<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 08 Jul 2026 20:53:03 +0530</lastBuildDate>
        <atom:link href="https://kannada.asianetnews.com/rss/sandalwood" rel="self" type="application/rss+xml"/>
        <item>
            <title><![CDATA[Karavali Controversy: ಟ್ರೈಲರ್ ಲಾಂಚ್‌ಗೆ ಪ್ರಜ್ವಲ್ ಅಬ್ಸೆಂಟ್; ಇದಕ್ಕೆಲ್ಲಾ ಕಾರಣ ಅಲ್ವಾ ಪೇಮೆಂಟ್? ಹಾಗಿದ್ರೆ ಸತ್ಯ ಏನು?]]></title>
            <link>https://kannada.asianetnews.com/sandalwood/prajwal-devaraj-and-raj-b-shetty-controversy-about-karavali-movie-become-talk-of-the-sandalwood-now/articleshow-rnf2vp0</link>
            <guid isPermaLink="true">https://kannada.asianetnews.com/sandalwood/prajwal-devaraj-and-raj-b-shetty-controversy-about-karavali-movie-become-talk-of-the-sandalwood-now/articleshow-rnf2vp0</guid>
            <pubDate>Wed, 08 Jul 2026 20:52:58 +0530</pubDate>
            <description><![CDATA[&lt;p&gt;ಅದ್ಧೂರಿಯಾಗಿ ಸಿದ್ದವಾಗಿರೋ 'ಕರಾವಳಿ ಸಿನಿಮಾ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ತಮ್ಮದೇ ಚಿತ್ರವನ್ನ ಒಬ್ಬ ನಟ ಸಾಯಿಸೋದಕ್ಕೆ ಹೊರಟರಾ? ಅಥವಾ ಸತ್ಯ ಇನ್ನೇನೋ ಇದೆಯಾ? ಇಲ್ಲಿದೆ ಹಲವು ಸಂಗತಿಗಳು..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx152f1emqspfdvv1tkrn6x3,imgname-prajwal-devaraj-raj-b-shetty--1--1783524047918.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರಾವಳಿ.. ಡೈನಾಮಿಕ್ ಪ್ರಿನ್ಸ್ ದೇವರಾಜ್ (Prajwal Devaraj) ಮತ್ತು ರಾಜ್ ಬಿ ಶೆಟ್ಟಿ (Raj B Shetty) ನಟಿಸಿರೋ ಅದ್ದೂರಿ ಸಿನಿಮಾ. ಅಸಲಿಗೆ ಕರಾವಳಿ ತಂಡ ಅದ್ದೂರಿಯಾಗಿ ಟ್ರೈಲರ್ ಲಾಂಚ್​ಮಾಡೋಕೆ ಪ್ಲಾನ್ ಮಾಡಿತ್ತು. ಆದ್ರೆ ಪ್ರಜ್ವಲ್ ಫ್ಯಾನ್ಸ್ ಬಂದು ಈ ಇವೆಂಟ್&zwnj;ಗೆ ಅಡ್ಡಿ ಪಡಿಸಿದ್ದಾರೆ. ಅಷ್ಟಕ್ಕೂ ಏನಿದು ಕರಾವಳಿ ಕದನ..? 'ಇದಕ್ಕೆ ನಮ್ಮ ಇಂಡಸ್ಟ್ರಿ ಉದ್ದಾರ ಆಗಿಲ್ಲ ಅಂದಿದ್ದೇಕೆ ರಾಜ್ ಶೆಟ್ಟಿ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.&lt;/p&gt;&lt;h2&gt;ಪ್ರಜ್ವಲ್ ದೇವರಾಜ್ - ರಾಜ್ ಶೆಟ್ಟಿ ನಡುವೆ ಕರಾವಳಿ ಕದನ? ಕರಾವಳಿ ಚಿತ್ರದ ಟ್ರೈಲರ್ ಲಾಂಚ್​ನಲ್ಲಿ ಪ್ರಜ್ವಲ್ ಫ್ಯಾನ್ಸ್ ಗಲಾಟೆ!&lt;/h2&gt;&lt;p&gt;ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ನಟಿಸಿರೋ ಕರಾವಳಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡ್ತಾ ಬಂದಿದೆ. ಚಿತ್ರದ ಟೀಸರ್ - ಸಾಂಗ್ಸ್ ನಿರೀಕ್ಷೆ ಮೂಡಿಸಿವೆ. ಆದ್ರೆ ಕರಾವಳಿ ಟ್ರೈಲರ್ ಲಾಂಚ್​ನಲ್ಲಿ ಒಂದು ಕದನ ನಡೆದಿದೆ.&lt;/p&gt;&lt;p&gt;ಟ್ರೈಲರ್ ಬಿಡುಗಡೆಗೆ ಪ್ರಜ್ವಲ್ ಬಂದಿಲ್ಲ. ಇತ್ತ ಅವರ ಫ್ಯಾನ್ಸ್ ಈ ಇವೆಂಟ್ ಗೆ ಬಂದು ಚಿತ್ರತಂಡವರ ಮೇಲೆ ಎಗರಾಡಿದ್ದಾರೆ. ತಳ್ಳಾಟ-ನೂಕಾಟ ನಡೆದು ದೊಡ್ಡ ಹೈಡ್ರಾಮಾನೇ ನಡೆದುಹೋಗಿದೆ.&lt;/p&gt;&lt;p&gt;ರಾಜ್​ ಶೆಟ್ಟಿ ಎಂಟ್ರಿ.. ಕರಾವಳಿಯಲ್ಲಿ ಪ್ರಜ್ವಲ್ ಸೈಡ್​ಲೈನ್..?&lt;/p&gt;&lt;p&gt;ಹೌದು ಈ ಸಿನಿಮಾಗೆ ಪ್ರಜ್ವಲ್ ನಾಯಕನಟ. ಆದ್ರೆ ಚಿತ್ರದ ಮುಖ್ಯವಾದ ಅತಿಥಿ ಪಾತ್ರಕ್ಕೆ ರಾಜ್ ಎಂಟ್ರಿ ಕೊಟ್ಟಿದ್ದಾರೆ. ಶೆಟ್ರು ಬಂದ ಮೇಲೆ ತನ್ನನ್ನ ಕಡೆಗಣಿಸಿದ್ರು ಅಂತ ಪ್ರಜ್ವಲ್​ಗೆ ಅನ್ನಿಸ್ತಾ ಗೊತ್ತಿಲ್ಲ. ಎರಡು ತಿಂಗಳಿಂದ ನಿರ್ದೇಶಕ ಗುರುದತ್ ಗಾಣಿಗ ಫೋನ್ ಸಂಪರ್ಕಕ್ಕೆ ಸಿಕ್ತಿಲ್ಲವಂತೆ ಪ್ರಜ್ವಲ್.&lt;/p&gt;&lt;p&gt;1 ಕೋಟಿ ಪೇಮೆಂಟ್.. ಟ್ರೈಲರ್ ಲಾಂಚ್​ಗೆ ಪ್ರಜ್ವಲ್ ಅಬ್ಸೆಂಟ್..!&lt;/p&gt;&lt;p&gt;ಹೌದು, ಪೇಮೆಂಟ್ ವಿಷ್ಯಕ್ಕೆ ಪ್ರಜ್ವಲ್ ಮುನಿಸಿಕೊಂಡಿದ್ದಾರಾ? ಆದ್ರೆ ಸಿಕ್ಕ ಮಾಹಿತಿ ಪ್ರಕಾರ ಕರಾವಳಿ ನಿರ್ಮಾಪಕರು ನಟ ಪ್ರಜ್ವಲ್&zwnj;ಗೆ ಬರೊಬ್ಬರಿ 1 ಕೋಟಿ ಪೇಮೆಂಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಆದ್ರೆ ಕೋಟಿ ಪೇಮೆಂಟ್ ಪಡೆದ ನಟ ಟ್ರೈಲರ್ ಲಾಂಚ್​ಗೆ ಅಬ್ಸೆಂಟ್ ಆಗಿದ್ದಾರೆ ಏಕೆ? ಈ ವಿವಾದ ಅಸಲಿಯತ್ತೇನು?&lt;/p&gt;&lt;h3&gt;'ಇದಕ್ಕೆ ನಮ್ಮ ಚಿತ್ರರಂಗ ಉದ್ದಾರ ಆಗಿಲ್ಲ..' ರಾಜ್ ಶೆಟ್ಟಿ ಬೇಸರ..!&lt;/h3&gt;&lt;p&gt;ಹೌದು, ಟ್ರೈಲರ್ ಲಾಂಚ್​ನಲ್ಲಿ ನಡೆದ ಗಲಾಟೆ, ಪ್ರಜ್ವಲ್ ಮುನಿಸಿನ ಪ್ರಸಂಗದಿಂದ ರಾಜ್ ಶೆಟ್ಟಿ ಸಿಕ್ಕಾಪಟ್ಟೆ ಅಪ್ಸೆಟ್ ಆಗಿದ್ದಾರೆ. ಇದಕ್ಕೇ ನಮ್ಮ ಚಿತ್ರರಂಗ ಉದ್ದಾರ ಆಗಿಲ್ಲ' ಅಂತ ನೋವು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಪ್ರಜ್ವಲ್ ದೇವರಾಜ್ ಇಷ್ಟು ವರ್ಷ ಚಿತ್ರರಂಗದಲ್ಲಿದ್ರೂ ಒಂದು ವಿವಾದ ಕೂಡ ಮಾಡಿಕೊಂಡವರಲ್ಲ. ಆದ್ರೆ ಕರಾವಳಿ ವಿಚಾರದಲ್ಲಿ ಇಂಥಾ ವಿವಾದ ಯಾಕಾಯ್ತು ಅನ್ನೋ ಪ್ರಶ್ನೆ ಚಿತ್ರಪ್ರಿಯರನ್ನ ಕಾಡ್ತಾ ಇದೆ.&lt;/p&gt;&lt;p&gt;ಒಟ್ಟಿನಲ್ಲಿ, ಅದ್ಧೂರಿಯಾಗಿ ಸಿದ್ದವಾಗಿರೋ 'ಕರಾವಳಿ ಸಿನಿಮಾ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ತಮ್ಮದೇ ಚಿತ್ರವನ್ನ ಒಬ್ಬ ನಟ ಸಾಯಿಸೋದಕ್ಕೆ ಹೊರಟರಾ? ಅಥವಾ ಸತ್ಯ ಇನ್ನೇನೋ ಇದೆಯಾ? ಸತ್ಯ ಸಂಗತಿ ತಿಳಿಯೋತನಕ ಎಲ್ಲರನ್ನೂ ಯಾವುದೋ ಒಂದು ಅನುಮಾನ ಕಾಡೋದಂತೂ ಸತ್ಯ! ಈ ವಿಷಯದ ಬಗ್ಗೆ ಪ್ರಜ್ವಲ್ ದೇವರಾಜ್ ಏನ್ ಹೇಳ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.&lt;/p&gt;&lt;p&gt;ಹೆಚ್ಚಿನ ಮಾಗಿತಿಗೆ &lsquo;ಸಿನಿಮಾ ಹಂಗಾಮ&rsquo; ನೋಡಿ..&lt;/p&gt;&lt;p&gt;&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/prajwal-devaraj-and-raj-b-shetty-controversy-about-karavali-movie-become-talk-of-the-sandalwood-now/articleshow-rnf2vp0"/>
        </item>
        <item>
            <title><![CDATA[ಕರಾವಳಿ ವಿವಾದಕ್ಕೆ ಹೊಸ ತಿರುವು: ಪತಿ ಪ್ರಜ್ವಲ್ ದೇವರಾಜ್ ಪರ ನಿಂತ ಪತ್ನಿ ರಾಗಿಣಿ ಚಂದ್ರನ್]]></title>
            <link>https://kannada.asianetnews.com/sandalwood/karavali-controversy-ragini-chandran-supports-prajwal-devaraj-viral-post-gvd/articleshow-me2gw02</link>
            <guid isPermaLink="true">https://kannada.asianetnews.com/sandalwood/karavali-controversy-ragini-chandran-supports-prajwal-devaraj-viral-post-gvd/articleshow-me2gw02</guid>
            <pubDate>Wed, 08 Jul 2026 18:06:38 +0530</pubDate>
            <description><![CDATA[&lt;p&gt;ಜುಲೈ 24ರಂದು ಬಿಡುಗಡೆಯಾಗಲಿರುವ ಕರಾವಳಿ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತ್ತು. ಆದರೆ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳದಿರುವುದು ಮೊದಲ ಚರ್ಚೆಗೆ ಕಾರಣವಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0vkb2ta1v4hpbg6nss4xd1,imgname-cjc-1783514115162.png" type="image/jpeg" height="390" width="690"/>
            <content:encoded><![CDATA[&lt;p&gt;'ಕರಾವಳಿ' ಸಿನಿಮಾ ಬಿಡುಗಡೆಯ ಮುನ್ನವೇ ವಿವಾದದ ಕೇಂದ್ರಬಿಂದುವಾಗಿದೆ. ಟ್ರೇಲರ್ ಬಿಡುಗಡೆಯ ನಂತರ ಚಿತ್ರದ ಸುತ್ತ ಹಲವು ಪ್ರಶ್ನೆಗಳು ಎದ್ದಿದ್ದು, ಅದರಲ್ಲೂ ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಅನುಪಸ್ಥಿತಿ ಮತ್ತು ಅವರ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ನಟನ ಬೆಂಬಲಕ್ಕೆ ಪತ್ನಿ ರಾಗಿಣಿ ಚಂದ್ರನ್ ನಿಂತಿದ್ದು, ಅವರ ಭಾವನಾತ್ಮಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.&lt;/p&gt;&lt;p&gt;ಜುಲೈ 24ರಂದು ಬಿಡುಗಡೆಯಾಗಲಿರುವ ಕರಾವಳಿ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತ್ತು. ಆದರೆ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳದಿರುವುದು ಮೊದಲ ಚರ್ಚೆಗೆ ಕಾರಣವಾಯಿತು. ಇದರ ಬೆನ್ನಲ್ಲೇ ಟ್ರೇಲರ್&zwnj;ನಲ್ಲಿ ಅವರ ಪಾತ್ರಕ್ಕೆ ಬೇರೆ ಕಲಾವಿದರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂಬ ಸಂಗತಿ ಹೊರಬಿದ್ದಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ವಿಶೇಷ ಪೋಸ್ಟ್ ವೈರಲ್&lt;/strong&gt;&lt;/h2&gt;&lt;p&gt;ಈ ಬೆಳವಣಿಗೆಗಳ ನಡುವೆಯೇ ರಾಗಿಣಿ ಚಂದ್ರನ್ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಪತಿಯ ಕುರಿತು ಹಂಚಿಕೊಂಡಿರುವ ವಿಶೇಷ ಪೋಸ್ಟ್ ವೈರಲ್ ಆಗಿದೆ. ಪ್ರಜ್ವಲ್ ಅವರ ಜನ್ಮದಿನ ಜುಲೈ 4ರಂದು ಕಳೆದಿದ್ದರೂ, ಮತ್ತೊಮ್ಮೆ ಶುಭಾಶಯ ಕೋರಿದ ಅವರು, ಪತಿಯ ವ್ಯಕ್ತಿತ್ವ ಮತ್ತು ಜೀವನ ಮೌಲ್ಯಗಳನ್ನು ಹೃದಯಸ್ಪರ್ಶಿಯಾಗಿ ಬಣ್ಣಿಸಿದ್ದಾರೆ.&lt;/p&gt;&lt;p&gt;&quot;ನೀವು ದಯೆ, ಪ್ರೀತಿ ಮತ್ತು ನಿಸ್ವಾರ್ಥತೆಗೆ ಪ್ರತಿರೂಪ. ನಿಮ್ಮ ಸುತ್ತಲಿರುವ ಪ್ರತಿಯೊಬ್ಬರ ಒಳಿತನ್ನೇ ಬಯಸುವ ವ್ಯಕ್ತಿ ನೀವು. ನನ್ನನ್ನು ರಾಜಕುಮಾರಿಯಂತೆ ನೋಡಿಕೊಳ್ಳುವ ಪತಿ, ಕುಟುಂಬಕ್ಕೆ ಮೊದಲ ಆದ್ಯತೆ ನೀಡುವ ಮಗ ಹಾಗೂ ಎರಡು ದಶಕಗಳಿಗೂ ಹೆಚ್ಚು ಕಾಲ ಅಭಿಮಾನಿಗಳಿಗೆ ಅತ್ಯುತ್ತಮ ಅಭಿನಯ ನೀಡುತ್ತಿರುವ ಅದ್ಭುತ ಕಲಾವಿದ ನೀವು,&quot; ಎಂದು ರಾಗಿಣಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಇದರೊಂದಿಗೆ, &quot;ನಿಮ್ಮ ವಿನಯ, ಎಲ್ಲರಿಗೂ ನೀಡುವ ಗೌರವ ಮತ್ತು ನಿಮ್ಮ ಮೌಲ್ಯಗಳೇ ನಿಮ್ಮ ದೊಡ್ಡ ಶಕ್ತಿ. ನಿಮ್ಮ ಕಲೆಗೆ, ಚಿತ್ರರಂಗಕ್ಕೆ ಮತ್ತು ನಿಮ್ಮವರಿಗಾಗಿ ನೀವು ಯಾವಾಗಲೂ ಶೇ.100ರಷ್ಟು ಸಮರ್ಪಣೆಯಿಂದ ದುಡಿಯುತ್ತೀರಿ. ನೀವು ಹೇಗಿದ್ದೀರೋ ಹಾಗೆಯೇ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನಿಮ್ಮ ಮೌಲ್ಯಗಳಿಗೆ ನಮ್ಮ ಗೌರವ ಸದಾ ಇರುತ್ತದೆ. ನೀವು ನಮ್ಮ ಹೆಮ್ಮೆ,&quot; ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.&lt;/p&gt;&lt;p&gt;ಒಂದೆಡೆ ಕರಾವಳಿ ಚಿತ್ರದ ಟ್ರೇಲರ್ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದರೆ, ಮತ್ತೊಂದೆಡೆ ರಾಗಿಣಿ ಚಂದ್ರನ್ ಅವರ ಈ ಬೆಂಬಲದ ಸಂದೇಶ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಈ ಬೆಳವಣಿಗೆಗಳು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿವೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Ragini Prajwal (@iamraginiprajwal)&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/karavali-controversy-ragini-chandran-supports-prajwal-devaraj-viral-post-gvd/articleshow-me2gw02"/>
