<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 28 May 2026 14:34:24 +0530</lastBuildDate>
        <atom:link href="https://kannada.asianetnews.com/rss/sandalwood" rel="self" type="application/rss+xml"/>
        <item>
            <title><![CDATA[ಹೊಸ ಹೇರ್‌ಸ್ಟೈಲ್‌ನಲ್ಲಿ ಗುರುತೇ ಸಿಗದಷ್ಟು ಬದಲಾದ್ರಾ 'ಕೃಷ್ಣ ರುಕ್ಕು' ನಟಿ: ಇಲ್ಲಿವೆ ಮೌನಾ ಗುಡ್ಡೆಮನೆ ಫೋಟೋಸ್!]]></title>
            <link>https://kannada.asianetnews.com/gallery/tv-talk/kannada-actress-mouna-guddemane-new-short-hairstyle-viral-photos-gvd-4v8z2am</link>
            <guid isPermaLink="true">https://kannada.asianetnews.com/gallery/tv-talk/kannada-actress-mouna-guddemane-new-short-hairstyle-viral-photos-gvd-4v8z2am</guid>
            <pubDate>Tue, 26 May 2026 19:27:22 +0530</pubDate>
            <description><![CDATA[&lt;p&gt;ಹೊಸ ಹೇರ್&zwnj;ಸ್ಟೈಲ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿರುವ ಕಿರುತೆರೆಯ ಜನಪ್ರಿಯ ನಟಿ ಮೌನಾ ಗುಡ್ಡೆಮನೆ ಅವರ ಈ ಲುಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksj917fvn2yb0yfqwfr2m6nt,imgname-jj-1779803659771.png" type="image/jpeg" height="390" width="690"/>
            <content:encoded><![CDATA[&lt;p&gt;ಹೊಸ ಹೇರ್&zwnj;ಸ್ಟೈಲ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿರುವ ಕಿರುತೆರೆಯ ಜನಪ್ರಿಯ ನಟಿ ಮೌನಾ ಗುಡ್ಡೆಮನೆ ಅವರ ಈ ಲುಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮೌನಾ ಗುಡ್ಡೆಮನೆ ತಮ್ಮ ಹೊಸ ಅವತಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರ ಹೊಸ ಫೋಟೋಗಳು ಭಾರೀ ವೈರಲ್ ಆಗಿದ್ದು, ಅದರಲ್ಲಿರುವ ಹೊಚ್ಚಹೊಸ ಶಾರ್ಟ್ ಹೇರ್&zwnj;ಸ್ಟೈಲ್ ಎಲ್ಲರ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಸದಾ ಸಾಂಪ್ರದಾಯಿಕ ಲುಕ್&zwnj;ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೌನಾ, ಈ ಬಾರಿ ಸಂಪೂರ್ಣ ಮಾಡರ್ನ್ ಸ್ಟೈಲ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಕೇಶವಿನ್ಯಾಸವು ಅವರ ವ್ಯಕ್ತಿತ್ವಕ್ಕೆ ವಿಭಿನ್ನ ಮೆರಗು ನೀಡಿದ್ದು, ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ವೈರಲ್ ಫೋಟೋಗಳಲ್ಲಿ ಮೌನಾ ತಿಳಿ ಹಳದಿ ಮತ್ತು ಬಿಳಿ ಬಣ್ಣದ ಫ್ಲೋರಲ್ ಗೌನ್ ಧರಿಸಿದ್ದು, ಅದರೊಂದಿಗೆ ಶಾರ್ಟ್ ಹೇರ್&zwnj;ಸ್ಟೈಲ್ ಅದ್ಭುತವಾಗಿ ಹೊಂದಿಕೊಂಡಿದೆ. ಈ ಹೊಸ ಲುಕ್&zwnj;ನಲ್ಲಿ ಅವರು ಅತ್ಯಂತ ಸ್ಟೈಲಿಶ್ ಹಾಗೂ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ನೆಟ್ಟಿಗರ ಅಭಿಪ್ರಾಯ.&lt;/p&gt;&lt;img&gt;&lt;p&gt;ಬೆಂಗಳೂರಿನ ಖ್ಯಾತ ಹೇರ್ ಸಲೂನ್&zwnj;ನಲ್ಲಿ ಈ ಹೊಸ ಹೇರ್&zwnj;ಕಟ್ ಮಾಡಿಸಿಕೊಂಡಿರುವ ಮೌನಾ, ಕ್ಯಾಮೆರಾ ಮುಂದೆ ನಗುಮುಖದಿಂದ ವಿವಿಧ ಪೋಸ್&zwnj;ಗಳನ್ನು ನೀಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಮತ್ತು ಕಮೆಂಟ್&zwnj;ಗಳ ಮಹಾಪೂರವೇ ಹರಿದುಬರುತ್ತಿದೆ.&lt;/p&gt;&lt;img&gt;&lt;p&gt;'ಶಾರ್ಟ್ ಹೇರ್ ನಿಮಗೆ ತುಂಬಾ ಸೂಟ್ ಆಗಿದೆ', 'ಇದು ನಿಮ್ಮ ಬೆಸ್ಟ್ ಲುಕ್', 'ಇನ್ನಷ್ಟು ಸುಂದರವಾಗಿ ಕಾಣಿಸುತ್ತಿದ್ದೀರಿ' ಎಂಬ ಕಾಮೆಂಟ್&zwnj;ಗಳ ಮೂಲಕ ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಿರುತೆರೆಯಲ್ಲಿ ರಾಮಾಚಾರಿ ಧಾರಾವಾಹಿಯ ಮೂಲಕ ಗಮನ ಸೆಳೆದಿದ್ದ ಮೌನಾ, ಪ್ರಸ್ತುತ ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ, ಲವ್ ಪಂಚ್ ವೆಬ್ ಸರಣಿಯಲ್ಲಿ ವಿಭಿನ್ನ ಹಾಗೂ ಬೋಲ್ಡ್ ಪಾತ್ರದ ಮೂಲಕವೂ ಅವರು ಗಮನ ಸೆಳೆದಿದ್ದರು.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/tv-talk/kannada-actress-mouna-guddemane-new-short-hairstyle-viral-photos-gvd-4v8z2am"/>
        </item>
        <item>
            <title><![CDATA[ಕಿಚ್ಚ ಸುದೀಪ್ ಅವರನ್ನು ಬೆಳೆಸಿದಂತೆ ನನ್ನನ್ನೂ ಬೆಳೆಸಿ: ಸಂಚಿತ್ ಸಂಜೀವ್ ಮನವಿ ಮಾಡಿದ್ದೇನು?]]></title>
            <link>https://kannada.asianetnews.com/sandalwood/raise-me-like-you-raised-kichcha-sudeep-says-sanchith-sanjeev-gvd/articleshow-5bmz4p3</link>
            <guid isPermaLink="true">https://kannada.asianetnews.com/sandalwood/raise-me-like-you-raised-kichcha-sudeep-says-sanchith-sanjeev-gvd/articleshow-5bmz4p3</guid>
            <pubDate>Mon, 25 May 2026 18:50:33 +0530</pubDate>
            <description><![CDATA[&lt;p&gt;ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅಭಿನಯದ ಕನ್ನಡ ಚಲನಚಿತ್ರ &quot;ಮ್ಯಾಂಗೋ ಪಚ್ಚ&quot; ಇದೇ ಜೂನ್ 5ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆ ಚಿತ್ರದ ನಾಯಕ ಸಂಚಿತ್ ಸಂಜೀವ್..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfmpbk7fyxwezk6xs8ay08j,imgname-bk-1779715223142.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮೇ.25):&lt;/strong&gt; ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅಭಿನಯದ ಕನ್ನಡ ಚಲನಚಿತ್ರ &quot;ಮ್ಯಾಂಗೋ ಪಚ್ಚ&quot; ಇದೇ ಜೂನ್ 5ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆ ಚಿತ್ರದ ನಾಯಕ ಸಂಚಿತ್ ಸಂಜೀವ್ ಹಾಗೂ ತಂಡವು ನಿಟ್ಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿತು. ಹೊಂಡದ ಸರ್ಕಲ್&zwnj;ನ ರಾಜವೀರ ಮದಕರಿ ನಾಯಕ ವೃತ್ತಕ್ಕೆ ತೆರಳಿ ಮದಕರಿ ನಾಯಕ ಪುತ್ಥಳಿ ಸೇರಿದಂತೆ ವಿವಿಧ ವೃತ್ತಗಳಲ್ಲಿನ ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.&lt;/p&gt;&lt;p&gt;ಅನಂತರ ತ್ರಿಶೂಲ್ ಚಿತ್ರಮಂದಿರದಲ್ಲಿ ನಟ ಸಂಚಿತ್ ಸಂಜೀವ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ದಾವಣಗೆರೆಗೆ ಬಂದಿರುವುದು ನನಗೆ ಬಹಳ ಖುಷಿಯಾಗಿದೆ. ಎಲ್ಲೆಡೆ ಸಿನಿಮಾ ಪ್ರಚಾರ ಮಾಡಿ ಬಂದಿದ್ದೇನೆ. ಆದರೆ, ದಾವಣಗೆರೆ ಜನತೆ ನನಗೆ ಬಹಳ ತುಂಬಾನೆ ಪ್ರೀತಿ, ವಿಶ್ವಾಸ, ಅಭಿಮಾನ, ಪ್ರೋತ್ಸಾಹ ನೀಡುತ್ತಿದ್ದೀರಿ. ನಾನು ಈಗ ತಾನೇ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೇನೆ. ಈಗಾಗಲೇ ನನ್ನ ಭಾವ ಕಿಚ್ಚ ಸುದೀಪ್ ಅವರನ್ನು ಬೆಳೆಸಿ ಅಂತರ ರಾಷ್ಟ್ರಿಯಮಟ್ಟಕ್ಕೆ ಕಳುಹಿಸಿದ್ದೀರಿ. ಅದರಂತೆಯೇ ನನಗೂ ಆರ್ಶೀರ್ವದಿಸಿ ಬೆಳೆಸಿ, ಹಾಗೆಯೇ ನಮ್ಮ ಚಿತ್ರತಂಡಕ್ಕೂ ಸಹಾ ಪ್ರೋತ್ಸಾಹ ನೀಡಿರಿ ಎಂದು ಮನವಿ ಮಾಡಿದರು.&lt;/p&gt;&lt;p&gt;ಚಿತ್ರದ ಮತ್ತೊಬ್ಬ ನಟ, ಜೈ ಮಾತನಾಡಿ, ನಿಮ್ಮ ಪ್ರೋತ್ಸಾಹ ನೋಡಿ ನನಗೆ ಬಹಳ ತುಂಬಾ ಖುಷಿ ಆಗುತ್ತಿದೆ. ನನ್ನ ಪ್ರಕಾರ ಜೂ.5 ರಿಂದ ನಮ್ಮ ಚಿತ್ರಕ್ಕೆ ಇದೇ ರೀತಿ ಪ್ರೋತ್ಸಾಹ ಸಿಗುತ್ತೆ ಅನಿಸುತ್ತಿದೆ. ಅಂದಿನಿಂದ ನಮ್ಮ ಸಿನಿಮಾದ ಹಬ್ಬ ಶುರು. ಎಲ್ಲರೂ ಸಿನಿಮಾ ನೋಡಿ ಹಬ್ಬದಂತೆ ಸಂಭ್ರಮಿಸೋಣ ಎಂದರು.&lt;/p&gt;&lt;h2&gt;&lt;strong&gt;ಮಾಸ್ ಹೀರೋ ಆಗಿ ಬೆಳಗುತ್ತಾರೆ&lt;/strong&gt;&lt;/h2&gt;&lt;p&gt;ನಟ, ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು ಮಾತನಾಡಿ, ಜೂನ್ 5ರಂದು ಬಿಡುಗಡೆಯಾಗುವ ನಮ್ಮ ಸಿನಿಮಾ &quot;ಮ್ಯಾಂಗೋ ಪಚ್ಚ&quot; ಹಿಟ್ ಆಗುವುದು ಪಕ್ಕಾ ಗ್ಯಾರಂಟಿ. ಉತ್ತರ ಕರ್ನಾಟಕದಿಂದ ಹಿಡಿದು ಇಲ್ಲಿಯವರೆಗೂ ಅಭಿಮಾನಿಗಳು ತುಂಬಾನೇ ಪ್ರೋತ್ಸಾಹ ನೀಡಿದ್ದಾರೆ. ಚಿತ್ರದ ನಾಯಕ ಸಂಚಿತ್ ಅವರು ಚಿಕ್ಕವರಿದ್ದಾಗಿನಿಂದಲೂ ಕೂಡ ಸುದೀಪ್ ಅವರ ಅಭಿನಯ ನೋಡಿಕೊಂಡು ಬೆಳೆದಿದ್ದಾರೆ. ಅವರಂತೆಯೇ ಇವರೂ ಮಾಸ್ ಹೀರೋ ಆಗಿ ಬೆಳಗುತ್ತಾರೆ ಎಂದರು.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/raise-me-like-you-raised-kichcha-sudeep-says-sanchith-sanjeev-gvd/articleshow-5bmz4p3"/>
        </item>
        <item>
            <title><![CDATA[MLA, MPಯಾಗಲು Bigg Boss ಜಾಹ್ನವಿ ಸಿದ್ಧತೆ ಹೇಗೆ ನಡೀತಿದೆ? ನಟಿ ಓಪನ್​ ಮಾತು]]></title>
            <link>https://kannada.asianetnews.com/gallery/entertainment/bigg-boss-jhanvi-wants-to-become-mla-or-mp-what-she-says-suc-670uu2o</link>
            <guid isPermaLink="true">https://kannada.asianetnews.com/gallery/entertainment/bigg-boss-jhanvi-wants-to-become-mla-or-mp-what-she-says-suc-670uu2o</guid>
            <pubDate>Wed, 27 May 2026 12:15:27 +0530</pubDate>
            <description><![CDATA[ಬಿಗ್​ಬಾಸ್​ ಖ್ಯಾತಿಯ ನಟಿ ಜಾಹ್ನವಿ, ಎಚ್​.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್​ ಪಕ್ಷ ಸೇರಿದ್ದಾರೆ. ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksm1sfrttr8tc8p754n6swek,imgname-bigg-boss-jhanvi-1779863174938.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​ ಖ್ಯಾತಿಯ ನಟಿ ಜಾಹ್ನವಿ, ಎಚ್​.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್​ ಪಕ್ಷ ಸೇರಿದ್ದಾರೆ. ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.&lt;img&gt;&lt;p&gt;ಖ್ಯಾತ ಆ್ಯಂಕರ್ ಆಗಿಯೂ ನಟಿಯಾಗಿಯೂ ಗುರುತಿಸಿಕೊಂಡಿರೋ ಜಾಹ್ನವಿ (Bigg Boss Jhanvi) ಅವರು ಬಿಗ್​ಬಾಸ್​ 12ಕ್ಕೆ ಹೋಗಿ ಬಂದ ಮೇಲೆ ಬಿಗ್​ಬಾಸ್​ ಜಾಹ್ನವಿಯಾಗಿದ್ದಾರೆ. ಬಿಗ್​ಬಾಸ್​ನಿಂದ ಬಂದ ಮೇಲೆ ಸಹಜವಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಜೊತೆಗೆನೇ ಒಳ್ಳೆಯ ಆಫರ್ಸ್​ಗಳೂ ಬರುತ್ತಿವೆ.&lt;/p&gt;&lt;img&gt;&lt;p&gt;ನಟಿ, ನಿರೂಪಕಿಯಾಗಿ ಇಲ್ಲಿಯವರೆಗೆ ಗುರುತಿಸಿಕೊಂಡಿದ್ದ ಜಾಹ್ನವಿ ಇದೀಗ ರಾಜಕಾರಣಿಯಾಗಿದ್ದಾರೆ. ಈಚೆಗಷ್ಟೇ ಅವರು ಜೆಡಿಎಸ್​ ಪಕ್ಷವನ್ನು ಸೇರಿದ್ದಾರೆ. ಎಚ್​ಜಿಎಸ್​ ನಾಯಕ, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಟಿ ಪಕ್ಷವನ್ನು ಸೇರಿದರು.&lt;/p&gt;&lt;img&gt;&lt;p&gt;ಇದೀಗ ಅವರಿಗೆ ದೊಡ್ಡ ಹುದ್ದೆ ಏರುವ ಆಸೆನಾ ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ಜಾಹ್ನವಿ ಅವರು, ಸದ್ಯ ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಚುನಾವಣೆ ನಡೆಯುತ್ತಿದೆ. ಆಗಸ್ಟ್​ 31ರ ಒಳಗೆ ಮಾಡುವಂತೆ ಸುಪ್ರೀಂಕೋರ್ಟ್​ ಕೂಡ ಹೇಳಿದೆ. ನಾನು ಪವರ್​ ಆಕಾಂಕ್ಷಿ ಅಲ್ಲ ಅಂತ ಖಂಡಿತ ಹೇಳುವುದಿಲ್ಲ ಎನ್ನುತ್ತಲೇ ಇದರಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಜಾಹ್ನವಿ.&lt;/p&gt;&lt;img&gt;&lt;p&gt;ಪವರ್​ ಇದ್ದರೆ ಜನರ ಸೇವೆ ಮಾಡಬಹುದು. ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಆಗಲೀ, ಎಂಎಲ್​ಎ, ಎಂಪಿ ಯಾವುದಕ್ಕೇ ಆದರೂ ಪಕ್ಷ ನೀವು ನಿಂತುಕೊಳ್ಳಿ ಎಂದರೆ ಹೇಳಿದರೆ ನಾನು ಅದಕ್ಕೆ ಸಿದ್ಧ ಇದ್ದೇನೆ. ಇದಾಗಲೇ ನನ್ನ ಇಂಗಿತವನ್ನು ವ್ಯಕ್ತಪಡಿಸಿದ್ದೇನೆ. ಪಕ್ಷದ ಧುರೀಣರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾನು ಬದ್ಧವಾಗಿದ್ದೇನೆ ಎಂದು ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಜಾಹ್ನವಿ ಡ್ರೆಸ್​​ ಸೆನ್ಸ್​ಗೆ ಸಕತ್​ ಫೇಮಸ್​ ಆಗಿದ್ದಾರೆ. ಮನೆಯಲ್ಲಿದ್ದ ಅವಧಿಯಲ್ಲಿ ತಮ್ಮ ಡ್ರೆಸ್ ಹಾಗೂ ಮೇಕಪ್&zwnj;ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಬಿಗ್ ಬಾಸ್ ಸಂಭಾವನೆಗಿಂತ ಬಟ್ಟೆಗೆ ಮಾಡಿರೋ ಖರ್ಚು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಜಾಹ್ನವಿ ಅವರು ಬಿಗ್​ಬಾಸ್​ನಲ್ಲಿ ಇದ್ದ ಸಂದರ್ಭದಲ್ಲಿ ಜಗಳದಿಂದಲೇ ಫೇಮಸ್​ ಆಗಿದ್ದರು. ಒಂದು ಸ್ಪರ್ಧೆ ಎಂದು ಬಂದಾಗ ಎಲ್ಲವೂ ಅನಿವಾರ್ಯ ಆಗುವ ಕಾರಣದಿಂದ ಅವರು, ಸಹಜವಾಗಿ ಜಗಳ ಮಾಡಿದ್ದರು. ಅವರು ಮನೆಯೊಳಕ್ಕೆ ಇದ್ದಾಗ, ಹೊರಗಡೆಯಲ್ಲಿ ಅವರ ಮಾಜಿ ಪತಿ ನೀಡ್ತಿದ್ದ ಹೇಳಿಕೆಯಿಂದಾಗಿ ಇವರಿಬ್ಬರ ಡಿವೋರ್ಸ್​ ವಿಷ್ಯ ವಿವಿಧ ರೂಪಗಳನ್ನು ಪಡೆದಿತ್ತು. ಇದೀಗ ಜಾಹ್ನವಿ ಅವರು ತಮಗೆ 2ನೇ ಮದುವೆಯ ಯೋಚನೆಯೇ ಇಲ್ಲ, ಮಗನೇ ಎಲ್ಲಾ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/bigg-boss-jhanvi-wants-to-become-mla-or-mp-what-she-says-suc-670uu2o"/>
