<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 09 Sep 2026 13:16:18 +0530</lastBuildDate>
        <atom:link href="https://kannada.asianetnews.com/rss/sandalwood" rel="self" type="application/rss+xml"/>
        <item>
            <title><![CDATA[ದರ್ಶನ್ ಮತ್ತೊಬ್ಬ ಅಭಿಮಾನಿ ಮೇಲೆ ಎಫ್‌ಐಆರ್; ಈ ಬಾರಿ ನಟಿಯರಿಗೆ ಅಶ್ಲೀಲ ಕಾಮೆಂಟ್‌ಗಾಗಿ ಮಾಡಿದ್ದಕ್ಕಲ್ಲ!]]></title>
            <link>https://kannada.asianetnews.com/state/sandalwood-actor-darshan-fan-fir-false-news-high-security-jail-kasnna12345-sat/articleshow-0y3y4kz</link>
            <guid isPermaLink="true">https://kannada.asianetnews.com/state/sandalwood-actor-darshan-fan-fir-false-news-high-security-jail-kasnna12345-sat/articleshow-0y3y4kz</guid>
            <pubDate>Tue, 08 Sep 2026 12:00:18 +0530</pubDate>
            <description><![CDATA[&lt;p&gt;ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ. ಆದರೆ, ಅವರ ಅಭಿಮಾನಿಗಳು ಕೂಡ ನಟಿಯರಿಗೆ ಅಶ್ಲೀಲ ಕಾಮೆಂಟ್ ಮಾಡುವುದು, ನಟರಿಗೆ ಕಿರುಕುಳ ನೀಡುವ ಮೂಲಕ ಜೈಲು ಸೇರುತ್ತಿದ್ದಾರೆ. ಇದೀಗ ಜೈಲಿನ ವಿಚಾರಕ್ಕೆ ದರ್ಶನ್&zwnj;ನ ಮತ್ತೊಬ್ಬ ಅಭಿಮಾನಿ ಜೈಲು ಸೇರುವ ಪರಿಸ್ಥಿತಿ ತಂದುಕೊಂಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ztn79mke3ee2jctvnzvnmr,imgname-actor-darshan-jail-fir-in-fans-1788848282932.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.08): ನ&lt;/strong&gt;ಟ ದರ್ಶನ್ ಕುರಿತಾಗಿ ಸುಳ್ಳು ಸುದ್ದಿ ಹರಡಿದ ಆರೋಪದ ಹಿನ್ನೆಲೆಯಲ್ಲಿ ಮತ್ತೊಬ್ಬ ದರ್ಶನ್ ಅಭಿಮಾನಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ. ಈ ಬಾರಿ ಅಶ್ಲೀಲ ಕಾಮೆಂಟ್ ಮಾಡಿದ ಆರೋಪವಲ್ಲ, ಬದಲಾಗಿ ಜೈಲಿನ ಕುರಿತು ಸುಳ್ಳು ಮಾಹಿತಿ ಹರಡಿದ ಆರೋಪ ಕೇಳಿಬಂದಿದೆ.&lt;/p&gt;&lt;p&gt;Instagram ID &lsquo;Kasnna12345&rsquo; ಖಾತೆಯಿಂದ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಕೊಲೆ ಆರೋಪಿ ದರ್ಶನ್ ಪರಪ್ಪನ ಅಗ್ರಹಾರದ ಹೈ ಸೆಕ್ಯುರಿಟಿ ಜೈಲಿನಲ್ಲಿ ಇರುವುದಾಗಿ ಹೇಳಲಾಗಿದೆ ಎನ್ನಲಾಗಿದೆ. ಈ ವಿಡಿಯೋ ಗಮನಕ್ಕೆ ಬಂದ ಬಳಿಕ ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕ ಕೊಟ್ರೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅನಾಮಿಕ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಜೈಲು ಅಧಿಕಾರಿಗಳಿಂದ ಸ್ಪಷ್ಟನೆ:&lt;/strong&gt;&lt;/h2&gt;&lt;p&gt;ಜೈಲು ಅಧಿಕಾರಿಗಳ ದೂರಿನ ಪ್ರಕಾರ, ಹೈ ಸೆಕ್ಯುರಿಟಿ ಜೈಲು ನೂತನವಾಗಿ ನಿರ್ಮಾಣಗೊಂಡಿದ್ದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಅಲ್ಲದೆ, ಯಾವುದೇ ಬಂದಿಗಳನ್ನು ಅಲ್ಲಿ ದಾಖಲಿಸಲಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೀಗಿರುವಾಗ ಕಾರಾಗೃಹದ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿರುವ &lsquo;Kasnna12345&rsquo; ಖಾತೆ ಹೊಂದಿರುವ ವ್ಯಕ್ತಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.&lt;/p&gt;&lt;p&gt;ದೂರು ದಾಖಲಾಗುತ್ತಿದ್ದಂತೆ ಸಂಬಂಧಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ. ಇದೀಗ &lsquo;Kasnna12345&rsquo; ಖಾತೆ ನಿರ್ವಹಿಸುತ್ತಿರುವ ಅನಾಮಿಕ ವ್ಯಕ್ತಿಯನ್ನು ಪತ್ತೆಹಚ್ಚಲು ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/sandalwood-actor-darshan-fan-fir-false-news-high-security-jail-kasnna12345-sat/articleshow-0y3y4kz"/>
        </item>
        <item>
            <title><![CDATA[ನಿರ್ದೇಶಕ ಓಂ ಸಾಯಿಪ್ರಕಾಶ್‌ ನನ್ನ ಪಾಲಿಗೆ ಗುರುಗಳಿದ್ದಂತೆ: ಹಿರಿಯ ನಟಿ ಉಮಾಶ್ರೀ!]]></title>
            <link>https://kannada.asianetnews.com/sandalwood/kannada-veteran-actress-umashree-talks-about-director-om-saiprakash-common-man-kannada-movie-gvd/articleshow-53wcixb</link>
            <guid isPermaLink="true">https://kannada.asianetnews.com/sandalwood/kannada-veteran-actress-umashree-talks-about-director-om-saiprakash-common-man-kannada-movie-gvd/articleshow-53wcixb</guid>
            <pubDate>Mon, 07 Sep 2026 16:01:39 +0530</pubDate>
            <description><![CDATA[&lt;p&gt;ಓಂ ಸಾಯಿಪ್ರಕಾಶ್ ನಿರ್ದೇಶನದ &lsquo;ಕಾಮನ್ ಮ್ಯಾನ್&rsquo; ಸಿನಿಮಾ ಸೆ.25ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಸಿಎಂ ಆದಾಗ ಆಡಳಿತದಲ್ಲಿ ಎದುರಿಸುವ ಸವಾಲುಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಚಿತ್ರದ ಪ್ರಮುಖ ಕಥಾಹಂದರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xpqmqfsppd9nr57j2zds9d,imgname-bbk-1788777059055.png" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯನೊಬ್ಬ ಮುಖ್ಯಮಂತ್ರಿಯಾದರೆ ಆಡಳಿತ ವ್ಯವಸ್ಥೆ ಹೇಗಿರುತ್ತದೆ ಮತ್ತು ಆತ ಎದುರಿಸುವ ಸವಾಲುಗಳೇನು ಎಂಬ ಕಥಾಹಂದರ ಹೊಂದಿರುವ &lsquo;ಕಾಮನ್&zwnj; ಮ್ಯಾನ್&zwnj;&rsquo; ಚಿತ್ರ ಸೆ.25ರಂದು ತೆರೆಕಾಣಲು ಸಜ್ಜಾಗಿದೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್&zwnj; ನಿರ್ದೇಶನದ 106ನೇ ಚಿತ್ರ ಇದಾಗಿದ್ದು, ಇತ್ತೀಚೆಗೆ ಚಿತ್ರದ ನಾಲ್ಕು ಹಾಡುಗಳನ್ನು ಉಮಾಶ್ರೀ, ವಿನೋದ್&zwnj; ಪ್ರಭಾಕರ್&zwnj;, ರಮೇಶ್&zwnj; ಭಟ್&zwnj; ಹಾಗೂ ಪ್ರಿಯಾಂಕಾ ಉಪೇಂದ್ರ ಬಿಡುಗಡೆ ಮಾಡಿದರು.&lt;/p&gt;&lt;p&gt;ಸಾಮಾಜಿಕ ಕಾರ್ಯಕರ್ತ ಎನ್. ನರಸಿಂಹಮೂರ್ತಿ ಕಥೆ ಬರೆದು ಈ ಚಿತ್ರ ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರು, ಪ್ರತಿ ಮನುಷ್ಯನಲ್ಲೂ ಒಂದಲ್ಲ ಒಂದು ಆಸೆ ಇರುತ್ತದೆ. ಹಾಗೆಯೇ ಒಬ್ಬ ಸಾಧಾರಣ ವ್ಯಕ್ತಿ ಸಿಎಂ ಆದಾಗ ಏನೆಲ್ಲ ಸುಧಾರಣೆ ಮಾಡಬಹುದು ಎಂಬುದನ್ನು ಈ ಚಿತ್ರದ ಮೂಲಕ ತೋರಿಸಲು ಪ್ರಯತ್ನಿಸಿದ್ದೇವೆ ಎಂದು ತಿಳಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಉಮಾಶ್ರೀ, &lsquo;ನಿರ್ದೇಶಕ ಸಾಯಿಪ್ರಕಾಶ್ ನನ್ನ ಪಾಲಿಗೆ ಗುರುಗಳಿದ್ದಂತೆ. ಹಿಂದೆ ಎನ್.ಎಸ್. ರಾವ್ ನಿಧನರಾದಾಗ ನನ್ನ ನಟನಾ ಬದುಕು ಮುಗಿಯಿತು ಎಂದೇ ಹಲವರು ಭಾವಿಸಿದ್ದರು. ಅಂಥ ಕಷ್ಟದ ಕಾಲದಲ್ಲಿ ನನಗೆ ಅವಕಾಶ ನೀಡಿ ಬೆಂಬಲಿಸಿದವರು ಸಾಯಿಪ್ರಕಾಶ್&rsquo; ಎಂದರು.&lt;/p&gt;&lt;p&gt;ರಮೇಶ್&zwnj; ಭಟ್&zwnj;, &lsquo;ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಮಟ್ಟಹಾಕುವ ಸಂದೇಶ ಈ ಚಿತ್ರದಲ್ಲಿದೆ&rsquo; ಎಂದರು. ವಿನೋದ್&zwnj; ಪ್ರಭಾಕರ್&zwnj;, &lsquo;ನನ್ನ ತಂದೆಯ ಜತೆ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡಿ ಸಂತಸವಾಯಿತು&rsquo; ಎಂದರು. ಪ್ರಿಯಾಂಕಾ ಉಪೇಂದ್ರ ಹಾಡುಗಳ ಗುಣಮಟ್ಟವನ್ನು ಶ್ಲಾಘಿಸಿದರು.&lt;/p&gt;&lt;h2&gt;&lt;strong&gt;ನಾಯಕಿಯಾಗಿ ಸೋನಾ ಲದ್ವಾ&lt;/strong&gt;&lt;/h2&gt;&lt;p&gt;&lsquo;ಕೆರೆ ಬೇಟೆ&rsquo; ಚಿತ್ರದ ಮೂಲಕ ಜನಮನ ಗೆದ್ದಿದ್ದ ಗೌರಿಶಂಕರ್ ಎಸ್.ಆರ್.ಜಿ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಶೋಕ್, ಗಣೇಶ್&zwnj; ರಾವ್&zwnj; ಕೇಸರಕರ್&zwnj;, ಪ್ರಕಾಶ್&zwnj; ತುಮಿನಾಡು ತಾರಾಗಣದಲ್ಲಿದ್ದಾರೆ. ಇನ್ನು ಸಾಮಾನ್ಯ ಮನುಷ್ಯನ ರಾಜಕೀಯ ಪಯಣದ ಕಥೆ ಹೊಂದಿರುವ ಈ ಸಿನಿಮಾ ಇದೇ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-veteran-actress-umashree-talks-about-director-om-saiprakash-common-man-kannada-movie-gvd/articleshow-53wcixb"/>
        </item>
        <item>
            <title><![CDATA[MN Lakshmi Devi ಸುಳ್ಳು ಸುದ್ದಿ ನಂಬಬೇಡಿ; ಹಿರಿಯ ನಟಿ ಲಕ್ಷ್ಮೀದೇವಿ ಆರೋಗ್ಯವಾಗಿದ್ದಾರೆ!]]></title>
            <link>https://kannada.asianetnews.com/entertainment/veteran-kannada-actress-mn-lakshmi-devi-death-rumors-debunked-granddaughter-clarifies-she-is-alive-and-healthy-gdp/articleshow-akrdvgg</link>
            <guid isPermaLink="true">https://kannada.asianetnews.com/entertainment/veteran-kannada-actress-mn-lakshmi-devi-death-rumors-debunked-granddaughter-clarifies-she-is-alive-and-healthy-gdp/articleshow-akrdvgg</guid>
            <pubDate>Tue, 08 Sep 2026 14:51:04 +0530</pubDate>
            <description><![CDATA[ಕನ್ನಡದ ಹಿರಿಯ ಹಾಸ್ಯ ನಟಿ ಎಂ.ಎನ್. ಲಕ್ಷ್ಮೀದೇವಿ ಅವರ ನಿಧನದ ಸುಳ್ಳು ಸುದ್ದಿಗೆ ಅವರ ಮೊಮ್ಮಗಳು ದೀಪಿಕಾ ಶರಣ್ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ ಎಂದು ವಿಡಿಯೋ ಮೂಲಕ ತಿಳಿಸಿದ್ದು, ಏಳು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಲಕ್ಷ್ಮೀದೇವಿ ಅವರ ಸಾಧನೆ ಮತ್ತು ಪ್ರಶಸ್ತಿಗಳ ಬಗ್ಗೆ ಲೇಖನವು ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m204ft9me4fr4nw6v9504yce,imgname-lakshmi-devi--2--1788858591540.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕನ್ನಡ ಚಿತ್ರರಂಗದ ಹಿರಿಯ ಹಾಗೂ ದಂತಕಥೆ ಹಾಸ್ಯ ನಟಿ ಎಂ.ಎನ್. ಲಕ್ಷ್ಮೀದೇವಿ ಅವರು ನಿಧನರಾಗಿದ್ದಾರೆ ಎಂಬ ಸುದ್ದಿಗೆ ಅವರ ಮೊಮ್ಮಗಳು ನಟಿ ದೀಪಿಕಾ ಶರಣ್ ಸ್ಪಷ್ಟನೆ ನೀಡಿದ್ದಾರೆ. ಎಂ.ಎನ್. ಲಕ್ಷ್ಮೀದೇವಿ ಅವರು ಆರಾಮವಾಗಿ ನಡೆದುಕೊಂಡು ಓಡಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.&lt;/p&gt;&lt;p&gt;ಏಳು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಸಾವಿರಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಕಲಾಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಲಕ್ಷ್ಮಿ ಅವರಿಗೆ. ಇತ್ತೀಚೆಗಷ್ಟೇ (ಜುಲೈ 2026) ಇವರಿಗೆ ಪ್ರತಿಷ್ಠಿತ &lsquo;ಸಾ.ರಾ.ಗೋವಿಂದು ಕನ್ನಡಶ್ರೀ ಪ್ರಶಸ್ತಿ&rsquo; ನೀಡಿ ಗೌರವಿಸಲಾಗಿತ್ತು.&lt;/p&gt;&lt;p&gt;&lsquo;ಮೈಸೂರು ನರಸಿಂಹಾಚಾರ್ ಲಕ್ಷ್ಮೀದೇವಿ&rsquo; ಎಂಬುದು ಇವರ ಪೂರ್ಣ ಹೆಸರು. 1932 ರಲ್ಲಿ ಜನಿಸಿದ ಇವರು ಮೂಲತಃ ಚಿಂತಾಮಣಿಯವರಾದ ಇವರು &lsquo;ಎಂ.ಎನ್. ಲಕ್ಷ್ಮೀದೇವಿ&rsquo; ಎಂದೇ ಜನಪ್ರಿಯರಾಗಿದ್ದರು. 1952ರಲ್ಲಿ ತೆರೆಕಂಡ 'ಶ್ರೀನಿವಾಸ ಕಲ್ಯಾಣ' ಚಿತ್ರದ ಮೂಲಕ ಅಭಿನಯ ಪಯಣ ಆರಂಭಿಸಿದ ಇವರು, ಕನ್ನಡ ಚಿತ್ರರಂಗದಲ್ಲಿ ಸತತ 74 ವರ್ಷಗಳಿಗೂ ನಟಿಸಿದ ಏಕೈಕ ಅಭಿನೇತ್ರಿ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.&lt;/p&gt;&lt;p&gt;ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜರಾದ ನರಸಿಂಹರಾಜು ಹಾಗೂ ಬಾಲಕೃಷ್ಣ ಅವರಂತಹ ಮಹಾನ್ ಕಲಾವಿದರೊಂದಿಗೆ ಸರಿಸಾಟಿಯಾಗಿ ನಟಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಕೀರ್ತಿ ಇವರದ್ದು. 'ರತ್ನಮಂಜರಿ' (1962) ಚಿತ್ರದಲ್ಲಿ ನರಸಿಂಹರಾಜು ಅವರೊಂದಿಗೆ ಇವರು ನಟಿಸಿದ &quot;ಯಾರು ಯಾರು ನೀ ಯಾರು...&quot; ಎಂಬ ಸದಾ ಹಸಿರಾದ ಹಾಡು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 'ಭಕ್ತ ಕನಕದಾಸ' (1960), 'ವೀರಕೇಸರಿ' (1963), 'ಬಂಗಾರದ ಮನುಷ್ಯ' (1972) ಸೇರಿದಂತೆ ನೂರಾರು ಸೂಪರ್&zwnj;ಹಿಟ್ ಚಿತ್ರಗಳಲ್ಲಿ ಇವರ ಅಭಿನಯ ಜನಮನ್ನಣೆ ಗಳಿಸಿದೆ.&lt;/p&gt;&lt;p&gt;ಬೆಳ್ಳಿಪರದೆಯಷ್ಟೇ ಅಲ್ಲದೆ, ಇತ್ತೀಚಿನ 'ಗೂಗ್ಲಿ', 'ರಾಜಾಹುಲಿ' ಸಿನಿಮಾಗಳು ಹಾಗೂ ಜೀ ಕನ್ನಡದ ಪ್ರಸಿದ್ಧ 'ಲಕ್ಷ್ಮಿ ನಿವಾಸ' ಧಾರಾವಾಹಿ ಸೇರಿದಂತೆ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ, ಕೊನೆಯವರೆಗೂ ಅಭಿನಯದ ಮೇಲಿನ ತಮ್ಮ ಒಲವನ್ನು ಕಾಯ್ದುಕೊಂಡಿದ್ದಾರೆ.&lt;/p&gt;&lt;h2&gt;ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು:&lt;/h2&gt;&lt;p&gt;2001-02: 'ಕಳ್ಳರ ಕಳ್ಳ' ಚಿತ್ರದ ಅಭಿನಯಕ್ಕಾಗಿ &lsquo;ಅತ್ಯುತ್ತಮ ಪೋಷಕ ನಟಿ&rsquo; ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ.&lt;/p&gt;&lt;p&gt;2006-07: ಕನ್ನಡ ಚಿತ್ರರಂಗಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಕರ್ನಾಟಕ ಸರ್ಕಾರದ ಗೌರವಾನ್ವಿತ 'ಡಾ. ರಾಜ್&zwnj;ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ'.&lt;/p&gt;&lt;p&gt;ಜುಲೈ 2026: ಪ್ರತಿಷ್ಠಿತ 'ಸಾ.ರಾ.ಗೋವಿಂದು ಕನ್ನಡಶ್ರೀ ಪ್ರಶಸ್ತಿ'. ಸೇರಿದಂತೆ ಹಲವು ಪುರಸ್ಕಾರಗಳು ಇವರ ಮಡಿಲು ಸೇರಿವೆ.&lt;/p&gt;]]></content:encoded>
            <category>sandalwood</category>
            <dc:creator>Gowthami K</dc:creator>
            <atom:link href="https://kannada.asianetnews.com/entertainment/veteran-kannada-actress-mn-lakshmi-devi-death-rumors-debunked-granddaughter-clarifies-she-is-alive-and-healthy-gdp/articleshow-akrdvgg"/>
        </item>
        <item>
            <title><![CDATA[ರಿಷಬ್ ಶೆಟ್ಟಿ ಸಂಸ್ಥೆಯಲ್ಲಿ ಸಿನಿಮಾ ಮಾಡಬೇಕಿತ್ತು, ಆದ್ರೆ..: ನಟ ಶೈನ್ ಶೆಟ್ಟಿ ಹೇಳಿದ್ದೇನು?]]></title>
            <link>https://kannada.asianetnews.com/gallery/sandalwood/kannada-actor-shine-shetty-s-dream-project-shankarabharana-film-teaser-wins-appreciation-gvd-bgxakh8</link>
            <guid isPermaLink="true">https://kannada.asianetnews.com/gallery/sandalwood/kannada-actor-shine-shetty-s-dream-project-shankarabharana-film-teaser-wins-appreciation-gvd-bgxakh8</guid>
            <pubDate>Mon, 07 Sep 2026 16:18:36 +0530</pubDate>