        </item>
        <item>
            <title><![CDATA['ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್: ಮುಂದಿನ ಭಾಗದ ಕಥೆಯ ರಹಸ್ಯ ಬಯಲು!]]></title>
            <link>https://kannada.asianetnews.com/gallery/sandalwood/kantara-next-part-update-by-rishab-shetty-script-work-gvd-w3g5wdx</link>
            <guid isPermaLink="true">https://kannada.asianetnews.com/gallery/sandalwood/kantara-next-part-update-by-rishab-shetty-script-work-gvd-w3g5wdx</guid>
            <pubDate>Wed, 08 Jul 2026 17:41:33 +0530</pubDate>
            <description><![CDATA[&lt;p&gt;'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್&zwnj;ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkgnwq9e38rhpper11svx7kd,imgname-rishab-shetty-1773307583790.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್&zwnj;ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್&zwnj;ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 'ಕಾಂತಾರ: ಚಾಪ್ಟರ್ 1' ಬಳಿಕ ಈಗ ಮುಂದಿನ ಭಾಗದ ಚಿತ್ರದ ಚಿತ್ರಕಥೆ ಬರೆಯುವ ಕೆಲಸ ಆರಂಭವಾಗಿದ್ದು, ತಮ್ಮ ಲೇಖಕರ ತಂಡದೊಂದಿಗೆ ಸ್ಕ್ರಿಪ್ಟ್ ಅಭಿವೃದ್ಧಿಯಲ್ಲಿ ತೊಡಗಿರುವುದಾಗಿ ಅವರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಅಂತರರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ನಿರ್ದೇಶನವೇ ತಮ್ಮ ನಿಜವಾದ ಫ್ಯಾಷನ್ ಎಂದು ಹೇಳಿಕೊಂಡಿದ್ದಾರೆ. ಕಥೆ ಬರೆಯುವ ಪ್ರಕ್ರಿಯೆಯಲ್ಲೇ ತಮಗೆ ಹೆಚ್ಚು ತೃಪ್ತಿ ಸಿಗುತ್ತದೆ ಎಂದು ತಿಳಿಸಿರುವ ಅವರು, ಮುಂದಿನ ಅಧ್ಯಾಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮೂಲಗಳ ಪ್ರಕಾರ, ಕಾಂತಾರದ ಮುಂದಿನ ಅಧ್ಯಾಯದಲ್ಲೂ ದೈವಿಕ ಶಕ್ತಿಗಳು ಕಥೆಯ ಕೇಂದ್ರಬಿಂದುವಾಗಲಿವೆ. ರಾಜಮನೆತನ ಮತ್ತು ಬುಡಕಟ್ಟು ಸಮುದಾಯದ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಸಾಗಲಿದ್ದು, ಹೊಸ ತಲೆಮಾರಿನ ಕಥೆಯೊಂದಿಗೆ ದೈವ, ನಂಬಿಕೆ ಮತ್ತು ಸಂಪ್ರದಾಯಗಳ ಹೋರಾಟವನ್ನು ಚಿತ್ರಿಸುವ ಸಾಧ್ಯತೆ ಇದೆ. ಹಿಂದಿನ ಭಾಗದಲ್ಲಿ ಕಾಣಿಸಿಕೊಂಡ ಸಂಘರ್ಷದ ಮುಂದುವರಿದ ಅಧ್ಯಾಯವನ್ನು ಇನ್ನಷ್ಟು ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ಚಿತ್ರತಂಡದ್ದಾಗಿದೆ.&lt;/p&gt;&lt;img&gt;&lt;p&gt;ನಿರ್ದೇಶನದ ಜೊತೆಗೆ ನಟನೆಯಲ್ಲೂ ರಿಷಬ್ ಶೆಟ್ಟಿ ಸದ್ಯ ಸಾಕಷ್ಟು ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಎರಡು ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾಗಳಿದ್ದು, ಒಂದಾದ ಮೇಲೆ ಒಂದರಂತೆ ಪೂರ್ಣಗೊಳಿಸುವ ಯೋಜನೆ ಹೊಂದಿದ್ದಾರೆ. ಮೊದಲು ಪ್ರಶಾಂತ್ ವರ್ಮ ನಿರ್ದೇಶನದ ಜೈ ಹನುಮಾನ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲಿರುವ ಅವರು, ಬಳಿಕ ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಐತಿಹಾಸಿಕ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಎರಡೂ ಸಿನಿಮಾಗಳ ಪಾತ್ರಗಳು ಸಂಪೂರ್ಣ ಭಿನ್ನವಾಗಿರುವುದರಿಂದ, ಪ್ರತ್ಯೇಕ ದೈಹಿಕ ಸಿದ್ಧತೆ ಮತ್ತು ವಿಭಿನ್ನ ಲುಕ್ ಅಗತ್ಯವಿದೆ ಎಂದು ರಿಷಬ್ ಹೇಳಿದ್ದಾರೆ. ಒಟ್ಟಾರೆ, ಕಾಂತಾರ ಸರಣಿಯ ಮುಂದಿನ ಭಾಗದ ಕೆಲಸ ಅಧಿಕೃತವಾಗಿ ಆರಂಭವಾಗಿರುವುದು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದು, ಚಿತ್ರದ ಕುರಿತು ಇನ್ನಷ್ಟು ಮಾಹಿತಿಗಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/kantara-next-part-update-by-rishab-shetty-script-work-gvd-w3g5wdx"/>
        </item>
        <item>
            <title><![CDATA[Esha Lankesh: ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ಕಿಡ್ ಎಂಟ್ರಿ: ನಾಯಕಿಯಾದ ಪಿ.ಲಂಕೇಶ್ ಮೊಮ್ಮಗಳು]]></title>
            <link>https://kannada.asianetnews.com/gallery/sandalwood/p-lankesh-granddaughter-esha-lankesh-debut-as-kannada-heroine-gvd-ixsp8ce</link>
            <guid isPermaLink="true">https://kannada.asianetnews.com/gallery/sandalwood/p-lankesh-granddaughter-esha-lankesh-debut-as-kannada-heroine-gvd-ixsp8ce</guid>
            <pubDate>Wed, 08 Jul 2026 17:15:27 +0530</pubDate>
            <description><![CDATA[&lt;p&gt;ನವಿಶಾ ಫಿಲ್ಮ್ಸ್ ಬ್ಯಾನರ್&zwnj;ನಡಿ ಶಿವರಾಜ್ ಕನಗನಪಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಎರಡನೇ ನಿರ್ಮಾಣವಾಗಿದೆ. ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಇಶಾ ಲಂಕೇಶ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0redhzdaykvytgfzkb7cr9,imgname-4-1783510808126.png" type="image/jpeg" height="390" width="690"/>
            <content:encoded><![CDATA[&lt;p&gt;ನವಿಶಾ ಫಿಲ್ಮ್ಸ್ ಬ್ಯಾನರ್&zwnj;ನಡಿ ಶಿವರಾಜ್ ಕನಗನಪಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಎರಡನೇ ನಿರ್ಮಾಣವಾಗಿದೆ. ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಇಶಾ ಲಂಕೇಶ್.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೊಸ ನಾಯಕಿಯ ಆಗಮನಕ್ಕೆ ವೇದಿಕೆ ಸಜ್ಜಾಗಿದೆ. ಖ್ಯಾತ ಪತ್ರಕರ್ತ, ಲೇಖಕ ಪಿ. ಲಂಕೇಶ್ ಅವರ ಮೊಮ್ಮಗಳು ಹಾಗೂ ನಿರ್ದೇಶಕಿ ಕವಿತಾ ಲಂಕೇಶ್ ಅವರ ಪುತ್ರಿ ಇಶಾ ಲಂಕೇಶ್ ಇದೀಗ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ತಮ್ಮ ಸಿನಿ ಪಯಣ ಆರಂಭಿಸುತ್ತಿದ್ದಾರೆ. ಸ್ಟಾರ್&zwnj;ಗಳ ಮಕ್ಕಳು, ನಿರ್ದೇಶಕರು ಹಾಗೂ ನಿರ್ಮಾಪಕರ ಕುಟುಂಬದ ಸದಸ್ಯರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುವುದು ಹೊಸ ಸಂಗತಿಯಲ್ಲ.&lt;/p&gt;&lt;img&gt;&lt;p&gt;ಆದರೆ ಪ್ರತಿಭೆಯ ಮೂಲಕ ತಮ್ಮದೇ ಆದ ಗುರುತು ಮೂಡಿಸಿಕೊಳ್ಳುವುದು ಮುಖ್ಯ. ಆ ನಿಟ್ಟಿನಲ್ಲಿ ಇಶಾ ಲಂಕೇಶ್ ಕೂಡ ತಮ್ಮ ಮೊದಲ ಚಿತ್ರದಲ್ಲೇ ಗಮನ ಸೆಳೆಯುವ ನಿರೀಕ್ಷೆಯಲ್ಲಿದ್ದಾರೆ. ಇಶಾ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೆ ಪ್ರೀತಂ ಗುಬ್ಬಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈಗಾಗಲೇ ದಿಲ್ ರಂಗೀಲಾ, ಜಾನು ಹಾಗೂ ಬಾನ ದಾರಿಯಲ್ಲಿ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅವರು, ಈ ಹೊಸ ಪ್ರಾಜೆಕ್ಟ್&zwnj;ಗೆ ನಿರ್ದೇಶನ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ನವಿಶಾ ಫಿಲ್ಮ್ಸ್ ಬ್ಯಾನರ್&zwnj;ನಡಿ ಶಿವರಾಜ್ ಕನಗನಪಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಎರಡನೇ ನಿರ್ಮಾಣವಾಗಿದೆ. ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಇಶಾ ಲಂಕೇಶ್, ನಟನೆಯ ತರಬೇತಿ ಹಾಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅಭಿನಯದ ಜೊತೆಗೆ ಪಾತ್ರದ ಆಯ್ಕೆಯಲ್ಲೂ ವಿಶೇಷ ಗಮನಹರಿಸಿರುವ ಅವರು, ಮೊದಲ ಸಿನಿಮಾದಲ್ಲೇ ವಿಭಿನ್ನವಾಗಿ ಕಾಣಿಸಿಕೊಳ್ಳುವ ನಿರೀಕ್ಷೆ ಮೂಡಿಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯಕ್ಕೆ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ನಾಯಕಿಯ ಪರಿಚಯವನ್ನು ಮಾತ್ರ ಅಧಿಕೃತವಾಗಿ ಪ್ರಕಟಿಸಿರುವ ನಿರ್ದೇಶಕ ಪ್ರೀತಂ ಗುಬ್ಬಿ, ಚಿತ್ರದ ಉಳಿದ ಕಲಾವಿದರು, ತಾಂತ್ರಿಕ ವರ್ಗ ಹಾಗೂ ಕಥೆಯ ವಿವರಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸುವುದಾಗಿ ತಿಳಿಸಿದ್ದಾರೆ. ಪ್ರತಿಭಾವಂತ ನಿರ್ದೇಶಕರೊಂದಿಗೆ ಇಶಾ ಲಂಕೇಶ್ ಅವರ ಚೊಚ್ಚಲ ಸಿನಿಮಾ ಘೋಷಣೆಯಾಗಿರುವುದರಿಂದ, ಈ ಹೊಸ ಜೋಡಿಯ ಸಿನಿಮಾ ಕುರಿತು ಸಿನಿಪ್ರಿಯರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/p-lankesh-granddaughter-esha-lankesh-debut-as-kannada-heroine-gvd-ixsp8ce"/>
        </item>
        <item>
            <title><![CDATA[Srinagara Kitty Birthday: ನಟ ಶ್ರೀನಗರ ಕಿಟ್ಟಿಗೆ ಹುಟ್ಟುಹಬ್ಬದ ದಿನ; ಪತ್ನಿ-ಮಗಳೊಂದಿಗೆ ಮನೆಯಲ್ಲೇ ಸರಳ ಸಂಭ್ರಮ!]]></title>
            <link>https://kannada.asianetnews.com/gallery/sandalwood/sandalwood-actor-srinagara-kitty-celebrates-his-birthday-in-simple-with-his-family-i5gk75a</link>
            <guid isPermaLink="true">https://kannada.asianetnews.com/gallery/sandalwood/sandalwood-actor-srinagara-kitty-celebrates-his-birthday-in-simple-with-his-family-i5gk75a</guid>
            <pubDate>Wed, 08 Jul 2026 15:41:15 +0530</pubDate>
