<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 30 Jul 2026 23:41:32 +0530</lastBuildDate>
        <atom:link href="https://kannada.asianetnews.com/rss/sandalwood" rel="self" type="application/rss+xml"/>
        <item>
            <title><![CDATA[ಸಂಭಾವನೆ ಕಡಿಮೆ ಮಾಡಲು ಸಿದ್ಧ ಎಂದ ಪ್ರಜ್ವಲ್ ದೇವರಾಜ್: ಆದರೆ ಈ ಷರತ್ತು ಅನಿವಾರ್ಯ!]]></title>
            <link>https://kannada.asianetnews.com/sandalwood/prajwal-devaraj-opens-up-on-karavali-controversy-and-save-sandalwood-gvd/articleshow-s3exk6k</link>
            <guid isPermaLink="true">https://kannada.asianetnews.com/sandalwood/prajwal-devaraj-opens-up-on-karavali-controversy-and-save-sandalwood-gvd/articleshow-s3exk6k</guid>
            <pubDate>Thu, 30 Jul 2026 23:41:27 +0530</pubDate>
            <description><![CDATA[&lt;p&gt;Save Sandalwood: ಕತೆ ಅಥವಾ ಸ್ಕ್ರಿಫ್ಟ್&zwnj;ಗಿಂತ ಹೀರೋ ದೊಡ್ಡವರಲ್ಲ. ಒಬ್ಬ ಕಲಾವಿದ ಅಥವಾ ಕಲಾವಿದೆಗೆ ಬೇರೆ ಬೇರೆ ರೀತಿಯ ಪಾತ್ರಗಳು, ಸನ್ನಿವೇಶಗಳನ್ನು ಬರೆಯುವ ರೈಟರ್&zwnj;ಗಳು ಬರಬೇಕು ಎಂದರು ಪ್ರಜ್ವಲ್ ದೇವರಾಜ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyt1az627e75ferrm02cqkfj,imgname-bjjb-1785432734914.png" type="image/jpeg" height="390" width="690"/>
            <content:encoded><![CDATA[&lt;p&gt;- ನನ್ನ ನಟನೆಯ &lsquo;ಕರಾವಳಿ&rsquo; ಚಿತ್ರಕ್ಕೆ ಎಲ್ಲಾ ಕಡೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಒಳ್ಳೆಯ ಸಿನಿಮಾಗಳನ್ನು ಮಾಡಿದರೆ ಜನ ನಮ್ಮನ್ನು ಕೈ ಬಿಡಲ್ಲ. ಇವತ್ತಿನ ಚಿತ್ರರಂಗದ ಪರಿಸ್ಥಿತಿಯಿಂದ ಆಚೆ ಬರಬೇಕು ಅಂದರೆ ನಾವೆಲ್ಲ ಮಾಡಬೇಕಿರುವೋದು ಒಳ್ಳೆಯ ಸಿನಿಮಾಗಳನ್ನು ಮಾತ್ರ.&lt;/p&gt;&lt;p&gt;- ನಾವು ಇಡೀ ಜಗತ್ತನ್ನು ಮೆಚ್ಚಿಸಬೇಕಿಲ್ಲ. ನಮ್ಮ ಪ್ರೇಕ್ಷಕರನ್ನು ಮೆಚ್ಚಿಸುವ ಕತೆಗಳನ್ನು ರೂಪಿಸಬೇಕು. ಇಡೀ ಭಾರತೀಯ ಚಿತ್ರರಂಗದ ಪೈಕಿ ಸೌತ್&zwnj; ಇಂಡಿಯಾದಲ್ಲಿ ಸಿನಿಮಾ ಮತ್ತು ಸಿನಿಮಾ ಮಂದಿಯನ್ನು ಜನ ತುಂಬಾ ಭಾವನಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಅವರ ಬಾಂಡಿಂಗ್&zwnj; ಜೊತೆಗೆ ಕನೆಕ್ಟ್&zwnj; ಆಗುವ ಸಿನಿಮಾ ಮಾಡಬೇಕು.&lt;/p&gt;&lt;p&gt;- ನನ್ನ ಪ್ರಕಾರ ಪ್ರೀ- ಪ್ರೊಡಕ್ಷನ್&zwnj; ಕೆಲಸಗಳು ಪರ್ಫೆಕ್ಟ್&zwnj; ಆದರೆ ಚಿತ್ರೋದ್ಯಮದ ಅರ್ಥ ಸಮಸ್ಯೆಗಳು ತೀರಿದಂತೆ. ಈ ಪ್ರೀ- ಪ್ರೊಡಕ್ಷನ್&zwnj; ಕೆಲಸಗಳು ಪಕ್ಕಾ ಪ್ಲಾನಿಂಗ್&zwnj; ಮಾಡಿಕೊಂಡರೆ ಚಿತ್ರವೊಂದಕ್ಕೆ ಕೆಲಸ ಮಾಡುವ ಪ್ರತಿಯೊಬ್ಬರು ಅಕೌಂಟೇಬಲ್&zwnj;- ಜವಾಬ್ದಾರಿಗಳಾಗಿರುತ್ತಾರೆ. ಇದರಿಂದ ಶೂಟಿಂಗ್&zwnj; ಡೇಟ್ಸ್&zwnj; ಕಡಿಮೆ ಆಗುತ್ತದೆ, ಬಜೆಟ್&zwnj; ಅನ್ನೋ ಭಾರ ಕೈ ಮೀರಲ್ಲ, ಅಂದುಕೊಂಡ ಸಮಯಕ್ಕೆ ಅಂದುಕೊಂಡಂತೆ ಸಿನಿಮಾ ತೆರೆಗೆ ಬರುತ್ತದೆ.&lt;/p&gt;&lt;p&gt;- ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕೆಂಬ ಮಾತು ತಪ್ಪಲ್ಲ. ಯಾಕೆಂದರೆ ಚಿತ್ರರಂಗ ಅನ್ನೋದು ಕುಟುಂಬ. ನಾವೆಲ್ಲ ಅದರ ಸದಸ್ಯರು. ನಿರ್ಮಾಪಕರಿಗೆ ಒಳ್ಳೆಯದಾಗುತ್ತದೆ, ಚಿತ್ರರಂಗಕ್ಕೆ ಹೊಸ ಚೈತನ್ಯ ಬರುತ್ತದೆ ಎಂದರೆ ಕಲಾವಿದರಾಗಿ ನಾವು ಸಂಭಾವನೆ ಕಡಿಮೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ. ನಾನೇ ಬಹಳಷ್ಟು ಸಲ ಸಂಭಾವನೆ ಬಿಟ್ಟಿದ್ದೇನೆ. ಇತ್ತೀಚೆಗೆ ಹೀಗೆ ಬಿಟ್ಟುಕೊಟ್ಟ ಸಂಭಾವನೆ ರೂ.1.5 ಕೋಟಿಯಷ್ಟಿದೆ. ಆದರೆ, ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಕಲಾವಿದರ ವಿಚಾರದಲ್ಲೂ ಅಷ್ಟೇ ಒಳ್ಳೆಯತನ, ಸೌಹಾರ್ದತೆ ತೋರಬೇಕಲ್ಲ! &lsquo;ಕರಾವಳಿ&rsquo; ಚಿತ್ರದ ವಿವಾದದ ಹೊತ್ತಿನಲ್ಲಿ ನನ್ನ ಸಂಭಾವನೆ ವಿಚಾರವೂ ಹೊರಗೆ ಬಂತು. ಅಷ್ಟು ಸಂಭಾವನೆ ನಾನು ತೆಗೆದುಕೊಂಡಿರುವುದು ಒಂದು ಸಿನಿಮಾಗೆ ಅಂತಲ್ಲ, ಮೂರು ವರ್ಷ ಬೇರೆ ಯಾವುದೇ ಸಿನಿಮಾ ಮಾಡಬಾರದು ಅಂತ.&lt;/p&gt;&lt;p&gt;- ಇಷ್ಟು ವರ್ಷಗಳಲ್ಲಿ ಸಿನಿಮಾ ಕಾರಣಕ್ಕೆ ನಾನು ಯಾವುದೇ ವಿವಾದ ಮಾಡಿಕೊಂಡವಲ್ಲ. &lsquo;ಕರಾವಳಿ&rsquo; ಚಿತ್ರದ ಘಟನೆಯನ್ನೂ ವಿವಾದ, ಗಲಾಟೆ ಅಂತ ಹೇಳಲ್ಲ. ನನ್ನ ಧ್ವನಿ ಇಲ್ಲ ಅನ್ನೋದು ಬೇಸರ ಬಿಟ್ಟರೆ ಬೇರೆ ಏನೂ ಇಲ್ಲ. ಸಿನಿಮಾ ನಮ್ಮೆಲ್ಲರಿಗಿಂತ ದೊಡ್ಡದು. ಅವತ್ತು ಹೇಳಿದ್ದ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಆದರೆ, ಪಾಠ ಕಲಿತಿದ್ದೇನೆ. ಇನ್ನು ಮುಂದೆ ಅಗ್ರಿಮೆಂಟ್&zwnj; ಇಲ್ಲದೆ ಸಿನಿಮಾ ಮಾಡಬಾರದು.&lt;/p&gt;&lt;p&gt;- ಕತೆ ಅಥವಾ ಸ್ಕ್ರಿಫ್ಟ್&zwnj;ಗಿಂತ ಹೀರೋ ದೊಡ್ಡವರಲ್ಲ. ಒಬ್ಬ ಕಲಾವಿದ ಅಥವಾ ಕಲಾವಿದೆಗೆ ಬೇರೆ ಬೇರೆ ರೀತಿಯ ಪಾತ್ರಗಳು, ಸನ್ನಿವೇಶಗಳನ್ನು ಬರೆಯುವ ರೈಟರ್&zwnj;ಗಳು ಬರಬೇಕು. ನಿರ್ದೇಶಕ ತಾನು ನರೇಟ್&zwnj; ಮಾಡುವ ಕತೆಯನ್ನು ಹಾಗೆಯೇ ತೆರೆ ಮೇಲೆ ತರಬೇಕು, ಈ ಪ್ರಯಾಣಕ್ಕೆ ನಿರ್ಮಾಪಕ ಜೊತೆಯಾಗಿ ನಿಲ್ಲಬೇಕು. ಒಂದೇ ಮಾತಿನಲ್ಲಿ ಹೇಳೋದಾದರೆ ನಾವೆಲ್ಲ ಸ್ಕ್ರಿಪ್ಟ್&zwnj;ಗೆ ಶರಣಾದರೆ ಸಿನಿಮಾ ಎಲ್ಲರಿಗಿಂತ ದೊಡ್ಡದಾಗಿ ಕಾಣುತ್ತದೆ.&lt;/p&gt;&lt;h2&gt;&lt;strong&gt;ನಾನೂ ನಿರ್ಮಾಪಕನಾಗುತ್ತಿದ್ದೇನೆ&lt;/strong&gt;&lt;/h2&gt;&lt;p&gt;ನಾನೂ ಕೂಡ ನಿರ್ಮಾಪಕ ಆಗುತ್ತಿದ್ದೇನೆ. ಅದರ ಪ್ರೀ ಪ್ರೊಡಕ್ಷನ್&zwnj; ಕೆಲಸಗಳು ಸಾಗುತ್ತಿವೆ. ಸದ್ಯದಲ್ಲೇ ಈ ಬಗ್ಗೆ ಎಲ್ಲಾ ಮಾಹಿತಿಗಳೊಂದಿಗೆ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ. ಪ್ರೀ- ಪ್ರೊಡಕ್ಷನ್&zwnj;ಗೆ ನಾನು ತುಂಬಾ ಮಹತ್ವ ಕೊಡುತ್ತಿದ್ದೇನೆ. ಕತೆನೇ ಹೀರೋ ಆಗಬೇಕು ಎಂದು ನನ್ನ ತಂಡಕ್ಕೆ ಹೇಳಿದ್ದೇನೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/prajwal-devaraj-opens-up-on-karavali-controversy-and-save-sandalwood-gvd/articleshow-s3exk6k"/>
        </item>
        <item>
            <title><![CDATA[ರಾವಣನಾಗಿ ಯಶ್ ಅವರನ್ನು ನೋಡಿ ಬೆರಗಾದೆ: ರಾಮಾಯಣ ಟ್ರೇಲರ್‌ ನೋಡಿ ರಿಷಬ್ ಶೆಟ್ಟಿ ಹೇಳಿದ್ದೇನು?]]></title>
            <link>https://kannada.asianetnews.com/entertainment/rishab-shetty-showers-praise-on-yashs-ravana-in-ramayana-trailer-gvd/articleshow-3786k9w</link>
            <guid isPermaLink="true">https://kannada.asianetnews.com/entertainment/rishab-shetty-showers-praise-on-yashs-ravana-in-ramayana-trailer-gvd/articleshow-3786k9w</guid>
            <pubDate>Thu, 30 Jul 2026 22:49:16 +0530</pubDate>
            <description><![CDATA[&lt;p&gt;Rishab Shetty: 'ರಾಮಾಯಣ' ಸಿನಿಮಾದ ಟ್ರೇಲರ್&zwnj; ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂಬಿಕೆ ಬರುವಂತಹ ಅದ್ಭುತ ಜಗತ್ತನ್ನು ಸೃಷ್ಟಿಸಿದ್ದಕ್ಕೆ ಇಡೀ ತಂಡವನ್ನು ಕೊಂಡಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyt05kq10s1f5jtvp7arzk75,imgname-vjv-1785431510753.png" type="image/jpeg" height="390" width="690"/>
            <content:encoded><![CDATA[&lt;p&gt;'ರಾಮಾಯಣ' ಸಿನಿಮಾದ ಟ್ರೇಲರ್&zwnj; ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂಬಿಕೆ ಬರುವಂತಹ ಅದ್ಭುತ ಜಗತ್ತನ್ನು ಸೃಷ್ಟಿಸಿದ್ದಕ್ಕೆ ಇಡೀ ತಂಡವನ್ನು ಕೊಂಡಾಡಿದ್ದಾರೆ. ರಾಮನಾಗಿ ರಣಬೀರ್ ಕಪೂರ್ ದೈವತ್ವವನ್ನು ತೋರಿಸಿದರೆ, ರಾವಣನಾಗಿ ಯಶ್ ತಮ್ಮ ನಟನೆಯಿಂದ ಬೆರಗುಗೊಳಿಸಿದ್ದಾರೆ. ಕನ್ನಡಿಗರಾದ ನಮಗೆಲ್ಲಾ ಹೆಮ್ಮೆ ತಂದಿದ್ದಾರೆ ಎಂದು ಹೇಳಿದ್ದಾರೆ.&lt;/p&gt;&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿ, ರಣಬೀರ್ ಕಪೂರ್ ಮತ್ತು ಯಶ್ ನಟನೆಯ 'ರಾಮಾಯಣ' ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ತಮ್ಮ ಇನ್&zwnj;ಸ್ಟಾಗ್ರಾಂನಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿರುವ ಅವರು, ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಪ್ರಮುಖ ನಟರಾದ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮತ್ತು ರವಿ ದುಬೆ ಸೇರಿದಂತೆ ಇಡೀ ತಂಡಕ್ಕೆ ಮೆಚ್ಚುಗೆ ತಿಳಿಸಿದ್ದಾರೆ.&lt;/p&gt;&lt;p&gt;&quot;ನಮ್ಮ ಪುರಾಣಗಳ ಕಥೆ ಮತ್ತು ಪಾತ್ರಗಳ ಮೂಲಕ ಜನರನ್ನು ಒಪ್ಪಿಸುವುದು ಸುಲಭವಲ್ಲ. ನಾವೆಲ್ಲರೂ ಈ ಕಥೆಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಪ್ರತಿಯೊಬ್ಬರಿಗೂ ಈ ಬಗ್ಗೆ ತಮ್ಮದೇ ಆದ ಕಲ್ಪನೆ ಇರುತ್ತದೆ. ಇಂತಹ ಅದ್ಭುತ ಹಾಗೂ ನಂಬಿಕೆ ಬರುವಂತಹ ಜಗತ್ತನ್ನು ಸೃಷ್ಟಿಸಿದ ಇಡೀ ತಂಡಕ್ಕೆ ನನ್ನ ಹ್ಯಾಟ್ಸ್ ಆಫ್. ನಿತೇಶ್ ತಿವಾರಿ, ನಮೀತ್ ಮಲ್ಹೋತ್ರ ನಿಮಗೊಂದು ಸಲಾಂ&quot; ಎಂದು ರಿಷಬ್ ಬರೆದುಕೊಂಡಿದ್ದಾರೆ.&lt;/p&gt;&lt;p&gt;ನಟರ ಅದ್ಭುತ ಅಭಿನಯ ಮತ್ತು ಎ.ಆರ್. ರೆಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಅವರ ಸಂಗೀತವನ್ನು ಹೊಗಳಿದ 'ಕಾಂತಾರ' ಸ್ಟಾರ್, &quot;ಇಂತಹ ಐಕಾನಿಕ್ ಪಾತ್ರಗಳನ್ನು ಮಾಡುವಾಗ ಒಬ್ಬ ನಟನ ಮೇಲಿರುವ ಒತ್ತಡವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಪ್ರತಿಯೊಬ್ಬ ನಟರೂ ಆ ಜವಾಬ್ದಾರಿಯನ್ನು ಅರಿತು ಅದ್ಭುತವಾಗಿ ನಟಿಸಿದ್ದಾರೆ. ರವಿ ದುಬೆ, ಸಾಯಿ ಪಲ್ಲವಿ, ರಕುಲ್ ಪ್ರೀತ್, ಎ.ಆರ್.ರೆಹಮಾನ್, ಹ್ಯಾನ್ಸ್ ಜಿಮ್ಮರ್ ನಿಮ್ಮ ಸಂಗೀತವು ಪ್ರತಿಯೊಂದು ಭಾವನೆಗೂ ಜೀವ ತುಂಬಿದೆ. ಎಂತಹ ಅದ್ಭುತ ಸಂಗೀತ,&quot; ಎಂದು ಸೇರಿಸಿದ್ದಾರೆ.&lt;/p&gt;&lt;p&gt;ರಣಬೀರ್ ಕಪೂರ್ ಅವರ ನಟನೆಯು 'ರಾಮನ ದೈವತ್ವ ಮತ್ತು ಪ್ರಭಾವಳಿಯನ್ನು ನಿಜವಾಗಿಯೂ ಅನುಭವಿಸುವಂತೆ ಮಾಡಿತು' ಎಂದು ರಿಷಬ್ ಹೇಳಿದ್ದಾರೆ. ಇನ್ನು ರಾವಣನಾಗಿ ಯಶ್ ಅವರನ್ನು ನೋಡಿ ಬೆರಗಾದೆ ಎಂದಿದ್ದಾರೆ. &quot;ರಣಬೀರ್&zwnj; ಕಪೂರ್ ಸಹೋದರ, ನೀವು ರಾಮನ ದೈವತ್ವವನ್ನು ನಮಗೆ ನಿಜವಾಗಿಯೂ ಅನುಭವಿಸುವಂತೆ ಮಾಡಿದ್ದೀರಿ. ಯಶ್ ಸರ್, ನಿಮ್ಮ ಪ್ರತಿಯೊಂದು ಶಾಟ್ ನೋಡುವಾಗಲೂ ನನ್ನ ಕಣ್ಣುಗಳು ದೊಡ್ಡದಾಗುತ್ತಿದ್ದವು. ಆ ಪಾತ್ರಕ್ಕೆ ಬೇರೆ ಯಾರೂ ನ್ಯಾಯ ಒದಗಿಸಲು ಸಾಧ್ಯವಿರಲಿಲ್ಲವೇನೋ. ನಿಮ್ಮ ಅದ್ಭುತ ನಟನೆಯ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ. ಆದರೆ ಒಂದು ಮಾತು, ಒಬ್ಬ ಕನ್ನಡಿಗನಾಗಿ ನೀವು ನಮಗೆ ಯಾವಾಗಲೂ ಹೆಮ್ಮೆ ತಂದಿದ್ದೀರಿ&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;'ರಾಮಾಯಣ: ಭಾಗ 1' ಟ್ರೇಲರ್&zwnj; ಬಿಡುಗಡೆ&lt;/strong&gt;&lt;/p&gt;&lt;p&gt;ದಿನದ ಆರಂಭದಲ್ಲಿ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ: ಭಾಗ 1' ಸಿನಿಮಾದ ಟ್ರೇಲರ್&zwnj; ಅನ್ನು ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆ ಮಾಡಲಾಗಿದೆ. ಯಶ್ ಅಭಿನಯದ ರಾವಣನ ಪಾತ್ರದ ಪರಿಚಯದೊಂದಿಗೆ ಟ್ರೇಲರ್&zwnj; ಆರಂಭವಾಗುತ್ತದೆ. ಕತ್ತಲೆಯಿಂದ ಹೊರಬರುವ ರಾವಣ, ಭವ್ಯವಾದ ಅರಮನೆಗೆ ಏರಿ ಮೂರು ಲೋಕಗಳಿಗೂ ತಾನೇ ಅಧಿಪತಿ ಎಂದು ಘೋಷಿಸುತ್ತಾನೆ. ಕತ್ತಲೆ ಆವರಿಸುತ್ತಿದ್ದಂತೆ, ವಿಷ್ಣುವು ಭೂಮಿಯ ಮೇಲೆ ರಾಜಕುಮಾರ ರಾಮನಾಗಿ ಮರುಜನ್ಮ ಪಡೆಯುತ್ತಾನೆ. ಅರುಣ್ ಗೋವಿಲ್ ಅವರು ರಾಜ ದಶರಥನ ಪಾತ್ರದಲ್ಲಿದ್ದು, ತಮ್ಮ ಜನರಿಗೆ ರಾಮನನ್ನು ಪರಿಚಯಿಸುತ್ತಾರೆ. ಚಿನ್ನದ ಅಯೋಧ್ಯೆಯ ಭವ್ಯ ದೃಶ್ಯಗಳ ನಂತರ, ಸಾಯಿ ಪಲ್ಲವಿ ನಿರ್ವಹಿಸಿದ ಸೀತೆಯೊಂದಿಗೆ ರಾಮನ ವಿವಾಹದ ದೃಶ್ಯ ಬರುತ್ತದೆ.&lt;/p&gt;&lt;p&gt;ತನ್ನ ಮಲತಾಯಿ ಕೈಕೇಯಿಯ ಬೇಡಿಕೆಯನ್ನು ರಾಮ ಒಪ್ಪಿಕೊಳ್ಳುವುದರೊಂದಿಗೆ ಕಥೆಯು ಭಾವನಾತ್ಮಕ ತಿರುವು ಪಡೆಯುತ್ತದೆ. ರವಿ ದುಬೆ ನಿರ್ವಹಿಸಿದ ತನ್ನ ಸಹೋದರ ಲಕ್ಷ್ಮಣನೊಂದಿಗೆ 14 ವರ್ಷಗಳ ವನವಾಸಕ್ಕೆ ಹೊರಡುತ್ತಾನೆ. ರಕುಲ್ ಪ್ರೀತ್ ನಿರ್ವಹಿಸಿದ ಶೂರ್ಪನಖಿಯೊಂದಿಗಿನ ಸಂಘರ್ಷ, ಸೀತೆಯ ಅಪಹರಣದಂತಹ ಮಹಾಕಾವ್ಯದ ಪ್ರಮುಖ ಕ್ಷಣಗಳ ಝಲಕ್ ಅನ್ನು ಟ್ರೇಲರ್&zwnj; ನೀಡುತ್ತದೆ. ಬೃಹತ್ ಸೇನೆಗಳು, ಪೌರಾಣಿಕ ಜೀವಿಗಳು ಮತ್ತು ತೀವ್ರವಾದ ಕತ್ತಿವರಸೆಯೊಂದಿಗೆ ದೊಡ್ಡ ಪ್ರಮಾಣದ ಯುದ್ಧದತ್ತ ಕಥೆ ಸಾಗುತ್ತದೆ. ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಮತ್ತು ಹಾಲಿವುಡ್ ಸಂಯೋಜಕ ಹ್ಯಾನ್ಸ್ ಜಿಮ್ಮರ್ ಅವರ ಜುಗಲ್ಬಂದಿ ಈ ಸಿನಿಮಾದ ಸಂಗೀತದ ಮತ್ತೊಂದು ಪ್ರಮುಖ ಹೈಲೈಟ್ ಆಗಿದೆ.&lt;/p&gt;&lt;h2&gt;&lt;strong&gt;ತಾರಾಗಣ ಮತ್ತು ಬಿಡುಗಡೆ ಮಾಹಿತಿ&lt;/strong&gt;&lt;/h2&gt;&lt;p&gt;ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸಿದ್ದಾರೆ. ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. 'ರಾಮಾಯಣ: ಭಾಗ 1' ಸಿನಿಮಾ 2026ರ ದೀಪಾವಳಿ ಹಬ್ಬದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಎರಡನೇ ಭಾಗವು 2027ರ ದೀಪಾವಳಿಗೆ ತೆರೆಗೆ ಬರುವ ನಿರೀಕ್ಷೆಯಿದೆ.&amp;nbsp;&lt;/p&gt;&lt;p&gt;It&rsquo;s not easy to convince people with the stories and characters of our epics. We have all grown up listening to them, and each of us carries our own imagination of these timeless legends. Hats off to the team for creating such an incredibly convincing world. @niteshtiwari22&hellip; pic.twitter.com/mLrLuUZqoi&lt;/p&gt;&lt;p&gt;&mdash; Rishab Shetty (@shetty_rishab) July 30, 2026&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rishab-shetty-showers-praise-on-yashs-ravana-in-ramayana-trailer-gvd/articleshow-3786k9w"/>
        </item>
        <item>
            <title><![CDATA[ಜೈಲಲ್ಲಿ ದರ್ಶನ್-ಧನ್ವೀರ್ ದಿಢೀರ್ ಭೇಟಿ ಸೀಕ್ರೇಟ್ ಕೊನೆಗೂ ಹೊರಬಿತ್ತಾ? 'ಝಣ ಝಣ ಕಾಂಚಾಣ'ದ ವ್ಯವಹಾರ!?]]></title>
            <link>https://kannada.asianetnews.com/sandalwood/dhanveer-gowda-and-darshan-thoogudeepa-recent-meet-in-parappana-agrahara-jail-secret-revealed-finally/articleshow-ebgo1x5</link>
            <guid isPermaLink="true">https://kannada.asianetnews.com/sandalwood/dhanveer-gowda-and-darshan-thoogudeepa-recent-meet-in-parappana-agrahara-jail-secret-revealed-finally/articleshow-ebgo1x5</guid>
            <pubDate>Thu, 30 Jul 2026 22:39:39 +0530</pubDate>
