<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 18 Sep 2026 18:30:20 +0530</lastBuildDate>
        <atom:link href="https://kannada.asianetnews.com/rss/science" rel="self" type="application/rss+xml"/>
        <item>
            <title><![CDATA[ಪ್ಲಾಸ್ಟಿಕ್ ತ್ಯಾಜ್ಯದಿಂದ ಜಾದೂ: ಕೇವಲ 16 ವರ್ಷದ ಹುಡುಗನ ಸಾಧನೆಗೆ ಜಗತ್ತೇ ಫಿದಾ, ಸಿಕ್ತು ಕೋಟಿ ಹತ್ತಿರದ ಬಹುಮಾನ!]]></title>
            <link>https://kannada.asianetnews.com/science/16-year-old-student-builds-low-cost-machine-to-recycle-3d-printer-waste-wins-dollar-75000/articleshow-09dvi5t</link>
            <guid isPermaLink="true">https://kannada.asianetnews.com/science/16-year-old-student-builds-low-cost-machine-to-recycle-3d-printer-waste-wins-dollar-75000/articleshow-09dvi5t</guid>
            <pubDate>Fri, 18 Sep 2026 15:14:00 +0530</pubDate>
            <description><![CDATA[&lt;p&gt;ಮ್ಯಾಸಚೂಸೆಟ್ಸ್&zwnj;ನ 16 ವರ್ಷದ ಬೆಂಜಮಿನ್ ಡೇವಿಸ್ 3D ಪ್ರಿಂಟರ್&zwnj;ನ ಪ್ಲಾಸ್ಟಿಕ್ ತ್ಯಾಜ್ಯವನ್ನು ಮತ್ತೆ ಬಳಸಬಹುದಾದ ಫಿಲಮೆಂಟ್ ಆಗಿ ಪರಿವರ್ತಿಸುವ ಕಡಿಮೆ ವೆಚ್ಚದ ಯಂತ್ರ ನಿರ್ಮಿಸಿದ್ದಾರೆ. 800ಕ್ಕೂ ಹೆಚ್ಚು ಗಂಟೆಗಳ ಪ್ರಯೋಗದ ಬಳಿಕ ರೂಪಿಸಿದ ಈ ಆವಿಷ್ಕಾರಕ್ಕೆ 2025ರ Regeneron ISEFನಲ್ಲಿ $75,000 ಪ್ರಶಸ್ತಿ ದೊರೆತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sm0wr2s6ve6qd06zqe1zse,imgname-benjamin-davis--16-year-old-student-builds-low-cost-machine-to-recycle-3d-printer-waste-1789713740545.jpg" type="image/jpeg" height="390" width="690"/>
            <content:encoded><![CDATA[&lt;h2&gt;3D ಪ್ರಿಂಟರ್ ತ್ಯಾಜ್ಯದಿಂದಲೇ ಹೊಸ ಫಿಲಮೆಂಟ್; 16 ವರ್ಷದ ವಿದ್ಯಾರ್ಥಿಯ ಅದ್ಭುತ ಆವಿಷ್ಕಾರ&lt;/h2&gt;&lt;p&gt;3D ಪ್ರಿಂಟರ್ ಬಳಕೆ ಹೆಚ್ಚಾಗುತ್ತಿದ್ದಂತೆ ಅದರಿಂದ ಉಂಟಾಗುವ ಪ್ಲಾಸ್ಟಿಕ್ ತ್ಯಾಜ್ಯವೂ ಹೆಚ್ಚುತ್ತಿದೆ. ವಿಫಲವಾದ ಪ್ರಿಂಟ್&zwnj;ಗಳು, ಉಳಿದ ಫಿಲಮೆಂಟ್ ಮತ್ತು ಇತರ ಪ್ಲಾಸ್ಟಿಕ್ ತುಂಡುಗಳು ಸಾಮಾನ್ಯವಾಗಿ ಕಸದ ಬುಟ್ಟಿಗೆ ಸೇರುತ್ತವೆ. ಆದರೆ ಅಮೆರಿಕದ ಮ್ಯಾಸಚೂಸೆಟ್ಸ್&zwnj;ನ 16 ವರ್ಷದ ವಿದ್ಯಾರ್ಥಿ ಬೆಂಜಮಿನ್ ಡೇವಿಸ್ ಈ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಂಡಿದ್ದಾರೆ.&lt;/p&gt;&lt;h3&gt;ಕಸವಾಗುವ ಪ್ಲಾಸ್ಟಿಕ್&zwnj;ಗೆ ಹೊಸ ಜೀವನ ತ್ಯಾಜ್ಯದಿಂದ ಮತ್ತೆ ಫಿಲಮೆಂಟ್&lt;/h3&gt;&lt;p&gt;Bishop Feehan High Schoolನಲ್ಲಿ ಓದುತ್ತಿರುವ ಬೆಂಜಮಿನ್, 3D ಪ್ರಿಂಟರ್&zwnj;ನಿಂದ ಹೊರಬರುವ ತ್ಯಾಜ್ಯ ಪ್ಲಾಸ್ಟಿಕ್ ಹಾಗೂ ಇತರ ಪ್ಲಾಸ್ಟಿಕ್ ವಸ್ತುಗಳನ್ನು ಮತ್ತೆ ಬಳಸಬಹುದಾದ ಫಿಲಮೆಂಟ್ ಆಗಿ ಪರಿವರ್ತಿಸುವ ಡೆಸ್ಕ್&zwnj;ಟಾಪ್ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.&lt;/p&gt;&lt;p&gt;ಈ ಫಿಲಮೆಂಟ್ ಅನ್ನು ಮತ್ತೆ 3D ಪ್ರಿಂಟರ್&zwnj;ನಲ್ಲಿ ಬಳಸಬಹುದು. ಅಂದರೆ ಒಂದು ಬಾರಿ ಬಳಸಿ ಎಸೆಯುವ ಬದಲು ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಹೊಸ ಉತ್ಪನ್ನ ತಯಾರಿಸಲು ಸಾಧ್ಯವಾಗುತ್ತದೆ.&lt;/p&gt;&lt;h3&gt;ಕಡಿಮೆ ವೆಚ್ಚ, ಉತ್ತಮ ಕಾರ್ಯಕ್ಷಮತೆ&lt;/h3&gt;&lt;p&gt;ಬೆಂಜಮಿನ್ ಅಭಿವೃದ್ಧಿಪಡಿಸಿರುವ ಯಂತ್ರದಲ್ಲಿ pultrusion ಮತ್ತು extrusion ಎಂಬ ಎರಡು ತಂತ್ರಗಳನ್ನು ಸಂಯೋಜಿಸಲಾಗಿದೆ. ಈ ವಿಧಾನದಿಂದ ಹಿಂದಿನ ವಿಧಾನಗಳಿಗೆ ಹೋಲಿಸಿದರೆ ಪ್ರಕ್ರಿಯೆ ಸುಮಾರು 45% ಹೆಚ್ಚು ಪರಿಣಾಮಕಾರಿಯಾಗಿದೆ ಎಂದು Massachusetts Science + Engineering Fair ವರದಿ ತಿಳಿಸಿದೆ.&lt;/p&gt;&lt;p&gt;ಇದರ ಮತ್ತೊಂದು ವಿಶೇಷತೆ ಕಡಿಮೆ ವೆಚ್ಚ. ವಾಣಿಜ್ಯ ಮಟ್ಟದಲ್ಲಿ ಲಭ್ಯವಿರುವ ಕೆಲವು ಮರುಬಳಕೆ ಯಂತ್ರಗಳಿಗೆ ಹೋಲಿಸಿದರೆ ಬೆಂಜಮಿನ್ ವಿನ್ಯಾಸದ ವೆಚ್ಚ ಸುಮಾರು 90% ಕಡಿಮೆ ಎಂದು ವರದಿ ಹೇಳಿದೆ. ಇದರಿಂದ ಶಾಲೆಗಳು, ಸಣ್ಣ ಸಂಸ್ಥೆಗಳು, ಹವ್ಯಾಸಿ 3D ಪ್ರಿಂಟರ್ ಬಳಕೆದಾರರು ಕೂಡ ಇಂತಹ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆ ಹೆಚ್ಚುತ್ತದೆ.&lt;/p&gt;&lt;h3&gt;800ಕ್ಕೂ ಹೆಚ್ಚು ಗಂಟೆಗಳ ಪ್ರಯೋಗ&lt;/h3&gt;&lt;p&gt;ಈ ಯಂತ್ರವನ್ನು ಅಭಿವೃದ್ಧಿಪಡಿಸುವುದು ಸುಲಭವಾಗಿರಲಿಲ್ಲ. ಬೆಂಜಮಿನ್ ಯೋಜನೆಗಾಗಿ 800ಕ್ಕೂ ಹೆಚ್ಚು ಗಂಟೆ ಕೆಲಸ ಮಾಡಿದ್ದು, ವಿವಿಧ ಭಾಗಗಳಲ್ಲಿ 50ಕ್ಕೂ ಹೆಚ್ಚು ಬದಲಾವಣೆಗಳನ್ನು ಮಾಡಿದ್ದಾರೆ. ಹಲವು ಬಾರಿ ವಿನ್ಯಾಸವನ್ನು ಬದಲಿಸಿ ಪರೀಕ್ಷಿಸಿದ ಬಳಿಕ ಯಂತ್ರವನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಿದ್ದಾರೆ.&lt;/p&gt;&lt;p&gt;ಸಾಮಾನ್ಯ 3D ಪ್ರಿಂಟಿಂಗ್ ಯೋಜನೆಯಲ್ಲಿ ಬಳಸುವ ಫಿಲಮೆಂಟ್&zwnj;ನ ಶೇ.67ರವರೆಗೆ ತ್ಯಾಜ್ಯವಾಗುವ ಸಾಧ್ಯತೆಯಿದೆ ಎಂದು Society for Science ಉಲ್ಲೇಖಿಸಿದೆ. ಹೀಗಾಗಿ ಈ ಆವಿಷ್ಕಾರವು ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಗಮನ ಸೆಳೆಯುತ್ತಿದೆ.&lt;/p&gt;&lt;h3&gt;₹62 ಲಕ್ಷಕ್ಕೂ ಹೆಚ್ಚು ಪ್ರಶಸ್ತಿ!&lt;/h3&gt;&lt;p&gt;2025ರ Regeneron International Science and Engineering Fairನಲ್ಲಿ ಬೆಂಜಮಿನ್ ಅವರ ಯೋಜನೆಗೆ $75,000 Regeneron Young Scientist Award ದೊರೆಯಿತು. ಸ್ಪರ್ಧೆಯ ಪ್ರಮುಖ ಪ್ರಶಸ್ತಿ ವಿಭಾಗದಲ್ಲೂ ಅವರು ರನ್ನರ್-ಅಪ್ ಆಗಿದ್ದರು.&lt;/p&gt;&lt;p&gt;ಈ ಸಾಧನೆಯ ಬಳಿಕವೂ ಬೆಂಜಮಿನ್ ತಮ್ಮ ಸಂಶೋಧನೆಯನ್ನು ಮುಂದುವರಿಸುತ್ತಿದ್ದಾರೆ. ಭವಿಷ್ಯದಲ್ಲಿ ಯಂತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವುದರ ಜೊತೆಗೆ, ಹೊಸ ರೀತಿಯ ಹೈ-ಟೆಂಪರೇಚರ್ ಕಾಂಪೋಸಿಟ್ ಫಿಲಮೆಂಟ್ ತಯಾರಿಸುವ ಯಂತ್ರ ಅಭಿವೃದ್ಧಿಪಡಿಸುವ ಯೋಜನೆಯನ್ನೂ ಅವರು ಹೊಂದಿದ್ದಾರೆ.&lt;/p&gt;&lt;p&gt;ಈ ಆವಿಷ್ಕಾರವು ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣೆಯನ್ನು ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಉತ್ತಮ ಉದಾಹರಣೆಯಾಗಿದೆ.&lt;/p&gt;]]></content:encoded>
            <category>science</category>
            <dc:creator>Chandrashekar GS</dc:creator>
            <atom:link href="https://kannada.asianetnews.com/science/16-year-old-student-builds-low-cost-machine-to-recycle-3d-printer-waste-wins-dollar-75000/articleshow-09dvi5t"/>
        </item>
        <item>
            <title><![CDATA[ಸಾಯುತ್ತಿರುವ ನಕ್ಷತ್ರದ ಕಥೆ ಬಿಚ್ಚಿಟ್ಟ ಜೇಮ್ಸ್ ವೆಬ್, ದೂರದರ್ಶಕದಿಂದ ಲಯನ್ ನೀಹಾರಿಕೆಯ ವಿಸ್ಮಯಕಾರಿ ಚಿತ್ರ ಸೆರೆ!]]></title>
            <link>https://kannada.asianetnews.com/science/stunning-new-view-nasa-james-webb-space-telescope-captures-the-lion-nebula-gdp/articleshow-0fuz4wa</link>
            <guid isPermaLink="true">https://kannada.asianetnews.com/science/stunning-new-view-nasa-james-webb-space-telescope-captures-the-lion-nebula-gdp/articleshow-0fuz4wa</guid>
            <pubDate>Thu, 10 Sep 2026 17:32:35 +0530</pubDate>
            <description><![CDATA[ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಲಯನ್ ನೀಹಾರಿಕೆ (NGC 2392)ಯ ಅತ್ಯಂತ ಸ್ಪಷ್ಟವಾದ ಹೊಸ ಚಿತ್ರಗಳನ್ನು ಸೆರೆಹಿಡಿದಿದೆ. ಈ ಚಿತ್ರಗಳು ಸಾಯುತ್ತಿರುವ ನಕ್ಷತ್ರದ ಸುತ್ತಲಿನ ಸಂಕೀರ್ಣ ರಚನೆ ಮತ್ತು ಅನಿಲದ ಗುಳ್ಳೆಗಳ ಬಗ್ಗೆ ಹೊಸ ವಿವರಗಳನ್ನು ಬಹಿರಂಗಪಡಿಸಿದ್ದು, ಹಬಲ್ ಚಿತ್ರಗಳಿಗಿಂತ ಹೆಚ್ಚು ಸೂಕ್ಷ್ಮ ಮಾಹಿತಿಯನ್ನು ಒದಗಿಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m25jv8s2e67b2jv19n9pc3eq,imgname-james-webb-lion-nebula-1789041419042.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾಸಾದ ಅತ್ಯಾಧುನಿಕ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಲಯನ್ ನೀಹಾರಿಕೆ ಎಂದೇ ಕರೆಯಲ್ಪಡುವ ಎನ್&zwnj;ಜಿಸಿ 2392 (NGC 2392) ನ ಅತಿ ಸ್ಪಷ್ಟ ಮತ್ತು ವಿಸ್ತೃತವಾದ ಹೊಸ ಚಿತ್ರಗಳನ್ನು ಸೆರೆಹಿಡಿದಿದೆ. ಈ ಹೊಸ ನೋಟವು ನೀಹಾರಿಕೆಯ ಗಮನಾರ್ಹ ಆಕಾರ ಹಾಗೂ ಅದರ ಮಧ್ಯಭಾಗದಲ್ಲಿರುವ ಸಾಯುತ್ತಿರುವ ನಕ್ಷತ್ರದ ಕುರಿತು ಹಿಂದೆಂದಿಗಿಂತಲೂ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದೆ ಎಂದು ನಾಸಾ ವರದಿ ಮಾಡಿದೆ.&lt;/p&gt;&lt;h2&gt;ಹಬಲ್ ಹಾಗೂ ಜೇಮ್ಸ್ ವೆಬ್ ದೂರದರ್ಶಕಗಳ ಚಿತ್ರಗಳ ತುಲನೆ&lt;/h2&gt;&lt;p&gt;ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಮೊದಲು 2000ನೇ ಇಸವಿಯಲ್ಲಿ ಈ ಗ್ರಹಗಳ ನೀಹಾರಿಕೆಯನ್ನು ಗಮನಿಸಿತ್ತು. ಇದು ಸಿಂಹದ ಮುಖದಂತಹ ವಿಶಿಷ್ಟ ಆಕಾರವನ್ನು ಹಾಗೂ ಧೂಮಕೇತುವಿನಂತಿರುವ ವಸ್ತುಗಳಿಂದ ರೂಪುಗೊಂಡ ಮಬ್ಬಾದ Lion's Mane ತರಹದ ವೈಶಿಷ್ಟ್ಯಗಳನ್ನು ಪ್ರದರ್ಶಿಸಿತ್ತು.&lt;/p&gt;&lt;p&gt;ಜೇಮ್ಸ್ ವೆಬ್ ತನ್ನ &lsquo;NIRCam&rsquo; (ನಿಯರ್ ಇನ್ಫ್ರಾರೆಡ್ ಕ್ಯಾಮೆರಾ) ಮತ್ತು &lsquo;MIRI&rsquo; (ಮಿಡ್-ಇನ್ಫ್ರಾರೆಡ್ ಇನ್&zwnj;ಸ್ಟ್ರುಮೆಂಟ್) ಉಪಕರಣಗಳನ್ನು ಬಳಸಿ ಲಯನ್ ನೆಬ್ಯುಲಾದ ಸ್ಪಷ್ಟ ಚಿತ್ರವನ್ನು ಹೊರಹಾಕಿದೆ. ಇದರ ಒಟ್ಟಾರೆ ರಚನೆಯು ಹಬಲ್&zwnj;ನ ಗೋಚರ-ಬೆಳಕಿನ ಚಿತ್ರವನ್ನು ಹೋಲುತ್ತದೆಯಾದರೂ, ವೆಬ್&zwnj;ನ ಅತಿಗೆಂಪು (Infrared) ದೃಷ್ಟಿಯು ಧೂಳಿನ ಸೂಕ್ಷ್ಮ ಗುಂಪುಗಳನ್ನು ಮತ್ತು ಅಯಾನೀಕೃತ ಅನಿಲದ ಮಬ್ಬುಗಳನ್ನು ಅತ್ಯಂತ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ.&lt;/p&gt;&lt;h2&gt;ಸಾಯುತ್ತಿರುವ ನಕ್ಷತ್ರ ಮತ್ತು 'ಬಿಳಿ ಕುಬ್ಜ' ಹುಟ್ಟು:&lt;/h2&gt;&lt;p&gt;ಬೃಹತ್ ನಕ್ಷತ್ರಗಳು ಸೂಪರ್ನೋವಾ ಸ್ಫೋಟದ ಮೂಲಕ ತಮ್ಮ ಜೀವನವನ್ನು ಅಂತ್ಯಗೊಳಿಸಿದರೆ, ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳ ಅಂತ್ಯವು ಸಂಪೂರ್ಣ ಭಿನ್ನವಾಗಿರುತ್ತದೆ. ತಹ ನಕ್ಷತ್ರವು ತನ್ನ ಮಧ್ಯಭಾಗದಲ್ಲಿ ಪರಮಾಣು ಸಮ್ಮಿಳನ (Nuclear Fusion) ಪ್ರತಿಕ್ರಿಯೆಗಳನ್ನು ಮುಂದುವರಿಸಲು ಅಶಕ್ತವಾದಾಗ ಅಸ್ಥಿರಗೊಂಡು ಕಂಪಿಸಲು ಆರಂಭಿಸುತ್ತದೆ. ಳಿಕ ಅದು ತನ್ನ ಹೊರ ಪದರಗಳನ್ನು ಕಳಚಿಕೊಳ್ಳುತ್ತದೆ. ಈ ಅನಿಲ ಮತ್ತು ಧೂಳಿನ ಚಿಪ್ಪುಗಳು ಸೇರಿ 'ಗ್ರಹಗಳ ನೀಹಾರಿಕೆ'ಯಾಗಿ ರೂಪುಗೊಳ್ಳುತ್ತವೆ.ನಕ್ಷತ್ರದಿಂದ ಹೊರಹೊಮ್ಮುವ ತೀವ್ರ ವಿಕಿರಣವು ಈ ವಸ್ತುಗಳನ್ನು ಹೊರತಳ್ಳುತ್ತಾ ಸಾಗಿದಾಗ, ಕೊನೆಗೆ 'ಬಿಳಿ ಕುಬ್ಜ' ಎಂದು ಕರೆಯಲ್ಪಡುವ ಅತಿ ಉಷ್ಣತೆಯುಳ್ಳ ಕೋರ್ (Core) ಮಾತ್ರ ಉಳಿದುಕೊಳ್ಳುತ್ತದೆ.&lt;/p&gt;&lt;h2&gt;ಲಯನ್ ನೀಹಾರಿಕೆಯ ವಿಶಿಷ್ಟ ರಚನೆ ಮತ್ತು ವಿಸ್ತರಣೆ&lt;/h2&gt;&lt;p&gt;ಸಿಂಹ ನೀಹಾರಿಕೆಯ ಕೇಂದ್ರಭಾಗದಲ್ಲಿ ಆಮ್ಲಜನಕ-ಸಮೃದ್ಧವಾಗಿರುವ ನಕ್ಷತ್ರದ ಮರಣದ ನಂತರ ಉಳಿದುಕೊಂಡಿರುವ ಬಿಳಿ ಕುಬ್ಜ ನಕ್ಷತ್ರವಿದೆ. ಇದು ಸಿಂಹದ 'ಗುಂಡಿ ಮೂಗು'ಯಂತೆ ಭಾಸವಾಗುತ್ತದೆ. ಈ ನಕ್ಷತ್ರದಿಂದ ಬಿಡುಗಡೆಯಾಗುತ್ತಿರುವ ಶಕ್ತಿ ಮತ್ತು ವಿಕಿರಣವು ಸುತ್ತಮುತ್ತಲಿನ ಸಂಕೀರ್ಣ ರಚನೆಗಳನ್ನು ರೂಪಿಸುತ್ತಿದೆ.&lt;/p&gt;&lt;p&gt;ಈ ಬಿಳಿ ಕುಬ್ಜವು ತನ್ನ ಸುತ್ತಲಿನ ವಸ್ತುಗಳನ್ನು ಒಳಗಿನಿಂದಲೇ &quot;ಬೇಯಿಸುತ್ತಿದ್ದು&quot;, ಒಂದು ದೊಡ್ಡ ಅಯಾನೀಕೃತ ಅನಿಲದ ಗುಳ್ಳೆಯನ್ನು ಸೃಷ್ಟಿಸಿದೆ. ಇದುವೇ ನೀಹಾರಿಕೆಗೆ ಸಿಂಹದ ಮುಖದ ಸ್ವರೂಪವನ್ನು ನೀಡಿದೆ. ಈ ಅನಿಲದ ಗುಳ್ಳೆಯು ನಿರಂತರವಾಗಿ ವಿಸ್ತರಿಸುತ್ತಾ, ತನ್ನ ಹಾದಿಯಲ್ಲಿ ಎದುರಾಗುವ ಧೂಳಿನ ಕಣಗಳನ್ನು ನಾಶಪಡಿಸುತ್ತಿದೆ.&lt;/p&gt;&lt;p&gt;ಅನಿಲ ಮತ್ತು ಧೂಳು ಒಗ್ಗೂಡಿ ಈ ನೀಹಾರಿಕೆಯನ್ನು ಇಂದಿನ ಪ್ರಸ್ತುತ ರೂಪಕ್ಕೆ ತರಲು ಸಾವಿರಾರು ವರ್ಷಗಳು ಬೇಕಾಗಿವೆ. ಇದರ ವಿವಿಧ ಭಾಗಗಳಲ್ಲಿ ಬದಲಾವಣೆಗಳು ಇಂದಿಗೂ ನಿರಂತರವಾಗಿ ಮುಂದುವರಿದಿವೆ. ಗ್ರಹಗಳ ನೀಹಾರಿಕೆಗಳಲ್ಲಿ ಇಂತಹ ಸಂಕೀರ್ಣ ಉಂಗುರಗಳು ಮತ್ತು ಚಿಪ್ಪುಗಳು ಸಾಮಾನ್ಯವಾಗಿ ಕಂಡುಬಂದರೂ, ಅವುಗಳ ಸಂಪೂರ್ಣ ರಚನಾಕ್ರಿಯೆಯನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವುದು ಇಂದಿಗೂ ಸಂಶೋಧನೆಯ ಪ್ರಮುಖ ಕ್ಷೇತ್ರವಾಗಿ ಉಳಿದಿದೆ.&lt;/p&gt;]]></content:encoded>
            <category>science</category>
            <dc:creator>Gowthami K</dc:creator>
            <atom:link href="https://kannada.asianetnews.com/science/stunning-new-view-nasa-james-webb-space-telescope-captures-the-lion-nebula-gdp/articleshow-0fuz4wa"/>
        </item>
        <item>
            <title><![CDATA[ಭಾರತದಲ್ಲಿ ಕಾಣದ ಅಪರೂಪದ 'ಬ್ಯಾಂಡೆಡ್ ಕ್ರೇಟ್' ಹಾವು ತೆಲಂಗಾಣದಲ್ಲಿ ಪ್ರತ್ಯಕ್ಷ, ಇದರ ಕಡಿತಕ್ಕೆ ಬದುಕಿರೋರೇ ಇಲ್ಲ!]]></title>
            <link>https://kannada.asianetnews.com/science/rare-and-extremely-venomous-banded-krait-snake-spotted-snake-in-telangana-s-eturnagaram-forest-gdp/articleshow-18e9ona</link>
            <guid isPermaLink="true">https://kannada.asianetnews.com/science/rare-and-extremely-venomous-banded-krait-snake-spotted-snake-in-telangana-s-eturnagaram-forest-gdp/articleshow-18e9ona</guid>
            <pubDate>Fri, 11 Sep 2026 16:59:37 +0530</pubDate>
            <description><![CDATA[ತೆಲಂಗಾಣದ ಏಟೂರುನಾಗಾರಂ ಅರಣ್ಯದಲ್ಲಿ ಅತ್ಯಂತ ವಿಷಕಾರಿ 'ಬ್ಯಾಂಡೆಡ್ ಕ್ರೇಟ್' ಹಾವು ಕಾಣಿಸಿಕೊಂಡು ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಈ ಕಪ್ಪು-ಹಳದಿ ಪಟ್ಟೆಯ ಹಾವು, ಮಾರಕ ನರವಿಷವನ್ನು ಹೊಂದಿದ್ದು, ಇದನ್ನು ಕಂಡರೆ ಕೊಲ್ಲದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಕೋರಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01dxwfa171ph8yysh79p4qvj8x,imgname-pjimage--14--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್ (ತೆಲಂಗಾಣ): &lt;/strong&gt;ತೆಲಂಗಾಣದ ಮುಲುಗು ಜಿಲ್ಲೆಯ ಏಟೂರುನಾಗಾರಂ ದಟ್ಟ ಅರಣ್ಯ ಪ್ರದೇಶದಲ್ಲಿ ಅತ್ಯಂತ ಅಪರೂಪದ ಹಾಗೂ ಭೀಕರ ವಿಷಪೂರಿತ 'ಬ್ಯಾಂಡೆಡ್ ಕ್ರೇಟ್' ಹಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಹಾಗೂ ಅರಣ್ಯ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕಪ್ಪು ಮತ್ತು ಹಳದಿ ಬಣ್ಣದ ದಪ್ಪನೆಯ ಪಟ್ಟೆಗಳನ್ನು ಹೊಂದಿರುವ ಈ ಹಾವು ಕಡಿದರೆ ವ್ಯಕ್ತಿ ಬದುಕುಳಿಯುವುದು ಬಹುತೇಕ ಅಸಾಧ್ಯ. ಸಾಮಾನ್ಯವಾಗಿ ಚೀನಾ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಾವು, ಈಗ ಭಾರತದ ಭಾಗದಲ್ಲೂ ಕಾಣಿಸಿಕೊಂಡಿರುವುದು ಸಾರ್ವಜನಿಕರು ಹಾಗೂ ಉರಗ ತಜ್ಞರ ಗಮನ ಸೆಳೆದಿದೆ.&lt;/p&gt;&lt;h2&gt;ಏಟೂರುನಾಗಾರಂ ಹಾಗೂ ಪಕಾಲಾ ಅರಣ್ಯದಲ್ಲಿ ಭೀತಿ&lt;/h2&gt;&lt;p&gt;ಏಟೂರುನಾಗಾರಂ ಹೊರವಲಯದ ರಸ್ತೆಯಲ್ಲಿ ರಾತ್ರಿ ವೇಳೆ ಈ ಹಾವೊಂದು ರಸ್ತೆ ದಾಟುತ್ತಿದ್ದಾಗ ದಾರಿಹೋಕರ ಕಣ್ಣಿಗೆ ಬಿದ್ದಿದೆ. ಆರಂಭದಲ್ಲಿ ಕಪ್ಪು-ಹಳದಿ ಪಟ್ಟೆಗಳ ಈ ವಿಚಿತ್ರ ರೂಪವನ್ನು ಕಂಡು ಜನ ಆತಂಕಗೊಂಡರು. ಈ ಹಿಂದೆ ವಾರಂಗಲ್&zwnj;ನ ಪಕಾಲಾ ಕಾಡುಗಳು ಹಾಗೂ ಖಾನಪುರಂ ಮಂಡಲದ ಅಶೋಕ್ ನಗರ ಗ್ರಾಮದ ಹೊರವಲಯದಲ್ಲೂ ಇಂತಹದ್ದೇ ಹಾವು ಕಾಣಿಸಿಕೊಂಡಿತ್ತು. ಅಶೋಕ್ ನಗರದಲ್ಲಿ ಕೃಷಿ ಭೂಮಿ ಬಳಿ ಇದನ್ನು ಮೊದಲ ಬಾರಿಗೆ ನೋಡಿದ ಸ್ಥಳೀಯರು, ಪ್ಲಾಸ್ಟಿಕ್ ಆಟಿಕೆ ಇರಬೇಕೆಂದು ಭಾವಿಸಿದ್ದರು. ಆದರೆ ಅದು ಚಲಿಸಲು ಪ್ರಾರಂಭಿಸಿದಾಗ ಭಯಭೀತರಾಗಿ ತಕ್ಷಣವೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.&lt;/p&gt;&lt;h2&gt;5 ಅಡಿ ಉದ್ದದ ಮಾರಕ ಸರೀಸೃಪ&lt;/h2&gt;&lt;p&gt;ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು ಹಾಗೂ ಉರಗ ರಕ್ಷಕರು ಸುಮಾರು 5 ಅಡಿ ಉದ್ದವಿದ್ದ ಈ ಹಾವನ್ನು ಅತ್ಯಂತ ಚಾಣಾಕ್ಷತನದಿಂದ ಹಿಡಿದು ದಟ್ಟ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಉರಗ ತಜ್ಞರ ಪ್ರಕಾರ, ಈ ಹಾವು ಶೇಕಡಾ 100 ರಷ್ಟು ಪ್ರಾಣಾಪಾಯ ತರಬಲ್ಲ ತೀವ್ರ ನರವಿಷವನ್ನು (Neurotoxin) ಹೊಂದಿದೆ. ಇದು ಕಡಿದ ಕೆಲವೇ ನಿಮಿಷಗಳಲ್ಲಿ ನರಮಂಡಲದ ಮೇಲೆ ದಾಳಿ ಮಾಡುವುದರಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವು ಸಂಭವಿಸುತ್ತದೆ.&lt;/p&gt;&lt;p&gt;ಇದು ನೋಡಡಲು ಅತ್ಯಂತ ಆಕರ್ಷಕವಾಗಿ ಕಂಡರೂ, ಅಷ್ಟೇ ಮಾರಕವಾದ ವಿಷವನ್ನು ಹೊಂದಿದೆ. ರಾತ್ರಿ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ಈ ಹಾವು, ಅತ್ಯಂತ ಶಾಂತ ಸ್ವಭಾವದ್ದಾಗಿದ್ದರೂ ಕಿರಿಕಿರಿ ಉಂಟುಮಾಡಿದರೆ ತಕ್ಷಣವೇ ದಾಳಿ ಮಾಡುತ್ತದೆ.&lt;/p&gt;&lt;h2&gt;ವಿದೇಶದಿಂದ ಸರಕು ಲಾರಿಗಳ ಮೂಲಕ ಭಾರತಕ್ಕೆ ಎಂಟ್ರಿ?&lt;/h2&gt;&lt;p&gt;ಸಾಮಾನ್ಯವಾಗಿ ಈ 'ಬ್ಯಾಂಡೆಡ್ ಕ್ರೇಟ್' ಹಾವುಗಳು ಚೀನಾ, ನೇಪಾಳ, ಥೈಲ್ಯಾಂಡ್, ಕಾಂಬೋಡಿಯಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಭಾರತದಲ್ಲಿ ಜಾರ್ಖಂಡ್, ಛತ್ತೀಸ್&zwnj;ಗಢ, ಬಿಹಾರ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಕೆಲವೇ ಭಾಗಗಳಲ್ಲಿ ಇವು ವಿರಳವಾಗಿ ಗೋಚರಿಸುತ್ತವೆ. ತೆಲಂಗಾಣದ ಕಾಡುಗಳಲ್ಲಿ ಇವು ಕಾಣ ಸಿಗುವುದು ಅತ್ಯಂತ ಆಶ್ಚರ್ಯಕರ ವಿಷಯವಾಗಿದೆ. ಬೇರೆ ರಾಜ್ಯಗಳಿಂದ ಅಥವಾ ವಿದೇಶಗಳಿಂದ ಬರುವ ಸರಕು ಸಾಗಣೆ ಲಾರಿಗಳಲ್ಲಿ ದಾರಿ ತಪ್ಪಿ ಇವು ಈ ಪ್ರದೇಶವನ್ನು ತಲುಪಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.&lt;/p&gt;&lt;h2&gt;ಅರಣ್ಯ ಇಲಾಖೆಯ ಮುಖ್ಯ ಮನವಿ&lt;/h2&gt;&lt;p&gt;ಈ ಹಾವುಗಳು ಸಾಮಾನ್ಯವಾಗಿ ಶಾಂತ ಸ್ವಭಾವದವು ಹಾಗೂ ರಾತ್ರಿ ವೇಳೆಯಲ್ಲಿ ಮಾತ್ರ ಆಹಾರ ಅರಸಿ ಹೊರಬರುತ್ತವೆ. ಸಾರ್ವಜನಿಕರು ಅಥವಾ ರೈತರು ಕಪ್ಪು ಮತ್ತು ಹಳದಿ ಪಟ್ಟೆಗಳಿರುವ ಇಂತಹ ಹಾವುಗಳನ್ನು ಕಂಡಾಗ ಭಯಪಟ್ಟು ಕೊಲ್ಲಬಾರದು. ಹಾವುಗಳನ್ನು ಕೊಲ್ಲುವುದು ಅಪರಾಧವಾಗಿದ್ದು, ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಥವಾ ನುರಿತ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.&lt;/p&gt;]]></content:encoded>