            <description><![CDATA[&lt;p&gt;ನಟ ಶ್ರೀನಗರ ಕಿಟ್ಟಿಯವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಅತ್ಯಂತ ಸರಳವಾಗಿ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಹಾಗೂ ಆತ್ಮೀಯರು, ಕುಟುಂಬಸ್ಥರು ಸೇರಿ ಕಿಟ್ಟಿ ಅವರ ಹುಟ್ಟುಹಬ್ಬವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0jnc92sbfjwt4qdncc32ka,imgname-srinagara-kitty-birthday-1783504744738.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ಶ್ರೀನಗರ ಕಿಟ್ಟಿಯವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಅತ್ಯಂತ ಸರಳವಾಗಿ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಹಾಗೂ ಆತ್ಮೀಯರು, ಕುಟುಂಬಸ್ಥರು ಸೇರಿ ಕಿಟ್ಟಿ ಅವರ ಹುಟ್ಟುಹಬ್ಬವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಸ್ಯಾಂಡಲ್&zwnj;ವುಡ್ ನಟ, 'ಇಂತಿ ನಿನ್ನ ಪ್ರೀತಿಯʼ ಸಿನಿಮಾದ ಮೂಲಕ ಕರ್ನಾಟಕದ ಮನೆಮನೆಮಾತಾಗಿರುವ ಕಲಾವಿದ ಶ್ರೀನಗರ ಕಿಟ್ಟಿಗೆ (Srinagara Kitty) ಇಂದು (8 ಜುಲೈ) ಹುಟ್ಟಹಬ್ಬದ ಸಂಭ್ರಮ. ʻಸವಾರಿʼ, ʻಸಂಜು ವೆಡ್ಸ್&zwnj; ಗೀತಾʼ ನಂತಹ ಸೂಪರ್&zwnj; ಹಿಟ್&zwnj; ಸಿನಿಮಾಗಳ ನಟನೆಯ ಮೂಲಕ ಜನಮನ್ನಣೆ ಗಳಿಸಿರುವ ಶ್ರೀನಗರ ಕಿಟ್ಟಿಯವರು ಇಂದು ತಮ್ಮ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಟ ಶ್ರೀನಗರ ಕಿಟ್ಟಿಯವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಅತ್ಯಂತ ಸರಳವಾಗಿ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಹಾಗೂ ಆತ್ಮೀಯರು, ಕುಟುಂಬಸ್ಥರು ಸೇರಿ ಕಿಟ್ಟಿ ಅವರ ಹುಟ್ಟುಹಬ್ಬವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಜೊತೆ ಸಿಂಪಲ್&zwnj; ಸೆಲೆಬ್ರೇಷನ್&lt;/p&gt;&lt;p&gt;ಹೌದು, ನಟ ಶ್ರೀನಗರ ಕಿಟ್ಟಿ ಯಾವುದೇ ಆಡಂಬರವಿಲ್ಲದೇ ಕುಟುಂಬಸ್ಥರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಇದೀಗ ವೈರಲ್ ಅಗುತ್ತಿದೆ. ಪತಿ ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬಕ್ಕೆ ಪತ್ನಿ ಭಾವನಾ ಬೆಳಗೆರೆ ಅವರು ಪ್ರೀತಿಯಿಂದ ಶುಭಕೋರಿದ್ದಾರೆ.&lt;/p&gt;&lt;img&gt;&lt;p&gt;ಪತಿಯ ಕೆನ್ನೆಯನ್ನು ಮುದ್ದಿಸಿ ಕ್ಯಾಮೆರಾ ಮುಂದೆಯೇ ತಮ್ಮ ಅಪರಿಮಿತ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕೇಕ್&zwnj; ಕತ್ತರಿಸುವ ಮೂಲಕ ಸಂಭ್ರಮಿಸಿದ್ದು, ಈ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.&lt;/p&gt;&lt;img&gt;&lt;p&gt;ಕುಟುಂಬದ ಜೊತೆ ಕೇಕ್&zwnj; ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಸ್ಯಾಂಡಲ್&zwnj;ವುಡ್&zwnj; ನಟ ಶ್ರೀನಗರ ಕಿಟ್ಟಿಗೆ ಪತ್ನಿ ಭಾವನಾ ಬೆಳಗೆರೆ ಹಾಗೂ ಮಗಳು ಪರಿಣಿತಾ ಶುಭ ಕೋರಿದ್ದು ಇದೀಗ ಸ್ಯಾಂಡಲ್&zwnj;ವುಡ್ ಅಂಗಳದಲ್ಲಿ ವೈರಲ್ ಆಗಿ ಕರ್ನಾಟಕದ ಸುತ್ತ ಸುತ್ತತೊಡಗಿದೆ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/sandalwood/sandalwood-actor-srinagara-kitty-celebrates-his-birthday-in-simple-with-his-family-i5gk75a"/>
        </item>
        <item>
            <title><![CDATA[Rishab Shetty: ಹುಟ್ಟುಹಬ್ಬದ ಸಂಭ್ರಮದಲ್ಲಿ ಹಲವು ಗುಟ್ಟು ಹಂಚಿಕೊಂಡ ರಿಷಬ್ ಶೆಟ್ಟಿ; ಸೀಕ್ರೆಟ್ ಮೂಟೆಯಲ್ಲಿ ಏನೇನಿದೆ ನೋಡಿ!]]></title>
            <link>https://kannada.asianetnews.com/sandalwood/sandalwood-divine-star-rishab-shetty-shares-many-secrets-on-his-birthday-celebration-event/articleshow-feqq654</link>
            <guid isPermaLink="true">https://kannada.asianetnews.com/sandalwood/sandalwood-divine-star-rishab-shetty-shares-many-secrets-on-his-birthday-celebration-event/articleshow-feqq654</guid>
            <pubDate>Wed, 08 Jul 2026 12:29:17 +0530</pubDate>
            <description><![CDATA[&lt;p&gt;ರಿಷಬ್ ನಟಿಸ್ತಾ ಇರೋ ನೆಕ್ಸ್ಟ್ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್. ಅಸಲಿಗೆ ಈ ಸಿನಿಮಾ ಅನೌನ್ಸ್ ಆದಾಗ ಹಲವು ಕನ್ನಡ ಪರ ಸಂಘಟನೆಗಳು ರಿಷಬ್ ಈ ಸಿನಿಮಾ ಮಾಡಬಾರದು ಅಂತ ಒತ್ತಾಯಿಸಿದ್ವು. ಶಿವಾಜಿ ಕನ್ನಡ ವಿರೋಧಿ.. ಅವರ ಬಯೋಪಿಕ್​ನಲ್ಲಿ ಕನ್ನಡಿಗರ ನಟಿಸೋದು ಎಷ್ಟು ಸರಿ ಅಂತ ವಾದ ಮಾಡಿದ್ರು. ಆದರೆ, ರಿಷಬ್ ಅವರು ಈ ಬಗ್ಗೆ ಏನು ಹೇಳಿದ್ದಾರೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx080gcyt35yn879yttccxqe,imgname-rishab-shetty--2--1783493575070.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ತಮ್ಮ 43ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿರುವುದು ಗೊತ್ತೇ ಇದೆ. ಬರ್ತ್​ಡೇ ಸಂಭ್ರಮದ ವೇಳೆ ಮುಂದೆ ಬರಲಿರೋ ಪ್ರಾಜೆಕ್ಟ್, ಇಂಡಸ್ಟ್ರಿಯಲ್ಲಿ ಓಡ್ತಿರೋ ಗಾಸಿಪ್, ಪ್ಯಾನ್ ಇಂಡಿಯಾ ಜರ್ನಿ, ಸಿನಿಮಾ ಇಂಡಸ್ಟ್ರಿಯ ಸ್ಥಿತಿಗತಿ ಎಲ್ಲದರ ಬಗ್ಗೆ ಉತ್ತರ ಕೊಟ್ಟಿದ್ದಾರೆ ರಿಷಬ್. ಹಾಗಾದ್ರೆ ರಿಷಬ್ ಹೇಳಿದ ಆ ಗುಟ್ಟುಗಳು ಏನು..? ವಾಚ್ ದಿಸ್ ಸ್ಟೋರಿ.&lt;/p&gt;&lt;p&gt;ಬರ್ತ್​ಡೇ ದಿನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ಈ ಮೂರು(3) ಗುಟ್ಟುಗಳನ್ನು ಹೇಳಿದ್ದಾರೆ.&lt;/p&gt;&lt;p&gt;ಜೈ ಹನುಮಾನ್ ತೆಲುಗು ಚಿತ್ರವಲ್ಲ.. ಅಪ್ಪಟ ಕನ್ನಡ ಚಿತ್ರ..!&lt;/p&gt;&lt;p&gt;ವಿವಾದಕ್ಕೆ ತಲೆ ಕೆಡಿಸಿಕೊಳ್ಳಲ್ಲ.. ಶಿವಾಜಿ ಸಿನಿಮಾ ಬಿಡಲ್ಲ..!&lt;/p&gt;&lt;p&gt;ಕಾಂತಾರ ಹೊಸ ಅಧ್ಯಾಯ ರೆಡಿಯಾಗ್ತಿರೋದು ಸುಳ್ಳಲ್ಲ..!&lt;/p&gt;&lt;p&gt;ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದು, ಚಿತ್ರರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಸಣ್ಣ ಪುಟ್ಟ ಪಾತ್ರ ಮಾಡ್ತಾ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಬಂದವರು ರಿಷಬ್. ಸದ್ಯ ಶೆಟ್ರು ಗ್ಲೋಬಲ್ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ.&lt;/p&gt;&lt;p&gt;ಕಾಂತಾರ ರಿಷಬ್ ಬದುಕಿನ ಟರ್ನಿಂಗ್ ಪಾಯಿಂಟ್. ಕಾಂತಾರದಿಂದ ಸಿಕ್ಕ ಜಾಗತಿಕ ಮನ್ನಣೆ ರಿಷಬ್​ಅವರನ್ನು ರಾತ್ರೋರಾತ್ರಿ ಗ್ಲೋಬಲ್ ಸ್ಟಾರ್ ಆಗಿಸಿದೆ. ಕಾಂತಾರ ಚಾಪ್ಟರ್-1 ಮತ್ತೊಂದು ಲೆವೆಲ್ ಎತ್ತರಕ್ಕೆ ಕೊಂಡೊಯ್ದಿದೆ.&lt;/p&gt;&lt;p&gt;ಸದ್ಯ ರಿಷಬ್ ಎರಡು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದನೇಯದ್ದು ಜೈ ಹನುಮಾನ್. ಪ್ರಶಾಂತ್ ವರ್ಮಾ ನಿರ್ದೇಶನದ ಮೈತ್ರಿ ಮೂವೀಸ್ ನಿರ್ಮಾಣದ ಜೈ ಹನುಮಾನ್ ತೆಲುಗು ಮೂವಿನಾ..? ಇಲ್ಲಾ ಅಂತಾರೆ ರಿಷಬ್. ಬೇರೆ ಬೇರೆ ಭಾಷೆಯ ನಟರು ಇರೋ ಸಿನಿಮಾ ಅದು. ಅವರವರು ಅವರವರ ಭಾಷೆಯಲ್ಲಿ ಮಾತನಾಡ್ತಾರೆ, ಬಳಿಕ ಡಬ್ಬಿಂಗ್ ಆಗುತ್ತೆ. ಹನುಮಂತನೂ ಕನ್ನಡದವನು.. ರಿಷಬ್ ಕೂಡ ಕನ್ನಡಿಗ.. ಸೋ ಇದು ಅಪ್ಪಟ ಕನ್ನಡ ಸಿನಿಮಾ ಅಂತಾರೆ ರಿಷಬ್.&lt;/p&gt;&lt;p&gt;ಇದಾದ ಬಳಿಕ ರಿಷಬ್ ನಟಿಸ್ತಾ ಇರೋ ನೆಕ್ಸ್ಟ್ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್. ಅಸಲಿಗೆ ಈ ಸಿನಿಮಾ ಅನೌನ್ಸ್ ಆದಾಗ ಹಲವು ಕನ್ನಡ ಪರ ಸಂಘಟನೆಗಳು ರಿಷಬ್ ಈ ಸಿನಿಮಾ ಮಾಡಬಾರದು ಅಂತ ಒತ್ತಾಯಿಸಿದ್ವು. ಶಿವಾಜಿ ಕನ್ನಡ ವಿರೋಧಿ.. ಅವರ ಬಯೋಪಿಕ್​ನಲ್ಲಿ ಕನ್ನಡಿಗರ ನಟಿಸೋದು ಎಷ್ಟು ಸರಿ ಅಂತ ವಾದ ಮಾಡಿದ್ರು.&lt;/p&gt;&lt;p&gt;ಆದ್ರೆ ಈ ವಿವಾದದ ಹೊರತಾಗಿಯೂ ರಿಷಬ್ ಈ ಪ್ರಾಜೆಕ್ಟ್​ನಿಂದ ಹಿಂದೆ ಸರಿದಿಲ್ಲ. ಶಿವಾಜಿ ಪಾತ್ರ ಮಾಡಿಯೇ ಸಿದ್ಧ ಅಂದಿದ್ದಾರೆ. ಜೈ ಹನುಮಾನ್ ಬಳಿಕ ಈ ಸಿನಿಮಾ ಶುರುವಾಗಲಿದೆ.&lt;/p&gt;&lt;p&gt;ಇನ್ನು, ಕಾಂತಾರದ ಇನ್ನೊಂದು ಅಧ್ಯಾಯ ಕೂಡ ಬರೋದು ಫಿಕ್ಸ್. ಸದ್ಯ ನಟನೆಯ ಚಿತ್ರಗಳ ಜೊತೆ ಜೊತೆಗೆ ಕಾಂತಾರ ಚಾಪ್ಟರ್ 2 ಸ್ಕ್ರಿಪ್ಟ್ ರೆಡಿಯಾಗ್ತಾ ಇದೆಯಂತೆ. ರಿಷಬ್ ರೈಟರ್ಸ್ ಟೀಂ ಆ ಸ್ಕ್ರಿಪ್ಟ್​ನ ಸಿದ್ದಮಾಡ್ತಾ ಇದೆ.&lt;/p&gt;&lt;p&gt;ಕರಾವಳಿ ಪ್ರವಾಸೋಧ್ಯಮ ರಾಯಭಾರಿ ಆಗಿದ್ದು ನಿಜಾನಾ..?&lt;/p&gt;&lt;p&gt;ಇತ್ತೀಚಿಗೆ ರಿಷಬ್, ಸಿಎಂ ಡಿ.ಕೆ ಶಿವಕುಮಾರ್​ಅವರನ್ನು ಭೇಟಿ ಮಾಡಿದ್ರು. ರಿಷಬ್​ಅವರನ್ನು ಕರ್ನಾಟಕ ಕರಾವಳಿ ಪ್ರವಾಸೋದ್ಯಮ ರಾಯಭಾರಿ ಮಾಡಲಾಗಿದೆ ಅನ್ನೋ ನ್ಯೂಸ್ ಹರಿದಾಡಿದ್ವು. ಆದ್ರೆ ಅದು ಇನ್ನೂ ಅಧಿಕೃತ ಆಗಿಲ್ಲ. ಈ ಕುರಿತ ಮಾತುಕತೆಗೆ ಅಂತಲೇ ರಿಷಬ್ ಸಿಎಂ ಭೇಟಿ ಮಾಡಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ರಿಷಬ್ ಕೈಯಲ್ಲಿ ಮೂರು ಚಿತ್ರಗಳಿವೆ. ತಲೆಯಲ್ಲಿ ಮತ್ತೊಂದಿಷ್ಟು ಕನಸುಗಳಿವೆ. ಇವೆಲ್ಲ ಕನಸುಗಳ ನಡುವೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರೋ ರಿಷಬ್ ಹೊಸ ಅಧ್ಯಾಯ ಸ್ಟಾರ್ಟ್ ಅಂದಿದ್ದಾರೆ..!&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-divine-star-rishab-shetty-shares-many-secrets-on-his-birthday-celebration-event/articleshow-feqq654"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೇಸ್‌: ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣದ ಹಿಂದೆ ಪ್ರಭಾವಿಗಳಿರೋ ಶಂಕೆ? ಡೀಲ್ ಕೊಟ್ಟವರಿಗೂ ನಡುಕ]]></title>
            <link>https://kannada.asianetnews.com/karnataka-districts/renukaswamy-case-darshan-aides-arrested-for-threatening-witness-fsl-to-uncover-big-names-in-witness-deal-gdp/articleshow-7m26gyz</link>
            <guid isPermaLink="true">https://kannada.asianetnews.com/karnataka-districts/renukaswamy-case-darshan-aides-arrested-for-threatening-witness-fsl-to-uncover-big-names-in-witness-deal-gdp/articleshow-7m26gyz</guid>
