<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 09 Aug 2026 07:09:07 +0530</lastBuildDate>
        <atom:link href="https://kannada.asianetnews.com/rss/science" rel="self" type="application/rss+xml"/>
        <item>
            <title><![CDATA[ಕೆಲವೇ ಗಂಟೆಗಳಲ್ಲಿ ಚಂದ್ರನಿಗೆ ಅಪ್ಪಳಿಸಲಿದೆ ಸ್ಪೇಸ್ ಎಕ್ಸ್ ರಾಕೆಟ್ ಭಾಗ: ಗಂಟೆಗೆ 8,690 ಕಿ.ಮೀ ವೇಗದಲ್ಲಿ ಡಿಕ್ಕಿ!]]></title>
            <link>https://kannada.asianetnews.com/science/spacex-falcon-9-rocket-stage-unintentional-moon-crash-space-junk-san/articleshow-556lt7l</link>
            <guid isPermaLink="true">https://kannada.asianetnews.com/science/spacex-falcon-9-rocket-stage-unintentional-moon-crash-space-junk-san/articleshow-556lt7l</guid>
            <pubDate>Wed, 05 Aug 2026 09:53:07 +0530</pubDate>
            <description><![CDATA[ಸ್ಪೇಸ್ ಎಕ್ಸ್ ಸಂಸ್ಥೆಯ ರಾಕೆಟ್&zwnj;ನ 4 ಟನ್ ತೂಕದ ಭಾಗವೊಂದು ಚಂದ್ರನ ಮೇಲ್ಮೈಗೆ ಅಪ್ಪಳಿಸಲಿದೆ. ಈ ಡಿಕ್ಕಿಯಿಂದ ಚಂದ್ರನ ಮೇಲೆ ಹೊಸ ಕುಳಿಯೊಂದು ನಿರ್ಮಾಣವಾಗಲಿದ್ದು, ಇದು ವಿಜ್ಞಾನಿಗಳಿಗೆ ಸಂಶೋಧನೆ ನಡೆಸಲು ಅವಕಾಶ ಕಲ್ಪಿಸಲಿದೆ ಹಾಗೂ ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kykyb6qvw3xqt7vhvcbcwym8,imgname-moon--3--1785228270331.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್ (ಆ.5):&lt;/strong&gt; ಕಳೆದ ವರ್ಷದಿಂದ ಬಾಹ್ಯಾಕಾಶದಲ್ಲಿ ತೇಲುತ್ತಿದ್ದ 'ಸ್ಪೇಸ್ ಎಕ್ಸ್' (SpaceX) ಸಂಸ್ಥೆಯ ರಾಕೆಟ್&zwnj;ನ 4 ಟನ್ ತೂಕದ ಭಾಗವೊಂದು ಬುಧವಾರದಂದು ತೀವ್ರ ವೇಗದಲ್ಲಿ ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆಯಲಿದೆ. ಈ ಡಿಕ್ಕಿಯಿಂದ ಭೂಮಿಗೆ ಯಾವುದೇ ಅಪಾಯವಿಲ್ಲವಾದರೂ, ಚಂದ್ರನ ಮೇಲೆ ಹೊಸದೊಂದು ಕುಳಿ (Crater) ನಿರ್ಮಾಣವಾಗಲಿದ್ದು, ವಿಜ್ಞಾನಿಗಳಿಗೆ ಹೆಚ್ಚಿನ ಸಂಶೋಧನೆ ನಡೆಸಲು ಇದು ಉತ್ತಮ ಅವಕಾಶ ಒದಗಿಸಲಿದೆ. ಶಾಲಾ ಬಸ್&zwnj; ಗಾತ್ರದ ಈ ವಸ್ತುವನ್ನು ಸ್ಪೇಸ್ ಎಕ್ಸ್&zwnj;ನ 'ಫಾಲ್ಕನ್ 9' (Falcon 9) ರಾಕೆಟ್&zwnj;ನ ಎರಡನೇ ಹಂತದ ಭಾಗ ಎಂದು ಗುರುತಿಸಲಾಗಿದೆ. ಈ ರಾಕೆಟ್ 2025ರ ಜನವರಿಯಲ್ಲಿ 'ಫೈರ್&zwnj;ಫ್ಲೈ ಏರೋಸ್ಪೇಸ್' (Firefly Aerospace) ಸಂಸ್ಥೆಯ ಲೂನಾರ್ ಲ್ಯಾಂಡರ್ ಅನ್ನು ಚಂದ್ರನತ್ತ ಹೊತ್ತೊಯ್ದಿತ್ತು.&lt;/p&gt;&lt;p&gt;ಯುರೋಪಿಯನ್&zwnj; ಕಾಲಮಾನ ಬೆಳಿಗ್ಗೆ 06.35ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 12.05 ನಿಮಿಷ) ಈ ರಾಕೆಟ್ ಭಾಗವು ಗಂಟೆಗೆ ಸುಮಾರು 5,400 ಮೈಲಿ (8,690 ಕಿ.ಮೀ) ವೇಗದಲ್ಲಿ ಚಂದ್ರನ ಅಂಗಳಕ್ಕೆ ಅಪ್ಪಳಿಸಲಿದೆ. ಈ ಡಿಕ್ಕಿಯಿಂದ ಚಂದ್ರನ ಧೂಳು ಗಾಳಿಯಲ್ಲಿ ತೇಲಲಿದ್ದು, ಸೂರ್ಯನ ಬೆಳಕಿನಲ್ಲಿ ಪ್ರಕಾಶಮಾನವಾಗಿ ಕಾಣಿಸಿದರೂ ಭೂಮಿಯಿಂದ ಬರಿಗಣ್ಣಿಗೆ ನೋಡುವುದು ಕಷ್ಟಕರವಾಗಿದೆ.&lt;/p&gt;&lt;h2&gt;&lt;strong&gt;18 ಮೀಟರ್ ಅಗಲದ ಕುಳಿ ನಿರ್ಮಾಣ&lt;/strong&gt;&lt;/h2&gt;&lt;p&gt;ನಾಸಾ (NASA) ನೀಡಿರುವ ಮಾಹಿತಿಯ ಪ್ರಕಾರ, ಈ ಅಪಘಾತದಿಂದ ಚಂದ್ರನ ಮೇಲೆ ಸುಮಾರು 60 ಅಡಿ (18 ಮೀಟರ್) ಅಗಲ ಹಾಗೂ 12 ಅಡಿ (4 ಮೀಟರ್) ಆಳದ ಕುಳಿ ನಿರ್ಮಾಣವಾಗಲಿದ್ದು, ಕಲ್ಲು ಮತ್ತು ಧೂಳಿನ ಕಣಗಳು ಹೊರಚೆಲ್ಲಲಿವೆ. ಚಂದ್ರನ ಪಶ್ಚಿಮ ಅಂಚಿನಲ್ಲಿರುವ 'ಐನ್ಸ್ಟೈನ್ ಕುಳಿ' (Einstein crater) ಪ್ರದೇಶಕ್ಕೆ ಈ ಭಾಗ ಡಿಕ್ಕಿಯಾಗುವ ನಿರೀಕ್ಷೆಯಿದೆ. ಭೂಮಿಯಿಂದ ಈ ಪ್ರದೇಶವನ್ನು ವೀಕ್ಷಿಸುವುದು ಕೊಂಚ ಸವಾಲಿನ ಕೆಲಸವಾಗಿದೆ.&lt;/p&gt;&lt;p&gt;ಆದರೆ, ಈ ಘಟನೆಯ ಮೊದಲು ಮತ್ತು ನಂತರದ ಚಿತ್ರಗಳನ್ನು ಸೆರೆಹಿಡಿಯಲು ನಾಸಾ ಯೋಜಿಸಿದ್ದು, ಸಂಗ್ರಹಿಸಿದ ಡೇಟಾ &quot;ಮಾನವ ನಿರ್ಮಿತ ಡಿಕ್ಕಿಗಳನ್ನು ಉತ್ತಮವಾಗಿ ಅರ್ಥೈಸಿಕೊಳ್ಳಲು ಹಾಗೂ ಬಾಹ್ಯಾಕಾಶ ಪರಿಶೋಧನೆಯ ಮುಂದಿನ ಹಂತಗಳಿಗೆ ಸಹಾಯ ಮಾಡಲಿವೆ&quot; ಎಂದು ತಿಳಿಸಿದೆ. ನಾಸಾದ ವಿಜ್ಞಾನಿ ಜಿಮಿ ರಸ್ಸೆಲ್ ಮಾತನಾಡಿ, &quot;ಈ ಘಟನೆಯಿಂದ ಭೂಮಿಗೆ ಯಾವುದೇ ಅಪಾಯವಿಲ್ಲ. ನಾಸಾ ವಿಜ್ಞಾನಿಗಳು ಚಂದ್ರನ ದತ್ತಾಂಶವನ್ನು ಸಂಗ್ರಹಿಸಲು ಹಾಗೂ ಬಾಹ್ಯಾಕಾಶದಲ್ಲಿರುವ ವಸ್ತುಗಳನ್ನು ಟ್ರ್ಯಾಕ್ ಮಾಡುವ ತಂತ್ರಜ್ಞಾನವನ್ನು ಸುಧಾರಿಸಲು ಯೋಜಿಸುತ್ತಿದ್ದಾರೆ&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಚಂದ್ರನತ್ತ ಪಥ ಬದಲಾಗಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ರಾಕೆಟ್&zwnj;ನ ಇಂತಹ ಹಂತಗಳು (Stages) ತಮ್ಮ ಕಾರ್ಯಾಚರಣೆ ಮುಗಿದ ನಂತರ ಭೂಮಿಯ ವಾತಾವರಣಕ್ಕೆ ಮರಳಿ ಉರಿದು ಹೋಗುತ್ತವೆ ಅಥವಾ ಸಾಗರಕ್ಕೆ ಬೀಳುತ್ತವೆ. ಆದರೆ, ಜನವರಿಯ ಈ ಚಂದ್ರನ ಯೋಜನೆಗೆ ಹೆಚ್ಚಿನ ಇಂಧನ ಹಾಗೂ ಥ್ರಸ್ಟ್&zwnj; ಅಗತ್ಯವಿದ್ದ ಕಾರಣ, ಈ ರಾಕೆಟ್&zwnj;ನ ಎರಡನೇ ಭಾಗವು ಬಾಹ್ಯಾಕಾಶದಲ್ಲೇ ಉಳಿದುಕೊಂಡಿತ್ತು. ಇದು ಇತರ ಸಾವಿರಾರು ಬಾಹ್ಯಾಕಾಶ ತ್ಯಾಜ್ಯಗಳ (Space Junk) ನಡುವೆ ನಿಗದಿ ಇಲ್ಲದೆ ತೇಲುತ್ತಿತ್ತು. ಸೂರ್ಯನ ವಿಕಿರಣ ಹಾಗೂ ಗುರುತ್ವಾಕರ್ಷಣೆಯ ಬಲದಿಂದಾಗಿ ಈ ನಿಯಂತ್ರಣವಿಲ್ಲದ ರಾಕೆಟ್ ಭಾಗವು ಚಂದ್ರನ ಕಡೆಗೆ ಚಲಿಸುತ್ತಿದೆ ಎಂಬುದನ್ನು ಬಾಹ್ಯಾಕಾಶ ವಿಜ್ಞಾನಿಗಳು ಈ ವರ್ಷದ ಆರಂಭದಲ್ಲಿ ಪತ್ತೆಹಚ್ಚಿದ್ದರು.&lt;/p&gt;&lt;p&gt;ಸೂರ್ಯನ ಚಟುವಟಿಕೆಗಳು ಮತ್ತು ಗುರುತ್ವಾಕರ್ಷಣೆಯ ಬಲಗಳು ಸೇರಿ ಇದನ್ನು ಚಂದ್ರನ ಕಡೆಗೆ ಸಾಗುವ ಪಥದಲ್ಲಿ ತಳ್ಳಿವೆ ಎಂದು ಸ್ಪೇಸ್ ಎಕ್ಸ್&zwnj;ನ ನಾಸಾ ವಿಜ್ಞಾನ ಮತ್ತು ಡ್ರ್ಯಾಗನ್ ಕಾರ್ಯಕ್ರಮಗಳ ನಿರ್ದೇಶಕಿ ಜುಲಿಯಾನಾ ಶೀಮನ್ ತಿಳಿಸಿದ್ದಾರೆ. ಆಸ್ಟ್ರೋನಮಿ ತಂತ್ರಾಂಶದ ಪ್ರವರ್ತಕ ಬಿಲ್ ಗ್ರೇ ಮಾತನಾಡಿ, ಇದರಿಂದ ಯಾವುದೇ ಅಪಾಯವಿಲ್ಲದಿದ್ದರೂ, ಬಾಹ್ಯಾಕಾಶದಲ್ಲಿ ಉಳಿಯುವ ಉಪಕರಣಗಳನ್ನು ಎಷ್ಟು ಜವಾಬ್ದಾರಿಯಿಲ್ಲದೆ ಎಸೆಯಲಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಚಂದ್ರನ ಮೇಲಿನ ಹಿಂದಿನ ಡಿಕ್ಕಿಗಳು&lt;/strong&gt;&lt;/h2&gt;&lt;p&gt;ಚಂದ್ರನ ಮೇಲೆ ಬಾಹ್ಯಾಕಾಶ ತ್ಯಾಜ್ಯಗಳು ಬೀಳುವುದು ವಿರಳ. 2022ರ ಮಾರ್ಚ್&zwnj;ನಲ್ಲಿ ಚೀನಾದ ರಾಕೆಟ್&zwnj; ಭಾಗವೊಂದು ಚಂದ್ರನಿಗೆ ಡಿಕ್ಕಿಯಾಗಿತ್ತು. 2009ರಲ್ಲಿ ನಾಸಾ ಸ್ವತಃ ಉದ್ದೇಶಪೂರ್ವಕವಾಗಿ ರಾಕೆಟ್ ಹಂತವನ್ನು ಚಂದ್ರನಿಗೆ ಡಿಕ್ಕಿ ಹೊಡೆಸಿ ಚಂದ್ರನ ಧೂಳಿನ ಮಾದರಿಯನ್ನು ಅಧ್ಯಯನ ಮಾಡಿತ್ತು. ಕಳೆದ ಕೆಲವು ವರ್ಷಗಳಲ್ಲಿ ಸುರಕ್ಷಿತವಾಗಿ ಇಳಿಯಲು ಯತ್ನಿಸಿ ಅಪಘಾತಕ್ಕೀಡಾದ ಬಾಹ್ಯಾಕಾಶ ನೌಕೆಗಳಲ್ಲಿ ರಷ್ಯಾದ 'ಲೂನಾ-25' (2023), ಭಾರತದ 'ಚಂದ್ರಯಾನ-2' (2019) ಮತ್ತು ಇಸ್ರೇಲ್&zwnj;ನ 'ಬೆರೆಶೀಟ್' (2019) ಸೇರಿವೆ.&lt;/p&gt;&lt;p&gt;ಮುಂದಿನ ದಿನಗಳಲ್ಲಿ ಇಂತಹ ಅನಗತ್ಯ ಡಿಕ್ಕಿಗಳನ್ನು ತಡೆಯಲು ನಾಸಾ ಮತ್ತು ಸ್ಪೇಸ್ ಎಕ್ಸ್ ಜಂಟಿಯಾಗಿ ಚರ್ಚಿಸುತ್ತಿವೆ. ಮತ್ತೊಂದೆಡೆ, ಸಾರ್ವಜನಿಕ ಕಂಪನಿಯಾಗಿ ಹೊರಹೊಮ್ಮಿದ ನಂತರ ಸ್ಪೇಸ್ ಎಕ್ಸ್ ಬಿಡುಗಡೆ ಮಾಡಿದ ತನ್ನ ಮೊದಲ ತ್ರೈಮಾಸಿಕ ವರದಿಯಲ್ಲಿ ವಾಲ್ ಸ್ಟ್ರೀಟ್ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ನಷ್ಟ ಹಾಗೂ ಹೆಚ್ಚಿನ ಆದಾಯವನ್ನು ದಾಖಲಿಸಿದೆ. ಆದರೆ, ಹೂಡಿಕೆದಾರರ ಅಪನಂಬಿಕೆಯಿಂದಾಗಿ ಕಂಪನಿಯ ಶೇರುಗಳಲ್ಲಿ ಕುಸಿತ ಕಂಡುಬಂದಿದೆ.&lt;/p&gt;]]></content:encoded>
            <category>science</category>
            <dc:creator>Santosh Naik</dc:creator>
            <atom:link href="https://kannada.asianetnews.com/science/spacex-falcon-9-rocket-stage-unintentional-moon-crash-space-junk-san/articleshow-556lt7l"/>
        </item>
        <item>
            <title><![CDATA[ಚಿಟ್ಟೆಗಳಿಗೆ ಕಂಬಳಿಹುಳು ಆಗಿದ್ದಾಗಿನ ಜೀವನದ ನೆನಪಿರುತ್ತದೆಯೇ? 10 ವರ್ಷದ ಬಾಲಕನಿಂದ ಅಚ್ಚರಿ ಸಂಶೋಧನೆ!]]></title>
            <link>https://kannada.asianetnews.com/science/japan-10-year-old-boy-jo-nagai-butterfly-remembers-caterpillar-stage-discovery-khs/articleshow-5fgugsw</link>
            <guid isPermaLink="true">https://kannada.asianetnews.com/science/japan-10-year-old-boy-jo-nagai-butterfly-remembers-caterpillar-stage-discovery-khs/articleshow-5fgugsw</guid>
            <pubDate>Mon, 03 Aug 2026 16:50:52 +0530</pubDate>
            <description><![CDATA[ಜಪಾನಿನ 10 ವರ್ಷದ ಬಾಲಕ ಜೋ ನಾಗಾಯ್, ರೂಪಾಂತರದ ನಂತರ ಚಿಟ್ಟೆಗಳು ತಮ್ಮ ಕಂಬಳಿಹುಳುವಿನ ಜೀವನದ ನೆನಪುಗಳನ್ನು ಉಳಿಸಿಕೊಳ್ಳುತ್ತವೆಯೇ ಎಂದು ಪರೀಕ್ಷಿಸಿದ. ಲ್ಯಾವೆಂಡರ್ ವಾಸನೆಗೆ ತರಬೇತಿ ಪಡೆದ ಕಂಬಳಿಹುಳುಗಳು, ಚಿಟ್ಟೆಯಾದ ನಂತರವೂ ಆ ವಾಸನೆಯಿಂದ ದೂರ ಉಳಿದವು, ಇದು ನೆನಪುಗಳು ಉಳಿಯುತ್ತವೆ ಎಂಬುದನ್ನು ಸಾಬೀತುಪಡಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kz3nfyste2zfngxpyfj13ee9,imgname-caterpillar-butterfly-memory--1785755859770.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಂ&lt;/strong&gt;ಬಳಿಹುಳು (Caterpillar) ಕೋಶದೊಳಗೆ (Chrysalis) ಹೋಗಿ ತನ್ನ ಸಂಪೂರ್ಣ ದೇಹದ ಆಕಾರವನ್ನು ಬದಲಾಯಿಸಿಕೊಂಡು ಸುಂದರ ಚಿಟ್ಟೆಯಾಗಿ (Butterfly) ಹೊರಬರುತ್ತದೆ. ಈ ಪ್ರಕ್ರಿಯೆಯನ್ನು ವಿಜ್ಞಾನದಲ್ಲಿ ರೂಪಾಂತರ (Metamorphosis) ಎಂದು ಕರೆಯಲಾಗುತ್ತದೆ. ಆದರೆ, ಈ ರೂಪಾಂತರದ ನಂತರ ಚಿಟ್ಟೆಗೆ ತನ್ನ ಹಳೆಯ ಕಂಬಳಿಹುಳುವಿನ ಜೀವನದ ನೆನಪುಗಳು ಉಳಿದಿರುತ್ತವೆಯೇ? ಈ ಪ್ರಶ್ನೆಗೆ ಜಪಾನಿನ 10 ವರ್ಷದ ಬಾಲಕ ಜೋ ನಾಗಾಯ್ (Jo Nagai) ಕಂಡುಕೊಂಡ ಉತ್ತರ ಇಡೀ ಜಗತ್ತಿನ ವಿಜ್ಞಾನಿಗಳನ್ನೇ ಹುಬ್ಬೇರಿಸುವಂತೆ ಮಾಡಿದೆ.&lt;/p&gt;&lt;h2&gt;&lt;strong&gt;ಪ್ರೀತಿಯಿಂದ ಆರಂಭವಾದ ಅದ್ಭುತ ಶೋಧನೆ!&lt;/strong&gt;&lt;/h2&gt;&lt;p&gt;ಜಪಾನಿನ ಕೋಬೆ (Kobe) ನಗರದ ನಿವಾಸಿಯಾಗಿರುವ ಜೋ ನಾಗಾಯ್, ತನ್ನ ಎರಡನೇ ತರಗತಿಯಲ್ಲಿದ್ದಾಗಿನಿಂದಲೂ ಚಿಟ್ಟೆಗಳನ್ನು ಸಾಕಿ ಬೆಳೆಸುವ ಹವ್ಯಾಸ ಹೊಂದಿದ್ದ. ತಾನು ಪ್ರೀತಿಯಿಂದ ಸಾಕಿದ ಕಂಬಳಿಹುಳುಗಳು ರೂಪಾಂತರಗೊಂಡು ಚಿಟ್ಟೆಯಾಗಿ ಗೂಡಿನಿಂದ ಹೊರಬಂದು, ಗಾಳಿಯಲ್ಲಿ ಹಾರಿದ ಮೇಲೆಯೂ ಮತ್ತೆ ತನ್ನ ಬಳಿಗೇ ಮರಳಿ ಬರುವುದನ್ನು ಆತ ಗಮನಿಸಿದ. &quot;ನಾನು ಸಾಕಿದ ಈ ಚಿಟ್ಟೆಗಳು ಇನ್ನೂ ನನ್ನನ್ನು ನೆನಪಿಟ್ಟುಕೊಂಡಿವೆಯೇ?&quot; ಎಂಬ ಕುತೂಹಲ ಬಾಲಕನ ಮನಸ್ಸಿನಲ್ಲಿ ಮೂಡಿತು.&lt;/p&gt;&lt;p&gt;ತನ್ನ ಕಂಬಳಿಹುಳುಗಳ ಮೇಲಿದ್ದ ಅಪಾರ ಪ್ರೀತಿ ಮತ್ತು ಕುತೂಹಲವೇ ಆತನನ್ನು ಪ್ರಸಿದ್ಧ ವಿಜ್ಞಾನಿ ಜಾರ್ಜ್&zwnj;ಟೌನ್ ವಿಶ್ವವಿದ್ಯಾಲಯದ (Georgetown University) ಡಾ. ಮಾರ್ತಾ ವೈಸ್ (Dr. Martha Weiss) ಅವರೊಡನೆ ಸಂಪರ್ಕಿಸುವಂತೆ ಮಾಡಿತು.&amp;nbsp;&lt;/p&gt;&lt;h2&gt;&lt;strong&gt;ಚಿಕ್ಕ ವಯಸ್ಸಿನಲ್ಲೇ ಸಿದ್ಧವಾಯಿತು ದೊಡ್ಡ ಪ್ರಯೋಗ!&lt;/strong&gt;&lt;/h2&gt;&lt;p&gt;ಡಾ. ಮಾರ್ತಾ ವೈಸ್ ಅವರ ಮಾರ್ಗದರ್ಶನದಲ್ಲಿ, ಜೋ ನಾಗಾಯ್ ತನ್ನ ಮನೆಯಲ್ಲೇ ಒಂದು ಸರಳವಾದ ಪ್ರಯೋಗವನ್ನು ರೂಪಿಸಿದ. ಕಂಬಳಿಹುಳುಗಳಿಗೆ ಲ್ಯಾವೆಂಡರ್ ಎಣ್ಣೆಯ (Lavender oil) ವಾಸನೆಯ ಜೊತೆಗೆ ಸಣ್ಣ ಪ್ರಮಾಣದ ಕಂಪನವನ್ನು ಗ್ರಹಿಸುವಂತೆ ತರಬೇತಿ ನೀಡಿದ. ನಂತರ ಆ ಕಂಬಳಿಹುಳುಗಳು ರೂಪಾಂತರ ಹೊಂದಿ ಪೂರ್ಣ ಪ್ರಮಾಣದ ಚಿಟ್ಟೆಗಳಾದಾಗ, ಅವುಗಳನ್ನು ವಾಸನೆ ಪರೀಕ್ಷೆಗೆ ಒಳಪಡಿಸಿದ. ಆಶ್ಚರ್ಯಕರ ರೀತಿಯಲ್ಲಿ, ಕಂಬಳಿಹುಳುವಾಗಿದ್ದಾಗ ಲ್ಯಾವೆಂಡರ್ ವಾಸನೆಯನ್ನು ಇಷ್ಟಪಡದಂತೆ ತರಬೇತಿ ಪಡೆದಿದ್ದ ಶೇ. 80ರಷ್ಟು ಚಿಟ್ಟೆಗಳು, ರೂಪಾಂತರದ ನಂತರವೂ ಅದೇ ಲ್ಯಾವೆಂಡರ್ ವಾಸನೆಯಿಂದ ದೂರವೇ ಉಳಿದವು.&lt;/p&gt;&lt;h2&gt;&lt;strong&gt;ಮುಂದಿನ ಪೀಳಿಗೆಗೂ ತಲುಪುತ್ತೆ ನೆನಪು!&lt;/strong&gt;&lt;/h2&gt;&lt;p&gt;ಜೋ ನಾಗಾಯ್ ಇಲ್ಲಿಗೆ ತನ್ನ ಶೋಧನೆಯನ್ನು ನಿಲ್ಲಿಸಲಿಲ್ಲ. ಈ ನೆನಪುಗಳು ಮುಂದಿನ ಪೀಳಿಗೆಯ ಚಿಟ್ಟೆಗಳಿಗೂ (Offspring) ಬಳುವಳಿಯಾಗಿ ತಲುಪುತ್ತವೆಯೇ ಎಂಬುದನ್ನೂ ಪರೀಕ್ಷಿಸಿದ. ಯಾವುದೇ ತರಬೇತಿ ಪಡೆಯದ ಹೊಸ ಪೀಳಿಗೆಯ ಚಿಟ್ಟೆಗಳು ಸಹ ತಮ್ಮ ತಾಯಿ ಚಿಟ್ಟೆ ಕಲಿತಿದ್ದ ಅದೇ ಲ್ಯಾವೆಂಡರ್ ವಾಸನೆಯನ್ನು ತಿರಸ್ಕರಿಸಿದವು.&lt;/p&gt;&lt;p&gt;ತನ್ನ 33 ಪುಟಗಳ ಸಂಶೋಧನಾ ವರದಿಯ ಮೂಲಕ ಜೋ ನಾಗಾಯ್, &quot;ರೂಪಾಂತರದ ನರಮಂಡಲದ ಮಹಾ ಬದಲಾವಣೆಯ ನಂತರವೂ ಚಿಟ್ಟೆಗಳು ತಮ್ಮ ಕಂಬಳಿಹುಳುವಿನ ಹಂತದ ನೆನಪುಗಳನ್ನು ಕಾಯ್ದುಕೊಳ್ಳುತ್ತವೆ&quot; ಎಂಬುದನ್ನು ಜಗತ್ತಿಗೆ ನಿರೂಪಿಸಿದ್ದಾನೆ. ಒಬ್ಬ ಸಾಮಾನ್ಯ 10 ವರ್ಷದ ಶಾಲಾ ಬಾಲಕನ ಈ ಅದ್ಭುತ ಅನ್ವೇಷಣೆಯನ್ನು ಕಂಡು ಇಡೀ ಜಾಗತಿಕ ಕೀಟಶಾಸ್ತ್ರಜ್ಞರ (Entomologists) ಸಮುದಾಯವೇ ಶ್ಲಾಘಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;A 10 year-old boy from Japan discovered that butterflies can remember their time as caterpillars.Jo Nagai noticed his caterpillars still loved him after turning into butterflies, and the affection he had for them led to a genuine scientific discovery. pic.twitter.com/NtXALNcFdW&lt;/p&gt;&lt;p&gt;&mdash; Pubity (@pubity) August 2, 2026&lt;/p&gt;&lt;p&gt;&lt;/p&gt;]]></content:encoded>
            <category>science</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/science/japan-10-year-old-boy-jo-nagai-butterfly-remembers-caterpillar-stage-discovery-khs/articleshow-5fgugsw"/>
        </item>
        <item>
            <title><![CDATA[15 ಸಾವಿರ ವರ್ಷ ಹಿಂದೆ ಮನುಷ್ಯರು ಏನು ತಿನ್ನುತ್ತಿದ್ದರು? ಆದಿಮಾನವನ ಹಲ್ಲಿನಲ್ಲಿತ್ತು ಸ್ಫೋಟಕ ಮಾಹಿತಿ]]></title>
            <link>https://kannada.asianetnews.com/science/what-did-humans-eat-15000-years-ago-ancient-teeth-bones-reveal-surprising-diet/articleshow-8b2fvq6</link>
            <guid isPermaLink="true">https://kannada.asianetnews.com/science/what-did-humans-eat-15000-years-ago-ancient-teeth-bones-reveal-surprising-diet/articleshow-8b2fvq6</guid>
            <pubDate>Fri, 07 Aug 2026 16:11:51 +0530</pubDate>
            <description><![CDATA[&lt;p&gt;ಪ್ರಾಣಿಗಳ ಜೊತೆ ಕಾಡಿನಲ್ಲಿದ್ದ ಆದಿಮಾನವರು ಕೃಷಿ ಆರಂಭಿಸುವ ಮೊದಲು ಏನು ತಿನ್ನುತ್ತಿದ್ದರು? ಬರೋಬ್ಬರಿ 15 ಸಾವಿರ ವರ್ಷಗಳ ಹಿಂದೆ ಮನುಷ್ಯನ ಆಹಾರ ಪದ್ಧತಿ ಕುರಿತು ಸ್ಫೋಟಕ ರಹಸ್ಯ ಆದಿಮಾನವನ ಹಲ್ಲು, ಮೂಳೆಯಿಂದ ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kak0a76dm7bkewzgj0533y1w,imgname-fotojet---2025-11-21t152818.456-1763721944269.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಾಣಿಗಳಂತೆ ಕಾಡಿನಲ್ಲಿದ್ದ ಮಾನವ ಬಳಿಕ ವಿಕಸನಗೊಳ್ಳುತ್ತಾ ಹೋದ ಜೀವಿ. ನಾಗರೀಕತೆ ಬೆಳೆದಂತೆ ಕೃಷಿ ಪದ್ಧತಿಗಳು ಆರಂಭಗೊಂಡಿತು. ಕೃಷಿ ಪದ್ಧತಿಗಳು ಆರಂಭಕ್ಕೂ ಮೊದಲು ಮಾನವ ಕೂಡ ಪ್ರಾಣಿಗಳ ಬೇಟೆಯಾಡಿ ತಿನ್ನುತ್ತಿದ್ದ ಅನ್ನೋದು ಇತಿಹಾಸ. ಆದರೆ ಮಾನವ ಕೇವಲ ಬೇಟೆ ಆಹಾರ ತಿನ್ನುತ್ತಿದ್ದನೆ ಅಥವಾ ಇತರ ಸಸ್ಯಾಹಾರವನ್ನು ಸೇವಿಸುತ್ತಿದ್ದನಾ? ಈ ಕುರಿತು ಸತತ ಸಂಶೋಧನೆ ನಡೆಸುತ್ತಿದ್ದ ವಿಜ್ಞಾನಿಗಳು ಇದೀಗ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ನಡೆಸಿದ ಸಂಶೋಧನೆ ಮಾನವನ ವಿಕಸನ ಸೇರಿದಂತೆ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ. ಬರೋಬ್ಬರಿ 15 ಸಾವಿರ ವರ್ಷಗಳ ಹಿಂದೆ ಮಾನವನ ಮೆನು ಕಾರ್ಡ್ ಎನಿತ್ತು ಅನ್ನೋದು ಬಯಲಾಗಿದೆ.&lt;/p&gt;&lt;h2&gt;ತಪೋರಾಲ್ಟ್ ಗುಹೆಯಲ್ಲಿ ಸಿಕ್ಕ ಆದಿಮಾನವನ ಪಳೆಯುಳಿಕೆ&lt;/h2&gt;&lt;p&gt;ಮೊರಕ್ಕೋದ ತಾಪೋರಾಲ್ಟ್ ಅತ್ಯಂತ ಪುರಾತನ ಗುಹೆ. ಈ ಗುಹೆಯನ್ನು ಮೊರಕ್ಕೋದ ಪುರಾತತ್ವ ಇಲಾಖೆ ನಿರ್ವಹಣೆ ಮಾಡುತ್ತಿದೆ. ಈ ಗುಹೆ ಮಾನವನ ವಿಕಸನ ಕುರಿತು ಕತೆ ಹೇಳುತ್ತಿದೆ. ಈ ಗುಹೆಯಲ್ಲಿ ಬರೋಬ್ಬರಿ 15 ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ಆದಿಮಾನವನ ಹಲವು ಮೂಳೆಗಳು, ಹಲ್ಲುಗಳು ಸೇರಿದಂತೆ ಪಳೆಯುಳಿಕೆಗಳು ಪತ್ತೆಯಾಗಿತ್ತು. ಈ ಮೂಳೆ, ಹಲ್ಲುಗಳನ್ನು ವಿಜ್ಞಾನಿಗಳು ಕೆಮಿಕಲ್ ಅನಾಲಿಸ್&zwnj;ಗೆ ಒಳಪಡಿಸಿ ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನಾ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದೆ.&lt;/p&gt;&lt;h2&gt;ಶಿಲಾಯುಗದ ಮಾನವರ ಆಹಾರ ಪದ್ಧತಿ&lt;/h2&gt;&lt;p&gt;ಶಿಲಾಯುಗದಲ್ಲಿದ್ದ ಮಾನವರು ಸಂಪೂರ್ಣವಾಗಿ ಮಾಂಸಾಹಾರಿಗಳಾಗಿದ್ದರು ಅನ್ನೋ ಉಲ್ಲೇಖವಿದೆ. ಆದರೆ ಹೊಸ ಸಂಶೋಧನೆ ಈ ವಾದಕ್ಕೆ ತದ್ವಿರುದ್ಧವಾಗಿದೆ. 15 ಸಾವಿರ ವರ್ಷಗಳ ಹಿಂದೆ ಇದ್ದ ಇಬೆರೊಮೌರುಸಿಯನ್ (Iberomaurusian) ಮೂಲಕ್ಕೆ ಸೇರಿದ ಬೇಟೆಗಾರ ಮಾನವನ ಹಲ್ಲುಗಳಲ್ಲಿ ಸಸ್ಯಜನ್ಯ ಆಹಾರಗಳ ಕುರುಹು ಪತ್ತೆಯಾಗಿದೆ. ಹಲ್ಲುಗಳಲ್ಲಿ ಪತ್ತೆಯಾದ ಐಸೋಟೋಪ್&zwnj; (Isotope) ಪರೀಕ್ಷೆ ಮಾಡಲಾಗಿದೆ. ಈ ಐಸೋಟೋಪ್ ಅನಾಲಿಸ್&zwnj;ನಲ್ಲಿ ಆದಿ ಮಾನವರು ಪ್ರಾಣಿಗಳ ಪ್ರೋಟಿನ್&zwnj;ಗಿಂತ ಸಸ್ಯಗಳು, ಬೀಜ, ಗೆಡ್ಡೆ ಗೆಣಸುಗಳ ಪ್ರೋಟಿನ್ ಪತ್ತೆಯಾಗಿದೆ. ಈ ಮೂಲಕ ಮಾಂಸಾಹಾರಕ್ಕಿಂತ ಹೆಚ್ಚಾಗಿ ಕಾಡಿನಲ್ಲಿ ಸಿಗುತ್ತಿದ್ದ ಸಸ್ಯಾಹಾರಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು ಅನ್ನೋದು ಸಂಶೋಧನೆಯಲ್ಲಿ ಬಯಲಾಗಿದೆ.&lt;/p&gt;&lt;h2&gt;ಸಸ್ಯಾಹಾರನೆಚ್ಚಿಕೊಂಡಿದ್ದ ಆದಿಮಾನವರು&lt;/h2&gt;&lt;p&gt;ಈ ಕುರಿತು ಮತ್ತಷ್ಟು ಸಂಶೋಧನೆ ನಡೆಸಿ ಸಸ್ಯಾಹಾರದ ಯಾವ ಪ್ರೊಟಿನ್ ಅನ್ನೋದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಓಕ್ ಸೇರಿದಂತೆ ಕಾಡಿನಲ್ಲಿ ಸಿಗುವ ಹಲವು ಮರಗಳು, ಸಸ್ಯಗಳ ಬೀಜಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಕೆಲ ಬೀಜಗಳನ್ನು ಹಾಗೇ ತಿನ್ನುತ್ತಿದ್ದರೆ, ಮತ್ತೆ ಕೆಲವು ಬೀಜಗಳನ್ನು ಸುಟ್ಟು ತಿನ್ನುತ್ತಿದ್ದರು, ಅರೆದು ತಿನ್ನುತ್ತಿದ್ದರು. ಬಳ್ಳಿ, ಭೂಮಿಯ ಅಡಿಯಲ್ಲಿದ್ದ ಗೆಡ್ಡೆ ಗೆಣಸುಗಳನ್ನು ತೆಗೆದು ತಿನ್ನುತ್ತಿದ್ದರು. ಇದರ ನಡುವೆ ಪ್ರಾಣಿಗಳನ್ನು ಬೇಟೆಯಾಗುತ್ತಿದ್ದರು. ಆದರೆ ಮಾಂಸಾಹಾರಕ್ಕಿಂತ ಸಸ್ಯಾಹಾರವೇ ಹೆಚ್ಚಾಗಿತ್ತು ಅನ್ನೋದು ಸಂಶೋಧನೆಯಲ್ಲಿ ಬಯಲಾಗಿದೆ.&lt;/p&gt;]]></content:encoded>