            <category>science</category>
            <dc:creator>Gowthami K</dc:creator>
            <atom:link href="https://kannada.asianetnews.com/science/rare-and-extremely-venomous-banded-krait-snake-spotted-snake-in-telangana-s-eturnagaram-forest-gdp/articleshow-18e9ona"/>
        </item>
        <item>
            <title><![CDATA[ಇಸ್ರೋ ಖಾಸಗೀಕರಣ ಮಾಡುವ ಯಾವ ಉದ್ದೇಶವೂ ಇಲ್ಲ, ಉದ್ಯೋಗಿಗಳಿಗೆ ಆಶ್ವಾಸನೆ ನೀಡಿದ ಚೇರ್ಮನ್‌]]></title>
            <link>https://kannada.asianetnews.com/science/isro-will-not-be-privatised-v-narayanan-assures-employees-san/articleshow-2fhbz2o</link>
            <guid isPermaLink="true">https://kannada.asianetnews.com/science/isro-will-not-be-privatised-v-narayanan-assures-employees-san/articleshow-2fhbz2o</guid>
            <pubDate>Thu, 10 Sep 2026 18:52:37 +0530</pubDate>
            <description><![CDATA[&lt;p&gt;ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರ ಹೆಚ್ಚಾಗುತ್ತಿರುವ ಬಗ್ಗೆ ಇಸ್ರೋ ಉದ್ಯೋಗಿಗಳು ವ್ಯಕ್ತಪಡಿಸಿದ ಆತಂಕಕ್ಕೆ ಸಂಸ್ಥೆಯ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ. ಇಸ್ರೋವನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಅಭಯ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25qmhx67kpk9g75jan28tjk,imgname-isro-chief-1789046441894.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ನವದೆಹಲಿ (ಸೆ.10): &lt;/strong&gt;ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರ ಹೆಚ್ಚಾಗುತ್ತಿರುವ ಬೆನ್ನಲ್ಲೇ ಉದ್ಭವಿಸಿರುವ ಆತಂಕ ಮತ್ತು ಗೊಂದಲಗಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮುಖ್ಯಸ್ಥ ವಿ. ನಾರಾಯಣನ್ ಸ್ಪಷ್ಟನೆ ನೀಡಿದ್ದಾರೆ. ದೇಶದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋವನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸುವುದಿಲ್ಲ ಎಂದು ಅವರು ಉದ್ಯೋಗಿಗಳಿಗೆ ಅಭಯ ನೀಡಿದ್ದಾರೆ.&lt;/p&gt;&lt;p&gt;ಬಾಹ್ಯಾಕಾಶ ಕ್ಷೇತ್ರದ ನೂತನ ನೀತಿ ಬದಲಾವಣೆಗಳ ಕುರಿತು ಸ್ಪಷ್ಟತೆ ಕೋರಿ ಇಸ್ರೋ ಉದ್ಯೋಗಿಗಳು ಬರೆದಿದ್ದ ಆತಂಕದ ಪತ್ರದ ಬೆನ್ನಲ್ಲೇ, ಅಧ್ಯಕ್ಷ ವಿ. ನಾರಾಯಣನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ಕೇಂದ್ರಗಳಲ್ಲಿರುವ ಇಸ್ರೋ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು. ಒಬ್ಬರು ಅಥವಾ ಇಬ್ಬರು ಪತ್ರ ನೀಡಿದ್ದಾರೆ ಎಂದಮಾತ್ರಕ್ಕೆ ತಕ್ಷಣವೇ ಲಿಖಿತ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮರುದಿನವೇ ಅವರು ಉದ್ಯೋಗಿಗಳನ್ನು ನೇರವಾಗಿ ಸಂಪರ್ಕಿಸಿರುವುದು ಗಮನಾರ್ಹ.&lt;/p&gt;&lt;p&gt;ಇಸ್ರೋ ಮುಖ್ಯಸ್ಥರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ವಿವಿಧ ಸಂಸ್ಥೆಗಳೊಂದಿಗೆ ನಡೆಸುವ ನಿಯಮಿತ ಸಭೆಯ ಭಾಗವಾಗಿ ಈ ವಿಡಿಯೋ ಕಾನ್ಫರೆನ್ಸ್ ನಡೆದಿದ್ದು, ಸುಮಾರು 30 ನಿಮಿಷಗಳ ಕಾಲ ನಾರಾಯಣನ್ ಅವರು ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಸೆಪ್ಟೆಂಬರ್ 4 ರಂದು ಸಲ್ಲಿಸಿದ್ದ ಮನವಿಗೆ ಇನ್ನು ಸಹ ಅಧಿಕೃತ ಲಿಖಿತ ಉತ್ತರ ಲಭ್ಯವಾಗಿಲ್ಲ ಎಂದು ಉದ್ಯೋಗಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಗಗನ್&zwnj;ಯಾನ್ ಸೇರಿ ಭವಿಷ್ಯದ ಯೋಜನೆಗಳ ಪಟ್ಟಿ ಹಂಚಿಕೆ&lt;/strong&gt;&lt;/h2&gt;&lt;p&gt;ಉದ್ಯೋಗಿಗಳಲ್ಲಿ ಮೂಡಿದ್ದ ಭಯವನ್ನು ಹೋಗಲಾಡಿಸಲು ಯತ್ನಿಸಿದ ನಾರಾಯಣನ್ ಅವರು, ಮುಂಬರುವ ವರ್ಷಗಳಲ್ಲಿ ಇಸ್ರೋ ಅನುಷ್ಠಾನಗೊಳಿಸಲಿರುವ ಹಲವಾರು ಯೋಜನೆಗಳು ಮತ್ತು ಬಾಹ್ಯಾಕಾಶ ಅಭಿಯಾನಗಳ ಬೃಹತ್ ಪಟ್ಟಿಯನ್ನೇ ಸಿಬ್ಬಂದಿ ಮುಂದೆ ಬಿಚ್ಚಿಟ್ಟರು. ಈ ವೇಳೆ, &quot;ಇಸ್ರೋ ಖಾಸಗೀಕರಣಗೊಳ್ಳುವುದಿಲ್ಲ&quot; ಎಂದು ಸ್ಪಷ್ಟಪಡಿಸಿದ ಅವರು, ಬಹುನಿರೀಕ್ಷಿತ 'ಗಗನ್&zwnj;ಯಾನ್&zwnj; ಅಭಿಯಾನ' (Gaganyaan Mission) ಈ ವರ್ಷಾಂತ್ಯಕ್ಕೆ ಮುನ್ನವೇ ಉಡಾವಣೆಗೆ ಸಿದ್ಧಗೊಳ್ಳುತ್ತಿದೆ ಎಂಬ ಪ್ರಮುಖ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಉದ್ಯೋಗಿಗಳ ಆತಂಕಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಸುಮಾರು ಆರು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಉದ್ಯಮಗಳಿಗೆ ಮುಕ್ತಗೊಳಿಸಲು ಆರಂಭಿಸಿದ ನಂತರ, ಇಸ್ರೋ ಉದ್ಯೋಗಿಗಳು ಈ ರೀತಿ ಸಾಂಸ್ಥಿಕ ಮಟ್ಟದಲ್ಲಿ ಕಳವಳ ವ್ಯಕ್ತಪಡಿಸಿ ಪತ್ರ ಬರೆದಿರುವುದು ಇದೇ ಮೊದಲ ಬಾರಿಯಾಗಿದೆ. ಸರ್ಕಾರವು ಖಾಸಗಿ ಕಂಪನಿಗಳ ಭಾಗವಹಿಸುವಿಕೆಯನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಜಾರಿಯಾಗುತ್ತಿರುವ ನೀತಿಗಳ ಕುರಿತು ಸಿಬ್ಬಂದಿ ಹೆಚ್ಚಿನ ಸ್ಪಷ್ಟತೆಯನ್ನು ಕೋರಿದ್ದರು.&lt;/p&gt;&lt;p&gt;ಇಷ್ಟೇ ಅಲ್ಲದೆ, ದೇಶದ ಬಾಹ್ಯಾಕಾಶ ವ್ಯವಸ್ಥೆಯಲ್ಲಿ ಬದಲಾಗುತ್ತಿರುವ ಜವಾಬ್ದಾರಿಗಳು ಮತ್ತು ಪಾತ್ರಗಳ ಕುರಿತು 'ಇನ್-ಸ್ಪೇಸ್' (IN-SPACe) ಅಧ್ಯಕ್ಷ ಪವನ್ ಗೋಯೆಂಕಾ ಅವರು ಸಾರ್ವಜನಿಕವಾಗಿ ನೀಡಿರುವ ಕೆಲವು ಹೇಳಿಕೆಗಳ ಬಗ್ಗೆ ಪ್ರಶ್ನಿಸಿದ್ದ ಉದ್ಯೋಗಿಗಳು, ಅಂತಹ ಹೇಳಿಕೆಗಳನ್ನು ನೀಡಲು ಅವರಿಗೆ ಅಧಿಕಾರವಿದೆಯೇ ಎಂದೂ ಪ್ರಶ್ನೆ ಮಾಡಿದ್ದರು.&lt;/p&gt;&lt;p&gt;ಸಾರ್ವಜನಿಕ ಹಣ ಮತ್ತು ತೆರಿಗೆದಾರರ ಹಣದಿಂದ ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು ಹಾಗೂ ಮೂಲಸೌಕರ್ಯ ಸೌಲಭ್ಯಗಳನ್ನು ಹೊರಗಿನ ಸಂಸ್ಥೆಗಳಿಗೆ (ಖಾಸಗಿಯವರಿಗೆ) ಹಸ್ತಾಂತರಿಸಲು ಅಥವಾ ಲಭ್ಯವಾಗುವಂತೆ ಮಾಡಲು ಇರುವ ಸಾಂಸ್ಥಿಕ ಚೌಕಟ್ಟು ಯಾವುದು? ಎಂಬುದು ಉದ್ಯೋಗಿಗಳ ಪ್ರಮುಖ ಪ್ರಶ್ನೆಯಾಗಿತ್ತು. ಇಂತಹ ತಂತ್ರಜ್ಞಾನಗಳು ಮತ್ತು ಮೂಲಸೌಕರ್ಯಗಳನ್ನು ಯಾವ ಸಂಸ್ಥೆಗಳು ಬಳಸಿಕೊಳ್ಳಬಹುದು ಎಂಬುದರ ಕುರಿತು ಈಗಾಗಲೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆಯೇ? ಮತ್ತು ಈ ಬದಲಾಗುತ್ತಿರುವ ರಚನೆಯು ಪ್ರಸ್ತುತ ಇರುವ ಇಸ್ರೋ ಉದ್ಯೋಗಿಗಳ ಭವಿಷ್ಯದ ಮೇಲೆ ಎಂತಹ ಪರಿಣಾಮ ಬೀರಲಿದೆ? ಎಂಬುದರ ಕುರಿತು ಸಿಬ್ಬಂದಿ ಮಾಹಿತಿ ಬಯಸಿದ್ದರು.&lt;/p&gt;&lt;p&gt;ಇಸ್ರೋವನ್ನು ಖಾಸಗೀಕರಣಗೊಳಿಸುವುದಿಲ್ಲ ಎಂಬ ಅಧ್ಯಕ್ಷರ ಹೇಳಿಕೆಯು ಉದ್ಯೋಗಿಗಳಲ್ಲಿ ತಕ್ಷಣದ ಆತಂಕವನ್ನು ಶಮನಗೊಳಿಸಲು ನೆರವಾಗಿದೆಯಾದರೂ, ವೇಗವಾಗಿ ಬದಲಾಗುತ್ತಿರುವ ಭಾರತದ ಬಾಹ್ಯಾಕಾಶ ಕ್ಷೇತ್ರದ ಭವಿಷ್ಯ ಹಾಗೂ ನೀತಿಗಳ ಕುರಿತು ಸಂಪೂರ್ಣ ವಿವರವಾದ ಉತ್ತರಕ್ಕಾಗಿ ಸಿಬ್ಬಂದಿ ಇನ್ನೂ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>science</category>
            <dc:creator>Santosh Naik</dc:creator>
            <atom:link href="https://kannada.asianetnews.com/science/isro-will-not-be-privatised-v-narayanan-assures-employees-san/articleshow-2fhbz2o"/>
        </item>
        <item>
            <title><![CDATA[ಕೃತಕ ಸೂರ್ಯನ ನಿರ್ಮಾಣದ ಸನಿಹ ಭಾರತ, ಗುಜರಾತ್‌ನಲ್ಲಿ ಅತ್ಯಾಧುನಿಕ ಗೈರೊಟ್ರಾನ್ ತಂತ್ರಜ್ಞಾನ ಯಶಸ್ವಿ]]></title>
            <link>https://kannada.asianetnews.com/science/india-artificial-sun-plasma-research-sst-1-tokamak-gyrotron-upgrade-san/articleshow-2n6b8sb</link>
            <guid isPermaLink="true">https://kannada.asianetnews.com/science/india-artificial-sun-plasma-research-sst-1-tokamak-gyrotron-upgrade-san/articleshow-2n6b8sb</guid>
            <pubDate>Tue, 15 Sep 2026 16:34:11 +0530</pubDate>
            <description><![CDATA[&lt;p&gt;ಭಾರತದ 'ಕೃತಕ ಸೂರ್ಯ' ಯೋಜನೆಯು ಗುಜರಾತ್&zwnj;ನ ಪ್ಲಾಸ್ಮಾ ಸಂಶೋಧನಾ ಸಂಸ್ಥೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇಲ್ಲಿನ 'ಎಸ್ಎಸ್&zwnj;ಟಿ-1 ಟೋಕಾಮ್ಯಾಕ್' ಯಂತ್ರದಲ್ಲಿ ಹೊಸ, ಶಕ್ತಿಶಾಲಿ 'ಗೈರೊಟ್ರಾನ್' ಸಾಧನವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2jbp8cksdabpw52tn4154yj,imgname-india-artificial-sun-1789470122387.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.15): &lt;/strong&gt;ಸೂರ್ಯನಲ್ಲಿ ಶಕ್ತಿ ಉತ್ಪಾದನೆಯಾಗುವ ನೈಸರ್ಗಿಕ ಪ್ರಕ್ರಿಯೆಯನ್ನು ಭೂಮಿಯ ಮೇಲೆಯೇ ಮರುಸೃಷ್ಟಿಸಿ, ನಕ್ಷತ್ರಗಳ ಅಪಾರ ಶಕ್ತಿಯನ್ನು ಮಾನವಕುಲದ ಬಳಕೆಗೆ ತರುವ ಭಾರತದ 'ಕೃತಕ ಸೂರ್ಯ' (Artificial Sun) ಕನಸು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಗುಜರಾತ್&zwnj;ನಲ್ಲಿರುವ ಪ್ರಸಿದ್ಧ 'ಪ್ಲಾಸ್ಮಾ ಸಂಶೋಧನಾ ಸಂಸ್ಥೆ'ಯ (IPR - Institute for Plasma Research) 'ಎಸ್ಎಸ್&zwnj;ಟಿ-1 ಟೋಕಾಮ್ಯಾಕ್' (SST-1 Tokamak) ಪ್ರಯೋಗಾಲಯದಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಹೊಸದಾದ 82.6 GHz, 400 kW 'ಗೈರೊಟ್ರಾನ್' (Gyrotron) ಸಾಧನವನ್ನು ಯಶಸ್ವಿಯಾಗಿ ಅಳವಡಿಸಿ, ಕಾರ್ಯಾರಂಭಗೊಳಿಸಲಾಗಿದೆ.&lt;/p&gt;&lt;p&gt;ಎಸ್ಎಸ್&zwnj;ಟಿ-1 (Steady State Superconducting Tokamak) ಎಂಬುದು ನಕ್ಷತ್ರಗಳಲ್ಲಿ ಶಕ್ತಿ ಉತ್ಪಾದನೆಯಾಗುವ 'ನ್ಯೂಕ್ಲಿಯರ್ ಫ್ಯೂಷನ್' (ಅಣು ಸಂಯೋಜನೆ) ಪ್ರಕ್ರಿಯೆಯನ್ನು ಕೃತಕವಾಗಿ ಮರುಸೃಷ್ಟಿಸಲು ವಿನ್ಯಾಸಗೊಳಿಸಲಾದ ಭಾರತದ ಪ್ರಮುಖ ಪ್ರಯೋಗಾತ್ಮಕ ಯಂತ್ರವಾಗಿದೆ. ಸಾಮಾನ್ಯ ವಿದ್ಯುತ್ ಉತ್ಪಾದನಾ ಘಟಕಗಳಂತೆ ಇಂಧನವನ್ನು ಸುಡುವ ಬದಲು, ಉನ್ನತ ತಾಪಮಾನ ಮತ್ತು ತೀವ್ರ ಒತ್ತಡದ ಸ್ಥಿತಿಯಲ್ಲಿ ಲಘು ಪರಮಾಣುಗಳ ನ್ಯೂಕ್ಲಿಯಸ್&zwnj;ಗಳನ್ನು ಒಂದಕ್ಕೊಂದು ಸಂಯೋಜಿಸುವ (Combine) ಮೂಲಕ ಅಪಾರ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುವುದು ಈ ಫ್ಯೂಷನ್ ರಿಯಾಕ್ಟರ್&zwnj;ನ ಪ್ರಮುಖ ಉದ್ದೇಶವಾಗಿದೆ.&lt;/p&gt;&lt;h2&gt;&lt;strong&gt;ಸೂರ್ಯನ ಗರ್ಭಕ್ಕಿಂತ 20 ಪಟ್ಟು ಹೆಚ್ಚು ಶಾಖ!&lt;/strong&gt;&lt;/h2&gt;&lt;p&gt;ಈ ಪ್ರಯೋಗದ ಕೇಂದ್ರ ಬಿಂದುವೇ 'ಪ್ಲಾಸ್ಮಾ' (Plasma). ಇದು ವಿದ್ಯುತ್ ಆವೇಶವನ್ನು ಹೊಂದಿರುವ (Electrically charged) ವಸ್ತುವಿನ ಅತಿ ತೀವ್ರತರದ ಬಿಸಿ ಸ್ಥಿತಿಯಾಗಿದೆ. ವಿಜ್ಞಾನಿಗಳು ಡೋನಟ್ (Doughnut) ಆಕಾರದ ಟೋಕಾಮ್ಯಾಕ್ ಯಂತ್ರದ ಒಳಗೆ ಪ್ರಬಲ ಕಾಂತೀಯ ಕ್ಷೇತ್ರಗಳನ್ನು (Magnetic fields) ಬಳಸಿ, ಈ ಪ್ಲಾಸ್ಮಾವನ್ನು ಅತ್ಯಂತ ಹೆಚ್ಚಿನ ತಾಪಮಾನಕ್ಕೆ ಕಾಯಿಸಿ ನಿಯಂತ್ರಣದಲ್ಲಿಡಬೇಕಾಗುತ್ತದೆ. ಭಾರತದ ಫ್ಯೂಷನ್ ಪ್ರಯೋಗಗಳಲ್ಲಿ ವಿಜ್ಞಾನಿಗಳು ಈಗಾಗಲೇ 200 ಮಿಲಿಯನ್ (20 ಕೋಟಿ) ಡಿಗ್ರಿ ಸೆಲ್ಸಿಯಸ್&zwnj;ಗಿಂತಲೂ ಹೆಚ್ಚಿನ ಪ್ಲಾಸ್ಮಾ ತಾಪಮಾನವನ್ನು ಸಾಧಿಸಿದ್ದಾರೆ! ಇದು ಸೂರ್ಯನ ಕೇಂದ್ರಭಾಗದ (Core) ಶಾಖಕ್ಕಿಂತ ಸುಮಾರು 20 ಪಟ್ಟು ಹೆಚ್ಚಾಗಿದೆ ಎಂಬುದು ವಿಶೇಷ.&lt;/p&gt;&lt;p&gt;ಆದರೆ, ಇಂತಹ ಅತಿಯಾದ ತಾಪಮಾನವನ್ನು ತಲುಪುವುದು ಸವಾಲಿನ ಒಂದು ಭಾಗ ಮಾತ್ರ. ಆ ಅಲ್ಟ್ರಾ-ಹಾಟ್ (Ultra-hot) ಪ್ಲಾಸ್ಮಾವನ್ನು ಸ್ಥಿರವಾಗಿಡುವುದು ಮತ್ತು ಫ್ಯೂಷನ್ ಶಕ್ತಿಯನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುವಷ್ಟು ಸುದೀರ್ಘ ಅವಧಿಗೆ ಯಂತ್ರದೊಳಗೆ ಬಂಧಿಸಿಡುವುದು ಅತ್ಯಂತ ಕ್ಲಿಷ್ಟಕರವಾದ ನಿಜವಾದ ಪರೀಕ್ಷೆಯಾಗಿದೆ. ಆ ಮಹತ್ವದ ಕೆಲಸವನ್ನು ಪ್ರಸ್ತುತ ಅಳವಡಿಸಲಾಗಿರುವ ಹೊಸ 'ಗೈರೊಟ್ರಾನ್' ಮಾಡಲಿದೆ.&lt;/p&gt;&lt;h2&gt;&lt;strong&gt;ಏನಿದು ಗೈರೊಟ್ರಾನ್? ಇದರ ಕಾರ್ಯವೇನು?&lt;/strong&gt;&lt;/h2&gt;&lt;p&gt;ಗೈರೊಟ್ರಾನ್ ಎಂಬುದು ಅಧಿಕ ಕಂಪನಾಂಕದ (High-frequency) ಮೈಕ್ರೋವೇವ್ ಶಕ್ತಿಯನ್ನು ಉತ್ಪಾದಿಸುವ ಅತ್ಯಾಧುನಿಕ ಸಾಧನ.&lt;/p&gt;&lt;p&gt;ತಂತ್ರಜ್ಞಾನದ ಮೇಲ್ದರ್ಜೆ: ಈ ನೂತನ ವ್ಯವಸ್ಥೆಯು ಎಸ್ಎಸ್&zwnj;ಟಿ-1 ನೊಳಗಿನ ಪ್ಲಾಸ್ಮಾಗೆ ಮೈಕ್ರೋವೇವ್ ಶಕ್ತಿಯನ್ನು ಹಾಯಿಸುತ್ತದೆ. ಇದರಿಂದ ವಿಜ್ಞಾನಿಗಳಿಗೆ ಪ್ಲಾಸ್ಮಾವನ್ನು ಅತ್ಯಂತ ಉನ್ನತ ತಾಪಮಾನದಲ್ಲಿ ಕಾಯಿಸಲು ಮತ್ತು ಕಂಟ್ರೋಲ್ ಮಾಡಲು ನೆರವಾಗುತ್ತದೆ. 82.6 GHz ಮತ್ತು 400 kW ಸಾಮರ್ಥ್ಯದ ಈ ಹೊಸ ಸಾಧನವು, ಹಿಂದೆ ಬಳಸುತ್ತಿದ್ದ 42 GHz ಸಿಸ್ಟಮ್&zwnj;ಗಿಂತ ಅತ್ಯಂತ ಶಕ್ತಿಶಾಲಿ ಹಾಗೂ ಬೃಹತ್ ಅಪ್&zwnj;ಗ್ರೇಡ್ ಆಗಿದೆ.&lt;/p&gt;&lt;p&gt;ಸ್ಥಿರತೆ ಮತ್ತು ನಿಯಂತ್ರಣ: ಈ ಸುಧಾರಿತ ಕಾಯಿಸುವ ಸಾಮರ್ಥ್ಯವು (Enhanced heating capability) ಸಂಶೋಧಕರಿಗೆ ಅತ್ಯಂತ ಬಿಸಿಯಾದ ಪ್ಲಾಸ್ಮಾವನ್ನು ಸುದೀರ್ಘ ಅವಧಿಯವರೆಗೆ ನಿರ್ವಹಿಸಲು ಮತ್ತು ಅತ್ಯಂತ ಸ್ಥಿರವಾದ ಪರಿಸ್ಥಿತಿಯಲ್ಲಿ ಅದು ಹೇಗೆ ವರ್ತಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ.&lt;/p&gt;&lt;p&gt;ಸೂರ್ಯನಲ್ಲಿರುವ ಭಾರಿ ಗುರುತ್ವಾಕರ್ಷಣೆಯ ಒತ್ತಡವು (Gravitation pressure) ಪ್ಲಾಸ್ಮಾವನ್ನು ತಾನಾಗಿಯೇ ಹಿಡಿದಿಟ್ಟುಕೊಂಡು ಫ್ಯೂಷನ್ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸುತ್ತದೆ. ಆದರೆ, ಭೂಮಿಯ ಮೇಲೆ ವಿಜ್ಞಾನಿಗಳು ಪ್ಲಾಸ್ಮಾವನ್ನು ರಿಯಾಕ್ಟರ್&zwnj;ನ ತಡೆಗೋಡೆಗಳಿಗೆ ಸ್ಪರ್ಶಿಸದಂತೆ ತಡೆಯಲು ಸಂಕೀರ್ಣವಾದ ಕಾಂತೀಯ ವ್ಯವಸ್ಥೆಗಳನ್ನು (Magnetic systems) ಅವಲಂಬಿಸಬೇಕಾಗುತ್ತದೆ. ಸಣ್ಣ ಅಸ್ಥಿರತೆ ಉಂಟಾದರೂ ಅತ್ಯಂತ ಸೂಕ್ಷ್ಮವಾದ ಫ್ಯೂಷನ್ ವಾತಾವರಣವು ಹಾಳಾಗುತ್ತದೆ.&lt;/p&gt;&lt;h2&gt;&lt;strong&gt;ಅತ್ಯುನ್ನತ ಸ್ವಚ್ಛ ಇಂಧನದ ಕನಸು&lt;/strong&gt;&lt;/h2&gt;&lt;p&gt;ನ್ಯೂಕ್ಲಿಯರ್ ಫ್ಯೂಷನ್ ಅನ್ನು ಮಾನವಕುಲದ 'ಅತ್ಯುನ್ನತ ಸ್ವಚ್ಛ ಇಂಧನ'ದ (Clean energy) ಕನಸು ಎಂದು ಬಣ್ಣಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಇಂಧನ ಸಂಪನ್ಮೂಲಗಳು ಸಮೃದ್ಧವಾಗಿವೆ. ಜೊತೆಗೆ ಸಾಂಪ್ರದಾಯಿಕ ಅಣು ವಿದ್ಯುತ್ ಸ್ಥಾವರಗಳಂತೆ (Nuclear fission) ಇದು ದೀರ್ಘಕಾಲದ ವಿಕಿರಣಶೀಲ ತ್ಯಾಜ್ಯವನ್ನು ಉತ್ಪಾದಿಸುವುದಿಲ್ಲ. ಆದರೆ, ಫ್ಯೂಷನ್ ತಂತ್ರಜ್ಞಾನವನ್ನು ವಾಣಿಜ್ಯಿಕವಾಗಿ ಸಾರ್ವಜನಿಕ ವಿದ್ಯುತ್ ಉತ್ಪಾದನೆಗೆ ಬಳಸುವುದು ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಇರುವ ಅತಿದೊಡ್ಡ ಸವಾಲಾಗಿದೆ.&lt;/p&gt;&lt;p&gt;ಈ ಹೊಸ ಗೈರೊಟ್ರಾನ್ ಸಾಧನವು ತಕ್ಷಣವೇ ಎಸ್ಎಸ್&zwnj;ಟಿ-1 ಅನ್ನು ವಿದ್ಯುತ್ ಸ್ಥಾವರವಾಗಿಸಿ ಬದಲಾಯಿಸುವುದಿಲ್ಲ ಅಥವಾ ಭಾರತದ ಕೃತಕ ಸೂರ್ಯ ತಕ್ಷಣವೇ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸುವುದಿಲ್ಲ.&lt;/p&gt;&lt;p&gt;ಆದರೆ, ದಾಖಲೆ ಮಟ್ಟದ ತಾಪಮಾನವನ್ನು ಸಾಧಿಸುವುದು ಮತ್ತು ಅದನ್ನು ಸುರಕ್ಷಿತವಾಗಿ ನಿಯಂತ್ರಿಸುವ ನಡುವಿನ ಪ್ರಮುಖ ಕೊಂಡಿಯಾದ 'ಅಲ್ಟ್ರಾ-ಹಾಟ್ ಪ್ಲಾಸ್ಮಾವನ್ನು ಸ್ಥಿರವಾಗಿ ನಿರ್ವಹಿಸುವ' ಭಾರತದ ಸಾಮರ್ಥ್ಯವನ್ನು ಇದು ಬಹುವಾಗಿ ಹೆಚ್ಚಿಸಿದೆ. ಈ ಮೈಲಿಗಲ್ಲು ಭಾರತದ ಕೃತಕ ಸೂರ್ಯ ಯೋಜನೆಯನ್ನು ಮುಂದಿನ ದೊಡ್ಡ ಕ್ರಾಂತಿಗೆ ಸಜ್ಜುಗೊಳಿಸಿದ್ದು, ಮುಂಬರುವ ದಿನಗಳಲ್ಲಿ ನಕ್ಷತ್ರಗಳ ಶಕ್ತಿಯು ಇಡೀ ಜಗತ್ತಿಗೆ ಬೆಳಕಾಗುವ ಭವಿಷ್ಯವನ್ನು ಮತ್ತಷ್ಟು ಹತ್ತಿರಗೊಳಿಸಿದೆ.&lt;/p&gt;]]></content:encoded>
            <category>science</category>
            <dc:creator>Santosh Naik</dc:creator>