            <pubDate>Wed, 08 Jul 2026 12:28:16 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿಗಳನ್ನು ಬಂಧಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ. ಪ್ರಭಾವಿಗಳ ಸೂಚನೆ ಮೇರೆಗೆ ನಡೆದಿದೆ ಎನ್ನಲಾದ ಈ 'ಡೀಲ್'ನ ರಹಸ್ಯವನ್ನು ಆರೋಪಿಗಳ ಮೊಬೈಲ್ ಫೋನ್&zwnj;ನ ಎಫ್&zwnj;ಎಸ್&zwnj;ಎಲ್ ವರದಿ ಬಯಲು ಮಾಡುವ ನಿರೀಕ್ಷೆಯಿದೆ, ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j0q7cynrazcp8gfx4vw71q87,imgname-Renukaswamy-Murder-Case-1718766435000.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಟ ದರ್ಶನ್ ಅವರನ್ನು ಈ ಕೊಲೆ ಕೇಸ್&zwnj;ನಿಂದ ಹೇಗಾದರೂ ಮಾಡಿ ಪಾರು ಮಾಡಬೇಕು ಎಂದು ಯಾರದ್ದೋ ಮಾತು ಕೇಳಿ ಸಾಕ್ಷಿಗಳ ನಾಶಕ್ಕೆ ಇಳಿದಿದ್ದ ದರ್ಶನ್ ಅಭಿಮಾನಿ ಸಂಘದ ಪ್ರಮುಖರು ಈಗ ತಾವೇ ಕಾನೂನಿನ ಉರುಳಿಗೆ ಸಿಲುಕಿದ್ದಾರೆ. ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಒಡ್ಡಿ ಸಿಕ್ಕಿಬಿದ್ದಿರುವ ಆರೋಪಿಗಳ ಜಾಲದ ಹಿಂದೆ ಚಿತ್ರರಂಗದ ಪ್ರಭಾವಿ ವ್ಯಕ್ತಿಗಳು ಅಥವಾ ರಾಜಕೀಯದ ಪ್ರಭಾವಿ ವ್ಯಕ್ತಿಗಳು ಇರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿದೆ.&lt;/p&gt;&lt;h2&gt;ಸಾಕ್ಷಿ ನಂ. 49 ಸಂದೀಪ್&zwnj;ಗೆ ಬೆದರಿಕೆ ಹಾಕಿದ್ದ ಮೂವರ ಬಂಧನ&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿಯಾಗಿರುವ ಚಿತ್ರದುರ್ಗದ ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್&zwnj;ನ ಕ್ಯಾಷಿಯರ್ ಸಂದೀಪ್&zwnj;ಗೆ ಇತ್ತೀಚೆಗೆ ಆಕರ್ಷ್ ಎಂಬ ವ್ಯಕ್ತಿಯ ಮೂಲಕ ಕರೆ ಮಾಡಿಸಲಾಗಿತ್ತು. ನಾವು ಹೇಳಿದಂತೆ ಕೋರ್ಟ್&zwnj;ನಲ್ಲಿ ಸಾಕ್ಷ್ಯ ನುಡಿಯಬೇಕು, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಕುರಿತು ಸಂದೀಪ್ ಸ್ವತಃ ನ್ಯಾಯಾಧೀಶರ ಮುಂದೆ ಧೈರ್ಯವಾಗಿ ನನಗೆ ಸುಳ್ಳು ಸಾಕ್ಷಿ ನುಡಿಯುವ ಬೆದರಿಕೆ ಇದೆ ಎಂದು ಜವಾಬ್ದಾರಿ ಹೇಳಿಕೆ ನೀಡಿದ್ದರು.&lt;/p&gt;&lt;p&gt;ವಿಚಾರಣೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಬೆದರಿಕೆ ಹಾಕಿದವರ ವಿರುದ್ಧ ತಕ್ಷಣ ಕ್ರಮ ಜರುಗಿಸಲು ಮತ್ತು ಸಾಕ್ಷಿಗೆ ಸೂಕ್ತ ರಕ್ಷಣೆ ನೀಡಲು ತನಿಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಟ ದರ್ಶನ್ ಅಭಿಮಾನಿ ಸಂಘದ ಸದಸ್ಯರಾದ ಸುಹಾಸ್, ವೇಣು ಮತ್ತು ಪುನೀತ್ ಎಂಬ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದರು.&lt;/p&gt;&lt;h2&gt;10 ದಿನ ಪೊಲೀಸ್ ಕಸ್ಟಡಿಯಲ್ಲಿ ಪುನೀತ್: ಬಾಯಿ ಬಿಟ್ಟರೆ ಅನಾಹುತ!&lt;/h2&gt;&lt;p&gt;ಬಂಧಿತರ ಪೈಕಿ ತೀವ್ರ ವಿಚಾರಣೆಗೆ ಒಳಗಾಗಿರುವ ದಾಸನ ಅಭಿಮಾನಿ ಪುನೀತ್ ನನ್ನು ಪೊಲೀಸರು ಸದ್ಯ 10 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಈ ಪುನೀತ್ ಪೊಲೀಸರ ಮುಂದೆ ನಿರಂತರವಾಗಿ ಮರು ಹೇಳಿಕೆಗಳನ್ನು ದಾಖಲಿಸುತ್ತಿದ್ದಾನೆ. ಸದ್ಯದ ಮಾಹಿತಿ ಪ್ರಕಾರ, ಈತ ಯಾರೋ ಪ್ರಭಾವಿಗಳ ಸೂಚನೆ ಮೇರೆಗೆ ಈ ಇಡೀ ಸಾಕ್ಷಿ ನಾಶದ &lsquo;ಡೀಲ್&rsquo; ಕುದುರಿಸಲು ಮುಂದಾಗಿದ್ದ ಎನ್ನಲಾಗಿದೆ. 10 ದಿನಗಳ ಈ ಸುದೀರ್ಘ ವಿಚಾರಣೆಯಲ್ಲಿ ಪುನೀತ್ ಅಸಲಿ ಸತ್ಯವನ್ನು ಬಾಯಿ ಬಿಟ್ಟರೆ, ಈ ಡೀಲ್ ಕುದುರಿಸಲು ಹಣದ ಆಮಿಷ ಒಡ್ಡಿದ ದೊಡ್ಡ ವ್ಯಕ್ತಿಗಳಿಗೆ ನೇರ ಸಂಕಷ್ಟ ಅಂತು ಕಟ್ಟಿಟ್ಟ ಬುತ್ತಿ.&lt;/p&gt;&lt;h2&gt;ಕಾನ್ಫರೆನ್ಸ್ ಕಾಲ್ ರಹಸ್ಯ ಬಿಚ್ಚಿಡಲಿದೆ ಎಫ್&zwnj;ಎಸ್&zwnj;ಎಲ್ (FSL) ವರದಿ&lt;/h2&gt;&lt;p&gt;ಸಾಕ್ಷಿಗೆ ಬೆದರಿಕೆ ಹಾಕಲು ಆರೋಪಿಗಳು ಬಳಸಿದ್ದ ಮೊಬೈಲ್ ಫೋನ್&zwnj;ಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಿದ್ದಾರೆ. ಮೊಬೈಲ್&zwnj;ನಿಂದ ಡಿಲೀಟ್ ಮಾಡಲಾಗಿರುವ ಕರೆಗಳ ವಿವರ, ವಾಟ್ಸಾಪ್ ಚಾಟ್&zwnj;ಗಳು ಮತ್ತು ಪ್ರಮುಖ ಆಡಿಯೋ ರೆಕಾರ್ಡಿಂಗ್&zwnj;ಗಳನ್ನು ಮರುಪಡೆಯುವ (Retrieve) ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ವರದಿ ಪೊಲೀಸರ ಕೈಸೇರಲಿದೆ. ಸಾಕ್ಷಿಗೆ ಬೆದರಿಕೆ ಹಾಕುವ ಸಮಯದಲ್ಲಿ ಈ ಆರೋಪಿಗಳ ಜೊತೆ ಕಾನ್ಫರೆನ್ಸ್ ಕಾಲ್&zwnj;ನಲ್ಲಿ ಇನ್ನು ಯಾರ್ಯಾರು ಸಂಪರ್ಕದಲ್ಲಿದ್ದರು? ಬೆಂಗಳೂರಿನಿಂದ ಯಾರಾದರೂ ಇವರಿಗೆ ಇನ್ಸ್ಟ್ರಕ್ಷನ್ ನೀಡುತ್ತಿದ್ದರೇ? ಎಂಬುದನ್ನು ಎಫ್&zwnj;ಎಸ್&zwnj;ಎಲ್ ಪತ್ತೆ ಹಚ್ಚಲಿದೆ.&lt;/p&gt;&lt;h2&gt;ಡೀಲ್ ಕುದುರಿಸಿದವರಿಗೆ ಶುರುವಾಗಿದೆ ನಡುಕ!&lt;/h2&gt;&lt;p&gt;ಎಫ್&zwnj;ಎಸ್&zwnj;ಎಲ್&zwnj;ನಿಂದ ತಾಂತ್ರಿಕ ಸಾಕ್ಷ್ಯಗಳು ಕೈ ಸೇರಿದ ತಕ್ಷಣವೇ, ಈ ಇಡೀ ಸಾಕ್ಷಿ ಬೆದರಿಕೆ ಪ್ರಕರಣದ ಹಿಂದೆ ನಿಂತು ಹಣದ ಹರಿವು ಹಾಗೂ ತಂತ್ರ ರೂಪಿಸಿದ ದೊಡ್ಡ ತಲೆಗಳಿಗೆ ಪೊಲೀಸರು ನೋಟಿಸ್ ಜಾರಿ ಮಾಡಲಿದ್ದಾರೆ. ನೋಟಿಸ್ ನೀಡಿದ ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಮುಖಾಮುಖಿ ವಿಚಾರಣೆ ನಡೆಸಲು ಕಾಮಾಕ್ಷಿಪಾಳ್ಯ ಪೊಲೀಸರು ಯೋಜನೆ ರೂಪಿಸಿದ್ದಾರೆ.&lt;/p&gt;&lt;p&gt;ದರ್ಶನ್ ರಕ್ಷಣೆಗಾಗಿ ಕೋಟಿ ಕೋಟಿ ಹಣ ಹಿಡಿದು ಡೀಲ್ ಮಾಡಲು ಹೊರಟಿದ್ದ ಪ್ರಭಾವಿ ವಲಯದಲ್ಲಿ ಈಗ ತೀವ್ರ ನಡುಕ ಮತ್ತು ಆತಂಕ ಮನೆಮಾಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್&zwnj;ನ ಸೈಡ್ ಟ್ರ್ಯಾಕ್&zwnj;ನಲ್ಲಿ ಆರಂಭವಾಗಿರುವ ಈ ಬೆದರಿಕೆ ಪ್ರಕರಣ, ಅಸಲಿ ಕೊಲೆ ಪ್ರಕರಣಕ್ಕಿಂತಲೂ ದೊಡ್ಡ ತಿರುವು ಪಡೆಯುವ ಮುನ್ಸೂಚನೆ ಸಿಗುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-darshan-aides-arrested-for-threatening-witness-fsl-to-uncover-big-names-in-witness-deal-gdp/articleshow-7m26gyz"/>
        </item>
        <item>
            <title><![CDATA[Yash-Toxic: ಕಿಯಾರ ಮೇಲೆ ಮುತ್ತಿನ ಮಳೆ.. ಹೊರಬಂತು ಮೋಸದ ಕಥೆ; ಮಿತಿಮೀರಿಸುತ್ತಿದೆ ಟಾಕ್ಸಿಕ್ ಕ್ರೇಜ್!]]></title>
            <link>https://kannada.asianetnews.com/sandalwood/rocking-star-yash-starrer-geethu-mohandas-movie-toxic-2nd-song-released-and-making-sensation/articleshow-z5dq6hr</link>
            <guid isPermaLink="true">https://kannada.asianetnews.com/sandalwood/rocking-star-yash-starrer-geethu-mohandas-movie-toxic-2nd-song-released-and-making-sensation/articleshow-z5dq6hr</guid>
            <pubDate>Wed, 08 Jul 2026 12:05:21 +0530</pubDate>
            <description><![CDATA[&lt;p&gt;ಇಂದು (8 ಜುಲೈ 2026) ಬಿಡುಗಡೆ ಆಗಿರುವ &lsquo;ತಬಾಹಿ&rsquo; &amp;nbsp;ಸಾಂಗ್ ಮೂಲಕ, ಯಶ್ ನಾಯಕತ್ವ ಹಾಗೂ ಗೀತೂ ಮೋಹನ್&zwnj;ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರಕ್ಕೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಈ ಮೂಲಕ, 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ 'ಪ್ಯಾನ್ ವರ್ಲ್ಡ್' ಟಾಕ್ಸಿಕ್&zwnj; ಸಿನಿಮಾಗೆ ಸಂಚಲನ ಹಾಗೂ ನಿರೀಕ್ಷೆ ಮುಗಿಲು ಮುಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx070418yy7vw59shcvf247c,imgname-yash-kiara-advani-1783492513832.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಪ್ರತಿಯೊಂದು ಅಪ್&zwnj;ಡೇಟ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೆನ್ಸೇಷನ್ ಸೃಷ್ಟಿಸುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್&zwnj; ಹಾಗೂ ಸಾಂಗ್ ಮೂಲಕ ಟಾಕ್ಸಿಕ್ ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಹೊಸ &lsquo;ತಬಾಹಿ (Tabaahi)&rsquo; ಸಾಂಗ್ ಬಿಡುಗಡೆ ಆಗಿದ್ದು ಇದು 'ಟಾಕ್ಸಿಕ್&zwnj;' ಜ್ವರವನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಸಂದೇಹವೇ ಇಲ್ಲ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಟಾಕ್ಸಿಕ್ ಚಿತ್ರದ ಎರಡನೇ ಹಾಡು ಇದೀಗ ಬಿಡುಗಡೆಯಾಗಿದೆ. ವಿಶಾಲ್ ಮಿಶ್ರಾ ಸಂಗೀತದ ಹೊಸ ಸಾಂಗ್&zwnj; ಸಿಕ್ಕಾಪಟ್ಟೆ ವೈರಲ್ ಅಗುತ್ತಿದೆ. ತಬಾಹಿ ಹಾಡು ನಾಳೆ 11.33ಕ್ಕೆ ಬರಲಿದೆ ಎಂದು ನಿನ್ನೆಯೇ ಟಾಕ್ಸಿಕ್ ನಟಿ ಕಿಯಾರಾ ಅದ್ವಾನಿ ಎಕ್ಸ್&zwnj;ನಲ್ಲಿ ಹಂಚಿಕೊಂಡಿದ್ದರು. (ಇಡೀ ಚಿತ್ರತಂಡ ಇಂದು ಲಾಂಚ್ ಆಗಲಿರುವ ತಬಾಹಿ ಸಾಂಗ್&zwnj;ಗೆ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿತ್ತು.). ಈಗ ಹಾಡು ಬಿಡುಗಡೆ ಆಗಿ ನಿರೀಕ್ಷೆಗೂ ಮೀರಿ ಸೆನ್ಸೇಷನ್ ಸೃಷ್ಟಿಸುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಏನಿದೆ, ಹೇಗಿದೆ ತಬಾಹಿ ಹಾಡು?!&lt;/h2&gt;&lt;p&gt;ವಿಶಾಲ್ ಮಿಶ್ರಾ ಸಂಗೀತ ನಿರ್ದೇಶನ, ಗಾಯನದ ಮೂಲಕ ಹೊರಬಂದಿರುವ ಈ ಹೊಸ ಹಾಡು ವಿಭಿನ್ನ ಹಾಗೂ ವಿಶೇಷ ಎನ್ನುವಂತಿದೆ. ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮೂಡಿಬಂದಿರುವ &lsquo;ತಬಾಹಿ.. ಎಲ್ಲಾ ಮೀತಿಮೀರಿ ಹೋಗೋಣ ಬಾ.. ಎನ್ನುವ ಹಾಡು ಯಶ್ ಹಾಗೂ ಕಿಯಾರಾ ಅಡ್ವಾನಿ ನಟನೆಯಲ್ಲಿ ಸೂಪರ್ ರೊಮ್ಯಾಂಟಿಕ್ ಎನ್ನುವಂತೆ ಇದೆ. ಜೆನ್ ಜೀ ಮಾತಲ್ಲಿ ಹೇಳಬೇಕು ಎಂದರೆ ಈ ಹಾಡು &rsquo;ಬೆಂಕಿ'.. &amp;nbsp; ಮಿಕ್ಕ ವಾತಾವರಣ ಈ ಹಾಡಿಗೆ ಪೂರಕವಾಗಿದ್ದು, ಹೈ ಲೆವಲ್ ಕಮಾಲ್ ಈ ಹಾಡಿನಲ್ಲಿ ಎದ್ದು ಕಾಣುತ್ತಿದೆ. ಮೇಕಿಂಗ್ ರಿಚ್&zwnj;ನೆಸ್, ಹೈ ಟೆಕ್ನಾಲಜಿ ಸೇರಿದಂತೆ ಎಲ್ಲಾ ಅಂಶಗಳೂ ಈ ಹಾಡಿನಲ್ಲಿ ಬೇರೆಯದೇ ಲೆವೆಲ್&zwnj;ನಲ್ಲಿ ಮೇಳೈಸಿದ್ದು, ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದೆ. ಇದೀಗ ಹೊರಜಗತ್ತಿಗೆ ಕಾಲಿಟ್ಟಿರುವ ತಬಾಹಿ ಹಾಡಿನ ಮೂಲಕ ಟಾಕ್ಸಿಕ್ ಸಿನಿಮಾಗೆ ಈಗಾಗಲೇ ಇರುವ ಅಪಾರ ನಿರೀಕ್ಷೆಯ ಬೆಂಕಿಗೆ ಇನ್ನಷ್ಟು ಮತ್ತಷ್ಟು ತುಪ್ಪ ಸುರಿದಿದೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;'ಲೇಡೀಸ್ &amp;amp; ಲೇಡೀಸ್' ಟೀಸರ್ ಭಾರೀ ಸಂಚಲನ&lt;/h3&gt;&lt;p&gt;ಅಂದಹಾಗೆ, ಇತ್ತೀಚೆಗೆ ಬಿಡುಗಡೆ ಆಗಿರುವ ಟಾಕ್ಸಿಕ್ ಸಿನಿಮಾದ 'ಲೇಡೀಸ್ &amp;amp; ಲೇಡೀಸ್' ಟೀಸರ್ ಭಾರೀ ಸಂಚಲನ ಸೃಷ್ಟಿಸಿದೆ. ನಯನತಾರಾ, ಕಿಯಾರಾ ಅಡ್ವಾನಿ, ಹಿಮಾ ಖುರೇಶಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಈ ಐದು ನಾಯಕಿಯರ ವಿಶೇಷ ಟೀಸರ್ ಇದಾಗಿದೆ. ಈ ಪಂಚ ಚಲುವೆಯರ ಜೊತೆ ಯಶ್ ಖದರ್ ಜೋರಾಗಿಯೇ ಹೈಲೈಟ್ ಆಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇಂದು (8 ಜುಲೈ 2026) ಬಿಡುಗಡೆ ಆಗಿರುವ ಸಾಂಗ್ ಮೂಲಕ, ಯಶ್ ನಾಯಕತ್ವ ಹಾಗೂ ಗೀತೂ ಮೋಹನ್&zwnj;ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರಕ್ಕೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಈ ಮೂಲಕ, ಮುಂದಿನ ತಿಂಗಳು, ಅಂದರೆ 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಪ್ಯಾನ್ ಇಂಡಿಯಾ ಮೀರಿದ 'ಪ್ಯಾನ್ ವರ್ಲ್ಡ್' ಟಾಕ್ಸಿಕ್ ಸಂಚಲನ ಹಾಗೂ ನಿರೀಕ್ಷೆ ಮುಗಿಲು ಮುಟ್ಟಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/rocking-star-yash-starrer-geethu-mohandas-movie-toxic-2nd-song-released-and-making-sensation/articleshow-z5dq6hr"/>
