<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 18 Jul 2026 16:08:24 +0530</lastBuildDate>
        <atom:link href="https://kannada.asianetnews.com/rss/science" rel="self" type="application/rss+xml"/>
        <item>
            <title><![CDATA[ಇಸ್ರೋದಿಂದ ಗಗನಯಾನದ 3 ಸಿದ್ಧತಾ ಪರೀಕ್ಷೆ ಯಶಸ್ವಿ]]></title>
            <link>https://kannada.asianetnews.com/gallery/science/isro-gaganyaan-crew-module-tests-successful-astronauts-space-mission-san-07k1ln7</link>
            <guid isPermaLink="true">https://kannada.asianetnews.com/gallery/science/isro-gaganyaan-crew-module-tests-successful-astronauts-space-mission-san-07k1ln7</guid>
            <pubDate>Mon, 13 Jul 2026 10:20:54 +0530</pubDate>
            <description><![CDATA[&lt;p&gt;ಇಸ್ರೋ ತನ್ನ ಮಹತ್ವಾಕಾಂಕ್ಷಿ &lsquo;ಗಗನಯಾನ&rsquo; ಯೋಜನೆಗಾಗಿ ಕ್ರೂ ಮಾಡ್ಯೂಲ್&zwnj;ನ ಮೂರು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಪರೀಕ್ಷೆಗಳು ಬಾಹ್ಯಾಕಾಶದಿಂದ ಮರಳುವಾಗ ಮಾಡ್ಯೂಲ್ ನೀರಿನಲ್ಲಿ ತೇಲುವ ಪರೀಕ್ಷೆಯನ್ನು ಒಳಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxbqz5332xr7g5cb9v469dfb,imgname-gaganyaan-1783879406691.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಸ್ರೋ ತನ್ನ ಮಹತ್ವಾಕಾಂಕ್ಷಿ &lsquo;ಗಗನಯಾನ&rsquo; ಯೋಜನೆಗಾಗಿ ಕ್ರೂ ಮಾಡ್ಯೂಲ್&zwnj;ನ ಮೂರು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಪರೀಕ್ಷೆಗಳು ಬಾಹ್ಯಾಕಾಶದಿಂದ ಮರಳುವಾಗ ಮಾಡ್ಯೂಲ್ ನೀರಿನಲ್ಲಿ ತೇಲುವ ಪರೀಕ್ಷೆಯನ್ನು ಒಳಗೊಂಡಿದೆ.&lt;/p&gt;&lt;img&gt;&lt;p&gt;ಭಾರತದ ಮಹತ್ವಾಕಾಂಕ್ಷಿ &lsquo;ಗಗನಯಾನ&rsquo; ಯೋಜನೆಯತ್ತ ಇಸ್ರೋ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಕ್ರೂ (ಸಿಬ್ಬಂದಿ) ಮಾಡ್ಯೂಲ್&zwnj; ವ್ಯವಸ್ಥೆಗೆ ಸಂಬಂಧಿಸಿದ 3 ಪರೀಕ್ಷೆಗಳನ್ನು ಭಾನುವಾರ ಯಶಸ್ವಿಯಾಗಿ ನಡೆಸಿದೆ.&lt;/p&gt;&lt;img&gt;&lt;p&gt;ಬಾಹ್ಯಾಕಾಶದಿಂದ ವಾಪಸ್&zwnj; ಬಂದ ನಂತರ ಸಮುದ್ರಕ್ಕೆ ಜಿಗಿದ ಮಾಡ್ಯೂಲ್&zwnj; ನೀರಿನ ಮೇಲೆ ತೇಲಬೇಕು. ಇದಕ್ಕಾಗಿ ಗ್ಯಾಸ್ ಬಳಸುವ ಹೊಸ ವ್ಯವಸ್ಥೆಯನ್ನು ಮಾಡಿ ಪರೀಕ್ಷಿಸಲಾಯಿತು. ಇದು ಗಗನಯಾತ್ರಿಗಳ ಸುರಕ್ಷತೆಗೆ ತುಂಬಾ ಮುಖ್ಯ. ಈ ಮೊದಲ ಪರೀಕ್ಷೆ ಯಶಸ್ವಿಯಾಯಿತು.&lt;/p&gt;&lt;img&gt;&lt;p&gt;2ನೆಯದಾಗಿ, ಕ್ಯಾಪ್ಸೂಲ್ ಭೂಮಿಗೆ ಮರಳುವಾಗ ಕ್ರೂ ಮಾಡ್ಯೂಲ್&zwnj; ಮತ್ತು ವಿದ್ಯುತ್&zwnj;, ಪ್ರೊಪಲ್ಷನ್&zwnj; ಒದಗಿಸುವ ಭಾಗವನ್ನು ಜೋಡಿಸುವ ಕೇಬಲ್&zwnj;ಗಳು ಬೇರ್ಪಡಬೇಕು. ಹೀಗಾಗಿ ಅದರ ಸಿಎಸ್&zwnj;ಯು-1 ಮತ್ತು ಸಿಎಸ್&zwnj;ಯು-2 ಎಂಬ 2 ಭಾಗಗಳನ್ನು ಟೆಸ್ಟ್ ಮಾಡಲಾಯಿತು. ಎರಡೂ ಸರಿಯಾಗಿ ಬೇರ್ಪಟ್ಟವು.&lt;/p&gt;&lt;img&gt;&lt;p&gt;ಕ್ಯಾಪ್ಸೂಲ್&zwnj;ನ ಮೇಲಿರುವ ಕವರ್ ಪ್ಯಾರಾಚೂಟ್&zwnj;ಗಳನ್ನು ರಕ್ಷಿಸುತ್ತದೆ. ಪ್ಯಾರಾಚೂಟ್ ಬಿಡುವ ಮೊದಲು ಈ ಕವರ್ ಬೇರೆಯಾಗಬೇಕು. ಈ ಸಮಯದಲ್ಲಿ ಕ್ಯಾಪ್ಸೂಲ್&zwnj;ಗೆ ಯಾವುದೇ ಹಾನಿಯಾಗುವುದಿಲ್ಲ ಎಂದು 3ನೇ ಪರೀಕ್ಷೆಯಲ್ಲಿ ದೃಢಪಟ್ಟಿದೆ.&lt;/p&gt;&lt;img&gt;&lt;p&gt;ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯು ಮೂವರು ಭಾರತೀಯ ಗಗನಯಾತ್ರಿಗಳನ್ನು ಭೂಮಿಯಿಂದ 400 ಕಿ.ಮೀ. ಎತ್ತರದ ಕಕ್ಷೆಗೆ ಕಳಿಸಿ, 3 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಪ್ರಯೋಗಗಳನ್ನು ನಡೆಸಿ ಸುರಕ್ಷಿತವಾಗಿ ಭೂಮಿಗೆ ಕರೆತರುವ ಗುರಿ ಹೊಂದಿದೆ. ಇದನ್ನು 2027ರ ವೇಳೆಗೆ ಉಡಾವಣೆ ಮಾಡಲು ಸಿದ್ಧತೆ ನಡೆಸುತ್ತಿದೆ.&lt;/p&gt;]]></content:encoded>
            <category>science</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/science/isro-gaganyaan-crew-module-tests-successful-astronauts-space-mission-san-07k1ln7"/>
        </item>
        <item>
            <title><![CDATA[3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ದಪ್ಪ ಮತ್ತು ಉದ್ದ ಏಕೆ ಇರುತ್ತದೆ..? ಇಲ್ಲಿದೆ ರೋಚಕ ವಿಜ್ಞಾನ..!]]></title>
            <link>https://kannada.asianetnews.com/gallery/science/why-is-one-pin-in-a-3-pin-plug-thicker-and-longer-here-is-the-interesting-science-gkn-27u6c1w</link>
            <guid isPermaLink="true">https://kannada.asianetnews.com/gallery/science/why-is-one-pin-in-a-3-pin-plug-thicker-and-longer-here-is-the-interesting-science-gkn-27u6c1w</guid>
            <pubDate>Sun, 12 Jul 2026 14:34:30 +0530</pubDate>
            <description><![CDATA[&lt;p&gt;ನಾವು ದಿನ ನಿತ್ಯ ಬಳಸುವ ಅನೇಕ ಸಣ್ಣ ಪುಟ್ಟ ವಸ್ತುಗಳಲ್ಲಿ ರೋಚಕ ವಿಜ್ಞಾನ ಅಡಗಿರುತ್ತದೆ. ಅದರಲ್ಲಿ ಮೂರು ಪಿನ್ ಹೊಂದಿರುವ ಪ್ಲಗ್ ಕೂಡ ಹೌದು. ನಿಮಗೆ ಗೊತ್ತಾ ಕೆಲವು ಪ್ಲಗ್&zwnj;ಗಳಲ್ಲಿ ಯಾಕೆ ಮೂರು ಪಿನ್ ಇರುತ್ತದೆ ಎಂದು? ಈ ಕುರಿತ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ...&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxarnjb8g9m2cnt7mbrpwj7r,imgname-3-pin-plug--3--1783846586728.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾವು ದಿನ ನಿತ್ಯ ಬಳಸುವ ಅನೇಕ ಸಣ್ಣ ಪುಟ್ಟ ವಸ್ತುಗಳಲ್ಲಿ ರೋಚಕ ವಿಜ್ಞಾನ ಅಡಗಿರುತ್ತದೆ. ಅದರಲ್ಲಿ ಮೂರು ಪಿನ್ ಹೊಂದಿರುವ ಪ್ಲಗ್ ಕೂಡ ಹೌದು. ನಿಮಗೆ ಗೊತ್ತಾ ಕೆಲವು ಪ್ಲಗ್&zwnj;ಗಳಲ್ಲಿ ಯಾಕೆ ಮೂರು ಪಿನ್ ಇರುತ್ತದೆ ಎಂದು? ಈ ಕುರಿತ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ...&lt;/p&gt;&lt;img&gt;&lt;p&gt;ನಿತ್ಯ ಜೀವನದಲ್ಲಿ ನಾವು ಅನೇಕ ವಿದ್ಯುತ್ ಉಪಕರಣಗಳನ್ನು ಬಳಸುತ್ತೇವೆ. ನೀವು ಗಮನಿಸಿರಬಹುದು! ಕೆಲವು ಪ್ಲಗ್&zwnj;ಗಳಿಗೆ ಎರಡು ಪಿನ್&zwnj;ಗಳಿದ್ದರೆ, ಇನ್ನು ಕೆಲವುಗಳಿಗೆ ಮೂರು ಪಿನ್&zwnj;ಗಳಿರುತ್ತವೆ. ಈ 3-ಪಿನ್ ಪ್ಲಗ್&zwnj;ಗಳಲ್ಲಿ ಎರಡು ಪಿನ್&zwnj;ಗಳು ಚಿಕ್ಕದಾಗಿದ್ದು, ಮೇಲ್ಭಾಗದ ಒಂದು ಪಿನ್ ಮಾತ್ರ ಉದ್ದ ಮತ್ತು ದಪ್ಪವಾಗಿರುತ್ತದೆ. ಇದು ಕೇವಲ ವಿನ್ಯಾಸಕ್ಕಾಗಿ ಮಾಡಿದ್ದಲ್ಲ, ಇದರ ಹಿಂದೆ ಪ್ರಮುಖವಾದ ಸುರಕ್ಷತಾ ಕಾರಣವಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಫ್ರಿಜ್, ಎಸಿ, ಮೈಕ್ರೋವೇವ್ ಓವನ್ ಮತ್ತು ಗೀಸರ್&zwnj;ನಂತಹ ದೊಡ್ಡ ವಿದ್ಯುತ್ ಉಪಕರಣಗಳಿಗೆ 3-ಪಿನ್ ಪ್ಲಗ್ ಬಳಸಲಾಗುತ್ತದೆ. ಈ ಸಾಧನಗಳ ಹೊರಭಾಗವು ಹೆಚ್ಚಾಗಿ ಲೋಹದಿಂದ (Metal body) ಮಾಡಲ್ಪಟ್ಟಿರುತ್ತದೆ. ಒಂದು ವೇಳೆ ವೈರ್&zwnj;ಗಳು ಸವೆದು ಲೋಹದ ಬಾಡಿಗೆ ತಗುಲಿದರೆ ಅಥವಾ ಶಾರ್ಟ್ ಸರ್ಕ್ಯೂಟ್ ಸಂಭವಿಸಿದರೆ ಆ ಸಾಧನವನ್ನು ಮುಟ್ಟಿದವರಿಗೆ ಜೋರಾದ ಎಲೆಕ್ಟ್ರಿಕ್ ಶಾಕ್ ಹೊಡೆಯುವ ಅಪಾಯವಿರುತ್ತದೆ. ಈ ಅಪಾಯ ತಪ್ಪಿಸಲು 3-ಪಿನ್ ಪ್ಲಗ್ ಅಗತ್ಯ.&lt;/p&gt;&lt;img&gt;&lt;p&gt;ನಮ್ಮ ಮೊಬೈಲ್ ಚಾರ್ಜರ್, ಟಿವಿ ಅಥವಾ ಟ್ರಿಮ್ಮರ್&zwnj;ಗಳಂತಹ ಸಾಧನಗಳಿಗೆ 2-ಪಿನ್ ಪ್ಲಗ್ ಇರುತ್ತದೆ. ಇವುಗಳ ಹೊರಭಾಗವು ಪ್ಲಾಸ್ಟಿಕ್&zwnj;ನಿಂದ ಮಾಡಲ್ಪಟ್ಟಿರುವುದರಿಂದ ಮತ್ತು ಇವು ಕಡಿಮೆ ವಿದ್ಯುತ್ ಬಳಸುವುದರಿಂದ ಇವುಗಳಿಗೆ ಅರ್ಥಿಂಗ್ ಅವಶ್ಯಕತೆ ಇರುವುದಿಲ್ಲ.&lt;/p&gt;&lt;img&gt;&lt;p&gt;3-ಪಿನ್ ಪ್ಲಗ್&zwnj;ನಲ್ಲಿರುವ ಉದ್ದವಾದ ಪಿನ್ ಅನ್ನು 'ಅರ್ಥ್ ಪಿನ್' (Earth Pin) ಎಂದು ಕರೆಯಲಾಗುತ್ತದೆ. ನೀವು ಪ್ಲಗ್ ಅನ್ನು ಸಾಕೆಟ್&zwnj;ಗೆ ಹಾಕಿದಾಗ, ಉದ್ದವಿರುವ ಅರ್ಥ್ ಪಿನ್ ಎಲ್ಲಕ್ಕಿಂತ ಮೊದಲು ಒಳಗೆ ಹೋಗುತ್ತದೆ. ವಿದ್ಯುತ್ ಹರಿಯುವ ಪಿನ್&zwnj;ಗಳಾದ 'ಫೇಸ್' ಮತ್ತು 'ನ್ಯೂಟ್ರಲ್' ಸಂಪರ್ಕ ಹೊಂದುವ ಮೊದಲೇ ಸಾಧನಕ್ಕೆ ಅರ್ಥಿಂಗ್ ಸಂಪರ್ಕ ಸಿಗುತ್ತದೆ.&lt;/p&gt;&lt;p&gt;ಒಂದು ವೇಳೆ ಆ ಉಪಕರಣದಲ್ಲಿ ಮೊದಲೇ ವಿದ್ಯುತ್ ಸೋರಿಕೆ (Current leakage) ಇದ್ದರೆ, ನೀವು ಅದನ್ನು ಮುಟ್ಟುವ ಮೊದಲೇ ಆ ಹೆಚ್ಚುವರಿ ವಿದ್ಯುತ್ ಸುರಕ್ಷಿತವಾಗಿ ಭೂಮಿಗೆ ಸೇರುತ್ತದೆ. ಇದರಿಂದ ನಮಗೆ ಶಾಕ್ ಹೊಡೆಯುವುದು ತಪ್ಪುತ್ತದೆ.&lt;/p&gt;&lt;img&gt;&lt;p&gt;ಪಿನ್ ದಪ್ಪವಾಗಿದ್ದರೆ ಅದನ್ನು ನಾವು ತಿಳಿಯದೇ ಸಾಕೆಟ್&zwnj;ನ 'ಲೈವ್' ಅಥವಾ 'ನ್ಯೂಟ್ರಲ್' ಸ್ಲಾಟ್&zwnj;ಗಳಿಗೆ ಹಾಕಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅದು ಸಣ್ಣದಾಗಿದ್ದರೆ, ತಪ್ಪಾಗಿ ಹಾಕುವ ಸಾಧ್ಯತೆ ಇರುತ್ತದೆ, ಇದರಿಂದ ಸಾಧನ ಹಾಳಾಗಬಹುದು. ವಿಜ್ಞಾನದ ನಿಯಮದಂತೆ, ವೈರ್ ಅಥವಾ ಪಿನ್ ಎಷ್ಟು ದಪ್ಪವಾಗಿರುತ್ತದೆಯೋ ಅದರ ವಿದ್ಯುತ್ ಪ್ರತಿರೋಧ ಅಷ್ಟು ಕಡಿಮೆಯಿರುತ್ತದೆ. ಪ್ರತಿರೋಧ ಕಡಿಮೆಯಿದ್ದಷ್ಟೂ ವಿದ್ಯುತ್ ವೇಗವಾಗಿ ಪ್ರವಹಿಸುತ್ತದೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್ ಆದಾಗ ಸೋರಿಕೆಯಾದ ವಿದ್ಯುತ್ ಯಾವುದೇ ಅಡೆತಡೆಯಿಲ್ಲದೆ, ಕ್ಷಣಾರ್ಧದಲ್ಲಿ ಭೂಮಿಗೆ ಸೇರಿ ಅಪಘಾತಗಳನ್ನು ತಪ್ಪಿಸುತ್ತದೆ. ಹೀಗೆ ನಮಗೆ ಸಣ್ಣದಾಗಿ ಕಾಣುವ ಪ್ಲಗ್ ವಿನ್ಯಾಸವು ನಮ್ಮ ಮನೆಯಲ್ಲಿ ವಿದ್ಯುತ್ ಅಪಘಾತಗಳು ಸಂಭವಿಸದಂತೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ.&lt;/p&gt;]]></content:encoded>
            <category>science</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/science/why-is-one-pin-in-a-3-pin-plug-thicker-and-longer-here-is-the-interesting-science-gkn-27u6c1w"/>
        </item>
        <item>
            <title><![CDATA[Skyroot Aerospace: ನಭಕ್ಕೆ ಹಾರಿದ ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಂ-1]]></title>
            <link>https://kannada.asianetnews.com/science/india-s-first-privately-developed-orbital-class-rocket-vikram-1-launched-from-the-satish-dhawan-space-centre-mrq/articleshow-50w26e3</link>
            <guid isPermaLink="true">https://kannada.asianetnews.com/science/india-s-first-privately-developed-orbital-class-rocket-vikram-1-launched-from-the-satish-dhawan-space-centre-mrq/articleshow-50w26e3</guid>
            <pubDate>Sat, 18 Jul 2026 12:10:31 +0530</pubDate>
            <description><![CDATA[&lt;p&gt;ಭಾರತೀಯ ಬಾಹ್ಯಾಕಾಶ ಸ್ಟಾರ್ಟಪ್ 'ಸ್ಕೈರೂಟ್&zwnj; ಏರೋಸ್ಪೇಸ್&zwnj;' ದೇಶದ ಮೊದಲ ಖಾಸಗಿ ರಾಕೆಟ್&zwnj; 'ವಿಕ್ರಂ-1' ಅನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ. 'ಆಗಮನ' ಹೆಸರಿನ ಈ ಐತಿಹಾಸಿಕ ಯೋಜನೆಯು ಹಲವು ಉಪಗ್ರಹಗಳನ್ನು ಹೊತ್ತೊಯ್ಯಲಿದಿದೆ. ಇದು ದೇಶದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxshakmvs552d4bjw0em3ftd,imgname--skyroot-aerospace-1784342204059.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಭಾರತೀಯ ಖಾಸಗಿ ಬಾಹ್ಯಾಕಾಶ ಟೆಕ್&zwnj; ಸ್ಟಾರ್ಟಪ್&zwnj; &lsquo;ಸ್ಕೈರೂಟ್&zwnj; ಏರೋಸ್ಪೇಸ್&zwnj;&rsquo; ಕಂಪನಿಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ರಾಕೆಟ್&zwnj; ವಿಕ್ರಂ-1ರ ಪರೀಕ್ಷಾರ್ಥ ಪ್ರಯೋಗಕ್ಕೆ &amp;nbsp;ನಭಕ್ಕೆ ಹಾರಿದೆ. ಇಂದು ಬೆಳಗ್ಗೆ 11.30ಕ್ಕೆ ಉಡಾವಣೆ ಸಮಯ ನಿಗಧಿಯಾಗಿತ್ತು, ತಾಂತ್ರಿಕ ಕಾರಣಗಳಿಂದ ಉಡಾವಣೆ ಮುಂದೂಡಿಕೆಯಾಗಿತ್ತು. ಶ್ರೀಹರಿಕೋಟಾದ ಸತೀಶ್&zwnj; ಧವನ್&zwnj; ಸ್ಪೇಸ್&zwnj; ಸೆಂಟರ್&zwnj;ನಿಂದ ವಿಕ್ರಂ-1 ರಾಕೆಟ್&zwnj;ನ ಉಡ್ಡಯನ ನಡೆದಿದೆ. ಈ ಉಡ್ಡಯನ ಯೋಜನೆಗೆ &lsquo;ಆಗಮನ&rsquo; ಎಂಬ ಹೆಸರಿಡಲಾಗಿದೆ. ದೇಶದ ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ ರಾಕೆಟ್&zwnj; ಮೂಲಕ ಪೇಲೋಡ್&zwnj; ಅನ್ನು ಕಕ್ಷೆಗೆ ಕಳುಹಿಸುವ ಪ್ರಯೋಗ ಇದಾಗಿರಲಿದ್ದು, ದೇಶದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಪಾಲಿಗೆ ಇದೊಂದು ಮಹತ್ವದ ಮೈಲಿಗಲ್ಲಾಗಿರಲಿದೆ.&lt;/p&gt;&lt;h2&gt;&lt;strong&gt;ಹಲವು ತಂತ್ರಜ್ಞಾನಗಳ ಪ್ರದರ್ಶನ&lt;/strong&gt;&lt;/h2&gt;&lt;p&gt;ತನ್ನ ಮೊದಲ ಉಡ್ಡಯನ ವೇಳೆ ವಿಕ್ರಂ-1 ರಾಕೆಟ್&zwnj; ಹಲವು ತಂತ್ರಜ್ಞಾನಗಳ ಪ್ರದರ್ಶನಕ್ಕೂ ವೇದಿಕೆ ಒದಗಿಸಲಿದೆ. ಭಾರತೀಯ ಭೂ ಪರಿವೀಕ್ಷಣಾ ನ್ಯಾನೋಸೆಟಲೈಟ್&zwnj; ನಿರ್ಮಾತೃ ಗ್ರಹಾ ಸ್ಪೇಸ್&zwnj;, ಭಾರತೀಯ ಬಾಹ್ಯಾಕಾಶ ಕಸಗಳನ್ನು ತೆಗೆದುಹಾಕುವ ಕಂಪನಿ ಕಾಸ್ಮೋಸರ್ವ್&zwnj;, ಸ್ಪೇಸ್&zwnj; ಬಿಡಿಭಾಗ ಅಭಿವೃದ್ಧಿಪಡಿಸುವ ಸಂಸ್ಥೆ ಡಿಕ್ಯುಬೆಡ್&zwnj; ಮತ್ತು ಸ್ಕೈರೂಟ್&zwnj;ನ ಸ್ಕೋಪ್&zwnj; ಉಪಗ್ರಹಗಳನ್ನು ನಭಕ್ಕೆ ಹೊತ್ತೊಯ್ಯಲಿದೆ. ಸ್ಕೋಪ್&zwnj; ಉಪಗ್ರಹ ಮಹತ್ವದ ಉಡ್ಡಯನ ಡೇಟಾಗಳನ್ನು ಸಂಗ್ರಹಿಸಲಿದೆ ಎಂದು ಹೇಳಲಾಗಿದೆ.&lt;/p&gt;&lt;h3&gt;&lt;strong&gt;ವಿಶೇಷ ಏನು?&lt;/strong&gt;&lt;/h3&gt;&lt;p&gt;ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಹಮ ಡಾ.ವಿಕ್ರಂ ಸಾರಾಬಾಯ್&zwnj; ಅವರ ಸ್ಮರಣೆಗಾಗಿ ವಿಕ್ರಂ-1 ಹೆಸರಿಡಲಾಗಿದೆ. ಹಲವು ಮಹಡಿಗಳ ಕಟ್ಟಡದಷ್ಟು ಎತ್ತರದ ಈ ರಾಕೆಟ್&zwnj;, 350 ಕಿ.ಗ್ರಾಂ. ತೂಕದ ಸಣ್ಣ ಉಪಗ್ರಹಗಳನ್ನು ಕೆಳ ಭೂಕಕ್ಷೆಗೆ ಕೂರಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.&lt;/p&gt;&lt;h3&gt;&lt;strong&gt;ಮೋದಿ ಕೈಬರಹದ ಪತ್ರವೂ ಬಾಹ್ಯಾಕಾಶಕ್ಕೆ&lt;/strong&gt;&lt;/h3&gt;&lt;p&gt;ಪ್ರಧಾನಿ ಮೋದಿ ಅವರ ಕೈಬರಹದಲ್ಲಿ &lsquo;ವಂದೇ ಮಾತರಂ&rsquo; ಎಂದು ಬರೆದಿರುವ ಪೋಸ್ಟ್&zwnj;ಕಾರ್ಡ್&zwnj; ಅನ್ನೂ ಸ್ಕೈರೂಟ್&zwnj; ಏರೋಸ್ಪೇಸ್&zwnj;ನ ವಿಕ್ರಂ-1 ರಾಕೆಟ್&zwnj; ನಭಕ್ಕೆ ಹೊತ್ತೊಯ್ಯಲಿದೆ. ಕಂಪನಿಯ ತಂಡ, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ವಿಶ್ವಾದ್ಯಂತದಿಂದ ಬೆಂಬಲಿಗರ ಶುಭಾಶಯಗಳನ್ನೂ ಈ ರಾಕೆಟ್&zwnj; ಹೊತ್ತೊಯ್ಯಲಿದೆ.&lt;/p&gt;&lt;p&gt;ಇದರ ಜತೆಗೆ ವಿಕ್ರಂ-1 ರಾಕೆಟ್&zwnj; ಕಾಸ್ಮೋಸ್&zwnj; ಡೈಮಂಡ್ಸ್&zwnj;ನ ವಜ್ರದ ಕಲಾಕೃತಿ ಕಾಸ್ಮಿಕ್&zwnj; ಬ್ಲೂಮ್&zwnj; ಮತ್ತು ಮೈಕ್ರೋ ಕಲಾಕೃತಿಯನ್ನು ಹೊತ್ತೊಯ್ಯಲಿದೆ.&lt;/p&gt;&lt;p&gt;ಇದು ನಮ್ಮ ಮೊದಲ ಪರೀಕ್ಷಾರ್ಥ ಉಡ್ಡಯನ. ಈ ಪ್ರಯೋಗದ ಮೂಲಕ ನಾವು ಮಹತ್ವದ ಡೇಟಾಗಳನ್ನು ಸಂಗ್ರಹಿಸಲಿದ್ದೇವೆ. ಇದು ಸ್ಕೈರೂಟ್&zwnj;ನ ಭವಿಷ್ಯದ ಉಡ್ಡಯನ ಆಕಾಂಕ್ಷೆಗಳಿಗೆ ಮೂಲ ಆಧಾರವಾಗಿರಲಿದೆ. ನಾವು ಇದಕ್ಕಾಗಿ ತೀವ್ರ ಉತ್ಸುಕರಾಗಿದ್ದೇವೆ ಎಂದು ಸ್ಕೈರೂಟ್&zwnj; ಸಿಇಒ ಪವನ್&zwnj; ಕುಮಾರ್ ಚಂದ್ನಾ ಎಂದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;#WATCH | Andhra Pradesh: India's first privately developed orbital-class rocket, Vikram-1, launched from the Satish Dhawan Space Centre in SriharikotaBuilt by Hyderabad-based Skyroot Aerospace, Vikram-1 is powered by three solid-fuel stages and a liquid orbital adjustment&hellip; pic.twitter.com/QQC9CPjcxH&lt;/p&gt;&lt;p&gt;&mdash; ANI (@ANI) July 18, 2026&lt;/p&gt;&lt;p&gt;&lt;/p&gt;]]></content:encoded>