            <description><![CDATA[&lt;p&gt;ಶೈನ್ ಶೆಟ್ಟಿ ನಿರ್ಮಿಸಿ, ನಾಯಕನಾಗಿ ನಟಿಸಿರುವ &lsquo;ಶಂಕರಾಭರಣ&rsquo; ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸುಮಂತ್ ಭಟ್ ನಿರ್ದೇಶನದ ಈ ಹಾರರ್ ಕಾಮಿಡಿಯಲ್ಲಿ ಶೈನ್ ಬಸ್ ಚಾಲಕನಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನ.20ರಂದು ತೆರೆಗೆ ಬರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xq6xj6z1bz1cakp5bq58fx,imgname-1-1788777559622.png" type="image/jpeg" height="390" width="690"/>
            <content:encoded><![CDATA[&lt;p&gt;ಶೈನ್ ಶೆಟ್ಟಿ ನಿರ್ಮಿಸಿ, ನಾಯಕನಾಗಿ ನಟಿಸಿರುವ &lsquo;ಶಂಕರಾಭರಣ&rsquo; ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸುಮಂತ್ ಭಟ್ ನಿರ್ದೇಶನದ ಈ ಹಾರರ್ ಕಾಮಿಡಿಯಲ್ಲಿ ಶೈನ್ ಬಸ್ ಚಾಲಕನಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನ.20ರಂದು ತೆರೆಗೆ ಬರಲಿದೆ.&lt;/p&gt;&lt;img&gt;&lt;p&gt;&lsquo;ನಮಗೆ ಅನ್ನಿಸುವುದನ್ನು ಮಾಡಬೇಕಾದರೆ ವೇದಿಕೆ ನಮ್ಮದೇ ಆಗಿರಬೇಕು. ಹಾಗಾಗಿ ನಾನೇ ನಿರ್ಮಾಣ ಸಂಸ್ಥೆ ಕಟ್ಟಿ ಮಾಡಿದ ಸಿನಿಮಾ ಇದು. ಹಲವು ವರ್ಷಗಳ ಶ್ರಮದ, ಕನಸಿನ ಫಲ ಈ ಶಂಕರಾಭರಣ&rsquo;. ಶೈನ್ ಶೆಟ್ಟಿ ಹೇಳಿದ ಮಾತಿದು. ಸಾಮಾನ್ಯವಾಗಿ ಪ್ರತಿಯೊಬ್ಬ ಕಲಾವಿದರೂ ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.&lt;/p&gt;&lt;img&gt;&lt;p&gt;ಕೆಲವರು ಆ ಅವಕಾಶವನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಶೈನ್ ಎರಡನೇ ದಾರಿ ಆರಿಸಿಕೊಂಡಿದ್ದಾರೆ. ಅವರ ತಂಡ ನಿರ್ಮಿಸಿರುವ, ಅವರು ನಾಯಕನಾಗಿ ನಟಿಸಿರುವ, &lsquo;ಮಿಥ್ಯ&rsquo; ಖ್ಯಾತಿಯ ಸುಮಂತ್ ಭಟ್ ನಿರ್ದೇಶನದ &lsquo;ಶಂಕರಾಭರಣ&rsquo; ಚಿತ್ರದ ಟೀಸರ್&zwnj; ಬಿಡುಗಡೆಯಾಗಿದೆ ಮತ್ತು ಮೆಚ್ಚುಗೆ ಗಳಿಸಿದೆ.&lt;/p&gt;&lt;img&gt;&lt;p&gt;ರಿಷಬ್ ಶೆಟ್ಟಿಯವರ ಸಂಸ್ಥೆಯಲ್ಲಿ ನಾನೊಂದು ಸಿನಿಮಾ ಮಾಡಬೇಕಿತ್ತು. ಅದಕ್ಕಾಗಿ ಕತೆ ಮಾಡಿದ್ದಾಗ ಅವರು ಮೆಚ್ಚಿದ್ದರು. ನಾನೂ ಕತೆ ಮಾಡಬಹುದು ಅನ್ನುವ ಧೈರ್ಯ ಬಂದಿತ್ತು. ಆಮೇಲೆ ನಾನೇ ನಿರ್ಮಾಣ ಸಂಸ್ಥೆ ಮಾಡುವ ಧೈರ್ಯ ಮಾಡಿದೆ. ಹಲವು ಸಮಯ ಹೋರಾಟ ಮಾಡಿದರೂ ನಿರ್ಮಾಪಕರು ಸಿಗಲಿಲ್ಲ.&lt;/p&gt;&lt;img&gt;&lt;p&gt;ಕೊನೆಗೆ ಅಣ್ಣ ದಿವಾಕರ ಶೆಟ್ಟಿ ಜೊತೆಯಾದರು. ರಂಗಸ್ಥಳ ಸಂಸ್ಥೆ ಕಟ್ಟಿದೆವು. ನನ್ನ ಕತೆಯನ್ನು ಸುಮಂತ್&zwnj; ಭಟ್ರಿಗೆ ಹೇಳಿ ಅವರೂ ಒಪ್ಪಿ ಸಿನಿಮಾ ಆಗಿದೆ. ಈ ಪಯಣ ನನಗೆ ತೃಪ್ತಿ ಕೊಟ್ಟಿದೆ. ಒಂದೊಳ್ಳೆ ಸಿನಿಮಾ ಮಾಡಿದ ಸಾರ್ಥಕತೆ ತಂದಿದೆ ಎನ್ನುತ್ತಾರೆ ಶೈನ್.ಇದೊಂದು ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಶೈನ್ ಬಸ್&zwnj; ಚಾಲಕನ ಪಾತ್ರದಲ್ಲಿ ನಟಿಸಿದ್ದಾರೆ.&lt;/p&gt;&lt;img&gt;&lt;p&gt;ಕರಾವಳಿ ಭಾಗದ ಖಾಸಗಿ ಬಸ್&zwnj;ಗಳ ಜಗತ್ತು ಈ ಕತೆಯಲ್ಲಿ ಅನಾವರಣಗೊಳ್ಳಲಿದೆ. ತನ್ವಿ ರಾವ್ ಈ ಚಿತ್ರದ ನಾಯಕಿ. ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚರಣ್&zwnj;ರಾಜ್&zwnj; ಸಂಗೀತ ನೀಡಿರುವ ಈ ಚಿತ್ರ ನ.20ರಂದು ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/kannada-actor-shine-shetty-s-dream-project-shankarabharana-film-teaser-wins-appreciation-gvd-bgxakh8"/>
        </item>
        <item>
            <title><![CDATA[ಮತ್ತೆ ರಾಕಿ ಭಾಯ್ ಹವಾ.. 'KGF 3' ಕಥೆ ರೆಡಿ: ಪ್ರಶಾಂತ್ ನೀಲ್ ಕೊಟ್ರು ಬಿಗ್ ಅಪ್‌ಡೇಟ್]]></title>
            <link>https://kannada.asianetnews.com/entertainment/sandalwood-actor-yash-s-kgf-3-is-happening-confirms-director-prashanth-neel-gvd/articleshow-cisz335</link>
            <guid isPermaLink="true">https://kannada.asianetnews.com/entertainment/sandalwood-actor-yash-s-kgf-3-is-happening-confirms-director-prashanth-neel-gvd/articleshow-cisz335</guid>
            <pubDate>Tue, 08 Sep 2026 15:13:44 +0530</pubDate>
            <description><![CDATA[&lt;p&gt;KGF 3 ಸಿನಿಮಾ ಖಚಿತವಾಗಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ. ಯಶ್ ನಟನೆಯ ಮೂರನೇ ಭಾಗದ ಕಥೆ ಮತ್ತು ಚಿತ್ರಕಥೆ ಈಗಾಗಲೇ ಸಿದ್ಧವಾಗಿದ್ದು, ಕೆಲವು ವಿಚಾರಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m206d845b3ewzwces6grdt23,imgname-nkn-1788860604549.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಕೆಜಿಎಫ್&rsquo; ಮತ್ತು &lsquo;ಕೆಜಿಎಫ್ 2&rsquo; ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದ ಜೋಡಿ ಯಶ್ ಹಾಗೂ ಪ್ರಶಾಂತ್ ನೀಲ್. ಈ ಎರಡು ಸಿನಿಮಾಗಳು ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಯಶಸ್ಸು ಸಾಧಿಸುವುದರ ಜೊತೆಗೆ ಯಶ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆಸಿದವು.&lt;/p&gt;&lt;p&gt;&lsquo;ಕೆಜಿಎಫ್ 3&rsquo; ಸಿನಿಮಾ ಬರುತ್ತಾ? ಈ ಪ್ರಶ್ನೆಗೆ ಕೊನೆಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಉತ್ತರ ನೀಡಿದ್ದಾರೆ. &lsquo;ಕೆಜಿಎಫ್ 3&rsquo; ಖಂಡಿತವಾಗಿಯೂ ಆಗಲಿದೆ ಎಂದು ಸ್ಪಷ್ಟಪಡಿಸಿರುವ ನೀಲ್, ಸಿನಿಮಾದ ಕಥೆ ಮತ್ತು ಚಿತ್ರಕಥೆ ಈಗಾಗಲೇ ಸಿದ್ಧವಾಗಿದೆ ಎಂಬ ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಯಶ್ ಅಭಿಮಾನಿಗಳ ಬಹುದಿನಗಳ ಕುತೂಹಲಕ್ಕೆ ಇದೀಗ ಮತ್ತಷ್ಟು ಬಲ ಸಿಕ್ಕಿದೆ.&lt;/p&gt;&lt;p&gt;2022ರ ಏಪ್ರಿಲ್&zwnj;ನಲ್ಲಿ &lsquo;ಕೆಜಿಎಫ್ 2&rsquo; ತೆರೆಗೆ ಬಂದಿತ್ತು. ಸಿನಿಮಾದ ಕ್ಲೈಮ್ಯಾಕ್ಸ್&zwnj;ನಲ್ಲಿಯೇ &lsquo;ಕೆಜಿಎಫ್ 3&rsquo; ಬರುವ ಸುಳಿವು ನೀಡಲಾಗಿತ್ತು. ಅಂದಿನಿಂದಲೇ ಅಭಿಮಾನಿಗಳು ಮೂರನೇ ಭಾಗದ ಬಗ್ಗೆ ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಆದರೆ ಪ್ರಶಾಂತ್ ನೀಲ್ ಸದ್ಯ ಪರಭಾಷೆಯ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ &lsquo;ಕೆಜಿಎಫ್ 3&rsquo; ಯಾವಾಗ ಆರಂಭವಾಗಲಿದೆ ಎಂಬುದು ಸ್ಪಷ್ಟವಾಗಿರಲಿಲ್ಲ.&lt;/p&gt;&lt;p&gt;ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, &lsquo;ಕೆಜಿಎಫ್ 3&rsquo; ಕುರಿತು ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. ಸಿನಿಮಾ ಖಂಡಿತವಾಗಿಯೂ ಬರಲಿದೆ, ಅದರ ಕಥೆ ಈಗಾಗಲೇ ಸಿದ್ಧವಾಗಿದೆ ಎಂದು ಹೇಳಿದ್ದಾರೆ. &lsquo;ಕೆಜಿಎಫ್ 2&rsquo; ಅಂತ್ಯದಲ್ಲಿ ಮೂರನೇ ಭಾಗದ ಸುಳಿವು ನೀಡಿದ್ದಕ್ಕೂ ಇದೇ ಕಾರಣ ಎಂದು ಅವರು ತಿಳಿಸಿದ್ದಾರೆ. ಸಿನಿಮಾ ಆರಂಭಿಸುವ ಮೊದಲು ಕೆಲವು ವಿಚಾರಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಮುಖ್ಯವಾಗಿ ಯಶ್ ಕೂಡ ತಮ್ಮ ಡೇಟ್ಸ್ ಹೊಂದಿಸಿಕೊಳ್ಳಬೇಕಿದೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. ಈ ಹೇಳಿಕೆ &lsquo;ಕೆಜಿಎಫ್ 3&rsquo; ಸಿನಿಮಾ ಸದ್ಯಕ್ಕೆ ನಿಂತಿಲ್ಲ ಎಂಬ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದೆ.&lt;/p&gt;&lt;p&gt;&lt;strong&gt;ನೀಲ್&zwnj;ಗೆ ಸಾಲು ಸಾಲು ಸಿನಿಮಾಗಳು&lt;/strong&gt;&lt;/p&gt;&lt;p&gt;&lsquo;ಕೆಜಿಎಫ್ 3&rsquo;ಗೆ ಇನ್ನೂ ಸಮಯ ಬೇಕಾಗಲು ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾಗಳೇ ಪ್ರಮುಖ ಕಾರಣ. ಸದ್ಯ ಅವರು ಜೂ ಎನ್&zwnj;ಟಿಆರ್ ನಟನೆಯ &lsquo;ಡ್ರ್ಯಾಗನ್&rsquo; ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ &lsquo;ಸಲಾರ್ 2&rsquo; ನಿರ್ದೇಶಿಸಲಿದ್ದಾರೆ.ಅದಾದ ನಂತರ ತಮಿಳಿನಲ್ಲಿ ಅಜಿತ್ ನಟನೆಯ ಹೊಸ ಸಿನಿಮಾವೊಂದನ್ನು ನಿರ್ದೇಶಿಸುವ ಯೋಜನೆಯಿದೆ. ನಂತರ ಅಲ್ಲು ಅರ್ಜುನ್ ಅಭಿನಯದ ಹೊಸ ಸಿನಿಮಾವನ್ನೂ ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ. ಈ ಸಿನಿಮಾಗಳ ಕೆಲಸಗಳು ಪೂರ್ಣಗೊಂಡ ಬಳಿಕವಷ್ಟೇ &lsquo;ಕೆಜಿಎಫ್ 3&rsquo; ಕಡೆಗೆ ಮರಳುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಸದ್ಯ ಯಶ್ ಕೂಡ ಬ್ಯುಸಿ&lt;/strong&gt;&lt;/h2&gt;&lt;p&gt;ಇತ್ತ ಯಶ್ ಅವರ ಸಿನಿಮಾಗಳ ಪಟ್ಟಿಯೂ ದೊಡ್ಡದಿದೆ. &lsquo;ಟಾಕ್ಸಿಕ್&rsquo; ಸಿನಿಮಾ ಬಿಡುಗಡೆಯಾಗಿದ್ದು, ನಿರೀಕ್ಷಿತ ಮಟ್ಟದ ಯಶಸ್ಸು ಪಡೆಯಲಿಲ್ಲ. ಸದ್ಯ ಯಶ್ &lsquo;ರಾಮಾಯಣ&rsquo; ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ. &lsquo;ರಾಮಾಯಣ&rsquo; ಸಿನಿಮಾದ ಪ್ರಚಾರ ಕಾರ್ಯದಲ್ಲೂ ಯಶ್ ಭಾಗಿಯಾಗಬೇಕಿದೆ. ಈ ಸಿನಿಮಾ ನವೆಂಬರ್&zwnj;ನಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಯಶ್ ಈ ವರ್ಷದ ಅಂತ್ಯದ ವೇಳೆಗೆ ತಮ್ಮ ಮುಂದಿನ ಸಿನಿಮಾಗಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಬಹುದು.&lt;/p&gt;&lt;p&gt;ಆದರೆ ಪ್ರಶಾಂತ್ ನೀಲ್ ಅವರ ಮುಂದಿನ ಸಾಲಿನ ಸಿನಿಮಾಗಳನ್ನು ಗಮನಿಸಿದರೆ, ಯಶ್ ಮತ್ತು ನೀಲ್ ಮತ್ತೆ ಒಂದಾಗಲು ಇನ್ನೂ ಕೆಲವು ವರ್ಷಗಳ ಸಮಯ ಬೇಕಾಗಬಹುದು. ಆದರೂ &lsquo;ಕೆಜಿಎಫ್ 3&rsquo; ಕಥೆ ಈಗಾಗಲೇ ಸಿದ್ಧವಾಗಿದೆ ಎಂಬ ಪ್ರಶಾಂತ್ ನೀಲ್ ಅವರ ಮಾತು, ಅಭಿಮಾನಿಗಳಲ್ಲಿ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟಿಸಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sandalwood-actor-yash-s-kgf-3-is-happening-confirms-director-prashanth-neel-gvd/articleshow-cisz335"/>
        </item>
        <item>
            <title><![CDATA[BBK 13: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಓಂ ಪ್ರಕಾಶ್ ರಾವ್.. 'ಬೀಪ್‌ ಸೌಂಡ್‌' ಪ್ರಶ್ನೆ ಕೇಳಿದ್ಯಾಕೆ ಕಿಚ್ಚ ಸುದೀಪ್?]]></title>
            <link>https://kannada.asianetnews.com/tv-talk/sandalwood-director-om-prakash-rao-is-a-contestant-in-bigg-boss-kannada-13-show-hosted-by-kiccha-sudeep/articleshow-d65e2xt</link>
            <guid isPermaLink="true">https://kannada.asianetnews.com/tv-talk/sandalwood-director-om-prakash-rao-is-a-contestant-in-bigg-boss-kannada-13-show-hosted-by-kiccha-sudeep/articleshow-d65e2xt</guid>
            <pubDate>Sun, 06 Sep 2026 18:03:51 +0530</pubDate>
            <description><![CDATA[&lt;p&gt;ಓಂ ಪ್ರಕಾಶ್ ರಾವ್ ಎಂದರೆ ನೇರ ನಡೆ, ನೇರ ನುಡಿ. ಯಾವುದೇ ವಿಷಯವನ್ನಾದರೂ ಮುಚ್ಚುಮರೆಯಿಲ್ಲದೆ ಮಾತನಾಡುವ ಗುಣ ಅವರದ್ದು. ಹಾಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಟ್ರೋಲ್&zwnj;ಗಳು ಶುರುವಾಗಿದ್ದು, &quot;ಇನ್ಮೇಲೆ ಎಡಿಟರ್&zwnj;ಗಳಿಗೆ ಬೀಪ್ ಸೌಂಡ್ ಹಾಕೋದೇ ಕೆಲಸ&quot; ಎನ್ನಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v9mje4rgyz1yjkk1m1j31z,imgname-om-prakash-rao-kichcha-sudeep-1788696218052.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Bigg Boss Kannada Season 13-Kiccha Sudeep-Om Prakash Rao Entry-ಬಿಗ್ ಬಾಸ್ ಮನೆಗೆ 'ಮಾಸ್' ಡೈರೆಕ್ಟರ್ ಎಂಟ್ರಿ: ಇನ್ಮೇಲೆ 'ಬೀಪ್' ಸೌಂಡ್ ಗ್ಯಾರಂಟಿ! ಓಂ ಪ್ರಕಾಶ್ ರಾವ್ ಅಖಾಡಕ್ಕೆ!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' ಇಂದು ಸಂಜೆಯಿಂದ ಅದ್ದೂರಿಯಾಗಿ ಶುರುವಾಗುತ್ತಿದೆ. ಕಿಚ್ಚ ಸುದೀಪ್ ಅವರ ಖಡಕ್ ನಿರೂಪಣೆಯಲ್ಲಿ ಆರಂಭವಾಗಲಿರುವ ಈ ಶೋನಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ. ನಟಿ ಸಂಗೀತಾ ಭಟ್ ಮತ್ತು ಕಾವ್ಯ ಗೌಡ ಅವರಂತಹ ಸುಂದರಿಯರ ಹೆಸರು ಕೇಳಿಬರುತ್ತಿರುವ ಬೆನ್ನಲ್ಲೇ, ಸ್ಯಾಂಡಲ್&zwnj;ವುಡ್&zwnj;ನ 'ಡೈನಾಮಿಕ್' ಡೈರೆಕ್ಟರ್ ಒಬ್ಬರು ಬಿಗ್ ಬಾಸ್ ಮನೆಯ ಬಾಗಿಲು ತಟ್ಟುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಅವರೇ 'ಆಕ್ಷನ್ ಕಿಂಗ್' ಓಂ ಪ್ರಕಾಶ್ ರಾವ್!&lt;/p&gt;&lt;p&gt;ಬಂದೇ ಬಿಟ್ಟರು 'ಮಾಸ್' ಸಿನಿಮಾಗಳ ಸರದಾರ!&lt;/p&gt;&lt;p&gt;ಬಿಗ್ ಬಾಸ್ ಇತಿಹಾಸದಲ್ಲಿ ಸಾಮಾನ್ಯವಾಗಿ ನಟ-ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಗಾಂಧಿನಗರದ ಸ್ಟಾರ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಎಂಟ್ರಿ ದೊಡ್ಡ ಧಮಾಕಾ ಎನ್ನಬಹುದು. ಯಾರೂ ಊಹಿಸದ ರೀತಿಯಲ್ಲಿ ಅಚ್ಚರಿಯ ಎಂಟ್ರಿ ಕೊಟ್ಟಿರುವ ರಾವ್ ಅವರು, ಬಿಗ್ ಬಾಸ್ ವೇದಿಕೆಯ ಮೇಲೆ ನಿಂತಾಗ ಅಭಿಮಾನಿಗಳ ಶಿಳ್ಳೆ-ಚಪ್ಪಾಳೆ ಮುಗಿಲು ಮುಟ್ಟಿದೆ. 47ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಇವರು, ಕೇವಲ ಆಕ್ಷನ್ ಮಾತ್ರವಲ್ಲದೆ ತಮ್ಮ ಮಾತಿನ ಶೈಲಿಯಿಂದಲೂ ಸಖತ್ ಫೇಮಸ್.&lt;/p&gt;&lt;h2&gt;ಲಾಕಪ್ ಡೆತ್&zwnj;ನಿಂದ ಕಲಾಸಿಪಾಳ್ಯದವರೆಗೆ... ಇವರದ್ದೇ ಹವಾ!&lt;/h2&gt;&lt;p&gt;ಓಂ ಪ್ರಕಾಶ್ ರಾವ್ ಅಂದಾಕ್ಷಣ ನೆನಪಾಗುವುದು 'AK 47', 'ಸಿಂಹದ ಮರಿ' ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿಜೀವನವನ್ನೇ ಬದಲಿಸಿದ 'ಕಲಾಸಿಪಾಳ್ಯ'. 'ಲಾಕಪ್ ಡೆತ್' ಚಿತ್ರದ ಮೂಲಕ ಅಬ್ಬರಿಸಿದ್ದ ಇವರು, ಗಾಂಧಿನಗರದ ಪ್ರತಿಷ್ಠಿತ ನಿರ್ದೇಶಕರಲ್ಲೊಬ್ಬರು. ಕೇವಲ ಆಕ್ಷನ್ ಕಟ್ ಹೇಳುವುದು ಮಾತ್ರವಲ್ಲದೆ, 'ಡಕೋಟಾ ಎಕ್ಸ್&zwnj;ಪ್ರೆಸ್'ನಂತಹ ಸಿನಿಮಾಗಳಲ್ಲಿ ಹಾಸ್ಯ ನಟನೆಯ ಮೂಲಕವೂ ಕನ್ನಡಿಗರನ್ನು ಹೊಟ್ಟೆ ಚುರುಕ್ ಎನ್ನುವಂತೆ ನಗಿಸಿದ್ದರು. ಈಗ ಇಂತಹ 'ಮಲ್ಟಿ ಟ್ಯಾಲೆಂಟೆಡ್' ವ್ಯಕ್ತಿ ಬಿಗ್ ಬಾಸ್ ಮನೆಗೆ ಹೋಗುತ್ತಿರುವುದು ಮನೆಯೊಳಗಿನ ಇತರ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿರುವುದಂತೂ ನಿಜ!&lt;/p&gt;&lt;p&gt;ಸಂಸಾರ ಎಂಬ ಸಿನಿಮೀಯ ಹಾದಿ!&lt;/p&gt;&lt;p&gt;ಓಂ ಪ್ರಕಾಶ್ ರಾವ್ ಅವರ ವೈಯಕ್ತಿಕ ಜೀವನವೂ ಯಾವುದೋ ಒಂದು ಸಿನಿಮಾ ಸ್ಕ್ರಿಪ್ಟ್&zwnj;ಗಿಂತ ಕಮ್ಮಿ ಇಲ್ಲ. ಹಿರಿಯ ನಟ ಎನ್.