            <category>science</category>
            <dc:creator>Chethan Kumar</dc:creator>
            <atom:link href="https://kannada.asianetnews.com/science/what-did-humans-eat-15000-years-ago-ancient-teeth-bones-reveal-surprising-diet/articleshow-8b2fvq6"/>
        </item>
        <item>
            <title><![CDATA[ಅಳಿವಿನ ಅಂಚಿನಲ್ಲಿರುವ ಹಾರ್ಲೆಕ್ವಿನ್ ಕಪ್ಪೆಗಳು: ವಿಷದ ರಕ್ಷಣೆ ಕಳೆದುಕೊಳ್ಳುತ್ತಿರುವ ಉಭಯಚರಗಳ ಆತಂಕಕಾರಿ ಕಥೆ!]]></title>
            <link>https://kannada.asianetnews.com/science/the-toxicity-crisis-why-the-world-most-vibrant-harlequin-frogs-are-suddenly-losing-their-lethal-defenses-gdp/articleshow-9d9afkd</link>
            <guid isPermaLink="true">https://kannada.asianetnews.com/science/the-toxicity-crisis-why-the-world-most-vibrant-harlequin-frogs-are-suddenly-losing-their-lethal-defenses-gdp/articleshow-9d9afkd</guid>
            <pubDate>Mon, 03 Aug 2026 16:40:28 +0530</pubDate>
            <description><![CDATA[ಅಳಿವಿನಂಚಿನಲ್ಲಿರುವ ಹಾರ್ಲೆಕ್ವಿನ್ ಕಪ್ಪೆಗಳು ತಮ್ಮ ಪ್ರಬಲ ರಕ್ಷಣಾ ವಿಷವನ್ನು ಕಳೆದುಕೊಳ್ಳುತ್ತಿವೆ ಎಂದು ಹೊಸ ಸಂಶೋಧನೆ ಬಹಿರಂಗಪಡಿಸಿದೆ. ಪರಿಸರ ಬದಲಾವಣೆ ಮತ್ತು ಮಾರಕ ಶಿಲೀಂಧ್ರದ ದಾಳಿಯಿಂದಾಗಿ ಈ ಉಭಯಚರಗಳ ಅಸ್ತಿತ್ವಕ್ಕೆ ದೊಡ್ಡ ಸವಾಲು ಎದುರಾಗಿದ್ದು, ಈ ವಿಷದ ನಷ್ಟವು ವೈದ್ಯಕೀಯ ಸಂಶೋಧನೆಗಳಿಗೂ ಹಿನ್ನಡೆಯನ್ನುಂಟುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j52mk7kbehd3h5b1tqsj0zeb,imgname-kallar-piligirian-frog.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಭಯಚರ ಲೋಕದ ಅತ್ಯಂತ ಆಕರ್ಷಕ ಜೀವಿಗಳಾದ ಹಾರ್ಲೆಕ್ವಿನ್ ಕಪ್ಪೆಗಳು (ಅಟೆಲೋಪಸ್) ಇಂದು ಜಾಗತಿಕವಾಗಿ ಅತಿ ದೊಡ್ಡ ಅಸ್ತಿತ್ವದ ಬೆದರಿಕೆಯನ್ನು ಎದುರಿಸುತ್ತಿವೆ. ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಈ ಅಪರೂಪದ ಕಪ್ಪೆಗಳ ಪೈಕಿ ಶೇಕಡಾ 81 ರಷ್ಟು ತಳಿಗಳು ತೀವ್ರ ಅವನತಿಯ ಹಾದಿಯಲ್ಲಿದ್ದು, ಸುಮಾರು ಶೇಕಡಾ 56 ರಷ್ಟು ಪ್ರಭೇದಗಳು ಈಗಾಗಲೇ ಭೂಮಿಯಿಂದ ಸಂಪೂರ್ಣವಾಗಿ ಅಳಿದುಹೋಗಿರಬಹುದು ಎಂದು ಅಂದಾಜಿಸಲಾಗಿದೆ. ತಮ್ಮ ಸಣ್ಣ ಗಾತ್ರ ಮತ್ತು ಮನಮೋಹಕ ವೈವಿಧ್ಯಮಯ ಬಣ್ಣಗಳಿಂದ ಗುರುತಿಸಿಕೊಳ್ಳುವ ಈ ಜೀವಿಗಳು, ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಲು ತಮ್ಮ ಚರ್ಮದಲ್ಲಿ ಉತ್ಪತ್ತಿಯಾಗುವ ಮಾರಕ ವಿಷಕ್ಕೆ ಹೆಸರಾಗಿವೆ. ಆದರೆ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (ಬರ್ಕ್ಲಿ) ಇತ್ತೀಚಿನ ಸಂಶೋಧನೆಯು ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಅದೇನೆಂದರೆ, ಕೆಲವು ಹಾರ್ಲೆಕ್ವಿನ್ ಕಪ್ಪೆಗಳು ಪ್ರಕೃತಿಯಲ್ಲಿ ಬದುಕಲು ನೆರವಾಗುವ ತಮ್ಮದೇ ಆದ ರಾಸಾಯನಿಕ ವಿಷದ ರಕ್ಷಣಾ ವ್ಯವಸ್ಥೆಯನ್ನು ದಿನೇ ದಿನೇ ಕಳೆದುಕೊಳ್ಳುತ್ತಿವೆ.&lt;/p&gt;&lt;h2&gt;ಪರಿಸರ ಬದಲಾವಣೆ ಮತ್ತು ವಿಷದ ನಷ್ಟದ ಆತಂಕ&lt;/h2&gt;&lt;p&gt;ಈ ಕಪ್ಪೆಗಳು ತಮ್ಮ ವಿಷವನ್ನು ಕಳೆದುಕೊಳ್ಳುತ್ತಿರುವುದು ಕೇವಲ ಅವುಗಳ ರಕ್ಷಣಾ ವ್ಯವಸ್ಥೆಯ ವೈಫಲ್ಯವಲ್ಲ, ಬದಲಿಗೆ ಇದು ಭೂಮಿಯ ಆಳವಾದ ಪರಿಸರ ಬದಲಾವಣೆಯ ಮುನ್ಸೂಚನೆಯಾಗಿದೆ. ಪನಾಮ ಉಭಯಚರ ರಕ್ಷಣಾ ಮತ್ತು ಸಂರಕ್ಷಣಾ ಯೋಜನೆ (PARC) ಹಾಗೂ ಯುಸಿ ಬರ್ಕ್ಲಿಯ ವಿಜ್ಞಾನಿಗಳು ಜಂಟಿಯಾಗಿ ನಡೆಸಿರುವ ಸಂಶೋಧನೆಯ ಪ್ರಕಾರ, ನೈಸರ್ಗಿಕ ಪರಿಸರ ವ್ಯವಸ್ಥೆಯ ಕೊರತೆಯು ಕಪ್ಪೆಗಳ ಚರ್ಮದಲ್ಲಿ ವಿಷವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯದ ಮೇಲೆ ನೇರವಾಗಿ ಪ್ರಭಾವ ಬೀರುತ್ತಿದೆ. ಕಾಡಿನಿಂದ ದೂರವಾಗಿ ಕೃತಕ ವಾತಾವರಣದಲ್ಲಿ ಬೆಳೆಯುವ ಕಪ್ಪೆಗಳಲ್ಲಿ ಈ ಬದಲಾವಣೆ ಎದ್ದು ಕಾಣುತ್ತಿದ್ದು, ಇವುಗಳನ್ನು ಮರಳಿ ಕಾಡಿಗೆ ಬಿಡುವ ವಿಜ್ಞಾನಿಗಳ ಪ್ರಯತ್ನಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.&lt;/p&gt;&lt;h2&gt;ದಕ್ಷಿಣ ಅಮೆರಿಕಾದ ಕಪ್ಪೆಗಳು ತಮ್ಮ ರಕ್ಷಣಾ ವಿಷವನ್ನು ಕಳೆದುಕೊಳ್ಳುತ್ತಿರುವುದಕ್ಕೆ ಕಾರಣಗಳು&lt;/h2&gt;&lt;p&gt;ವಿಜ್ಞಾನಿಗಳು ಸದ್ಯ ಈ ಜೀವಿಗಳ ವಿಷದ ಮೂಲದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಸಂಶೋಧಕರಾದ ಕಣ್ಣನ್ ಪಿಯರ್ಸನ್ ಮತ್ತು ರೆಬೆಕ್ಕಾ ಟಾರ್ವಿನ್ ಅವರ ಸಮಗ್ರ ವಿಮರ್ಶೆಯ ಪ್ರಕಾರ, ಈ ಕಪ್ಪೆಗಳು ಪ್ರಮುಖವಾಗಿ ಎರಡು ರೀತಿಯ ವಿಷಗಳನ್ನು ಹೊಂದಿರುತ್ತವೆ. ಮೊದಲನೆಯದು 'ಬುಫಾಡಿಯೆನೊಲೈಡ್ಸ್' ಆಗಿದ್ದು, ಇದನ್ನು ಕಪ್ಪೆಗಳು ತಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಬಳಸಿ ಸ್ವತಃ ತಾವೇ ತಯಾರಿಸಿಕೊಳ್ಳುತ್ತವೆ. ಆದರೆ 'ಗ್ವಾನಿಡಿನಿಯಮ್ ಆಲ್ಕಲಾಯ್ಡ್ಸ್' ಎಂದು ಕರೆಯಲ್ಪಡುವ ಎರಡನೆಯ ವಿಷವು ಅತ್ಯಂತ ಸಂಕೀರ್ಣವಾಗಿದ್ದು, ಇದರಲ್ಲಿ ಪ್ರಸಿದ್ಧ 'ಟೆಟ್ರೋಡೋಟಾಕ್ಸಿನ್' (TTX) ಸೇರಿದೆ.&lt;/p&gt;&lt;p&gt;ಕಾಡಿನಲ್ಲಿ ಸ್ವಚ್ಛಂದವಾಗಿ ಬದುಕುವ ಹಾರ್ಲೆಕ್ವಿನ್ ಕಪ್ಪೆಗಳ ದೇಹದಲ್ಲಿ ಈ ವಿಷಗಳು ಹೇರಳವಾಗಿರುತ್ತವೆ. ಆದರೆ, ಮಾನವನ ನಿಗಾದಲ್ಲಿ ಅಂದರೆ ಸೆರೆಯಲ್ಲಿ ಜನಿಸಿ ಬೆಳೆಯುವ ವಯಸ್ಕ ಕಪ್ಪೆಗಳ ಚರ್ಮದಲ್ಲಿ ಈ ಟೆಟ್ರೋಡೋಟಾಕ್ಸಿನ್ ವಿಷವು ಸಂಪೂರ್ಣವಾಗಿ ನಾಪತ್ತೆಯಾಗಿರುವುದು ವಿಜ್ಞಾನಿಗಳಿಗೆ ಗೋಚರಿಸಿದೆ. ದಕ್ಷಿಣ ಅಮೆರಿಕಾದ ದಟ್ಟವಾದ ಮಳೆಕಾಡುಗಳ ನೈಸರ್ಗಿಕ ಪರಿಸರದಲ್ಲಿ ಕಪ್ಪೆಗಳ ಚರ್ಮದ ಮೇಲೆ ವಾಸಿಸುವ ವಿಶಿಷ್ಟ ಬ್ಯಾಕ್ಟೀರಿಯಾಗಳು ಈ ವಿಷವನ್ನು ಉತ್ಪಾದಿಸುತ್ತವೆ. ಹೀಗಾಗಿ, ಆ ವಿಶಿಷ್ಟ ಮಳೆಕಾಡಿನ ಪರಿಸರವಿಲ್ಲದೆ ಕೃತಕ ಜಾಗದಲ್ಲಿ ಬೆಳೆಯುವ ಕಪ್ಪೆಗಳಿಗೆ ಈ ವಿಷವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.&lt;/p&gt;&lt;h2&gt;ಹಾರ್ಲೆಕ್ವಿನ್ ಕಪ್ಪೆಗಳ ವಿಷದ ಅಪ್ರತಿಮ ವಿಶಿಷ್ಟತೆ ಮತ್ತು ವೈದ್ಯಕೀಯ ಮಹತ್ವ&lt;/h2&gt;&lt;p&gt;ಹಾರ್ಲೆಕ್ವಿನ್ ಕಪ್ಪೆಗಳಲ್ಲಿ ಕಂಡುಬರುವ ರಾಸಾಯನಿಕ ವಿಷಗಳು ಭೂಮಿಯ ಮೇಲೆ ಬೇರೆಲ್ಲೂ ಸಿಗದಷ್ಟು ವಿಶಿಷ್ಟವಾಗಿವೆ. ಉದಾಹರಣೆಗೆ, ಪನಾಮದ ಪ್ರಸಿದ್ಧ ಗೋಲ್ಡನ್ ಫ್ರಾಗ್ ಅತ್ಯಂತ ಶಕ್ತಿಶಾಲಿ 'ಜೆಟೆಕಿಟಾಕ್ಸಿನ್ ಎಬಿ' ಎಂಬ ವಿಶಿಷ್ಟ ವಿಷವನ್ನು ಹೊಂದಿದೆ. ಈ ವಿಷವು ಎಷ್ಟು ಮಾರಕವಾಗಿದೆ ಎಂದರೆ, ಕೇವಲ ಒಂದು ಕಪ್ಪೆಯ ಚರ್ಮದಲ್ಲಿರುವ ವಿಷದಿಂದ ಸೈದ್ಧಾಂತಿಕವಾಗಿ ಸುಮಾರು 1,200 ಇಲಿಗಳನ್ನು ಕ್ಷಣಾರ್ಧದಲ್ಲಿ ಕೊಲ್ಲಬಹುದು.&lt;/p&gt;&lt;p&gt;ಈ ರಾಸಾಯನಿಕಗಳು ಪರಭಕ್ಷಕ ಜೀವಿಗಳ ದೇಹದ ನರ ಸಂಕೇತಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ, ಪಾರ್ಶ್ವವಾಯು ಅಥವಾ ಉಸಿರಾಟದ ವೈಫಲ್ಯವನ್ನು ಉಂಟುಮಾಡುತ್ತವೆ. ಇಂತಹ ಅಮೂಲ್ಯವಾದ ನೈಸರ್ಗಿಕ ರಾಸಾಯನಿಕಗಳು ಕಣ್ಮರೆಯಾಗುತ್ತಿರುವುದು ಕೇವಲ ಪರಿಸರಕ್ಕೆ ಮಾತ್ರವಲ್ಲದೆ ವೈದ್ಯಕೀಯ ಕ್ಷೇತ್ರಕ್ಕೂ ದೊಡ್ಡ ನಷ್ಟವಾಗಿದೆ. ಏಕೆಂದರೆ, ಈ ವಿಷಗಳನ್ನು ಬಳಸಿ ಭವಿಷ್ಯದಲ್ಲಿ ಮಾನವನ ಜೀವ ಉಳಿಸುವ ಹೊಸ ಔಷಧಿಗಳನ್ನು ತಯಾರಿಸುವ ಸಂಶೋಧನೆಗಳು ಸ್ಥಗಿತಗೊಳ್ಳುವ ಅಪಾಯ ಎದುರಾಗಿದೆ.&lt;/p&gt;&lt;h2&gt;ಮಾರಕ ಶಿಲೀಂಧ್ರ ಮತ್ತು ಉಭಯಚರಗಳ ಅಳಿವು&lt;/h2&gt;&lt;p&gt;ಪ್ರಸ್ತುತ ಈ ಕಪ್ಪೆಗಳ ಜೀವಕ್ಕೆ 'ಉಭಯಚರ ಕೈಟ್ರಿಡ್ ಶಿಲೀಂಧ್ರ' (Chytrid Fungus) ಎಂಬ ಮಾರಕ ರೋಗಾಣು ದೊಡ್ಡ ಶಾಪವಾಗಿ ಪರಿಣಮಿಸಿದೆ. ಈ ಕಪ್ಪೆಗಳ ಅವನತಿಗೆ ಇದೇ ಪ್ರಮುಖ ಕಾರಣ ಎಂದು ಜಾಗತಿಕ ಸಂರಕ್ಷಣಾ ಸಂಸ್ಥೆಗಳು ಗುರುತಿಸಿವೆ. ಕಪ್ಪೆಗಳ ಚರ್ಮದಲ್ಲಿರುವ ವಿಷಗಳು ಕೇವಲ ಪರಭಕ್ಷಕರಿಂದ ರಕ್ಷಣೆ ನೀಡುವುದು ಮಾತ್ರವಲ್ಲದೆ, ಇಂತಹ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಆಂಟಿಮೈಕ್ರೊಬಿಯಲ್ ಶಕ್ತಿಯನ್ನೂ ಒದಗಿಸುತ್ತವೆ ಎಂದು ವಿಜ್ಞಾನಿಗಳು ನಂಬಿದ್ದಾರೆ.&lt;/p&gt;&lt;p&gt;ಆದರೆ, ಈ ಶಿಲೀಂಧ್ರದ ತೀವ್ರತೆಯ ಮುಂದೆ ಹಾರ್ಲೆಕ್ವಿನ್ ಕಪ್ಪೆಗಳು ತತ್ತರಿಸಿಹೋಗುತ್ತಿವೆ. PARC ಸಂಸ್ಥೆಯ ಇತ್ತೀಚಿನ ವರದಿಗಳ ಪ್ರಕಾರ, ಈ ಶಿಲೀಂಧ್ರಕ್ಕೆ ಒಡ್ಡಿಕೊಂಡು ಗುಣಮುಖರಾದ ಕಪ್ಪೆಗಳಿಗೆ ಮತ್ತೊಮ್ಮೆ ಸೋಂಕು ತಗುಲಿಸಿದಾಗ ಅವುಗಳ ಬದುಕುಳಿಯುವಿಕೆಯ ಪ್ರಮಾಣದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅಂದರೆ, ಈ ರೋಗದ ವಿರುದ್ಧ ಇವುಗಳಲ್ಲಿ ಯಾವುದೇ ನೈಸರ್ಗಿಕ ಲಸಿಕೆಯಂತಹ ರೋಗನಿರೋಧಕ ಶಕ್ತಿ ಬೆಳೆಯುತ್ತಿಲ್ಲ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.&lt;/p&gt;&lt;h2&gt;ಕಪ್ಪೆಗಳ ಪುನರುಜ್ಜೀವನಕ್ಕೆ ವಿಜ್ಞಾನಿಗಳ ನವೀನ ಪ್ರಯೋಗಗಳು&lt;/h2&gt;&lt;p&gt;ಈ ಜೀವಿಗಳು ಕಾಡಿನಲ್ಲಿ ಸುಲಭವಾಗಿ ಪರಭಕ್ಷಕಗಳಿಗೆ ಬಲಿಯಾಗುವುದನ್ನು ತಪ್ಪಿಸಲು ವಿಜ್ಞಾನಿಗಳು ಸದ್ಯ ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಭಾಗವಾಗಿ, ಸೆರೆಯಲ್ಲಿರುವ ಕಪ್ಪೆಗಳಿಗೆ ಕೃತಕವಾಗಿ 'ಟೆಟ್ರೋಡೋಟಾಕ್ಸಿನ್ ವಿಷವನ್ನು ಇಂಜೆಕ್ಟ್ ಮಾಡಿದ ಪತಂಗದ ಲಾರ್ವಾಗಳನ್ನು' ಆಹಾರವಾಗಿ ನೀಡಲಾಗುತ್ತಿದೆ. ಈ ಮೂಲಕ ಕಪ್ಪೆಗಳು ತಾವು ತಿನ್ನುವ ಆಹಾರದಿಂದ ವಿಷವನ್ನು ಪ್ರತ್ಯೇಕಿಸಿ, ಅದನ್ನು ತಮ್ಮ ಚರ್ಮದ ಮೇಲೆ ರಕ್ಷಣಾ ಕವಚವಾಗಿ ಮರುಸ್ಥಾಪಿಸಿಕೊಳ್ಳಬಲ್ಲವೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ. ಏಕೆಂದರೆ, ವಿಷವಿಲ್ಲದ ಕಪ್ಪೆಗಳು ಕಾಡಿಗೆ ಮರಳಿದಾಗ ಪರಭಕ್ಷಕಗಳಿಗೆ ಸುಲಭವಾಗಿ ಆಹಾರವಾಗಿ ಸಾಯುತ್ತವೆ.&lt;/p&gt;&lt;p&gt;ಇದರೊಂದಿಗೆ, ಕಪ್ಪೆಗಳ ಜೀವಶಾಸ್ತ್ರವನ್ನು ಆಧರಿಸಿ ಅವುಗಳ ಬದುಕುಳಿಯುವಿಕೆಯನ್ನು ಊಹಿಸುವ ಅಧ್ಯಯನಗಳೂ ನಡೆಯುತ್ತಿವೆ. ಸಂಶೋಧಕರ ಪ್ರಕಾರ, ತಗ್ಗು ಪ್ರದೇಶಗಳಲ್ಲಿ ಕಂಡುಬರುವ ವೇರಿಯಬಲ್ ಹಾರ್ಲೆಕ್ವಿನ್ ಕಪ್ಪೆಗಳು (ಅಟೆಲೋಪಸ್ ವೇರಿಯಸ್) ಇತರ ತಳಿಗಳಿಗಿಂತ ರೋಗಗಳಿಗೆ ಕಡಿಮೆ ದುರ್ಬಲವಾಗಿದ್ದು, ಸಂರಕ್ಷಣಾ ಪ್ರಯತ್ನಗಳಿಗೆ ಒಂದು ಆಶಾದಾಯಕ ಕಿರಣವಾಗಿ ಮೂಡಿಬಂದಿವೆ.&lt;/p&gt;&lt;h2&gt;ಜಾಗತಿಕ ಸಂರಕ್ಷಣಾ ಯೋಜನೆ ಮತ್ತು ಭವಿಷ್ಯದ ದೃಷ್ಟಿಕೋನ&lt;/h2&gt;&lt;p&gt;ಹಾರ್ಲೆಕ್ವಿನ್ ಕಪ್ಪೆಗಳನ್ನು ಅಳಿವಿನ ಅಂಚಿನಿಂದ ಪಾರು ಮಾಡಲು ಜಾಗತಿಕ ಸಮುದಾಯವು 'ಹಾರ್ಲೆಕ್ವಿನ್ ಟೋಡ್ ಸಂರಕ್ಷಣಾ ಕ್ರಿಯಾ ಯೋಜನೆ' (ಹಾರ್ಲೆಕ್ಯಾಪ್) ಎಂಬ 20 ವರ್ಷಗಳ ಸುದೀರ್ಘ ಕಾರ್ಯತಂತ್ರವನ್ನು ರೂಪಿಸಿದೆ. ಈ ಯೋಜನೆಯು ಕಳೆದುಹೋದ ಪ್ರಭೇದಗಳ ಪತ್ತೆ ಹಾಗೂ ಕೃತಕ ವಾತಾವರಣದಲ್ಲಿ ಸುರಕ್ಷಿತ ವಸಾಹತುಗಳನ್ನು ನಿರ್ಮಿಸುವ ಪ್ರಮುಖ ಉದ್ದೇಶಗಳನ್ನು ಹೊಂದಿದೆ. ಸದ್ಯ PARC ಸಂಸ್ಥೆಯು ಇಂತಹ 12 ಆದ್ಯತೆಯ ಸಂರಕ್ಷಣಾ ಪ್ರಭೇದಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.&lt;/p&gt;&lt;p&gt;ಈ ವಿಶಿಷ್ಟ ಉಭಯಚರಗಳನ್ನು ರಕ್ಷಿಸುವುದು ಎಂದರೆ ಕೇವಲ ಒಂದು ಜೀವಿಯನ್ನು ಉಳಿಸುವುದಲ್ಲ, ಬದಲಿಗೆ ನಮ್ಮ ಸುತ್ತಮುತ್ತಲಿನ ಶುದ್ಧ ಜಲಮೂಲಗಳು ಮತ್ತು ಸಮತೋಲಿತ ಪರಿಸರ ವ್ಯವಸ್ಥೆಯನ್ನು ಕಾಪಾಡುವುದಾಗಿದೆ. ಪ್ರಕೃತಿಯ ಈ ವರ್ಣರಂಜಿತ ಜೀವಿಗಳು ಭವಿಷ್ಯದ ಪೀಳಿಗೆಗೂ ಉಳಿಯುವಂತಾಗಲು ಜಾಗತಿಕ ಮಟ್ಟದಲ್ಲಿ ನಿರಂತರ ಹೂಡಿಕೆ ಮತ್ತು ತೀವ್ರ ಸಂಶೋಧನೆಗಳು ಇಂದಿನ ತುರ್ತು ಅಗತ್ಯವಾಗಿವೆ.&lt;/p&gt;]]></content:encoded>
            <category>science</category>
            <dc:creator>Gowthami K</dc:creator>
            <atom:link href="https://kannada.asianetnews.com/science/the-toxicity-crisis-why-the-world-most-vibrant-harlequin-frogs-are-suddenly-losing-their-lethal-defenses-gdp/articleshow-9d9afkd"/>
        </item>
        <item>
            <title><![CDATA[ಚಂದ್ರನ ಮೇಲೆ ಅಪ್ಪಳಿಸಿದ ಸ್ಪೇಸ್‌ ಎಕ್ಸ್‌ ರಾಕೆಟ್‌: 60 ಅಡಿ ಅಗಲ ಕುಳಿ ನಿರ್ಮಾಣ]]></title>
            <link>https://kannada.asianetnews.com/gallery/science/spacex-falcon-9-rocket-crashes-into-moon-creates-60-foot-crater-san-ft8v712</link>
            <guid isPermaLink="true">https://kannada.asianetnews.com/gallery/science/spacex-falcon-9-rocket-crashes-into-moon-creates-60-foot-crater-san-ft8v712</guid>
            <pubDate>Fri, 07 Aug 2026 08:30:49 +0530</pubDate>
            <description><![CDATA[&lt;p&gt;ಒಂದು ವರ್ಷದಿಂದ ಬಾಹ್ಯಾಕಾಶದಲ್ಲಿ ತೇಲುತ್ತಿದ್ದ ಸ್ಪೇಸ್&zwnj;ಎಕ್ಸ್&zwnj;ನ ಫಾಲ್ಕನ್&zwnj;-9 ರಾಕೆಟ್&zwnj;ನ ಭಾಗವೊಂದು ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಅಪ್ಪಳಿಸಿದೆ. ಗಂಟೆಗೆ 5,400 ಮೈಲಿ ವೇಗದಲ್ಲಿ ಅಪ್ಪಳಿಸಿದ ಈ ರಾಕೆಟ್, ಚಂದ್ರನ ಮೇಲೆ ದೊಡ್ಡ ಕುಳಿಯನ್ನು ಸೃಷ್ಟಿಸಿರಬಹುದೆಂದು ಅಂದಾಜಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzd278sbtacpkmbvyb4k5n12,imgname-spaccex-moon-crash--2--1786071196459.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ವರ್ಷದಿಂದ ಬಾಹ್ಯಾಕಾಶದಲ್ಲಿ ತೇಲುತ್ತಿದ್ದ ಸ್ಪೇಸ್&zwnj;ಎಕ್ಸ್&zwnj;ನ ಫಾಲ್ಕನ್&zwnj;-9 ರಾಕೆಟ್&zwnj;ನ ಭಾಗವೊಂದು ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಅಪ್ಪಳಿಸಿದೆ. ಗಂಟೆಗೆ 5,400 ಮೈಲಿ ವೇಗದಲ್ಲಿ ಅಪ್ಪಳಿಸಿದ ಈ ರಾಕೆಟ್, ಚಂದ್ರನ ಮೇಲೆ ದೊಡ್ಡ ಕುಳಿಯನ್ನು ಸೃಷ್ಟಿಸಿರಬಹುದೆಂದು ಅಂದಾಜಿಸಲಾಗಿದೆ.&lt;/p&gt;&lt;img&gt;&lt;p&gt;ಕಳೆದೊಂದು ವರ್ಷದಿಂದ ಬಾಹ್ಯಾಕಾಶದಲ್ಲಿ ಅಲೆಯುತ್ತಿದ್ದ ಸ್ಪೇಸ್&zwnj;ಎಕ್ಸ್&zwnj;ನ ಫಾಲ್ಕನ್&zwnj;-9 ರಾಕೆಟ್&zwnj;ನ ಭಾಗವೊಂದು ಬುಧವಾರ ಬೆಳಗ್ಗೆ ಚಂದ್ರನ ಗುರುತ್ವಾಕರ್ಷಣೆಯ ಸೆಳೆತಕ್ಕೆ ಸಿಕ್ಕು ಅದಕ್ಕಪ್ಪಳಿಸಿದೆ.&lt;/p&gt;&lt;img&gt;&lt;p&gt;ಪರಿಣಾಮ ಭೂಮಿಗೂ ಕಾಣುವಷ್ಟು ಪ್ರಖರ ಬೆಳಕು ಉತ್ಪತ್ತಿಯಾಗಿದೆ. ಒಂದು ಸ್ಕೂಲ್&zwnj; ಬಸ್&zwnj;ನಷ್ಟು ದೊಡ್ಡದಿದ್ದ 4 ಟನ್&zwnj; ತೂಕದ ರಾಕೆಟ್&zwnj; ಗಂಟೆಗೆ 5,400 ಮೈಲಿಯ ವೇಗದಲ್ಲಿ ಕ್ರ್ಯಾಶ್&zwnj; ಆದ ಜಾಗದಲ್ಲಿ 60 ಅಡಿ ಅಗಲ ಹಾಗೂ 12 ಅಡಿ ಆಳದ ಕುಳಿ ಸೃಷ್ಟಿಯಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.&lt;/p&gt;&lt;img&gt;&lt;p&gt;ಚಂದ್ರನ ಐನ್&zwnj;ಸ್ಟೈನ್ ಕುಳಿಯ ಬಳಿ ಕ್ರ್ಯಾಶ್&zwnj; ಆಗಿದ್ದು, ಈ ಪ್ರಕ್ರಿಯೆ ಅಥವಾ ಪರಿಣಾಮದ ಸ್ಪಷ್ಟ ವೀಕ್ಷಣೆ ಈ ವರೆಗೆ ಸಾಧ್ಯವಾಗಿಲ್ಲ. ಆದಕಾರಣ, ಚಂದ್ರನ ಸುತ್ತ ಸುತ್ತುತ್ತಿರುವ ತಮ್ಮ ನೌಕೆಗಳ ಸಹಾಯದಿಂದ ರಾಕೆಟ್&zwnj; ಬಿದ್ದ ಜಾಗದ ಫೋಟೋಗಳನ್ನು ಸೆರೆಹಿಡಿಯಲು ಅಮೆರಿಕದ ನಾಸಾ ಮತ್ತು ದಕ್ಷಿಣ ಕೊರಿಯಾದ ಬಾಹ್ಯಾಕಾಶ ಸಂಸ್ಥೆಗಳು ಯತ್ನಿಸುತ್ತಿದ್ದವು.&lt;/p&gt;&lt;img&gt;&lt;p&gt;ಇದರ ನಡುವೆ ದಕ್ಷಿಣ ಕೊರಿಯಾದ ಆರ್ಬಿಟರ್&zwnj; ಆ ಕ್ಷಣದ ಫೋಟೋಗಳನ್ನು ತೆಗೆಯುವಲ್ಲಿ ಯಶ ಕಂಡಿದೆ. ತಾನು ಹೊತ್ತುತಂದಿದ್ದ ಬಾಹ್ಯಾಕಾಶ ನೌಕೆಗಳನ್ನು ಗಮ್ಯಸ್ಥಾನಕ್ಕೆ ತಲುಪಿಸಿದ ಬಳಿಕ ಇಂಧನ ಖಾಲಿಯಾದ ಪರಿಣಾಮ ದಿಕ್ಕು-ದೆಸೆಯಿಲ್ಲದೆ ಅಂತರಿಕ್ಷದಲ್ಲಿ ಈ ರಾಕೆಟ್&zwnj; ತೇಲಾಡುತ್ತಿತ್ತು.&lt;/p&gt;&lt;img&gt;&lt;p&gt;ಹೀಗೆ ಅಲೆಯುತ್ತಿದ್ದ ವೇಳೆ ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ, ಅದರತ್ತ ಆಕರ್ಷಿಸಲ್ಪಟ್ಟು, ಅಪ್ಪಳಿಸಿದೆ. ಚಂದ್ರನ ಮೇಲೆ ಕುಳಿಗಳ ಸೃಷ್ಟಿಯ ಬಗೆಗಿನ ಅಧ್ಯಯನಕ್ಕೆ ಈ ಪ್ರಕ್ರಿಯೆ ಸಹಕಾರಿಯಾಗಿದೆ.&lt;/p&gt;]]></content:encoded>