        </item>
        <item>
            <title><![CDATA['ನೀವು ನೀವಾಗಿ ಇರುವುದಕ್ಕೇ ಧನ್ಯವಾದಗಳು': ಪತಿ ರಿಷಬ್‌ಗೆ ಪತ್ನಿ ಪ್ರಗತಿ ಶೆಟ್ಟಿ ಹೃದಯಸ್ಪರ್ಶಿ ಶುಭಾಶಯ]]></title>
            <link>https://kannada.asianetnews.com/sandalwood/rishab-shetty-wife-pragathi-shetty-birthday-post-viral-gvd/articleshow-0kzdu3x</link>
            <guid isPermaLink="true">https://kannada.asianetnews.com/sandalwood/rishab-shetty-wife-pragathi-shetty-birthday-post-viral-gvd/articleshow-0kzdu3x</guid>
            <pubDate>Tue, 07 Jul 2026 21:04:10 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಸಿನಿತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwykcjc4sm4bhrrdkksykkrx,imgname-ch-1783438395780.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಸಿನಿತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿರುವ ಈ ವಿಶೇಷ ದಿನದಂದು, ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡ ಭಾವನಾತ್ಮಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ರಿಷಬ್ ಶೆಟ್ಟಿ ಜೊತೆಗಿನ ಸುಂದರ ಕ್ಷಣಗಳ ಚಿತ್ರಗಳನ್ನು ಹಂಚಿಕೊಂಡಿರುವ ಪ್ರಗತಿ ಶೆಟ್ಟಿ, ಪತಿಯ ಮೇಲಿನ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&quot;ನಿಮ್ಮ ನಂಬಿಕೆ ಮತ್ತು ಪ್ರೀತಿಯೇ ಕಾರಣ&quot;&lt;/strong&gt;&lt;/p&gt;&lt;p&gt;&quot;ಪ್ರತಿದಿನವನ್ನೂ ಇನ್ನಷ್ಟು ಸುಂದರವಾಗಿಸುವ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನೀವು ನನ್ನ ಜೀವನವನ್ನು ನಾನು ಊಹಿಸಿದ್ದಕ್ಕಿಂತಲೂ ಹೆಚ್ಚು ಸುಂದರವಾಗಿಸಿದ್ದೀರಿ. ನಿಮ್ಮ ಪ್ರೀತಿಯೇ ನನ್ನ ಬೆಳಕು, ನನ್ನ ಶಾಂತಿ. ಇಂದು ನಾನು ಏನಾಗಿದ್ದೇನೋ ಅದಕ್ಕೆ ನಿಮ್ಮ ಪ್ರೋತ್ಸಾಹ, ನಂಬಿಕೆ ಮತ್ತು ಪ್ರೀತಿಯೇ ಕಾರಣ. ನನ್ನ ಸಂಗಾತಿಯಾಗಿ, ನನ್ನ ಅತಿದೊಡ್ಡ ಶಕ್ತಿಯಾಗಿ ನಿಂತು, ನನ್ನ ಪುಟ್ಟ ಪ್ರಪಂಚವನ್ನು ಅಂತ್ಯವಿಲ್ಲದ ಕನಸುಗಳ ಸಾಗರವಾಗಿ ರೂಪಿಸಿದ್ದೀರಿ,&quot; ಎಂದು ಪ್ರಗತಿ ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;&quot;ನೀವು ನೀವಾಗಿ ಇರುವುದಕ್ಕೇ ಧನ್ಯವಾದಗಳು&quot;&lt;/strong&gt;&lt;/h2&gt;&lt;p&gt;ಮುಂದುವರಿದು, &quot;ನಾವು ಜೊತೆಯಾಗಿ ಸಾಗಿದ ಪ್ರತಿಯೊಂದು ಹೆಜ್ಜೆಯೂ ಅಮೂಲ್ಯ ನೆನಪು. ನಮ್ಮ ಬದುಕಿನಲ್ಲಿ ನಗು, ಕಣ್ಣೀರು, ಸಂತೋಷ, ಭಿನ್ನಾಭಿಪ್ರಾಯ ಎಲ್ಲವೂ ಬಂದಿವೆ. ಆದರೆ ಅವೆಲ್ಲಕ್ಕಿಂತ ದೊಡ್ಡದು ನಮ್ಮ ನಡುವಿನ ಪರಸ್ಪರ ಅರ್ಥೈಸಿಕೊಳ್ಳುವಿಕೆ ಮತ್ತು ಎಂದಿಗೂ ಕಡಿಮೆಯಾಗದ ಪ್ರೀತಿ. ನೀವು ನೀವಾಗಿ ಇರುವುದಕ್ಕೇ ಧನ್ಯವಾದಗಳು. ಪದಗಳಲ್ಲಿ ಹೇಳಲಾಗದಷ್ಟು ನಾನು ನಿಮ್ಮನ್ನು ಪ್ರೀತಿಸುತ್ತೇನೆ,&quot; ಎಂದು ಭಾವುಕರಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಪ್ರಗತಿ ಶೆಟ್ಟಿ ಅವರ ಈ ಹೃದಯಸ್ಪರ್ಶಿ ಸಂದೇಶಕ್ಕೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಕಾಮೆಂಟ್&zwnj;ಗಳ ಮೂಲಕ ದಂಪತಿಗೆ ಶುಭ ಹಾರೈಸುತ್ತಿದ್ದಾರೆ. ರಿಷಬ್ ಶೆಟ್ಟಿಯ ಜನ್ಮದಿನದ ಸಂಭ್ರಮದ ನಡುವೆ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಗಮನ ಸೆಳೆದಿದೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by PragathiRishabShetty (@pragathirishabshetty)&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/rishab-shetty-wife-pragathi-shetty-birthday-post-viral-gvd/articleshow-0kzdu3x"/>
        </item>
        <item>
            <title><![CDATA[Rishab Shetty: 'ಜೈಹನುಮಾನ್' ತೆಲುಗು ಅಲ್ಲ, ಕನ್ನಡ ಸಿನಿಮಾ; ಮಾರ್ಮಿಕ ಕ್ಲಾರಿಟಿ ಕೊಟ್ಟ ರಿಷಬ್ ಶೆಟ್ಟಿ!]]></title>
            <link>https://kannada.asianetnews.com/sandalwood/rishab-shetty-clarifies-jai-hanuman-movie-is-kannada-movie-only-in-his-own-way/articleshow-f9cgfiy</link>
            <guid isPermaLink="true">https://kannada.asianetnews.com/sandalwood/rishab-shetty-clarifies-jai-hanuman-movie-is-kannada-movie-only-in-his-own-way/articleshow-f9cgfiy</guid>
            <pubDate>Tue, 07 Jul 2026 21:00:24 +0530</pubDate>
            <description><![CDATA[&lt;p&gt;'ಮೊಟ್ಟೆ ಮೊದ್ಲಾ ಕೋಳಿ ಮೊದ್ಲಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಕೊಟ್ರೆ ಜನ ನೋಡ್ತಿಲ್ವಾ, ಜನ ನೋಡೋದಕ್ಕೆ ಒಳ್ಳೆ ಸಿನಿಮಾ ಕೊಡ್ತಿಲ್ವಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಬಂದಾಗ ಜನ ನೋಡ್ತಾರೆ. 'ಸು ಫ್ರಂ ಸೋ' ಸಿನಿಮಾ ಬಂದಾಗ ಎಲ್ಲಾ ನುಗ್ಗಿ ನೋಡಿದ್ರು. ಜೆಪಿ ತುಮ್ಮಿನಾಡು ಹೊಸ ನಿರ್ದೇಶಕರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyk6vztckh7ensxr05b707v,imgname-rishab-shetty--1--1783438209018.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದು, (07 July 2026) ಸ್ಯಾಂಡಲ್&zwnj;ವುಡ್ ಪ್ಯಾನ್ ಇಂಡಿಯಾ ಸ್ಟಾರ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ನಿನ್ನೆ ಬೆಂಗಳೂರಿನಲ್ಲಿ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ, ಮಗ-ಮಗಳು ಜೊತೆ ನಿನ್ನೆ ಆಗಮಿಸಿದ್ದ ರಿಷಬ್ ಶೆಟ್ಟಿಯವರು ಮಾಧ್ಯಮಗಳ ಜೊತೆಯಲ್ಲಿ ಮಾತುಕತೆ ನಡೆಸಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮದ ಸಮಯದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮುಂದಿನ ಯೋಜನೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಈ ಮಾತುಕತೆ ವೇಳೆ 'ಜೈ ಹನುಮಾನ್' ಸಿನಿಮಾದ ಬಗ್ಗೆ ಕೂಡ ಮಾತನ್ನಾಡಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ 'ಜೈಹನುಮಾನ್' ಚಿತ್ರವು ತೆಲುಗು ಅಲ್ಲ ಕನ್ನಡ ಸಿನಿಮಾ ಎಂದು ಹೇಳಿ ಶಾಕ್ ಮೂಡಿಸಿದ್ದಾರೆ. ಅದು ಹೇಗೆ ಎನ್ನುವ ಪ್ರಶ್ನೆಗೆ ತಮ್ಮದೇ ಆದ ಶೈಲಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. &quot;ಕನ್ನಡ ಬಿಟ್ಟು ನಾವು ಎಲ್ಲೂ ಹೋಗಲ್ಲ. ಯಾರೋ ಕೇಳಿದ್ರು, 'ಜೈಹನುಮಾನ್' ತೆಲುಗು ಸಿನ್ಮಾ ಅಲ್ವಾ ಅಂತ.. ನಾನು ಇಲ್ಲ ಕನ್ನಡ ಸಿನ್ಮಾ ಅಂದೆ..' ಎಂದಿದ್ದಾರೆ.&lt;/p&gt;&lt;p&gt;ತೆಲುಗು ನಿರ್ಮಾಪಕ, ನಿರ್ದೇಶಕರ ಸಿನಿಮಾ 'ಜೈ ಹನುಮಾನ್' ಅದು ಹೇಗೆ ಕನ್ನಡ ಸಿನಿಮಾ ಆಗುತ್ತದೆ ಎಂಬ 'ಮರುಪ್ರಶ್ನೆ'ಗೆ ಉತ್ತರಿಸಿದ್ದಾರೆ ರಿಷಬ್ ಶೆಟ್ಟಿಯವರು. 'ಹೌದು ಈ ಚಿತ್ರದ ನಿರ್ಮಾಪಕರು, ನಿರ್ದೇಶಕರು ತೆಲುಗಿನವ್ರು.. ಹೀರೊ ನಾನು ಕನ್ನಡದವನು. ಹನುಮಂತ ಹಾಗೂ ನಾನು ಇಬ್ಬರೂ ಕನ್ನಡದವ್ರು.. ಹಾಗಾಗಿ ಈ ಚಿತ್ರ ಕನ್ನಡ ಸಿನಿಮಾ ತಾನೇ ಎಂದೆ&quot; ಎಂದಿದ್ದಾರೆ ರಿಷಬ್. ಇದೀಗ ಅವರ ಈ ಹೇಳಿಕೆ ಇದೀಗ ವೈರಲ್ ಆಗ್ತಿದೆ.&lt;/p&gt;&lt;p&gt;'ಜೈಹನುಮಾನ್' ಸಿನಿಮಾ ಯಾವ ಭಾಷೆಯಲ್ಲಿ ಚಿತ್ರೀಕರಣವಾಗುತ್ತದೆ ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿಯವರು &quot;ತೆಲುಗಿನವ್ರು ತೆಲುಗಿನಲ್ಲಿ ಮಾತನಾಡ್ತಾರೆ, ಕನ್ನಡದವ್ರು ಕನ್ನಡದಲ್ಲಿ ಮಾತನಾಡ್ತಾರೆ, ಹಿಂದಿಯವ್ರು ಹಿಂದಿಯಲ್ಲಿ ಮಾತನಾಡ್ತಾರೆ. ಒಟ್ಟಾರೆ ಪ್ಯಾನ್ ಇಂಡಿಯಾ ಸಿನಿಮಾ ಹಲವು ಭಾಷೆಗಳಲ್ಲಿ ಬರುತ್ತೆ. ಈಗ ಸಿನಿಮಾ ಡಬ್ಬಿಂಗ್ ಮಾಡುವುದು ಸುಲಭವಾಗಿದೆ. ನಿರ್ದೇಶಕರಿಗೆ ಯಾವ ಭಾಷೆಯಲ್ಲಿ ಬೇಕೋ ಆ ಭಾಷೆಯಲ್ಲಿ ಚಿತ್ರೀಕರಣ ಮಾಡ್ತಾರೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;ನಿನ್ನೆ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. 'ಮೊಟ್ಟೆ ಮೊದ್ಲಾ ಕೋಳಿ ಮೊದ್ಲಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಕೊಟ್ರೆ ಜನ ನೋಡ್ತಿಲ್ವಾ, ಜನ ನೋಡೋದಕ್ಕೆ ಒಳ್ಳೆ ಸಿನಿಮಾ ಕೊಡ್ತಿಲ್ವಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಬಂದಾಗ ಜನ ನೋಡ್ತಾರೆ. 'ಸು ಫ್ರಂ ಸೋ' ಸಿನಿಮಾ ಬಂದಾಗ ಎಲ್ಲಾ ನುಗ್ಗಿ ನೋಡಿದ್ರು. ಜೆಪಿ ತುಮ್ಮಿನಾಡು ಹೊಸ ನಿರ್ದೇಶಕರು. ರಾಜ್ ಬಿಟ್ರೆ ಎಲ್ಲಾ ಹೊಸ ಕಲಾವಿದರೇ.. ಸಿನಿಮಾ ಇಷ್ಟವಾಗಿದ್ದಕ್ಕೆ ಜನ ನೋಡಿದ್ರು.. ಜನಪ್ರಿಯ ಕಲಾವಿದರು ಇದ್ದೂ ಜನ ನೋಡ್ಲಿಲ್ಲ ಅಂದ್ರೆ, ಸಿನಿಮಾ ಚೆನ್ನಾಗಿಲ್ಲ ಅಂತ ಅರ್ಥ.&lt;/p&gt;&lt;p&gt;ಅಷ್ಟೇ ಅಲ್ಲ, ಇನ್ನೂ ಸಾಕಷ್ಟು ಸಂಗತಿಗಳ ಬಗ್ಗೆ ರಿಷಬ್ ಶೆಟ್ಟಿಯವರು ಮಾತನ್ನಾಡಿದ್ದಾರೆ. ಮಲಯಾಳಂನಲ್ಲಿ 'ವಾಳಾ- 2', ತಮಿಳಿನಲ್ಲಿ 'ಯೂತ್' ಎನ್ನುವ ಸಿನಿಮಾಗಳು ಬಂತು.. ಹೊಸಬರ ಸಿನಿಮಾ ಆಗಿದ್ರೂ ಅದು 200 ಕೋಟಿ ಕಲೆಕ್ಷನ್ ಆಯ್ತು.. ಕಲೆಕ್ಷನ್&zwnj; ನಂಬರ್&zwnj;ಗಿಂತಲೂ ಅಷ್ಟು ಜನ ನೋಡಿದ್ರು ಎನ್ನುವುದು ಮುಖ್ಯ. ಓಟಿಟಿ ಬಂದಿದೆ ಅಂತ ಎಲ್ಲರೂ ಹೇಳ್ತಾರೆ. ಆದರೆ ಟಿವಿ ರೀತಿ ಈಗ ಓಟಿಟಿ ಕೂಡ ಹಳೇದಾಯ್ತು.. ಓಟಿಟಿಗೆ ಬೇಕಾದ ಕಂಟೆಂಟ್ ಸಿಕ್ತಿದೆ, ಅದು ಅದರ ಪಾಡಿಗೆ ನಡಿತಿದೆ. ಥಿಯೇಟರ್&zwnj;ಗೆ ಬಂದು ಜನ ಸಿನಿಮಾ ನೋಡಲು ಈಗ ಏನು ಮಾಡಬೇಕು ಎನ್ನುವುದು ಮುಖ್ಯ. 'ಚಿತ್ರಮಂದಿರವೇ ಅಂತಿಮ' ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.&lt;/p&gt;&lt;p&gt;ಸಣ್ಣ ಬಜೆಟ್ ಸಿನಿಮಾ ಆದರೆ ವರ್ಷಕ್ಕೆ ಒಂದು ಮಾಡಬಹುದು. ಬಿಗ್ ಬಜೆಟ್ ಸಿನಿಮಾ ಅಂದಾಗ ಅದಕ್ಕೆ ಬೇಕಾಗಿರುವ ಅಗತ್ಯಗಳು ಸಿಗಲು ತಡವಾಗುತ್ತದೆ. ನಾನು 'ಜೈಹನುಮಾನ್' ಸಿನಿಮಾದಲ್ಲಿ ನಟಿಸುವುದರ ಜೊತೆ ಎರಡು ಪ್ರಾಜೆಕ್ಟ್ ಸ್ಕ್ರಿಪ್ಟ್ ಮಾಡ್ತಿದ್ದೀನಿ. ಕೆಲವೊಮ್ಮೆ ಆಗುತ್ತೆ, ಕೆಲವೊಮ್ಮೆ ಆಗೋದಿಲ್ಲ. 'ಕಾಂತಾರ' ಸಿನಿಮಾ ಒಂದೇ ವರ್ಷದಲ್ಲಿ ಕಥೆ ಬರೆದು, ಚಿತ್ರೀಕರಣ ಮಾಡಿ ಬಿಡುಗಡೆಯನ್ನೂ ಮಾಡಿಬಿಟ್ಟೆವು. ಸಿನಿಮಾ ಅನ್ನೋದು ಆಗಬೇಕು ಮಾಡೋಕೆ ಆಗಲ್ಲ. 'ಕಾಂತಾರ-1' ನಾವು ಮಾಡಿದ ಸಿನಿಮಾ' ಎಂದು ರಿಷಬ್ ಶೆಟ್ಟಿ ಮಾರ್ಮಿಕ ಅರ್ಥದಲ್ಲಿ ಹೇಳಿದ್ದಾರೆ.&lt;/p&gt;&lt;p&gt;ಇನ್ನೂ ಒಂದು ಸೀಕ್ರೆಟ್ ಹೇಳಿದ್ದಾರೆ ರಿಷಬ್ ಶೆಟ್ಟಿ. 'ಬರಹಗಾರರನ್ನು ಕನ್ನಡ ಚಿತ್ರರಂಗದಲ್ಲಿ ಬೆಳೆಸುತ್ತಿಲ್ಲ. ಮೊದಲಿನಿಂದ ಅದೇ ತಪ್ಪು ಮಾಡಿದ್ದಕ್ಕೆ ಈಗ ಪರಿಸ್ಥಿತಿ ಈ ರೀತಿಯಾಗಿದೆ. ಬೆಂಗಳೂರಿನ ಬರಹಗಾರರು ಈಗ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಬರಹಗಾರರನ್ನು ಬೆಳೆಸುತ್ತಿದ್ದೇವೆ. ಅವರಿಂದ ಮುಂದೆ ಚಿತ್ರರಂಗಕ್ಕೆ ಕೊಡುಗೆಗಳು ಖಂಡಿತ ಸಿಗಲಿವೆ' ಎಂದಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/rishab-shetty-clarifies-jai-hanuman-movie-is-kannada-movie-only-in-his-own-way/articleshow-f9cgfiy"/>