ಎಸ್. ರಾವ್ ಅವರ ಪುತ್ರರಾದ ಇವರು, ನಟಿ ರೇಖಾ ದಾಸ್ ಅವರನ್ನು ಮೊದಲು ವಿವಾಹವಾಗಿದ್ದರು. ನಂತರದ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡು, ನಂದಾ ಹಾಗೂ ನಟಿ ಭವ್ಯ ಪ್ರೇಮಯ್ಯ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಬೇರ್ಪಟ್ಟಿದ್ದರು. ಸದ್ಯ ಡೆನಿಸ್ಸಾ ಅವರೊಂದಿಗೆ ಜೀವನ ನಡೆಸುತ್ತಿರುವ ಓಂ ಪ್ರಕಾಶ್ ರಾವ್ ಅವರ ಈ ವೈಯಕ್ತಿಕ ಹಾದಿಯೇ ಒಂದು ತೆರೆದ ಪುಸ್ತಕ. ಅವರ ಜೀವನದ ಕಥೆಗಳು ಬಿಗ್ ಬಾಸ್ ಮನೆಯೊಳಗೆ ಎಷ್ಟರಮಟ್ಟಿಗೆ ಚರ್ಚೆಗೆ ಬರಲಿವೆ ಎಂಬುದು ಸದ್ಯದ ಕುತೂಹಲ.&lt;/p&gt;&lt;h3&gt;ಬಿಗ್ ಬಾಸ್ ಮನೆಯಲ್ಲಿ 'ಬೀಪ್' ಸೌಂಡ್ ಜಾಸ್ತಿ ಇರುತ್ತಾ?&lt;/h3&gt;&lt;p&gt;ಓಂ ಪ್ರಕಾಶ್ ರಾವ್ ಎಂದರೆ ನೇರ ನಡೆ, ನೇರ ನುಡಿ. ಯಾವುದೇ ವಿಷಯವನ್ನಾದರೂ ಮುಚ್ಚುಮರೆಯಿಲ್ಲದೆ ಮಾತನಾಡುವ ಗುಣ ಅವರದ್ದು. ಹಾಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಟ್ರೋಲ್&zwnj;ಗಳು ಶುರುವಾಗಿದ್ದು, &quot;ಇನ್ಮೇಲೆ ಎಡಿಟರ್&zwnj;ಗಳಿಗೆ ಬೀಪ್ ಸೌಂಡ್ ಹಾಕೋದೇ ಕೆಲಸ&quot; ಎನ್ನಲಾಗುತ್ತಿದೆ. ಇಷ್ಟು ದಿನ ಬೇರೆಯವರಿಗೆ ಆಕ್ಷನ್ ಕಟ್ ಹೇಳುತ್ತಿದ್ದ ನಿರ್ದೇಶಕರು, ಈಗ ಬಿಗ್ ಬಾಸ್ ಕಣ್ಗಾವಲಿನಲ್ಲಿ ಹೇಗೆ ಬದುಕುತ್ತಾರೆ? ಮನೆಯೊಳಗಿನ ಕಿರಿಕ್ ಮತ್ತು ಮಜಾ ಹೇಗಿರುತ್ತದೆ ಅನ್ನೋದನ್ನ ನೋಡಲು ಕನ್ನಡಿಗರು ಕಾತರರಾಗಿದ್ದಾರೆ.&lt;/p&gt;&lt;p&gt;ಅಂದಹಾಗೆ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಗೆ ಇದು 2ನೇ ಎಂಟ್ರಿ. ಈ ಹಿಂದೆ ಬಿಗ್​​ಬಾಸ್ ಕನ್ನಡ ಸೀಸನ್ 4ರಲ್ಲಿ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್​​ಬಾಸ್ ಮನೆಗೆ ಹೋಗಿದ್ದರು. ಆದರೆ ಅಲ್ಲಿ ಅವರು ಹೆಚ್ಚು ದಿನ ಇರಲಿಲ್ಲ. ಅವರಿಗೆ ವಿಪರೀತ ಕಾಲು ನೋವು ಶುರುವಾದ ಕಾರಣ, &lsquo;ಆರೋಗ್ಯದ ಕಾರಣ&rsquo; ನೀಡಿ ಅಲ್ಲಿಂದ ಹೊರಬಂದಿದ್ದರು. ಇದೀಗ ಎರಡನೇ ಬಾರಿ ಓಂ ಪ್ರಕಾಶ್ ಅವರು ಬಿಗ್​​ಬಾಸ್ ಮನೆಗೆ ಕಾಲಿಟ್ಟಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಬಿಗ್ ಬಾಸ್ ಸೀಸನ್ 13 ಕೇವಲ ಸುಂದರಿಯರ ಸೌಂದರ್ಯಕ್ಕೆ ಮಾತ್ರವಲ್ಲ, ಓಂ ಪ್ರಕಾಶ್ ರಾವ್ ಅಂತಹ ಮಾಸ್ ವ್ಯಕ್ತಿಗಳ ಘರ್ಜನೆಗೂ ಸಾಕ್ಷಿಯಾಗಲಿದೆ. ಲೈಟ್ಸ್... ಕ್ಯಾಮೆರಾ... ಆಕ್ಷನ್... ಇನ್ಮುಂದೆ &lsquo;ಬಿಗ್ ಬಾಸ್&rsquo; ಹವಾ ಶುರು!&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/sandalwood-director-om-prakash-rao-is-a-contestant-in-bigg-boss-kannada-13-show-hosted-by-kiccha-sudeep/articleshow-d65e2xt"/>
        </item>
        <item>
            <title><![CDATA[ಅಭಿ ಸಿನಿಮಾಗೆ ರಮ್ಯಾ ಪಡೆದುಕೊಂಡ ಸಂಭಾವನೆ ಎಷ್ಟು? ಮಂಡ್ಯ ಜನತೆ ಬಗ್ಗೆ ನಟಿಯ ಮಾತು]]></title>
            <link>https://kannada.asianetnews.com/gallery/sandalwood/kannada-actress-ramya-recalls-her-first-paycheck-from-rs-1-lakh-for-puneeth-rajkumar-s-abhi-film-d8hkx6z</link>
            <guid isPermaLink="true">https://kannada.asianetnews.com/gallery/sandalwood/kannada-actress-ramya-recalls-her-first-paycheck-from-rs-1-lakh-for-puneeth-rajkumar-s-abhi-film-d8hkx6z</guid>
            <pubDate>Wed, 09 Sep 2026 13:16:16 +0530</pubDate>
            <description><![CDATA[&lt;p&gt;Mandya&rsquo;s Love Was My Greatest Remuneration: ಸ್ಯಾಂಡಲ್&zwnj;ವುಡ್&zwnj;ನ ಮೋಹಕ ತಾರೆ ರಮ್ಯಾ ತಮ್ಮ ಮೊದಲ ಸಿನಿಮಾ 'ಅಭಿ'ಯ ಸಂಭಾವನೆಯನ್ನು ಬಹಿರಂಗಪಡಿಸಿದ್ದಾರೆ. ಯುವಜನತೆ ಆರ್ಥಿಕವಾಗಿ ಸಬಲರಾಗಲು ಸಲಹೆ ನೀಡಿದ್ದು, ಮಂಡ್ಯದ ಜನತೆ ನೀಡಿದ ಪ್ರೀತಿ ಬಗ್ಗೆ ಭಾವನಾತ್ಮಕವಾಗಿ ನುಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m22hfnygp7rk1gm8gjkhvm90,imgname-ramya-1788939327440.jpg" type="image/jpeg" height="390" width="690"/>
            <content:encoded><![CDATA[&lt;p&gt;Mandya&rsquo;s Love Was My Greatest Remuneration: ಸ್ಯಾಂಡಲ್&zwnj;ವುಡ್&zwnj;ನ ಮೋಹಕ ತಾರೆ ರಮ್ಯಾ ತಮ್ಮ ಮೊದಲ ಸಿನಿಮಾ 'ಅಭಿ'ಯ ಸಂಭಾವನೆಯನ್ನು ಬಹಿರಂಗಪಡಿಸಿದ್ದಾರೆ. ಯುವಜನತೆ ಆರ್ಥಿಕವಾಗಿ ಸಬಲರಾಗಲು ಸಲಹೆ ನೀಡಿದ್ದು, ಮಂಡ್ಯದ ಜನತೆ ನೀಡಿದ ಪ್ರೀತಿ ಬಗ್ಗೆ ಭಾವನಾತ್ಮಕವಾಗಿ ನುಡಿದಿದ್ದಾರೆ.&lt;/p&gt;&lt;img&gt;&lt;p&gt;ಸ್ಯಾಂಡಲ್&zwnj;ವುಡ್ ಅಂಗಳದ ಮೋಹಕ ತಾರೆ ರಮ್ಯಾ ತಮ್ಮ ಮೊದಲ ಸಿನಿಮಾದ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ಇಂದಿನ ಯುವ ಪೀಳಿಗೆ ಆರ್ಥಿಕವಾಗಿ ಹೇಗೆ ಸಬಲರಾಗಬೇಕು? ಸಿನಿಮಾ ಅಂಗಳದಲ್ಲಿ ಹೇಗೆ ಸರ್ವವೈ ಆಗಬೇಕು? ಸದ್ಯ ತಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆಯೂ ರಮ್ಯಾ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.&lt;/p&gt;&lt;img&gt;&lt;p&gt;ಇಂದಿನ ಯುವ ಪೀಳಿಗೆ ಸೋಶಿಯಲ್ ಮೀಡಿಯಾ ಮೂಲಕ ತಮ್ಕ ಆದಾಯದ ಮೂಲಗಳನ್ನು ಕಂಡುಕೊಳ್ಳಬಹುದು. ಅದರಲ್ಲಿ ಇನ್&zwnj;ಸ್ಟಾಗ್ರಾಂ ಉತ್ತಮ ಮಾರ್ಗವಾಗಿದೆ. ಈ ಮೂಲಕ ಜನರನ್ನು ಬೇಗ ತಲುಪಬಹುದು ಎಂದು ಸಲಹೆ ನೀಡಿದರು. ಇದೇ ವೇಳೆ ಸದ್ಯ ತಾವು ವಿವಾಹಿತ ಮತ್ತು Menopause ಹಂತದಲ್ಲಿರುವ ಮಹಿಳೆಯರ ಕುರಿತು ಜಾಗೃತಿ ಮೂಡಿಸುವ ಫೌಂಡೇಶನ್&zwnj;ನಲ್ಲಿ ಬ್ಯುಸಿಯಾಗಿರೋದಾಗಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಇದೇ ವೇಳೆ ತಮ್ಮ ಮೊದಲ ಸಿನಿಮಾ 'ಅಭಿ' ಚಿತ್ರದ ಅಭಿನಯಕ್ಕಾಗಿ 1 ಲಕ್ಷ ರೂಪಾಯಿಯ ಚೆಕ್ ಸಿಕ್ಕಿತ್ತು. 20 ರಿಂದ 22 ದಿನ ಶೂಟಿಂಗ್ ಮಾಡಲಾಗಿತ್ತು. ಬಾಕ್ಸ್&zwnj; ಆಫಿಸ್&zwnj;ನಲ್ಲಿ ಗೆಲ್ಲುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ದೀರ್ಘಕಾಲದವರೆಗೆ ಚಿತ್ರರಂಗದಲ್ಲಿ ಉಳಿಯಲು ಸಾಧ್ಯವಾಗುತ್ತದೆ.&lt;/p&gt;&lt;p&gt;ಮೊದಲ ಮತ್ತು ಎರಡನೇ ಸಿನಿಮಾ ಸಂದರ್ಭದಲ್ಲಿಯೇ ಆಯ್ಕೆ ಹಂತಕ್ಕೆ ಹೋಗಬಾರದು. ನಿರ್ಮಾಪಕರು ಮತ್ತು ನಿರ್ದೇಶಕರು ನಿಮಗೆ ಆದ್ಯತೆ ನೀಡಲು ಪ್ರಾರಂಭಿಸಿದಾಗ ಅಥವಾ ನಿಮ್ಮನ್ನು ಆಯ್ಕೆ ಮಾಡಲು ಬಂದಾಗ ಆಗ ನಿಮಗೆ ಪಾತ್ರವೇ ಮುಖ್ಯವಾಗಬೇಕಾಗುತ್ತದೆ. ನನ್ನ ಸಿನಿಮಾಗಳಲ್ಲಿ ಪಾತ್ರವೇ ನನಗೆ ಮುಖ್ಯವಾಗಿತ್ತು ಎಂದು ರಮ್ಯಾ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ನಮ್ಮನ್ನು ಸಾಮಾನ್ಯ ಜನರಿಗಿಂತ ವಿಶೇಷ ಮತ್ತು ಎತ್ತರದ ಸ್ಥಾನದಲ್ಲಿ ನೋಡಲಾಗುತ್ತದೆ. ನಾವು ಎಲ್ಲರಂತೆಯೇ ಕಷ್ಟದಿಂದ ಈ ಹಂತಕ್ಕೆ ಬಂದಿರುತ್ತೇವೆ. ಕೆಲವೊಮ್ಮೆ ನಮ್ಮನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಹಾಗಾಗಿ ನಮ್ಮ ಬಗ್ಗೆ ಸ್ವಲ್ಪ ಸಹಾನುಭೂತಿ ಇರಬೇಕು ಎಂಬುದು ನನ್ನ ಅನಿಸಿಕೆ. ಹೇಗೆ ಕಾಣುತ್ತೀರಿ? ಏನು ಧರಿಸುತ್ತೀರಿ? ತೂಕ ಹೀಗೆ ವಿವಿಧ ವಿಷಯಗಳಲ್ಲಿ ನಮ್ಮನ್ನು ನಿರಂತರವಾಗಿ ಜಡ್ಜ್ ಮಾಡಲಾಗುತ್ತದೆ. ಇದರ ಜೊತೆಗೆ ನಮಗೆ ಜನರು ತುಂಬಾ ಪ್ರೀತಿಯನ್ನು ಸಹ ನೀಡುತ್ತಾರೆ ಅಂತಾರೆ ರಮ್ಯಾ.&lt;/p&gt;&lt;img&gt;&lt;p&gt;ಇದೇ ಸಂದರ್ಶನದಲ್ಲಿ ಮಂಡ್ಯ ಜನತೆ ಬಗ್ಗೆಯೂ ಮಾತಾಡಿರೋ ರಮ್ಯಾ, ಚುನಾವಣೆ ಪ್ರಚಾರದ ವೇಳೆ ಬಡವರು ಸಹ ನನಗೆ ಆಶೀರ್ವಾದದ ರೂಪದಲ್ಲಿ 10, 20, 50 ಮತ್ತು 100 ರೂಪಾಯಿ ನೀಡಿದರು. ಆ ದಿನಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದು ನನ್ನ ಜೀವನದಲ್ಲಿ ಸಿಕ್ಕ ಅತ್ಯಂತ ಅಮೂಲ್ಯವಾದ ಉಡುಗೊರೆ ಎಂದು ನಾನು ಭಾವಿಸುತ್ತೇನೆ. ಇದುವೇ ನನ್ನ ಅತಿದೊಡ್ಡ ಸಂಭಾವನೆ ಎಂದರು.&lt;/p&gt;]]></content:encoded>
            <category>sandalwood</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/sandalwood/kannada-actress-ramya-recalls-her-first-paycheck-from-rs-1-lakh-for-puneeth-rajkumar-s-abhi-film-d8hkx6z"/>
        </item>
        <item>
            <title><![CDATA[ಡಾ.ರಾಜ್ ಕುಮಾರ್-ಲೀಲಾವತಿ ಸಂಬಂಧ: ತಿಂಗಳಲ್ಲಿ 10 ಮುದ್ರಣ ಕಂಡ 'ಲೀಲಮ್ಮ ನಿನ್ನ ಗಂಡ ಯಾರಮ್ಮ?' ಕೃತಿ!]]></title>
            <link>https://kannada.asianetnews.com/gallery/state/actress-leelavathi-dr-raj-kumar-relationship-nr-ramesh-book-leelamma-ninna-ganda-yaaramma-10th-edition-record-sat-dyslssk</link>
            <guid isPermaLink="true">https://kannada.asianetnews.com/gallery/state/actress-leelavathi-dr-raj-kumar-relationship-nr-ramesh-book-leelamma-ninna-ganda-yaaramma-10th-edition-record-sat-dyslssk</guid>
            <pubDate>Wed, 09 Sep 2026 07:50:58 +0530</pubDate>
            <description><![CDATA[&lt;p&gt;ಬಿಜೆಪಿ ಮುಖಂಡ ಎನ್&zwnj;.ಆರ್&zwnj;.ರಮೇಶ್ ರಚಿಸಿದ &lsquo;ಲೀಲಮ್ಮ ನಿನ್ನ ಗಂಡ ಯಾರಮ್ಮ?&rsquo; ಕೃತಿಯು ಕೇವಲ 28 ದಿನಗಳಲ್ಲಿ 10ನೇ ಮುದ್ರಣ ದಾಖಲೆ ಸೃಷ್ಟಿಸಿದೆ. ಡಾ.ರಾಜ್ ಕುಮಾರ್ ಚಾರಿತ್ರ್ಯವಧೆ ಮಾಡುವ ವಿವಾದಗಳಿಗೆ, ಲೀಲಾವತಿ ಮತ್ತು ವಿನೋದ್ ರಾಜ್ ಸ್ವತ್ತುಗಳಿಗೆ ಸರ್ಕಾರಿ ದಾಖಲೆಗಳ ಸಹಿತ ಪುಸ್ತಕ ತೆರೆ ಎಳೆಯುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m21yxm2avyvk9ct1bf7dzhk5,imgname-dr-raj-kumar-fans-leelamma-ninna-ganda-yaramma-book-1788919861322.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಜೆಪಿ ಮುಖಂಡ ಎನ್&zwnj;.ಆರ್&zwnj;.ರಮೇಶ್ ರಚಿಸಿದ &lsquo;ಲೀಲಮ್ಮ ನಿನ್ನ ಗಂಡ ಯಾರಮ್ಮ?&rsquo; ಕೃತಿಯು ಕೇವಲ 28 ದಿನಗಳಲ್ಲಿ 10ನೇ ಮುದ್ರಣ ದಾಖಲೆ ಸೃಷ್ಟಿಸಿದೆ. ಡಾ.ರಾಜ್ ಕುಮಾರ್ ಚಾರಿತ್ರ್ಯವಧೆ ಮಾಡುವ ವಿವಾದಗಳಿಗೆ, ಲೀಲಾವತಿ ಮತ್ತು ವಿನೋದ್ ರಾಜ್ ಸ್ವತ್ತುಗಳಿಗೆ ಸರ್ಕಾರಿ ದಾಖಲೆಗಳ ಸಹಿತ ಪುಸ್ತಕ ತೆರೆ ಎಳೆಯುತ್ತದೆ.&lt;/p&gt;&lt;img&gt;&lt;p&gt;ಬಿಜೆಪಿ ಮುಖಂಡ ಹಾಗೂ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್&zwnj;.ಆರ್&zwnj;.ರಮೇಶ್ ಅವರು ರಚಿಸಿದ &lsquo;ಲೀಲಮ್ಮ ನಿನ್ನ ಗಂಡ ಯಾರಮ್ಮ?&rsquo; ಕೃತಿ ದಾಖಲೆ ಸೃಷ್ಟಿಸಿದ್ದು, ಪ್ರಥಮ ಮುದ್ರಣ ಬಿಡುಗಡೆಯಾದ ಕೇವಲ 28 ದಿನಗಳ ಅಲ್ಪಾವಧಿಯಲ್ಲಿಯೇ 10ನೇ ಮುದ್ರಣವನ್ನು ಕಂಡಿದೆ.&lt;/p&gt;&lt;img&gt;&lt;p&gt;ನಗರದಲ್ಲಿ ನಡೆದ ಸಮಾರಂಭದಲ್ಲಿ ಕೃತಿಯ 10ನೇ ಮುದ್ರಣದ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಕತೃ ಎನ್&zwnj;.ಆರ್.ರಮೇಶ್&zwnj;, ಬದುಕಿನುದ್ದಕ್ಕೂ ಕನ್ನಡ ನಾಡು-ನುಡಿ-ನೆಲ-ಜಲ-ಭಾಷೆಯ ಸೇವೆಗೆಂದೇ ತಮ್ಮ ಜೀವನವನ್ನು ಸಮರ್ಪಣೆ ಮಾಡಿದ್ದ ನಟಸಾರ್ವಭೌಮ, ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಡಾ.ರಾಜ್ ಕುಮಾರ್ ಅವರ ಏಳಿಗೆಯನ್ನು ಮತ್ತು ಜನಪ್ರಿಯತೆಯನ್ನು ಸಹಿಸದೆ ಕೇವಲ ಅವರ ಚಾರಿತ್ರ್ಯವಧೆ ಮಾಡಬೇಕೆಂಬ ಏಕೈಕ ದುರುದ್ದೇಶದಿಂದ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ವಿವಾದ ಹಾಗೂ ಗೊಂದಲ ಸೃಷ್ಟಿಸಿದ್ದರು ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಇದಕ್ಕೆಲ್ಲ ಸರ್ಕಾರಿ ದಾಖಲೆಗಳ ಸಹಿತ ತೆರೆ ಎಳೆಯಬೇಕೆಂಬ ಸದುದ್ದೇಶದಿಂದ ಈ ಕೃತಿಯನ್ನು ರಚಿಸಲಾಗಿದ್ದು, ಕೃತಿಯ ಕೊನೆಯ 20 ಪುಟಗಳಲ್ಲಿ ದಿವಂಗತ ನಟಿ ಲೀಲಾವತಿ ಮತ್ತು ನಟ ವಿನೋದ್ ರಾಜ್ ಅವರ ಸ್ವತ್ತುಗಳಿಗೆ ಸಂಬಂಧಿಸಿದ ಅಧಿಕೃತ ಸರ್ಕಾರಿ ದಾಖಲೆಗಳ ಸಹಿತ ಕೃತಿಯನ್ನು ರಚಿಸಲಾಗಿದೆ. ಕೃತಿಯು 11 ಮತ್ತು 12ನೇ ಮುದ್ರಣವನ್ನು ಕಾಣುವ ದಿಕ್ಕಿನಲ್ಲಿ ಮುನ್ನಡೆದಿದೆ ಎಂದು ಹೇಳಿದರು.&lt;/p&gt;&lt;img&gt;&lt;p&gt;ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಗಡಿ ರಸ್ತೆಯ ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಸದಸ್ಯರು ಮತ್ತು ಕೃಷ್ಣರಾಜಪುರದ ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಸದಸ್ಯರು ಸ್ಥಳದಲ್ಲಿಯೇ 10ನೇ ಮುದ್ರಣದ ಎಲ್ಲ ಪ್ರತಿಗಳನ್ನು ಕ್ರಯಕ್ಕೆ ಪಡೆದರು. ಒಕ್ಕೂಟದ ಪದಾಧಿಕಾರಿಗಳಾದ ಪ್ರಕಾಶ್, ಸೋಮಣ್ಣ, ಹೊನ್ನೇಗೌಡ, ಉಮೇಶ್, ಡಾ.ರಾಜ್ ಕುಮಾರ್ ಸೇನೆಯ ತ್ಯಾಗರಾಜ್ ಹಾಜರಿದ್ದರು.&lt;/p&gt;]]></content:encoded>
            <category>sandalwood</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/actress-leelavathi-dr-raj-kumar-relationship-nr-ramesh-book-leelamma-ninna-ganda-yaaramma-10th-edition-record-sat-dyslssk"/>
        </item>
        <item>
            <title><![CDATA[Bigg Boss: ಬಿಗ್ ಬಾಸ್ ವೇದಿಕೆ ಮೇಲೆ 'ವಿಷ್ಣುವರ್ಧನ್' ಸ್ಟೈಲ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್‌.. ಇದು ಏಕೆ ಗೊತ್ತಾ?]]></title>
            <link>https://kannada.asianetnews.com/tv-talk/bigg-boss-season-13-host-kiccha-sudeep-appeared-exactly-like-the-late-actor-vishnuvardhan-in-this-venue/articleshow-ffnwgod</link>
            <guid isPermaLink="true">https://kannada.asianetnews.com/tv-talk/bigg-boss-season-13-host-kiccha-sudeep-appeared-exactly-like-the-late-actor-vishnuvardhan-in-this-venue/articleshow-ffnwgod</guid>
            <pubDate>Sun, 06 Sep 2026 19:49:16 +0530</pubDate>