        </item>
        <item>
            <title><![CDATA[Yash: ಯಶ್ ನಿಜವಾದ ಹೆಸರು ನವೀನ್ ಅಲ್ಲ, ಇನ್ನೊಂದು.. ಇಲ್ಲಿದೆ ಹೊಸ ಟ್ವಿಸ್ಟ್!]]></title>
            <link>https://kannada.asianetnews.com/sandalwood/yash-mother-pushpa-arunkumar-recently-shared-a-secret-that-rocking-star-real-name-is-yashwanth-and-not-naveen/articleshow-9083a4f</link>
            <guid isPermaLink="true">https://kannada.asianetnews.com/sandalwood/yash-mother-pushpa-arunkumar-recently-shared-a-secret-that-rocking-star-real-name-is-yashwanth-and-not-naveen/articleshow-9083a4f</guid>
            <pubDate>Thu, 28 May 2026 13:55:40 +0530</pubDate>
            <description><![CDATA[&lt;p&gt;ನಾಟಕ, ಧಾರಾವಾಹಿಗಳಲ್ಲಿ ನಟಿಸುವಾಗ ಯಶ್ ಅವರ ಹೆಸರು ಇದ್ದಿದ್ದು ನವೀನ್ ಅಂತಲೇ ಅಗಿತ್ತು. ಆದರೆ, ಯಾವಾಗ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸಿದರೋ ಆಗ ಅವರ ಹೆಸರನ್ನು 'ಯಶ್' ಎಂದು ಬದಲಾಯಿಸಲಾಯಿತು. ಈ ಸಂಗತಿ ಹೆಚ್ಚಿನ ಎಲ್ಲರಿಗೂ ಗೊತ್ತಿದೆ. ಆದರೆ, ಈಗ ನೋಡಿದರೆ ಯಶ್ ಅಮ್ಮ ಹೊಸ ರಹಸ್ಯ ಹೇಳಿದ್ದಾರೆ!..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk1bxvwmm8ccd76aegfsg1a3,imgname-rocking-star-yash--1--1772793819028.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಶ್ ಮೂಲ ಹೆಸರಿನ ಸೀಕ್ರೆಟ್!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ನಟ, ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ (Yash) ಅವರೀಗ ಇಡೀ ಜಗತ್ತಿಗೆ 'ಯಶ್' ಎಂದೇ ಪರಿಚಿತರು. ಆದರೆ ಅವರ ಮೂಲ ಹೆಸರು, ಸ್ಕೂಲ್-ಕಾಲೇಜಿನ ಹೆಸರು (ಮೂಲ ಹೆಸರು) ನವೀನ್ ಕುಮಾರ್ ಗೌಡ (Naveen Kumar Gowda) ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಅದನ್ನೇ ಯಶ್ ಸಿನಿಮಾರಂಗಕ್ಕೆ ಬಂದಮೇಲೆ ಅವರನ್ನು ಲವ್ ಮಾಡಿ ಮದುವೆಯಾಗಿರುವ ರಾಧಿಕಾ ಪಂಡಿತ್ (Radhika Pandit) ಕೂಡ ಹೇಳಿದ್ದರು. (ಯಶ್ ಅವರು ಈಗ ಕಾನೂನಾತ್ಮಕವಾಗಿಯೂ ತಮ್ಮ ಹೆಸರನ್ನು 'ಯಶ್' ಎಂದೇ ಬದಲಾಯಿಸಿಕೊಂಡಿದ್ದಾರೆ ಎಂದು ರಾಧಿಕಾ ಒಮ್ಮೆ ಸ್ಪಷ್ಟಪಡಿಸಿದ್ದಾರೆ.)&lt;/p&gt;&lt;p&gt;&lt;img&gt;&lt;/p&gt;&lt;p&gt;ಆದರೆ ಸ್ವತಃ ಯಶ್ ಅವರನ್ನು ಹೆತ್ತಿರುವ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಯಶ್ ಅವರ ಮೊಟ್ಟಮೊದಲ ಹೆಸರು ನವೀನ್ ಕುಮಾರ್ ಅಲ್ಲ, ಜನವರಿಯಲ್ಲಿ ಅವರು ಹುಟ್ಟಿರುವುದರಿಂದ (ಹೊಸ ವರ್ಷ, ನವೀನ ವರ್ಷ) ಅವರನ್ನು &lsquo;ನವೀನ&rsquo; ಅಂತ ಕರೆಯುತ್ತಿದ್ದೆವು. ಅದೇ ಸ್ಕೂಲು-ಕಾಲೇಜ್ ಸೇರಿದಂತೆ ಎಲ್ಲಾ ದಾಖಲೆಯಲ್ಲಿ ಬಂದಿತ್ತು. ಆದರೆ, ಅವರಿಗೆ ಹುಟ್ಟಿದಾಗ ನಮ್ಮ ತಾಯಿಯ ಮನೆಯಲ್ಲಿ, ಕುಟುಂಬದವರು ಪ್ರೀತಿಯಿಂದ ನಾವೆಲ್ಲಾ ಇಟ್ಟ ಹೆಸರು ಯಶವಂತ್ ಎಂಬ ಸೀಕ್ರೆಟ್&zwnj; ಬಿಚ್ಚಿಟ್ಟಿದ್ದಾರೆ.&lt;/p&gt;&lt;h2&gt;ಯಶ್ ಅವರ ನಿಜ ಹೆಸರು ನವೀನ್ ಕುಮಾರ್ ಅಲ್ಲ!&lt;/h2&gt;&lt;p&gt;ಇತ್ತೀಚೆಗೆ ('ಲೋ ನವೀನ' ಸಿನಿಮಾ ವೇಳೆ) ಯಶ್ ಅವರ ತಾಯಿ ಪುಷ್ಪಾ ಅವರು ಯಶ್ ಅವರ ನಿಜ ಹೆಸರು ನವೀನ್ ಕುಮಾರ್ ಅಲ್ಲ, ಅವರನ್ನು ನಾವು ಪ್ರೀತಿಯಿಂದ ಯಶವಂತ್ ಅಂತ ಕರೆಯುತ್ತಿದ್ದೆವು. ಆದರೆ, ಜನವರಿಯಲ್ಲಿ ಹುಟ್ಟಿದ್ದಾನೆ ಎಂಬ ಕಾರಣಕ್ಕೆ ಆಮೇಲೆ ನವೀನ್ ಅಂತ ಇಟ್ಟಿದ್ದೇವೆ. ಆದರೆ, ಸಿನಿಮಾಕ್ಕೆ ಬಂದ ಮೇಲೆ ಮತ್ತೆ ಆತನ ಮೊದಲ ಹೆಸರು ಯಶವಂತ್ ಎಂಬುದೇ ಯಶ್ ಆಗಿ ಮತ್ತೆ ಬಂತು' ಎಂದು ಹೇಳಿದ್ದಾರೆ. ಈ ಮೂಲಕ, ಇಷ್ಟು ದಿನವೂ ಇಡೀ ಜಗತ್ತಿಗೆ ಗೊತ್ತಿಲ್ಲದ ಯಶ್ ನಿಜವಾದ ಹೆಸರು, ಅಂದರೆ ಹುಟ್ಟಿದಾಗ ಇಟ್ಟ ಹೆಸರು 'ಯಶವಂತ್' ಅಥವಾ 'ಯಶ್&zwnj;ವಂತ್' ಎಂಬುದು ಗೊತ್ತಿರಲಿಲ್ಲ. ಅದೀಗ ಯಶ್ ಅಮ್ಮ ಪುಷ್ಪಾ ಅವರ ಮೂಲಕ ಜಗಜ್ಜಾಹೀರಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಹೌದು, ಯಶ್ ನಾಟಕ, ಧಾರಾವಾಹಿಗಳಲ್ಲಿ ನಟಿಸುವಾಗ ಅವರ ಹೆಸರು ಇದ್ದಿದ್ದು ನವೀನ್ ಅಂತಲೇ ಅಗಿತ್ತು. ಆದರೆ, ಯಾವಾಗ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸಿದರೋ ಆಗ ಅವರ ಹೆಸರನ್ನು 'ಯಶ್' ಎಂದು ಬದಲಾಯಿಸಲಾಯಿತು. ಈ ಸಂಗತಿ ಹೆಚ್ಚಿನ ಎಲ್ಲರಿಗೂ ಗೊತ್ತಿದೆ. ಆದರೆ, ಈಗ ಇರುವ ಹೆಸರು ಯಶ್ ಈ ಸೂಪರ್ ಸ್ಟಾರ್ ನಟನ ಮೊಟ್ಟಮೊದಲ ಹೆಸರಿನ ಶಾರ್ಟ್ ರೂಪ ಎಂಬುದು ಸತ್ಯ ಸಂಗತಿ. ಅದೆಷ್ಟೋ ಜನರಿಗೆ ಗೊತ್ತಿಲ್ಲದ ಈ ಸತ್ಯ ಇಂದು ವೈರಲ್ ಆಗುತ್ತಿದೆ.&lt;/p&gt;&lt;h3&gt;'ಟಾಕ್ಸಿಕ್' ಹಾಗೂ 'ರಾಮಾಯಣ' ಬಿಡುಗಡೆ!&lt;/h3&gt;&lt;p&gt;ಅಂದಹಾಗೆ, ನಟ ಯಶ್ ಅವರ ಮುಂಬರುವ ಸಿನಿಮಾಗಳಾದ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಇದೇ ವರ್ಷ ಬಿಡುಗಡೆ ಆಗಲಿವೆ ಎನ್ನಲಾಗುತ್ತಿದೆ. ರಾಮಾಯಣ ಚಿತ್ರವು 'ಟಾಕ್ಸಿಕ್&zwnj;'ಗಿಂತಲೂ ಮೊದಲೇ ಚಿತ್ರಮಂದಿರಗಳಿಗೆ ಬರಲಿದೆ ಎಂಬ ಸಂಗತಿ ಈಗಾಗಲೇ ಸುದ್ದಿಯಾಗಿದೆ. ಯಶ್ ನಟನೆ ಮಾತ್ರವಲ್ಲ, ನಿರ್ಮಾಣದಲ್ಲೂ ಪಾಲುದಾರರಾಗಿರುವ 'ರಾಮಾಯಣ' ಚಿತ್ರವು ದೀಪಾವಳಿ ಸಮಯಕ್ಕೆ ತೆರೆಗೆ ಬರಲಿದ್ದು, ಟಾಕ್ಸಿಕ್ ಚಿತ್ರವು ಡಿಸೆಂಬರ್&zwnj;ನಲ್ಲಿ ತೆರೆಯ ಮೇಲೆ ದರ್ಶನ ನೀಡಲಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕವನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಟಾಕ್ಸಿಕ್ ಚಿತ್ರವು ಹಾಲಿವುಡ್ ರೇಂಜ್&zwnj; ಮೇಕಿಂಗ್ ಮೂಲಕ, ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕೆಜಿಎಫ್ (KGF) ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದ ನಟ ಯಶ್ ಅವರು 'ಟಾಕ್ಸಿಕ್' ಮೂಲಕ 'ಪ್ಯಾನ್ ವರ್ಲ್ಡ್' ಸ್ಟಾರ್ ಆಗಿ ಕನ್ನಡನಾಡನ್ನು ಬೆಳಗಿಸಲಿದ್ದಾರೆ. ಈ ಮೂಲಕ ಕನ್ನಡಿಗರ ಹೆಸರು ವಿಶ್ವಮಟ್ಟದಲ್ಲಿ ರಾರಾಜಿಸಲಿದ್ದು, ಇದು ಟಾಕ್ಸಿಕ್ ಚಿತ್ರದ ಮೂಲಕ ಕನ್ನಡನಾಡಿಗೆ ಸಿಗಲಿರುವ ಮತ್ತೊಮದು 'ಬೋನಸ್' ಎನ್ನಬಹುದು.&lt;/p&gt;&lt;p&gt;&lt;img&gt;&lt;/p&gt;&lt;p&gt;ಒಟ್ಟಿನಲ್ಲಿ, ಯಶ್ ಆಗಿರುವ ಯಶ್&zwnj;ವಂತ್ ಅವರ ಮುಂಬರುವ ಸಿನಿಮಾಗಳಿಗಾಗಿ ಇಡೀ ಜಗತ್ತು ಕಾಯುತ್ತಿದೆ. ಆ ರೇಂಜ್&zwnj;ಗೆ ನಟ ಯಶ್ ಇಂದು ಬೆಳೆದುನಿಂತಿದ್ದಾರೆ. ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕಗಳಿಗಾಗಿ ಇಡೀ ಜಗತ್ತು ಈಗ ಕಾಯುತ್ತಿದೆ. ಎಂದು ಬರಲಿವೆ ಯಶ್ ಸಿನಿಮಾಗಳು? ಸ್ವಲ್ಪ ಕಾಯಬೇಕಷ್ಟೇ, ತೆರೆಯ ಮೇಲಿನ ಅಬ್ಬರಕ್ಕೆ ಇನ್ನೇನು ತುಂಬಾ ಕಾಲ ಕಾಯಬೇಕಿಲ್ಲ ಬಿಡಿ!&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Cinistore (@cinistorekannada)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/yash-mother-pushpa-arunkumar-recently-shared-a-secret-that-rocking-star-real-name-is-yashwanth-and-not-naveen/articleshow-9083a4f"/>
        </item>
        <item>
            <title><![CDATA[ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ Rukmini Vasanth… ಕರ್ನಾಟಕ ಚಿನ್ನದ ಗಣಿ ಎಂದ ಫ್ಯಾನ್ಸ್]]></title>
            <link>https://kannada.asianetnews.com/gallery/sandalwood/rukmini-vasanth-stuns-in-transparent-saree-in-chittara-star-awards-9gyp64l</link>
            <guid isPermaLink="true">https://kannada.asianetnews.com/gallery/sandalwood/rukmini-vasanth-stuns-in-transparent-saree-in-chittara-star-awards-9gyp64l</guid>
            <pubDate>Tue, 26 May 2026 15:34:26 +0530</pubDate>
            <description><![CDATA[&lt;p&gt;Rukmini Vasanth: ಸಪ್ತಸಾಗರದಾಚೆ ಎಲ್ಲೋ ಮತ್ತು ಕಾಂತಾರಾ ಸಿನಿಮಾ ಬಳಿಕ ಕರ್ನಾಟಕದಲ್ಲಿ ಮಾತ್ರವಲ್ಲದೇ, ದೇಶದೆಲ್ಲೆಡೆ ಭಾರಿ ಪ್ರಮಾಣದಲಿ ಫ್ಯಾನ್ಸ್ ಗಳನ್ನು ಹೊಂದಿರುವ ನಟಿ ರುಕ್ಮಿಣಿ ವಸಂತ್ ಅವರ ಹೊಸ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshvstm25206gq024bpp69f1,imgname-rukmini-vasanth-1779789785730.jpg" type="image/jpeg" height="390" width="690"/>
            <content:encoded><![CDATA[&lt;p&gt;Rukmini Vasanth: ಸಪ್ತಸಾಗರದಾಚೆ ಎಲ್ಲೋ ಮತ್ತು ಕಾಂತಾರಾ ಸಿನಿಮಾ ಬಳಿಕ ಕರ್ನಾಟಕದಲ್ಲಿ ಮಾತ್ರವಲ್ಲದೇ, ದೇಶದೆಲ್ಲೆಡೆ ಭಾರಿ ಪ್ರಮಾಣದಲಿ ಫ್ಯಾನ್ಸ್ ಗಳನ್ನು ಹೊಂದಿರುವ ನಟಿ ರುಕ್ಮಿಣಿ ವಸಂತ್ ಅವರ ಹೊಸ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕನ್ನಡ ಸಿನಿ ರಸಿಕರ ಹೊಸ ಕ್ರಶ್ ಖಂಡಿತಾ ರುಕ್ಮಿಣಿ ವಸಂತ್. ತಮ್ಮ ಅಭಿನಯದ ಜೊತೆಗೆ ಅದ್ಭುತ ಸೌಂದರ್ಯದ ಮೂಲಕ ಜನಮನ ಗೆದ್ದಿರುವ ರುಕ್ಮಿಣಿ, ಕನ್ನಡಿಗರ ಪ್ರೀತಿಯ ರುಕ್ಕು ಇದೀಗ ಹೊಸ ಫೋಟೊಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಅವರ ಬ್ಯಾಕ್ ಲೆಸ್ ಬ್ಲೌಸ್ ಟ್ರಾನ್ಸಪರೆಂಟ್ ಸೀರೆ ಲುಕ್ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ನಟಿ ರುಕ್ಮಿಣಿ ವಸಂತ್ ಚಿತ್ತಾರ ಪ್ರಶಸ್ತಿ ಸಮಾರಂಭದಲ್ಲಿ ಅಪ್ಸರೆಯಂತೆ ಮಿಂಚಿದ್ದಾರೆ. ಪೀಚ್ ಬಣ್ಣದ ಟ್ರಾನ್ಸ್ಪರೆಂಟ್, ಹೆವಿ ವರ್ಕ್ ಸೀರೆ ಜೊತೆಗೆ, ನಟಿ ಶೋಲ್ಡರ್ ಲೆಸ್ ಬ್ಲೌಸ್ ಧರಿಸಿದ್ದು, ಅವರ 100 ವೋಲ್ಟೇಜ್ ಸ್ಮೈಲ್, ಆ ಸೌಂದರ್ಯವನ್ನು ಮತ್ತಷ್ಟು ಡಬಲ್ ಮಾಡಿದೆ. ಅಭಿಮಾನಿಗಳು ಫಿದಾ ಆಗುವಂತೆ ಮಾಡಿದ್ದಾರೆ ರುಕ್ಮಿಣಿ.&lt;/p&gt;&lt;img&gt;&lt;p&gt;ರುಕ್ಮಿಣಿ ಹಂಚಿಕೊಂಡಿರುವ ಹೊಸ ಫೋಟೋಗೆ ಮಲಯಾಳಂ ನಟಿ ನಜ್ರಿಯಾ ನಾಜಿಮ್ ಕಾಮೆಂಟ್ ಮಾಡಿ ಡೈಮಂಡ್, ಹಾರ್ಟ್ ಇಮೋಜಿ ಹಾಕಿದ್ದು, ಅದಕ್ಕೆ ಉತ್ತರವಾಗಿ ರುಕ್ಮಿಣಿ ಥ್ಯಾಂಕ್ಯೂ ಎಂದಿದ್ದಾರೆ. ಇನ್ನೂ ಫ್ಯಾನ್ಸ್ ಅಂತೂ ಕರ್ನಾಟಕದ ಚಿನ್ನದ ಗಣಿ, ಒಂದು ದೃಷ್ಟಿ ಬೊಟ್ಟು ಇಟ್ಕೊಳಿ, ದೇವತೆ, ಪ್ರಿನ್ಸಸ್, ಅಪ್ಸರೆ, ಎಂದು ಕಾಮೆಂಟ್ ಹಾಗೂ ಪ್ರೀತಿಯ ಮಳೆ ಸುರಿಸಿದ್ದಾರೆ.&lt;/p&gt;&lt;img&gt;&lt;p&gt;ನಿನ್ನೆ ಅದ್ಧೂರಿಯಾಗಿ ನಡೆದ ಚಿತ್ತಾರ ಸ್ಟಾರ್ ಪ್ರಶಸ್ತಿ ಸಮಾರಂಭದಲ್ಲಿ ರುಕ್ಮಿಣಿ ವಸಂತ್, ಪೀಪಲ್ಸ್ ಚಾಯ್ಸ್ ಜನಮೆಚ್ಚಿದ ನಟಿ ಅವಾರ್ಡ್ ಪದೆದುಕೊಂಡಿದ್ದಾರೆ. ಕಾಂತಾರಾ ಚಾಪ್ಟರ್ 1ರಲ್ಲಿ ನಟಿ ಅದ್ಭುತವಾಗಿ ನಟಿಸಿದ್ದರು. ಪಾಸಿಟೀವ್ ಪಾತ್ರದಿಂದ ಶುರುವಾಗಿ ನೆಗೆಟಿವ್ ಶೇಡ್ ಗೆ ಬದಲಾಗುವ ಅವರ ಪಾತ್ರ ಅತ್ಯುತ್ತಮವಾಗಿ ಮೂಡಿ ಬಂದಿತ್ತು.&lt;/p&gt;&lt;img&gt;&lt;p&gt;ರುಕ್ಮಿಣಿ ಸದ್ಯದ ಅತ್ಯಂತ ಬ್ಯುಸಿ ನಟಿಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ &lsquo;ಟಾಕ್ಸಿಕ್&rsquo; ಸಿನಿಮಾದಲ್ಲಿ ರುಕ್ಮಿಣಿ ಮೆಲಿಸಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಎನ್ ಟಿ ಆರ್ ಜೊತೆ ಡ್ರಾಗನ್ ಸಿನಿಮಾದಲ್ಲಿ ರುಕ್ಮಿಣಿ ನಟಿಸಿದ್ದಾರೆ. ಬಾಲಿವುಡ್ ನಲ್ಲೂ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಇನ್ನು ಇತ್ತೀಚಿನ ದಿನಗಳಲ್ಲಿ ರುಕ್ಮಿಣಿ ವಸಂತ್ ಅವರ ಡೀಪ್ ಫೇಕ್ ವಿಡಿಯೋ, ಫೋಟೊ ವೈರಲ್ ಆಗಿತ್ತು. ಇದರಲ್ಲಿ ಬಿಕಿನಿ ಧರಿಸಿ ರುಕ್ಮಿಣಿ ಸ್ವಿಮ್ಮಿಂಗ್ ಪೂಲ್ ಗೆ ಇಳಿಯುವ ದೃಶ್ಯ ಸೆರೆಯಾಗಿತ್ತು. ಆದರೆ ಈ ಬಗ್ಗೆ ಸಿಟ್ಟಿಗೆದ್ದ ರುಕ್ಮಿಣಿ, ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಈ ರೀತಿ ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/rukmini-vasanth-stuns-in-transparent-saree-in-chittara-star-awards-9gyp64l"/>
        </item>
        <item>
            <title><![CDATA[Kantara - Ranveer Singh: 'ಕಾಂತಾರ' ದೈವಕ್ಕೆ ಅಪಮಾನ ಮಾಡಿದ್ದೇ ಶಾಪವಾಯ್ತಾ? ಅದಕ್ಕೇ Top Star ಆಗಿರುವಾಗಲೇ ಬ್ಯಾನ್!?]]></title>
            <link>https://kannada.asianetnews.com/cine-world/following-ranveer-singh-industry-ban-social-media-sounds-with-it-is-a-consequence-of-him-insulting-the-kantara-daiva/articleshow-bxo458h</link>
            <guid isPermaLink="true">https://kannada.asianetnews.com/cine-world/following-ranveer-singh-industry-ban-social-media-sounds-with-it-is-a-consequence-of-him-insulting-the-kantara-daiva/articleshow-bxo458h</guid>