        </item>
        <item>
            <title><![CDATA[ಪ್ರಜ್ವಲ್‌ ದೇವರಾಜ್‌ ಒಳ್ಳೆಯವರು ಅಂತಾ ಯಾರಾದ್ರೂ ಆಸ್ಕರ್‌ ಅವಾರ್ಡ್‌ ಕೊಟ್ಟಿದ್ದೀರಾ?.. ಕರಾವಳಿ ಚಿತ್ರತಂಡದ ವಿರುದ್ಧ ಫ್ಯಾನ್ಸ್ ಆಕ್ರೋಶ]]></title>
            <link>https://kannada.asianetnews.com/sandalwood/prajwal-devaraj-fans-protest-karavali-trailer-launch-controversy-san/articleshow-7s6qrzw</link>
            <guid isPermaLink="true">https://kannada.asianetnews.com/sandalwood/prajwal-devaraj-fans-protest-karavali-trailer-launch-controversy-san/articleshow-7s6qrzw</guid>
            <pubDate>Tue, 07 Jul 2026 20:11:36 +0530</pubDate>
            <description><![CDATA[&lt;p&gt;'ಕರಾವಳಿ' ಚಿತ್ರದ ಟ್ರೈಲರ್&zwnj;ನಲ್ಲಿ ನಾಯಕ ಪ್ರಜ್ವಲ್ ದೇವರಾಜ್ ಅವರ ಧ್ವನಿ ಇಲ್ಲದಿರುವುದು ಮತ್ತು ಕಳಪೆ ಸ್ಕ್ರೀನ್ ಪ್ರೆಸೆನ್ಸ್&zwnj;ಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಬೇಜವಾಬ್ದಾರಿತನದಿಂದ ಅಭಿಮಾನಿಗಳು ನೊಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyga8r764m3d730wj3t8k4d,imgname-prajwal-devaraj-fans-controversy-1783435174663.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7):&lt;/strong&gt; ಸ್ಯಾಂಡಲ್&zwnj;ವುಡ್&zwnj;ನ ಬಹುನಿರೀಕ್ಷಿತ &lsquo;ಕರಾವಳಿ&rsquo; ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಡೆದ ಗದ್ದಲದ ಅಸಲಿ ಚಿತ್ರಣ ಈಗ ಹೊರಬಂದಿದೆ. ಚಿತ್ರದ ಟ್ರೈಲರ್&zwnj;ನಲ್ಲಿ ಹೀರೊ ಪ್ರಜ್ವಲ್ ದೇವರಾಜ್ (Prajwal Devaraj) ಅವರ ಧ್ವನಿ ಇಲ್ಲದಿರುವುದು ಹಾಗೂ ಕಳಪೆ ಸ್ಕ್ರೀನ್ ಪ್ರೆಸೆನ್ಸ್&zwnj;ನಿಂದ ಬೇಸತ್ತ ಅಖಿಲ ಕರ್ನಾಟಕ ಪ್ರಜ್ವಲ್ ದೇವರಾಜ್ ಅಭಿಮಾನಿ ಸಂಘದ ಪದಾಧಿಕಾರಿಗಳು ಚಿತ್ರತಂಡದ ವಿರುದ್ಧ ಕಣ್ಣೀರು ಹಾಕುತ್ತಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. &quot;ನಮ್ಮ 15 ವರ್ಷಗಳ ಅಭಿಮಾನದ ಇತಿಹಾಸದಲ್ಲೇ ನಾವು ಈ ರೀತಿ ರಸ್ತೆಗೆ ಇಳಿದಿರಲಿಲ್ಲ, ಆದರೆ ಚಿತ್ರತಂಡ ನಮ್ಮನ್ನು ಆ ಮಟ್ಟಿಗೆ ನೋಯಿಸಿದೆ&quot; ಎಂದು ಅಭಿಮಾನಿಗಳು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ನಮ್ಮ ಬಾಸ್ ಸಿನಿಮಾ ಬಂದು ಎರಡು ವರ್ಷ ಆಗಿತ್ತು. ಈ ಬಾರಿ ಅವರ ಬರ್ತ್&zwnj;ಡೇಗೆ ನಮಗೆ ಅವರನ್ನು ಸಿಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಟ್ರೈಲರ್ ಲಾಂಚ್ ಅನ್ನೇ ದೊಡ್ಡ ಹಬ್ಬದಂತೆ ಆಚರಿಸಲು ನಿರ್ಧರಿಸಿ, ನೆನ್ನೆ ರಾತ್ರಿ 2 ಗಂಟೆಯವರೆಗೂ ರಸ್ತೆಯಲ್ಲಿ ನಿಂತು ಬ್ಯಾನರ್ ಕಟ್ಟಿದ್ದೇವೆ, ಹೂವಿನ ಹಾರ ತಂದಿದ್ದೇವೆ, ಪಟಾಕಿಗಳನ್ನು ತಂದಿದ್ದೇವೆ. ರಾತ್ರಿ ಪೊಲೀಸರು ಬಂದು ನಮಗೆ ಕೆಟ್ಟದಾಗಿ ಬೈದರೂ, ರಿಕ್ವೆಸ್ಟ್ ಮಾಡಿಕೊಂಡು ಕೆಲಸ ಮುಗಿಸಿದ್ದೆವು. ಇದೆಲ್ಲವನ್ನೂ ನಾವು ನಿರ್ದೇಶಕ ಗುರುದತ್ ಗಾಣಿಗ ಅವರ ಮೇಲಿನ ನಂಬಿಕೆಯಿಂದ ಮಾಡಿದ್ದೆವು. ಆದರೆ ಇಂದು ಬೆಳಗ್ಗೆ 10:30 ಆದರೂ ಬಾಸ್ ಬರ್ತಾ ಇಲ್ಲ ಅಂದಾಗ ಚಿತ್ರತಂಡದವರು ನಮಗೆ 'ಗೊತ್ತಿಲ್ಲ' ಎಂದು ಬೇಜವಾಬ್ದಾರಿಯ ಉತ್ತರ ನೀಡಿದರು ಎಂದು ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಟ್ರೈಲರ್&zwnj;ನಲ್ಲಿ ನಮ್ಮ ಬಾಸ್ ಕಾಣಿಸಿದ್ದು ಕೇವಲ 'ಜೂನಿಯರ್ ಆರ್ಟಿಸ್ಟ್' ತರ&lt;/strong&gt;&lt;/h2&gt;&lt;p&gt;ಬಾಸ್ ಬರಲಿಲ್ಲ ಅಂದರೂ ಬೇಸರ ಮರೆತು ಸಿನಿಮಾ ಟ್ರೈಲರ್&zwnj; ನೋಡೋಣ ಎಂದು ಥಿಯೇಟರ್ ಒಳಗೆ ಹೋದೆವು. ಆದರೆ ಟ್ರೈಲರ್ ನೋಡಿದ ನಮಗೆ ಎದೆ ಒಡೆದಂತಾಯಿತು. ಇಡೀ ಟ್ರೈಲರ್&zwnj;ನಲ್ಲಿ ನಮ್ಮ ಹೀರೊ ಎಲ್ಲೂ ಸರಿಯಾಗಿ ಕಾಣಿಸಿಯೇ ಇಲ್ಲ. ಬಂದು ಹಾಗೆ ಹೋಗುವ ಜೂನಿಯರ್ ಆರ್ಟಿಸ್ಟ್ ಅಥವಾ ಪಾಸಿಂಗ್ ಶಾಟ್&zwnj; ತರಹ ಬಾಸ್ ಅನ್ನು ತೋರಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಟ್ರೈಲರ್&zwnj;ನಲ್ಲಿ ಅವರ ಧ್ವನಿಯೇ ಇಲ್ಲ. ಸಂಭಾವನೆ ಗಲಾಟೆ ನಮಗಂತೂ ಗೊತ್ತಿಲ್ಲ, ಆದರೆ ಒಬ್ಬ ಅಭಿಮಾನಿಯಾಗಿ ನಮ್ಮ ಹೀರೊನ ನಾವು ಸ್ಕ್ರೀನ್ ಮೇಲೆ ಅದ್ಭುತವಾಗಿ ನೋಡಲು ಬಂದಿದ್ದೆವು. ಆದರೆ ಚಿತ್ರತಂಡ ನಮಗೆ ತೀವ್ರ ನಿರಾಸೆ ಮೂಡಿಸಿದೆ. ಈ ಮುಂಚೆ ಬಿಡುಗಡೆಯಾದ ಹಾಡಿನಲ್ಲೂ ಅವರ ಧ್ವನಿ ಇರಲಿಲ್ಲ ಎಂದು ಅಭಿಮಾನಿಯೊಬ್ಬರು ದೂರಿದ್ದಾರೆ.&lt;/p&gt;&lt;h2&gt;&lt;strong&gt;ಮಂಗಳೂರು ಭಾಷೆಯೇ ಬೇಕಿತ್ತಾದ್ರೆ ರಿಷಬ್ ಶೆಟ್ಟಿ ಅಥವಾ ರಾಜ್ ಬಿ. ಶೆಟ್ಟಿನೇ ಹೀರೊ ಮಾಡ್ಬಹುದಿತ್ತಲ್ಲ&lt;/strong&gt;&lt;/h2&gt;&lt;p&gt;ಚಿತ್ರತಂಡದ ಮೇಕಿಂಗ್ ಶೈಲಿಯನ್ನು ಪ್ರಶ್ನಿಸಿದ ಫ್ಯಾನ್ಸ್, ಇದು ಕರಾವಳಿ ಭಾಷೆಯ ಸಿನಿಮಾ, ಮಂಗಳೂರು ಶೈಲಿಯ ಧ್ವನಿಯೇ ಬೇಕು ಅಂತ ಇವರು ಹಠ ಮಾಡುವುದಾದರೆ, ಮೊದಲೇ ಪ್ರಜ್ವಲ್ ದೇವರಾಜ್ ಅವರನ್ನು ಹೀರೊ ಮಾಡುವುದು ಬೇಕಿರಲಿಲ್ಲ. ಅದರ ಬದಲು ರಾಜ್ ಬಿ. ಶೆಟ್ಟಿ, ರಿಷಬ್ ಶೆಟ್ಟಿ ಅಥವಾ ರಕ್ಷಿತ್ ಶೆಟ್ಟಿ ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಬೇಕಿತ್ತಲ್ಲ? ನಮ್ಮ ಬಾಸ್&zwnj;ನ ಹೀರೊ ಅಂತ ಮುಂಚೆ ಹಾಕಿ, ಇವಾಗ ವಾಯ್ಸ್ ಬರಲ್ಲ, ಡಬ್ಬಿಂಗ್ ಮಾಡಿಲ್ಲ ಅಂದರೆ ಹೇಗೆ? ತಪ್ಪು ಎರಡು ಕಡೆಯಿಂದಲೂ ಆಗಿರುತ್ತದೆ. ಚಿತ್ರತಂಡದ ಈ ನಡವಳಿಕೆಯಿಂದ ನಮ್ಮ ಹೀರೊಗೆ ಎಷ್ಟು ಹರ್ಟ್ ಆಗಿರಬೇಡ? ಅದಕ್ಕೇ ಅವರು ಬಂದಿಲ್ಲ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ನಾವು ಪ್ರಾಣಿಗಳಲ್ಲ, ನಮ್ಮ ಹೋರಾಟ ಮುಂದುವರಿಯುತ್ತದೆ!&lt;/strong&gt;&lt;/h2&gt;&lt;p&gt;ವೇದಿಕೆಯ ಮೇಲೆ ಚಿತ್ರರಂಗದ ಗಣ್ಯರು ಮಾತನಾಡಿದ ಶೈಲಿಗೆ ಆಕ್ಷೇಪವೆತ್ತಿದ ಅಭಿಮಾನಿಗಳು, ಅಲ್ಲಿ ಸ್ಟೇಜ್ ಮೇಲೆ ಕೂತವರು 'ನಾವು ಮನುಷ್ಯರ ಜೊತೆ ಮಾತನಾಡುತ್ತೇವೆ' ಅಂತಾರೆ, ಹಾಗಾದರೆ ನಾವೇನು ಪ್ರಾಣಿಗಳಾ? ನಾವು ಸಿನಿಮಾ ಹಾಳು ಮಾಡಲು ಬಂದಿಲ್ಲ, ಎರಡು ವರ್ಷಗಳಿಂದ ರೀಲ್ಸ್ ಮಾಡಿ ಪ್ರಮೋಷನ್ ಮಾಡಿದ್ದು ನಾವೇ. ಇವತ್ತು ನಮ್ಮ ನೋವನ್ನು ತೋರಿಸಿಕೊಳ್ಳುತ್ತಿದ್ದೇವೆ. ನಮ್ಮ ಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ. ಈಗ ತಂದಿರುವ ಪಟಾಕಿಗಳನ್ನು ಇಲ್ಲೇ ಹೊಡೆದು, ಹೂವಿನ ಹಾರಗಳನ್ನು ವೇಸ್ಟ್ ಮಾಡಿ, ಮುಂದಿನ ನಿರ್ಧಾರಕ್ಕಾಗಿ ನೇರವಾಗಿ ನಮ್ಮ ಬಾಸ್ (ಪ್ರಜ್ವಲ್) ಮನೆ ಮುಂದೆ ಹೋಗುತ್ತೇವೆ. ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sandalwood</category>
            <dc:creator>Santosh Naik</dc:creator>
            <atom:link href="https://kannada.asianetnews.com/sandalwood/prajwal-devaraj-fans-protest-karavali-trailer-launch-controversy-san/articleshow-7s6qrzw"/>
        </item>
        <item>
            <title><![CDATA['ಮಧ್ಯರಾತ್ರಿ ಟ್ರೈಲರ್ ನೋಡಿದಾಗ ಶಾಕ್ ಆಯ್ತು, ನನ್ನ ಧ್ವನಿಯೇ ಇರಲಿಲ್ಲ': ಕರಾವಳಿ ವಿವಾದದ ಸತ್ಯ ಬಿಚ್ಚಿಟ್ಟ ಪ್ರಜ್ವಲ್ ದೇವರಾಜ್!]]></title>
            <link>https://kannada.asianetnews.com/entertainment/prajwal-devaraj-clarifies-karavali-movie-trailer-voice-remuneration-dispute-san/articleshow-1nmquso</link>
            <guid isPermaLink="true">https://kannada.asianetnews.com/entertainment/prajwal-devaraj-clarifies-karavali-movie-trailer-voice-remuneration-dispute-san/articleshow-1nmquso</guid>
            <pubDate>Tue, 07 Jul 2026 19:29:04 +0530</pubDate>
            <description><![CDATA[&lt;p&gt;'ಕರಾವಳಿ' ಚಿತ್ರದ ಟ್ರೈಲರ್ ವಿವಾದದ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಮೌನ ಮುರಿದಿದ್ದಾರೆ. ಚಿತ್ರತಂಡ ಸಂಭಾವನೆ ಬಾಕಿ ಉಳಿಸಿಕೊಂಡಿದ್ದರಿಂದ ಡಬ್ಬಿಂಗ್ ಮಾಡಿರಲಿಲ್ಲ ಮತ್ತು ಕಾರ್ಯಕ್ರಮಕ್ಕೆ ಗೈರಾಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwydwn65y97sdkdq6hq04eya,imgname-prajwal-devaraj-opens-up-on-karavali-movie-trailer-and-fee-dispute-1783432631492.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7): &lt;/strong&gt;ಸ್ಯಾಂಡಲ್&zwnj;ವುಡ್&zwnj;ನಲ್ಲಿ ಭಾರಿ ಸದ್ದು ಮಾಡುತ್ತಿರುವ &lsquo;ಕರಾವಳಿ&rsquo; ಚಿತ್ರದ ಟ್ರೈಲರ್ ಲಾಂಚ್ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ನಾಯಕ ನಟ ಪ್ರಜ್ವಲ್ ದೇವರಾಜ್ ಮೌನ ಮುರಿದಿದ್ದಾರೆ. ತಾವು ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಹಾಗೂ ಟ್ರೈಲರ್&zwnj;ನಲ್ಲಿ ತಮ್ಮ ಧ್ವನಿ ಇಲ್ಲದಿರಲು ಕಾರಣವೇನು ಎಂಬುದನ್ನು ಮಾಧ್ಯಮಗಳ ಎದುರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 'ನನ್ನ ಇಡೀ ಸಿನಿ ಜರ್ನಿಯಲ್ಲಿ ಇಂತಹ ಬ್ಲಾಕ್ ಮಾರ್ಕ್ ಇರಲಿಲ್ಲ, ಆದರೆ ಚಿತ್ರತಂಡ ನನ್ನನ್ನು ನಡೆಸಿಕೊಂಡ ರೀತಿ ತೀವ್ರ ಬೇಸರ ತರಿಸಿದೆ' ಎಂದು ಅವರು ಬೇಸರ ಹೊರಹಾಕಿದ್ದಾರೆ.&lt;/p&gt;&lt;p&gt;ಖಾಸಗಿ ಟಿವಿಯ ಜೊತೆ ಮಾತನಾಡಿರುವ ಪ್ರಜ್ವಲ್&zwnj; ದೇವರಾಜ್&zwnj;, ನಾನು ಚಿತ್ರರಂಗದ ಮೇಲಿರುವ ಪ್ರೀತಿ ಮತ್ತು ಬಾಂಧವ್ಯದಿಂದಾಗಿ ನಿರ್ಮಾಪಕರಿಗಾಗಿ ಕಳೆದ ವರ್ಷದಲ್ಲಿ ಅಂದಾಜು 1.5 ಕೋಟಿ ರೂಪಾಯಿ ಸಂಭಾವನೆ ಬಿಟ್ಟುಕೊಟ್ಟಿದ್ದೇನೆ. ಆದರೆ, ನಾವೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿ ಇರಬೇಕಲ್ಲವೇ? ಕಳೆದ 2-3 ವರ್ಷಗಳಿಂದ ಬೇರೆ ಸಿನಿಮಾ ಮಾಡದೆ ಕೇವಲ ಈ ಪ್ರಾಜೆಕ್ಟ್&zwnj;ಗಳನ್ನೇ ನಂಬಿ ಮನೆಯಲ್ಲಿದ್ದೇನೆ. ನನಗೂ ಫೈನಾನ್ಸಿಯಲ್ ಕಮೀಟ್&zwnj;ಮೆಂಟ್&zwnj; ಇರುತ್ತವೆ. ಚಿತ್ರತಂಡ ನನಗೆ ಕೊಡಬೇಕಾದ ಸಂಭಾವನೆ ಹಾಗೂ ಜಿಎಸ್&zwnj;ಟಿ (GST) ಪೇಮೆಂಟ್ ಅನ್ನು ಬಾಕಿ ಉಳಿಸಿಕೊಂಡಿದೆ. ಅದನ್ನು ಕೊಟ್ಟರೆ ನಾನು ಬಂದು ಡಬ್ಬಿಂಗ್ ಮಾಡುತ್ತೇನೆ ಎಂದಿದ್ದೆ. ಆದರೆ ಅವರು ಖಡಾಖಂಡಿತವಾಗಿ 'ಕೊಡಲು ಆಗಲ್ಲ' ಎಂದು ಹಠ ಮಾಡುತ್ತಿದ್ದಾರೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಮಧ್ಯರಾತ್ರಿ ಟ್ರೈಲರ್ ನೋಡಿದಾಗ ಶಾಕ್ ಆಯ್ತು, ನನ್ನ ವಾಯ್ಸ್ ಇರಲಿಲ್ಲ!