            <description><![CDATA[&lt;p&gt;ಈ ಬಾರಿಯ ಬಿಗ್ ಬಾಸ್ 'ಹೊಸ ಬಾಸ್, ಹೊಸ ರೂಲ್ಸ್' ಮಾತ್ರವಲ್ಲದೆ, ಹೊಸ ಸ್ಟೈಲ್ ಮೂಲಕವೂ ಜನರ ಮನ ಗೆಲ್ಲಲು ಸಜ್ಜಾಗಿದೆ. ಕಿಚ್ಚನ ಖದರ್, ಸುಂದರ ಮನೆ ಮತ್ತು ವಿಭಿನ್ನ ಸ್ಪರ್ಧಿಗಳ ನಡುವೆ ಈ ಸೀಸನ್ 13 ಕನ್ನಡಿಗರಿಗೆ ಪಕ್ಕಾ ಎಂಟರ್ಟೈನ್ಮೆಂಟ್ ನೀಡೋದು ಗ್ಯಾರಂಟಿನಾ?! ನೋಡೋಣ.. ಇನ್ಮೇಲೆ ಶುರುವಾಗಲಿದೆ ಅಸಲಿ ಮಜಾ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vha3vq5nvttmdk6jmecyva,imgname-vishnuvardhan-kichcha-sudeep-1788704264055.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Bigg Boss Kannada Season 13-Kiccha Sudeep Vishnuvardhan Look Highlights- Vihnuvardhan 75th Birth Anniversary-September 18 Special-ದೊಡ್ಮನೆಯಲ್ಲಿ 'ಯಜಮಾನ'ನ ಅಬ್ಬರ: ವಿಷ್ಣುದಾದಾ ಸ್ಟೈಲ್&zwnj;ನಲ್ಲಿ ಕಿಚ್ಚ ಸುದೀಪ್&zwnj;! ಬಿಗ್ ಬಾಸ್ 13ಕ್ಕೆ ಗ್ರ್ಯಾಂಡ್ ವೆಲ್ಕಮ್!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ಅಂಗಳದ ಅತಿದೊಡ್ಡ ರಿಯಾಲಿಟಿ ಹಬ್ಬ 'ಬಿಗ್ ಬಾಸ್ ಕನ್ನಡ ಸೀಸನ್ 13'ಕ್ಕೆ ಈಗ ಅದ್ಧೂರಿ ಚಾಲನೆ ಸಿಕ್ಕಿದೆ. ಪ್ರತಿ ಸೀಸನ್&zwnj;ನಲ್ಲೂ ತನ್ನದೇ ಆದ ಹೊಸತನದೊಂದಿಗೆ ಬರುವ ಬಿಗ್ ಬಾಸ್, ಈ ಬಾರಿ ಆರಂಭದಲ್ಲೇ ಇಡೀ ಕರ್ನಾಟಕವೇ ಬೆರಗಾಗುವಂತಹ ಸರ್&zwnj;ಪ್ರೈಸ್ ನೀಡಿದೆ. ಈ ಸಲದ ಹೈಲೈಟ್ ಕೇವಲ ಸ್ಪರ್ಧಿಗಳಲ್ಲ, ಬದಲಿಗೆ ನಮ್ಮ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರ ಹೊಸ ಅವತಾರ!&lt;/p&gt;&lt;p&gt;ವಿಷ್ಣು ದಾದಾ ನೆನಪಿಸಿದ ಕಿಚ್ಚನ 'ಲಕ್'!&lt;/p&gt;&lt;p&gt;ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳ ಎದಬಡಿತ ಜೋರಾಗಿದೆ. ಅದಕ್ಕೆ ಕಾರಣ ಸುದೀಪ್ ಅವರ ಸ್ಟೈಲಿಶ್ ಲುಕ್. ಹೌದು, ಈ ಬಾರಿ ಸುದೀಪ್ ಅವರು ಸ್ಯಾಂಡಲ್&zwnj;ವುಡ್&zwnj;ನ ಸಾಹಸಿಂಹ, ದಿವಂಗತ ಡಾ. ವಿಷ್ಣುವರ್ಧನ್ ಅವರ ಸಿಗ್ನೇಚರ್ ಸ್ಟೈಲ್&zwnj;ನಲ್ಲಿ ಮಿಂಚುತ್ತಿದ್ದಾರೆ. ಅವರ ಹೇರ್ ಸ್ಟೈಲ್, ಕಣ್ಣಿಗೆ ಧರಿಸಿರುವ ಕೂಲಿಂಗ್ ಗ್ಲಾಸ್ ಮತ್ತು ಆ ಕಪ್ಪು ಬಣ್ಣದ ರಾಯಲ್ ಕೋಟ್ ನೋಡುತ್ತಿದ್ದರೆ, ಥೇಟ್ 'ಯಜಮಾನ' ಸಿನೆಮಾದ ವಿಷ್ಣುದಾದಾ ಅವರನ್ನೇ ನೆನಪಿಸುತ್ತಿದೆ. ವಿಶೇಷವಾಗಿ ಸುದೀಪ್ ಅವರ ನಗು ಮತ್ತು ವೇದಿಕೆ ಮೇಲಿನ ಗತ್ತಿನ ನಡಿಗೆ ಸಾಹಸಿಂಹನ ಅಭಿಮಾನಿಗಳಿಗೆ ಫುಲ್ ಖುಷಿ ಕೊಟ್ಟಿದೆ. ಕಿಚ್ಚನ ಈ 'ವಿಷ್ಣು ಅವತಾರ' ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.&lt;/p&gt;&lt;p&gt;ಈ ತಿಂಗಳು, ಅಂದರೆ ಸೆಪ್ಟೆಂಬರ್ 18ಕ್ಕೆ ನಟ ಸಾಹಸಸಿಂಹ ಖ್ಯಾತಿಯ ಡಾ. ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವಿದೆ. ಈ ಕಾರಣಕ್ಕೇ ನಟ ಕಿಚ್ಚ ಸುದೀಪ್ ಅವರು ಲೆಜೆಂಡರಿ ನಟ ವಿಷ್ಣುವರ್ಧನ್ ಗೆಟ್&zwnj;ಅಪ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ನಿಜವೆಷ್ಟು ಎಂಬದು ಗೊತ್ತಿಲ್ಲ. ಇದು ಜಸ್ಟ್ ಸೋಷಿಯಲ್ ಮೀಡಿಯಾ ಊಹೆಯೂ ಆಗಿರಬಹುದು!&lt;/p&gt;&lt;h2&gt;ದೊಡ್ಮನೆಯಲ್ಲಿ 'ವಿಶ್ವ ಪರ್ಯಟನೆ'!&lt;/h2&gt;&lt;p&gt;ಇನ್ನು ಬಿಗ್ ಬಾಸ್ ಮನೆ ಈ ಬಾರಿ ಕೇವಲ ಒಂದು ಮನೆಯಲ್ಲ, ಅದೊಂದು 'ವಿಶ್ವದ ಅದ್ಭುತಗಳ ಮ್ಯೂಸಿಯಂ'. ಮನೆಯೊಳಗೆ ಕಾಲಿಟ್ಟರೆ ನೀವು ಯಾವುದೋ ವಿದೇಶಿ ಪ್ರವಾಸಕ್ಕೆ ಬಂದ ಅನುಭವವಾಗುತ್ತದೆ. ಯುರೋಪ್ ರಾಷ್ಟ್ರಗಳ ಐಷಾರಾಮಿ ಶೈಲಿಯಲ್ಲಿ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಮನೆಯ ಮಧ್ಯಭಾಗದಲ್ಲಿ ಬೃಹತ್ ವಿಶ್ವದ ಗೋಳ (Globe), ಐಫೆಲ್ ಟವರ್, ಸ್ಟ್ಯಾಚ್ಯೂ ಆಫ್ ಲಿಬರ್ಟಿ ಮತ್ತು ಡ್ರ್ಯಾಗನ್ ಸೇರಿದಂತೆ ಜಗತ್ತಿನ ಏಳು ಅದ್ಭುತಗಳ ಪರಿಕಲ್ಪನೆಯನ್ನು ಅದ್ಭುತವಾಗಿ ಬಳಸಲಾಗಿದೆ. ವಿಮಾನದ ಮಾದರಿಯಲ್ಲೇ ರೂಪಿಸಿರುವ ಸಿಟ್-ಔಟ್ ಪ್ರದೇಶವಂತೂ ಈ ಸೀಸನ್&zwnj;ನ ಮಾಸ್ಟರ್ ಪೀಸ್ ಎನ್ನಬಹುದು.&lt;/p&gt;&lt;h3&gt;ಸುಂದರಿಯರ ಸೌಂದರ್ಯ ಮತ್ತು ಮಾಸ್ ಡೈರೆಕ್ಟರ್ ಎಂಟ್ರಿ!&lt;/h3&gt;&lt;p&gt;ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋಗಳ ಪ್ರಕಾರ, ಕಿರುತೆರೆಯ ಜನಪ್ರಿಯ ನಟಿಯರಾದ ಸಂಗೀತಾ ಭಟ್ ಮತ್ತು ಕಾವ್ಯ ಗೌಡ ಅವರ ಎಂಟ್ರಿ ಕನ್ಫರ್ಮ್ ಆಗಿದೆ. ಈ ಇಬ್ಬರು ಸುಂದರಿಯರು ದೊಡ್ಮನೆಯ ಗ್ಲಾಮರ್ ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ. ಇವರ ಜೊತೆಗೆ ಸ್ಯಾಂಡಲ್&zwnj;ವುಡ್&zwnj;ನ 'ಮಾಸ್' ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪ್ರವೇಶ ಪ್ರೇಕ್ಷಕರಲ್ಲಿ ಕುತೂಹಲದ ಕಿಚ್ಚು ಹಚ್ಚಿದೆ. ಆಕ್ಷನ್ ಮತ್ತು ಕಿರಿಕ್&zwnj;ಗಳಿಗೆ ಫೇಮಸ್ ಆಗಿರುವ ಓಂ ಪ್ರಕಾಶ್ ರಾವ್ ಅವರು ಮನೆಯೊಳಗೆ ಯಾವ ರೀತಿ ಆಟವಾಡಲಿದ್ದಾರೆ ಎಂಬುದೇ ದೊಡ್ಡ ಸಸ್ಪೆನ್ಸ್.&lt;/p&gt;&lt;p&gt;ಒಟ್ಟಿನಲ್ಲಿ, ಈ ಬಾರಿಯ ಬಿಗ್ ಬಾಸ್ 'ಹೊಸ ಬಾಸ್, ಹೊಸ ರೂಲ್ಸ್' ಮಾತ್ರವಲ್ಲದೆ, ಹೊಸ ಸ್ಟೈಲ್ ಮೂಲಕವೂ ಜನರ ಮನ ಗೆಲ್ಲಲು ಸಜ್ಜಾಗಿದೆ. ಕಿಚ್ಚನ ಖದರ್, ಸುಂದರ ಮನೆ ಮತ್ತು ವಿಭಿನ್ನ ಸ್ಪರ್ಧಿಗಳ ನಡುವೆ ಈ ಸೀಸನ್ 13 ಕನ್ನಡಿಗರಿಗೆ ಪಕ್ಕಾ ಎಂಟರ್ಟೈನ್ಮೆಂಟ್ ನೀಡೋದು ಗ್ಯಾರಂಟಿ! ಇನ್ಮೇಲೆ ಶುರುವಾಗಲಿದೆ ಅಸಲಿ ಮಜಾ!&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/bigg-boss-season-13-host-kiccha-sudeep-appeared-exactly-like-the-late-actor-vishnuvardhan-in-this-venue/articleshow-ffnwgod"/>
        </item>
        <item>
            <title><![CDATA[ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ ನೆನಪಿದೆಯಾ? ಈಗ ಅವರ ಜೀವನದಲ್ಲಿ ಏನಾಗ್ತಿದೆ?]]></title>
            <link>https://kannada.asianetnews.com/gallery/entertainment/sandalwood-film-kirik-party-actress-samyuktha-hegde-heres-what-she-is-doing-now-gvd-gg5z6d6</link>
            <guid isPermaLink="true">https://kannada.asianetnews.com/gallery/entertainment/sandalwood-film-kirik-party-actress-samyuktha-hegde-heres-what-she-is-doing-now-gvd-gg5z6d6</guid>
            <pubDate>Mon, 07 Sep 2026 17:48:45 +0530</pubDate>
            <description><![CDATA[&lt;p&gt;ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಹಾಗೂ ತೆಲುಗು ಪ್ರೇಕ್ಷಕರ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫಿಟ್&zwnj;ನೆಸ್ ವಿಡಿಯೋಗಳು ಹಾಗೂ ಗ್ಲಾಮರಸ್ ಫೋಟೋಗಳಿಂದ ಅವರು ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xwb6p89staak8rz2nng2sj,imgname-sam--5--1788782942920.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಹಾಗೂ ತೆಲುಗು ಪ್ರೇಕ್ಷಕರ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫಿಟ್&zwnj;ನೆಸ್ ವಿಡಿಯೋಗಳು ಹಾಗೂ ಗ್ಲಾಮರಸ್ ಫೋಟೋಗಳಿಂದ ಅವರು ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾ ರಂಗದಲ್ಲಿ ಕೆಲ ನಟಿಯರು ಒಂದೆರಡು ಸಿನಿಮಾಗಳಲ್ಲೇ ಪ್ರೇಕ್ಷಕರ ಗಮನ ಸೆಳೆದು ಬಳಿಕ ಚಿತ್ರರಂಗದಿಂದ ದೂರವಾಗುತ್ತಾರೆ. ಕೆಲವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಸಂಪರ್ಕದಲ್ಲೇ ಇರುತ್ತಾರೆ. ಗ್ಲಾಮರಸ್ ಫೋಟೋಗಳು, ಫಿಟ್&zwnj;ನೆಸ್ ವಿಡಿಯೋಗಳ ಮೂಲಕ ಆಗಾಗ್ಗೆ ಸದ್ದು ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಬ್ಬ ನಟಿಯ ಬಗ್ಗೆ ಚರ್ಚೆ ಶುರುವಾಗಿದೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಯುವಕರ ಮನ ಗೆದ್ದಿದ್ದ ಈ ನಟಿ, ಬಳಿಕ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇದರ ನಡುವೆಯೇ ಕೆಲವು ವಿವಾದಗಳಲ್ಲೂ ಸಿಲುಕಿಕೊಂಡಿದ್ದರು. ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ, ಕನ್ನಡದ ಬೆಡಗಿ ಸಂಯುಕ್ತಾ ಹೆಗ್ಡೆ.&lt;/p&gt;&lt;img&gt;&lt;p&gt;ಸಂಯುಕ್ತಾ ಹೆಗ್ಡೆ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಪರಿಚಿತ ಹೆಸರು. ತೆಲುಗಿನಲ್ಲಿ ಯಂಗ್ ಹೀರೋ ನಿಖಿಲ್ ಸಿದ್ಧಾರ್ಥ್ ಅಭಿನಯದ &lsquo;ಕಿರಿಕ್ ಪಾರ್ಟಿ&rsquo; ಚಿತ್ರದ ಮೂಲಕ ಟಾಲಿವುಡ್&zwnj;ಗೆ ಎಂಟ್ರಿ ಕೊಟ್ಟಿದ್ದರು. ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ, ಸಂಯುಕ್ತಾ ಅವರ ಲುಕ್ ಮತ್ತು ಅಭಿನಯ ಪ್ರೇಕ್ಷಕರ ಗಮನ ಸೆಳೆದಿತ್ತು. &lsquo;ಕಿರಿಕ್ ಪಾರ್ಟಿ&rsquo; ಬಳಿಕ ಸಂಯುಕ್ತಾ ತೆಲುಗಿನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಲಿಲ್ಲ.&lt;/p&gt;&lt;img&gt;&lt;p&gt;ಒಂದೇ ಒಂದು ಟಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಂಡರೂ, ಆ ಮೂಲಕವೇ ಅವರು ತೆಲುಗು ಪ್ರೇಕ್ಷಕರಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಟಾಲಿವುಡ್&zwnj;ನಲ್ಲಿ ಅವಕಾಶಗಳು ಹೆಚ್ಚಾಗಿ ಸಿಗದಿದ್ದರೂ, ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಮಾತ್ರ ಸಂಯುಕ್ತಾ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರಗಳು ಹಾಗೂ ತಮ್ಮದೇ ಆದ ಸ್ಟೈಲ್&zwnj;ನಿಂದ ಅವರು ಪ್ರೇಕ್ಷಕರ ಗಮನ ಸೆಳೆಯುತ್ತಲೇ ಬಂದಿದ್ದಾರೆ.&lt;/p&gt;&lt;img&gt;&lt;p&gt;ಸಂಯುಕ್ತಾ ಹೆಗ್ಡೆ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲು ಬಿಗ್&zwnj;ಬಾಸ್ ಕೂಡ ಪ್ರಮುಖ ಕಾರಣ. ಕನ್ನಡ ಬಿಗ್&zwnj;ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಳಿಕ ಅವರ ಫ್ಯಾನ್ ಫಾಲೋಯಿಂಗ್ ಮತ್ತಷ್ಟು ವಿಸ್ತರಿಸಿತು. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಸಂಯುಕ್ತಾ, ತಮ್ಮ ಅಭಿಮಾನಿಗಳಿಗಾಗಿ ಆಗಾಗ್ಗೆ ಹೊಸ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ವಿಶೇಷವಾಗಿ ಅವರ ಫಿಟ್&zwnj;ನೆಸ್ ಕುರಿತ ಪೋಸ್ಟ್&zwnj;ಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತವೆ. ಗ್ಲಾಮರಸ್ ಫೋಟೋಗಳನ್ನು ಕೂಡ ಹಂಚಿಕೊಳ್ಳುವ ಅವರು, ತಮ್ಮ ಸ್ಟೈಲಿಶ್ ಲುಕ್&zwnj;ನಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಅವರ ಪೋಸ್ಟ್&zwnj;ಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್&zwnj;ಗಳನ್ನು ಮಾಡುತ್ತಿದ್ದು, ಸಂಯುಕ್ತಾ ಅವರ ಸೋಶಿಯಲ್ ಮೀಡಿಯಾ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಟಾಲಿವುಡ್&zwnj;ನಲ್ಲಿ ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡರೂ ಸಂಯುಕ್ತಾ ಹೆಗ್ಡೆ ಅವರನ್ನು ತೆಲುಗು ಪ್ರೇಕ್ಷಕರು ಇನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಸದ್ಯ ಸಿನಿಮಾಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಈ ಕನ್ನಡದ ಬೆಡಗಿ, ಮತ್ತೆ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/sandalwood-film-kirik-party-actress-samyuktha-hegde-heres-what-she-is-doing-now-gvd-gg5z6d6"/>
        </item>
        <item>
            <title><![CDATA[ಮುಂದೆ ಮೈಲಾರಿ 2, ಕಬ್ಜ 2 ಬರುತ್ತೆ: ಅಭಿಮಾನಿಗಳಿಗೆ ಶಿವಣ್ಣ ಕೊಟ್ರು ಬಿಗ್ ಅಪ್‌ಡೇಟ್!]]></title>
            <link>https://kannada.asianetnews.com/sandalwood/kannada-actor-shivarajkumar-gives-a-major-update-on-r-chandru-s-mylari-2-and-kabzaa-2-gvd/articleshow-gzt9pxz</link>
            <guid isPermaLink="true">https://kannada.asianetnews.com/sandalwood/kannada-actor-shivarajkumar-gives-a-major-update-on-r-chandru-s-mylari-2-and-kabzaa-2-gvd/articleshow-gzt9pxz</guid>
            <pubDate>Wed, 09 Sep 2026 08:30:49 +0530</pubDate>
            <description><![CDATA[&lt;p&gt;ಶಿವರಾಜ್&zwnj;ಕುಮಾರ್ ಅಭಿನಯದ &lsquo;ಮೈಲಾರಿ 2&rsquo; ಸಿನಿಮಾ ಖಂಡಿತವಾಗಿಯೂ ಬರಲಿದೆ ಎಂದು ಶಿವಣ್ಣ ಸ್ಪಷ್ಟಪಡಿಸಿದ್ದಾರೆ. ಆರ್.ಚಂದ್ರು ಈಗಾಗಲೇ ಮುಂದುವರಿದ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದು, ಕಥೆ ಮತ್ತು ಪಾತ್ರದ ಸ್ಟೈಲ್ ಎಲ್ಲಾ ಭಾಷೆಗಳ ಪ್ರೇಕ್ಷಕರಿಗೂ ಕನೆಕ್ಟ್ ಆಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20w7ds1gy1zmq1smywqhy2h,imgname-vh-1788883482401.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ನನಗೆ ಆ ಚಿತ್ರದ ಕತೆ ಮತ್ತು ಕ್ಯಾರೆಕ್ಟರ್&zwnj; ತುಂಬಾ ಇಷ್ಟವಾಗಿತ್ತು. ಖಂಡಿತವಾಗಿಯೂ ಅದರ ಮುಂದುವರಿದ ಭಾಗ ಬರಲಿದೆ&rsquo;. ಆರ್&zwnj;.ಚಂದ್ರು ನಿರ್ದೇಶನದ &lsquo;ಒರಿಜಿನಲ್&zwnj; ಮಾನ್&zwnj;ಸ್ಟರ್&zwnj;&rsquo; ಚಿತ್ರದ ಮೂಹೂರ್ತದಲ್ಲಿ ಶಿವರಾಜ್&zwnj;ಕುಮಾರ್&zwnj; ಹೀಗೆ ಹೇಳಿದ್ದು &lsquo;ಮೈಲಾರಿ&rsquo; ಚಿತ್ರದ ಬಗ್ಗೆ.&lt;/p&gt;&lt;p&gt;&lsquo;ಕಬ್ಜ&rsquo; ಪಾರ್ಟ್&zwnj; 2 ಬರಲಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, &lsquo;ಕಬ್ಜ ಪಾರ್ಟ್&zwnj; 2 ಬರಲಿದೆ. ಅದಕ್ಕಿಂತ ಮುಖ್ಯವಾಗಿ &lsquo;ಮೈಲಾರಿ 2&rsquo; ಚಿತ್ರ ಬರಲಿದೆ. ಆರ್&zwnj;.ಚಂದ್ರು ಅದರ ಮುಂದುವರಿದ ಕತೆ ಬರೆದುಕೊಂಡಿದ್ದಾರೆ. ಅದರ ಮುಂದುವರಿದ ಕತೆ ಮತ್ತು ಕ್ಯಾರೆಕ್ಟರ್&zwnj; ಸ್ಟೈಲ್&zwnj; ಎಲ್ಲಾ ಭಾಷೆಗಳಿಗೂ ಕನೆಕ್ಟ್&zwnj; ಆಗೋದು ಪಕ್ಕಾ.&lt;/p&gt;&lt;p&gt;ಖಂಡಿತವಾಗಿಯೂ ಅದೊಂದು ವಿಶೇಷ ಸಿನಿಮಾ ಆಗಲಿದೆ. ಇದರ ಜೊತೆಗೆ &lsquo;ಕಬ್ಜ 2&rsquo; ಚಿತ್ರ ಕೂಡ ಪ್ಲಾನ್&zwnj;ನಲ್ಲಿದೆ&rsquo; ಎಂದಿದ್ದಾರೆ. &lsquo;ಒರಿಜಿನಲ್&zwnj; ಮಾನ್&zwnj;ಸ್ಟರ್&zwnj;&rsquo; ಕನ್ನಡ ಮತ್ತು ಹಿಂದಿಯಲ್ಲಿ ಮೂಡಿಬರಲಿದೆ. ಶಿವಣ್ಣ ತಮಗೆ ಹಿಂದಿ ಭಾಷೆ ತಿಳಿದಿರುವುದಾಗಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಕಬ್ಜ ಫ್ಲಾಪ್&zwnj; ಅನ್ನೋರಿಗೆ ಚಿತ್ರದ ಕಲೆಕ್ಷನ್&zwnj; ಉತ್ತರ ಕೊಟ್ಟಿದೆ: ಆರ್&zwnj;.ಚಂದ್ರು&lt;/strong&gt;&lt;/h2&gt;&lt;p&gt;&lsquo;ಒರಿಜಿನಲ್&zwnj; ಮಾನ್&zwnj;ಸ್ಟರ್&zwnj;&rsquo; ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್&zwnj;.ಚಂದ್ರು, &lsquo;ಕಬ್ಜ ಫ್ಲಾಪ್&zwnj; ಆಗಿದ್ದರೆ ಶಿವಣ್ಣ ಅಂಥ ದೊಡ್ಡ ಸ್ಟಾರ್&zwnj; ಹೀರೋ ನನ್ನ ಜೊತೆಗೆ ಸಿನಿಮಾ ಮಾಡುತ್ತಿರಲಿಲ್ಲ. ಅಮೆಜಾನ್&zwnj; ಪ್ರೈಮ್&zwnj; ವೀಡಿಯೋ ಓಟಿಟಿಯವರು ಕರ್ನಾಟಕದಿಂದ ಇಬ್ಬರನ್ನು ಮಾತ್ರ ಬಿಸಿನೆಸ್&zwnj; ಮೀಟಿಂಗ್&zwnj;ಗೆ ಕರೆದಿದ್ದರು. ಒಬ್ಬರು ಹೊಂಬಾಳೆ ಪ್ರೊಡಕ್ಷನ್&zwnj; ಮತ್ತು ನಾನು.&lt;/p&gt;&lt;p&gt;ಇಷ್ಟೆಲ್ಲ ಗೌರವ ಪಡೆಯಲು ಸಾಧ್ಯವಾಗಿದ್ದು &lsquo;ಕಬ್ಜ&rsquo; ಸಿನಿಮಾದಿಂದಲೇ. ಅಲ್ಲದೆ &lsquo;ಕಬ್ಜ&rsquo; ಎಷ್ಟು ಕೋಟಿ ಗಳಿಸಿದೆ, ಎಷ್ಟು ಕೋಟಿ ತೆರಿಗೆ ಕಟ್ಟಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿದ್ದೇನೆ. ಹಾಗಿದ್ದರೂ &lsquo;ಕಬ್ಜ&rsquo; ಫ್ಲಾಪ್&zwnj; ಅನ್ನೋರಿಗೆ ನಾನು ಉತ್ತರ ಕೊಡಲ್ಲ. ನಾನು ಸಿನಿಮಾ ಮಾಡಿಕೊಂಡು ಹೋಗುತ್ತೇನೆ. ಮಾತಾಡೋವ್ರು ಮಾತಾಡಲಿ&rsquo; ಎಂದಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-actor-shivarajkumar-gives-a-major-update-on-r-chandru-s-mylari-2-and-kabzaa-2-gvd/articleshow-gzt9pxz"/>
        </item>
        <item>