            <category>science</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/science/spacex-falcon-9-rocket-crashes-into-moon-creates-60-foot-crater-san-ft8v712"/>
        </item>
        <item>
            <title><![CDATA[ಕೃತಕ ಬುದ್ಧಿಮತ್ತೆ (AI) ಬಳಸಿ ವೈರಸ್‌ಗಳನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿ]]></title>
            <link>https://kannada.asianetnews.com/science/scientists-have-succeeded-in-creating-viruses-using-artificial-intelligence-mrq/articleshow-fym66gk</link>
            <guid isPermaLink="true">https://kannada.asianetnews.com/science/scientists-have-succeeded-in-creating-viruses-using-artificial-intelligence-mrq/articleshow-fym66gk</guid>
            <pubDate>Sun, 09 Aug 2026 07:09:02 +0530</pubDate>
            <description><![CDATA[ಕೃತಕ ಬುದ್ಧಿಮತ್ತೆ (ಎಐ) ಬಳಸಿ ವಿಜ್ಞಾನಿಗಳು ವೈರಸ್&zwnj;ಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ವೈರಸ್&zwnj;ಗಳು ಬ್ಯಾಕ್ಟೀರಿಯಾಗಳನ್ನು ಮಾತ್ರ ನಾಶಪಡಿಸುತ್ತವೆಯಾದರೂ, ಭವಿಷ್ಯದಲ್ಲಿ ಇದು ಮಾನವರಿಗೆ ಮಾರಕವಾಗಬಲ್ಲ ವೈರಸ್&zwnj;ಗಳ ಸೃಷ್ಟಿಗೆ ಕಾರಣವಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj2m3qwym3xv5vx08mmp5jq,imgname-ai-virus-1786239389436.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಇಷ್ಟು ದಿನ ಫೋಟೋ, ವಿಡಿಯೋ, ಆ್ಯಪ್&zwnj;ಗಳ ಸೃಷ್ಟಿಗೆ ಬಳಕೆಯಾಗುತ್ತಿದ್ದ ಕೃತಕ ಬುದ್ಧಿಮತ್ತೆ ಇದೀಗ ವೈರಸ್&zwnj; ಅನ್ನು ಸೃಷ್ಟಿಸಲೂ ಶಕ್ತವಾಗಿದೆ. ಸೈನ್ಸ್&zwnj; ನಿಯತಕಾಲಿಕದಲ್ಲಿ ಈ ಸಂಶೋಧನೆಯ ವರದಿ ಪ್ರಕಟವಾಗಿದ್ದು, ಇದು ಮನುಕುಲಕ್ಕೆ ವರವೇ? ಶಾಪವೇ? ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಸದ್ಯ ಸೃಷ್ಟಿಸಲಾಗಿರುವ ವೈರಸ್&zwnj;, ಬ್ಯಾಕ್ಟೀರಿಯಾಗಳ ಮೇಲಷ್ಟೇ ಪರಿಣಾಮ ಬೀರುವ ಕಾರಣ ಮಾನವರು, ಪ್ರಾಣಿಗಳು ಅಥವಾ ಗಿಡಗಳಿಗೆ ಯಾವುದೇ ಹಾನಿ ಮಾಡುವ ಅಪಾಯ ಇಲ್ಲ.&lt;/p&gt;&lt;p&gt;ಸ್ಟ್ಯಾನ್&zwnj;ಫೋರ್ಡ್ ವಿಶ್ವವಿದ್ಯಾಲಯದ ಡಾ. ಬ್ರಿಯಾನ್ ಹೈ ಅವರ ತಂಡ ಎಐ ಬಳಸಿಕೊಂಡು ಫೇಜ್&zwnj;ಗಳನ್ನು (ಬ್ಯಾಕ್ಟೀರಿಯಾಗೆ ಸೋಂಕು ತಗುಲಿಸಿ, ಅದರೊಳಗೆ ಸೇರಿಕೊಂಡು ಗುಣಿಸಿ ಕೊಲ್ಲುವ ವೈರಸ್&zwnj;ನ ಒಂದು ವಿಧ) ಸೃಷ್ಟಿಸಿದೆ. ಈ ಪ್ರಕ್ರಿಯೆಗೆ ಬಳಸಲಾದ ಇವಿಒ1 ಮತ್ತು 2 ಮಾಡೆಲ್&zwnj;ಗಳು 20 ಲಕ್ಷ ಫೇಜ್&zwnj;ಗಳ ಅಧ್ಯಯನದ ಬಳಿಕ ಈ ಸಾಧನೆ ಮಾಡಿವೆ. ಬಳಿಕ ಎಐ ಸೃಷ್ಟಿತ ಜೆನೆಟಿಕ್ ಸೀಕ್ವೆನ್ಸಿಂಗ್&zwnj; ಮೂಲಕ ಇವುಗಳ ಕ್ಷಮತೆಯನ್ನು ಪರೀಕ್ಷಿಸಲಾಗಿದ್ದು, ಹಲವು ಬ್ಯಾಕ್ಟೀರಿಯಾಗಳಿಗೆ ಸೋಂಕು ತಗುಲಿಸುವಲ್ಲಿ ಅವು ಯಶಸ್ವಿಯಾಗಿವೆ.&lt;/p&gt;&lt;h2&gt;&lt;strong&gt;ವರವೇಕೆ?&lt;/strong&gt;&lt;/h2&gt;&lt;p&gt;ಎಐ ಸೃಷ್ಟಿತ ವೈರಸ್&zwnj;ಗಳನ್ನು ಬಳಸಿಕೊಂಡು, ಸದ್ಯ ಲಭ್ಯವಿರುವ ಔಷಧಿ ಅಥವಾ ಚಿಕಿತ್ಸೆಗಳಿಗೆ ಬಗ್ಗದ ಬ್ಯಾಕ್ಟೀರಿಯಾಗಳನ್ನು ಬಗ್ಗುಬಡಿಯಬಹುದು. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಎಐ ವೈರಸ್&zwnj;ಗಳ ಸೃಷ್ಟಿಯನ್ನು ತ್ವರಿತವಾಗಿ ಹಾಗೂ ಅಪಾರ ಪ್ರಮಾಣದಲ್ಲಿ ಮಾಡಬಹುದು.&lt;/p&gt;&lt;h3&gt;&lt;strong&gt;ಆತಂಕವೇಕೆ?&lt;/strong&gt;&lt;/h3&gt;&lt;p&gt;ಸದ್ಯ ಸೃಷ್ಟಿಸಲಾಗಿರುವುದು ಸೋಂಕುಗಳಿಗೆ ಮಾರಕವಾದ ಬ್ಯಾಕ್ಟೀರಿಯಾಗಳನ್ನು ಮಾತ್ರ. ಆದರೆ ಮುಂದಿನ ದಿನಗಳಲ್ಲಿ ಸಂಶೋಧನೆಗಳು ತೀವ್ರಗೊಂಡು ಇವುಗಳ ವ್ಯಾಪ್ತಿ ವಿಸ್ತರಿಸುವ ಸಾಧ್ಯತೆ ಇದ್ದೇ ಇದೆ. ಈ ಪ್ರಕ್ರಿಯೆಯಲ್ಲಿ, ಮಾನವರು ಅಥವಾ ಪ್ರಾಣಿಗಳಿಗೆ ಹಾನಿಯುಂಟುಮಾಡಬಲ್ಲ ವೈರಸ್&zwnj; ಸೃಷ್ಟಿಯಾಗಬಹುದು. ಇವುಗಳನ್ನು ಸರಿಯಾಗಿ ನಿಯಂತ್ರಿಸದಿದ್ದಲ್ಲಿ ಅಥವಾ ದುಷ್ಟರ ಕೈಗೆ ಸಿಕ್ಕಲ್ಲಿ (ಕೊರೋನಾ ರೀತಿ) ಮಹಾಮಾರಿ ಸೃಷ್ಟಿಯಾಗುವುದು ಖಚಿತ. ಸರ್ವವ್ಯಾಪಿಯಾಗಿ ಸುಮಾರು 3 ವರ್ಷ ವಿಶ್ವವನ್ನು ಕಾಡಿದ್ದ ಕೋವಿಡ್&zwnj;-19 ವೈರಸ್&zwnj; ಸೃಷ್ಟಿಯಾಗಿದ್ದು ಚೀನಾದ ಒಂದು ಪ್ರಯೋಗಾಲಯದಲ್ಲಿ ಎಂಬುದನ್ನು ಮರೆಯುವಂತಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru: ಹೆಸರಘಟ್ಟದಲ್ಲಿ ಭಾರತದ ಮೊದಲ ಕ್ವಾಂಟಮ್ ಸಿಟಿ ನಿರ್ಮಾಣ: ಸಿಎಂ ಡಿಕೆ ಶಿವಕುಮಾರ್&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭಾರತ ವಿಶ್ವದ AI ಬಳಕೆಯ ರಾಜಧಾನಿಯಾಗಲಿದೆ, ದೊಡ್ಡ ಕಂಪನಿಗಳಲ್ಲಿ ಲೇ ಆಫ್, ಸಣ್ಣ ಉದ್ಯಮಗಳಿಗೆ ವರ: ನಂದನ್ ನಿಲೇಕಣಿ&lt;/strong&gt;&lt;/p&gt;]]></content:encoded>
            <category>science</category>
            <dc:creator>Kannadaprabha News</dc:creator>
            <atom:link href="https://kannada.asianetnews.com/science/scientists-have-succeeded-in-creating-viruses-using-artificial-intelligence-mrq/articleshow-fym66gk"/>
        </item>
        <item>
            <title><![CDATA[ಬುರುಡೆ ಓಪನ್ ಮಾಡದೆಯೇ ಮೆದುಳು ಶಸ್ತ್ರಚಿಕಿತ್ಸೆ.. ಭಾರತೀಯ ವೈದ್ಯನ ಚಮತ್ಕಾರ..!]]></title>
            <link>https://kannada.asianetnews.com/health-life/indian-american-army-surgeon-major-jagatkumar-patel-remove-brain-tumour-through-patients-nose-gkn/articleshow-g81rtmo</link>
            <guid isPermaLink="true">https://kannada.asianetnews.com/health-life/indian-american-army-surgeon-major-jagatkumar-patel-remove-brain-tumour-through-patients-nose-gkn/articleshow-g81rtmo</guid>
            <pubDate>Mon, 03 Aug 2026 11:42:58 +0530</pubDate>
            <description><![CDATA[ಭಾರತೀಯ ಮೂಲದ ಅಮೆರಿಕನ್ ಆರ್ಮಿ ಸರ್ಜನ್ ಮೇಜರ್ ಜಗತ್ ಕುಮಾರ್ ಪಟೇಲ್, ತಲೆಬುರುಡೆ ತೆರೆಯದೆ ಮೂಗಿನ ಮೂಲಕವೇ ಗಾಲ್ಫ್ ಬಾಲ್ ಗಾತ್ರದ ಮೆದುಳಿನ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಈ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಿಂದಾಗಿ ರೋಗಿಯು ಕೇವಲ ಎರಡು ದಿನಗಳಲ್ಲಿ ಚೇತರಿಸಿಕೊಂಡಿದ್ದು, ಈ ಸಾಧನೆಗೆ ಜಾಗತಿಕ ಮನ್ನಣೆ ದೊರೆತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz340tbn6ekrfewgyn01txth,imgname-brain-1785737537909.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್: &lt;/strong&gt;ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯ ಮೂಲದ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವುದು ಹೊಸದೇನಲ್ಲ. ಈಗ ಅಮೆರಿಕದ ಆರ್ಮಿ ಸರ್ಜನ್ ಒಬ್ಬರು ಅಂತಹದ್ದೇ ಒಂದು ಅಸಾಧಾರಣ ಸಾಧನೆ ಮಾಡಿದ್ದಾರೆ. ಮೆದುಳಿನ ಶಸ್ತ್ರಚಿಕಿತ್ಸೆ ಎಂದರೆ ತಲೆಬುರುಡೆ ಸೀಳಲೇಬೇಕು ಎಂಬ ಕಾಲ ಹೋಗಿದ್ದು, ಈಗ ಕೇವಲ ಮೂಗಿನ ಮೂಲಕವೇ ಗಾಲ್ಫ್ ಬಾಲ್ ಗಾತ್ರದ ಮೆದುಳಿನ ಗಂಟನ್ನು (Brain Tumor) ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಮೇಜರ್ ಜಗತ್ ಕುಮಾರ್ ಪಟೇಲ್ ಹೊಸ ಇತಿಹಾಸ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಯಾರೀ ಸಾಧಕ ವೈದ್ಯ?&lt;/strong&gt;&lt;/h2&gt;&lt;p&gt;ಭಾರತೀಯ ಮೂಲದ ಅಮೆರಿಕನ್ ಆರ್ಮಿ ಸರ್ಜನ್ ಮೇಜರ್ ಜಗತ್ ಕುಮಾರ್ ಪಟೇಲ್ ಅವರು ವಾಷಿಂಗ್ಟನ್ ಬಳಿಯ ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್&zwnj;ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಇವರು ನ್ಯೂರೋ ಸರ್ಜನ್ ಲೆಫ್ಟಿನೆಂಟ್ ಕರ್ನಲ್ ಚಾರ್ಲ್ಸ್ ಮಿಲ್ಲರ್ ಅವರೊಂದಿಗೆ ಸೇರಿ ಈ ವಿಶಿಷ್ಟ ಶಸ್ತ್ರಚಿಕಿತ್ಸೆಯನ್ನು ಪೂರೈಸಿದ್ದಾರೆ.&lt;/p&gt;&lt;p&gt;ಮೆರೈನ್ ಕಾರ್ಪ್ಸ್ ಸ್ಟಾಫ್ ಸಾರ್ಜೆಂಟ್ ಆಂಡಿ ಆರ್ಚರ್ ಎಂಬುವವರು ಕಳೆದ 15 ವರ್ಷಗಳಿಂದ ತೀವ್ರ ತಲೆನೋವು ಮತ್ತು ದೃಷ್ಟಿ ದೋಷದಿಂದ ಬಳಲುತ್ತಿದ್ದರು. ಪರೀಕ್ಷೆ ನಡೆಸಿದಾಗ ಅವರ ಮೆದುಳಿನ ಪಿಟ್ಯುಟರಿ ಗ್ರಂಥಿಯ ಮುಂದೆ ಸುಮಾರು 4.4 ಸೆಂಟಿಮೀಟರ್ ಗಾತ್ರದ ಗಡ್ಡೆ ಇರುವುದು ಪತ್ತೆಯಾಯಿತು. ಈ ಗಡ್ಡೆಯು ಅವರ ದೃಷ್ಟಿ ನರದ ಮೇಲೆ ಒತ್ತಡ ಹೇರುತ್ತಿದ್ದರಿಂದ ಅವರು ಕಣ್ಣು ಕಾಣದಾಗುವ ಅಪಾಯವಿತ್ತು.&lt;/p&gt;&lt;h2&gt;&lt;strong&gt;ಮೂಗಿನ ಮೂಲಕ ಮಿದುಳಿಗೆ ದಾರಿ!&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಇಂತಹ ದೊಡ್ಡ ಗಡ್ಡೆಗಳನ್ನು ತೆಗೆಯಲು ತಲೆಬುರುಡೆಯನ್ನು ತೆರೆಯುವ (Open Brain Surgery) ಅವಶ್ಯಕತೆ ಇರುತ್ತದೆ. ಆದರೆ ಮೇಜರ್ ಜಗತ್ ಕುಮಾರ್ ಪಟೇಲ್ ಅವರು 'ಮಿನಿಮಲಿ ಇನ್ವೇಸಿವ್' (Minimally Invasive) ಎಂಬ ಅತ್ಯಾಧುನಿಕ ವಿಧಾನವನ್ನು ಬಳಸಲು ನಿರ್ಧರಿಸಿದರು. ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ಮೂಗಿನ ಮೂಲಕ ಕಳುಹಿಸಿ, ಮಿದುಳಿನವರೆಗೆ ದಾರಿ ಮಾಡಿಕೊಟ್ಟರು. ಈ ಮಾರ್ಗದ ಮೂಲಕವೇ ಶೇ. 99 ರಷ್ಟು ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು.&lt;/p&gt;&lt;h2&gt;&lt;strong&gt;ಎರಡೇ ದಿನದಲ್ಲಿ ಚೇತರಿಕೆ&lt;/strong&gt;&lt;/h2&gt;&lt;p&gt;ಈ ಶಸ್ತ್ರಚಿಕಿತ್ಸೆಯ ವಿಶೇಷತೆ ಎಂದರೆ ಆಪರೇಷನ್ ಆದ ಕೇವಲ ಎರಡು ದಿನಗಳಲ್ಲಿ ರೋಗಿ ಆಂಡಿ ಆರ್ಚರ್ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ತಲೆಬುರುಡೆ ಸೀಳದ ಕಾರಣ ಯಾವುದೇ ಗಾಯದ ಗುರುತುಗಳಿಲ್ಲ. ಅವರ ದೃಷ್ಟಿ ಕೂಡ ಈಗ ಸುಧಾರಿಸುತ್ತಿದೆ. ಗಡ್ಡೆಯು ಸರಿಯಾದ ಸ್ಥಳದಲ್ಲಿದ್ದರೆ ಈಗ ಓಪನ್ ಸರ್ಜರಿಯ ಅಗತ್ಯವೇ ಇಲ್ಲ. ಮೂಗಿನ ಮೂಲಕವೇ ಅದನ್ನು ಸುರಕ್ಷಿತವಾಗಿ ತೆಗೆಯಬಹುದು ಎಂದು ಮೇಜರ್ ಪಟೇಲ್ ಹೆಮ್ಮೆಯಿಂದ ಹೇಳಿದ್ದಾರೆ. ಭಾರತೀಯ ಮೂಲದ ವೈದ್ಯನ ಈ ಅದ್ಭುತ ಚಾಣಾಕ್ಷತನಕ್ಕೆ ಅಮೆರಿಕದ ರಕ್ಷಣಾ ಇಲಾಖೆ (Pentagon) ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹೊಸ ವಿಧಾನವು ಮುಂದಿನ ದಿನಗಳಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಯಲ್ಲಿ ದೊಡ್ಡ ಕ್ರಾಂತಿ ಉಂಟುಮಾಡಲಿದೆ.&lt;/p&gt;]]></content:encoded>
            <category>science</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/health-life/indian-american-army-surgeon-major-jagatkumar-patel-remove-brain-tumour-through-patients-nose-gkn/articleshow-g81rtmo"/>
        </item>
        <item>
            <title><![CDATA[ಇಂಜಿನಿಯರಿಂಗ್‌ ಪ್ಲಾಸ್ಟಿಕ್‌ ಆಗಬಹುದು ನಿಮ್ಮನೆಯ ಹಾಲಿನ ಖಾಲಿ ಪ್ಯಾಕೆಟ್‌, IISc ವಿಜ್ಞಾನಿಗಳ ಕ್ರಾಂತಿಕಾರಿ ತಂತ್ರಜ್ಞಾನ!]]></title>
            <link>https://kannada.asianetnews.com/science/iisc-bengaluru-develops-tech-to-convert-waste-milk-pouches-into-plastic-san/articleshow-ghfg93a</link>
            <guid isPermaLink="true">https://kannada.asianetnews.com/science/iisc-bengaluru-develops-tech-to-convert-waste-milk-pouches-into-plastic-san/articleshow-ghfg93a</guid>
            <pubDate>Mon, 03 Aug 2026 19:06:12 +0530</pubDate>
            <description><![CDATA[&lt;p&gt;ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು, ಪರಿಸರಕ್ಕೆ ಮಾರಕವಾಗಿದ್ದ ಹಾಲಿನ ಪ್ಲಾಸ್ಟಿಕ್ ಪೊಟ್ಟಣಗಳನ್ನು ಅತ್ಯಂತ ಗಟ್ಟಿಮುಟ್ಟಾದ 'ಹೈ-ಪರ್ಫಾರ್ಮೆನ್ಸ್ ಇಂಜಿನಿಯರಿಂಗ್ ಪ್ಲಾಸ್ಟಿಕ್' ಆಗಿ ಪರಿವರ್ತಿಸುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h5y7navr2eetj7j2x77kf1bc,imgname-Nandini-milk-1690010561400.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.3): &lt;/strong&gt;ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ವಿಲೇವಾರಿಯಾಗಿ ಪರಿಸರಕ್ಕೆ ಮಾರಕವಾಗುತ್ತಿದ್ದ ಹಾಲಿನ ಪ್ಲಾಸ್ಟಿಕ್ ಪೊಟ್ಟಣಗಳನ್ನು (ಮೈಕ್ರೋ ಪ್ಲಾಸ್ಟಿಕ್ ಕವರ್&zwnj;ಗಳು) ಅತ್ಯಂತ ಗಟ್ಟಿಮುಟ್ಟಾದ 'ಹೈ-ಪರ್ಫಾರ್ಮೆನ್ಸ್ ಇಂಜಿನಿಯರಿಂಗ್ ಪ್ಲಾಸ್ಟಿಕ್' ಆಗಿ ಪರಿವರ್ತಿಸುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಬೆಂಗಳೂರಿನ ಪ್ರತಿಷ್ಠಿತ 'ಭಾರತೀಯ ವಿಜ್ಞಾನ ಸಂಸ್ಥೆ'ಯ (IISc) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಅದಕ್ಕೆ ಪೇಟೆಂಟ್ ಕೂಡ ಪಡೆದುಕೊಂಡಿದ್ದಾರೆ. ಈ ತಂತ್ರಜ್ಞಾನದ ವಿಶೇಷತೆಯೆಂದರೆ, ಇದರಿಂದ ತಯಾರಾಗುವ ಪ್ಲಾಸ್ಟಿಕ್ ಅನ್ನು ಗುಣಮಟ್ಟ ಹಾಗೂ ಗಟ್ಟಿತನ ಕುಂದದಂತೆ ಹಲವು ಬಾರಿ ಮರುಬಳಕೆ (Recycle) ಮಾಡಬಹುದಾಗಿದೆ.&lt;/p&gt;&lt;h2&gt;&lt;strong&gt;ದೇಶದಲ್ಲಿ ಪ್ರತಿದಿನ 12 ಕೋಟಿ ಹಾಲಿನ ಪ್ಲಾಸ್ಟಿಕ್ ಚೀಲಗಳ ತ್ಯಾಜ್ಯ!&lt;/strong&gt;&lt;/h2&gt;&lt;p&gt;'ಚಿಂತನ್ ಎನ್ವಿರಾನ್&zwnj;ಮೆಂಟಲ್ ರಿಸರ್ಚ್ ಆಂಡ್ ಆಕ್ಷನ್ ಗ್ರೂಪ್' ಸಂಸ್ಥೆಯ 2025ರ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿದಿನ ಅಂದಾಜು 10 ರಿಂದ 12 ಕೋಟಿ ಹಾಲಿನ ಪ್ಲಾಸ್ಟಿಕ್ ಚೀಲಗಳು ತ್ಯಾಜ್ಯವಾಗಿ ಹೊರಬರುತ್ತಿವೆ. ಅಂದರೆ ವರ್ಷಕ್ಕೆ ಬರೋಬ್ಬರಿ 3,650 ರಿಂದ 4,380 ಕೋಟಿಯಷ್ಟು ಚೀಲಗಳು ಕಸದ ಬುಟ್ಟಿ ಸೇರುತ್ತಿವೆ.&lt;/p&gt;&lt;p&gt;ಹಾಲಿನ ಪ್ಯಾಕೆಟ್&zwnj;ಗಳನ್ನು ಸಾಮಾನ್ಯವಾಗಿ 'ಪಾಲಿಎಥಿಲಿನ್' (PE) ನಿಂದ ತಯಾರಿಸಲಾಗುತ್ತದೆ. ಇವುಗಳನ್ನು ಮರುಬಳಕೆ ಮಾಡಲು ಸಾಧ್ಯವಿದ್ದರೂ, ಇವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಇವು ಬಹುತೇಕ ಕಸದ ರಾಶಿ, ಜಲಮೂಲಗಳು ಅಥವಾ ಎಲ್ಲೆಂದರಲ್ಲಿ ಬಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದವು. ಜತೆಗೆ, ಸಾಂಪ್ರದಾಯಿಕ ವಿಧಾನದಲ್ಲಿ ಇವುಗಳನ್ನು ಮರುಬಳಕೆ ಮಾಡಿದಾಗ ಪ್ರತಿ ಬಾರಿಯೂ ಪ್ಲಾಸ್ಟಿಕ್&zwnj;ನ ಗಟ್ಟಿತನ ಹಾಗೂ ಗುಣಮಟ್ಟ ಕಡಿಮೆಯಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಐಐಎಸ್&zwnj;ಸಿಯ ಹೊಸ ತಂತ್ರಜ್ಞಾನ ಪರಿಹಾರ ನೀಡಿದೆ.&lt;/p&gt;&lt;h2&gt;&lt;strong&gt;ಹೇಗೆ ಕೆಲಸ ಮಾಡಲಿದೆ ಈ ತಂತ್ರಜ್ಞಾನ?&lt;/strong&gt;&lt;/h2&gt;&lt;p&gt;ಐಐಎಸ್&zwnj;ಸಿಯ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಸೂರ್ಯಸಾರಥಿ ಬೋಸ್ ಅವರ ನೇತೃತ್ವದಲ್ಲಿ, ಸಂಶೋಧಕರಾದ ಭಾಸ್ಕರ್ ಬೋಹ್ರಾ ಮತ್ತು ದೇಬಾಶ್ರಿತಾ ಕುಂಡು ಅವರನ್ನೊಳಗೊಂಡ ತಂಡ ಈ ಸಂಶೋಧನೆ ನಡೆಸಿದೆ. ಶಾಂಪೂ ಹಾಗೂ ಎಣ್ಣೆ ಬಾಟಲಿಗಳಲ್ಲಿ ಬಳಸಲಾಗುವ 'ಪಾಲಿಪ್ರೊಪಿಲೀನ್' ಪ್ಲಾಸ್ಟಿಕ್&zwnj;ನಿಂದ ವಿಶೇಷವಾಗಿ ರೂಪಿಸಲಾದ 'ಪಾಲಿಪ್ರೊಪಿಲೀನ್ ವಿಟ್ರಿಮರ್' (Polypropylene Vitrimer) ನೊಂದಿಗೆ ಹಾಲಿನ ಪ್ಲಾಸ್ಟಿಕ್ ಚೀಲಗಳನ್ನು ವಿಜ್ಞಾನಿಗಳು ಮಿಶ್ರಣ ಮಾಡಿದ್ದಾರೆ.&lt;/p&gt;&lt;p&gt;ಸಾಧಾರಣವಾಗಿ ಒಂದಕ್ಕೊಂದು ಬೆರೆಯದ ಎರಡು ವಿಭಿನ್ನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಒಂದಾಗಿಸಲು ಈ 'ವಿಟ್ರಿಮರ್' ಬೈಂಡರ್ ಮತ್ತು ಬಲವರ್ಧಕವಾಗಿ ಕೆಲಸ ಮಾಡುತ್ತದೆ. ಈ ಮಿಶ್ರಣದಿಂದ ತಯಾರಾದ ಪ್ಲಾಸ್ಟಿಕ್&zwnj;ನ ವಿಸ್ತರಣಾ ಸಾಮರ್ಥ್ಯ (Tensile Strength) ಸಾಂಪ್ರದಾಯಿಕ ಮರುಬಳಕೆಯ ಪ್ಲಾಸ್ಟಿಕ್&zwnj;ಗಿಂತ ದುಪ್ಪಟ್ಟಾಗಿದೆ. ಸತತ 3 ಬಾರಿ ಮರುಬಳಕೆ ಮಾಡಿದ ಮೇಲೆಯೂ ಇದು ತನ್ನ ಯಾಂತ್ರಿಕ ಗುಣಮಟ್ಟ ಹಾಗೂ ಗಟ್ಟಿತನವನ್ನು ಉಳಿಸಿಕೊಂಡಿರುವುದು ಸಂಶೋಧನೆಯಲ್ಲಿ ದೃಢಪಟ್ಟಿದೆ.&lt;/p&gt;&lt;h2&gt;&lt;strong&gt;ಕಾಂಕ್ರೀಟ್&zwnj;ಗೆ ಪರ್ಯಾಯವಾಗಿ ಬಳಕೆಯಾಗಲಿದೆ ಪ್ಲಾಸ್ಟಿಕ್!&lt;/strong&gt;&lt;/h2&gt;&lt;p&gt;ಈ ಕುರಿತು ಮಾತನಾಡಿದ ಪ್ರೊಫೆಸರ್ ಸೂರ್ಯಸಾರಥಿ ಬೋಸ್, ಈ ತಂತ್ರಜ್ಞಾನಕ್ಕೆ ಪ್ಲಾಸ್ಟಿಕ್ ಮೂಲ ಯಾವುದು ಎಂಬುದು ಮುಖ್ಯವಾಗುವುದಿಲ್ಲ. ಯಾವುದೇ ಬ್ರ್ಯಾಂಡ್&zwnj;ನ ಹಾಲಿನ ಪ್ಲಾಸ್ಟಿಕ್ ಚೀಲಗಳನ್ನಾದರೂ ಇದಕ್ಕೆ ಬಳಸಬಹುದು. ಈ ರೀತಿ ತಯಾರಾದ ಅಂತಿಮ ವಸ್ತುವಿನಿಂದ 3D ಪ್ರಿಂಟಿಂಗ್ ಮೂಲಕ ಯಾವುದೇ ವಸ್ತುವನ್ನು ವಿನ್ಯಾಸಗೊಳಿಸಬಹುದು. ಪ್ರಸ್ತುತ ಕಾಂಕ್ರೀಟ್&zwnj;ನಿಂದ ತಯಾರಿಸಲಾಗುತ್ತಿರುವ ವಸ್ತುಗಳನ್ನು ಸಹ ಈ ಪ್ಲಾಸ್ಟಿಕ್&zwnj;ನಿಂದ ತಯಾರಿಸಲು ಸಾಧ್ಯವಿದೆ ಎಂದಿದ್ದಾರೆ. ಈ ಹೊಸ ಮಾದರಿಯ ಇಂಜಿನಿಯರಿಂಗ್ ಪ್ಲಾಸ್ಟಿಕ್ ಬಳಸಿ ರಸ್ತೆ ಡಿವೈಡರ್&zwnj;ಗಳು, ಬಸ್ ತಂಗುದಾಣಗಳು (Bus Shelters) ಮತ್ತು ಲಾಜಿಸ್ಟಿಕ್ಸ್ ಕಂಟೇನರ್&zwnj;ಗಳನ್ನು ತಯಾರಿಸಬಹುದಾಗಿದೆ.&lt;/p&gt;&lt;p&gt;&lt;strong&gt;ತ್ಯಾಜ್ಯ ವಿಂಗಡಣೆಗೆ ಮನವಿ: &lt;/strong&gt;ಮರುಬಳಕೆ ಮಾಡುವ ಪ್ಲಾಸ್ಟಿಕ್&zwnj;ನ ಗುಣಮಟ್ಟ ಹೆಚ್ಚಾಗಬೇಕಾದರೆ, ಸಾರ್ವಜನಿಕರು ಹಾಗೂ ಆಡಳಿತ ಮಂಡಳಿಗಳು ಹಸಿ ಕಸ ಮತ್ತು ಬಯೋಮೆಡಿಕಲ್ (ವೈದ್ಯಕೀಯ) ತ್ಯಾಜ್ಯದಿಂದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸುವುದು ಅತ್ಯಗತ್ಯ ಎಂದು ಪ್ರೊ. ಬೋಸ್ ಪ್ರತಿಪಾದಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>science</category>