            <description><![CDATA[&lt;p&gt;ಧನ್ವೀರ್​ ಹಾಗು ವಿಜಯಲಕ್ಷ್ಮೀ ಇಬ್ಬರೂ ದರ್ಶನ್​​ಅವರನ್ನ ನೋಡೋಕೆ ಪರಪ್ಪನ ಅಗ್ರಹಾರ ಜೈಲಿಗೆ ಒಟ್ಟಿಗೆ ಹೋಗುತ್ತಿದ್ರು. ದೇವಸ್ಥಾನಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ರು. ಆದ್ರೆ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ವಿಜಯಲಕ್ಷ್ಮೀ ಒಂಬೊಂಟಿಯಾಗಿ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಈಗ ಈ ಮುನಿಸಿಗೆ ಕಾರಣ ಬಹಿರಂಗವಾಗಿದೆ..!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyszj6c5zawxy61kck559ysg,imgname-darshan-thoogudeepa-dhanveer-gowda--1--1785430874501.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Darshan Thoogudeepa-Dhanveer Gowda Controversy Secret Revealed:&lt;/strong&gt; ರಾಮನ ಭಂಟ ಹನುಮಂತ ಅನ್ನೋ ಹಾಗೆ ಇದ್ದವರು ನಟ ದರ್ಶನ್ ಹಾಗು ಧನ್ವೀರ್​.. ನಟ ದರ್ಶನ್&zwnj;ಗೆ (Darshan Thoogudeeap) ನಟ ಧನ್ವೀರ್ ರಕ್ತ ಸಂಬಂಧಿ ಅಲ್ಲದೇ ಇದ್ರೂ, ಒಡಹುಟ್ಟಿದ ತಮ್ಮನಿಗಿಂತ ಹೆಚ್ಚು ಹತ್ತಿರವಾಗಿದ್ರು. ಆದ್ರೆ ಒಳಗೊಳಗೆ ಅದೇನ್ ಆಯ್ತೋ ಏನೋ..?! ನಟ ಧನ್ವೀರ್ (Dhanveer Gowda) ದರ್ಶನ್​ಅವರಿಂದ ದೂರಾದ್ರು. ಈಗ ದರ್ಶನ್​ರನ್ನ ಧನ್ವೀರ್ ದಿಢೀರ್ ಅಂತ ಜೈಲ್ಲಿ ಭೇಟಿ ಮಾಡಿದ್ದಾರೆ. ಈ ಭೇಟಿ ಹಿಂದಿನ ರಹಸ್ಯ ಏನು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ..&lt;/p&gt;&lt;h2&gt;ಜೈಲಲ್ಲಿ ದರ್ಶನ್ ಧನ್ವೀರ್ ದಿಢೀರ್ ಭೇಟಿ.. ಏನಿದು ಸೀಕ್ರೇಟ್? ಧನ್ವೀರ್ ನ ಜೈಲಿಗೆ ಕರೆಸಿಕೊಂಡಿದ್ದೇ ದರ್ಶನ್.. ಯಾಕಾಗಿ..?&lt;/h2&gt;&lt;p&gt;ಹಳಸಿದ್ದ ಅಣ್ತಮ್ಮಂದಿರ ಸಂಬಂಧ ಮತ್ತೆ ಪ್ಯಾಚಪ್ ಆಯ್ತಾ..?&lt;/p&gt;&lt;p&gt;ನಟ ದರ್ಶನ್ ಜೈಲು ಪಾಲಾದ್ಮೇಲೆ ದಾಸನನ್ನ ಈ ಕೇಸ್​ನಿಂದ ಬಿಡಿಸಿಕೊಳ್ಳೋಕೆ ಶ್ರಮ ಪಟ್ಟವರಲ್ಲಿ ನಟ ಧನ್ವೀರ್ ಕೂಡ ಒಬ್ಬ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೇಗೆ ದೇವಸ್ಥಾನ, ವಕೀಲರ ಮನೆ, ಜೈಲು ಅಂತ ಓಡಾಡುತ್ತಿದ್ರೋ, ಅವರ ಹಿಂದೆ ಅಕ್ಕ ಪಕ್ಕ ಜೊತೆಯಾಗಿ ಇದ್ದವರು ಧನ್ವೀರ್.. ಆದ್ರೆ ಅದೇನ್ ಆಯ್ತೋ ಏನೋ, ಕಳೆದ ಆರು ತಿಂಗಳಿಂದೀಚೆಗೆ ದಾಸ ಇರೋ ಜೈಲಿಗೆ ಧನ್ವೀರ್ ಹೋಗೋದನ್ನೇ ಮರೆತ್ರು. ವಿಜಯಲಕ್ಷ್ಮಿ ಅಕ್ಕ ಪಕ್ಕ ಎಲ್ಲೂ ಕಾಣಿಸಿಕೊಳ್ಳಲಿಲ್ಲ..&lt;/p&gt;&lt;p&gt;ಹೌದು, ಧನ್ವೀರ್​ಹಾಗು ವಿಜಯಲಕ್ಷ್ಮೀ ದರ್ಶನ್​​ಅವರನ್ನ ನೋಡೋಕೆ ಪರಪ್ಪನ ಅಗ್ರಹಾರ ಜೈಲಿಗೆ ಒಟ್ಟಿಗೆ ಹೋಗುತ್ತಿದ್ರು. ದೇವಸ್ಥಾನಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ರು. ಆದ್ರೆ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ವಿಜಯಲಕ್ಷ್ಮೀ ಒಂಬೊಂಟಿಯಾಗಿ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಮೊನ್ನೆ ಜೈಲಿಗೆ ಹೋದಾಗ ಧನ್ವೀರ್​ರನ್ನ ಬಿಟ್ಟು ರಕ್ಷಿತಾರನ್ನ ಕರೆದುಕೊಂಡು ಹೋಗಿದ್ರು, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋದಾಗ ಒಬ್ಬರೇ ಹೋಗಿ ಬಂದಿದ್ರು.&lt;/p&gt;&lt;p&gt;ಧನ್ವೀರ್ ​ದಾಸ ಇರೋ ಜೈಲಿಗೆ ಹೋಗೋದನ್ನೇ ಮರೆತು ಬಿಟ್ರು. ವಿಜಯಲಕ್ಷ್ಮಿ ಅಂಗರಕ್ಷಕನಂತಿದ್ದ ಧನ್ವೀರ್ ವಿಜಿಯಕ್ಕನ ಅಕ್ಕ ಪಕ್ಕ ಸುಳಿಯೋದನ್ನ ನಿಲ್ಲಿಸಿ ಬಿಟ್ರು. ಇದಕ್ಕೆಲ್ಲಾ ಕಾರಣ ದಾಸ ಜೈಲಿನಿಂದ ಹೊರ ಬರೋದಕ್ಕೆ ಖರ್ಚು ಮಾಡುತ್ತಿದ್ದ ಹಣದಲ್ಲಿ ಅವ್ಯವಹಾರ ಆಗಿದೇ ಅನ್ನೋ ವಿಚಾರ ಗುಲ್ಲಾಗಿತ್ತು. ಇದರಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗು ಧನ್ವೀರ್ ಮಧ್ಯೆ ಮನಸ್ತಾಪ ಆಗಿದೆ ಅಂತ ಹೇಳಲಾಗಿತ್ತು.&lt;/p&gt;&lt;h3&gt;ದರ್ಶನ್ ಬುಲಾವ್ ಮೇರೆಗೆ ಜೈಲಿಗೆ ಹೋದ್ರಾ ಧನ್ವೀರ್? ದಾಸನ ಭೇಟಿ&zwnj; ನಂತರ ಧನ್ವೀರ್ ಟಾಂಗ್ ಕೊಟ್ಟಿದ್ಯಾರಿಗೆ..?&lt;/h3&gt;&lt;p&gt;ದರ್ಶನ್ ಪತ್ನಿ ವಿಜಯಲಕ್ಷ್ಮೀಯಿಂದ ದೂರ ಉಳಿದಿರೋ ಧನ್ವೀರ್, ಇತ್ತೀಚೆಗೆ ವಿಜಯಲಕ್ಷ್ಮೀ ಅವರು ದರ್ಶನ್ ರನ್ನ ಜೈಲಲ್ಲಿ ಭೇಟಿ ಮಾಡಿ ಬಂದ ಒಂದೇ ವಾರಕ್ಕೆ ದರ್ಶನ್​ರನ್ನ ಭೇಟಿ ಮಾಡಿದ್ದಾರೆ. ಈ ಭೇಟಿ ದರ್ಶನ್​ಅವರ ಯೋಗ ಕ್ಷೇಮ ವಿಚಾರಿಸೋದಕ್ಕೆ ಅಲ್ಲ, ಬದಲಾಗಿ ಆಗಿರೋ ವ್ಯವಹಾರದ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳೋಕೆ ಅನ್ನೋ ವಿಚಾರ ಈಗ ದಾಸನ ಮೂಲಗಳಿಂದ ಹೊರ ಬರ್ತಾ ಇದೆ. ದರ್ಶನ್​ ಬುಲಾವ್ ಮೇರೆಗೆ ಧನ್ವೀರ್ ಜೈಲಿಗೆ ಹೋಗಿದ್ದಂತೆ. ಧನ್ವೀರ್​ಕರೆದು ದರ್ಶನ್ ಬೈದಿದ್ದಾರೆ ಅಂತ ಜೈಲಿನಿಂದ ಮಾಹಿತಿ ಹೊರ ಬಂದಿದೆ.&lt;/p&gt;&lt;p&gt;ಅಂದು ವಿಜಯಲಕ್ಷ್ಮೀ ಹಾಕಿದ್ದ ಪೋಸ್ಟ್​ಇಂದು ಧನ್ವೀರ್ ರಿಪೀಟ್ ಹಾಕಿದ್ದೇಕೆ..?&lt;/p&gt;&lt;p&gt;ಈಗ ದರ್ಶನ್ ಹಾಗೂ ಧನ್ವೀರ್ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಜಗಜ್ಜಾಹಿರಾಗಿದೆ. ಯಾಕಂದ್ರೆ ದರ್ಶನ್ ಭೇಟಿ ಮಾಡಿ ಬಂದ ಬಳಿಕ ಧನ್ವೀರ್​ ಹಾಕಿರೋ ಈ ಪೋಸ್ಟ್.. ಅಂದು ವಿಜಯಲಕ್ಷ್ಮಿ ದರ್ಶನ್ ಅವರು ಹಾಕಿದ್ದ ಪೋಸ್ಟ್ ಅನ್ನೇ ಇಂದು ನಟ ಧನ್ವೀರ್ ಹಾಕಿ ಟಾಂಗ್ ಕೊಟ್ರಾ ಅನ್ನೋ ರೀತಿ ಇದೆ ಈ ಪೋಸ್ಟ್..&lt;/p&gt;&lt;p&gt;'ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ..ಅದು ವಸ್ತುವಾಗಲಿ.. ವ್ಯಕ್ತಿಯಾಗಲಿ..' ಎಂದಿದ್ದು ಯಾರಿಗೆ ಧನ್ವೀರ್..?&lt;/p&gt;&lt;p&gt;ಅಂದ&zwnj;ಹಾಗೆ, ದರ್ಶನ್ ಕುಟುಂಬದ ಜೊತೆ ಧನ್ವೀರ್ ಗೆ ವೈಮನಸ್ಸುಂಟಾಗಿದೆ ಅನ್ನೋ ಸುದ್ದಿ ಶುರುವಾದಾಗ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಒಂದು ಪೋಸ್ಟ್ ಹಾಕಿದ್ರು. 'ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ ಅದು ವ್ಯಕ್ತಿಯಾಗಲಿ, ವಸ್ತುವಾಗಿರಲಿ..' ಅಂತ.. ಅದು ಧನ್ವಿರ್ ನಡೆ ಬಗ್ಗೆ ವಿಜಯಲಕ್ಷ್ಮೀ ಹಾಕಿರೋ ಪೋಸ್ಟ್ ಅಂತ ಅಂದು ಹೇಳಲಾಗಿತ್ತು. ಈಗ ಅದೇ ಸಾಲುಗಳನ್ನ ಧನ್ವೀರ್ ಅವರು ದರ್ಶನ್ ಭೇಟಿ ಮಾಡಿ ಬಂದ&zwnj; ನಂತರ ಹಾಕಿದ್ದಾರೆ&zwnj;&zwnj;. ಅದು ದರ್ಶನ್ ಹಾಗೆ ವಿಜಯಲಕ್ಷ್ಮಿಗೆ ಧನ್ವೀರ್ ಟಾಂಗ್ ಕೊಟ್ಟು ಹಾಕಿರೋ ಪೋಸ್ಟ್&zwnj; ಇರಬಹುದು ಅನ್ನೋ ಚರ್ಚೆ ಹುಟ್ಟಿದೆ.&lt;/p&gt;&lt;p&gt;ಸದ್ಯ ದರ್ಶನ್ ವಿಜಯಲಕ್ಷ್ಮೀ ಹಾಗು ಧನ್ವೀರ್ ಬೇರೆ ಬೇರೆ ಆಗಿರೋದಕ್ಕೆ ಹಲವು ಉದಹಾರಣೆಗಳಂತೂ ಕಣ್ಣಿಗೆ ಕಾಣುತ್ತಿವೆ. ವಿಜಯಲಕ್ಷ್ಮೀ ಜೊತೆ ಧನ್ವೀರ್ ಕಾಣಿಸಿಕೊಳ್ಳುತ್ತಿಲ್ಲ. ದರ್ಶನ್ ನೋಡೋಕೆ ಧನ್ವೀರ್ ಇಷ್ಟು ದಿನ ಜೈಲಿಗೆ ಹೋಗಿಲ್ಲ. ಇದರ ಮಧ್ಯೆ ದರ್ಶನ್ ಭೇಟಿ ಮಾಡಿ ಬಂದ ಕೇಲವೇ ಗಂಟೆಗಳಲ್ಲಿ ಧನ್ವೀರ್ ಮಾರ್ಮಿಕ ಪೋಸ್ಟ್ ಹಾಕಿದ್ದಾರೆ. ಇದೆಲ್ಲವನ್ನ ಡಿಕೋಡ್ ಮಾಡಿದ್ರೆ ಇಲ್ಲೊಂದು ಸಮಸ್ಯೆ ಇದೆ ಅನ್ನೋದು ಗೊತ್ತಾಗುತ್ತಿದೆ. ಆದರೆ ಅದೇನು..? ಗಾಸಿಪ್ ಹಬ್ಬಿರುವಂತೆ 'ಹಣದ ಹೊಳೆ'ಯ ಅವ್ಯವಹಾರವೇ?&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/dhanveer-gowda-and-darshan-thoogudeepa-recent-meet-in-parappana-agrahara-jail-secret-revealed-finally/articleshow-ebgo1x5"/>
        </item>
        <item>
            <title><![CDATA[ಹೂವಲ್ಲ, ಚಿನ್ನವಲ್ಲ... ರಾಧಿಕಾಗೆ 'ಲಂಕಾಧಿಪತಿ ರಾವಣ' ಯಶ್ ಕೊಟ್ಟ ಮೊದಲ ಗಿಫ್ಟ್ ಏನು ಗೊತ್ತಾ?]]></title>
            <link>https://kannada.asianetnews.com/sandalwood/yashs-first-gift-to-radhika-pandit-wasnt-flowers-or-jewellery-gvd/articleshow-vam9ikw</link>
            <guid isPermaLink="true">https://kannada.asianetnews.com/sandalwood/yashs-first-gift-to-radhika-pandit-wasnt-flowers-or-jewellery-gvd/articleshow-vam9ikw</guid>
            <pubDate>Thu, 30 Jul 2026 21:35:40 +0530</pubDate>
            <description><![CDATA[&lt;p&gt;Yash First Gift: ಮೊದಲು ಸ್ನೇಹ, ನಂತರ ಪ್ರೀತಿ, ಆ ಬಳಿಕ ದಾಂಪತ್ಯ... ಕನ್ನಡ ಚಿತ್ರರಂಗದ ಆದರ್ಶ ಜೋಡಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyswa4j901rd31c1rwb9hjr9,imgname-cc-1785427464777.png" type="image/jpeg" height="390" width="690"/>
            <content:encoded><![CDATA[&lt;p&gt;ಮೊದಲು ಸ್ನೇಹ, ನಂತರ ಪ್ರೀತಿ, ಆ ಬಳಿಕ ದಾಂಪತ್ಯ... ಕನ್ನಡ ಚಿತ್ರರಂಗದ ಆದರ್ಶ ಜೋಡಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ತಮ್ಮ ಸರಳತೆ, ಪರಸ್ಪರ ಗೌರವ ಮತ್ತು ಆತ್ಮೀಯತೆಯಿಂದ ಅಭಿಮಾನಿಗಳ ಮನ ಗೆದ್ದಿರುವ ಈ ಜೋಡಿಯ ಹಳೆಯ ನೆನಪೊಂದು ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದಕ್ಕೆ ಕಾರಣ, ಯಶ್ ಅವರು ರಾಧಿಕಾ ಪಂಡಿತ್&zwnj;ಗೆ ನೀಡಿದ್ದ ಮೊದಲ ಉಡುಗೊರೆ.&lt;/p&gt;&lt;p&gt;&lt;strong&gt;ಹೂವು, ಚಿನ್ನವಲ್ಲ... ಯಶ್ ಕೊಟ್ಟ ಮೊದಲ ಗಿಫ್ಟ್ ಇದೇ!&lt;/strong&gt;&lt;/p&gt;&lt;p&gt;ಸಾಮಾನ್ಯವಾಗಿ ಪ್ರೀತಿಯ ಆರಂಭದಲ್ಲಿ ಹೂವು, ಚಾಕೊಲೇಟ್ ಅಥವಾ ಆಭರಣಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಆದರೆ ಯಶ್ ಮಾತ್ರ ಎಲ್ಲರಿಗಿಂತ ಭಿನ್ನ. ರಾಧಿಕಾ ಪಂಡಿತ್&zwnj;ಗೆ ಅವರು ಮೊದಲ ಬಾರಿ ನೀಡಿದ್ದ ಉಡುಗೊರೆ ಒಂದು ಆಟದ ಕೋತಿ (Toy Monkey). ಈ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಧಿಕಾ ಪಂಡಿತ್, &quot;ಯಶ್ ಕೊಟ್ಟ ಮೊದಲ ಗಿಫ್ಟ್ ಆಟದ ಕೋತಿ. ಅದು ತುಂಬಾ ವಿಭಿನ್ನವಾಗಿತ್ತು. ಆ ಉಡುಗೊರೆಯಲ್ಲೇ ಅವರ ತುಂಟತನ ಮತ್ತು ಮೋಜಿನ ಸ್ವಭಾವ ಅಡಗಿತ್ತು. ಇಂದಿಗೂ ಅದು ನನ್ನ ಅತ್ಯಂತ ಪ್ರಿಯ ನೆನಪುಗಳಲ್ಲಿ ಒಂದಾಗಿದೆ&quot; ಎಂದು ಹೇಳಿಕೊಂಡಿದ್ದರು. ಈ ಹಳೆಯ ವಿಡಿಯೊ ಮತ್ತು ಸಂದರ್ಶನದ ತುಣುಕುಗಳು ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಈ ಜೋಡಿಯ ಸರಳ ಪ್ರೀತಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ.&lt;img&gt;&lt;/p&gt;&lt;p&gt;&lt;strong&gt;'ನಂದಗೋಕುಲ'ದಿಂದ ಆರಂಭವಾದ ಸ್ನೇಹ... ಪ್ರೀತಿಯಾಗಿ ಅರಳಿದ ಬಾಂಧವ್ಯ&lt;/strong&gt;&lt;/p&gt;&lt;p&gt;ಯಶ್ ಹಾಗೂ ರಾಧಿಕಾ ಮೊದಲ ಬಾರಿಗೆ ಕನ್ನಡದ ಜನಪ್ರಿಯ ಧಾರಾವಾಹಿ 'ನಂದಗೋಕುಲ' ಸೆಟ್&zwnj;ನಲ್ಲಿ ಭೇಟಿಯಾದರು. ಆರಂಭದಲ್ಲಿ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ನಂತರ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುವ ಅವಕಾಶ ಸಿಕ್ಕಿತು. 'ಮೊಗ್ಗಿನ ಮನಸು', 'ಡ್ರಾಮಾ', 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಸಿನಿಮಾಗಳಲ್ಲಿ ಮೂಡಿಬಂದ ಇವರ ಜೋಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ಸ್ನೇಹ ಕಾಲಕ್ರಮೇಣ ಪ್ರೀತಿಯಾಗಿ ಬದಲಾಯಿತು.&lt;/p&gt;&lt;p&gt;&lt;strong&gt;2016ರಲ್ಲಿ ಅದ್ಧೂರಿ ವಿವಾಹ... ಇಂದು ಸುಂದರ ಕುಟುಂಬ&lt;/strong&gt;&lt;/p&gt;&lt;p&gt;ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ಯಶ್ ಮತ್ತು ರಾಧಿಕಾ 2016ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ಬಳಿಕ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಇಂದು ಈ ಜೋಡಿಗೆ ಐರಾ ಮತ್ತು ಯಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸಿನಿಮಾ ಬ್ಯುಸಿ ಜೀವನದ ನಡುವೆಯೂ ಕುಟುಂಬಕ್ಕೆ ಆದ್ಯತೆ ನೀಡುವ ಈ ಜೋಡಿ, ತಮ್ಮ ಕುಟುಂಬದ ಸುಂದರ ಕ್ಷಣಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದಕ್ಕಾಗಿಯೇ ಇವರಿಗೆ ಕನ್ನಡ ಮಾತ್ರವಲ್ಲದೆ ದೇಶಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ.&lt;img&gt;&lt;/p&gt;&lt;h2&gt;&lt;strong&gt;ಒಂದೆಡೆ 'ಟಾಕ್ಸಿಕ್', ಮತ್ತೊಂದೆಡೆ 'ರಾಮಾಯಣ'&lt;/strong&gt;&lt;/h2&gt;&lt;p&gt;ಸಿನಿಮಾ ವಿಚಾರಕ್ಕೆ ಬಂದರೆ, ಯಶ್ ಸದ್ಯ ಎರಡು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಟಾಕ್ಸಿಕ್' ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿರುವ ಅವರು, ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ 'ರಾಮಾಯಣ' ಚಿತ್ರದಲ್ಲಿ ರಾವಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಸೇರಿದಂತೆ ದೊಡ್ಡ ತಾರಾಗಣ ಅಭಿನಯಿಸುತ್ತಿದೆ.&lt;/p&gt;&lt;p&gt;ಮತ್ತೊಂದೆಡೆ, ರಾಧಿಕಾ ಪಂಡಿತ್ ಸಿನಿಮಾಗಳಿಂದ ಸ್ವಲ್ಪ ದೂರ ಉಳಿದಿದ್ದರೂ ಕುಟುಂಬದೊಂದಿಗೆ ಸಮಯ ಕಳೆಯುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಒಟ್ಟಾರೆ, ಯಶ್ ರಾಧಿಕಾಗೆ ಕೊಟ್ಟ ಮೊದಲ ಉಡುಗೊರೆ ದುಬಾರಿ ಆಭರಣವಲ್ಲ, ಒಂದು ಪುಟ್ಟ ಆಟದ ಕೋತಿಯಾಗಿದ್ದರೂ, ಅದರಲ್ಲಿದ್ದ ಪ್ರೀತಿ ಮತ್ತು ಆತ್ಮೀಯತೆಯೇ ಇಂದು ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ. ಇದು ಮತ್ತೊಮ್ಮೆ &quot;ಬೆಲೆಬಾಳುವ ಉಡುಗೊರೆಗಿಂತ, ಮನಸಿನಿಂದ ಕೊಟ್ಟ ನೆನಪುಗಳೇ ಅಮೂಲ್ಯ&quot; ಎಂಬುದನ್ನು ಸಾಬೀತುಪಡಿಸಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/yashs-first-gift-to-radhika-pandit-wasnt-flowers-or-jewellery-gvd/articleshow-vam9ikw"/>
        </item>
        <item>
            <title><![CDATA[ಯಶ್ 'ಜಾನು' ಸಿನಿಮಾಗೆ ನಾಯಕನಾದ ಕಥೆ ಬಿಚ್ಚಿಟ್ಟ ನಿರ್ಮಾಪಕ ಜಯಣ್ಣ: ರಾಕಿ ಭಾಯ್ ಆಯ್ಕೆಯ ಹಿಂದಿತ್ತು ಈ ಕಾರಣ!]]></title>
            <link>https://kannada.asianetnews.com/sandalwood/producer-jayanna-reveals-how-yash-became-the-hero-of-jaanu-movie-gvd/articleshow-l466xir</link>
            <guid isPermaLink="true">https://kannada.asianetnews.com/sandalwood/producer-jayanna-reveals-how-yash-became-the-hero-of-jaanu-movie-gvd/articleshow-l466xir</guid>
            <pubDate>Thu, 30 Jul 2026 20:45:27 +0530</pubDate>
            <description><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಹಾಗೂ ಖ್ಯಾತ ನಿರ್ಮಾಪಕ ಜಯಣ್ಣ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲಿ ಒಂದು. ಈ ಜೋಡಿಯ ಸಿನಿಮಾಗಳು ಬಾಕ್ಸ್ ಆಫೀಸ್&zwnj;ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyss5wh7v700tyejzf9hqp26,imgname-vhcv-1785424179751.png" type="image/jpeg" height="390" width="690"/>
            <content:encoded><![CDATA[&lt;p&gt;ರಾವಣನಾಗಿ ಅಬ್ಬರಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಖ್ಯಾತ ನಿರ್ಮಾಪಕ ಜಯಣ್ಣ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲಿ ಒಂದು. ಈ ಜೋಡಿಯ ಸಿನಿಮಾಗಳು ಬಾಕ್ಸ್ ಆಫೀಸ್&zwnj;ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಅಭಿಮಾನಿಗಳಲ್ಲಿ ವಿಶೇಷ ಸ್ಥಾನ ಪಡೆದಿವೆ. ಇದೀಗ ನಿರ್ಮಾಪಕ ಜಯಣ್ಣ ಅವರು ಯಶ್ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲೊಂದು ಮಹತ್ವದ ಸಿನಿಮಾ &lsquo;ಜಾನು&rsquo; ಹೇಗೆ ಆರಂಭವಾಯಿತು ಎಂಬ ಕುತೂಹಲಕಾರಿ ಕಥೆಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಬೇರೊಬ್ಬ ನಟನಿಗೆ ಹೋಗಬೇಕಿದ್ದ ಸಿನಿಮಾ ಯಶ್ ಪಾಲಾದದ್ದು ಹೇಗೆ?&lt;/strong&gt;&lt;/p&gt;&lt;p&gt;ನಿರ್ದೇಶಕ ಪ್ರೀತಂ ಗುಬ್ಬಿ ಅವರು ಸಿದ್ಧಪಡಿಸಿದ್ದ ಕಥೆಯೊಂದನ್ನು ಆಧರಿಸಿ &lsquo;ಜಾನು&rsquo; ಸಿನಿಮಾ ರೂಪುಗೊಂಡಿತ್ತು. ಆರಂಭದಲ್ಲಿ ಈ ಚಿತ್ರಕ್ಕಾಗಿ ಬೇರೊಬ್ಬ ನಟನನ್ನು ಸಂಪರ್ಕಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಆ ಪ್ರಾಜೆಕ್ಟ್ ಮುಂದುವರಿಯಲಿಲ್ಲ. ಅದೇ ಸಮಯದಲ್ಲಿ ಯಶ್ ನಟನೆಯ &lsquo;ಮೊದಲ ಸಲ&rsquo; ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಚಿತ್ರದಲ್ಲಿ ಯಶ್ ಅವರ ಅಭಿನಯವನ್ನು ಗಮನಿಸಿದ್ದ ಜಯಣ್ಣ ಅವರಿಗೆ, ಈ ಯುವ ನಟನಲ್ಲಿ ದೊಡ್ಡ ಭರವಸೆ ಕಾಣಿಸಿತು. ಇದರ ಬೆನ್ನಲ್ಲೇ ಯಶ್ ಅಭಿನಯದ &lsquo;ಕಿರಾತಕ&rsquo; ಸಿನಿಮಾ ಕೂಡ ಬಿಡುಗಡೆಯಾಗಿ ಯಶಸ್ಸು ಗಳಿಸಿತು. ಈ ಎರಡು ಸಿನಿಮಾಗಳ ಗೆಲುವಿನ ಬಳಿಕ, &lsquo;ಜಾನು&rsquo; ಚಿತ್ರಕ್ಕೆ ಯಶ್ ಅವರೇ ಸೂಕ್ತ ನಾಯಕ ಎಂಬ ನಿರ್ಧಾರಕ್ಕೆ ಜಯಣ್ಣ ಬಂದರು.&lt;/p&gt;&lt;p&gt;&lt;strong&gt;ಯಶ್ ಮಾತಿಗೆ ತಪ್ಪದ ಗುಣ ನೆನಪಿಸಿಕೊಂಡ ಜಯಣ್ಣ&lt;/strong&gt;&lt;/p&gt;&lt;p&gt;ಯಶ್ ಅವರನ್ನು ಸಂಪರ್ಕಿಸಿದಾಗ ಸಿನಿಮಾ ಮಾಡಲು ಅವರು ಕೂಡಲೇ ಒಪ್ಪಿಕೊಂಡಿದ್ದರು. ಆದರೆ ಅಡ್ವಾನ್ಸ್ ಪಡೆಯಲು ಮಾತ್ರ 5 ದಿನಗಳ ಸಮಯ ಕೇಳಿದ್ದರು. ಅದಕ್ಕೆ ಕಾರಣವೂ ವಿಶೇಷವಾಗಿತ್ತು. ಆಗಲೇ ಯಶ್ ಬೇರೊಬ್ಬರ ಬಳಿ ಸಣ್ಣ ಮೊತ್ತದ ಅಡ್ವಾನ್ಸ್ ಪಡೆದಿದ್ದರು. ಮೊದಲು ಅವರಿಂದ ಅನುಮತಿ ಪಡೆದು ನಂತರವೇ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಯಶ್ ಹೇಳಿದ್ದರು. ಯುವ ನಟನಾಗಿದ್ದ ಆ ಸಮಯದಲ್ಲೂ ಕೊಟ್ಟ ಮಾತಿಗೆ ಬೆಲೆ ನೀಡಿದ ಯಶ್ ಅವರ ಗುಣವನ್ನು ಜಯಣ್ಣ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ನಂತರ ಆ ಪ್ರಾಜೆಕ್ಟ್ ಅಂತಿಮಗೊಳ್ಳದ ಕಾರಣ, ಯಶ್ ಅವರು ಜಯಣ್ಣ ಅವರ ಕಚೇರಿಗೆ ಬಂದು ಕಥೆ ಕೇಳಿ ಅಡ್ವಾನ್ಸ್ ಪಡೆದರು. ಅಲ್ಲಿಂದ &lsquo;ಜಾನು&rsquo; ಚಿತ್ರದ ಪಯಣ ಆರಂಭವಾಯಿತು.&lt;/p&gt;&lt;h2&gt;&lt;strong&gt;ಮೊದಲ ಸಿನಿಮಾದಿಂದಲೇ ಸಿನಿಮಾ ಬಗ್ಗೆ ಅಪಾರ ಕಾಳಜಿ&lt;/strong&gt;&lt;/h2&gt;&lt;p&gt;ಯಶ್ ಅವರ ಸಿನಿಮಾ ಮೇಲಿನ ಬದ್ಧತೆಯ ಬಗ್ಗೆಯೂ ಜಯಣ್ಣ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. &quot;ಯಶ್ ಅವರಿಗೆ ಮೊದಲಿನಿಂದಲೂ ಸಿನಿಮಾದ ಬಗ್ಗೆ ಅಪಾರ ಆಸಕ್ತಿ ಇತ್ತು. ಮೊದಲ ಸಿನಿಮಾದಲ್ಲೇ ಕಥೆ, ಸ್ಕ್ರಿಪ್ಟ್ ಮತ್ತು ಮೇಕಿಂಗ್ ವಿಚಾರಗಳಲ್ಲಿ ಅವರು ತುಂಬಾ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಆ ಸಮಯದಲ್ಲಿ ಅವರ ಮಾತುಗಳಿಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿರಲಿಲ್ಲ. ನಂತರದ ದಿನಗಳಲ್ಲಿ ಅವರ ಆಲೋಚನೆಗಳಿಗೆ ಹೆಚ್ಚು ಗೌರವ ಸಿಕ್ಕಿತು&quot; ಎಂದು ಜಯಣ್ಣ ಹೇಳಿದ್ದಾರೆ. ಇನ್ನು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯಶ್ ಅವರ ಆರಂಭಿಕ ಹಂತದ ಈ ಕಥೆ, ಅವರ ಸಿನಿಮಾ ಮೇಲಿನ ಬದ್ಧತೆ ಮತ್ತು ಬೆಳವಣಿಗೆಯ ಮತ್ತೊಂದು ಮುಖವನ್ನು ತೋರಿಸುತ್ತದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/producer-jayanna-reveals-how-yash-became-the-hero-of-jaanu-movie-gvd/articleshow-l466xir"/>