            <atom:link href="https://kannada.asianetnews.com/science/india-artificial-sun-plasma-research-sst-1-tokamak-gyrotron-upgrade-san/articleshow-2n6b8sb"/>
        </item>
        <item>
            <title><![CDATA[Science: ಸೌರಮಂಡಲದ ಅತಿದೊಡ್ಡ ರಹಸ್ಯ ಭೇದಿಸಿದ ವಿಜ್ಞಾನಿಗಳು: ಕೇವಲ 5 ಗಂಟೆಗಳ ಮಹಾ ಘಟನೆಯಲ್ಲಿ ಚಂದ್ರನ ಜನನ!]]></title>
            <link>https://kannada.asianetnews.com/science/moon-formation-theory-theia-earth-collision-5-hours-supercomputer-simulation-space-science-bmk/articleshow-611owyr</link>
            <guid isPermaLink="true">https://kannada.asianetnews.com/science/moon-formation-theory-theia-earth-collision-5-hours-supercomputer-simulation-space-science-bmk/articleshow-611owyr</guid>
            <pubDate>Thu, 10 Sep 2026 19:04:38 +0530</pubDate>
            <description><![CDATA[&lt;p&gt;ಇತ್ತೀಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ, 'ಥಿಯಾ' ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ನಂತರ ಚಂದ್ರನು ವರ್ಷಗಳ ಕಾಲಾವಧಿಯಲ್ಲಿ ರೂಪುಗೊಳ್ಳಲಿಲ್ಲ. ಬದಲಿಗೆ, ಸೂಪರ್&zwnj;ಕಂಪ್ಯೂಟರ್ ಸಿಮ್ಯುಲೇಶನ್&zwnj;ಗಳು ತೋರಿಸುವಂತೆ, 5 ಗಂಟೆಗಳ ಅಲ್ಪಾವಧಿಯಲ್ಲಿ ಚಂದ್ರನ ಬಹುಪಾಲು ಆಕಾರ ರೂಪುಗೊಂಡಿತು. ಈ ಕುರಿತು ಕಂಪ್ಟೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5fxb8rkr4s7dkztzahqfak,imgname-space-science--5--1778300923159.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾವು ಪ್ರತಿದಿನ ರಾತ್ರಿ ಆಕಾಶದಲ್ಲಿ ಕಾಣುವ ಬೆಣ್ಣೆಯಂತಹ ಚಂದ್ರ ಹೇಗೆ ಹುಟ್ಟಿದ ಎಂದು ಎಂದಾದರೂ ಯೋಚಿಸಿದ್ದೀರಾ? ಈ ಪ್ರಶ್ನೆಗೆ ವಿಜ್ಞಾನಿಗಳು ಹಲವು ದಶಕಗಳಿಂದ ಬೇರೆ ಬೇರೆ ಉತ್ತರಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ, ಇತ್ತೀಚಿನ ವಿಜ್ಞಾನ ಸಂಶೋಧನೆಯೊಂದು ಬಾಹ್ಯಾಕಾಶ ಜಗತ್ತನ್ನೇ ಬೆರಗುಗೊಳಿಸುವಂತಹ ಆಶ್ಚರ್ಯಕರ ಸತ್ಯವನ್ನು ಹೊರಹಾಕಿದೆ. ನಾವೆಲ್ಲರೂ ಅಂದುಕೊಂಡಂತೆ ಚಂದ್ರನ ರಚನೆಗೆ ವರ್ಷಗಳು ಬೇಕಾಗಲಿಲ್ಲ, ಬದಲಿಗೆ ಕೇವಲ 5 ಗಂಟೆಗಳಲ್ಲಿ ಚಂದ್ರ ಸೃಷ್ಟಿಯಾಗಿದ್ದ ಎಂಬ ಹೊಸ ಸಿದ್ಧಾಂತ ಮುನ್ನೆಲೆಗೆ ಬಂದಿದೆ.&lt;/p&gt;&lt;h2&gt;&lt;strong&gt;ಹಳೆಯ ಸಿದ್ಧಾಂತ ಏನಿತ್ತು?&lt;/strong&gt;&lt;/h2&gt;&lt;p&gt;ಇಲ್ಲಿಯವರೆಗೆ ಬಾಹ್ಯಾಕಾಶ ವಿಜ್ಞಾನಿಗಳು ನಂಬಿದ್ದ ಸಿದ್ಧಾಂತದ ಪ್ರಕಾರ, ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಕಲ್ಲಿನಂತಹ ದೊಡ್ಡ ಕಾಯವೊಂದು ಭೂಮಿಗೆ ಡಿಕ್ಕಿ ಹೊಡೆದಿತ್ತು. ಈ ಭೀಕರ ಘರ್ಷಣೆಯಿಂದ ಭೂಮಿಯಿಂದ ಬೃಹತ್ ಪ್ರಮಾಣದ ಬಂಡೆಗಳು ಮತ್ತು ಧೂಳಿನ ಕಣಗಳು ಬಾಹ್ಯಾಕಾಶಕ್ಕೆ ಹಾರಿಬಿದ್ದವು. ಇವು ಭೂಮಿಯ ಸುತ್ತ ಉಂಗುರಾಕಾರದಲ್ಲಿ ಸುತ್ತಲು ಪ್ರಾರಂಭಿಸಿದವು. ಕಾಲಕ್ರಮೇಣ ಗುರುತ್ವಾಕರ್ಷಣೆಯ ಪ್ರಭಾವದಿಂದ ಈ ಶಿಲಾಖಂಡರಾಶಿಗಳು ಒಂದಕ್ಕೊಂದು ಸೇರಿಕೊಳ್ಳುತ್ತಾ, ತಿಂಗಳುಗಳು ಅಥವಾ ವರ್ಷಗಳ ಸುದೀರ್ಘ ಅವಧಿಯಲ್ಲಿ ಚಂದ್ರ ರೂಪುಗೊಂಡನು ಎಂದು ವಿಜ್ಞಾನಿಗಳು ಭಾವಿಸಿದ್ದರು.&lt;/p&gt;&lt;h3&gt;&lt;strong&gt;ಹೊಸ ಸಂಶೋಧನೆ ಹೇಳುತ್ತಿರುವುದೇನು?&lt;/strong&gt;&lt;/h3&gt;&lt;p&gt;ಆದರೆ, ಅಮೆರಿಕದ 'ಸೌತ್&zwnj;ವೆಸ್ಟ್ ರಿಸರ್ಚ್ ಇನ್&zwnj;ಸ್ಟಿಟ್ಯೂಟ್' ಮತ್ತು 'ಅರಿಜೋನಾ ವಿಶ್ವವಿದ್ಯಾಲಯ'ದ ವಿಜ್ಞಾನಿಗಳ ತಂಡ ನಡೆಸಿದ ಹೊಸ ಅಧ್ಯಯನವು ಹಳೆಯ ಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಸಂಶೋಧಕಿ ಅಡೀನ್ ಡೆಂಟನ್ ಅವರ ನೇತೃತ್ವದಲ್ಲಿ ನಡೆದ ಈ ಅಧ್ಯಯನದ ವರದಿಯು ಪ್ರಸಿದ್ಧ 'ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್'ನಲ್ಲಿ ಪ್ರಕಟವಾಗಿದೆ.&lt;/p&gt;&lt;h3&gt;&lt;strong&gt;ಈ ಹಿಂದೆ ಆಗಿದ್ದೇನು?&lt;/strong&gt;&lt;/h3&gt;&lt;p&gt;ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ನಮ್ಮ ಸೌರವ್ಯೂಹವು ಅತ್ಯಂತ ಚಿಕ್ಕದಾಗಿದ್ದಾಗ, ಮಂಗಳ ಗ್ರಹದ ಗಾತ್ರದಲ್ಲಿದ್ದ 'ಥಿಯಾ' ಎಂಬ ಪ್ರೋಟೋಪ್ಲಾನೆಟ್ (ಪ್ರಾಚೀನ ಗ್ರಹ) ಅತ್ಯಂತ ವೇಗವಾಗಿ ಬಂದು ನೇರವಾಗಿ ಭೂಮಿಗೆ ಡಿಕ್ಕಿ ಹೊಡೆಯಿತು. ಈ ಕಲ್ಪನಾತೀತ ದುರಂತ ಘರ್ಷಣೆಯ ನಂತರ ಜರುಗಿದ ಬೆಳವಣಿಗೆಗಳನ್ನು ವಿಜ್ಞಾನಿಗಳು ಸೂಪರ್&zwnj;ಕಂಪ್ಯೂಟರ್ ಸಿಮ್ಯುಲೇಶನ್ (ತಂತ್ರಜ್ಞಾನದ ಆಧಾರಿತ ವಿನ್ಯಾಸ) ಮೂಲಕ ಪುನಃ ಸೃಷ್ಟಿಸಿ ವಿಶ್ಲೇಷಿಸಿದರು.&lt;/p&gt;&lt;h3&gt;&lt;strong&gt;ಸೂಪರ್&zwnj;ಕಂಪ್ಯೂಟರ್ ನೀಡಿದ ಶಾಕಿಂಗ್ ಮಾಹಿತಿ!&lt;/strong&gt;&lt;/h3&gt;&lt;p&gt;ವಿಜ್ಞಾನಿಗಳು ಈ ಬಾರಿ ಸೂಪರ್&zwnj;ಕಂಪ್ಯೂಟರ್&zwnj;ನಲ್ಲಿ ಸಿಮ್ಯುಲೇಶನ್ ನಡೆಸುವಾಗ ಕೇವಲ ಕಲ್ಲುಗಳ ಗಾತ್ರವನ್ನು ಮಾತ್ರ ಪರಿಗಣಿಸಲಿಲ್ಲ, ಬದಲಿಗೆ ಘರ್ಷಣೆಯ ಸಮಯದಲ್ಲಿ ಉಂಟಾದ ಬಂಡೆಗಳ ವಿಪರೀತ ತಾಪಮಾನ ಮತ್ತು ಅವುಗಳ ಸಾಂದ್ರತೆ ಅಥವಾ ಬಲವನ್ನು (Strength) ಪ್ರಮುಖ ಅಂಶವಾಗಿ ಸೇರಿಸಿಕೊಂಡರು.&lt;/p&gt;&lt;h3&gt;&lt;strong&gt;ವಿಜ್ಞಾನಿಗಳನ್ನೆ ಕೂತುಹಲಗೊಳಿಸಿದ ಘಟನೆ!&lt;/strong&gt;&lt;/h3&gt;&lt;p&gt;ಈ ಹೊಸ ವಿಶ್ಲೇಷಣೆಯನ್ನು ಅಳವಡಿಸಿ ಸಿಮ್ಯುಲೇಶನ್ ಚಾಲನೆ ಮಾಡಿದಾಗ ವಿಜ್ಞಾನಿಗಳಿಗೆ ಆಶ್ಚರ್ಯ ಕಾಯ್ದಿತ್ತು. ಮಹಾ ಘರ್ಷಣೆಯ ನಂತರ ಭೂಮಿಯಿಂದ ಚಿಮ್ಮಿದ ದ್ರವ್ಯರಾಶಿಯು ಸುದೀರ್ಘ ಸಮಯ ಬಾಹ್ಯಾಕಾಶದಲ್ಲಿ ಸುತ್ತುತ್ತಾ ಕಾಯಲಿಲ್ಲ. ಬದಲಾಗಿ, ಘರ್ಷಣೆಯಾದ ತಕ್ಷಣವೇ ಕ್ಷಿಪ್ರವಾಗಿ ಒಂದಾಗಲು ಪ್ರಾರಂಭಿಸಿತು. ಕೇವಲ 5 ಗಂಟೆಗಳ ಅಲ್ಪಾವಧಿಯಲ್ಲಿ ಚಂದ್ರನ ಬಹುಪಾಲು ಆಕಾರವು ರೂಪುಗೊಂಡು, ಭೂಮಿಯ ಕಕ್ಷೆಯನ್ನು ಸೇರಿ ಸ್ಥಿರವಾಯಿತು ಎಂಬುದು ಈ ಸಂಶೋಧನೆಯಿಂದ ತಿಳಿದುಬಂದಿದೆ.&lt;/p&gt;&lt;h3&gt;&lt;strong&gt;ಈ ಸಂಶೋಧನೆಯ ಪ್ರಾಮುಖ್ಯತೆ ಏನು?&lt;/strong&gt;&lt;/h3&gt;&lt;p&gt;ಚಂದ್ರನ ಸೃಷ್ಟಿ ಕೇವಲ 5 ಗಂಟೆಗಳಲ್ಲಿ ಆಗಿದೆ ಎಂಬ ಈ ಸಿದ್ಧಾಂತವು ಸೌರಮಂಡಲದ ವಿಕಾಸದ ಅಧ್ಯಯನಕ್ಕೆ ಹೊಸ ದಾರಿಯನ್ನು ತೋರಿಸಿದೆ. ಚಂದ್ರನಲ್ಲಿರುವ ಶೇ. 80 ಕ್ಕಿಂತ ಹೆಚ್ಚು ಭಾಗವು ಭೂಮಿಯ ಹೊರಪದರಕ್ಕೆ (Mantle) ಹೋಲುತ್ತದೆ ಎಂಬುದಕ್ಕೆ ಇದುವರೆಗೆ ಸರಿಯಾದ ಉತ್ತರವಿರಲಿಲ್ಲ. ಆದರೆ, ಈ ತ್ವರಿತ ಸೃಷ್ಟಿಯ ಸಿದ್ಧಾಂತವು ಭೂಮಿಯ ಮೇಲ್ಮೈಯ ಭಾಗವೇ ಕ್ಷಣಾರ್ಧದಲ್ಲಿ ಪ್ರತ್ಯೇಕಗೊಂಡು ಚಂದ್ರನಾಗಿ ಬದಲಾಯಿತು ಎಂಬುದಕ್ಕೆ ಸೂಕ್ತ ಪುರಾವೆ ಒದಗಿಸುತ್ತದೆ.&lt;/p&gt;&lt;h3&gt;&lt;strong&gt;ನಿಜಕ್ಕೂ ವಿಸ್ಮಯಕಾರಿ ಸತ್ಯ!&lt;/strong&gt;&lt;/h3&gt;&lt;p&gt;ಬ್ರಹ್ಮಾಂಡದ ಇತಿಹಾಸದಲ್ಲೇ ಅತ್ಯಂತ ರೋಮಾಂಚಕಾರಿ ಎನ್ನಲಾದ ಈ ಘಟನೆ, ಭೂಮಿ ಮತ್ತು ಚಂದ್ರನ ನಡುವಿನ ಸಂಬಂಧವನ್ನು ವಿವರಿಸುವಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಕೇವಲ 5 ಗಂಟೆಗಳಲ್ಲಿ ನಡೆದ ಆ ಮಹಾ ಘಟನೆಯು ಇಂದು ನಮಗೆ ಪ್ರತಿದಿನ ಬೆಳಕು ನೀಡುವ ಸುಂದರ ಚಂದ್ರನನ್ನು ಕರುಣಿಸಿದೆ ಎಂಬುದು ನಿಜಕ್ಕೂ ವಿಸ್ಮಯಕಾರಿ ಸತ್ಯ.&lt;/p&gt;]]></content:encoded>
            <category>science</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/science/moon-formation-theory-theia-earth-collision-5-hours-supercomputer-simulation-space-science-bmk/articleshow-611owyr"/>
        </item>
        <item>
            <title><![CDATA[ಸೌರವ್ಯೂಹದಲ್ಲೇ ಅಪರೂಪದ ಘಟನೆ: ಚಂದ್ರನಿಗೆ ಆರು ಅಂತಸ್ತಿನ ಬೃಹತ್ ಕ್ಷುದ್ರಗ್ರಹ ಡಿಕ್ಕಿಯಾಗಿ ದೈತ್ಯ ಕುಳಿ ಪತ್ತೆ!]]></title>
            <link>https://kannada.asianetnews.com/science/nasa-s-lro-discovers-massive-new-impact-crater-mcgetchin-on-the-moon-gdp/articleshow-79slywv</link>
            <guid isPermaLink="true">https://kannada.asianetnews.com/science/nasa-s-lro-discovers-massive-new-impact-crater-mcgetchin-on-the-moon-gdp/articleshow-79slywv</guid>
            <pubDate>Thu, 17 Sep 2026 17:13:00 +0530</pubDate>
            <description><![CDATA[2024ರಲ್ಲಿ ಚಂದ್ರನಿಗೆ ಬೃಹತ್ ಬಾಹ್ಯಾಕಾಶ ಬಂಡೆಯೊಂದು ಡಿಕ್ಕಿ ಹೊಡೆದ ಪರಿಣಾಮ ಸೃಷ್ಟಿಯಾದ ದೈತ್ಯ ಕುಳಿಯನ್ನು ನಾಸಾದ 'ಲೂನಾರ್ ರಿಕಾನಿಸನ್ಸ್ ಆರ್ಬಿಟರ್' ಪತ್ತೆಹಚ್ಚಿದೆ. 'ಮೆಕ್&zwnj;ಗೆಚಿನ್' ಎಂದು ಹೆಸರಿಸಲಾದ ಈ ಕುಳಿಯು ಎರಡು ಫುಟ್&zwnj;ಬಾಲ್ ಮೈದಾನಗಳಷ್ಟು ಅಗಲವಿದ್ದು, ಇದರ ಸುತ್ತಲಿನ ಉಷ್ಣಾಂಶ ತೀವ್ರವಾಗಿ ಕುಸಿದಿದೆ. ಈ ಸಂಶೋಧನೆಯು ಭವಿಷ್ಯದ ಚಂದ್ರಯಾನಗಳ ಸುರಕ್ಷತೆಗೆ ಪ್ರಮುಖ ಮಾಹಿತಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2qj0br0he4grrmp93asx4c7,imgname-nj-1789644517120.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್: &lt;/strong&gt;ಬಾಹ್ಯಾಕಾಶ ಸಂಶೋಧನೆಯಲ್ಲಿ ನಾಸಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. 2024 ರಲ್ಲಿ ಆರು ಅಂತಸ್ತಿನ ಕಟ್ಟಡದಷ್ಟು ಬೃಹತ್ ಪ್ರಮಾಣದ ಬಾಹ್ಯಾಕಾಶ ಬಂಡೆಯೊಂದು ಚಂದ್ರನ ಮೇಲ್ಮೈಗೆ ತೀವ್ರವಾಗಿ ಡಿಕ್ಕಿಯಾದ ಪರಿಣಾಮ ರಚನೆಯಾಗಿದ್ದ ದೈತ್ಯ ಕುಳಿಯನ್ನು ನಾಸಾದ 'ಲೂನಾರ್ ರಿಕಾನಿಸನ್ಸ್ ಆರ್ಬಿಟರ್' ಪತ್ತೆ ಹಚ್ಚಿದೆ. ವಿಜ್ಞಾನ ನಿಯತಕಾಲಿಕ ಸೈನ್ಸ್ ಅಡ್ವಾನ್ಸಸ್&zwnj;ನಲ್ಲಿ ಈ ಕುರಿತು ಸಂಶೋಧನಾ ಲೇಖನ ಪ್ರಕಟವಾಗಿದ್ದು, ಹೊಸದಾಗಿ ರೂಪುಗೊಂಡ ಈ ಕುಳಿಗೆ ಅಧಿಕೃತವಾಗಿ 'ಮೆಕ್&zwnj;ಗೆಚಿನ್' (McGetchin) ಎಂದು ಹೆಸರಿಡಲಾಗಿದೆ. ಇದು ಸೌರವ್ಯೂಹದಲ್ಲಿ ಇತ್ತೀಚಿನ ದಶಕಗಳಲ್ಲಿ ಗುರುತಿಸಲಾದ ಅತಿದೊಡ್ಡ ಹೊಸ ಘರ್ಷಣೆಯ ಕುಳಿಯಾಗಿದೆ.&lt;/p&gt;&lt;h2&gt;ಫುಟ್&zwnj;ಬಾಲ್ ಮೈದಾನದಷ್ಟು ಅಗಲದ ದೈತ್ಯ ಕುಳಿ!&lt;/h2&gt;&lt;p&gt;ಈ ತೀವ್ರ ಸ್ಫೋಟದ ಪರಿಣಾಮವಾಗಿ ಚಂದ್ರನ ಮೇಲೆ ಸುಮಾರು 728 ಅಡಿ ಅಗಲ ಹಾಗೂ 141 ಅಡಿ ಆಳದ ಬೃಹತ್ ಕುಳಿ ಸೃಷ್ಟಿಯಾಗಿದೆ. ಇದರ ಉದ್ದವು ಸರಿಸುಮಾರು ಎರಡು ಫುಟ್&zwnj;ಬಾಲ್ ಮೈದಾನಗಳಷ್ಟು ದೊಡ್ಡದಿದೆ. ಚಂದ್ರನ ಮೇಲೆ ಈ ಮಟ್ಟದ ದೈತ್ಯ ಪ್ರಭಾವದ ಘರ್ಷಣೆಗಳು ಪ್ರತಿಯೊಂದು ಶತಮಾನಕ್ಕೆ ಒಮ್ಮೆ ಇಲ್ಲವೇ ಅದಕ್ಕಿಂತಲೂ ಕಡಿಮೆ ಬಾರಿ ಸಂಭವಿಸುತ್ತವೆ ಎಂದು ನಾಸಾ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.&lt;/p&gt;&lt;h2&gt;ಆವಿಷ್ಕಾರ ನಡೆದಿದ್ದು ಹೇಗೆ?&lt;/h2&gt;&lt;p&gt;ಇಂಟ್ಯೂಟಿವ್ ಮೆಷಿನ್ಸ್&zwnj;ನ ಇಮೇಜ್ ಪ್ರೊಸೆಸಿಂಗ್ ತಜ್ಞ ರಾಬರ್ಟ್ ವ್ಯಾಗ್ನರ್, ಎಲ್&zwnj;ಆರ್&zwnj;ಒ ಕ್ಯಾಮೆರಾ ದತ್ತಾಂಶಗಳನ್ನು ಚೆಕ್ ಮಾಡುವಾಗ, ಚಂದ್ರನ ಪ್ರಪಂಚದ ನಕ್ಷೆಯಲ್ಲಿ ಗಾಢವಾದ ಪ್ರಭಾವಲಯದಿಂದ ಸುತ್ತುವರೆದಿರುವ ಅಸಾಮಾನ್ಯ ಪ್ರಕಾಶಮಾನವಾದ ಜಾಗವನ್ನು ಗಮನಿಸಿದರು. ನಂತರ ಡಿಕ್ಕಿಗೂ ಮುನ್ನ ಹಾಗೂ ನಂತರದ ಹೈ-ರೆಸಲ್ಯೂಶನ್ ಚಿತ್ರಗಳನ್ನು ಹೋಲಿಸಿ ನೋಡಿದಾಗ, ಕ್ಷುದ್ರಗ್ರಹ ಡಿಕ್ಕಿಯಿಂದ ಚೆಲ್ಲಾಪಿಲ್ಲಿಯಾದ ಶಿಲಾಖಂಡರಾಶಿಗಳು ಮತ್ತು ಬೃಹತ್ ಕುಳಿ ಕಾಣಿಸಿತು. ಕಳೆದ 17 ವರ್ಷಗಳಿಂದ ಚಂದ್ರನ ಕಕ್ಷೆಯಲ್ಲಿದ್ದು ಅಧ್ಯಯನ ನಡೆಸುತ್ತಿರುವ ಎಲ್&zwnj;ಆರ್&zwnj;ಒ, ಇದುವರೆಗೆ 1,000ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಪ್ರಭಾವದ ಕುಳಿಗಳನ್ನು ಪತ್ತೆ ಹಚ್ಚಿದೆ.&lt;/p&gt;&lt;h2&gt;ಕುಳಿಯ ಸುತ್ತ ಉಂಟಾದ ಹವಾಮಾನ ಬದಲಾವಣೆ&lt;/h2&gt;&lt;p&gt;ಚಂದ್ರನಿಗೆ ಯಾವುದೇ ವಾತಾವರಣವಿಲ್ಲದಿರುವುದರಿಂದ, ಆಕಾಶದಿಂದ ಬರುವ ಕ್ಷುದ್ರಗ್ರಹಗಳು ನೇರವಾಗಿ ಅತ್ಯಂತ ವೇಗದಲ್ಲಿ ಬಂದು ಮೇಲ್ಮೈಗೆ ಅಪ್ಪಳಿಸುತ್ತವೆ. ಎಲ್&zwnj;ಆರ್&zwnj;ಒ ದ 'ಡಿವೈನರ್' ಉಪಕರಣದ ದತ್ತಾಂಶಗಳ ಪ್ರಕಾರ, 'ಮೆಕ್&zwnj;ಗೆಚಿನ್' ಕುಳಿಯ ಸುತ್ತಲಿನ ಸುಮಾರು 4 ಮೈಲಿ ವ್ಯಾಪ್ತಿಯಲ್ಲಿ ಉಷ್ಣಾಂಶ ತೀವ್ರವಾಗಿ ಇಳಿಕೆಯಾಗಿದೆ. ರಾತ್ರಿ ವೇಳೆಯಲ್ಲಿ ಈ ಭಾಗವು ಸುತ್ತಮುತ್ತಲಿನ ಭೂಪ್ರದೇಶಕ್ಕಿಂತ 9 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ಇರುತ್ತದೆ. ಘರ್ಷಣೆಯ ತೀವ್ರತೆಗೆ ಚಂದ್ರನ ಮಣ್ಣು (ರೆಗೋಲಿತ್) ಹಗುರವಾಗಿ, ಶಾಖವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.&lt;/p&gt;&lt;p&gt;ಈ ಅಪರೂಪದ ಸಂಶೋಧನೆಯು ಭವಿಷ್ಯದಲ್ಲಿ ಚಂದ್ರನ ಮೇಲೆ ಇಳಿಯಲಿರುವ ಮಾನವಸಹಿತ ನೌಕೆಗಳು, ರೋವರ್&zwnj;ಗಳು ಮತ್ತು ಸಂಶೋಧನಾ ಕೇಂದ್ರಗಳ ಸುರಕ್ಷತೆಗೆ ಅತ್ಯಂತ ನಿರ್ಣಾಯಕ ಮಾಹಿತಿಯನ್ನು ನೀಡಿದಂತಾಗಿದೆ.&lt;/p&gt;]]></content:encoded>
            <category>science</category>
            <dc:creator>Gowthami K</dc:creator>
            <atom:link href="https://kannada.asianetnews.com/science/nasa-s-lro-discovers-massive-new-impact-crater-mcgetchin-on-the-moon-gdp/articleshow-79slywv"/>
        </item>
        <item>
            <title><![CDATA[Pak: ಮಕ್ಕಾ ಒಪ್ಪಂದದಲ್ಲಿದೆ ಬಿಗ್ ಲೂಪ್‌ಹೋಲ್; ಮುಸ್ಸಿಂ ಒಕ್ಕೂಟದ ಬೆನ್ನಿಗೆ ಇರಿದು ಕಳ್ಳದಾರಿ ಹಿಡಿದ ಪಾಕ್! ರಣಭೂಮಿಯಲ್ಲಿ ಏಕಾಂಗಿಯಾದ ಸೌದಿ!]]></title>
            <link>https://kannada.asianetnews.com/science/mecca-pact-saudi-arabia-pakistan-military-support-houthi-attacks-asim-munir-iran-fear-double-game-bmk/articleshow-874kgek</link>
            <guid isPermaLink="true">https://kannada.asianetnews.com/science/mecca-pact-saudi-arabia-pakistan-military-support-houthi-attacks-asim-munir-iran-fear-double-game-bmk/articleshow-874kgek</guid>
            <pubDate>Thu, 10 Sep 2026 20:00:06 +0530</pubDate>
            <description><![CDATA[&lt;p&gt;ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನದ ನಡುವಿನ 'ಮಕ್ಕಾ ಒಪ್ಪಂದ'ದ ಅನ್ವಯ, ಸೌದಿಯ ರಕ್ಷಣೆಗೆ ಪಾಕಿಸ್ತಾನ ಬದ್ಧವಾಗಿತ್ತು. ಆದರೆ, ಯೆಮೆನ್&zwnj;ನ ಹೌತಿ ಬಂಡುಕೋರರು ಸೌದಿ ಮೇಲೆ ದಾಳಿ ನಡೆಸಿದಾಗ, ಪಾಕಿಸ್ತಾನವು ಒಪ್ಪಂದದ ಲೋಪದೋಷಗಳನ್ನು ಬಳಸಿ ಸೇನಾ ನೆರವು ನೀಡಲು ನಿರಾಕರಿಸಿದೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25vk37wfxd3aq9h9k21vabp,imgname-pakistan-1-1789050588412.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಡಿದ ಮಾತನ್ನು ತಪ್ಪುವುದು ಮತ್ತು ಸಂದರ್ಭ ಬಂದಾಗ ಬೆನ್ನು ತೋರಿಸಿ ಓಡುವುದು ಪಾಕಿಸ್ತಾನಕ್ಕೆ ಹೊಸದೇನಲ್ಲ. ಜಗತ್ತಿಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿ, ಸಮಯ ಬಂದಾಗ ಜಾರಿಕೊಳ್ಳುವುದರಲ್ಲಿ ತಾನು ಎತ್ತಿದ ಕೈ ಎಂಬುದನ್ನು ಇಸ್ಲಾಮಾಬಾದ್ ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ದೇಶಗಳು ಸೇರಿ ಅದ್ದೂರಿಯಾಗಿ ಸಹಿ ಹಾಕಿದ್ದ ಮಕ್ಕಾ ರಕ್ಷಣಾ ಒಪ್ಪಂದ (Mecca Pact) ಇದಕ್ಕೆ ತಾಜಾ ಉದಾಹರಣೆಯಾಗಿದೆ. ಒಪ್ಪಂದಕ್ಕೆ ಸಹಿ ಹಾಕುವಾಗ ದೊಡ್ಡ ಮಟ್ಟದ ಬಿಲ್ಡಪ್ ನೀಡಿದ್ದ ಪಾಕಿಸ್ತಾನ, ಈಗ ಸೌದಿ ಅರೇಬಿಯಾಕ್ಕೆ ಸೇನಾ ನೆರವಿನ ಅಗತ್ಯ ಬಂದಾಗ ಕಳ್ಳಬಾಗಿಲ ಮೂಲಕ ಕಾಲ್ಕಿತ್ತಿದೆ.&lt;/p&gt;&lt;h2&gt;&lt;strong&gt;ಏನಿದು &lsquo;ಮಕ್ಕಾ ಒಪ್ಪಂದ&rsquo; ಮತ್ತು ಪಾಕಿಸ್ತಾನದ ಡಬಲ್ ಗೇಮ್?&lt;/strong&gt;&lt;/h2&gt;&lt;p&gt;ಕಳೆದ ತಿಂಗಳು ಪವಿತ್ರ ಭೂಮಿ ಮಕ್ಕಾದಲ್ಲಿ ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ದೇಶಗಳು ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ವೇಳೆ ಇಸ್ಲಾಮಾಬಾದ್&zwnj;ನಲ್ಲಿ ಭಾರಿ ವಿಜೃಂಭಣೆಯ ಪ್ರಚಾರ ಕೈಗೊಳ್ಳಲಾಗಿತ್ತು. ಒಂದು ದೇಶದ ಮೇಲಿನ ದಾಳಿಯನ್ನು ಮೂರೂ ದೇಶಗಳ ಮೇಲಿನ ಯುದ್ಧ ಘೋಷಣೆ ಎಂದು ಪರಿಗಣಿಸಲಾಗುವುದು. ಮೂರು ದೇಶಗಳು ಸೇರಿ ಜಂಟಿಯಾಗಿ ಶತ್ರುವನ್ನು ಮೆಟ್ಟಿಮಿಟ್ಟಲಿವೆ. ಇದು ಮುಸ್ಲಿಂ ಜಗತ್ತಿನ ಸಾಂಪ್ರದಾಯಿಕ 'ನ್ಯಾಟೋ' (NATO)&quot; ಎಂದೆಲ್ಲಾ ಪಾಕಿಸ್ತಾನದ ನಾಯಕರು ಕೊಚ್ಚಿಕೊಂಡಿದ್ದರು.&lt;/p&gt;&lt;h3&gt;&lt;strong&gt;ಕಾಲ್ಕಿತ್ತ ಅಸಿಮ್&zwnj; ಮುನೀರ್!&lt;/strong&gt;&lt;/h3&gt;&lt;p&gt;ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಪ್ರಮುಖ ಟಿವಿ ಚಾನೆಲ್&zwnj;ಗಳಲ್ಲಿ ಭಾಗವಹಿಸಿ, ಸೌದಿ ಅರೇಬಿಯಾದ ನೆಲಕ್ಕೆ ತೊಂದರೆಯಾದರೆ ಅಥವಾ ಯೆಮೆನ್ ಯುದ್ಧದ ಬಿಸಿ ಸೌದಿಗೆ ತಟ್ಟಿದರೆ, ನಮ್ಮ ಪಡೆಗಳು ತಕ್ಷಣವೇ ರಂಗಕ್ಕಿಳಿಯಲಿವೆ. ಸೌದಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಗಂಭೀರ ಮಾತುಗಳನ್ನಾಡಿದ್ದರು. ಆದರೆ, ನಿಜವಾದ ಪರೀಕ್ಷೆಯ ಸಮಯ ಬಂದಾಗ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ರಾಜತಾಂತ್ರಿಕರು ಒಪ್ಪಂದದಲ್ಲಿದ್ದ ಒಂದು 'ಲೂಪ್&zwnj;ಹೋಲ್' (ಲೋಪದೋಷ) ಬಳಸಿ ಸುಲಭವಾಗಿ ಕಾಲ್ಕಿತ್ತಿದ್ದಾರೆ.