            <title><![CDATA[ಚಾಲೆಂಜಿಂಗ್ ಲಾಯರ್ ವೈದೇಹಿಯಾದ ಭಾವನಾ: ವಿಭಿನ್ನ 'ಸ್ಪಾರ್ಕ್' ಅವತಾರದಲ್ಲಿ ಜಾಕಿ ನಟಿ!]]></title>
            <link>https://kannada.asianetnews.com/sandalwood/jackie-actress-bhavana-menon-praises-spark-niranjan-sudhindra-calls-him-a-promising-talent-gvd/articleshow-h7nkxku</link>
            <guid isPermaLink="true">https://kannada.asianetnews.com/sandalwood/jackie-actress-bhavana-menon-praises-spark-niranjan-sudhindra-calls-him-a-promising-talent-gvd/articleshow-h7nkxku</guid>
            <pubDate>Tue, 08 Sep 2026 15:40:17 +0530</pubDate>
            <description><![CDATA[&lt;p&gt;&lsquo;ಸ್ಪಾರ್ಕ್&rsquo; ಸಿನಿಮಾದಲ್ಲಿ ಲಾಯರ್ ವೈದೇಹಿ ಪಾತ್ರದಲ್ಲಿ ನಟಿಸಿರುವ ಭಾವನಾ ಮೆನನ್, ತಮ್ಮ ವಿಭಿನ್ನ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ನಾಯಕ ನಿರಂಜನ್ ಸುಧೀಂದ್ರ ಅವರ ನಟನಾ, ಡ್ಯಾನ್ಸ್ ಮತ್ತು ಫೈಟ್ ಪ್ರತಿಭೆಯನ್ನು ನಟಿ ಮೆಚ್ಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m207tbhy0ye68skjjp71gzty,imgname-bjb-1788862082622.png" type="image/jpeg" height="390" width="690"/>
            <content:encoded><![CDATA[&lt;p&gt;ಬಹಳ ದಿನಗಳ ಬಳಿಕ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಬಹುಭಾಷಾ ನಟಿ ಭಾವನಾ ಮೆನನ್, ಇದೀಗ &lsquo;ಸ್ಪಾರ್ಕ್&rsquo; ಸಿನಿಮಾದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ನಿರಂಜನ್ ಸುಧೀಂದ್ರ ಹಾಗೂ ರಚನಾ ಇಂದರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಭಾವನಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಜಾಕಿ ಖ್ಯಾತಿಯ ಭಾವನಾ, ಸಿನಿಮಾದಲ್ಲಿ ಲಾಯರ್ ವೈದೇಹಿ ಪಾತ್ರಕ್ಕೆ ಜೀವ ತುಂಬಿದ್ದಾರೆ.&lt;/p&gt;&lt;p&gt;ಹಾಡುಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ &lsquo;ಸ್ಪಾರ್ಕ್&rsquo; ಸಿನಿಮಾದ ಬಗ್ಗೆ ಮಾತನಾಡಿರುವ ಭಾವನಾ, ಚಿತ್ರದ ಕಥೆಯಲ್ಲಿಯೇ ಸಾಕಷ್ಟು &lsquo;ಸ್ಪಾರ್ಕ್&rsquo; ಇದೆ ಎಂದು ಹೇಳಿದ್ದಾರೆ. ಸಿನಿಮಾದ ಪ್ರತಿಯೊಂದು ಪಾತ್ರವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇದೇ ಕಾರಣಕ್ಕೆ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.&lt;/p&gt;&lt;p&gt;ಸವಾಲಿನ ಚಿತ್ರಕಥೆ ಎದುರಾದಾಗ ಮಾತ್ರ ಸಿನಿಮಾ ಒಪ್ಪಿಕೊಳ್ಳುವ ಭಾವನಾ, ನಿರ್ದೇಶಕರು ವೈದೇಹಿ ಪಾತ್ರದ ಬಗ್ಗೆ ವಿವರಿಸಿದಾಗ ಇದು ತಾವು ಈ ಹಿಂದೆ ಮಾಡಿರದಂತಹ ಪಾತ್ರ ಎಂಬುದು ಅರಿವಾಯಿತು ಎಂದು ಹೇಳಿದ್ದಾರೆ. ಬಹಳ ಸಮಯದ ಬಳಿಕ ತಮ್ಮೊಳಗಿನ ನಟಿಯನ್ನು ಸಂಪೂರ್ಣವಾಗಿ ಹೊರತರುವ ಅವಕಾಶ ಈ ಪಾತ್ರದಿಂದ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ನಿರ್ಮಾಪಕಿ ಸಮರ್ಪಣಾ ಅವರು ಸಿನಿಮಾದ ಬಗ್ಗೆ ಹೊಂದಿರುವ ಸಮರ್ಪಣಾ ಭಾವನೆಯನ್ನೂ ಭಾವನಾ ಮೆಚ್ಚಿಕೊಂಡಿದ್ದಾರೆ. ಪ್ರತಿದಿನವೂ ಸೆಟ್&zwnj;ಗೆ ಬಂದು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದ ನಿರ್ಮಾಪಕಿಯ ಉತ್ಸಾಹ ಚಿತ್ರತಂಡಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ನಿರಂಜನ್ ಬಗ್ಗೆ ಭಾವನಾ ಮೆಚ್ಚುಗೆಯ ಮಾತು&lt;/strong&gt;&lt;/h2&gt;&lt;p&gt;&lsquo;ಸ್ಪಾರ್ಕ್&rsquo; ಚಿತ್ರದ ನಾಯಕ ನಿರಂಜನ್ ಸುಧೀಂದ್ರ ಬಗ್ಗೆಯೂ ಭಾವನಾ ಮನಬಿಚ್ಚಿ ಮಾತನಾಡಿದ್ದಾರೆ. ನಟನಾಗಿ ಮಾತ್ರವಲ್ಲದೆ ಡ್ಯಾನ್ಸ್ ಮತ್ತು ಫೈಟ್&zwnj;ನಲ್ಲಿಯೂ ಉತ್ತಮವಾಗಿ ಕಾಣಿಸಿಕೊಳ್ಳುವ ಅಪರೂಪದ ಬಹುಮುಖ ಪ್ರತಿಭೆ ನಿರಂಜನ್ ಎಂದು ಅವರು ಪ್ರಶಂಸಿಸಿದ್ದಾರೆ. ಯುವ ನಟ ನಿರಂಜನ್ ಸುಧೀಂದ್ರ ಚಿತ್ರರಂಗದ ಭರವಸೆಯ ನಾಯಕನಾಗಿ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ವಿಶ್ವಾಸವನ್ನೂ ಭಾವನಾ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇನ್ನು &lsquo;ಸ್ಪಾರ್ಕ್&rsquo; ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಞರ ಜೊತೆಗಿನ ಆತ್ಮೀಯತೆಯ ಬಗ್ಗೆಯೂ ನಟಿ ಮಾತನಾಡಿದ್ದಾರೆ. ಸಿನಿಮಾದಲ್ಲಿ ಉತ್ತಮ ಕಲಾವಿದರು ಮತ್ತು ತಂತ್ರಜ್ಞರ ಜೊತೆಗೆ ಕೌಟುಂಬಿಕ ವಿಚಾರಗಳು ಹಾಗೂ ಒಳ್ಳೆಯ ಸಂದೇಶಕ್ಕೂ ಜಾಗ ನೀಡಲಾಗಿದೆ. ಮನರಂಜನೆಯ ಜೊತೆಗೆ ಕುಟುಂಬ ಸಮೇತ ನೋಡಬಹುದಾದ ಸಂಪೂರ್ಣ ಪ್ಯಾಕೇಜ್ ಆಗಿ ಸಿನಿಮಾ ಮೂಡಿಬಂದಿದೆ ಎಂದು ಅವರು ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ &lsquo;ಸ್ಪಾರ್ಕ್&rsquo; ಇದೇ ಸೆಪ್ಟೆಂಬರ್ 25ರಂದು ಪ್ರೇಕ್ಷಕರ ಮುಂದೆ ಬರಲಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/jackie-actress-bhavana-menon-praises-spark-niranjan-sudhindra-calls-him-a-promising-talent-gvd/articleshow-h7nkxku"/>
        </item>
        <item>
            <title><![CDATA['ಒಳ್ಳೆಯ ಸ್ನೇಹಿತನಾಗಿರುವ ಸಂಗಾತಿ ಸಿಕ್ಕರೆ..': ಮದುವೆ ಬಗ್ಗೆ ನಟಿ ರಮ್ಯಾ ನಿಲುವೇನು?]]></title>
            <link>https://kannada.asianetnews.com/sandalwood/kannada-actress-ramya-divya-spandana-talks-marriage-and-relationships-i-haven-t-found-that-person-yet-gvd/articleshow-i52fgud</link>
            <guid isPermaLink="true">https://kannada.asianetnews.com/sandalwood/kannada-actress-ramya-divya-spandana-talks-marriage-and-relationships-i-haven-t-found-that-person-yet-gvd/articleshow-i52fgud</guid>
            <pubDate>Mon, 07 Sep 2026 17:11:46 +0530</pubDate>
            <description><![CDATA[&lt;p&gt;ಸ್ಯಾಂಡಲ್&zwnj;ವುಡ್ ನಟಿ ರಮ್ಯಾ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಮದುವೆಗಿಂತ ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ ಎಂದಿದ್ದಾರೆ. ಸೂಕ್ತ ಸಂಗಾತಿ ಸಿಕ್ಕರೆ ಮದುವೆ ಉತ್ತಮ ಎಂದು ಹೇಳಿರುವ ಅವರು, ಸದ್ಯ ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xt5593gdwn0w7zhhw8y643,imgname-mlmn-1788780647715.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಮೋಹಕ ತಾರೆ ರಮ್ಯಾ ಅವರ ಮದುವೆ ವಿಚಾರ ಆಗಾಗ್ಗೆ ಚರ್ಚೆಗೆ ಬರುತ್ತಲೇ ಇರುತ್ತದೆ. ಅಭಿಮಾನಿಗಳು ಕೂಡ &lsquo;ರಮ್ಯಾ ಯಾವಾಗ ಮದುವೆಯಾಗುತ್ತಾರೆ?&rsquo; ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿರುತ್ತಾರೆ. ಇದೀಗ ಇದೇ ಪ್ರಶ್ನೆಗೆ ಸ್ವತಃ ರಮ್ಯಾ ಉತ್ತರಿಸಿದ್ದು, ಅವರ ಮಾತುಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.&lt;/p&gt;&lt;p&gt;ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ನಬಿಲಾ ಜಮಾಲ್ ಅವರು ನಟಿ ರಮ್ಯಾ ಅವರಿಗೆ ಮದುವೆ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಮ್ಯಾ, ಮದುವೆಯನ್ನು ಜೀವನದ ಅನಿವಾರ್ಯ ಗುರಿಯಂತೆ ನೋಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. &lsquo;ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ&rsquo; ಎಂದು ಹೇಳಿದ ರಮ್ಯಾ, ವ್ಯಕ್ತಿಯ ಗುರುತು ಅಥವಾ ಸಂತೋಷವನ್ನು ಮದುವೆಯೇ ನಿರ್ಧರಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lsquo;ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗುವುದಿಲ್ಲ. ಮದುವೆಯಾಗದೇ ಇದ್ದರೂ ನಾವು ಖುಷಿಯಾಗಿರಬಹುದು. ಜೀವನದಲ್ಲಿ ಖುಷಿಯಾಗಿರುವುದೇ ಎಲ್ಲಕ್ಕಿಂತ ಮುಖ್ಯ. ಒಂದೋ ಮದುವೆಯಾಗಿರಬೇಕು ಅಥವಾ ಖುಷಿಯಾಗಿರಬೇಕು ಎಂಬ ರೀತಿಯಲ್ಲಿ ಸಮಾಜ ನೋಡುವುದು ಸರಿಯಲ್ಲ. ನಿಮಗೆ ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು&rsquo; ಎಂದು ರಮ್ಯಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಒಳ್ಳೆಯ ಸ್ನೇಹಿತನಾಗಿರುವ ಸಂಗಾತಿ ಸಿಕ್ಕರೆ..&rsquo;&lt;/strong&gt;&lt;/p&gt;&lt;p&gt;ಮದುವೆಯ ಬಗ್ಗೆ ಸಂಪೂರ್ಣವಾಗಿ ನಕಾರಾತ್ಮಕವಾಗಿ ಮಾತನಾಡದ ರಮ್ಯಾ, ಸೂಕ್ತ ಸಂಗಾತಿ ಸಿಕ್ಕರೆ ವೈವಾಹಿಕ ಜೀವನವೂ ಸುಂದರವಾಗಿರಬಹುದು ಎಂದು ಹೇಳಿದ್ದಾರೆ. &lsquo;ಮದುವೆಯಾಗಿಯೂ ಖುಷಿಯಾಗಿ ಇರಬಹುದು. ನಿಮಗೆ ಹೊಂದಿಕೆಯಾಗುವಂತಹ ಸಂಗಾತಿ ಸಿಕ್ಕರೆ ಅದು ಚೆನ್ನಾಗಿರುತ್ತದೆ. ಅವರು ನಿಮ್ಮ ಉತ್ತಮ ಸ್ನೇಹಿತರಾಗಿದ್ದು, ಅವರೊಂದಿಗೆ ಇಡೀ ಜೀವನ ಕಳೆಯಲು ನೀವು ಬಯಸಿದರೆ ಮದುವೆ ಉತ್ತಮ ನಿರ್ಧಾರವಾಗಬಹುದು&rsquo; ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಮನುಷ್ಯರ ಬದುಕಿನಲ್ಲಿ ಬದಲಾವಣೆ ಸಹಜ. ಕಾಲ ಕಳೆದಂತೆ ನಮ್ಮ ಆಲೋಚನೆಗಳು, ಮೌಲ್ಯಗಳು ಮತ್ತು ಆದ್ಯತೆಗಳು ಬದಲಾಗುತ್ತವೆ. ಹೀಗಾಗಿ ಮದುವೆಯಲ್ಲಿ ಇಬ್ಬರ ನಡುವಿನ ಹೊಂದಾಣಿಕೆ ಮತ್ತು ಒಂದೇ ರೀತಿಯ ಮೌಲ್ಯಗಳು ಮುಖ್ಯ ಎಂದು ರಮ್ಯಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ&rsquo;&lt;/strong&gt;&lt;/h2&gt;&lt;p&gt;ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ರಮ್ಯಾ, ಸದ್ಯಕ್ಕೆ ಮದುವೆ ಅಥವಾ ಸಂಬಂಧದ ಬಗ್ಗೆ ತಾವು ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ. &lsquo;ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ. ನಾನು ಆ ಬಗ್ಗೆ ಗಮನ ಕೂಡ ಹರಿಸುತ್ತಿಲ್ಲ. ಕೆಲಸ ಮಾಡುವುದರಲ್ಲಿ ಬ್ಯುಸಿ ಆಗಿದ್ದೇನೆ. ರಿಲೇಷನ್&zwnj;ಶಿಪ್&zwnj;ಗೆ ಸಮಯ ಬೇಕು&rsquo; ಎಂದು ರಮ್ಯಾ ಹೇಳಿದ್ದಾರೆ.&lt;/p&gt;&lt;p&gt;ರಮ್ಯಾ ಅವರ ಈ ಮಾತುಗಳು ಇದೀಗ ಅಭಿಮಾನಿಗಳಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿವೆ. ಸದ್ಯ ಮದುವೆಯ ವಿಚಾರದಲ್ಲಿ ಯಾವುದೇ ಆತುರವಿಲ್ಲ ಎಂಬುದನ್ನು ನಟಿ ಸ್ಪಷ್ಟಪಡಿಸಿದ್ದು, ಸೂಕ್ತ ವ್ಯಕ್ತಿ ಸಿಕ್ಕಾಗ ಮಾತ್ರ ಆ ಬಗ್ಗೆ ಯೋಚಿಸುವ ಮನಸ್ಥಿತಿಯಲ್ಲಿರುವಂತೆ ಕಾಣಿಸುತ್ತಿದೆ. ಇನ್ನೊಂದೆಡೆ, ರಮ್ಯಾ ಅವರು ಸಿನಿಮಾಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವರ ಅಭಿಮಾನಿಗಳ ಬಹುಕಾಲದ ಬೇಡಿಕೆಯಾಗಿದೆ. ಮದುವೆಗಿಂತ ತಮ್ಮ ಸಂತೋಷ ಮತ್ತು ವೃತ್ತಿಜೀವನಕ್ಕೆ ಆದ್ಯತೆ ನೀಡುತ್ತಿರುವ ರಮ್ಯಾ ಅವರ ನಿಲುವಿಗೆ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-actress-ramya-divya-spandana-talks-marriage-and-relationships-i-haven-t-found-that-person-yet-gvd/articleshow-i52fgud"/>
        </item>
        <item>
            <title><![CDATA[ಅಂದಕ್ಕೇ ಅಸೂಯೆ ಹುಟ್ಟಿಸೋ ಲುಕ್.. ಅಚ್ಚು ಗೋಪಿಕೆಯಂತೆ ಕಂಗೊಳಿಸಿದ ನಟಿ ಶ್ರೀಲೀಲಾ!]]></title>
            <link>https://kannada.asianetnews.com/gallery/entertainment/sandalwood-actress-sreeleela-looks-like-a-gopika-in-her-stunning-radha-avatar-goes-viral-gvd-k2ggi3d</link>
            <guid isPermaLink="true">https://kannada.asianetnews.com/gallery/entertainment/sandalwood-actress-sreeleela-looks-like-a-gopika-in-her-stunning-radha-avatar-goes-viral-gvd-k2ggi3d</guid>
            <pubDate>Tue, 08 Sep 2026 09:00:11 +0530</pubDate>
            <description><![CDATA[&lt;p&gt;ಚಿತ್ರರಂಗದ ಕ್ಯೂಟ್ ಬ್ಯೂಟಿ, ಗ್ಲಾಮರಸ್ ಬೆಡಗಿ ನಟಿ ಶ್ರೀಲೀಲಾ ರಾಧೆಯ ರೂಪದಲ್ಲಿ ಅಚ್ಚು ಗೋಪಿಕೆಯಂತೆ ಕಂಗೊಳಿಸಿದ್ದು, ಅವರ ಹೊಸ ಲುಕ್ ಹಾಗೂ ಗ್ಲಾಮರಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ybyjrnd011p7qsh4zqgdfz,imgname-sre--1--1788799306517.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗದ ಕ್ಯೂಟ್ ಬ್ಯೂಟಿ, ಗ್ಲಾಮರಸ್ ಬೆಡಗಿ ನಟಿ ಶ್ರೀಲೀಲಾ ರಾಧೆಯ ರೂಪದಲ್ಲಿ ಅಚ್ಚು ಗೋಪಿಕೆಯಂತೆ ಕಂಗೊಳಿಸಿದ್ದು, ಅವರ ಹೊಸ ಲುಕ್ ಹಾಗೂ ಗ್ಲಾಮರಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.&lt;/p&gt;&lt;img&gt;&lt;p&gt;ಚಿತ್ರರಂಗದ ಕ್ಯೂಟ್ ಬ್ಯೂಟಿ, ಗ್ಲಾಮರಸ್ ಬೆಡಗಿ ನಟಿ ಶ್ರೀಲೀಲಾ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಸೌಂದರ್ಯದ ಜೊತೆಗೆ ಅದ್ಭುತ ಅಭಿನಯ ಹಾಗೂ ಸಖತ್ ಡ್ಯಾನ್ಸ್&zwnj;ನಿಂದಲೂ ಗಮನ ಸೆಳೆದಿರುವ ಈ ಚೆಲುವೆ, ತಮ್ಮ ಸ್ಟೈಲ್ ಮತ್ತು ಗ್ಲಾಮರ್&zwnj;ನಿಂದಲೇ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. &lsquo;ಕಿಸ್&rsquo; ಸಿನಿಮಾದ ಮೂಲಕ ಸ್ಯಾಂಡಲ್&zwnj;ವುಡ್&zwnj;ಗೆ ಎಂಟ್ರಿ ಕೊಟ್ಟ ಶ್ರೀಲೀಲಾ, ಮೊದಲ ಚಿತ್ರದಲ್ಲೇ ಕನ್ನಡಿಗರ ಪ್ರೇಕ್ಷಕರ ಮನಗೆದ್ದಿದ್ದರು.&lt;/p&gt;&lt;img&gt;&lt;p&gt;ಈ ಸಿನಿಮಾ ಮೂಲಕವೇ ತಮ್ಮ ಕ್ಯೂಟ್ ಲುಕ್ ಮತ್ತು ನಟನೆ ಮೂಲಕ ಎಲ್ಲರ ಗಮನ ಸೆಳೆದ ಈ ನಟಿಗೆ ಬಳಿಕ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು. ಗ್ಲಾಮರ್ ಮಾತ್ರವಲ್ಲದೆ ತಮ್ಮ ಅದ್ಭುತ ಡ್ಯಾನ್ಸ್&zwnj;ನಿಂದಲೂ ಶ್ರೀಲೀಲಾ ಸಖತ್ ಫೇಮಸ್ ಆದರು. ಒಂದೇ ಸಿನಿಮಾದ ಮೂಲಕ ಸ್ಟಾರ್ ಹೀರೋಯಿನ್&zwnj;ಗಳ ಸಾಲಿನಲ್ಲಿ ಗುರುತಿಸಿಕೊಂಡ ಈ ಬೆಡಗಿ, ಬಳಿಕ ಮಾಸ್ ಮಹಾರಾಜ ರವಿತೇಜ ಅವರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.&lt;/p&gt;&lt;img&gt;&lt;p&gt;ರವಿತೇಜ ಜೊತೆಗಿನ &lsquo;ಧಮಾಕಾ&rsquo; ಸಿನಿಮಾ ಶ್ರೀಲೀಲಾ ವೃತ್ತಿಜೀವನಕ್ಕೆ ಮತ್ತಷ್ಟು ಬೂಸ್ಟ್ ನೀಡಿತು. ಈ ಚಿತ್ರದಲ್ಲಿ ನಟನೆ ಜೊತೆಗೆ ತಮ್ಮ ಮಾಸ್ ಡ್ಯಾನ್ಸ್&zwnj;ನಿಂದ ಯುವಕರ ಗಮನ ಸೆಳೆದ ಅವರು, ಒಂದೇ ಸಿನಿಮಾದಲ್ಲಿ ಯೂತ್ ಫೇವರಿಟ್ ಹೀರೋಯಿನ್ ಆಗಿ ಗುರುತಿಸಿಕೊಂಡರು. &lsquo;ಧಮಾಕಾ&rsquo; ಕೂಡ ಸೂಪರ್&zwnj;ಹಿಟ್ ಆಗುತ್ತಿದ್ದಂತೆ ಶ್ರೀಲೀಲಾ ಕೈತುಂಬಾ ಸಿನಿಮಾಗಳನ್ನು ಪಡೆದುಕೊಂಡರು. ಸಾಲು ಸಾಲಾಗಿ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ಟಾಲಿವುಡ್&zwnj;ನ ಬ್ಯುಸಿ ನಟಿಯರ ಪಟ್ಟಿಯಲ್ಲೂ ಸ್ಥಾನ ಪಡೆದರು.&lt;/p&gt;&lt;img&gt;&lt;p&gt;ಮಹೇಶ್ ಬಾಬು ಜೊತೆ &lsquo;ಗುಂಟೂರು ಖಾರಂ&rsquo;, ನಿತಿನ್ ಜೊತೆ &lsquo;ಎಕ್ಸ್&zwnj;ಟ್ರಾ ಆರ್ಡಿನರಿ ಮ್ಯಾನ್&rsquo;, &lsquo;ರಾಬಿನ್&zwnj;ಹುಡ್&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಇದರ ಜೊತೆಗೆ ಪವರ್&zwnj;ಸ್ಟಾರ್ ಪವನ್ ಕಲ್ಯಾಣ್ ಅಭಿನಯದ &lsquo;ಉಸ್ತಾದ್ ಭಗತ್ ಸಿಂಗ್&rsquo; ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲೂ ಶ್ರೀಲೀಲಾ ತಮ್ಮದೇ ಛಾಪು ಮೂಡಿಸಿದ್ದಾರೆ.&lt;/p&gt;&lt;img&gt;&lt;p&gt;&lsquo;ಕಿಸ್&rsquo; ಹಾಗೂ &lsquo;ಭರಾಟೆ&rsquo; ಸಿನಿಮಾಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೂ ಪರಿಚಿತರಾದ ಈ ಚೆಲುವೆ, ಇದೀಗ ತಮಿಳಿನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ತಮಿಳಿನಲ್ಲಿ &lsquo;ಪರಾಶಕ್ತಿ&rsquo; ಸಿನಿಮಾದಲ್ಲಿ ನಟಿಸಿರುವ ಶ್ರೀಲೀಲಾ, ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ತಮ್ಮ ಜನಪ್ರಿಯತೆಯನ್ನು ವಿಸ್ತರಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಶ್ರೀಲೀಲಾ ಅವರ ಹೊಸ ಲುಕ್&zwnj;ಗಳು ಹಾಗೂ ಗ್ಲಾಮರಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಅವರ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಧೆಯ ರೂಪದಲ್ಲಿ ಅಚ್ಚು ಗೋಪಿಕೆಯಂತೆ ಕಾಣುತ್ತಿರುವ ಈ ಚೆಲುವೆಯ ಲುಕ್&zwnj;ಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/sandalwood-actress-sreeleela-looks-like-a-gopika-in-her-stunning-radha-avatar-goes-viral-gvd-k2ggi3d"/>