            <pubDate>Mon, 25 May 2026 20:41:10 +0530</pubDate>
            <description><![CDATA[&lt;p&gt;ರಣವೀರ್ ಕೆರಿಯರ್ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ, &quot;ಅಂದು ದೈವಕ್ಕೆ ಅವಮಾನ ಮಾಡಿದ್ದಕ್ಕೆ ಈಗ ನಿನಗೆ ದೈವವೇ ಶಿಕ್ಷೆ ನೀಡುತ್ತಿದೆ. ಕಾಂತಾರ ದೈವದ ಶಾಪ ತಟ್ಟಿದೆ&quot; ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್&zwnj;ಗಳ ಸುರಿಮಳೆಯಾಗುತ್ತಿದೆ. ದೈವದ ಶಕ್ತಿಯನ್ನು ಹಗುರವಾಗಿ ಕಂಡರೆ ಅದರ ಪರಿಣಾಮ ಹೀಗೆ ಇರುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfv0vmr1gynaytkjcxtsdst,imgname-ranveer-singh-kantara-1779721858712.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಣವೀರ್ ಸಿಂಗ್&zwnj;ಗೆ ತಟ್ಟಿತಾ 'ಕಾಂತಾರ' ದೈವದ ಶಾಪ? ಬಾಲಿವುಡ್&zwnj;ನ 'ಎನರ್ಜಿಟಿಕ್ ಸ್ಟಾರ್' ಈಗ ಅಕ್ಷರಶಃ ಅತಂತ್ರ!&lt;/strong&gt;&lt;/p&gt;&lt;p&gt;ಬಾಲಿವುಡ್&zwnj;ನ 'ಪವರ್ ಹೌಸ್' ಎಂದೇ ಕರೆಯಲ್ಪಡುವ ರಣವೀರ್ ಸಿಂಗ್&zwnj;ಗೆ (Ranveer Singh) ಈಗ ಅಕ್ಷರಶಃ ಕೆಟ್ಟ ಕಾಲ ಶುರುವಾದಂತಿದೆ. ಇತ್ತೀಚೆಗಷ್ಟೇ 'ಧುರಂಧರ್' ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿದ್ದ ಈ ನಟನಿಗೆ ಈಗ ಚಿತ್ರರಂಗದಿಂದಲೇ ಪರೋಕ್ಷವಾಗಿ ಗೇಟ್ ಪಾಸ್ ನೀಡಲಾಗಿದೆಯೇ? ಹೀಗೊಂದು ಪ್ರಶ್ನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಅಷ್ಟೇ ಅಲ್ಲ, ರಣವೀರ್ ಈ ಸ್ಥಿತಿಗೆ ತಲುಪಲು ಕನ್ನಡಿಗರ ಹೆಮ್ಮೆಯ 'ಕಾಂತಾರ' ಸಿನಿಮಾದ ದೈವಕ್ಕೆ ಅವರು ಮಾಡಿದ ಅವಮಾನವೇ ಕಾರಣ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ!&lt;/p&gt;&lt;p&gt;'ಡಾನ್ 3' ಕೈಬಿಟ್ಟ ರಣವೀರ್: ನಿರ್ಮಾಪಕರಿಗೆ ನೂರಾರು ಕೋಟಿ ನಷ್ಟ!&lt;/p&gt;&lt;p&gt;ಈ ಎಲ್ಲ ಹೈಡ್ರಾಮಾ ಶುರುವಾಗಿದ್ದು 'ಡಾನ್ 3' ಸಿನಿಮಾದಿಂದ. ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಬಳಿಕ 'ಡಾನ್' ಪಟ್ಟ ರಣವೀರ್ ಸಿಂಗ್ ಪಾಲಾಗಿತ್ತು. ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್&zwnj;ಟೈನ್&zwnj;ಮೆಂಟ್ ಈ ಚಿತ್ರಕ್ಕಾಗಿ ಕೋಟ್ಯಂತರ ರೂಪಾಯಿ ಸುರಿದು ಭರ್ಜರಿ ಸೆಟ್ ಹಾಕಿತ್ತು. ಸ್ಕ್ರಿಪ್ಟ್&zwnj;ನಿಂದ ಹಿಡಿದು ಲೊಕೇಶನ್ ವರೆಗೆ ಎಲ್ಲವೂ ಫೈನಲ್ ಆಗಿತ್ತು. ಆದರೆ, ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳಿರುವಾಗ ರಣವೀರ್ ಸಿಂಗ್ ದಿಢೀರ್ ಆಗಿ ಸಿನಿಮಾದಿಂದ ಹೊರಬಂದಿದ್ದಾರೆ!&lt;/p&gt;&lt;p&gt;ಯಾವುದೇ ಮುನ್ಸೂಚನೆ ಇಲ್ಲದೆ ರಣವೀರ್ ನೀಡಿದ ಈ ಶಾಕ್&zwnj;ನಿಂದ ನಿರ್ಮಾಣ ಸಂಸ್ಥೆಗೆ ಭಾರೀ ಆರ್ಥಿಕ ಹೊಡೆತ ಬಿದ್ದಿದೆ. ಪ್ರಿ-ಪ್ರೊಡಕ್ಷನ್ ಹಂತದಲ್ಲೇ ಖರ್ಚಾದ ಕೋಟಿ ಕೋಟಿ ಹಣ ಈಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.&lt;/p&gt;&lt;h2&gt;FWICE ನಿಂದ ಪರೋಕ್ಷ ಬ್ಯಾನ್: ಕೆರಿಯರ್&zwnj;ಗೆ ಕುತ್ತು?&lt;/h2&gt;&lt;p&gt;ನಟನ ಈ ಬೇಜವಾಬ್ದಾರಿ ನಡವಳಿಕೆಯಿಂದ ಸಿನಿಮಾ ನೌಕರರ ಒಕ್ಕೂಟ (FWICE) ಕೆಂಡಾಮಂಡಲವಾಗಿದೆ. ಒಕ್ಕೂಟದ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, &quot;ನಟರು ಹೀಗೆ ಏಕಾಏಕಿ ಶೂಟಿಂಗ್ ಸಮಯದಲ್ಲಿ ಕೈಕೊಟ್ಟರೆ ಇಡೀ ಉದ್ಯಮವೇ ನಾಶವಾಗುತ್ತದೆ&quot; ಎಂದು ಗುಡುಗಿದ್ದಾರೆ. ಇದರ ಬೆನ್ನಲ್ಲೇ, FWICE ನ ಯಾವುದೇ ಸದಸ್ಯರು ರಣವೀರ್ ಸಿಂಗ್ ಸಿನಿಮಾಗಳಲ್ಲಿ ಕೆಲಸ ಮಾಡಬಾರದು ಎಂಬ ಕಠಿಣ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ. ಅಂದರೆ, ಲೈಟ್&zwnj;ಮ್ಯಾನ್&zwnj;ನಿಂದ ಹಿಡಿದು ತಾಂತ್ರಿಕ ವರ್ಗದವರೆಗೆ ಯಾರೂ ಸಹಕರಿಸದಿದ್ದರೆ ರಣವೀರ್ ಸಿನಿಮಾ ಮಾಡುವುದು ಅಸಾಧ್ಯ. ಇದನ್ನೇ ಚಿತ್ರರಂಗದ ಪರೋಕ್ಷ ಬ್ಯಾನ್ ಎಂದು ವ್ಯಾಖ್ಯಾನಿಸಲಾಗುತ್ತಿದೆ.&lt;/p&gt;&lt;h3&gt;'ಕಾಂತಾರ' ದೈವಕ್ಕೆ ಮಾಡಿದ ಅವಮಾನವೇ ಶಾಪವಾಯಿತಾ?&lt;/h3&gt;&lt;p&gt;ರಣವೀರ್ ಸಿಂಗ್ ಅವರ ಈ ಇತ್ತೀಚಿನ ಕುಸಿತಕ್ಕೆ ಜನ ಈಗ ಹಳೆಯ ಘಟನೆಯೊಂದನ್ನು ನೆನಪಿಸುತ್ತಿದ್ದಾರೆ. ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವೇಳೆ ರಣವೀರ್ ಸಿಂಗ್ ಅವರು 'ಕಾಂತಾರ' ಸಿನಿಮಾದ ದೈವದ ದೃಶ್ಯವನ್ನು ಅನುಕರಿಸುತ್ತಾ, ಅದನ್ನು 'ಫೀಮೇಲ್ ಗೋಸ್ಟ್' (ಹೆಣ್ಣು ದೆವ್ವ) ಎಂದು ಕರೆದಿದ್ದರು. ಕೋಟ್ಯಂತರ ಕನ್ನಡಿಗರ ಶ್ರದ್ಧೆಯ ಕೇಂದ್ರವಾದ ದೈವವನ್ನು ಈ ರೀತಿ ಅಣಕಿಸಿದ್ದು ಅಂದು ದೊಡ್ಡ ವಿವಾದವಾಗಿತ್ತು.&lt;/p&gt;&lt;p&gt;ಈಗ ರಣವೀರ್ ಕೆರಿಯರ್ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ, &quot;ಅಂದು ದೈವಕ್ಕೆ ಅವಮಾನ ಮಾಡಿದ್ದಕ್ಕೆ ಈಗ ನಿನಗೆ ದೈವವೇ ಶಿಕ್ಷೆ ನೀಡುತ್ತಿದೆ. ಕಾಂತಾರ ದೈವದ ಶಾಪ ತಟ್ಟಿದೆ&quot; ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್&zwnj;ಗಳ ಸುರಿಮಳೆಯಾಗುತ್ತಿದೆ. ದೈವದ ಶಕ್ತಿಯನ್ನು ಹಗುರವಾಗಿ ಕಂಡರೆ ಅದರ ಪರಿಣಾಮ ಹೀಗೆ ಇರುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ಕೊನೆಯ ಮಾತು:&lt;/p&gt;&lt;p&gt;ಯಶಸ್ಸಿನ ಉತ್ತುಂಗದಲ್ಲಿದ್ದ ರಣವೀರ್ ಸಿಂಗ್&zwnj;ಗೆ ಈಗ ವೃತ್ತಿಪರತೆ ಮತ್ತು ಸಂಸ್ಕೃತಿಯ ಬಗ್ಗೆ ಪಾಠ ಕಲಿಯುವ ಸಮಯ ಬಂದಿದೆ. ಸಿನಿಮಾ ನೌಕರರ ಒಕ್ಕೂಟದ ಕೆಂಗಣ್ಣು ಮತ್ತು ದೈವದ ಭಕ್ತರ ಆಕ್ರೋಶದ ನಡುವೆ ರಣವೀರ್ ಸಿಂಗ್ ಅವರ ಮುಂದಿನ ಹಾದಿ ಹೇಗಿರಲಿದೆ? ಅವರು ಮತ್ತೆ ಕಮ್&zwnj;ಬ್ಯಾಕ್ ಮಾಡ್ತಾರಾ? ಕಾದು ನೋಡಬೇಕು!&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/following-ranveer-singh-industry-ban-social-media-sounds-with-it-is-a-consequence-of-him-insulting-the-kantara-daiva/articleshow-bxo458h"/>
        </item>
        <item>
            <title><![CDATA[ID Card- Shocking: ಕಂಡಕ್ಟರ್ ಆಗಿದ್ದ ರಜನಿಕಾಂತ್ ಐಡಿ ಕಾರ್ಡ್ ವೈರಲ್.. ಆ ಕಾಲದಲ್ಲಿ ತಿಂಗಳ ಸಂಬಳ ಇಷ್ಟಿತ್ತು!]]></title>
            <link>https://kannada.asianetnews.com/cine-world/rajinikanth-old-conductor-id-card-is-viral-on-social-media-by-showing-his-monthly-salary-as-275-rupees-as-conductor/articleshow-cpu8l5c</link>
            <guid isPermaLink="true">https://kannada.asianetnews.com/cine-world/rajinikanth-old-conductor-id-card-is-viral-on-social-media-by-showing-his-monthly-salary-as-275-rupees-as-conductor/articleshow-cpu8l5c</guid>
            <pubDate>Wed, 27 May 2026 12:45:29 +0530</pubDate>
            <description><![CDATA[&lt;p&gt;ಒಬ್ಬ ಸಾಮಾನ್ಯ ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿ, ಇಂದು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಜನಿಯ ಈ ಪಯಣ ಪ್ರತಿಯೊಬ್ಬರಿಗೂ ಸ್ಫೂರ್ತಿ. ಕೈಯಲ್ಲಿ ಚಿಲ್ಲರೆ ಕಾಸು ಹಿಡಿದು ಬಸ್ ಹತ್ತುತ್ತಿದ್ದ ಆ ಹುಡುಗ, ಇಂದು ಭಾರತೀಯ ಚಿತ್ರರಂಗದ ಅತಿ ದೊಡ್ಡ ಆಸ್ತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj87v6h4dj75510jnzqrjyrf,imgname-rajinikanth-upcoming-movie-5-1771950676516.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೂಪರ್&zwnj;ಸ್ಟಾರ್&zwnj; 'ಶಿವಾಜಿ'ಯ ಫ್ಲ್ಯಾಶ್&zwnj;ಬ್ಯಾಕ್: 275 ರೂಪಾಯಿ ಸಂಬಳದಿಂದ ಕೋಟಿಗಳ ಸಾಮ್ರಾಜ್ಯದವರೆಗೆ!&lt;/strong&gt;&lt;/p&gt;&lt;p&gt;ಸಿನಿಮಾ ಅಂದಮೇಲೆ ಅಲ್ಲಿ ಹೀರೋ ಇರಬೇಕು, ಅಬ್ಬರದ ಎಂಟ್ರಿ ಇರಬೇಕು. ಆದರೆ, ಭಾರತೀಯ ಚಿತ್ರರಂಗದ ಅನ್-ಕ್ರೌನ್ಡ್ ಕಿಂಗ್, 'ತಲೈವಾ' ರಜನಿಕಾಂತ್ (Rajinikanth) ಅವರ ರಿಯಲ್ ಲೈಫ್ ಕಥೆಯೇ ಒಂದು ಅದ್ಭುತ ಸಿನಿಮಾ! ಈಗ ಸೋಷಿಯಲ್ ಮೀಡಿಯಾದಲ್ಲಿ ಒಂದು ಹಳೆಯ ಐಡಿ ಕಾರ್ಡ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಹೌದು, ಅದು ನಮ್ಮ 'ಬೆಂಗಳೂರು ಹುಡುಗ' ಶಿವಾಜಿ ರಾವ್ ಗಾಯಕ್ವಾಡ್ ಅವರು ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ಕಾಲದ ಗುರುತಿನ ಚೀಟಿ!&lt;/p&gt;&lt;p&gt;&lt;img&gt;&lt;/p&gt;&lt;h2&gt;ವೈರಲ್ ಕಾರ್ಡ್&zwnj;ನಲ್ಲಿ ಏನಿದೆ ವಿಶೇಷ?&lt;/h2&gt;&lt;p&gt;ಈಗ ವೈರಲ್ ಆಗುತ್ತಿರುವ ಆ ಐಡಿ ಕಾರ್ಡ್ ನಿಜವೋ ಅಥವಾ ಎಐ (AI) ಸೃಷ್ಟಿಸಿದ ಕೈಚಳಕವೋ ಎಂಬ ಚರ್ಚೆ ಒಂದು ಕಡೆಯಿರಲಿ, ಆದರೆ ಆ ಕಾರ್ಡ್&zwnj;ನಲ್ಲಿರುವ ಮಾಹಿತಿ ಮಾತ್ರ ರಜನಿ ಅಭಿಮಾನಿಗಳ ಎದೆಯಲ್ಲಿ ರೋಮಾಂಚನ ಉಂಟುಮಾಡುತ್ತಿದೆ. ಅದರಲ್ಲಿ ರಜನಿಕಾಂತ್ ಅವರ ಅಸಲಿ ಹೆಸರು 'ಶಿವಾಜಿ ರಾವ್ ಗಾಯಕ್ವಾಡ್' ಎಂದು ಅಚ್ಚುಕಟ್ಟಾಗಿ ಬರೆಯಲಾಗಿದೆ. ಶ್ರೀನಗರ ಡಿಪೋ, ರೂಟ್ ನಂಬರ್ 10A ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದ ಈ 'ಮಾಸ್' ಕಂಡಕ್ಟರ್&zwnj;ಗೆ 1971 ರಲ್ಲಿ ಸಿಗುತ್ತಿದ್ದ ತಿಂಗಳ ಸಂಬಳ ಎಷ್ಟು ಗೊತ್ತಾ? ಕೇವಲ 275 ರೂಪಾಯಿ! ಇವತ್ತು ಕೋಟಿಗಳಲ್ಲಿ ಸಂಭಾವನೆ ಪಡೆಯುವ ರಜನಿ, ಅಂದು ನೂರರ ನೋಟುಗಳಿಗಾಗಿ ಟಿಕೆಟ್ ಹರಿಯುತ್ತಿದ್ದರು ಎಂದರೆ ನಂಬಲು ಅಸಾಧ್ಯ ಅನ್ಸುತ್ತೆ ಅಲ್ವಾ?&lt;/p&gt;&lt;p&gt;&lt;img&gt;&lt;/p&gt;&lt;p&gt;ವಿಸಲ್ ಹೊಡೆಯೋದ್ರಲ್ಲೂ ಇತ್ತು ಒಂದು ಸ್ಟೈಲ್!&lt;/p&gt;&lt;p&gt;ಅಂದು ಬಸ್&zwnj;ನಲ್ಲಿ ಟಿಕೆಟ್ ಕೊಡುವಾಗ ರಜನಿ ತೋರಿಸುತ್ತಿದ್ದ ವೇಗ, ಆ ವಿಸಲ್ ಸದ್ದು ಮತ್ತು ಪ್ರಯಾಣಿಕರ ಜೊತೆ ಅವರು ಮಾತನಾಡುತ್ತಿದ್ದ ಸ್ಟೈಲ್ ಆಗಲೇ ಫೇಮಸ್ ಆಗಿತ್ತಂತೆ. &quot;ಮುಂದಕ್ಕೆ ಹೋಗಿ ಸರ್...&quot;, &quot;ಚಿಲ್ಲರೆ ಕೊಡಿ...&quot; ಎನ್ನುವಾಗಲೂ ಅಲ್ಲಿ ಒಬ್ಬ ಸೂಪರ್&zwnj;ಸ್ಟಾರ್ ಮಿಂಚುತ್ತಿದ್ದ. ಅವರ ಆತ್ಮೀಯ ಗೆಳೆಯ, ಡ್ರೈವರ್ ರಾಜ್ ಬಹದ್ದೂರ್ ಅವರಿಗೆ ಅಂದೇ ಗೊತ್ತಿತ್ತು, ಈ ಶಿವಾಜಿ ಕೇವಲ ಬಸ್&zwnj;ಗೆ ಸೀಮಿತವಾದವನಲ್ಲ, ಇಡೀ ಜಗತ್ತನ್ನೇ ಆಳುವವನು ಎಂದು!&lt;/p&gt;&lt;p&gt;ನೆನಪಿನ ಬಸ್ ಹತ್ತಿದ ರಜನಿ...&lt;/p&gt;&lt;p&gt;ಇವತ್ತು ರಜನಿಕಾಂತ್ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಅವರು ತಮ್ಮ ಬೇರುಗಳನ್ನು ಮರೆತಿಲ್ಲ. ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಜಯನಗರ ಡಿಪೋಗೆ ದಿಢೀರ್ ಭೇಟಿ ನೀಡಿದ ರಜನಿ, ಅಲ್ಲಿನ ಕಂಡಕ್ಟರ್ ಮತ್ತು ಡ್ರೈವರ್&zwnj;ಗಳ ಜೊತೆ ಕುಳಿತು ಹರಟೆ ಹೊಡೆದಿದ್ದರು. ಆ ಕ್ಷಣದಲ್ಲಿ ಅವರು ಕಂಡಕ್ಟರ್ ಶಿವಾಜಿಯಾಗಿದ್ದರೇ ಹೊರತು ಸೂಪರ್&zwnj;ಸ್ಟಾರ್ ರಜನಿ ಆಗಿರಲಿಲ್ಲ. ಅಷ್ಟೇ ಅಲ್ಲ, ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದ ಪೋಸ್ಟರ್&zwnj;ನಲ್ಲಿ ಕಂಡಕ್ಟರ್ ಬ್ಯಾಡ್ಜ್ ಸಂಖ್ಯೆ 1421 ಕಾಣಿಸಿಕೊಂಡಾಗ ಅಭಿಮಾನಿಗಳು ಅದು ರಜನಿಯದ್ದೇ ಎಂದು ಸಂಭ್ರಮಿಸಿದ್ದರು. ಆದರೆ ಆ ಸಂಖ್ಯೆ ನಿರ್ದೇಶಕರ ತಂದೆಯದ್ದಾಗಿತ್ತು ಎಂಬುದು ನಂತರ ತಿಳಿದುಬಂತು.&lt;/p&gt;&lt;h3&gt;ಸ್ಪೂರ್ತಿಯ ಸೆಲೆ ಈ 'ಕಂಡಕ್ಟರ್'!&lt;/h3&gt;&lt;p&gt;ಒಬ್ಬ ಸಾಮಾನ್ಯ ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿ, ಇಂದು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಜನಿಯ ಈ ಪಯಣ ಪ್ರತಿಯೊಬ್ಬರಿಗೂ ಸ್ಫೂರ್ತಿ. ಕೈಯಲ್ಲಿ ಚಿಲ್ಲರೆ ಕಾಸು ಹಿಡಿದು ಬಸ್ ಹತ್ತುತ್ತಿದ್ದ ಆ ಹುಡುಗ, ಇಂದು ಭಾರತೀಯ ಚಿತ್ರರಂಗದ ಅತಿ ದೊಡ್ಡ ಆಸ್ತಿ. ಈ ವೈರಲ್ ಐಡಿ ಕಾರ್ಡ್ ಮತ್ತೊಮ್ಮೆ ಸಾಬೀತುಪಡಿಸಿದೆ ಏನೆಂದರೆ - &quot;ಕಷ್ಟ ಪಟ್ಟರೆ ಮನುಷ್ಯ ಎಲ್ಲವನ್ನೂ ಸಾಧಿಸಬಹುದು, ಆದರೆ ಸಾಧಿಸಿದ ಮೇಲೂ ತಾವು ಬಂದ ದಾರಿಯನ್ನು ಮರೆಯಬಾರದು.&quot;&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/rajinikanth-old-conductor-id-card-is-viral-on-social-media-by-showing-his-monthly-salary-as-275-rupees-as-conductor/articleshow-cpu8l5c"/>
        </item>
        <item>
            <title><![CDATA[ಕನ್ನಡದಲ್ಲಿ ಮಾತನಾಡಿ ಕರುನಾಡಿಗರ ಮನಗೆದ್ದ ಜಾಹ್ನವಿ ಕಪೂರ್​: ಶ್ರೀದೇವಿ ಪುತ್ರಿಗೆ ಕನ್ನಡಿಗರು ಫಿದಾ]]></title>
            <link>https://kannada.asianetnews.com/gallery/sandalwood/peddi-movie-promotion-in-bengaluru-jhanvi-kapoor-spokes-kannada-suc-cy4zb9b</link>