&lt;/p&gt;&lt;h3&gt;&lt;strong&gt;ಸೌದಿಗೆ ಹೌತಿಗಳ ದಾಳಿ; ಬೆನ್ನು ತೋರಿಸಿದ ಇಸ್ಲಾಮಾಬಾದ್!&lt;/strong&gt;&lt;/h3&gt;&lt;p&gt;ಇತ್ತೀಚೆಗೆ ಯೆಮೆನ್&zwnj;ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಪ್ರಮುಖ ನಗರಗಳು ಮತ್ತು ಇಂಧನ ಸಂಸ್ಕರಣಾ ಘಟಕಗಳ ಮೇಲೆ ಭೀಕರ ಕ್ಷಿಪಣಿ ದಾಳಿಗಳನ್ನು ನಡೆಸಿದರು. ಈ ಹಂತದಲ್ಲಿ 'ಮಕ್ಕಾ ಒಪ್ಪಂದ'ದ ಪ್ರಕಾರ ಪಾಕಿಸ್ತಾನ ತನ್ನ ಸೈನ್ಯವನ್ನು ಸೌದಿಯ ರಕ್ಷಣೆಗೆ ಕಳುಹಿಸುತ್ತದೆ ಎಂದು ಇಡೀ ಜಗತ್ತು ನಿರೀಕ್ಷಿಸಿತ್ತು. ಆದರೆ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಸಜ್ಜದ್ ಹೈದರ್ ಖಾನ್, &quot;ಸೌದಿ ಅರೇಬಿಯಾದ ನೆರವಿಗೆ ಸೈನಿಕರನ್ನು ಕಳುಹಿಸುವ ಯಾವುದೇ ಚರ್ಚೆಗಳು ಪ್ರಸ್ತುತ ನಡೆಯುತ್ತಿಲ್ಲ, ಸೂಕ್ತ ಸಮಯ ಬಂದಾಗ ನೋಡೋಣ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ಸಂಪೂರ್ಣವಾಗಿ ನುಣುಚಿಕೊಂಡಿದ್ದಾರೆ. ಅತ್ತ ಸೌದಿ ಮೇಲೆ ಕ್ಷಿಪಣಿಗಳು ಬೀಳುತ್ತಿದ್ದರೂ, ರಕ್ಷಣಾ ಸಚಿವ ಖವಾಜಾ ಆಸಿಫ್ ತಮಗೆ ಯಾವುದೂ ತಿಳಿದೇ ಇಲ್ಲ ಎಂಬಂತೆ ನಟಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಪಾಕಿಸ್ತಾನಕ್ಕೆ ಕಾಡುತ್ತಿರುವ ನಿಜವಾದ ಭಯವೇನು?&lt;/strong&gt;&lt;/h3&gt;&lt;p&gt;ಪಾಕಿಸ್ತಾನ ಸೌದಿ ಅರೇಬಿಯಾವನ್ನು ಬಿಟ್ಟು ಓಡಲು ಪ್ರಮುಖವಾಗಿ ಮೂರು ಕಾರಣಗಳಿವೆ;&lt;/p&gt;&lt;p&gt;&lt;strong&gt;ಇರಾನ್ ಕೋಪದ ಭಯ;&lt;/strong&gt; ಯೆಮೆನ್&zwnj;ನ ಹೌತಿ ಬಂಡುಕೋರರಿಗೆ ಇರಾನ್ ಸಂಪೂರ್ಣ ಬೆಂಬಲ ನೀಡುತ್ತಿದೆ. ಪಾಕಿಸ್ತಾನವು ಇರಾನ್ ಜೊತೆ ಸುದೀರ್ಘ ಗಡಿ ಹಂಚಿಕೊಂಡಿದೆ. ಹೌತಿಗಳ ವಿರುದ್ಧ ಸೌದಿಗೆ ಬೆಂಬಲವಾಗಿ ನಿಂತರೆ, ಇರಾನ್&zwnj;ನೊಂದಿಗೆ ನೇರ ವೈರತ್ವ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯ ಪಾಕಿಸ್ತಾನಕ್ಕಿದೆ.&lt;/p&gt;&lt;p&gt;&lt;strong&gt;ಆರ್ಥಿಕ ದಿವಾಳಿತನ;&lt;/strong&gt; ಈಗಾಗಲೇ ತೀವ್ರ ಬಡತನ ಮತ್ತು ಆಂತರಿಕ ಭಯೋತ್ಪಾದನೆಯಿಂದ ನಲುಗುತ್ತಿರುವ ಪಾಕಿಸ್ತಾನಕ್ಕೆ, ಮತ್ತೊಂದು ವಿದೇಶಿ ಯುದ್ಧದಲ್ಲಿ ಭಾಗಿಯಾಗುವಷ್ಟು ಆರ್ಥಿಕ ಹಾಗೂ ಸೈನಿಕ ಸಾಮರ್ಥ್ಯವಿಲ್ಲ.&lt;/p&gt;&lt;p&gt;&lt;strong&gt;ಅಸಿಮ್ ಮುನೀರ್ ತಂತ್ರ;&lt;/strong&gt; ಜನರಲ್ ಅಸಿಮ್ ಮುನೀರ್ ತಮ್ಮ ದೇಶವನ್ನು ಪ್ರಾದೇಶಿಕ ಯುದ್ಧಕ್ಕೆ ತಳ್ಳಲು ಬಯಸುವುದಿಲ್ಲ. ಹೀಗಾಗಿ, ಇರಾನ್&zwnj;ಗೆ ತೆರೆಮರೆಯಲ್ಲಿ ಮನವಿ ಮಾಡುತ್ತಾ, ಯುದ್ಧಭೂಮಿಯಿಂದ ದೂರ ಉಳಿದಿದ್ದಾರೆ.&lt;/p&gt;&lt;h3&gt;&lt;strong&gt;ಮುಸ್ಲಿಂ ಬ್ರದರ್&zwnj;ಹುಡ್&zwnj;ಗೆ ಆದ ಅನ್ಯಾಯ!&lt;/strong&gt;&lt;/h3&gt;&lt;p&gt;ಪಾಕಿಸ್ತಾನಕ್ಕೆ ಉಚಿತ ಅಥವಾ ಅಗ್ಗದ ದರದಲ್ಲಿ ತೈಲ ಬೇಕಾದಾಗ, ಶತಕೋಟಿ ಡಾಲರ್ ಸಾಲ ಬೇಕಾದಾಗ ಅಥವಾ ಆರ್ಥಿಕ ನೆರವಿನ ಅಗತ್ಯವಿದ್ದಾಗ ಮೊದಲು ಓಡುವುದು ಸೌದಿ ಅರೇಬಿಯಾದ ಬಳಿಗೇ. ಆದರೆ, ಸೌದಿ ಅರೇಬಿಯಾ ತನ್ನ ಭದ್ರತೆಗಾಗಿ ಪಾಕ್ ಸೈನ್ಯದ ನೆರವು ಕೇಳಿದಾಗ ಇಸ್ಲಾಮಾಬಾದ್ ನೆಪಗಳನ್ನು ಹೇಳಿ ಕಾಲ್ಕೀಳುತ್ತಿದೆ.&lt;/p&gt;&lt;h3&gt;&lt;strong&gt;ಮುಸ್ಸಿಂ ಒಕ್ಕೂಟದ ಭಾವನೆಗೆ ದಕ್ಕೆ!&lt;/strong&gt;&lt;/h3&gt;&lt;p&gt;ಪಾಕಿಸ್ತಾನದ ಈ ಮೋಸದ ಆಟದಿಂದಾಗಿ ಮುಸ್ಲಿಂ ಒಕ್ಕೂಟ ಹಾಗೂ 'ಉಮ್ಮಾ' ಭಾವನೆಗೆ ಭಾರಿ ಧಕ್ಕೆಯಾಗಿದೆ. ಪ್ರಸ್ತುತ ಸೌದಿ ಅರೇಬಿಯಾವನ್ನು ಹೌತಿಗಳ ದಾಳಿಯಿಂದ ರಕ್ಷಿಸಲು ಯಾರೂ ಇಲ್ಲದಂತಾಗಿದ್ದು, ಪಾಕಿಸ್ತಾನದ ಈ 'ಹಿಂಬಾಗಿಲ ಪಲಾಯನ' ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.&lt;/p&gt;]]></content:encoded>
            <category>science</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/science/mecca-pact-saudi-arabia-pakistan-military-support-houthi-attacks-asim-munir-iran-fear-double-game-bmk/articleshow-874kgek"/>
        </item>
        <item>
            <title><![CDATA[7 ವರ್ಷಗಳ ಬಳಿಕ ಬಯಲಾದ ಹೊಸ ಪ್ರಭೇದದ ಮೊಟ್ಟೆ ತಿನ್ನುವ ನಿಗೂಢ ಹಾವಿನ ರಹಸ್ಯ!]]></title>
            <link>https://kannada.asianetnews.com/science/scientists-discover-new-snake-species-dasypeltis-albigularis-in-ethiopia-s-harenna-forest-gdp/articleshow-b7u8glv</link>
            <guid isPermaLink="true">https://kannada.asianetnews.com/science/scientists-discover-new-snake-species-dasypeltis-albigularis-in-ethiopia-s-harenna-forest-gdp/articleshow-b7u8glv</guid>
            <pubDate>Fri, 18 Sep 2026 15:15:31 +0530</pubDate>
            <description><![CDATA[ಇಥಿಯೋಪಿಯಾದ ಹರೆನ್ನಾ ಅರಣ್ಯದಲ್ಲಿ ವಿಜ್ಞಾನಿಗಳು 'ಡ್ಯಾಸಿಪೆಲ್ಟಿಸ್ ಅಲ್ಬಿಗುಲಾರಿಸ್' ಎಂಬ ಹೊಸ ಪ್ರಭೇದದ ಹಾವನ್ನು ಪತ್ತೆಹಚ್ಚಿದ್ದಾರೆ. ಕೇವಲ ಪಕ್ಷಿಗಳ ಮೊಟ್ಟೆಗಳನ್ನು ನುಂಗಿ, ದೇಹದೊಳಗೇ ಚಿಪ್ಪು ಒಡೆದು ತಿನ್ನುವ ವಿಶಿಷ್ಟ ಆಹಾರ ಪದ್ಧತಿಯನ್ನು ಇದು ಹೊಂದಿದೆ. ಸತತ ಏಳು ವರ್ಷಗಳ ಸಂಶೋಧನೆಯ ನಂತರ ಈ ಬಿಳಿ ಗಂಟಲಿನ ಹಾವಿನ ರಹಸ್ಯ ಜಗತ್ತಿಗೆ ತಿಳಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2sy22jcv3hv21qkj11f8cjb,imgname-thhh-1789724265035.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜ್ಞಾನ ಲೋಕದಲ್ಲಿ ಮತ್ತೊಂದು ಕುತೂಹಲಕಾರಿ ಆವಿಷ್ಕಾರ ನಡೆದಿದೆ. ಇಥಿಯೋಪಿಯಾದ ದಟ್ಟವಾದ ಹರೆನ್ನಾ ಅರಣ್ಯದಲ್ಲಿ ವಿಜ್ಞಾನಿಗಳು ಸಂಪೂರ್ಣವಾಗಿ ಹೊಸ ಪ್ರಭೇದದ ಹಾವನ್ನು ಪತ್ತೆಹಚ್ಚಿದ್ದಾರೆ. ಮೊದಲ ನೋಟಕ್ಕೆ ಇದು ಸಾಮಾನ್ಯ ಹಾವಿನಂತೆ ಕಂಡರೂ, ಸುದೀರ್ಘ ಏಳು ವರ್ಷಗಳ ನಿರಂತರ ತನಿಖೆ, ಕ್ಷೇತ್ರ ವೀಕ್ಷಣೆ, ಜೀನ್&zwnj; ವಿಶ್ಲೇಷಣೆ ಮತ್ತು ಅಧ್ಯಯನಗಳ ನಂತರ ಇದು ಜಗತ್ತಿಗೆ ಇದುವರೆಗೂ ತಿಳಿಯದಿರುವ ಹೊಸ ಪ್ರಭೇದ ಎಂದು ದೃಢಪಟ್ಟಿದೆ.&lt;/p&gt;&lt;p&gt;ಆರ್ಥರ್ ಟ್ಯುಟೆಂಕೊ, ಟಿಮ್ ಎಲ್. ಹೆಲ್ಲರ್ ಮತ್ತು ಮೈಕೆಲ್ ಎಫ್. ಬೇಟ್ಸ್ ಎಂಬ ಸಂಶೋಧಕರ ತಂಡವು ತಮ್ಮ ಈ ಮಹತ್ವದ ಸಂಶೋಧನೆಯನ್ನು ಅಂತರರಾಷ್ಟ್ರೀಯ ಮುಕ್ತ-ಪ್ರವೇಶ ಜರ್ನಲ್ 'ಹರ್ಪೆಟೊಜೋವಾ' ದಲ್ಲಿ ಆಗಸ್ಟ್ 27, 2026 ರಂದು ಅಧಿಕೃತವಾಗಿ ಪ್ರಕಟಿಸಿದೆ.&lt;/p&gt;&lt;h2&gt;ಹೊಸ ಹೆಸರಿನ ಹಿನ್ನೆಲೆ&lt;/h2&gt;&lt;p&gt;ಈ ಹೊಸ ಪ್ರಭೇದಕ್ಕೆ ವೈಜ್ಞಾನಿಕವಾಗಿ 'ಡ್ಯಾಸಿಪೆಲ್ಟಿಸ್ ಅಲ್ಬಿಗುಲಾರಿಸ್' (Dasypeltis albigularis) ಎಂದು ಹೆಸರಿಸಲಾಗಿದ್ದು, ಇದನ್ನು ಸಾಮಾನ್ಯವಾಗಿ 'ಬಿಳಿ ಗಂಟಲಿನ ಮೊಟ್ಟೆ ಭಕ್ಷಕ' (White-throated egg-eater) ಎಂದು ಕರೆಯಲಾಗುತ್ತದೆ. ಇದರ ಗಂಟಲು ಹಾಗೂ ಹೊಟ್ಟೆಯ ಮುಂಭಾಗವು ಸಂಪೂರ್ಣ ಬಿಳಿ ಬಣ್ಣದಿಂದ ಕೂಡಿರುವುದರಿಂದ ಈ ಹೆಸರು ನೀಡಲಾಗಿದೆ.&lt;/p&gt;&lt;h2&gt;ಆವಿಷ್ಕಾರದ ಕುತೂಹಲಕಾರಿ ಹಾದಿ (2019 - 2026)&lt;/h2&gt;&lt;p&gt;ಈ ಆವಿಷ್ಕಾರದ ಪ್ರಯಾಣ ಪ್ರಾರಂಭವಾಗಿದ್ದು 2019 ರಲ್ಲಿ. ಸಂಶೋಧಕ ಆರ್ಥರ್ ಟ್ಯುಟೆಂಕೊ ಅವರು ಹರೆನ್ನಾ ಅರಣ್ಯದಿಂದ ಒಂದು ಸಣ್ಣ ಹೆಣ್ಣು ಹಾವನ್ನು ಪಡೆದುಕೊಂಡಿದ್ದರು. ಆರಂಭದಲ್ಲಿ ಇದನ್ನು 'ಮಾಂಟೇನ್ ಮೊಟ್ಟೆ-ಭಕ್ಷಕ' ಎಂದೇ ಕರೆಯಲ್ಪಡುವ ಡ್ಯಾಸಿಪೆಲ್ಟಿಸ್ ಅಟ್ರಾ (Dasypeltis atra) ಪ್ರಭೇದಕ್ಕೆ ಸೇರಿದ್ದು ಎಂದು ಊಹಿಸಲಾಗಿತ್ತು.&lt;/p&gt;&lt;p&gt;ಆದರೆ, ಈ ಹಾವು ಬೆಳೆದು ದೊಡ್ಡದಾಗುತ್ತಿದ್ದಂತೆ ಅದರ ಭೌತಿಕ ಗುಣಲಕ್ಷಣಗಳಲ್ಲಿ ಬದಲಾವಣೆಗಳು ಕಾಣಿಸಿಕೊಂಡವು. ಇದರಿಂದ ಅನುಮಾನಗೊಂಡ ವಿಜ್ಞಾನಿಗಳು ಹರೆನ್ನಾ ಅರಣ್ಯದ ಗಂಡು ಮತ್ತು ಹೆಣ್ಣು ಸೇರಿದಂತೆ ಒಟ್ಟು 16 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದರು. ಮೈಟೊಕಾಂಡ್ರಿಯಲ್ ಮತ್ತು ನ್ಯೂಕ್ಲಿಯರ್ ಮಾರ್ಕರ್&zwnj;ಗಳನ್ನು ಬಳಸಿ ಆನುವಂಶಿಕ ತನಿಖೆ ನಡೆಸಿದಾಗ, ಇದು D. atra ನಿಕಟ ಸಂಬಂಧಿಯಾಗಿದ್ದರೂ, ಸಂಪೂರ್ಣವಾಗಿ ಪ್ರತ್ಯೇಕವಾದ ವಿಕಸನೀಯ ವಂಶಾವಳಿಗೆ ಸೇರಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಸಂಶೋಧನೆಯ ಭಾಗವಾಗಿ, 2022 ರಲ್ಲಿ ಹರೆನ್ನಾ ಅರಣ್ಯದ ಹೆಣ್ಣು ಹಾವನ್ನು ಮೌಂಟ್ ಕೀನ್ಯಾದಿಂದ ತಂದ ಗಂಡು D. atra ಜೊತೆ ಜೋಡಿಸಿ ಸಂತಾನೋತ್ಪತ್ತಿ ಅಧ್ಯಯನ ನಡೆಸಲಾಯಿತು. ಇದರಿಂದ ಜನಿಸಿದ ಮರಿಗಳು ಎರಡೂ ತಳಿಗಳ ಗುಣಲಕ್ಷಣಗಳನ್ನು ಹೊಂದಿದ್ದವು. ಈ ಎಲ್ಲಾ ಸಾಕ್ಷ್ಯಗಳನ್ನು ಕ್ರೋಢೀಕರಿಸಿ, ಏಳು ವರ್ಷಗಳ ಸುದೀರ್ಘ ಅಧ್ಯಯನದ ನಂತರ ಇದನ್ನು ಹೊಸ ಜಾತಿ ಎಂದು ವಿಜ್ಞಾನಿಗಳು ಘೋಷಿಸಿದರು.&lt;/p&gt;&lt;h2&gt;ದೈಹಿಕ ರಚನೆ ಮತ್ತು ಬಣ್ಣ&lt;/h2&gt;&lt;p&gt;'ಡ್ಯಾಸಿಪೆಲ್ಟಿಸ್ ಅಲ್ಬಿಗುಲಾರಿಸ್' ಮಧ್ಯಮ ಗಾತ್ರದ ಹಾವಾಗಿದೆ. ಹೆಣ್ಣು ಹಾವುಗಳು ಸುಮಾರು 92 ಸೆಂ.ಮೀ. ಉದ್ದ ಬೆಳೆದರೆ, ಗಂಡು ಹಾವುಗಳು 60 ಸೆಂ.ಮೀ. ಗಿಂತ ಚಿಕ್ಕದಾಗಿರುತ್ತವೆ. ಹೆಚ್ಚಿನ ಹಾವುಗಳ ಮೇಲ್ಭಾಗ ಗಾಢ ಬೂದು ಅಥವಾ ಕಪ್ಪು ಬಣ್ಣದಲ್ಲಿರುತ್ತದೆ. ಕೆಲವು ಕಂದು ಅಥವಾ ಕೆಂಪು-ಕಂದು ಬಣ್ಣ ಹೊಂದಿದ್ದು, ಸಣ್ಣ ಬಿಳಿ ಚುಕ್ಕೆಗಳನ್ನು ಹೊಂದಿರುತ್ತವೆ. ಇದರ ಮಾಪಕಗಳ ನಡುವಿನ ಚರ್ಮವು ಮಸುಕಾಗಿದ್ದು, ವಯಸ್ಕ ಹಾವುಗಳಲ್ಲಿ ನೀಲಿ ಛಾಯೆಯಲ್ಲಿ ಕಾಣಿಸುತ್ತದೆ. ಗಂಟಲಿನ ಭಾಗವು ಸಂಪೂರ್ಣ ಬಿಳಿಯಾಗಿರುತ್ತದೆ.&lt;/p&gt;&lt;h2&gt;ವಿಶಿಷ್ಟ ಆಹಾರ ಪದ್ಧತಿ: ದೇಹದೊಳಗೇ ಇದೆ 'ಮೊಟ್ಟೆ ಒಡೆಯುವ ಯಂತ್ರ'!&lt;/h2&gt;&lt;p&gt;ಈ ಹಾವು ಪಕ್ಷಿಗಳ ಮೊಟ್ಟೆಗಳನ್ನು ಮಾತ್ರ ಸೇವಿಸುವ ವಿಶೇಷ ಆಹಾರಕ್ರಮಕ್ಕೆ ರೂಪಾಂತರಗೊಂಡಿದೆ. ಇದು ಬೇಟೆಯನ್ನು ಕೊಂದು ನುಂಗುವುದಿಲ್ಲ. ಬದಲಾಗಿ ಮರಗಳ ಮೇಲಿರುವ ಪಕ್ಷಿಗಳ ಗೂಡುಗಳನ್ನು ಹುಡುಕಿ ಮೊಟ್ಟೆಗಳನ್ನು ಸಂಪೂರ್ಣವಾಗಿ ನುಂಗುತ್ತದೆ. ಹಾವಿನ ಬೆನ್ನುಮೂಳೆಯ ಕೆಳಭಾಗದಲ್ಲಿ ವಿಶೇಷವಾದ ಎಲುಬಿನ ಮುಂಚಾಚಿರುವಿಕೆಗಳಿವೆ. ಹಾವು ಮೊಟ್ಟೆಯನ್ನು ನುಂಗಿ ತನ್ನ ದೇಹವನ್ನು ಸಂಕುಚಿತಗೊಳಿಸಿದಾಗ, ಈ ಎಲುಬುಗಳ ಒತ್ತಡಕ್ಕೆ ಸಿಲುಕಿ ಮೊಟ್ಟೆಯ ಚಿಪ್ಪು ದೇಹದ ಒಳಗಡೆಯೇ ಒಡೆಯುತ್ತದೆ.&lt;/p&gt;&lt;p&gt;ನಂತರ ಹಾವು ಮೊಟ್ಟೆಯೊಳಗಿನ ಪೌಷ್ಟಿಕ ದ್ರವವನ್ನು ಮಾತ್ರ ನುಂಗಿ, ಪುಡಿಚೂರಾದ ಚಿಪ್ಪನ್ನು ವಾಂತಿ ಮಾಡುವ ಮೂಲಕ ಹೊರಹಾಕುತ್ತದೆ. ದೊಡ್ಡ ಹೆಣ್ಣು ಹಾವುಗಳು ಸಣ್ಣ ಕೋಳಿ ಮೊಟ್ಟೆಯಷ್ಟಿರುವ ಪಕ್ಷಿ ಮೊಟ್ಟೆಗಳನ್ನೂ ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲವು.&lt;/p&gt;&lt;p&gt;ಇತರ 'ಡ್ಯಾಸಿಪೆಲ್ಟಿಸ್' ಹಾವುಗಳಂತೆಯೇ ಇದು ಕೂಡ ಸಾದಾ ಬಣ್ಣವನ್ನು ಹೊಂದಿರುವುದರಿಂದ ಇಷ್ಟೂ ದಿನಗಳ ಕಾಲ ವಿಜ್ಞಾನಿಗಳ ಕಣ್ಣಿಗೆ ಬೀಳದೆ ಅಡಗಿತ್ತು. ಈ ಆವಿಷ್ಕಾರವು ಪ್ರಕೃತಿಯಲ್ಲಿ ಇಂದಿಗೂ ನಮಗೆ ತಿಳಿಯದ ಅನೇಕ ಜೀವ ವೈವಿಧ್ಯಗಳು ಅಡಗಿವೆ ಎಂಬುದನ್ನು ನೆನಪಿಸುತ್ತದೆ.&lt;/p&gt;]]></content:encoded>
            <category>science</category>
            <dc:creator>Gowthami K</dc:creator>
            <atom:link href="https://kannada.asianetnews.com/science/scientists-discover-new-snake-species-dasypeltis-albigularis-in-ethiopia-s-harenna-forest-gdp/articleshow-b7u8glv"/>
        </item>
        <item>
            <title><![CDATA[ಪದವಿ ಇಲ್ಲ, ಪ್ರಯೋಗಾಲಯವೂ ಇಲ್ಲ; 23 ಸಸ್ಯಗಳ ಪತ್ತೆ ಮಾಡಿದ ‘ಬರಿಗಾಲಿನ ವಿಜ್ಞಾನಿ’!]]></title>
            <link>https://kannada.asianetnews.com/science/he-left-school-early-then-discovered-23-plants-meet-keralas-barefoot-scientist-salim-pichan/articleshow-c3n8pwn</link>
            <guid isPermaLink="true">https://kannada.asianetnews.com/science/he-left-school-early-then-discovered-23-plants-meet-keralas-barefoot-scientist-salim-pichan/articleshow-c3n8pwn</guid>
            <pubDate>Sat, 12 Sep 2026 16:12:29 +0530</pubDate>
            <description><![CDATA[&lt;p&gt;ಶಾಲಾ ಶಿಕ್ಷಣವನ್ನು ಬೇಗನೇ ಮುಗಿಸಿದ ಕೇರಳದ ಪಿಚನ್ ಎಂ. ಸಲೀಂ ಕಾಡನ್ನೇ ವಿಶ್ವವಿದ್ಯಾಲಯ ಮಾಡಿಕೊಂಡು ಸಸ್ಯಶಾಸ್ತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. 2,000ಕ್ಕೂ ಹೆಚ್ಚು ಸಸ್ಯಗಳ ಜ್ಞಾನ ಹೊಂದಿರುವ ಅವರು 23 ಹೊಸ ಸಸ್ಯಗಳ ಪತ್ತೆಗೆ ಕೊಡುಗೆ ನೀಡಿದ್ದಾರೆ. ಎರಡು ಸಸ್ಯಗಳಿಗೆ ಅವರ ಹೆಸರಿಡಲಾಗಿದ್ದು, ರಾಷ್ಟ್ರಪತಿಗಳಿಂದಲೂ ಗೌರವ ಪಡೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2a5hk6dbszdmbeg5y76z6jq,imgname-pichan-m-salim--a-barefoot-scientist-from-kerala--1--1789195242701.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಶಾಲೆ ಬಿಟ್ಟರೂ ಕಾಡನ್ನೇ ವಿಶ್ವವಿದ್ಯಾಲಯ ಮಾಡಿಕೊಂಡ &lsquo;ಬೇರ್&zwnj;ಫೂಟ್ ಸೈಂಟಿಸ್ಟ್&rsquo;!&lt;/strong&gt;&lt;/h2&gt;&lt;p&gt;ಕೇರಳದ ವಯನಾಡಿನ ಪಿಚನ್ ಎಂ. ಸಲೀಂ ಅವರ ಕಥೆ, ಪದವಿ ಅಥವಾ ದೊಡ್ಡ ಶೈಕ್ಷಣಿಕ ಅರ್ಹತೆಯಿಲ್ಲದಿದ್ದರೂ ಜ್ಞಾನ ಮತ್ತು ಕ್ಷೇತ್ರಾನುಭವದಿಂದ ವಿಜ್ಞಾನ ಲೋಕದಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ. ಶಾಲಾ ಶಿಕ್ಷಣವನ್ನು ಬೇಗನೇ ಮುಗಿಸಿದ ಸಲೀಂ, ಪಶ್ಚಿಮ ಘಟ್ಟಗಳ ಕಾಡುಗಳನ್ನೇ ತಮ್ಮ ವಿಶ್ವವಿದ್ಯಾಲಯವನ್ನಾಗಿ ಮಾಡಿಕೊಂಡು ಸಸ್ಯಶಾಸ್ತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;2,000ಕ್ಕೂ ಹೆಚ್ಚು ಸಸ್ಯಗಳ ವೈಜ್ಞಾನಿಕ ಹೆಸರುಗಳ ಜ್ಞಾನ&lt;/strong&gt;&lt;/h3&gt;&lt;p&gt;1997ರಲ್ಲಿ ವಯನಾಡಿನಲ್ಲಿ ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (MSSRF) ಆಯೋಜಿಸಿದ್ದ ಪ್ಯಾರಾಟ್ಯಾಕ್ಸಾನಮಿ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾದ 20 ಸ್ಥಳೀಯ ಯುವಕರಲ್ಲಿ ಸಲೀಂ ಕೂಡ ಒಬ್ಬರು. ಬಳಿಕ MSSRF ಜೊತೆ ಕೆಲಸ ಆರಂಭಿಸಿದ ಅವರು ಕೃಷಿ ಜೀವವೈವಿಧ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡರು.&lt;/p&gt;&lt;p&gt;ವರ್ಷಗಳ ಕಾಲ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಸಂಚರಿಸಿ ಸಸ್ಯಗಳನ್ನು ಗುರುತಿಸುವ ಮೂಲಕ ಸಲೀಂ 2,000ಕ್ಕೂ ಹೆಚ್ಚು ಸಸ್ಯಗಳ ವೈಜ್ಞಾನಿಕ ಹೆಸರುಗಳನ್ನು ಕಲಿತಿದ್ದಾರೆ. ಸಂಶೋಧಕರಿಗೆ ಸಸ್ಯಗಳು ಹಾಗೂ ಅವುಗಳ ಆವಾಸಸ್ಥಾನಗಳನ್ನು ಗುರುತಿಸಲು ಸಹಾಯ ಮಾಡುತ್ತಾ, 23 ಹೊಸ ಸಸ್ಯ ಪ್ರಭೇದಗಳ ಪತ್ತೆ, 10ಕ್ಕೂ ಹೆಚ್ಚು ಹೊಸ ಭೌಗೋಳಿಕ ದಾಖಲೆಗಳು ಹಾಗೂ 53ಕ್ಕೂ ಹೆಚ್ಚು ವೈಜ್ಞಾನಿಕ ಪ್ರಕಟಣೆಗಳಿಗೆ ಅವರ ಕೆಲಸ ಕೊಡುಗೆ ನೀಡಿದೆ.&lt;/p&gt;&lt;h3&gt;&lt;strong&gt;175 ವರ್ಷಗಳ ಬಳಿಕ ಅಪರೂಪದ ಸಸ್ಯದ ಮರುಪತ್ತೆ&lt;/strong&gt;&lt;/h3&gt;&lt;p&gt;ಸಲೀಂ ಅವರ ಗಮನಾರ್ಹ ಸಾಧನೆಗಳಲ್ಲಿ 175 ವರ್ಷಕ್ಕೂ ಹೆಚ್ಚು ಕಾಲ ಕಾಣೆಯಾಗಿದ್ದ Campbellia aurantiaca ಸಸ್ಯದ ಮರುಪತ್ತೆಯೂ ಒಂದು. ವಯನಾಡಿನ ತೊಲ್ಲಾಯಿರಂ ಪ್ರದೇಶದಲ್ಲಿ ಸಂಶೋಧಕರ ತಂಡದೊಂದಿಗೆ ಅವರು ಈ ಅಪರೂಪದ ಪರಾವಲಂಬಿ ಹೂವಿನ ಸಸ್ಯವನ್ನು ಪತ್ತೆಹಚ್ಚಿದರು. ಈ ಸಂಶೋಧನೆಯ ಫಲಿತಾಂಶ 2025ರಲ್ಲಿ Kew Bulletinನಲ್ಲಿ ಪ್ರಕಟವಾಯಿತು.&lt;/p&gt;&lt;h3&gt;&lt;strong&gt;ಸಲೀಂ ಹೆಸರನ್ನೇ ಪಡೆದ ಎರಡು ಸಸ್ಯಗಳು!&lt;/strong&gt;&lt;/h3&gt;&lt;p&gt;ಸಸ್ಯಶಾಸ್ತ್ರ ಕ್ಷೇತ್ರಕ್ಕೆ ಅವರ ಕೊಡುಗೆ ಎಷ್ಟರ ಮಟ್ಟಿಗೆ ಗುರುತಿಸಲ್ಪಟ್ಟಿದೆ ಎಂಬುದಕ್ಕೆ ಎರಡು ಅಪರೂಪದ ಸಸ್ಯಗಳೇ ಸಾಕ್ಷಿ. Seidenfadeniella salimii ಹಾಗೂ Impatiens salimii ಎಂಬ ಸಸ್ಯಗಳಿಗೆ ಸಲೀಂ ಅವರ ಹೆಸರನ್ನೇ ಇಡಲಾಗಿದೆ. ಇದು ಅವರ ಕ್ಷೇತ್ರಜ್ಞಾನಕ್ಕೆ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮುದಾಯ ನೀಡಿದ ಗೌರವವಾಗಿದೆ.&lt;/p&gt;&lt;h3&gt;&lt;strong&gt;ರಾಷ್ಟ್ರಪತಿಗಳಿಂದಲೂ ಗೌರವ&lt;/strong&gt;&lt;/h3&gt;&lt;p&gt;ಸಸ್ಯ ಜನಿತ ಸಂಪತ್ತಿನ ಸಂರಕ್ಷಣೆಗೆ ನೀಡಿದ ಕೊಡುಗೆಗಾಗಿ ಸಲೀಂ ಅವರಿಗೆ 2020&ndash;21ರ Plant Genome Saviour Award ದೊರೆತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023ರಲ್ಲಿ ಈ ಗೌರವವನ್ನು ಪ್ರದಾನ ಮಾಡಿದರು. ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿ ಪ್ರಶಸ್ತಿ ಹಾಗೂ ವನಮಿತ್ರ ಪ್ರಶಸ್ತಿಯೂ ಅವರಿಗೆ ಲಭಿಸಿದೆ.&lt;/p&gt;&lt;h3&gt;&lt;strong&gt;ಮನೆಯೇ ಜೀವಂತ &lsquo;ಜೀನ್ ಬ್ಯಾಂಕ್&rsquo;&lt;/strong&gt;&lt;/h3&gt;&lt;p&gt;ಸಲೀಂ ಅವರ ಸಂರಕ್ಷಣಾ ಕಾರ್ಯ ಕಾಡಿನಲ್ಲಷ್ಟೇ ಸೀಮಿತವಾಗಿಲ್ಲ. ವಯನಾಡಿನ ಅಥಿಮೂಲದಲ್ಲಿರುವ ತಮ್ಮ ಮನೆಯಲ್ಲೇ ಅವರು ಇನ್-ಸಿಟು ಮತ್ತು ಎಕ್ಸ್-ಸಿಟು ಜೈವ ಸಂರಕ್ಷಣಾ ಕೇಂದ್ರವನ್ನು ನಿರ್ಮಿಸಿದ್ದಾರೆ. ಇಲ್ಲಿ 614 ಸಾಂಪ್ರದಾಯಿಕ ಹಾಗೂ ಕಾಡು ಸಸ್ಯ ಪ್ರಭೇದಗಳು ಮತ್ತು ವೈವಿಧ್ಯಗಳನ್ನು ಸಂರಕ್ಷಿಸಲಾಗುತ್ತಿದೆ.&lt;/p&gt;&lt;p&gt;ಪದವಿ ಇಲ್ಲದಿದ್ದರೂ ಕ್ಷೇತ್ರಜ್ಞಾನ, ನಿರಂತರ ಅಧ್ಯಯನ ಮತ್ತು ಪ್ರಕೃತಿಯ ಮೇಲಿನ ಅಪಾರ ಆಸಕ್ತಿಯಿಂದ ಸಲೀಂ ಇಂದು &lsquo;ಬೇರ್&zwnj;ಫೂಟ್ ಸೈಂಟಿಸ್ಟ್&rsquo; ಎಂದೇ ಗುರುತಿಸಿಕೊಂಡಿದ್ದಾರೆ. ಅವರ ಬದುಕು, ವಿಜ್ಞಾನ ಕಲಿಯಲು ತರಗತಿಯ ನಾಲ್ಕು ಗೋಡೆಗಳೇ ಬೇಕೆಂದಿಲ್ಲ; ಪ್ರಕೃತಿಯೂ ಒಂದು ದೊಡ್ಡ ಪಾಠಶಾಲೆಯಾಗಬಹುದು ಎಂಬುದನ್ನು ತೋರಿಸುತ್ತದೆ.&lt;/p&gt;]]></content:encoded>