        </item>
        <item>
            <title><![CDATA[ಹೀರೋಯಿನ್ ಆಗಿ ಕಾಣಿಸಿಕೊಳ್ಳುವುದಲ್ಲ, ಪಾತ್ರಕ್ಕೆ ಬೆಲೆ ಬೇಕು: ನಟಿ ಶಾನ್ವಿ ಸಂದರ್ಶನ]]></title>
            <link>https://kannada.asianetnews.com/celebrity-interviews/kannada-actress-shanvi-srivastava-opens-up-about-her-role-in-america-america-2-interview-gvd/articleshow-ki9c5cb</link>
            <guid isPermaLink="true">https://kannada.asianetnews.com/celebrity-interviews/kannada-actress-shanvi-srivastava-opens-up-about-her-role-in-america-america-2-interview-gvd/articleshow-ki9c5cb</guid>
            <pubDate>Sun, 06 Sep 2026 17:28:16 +0530</pubDate>
            <description><![CDATA[&lt;p&gt;ನಟಿ ಶಾನ್ವಿ ಶ್ರೀವಾಸ್ತವ ತಮ್ಮ ಹತ್ತು ವರ್ಷಗಳ ಸಿನಿ ಪಯಣ, ಸಿನಿಮಾ ಆಯ್ಕೆ ಮತ್ತು &lsquo;ಅಮೆರಿಕಾ ಅಮೆರಿಕಾ 2&rsquo; ಚಿತ್ರದ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಾತ್ರಕ್ಕೆ ಮೌಲ್ಯ ಸಿಗುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v93fr077m708rw5gzpvhw6,imgname-jbkjb-1788695658240.png" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ ನಟಿ ಶಾನ್ವಿ ಶ್ರೀವಾಸ್ತವ ಅವರಿಗೆ. ಈ ಹತ್ತು ವರ್ಷಗಳಲ್ಲಿ ಸಿನಿಮಾ ಬದಲಾಗಿದೆ, ಚಿತ್ರರಂಗದ ಆದ್ಯತೆಗಳು ಬದಲಾಗಿವೆ, ಅದರೊಂದಿಗೆ ತಮ್ಮ ಆಲೋಚನೆಗಳೂ ಬದಲಾಗಿವೆ ಎನ್ನುತ್ತಾರೆ ಶಾನ್ವಿ. &lsquo;ಚಂದ್ರಲೇಖಾ&rsquo; ಮೂಲಕ ಸಿನಿರಂಗಕ್ಕೆ ಪರಿಚಯವಾದ ಅವರು ಬಳಿಕ &lsquo;ಮಾಸ್ಟರ್&zwnj;ಪೀಸ್&rsquo;, &lsquo;ಅವನೇ ಶ್ರೀಮನ್ನಾರಾಯಣ&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.&lt;/p&gt;&lt;p&gt;ಇದೀಗ ಸೆಪ್ಟೆಂಬರ್ 11ರಂದು ತೆರೆಗೆ ಬರಲಿರುವ &lsquo;ಅಮೆರಿಕಾ ಅಮೆರಿಕಾ 2&rsquo; ಮೂಲಕ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಹತ್ತು ವರ್ಷಗಳ ಸಿನಿ ಪಯಣವನ್ನು Cinema Express ಜೊತೆ ಮೆಲುಕು ಹಾಕಿರುವ ಶಾನ್ವಿ, ಪರದೆಯ ಮೇಲೆ ಕಾಣಿಸಿಕೊಳ್ಳುವುದಕ್ಕಿಂತ, ತಾನು ಮಾಡುವ ಕೆಲಸಕ್ಕೆ ಸಿಗುವ ಮೌಲ್ಯವೇ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಿರುವುದಾಗಿ ಹೇಳುತ್ತಾರೆ.&lt;/p&gt;&lt;p&gt;&lt;strong&gt;&lsquo;ನಾನು ಮಾತ್ರ ಬದಲಾಗಿಲ್ಲ, ಸುತ್ತಲಿನ ಎಲ್ಲವೂ ಬದಲಾಗಿದೆ&rsquo;&lt;/strong&gt;&lt;/p&gt;&lt;p&gt;ನನ್ನನ್ನು ಹೊರತುಪಡಿಸಿ ನನ್ನ ಸುತ್ತಲಿನ ಬಹುತೇಕ ಎಲ್ಲವೂ ಬದಲಾಗಿದೆ. ಅದೂ ಒಳ್ಳೆಯ ರೀತಿಯಲ್ಲಿ. ಇದರೊಂದಿಗೆ ಸಿನಿಮಾಗಳನ್ನು ನೋಡುವ ಮತ್ತು ಕೆಲಸ ಆಯ್ಕೆ ಮಾಡುವ ನನ್ನ ದೃಷ್ಟಿಕೋನವೂ ಬದಲಾಗಿದೆ ಎನ್ನುತ್ತಾರೆ ಶಾನ್ವಿ. ವೃತ್ತಿಜೀವನದ ಆರಂಭದಲ್ಲಿ ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತಾ ಇರಬೇಕು ಎಂಬ ಉತ್ಸಾಹ ಅವರಲ್ಲಿತ್ತು. ಆದರೆ ಕಾಲ ಕಳೆದಂತೆ ಕೇವಲ ಬ್ಯುಸಿಯಾಗಿರಲು ಸಿನಿಮಾ ಮಾಡುವುದು ಸರಿಯಲ್ಲ ಎಂಬ ಅರಿವು ಮೂಡಿತು.&lt;/p&gt;&lt;p&gt;ಒಂದು ಹಂತದಲ್ಲಿ ಹಣ ಸಂಪಾದನೆಗಾಗಿ ಸಿನಿಮಾಗಳನ್ನು ಮಾಡುತ್ತಾ, ಸದಾ ಸರ್ವೈವಲ್ ಮೋಡ್&zwnj;ನಲ್ಲಿ ಇರಲು ನನಗೆ ಇಷ್ಟವಿಲ್ಲ ಎಂಬ ಭಾವನೆ ಬಂತು. ನನ್ನ ಮಧ್ಯಮ ವರ್ಗದ ಮನಸ್ಥಿತಿಯೇ ನನ್ನನ್ನು ಉಳಿಸಿತು. ವೃತ್ತಿಜೀವನದ ಆರಂಭದಲ್ಲಿ ನನಗಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡೆ. ನಂತರ ನನಗೆ ಇಷ್ಟವಾಗುವ ಸ್ಕ್ರಿಪ್ಟ್&zwnj;ಗಳನ್ನು ಆಯ್ಕೆ ಮಾಡಿಕೊಳ್ಳುವ ಹಾದಿಗೆ ಬಂದೆ. ಇದಕ್ಕೆ ಸಮಯ ಬೇಕಾಗುತ್ತದೆ. ನನ್ನ ಕಡೆಯಿಂದಲೂ, ತಂಡದ ಕಡೆಯಿಂದಲೂ ಸಾಕಷ್ಟು ರಿಜೆಕ್ಷನ್ ಎದುರಿಸಬೇಕಾಗುತ್ತದೆ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಕಾಣಿಸಿಕೊಳ್ಳುವುದಕ್ಕಿಂತ ಮೌಲ್ಯ ಸಿಗುವುದು ಮುಖ್ಯ&rsquo;&lt;/strong&gt;&lt;/p&gt;&lt;p&gt;ಚಿತ್ರರಂಗದಲ್ಲಿ ಸದಾ ಕಾಣಿಸಿಕೊಳ್ಳುವುದು ಮುಖ್ಯ ಎನ್ನುವ ಮಾತಿದೆ. ಆದರೆ ಶಾನ್ವಿ ಅವರ ಪ್ರಕಾರ ಕೇವಲ ಗೋಚರತೆಯ ಹಿಂದೆ ಓಡುವುದಕ್ಕಿಂತ, ತಮಗೆ ಸೂಕ್ತವಾದ ಪಾತ್ರಕ್ಕಾಗಿ ಕಾಯುವುದು ಹೆಚ್ಚು ಮುಖ್ಯ.&lt;/p&gt;&lt;p&gt;ನಾವು ಸಿನಿಮಾಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳಬೇಕು. ಜನರು ಹೇಳುವಂತೆ &lsquo;Out of sight, out of mind&rsquo; ಎನ್ನುವುದು ನಿಜ. ಆದರೆ ಒಂದು ಸಿನಿಮಾದಲ್ಲಿ ಇದ್ದರೂ ನಮ್ಮನ್ನು ಮೌಲ್ಯಯುತವಾಗಿ ಕಾಣದಿದ್ದರೆ ಅದರಿಂದ ಏನು ಪ್ರಯೋಜನ? ಒಂದು ಹಂತದಲ್ಲಿ ನಿಮ್ಮನ್ನು ನಿಜವಾಗಿಯೂ ಮೌಲ್ಯಯುತವಾಗಿ ಕಾಣುವ ಸಿನಿಮಾ ಬರುತ್ತದೆ. ನನಗೆ &lsquo;ಅಮೆರಿಕಾ ಅಮೆರಿಕಾ 2&rsquo; ಅಂಥ ಸಿನಿಮಾ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಿರ್ದೇಶಕರೇ ಹೀರೋ ಆಗಲಿ, ನಾನು ನಟಿಯಾಗಿ ಇರಲು ಬಯಸುತ್ತೇನೆ&rsquo;&lt;/strong&gt;&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಸಿನಿಮಾವನ್ನು ಒಪ್ಪಿಕೊಳ್ಳಲು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗಿನ ಕೆಲಸವೂ ಪ್ರಮುಖ ಕಾರಣ ಎನ್ನುವ ಶಾನ್ವಿ, ನಿರ್ದೇಶಕ ಪ್ರಧಾನ ಸಿನಿಮಾಗಳಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಮೆಚ್ಚಿಕೊಂಡಿದ್ದಾರೆ. ಈ ರೀತಿಯ ಇನ್ನೂ ಹತ್ತು ಸ್ಕ್ರಿಪ್ಟ್&zwnj;ಗಳಿಗೆ ಸಹಿ ಹಾಕಲು ನಾನು ಸಿದ್ಧ. ನಿರ್ದೇಶಕ ಮತ್ತು ಸ್ಕ್ರಿಪ್ಟ್&zwnj;ಗಳೇ ಹೀರೋ ಆಗಿರಲಿ. ನಾನು ಕೇವಲ ನಟಿಯಾಗಿ ಇರಲು ಬಯಸುತ್ತೇನೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ನನಗೆ ಒಂದು ರೀತಿಯ ಸುರಕ್ಷಿತ ನೆಟ್ ಇದ್ದಂತೆ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಹೀರೋಯಿನ್&zwnj;ಗೆ ಕೇಂದ್ರದಲ್ಲಿರಬೇಕೆಂದೇನಿಲ್ಲ, ಆದರೆ ಸಮಾನ ಪ್ರಾಮುಖ್ಯ ಬೇಕು&rsquo;&lt;/strong&gt;&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo;ರಲ್ಲಿ ಶಾನ್ವಿ ಅವರ ಪಾತ್ರ ಲವ್ ಟ್ರಯಾಂಗಲ್&zwnj;ನ ಭಾಗವಾಗಿದ್ದರೂ, ಇದು ಸಾಮಾನ್ಯ ಪ್ರೇಮಕಥೆಯಲ್ಲ ಎನ್ನುತ್ತಾರೆ ಅವರು. ತಮ್ಮ ಪಾತ್ರಕ್ಕೆ ನೀಡಿರುವ ಭಾವನಾತ್ಮಕ ಆಳವೇ ಸಿನಿಮಾವನ್ನು ಒಪ್ಪಿಕೊಳ್ಳಲು ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;ನಾನು ಹುಡುಕುತ್ತಿದ್ದ ವಿಷಯವೇ ಇದು. ಕಥೆಯ ಕೇಂದ್ರಬಿಂದುವಾಗಿರದೇ ಇದ್ದರೂ, ಪಾತ್ರಕ್ಕೆ ಸಮಾನವಾದ ಪ್ರಾಮುಖ್ಯ ಇರಬೇಕು ಎಂಬುದು ನನ್ನ ಬಯಕೆ. ಶೇ.90ರಷ್ಟು ನಾಯಕಿಯರು ಇಂಥ ಜಾಗಕ್ಕಾಗಿ ಹೋರಾಡುತ್ತಿದ್ದಾರೆ. ಅಂತಹ ಅವಕಾಶ ಸಿಕ್ಕಾಗ ನಾವು ಅದನ್ನು ಹಿಡಿದುಕೊಳ್ಳುತ್ತೇವೆ. ನನಗೆ ಅವಕಾಶ ಸಿಕ್ಕು ನಾನು ಅದನ್ನು ತೆಗೆದುಕೊಳ್ಳದಿದ್ದರೆ, ಅದು ನನ್ನದೇ ನಷ್ಟ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಇದು ಕೇವಲ ಪ್ರೇಮಕಥೆಯಲ್ಲ, ಸಂಪೂರ್ಣ ಮಹಿಳೆಯ ಕಥೆ&rsquo;&lt;/strong&gt;&lt;/p&gt;&lt;p&gt;ಸಿನಿಮಾ ಕೇವಲ ಪ್ರೀತಿ ಮತ್ತು ಸಂಬಂಧಗಳ ಸುತ್ತ ಸುತ್ತುವುದಿಲ್ಲ. ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ಎದುರಿಸುವ ಹಲವು ಸಂಬಂಧಗಳು, ಜವಾಬ್ದಾರಿಗಳು ಮತ್ತು ತನ್ನನ್ನು ತಾನು ಹುಡುಕಿಕೊಳ್ಳುವ ಪಯಣವನ್ನೂ ಸಿನಿಮಾ ಹೇಳುತ್ತದೆ ಎನ್ನುವುದು ಶಾನ್ವಿ ಮಾತು. ಈ ಸಿನಿಮಾ ಒಬ್ಬ ಸಂಪೂರ್ಣ ಮಹಿಳೆಯನ್ನು ಪ್ರತಿನಿಧಿಸುತ್ತದೆ. ಮಹಿಳೆಯರು ಪ್ರೀತಿಯನ್ನು ಕಂಡುಕೊಳ್ಳುತ್ತಾರಾ? ಖಂಡಿತ. ಆದರೆ ಅದಕ್ಕಿಂತ ಮೊದಲು ನೀವು ನಿಮ್ಮನ್ನು ನೀವು ಕಂಡುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಈ ಸಿನಿಮಾದಲ್ಲಿ ನನ್ನ ಲುಕ್ ಬಗ್ಗೆ ನಾನು ಹೆಚ್ಚು ಯೋಚಿಸಲಿಲ್ಲ&rsquo;&lt;/strong&gt;&lt;/p&gt;&lt;p&gt;ಸಿನಿಮಾದಲ್ಲಿ ತಮ್ಮ ಪಾತ್ರದ ಜೊತೆಗೆ ತಮ್ಮ ನೋಟ ಮತ್ತು ಅಭಿನಯದ ವಿಚಾರದಲ್ಲೂ ಸಾಕಷ್ಟು ಸ್ವಾತಂತ್ರ್ಯ ಸಿಕ್ಕಿತು ಎನ್ನುತ್ತಾರೆ ಶಾನ್ವಿ. ಮಹಿಳಾ ನಟಿಯಾಗಿದ್ದಾಗ ಎಲ್ಲವೂ ಅಚ್ಚುಕಟ್ಟಾಗಿ, ಪರಿಪೂರ್ಣವಾಗಿ ಕಾಣಬೇಕು ಎಂಬ ನಿರೀಕ್ಷೆ ಇರುತ್ತದೆ. ಮುಖದ ಮೇಲೆ ಸಣ್ಣ ಮೊಡವೆ ಇದ್ದರೂ ಅದನ್ನು ದೊಡ್ಡ ವಿಚಾರವಾಗಿ ನೋಡಲಾಗುತ್ತದೆ. ಆದರೆ ಈ ಸಿನಿಮಾದಲ್ಲಿ ನಾನು ಸಂಪೂರ್ಣ ಕೇರ್&zwnj;ಫ್ರೀ ಆಗಿದ್ದೆ. ನಿಜವಾಗಿಯೂ ಆ ಪಾತ್ರವನ್ನು ಬದುಕಿದ್ದೇನೆ ಎಂದು ಅವರು ಹೇಳಿದ್ದಾರೆ.&lt;img&gt;&lt;/p&gt;&lt;p&gt;&lt;strong&gt;&lsquo;ನಿರೂಪ್ ಮತ್ತು ಪೃಥ್ವಿ ನನ್ನ ಶಕ್ತಿಯ ಕಂಬಗಳು&rsquo;&lt;/strong&gt;&lt;/p&gt;&lt;p&gt;ಸಹನಟರಾದ ನಿರೂಪ್ ಭಂಡಾರಿ ಮತ್ತು ಪೃಥ್ವಿ ಅಂಬಾರ್ ಅವರೊಂದಿಗಿನ ಕೆಲಸವೂ ಸಿನಿಮಾದ ಅನುಭವವನ್ನು ಮತ್ತಷ್ಟು ವಿಶೇಷವಾಗಿಸಿದೆ ಎಂದು ಶಾನ್ವಿ ಹೇಳಿದ್ದಾರೆ. ನನ್ನ ಸಹನಟರು ನನ್ನ ಶಕ್ತಿಯ ಕಂಬಗಳಾಗಿದ್ದರು. ಅವರು ನನಗೆ ನೀಡಿದ ಸ್ಪೇಸ್ ಮತ್ತು ಸ್ವಾತಂತ್ರ್ಯ, ಪ್ರತಿಯೊಂದು ಶಾಟ್&zwnj;ನ ನಂತರ ನಾವು ನಡೆಸುತ್ತಿದ್ದ ಚರ್ಚೆಗಳು ಸಾಕಷ್ಟು ವ್ಯತ್ಯಾಸ ತಂದವು. ನಮ್ಮ ಈ ಸಹಕಾರ ತೆರೆಮೇಲೂ ಕಾಣಿಸುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.&lt;/p&gt;&lt;p&gt;&lt;strong&gt;&lsquo;ಭಾವನೆಗಳನ್ನು ನುಗ್ಗಿಸದೆ ಕಟ್ಟಿಕೊಡುವ ನಿರ್ದೇಶಕರು ಬಹಳ ಕಡಿಮೆ&rsquo;&lt;/strong&gt;&lt;/p&gt;&lt;p&gt;ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಬಗ್ಗೆ ಮಾತನಾಡಿದ ಶಾನ್ವಿ, ಭಾವನೆಗಳನ್ನು ಆತುರಪಡಿಸದೆ ಸಹಜವಾಗಿ ತೆರೆಗೆ ತರುವ ಅವರ ಸಾಮರ್ಥ್ಯವನ್ನು ಮೆಚ್ಚಿಕೊಂಡಿದ್ದಾರೆ. ತೆರೆಯ ಮೇಲೆ ಭಾವನೆಗಳನ್ನು ಸಮರ್ಥವಾಗಿ ಕಟ್ಟಿಕೊಡಬಲ್ಲ ನಿರ್ದೇಶಕರು ಬಹಳ ಕಡಿಮೆ. ಅವರು ಭಾವನೆಗಳನ್ನು ಆತುರದಲ್ಲಿ ತೋರಿಸುವುದಿಲ್ಲ. ಹೀಗಾಗಿ ಕುಟುಂಬ ಪ್ರೇಕ್ಷಕರು ಸಿನಿಮಾದೊಂದಿಗೆ ಸುಲಭವಾಗಿ ಕನೆಕ್ಟ್ ಆಗುತ್ತಾರೆ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಇದು ಕಂಬ್ಯಾಕ್&zwnj;ಗಾಗಿ ಲೆಕ್ಕ ಹಾಕಿ ಮಾಡಿದ ಸಿನಿಮಾ ಅಲ್ಲ&rsquo;&lt;/strong&gt;&lt;/h2&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ತಮ್ಮ ಲೆಕ್ಕಾಚಾರದ ಕಂಬ್ಯಾಕ್ ಸಿನಿಮಾ ಅಲ್ಲ ಎನ್ನುವುದು ಶಾನ್ವಿ ಅವರ ಸ್ಪಷ್ಟನೆ. ಸರಿಯಾದ ಸಮಯದಲ್ಲಿ, ಸರಿಯಾದ ಕಥೆ ಮತ್ತು ಸರಿಯಾದ ತಂಡದೊಂದಿಗೆ ಸಿನಿಮಾ ಸಿಕ್ಕಿದೆ ಎಂಬ ಭಾವನೆ ಅವರದು. ಸಿನಿಮಾದಲ್ಲಿ ಸರಿ ಅಥವಾ ತಪ್ಪು ಎಂಬುದಿಲ್ಲ. ಪ್ರೇಕ್ಷಕರ ಭಾವನೆಗಳನ್ನು ಮುಟ್ಟುವ ಸಿನಿಮಾ ಯಾವಾಗಲೂ ಸರಿಯಾದ ಸಿನಿಮಾವೇ. ಅದು ಪ್ರತಿಯೊಬ್ಬ ವ್ಯಕ್ತಿಯ ಅನುಭವ ಮತ್ತು ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ ಎಂದು ಶಾನ್ವಿ ಶ್ರೀವಾಸ್ತವ ಹೇಳಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಹತ್ತು ವರ್ಷಗಳ ಸಿನಿ ಪಯಣದ ಬಳಿಕ ಕೇವಲ ಕಾಣಿಸಿಕೊಳ್ಳುವುದಕ್ಕಾಗಿ ಸಿನಿಮಾ ಮಾಡುವ ಬದಲು, ತಮ್ಮ ಪಾತ್ರಕ್ಕೆ ಮೌಲ್ಯ ಸಿಗುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸ್ಪಷ್ಟ ನಿಲುವಿಗೆ ಶಾನ್ವಿ ಬಂದಿದ್ದಾರೆ. &lsquo;ಅಮೆರಿಕಾ ಅಮೆರಿಕಾ 2&rsquo; ಈ ಹೊಸ ಹಂತದ ಪಯಣದಲ್ಲಿ ಅವರಿಗೆ ಎಷ್ಟರ ಮಟ್ಟಿಗೆ ವಿಶೇಷವಾಗಲಿದೆ ಎಂಬುದನ್ನು ಸೆಪ್ಟೆಂಬರ್ 11ರಂದು ಸಿನಿಮಾ ತೆರೆಕಂಡ ಬಳಿಕ ನೋಡಬೇಕಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kannada-actress-shanvi-srivastava-opens-up-about-her-role-in-america-america-2-interview-gvd/articleshow-ki9c5cb"/>
        </item>
        <item>
            <title><![CDATA[ಕೊನೆಗೂ ಶುರುವಾಯಿತು ದುನಿಯಾ ಸೂರಿ ಚಿತ್ರ ಕಾಗೆ ಬಂಗಾರ: ತಾರಾಬಳಗದಲ್ಲಿ ಸರ್ಪ್ರೈಸ್!]]></title>
            <link>https://kannada.asianetnews.com/sandalwood/kannada-director-duniya-suri-kaage-bangara-finally-goes-on-floors-surya-prakhyath-and-rithanya-vijay-lead-gvd/articleshow-o9mkvh6</link>
            <guid isPermaLink="true">https://kannada.asianetnews.com/sandalwood/kannada-director-duniya-suri-kaage-bangara-finally-goes-on-floors-surya-prakhyath-and-rithanya-vijay-lead-gvd/articleshow-o9mkvh6</guid>
            <pubDate>Mon, 07 Sep 2026 15:48:22 +0530</pubDate>
            <description><![CDATA[&lt;p&gt;ದುನಿಯಾ ಸೂರಿ ನಿರ್ದೇಶನದ &lsquo;ಕಾಗೆ ಬಂಗಾರ&rsquo; ಚಿತ್ರೀಕರಣ ಆರಂಭವಾಗಿದ್ದು, ಸೂರ್ಯ ಪ್ರಖ್ಯಾತ್ ಮತ್ತು ರಿತನ್ಯಾ ವಿಜಯ್ ನಾಯಕ-ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪ್ರಶಾಂತ್ ಸಿದ್ಧಿ ಸೇರಿದಂತೆ ಹಳೆಯ ಚಿತ್ರಗಳ ಹಲವು ನಟರು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xn22krpw1gqd0tp2np2akf,imgname-jbj-1788775303800.png" type="image/jpeg" height="390" width="690"/>