            <category>science</category>
            <dc:creator>Mahmad Rafik</dc:creator>
            <atom:link href="https://kannada.asianetnews.com/science/india-s-first-privately-developed-orbital-class-rocket-vikram-1-launched-from-the-satish-dhawan-space-centre-mrq/articleshow-50w26e3"/>
        </item>
        <item>
            <title><![CDATA[Space Scientist: ತಿರಸ್ಕೃತರಿಂದಲೇ ಸನ್ಮಾನ: ಶೌಚಾಲಯ ಕ್ಲೀನ್​ ಮಾಡುತ್ತಲೇ ಮಂಗಳನ ಅಂಗಳದವರೆಗೆ- ಧೀರೆಯ ರೋಚಕ ಸ್ಟೋರಿ]]></title>
            <link>https://kannada.asianetnews.com/science/rejected-by-nasa-at-14-cleaning-space-toilets-to-leading-mars-mission-claire-parfitt-made-dream-come-true-suc/articleshow-5c483pu</link>
            <guid isPermaLink="true">https://kannada.asianetnews.com/science/rejected-by-nasa-at-14-cleaning-space-toilets-to-leading-mars-mission-claire-parfitt-made-dream-come-true-suc/articleshow-5c483pu</guid>
            <pubDate>Wed, 15 Jul 2026 13:37:58 +0530</pubDate>
            <description><![CDATA[14ನೇ ವಯಸ್ಸಿನಲ್ಲಿ ನಾಸಾದಿಂದ ತಿರಸ್ಕೃತಳಾದ ಕ್ಲೇರ್ ಪರ್ಫಿಟ್, ಬಾಹ್ಯಾಕಾಶ ಶೌಚಾಲಯ ಸ್ವಚ್ಛಗೊಳಿಸುವ ಕೆಲಸದಿಂದ ವೃತ್ತಿ ಆರಂಭಿಸಿದರು. ತಮ್ಮ ಛಲ ಮತ್ತು ಪರಿಶ್ರಮದಿಂದ ಇಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯಲ್ಲಿ ಮಂಗಳ ಗ್ರಹದ ಪರಿಶೋಧನಾ ತಂಡವನ್ನು ಮುನ್ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxjd1wvjrjt1zbrnkzvr1txp,imgname-nasa-1784102843250.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನಸು ನನಸು ಮಾಡಿಕೊಳ್ಳಬೇಕೆಂದರೆ ಅದು ಹಲವರ ಪಾಲಿಗೆ ಅಷ್ಟು ಸುಲಭದ ಪ್ರಯಾಣ ಆಗಿರುವುದಿಲ್ಲ. ಆದರೆ ಗುರಿ ಸ್ಪಷ್ಟವಾಗಿದ್ದರೆ, ಆರಂಭದಲ್ಲಿ ಬರುವ ಎಡರುತೊಡರುಗಳನ್ನು ಹಿಮ್ಮೆಟ್ಟಿ, ಛಲದ ಬೆನ್ನುಬಿದ್ದಾಗ ಇಡೀ ವಿಶ್ವವೇ ಗಮನಿಸುತ್ತದೆ ಎನ್ನುವುದಕ್ಕೆ ತಾಜಾ ಉದಾಹರಣೆ ಈ ಮಹಿಳೆ. ಹೆಸರು ಕ್ಲೇರ್ ಪರ್ಫಿಟ್.&lt;/p&gt;&lt;p&gt;ಕ್ಲೇರ್ 14 ವರ್ಷದವರಿದ್ದಾಗ, ಬಾಹ್ಯಾಕಾಶ ಉದ್ಯಮದಲ್ಲಿ ವೃತ್ತಿಜೀವನದ ಕನಸು ಕಂಡರು. ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳಿಂದ ಆಕರ್ಷಿತರಾದ ಅವರು, ಬಾಹ್ಯಾಕಾಶ ಪರಿಶೋಧನಾ ಪ್ರಪಂಚದ ಭಾಗವಾಗಲು ಅವಕಾಶವನ್ನು ಪಡೆಯುವ ಆಶಯದೊಂದಿಗೆ ನಾಸಾದಲ್ಲಿ ಕೆಲಸದ ಅನುಭವಕ್ಕಾಗಿ ಅರ್ಜಿ ಸಲ್ಲಿಸಿದರು. ಆದರೆ ಅಲ್ಲಿ ಅನುಭವ ಇರಲಿಲ್ಲ ಎನ್ನುವ ಕಾರಣಕ್ಕೆ ಅರ್ಜಿ ತಿರಸ್ಕರಿಸಲಾಯಿತು. ಆದರೆ ಬಾಲಕಿ ಕ್ಲೇರ್​ ಹತಾಶಳಾಗಲಿಲ್ಲ. ಛಲ ಬಿಟ್ಟುಕೊಡಲಿಲ್ಲ. ಬದಲಿಗೆ ಇಂಗ್ಲೆಂಡ್&zwnj;ನ ಲೀಸೆಸ್ಟರ್&zwnj;ನಲ್ಲಿರುವ ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ಕೇಂದ್ರದಲ್ಲಿ ಮತ್ತೊಂದು ಅವಕಾಶವನ್ನು ಕಂಡುಕೊಂಡರು.&lt;/p&gt;&lt;h2&gt;&lt;strong&gt;ಶೌಚಾಲಯ ಕ್ಲೀನಿಂಗ್​&lt;/strong&gt;&lt;/h2&gt;&lt;p&gt;ಅದು ಬಾಹ್ಯಾಕಾಶ ಶೌಚಾಲಯವನ್ನು ಶುಚಿ ಮಾಡುವ ಕಾರ್ಯ. ಇದು ಆರಂಭದಲ್ಲಿ ಕ್ಲೇರ್​ಗೆ ಅಸಹ್ಯ ಎನ್ನಿಸಿದ್ದು ಉಂಟು. ಏಕೆಂದರೆ, ಬಾಹ್ಯಾಕಾಶ ಶೌಚಾಲಯವನ್ನು ಸ್ವಚ್ಛಗೊಳಿಸಬೇಕಾಗಿತ್ತು. ಆದರೆ ಭವಿಷ್ಯದ ಕನಸಿನ ಸಾಕಾರಕ್ಕೆ ಈ ಉದ್ಯೋಗ ದಾರಿ ಮಾಡಿಕೊಡಲಿದೆ ಎಂದು ಅರಿತ ಅವರು, ಆ ಕಾರ್ಯವನ್ನು ಆರಂಭಿಸಿದರು. ಈ ಆರಂಭಿಕ ಅನುಭವದಿಂದ ಅವರ ಕನಸು ಸಾಕಾರಕ್ಕೆ ದಾರಿಯೂ ಸಿಕ್ಕಿತು. ಅಂತಿಮವಾಗಿ ಈ ಕಾರ್ಯವೇ ಕ್ಲೇರ್​ ಅವರನ್ನು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಗೆ ಕರೆದೊಯ್ಯಿತು, ಅಲ್ಲಿ ಅವರು ಈಗ ಭವಿಷ್ಯದ ಮಂಗಳ ಪರಿಶೋಧನಾ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುವ ತಂಡವನ್ನು ಮುನ್ನಡೆಸಲು ಆಯ್ಕೆಗೊಂಡರು.&lt;/p&gt;&lt;p&gt;ಕ್ಲೇರ್​ ಅವರ ಬಾಹ್ಯಾಕಾಶ ವೃತ್ತಿಜೀವನವು ಶುರುವಾಗಿದ್ದು, ಶೌಚಾಲಯ ಕ್ಲೀನ್​ನಿಂದ ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ಕೇಂದ್ರದಲ್ಲಿ ಅವರ ತರಬೇತಿಯ ಸಮಯದಲ್ಲಿ. ಅವರು ತೋರಿದ ಜಾಣ್ಮೆಗೆ ಅವಕಾಶ ಹುಡುಕಿ ಬಂದಿತು. ಮೊದಲ ಬ್ರಿಟಿಷ್ ಗಗನಯಾತ್ರಿ ಹೆಲೆನ್ ಶರ್ಮನ್ ಧರಿಸಿದ್ದ ಬಾಹ್ಯಾಕಾಶ ಸೂಟ್&zwnj;ನಂತಹ ಪ್ರಮುಖ ಬಾಹ್ಯಾಕಾಶ-ಸಂಬಂಧಿತ ವಸ್ತುಗಳನ್ನು ಅನ್​ಪ್ಯಾಕ್​ ಮಾಡುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಕ್ಲೇರ್​ ಪರ್ಫಿಟ್ ನಿರ್ವಹಿಸಿದರು. ಬಾಹ್ಯಾಕಾಶ ಶೌಚಾಲಯ ಕ್ಲೀನಿಂಗ್​ ಸೇರಿದಂತೆ ಅಲ್ಲಿಯ ಎಲ್ಲಾ ಚಟುವಟಿಕೆಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದರು, ಈ ಕಾರ್ಯಗಳು ಸಾಮಾನ್ಯವೆಂದು ತೋರುತ್ತದೆಯಾದರೂ, ಅವು ಅವರಿಗೆ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಅಮೂಲ್ಯವಾದ ಒಳನೋಟವನ್ನು ಒದಗಿಸಿದವು ಮತ್ತು ಬಾಹ್ಯಾಕಾಶ ಪರಿಶೋಧನೆಯನ್ನು ಸಾಧ್ಯವಾಗಿಸುವಲ್ಲಿ ಒಳಗೊಂಡಿರುವ ವಿವಿಧ ಪಾತ್ರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದವು.&lt;/p&gt;&lt;h3&gt;&lt;strong&gt;ಅವಕಾಶದ ಬಾಗಿಲು&lt;/strong&gt;&lt;/h3&gt;&lt;p&gt;ಅವರ ಭವಿಷ್ಯಕ್ಕೆ ಸ್ಫೂರ್ತಿ ನೀಡಿದ ನಾಯಕಿ ಆಗ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿದ್ದ ಅಲೆಕ್ಸ್ ಹಾಲ್. ಅಲೆಕ್ಸ್​ ಅವರನ್ನು ಕ್ಲೇರಾ ಭೇಟಿಯಾದಾಗ ಅವರ ಜೀವನ ಪ್ರಯಾಣದಲ್ಲಿ ಒಂದು ಮಹತ್ವದ ತಿರುವು ಬಂದಿತು. ಬಾಹ್ಯಾಕಾಶ ಉದ್ಯಮದಲ್ಲಿ ನಾಯಕತ್ವದ ಸ್ಥಾನಗಳನ್ನು ಸಾಧಿಸುವುದು ಸಾಧ್ಯ ಎಂದು ಹಾಲ್ ಯುವ ವಿದ್ಯಾರ್ಥಿಗೆ ತೋರಿಸಿದರು. ಸಾಂಪ್ರದಾಯಿಕವಾಗಿ ಮಹಿಳೆಯರು ಕಡಿಮೆ ಪ್ರಾತಿನಿಧ್ಯ ಹೊಂದಿರುವ ಕ್ಷೇತ್ರದಲ್ಲಿ ತನ್ನನ್ನು ತಾನು ನೋಡಲು ಕ್ಲೇರ್​ ಅವರಿಗೆ ಸಹಾಯ ಮಾಡಿತು. ಭೌತಶಾಸ್ತ್ರ ವಿದ್ಯಾರ್ಥಿಯಿಂದ ಬಾಹ್ಯಾಕಾಶ ಎಂಜಿನಿಯರ್ ಆಗಿ ತನ್ನ ಕನಸುಗಳನ್ನು ನನಸಾಗಿಸಲು ಪ್ರೇರೇಪಿಸಲ್ಪಟ್ಟ ಕ್ಲೇರ್​ ಪರ್ಫಿಟ್ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ನಂತರ ಬಾಹ್ಯಾಕಾಶ ನೌಕೆ ವಿದ್ಯುತ್ ವ್ಯವಸ್ಥೆಗಳ ಎಂಜಿನಿಯರಿಂಗ್&zwnj;ನಲ್ಲಿ ಪಿಎಚ್&zwnj;ಡಿ ಗಳಿಸಿದರು.&lt;/p&gt;&lt;p&gt;ಅವರ ಶೈಕ್ಷಣಿಕ ಹಿನ್ನೆಲೆಯು ಅಂತಿಮವಾಗಿ ನೆದರ್&zwnj;ಲ್ಯಾಂಡ್ಸ್&zwnj;ನಲ್ಲಿರುವ ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಅತಿದೊಡ್ಡ ತಾಂತ್ರಿಕ ಕೇಂದ್ರವಾದ ಯುರೋಪಿಯನ್ ಬಾಹ್ಯಾಕಾಶ ಸಂಶೋಧನೆ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ (ESTEC) ವೃತ್ತಿಜೀವನಕ್ಕೆ ಬಾಗಿಲು ತೆರೆಯಿತು. ಮಂಗಳ ಗ್ರಹದ ಭವಿಷ್ಯದ ಪರಿಶೋಧನೆಗೆ ಕೊಡುಗೆ ನೀಡುವುದು ಅವರ ಪ್ರಸ್ತುತ ಪಾತ್ರವು ಭವಿಷ್ಯದ ಪರಿಶೋಧನಾ ಕಾರ್ಯಾಚರಣೆಗಳನ್ನು ವಿನ್ಯಾಸಗೊಳಿಸುವ ಮತ್ತು ಯೋಜಿಸುವ ಪ್ರಮುಖ ಎಂಜಿನಿಯರಿಂಗ್ ತಂಡಗಳನ್ನು ಒಳಗೊಂಡಿದೆ. ಬಾಹ್ಯಾಕಾಶ ನೌಕೆ ವ್ಯವಸ್ಥೆಗಳು ಆಳವಾದ ಬಾಹ್ಯಾಕಾಶದ ತೀವ್ರ ಪರಿಸ್ಥಿತಿಗಳನ್ನು ಬದುಕಲು ಸಮರ್ಥವಾಗಿವೆ ಎಂದು ಖಚಿತಪಡಿಸಿಕೊಳ್ಳುವುದು ಇದರಲ್ಲಿ ಸೇರಿದೆ.&lt;/p&gt;&lt;p&gt;ನಾಸಾದಿಂದ ತಿರಸ್ಕಾರವು ಅವರ ಕನಸನ್ನು ಕೊನೆಗೊಳಿಸಬಹುದಿತ್ತು, ಆದರೆ ಸ್ಥಳೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅನಿರೀಕ್ಷಿತ ಅವಕಾಶವು ಅವರ ಯಶಸ್ವಿ ವೃತ್ತಿಜೀವನಕ್ಕೆ ಅಡಿಪಾಯ ಹಾಕಿತು. ಅವರ ಕಥೆಯು ಬಾಹ್ಯಾಕಾಶ ಪರಿಶೋಧನೆಯಲ್ಲಿ ಎಂಜಿನಿಯರ್&zwnj;ಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಸಹ ವಿವರಿಸುತ್ತದೆ. ಭೂಮಿಯಾಚೆಗಿನ ಕಾರ್ಯಾಚರಣೆಗಳು ಗಗನಯಾತ್ರಿಗಳ ಮೇಲೆ ಮಾತ್ರವಲ್ಲದೆ, ಬಾಹ್ಯಾಕಾಶ ನೌಕೆಯನ್ನು ವಿನ್ಯಾಸಗೊಳಿಸುವ, ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮತ್ತು ಪರಿಶೋಧನೆಯನ್ನು ಸಾಧ್ಯವಾಗಿಸುವ ವ್ಯವಸ್ಥೆಗಳನ್ನು ರಚಿಸುವ ಸಾವಿರಾರು ವಿಜ್ಞಾನಿಗಳು ಮತ್ತು ಎಂಜಿನಿಯರ್&zwnj;ಗಳ ಮೇಲೂ ಅವಲಂಬಿತವಾಗಿದೆ.&lt;/p&gt;]]></content:encoded>
            <category>science</category>
            <dc:creator>Suchethana D</dc:creator>
            <atom:link href="https://kannada.asianetnews.com/science/rejected-by-nasa-at-14-cleaning-space-toilets-to-leading-mars-mission-claire-parfitt-made-dream-come-true-suc/articleshow-5c483pu"/>
        </item>
        <item>
            <title><![CDATA[ಭಾರತದ ಮೊದಲ ಖಾಸಗಿ ರಾಕೆಟ್‌ 'ವಿಕ್ರಮ್-1' ನಾಳೆ ಉಡಾವಣೆ;  ಬಾಹ್ಯಾಕಾಶಕ್ಕೆ ರವಾನೆಯಾಗಲಿದೆ ಪಿಎಂ ಮೋದಿ ವಿಶೇಷ ಸಂದೇಶ!]]></title>
            <link>https://kannada.asianetnews.com/science/skyroot-vikram-1-launch-india-first-private-rocket-pm-modi-message-san/articleshow-6tvlyeb</link>
            <guid isPermaLink="true">https://kannada.asianetnews.com/science/skyroot-vikram-1-launch-india-first-private-rocket-pm-modi-message-san/articleshow-6tvlyeb</guid>
            <pubDate>Fri, 17 Jul 2026 23:04:05 +0530</pubDate>
            <description><![CDATA[&lt;p&gt;ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಖಾಸಗಿ ರಾಕೆಟ್ 'ವಿಕ್ರಮ್-1' ಉಡಾವಣೆಗೆ ಸಿದ್ಧವಾಗಿದೆ. ಈ ರಾಕೆಟ್ ಪ್ರಧಾನಿ ಮೋದಿಯವರ ಕೈಬರಹದ 'ವಂದೇ ಮಾತರಂ' ಪೋಸ್ಟ್&zwnj;ಕಾರ್ಡ್ ಸೇರಿದಂತೆ ಹಲವು ವಿಶೇಷ ವಸ್ತುಗಳನ್ನು ಹೊತ್ತೊಯ್ಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxrj54s7mxrmqkq79x18fccq,imgname-skyroot-vikram-1-launch-pm-modi-1784309519143.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.17):&lt;/strong&gt; ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಮತ್ತೊಂದು ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗಲು ಕ್ಷಣಗಣನೆ ಆರಂಭವಾಗಿದೆ. ದೇಶದ ಮೊಟ್ಟಮೊದಲ ಖಾಸಗಿ ಆರ್ಬಿಟಲ್ ಕ್ಲಾಸ್ ರಾಕೆಟ್ 'ವಿಕ್ರಮ್-1' (Vikram-1) ಶನಿವಾರ ಬೆಳಿಗ್ಗೆ 11:30 ಕ್ಕೆ ಬಾಹ್ಯಾಕಾಶಕ್ಕೆ ಹಾರಲಿದೆ. ಹೈದರಾಬಾದ್ ಮೂಲದ ಪ್ರಮುಖ ಸ್ಪೇಸ್&zwnj;ಟೆಕ್ ಸಂಸ್ಥೆ 'ಸ್ಲೈರೂಟ್ ಏರೋಸ್ಪೇಸ್' (Skyroot Aerospace) ಈ ಅತ್ಯಾಧುನಿಕ ರಾಕೆಟ್&zwnj; ಅನ್ನು ಅಭಿವೃದ್ಧಿಪಡಿಸಿದ್ದು, ಇಡೀ ವಿಶ್ವದ ಕಣ್ಣು ಈಗ ಈ ಉಡಾವಣೆಯ ಮೇಲೆ ನೆಟ್ಟಿದೆ.&lt;/p&gt;&lt;p&gt;'ವಿಕ್ರಮ್-1 ಟೆಸ್ಟ್ ಫ್ಲೈಟ್-1' ಹೊತ್ತೊಯ್ಯುತ್ತಿರುವ ಪೇಲೋಡ್&zwnj;ನಲ್ಲಿ ಅತ್ಯಂತ ವಿಶಿಷ್ಟವಾದ ವಸ್ತುವೊಂದನ್ನು ಇರಿಸಲಾಗಿದೆ ಎಂದು ಸ್ಕೈರೂಟ್ ಏರೋಸ್ಪೇಸ್ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಕೈಬರಹದಲ್ಲಿ ಬರೆದಿರುವ ಪೋಸ್ಟ್&zwnj;ಕಾರ್ಡ್ ಇದಾಗಿದ್ದು, ಅದರಲ್ಲಿ 'ವಂದೇ ಮಾತರಂ' ಎಂದು ಬರೆಯಲಾಗಿದೆ. ಈ ಕಾರ್ಡ್ ಮೇಲೆ ಪ್ರಧಾನಿ ಮೋದಿಯವರ ಸಹಿ ಇದ್ದು, ಅವರದ್ದೇ ಕೈಬರಹದಲ್ಲಿ '26.06.26' ರ ದಿನಾಂಕವನ್ನು ನಮೂದಿಸಲಾಗಿದೆ.&lt;/p&gt;&lt;p&gt;ಪ್ರಧಾನಿ ಮೋದಿಯವರ ಈ ವಿಶೇಷ ಸಂದೇಶದ ಜೊತೆಗೆ ದೇಶದ ಹಲವು ತಜ್ಞರು ಮತ್ತು ಗಣ್ಯರು ಬರೆದ ಪೋಸ್ಟ್&zwnj;ಕಾರ್ಡ್&zwnj;ಗಳನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸ್ಕೈರೂಟ್ ಏರೋಸ್ಪೇಸ್&zwnj;ನ ಸಂಸ್ಥಾಪಕ ಮತ್ತು ಸಿಇಒ ಪವನ್ ಕುಮಾರ್ ಚಂದನಾ, &quot;ಪ್ರಧಾನಿಯವರ ಕೈಬರಹದ ಪೋಸ್ಟ್&zwnj;ಕಾರ್ಡ್ ಓದಿದಾಗ ನನಗೆ ಮೈ ರೋಮಾಂಚನಗೊಳ್ಳುತ್ತದೆ. ಇದು ನಮ್ಮ ಇಡೀ ತಂಡ, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ವಿಶ್ವದಾದ್ಯಂತ ಇರುವ ನಮ್ಮ ಹಿತಚಿಂತಕರ ಹಸ್ತಪ್ರತಿ ಸಂದೇಶಗಳೊಂದಿಗೆ ಬಾಹ್ಯಾಕಾಶಕ್ಕೆ ಪಯಣಿಸಲಿದೆ&quot; ಎಂದಿದ್ದಾರೆ. ಕೇಂದ್ರ ಕ್ಯಾಬಿನೆಟ್ ಸಚಿವರಾದ ಜಿತೇಂದ್ರ ಸಿಂಗ್, ಪಿಯೂಷ್ ಗೋಯಲ್, ಇಸ್ರೋ (ISRO) ಚೇರ್ಮನ್ ವಿ. ನಾರಾಯಣನ್, ಇಸ್ರೋದ ಮಾಜಿ ಚೇರ್ಮನ್ ಎಸ್. ಸೋಮನಾಥ್ ಮತ್ತು ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಈ ಮಿಷನ್&zwnj;ನ ಯಶಸ್ಸಿಗಾಗಿ ಬರೆದಿರುವ ಶುಭಾಶಯ ಸಂದೇಶಗಳು ಈ ಪಟ್ಟಿಯಲ್ಲಿವೆ.&lt;/p&gt;&lt;p&gt;ಬಾಹ್ಯಾಕಾಶ ಕ್ಷೇತ್ರದಲ್ಲಿ ಬೃಹತ್ ಸಾಧನೆ ಮಾಡಿರುವ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯು ಇದುವರೆಗೆ ಜಾಗತಿಕ ಮಾರುಕಟ್ಟೆಯಿಂದ ಒಟ್ಟು 160 ಮಿಲಿಯನ್ ಡಾಲರ್ ಹೂಡಿಕೆಯನ್ನು ಸಂಗ್ರಹಿಸಿದೆ. ಈ ಮೂಲಕ 1.1 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ (Valuation) ಭಾರತದ ಮೊಟ್ಟಮೊದಲ ಸ್ಪೇಸ್&zwnj;ಟೆಕ್ ಯೂನಿಕಾರ್ನ್ (Unicorn) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಂಪನಿಯಲ್ಲಿ ಸಿಂಗಾಪುರದ ಸಾವರಿಜಿನ್&zwnj; ವೆಲ್ತ್ ಫಂಡ್ 'ಜಿಐಸಿ' (GIC), ಸಿಂಗಾಪುರ ಸರ್ಕಾರದ ಹೂಡಿಕೆ ಸಂಸ್ಥೆ 'ಟೀಮಾಸೆಕ್ ಹೋಲ್ಡಿಂಗ್ಸ್', ಗೂಗಲ್&zwnj;ನ ಆರಂಭಿಕ ಹೂಡಿಕೆದಾರ ಸಂಸ್ಥೆಯಾದ 'ಶೇರ್&zwnj;ಪಾಲೋ ವೆಂಚರ್ಸ್' ಮತ್ತು ಜಾಗತಿಕ ಆಸ್ತಿ ನಿರ್ವಹಣಾ ಸಂಸ್ಥೆ 'ಬ್ಲ್ಯಾಕ್&zwnj;ರಾಕ್' ಪ್ರಮುಖ ಹೂಡಿಕೆ ಮಾಡಿವೆ. ಇವುಗಳ ಜೊತೆಗೆ ಅರ್ಕಮ್ ವೆಂಚರ್ಸ್, ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ, ಪ್ಲೇಬುಕ್ ಪಾರ್ಟನರ್ಸ್, ಸಾಂಘ್ವಿ ಫ್ಯಾಮಿಲಿ ಆಫೀಸ್ ಹಾಗೂ ಮೈಂತ್ರಾ/ಕ್ಯೂರ್&zwnj;ಫಿಟ್ ಸಂಸ್ಥಾಪಕ ಮುಕೇಶ್ ಬನ್ಸಲ್ ಕೂಡ ಹೂಡಿಕೆದಾರರಾಗಿದ್ದಾರೆ.&lt;/p&gt;&lt;p&gt;ಶ್ರೀಹರಿಕೋಟಾದ ಐತಿಹಾಸಿಕ ಮೊದಲ ಲಾಂಚ್&zwnj;ಪ್ಯಾಡ್&zwnj;ನಿಂದ ಈ ಉಡಾವಣೆ ನಡೆಯಲಿದೆ. ವಿಕ್ರಮ್-1 ರಾಕೆಟ್&zwnj;ನಲ್ಲಿ ಗ್ರಾಹಾ ಸ್ಪೇಸ್, ಕಾಸ್ಮೋಸರ್ವ್ ಸ್ಕೋಪ್ ಹಾಗೂ ಕಾಸ್ಮಾಸ್ ಡೈಮಂಡ್ಸ್ ಸಂಸ್ಥೆಯ 'ಕಾಸ್ಮಿಕ್ ಬ್ಲೂಮ್' ಎಂಬ ಕಲಾಕೃತಿ (Artwork) ಮತ್ತು ಒಂದು ಮೈಕ್ರೋ ಆರ್ಟ್ ಪೀಸ್ ಅನ್ನು ಕಳುಹಿಸಲಾಗುತ್ತಿದೆ. ಅತ್ಯಂತ ಆಕರ್ಷಕವಾದ 18 ಕ್ಯಾರೆಟ್ ಚಿನ್ನದ ರಾಕೆಟ್ ಮಾದರಿಯ ಮೈಕ್ರೋ-ಆರ್ಟ್&zwnj;ನಲ್ಲಿ ಭಾರತದ ಹೆಮ್ಮೆಯ ವಿಜ್ಞಾನಿಗಳಾದ ಸರ್ ಸಿ.ವಿ. ರಾಮನ್, ಡಾ. ವಿಕ್ರಮ್ ಸಾರಾಭಾಯ್ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸೂಕ್ಷ್ಮ ಮೂರ್ತಿಗಳನ್ನು (Micro-sculptures) ಕೆತ್ತಲಾಗಿದ್ದು, ಇವು ಬಾಹ್ಯಾಕಾಶದ ಕಕ್ಷೆ ಸೇರಲಿವೆ.&lt;/p&gt;&lt;h2&gt;&lt;strong&gt;ಭಾರತದ ಬಾಹ್ಯಾಕಾಶ ವಲಯಕ್ಕೆ ಸಿಗಲಿದೆ ಹೊಸ ಬಲ&lt;/strong&gt;&lt;/h2&gt;&lt;p&gt;ಈ ಉಡಾವಣೆ ಯಶಸ್ವಿಯಾದರೆ, ಭಾರತೀಯ ಬಾಹ್ಯಾಕಾಶ ರಂಗಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮನ್ನಣೆ ಸಿಗಲಿದೆ. ಇದುವರೆಗೆ ಭೂಮಿಯ ಕೆಳ ಕಕ್ಷೆಗೆ (Low Earth Orbit - LEO) ಉಪಗ್ರಹಗಳನ್ನು ಉಡಾವಣೆ ಮಾಡಲು ಕೇವಲ ಇಸ್ರೋ (ISRO) ರಾಕೆಟ್&zwnj;ಗಳನ್ನೇ ಅವಲಂಬಿಸಬೇಕಾಗಿತ್ತು. ಆದರೆ, ವಿಕ್ರಮ್-1 ಯಶಸ್ಸಿನ ಬಳಿಕ ವಾಣಿಜ್ಯ ಉಪಗ್ರಹ ಉಡಾವಣೆಗೆ ದೇಶೀಯವಾಗಿ ಮತ್ತೊಂದು ಅತ್ಯುತ್ತಮ ಮತ್ತು ಕೈಗೆಟುಕುವ ಖಾಸಗಿ ಪರ್ಯಾಯ ಆಯ್ಕೆ ಲಭ್ಯವಾಗಲಿದ್ದು, ಭಾರತದ ಸ್ಪೇಸ್ ಸೆಕ್ಟರ್ ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲಿಷ್ಠವಾಗಲಿದೆ.&lt;/p&gt;&lt;p&gt;&lt;/p&gt;]]></content:encoded>