            <category>science</category>
            <dc:creator>Chandrashekar GS</dc:creator>
            <atom:link href="https://kannada.asianetnews.com/science/he-left-school-early-then-discovered-23-plants-meet-keralas-barefoot-scientist-salim-pichan/articleshow-c3n8pwn"/>
        </item>
        <item>
            <title><![CDATA[ವಯಸ್ಸು ಕೇವಲ ಸಂಖ್ಯೆ ಅಷ್ಟೇ: AI ಬಳಸಿ ವನ್ಯಜೀವಿ ರಕ್ಷಣಾ ಅಪ್ಲಿಕೇಶನ್ ನಿರ್ಮಿಸಿದ ಕೆನಡಾದ 8 ವರ್ಷದ ಬಾಲಕ!]]></title>
            <link>https://kannada.asianetnews.com/science/8-year-old-canadian-boy-viyoohan-builds-urban-wild-watch-app-to-protect-wildlife-gdp/articleshow-h7qc9d3</link>
            <guid isPermaLink="true">https://kannada.asianetnews.com/science/8-year-old-canadian-boy-viyoohan-builds-urban-wild-watch-app-to-protect-wildlife-gdp/articleshow-h7qc9d3</guid>
            <pubDate>Thu, 10 Sep 2026 13:32:44 +0530</pubDate>
            <description><![CDATA[ಕೆನಡಾದ ಎಂಟು ವರ್ಷದ ಬಾಲಕ ವಿಯೂಹನ್ ಸಯೂರನ್, 'ಅರ್ಬನ್ ವೈಲ್ಡ್ ವಾಚ್' ಎಂಬ ವಿನೂತನ ಅಪ್ಲಿಕೇಶನ್ ಅನ್ನು ನಿರ್ಮಿಸಿದ್ದಾರೆ. ಈ ಆ್ಯಪ್, AI ಬಳಸಿ ವನ್ಯಜೀವಿಗಳ ನಿಖರ ಸ್ಥಳವನ್ನು ತೋರಿಸದೆ, ಅವುಗಳ ಸಾಮಾನ್ಯ ಪ್ರದೇಶದ ಬಗ್ಗೆ ಜನರಿಗೆ ಮಾಹಿತಿ ನೀಡಿ ಸುರಕ್ಷತೆ ಮತ್ತು ಪ್ರಾಣಿಗಳ ರಕ್ಷಣೆಗೆ ನೆರವಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m255dcahsx73wn8s2mvm80a9,imgname-viyoohan--1--1789027332433.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆನಡಾದ ಎಂಟು ವರ್ಷದ ಬಾಲಕನೊಬ್ಬ 'ಅರ್ಬನ್ ವೈಲ್ಡ್ ವಾಚ್' (Urban Wild Watch) ಎಂಬ ವಿನೂತನ ಅಪ್ಲಿಕೇಶನ್ ಅನ್ನು ನಿರ್ಮಿಸುವ ಮೂಲಕ ಇಂಟರ್ನೆಟ್&zwnj;ನಲ್ಲಿ ಸಂಚಲನ ಮೂಡಿಸಿದ್ದಾರೆ. ಸಮುದಾಯದ ಜನರು ತಾವು ಕಂಡ ವನ್ಯಜೀವಿಗಳ ಬಗ್ಗೆ ವರದಿ ಮಾಡಲು ಈ ಉಚಿತ ಆ್ಯಪ್ ನೆರವಾಗುತ್ತದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಸಹಾಯದಿಂದ, ಬಾಲಕ ವಿಯೂಹನ್ ಸಯೂರನ್ (Viyuhan Sayuran) ಪ್ರಾಣಿಗಳ ನಿಖರವಾದ ಸ್ಥಳದ ಬದಲು ಕೇವಲ ಸಾಮಾನ್ಯ ಪ್ರದೇಶವನ್ನು ಮಾತ್ರ ತೋರಿಸುವ ಲೈವ್ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಇದರಿಂದ ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗದಂತೆ ಜನರಿಗೆ ಸುರಕ್ಷಿತವಾಗಿ ಮಾಹಿತಿ ಲಭ್ಯವಾಗುತ್ತದೆ.&lt;/p&gt;&lt;h2&gt;ಸಮಸ್ಯೆಯಿಂದ ಹುಟ್ಟಿಕೊಂಡ ಅದ್ಭುತ ಕಲ್ಪನೆ&lt;/h2&gt;&lt;p&gt;ಕೆನಡಾದ ಮಾರ್ಕಾಮ್&zwnj;ನಲ್ಲಿರುವ ತನ್ನ ನೆರೆಹೊರೆಯಲ್ಲಿ ಕೊಯೊಟ್&zwnj;ಗಳು (ಕಾಡು ನಾಯಿಗಳು) ಮತ್ತು ಕರಡಿಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ಎಂಟು ವರ್ಷದ ವಿಯೂಹನ್&zwnj;ಗೆ ಒಂದು ಪ್ರಶ್ನೆ ಎದುರಾಯಿತು. ನೆರೆಹೊರೆಯವರು ಪ್ರಾಣಿಗಳನ್ನು ಅಪಾಯಕ್ಕೆ ಸಿಲುಕಿಸದೆ, ವನ್ಯಜೀವಿಗಳ ಓಡಾಟದ ಬಗ್ಗೆ ಪರಸ್ಪರ ಎಚ್ಚರಿಕೆ ನೀಡಿದರೆ ಹೇಗೆ?&lt;/p&gt;&lt;p&gt;ಈ ಯೋಚನೆಯೇ ಅರ್ಬನ್ ವೈಲ್ಡ್ ವಾಚ್ ಅಪ್ಲಿಕೇಶನ್ ರೂಪಿಸಲು ಪ್ರೇರಣೆಯಾಯಿತು. ಈ ಆ್ಯಪ್ ಮೂಲಕ ಜನರು ಕೊಯೊಟೆಗಳು, ಕರಡಿಗಳು, ನರಿಗಳು, ಜಿಂಕೆಗಳು ಮತ್ತು ಇತರೆ ವನ್ಯಜೀವಿಗಳನ್ನು ಕಂಡರೆ ಸುಲಭವಾಗಿ ವರದಿ ಮಾಡಬಹುದು. ಅಷ್ಟೇ ಅಲ್ಲದೆ, ಗಾಯಗೊಂಡ ಅಥವಾ ಅನಾಥ ಪ್ರಾಣಿಗಳ ಬಗ್ಗೆಯೂ ಮಾಹಿತಿ ನೀಡಬಹುದು ಹಾಗೂ ಅಂತಹ ಸಂದರ್ಭಗಳಲ್ಲಿ ಸುರಕ್ಷಿತವಾಗಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಅಗತ್ಯ ಮಾರ್ಗದರ್ಶನವನ್ನೂ ಪಡೆಯಬಹುದು.&lt;/p&gt;&lt;p&gt;ಜೂನ್ 5 ರಂದು ಬಿಡುಗಡೆಯಾದ ಈ ಅಪ್ಲಿಕೇಶನ್, ಜುಲೈ ವೇಳೆಗೆ ಕೆನಡಾ ಮತ್ತು ಅಮೆರಿಕದಾದ್ಯಂತ 150 ಕ್ಕೂ ಹೆಚ್ಚು ವನ್ಯಜೀವಿಗಳ ಮುಖಾಮುಖಿಗಳನ್ನು ದಾಖಲಿಸಿದೆ. ಕೆನಡಾದಲ್ಲಿ ವನ್ಯಜೀವಿಗಳ ಹಾವಳಿ ಸಾಮಾನ್ಯವಾಗಿದ್ದು, ಉದಾಹರಣೆಗೆ ಟೊರೊಂಟೊ ಒಂದರಲ್ಲೇ 2024ರಲ್ಲಿ 2,584 ಕೊಯೊಟೆ ವೀಕ್ಷಣೆಗಳು, 303 ಸಾರ್ವಜನಿಕ ಸುರಕ್ಷತಾ ಎನ್ಕೌಂಟರ್&zwnj;ಗಳು ಹಾಗೂ ನಾಯಿಗಳ ಮೇಲೆ ದಾಳಿ ಮಾಡಿದ 91 ಪ್ರಕರಣಗಳು ವರದಿಯಾಗಿವೆ.&lt;/p&gt;&lt;h2&gt;ಪ್ರಾಣಿಗಳ ರಕ್ಷಣೆಗಾಗಿ ವಿಶಿಷ್ಟ ವೈಶಿಷ್ಟ್ಯ&lt;/h2&gt;&lt;p&gt;ಅರ್ಬನ್ ವೈಲ್ಡ್ ವಾಚ್ ಅಪ್ಲಿಕೇಶನ್&zwnj;ನ ಅತ್ಯಂತ ವಿಶೇಷ ಹಾಗೂ ಪ್ರಮುಖ ಅಂಶವೆಂದರೆ, ಇದು ಪ್ರಾಣಿಯ ನಿಖರವಾದ ಸ್ಥಳವನ್ನು (Exact Location) ಬಹಿರಂಗಪಡಿಸುವುದಿಲ್ಲ. ಬದಲಾಗಿ, ಕೇವಲ ಒಂದು ಸಾಮಾನ್ಯ ಪ್ರದೇಶವನ್ನು ಮಾತ್ರ ತೋರಿಸುತ್ತದೆ.&lt;/p&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಲು ಜನರು ವನ್ಯಜೀವಿಗಳಿರುವ ಜಾಗಕ್ಕೆ ಗುಂಪುಗುಂಪಾಗಿ ನುಗ್ಗುವುದು ವಿಯೂಹನ್&zwnj;ಗೆ ಇಷ್ಟವಿರಲಿಲ್ಲ. ಜನರು ಮುಗಿಬೀಳುವುದು ಪ್ರಾಣಿಯನ್ನು ಹೆದರಿಸುವುದಲ್ಲದೆ, ಮಾನವರು ಹಾಗೂ ವನ್ಯಜೀವಿಗಳಿಬ್ಬರಿಗೂ ಅಪಾಯವನ್ನುಂಟುಮಾಡಬಹುದು&quot; ಎಂದು ಅವರು ತಮ್ಮ ಯೂಟ್ಯೂಬ್ ವೀಡಿಯೊದಲ್ಲಿ ವಿವರಿಸಿದ್ದಾರೆ.&lt;/p&gt;&lt;h2&gt;AI ಬಳಸಿ ಆ್ಯಪ್ ರೂಪಿಸಿದ ಬಾಲಕ&lt;/h2&gt;&lt;p&gt;ತಮ್ಮ ಆಲೋಚನೆಗಳನ್ನು ವ್ಯವಸ್ಥಿತವಾಗಿ ರೂಪಿಸಲು ವಿಯೂಹನ್ 'ಕ್ಲಾಡ್' ಅನ್ನು ಬಳಸಿಕೊಂಡರೆ, ಆ ಸದಾಶಯವನ್ನು ಸುಲಭ ಇಂಗ್ಲಿಷ್ ಸೂಚನೆಗಳ ಮೂಲಕ ಕಾರ್ಯನಿರ್ವಹಿಸುವ ವೆಬ್ ಅಪ್ಲಿಕೇಶನ್ ಆಗಿ ಪರಿವರ್ತಿಸಲು 'ಲವ್&zwnj;ಬಲ್' (Lovable) ತಂತ್ರಜ್ಞಾನವನ್ನು ಬಳಸಿದರು. ತಂತ್ರಜ್ಞಾನದ ಬಳಕೆಯಿಂದ ಇಂದು ಸಾಮಾನ್ಯ ಆಲೋಚನೆಗಳು ಕೂಡ ಎಷ್ಟು ಬೇಗ ಸಾಕಾರಗೊಳ್ಳಬಹುದು ಎಂಬುದಕ್ಕೆ ಈ ಯೋಜನೆಯೇ ಸಾಕ್ಷಿಯಾಗಿದೆ. ವಿಯೂಹನ್ ಇದಕ್ಕಾಗಿ ತಿಂಗಳುಗಟ್ಟಲೆ ಕೋಡಿಂಗ್ ಬರೆಯುತ್ತಾ ಕುಳಿತುಕೊಳ್ಳಬೇಕಾಗಿ ಬರಲಿಲ್ಲ.&lt;/p&gt;&lt;h2&gt;ಕೋಡಿಂಗ್ ಮೀರಿದ ದೊಡ್ಡ ಪಾಠ&lt;/h2&gt;&lt;p&gt;ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳು ಶಾಲೆ ಹಾಗೂ ಮನೆಕೆಲಸಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ ವಿಯೂಹನ್ ಮಾತ್ರ ವಯಸ್ಕರ ಸಹಾಯವನ್ನು ಕೋರದೆ, ತನ್ನ ಸುತ್ತಮುತ್ತಲಿನ ನೈಜ ಸಮಸ್ಯೆಗೆ ತಾನೇ ಸ್ವತಃ ಪರಿಹಾರ ಕಂಡುಕೊಂಡಿದ್ದಾರೆ. ತಂತ್ರಜ್ಞಾನ ಕ್ಷೇತ್ರವು ಇಂದು ಬದಲಾಗುತ್ತಿದ್ದು, ಕೇವಲ ತಾಂತ್ರಿಕ ಪರಿಣತಿ ಇದ್ದವರಷ್ಟೇ ಅಲ್ಲ, ಕುತೂಹಲ, ಸಹಾನುಭೂತಿ ಮತ್ತು ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇರುವ ಯಾರಿ ಬೇಕಾದರೂ ನಾವೀನ್ಯತೆ ಮೆರೆಯಬಹುದು ಎಂಬುದನ್ನು ಈ ಬಾಲಕ ಸಾಬೀತುಪಡಿಸಿದ್ದಾನೆ. ವಯಸ್ಸು ಯಾವುದೇ ಹೊಸ ಕಲ್ಪನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ವಿಯೂಹನ್ ಅವರ ಈ ಸಾಧನೆಯೇ ಒಂದು ರೋಮಾಂಚಕ ಉದಾಹರಣೆಯಾಗಿದೆ.&lt;/p&gt;]]></content:encoded>
            <category>science</category>
            <dc:creator>Gowthami K</dc:creator>
            <atom:link href="https://kannada.asianetnews.com/science/8-year-old-canadian-boy-viyoohan-builds-urban-wild-watch-app-to-protect-wildlife-gdp/articleshow-h7qc9d3"/>
        </item>
        <item>
            <title><![CDATA[ಮಹಾ ಪಿರಮಿಡ್ ಬರಿ ಸಮಾಧಿಯಲ್ಲ, ಖಗೋಳದ ಗಣಿತ ಕಣಜ! ಚಂದ್ರ, ಗ್ರಹಗಳ ಲೆಕ್ಕ, ಹೊಸ ಸಿದ್ಧಾಂತದಿಂದ ಶಾಕಿಂಗ್ ಸತ್ಯ ಬಯಲು!]]></title>
            <link>https://kannada.asianetnews.com/science/great-pyramid-of-giza-hidden-mathematical-code-for-planets-and-stars-new-study-gdp/articleshow-hvkgeta</link>
            <guid isPermaLink="true">https://kannada.asianetnews.com/science/great-pyramid-of-giza-hidden-mathematical-code-for-planets-and-stars-new-study-gdp/articleshow-hvkgeta</guid>
            <pubDate>Sat, 12 Sep 2026 18:05:21 +0530</pubDate>
            <description><![CDATA[ಗಿಜಾದ ಮಹಾ ಪಿರಮಿಡ್ ತನ್ನ ಆಯಾಮಗಳಲ್ಲಿ ಗುಪ್ತ ಗಣಿತ ಸಂಕೇತವನ್ನು ಹೊಂದಿರಬಹುದು ಎಂದು ಹೊಸ ಸಿದ್ಧಾಂತವೊಂದು ಹೇಳಿದೆ. ಈ ಸಂಕೇತವು ಚಂದ್ರ, ನಕ್ಷತ್ರ ಮತ್ತು ಗ್ರಹಗಳ ಚಲನೆಗೆ ಸಂಬಂಧಿಸಿದೆ ಎಂದು ಸಂಶೋಧಕ ಸೆಫಿ ಲೆವಿ ಪ್ರತಿಪಾದಿಸಿದ್ದಾರೆ. ಆದರೆ, ಈ ವಾದಕ್ಕೆ ಇನ್ನೂ ವೈಜ್ಞಾನಿಕ ಪುರಾವೆಗಳು ಲಭ್ಯವಾಗಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kfszwgm3t5ac7skt5whtg4cs,imgname-great-pyramid-construction-new-study-pulley-counterweight-theory-05-1769325085315.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಈಜಿಪ್ಟ್:&lt;/strong&gt; ಪ್ರಪಂಚದ ಅತ್ಯಂತ ಅದ್ಭುತ ಪ್ರಾಚೀನ ಸ್ಮಾರಕಗಳಲ್ಲಿ ಒಂದಾದ ಗಿಜಾದ ಮಹಾ ಪಿರಮಿಡ್ (Great Pyramid of Giza) ತನಗಷ್ಟೇ ಸೀಮಿತವಾದ ಅಪಾರ ರಹಸ್ಯಗಳಿಂದಾಗಿ ಗತಕಾಲದಿಂದ ಸಂಶೋಧಕರನ್ನು ಆಕರ್ಷಿಸುತ್ತಲೇ ಬಂದಿದೆ. ಇದೀಗ ಈ ಪಿರಮಿಡ್ ಚಂದ್ರ, ನಕ್ಷತ್ರಗಳು ಹಾಗೂ ವಿವಿಧ ಗ್ರಹಗಳ ಚಲನೆಗೆ ಸಂಬಂಧಿಸಿದ ಅತ್ಯಂತ ನಿಖರವಾದ ಗುಪ್ತ ಗಣಿತ ಸಂಕೇತಗಳನ್ನು (Mathematical Code) ಹೊಂದಿರಬಹುದು ಎಂಬ ಹೊಸ ಸಿದ್ಧಾಂತವೊಂದು ಚರ್ಚೆಗೆ ಬಂದಿದೆ&lt;/p&gt;&lt;p&gt;ವರದಿಯ ಪ್ರಕಾರ, ಸ್ವತಂತ್ರ ಸಂಶೋಧಕರಾದ ಸೆಫಿ ಲೆವಿ ಅವರು ಈ ಹೊಸ ಅಧ್ಯಯನವನ್ನು ಮಾಡಿದ್ದಾರೆ. ಪಿರಮಿಡ್&zwnj;ನ ಎತ್ತರ, ತಳಭಾಗದ ಅಳತೆ ಹಾಗೂ ಇಳಿಜಾರಿನ ಬದಿಗಳ ಆಯಾಮಗಳು ಪ್ರಾಚೀನ ಈಜಿಪ್ಟಿನವರ ಅಪಾರ ಗಣಿತ ಮತ್ತು ಖಗೋಳಶಾಸ್ತ್ರದ ಜ್ಞಾನವನ್ನು ಪ್ರತಿಬಿಂಬಿಸುವ ನಿರ್ದಿಷ್ಟ ಸಂಖ್ಯಾತ್ಮಕ ಮಾದರಿಗಳನ್ನು ಒಳಗೊಂಡಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.&lt;/p&gt;&lt;h2&gt;ಸಿದ್ಧಾಂತ ಹೇಳುವುದೇನು?&lt;/h2&gt;&lt;p&gt;ಈ ಹೊಸ ಅಧ್ಯಯನವು 'SSRN' ಜರ್ನಲ್&zwnj;ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧವನ್ನು ಆಧರಿಸಿದೆ. ಲೆವಿ ಅವರು ಪ್ರಾಚೀನ ಈಜಿಪ್ಟಿನ ಗಣಿತ ಪದ್ಧತಿಯಲ್ಲಿದ್ದ ಭಿನ್ನರಾಶಿಗಳನ್ನು ಬಳಸಿಕೊಂಡು ಗ್ರೇಟ್ ಪಿರಮಿಡ್&zwnj;ನ ಪ್ರಮುಖ ಅಳತೆಗಳನ್ನು ತೀವ್ರ ಅಧ್ಯಯನಕ್ಕೆ ಒಳಪಡಿಸಿದರು. ಈ ಲೆಕ್ಕಾಚಾರಗಳಿಂದ ದೊರೆತ ಸಂಖ್ಯೆಗಳು ಪ್ರಮುಖ ಖಗೋಳ ಚಕ್ರಗಳು ಹಾಗೂ ಗಣಿತದ ಸ್ಥಿರಾಂಕಗಳಿಗೆ (Mathematical Constants) ಅತ್ಯಂತ ನಿಕಟವಾಗಿ ಹೊಂದಿಕೆಯಾಗುತ್ತವೆ ಎಂಬುದು ಅವರ ವಾದ.&lt;/p&gt;&lt;p&gt;ಪಿರಮಿಡ್&zwnj;ನ ಅಳತೆಯ ಒಂದು ಲೆಕ್ಕಾಚಾರದಿಂದ 27.5 ಎಂಬ ಸಂಖ್ಯೆ ದೊರೆತಿದೆ. ಇದು ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿರುವಾಗ ಎರಡು ಸತತ ಪರಿಭ್ರಮಣೆಗಳ ನಡುವೆ ಇರುವ 27.55 ದಿನಗಳ ಅವಧಿಗೆ ಅತ್ಯಂತ ಹತ್ತಿರದಲ್ಲಿದೆ.&lt;/p&gt;&lt;p&gt;ಮತ್ತೊಂದು ಲೆಕ್ಕಾಚಾರದಲ್ಲಿ 70 ಎಂಬ ಸಂಖ್ಯೆ ಲಭಿಸಿದ್ದು, ಸೂರ್ಯನ ತೀವ್ರ ಪ್ರಜ್ವಲನೆಯಿಂದಾಗಿ ಸಿರಿಯಸ್ ನಕ್ಷತ್ರವು ಆಕಾಶದಲ್ಲಿ ಗೋಚರಿಸದಿರುವ ಅಂದಾಜು 70 ದಿನಗಳ ಅವಧಿಗೆ ಇದು ಸಂಪರ್ಕ ಹೊಂದಿದೆ ಎಂದು ಲೆವಿ ಹೇಳುತ್ತಾರೆ.&lt;/p&gt;&lt;p&gt;ಈ ಸಿದ್ಧಾಂತದ ಪ್ರಕಾರ, ಪಿರಮಿಡ್&zwnj;ನ ಹಲವು ಲೆಕ್ಕಾಚಾರಗಳು ಗುರು, ಶನಿ, ಶುಕ್ರ ಮತ್ತು ಮಂಗಳ ಗ್ರಹಗಳ ಚಲನೆಗೆ ಅನುಗುಣವಾಗಿವೆ. ಅಷ್ಟೇ ಅಲ್ಲದೆ, ಗಣಿತದ ಪ್ರಮುಖ ಸ್ಥಿರಾಂಕಗಳಾದ &lsquo;ಪೈ&rsquo; ಮತ್ತು &lsquo;ಸುವರ್ಣ ಅನುಪಾತ&rsquo;ದ (Golden Ratio) ಜೊತೆಗೂ ಇವು ಸಂಭಾವ್ಯ ಸಂಪರ್ಕ ಹೊಂದಿವೆ.&lt;/p&gt;&lt;h2&gt;ಉದ್ದೇಶಪೂರ್ವಕವಾಗಿ ನಿರ್ಮಿಸಿದ ಕೋಡ್?&lt;/h2&gt;&lt;p&gt;ಈ ಸಂಖ್ಯಾತ್ಮಕ ಮಾದರಿಗಳು ಕೇವಲ ಯಾದೃಚ್ಛಿಕವಾಗಿ ಅಥವಾ ಆಕಸ್ಮಿಕವಾಗಿ ಸಂಭವಿಸಿವೆಯೇ ಎಂದು ಪರೀಕ್ಷಿಸಲು, ಲೆವಿ ತಮ್ಮ ಫಲಿತಾಂಶಗಳನ್ನು ಕಂಪ್ಯೂಟರ್ ಮೂಲಕ ಸೃಷ್ಟಿಸಿದ 100,000 ವಿಭಿನ್ನ ಪಿರಮಿಡ್ ಮಾದರಿಗಳೊಂದಿಗೆ ಹೋಲಿಕೆ ಮಾಡಿದರು.&lt;/p&gt;&lt;p&gt;ಈ ಪರೀಕ್ಷೆಯಲ್ಲಿ ಕೇವಲ ಶೇಕಡಾ 2.4 ರಷ್ಟು ಮಾದರಿಗಳು ಮಾತ್ರ ಗ್ರೇಟ್ ಪಿರಮಿಡ್&zwnj;ನಲ್ಲಿರುವಂತಹ ಹೋಲಿಕೆಯನ್ನು ತೋರಿಸಿವೆ. ಹೀಗಾಗಿ, ಗ್ರೇಟ್ ಪಿರಮಿಡ್&zwnj;ನ ಆಯಾಮಗಳನ್ನು ಪ್ರಾಚೀನ ಈಜಿಪ್ಟಿನವರು ಅತ್ಯಂತ ಯೋಜನಾಬದ್ಧವಾಗಿ ಹಾಗೂ ಉದ್ದೇಶಪೂರ್ವಕವಾಗಿಯೇ ವಿನ್ಯಾಸಗೊಳಿಸಿದ್ದಾರೆ ಎಂದು ಲೆವಿ ವಾದಿಸುತ್ತಾರೆ.&lt;/p&gt;&lt;p&gt;ಸುಮಾರು 4,500 ವರ್ಷಗಳ ಹಿಂದೆ ಫರೋ ಖುಫು (Pharaoh Khufu) ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಮಹಾ ಪಿರಮಿಡ್ ಅನ್ನು ಸಾಂಪ್ರದಾಯಿಕವಾಗಿ ಅವರ ಅಂತ್ಯಕ್ರಿಯೆಯ ಸ್ಥಳ ಅಥವಾ ಸಮಾಧಿ ಎಂದು ಅರ್ಥೈಸಲಾಗುತ್ತದೆ. ಆದರೆ, ಲೆವಿ ಭಿನ್ನ ವ್ಯಾಖ್ಯಾನವನ್ನು ನೀಡಿದ್ದು, ಇದನ್ನು ಕೇವಲ ಸಮಾಧಿಯಾಗಿ ನಿರ್ಮಿಸದೆ, ಪ್ರಾಚೀನ ಮಹಾ ಜ್ಞಾನವನ್ನು ಭವಿಷ್ಯಕ್ಕಾಗಿ ಕಾಯ್ದಿರಿಸುವ 'ಶಾಶ್ವತ ದಾಖಲೆ'ಯಾಗಿ ರೂಪಿಸಿರಬಹುದು ಎಂದಿದ್ದಾರೆ. ಈಜಿಪ್ಟಿನ ಸೃಷ್ಟಿ ಪುರಾಣದಲ್ಲಿ ಉಲ್ಲೇಖಿಸಲಾದ 'ಬೆನ್&zwnj;ಬೆನ್' ಎಂಬ ಆದಿಸ್ವರೂಪದ ದಿಬ್ಬಕ್ಕೂ ಇದಕ್ಕೂ ಸಂಬಂಧವಿರಬಹುದು ಎಂಬುದು ಅವರ ಊಹೆ.&lt;/p&gt;&lt;h2&gt;ಸಿದ್ಧಾಂತಕ್ಕೆ ವೈಜ್ಞಾನಿಕ ಪುರಾವೆಗಳಿವೆಯೇ?&lt;/h2&gt;&lt;p&gt;ಸದ್ಯಕ್ಕೆ ಈ ಎಲ್ಲಾ ಹೇಳಿಕೆಗಳು ಕೇವಲ ಊಹಾತ್ಮಕವಾಗಿಯೇ ಉಳಿದಿವೆ. ಈ ಸಂಶೋಧನೆಯು ಇನ್ನು ಪೀರ್-ರಿವ್ಯೂ (Peer-Reviewed) ಪ್ರಕ್ರಿಯೆಗೆ ಒಳಪಟ್ಟಿಲ್ಲ ಹಾಗೂ ಮುಖ್ಯವಾಹಿನಿಯ ಈಜಿಪ್ಟ್ ಶಾಸ್ತ್ರಜ್ಞರು (Egyptologists) ಅಥವಾ ಪುರಾತತ್ವಜ್ಞರು ಈ ವಾದಗಳನ್ನು ಅಧಿಕೃತವಾಗಿ ಸ್ವೀಕರಿಸಿಲ್ಲ.&lt;/p&gt;&lt;p&gt;ಖಗೋಳ ಅಥವಾ ಗ್ರಹಗಳ ಮಾಹಿತಿಯನ್ನು ಎನ್&zwnj;ಕೋಡ್ ಮಾಡಲು ಈ ಪಿರಮಿಡ್ ಅನ್ನು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದಕ್ಕೆ ಯಾವುದೇ ಸ್ವತಂತ್ರ ಸಾಕ್ಷ್ಯಗಳು ಲಭ್ಯವಿಲ್ಲ. ಪ್ರಪಂಚದ ಈ ಮಹಾನ್ ಸೃಷ್ಟಿಯ ಹಿಂದಿರುವ ನೈಜ ಉದ್ದೇಶ ಮತ್ತು ವಿನ್ಯಾಸದ ಕುರಿತು ದಶಕಗಳಿಂದ ನಡೆಯುತ್ತಿರುವ ಸಾರ್ವತ್ರಿಕ ಚರ್ಚೆಗೆ ಈ ಹೊಸ ಸಿದ್ಧಾಂತವು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.&lt;/p&gt;]]></content:encoded>
            <category>science</category>
            <dc:creator>Gowthami K</dc:creator>
            <atom:link href="https://kannada.asianetnews.com/science/great-pyramid-of-giza-hidden-mathematical-code-for-planets-and-stars-new-study-gdp/articleshow-hvkgeta"/>
        </item>
        <item>
            <title><![CDATA['2030ರ ವೇಳೆಗೆ ಎಐಯಿಂದ ಮಾನವಕುಲವೇ ನಾಶ' ಬಿಗ್‌ ವಾರ್ನಿಂಗ್‌ ನೀಡಿ ಆಂಥ್ರೋಪಿಕ್‌ ಕಂಪನಿಗೆ ರಾಜೀನಾಮೆ ನೀಡಿದ AI ರಿಸರ್ಚರ್‌]]></title>
            <link>https://kannada.asianetnews.com/technology/ai-researcher-jacob-coxon-resigns-warns-human-extinction-by-2030-san/articleshow-os11vop</link>
            <guid isPermaLink="true">https://kannada.asianetnews.com/technology/ai-researcher-jacob-coxon-resigns-warns-human-extinction-by-2030-san/articleshow-os11vop</guid>
            <pubDate>Thu, 10 Sep 2026 19:18:29 +0530</pubDate>