            <content:encoded><![CDATA[&lt;p&gt;ಬಹುದಿನಗಳಿಂದ ಸುದ್ದಿಯಲ್ಲಿದ್ದ ದುನಿಯಾ ಸೂರಿ ನಿರ್ದೇಶನದ &lsquo;ಕಾಗೆ ಬಂಗಾರ&rsquo; ಚಿತ್ರ ಇದೀಗ ಚಿತ್ರೀಕರಣದ ಹಂತಕ್ಕೆ ಪ್ರವೇಶಿಸಿದೆ. ಹಲವು ಕಾರಣಗಳಿಂದ ವಿಳಂಬವಾಗಿದ್ದ ಈ ಸಿನಿಮಾದ ಕೆಲಸಕ್ಕೆ ಕೊನೆಗೂ ಚಾಲನೆ ಸಿಕ್ಕಿದ್ದು, ಚಿತ್ರೀಕರಣ ಆರಂಭಗೊಂಡಿದೆ ಎನ್ನಲಾಗಿದೆ. ಶೀಘ್ರದಲ್ಲೇ ಚಿತ್ರತಂಡದಿಂದ ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.&lt;/p&gt;&lt;p&gt;ಇದರ ನಡುವೆ ಸಿನಿಮಾದ ತಾರಾಬಳಗದ ಕುರಿತ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. &lsquo;ನಡುವೆ ಅಂತರವಿರಲಿ&rsquo; ಚಿತ್ರದ ಮೂಲಕ ಸ್ಯಾಂಡಲ್&zwnj;ವುಡ್&zwnj;ಗೆ ಪರಿಚಿತರಾದ ನಟ ಸೂರ್ಯ ಪ್ರಖ್ಯಾತ್ ಇದೀಗ &lsquo;ಕಾಗೆ ಬಂಗಾರ&rsquo;ದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ &lsquo;ಜೆಸಿ - ದಿ ಯೂನಿವರ್ಸಿಟಿ&rsquo; (JC &ndash; The University) ಚಿತ್ರದಲ್ಲೂ ಅವರು ನಟಿಸಿದ್ದರು.&lt;/p&gt;&lt;p&gt;ಇನ್ನು &lsquo;ಕಾಗೆ ಬಂಗಾರ&rsquo;ಕ್ಕೆ ನಾಯಕಿಯಾಗಿ ನಟಿ ರಿತನ್ಯಾ ವಿಜಯ್ ಆಯ್ಕೆಯಾಗಿದ್ದಾರೆ. ನಟ ದುನಿಯಾ ವಿಜಯ್ ಅವರ ಪುತ್ರಿಯಾಗಿರುವ ರಿತನ್ಯಾ, ಜಡೇಶಾ ಕೆ. ಹಂಪಿ ನಿರ್ದೇಶನದ &lsquo;ಲ್ಯಾಂಡ್&zwnj;ಲಾರ್ಡ್&rsquo; ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇದೀಗ ದುನಿಯಾ ಸೂರಿ ನಿರ್ದೇಶನದ ಈ ಸಿನಿಮಾ ಅವರ ಮುಂದಿನ ಪ್ರಮುಖ ಹೆಜ್ಜೆಯಾಗಲಿದೆ.&lt;/p&gt;&lt;h2&gt;&lt;strong&gt;&lsquo;ಕೆಂಡಸಂಪಿಗೆ&rsquo;, &lsquo;ಪಾಪ್&zwnj;ಕಾರ್ನ್ ಮಂಕಿ ಟೈಗರ್&zwnj;&rsquo; ಜೊತೆ ಹೊಸ ಕನೆಕ್ಷನ್&lt;/strong&gt;&lt;/h2&gt;&lt;p&gt;&lsquo;ಕಾಗೆ ಬಂಗಾರ&rsquo; ಕೇವಲ ಹೊಸ ಕಥೆಯ ಸಿನಿಮಾವಾಗಿರದೆ, ದುನಿಯಾ ಸೂರಿ ಅವರ ಹಿಂದಿನ ಚಿತ್ರಗಳ ಜಗತ್ತಿನೊಂದಿಗೂ ಒಂದು ರೀತಿಯ ಸಂಪರ್ಕ ಹೊಂದಿರಲಿದೆ ಎಂಬುದು ವಿಶೇಷ. &lsquo;ಕೆಂಡಸಂಪಿಗೆ&rsquo; ಹಾಗೂ &lsquo;ಪಾಪ್&zwnj;ಕಾರ್ನ್ ಮಂಕಿ ಟೈಗರ್&zwnj;&rsquo; ಚಿತ್ರಗಳ ತುದಿಗಳನ್ನು ಒಟ್ಟಿಗೆ ತರುವ ಪ್ರಯತ್ನ ಈ ಸಿನಿಮಾದಲ್ಲಿದೆ ಎನ್ನಲಾಗಿದೆ.&lt;/p&gt;&lt;p&gt;ಈ ಕನೆಕ್ಷನ್&zwnj;ನ ಭಾಗವಾಗಿ ನಟ ಪ್ರಶಾಂತ್ ಸಿದ್ಧಿ ಮತ್ತೊಮ್ಮೆ ಸೂರಿ ಅವರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರವನ್ನು &lsquo;ಕೆಂಡಸಂಪಿಗೆ&rsquo; ಚಿತ್ರದಿಂದಲೇ ಮುಂದುವರಿಸಲಾಗಿದೆ ಎನ್ನಲಾಗುತ್ತಿದ್ದು, ಈ ಕಾರಣದಿಂದ &lsquo;ಕಾಗೆ ಬಂಗಾರ&rsquo;ದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.&lt;/p&gt;&lt;p&gt;ಇದರ ಜೊತೆಗೆ ದುನಿಯಾ ಸೂರಿ ಅವರ ಹಿಂದಿನ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಇನ್ನೂ ಹಲವು ನಟರು &lsquo;ಕಾಗೆ ಬಂಗಾರ&rsquo; ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಸಿನಿಮಾದ ಕಥೆ, ಪಾತ್ರಗಳು ಮತ್ತು ಹಿಂದಿನ ಚಿತ್ರಗಳ ನಡುವಿನ ಕನೆಕ್ಷನ್ ಹೇಗಿರಲಿದೆ ಎಂಬ ಕುತೂಹಲ ಇದೀಗ ಸಿನಿಪ್ರಿಯರಲ್ಲಿ ಮೂಡಿದೆ. ಇನ್ನು ಚಿತ್ರದ ಅಧಿಕೃತ ಘೋಷಣೆ ಹಾಗೂ ಸಂಪೂರ್ಣ ತಾರಾಬಳಗದ ವಿವರಗಳು ಹೊರಬಂದ ಬಳಿಕ &lsquo;ಕಾಗೆ ಬಂಗಾರ&rsquo;ದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-director-duniya-suri-kaage-bangara-finally-goes-on-floors-surya-prakhyath-and-rithanya-vijay-lead-gvd/articleshow-o9mkvh6"/>
        </item>
        <item>
            <title><![CDATA['ಉಪೇಂದ್ರ' ನಟಿ ಪ್ರೇಮಾ ನ್ಯೂಜಿಲೆಂಡ್‌ಗೆ ಹೋಗಿದ್ದೇಕೆ? ಕೊನೆಗೂ ಗೊತ್ತಾಯ್ತು ಅಸಲಿ ಕಾರಣ]]></title>
            <link>https://kannada.asianetnews.com/entertainment/sandalwood-actress-prema-breaks-silence-on-cancer-rumours-and-her-new-zealand-trip-i-have-no-illness-gvd/articleshow-px5xgyz</link>
            <guid isPermaLink="true">https://kannada.asianetnews.com/entertainment/sandalwood-actress-prema-breaks-silence-on-cancer-rumours-and-her-new-zealand-trip-i-have-no-illness-gvd/articleshow-px5xgyz</guid>
            <pubDate>Sun, 06 Sep 2026 18:01:58 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದ 'ಉಪೇಂದ್ರ' ನಟಿ ಪ್ರೇಮಾ ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪ್ರೇಮಾಗೆ ಕ್ಯಾನ್ಸರ್ ಇದೆ ಮತ್ತು ಚಿಕಿತ್ಸೆಗಾಗಿ ನ್ಯೂಜಿಲೆಂಡ್&zwnj;ಗೆ ತೆರಳಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vb7740fdw57b4w235600k4,imgname-vhv-1788697877632.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಪ್ರೇಮಾ ಕೂಡ ಒಬ್ಬರು. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿರುವ ಅವರು, ಹೋಮ್ಲಿ ಲುಕ್ ಹಾಗೂ ಅದ್ಭುತ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ವಿಶೇಷವಾಗಿ ಕೋಡಿ ರಾಮಕೃಷ್ಣ ನಿರ್ದೇಶನದ &lsquo;ದೇವಿ&rsquo; ಸಿನಿಮಾ ಪ್ರೇಮಾ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತ್ತು. ಈ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದರು.&lt;/p&gt;&lt;p&gt;ಇದಕ್ಕೂ ಮುನ್ನ &lsquo;ಧರ್ಮಚಕ್ರಂ&rsquo; ಚಿತ್ರದ ಮೂಲಕ ಟಾಲಿವುಡ್&zwnj;ಗೆ ಎಂಟ್ರಿ ನೀಡಿದ್ದ ಪ್ರೇಮಾ, ಬಳಿಕ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ತೆಲುಗು ಮಾತ್ರವಲ್ಲದೆ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲೂ ಅಭಿನಯಿಸಿರುವ ಪ್ರೇಮಾ, ನಾಯಕಿಯಾಗಿ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.&lt;/p&gt;&lt;p&gt;2006ರಲ್ಲಿ ಉದ್ಯಮಿ ಜೀವನ್ ಅಪ್ಪಚುನ್ ಅವರನ್ನು ವಿವಾಹವಾಗಿದ್ದ ಅವರು, ಬಳಿಕ 2016ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು. ವೈಯಕ್ತಿಕ ಜೀವನದ ಕೆಲವು ಕಾರಣಗಳಿಂದಾಗಿ ಕೆಲಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಪ್ರೇಮಾ, ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ತಾಯಿ, ಅಕ್ಕ, ಅತ್ತಿಗೆ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಟಿವಿ ಶೋಗಳಲ್ಲೂ ಸಕ್ರಿಯರಾಗಿದ್ದಾರೆ.&lt;/p&gt;&lt;p&gt;&lt;strong&gt;ಪ್ರೇಮಾ ಆರೋಗ್ಯದ ಬಗ್ಗೆ ಹರಿದಾಡಿದ್ದ ರೂಮರ್ ಏನು?&lt;/strong&gt;&lt;/p&gt;&lt;p&gt;ಇತ್ತೀಚಿನ ವರ್ಷಗಳಲ್ಲಿ ಪ್ರೇಮಾ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ರೀತಿಯ ಸುದ್ದಿಗಳು ಮತ್ತು ವದಂತಿಗಳು ಹರಿದಾಡಿದ್ದವು. ಅವರು ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂಬ ಮಾತುಗಳ ಜೊತೆಗೆ, ಅವರ ಆರೋಗ್ಯದ ಬಗ್ಗೆಯೂ ಸಾಕಷ್ಟು ಊಹಾಪೋಹಗಳು ಕೇಳಿಬಂದಿದ್ದವು. ಪ್ರೇಮಾಗೆ ಕ್ಯಾನ್ಸರ್ ಇದೆ. ಅದಕ್ಕಾಗಿ ಅವರು ನ್ಯೂಜಿಲೆಂಡ್&zwnj;ಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವದಂತಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರಿಂದ ಅವರ ಅಭಿಮಾನಿಗಳು ಸಹ ಆತಂಕಕ್ಕೊಳಗಾಗಿದ್ದರು. ಆದರೆ ಇದೀಗ ಈ ಎಲ್ಲಾ ಸುದ್ದಿಗಳಿಗೆ ನಟಿ ಪ್ರೇಮಾ ಅವರೇ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ದೇವರ ದಯೆಯಿಂದ ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ&rsquo;&lt;/strong&gt;&lt;/p&gt;&lt;p&gt;ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಕುರಿತು ಮಾತನಾಡಿರುವ ಪ್ರೇಮಾ, ನ್ಯೂಜಿಲೆಂಡ್&zwnj;ಗೆ ತೆರಳಿದ್ದರ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ನನ್ನ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಸೃಷ್ಟಿಸಿದ್ದಾರೆ. ನಾನು ನ್ಯೂಜಿಲೆಂಡ್&zwnj;ಗೆ ನನ್ನ ಸ್ನೇಹಿತರೊಬ್ಬರನ್ನು ಭೇಟಿಯಾಗಲು ಹೋಗಿ ಬಂದಿದ್ದೆ. ದೇವರ ದಯೆಯಿಂದ ನನಗೆ ಯಾವುದೇ ಅನಾರೋಗ್ಯವಿಲ್ಲ. ಆದರೆ ಕೆಲವರು ಈ ವಿಚಾರವನ್ನು ಅತಿರೇಕವಾಗಿ ಬಿಂಬಿಸುತ್ತಿದ್ದಾರೆ ಎಂದು ಪ್ರೇಮಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಈ ವದಂತಿಗಳಿಂದ ನಾನು ಇನ್ನಷ್ಟು ಸ್ಟ್ರಾಂಗ್ ಆಗಿದ್ದೇನೆ&rsquo;&lt;/strong&gt;&lt;/p&gt;&lt;p&gt;ತಮ್ಮ ಬಗ್ಗೆ ಕೇಳಿಬರುವ ಮಾತುಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಪ್ರೇಮಾ, ಇಂತಹ ಪರಿಸ್ಥಿತಿಗಳೇ ತಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿವೆ ಎಂದು ಹೇಳಿದ್ದಾರೆ. ಇಂತಹ ವದಂತಿಗಳಿಂದ ನಾನು ಇನ್ನಷ್ಟು ಸ್ಟ್ರಾಂಗ್ ಆಗಿದ್ದೇನೆ. ನನ್ನ ತಂದೆ-ತಾಯಿ ಪ್ರತಿಯೊಂದು ವಿಚಾರದಲ್ಲೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ಯಾರಾದರೂ ನನ್ನ ಬಗ್ಗೆ ಏನಾದರೂ ಮಾತನಾಡಿದರೆ, ಅದಕ್ಕೆ ಹೇಗೆ ಉತ್ತರಿಸಬೇಕು ಎಂಬುದೂ ನನಗೆ ಚೆನ್ನಾಗಿ ಗೊತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನನ್ನ ಸ್ನೇಹಿತರು ನನ್ನನ್ನು ಸ್ಟಾರ್&zwnj;ನಂತೆ ನೋಡುವುದಿಲ್ಲ&rsquo;&lt;/strong&gt;&lt;/h2&gt;&lt;p&gt;ತಮ್ಮ ಜೀವನದಲ್ಲಿ ಸ್ನೇಹಿತರ ಪಾತ್ರದ ಬಗ್ಗೆಯೂ ಪ್ರೇಮಾ ಮಾತನಾಡಿದ್ದಾರೆ. ನನಗೆ ಒಳ್ಳೆಯ ಸ್ನೇಹಿತರಿದ್ದಾರೆ. ಅವರು ನನ್ನನ್ನು ಸ್ಟಾರ್&zwnj;ನಂತೆ ನೋಡುವುದಿಲ್ಲ. ಅವರೊಂದಿಗೆ ನನ್ನ ಜೀವನದ ಪ್ರತಿಯೊಂದು ವಿಚಾರವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತೇನೆ ಎಂದು ಪ್ರೇಮಾ ಹೇಳಿದ್ದಾರೆ. ಸದ್ಯ ಹಿರಿಯ ನಟಿಯ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ವತಃ ಪ್ರೇಮಾ ಅವರೇ ತೆರೆ ಎಳೆದಿರುವುದು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sandalwood-actress-prema-breaks-silence-on-cancer-rumours-and-her-new-zealand-trip-i-have-no-illness-gvd/articleshow-px5xgyz"/>
        </item>
        <item>
            <title><![CDATA[ಒಳ್ಳೆ ಕತೆ ಸಿಕ್ಕರೆ ಅರ್ಜುನ್‌ ದೇವ್‌ ಜೊತೆ ಸಿನಿಮಾ ಮಾಡುತ್ತೇನೆ: ಗೋಲ್ಡನ್‌ ಸ್ಟಾರ್‌ ಗಣೇಶ್‌]]></title>
            <link>https://kannada.asianetnews.com/gallery/sandalwood/kannada-actor-golden-star-ganesh-launches-toss-movie-trailer-praises-arjun-dev-gvd-qkddc7s</link>
            <guid isPermaLink="true">https://kannada.asianetnews.com/gallery/sandalwood/kannada-actor-golden-star-ganesh-launches-toss-movie-trailer-praises-arjun-dev-gvd-qkddc7s</guid>
            <pubDate>Wed, 09 Sep 2026 09:00:18 +0530</pubDate>
            <description><![CDATA[&lt;p&gt;&lsquo;ಟಾಸ್&rsquo; ಸಿನಿಮಾದ ಟ್ರೇಲರ್ ಅನ್ನು ಗೋಲ್ಡನ್&zwnj; ಸ್ಟಾರ್&zwnj; ಗಣೇಶ್&zwnj; ಬಿಡುಗಡೆ ಮಾಡಿದ್ದಾರೆ. ಹೊಸ ರೀತಿಯ ಕಥೆಗಳು ಹಾಗೂ ಹೊಸ ಪ್ರತಿಭೆಗಳನ್ನು ಬೆಂಬಲಿಸುವ ಉದ್ದೇಶದಿಂದ ತಮ್ಮ ಬ್ಯಾನರ್&zwnj;ನಿಂದ &lsquo;ಟಾಸ್&rsquo; ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವುದಾಗಿ ಗಣೇಶ್ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20yfbs808wv5ztj46deh6xe,imgname-bj-1788885839656.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಟಾಸ್&rsquo; ಸಿನಿಮಾದ ಟ್ರೇಲರ್ ಅನ್ನು ಗೋಲ್ಡನ್&zwnj; ಸ್ಟಾರ್&zwnj; ಗಣೇಶ್&zwnj; ಬಿಡುಗಡೆ ಮಾಡಿದ್ದಾರೆ. ಹೊಸ ರೀತಿಯ ಕಥೆಗಳು ಹಾಗೂ ಹೊಸ ಪ್ರತಿಭೆಗಳನ್ನು ಬೆಂಬಲಿಸುವ ಉದ್ದೇಶದಿಂದ ತಮ್ಮ ಬ್ಯಾನರ್&zwnj;ನಿಂದ &lsquo;ಟಾಸ್&rsquo; ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವುದಾಗಿ ಗಣೇಶ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅರ್ಜುನ್&zwnj; ದೇವ್&zwnj; ನಟನೆ, ನಿರ್ದೇಶನದ &lsquo;ಟಾಸ್&zwnj;&rsquo; ಚಿತ್ರದ ಟ್ರೇಲರ್&zwnj; ಅನ್ನು ಗೋಲ್ಡನ್&zwnj; ಸ್ಟಾರ್&zwnj; ಗಣೇಶ್&zwnj; ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂದಿದ್ದ ಗಣೇಶ್&zwnj; ಮಾತನಾಡಿ, ನಾನು ಸಿನಿಮಾ ಪ್ರೇಮಿ, ಸಿನಿಮಾ ಉತ್ಸಾಹಿ.&lt;/p&gt;&lt;img&gt;&lt;p&gt;ಹೊಸ ರೀತಿಯ ಕತೆಗಳನ್ನು ಬೆಂಬಲಿಸಬೇಕು, ಹೊಸ ತಂಡಗಳು ಚಿತ್ರರಂಗಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಈ ಚಿತ್ರವನ್ನು ನಮ್ಮ ಬ್ಯಾನರ್&zwnj;ನಿಂದ ಪ್ರೆಸೆಂಟ್&zwnj; ಮಾಡುತ್ತಿದ್ದೇನೆ. ಈ ಚಿತ್ರದ ನಿರ್ದೇಶಕ ಹಾಗೂ ನಾಯಕ ಅರ್ಜುನ್&zwnj; ದೇವ್&zwnj; ಮಂಗಳೂರಿನ ಹೆಮ್ಮೆ.&lt;/p&gt;&lt;img&gt;&lt;p&gt;ಕೋಸ್ಟಲ್&zwnj;ವುಡ್&zwnj;ನ ಸೂಪರ್&zwnj;ಸ್ಟಾರ್&zwnj; ಕೂಡ. ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಕಥೆ ಸಿದ್ಧವಾದರೆ ನಾನು ಈ ಪ್ರತಿಭಾವಂತ ನಟ ಅರ್ಜುನ್&zwnj; ದೇವ್&zwnj; ಜೊತೆಗೆ ಸಿನಿಮಾ ಮಾಡುತ್ತೇನೆ ಎಂದರು.&lt;/p&gt;&lt;img&gt;&lt;p&gt;ಅರ್ಜುನ್&zwnj; ದೇವ್&zwnj;, ನನ್ನ ಹಾಗೂ ನನ್ನ ತಂದೆ ದೇವದಾಸ್&zwnj; ಕಾಪಿಕಾಡ್&zwnj; ಅವರ ಮೇಲಿನ ಪ್ರೀತಿ, ಗೌರವಕ್ಕೆ ನಟ ಗಣೇಶ್&zwnj;, ನಿರ್ಮಾಪಕಿ ಶಿಲ್ಪಾ ಗಣೇಶ್&zwnj; ಬೆಂಬಲವಾಗಿ ನಿಂತಿದ್ದಾರೆ ಎಂದರು.&lt;/p&gt;&lt;img&gt;&lt;p&gt;ಇನ್ನು ಸೆ.18ಕ್ಕೆ ಕನ್ನಡ ಹಾಗೂ ತುಳು ಭಾಷೆಯಲ್ಲಿ &lsquo;ಟಾಸ್&zwnj;&rsquo; ಸಿನಿಮಾ ಬಿಡುಗಡೆ ಆಗುತ್ತಿದೆ. ಸುತೇಜ್ ಶೆಟ್ಟಿ, ಕೃತಿ ಶೆಟ್ಟಿ, ಗರುಡಾರಾಮ್, ಬಾಲಾಜಿ ಮನೋಹರ್ ನಟಿಸಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/kannada-actor-golden-star-ganesh-launches-toss-movie-trailer-praises-arjun-dev-gvd-qkddc7s"/>
        </item>
        <item>
            <title><![CDATA['ಫಿಲ್ಮ್‌ಮೇಕಿಂಗ್ ಅನ್ನೋದು ರಿಸ್ಕ್': ಕನ್ನಡ ಚಿತ್ರರಂಗದ ಬಗ್ಗೆ ನಟಿ ಶ್ರುತಿ ಹರಿಹರನ್ ಯಾಕೆ ಹೀಗಂದ್ರು]]></title>
            <link>https://kannada.asianetnews.com/celebrity-interviews/kannada-actress-sruthi-hariharan-on-sandalwood-cinema-theatrical-releases-risk-interview-gvd/articleshow-rz1p9gs</link>
            <guid isPermaLink="true">https://kannada.asianetnews.com/celebrity-interviews/kannada-actress-sruthi-hariharan-on-sandalwood-cinema-theatrical-releases-risk-interview-gvd/articleshow-rz1p9gs</guid>