            <guid isPermaLink="true">https://kannada.asianetnews.com/gallery/sandalwood/peddi-movie-promotion-in-bengaluru-jhanvi-kapoor-spokes-kannada-suc-cy4zb9b</guid>
            <pubDate>Tue, 26 May 2026 11:23:23 +0530</pubDate>
            <description><![CDATA[&lt;p&gt;'ಪೆದ್ದಿ' ಚಿತ್ರದ ಪ್ರಚಾರಕ್ಕಾಗಿ ನಟಿ ಜಾಹ್ನವಿ ಕಪೂರ್ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಅವರು, ರಾಮ್ ಚರಣ್ ಮತ್ತು ಶಿವರಾಜ್&zwnj;ಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡರು&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshd4eywj3bswfwftk0cgbfp,imgname-peddi-06-1779774405596.jpg" type="image/jpeg" height="390" width="690"/>
            <content:encoded><![CDATA[&lt;p&gt;'ಪೆದ್ದಿ' ಚಿತ್ರದ ಪ್ರಚಾರಕ್ಕಾಗಿ ನಟಿ ಜಾಹ್ನವಿ ಕಪೂರ್ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಅವರು, ರಾಮ್ ಚರಣ್ ಮತ್ತು ಶಿವರಾಜ್&zwnj;ಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡರು&amp;nbsp;&lt;/p&gt;&lt;img&gt;&lt;p&gt;80-90ರ ದಶಕದಲ್ಲಿ ಬಾಲಿವುಡ್​ ಆಳಿ, ಹಲವರ ನಿದ್ದೆ ಕದ್ದ ಸುರಸುಂದರಿ ಶ್ರೀದೇವಿಯ ಪುತ್ರಿ ಜಾಹ್ನವಿ ಕಪೂರ್​ ಅವರು ಸದ್ಯ ಬಾಲಿವುಡ್​ನಲ್ಲಿ ಬಿಜಿಯಾಗಿದ್ದಾರೆ. ಇದೀಗ ನಟಿ ನಟಿಸಿರುವ ಆ್ಯಕ್ಷನ್-ಪ್ಯಾಕ್ಡ್ ಸ್ಪೋರ್ಟ್ಸ್ ಡ್ರಾಮಾ 'ಪೆದ್ದಿ' ಜೂನ್​​​ 4ರಂದು ಬಿಡುಗಡೆಯಾಗಲಿದ್ದು, ಅದರ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು.&lt;/p&gt;&lt;img&gt;&lt;p&gt;ನಟ ಶಿವರಾಜ್​ಕುಮಾರ್​ ಹಾಗೂ ರಾಮ್​ ಚರಣ್​​ ಅವರು ಸಿನಿಮಾದಲ್ಲಿ ಇರುವುದು ವಿಶೇಷ. ರಾಮ್ ಚರಣ್ ಜೋಡಿಯಾಗಿ ಜಾಹ್ನವಿ ಕಪೂರ್&zwnj; ನಟಿಸಿದ್ದರೆ, ಜಗಪತಿ ಬಾಬು, ಬೊಮನ್ ಇರಾನಿ, ಶಿವರಾಜ್​ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಇದಾಗಲೇ ರಾಮ್ ಚರಣ್ ಅವರ ಪಾತ್ರದ ಮೇಕ್ ಓವರ್​ ನೋಡಿ ಫ್ಯಾನ್ಸ್​ ಥ್ರಿಲ್ ಆಗಿದ್ದಾರೆ.&lt;/p&gt;&lt;img&gt;&lt;p&gt;ಪೆದ್ದಿ ಚಿತ್ರಕ್ಕಾಗಿ ಚಿತ್ರತಂಡ ಬೆಂಗಳೂರಿನಲ್ಲಿ ಪ್ರಚಾರಕ್ಕೆ ಬಂದಾಗ ಹೈಲೈಟ್​ ಆಗಿದ್ದು, ನಟಿ ಜಾಹ್ನವಿ ಕಪೂರ್​ ಅವರ ಕನ್ನಡದ ಮಾತು. ಎಲ್ಲರೂ ಹೇಗಿದ್ದೀರಾ, ನಿಮ್ಮನ್ನು ನೋಡಿ ನನಗೆ ತುಂಬಾ ಸಂತೋಷವಾಯ್ತು ಎಂದು ನಟಿ ಹೇಳಿದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿದರು.&lt;/p&gt;&lt;img&gt;&lt;p&gt;ಈ ವಾಕ್ಯವನ್ನು ಬೆಳಿಗ್ಗೆಯಿಂದ ತುಂಬಾ ಸಲ ಪ್ರಾಕ್ಟೀಸ್​ ಮಾಡಿರುವುದಾಗಿ ಆ್ಯಂಕರ್​ ಅನುಶ್ರೀ ಅವರು ಹೇಳಿದರು. ಬಳಿಕ ನಟಿ, ಇಂಗ್ಲಿಷ್​ನಲ್ಲಿ ಇದೊಂದು ವಿಭಿನ್ನ ಚಿತ್ರ. ಅದರಲ್ಲೂ ರಾಮ್ ಚರಣ್ ಜೊತೆ ವರ್ಕ್ ಮಾಡಿದ್ದು ಒಂದೊಳ್ಳೆ ಅನುಭವ. ನನಗೆ ಬೆಂಗಳೂರು ಅಂದ್ರೆ ಇಷ್ಟ ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ಶಿವರಾಜ್​​ಕುಮಾರ್ ಅವರು, ''ಚಿರಂಜೀವಿ ಸರ್ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಡೈರೆಕ್ಟರ್ ಬುಚಿ ಬಾಬು ಸನಾ ಅವರು ಪೆದ್ದಿ ಚಿತ್ರದಲ್ಲಿ ನೀವು ಅಭಿನಯಿಸಬೇಕು ಅಂದಾಗ ನಾನು ಒಪ್ಪಿಕೊಂಡೆ. ಚಿರಂಜೀವಿ ಸರ್ ಫ್ಯಾಮಿಲಿ ಜೊತೆ ಇರುವ ಬಾಂಡಿಂಗ್ ಒಂದು ಕಾರಣವಾದ್ರೆ, ಮತ್ತೊಂದು ರಾಮ್ ಚರಣ್ ತೇಜಾ ಮೇಲಿರುವ ಪ್ರೀತಿ ಎಂದರು.&lt;/p&gt;&lt;img&gt;&lt;p&gt;ರಾಮ್​ಚರಣ್​ ತುಂಬಾ ಎಫರ್ಟ್​ ಹಾಕಿದ್ದಾರೆ. ಅದನ್ನು ನೋಡಿದ್ರೆ ನ್ಯಾಷನಲ್ ಅವಾರ್ಡ್ ಕೊಡುವಷ್ಟು ಚೆನ್ನಾಗಿ ಈ ಸಿನಿಮಾ ಮೂಡಿ ಬಂದಿದೆ. ಅದಕ್ಕೆ ನಾನು ಗ್ಯಾರಂಟಿ ಎಂದಿದ್ದಾರೆ. ಬಳಿಕ ರಾಮ್ ಚರಣ್ ಅವರು, ಈ ಸಿನಿಮಾದಲ್ಲಿ ಶಿವಣ್ಣ ನನ್ನ ಗುರುವಿನ ಪಾತ್ರ ಮಾಡಿದ್ದಾರೆ. ಅವರು ಈ ಪಾತ್ರ ನಿರ್ವಹಿಸಿದ್ದು ನನಗೆ ಬಹಳ ಖುಷಿ ಆಯಿತು. ಏಕೆಂದರೆ ಅವರನ್ನು ಬಿಟ್ಟು ಬೇರೆ ಯಾರೇ ಈ ಪಾತ್ರ ಮಾಡಿದ್ರೂ ಅಷ್ಟು ಚೆನ್ನಾಗಿ ಇರುತ್ತಿರಲಿಲ್ಲ ಎಂದರು.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/peddi-movie-promotion-in-bengaluru-jhanvi-kapoor-spokes-kannada-suc-cy4zb9b"/>
        </item>
        <item>
            <title><![CDATA[ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ: ಬ್ರೇಕಪ್ ಬಗ್ಗೆ ಹೇಳಿ ಕಣ್ಣೀರಿಟ್ಟ ನಟಿ ಕೃಷಿ ತಾಪಂಡ!]]></title>
            <link>https://kannada.asianetnews.com/gallery/sandalwood/krishi-thapanda-emotional-interview-last-statement-personal-life-gvd-ehetxii</link>
            <guid isPermaLink="true">https://kannada.asianetnews.com/gallery/sandalwood/krishi-thapanda-emotional-interview-last-statement-personal-life-gvd-ehetxii</guid>
            <pubDate>Tue, 26 May 2026 18:50:34 +0530</pubDate>
            <description><![CDATA[&lt;p&gt;ನಟಿ ಹಾಗೂ ಮಾಜಿ ಬಿಗ್&zwnj;ಬಾಸ್ ಸ್ಪರ್ಧಿ ಕೃಷಿ ತಾಪಂಡ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಹಲವು ಬಾರಿ ಸುದ್ದಿಯಾಗಿದ್ದರು. ಇದೀಗ ಖಾಸಗಿ ಚಾನೆಲ್&zwnj;ಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksj6rav04b707vk1yzjnnmzw,imgname-1-1779801271136.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಹಾಗೂ ಮಾಜಿ ಬಿಗ್&zwnj;ಬಾಸ್ ಸ್ಪರ್ಧಿ ಕೃಷಿ ತಾಪಂಡ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಹಲವು ಬಾರಿ ಸುದ್ದಿಯಾಗಿದ್ದರು. ಇದೀಗ ಖಾಸಗಿ ಚಾನೆಲ್&zwnj;ಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ ತಮ್ಮ ಖಾಸಗಿ ಬದುಕಿನ ಬಗ್ಗೆ ಹರಿದಾಡಿದ ಸುದ್ದಿಗಳು ಮತ್ತು ವೈಯಕ್ತಿಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ತಮ್ಮ ಜೀವನ ಸಂಪೂರ್ಣ ಬದಲಾಗಿದೆ ಎಂದು ಕೃಷಿ ತಾಪಂಡ ಹೇಳಿದ್ದಾರೆ. ತಮ್ಮ ಹಾಗೂ ಉದ್ಯಮಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಅವರು, ಪ್ರಾರಂಭದಲ್ಲಿ ಸಾಕಷ್ಟು ಪ್ರೀತಿ ಸಿಕ್ಕಿತ್ತು. ಆದರೆ ಸಮಯ ಕಳೆದಂತೆ ಸಂಬಂಧದಲ್ಲಿ ಅಂತರ ಹೆಚ್ಚಾಯಿತು ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ನನಗೆ ಉಡುಗೊರೆಗಳು ಸಿಕ್ಕಿವೆ, ಹಣ ಸಿಕ್ಕಿದೆ. ಆದರೆ ಪ್ರೀತಿ ಮತ್ತು ಸಮಯ ಸಿಗಲಿಲ್ಲ. ಅದೇ ನನಗೆ ಹೆಚ್ಚು ನೋವು ಕೊಟ್ಟದ್ದು ಎಂದು ಕೃಷಿ ತಾಪಂಡ ಹೇಳಿದ್ದಾರೆ. ಸಂಬಂಧದಲ್ಲಿ ಉಂಟಾದ ಸಮಸ್ಯೆಗಳು ದೊಡ್ಡ ಮಟ್ಟದ ಭಿನ್ನಾಭಿಪ್ರಾಯಕ್ಕೆ ಕಾರಣವಾದವು. ಖಾಸಗಿ ಬದುಕಿನಲ್ಲಿ ನಡೆದ ಘಟನೆಗಳು ಸಾರ್ವಜನಿಕ ಚರ್ಚೆಯಾಗಿ ಮಾರ್ಪಟ್ಟವು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ನಾಲ್ಕು ಗೋಡೆಗಳ ಮಧ್ಯೆ ಉಳಿಯಬೇಕಿದ್ದ ವಿಷಯ ಬೀದಿಗೆ ಬಂತು. ಜನರು ನನ್ನ ಹಲವು ವರ್ಷದ ಪಯಣ ಮರೆತು, ಕಳೆದ ಕೆಲವು ತಿಂಗಳ ಘಟನೆಗಳಿಂದಲೇ ನನ್ನನ್ನು ಅಳೆಯುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಈ ಘಟನೆಗಳಿಂದ ಕೆಲಸದ ಅವಕಾಶಗಳೂ ಕಡಿಮೆಯಾದವು. ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು ಎಂದು ಹೇಳಿದ ಕೃಷಿ ತಾಪಂಡ, ಕಳೆದ ಎರಡು ವರ್ಷಗಳಿಂದ ಹೊರಜಗತ್ತಿನಿಂದ ದೂರವಾಗಿದ್ದೇನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಇದೇ ನನ್ನ ಕೊನೆಯ ಸಂದರ್ಶನ. ಇನ್ನು ಮುಂದೆ ಯಾವ ಕ್ಯಾಮೆರಾ ಮುಂದೆಯೂ ಬರಲು ಬಯಸುವುದಿಲ್ಲ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ ಎಂದು ಭಾವುಕರಾಗಿ ಕೃಷಿ ತಾಪಂಡ ಮನವಿ ಮಾಡಿದ್ದಾರೆ. ಇನ್ನೂ ತಮ್ಮ ಹೆಸರಿನಲ್ಲಿ ದುಬಾರಿ ಆಸ್ತಿ ಅಥವಾ ಐಷಾರಾಮಿ ಜೀವನ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;&lt;img&gt;&lt;p&gt;ಉದ್ಯಮಿ, ಕಾರನ್ನು ನನ್ನ ಹೆಸರಿಗೆ ಮಾಡಿಸಿದ್ದರು. ಆದರೆ ಅದನ್ನು ನಾನು ಬಳಸಿಲ್ಲ. ಈಗಲೂ ಬಾಡಿಗೆ ಮನೆಯಲ್ಲೇ ಇದ್ದೇನೆ. ಕೊಟ್ಟಿದ್ದ ಆಭರಣಗಳನ್ನೂ ಹಿಂತಿರುಗಿಸಿದ್ದೇನೆ. ಇಂದಿಗೂ ಆ ವ್ಯಕ್ತಿಯ ಮೇಲೆ ನನಗೆ ದ್ವೇಷ ಇಲ್ಲ. ಜೀವನ ಹೀಗಾಗಿದೆ ಎಂದು ಅವರನ್ನು ದೂರುವುದಿಲ್ಲ ಎಂದು ಭಾವುಕರಾಗಿ ಕೃಷಿ ತಾಪಂಡ ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/krishi-thapanda-emotional-interview-last-statement-personal-life-gvd-ehetxii"/>
        </item>
        <item>
            <title><![CDATA[Jahnavi: 'ಅವನೇ ನನ್ನ ಪ್ರಪಂಚ, ಮಿಕ್ಕಂತೆ ಸಮಾಜ ಸೇವೆ+ ರಾಜಕೀಯಕ್ಕೆ ಮೀಸಲು ಎಂದ 'Bigg Boss' ಜಾಹ್ನವಿ!]]></title>
            <link>https://kannada.asianetnews.com/tv-talk/my-son-is-my-world-and-my-remaining-time-is-for-politics-and-social-service-says-bigg-boss-fame-jahnavi-for-plans/articleshow-gmmvvzg</link>
            <guid isPermaLink="true">https://kannada.asianetnews.com/tv-talk/my-son-is-my-world-and-my-remaining-time-is-for-politics-and-social-service-says-bigg-boss-fame-jahnavi-for-plans/articleshow-gmmvvzg</guid>
            <pubDate>Wed, 27 May 2026 15:38:38 +0530</pubDate>
            <description><![CDATA[&lt;p&gt;ಬಿಗ್&zwnj;ಬಾಸ್ ಕಿರೀಟ ಮುಡಿಗೇರಿಸಿಕೊಳ್ಳದಿದ್ದರೂ ಜನರ ಮನ ಗೆದ್ದಿರುವ ಜಾಹ್ನವಿ, ಈಗ ರಾಜಕೀಯದಲ್ಲಿ ಯಾವ ರೀತಿಯ ಮೋಡಿ ಮಾಡಲಿದ್ದಾರೆ? ಜೆಡಿಎಸ್ ಪಕ್ಷಕ್ಕೆ ಈ ಗ್ಲಾಮರಸ್ ನಾಯಕಿಯ ಸೇರ್ಪಡೆಯಿಂದ ಎಷ್ಟು ಬಲ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmeed7y5swtyfc8wx9w56jt,imgname-jahnavi-1779876443390.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ ಮನೆಯಿಂದ ರಾಜಕೀಯ ಅಖಾಡಕ್ಕೆ ಜಾಹ್ನವಿ ಎಂಟ್ರಿ:&lt;/p&gt;&lt;p&gt;ಬಣ್ಣದ ಲೋಕದ ಮಿಂಚು, ಬಿಗ್&zwnj;ಬಾಸ್ ಕನ್ನಡ ಸೀಸನ್ 11ರ ಸಂಚಲನ, ಖ್ಯಾತ ನಿರೂಪಕಿ ಜಾಹ್ನವಿ (Jahnavi) ಈಗ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಬಿಗ್&zwnj;ಬಾಸ್ ಮನೆಯೊಳಗೆ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮತ್ತು ನೇರ ನುಡಿಯಿಂದಲೇ ಹಲ್ಚಲ್ ಎಬ್ಬಿಸಿದ್ದ ಈ ನಟಿ, ಈಗ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಧುಮುಕಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ 'ತೆನೆ ಹೊತ್ತ ಮಹಿಳೆ'ಯನ್ನು ಅಪ್ಪಿಕೊಂಡಿರುವ ಜಾಹ್ನವಿ, ಜೆಡಿಎಸ್ ಪಕ್ಷದ ಮೂಲಕ ತಮ್ಮ ಸಮಾಜ ಸೇವೆಯ ಕನಸಿಗೆ ರೆಕ್ಕೆ ಕಟ್ಟಿದ್ದಾರೆ.&lt;/p&gt;&lt;p&gt;&quot;ನಾನು ಸುಳ್ಳು ಹೇಳಲ್ಲ, ನನಗೆ ಪವರ್ ಬೇಕು!&quot;&lt;/p&gt;&lt;p&gt;ಸಾಮಾನ್ಯವಾಗಿ ರಾಜಕೀಯಕ್ಕೆ ಬರುವವರು &quot;ನಾನು ಅಧಿಕಾರಕ್ಕಾಗಿ ಬಂದಿಲ್ಲ, ಕೇವಲ ಸೇವೆಗಾಗಿ ಬಂದಿದ್ದೇನೆ&quot; ಎಂದು ನಾಟಕೀಯವಾಗಿ ಹೇಳುತ್ತಾರೆ. ಆದರೆ ಜಾಹ್ನವಿ ಅವರ ಶೈಲಿಯೇ ಬೇರೆ! ಜೆಡಿಎಸ್ ಸೇರಿದ ಬೆನ್ನಲ್ಲೇ ಅವರು ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. &quot;ನಾನು ಪವರ್ ಆಕಾಂಕ್ಷಿ ಅಲ್ಲ ಎಂದು ಖಂಡಿತವಾಗಿಯೂ ಸುಳ್ಳು ಹೇಳಲ್ಲ. ಅಧಿಕಾರ ಕೈಯಲ್ಲಿದ್ದರೆ ಜನಸಾಮಾನ್ಯರ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದು&quot; ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಆಸೆಯನ್ನು ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;ಚುನಾವಣಾ ಅಖಾಡಕ್ಕೆ ಸಿದ್ಧರಾದರೇ 'ಆಂಕರ್' ಜಾಹ್ನವಿ?&lt;/p&gt;&lt;p&gt;ಸುಪ್ರೀಂಕೋರ್ಟ್ ಆದೇಶದಂತೆ ಆಗಸ್ಟ್ 31ರ ಒಳಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಯಬೇಕಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಜಾಹ್ನವಿ ಸಖತ್ ಆಸಕ್ತಿ ತೋರಿಸಿದ್ದಾರೆ. ಅಷ್ಟೇ ಅಲ್ಲ, &quot;ಪಕ್ಷದ ನಾಯಕರು ಸೂಚಿಸಿದರೆ ನಾನು ಎಂಎಲ್&zwnj;ಎ ಅಥವಾ ಎಂಪಿ ಚುನಾವಣೆಗೆ ಸ್ಪರ್ಧಿಸಲೂ ಸಿದ್ಧಳಿದ್ದೇನೆ. ನನ್ನ ಇಚ್ಛೆಯನ್ನು ಈಗಾಗಲೇ ದಳಪತಿಗಳ ಮುಂದೆ ಇಟ್ಟಿದ್ದೇನೆ&quot; ಎನ್ನುವ ಮೂಲಕ ತಾವು ಕೇವಲ ಸ್ಟಾರ್ ಪ್ರಚಾರಕಿಯಾಗಿ ಉಳಿಯುವವರಲ್ಲ, ಬದಲಾಗಿ ಜನರ ಪ್ರತಿನಿಧಿಯಾಗಿ ವಿಧಾನಸೌಧ ಏರುವ ಛಲ ಹೊಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಬಿಗ್&zwnj;ಬಾಸ್&zwnj;ನಲ್ಲಿ ಸಿಕ್ಕ ಸಂಭಾವನೆಗಿಂತ ಬಟ್ಟೆಗೇ ಹೆಚ್ಚು ಖರ್ಚು!&lt;/p&gt;&lt;p&gt;ಜಾಹ್ನವಿ ಅಂದ ಕೂಡಲೇ ನೆನಪಾಗುವುದು ಅವರ ಹೈ-ಕ್ಲಾಸ್ ಫ್ಯಾಷನ್. ಬಿಗ್&zwnj;ಬಾಸ್ ಮನೆಯಲ್ಲಿದ್ದಾಗ ಪ್ರತಿ ದಿನವೂ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದ ಅವರು, ಇತ್ತೀಚೆಗೆ ಒಂದು ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದರು. ಬಿಗ್&zwnj;ಬಾಸ್ ಕಾರ್ಯಕ್ರಮದಿಂದ ತಮಗೆ ಸಿಕ್ಕ ಸಂಭಾವನೆಗಿಂತಲೂ, ಅಲ್ಲಿ ಧರಿಸಿದ ಬಟ್ಟೆ ಮತ್ತು ಮೇಕಪ್&zwnj;ಗಾಗಿ ತಾವು ಲಕ್ಷಾಂತರ ರೂಪಾಯಿ ಹೆಚ್ಚು ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದರು. ಈ ವಿಚಾರ ಕೇಳಿ ನೆಟ್ಟಿಗರು ದಂಗಾಗಿದ್ದರು.&lt;/p&gt;&lt;p&gt;ವೈಯಕ್ತಿಕ ಜೀವನ ಮತ್ತು ಎರಡನೇ ಮದುವೆ ಬಗ್ಗೆ ಸ್ಪಷ್ಟನೆ:&lt;/p&gt;&lt;p&gt;ಬಿಗ್&zwnj;ಬಾಸ್ ಮನೆಯಲ್ಲಿದ್ದಾಗ ಜಾಹ್ನವಿ ಅವರ ವೈಯಕ್ತಿಕ ಜೀವನ, ವಿಚ್ಛೇದನ ಮತ್ತು ಮಾಜಿ ಪತಿಯ ಹೇಳಿಕೆಗಳು ಭಾರಿ ಸುದ್ದಿಯಾಗಿದ್ದವು. ಆದರೆ ಈಗ ಎಲ್ಲದಕ್ಕೂ ಪೂರ್ಣವಿರಾಮ ಹಾಕಿರುವ ಅವರು, &quot;ಸದ್ಯಕ್ಕೆ ನನಗೆ ಎರಡನೇ ಮದುವೆ ಆಗುವ ಯೋಚನೆಯೇ ಇಲ್ಲ. ನನ್ನ ಮಗನೇ ನನ್ನ ಸರ್ವಸ್ವ, ಅವನೇ ನನ್ನ ಪ್ರಪಂಚ. ಉಳಿದ ಸಮಯವನ್ನು ಸಮಾಜ ಸೇವೆ ಮತ್ತು ರಾಜಕೀಯಕ್ಕಾಗಿ ಮೀಸಲಿಡುತ್ತೇನೆ&quot; ಎಂದು ಖಡಕ್ ಆಗಿ ಹೇಳಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಬಿಗ್&zwnj;ಬಾಸ್ ಕಿರೀಟ ಮುಡಿಗೇರಿಸಿಕೊಳ್ಳದಿದ್ದರೂ ಜನರ ಮನ ಗೆದ್ದಿರುವ ಜಾಹ್ನವಿ, ಈಗ ರಾಜಕೀಯದಲ್ಲಿ ಯಾವ ರೀತಿಯ ಮೋಡಿ ಮಾಡಲಿದ್ದಾರೆ? ಜೆಡಿಎಸ್ ಪಕ್ಷಕ್ಕೆ ಈ ಗ್ಲಾಮರಸ್ ನಾಯಕಿಯ ಸೇರ್ಪಡೆಯಿಂದ ಎಷ್ಟು ಬಲ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/my-son-is-my-world-and-my-remaining-time-is-for-politics-and-social-service-says-bigg-boss-fame-jahnavi-for-plans/articleshow-gmmvvzg"/>