            <description><![CDATA[&lt;p&gt;ಪ್ರಮುಖ ಎಐ ಸಂಸ್ಥೆ 'ಆಂಥ್ರೋಪಿಕ್'ನ ಮಾಜಿ ಸಂಶೋಧಕ ಜೇಕಬ್ ಕಾಕ್ಸನ್, ಕೃತಕ ಬುದ್ಧಿಮತ್ತೆಯು 2030ರ ವೇಳೆಗೆ ಮಾನವಕುಲದ ವಿನಾಶಕ್ಕೆ ಕಾರಣವಾಗಬಹುದು ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25s2b7wxpm7z52vpzpxfz1f,imgname-ai-researcher-jacob-coxon-resigns-1789047942396.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.10): &lt;/strong&gt;ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ತೀವ್ರಗತಿಯ ಬೆಳವಣಿಗೆಯು 2030 ರ ವೇಳೆಗೆ ಇಡೀ ಮಾನವಕುಲದ ವಿನಾಶಕ್ಕೇ ಕಾರಣವಾಗಬಹುದು ಎಂಬ ಅತ್ಯಂತ ಆತಂಕಕಾರಿ ಮತ್ತು ಗಂಭೀರ ಎಚ್ಚರಿಕೆಯನ್ನು ಪ್ರಮುಖ ಎಐ ಸಂಸ್ಥೆಯಾದ 'ಆಂಥ್ರೋಪಿಕ್'ನ (Anthropic) ಮಾಜಿ ಸಂಶೋಧಕ ಜೇಕಬ್ ಕಾಕ್ಸನ್ (Jacob Coxon) ನೀಡಿದ್ದಾರೆ. ಕಂಪನಿಯಿಂದ ತಮಗೆ ಲಭಿಸಬೇಕಿದ್ದ ದಶಲಕ್ಷಗಟ್ಟಲೆ ಡಾಲರ್ ಮೌಲ್ಯದ ಇಕ್ವಿಟಿ ಹಾಗೂ ಶೇರುಗಳನ್ನು ಸಂಪೂರ್ಣವಾಗಿ ತ್ಯಜಿಸಿರುವ 27 ವರ್ಷದ ಜೇಕಬ್ ಕಾಕ್ಸನ್ ತಮ್ಮ ಹುದ್ದೆಗೆ ತಕ್ಷಣವೇ ರಾಜೀನಾಮೆ ನೀಡಿದ್ದಾರೆ.&lt;/p&gt;&lt;p&gt;ತಮ್ಮ ಈ ದಿಢೀರ್ ನಿರ್ಗಮನದೊಂದಿಗೆ ಜಗತ್ತಿಗೆ ಪ್ರಮುಖ ಎಚ್ಚರಿಕೆಯೊಂದನ್ನು ನೀಡಿರುವ ಅವರು, &quot;ವಿಶ್ವದ ದೈತ್ಯ ಎಐ ಕಂಪನಿಗಳು ಯಾವುದೇ ಕನಿಷ್ಠ ಸುರಕ್ಷತಾ ಮಾನದಂಡಗಳನ್ನೂ ಪಾಲಿಸದೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಮಾನವನ ಮತ್ತಾವ ಕೃತ್ಯವೂ ಪ್ರಸ್ತುತ ಎಐ ತಂತ್ರಜ್ಞಾನ ತಂದೊಡ್ಡುತ್ತಿರುವಷ್ಟು ದೊಡ್ಡ ಅಪಾಯವನ್ನು ಸೃಷ್ಟಿಸಿಲ್ಲ&quot; ಎಂದು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೂಲಸೌಕರ್ಯ, ಆಡಳಿತವನ್ನೇ ಕಬಳಿಸುವ ಸಾಮರ್ಥ್ಯ&lt;/strong&gt;&lt;/h2&gt;&lt;p&gt;ಕಳೆದ ಮೂರು ವರ್ಷಗಳಿಂದ ಜಾಗತಿಕ ಮುಂಚೂಣಿ ಎಐ ಸಂಸ್ಥೆಗಳಾದ 'ಓಪನ್ ಎಐ' (OpenAI) ಮತ್ತು 'ಆಂಥ್ರೋಪಿಕ್' (Anthropic) ಕಂಪನಿಗಳಲ್ಲಿ ಪ್ರೀ-ಟ್ರೇನಿಂಗ್ ಸಂಶೋಧಕನಾಗಿ (Pre-training researcher) ಜೇಕಬ್ ಕಾಕ್ಸನ್ ಕರ್ತವ್ಯ ನಿರ್ವಹಿಸಿದ್ದರು. ಆದರೆ ಈ ಎರಡೂ ಕಂಪನಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಅವರು, ಸ್ವಯಂ-ಸಾಮರ್ಥ್ಯ ಹೆಚ್ಚಿಸಿಕೊಳ್ಳುವ 'ಸೂಪರ್ ಇಂಟೆಲಿಜೆನ್ಸ್' (Self-improving Superintelligence) ನಿರ್ಮಿಸುವ ಕುರುಡು ಓಟದಲ್ಲಿ ಜನರ ಜೀವನವನ್ನು ಪಣಕ್ಕಿಡಲಾಗುತ್ತಿದೆ ಎಂದಿದ್ದಾರೆ.&lt;/p&gt;&lt;p&gt;&quot;ಎಐ ಸಾಮರ್ಥ್ಯವನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ಇದರ ಬೆಳವಣಿಗೆ ಕಲ್ಪಿಸಲಾಗದಷ್ಟು ವೇಗವಾಗಿದೆ. ಯಾವುದೇ ಡಿಜಿಟಲ್ ನೆಟ್&zwnj;ವರ್ಕ್ ಅನ್ನು ಹ್ಯಾಕ್ ಮಾಡುವ ಹಾಗೂ ಹಣಕಾಸು ಮತ್ತು ಸರ್ಕಾರಿ ವ್ಯವಸ್ಥೆಗಳ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯವಿರುವ 'ಸೂಪರ್ ಹ್ಯೂಮನ್' (Superhuman) ಸಿಸ್ಟಮ್&zwnj;ಗಳು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿವೆ&quot; ಎಂದು ಕಾಕ್ಸನ್ ಎಚ್ಚರಿಸಿದ್ದಾರೆ.&lt;/p&gt;&lt;h2&gt;&lt;strong&gt;ಮುಚ್ಚಿದ ಬಾಗಿಲ ಮರೆಯಲ್ಲಿ ಮಾನವ ವಿನಾಶದ ಭೀತಿ&lt;/strong&gt;&lt;/h2&gt;&lt;p&gt;ಸಾಮಾಜಿಕ ಜಾಲತಾಣ 'ಎಕ್ಸ್' (X) ಮೂಲಕ ತಮ್ಮ ಕಳವಳ ಹಾಗೂ ರಾಜೀನಾಮೆ ನಿರ್ಧಾರವನ್ನು ಹಂಚಿಕೊಂಡಿರುವ ಕಾಕ್ಸನ್, &quot;ಈ ದಶಕದ ಅಂತ್ಯದ ವೇಳೆಗೆ (2030) ಇದು ಮಾನವಕುಲದ ಸಂಪೂರ್ಣ ವಿನಾಶಕ್ಕೆ ಕಾರಣವಾಗಬಹುದು ಎಂಬ ಸತ್ಯ ಎಐ ರೂಪಿಸುತ್ತಿರುವ ತಜ್ಞರಿಗೆ ಮತ್ತು ಸಂಶೋಧಕರಿಗೆ ಚೆನ್ನಾಗಿ ತಿಳಿದಿದೆ. ಇದೇನೂ ಮಾರ್ಕೆಟಿಂಗ್ ತಂತ್ರವಲ್ಲ, ಮುಚ್ಚಿದ ಬಾಗಿಲುಗಳ ಮರೆಯಲ್ಲಿ ಅವರು ಈ ಭಯವನ್ನು ಹಂಚಿಕೊಳ್ಳುವುದನ್ನು ನಾನು ಸ್ವತಃ ಕೇಳಿದ್ದೇನೆ&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;&quot;ಎಐ ತಯಾರಕರಿಗೇ ಈ ಭಯವಿದ್ದ ಮೇಲೆ ಅವರು ಅದನ್ನು ಏಕೆ ಮುಂದುವರಿಸುತ್ತಿದ್ದಾರೆ? ಎಂಬ ಪ್ರಶ್ನೆ ಮೂಡುವುದು ಸಹಜ. ಓಪನ್ ಎಐನಲ್ಲಿರುವ ಹಲವರು ಇದರ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಆದರೆ ಆಂಥ್ರೋಪಿಕ್ ಸಂಸ್ಥೆಗೆ ಈ ಅಪಾಯಗಳ ಅರಿವಿದೆ. ಆದಾಗ್ಯೂ, ಸ್ಪರ್ಧೆಯಲ್ಲಿ ಮೊದಲಿಗರಾಗುವ ಆತುರದಲ್ಲಿದ್ದಾರೆ. ಬೇರಾರೂ ಜವಾಬ್ದಾರಿಯಿಂದ ನಡೆದುಕೊಳ್ಳುವುದಿಲ್ಲ, ಹೀಗಾಗಿ ಅಪಾಯಗಳಿದ್ದರೂ ನಾವೇ ಇದನ್ನು ಮೊದಲು ಮಾಡಬೇಕು ಎಂಬುದು ಅವರ ನಂಬಿಕೆಯಾಗಿದೆ&quot; ಎಂದು ಜೇಕಬ್ ಕಾಕ್ಸನ್ ಬಹಿರಂಗಪಡಿಸಿದ್ದಾರೆ .&lt;/p&gt;&lt;h2&gt;&lt;strong&gt;ಶೇ. 10 ಕ್ಕಿಂತ ಹೆಚ್ಚು ವಂಶನಾಶದ ಭೀತಿ: ವಿಜ್ಞಾನಿಗಳ ಸಹಮತ&lt;/strong&gt;&lt;/h2&gt;&lt;p&gt;ಜೇಕಬ್ ಕಾಕ್ಸನ್ ಅವರ ಈ ವಾರ್ನಿಂಗ್&zwnj; ಬೆನ್ನಲ್ಲೇ, ಆಂಥ್ರೋಪಿಕ್ ಸಂಸ್ಥೆಯ 'ಅಲೈನ್&zwnj;ಮೆಂಟ್' (Alignment) ವಿಭಾಗದ ಮುಖ್ಯಸ್ಥ ಇವಾನ್ ಹುಬಿಂಗರ್ (Evan Hubinger) ಕೂಡ ಇದೇ ರೀತಿಯ ಆತಂಕವನ್ನು ಹಂಚಿಕೊಂಡಿದ್ದಾರೆ. ಮುಂಬರುವ ಒಂದು ದಶಕದಲ್ಲಿ ಕೃತಕ ಬುದ್ಧಿಮತ್ತೆಯಿಂದಾಗಿ ಮಾನವಕುಲದ ವಂಶನಾಶ ಹೊಂದುವ ಸಾಧ್ಯತೆ ಶೇಕಡಾ 10 ಕ್ಕಿಂತ ಹೆಚ್ಚಿದೆ ಎಂದು ಇವಾನ್ ಹುಬಿಂಗರ್ ಸ್ಪಷ್ಟಪಡಿಸಿದ್ದಾರೆ. ಮಾನವೀಯತೆಗೆ ಅಪಾಯವಾಗದಂತೆ 'ಸೂಪರ್ ಇಂಟೆಲಿಜೆನ್ಸ್' ಅನ್ನು ನಿಯಂತ್ರಿಸಲು ಪ್ರಸ್ತುತ ತಮ್ಮ ಬಳಿ ಯಾವುದೇ ಮಾರ್ಗವಿಲ್ಲ ಎಂಬ ಕಹಿ ಸತ್ಯವನ್ನೂ ಅವರು ಒಪ್ಪಿಕೊಂಡಿದ್ದಾರೆ.&lt;/p&gt;&lt;p&gt;ಎಐ ತಂತ್ರಜ್ಞಾನದ ಪಿತಾಮಹರಲ್ಲಿ ಒಬ್ಬರೆಂದು ಪರಿಗಣಿತರಾಗಿರುವ ನೋಬೆಲ್ ಪುರಸ್ಕೃತ ವಿಜ್ಞಾನಿ ಜಿಯಾಫ್ರಿ ಹಿಂಟನ್ (Geoffrey Hinton) ಕೂಡ ಈ ಆತಂಕಕಾರಿ ಮುನ್ಸೂಚನೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category>science</category>
            <dc:creator>Santosh Naik</dc:creator>
            <atom:link href="https://kannada.asianetnews.com/technology/ai-researcher-jacob-coxon-resigns-warns-human-extinction-by-2030-san/articleshow-os11vop"/>
        </item>
        <item>
            <title><![CDATA[Loneliness: ಸಾವಿರಾರೂ ಜನರ ನಡುವಿದ್ದರೂ ಏಕಾಂಗಿ ಭಾವನೆ! ನಿಮ್ಮನ್ನೂ ಕಾಡುತ್ತಿದೆಯಾ ಈ ಸೈಲೆಂಟ್ ಮಹಾಮಾರಿ? ಪರಿಹಾರವೇನು?]]></title>
            <link>https://kannada.asianetnews.com/science/loneliness-health-effects-citizens-mental-health-heart-disease-depression-anxiety-alzheimers-aging-health-tips-bmk/articleshow-pw3hgcz</link>
            <guid isPermaLink="true">https://kannada.asianetnews.com/science/loneliness-health-effects-citizens-mental-health-heart-disease-depression-anxiety-alzheimers-aging-health-tips-bmk/articleshow-pw3hgcz</guid>
            <pubDate>Sat, 12 Sep 2026 22:14:17 +0530</pubDate>
            <description><![CDATA[&lt;p&gt;ಇತ್ತೀಚೆಗೆ ಒಂಟಿತನವು ಕೇವಲ ಭಾವನಾತ್ಮಕ ಕೊರತೆಯಾಗಿ ಉಳಿದಿಲ್ಲ, ಬದಲಿಗೆ ಅದೊಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ವೈದ್ಯರ ಪ್ರಕಾರ, ಈ ಏಕಾಂಗಿತನವು ದೈಹಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಈ ಬಿಕ್ಕಟ್ಟಿಗೆ ಪರಿಹಾರವು ಕುಟುಂಬದ ಪ್ರೀತಿ, ಗೌರವ ಮತ್ತು ಅರ್ಥಪೂರ್ಣ ಸಂವಾದದಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2b81hschbks6jpnc12rr7sk,imgname-alone-1789231417132.jpg" type="image/jpeg" height="390" width="690"/>
            <content:encoded><![CDATA[&lt;p&gt;ವೃದ್ಧಾಪ್ಯ ಎಂಬುದು ಜೀವನದ ಅತ್ಯಂತ ಅನುಭವಿ ಘಟ್ಟ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಹಿರಿಯ ನಾಗರಿಕರು ಎದುರಿಸುತ್ತಿರುವ ಅತ್ಯಂತ ಗಂಭೀರ ಹಾಗೂ ಕಡೆಗಣಿಸಲ್ಪಟ್ಟ ಸಮಸ್ಯೆಯೆಂದರೆ ಅದು ಒಂಟಿತನ. ವೃದ್ಧರು ನಾಲ್ಕು ಜನರ ನಡುವೆ ಅಥವಾ ಸ್ವಂತ ಕುಟುಂಬದೊಂದಿಗೆ ವಾಸಿಸುತ್ತಿದ್ದರೂ ಈ ಒಂಟಿತನ ಅವರನ್ನು ಆವರಿಸಿಕೊಳ್ಳುತ್ತಿರುವುದು ವೈದ್ಯಕೀಯ ಜಗತ್ತನ್ನು ತೀವ್ರ ಚಿಂತೆಗೆ ಈಡುಮಾಡಿದೆ.&lt;/p&gt;&lt;h2&gt;&lt;strong&gt;ಖಾಲಿ ಮಾಡುವ ಭಾವನೆ!&lt;/strong&gt;&lt;/h2&gt;&lt;p&gt;ಸೀತಾರಾಮ್ ಭಾರ್ತಿಯಾ ಆಸ್ಪತ್ರೆಯ ವೃದ್ಧಾಶ್ರಮ ವಿಭಾಗದ ಹಿರಿಯ ಸಲಹೆಗಾರ ಡಾ. ಹರ್ಜೀತ್ ಸಿಂಗ್ ಭಟ್ಟಿ ಅವರ ಪ್ರಕಾರ, ಒಂಟಿತನ ಎಂಬುದು ಕೇವಲ ಒಬ್ಬಂಟಿಯಾಗಿ ಕೊಠಡಿಯಲ್ಲಿ ವಾಸಿಸುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ, ತಾನು ವಾಸಿಸುತ್ತಿರುವ ವಾತಾವರಣದಲ್ಲಿ ನಿರ್ಲಕ್ಷಿಸಲ್ಪಟ್ಟಾಗ, ಅಪೇಕ್ಷಿತ ಭಾವನಾತ್ಮಕ ಸಂಪರ್ಕ ಸಿಗದಿದ್ದಾಗ ಉಂಟಾಗುವ ಆಂತರಿಕ ಕೊರತೆಯಾಗಿದೆ. ಬದಲಾಗುತ್ತಿರುವ ವಿಭಕ್ತ ಕುಟುಂಬ ವ್ಯವಸ್ಥೆ, ನಗರೀಕರಣ ಹಾಗೂ ಮಕ್ಕಳು ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗುವುದು ವೃದ್ಧರಲ್ಲಿ ಕೇವಲ ದೈಹಿಕ ದೂರವನ್ನಷ್ಟೇ ಅಲ್ಲ, ಮನಸ್ಸಿನ ನಡುವೆಯೂ ಕಂದಕ ಸೃಷ್ಟಿಸಿದೆ. ಸಂಗಾತಿಯ ಅಗಲಿಕೆ, ದೀರ್ಘಕಾಲದ ಅನಾರೋಗ್ಯ ಮತ್ತು ನಿವೃತ್ತಿಯು ಈ ಸಮಸ್ಯೆಯ ಆಳವನ್ನು ಹೆಚ್ಚಿಸಿದೆ.&lt;/p&gt;&lt;h3&gt;&lt;strong&gt;ಒಂಟಿತನ ನೈಸರ್ಗಿಕ ವಯಸ್ಸಾಗುವಿಕೆಯಲ್ಲ, ಅದೊಂದು ದೈಹಿಕ ಕಾಯಿಲೆ!&lt;/strong&gt;&lt;/h3&gt;&lt;p&gt;ದೆಹಲಿಯ ಏಮ್ಸ್ ನವದೆಹಲಿ ರಾಷ್ಟ್ರೀಯ ವೃದ್ಧಾಪ್ಯ ಕೇಂದ್ರದ ಪ್ರಾಧ್ಯಾಪಕ ಡಾ. ಅವಿನಾಶ್ ಚಕ್ರವರ್ತಿ ಅವರು ವೈಜ್ಞಾನಿಕ ಕೋನದಿಂದ ಈ ಸಮಸ್ಯೆಯನ್ನು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ, ಒಂಟಿತನವನ್ನು ವೃದ್ಧಾಪ್ಯದ ಸಹಜ ಪರಿಣಾಮವೆಂದು ನಿರ್ಲಕ್ಷಿಸದೆ, ಅದನ್ನೊಂದು ಆರೋಗ್ಯ ಸಂಬಂಧಿತ ಕಾಯಿಲೆಯಂತೆ ಕಾಣಬೇಕು. ಕೇಳುವ ಶಕ್ತಿ ಕಡಿಮೆಯಾಗುವುದು, ಸರಿಯಾಗಿ ನಡೆಯಲಾಗದಿರುವುದು ಮತ್ತು 'ನಾವು ಯಾರಿಗೂ ಬೇಡ' ಎಂಬ ಕೀಳರಿಮೆ ಹಿರಿಯರನ್ನು ಸಾಮಾಜಿಕವಾಗಿ ಇನ್ನಷ್ಟು ಪ್ರತ್ಯೇಕಿಸುತ್ತದೆ. ಇದು ಅವರ ನಿದ್ರೆ, ಆಹಾರ ಕ್ರಮ ಹಾಗೂ ಮನಸ್ಥಿತಿಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ.&lt;/p&gt;&lt;h3&gt;&lt;strong&gt;ಜೀವಕೋಶಗಳ ಮಟ್ಟದಲ್ಲಿ ಆತಂಕ!&lt;/strong&gt;&lt;/h3&gt;&lt;p&gt;ಐಎಂಎಸ್-ಬಿಎಚ್&zwnj;ಯು (IMS-BHU) ನ ವೃದ್ಧಾಪ್ಯ ವಿಭಾಗದ ಸ್ಥಾಪಕ ಮುಖ್ಯಸ್ಥ ಡಾ. ಅನೂಪ್ ಸಿಂಗ್ ಅವರು ಒಂಟಿತನದ ಭಯಾನಕ ದೈಹಿಕ ಪರಿಣಾಮಗಳನ್ನು ವಿವರಿಸುತ್ತಾರೆ. ದೀರ್ಘಕಾಲದ ಏಕಾಂಗಿತನವು ದೇಹದಲ್ಲಿ ನಿರಂತರ ಸೈಕಾಲಜಿಕಲ್ ಸ್ಟ್ರೆಸ್ (ಒತ್ತಡ) ಉಂಟುಮಾಡುತ್ತದೆ. ಇದರಿಂದಾಗಿ: ಅಧಿಕ ರಕ್ತದೊತ್ತಡ, ಹೃದ್ರೋಗದ ಅಪಾಯ ಮತ್ತು ನಿದ್ರಾಹೀನತೆ ಹೆಚ್ಚಾಗುತ್ತದೆ. ಅರಿವಿನ ಕುಸಿತ, ಆತಂಕ, ಖಿನ್ನತೆ ಮತ್ತು ಆಲ್ಝೈಮರ್ಸ್&zwnj;ನಂತಹ ಮನೋವ್ಯಾಧಿಗಳಿಗೆ ಇದು ಹಾದಿಮಾಡಿಕೊಡುತ್ತದೆ. ಇದು ಕೇವಲ ನಗರಗಳಿಗೆ ಸೀಮಿತವಾಗಿರದೆ, ಯುವಕರು ವಲಸೆ ಹೋದ ಕಾರಣ ಗ್ರಾಮೀಣ ಭಾಗದಲ್ಲೂ ವೃದ್ಧರಿಗೆ ಒಡನಾಟವಿಲ್ಲದೆ ತೀವ್ರವಾಗಿ ಕಾಡುತ್ತಿದೆ.&lt;/p&gt;&lt;h3&gt;&lt;strong&gt;ಪರಿಹಾರವೇನು? ಹಿರಿಯರನ್ನು ಮತ್ತೆ ಬಾಂಧವ್ಯಕ್ಕೆ ತರುವುದು ಹೇಗೆ?&lt;/strong&gt;&lt;/h3&gt;&lt;p&gt;ವೃದ್ಧರ ಈ ಮಾನಸಿಕ ಮತ್ತು ಭಾವನಾತ್ಮಕ ಬಿಕ್ಕಟ್ಟಿಗೆ ಪರಿಹಾರ ನಮ್ಮ ಮನೆಯಿಂದಲೇ ಆರಂಭವಾಗಬೇಕಿದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು ಅಥವಾ ಮೌನವಾಗಿರುವುದನ್ನು ಕುಟುಂಬಸ್ಥರು ಸೂಕ್ಷ್ಮವಾಗಿ ಗಮನಿಸಬೇಕು. ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಅವರೊಂದಿಗೆ ಮುಕ್ತವಾಗಿ ಮಾತನಾಡುವುದು. ಊಟವನ್ನು ಒಟ್ಟಿಗೆ ಮಾಡುವುದು ಮತ್ತು ಹಿರಿಯರನ್ನು ಸಣ್ಣಪುಟ್ಟ ಕುಟುಂಬ ನಿರ್ಧಾರಗಳಲ್ಲಿ ಭಾಗಿ ಮಾಡಿಕೊಳ್ಳುವುದು. ಅವರ ಅನುಭವಗಳಿಗೆ ಸೂಕ್ತ ಗೌರವ ನೀಡಿ, 'ನಿಮ್ಮ ಅಗತ್ಯ ನಮಗಿದೆ' ಎಂಬ ಭರವಸೆ ಮೂಡಿಸುವುದು. ಹಿರಿಯರಿಗೆ ಬೇಕಿರುವುದು ಕೇವಲ ಆಸ್ಪತ್ರೆಯ ಔಷಧಗಳಲ್ಲ, ಬದಲಿಗೆ ಪ್ರೀತಿ, ಆಲಿಸುವ ಕಿವಿಗಳು ಮತ್ತು ಅರ್ಥಪೂರ್ಣ ಒಡನಾಟ. ಅವರ ಆರೋಗ್ಯಪೂರ್ಣ ಜೀವನಕ್ಕೆ ಸಾಮಾಜಿಕ ಸಂಪರ್ಕವೇ ಅಂತಿಮ ಸಂಜೀವಿನಿಯಾಗಿದೆ ಎನ್ನಲಾಗಿದೆ.&lt;/p&gt;]]></content:encoded>
            <category>science</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/science/loneliness-health-effects-citizens-mental-health-heart-disease-depression-anxiety-alzheimers-aging-health-tips-bmk/articleshow-pw3hgcz"/>
        </item>
        <item>
            <title><![CDATA[ನೀರಿನಿಂದ ಸ್ಟೌವ್ ಉರಿಸಿದ 16 ವರ್ಷದ ಬಾಲಕ! 2 ಟ್ಯಾಂಕ್‌ + 1 ಬರ್ನರ್‌ + 3 ರೆಗ್ಯುಲೇಟರ್‌; ಅಣ್ಣ ಸೋತ, ತಮ್ಮ ಗೆದ್ದ!]]></title>
            <link>https://kannada.asianetnews.com/science/16-year-old-indian-student-built-a-kerosene-stove-that-runs-on-water-suh/articleshow-r9dado9</link>
            <guid isPermaLink="true">https://kannada.asianetnews.com/science/16-year-old-indian-student-built-a-kerosene-stove-that-runs-on-water-suh/articleshow-r9dado9</guid>
            <pubDate>Sun, 13 Sep 2026 16:53:14 +0530</pubDate>
            <description><![CDATA[&lt;p&gt;ವಿಜ್ಞಾನದಲ್ಲಿ ಹೊಸದನ್ನು ಸಾಧಿಸಲು ದೊಡ್ಡ ವಯಸ್ಸೇ ಬೇಕಿಲ್ಲ ಎಂಬುದನ್ನು ಮಧ್ಯಪ್ರದೇಶದ 16 ವರ್ಷದ ವಿದ್ಯಾರ್ಥಿ ವ್ಯಾಸ್ಜಿ ಮಿಶ್ರಾ ಸಾಬೀತುಪಡಿಸಿದ್ದರು. 11ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಕೆರೋಸಿನ್ ಮತ್ತು ಆವಿಯನ್ನು ಬಳಸುವ ವಿಶೇಷ ಹೈಬ್ರಿಡ್ ಸ್ಟೌವ್&zwnj;ವೊಂದನ್ನು ಅಭಿವೃದ್ಧಿಪಡಿಸಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d7kv0yednk5amtxted9awn,imgname-16-year-old-indian-student-built-a-kerosene-stove-that-runs-on-water-1789298076702.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜ್ಞಾನದಲ್ಲಿ ಹೊಸದನ್ನು ಸಾಧಿಸಲು ದೊಡ್ಡ ವಯಸ್ಸೇ ಬೇಕಿಲ್ಲ ಎಂಬುದನ್ನು ಮಧ್ಯಪ್ರದೇಶದ 16 ವರ್ಷದ ವಿದ್ಯಾರ್ಥಿ ವ್ಯಾಸ್ಜಿ ಮಿಶ್ರಾ ಸಾಬೀತುಪಡಿಸಿದ್ದರು. 11ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಕೆರೋಸಿನ್ ಮತ್ತು ಆವಿಯನ್ನು ಬಳಸುವ ವಿಶೇಷ ಹೈಬ್ರಿಡ್ ಸ್ಟೌವ್&zwnj;ವೊಂದನ್ನು ಅಭಿವೃದ್ಧಿಪಡಿಸಿದ್ದರು. ಈ ಆವಿಷ್ಕಾರ ವಿಜ್ಞಾನ ಪ್ರದರ್ಶನಗಳಲ್ಲಿ ಗಮನ ಸೆಳೆದಿದ್ದು, ಅವರಿಗೆ ಪ್ರಥಮ ಬಹುಮಾನವನ್ನೂ ತಂದುಕೊಟ್ಟಿತ್ತು. ಮಧ್ಯಪ್ರದೇಶದ ದೇವ್ಸರ್&zwnj;ನವರಾದ ಮಿಶ್ರಾಗೆ ಬಾಲ್ಯದಿಂದಲೇ ವಿಜ್ಞಾನ ಮತ್ತು ಅದರ ಪ್ರಾಯೋಗಿಕ ಬಳಕೆಯಲ್ಲಿ ಆಸಕ್ತಿ ಇತ್ತು. ಅವರು ಹಲವು ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. 2003ರಲ್ಲಿ ನಡೆದ ವಿಜ್ಞಾನ ಪ್ರದರ್ಶನದಲ್ಲಿ ಅವರ ಆವಿಷ್ಕಾರಕ್ಕೆ ಅಂದಿನ ಶಿಕ್ಷಣ ಸಚಿವ ಇಂದ್ರಜಿತ್ ಕುಮಾರ್ ಪಟೇಲ್ ಅವರಿಂದ ಪ್ರಥಮ ಬಹುಮಾನ ದೊರೆತಿತ್ತು. ಇದಕ್ಕೂ ಮೊದಲು 2000ರಲ್ಲಿ ಅವರು ಅಭಿವೃದ್ಧಿಪಡಿಸಿದ್ದ ಡ್ರಿಪ್ ಇರಿಗೇಷನ್ ವ್ಯವಸ್ಥೆಯ ಮಾದರಿ ಕೂಡ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಪಡೆದಿತ್ತು.&lt;/p&gt;&lt;h2&gt;ಅಣ್ಣನ ವಿಫಲ ಪ್ರಯತ್ನದಿಂದ ಹುಟ್ಟಿದ ಹೊಸ ಆಲೋಚನೆ&lt;/h2&gt;&lt;p&gt;ಈ ಸ್ಟೌವ್&zwnj;ನ ಕಲ್ಪನೆಯ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ಮಿಶ್ರಾ ಅವರ ಅಣ್ಣ ಪವನ್&zwnj;ಜಿ ಮಿಶ್ರಾ 2001-02ರಲ್ಲಿ ವಿಜ್ಞಾನ ಮೇಳಕ್ಕಾಗಿ ಇದೇ ರೀತಿಯ ಮಾದರಿಯನ್ನು ನಿರ್ಮಿಸಲು ಪ್ರಯತ್ನಿಸಿದ್ದರು. ಆದರೆ ಆ ಪ್ರಯತ್ನ ಯಶಸ್ವಿಯಾಗಿರಲಿಲ್ಲ. ನಂತರ 2002-03ರಲ್ಲಿ ಶಾಲೆಯ ವಿಜ್ಞಾನ ಪ್ರದರ್ಶನದ &lsquo;Sources of Energy&rsquo; ವಿಭಾಗದಲ್ಲಿ ಭಾಗವಹಿಸಲು ವ್ಯಾಸ್ಜಿ ನಿರ್ಧರಿಸಿದಾಗ, ಇಬ್ಬರೂ ಸಹೋದರರು ಸೇರಿ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಲು ಮುಂದಾದರು. ಸುಮಾರು ಆರು ತಿಂಗಳ ಕಾಲ ಪ್ರಯೋಗ, ವಿನ್ಯಾಸ ಮತ್ತು ತಯಾರಿಕೆಯ ನಂತರ ಈ ಸ್ಟೌವ್ ರೂಪುಗೊಂಡಿತು.&lt;/p&gt;&lt;h2&gt;ಎರಡು ಟ್ಯಾಂಕ್&zwnj;, ಒಂದು ಬರ್ನರ್, ಮೂರು ರೆಗ್ಯುಲೇಟರ್&lt;/h2&gt;&lt;p&gt;ಮಿಶ್ರಾ ಮತ್ತು ಅವರ ಅಣ್ಣ ಎರಡು ಸಾಮಾನ್ಯ ಕೆರೋಸಿನ್ ಸ್ಟೌವ್&zwnj;ಗಳ ವಿನ್ಯಾಸವನ್ನು ಸಂಯೋಜಿಸಿ ಹೊಸ ಮಾದರಿ ತಯಾರಿಸಿದರು. ಇದಕ್ಕೆ ಮೂರು ರೆಗ್ಯುಲೇಟರ್&zwnj;ಗಳನ್ನು ಅಳವಡಿಸಲಾಗಿತ್ತು.&lt;/p&gt;&lt;p&gt;ಒಂದು ರೆಗ್ಯುಲೇಟರ್&zwnj; ಕೆರೋಸಿನ್ ಹರಿವನ್ನು ನಿಯಂತ್ರಿಸುತ್ತಿತ್ತು.&lt;/p&gt;&lt;p&gt;ಎರಡನೆಯದು ನೀರಿನ ಹರಿವನ್ನು ನಿಯಂತ್ರಿಸುತ್ತಿತ್ತು.&lt;/p&gt;&lt;p&gt;ಮೂರನೆಯದು ಬರ್ನರ್&zwnj; ಅನ್ನು ಆನ್-ಆಫ್ ಮಾಡಲು ಬಳಸಲಾಗುತ್ತಿತ್ತು. ಸ್ಟೌವ್&zwnj;ನಲ್ಲಿ ಎರಡು ಪ್ರತ್ಯೇಕ ಟ್ಯಾಂಕ್&zwnj;ಗಳಿದ್ದವು. ಒಂದರಲ್ಲಿ ಕೆರೋಸಿನ್, ಮತ್ತೊಂದರಲ್ಲಿ ನೀರು ತುಂಬಲಾಗುತ್ತಿತ್ತು. ಎರಡೂ ಟ್ಯಾಂಕ್&zwnj;ಗಳಿಗೆ ಗಾಳಿಯ ಒತ್ತಡ ಸೃಷ್ಟಿಸಲು ಪಂಪ್&zwnj;ಗಳಿದ್ದು, ಪೈಪ್&zwnj;ಗಳ ಮೂಲಕ ಕೆರೋಸಿನ್ ಮತ್ತು ನೀರನ್ನು ಬರ್ನರ್&zwnj;ವರೆಗೆ ತಲುಪಿಸಲಾಗುತ್ತಿತ್ತು.&lt;/p&gt;&lt;h2&gt;ಹಾಗಾದರೆ ನೀರಿನಿಂದ ಸ್ಟೌವ್ ಹೇಗೆ ಉರಿಯುತ್ತಿತ್ತು?&lt;/h2&gt;&lt;p&gt;ಇದು ಸಂಪೂರ್ಣವಾಗಿ ನೀರಿನಿಂದ ಮಾತ್ರ ಉರಿಯುವ ಸ್ಟೌವ್ ಆಗಿರಲಿಲ್ಲ. ಮೊದಲಿಗೆ ಕೆರೋಸಿನ್ ಬಳಸಿ ಬರ್ನರ್&zwnj; ಅನ್ನು ಬಿಸಿ ಮಾಡಲಾಗುತ್ತಿತ್ತು. ಬರ್ನರ್ ಕೆಂಪಗೆ ಬಿಸಿಯಾದ ಬಳಿಕ ಕೆರೋಸಿನ್ ರೆಗ್ಯುಲೇಟರ್&zwnj; ಅನ್ನು ಮುಚ್ಚಿ ನೀರಿನ ರೆಗ್ಯುಲೇಟರ್&zwnj; ತೆರೆಯಲಾಗುತ್ತಿತ್ತು. ಬಿಸಿಯಾದ ಭಾಗಕ್ಕೆ ನೀರು ತಲುಪಿದಾಗ ಆವಿ ಉತ್ಪತ್ತಿಯಾಗುತ್ತಿತ್ತು. ಆ ಆವಿಯನ್ನು ತಾಪನ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿತ್ತು. ಆದರೆ ಸ್ವಲ್ಪ ಸಮಯದ ನಂತರ ಜ್ವಾಲೆ ಕಡಿಮೆಯಾದರೆ ನೀರಿನ ಪೂರೈಕೆಯನ್ನು ನಿಲ್ಲಿಸಿ ಮತ್ತೆ ಕೆರೋಸಿನ್ ವಿಭಾಗವನ್ನು ಚಾಲನೆ ಮಾಡಬೇಕಾಗುತ್ತಿತ್ತು. ಬರ್ನರ್ ಮತ್ತೆ ಬಿಸಿಯಾದ ಬಳಿಕ ಇದೇ ಪ್ರಕ್ರಿಯೆಯನ್ನು ಪುನರಾವರ್ತಿಸಲಾಗುತ್ತಿತ್ತು.