            <dc:creator>Santosh Naik</dc:creator>
            <atom:link href="https://kannada.asianetnews.com/science/iisc-bengaluru-develops-tech-to-convert-waste-milk-pouches-into-plastic-san/articleshow-ghfg93a"/>
        </item>
        <item>
            <title><![CDATA[ಗಗನಯಾತ್ರಿಗಳಿಗೆ ಆಕಾಶದಲ್ಲೇ ಬಿಸಿ ಬಿಸಿ ಊಟ, ಬಾಹ್ಯಾಕಾಶದಲ್ಲಿ ಭತ್ತದ ಕಟಾವು ಮಾಡಿ ಇತಿಹಾಸ ನಿರ್ಮಿಸಿದ ವಿಜ್ಞಾನಿಗಳು]]></title>
            <link>https://kannada.asianetnews.com/science/china-harvests-first-rice-crop-grown-in-space-paves-way-for-farming-beyond-earth-suh/articleshow-gq0xx69</link>
            <guid isPermaLink="true">https://kannada.asianetnews.com/science/china-harvests-first-rice-crop-grown-in-space-paves-way-for-farming-beyond-earth-suh/articleshow-gq0xx69</guid>
            <pubDate>Fri, 07 Aug 2026 17:14:32 +0530</pubDate>
            <description><![CDATA[&lt;p&gt;ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದಲ್ಲಿ ಸುತ್ತುತ್ತಿರುವ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ಬೆಳೆದ ಭತ್ತವನ್ನು ಕೊಯ್ಲು ಮಾಡಲಾಗಿದೆ. ಈ ಯಶಸ್ಸು ಭವಿಷ್ಯದಲ್ಲಿ ಗಗನಯಾತ್ರಿಗಳಿಗೆ ಆಕಾಶದಲ್ಲಿ ತಾಜಾ ಆಹಾರ ಬೆಳೆಯುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kze0aq95g117fksk1b435anf,imgname-china-harvests-first-rice-crop-grown-in-space-paves-way-for-farming-beyond-earth-1786102766885.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಹ್ಯಾಕಾಶ ಕೃಷಿಯಲ್ಲಿ ಚೀನಾ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದಲ್ಲಿ ಸುತ್ತುತ್ತಿರುವ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ಬೆಳೆದ ಭತ್ತವನ್ನು ಕೊಯ್ಲು ಮಾಡಲಾಗಿದೆ. ಈ ಯಶಸ್ಸು ಭವಿಷ್ಯದಲ್ಲಿ ಚಂದ್ರ ಮತ್ತು ಮಂಗಳ ಗ್ರಹದಂತಹ ದೂರದ ತಾಣಗಳಲ್ಲಿ ಗಗನಯಾತ್ರಿಗಳಿಗೆ ತಾಜಾ ಆಹಾರವನ್ನು ಬೆಳೆಯುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಬಾಹ್ಯಾಕಾಶ ಪರಿಶೋಧನೆಯಲ್ಲಿ ಚೀನಾ ಮಹತ್ವದ ಸಾಧನೆ ಮಾಡಿದೆ. ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಡಲಾಗಿದ್ದ ಭತ್ತ ತನ್ನ ಸಂಪೂರ್ಣ ಬೆಳವಣಿಗೆಯ ಹಂತವನ್ನು ಪೂರ್ಣಗೊಳಿಸಿದ್ದು, ಗಗನಯಾತ್ರಿಗಳು ಇದೀಗ ಅದರ ಕೊಯ್ಲು ಮಾಡಿದ್ದಾರೆ. ಸೂಕ್ಷ್ಮ ಗುರುತ್ವಾಕರ್ಷಣೆಯ ವಾತಾವರಣದಲ್ಲೂ ಆಹಾರ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಈ ಪ್ರಯೋಗ ಮತ್ತೊಮ್ಮೆ ಸಾಬೀತುಪಡಿಸಿದೆ. ಭವಿಷ್ಯದಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ದೀರ್ಘಾವಧಿಯ ಮಾನವಸಹಿತ ಯಾತ್ರೆಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಲಿದೆ. ಭೂಮಿಯಿಂದ ನಿರಂತರವಾಗಿ ಆಹಾರ ಸಾಗಿಸುವ ಬದಲು, ಬಾಹ್ಯಾಕಾಶದಲ್ಲೇ ತಾಜಾ ಆಹಾರವನ್ನು ಉತ್ಪಾದಿಸುವ ಸಾಧ್ಯತೆಗೆ ಈ ಪ್ರಯೋಗ ದಾರಿ ಮಾಡಿಕೊಟ್ಟಿದೆ.&lt;/p&gt;&lt;h2&gt;ಬಾಹ್ಯಾಕಾಶದಲ್ಲಿ ಭತ್ತ ಬೆಳೆಯುವುದು ಹೇಗೆ?&lt;/h2&gt;&lt;p&gt;ಭೂಮಿಯಲ್ಲಿ ಭತ್ತ ಬೆಳೆಯುವುದು ಸುಲಭವೆನಿಸಿದರೂ, ಬಾಹ್ಯಾಕಾಶದಲ್ಲಿ ಅದನ್ನು ಬೆಳೆಸುವುದು ವಿಜ್ಞಾನಿಗಳಿಗೆ ದೊಡ್ಡ ಸವಾಲು. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಬೇರುಗಳಿಗೆ ಮೇಲೆ ಮತ್ತು ಕೆಳಗೆ ಯಾವ ದಿಕ್ಕು ಎಂಬುದನ್ನು ಗುರುತಿಸುವುದು ಕಷ್ಟವಾಗುತ್ತದೆ. ನೀರು ಮತ್ತು ಪೋಷಕಾಂಶಗಳು ಕೂಡ ಭೂಮಿಯಲ್ಲಿರುವ ರೀತಿಯಲ್ಲಿ ವರ್ತಿಸುವುದಿಲ್ಲ. ಹೀಗಾಗಿ ಸಸ್ಯದ ಬೆಳವಣಿಗೆಗೆ ಅಗತ್ಯವಾದ ಪ್ರತಿಯೊಂದು ಅಂಶವನ್ನೂ ವಿಜ್ಞಾನಿಗಳು ನಿಯಂತ್ರಿಸಬೇಕಾಗುತ್ತದೆ. ಇದಕ್ಕಾಗಿ ವಿಶೇಷ ಸಸ್ಯ ಬೆಳವಣಿಗೆಯ ಕೋಣೆಗಳನ್ನು ಬಳಸಲಾಗುತ್ತದೆ. ಇಲ್ಲಿ ಬೆಳಕು, ತಾಪಮಾನ, ಆರ್ದ್ರತೆ, ನೀರು ಮತ್ತು ಪೋಷಕಾಂಶಗಳ ಪ್ರಮಾಣವನ್ನು ನಿಯಂತ್ರಿಸಲಾಗುತ್ತದೆ. ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳು ಇದೇ ರೀತಿಯ ನಿಯಂತ್ರಿತ ವಾತಾವರಣದಲ್ಲಿ ಭತ್ತದ ಸಸ್ಯವನ್ನು ಅದರ ಜೀವನಚಕ್ರದ ವಿವಿಧ ಹಂತಗಳ ಮೂಲಕ ಬೆಳೆಸಿ, ಅಂತಿಮವಾಗಿ ಕೊಯ್ಲು ಮಾಡಿದ್ದಾರೆ.&lt;/p&gt;&lt;h2&gt;ಬಾಹ್ಯಾಕಾಶದಲ್ಲಿ ಭತ್ತ ಕೊಯ್ಲು ಮಾಡಿದ ಮೊದಲ ದೇಶ ಚೀನಾ&lt;/h2&gt;&lt;p&gt;ಈ ಸಾಧನೆಯೊಂದಿಗೆ ಬಾಹ್ಯಾಕಾಶದಲ್ಲಿ ಭತ್ತವನ್ನು ಸಂಪೂರ್ಣ ಬೆಳವಣಿಗೆಯ ಹಂತದವರೆಗೆ ಬೆಳೆಸಿ ಕೊಯ್ಲು ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ. ಈ ಪ್ರಯೋಗ ಕೇವಲ ಭತ್ತ ಬೆಳೆಯುವುದಕ್ಕೆ ಸೀಮಿತವಾಗಿಲ್ಲ. ಸೂಕ್ಷ್ಮ ಗುರುತ್ವಾಕರ್ಷಣೆಯು ಸಸ್ಯಗಳ ಬೆಳವಣಿಗೆ, ಬೇರುಗಳ ರಚನೆ ಮತ್ತು ಮುಂದಿನ ಪೀಳಿಗೆಯ ಬೀಜಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಇದು ಮಹತ್ವದ ಮಾಹಿತಿ ನೀಡಲಿದೆ. ಭವಿಷ್ಯದಲ್ಲಿ ಬಾಹ್ಯಾಕಾಶ ಕೇಂದ್ರಗಳು ಭೂಮಿಯಿಂದ ಸಂಪೂರ್ಣವಾಗಿ ಆಹಾರ ಸರಬರಾಜನ್ನು ಅವಲಂಬಿಸದೆ, ತಮ್ಮದೇ ಆದ ಆಹಾರವನ್ನು ಉತ್ಪಾದಿಸುವ ಸ್ವಾವಲಂಬಿ ವ್ಯವಸ್ಥೆಗಳಾಗಿ ರೂಪುಗೊಳ್ಳಲು ಇಂತಹ ಪ್ರಯೋಗಗಳು ನೆರವಾಗಬಹುದು.&lt;/p&gt;&lt;h2&gt;ಟಿಯಾಂಗಾಂಗ್&zwnj;ನಲ್ಲಿ ಈ ಸಾಧನೆ&lt;/h2&gt;&lt;p&gt;ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದಲ್ಲಿ ಭೂಮಿಯನ್ನು ಸುತ್ತುತ್ತಿರುವ ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ಈ ಪ್ರಯೋಗ ನಡೆದಿದೆ. ಚೀನಾದ ಬಾಹ್ಯಾಕಾಶ ಜೀವ ವಿಜ್ಞಾನ ಸಂಶೋಧನಾ ಕಾರ್ಯಕ್ರಮದ ಭಾಗವಾಗಿ ಶೆನ್&zwnj;ಝೌ-23 ಮಿಷನ್&zwnj;ನ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿನ ಭತ್ತದ ಪ್ರಯೋಗವನ್ನು ನಿರ್ವಹಿಸಿ, ಬೆಳವಣಿಗೆಯ ಪ್ರಕ್ರಿಯೆಯನ್ನು ಗಮನಿಸಿದ್ದಾರೆ.&lt;/p&gt;&lt;h2&gt;ಚಂದ್ರ, ಮಂಗಳದಲ್ಲಿ ಕೃಷಿ ಸಾಧ್ಯವೇ?&lt;/h2&gt;&lt;p&gt;ಚಂದ್ರ ಅಥವಾ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವುದು ಮಾತ್ರವಲ್ಲ, ಅವರನ್ನು ದೀರ್ಘಕಾಲ ಅಲ್ಲೇ ಉಳಿಸುವುದು ಭವಿಷ್ಯದ ಬಾಹ್ಯಾಕಾಶ ಸಂಶೋಧನೆಯ ಪ್ರಮುಖ ಗುರಿಯಾಗಿದೆ. ಇಂತಹ ಕಾರ್ಯಾಚರಣೆಗಳಲ್ಲಿ ಆಹಾರ ಪ್ರಮುಖ ಸವಾಲಾಗಲಿದೆ. ಭೂಮಿಯಿಂದ ಅಗತ್ಯವಿರುವ ಎಲ್ಲ ಆಹಾರವನ್ನು ಸಾಗಿಸುವುದು ದುಬಾರಿ ಮತ್ತು ಕಷ್ಟಕರ. ಹೀಗಾಗಿ ಬಾಹ್ಯಾಕಾಶದಲ್ಲೇ ಬೆಳೆಗಳನ್ನು ಬೆಳೆಯಲು ಸಾಧ್ಯವಾದರೆ ಗಗನಯಾತ್ರಿಗಳಿಗೆ ತಾಜಾ ಆಹಾರ ದೊರೆಯುವುದರ ಜೊತೆಗೆ, ದೀರ್ಘಾವಧಿಯ ಬಾಹ್ಯಾಕಾಶ ಯಾತ್ರೆಗಳಿಗೆ ಸ್ವಾವಲಂಬನೆ ಸಾಧ್ಯವಾಗಬಹುದು. ಚಂದ್ರನಲ್ಲಾಗಲಿ, ಮಂಗಳನಲ್ಲಾಗಲಿ ಭವಿಷ್ಯದ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಈ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.&lt;/p&gt;&lt;h2&gt;ಭೂಮಿಗೂ ಸಿಗಲಿದೆ ಪ್ರಯೋಜನ&lt;/h2&gt;&lt;p&gt;ಬಾಹ್ಯಾಕಾಶ ಕೃಷಿಯ ಸಂಶೋಧನೆಯ ಪ್ರಯೋಜನ ಕೇವಲ ಬಾಹ್ಯಾಕಾಶಕ್ಕೆ ಸೀಮಿತವಾಗುವುದಿಲ್ಲ.ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಲ್ಲೂ ಬೆಳೆಯಬಲ್ಲ, ಪ್ರತಿಕೂಲ ಪರಿಸರವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಬೆಳೆಗಳನ್ನು ಅಭಿವೃದ್ಧಿಪಡಿಸಲು ಈ ಸಂಶೋಧನೆ ನೆರವಾಗಬಹುದು. ಸಸ್ಯಗಳ ಬೆಳವಣಿಗೆಯ ಮೇಲೆ ಗುರುತ್ವಾಕರ್ಷಣೆ ಮತ್ತು ಇತರ ಪರಿಸರ ಅಂಶಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದರಿಂದ ಭೂಮಿಯಲ್ಲಿನ ಕೃಷಿಗೂ ಹೊಸ ತಂತ್ರಜ್ಞಾನಗಳು ಲಭ್ಯವಾಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category>science</category>
            <dc:creator>Sushma Hegde</dc:creator>
            <atom:link href="https://kannada.asianetnews.com/science/china-harvests-first-rice-crop-grown-in-space-paves-way-for-farming-beyond-earth-suh/articleshow-gq0xx69"/>
        </item>
        <item>
            <title><![CDATA[ಬಾಹ್ಯಾಕಾಶದಿಂದ ಭೂಮಿಯ ‘ಪ್ರೇಮ ಸಂದೇಶ’, ಹೃದಯಾಕಾರದ ಸರೋವರದ ಅಪರೂಪದ ಚಿತ್ರ ಕ್ಲಿಕ್ಕಿಸಿದ ಗಗನಯಾತ್ರಿ!]]></title>
            <link>https://kannada.asianetnews.com/science/heart-shaped-lake-from-space-esa-astronaut-sophie-adenot-shares-viral-earth-photo-gdp/articleshow-iyqmmr5</link>
            <guid isPermaLink="true">https://kannada.asianetnews.com/science/heart-shaped-lake-from-space-esa-astronaut-sophie-adenot-shares-viral-earth-photo-gdp/articleshow-iyqmmr5</guid>
            <pubDate>Tue, 04 Aug 2026 16:13:59 +0530</pubDate>
            <description><![CDATA[ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿ ಸೋಫಿ ಅಡೆನೋಟ್, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿದ ಹೃದಯಾಕಾರದ ಸರೋವರದ ಫೋಟೋವನ್ನು ಹಂಚಿಕೊಂಡಿದ್ದಾರೆ. ವೈಜ್ಞಾನಿಕವಾಗಿ ಇದು 'ಪ್ಯಾರಿಡೋಲಿಯಾ' ಎಂಬ ಭ್ರಮೆಯಾದರೂ, ಭೂಮಿಯು ನಮಗೆ ಪ್ರೀತಿಯ ಸಂದೇಶ ಕಳುಹಿಸುತ್ತಿದೆ ಎಂದು ಅವರು ಭಾವನಾತ್ಮಕವಾಗಿ ಬರೆದಿದ್ದು, ಈ ಚಿತ್ರವು ಭೂಮಿಯ ಸೌಂದರ್ಯವನ್ನು ರಕ್ಷಿಸುವ ಅಗತ್ಯವನ್ನು ನೆನಪಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz65vqjb996ve9b2maeh8n97,imgname-heart-shaped-lake-from-the-iss-1785840131658.jpg" type="image/jpeg" height="390" width="690"/>
            <content:encoded><![CDATA[&lt;p&gt;ಅನಂತ ಬಾಹ್ಯಾಕಾಶದ ಕತ್ತಲೆಯಿಂದ ನಮ್ಮ ಸುಂದರ ಭೂಮಿಯನ್ನು ವೀಕ್ಷಿಸಿದಾಗಲೆಲ್ಲಾ ಹೊಸದೊಂದು ವಿಸ್ಮಯ ತೆರೆದುಕೊಳ್ಳುತ್ತದೆ. ಇತ್ತೀಚೆಗೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ESA) ಗಗನಯಾತ್ರಿ ಸೋಫಿ ಅಡೆನೋಟ್, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಸೆರೆಹಿಡಿದ ಅಪರೂಪದ ಛಾಯಾಚಿತ್ರವೊಂದು ಜಾಗತಿಕ ಗಮನ ಸೆಳೆದಿದೆ. ಅವರು ಬಾಹ್ಯಾಕಾಶದಿಂದ ಪ್ರಕೃತಿಯಲ್ಲಿ ಮೂಡಿದ ಸುಂದರ ಹೃದಯಾಕಾರದ ಸರೋವರದ ಫೋಟೋವನ್ನು ತಮ್ಮ &quot;X&quot; (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಬರೆದಿರುವ ಭಾವನಾತ್ಮಕ ಟಿಪ್ಪಣಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;h2&gt;ವೈಜ್ಞಾನಿಕ ಸತ್ಯ ಮತ್ತು ಭಾವನೆಗಳ ಸಮ್ಮಿಲನ&lt;/h2&gt;&lt;p&gt;ತಮ್ಮ ಪೋಸ್ಟ್&zwnj;ನಲ್ಲಿ ಈ ದೃಶ್ಯದ ಬಗ್ಗೆ ವಿವರಿಸಿರುವ ಸೋಫಿ, &quot;ಪ್ರಕೃತಿಯಲ್ಲಿ ಇಂತಹ ಹೃದಯಾಕಾರಗಳನ್ನು ಕಂಡಾಗ ಮನಸ್ಸಿಗೆ ಸದಾ ಸಂತೋಷವಾಗುತ್ತದೆ. ವೈಜ್ಞಾನಿಕವಾಗಿ ಇದು &lsquo;ಪ್ಯಾರಿಡೋಲಿಯಾ&rsquo; (ನಿರ್ಜೀವ ಅಥವಾ ಆಕಾರವಿಲ್ಲದ ವಸ್ತುಗಳಲ್ಲಿ ನಮಗೆ ಪರಿಚಿತ ಆಕಾರ/ಮುಖಗಳು ಕಾಣಿಸುವ ಮಾನಸಿಕ ಸ್ಥಿತಿ) ಎಂದು ನನ್ನ ಮೆದುಳಿಗೆ ತಿಳಿದಿದೆ. ಇದು ಕೇವಲ ಕಣ್ಣಿನ ಭ್ರಮೆಯಾಗಿದ್ದರೂ, ನಮ್ಮ ಭೂಮಿತಾಯಿ ನಮಗೆ ಪ್ರೀತಿಯ ಸಂದೇಶವನ್ನು ಕಳುಹಿಸುತ್ತಿದ್ದಾಳೆ ಎಂದೇ ನನ್ನ ಮನಸ್ಸು ಭಾವಿಸುತ್ತದೆ,&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ಭರವಸೆ ಮತ್ತು ಕಾಳಜಿಯ ಸಂಕೇತ&lt;/h2&gt;&lt;p&gt;ಪ್ರಸ್ತುತ ಜಗತ್ತು ಎದುರಿಸುತ್ತಿರುವ ಹವಾಮಾನ ಬದಲಾವಣೆ ಮತ್ತು ಇತರೆ ಸವಾಲುಗಳ ಕುರಿತೂ ಸೋಫಿ ಕಳವಳ ವ್ಯಕ್ತಪಡಿಸಿದ್ದಾರೆ. &quot;ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯ ದಿನಗಳು ಹಿಂದಿನಂತೆ ನಿರಾತಂಕವಾಗಿ ಉಳಿದಿಲ್ಲ, ಜಗತ್ತಿನಲ್ಲಿ ಅನೇಕ ಸಮಸ್ಯೆಗಳಿವೆ. ಆದರೆ ಬಾಹ್ಯಾಕಾಶದಿಂದ ಕಾಣುವ ಈ ಹೃದಯಾಕಾರದ ಸರೋವರವು, ಈ ಭೂಮಿಯ ಮೇಲೆ ನಾವು ಕಾಳಜಿ ವಹಿಸಬೇಕಾದ ಮತ್ತು ರಕ್ಷಿಸಬೇಕಾದ ಸೌಂದರ್ಯ ಇನ್ನೂ ಜೀವಂತವಾಗಿದೆ ಎಂಬುದನ್ನು ನೆನಪಿಸುತ್ತದೆ,&quot; ಎಂದು ಅವರು ಪ್ರತಿಪಾದಿಸಿದ್ದಾರೆ.&lt;/p&gt;&lt;h2&gt;ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾದ ಸಂಚಲನ&lt;/h2&gt;&lt;p&gt;ಸೋಫಿ ಅಡೆನೋಟ್ ಅವರ ಈ ಭಾವನಾತ್ಮಕ ಪೋಸ್ಟ್ ಮತ್ತು ನಯನಮನೋಹರ ಚಿತ್ರವನ್ನು ಕಂಡ ನೆಟ್ಟಿಗರು ಪ್ರಕೃತಿಯ ವಿಸ್ಮಯಕ್ಕೆ ಮಾರುಹೋಗಿದ್ದಾರೆ.&lt;/p&gt;&lt;p&gt;ಒಬ್ಬ ಬಳಕೆದಾರರು, &quot;ಪ್ರಕೃತಿ ನಿಜಕ್ಕೂ ಅದ್ಭುತ ಮತ್ತು ಭವ್ಯವಾದದ್ದು&quot; ಎಂದು ಉದ್ಗರಿಸಿದ್ದಾರೆ.&lt;/p&gt;&lt;p&gt;ಮತ್ತೊಬ್ಬರು, &quot;ನಮ್ಮ ಭೂಮಿಯು ಪ್ರೀತಿಗೆ ಅರ್ಹವಾದದ್ದು, ಅದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ&quot; ಎಂದು ಬರೆದಿದ್ದಾರೆ.&lt;/p&gt;&lt;p&gt;ಇನ್ನು ಕೆಲವರು ಈ ಅಪರೂಪದ ವೀಕ್ಷಣೆಯನ್ನು ಹಂಚಿಕೊಂಡಿದ್ದಕ್ಕಾಗಿ ಗಗನಯಾತ್ರಿಗೆ ಧನ್ಯವಾದ ಅರ್ಪಿಸಿದ್ದಾರೆ.&lt;/p&gt;&lt;p&gt;ನಾವು ತಂತ್ರಜ್ಞಾನದಲ್ಲಿ ಎಷ್ಟೇ ಮುನ್ನಡೆ ಸಾಧಿಸಿದರೂ, ಪ್ರಕೃತಿಯ ನೈಜ ಸೌಂದರ್ಯವು ಮಾನವನ ಹೃದಯವನ್ನು ತಲುಪುವ ಶಕ್ತಿಯನ್ನು ಹೊಂದಿದೆ ಎಂಬುದಕ್ಕೆ ಈ ಛಾಯಾಚಿತ್ರವೇ ಸಾಕ್ಷಿ.&lt;/p&gt;]]></content:encoded>
            <category>science</category>
            <dc:creator>Gowthami K</dc:creator>
            <atom:link href="https://kannada.asianetnews.com/science/heart-shaped-lake-from-space-esa-astronaut-sophie-adenot-shares-viral-earth-photo-gdp/articleshow-iyqmmr5"/>
        </item>
        <item>
            <title><![CDATA[ರಷ್ಯಾ ಆಧ್ಯಕ್ಷ ಪುಟಿನ್ 194 ವರ್ಷ ಬದುಕ್ತಾರಾ? ದುರ್ಬಲಗೊಳ್ಳೋ ಜೀವಕೋಶಗಳ ನಿಯಂತ್ರಣ]]></title>
            <link>https://kannada.asianetnews.com/science/russia-anti-aging-research-will-russian-president-vladimir-putin-live-to-be-194-years-old-mrq/articleshow-l26m6am</link>
            <guid isPermaLink="true">https://kannada.asianetnews.com/science/russia-anti-aging-research-will-russian-president-vladimir-putin-live-to-be-194-years-old-mrq/articleshow-l26m6am</guid>
            <pubDate>Thu, 06 Aug 2026 13:36:31 +0530</pubDate>