        </item>
        <item>
            <title><![CDATA[Shock News: ಸಾಕ್ಷಿ ಶಿವಾನಂದ್ ಲೈಫಲ್ಲಿ ಘೋರ ದುರಂತ; ಆತನ ಫೋನ್‌ಕಾಲ್‌ಗೆ ಹೆದರಿ ಇದ್ದಕ್ಕಿದ್ದಂತೆ ನಾಪತ್ತೆಯಾದ ನಟಿ!]]></title>
            <link>https://kannada.asianetnews.com/cine-world/sakshi-shivanand-driven-away-from-mumbai-by-calls-from-an-underworld-linked-producer-then-acted-in-south-indian-films/articleshow-nb379s5</link>
            <guid isPermaLink="true">https://kannada.asianetnews.com/cine-world/sakshi-shivanand-driven-away-from-mumbai-by-calls-from-an-underworld-linked-producer-then-acted-in-south-indian-films/articleshow-nb379s5</guid>
            <pubDate>Wed, 27 May 2026 18:05:54 +0530</pubDate>
            <description><![CDATA[&lt;p&gt;ಸಾಕ್ಷಿ ಶಿವಾನಂದ್, ಮೊದಲು ಕನ್ನಡಕ್ಕೆ ಬಂದಿದ್ದು &lsquo;ಗಲಾಟೆ ಅಲಿಯಂದಿರು&rsquo; ಮೂಲಕ. ಆದರೆ ಆಕೆಗೆ ಬಾಲಿವುಡ್&zwnj;ನಲ್ಲಿ &lsquo;ಆಪ್ಕೋ ಪೆಹಲೆ ಭಿ ಕಹಿ ದೇಖಾ ಹೈ&rsquo; ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತು. ಇಡೀ ಭಾರತವೇ ಆಕೆಯತ್ತ ತಿರುಗಿ ನೋಡುವಷ್ಟರಲ್ಲಿ ಆಕೆಗೆ ಒಂದು ದೊಡ್ಡ ಶಾಕ್ ಕಾದಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmpy0vvx06hk6afq3vf30qe,imgname-sakshi-shivanand-1779885343611.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಣ್ಣದ ಲೋಕದ &lsquo;ಸೈನಿಕ&rsquo; ಸುಂದರಿ ಸಾಕ್ಷಿ ಶಿವಾನಂದ್ ರಾತ್ರೋರಾತ್ರಿ ಮಾಯವಾಗಿದ್ದೇಕೆ?&lt;/strong&gt;&lt;/p&gt;&lt;p&gt;90ರ ದಶಕದ ಕೊನೆಯಲ್ಲಿ ಬೆಳ್ಳಿತೆರೆಯನ್ನು ಆಳಿದ ಸುಂದರಿಯರಲ್ಲಿ ಸಾಕ್ಷಿ ಶಿವಾನಂದ್ (Sakshi Shivanand) ಹೆಸರು ಮುಂಚೂಣಿಯಲ್ಲಿತ್ತು. &lsquo;ಸೈನಿಕ&rsquo; ಚಿತ್ರದಲ್ಲಿ ಯೋಗಿ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ ಆಕೆಯ ಕೆಮಿಸ್ಟ್ರಿ ಇಂದಿಗೂ ಅಭಿಮಾನಿಗಳ ಮನದಲ್ಲಿ ಹಚ್ಚ ಹಸಿರು. ಆದರೆ, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಈ ನಟಿ ಚಿತ್ರರಂಗದಿಂದ &lsquo;ವ್ಯಾನಿಶ್&rsquo; ಆದದ್ದು ಒಂದು ದೊಡ್ಡ ಮಿಸ್ಟರಿ. ಅಸಲಿಗೆ, ಆಕೆಯ ಜೀವನದಲ್ಲಿ ನಡೆದ ಆ ಘಟನೆಗಳು ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ!&lt;/p&gt;&lt;h2&gt;ಮುಂಬೈ ಹುಡುಗಿಯ ಬಾಲಿವುಡ್ ಬ್ರೇಕ್ ಹಾಗೂ ಭೂಗತ ಲೋಕದ ಭಯ!&lt;/h2&gt;&lt;p&gt;1977ರಲ್ಲಿ ಮುಂಬೈನಲ್ಲಿ ಜನಿಸಿದ ಸಾಕ್ಷಿ ಶಿವಾನಂದ್, ಮೊದಲು ಕನ್ನಡಕ್ಕೆ ಬಂದಿದ್ದು &lsquo;ಗಲಾಟೆ ಅಲಿಯಂದಿರು&rsquo; ಮೂಲಕ. ಆದರೆ ಆಕೆಗೆ ಬಾಲಿವುಡ್&zwnj;ನಲ್ಲಿ &lsquo;ಆಪ್ಕೋ ಪೆಹಲೆ ಭಿ ಕಹಿ ದೇಖಾ ಹೈ&rsquo; ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತು. ಇಡೀ ಭಾರತವೇ ಆಕೆಯತ್ತ ತಿರುಗಿ ನೋಡುವಷ್ಟರಲ್ಲಿ ಆಕೆಗೆ ಒಂದು ದೊಡ್ಡ ಶಾಕ್ ಕಾದಿತ್ತು. ಅದು &lsquo;ಅಂಡರ್&zwnj;ವರ್ಲ್ಡ್ ಮಾಫಿಯಾ&rsquo;! ಸಾಕ್ಷಿ ನಟಿಸಬೇಕಿದ್ದ ಚಿತ್ರವೊಂದಕ್ಕೆ ಭೂಗತ ಲೋಕದ ನಂಟಿತ್ತು. ಅಷ್ಟೇ ಅಲ್ಲದೆ, ಪ್ರಾಣ ಬೆದರಿಕೆಯ ಕರೆಗಳು ಬರಲು ಶುರುವಾದಾಗ ಸಾಕ್ಷಿ ಭಯಭೀತರಾದರು. ಬಾಲಿವುಡ್ ಎನ್ನುವುದು ಅಂದು ಮಾಫಿಯಾದ ಕಪಿಮುಷ್ಟಿಯಲ್ಲಿತ್ತು. ಪ್ರಾಣ ಉಳಿಸಿಕೊಳ್ಳಲು ಸಾಕ್ಷಿ ರಾತ್ರೋರಾತ್ರಿ ಫೋನ್ ನಂಬರ್ ಬದಲಿಸಿ, ಮುಂಬೈಗೆ ಗುಡ್&zwnj;ಬೈ ಹೇಳಿ ದಕ್ಷಿಣ ಭಾರತಕ್ಕೆ ಓಡಿಬಂದಿದ್ದರು!&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ಮತ್ತು ಟಾಲಿವುಡ್&zwnj;ನ &lsquo;ಲಕ್ಕಿ ಗರ್ಲ್&rsquo;:&lt;/p&gt;&lt;p&gt;ಮುಂಬೈನಿಂದ ಓಡಿಬಂದ ಸಾಕ್ಷಿಗೆ ದಕ್ಷಿಣ ಭಾರತದ ಚಿತ್ರರಂಗ ಕೈ ಹಿಡಿಯಿತು. ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು, ಅಕ್ಕಿನೇನಿ ನಾಗಾರ್ಜುನ ಅವರಂತಹ ಸೂಪರ್&zwnj;ಸ್ಟಾರ್&zwnj;ಗಳ ಜೊತೆ ನಟಿಸಿ &lsquo;ಸ್ಟಾರ್ ನಾಯಕಿ&rsquo; ಎನಿಸಿಕೊಂಡರು. ಕನ್ನಡದಲ್ಲಿ ಉಪೇಂದ್ರ ಅವರ &lsquo;ನಗುವ ನಯನ&rsquo; ಮತ್ತು &lsquo;ಸೈನಿಕ&rsquo; ಚಿತ್ರಗಳು ಆಕೆಯನ್ನು ಕನ್ನಡಿಗರ ಮನೆಮಾತಾಗಿಸಿದವು. ಸುಂದರ ಕಣ್ಣುಗಳು ಮತ್ತು ಸಹಜ ನಟನೆಯಿಂದ ಆಕೆ ಸಾವಿರಾರು ಯುವಕರ ಹಾರ್ಟ್ ಬ್ರೇಕ್ ಮಾಡಿದ್ದರು.&lt;/p&gt;&lt;h3&gt;ಮದುವೆಯ ನಂತರ ಶುರುವಾಯ್ತು ಅಸಲಿ ಸಿನಿಮಾ!&lt;/h3&gt;&lt;h3&gt;ಸಾಗರ್ ಎಂಬುವವರನ್ನು ಮದುವೆಯಾದ ನಂತರ ಸಾಕ್ಷಿ ಬಣ್ಣದ ಲೋಕದಿಂದ ದೂರವಾಗಿ ಸಂಸಾರ ನೌಕೆಯಲ್ಲಿ ಮುಳುಗಿದರು. ಆದರೆ, 2019ರಲ್ಲಿ ಸಾಕ್ಷಿ ಹೆಸರು ಮತ್ತೆ ಹೆಡ್&zwnj;ಲೈನ್ಸ್&zwnj;ಗೆ ಬಂತು. ಇದಕ್ಕೆ ಕಾರಣ ಅವರ ಸ್ವಂತ ತಂಗಿ, ನಟಿ ಶಿಲ್ಪಾ ಆನಂದ್ (ಓಹನ್ನಾ ಶಿವಾನಂದ್) ಮಾಡಿದ ಆಘಾತಕಾರಿ ಆರೋಪ! &quot; ನನ್ನ ಅಕ್ಕ ಸಾಕ್ಷಿ ಮತ್ತು ಆಕೆಯ ಅತ್ತೆ ಭಾವನಾ ಸೇರಿ ನನ್ನನ್ನು ಮತ್ತು ತಾಯಿಯನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ. ವಿಮಾ ಹಣಕ್ಕಾಗಿ ಅವರು ಈ ಕ್ರಿಮಿನಲ್ ಪ್ಲಾನ್ ಮಾಡಿದ್ದಾರೆ&quot; ಎಂದು ಶಿಲ್ಪಾ ಸೋಶಿಯಲ್ ಮೀಡಿಯಾದಲ್ಲಿ ಬಾಂಬ್ ಸಿಡಿಸಿದ್ದರು. ಈ ಕೌಟುಂಬಿಕ ಕಲಹ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿತ್ತು.&lt;/h3&gt;&lt;p&gt;ಈಗ ಸಾಕ್ಷಿ ಶಿವಾನಂದ್ ಎಲ್ಲಿದ್ದಾರೆ?&lt;/p&gt;&lt;p&gt;ಸಿನಿಮಾಗಳಿಂದ ಸಂಪೂರ್ಣ ದೂರವಿರುವ ಸಾಕ್ಷಿ, ಈಗ ತಮ್ಮ ಖಾಸಗಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ವಿದೇಶಗಳಲ್ಲಿ ಹೆಚ್ಚಾಗಿ ಕಾಲ ಕಳೆಯುವ ಅವರು, ಗ್ಲಾಮರ್ ಪ್ರಪಂಚದ ಚಕ್ರವ್ಯೂಹದಿಂದ ಹೊರಬಂದು ನೆಮ್ಮದಿಯ ಜೀವನ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಅಷ್ಟಾಗಿ ಸಕ್ರಿಯವಾಗಿರದ ಸಾಕ್ಷಿ, ಇಂದಿಗೂ ತಮ್ಮ ಹಳೆಯ ಅಭಿಮಾನಿಗಳ ಪಾಲಿಗೆ &lsquo;ಸೈನಿಕ&rsquo;ನ ಮುದ್ದಾದ ಹುಡುಗಿಯಾಗಿಯೇ ಉಳಿದಿದ್ದಾರೆ.&lt;/p&gt;&lt;p&gt;ಒಬ್ಬ ನಟಿ ಮಾಫಿಯಾಕ್ಕೆ ಹೆದರಿ ಓಡಿ ಬಂದದ್ದು, ಸ್ಟಾರ್ ನಾಯಕಿಯಾಗಿ ಮೆರೆದದ್ದು ಮತ್ತು ಕೊನೆಯಲ್ಲಿ ಕುಟುಂಬದ ಕಲಹಕ್ಕೆ ಸಿಲುಕಿದ್ದು ನಿಜಕ್ಕೂ ಸಾಕ್ಷಿ ಶಿವಾನಂದ್ ಜೀವನವನ್ನು ಒಂದು ಟ್ರಾಜಿಡಿ ಸಿನಿಮಾದಂತೆ ಮಾಡಿದೆ. ಆದರೂ, ಆಕೆಯ ಹಳೆಯ ಸಿನಿಮಾಗಳು ಇಂದಿಗೂ ನಮಗೆ ಆ &lsquo;ಗೋಲ್ಡನ್ ಎರಾ&rsquo;ವನ್ನು ನೆನಪಿಸುತ್ತಲೇ ಇರುತ್ತವೆ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/sakshi-shivanand-driven-away-from-mumbai-by-calls-from-an-underworld-linked-producer-then-acted-in-south-indian-films/articleshow-nb379s5"/>
        </item>
        <item>
            <title><![CDATA[ಪಂಚೆ,ಶಲ್ಯದಲ್ಲಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿಯನ್ನು ರವಿ ಅಣ್ಣನಿಗೆ ಹೋಲಿಸಿದ ನೆಟ್ಟಿಗರು!]]></title>
            <link>https://kannada.asianetnews.com/gallery/sandalwood/rakshit-shetty-is-compared-to-ravi-anna-of-su-from-so-obkc4u7</link>
            <guid isPermaLink="true">https://kannada.asianetnews.com/gallery/sandalwood/rakshit-shetty-is-compared-to-ravi-anna-of-su-from-so-obkc4u7</guid>
            <pubDate>Mon, 25 May 2026 21:56:24 +0530</pubDate>
            <description><![CDATA[&lt;p&gt;Rakshit Shetty: ಹಲವಾರು ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಪಂಚ, ಶಲ್ಯ ಧರಿಸಿ ಮಿರ ಮಿರನೆ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ ಬಗ್ಗೆ ಅಭಿಮಾನಿಗಳಲ್ಲಿ ಗುಸು ಗುಸು ಶುರುವಾಗಿದೆ. ಏನ್ ಹೇಳ್ತಿದ್ದಾರೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfz4212931h3n8b5svj10dt,imgname-rakshith-shetty-1-1779726157852.jpg" type="image/jpeg" height="390" width="690"/>
            <content:encoded><![CDATA[&lt;p&gt;Rakshit Shetty: ಹಲವಾರು ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಪಂಚ, ಶಲ್ಯ ಧರಿಸಿ ಮಿರ ಮಿರನೆ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ ಬಗ್ಗೆ ಅಭಿಮಾನಿಗಳಲ್ಲಿ ಗುಸು ಗುಸು ಶುರುವಾಗಿದೆ. ಏನ್ ಹೇಳ್ತಿದ್ದಾರೆ ನೋಡಿ.&lt;/p&gt;&lt;img&gt;&lt;p&gt;ಚಂದನವನದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, &lsquo;ಸಪ್ತ ಸಾಗರದಾಚೆ&rsquo; ಸಿನಿಮಾ ಬಳಿಕ ಸಂಪೂರ್ಣವಾಗಿ ಮರೆಯಾಗಿದ್ದರು. ತಮ್ಮ ಮುಂದಿನ ಸಿನಿಮಾ ಕಥೆ ಬರೆಯೋದ್ರಲ್ಲಿ ಬ್ಯುಸಿಯಾಗಿದ್ದರು ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ. ಇದೀಗ ಜನರ ಮುಂದೆ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ರಕ್ಷಿತ್ ಶೆಟ್ಟಿ ಫೋಟೊಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದು, ಪಂಚೆ, ಶಲ್ಯ ಧರಿಸಿ ಓಡಾಡುತ್ತಿರುವ ನಟ ರಕ್ಷಿತ್ ಶೆಟ್ಟಿಯನ್ನು ನೋಡಿ ಜನ ಗುಡ್ ನ್ಯೂಸ್ ಇದೆಯೇ ಎಂದು ಕೇಳುತ್ತಿದ್ದಾರೆ. ಆದರೆ ಈ ಫೋಟೊಗಳು ರಕ್ಷಿತ್ ಶೆಟ್ಟಿ ತಂದೆ-ತಾಯಿಯ 50ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಡೆದ ಪೂಜೆಗಾಗಿ ರಕ್ಷಿತ್ ಈ ರೀತಿ ತಯಾರಾಗಿದ್ದರು.&lt;/p&gt;&lt;img&gt;&lt;p&gt;ರಿಚರ್ಡ್ ಆಂಟನಿ ಮತ್ತು ಪುಣ್ಯಕೋಟಿ ಎರಡು ಸಿನಿಮಾಗಳನ್ನು ಮಾಡುವುದಾಗಿ ಹೇಳಿ, ಮೀಡಿಯಾದಿಂದ ಸಂಪೂರ್ಣವಾಗಿ ಕಣ್ಮರೆಯಾಗಿದ್ದ ರಕ್ಷಿತ್ ಅವರನ್ನು ನೋಡಿ ಅಭಿಮಾನಿಗಳಂತೂ ಈ ರೀತಿಯಾಗಿ ಪಂಚೆ ಶಲ್ಯದಲ್ಲಿ ನೋಡಿ ಸಖತ್ ಖುಷಿ ಪಟ್ಟಿದ್ದಾರೆ. ತುಂಬಾ ಚೆನ್ನಾಗಿ ಕಾಣಿಸ್ತಿದ್ದೀರಿ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಫೋಟೊ ನೋಡಿ ಕೆಲವು ಅಭಿಮಾನಿಗಳು ಸು ಫ್ರಮ್ ಸೋ ಸಿನಿಮಾದ ರವಿ ಅಣ್ಣನಿಗೆ ಹೋಲಿಕೆ ಮಾಡುತ್ತಿದ್ದಾರೆ. ಟ್ರೋಲ್ ಪೇಜ್ ಗಳು ರವಿ ಅಣ್ಣ ಹಾಗೂ ರಕ್ಷಿತ್ ಶೆಟ್ಟಿ ಫೋಟೊಗಳೆಡನ್ನು ಸೇರಿಸಿ, ರಕ್ಷಿತ್ ಶೆಟ್ಟಿ ನಿಧಾನವಾಗಿ ರವಿ ಅಣ್ಣ ಆಗಿ ಬದಲಾಗುತ್ತಿದ್ದಾರೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸು ಫ್ರಮ್ ಸೋ ಸಿನಿಮಾದಲ್ಲಿ ರವಿ ಅಣ್ಣ ಸದಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ, ದೇಹ ತೂಕ ಕೂಡ ತುಸು ಹೆಚ್ಚು, ಅಷ್ಟೇ ಯಾಕೆ ಮದುವೆ ಕೂಡ ಆಗಿಲ್ಲ. ಅದೇ ರೀತಿ ರಕ್ಷಿತ್ ಶೆಟ್ಟಿ ತೂಕ ಹೆಚ್ಚಿಸಿಕೊಂಡು 42 ಆದರೂ ಮದುವೆಯಾಗದೇ ಉಳಿದಿರುವುದಕ್ಕಾಗಿ ಇಬ್ಬರ ಹೋಲಿಕೆ ಮಾಡಲಾಗಿದೆ.&lt;/p&gt;]]></content:encoded>