&lt;/p&gt;&lt;h2&gt;ನಿರಂತರವಾಗಿ ನೀರಿನಿಂದಲೇ ಕೆಲಸ ಮಾಡಬೇಕು ಎಂಬುದು ಗುರಿ&lt;/h2&gt;&lt;p&gt;ಮಿಶ್ರಾ ಅವರ ಮೂಲ ಮಾದರಿಗೆ ಕೆಲವು ಮಿತಿಗಳಿದ್ದವು. ನೀರನ್ನು ಬಳಸುವಾಗ ಸ್ವಲ್ಪ ಸಮಯದ ನಂತರ ಬರ್ನರ್ ತಣ್ಣಗಾಗುವ ಸಾಧ್ಯತೆ ಇತ್ತು. ಇದರಿಂದ ಸ್ಟೌವ್ ಕಾರ್ಯನಿರ್ವಹಣೆ ನಿಲ್ಲಬಹುದಾಗಿತ್ತು. ಹೀಗಾಗಿ ಸ್ಟೌವ್&zwnj; ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಹೊರಗಿನಿಂದ ಮತ್ತೆ ಕೆರೋಸಿನ್ ಬಳಸುವ ಅಗತ್ಯವಿಲ್ಲದೆ ನೀರಿನ ವ್ಯವಸ್ಥೆಯಲ್ಲೇ ನಿರಂತರವಾಗಿ ಕೆಲಸ ಮಾಡುವಂತೆ ಮಾಡಬೇಕೆಂಬುದು ಅವರ ಗುರಿಯಾಗಿತ್ತು.&lt;/p&gt;&lt;h2&gt;ಸುರಕ್ಷತೆಯ ಬಗ್ಗೆಯೂ ಎಚ್ಚರಿಕೆ&lt;/h2&gt;&lt;p&gt;ಸ್ಟೌವ್ ಬಳಸುವಾಗ ಕೆಲವು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕಾಗಿತ್ತು. ನೀರಿನ ರೆಗ್ಯುಲೇಟರ್ ತೆರೆಯುವ ಸಂದರ್ಭದಲ್ಲಿ ಕೆರೋಸಿನ್ ರೆಗ್ಯುಲೇಟರ್ ಮುಚ್ಚಿರಬೇಕಾಗಿತ್ತು. ಟ್ಯಾಂಕ್&zwnj;ಗಳಿಗೆ ನೀರು ಅಥವಾ ಕೆರೋಸಿನ್ ತುಂಬುವಾಗ ಅವುಗಳೊಳಗೆ ಕೊಳಕು ಸೇರದಂತೆ ಎಚ್ಚರಿಕೆ ವಹಿಸಬೇಕಾಗಿತ್ತು.&lt;/p&gt;&lt;h2&gt;ಕೆರೋಸಿನ್ ಬಳಕೆ ಕಡಿಮೆ ಮಾಡುವ ಉದ್ದೇಶ&lt;/h2&gt;&lt;p&gt;ಈ ಆವಿಷ್ಕಾರದ ಪ್ರಮುಖ ಉದ್ದೇಶ ಸಾಮಾನ್ಯ ಸ್ಟೌವ್&zwnj;ಗಳಿಗೆ ಹೋಲಿಸಿದರೆ ಕೆರೋಸಿನ್ ಬಳಕೆ ಮತ್ತು ಹೊಗೆಯನ್ನು ಕಡಿಮೆ ಮಾಡುವುದು. ಕೆರೋಸಿನ್ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಮನೆಗಳಿಗೆ ಮಾತ್ರವಲ್ಲದೆ, ಗಾಜು ಮತ್ತು ಆಟಿಕೆ ತಯಾರಿಕಾ ಘಟಕಗಳು, ಪ್ರಯೋಗಾಲಯಗಳು ಹಾಗೂ ಸಣ್ಣ ಉದ್ಯಮಗಳಲ್ಲೂ ಇದರ ಬಳಕೆಯ ಸಾಧ್ಯತೆಯನ್ನು ಪರಿಗಣಿಸಲಾಗಿತ್ತು. ಆ ಸಮಯದಲ್ಲಿ ಈ ಸ್ಟೌವ್&zwnj;ನ ಮಾರುಕಟ್ಟೆ ಬೆಲೆ ಸುಮಾರು ₹600 ಇರಬಹುದು ಎಂದು ಅಂದಾಜಿಸಲಾಗಿತ್ತು.&lt;/p&gt;&lt;h2&gt;ಆದರೆ ಪರೀಕ್ಷೆಯಲ್ಲಿ ಸಿಕ್ಕಿದ್ದು ಎಷ್ಟು ಉಳಿತಾಯ?&lt;/h2&gt;&lt;p&gt;ಸ್ಟೌವ್ ಕುರಿತು ಆರಂಭದಲ್ಲಿ ಹೆಚ್ಚಿನ ಪ್ರಮಾಣದ ಕೆರೋಸಿನ್ ಉಳಿತಾಯದ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ಹೆಚ್ಚಿನ ಪರೀಕ್ಷೆ ಮತ್ತು ಸಂಶೋಧನೆಯ ಅಗತ್ಯವಿತ್ತು. ಇಂಡಿಯನ್ ಇನ್&zwnj;ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ, ಡೆಹ್ರಾಡೂನ್ ಈ ಪರಿಕಲ್ಪನೆ ಕುರಿತು ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು. ಮತ್ತೊಂದೆಡೆ IIT ಗುವಾಹಟಿ ಸ್ಟೌವ್&zwnj;ನ ಕಾರ್ಯಕ್ಷಮತೆಯನ್ನು ಸುಧಾರಿಸುವ ಕೆಲಸ ಮಾಡಿತು. ಕ್ಯಾಲಿಬ್ರೇಷನ್&zwnj; ಬಳಿಕ ನಡೆದ ಪರೀಕ್ಷೆಗಳಲ್ಲಿ ಈ ಸಾಧನವು ಸುಮಾರು 20% ಕೆರೋಸಿನ್ ಉಳಿತಾಯ ಮಾಡಬಹುದೆಂದು ಕಂಡುಬಂದಿತ್ತು. ಆರಂಭದಲ್ಲಿ ಹೇಳಲಾಗಿದ್ದ ಹೆಚ್ಚಿನ ಪ್ರಮಾಣದ ಉಳಿತಾಯಕ್ಕಿಂತ ಇದು ಕಡಿಮೆಯಾಗಿತ್ತು.&lt;/p&gt;&lt;h2&gt;₹37,250 ಇನ್ನೋವೇಶನ್ ಫಂಡ್ ನೆರವು&lt;/h2&gt;&lt;p&gt;ಮಿಶ್ರಾ ಅವರ ಪ್ರಯತ್ನಕ್ಕೆ ನಂತರ National Innovation Foundation (NIF) ಮತ್ತು Grassroots Innovations Augmentation Network (GIAN) ಮೂಲಕವೂ ಬೆಂಬಲ ದೊರೆಯಿತು. ನೀರಿನ-ಕೆರೋಸಿನ್ ಸ್ಟೌವ್ ಸೇರಿದಂತೆ ನಾಲ್ಕು ಆವಿಷ್ಕಾರಗಳ ಪ್ರೋಟೋಟೈಪ್ ಅಭಿವೃದ್ಧಿ ಮತ್ತು ಮಾರುಕಟ್ಟೆ ಸಂಶೋಧನೆಗಾಗಿ Micro Venture Innovation Fundನಿಂದ ಒಟ್ಟು ₹37,250 ಮಂಜೂರು ಮಾಡಲಾಗಿತ್ತು. ಈ ಆವಿಷ್ಕಾರಕ್ಕೆ 2002ರಲ್ಲೇ ಹಲವು ವಿಜ್ಞಾನ ಪ್ರದರ್ಶನಗಳಲ್ಲಿ ಗಮನ ಸೆಳೆದಿದ್ದು, ಪತ್ರಿಕೆಗಳಲ್ಲೂ ವರದಿಯಾಗಿತ್ತು.&lt;/p&gt;]]></content:encoded>
            <category>science</category>
            <dc:creator>Sushma Hegde</dc:creator>
            <atom:link href="https://kannada.asianetnews.com/science/16-year-old-indian-student-built-a-kerosene-stove-that-runs-on-water-suh/articleshow-r9dado9"/>
        </item>
        <item>
            <title><![CDATA[ISRO ವಿಜ್ಞಾನಿಗಳ 3 ಸೈಕ್ಲೋನ್ ಮುನ್ಸೂಚನೆ: ಬರಗಾಲದಿಂದ ಕಂಗೆಟ್ಟ ರಾಜ್ಯಕ್ಕೆ ಮಳೆ ತರುತ್ತವೆಯೇ ಚಂಡಮಾರುತಗಳು!]]></title>
            <link>https://kannada.asianetnews.com/science/isro-forecasts-three-cyclones-in-indian-ocean-relief-for-india-and-karnataka-drought-sat/articleshow-tf161og</link>
            <guid isPermaLink="true">https://kannada.asianetnews.com/science/isro-forecasts-three-cyclones-in-indian-ocean-relief-for-india-and-karnataka-drought-sat/articleshow-tf161og</guid>
            <pubDate>Mon, 14 Sep 2026 06:39:27 +0530</pubDate>
            <description><![CDATA[ಈ ವರ್ಷದ ಅಕ್ಟೋಬರ್&zwnj;ನಿಂದ ಡಿಸೆಂಬರ್&zwnj; ಅವಧಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಮೂರು ಪ್ರಬಲ ಚಂಡಮಾರುತಗಳು ಸೃಷ್ಟಿಯಾಗಲಿವೆ ಎಂದು ಇಸ್ರೋ ಮುನ್ಸೂಚನೆ ನೀಡಿದೆ. ಈ ಚಂಡಮಾರುತಗಳು ಬರದಿಂದ ತತ್ತರಿಸಿರುವ ಕರ್ನಾಟಕಕ್ಕೆ ಧಾರಾಕಾರ ಮಳೆ ತಂದು, ಜಲಾಶಯಗಳನ್ನು ತುಂಬಿಸುವ ಮೂಲಕ ವರದಾನವಾಗುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kcp5wv2237p5n4wnqcp0wkzp,imgname-bay-of-bengal-1765975944258.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.14): ಈ&lt;/strong&gt; ವರ್ಷದ ಅಂತಿಮ ತ್ರೈಮಾಸಿಕ ಅವಧಿಯಲ್ಲಿ (ಅಕ್ಟೋಬರ್&zwnj;ನಿಂದ ಡಿಸೆಂಬರ್) ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ಬರೋಬ್ಬರಿ 3 ಪ್ರಬಲ ಚಂಡಮಾರುತಗಳು (Cyclones) ಸೃಷ್ಟಿಯಾಗುವ ಆತಂಕವಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ. ಚಂಡಮಾರುತಗಳು ಕರಾವಳಿ ತೀರಗಳಲ್ಲಿ ಆತಂಕ ಮೂಡಿಸಿದ್ದರೂ, ಇನ್ನೊಂದೆಡೆ ತೀವ್ರ ಮಳೆ ಕೊರತೆ ಹಾಗೂ ಬರ ಎದುರಿಸುತ್ತಿರುವ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಇದು ವರದಾನವಾಗುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;ಮುಂಗಾರೋತ್ತರದಲ್ಲಿ ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ ಪ್ರಕ್ಷುಬ್ಧ!&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಮುಂಗಾರು ಮಳೆ ಮುಗಿಯುವ ಹೊತ್ತಿಗೆ ಅಂದರೆ ಮುಂಗಾರೋತ್ತರ (Post-Monsoon) ಅವಧಿಯಲ್ಲಿ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಚಂಡಮಾರುತಗಳು ಉದ್ಭವಿಸುವುದು ಸಾಮಾನ್ಯ. ಸದ್ಯ ವಾತಾವರಣದಲ್ಲಿ ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್&zwnj;ನಿಂದ ವರ್ಷಾಂತ್ಯದೊಳಗೆ ಮೂರು ಪ್ರಮುಖ ಸೈಕ್ಲೋನ್&zwnj;ಗಳು ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಇಸ್ರೋ ವಿಜ್ಞಾನಿಗಳ ಹವಾಮಾನ ಮಾದರಿಗಳು ಅಂದಾಜಿಸಿವೆ.&lt;/p&gt;&lt;h2&gt;&lt;strong&gt;ಗುಜರಾತ್, ಮಹಾರಾಷ್ಟ್ರ ಕರಾವಳಿಗೆ ಭಾರಿ ಮಳೆ ಸಾಧ್ಯತೆ:&lt;/strong&gt;&lt;/h2&gt;&lt;p&gt;ಪ್ರಾಥಮಿಕ ವರದಿಗಳ ಪ್ರಕಾರ, ಈ ಚಂಡಮಾರುತಗಳ ಪ್ರಭಾವದಿಂದಾಗಿ ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ತೀರಗಳಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಪ್ರಸ್ತುತ ಹವಾಮಾನ ಪರಿಸ್ಥಿತಿಯನ್ನು ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಚಂಡಮಾರುತಗಳು ನಿಖರವಾಗಿ ಎಲ್ಲಿ ಸೃಷ್ಟಿಯಾಗಲಿವೆ ಮತ್ತು ಅವು ಯಾವ ಕರಾವಳಿಗೆ ಅಪ್ಪಳಿಸಲಿವೆ ಎಂಬುದು ಆಯಾ ಸಿಸ್ಟಮ್&zwnj;ಗಳು ಸಂಪೂರ್ಣವಾಗಿ ರೂಪುಗೊಂಡ ಬಳಿಕವಷ್ಟೇ ನಿಖರವಾಗಿ ತಿಳಿಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ.&lt;/p&gt;&lt;h3&gt;&lt;strong&gt;ಕರ್ನಾಟಕದ ಜಲಾಶಯಗಳಿಗೆ ಹರಿದುಬರುತ್ತಾ ನೀರು? ಬರ ನೀಗೀತೇ?&lt;/strong&gt;&lt;/h3&gt;&lt;p&gt;ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದೆ. ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಕೃಷಿ ಚಟುವಟಿಕೆಗಳು ಹಾಗೂ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಆದರೆ, ಇಸ್ರೋ ಮುನ್ಸೂಚನೆಯಂತೆ ಸೃಷ್ಟಿಯಾಗಲಿರುವ ಚಂಡಮಾರುತಗಳು ಪಶ್ಚಿಮ ಕರಾವಳಿ ಅಥವಾ ದಕ್ಷಿಣ ಭಾರತದ ಒಳನಾಡಿನತ್ತ ಮುಖಮಾಡಿದರೆ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಭಾಗಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಇದರಿಂದ ರಾಜ್ಯದ ಪ್ರಮುಖ ಅಣೆಕಟ್ಟುಗಳಿಗೆ ಒಳಹರಿವು ಹೆಚ್ಚಿ, ಬರದ ಬವಣೆ ತಕ್ಕಮಟ್ಟಿಗೆ ನೀಗಬಹುದು ಎಂಬ ಆಶಾಭಾವನೆ ರೈತ ವಲಯದಲ್ಲಿ ಮೂಡಿದೆ.&lt;/p&gt;]]></content:encoded>
            <category>science</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/science/isro-forecasts-three-cyclones-in-indian-ocean-relief-for-india-and-karnataka-drought-sat/articleshow-tf161og"/>
        </item>
        <item>
            <title><![CDATA[30ಕ್ಕೂ ಹೆಚ್ಚು ದೇಶದಲ್ಲಿ ಟೆರೇಸ್ ಮೇಲೆ ಪ್ಲಾಸ್ಟಿಕ್ ನೀರಿನ ಬಾಟಲಿ ಇಡುತ್ತಿರುವುದೇಕೆ?]]></title>
            <link>https://kannada.asianetnews.com/life/moser-lamp-the-simple-water-bottle-trick-used-in-over-30-countries/articleshow-tw2gwts</link>
            <guid isPermaLink="true">https://kannada.asianetnews.com/life/moser-lamp-the-simple-water-bottle-trick-used-in-over-30-countries/articleshow-tw2gwts</guid>
            <pubDate>Thu, 10 Sep 2026 14:43:49 +0530</pubDate>
            <description><![CDATA[&lt;p&gt;&lt;strong&gt;Eco friendly lighting: &lt;/strong&gt;ಬೆಳಕಿಲ್ಲದ ಕೋಣೆಗೆ ಬೆಳಕು ತರಲು ನಾವೇನು ಮಾಡುತ್ತೇವೆ? ಸ್ವಿಚ್ ಆನ್ ಮಾಡಿ ಬಲ್ಬ್ ಹಚ್ಚುತ್ತೇವೆ. ಆದರೆ, ಹಗಲು ಹೊತ್ತಿನಲ್ಲಿ ವಿದ್ಯುತ್ ಇಲ್ಲದೆಯೂ, ಬಿಲ್ ಕಟ್ಟದೆಯೂ ಕೋಣೆಯನ್ನು ಫಳಫಳನೆ ಬೆಳಗಿಸಬಹುದು ಅಂದರೆ ನೀವು ನಂಬುತ್ತೀರಾ? ಹೌದು, ಒಂದು ಖಾಲಿ ಪ್ಲಾಸ್ಟಿಕ್ ಬಾಟಲ್ ಮತ್ತು ಸ್ವಲ್ಪ ನೀರಿದ್ದರೆ ಸಾಕು!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25918b6vdfgx352wj2vhdmn,imgname-thumbnail---2026-09-10t143324.700-1789031129446.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹ&lt;/strong&gt;ಗಲಿನಲ್ಲಿ ವಿದ್ಯುತ್ ದೀಪಗಳನ್ನು ಬಳಸುವುದನ್ನು ತಪ್ಪಿಸಲು ಜಗತ್ತಿನ 30ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರು ಈ ಅದ್ಭುತ ಐಡಿಯಾವನ್ನು ಬಳಸುತ್ತಿದ್ದಾರೆ. ಇದಕ್ಕೆ &lsquo;ಮೋಸರ್ ಲ್ಯಾಂಪ್&rsquo; (Moser Lamp) ಎಂದು ಕರೆಯಲಾಗುತ್ತದೆ.&lt;/p&gt;&lt;h2&gt;&lt;strong&gt;ಏನಿದು 'ಮೋಸರ್ ಲ್ಯಾಂಪ್'? ಹುಟ್ಟಿದ್ದು ಎಲ್ಲಿ?&lt;/strong&gt;&lt;/h2&gt;&lt;p&gt;ಈ ಸರಳ ತಂತ್ರಜ್ಞಾನವನ್ನು 2002 ರಲ್ಲಿ ಬ್ರೆಜಿಲ್&zwnj;ನ ಮೆಕ್ಯಾನಿಕ್ ಆಗಿದ್ದ ಆಲ್ಫ್ರೆಡೋ ಮೋಸರ್ (Alfredo Moser) ಎಂಬುವವರು ಆವಿಷ್ಕರಿಸಿದರು. ಆ ಸಮಯದಲ್ಲಿ ಬ್ರೆಜಿಲ್&zwnj;ನಲ್ಲಿ ತೀವ್ರ ವಿದ್ಯುತ್ ಕೊರತೆ ಮತ್ತು ಲೋಡ್&zwnj;ಶೆಡ್ಡಿಂಗ್ ಇತ್ತು. ಕಿಟಕಿಗಳಿಲ್ಲದ ತಮ್ಮ ವರ್ಕ್&zwnj;ಶಾಪ್&zwnj;ನಲ್ಲಿ ಕತ್ತಲನ್ನು ಹೋಗಲಾಡಿಸಲು ಅವರು ಈ ಬಾಟಲ್ ದೀಪವನ್ನು ಕಂಡುಹಿಡಿದರು. ಅವರ ಹೆಸರಿನಿಂದಲೇ ಇದು 'ಮೋಸರ್ ಲ್ಯಾಂಪ್' ಎಂದು ಪ್ರಸಿದ್ಧಿಯಾಯಿತು.&lt;/p&gt;&lt;p&gt;ನಂತರ 2011 ರಲ್ಲಿ, ಫಿಲಿಪೈನ್ಸ್&zwnj;ನ 'ಮೈ ಶೆಲ್ಟರ್ ಫೌಂಡೇಶನ್' (MyShelter Foundation) ಈ ಐಡಿಯಾವನ್ನು &lsquo;ಲಿಟರ್ ಆಫ್ ಲೈಟ್&rsquo; (Liter of Light) ಎಂಬ ಅಭಿಯಾನದ ಮೂಲಕ ಜಗತ್ತಿಗೆ ಪರಿಚಯಿಸಿತು. ಕೆಲವೇ ತಿಂಗಳುಗಳಲ್ಲಿ 15 ದೇಶಗಳ ಸುಮಾರು 3.5 ಲಕ್ಷ ಮನೆಗಳಿಗೆ ಇದು ಬೆಳಕು ನೀಡಿತು. ನಂತರ ಯುನೆಸ್ಕೋ (UNESCO) ವರದಿಗಳ ಪ್ರಕಾರ, ಇದು ವಿಶ್ವದ 30ಕ್ಕೂ ಹೆಚ್ಚು ಬಡ ಮತ್ತು ಹಿಂದುಳಿದ ದೇಶಗಳಿಗೆ ವಿಸ್ತರಿಸಿತು.&lt;/p&gt;&lt;h2&gt;&lt;strong&gt;ಇದು ಹೇಗೆ ಕೆಲಸ ಮಾಡುತ್ತದೆ? (ವೈಜ್ಞಾನಿಕ ತತ್ವ)&lt;/strong&gt;&lt;/h2&gt;&lt;p&gt;ಇದೊಂದು ನೈಸರ್ಗಿಕ ಸೋಲಾರ್ ಬಲ್ಬ್&zwnj;ನಂತೆ ಕೆಲಸ ಮಾಡುತ್ತೆ. ಛಾವಣಿಯ (ಮೇಲ್ಛಾವಣಿ/ಶೀಟ್) ಮೇಲೆ ತೂತು ಮಾಡಿ, ನೀರು ತುಂಬಿದ ಪಾರದರ್ಶಕ ಪ್ಲಾಸ್ಟಿಕ್ ಬಾಟಲಿಯನ್ನು ಅರ್ಧ ಹೊರಗೆ ಮತ್ತು ಅರ್ಧ ಒಳಗೆ ಇರುವಂತೆ ಕೂರಿಸಲಾಗುತ್ತದೆ. ಸೂರ್ಯನ ಬೆಳಕು ಬಾಟಲಿಯ ಹೊರಭಾಗದ ಮೇಲೆ ಬಿದ್ದಾಗ, ಬೆಳಕಿನ ಕಿರಣಗಳು ನೀರನ್ನು ಹಾದುಹೋಗುತ್ತವೆ. ಇಲ್ಲಿ &lsquo;ಬೆಳಕಿನ ವಕ್ರೀಭವನ&rsquo; (Refraction) ಕ್ರಿಯೆ ನಡೆಯುತ್ತದೆ. ನೀರು ಬೆಳಕನ್ನು ಒಂದೇ ಕಡೆ ಕೇಂದ್ರೀಕರಿಸದೆ, ಕೋಣೆಯ ನಾಲಕ್ಕು ಮೂಲೆಗೂ 360 ಡಿಗ್ರಿಯಲ್ಲಿ ಚದುರಿಸುತ್ತದೆ (Diffuse).&lt;/p&gt;&lt;p&gt;ಇದು ಸುಮಾರು 40 ರಿಂದ 60 ವ್ಯಾಟ್ ಸಾಮರ್ಥ್ಯದ ವಿದ್ಯುತ್ ಬಲ್ಬ್&zwnj;ನಷ್ಟೇ ಪ್ರಕಾಶಮಾನವಾದ ಬೆಳಕನ್ನು ಕೋಣೆಗೆ ನೀಡುತ್ತದೆ!&lt;/p&gt;&lt;h2&gt;&lt;strong&gt;ಇದನ್ನು ಸರಿಯಾಗಿ ಅಳವಡಿಸುವುದು ಹೇಗೆ?&lt;/strong&gt;&lt;/h2&gt;&lt;p&gt;&lt;strong&gt;ಸ್ವಚ್ಛವಾದ ಪ್ಲಾಸ್ಟಿಕ್ ಬಾಟಲ್: &lt;/strong&gt;ಪಾರದರ್ಶಕವಾದ 1.5 ಅಥವಾ 2 ಲೀಟರ್&zwnj;ನ PET ಬಾಟಲಿಯನ್ನು ಬಳಸಬೇಕು.&lt;/p&gt;&lt;p&gt;&lt;strong&gt;ಬ್ಲೀಚ್ / ಕ್ಲೋರಿನ್ ಬಳಕೆ: &lt;/strong&gt;ನೀರು ತುಂಬುವಾಗ ಅದಕ್ಕೆ 2-3 ಮುಚ್ಚಳದಷ್ಟು ಬ್ಲೀಚ್ (Bleach) ಅಥವಾ ಕ್ಲೋರಿನ್ ಹಾಕಬೇಕು. ಇದರಿಂದ ನೀರಿನಲ್ಲಿ ಪಾಚಿ (Algae) ಕಟ್ಟುವುದಿಲ್ಲ ಮತ್ತು ನೀರು ವರ್ಷಗಟ್ಟಲೆ ಸ್ವಚ್ಛವಾಗಿ ಉಳಿಯುತ್ತದೆ.&lt;/p&gt;&lt;p&gt;&lt;strong&gt;ಸೀಲಿಂಗ್ ಅತ್ಯಗತ್ಯ: &lt;/strong&gt;ಛಾವಣಿಗೆ ರಂಧ್ರ ಕೊರೆದು ಬಾಟಲ್ ಕೂರಿಸಿದ ನಂತರ, ಮಳೆ ನೀರು ಒಳಗೆ ಬರದಂತೆ ಸುತ್ತಲೂ ಸಿಲಿಕಾನ್ ಅಥವಾ ವಾಟರ್&zwnj;ಪ್ರೂಫ್ ಅಂಟು (Sealant) ಹಾಕಿ ಭದ್ರಪಡಿಸಬೇಕು.&lt;/p&gt;&lt;h2&gt;&lt;strong&gt;ಇದು ಜಗತ್ತಿನಾದ್ಯಂತ ಇಷ್ಟೊಂದು ಜನಪ್ರಿಯವಾಗಲು ಕಾರಣವೇನು?&lt;/strong&gt;&lt;/h2&gt;&lt;p&gt;&lt;strong&gt;ಶೂನ್ಯ ಖರ್ಚು&lt;/strong&gt;: ಕಸಕ್ಕೆ ಎಸೆಯುವ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆಯಾಗುತ್ತದೆ.&lt;/p&gt;&lt;p&gt;&lt;strong&gt;ವಿದ್ಯುತ್ ಉಳಿತಾಯ: &lt;/strong&gt;ಹಗಲಿನಲ್ಲಿ ಬಲ್ಬ್ ಹಾಕುವ ಅಗತ್ಯವೇ ಇರುವುದಿಲ್ಲ, ಕರೆಂಟ್ ಬಿಲ್ ಉಳಿಯುತ್ತದೆ.&lt;/p&gt;&lt;p&gt;&lt;strong&gt;ಪರಿಸರ ಸ್ನೇಹಿ: &lt;/strong&gt;ಯಾವುದೇ ಇಂಧನ ಅಥವಾ ಕಾರ್ಬನ್ ಹೊರಸೂಸುವಿಕೆ ಇರುವುದಿಲ್ಲ.&lt;/p&gt;&lt;p&gt;&lt;strong&gt;ಸುಲಭ ಬಳಕೆ:&lt;/strong&gt; ಕಡಿಮೆ ಆದಾಯದ ಕುಟುಂಬಗಳು ಅಥವಾ ಕಿಟಕಿಗಳಿಲ್ಲದ ಗೋದಾಮು, ಕೊಳೆಗೇರಿ (Slum) ಪ್ರದೇಶದ ಸಣ್ಣ ಮನೆಗಳಿಗೆ ಇದು ಸಂಜೀವಿನಿಯಾಗಿದೆ.&lt;/p&gt;&lt;p&gt;ಯಾವುದೇ ಸಂಕೀರ್ಣ ತಂತ್ರಜ್ಞಾನವಿಲ್ಲದೆ, ಕೇವಲ ಸೂರ್ಯನ ಬೆಳಕು ಮತ್ತು ಒಂದು ಬಾಟಲ್ ನೀರಿನಿಂದ ಬಡವರ ಮನೆಗಳಲ್ಲಿ ಬೆಳಕು ಚೆಲ್ಲಿದ ಈ ಆವಿಷ್ಕಾರ ಇಂದಿಗೂ ವಿಶ್ವದ ಅತ್ಯಂತ ಯಶಸ್ವಿ 'ಜುಗಾಡ್' ಅಥವಾ ಗ್ರಾಮೀಣ ತಂತ್ರಜ್ಞಾನಗಳಲ್ಲಿ ಒಂದಾಗಿದೆ.&lt;/p&gt;]]></content:encoded>
            <category>science</category>
            <dc:creator>Ashwini HR</dc:creator>
            <atom:link href="https://kannada.asianetnews.com/life/moser-lamp-the-simple-water-bottle-trick-used-in-over-30-countries/articleshow-tw2gwts"/>
        </item>
        <item>
            <title><![CDATA[ವಾಹನ ಯಾವುದೇ ಬಣ್ಣದಲ್ಲಿದ್ದರೂ ಟೈರ್ ಮಾತ್ರ ಕಪ್ಪಾಗಿ ಇರೋದ್ಯಾಕೆ? ಇದರ ಹಿಂದಿದೆ ಜನರ ಪ್ರಾಣ ಉಳಿಸೋ ಬಿಗ್ ಸೀಕ್ರೆಟ್!]]></title>
            <link>https://kannada.asianetnews.com/life/why-are-vehicle-tires-always-black-the-life-saving-science-behind-it/articleshow-vglrheq</link>
            <guid isPermaLink="true">https://kannada.asianetnews.com/life/why-are-vehicle-tires-always-black-the-life-saving-science-behind-it/articleshow-vglrheq</guid>
            <pubDate>Fri, 18 Sep 2026 18:30:15 +0530</pubDate>