            <description><![CDATA[&lt;p&gt;ರಷ್ಯಾದ ವಿಜ್ಞಾನಿಗಳು ಮಾನವನ ಜೀವಿತಾವಧಿಯನ್ನು 194 ವರ್ಷಗಳವರೆಗೆ ಹೆಚ್ಚಿಸುವ ಸಂಶೋಧನೆಯಲ್ಲಿ ತೊಡಗಿದ್ದಾರೆ. ಸ್ಕೋಲ್ಕೊವೊ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಈ ಅಧ್ಯಯನವು, ಜೀನ್ ಚಿಕಿತ್ಸೆ ಮತ್ತು ಅಂಗಾಂಗ ಕಸಿ ಮುಂತಾದ ವೈದ್ಯಕೀಯ ತಂತ್ರಗಳ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಗುರಿ ಹೊಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzb1jd0wwez2th81z9cz719b,imgname-putin-1786003403804.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Russia Anti Aging Research:&lt;/strong&gt; ಮಾನವನ ಜೀವಿತಾವಧಿ ಹೆಚ್ಚಳ ಅಥವಾ ಅಮರತ್ವದ ಕುರಿತು ರಷ್ಯಾದ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆ ಜಾಗತೀಕಮಟ್ಟದಲ್ಲಿ ದೊಡ್ಡ ಸಂಚಲವನ್ನು ಸೃಷ್ಟಿಸಿದೆ. ಸ್ಕೋಲ್ಕೊವೊ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವರದಿಯಲ್ಲಿ ಜೀವಿತಾವಧಿ ಹೆಚ್ಚಳದ ಕುರಿತ ಹಲವು ಅಂಶಗಳು ಉಲ್ಲೇಖವಾಗಿವೆ. Medical Techniques ಮತ್ತು Medical Advanced ಮೂಲಕ ಮನುಷ್ಯನ ಜೀವಿತಾವಧಿ 194 ವರ್ಷಗಳವರೆಗೆ ಹೆಚ್ಚಿಸಬಹುದು. ಹಿಂದಿನ ವರ್ಷದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಂಭಾಷಣೆಯ ಕ್ಲಿಕ್ ಸೋರಿಕೆಯಾಗಿತ್ತು. ಈ ಸಂಭಾಷಣೆಯಲ್ಲಿ ಅಂಗಾಂಗ ಕಸಿ ಮೂಲಕ ದೀರ್ಘಾಯುಷ್ಯದ ಬಗ್ಗೆ ಮಾತನಾಡಲಾಗಿತ್ತು. ಸ್ವತಃ ಪುಟಿನ್ ಅವರೇ ಈ ಮಾತುಗಳನ್ನು ಉಲ್ಲೇಖಿಸಿದ್ದರಿಂದ ಇಂತಹದೊಂದು ಸಂಶೋಧನೆ ನಡೆಯುತ್ತಿದೆಯಾ ಎಂಬುದರ ಬಗ್ಗೆ ಚರ್ಚೆಗಳು ಆರಂಭಗೊಂಡಿದ್ದವು.&lt;/p&gt;&lt;p&gt;ಮಾಸ್ಕೋ ಮೂಲದ ಸ್ಕೋಲ್ಕೊವೊ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಈ ಅಧ್ಯಯನವು NPG ಏಜಿಂಗ್ ಜರ್ನಲ್&zwnj;ನಲ್ಲಿ ಪ್ರಕಟವಾಗಿದೆ. ವಯಸ್ಸು ಹೆಚ್ಚಳ ಮತ್ತು ಜೀವಿತಾವಧಿಯಲ್ಲಿ ಬರುವ ಕಾಯಿಲೆಗಳನ್ನು ನಿಯಂತ್ರಿಸಿದ್ರೆ ಮಾನವನ ಆಯುಷ್ಯ ಹೆಚ್ಚಳವಾಗುತ್ತದೆ ಎಂಬುವುದು ವಿಜ್ಞಾನಿಗಳ ಗಣಿತ. ಆದ್ರೆ ಗಣಿತದ ಲೆಕ್ಕಾಚಾರ ಜೀವನದಲ್ಲಿ ಹೇಗೆ ಎಂಬುದರ ಬಗ್ಗೆ ಚರ್ಚೆಗಳಿವೆ. ವಯಸ್ಸಾಗುವಿಕೆ ಮತ್ತು ಕಾಯಿಲೆಗಳನ್ನು ಮೈನಸ್ ಮಾಡಿದ್ರೆ ಪ್ರಸ್ತುತ ಸರಾಸರಿ ಜೀವಿತಾವಧಿಗಿಂತ ಎರಡು ಪಟ್ಟು ಹೆಚ್ಚು ಬದುಕಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.&lt;/p&gt;&lt;h2&gt;&lt;strong&gt;ದುರ್ಬಲಗೊಳ್ಳುವ ಜೀವಕೋಶಗಳ ನಿಯಂತ್ರಣ&lt;/strong&gt;&lt;/h2&gt;&lt;p&gt;ವಯಸ್ಸು ಹೆಚ್ಚಳ ಪ್ರಾಥಮಿಕವಾಗಿ ದೈಹಿಕ ರೂಪಾಂತರವನ್ನು ಅವಲಂಬಿಸಿರುತ್ತದೆ. ಈ ಪ್ರಕ್ರಿಯೆಯು DNAನಲ್ಲಿ ಸಂಭವಿಸುತ್ತದೆ. ವಯಸ್ಸು ಆದಂತೆ DNA ಒಡೆಯಲು ಅಂದ್ರೆ ಬ್ರೇಕ್ ಆಗಲು ಆರಂಭಿಸುತ್ತದೆ. ಒಮ್ಮೆ ದುರ್ಬಲಗೊಂಡ ಜೀವಕೋಶಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುವುದು ಸದ್ಯದ ವಿಜ್ಞಾನ. ಇದೀಗ ಈ ವಿಜ್ಞಾನದ ಮೇಲೆ ಸಂಶೋಧನೆಗಳು ನಡೆಯುತ್ತಿವೆ.&lt;/p&gt;&lt;p&gt;ಮಾನವ ಅಂಗಗಳನ್ನು ಕಸಿ ಮಾಡಿದರೆ, ಒಬ್ಬ ವ್ಯಕ್ತಿಯು ಬಯಸಿದಷ್ಟು ಕಾಲ ಬದುಕಬಹುದು ಎಂಬ ಪುಟಿನ್ ಹೇಳಿಕೆ ವೈರಲ್ ಬಳಿಕ ಇಂತಹ ಚರ್ಚೆಗೆ ರಷ್ಯಾ ಮುಂದಾಗಿದೆ ಎಂಬುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಶತಮಾನದಲ್ಲಿ ಮಾನವರು 150 ವರ್ಷಗಳವರೆಗೆ ಸುಲಭವಾಗಿ ಬದುಕಬಹುದು ಎಂದು ಕೆಲವು ಸಂಶೋಧಕರು ಹೇಳುತ್ತಾರೆ ಎಂಬುವುದು ಉತ್ತರ ಕೊರಿಯಾ ನಾಯಕನಾಗಿರುವ ಕಿಮ್ ಜಾಂಗ್ ಉನ್ ಮಾತಾಗಿದೆ.&lt;/p&gt;&lt;h3&gt;&lt;strong&gt;2 ಲಕ್ಷ ಕೋಟಿ ರೂ. ಬಜೆಟ್&lt;/strong&gt;&lt;/h3&gt;&lt;p&gt;ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೋರಿಕೆಯಾದ ಪುಟಿನ್ ಹೇಳಿಕೆಯಿಂದ ರಷ್ಯಾ ಯಾವ ಮಾರ್ಗದಲ್ಲಿ ಸಂಶೋಧನೆ ನಡೆಸುತ್ತಿದೆ ಎಂಬವುದು ಖಚಿತವಾಗಿತ್ತು. ರಷ್ಯಾ ಈ ದಿಕ್ಕಿನಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಸಂಶೋಧನಾ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಕ್ರೆಮ್ಲಿನ್ ಅಧಿಕೃತವಾಗಿ ಒಪ್ಪಿಕೊಂಡಿದೆ. ವಾಲ್ ಸ್ಟ್ರೀಟ್ ಜರ್ನಲ್&zwnj; ವರದಿ ಪ್ರಕಾರ, 2024 ರಲ್ಲಿ ಪ್ರಾರಂಭವಾದ ಈ ಯೋಜನೆಗೆ New technologies for healthcare national Scheme ಎಂದು ಹೆಸರಿಡಲಾಗಿದ್ದು, ಇದಕ್ಕಾಗಿ ರಷ್ಯಾ ಸರ್ಕಾರ 26 ಬಿಲಿಯನ್ ಡಾಲರ್&zwnj;ಗಳ (2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು) ಬೃಹತ್ ಬಜೆಟ್ ನಿಗದಿಪಡಿಸಿದೆ. 2030 ರ ವೇಳೆಗೆ ದೇಶದ 1.75 ಲಕ್ಷ ಜನರ ಜೀವಗಳನ್ನು ಉಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ&lt;/p&gt;&lt;h3&gt;&lt;strong&gt;ಮುದುಕರಾಗುವುದಿಲ್ಲವೇ ಮನುಷ್ಯರು?&lt;/strong&gt;&lt;/h3&gt;&lt;p&gt;ರಷ್ಯಾದ ಸಚಿವ ಡೆನಿಸ್ ಹೇಳಿಕೆ ಪ್ರಕಾರ, ಈ ಯೋಜನೆಯಲ್ಲಿ ಆಧುನಿಕ ತಂತ್ರಜ್ಞಾನ ವಯಸ್ಸು ಏರಿಕೆಯಾಗುವುದು ತಡೆಯುತ್ತದೆ. ವಿಜ್ಞಾನಿಗಳು ಡಿಎನ್&zwnj;ಎ ಮಟ್ಟದಲ್ಲಿ ಜೀವಕೋಶದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವ ಜೀನ್ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಬಯೋಪ್ರಿಂಟಿಂಗ್ ಮೂಲಕ ಪ್ರಯೋಗಾಲಯದಲ್ಲಿ ಹೊಸ ಮಾನವ ಅಂಗಗಳನ್ನು ರಚಿಸಲಾಗುತ್ತಿದೆ. ಕ್ಸೆನೋಟ್ರಾನ್ಸ್&zwnj;ಪ್ಲಾಂಟೇಶನ್, ಮಾನವ ದೇಹಕ್ಕೆ ಹೊಂದಿಕೊಳ್ಳಲು ಹಂದಿ ಅಂಗಗಳನ್ನು ತಳೀಯವಾಗಿ ಸಂಪಾದಿಸುವುದು ಮತ್ತು ಕಡಿಮೆ-ತಾಪಮಾನದ ಕ್ರಯೋಥೆರಪಿಯನ್ನು ಸಹ ಅನುಸರಿಸಲಾಗುತ್ತಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಪುಟಿನ್ 194 ವರ್ಷ ಬದುಕುತ್ತಾರಾ?&lt;/strong&gt;&lt;/h3&gt;&lt;p&gt;ಪುಟಿನ್ ತಮ್ಮ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಲು ಶತಕೋಟಿ ಡಾಲರ್&zwnj;ಗಳನ್ನು ಖರ್ಚು ಮಾಡುತ್ತಿದ್ದಾರೆ ಎಂಬ ಮಾತುಗಳು ಜಾಗತೀಕಮಟ್ಟದಲ್ಲಿ ಕೇಳಿ ಬರುತ್ತಿರುತ್ತವೆ. 2024 ರ ಮಾಹಿತಿಯ ಪ್ರಕಾರ, ರಷ್ಯಾದಲ್ಲಿ ಸರಾಸರಿ ಜೀವಿತಾವಧಿ 73.44 ವರ್ಷಗಳು, ಪುರುಷರ ಸರಾಸರಿ ಜೀವಿತಾವಧಿ ಕೇವಲ 68.26 ವರ್ಷಗಳು. ಹೋಲಿಸಿದರೆ, ಯುನೈಟೆಡ್ ಸ್ಟೇಟ್ಸ್&zwnj;ನಲ್ಲಿ ಪುರುಷರ ಸರಾಸರಿ ಜೀವಿತಾವಧಿ 74 ವರ್ಷಗಳು ಮತ್ತು ಪಶ್ಚಿಮ ಯುರೋಪಿನಲ್ಲಿ ಇದು 78 ರಿಂದ 80 ವರ್ಷಗಳು ಆಗಿದೆ. ಮುಂದಿನ ದಿನಗಳಲ್ಲಿ ಪುಟಿನ್ 194 ವರ್ಷ ಬದುಕುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.&lt;/p&gt;]]></content:encoded>
            <category>science</category>
            <dc:creator>Mahmad Rafik</dc:creator>
            <atom:link href="https://kannada.asianetnews.com/science/russia-anti-aging-research-will-russian-president-vladimir-putin-live-to-be-194-years-old-mrq/articleshow-l26m6am"/>
        </item>
        <item>
            <title><![CDATA[ಹಾವಿನ ದೇಹದ ಬಗ್ಗೆ ನಿಮಗೆ ಗೊತ್ತಿರದ ಸತ್ಯ: ಹೊಸ ಸಂಶೋಧನೆಯಲ್ಲಿ ಅಚ್ಚರಿ ಮಾಹಿತಿ ಬಯಲು]]></title>
            <link>https://kannada.asianetnews.com/life/snakes-aren-t-simple-tubes-new-study-reveals-five-body-regions-gvd/articleshow-mpq8h4i</link>
            <guid isPermaLink="true">https://kannada.asianetnews.com/life/snakes-aren-t-simple-tubes-new-study-reveals-five-body-regions-gvd/articleshow-mpq8h4i</guid>
            <pubDate>Tue, 04 Aug 2026 17:38:40 +0530</pubDate>
            <description><![CDATA[&lt;p&gt;Snake Neck Length: ಹಾವು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಉದ್ದನೆಯ ದೇಹ, ಒಂದು ತಲೆ ಹಾಗೂ ಬಾಲ. ಹೊರನೋಟಕ್ಕೆ ಹಾವಿನ ದೇಹ ಸರಳವಾದ ಉದ್ದನೆಯ ಕೊಳವೆಯಂತೆ ಕಾಣಬಹುದು. ಆದರೆ, ಹಾವಿನ ದೇಹದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz6apq3wxys2avgf6jxhng1e,imgname-nbnk-1785845210236.png" type="image/jpeg" height="390" width="690"/>
            <content:encoded><![CDATA[&lt;p&gt;ಹಾವು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಉದ್ದನೆಯ ದೇಹ, ಒಂದು ತಲೆ ಹಾಗೂ ಬಾಲ. ಹೊರನೋಟಕ್ಕೆ ಹಾವಿನ ದೇಹ ಸರಳವಾದ ಉದ್ದನೆಯ ಕೊಳವೆಯಂತೆ ಕಾಣಬಹುದು. ಆದರೆ, ಹಾವಿನ ದೇಹದ ರಚನೆ ನಾವು ಅಂದುಕೊಂಡಷ್ಟು ಸರಳವಲ್ಲ ಎಂಬುದು ಹೊಸ ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಹಾವುಗಳ ದೇಹದಲ್ಲಿ ವಿಷಕಾರಿ ಕೋರೆಹಲ್ಲುಗಳು, ಬೇಟೆಯನ್ನು ಸಂಪೂರ್ಣವಾಗಿ ನುಂಗುವಷ್ಟು ಬಾಯಿ ವಿಸ್ತರಿಸುವ ಸಾಮರ್ಥ್ಯ ಸೇರಿದಂತೆ ಹಲವು ವಿಶಿಷ್ಟ ಗುಣಗಳಿವೆ.&lt;/p&gt;&lt;p&gt;ಇದೀಗ ಅವುಗಳ ಬೆನ್ನುಮೂಳೆಯ ರಚನೆಯೂ ಅತ್ಯಂತ ಸಂಕೀರ್ಣವಾಗಿದೆ ಎಂಬುದು ಹೊಸ ಅಧ್ಯಯನದಿಂದ ಬಹಿರಂಗವಾಗಿದೆ. &lsquo;ಜರ್ನಲ್ ಆಫ್ ಮಾರ್ಫಾಲಜಿ&rsquo;ಯಲ್ಲಿ ಪ್ರಕಟವಾಗಿರುವ ಹೊಸ ಸಂಶೋಧನೆಯ ಪ್ರಕಾರ, ಹಾವುಗಳ ಬೆನ್ನುಮೂಳೆಯಲ್ಲಿ ನಾಲ್ಕಲ್ಲ, ಐದು ವಿಭಿನ್ನ ದೇಹದ ಭಾಗಗಳಿವೆ. ಅಷ್ಟೇ ಅಲ್ಲ, ಹಾವುಗಳ ಕುತ್ತಿಗೆ ನಾವು ಈ ಹಿಂದೆ ಅಂದುಕೊಂಡಿದ್ದಕ್ಕಿಂತಲೂ ಸಾಕಷ್ಟು ಚಿಕ್ಕದಾಗಿದೆ.&lt;/p&gt;&lt;p&gt;&lt;strong&gt;ಮೊದಲು ಬೆನ್ನುಮೂಳೆಯ ರಚನೆಯನ್ನು ಅರ್ಥಮಾಡಿಕೊಳ್ಳೋಣ&lt;/strong&gt;&lt;/p&gt;&lt;p&gt;ಮನುಷ್ಯರ ಬೆನ್ನುಮೂಳೆಯನ್ನು ಸಾಮಾನ್ಯವಾಗಿ ಮೂರು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲನೆಯದು ಸರ್ವೈಕಲ್ ಅಥವಾ ಕುತ್ತಿಗೆಯ ಭಾಗ. ಇದು ತಲೆಯನ್ನು ಬೆಂಬಲಿಸುವುದರ ಜೊತೆಗೆ ತಲೆಯನ್ನು ವಿವಿಧ ದಿಕ್ಕುಗಳಲ್ಲಿ ಚಲಿಸಲು ಸಹಾಯ ಮಾಡುತ್ತದೆ. ಎರಡನೆಯದು ಥೋರಾಸಿಕ್ ಭಾಗ. ಈ ಭಾಗದ ಕಶೇರುಖಂಡಗಳಿಗೆ ಪಕ್ಕೆಲುಬುಗಳು ಸಂಪರ್ಕ ಹೊಂದಿದ್ದು, ದೇಹದ ಒಳಗಿನ ಪ್ರಮುಖ ಅಂಗಗಳನ್ನು ರಕ್ಷಿಸುತ್ತವೆ.&lt;/p&gt;&lt;p&gt;ಮೂರನೆಯದು ಲಂಬಾರ್ ಅಥವಾ ಸೊಂಟದ ಭಾಗ. ಇದು ದೇಹದ ಮೇಲ್ಭಾಗಕ್ಕೆ ಅಗತ್ಯವಾದ ಬೆಂಬಲ ನೀಡುತ್ತದೆ. ಪ್ರತಿಯೊಂದು ಭಾಗದಲ್ಲಿರುವ ಕಶೇರುಖಂಡಗಳ ಆಕಾರವೂ ಅವುಗಳ ಕಾರ್ಯಕ್ಕೆ ಅನುಗುಣವಾಗಿ ಬದಲಾಗುತ್ತದೆ. ಹಲವು ಪ್ರಾಣಿಗಳಲ್ಲೂ ಇದೇ ರೀತಿಯ ಪ್ರಾದೇಶಿಕ ವ್ಯತ್ಯಾಸವನ್ನು ಕಾಣಬಹುದು. ಆದರೆ ಹಾವುಗಳ ವಿಷಯಕ್ಕೆ ಬಂದಾಗ ಬೆನ್ನುಮೂಳೆಯ ಕಥೆ ಇನ್ನಷ್ಟು ಕುತೂಹಲಕಾರಿಯಾಗುತ್ತದೆ.&lt;/p&gt;&lt;p&gt;&lt;strong&gt;ಹಾವುಗಳಿಗೆ ಒಂದೇ ಉದ್ದನೆಯ ದೇಹ ಎಂದುಕೊಂಡಿದ್ದರು!&lt;/strong&gt;&lt;/p&gt;&lt;p&gt;ಹಾವುಗಳ ಕಶೇರುಖಂಡಗಳ ಆಕಾರವೂ ದೇಹದ ಉದ್ದಕ್ಕೂ ಬದಲಾಗುತ್ತದೆ. ಆದರೆ, ಈ ಬದಲಾವಣೆ ಎಲ್ಲಿ ಒಂದು ಭಾಗ ಮುಗಿದು ಮತ್ತೊಂದು ಭಾಗ ಆರಂಭವಾಗುತ್ತದೆ ಎಂಬ ಗಡಿ ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ. ಹೀಗಾಗಿ ಆರಂಭಿಕ ಸಂಶೋಧನೆಗಳಲ್ಲಿ ಹಾವುಗಳ ದೇಹವನ್ನು ಒಂದೇ ಉದ್ದನೆಯ ಭಾಗವಾಗಿ ಪರಿಗಣಿಸಲಾಗಿತ್ತು. ತಲೆಯಿಂದ ಬಾಲದವರೆಗೆ ಕಶೇರುಖಂಡಗಳ ಆಕಾರದಲ್ಲಿ ಕ್ರಮೇಣ ಬದಲಾವಣೆ ಆಗುತ್ತದೆ ಎಂದು ವಿಜ್ಞಾನಿಗಳು ಭಾವಿಸಿದ್ದರು.&lt;/p&gt;&lt;p&gt;ಆದರೆ ಈ ಅಭಿಪ್ರಾಯಕ್ಕೆ ಎಲ್ಲರೂ ಒಪ್ಪಿರಲಿಲ್ಲ. ಈ ಕುರಿತು ಹಲವು ವರ್ಷಗಳ ಕಾಲ ಚರ್ಚೆಗಳು ನಡೆದವು. ಕೊನೆಗೆ 2015ರಲ್ಲಿ &lsquo;ನೇಚರ್&rsquo; ಜರ್ನಲ್&zwnj;ನಲ್ಲಿ ಪ್ರಕಟವಾದ ಮಹತ್ವದ ಅಧ್ಯಯನವೊಂದು ಹಾವುಗಳ ದೇಹದಲ್ಲಿ ವಾಸ್ತವವಾಗಿ ಪ್ರಾದೇಶಿಕ ವಿಭಾಗಗಳಿವೆ ಎಂದು ತೋರಿಸಿತು. ಆ ಅಧ್ಯಯನದ ಪ್ರಕಾರ ಹಾವುಗಳ ಬೆನ್ನುಮೂಳೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದಾಗಿತ್ತು &mdash; ಸರ್ವೈಕಲ್, ಆಂಟೀರಿಯರ್ ಥೋರಾಸಿಕ್, ಪೋಸ್ಟೀರಿಯರ್ ಥೋರಾಸಿಕ್ ಮತ್ತು ಲಂಬಾರ್. ಆದರೆ ಇದೀಗ ನಡೆದಿರುವ ಹೊಸ ಸಂಶೋಧನೆ ಈ ವಿಚಾರಕ್ಕೆ ಮತ್ತೊಂದು ಮಹತ್ವದ ಬದಲಾವಣೆ ತಂದಿದೆ.&lt;/p&gt;&lt;p&gt;&lt;strong&gt;ಹಾವುಗಳ ಕುತ್ತಿಗೆ ನಾವು ಅಂದುಕೊಂಡಿದ್ದಕ್ಕಿಂತ ಚಿಕ್ಕದು!&lt;/strong&gt;&lt;/p&gt;&lt;p&gt;ಹೊಸ ಅಧ್ಯಯನಕ್ಕಾಗಿ ಸಂಶೋಧಕರು ಮೂರು ಆಸ್ಟ್ರೇಲಿಯಾದ ಹಾವು ಪ್ರಭೇದಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ &mdash; ಈಸ್ಟರ್ನ್ ಬ್ರೌನ್ ಸ್ನೇಕ್, ಕಾಪರ್&zwnj;ಹೆಡ್ ಮತ್ತು ಟೈಗರ್ ಸ್ನೇಕ್. 13 ಹಾವುಗಳ ದೇಹದಲ್ಲಿರುವ ಪ್ರತಿಯೊಂದು ಕಶೇರುಖಂಡದ ಆಕಾರವನ್ನು ಸೂಕ್ಷ್ಮವಾಗಿ ಅಳೆಯಲಾಗಿದೆ. ಪ್ರತಿಯೊಂದು ಕಶೇರುಖಂಡದ ಆಕಾರದಲ್ಲಾಗುವ ಬದಲಾವಣೆಯನ್ನು ಪ್ರಮಾಣಾತ್ಮಕವಾಗಿ ವಿಶ್ಲೇಷಿಸುವ ಮೂಲಕ, ದೇಹದ ಉದ್ದಕ್ಕೂ ಅದರ ರಚನೆ ಹೇಗೆ ಬದಲಾಗುತ್ತದೆ ಎಂಬುದನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ.&lt;/p&gt;&lt;p&gt;ಇದರಲ್ಲಿ ಹಾವುಗಳ ದೇಹದಲ್ಲಿ ಒಂದೇ ರೀತಿಯ ಕ್ರಮೇಣ ಬದಲಾವಣೆ ಇರುವುದಿಲ್ಲ ಎಂಬುದು ಕಂಡುಬಂದಿದೆ. ಬದಲಾಗಿ, ಕೆಲವು ಪ್ರದೇಶಗಳಲ್ಲಿ ಕಶೇರುಖಂಡಗಳ ಆಕಾರದಲ್ಲಿ ವೇಗವಾಗಿ ಬದಲಾವಣೆ ಕಂಡುಬಂದರೆ, ಮತ್ತೆ ಕೆಲವು ಪ್ರದೇಶಗಳಲ್ಲಿ ಅವುಗಳ ಆಕಾರ ಬಹುತೇಕ ಒಂದೇ ರೀತಿಯಲ್ಲಿರುತ್ತದೆ. ಇದರಿಂದ ಹಾವುಗಳ ದೇಹದಲ್ಲಿ ಸ್ಪಷ್ಟವಾದ ಪ್ರಾದೇಶಿಕ ವಿಭಾಗಗಳಿವೆ ಎಂಬುದು ಮತ್ತಷ್ಟು ದೃಢಪಟ್ಟಿದೆ. ಈ ಸೂಕ್ಷ್ಮ ವಿಶ್ಲೇಷಣೆಯಲ್ಲಿ ಸಂಶೋಧಕರು ಹಾವುಗಳ ದೇಹದಲ್ಲಿ ನಾಲ್ಕಲ್ಲ, ಐದು ವಿಭಿನ್ನ ಪ್ರದೇಶಗಳನ್ನು ಗುರುತಿಸಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ, ಹಾವುಗಳ ಕುತ್ತಿಗೆ ಕೂಡ ಈ ಹಿಂದೆ ಅಂದುಕೊಂಡಿದ್ದಕ್ಕಿಂತ ಚಿಕ್ಕದಾಗಿದೆ ಎಂಬುದು ತಿಳಿದುಬಂದಿದೆ. ಹಿಂದಿನ ಸಂಶೋಧನೆಗಳಲ್ಲಿ ಹಾವಿನ ಕುತ್ತಿಗೆ ದೇಹದ ಒಟ್ಟು ಉದ್ದದ ಶೇ.15ರವರೆಗೂ ಇರಬಹುದು ಎಂದು ಪರಿಗಣಿಸಲಾಗಿತ್ತು. ಆದರೆ ಹೊಸ ಅಧ್ಯಯನದ ಪ್ರಕಾರ, ಹಾವಿನ ಕುತ್ತಿಗೆ ದೇಹದ ಉದ್ದದ ಸುಮಾರು ಶೇ.5ರಷ್ಟು ಮಾತ್ರ ಇರಬಹುದು. ಅಂದರೆ, ಹಾವಿನ ಕುತ್ತಿಗೆಯಲ್ಲಿ ಸುಮಾರು 7ರಿಂದ 12 ಕಶೇರುಖಂಡಗಳು ಇರಬಹುದು. ಇದು ಹಲ್ಲಿಗಳ ಕುತ್ತಿಗೆಯಲ್ಲಿರುವ ಕಶೇರುಖಂಡಗಳ ಸಂಖ್ಯೆಗೆ ಹೋಲುತ್ತದೆ.&lt;/p&gt;&lt;p&gt;&lt;strong&gt;ಹೊಸದಾಗಿ ಪತ್ತೆಯಾದ &lsquo;ಮಿಡಲ್ ಥೋರಾಸಿಕ್&rsquo; ಪ್ರದೇಶ&lt;/strong&gt;&lt;/p&gt;&lt;p&gt;ಹೊಸ ಅಧ್ಯಯನದಲ್ಲಿ ವಿಜ್ಞಾನಿಗಳು ಈ ಹಿಂದೆ ಗುರುತಿಸದ ಮತ್ತೊಂದು ದೇಹದ ಪ್ರದೇಶವನ್ನು ಪತ್ತೆಹಚ್ಚಿದ್ದಾರೆ. ಇದನ್ನು &lsquo;ಮಿಡಲ್ ಥೋರಾಸಿಕ್ ರೀಜನ್&rsquo; ಎಂದು ಕರೆಯಲಾಗಿದೆ. ಇದು ಆಂಟೀರಿಯರ್ ಥೋರಾಸಿಕ್ ಮತ್ತು ಪೋಸ್ಟೀರಿಯರ್ ಥೋರಾಸಿಕ್ ಪ್ರದೇಶಗಳ ಮಧ್ಯದಲ್ಲಿದೆ. ಈ ಸಂಶೋಧನೆ ಕಾಲುಗಳಿಲ್ಲದ ಪ್ರಾಣಿಗಳ ದೇಹದ ವಿಕಾಸದ ಕುರಿತು ರೂಪುಗೊಳ್ಳುತ್ತಿರುವ ಹೊಸ ಸಿದ್ಧಾಂತಕ್ಕೂ ಮತ್ತಷ್ಟು ಬಲ ನೀಡುತ್ತದೆ.&lt;/p&gt;&lt;p&gt;ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಪರಿಸರಕ್ಕೆ ಹೊಂದಿಕೊಳ್ಳಲು ಕಾಲುಗಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತವೆ. ಆದರೆ ಕಾಲುಗಳೇ ಇಲ್ಲದ ಪ್ರಾಣಿಗಳಲ್ಲಿ ಪರಿಸರಕ್ಕೆ ಹೊಂದಿಕೊಳ್ಳುವ ಮಾರ್ಗವೇ ವಿಭಿನ್ನವಾಗಿರುತ್ತದೆ. ಅವುಗಳ ದೇಹದ ಸಂಪೂರ್ಣ ರಚನೆಯಲ್ಲೇ ಬದಲಾವಣೆಗಳು ಸಂಭವಿಸಬೇಕಾಗುತ್ತದೆ.&lt;/p&gt;&lt;h2&gt;&lt;strong&gt;ಕಾಲು ಕಳೆದುಕೊಂಡರೂ ಹಳೆಯ ದೇಹರಚನೆಯ ಕುರುಹು ಉಳಿದಿದೆ!&lt;/strong&gt;&lt;/h2&gt;&lt;p&gt;ಹಾವುಗಳು ವಿಕಾಸದ ಸಂದರ್ಭದಲ್ಲಿ ತಮ್ಮ ದೇಹವನ್ನು ಉದ್ದಗೊಳಿಸಿಕೊಂಡು ಕಾಲುಗಳನ್ನು ಕಳೆದುಕೊಂಡಿದ್ದರೂ, ಅವುಗಳ ಬೆನ್ನುಮೂಳೆಯಲ್ಲಿ ಕೆಲವು ಪುರಾತನ ದೇಹರಚನೆಯ ಲಕ್ಷಣಗಳು ಇನ್ನೂ ಉಳಿದುಕೊಂಡಿವೆ ಎಂದು ಸಂಶೋಧನೆ ಸೂಚಿಸುತ್ತದೆ. ಅದೇ ಸಮಯದಲ್ಲಿ, ಹಾವುಗಳು ತಮ್ಮ ಬೆನ್ನುಮೂಳೆಯ ರಚನೆಯನ್ನು ಮತ್ತಷ್ಟು ಬದಲಾಯಿಸಿಕೊಂಡು, ಕಾಲುಗಳನ್ನು ಹೊಂದಿರುವ ಕೆಲವು ಸಂಬಂಧಿಕ ಪ್ರಾಣಿಗಳಿಗಿಂತಲೂ ಹೆಚ್ಚು ಸಂಕೀರ್ಣವಾದ ರಚನೆಯನ್ನು ರೂಪಿಸಿಕೊಂಡಿವೆ. ಹೀಗಾಗಿ, ಹೊರನೋಟಕ್ಕೆ ಸರಳವಾಗಿ ಕಾಣುವ ಹಾವಿನ ದೇಹದೊಳಗೆ ವಾಸ್ತವವಾಗಿ ಅತ್ಯಂತ ಸಂಕೀರ್ಣವಾದ ರಚನೆಯೊಂದು ಅಡಗಿದೆ ಎಂಬುದನ್ನು ಈ ಹೊಸ ಅಧ್ಯಯನ ತೋರಿಸಿಕೊಟ್ಟಿದೆ.&lt;/p&gt;]]></content:encoded>
            <category>science</category>
            <dc:creator>Govindaraj S</dc:creator>
            <atom:link href="https://kannada.asianetnews.com/life/snakes-aren-t-simple-tubes-new-study-reveals-five-body-regions-gvd/articleshow-mpq8h4i"/>
        </item>
        <item>
            <title><![CDATA[ನಕ್ಷತ್ರವನ್ನು ಭಕ್ಷಿಸಿ ಅರ್ಧದಷ್ಟನ್ನು ಕಕ್ಕುವ  ಕಪ್ಪು ಕುಳಿಗಳು! ವಿಜ್ಞಾನಿಗಳು ಕಂಡ ಖಗೋಳದ ವಿಸ್ಮಯಕಾರಿ ಸತ್ಯ!]]></title>
            <link>https://kannada.asianetnews.com/science/black-holes-expels-half-its-star-meal-vlt-telescope-reveals-inefficient-eaters-gdp/articleshow-o5dqg43</link>
            <guid isPermaLink="true">https://kannada.asianetnews.com/science/black-holes-expels-half-its-star-meal-vlt-telescope-reveals-inefficient-eaters-gdp/articleshow-o5dqg43</guid>
            <pubDate>Tue, 04 Aug 2026 16:38:21 +0530</pubDate>
            <description><![CDATA[ಖಗೋಳಶಾಸ್ತ್ರಜ್ಞರು 'ಸ್ವಿಫ್ಟ್ J1727.8-1613' ಎಂಬ ಕಪ್ಪು ಕುಳಿಯು ನಕ್ಷತ್ರವನ್ನು ಭಕ್ಷಿಸುವ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದ್ದಾರೆ. ಈ ಅವಲೋಕನದ ಪ್ರಕಾರ, ಕಪ್ಪು ಕುಳಿಗಳು ತಮ್ಮತ್ತ ಸೆಳೆಯುವ ವಸ್ತುವಿನ ಬಹುಭಾಗವನ್ನು ಬಾಹ್ಯಾಕಾಶಕ್ಕೆ ವಾಪಸ್ ಎಸೆಯುತ್ತವೆ ಎಂಬುದು ತಿಳಿದುಬಂದಿದೆ. ಈ ಸಂಶೋಧನೆಯು ಕಪ್ಪು ಕುಳಿಗಳು ಅಂದುಕೊಂಡಷ್ಟು ಸಮರ್ಥ 'ಭಕ್ಷಕ'ಗಳಲ್ಲ ಎಂಬುದನ್ನು ಸಾಬೀತುಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01gws87wtra0qrgfa8yptej1qy,imgname-5-1680179721048.jpg" type="image/jpeg" height="390" width="690"/>