        </item>
        <item>
            <title><![CDATA[ಪಂಡರಿಬಾಯಿ ಜೊತೆಗಿನ ಹಳೆಯ ನೆನಪು ಬಿಚ್ಚಿಟ್ಟ ಶ್ರೀನಾಥ್: ಫೋಟೋ ನೋಡಿ ಫ್ಯಾನ್ಸ್ ಫಿದಾ]]></title>
            <link>https://kannada.asianetnews.com/sandalwood/srinath-shares-rare-1968-photo-with-legendary-actress-pandari-bai-gvd/articleshow-sg1x7sg</link>
            <guid isPermaLink="true">https://kannada.asianetnews.com/sandalwood/srinath-shares-rare-1968-photo-with-legendary-actress-pandari-bai-gvd/articleshow-sg1x7sg</guid>
            <pubDate>Thu, 30 Jul 2026 20:13:09 +0530</pubDate>
            <description><![CDATA[&lt;p&gt;Pranaya Raja Srinath: 1968ರ ಕಾಲಘಟ್ಟದ ಈ ಅಪರೂಪದ ಚಿತ್ರದಲ್ಲಿ ಶ್ರೀನಾಥ್ ಅವರೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಪಂಡರಿಬಾಯಿ ಹಾಗೂ ನಿರ್ದೇಶಕ ಎಸ್.ಕೆ.ಎ. ಚಾರಿ ಕಾಣಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysqj8cdpcq7sdevpekdssbf,imgname-vknk-1785422487948.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ಪ್ರಣಯರಾಜ ಶ್ರೀನಾಥ್ ಅವರು ತಮ್ಮ ಸಿನಿ ಪಯಣದ ಅಪರೂಪದ ನೆನಪುಗಳನ್ನು ಆಗಾಗ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಹಂಚಿಕೊಂಡಿರುವ ಒಂದು ಹಳೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಗಮನ ಸೆಳೆಯುತ್ತಿದೆ. 1968ರ ಕಾಲಘಟ್ಟದ ಈ ಅಪರೂಪದ ಚಿತ್ರದಲ್ಲಿ ಶ್ರೀನಾಥ್ ಅವರೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಪಂಡರಿಬಾಯಿ ಹಾಗೂ ನಿರ್ದೇಶಕ ಎಸ್.ಕೆ.ಎ. ಚಾರಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್&zwnj;ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಶ್ರೀನಾಥ್, ಹಳೆಯ ದಿನಗಳನ್ನು ನೆನೆದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;'ಮಧುರ ಮಿಲನ' ಚಿತ್ರದ ಸೆಟ್&zwnj;ನ ಅಪರೂಪದ ಕ್ಷಣ&lt;/strong&gt;&lt;/p&gt;&lt;p&gt;&quot;ನನ್ನ ನಟನೆಯ 'ಮಧುರ ಮಿಲನ' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಪಂಡರಿಬಾಯಿ ಹಾಗೂ ನಿರ್ದೇಶಕ ಎಸ್.ಕೆ.ಎ. ಚಾರಿ ಅವರೊಂದಿಗೆ ಕಳೆದ ಅಪರೂಪದ ಕ್ಷಣ&quot; ಎಂದು ಶ್ರೀನಾಥ್ ಈ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಹಳೆಯ ಕನ್ನಡ ಚಿತ್ರರಂಗದ ಆ ಸುವರ್ಣ ಯುಗವನ್ನು ನೆನಪಿಸಿಕೊಂಡಿದ್ದು, &quot;ಎಲ್ಲಾ ರತ್ನಗಳು ಒಂದೇ ಫ್ರೇಮ್&zwnj;ನಲ್ಲಿ&quot; ಎಂದು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;'ಮಧುರ ಮಿಲನ' ಚಿತ್ರದ ನೆನಪು&lt;/strong&gt;&lt;/p&gt;&lt;p&gt;ಶ್ರೀನಾಥ್ ನಾಯಕನಾಗಿ ನಟಿಸಿದ್ದ 'ಮಧುರ ಮಿಲನ' ಸಿನಿಮಾ 1969ರ ಫೆಬ್ರವರಿ 25ರಂದು ಬಿಡುಗಡೆಯಾಗಿತ್ತು. ಎಸ್.ಕೆ.ಎ. ಚಾರಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಾಥ್ ಅವರೊಂದಿಗೆ ಉದಯಕುಮಾರ್, ಬಾಲಕೃಷ್ಣ, ಪದ್ಮಾಂಜಲಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದರು. ಈ ಸಿನಿಮಾ ಶ್ರೀನಾಥ್ ಅವರ ವೃತ್ತಿಜೀವನದ ಆರಂಭಿಕ ಹಂತದ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ.&lt;/p&gt;&lt;h2&gt;&lt;strong&gt;ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ ಪಂಡರಿಬಾಯಿ&lt;/strong&gt;&lt;/h2&gt;&lt;p&gt;ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿಯರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ಪಂಡರಿಬಾಯಿ ಅವರ ಸಿನಿ ಪಯಣವೇ ಒಂದು ಇತಿಹಾಸ. ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅವರು 1943ರಲ್ಲಿ ಬಿಡುಗಡೆಯಾದ 'ವಾಣಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ನಂತರ ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ ಅವರು, ಡಾ. ರಾಜ್&zwnj;ಕುಮಾರ್, ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪಂಡರಿಬಾಯಿ ಅವರು ಕನ್ನಡ ಚಿತ್ರರಂಗದ ಅತ್ಯಂತ ಗೌರವಾನ್ವಿತ ಕಲಾವಿದರಲ್ಲಿ ಒಬ್ಬರು. ಕರ್ನಾಟಕದ ಕರಾವಳಿ ಭಾಗದ ಭಟ್ಕಳದಲ್ಲಿ ಜನಿಸಿದ ಅವರು, ತಂದೆಯ ಪ್ರಭಾವದಿಂದ ಕೇವಲ 10ನೇ ವಯಸ್ಸಿನಲ್ಲೇ ಹರಿಕಥೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆರಂಭಿಸಿದ್ದರು. ಇನ್ನು ಶ್ರೀನಾಥ್ ಹಂಚಿಕೊಂಡಿರುವ ಈ ಅಪರೂಪದ ಫೋಟೋ ಇದೀಗ ಕೇವಲ ಒಂದು ಚಿತ್ರವಾಗಿರದೆ, ಕನ್ನಡ ಚಿತ್ರರಂಗದ ಸುವರ್ಣ ಯುಗದ ನೆನಪಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Pranayaraja Dr.Srinath (@pranayaraja_drsrinath)&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/srinath-shares-rare-1968-photo-with-legendary-actress-pandari-bai-gvd/articleshow-sg1x7sg"/>
        </item>
        <item>
            <title><![CDATA[ಡಾಲಿ ಧನಂಜಯ ಅಭಿಮಾನಿಗಳಿಗೆ ಡಬಲ್ ಖುಷಿ: 'ಅಣ್ಣ ಫ್ರಂ ಮೆಕ್ಸಿಕೋ' ರಿಲೀಸ್ ಡೇಟ್ ಫಿಕ್ಸ್]]></title>
            <link>https://kannada.asianetnews.com/sandalwood/daali-dhananjay-anna-from-mexico-gets-december-24-release-date-gvd/articleshow-1ebyrn2</link>
            <guid isPermaLink="true">https://kannada.asianetnews.com/sandalwood/daali-dhananjay-anna-from-mexico-gets-december-24-release-date-gvd/articleshow-1ebyrn2</guid>
            <pubDate>Thu, 30 Jul 2026 16:34:03 +0530</pubDate>
            <description><![CDATA[&lt;p&gt;&lsquo;ಅಣ್ಣ ಫ್ರಂ ಮೆಕ್ಸಿಕೋ ಭಾವನೆಗಳನ್ನು ಸಂಭ್ರಮಿಸುವ, ಸ್ನೇಹವನ್ನು ಸಂಭ್ರಮಿಸುವ ಸಿನಿಮಾ. ಕೌಟುಂಬಿಕ ಪ್ರೇಕ್ಷಕರನ್ನು ಸಿಂಗಲ್&zwnj; ಸ್ಕ್ರೀನ್&zwnj;ಗೆ ಕರೆತರಬಲ್ಲ ಶಕ್ತಿ ಇರುವ ಸಿನಿಮಾ&rsquo; ಹೀಗೆ ಹೇಳಿದ್ದು ಡಾಲಿ ಧನಂಜಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysayzhg9gm4cc3399nshdt8,imgname-vvj-1785409273392.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಅಣ್ಣ ಫ್ರಂ ಮೆಕ್ಸಿಕೋ ಭಾವನೆಗಳನ್ನು ಸಂಭ್ರಮಿಸುವ, ಸ್ನೇಹವನ್ನು ಸಂಭ್ರಮಿಸುವ ಸಿನಿಮಾ. ಕೌಟುಂಬಿಕ ಪ್ರೇಕ್ಷಕರನ್ನು ಸಿಂಗಲ್&zwnj; ಸ್ಕ್ರೀನ್&zwnj;ಗೆ ಕರೆತರಬಲ್ಲ ಶಕ್ತಿ ಇರುವ ಸಿನಿಮಾ&rsquo;.- ಹೀಗೆ ಹೇಳಿದ್ದು ಡಾಲಿ ಧನಂಜಯ. ಅವರು ನಾಯಕನಾಗಿ ನಟಿಸಿರುವ, &lsquo;ಬಡವ ರಾಸ್ಕಲ್&zwnj;&rsquo; ಖ್ಯಾತಿಯ ಶಂಕರ್&zwnj; ಗುರು ನಿರ್ದೇಶನದ &lsquo;ಅಣ್ಣ ಫ್ರಂ ಮೆಕ್ಸಿಕೋ&rsquo; ಚಿತ್ರವನ್ನು ಡಿ.24ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.&lt;/p&gt;&lt;p&gt;ಈ ಕುರಿತು ಮಾತನಾಡಿದ ಅವರು, ಶಂಕರ್ ಗುರು ಅವರು ಕೌಟುಂಬಿಕ ಪ್ರೇಕ್ಷಕರ ನಾಡಿಮಿಡಿತ ಬಲ್ಲವರು. ಅವರಿಗೆ ಇಷ್ಟವಾಗುವ ಕತೆ ಹೇಳಿದ್ದಾರೆ. ಚಿತ್ರದಲ್ಲಿ ಸೊಗಸಾದ ಹಾಡುಗಳು, ಅತ್ಯುತ್ತಮ ತಾರಾಗಣವಿದೆ. ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಇದೊಂದು ಪಕ್ಕಾ ಮಾಸ್ ಕಮರ್ಷಿಯಲ್ ಎಂಟರ್&zwnj;ಟೇನರ್&zwnj;. ಸಿಂಗಲ್&zwnj; ಸ್ಕ್ರೀನ್&zwnj;ಗಳು ಸಂಭ್ರಮಿಸಲಿವೆ ಎಂದು ಹೇಳಿದರು.&lt;/p&gt;&lt;p&gt;ನಿರ್ದೇಶಕ ಶಂಕರ್&zwnj; ಗುರು, ನಮ್ಮ ಬಡವ ರಾಸ್ಕಲ್&zwnj; ಸಿನಿಮಾ ಕೂಡ ಡಿ.24ರಂದು ಬಿಡುಗಡೆಯಾಗಿತ್ತು. ಈಗ ಅಣ್ಣ ಫ್ರಂ ಮೆಕ್ಸಿಕೋ ಕೂಡ ಅದೇ ದಿನಾಂಕದಂದು ಬಿಡುಗಡೆಯಾಗುತ್ತಿದೆ ಎಂದರು. ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಪೂರ್ಣಚಂದ್ರ, ನಾಗಭೂಷಣ, ಸಾಧು ಕೋಕಿಲ, ರಂಗಾಯಣ ರಘು ನಟಿಸಿದ್ದಾರೆ.&lt;/p&gt;&lt;h2&gt;&lt;strong&gt;'666 ಆಪರೇಷನ್ ಡ್ರೀಮ್ ಥಿಯೇಟರ್'&lt;/strong&gt;&lt;/h2&gt;&lt;p&gt;'ಅಣ್ಣ ಫ್ರಮ್ ಮೆಕ್ಸಿಕೋ' ಡಿಸೆಂಬರ್ 24ರ ಬಿಡುಗಡೆ ದಿನಾಂಕವನ್ನು ಘೋಷಿಸಿದ ಬೆನ್ನಲ್ಲೇ, ಧನಂಜಯ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ '666 ಆಪರೇಷನ್ ಡ್ರೀಮ್ ಥಿಯೇಟರ್' ಕುರಿತು ಕುತೂಹಲ ಹೆಚ್ಚಾಗಿದೆ. ಹೇಮಂತ್ ಎಂ. ರಾವ್ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ ಶಿವರಾಜ್&zwnj;ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈ ವರ್ಷವೇ ಬಿಡುಗಡೆಯಾಗುತ್ತದೆಯೇ ಅಥವಾ 2027ಕ್ಕೆ ಮುಂದೂಡಲಾಗುತ್ತದೆಯೇ ಎಂಬ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/daali-dhananjay-anna-from-mexico-gets-december-24-release-date-gvd/articleshow-1ebyrn2"/>
        </item>
        <item>
            <title><![CDATA[ತೆರೆಕಂಡಿತು ರಾಮಾಯಣ ಟ್ರೈಲರ್; ಒಂದೊಂದು ಪಾತ್ರದ  ಅನಾವರಣ; ಯಶ್ ಲುಕ್ ಹೇಗಿದೆ ಗೊತ್ತಾ?]]></title>
            <link>https://kannada.asianetnews.com/gallery/entertainment/ramayana-movie-trailer-released-each-character-revealed-do-you-know-what-yash-looks-like-mrq-20u1xaa</link>
            <guid isPermaLink="true">https://kannada.asianetnews.com/gallery/entertainment/ramayana-movie-trailer-released-each-character-revealed-do-you-know-what-yash-looks-like-mrq-20u1xaa</guid>
            <pubDate>Thu, 30 Jul 2026 07:58:41 +0530</pubDate>
            <description><![CDATA[ಯಶ್, ರಣ್&zwnj;ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಚಿತ್ರದ ಟ್ರೈಲರ್ ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ರಾವಣನಾಗಿ ಯಶ್, ರಾಮನಾಗಿ ರಣ್&zwnj;ಬೀರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದು, ಈ ಟ್ರೈಲರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrabx91wgzgk1sfrfd74fh1,imgname-ram-and-ravan-1785375094049.jpg" type="image/jpeg" height="390" width="690"/>
            <content:encoded><![CDATA[ಯಶ್, ರಣ್&zwnj;ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಚಿತ್ರದ ಟ್ರೈಲರ್ ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ರಾವಣನಾಗಿ ಯಶ್, ರಾಮನಾಗಿ ರಣ್&zwnj;ಬೀರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದು, ಈ ಟ್ರೈಲರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ.&lt;img&gt;&lt;p&gt;ರಾಕಿಂಗ್ ಸ್ಟಾರ್ ಯಶ್, ರಣ್&zwnj;ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ಜುಲೈ 24 ಕ್ಕೆ ರಿಲೀಸ್ ಆಗಬೇಕಿದ್ದ ರಾಮಾಯಣ ಟ್ರೈಲರ್ ದಿನಾಂಕವನ್ನು ಚಿತ್ರತಂಡ ಕೊನೆ ಗಳಿಗೆಯಲ್ಲಿ ಮುಂದೂಡಿಕೆ ಮಾಡಲಾಗಿತ್ತು.&lt;/p&gt;&lt;img&gt;&lt;p&gt;ಇಂದು ಬೆಳಗ್ಗೆ 4.15ರ ಬ್ರಾಹ್ಮೀ ಮುಹೂರ್ತದಲ್ಲಿ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದೆ. ಸಿನಿಮಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಳಗಿನ ಜಾವ ಟ್ರೈಲರ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಸಿನಿಪ್ರಿಯರು ನಸುಕಿನಲ್ಲೇ ಇದನ್ನು ಕಣ್ತುಂಬಿಕೊಂಡಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ರಾಮಾಯಾಣ ಟ್ರೈಲರ್ ಸಂಚಲನ ಮೂಡಿಸಿದ್ದು, ನಾಲ್ಕು ನಿಮಿಷದ ಕ್ಲಿಪ್ ನೋಡುಗರಿಗೆ ಅದ್ಭುತವಾದ ಅನುಭವ ನೀಡುತ್ತಿದೆ&lt;/p&gt;&lt;img&gt;&lt;p&gt;ಈ ಚಿತ್ರದಲ್ಲಿ ಕನ್ನಡದ ನಟ ಯಶ್ ರಾವಣನಾಗಿ ಆರ್ಭಟಿಸಿದ್ದು, ನಮಿತ್ ಮಲ್ಹೋತ್ರಾ ಜೊತೆಗೆ ಚಿತ್ರಕ್ಕೆ ಸ್ವತಃ ಬಂಡವಾಳವನ್ನೂ ಹೂಡಿದ್ದಾರೆ. ರಾವಣನಾಗಿ ನಟ ಯಶ್ ಅಕ್ಷರಶಃ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ಸೌಮ್ಯ ಮತ್ತು ಮಂದಸ್ಮಿತನಾಗಿ ರಣ್&zwnj;ಬೀರ್ ಕಪೂರ್ ಕಾಣಿಸಿಕೊಂಡಿದ್ರೆ, ತಾಯಿ ಸೀತಾದೇವಿ ರೂಪದಲ್ಲಿ ನಟಿ ಸಾಯಿ ಪಲ್ಲವಿಯನ್ನು ನೋಡುವುದೇ ಚೆಂದ.&lt;/p&gt;&lt;img&gt;&lt;p&gt;ಎಆರ್ ರೆಹಮಾನ್ ಸಂಗೀತ ಚಿತ್ರದ ಪ್ರತಿಯೊಂದು ದೃಶ್ಯದ ಭಾವನೆಯನ್ನು ನೋಡುಗರಲ್ಲಿ ಜಾಗೃತಗೊಳಿಸುವಂತಿದೆ. ಯಶ್ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಾವಣ ಅಂದ್ರೆ ಹೀಗೆಯೇ ಇದ್ರಾ ಎಂಬಂತೆ ನಟಿಸಿದ್ದಾರೆ. ಇನ್ನುಳಿದಂತೆ ಚಿತ್ರದ ಬಹುತೇಕ ಪಾತ್ರಗಳ ಪರಿಚಯವನ್ನ ಟ್ರೈಲರ್&zwnj;ನಲ್ಲಿ ತೋರಿಸಲಾಗಿದೆ. ಈ ಹಿಂದೆ ಬಂದಂತಹ ರಾಮಯಾಣ ಕಥೆ ಆಧರಿತ ಚಿತ್ರಗಳಿಗಿಂತಲೂ ಇದು ಸಂಪೂರ್ಣ ಭಿನ್ನ ಎಂಬುದನ್ನು ಟ್ರೈಲರ್ ಹೇಳುತ್ತಿದೆ.&lt;/p&gt;&lt;img&gt;&lt;p&gt;ಲಕ್ಷ್ಮಣನಾಗಿ ರವಿ ದುಬೆ, ಹನುಮನಾಗಿ ಸನ್ನಿ ದಿಯೋಲ್, ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಹಲವು ಕಲಾವಿದರನ್ನು ಟ್ರೈಲರ್&zwnj;ನಲ್ಲಿ ನೋಡಬಹುದಾಗಿದೆ. ನಿತೀಶ್ ತಿವಾರಿ ನಿರ್ದೇಶನದ ಈ ಬೃಹತ್ ರಾಮಾಯಣ ಚಿತ್ರವು ಬರೋಬ್ಬರಿ 4 ಸಾವಿರ ಕೋಟಿ ಬಜೆಟ್&zwnj;ನಲ್ಲಿ ನಿರ್ಮಾಣವಾಗಿದೆ.'ರಾಮಾಯಣ ಪಾರ್ಟ್ 1' ಮುಂಬರುವ ದೀಪಾವಳಿ ಹಬ್ಬದ ಶುಭಸಮಯದಲ್ಲಿ ಬೆಳ್ಳಿಪರದೆಗೆ ಬರಲಿದೆ.&lt;/p&gt;&lt;p&gt;&lt;/p&gt;]]></content:encoded>
            <category>sandalwood</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/entertainment/ramayana-movie-trailer-released-each-character-revealed-do-you-know-what-yash-looks-like-mrq-20u1xaa"/>
        </item>
        <item>
            <title><![CDATA[ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!]]></title>
            <link>https://kannada.asianetnews.com/entertainment/what-did-priyanka-upendra-say-about-nepotism-videoshow-3yptfms</link>
            <guid isPermaLink="true">https://kannada.asianetnews.com/entertainment/what-did-priyanka-upendra-say-about-nepotism-videoshow-3yptfms</guid>
            <pubDate>Wed, 29 Jul 2026 11:46:23 +0530</pubDate>
            <description><![CDATA[&lt;p&gt;ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ,ನಮ್ಮ ಮಕ್ಕಳು ಯಾವ ವಿಚಾರದಲ್ಲಿ ಆಸಕ್ತರಾಗಿರ್ತಾರೆ ಆ ವಿಚಾರಕ್ಕೆ, ನಮ್ಮ ಸಂಪೂರ್ಣ ಸಪೋರ್ಟ್ ಇರಬೇಕು ಅದು ನಮ್ಮ ಜವಾಬ್ದಾರಿ, ಪ್ರೀತಿ ಆಗಿರುತ್ತೆ ಎಂದಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xaswtzm" medium="video" height="768" width="1024"/>
            <content:encoded><![CDATA[&lt;p&gt;&lt;span&gt;ಹೌದು&amp;nbsp;&lt;/span&gt;&lt;span&gt;ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ, ನೆಪೋಟಿಸಂ ವಿಚಾರವಾಗಿ ಪ್ರಶ್ನಿಸಿದಾಗ, ನಮ್ಮ ಮಕ್ಕಳು ಯಾವ ವಿಚಾರದಲ್ಲಿ ಆಸಕ್ತರಾಗಿರ್ತಾರೆ ಆ ವಿಚಾರಕ್ಕೆ, ನಮ್ಮ ಸಂಪೂರ್ಣ ಸಪೋರ್ಟ್ ಇರಬೇಕು ಅದು ನಮ್ಮ ಜವಬ್ದಾರಿ, ಪ್ರೀತಿ ಆಗಿರುತ್ತೆ, ನನ್ನ ಅಮ್ಮ, ತಮ್ಮ ಕೂಡ ಕಲಾವಿದರೇ. ನನ್ನ ಮಕ್ಕಳನ್ನ ನಾನು ಒಂದು ಸಿನಿಮಾದ ಮುಖೇನ ನಾನು ಪರಿಚಯಿಸಬಹುದಷ್ಟೆ. ಅವರ ಶ್ರಮ, ಒಳ್ಳೆಯ ಸಿನಿಮಾದಿಂದಷ್ಟೆ ಅವರು ಗೆಲ್ಲಲು ಸಾಧ್ಯ ಎಂದಿದ್ದಾರೆ.&amp;nbsp;&lt;/span&gt;&lt;/p&gt;]]></content:encoded>
            <category>sandalwood</category>
            <dc:creator>Roja Manu Patil</dc:creator>
            <atom:link href="https://kannada.asianetnews.com/entertainment/what-did-priyanka-upendra-say-about-nepotism-videoshow-3yptfms"/>
        </item>
        <item>
            <title><![CDATA[ಸೀರೆಯಲ್ಲಿ ಪ್ರೀತ್ಸೇ ಅಂತಾ ಬಂದ ಸ್ಪಂದನಾ ಸೋಮಣ್ಣ!]]></title>
            <link>https://kannada.asianetnews.com/webstories/tv-talk/spandana-somanna-viral-saree-photoshoot-instagram-pics-san-9lepa4b</link>