            <category>sandalwood</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/rakshit-shetty-is-compared-to-ravi-anna-of-su-from-so-obkc4u7"/>
        </item>
        <item>
            <title><![CDATA[‘ಲೋ ನವೀನ’ ಸಿನಿಮಾ ಹಳ್ಳಿ ಸೊಗಡಿನಿಂದ ಪ್ರೇಕ್ಷಕರ ಮನಗೆದ್ದಿದೆ: ನವೀನ್ ಸಜ್ಜು ಹರ್ಷ]]></title>
            <link>https://kannada.asianetnews.com/sandalwood/naveen-sajjus-lo-naveena-kannada-movie-response-davanagere-gvd/articleshow-pfvoscb</link>
            <guid isPermaLink="true">https://kannada.asianetnews.com/sandalwood/naveen-sajjus-lo-naveena-kannada-movie-response-davanagere-gvd/articleshow-pfvoscb</guid>
            <pubDate>Wed, 27 May 2026 23:48:19 +0530</pubDate>
            <description><![CDATA[&lt;p&gt;&lsquo;ಲೋ ನವೀನ&rsquo; ಸಿನಿಮಾವು ಮಂಡ್ಯ, ಮೈಸೂರು ಭಾಗದ ಹಳ್ಳಿ ಸೊಗಡನ್ನು ಮನರಂಜನಾತ್ಮಕವಾಗಿ ತೆರೆಯ ಮೇಲೆ ತಂದ ಸಿನಿಮಾ ಆಗಿದ್ದು, ಎಲ್ಲ ಕಡೆ ಪ್ರೇಕ್ಷಕರ ಗಮನ ಸೆಳೆದು ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ ಎಂದು ನವೀನ್ ಸಜ್ಜು ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kre08z8mfp65ybznpdfp747p,imgname-cjc-1778586516756.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮೇ.27): &lt;/strong&gt;&lsquo;ಲೋ ನವೀನ&rsquo; ಸಿನಿಮಾವು ಮಂಡ್ಯ, ಮೈಸೂರು ಭಾಗದ ಹಳ್ಳಿ ಸೊಗಡನ್ನು ಮನರಂಜನಾತ್ಮಕವಾಗಿ ತೆರೆಯ ಮೇಲೆ ತಂದ ಸಿನಿಮಾ ಆಗಿದ್ದು, ಎಲ್ಲ ಕಡೆ ಪ್ರೇಕ್ಷಕರ ಗಮನ ಸೆಳೆದು ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ ಎಂದು ಚಿತ್ರದ ನಾಯಕ ನಟ ನವೀನ್ ಸಜ್ಜು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಬದುಕಿನ ಕಥೆಯ ನೈಜ ಚಿತ್ರಣ, ಪ್ರೀತಿ, ಸ್ನೇಹ, ಕುಟುಂಬ ಬಾಂಧವ್ಯ, ಗ್ರಾಮೀಣ ಯುವಕ ಜೀವನಶೈಲಿಯನ್ನು ಮನಮುಟ್ಟುವಂತಹ ಕಥೆ ಒಳಗೊಂಡ &lsquo;ಲೋ ನವೀನ&rsquo; ಪ್ರೇಕ್ಷಕರ ಮನ ಗೆಲ್ಲುತ್ತಿದೆ ಎಂದರು.&lt;/p&gt;&lt;p&gt;ಧನುರ್ಧಾರಿ ಪವನ್&zwnj; ಚಿತ್ರವನ್ನು ನಿರ್ದೇಶಿಸಿದ್ದು, ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಕೀರ್ತಿ ಸ್ವಾಮಿ, ಬೆನ್ ಚಿಕ್ಕ ಸ್ವಾಮಿ ಹಾಗೂ ಎನ್ಎಸ್&zwnj; ಸ್ಟುಡಿಯೋಸ್&zwnj; ನಿರ್ಮಾಣ ಮಾಡಿರುವ ಚಿತ್ರ ಇದಾಗಿದೆ. ಒಟ್ಟು 8 ಹಾಡುಗಳಿರುವ &lsquo;ಲೋ ನವೀನ&rsquo;ದಲ್ಲಿ ವರ್ಷ ಗಿರಿಧರ್, ರೇಷ್ಮಾ ಗೌಡ, ಪ್ರಕಾಶ ತುಮ್ಮಿನಾಡು, ಅಪೂರ್ವಶ್ರೀ, ಅಭಿಜಿತ್ ಗೌಡ, ಮಲ್ಲರಾಜು ಮಾರಸಿಂಗನಹಳ್ಳಿ ಸೇರಿದಂತೆ ಹಲವಾರು ಹೊಸ ಕಲಾವಿದರು ಅಭಿನಯಿಸಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಮೇ 15ರಂದು ರಾಜ್ಯಾದ್ಯಂತ ತೆರೆ ಕಂಡ &lsquo;ಲೋ ನವೀನ&rsquo; ಮೈಸೂರು, ಮಂಡ್ಯ ಹಾಗೂ ಇತರೆ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾ ಇದಾಗಿದೆ. ನಾಯಕನಾಗಿ ತಾವು ಅಭಿನಯಿಸಿದ ಮೊದಲ ಚಿತ್ರಕ್ಕೆ ಜನರಿಂದ ಉತ್ತಮ ಸ್ಪಂದನೆ, ಪ್ರೋತ್ಸಾಹ ವ್ಯಕ್ತವಾಗುತ್ತಿದೆ. ಇದು ತಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್&zwnj;&lt;/strong&gt;&lt;/h2&gt;&lt;p&gt;ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಹೊಸ ಅಲೆ ಎಬ್ಬಿಸುತ್ತಿರುವ ಈ ಚಿತ್ರದ ಮೊದಲಾರ್ಧದಲ್ಲಿ ಹಳ್ಳಿ ಸೊಗಡಿನ ಭರಪೂರ ಕಾಮಿಡಿ ಹಾಗೂ ತುಂಟಾಟ ಪ್ರೇಕ್ಷಕರನ್ನು ನಗಿಸಿದರೆ, ದ್ವಿತೀಯಾರ್ಧದಲ್ಲಿ ಕಥೆ ಕೊಂಚ ಗಂಭೀರ ತಿರುವು ಪಡೆದುಕೊಳ್ಳುತ್ತದೆ. ಚಿತ್ರಕ್ಕೆ ತಾವೇ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳು ಚಿತ್ರದ ದೊಡ್ಡ ಫ್ಲಸ್ ಪಾಯಿಂಟ್. ಅದರಲ್ಲೂ ವಿಶೇಷವಾಗಿ ಎಚ್.ಡಿ.ಕೋಟೆ ಗ್ರಾಮೀಣ ಪ್ರತಿಭೆಗಳಾದ ಚಮ್ಮಮ್ಮ ಹಾಗೂ ಲಕ್ಷಮ್ಮ ಹಾಡಿರುವ ಜನಪದ ಶೈಲಿಯ ಕೋಣಾಣೆ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್&zwnj;ನಲ್ಲಿದ್ದು, ಪ್ರೇಕ್ಷಕರ ಮನಗೆದ್ದಿದೆ ಎಂದು ನವೀನ ಸಜ್ಜು ಹೇಳಿದರು.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/naveen-sajjus-lo-naveena-kannada-movie-response-davanagere-gvd/articleshow-pfvoscb"/>
        </item>
        <item>
            <title><![CDATA['ಲೋ ನವೀನ' ಸಿನಿಮಾ ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್: ನವೀನ್ ಸಜ್ಜುಗೆ ಹೇಳಿದ ಮಾತು ವೈರಲ್!]]></title>
            <link>https://kannada.asianetnews.com/gallery/sandalwood/ashwini-puneeth-rajkumar-praises-lo-naveena-movie-naveen-sajju-gvd-s7q1ydb</link>
            <guid isPermaLink="true">https://kannada.asianetnews.com/gallery/sandalwood/ashwini-puneeth-rajkumar-praises-lo-naveena-movie-naveen-sajju-gvd-s7q1ydb</guid>
            <pubDate>Tue, 26 May 2026 20:11:56 +0530</pubDate>
            <description><![CDATA[&lt;p&gt;ಗಾಯಕ, ಸಂಗೀತ ನಿರ್ದೇಶಕ ಹಾಗೂ ಇದೀಗ ನಾಯಕನಟನಾಗಿ ಗುರುತಿಸಿಕೊಂಡಿರುವ ನವೀನ್ ಸಜ್ಜು ಅಭಿನಯದ ಚೊಚ್ಚಲ ಸಿನಿಮಾ &lsquo;ಲೋ ನವೀನ&rsquo; ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಇದೀಗ ದೊಡ್ಮನೆ ಕುಟುಂಬದಿಂದಲೂ ವಿಶೇಷ ಪ್ರಶಂಸೆ ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksjbggvev3evjk0fyvp0henc,imgname-1-1779806258030.png" type="image/jpeg" height="390" width="690"/>
            <content:encoded><![CDATA[&lt;p&gt;ಗಾಯಕ, ಸಂಗೀತ ನಿರ್ದೇಶಕ ಹಾಗೂ ಇದೀಗ ನಾಯಕನಟನಾಗಿ ಗುರುತಿಸಿಕೊಂಡಿರುವ ನವೀನ್ ಸಜ್ಜು ಅಭಿನಯದ ಚೊಚ್ಚಲ ಸಿನಿಮಾ &lsquo;ಲೋ ನವೀನ&rsquo; ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಇದೀಗ ದೊಡ್ಮನೆ ಕುಟುಂಬದಿಂದಲೂ ವಿಶೇಷ ಪ್ರಶಂಸೆ ಸಿಕ್ಕಿದೆ.&lt;/p&gt;&lt;img&gt;&lt;p&gt;ಗಾಯಕ, ಸಂಗೀತ ನಿರ್ದೇಶಕ ಹಾಗೂ ಇದೀಗ ನಾಯಕನಟನಾಗಿ ಗುರುತಿಸಿಕೊಂಡಿರುವ ನವೀನ್ ಸಜ್ಜು ಅಭಿನಯದ ಚೊಚ್ಚಲ ಸಿನಿಮಾ &lsquo;ಲೋ ನವೀನ&rsquo; ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಇದೀಗ ದೊಡ್ಮನೆ ಕುಟುಂಬದಿಂದಲೂ ವಿಶೇಷ ಪ್ರಶಂಸೆ ಸಿಕ್ಕಿದೆ. ವಿಶೇಷವಾಗಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್&zwnj;ಕುಮಾರ್ ಚಿತ್ರದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಚಿತ್ರತಂಡದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದ ದಿವಂಗತ ಪುನೀತ್ ರಾಜ್&zwnj;ಕುಮಾರ್ ಅವರ ಹೆಜ್ಜೆಗುರುತುಗಳಲ್ಲಿ ಸಾಗುತ್ತಿರುವ ಅಶ್ವಿನಿ ಪುನೀತ್ ರಾಜ್&zwnj;ಕುಮಾರ್, ಹೊಸ ಕಲಾವಿದರು ಮತ್ತು ವಿಭಿನ್ನ ಪ್ರಯತ್ನಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದೇ ರೀತಿ, ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆಯುತ್ತಿರುವ &lsquo;ಲೋ ನವೀನ&rsquo; ಚಿತ್ರವನ್ನು ವೀಕ್ಷಿಸಿ ಚಿತ್ರತಂಡವನ್ನು ಅಭಿನಂದಿಸಿದ್ದಾರೆ.&lt;/p&gt;&lt;img&gt;&lt;p&gt;ಚಿತ್ರ ವೀಕ್ಷಿಸಿದ ಬಳಿಕ ತಂಡದೊಂದಿಗೆ ಸಾಕಷ್ಟು ಸಮಯ ಚರ್ಚೆ ನಡೆಸಿದ ಅಶ್ವಿನಿ, ಚಿತ್ರದ ಕಥಾಹಂದರ, ಸಹಜ ಅಭಿನಯ ಮತ್ತು ಮನರಂಜನಾತ್ಮಕ ನಿರೂಪಣೆಯನ್ನು ಶ್ಲಾಘಿಸಿದ್ದಾರೆ. 'ಸರಳ ಕಥೆಯನ್ನು ಜನರ ಮನಸ್ಸಿಗೆ ತಲುಪುವ ರೀತಿಯಲ್ಲಿ ಹೇಳಿರುವುದು ಚಿತ್ರದ ದೊಡ್ಡ ಶಕ್ತಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ನಟ ನವೀನ್ ಸಜ್ಜು ಹಾಗೂ ಇಡೀ ಚಿತ್ರತಂಡದ ಪರಿಶ್ರಮವನ್ನು ಕೊಂಡಾಡಿದ ಅವರು, ಮುಂದಿನ ದಿನಗಳಲ್ಲಿ ಸಿನಿಮಾ ಇನ್ನಷ್ಟು ಜನರಿಗೆ ತಲುಪಲು ಯಾವ ರೀತಿಯ ಹೆಜ್ಜೆ ಇಡಬೇಕು ಎಂಬುದರ ಕುರಿತು ಸಲಹೆಗಳನ್ನೂ ನೀಡಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಚಿತ್ರದ ಮತ್ತೊಂದು ವಿಶೇಷತೆಯಾಗಿ ಮಂಡ್ಯ ಶೈಲಿಯ ಭಾಷೆ, ನೈಜ ಬದುಕಿಗೆ ಹತ್ತಿರವಾಗಿರುವ ಪಾತ್ರಗಳು ಮತ್ತು ಸಹಜ ನಿರೂಪಣೆಯನ್ನು ಉಲ್ಲೇಖಿಸಿದ ಅಶ್ವಿನಿ ಪುನೀತ್ ರಾಜ್&zwnj;ಕುಮಾರ್, 'ಕನ್ನಡ ಚಿತ್ರರಂಗಕ್ಕೆ ನಿಮ್ಮಂತಹ ಪ್ರತಿಭಾವಂತ ಯುವ ಕಲಾವಿದರು ಅಗತ್ಯ' ಎಂದು ತಂಡಕ್ಕೆ ಶುಭ ಹಾರೈಸಿದ್ದಾರೆ. ಚೊಚ್ಚಲ ನಾಯಕನಟನಾಗಿ ನವೀನ್ ಸಜ್ಜುಗೆ ಸಿಕ್ಕಿರುವ ಈ ಮೆಚ್ಚುಗೆ, &lsquo;ಲೋ ನವೀನ&rsquo; ಸಿನಿಮಾದ ಯಶಸ್ಸಿಗೆ ಮತ್ತೊಂದು ದೊಡ್ಡ ಬಲವಾಗಿ ಪರಿಣಮಿಸಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/ashwini-puneeth-rajkumar-praises-lo-naveena-movie-naveen-sajju-gvd-s7q1ydb"/>
        </item>
        <item>
            <title><![CDATA[Shocking: ನಟಿ ಸೌಂದರ್ಯ ನಿಧನರಾದ ದಿನ ಆ ನಟನಿಗೆ ಚಪ್ಪಲಿಯಲ್ಲಿ ಹೊಡೆದರು.. ಇಂದು ಈ ನಟ ಎಲ್ಲಿದ್ದಾರೆ?]]></title>
            <link>https://kannada.asianetnews.com/cine-world/a-person-beats-to-bandla-ganesh-in-slippers-the-day-actress-soundarya-died-and-now-he-became-producer/articleshow-so5vnmx</link>
            <guid isPermaLink="true">https://kannada.asianetnews.com/cine-world/a-person-beats-to-bandla-ganesh-in-slippers-the-day-actress-soundarya-died-and-now-he-became-producer/articleshow-so5vnmx</guid>
            <pubDate>Mon, 25 May 2026 18:40:48 +0530</pubDate>
            <description><![CDATA[&lt;p&gt;ಆದರೆ ತಮಗೆ ಚಪ್ಪಲಿಯಿಂದ ಹೊಡೆದ ಆ 'ಸ್ಟಾರ್ ನಟ' ಯಾರು ಎಂಬುವುದನ್ನು ಈ ನಟ ಬಹಿರಂಗ ಪಡಿಸಿಲ್ಲ. ಆದರೆ 'ಅವರು ಒಳ್ಳೆಯವರೇ, ನನಗೆ ಮೊದಲೂ ಸಹಾಯ ಮಾಡಿದ್ದಾರೆ. ಆದರೆ ಅಂದು ಏಕೆ ಹಾಗೆ ಮಾಡಿದರೋ ಗೊತ್ತಿಲ್ಲ&hellip;' ಎಂದಿದ್ದಾರೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfm4cwf1y7pmb0dzs0x873q,imgname-soundarya-1779714634639.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಪ್ಪಲಿಯಲ್ಲಿ ಹೊಡೆದ ಸ್ಟಾರ್ ನಟನಿಗೆ ಬಂಡ್ಲಾ ಗಣೇಶ್ ಕೊಟ್ಟ ತಿರುಗೇಟು ಹೇಗಿದೆ?&lt;/strong&gt;&lt;/p&gt;&lt;p&gt;ಬಣ್ಣದ ಲೋಕ ಅಂದರೆ ಅಲ್ಲಿ ಬರಿ ಗ್ಲಾಮರ್ ಮಾತ್ರ ಇರಲ್ಲ, ಅದರ ಹಿಂದೆ ಕಣ್ಣೀರು, ಅವಮಾನ ಮತ್ತು ಹತಾಶೆಯ ಕರಾಳ ಕಥೆಗಳೂ ಇರುತ್ತವೆ. ಇಂದು ಟಾಲಿವುಡ್&zwnj;ನಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆಸುವ, ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡುವ 'ಬಾಕ್ ಆಫೀಸ್ ಬಾದ್&zwnj;ಶಾ' ಬಂಡ್ಲಾ ಗಣೇಶ್ (Bandla Ganesh) ಅವರ ಬದುಕಿನಲ್ಲೂ ಅಂತಹದ್ದೇ ಒಂದು ಘಟನೆ ನಡೆದಿತ್ತು. ಅಂದು ಒಬ್ಬ ಸ್ಟಾರ್ ನಟ ಇವರಿಗೆ ಶೂನಿಂದ ಹೊಡೆದಿದ್ದರಂತೆ! ಈ ಕಹಿ ನೆನಪನ್ನು ಹಂಚಿಕೊಳ್ಳುವಾಗ ಗಣೇಶ್ ಇಂದಿಗೂ ಭಾವುಕರಾಗುತ್ತಾರೆ.&lt;/p&gt;&lt;h2&gt;ಸೌಂದರ್ಯ ತೀರಿಕೊಂಡ ಆ ಕರಾಳ ದಿನ ಮತ್ತು ಆ ಅವಮಾನ!&lt;/h2&gt;&lt;p&gt;ಅದು 2004ರ ಏಪ್ರಿಲ್ 17. ಇಡೀ ದಕ್ಷಿಣ ಭಾರತದ ಚಿತ್ರರಂಗ ಅಂದು ಶೋಕ ಸಾಗರದಲ್ಲಿ ಮುಳುಗಿತ್ತು. ಕನ್ನಡದ ಹೆಮ್ಮೆಯ ನಟಿ ಸೌಂದರ್ಯ (Soundarya) ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಸುದ್ದಿಯನ್ನು ಕೇಳಿ ಇಡೀ ಇಂಡಸ್ಟ್ರಿ ಬೆಚ್ಚಿಬಿದ್ದಿತ್ತು. ಅದೇ ಕರಾಳ ದಿನದಂದು ಬಂಡ್ಲಾ ಗಣೇಶ್ ಅವರ ಬದುಕಿನಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿತು.&lt;/p&gt;&lt;p&gt;ಆಗ ಬಂಡ್ಲಾ ಗಣೇಶ್ ಕೇವಲ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ನಟ. ಒಂದು ಶೂಟಿಂಗ್ ಸ್ಪಾಟ್&zwnj;ನಲ್ಲಿ ಒಬ್ಬ ಪ್ರಮುಖ ಸ್ಟಾರ್ ನಟನ ಬಳಿ ಹೋಗಿ, ಗೌರವದಿಂದ &quot;ಸರ್.. ಸರ್..&quot; ಎಂದು ಕರೆಯುತ್ತಿದ್ದರು. ಏನಾಯ್ತೋ ಏನೋ ಗೊತ್ತಿಲ್ಲ, ಆ ಸ್ಟಾರ್ ನಟನಿಗೆ ಇದ್ದಕ್ಕಿದ್ದಂತೆ ವಿಪರೀತ ಕೋಪ ಬಂತು. ಕುಳಿತಿದ್ದ ಜಾಗದಿಂದ ಎದ್ದ ನಟ, ತನ್ನ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಎಲ್ಲರೆದುರೇ ಗಣೇಶ್&zwnj;ಗೆ ಹೊಡೆದೇ ಬಿಟ್ಟರು!&lt;/p&gt;&lt;p&gt;ಒಡೆದ ಮನಸ್ಸು ಮತ್ತು ಕೆರಳಿದ ಶಪಥ!