            <content:encoded><![CDATA[&lt;p&gt;ಖಗೋಳಶಾಸ್ತ್ರಜ್ಞರು ಯೂರೋಪಿಯನ್ ಸದರ್ನ್ ಅಬ್ಸರ್ವೇಟರಿಯ &lsquo;ವೆರಿ ಲಾರ್ಜ್ ಟೆಲಿಸ್ಕೋಪ್&rsquo; (VLT) ಬಳಸಿ, ನಕ್ಷತ್ರವೊಂದನ್ನು ಭಕ್ಷಿಸುತ್ತಿರುವ ದೂರದ ಕಪ್ಪು ಕುಳಿಯೊಂದನ್ನು ಸುದೀರ್ಘವಾಗಿ ಅಧ್ಯಯನ ಮಾಡಿದ್ದಾರೆ. ಈ ಅವಲೋಕನದಿಂದ ಕಪ್ಪು ಕುಳಿಗಳು ತಮ್ಮತ್ತ ಸೆಳೆಯುವ ಪ್ರತಿಯೊಂದನ್ನೂ ಸಂಪೂರ್ಣವಾಗಿ ನುಂಗುವುದಿಲ್ಲ; ಬದಲಾಗಿ, ಆ ಪ್ರಕ್ರಿಯೆಯಲ್ಲಿ ಸಿಂಹಪಾಲನ್ನು ಬಾಹ್ಯಾಕಾಶಕ್ಕೆ ವಾಪಸ್ ಎಸೆಯುತ್ತವೆ ಎಂಬ ಅಪರೂಪದ ಸತ್ಯ ಬಯಲಾಗಿದೆ ಎಂದು Space.com ವರದಿ ಮಾಡಿದೆ.&lt;/p&gt;&lt;h2&gt;ಸ್ವಿಫ್ಟ್ J1727.8-1613 ಕಪ್ಪು ಕುಳಿ ವ್ಯವಸ್ಥೆ&lt;/h2&gt;&lt;p&gt;ಈ ಸಂಶೋಧನೆಯು ಭೂಮಿಯಿಂದ ಸುಮಾರು 8,800 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ &lsquo;ಸ್ವಿಫ್ಟ್ J1727.8-1613&rsquo; (Swift J1727.8-1613) ಎಂಬ ಕಪ್ಪು ಕುಳಿ ವ್ಯವಸ್ಥೆಯ ಮೇಲೆ ಕೇಂದ್ರೀಕೃತವಾಗಿದೆ. 2023ರಲ್ಲಿ ಸಂಭವಿಸಿದ ಪ್ರಬಲ ಸ್ಫೋಟದ ನಂತರ, ಈ ವ್ಯವಸ್ಥೆಯು ಭೂಮಿಯಿಂದ ಕಾಣಿಸುವ ಅತ್ಯಂತ ಪ್ರಕಾಶಮಾನವಾದ ಎಕ್ಸ್-ರೇ (X-ray) ಮೂಲಗಳಲ್ಲಿ ಒಂದಾಗಿ ಗುರುತಿಸಿಕೊಂಡು ವಿಜ್ಞಾನಿಗಳ ಗಮನ ಸೆಳೆದಿತ್ತು.&lt;/p&gt;&lt;h2&gt;ಕಪ್ಪು ಕುಳಿಯ ಆಹಾರ ಶೈಲಿ ಮತ್ತು ವಸ್ತುವಿನ ಹೊರಹರಿವು&lt;/h2&gt;&lt;p&gt;ಕಪ್ಪು ಕುಳಿಯು ತನಗೆ ಹತ್ತಿರವಿರುವ ಸಹವರ್ತಿ ನಕ್ಷತ್ರದ ಭಾಗಗಳನ್ನು ತನ್ನತ್ತ ಎಳೆದಾಗ, ಅದರಲ್ಲಿ ಕೆಲವನ್ನು ಮಾತ್ರ ಅದು ಸೇವಿಸುತ್ತದೆ. ಉಳಿದ ಭಾಗವನ್ನು ಅತಿ ವೇಗದ 'ಜೆಟ್&zwnj;ಗಳು' (Jets) ಮತ್ತು ಶಕ್ತಿಯುತ 'ಕಪ್ಪು ಕುಳಿ ಮಾರುತಗಳ' (Black Hole Winds) ರೂಪದಲ್ಲಿ ಬಾಹ್ಯಾಕಾಶಕ್ಕೆ ಮತ್ತೆ ಚಿಮ್ಮಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.&lt;/p&gt;&lt;p&gt;ವಿಶೇಷವೆಂದರೆ, ಕಪ್ಪು ಕುಳಿಯ ಆಹಾರ ಸೇವನೆಯ ಚಟುವಟಿಕೆ ಕಡಿಮೆಯಾದಷ್ಟೂ, ಅದರಿಂದ ಹೊರಗೆಸೆಯಲ್ಪಡುವ ವಸ್ತುವಿನ ಪ್ರಮಾಣ ಹೆಚ್ಚಿರುತ್ತದೆ ಎಂಬುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ವಾರ್ವಿಕ್ ವಿಶ್ವವಿದ್ಯಾನಿಲಯದ ತಂಡದ ನಾಯಕ ನೋಯೆಲ್ ಕ್ಯಾಸ್ಟ್ರೋ ಸೆಗುರಾ ಮಾತನಾಡಿ, &quot;ಸಾಮಾನ್ಯವಾಗಿ ಜನರು ಕಪ್ಪು ಕುಳಿಗಳು ತಮ್ಮ ಸುತ್ತಲಿನ ಪ್ರತಿಯೊಂದನ್ನೂ ನುಂಗಿ ಹಾಕುತ್ತವೆ ಎಂದು ಭಾವಿಸುತ್ತಾರೆ. ಆದರೆ ನಮ್ಮ ವೀಕ್ಷಣೆಗಳು ಹೆಚ್ಚು ಸಂಕೀರ್ಣವಾದ ವ್ಯವಸ್ಥೆಯನ್ನು ತೋರಿಸಿವೆ. ವಸ್ತುವು ಕಪ್ಪು ಕುಳಿಯ ಸನಿಹಕ್ಕೆ ಬರುತ್ತದೆ, ವ್ಯವಸ್ಥೆಯು ಅದನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಆಶ್ಚರ್ಯಕರ ಪ್ರಮಾಣದ ವಸ್ತುವನ್ನು ಮತ್ತೆ ಬಾಹ್ಯಾಕಾಶಕ್ಕೆ ಹೊರಹಾಕುತ್ತದೆ,&quot; ಎಂದು ವಿವರಿಸಿದ್ದಾರೆ.&lt;/p&gt;&lt;h2&gt;VLT ಮೂಲಕ ಸೆರೆಯಾದ 'ಆಹಾರ ಪ್ರಕ್ರಿಯೆಯ ಚಲನಚಿತ್ರ'&lt;/h2&gt;&lt;p&gt;ಸ್ವಿಫ್ಟ್ J1727.8-1613 ವ್ಯವಸ್ಥೆಯಲ್ಲಿ, ಸಹವರ್ತಿ ನಕ್ಷತ್ರದಿಂದ ಎಳೆಯಲ್ಪಟ್ಟ ವಸ್ತುಗಳಿಂದ ರೂಪುಗೊಂಡ ಸುರುಳಿಯಾಕಾರದ &lsquo;ಅಕ್ರಿಶನ್ ಡಿಸ್ಕ್&rsquo; (Accretion Disk) ಕಪ್ಪು ಕುಳಿಯ ಸುತ್ತಲಿದೆ. ಕಪ್ಪು ಕುಳಿಯ ಪ್ರಚಂಡ ಗುರುತ್ವಾಕರ್ಷಣೆಯು ಈ ತಿರುಗುವ ಡಿಸ್ಕ್ ಅನ್ನು ತೀವ್ರವಾಗಿ ಕಾಯಿಸುವುದರಿಂದ ಅದು ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತದೆ.&lt;/p&gt;&lt;p&gt;ತಂಡವು VLT ಟೆಲಿಸ್ಕೋಪ್ ಬಳಸಿ ಈ ಪ್ರಕ್ರಿಯೆಯನ್ನು ಕಾಲಕ್ರಮೇಣ ಟ್ರ್ಯಾಕ್ ಮಾಡಿದೆ. ಕಪ್ಪು ಕುಳಿಯು ಬಾಹ್ಯಾಕಾಶಕ್ಕೆ ಶಕ್ತಿಯುತ ಜೆಟ್&zwnj;ಗಳನ್ನು ಚಿಮ್ಮಿಸುವಾಗ ಪ್ರಕಾಶಮಾನವಾದ ಡಿಸ್ಕ್&zwnj;ನಲ್ಲಿ ಉಂಟಾಗುವ ಬದಲಾವಣೆಗಳನ್ನು ಸಂಶೋಧಕರು &lsquo;ಚಲನಚಿತ್ರದಂತೆ&rsquo; ರೆಕಾರ್ಡ್ ಮಾಡಿದ್ದಾರೆ. ಈ ಭಕ್ಷಣೆ ನಿಧಾನಗೊಂಡ ನಂತರವೂ, ಕಪ್ಪು ಕುಳಿಯು ದಟ್ಟವಾದ ಅನಿಲ ಮಾರುತಗಳನ್ನು ಉತ್ಪಾದಿಸುವುದನ್ನು ಮುಂದುವರಿಸಿತ್ತು.&lt;/p&gt;&lt;h2&gt;ಕಪ್ಪು ಕುಳಿಗಳ ಬಗ್ಗೆ ಬದಲಾದ ದೃಷ್ಟಿಕೋನ&lt;/h2&gt;&lt;p&gt;ಹೊರಗೆಸೆಯಲ್ಪಟ್ಟ ಒಟ್ಟು ವಸ್ತುವಿನ ಪ್ರಮಾಣವು ಕಪ್ಪು ಕುಳಿ ನಿಜವಾಗಿ ಸೇವಿಸಿದ ಪ್ರಮಾಣಕ್ಕೆ ಸಮನಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅಂದರೆ, ನಕ್ಷತ್ರದ ಒಟ್ಟು ರಾಶಿಯ ಸುಮಾರು ಅರ್ಧದಷ್ಟು ಭಾಗ ಬಾಹ್ಯಾಕಾಶದಲ್ಲಿಯೇ ನಷ್ಟವಾಗುತ್ತದೆ.&lt;/p&gt;&lt;p&gt;&quot;ತಮ್ಮ ದೊಡ್ಡ ಸ್ಫೋಟಗಳ ನಂತರವೂ ಕಪ್ಪು ಕುಳಿಗಳು ವಸ್ತುಗಳನ್ನು ಹೀಗೆ ಹೊರಹಾಕುವುದನ್ನು ಮುಂದುವರಿಸಿದರೆ, ನಾವು ಭಾವಿಸಿದ್ದಕ್ಕಿಂತ ಅವು ಕಡಿಮೆ ಸಾಮರ್ಥ್ಯದ 'ಭಕ್ಷಕಗಳು' (Inefficient Eaters) ಎಂದರ್ಥ,&quot; ಎಂದು ಸೆಗುರಾ ಹೇಳಿದ್ದಾರೆ. ಈ ರೀತಿ ನಕ್ಷತ್ರದ ಗಮನಾರ್ಹ ಭಾಗವು ಕಪ್ಪು ಕುಳಿಯನ್ನು ತಲುಪದೇ ಇರುವುದು, ಗ್ಯಾಲಕ್ಸಿಗಳಲ್ಲಿನ ಬೈನರಿ ನಕ್ಷತ್ರ ವ್ಯವಸ್ಥೆಗಳ (Binary Star Systems) ವಿಕಸನದ ಬಗ್ಗೆ ವಿಜ್ಞಾನಿಗಳಿಗಿದ್ದ ತಿಳುವಳಿಕೆಯನ್ನೇ ಬದಲಾಯಿಸಲಿದೆ.&lt;/p&gt;&lt;p&gt;ಕೇಪ್ ಟೌನ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಸಂಶೋಧಕ ಕೈಲ್ ಸೊಲೊಮನ್ಸ್ ಮಾತನಾಡಿ, &quot;ವಿಜ್ಞಾನಿಗಳು ಸಾಮಾನ್ಯವಾಗಿ ಕಪ್ಪು ಕುಳಿಯ ಸ್ಫೋಟದ ಆರಂಭಿಕ ರೌದ್ರಾವತಾರಕ್ಕಷ್ಟೇ ಗಮನ ಕೊಡುತ್ತಾರೆ. ಆದರೆ, ಈ ಪ್ರಕ್ರಿಯೆಯ ಅಂತಿಮ ಹಂತಗಳೂ ಸಹ ಅಷ್ಟೇ ತೀವ್ರ ಮತ್ತು ನಾಟಕೀಯವಾಗಿರುತ್ತವೆ ಎಂಬುದನ್ನು ಈ ಅಧ್ಯಯನ ಸಾಬೀತುಪಡಿಸಿದೆ,&quot; ಎಂದಿದ್ದಾರೆ.&lt;/p&gt;]]></content:encoded>
            <category>science</category>
            <dc:creator>Gowthami K</dc:creator>
            <atom:link href="https://kannada.asianetnews.com/science/black-holes-expels-half-its-star-meal-vlt-telescope-reveals-inefficient-eaters-gdp/articleshow-o5dqg43"/>
        </item>
        <item>
            <title><![CDATA[ಚಂದ್ರನ ಮೇಲೆ ನಾಳೆ ರಾಕೆಟ್‌ ಕ್ರ್ಯಾಶ್‌; 90 ಅಡಿ ಅಗಲ, 16 ಅಡಿ ಆಳ ಕುಳಿ ಸೃಷ್ಟಿ ಸಂಭವ]]></title>
            <link>https://kannada.asianetnews.com/science/spacex-falcon-9-rocket-crashes-on-the-moon-possibility-of-creating-a-crater-90-feet-wide-and-16-feet-deep-mrq/articleshow-p42ging</link>
            <guid isPermaLink="true">https://kannada.asianetnews.com/science/spacex-falcon-9-rocket-crashes-on-the-moon-possibility-of-creating-a-crater-90-feet-wide-and-16-feet-deep-mrq/articleshow-p42ging</guid>
            <pubDate>Tue, 04 Aug 2026 09:07:46 +0530</pubDate>
            <description><![CDATA[ಬಾಹ್ಯಾಕಾಶದಲ್ಲಿ ಅಲೆಯುತ್ತಿದ್ದ ಸ್ಪೇಸ್&zwnj;ಎಕ್ಸ್&zwnj; ಫಾಲ್ಕನ್&zwnj;-9 ರಾಕೆಟ್&zwnj;ನ ಭಾಗವೊಂದು ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಅದರ ಮೇಲೆ ಅಪ್ಪಳಿಸುವ ನಿರೀಕ್ಷೆಯಿದೆ. ಈ ಘಟನೆಯು ಉದ್ದೇಶಪೂರ್ವಕವಲ್ಲದಿದ್ದರೂ, ಚಂದ್ರನ ಮೇಲೆ ಕುಳಿಗಳು ಹೇಗೆ ಸೃಷ್ಟಿಯಾಗುತ್ತವೆ ಮತ್ತು ಅದರ ಮೇಲ್ಮೈ ಧೂಳು ಹೇಗೆ ವರ್ತಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಒಂದು ಉಪಯುಕ್ತ ಅವಕಾಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5dg8pdmqsefx0ag8e5zv5y,imgname-spacex-rocket-crashes-on-the-moon-1785814590157.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj;:&lt;/strong&gt; ಸುಮಾರು 1 ವರ್ಷ ಬಾಹ್ಯಾಕಾಶದಲ್ಲಿ ಅಲೆದಾಡಿದ್ದ ಸ್ಪೇಸ್&zwnj;ಎಕ್ಸ್&zwnj; ರಾಕೆಟ್&zwnj;ನ ಭಾಗವೊಂದು ಚಂದ್ರನ ಮೇಲೆ ಬುಧವಾರ ಅಪ್ಪಳಿಸುವ ಸಂಭವವಿದೆ. ಇದು ಉದ್ದೇಶಪೂರ್ವಕ ಪ್ರಕ್ರಿಯೆಯಲ್ಲ. ಇದರಿಂದ ಭೂಮಿಗಾಗಲಿ, ಚಂದ್ರನ ಮೇಲಿನ ಕಾರ್ಯಾಚರಣೆಗಳಿಗಾಗಲೀ ಹಾನಿ ಆಗುವುದಿಲ್ಲವಾದ್ದರಿಂದ ವಿಜ್ಞಾನ ಲೋಕ ಈ ಬೆಳವಣಿಗೆ ಬಗ್ಗೆ ಆತಂಕ ಪಡುವ ಬದಲು ಅದನ್ನು ಅಧ್ಯಯನಕ್ಕೆ ಬಳಸಿಕೊಳ್ಳುವ ನಿರೀಕ್ಷೆ ಇದೆ.&lt;/p&gt;&lt;h2&gt;&lt;strong&gt;ಫಾಲ್ಕನ್&zwnj;-9 ಪಯಣ&lt;/strong&gt;&lt;/h2&gt;&lt;p&gt;2025ರ ಜ.15ರಂದು ಫೈರ್&zwnj;ಫ್ಲೈ ಏರೋಸ್ಪೇಸ್&zwnj;ನ ''ಬ್ಲೂ ಘೋಸ್ಟ್'' ಲ್ಯಾಂಡರ್ ಮತ್ತು ಜಪಾನ್&zwnj;ನ ಐಸ್ಪೇಸ್ ಹಕುಟೊ-ಆರ್ ಲ್ಯಾಂಡರ್&zwnj; ಅನ್ನು ಹೊತ್ತು ಚಂದ್ರನಂಗಳಕ್ಕೆ ಹೋಗಿದ್ದ ಫಾಲ್ಕನ್&zwnj;-9 ರಾಕೆಟ್&zwnj;, ಎರಡೂ ಬಾಹ್ಯಾಕಾಶ ನೌಕೆಗಳನ್ನು ಅವುಗಳ ಗಮ್ಯಕ್ಕೆ ತಲುಪಿಸಿತ್ತು. ಪರಿಣಾಮ ಪೇಲೋಡ್&zwnj; ಹೊತ್ತೊಯ್ದಿದ್ದ ಭಾಗದ ಕೆಲಸ ಮುಗಿದಿತ್ತು. ಭೂಮಿಗೆ ಮರಳಲು ಅಥವಾ ಸೂರ್ಯನ ಸುತ್ತಲಿರುವ ಕಕ್ಷೆಯತ್ತ ಹೋಗಲು ಬೇಕಾದಷ್ಟು ಇಂಧನ ಅದರಲ್ಲಿ ಇರದ ಕಾರಣ ಭೂಮಿ, ಚಂದ್ರ, ಸೂರ್ಯನ ಗುರುತ್ವಾಕರ್ಷಣೆಯ ನಡುವೆ ಸಿಲುಕಿ ಬಾಹ್ಯಾಕಾಶದಲ್ಲಿ ಅಲೆಯುತ್ತಿತ್ತು. ಇದೀಗ ಅದನ್ನು ಚಂದ್ರನ ಗುರುತ್ವಾಕರ್ಷಣಾ ಶಕ್ತಿ ತನ್ನೆಡೆಗೆ ಬಲವಾಗಿ ಸೆಳೆಯುತ್ತಿದ್ದು, ಬುಧವಾರ ಅಪ್ಪಳಿಸುವ ನಿರೀಕ್ಷೆ ಇದೆ.&lt;/p&gt;&lt;h3&gt;&lt;strong&gt;ಅಪ್ಪಳಿಸುವಿಕೆ&lt;/strong&gt;&lt;/h3&gt;&lt;p&gt;ಗಂಟೆಗೆ 8,700 ಕಿ.ಮೀ.(ಭೂಮಿಯಲ್ಲಿ ಶಬ್ದದ ಗತಿಗಿಂತ 7 ಪಟ್ಟು ಹೆಚ್ಚು) ವೇಗದಲ್ಲಿ ಚಲಿಸುವ ರಾಕೆಟ್&zwnj;, ಚಂದ್ರನಲ್ಲಿರುವ ಐನ್&zwnj;ಸ್ಟೈನ್ ಕುಳಿಯ ಬಳಿ ಅಪ್ಪಳಿಸುವ ನಿರೀಕ್ಷೆ ಇದೆ. ಪರಿಣಾಮ, 90 ಅಡಿ ಅಗಲ ಹಾಗೂ 16 ಅಡಿ ಆಳದ ಕುಳಿ ಸೃಷ್ಟಿಯಾಗುವ ಅಂದಾಜಿದೆ. ಚಂದ್ರನ ಮೈಗೆ ಇದು ಅಪ್ಪಳಿಸುವ ವೇಳೆ ಆ ಪ್ರದೇಶದಲ್ಲಿ ಬೆಳಕಿರುವ ಕಾರಣ, ವಿಜ್ಞಾನಿಗಳಿಗೆ ಈ ಪ್ರಕ್ರಿಯೆಯನ್ನು ವೀಕ್ಷಿಸುವುದು ಸುಲಭವಾಗಲಿದೆ.&lt;/p&gt;&lt;h3&gt;&lt;strong&gt;ಉಪಯೋಗವೇನು?&lt;/strong&gt;&lt;/h3&gt;&lt;p&gt;ನೈಸರ್ಗಿಕವಾಗಿ ನಡೆಯುತ್ತಿರುವ ಈ ಪ್ರಕ್ರಿಯೆಯು ವಿಜ್ಞಾನಿಗಳ ಪಾಲಿಗೆ ಮಹತ್ವದ್ದಾಗಿದೆ. ರಾಕೆಟ್&zwnj;ನ ಗಾತ್ರ, ತೂಕ, ವೇಗ, ಅದು ಅಪ್ಪಳಿಸಲಿರುವ ಸಮಯ ಇತ್ಯಾದಿಗಳು ವಿದಿತ. ಹೀಗಿರುವಾಗ, ಚಂದ್ರನಂಗಳದಲ್ಲಿ ಕುಳಿಗಳು ಹೇಗೆ ಸೃಷ್ಟಿಯಾಗುತ್ತವೆ, ವಸ್ತುವೊಂದು ಅಪ್ಪಳಿಸಿದಾಗ ಚಂದ್ರನ ಮೇಲಿನ ಧೂಳು ಹೇಗೆ ವರ್ತಿಸುತ್ತದೆ ಅಥವಾ ಎಷ್ಟು ಎತ್ತರಕ್ಕೆ ಚಿಮ್ಮುತ್ತದೆ, ಅದರ ಪರಿಣಾಮವೇನಾಗುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಇದು ಸಹಕಾರಿಯಾಗಲಿದೆ.&lt;/p&gt;&lt;h3&gt;&lt;strong&gt;ಮೊದಲ ಬಾರಿ ಅಲ್ಲ:&lt;/strong&gt;&lt;/h3&gt;&lt;p&gt;ಚಂದ್ರನ ಮೇಲೆ ರಾಕೆಟ್&zwnj; ಅಪ್ಪಳಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಪೋಲೋ ಮಿಷನ್&zwnj; ಭಾಗವಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಚಂದ್ರಕಂಪನವನ್ನು ಅಧ್ಯಯನ ಮಾಡಲು ರಾಕೆಟ್&zwnj;ನ ಭಾಗವೊಂದು ಉದ್ದೇಶಪೂರ್ವಕವಾಗಿ ಅಪ್ಪಳಿಸುವಂತೆ ಮಾಡಿತ್ತು. 2009ರಲ್ಲಿ, ನೀರಿನ ಮಂಜುಗಡ್ಡೆಯನ್ನು ಹುಡುಕುವ ಉದ್ದೇಶದಿಂದಲೂ ಇಂಥ ಪ್ರಕ್ರಿಯೆ ನಡೆಸಲಾಗಿತ್ತು. 2022ರಲ್ಲಿ, ರಾಕೆಟ್&zwnj;ನ ಭಾಗವೊಂದು ಚಂದ್ರನಿಗೆ ಅಪ್ಪಳಿಸಿತ್ತು. ಚಂದ್ರನ ಮೇಲ್ಮೈಯಿಂದ ಧೂಳು ಮತ್ತು ಅವಶೇಷಗಳನ್ನು ಮೇಲಕ್ಕೆಬ್ಬಿಸುವ ಉದ್ದೇಶದಿಂದ 2008ರಲ್ಲಿ ''ಚಂದ್ರಯಾನ-1'' ಆರ್ಬಿಟರ್&zwnj; ಸಹಾಯದಿಂದ 32 ಕೆ.ಜಿ.ಯ ಕ್ಯೂಬ್&zwnj; ಒಂದನ್ನು ಅಪ್ಪಳಿಸಲಾಗಿತ್ತು. 2019ರಲ್ಲಿ ಉಡಾವಣೆಯಾಗಿದ್ದ ವಿಕ್ರಂ ಲ್ಯಾಂಡರ್&zwnj;, ತಾಂತ್ರಿಕ ದೋಷದಿಂದ ಕ್ರ್ಯಾಶ್&zwnj; ಆಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರಿನ ಬಾನಂಗಳದಲ್ಲಿ ಅಪರೂಪದ ಅತಿಥಿಯ ಆಗಮನ! 1873ರಲ್ಲಿ ಪತ್ತೆಯಾಗಿದ್ದ ಧೂಮಕೇತು ಭೂಮಿಗೆ ಅತ್ಯಂತ ಸಮೀಪ!&lt;/strong&gt;&lt;/p&gt;&lt;h3&gt;&lt;strong&gt;ಅಪಾಯವಿಲ್ಲವೇ?&lt;/strong&gt;&lt;/h3&gt;&lt;p&gt;ರಾಕೆಟ್&zwnj; ಅಪ್ಪಳಿಸುವಿಕೆಯಿಂದ ಸದ್ಯ ಯಾವುದೇ ಯೋಜನೆಗಳಿಗೆ ಹಾನಿಯಿಲ್ಲ. ಆದರೆ ಭೂಮಿಯಿಂದ ಕಳಿಸಲ್ಪಟ್ಟ ರಾಕೆಟ್&zwnj;ನ ಭಾಗಗಳು ಹೀಗೆ ಚಂದ್ರನ ಮೇಲೆ ಸ್ಥಾಪಿತವಾದರೆ, ಬಾಹ್ಯಾಕಾಶದಲ್ಲಿನ ತ್ಯಾಜ್ಯದ ಪ್ರಮಾಣ ಹೆಚ್ಚುತ್ತದೆ. ಇದರಿಂದ ಮುಂದಿನ ಯೋಜನೆಗಳಿಗೆ ಅಡಚಣೆಯಾಗುವ ಅಪಾಯ ಇದ್ದೇಇದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇಂಜಿನಿಯರಿಂಗ್&zwnj; ಪ್ಲಾಸ್ಟಿಕ್&zwnj; ಆಗಬಹುದು ನಿಮ್ಮನೆಯ ಹಾಲಿನ ಖಾಲಿ ಪ್ಯಾಕೆಟ್&zwnj;, IISc ವಿಜ್ಞಾನಿಗಳ ಕ್ರಾಂತಿಕಾರಿ ತಂತ್ರಜ್ಞಾನ!&lt;/strong&gt;&lt;/p&gt;]]></content:encoded>
            <category>science</category>
            <dc:creator>Kannadaprabha News</dc:creator>
            <atom:link href="https://kannada.asianetnews.com/science/spacex-falcon-9-rocket-crashes-on-the-moon-possibility-of-creating-a-crater-90-feet-wide-and-16-feet-deep-mrq/articleshow-p42ging"/>
        </item>
        <item>
            <title><![CDATA[ವಾಟರ್ ಟ್ಯಾಂಕ್ ಕ್ಲೀನ್ ಮಾಡೋಕೆ 'ಟ್ಯಾಂಕ್ ಒಳಗೆ ಯಾಕೆ ಇಳಿತೀರಾ? ಹೀಗ್ ಮಾಡಿದ್ರೆ 10 ನಿಮಿಷದಲ್ಲಿ ಸ್ವಚ್ಛವಾಗುತ್ತೆ!]]></title>
            <link>https://kannada.asianetnews.com/life/use-this-simple-desi-jugaad-to-clean-it-easily-and-no-more-stepping-inside-the-water-tank/articleshow-p4s67yk</link>
            <guid isPermaLink="true">https://kannada.asianetnews.com/life/use-this-simple-desi-jugaad-to-clean-it-easily-and-no-more-stepping-inside-the-water-tank/articleshow-p4s67yk</guid>
            <pubDate>Wed, 05 Aug 2026 18:44:25 +0530</pubDate>
            <description><![CDATA[&lt;p&gt;&lsquo;ನೀರು ಪೈಪ್ ಮೂಲಕ ಹೊರಬರಲು ಶುರುವಾಗುತ್ತದೆ. ನೀವು ಬಾಟಲಿಯನ್ನು ಮಣ್ಣು ಇರುವ ಕಡೆ ಚಲಿಸಿದರೆ ಸಾಕು, ಟ್ಯಾಂಕ್&zwnj;ನ ತಳದಲ್ಲಿರುವ ಎಲ್ಲಾ ಕೊಳಕು ನೀರು ಪೈಪ್ ಮೂಲಕ ಹೊರಬರುತ್ತದೆ. ಟ್ಯಾಂಕ್&zwnj;ನಲ್ಲಿರುವ ಒಳ್ಳೆಯ ನೀರು ಹಾಗೆಯೇ ಇರುತ್ತದೆ&rsquo;... ಈ ಸೀಕ್ರೆಟ್ ತಿಳಿಯಿರಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz90htxh6425cvj05khskbx9,imgname-water-tank--1--1785935227825.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Water Tank Cleaning Tips- How to clean your home water tank quickly and easily: ಟ್ಯಾಂಕ್ ಕ್ಲೀನ್ ಮಾಡೋಕೆ 'ಟ್ಯಾಂಕ್' ಒಳಗೆ ಇಳಿಯಬೇಕಿಲ್ಲ! ಇಲ್ಲಿದೆ ನೋಡಿ 10 ನಿಮಿಷದ ಮ್ಯಾಜಿಕ್ 'ಜುಗಾಡ್'!&lt;/strong&gt;&lt;/p&gt;&lt;p&gt;ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು ಅಂದ್ರೆ ಸಾಕು, ಮನೆಯಲ್ಲಿ ಯುದ್ಧವೇ ಶುರುವಾಗುತ್ತೆ!&lt;/p&gt;&lt;p&gt;ನಮಸ್ಕಾರ ಸ್ನೇಹಿತರೇ, ನಿಮ್ಮ ಮನೆಯಲ್ಲೂ 500 ಅಥವಾ 1000 ಲೀಟರ್&zwnj;ನ ನೀರಿನ ಟ್ಯಾಂಕ್ ಇದೆಯಾ? ಅದನ್ನು ಸ್ವಚ್ಛಗೊಳಿಸಬೇಕು ಅಂದಾಗಲೆಲ್ಲಾ &quot;ಅಬ್ಬಾ.. ಅಷ್ಟು ನೀರನ್ನೆಲ್ಲಾ ಖಾಲಿ ಮಾಡಬೇಕಲ್ಲ, ಟ್ಯಾಂಕ್ ಒಳಗೆ ಇಳಿದು ಉಜ್ಜಿ ಉಜ್ಜಿ ತೊಳೆಯಬೇಕಲ್ಲ&quot; ಅನ್ನೋ ಭಯ ನಿಮ್ಮನ್ನು ಕಾಡುತ್ತಿದೆಯಾ? ಅಥವಾ &quot;ಇವತ್ತು ಬೇಡ, ಮುಂದಿನ ವಾರ ನೋಡೋಣ&quot; ಅಂತ ತಿಂಗಳುಗಟ್ಟಲೆ ಆ ಕೆಲಸವನ್ನು ಪೋಸ್ಟ್&zwnj;ಪೋನ್ ಮಾಡ್ತಿದ್ದೀರಾ?&lt;/p&gt;&lt;p&gt;ಹಾಗಾದರೆ ನಿಮಗೊಂದು ಗುಡ್ ನ್ಯೂಸ್! ಈಗ ವೈರಲ್ ಆಗುತ್ತಿರುವ ಈ 'ದೇಸಿ ಜುಗಾಡ್' ಟ್ರಿಕ್ ನೋಡಿದರೆ, ನೀವು ಟ್ಯಾಂಕ್ ಒಳಗೆ ಇಳಿಯುವ ಅವಶ್ಯಕತೆಯೇ ಇಲ್ಲ. ಒಂದು ಹನಿ ಶುದ್ಧ ನೀರನ್ನು ವ್ಯರ್ಥ ಮಾಡದೆ, ಕೇವಲ 10 ರಿಂದ 20 ನಿಮಿಷಗಳಲ್ಲಿ ನಿಮ್ಮ ಟ್ಯಾಂಕ್&zwnj;ನ ತಳದಲ್ಲಿರುವ ಕೊಳೆ, ಮಣ್ಣು ಮತ್ತು ಪಾಚಿಯನ್ನು 'ವ್ಯಾಕ್ಯೂಮ್ ಕ್ಲೀನರ್'ನಂತೆ ಹೊರತೆಗೆಯಬಹುದು!&lt;/p&gt;&lt;h2&gt;ಈ ಮ್ಯಾಜಿಕ್ ಮಾಡಲು ಬೇಕಾಗುವ 'ಆಯುಧಗಳು' ಇವೇ ನೋಡಿ:&lt;/h2&gt;&lt;p&gt;ಇದಕ್ಕಾಗಿ ನೀವು ಮಾರುಕಟ್ಟೆಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಿಲ್ಲ. ನಿಮ್ಮ ಮನೆಯಲ್ಲೇ ಇರುವ ಈ ವಸ್ತುಗಳು ಸಾಕು:&lt;/p&gt;&lt;p&gt;ಒಂದು ಉದ್ದವಾದ ಪ್ಲಾಸ್ಟಿಕ್ ಅಥವಾ ಪಿವಿಸಿ ಪೈಪ್.&lt;/p&gt;&lt;p&gt;ಒಂದು ಹಳೆಯ ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲ್.&lt;/p&gt;&lt;p&gt;ಸ್ವಲ್ಪ ಸೆಲ್ಲೋ ಟೇಪ್ ಅಥವಾ ದಾರ.