            <guid isPermaLink="true">https://kannada.asianetnews.com/webstories/tv-talk/spandana-somanna-viral-saree-photoshoot-instagram-pics-san-9lepa4b</guid>
            <pubDate>Wed, 29 Jul 2026 18:36:25 +0530</pubDate>
            <description><![CDATA[ಬಿಗ್&zwnj;ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಇತ್ತೀಚೆಗೆ ವೈರಲ್ ಫೋಟೋಶೂಟ್ ಮಾಡಿಸಿದ್ದಾರೆ. 'ಪ್ರೀತ್ಸೇ ಅಂತಾ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು' ಎಂಬ ಶೀರ್ಷಿಕೆಯೊಂದಿಗೆ ಫೋಟೋ ಹಂಚಿಕೊಂಡಿದ್ದು, ನಟಿಯ ಹೊಸ ಲುಕ್&zwnj;ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kypz26e4epgkz9fjq5g14ypn,imgname-spandana-somanna--1--1785329686980.jpg" type="image/jpeg" height="390" width="690"/>
            <category>sandalwood</category>
            <dc:creator>Santosh Naik</dc:creator>
            <atom:link href="https://kannada.asianetnews.com/webstories/tv-talk/spandana-somanna-viral-saree-photoshoot-instagram-pics-san-9lepa4b"/>
        </item>
        <item>
            <title><![CDATA[Shocking: ವಿಜಯಲಕ್ಷ್ಮೀ ಮಾಡಿದ್ದ ಪೋಸ್ಟ್ ರಿಪೀಟ್ ಮಾಡಿದ್ದೇಕೆ ಧನ್ವೀರ್ ಗೌಡ, 'ಬೇರೆ ಏನೋ ಇದೆ ಇಲ್ಲಿ..' ಅಂತಿರೋ ನೆಟ್ಟಿಗರು!]]></title>
            <link>https://kannada.asianetnews.com/sandalwood/sandalwood-actor-dhanveer-gowda-repeats-darshan-wife-vijayalakshmi-old-post-after-he-meets-actor-darshan-in-jail/articleshow-cune80y</link>
            <guid isPermaLink="true">https://kannada.asianetnews.com/sandalwood/sandalwood-actor-dhanveer-gowda-repeats-darshan-wife-vijayalakshmi-old-post-after-he-meets-actor-darshan-in-jail/articleshow-cune80y</guid>
            <pubDate>Wed, 29 Jul 2026 12:52:38 +0530</pubDate>
            <description><![CDATA[&lt;p&gt;'ದರ್ಶನ್ ಹೇಗಿದ್ದಾರೆ ಎಂಬ ಮಾಧ್ಯಮದ ಅನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿರುವ ನಟ ಧನ್ವೀರ್ ಗೌಡ, 'ಪರವಾಗಿಲ್ಲ' ಎಂದಷ್ಟೇ ಹೇಳಿದ್ದಾರೆ. ಹಾಗಿದ್ರೆ ನಿಜವಾಗಿಯೂ ದರ್ಶನ್-ಧನ್ವೀರ್ ಮಧ್ಯೆ ಏನಾಗುತ್ತಿದೆ? ನಿನ್ನೆ ಧನ್ವೀರ್ ಗೌಡ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಏಕೆ ಹೋಗಿಲ್ಲ. ಚರ್ಚೆ ಜೋರಾಗಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypbb658pazadexvsbx6nt86,imgname-dhanveer-gowda-darshan-vijayalakshmi-1785309010087.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಏನಾಗ್ತಿದೆ ದರ್ಶನ್-ವಿಜಯಲಕ್ಷ್ಮೀ ಹಾಗೂ ಧನ್ವೀರ್ ಮಧ್ಯೆ?&amp;nbsp;&lt;/strong&gt;&lt;/p&gt;&lt;p&gt;Dhanveer Gowda Post after Darshan Thoogudeepa Meet: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್ ಅವರನ್ನು ನಿನ್ನೆ (28 ಜುಲೈ 2026) ದರ್ಶನ್ ಆಪ್ತ ಸ್ನೇಹಿತ ಹಾಗೂ ನಟ ಧನ್ವೀರ್ ಗೌಡ (Dhanveer Gowda) ಭೇಟಿಯಾಗಿ ಮಾತನ್ನಾಡಿಕೊಂಡು ಬಂದಿದ್ದಾರೆ. ಈ ಮೊದಲು ಕೂಡ ಧನ್ವೀರ್ ಅವರು ದರ್ಶನ್ (Darshan Thoogudeepa) ಅವರನ್ನು ಭೇಟಿಯಾಗಿ ಬಂದಿದ್ದರು. ಆದರೆ, ಈ ಭೇಟಿಯ ಬಳಿಕ ನಟ ಧನ್ವೀರ್ ಗೌಡ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಇನ್&zwnj;ಸ್ಟಾಗ್ರಾಂನಲ್ಲಿ ಮಾಡಿರೋ ಪೋಸ್ಟ್&zwnj; ಇದೀಗ ತೀವ್ರ ಕುತೂಹಲ ಹಾಗೂ ಸಂಚಲನ ಸೃಷ್ಟಿಸಿದೆ. ಹಾಗಿದ್ದರೆ ನಟ ಧನ್ವೀರ್ ಗೌಡ ಅದೇನು ಪೋಸ್ಟ್ ಮಾಡಿದ್ದಾರೆ. ಅದೇನು ಅಂತ ಮುಂದೆ ನೋಡಿ..&lt;/p&gt;&lt;p&gt;ಹೌದು, ನಿನ್ನೆ ತಮ್ಮ ಆಪ್ತ ಸ್ನೇಹಿತ ದರ್ಶನ್ ತೂಗುದೀಪ ಅವರನ್ನು ಜೈಲಿಗೆ ಹೋಗಿ ಭೇಟಿ ಮಾಡಿ ವಾಪಸ್ ಆದ ಬಳಿಕ ನಟ ಧನ್ವೀರ್ ಗೌಡ ಅವರು ಮಾಡಿರೋ ಪೋಸ್ಟ್&zwnj; ಹೀಗಿದೆ. ಕೃಷ್ಣನ ಫೋಟೋ ಕಾರ್ಡ್&zwnj;ನಲ್ಲಿ 'ಪಡೆದುಕೊಂಡ ಮೇಲೆ.... ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ.... ಅದು ವಸ್ತುವಾಗಲಿ, ವ್ಯಕ್ತಿಯಾಗಲಿ....' ಎಂದು ಬರೆದಿರುವ ಪೋಸ್ಟ್ ಮಾಡಿದ್ದಾರೆ ಧನ್ವೀರ್ ಗೌಡ. ಇದೇ ಪೋಸ್ಟ್&zwnj; ಅನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ಕೆಲವು ದಿನಗಳ ಹಿಂದೆ ಜೈಲಿನಲ್ಲಿ ಪತಿ ದರ್ಶನ್ ಭೇಟಿ ಮಾಡಿ ಬಂದ ಬಳಿಕ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಪೋಸ್ಟ್ ಮಾಡಿದ್ದರು. ಒಂದೇ ರೀತಿಯಲ್ಲಿ ಈ ಇಬ್ಬರೂ, ಅಂದರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಗೌಡ ಪೋಸ್ಟ್ ಮಾಡುವ ಮೂಲಕ ಹೊಸ ಕುತೂಹಲ ಹಾಗೂ ಸಂಶಯಕ್ಕೆ ಕಾರಣರಾಗಿದ್ದಾರೆ.&lt;/p&gt;&lt;h2&gt;ಈ ಪೋಸ್ಟ್ ಅಸಲಿಯತ್ತೇನು?&lt;/h2&gt;&lt;p&gt;ಹಾಗಿದ್ದರೆ ಈ ಪೋಸ್ಟ್ ಅಸಲಿಯತ್ತೇನು? ಅದ್ಯಾಕೆ ಇಬ್ಬರೂ (ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಗೌಡ) ಒಂದೇ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಸತ್ಯ ಸಂಗತಿ ಅವರಿಗೇ ಗೊತ್ತು. ಆದರೆ ಇಬ್ಬರೂ ಹಾಕಿರುವ ಒಂದೇ ಪೋಸ್ಟ್ ಇದೀಗ, ಇಲ್ಲಸಲ್ಲದ ಚರ್ಚೆಗೆ, ಕುತೂಹಲಕ್ಕೆ ಹಾಗು 'ಅವರ ನಡುವೆ ಏನೋ ಸರಿಯಿಲ್ಲ ಅಥವಾ ಎಲ್ಲವೂ ಸರಿಯಿಲ್ಲ' ಎಂಬ ಮಾತುಗಳಿಗೆ ಕಾರಣವಾಗಿದೆ. ಹಾಗಿದ್ದರೆ ಅಸಲೀಯತ್ತು ಏನು? ಏಕೆ ಇಬ್ಬರೂ ಒಂದೇ ರೀತಿಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಅದೂ ಕೂಡ ಜೈಲಿನ್ಲಲಿ ನಟ ದರ್ಶನ್ ಅವರನ್ನು ಬೇಟಿಯಾಗಿ ಬಂದ ಮೇಲೆ!?&lt;/p&gt;&lt;p&gt;&lt;img&gt;&lt;/p&gt;&lt;h3&gt;ಧನ್ವೀರ್ ಕ್ಯಾಮೆರಾ ಮುಂದೆ ಹೇಳಿರೋ ಮಾತು?!&lt;/h3&gt;&lt;p&gt;ದರ್ಶನ್ ಭೇಟಿಯಾಗಿ ಬಂದ ನಟ ಧನ್ವೀರ್ ಕ್ಯಾಮೆರಾ ಮುಂದೆ ಹೇಳಿರೋ ಮಾತು ಒಂದೇ ಶಬ್ದ. 'ದರ್ಶನ್ ಹೇಗಿದ್ದಾರೆ ಎಂಬ ಮಾಧ್ಯಮದ ಅನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿರುವ ನಟ ಧನ್ವೀರ್ ಗೌಡ, 'ಪರವಾಗಿಲ್ಲ' ಎಂದಷ್ಟೇ ಹೇಳಿದ್ದಾರೆ. ಹಾಗಿದ್ರೆ ನಿಜವಾಗಿಯೂ ದರ್ಶನ್-ಧನ್ವೀರ್ ಮಧ್ಯೆ ಏನಾಗುತ್ತಿದೆ? ನಿನ್ನೆ ಧನ್ವೀರ್ ಗೌಡ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಏಕೆ ಹೋಗಿಲ್ಲ. ವಿಜಯಲಕ್ಷ್ಮೀ ಹಾಗೂ ಧನ್ವೀರ್ ಮಧ್ಯೆ ಸಮಸ್ಯೆ ಆಗಿದೆಯಾ ಅಥವಾ ದರ್ಶನ್ ಧನ್ವೀರ್ ಮಧ್ಯೆ ಮನಸ್ತಾಪ ಮೂಡಿದೆಯಾ? ಹೀಗೆ ಹಲವಾರು ಪ್ರಶ್ನೆಗಳು ಈಗ ಕನ್ನಡದ ಸಿನಿರಸಿಕರು, ದರ್ಶನ್ ಆಪ್ತರು ಸೇರಿದಂತೆ ದರ್ಶನ್ ಅಭಿಮಾನಿಗಳ ವಲಯದಲ್ಲಿ ಮೂಡತೊಡಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಷ್ಟೇ!&lt;/p&gt;&lt;p&gt;ಒಟ್ಟಿನಲ್ಲಿ, ಸ್ಯಾಂಡಲ್&zwnj;ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್&zwnj; ಅವರ ಕ್ಲೋಸ್ ಸರ್ಕಲ್&zwnj;ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೇಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ &lsquo;ಸ್ನೇಹವೆಂದರೆ ಸ್ನೇಹ, ಪ್ರೀತಿ ಎಂದರೆ ಪ್ರೀತಿ-ನಮ್ಮಿಬ್ಬರ ನಡುವಿನ ಗೌರವಾದರ ಹಾಗೇ ಇದೆ&rsquo; ಎಂಬುದನ್ನು ಈ ಮೂಲಕ ಜಗತ್ತಿಗೆ ಹೇಳುತ್ತಿದ್ದಾರಾ? ಅಥವಾ ಬೇರೇನೋ ಆಗ್ತಿದ್ಯಾ? ಕಾಲವೇ ಉತ್ತರ ಕೊಡಬೇಕಿದೆ ಎನ್ನೋದು ಸೂಕ್ತ!&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-actor-dhanveer-gowda-repeats-darshan-wife-vijayalakshmi-old-post-after-he-meets-actor-darshan-in-jail/articleshow-cune80y"/>
        </item>
        <item>
            <title><![CDATA[ಟಾಕ್ಸಿಕ್ ಕಥೆಯ ನಿಜವಾದ ಹೀರೋ ಯಾರು? ರಾಕಿಂಗ್ ಸ್ಟಾರ್ ಯಶ್ ಹೇಳಿದ ಉತ್ತರವೇ ಹೈಲೈಟ್]]></title>
            <link>https://kannada.asianetnews.com/entertainment/yash-reveals-why-emotion-is-the-biggest-strength-of-toxic-gvd/articleshow-d4cknue</link>
            <guid isPermaLink="true">https://kannada.asianetnews.com/entertainment/yash-reveals-why-emotion-is-the-biggest-strength-of-toxic-gvd/articleshow-d4cknue</guid>
            <pubDate>Wed, 29 Jul 2026 21:23:48 +0530</pubDate>
            <description><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್&zwnj;ವರ್ಲ್ಡ್ ಸಿನಿಮಾ &lsquo;ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&rsquo; ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಟೀಸರ್ ಮೂಲಕ ಈಗಾಗಲೇ ವಿಭಿನ್ನ ಲೋಕ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq94kwgcqw8chbgejg18k0w,imgname-vj-1785340252048.png" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್&zwnj;ವರ್ಲ್ಡ್ ಸಿನಿಮಾ &lsquo;ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&rsquo; ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಟೀಸರ್ ಮೂಲಕ ಈಗಾಗಲೇ ವಿಭಿನ್ನ ಲೋಕ ಮತ್ತು ಅದ್ಧೂರಿ ಆ್ಯಕ್ಷನ್&zwnj;ನ ಝಲಕ್ ನೀಡಿರುವ ಚಿತ್ರ, ಕೇವಲ ಆ್ಯಕ್ಷನ್&zwnj;ಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂದು ಸ್ವತಃ ಯಶ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, &lsquo;ಟಾಕ್ಸಿಕ್&rsquo; ಚಿತ್ರದ ಕಥೆಯ ಹೃದಯವೇ ಭಾವನೆಗಳು ಎಂದು ಹೇಳಿದ್ದು, ಪ್ರೇಕ್ಷಕರಿಗೆ ಮರೆಯಲಾಗದ ಅನುಭವ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&quot;ಆ್ಯಕ್ಷನ್ ಜೊತೆಗೆ ಭಾವನೆ ಇದ್ದಾಗಲೇ ಸಿನಿಮಾ ಗೆಲ್ಲುತ್ತದೆ&quot;&lt;/strong&gt;&lt;/p&gt;&lt;p&gt;ಚಿತ್ರದ ಬಗ್ಗೆ ಮಾತನಾಡಿದ ಯಶ್, &quot;&lsquo;ಟಾಕ್ಸಿಕ್&rsquo; ಒಂದು ರೋಲರ್&zwnj;ಕೋಸ್ಟರ್ ಅನುಭವ. ಕಥೆ ತುಂಬಾ ಆಳವಾಗಿದೆ, ಅದ್ದೂರಿಯಾಗಿದೆ ಮತ್ತು ಜೀವನಕ್ಕಿಂತ ದೊಡ್ಡ ಕ್ಯಾನ್ವಾಸ್ ಹೊಂದಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಇದು ಭಾವನೆಗಳಿಂದ ಕೂಡಿದ ಸಿನಿಮಾ. ಆ್ಯಕ್ಷನ್ ಮತ್ತು ಎಮೋಷನ್&zwnj;ನ ಈ ಸಂಯೋಜನೆಯೇ ಚಿತ್ರದ ದೊಡ್ಡ ಶಕ್ತಿ. ಸಿನಿಮಾ ನೋಡಿ ಹೊರಬರುವವರು &lsquo;ಏನಿದು ಅದ್ಭುತ ಅನುಭವ!&rsquo; ಎಂದು ಹೇಳುತ್ತಾರೆ ಎಂಬ ನಂಬಿಕೆ ಇದೆ,&quot; ಎಂದು ಹೇಳಿದ್ದಾರೆ. ಟೀಸರ್&zwnj;ನಲ್ಲಿ ಚಿತ್ರದ ಸ್ಟೈಲಿಷ್ ಆ್ಯಕ್ಷನ್ ಮತ್ತು ಗಾಢ ವಾತಾವರಣ ಗಮನ ಸೆಳೆದಿದ್ದರೂ, ಅದರ ಹಿಂದಿರುವ ಭಾವನಾತ್ಮಕ ಕಥೆಯೇ ಚಿತ್ರದ ಆತ್ಮ ಎಂದು ಯಶ್ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಜಾನ್ ವಿಕ್ ಖ್ಯಾತಿಯ ಜೆಜೆ ಪೆರಿಗೆ ಯಶ್ ಮೆಚ್ಚುಗೆ&lt;/strong&gt;&lt;/p&gt;&lt;p&gt;&lsquo;ಟಾಕ್ಸಿಕ್&rsquo; ಚಿತ್ರದ ಆ್ಯಕ್ಷನ್ ದೃಶ್ಯಗಳನ್ನು ಸಂಯೋಜಿಸಿರುವ ಜೆಜೆ ಪೆರಿ ಬಗ್ಗೆ ಕೂಡ ಯಶ್ ವಿಶೇಷವಾಗಿ ಮಾತನಾಡಿದರು. &lsquo;ಜಾನ್ ವಿಕ್&rsquo; ಸರಣಿಯ ಆ್ಯಕ್ಷನ್ ದೃಶ್ಯಗಳಿಗೆ ಖ್ಯಾತರಾಗಿರುವ ಜೆಜೆ ಪೆರಿಯ ಕೆಲಸವನ್ನು ತಾವು ಬಹಳ ಹಿಂದಿನಿಂದಲೇ ಮೆಚ್ಚಿಕೊಂಡಿದ್ದಾಗಿ ಹೇಳಿದರು. &quot;ನನಗೆ ಆ್ಯಕ್ಷನ್ ಸಿನಿಮಾಗಳೆಂದರೆ ತುಂಬಾ ಇಷ್ಟ. ಆ್ಯಕ್ಷನ್ ದೃಶ್ಯಗಳಲ್ಲಿ ಅಭಿನಯಿಸುವಾಗ ನಾನು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುತ್ತೇನೆ. ಜೆಜೆ ಪೆರಿ ಅದ್ಭುತ ಕೆಲಸ ಮಾಡಿದ್ದಾರೆ. ಅವರು ವಿನ್ಯಾಸಗೊಳಿಸಿರುವ ಆ್ಯಕ್ಷನ್ ಸೀಕ್ವೆನ್ಸ್&zwnj;ಗಳು ನನಗೆ ಯಾವಾಗಲೂ ಸ್ಫೂರ್ತಿ ನೀಡಿವೆ,&quot; ಎಂದು ಯಶ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&quot;ಪ್ರತಿ ಆ್ಯಕ್ಷನ್ ಹಿಂದೆ ಭಾವನೆ ಇರಬೇಕು&quot;&lt;/strong&gt;&lt;/p&gt;&lt;p&gt;ಆದರೆ, ಆ್ಯಕ್ಷನ್ ಮಾತ್ರವೇ ಸಿನಿಮಾದ ಗುರಿಯಾಗಿರಲಿಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ. &quot;ನನಗೆ ಆ್ಯಕ್ಷನ್ ಜೊತೆಗೆ ಭಾವನೆಗಳು ಇರಬೇಕು. &lsquo;ಟಾಕ್ಸಿಕ್&rsquo; ಚಿತ್ರದ ಮೂಲ ಅಂಶವೂ ಅದೇ. ಪ್ರತಿಯೊಂದು ಆ್ಯಕ್ಷನ್ ದೃಶ್ಯದ ಹಿಂದೆ ಪ್ರಬಲ ಭಾವನೆ ಇರಬೇಕು. ಆಗ ಮಾತ್ರ ಅದು ಪ್ರೇಕ್ಷಕರನ್ನು ನಿಜವಾಗಿ ತಟ್ಟುತ್ತದೆ,&quot; ಎಂದು ಅವರು ಹೇಳಿದರು.&lt;/p&gt;&lt;p&gt;&lt;strong&gt;&lsquo;ರಾಮಾಯಣ&rsquo;ದಲ್ಲೂ ಇದೇ ಮ್ಯಾಜಿಕ್&lt;/strong&gt;&lt;/p&gt;&lt;p&gt;ಯಶ್ ತಮ್ಮ ಮತ್ತೊಂದು ಬಹುನಿರೀಕ್ಷಿತ ಸಿನಿಮಾ &lsquo;ರಾಮಾಯಣ&rsquo; ಬಗ್ಗೆಯೂ ಮಾತನಾಡಿದ್ದು, ಆ ಚಿತ್ರದಲ್ಲೂ ಅದ್ದೂರಿ ಆ್ಯಕ್ಷನ್ ಜೊತೆಗೆ ಭಾವನಾತ್ಮಕ ಕಥೆಗೆ ಸಮಾನ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. &quot;&lsquo;ರಾಮಾಯಣ&rsquo;ದಲ್ಲೂ ಅದ್ಭುತ ಆ್ಯಕ್ಷನ್ ದೃಶ್ಯಗಳನ್ನು ನೋಡಬಹುದು. ಆದರೆ ಅಲ್ಲಿಯೂ ಭಾವನೆಗಳೇ ಕಥೆಯನ್ನು ಮುನ್ನಡೆಸುವ ಶಕ್ತಿ,&quot; ಎಂದು ಯಶ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಬಿಡುಗಡೆ&lt;/strong&gt;&lt;/h2&gt;&lt;p&gt;ನಿರ್ದೇಶಕಿ ಗೀತು ಮೋಹನದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ &lsquo;ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&rsquo; ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿವೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸಿರುವ ಈ ಸಿನಿಮಾ, ಬಹುಭಾಷೆಗಳಲ್ಲಿ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಮೇಲೆ ಭಾರೀ ನಿರೀಕ್ಷೆ ನಿರ್ಮಾಣವಾಗಿದ್ದು, ಯಶ್ ಅಭಿಮಾನಿಗಳು ಈ ಪ್ಯಾನ್&zwnj;ವರ್&zwnj;ಲ್ಡ್ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/yash-reveals-why-emotion-is-the-biggest-strength-of-toxic-gvd/articleshow-d4cknue"/>
        </item>
        <item>
            <title><![CDATA[ಕಾಮಿಡಿ ಕಿಂಗ್ ಚಿಕ್ಕಣ್ಣ ಹಸೆಮಣೆ ಏರಲು ಸಜ್ಜು: ಮದುವೆ ಸ್ಥಳ ಎಲ್ಲಿ? ದಿನಾಂಕ ಯಾವಾಗ? ಇಲ್ಲಿದೆ ಮಾಹಿತಿ]]></title>
            <link>https://kannada.asianetnews.com/sandalwood/kannada-comedy-star-chikkanna-wedding-date-revealed-marriage-set-for-august-gvd/articleshow-eb8rzzx</link>
            <guid isPermaLink="true">https://kannada.asianetnews.com/sandalwood/kannada-comedy-star-chikkanna-wedding-date-revealed-marriage-set-for-august-gvd/articleshow-eb8rzzx</guid>
            <pubDate>Wed, 29 Jul 2026 18:32:35 +0530</pubDate>