&lt;/p&gt;&lt;p&gt;ತುಂಬಿದ ಮಂದಿಯ ನಡುವೆ ನಡೆದ ಈ ಅವಮಾನ ಗಣೇಶ್ ಅವರ ಅಂತರಾತ್ಮವನ್ನು ಬೆಚ್ಚಿಬೀಳಿಸಿತು. ಕಣ್ಣೀರು ಹಾಕುತ್ತಾ ಅಲ್ಲಿಂದ ಹೊರಬಂದ ಗಣೇಶ್, &quot;ನನ್ನ ಹತ್ತಿರ ಹಣವಿಲ್ಲ, ಅಧಿಕಾರವಿಲ್ಲ ಎಂಬ ಕಾರಣಕ್ಕೆ ತಾನೇ ನನಗೆ ಈ ರೀತಿ ಮಾಡಿದ್ದು?&quot; ಎಂದು ಹಲುಬಿದರು. ಆದರೆ ಅವರು ಅಲ್ಲಿಗೆ ಸೋತು ಸುಮ್ಮನಾಗಲಿಲ್ಲ. ಅಕ್ಷರಶಃ ಸಿನಿಮಾ ಸ್ಟೈಲ್&zwnj;ನಲ್ಲಿ ಅಂದು ಒಂದು ದೊಡ್ಡ ಶಪಥ ಮಾಡಿದರು. ತಮ್ಮ ಪಕ್ಕದಲ್ಲಿದ್ದ ಗೆಳೆಯನ ಕೈ ಹಿಡಿದು ಗಣೇಶ್ ಹೀಗೆಂದರು: &quot;ಒಂದು ದಿನ ನಾನು ಇವರಿಗಿಂತ ಹೆಚ್ಚು ಹಣ ಗಳಿಸುತ್ತೇನೆ.. ದೊಡ್ಡ ನಿರ್ಮಾಣ ಸಂಸ್ಥೆ ಕಟ್ಟುತ್ತೇನೆ.. ಅಲ್ಲಿಯವರೆಗೆ ನನ್ನ ಹೆಸರು ಗಣೇಶ್ ಅಲ್ಲ!&quot;&lt;/p&gt;&lt;h3&gt;ಸೋಲನ್ನೇ ಸೋಪಾನ ಮಾಡಿಕೊಂಡ ಸಾಧಕ&lt;/h3&gt;&lt;p&gt;ಅಂದು ಬಿದ್ದ ಆ ಶೂ ಏಟು ಬಂಡ್ಲಾ ಗಣೇಶ್ ಅವರಿಗೆ ಸ್ಫೂರ್ತಿಯ ಬೆಂಕಿಯಾಯಿತು. ನಟನೆಯನ್ನು ಬಿಟ್ಟು ನಿರ್ಮಾಣದತ್ತ ಗಮನ ಹರಿಸಿದ ಅವರು, ಪವನ್ ಕಲ್ಯಾಣ್ ಅವರ 'ಗಬ್ಬರ್ ಸಿಂಗ್' ನಂತಹ ಬ್ಲಾಕ್&zwnj;ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿ ಟಾಲಿವುಡ್&zwnj;ನ ಸ್ಟಾರ್ ನಿರ್ಮಾಪಕರಾಗಿ ಬೆಳೆದರು. ಅಂದು ಅವಮಾನಿಸಿದವರು ಇಂದು ಇವರ ಎದುರು ತಲೆತಗ್ಗಿಸುವಂತೆ ಬೆಳೆದು ತೋರಿಸಿದರು.&lt;/p&gt;&lt;p&gt;ಯಾರು ಆ ಸೀಕ್ರೆಟ್ ಸ್ಟಾರ್ ನಟ?&lt;/p&gt;&lt;p&gt;ಬಂಡ್ಲಾ ಗಣೇಶ್ ಈ ಕಥೆಯನ್ನೇನೋ ಹೇಳಿದ್ದಾರೆ, ಆದರೆ ತಮಗೆ ಚಪ್ಪಲಿಯಿಂದ ಹೊಡೆದ ಆ 'ಸ್ಟಾರ್ ನಟ' ಯಾರು ಎಂಬ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ. &quot;ಅವರು ಒಳ್ಳೆಯವರೇ, ನನಗೆ ಮೊದಲೂ ಸಹಾಯ ಮಾಡಿದ್ದಾರೆ. ಆದರೆ ಅಂದು ಏಕಾದರೋ ಗೊತ್ತಿಲ್ಲ&quot; ಎಂದು ರಹಸ್ಯ ಕಾಯ್ದುಕೊಂಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಆ ನಟ ತೆಲುಗಿನವರೋ ಅಥವಾ ಕನ್ನಡದವರೋ? ಎಂಬ ಊಹಾಪೋಹಗಳು ಹರಿದಾಡುತ್ತಿವೆ.&lt;/p&gt;&lt;p&gt;ಕೊನೆಯ ಮಾತು: ಅವಮಾನ ಎಂಬುದು ಬೆಂಕಿಯಿದ್ದಂತೆ. ಅದರಲ್ಲಿ ಬೆಂದು ಬೂದಿಯಾಗಬಹುದು ಅಥವಾ ಅದೇ ಬೆಂಕಿಯಲ್ಲಿ ಅರಗಿನಂತೆ ಅರಳಿ ಜಗತ್ತೇ ಬೆರಗಾಗುವಂತೆ ಬೆಳಗಬಹುದು. ಬಂಡ್ಲಾ ಗಣೇಶ್ ಎರಡನೇ ಹಾದಿಯನ್ನು ಆರಿಸಿಕೊಂಡು ಸಾಧಿಸಿ ತೋರಿಸಿದ್ದಾರೆ. ಇದು ಸಿನಿಮಾ ಕಥೆಗಿಂತಲೂ ರೋಚಕವಾಗಿದೆ ಅಲ್ವಾ?&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/a-person-beats-to-bandla-ganesh-in-slippers-the-day-actress-soundarya-died-and-now-he-became-producer/articleshow-so5vnmx"/>
        </item>
        <item>
            <title><![CDATA[ಪುರುಷರಿಗೆ ನಾಚಿಕೆ ಆಗಬೇಕು- ಸಿಕ್ಸ್‌ ಪ್ಯಾಕ್‌ ಮಾಡಿ ತೋರಿಸಿದ ಕನ್ನಡದ ಸ್ಟಾರ್‌ ನಟನ ಮಗಳು! ಯಾರದು?]]></title>
            <link>https://kannada.asianetnews.com/gallery/sandalwood/kannada-actor-upendra-daughter-aishwarya-fitness-and-six-pack-body-uhogvcv</link>
            <guid isPermaLink="true">https://kannada.asianetnews.com/gallery/sandalwood/kannada-actor-upendra-daughter-aishwarya-fitness-and-six-pack-body-uhogvcv</guid>
            <pubDate>Tue, 26 May 2026 13:58:38 +0530</pubDate>
            <description><![CDATA[&lt;p&gt;Kannada Star Actor Daughter: ಕನ್ನಡದ ಸ್ಟಾರ್&zwnj; ನಟನ ಮಗಳೋರ್ವರು ಸಿಕ್ಸ್&zwnj; ಪ್ಯಾಕ್&zwnj; ಮಾಡಿದ್ದಾರೆ. ಈಗ ಈ ಫೋಟೋಗಳು ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗುತ್ತಿವೆ. ಹಾಗಾದರೆ ಯಾರದು? ಅವರು ಯಾರು?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshnv5xr5f07vfaw2tjpcav6,imgname-new-project---2026-05-26t134824.315-1779783538616.jpg" type="image/jpeg" height="390" width="690"/>
            <content:encoded><![CDATA[&lt;p&gt;Kannada Star Actor Daughter: ಕನ್ನಡದ ಸ್ಟಾರ್&zwnj; ನಟನ ಮಗಳೋರ್ವರು ಸಿಕ್ಸ್&zwnj; ಪ್ಯಾಕ್&zwnj; ಮಾಡಿದ್ದಾರೆ. ಈಗ ಈ ಫೋಟೋಗಳು ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗುತ್ತಿವೆ. ಹಾಗಾದರೆ ಯಾರದು? ಅವರು ಯಾರು?&amp;nbsp;&lt;/p&gt;&lt;img&gt;&lt;p&gt;ಹೌದು, ಪುರುಷರಿಗೆ ಠಕ್ಕರ್&zwnj; ಕೊಡೋ ರೀತಿಯಲ್ಲಿ ಸಿಕ್ಸ್&zwnj; ಪ್ಯಾಕ್&zwnj; ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿ ಅನೇಕರು ಕಂಗಾಲಾಗಿದ್ದಾರೆ.&lt;/p&gt;&lt;img&gt;&lt;p&gt;ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರ ಮಗಳು ಐಶ್ವರ್ಯಾ ಅವರು ಗುರುತೇ ಸಿಗದಷ್ಟರ ಮಟ್ಟಿಗೆ ಬದಲಾಗಿದ್ದಾರೆ, ಸಣ್ಣಗಾಗಿದ್ದಾರೆ.&lt;/p&gt;&lt;img&gt;&lt;p&gt;ಇವರ ಸಿಕ್ಸ್&zwnj; ಪ್ಯಾಕ್&zwnj; ನೋಡಿ ಅನೇಕರು ಕಂಗಾಲಾಗಿದ್ದಾರೆ. ಸರಿಯಾದ ಸಮತೋಲನ ಆಹಾರದ ಜೊತೆಗೆ ವರ್ಕೌಟ್&zwnj; ಕೂಡ ಮುಖ್ಯ ಆಗುತ್ತದೆ.&lt;/p&gt;&lt;img&gt;&lt;p&gt;ಈ ರೀತಿ ಬಾಡಿ ಮಾಡಲು ಶ್ರದ್ಧೆ, ಶ್ರಮ ಬೇಕೇ ಬೇಕು. ಇದು ಎರಡು ದಿನದ ಕೆಲಸವಲ್ಲ.&amp;nbsp;&lt;/p&gt;]]></content:encoded>
            <category>sandalwood</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/sandalwood/kannada-actor-upendra-daughter-aishwarya-fitness-and-six-pack-body-uhogvcv"/>
        </item>
        <item>
            <title><![CDATA[‌ಇಂಟರ್‌ನ್ಯಾಶನಲ್‌ ಕ್ರಿಕೆಟರ್‌ನನ್ನು ಮದುವೆಯಾಗಿರೋ 'ಹಳ್ಳಿಮೇಷ್ಟ್ರು' ಸಿನಿಮಾ ಹೀರೋಯಿನ್ ಬಿಂದಿಯಾ! ಯಾರದು?]]></title>
            <link>https://kannada.asianetnews.com/gallery/sandalwood/halli-meshtru-movie-heroine-bindiya-farheen-prabhakar-husband-manoj-prabhakar-is-cricketer-xvm1n6g</link>
            <guid isPermaLink="true">https://kannada.asianetnews.com/gallery/sandalwood/halli-meshtru-movie-heroine-bindiya-farheen-prabhakar-husband-manoj-prabhakar-is-cricketer-xvm1n6g</guid>
            <pubDate>Wed, 27 May 2026 11:45:47 +0530</pubDate>
            <description><![CDATA[&lt;p&gt;Actress Bindiya: ವಿ ರವಿಚಂದ್ರನ್&zwnj; ಅವರ &lsquo;ಹಳ್ಳಿ ಮೇಷ್ಟ್ರು&rsquo; ಸಿನಿಮಾ ರಿಲೀಸ್&zwnj; ಆಗಿ 30 ವರ್ಷಗಳ ಮೇಲಾದರೂ ಕೂಡ ಈ ಚಿತ್ರ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದೆ. ಈಗ ಈ ಸಿನಿಮಾ ನಾಯಕಿ ಬಿಂದಿಯಾ ಅವರು ನಿರ್ದೇಶಕ ರಘುರಾಮ್ ಅವರ ಯುಟ್ಯೂಬ್&zwnj; ಚಾನೆಲ್&zwnj; ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksm11882tyd9gg8y3bnnech1,imgname-new-project---2026-05-27t113320.295-1779862380802.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Bindiya: ವಿ ರವಿಚಂದ್ರನ್&zwnj; ಅವರ &lsquo;ಹಳ್ಳಿ ಮೇಷ್ಟ್ರು&rsquo; ಸಿನಿಮಾ ರಿಲೀಸ್&zwnj; ಆಗಿ 30 ವರ್ಷಗಳ ಮೇಲಾದರೂ ಕೂಡ ಈ ಚಿತ್ರ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದೆ. ಈಗ ಈ ಸಿನಿಮಾ ನಾಯಕಿ ಬಿಂದಿಯಾ ಅವರು ನಿರ್ದೇಶಕ ರಘುರಾಮ್ ಅವರ ಯುಟ್ಯೂಬ್&zwnj; ಚಾನೆಲ್&zwnj; ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದಾನೆ. ನನ್ನ ತಂದೆ ಬಿಲ್ಡಿಂಗ್&zwnj; ಕನ್&zwnj;ಸ್ಟ್ರಕ್ಷನ್ಸ್&zwnj; ಮಾಡುತ್ತಿದ್ದರು. ಈಗ ತಂದೆ-ತಾಯಿ ಇಬ್ಬರೂ ಇಲ್ಲ. ನಾನು ಮುಸ್ಲಿಂ ಫ್ಯಾಮಿಲಿಯಲ್ಲಿ ಹುಟ್ಟಿ ಬೆಳೆದೆ. ಫರೀನಾ ನನ್ನ ಹೆಸರು ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ನನ್ನ ತಾಯಿ&zwnj; ಸ್ನೇಹಿತೆ ರೀನಾ ರಾಯ್ ಕೂಡ ನಟಿ. ಇವರಿಂದ ನನಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿತು. ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟಾರೆಯಾಗಿ 36 ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದು ಬಿಂದಿಯಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನನಗೆ ಮದುವೆಯಾಗಿ ಸೆಟಲ್&zwnj; ಆಗಬೇಕಿತ್ತು. ನನ್ನ ಜೀವನದಲ್ಲಿ ಎಲ್ಲವೂ ಆರ್ಗಾನಿಕ್&zwnj; ಆಯ್ತು. ತನ್ನಿಂದ ತಾನೇ ನನಗೆ ಸಿನಿಮಾ ಅವಕಾಶ ಸಿಕ್ಕಿತು, ಒಂದು ಹುಡುಗನನ್ನು ನೋಡಿ ಲವ್&zwnj; ಆಯ್ತು, ಮದುವೆ ಕೂಡ ಆಯ್ತು ಎಂದು ಬಿಂದಿಯಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನನಗೆ ರವಿಚಂದ್ರನ್&zwnj; ಯಾರು ಎಂದು ಗೊತ್ತಿರಲಿಲ್ಲ, ಅವರ ಕುಟುಂಬದ ಬಗ್ಗೆ ಕೂಡ ಗೊತ್ತಿರಲಿಲ್ಲ. ರವಿಚಂದ್ರನ್&zwnj; ಅವರು ಮುಂಬೈನಲ್ಲಿ ಹೀರೋಯಿನ್&zwnj; ಹುಡುಕುತ್ತಿದ್ದರು. ಆಗ ಕಾಫಿ ಶಾಪ್&zwnj;ನಲ್ಲಿ ಅವರು ನನ್ನ ಮೀಟ್&zwnj; ಮಾಡಿ, ಮೇಕಪ್&zwnj; ಇಲ್ಲದೆ ನನಗೆ ನಟಿಸುವ ಹುಡುಗಿ ಬೇಕು ಎಂದರು. ನನ್ನ ಹಿಂದಿ ಸಿನಿಮಾ ನೋಡಿ ಅವರು ಆಯ್ಕೆ ಮಾಡಿದ್ದರು ಎಂದು ಬಿಂದಿಯಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್&zwnj; ಆಡುತ್ತಿದ್ದ ಮನೋಜ್ ಪ್ರಭಾಕರ್&zwnj; ಅವರನ್ನೇ ಬಿಂದಿಯಾ ಮದುವೆಯಾಗಿದ್ದಾರೆ. ಆಲ್&zwnj; ರೌಂಡರ್&zwnj; ಆಗಿದ್ದ ಮನೋಜ್&zwnj; ಈಗ ನಿವೃತ್ತಿ ಪಡೆದಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/sandalwood/halli-meshtru-movie-heroine-bindiya-farheen-prabhakar-husband-manoj-prabhakar-is-cricketer-xvm1n6g"/>
        </item>
        <item>
            <title><![CDATA[Shocking- Bigg Boss: ಅಯ್ಯೋ, ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಗೆ ವೇದಿಕೆಯಲ್ಲೇ ಭಾರೀ ಅವಮಾನ; ಅದ್ಯಾಕೆ ಹಾಗೆಲ್ಲಾ ಮಾಡಿದ್ದು?]]></title>
            <link>https://kannada.asianetnews.com/gallery/tv-talk/bigg-boss-contestant-kavya-shaiva-insulted-on-stage-find-out-what-transpired-after-her-mic-was-snatched-away-xxx1td1</link>
            <guid isPermaLink="true">https://kannada.asianetnews.com/gallery/tv-talk/bigg-boss-contestant-kavya-shaiva-insulted-on-stage-find-out-what-transpired-after-her-mic-was-snatched-away-xxx1td1</guid>
            <pubDate>Mon, 25 May 2026 20:06:51 +0530</pubDate>
            <description><![CDATA[&lt;p&gt;ಒಬ್ಬ ಸೆಲೆಬ್ರಿಟಿ, ಅದೂ ಒಬ್ಬ ಹೆಣ್ಣುಮಗಳು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದರು. ಸಾವಿರಾರು ಜನರ ಮುಂದೆ ಈ ರೀತಿ ಮಾಡಿದ್ದಕ್ಕೆ ಕಾವ್ಯಾ ಕಣ್ಣೀರು ಹಾಕಿದರು..!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfr05d2jg3pp2363pxg5712,imgname-kavya-shaiva-1779718690210.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಬ್ಬ ಸೆಲೆಬ್ರಿಟಿ, ಅದೂ ಒಬ್ಬ ಹೆಣ್ಣುಮಗಳು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದರು. ಸಾವಿರಾರು ಜನರ ಮುಂದೆ ಈ ರೀತಿ ಮಾಡಿದ್ದಕ್ಕೆ ಕಾವ್ಯಾ ಕಣ್ಣೀರು ಹಾಕಿದರು..!&lt;/p&gt;&lt;img&gt;&lt;p&gt;ಬಿಗ್ ಬಾಸ್ ಕಾವ್ಯ ಶೈವಗೆ ಕಲಬುರಗಿಯಲ್ಲಿ ಅವಮಾನ! ಕಣ್ಣೀರು ಹಾಕಿದ್ರಾ 'ಬಜಾರಿ' ಕುವರಿ?&lt;/p&gt;&lt;p&gt;ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಮಾತಾಗಿದ್ದ ಕ್ಯೂಟ್ ಅಂಡ್ ಬೋಲ್ಡ್ ಬೆಡಗಿ ಕಾವ್ಯ ಶೈವ (Kavya Shaiva) ಅವರಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್. ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ 'ಬಜಾರಿ' ಸ್ಟೈಲ್ ಮೂಲಕ ಫೈನಲ್ ಹಂತದವರೆಗೆ ತಲುಪಿ ಜನರ ಮನಗೆದ್ದಿದ್ದ ಕಾವ್ಯ, ಹೊರಗೆ ಬಂದ ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆದರೆ, ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ನಟಿಗೆ ಅಕ್ಷರಶಃ ಶಾಕ್ ಕಾದಿತ್ತು! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಆ ಸೀಕ್ರೆಟ್ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಸೆಲ್ಫಿ ಕ್ರೇಜ್.. ಆಯೋಜಕರ ಕಿರಿಕ್!