            <category>science</category>
            <dc:creator>Santosh Naik</dc:creator>
            <atom:link href="https://kannada.asianetnews.com/science/skyroot-vikram-1-launch-india-first-private-rocket-pm-modi-message-san/articleshow-6tvlyeb"/>
        </item>
        <item>
            <title><![CDATA[Gold In The Ocean: ಸಮುದ್ರದಲ್ಲಿ 2 ಕೋಟಿ ಟನ್‌ ಬಂಗಾರ ಇದ್ರೂ ಯಾಕೆ ತೆಗೆಯುತ್ತಿಲ್ಲ? ವಿಜ್ಞಾನಿಗಳು ಏನಂತಾರೆ?]]></title>
            <link>https://kannada.asianetnews.com/money/is-there-more-gold-in-the-ocean-or-on-land-how-to-find-out/articleshow-77fszze</link>
            <guid isPermaLink="true">https://kannada.asianetnews.com/money/is-there-more-gold-in-the-ocean-or-on-land-how-to-find-out/articleshow-77fszze</guid>
            <pubDate>Sat, 11 Jul 2026 15:44:37 +0530</pubDate>
            <description><![CDATA[&lt;p&gt;How much gold is lost in the ocean: ಸಮುದ್ರ ಎಂದರೆ ನಮಗೆ ನೆನಪಾಗುವುದು ತೀರಕ್ಕೆ ಅಪ್ಪಳಿಸುವ ಅಲೆಗಳು, ಕಣ್ಮನ ಸೆಳೆಯುವ ನೀಲಿ ಜಗತ್ತು ಮತ್ತು ವಿಲಕ್ಷಣ ಜಲಚರಗಳು. ಆದರೆ, ಇದೇ ಸಾಗರದ ಗರ್ಭದಲ್ಲಿ ನಾವ್ಯಾರೂ ಊಹಿಸದಷ್ಟು ಅಗಾಧ ಪ್ರಮಾಣದ ಚಿನ್ನ ಅಡಗಿದೆ ಎಂದರೆ ನೀವು ನಂಬಲೇಬೇಕು! &zwnj;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx8amvfkkzx5h6jgy5ba6fym,imgname-new-project--14--1783764774386.jpg" type="image/jpeg" height="390" width="690"/>
            <content:encoded><![CDATA[&lt;p&gt;How to find gold in the ocean: ಭೂಮಿಯ ಗಣಿಗಳಲ್ಲಿ ಅದಿರಿನ ರೂಪದಲ್ಲಿ ಬಂಗಾರ ಸಿಗುತ್ತದೆ ಎನ್ನೋದು ಎಲ್ಲರಿಗೂ ಗೊತ್ತು. ಆದರೆ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ಜಗತ್ತಿನ ಸಾಗರಗಳಲ್ಲಿ ಸುಮಾರು 2 ಕೋಟಿ ಟನ್ ಬಂಗಾರ ಅಡಗಿದೆ. ಆದರೆ, ಈ ಸಂಪತ್ತನ್ನು ಸ್ಪರ್ಶಿಸಲು ಇಂದಿನ ಮುಂದುವರಿದ ತಂತ್ರಜ್ಞಾನಕ್ಕೂ ಸಾಧ್ಯವಾಗುತ್ತಿಲ್ಲ.&lt;/p&gt;&lt;h2&gt;ನೀರಿನಲ್ಲಿ ಕರಗಿದ ಬಂಗಾರದ ಕಣಗಳು&lt;/h2&gt;&lt;p&gt;ಸಮುದ್ರದಲ್ಲಿರುವ ಚಿನ್ನವು ಗಟ್ಟಿ ಬಿಸ್ಕೆಟ್ ಅಥವಾ ಅದಿರಿನ ರೂಪದಲ್ಲಿಲ್ಲ. ಬದಲಾಗಿ, ಅದು ನೀರಿನ ಪ್ರತಿ ಹನಿಯಲ್ಲಿಯೂ ಅತ್ಯಂತ ಸೂಕ್ಷ್ಮ ಕಣಗಳಾಗಿ ಸಂಪೂರ್ಣವಾಗಿ ವಿಲೀನಗೊಂಡಿದೆ. ಸರಳವಾಗಿ ಹೇಳಬೇಕೆಂದರೆ, ಒಂದು ಲೀಟರ್ ಸಮುದ್ರದ ನೀರಿನಲ್ಲಿ ಸಿಗುವ ಚಿನ್ನದ ಅಂಶ ತೀರಾ ಅತ್ಯಲ್ಪ. ಈ ಅಗೋಚರ ಚಿನ್ನದ ಕಣಗಳನ್ನು ಬೇರ್ಪಡಿಸಬೇಕಾದರೆ ಕೋಟ್ಯಂತರ ಲೀಟರ್ ನೀರನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಸಂಸ್ಕರಿಸಬೇಕಾಗುತ್ತದೆ.&lt;/p&gt;&lt;h2&gt;ತಂತ್ರಜ್ಞಾನಕ್ಕೆ ಸವಾಲಾದ ಆರ್ಥಿಕ ನಷ್ಟ&lt;/h2&gt;&lt;p&gt;ಪ್ರಸ್ತುತ ಜಗತ್ತಿನಲ್ಲಿ ತಂತ್ರಜ್ಞಾನವು ರಾಕೆಟ್ ವೇಗದಲ್ಲಿ ಬೆಳೆದಿದ್ದರೂ, ಸಮುದ್ರದಿಂದ ಚಿನ್ನವನ್ನು ಬೇರ್ಪಡಿಸುವ ಪ್ರಕ್ರಿಯೆ ಮಾತ್ರ ಲಾಭದಾಯಕವಾಗಿಲ್ಲ. ಸಾಗರದ ನೀರಿನಿಂದ ಒಂದು ಗ್ರಾಂ ಚಿನ್ನವನ್ನು ಹೊರತೆಗೆಯಲು ತಗಲುವ ವೆಚ್ಚವು, ಆ ಚಿನ್ನದ ಮಾರುಕಟ್ಟೆ ಮೌಲ್ಯಕ್ಕಿಂತ ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ. ಅಂದರೆ, ಹೂಡಿಕೆ ಮಾಡುವ ಬಂಡವಾಳಕ್ಕೆ ಹೋಲಿಸಿದರೆ ಸಿಗುವ ಲಾಭ ಶೂನ್ಯ. ಈ ಪ್ರಾಯೋಗಿಕ ನಷ್ಟದ ಕಾರಣಕ್ಕಾಗಿಯೇ ಜಗತ್ತಿನ ಯಾವುದೇ ಪ್ರಭಾವಿ ದೇಶವೂ ಈ ಸಾಹಸಕ್ಕೆ ಕೈಹಾಕುತ್ತಿಲ್ಲ.&lt;/p&gt;&lt;h2&gt;ಜಲಚರಗಳ ಜೀವಕ್ಕೆ ಕಂಟಕ&lt;/h2&gt;&lt;p&gt;ಕೇವಲ ಆರ್ಥಿಕ ನಷ್ಟ ಮಾತ್ರವಲ್ಲದೆ, ಪರಿಸರ ಕಾಳಜಿಯೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಬೃಹತ್ ಪ್ರಮಾಣದಲ್ಲಿ ನೀರನ್ನು ಶುದ್ಧೀಕರಿಸುವ ಯಂತ್ರಗಳನ್ನು ಅಳವಡಿಸಿದರೆ, ಅದು ಸಮುದ್ರದ ಸೂಕ್ಷ್ಮ ಜೀವವ್ಯವಸ್ಥೆಯನ್ನು (Marine Ecosystem) ಸಂಪೂರ್ಣವಾಗಿ ನಾಶಪಡಿಸುತ್ತದೆ. ಮೀನುಗಳು, ಅಪರೂಪದ ಹವಳದ ದಿಬ್ಬಗಳು ಮತ್ತು ಜಲಸಸ್ಯಗಳು ನಾಶವಾಗಿ ಪ್ರಕೃತಿಯ ಸಮತೋಲನವೇ ಏರುಪೇರಾಗುತ್ತದೆ. ಹೀಗಾಗಿ, ಬಂಗಾರದ ಆಸೆಗೆ ಬಿದ್ದು ಪ್ರಕೃತಿಯನ್ನು ವಿನಾಶದ ಅಂಚಿಗೆ ತಳ್ಳುವುದು ಮೂರ್ಖತನ ಎನ್ನುತ್ತಾರೆ ವಿಜ್ಞಾನಿಗಳು.&lt;/p&gt;&lt;p&gt;ಪ್ರಸ್ತುತ, ಪ್ರಕೃತಿಗೆ ಹಾನಿಯಾಗದಂತೆ ಕನಿಷ್ಠ ವೆಚ್ಚದಲ್ಲಿ ಚಿನ್ನವನ್ನು ಬೇರ್ಪಡಿಸುವ ಹಸಿರು ತಂತ್ರಜ್ಞಾನದ ಕುರಿತು ಸಂಶೋಧನೆಗಳು ಜಾರಿಯಲ್ಲಿವೆ. ಅಲ್ಲಿಯವರೆಗೆ ಸಮುದ್ರದ ಈ ಕೋಟ್ಯಂತರ ಟನ್ ಚಿನ್ನವು ಕೇವಲ ಒಂದು ನಿಗೂಢ ಜಲನಿಧಿಯಾಗಿಯೇ ಉಳಿಯಲಿದೆ.&lt;/p&gt;&lt;p&gt;&lt;/p&gt;]]></content:encoded>
            <category>science</category>
            <dc:creator>Padmashree Bhat</dc:creator>
            <atom:link href="https://kannada.asianetnews.com/money/is-there-more-gold-in-the-ocean-or-on-land-how-to-find-out/articleshow-77fszze"/>
        </item>
        <item>
            <title><![CDATA[ಉಪವಾಸವಿದ್ದು ಸಾಮಾನ್ಯ ಮನುಷ್ಯ ಎಷ್ಟು ದಿನ ಇರಬಲ್ಲ? ಬಳಿಕ ದೇಹದಲ್ಲಿ ಆಗೋದೇನು? ವಿಜ್ಞಾನ ಹೇಳುವುದೇನು]]></title>
            <link>https://kannada.asianetnews.com/science/how-long-can-a-normal-person-stay-fasting-what-happens-to-the-body-afterwards-as-per-science-say-suc/articleshow-7l7bq24</link>
            <guid isPermaLink="true">https://kannada.asianetnews.com/science/how-long-can-a-normal-person-stay-fasting-what-happens-to-the-body-afterwards-as-per-science-say-suc/articleshow-7l7bq24</guid>
            <pubDate>Fri, 17 Jul 2026 14:10:20 +0530</pubDate>
            <description><![CDATA[ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ, ಆಹಾರವಿಲ್ಲದೆ ಮನುಷ್ಯ ಎಷ್ಟು ದಿನ ಬದುಕಬಲ್ಲ ಎಂಬ ವೈಜ್ಞಾನಿಕ ಚರ್ಚೆ ಆರಂಭವಾಗಿದೆ. ದೇಹವು ಗ್ಲೈಕೊಜೆನ್, ಸ್ನಾಯು ಪ್ರೋಟೀನ್, ಮತ್ತು ಕೀಟೋನ್&zwnj;ಗಳನ್ನು ಶಕ್ತಿಯಾಗಿ ಬಳಸುವ ಹಂತಗಳನ್ನು ಈ ಲೇಖನ ವಿವರಿಸುತ್ತದೆ. ದೀರ್ಘಕಾಲದ ಉಪವಾಸದಿಂದಾಗುವ ದೌರ್ಬಲ್ಯ, ಸ್ನಾಯು ನಷ್ಟ ಮತ್ತು ಆರೋಗ್ಯದ ಅಪಾಯಗಳ ಬಗ್ಗೆಯೂ ಇದು ಮಾಹಿತಿ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxqkpb68fxnr7q77c14gca3h,imgname-hunger-1784277576900.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರೀಯ ಪರೀಕ್ಷೆಗಳಲ್ಲಿ ನಡೆದಿರುವ ಪೇಪರ್ ಲೀಕ್ ಹಾಗೂ NEET UG ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್&zwnj;ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಖ್ಯಾತ ಶಿಕ್ಷಣ ಸುಧಾರಕ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ಇಂದು 20ನೇ ದಿನಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಏನನ್ನೂ ಸೇವಿಸದೇ ಒಬ್ಬ ಮನುಷ್ಯ ಎಷ್ಟು ದಿನ ಜೀವಂತ ಇರಬಹುದು ಎನ್ನುವ ಬಗ್ಗೆ ವಿಜ್ಞಾನ ಏನು ಹೇಳುತ್ತದೆ, ನಮ್ಮ ದೇಹದಲ್ಲಿ ಯಾವೆಲ್ಲಾ ಬದಲಾವಣೆ ಆಗುತ್ತದೆ ಎನ್ನುವ ಬಗ್ಗೆ ಇದೀಗ ಸಾಕಷ್ಟು ಚರ್ಚೆ ಆರಂಭವಾಗಿವೆ.&lt;/p&gt;&lt;p&gt;ವಿಜ್ಞಾನದ ಪ್ರಕಾರ, ಒಬ್ಬ ವ್ಯಕ್ತಿ ಎಷ್ಟುದಿನ ಉಪವಾಸ ಇರಬಹುದು ಎನ್ನುವುದು ಆಯಾ ವ್ಯಕ್ತಿಯ ಶರೀರದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ವಿಜ್ಞಾನಕ್ಕೂ ಮೀರಿದ ಘಟನೆಗಳು ನಡೆಯುವುದು ಇದೆ. ಎಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದೆಯೇಇರುತ್ತವೆ. ಮಹಾನ್​ ಸಾಧಕ ಸಾಧು-ಸಂತರು ಎಲ್ಲವನ್ನೂ ಮೀರಿ ಉಪವಾಸ ಮಾಡುವುದೂ ಇದೆ. ಆದರೆ ಸಾಮಾನ್ಯ ಜನರ ಬಗ್ಗೆ ಹೇಳುವುದಾದರೆ, ಏನನ್ನೂ ತಿನ್ನದೇ ಕುಡಿಯದೇ ಸಾಮಾನ್ಯ ವ್ಯಕ್ತಿಯೊಬ್ಬ 48 ಗಂಟೆಗಳ ಕಾಲ ಬದುಕಬಹುದಾಗಿದೆ. ಆದರೆ ಬಳಿಕ ಮನುಷ್ಯ ಬದುಕಿದರೂ ದೇಹದಲ್ಲಿ ಏನಾಗುತ್ತದೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.&lt;/p&gt;&lt;p&gt;48 ಗಂಟೆಗಳವರೆಗೆ ಮನುಷ್ಯನ ಯಕೃತ್ತಿನಲ್ಲಿ ಸಂಗ್ರಹವಾಗಿರುವ ಗ್ಲೈಕೊಜೆನ್ ರಕ್ತಪ್ರವಾಹಕ್ಕೆ ಬಿಡುಗಡೆಯಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ಸ್ಥಿರವಾಗಿ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹಸಿವಿನ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ಮೊದಲ ಪ್ರಕ್ರಿಯೆ ಗ್ಲೈಕೊಜೆನೊಲಿಸಿಸ್. ಒಬ್ಬ ವ್ಯಕ್ತಿಯು ಎರಡು ದಿನಗಳಿಗಿಂತ ಹೆಚ್ಚು ಕಾಲ ಹಸಿವಿನಿಂದ ಬಳಲುತ್ತಿರುವಾಗ, ದೇಹವು ಎರಡನೇ ಹಂತವನ್ನು ಪ್ರವೇಶಿಸುತ್ತದೆ. ಅಲ್ಲಿಯವರೆಗೆ ಮನುಷ್ಯನಿಗೆ ಏನೂ ಆಗುವುದಿಲ್ಲ.&lt;/p&gt;&lt;h2&gt;&lt;strong&gt;ಏನಿದು ಎರಡನೆಯ ಹಂತ?&lt;/strong&gt;&lt;/h2&gt;&lt;p&gt;ಒಬ್ಬ ವ್ಯಕ್ತಿಯು ಹಲವಾರು ದಿನಗಳವರೆಗೆ ಆಹಾರವಿಲ್ಲದೆ ಇದ್ದಾಗ, ದೇಹವು ತನ್ನ ಶಕ್ತಿಯ ಅಗತ್ಯಗಳನ್ನು ಪೂರೈಸಲು ಸ್ನಾಯು ಪ್ರೋಟೀನ್ ಅನ್ನು ಬಳಸಲು ಪ್ರಾರಂಭಿಸಬಹುದು. ಈ ಸಂದರ್ಭದಲ್ಲಿ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತವೆ. ದೌರ್ಬಲ್ಯ, ತಲೆತಿರುಗುವಿಕೆ, ಕಡಿಮೆ ರಕ್ತದ ಸಕ್ಕರೆ ಮತ್ತು ಸ್ನಾಯುವಿನ ಬಲವನ್ನು ಕಡಿಮೆ ಮಾಡುತ್ತದೆ. ಹೀಗೆ ದೇಹದಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳು ತಲೆದೋರಲು ಆರಂಭವಾಗುತ್ತವೆ. ದೇಹವು ಹಲವಾರು ದಿನಗಳವರೆಗೆ ಹಸಿವಿನಿಂದ ಇರುವಾಗ, ಯಕೃತ್ತು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಮತ್ತು ಕೊಬ್ಬಿನಾಮ್ಲಗಳನ್ನು ಕೀಟೋನ್ ದೇಹಗಳಾಗಿ ಪರಿವರ್ತಿಸುತ್ತದೆ. ಇದು ದೇಹದಲ್ಲಿ ಚಯಾಪಚಯ ಬಿಕ್ಕಟ್ಟನ್ನು ಪ್ರಚೋದಿಸುತ್ತದೆ. ಗ್ಲೂಕೋಸ್ ಕೊರತೆಯಿಂದಾಗಿ ದೇಹವು ಕೀಟೋನ್&zwnj;ಗಳನ್ನು ಶಕ್ತಿಯಾಗಿ ಬಳಸುತ್ತದೆ.&lt;/p&gt;&lt;h3&gt;&lt;strong&gt;ಹೆಚ್ಚು ದಿನ ಉಪವಾಸ ಇದ್ದರೆ ಏನಾಗುತ್ತದೆ?&lt;/strong&gt;&lt;/h3&gt;&lt;p&gt;ಸಾಮಾನ್ಯ ಮನುಷ್ಯನೊಬ್ಬ 10-12 ದಿನಗಳವರೆಗೆ ಸತತ ಉಪವಾಸವಿದ್ದರೆ, ದೇಹದ ಪ್ರೋಟೀನ್ ಶಕ್ತಿಗಾಗಿ ಬಳಸಲು ಪ್ರಾರಂಭಿಸುತ್ತದೆ. ಇದು ಸ್ನಾಯು ನಷ್ಟ ಮತ್ತು ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಇದು ಹಾರ್ಮೋನುಗಳ ಅಸಮತೋಲನ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ದುರ್ಬಲತೆಗೆ ಕಾರಣವಾಗುತ್ತದೆ. ಇದು ವ್ಯಕ್ತಿಯನ್ನು ಸೋಂಕಿನ ಹೆಚ್ಚಿನ ಅಪಾಯಕ್ಕೆ ಸಿಲುಕಿಸುತ್ತದೆ. ಆಹಾರವಿಲ್ಲದೆ ದೇಹವು ಎಷ್ಟು ಸಮಯದವರೆಗೆ ಶಕ್ತಿಯನ್ನು ಉತ್ಪಾದಿಸಬಹುದು ಎಂದು ಹೇಳುವುದು ಕಷ್ಟ. ವಯಸ್ಸು, ಆರೋಗ್ಯ ಮತ್ತು ಇತರ ಅಂಶಗಳನ್ನು ಅವಲಂಬಿಸಿ, ವ್ಯಕ್ತಿಯ ಜೀವಿತಾವಧಿ ಬದಲಾಗಬಹುದು.&lt;/p&gt;&lt;p&gt;&lt;/p&gt;]]></content:encoded>
            <category>science</category>
            <dc:creator>Suchethana D</dc:creator>
            <atom:link href="https://kannada.asianetnews.com/science/how-long-can-a-normal-person-stay-fasting-what-happens-to-the-body-afterwards-as-per-science-say-suc/articleshow-7l7bq24"/>
        </item>
        <item>
            <title><![CDATA[ಭಾರತಕ್ಕೆ ಬಂದ ಅನ್ಯಗ್ರಹ ಜೀವಿ? ಚಂದ್ರಲೋಕದಿಂದ ಬಂದವನಂತೆ ಈತ! 3 ವರ್ಷ ಭೂಮಿ ಮೇಲೆ ಇದ್ದವ ಏನಂದ]]></title>
            <link>https://kannada.asianetnews.com/viral/man-from-uttar-pradesh-claimed-that-he-is-an-alien-from-the-moon-video-viral-suc/articleshow-972ofwz</link>
            <guid isPermaLink="true">https://kannada.asianetnews.com/viral/man-from-uttar-pradesh-claimed-that-he-is-an-alien-from-the-moon-video-viral-suc/articleshow-972ofwz</guid>
            <pubDate>Sat, 11 Jul 2026 17:28:46 +0530</pubDate>
            <description><![CDATA[ಉತ್ತರ ಪ್ರದೇಶದ ವೃಂದಾವನದಲ್ಲಿ ವ್ಯಕ್ತಿಯೊಬ್ಬ ತಾನು ಚಂದ್ರನಿಂದ ಬಂದವನು ಎಂದು ಹೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಕಳೆದ ಮೂರು ವರ್ಷಗಳಿಂದ ಭೂಮಿಯ ಮೇಲೆ ವಾಸಿಸುತ್ತಿದ್ದು, ಜನರ ಮನಸ್ಸನ್ನು ಓದುವ ಶಕ್ತಿ ತನಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಭೂಮಿಯ ಮೇಲೆ ಯಾವುದೂ ಸರಿಯಿಲ್ಲ ಎಂದು ಹೇಳಿ, ತಾನು ಚಂದ್ರಲೋಕಕ್ಕೆ ವಾಪಸ್ ಹೋಗುವುದಾಗಿ ತಿಳಿಸಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx8gnz4wbzt4fzv8jpxxdank,imgname-viral-video-1783771102364.jpg" type="image/jpeg" height="390" width="690"/>