            <description><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರ ಅಭಿಮಾನಿಗಳಿಗೆ ಕೊನೆಗೂ ಗುಡ್&zwnj;ನ್ಯೂಸ್ ಸಿಕ್ಕಿದೆ. ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಚಿಕ್ಕಣ್ಣ ಅವರ ವಿವಾಹ ದಿನಾಂಕ ಇದೀಗ ಅಂತಿಮವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypz50m68974sfxew86xk61j,imgname-hvh-1785329779334.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರ ಅಭಿಮಾನಿಗಳಿಗೆ ಕೊನೆಗೂ ಗುಡ್&zwnj;ನ್ಯೂಸ್ ಸಿಕ್ಕಿದೆ. ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಚಿಕ್ಕಣ್ಣ ಅವರ ವಿವಾಹ ದಿನಾಂಕ ಇದೀಗ ಅಂತಿಮವಾಗಿದೆ ಎನ್ನಲಾಗಿದ್ದು, ಆಗಸ್ಟ್&zwnj; 29 ಮತ್ತು 30ರಂದು ಮೈಸೂರಿನಲ್ಲಿ ಅದ್ಧೂರಿ ವಿವಾಹ ಸಂಭ್ರಮ ನಡೆಯಲಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹಾಸ್ಯ ಶೈಲಿ, ವಿಭಿನ್ನ ಬಾಡಿ ಲಾಂಗ್ವೇಜ್&zwnj; ಮತ್ತು ಪಂಚಿಂಗ್ ಡೈಲಾಗ್&zwnj;ಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಚಿಕ್ಕಣ್ಣ, ಇದೀಗ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.&lt;/p&gt;&lt;p&gt;&lt;strong&gt;ಆಗಸ್ಟ್&zwnj;ನಲ್ಲಿ ಚಿಕ್ಕಣ್ಣ-ಪಾವನಾ ಮದುವೆ&lt;/strong&gt;&lt;/p&gt;&lt;p&gt;ಚಿಕ್ಕಣ್ಣ ಮತ್ತು ಪಾವನಾ ಅವರ ವಿವಾಹ ಕಾರ್ಯಕ್ರಮಗಳು ಮೈಸೂರಿನ ಸ್ಪೆಕ್ಟ್ರಮ್ ಹಾಲ್&zwnj;ನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ ಎಂದು ತಿಳಿದುಬಂದಿದೆ. ಕುಟುಂಬದವರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಮದುವೆ ಸಂಭ್ರಮ ನಡೆಯುವ ನಿರೀಕ್ಷೆಯಿದೆ. ಈ ಹಿಂದೆ 2025ರಲ್ಲಿ ಚಿಕ್ಕಣ್ಣ ಮತ್ತು ಪಾವನಾ ಅವರ ನಿಶ್ಚಿತಾರ್ಥ ನಡೆದಿತ್ತು. ಕುಟುಂಬದವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ ಮದುವೆಯ ದಿನಾಂಕ ಮಾತ್ರ ಅಧಿಕೃತವಾಗಿ ಬಹಿರಂಗವಾಗಿರಲಿಲ್ಲ. ಇದೀಗ ವಿವಾಹ ಮುಹೂರ್ತ ನಿಗದಿಯಾಗಿರುವ ಸುದ್ದಿ ಹೊರಬಿದ್ದಿದೆ.&lt;/p&gt;&lt;p&gt;&lt;strong&gt;ಯಾರು ಈ ಪಾವನಾ?&lt;/strong&gt;&lt;/p&gt;&lt;p&gt;ಚಿಕ್ಕಣ್ಣ ಅವರ ಬಾಳ ಸಂಗಾತಿಯಾಗಲಿರುವ ಪಾವನಾ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು. ಇಂಜಿನಿಯರಿಂಗ್ ಪದವಿ ಪಡೆದಿರುವ ಪಾವನಾ ಅವರೊಂದಿಗೆ ಚಿಕ್ಕಣ್ಣ ಹೊಸ ಜೀವನ ಆರಂಭಿಸಲಿದ್ದಾರೆ.&lt;/p&gt;&lt;p&gt;&lt;strong&gt;ಗಾರೆ ಕೆಲಸದಿಂದ ಗ್ಲಾಮರ್&zwnj; ಲೋಕದವರೆಗೆ ಚಿಕ್ಕಣ್ಣ ಜರ್ನಿ&lt;/strong&gt;&lt;/p&gt;&lt;p&gt;ಇಂದು ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟರಲ್ಲಿ ಒಬ್ಬರಾಗಿರುವ ಚಿಕ್ಕಣ್ಣ ಅವರ ಸಿನಿ ಪಯಣ ಅಷ್ಟು ಸುಲಭವಾಗಿರಲಿಲ್ಲ. ಮೈಸೂರಿನ ಬಲ್ಲಹಳ್ಳಿಯಲ್ಲಿ ಜನಿಸಿದ ಚಿಕ್ಕಣ್ಣ, ಎಸ್&zwnj;ಎಸ್&zwnj;ಎಲ್&zwnj;ಸಿ ಬಳಿಕ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಬಾಲ್ಯದಿಂದಲೇ ಅಭಿನಯದ ಮೇಲೆ ಆಸಕ್ತಿ ಹೊಂದಿದ್ದ ಅವರು, ಶಾಲಾ ನಾಟಕಗಳು ಮತ್ತು ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ತಮ್ಮ ಪ್ರತಿಭೆ ತೋರಿಸಿದ್ದರು.&lt;/p&gt;&lt;p&gt;ನಂತರ ಕಿರುತೆರೆ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದ ಚಿಕ್ಕಣ್ಣ, ಬೆಳ್ಳಿತೆರೆಗೆ ಎಂಟ್ರಿ ನೀಡಿದರು. 'ಕಿರಾತಕ' ಸಿನಿಮಾ ಅವರ ಸಿನಿ ಬದುಕಿಗೆ ದೊಡ್ಡ ತಿರುವು ನೀಡಿತು. ಬಳಿಕ 'ರಾಜಾಹುಲಿ', 'ಅಧ್ಯಕ್ಷ', 'ಕೋಟಿಗೊಬ್ಬ 2' ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಹಾಸ್ಯದಿಂದ ಪ್ರೇಕ್ಷಕರ ಮನ ಗೆದ್ದರು.&lt;/p&gt;&lt;h2&gt;&lt;strong&gt;ಹಾಸ್ಯದಿಂದ ಹೃದಯ ಗೆದ್ದ ನಟನ ಹೊಸ ಅಧ್ಯಾಯ&lt;/strong&gt;&lt;/h2&gt;&lt;p&gt;ಯಶ್ ಅಭಿನಯದ ಕಿರಾತಕ ಮೂಲಕ ದೊಡ್ಡ ಮಟ್ಟದ ಗುರುತಿಸಿಕೊಂಡ ಚಿಕ್ಕಣ್ಣ, ನಂತರ ತಮ್ಮದೇ ಆದ ಕಾಮಿಡಿ ಟೈಮಿಂಗ್ ಮೂಲಕ ಸ್ಯಾಂಡಲ್&zwnj;ವುಡ್&zwnj;ನಲ್ಲಿ ವಿಶೇಷ ಸ್ಥಾನ ಪಡೆದುಕೊಂಡರು. ತೆರೆಯ ಮೇಲೆ ಜನರನ್ನು ನಗಿಸುತ್ತಾ ಬಂದ ಚಿಕ್ಕಣ್ಣ, ಇದೀಗ ನಿಜ ಜೀವನದಲ್ಲೂ ಸಂತಸದ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಚಿಕ್ಕಣ್ಣ-ಪಾವನಾ ಅವರ ವಿವಾಹ ಸಂಭ್ರಮಕ್ಕಾಗಿ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-comedy-star-chikkanna-wedding-date-revealed-marriage-set-for-august-gvd/articleshow-eb8rzzx"/>
        </item>
        <item>
            <title><![CDATA[Cauvery River Water Dispute: ಕಾವೇರಿ ನೀರು ಹಂಚಿಕೆ ವಿವಾದ: 'ಫಿಲಂ ಚೇಂಬರ್‌'ನಲ್ಲಿ ಸಭೆ- ಯಾರೆಲ್ಲಾ ಮಾತನಾಡಿದ್ದಾರೆ? ತೆಗೆದುಕೊಂಡ ನಿರ್ಣಯವೇನು?]]></title>
            <link>https://kannada.asianetnews.com/sandalwood/who-were-the-speakers-at-the-film-chamber-meeting-for-cauvery-water-sharing-dispute-and-the-resolution-to-know-here/articleshow-fcvbgq0</link>
            <guid isPermaLink="true">https://kannada.asianetnews.com/sandalwood/who-were-the-speakers-at-the-film-chamber-meeting-for-cauvery-water-sharing-dispute-and-the-resolution-to-know-here/articleshow-fcvbgq0</guid>
            <pubDate>Thu, 30 Jul 2026 17:29:35 +0530</pubDate>
            <description><![CDATA[&lt;p&gt;'ತಮಿಳುನಾಡು ಸಿಎಂ ವಿಜಯ್ ಅವರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಸಿಎಂ ವಿಜಯ್ ಸಿನಿಮಾರಂಗದವರು. ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ನಾವು ಹೋಗಿ ಭೇಟಿ ಮಾಡೋ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysd7wbg3d1h5rf8wgeffw9h,imgname-film-chamber-1785411662192.jpg" type="image/jpeg" height="390" width="690"/>
            <content:encoded><![CDATA[&lt;p&gt;ಸದ್ಯ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಮಧ್ಯೆ ಕಾವೇರಿ ನದಿ ನೀರಿನ ಹಂಚಿಕೆ (Cauvery Water Dispute) ವಿಷಯವಾಗಿ 'ಕಾವೇರಿ'ದ ವಾತಾವರಣ ನಿರ್ಮಾಣವಾಗಿರೋದು ಗೊತ್ತೇ ಇದೆ. ಇದು ಕರ್ನಾಟಕದಲ್ಲಿ ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಹಲವು ಕಡೆ ಪ್ರತಿಭಟನೆ ರೂಪ ತಳೆದಿದೆ. ಸದ್ಯ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಮಧ್ಯೆ ಈ ಬಗ್ಗೆ ಮಾತುಕತೆ ನಡೆಯುವ ನಿರ್ಧಾರ ಕೂಡ ಆಗಿದೆ. ಆದರೆ, ಕಾವೇರಿ ನೀರನ್ನೇ ಅವಲಂಬಿಸಿದ ರೈತರ ಪ್ರತಿಭಟನೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದ್ದು ಈ ಕಾವು ಚಲನಚಿತ್ರ ರಂಗ ಸೇರಿದಂತೆ ಇಡೀ ಕರ್ನಾಟಕಕ್ಕೆ ವ್ಯಾಪಿಸಿದೆ.&lt;/p&gt;&lt;p&gt;&lt;strong&gt;KFCC meeting on Cauvery water row: &lt;/strong&gt;ಇಂದು, 30 ಜುಲೈ 2026ರಂದು ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ಇದೀಗ ತುರ್ತಾಗಿ ಸುದ್ದಿಗೋಷ್ಟಿ ಕರೆದಿದ್ದಾರೆ. ಅದರಲ್ಲಿ, ಕಾವೇರಿ ನೀರು ಹಂಚಿಕೆ ಬಗ್ಗೆ ಸಭೆ ಮಾಡಿರೋ ಕನ್ನಡ ಚಲನಚಿತ್ರ ರಂಗದ ವಿವಿಧ ಸಂಘಗಳು, ಅಂದರೆ ಕಲಾವಿದರ ಸಂಘ, ನಿರ್ಮಾಪಕರ ಸಂಘ, ಪ್ರದರ್ಶಕರ ಸಂಘ ಹೀಗೆ ಸಿನಿಮಾರಂಗದ ಎಲ್ಲಾ ಸಂಘಸಂಸ್ಥೆಗಳು ಬೆಂಗಳೂರಿನ ಫಿಲಂ ಚೆಂಬರ್&zwnj;ನಲ್ಲಿ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಭಾಗಿಯಾದವರಲ್ಲಿ ಯಾರ್ಯಾರು ಏನೇನು ಹೇಳಿದ್ದಾರೆ? ಇಲ್ಲಿದೆ ನೋಡಿ..&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ವಿವಾದ: ನಟ ಶೋಭರಾಜ್ ಹೇಳಿಕೆ&lt;/p&gt;&lt;p&gt;;ನಾವೆಲ್ಲಾ ಕಾವೇರಿ ನೀರು ಕುಡಿದು ಬೆಳೆದವರು. ಮಳೆ&zwnj;&zwnj; ಜಾಸ್ತಿ ಇದ್ರೆ&zwnj; ನಾವೇನು ಗೋಡೆ ಕಟ್ಟಿ ನೀರನ್ನು ಅಡ್ಡ ಹಾಕಲ್ಲ. ಈ ಭಾರಿ ಮಳೆ ಇಲ್ಲ ನಮ್ಮ ರೈತರು ಕಷ್ಟದಲ್ಲಿದ್ದಾರೆ ನೀರು ಕೇಳಬೇಡಿ. ನಮ್ಮ ರೈತರು ಕಷ್ಡದಲ್ಲಿದ್ದಾರೆ ನಮಗೆ ರೈತರು ನಮಗೆ ಮುಖ್ಯ. ಫಿಲ್ಮ್ ಚೇಂಬರ್ ಏನು ನಿರ್ಧಾರ ಮಾಡುತ್ತಾರೆ ಅದಕ್ಕೆ ನಾವು ಬದ್ಧರಾಗಿರುತ್ತೇವೆ' ಎಂದಿದ್ದಾರೆ.&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ವಿಚಾರ: ನಟ ಪ್ರಥಮ್ ಹೇಳಿಕೆ&lt;/p&gt;&lt;p&gt;'ಕಾವೇರಿ ವಿಚಾರದಲ್ಲಿ ನಾವೆಲ್ಲಾ ಕನ್ನಡಿಗರು ಒಂದೇ.. ಪ್ರಧಾನಿ ಆಗಿರಲಿ ಯಾರೇ ಆಗಿರಲಿ, ಅವರು ಕೂಡ ರೈತರು ಬೆಳೆದ ಅನ್ನ&zwnj; ತಿನ್ನೋದು.. ಕಾವೇರಿ ವಿಚಾರವಾಗಿ ತಮಿಳುನಾಡು ಸಿಎಂ ವಿಜಯ್ ಕರ್ನಾಟಕಕ್ಕೆ ಬರುತ್ತಿದ್ದಾರೆ. ವಿಜಯ್ ನಮ್ಮ ಕರ್ನಾಟಕದ ರೈತರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಸಿಎಂ ಆಗಿದ್ದೀರಾ ಸಂತೋಷ.. ಬಲವಂತವಾಗಿ ನೀರು ಪಡೆಯೋ ಸಾಹಸಕ್ಕೆ ಹೋಗಬೇಡಿ..' ಎಂದಿದ್ದಾರೆ ನಟ ಪ್ರಥಮ್&lt;/p&gt;&lt;p&gt;ಕರ್ನಾಟಕದಲ್ಲಿ ಕಾವೇರಿ ವಿವಾದ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯ ಮುಖ್ಯಾಂಶಗಳು:-&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ಬಗ್ಗೆ ಸಭೆ ಮಾಡಿರೋ ಕನ್ನಡ ಚಲನಚಿತ್ರ ರಂಗದ ವಿವಿಧ ಸಂಘಗಳು- ಫಿಲಂ ಚೇಂಬರ್, ಕಲಾವಿದರ ಸಂಘ, ನಿರ್ಮಾಪಕರ ಸಂಘ, ಪ್ರದರ್ಶಕರ ಸಂಘ ಎಲ್ಲವೂ ಈಗ ಫಿಲ್ಮ್ ಚೇಂಬರ್ ನೇತೃತ್ವದಲ್ಲಿ ಸುದ್ದಿ ಘೋಷ್ಟಿಯಲ್ಲಿ ಭಾಗಿಯಾಗಿವೆ. ಅಲ್ಲಿ ತೆಗೆದುಕೊಂಡ ನಿರ್ಧಾರದ ಮುಖ್ಯಾಂಶಗಳಿ ಇಲ್ಲಿವೆ-&lt;/p&gt;&lt;h2&gt;ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ&lt;/h2&gt;&lt;p&gt;'ಕನ್ನಡ ಚಿತ್ರರಂಗದ ನಾವೆಲ್ಲರೂ ಸಂಪೂರ್ಣವಾಗಿ ನಮ್ಮ ರೈತ ಬಾಂಧವರ ಪರವಾಗಿ ಇದ್ದೇವೆ. ಮಹದಾಯಿ, ಕಳಸಾ-ಬಂಡೂರಿ ಹೋರಾಟದಲ್ಲೂ ಚಿತ್ರರಂಗ ಇತ್ತು. ಭಾಷೆ ಬದುಕಿದ್ರೆ, ನೆಲ ಜಲ ಮನುಷ್ಯ ಇದ್ರೆ, ನಾವೆಲ್ಲಾ ಇರುತ್ತೇವೆ. ಹೀಗಾಗಿ ರೈತರ ಪರ ಯಾವತ್ತೂ ನಾವಿದ್ದೇವೆ. ಈ ವಿಷಯದಲ್ಲಿ ಚಿತ್ರರಂಗದ ಒಗ್ಗಟ್ಟು ಅದ್ಭುತವಾಗಿದೆ. ಭಾಷೆ ನೆಲ&zwnj; ಜನ ಅಂತ ಬಂದಾಗ ಯಾರೂ ಯಾರೂ ತಡೆಯೋಕೆ ಆಗಲ್ಲ, ನಾವೆಲ್ಲಾ ಒಂದಾಗಿದ್ದೇವೆ' ಎಂದಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ.&lt;/p&gt;&lt;p&gt;ಸಾರಾ ಗೋವಿಂದು:-&lt;/p&gt;&lt;p&gt;'ಕಾವೇರಿ ನೀರು ನಿಯಂತ್ರಣಾ ಮಂಡಳಿ ಅವೈಜ್ನಾನಿಕ ತೀರ್ಪನ್ನು ಕೊಟ್ಟಿದೆ. ಅದಕ್ಕೂ ಮೊದಲು ಕರ್ನಾಟಕ್ಕೆ ಬಂದು ಪರಿಸ್ಥಿತಿ ನೋಡಬೇಕು, ಇಲ್ಲಿ ಸಂಬಂಧಪಟ್ಟವರ ಮಾತನ್ನು ಆಲಿಸಬೇಕು. ಮಳೆ ಇಲ್ಲ, ಜನರಿಗೆ ಕುಡಿಯೋ ನೀರಿಗೆ ಹಾಹಾಕಾರ ಆಗಿದೆ. ನೀರು ಬಿಡೋದಕ್ಕೆ&zwnj; ಆಗಲ್ಲ ಅಂತ ಜನ ಹೇಳುತ್ತಿದ್ದಾರೆ. ಆದ್ರೆ&zwnj; ಎಲ್ಲದಕ್ಕೂ ಚಿತ್ರರಂಗ ಸ್ಪಂದಿಸಿಲ್ಲ ಅಂತಾರೆ. ಆದರೆ ರಾಜ್&zwnj;ಕುಮಾರ್ ಕಾಲದಿಂದಲೂ ನಾವು ರೈತರ, ಕರ್ನಾಟಕದ ಕಾವೇರಿ ಸಮಸ್ಯೆ ಜೊತೆ ಒಗ್ಗಟ್ಟಾಗಿ ನಿಂತಿದ್ದೇವೆ.&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ಬಗ್ಗೆ ಪರಿಶೀಲನೆ ಮಾಡಿ ತೀರ್ಪು ಕೊಡದಿದ್ರೆ ನಾವು ಹೋರಾಟಕ್ಕೆ ಇಳಿಬೇಕಾಗುತ್ತೆ. ನೆಲ, ಜನ, ಭಾಷೆ ಅಂತ ಬಂದಾಗ ನಮ್ಮ ಇಡೀ ಚಿತ್ರರಂಗ ಕರ್ನಾಟಕದ ಜೊತೆಗೆ ಇರುತ್ತೆ. ಇದರಲ್ಲಿ ಕನ್ನಡ ಚಿತ್ರರಂಗದ ಯಾರದ್ದೂ ಅಪಸ್ವರ ಇಲ್ಲ. 1991 ರಲ್ಲಿ ಇದೇ ಪರೀಸ್ಥಿತಿ ನಿರ್ಮಾಣ ಆಗಿತ್ತು. ಬಂಗಾರಪ್ಪ ಅವರು ಸುಗ್ರೀವಾಜ್ಞೆ ಹೊರಡಿಸಿದ್ರು. ಎಲ್ಲರಿಗೂ ಅನುಕೂಲ ಆಯ್ತು. ಮೇಕೆದಾಟು ಯೋಜನೆ ಸಮಸ್ಯೆ ಬಗೆ ಹರಿದಿದೆ. ಅದರ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ' ಎಂದಿದ್ದಾರೆ.&lt;/p&gt;&lt;p&gt;ರಾಕ್ ಲೈನ್ ಹೇಳಿಕೆ:-&lt;/p&gt;&lt;p&gt;'ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಅಂತ ಯಾರು ಹೇಳಿದ್ದು? ನಮ್ಮಲ್ಲಿ ಒಗ್ಗಟ್ಟಿದೆ.. ಕಾವೇರಿ ಹೋರಾಟಕ್ಕೆ ಎಲ್ಲರು ಬರುತ್ತಾರೆ, ಬರಲೇಬೇಕು..&lt;/p&gt;&lt;p&gt;ಕಲಾವಿದರಾಗಿದ್ದ ಅಂಬರೀಶ್ ಅವರು ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿಯೇ ರಾಜೀನಾಮೆ ನೀಡಿದ್ದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ತೀರ್ಮಾನ ತೆಗೆದುಕೊಂಡ್ರೆ ನಾವೆಲ್ಲಾ ಅದನ್ನ ಪಾಲಿಸುತ್ತೇವೆ.&lt;/p&gt;&lt;p&gt;ಆದ್ರೆ ಕಲಾವಿದರು ಬಂದ್ರೆ ತೀರ್ಮಾನ ಆಗುತ್ತೆ ಅಂತ ತಿಳಿದುಕೊಳ್ಳಬೇಡಿ.. ಚಿತ್ರರಂಗದ ಎಲ್ಲರೂ ಇರುತ್ತೇವೆ.. ಕನ್ನಡ ಚಿತ್ರರಂಗ ಸಂಪೂರ್ಣವಾಗಿ ನಾವು ರೈತ ಬಾಂಧವರ ಪರವಾಗಿ ಇದ್ದೇವೆ' ಎಂದಿದ್ದಾರೆ ನಿರ್ಮಾಪಕರಾದ ರಾಕ್&zwnj;ಲೈನ್ ವೆಂಕಟೇಶ್.&lt;/p&gt;&lt;p&gt;ಇನ್ನು ಮೊತ್ತೊಮ್ಮೆ ಮಾತನಾಡಿ ಹೇಳಿಕೆ ನೀಡಿರೋ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ 'ತಮಿಳುನಾಡು ಸಿಎಂ ವಿಜಯ್ ಅವರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಸಿಎಂ ವಿಜಯ್ ಸಿನಿಮಾರಂಗದವರು.&lt;/p&gt;&lt;p&gt;ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ನಾವು ಹೋಗಿ ಭೇಟಿ ಮಾಡೋ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಕರ್ನಾಟಕದಲ್ಲಿ ನಡೆಯುತ್ತಿರುವ ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಇಂದು ನಡೆದ ಫಿಲಂ ಚೇಂಬರ್ ಸಭೆಯಲ್ಲಿ ಸಿನಿರಂಗದ ಎಲ್ಲಾ ಸಂಘಗಳು ಭಾಗಿಯಾಗಿ ರೈತರ ಪರ ಹೋರಾಟಕ್ಕೆ ನಿಲ್ಲುವ ಒಮ್ಮತದ ನಿರ್ಧಾರಕ್ಕೆ ಬದ್ಧರಾಗಿರುವ ತೀರ್ಮಾನ ತೆಗೆದುಕೊಂಡಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/who-were-the-speakers-at-the-film-chamber-meeting-for-cauvery-water-sharing-dispute-and-the-resolution-to-know-here/articleshow-fcvbgq0"/>
        </item>
        <item>
            <title><![CDATA[ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದ ರಾಮಾಯಣ ಟ್ರೇಲರ್; ಸಿನಿಪ್ರಿಯರನ್ನು ಹುಚ್ಚೆಬ್ಬಿಸಿ ಕಿಕ್ಕೇರಿಸುವ ಸಂಗತಿಗಳು ಇವೇ ನೋಡಿ..!]]></title>
            <link>https://kannada.asianetnews.com/entertainment/ramayana-trailer-sets-the-internet-ablaze-and-here-are-5-mind-blowing-elements-driving-movie-buffs-wild/articleshow-fgmsq6d</link>
            <guid isPermaLink="true">https://kannada.asianetnews.com/entertainment/ramayana-trailer-sets-the-internet-ablaze-and-here-are-5-mind-blowing-elements-driving-movie-buffs-wild/articleshow-fgmsq6d</guid>
            <pubDate>Thu, 30 Jul 2026 18:09:36 +0530</pubDate>
            <description><![CDATA[&lt;p&gt;ಭಾರತೀಯ ಚಿತ್ರರಂಗದಲ್ಲಿ ಸದ್ಯ ಕೇಳಿಬರುತ್ತಿರುವ ಏಕೈಕ ಹೆಸರು 'ರಾಮಾಯಣ'. ಬಾಲಿವುಡ್&zwnj;ನ ಪ್ರತಿಭಾವಂತ ನಿರ್ದೇಶಕ ನಿತೇಶ್ ತಿವಾರಿ ಕನಸಿನ ಕೂಸು, ಬಿಗ್ ಬಜೆಟ್&zwnj;ನ ಈ ಮಹಾಕಾವ್ಯ ರಾಮಾಯಣದ ಟ್ರೇಲರ್ ಈಗ ಬಿಡುಗಡೆಯಾಗಿದ್ದು, ಇಂಟರ್ನೆಟ್&zwnj;ನಲ್ಲಿ ಬೆಂಕಿ ಹಚ್ಚಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysg8ps42xsv562xyjbych0h,imgname-ramayana-trailer--1--1785414834980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ 'ರಾಮಾಯಣ' ಸುನಾಮಿ: ರಾಕಿಂಗ್ ಸ್ಟಾರ್ ರಾವಣನ ಅಬ್ಬರಕ್ಕೆ ನಡುಗಿದ ಲಂಕೆ!&lt;/strong&gt;&lt;/p&gt;&lt;p&gt;ಭಾರತೀಯ ಚಿತ್ರರಂಗದಲ್ಲಿ ಸದ್ಯ ಕೇಳಿಬರುತ್ತಿರುವ ಏಕೈಕ ಹೆಸರು 'ರಾಮಾಯಣ'. ಬಾಲಿವುಡ್&zwnj;ನ ಪ್ರತಿಭಾವಂತ ನಿರ್ದೇಶಕ ನಿತೇಶ್ ತಿವಾರಿ ಕನಸಿನ ಕೂಸು, ಬಿಗ್ ಬಜೆಟ್&zwnj;ನ ಈ ಮಹಾಕಾವ್ಯ ರಾಮಾಯಣದ (Ramayana Trailer) ಟ್ರೇಲರ್ ಈಗ ಬಿಡುಗಡೆಯಾಗಿದ್ದು, ಇಂಟರ್ನೆಟ್&zwnj;ನಲ್ಲಿ ಬೆಂಕಿ ಹಚ್ಚಿದೆ. ಕೇವಲ ಟ್ರೇಲರ್ ಅಲ್ಲ, ಇದು ದೃಶ್ಯ ಕಾವ್ಯ! ಅದೂ ನಮ್ಮ ಹೆಮ್ಮೆಯ 'ರಾಕಿಂಗ್ ಸ್ಟಾರ್' ಯಶ್ ಅವರು ರಾವಣನಾಗಿ ಅಬ್ಬರಿಸುತ್ತಿದ್ದರೆ, ಫ್ಯಾನ್ಸ್ ಎದೆಯಲ್ಲಿ ನೂರಾರು ಆನೆಗಳ ಬಲ ಬಂದಂತಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಈ ಮೂರು ನಿಮಿಷಗಳ ಟ್ರೇಲರ್&zwnj;ನಲ್ಲಿ ಸಿನಿಪ್ರಿಯರನ್ನು ಹುಚ್ಚೆಬ್ಬಿಸಿ, ಕಿಕ್ಕೇರಿಸಿದ ಆ 5 ಅಂಶಗಳು ಇಲ್ಲಿವೆ ನೋಡಿ:&lt;/h2&gt;&lt;p&gt;1. ರಾವಣನಾಗಿ ಯಶ್ 'ಮಾನ್ಸ್ಟರ್' ಎಂಟ್ರಿ!&lt;/p&gt;&lt;p&gt;ಟ್ರೇಲರ್&zwnj;ನ ಹೈಲೈಟ್ ಅಂದರೆ ಅದು ಲಂಕೇಶ್ವರನಾಗಿ ಯಶ್ ಅವರ ದರ್ಶನ. &quot;ಮೂರು ಲೋಕಗಳು ರಾವಣ ರಾಜ್ಯವನ್ನು ವೀಕ್ಷಿಸಲಿವೆ&quot; ಎನ್ನುವ ಸಂಭಾಷಣೆಯೊಂದಿಗೆ ಅವರು ತೆರೆಯ ಮೇಲೆ ಕಾಣಿಸಿಕೊಂಡಾಗ ಸಿಗುವ ಕಿಕ್ ಅಷ್ಟಿಷ್ಟಲ್ಲ. ಚಿನ್ನದ ಲಂಕೆಯಲ್ಲಿ ಲಕ್ಷಾಂತರ ಸೈನಿಕರ ಮುಂದೆ ನಿಂತು ಘರ್ಜಿಸುವ ರಾವಣನ ಪಾತ್ರದಲ್ಲಿ ಯಶ್ ಅವರ ಲುಕ್ ಮತ್ತು ಆಟಿಟ್ಯೂಡ್ ಸಖತ್ ಮಾಸ್ ಆಗಿದೆ. ಕೇವಲ ನಾಯಕನಾಗಿ ಮೆರೆದಿದ್ದ ರಾಕಿ ಭಾಯ್, ಈಗ ಜಗತ್ತಿನ ಅತೀ ದೊಡ್ಡ ವಿಲನ್ ಆಗಿ ಹೇಗೆ ಅಬ್ಬರಿಸಲಿದ್ದಾರೆ ಎಂಬ ಕುತೂಹಲ ದುಪ್ಪಟ್ಟಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;2. ಕಣ್ಮನ ಸೆಳೆಯುವ ಮಹಾವಿಷ್ಣುವಿನ ಅವತಾರ&lt;/p&gt;&lt;p&gt;ವಿಎಫ್&zwnj;ಎಕ್ಸ್ (VFX) ಅಂದರೆ ಹೀಗಿರಬೇಕು ಎಂಬಂತೆ ಚಿತ್ರದ ದೃಶ್ಯಗಳು ಮೂಡಿಬಂದಿವೆ. ಭೂಮಿಯ ಮೇಲೆ ಅಧರ್ಮ ಹೆಚ್ಚಾದಾಗ ಶ್ರೀಮನ್ನಾರಾಯಣ ಅವತರಿಸುವ ಸನ್ನಿವೇಶವು ಅದ್ಭುತವಾಗಿದೆ. ಶೇಷನಾಗನ ಮೇಲೆ ಪವಡಿಸಿರುವ ವಿಷ್ಣು, ಶಂಖ ಮತ್ತು ಕಮಲ ಹಿಡಿದು ದರ್ಶನ ನೀಡುವ ದೃಶ್ಯವು ಪ್ರೇಕ್ಷಕರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ಯುತ್ತದೆ. ಹಾಲಿವುಡ್ ಮಟ್ಟದ ತಾಂತ್ರಿಕತೆ ಇಲ್ಲಿ ಎದ್ದು ಕಾಣುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;3. ಶಾಂತಸ್ವರೂಪಿ ರಾಮನ ಸುತ್ತ ಕಮಲದ ಹೂವುಗಳು!&lt;/p&gt;&lt;p&gt;ರಣಬೀರ್ ಕಪೂರ್ ಶ್ರೀರಾಮನಾಗಿ ಪರಕಾಯ ಪ್ರವೇಶ ಮಾಡಿದ್ದಾರೆ ಎನ್ನಬಹುದು. ಅವರು ಧ್ಯಾನಕ್ಕೆ ಕುಳಿತಾಗ ಅವರ ಸುತ್ತ ಬೃಹತ್ ಗಾತ್ರದ ಕಮಲದ ದಳಗಳು ಅರಳುವ ದೃಶ್ಯವಂತೂ ಕಣ್ಣಿಗೆ ಹಬ್ಬ. ರಾಮನ ಶಾಂತಿ ಮತ್ತು ಒಳಗಿನ ಶಕ್ತಿಯನ್ನು ಬಿಂಬಿಸುವ ಈ ದೃಶ್ಯವು ನಿರ್ದೇಶಕರ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿದೆ. ಲಕ್ಷ್ಮಣನಾಗಿ ರವಿ ದುಬೆ ಕೂಡ ಅಷ್ಟೇ ಗಾಂಭೀರ್ಯದಿಂದ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;4. ಸೀತೆಯ ಕೈಯಲ್ಲಿ ಖಡ್ಗ? ಇದೇ ನೋಡಿ ಟ್ವಿಸ್ಟ್!&lt;/p&gt;&lt;p&gt;ಎಲ್ಲರೂ ಸೀತೆಯನ್ನು ಮೃದುಸ್ವಭಾವದವಳು ಎಂದು ಭಾವಿಸಿದ್ದರು. ಆದರೆ ಈ ಸಿನಿಮಾದಲ್ಲಿ ಸೈ ಪಲ್ಲವಿ ನಿರ್ವಹಿಸಿರುವ ಸೀತೆ ಕೇವಲ ಸೌಮ್ಯವತಿಯಲ್ಲ, ಆಕೆ ವೀರನಾರಿ ಕೂಡ! ಟ್ರೇಲರ್&zwnj;ನಲ್ಲಿ ಸೈ ಪಲ್ಲವಿ ಅವರು ಖಡ್ಗ ಹಿಡಿದು ಹೋರಾಡುವ ದೃಶ್ಯವು ಎಲ್ಲರ ಹುಬ್ಬೇರಿಸಿದೆ. ಇದು ಸೀತೆಯ ಶಕ್ತಿಯ ಹೊಸ ಆಯಾಮವನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನದಂತೆ ತೋರುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;5. ಬ್ರಹ್ಮಾಸ್ತ್ರದ ಮೂಲಕ ರಾಮಯುಗ ಆರಂಭ!&lt;/p&gt;&lt;p&gt;ಟ್ರೇಲರ್ ಮುಕ್ತಾಯವಾಗುವುದು ಒಂದು ಮಾಸ್ ಡೈಲಾಗ್ ಮತ್ತು ಅದ್ಭುತ ಆಕ್ಷನ್ ಸೀನ್ ಮೂಲಕ. &quot;ಇದು ರಾಮಯುಗದ ಆರಂಭ&quot; ಎಂದು ಹೇಳುತ್ತಾ ಶ್ರೀರಾಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವ ದೃಶ್ಯವು ರೋಮಾಂಚನಕಾರಿಯಾಗಿದೆ. ಅಗ್ನಿ ಮತ್ತು ಪಂಚಭೂತಗಳು ಒಂದಾಗುವ ಈ ದೃಶ್ಯವು ಪ್ರೇಕ್ಷಕರಿಗೆ ಗೂಸ್&zwnj;ಬಂಪ್ಸ್ ಗ್ಯಾರಂಟಿ ನೀಡುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇದಕ್ಕೆ ಆಸ್ಕರ್ ವಿಜೇತರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಸಂಗೀತವು ಜೀವ ತುಂಬಿದೆ. ಒಟ್ಟಿನಲ್ಲಿ, 2026ರ ದೀಪಾವಳಿಗೆ ಭಾರತೀಯ ಚಿತ್ರರಂಗ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಈ ಚಿತ್ರ ಕೇವಲ ಸಿನಿಮಾವಲ್ಲ, ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಎನ್ನುವುದರಲ್ಲಿ ಸಂಶಯವೇ ಇಲ್ಲ!&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/ramayana-trailer-sets-the-internet-ablaze-and-here-are-5-mind-blowing-elements-driving-movie-buffs-wild/articleshow-fgmsq6d"/>