&lt;/strong&gt;&lt;/h2&gt;&lt;p&gt;ನಾನು ಸದಾ ಸಿನಿಮಾದ ಪ್ರಮೋಷನ್ ಮಾಡಲು ಸಿದ್ಧನಿದ್ದೆ. ನನ್ನ ಮ್ಯಾನೇಜರ್ ಮೂಲಕ ಚಿತ್ರತಂಡವನ್ನು ಸಂಪರ್ಕಿಸಿ 'ಟ್ರೈಲರ್ ಡಬ್ಬಿಂಗ್ ಯಾವಾಗ?' ಎಂದು ಕೇಳಿದ್ದೆ. ಆದರೆ ಅವರು 'ಫಸ್ಟ್ ಲಾಂಚ್&zwnj;ಗೆ ಬನ್ನಿ, ಆಮೇಲೆ ಮಾತನಾಡೋಣ' ಎಂದಿದ್ದರು. ನಾನು ಬೆಳಗ್ಗೆ ಜೋಶ್&zwnj;ನಲ್ಲಿ ಕಾರ್ಯಕ್ರಮಕ್ಕೆ ಹೋಗಲು ನಿರ್ಧಾರ ಮಾಡಿದ್ದೆ. ಆದರೆ, ನೆನ್ನೆ ಮಧ್ಯರಾತ್ರಿ ನಾನು ಕಾಡಿ ಬೇಡಿ ಅವರಿಂದ ಟ್ರೈಲರ್ ತರಿಸಿಕೊಂಡು ನೋಡಿದಾಗ ನನಗೆ ದೊಡ್ಡ ಶಾಕ್ ಕಾದಿತ್ತು. ಅದರಲ್ಲಿ ನನ್ನ ಧ್ವನಿಯೇ ಇರಲಿಲ್ಲ! ಈ ಮುಂಚೆ ಹಾಡಿನ ಡೈಲಾಗ್&zwnj;ನಲ್ಲೂ ನನ್ನ ವಾಯ್ಸ್ ಬಳಸಿರಲಿಲ್ಲ. ಕನಿಷ್ಠಪಕ್ಷ ನನಗೆ ಈ ವಿಷಯವನ್ನು ತಿಳಿಸುವ ಸೌಜನ್ಯವನ್ನೂ ಚಿತ್ರತಂಡ ತೋರಲಿಲ್ಲ. ನನ್ನನ್ನು ಇಷ್ಟು ಕೇರ್&zwnj;ಲೆಸ್ ಮಾಡಿದ್ದಕ್ಕೆ ಬೇಸರಗೊಂಡು ನಾನು ಕಾರ್ಯಕ್ರಮಕ್ಕೆ ಹೋಗಲಿಲ್ಲ. ಅವರು ಮೊದಲೇ ಹೇಳಿದ್ದರೆ ನಾನು ಉಚಿತವಾಗಿಯಾದರೂ ಟ್ರೈಲರ್ ಮುಗಿಸಿಕೊಡುತ್ತಿದ್ದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ರಾಜ್ ಬಿ. ಶೆಟ್ಟಿ ಎಕ್ಸ್&zwnj;ಟ್ರಾಆರ್ಡಿನರಿ ಪರ್ಸನ್; ನಮ್ಮ ನಡುವೆ ಮನಸ್ತಾಪವಿಲ್ಲ&lt;/strong&gt;&lt;/h2&gt;&lt;p&gt;ಮಲ್ಟಿಸ್ಟಾರರ್ ಸಿನಿಮಾ ಎಂಬ ಕಾರಣಕ್ಕೆ ನಟ ರಾಜ್ ಬಿ. ಶೆಟ್ಟಿ ಮತ್ತು ನಿಮ್ಮ ನಡುವೆ ಇಗೋ ಕ್ಲ್ಯಾಶ್ (Ego Clash) ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್, ಖಂಡಿತವಾಗಿಯೂ ಇಲ್ಲ. ನಾವು ಹಿಂದೆ &lsquo;ಚೌಕ&rsquo; ಸಿನಿಮಾದಲ್ಲಿ ನಾಲ್ಕು ಜನ ಹೀರೊಗಳು ಒಟ್ಟಿಗೆ ನಟಿಸಿರಲಿಲ್ಲವೇ? ಇವತ್ತಿಗೂ ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ. ರಾಜ್ ಬಿ. ಶೆಟ್ಟಿ ಅವರು ಎಕ್ಸ್&zwnj;ಟ್ರಾಆರ್ಡಿನರಿ ಟ್ಯಾಲೆಂಟ್, ಅಮೇಜಿಂಗ್&zwnj; ಪರ್ಸನ್ ಮತ್ತು ವಂಡರ್&zwnj;ಫುಲ್ ಕೋ-ಸ್ಟಾರ್. ಅವರ ಜೊತೆ ನನಗೆ ಯಾವುದೇ ಸಮಸ್ಯೆ ಇಲ್ಲ. ಅವರು ನನಗೆ ಕರೆ ಮಾಡಿಲ್ಲ, ಆದರೆ ಅವರ ಜೊತೆ ಮುಕ್ತವಾಗಿ ಮಾತನಾಡಲು ನಾನು ಸಿದ್ಧನಿದ್ದೇನೆ. ಇಂಡಸ್ಟ್ರಿ ಬೆಳೆಯಬೇಕು, ಪ್ರೊಡ್ಯೂಸರ್ಸ್ ಚೆನ್ನಾಗಿರಬೇಕು ಅನ್ನೋದಷ್ಟೇ ನನ್ನ ಆಸೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಅಪ್ಪನಿಗೆ ಬೇಸರವಾಗಿದೆ; ಲಿಖಿತ ಒಪ್ಪಂದ ಮಾಡಿಕೊಳ್ಳದ ನಂಬಿಕೆಯೇ ಮುಳುವಾಯಿತು!&lt;/strong&gt;&lt;/h2&gt;&lt;p&gt;&quot;ನನ್ನ ತಂದೆ (ಹಿರಿಯ ನಟ ದೇವರಾಜ್) ಈ ಬೆಳವಣಿಗೆಯಿಂದ ತೀವ್ರ ಬೇಸರಗೊಂಡಿದ್ದಾರೆ. 'ನೀನ್ಯಾಕಪ್ಪಾ ಹೀಗೆ ಪ್ರತಿಬಾರಿಯೂ ಲಾಸ್ಟ್ ತನಕ ಕಾಸು ಬಿಟ್ಟುಕೊಟ್ಟು ಒದ್ದಾಡುತ್ತೀಯಾ, ನಿನ್ನ ನೋಡಿದರೆ ಅಯ್ಯೋ ಅನ್ಸುತ್ತೆ' ಎಂದು ಬೇಸರ ಹೊರಹಾಕಿದ್ದಾರೆ. ನಾನು ಯಾವುದೇ ನಿರ್ಮಾಪಕರ ಹತ್ತಿರ ಲಿಖಿತ ಒಪ್ಪಂದ ಮಾಡಿಕೊಳ್ಳಲ್ಲ. ಮಾತಿನ ನಂಬಿಕೆ ಮೇಲೆ ಸಿನಿಮಾ ಮಾಡುತ್ತೇನೆ. ಅದೇ ಈಗ ನನಗೆ ಮುಳುವಾಗಿದೆ ಎಂದಿದ್ದಾರೆ ಪ್ರಜ್ವಲ್.&lt;/p&gt;&lt;h2&gt;&lt;strong&gt;ಸಿನಿಮಾ ಒಬ್ಬನದಲ್ಲ, ಅದರ ಹಿಂದೆ 500 ಜನರ ಬದುಕಿರುತ್ತದೆ...&lt;/strong&gt;&lt;/h2&gt;&lt;p&gt;ಒಂದು ಸಿನಿಮಾದ ಹಿಂದೆ ನನ್ನೊಬ್ಬನದಲ್ಲ, 500 ಜನರ ಬದುಕಿರುತ್ತದೆ. ಎಲ್ಲರಿಗೂ ಆ ಸಿನಿಮಾ ಜೀವನ ನೀಡಬೇಕು. ಚಿತ್ರತಂಡದೊಂದಿಗೆ ನನ್ನ ಮ್ಯಾನೇಜರ್ ಇನ್ನು ಕಾಂಟ್ಯಾಕ್ಟ್&zwnj;ನಲ್ಲೇ ಇದ್ದಾರೆ. ಸಮಸ್ಯೆ ಬಗೆಹರಿದರೆ ನನಗೂ ಸಂತೋಷವೇ&quot; ಎಂದು ಮಾತು ಮುಗಿಸಿರುವ ಪ್ರಜ್ವಲ್, ನಾಯಕ ನಟನ ಧ್ವನಿ ಇಲ್ಲದೆ ಸಿನಿಮಾ ರಿಲೀಸ್ ಆಗುವುದು ಹೇಗೆ ಎಂಬ ಪ್ರಶ್ನೆಗೆ, &quot;ಅದು ನನಗೂ ದೊಡ್ಡ ಡೌಟ್!&quot; ಎಂದು ಉತ್ತರಿಸಿರುವುದು ಚಿತ್ರದ ಭವಿಷ್ಯದ ಮೇಲೆ ಕುತೂಹಲ ಮೂಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sandalwood</category>
            <dc:creator>Santosh Naik</dc:creator>
            <atom:link href="https://kannada.asianetnews.com/entertainment/prajwal-devaraj-clarifies-karavali-movie-trailer-voice-remuneration-dispute-san/articleshow-1nmquso"/>
        </item>
        <item>
            <title><![CDATA['ನಮ್‌ ಇಂಡಸ್ಟ್ರಿ ಯಾಕೆ ಉದ್ದಾರ ಆಗಲ್ಲ ಅಂದ್ರೆ ಇದೇ ಕಾರಣ..' ಕರಾವಳಿ ವೇದಿಕೆಯಲ್ಲೇ ರಾಜ್‌ ಬಿ ಶೆಟ್ಟಿ ಕಿಡಿಕಿಡಿ]]></title>
            <link>https://kannada.asianetnews.com/sandalwood/raj-b-shetty-slams-prajwal-devaraj-karavali-trailer-launch-controversy-san/articleshow-4w725ku</link>
            <guid isPermaLink="true">https://kannada.asianetnews.com/sandalwood/raj-b-shetty-slams-prajwal-devaraj-karavali-trailer-launch-controversy-san/articleshow-4w725ku</guid>
            <pubDate>Tue, 07 Jul 2026 19:08:16 +0530</pubDate>
            <description><![CDATA[&lt;p&gt;'ಕರಾವಳಿ' ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳ ಪ್ರತಿಭಟನೆಯಿಂದ ವಿವಾದ ಭುಗಿಲೆದ್ದಿದೆ. ಈ ಕುರಿತು ಮಾತನಾಡಿದ ನಟ ರಾಜ್ ಬಿ. ಶೆಟ್ಟಿ, ಚಿತ್ರತಂಡದ ವಿರುದ್ಧದ ಪಿತೂರಿ ಹಾಗೂ ಪ್ರಜ್ವಲ್ ದೇವರಾಜ್ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwycq84y0atc8qjxv0s0qyb9,imgname-raj-b-shetty-slams-prajwal-devaraj-1783431405726.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7):&lt;/strong&gt; ಸ್ಯಾಂಡಲ್&zwnj;ವುಡ್&zwnj;ನ ಬಹುನಿರೀಕ್ಷಿತ ಸಿನಿಮಾ ಕರಾವಳಿಯ ವಿವಾದ ದೊಡ್ಡದಾಗುವ ಲಕ್ಷಣ ಕಂಡಿದೆ. ಮಂಗಳವಾರ ಸಿನಿಮಾದ ಟ್ರೇಲರ್&zwnj; ಬಿಡುಗಡೆ ಸಮಾರಂಭದಲ್ಲಿ ಸಿನಿಮಾದ ಟ್ರೇಲರ್&zwnj;ನಲ್ಲಿ ಪ್ರಜ್ವಲ್&zwnj; ದೇವರಾಜ್&zwnj; ಅವರ ವಾಯ್ಸ್&zwnj; ಇಲ್ಲ ಎನ್ನುವ ಕಾರಣ ನೀಡಿ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಈ ಸಿನಿಮಾದ ಒಂದೊಂದೆ ವಿವಾದಗಳು ಹೊರಬರಲು ಆರಂಭಿಸಿದೆ. ಇನ್ನೊಂದೆಡೆ ಇದೇ ಸಿನಿಮಾದಲ್ಲಿ ನಟಿಸಿರುವ ಸ್ಯಾಂಡಲ್&zwnj;ವುಡ್&zwnj;ನ ಪ್ರಖ್ಯಾತ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ (Raj B Shetty) ಹೀರೊ ಪ್ರಜ್ವಲ್ ದೇವರಾಜ್ ಅವರ ನಡೆ ಹಾಗೂ ಚಿತ್ರತಂಡದ ವಿರುದ್ಧ ನಡೆಯುತ್ತಿರುವ ಪಿತೂರಿಗಳ ವಿರುದ್ಧ ಬಹಿರಂಗವಾಗಿ ಗುಡುಗಿದ್ದಾರೆ. &quot;ನಮ್ಮ ಇಂಡಸ್ಟ್ರಿ ಯಾಕೆ ಉದ್ಧಾರ ಆಗಲ್ಲ ಅಂತ ಜನ ಕೇಳ್ತಾರಲ್ಲ, ಅದಕ್ಕೆ ನಮ್ಮಲ್ಲಿ ಸಹಯೋಗ ಮನೋಭಾವ ಇಲ್ಲದಿರುವುದೇ ಕಾರಣ ಎಂದು ಭಾವುಕರಾಗುತ್ತಲೇ ತೀಕ್ಷ್ಣವಾಗಿ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ನಡೆದ &lsquo;ಕರಾವಳಿ&rsquo; ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಂಟಾದ ಗದ್ದಲ ಹಾಗೂ ಪ್ರಜ್ವಲ್ ದೇವರಾಜ್ ಅವರ ಮುನಿಸಿನ ಕುರಿತು ರಾಜ್ ಬಿ. ಶೆಟ್ಟಿ ಮಾಧ್ಯಮಗಳ ಮುಂದೆ ಅದೇ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;h2&gt;&lt;strong&gt;ಮನುಷ್ಯರಂತೆ ಮಾತನಾಡಿದರೆ ಮಾತ್ರ ನಾನೂ ಕೂತು ಚರ್ಚಿಸುತ್ತೇನೆ!&lt;/strong&gt;&lt;/h2&gt;&lt;p&gt;ಪ್ರಜ್ವಲ್ ದೇವರಾಜ್ ಅಸಮಾಧಾನದ ಕುರಿತು ಮಾತನಾಡಿದ ರಾಜ್, &quot;ನನಗೆ ಯಾರ ಜೊತೆಯೂ ಪೈಪೋಟಿ ಇಲ್ಲ. ಅವರ ಮನಸ್ಸಿನಲ್ಲಿ ನನ್ನ ಮೇಲೆ ಏನಾದರೂ ಕೋಪ ಅಥವಾ ಮುನಿಸಿದ್ದರೆ, ನಾನು ಅವರ ಜೊತೆ ಕೂತು ಮಾತನಾಡಲು ಸಿದ್ಧನಿದ್ದೇನೆ. ಆದರೆ, ಅವರು ಮನುಷ್ಯರ ತರಹ ಬಂದು ಮಾತನಾಡಿದರೆ ಮಾತ್ರ ನಾನು ಚರ್ಚಿಸುತ್ತೇನೆ. ಎಲ್ಲದಕ್ಕಿಂತ ಮನುಷ್ಯತ್ವ ಮುಖ್ಯ. ಇಡೀ ಭಾರತವೇ ತಿರುಗಿ ನೋಡುವಂತಹ ಅದ್ಭುತ ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ದೇವೆ. ಇಂತಹ ಸಮಯದಲ್ಲಿ ನಾವು ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ಮಾತನಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ&quot; ಎಂದಿದ್ದಾರೆ.&lt;/p&gt;&lt;p&gt;ರಾಜ್ ಬಿ ಶೆಟ್ಟಿ ಚಿತ್ರಕ್ಕೆ ಬಂದಿದ್ದರಿಂದ ಪ್ರಜ್ವಲ್ ಮುನಿಸಿಕೊಂಡಿದ್ದಾರೆ ಎಂಬ ಗಾಂಧಿನಗರದ ಗಾಸಿಪ್&zwnj;ಗೆ ಉತ್ತರಿಸಿದ ರಾಜ್, &quot;ಈ ಸಿನಿಮಾದಲ್ಲಿ ನಾನೊಂದು ಮುಖ್ಯವಾದ ಅತಿಥಿ ಪಾತ್ರ (Cameo) ಮಾಡುತ್ತಿದ್ದೇನಷ್ಟೇ. ಇದರ ಪೋಸ್ಟರ್, ಟೈಟಲ್ ಎಲ್ಲದರಲ್ಲೂ ಪ್ರಜ್ವಲ್ ಅವರ ಹೆಸರೇ ಮುಂಚೂಣಿಯಲ್ಲಿದೆ ಮತ್ತು ಅದು ನನಗೆ ಮೊದಲೇ ಗೊತ್ತಿತ್ತು. ನಾನು ಈ ಪಾತ್ರಕ್ಕೆ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ. ನನಗಿಂತ ದೊಡ್ಡ ನಟರೊಬ್ಬರು ಈ ಪಾತ್ರ ಮಾಡಬೇಕಿತ್ತು, ಕಾರಣಾಂತರಗಳಿಂದ ಅವರು ಬರದೇ ಇದ್ದಾಗ ಕೊನೆಯಲ್ಲಿ ನಾನು ಬಂದೆ. ಇದು ಬರವಣಿಗೆಯಲ್ಲೇ ಇದ್ದ ಪಾತ್ರ, ಯಾರದ್ದೋ ಜಾಗ ಕಿತ್ತುಕೊಳ್ಳಲು ನಾನು ಬಂದಿಲ್ಲ&quot; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಿನಿಮಾ ನನಗಿಂತ ದೊಡ್ಡದು, ಕಟೌಟ್ ಸಂಸ್ಕೃತಿ ನನಗಿಲ್ಲ!&lt;/strong&gt;&lt;/h2&gt;&lt;p&gt;ತಮ್ಮ ಸಿನಿಪ್ರಯಾಣದ ಶಿಸ್ತನ್ನು ನೆನಪಿಸಿದ ರಾಜ್, &quot;ನಾನು ಮೂಲತಃ ಒಬ್ಬ ತಂತ್ರಜ್ಞ (Technician). ಒಂಬತ್ತನೇ ಕ್ಲಾಸಿನಲ್ಲಿ ಕುಂದಾಪುರದಿಂದ ಮನೆ ಬಿಟ್ಟು ಓಡಿಬಂದ ಹುಡುಗ ಇವತ್ತು ಇಷ್ಟು ದೊಡ್ಡ ಸಿನಿಮಾ ಮಾಡಿದ್ದಾನೆಂದರೆ ಅದರ ಹಿಂದೆ ಎಷ್ಟು ಶ್ರಮವಿದೆ ಎಂದು ನನಗೆ ಗೊತ್ತು. ಸಿನಿಮಾ ಎನ್ನುವುದು ನನಗಿಂತ ತುಂಬಾ ದೊಡ್ಡದು. ನನ್ನ ಹೆಸರು ಪೋಸ್ಟರ್&zwnj;ನಲ್ಲಿ ಹಾಕದಿದ್ದರೂ ಯಾರೂ ನನ್ನ ಸಿನಿಮಾ ನೋಡಲು ಬರಲ್ಲ ಅಂತ ನಾನು ಗ್ಯಾರೆಂಟಿ ಕೊಡಬಲ್ಲೆ. ನಾನು ಈ ಹಿಂದೆ ಖಳನಾಯಕನಾಗಿ, ಕಾಮಿಡಿ ಪಾತ್ರದಲ್ಲೂ ನಟಿಸಿದ್ದೇನೆ. ಎಲ್ಲೂ ನನ್ನ ಕಟೌಟ್ ಹಾಕಿ ಅಂತಾಗಲಿ, ಪೋಸ್ಟರ್&zwnj;ನಲ್ಲಿ ಹೆಸರು ದೊಡ್ಡದಾಗಿ ಹಾಕಿ ಅಂತಾಗಲಿ ಕೇಳಿಲ್ಲ, ಕೇಳುವುದೂ ಇಲ್ಲ. ಹಾಗೇನಾದರೂ ನಾನು ಮಾಡಿದರೆ ಅಂದೇ ಚಿತ್ರರಂಗ ಬಿಡುತ್ತೇನೆ&quot; ಎಂದು ಕಟುವಾಗಿ ನುಡಿದಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಜ್ವಲ್ ದೊಡ್ಡ ಸ್ಟಾರ್ ಆಗಲಿ, ನನಗೆ ಖುಷಿಯೇ!&lt;/strong&gt;&lt;/h2&gt;&lt;p&gt;ಚಿತ್ರದ ಇತರ ಸಹನಟರಾದ ಮಿತ್ರ ಹಾಗೂ ಶ್ರೀಧರ್ ಅವರ ಶ್ರಮವನ್ನು ಕೊಂಡಾಡಿದ ರಾಜ್, &quot;ಮಿತ್ರ ಸರ್, ಶ್ರೀಧರ್ ಸರ್ ಅವರಂತಹ ಅದ್ಭುತ ಕಲಾವಿದರು ಪೋಸ್ಟರ್&zwnj;ನಲ್ಲಿ ತಮ್ಮ ಹೆಸರಿಲ್ಲ ಎಂದು ಎಂದಾದರೂ ಗಲಾಟೆ ಮಾಡಿದ್ದಾರೆಯೇ? ಅವರಿಗಿಂತ ದೊಡ್ಡ ನಟನಾ ನಾನು? ಈ ಸಿನಿಮಾದ ಮೂಲಕ ಪ್ರಜ್ವಲ್ ದೇವರಾಜ್ ಅವರಿಗೆ ಅತಿ ದೊಡ್ಡ ಹೆಸರು ಬಂದರೆ ಎಲ್ಲರಿಗಿಂತ ಹೆಚ್ಚು ಖುಷಿ ಪಡುವವನು ನಾನು. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ದೊಡ್ಡ ಸ್ಟಾರ್ ಸಿಗಲಿ. ಹಾಗೆಯೇ ಮಿತ್ರ ಸರ್ ಅವರಂತಹ ಕಲಾವಿದರಿಗೆ ಗೌರವ ಸಿಗಲಿ. ಕರಾವಳಿ ಸಿನಿಮಾದ ಗುಣಮಟ್ಟ (Quality) ನೋಡಿ ಮಾತನಾಡಿ, ಅಹಂಕಾರ, ಜಗಳಗಳನ್ನು ಬಿಟ್ಟುಬಿಡಿ&quot; ಎಂದು ಚಿತ್ರರಂಗದ ಮನಸ್ಥಿತಿಗೆ ರಾಜ್ ಬಿ. ಶೆಟ್ಟಿ ಕನ್ನಡಿ ಹಿಡಿದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sandalwood</category>