            <content:encoded><![CDATA[&lt;p&gt;ಏಲಿಯನ್&zwnj;ಗಳು ಎನ್ನುವ ಕಲ್ಪನೆಯೇ ಕುತೂಹಲವಾದದ್ದು. ಮನುಷ್ಯದ ಊಹೆಗೂ ನಿಲುಕದ ಅದೆಷ್ಟೋ ಪ್ರಕೃತಿ ವಿಸ್ಮಯಗಳು ನಡೆದೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಕೆಲವು ವಿಷಯಗಳು ಎಲ್ಲವನ್ನೂ ಮೀರಿದ್ದೇ ಆಗಿವೆ. ಅಂಥದ್ದರಲ್ಲಿ ಒಂದು ಈ ಏಲಿಯನ್&zwnj;. ಏಲಿಯನ್&zwnj; ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಇಂದು ನಿನ್ನೆಯದ್ದಲ್ಲ. ಎಷ್ಟೋ ದಶಕಗಳಿಂದ ಈ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ, ಪರ-ವಿರೋಧಗಳ ಚರ್ಚೆಗಳೂ ಆಗುತ್ತಿವೆ. ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ಈಗಾಗಲೇ ಏಲಿಯನ್ಸ್ ಬಗ್ಗೆ ಮಾಹಿತಿ ಇದೆ ಎಂಬ ಸುದ್ದಿ ಇತ್ತು. ಆದರೆ ಏಲಿಯನ್​ಗಳ ಮಾಹಿತಿಗಳನ್ನು ಅಮರಿಕ ಮರೆಮಾಚುತ್ತಿದೆ ಎಂಬ ಗಂಭೀರ ಆರೋಪಗಳೂ ಇವೆ. ನೂರಾರು ವರ್ಷಗಳ ಭವಿಷ್ಯ ನುಡಿದಿದ್ದ ಬಾಬಾ ವಾಂಗಾ ಮುಂದೊಂದು ದಿನ ಈ ಭೂಮಿಯ ಮೇಲೆ ಏಲಿಯನ್​ ಆಳುತ್ತದೆ ಎಂದಿದ್ದರು. ಅದೇ ರೀತಿ, 2026ರಲ್ಲಿಯೇ ಏಲಿಯನ್​ಗಳು ಪ್ರತ್ಯಕ್ಷವಾಗಲಿವೆ ಎಂದೂ ಭವಿಷ್ಯ ನುಡಿಯಲಾಗಿತ್ತು.&lt;/p&gt;&lt;h2&gt;&lt;strong&gt;ನಿಜ ಹೇಳಿದ್ರೂ ನಂಬಲ್ಲ&lt;/strong&gt;&lt;/h2&gt;&lt;p&gt;ಇದರ ನಡುವೆಯೇ ತಾನು ಚಂದ್ರಲೋಕದವ, ಭೂಮಿಯ ಮೇಲೆ ಮೂರು ವರ್ಷಗಳಿಂದ ವಾಸವಾಗಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿಕೊಂಡು ಬಂದಿದ್ದು, ಅದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಉತ್ತರ ಪ್ರದೇಶದ ವೃಂದಾವನದ ವ್ಯಕ್ತಿ ತಾನು ಚಂದ್ರನಿಂದ ಬಂದಿರುವುದಾಗಿ ಹೇಳುತ್ತಿದ್ದಾನೆ. ಇದನ್ನು ಹೇಳಿದ್ರೆ ಯಾರೂ ನಂಬಲ್ಲ. ಎಷ್ಟು ಹೇಳಿದರೂ ಯಾರೂ ಕೇಳುವುದಿಲ್ಲ. ನಾನು ತಮಾಷೆಗೆ ಹೇಳ್ತೇನೆ ಎಂದುಕೊಂಡಿದ್ದಾರೆ. ನಾನು ನಿಜವಾಗಿಯೂ ಚಂದ್ರನಿಂದ ಬಂದ ವ್ಯಕ್ತಿ ಎಂದು ಈತ ಹೇಳುತ್ತಿರುವ ವಿಡಿಯೋ ವೈರಲ್​ ಆಗಿದೆ.&lt;/p&gt;&lt;h3&gt;&lt;strong&gt;ಭೂಮಿ ಮೇಲೆ ಯಾರೂ ಸರಿಯಿಲ್ಲ&lt;/strong&gt;&lt;/h3&gt;&lt;p&gt;ವೈರಲ್ ಆಗಿರುವ ಈ ಕ್ಲಿಪ್&zwnj;ನಲ್ಲಿ, ಆ ವ್ಯಕ್ತಿ ತನ್ನನ್ನು ತಾನು ಭೂಮಿಗೆ ಸೇರಿದವನಲ್ಲ ಎಂದು ಆತ್ಮವಿಶ್ವಾಸದಿಂದ ಪರಿಚಯಿಸಿಕೊಳ್ಳುತ್ತಾ, ನಾನು ಚಂದ್ರನಿಂದ ಬಂದಿದ್ದೇನೆ ಮತ್ತು ಕಳೆದ ಮೂರು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ. ನಾನು ಜನರ ಮನಸ್ಸಿನಲ್ಲಿ ಏನಿದೆ ಎಲ್ಲವನ್ನೂ ಹೇಳುತ್ತೇನೆ. ಚಂದ್ರನಲ್ಲಿ ವಾಸಿಸುವವರಿಗೆ ಈ ವಿಶೇಷ ಶಕ್ತಿ ಇದೆ. ನನಗೂ ಅದು ಬಂದಿದೆ ಎಂದು ವ್ಯಕ್ತಿ ಹೇಳಿದ್ದಾನೆ. ಈ ಭೂಮಿಯ ಮೇಲೆ ಯಾರೂ ಸರಿಯಿಲ್ಲ, ಇದು ನಡೆಯುತ್ತಿರುವುದು ಯಾವುದೂ ಸರಿಯಲ್ಲ ಎಂದಿರುವ ಆತ, ತಾನು ವಾಪಸ್​ ಚಂದ್ರಲೋಕಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾನೆ.&lt;/p&gt;&lt;p&gt;ಇದರ ವಿಡಿಯೋ ನೋಡಿ ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಈತನನ್ನು ಮೊದಲು ಮೆಂಟಲ್​ ಆಸ್ಪತ್ರೆಗೆ ಸೇರಿಸಿ ಎಂದು ಕೆಲವರು ಹೇಳುತ್ತಿದ್ದರೆ, ಈತನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿತ್ತು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ರೀಲ್ಸ್​ಗಾಗಿ ಈ ರೀತಿಯ ಖತರ್ನಾಕ್​ ಪ್ಲ್ಯಾನ್​ ಯಾರೋ ಕಂಟೆಂಟ್​ ಕ್ರಿಯೇಟರ್​ ಮಾಡಿರಲಿಕ್ಕೆ ಸಾಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈತನ ವೇಷ ಮತ್ತು ಮಾತು ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಹಾಸ್ಯದ ಹೊಳೆಯೇ ಹರಿಯುತ್ತಿದೆ.&lt;/p&gt;&lt;p&gt;&lt;/p&gt;]]></content:encoded>
            <category>science</category>
            <dc:creator>Suchethana D</dc:creator>
            <atom:link href="https://kannada.asianetnews.com/viral/man-from-uttar-pradesh-claimed-that-he-is-an-alien-from-the-moon-video-viral-suc/articleshow-972ofwz"/>
        </item>
        <item>
            <title><![CDATA[Why snakes like Sandalwood: ಶ್ರೀಗಂಧದ ಮರಕ್ಕೆ ಹಾವು ಸುತ್ತಿಕೊಳ್ಳೋದು ಏಕೆ? ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!]]></title>
            <link>https://kannada.asianetnews.com/gallery/life/the-real-reason-why-snakes-are-attracted-to-sandalwood-trees-myth-vs-science-9ndimlf</link>
            <guid isPermaLink="true">https://kannada.asianetnews.com/gallery/life/the-real-reason-why-snakes-are-attracted-to-sandalwood-trees-myth-vs-science-9ndimlf</guid>
            <pubDate>Thu, 16 Jul 2026 12:35:08 +0530</pubDate>
            <description><![CDATA[&lt;p&gt;Why snakes like Sandalwood: ಈ ಮರದ ಸುಗಂಧವು ಹಾವುಗಳನ್ನು ಆಯಸ್ಕಾಂತದಂತೆ ಸೆಳೆಯುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ, ಹಾವುಗಳಿಗೆ ಶ್ರೀಗಂಧದ ವಾಸನೆಯನ್ನು ಆಸ್ವಾದಿಸುವ ಸಾಮರ್ಥ್ಯವೇ ಇರುವುದಿಲ್ಲ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmvdzcdnc8aapmn4ke9a1b0,imgname-thumbnail---2026-07-16t122634.469-1784185027981.jpg" type="image/jpeg" height="390" width="690"/>
            <content:encoded><![CDATA[&lt;p&gt;Why snakes like Sandalwood: ಈ ಮರದ ಸುಗಂಧವು ಹಾವುಗಳನ್ನು ಆಯಸ್ಕಾಂತದಂತೆ ಸೆಳೆಯುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ, ಹಾವುಗಳಿಗೆ ಶ್ರೀಗಂಧದ ವಾಸನೆಯನ್ನು ಆಸ್ವಾದಿಸುವ ಸಾಮರ್ಥ್ಯವೇ ಇರುವುದಿಲ್ಲ!&lt;/p&gt;&lt;img&gt;&lt;p&gt;&lt;strong&gt;ಯಾವುದೇ ಸಿನಿಮಾ ಮಾದರಿಯ ಕಥೆಯಿಲ್ಲ&lt;/strong&gt;ನಾವು ಬಾಲ್ಯದಿಂದಲೂ ಶ್ರೀಗಂಧದ ಮರ ಮತ್ತು ಹಾವುಗಳ ನಡುವಿನ ಸಂಬಂಧದ ಬಗ್ಗೆ ಅನೇಕ ಕಥೆಗಳನ್ನು ಕೇಳುತ್ತಾ ಬಂದಿದ್ದೇವೆ. ಶ್ರೀಗಂಧದ ಸುವಾಸನೆಗೆ ಮಾರುಹೋಗಿ ಹಾವುಗಳು ಮರವನ್ನು ಸುತ್ತಿಕೊಳ್ಳುತ್ತವೆ ಎಂಬುದು ಜನಪ್ರಿಯ ನಂಬಿಕೆ. ಆದರೆ, ಇದರ ಹಿಂದೆ ಯಾವುದೇ ಸಿನಿಮಾ ಮಾದರಿಯ ಕಥೆಯಿಲ್ಲ, ಬದಲಿಗೆ ಅಚ್ಚರಿಯ ವೈಜ್ಞಾನಿಕ ಕಾರಣಗಳಿವೆ. ಹಾವುಗಳು ಶ್ರೀಗಂಧದ ಮರವನ್ನು ಅರಸಿ ಬರುವುದು ಸುವಾಸನೆಗಾಗಿಯೋ ಅಥವಾ ಬದುಕುವ ತಂತ್ರಕ್ಕಾಗಿಯೋ? ಇಲ್ಲಿದೆ ಪೂರ್ಣ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಈ ಮರಕ್ಕೆ ಅಂಟಿಕೊಳ್ಳಲು ಕಾರಣವೇನು?&lt;/strong&gt;ಸಾಮಾನ್ಯವಾಗಿ ಶ್ರೀಗಂಧದ ಮರದ ಸುತ್ತ ಹಾವುಗಳು ಬೀಡುಬಿಟ್ಟಿರುತ್ತವೆ ಎಂಬ ಮಾತಿದೆ. ಈ ಮರದ ಸುಗಂಧವು ಹಾವುಗಳನ್ನು ಆಯಸ್ಕಾಂತದಂತೆ ಸೆಳೆಯುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ, ಹಾವುಗಳಿಗೆ ಶ್ರೀಗಂಧದ ವಾಸನೆಯನ್ನು ಆಸ್ವಾದಿಸುವ ಸಾಮರ್ಥ್ಯವೇ ಇರುವುದಿಲ್ಲ! ಹಾಗಿದ್ದರೆ ಅವು ಈ ಮರಕ್ಕೆ ಅಂಟಿಕೊಳ್ಳಲು ಕಾರಣವೇನು?.&lt;/p&gt;&lt;img&gt;&lt;p&gt;&lt;strong&gt;1. ದೇಹದ ತಾಪಮಾನ ನಿಯಂತ್ರಣ (Cold-blooded logic)&lt;/strong&gt;ಹಾವುಗಳು 'ಶೀತ ರಕ್ತದ ಪ್ರಾಣಿಗಳು' (ದೇಹದ ತಾಪಮಾನವನ್ನು ತಾವಾಗಿಯೇ ನಿಯಂತ್ರಿಸಿಕೊಳ್ಳಲು ಸಾಧ್ಯವಾಗದ ಪ್ರಾಣಿಗಳು) ಅಂದರೆ, ಅವುಗಳಿಗೆ ಮನುಷ್ಯರಂತೆ ತಮ್ಮ ದೇಹದ ತಾಪಮಾನವನ್ನು ಸ್ವತಃ ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪರಿಸರದ ತಾಪಮಾನಕ್ಕೆ ಅನುಗುಣವಾಗಿ ಅವುಗಳ ದೇಹದ ಉಷ್ಣತೆ ಬದಲಾಗುತ್ತದೆ. ಶ್ರೀಗಂಧದ ಮರವು ಅತ್ಯಂತ ತಂಪಾದ ಗುಣವನ್ನು ಹೊಂದಿದ್ದು, ತನ್ನ ಸುತ್ತಲೂ ಒಂದು ರೀತಿಯ 'ಕಿರು ಹವಾಮಾನ' (Microclimate) ಸೃಷ್ಟಿಸುತ್ತದೆ. ವಿಪರೀತ ಬಿಸಿಲಿನಿಂದ ಪಾರಾಗಲು ಮತ್ತು ದೇಹವನ್ನು ತಂಪಾಗಿರಿಸಿಕೊಳ್ಳಲು ಹಾವುಗಳು ಈ ಮರವನ್ನು ಆಶ್ರಯಿಸುತ್ತವೆ.&lt;/p&gt;&lt;img&gt;&lt;p&gt;&lt;strong&gt;2. ದಟ್ಟವಾದ ನೆರಳು ಮತ್ತು ರಕ್ಷಣೆ&lt;/strong&gt;ಶ್ರೀಗಂಧದ ಮರಗಳು ದಟ್ಟವಾಗಿ ಬೆಳೆಯುತ್ತವೆ. ಇವುಗಳ ಎಲೆಗಳು ಮತ್ತು ಕೊಂಬೆಗಳ ನಡುವೆ ಸೂರ್ಯನ ಕಿರಣಗಳು ನೇರವಾಗಿ ಬೀಳುವುದಿಲ್ಲ. ಇದು ಹಾವುಗಳಿಗೆ ಬಿಸಿಲಿನಿಂದ ರಕ್ಷಣೆ ನೀಡುವುದಲ್ಲದೆ, ಹದ್ದು ಅಥವಾ ಇತರ ಬೇಟೆಗಾರ ಪ್ರಾಣಿಗಳ ಕಣ್ಣಿಗೆ ಬೀಳದಂತೆ ಅಡಗಿಕೊಳ್ಳಲು ಸುರಕ್ಷಿತ ತಾಣವನ್ನು ಒದಗಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;3. ಆಹಾರದ ಸುಲಭ ಲಭ್ಯತೆ&lt;/strong&gt;ಶ್ರೀಗಂಧದ ಮರದ ಸುತ್ತಮುತ್ತಲಿನ ಪರಿಸರವು ತಂಪಾಗಿರುವುದರಿಂದ, ಅಲ್ಲಿ ಕೀಟಗಳು, ಪಕ್ಷಿಗಳು ಮತ್ತು ಸಣ್ಣಪುಟ್ಟ ಇಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಇದು ಹಸಿವಿನಿಂದ ಇರುವ ಹಾವುಗಳಿಗೆ ಸುಲಭವಾದ ಬೇಟೆಯನ್ನು ಒದಗಿಸುತ್ತದೆ. ಅಂದರೆ, ಹಾವುಗಳು ಇಲ್ಲಿಗೆ ಬರುವುದು ಸುವಾಸನೆಗಾಗಿ ಅಲ್ಲ, ಬದಲಿಗೆ ತಮ್ಮ 'ಊಟ' ಮತ್ತು 'ವಾಸ'ದ ಸೌಕರ್ಯಕ್ಕಾಗಿ.&lt;/p&gt;&lt;img&gt;&lt;p&gt;&lt;strong&gt;4. ಸುವಾಸನೆ ಎಂಬುದು ಕೇವಲ ಭ್ರಮೆ&lt;/strong&gt;ವಿಜ್ಞಾನದ ಪ್ರಕಾರ, ಹಾವುಗಳಿಗೆ ವಾಸನೆಯನ್ನು ಗ್ರಹಿಸುವ ಮೂಗಿಲ್ಲ (ಅವು ನಾಲಿಗೆಯ ಮೂಲಕ ಪರಿಸರದ ಬದಲಾವಣೆಯನ್ನು ಅರಿಯುತ್ತವೆ). ಸಂಶೋಧನೆಗಳ ಪ್ರಕಾರ, ಹಾವುಗಳು ಅತೀ ತೀಕ್ಷ್ಣವಾದ ವಾಸನೆಯಿಂದ ದೂರ ಓಡುತ್ತವೆಯೇ ಹೊರತು ಅದಕ್ಕೆ ಆಕರ್ಷಿತವಾಗುವುದಿಲ್ಲ. ಶ್ರೀಗಂಧದ ಮರವಿರುವಲ್ಲಿ ಮನುಷ್ಯರ ಓಡಾಟ ಕಡಿಮೆ ಇರುವುದು ಕೂಡ ಹಾವುಗಳು ಅಲ್ಲಿ ನೆಮ್ಮದಿಯಾಗಿರಲು ಒಂದು ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;ಹೀಗಾಗಿ, ಶ್ರೀಗಂಧದ ಮರದ ಮೇಲೆ ಹಾವುಗಳಿರುವುದು ಕೇವಲ ಪ್ರಕೃತಿಯ ಒಂದು ಭಾಗ. ಅದು ಅಸ್ತಿತ್ವದ ಹೋರಾಟವೇ ಹೊರತು ಸುವಾಸನೆಯ ಮೋಹವಲ್ಲ. ಪ್ರತಿಯೊಂದು ಜೀವಿಯು ತನ್ನ ಬದುಕಿಗೆ ಪೂರಕವಾದ ಪರಿಸರವನ್ನು ಹುಡುಕುವಂತೆ, ಹಾವುಗಳು ತಂಪು ಮತ್ತು ರಕ್ಷಣೆಗಾಗಿ ಶ್ರೀಗಂಧದ ಮರವನ್ನು ಆರಿಸಿಕೊಳ್ಳುತ್ತವೆ.&lt;/p&gt;]]></content:encoded>
            <category>science</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/the-real-reason-why-snakes-are-attracted-to-sandalwood-trees-myth-vs-science-9ndimlf"/>
        </item>
        <item>
            <title><![CDATA[ಸೋಪಿನ ಬಣ್ಣ ಯಾವುದೇ ಇರಲಿ, ಆದರೆ ನೊರೆ ಮಾತ್ರ ಬಿಳಿಯಾಗಿರಲು ಕಾರಣವೇನು?]]></title>
            <link>https://kannada.asianetnews.com/gallery/science/why-soap-is-foam-always-white-the-surprising-science-behind-th-bubble-rav-anhvddy</link>
            <guid isPermaLink="true">https://kannada.asianetnews.com/gallery/science/why-soap-is-foam-always-white-the-surprising-science-behind-th-bubble-rav-anhvddy</guid>
            <pubDate>Wed, 15 Jul 2026 15:44:47 +0530</pubDate>
            <description><![CDATA[&lt;p&gt;ದಿನನಿತ್ಯ ಬಳಸುವ ವಸ್ತುಗಳಲ್ಲಿ ಸೋಪ್ ಮುಖ್ಯವಾದದ್ದು. ಬಟ್ಟೆ ಒಗೆಯಲು, ಸ್ನಾನ ಮಾಡಲು, ಪಾತ್ರೆ ತೊಳೆಯಲು ನಾವು ಪ್ರತಿಯೊಂದಕ್ಕೂ ವಿಭಿನ್ನ ಸೋಪ್&zwnj;ಗಳನ್ನು ಬಳಸುತ್ತೇವೆ, ಸೋಪಿನ ಬಣ್ಣಗಳು ಯಾವುದೇ ಇರಲಿ ಆದರೆ ನೊರೆ ಮಾತ್ರ ಬಿಳಿಯಾಗಿರುವುದು ಏಕೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjm6mmfxa7ymr1zjq58jmkz,imgname-----------------------2026-07-15t154159.107-1784110338703.jpg" type="image/jpeg" height="390" width="690"/>
            <content:encoded><![CDATA[&lt;p&gt;ದಿನನಿತ್ಯ ಬಳಸುವ ವಸ್ತುಗಳಲ್ಲಿ ಸೋಪ್ ಮುಖ್ಯವಾದದ್ದು. ಬಟ್ಟೆ ಒಗೆಯಲು, ಸ್ನಾನ ಮಾಡಲು, ಪಾತ್ರೆ ತೊಳೆಯಲು ನಾವು ಪ್ರತಿಯೊಂದಕ್ಕೂ ವಿಭಿನ್ನ ಸೋಪ್&zwnj;ಗಳನ್ನು ಬಳಸುತ್ತೇವೆ, ಸೋಪಿನ ಬಣ್ಣಗಳು ಯಾವುದೇ ಇರಲಿ ಆದರೆ ನೊರೆ ಮಾತ್ರ ಬಿಳಿಯಾಗಿರುವುದು ಏಕೆ?&lt;/p&gt;&lt;img&gt;&lt;p&gt;ದಿನನಿತ್ಯ ಬಳಸುವ ವಸ್ತುಗಳಲ್ಲಿ ಸೋಪ್ ಮುಖ್ಯವಾದದ್ದು. ಬಟ್ಟೆ ಒಗೆಯಲು, ಸ್ನಾನ ಮಾಡಲು, ಪಾತ್ರೆ ತೊಳೆಯಲು ನಾವು ಪ್ರತಿಯೊಂದಕ್ಕೂ ವಿಭಿನ್ನ ಸೋಪ್&zwnj;ಗಳನ್ನು ಬಳಸುತ್ತೇವೆ, ಸ್ನಾನ ಮಾಡಲು ಉಪಯೋಗಿಸುವ ಸಾಬೂನುಗಳಂತೂ ಒಂದೊಂದು ಬ್ರಾಂಡ್&zwnj;ನದ್ದು ಒಂದೊಂದು ಬಣ್ಣ, ಸಂತೂರು ಬ್ರಾಂಡ್ ಕೇಸರಿ, ಡವ್ ಬ್ರಾಂಡ್ ಬಿಳಿ, ಆಕಾಶ ನೀಲಿ, ಕೆಲವು ಕಪ್ಪುಗಳಲ್ಲಿವೆ.&lt;/p&gt;&lt;img&gt;&lt;p&gt;ವಿಷಯ ಬಣ್ಣಗಳದ್ದಲ್ಲ, ಯಾವುದೇ ಬಣ್ಣದ ಸಾಬೂನು ಬಳಸಿದ್ರೂ ಅದರ ನೊರೆ ಬಿಳಿಯಾಗಿಯೇ ಇರುತ್ತದೆ ಯಾಕೆ? ಎಂದಾದರೂ ಯೋಚಿದ್ದೀರಾ? ಸಾಮಾನ್ಯವಾಗಿ ಡಿಟರ್ಜೆಂಟ್ ಸೋಪ್ ನೀಲಿ ಬಣ್ಣಗಳಲ್ಲಿರುತ್ತದೆ ಬಟ್ಟೆ ತೊಳೆಯುವಾಗ ನೊರೆಯು ನೀಲಿ ಬಣ್ಣದಲ್ಲಿರುವುದೇಕೆ?&lt;/p&gt;&lt;p&gt;ಹೌದಲ್ಲವಾ? ಈಗ ನಿಮ್ಮ ಮನಸಿಲ್ಲಿ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿರಬೇಕು. ಸೋಪ್ ಯಾವುದೇ ಬಣ್ಣದ್ದಾದರೂ ನೊರೆ ಮಾತ್ರ ಬಿಳಿಯಾಗಿಯೇ ಏಕೆ ಬರುತ್ತೆ? ಇಲ್ಲಿ ತಿಳಿಯೋಣ&lt;/p&gt;&lt;img&gt;&lt;p&gt;ವಾಸ್ತವವಾಗಿ, ಯಾವುದೇ ವಸ್ತು ಬೆಳಗಿನ ಎಲ್ಲ ಬಣ್ಣಗಳನ್ನು ಹೀರಿಕೊಂಡಾಗ ಅದು ಕಪ್ಪಾಗಿ ಕಣ್ಣುತ್ತದೆ. ಅದೇ ಸಮಯದಲ್ಲಿ ಬೆಳಕಿನ ಎಲ್ಲ ಬಣ್ಣಗಳು ಪ್ರತಿಫಲಿಸಿದರೆ ಅಥವಾ ವಸ್ತುವಿನಿಂದ ಆ ಬಣ್ಣ ಹೀರಲ್ಪಡದಿದ್ದರೆ ಬಿಳಿಯಾಗಿ ಕಾಣುತ್ತದೆ.&lt;/p&gt;&lt;img&gt;&lt;p&gt;ಸೋಪಿನ ಬಿಳಿ ನೊರೆ ಆ ಬಣ್ಣವನ್ನು ಹೊಂದಲು ಕಾರಣ ಅದು ಬೆಳಕನ್ನು ಚದುರಿಸುವ ವಿಧಾನ. ಬೆಳಕು ವಸ್ತುವನ್ನು ಹೊಡೆದಾಗ ಈ ಕೆಳಗಿನ ವಿಧಾನಗಳಲ್ಲಿ ಚದುರಿಹೋಗುತ್ತದೆ: ಅದನ್ನು ಹೀರಿಕೊಳ್ಳಬಹುದು, ಅದು ಬಂದ ದಿಕ್ಕಿನಲ್ಲಿ ಹಿಂತಿರುಗಿಸಬಹುದು ಅಥವಾ ಎಲ್ಲಾ ದಿಕ್ಕುಗಳಲ್ಲಿಯೂ ಚದುರಿಹೋಗಬಹುದು. ಆದರೆ ಸೋಪಿನ ಸುಡ್&zwnj;ಗಳ ವಿಷಯದಲ್ಲಿ, ಬೆಳಕು ಕೇವಲ ಒಂದು ದಿಕ್ಕಿನಲ್ಲಿ ಹಾದುಹೋಗುತ್ತದೆ ಅಥವಾ ಪುಟಿಯುತ್ತದೆ ಎಂದರ್ಥವಲ್ಲ&lt;/p&gt;&lt;p&gt;ಸೋಪ್&zwnj;ನ ಅಣುಗಳು ಬೆಳಕಿನ ಎಲ್ಲ ಬಣ್ಣಗಳನ್ನ ಪ್ರತಿಬಿಂಬಿಸುತ್ತವೆ. ಅದಕ್ಕಾಗಿಯೇ ಸೋಪ್ ಸಡ್&zwnj;ಗಳು ಅವುಗಳ ಬಣ್ಣಗಳು ಬದಲಾದರೂ ನೊರೆ ಮಾತ್ರ ಬಿಳಿಯಾಗಿರುತ್ತದೆ. ಫೋಮ್ ಗಾಜಿನಂತೆ ಕಾಣಲು ಇದೂ ಒಂದು ಕಾರಣ. ಅಂದರೆ ಬುರುಗು ಅಥವಾ ಗುಳ್ಳೆ ಏಳುವುದು ಗಮನಿಸಿದ್ದೀರಲ್ಲವ? ಬೆಳಕಿನ ಈ ಪ್ರತಿಫಲನಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>science</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/science/why-soap-is-foam-always-white-the-surprising-science-behind-th-bubble-rav-anhvddy"/>
        </item>
        <item>
            <title><![CDATA[ಅನ್ಯಗ್ರಹ ಜೀವಿಗಳ UFO ಚಲನೆ ರಹಸ್ಯ ವಿಡಿಯೋ, ದಾಖಲೆ ಬಿಡುಗಡೆ ಮಾಡಿದ ಅಮೆರಿಕ ರಕ್ಷಣಾ ಇಲಾಖೆ]]></title>
            <link>https://kannada.asianetnews.com/science/pentagon-publishes-footage-of-unidentified-flying-object-sparks-fresh-aliens-ufo-debate/articleshow-cq7xo44</link>
            <guid isPermaLink="true">https://kannada.asianetnews.com/science/pentagon-publishes-footage-of-unidentified-flying-object-sparks-fresh-aliens-ufo-debate/articleshow-cq7xo44</guid>
            <pubDate>Sat, 11 Jul 2026 15:53:50 +0530</pubDate>