&lt;/p&gt;&lt;p&gt;ಕ್ಲೀನಿಂಗ್ ಪ್ರಕ್ರಿಯೆ ಶುರು ಮಾಡೋದು ಹೇಗೆ? (ಹಂತ-ಹಂತವಾಗಿ ಇಲ್ಲಿದೆ ವಿವರ)&lt;/p&gt;&lt;p&gt;ಸ್ಟೆಪ್ 1: ಹೋಮ್ ಮೇಡ್ ವ್ಯಾಕ್ಯೂಮ್ ತಯಾರಿಸಿ: ಮೊದಲು ಪ್ಲಾಸ್ಟಿಕ್ ಬಾಟಲಿಯ ತಳಭಾಗವನ್ನು ಕತ್ತರಿಸಿ (ಅದು ಕವಚದಂತೆ ಇರಲಿ). ಈಗ ಬಾಟಲಿಯ ಮುಚ್ಚಳದ ಭಾಗಕ್ಕೆ ಪೈಪ್&zwnj;ನ ಒಂದು ತುದಿಯನ್ನು ಸೇರಿಸಿ. ಗಾಳಿ ಅಥವಾ ನೀರು ಸೋರಿಕೆಯಾಗದಂತೆ ಟೇಪ್&zwnj;ನಿಂದ ಬಿಗಿಯಾಗಿ ಸುತ್ತಿ. ಈಗ ನಿಮ್ಮ 'ಹೀರುವ ಸಾಧನ' ರೆಡಿ!&lt;/p&gt;&lt;p&gt;ಸ್ಟೆಪ್ 2: ಸೈಫನ್ ಟ್ರಿಕ್ ಬಳಸಿ: ಈಗ ಇಡೀ ಪೈಪ್&zwnj;ಗೆ ನೀರನ್ನು ತುಂಬಿಸಿ. ಪೈಪ್&zwnj;ನ ಇನ್ನೊಂದು ತುದಿಯನ್ನು (ಬಾಟಲಿ ಇಲ್ಲದ ತುದಿ) ನಿಮ್ಮ ಹೆಬ್ಬೆರಳಿನಿಂದ ಬಿಗಿಯಾಗಿ ಮುಚ್ಚಿ ಹಿಡಿಯಿರಿ.&lt;/p&gt;&lt;p&gt;ಸ್ಟೆಪ್ 3: ಕೊಳೆಯನ್ನು ಗುಡಿಸಿ: ಟ್ಯಾಂಕ್&zwnj;ನ ಮುಚ್ಚಳ ತೆಗೆದು, ಬಾಟಲಿ ಇರುವ ತುದಿಯನ್ನು ಟ್ಯಾಂಕ್&zwnj;ನ ತಳಭಾಗಕ್ಕೆ ಇಳಿಸಿ. ಅಲ್ಲಿ ಸಂಗ್ರಹವಾಗಿರುವ ಮಣ್ಣಿನ ಹತ್ತಿರ ಬಾಟಲಿಯನ್ನು ಇಡಿ. ಈಗ ಟ್ಯಾಂಕ್&zwnj;ನಿಂದ ಹೊರಗಿರುವ ಪೈಪ್&zwnj;ನ ತುದಿಯನ್ನು ಕೆಳಮಟ್ಟದಲ್ಲಿ ಹಿಡಿದು ನಿಮ್ಮ ಹೆಬ್ಬೆರಳನ್ನು ತೆಗೆಯಿರಿ.&lt;/p&gt;&lt;p&gt;ಮ್ಯಾಜಿಕ್ ನೋಡಿ: 'ಸೈಫನ್' ತತ್ವದ ಪ್ರಕಾರ, ನೀರು ಪೈಪ್ ಮೂಲಕ ಹೊರಬರಲು ಶುರುವಾಗುತ್ತದೆ. ನೀವು ಬಾಟಲಿಯನ್ನು ಮಣ್ಣು ಇರುವ ಕಡೆ ಚಲಿಸಿದರೆ ಸಾಕು, ಟ್ಯಾಂಕ್&zwnj;ನ ತಳದಲ್ಲಿರುವ ಎಲ್ಲಾ ಕೊಳಕು ನೀರು ಪೈಪ್ ಮೂಲಕ ಹೊರಬರುತ್ತದೆ. ಟ್ಯಾಂಕ್&zwnj;ನಲ್ಲಿರುವ ಒಳ್ಳೆಯ ನೀರು ಹಾಗೆಯೇ ಇರುತ್ತದೆ, ಕೇವಲ ತಳದ ಗಲೀಜು ಮಾತ್ರ ವ್ಯಾಕ್ಯೂಮ್ ಕ್ಲೀನರ್ ಎಳೆದಂತೆ ಹೊರಬರುತ್ತದೆ!&lt;/p&gt;&lt;h3&gt;ಈ ವಿಧಾನದ 'ಜಬರ್ದಸ್ತ್' ಲಾಭಗಳು:&lt;/h3&gt;&lt;p&gt;ನೂರು ಲೀಟರ್ ನೀರು ಉಳಿತಾಯ: ಟ್ಯಾಂಕ್ ಕ್ಲೀನ್ ಮಾಡೋಕೆ ಇಡೀ ನೀರನ್ನು ಸುರಿಯಬೇಕಿಲ್ಲ. ಕೇವಲ 15-20 ಲೀಟರ್ ಗಲೀಜು ನೀರು ಮಾತ್ರ ಹೊರಹೋಗುತ್ತದೆ.&lt;/p&gt;&lt;p&gt;ಬೆನ್ನು ನೋವಿಗೆ ಬೈ-ಬೈ: ಟ್ಯಾಂಕ್ ಒಳಗೆ ಇಳಿದು ಬಗ್ಗಿ ಉಜ್ಜುವ ಕಷ್ಟವೇ ಇಲ್ಲ.&lt;/p&gt;&lt;p&gt;ಸಮಯ ಉಳಿತಾಯ: 2-3 ಗಂಟೆ ಕೆಲಸ ಕೇವಲ 15 ನಿಮಿಷದಲ್ಲಿ ಮುಗಿಯುತ್ತದೆ.&lt;/p&gt;&lt;p&gt;ಬೋನಸ್ ಟಿಪ್:&lt;/p&gt;&lt;p&gt;ಹೀಗೆ ಮಣ್ಣನ್ನು ತೆಗೆದ ನಂತರ, ಟ್ಯಾಂಕ್ ನೀರಿಗೆ ಸ್ವಲ್ಪ ಬ್ಲೀಚಿಂಗ್ ಪೌಡರ್ ಅಥವಾ 'ಪಟಿಕ' (Alum) ಸೇರಿಸಿದರೆ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ನೀರು ಸ್ಪಟಿಕದಂತೆ ಶುದ್ಧವಾಗುತ್ತದೆ. ಜೊತೆಗೆ ಟ್ಯಾಂಕ್ ಮುಚ್ಚಳವನ್ನು ಯಾವಾಗಲೂ ಬಿಗಿಯಾಗಿ ಮುಚ್ಚಿಡಿ, ಆಗ ಧೂಳು ಬೀಳುವುದು ಕಡಿಮೆಯಾಗುತ್ತದೆ.&lt;/p&gt;&lt;p&gt;ಇನ್ನೇಕೆ ತಡ? ಈ ವಾರಾಂತ್ಯದಲ್ಲೇ ಈ 'ದೇಸಿ ಜುಗಾಡ್' ಟ್ರೈ ಮಾಡಿ ನೋಡಿ ಮತ್ತು ನಿಮ್ಮ ಟ್ಯಾಂಕ್ ಅನ್ನು ಮಿನುಗಿಸಿ!&lt;/p&gt;]]></content:encoded>
            <category>science</category>
            <dc:creator>Shriram Bhat</dc:creator>
            <atom:link href="https://kannada.asianetnews.com/life/use-this-simple-desi-jugaad-to-clean-it-easily-and-no-more-stepping-inside-the-water-tank/articleshow-p4s67yk"/>
        </item>
        <item>
            <title><![CDATA[ಸೂರ್ಯನ ಅಂತ್ಯದ ಬಳಿಕವೂ ಭೂಮಿಯಲ್ಲಿ ಜೀವ ಉಳಿಸಬಹುದೇ? ವಿಜ್ಞಾನಿಗಳಿಂದ ರೋಚಕ 'ಪ್ಲಾನ್ ಬಿ' ಅನಾವರಣ!]]></title>
            <link>https://kannada.asianetnews.com/science/can-humanity-save-earth-from-the-dying-sun-scientists-imagine-a-mega-engineering-plan/articleshow-sq0zsux</link>
            <guid isPermaLink="true">https://kannada.asianetnews.com/science/can-humanity-save-earth-from-the-dying-sun-scientists-imagine-a-mega-engineering-plan/articleshow-sq0zsux</guid>
            <pubDate>Sat, 08 Aug 2026 17:35:03 +0530</pubDate>
            <description><![CDATA[&lt;p&gt;ಇನ್ನೂ ಸುಮಾರು 5 ಶತಕೋಟಿ ವರ್ಷಗಳ ಬಳಿಕ ಸೂರ್ಯ ಕೆಂಪು ದೈತ್ಯನಾಗಿ ಭೂಮಿಯನ್ನು ವಾಸಯೋಗ್ಯವಲ್ಲದಂತೆ ಮಾಡಬಹುದು. ಆದರೆ ಹೊಸ ಅಧ್ಯಯನವು ದೈತ್ಯ ಸೂರ್ಯನ ನೆರಳು ನಿರ್ಮಿಸುವುದು, ಭೂಮಿಯ ಕಕ್ಷೆಯನ್ನು ಬದಲಿಸುವುದು ಹಾಗೂ ಕೃತಕ ಶಕ್ತಿಯ ಮೂಲ ಸೃಷ್ಟಿಸುವಂತಹ ಮಹತ್ವಾಕಾಂಕ್ಷೆಯ ಯೋಜನೆಗಳ ಮೂಲಕ ಭೂಮಿಯನ್ನು ಟ್ರಿಲಿಯನ್ ವರ್ಷಗಳವರೆಗೆ ಜೀವಕ್ಕೆ ಅನುಕೂಲವಾಗಿಡುವ ಸಾಧ್ಯತೆಯನ್ನು ಚರ್ಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzebak6braf9x41cvycmp33g,imgname-scientists-propose-sci-fi-ideas-to-keep-earth-habitable-long-after-the-sun-changes-1786114297035.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೂರ್ಯನ ಅಂತ್ಯದ ಬಳಿಕವೂ ಭೂಮಿಯಲ್ಲಿ ಜೀವ ಉಳಿಸಬಹುದೇ?&lt;/strong&gt;&lt;/p&gt;&lt;p&gt;ಮಾನವ ನಾಗರಿಕತೆಯ ಭವಿಷ್ಯದ ಬಗ್ಗೆ ವಿಜ್ಞಾನಿಗಳು ಹಲವು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದಾರೆ. ಈಗ ಪ್ರಕಟವಾದ ಹೊಸ ಸಂಶೋಧನೆಯೊಂದು ಮತ್ತಷ್ಟು ಕುತೂಹಲಕಾರಿ ಪ್ರಶ್ನೆಯನ್ನು ಎತ್ತಿದೆ. ಸೂರ್ಯನು ತನ್ನ ಅಂತಿಮ ಹಂತ ತಲುಪಿದ ಬಳಿಕವೂ ಭೂಮಿಯನ್ನು ವಾಸಯೋಗ್ಯವಾಗಿಡಲು ಸಾಧ್ಯವೇ? ಇದಕ್ಕೆ ಉತ್ತರ ಹುಡುಕಲು ವಿಜ್ಞಾನಿಗಳು ಕೆಲವು ಮಹತ್ವಾಕಾಂಕ್ಷೆಯ ಎಂಜಿನಿಯರಿಂಗ್ ಕಲ್ಪನೆಗಳನ್ನು ಮುಂದಿಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಸೂರ್ಯನ ಮುಂದಿನ ಹಂತ ಏನು?&lt;/strong&gt;&lt;/p&gt;&lt;p&gt;ಖಗೋಳ ವಿಜ್ಞಾನಿಗಳ ಪ್ರಕಾರ, ಇನ್ನೂ ಸುಮಾರು 5 ಶತಕೋಟಿ ವರ್ಷಗಳ ನಂತರ ಸೂರ್ಯ ತನ್ನ ಇಂಧನವನ್ನು ಬಹುತೇಕ ಖಾಲಿ ಮಾಡಿಕೊಂಡು ಕೆಂಪು ದೈತ್ಯ (Red Giant) ಹಂತಕ್ಕೆ ಪ್ರವೇಶಿಸುತ್ತದೆ. ಆಗ ಸೂರ್ಯನ ಗಾತ್ರ ಮತ್ತು ಉಷ್ಣತೆ ಹೆಚ್ಚಾಗಿ ಭೂಮಿಯ ಮೇಲಿನ ಜೀವ ಉಳಿಯಲು ಅಸಾಧ್ಯವಾಗಬಹುದು.&lt;/p&gt;&lt;p&gt;&lt;strong&gt;ಭೂಮಿಯನ್ನು ರಕ್ಷಿಸುವ ಮೂರು ಪ್ರಮುಖ ಯೋಜನೆಗಳು..!&lt;/strong&gt;&lt;/p&gt;&lt;p&gt;ಹೊಸ ಅಧ್ಯಯನದಲ್ಲಿ ವಿಜ್ಞಾನಿಗಳು ಭವಿಷ್ಯದಲ್ಲಿ ಸಾಧ್ಯವಾಗಬಹುದಾದ ಮೂರು ಸಾಹಸಮಯ ಯೋಜನೆಗಳನ್ನು ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;1. ಬಾಹ್ಯಾಕಾಶದಲ್ಲಿ ದೈತ್ಯ ಸೂರ್ಯನ ನೆರಳು:&lt;/strong&gt; ಭೂಮಿ ಮತ್ತು ಸೂರ್ಯನ ನಡುವೆ ಒಂದು ಬೃಹತ್ &quot;ಸೋಲಾರ್ ಪ್ಯಾರಾಸೋಲ್&quot; ನಿರ್ಮಿಸಿ, ಸೂರ್ಯನ ಬೆಳಕು ಮತ್ತು ಶಾಖದ ಒಂದು ಭಾಗವನ್ನು ತಡೆಯುವ ಕಲ್ಪನೆ.&lt;/p&gt;&lt;p&gt;&lt;strong&gt;2. ಭೂಮಿಯ ಕಕ್ಷೆಯನ್ನು ಬದಲಿಸುವುದು:&lt;/strong&gt; ನಿಯಂತ್ರಿತ ಕ್ಷುದ್ರಗ್ರಹಗಳ (Asteroids) ನೆರವಿನಿಂದ ಭೂಮಿಯನ್ನು ನಿಧಾನವಾಗಿ ಸೂರ್ಯನಿಂದ ದೂರದ ಕಕ್ಷೆಗೆ ತಳ್ಳುವುದು.&lt;/p&gt;&lt;p&gt;&lt;strong&gt;3. ಕೃತಕ ಸೂರ್ಯ ನಿರ್ಮಾಣ:&lt;/strong&gt; ಸೂರ್ಯ ತನ್ನ ಶಕ್ತಿಯನ್ನು ಕಳೆದುಕೊಂಡ ಬಳಿಕ, ಬೆಳಕು ಮತ್ತು ಶಾಖ ಒದಗಿಸುವ ಕೃತಕ ಶಕ್ತಿಯ ಮೂಲವನ್ನು ನಿರ್ಮಿಸುವ ಸಾಧ್ಯತೆಯನ್ನೂ ಅಧ್ಯಯನ ಚರ್ಚಿಸಿದೆ.&lt;/p&gt;&lt;p&gt;&lt;strong&gt;ಭೂಮಿ ಟ್ರಿಲಿಯನ್ ವರ್ಷಗಳ ಕಾಲ ವಾಸಯೋಗ್ಯವೇ?&lt;/strong&gt;&lt;/p&gt;&lt;p&gt;ಸಂಶೋಧಕರ ಅಂದಾಜಿನ ಪ್ರಕಾರ, ಈ ತಂತ್ರಜ್ಞಾನಗಳು ಭವಿಷ್ಯದಲ್ಲಿ ಯಶಸ್ವಿಯಾದರೆ ಭೂಮಿಯನ್ನು ಸುಮಾರು 9.1 ಮಿಲಿಯನ್ ಶತಕೋಟಿ ವರ್ಷಗಳ ಕಾಲ ವಾಸಯೋಗ್ಯವಾಗಿಡುವ ಸಾಧ್ಯತೆ ಇದೆ. ಸೂರ್ಯನ ದ್ರವ್ಯರಾಶಿಯನ್ನು ನಿಯಂತ್ರಿಸುವಂತಹ ಹೆಚ್ಚುವರಿ ತಂತ್ರಜ್ಞಾನಗಳು ಅಭಿವೃದ್ಧಿಯಾದರೆ ಈ ಅವಧಿ ಇನ್ನಷ್ಟು ವಿಸ್ತರಿಸಬಹುದು ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಈಗಿನ ತಂತ್ರಜ್ಞಾನಕ್ಕೆ ಇದು ಸಾಧ್ಯವೇ?&lt;/strong&gt;&lt;/p&gt;&lt;p&gt;ಸದ್ಯಕ್ಕೆ ಈ ಎಲ್ಲ ಯೋಜನೆಗಳು ಕೇವಲ ಸೈದ್ಧಾಂತಿಕ ಕಲ್ಪನೆಗಳಷ್ಟೇ. ಇವುಗಳನ್ನು ಕಾರ್ಯರೂಪಕ್ಕೆ ತರಲು ಇಂದಿನ ಮಾನವ ನಾಗರಿಕತೆಯ ಸಾಮರ್ಥ್ಯಕ್ಕಿಂತ ಸಾವಿರಾರು ಪಟ್ಟು ಹೆಚ್ಚು ಶಕ್ತಿ, ಸಂಪನ್ಮೂಲ ಮತ್ತು ಅತ್ಯಾಧುನಿಕ ಎಂಜಿನಿಯರಿಂಗ್ ಅಗತ್ಯವಿದೆ.&lt;/p&gt;&lt;p&gt;&lt;strong&gt;ಹೊಸ ಅಧ್ಯಯನ ಹೇಳುವುದೇನು?&lt;/strong&gt;&lt;/p&gt;&lt;p&gt;ಇತ್ತೀಚಿನ ಮತ್ತೊಂದು ಅಧ್ಯಯನದ ಪ್ರಕಾರ, ಸೂರ್ಯ ಕೆಂಪು ದೈತ್ಯವಾದಾಗ ಭೂಮಿಯನ್ನು ನೇರವಾಗಿ ನುಂಗದಿರಬಹುದು. ಆದರೆ ಅದರ ಉಷ್ಣತೆಯಿಂದ ಭೂಮಿಯು ಜೀವಕ್ಕೆ ಅಸಾಧ್ಯವಾದಷ್ಟು ಬಿಸಿಯಾಗುವ ಸಾಧ್ಯತೆ ಇದೆ. ಹೀಗಾಗಿ ಭವಿಷ್ಯದಲ್ಲಿ ಭೂಮಿಯನ್ನು ರಕ್ಷಿಸಲು ಇಂತಹ ಮಹತ್ವಾಕಾಂಕ್ಷೆಯ ಯೋಜನೆಗಳು ಅಗತ್ಯವಾಗಬಹುದು ಎಂಬ ಅಭಿಪ್ರಾಯವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಭವಿಷ್ಯದ ದೊಡ್ಡ ಪ್ರಶ್ನೆ?&lt;/strong&gt;&lt;/p&gt;&lt;p&gt;ಮಾನವಕುಲವು ಇನ್ನೂ ಶತಕೋಟಿ ವರ್ಷಗಳ ನಂತರವೂ ಅಸ್ತಿತ್ವದಲ್ಲಿದ್ದರೆ, ಹೊಸ ಗ್ರಹಕ್ಕೆ ವಲಸೆ ಹೋಗುವುದು ಸುಲಭವೇ? ಅಥವಾ ನಮ್ಮದೇ ಸೌರವ್ಯೂಹವನ್ನು ಬದಲಾಯಿಸಿ ಭೂಮಿಯನ್ನು ಉಳಿಸುವುದು ಉತ್ತಮವೇ? ಈ ಪ್ರಶ್ನೆಗೆ ಉತ್ತರವನ್ನು ಭವಿಷ್ಯದ ವಿಜ್ಞಾನ ಮತ್ತು ತಂತ್ರಜ್ಞಾನವೇ ನೀಡಬೇಕಿದೆ.&lt;/p&gt;]]></content:encoded>
            <category>science</category>
            <dc:creator>Chandrashekar GS</dc:creator>
            <atom:link href="https://kannada.asianetnews.com/science/can-humanity-save-earth-from-the-dying-sun-scientists-imagine-a-mega-engineering-plan/articleshow-sq0zsux"/>
        </item>
        <item>
            <title><![CDATA[Knowledge Story: ಗಡಿಯಾರದ ಮುಳ್ಳು ಬಲಕ್ಕೆ ತಿರುಗೋದೇಕೆ, ದಿನಾ ನೋಡಿದ್ರೂ ಈ ಸತ್ಯ ಯಾರಿಗೂ ಗೊತ್ತಿಲ್ಲ]]></title>
            <link>https://kannada.asianetnews.com/gallery/science/ancient-secret-behind-why-clocks-move-clockwise-suh-ugp6qfl</link>
            <guid isPermaLink="true">https://kannada.asianetnews.com/gallery/science/ancient-secret-behind-why-clocks-move-clockwise-suh-ugp6qfl</guid>
            <pubDate>Fri, 07 Aug 2026 10:57:44 +0530</pubDate>
            <description><![CDATA[&lt;p&gt;ಗಡಿಯಾರದ ಮುಳ್ಳುಗಳು ಯಾಕೆ ಯಾವಾಗಲೂ ಎಡದಿಂದ ಬಲಕ್ಕೆ ತಿರುಗುತ್ತವೆ ಅಂತ ನೀವು ಎಂದಾದರೂ ಯೋಚಿಸಿದ್ದೀರಾ? ಪ್ರತಿದಿನ ನಾವು ಸಮಯ ನೋಡುತ್ತೇವೆ, ಆದರೆ ಈ ಸರಳ ಪ್ರಶ್ನೆಯ ಹಿಂದಿರುವ ಕುತೂಹಲಕಾರಿ ಇತಿಹಾಸ ಮತ್ತು ವಿಜ್ಞಾನದ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಬನ್ನಿ, ಇದರ ಹಿಂದಿನ ಸತ್ಯವನ್ನು ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ka0qec9f6v1dv4yc2pcxm0v2,imgname-vastu-tips-for-clock-03-1763108663599.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಡಿಯಾರದ ಮುಳ್ಳುಗಳು ಯಾಕೆ ಯಾವಾಗಲೂ ಎಡದಿಂದ ಬಲಕ್ಕೆ ತಿರುಗುತ್ತವೆ ಅಂತ ನೀವು ಎಂದಾದರೂ ಯೋಚಿಸಿದ್ದೀರಾ? ಪ್ರತಿದಿನ ನಾವು ಸಮಯ ನೋಡುತ್ತೇವೆ, ಆದರೆ ಈ ಸರಳ ಪ್ರಶ್ನೆಯ ಹಿಂದಿರುವ ಕುತೂಹಲಕಾರಿ ಇತಿಹಾಸ ಮತ್ತು ವಿಜ್ಞಾನದ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಬನ್ನಿ, ಇದರ ಹಿಂದಿನ ಸತ್ಯವನ್ನು ತಿಳಿಯೋಣ.&lt;/p&gt;&lt;img&gt;&lt;p&gt;ಸಮಯ ನೋಡಬೇಕೆಂದರೆ ನಮ್ಮ ಕಣ್ಣುಗಳು ಮೊದಲು ಗಡಿಯಾರದತ್ತ ಹೋಗುತ್ತವೆ. ಆದರೆ ಗಡಿಯಾರದ ಮುಳ್ಳುಗಳು ಯಾಕೆ ಎಡದಿಂದ ಬಲಕ್ಕೆ ತಿರುಗುತ್ತವೆ? ಬಲದಿಂದ ಎಡಕ್ಕೆ ಯಾಕೆ ಹೋಗುವುದಿಲ್ಲ? ಈ ಪ್ರಶ್ನೆ ಎಂದಾದರೂ ನಿಮ್ಮ ಮನಸ್ಸಿನಲ್ಲಿ ಮೂಡಿದೆಯೇ?&lt;/p&gt;&lt;p&gt;&lt;strong&gt;ಗಡಿಯಾರದ ಮುಳ್ಳು ಬಲಕ್ಕೆ ತಿರುಗುತ್ತದೆಯೇ?&lt;/strong&gt;&lt;/p&gt;&lt;p&gt;ಈ ಪ್ರಶ್ನೆಗೆ ಉತ್ತರ ತಿಳಿಯಲು ನಾವು ಪ್ರಾಚೀನ ಕಾಲಕ್ಕೆ ಹೋಗಬೇಕು. ಬಹಳ ವರ್ಷಗಳ ಹಿಂದೆ, ಜನರು ಸಮಯವನ್ನು ತಿಳಿಯಲು ಸೂರ್ಯಗಡಿಯಾರವನ್ನು ಬಳಸುತ್ತಿದ್ದರು. ಕ್ರಿ.ಪೂ. 1500ರ ಸುಮಾರಿಗೆ ಬ್ಯಾಬಿಲೋನ್&zwnj;ನಲ್ಲಿ ಮೊದಲ ಬಾರಿಗೆ ಸೂರ್ಯಗಡಿಯಾರವನ್ನು ಬಳಸಲಾಯಿತು ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;ಸೂರ್ಯನ ಬೆಳಕು ಮತ್ತು ಅದರ ಸ್ಥಾನದ ಸಹಾಯದಿಂದ ಈ ಗಡಿಯಾರವು ಹಗಲಿನ ಸಮಯವನ್ನು ನಿರ್ಧರಿಸುತ್ತಿತ್ತು. ಆದರೆ ಇದು ಕೇವಲ ಹಗಲಿನಲ್ಲಿ ಮಾತ್ರ ಕೆಲಸ ಮಾಡುತ್ತಿತ್ತು. ಇದೇ ಕಾರಣಕ್ಕೆ ನಂತರದ ದಿನಗಳಲ್ಲಿ ಸುಧಾರಿತ ಯಾಂತ್ರಿಕ ಗಡಿಯಾರಗಳನ್ನು ತಯಾರಿಸಲಾಯಿತು.&lt;/p&gt;&lt;p&gt;&lt;strong&gt;ಇತಿಹಾಸ ತಿಳಿದುಕೊಳ್ಳಿ&lt;/strong&gt;&lt;/p&gt;&lt;p&gt;ಸೂರ್ಯಗಡಿಯಾರದಲ್ಲಿ, ಸಮತಟ್ಟಾದ ತಟ್ಟೆಯ ಮೇಲೆ ಸಮಯದ ಗುರುತುಗಳನ್ನು ಮಾಡಲಾಗುತ್ತಿತ್ತು. ಅದರ ಮೇಲೆ 'ನೋಮನ್' (Gnomon) ಎಂದು ಕರೆಯಲ್ಪಡುವ ಒಂದು ನೇರವಾದ ದಂಡ ಅಥವಾ ತ್ರಿಕೋನ ಭಾಗವನ್ನು ಇರಿಸಲಾಗುತ್ತಿತ್ತು.&lt;/p&gt;&lt;img&gt;&lt;p&gt;ಸೂರ್ಯನ ಬೆಳಕು ಬಿದ್ದಾಗ, ನೋಮನ್&zwnj;ನ ನೆರಳು ತಟ್ಟೆಯ ಮೇಲೆ ಚಲಿಸುತ್ತಿತ್ತು. ಆ ನೆರಳಿನ ಸ್ಥಾನವನ್ನು ನೋಡಿ ಸಮಯವನ್ನು ತಿಳಿಯಲಾಗುತ್ತಿತ್ತು. ಬಯಸಿದರೆ, ಯಾರಾದರೂ ಸುಲಭವಾಗಿ ಸೂರ್ಯಗಡಿಯಾರವನ್ನು ಮಾಡಬಹುದು. ತೆರೆದ ಜಾಗದಲ್ಲಿ ಒಂದು ಕೋಲನ್ನು ನೆಟ್ಟು ಅದರ ಸುತ್ತಲೂ ಗಂಟೆಗಳ ಗುರುತು ಹಾಕಬೇಕು.&lt;/p&gt;&lt;p&gt;&lt;strong&gt;ಅಪರಿಚಿತ ಕಾರಣವನ್ನು ತಿಳಿದುಕೊಳ್ಳಿ&lt;/strong&gt;&lt;/p&gt;&lt;p&gt;ಪೂರ್ವದಲ್ಲಿ ಸೂರ್ಯ ಉದಯಿಸಿದ ನಂತರ, ಕೋಲಿನ ನೆರಳು ನಿಧಾನವಾಗಿ ತಿರುಗಲು ಪ್ರಾರಂಭಿಸುತ್ತದೆ. ಆ ನೆರಳನ್ನು ನೋಡುವ ಮೂಲಕ ಸಮಯವನ್ನು ಸುಲಭವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ.&lt;/p&gt;&lt;img&gt;&lt;p&gt;ಈಗ ಮೂಲ ಪ್ರಶ್ನೆಗೆ ಉತ್ತರ. ಭೂಮಿಯು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ. ಇದರಿಂದಾಗಿ, ಉತ್ತರ ಗೋಳಾರ್ಧದಲ್ಲಿರುವ ನಮಗೆ ಸೂರ್ಯನು ಆಕಾಶದಲ್ಲಿ ಪೂರ್ವದಿಂದ ದಕ್ಷಿಣದ ಕಡೆಗೆ ಸಾಗಿ ಪಶ್ಚಿಮದಲ್ಲಿ ಮುಳುಗುವಂತೆ ಕಾಣಿಸುತ್ತಾನೆ.&lt;/p&gt;&lt;p&gt;&lt;strong&gt;ಅದಕ್ಕಾಗಿಯೇ ಇದು ಎಡದಿಂದ ಬಲಕ್ಕೆ ತಿರುಗುತ್ತದೆ&lt;/strong&gt;&lt;/p&gt;&lt;p&gt;ಹೀಗಾಗಿ, ಸೂರ್ಯಗಡಿಯಾರದಲ್ಲಿ ಕೋಲಿನ ನೆರಳು ಕೂಡ ಎಡದಿಂದ ಬಲಕ್ಕೆ ಚಲಿಸುತ್ತದೆ. ನಂತರ ಯಾಂತ್ರಿಕ ಗಡಿಯಾರಗಳನ್ನು ತಯಾರಿಸುವಾಗ, ಅದೇ ದಿಕ್ಕನ್ನು ಅನುಸರಿಸಲಾಯಿತು. ಇದೇ ಕಾರಣಕ್ಕೆ ಇಂದಿಗೂ ಗಡಿಯಾರದ ಮುಳ್ಳುಗಳು ಎಡದಿಂದ ಬಲಕ್ಕೆ ತಿರುಗುತ್ತವೆ.&lt;/p&gt;&lt;img&gt;&lt;p&gt;ಒಂದು ವೇಳೆ ಮೊದಲ ಗಡಿಯಾರವನ್ನು ದಕ್ಷಿಣ ಗೋಳಾರ್ಧದಲ್ಲಿ ಕಂಡುಹಿಡಿದಿದ್ದರೆ, ಸೂರ್ಯನ ಚಲನೆಯಿಂದಾಗಿ ಸೂರ್ಯಗಡಿಯಾರದ ನೆರಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿತ್ತು. ಆಗ, ಇಂದಿನ ಗಡಿಯಾರದ ಮುಳ್ಳುಗಳು ಬಹುಶಃ ಬಲದಿಂದ ಎಡಕ್ಕೆ ತಿರುಗುತ್ತಿದ್ದವು.&lt;/p&gt;&lt;p&gt;&lt;strong&gt;ಅಸಲಿ ಕಾರಣ ತಿಳಿದುಕೊಳ್ಳಿ&lt;/strong&gt;&lt;/p&gt;&lt;p&gt;ಸಾರಾಂಶವೆಂದರೆ, ಗಡಿಯಾರದ ಮುಳ್ಳುಗಳ ಪ್ರಸ್ತುತ ಚಲನೆಯ ದಿಕ್ಕು, ಉತ್ತರ ಗೋಳಾರ್ಧದಲ್ಲಿನ ಸೂರ್ಯಗಡಿಯಾರದ ಬಳಕೆ ಮತ್ತು ಸೂರ್ಯನ ಚಲನೆಯ ಐತಿಹಾಸಿಕ ಮುಂದುವರಿಕೆಯ ಫಲವಾಗಿದೆ.&lt;/p&gt;]]></content:encoded>
            <category>science</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/science/ancient-secret-behind-why-clocks-move-clockwise-suh-ugp6qfl"/>
        </item>
        <item>
            <title><![CDATA[Science: ವಿಜ್ಞಾನ ಲೋಕದಲ್ಲೊಂದು ಅಪರೂಪದ ಶೋಧ! 12 ವರ್ಷಗಳ ಸುದೀರ್ಘ ಹುಡುಕಾಟದ ಬಳಿಕ 'ಡೈಮಂಡ್ ಫ್ರಾಗ್' ರಹಸ್ಯ ಭೇದಿಸಿದ ವಿಜ್ಞಾನಿಗಳು]]></title>
            <link>https://kannada.asianetnews.com/science/rare-discovery-scientists-crack-diamond-frog-mystery-after-12-years-bmk/articleshow-unswwz5</link>
            <guid isPermaLink="true">https://kannada.asianetnews.com/science/rare-discovery-scientists-crack-diamond-frog-mystery-after-12-years-bmk/articleshow-unswwz5</guid>
            <pubDate>Fri, 07 Aug 2026 16:55:42 +0530</pubDate>