&lt;/p&gt;&lt;p&gt;ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕಾವ್ಯ ಶೈವ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾವ್ಯ ಅವರನ್ನ ನೋಡಲು ಅಲ್ಲಿ ಅಭಿಮಾನಿಗಳು ಜೇನುಗೂಡಿನಂತೆ ಮುತ್ತಿಕೊಂಡಿದ್ದರು. ಯಾವಾಗ ಕಾವ್ಯ ವೇದಿಕೆ ಮೇಲೆ ಬಂದರೋ, ಅಭಿಮಾನಿಗಳಿಗೆ ಸೆಲ್ಫಿ ತಗೊಳ್ಳೋಕೆ ಅದೇನು ಆತುರವೋ ಗೊತ್ತಿಲ್ಲ! ಸೀದಾ ಸ್ಟೇಜ್ ಹತ್ತೋಕೆ ಶುರು ಮಾಡಿದರು. ಆಗ ಶುರುವಾಯ್ತು ನೋಡಿ ಅಸಲಿ ಕಿರಿಕ್. ಆಯೋಜಕರು ಅಭಿಮಾನಿಗಳನ್ನು ತಡೆಯಲು ಹೋಗಿ ಅಲ್ಲಿ ಗದ್ದಲ ಸೃಷ್ಟಿಯಾಯಿತು.&lt;/p&gt;&lt;img&gt;&lt;p&gt;ವೇದಿಕೆ ಮೇಲೆಯೇ ಮೈಕ್ ಕಿತ್ತಾಟ!&lt;/p&gt;&lt;p&gt;ಕಾರ್ಯಕ್ರಮ ಸುಗಮವಾಗಿ ಸಾಗುತ್ತಿದೆ ಎನ್ನುವಾಗಲೇ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಕಾವ್ಯ ಶೈವ ಅವರು ಮೈಕ್ ಹಿಡಿದು ಮಾತನಾಡಲು ಮುಂದಾದಾಗ, ಅಲ್ಲಿದ್ದ ಒಬ್ಬ ವ್ಯಕ್ತಿ (ಸ್ಥಳೀಯ ಸಿಬ್ಬಂದಿ ಅಥವಾ ಆಯೋಜಕ ಎನ್ನಲಾಗಿದೆ) ಏಕಾಏಕಿ ಕಾವ್ಯ ಅವರ ಬಳಿ ಬಂದು, ಅವರ ಕೈಯಲ್ಲಿದ್ದ ಮೈಕ್ ಅನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸಿದ!&lt;/p&gt;&lt;img&gt;&lt;p&gt;ಒಬ್ಬ ಸೆಲೆಬ್ರಿಟಿ, ಅದೂ ಒಬ್ಬ ಹೆಣ್ಣುಮಗಳು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದರು. ಸಾವಿರಾರು ಜನರ ಮುಂದೆ ಈ ರೀತಿ ಮೈಕ್ ಕಿತ್ತುಕೊಂಡಿದ್ದು ಕಾವ್ಯ ಅವರಿಗೆ ಆದ ದೊಡ್ಡ ಅವಮಾನವಾಗಿತ್ತು. ಕಾವ್ಯ ಒಂದು ಕ್ಷಣ ಸ್ತಬ್ದರಾಗಿ ಹೋದರು.&lt;/p&gt;&lt;img&gt;&lt;p&gt;ಸುಮ್ಮನೆ ಬಿಡ್ತಾರಾ ಕಾವ್ಯ? ಶುರುವಾಯ್ತು ವಾರ್!&lt;/p&gt;&lt;p&gt;ನಮಗೆಲ್ಲಾ ಗೊತ್ತಿರುವಂತೆ ಕಾವ್ಯ ಶೈವ ಏನೂ ಅಂದ್ರೆ ಸುಮ್ಮನೆ ಕೂರುವವರಲ್ಲ. ಬಿಗ್ ಬಾಸ್ ಮನೆಯಲ್ಲೇ ಅಷ್ಟೊಂದು ಟಕ್ಕರ್ ಕೊಟ್ಟಿದ್ದ ಅವರು, ವೇದಿಕೆ ಮೇಲೆ ಆದ ಅವಮಾನವನ್ನು ಸಹಿಸಿಕೊಳ್ಳಲಿಲ್ಲ. &quot;ಒಬ್ಬ ನಟಿಗೆ ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ಅವಮಾನ ಮಾಡುವುದಾ? ನಿಮ್ಮ ನಡೆ ಸರಿಯಿಲ್ಲ&quot; ಎಂದು ಅವರು ನೇರವಾಗಿಯೇ ಆಯೋಜಕರನ್ನು ಪ್ರಶ್ನಿಸಿದರು. ಅಲ್ಲಿಗೆ ವೇದಿಕೆ ಮೇಲೆ ಮಾತಿನ ಚಕಮಕಿ ಜೋರಾಯಿತು. ಅಭಿಮಾನಿಗಳು ಕೂಡ ಆಯೋಜಕರ ವಿರುದ್ಧ ಆಕ್ರೋಶ ಹೊರಹಾಕಿದರು.&lt;/p&gt;&lt;p&gt;ಮನನೊಂದು ವೇದಿಕೆ ತೊರೆದ ನಟಿ!&lt;/p&gt;&lt;img&gt;&lt;p&gt;ಕಾರ್ಯಕ್ರಮದಲ್ಲಿ ಭದ್ರತೆಯ ಕೊರತೆ ಮತ್ತು ಸಂಘಟಕರ ಬೇಜವಾಬ್ದಾರಿಯಿಂದ ಮನನೊಂದ ಕಾವ್ಯ ಶೈವ, ಅರ್ಧಕ್ಕೇ ಕಾರ್ಯಕ್ರಮವನ್ನು ಬಿಟ್ಟು ಹೊರನಡೆದರು. &quot;ನನಗೆ ಗೌರವ ಇಲ್ಲದ ಕಡೆ ನಾನು ಇರಲಾರೆ&quot; ಎನ್ನುವ ಸಂದೇಶವನ್ನು ನೀಡಿ ಅವರು ಅಲ್ಲಿಂದ ನಿರ್ಗಮಿಸಿದರು.&amp;nbsp;&lt;/p&gt;&lt;img&gt;&lt;p&gt;ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾವ್ಯ ಅಭಿಮಾನಿಗಳು ಆಯೋಜಕರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. &quot;ಸೆಲೆಬ್ರಿಟಿಗಳನ್ನು ಕರೆಸಿದ ಮೇಲೆ ಅವರಿಗೆ ಸರಿಯಾದ ಭದ್ರತೆ ಕೊಡಬೇಡವೇ?&quot; ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಿಂದ ಖ್ಯಾತಿ ಗಳಿಸಿದ ಕಾವ್ಯ ಶೈವಗೆ ಕಲಬುರಗಿಯ ಈ ಕಹಿ ಅನುಭವ ಮಾತ್ರ ಮರೆಯಲಾಗದ ಗಾಯವನ್ನಂತೂ ಮಾಡಿದೆ!&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/tv-talk/bigg-boss-contestant-kavya-shaiva-insulted-on-stage-find-out-what-transpired-after-her-mic-was-snatched-away-xxx1td1"/>
        </item>
        <item>
            <title><![CDATA[ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳು… ಯಾವ ಸಿನಿಮಾಗೆ ನೀವು ಕಾಯುತ್ತಿದ್ದೀರಿ?]]></title>
            <link>https://kannada.asianetnews.com/gallery/sandalwood/most-expected-sandalwood-movies-of-this-year-z7xigiz</link>
            <guid isPermaLink="true">https://kannada.asianetnews.com/gallery/sandalwood/most-expected-sandalwood-movies-of-this-year-z7xigiz</guid>
            <pubDate>Tue, 26 May 2026 21:35:03 +0530</pubDate>
            <description><![CDATA[&lt;p&gt;Most expected sandalwood movies: ಚಂದನವನದಲ್ಲಿ ಈ ವರ್ಷ ಹಲವಾರು ಸಿನಿಮಾಗಳು ತೆರೆ ಕಾಣಲು ಸಜ್ಜಾಗಿವೆ. ಅವುಗಳಲ್ಲಿ ಕೆಲವು ಸಿನಿಮಾ ಬಿಡುಗಡೆಗೆ ಜನ ತುದಿ ಕಾಲಲ್ಲಿ ಕಾಯುತ್ತಿದ್ದಾರೆ. ಅಂತಹ ಸಿನಿಮಾಗಳು ಯಾವುವು ನೋಡೋಣ? ಅಂದ ಹಾಗೇ ನೀವು ಯಾವ ಸಿನಿಮಾಕ್ಕಾಗಿ ಕಾಯುತ್ತಿದ್ದೀರಿ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksjg9k5bdtw52w4c2nq7yd9r,imgname-most-expected-sandalwood-movies-1779811273899.jpg" type="image/jpeg" height="390" width="690"/>
            <content:encoded><![CDATA[&lt;p&gt;Most expected sandalwood movies: ಚಂದನವನದಲ್ಲಿ ಈ ವರ್ಷ ಹಲವಾರು ಸಿನಿಮಾಗಳು ತೆರೆ ಕಾಣಲು ಸಜ್ಜಾಗಿವೆ. ಅವುಗಳಲ್ಲಿ ಕೆಲವು ಸಿನಿಮಾ ಬಿಡುಗಡೆಗೆ ಜನ ತುದಿ ಕಾಲಲ್ಲಿ ಕಾಯುತ್ತಿದ್ದಾರೆ. ಅಂತಹ ಸಿನಿಮಾಗಳು ಯಾವುವು ನೋಡೋಣ? ಅಂದ ಹಾಗೇ ನೀವು ಯಾವ ಸಿನಿಮಾಕ್ಕಾಗಿ ಕಾಯುತ್ತಿದ್ದೀರಿ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈ ವರ್ಷ ತೆರೆಕಾಣಲಿರುವ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳು ಯಾವುವು ನೋಡೋಣ.&lt;/p&gt;&lt;img&gt;&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್. ಮಾರ್ಚ್ ನಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ ಇನ್ನು ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಗೀತೂ ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾ ಟ್ರೈಲರ್ ಮೂಲಕವೇ ಸದ್ದು ಮಾಡಿತ್ತು.&lt;/p&gt;&lt;img&gt;&lt;p&gt;'666 ಆಪರೇಷನ್ ಡ್ರೀಮ್ ಥಿಯೇಟರ್' ಹೇಮಂತ್ ಎಂ. ರಾವ್ ನಿರ್ದೇಶನದ ಬಹುನಿರೀಕ್ಷಿತ ಕನ್ನಡ ಆಕ್ಷನ್-ಥ್ರಿಲ್ಲರ್ ಸಿನಿಮಾ. 1970ರ ದಶಕದ ಸ್ಪೈ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಶಿವರಾಜ್&zwnj;ಕುಮಾರ್ ಮತ್ತು ಡಾಲಿ ಧನಂಜಯ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಾಳವಿಕಾ ಮೋಹನ್ ನಾಯಕಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಅಣ್ಣ ಫ್ರಮ್ ಮೆಕ್ಸಿಕೋ' ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾಗಿದ್ದು, 'ಡಾಲಿ' ಧನಂಜಯ್ ಮತ್ತು ರೀಷ್ಮಾ ನಾಣಯ್ಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಬಡವ ರಾಸ್ಕಲ್' ಖ್ಯಾತಿಯ ಶಂಕರ್ ಗುರು ಈ ಚಿತ್ರ ನಿರ್ದೇಶನ ಮಾಡಿದ್ದು, ಅಜ್ಜಿ ಮತ್ತು ಮೊಮ್ಮಗನ ಬಾಂಧವ್ಯದ ಸುಂದರ ಕಥೆಯನ್ನು ಒಳಗೊಂಡಿದೆ&lt;/p&gt;&lt;img&gt;&lt;p&gt;ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಯುವರ್ಸ್ ಸಿನ್ಸಿಯರ್ಲಿ ರಾಮ್. ಈ ಸಿನಿಮಾವನ್ನು ಎ.ಆರ್ ವಿಖ್ಯಾತ್ ನಿರ್ದೇಶನ ಮಾಡುತ್ತಿದ್ದಾರೆ. ಭಾವನಾತ್ಮಕ ಎಳೆಯನ್ನು ಹೊಂದಿರುವ ಕಥೆ ಇದಾಗಿದೆ.&lt;/p&gt;&lt;img&gt;&lt;p&gt;'ಬಿಆರ್&zwnj;ಬಿ' (BRB) ಎಂದರೆ 'ಬಿಲ್ಲ ರಂಗ ಭಾಷ' ಇದು ಕಿಚ್ಚ ಸುದೀಪ್ ನಟಿಸುತ್ತಿರುವ ಬಹುನಿರೀಕ್ಷಿತ, ಸಿನಿಮಾವಾಗಿದೆ.ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಇದು 2209ನೇ ಇಸವಿಯ ಭವಿಷ್ಯದ ಜಗತ್ತಿನಲ್ಲಿ ನಡೆಯುವ ಕಥೆಯಾಗಿದ್ದು, ಸೈನ್ಸ್-ಫಿಕ್ಷನ್ ಮತ್ತು ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ.&lt;/p&gt;&lt;img&gt;&lt;p&gt;ದೈಜಿ ನಟ ರಮೇಶ್ ಅರವಿಂದ್ ನಟಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಕನ್ನಡ ಪ್ಯಾರಾನಾರ್ಮಲ್ ಥ್ರಿಲ್ಲರ್ ಸಿನಿಮಾವಾಗಿದೆ. ಸಿನಿಮಾದಲ್ಲಿ ರಾಧಿಕಾ ನಾರಾಯಣ್ ಮತ್ತು ದಿಗಂತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಡಾಲಿ ಧನಂಜಯ್ ಅವರ &zwnj;ʻಡಾಲಿ ಪಿಕ್ಚರ್ಸ್ʼ ನಿರ್ಮಾಣದ &lsquo;ಮದರ್&zwnj; ಪ್ರಾಮಿಸ್&rsquo; ಚಿತ್ರವನ್ನು ಪೂರ್ಣ ಮೈಸೂರು ನಿರ್ದೇಶನ ಮಾಡುತ್ತಿದ್ದಾರೆ. ಮದರ್ ಪ್ರಾಮಿಸ್' ಕಾಮಿಡಿ ಹಾಗೂ ಥ್ರಿಲ್ಲಿಂಗ್ ಸಿನಿಮಾ. ಈ ಚಿತ್ರದಲ್ಲಿ ಡಾಲಿ ಧನಂಜಯ, ನಾಗಭೂಷಣ್&zwnj; , ಹಿರಿಯ ನಟಿ ವಿನಯಪ್ರಸಾದ್&zwnj;, ಗೀತಾ, ಗುರುದತ್&zwnj; ಸೇರಿ ಅನೇಕರು ನಟಿಸಿದ್ದಾರೆ.&lt;/p&gt;&lt;img&gt;&lt;p&gt;ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟಿಸಿರುವ &lsquo;ಮ್ಯಾಂಗೋ ಪಚ್ಚಾ&rsquo; ಸಿನಿಮಾ ಟ್ರೈಲರ್ ಮೂಲಕ ಭರವಸೆ ಹುಟ್ಟಿಸಿದೆ. ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿಯಲ್ಲಿ ಬಂದ ಟ್ರೈಲರ್ ಸಿನಿಮಾ ಮೇಲಿನ ಭರವಸೆ ಹೆಚ್ಚಿಸಿದೆ. 'ಮ್ಯಾಂಗೋ ಪಚ್ಚ' ಚಿತ್ರವು 2001-02ರ ಕಾಲಘಟ್ಟದ ಮೈಸೂರಿನ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ.&lt;/p&gt;]]></content:encoded>
            <category>sandalwood</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/most-expected-sandalwood-movies-of-this-year-z7xigiz"/>
        </item>
        <item>
            <title><![CDATA[‘ಒಳ್ಳೆ ಕಾಲ ಬಂದೇ ಬರುತ್ತೆ’.. ಜೈಲಿನಲ್ಲಿರುವ ದರ್ಶನ್ ನೆನೆದು ವಿಜಯಲಕ್ಷ್ಮಿ ಭಾವುಕ ಪೋಸ್ಟ್ ವೈರಲ್!]]></title>
            <link>https://kannada.asianetnews.com/gallery/sandalwood/vijayalakshmi-emotional-post-for-darshan-emotional-message-gvd-zr7tgnd</link>
            <guid isPermaLink="true">https://kannada.asianetnews.com/gallery/sandalwood/vijayalakshmi-emotional-post-for-darshan-emotional-message-gvd-zr7tgnd</guid>
            <pubDate>Wed, 27 May 2026 18:52:59 +0530</pubDate>
            <description><![CDATA[&lt;p&gt;ದರ್ಶನ್ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ಮತ್ತೆ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ದರ್ಶನ್ ಕುರಿತ ಪೋಸ್ಟ್&zwnj;ಗಳನ್ನು ಹಂಚಿಕೊಳ್ಳುವ ವಿಜಯಲಕ್ಷ್ಮಿ, ಇದೀಗ ವಿಶೇಷ ಫೋಟೋ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksms60ym36j61v8pdpketey8,imgname-1-1779887702996.png" type="image/jpeg" height="390" width="690"/>
            <content:encoded><![CDATA[&lt;p&gt;ದರ್ಶನ್ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ಮತ್ತೆ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ದರ್ಶನ್ ಕುರಿತ ಪೋಸ್ಟ್&zwnj;ಗಳನ್ನು ಹಂಚಿಕೊಳ್ಳುವ ವಿಜಯಲಕ್ಷ್ಮಿ, ಇದೀಗ ವಿಶೇಷ ಫೋಟೋ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ಮತ್ತೆ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ದರ್ಶನ್ ಕುರಿತ ಪೋಸ್ಟ್&zwnj;ಗಳನ್ನು ಹಂಚಿಕೊಳ್ಳುವ ವಿಜಯಲಕ್ಷ್ಮಿ, ಇದೀಗ ಇನ್&zwnj;ಸ್ಟಾಗ್ರಾಂ ಸ್ಟೋರಿಯಲ್ಲಿ ವಿಶೇಷ ಫೋಟೋ ಹಂಚಿಕೊಂಡು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಇದು &lsquo;ಡೆವಿಲ್&rsquo; ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ತೆಗೆದ ಫೋಟೋವಾಗಿದ್ದು, ಬೋಟ್ ಮೇಲೆ ನಿಂತು ದೂರದ ದ್ವೀಪದತ್ತ ನೋಡುವ ದರ್ಶನ್ ಅವರ ಬ್ಯಾಕ್&zwnj;ಲುಕ್ ಚಿತ್ರವನ್ನು ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಜೊತೆಗೆ 'ಒಳ್ಳೆ ಕಾಲ ಬಂದೆ ಬರುತ್ತೇ ಅಲ್ಲಿವರೆಗೂ ನಂಬಿಕೆ ಹೆಸರಲಿ ನಗುತಿರಬೇಕು' ಎಂದು ಕ್ಯಾಪ್ಶನ್ ಕೊಟ್ಟಿದ್ದು, ಭಾವನಾತ್ಮಕ ಹಾಡೊಂದನ್ನು ಹಿನ್ನೆಲೆಯಾಗಿ ಬಳಸಿದ್ದಾರೆ. ದರ್ಶನ್ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಅಭಿಮಾನಿಗಳ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ದರ್ಶನ್ ಜೈಲು ಜೀವನಕ್ಕೆ ಸುಮಾರು ಒಂದು ವರ್ಷ ಸಮೀಪಿಸುತ್ತಿರುವ ನಡುವೆಯೇ, ವಿಜಯಲಕ್ಷ್ಮಿ ಆಗಾಗ ಹಳೆಯ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಹಂಚಿಕೊಂಡಿರುವ ಈ ಪೋಸ್ಟ್ ಅಭಿಮಾನಿಗಳಲ್ಲೂ ಭಾವುಕತೆ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/vijayalakshmi-emotional-post-for-darshan-emotional-message-gvd-zr7tgnd"/>
        </item>
    </channel>
</rss>