            <description><![CDATA[&lt;p&gt;ಅನ್ಯಗ್ರಹ ಜೀವಿಗಳ ಕುರಿತು ಕುತೂಹಲಕ್ಕೆ ಇದೀಗ ಡಬಲ್ ಆಗಿದೆ. ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಕಚೇರಿ ಮಹತ್ವದ ರಹಸ್ಯ ಫೈಲ್ಸ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಯುಎಫ್ಒ ವೇಗವಾಗಿ ಚಲಿಸುತ್ತಿರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx8b7zj9jgjqfyy891m2z3vz,imgname-ufo-video-released-by-pentagon-1783765401159.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪೆಂಟಗನ್ (ಜು.11) &lt;/strong&gt;ಅನ್ಯಗ್ರಹ ಜೀವಿಗಳ ಇರುವಿಕೆ ಕುರಿತು ಸತತ ಅಧ್ಯಯನಗಳು ನಡೆದಿದೆ. ಹಲವು ಬಾರಿ ಅನ್ಯಗ್ರಹ ಜೀವಿಗಳ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಅಧ್ಯಯನಗಳು ಇರುವಿಕೆಯನ್ನು ಅಲ್ಲಗೆಳೆದಿಲ್ಲ. ಈ ಕುರಿತು ಅಮೆರಿಕ ಅತೀ ಹೆಚ್ಚು ಸಂಶೋಧನೆ ನಡೆಸಿದೆ. ಇದೀಗ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಇದೀಗ ಎಲಿಯನ್ ಹಾರುವ ವಸ್ತುವಿನ ವಿಡಿಯೋ ಸೇರಿದಂತೆ ಹಲವು ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಅನ್ಯಗ್ರಹ ಜೀವಿಗಳ ಕುರಿತು ಹಲವು ರೋಚಕ ಮಾಹಿತಿಗಳು ಬಯಲಾಗಿದೆ.&lt;/p&gt;&lt;h2&gt;19 ವಿಡಿಯೋ ಸೇರಿದಂತೆ ಮಹತ್ವದ ದಾಖಲೆ&lt;/h2&gt;&lt;p&gt;ರಹಸ್ಯ ದಾಖಲೆ, ವಿಡಿಯೋಗಳ ಬಹಿರಂಗ ಮಾಡಿದ ಮಿಲಿಟರಿ ಅಧಿಕಾರಿ, ನನ್ನ 28 ವರ್ಷಗಳ ಸೇವೆಯಲ್ಲಿಈ ರೀತಿಯ ಹಾರುವ ವಸ್ತುಗಳನ್ನು ನೋಡಿಲ್ಲ ಎಂದಿದ್ದಾರೆ. ಅಮೆರಿಕದ ಪೆಂಟಗನ್ ಕಚೇರಿ ಬಿಡುಗೆಡೆ ಮಾಡಿದ ಮಾಹಿತಿಗಳಲ್ಲಿ 40 ಫೈಲ್ಸ್, 14 ಡಾಕ್ಯುಮೆಂಟ್, 19 ವಿಡಿಯೋ, ನಾಲ್ಕು ಆಡಿಯೋ ಹಾಗೂ 3 ಚಿತ್ರಗಳು ಒಳಗೊಂಡಿದೆ. ಇದರೊಂದಿಗೆ ಅನ್ಯಗ್ರಹ ಜೀವಿಗಳ ಇರುವಿಕೆ ಕುರಿತು ಹಲವು ರೋಚಕ ಮಾಹಿತಿಗಳು ಇದೀಗ ಬಹಿರಂಗವಾಗಿದೆ. ಜಂಟಿಯಾಗಿ ನಡೆಸಿದ ಸಂಶೋಧನೆಯಲ್ಲಿ ಪೆಂಟಗನ್, ನಾಸಾ, ಸಿಐಎ, ಎಫ್&zwnj;ಬಿಐ, ಇಂಧನ ಇಲಾಖೆ ಹಲವು ದಾಖಲೆ ಸಂಗ್ರಹಿಸಿದೆ.&lt;/p&gt;&lt;p&gt;ಅನ್ಯಗ್ರಹ ಜೀವಿಗಳ ಕುರಿತು ರಹಸ್ಯ ಫೈಲ್ಸ್ ಇದೀಗ ಅಮೆರಿಕ ಸರ್ಕಾರದ ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿ ಪ್ರಕಟಿಸಲಾಗಿದೆ. ಈ ರಹಸ್ಯ ಫೈಲ್ಸ್&zwnj;ಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ. ಹಲವು ಎಜೆನ್ಸಿಗಳು ಕಲೆ ಹಾಕಿದ ಮಹತ್ವದ ದಾಖಲೆಗಳು ಇದಾಗಿದೆ.&lt;/p&gt;&lt;p&gt;ಅಮೆರಿಕ ಬಿಡುಗಡೆ ಮಾಡಿರುವ ದಾಖಲೆಗಳು ಅನ್ಯಗ್ರಹ ಜೀವಿಗಳ 2010 ಹಾಗೂ ಅದ ನಂತರದಲ್ಲಿ ಸಿಕ್ಕ ದಾಖಲೆಗಳು, ಕುರುಹುಗಳು, ವಿಡಿಯೋಗಳಾಗಿದೆ.ಈ ಪೈಕಿ ಅತ್ಯಾಧುನಿಕ ಸೆನ್ಸರ್ ಮೂಲಕ ರೆಕಾರ್ಡ್ ಮಾಡಿದ ಇನ್&zwnj;ಫ್ರಾರೆಡ್ ವಿಡಿಯೋ ಸೇರಿದೆ. ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ ಹಾಗೂ ಮಧ್ಯಪ್ರಾಚ್ಯ ಏಷ್ಯಾ ವಾಯುಪ್ರದೇಶದಲ್ಲಿ ಹಾರಟದ ವೇಳೆ ಸೇನಾ ಪೈಲೆಟ್ ತನ್ನ ವಿಮಾನದ ಕ್ಯಮೆರಾದಲ್ಲಿ ಸೆರೆಯಾದ ವಿಡಿಯೋಗಳು ಈ ದಾಖಲೆಯಲ್ಲಿದೆ. ಪೈಲೆಟ್ ತನಗಾದ ವಿಚಿತ್ರ ಅನುಭವಗಳನ್ನು, ವಿಚಿತ್ರ ವಸ್ತುವಿನ ಹಾರಾಟವನ್ನು ವಿವರಿಸಿದ ದಾಖಲೆಗಳು ಇವೆ.&lt;/p&gt;&lt;p&gt;2020ರಲ್ಲೂ ಅನ್ಯಗ್ರಹ ಜೀವಿಯ ಸುಳಿವು ಪತ್ತೆಯಾಗಿದೆ ಎಂದು ಈ ರಹಸ್ಯ ದಾಖಲೆಗಳು ಹೇಳುತ್ತಿದೆ. ಅಮೆರಿಕನ್ ಏರ್&zwnj;ಫೋರ್ಸ್ ಪೈಲೆಟ್ ನಿಗೂಡ ವಸ್ತುವೊಂದನ್ನು ಹಾರಾಟದ ವೇಳೆ ಪತ್ತೆ ಹಚ್ಚಿದ್ದರು. ಈ ಕುರಿತು ದಾಖಲೆಗಳು ಬಿಡುಗಡೆ ಮಾಡಿದ ಫೈಲ್ಸ್&zwnj;ನಲ್ಲಿದೆ. 2019ರ ಆರಂಭದಲ್ಲಿ ಪೂರ್ವ ಅಮೆರಿಕದಲ್ಲಿ ಪತ್ತೆಯಾದ ಅನ್ಯಗ್ರಹ ಜೀವಿಯ ಯುಎಫ್ಒ ಕುರಿತು ಮಾಹಿತಿಯೂ ಇದರಲ್ಲಿದೆ.&lt;/p&gt;&lt;p&gt;2025ರಲ್ಲಿ ಇಂಡೋ ಪೆಸಿಫಿಕ್ ಸೇನಾ ಕಾರ್ಯಾಚರಣೆ ವೇಳೆ ಚೀನಾ ಸಮುದ್ರದ ಮೇಲೆ ವಿಚಿತ್ರ ಹಾರುವ ವಸ್ತು ಪತ್ತೆಯಾಗಿತ್ತು. ಆರಂಭದಲ್ಲೇ ಉಲ್ಕೆ ಎಂದೇ ಭಾವಿಸಲಾಗಿತ್ತು. ಬಳಿಕ ಇದು ಉಲ್ಕೆ ಅಲ್ಲ ಅನ್ನೋ ಖಚಿತಗೊಂಡಿತು. ಶೀಘ್ರದಲ್ಲೇ ಯುಎಫ್ಒ ಕುರಿತು ಮತ್ತಷ್ಟು ರಹಸ್ಯ ಫೈಲ್ಸ್ ಅಮೆರಿಕ ಬಿಡುಗಡೆ ಮಾಡಲಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;The Creepiest UFO Video Ever Released By The White House What is that thing? Is it an ALIEN? DOW-UAP-PR116, Unresolved UAP Report, Atlantic Ocean, 2020 pic.twitter.com/vOabmCyBb6&lt;/p&gt;&lt;p&gt;&mdash; Interstellar (@InterstellarUAP) July 10, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>science</category>
            <dc:creator>Chethan Kumar</dc:creator>
            <atom:link href="https://kannada.asianetnews.com/science/pentagon-publishes-footage-of-unidentified-flying-object-sparks-fresh-aliens-ufo-debate/articleshow-cq7xo44"/>
        </item>
        <item>
            <title><![CDATA[ISRO: 1 ವರ್ಷದಲ್ಲೇ 120 ಸೈಂಟಿಸ್ಟ್ ರಾಜೀನಾಮೆ! ವಿಜ್ಞಾನಿಗಳು ಬರ್ತಾರೆ ಹೋಗ್ತಾರೆ ಎಂದ ಇಸ್ರೋ ಅಧ್ಯಕ್ಷ]]></title>
            <link>https://kannada.asianetnews.com/india-news/why-are-scientists-leaving-isro-100-plus-resignations-raise-big-questions-rav/articleshow-cwmu6iu</link>
            <guid isPermaLink="true">https://kannada.asianetnews.com/india-news/why-are-scientists-leaving-isro-100-plus-resignations-raise-big-questions-rav/articleshow-cwmu6iu</guid>
            <pubDate>Fri, 17 Jul 2026 07:00:41 +0530</pubDate>
            <description><![CDATA[&lt;p&gt;ಭಾರತವು ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಸಜ್ಜಾಗುತ್ತಿರುವ ಹೊತ್ತಲ್ಲಲಿ ಇಸ್ರೋ ಕಳೆದ 1 ವರ್ಷದಲ್ಲಿ 100ರಿಂದ 120 ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ರಾಜೀನಾಮೆ ಮತ್ತು ವಿಆರ್&zwnj;ಎಸ್ (ಸ್ವಯಂಪ್ರೇರಿತ ನಿವೃತ್ತಿ) ಪಡೆದಿದ್ದಾರೆ. ಇದರಿಂದ ಮಹತ್ವದ ಯೋಜನೆಗಳಿಗೆ ಹಿನ್ನಡೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxptnemn8r33fzsykyxkj5h8,imgname-----------------------2026-07-17t065133.857-1784251333269.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಜೀನಾಮೆ ಪರ್ವ&lt;/strong&gt;&lt;/p&gt;&lt;ul&gt; &lt;li&gt;&amp;nbsp;ಮಾನವಸಹಿತ ಅಂತರಿಕ್ಷ ಯಾನ ಸೇರಿ ಹಲವು ಕಾರ್ಯಕ್ರಮಕ್ಕೆ ಸಜ್ಜಾಗಿರುವ ಇಸ್ರೋ&lt;/li&gt; &lt;li&gt;ಇಂತಹ ಹೊತ್ತಿನಲ್ಲೇ 1 ವರ್ಷದಲ್ಲಿ 100ರಿಂದ 120 ವಿಜ್ಞಾನಿಗಳಿಂದ ರಾಜೀನಾಮೆ&lt;/li&gt; &lt;li&gt;&amp;nbsp;ಇದರಿಂದ ಮಹತ್ವದ ಯೋಜನೆಗಳಿಗೆ ಹಿನ್ನಡೆ. ಕೇಂದ್ರದಿಂದ ರಾಜೀನಾಮೆ ನೀತಿ ಬಿಗಿ&lt;/li&gt; &lt;li&gt;ವಿಜ್ಞಾನಿಗಳು ಬರ್ತಾರೆ, ಹೋಗ್ತಾರೆ ಎಂದ ಇಸ್ರೋ ಅಧ್ಯಕ್ಷ, ಕೇಂದ್ರ ಸಚಿವ ಜಿತೇಂದ್ರ&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ನವದೆಹಲಿ (ಜು.17):&lt;/strong&gt; ಭಾರತವು ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಕಳೆದ 1 ವರ್ಷದಲ್ಲಿ 100ರಿಂದ 120 ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ರಾಜೀನಾಮೆ ಮತ್ತು ವಿಆರ್&zwnj;ಎಸ್ (ಸ್ವಯಂಪ್ರೇರಿತ ನಿವೃತ್ತಿ) ಪಡೆದಿದ್ದಾರೆ. ಇದರಿಂದ ಮಹತ್ವದ ಯೋಜನೆಗಳಿಗೆ ಹಿನ್ನಡೆ ಆಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರಾಜೀನಾಮೆ/ವಿಆರ್&zwnj;ಎಸ್ ನಿಯಮ ಬಿಗಿಗೊಳಿಸಿದೆ.&lt;/p&gt;&lt;p&gt;ಇಸ್ರೋಗೆ ಪ್ರತಿಭಾ ಪಲಾಯನ ಹೊಸ ವಿಚಾರವೇನಲ್ಲ. ಆದರೆ, ರಾಷ್ಟ್ರೀಯ ಮಹತ್ವದ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು ಹಾಗೂ ಅನುಭವಿ ತಜ್ಞರ ರಾಜೀನಾಮೆ ಆ ಯೋಜನೆಗಳಿಗೆ ಹಿನ್ನಡೆ ಸೃಷ್ಟಿಸುತ್ತಿದೆ. ಅವರ ಜಾಗಕ್ಕೆ ತಕ್ಷಣ ಬದಲಿ ವ್ಯವಸ್ಥೆ ಮಾಡುವುದು ಅಷ್ಟು ಸುಲಭವೂ ಅಲ್ಲ. ಹೀಗಾಗಿ ಇಸ್ರೋಗೆ ಈಗ ದಿಢೀರ್&zwnj; ಪ್ರತಿಭಾ ಪಲಾಯನದಿಂದಾಗಿ ಸಮಸ್ಯೆ ಉಂಟಾಗುತ್ತಿದೆ ಎಂದು ವರದಿಯಾಗಿದೆ.&lt;/p&gt;&lt;h2&gt;ISRO ಗೆ 120 ವಿಜ್ಞಾನಿಗಳಿಂದ ರಾಜೀನಾಮೆ ಏಕೆ?&lt;/h2&gt;&lt;p&gt;ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಖಾಸಗಿ ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ. ಹಲವು ಸ್ಟಾರ್ಟಪ್&zwnj;ಗಳು ಮತ್ತು ಖಾಸಗಿ ಕಂಪನಿಗಳು ಇಸ್ರೋದ ಅನುಭವಿ ವಿಜ್ಞಾನಿಗಳು ಹಾಗೂ ತಂತ್ರಜ್ಞರನ್ನು ಸೆಳೆಯಲು ಹೆಚ್ಚಿನ ಒಲವು ತೋರುತ್ತಿವೆ. ಜತೆಗೆ, ನಾಯಕತ್ವ, ಆಡಳಿತಾತ್ಮಕ ವಿಚಾರಗಳು, ಉದ್ಯೋಗದಲ್ಲಿನ ಬೆಳವಣಿಗೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿಯೂ ಹಲವು ವಿಜ್ಞಾನಿಗಳು, ತಂತ್ರಜ್ಞರು ಖಾಸಗಿ ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;ರಾಜೀನಾಮೆಗೆ ಕಡಿವಾಣ:&lt;/h3&gt;&lt;p&gt;ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಬಾಹ್ಯಾಕಾಶ ಇಲಾಖೆಯು ಜು.14ರಂದು ಆಂತರಿಕ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಗಗನಯಾನ ಮತ್ತು ಇತರೆ ರಾಷ್ಟ್ರೀಯ ಹಿತಾಸಕ್ತಿಯ ಪ್ರಮುಖ ಯೋಜನೆಗಳ ಭಾಗವಾಗಿರುವ ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರ ರಾಜೀನಾಮೆ ಮತ್ತು ವಿಆರ್&zwnj;ಎಸ್&zwnj; ಕುರಿತ ನಿಯಮಾವಳಿಗಳನ್ನು ಬಿಗಿಗೊಳಿಸಿದೆ.&lt;/p&gt;&lt;p&gt;ಈ ಹಿಂದೆ ವಿಜ್ಞಾನಿಗಳ ರಾಜೀನಾಮೆ ಮತ್ತು ವಿಆರ್&zwnj;ಎಸ್&zwnj; ಕುರಿತ ಮನವಿಗೆ ಇಸ್ರೋ ನಿರ್ದೇಶಕರು ಅನುಮತಿ ನೀಡುತ್ತಿದ್ದರು. ಆದರೆ, ಪರಿಷ್ಕೃತ ನಿಯಮಾವಳಿ ಪ್ರಕಾರ ರಾಷ್ಟ್ರೀಯ ಹಿತಾಸಕ್ತಿಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರು ರಾಜೀನಾಮೆ ಅಥವಾ ವಿಆರ್&zwnj;ಎಸ್&zwnj; ಕೋರಿ ಸಲ್ಲಿಸಲಿರುವ ಅರ್ಜಿಗಳನ್ನು ಇನ್ನು ಮುಂದೆ ತೀವ್ರ ಪರಿಶೀಲನೆ ನಡೆಸಲಾಗುತ್ತದೆ. ಅದೇ ರೀತಿ ಇದಕ್ಕೆ ಅಂತಿಮ ಒಪ್ಪಿಗೆಯನ್ನು ಬಾಹ್ಯಾಕಾಶ ಇಲಾಖೆಯೇ ನೀಡುತ್ತದೆ.&lt;/p&gt;&lt;p&gt;--&lt;/p&gt;&lt;h3&gt;ಬರೋದು ಹೋಗೋದು ಮಾಮೂಲಿ: ಸಚಿವ ಸಿಂಗ್&zwnj;&lt;/h3&gt;&lt;p&gt;ನವದೆಹಲಿ: ಇಸ್ರೋ ರಾಜೀನಾಮೆ ಪರ್ವದ ಬಗ್ಗೆ ಕೇಂದ್ರ ವಿಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್&zwnj; ಪ್ರತಿಕ್ರಿಯಿಸಿದ್ದು &lsquo;ಕೆಲವರು ಆಡಳಿತಾತ್ಮಕ ಕಾರಣಗಳಿಗಾಗಿ ಇಂಥ ನಿರ್ಧಾರ ತೆಗೆದುಕೊಳ್ಳಬಹುದು. ಇಸ್ರೋ ಬಹಳ ದೊಡ್ಡ ಕಾರ್ಯಪಡೆ ಹೊಂದಿದೆ. ಹೋಗುವುದು, ಬರುವುದು ಇರುತ್ತದೆ. ಜನರು ಹೊರಟು ಹೋದಂತೆ ಅನೇಕರು ಸೇರುತ್ತಾರೆ. ಈ ವಿಷಯದಲ್ಲಿ ಯಾವುದೇ ವಿವಾದವಿಲ್ಲ&rsquo; ಎಂದರು.&lt;/p&gt;&lt;p&gt;ಇಸ್ರೋ ಅಧ್ಯಕ್ಷ ವಿ. ನಾರಾಯಣನ್&zwnj; ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, &lsquo;ಹೌದು, ಬಹಳಷ್ಟು ಜನರು ಹೋಗುತ್ತಾರೆ. ಅದು ಪ್ರತಿ ಸಂಸ್ಥೆಯಲ್ಲಿನ ವಿದ್ಯಮಾನ. ಆದರೆ ಪ್ರಮುಖ ಯೋಜನೆಗಳು ಹಠಾತ್ತನೆ ತೊಂದರೆ ಅನುಭವಿಸದಂತೆ ನೋಡಿಕೊಳ್ಳುತ್ತಿದ್ದೇವೆ. ಯಾರಾದರೂ ಹೋದರೆ ಅನ್ಯರಿಗೆ ಜವಾಬ್ದಾರಿ ವಹಿಸುತ್ತಿದ್ದೇವೆ&rsquo; ಎಂದರು.&lt;/p&gt;]]></content:encoded>
            <category>science</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/why-are-scientists-leaving-isro-100-plus-resignations-raise-big-questions-rav/articleshow-cwmu6iu"/>
        </item>
        <item>
            <title><![CDATA[ಗಣಿತದಲ್ಲಿ 51 ಮಾರ್ಕ್ಸ್‌.. ಇಂದು 'ವಿಕ್ರಮ್-I' ಉಡಾವಣೆ ಯಶಸ್ಸಿನ ಹಿಂದೆ IIT ಯುವಕನ ಸ್ಫೂರ್ತಿದಾಯಕ ಕತೆ]]></title>
            <link>https://kannada.asianetnews.com/gallery/science/who-is-pawan-kumar-chandana-51-in-maths-iit-isro-and-rockets-gkn-d4im4f6</link>
            <guid isPermaLink="true">https://kannada.asianetnews.com/gallery/science/who-is-pawan-kumar-chandana-51-in-maths-iit-isro-and-rockets-gkn-d4im4f6</guid>
            <pubDate>Sat, 18 Jul 2026 16:08:20 +0530</pubDate>
            <description><![CDATA[&lt;p&gt;ಗಣಿತದಲ್ಲಿ ಕೇವಲ 51 ಅಂಕ ಪಡೆದಿದ್ದ ಪವನ್ ಕುಮಾರ್ ಚಂದನಾ, ಇಸ್ರೋದಲ್ಲಿನ ಕೆಲಸ ತೊರೆದು 'ಸ್ಕೈರೂಟ್ ಏರೋಸ್ಪೇಸ್' ಸ್ಥಾಪಿಸಿದರು. ಸವಾಲುಗಳನ್ನು ಮೆಟ್ಟಿ ನಿಂತು, 'ವಿಕ್ರಮ್-I' ರಾಕೆಟ್ ಯಶಸ್ವಿ ಉಡಾವಣೆಯೊಂದಿಗೆ ಭಾರತದ ಖಾಸಗಿ ಬಾಹ್ಯಾಕಾಶ ಯಾನದಲ್ಲಿ ಹೊಸ ಅಧ್ಯಾಯ ಬರೆದ ಅವರ ಸ್ಪೂರ್ತಿದಾಯಕ ಪಯಣದ ಕಥೆಯಿದು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxtc6v7cccbf2eytwcf9mzja,imgname-pawan-kumar-chandana-vikram-rocket--3--1784370392299.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಣಿತದಲ್ಲಿ ಕೇವಲ 51 ಅಂಕ ಪಡೆದಿದ್ದ ಪವನ್ ಕುಮಾರ್ ಚಂದನಾ, ಇಸ್ರೋದಲ್ಲಿನ ಕೆಲಸ ತೊರೆದು 'ಸ್ಕೈರೂಟ್ ಏರೋಸ್ಪೇಸ್' ಸ್ಥಾಪಿಸಿದರು. ಸವಾಲುಗಳನ್ನು ಮೆಟ್ಟಿ ನಿಂತು, 'ವಿಕ್ರಮ್-I' ರಾಕೆಟ್ ಯಶಸ್ವಿ ಉಡಾವಣೆಯೊಂದಿಗೆ ಭಾರತದ ಖಾಸಗಿ ಬಾಹ್ಯಾಕಾಶ ಯಾನದಲ್ಲಿ ಹೊಸ ಅಧ್ಯಾಯ ಬರೆದ ಅವರ ಸ್ಪೂರ್ತಿದಾಯಕ ಪಯಣದ ಕಥೆಯಿದು&lt;/p&gt;&lt;img&gt;&lt;p&gt;&lt;strong&gt;ಹೊಸದಿಲ್ಲಿ:&lt;/strong&gt; ಭಾರತದ ಬಾಹ್ಯಾಕಾಶ ಯಾನದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಬೆಳಿಗ್ಗೆ 'ವಿಕ್ರಮ್-I' (Vikram-I) ರಾಕೆಟ್&zwnj;ನ ಉಡಾವಣೆ ಯಶಸ್ವಿಯಾಗಿದೆ. ಈ ಯಶಸ್ಸಿನ ಹಿಂದೆ ಒಬ್ಬ ಐಐಟಿ ಪದವೀಧರ, ಇಸ್ರೋದ ಮಾಜಿ ವಿಜ್ಞಾನಿ ಹಾಗೂ ಅದ್ಭುತ ಕನಸುಗಾರನ ಪರಿಶ್ರಮವಿದೆ. ಅವರೇ ಪವನ್ ಕುಮಾರ್ ಚಂದನಾ.&lt;/p&gt;&lt;p&gt;ಸಾಮಾನ್ಯವಾಗಿ ರಾಕೆಟ್ ವಿಜ್ಞಾನಿಗಳ ಕಥೆ ಅಂದ ಕೂಡಲೇ ನಮಗೆ ನೆನಪಾಗುವುದು ಶಾಲೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುತ್ತಿದ್ದ ಬುದ್ಧಿವಂತ ವಿದ್ಯಾರ್ಥಿಗಳು. ಆದರೆ ಪವನ್ ಅವರ ಕಥೆ ಶುರುವಾಗುವುದು ಗಣಿತದಲ್ಲಿ ಪಡೆದ ಕೇವಲ 51 ಅಂಕಗಳಿಂದ!&lt;/p&gt;&lt;img&gt;&lt;p&gt;ಹೈದರಾಬಾದ್&zwnj;ನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪವನ್ ಕುಮಾರ್ ಚಂದನಾ ಅವರಿಗೆ ಗಣಿತ ಎಂದಿಗೂ ಸುಲಭದ ವಿಷಯವಾಗಿರಲಿಲ್ಲ. ಆದರೆ ಅವರಿಗೆ ಯಂತ್ರಗಳ ಬಗ್ಗೆ ಅಪಾರ ಕುತೂಹಲವಿತ್ತು. ಅಂಕಗಳಿಗಿಂತ ಹೆಚ್ಚಾಗಿ ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ? ಎಂಬುದು ಅವರನ್ನು ಕಾಡುತ್ತಿತ್ತು. ಈ ಕುತೂಹಲವೇ ಅವರನ್ನು ಮೊದಲ ಪ್ರಯತ್ನದಲ್ಲೇ ಐಐಟಿ ಖರಗ್&zwnj;ಪುರ (IIT Kharagpur) ಸೇರುವಂತೆ ಮಾಡಿತು. ಐಐಟಿಯಲ್ಲಿ ಓದುತ್ತಿರುವಾಗಲೇ ಅನೇಕರು ಲಕ್ಷಾಂತರ ಸಂಬಳದ ಐಟಿ ಕೆಲಸಗಳ ಹಿಂದೆ ಓಡುತ್ತಿದ್ದರೆ, ಪವನ್ ಕಣ್ಣು ಮಾತ್ರ ಬಾಹ್ಯಾಕಾಶದ ಮೇಲಿತ್ತು. ಹೀಗಾಗಿಯೇ ಅವರು ಐಐಟಿ ಕ್ಯಾಂಪಸ್&zwnj;ನಿಂದ ನೇರವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿಕೊಂಡರು.&lt;/p&gt;&lt;img&gt;&lt;p&gt;ಇಸ್ರೋದಲ್ಲಿ ಕೆಲಸ ಮಾಡುವಾಗ ಪವನ್, ಭಾರತದ ಅತ್ಯಂತ ತೂಕದ ಉಡಾವಣಾ ವಾಹನವಾದ GSLV Mk III ಯೋಜನೆಯಲ್ಲಿ ಕೆಲಸ ಮಾಡಿದರು. ಅಲ್ಲಿನ ಅವರ ನಾವೀನ್ಯತೆಗೆ ಪ್ರಶಸ್ತಿಯೂ ಒಲಿದು ಬಂತು. ಆದರೆ ಆರು ವರ್ಷಗಳ ಕೆಲಸದ ನಂತರ ಪವನ್ ಅವರ ಮನಸ್ಸಿನಲ್ಲಿ ಒಂದು ಹೊಸ ಆಲೋಚನೆ ಚಿಗುರಿತು. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಯಾಕೆ ರಾಕೆಟ್ ನಿರ್ಮಿಸಬಾರದು? 2018ರಲ್ಲಿ ತಮ್ಮ ಇಸ್ರೋ ಸಹೋದ್ಯೋಗಿ ನಾಗಾ ಭರತ್ ದಾಕಾ ಅವರೊಂದಿಗೆ ಸೇರಿ ಹೈದರಾಬಾದ್&zwnj;ನಲ್ಲಿ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಎಂಬ ಸ್ಟಾರ್ಟ್&zwnj;ಅಪ್ ಸ್ಥಾಪಿಸಿದರು.&lt;/p&gt;&lt;img&gt;&lt;p&gt;ಖಾಸಗಿ ಬಾಹ್ಯಾಕಾಶ ಸಂಸ್ಥೆ ಆರಂಭಿಸುವುದು ಸುಲಭದ ಮಾತಾಗಿರಲಿಲ್ಲ. ಫಂಡಿಂಗ್ ಸಮಸ್ಯೆ, ಹೂಡಿಕೆದಾರರ ಹಿಂದೇಟು ಇವುಗಳ ನಡುವೆ ಫ್ಲಿಪ್&zwnj;ಕಾರ್ಟ್ ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ ಅವರು 1.5 ಮಿಲಿಯನ್ ಡಾಲರ್ ಹೂಡಿಕೆ ಮಾಡಿ ಬೆನ್ನೆಲುಬಾಗಿ ನಿಂತರು. ನಂತರ ಕೋವಿಡ್ ಸಾಂಕ್ರಾಮಿಕ ಬಂದರೂ ಪವನ್ ಪಟ್ಟು ಬಿಡಲಿಲ್ಲ. ಅಂತಿಮವಾಗಿ ಜುಲೈ 2020 ರಲ್ಲಿ, ರಾಕೆಟ್ ಇಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಸ್ಕೈರೂಟ್ ಪಾತ್ರವಾಯಿತು. ಈ ಇಂಜಿನ್&zwnj;ಗೆ ನೋಬೆಲ್ ಪುರಸ್ಕೃತ ಸಿ.ವಿ. ರಾಮನ್ ಅವರ ನೆನಪಿನಲ್ಲಿ 'ರಾಮನ್-1' ಎಂದು ಹೆಸರಿಡಲಾಗಿತ್ತು.&lt;/p&gt;&lt;img&gt;&lt;p&gt;ನವೆಂಬರ್ 18, 2022: ಭಾರತದ ಮೊದಲ ಖಾಸಗಿ ಸಬ್&zwnj;ಆರ್ಬಿಟಲ್ ರಾಕೆಟ್ 'ವಿಕ್ರಮ್-ಎಸ್' ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದರು. ಮೇ 7, 2024: ಪ್ರಧಾನಿ ನರೇಂದ್ರ ಮೋದಿ ಅವರು ಸ್ಕೈರೂಟ್&zwnj;ನ ಭಾರತದ ಅತಿದೊಡ್ಡ ಖಾಸಗಿ ರಾಕೆಟ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.&lt;/p&gt;&lt;p&gt;ವಿಕ್ರಮ್-I ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ಯುವಜನತೆಗೆ ಪವನ್ ನೀಡುವ ಸಂದೇಶ ಏನೆಂದರೆ, ಉದ್ಯಮಶೀಲತೆ (Entrepreneurship) ಅತ್ಯುತ್ತಮ ವೃತ್ತಿ ಆಯ್ಕೆ. ಇದು ನಮಗೆ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ದೇಶವನ್ನು ಕಟ್ಟಲು ಹಾಗೂ ಉದ್ಯೋಗ ಸೃಷ್ಟಿಸಲು ಅವಕಾಶ ನೀಡುತ್ತದೆ ಎಂಬುದು ಪವನ್ ಅವರ ನಂಬಿಕೆ.&lt;/p&gt;&lt;p&gt;ಗಣಿತದಲ್ಲಿ 51 ಅಂಕ ಪಡೆದಿದ್ದ ಹುಡುಗ ಇಂದು ಕೋಟ್ಯಂತರ ರೂಪಾಯಿ ಮೌಲ್ಯದ ಕಂಪನಿ ಕಟ್ಟಿ, ಸಾವಿರಾರು ಜನರಿಗೆ ಉದ್ಯೋಗ ನೀಡಿ, ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಇದು ಕೇವಲ ರಾಕೆಟ್ ವಿಜ್ಞಾನದ ಕಥೆಯಲ್ಲ, ಅಂಕಗಳಿಗಿಂತ ಹೆಚ್ಚಾಗಿ ಮನುಷ್ಯನ ಕುತೂಹಲ ಮತ್ತು ಪರಿಶ್ರಮ ಹೇಗೆ ಇತಿಹಾಸ ನಿರ್ಮಿಸಬಹುದು ಎಂಬುದಕ್ಕೆ ಸಾಕ್ಷಿ.&lt;/p&gt;]]></content:encoded>