            <description><![CDATA[ಮಡಗಾಸ್ಕರ್&zwnj;ನಲ್ಲಿ ವಿಜ್ಞಾನಿಗಳು 'ರೋಂಬೊಫ್ರೈನ್' ಕುಲಕ್ಕೆ ಸೇರಿದ ಏಳು ಹೊಸ ಜಾತಿಯ ವಜ್ರ ಕಪ್ಪೆಗಳನ್ನು ಪತ್ತೆಹಚ್ಚಿದ್ದಾರೆ. ಡಿಎನ್&zwnj;ಎ ವಿಶ್ಲೇಷಣೆ ಮತ್ತು ಸಿಟಿ ಸ್ಕ್ಯಾನ್&zwnj;ಗಳಂತಹ ಆಧುನಿಕ ತಂತ್ರಜ್ಞಾನ ಬಳಸಿ ಈ ಆವಿಷ್ಕಾರ ಮಾಡಲಾಗಿದ್ದು, ಇದು ದ್ವೀಪದ ಅಪಾರ ಜೀವವೈವಿಧ್ಯತೆ ಮತ್ತು ಅದರ ಸಂರಕ್ಷಣೆಯ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzdzgtpyt61tt06ykg14kdze,imgname-daimond-frog--1786101918430.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಡಗಾಸ್ಕರ್ ವಿಶ್ವದ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿದೆ. ಆಧುನಿಕ ವಿಜ್ಞಾನಕ್ಕೂ ನಿರಂತರವಾಗಿ ಸವಾಲು ಎಸೆಯುವ ಈ ದ್ವೀಪದಲ್ಲಿ ಇದೀಗ ವಿಜ್ಞಾನಿಗಳು ಮತ್ತೊಂದು ಬೆರಗುಗೊಳಿಸುವ ಆವಿಷ್ಕಾರ ಮಾಡಿದ್ದಾರೆ. 'ವರ್ಟೆಬ್ರೇಟ್ ಜೂವಾಲಜಿ' ಜರ್ನಲ್&zwnj;ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ವಿಜ್ಞಾನಿಗಳು ರೋಂಬೊಫ್ರೈನ್ ಕುಲಕ್ಕೆ ಸೇರಿದ ಏಳು ಹೊಸ ಜಾತಿಯ ವಜ್ರ ಕಪ್ಪೆಗಳನ್ನು ಪತ್ತೆಹಚ್ಚಿದ್ದಾರೆ. ಈ ಹೊಸ ಸೇರ್ಪಡೆಯೊಂದಿಗೆ ಮಡಗಾಸ್ಕರ್&zwnj;ನಲ್ಲಿ ಗುರುತಿಸಲಾದ ವಜ್ರ ಕಪ್ಪೆಗಳ ಒಟ್ಟು ಪ್ರಭೇದಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.&lt;/p&gt;&lt;h2&gt;&lt;strong&gt;ಕಣ್ಣಿಗೆ ಕಾಣದ ನಿಗೂಢ ವೈವಿಧ್ಯತೆ&lt;/strong&gt;&lt;/h2&gt;&lt;p&gt;ವಜ್ರದ ಕಪ್ಪೆಗಳು ಹೆಸರಿಗೆ ತಕ್ಕಂತೆ ವರ್ಣರಂಜಿತವಾಗಿರುವುದಿಲ್ಲ. ಇವು ಹೆಚ್ಚಾಗಿ ಚಿಕ್ಕದಾಗಿ, ಕಂದು ಬಣ್ಣದಲ್ಲಿದ್ದು, ಮಡಗಾಸ್ಕರ್&zwnj;ನ ಕಾಡುಗಳಲ್ಲಿನ ಒಣ ಎಲೆಗಳ ಅಡಿಯಲ್ಲಿ ಅಥವಾ ಭೂಗತವಾಗಿ ವಾಸಿಸುತ್ತವೆ. ತಮ್ಮ ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಾಯಿಸಿ ವೇಷ ಮರೆಸಿಕೊಳ್ಳುವ ಇವುಗಳ ಜೀವನಶೈಲಿ ಹಾಗೂ ಒಂದೇ ರೀತಿಯ ಬಾಹ್ಯ ನೋಟದಿಂದಾಗಿ ಇವುಗಳನ್ನು ಗುರುತಿಸುವುದು ಕಷ್ಟಕರವಾಗಿತ್ತು.&lt;/p&gt;&lt;h3&gt;&lt;strong&gt;ಹೊಬಿತ್ತು ಸ್ಫೋಟಕ ಸತ್ಯ!&lt;/strong&gt;&lt;/h3&gt;&lt;p&gt;ಕೇವಲ ಬಾಹ್ಯ ನೋಟದಿಂದ ಈ ಕಪ್ಪೆಗಳ ಪ್ರಭೇದಗಳನ್ನು ಪ್ರತ್ಯೇಕಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಸಂಶೋಧಕರು ಡಿಎನ್&zwnj;ಎ ವಿಶ್ಲೇಷಣೆ, ಸಿಟಿ ಸ್ಕ್ಯಾನ್&zwnj;ಗಳ ಮೂಲಕ ಅಸ್ಥಿಪಂಜರದ ಅಧ್ಯಯನ, ದೇಹದ ಅಳತೆಗಳು** ಹಾಗೂ ದಶಕಗಳಿಂದ ವಸ್ತುಸಂಗ್ರಹಾಲಯದಲ್ಲಿದ್ದ ಮಾದರಿಗಳನ್ನು ಮರುಪರಿಶೀಲಿಸಿದರು. ಈ ಆಧುನಿಕ ಹಾಗೂ ಸಾಂಪ್ರದಾಯಿಕ ಸಂಶೋಧನಾ ವಿಧಾನಗಳ ಸಂಯೋಜನೆಯಿಂದಾಗಿ, ದೀರ್ಘಕಾಲದಿಂದ ಒಂದೇ ಜಾತಿ ಎಂದು ಭಾವಿಸಲಾಗಿದ್ದ ಕಪ್ಪೆಗಳು ವಾಸ್ತವವಾಗಿ ಲಕ್ಷಾಂತರ ವರ್ಷಗಳಿಂದ ಸ್ವತಂತ್ರವಾಗಿ ವಿಕಸನಗೊಂಡ ವಿಭಿನ್ನ ವಂಶಾವಳಿಗಳಿಗೆ ಸೇರಿದವು ಎಂಬ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ.&lt;/p&gt;&lt;h3&gt;&lt;strong&gt;ಸಣ್ಣ ಆವಾಸಸ್ಥಾನ ಮತ್ತು ವಿಶಿಷ್ಟ ವಿಕಸನ&lt;/strong&gt;&lt;/h3&gt;&lt;p&gt;ಈ ಕಪ್ಪೆಗಳ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಇವುಗಳ ನಿಯಮಿತ ಆವಾಸಸ್ಥಾನ. ಇಡೀ ದ್ವೀಪದಾದ್ಯಂತ ಹರಡುವ ಬದಲು, ಕೆಲವು ಪ್ರಭೇದಗಳು ಕೇವಲ ಒಂದೇ ಪರ್ವತ ಪ್ರದೇಶ ಅಥವಾ ಸಣ್ಣ ಅರಣ್ಯ ಭಾಗಕ್ಕೆ ಮಾತ್ರ ಸೀಮಿತವಾಗಿವೆ. ಪರ್ವತಗಳು ಮತ್ತು ಕಾಡುಗಳಿಂದ ಭೌಗೋಳಿಕವಾಗಿ ಬೇರ್ಪಟ್ಟಿದ್ದರಿಂದ, ಇವು ಪ್ರತ್ಯೇಕವಾಗಿ ವಿಕಸನಗೊಂಡು ಹೊಸ ಜಾತಿಗಳಾಗಿ ಹೊರಹೊಮ್ಮಿವೆ.&lt;/p&gt;&lt;h3&gt;&lt;strong&gt;ಈ ಆವಿಷ್ಕಾರ ಏಕೆ ಮುಖ್ಯ? ಮತ್ತು ಸಂರಕ್ಷಣೆಯ ಸವಾಲು!&lt;/strong&gt;&lt;/h3&gt;&lt;p&gt;&lt;strong&gt;ಆವಾಸಸ್ಥಾನ ನಾಶದ ಭೀತಿ; &lt;/strong&gt;ಮಡಗಾಸ್ಕರ್&zwnj;ನಲ್ಲಿ ಕೃಷಿ, ಮರ ಕಡಿಯುವುದು ಮತ್ತು ಮಾನವ ವಸಾಹತುಗಳ ವಿಸ್ತರಣೆಯಿಂದಾಗಿ ಕಾಡುಗಳು ವೇಗವಾಗಿ ನಾಶವಾಗುತ್ತಿವೆ.&lt;/p&gt;&lt;p&gt;&lt;strong&gt;ಅಳಿವಿನ ಅಪಾಯ;&lt;/strong&gt; ಅತ್ಯಂತ ಸಣ್ಣ ಪ್ರದೇಶಗಳಲ್ಲಿ ಮಾತ್ರ ವಾಸಿಸುವ ಈ ಕಪ್ಪೆಗಳು, ವಿಜ್ಞಾನಿಗಳು ಇವುಗಳ ಅಸ್ತಿತ್ವವನ್ನು ಅರಿಯುವ ಮುನ್ನವೇ ಅಳಿದುಹೋಗುವ ಅಪಾಯವಿತ್ತು.&lt;/p&gt;&lt;p&gt;&lt;strong&gt;ಸರಿಯಾದ ವರ್ಗೀಕರಣ;&lt;/strong&gt; ಜೀವಿವರ್ಗೀಕರಣ ಶಾಸ್ತ್ರ ಸೂಕ್ತವಾಗಿದ್ದರೆ ಮಾತ್ರ, ಅಳಿವಿನಂಚಿನಲ್ಲಿರುವ ಜೀವಿಗಳನ್ನು ಗುರುತಿಸಿ ರಕ್ಷಿಸಲು ಸಂರಕ್ಷಣಾ ಸಂಸ್ಥೆಗಳಿಗೆ ಸಾಧ್ಯವಾಗುತ್ತದೆ.&lt;/p&gt;&lt;h3&gt;&lt;strong&gt;ಮುಂದುವರೆದ ಶೋಧನೆ!&lt;/strong&gt;&lt;/h3&gt;&lt;p&gt;ದಶಕಗಳ ನಿಕಟ ಸಂಶೋಧನೆಯ ನಂತರವೂ ಮಡಗಾಸ್ಕರ್ ದ್ವೀಪವು ಇಂದಿಗೂ ಅನೇಕ ಜೈವಿಕ ರಹಸ್ಯಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ ಎಂಬುದಕ್ಕೆ ಈ ಆವಿಷ್ಕಾರವೇ ಸಾಕ್ಷಿ. ಜೀನ್&zwnj; ತಂತ್ರಜ್ಞಾನ ಬೆಳೆದಂತೆ ಹಾಗೂ ಶೋಧನೆಗಳು ಮುಂದುವರಿದಂತೆ ಇನ್ನೂ ಹಲವು ಹೊಸ ಪ್ರಭೇದಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ. ಪರಿಸರವಾದಿಗಳಿಗೆ ಈ ಘಟನೆಯು ಒಂದು ಪ್ರಮುಖ ಪಾಠವನ್ನು ನೆನಪಿಸುತ್ತದೆ: ಕಾಡಿನಲ್ಲಿರುವ ಹೊಸ ಪ್ರಭೇದಗಳನ್ನು ಕಂಡುಹಿಡಿಯುವುದು ಎಷ್ಟು ಮುಖ್ಯವೋ, ಅವುಗಳು ವಾಸಿಸುವ ಆವಾಸಸ್ಥಾನಗಳನ್ನು ರಕ್ಷಿಸುವುದು ಅಷ್ಟೇ ತುರ್ತಾಗಿದೆ.&lt;/p&gt;]]></content:encoded>
            <category>science</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/science/rare-discovery-scientists-crack-diamond-frog-mystery-after-12-years-bmk/articleshow-unswwz5"/>
        </item>
        <item>
            <title><![CDATA[ಮೆಲ್ಲನೆ ಕುಗ್ಗುತ್ತಿದೆ ಜಗತ್ತಿನ ಅತಿ ದೊಡ್ಡ ಸಾಗರ! ಮುಳುಗುತ್ತಾ ಭೂಖಂಡಗಳು, ಸೃಷ್ಟಿಯಾಗುತ್ತಾ ಹೊಸ 'ಮಹಾಖಂಡ'?]]></title>
            <link>https://kannada.asianetnews.com/science/earths-largest-ocean-is-shrinking-scientists-predict-a-new-supercontinent-amasia/articleshow-wtg4lkn</link>
            <guid isPermaLink="true">https://kannada.asianetnews.com/science/earths-largest-ocean-is-shrinking-scientists-predict-a-new-supercontinent-amasia/articleshow-wtg4lkn</guid>
            <pubDate>Fri, 07 Aug 2026 16:49:12 +0530</pubDate>
            <description><![CDATA[&lt;p&gt;ಭೂಮಿಯ ಅತಿದೊಡ್ಡ ಪೆಸಿಫಿಕ್ ಸಾಗರ ನಿಧಾನವಾಗಿ ಕುಗ್ಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಟೆಕ್ಟೋನಿಕ್ ಫಲಕಗಳ ಚಲನೆಯಿಂದ ಸಾಗರದ ತಳಭಾಗ ಭೂಮಿಯ ಒಳಭಾಗಕ್ಕೆ ಸೇರುತ್ತಿದ್ದು, ಇನ್ನೂ 20&ndash;30 ಕೋಟಿ ವರ್ಷಗಳ ಬಳಿಕ ಏಷ್ಯಾ, ಅಮೆರಿಕ ಸೇರಿ 'ಅಮಾಸಿಯಾ' ಎಂಬ ಹೊಸ ಸೂಪರ್&zwnj;ಕಾಂಟಿನೆಂಟ್ ರೂಪುಗೊಳ್ಳುವ ಸಾಧ್ಯತೆ ಇದೆ. ಇದು ಭೂಮಿಯ ಸಹಜ ಭೂವೈಜ್ಞಾನಿಕ ಪ್ರಕ್ರಿಯೆಯ ಭಾಗವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzdyys346vkfp79c7wkx25kc,imgname-earth-s-largest-ocean-is-shrinking-scientists-predict-a-new-supercontinent-amasia-1786101326947.jpg" type="image/jpeg" height="390" width="690"/>
            <content:encoded><![CDATA[&lt;p&gt;ಭೂಮಿಯ ಮೇಲ್ಮೈಯ ಸುಮಾರು ಮೂರನೇ ಒಂದು ಭಾಗವನ್ನು ಆವರಿಸಿರುವ ಪೆಸಿಫಿಕ್ ಮಹಾಸಾಗರ ವಿಶ್ವದ ಅತಿದೊಡ್ಡ ಸಾಗರ. ಇದು ಭೂಮಿಯ ಎಲ್ಲಾ ಖಂಡಗಳ ಒಟ್ಟು ವಿಸ್ತೀರ್ಣಕ್ಕಿಂತಲೂ ದೊಡ್ಡದಾಗಿದೆ. ಆದರೆ ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ಈ ಸಾಗರವು ನಿಧಾನವಾಗಿ ಕುಗ್ಗುತ್ತಿದ್ದು, ಭವಿಷ್ಯದಲ್ಲಿ ಭೂಮಿಯ ಎಲ್ಲ ಖಂಡಗಳು ಒಂದಾಗಿ 'ಅಮಾಸಿಯಾ' (Amasia) ಎಂಬ ಹೊಸ ಸೂಪರ್&zwnj;ಕಾಂಟಿನೆಂಟ್ ರೂಪುಗೊಳ್ಳಬಹುದು ಎಂದು ಸೂಚಿಸಿವೆ.&lt;/p&gt;&lt;p&gt;&lt;strong&gt;ಪೆಸಿಫಿಕ್ ಸಾಗರ ಏಕೆ ಕುಗ್ಗುತ್ತಿದೆ?&lt;/strong&gt;&lt;/p&gt;&lt;p&gt;ಭೂಮಿಯ ಹೊರಪದರ (Lithosphere) ಹಲವು ಟೆಕ್ಟೋನಿಕ್ ಫಲಕಗಳಾಗಿ (Tectonic Plates) ವಿಭಜನೆಯಾಗಿದೆ. ಈ ಫಲಕಗಳು ವರ್ಷಕ್ಕೆ ಕೆಲ ಸೆಂಟಿಮೀಟರ್&zwnj;ಗಳಷ್ಟು ನಿಧಾನವಾಗಿ ಚಲಿಸುತ್ತಿರುತ್ತವೆ. ಪೆಸಿಫಿಕ್ ಸಾಗರದ ಸುತ್ತಲೂ ಇರುವ 'ರಿಂಗ್ ಆಫ್ ಫೈರ್' (Ring of Fire) ಪ್ರದೇಶದಲ್ಲಿ ಒಂದು ಫಲಕ ಮತ್ತೊಂದು ಫಲಕದ ಕೆಳಗೆ ಜಾರುವ Subduction ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.&lt;/p&gt;&lt;p&gt;ಈ ಪ್ರಕ್ರಿಯೆಯಿಂದ ಸಾಗರದ ತಳಭಾಗ ನಿಧಾನವಾಗಿ ಭೂಮಿಯ ಒಳಭಾಗಕ್ಕೆ ಸೇರುತ್ತಿದ್ದು, ಪೆಸಿಫಿಕ್ ಸಾಗರದ ಅಗಲ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.&lt;/p&gt;&lt;p&gt;&lt;strong&gt;ಅಮಾಸಿಯಾ ಎಂದರೇನು?&lt;/strong&gt;&lt;/p&gt;&lt;p&gt;ಸುಮಾರು 20 ರಿಂದ 30 ಕೋಟಿ ವರ್ಷಗಳ ನಂತರ, ಉತ್ತರ ಅಮೆರಿಕ, ಏಷ್ಯಾ ಹಾಗೂ ಇತರೆ ಖಂಡಗಳು ಒಂದಕ್ಕೊಂದು ಸೇರಿ ಹೊಸ ಸೂಪರ್&zwnj;ಕಾಂಟಿನೆಂಟ್ ರೂಪಿಸಬಹುದು. ಈ ಭವಿಷ್ಯದ ಮಹಾಖಂಡಕ್ಕೆ ವಿಜ್ಞಾನಿಗಳು 'Amasia' ಎಂದು ಹೆಸರು ನೀಡಿದ್ದಾರೆ.&lt;/p&gt;&lt;p&gt;ಈ ಹೆಸರು America ಮತ್ತು Asia ಪದಗಳ ಸಂಯೋಜನೆಯಾಗಿದೆ.&lt;/p&gt;&lt;p&gt;&lt;strong&gt;ವರ್ಷಗಳ ಹಿಂದೆಯೂ ಸೂಪರ್&zwnj;ಕಾಂಟಿನೆಂಟ್&zwnj;ಗಳಿದ್ದವೆಯೇ?&lt;/strong&gt;&lt;/p&gt;&lt;p&gt;ಹೌದು. ಸುಮಾರು 33.5 ಕೋಟಿ ವರ್ಷಗಳ ಹಿಂದೆ ಭೂಮಿಯ ಎಲ್ಲಾ ಖಂಡಗಳು ಸೇರಿ ಪ್ಯಾಂಜಿಯಾ (Pangaea) ಎಂಬ ಸೂಪರ್&zwnj;ಕಾಂಟಿನೆಂಟ್ ಆಗಿದ್ದವು. ನಂತರ ಟೆಕ್ಟೋನಿಕ್ ಚಲನೆಯಿಂದ ಅದು ವಿಭಜನೆಯಾಗಿ ಇಂದಿನ ಖಂಡಗಳು ರೂಪುಗೊಂಡವು.&lt;/p&gt;&lt;p&gt;ವಿಜ್ಞಾನಿಗಳ ಪ್ರಕಾರ, ಖಂಡಗಳು ಮತ್ತೆ ಒಂದಾಗುವುದು ಭೂಮಿಯ ಸಹಜ ಭೂವೈಜ್ಞಾನಿಕ ಚಕ್ರದ ಭಾಗವಾಗಿದೆ.&lt;/p&gt;&lt;p&gt;&lt;strong&gt;ಇದರ ಪರಿಣಾಮವೇನು?&lt;/strong&gt;&amp;nbsp;&lt;/p&gt;&lt;ul&gt; &lt;li&gt;ಭೂಮಿಯ ಭೌಗೋಳಿಕ ವಿನ್ಯಾಸದಲ್ಲಿ ದೊಡ್ಡ ಬದಲಾವಣೆ.&amp;nbsp;&lt;/li&gt; &lt;li&gt;ಹವಾಮಾನ ಮಾದರಿಗಳಲ್ಲಿ ಮಹತ್ತರ ವ್ಯತ್ಯಾಸ.&amp;nbsp;&lt;/li&gt; &lt;li&gt;ಸಾಗರ ಪ್ರವಾಹಗಳಲ್ಲಿ ಬದಲಾವಣೆ.&amp;nbsp;&lt;/li&gt; &lt;li&gt;ಅನೇಕ ಜೀವಿಗಳ ವಿಕಾಸ ಹಾಗೂ ಅಳಿವಿನ ಪ್ರಕ್ರಿಯೆಗಳ ಮೇಲೆ ಪರಿಣಾಮ.&amp;nbsp;&lt;/li&gt; &lt;li&gt;ಹೊಸ ಪರ್ವತ ಶ್ರೇಣಿಗಳು ಹಾಗೂ ಭೂಕಂಪ ಚಟುವಟಿಕೆಗಳಲ್ಲಿ ಬದಲಾವಣೆ.&amp;nbsp;&lt;/li&gt;&lt;/ul&gt;&lt;p&gt;&lt;strong&gt;ಇದು ಯಾವಾಗ ನಡೆಯಲಿದೆ?&lt;/strong&gt;&lt;/p&gt;&lt;p&gt;ವಿಜ್ಞಾನಿಗಳ ಪ್ರಕಾರ, ಇದು ಮಾನವ ಜೀವನದಲ್ಲಿ ನಡೆಯುವ ಘಟನೆಯಲ್ಲ. ಈ ಪ್ರಕ್ರಿಯೆ 20&ndash;30 ಕೋಟಿ ವರ್ಷಗಳ ಅವಧಿಯಲ್ಲಿ ನಿಧಾನವಾಗಿ ನಡೆಯಲಿದೆ. ಆದ್ದರಿಂದ ಇದು ತಕ್ಷಣದ ಆತಂಕದ ವಿಷಯವಲ್ಲ; ಭೂಮಿಯ ದೀರ್ಘಕಾಲೀನ ಭೂವೈಜ್ಞಾನಿಕ ವಿಕಾಸದ ಭಾಗವಾಗಿದೆ.&lt;/p&gt;]]></content:encoded>
            <category>science</category>
            <dc:creator>Chandrashekar GS</dc:creator>
            <atom:link href="https://kannada.asianetnews.com/science/earths-largest-ocean-is-shrinking-scientists-predict-a-new-supercontinent-amasia/articleshow-wtg4lkn"/>
        </item>
        <item>
            <title><![CDATA[ಇದುವರೆಗೆ ನೋಡಿರದ ಸೂರ್ಯನ ಸ್ಪಷ್ಟ ಚಿತ್ರ, ವಿಚಿತ್ರ ಅಲೆಗಳ ಅದ್ಭುತ ದೃಶ್ಯ ಸೆರೆ ಹಿಡಿದ ನಾಸಾ]]></title>
            <link>https://kannada.asianetnews.com/science/nasa-captures-the-clearest-ever-image-of-the-sun-reveals-mysterious-wave-patterns/articleshow-zzvdlof</link>
            <guid isPermaLink="true">https://kannada.asianetnews.com/science/nasa-captures-the-clearest-ever-image-of-the-sun-reveals-mysterious-wave-patterns/articleshow-zzvdlof</guid>
            <pubDate>Thu, 06 Aug 2026 15:28:31 +0530</pubDate>
            <description><![CDATA[&lt;p&gt;ಸೂರ್ಯನ ಬರಿಗಣ್ಣಿನಿಂದ ನೋಡಿದೂರ ಸ್ಪಷ್ಟತೆ ಕಾಣುವುದಿಲ್ಲ, ಟೆಲಿಸ್ಕೋಪ್ ಮೂಲಕ, ಉಪಗ್ರಹಗಳ ಮೂಲಕ ಸೆರೆ ಹಿಡಿದರೂ ಬೆಂಕಿ ಉಂಡೆ ರೀತಿ ಕಾಣಿಸುವ ಫೋಟೋ, ವಿಡಿಯೋ ಲಭ್ಯವಿದೆ. ಆದರೆ ನಾಸಾ ಇದೀಗ ಅತ್ಯಂತ ಸ್ಪಷ್ಟ ದೃಶ್ಯ ಸೆರೆ ಹಿಡಿದಿದೆ. ಈ ವಿಸ್ಮಯ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzb80xre80ef0xz73z6vc8sq,imgname-clearest-image-of-the-sun-1786010171150.png" type="image/jpeg" height="390" width="690"/>
            <content:encoded><![CDATA[&lt;p&gt;ಸೂರ್ಯನ ಕುರಿತು ಇಸ್ರೋದ ಆದಿತ್ಯ ಸೇರಿದಂತೆ ಹಲವು ಉಪಗ್ರಹ ಸೂರ್ಯನ ಹತ್ತಿರದ ಫೋಟೋ ಸೆರೆ ಹಿಡಿದಿದೆ. ಎಲ್ಲವೂ ಬೆಂಕಿಯ ಉಂಡೆಯಂತೆ ಮಾತ್ರ ಕಾಣುವ ಚಿತ್ರಗಳಾಗಿದೆ. ಆದರೆ ಮೊದಲ ಬಾರಿಗೆ ನಾಸಾ ಹೈ ರೆಸಲ್ಯೂಶನ್ ಇರುವ ಸೂರ್ಯನ ಸ್ಪಷ್ಟ ಚಿತ್ರ ಸೆರೆ ಹಿಡಿದಿದೆ. ವಿಶೇಷ ಅಂದರೆ ಸೂರ್ಯನ ಮೇಲೇ ವಿಚಿತ್ರ ಅಲೆಗಳ ಚಲನ ಕುರಿತ ದೃಶ್ಯಲನ್ನು ನಾಸಾ ಸೆರೆ ಹಿಡಿದಿದೆ. ಇದುವರೆಗೆ ಸೂರ್ಯನ ಚಿತ್ರಗಳನ್ನು ನೋಡಿ ಕಲ್ಪಿಸಿಕೊಂಡ, ತಿಳಿದುಕೊಂಡ ರೀತಿಗೂ ಈ ದೃಶ್ಯಗಳಿಗೂ ಭಾರಿ ವ್ಯತ್ಯಾಸವಿದೆ. ಸೂರ್ಯನ ಮೇಲ್ಮೆ ಹೀಗೂ ಇದೆಯಾ ಅನ್ನೋ ಅಚ್ಚರಿಗೆ ಕಾರಣವಾಗಿದೆ.&lt;/p&gt;&lt;h2&gt;ದೈತ್ಯ ಅಲೆಗಳು ಸೆರೆ&lt;/h2&gt;&lt;p&gt;ಸೂರ್ಯನ ಕುರಿತು ನಿರಂತರ ಸಂಶೋಧನೆಗಳು ನಡೆಯುತ್ತಿದೆ. ಈ ಪೈಕಿ ನಾಸಾದ ಸಂಶೋಧನೆ ಇದೀಗ ಜಗತ್ತನ್ನೆ ಬೆರಗುಗೊಳಿಸಿದೆ. ನಾಸಾ ತಂತ್ರಜ್ಞಾನ ಹಾಗೂ ಆಸ್ಟ್ರೋಫಿಸಿಕಲ್ ಟೆಲಿಸ್ಕೋಪ್ ಮೂಲಕ ಅತ್ಯಂತ ಸ್ಪಷ್ಟ ಹಾಗೂ ಹೈ ರೆಸಲ್ಯೂಶನ್ ಚಿತ್ರ ಸೆರೆ ಹಿಡಿಯಲಾಗಿದೆ. ಬೆಂಕಿಯ ಉಂಡೆ ಸೂರ್ಯನ ಮೇಲ್ಮೈ ಮೇಲೆ ನಡೆಯುವ ತೀವ್ರ ಚಲನೆ, ದೈತ್ಯ ಗಾತ್ರದ ಅಲೆಗಳ ವಿಶೇಷತೆ ಈ ದೃಶ್ಯದಲ್ಲಿ ಸೆರೆಯಾಗಿದೆ. ಈ ಚಿತ್ರ ಹಾಗೂ ದೃಶ್ಯಗಳು ಇದೀಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಖಗೋಳ, ಸೌರಮಂಡಲ ಕುರಿತ ಅಧ್ಯಯನದಲ್ಲಿ ಸೂರ್ಯನ ಅಧ್ಯಯನ ಅತ್ಯಂತ ಸವಾಲಿನಿಂದ ಕೂಡಿದೆ. ಈ ಸವಾಲು ಹಾಗೂ ಹಲವು ವರ್ಷಗಳ ಅಧ್ಯಯನಕ್ಕೆ ಇದೀಗ ಈ ಸಂಶೋಧನೆ ಹೊಸ ಆಯಾಮ ನೀಡಲಿದೆ.&lt;/p&gt;&lt;h2&gt;ಸೂರ್ಯನ ಬಿಸಿ ವಾತಾವರಣದ ಮೇಲಿನ ಪ್ರಕ್ರಿಯೆ&lt;/h2&gt;&lt;p&gt;ಸಮುದ್ರದಲ್ಲಿ ಅತೀಯಾದ ಗಾಳಿಗೆ ದೈತ್ಯ ಅಲೆಗಳು ಎಳುತ್ತವೆ. ಭೌತಶಾಸ್ತ್ರದ ಪ್ರಕ್ರಿಯೆ ಪ್ರಕಾರ, ಸೂರ್ಯನ ಹೊರ ವಾತಾವರಣದಲ್ಲೂ ಇದೇ ರೀತಿಯ ಘಟನೆ ಸಂಭವಿಸುತ್ತದೆ. ವಿಭಿನ್ನ ವೇಗ ಹಾಗೂ ಸಾಂದ್ರತೆಯ ಪ್ಲಾಸ್ಮಾ ಪದರಗಳ ಹಾದುಹೋಗುವಾಗ ಈ ಅಸ್ಥಿರತೆ ಉಂಟಾಗುತ್ತದೆ. ಸೂರ್ಯನ ಬಿಸಿ ವಾತಾವರಣ ಮೇಲಿನ ಈ ಪ್ರಕ್ರಿಯೆ ಸಾಮಾನ್ಯ ಟೆಲಿಸ್ಕೋಪ್ ಲೆನ್ಸ್&zwnj;ನಲ್ಲಿ ಪತ್ತೆಯಾಗುವುದಿಲ್ಲ. ವಿಶೇಷ ಹಾಗೂ ಹೈರೆಸಲ್ಯೂಶನ್ ಟೆಲಿಸ್ಕೋಪ್&zwnj;ನಲ್ಲಿ ಈ ಸೂರ್ಯನ ಮೇಲೆ ನಡೆಯುತ್ತಿರುವ ದೈತ್ಯ ಅಲೆಗಳ ಪಕ್ರಿಯೆ ಮೊದಲ ಬಾರಿಗೆ ಗೋಚರವಾಗಿದೆ.&lt;/p&gt;&lt;p&gt;ಸೂರ್ಯನ ಕರೋನಾ ವಿಭಾಗ ಸೂರ್ಯನ ಮೇಲ್ಮೈಗಿಂತ ಲಕ್ಷಾಂತರ ಡಿಗ್ರಿ ಸೆಲ್ಶಿಯಸ್ ಬಿಸಿಯಾಗಿರುತ್ತದೆ. ಈ ದೃಶ್ಯ, ಚಿತ್ರಗಳು ವಿಜ್ಞಾನಿಗಳಿಗೆ ಅತೀ ದೊಡ್ಡ ಸಾಕ್ಷ್ಯ ನೀಡಿದೆ. ಸೂರ್ಯನ ಶಕ್ತಿ, ಸೂರ್ಯನ ಮೇಲಿನ ಬಿಸಿ ವಾತವಾರಣ, ದೈತ್ಯ ಅಲೆಗಳ ಸೃಷ್ಟಿ ಸೇರಿದಂತೆ ಹಲವು ಸೂಕ್ಷ್ಮತೆಗಳು ವಿಜ್ಞಾನಿಗಳಿಗೆ ಸಂಶೋಧನೆಗೆ ವೇಗ ನೀಡಿದೆ. ಸೂರ್ಯನ ಮೇಲೆ ನಡೆಯುವ ಈ ಪಕ್ರಿಯೆಗಳು ಭೂಮಿ ಮೇಲೆ, ವಾತಾವರಣ ಮೇಲೂ ಪ್ರಭಾವ ಬೀರಲಿದೆ. ಸೌರ ಜ್ವಾಲೆಗಳು, ಪ್ಲಾಸ್ಮಾ ಕಿರಣಗಳು ಉಪಗ್ರಹ ಜಾಲ, ಜಿಪಿಎಸ್ ವ್ಯವಸ್ಥೆ, ವಿದ್ಯುತ್ ಗ್ರಿಡ್ ಮೇಲೆ ಪರಿಣಾಮ ಬೀರುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;☀️ Scientists using the @NSF Inouye Solar Telescope have made a major breakthrough in solar physics, discovering Kelvin-Helmholtz instability on the Sun's surface&mdash;a finding that could help explain explosive solar activity and other solar phenomena: https://t.co/GHDS3B7UXT pic.twitter.com/yJhD4KecVY&lt;/p&gt;&lt;p&gt;&mdash; National Solar Observatory (@NatSolarObs) August 5, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>science</category>
            <dc:creator>Chethan Kumar</dc:creator>
            <atom:link href="https://kannada.asianetnews.com/science/nasa-captures-the-clearest-ever-image-of-the-sun-reveals-mysterious-wave-patterns/articleshow-zzvdlof"/>
        </item>
    </channel>
</rss>