        </item>
        <item>
            <title><![CDATA[ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!]]></title>
            <link>https://kannada.asianetnews.com/sandalwood/jayaprakash-shetty-starrer-bana-kannada-and-tulu-movie-release-date-announced-videoshow-ix8ebrr</link>
            <guid isPermaLink="true">https://kannada.asianetnews.com/sandalwood/jayaprakash-shetty-starrer-bana-kannada-and-tulu-movie-release-date-announced-videoshow-ix8ebrr</guid>
            <pubDate>Wed, 29 Jul 2026 17:25:54 +0530</pubDate>
            <description><![CDATA[&lt;p&gt;ತುಳುನಾಡಿನ ಸಾಂಸ್ಕೃತಿಕ ಪರಂಪರೆ, ನಾಗಾರಾಧನೆ ಹಾಗೂ ನಂಬಿಕೆಗಳನ್ನು ಆಧರಿಸಿ ನಿರ್ಮಾಣವಾಗಿರುವ 'ಬನ' ಚಿತ್ರ ಅಕ್ಟೋಬರ್ 23ರಂದು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 'ಬನ' ಚಿತ್ರದ ಪ್ರಮುಖ ಆಕರ್ಷಣೆಯೆಂದರೆ ಹಿರಿಯ ಪತ್ರಕರ್ತ ಹಾಗೂ ನ್ಯೂಸ್ ಆಂಕರ್ ಜಯಪ್ರಕಾಶ್ ಶೆಟ್ಟಿ ಅಭಿನಯ..&lt;/p&gt;]]></description>
            <media:content url="https://geo.dailymotion.com/player/x1tbu.html?video=xat66nu" medium="video" height="768" width="1024"/>
            <content:encoded><![CDATA[&lt;p&gt;ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಹೊಸ ರೀತಿಯ ಕಥಾಹಂದರದ ಮೂಲಕ ಗಮನ ಸೆಳೆಯುತ್ತಿರುವ &lsquo;ಬನ&rsquo; ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆ, ನಾಗಾರಾಧನೆ ಹಾಗೂ ನಂಬಿಕೆಗಳನ್ನು ಆಧರಿಸಿ ನಿರ್ಮಾಣವಾಗಿರುವ 'ಬನ' ಚಿತ್ರ ಅಕ್ಟೋಬರ್ 23ರಂದು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. 'ಬನ' ಚಿತ್ರದ ಪ್ರಮುಖ ಆಕರ್ಷಣೆಯೆಂದರೆ ಹಿರಿಯ ಪತ್ರಕರ್ತ ಹಾಗೂ ನ್ಯೂಸ್ ಆಂಕರ್ ಜಯಪ್ರಕಾಶ್ ಶೆಟ್ಟಿ (Jayaprakash Shetty) ಅವರ ಅಭಿನಯ.&amp;nbsp;&lt;/p&gt;&lt;p&gt;ಹಲವು ವರ್ಷಗಳಿಂದ ಕನ್ನಡದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಜಯಪ್ರಕಾಶ್ ಶೆಟ್ಟಿ ಬನ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದೆ ರೂಪಾ ವರ್ಕಡಿ 'ಬನ' ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೋಹರ್ ರೈ ವೈಪಾಲ ನಿರ್ಮಿಸಿರೋ ಚಿತ್ರಕ್ಕೆ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನ ಮಾಡಿದ್ದಾರೆ.&amp;nbsp;&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/jayaprakash-shetty-starrer-bana-kannada-and-tulu-movie-release-date-announced-videoshow-ix8ebrr"/>
        </item>
        <item>
            <title><![CDATA[ಮೊದಲ ಬಾರಿಗೆ ಮಗಳೊಂದಿಗೆ ತೆರೆ ಹಂಚಿಕೊಂಡ ಊರ್ವಶಿ: 'ಬುಲ್ಲಿ'ಯಲ್ಲಿ ತೇಜಲಕ್ಷ್ಮಿ ಎಂಟ್ರಿ]]></title>
            <link>https://kannada.asianetnews.com/sandalwood/urvashi-shares-screen-with-daughter-tejalakshmi-for-the-first-time-in-bulli-gvd/articleshow-lo3r2c1</link>
            <guid isPermaLink="true">https://kannada.asianetnews.com/sandalwood/urvashi-shares-screen-with-daughter-tejalakshmi-for-the-first-time-in-bulli-gvd/articleshow-lo3r2c1</guid>
            <pubDate>Wed, 29 Jul 2026 16:30:03 +0530</pubDate>
            <description><![CDATA[&lt;p&gt;ಊರ್ವಶಿ ಅವರ ಮಗಳು ಇದೀಗ ಸ್ಯಾಂಡಲ್&zwnj;ವುಡ್&zwnj;ಗೆ ಎಂಟ್ರಿ ಕೊಟ್ಟಿದ್ದಾರೆ. ಭುವನ್&zwnj; ಪೊನ್ನಣ್ಣ ನಟನೆಯ ಹೊಸ ಸಿನಿಮಾ &lsquo;ಬುಲ್ಲಿ&rsquo;ಯಲ್ಲಿ ಊರ್ವಶಿ ಹಾಗೂ ಅವರ ಮಗಳು ತೇಜಲಕ್ಷ್ಮಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypres0r4cw28drxgmm556ae,imgname-vjj-1785322759192.png" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರಪ್ರಶಸ್ತಿ ವಿಜೇತ ಬಹುಭಾಷಾ ನಟಿ ಊರ್ವಶಿ ಅವರ ಮಗಳು ಇದೀಗ ಸ್ಯಾಂಡಲ್&zwnj;ವುಡ್&zwnj;ಗೆ ಎಂಟ್ರಿ ಕೊಟ್ಟಿದ್ದಾರೆ. ಭುವನ್&zwnj; ಪೊನ್ನಣ್ಣ ನಟನೆಯ ಹೊಸ ಸಿನಿಮಾ &lsquo;ಬುಲ್ಲಿ&rsquo;ಯಲ್ಲಿ ಊರ್ವಶಿ ಹಾಗೂ ಅವರ ಮಗಳು ತೇಜಲಕ್ಷ್ಮಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ. ಭುವನ್&zwnj; ಪೊನ್ನಣ್ಣ ನಟನೆಯ &lsquo;ಬುಲ್ಲಿ&rsquo; ಸಿನಿಮಾದ ಶೀರ್ಷಿಕೆ ಅನಾವರಣದ ವೇಳೆ ನಟಿ ಹರ್ಷಿಕಾ ಪೂಣಚ್ಚ ಈ ವಿಚಾರ ರಿವೀಲ್ ಮಾಡಿದರು.&lt;/p&gt;&lt;p&gt;ಈ ವೇಳೆ ಮಾತನಾಡಿದ ನಟಿ ಊರ್ವಶಿ, &lsquo;ನಾನು ಮತ್ತು ನನ್ನ ಮಗಳು ಜೊತೆಯಾಗಿ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಇದೇ ಮೊದಲ ಬಾರಿ ಕನ್ನಡ ಸಿನಿಮಾ ಬುಲ್ಲಿಯಲ್ಲಿ ಜೊತೆಯಾಗಿ ನಟಿಸುತ್ತಿದ್ದೇವೆ. ಮಗಳು ತೇಜಾ ಬೆಂಗಳೂರಿನಲ್ಲೇ ಓದಿ ಇದೀಗ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾಳೆ. ಸಿನಿಮಾಗಳಲ್ಲೂ ನಟಿಸುತ್ತಿದ್ದಾಳೆ. ನನಗೂ ಕನ್ನಡ ಚಿತ್ರರಂಗಕ್ಕೂ ದೈವಿಕ ನಂಟಿದೆ.&lt;/p&gt;&lt;p&gt;ಡಾ.ರಾಜ್&zwnj;ಕುಮಾರ್&zwnj; ಅವರಿಂದ ಭುವನ್&zwnj;ವರೆಗೆ ಪ್ರತೀ ತಲೆಮಾರಿನ ಕಲಾವಿದರ ಜೊತೆಗೆ ಅಭಿನಯಿಸಿರುವುದಕ್ಕೆ ಹೆಮ್ಮೆ ಇದೆ. ರಾಮ ಶಾಮ ಭಾಮ ಸಿನಿಮಾ ನಂತರ ಅನೇಕ ಕನ್ನಡ ಸಿನಿಮಾ ಸ್ಕ್ರಿಪ್ಟ್&zwnj;ಗಳು ಬಂದಿದ್ದವು. ಆದರೆ ಯಾವುದೂ ಸಹಜವಾಗಿ ಕನೆಕ್ಟ್&zwnj; ಆಗುವಂತಿರಲಿಲ್ಲ. ಬುಲ್ಲಿ ಸಿನಿಮಾದ ಸ್ಕ್ರಿಪ್ಟ್&zwnj;ನಲ್ಲಿ ಹೊಸತನವಿತ್ತು. ಈ ಸಿನಿಮಾದಲ್ಲಿ ಮಾಡಿಲ್ಲ ಎಂದಾದರೆ ಒಂದೊಳ್ಳೆ ಚಾನ್ಸ್&zwnj; ಮಿಸ್&zwnj; ಮಾಡಿಕೊಳ್ತಿದ್ದೆ&rsquo; ಎಂದರು. ಈ ವೇಳೆ ಪುನೀತ್&zwnj; ರಾಜ್&zwnj;ಕುಮಾರ್&zwnj; ಜೊತೆಗೆ ಡ್ಯಾನ್ಸ್&zwnj; ಮಾಡಿದ್ದನ್ನು ನೆನಪಿಸಿಕೊಂಡು ಭಾವುಕರಾದರು.&lt;/p&gt;&lt;h2&gt;&lt;strong&gt;ಬಡ್ಡಿ ವ್ಯಾಪಾರಿಯಾಗಿ ಓಂಪ್ರಕಾಶ್&zwnj; ರಾವ್&zwnj;&lt;/strong&gt;&lt;/h2&gt;&lt;p&gt;ನಾಯಕ ಭುವನ್&zwnj; ಮಾತನಾಡಿ, &lsquo;ಚಿತ್ರದಲ್ಲಿ ಗೊತ್ತು ಗುರಿಯಿಲ್ಲದ ಜೆನ್&zwnj;ಜಿ ಹುಡುಗ ಬಲರಾಮನಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಅಮ್ಮ ಯಶೋದೆ ಪಾತ್ರದಲ್ಲಿ ಊರ್ವಶಿ ನಟಿಸುವ ಮೂಲಕ ನನ್ನ ಬಹುದಿನಗಳ ಕನಸು ನನಸಾದಂತಾಗಿದೆ&rsquo; ಎಂದರು. ಓಂಪ್ರಕಾಶ್&zwnj; ರಾವ್&zwnj; ಬಡ್ಡಿ ವ್ಯಾಪಾರಿಯಾಗಿ ನಟಿಸಿದ್ದಾರೆ. ಅನೂಪ್&zwnj; ಆಂಟನಿ ಈ ಸಿನಿಮಾದ ನಿರ್ದೇಶಕರು. ನವೀನ್&zwnj; ನಿರ್ಮಾಪಕರು.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/urvashi-shares-screen-with-daughter-tejalakshmi-for-the-first-time-in-bulli-gvd/articleshow-lo3r2c1"/>
        </item>
        <item>
            <title><![CDATA[ವಿಜಯ್ ಕೊನೆ ಸಿನಿಮಾದಲ್ಲಿ 6.3 ಅಡಿ ಎತ್ತರದ ಕನ್ನಡಿಗನ ಖದರ್: ಕಾಲಿವುಡ್‌ನಲ್ಲಿ ವಜ್ರಾಂಗ್ ಶೆಟ್ಟಿ ಅಬ್ಬರ!]]></title>
            <link>https://kannada.asianetnews.com/sandalwood/vajrang-shetty-makes-powerful-kollywood-debut-with-vijay-gvd/articleshow-m83q4lw</link>
            <guid isPermaLink="true">https://kannada.asianetnews.com/sandalwood/vajrang-shetty-makes-powerful-kollywood-debut-with-vijay-gvd/articleshow-m83q4lw</guid>
            <pubDate>Wed, 29 Jul 2026 17:38:14 +0530</pubDate>
            <description><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನಲ್ಲಿ ನಾಯಕನಾಗಿಯೂ, ಖಳನಾಯಕನಾಗಿಯೂ ತನ್ನದೇ ಛಾಪು ಮೂಡಿಸಿರುವ ನಟ ವಜ್ರಾಂಗ್ ಶೆಟ್ಟಿ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಬಾರಿ ಅವರು ಕಾಲಿವುಡ್&zwnj;ಗೆ ಭರ್ಜರಿ ಎಂಟ್ರಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypwaxrrgbdsk07bqfpk6e4s,imgname-hch-1785326827288.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನಲ್ಲಿ ನಾಯಕನಾಗಿಯೂ, ಖಳನಾಯಕನಾಗಿಯೂ ತನ್ನದೇ ಛಾಪು ಮೂಡಿಸಿರುವ ನಟ ವಜ್ರಾಂಗ್ ಶೆಟ್ಟಿ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಬಾರಿ ಅವರು ಕಾಲಿವುಡ್&zwnj;ಗೆ ಭರ್ಜರಿ ಎಂಟ್ರಿ ನೀಡಿದ್ದು, ತಮಿಳು ಸೂಪರ್&zwnj;ಸ್ಟಾರ್ ವಿಜಯ್ ದಳಪತಿ ಅಭಿನಯದ ಬಹುನಿರೀಕ್ಷಿತ ಹಾಗೂ ಅವರ ವಿದಾಯ ಚಿತ್ರವೆಂದು ಹೇಳಲಾಗುತ್ತಿರುವ 'ಜನನಾಯಗನ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.&lt;/p&gt;&lt;p&gt;ಕಳೆದ ವಾರ ಬಿಡುಗಡೆಯಾದ ಜನನಾಯಗನ್ ಸಿನಿಮಾ ತಮಿಳುನಾಡಿನಲ್ಲಿ ಭರ್ಜರಿ ಚರ್ಚೆಗೆ ಗ್ರಾಸವಾಗಿದ್ದು, ಚಿತ್ರದ ಖಳನಾಯಕ ಬಾಬಿ ಡಿಯೋಲ್ ನಂತರ ಗಮನ ಸೆಳೆದ ಮತ್ತೊಂದು ಹೆಸರು ವಜ್ರಾಂಗ್ ಶೆಟ್ಟಿ. ವಿಶೇಷವಾಗಿ ವಿಜಯ್ ಮತ್ತು ವಜ್ರಾಂಗ್ ನಡುವಿನ ಮಾಸ್ ಆ್ಯಕ್ಷನ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಲಿವುಡ್ ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸಿವೆ.&lt;/p&gt;&lt;p&gt;ಮೂಲತಃ ಕುಂದಾಪುರದವರಾದ ಮಣಿ ಶೆಟ್ಟಿ, ಚಿತ್ರರಂಗದಲ್ಲಿ ವಜ್ರಾಂಗ್ ಶೆಟ್ಟಿ ಎಂದೇ ಪರಿಚಿತರು. 2014ರಲ್ಲಿ ಮಿಸ್ಟರ್ ಕುಂದಾಪುರ ಪಟ್ಟ ಗೆದ್ದ ಅವರು, ಸುಮಾರು 6.3 ಅಡಿ ಎತ್ತರದ ಆಕರ್ಷಕ ವ್ಯಕ್ತಿತ್ವ ಮತ್ತು ದಿಟ್ಟ ಮೈಕಟ್ಟಿನ ಮೂಲಕ ಆರಂಭದಿಂದಲೇ ಗಮನ ಸೆಳೆದಿದ್ದರು. ಇದೇ ಕಾರಣಕ್ಕೆ ನಾಯಕ ಹಾಗೂ ಖಳನಾಯಕ ಎರಡೂ ಬಗೆಯ ಪಾತ್ರಗಳಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿದ್ದಾರೆ.&lt;/p&gt;&lt;p&gt;ವಿನಯ್ ರಾಜ್&zwnj;ಕುಮಾರ್ ಅಭಿನಯದ 'ಸಿದ್ದಾರ್ಥ' ಚಿತ್ರದ ಮೂಲಕ ಖಳನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ವಜ್ರಾಂಗ್, ಪಾರ್ವತಮ್ಮ ರಾಜ್&zwnj;ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್&zwnj;ನಿಂದ ತಮ್ಮ ಸಿನಿಪಯಣ ಆರಂಭಿಸಿದರು. ನಂತರ 'ಮಂತ್ರಂ' ಹಾಗೂ 'ಬಬ್ಲುಷಾ' ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಗಮನ ಸೆಳೆದರು. ಪ್ರಜ್ವಲ್ ದೇವರಾಜ್ ಅಭಿನಯದ 'ಮಾದ ಮತ್ತು ಮಾನಸಿ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅವರು, ಪುನೀತ್ ರಾಜ್&zwnj;ಕುಮಾರ್ ಅವರ ಕೊನೆಯ ಸಿನಿಮಾ 'ಜೇಮ್ಸ್'ನಲ್ಲಿ ಪ್ರತಾಪ್ ಅರಸ್ ಎಂಬ ಖಳಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.&lt;/p&gt;&lt;p&gt;ಕನ್ನಡದ ಬಳಿಕ ಟಾಲಿವುಡ್&zwnj;ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ವಜ್ರಾಂಗ್ ಶೆಟ್ಟಿ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ವಿಷ್ಣು ಎಂಬ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಗಮನ ಸೆಳೆದರು. ವಿಶೇಷವಾಗಿ ಪ್ರಭಾಸ್ ಜೊತೆಗಿನ ಆ್ಯಕ್ಷನ್ ದೃಶ್ಯಗಳು ಇಂದಿಗೂ ಅಭಿಮಾನಿಗಳ ಮೆಚ್ಚಿನ ಕ್ಷಣಗಳಾಗಿ ಉಳಿದಿವೆ.&lt;/p&gt;&lt;h2&gt;&lt;strong&gt;ಬಹುಬೇಡಿಕೆಯ ನಟರಲ್ಲಿ ಒಬ್ಬ&lt;/strong&gt;&lt;/h2&gt;&lt;p&gt;ಈಗ ಜನನಾಯಗನ್ ಮೂಲಕ ಕಾಲಿವುಡ್&zwnj;ನಲ್ಲೂ ಅದ್ದೂರಿ ಪ್ರವೇಶ ಮಾಡಿರುವ ವಜ್ರಾಂಗ್ ಶೆಟ್ಟಿ, ಕನ್ನಡದಿಂದ ತೆಲುಗು, ಅಲ್ಲಿಂದ ತಮಿಳು ಚಿತ್ರರಂಗದವರೆಗೆ ತಮ್ಮ ಪ್ರತಿಭೆಯ ಛಾಪು ಮೂಡಿಸುತ್ತಿದ್ದಾರೆ. ಪ್ರತಿಯೊಂದು ಭಾಷೆಯಲ್ಲೂ ತಮ್ಮದೇ ಆದ ಪ್ರಭಾವ ಬೀರುತ್ತಿರುವ ಈ ಕನ್ನಡದ ಪ್ರತಿಭೆ, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/vajrang-shetty-makes-powerful-kollywood-debut-with-vijay-gvd/articleshow-m83q4lw"/>
        </item>
        <item>
            <title><![CDATA[ಹೀರೋ ಸೇರಿ ಎಲ್ಲರೂ ಅರ್ಧ ಸಂಭಾವನೆ ಹೂಡಿಕೆ ಮಾಡಬೇಕು: ನಿರ್ದೇಶಕ ಕಿರಣ್‌ ರಾಜ್‌ ಹೇಳಿದ್ದೇನು?]]></title>
            <link>https://kannada.asianetnews.com/sandalwood/kiran-raj-urges-heroes-to-invest-half-their-salary-to-save-sandalwood-gvd/articleshow-nm3nntm</link>
            <guid isPermaLink="true">https://kannada.asianetnews.com/sandalwood/kiran-raj-urges-heroes-to-invest-half-their-salary-to-save-sandalwood-gvd/articleshow-nm3nntm</guid>
            <pubDate>Wed, 29 Jul 2026 16:11:51 +0530</pubDate>
            <description><![CDATA[&lt;p&gt;ಸಿನಿಮಾದಲ್ಲಿ ಹೆಚ್ಚು ಖರ್ಚಾಗುವುದು ಸಂಭಾವನೆ ವಿಚಾರದಲ್ಲಿ. ಹೀರೋ ಸೇರಿದಂತೆ ಎಲ್ಲರೂ ಸಂಭಾವನೆಯಲ್ಲಿ ಅರ್ಧ ತೆಗೆದುಕೊಂಡು ಉಳಿದರ್ಧವನ್ನು ಚಿತ್ರಕ್ಕೇ ಹೂಡಿಕೆ ಮಾಡಬೇಕು ಎಂದರು ನಿರ್ದೇಶಕ ಕಿರಣ್&zwnj; ರಾಜ್&zwnj;.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypq1ym9drzket04ww2cnjv8,imgname-bjb-1785321290377.png" type="image/jpeg" height="390" width="690"/>