            <category>science</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/science/who-is-pawan-kumar-chandana-51-in-maths-iit-isro-and-rockets-gkn-d4im4f6"/>
        </item>
        <item>
            <title><![CDATA[ಗಗನಯಾನಕ್ಕೆ ಸಿದ್ಧತೆ ಮಾಡುವಾಗಲೇ ಇಸ್ರೋದಲ್ಲಿ ಬಿಕ್ಕಟ್ಟು; ಬಾಹ್ಯಾಕಾಶ ಸಂಸ್ಥೆ ತೊರೆದ 100ಕ್ಕೂ ಅಧಿಕ ವಿಜ್ಞಾನಿಗಳು!]]></title>
            <link>https://kannada.asianetnews.com/science/over-100-isro-scientists-resign-ahead-of-gaganyaan-mission-san/articleshow-dixqbk3</link>
            <guid isPermaLink="true">https://kannada.asianetnews.com/science/over-100-isro-scientists-resign-ahead-of-gaganyaan-mission-san/articleshow-dixqbk3</guid>
            <pubDate>Thu, 16 Jul 2026 19:24:39 +0530</pubDate>
            <description><![CDATA[&lt;p&gt;ಗಗನಯಾನದಂತಹ ರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿದ್ದ ನೂರಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ಇಸ್ರೋವನ್ನು ತೊರೆದಿದ್ದಾರೆ. ಈ ಸಾಮೂಹಿಕ ನಿರ್ಗಮನದಿಂದ ಉಂಟಾಗಬಹುದಾದ ಹಿನ್ನಡೆಯನ್ನು ತಡೆಯಲು, ಕೇಂದ್ರ ಬಾಹ್ಯಾಕಾಶ ಇಲಾಖೆಯು ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿ ನಿಯಮಗಳನ್ನು ಕಠಿಣಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmqt3nrtj7kbbp54zwq6bdj,imgname-isro-resignation-1784181231288.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.16): &lt;/strong&gt;ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅತ್ಯಂತ ಮಹತ್ವಾಕಾಂಕ್ಷೆಯ 'ಗಗನಯಾನ' ಸೇರಿದಂತೆ ಪ್ರಮುಖ ರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ನೂರಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ಸದ್ದಿಲ್ಲದೆ ಸಂಸ್ಥೆಯನ್ನು ತೊರೆದಿದ್ದಾರೆ. ಇಸ್ರೋ ಇತಿಹಾಸದಲ್ಲೇ ಅತ್ಯಂತ ಗಂಭೀರ ಎನ್ನಲಾದ ಈ ಸಾಮೂಹಿಕ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ (VRS) ಪ್ರಕ್ರಿಯೆಗೆ ಬ್ರೇಕ್ ಹಾಕಲು ಕೇಂದ್ರ ಬಾಹ್ಯಾಕಾಶ ಇಲಾಖೆಯು (DoS) ಇದೀಗ ನಿಯಮಗಳನ್ನು ತೀವ್ರವಾಗಿ ಬಿಗಿಗೊಳಿಸಿದೆ. ವಿಜ್ಞಾನಿಗಳು ದಿಢೀರನೆ ಹೊರಹೋಗುವುದರಿಂದ ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯತಂತ್ರದ ಯೋಜನೆಗಳ ಮೇಲಾಗುವ ಭಾರಿ ಹಿನ್ನಡೆಯನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;ಜುಲೈ 14 ರಂದು ಬಾಹ್ಯಾಕಾಶ ಇಲಾಖೆಯು ಹೊರಡಿಸಿರುವ ಆಂತರಿಕ ಮೆಮೊ ಪ್ರಕಾರ, ಗಗನಯಾನ ಮತ್ತು ಇತರ ಪ್ರಮುಖ ಮಿಷನ್&zwnj;ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ &lsquo;ಎ&rsquo; (Group A) ದರ್ಜೆಯ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿ ವಿನಂತಿಗಳನ್ನು ಇಸ್ರೋ ಕೇಂದ್ರಗಳು ಇನ್ನು ಮುಂದೆ ನೇರವಾಗಿ ಸ್ವೀಕರಿಸುವಂತಿಲ್ಲ. ಇಂತಹ ಎಲ್ಲಾ ವಿನಂತಿಗಳನ್ನು ಕಡ್ಡಾಯವಾಗಿ ಅಂತಿಮ ಅನುಮೋದನೆಗಾಗಿ ಕೇಂದ್ರ ಬಾಹ್ಯಾಕಾಶ ಇಲಾಖೆಗೆ ಕಳುಹಿಸಿಕೊಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.&lt;/p&gt;&lt;h2&gt;&lt;strong&gt;ರಾಜೀನಾಮೆ ನೀಡಿದ ಪ್ರಮುಖರು ಯಾರು?&lt;/strong&gt;&lt;/h2&gt;&lt;p&gt;ಅಧಿಕೃತವಾಗಿ ಬಾಹ್ಯಾಕಾಶ ಇಲಾಖೆಯು ಹೊರಹೋಗಿರುವ ವಿಜ್ಞಾನಿಗಳ ನಿಖರ ಸಂಖ್ಯೆಯನ್ನು ಬಹಿರಂಗಪಡಿಸದಿದ್ದರೂ, ಮೂಲಗಳ ಪ್ರಕಾರ ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು 100 ರಿಂದ 120 ಕ್ಕೂ ಹೆಚ್ಚು ತಜ್ಞ ವಿಜ್ಞಾನಿಗಳು ಇಸ್ರೋ ತೊರೆದಿದ್ದಾರೆ.ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರ (URSC) ಇಲ್ಲಿಂದಲೇ ಅತಿ ಹೆಚ್ಚು ಅಂದರೆ ಸುಮಾರು 80 ವಿಜ್ಞಾನಿಗಳು ಹೊರನಡೆದಿದ್ದಾರೆ. ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಸಂಸ್ಥೆಯಿಂದ 20 ಕ್ಕೂ ಹೆಚ್ಚು ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ.&lt;/p&gt;&lt;p&gt;ಇದರಲ್ಲಿ ಅತ್ಯಂತ ಹಿರಿಯ ಮತ್ತು ಹೈ-ಪ್ರೊಫೈಲ್ ವಿಜ್ಞಾನಿಗಳೂ ಸೇರಿದ್ದಾರೆ. ಎಲ್&zwnj;ವಿಎಂ3 (LVM3) ಪ್ರಾಜೆಕ್ಟ್ ಡೈರೆಕ್ಟರ್ ವಿಕ್ಟರ್ ಜೋಸೆಫ್, ಯುಆರ್&zwnj;ಎಸ್&zwnj;ಸಿಯ ಸ್ಪೇಸ್&zwnj;ಡೆಕ್ಸ್ (SpaDeX) ಪ್ರಾಜೆಕ್ಟ್ ಡೈರೆಕ್ಟರ್ ಹಾಗೂ ಚಂದ್ರಯಾನ-3 ಮಿಷನ್&zwnj;ನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರಮುಖ ವಿಜ್ಞಾನಿ ಆದಿತ್ಯ ರಾಲ್ಲಪಲ್ಲಿ ಅವರು ಇಸ್ರೋ ತೊರೆದ ಪ್ರಮುಖರಾಗಿದ್ದಾರೆ. ಆದಿತ್ಯ ರಾಲ್ಲಪಲ್ಲಿ ಅವರು ಚಂದ್ರಯಾನ ನೌಕೆಯ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು 1,00,000 ಕ್ಕೂ ಹೆಚ್ಚು ಸಿಮ್ಯುಲೇಶನ್&zwnj;ಗಳ ಮೂಲಕ ಸುಮಾರು 25 ಟೆರಾಬೈಟ್&zwnj;ಗಳಷ್ಟು ಮಿಷನ್ ಡೇಟಾವನ್ನು ಸಿದ್ಧಪಡಿಸಿದ ತಂಡದ ನೇತೃತ್ವ ವಹಿಸಿದ್ದರು.&lt;/p&gt;&lt;h2&gt;&lt;strong&gt;2020ರ ಸುಧಾರಣಾ ನಿಯಮ ಉಲ್ಟಾ&lt;/strong&gt;&lt;/h2&gt;&lt;p&gt;ಬಾಹ್ಯಾಕಾಶ ಇಲಾಖೆಯ ಈ ಹೊಸ ಆದೇಶವು ನವೆಂಬರ್ 2020 ರಲ್ಲಿ ಜಾರಿಗೆ ತರಲಾಗಿದ್ದ ಆಡಳಿತಾತ್ಮಕ ಸುಧಾರಣಾ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಈ ಹಿಂದೆ ಇಸ್ರೋ ಕೇಂದ್ರಗಳ ನಿರ್ದೇಶಕರಿಗೆ 'ಸೈಂಟಿಸ್ಟ್/ಇಂಜಿನಿಯರ್-ಎಸ್&zwnj;ಜಿ' ದರ್ಜೆಯವರೆಗಿನ ಅಧಿಕಾರಿಗಳ ರಾಜೀನಾಮೆ ಅಂಗೀಕರಿಸುವ ಸ್ವಾಯತ್ತ ಅಧಿಕಾರ ನೀಡಲಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ, ಪ್ರಮುಖ ಮಿಷನ್&zwnj;ಗಳು ಪೂರ್ಣಗೊಳ್ಳುವವರೆಗೆ ಯಾವುದೇ ರಾಜೀನಾಮೆಯನ್ನು ಸ್ವೀಕರಿಸದಂತೆ ಕೇಂದ್ರಗಳ ನಿರ್ದೇಶಕರಿಗೆ ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;ಕಳವಳಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಇಸ್ರೋ ಹೊಂದಿರುವ ಒಟ್ಟು 14,600 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಹೋಲಿಸಿದರೆ ಈ ರಾಜೀನಾಮೆಗಳ ಸಂಖ್ಯೆ ಚಿಕ್ಕದಾಗಿ ಕಂಡರೂ, ಹೊರ ಹೋಗುತ್ತಿರುವವರೆಲ್ಲರೂ ದೇಶದ ಫ್ಲ್ಯಾಗ್&zwnj;ಶಿಪ್ ಯೋಜನೆಗಳ ಮುಂಚೂಣಿಯಲ್ಲಿದ್ದವರಾಗಿದ್ದಾರೆ. ಹೊಸದಾಗಿ ನೇಮಕಾತಿ ಮಾಡಿಕೊಳ್ಳುವುದು ಸುಲಭ, ಆದರೆ ಗಗನಯಾನ, ಚಂದ್ರಯಾನದಂತಹ ಜಟಿಲ ಯೋಜನೆಗಳ ಮೂಲಕ ವಿಜ್ಞಾನಿಗಳು ಗಳಿಸಿರುವ ವರ್ಷಗಳ ಮಿಷನ್-ನಿರ್ದಿಷ್ಟ ಪರಿಣತಿ ಹಾಗೂ ಸಾಂಸ್ಥಿಕ ಜ್ಞಾನವನ್ನು ತಕ್ಷಣಕ್ಕೆ ಭರ್ತಿ ಮಾಡುವುದು ಅಸಾಧ್ಯ ಎಂಬುದು ಇಲಾಖೆಯ ಆತಂಕವಾಗಿದೆ.&lt;/p&gt;&lt;p&gt;ಈ ಬೆಳವಣಿಗೆಯನ್ನು ಒಪ್ಪಿಕೊಂಡಿರುವ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಆತಂಕವನ್ನು ತಳ್ಳಿಹಾಕಿದ್ದಾರೆ. &quot;ಹೌದು, ಅನೇಕ ಜನರು ಹೋಗುತ್ತಾರೆ, ಇದು ಪ್ರತಿಯೊಂದು ಸಂಸ್ಥೆಯಲ್ಲೂ ಸಾಮಾನ್ಯ ಪ್ರಕ್ರಿಯೆ. ಈ ಹೊಸ ನಿಯಮವು ಕೇವಲ ವಿಜ್ಞಾನಿಗಳನ್ನು ಹಿಡಿದಿಟ್ಟುಕೊಳ್ಳಲು ಮಾತ್ರವಲ್ಲ, ಪ್ರಮುಖ ಯೋಜನೆಗಳು ದಿಢೀರನೆ ಅರ್ಧಕ್ಕೆ ನಿಂತು ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕೆಯಾಗಿದೆ. ಯಾರಾದರೂ ಹೋದರೆ, ಅವರ ಜವಾಬ್ದಾರಿಯನ್ನು ಮತ್ತೊಬ್ಬರು ವಹಿಸಿಕೊಳ್ಳುತ್ತಾರೆ. ನಾವು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇವೆ,&quot; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಇಸ್ರೋದಲ್ಲಿ ಇಂತಹ ವಲಸೆ ಹೊಸದೇನಲ್ಲ. ಅಧಿಕೃತ ಅಂಕಿ-ಅಂಶಗಳ ಪ್ರಕಾರ 2012 ರಿಂದ 2024 ರ ನಡುವೆ ಸುಮಾರು 700 ಉದ್ಯೋಗಿಗಳು ರಾಜೀನಾಮೆ ನೀಡಿದ್ದರು. ಹಾಗೆಯೇ 2004 ರಿಂದ 2007 ರ ಅವಧಿಯಲ್ಲಿ ನೇಮಕಗೊಂಡಿದ್ದ ಹೊಸಬರಲ್ಲಿ ಅರ್ಧದಷ್ಟು ಜನ ಸಂಸ್ಥೆ ತೊರೆದಿದ್ದರು. ಪ್ರಸ್ತುತ 1,050 ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ, ಗಗನಯಾನ, ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಭವಿಷ್ಯದ ಚಂದ್ರನ ಪರಿಶೋಧನಾ ಯೋಜನೆಗಳ ಹಿನ್ನೆಲೆಯಲ್ಲಿ ಅನುಭವಿಗಳನ್ನು ಉಳಿಸಿಕೊಳ್ಳುವುದು ಇಸ್ರೋಗೆ ಈಗ ತಾಂತ್ರಿಕ ಸವಾಲಾಗಿ ಪರಿಣಮಿಸಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;/p&gt;]]></content:encoded>
            <category>science</category>
            <dc:creator>Santosh Naik</dc:creator>
            <atom:link href="https://kannada.asianetnews.com/science/over-100-isro-scientists-resign-ahead-of-gaganyaan-mission-san/articleshow-dixqbk3"/>
        </item>
        <item>
            <title><![CDATA[Earth: ಬೆಂಕಿಯ ಉಂಡೆಯಾಗಿದ್ದ ಭೂಮಿ ಮೇಲೆ ಇಷ್ಟೊಂದು ನೀರು ಎಲ್ಲಿಂದ ಬಂತು?]]></title>
            <link>https://kannada.asianetnews.com/gallery/science/how-did-earth-get-its-water-rav-gb3s6bq</link>
            <guid isPermaLink="true">https://kannada.asianetnews.com/gallery/science/how-did-earth-get-its-water-rav-gb3s6bq</guid>
            <pubDate>Sun, 12 Jul 2026 11:53:35 +0530</pubDate>
            <description><![CDATA[&lt;p&gt;ಸುಮಾರು 4.6 ಬಿಲಿಯನ್ (460 ಕೋಟಿ) ವರ್ಷಗಳ ಹಿಂದೆ ಭೂಮಿ ರೂಪುಗೊಳ್ಳುವ ಸಮಯದಲ್ಲಿ ಭೂಮಿ ಧಗಧಗ ಉರಿಯುವ ಬೆಂಕಿಯ ಉಂಡೆಯಂತಿತ್ತು. ಆಗಿದ್ದಾಗ ನೀರು ಇರಲು ಹೇಗೆ ಸಾಧ್ಯ? ಆವಿಯಾಗಿರಬೇಕಲ್ಲವೇ? ಭೂಮಿ ರಚನೆ ಬಳಿಕ ನೀರು ಬಂದಿದ್ದು ಎಲ್ಲಿಂದ? ವೈಜ್ಞಾನಿಕ ಸಂಶೋಧನೆ ಹೇಳೋದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxafnyvdctbbm8yd642e5vs0,imgname-----------------------2026-07-12t114848.044-1783837162349.jpg" type="image/jpeg" height="390" width="690"/>
            <content:encoded><![CDATA[&lt;p&gt;ಸುಮಾರು 4.6 ಬಿಲಿಯನ್ (460 ಕೋಟಿ) ವರ್ಷಗಳ ಹಿಂದೆ ಭೂಮಿ ರೂಪುಗೊಳ್ಳುವ ಸಮಯದಲ್ಲಿ ಭೂಮಿ ಧಗಧಗ ಉರಿಯುವ ಬೆಂಕಿಯ ಉಂಡೆಯಂತಿತ್ತು. ಆಗಿದ್ದಾಗ ನೀರು ಇರಲು ಹೇಗೆ ಸಾಧ್ಯ? ಆವಿಯಾಗಿರಬೇಕಲ್ಲವೇ? ಭೂಮಿ ರಚನೆ ಬಳಿಕ ನೀರು ಬಂದಿದ್ದು ಎಲ್ಲಿಂದ? ವೈಜ್ಞಾನಿಕ ಸಂಶೋಧನೆ ಹೇಳೋದೇನು?&lt;/p&gt;&lt;img&gt;&lt;p&gt;ಸುಮಾರು 4.6 ಬಿಲಿಯನ್ (460 ಕೋಟಿ) ವರ್ಷಗಳ ಹಿಂದೆ ಭೂಮಿ ರೂಪುಗೊಳ್ಳುವ ಸಮಯದಲ್ಲಿ ಭೂಮಿ ಧಗಧಗ ಉರಿಯುವ ಬೆಂಕಿಯ ಉಂಡೆಯಂತಿತ್ತು. ಸೌರಮಂಡಲದ ರಚನೆಯ ಕಾಲದಲ್ಲಿ ತೇಲುತ್ತಿದ್ದ ಧೂಳು-ಅನಿಲಗಳು ಪರಸ್ಪರ ಡಿಕ್ಕಿ ಹೊಡೆದು ಗುರುತ್ವಾಕರ್ಷಣೆಯಿಂದ ಒಟ್ಟಾಗಿ ಸೇರಿದಾಗ ಭೂಮಿ ಉತ್ಪತ್ತಿಯಾಯಿತು ಎಂದು ಹೇಳಲಾಗುತ್ತದೆ. ಆದರೆ ಬಹುತೇಕರಿಗೆ ಒಂದು ಪ್ರಶ್ನೆ ಉದ್ಭುವಿಸಿದೆ. ಭೂಮಿ ಬೆಂಕಿಯ ಉಂಡೆ ಆಗಿದ್ದಾಗ ನೀರು ಇರಲು ಹೇಗೆ ಸಾಧ್ಯ? ಆವಿಯಾಗಿರಬೇಕಲ್ಲವೇ? ಭೂಮಿ ರಚನೆ ಬಳಿಕ ನೀರು ಬಂದಿದ್ದು ಎಲ್ಲಿಂದ ಎಂಬ ಪ್ರಶ್ನೆ ಎದ್ದಿದೆ.&lt;/p&gt;&lt;img&gt;&lt;p&gt;ಭೂಮಿಯ ಮೇಲ್ಮೈಯ ಶೇ 70ರಷ್ಟು ಭಾಗ ನೀರಿನಿಂದ ಆವೃತ್ತವಾಗಿದೆ. ಭೂಮಿ ಮೇಲಿನ ಎಲ್ಲ ಜೀವರಾಶಿಗಳಿಗೂ ನೀರು ಅತ್ಯಗತ್ಯ, ನೀರು ಇಲ್ಲದೆ ಯಾವ ಜೀವ ಸಂಕುಲವೂ ಉಳಿಯುವುದಿಲ್ಲ ಎಂಬುದು ನಾವು ಚಿಕ್ಕವಯಸ್ಸಿನಲ್ಲಿ ಶಾಲಾ ಪಠ್ಯದಲ್ಲಿ ಓದಿದ್ದೇವೆ. ಆದರೆ. ಸೌರಮಂಡಲದ ಯಾವ ಗ್ರಹದಲ್ಲೂ ಕಾಣದ ನೀರು, ನಮ್ಮ ಗ್ರಹಕ್ಕೆ ಇಷ್ಟೊಂದು ನೀರು ಹೇಗೆ ಸಿಕ್ಕಿತು ಎಂಬ ಪ್ರಶ್ನೆ ವೈಜ್ಞಾನಿಕ ರಹಸ್ಯಗಳಲ್ಲಿ ಒಂದಾಗಿದೆ.&lt;/p&gt;&lt;p&gt;ಪ್ರಸ್ತುತ ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಭೂಮಿ ಮೇಲಿನ ನೀರು ನಿನ್ನೆ ಮೊನ್ನೆಯದಲ್ಲ, ಅದು ತುಂಬಾ ಪ್ರಾಚೀನವಾದುದು, ಭೂಮಿ ಮೇಲಿನ ನೀರು 4.6 ಶತಕೋಟಿ ವರ್ಷಗಳಿಗೂ ಹಿಂದಿನದು ಎಂದು ಹೇಳಿದೆ. ಅಂದರೆ ಸೂರ್ಯ ಮತ್ತು ಸೌರವ್ಯೂಹದ ರಚನೆಗೂ ಮುಂಚೆಯೇ ನೀರಿನ ದೊಡ್ಡ ಭಾಗವು ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ. ಭೂಮಿಯ ಮೇಲಿನ ಅರ್ಧದಷ್ಟು ನೀರು ಅಂತರತಾರಾ ಮಂಜುಗಡ್ಡೆ(Interstellar ice)ಯಿಂದ ಬಂದಿದೆ ಎಂದು ಖಗೋಳಶಾಸ್ತ್ರಜ್ಞರು ನಂಬುತ್ತಾರೆ&lt;/p&gt;&lt;img&gt;&lt;p&gt;ಇವು ಸೂರ್ಯನ ಹುಟ್ಟಿಗೆ ಮೊದಲು ಬಾಹ್ಯಾಕಾಶದಲ್ಲಿ ತಂಪಾದ ಅಣುವಿನ ರೂಪದ ಮೋಡಗಳಲ್ಲಿ ಅಸ್ತಿತ್ವದಲ್ಲಿದ್ದ ಮಂಜುಗಡ್ಡೆಯ ಸಣ್ಣ ಕಣಗಳಾಗಿದ್ದವು. ಸುಮಾರು 4.6 ಶತಕೋಟಿ ವರ್ಷಗಳ ಹಿಂದೆ ಸೌರವ್ಯೂಹವು ರೂಪುಗೊಳ್ಳಲು ಪ್ರಾರಂಭಿಸಿದಾಗ, ಈ ಹಳೆಯ ಮಂಜುಗಡ್ಡೆಯ ಒಂದು ಭಾಗ ಉಳಿದುಕೊಂಡಿತು. ಅದು ಅಂತಿಮವಾಗಿ ಭೂಮಿಯನ್ನು ರೂಪಿಸಿದ ವಸ್ತುವಿನ ಭಾಗವಾಯಿತು ಎಂದು ಹೇಳುತ್ತಾರೆ.&lt;/p&gt;&lt;img&gt;&lt;p&gt;ಭೂಮಿ ಮೊದಲು ರೂಪುಗೊಂಡಾಗ, ಅದು ಬಿಸಿಯಾದ, ಕಲ್ಲಿನ ಜಗತ್ತಾಗಿತ್ತು. ಕಲ್ಲು ಬಂಡೆಗಳ ಹೊರತು ಅಲ್ಲೇ ಯಾವುದೇ ಜೀವ ಕುರುಹುಗಳಿರಲಿಲ್ಲ. ಏಕೆ ಭೂಮಿ ಮೇಲೆ ಒಂದು ಬೊಗಸೆಯಷ್ಟೂ ನೀರು ಇರಲಿಲ್ಲ. ಮುಂದಿನ ಹಲವಾರು ಮಿಲಿಯನ್ ವರ್ಷಗಳಲ್ಲಿ, ಹೊಸ ಗ್ರಹವು ಲೆಕ್ಕವಿಲ್ಲದಷ್ಟು ಇಂಗಾಲ-ಸಮೃದ್ಧ ಉಲ್ಕೆಗಳು ಮತ್ತು ಕ್ಷುದ್ರಗ್ರಹಗಳಿಂದ ದಾಳಿಗೊಳಗಾದವು, ಅವು ಮಂಜುಗಡ್ಡೆ ಮತ್ತು ಹೈಡ್ರೀಕರಿಸಿದ ಖನಿಜಗಳನ್ನು ಹೊತ್ತು ತಂದವು. ಈ ಪ್ರಾಚೀನ ಬಾಹ್ಯಾಕಾಶ ಶಿಲೆಗಳಲ್ಲಿ ಸಿಲುಕಿರುವ ನೀರಿನ ರಾಸಾಯನಿಕ ಸಂಯೋಜನೆಯು ಇಂದು ಭೂಮಿಯ ಸಾಗರಗಳಲ್ಲಿ ಕಂಡುಬರುವ ನೀರಿಗೆ ಹೋಲುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.&lt;/p&gt;&lt;img&gt;&lt;p&gt;ಗ್ರಹವು ರೂಪುಗೊಂಡಾಗ ಭೂಮಿಯೊಳಗೆ ಸ್ವಲ್ಪ ನೀರು ಸೇರಿತ್ತು ಎಂದು ನಂಬಲಾಗಿದೆ. ಈ ನೀರು ನಿಲುವಂಗಿಯ ಆಳವಾದ ಖನಿಜಗಳಲ್ಲಿ ಸಿಲುಕಿಕೊಂಡಿತ್ತು. ಭೂಮಿಯು ತಣ್ಣಗಾಗುತ್ತಿದ್ದಂತೆ, ತೀವ್ರವಾದ ಜ್ವಾಲಾಮುಖಿ ಚಟುವಟಿಕೆಯು ಈ ಸಿಕ್ಕಿಹಾಕಿಕೊಂಡ ನೀರನ್ನು ಉಗಿಯ ರೂಪದಲ್ಲಿ ಬಿಡುಗಡೆ ಮಾಡಿತು. ಕಾಲಾನಂತರದಲ್ಲಿ, ಬೃಹತ್ ಜ್ವಾಲಾಮುಖಿ ಸ್ಫೋಟಗಳು ನಿರಂತರವಾಗಿ ನೀರಿನ ಆವಿಯನ್ನು ವಾತಾವರಣಕ್ಕೆ ಬಿಡುಗಡೆ ಮಾಡಿ, ಗ್ರಹದ ಬೆಳೆಯುತ್ತಿರುವ ನೀರಿನ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಿದವು.&lt;/p&gt;&lt;img&gt;&lt;p&gt;ಭೂಮಿಯ ಆರಂಭಿಕ ಇತಿಹಾಸದಲ್ಲಿ, ಜ್ವಾಲಾಮುಖಿ ಉಗಿ, ಉಲ್ಕಾಶಿಲೆ ನೀರು ದಟ್ಟವಾದ, ತೇವಾಂಶ-ಸಮೃದ್ಧ ವಾತಾವರಣವನ್ನು ಸೃಷ್ಟಿಸಿತು. ಗ್ರಹವು ನಿಧಾನವಾಗಿ ತಣ್ಣಗಾಗುತ್ತಿದ್ದಂತೆ, ಈ ನೀರಿನ ಆವಿ ಸಾಂದ್ರೀಕೃತಗೊಂಡು ಮೋಡಗಳನ್ನು ರೂಪಿಸಿತು. ಸಾವಿರಾರು, ಬಹುಶಃ ಲಕ್ಷಾಂತರ ವರ್ಷಗಳ ಕಾಲ ಭಾರೀ ಮಳೆ ಮುಂದುವರೆಯಿತು ಎಂದು ವಿಜ್ಞಾನಿಗಳು ನಂಬುತ್ತಾರೆ. ಈ ಮಳೆನೀರು ಭೂಮಿಯ ಮೇಲ್ಮೈಯಲ್ಲಿ ದೊಡ್ಡ ತಗ್ಗುಗಳಲ್ಲಿ ಸಂಗ್ರಹವಾಯಿತು, ಅಂತಿಮವಾಗಿ ಮೊದಲ ಸಾಗರಗಳು, ಸಮುದ್ರಗಳು, ಸರೋವರಗಳು ಮತ್ತು ನದಿಗಳನ್ನು ರೂಪಿಸಿತು ಎಂದು ನಂಬಲಾಗಿದೆ.&lt;/p&gt;]]></content:encoded>