            <pubDate>Sun, 06 Sep 2026 18:44:33 +0530</pubDate>
            <description><![CDATA[&lt;p&gt;ನಟಿ ಶ್ರುತಿ ಹರಿಹರನ್&zwnj;ಗೆ ಸಿನಿಮಾದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಅಷ್ಟೇ ಮುಖ್ಯ. ಕೇವಲ ಮನರಂಜನೆ ಎಂಬ ಕಾರಣಕ್ಕೆ ಪರದೆಯ ಮೇಲೆ ಮಹಿಳೆಯರನ್ನು ಹೇಗೆ ಬೇಕಾದರೂ ತೋರಿಸುವುದನ್ನು ಒಪ್ಪಿಕೊಳ್ಳಬಾರದು ಎಂಬುದು ಅವರ ಅಭಿಪ್ರಾಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vdnhn6tve93d1d984mac80,imgname-vjv-1788700444326.png" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಕೆಲ ವರ್ಷಗಳಿಂದ ತುಸು ಸೈಲೆಂಟ್ ಆಗಿದ್ದ ನಟಿ ಶ್ರುತಿ ಹರಿಹರನ್ ಇದೀಗ ವಿಭಿನ್ನ ಸಿನಿಮಾಗಳ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. &lsquo;ಮುಧೋಳ್&rsquo;, &lsquo;ಚೀತಾ&rsquo; ಹಾಗೂ &lsquo;NH66&rsquo; ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿದ್ದು, ಈ ಚಿತ್ರಗಳು ಶ್ರುತಿಯನ್ನು ಈ ಹಿಂದೆ ನೋಡಿರದ ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ಪರಿಚಯಿಸುವ ನಿರೀಕ್ಷೆಯಿದೆ.&lt;/p&gt;&lt;p&gt;ಒಂದು ಕಾಲದಲ್ಲಿ ಸಾಂಪ್ರದಾಯಿಕ ನಾಯಕಿ ಪಾತ್ರಗಳಿಗೆ ಸೀಮಿತವಾಗಿದ್ದ ಶ್ರುತಿಗೆ ಇದೀಗ ಸಿಗುತ್ತಿರುವ ಪಾತ್ರಗಳಲ್ಲಿ ಹೆಚ್ಚು ವೈವಿಧ್ಯತೆ ಮತ್ತು ತೂಕವಿದೆ. ತಮ್ಮ ಈ ಹೊಸ ಹಂತದ ಸಿನಿಮಾ ಪಯಣ, ಎನ್ಸೆಂಬಲ್ ಸಿನಿಮಾಗಳಲ್ಲಿ ಕೆಲಸ ಮಾಡುವ ಖುಷಿ, ಚಿತ್ರಗಳ ಥಿಯೇಟ್ರಿಕಲ್ ಭವಿಷ್ಯ ಹಾಗೂ ತಾವು ನಂಬಿರುವ ಸಿನಿಮಾಗಳನ್ನು ಮಾಡುವ ಅಗತ್ಯದ ಬಗ್ಗೆ ಶ್ರುತಿ ಹರಿಹರನ್ ಮಾತನಾಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ವಿಭಿನ್ನ ರೀತಿಯ ಪಾತ್ರಗಳು ನನ್ನತ್ತ ಬರಬೇಕು ಎಂಬ ಆಸೆ ಯಾವಾಗಲೂ ಇತ್ತು&rsquo;&lt;/strong&gt;&lt;/p&gt;&lt;p&gt;ಕಳೆದ ಎರಡು ವರ್ಷಗಳಿಂದ ನನ್ನ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ ಅನ್ನೋದು ನಿಜಕ್ಕೂ ಆಶ್ಚರ್ಯಕರ. ಆದರೆ ಕಳೆದ ಎರಡೂವರೆ-ಮೂರು ವರ್ಷಗಳಲ್ಲಿ ನಾನು ಕೆಲಸ ಮಾಡಿರುವ ಸಿನಿಮಾಗಳ ಪೈಕಿ ಬಹುತೇಕ ಚಿತ್ರಗಳು ಈ ವರ್ಷ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಶ್ರುತಿ ಹೇಳುತ್ತಾರೆ. ಆ ಸಿನಿಮಾಗಳೆಲ್ಲವೂ ವಿಭಿನ್ನವಾಗಿವೆ. ಅವುಗಳಲ್ಲಿ ನಾನು ಸಾಮಾನ್ಯ ಅರ್ಥದಲ್ಲಿ ನಾಯಕಿಯ ಪಾತ್ರ ಮಾಡದೇ ಇರಬಹುದು.&lt;/p&gt;&lt;p&gt;ಆದರೆ ಆ ಪಾತ್ರಗಳಲ್ಲಿ ಸಾಕಷ್ಟು ತೂಕವಿದೆ, ನನ್ನನ್ನು ಸವಾಲಿಗೆ ಒಡ್ಡುವಂತಹ ಪಾತ್ರಗಳಾಗಿವೆ. ಇಂಥ ವಿಭಿನ್ನ ಕೆಲಸಗಳು ನನ್ನತ್ತ ಬರಬೇಕು ಎಂಬ ಆಸೆ ನನಗೆ ಯಾವಾಗಲೂ ಇತ್ತು ಎನ್ನುತ್ತಾರೆ. ನನಗೆ ಯಾವಾಗ ಅವಕಾಶ ಸಿಕ್ಕರೂ ಅದನ್ನು ಕೈಬಿಡಲು ಇಷ್ಟವಾಗುವುದಿಲ್ಲ. &lsquo;ವಾವ್, ಇದು ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ&rsquo; ಎಂದುಕೊಂಡು ಆ ಅವಕಾಶವನ್ನು ಸ್ವೀಕರಿಸುತ್ತೇನೆ ಎಂದು ತಮ್ಮ ಪಾತ್ರಗಳ ಆಯ್ಕೆಯ ಬಗ್ಗೆ ಅವರು ಹೇಳುತ್ತಾರೆ.&lt;/p&gt;&lt;p&gt;ಉದಾಹರಣೆಗೆ, ಶ್ರುತಿ ನಟಿಸಿರುವ &lsquo;ಮುಧೋಳ್&rsquo; ಒಂದು ಎನ್ಸೆಂಬಲ್ ಸಿನಿಮಾ. ಒಂದೇ ಚಿತ್ರದಲ್ಲಿ ಹಲವು ಕಲಾವಿದರು ಇರುವ ಇಂತಹ ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ಅವರು ವಿಶೇಷವಾಗಿ ಇಷ್ಟಪಡುತ್ತಾರೆ. ಸೆಟ್&zwnj;ನಲ್ಲಿ ಸಾಕಷ್ಟು ಕಲಾವಿದರು ಇದ್ದಾಗ ಸುತ್ತಮುತ್ತ ತುಂಬಾ ಮಾತುಕತೆ, ಎನರ್ಜಿ ಇರುತ್ತದೆ. ಸಿನಿಮಾದಲ್ಲಿ ನಮ್ಮದೇ ಆದ ಜಾಗವನ್ನು ಹುಡುಕಿಕೊಳ್ಳಬೇಕಾಗುತ್ತದೆ. ಅದು ಬಹುತೇಕ ಸಂದರ್ಭಗಳಲ್ಲಿ ನನ್ನಿಂದ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಿಸುವಂತೆ ಮಾಡುತ್ತದೆ ಎನ್ನುತ್ತಾರೆ ಶ್ರುತಿ.&lt;/p&gt;&lt;p&gt;&lt;strong&gt;&lsquo;ಮನರಂಜನೆಯಾಚೆ ಕಲೆಗಿರುವ ಶಕ್ತಿ ಅಪಾರ&rsquo;&lt;/strong&gt;&lt;/p&gt;&lt;p&gt;ಶ್ರುತಿ ಹರಿಹರನ್&zwnj;ಗೆ ಸಿನಿಮಾದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಅಷ್ಟೇ ಮುಖ್ಯ. ಕೇವಲ ಮನರಂಜನೆ ಎಂಬ ಕಾರಣಕ್ಕೆ ಪರದೆಯ ಮೇಲೆ ಮಹಿಳೆಯರನ್ನು ಹೇಗೆ ಬೇಕಾದರೂ ತೋರಿಸುವುದನ್ನು ಒಪ್ಪಿಕೊಳ್ಳಬಾರದು ಎಂಬುದು ಅವರ ಅಭಿಪ್ರಾಯ.&lt;/p&gt;&lt;p&gt;ಬರಹಗಾರರನ್ನು ಪ್ರಶ್ನಿಸುವುದು, ಪುರುಷರ ದೃಷ್ಟಿಕೋನವನ್ನು ಪ್ರಶ್ನಿಸುವುದು ಬಹಳ ಮುಖ್ಯ. ನಿಮ್ಮ ಲೈಂಗಿಕತೆಯನ್ನು ಸಂಭ್ರಮಿಸುವುದೇ ತಪ್ಪು ಎಂದು ನಾನು ಹೇಳುವುದಿಲ್ಲ. ಖಂಡಿತವಾಗಿಯೂ ಅಲ್ಲ. ಆದರೆ ಒಂದು ಹಂತದಲ್ಲಿ ಯಾವುದಾದರೂ ವಿಚಾರ ಮಹಿಳೆಯರನ್ನು ಕೀಳಾಗಿ ತೋರಿಸುತ್ತಿದೆಯೇ, ಅಥವಾ ಒಬ್ಬ ಮಹಿಳೆ ನಿಮ್ಮನ್ನು ಆ ದೃಶ್ಯದಲ್ಲಿ ನೋಡಿಕೊಂಡು ಮುಜುಗರಪಡಬಹುದೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಶ್ರುತಿ ಹೇಳುತ್ತಾರೆ.&lt;/p&gt;&lt;p&gt;ಕಲೆಗೆ ಅಪಾರ ಶಕ್ತಿಯಿದೆ. ಫಿಲ್ಮ್&zwnj;ಮೇಕರ್&zwnj;ಗಳು ಮತ್ತು ನಟ-ನಟಿಯರಾದ ನಾವು ಮನರಂಜನೆ ನೀಡುತ್ತಲೇ ಒಂದು ಮುಖ್ಯವಾದ ವಿಚಾರವನ್ನು ಹೇಳುವ ಶಕ್ತಿಯನ್ನು ಹೊಂದಿದ್ದೇವೆ. ಮನರಂಜನೆಯೂ ಅಷ್ಟೇ ಮುಖ್ಯ. ಆದರೆ ನಮ್ಮ ಕೆಲಸದಿಂದ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬುದನ್ನೂ ನಾವು ಅರ್ಥಮಾಡಿಕೊಳ್ಳಬೇಕು ಎಂದು ಅವರು ವಿವರಿಸುತ್ತಾರೆ.&lt;/p&gt;&lt;p&gt;&lt;strong&gt;&lsquo;ಒಬ್ಬರನ್ನೊಬ್ಬರು ದೂಷಿಸುತ್ತಾ ಕೂರಬಹುದು; ಇಲ್ಲವೇ ಸಿನಿಮಾ ಮಾಡುತ್ತಲೇ ಇರಬಹುದು&rsquo;&lt;/strong&gt;&lt;/p&gt;&lt;p&gt;ಇತ್ತೀಚೆಗೆ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿದ್ದರೂ ಅವುಗಳಿಗೆ ಥಿಯೇಟರ್&zwnj;ನಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿರುವ ಕುರಿತು ಕೇಳಿದಾಗ, ಶ್ರುತಿ ಕೂಡ ಇದಕ್ಕೆ ಸುಲಭವಾದ ಉತ್ತರ ಇಲ್ಲ ಎನ್ನುತ್ತಾರೆ. ಇದು ಯಾಕೆ ಆಗುತ್ತಿದೆ ಎಂದು ನಾವೆಲ್ಲರೂ ಯೋಚಿಸಿದ್ದೇವೆ. ಪ್ರೇಕ್ಷಕರು ಥಿಯೇಟರ್&zwnj;ಗೆ ಬರುತ್ತಿಲ್ಲ ಎಂದು ಹೇಳುತ್ತೇವೆ. ಆದರೆ ಮತ್ತೊಂದು ಕಡೆ, ಪ್ರೇಕ್ಷಕರು ಥಿಯೇಟರ್&zwnj;ಗೆ ಬರುವಷ್ಟು ಉತ್ತಮ ಸಿನಿಮಾಗಳನ್ನು ನಾವು ಮಾಡುತ್ತಿದ್ದೇವೆಯೇ ಎಂಬ ಪ್ರಶ್ನೆಯೂ ಇದೆ. ಇದು ಮೊದಲು ಕೋಳಿ ಬಂದಿತೋ, ಮೊಟ್ಟೆ ಬಂದಿತೋ ಎಂಬಂತಾಗಿದೆ ಎಂದು ಅವರು ಹೇಳುತ್ತಾರೆ. ಆದರೆ ಈ ಪರಿಸ್ಥಿತಿಯಲ್ಲಿ ತಮ್ಮ ನಿಲುವು ಮಾತ್ರ ಸ್ಪಷ್ಟವಾಗಿದೆ ಎನ್ನುತ್ತಾರೆ ಶ್ರುತಿ.&lt;/p&gt;&lt;p&gt;ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಫಿಲ್ಮ್&zwnj;ಮೇಕಿಂಗ್ ದೊಡ್ಡ ರಿಸ್ಕ್ ಆಗಿಬಿಟ್ಟಿದೆ. ಆದರೂ ಆ ರಿಸ್ಕ್ ತೆಗೆದುಕೊಂಡು ಸಿನಿಮಾಗಳನ್ನು ಮಾಡುತ್ತಿರುವವರು ಈಗಲೂ ಇದ್ದಾರೆ. ನಾವು ಒಬ್ಬರನ್ನೊಬ್ಬರು ದೂಷಿಸುತ್ತಾ ಕೂರಬಹುದು. ಇಲ್ಲವೇ ನಮ್ಮದೇ ಆದ ರೀತಿಯಲ್ಲಿ ನಾವು ನಂಬಿರುವ, ಉತ್ತಮ ಬರಹ ಹೊಂದಿರುವ ಸಿನಿಮಾಗಳನ್ನು ಮಾಡುವುದನ್ನು ಮುಂದುವರಿಸಬಹುದು ಎಂದು ಶ್ರುತಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಒಂದು ಸಿನಿಮಾ ಎರಡು ಗಂಟೆಯ ಕೆಲಸವಲ್ಲ; ಅದರ ಹಿಂದೆ ವರ್ಷಗಳ ಶ್ರಮವಿರುತ್ತದೆ&rsquo;&lt;/strong&gt;&lt;/h2&gt;&lt;p&gt;ಸಿನಿಮಾ ಕ್ಷೇತ್ರದ ಬಗ್ಗೆ ಪ್ರೇಕ್ಷಕರು ಇನ್ನಷ್ಟು ಅರ್ಥಮಾಡಿಕೊಳ್ಳಬೇಕಾದ ಒಂದು ವಿಚಾರವಿದೆ ಎಂದರೆ, ಪರದೆಯ ಮೇಲೆ ಕಾಣಿಸುವ ಎರಡು ಗಂಟೆಗಳ ಹಿಂದೆ ಇರುವ ಅಪಾರ ಪರಿಶ್ರಮ ಎನ್ನುತ್ತಾರೆ ಶ್ರುತಿ. ಒಂದು ಸಿನಿಮಾ ಎರಡರಿಂದ ಎರಡೂವರೆ ಗಂಟೆಗಳ ಮನರಂಜನೆಯಾಗಿರಬಹುದು. ಆದರೆ ಆ ಸಿನಿಮಾದ ಹಿಂದೆ ಹಲವಾರು ಜನರ ವರ್ಷಗಳ ಪರಿಶ್ರಮ ಇರುತ್ತದೆ. ಯಾವುದಾದರೂ ಸಿನಿಮಾವನ್ನು ತಕ್ಷಣವೇ ತಿರಸ್ಕರಿಸುವುದು ಸುಲಭ.&lt;/p&gt;&lt;p&gt;ಆದರೆ ಕನಿಷ್ಠ ಒಂದು ಅವಕಾಶ ನೀಡುವುದು ಮುಖ್ಯ. ಥಿಯೇಟರ್&zwnj;ಗೆ ಬಂದು ಸಿನಿಮಾವನ್ನು ನೋಡಿ, ಅದಕ್ಕೆ ಸ್ವಲ್ಪ ಸಮಯ ಕೊಡಿ ಎಂದು ಅವರು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಇನ್ನು ವಿಭಿನ್ನ ಪಾತ್ರಗಳ ಮೂಲಕ ಮತ್ತೆ ತೆರೆಮೇಲೆ ಬರಲು ಸಜ್ಜಾಗಿರುವ ಶ್ರುತಿ ಹರಿಹರನ್ ಅವರ ಮಾತುಗಳಲ್ಲಿ, ಸಿನಿಮಾ ಎನ್ನುವುದು ಕೇವಲ ಮನರಂಜನೆಯಲ್ಲ; ಅದು ರಿಸ್ಕ್, ಪರಿಶ್ರಮ ಮತ್ತು ನಂಬಿಕೆಯ ಫಲ ಎಂಬ ಸಂದೇಶವೂ ಸ್ಪಷ್ಟವಾಗಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kannada-actress-sruthi-hariharan-on-sandalwood-cinema-theatrical-releases-risk-interview-gvd/articleshow-rz1p9gs"/>
        </item>
        <item>
            <title><![CDATA[ದುನಿಯಾ ವಿಜಯ್ ‘ಸಿಟಿ ಲೈಟ್ಸ್’ನಲ್ಲಿ ಅಲಖ್ ನಿರಂಜನ್: ಜನಪದ ಸೊಗಡಿಗೆ ರ‍್ಯಾಪ್ ಟಚ್]]></title>
            <link>https://kannada.asianetnews.com/sandalwood/kannada-actor-vinay-rajkumar-city-lights-unveils-unique-folk-rap-song-alakh-niranjan-gvd/articleshow-z1lhkq2</link>
            <guid isPermaLink="true">https://kannada.asianetnews.com/sandalwood/kannada-actor-vinay-rajkumar-city-lights-unveils-unique-folk-rap-song-alakh-niranjan-gvd/articleshow-z1lhkq2</guid>
            <pubDate>Mon, 07 Sep 2026 19:31:47 +0530</pubDate>
            <description><![CDATA[&lt;p&gt;ವಿನಯ್ ರಾಜ್&zwnj;ಕುಮಾರ್ ಹಾಗೂ ಮೋನಿಷಾ ವಿಜಯ್ ಕುಮಾರ್ ಅಭಿನಯದ &lsquo;ಸಿಟಿ ಲೈಟ್ಸ್&rsquo; ಸಿನಿಮಾದ ಹೊಸ ಹಾಡು &lsquo;ಅಲಖ್ ನಿರಂಜನ್&rsquo; ಬಿಡುಗಡೆಯಾಗಿದೆ. ಸಾಂಪ್ರದಾಯಿಕ ಜನಪದ ಸಂಗೀತದ ಸೊಗಡಿಗೆ ರ&zwj;್ಯಾಪ್..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y2rtc9kq470byz53t370c6,imgname-vhjv-1788789680490.png" type="image/jpeg" height="390" width="690"/>
            <content:encoded><![CDATA[&lt;p&gt;ಚಂದನವನದ ಜನಪದ ಸಂಗೀತದ ಸೊಗಡಿಗೆ ಸಮಕಾಲೀನ ರ&zwj;್ಯಾಪ್ ಬೀಟ್ ಬೆರೆತರೆ ಹೇಗಿರಬಹುದು? ದುನಿಯಾ ವಿಜಯ್ &lsquo;ಸಿಟಿ ಲೈಟ್ಸ್&rsquo; ಸಿನಿಮಾದ ಹೊಸ ಹಾಡು &lsquo;ಅಲಖ್ ನಿರಂಜನ್&rsquo; ಇದಕ್ಕೆ ವಿಭಿನ್ನ ಉತ್ತರ ನೀಡಿದೆ. ಸಾಂಪ್ರದಾಯಿಕ ಜನಪದ ಹಾಗೂ ಆಧ್ಯಾತ್ಮಿಕ ಸಂಗೀತದ ಸ್ಪರ್ಶದ ಜೊತೆಗೆ ರ&zwj;್ಯಾಪ್ ಮತ್ತು ಶಾಸ್ತ್ರೀಯ ಗಾಯನವನ್ನು ಒಂದೇ ಟ್ರ್ಯಾಕ್&zwnj;ನಲ್ಲಿ ಬೆರೆಸಿರುವುದು ಹಾಡಿನ ವಿಶೇಷತೆ.&lt;/p&gt;&lt;p&gt;&lt;strong&gt;ಜನಪದ ಗೀತೆಗೆ ಹೊಸ ರೂಪ&lt;/strong&gt;&lt;/p&gt;&lt;p&gt;&lsquo;ಅಲಖ್ ನಿರಂಜನ್&rsquo; ಹಾಡಿನಲ್ಲಿ ಮಾಳವಳ್ಳಿ ಎಂ. ಮಹದೇವಸ್ವಾಮಿ, ವೀರ ಹಾಗೂ ವಿಜಯ್ ಕುಮಾರ್ ಅವರ ಧ್ವನಿಯೊಂದಿಗೆ ರ&zwj;್ಯಾಪರ್ ಪಾಶಾ ಭಾಯ್ ಮತ್ತು ಶಾಸ್ತ್ರೀಯ ಗಾಯಕ ಕೀರ್ತನ್ ಹೊಳ್ಳ ಕೂಡ ಧ್ವನಿ ನೀಡಿದ್ದಾರೆ. ಹಾಡಿನ ಸಾಹಿತ್ಯದ ಪ್ರಮುಖ ಭಾಗವು ಸಾಂಪ್ರದಾಯಿಕ ಜನಪದ ಗೀತೆಯಿಂದ ಪ್ರೇರಣೆ ಪಡೆದಿದ್ದು, ಪಾಶಾ ಭಾಯ್ ರ&zwj;್ಯಾಪ್ ಭಾಗಗಳನ್ನು ಬರೆದಿದ್ದಾರೆ. ಹೀಗಾಗಿ ಹಳೆಯ ಜನಪದ ಸೊಗಡಿನೊಂದಿಗೆ ಇಂದಿನ ಯುವಜನರ ಸಂಗೀತ ಶೈಲಿಯನ್ನೂ ಹಾಡು ಒಟ್ಟಿಗೆ ಕಟ್ಟಿಕೊಟ್ಟಿದೆ.&lt;/p&gt;&lt;p&gt;&lt;strong&gt;ಚರಣ್ ರಾಜ್ ಸಂಗೀತದಲ್ಲಿ ವಿಭಿನ್ನ ಪ್ರಯೋಗ&lt;/strong&gt;&lt;/p&gt;&lt;p&gt;ಸಂಗೀತ ನಿರ್ದೇಶಕ ಚರಣ್ ರಾಜ್ ಎಂ.ಆರ್. ಅವರು ಈ ವಿಭಿನ್ನ ಸಂಗೀತ ಪ್ರಕಾರಗಳನ್ನು ಒಟ್ಟಿಗೆ ಬೆಸೆದಿದ್ದಾರೆ. ಹಾಡಿನಲ್ಲಿ ಒಂದು ಕಡೆ ಮಣ್ಣಿನ ಸೊಗಡನ್ನು ಹೊತ್ತ ಜನಪದ ಸಂಗೀತ ಕೇಳಿಬಂದರೆ, ಮತ್ತೊಂದೆಡೆ ರ&zwj;್ಯಾಪ್&zwnj;ನ ವೇಗ ಮತ್ತು ಆಧುನಿಕ ಎನರ್ಜಿ ಗಮನ ಸೆಳೆಯುತ್ತದೆ. &lsquo;ಸಿಟಿ ಲೈಟ್ಸ್&rsquo; ಸಿನಿಮಾದ ಕಥೆಯ ಹಿನ್ನೆಲೆಯಲ್ಲೂ ಈ ಸಂಗೀತ ಪ್ರಯೋಗ ವಿಶೇಷವಾಗಿ ಹೊಂದಿಕೊಳ್ಳುತ್ತದೆ. ಹಳ್ಳಿಯಿಂದ ಬೆಂಗಳೂರಿಗೆ ಬರುವ ಇಬ್ಬರು ಯುವಕರ ಬದುಕು, ನಗರ ಜೀವನದ ಒತ್ತಡ, ಹೋರಾಟ ಹಾಗೂ ಅನಿಶ್ಚಿತತೆಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ.&lt;/p&gt;&lt;p&gt;&lt;strong&gt;ಹಳ್ಳಿ ಬಿಟ್ಟು ಸಿಟಿಗೆ ಬರುವ ಯುವಕರ ಕಥೆ&lt;/strong&gt;&lt;/p&gt;&lt;p&gt;ವಿಜಯ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ವಿನಯ್ ರಾಜ್&zwnj;ಕುಮಾರ್ ಹಾಗೂ ಮೋನಿಷಾ ವಿಜಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಕಥೆ ಮತ್ತು ಚಿತ್ರಕಥೆಯನ್ನೂ ವಿಜಯ್ ಕುಮಾರ್ ಅವರೇ ಬರೆದಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಬೆಳೆದ ಯುವಕರ ಬದುಕು ನಗರಕ್ಕೆ ಬಂದ ಬಳಿಕ ಹೇಗೆ ಬದಲಾಗುತ್ತದೆ? ಹೊಸ ವಾತಾವರಣದ ಒತ್ತಡಗಳಿಗೆ ಅವರು ಹೇಗೆ ಹೊಂದಿಕೊಳ್ಳುತ್ತಾರೆ? ಎಂಬ ಅಂಶಗಳನ್ನು &lsquo;ಸಿಟಿ ಲೈಟ್ಸ್&rsquo; ತೆರೆಗೆ ತರುತ್ತಿದೆ.&lt;/p&gt;&lt;p&gt;&lt;strong&gt;ಕಥೆಯಂತೆಯೇ ಸಂಗೀತದಲ್ಲೂ ಎರಡು ಲೋಕಗಳ ಸಂಘರ್ಷ&lt;/strong&gt;&lt;/p&gt;&lt;p&gt;ಸಿನಿಮಾದ ಕಥೆಯಲ್ಲಿ ಹಳ್ಳಿ ಮತ್ತು ನಗರದ ಎರಡು ವಿಭಿನ್ನ ಜಗತ್ತುಗಳ ನಡುವೆ ಯುವಕರು ಸಿಲುಕಿಕೊಳ್ಳುವ ಚಿತ್ರಣವಿದ್ದರೆ, ಚಿತ್ರದ ಸಂಗೀತದಲ್ಲೂ ಅದೇ ರೀತಿಯ ವಿಭಿನ್ನತೆಯನ್ನು ಕಾಣಬಹುದು. &lsquo;ಅಲಖ್ ನಿರಂಜನ್&rsquo; ಮೂಲಕ ಹಳೆಯ ಜನಪದ ಪರಂಪರೆಯನ್ನು ಸಮಕಾಲೀನ ರ&zwj;್ಯಾಪ್ ಶೈಲಿಯೊಂದಿಗೆ ಬೆರೆಸುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ ಸಿನಿಮಾದ ಪಾತ್ರಗಳು ಎದುರಿಸುವ ಎರಡು ವಿಭಿನ್ನ ಲೋಕಗಳ ಸಂಘರ್ಷವನ್ನು ಸಂಗೀತದ ಮೂಲಕವೂ ಕಟ್ಟಿಕೊಡುವ ಪ್ರಯತ್ನ ಚಿತ್ರತಂಡ ಮಾಡಿದೆ.&lt;/p&gt;&lt;h2&gt;&lt;strong&gt;ಸೆಪ್ಟೆಂಬರ್ 18ಕ್ಕೆ &lsquo;ಸಿಟಿ ಲೈಟ್ಸ್&rsquo; ಬಿಡುಗಡೆ&lt;/strong&gt;&lt;/h2&gt;&lt;p&gt;ಶಿವಸೇನ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ದುನಿಯಾ ಟಾಕೀಸ್ ಮತ್ತು ಯಂತ್ರೋದ್ಧಾರಕ ಬ್ಯಾನರ್&zwnj;ಗಳ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಮ್ ಆರ್ಯ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು &lsquo;ಅಲಖ್ ನಿರಂಜನ್&rsquo; ಹಾಡಿನ ಮೂಲಕವೇ ವಿಭಿನ್ನ ಸಂಗೀತ ಪ್ರಯೋಗಕ್ಕೆ ಮುನ್ನುಡಿ ಬರೆದಿರುವ &lsquo;ಸಿಟಿ ಲೈಟ್ಸ್&rsquo;, ಹಳ್ಳಿ-ನಗರದ ನಡುವಿನ ಯುವ ಬದುಕಿನ ಕಥೆಯನ್ನು ಪ್ರೇಕ್ಷಕರಿಗೆ ಹೇಗೆ ಕಟ್ಟಿಕೊಡಲಿದೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-actor-vinay-rajkumar-city-lights-unveils-unique-folk-rap-song-alakh-niranjan-gvd/articleshow-z1lhkq2"/>
        </item>
    </channel>
</rss>