            <content:encoded><![CDATA[&lt;p&gt;1. ಕನ್ನಡ ಚಿತ್ರರಂಗದ ಇವತ್ತಿನ ಪರಿಸ್ಥಿತಿಗೆ ಯಾರು ಯಾರನ್ನೂ ದೂರುವ ಅಗತ್ಯ ಇಲ್ಲ. ಯಾಕೆಂದರೆ ಎಲ್ಲಾ ಭಾಷೆಯಲ್ಲೂ ಇದೇ ಪರಿಸ್ಥಿತಿ ಇದೆ. ಓಟಿಟಿ, ಟೀವಿ ರೈಟ್ಸ್&zwnj;, ಡಬ್ಬಿಂಗ್&zwnj;, ರೀಮೇಕ್&zwnj;... ಹೀಗೆ ಸಿನಿಮಾವೊಂದರ ಬಿಡುಗಡೆಯ ಪೂರ್ವ ಇದ್ದ ಎಲ್ಲಾ ಬಿಸಿನೆಸ್&zwnj;ಗಳು ಈಗ ಬಾಗಿಲು ಹಾಕಿಕೊಂಡಿವೆ.&lt;/p&gt;&lt;p&gt;2. ಈಗ ಎಲ್ಲರೂ ನಿರ್ಮಾಪಕರ ಜವಾಬ್ದಾರಿಯಲ್ಲಿ ಪಾಲುದಾರರಾಗಬೇಕು. ನಿರ್ಮಾಪಕರಂತೆ ನಿರ್ದೇಶಕ, ನಟ- ನಟಿಯರು, ನಿರ್ದೇಶಕ, ತಂತ್ರಜ್ಞರು ಹೀಗೆ ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳುವ ಅನಿವಾರ್ಯ ಮತ್ತು ಅವಶ್ಯಕತೆ ಇದೆ.&lt;/p&gt;&lt;p&gt;3. ಸಿನಿಮಾದಲ್ಲಿ ಹೆಚ್ಚು ಖರ್ಚಾಗುವುದು ಸಂಭಾವನೆ ವಿಚಾರದಲ್ಲಿ. ಹೀರೋ ಸೇರಿದಂತೆ ಎಲ್ಲರೂ ಸಂಭಾವನೆಯಲ್ಲಿ ಅರ್ಧ ತೆಗೆದುಕೊಂಡು ಉಳಿದರ್ಧವನ್ನು ಚಿತ್ರಕ್ಕೇ ಹೂಡಿಕೆ ಮಾಡಬೇಕು. ಅಂದರೆ 10 ರು. ಸಂಭಾವನೆ ಎಂದರೆ 5 ರು. ತೆಗೆದುಕೊಳ್ಳಬೇಕು. ಹೀಗೆ ಹೂಡಿಕೆ ಮಾಡುವ ಮೂಲಕ ಚಿತ್ರದ ಕೊನೆಯವರೆಗೂ ನಿರ್ಮಾಪಕನ ಜೊತೆಗೆ ನಿಂತು ಸೋಲು- ಗೆಲುವು, ಲಾಭ- ನಷ್ಟ ಎಲ್ಲದಕ್ಕೂ ನಾವೂ ಜವಾಬ್ದಾರಿ ಹೊರಬಹುದು. ಗೆದ್ದರೆ ಎಲ್ಲರೂ ಗೆಲ್ಲೋಣ ಎನ್ನುವ ಭಾವನೆ ನಮ್ಮಲ್ಲಿ ಮೂಡಬೇಕಿದೆ.&lt;/p&gt;&lt;p&gt;4. ಈಗ ಚಿತ್ರರಂಗಕ್ಕೆ ಎದುರಾಗಿರುವ ಸ್ಥಿತಿ ಒಂದು ರೀತಿ ಒಳ್ಳೆಯದು. ಯಾಕೆಂದರೆ ಸಿನಿಮಾಗಳಿಗೆ ಚಿತ್ರಮಂದಿರಗಳು ಹೊರತಾಗಿ ಉಳಿದೆಲ್ಲವು ಬಾಗಿಲು ಮುಚ್ಚಿದಾಗ ಈ ಹಿಂದಿನಂತೆ ಥಿಯೇಟರ್&zwnj;ಗಾಗಿಯೇ ಸಿನಿಮಾ ಮಾಡುವ ಕಾಲ ಮತ್ತೆ ಬಂದಿದೆ. ಬೇರೆ ಬೇರೆ ಮೂಲಗಳಿಂದ ದುಡ್ಡು ಬರುತ್ತದೆ ಎನ್ನುವ ಭಾವನೆಯಲ್ಲಿ ಹೇಗೆ ಬೇಕೋ ಹಾಗೆ ಸಿನಿಮಾ ಮಾಡುವುದಕ್ಕೆ ಈಗ ಅವಕಾಶ ಇಲ್ಲ.&lt;/p&gt;&lt;h2&gt;&lt;strong&gt;ಗೋಲ್ಡನ್&zwnj; ಡೇಸ್&zwnj; ಬರೋದು ಪಕ್ಕಾ&lt;/strong&gt;&lt;/h2&gt;&lt;p&gt;5. ತಿಂಗಳಿಗೆ ಕನಿಷ್ಠ ಎರಡು ಸಿನಿಮಾಗಳಾದರೂ ಚಿತ್ರಮಂದಿರಗಳಲ್ಲಿ ಸೂಪರ್&zwnj; ಹಿಟ್&zwnj; ಆಗಬೇಕು. ಇದು ಚಿತ್ರರಂಗದಲ್ಲಿರುವ ಎಲ್ಲರ ಗುರಿಯಾದರೆ ಚಿತ್ರೋದ್ಯಮದ ಪಾಲಿಗೆ ಗೋಲ್ಡನ್&zwnj; ಡೇಸ್&zwnj; ಬರೋದು ಪಕ್ಕಾ.&lt;/p&gt;&lt;p&gt;6. ಪ್ರೇಕ್ಷಕರನ್ನು ದೂರಬಾರದು. ನಮ್ಮಲ್ಲಿ ಎಲ್ಲಾ ರೀತಿಯ ಸಿನಿಮಾಗಳನ್ನು ಗೆಲ್ಲಿಸುವ ಪ್ರೇಕ್ಷಕ ಇದ್ದಾರೆ. ಪಕ್ಕಾ ಕಮರ್ಷಿಯಲ್&zwnj; ಸಿನಿಮಾ ಆಗಿರುವ &lsquo;ಕೆಜಿಎಫ್&zwnj;&rsquo;, ಕ್ಲಾಸಿಕ್&zwnj; ಎನಿಸುವ &lsquo;777 ಚಾರ್ಲಿ&rsquo;, ದೈವಿಕ ಎನಿಸುವ &lsquo;ಕಾಂತಾರ&rsquo;, ಹಾರರ್&zwnj; ಕಾಮಿಡಿಯ &lsquo;ಸು ಫ್ರಮ್&zwnj; ಸೋ&rsquo;, ಪ್ರೇಮ ಕತೆಯಾಗಿರುವ &lsquo;ಲವ್&zwnj; ಮಾಕ್ಟೇಲ್&zwnj;&rsquo; ಚಿತ್ರಗಳನ್ನು ನೋಡಿ ಮೆಚ್ಚಿದ್ದಾರೆ. ಹೀಗಾಗಿ ಅವರನ್ನು ನಾವು ಇಂಥದ್ದೇ ಜಾನರ್&zwnj;ಗೇ ಸೀಮಿತ ಮಾಡದೆ, ನಾವೂ ಕೂಡ ನಿರ್ದಿಷ್ಟ ಜಾನರ್&zwnj;ಗೆ ಅಂಟಿಕೊಳ್ಳದೆ ಸಿನಿಮಾ ಮಾಡಬೇಕಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kiran-raj-urges-heroes-to-invest-half-their-salary-to-save-sandalwood-gvd/articleshow-nm3nntm"/>
        </item>
        <item>
            <title><![CDATA[Ramayana Trailer: 'ರಾಮಾಯಣ' ಟ್ರೇಲರ್ ರಿಲೀಸ್ ಬಳಿಕ ಜಗತ್ತಿನ ರೆಸ್ಪಾನ್ಸ್ ಹೇಗಿದೆ? ನೆಟ್ಟಿಗರು ಹೇಳ್ತಿರೋದೇನು? ಇಲ್ಲಿ ನೋಡಿ..]]></title>
            <link>https://kannada.asianetnews.com/news-entertainment/social-media-response-about-today-launched-ramayana-trailer-to-know-here/articleshow-ns99wcl</link>
            <guid isPermaLink="true">https://kannada.asianetnews.com/news-entertainment/social-media-response-about-today-launched-ramayana-trailer-to-know-here/articleshow-ns99wcl</guid>
            <pubDate>Thu, 30 Jul 2026 10:16:57 +0530</pubDate>
            <description><![CDATA[&lt;p&gt;ರಾಮಾಯಣ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಹಲವು. ರಾಮಾಯಣ ಚಿತ್ರ ಬರುತ್ತೆ ಅಂದಾಗ, ಅದರಲ್ಲಿ ರಾಮನ ಪಾತ್ರವನ್ನು ರಣಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಹಲವರು ಪ್ರಶ್ನೆ ಎತ್ತಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyrn6xk91xf6zewv2spntd1m,imgname-ramayana-trailer-1785386464873.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ, 4-15 ಕ್ಕೆ ರಾಮಾಯಣ ಟ್ರೇಲರ್ ಬಿಡುಗಡೆ&lt;/strong&gt;&lt;/p&gt;&lt;p&gt;ಜಾಗತಿಕವಾಗಿ ಭಾರೀ ನಿರೀಕ್ಷೆ ಸೃಷ್ಟಿಸಿದ್ದ 'ರಾಮಾಯಣ' ಚಿತ್ರದ ಟ್ರೈಲರ್ (Ramayana Trailer) ಚಿತ್ರತಂಡ ಘೋಷಿಸಿದಂತೆ ಇಂದು ಬೆಳಿಗ್ಗೆ ರಿಲೀಸ್ ಆಗಿದೆ. ರಣಬೀರ್ ಕಪೂರ್ 'ರಾಮ', ಯಶ್ 'ರಾವಣ', ಹಾಗೂ ಸಾಯಿ ಪಲ್ಲವಿ 'ಸೀತೆ'ಯಾಗಿ ಮುಂಬರುವ ಈ ರಾಮಾಯಣ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಬಹುತೇಕರಿಗೆ ಗೊತ್ತೇ ಇದೆ. ಬಹುನಿರೀಕ್ಷಿತ ರಾಮಾಯಣ ಟ್ರೇಲರ್ ಬಿಡುಗಡೆ ಬೆನ್ನಲ್ಲೇ, ರಾಮಾಯಣದ ಟ್ರೇಲರ್ ಹಾಗೂ ಪಾತ್ರಧಾರಿಗಳ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಳಗಿನ ಜಾವ, ಬ್ರಹ್ಮ ಮುಹೂರ್ತದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಇಂದು ಬೆಳಗ್ಗೆ 4.15ಕ್ಕೆ ರಿಲೀಸ್ ಆಗಿರುವ ರಾಮಾಯಣ ಚಿತ್ರದ ಟ್ರೈಲರ್ ಬಗ್ಗೆ ಇದೀಗ ಮನೆಮನೆಗಳಲ್ಲೂ ಟಾಕ್ ಶುರುವಾಗಿದೆ. ಯೂಟ್ಯೂಬ್&zwnj; ನೋಡಿ ಜನರು ರಾಮಾಯಣದ ತುಣುಕನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. 4 ಸಾವಿರ ಕೋಟಿ ಬಜೆಟ್&zwnj;ನಲ್ಲಿ ನಿರ್ಮಾಣವಾಗಿರುವ ರಾಮಾಯಣ ಚಿತ್ರದ ಬಗ್ಗೆಯೇ ವಿಶ್ವದಲ್ಲಿ ಈಗ ಎಲ್ಲಾ ಕಡೆ ಚರ್ಚೆ ಶುರುವಾಗಿದೆ. ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರಕ್ಕೆ ನಮಿತ್ ಮಲ್ಹೋತ್ರಾ ಜೊತೆಗೆ ಯಶ್ ಕೂಡ ಬಂಡವಾಳ ಹೂಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಏನ್ ಹೇಳ್ತಿದೆ ಅಂತರ್ಜಾಲ?!&lt;/h2&gt;&lt;p&gt;ಹೌದು, ರಾಮಾಯಣ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಹಲವು. ರಾಮಾಯಣ ಚಿತ್ರ ಬರುತ್ತೆ ಅಂದಾಗ, ಅದರಲ್ಲಿ ರಾಮನ ಪಾತ್ರವನ್ನು ರಣಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಹಲವರು ರಾಮನಾಗಿ ರಣಬೀರ್ ಕಪೂರ್ ನ್ಯಾಯ ಒದಗಿಸುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ಸೀತೆಯಾಗಿ ಸಾಯಿ ಪಲ್ಲವಿ ಆಯ್ಕೆಯನ್ನು ಹಲವರು ಪ್ರಶ್ನೆ ಮಾಡಿದ್ದರು. ರಾವಣನ ಆಯ್ಕೆಯನ್ನು ಕೂಡ ಕೆಲವರು ಟೀಕಿಸಿದ್ದರು. ಇಂದು ಟ್ರೇಲರ್ ಬಡುಗಡೆ ಆಗುವವರೆಗೂ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇತ್ತು. ಆದರೆ, ಈಗ ಇಂಟರ್&zwnj;ನೆಟ್ ಜಗತ್ತು ಏನು ಹೇಳ್ತಿದೆ ಗೊತ್ತಾ? ಮುಂದೆ ನೋಡಿ..&lt;/p&gt;&lt;p&gt;&lt;img&gt;&lt;/p&gt;&lt;p&gt;ರಾವಣನಾಗಿ ಯಶ್ ಆರ್ಭಟ&lt;/p&gt;&lt;p&gt;ರಾಮಾಯಣ ಚಿತ್ರದ ಟ್ರೇಲರ್ ಶುರುವಿನಲ್ಲೇ ರಾವಣ ಪಾತ್ರಧಾರಿ ಯಶ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಟ ಯಶ್ ರಾವಣನಾಗಿ ಅಕ್ಷರಶಃ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ರಾವಣನ ಎಂಟ್ರಿ, ಡೈಲಾಗ್, ರಾಮಾಯಣದ ಸೆಟ್ ಕಟ್ಟಿಕೊಟ್ಟಿರುವ ರೀತಿ ಅನನ್ಯ ಹಾಗೂ ಅಮೋಘ ಎಂಬಂತೆ ಮೂಡಿಬಂದಿದೆ. ರಾವಣನ ಪಾತ್ರಕ್ಕೆ ಯಶ್ ಸೂಕ್ತ ಆಯ್ಕೆ ಎಂಬ ಮಾತು ಬಹುತೇಕರಿಂದ ಕೇಳಿಬರುತ್ತಿದೆ. ಕನ್ನಡದ ಹೆಮ್ಮೆಯ ನಟ ಯಶ್ ಅವರು ರಾವಣ ಪಾತ್ರದ ಜೊತೆಗೆ ಮುಂಬರುವ ರಾಮಾಯಣ ಚಿತ್ರದ ನಿರ್ಮಾಣದಲ್ಲಿ ಕೂಡ ಭಾಗಿಯಾಗಿರುವುದು ವಿಶೇಷ.&lt;/p&gt;&lt;p&gt;&lt;img&gt;&lt;/p&gt;&lt;h3&gt;ರಾಮನಾಗಿ ರಣಬೀರ್ ಕಪೂರ್!&lt;/h3&gt;&lt;p&gt;ಇಂದು ಬಿಡುಗಡೆ ಆಗಿರುವ ರಾಮಾಯಣ ಟ್ರೇಲರ್&zwnj;ನಲ್ಲಿ, ಬಾಲವುಡ್ ನಟ ರಣಬೀರ್&zwnj; ಕಪೂರ್ ಅವರು ಅಮೋಘವಾಗಿ ಮಿಂಚಿದ್ದಾರೆ. ರಾಮನ ಪಾತ್ರದಲ್ಲಿ ನಟ ರಣಬೀರ್ ಕಪೂರ್ ಲುಕ್ ಹಾಗೂ ಪಾತ್ರಪೋಷಣೆ ಅತ್ಯದ್ಭುತ ಎಂಬಂತೆ ಮೂಡಿಬಂದಿದೆ. ಬಿಡುಗಡೆ ಆಗಿರುವ ಟ್ರೇಲರ್&zwnj;ನಲ್ಲಿ ಸನ್ನಿವೇಶಕ್ಕೆ ತಕ್ಕಂತೆ, ಸೌಮ್ಯ ಸ್ವಭಾವದ ರಾಮನಾಗಿ ನಟ ರಣಬೀರ್ ಕಪೂರ್ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಸೀತೆಯಾಗಿ ಸಾಯಿ ಪಲ್ಲವಿ!&lt;/p&gt;&lt;p&gt;ಈ ಮೊದಲು ಸೀತೆಯಾಗಿ ಸಾಯಿ ಪಲ್ಲವಿ ಆಯ್ಕೆಯನ್ನು ಟೀಕೆ ಮಾಡಿದ್ದವರಿಗೆ ಉತ್ತರ ಎಂಬಂತೆ ನಟಿ ಸಾಯಿ ಪಲ್ಲವಿಯವರು ಟ್ರೇಲರ್&zwnj;ನಲ್ಲಿ ಮಿಂಚು ಹರಿಸಿದ್ದಾರೆ. ಮುಗ್ಧ ನೋಟ, ದೈವಿಕ ಕಳೆಯ ಮೂಲಕ ನಟಿ ಸಾಯಿ ಪಲ್ಲವಿ ಮೊದಲ ನೋಟದಲ್ಲೇ ಇಷ್ಟವಾಗುತ್ತಾರೆ. ಟ್ರೇಲರ್&zwnj;ನ ಕೆಲವೇ ಕೆಲವು ಸೆಕೆಂಡ್&zwnj;ಗಳ ಝಲಕ್&zwnj;ನಲ್ಲಿ ಕೂಡ ಸಾಯಿ ಪಲ್ಲವಿಯವರು ತಮ್ಮ ಅತ್ಯಮೋಘ ನಟನೆಯಿಂದ ಮನಸೂರೆಗೊಂಡಿದ್ದಾರೆ. ರಾಣಿಯ ಲುಕ್&zwnj;ನಲ್ಲಿ ಸಾಯಿ ಪಲ್ಲವಿ ಅಕ್ಷರಶಃ ಮಿಂಚಿದ್ದಾರೆ. ಹೊಸ ಸೀತೆಯಾಗಿ ನಟಿ ಸಾಯಿ ಪಲ್ಲವಿಯನ್ನು ಜಗತ್ತು ಒಪ್ಪಿಕೊಳ್ಳುವುದರಲ್ಲಿ ಸಂದೇಹವೆ ಇಲ್ಲ ಎಂಬಂತೆ ಸಾಯಿ ಪಲ್ಲವಿ ಪಾತ್ರಪೋಷಣೆ ಹಾಗೂ ನಟನೆ ಹೈಲೈಟ್ಸ್&zwnj; ಆಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಅಂದಹಾಗೆ, ನಿತೇಶ್ ತಿವಾರಿ ನಿರ್ದೇಶನದ ಈ ರಾಮಾಯಣ ಸಿನಿಮಾ ಇದೇ ವರ್ಷ, ದೀಪಾವಳಿಗೆ ಹಬ್ಬದ ಉಡುಗೊರೆಯಾಗಿ ತೆರೆಗೆ ಬರಲಿದೆ. ಜಗತ್ತಿನಾದ್ಯಂತ ಈ ಮೊದಲೇ ಸೃಷ್ಟಿಯಾಗಿದ್ದ ಭಾರೀ ನಿರೀಕ್ಷೆಯನ್ನು ಇಂದು ಬಡುಗಡೆ ಆಗಿರುವ ಟ್ರೇಲರ್&zwnj; ಸಾವಿ ಪಟ್ಟು ಜಾಸ್ತಿ ಮಾಡಿದೆ. ಸದ್ಯ ಇಡೀ ವಿಶ್ವದಲ್ಲಿ ಭಾರತದ ರಾಮಾಯಣ ಟ್ರೇಲರ್ ಬಗ್ಗೆ ಮಾತುಕತೆ, ಚರ್ಚೆ ಜೋರಾಗಿ ನಡೆಯುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/social-media-response-about-today-launched-ramayana-trailer-to-know-here/articleshow-ns99wcl"/>
        </item>
        <item>
            <title><![CDATA[ಕನ್ನಡ ಸಿನಿಮಾ ಗೆಲ್ಲಬೇಕಾದರೆ ಮೊದಲು ಇದು ಬದಲಾಗಬೇಕು: ನಿರ್ದೇಶಕ ಎಂ.ಡಿ.ಶ್ರೀಧರ್‌]]></title>
            <link>https://kannada.asianetnews.com/sandalwood/directors-must-update-themselves-to-save-sandalwood-md-sridhar-gvd/articleshow-obe7quu</link>
            <guid isPermaLink="true">https://kannada.asianetnews.com/sandalwood/directors-must-update-themselves-to-save-sandalwood-md-sridhar-gvd/articleshow-obe7quu</guid>
            <pubDate>Thu, 30 Jul 2026 16:18:01 +0530</pubDate>
            <description><![CDATA[&lt;p&gt;ಈಗ ಕನ್ನಡದಲ್ಲಿ ದೊಡ್ಡ ತಾರೆಗಳು ಎನಿಸಿಕೊಂಡವರು ಎಷ್ಟು ಮಂದಿ ಇದ್ದಾರೆ, ಅವರ ಪೈಕಿ ಎಷ್ಟು ಮಂದಿ ಕನ್ನಡ ಚಿತ್ರಗಳ ನಿರ್ಮಾಪಕರ ಕೈಗೆಟುಕುತ್ತಾರೆ ಎಂಬುದನ್ನೂ ಕೂಡ ನೋಡಬೇಕಿದೆ ಎಂದರು ನಿರ್ದೇಶಕ ಎಂ.ಡಿ.ಶ್ರೀಧರ್&zwnj;.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysa69d8s9sw8x0jyzn6t1ax,imgname-hvvhj-1785408464296.png" type="image/jpeg" height="390" width="690"/>
            <content:encoded><![CDATA[&lt;p&gt;- ನಾವು ಕ್ವಾಲಿಟಿ ಕಡೆಗೆ ಗಮನ ಕೊಟ್ಟು, ಕನ್ನಡ ಸಿನಿಮಾಗಳ ಬಗ್ಗೆ ಪ್ರೇಕ್ಷಕರ ಮನಸ್ಸಿನಲ್ಲಿರುವ ಭಾವನೆಗಳನ್ನು ಬದಲಾಯಿಸಬೇಕಿದೆ.&lt;/p&gt;&lt;p&gt;- ನಿರ್ಮಾಪಕರು ಸ್ಟಾರ್&zwnj; ಹೀರೋಗಳ ಹಿಂದೆ ಹೋಗೋದನ್ನು ಮೊದಲು ಬಿಡಬೇಕು. ನಿರ್ಮಾಪಕರೇ ಸ್ಟಾರ್&zwnj;ಗಳನ್ನು ಹುಟ್ಟು ಹಾಕಬೇಕು.&lt;/p&gt;&lt;p&gt;- ಈಗ ಕನ್ನಡದಲ್ಲಿ ದೊಡ್ಡ ತಾರೆಗಳು ಎನಿಸಿಕೊಂಡವರು ಎಷ್ಟು ಮಂದಿ ಇದ್ದಾರೆ, ಅವರ ಪೈಕಿ ಎಷ್ಟು ಮಂದಿ ಕನ್ನಡ ಚಿತ್ರಗಳ ನಿರ್ಮಾಪಕರ ಕೈಗೆಟುಕುತ್ತಾರೆ ಎಂಬುದನ್ನೂ ಕೂಡ ನೋಡಬೇಕಿದೆ. ನನಗೆ ಗೊತ್ತಿರುವಂತೆ ಕನ್ನಡದಲ್ಲಿ ಏಳೆಂಟು ಹೊಸ ಪ್ರತಿಭಾವಂತ ನಟರು ಇದ್ದಾರೆ. ಅವರು ಮುಂದಿನ ಕನ್ನಡ ಚಿತ್ರರಂಗದ ಸ್ಟಾರ್&zwnj; ಹೀರೋಗಳಾಗುತ್ತಾರೆ. ಆದರೆ, ಅವರ ಜೊತೆಗೆ ಈಗ ಸಿನಿಮಾ ಮಾಡಲು ಯಾರು ರೆಡಿ ಇದ್ದಾರೆ?&lt;/p&gt;&lt;p&gt;- ದೊಡ್ಡ ತಾರೆಗಳು ಬದಲಾಯಿಸಿಕೊಳ್ಳಬೇಕಿರುವುದು ಪೇಮೆಂಟ್&zwnj;ಗಿಂತ ಕತೆಗೆ ಮಹತ್ವ ಕೊಡೋದನ್ನು. ಚಿತ್ರದ ಪ್ರತಿ ಪಾತ್ರದ ಕತೆ, ಸಂಭಾಷಣೆಯನ್ನು ಕೇಳಿಸಿಕೊಳ್ಳಬೇಕು. ಶೂಟಿಂಗ್&zwnj;, ಬಜೆಟ್&zwnj;ನಲ್ಲಿ ಮಧ್ಯ ಪ್ರವೇಶಿಸುವ ಬದಲು ಸ್ಕ್ರಿಪ್ಟ್&zwnj;ನಲ್ಲಿ ಭಾಗಿಯಾಗಬೇಕು. ದರ್ಶನ್&zwnj; ಅವರು ಹೀಗೆ ಮಾಡುತ್ತಿದ್ದರು. ಕತೆಯನ್ನು ಸಂಪೂರ್ಣವಾಗಿ ಕೇಳುತ್ತಿದ್ದರು. ಏನೇ ಬದಲಾವಣೆ, ಸಲಹೆ, ಪ್ರಶ್ನೆ ಇದ್ದರೆ ಶೂಟಿಂಗ್&zwnj; ಮೊದಲೇ ಕೇಳುತ್ತಿದ್ದರು.&lt;/p&gt;&lt;h2&gt;&lt;strong&gt;ಸಿನಿಮಾಗಳ ಜೊತೆಗೆ ಅಲ್ಲ&lt;/strong&gt;&lt;/h2&gt;&lt;p&gt;- ನಾವು ಈಗ ಸ್ಪರ್ಧಿಸಬೇಕಿರುವುದು ಮೊಬೈಲ್&zwnj; ಜೊತೆಗೆ ಹೊರತು ಬೇರೆ ಭಾಷೆಯ ಸಿನಿಮಾಗಳ ಜೊತೆಗೆ ಅಲ್ಲ. ನಿರ್ದೇಶಕರು ಅಪ್&zwnj;ಡೇಟ್&zwnj; ಆಗಿ ಚಿತ್ರಮಂದಿರಗಳನ್ನು ಉಳಿಸುವಂತಹ ಸಿನಿಮಾಗಳನ್ನು ಮಾಡಬೇಕಿದೆ.&lt;/p&gt;&lt;p&gt;- ಚಿತ್ರದ ಪ್ರತಿಯೊಂದು ವಿಭಾಗವೂ ಕತೆಗೆ ಶರಣಾಗಬೇಕು. ಕತೆಗಿಂತ ಬಜೆಟ್&zwnj; ದೊಡ್ಡದು, ಕತೆಗಿಂತ ನಾನೇ ದೊಡ್ಡವನು ಅಂತ ಹೋದರೆ ಹೆಸರಿಗೊಂದು ಪ್ಯಾನ್&zwnj; ಇಂಡಿಯಾ ಸಿನಿಮಾ ಆಗುತ್ತದೆ ಅಷ್ಟೇ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/directors-must-update-themselves-to-save-sandalwood-md-sridhar-gvd/articleshow-obe7quu"/>
        </item>
        <item>
            <title><![CDATA['ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿಗೆ ಮತ್ತೊಂದು ಗರಿ: ಮೆಲ್ಬೋರ್ನ್‌ನಲ್ಲಿ 'ಲೀಡರ್‌ಶಿಪ್ ಇನ್ ಸಿನಿಮಾ' ಪ್ರಶಸ್ತಿ!]]></title>
            <link>https://kannada.asianetnews.com/sandalwood/rishab-shetty-to-receive-leadership-in-cinema-award-at-iffm-2026-gvd/articleshow-phmklxt</link>
            <guid isPermaLink="true">https://kannada.asianetnews.com/sandalwood/rishab-shetty-to-receive-leadership-in-cinema-award-at-iffm-2026-gvd/articleshow-phmklxt</guid>
            <pubDate>Wed, 29 Jul 2026 18:02:05 +0530</pubDate>
            <description><![CDATA[&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ 2026ರ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್&zwnj;ನಲ್ಲಿ 'ಲೀಡರ್&zwnj;ಶಿಪ್ ಇನ್ ಸಿನಿಮಾ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ್ದಕ್ಕಾಗಿ ಈ ಗೌರವ ಸಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbf22sh9kfw8e7xa2jxarant,imgname-rishab-shetty-1764663322153.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಪ್ರತಿಷ್ಠಿತ 'ಲೀಡರ್&zwnj;ಶಿಪ್ ಇನ್ ಸಿನಿಮಾ' ಪ್ರಶಸ್ತಿ ಸಿಗಲಿದೆ. 2026ರ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) ಈ ಗೌರವವನ್ನು ನೀಡುತ್ತಿದೆ. ಭಾರತದ ಅಪ್ಪಟ ಸಂಸ್ಕೃತಿ, ಪರಂಪರೆಯನ್ನು ತಮ್ಮ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ತಂದಿದ್ದಕ್ಕಾಗಿ ರಿಷಬ್&zwnj;ಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. &lsquo;ಕಾಂತಾರ&rsquo; ಸ್ಟಾರ್ ರಿಷಬ್ ಶೆಟ್ಟಿ, 2026ರ IFFM ಫೆಸ್ಟಿವಲ್&zwnj;ನ ಪ್ರಮುಖ ಅತಿಥಿಗಳಲ್ಲಿ ಒಬ್ಬರಾಗಿ ಭಾಗವಹಿಸಲಿದ್ದಾರೆ.&lt;/p&gt;&lt;p&gt;&lt;strong&gt;ಈ ಗೌರವಕ್ಕೆ ಪ್ರತಿಕ್ರಿಯೆಗಳು&lt;/strong&gt;&lt;/p&gt;&lt;p&gt;ಈ ಗೌರವದ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ, &quot;ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್&zwnj;ನಿಂದ 'ಲೀಡರ್&zwnj;ಶಿಪ್ ಇನ್ ಸಿನಿಮಾ' ಪ್ರಶಸ್ತಿ ಸಿಗುತ್ತಿರುವುದು ನನಗೆ ಬಹಳ ಗೌರವ ತಂದಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ನಮಗೆ ಸ್ಫೂರ್ತಿ ನೀಡುವ ಸಮುದಾಯಗಳನ್ನು ಸಂಭ್ರಮಿಸಲು ಕಥೆ ಹೇಳುವುದು ನನ್ನ ದಾರಿ. ನಮ್ಮ ಪರಂಪರೆಯಲ್ಲಿ ಬೇರೂರಿರುವ ಕಥೆಗಳು ಪ್ರಪಂಚದಾದ್ಯಂತ ಪ್ರೇಕ್ಷಕರನ್ನು ತಲುಪುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ. ಮೆಲ್ಬೋರ್ನ್&zwnj;ಗೆ ಹೋಗಿ, ಅಲ್ಲಿ ಇತರ ಸಿನಿಮಾ ನಿರ್ಮಾಪಕರು ಮತ್ತು ಪ್ರೇಕ್ಷಕರೊಂದಿಗೆ ಭಾರತೀಯ ಸಿನಿಮಾದ ವೈವಿಧ್ಯತೆ ಮತ್ತು ಶಕ್ತಿಯನ್ನು ಸಂಭ್ರಮಿಸಲು ನಾನು ಎದುರು ನೋಡುತ್ತಿದ್ದೇನೆ,&quot; ಎಂದು ಹೇಳಿದ್ದಾರೆ.&lt;/p&gt;&lt;p&gt;ಫೆಸ್ಟಿವಲ್ ನಿರ್ದೇಶಕಿ ಮಿತು ಭೌಮಿಕ್ ಲಾಂಗೇ, &quot;ರಿಷಬ್ ಶೆಟ್ಟಿ ಭಾರತೀಯ ಸಿನಿಮಾ ನಿರ್ಮಾಪಕರ ಹೊಸ ಪೀಳಿಗೆಯನ್ನು ಪ್ರತಿನಿಧಿಸುತ್ತಾರೆ. ಅವರ ಕೆಲಸಗಳು ಸ್ಥಳೀಯವಾಗಿದ್ದರೂ ಜಾಗತಿಕ ಮಟ್ಟದಲ್ಲಿ ಪ್ರಸ್ತುತವಾಗಿವೆ. ತಮ್ಮ ವಿಶಿಷ್ಟ ಕಥಾಹಂದರದ ಮೂಲಕ, ಸ್ಥಳೀಯ ಕಥೆಗಳು ಹೇಗೆ ಗಡಿಗಳನ್ನು ಮೀರಿ ಎಲ್ಲೆಡೆ ಪ್ರೇಕ್ಷಕರನ್ನು ತಲುಪಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅವರಿಗೆ 'ಲೀಡರ್&zwnj;ಶಿಪ್ ಇನ್ ಸಿನಿಮಾ' ಪ್ರಶಸ್ತಿ ನೀಡಿ ಗೌರವಿಸಲು ನಮಗೆ ಸಂತೋಷವಿದೆ. IFFM 2026ಕ್ಕೆ ಅವರನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಿನಿಮಾ ವಿಚಾರಕ್ಕೆ ಬಂದರೆ&lt;/strong&gt;&lt;/h2&gt;&lt;p&gt;ಕಳೆದ ಕೆಲವು ವರ್ಷಗಳಲ್ಲಿ, ರಿಷಬ್ ಶೆಟ್ಟಿ ತಮ್ಮ ವಿಶಿಷ್ಟ ಸಿನಿಮಾಗಳ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಅದರಲ್ಲೂ 'ಕಾಂತಾರ' ಫ್ರಾಂಚೈಸಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ. ಸದ್ಯ, ಅವರು ಸಂದೀಪ್ ಸಿಂಗ್ ನಿರ್ಮಾಣದ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಎಂಬ ಎರಡು ಭಾಗಗಳ ಐತಿಹಾಸಿಕ ಸಿನಿಮಾದಲ್ಲಿ ನಟಿಸಲಿದ್ದಾರೆ. ಇತ್ತೀಚೆಗೆ ನಟಿ ಭೂಮಿ ಪೆಡ್ನೇಕರ್ ಕೂಡ ಈ ಸಿನಿಮಾದ ಬಳಗ ಸೇರಿಕೊಂಡಿದ್ದಾರೆ.&lt;/p&gt;&lt;p&gt;ಅವರು ವೀರ ರಾಣಿ ಬೆಳವಾಡಿ ಮಲ್ಲಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಿಷಿ ವಿರ್ಮಾನಿ ಈ ಐತಿಹಾಸಿಕ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಈಗಾಗಲೇ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/rishab-shetty-to-receive-leadership-in-cinema-award-at-iffm-2026-gvd/articleshow-phmklxt"/>