            <category>science</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/science/how-did-earth-get-its-water-rav-gb3s6bq"/>
        </item>
        <item>
            <title><![CDATA[ಭೂಮಿ ಮೇಲಿನ ನೀರು ಬಾಹ್ಯಾಕಾಶದಿಂದ ಬಂದಿದ್ದು! ಅಚ್ಚರಿ ಹುಟ್ಟಿಸಿದ ಸಂಶೋಧನ ವರದಿ]]></title>
            <link>https://kannada.asianetnews.com/gallery/science/the-sun-is-older-than-earth-but-earth-s-water-is-older-than-the-sun-pp1tzm5</link>
            <guid isPermaLink="true">https://kannada.asianetnews.com/gallery/science/the-sun-is-older-than-earth-but-earth-s-water-is-older-than-the-sun-pp1tzm5</guid>
            <pubDate>Mon, 13 Jul 2026 13:18:12 +0530</pubDate>
            <description><![CDATA[&lt;p&gt;ನಾವು ನೀರಿಲ್ಲದೆ ಬದುಕುವುದಿಲ್ಲ. ನೀರು ಜೀವನಕ್ಕೆ ಅತ್ಯಗತ್ಯ. ಆದರೆ ನಮಗೆ ಜೀವಜಲವಾದ ಹೆಚ್ಚಿನ ನೀರು ಭೂಮಿಯದ್ದಲ್ಲ ಬಾಹ್ಯಾಕಾಶದಿಂದ ಬಂದವು ಎಂದರೆ ಅಚ್ಚರಿಯಾಗುತ್ತಲ್ಲವೇ? ಭೂಮಿಗಿಂತ ಸೂರ್ಯ ಹಳೆಯದು, ಆದರೆ ಸೂರ್ಯನಿಗಿಂಗ ಭೂಮಿಯ ಮೇಲಿನ ನೀರು ಹಳೆಯದು! ಬ್ರಹ್ಮಾಂಡ ಎಷ್ಟೊಂದು ನಿಗೂಢ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd664kxgjqa7f6ntmygs06a,imgname-----------------------2026-07-13t125928.537-1783927870077.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾವು ನೀರಿಲ್ಲದೆ ಬದುಕುವುದಿಲ್ಲ. ನೀರು ಜೀವನಕ್ಕೆ ಅತ್ಯಗತ್ಯ. ಆದರೆ ನಮಗೆ ಜೀವಜಲವಾದ ಹೆಚ್ಚಿನ ನೀರು ಭೂಮಿಯದ್ದಲ್ಲ ಬಾಹ್ಯಾಕಾಶದಿಂದ ಬಂದವು ಎಂದರೆ ಅಚ್ಚರಿಯಾಗುತ್ತಲ್ಲವೇ? ಭೂಮಿಗಿಂತ ಸೂರ್ಯ ಹಳೆಯದು, ಆದರೆ ಸೂರ್ಯನಿಗಿಂಗ ಭೂಮಿಯ ಮೇಲಿನ ನೀರು ಹಳೆಯದು! ಬ್ರಹ್ಮಾಂಡ ಎಷ್ಟೊಂದು ನಿಗೂಢ!&lt;/p&gt;&lt;img&gt;&lt;p&gt;ಭೂಮಿ ಶೇ.70ರಷ್ಟು ಭಾಗ ನೀರಿನಿಂದ ಆವೃತವಾಗಿದೆ. ಆದರೆ ಭೂ ರಚನೆ ವೇಳೆ ಬೆಂಕಿಯ ಉಂಡೆಯಂತಿದ್ದ ಭೂಮಿ ಮೇಲ್ಮೈಯಲ್ಲಿ ಬೊಗಸೆ ಹನಿಯೂ ನೀರು ಇರಲಿಲ್ಲ. ನೀರು ಇಲ್ಲದ ಮೇಲೆ ಜೀವರಾಶಿಯೂ ಇಲ್ಲ. ಅಂತಯೇ ಎತ್ತ ನೋಡಿದರೂ ಕಲ್ಲು ಬಂಡೆಗಳ ರಾಶಿ. ಹೀಗಿದ್ದ ಭೂಮಿಯಲ್ಲಿ ಶೇ 70 ರಷ್ಟು ನೀರು ಎಲ್ಲಿಂದ ಬಂತು ಎಂಬುದು ಅತ್ಯಂತ ನಿಗೂಢ, ವೈಜ್ಞಾನಿಕ ರಹಸ್ಯಗಳಲ್ಲಿ ಒಂದಾಗಿದೆ. ಇನ್ನೊಂದು ಅಚ್ಚರಿ ಪಡುವ ವಿಷಯವೆಂದರೆ ಭೂಮಿಗಿಂತ ಸೂರ್ಯ ಹಳೆಯದು, ಸೂರ್ಯನಿಗಿಂತ ಭೂಮಿ ಮೇಲಿನ ನೀರು ಹಳೆಯದು!&lt;/p&gt;&lt;img&gt;&lt;p&gt;ಪ್ರಸ್ತುತ ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಸೂರ್ಯ ಭೂಮಿಗಿಂತ ಹಳೆಯದು ಮತ್ತು ಭೂಮಿಯ ಮೇಲಿನ ನೀರು ಸೂರ್ಯನಿಗಿಂತಲೂ ಹಳೆಯದು ಎಂದು ನಂಬಲಾಗಿದೆ. ಆಧುನಿಕ ಖಗೋಳ ಭೌತಶಾಸ್ತ್ರವು ಭೂಮಿಯ ನೀರಿನ ಹೆಚ್ಚಿನ ಭಾಗವು ನಮ್ಮ ಸೌರವ್ಯೂಹದ ಜನನಕ್ಕಿಂತ ಮುಂಚೆಯೇ ಇದೆಯಂತೆ.&lt;/p&gt;&lt;img&gt;&lt;p&gt;ಸೂರ್ಯ ರೂಪುಗೊಳ್ಳುವ ಬಹಳ ಹಿಂದೆಯೇ, ನಮ್ಮ ಸೌರವ್ಯೂಹ ಅಂದರೆ ಈಗ ಇರುವ ಬಾಹ್ಯಾಕಾಶ ಪ್ರದೇಶವು ಅಣು ರೂಪದ ಮೋಡಗಳು ಎಂದು ಕರೆಯಲ್ಪಡುವ ಅನಿಲ ಮತ್ತು ಧೂಳಿನ ದೊಡ್ಡ ಮೋಡಗಳಿಂದ ತುಂಬಿತ್ತು. ಇವುಗಳಲ್ಲಿ ಹೆಪ್ಪುಗಟ್ಟಿದ ಮಂಜುಗಡ್ಡೆಯ ರೂಪದಲ್ಲಿ ನೀರು ಇತ್ತು. ಇದರರ್ಥ ಸೂರ್ಯನ ದಹನಕಾರಿಗಿಂತ ಶತಕೋಟಿ ವರ್ಷಗಳ ಮೊದಲೇ ನೀರಿನ ಅಣುಗಳು ಬಾಹ್ಯಾಕಾಶದಲ್ಲಿ ಇದ್ದವು. ವಿಜ್ಞಾನಿಗಳು 'ಹೆವಿ ವಾಟರ್' ನೀರು ಎಂಬ ನಿರ್ದಿಷ್ಟ ಅಣುವನ್ನು ಬಳಸಿಕೊಂಡು ನೀರಿನ ವಯಸ್ಸನ್ನು ನಿರ್ಧರಿಸಿದ್ದಾರೆ. ಸಂಶೋಧಕರು ಭೂಮಿಯ ನೀರನ್ನು ಅಂತರತಾರಾ ಮಂಜುಗಡ್ಡೆಯೊಂದಿಗೆ ಹೋಲಿಸಿದಾಗ, ಅವರು ಇದೇ ರೀತಿಯ ರಾಸಾಯನಿಕ ಹೊಂದಿಕೆಯಾಗಿರುವುದು ಕಂಡುಬಂದಿದೆ.&lt;/p&gt;&lt;img&gt;&lt;p&gt;ಹೆವಿ ವಾಟರ್ (Heavy Water) ಎಂದರೆ ಸಾಮಾನ್ಯ ನೀರಿನಂತೆಯೇ ಕಾಣುವ ನೀರು. ಆದರೆ ಇದರಲ್ಲಿ ಸಾಮಾನ್ಯ ಹೈಡ್ರೋಜನ್ ಬದಲಿಗೆ ಡ್ಯೂಟೇರಿಯಂ (Deuterium) ಎಂಬ ಭಾರವಾದ ಹೈಡ್ರೋಜನ್ ಅಂಶ ಇರುತ್ತದೆ. ಇದರಿಂದಲೇ ಇದನ್ನು ಹೆವಿ ವಾಟರ್ ಎಂದು ಕರೆಯಲಾಗುತ್ತದೆ. ಇದು ಕುಡಿಯಲು ಬಳಸುವ ನೀರಲ್ಲ. ಮುಖ್ಯವಾಗಿ ಅಣು ವಿದ್ಯುತ್ ಸ್ಥಾವರಗಳಲ್ಲಿ ರಿಯಾಕ್ಟರ್&zwnj;ಗಳನ್ನು ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಹಾಗೂ ವೈಜ್ಞಾನಿಕ ಸಂಶೋಧನೆಗಳಲ್ಲಿ ಬಳಸಲಾಗುತ್ತದೆ. ಭಾರತದ ಹಲವು ಅಣು ವಿದ್ಯುತ್ ಘಟಕಗಳಲ್ಲೂ ಹೆವಿ ವಾಟರ್ ಪ್ರಮುಖ ಪಾತ್ರ ವಹಿಸುತ್ತದೆ.&lt;/p&gt;&lt;p&gt;&lt;strong&gt;ಸೂರ್ಯ ರೂಪುಗೊಂಡಾಗ ಎಲ್ಲವೂ ನಾಶವಾಗಲಿಲ್ಲ&lt;/strong&gt;&lt;/p&gt;&lt;p&gt;ಸೂರ್ಯ ಸುಮಾರು 4.6 ಶತಕೋಟಿ ವರ್ಷಗಳ ಹಿಂದೆ ಅನಿಲ ಮತ್ತು ಧೂಳಿನ ಘರ್ಷಣೆಯಿಂದ ರೂಪುಗೊಂಡಿತು. ಈ ಪ್ರಕ್ರಿಯೆಯು ಸುತ್ತಮುತ್ತಲಿನ ಯಾವುದೇ ನೀರಿನ ಅಣುವನ್ನು ನಾಶಮಾಡುವಷ್ಟು ಅಪಾರ ಶಾಖವನ್ನು ಉತ್ಪಾದಿಸಿತು. ಆದಾಗ್ಯೂ, ಹಳೆಯ ಮಂಜುಗಡ್ಡೆ ಸೂರ್ಯನ ಶಾಖಕ್ಕೂ ನಾಶವಾಗದೆ 30% ರಿಂದ 50% ರಷ್ಟು ಉಳಿದುಕೊಂಡಿತ್ತು ಎಂದು ಅಧ್ಯಯನಗಳು ಹೇಳುತ್ತವೆ.&lt;/p&gt;&lt;img&gt;&lt;p&gt;ಸೂರ್ಯನಿಂದ ನಾಶವಾಗದೆ ಉಳಿದುಕೊಂಡ ಧೂಳಿನ ಮಂಜುಗಡ್ಡೆ((Interstellar ice)ಯು ಧೂಮಕೇತುಗಳು, ಕ್ಷುದ್ರಗ್ರಹಗಳು, ಗ್ರಹಗಳ ವಸ್ತುಗಳ ಭಾಗವಾಯಿತು. ಕಾಲಾನಂತರದಲ್ಲಿ, ಈ ಕಾಯಗಳು ಆರಂಭದಲ್ಲಿ ಭೂಮಿಗೆ ಡಿಕ್ಕಿ ಹೊಡೆದವು, ಗ್ರಹದ ರಚನೆಗೆ ಬಹಳ ಹಿಂದೆಯೇ ಅಸ್ತಿತ್ವದಲ್ಲಿದ್ದ ನೀರನ್ನು ತಂದವು. ಇಂದು ಭೂಮಿಯ ಸಾಗರಗಳಲ್ಲಿರುವ ನೀರಿನ ಒಂದು ಭಾಗವು ವಾಸ್ತವವಾಗಿ ಬಾಹ್ಯಾಕಾಶದಿಂದ ಬಂದಿದೆ.&lt;/p&gt;&lt;p&gt;ಭೂಮಿಯ ನೀರು ಸೂರ್ಯನಿಗಿಂತ ಹಳೆಯದು ಎಂಬ ಕಲ್ಪನೆಯು ನಮ್ಮ ಬ್ರಹ್ಮಾಂಡ ಎಷ್ಟು ಪ್ರಾಚೀನ ಮತ್ತು ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ಇದರಿಂದ ತಿಳಿಯಬಹುದು. ನೀರು ನಮ್ಮ ಜೀವದ ಮೂಲ. ಬೇರೆ ಯಾವುದೇ ಗ್ರಹಗಳಲ್ಲಿ ಕಾಣದ ನೀರು ಭೂಮಿಯ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ಬಂದಿದ್ದೇ ಅಚ್ಚರಿ ಎನಿಸುವುದಿಲ್ಲವೆ? ನಾವು ನೀರಿಲ್ಲದೆ ಬದುಕುವುದಿಲ್ಲ ಎಂದರೆ ಜೀವನದ ಮೂಲಭೂತ ಅಂಶಗಳು ಭೂಮಿಯ ಮೇಲೆ ಹುಟ್ಟಿಕೊಂಡಿಲ್ಲ ಆದರೆ ಬಾಹ್ಯಾಕಾಶದಿಂದ ಬಂದವು ಎಂದು ಸಂಶೋಧನಾ ವರದಿ ತಿಳಿಸುತ್ತದೆ.&lt;/p&gt;]]></content:encoded>
            <category>science</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/science/the-sun-is-older-than-earth-but-earth-s-water-is-older-than-the-sun-pp1tzm5"/>
        </item>
        <item>
            <title><![CDATA[ವಿಜ್ಞಾನಿಗಳಿಗೆ ಸಿಕ್ಕ ರಹಸ್ಯಮಯ ವಸ್ತು... ಬಾಹ್ಯಾಕಾಶದಲ್ಲಿ ತೇಲುತ್ತಿದ್ದ ವಿಚಿತ್ರ ವಸ್ತು ಪತ್ತೆ... ಜೀವದ ಹುಡುಕಾಟಕ್ಕೆ ಹೊಸ ತಿರುವು!]]></title>
            <link>https://kannada.asianetnews.com/science/scientists-find-sugar-floating-in-deep-space-a-historic-breakthrough-in-the-search-for-alien-life/articleshow-r71dmuy</link>
            <guid isPermaLink="true">https://kannada.asianetnews.com/science/scientists-find-sugar-floating-in-deep-space-a-historic-breakthrough-in-the-search-for-alien-life/articleshow-r71dmuy</guid>
            <pubDate>Wed, 15 Jul 2026 08:30:26 +0530</pubDate>
            <description><![CDATA[&lt;p&gt;ನಮ್ಮ ಕ್ಷೀರಪಥ ಗ್ಯಾಲಕ್ಸಿಯ ಮಧ್ಯಭಾಗದ ಆಣ್ವಿಕ ಮೋಡದಲ್ಲಿ ರಾಸ್ಪ್&zwnj;ಬೆರಿ ಹಣ್ಣಿನಲ್ಲಿರುವ 'ಎರಿಥ್ರುಲೋಸ್' ಎಂಬ ನೈಸರ್ಗಿಕ ಸಕ್ಕರೆಯನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಡಿಎನ್&zwnj;ಎ ಹಾಗೂ ಆರ್&zwnj;ಎನ್&zwnj;ಎ ರಚನೆಗೆ ಸಕ್ಕರೆ ಪ್ರಮುಖವಾಗಿರುವುದರಿಂದ, ಈ ಆವಿಷ್ಕಾರವು ಬಾಹ್ಯಾಕಾಶದಲ್ಲಿ ಜೀವದ ಸಾಧ್ಯತೆ ಮತ್ತು ಅನ್ಯಗ್ರಹ ಜೀವಿಗಳ ಹುಡುಕಾಟಕ್ಕೆ ಹೊಸ ದಿಕ್ಕು ನೀಡುವ ನಿರೀಕ್ಷೆ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxghzxccms5zwbg64s1hkxka,imgname-scientists-find-unusual-material-that-could-change-space-research-1784040912268.jpg" type="image/jpeg" height="390" width="690"/>
            <content:encoded><![CDATA[&lt;p&gt;ಬ್ರಹ್ಮಾಂಡದ ಆಳದಲ್ಲಿ ಜೀವಿಗಳ ಹುಡುಕಾಟ ನಡೆಸುತ್ತಿರುವ ವಿಜ್ಞಾನಿಗಳಿಗೆ ಅತ್ಯಂತ ರೋಮಾಂಚನಕಾರಿ ಮತ್ತು ಆಶ್ಚರ್ಯಕರವಾದ ವಿಶಿಷ್ಟ ವಸ್ತುವೊಂದು ಪತ್ತೆಯಾಗಿದೆ. ಇಂಟರ್&zwnj;ಸ್ಟೆಲ್ಲರ್ ಆಕಾಶದಲ್ಲಿ ತೇಲುತ್ತಿರುವ ಈ ವಸ್ತುವು ಜೀವಿಗಳ ಉಗಮಕ್ಕೆ ಕಾರಣವಾಗುವ ಪ್ರಮುಖ ಕೊಂಡಿಯಾಗಿದೆ. ಖಗೋಳವಿಜ್ಞಾನಿಗಳು ನಮ್ಮ ಕ್ಷೀರಪಥ ಗ್ಯಾಲಕ್ಸಿಯ ಮಧ್ಯಭಾಗದಲ್ಲಿರುವ &quot;G+0.693&minus;0.027&quot; ಎಂಬ ದೈತ್ಯ ಆಣ್ವಿಕ ಮೋಡದ ಹತ್ತಿರ ಸಕ್ಕರೆಯ ಅಂಶವೊಂದನ್ನು ಪತ್ತೆಹಚ್ಚಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಸಕ್ಕರೆಯು ಭೂಮಿಯ ಮೇಲಿನ ರಸ್ಬೆರಿ ಹಣ್ಣುಗಳಲ್ಲಿ ಹಾಗೂ ಕೃತಕ ಸನ್&zwnj;ಟ್ಯಾನ್ ಉತ್ಪನ್ನಗಳಲ್ಲಿ ಕಂಡುಬರುವ ನೈಸರ್ಗಿಕ ಸಕ್ಕರೆಯಾದ &quot;ಎರಿಥ್ರುಲೋಸ್&quot; (Erythrulose) ಆಗಿದೆ! ಮಹಾವಿಜ್ಞಾನಿಗಳು ಅತ್ಯಂತ ಸೂಕ್ಷ್ಮವಾದ ರೇಡಿಯೋ ಟೆಲಿಸ್ಕೋಪ್&zwnj;ಗಳನ್ನು ಬಳಸಿ ಈ ಸಂಕೀರ್ಣ ಕಾರ್ಬನ್ ಸಕ್ಕರೆಯನ್ನು ಇಂಟರ್&zwnj;ಸ್ಟೆಲ್ಲರ್ ಮಾಧ್ಯಮದಲ್ಲಿ ಮೊದಲ ಬಾರಿಗೆ ಪತ್ತೆಹಚ್ಚಿದ್ದಾರೆ.&lt;/p&gt;&lt;p&gt;&lt;strong&gt;ಬ್ರಹ್ಮಾಂಡದ ಆಳದಲ್ಲಿ ಪತ್ತೆಯಾದ 'ಸಿಹಿ' ವಸ್ತು!&lt;/strong&gt;&lt;/p&gt;&lt;p&gt;ಖಗೋಳವಿಜ್ಞಾನಿಗಳು ನಮ್ಮ ಕ್ಷೀರಪಥ (Milky Way) ಗ್ಯಾಲಕ್ಸಿಯ ಮಧ್ಯಭಾಗದಲ್ಲಿರುವ &quot;G+0.693&minus;0.027&quot; ಎಂಬ ದೈತ್ಯ ಆಣ್ವಿಕ ಮೋಡದ (Molecular Cloud) ಹತ್ತಿರ ಸಕ್ಕರೆಯ ಅಂಶವೊಂದನ್ನು ಪತ್ತೆಹಚ್ಚಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಸಕ್ಕರೆಯು ಭೂಮಿಯ ಮೇಲಿನ ರಸ್ಬೆರಿ (Raspberries) ಹಣ್ಣುಗಳಲ್ಲಿ ಹಾಗೂ ಕೃತಕ ಸನ್&zwnj;ಟ್ಯಾನ್ (Fake Tan) ಉತ್ಪನ್ನಗಳಲ್ಲಿ ಕಂಡುಬರುವ ನೈಸರ್ಗಿಕ ಸಕ್ಕರೆಯಾದ &quot;ಎರಿಥ್ರುಲೋಸ್&quot; (Erythrulose) ಆಗಿದೆ!&lt;/p&gt;&lt;p&gt;ಮಹಾವಿಜ್ಞಾನಿಗಳು ಅತ್ಯಂತ ಸೂಕ್ಷ್ಮವಾದ ರೇಡಿಯೋ ಟೆಲಿಸ್ಕೋಪ್&zwnj;ಗಳನ್ನು ಬಳಸಿ ಈ ಸಂಕೀರ್ಣ ಕಾರ್ಬನ್ ಸಕ್ಕರೆಯನ್ನು ಇಂಟರ್&zwnj;ಸ್ಟೆಲ್ಲರ್ ಮಾಧ್ಯಮದಲ್ಲಿ ಮೊದಲ ಬಾರಿಗೆ ಪತ್ತೆಹಚ್ಚಿದ್ದಾರೆ.&lt;/p&gt;&lt;p&gt;&lt;strong&gt;ಅನ್ಯಗ್ರಹ ಜೀವಿಗಳ ಹುಡುಕಾಟದಲ್ಲಿ ಇದು ದೊಡ್ಡ ತಿರುವು ಏಕೆ?&lt;/strong&gt;&lt;/p&gt;&lt;ul&gt; &lt;li&gt;&lt;strong&gt;ಜೀವದ ಮೂಲಾಧಾರ:&lt;/strong&gt; ಸಕ್ಕರೆಗಳು ಕೇವಲ ತಿನ್ನುವ ವಸ್ತುವಲ್ಲ; ಅವು ನಮ್ಮ ದೇಹದಲ್ಲಿರುವ ಡಿಎನ್&zwnj;ಎ (DNA) ಮತ್ತು ಆರ್&zwnj;ಎನ್&zwnj;ಎ (RNA) ಗಳ ಬೆನ್ನೆಲುಬಾಗಿವೆ. ಜೀವದ ಉಗಮ ಮತ್ತು ಜೈವಿಕ ಪ್ರಕ್ರಿಯೆಗಳಿಗೆ ಸಕ್ಕರೆಯ ಅಣುಗಳು ಅತ್ಯಗತ್ಯ.&lt;/li&gt; &lt;li&gt;&lt;strong&gt;ಹಳೆಯ ಸಿದ್ಧಾಂತಕ್ಕೆ ಸವಾಲು:&lt;/strong&gt; ಖಗೋಳ ರಸಾಯನಶಾಸ್ತ್ರದ ಹಳೆಯ ಸಿದ್ಧಾಂತದ ಪ್ರಕಾರ, ಬಾಹ್ಯಾಕಾಶದಲ್ಲಿನ ಅಣುಗಳು ಒಂದೊಂದೇ ಕಾರ್ಬನ್ ಪರಮಾಣುಗಳನ್ನು ಸೇರಿಸಿಕೊಳ್ಳುತ್ತಾ ಹಂತ-ಹಂತವಾಗಿ ಬೆಳೆಯುತ್ತವೆ. ಆದರೆ, ನಾಲ್ಕು ಕಾರ್ಬನ್&zwnj;ಗಳನ್ನು ಹೊಂದಿರುವ ಈ ಸಂಕೀರ್ಣ ಎರಿಥ್ರುಲೋಸ್ ಸಕ್ಕರೆ ಪತ್ತೆಯಾಗಿರುವುದು ವಿಜ್ಞಾನಿಗಳಿಗೆ ದೊಡ್ಡ ಅಚ್ಚರಿ ಮೂಡಿಸಿದೆ.&lt;/li&gt; &lt;li&gt;&lt;strong&gt;ಭೂಮಿಗೆ ಬಂದ ಬಾಹ್ಯಾಕಾಶ ಸಕ್ಕರೆ:&lt;/strong&gt; ಸುಮಾರು 4 ಬಿಲಿಯನ್ (400 ಕೋಟಿ) ವರ್ಷಗಳ ಹಿಂದೆ ಭೂಮಿಯ ಮೇಲೆ ಧೂಮಕೇತುಗಳು ಮತ್ತು ಉಲ್ಕಾಪಾತಗಳು ಮಳೆಯಂತೆ ಸುರಿಯುತ್ತಿದ್ದ ಕಾಲದಲ್ಲಿ (Late Heavy Bombardment), ಸುಮಾರು 50 ಲಕ್ಷದಿಂದ 5 ಕೋಟಿ ಟನ್&zwnj;ಗಳಷ್ಟು ಈ ಸಕ್ಕರೆ ಭೂಮಿಗೆ ತಲುಪಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದು ಭೂಮಿಯ ಮೇಲೆ ಮೊದಲ ಬಾರಿಗೆ ಜೀವಿಗಳು ಸೃಷ್ಟಿಯಾಗಲು ಪ್ರೇರಣೆ ನೀಡಿರಬಹುದು.&lt;/li&gt;&lt;/ul&gt;]]></content:encoded>
            <category>science</category>
            <dc:creator>Chandrashekar GS</dc:creator>
            <atom:link href="https://kannada.asianetnews.com/science/scientists-find-sugar-floating-in-deep-space-a-historic-breakthrough-in-the-search-for-alien-life/articleshow-r71dmuy"/>
        </item>
        <item>
            <title><![CDATA[ಚಂದ್ರನ ಬೆಳಕಿನಲ್ಲಿ ಹೊಳೆಯುವ ಭೂಮಿ, ಸಿಡಿಲು ಮಿಂಚುಗಳ ಚಿತ್ತಾರ, ಬಾಹ್ಯಾಕಾಶದಿಂದ ಅದ್ಭುತ ದೃಶ್ಯ ಸೆರೆ]]></title>
            <link>https://kannada.asianetnews.com/science/stunning-video-captures-earth-rotation-with-moonlight-and-lightning-at-night/articleshow-smfygch</link>
            <guid isPermaLink="true">https://kannada.asianetnews.com/science/stunning-video-captures-earth-rotation-with-moonlight-and-lightning-at-night/articleshow-smfygch</guid>