            <description><![CDATA[&lt;p&gt;&lt;strong&gt;Why tires are not colorful: &lt;/strong&gt;ಕಾರು, ಬೈಕುಗಳು ನೂರಾರು ಆಕರ್ಷಕ ಬಣ್ಣಗಳಲ್ಲಿ ಸಿಗುತ್ತವೆ, ಆದರೆ ಅವುಗಳ ಟೈರ್&zwnj;ಗಳು ಮಾತ್ರ ಸದಾ ಕಪ್ಪು ಬಣ್ಣದಲ್ಲೇ ಇರುವುದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t9jr5janbsgh3qpx1fs2k9,imgname-thumbnail---2026-09-18t182432.558-1789736345778.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Why Are Vehicle Tires Always Black:&lt;/strong&gt; ಸೈಕಲ್&zwnj;ನಿಂದ ಹಿಡಿದು ಆಗಸದಲ್ಲಿ ಹಾರುವ ವಿಮಾನಗಳವರೆಗೆ ಪ್ರತಿಯೊಂದು ವಾಹನದ ಟೈರ್&zwnj;ಗಳು ಕಪ್ಪು ಬಣ್ಣದಲ್ಲೇ ಇರುತ್ತವೆ. ಕಾರು, ಬೈಕುಗಳು ಕೆಂಪು, ಬಿಳಿ, ಹಳದಿ ಹೀಗೆ ನಾನಾ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದರೂ, ಅವುಗಳ ಟೈರ್&zwnj;ಗಳು ಮಾತ್ರ ಏಕೆ ಬೇರೆ ಬಣ್ಣದಲ್ಲಿರುವುದಿಲ್ಲ? &quot;ಟೈರ್&zwnj;ಗಳು ಕಪ್ಪಾಗಿಯೇ ಏಕೆ ಇರುತ್ತವೆ?&quot; ಎಂಬ ಅನುಮಾನ ನಿಮಗೂ ಎಂದಾದರೂ ಬಂದಿದೆಯೇ? ಇದರ ಹಿಂದೆ ಕೇವಲ ಬಣ್ಣ ಮಾತ್ರವಲ್ಲ, ಜನರ ಜೀವ ಉಳಿಸುವ ಅದ್ಭುತವಾದ ವೈಜ್ಞಾನಿಕ ಕಾರಣವಿದೆ!&lt;/p&gt;&lt;h2&gt;&lt;strong&gt;ಬೆಳ್ಳಗಿರುವ ರಬ್ಬರ್ ಕಪ್ಪಾಗುವುದು ಹೇಗೆ?&lt;/strong&gt;&lt;/h2&gt;&lt;p&gt;ವಾಸ್ತವವಾಗಿ, ಟೈರ್ ತಯಾರಿಸಲು ಮರಗಳಿಂದ ತೆಗೆಯುವ ನೈಸರ್ಗಿಕ ರಬ್ಬರ್ (Natural Rubber) ತಿಳಿ ಬಿಳಿ ಅಥವಾ ಹಳದಿ ಬಣ್ಣದಲ್ಲಿರುತ್ತದೆ. ಆದರೆ ಆ ಬಿಳಿ ರಬ್ಬರ್&zwnj;ನಿಂದ ನೇರವಾಗಿ ಟೈರ್ ಮಾಡಿದರೆ ಅದು ಕೆಲವೇ ದಿನಗಳಲ್ಲಿ ಕರಗಿ ಅಥವಾ ಸವೆದು ಹಾಳಾಗಿಬಿಡುತ್ತದೆ. ಅದಕ್ಕಾಗಿ ಟೈರ್ ತಯಾರಕರು ಒಂದು ವಿಶೇಷ ತಂತ್ರಜ್ಞಾನವನ್ನು ಬಳಸುತ್ತಾರೆ. ರಬ್ಬರ್ ತಯಾರಿಕೆಯ ಸಮಯದಲ್ಲಿ ಅದಕ್ಕೆ 'ಕಾರ್ಬನ್ ಬ್ಲಾಕ್' (Carbon Black) ಎಂಬ ವಿಶೇಷ ರಾಸಾಯನಿಕ ವಸ್ತುವನ್ನು ಬೆರೆಸುತ್ತಾರೆ. ಈ ಕಾರ್ಬನ್ ಬ್ಲಾಕ್&zwnj;ನಿಂದಾಗಿಯೇ ಟೈರ್&zwnj;ಗಳು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತವೆ.&lt;/p&gt;&lt;h2&gt;&lt;strong&gt;ಕಪ್ಪು ಬಣ್ಣ ಕೇವಲ ಸ್ಟೈಲ್&zwnj;ಗಾಗಿ ಅಲ್ಲ, ಇದರ ಹಿಂದಿರುವ ವೈಜ್ಞಾನಿಕ ಕಾರಣಗಳಿವು..&lt;/strong&gt;&lt;/h2&gt;&lt;h2&gt;&lt;strong&gt;1. ಉಕ್ಕಿನಂತಹ ಬಲ ಮತ್ತು ದೀರ್ಘಾಯುಷ್ಯ&lt;/strong&gt;&lt;/h2&gt;&lt;p&gt;ಕಾರ್ಬನ್ ಬ್ಲಾಕ್ ಬೆರೆಸುವುದರಿಂದ ಮೃದುವಾದ ರಬ್ಬರ್&zwnj;ಗೆ ಉಕ್ಕಿನಂತಹ ಶಕ್ತಿ ಬರುತ್ತದೆ. ಕೇವಲ ನೈಸರ್ಗಿಕ ರಬ್ಬರ್&zwnj;ನಿಂದ ಮಾಡಿದ ಟೈರ್ ಕೇವಲ 8,000 ಕಿ.ಮೀ ಓಡಿದರೆ ಸವೆದುಹೋಗುತ್ತದೆ. ಆದರೆ ಕಾರ್ಬನ್ ಬ್ಲಾಕ್ ಬೆರೆಸಿದ ಕಪ್ಪು ಟೈರ್ ಬರೋಬ್ಬರಿ 50,000 ದಿಂದ 1 ಲಕ್ಷ ಕಿ.ಮೀ ವರೆಗೂ ಸುಲಭವಾಗಿ ಬಾಳಿಕೆ ಬರುತ್ತದೆ!&lt;/p&gt;&lt;h2&gt;&lt;strong&gt;2. ಅತಿಯಾದ ಶಾಖದಿಂದ ರಕ್ಷಣೆ (ಟೈರ್ ಬ್ಲಾಸ್ಟ್ ಆಗಲ್ಲ)&lt;/strong&gt;&lt;/h2&gt;&lt;p&gt;ವಾಹನಗಳು ರಸ್ತೆಯಲ್ಲಿ ಅತಿ ವೇಗವಾಗಿ ಚಲಿಸುವಾಗ ರಸ್ತೆ ಮತ್ತು ಟೈರ್ ನಡುವಿನ ಘರ್ಷಣೆಯಿಂದಾಗಿ (Friction) ವಿಪರೀತ ಶಾಖ ಹುಟ್ಟಿಕೊಳ್ಳುತ್ತದೆ. ಸಾಮಾನ್ಯ ರಬ್ಬರ್ ಆಗಿದ್ದರೆ ಆ ಶಾಖಕ್ಕೆ ಕರಗಿ ಅಥವಾ ಸಿಡಿದು (Burst) ಹೋಗುತ್ತಿತ್ತು. ಆದರೆ ಈ ಕಾರ್ಬನ್ ಬ್ಲಾಕ್ ಶಾಖವನ್ನು ಒಂದೇ ಕಡೆ ಉಳಿಯಲು ಬಿಡದೆ, ಟೈರ್&zwnj;ನಾದ್ಯಂತ ಸಮಾನವಾಗಿ ಹರಡುತ್ತದೆ. ಇದರಿಂದ ಟೈರ್ ಕರಗದೆ, ಬ್ಲಾಸ್ಟ್ ಆಗದಂತೆ ರಕ್ಷಣೆ ಸಿಗುತ್ತದೆ.&lt;/p&gt;&lt;h2&gt;&lt;strong&gt;3. ಸೂರ್ಯನ ಯುವಿ ಕಿರಣಗಳಿಂದ ರಕ್ಷಣೆ (UV Protection)&lt;/strong&gt;&lt;/h2&gt;&lt;p&gt;ಬಿಸಿಲಿನಲ್ಲಿರುವ ಅಪಾಯಕಾರಿ ಯುವಿ ಕಿರಣಗಳು (UV Rays) ಮತ್ತು ಓಝೋನ್ ಅನಿಲವು ಸಾಮಾನ್ಯ ರಬ್ಬರ್ ಅನ್ನು ಬಿರುಕು ಬಿಡುವಂತೆ ಮಾಡುತ್ತವೆ. ಆದರೆ ಕಾರ್ಬನ್ ಬ್ಲಾಕ್ ಈ ಕಿರಣಗಳನ್ನು ಹಿಮ್ಮೆಟ್ಟಿಸಿ, ಟೈರ್ ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ.&lt;/p&gt;&lt;h2&gt;&lt;strong&gt;4. ರಸ್ತೆಯ ಸವೆತ ತಡೆಯಲು ಮತ್ತು ಸುರಕ್ಷಿತ ಪ್ರಯಾಣಕ್ಕೆ&lt;/strong&gt;&lt;/h2&gt;&lt;p&gt;ಗುಂಡಿ ಬಿದ್ದ ರಸ್ತೆಗಳು, ಹಠಾತ್ ಬ್ರೇಕ್ ಮತ್ತು ವಾಹನದ ಸಂಪೂರ್ಣ ತೂಕವನ್ನು ಹೊರುವ ಶಕ್ತಿ ಟೈರ್&zwnj;ಗಳಿಗೆ ಇರಬೇಕು. ಕಾರ್ಬನ್ ಬ್ಲಾಕ್ ಟೈರ್&zwnj;ಗೆ ಅತ್ಯುತ್ತಮ ರೋಡ್ ಗ್ರಿಪ್ (Grip) ನೀಡಿ, ಜಾರದಂತೆ ನಿಯಂತ್ರಣ ನೀಡುತ್ತದೆ.&lt;/p&gt;&lt;h3&gt;&lt;strong&gt;ಆಧುನಿಕ ಟೈರ್&zwnj;ಗಳು ತಂತ್ರಜ್ಞಾನದ ಅದ್ಭುತ&lt;/strong&gt;&lt;/h3&gt;&lt;p&gt;ಇಂದಿನ ಕಾಲದ ಟೈರ್&zwnj;ಗಳನ್ನು ಕೇವಲ ರಬ್ಬರ್ ಮತ್ತು ಕಾರ್ಬನ್ ಬ್ಲಾಕ್&zwnj;ನಿಂದ ಮಾತ್ರ ಮಾಡುತ್ತಿಲ್ಲ. ಇದರಲ್ಲಿ ಸಿಂಥೆಟಿಕ್ ರಬ್ಬರ್, ಸ್ಟೀಲ್ ವೈರ್&zwnj;ಗಳು, ಪಾಲಿಯೆಸ್ಟರ್ ನೂಲುಗಳು ಮತ್ತು ಸಿಲಿಕಾದಂತಹ ಹಲವು ಅತ್ಯಾಧುನಿಕ ವಸ್ತುಗಳನ್ನು ಬಳಸಿ ಸಂಪೂರ್ಣ ಸುರಕ್ಷಿತವಾಗಿ ತಯಾರಿಸಲಾಗುತ್ತಿದೆ.&lt;/p&gt;]]></content:encoded>
            <category>science</category>
            <dc:creator>Ashwini HR</dc:creator>
            <atom:link href="https://kannada.asianetnews.com/life/why-are-vehicle-tires-always-black-the-life-saving-science-behind-it/articleshow-vglrheq"/>
        </item>
        <item>
            <title><![CDATA[100 ವರ್ಷದ ಸಾಧನೆ: ಕಾಳಿಂಗ ಸರ್ಪ, ನಾಗರಹಾವು ಕಡಿತಕ್ಕೆ ಔಷಧಿ ಕಂಡುಹಿಡಿದ ಬೆಂಗಳೂರು ಐಐಎಸ್‌ಸಿ ವಿಜ್ಞಾನಿಗಳು!]]></title>
            <link>https://kannada.asianetnews.com/science/iisc-bengaluru-develops-novel-antivenom-for-king-cobra-bites-after-100-years-effort-sat/articleshow-xe59eo4</link>
            <guid isPermaLink="true">https://kannada.asianetnews.com/science/iisc-bengaluru-develops-novel-antivenom-for-king-cobra-bites-after-100-years-effort-sat/articleshow-xe59eo4</guid>
            <pubDate>Fri, 11 Sep 2026 09:32:48 +0530</pubDate>
            <description><![CDATA[ಬೆಂಗಳೂರಿನ ಐಐಎಸ್&zwnj;ಸಿ ಮತ್ತು ಡೆನ್ಮಾರ್ಕ್ ಸಂಶೋಧಕರು ಜಂಟಿಯಾಗಿ ನಾಗರಹಾವು ಹಾಗೂ ಕಾಳಿಂಗ ಸರ್ಪದ ಕಡಿತಕ್ಕೆ ನ್ಯಾನೋಬಾಡಿ ಆಧಾರಿತ ಹೊಸ ಔಷಧವನ್ನು (ಆ್ಯಂಟಿ ವಿನಮ್) ಸಂಶೋಧಿಸಿದ್ದಾರೆ. ಇಲಿಗಳ ಮೇಲೆ ಯಶಸ್ವಿಯಾಗಿ ಪರೀಕ್ಷಿಸಲಾದ ಈ ಔಷಧವು, ಕಡಿಮೆ ಪ್ರಮಾಣದಲ್ಲಿ ವಿಷದ ಪರಿಣಾಮವನ್ನು ಸಂಪೂರ್ಣವಾಗಿ ತಗ್ಗಿಸುವ ಸಾಮರ್ಥ್ಯ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27a06hz2bh5azz0g11ztfqz,imgname-king-cobra-kalinga-sarpa-1789099252287.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): ಬೆಂ&lt;/strong&gt;ಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್&zwnj;ಸಿ) ಹಾಗೂ ಡೆನ್ಮಾರ್ಕ್ ಸಂಶೋಧಕರ ತಂಡಗಳು ಜಂಟಿಯಾಗಿ ಭಾರತೀಯ ನಾಗರಹಾವು ಹಾಗೂ ಕಾಳಿಂಗ ಸರ್ಪಗಳ ಕಡಿತಕ್ಕೆ ಹೊಸ ಔಷಧವನ್ನು (ಆ್ಯಂಟಿ ವಿನಮ್) ಸಂಶೋಧಿಸಿದ್ದಾರೆ.&lt;/p&gt;&lt;p&gt;ಐಐಎಸ್ಸಿಯ ಪರಿಸರ ವಿಜ್ಞಾನ ಕೇಂದ್ರದ ಸಂಶೋಧಕರು ಹಾಗೂ ಡೆನ್ಮಾರ್ಕ್&zwnj;ನ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜಂಟಿಯಾಗಿ ಕೃತಕವಾಗಿ ರೂಪಿಸಿದ ನ್ಯಾನೋಬಾಡಿ ಆಧಾರಿತ ಹೊಸ ಆ್ಯಂಟಿವಿನಮ್ ಸಂಶೋಧನೆಯ ವಿವರಗಳು ಪ್ರತಿಷ್ಠಿತ &lsquo;ಸೈನ್ಸ್ ಟ್ರಾನ್ಸ್&zwnj;ಲೇಷನಲ್ ಮೆಡಿಸಿನ್&rsquo; ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ.&lt;/p&gt;&lt;h2&gt;&lt;strong&gt;ಹೊಸ ತಲೆಮಾರಿನ ಏಕೈಕ ಔಷಧಿ&lt;/strong&gt;&lt;/h2&gt;&lt;p&gt;ಭಾರತದಲ್ಲಿ ಪ್ರತಿವರ್ಷ ಸುಮಾರು 50,000 ಜನರು ಹಾವು ಕಡಿತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದು, ಇದು ಜಗತ್ತಿನಲ್ಲೇ ಗರಿಷ್ಠ ಪ್ರಮಾಣವಾಗಿದೆ. ಹಾವು ಕಡಿತದ ಚಿಕಿತ್ಸಾ ವಿಧಾನವು ಕಳೆದ 100 ವರ್ಷಗಳಿಂದ ಬದಲಾಗಿಲ್ಲ. ಭಾರತದ ಹಾವು ಕಡಿತದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಲ್ಲ ಹೊಸ ತಲೆಮಾರಿನ ಏಕೈಕ ಔಷಧಿ ಇದಾಗಿದೆ ಎಂದು ಐಐಎಸ್ಸಿ ಸಹಾಯಕ ಪ್ರಾಧ್ಯಾಪಕ ಡಾ.ಕಾರ್ತಿಕ್ ಸುನಗರ್ ಹೇಳಿದ್ದಾರೆ.&lt;/p&gt;&lt;p&gt;ಈಗಾಗಲೇ ಪ್ರಾಯೋಗಿಕವಾಗಿ ಇಲಿಗಳ ಮೇಲೆ ಹೊಸ ಔಷಧದ ಪ್ರಯೋಗ ಮಾಡಲಾಗಿದ್ದು, ಉತ್ತಮ ಫಲಿತಾಂಶ ನೀಡಿದೆ. ಇದು ಸಾಮಾನ್ಯ ನಾಗರಹಾವು, ಭಾರತದ ಕಾಳಿಂಗ ಸರ್ಪ ಪ್ರಭೇದಗಳು ಸೇರಿದಂತೆ ಬಹುತೇಕ ಎಲ್ಲಾ ಮಾದರಿಯ ಭಾರತೀಯ ನಾಗರಹಾವುಗಳ ವಿಷದ ವಿರುದ್ಧ ಸಂಪೂರ್ಣ ರಕ್ಷಣೆ ನೀಡಲಿದೆ. ಹಾವಿನ ವಿಷ ಶರೀರ ಸೇರಿದ 30 ನಿಮಿಷಗಳ ನಂತರ ಹಾಗೂ ಪಾರ್ಶ್ವವಾಯು ಅಥವಾ ನರಸಂಬಂಧಿ ಲಕ್ಷಣಗಳು ಕಾಣಿಸಿಕೊಂಡ ನಂತರವೂ ಪರಿಣಾಮಕಾರಿಯಾಗಿದೆ. ಇಲಿಗಳು ಸಂಪೂರ್ಣವಾಗಿ ಗುಣಮುಖವಾಗಿವೆ ಎಂದು ಐಐಎಸ್ಸಿ ಹೇಳಿದೆ.&lt;/p&gt;&lt;h2&gt;&lt;strong&gt;ಕಡಿಮೆ ಪ್ರಮಾಣದ ಡೋಸ್:&amp;nbsp;&lt;/strong&gt;&lt;/h2&gt;&lt;p&gt;ಈಗ ಆಗಿರುವ ಸಂಶೋಧನೆಯ ಪ್ರಕಾರ, ಅತ್ಯಂತ ಕಡಿಮೆ ಪ್ರಮಾಣದ ಡೋಸ್&zwnj; ನೀಡಿ ಹಾವಿನ ವಿಷದ ಪರಿಣಾಮವನ್ನು ತಗ್ಗಿಸಬಹುದು. ಇದರಿಂದ ಉತ್ಪಾದನಾ ವೆಚ್ಚ ಹಾಗೂ ಅಡ್ಡಪರಿಣಾಮಗಳು ಕಡಿಮೆಯಾಗಲಿವೆ ಎಂದು ಐಐಎಸ್ಸಿ ತಿಳಿಸಿದೆ.&lt;/p&gt;]]></content:encoded>
            <category>science</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/science/iisc-bengaluru-develops-novel-antivenom-for-king-cobra-bites-after-100-years-effort-sat/articleshow-xe59eo4"/>
        </item>
        <item>
            <title><![CDATA[ಸೆ.14ರಂದು ಆಗಸದಲ್ಲಿ ಕಾಣಿಸಿದ ಚಂದ್ರ-ಶುಕ್ರ ಗ್ರಹದ ಅಪರೂಪದ ಮಿಲನ, ಚೌತಿ ದಿನ ಆಕಾಶ ನೋಡಲು ಹೆದರಿದ ಜನ!]]></title>
            <link>https://kannada.asianetnews.com/science/ganesh-chaturthi-moon-sight-concern-rare-venus-moon-occultation-viewed-across-india-sparks-curiosity-in-bengaluru-gdp/articleshow-zres1ax</link>
            <guid isPermaLink="true">https://kannada.asianetnews.com/science/ganesh-chaturthi-moon-sight-concern-rare-venus-moon-occultation-viewed-across-india-sparks-curiosity-in-bengaluru-gdp/articleshow-zres1ax</guid>
            <pubDate>Tue, 15 Sep 2026 19:10:25 +0530</pubDate>
            <description><![CDATA[ಗಣೇಶ ಚೌತಿಯ ದಿನ ಚಂದ್ರನನ್ನು ನೋಡಿದರೆ ಅಪವಾದ ಬರುತ್ತದೆ ಎಂಬ ಪೌರಾಣಿಕ ನಂಬಿಕೆಯಿದೆ. ಆದರೆ, 2026ರ ಸೆಪ್ಟೆಂಬರ್ 14ರ ಚೌತಿಯಂದೇ, ಚಂದ್ರನು ಶುಕ್ರ ಗ್ರಹವನ್ನು ಸಂಪೂರ್ಣವಾಗಿ ಮರೆಮಾಚಿದ 'ಚಂದ್ರನ ಗುಪ್ತ ಕ್ರಿಯೆ' ಎಂಬ ಅಪರೂಪದ ಖಗೋಳ ಘಟನೆ ಸಂಭವಿಸಿತು. ಈ ಲೇಖನವು ಈ ವೈಜ್ಞಾನಿಕ ವಿಸ್ಮಯ ಮತ್ತು ಪೌರಾಣಿಕ ನಂಬಿಕೆಯ ನಡುವಿನ ಕುತೂಹಲಕಾರಿ ಸಂಗತಿಗಳನ್ನು ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2jmpc8h111d70hc8f6fj642,imgname-lunar-occultation-of-venus-2026-1789479563537.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಮ್ಮ ಭಾರತೀಯ ಸಂಸ್ಕೃತಿ ಹಾಗೂ ನಂಬಿಕೆಗಳಲ್ಲಿ ಗಣೇಶ ಚೌತಿಯ ಆಚರಣೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಚೌತಿಯ ದಿನದಂದು ಆಕಾಶದಲ್ಲಿ ಚಂದ್ರನನ್ನು ನೋಡಬಾರದು, ನೋಡಿದರೆ ಅನಗತ್ಯ ಸುಳ್ಳು ಆಪಾದನೆ ಅಥವಾ ಅಪಕೀರ್ತಿ ಎದುರಿಸಬೇಕಾಗುತ್ತದೆ ಎಂಬ ಬಲವಾದ ನಂಬಿಕೆ ಪುರಾಣದಲ್ಲಿ ಉಲ್ಲೇಖವಿದೆ.&lt;/p&gt;&lt;p&gt;ದ್ವಾಪರ ಯುಗದಲ್ಲಿ ಗಣಪತಿಯ ವಿಚಿತ್ರ ರೂಪವನ್ನು ಕಂಡು ಚಂದ್ರನು ಗೇಲಿ ಮಾಡಿ ನಕ್ಕಿದ್ದನಂತೆ. ಇದರಿಂದ ಕೋಪಗೊಂಡ ಗಣೇಶನು, ಯಾರು ಚೌತಿಯ ದಿನದಂದು ನಿನ್ನನ್ನು ನೋಡುತ್ತಾರೋ, ಅವರು ಸಮಾಜದಲ್ಲಿ ಅಪವಾದ ಹಾಗೂ ಕಳಂಕಕ್ಕೆ ಗುರಿಯಾಗಲಿ ಎಂದು ಶಾಪ ನೀಡಿದನು. ಸ್ವತಃ ಶ್ರೀಕೃಷ್ಣನೇ ಚೌತಿಯ ದಿನ ಚಂದ್ರನನ್ನು ನೋಡಿ, ಸ್ಯಮಂತಕ ಮಣಿಯನ್ನು ಕದ್ದ ಕಳ್ಳ ಎಂಬ ಸುಳ್ಳು ಅಪವಾದಕ್ಕೆ ಗುರಿಯಾಗಬೇಕಾಯಿತು ಎಂಬ ಪೌರಾಣಿಕ ಕಥೆಯಿದೆ&lt;/p&gt;&lt;p&gt;ಇಂತಹ ಪೌರಾಣಿಕ ನಂಬಿಕೆಗಳ ಚರ್ಚೆಯ ಮಧ್ಯೆಯೇ, ಇತ್ತೀಚೆಗೆ ಸೆಪ್ಟೆಂಬರ್ 14, 2026 ಪಶ್ಚಿಮ ಆಕಾಶದಲ್ಲಿ ಅದ್ಭುತ ಹಾಗೂ ಅಪರೂಪದ ಖಗೋಳ ಘಟನೆಯೊಂದು ಸಂಭವಿಸಿತು. ಆಕಾಶ ಪ್ರಿಯರನ್ನು ಮಂತ್ರಮುಗ್ಧಗೊಳಿಸಿದ 'ಚಂದ್ರನ ಗುಪ್ತ ಕ್ರಿಯೆ' (Lunar Occultation of Venus) ಯಲ್ಲಿ ಚಂದ್ರ ಮತ್ತು ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ ಪರಸ್ಪರ ಮುಖಾಮುಖಿಯಾದವು. ಸಂಜೆಯ ವೇಳೆಗೆ ಬೆಂಗಳೂರು ಸೇರಿದಂತೆ ಮಧ್ಯ ಮತ್ತು ದಕ್ಷಿಣ ಭಾರತದಾದ್ಯಂತ, ಪಶ್ಚಿಮ ಆಕಾಶದಲ್ಲಿ ಅರ್ಧಚಂದ್ರ ಹಾಗೂ ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ ಒಂದೇ ಕಡೆ ಕಂಗೊಳಿಸುವ ದೃಶ್ಯ ಕಾಣಿಸಿತು. ಹಲವರು ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಹಬ್ಬ ಇದ್ದ ಕಾರಣಕ್ಕೆ ಇದನ್ನು ನೋಡಲು ಹಿಂದೇಟು ಹಾಕಿದರು.&lt;/p&gt;&lt;p&gt;ಚಂದ್ರನು ಶುಕ್ರ ಗ್ರಹದ ನೇರ ಪಥದಲ್ಲಿ ಹಾದುಹೋದ ಕಾರಣ, ಶುಕ್ರ ಗ್ರಹವು ತಾತ್ಕಾಲಿಕವಾಗಿ ಚಂದ್ರನ ಮರೆಯಲ್ಲಿ ಕಣ್ಮರೆಯಾಯಿತು. ಭಾರತೀಯ ಕಾಲಮಾನ ಸಂಜೆ 5:22 ಕ್ಕೆ ಚಂದ್ರನ ಹಿಂದೆ ಮರೆಯಾದ ಶುಕ್ರ ಗ್ರಹವು, ನಂತರ ಸಂಜೆ 6:18 ರ ಸುಮಾರಿಗೆ ಮತ್ತೆ ಪ್ರತ್ಯಕ್ಷವಾಯಿತು.&lt;/p&gt;&lt;h2&gt;ಸೆಪ್ಟೆಂಬರ್ 14 ರಂದು ಆಕಾಶದಲ್ಲಿ ಏನಾಯಿತು?&lt;/h2&gt;&lt;p&gt;ಖಗೋಳ ವಿಜ್ಞಾನದಲ್ಲಿ ಈ ಘಟನೆಯನ್ನು ಚಂದ್ರನ ಗುಪ್ತ ಕ್ರಿಯೆ ಅಥವಾ Lunar Occultation ಎಂದು ಕರೆಯಲಾಗುತ್ತದೆ. ಇದರಲ್ಲಿ ಶುಕ್ರ ಗ್ರಹವು ನಿಧಾನವಾಗಿ ಚಂದ್ರನ ಅಂಚಿಗೆ ಸಮೀಪಿಸಿ, ಚಂದ್ರನ ಡಿಸ್ಕ್&zwnj;ನ ಹಿಂದೆ ಸಂಪೂರ್ಣವಾಗಿ ಮರೆಯಾಗುತ್ತದೆ. ಸ್ವಲ್ಪ ಸಮಯದ ನಂತರ, ಚಂದ್ರನ ಇನ್ನೊಂದು ಬದಿಯಿಂದ ಗ್ರಹವು ಮತ್ತೆ ಕಾಣಿಸುತ್ತದೆ ಇದು ಕೇವಲ ಎರಡು ಆಕಾಶ ಕಾಯಗಳು ಹತ್ತಿರ ಬರುವುದಷ್ಟೇ ಅಲ್ಲ, ಒಂದರ ಹಿಂದೆ ಇನ್ನೊಂದು ಸಂಪೂರ್ಣವಾಗಿ ಮರೆಯಾಗುವ ರೋಮಾಂಚಕಾರಿ ಪ್ರಕ್ರಿಯೆಯಾಗಿದೆ.&lt;/p&gt;&lt;h2&gt;ಇದು ಹಗಲಿನಲ್ಲಿ ಸಂಭವಿಸುವ ಅಪರೂಪದ ಘಟನೆ&lt;/h2&gt;&lt;p&gt;ಈ ಆಕಾಶ ವಿದ್ಯಮಾನದ ಅತ್ಯಂತ ಅಸಾಮಾನ್ಯ ವೈಶಿಷ್ಟ್ಯವೆಂದರೆ ಇದರ ಸಮಯ. ಅನೇಕ ದೇಶಗಳಲ್ಲಿ ಸೂರ್ಯ ಇನ್ನೂ ಆಕಾಶದಲ್ಲಿರುವಾಗಲೇ ಹಗಲಿನಲ್ಲೇ ಈ ಘಟನೆ ನಡೆದಿದೆ. ಆದಾಗ್ಯೂ, ಶುಕ್ರ ಗ್ರಹವು ಅತ್ಯಂತ ಪ್ರಕಾಶಮಾನವಾಗಿರುವುದರಿಂದ ಸೂಕ್ತ ವಾತಾವರಣವಿದ್ದರೆ ಹಗಲಿನ ವೇಳೆಯಲ್ಲೂ ಇದು ಕಾಣಿಸುತ್ತದೆ. ಈ ಸಮಯದಲ್ಲಿ ಚಂದ್ರನು ತೆಳುವಾದ ಅರ್ಧಚಂದ್ರಾಕಾರದಲ್ಲಿದ್ದರೆ, ಶುಕ್ರ ಗ್ರಹವೂ ಅರ್ಧಚಂದ್ರ ಸಮೀಪ ಕಾಣಿಸುತ್ತದೆ.&lt;/p&gt;&lt;h2&gt;ಭಾರತೀಯ ಸಮಯ&lt;/h2&gt;&lt;p&gt;ಈ ಘಟನೆಯು ಸೆಪ್ಟೆಂಬರ್ 14 ರಂದು ಸುಮಾರು 09:26 UTC ಯಿಂದ 13:42 UTC ನಡುವೆ ಸಂಭವಿಸಿತು. ಅಮೆರಿಕದ ಪೂರ್ವ ಕರಾವಳಿ ಭಾಗಗಳಲ್ಲಿ ಇದು ಬೆಳಿಗ್ಗೆ 5:26 ರಿಂದ 9:42 EDT ವರೆಗೆ ನಡೆದಿತ್ತು.&lt;/p&gt;&lt;p&gt;ಭಾರತದಲ್ಲಿ ಈ ಪ್ರಕ್ರಿಯೆಯ ವಿಶಾಲ ಸಮಯ ಸಂಜೆ 2:56 ರಿಂದ 7:12 ರವರೆಗೆ ಇತ್ತು. ವೀಕ್ಷಕರ ಭೌಗೋಳಿಕ ಸ್ಥಳವನ್ನು ಆಧರಿಸಿ ಗ್ರಹ ಕಣ್ಮರೆಯಾಗುವ ಮತ್ತು ಪ್ರತ್ಯಕ್ಷವಾಗುವ ನಿಖರ ಸಮಯ ಸಲ್ಪ ವ್ಯತ್ಯಾಸವಾಗಿತ್ತು.&lt;/p&gt;&lt;h2&gt;ಈ ಅಮೋಘ ದೃಶ್ಯ ಎಲ್ಲೆಲ್ಲಿ ಗೋಚರಿಸಿತು?&lt;/h2&gt;&lt;p&gt;ಯುರೋಪ್, ಆಫ್ರಿಕಾ, ಪಶ್ಚಿಮ ರಷ್ಯಾ, ಮಧ್ಯಪ್ರಾಚ್ಯ ಮತ್ತು ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ ಈ ಚಂದ್ರನ ಗುಪ್ತ ಕ್ರಿಯೆ ಸ್ಪಷ್ಟವಾಗಿ ಗೋಚರಿಸಿತು. ಆದರೆ, ಅಮೆರಿಕ ಖಂಡದ ವೀಕ್ಷಕರಿಗೆ ಶುಕ್ರನು ಚಂದ್ರನ ಹಿಂದೆ ಮರೆಯಾಗುವುದು ಕಾಣಿಸಲಿಲ್ಲ. ಬದಲಿಗೆ ಅವರಿಗೆ ಚಂದ್ರ ಮತ್ತು ಶುಕ್ರ ಪರಸ್ಪರ ಅತ್ಯಂತ ಹತ್ತಿರದಲ್ಲಿರುವಂತೆ ಮಾತ್ರ ಗೋಚರಿಸಿದವು. ಕರ್ನಾಟಕ ಹಲವು ಕಡೆ ಇದು ಘೋಚರಿಸಿತು ಮತ್ತು ಚೌತಿ ಹಬ್ಬದ ದಿನ ಹಲವು ಮಂದಿ ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ಕಡೆ ಜನ ನೋಡಿ ಖುಷಿಪಟ್ಟರು. ಕೆಲವರು ಚೌತಿ ಹಬ್ಬವೆಂದು ಆಕಾಶದಲ್ಲಿನ ಚಂದ್ರನನ್ನು ನೋಡಲು ಹಿಂದೇಟು ಹಾಕಿದರು.&lt;/p&gt;&lt;h2&gt;ವೀಕ್ಷಣೆ ಮಾಡುವುದು ಹೇಗೆ?&lt;/h2&gt;&lt;p&gt;ಈ ರೀತಿಯ ಆಕಾಶ ವಿದ್ಯಮಾನಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ದೂರದರ್ಶಕ ಅಥವಾ ಬೈನಾಕ್ಯುಲರ್ ಬಳಸುವುದು ಸೂಕ್ತ. ಹಗಲಿನ ವೇಳೆಯಲ್ಲಿ ವೀಕ್ಷಿಸುವಾಗ ಸೂರ್ಯನು ನಿಮ್ಮ ದೂರದರ್ಶಕ ಅಥವಾ ಬೈನಾಕ್ಯುಲರ್&zwnj;ನ ವೀಕ್ಷಣಾ ಕ್ಷೇತ್ರಕ್ಕೆ ಬಾರದಂತೆ ಅತ್ಯಂತ ಜಾಗರೂಕರಾಗಿರಬೇಕು. ಆಪ್ಟಿಕಲ್ ಉಪಕರಣಗಳ ಮೂಲಕ ನೇರವಾಗಿ ಸೂರ್ಯನನ್ನು ನೋಡುವುದರಿಂದ ಕಣ್ಣಿನ ದೃಷ್ಟಿ ಶಾಶ್ವತವಾಗಿ ಹಾನಿಗೊಳಗಾಗಬಹುದು.&lt;/p&gt;&lt;p&gt;ಗುಪ್ತ ಮಾರ್ಗದ ಹೊರಗಿದ್ದ ವೀಕ್ಷಕರಿಗೂ ಸಹ, ಆಕಾಶದಲ್ಲಿ ಚಂದ್ರ ಮತ್ತು ಶುಕ್ರ ಗ್ರಹಗಳ ಈ ಸುಂದರ ಜೋಡಿ ಹಗಲು ಮತ್ತು ಸಂಜೆಯ ವೇಳೆಯಲ್ಲಿ ಅತ್ಯಂತ ಆಕರ್ಷಕ ದೃಶ್ಯ ವೈಭವವನ್ನು ಒದಗಿಸಿತು.&lt;/p&gt;]]></content:encoded>
            <category>science</category>
            <dc:creator>Gowthami K</dc:creator>
            <atom:link href="https://kannada.asianetnews.com/science/ganesh-chaturthi-moon-sight-concern-rare-venus-moon-occultation-viewed-across-india-sparks-curiosity-in-bengaluru-gdp/articleshow-zres1ax"/>
        </item>
    </channel>
</rss>