        </item>
        <item>
            <title><![CDATA[AI ಫೋಟೋದಲ್ಲಿ ಕಂಡ ಅಮ್ಮ: ಭಾವುಕರಾಗಿ ಜೀವನದ ದೊಡ್ಡ ಪಶ್ಚಾತ್ತಾಪ ಹಂಚಿಕೊಂಡ ಜಗ್ಗೇಶ್]]></title>
            <link>https://kannada.asianetnews.com/sandalwood/jaggesh-breaks-down-after-seeing-ai-photo-with-his-mother-gvd/articleshow-r2a1zit</link>
            <guid isPermaLink="true">https://kannada.asianetnews.com/sandalwood/jaggesh-breaks-down-after-seeing-ai-photo-with-his-mother-gvd/articleshow-r2a1zit</guid>
            <pubDate>Thu, 30 Jul 2026 17:39:51 +0530</pubDate>
            <description><![CDATA[&lt;p&gt;Jaggesh AI Photo: 'ನವರಸ ನಾಯಕ' ಜಗ್ಗೇಶ್ ಅವರಿಗೆ ಅಮ್ಮ ಎಂದರೆ ಅಪಾರ ಪ್ರೀತಿ. ತಮ್ಮ ಜೀವನದ ಪ್ರತಿಯೊಂದು ಮಹತ್ವದ ಘಟ್ಟದಲ್ಲೂ ತಾಯಿಯನ್ನು ನೆನಪಿಸಿಕೊಳ್ಳುವ ಅವರು, ಈ ಬಾರಿ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysep99hykytq662k7bty4v8,imgname-jjv-1785413182769.png" type="image/jpeg" height="390" width="690"/>
            <content:encoded><![CDATA[&lt;p&gt;'ನವರಸ ನಾಯಕ' ಜಗ್ಗೇಶ್ ಅವರಿಗೆ ಅಮ್ಮ ಎಂದರೆ ಅಪಾರ ಪ್ರೀತಿ. ತಮ್ಮ ಜೀವನದ ಪ್ರತಿಯೊಂದು ಮಹತ್ವದ ಘಟ್ಟದಲ್ಲೂ ತಾಯಿಯನ್ನು ನೆನಪಿಸಿಕೊಳ್ಳುವ ಅವರು, ಈ ಬಾರಿ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಅನೇಕ ಮಂದಿಯ ಮನ ಮುಟ್ಟಿದೆ. ಆತ್ಮೀಯ ಸ್ನೇಹಿತನೊಬ್ಬ ಎಐ (AI) ತಂತ್ರಜ್ಞಾನ ಬಳಸಿ ಜಗ್ಗೇಶ್ ತಮ್ಮ ತಾಯಿಯೊಂದಿಗೆ ಇರುವಂತೆ ಒಂದು ಚಿತ್ರವನ್ನು ಸೃಷ್ಟಿಸಿ ಉಡುಗೊರೆಯಾಗಿ ನೀಡಿದ್ದಾನೆ. ಆ ಫೋಟೋ ನೋಡಿದ ಕ್ಷಣವೇ ಹಳೆಯ ನೆನಪುಗಳೆಲ್ಲ ಕಣ್ಣಮುಂದೆ ಬಂದಿದ್ದು, ಜಗ್ಗೇಶ್ ಮನದಾಳದ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;'29ನೇ ವಯಸ್ಸಿನಲ್ಲೇ ಅಮ್ಮನನ್ನು ಕಳೆದುಕೊಂಡೆ'&lt;/strong&gt;&lt;/p&gt;&lt;p&gt;ಎಐ ಫೋಟೋ ಹಂಚಿಕೊಂಡಿರುವ ಜಗ್ಗೇಶ್, &quot;ನನ್ನ ಆತ್ಮೀಯ ಸಹೋದರ ಮೇಘರಾಜ್, ನೀವು ನನ್ನನ್ನು ಅಳಿಸಿಬಿಟ್ಟಿರಿ. 29ನೇ ವಯಸ್ಸಿನಲ್ಲೇ ಅಮ್ಮನನ್ನು ಕಳೆದುಕೊಂಡ ನತದೃಷ್ಟ ನಾನು. ಅಮ್ಮನ ಜೊತೆ ಹೀಗೆ ಒಂದು ಫೋಟೋ ತೆಗೆಸಿಕೊಳ್ಳುವ ಭಾಗ್ಯವೂ ನನಗೆ ಸಿಗಲಿಲ್ಲ. ಅಮ್ಮನಿಗೆ ಹೇಳಬೇಕೆಂದಿದ್ದ ಎಷ್ಟೋ ಮಾತುಗಳು ಇಂದಿಗೂ ಮನಸ್ಸಿನಲ್ಲೇ ಉಳಿದುಹೋಗಿವೆ. ಮಗನ ನೋವನ್ನು ಮಾತಿಲ್ಲದೇ ಅರ್ಥಮಾಡಿಕೊಳ್ಳುವ ದೇವರು ಯಾರಾದರೂ ಇದ್ದರೆ ಅದು ಅಮ್ಮ ಮಾತ್ರ&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಸಾವಿನ ಮುನ್ನ ಅಮ್ಮನ ಕೊನೆಯ ಆಸೆ...&lt;/strong&gt;&lt;/p&gt;&lt;p&gt;1995ರಲ್ಲಿ 'ಅರ್ಜುನ್ ಅಭಿಮನ್ಯು' ಚಿತ್ರದ ಚಿತ್ರೀಕರಣದಲ್ಲಿ ಟೈಗರ್ ಪ್ರಭಾಕರ್ ಅವರೊಂದಿಗೆ ರಾತ್ರಿ-ಹಗಲು ಬ್ಯುಸಿಯಾಗಿದ್ದ ಸಮಯವನ್ನು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ. &quot;ಅಮ್ಮನನ್ನು ಭೇಟಿಯಾಗಿ ಸುಮಾರು 15 ದಿನಗಳಾಗಿತ್ತು. ಆಗ ಅಮ್ಮ ನನ್ನ ಭಾವಮೈದುನ ರಂಗನಾಥ್ ಅವರಿಗೆ, 'ಈಶನನ್ನು (ಜಗ್ಗೇಶ್) ಕರೆಸು. ಅವನಿಗೆ ಇಷ್ಟವಾದ ಒಬ್ಬಟ್ಟು ಮಾಡಿ ತಿನ್ನಿಸಬೇಕು. ಅವನ ತೊಡೆಯ ಮೇಲೆ ಮಲಗಬೇಕು' ಎಂದು ಹೇಳಿದ್ದರಂತೆ. ಈ ವಿಷಯವನ್ನು ರಂಗ ನನಗೆ ತಿಳಿಸಿದ್ದ. ಆದರೆ ಚಿತ್ರೀಕರಣದ ಒತ್ತಡದಿಂದ 'ಇನ್ನೆರಡು ದಿನಗಳಲ್ಲಿ ಬರುತ್ತೇನೆ' ಎಂದು ಹೇಳಿ ಹೋಗಲಿಲ್ಲ. ಆ ನಿರ್ಧಾರವೇ ಇಂದು ನನ್ನ ಬದುಕಿನ ದೊಡ್ಡ ಪಶ್ಚಾತ್ತಾಪವಾಗಿದೆ&quot; ಎಂದು ಅವರು ಬರೆದುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;'ಅಮ್ಮ ಹೊರಟುಹೋದಳು' ಎಂಬ ಭಾವನೆ...&lt;/strong&gt;&lt;/p&gt;&lt;p&gt;ಅದೇ ದಿನ ಸಂಜೆ ನಡೆದ ಘಟನೆಯನ್ನು ನೆನಪಿಸಿಕೊಂಡ ಜಗ್ಗೇಶ್, &quot;ಸಂಜೆ ಸುಮಾರು 6.45ರ ವೇಳೆಗೆ ವಿಚಿತ್ರವಾದ ನಿದ್ರೆ ಆವರಿಸಿತು. ಪತ್ನಿ ಪರಿಮಳ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಆಗ ಅಮ್ಮ ನನ್ನ ಪಕ್ಕದಿಂದ ಹಾದುಹೋದಂತೊಂದು ಅನುಭವವಾಯಿತು. ತಕ್ಷಣ ಎದ್ದು 'ಅಮ್ಮ ಹೊರಟುಹೋದಳು' ಎಂದು ಹೇಳಿದೆ. ನಂತರ ಸಮಯ ನೋಡಿದಾಗ, ಸುಮಾರು 6.48ಕ್ಕೆ ಅಮ್ಮ ಈ ಲೋಕವನ್ನು ತೊರೆದು ಹೋಗಿದ್ದರು ಎಂಬ ಸುದ್ದಿ ತಿಳಿಯಿತು. ಆ ಕ್ಷಣ ಇಂದಿಗೂ ನನ್ನನ್ನು ಕಾಡುತ್ತದೆ&quot; ಎಂದು ಭಾವುಕರಾಗಿದ್ದಾರೆ.&lt;/p&gt;&lt;h2&gt;&lt;strong&gt;'ಇಂದಿಗೂ ಅಮ್ಮನಿಗಾಗಿ ಅಳುತ್ತೇನೆ'&lt;/strong&gt;&lt;/h2&gt;&lt;p&gt;ತಮ್ಮ ಪೋಸ್ಟ್&zwnj;ನ ಕೊನೆಯಲ್ಲಿ ಯುವಕರಿಗೆ ಜಗ್ಗೇಶ್ ಭಾವನಾತ್ಮಕ ಸಂದೇಶವನ್ನೂ ನೀಡಿದ್ದಾರೆ. &quot;64ನೇ ವಯಸ್ಸಿನಲ್ಲೂ ನನಗೆ ನನ್ನ ಅಮ್ಮ ಬೇಕು ಎಂದು ಏಕಾಂತದಲ್ಲಿ ಕುಳಿತು ಅಳುತ್ತೇನೆ. ಬದುಕಿನಲ್ಲಿ ನಾನು ಕ್ಷಮಿಸಿಕೊಳ್ಳಲಾಗದ ತಪ್ಪು ಇದೇ. ಯುವ ಮಿತ್ರರೇ, ನಿಮ್ಮ ಅಮ್ಮ ಕರೆ ಮಾಡಿದರೆ ಅಥವಾ 'ಮಗು' ಎಂದು ಕರೆದರೆ ಎಲ್ಲ ಕೆಲಸ ಬಿಟ್ಟು ಅವರ ಬಳಿ ಓಡಿ ಹೋಗಿ. ತಾಯಿಯ ಕರೆಯೇ ದೇವರ ಕರೆಯಿಗಿಂತ ಶ್ರೇಷ್ಠ. ತಾಯಿಗಿಂತ ದೊಡ್ಡ ದೇವರು ಈ ಜಗತ್ತಿನಲ್ಲಿ ಯಾರೂ ಇಲ್ಲ&quot; ಎಂದು ಮನಮುಟ್ಟುವ ಮಾತುಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಸದ್ಯ ಜಗ್ಗೇಶ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಅಭಿಮಾನಿಗಳು ಮತ್ತು ಸಿನಿರಂಗದ ಗಣ್ಯರು ಅವರ ಭಾವನೆಗೆ ಸ್ಪಂದಿಸಿ, ತಮ್ಮ ತಾಯಿಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/jaggesh-breaks-down-after-seeing-ai-photo-with-his-mother-gvd/articleshow-r2a1zit"/>
        </item>
        <item>
            <title><![CDATA[ಭವಿಷ್ಯದ ಜಗತ್ತಿನಲ್ಲಿ ಕಿಚ್ಚ ಸುದೀಪ್ ಆರ್ಭಟ: 'ಬಿಲ್ಲ ರಂಗ ಭಾಷಾ'ಗೆ ಕನಸಿನ ರಾಣಿ ಸಾಥ್?]]></title>
            <link>https://kannada.asianetnews.com/sandalwood/malashri-joins-kichcha-sudeep-billa-ranga-baashaa-excitement-reaches-new-heights-gvd/articleshow-stibzra</link>
            <guid isPermaLink="true">https://kannada.asianetnews.com/sandalwood/malashri-joins-kichcha-sudeep-billa-ranga-baashaa-excitement-reaches-new-heights-gvd/articleshow-stibzra</guid>
            <pubDate>Wed, 29 Jul 2026 19:02:48 +0530</pubDate>
            <description><![CDATA[&lt;p&gt;Billa Ranga Baashaa First Blood: ಸ್ಯಾಂಡಲ್&zwnj;ವುಡ್&zwnj;ನ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ ಕಿಚ್ಚ ಸುದೀಪ್ ಅಭಿನಯದ 'ಬಿಲ್ಲ ರಂಗ ಭಾಷಾ - ಫಸ್ಟ್ ಬ್ಲಡ್' ಚಿತ್ರದ ಚಿತ್ರೀಕರಣ ಮತ್ತೆ ಭರ್ಜರಿಯಾಗಿ ಆರಂಭವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq0tpsz13anfvtahvpvfeg1,imgname-hh-1785331538751.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ ಕಿಚ್ಚ ಸುದೀಪ್ ಅಭಿನಯದ 'ಬಿಲ್ಲ ರಂಗ ಭಾಷಾ - ಫಸ್ಟ್ ಬ್ಲಡ್' ಚಿತ್ರದ ಚಿತ್ರೀಕರಣ ಮತ್ತೆ ಭರ್ಜರಿಯಾಗಿ ಆರಂಭವಾಗಿದೆ. ನಿರ್ದೇಶಕ ಅನೂಪ್ ಭಂಡಾರಿ ಸಾರಥ್ಯದ ಈ ಸಿನಿಮಾ ಘೋಷಣೆಯಾದ ದಿನದಿಂದಲೂ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರತಂಡ ಸಿನಿಮಾದ ಹಲವು ವಿಚಾರಗಳನ್ನು ಗೌಪ್ಯವಾಗಿಟ್ಟುಕೊಂಡಿದ್ದರೂ, ಇದೀಗ ಸಿನಿಮಾದ ಬಗ್ಗೆ ಮತ್ತೊಂದು ದೊಡ್ಡ ಅಪ್&zwnj;ಡೇಟ್ ಹೊರಬಿದ್ದಿದೆ. ಕನ್ನಡ ಚಿತ್ರರಂಗದ ಆಕ್ಷನ್ ಕ್ವೀನ್, ಕನಸಿನ ರಾಣಿ ಮಾಲಾಶ್ರೀ ಅವರು 'ಬಿಲ್ಲ ರಂಗ ಭಾಷಾ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್&zwnj;ವುಡ್&zwnj;ನಲ್ಲಿ ಸದ್ದು ಮಾಡುತ್ತಿದೆ.&lt;/p&gt;&lt;p&gt;&lt;strong&gt;ಸುದೀಪ್ ಜೊತೆ ಮಾಲಾಶ್ರೀ ವಿಭಿನ್ನ ಪಾತ್ರ&lt;/strong&gt;&lt;/p&gt;&lt;p&gt;ಮಾಲಾಶ್ರೀ ಅವರ ಪಾತ್ರದ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಸಿನಿಮಾ ಮೂಲಗಳ ಪ್ರಕಾರ, ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಮಾಡಿರುವ ಪಾತ್ರಗಳಿಗಿಂತ ಸಂಪೂರ್ಣ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ಮಾಲಾಶ್ರೀ, ಅನೇಕ ಸೂಪರ್&zwnj;ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆಯ್ದ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿರುವ ಅವರು, ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ಸುದೀಪ್ ಪಾತ್ರದ ಬಗ್ಗೆ ಸಸ್ಪೆನ್ಸ್&lt;/strong&gt;&lt;/p&gt;&lt;p&gt;'ಬಿಲ್ಲ ರಂಗ ಭಾಷಾ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಒಂದಕ್ಕಿಂತ ಹೆಚ್ಚು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅವರ ಪಾತ್ರದ ಸ್ವರೂಪ ಮತ್ತು ಕಥೆಯಲ್ಲಿ ಅದರ ಮಹತ್ವದ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ನೀಡಿಲ್ಲ. ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್&zwnj;ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ವಿಕ್ರಾಂತ್ ರೋಣ ಬಳಿಕ ಇವರಿಬ್ಬರ ಮತ್ತೊಂದು ದೊಡ್ಡ ಪ್ರಯತ್ನವಾಗಿದೆ.&lt;/p&gt;&lt;p&gt;&lt;strong&gt;ಭವಿಷ್ಯದ ಜಗತ್ತಿನ ಫ್ಯಾಂಟಸಿ ಆ್ಯಕ್ಷನ್ ಸಿನಿಮಾ&lt;/strong&gt;&lt;/p&gt;&lt;p&gt;'ಬಿಲ್ಲ ರಂಗ ಭಾಷಾ' ಅನ್ನು ಫ್ಯಾಂಟಸಿ ಆ್ಯಕ್ಷನ್ ಸಾಹಸ ಕಥೆಯಾಗಿ ಪರಿಚಯಿಸಲಾಗುತ್ತಿದೆ. ಕ್ರಿ.ಶ. 2209ರ ಭವಿಷ್ಯದ ಕಾಲಘಟ್ಟವನ್ನು ಆಧರಿಸಿದ ಕಥಾಹಂದರ, ವಿಭಿನ್ನ ಲೋಕ ನಿರ್ಮಾಣ ಮತ್ತು ಅದ್ದೂರಿ ಆ್ಯಕ್ಷನ್ ದೃಶ್ಯಗಳು ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ. ಪ್ರಸ್ತುತ ಚಿತ್ರದ ಪ್ರಮುಖ ಭಾಗಗಳಿಗಾಗಿ ನಿರ್ಮಿಸಲಾಗಿರುವ ಬೃಹತ್ ಸೆಟ್&zwnj;ಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಪ್ರಮಾಣ ಮತ್ತು ಮೇಕಿಂಗ್ ಬಗ್ಗೆ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.&lt;/p&gt;&lt;h2&gt;&lt;strong&gt;ಹುಟ್ಟುಹಬ್ಬದಂದು ಟೀಸರ್ ನಿರೀಕ್ಷೆ&lt;/strong&gt;&lt;/h2&gt;&lt;p&gt;ಸುದೀಪ್ ಅವರ ಹುಟ್ಟುಹಬ್ಬವಾದ ಸೆಪ್ಟೆಂಬರ್ 2ರಂದು ಚಿತ್ರದ ಟೀಸರ್ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಪ್ರೈಮ್&zwnj;ಶೋ ಎಂಟರ್&zwnj;ಟೈನ್&zwnj;ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕುಬ್ರಾ ಸೇಠ್, ರಾಹುಲ್ ದೇವ್ ಮತ್ತು ಸಾಯಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ. ಇನ್ನು ಮಾಲಾಶ್ರೀ ಅವರ ಸೇರ್ಪಡೆಯೊಂದಿಗೆ 'ಬಿಲ್ಲ ರಂಗ ಭಾಷಾ' ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಕಿಚ್ಚ ಸುದೀಪ್ ಅಭಿಮಾನಿಗಳು ಈ ವಿಭಿನ್ನ ಲೋಕದ ಅನಾವರಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/malashri-joins-kichcha-sudeep-billa-ranga-baashaa-excitement-reaches-new-heights-gvd/articleshow-stibzra"/>
        </item>
        <item>
            <title><![CDATA[ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕಳುಹಿಸಿ ಅಭಿನಂದಿಸಿದ ಕಿಚ್ಚ ಸುದೀಪ್‌!]]></title>
            <link>https://kannada.asianetnews.com/sandalwood/kichcha-sudeep-special-gift-handwritten-letter-pv-sindhu-japan-open-san/articleshow-ybfpptk</link>
            <guid isPermaLink="true">https://kannada.asianetnews.com/sandalwood/kichcha-sudeep-special-gift-handwritten-letter-pv-sindhu-japan-open-san/articleshow-ybfpptk</guid>
            <pubDate>Wed, 29 Jul 2026 23:22:57 +0530</pubDate>
            <description><![CDATA[ಜಪಾನ್ ಓಪನ್ ಗೆದ್ದ ಭಾರತದ ಸ್ಟಾರ್ ಷಟ್ಲರ್&zwnj; ಪಿವಿ ಸಿಂಧುಗೆ ನಟ ಕಿಚ್ಚ ಸುದೀಪ್&zwnj; ವಿಶೇಷ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ. ಸುದೀಪ್&zwnj; ಕಳುಹಿಸಿದ ಉಡುಗೊರೆ ಹಾಗೂ ಕೈಬರಹದ ಪತ್ರದ ಫೋಟೋವನ್ನು ಸಿಂಧು ಇನ್ಸ್&zwnj;ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿದ್ದು, ಈ ಗೆಲುವು 19 ತಿಂಗಳ ಬಳಿಕ ಬಂದಿರುವುದು ವಿಶೇಷವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyqfx5srdgnj73qkmn8bd546,imgname-sudeep-and-pv-sindhu-1785347348280.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.29): &lt;/strong&gt;ಸಾಲು ಸಾಲು ಹಿನ್ನಡೆಗಳ ನಡುವೆ 19 ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್&zwnj; ಟೂರ್ನಿಯಲ್ಲಿ ಜಯಗಳಿಸಿದ ಭಾರತದ ಸ್ಟಾರ್&zwnj; ಷಟ್ಲರ್&zwnj; ಪಿವಿ ಸಿಂಧುಗೆ ಕಿಚ್ಚ ಸುದೀಪ್&zwnj; ವಿಶೇಷ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ. ಇತ್ತೀಚೆಗೆ ನಡೆದ ಜಪಾನ್&zwnj; ಓಪನ್&zwnj; ಬಿಡಬ್ಲ್ಯುಎಫ್&zwnj; ಸೂಪರ್&zwnj; ಸಿರೀಸ್&zwnj; ಪ್ರಶಸ್ತಿ ಗೆಲ್ಲುವ ಮೂಲಕ ಜಪಾನ್&zwnj; ಓಪನ್&zwnj; ಬ್ಯಾಡ್ಮಿಂಟನ್&zwnj; ಟೂರ್ನಿ ಜಯಿಸಿದ ಭಾರತದ ಮೊದಲ ಷಟ್ಲರ್&zwnj; ಎನಿಸಿಕೊಂಡ ಪಿವಿ ಸಿಂಧು ಅವರಿಗೆ ಉಡುಗೊರೆ ನೀಡಿದ ವಿಚಾರವನ್ನು ಸ್ವತಃ ಸುದೀಪ್&zwnj; ಬಹಿರಂಗಪಡಿಸಿದ್ದಾರೆ. ಉಡುಗೊರೆಯೊಂದಿಗೆ ತಮ್ಮ ಹೆಸರು ಇರುವ ಲೆಟರ್&zwnj;ಹೆಡ್&zwnj;ನಲ್ಲಿ ಅಭಿನಂದನಾ ಪತ್ರವನ್ನೂ ಕೂಡ ಸುದೀಪ್&zwnj; ಕಳುಹಿಸಿಕೊಟ್ಟಿದ್ದಾರೆ.&lt;/p&gt;&lt;p&gt;ಸುದೀಪ್&zwnj; ಅವರಿಂದ ಬಂದ ಉಡುಗೊರೆ ಹಾಗೂ ವಿಶೇಷ ಪತ್ರದ ಫೋಟೋ ತೆಗೆದು ಇನ್ಸ್&zwnj;ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿದ್ದು, ಥ್ಯಾಂಕ್&zwnj; ಯು ಸೋ ಮಚ್&zwnj; ಸುದೀಪ್&zwnj; ಸರ್&zwnj; ಎಂದು ಕಿಚ್ಚ ಸುದೀಪ್&zwnj; ಅವರನ್ನು ಟ್ಯಾಗ್&zwnj; ಮಾಡಿದ್ದಾರೆ.&lt;/p&gt;&lt;p&gt;ತಮ್ಮ ಕೈಬರಹದಲ್ಲಿ ಇಂಗ್ಲೀಷ್&zwnj; ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ ಸುದೀಪ್&zwnj;, ಜಪಾನ್ ಓಪನ್&zwnj;ನಲ್ಲಿ ದಾಖಲೆ ಮುರಿಯುವಂತಹ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳು. ನಮ್ಮ ಪ್ರೀತಿಯ ದೇಶವನ್ನು ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಎತ್ತಿ ಹಿಡಿದಿದ್ದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ನಮಗೆ ಪ್ರೇರಣೆಯಾಗಿದ್ದೀರಿ ಎಂದು ಅವರು ಬರೆದಿದ್ದಾರೆ.&lt;/p&gt;&lt;p&gt;ಜುಲೈ 19 ರಂದು ನಡೆದ ಜಪಾನ್&zwnj; ಓಪನ್&zwnj; ಫೈನಲ್&zwnj; ಪಂದ್ಯದಲ್ಲಿ ಪಿವಿ ಸಿಂಧು, ಅಕಾನೆ ಯಮ ಗುಚಿ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದರು. ಅದರೊಂದಿಗೆ ಕಳೆದ ಏಳು ವರ್ಷಗಳಿಂದ ಭಾರತಷದ ಯಾವ ಷಟ್ಲರ್&zwnj; ಕೂಡ ಬಿಡಬ್ಲ್ಯುಎಫ್&zwnj; ಟೂರ್&zwnj;ನಲ್ಲಿ ಮೇಜರ್&zwnj; ಟೈಟಲ್&zwnj; ಗೆಲ್ಲದ ಬರವನ್ನು ನೀಗಿಸಿದ್ದರು. ಅದಕ್ಕಿಂತ ಮುಖ್ಯವಾಗಿ ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್&zwnj;ಷಿಪ್&zwnj; ಮುಂಚಿತವಾಗಿ ಬಂದಿರುವುದು ವಿಶೇಷವಾಗಿದೆ.&lt;/p&gt;&lt;p&gt;31 ವರ್ಷದ ಪಿವಿ ಸಿಂಧು ಫೈನಲ್&zwnj; ಪಂದ್ಯದ 50 ನಿಮಿಷದ ಕಾದಾಟದಲ್ಲಿ 21-17, 21-17 ನೇರ ಗೇಮ್&zwnj;ಗಳಿಂದ ಯಮಗುಚಿ ಅವರನ್ನು ಮಹಿಳಾ ಸಿಂಗಲ್ಸ್&zwnj;ನಲ್ಲಿ ಸೋಲಿಸಿದ್ದರು.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;/p&gt;]]></content:encoded>
            <category>sandalwood</category>
            <dc:creator>Santosh Naik</dc:creator>
            <atom:link href="https://kannada.asianetnews.com/sandalwood/kichcha-sudeep-special-gift-handwritten-letter-pv-sindhu-japan-open-san/articleshow-ybfpptk"/>
        </item>
    </channel>
</rss>