            <pubDate>Tue, 14 Jul 2026 17:01:50 +0530</pubDate>
            <description><![CDATA[&lt;p&gt;ಒಂದು ಇಡೀ ದಿನದಲ್ಲಿ ಭೂಮಿ ಚಲನೆ, ಸೂರ್ಯನ ಬೆಳಕಿನಲ್ಲಿ ಭೂಮಿ, ಚಂದ್ರನ ಬೆಳಕಿನಲ್ಲಿ ಭೂಮಿ, ಸಿಡಿಲು ಮಿಂಚುಗಳ ಅದ್ಭುತ ದೃಶ್ಯವನ್ನು ಬಾಹ್ಯಾಕಾಶದಿಂದ ಸೆರೆ ಹಿಡಿಯಲಾಗಿದೆ. ಈ ವಿಡಿಯೋ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxg60bfhtw78nay55wvxrbtd,imgname-earth-incredible-night-time-footage-goes-viral-1784028343792.png" type="image/jpeg" height="390" width="690"/>
            <content:encoded><![CDATA[&lt;p&gt;ಭೂಮಿ, ಸೂರ್ಯ, ಚಂದ್ರ ಸೇರಿದಂತೆ ಭೂಮಂಡಲ ಕೌತುಕದ ಆಗರ. ಬಾಹ್ಯಾಕಾಶದ ವಿಸ್ಮಯಗಳು, ಭೂಮಿಯ ಚಲನೆ, ಸೂರ್ಯ ಸೇರಿದಂತೆ ಸೌರಮಂಡಲದ ಕುರಿತು ಸಂಶೋಧನೆಗಳು ಅಧ್ಯಯನಗಳು ನಡೆಯುತ್ತಲೇ ಇರುತ್ತದೆ. ವಿಶೇಷ ಅಂದರೆ ಭೂಮಿ ತಿರುಗುತ್ತೆ ಎಂದು ಶಾಲೆಯಿಂದ ಕಲಿಯುತ್ತಾ ಬಂದರೂ ಪ್ರತಿಯೊಬ್ಬರಲ್ಲೂ ಹಲವು ಪ್ರಶ್ನೆಗಳು ಉದ್ಭವಿಸುವುದು ಸಾಮಾನ್ಯ. ಸೂರ್ಯನ ಬೆಳಕಿನಲ್ಲಿ ಭೂಮಿ, ಚಂದ್ರನ ಬೆಳಕಿನ ಭೂಮಿ ಹೇಗೆ ಕಾಣುತ್ತೆ, 24 ದಿನದಲ್ಲಿ ಏನೆಲ್ಲಾ ನಡೆಯುತ್ತೆ ಅನ್ನೋ ಕುರಿತ ಅದ್ಭುತ ವಿಡಿಯೋವನ್ನು ಬಾಹ್ಯಾಕಾಶದಿಂದ ಸೆರೆ ಹಿಡಿಯಲಾಗಿದೆ.&lt;/p&gt;&lt;h2&gt;ಬಾಹ್ಯಾಕಾಶ ನೌಕೆ ವಿಂಡೋದಿಂದ ಅದ್ಭುತ ದೃಶ್ಯ ಸೆರೆ&lt;/h2&gt;&lt;p&gt;ನಾಸಾ ಗಗನಯಾತ್ರಿ ಸೋಫಿ ಅಡೆನಾಟ್ ಬಾಹ್ಯಾಕಾಶದಿಂದ ಭೂಮಿಯ ಸಂಪೂರ್ಣ ಚಲನೆ ವಲನೆಗಳನ್ನು ಸೆರೆ ಹಿಡಿದಿದ್ದಾರೆ. ಸೋಫಿ ಅಡೆನಾಟ್ ಪ್ರಮುಖವಾಗಿ ಭೂಮಿ ಚಂದ್ರನ ಬೆಳಕಿನಲ್ಲಿ ಹೇಗೆ ಕಾಣುತ್ತೆ. ಇದೇ ವೇಳೆ ಭೂಮಿ ಚಲನೆ, ಆಗಸದಲ್ಲಿನ ಮಿಂಚು ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಸೆರೆ ಹಿಡಿಯಲಾಗಿದೆ. ಬಾಹ್ಯಾಕಾಶ ನೌಕೆಯ ವಿಂಡೋದಿಂದ ಈ ವಿಡಿಯೋ ಸೆರೆ ಹಿಡಿಯಲಾಗಿದೆ. ಇದೇ ವೇಳೆ ಇಲ್ಲಿಂದ ಕಣ್ಣಾರೆ ನೋಡುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸಾಟಿಯಾಗಲಾರದು. ಕಣ್ಣಿಗೆ ಕಾಣುವ ಅದ್ಭುತ ದೃಶ್ಯವನ್ನು ಕ್ಯಾಮೆರಾ ಅಷ್ಟೇ ಅದ್ಭುತವಾಗಿ ಸೆರೆಹಿಡಿಯುವುದಿಲ್ಲ ಎಂದಿದ್ದಾರೆ. ನಮ್ಮ ಕಣ್ಣಿನಿಂದ ನೋಡುವುದೇ ಅದ್ಭುತ ಅನುಭವ ಎಂದಿದ್ದಾರೆ.&lt;/p&gt;&lt;p&gt;ಭೂಮಿಯ ಮೇಲಿರುವ ಬಾಹ್ಯಾಕಾಶ ನೌಕೆ ಸುತ್ತುವ ಕಾರಣ ಭೂಮಿ ಚಲನೆ, ಪ್ರಕ್ರಿಯೆಗಳನ್ನು ಸೆರೆ ಹಿಡಿಯಲಾಗಿದೆ. ಭೂಮಿ ಯಾವ ರೀತಿ ತಿರುಗುತ್ತೆ ಅನ್ನೋದು ಗಮನಿಸಬಹುಗು. ಮಿಂಚು ಹುಳದಂತೆ ಮಿನುಗುವ ಸಿಡಿಲು ಮಿಂಚು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಚಂದ್ರ ಉದಯಿಸುತ್ತಿರುವ ದೃಶ್ಯ, ಚಂದ್ರನ ಬೆಳಕಿನಲ್ಲಿ ಇಡಿ ಭೂಮಿ ಮೇಲಿನ ಪ್ರಕ್ರಿಯೆಗಳು ಸೆರೆಯಾಗಿದೆ.ಕತ್ತಲೆಯ ನಡುವೆ ಹರಡಿರುವ ನಗರಗಳ ಬೆಳಕಿನ ವಿನ್ಯಾಸಗಳು, ಮೋಡಗಳ ಚಲನೆ ಹಾಗೂ ವಾತಾವರಣದ ತೆಳುವಾದ ಪದರವು ಅತ್ಯಂತ ಸ್ಪಷ್ಟವಾಗಿ ಸೆರೆಯಾಗಿದೆ. ಈ ಅದ್ಭುತ ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.&lt;/p&gt;&lt;p&gt;ಬಾಹ್ಯಾಕಾಶ ನೌಕೆಯ ಕಿಟಕಿಯಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ, ನಾನಾಗಿದ್ದರೆ ಈ ದೃಶ್ಯ ನೋಡುತ್ತಾ ಕುಳಿತುಕೊಳ್ಳುತ್ತಿದ್ದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಅದು ನಂಬಲು ಅಸಾಧ್ಯವಾದ ಅದ್ಭುತ ದೃಶ್ಯ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Jour 150, orbite 2326 &mdash; L&rsquo;une de mes vues pr&eacute;f&eacute;r&eacute;es depuis l&rsquo;orbite : La Terre de nuit ✨, illumin&eacute;e par les activit&eacute;s humaines et les ph&eacute;nom&egrave;nes naturels. Que notre plan&egrave;te est belle ! @ESA / @NASA#&epsilon;psilon &bull; @esaspaceflight &bull; @ESA_fr &bull; @Space_Station &bull; @NASAJohnson&hellip; pic.twitter.com/y9FTcM36Lb&lt;/p&gt;&lt;p&gt;&mdash; Adenot Sophie (@Soph_astro) July 13, 2026&lt;/p&gt;&lt;p&gt;&lt;/p&gt;]]></content:encoded>
            <category>science</category>
            <dc:creator>Chethan Kumar</dc:creator>
            <atom:link href="https://kannada.asianetnews.com/science/stunning-video-captures-earth-rotation-with-moonlight-and-lightning-at-night/articleshow-smfygch"/>
        </item>
        <item>
            <title><![CDATA[ಕಲ್ಪನಾ, ಸುನಿತಾ ಹಾದಿಯಲ್ಲೇ ಅನಿಲ್ ಮೆನನ್.. ಇಂದು ಬಾಹ್ಯಾಕಾಶಕ್ಕೆ ಮತ್ತೊಬ್ಬ ಭಾರತೀಯ!]]></title>
            <link>https://kannada.asianetnews.com/gallery/science/who-is-anil-menon-indian-origin-nasa-astronaut-anil-menon-flying-to-space-tonight-gkn-xhz57gr</link>
            <guid isPermaLink="true">https://kannada.asianetnews.com/gallery/science/who-is-anil-menon-indian-origin-nasa-astronaut-anil-menon-flying-to-space-tonight-gkn-xhz57gr</guid>
            <pubDate>Tue, 14 Jul 2026 15:39:32 +0530</pubDate>
            <description><![CDATA[&lt;p&gt;ಭಾರತೀಯ ಮೂಲದ ಮತ್ತೊಬ್ಬ ಪ್ರತಿಭೆ ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ. ಕಲ್ಪನಾ ಚಾವ್ಲಾ, &amp;nbsp;ಸುನಿತಾ ವಿಲಿಯಮ್ಸ್ ಅವರ ಸಾಲಿಗೆ ಸೇರ್ಪಡೆಯಾಗಲಿರುವ ಅನಿಲ್ ಮೆನನ್ ಅವರ ಈ ಪಯಣ ಕೇವಲ ವೈಯಕ್ತಿಕ ಸಾಧನೆಯಲ್ಲ, ಇದು ಶತಕೋಟಿ ಭಾರತೀಯರ ಹೆಮ್ಮೆಯ ಕ್ಷಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxg1a3wg09mx18z0s3dp4h4s,imgname-anil-menon--7--1784023420816.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಮೂಲದ ಮತ್ತೊಬ್ಬ ಪ್ರತಿಭೆ ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ. ಕಲ್ಪನಾ ಚಾವ್ಲಾ, &amp;nbsp;ಸುನಿತಾ ವಿಲಿಯಮ್ಸ್ ಅವರ ಸಾಲಿಗೆ ಸೇರ್ಪಡೆಯಾಗಲಿರುವ ಅನಿಲ್ ಮೆನನ್ ಅವರ ಈ ಪಯಣ ಕೇವಲ ವೈಯಕ್ತಿಕ ಸಾಧನೆಯಲ್ಲ, ಇದು ಶತಕೋಟಿ ಭಾರತೀಯರ ಹೆಮ್ಮೆಯ ಕ್ಷಣವಾಗಿದೆ.&lt;/p&gt;&lt;img&gt;&lt;p&gt;ಭಾರತೀಯ ಮೂಲದ ಮತ್ತೊಬ್ಬ ವಿಜ್ಞಾನಿ ಬಾಹ್ಯಾಕಾಶ ಲೋಕದಲ್ಲಿ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. NASA ಗಗನಯಾತ್ರಿ ಅನಿಲ್ ಮೆನನ್ ಅವರು ಇಂದು ಚೊಚ್ಚಲ ಬಾಹ್ಯಾಕಾಶ ಪ್ರಯಾಣ ಕೈಗೊಳ್ಳಲಿದ್ದಾರೆ. ರಷ್ಯಾದ ಸೋಯುಜ್ ಎಂಎಸ್-29 (Soyuz MS-29) ಗಗನನೌಕೆಯ ಮೂಲಕ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸಲಿದ್ದಾರೆ.&lt;/p&gt;&lt;img&gt;&lt;p&gt;ಕಝಾಕಿಸ್ತಾನ್&zwnj;ನ ಬೈಕೊನೂರ್ ಕಾಸ್ಮೊಡ್ರೋಮ್&zwnj;ನಿಂದ ಇಂದು ಭಾರತೀಯ ಕಾಲಮಾನ ರಾತ್ರಿ 8:17ಕ್ಕೆ ಸೋಯುಜ್ ರಾಕೆಟ್ ಉಡಾವಣೆಯಾಗಲಿದೆ. ಅನಿಲ್ ಮೆನನ್ ಅವರೊಂದಿಗೆ ರಷ್ಯಾದ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್ ಮತ್ತು ಅನ್ನಾ ಕಿಕಿನಾ ಕೂಡ ಪ್ರಯಾಣಿಸಲಿದ್ದಾರೆ. ಕೇವಲ ಮೂರು ಗಂಟೆಗಳ ಪ್ರಯಾಣದ ನಂತರ ಅಂದರೆ ರಾತ್ರಿ ಸುಮಾರು 11:26ಕ್ಕೆ ಇವರು ಬಾಹ್ಯಾಕಾಶ ನಿಲ್ದಾಣ ತಲುಪಲಿದ್ದಾರೆ.&lt;/p&gt;&lt;img&gt;&lt;p&gt;ಸುಮಾರು 8 ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಹೂಡಲಿರುವ ಈ ತಂಡವು 'ಎಕ್ಸ್&zwnj;ಪೆಡಿಶನ್ 74' ಮಿಷನ್&zwnj;ನ ಭಾಗವಾಗಿರಲಿದೆ. ಅಲ್ಲಿ ಅವರು ಹಲವು ಪ್ರಮುಖ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.&lt;/p&gt;&lt;img&gt;&lt;p&gt;ಭವಿಷ್ಯದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಸುಧಾರಿಸಲು ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಉತ್ತಮ ಗುಣಮಟ್ಟದ ಸೆಮಿಕಂಡಕ್ಟರ್ ಹರಳುಗಳನ್ನು ಬೆಳೆಸುವ ಬಗ್ಗೆ ಸಂಶೋಧನೆ ನಡೆಸಲಿದ್ದಾರೆ.&lt;/p&gt;&lt;img&gt;&lt;p&gt;ಭೂಮಿಯ ಮೇಲಿರುವ ವೈದ್ಯರ ನೇರ ಸಂಪರ್ಕವಿಲ್ಲದೆಯೇ ಗಗನಯಾತ್ರಿಗಳು ಸ್ವತಃ ಮೆಡಿಕಲ್ ಸ್ಕ್ಯಾನಿಂಗ್ ಮಾಡಿಕೊಳ್ಳಲು ನೆರವಾಗುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಪರೀಕ್ಷಿಸಲಿದ್ದಾರೆ.&lt;/p&gt;&lt;img&gt;&lt;p&gt;ಬಾಹ್ಯಾಕಾಶದಲ್ಲಿ ರಕ್ತ ಪರಿಚಲನೆ ಹೇಗೆ ಬದಲಾಗುತ್ತದೆ ಮತ್ತು ಅಂಗಾಂಶಗಳ ದುರಸ್ತಿಗೆ ಸಂಬಂಧಿಸಿದ ಬಯೋಪ್ರಿಂಟಿಂಗ್ ತಂತ್ರಜ್ಞಾನದ ಬಗ್ಗೆಯೂ ಅವರು ಅಧ್ಯಯನ ನಡೆಸಲಿದ್ದಾರೆ.&lt;/p&gt;&lt;img&gt;&lt;p&gt;ಅನಿಲ್ ಮೆನನ್ ಅವರ ಹಿನ್ನೆಲೆ ಸ್ಫೂರ್ತಿದಾಯಕವಾಗಿದೆ. ಅನಿಲ್ ತಂದೆ ಕೇರಳ ಮೂಲದ ಭಾರತೀಯರು ಮತ್ತು ತಾಯಿ ಉಕ್ರೇನ್ ಮೂಲದವರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನ್ಯೂರೋಬಯಾಲಜಿಯಲ್ಲಿ ಪದವಿ ಪಡೆದಿರುವ ಇವರು, ಸ್ಟ್ಯಾನ್&zwnj;ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ (M.D.) ಪೂರೈಸಿದ್ದಾರೆ. ನಾಸಾ ಸೇರುವ ಮುನ್ನ ಇವರು ಎಲೋನ್ ಮಾಸ್ಕ್ ಅವರ SpaceX ಕಂಪನಿಯ ಮೊದಲ 'ಫ್ಲೈಟ್ ಸರ್ಜನ್' ಆಗಿ ಕೆಲಸ ಮಾಡಿದ್ದರು. ಪ್ರಸ್ತುತ ಅವರು ಅಮೆರಿಕ ಬಾಹ್ಯಾಕಾಶ ಪಡೆಯಲ್ಲಿ (US Space Force) ಕರ್ನಲ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅನಿಲ್ ಅವರ ಪತ್ನಿ ಅನ್ನಾ ಮೆನನ್ ಕೂಡ ಖ್ಯಾತ ಗಗನಯಾನಿಯಾಗಿದ್ದು, ಅವರು ಇತ್ತೀಚೆಗಷ್ಟೇ ಖಾಸಗಿ ಬಾಹ್ಯಾಕಾಶ ಮಿಷನ್ ಮೂಲಕ ಸುದ್ದಿಯಾಗಿದ್ದರು.&lt;/p&gt;&lt;img&gt;&lt;p&gt;ಈ ಐತಿಹಾಸಿಕ ಕ್ಷಣವನ್ನು ನಾಸಾ ತನ್ನ 'NASA+' ಸ್ಟ್ರೀಮಿಂಗ್ ಪ್ಲಾಟ್&zwnj;ಫಾರ್ಮ್ ಹಾಗೂ ಅಧಿಕೃತ ಯೂಟ್ಯೂಬ್ ಚಾನೆಲ್&zwnj;ನಲ್ಲಿ ನೇರ ಪ್ರಸಾರ ಮಾಡಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 8 ತಿಂಗಳ ಸುದೀರ್ಘ ಸಂಶೋಧನೆಯ ನಂತರ ಅನಿಲ್ ಮೆನನ್ ಮತ್ತು ತಂಡವು 2027ರ ಏಪ್ರಿಲ್&zwnj;ನಲ್ಲಿ ಭೂಮಿಗೆ ಮರಳಲಿದೆ. ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರ ನಂತರ ಬಾಹ್ಯಾಕಾಶಕ್ಕೆ ಹಾರುತ್ತಿರುವ ಭಾರತೀಯ ಮೂಲದ ಪ್ರಮುಖ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅನಿಲ್ ಮೆನನ್ ಪಾತ್ರರಾಗಿದ್ದಾರೆ.&lt;/p&gt;]]></content:encoded>
            <category>science</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/science/who-is-anil-menon-indian-origin-nasa-astronaut-anil-menon-flying-to-space-tonight-gkn-xhz57gr"/>
        </item>
        <item>
            <title><![CDATA[ಆಕಾಶಕ್ಕೆ ಕನ್ನಡಿ ಹಾಕಿ ಭೂಮಿಗೆ ಟಾರ್ಚ್‌ ಹಿಡಿಯುವ ಪ್ರಯೋಗಕ್ಕೆ ಅಮೆರಿಕಾ ಒಪ್ಪಿಗೆ]]></title>
            <link>https://kannada.asianetnews.com/science/reflect-orbital-plans-to-deploy-giant-mirrors-in-space-to-reflect-sunlight-back-to-earth-mrq/articleshow-z82el2f</link>
            <guid isPermaLink="true">https://kannada.asianetnews.com/science/reflect-orbital-plans-to-deploy-giant-mirrors-in-space-to-reflect-sunlight-back-to-earth-mrq/articleshow-z82el2f</guid>
            <pubDate>Sun, 12 Jul 2026 07:04:30 +0530</pubDate>
            <description><![CDATA[ರಿಫ್ಲೆಕ್ಟ್&zwnj; ಆರ್ಬಿಟಲ್&zwnj; ಕಂಪನಿಯು ಬಾಹ್ಯಾಕಾಶದಲ್ಲಿ ಬೃಹತ್ ಕನ್ನಡಿಗಳನ್ನು ಅಳವಡಿಸಿ, ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಯೋಜನೆಗೆ ಅನುಮತಿ ಪಡೆದಿದೆ. ಈ ತಂತ್ರಜ್ಞಾನವು ಕೃಷಿ ಮತ್ತು ತುರ್ತು ಸಂದರ್ಭಗಳಲ್ಲಿ ನೆರವಾಗುವ ಗುರಿ ಹೊಂದಿದ್ದರೂ, ಖಗೋಳ ತಜ್ಞರು ಇದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx9z8kx8qtmq0b9z0v28v2s4,imgname-reflect-orbital-plans-1783819947944.jpg" type="image/jpeg" height="390" width="690"/>
            <content:encoded><![CDATA[&lt;p&gt;ವ್ಯಾಂಕೋವರ್&zwnj;: ಖಗೋಳ ತಜ್ಞರು, ಸಾರ್ವಜನಿಕರ ವಿರೋಧದ ನಡುವೆಯೂ ರಿಫ್ಲೆಕ್ಟ್&zwnj; ಆರ್ಬಿಟಲ್&zwnj; ಕಂಪನಿಯ ಬಾಹ್ಯಾಕಾಶದಲ್ಲಿ ಬೃಹತ್&zwnj; ಕನ್ನಡಿಯನ್ನೊಳಗೊಂಡ ಉಪಗ್ರಹದ ಮೂಲಕ ಬೆಳಕನ್ನು ಪ್ರತಿಫಲಿಸುವ ಪ್ರಯೋಗಕ್ಕೆ ಅಮೆರಿಕದ ಸಂವಹನ ಆಯೋಗವು ಒಪ್ಪಿಗೆ ನೀಡಿದೆ.&lt;/p&gt;&lt;p&gt;ರಿಫ್ಲೆಕ್ಟ್&zwnj; ಆರ್ಬಿಟಲ್&zwnj; ಕಂಪನಿಯು ಮೊದಲಿಗೆ ಒಂದು ಎರಾಂಡಿಲ್&zwnj;-1 ಉಪಗ್ರಹದ ಮೂಲಕ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಪ್ರಯೋಗ ನಡೆಸಲು ಅವಕಾಶ ಪಡೆದಿದೆ. ಈ ಮೂಲಕ ಕತ್ತಲೆಯಲ್ಲೂ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಪ್ರಯೋಗ ನಡೆಸಲಾಗುತ್ತದೆ. ಈ ಬೆಳಕು ಸುಮಾರು 5 ಕಿ.ಮೀ. ವ್ಯಾಪ್ತಿ ಹೊಂದಿರಲಿದ್ದು, ಪ್ರತಿ ನಾಲ್ಕು ನಿಮಿಷಗಳಿಗೆ ಬೆಳಕನ್ನು ಮರು ನಿರ್ದೇಶನ ಮಾಡಬೇಕಾಗುತ್ತದೆ.&lt;/p&gt;&lt;h2&gt;&lt;strong&gt;50 ಸಾವಿರ ಉಪಗ್ರಹ&lt;/strong&gt;&lt;/h2&gt;&lt;p&gt;ಇದು ಆರಂಭ ಅಷ್ಟೆ, ರಿಫ್ಟೆಕ್ಟ್&zwnj; ಆರ್ಬಿಟಲ್&zwnj; ಇಂಥ 50 ಸಾವಿರ ಉಪಗ್ರಹಗಳನ್ನು 2035ರ ಹೊತ್ತಿಗೆ ಬಾಹ್ಯಾಕಾಶಕ್ಕೆ ಕಳುಹಿಸಲು ಉದ್ದೇಶಿಸಿದೆ. ಈ ಉಪಗ್ರಹಗಳು 60 ಅಡಿ ಉದ್ದ 60 ಅಡಿ ಅಗಲದ ಕನ್ನಡಿಯನ್ನು ಹೊಂದಿರಲಿವೆ. ಇವು ಬಾಹ್ಯಾಕಾಶದಿಂದ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸಲಿವೆ. ಕೃಷಿ, ನೈಸರ್ಗಿಕ ವಿಕೋಪದಂಥ ತುರ್ತು ಸಂದರ್ಭ ಹಾಗೂ ಉದ್ಯಮ ಕ್ಷೇತ್ರಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಬೇಡಿಕೆ ಇಟ್ಟರೆ ರಾತ್ರಿ ಹೊತ್ತಿನಲ್ಲೂ ನಿರ್ದಿಷ್ಟ ಪ್ರದೇಶಕ್ಕೆ ಬೆಳಕಿನ ವ್ಯವಸ್ಥೆ ಮಾಡುವ ಉದ್ದೇಶ ಕಂಪನಿಯದ್ದಾಗಿದೆ.&lt;/p&gt;&lt;p&gt;ಆದರೆ, ಈ ಪ್ರಯೋಗದಿಂದ ಮಾನವನ ಆರೋಗ್ಯ, ಸುರಕ್ಷತೆ, ಖಗೋಳ ಮತ್ತು ಕೆಳ ಭೂವಾತಾವರಣದ ಮೇಲೆ ಅನೇಕ ಅಡ್ಡಪರಿಣಾಮಗಳೂ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;&lt;p&gt;ಕನ್ನಡಿಯ ಪ್ರತಿಫಲನವು ಪೈಲಟ್&zwnj;ಗಳು ಹಾಗೂ ಚಾಲಕರಿಗೆ ಕಿರಿಕಿರಿ ಉಂಟು ಮಾಡಬಹುದು. ಸಸ್ಯಗಳು, ಪ್ರಾಣಿಗಳ ದೇಹದ ನೈಸರ್ಗಿಕ ಗಡಿಯಾರದಲ್ಲಿ ಬದಲಾವಣೆಗೆ ಕಾರಣವಾಗಬಹುದು. ಇತರೆ ಉಪಗ್ರಹಗಳಿಗೂ ಸಮಸ್ಯೆ ತಂದಿಡಬಹುದು ಎಂದು ಹೇಳಲಾಗಿದೆ.&lt;/p&gt;]]></content:encoded>
            <category>science</category>
            <dc:creator>Kannadaprabha News</dc:creator>
            <atom:link href="https://kannada.asianetnews.com/science/reflect-orbital-plans-to-deploy-giant-mirrors-in-space-to-reflect-sunlight-back-to-earth-mrq/articleshow-z82el2f"/>
        </item>
    </channel>
</rss>