            <dc:creator>Santosh Naik</dc:creator>
            <atom:link href="https://kannada.asianetnews.com/sandalwood/raj-b-shetty-slams-prajwal-devaraj-karavali-trailer-launch-controversy-san/articleshow-4w725ku"/>
        </item>
        <item>
            <title><![CDATA[ಸ್ಯಾಂಡಲ್‌ವುಡ್‌ ಕರಾವಳಿಯಲ್ಲಿ ಫುಲ್‌ 'ವರಿ', ಪ್ರಜ್ವಲ್‌ ದೇವರಾಜ್‌ ವೈಮನಸ್ಯಕ್ಕೆ ಹಣವೊಂದೇ ಕಾರಣವೇ?]]></title>
            <link>https://kannada.asianetnews.com/sandalwood/karavali-kannada-movie-controversy-prajwal-devaraj-raj-b-shetty-guruduth-ganiga-san/articleshow-qeuerfp</link>
            <guid isPermaLink="true">https://kannada.asianetnews.com/sandalwood/karavali-kannada-movie-controversy-prajwal-devaraj-raj-b-shetty-guruduth-ganiga-san/articleshow-qeuerfp</guid>
            <pubDate>Tue, 07 Jul 2026 18:46:22 +0530</pubDate>
            <description><![CDATA[&lt;p&gt;'ಕರಾವಳಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಸಂಭಾವನೆ ವಿಚಾರವಾಗಿ ನಾಯಕ ಪ್ರಜ್ವಲ್ ದೇವರಾಜ್ ಮತ್ತು ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಈ ಒಳಜಗಳವು ಚಿತ್ರದ ಡಬ್ಬಿಂಗ್ ಮತ್ತು ನಿಗದಿತ ಬಿಡುಗಡೆಯ ಮೇಲೆ ಪರಿಣಾಮ ಬೀರಿದ್ದು, ಚಿತ್ರದ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwybew1ttn2e6zafm69pewyb,imgname-karavali-movie-controversy-1783430082618.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಜು.7): ಸ್ಯಾಂಡಲ್&zwnj;ವುಡ್&zwnj;ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ &lsquo;ಕರಾವಳಿ&rsquo; ಜುಲೈ 24 ರಂದು ತೆರೆಗೆ ಬರಲು ಸಜ್ಜಾಗಿದೆ. ಆದರೆ, ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡದ ಒಳಜಗಳ ಗಾಂಧಿನಗರದ ಬೀದಿಗೆ ಬಂದು ನಿಂತಿದೆ. ಇತ್ತೀಚೆಗೆ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಹೀರೊ ಪ್ರಜ್ವಲ್ ದೇವರಾಜ್ ಗೈರಾಗಿದ್ದು, ಸಿನಿಮಾದ ಟ್ರೇಲರ್&zwnj;ನಲ್ಲಿ ಅವರ ಧ್ವನಿಯೂ ಇಲ್ಲದ ಕಾರಣ ಕೆರಳಿದ ಅಭಿಮಾನಿಗಳು ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ಸಿನಿಮಾದ ಒಳಗಿನ ದೊಡ್ಡ ವಿವಾದವೊಂದು ಅಧಿಕೃತವಾಗಿ ಸ್ಫೋಟಗೊಂಡಿದೆ.&lt;/p&gt;&lt;p&gt;ಈ ಮುನಿಸಿಗೆ ಪ್ರಮುಖ ಕಾರಣ ಸಂಭಾವನೆ ಹಾಗೂ ಸಹಾಯಕರ ಭತ್ಯೆಯ ವಿಚಾರ ಅನ್ನೋದು ಗಾಂಧಿನಗರದ ಗಲ್ಲಿಗಳ ಮಾತು. ವಿವಿಧ ಮೂಲಗಳ ಪ್ರಕಾರ, ನಿರ್ದೇಶಕ ಹಾಗೂ ನಿರ್ಮಾಪಕ ಗುರುದತ್ ಗಾಣಿಗ ಅವರು ಪ್ರಜ್ವಲ್&zwnj;ಗೆ 1.25 ಕೋಟಿ ರೂ. ಸಂಭಾವನೆ ನಿಗದಿಪಡಿಸಿ, ಈಗಾಗಲೇ 1 ಕೋಟಿ ರೂಪಾಯಿ ಹಣವನ್ನು ಪಾವಿತಿಯೂ ಮಾಡಿದ್ದಾರೆ. ಉಳಿದ 25 ಲಕ್ಷ ರೂ.ಗಳನ್ನು ಡಬ್ಬಿಂಗ್ ಮುಗಿದ ನಂತರ ನೀಡುವುದಾಗಿ ಗಾಣಿಗ ಹೇಳಿದ್ದಾರೆ. ಆದರೆ, ಪ್ರಜ್ವಲ್ ತಮ್ಮ ಸಹಾಯಕರಿಗಾಗಿ ಹೆಚ್ಚುವರಿಯಾಗಿ 20 ಲಕ್ಷ ರೂ. ಭತ್ಯೆ ಮತ್ತು ಜಿಎಸ್&zwnj;ಟಿ ಮೊತ್ತವನ್ನು ಕೇಳುತ್ತಿದ್ದಾರೆ. ಇದಕ್ಕೆ ನಿರ್ಮಾಪಕರು ಒಪ್ಪದ ಕಾರಣ ಇಬ್ಬರ ನಡುವೆ ಹಣಕಾಸಿನ ದೊಡ್ಡ ಕಂದಕ ಸೃಷ್ಟಿಯಾಗಿದೆ ಎಂದು ಹೇಳಲಾಗಿದ.ೆ&lt;/p&gt;&lt;p&gt;ಮತ್ತೊಂದೆಡೆ, ಸಿನಿಮಾದ ಸ್ಟಾರ್ ಕಾಸ್ಟಿಂಗ್ ವಿಚಾರದಲ್ಲೂ ಅಸಮಾಧಾನದ ಹೊಗೆಯಾಡುತ್ತಿದೆ. ಚಿತ್ರದ ಕಥೆ ಒಪ್ಪಿಸುವಾಗ ಗುರುದತ್ ಗಾಣಿಗ ಅವರು ಬೇರೊಬ್ಬ ಪ್ರಮುಖ ಸ್ಟಾರ್ ನಟನನ್ನು ಕರೆತರುವುದಾಗಿ ಪ್ರಜ್ವಲ್&zwnj;ಗೆ ಭರವಸೆ ನೀಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಆ ನಟನ ಬದಲಿಗೆ ರಾಜ್ ಬಿ. ಶೆಟ್ಟಿ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಈ ದಿಢೀರ್ ಬದಲಾವಣೆ ಪ್ರಜ್ವಲ್&zwnj;ಗೆ ಇಷ್ಟವಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಮಾಧ್ಯಮಗಳ ಮುಂದೆ ಪ್ರಜ್ವಲ್ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕರಾವಳಿ ಸಿನಿಮಾದಲ್ಲಿ ರಾಜ್ ಬಿ. ಶೆಟ್ ನಟಿಸಿರುವುದರ ಟಿ ವಿರುದ್ಧ ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ರಿಲೀಸ್ ಡೇಟ್ ಫಿಕ್ಸ್; ಆದರೆ ಡಬ್ಬಿಂಗ್ ಸಸ್ಪೆನ್ಸ್!&lt;/p&gt;&lt;p&gt;ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಈ ಚಿತ್ರದ ವಿತರಣೆ ಜವಾಬ್ದಾರಿ ಹೊತ್ತಿರುವುದರಿಂದ ನಿಗದಿತ ದಿನದಂದೇ ಸಿನಿಮಾ ತರಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ಬಾಕಿ ಹಣ ಸಿಗುವವರೆಗೂ ಪ್ರಜ್ವಲ್ ಡಬ್ಬಿಂಗ್ ಮಾಡುವ ಸಾಧ್ಯತೆ ಕಡಿಮೆ. ಒಂದು ವೇಳೆ ಅವರ ಧ್ವನಿ ಇಲ್ಲದೆ ಬೇರೆಯವರಿಂದ ಡಬ್ ಮಾಡಿಸಿ ಸಿನಿಮಾ ರಿಲೀಸ್ ಮಾಡಲು ರೆಡಿಯಾಗಿದೆ. ಹಾಗೇನಾದರೂ ಪ್ರಜ್ವಲ್ ಕಾನೂನಾತ್ಮಕವಾಗಿ ಒಪ್ಪಿಗೆ ನೀಡದಿದ್ದರೆ, ಜುಲೈ 24 ರ ಬಿಡುಗಡೆ ಭಾಗ್ಯ ಅನುಮಾನ ಎನ್ನಲಾಗುತ್ತಿದೆ. ನಿರ್ದೇಶಕ ಗುರುದತ್ ಗಾಣಿಗ ಈ ಬಿಕ್ಕಟ್ಟನ್ನು ಹೇಗೆ ಬಗೆಹರಿಸುತ್ತಾರೆ ಎಂಬುದರ ಮೇಲೆ ಚಿತ್ರದ ಭವಿಷ್ಯ ನಿರ್ಧಾರವಾಗಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sandalwood</category>
            <dc:creator>Santosh Naik</dc:creator>
            <atom:link href="https://kannada.asianetnews.com/sandalwood/karavali-kannada-movie-controversy-prajwal-devaraj-raj-b-shetty-guruduth-ganiga-san/articleshow-qeuerfp"/>
        </item>
        <item>
            <title><![CDATA['ಭರವಸೆ ಕಳೆದುಕೊಳ್ಳಬೇಡ, ನಾನಿದ್ದೇನೆ': ಕೃಷಿ ತಾಪಂಡಗೆ ಧೈರ್ಯ ತುಂಬಿದ ರಾಧಾ ರಮಣ ನಟಿ]]></title>
            <link>https://kannada.asianetnews.com/sandalwood/radha-ramana-actress-kavya-gowda-emotional-message-to-krishi-thapanda-gvd/articleshow-8byut0m</link>
            <guid isPermaLink="true">https://kannada.asianetnews.com/sandalwood/radha-ramana-actress-kavya-gowda-emotional-message-to-krishi-thapanda-gvd/articleshow-8byut0m</guid>
            <pubDate>Tue, 07 Jul 2026 17:30:01 +0530</pubDate>
            <description><![CDATA[&lt;p&gt;ಇತ್ತೀಚೆಗೆ ಕೃಷಿ ತಾಪಂಡ, &quot;ಈಗ ನಾನು ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ, ಅದರ ಜೊತೆಗೆ ಬದುಕುವುದನ್ನು ಕಲಿತಿದ್ದೇನೆ&quot; ಎಂದು ಹೃದಯ ಮುರಿದಿರುವ ಎಮೋಜಿಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy75cwbf01dgf1m90zzjg7p,imgname-ch-1783425577867.png" type="image/jpeg" height="390" width="690"/>
            <content:encoded><![CDATA[&lt;p&gt;ಆತ್ಮೀಯ ಗೆಳೆಯ ವೈಶಾಖ್ ಅಗಲಿಕೆಯ ನೋವಿನಿಂದ ಇನ್ನೂ ಹೊರಬರಲಾಗದ ನಟಿ ಕೃಷಿ ತಾಪಂಡ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಭಾವುಕ ಪೋಸ್ಟ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದರು. ತಮ್ಮ ಮನಸ್ಥಿತಿಯನ್ನು ತೆರೆದಿಟ್ಟಿದ್ದ ನಟಿಗೆ ಇದೀಗ ಸ್ನೇಹಿತರು, ಅಭಿಮಾನಿಗಳು ಹಾಗೂ ಚಿತ್ರರಂಗದ ಹಲವರು ಧೈರ್ಯ ತುಂಬುತ್ತಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಕೃಷಿ ತಾಪಂಡ, &quot;ಈಗ ನಾನು ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ, ಅದರ ಜೊತೆಗೆ ಬದುಕುವುದನ್ನು ಕಲಿತಿದ್ದೇನೆ&quot; ಎಂದು ಹೃದಯ ಮುರಿದಿರುವ ಎಮೋಜಿಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದರು. ಈ ಸಾಲುಗಳು ಅವರ ಮನದಾಳದ ನೋವನ್ನು ಪ್ರತಿಬಿಂಬಿಸುತ್ತಿದ್ದರಿಂದ, ಸಾವಿರಾರು ಅಭಿಮಾನಿಗಳು ಕಾಮೆಂಟ್&zwnj;ಗಳ ಮೂಲಕ ಸಾಂತ್ವನ ಹೇಳಿ ಬೆಂಬಲ ಸೂಚಿಸಿದ್ದರು.&lt;/p&gt;&lt;p&gt;&lt;strong&gt;ರಾಧಾ ರಮಣ ನಟಿ ಕಾವ್ಯ ಗೌಡ ಭಾವುಕ ಸಂದೇಶ&lt;/strong&gt;&lt;/p&gt;&lt;p&gt;ಕಿರುತೆರೆ ನಟಿ ಕಾವ್ಯ ಗೌಡ ಕೂಡ ಕೃಷಿ ತಾಪಂಡ ಅವರ ಪೋಸ್ಟ್&zwnj;ಗೆ ಪ್ರತಿಕ್ರಿಯಿಸಿ, ಧೈರ್ಯ ತುಂಬುವ ಸಂದೇಶ ಬರೆದಿದ್ದಾರೆ. &quot;ಕೃಷಿ, ಈಗ ಎಲ್ಲವೂ ತುಂಬಾ ಭಾರವಾಗಿ ಅನಿಸುತ್ತಿದೆ ಎಂಬುದು ನನಗೆ ಗೊತ್ತು. ಆದರೆ ಕಷ್ಟದ ದಿನಗಳು ಶಾಶ್ವತವಲ್ಲ. ಸಮಯದೊಂದಿಗೆ ಎಲ್ಲವೂ ನಿಧಾನವಾಗಿ ಬದಲಾಗುತ್ತದೆ. ಧೈರ್ಯವಾಗಿ ಮುಂದೆ ಹೆಜ್ಜೆ ಇಡು. ಮೊದಲಿಗೆ ನಿನ್ನ ಬಗ್ಗೆ ನೀನೇ ಕಾಳಜಿ ವಹಿಸು,&quot; ಎಂದು ಅವರು ಬರೆದಿದ್ದಾರೆ.&lt;/p&gt;&lt;p&gt;ಮುಂದುವರಿದು, &quot;ಹೀಲಿಂಗ್ ಎನ್ನುವುದು ಒಂದೇ ದಿನದಲ್ಲಿ ಆಗುವುದಿಲ್ಲ. ಆದರೆ ಮುಂದೆ ಇಡುವ ಪ್ರತಿಯೊಂದು ಸಣ್ಣ ಹೆಜ್ಜೆಯೂ ಬಹಳ ಮಹತ್ವದ್ದು. ಭರವಸೆ ಕಳೆದುಕೊಳ್ಳಬೇಡ. ನೀನು ತುಂಬಾ ಗಟ್ಟಿಯಾದ ವ್ಯಕ್ತಿ. ಮಾತನಾಡಬೇಕು ಅನಿಸಿದಾಗ ನಾನು ಯಾವಾಗಲೂ ನಿನ್ನ ಜೊತೆಯಲ್ಲಿದ್ದೇನೆ. ಸಮಯವೇ ಎಲ್ಲ ಗಾಯಗಳಿಗೂ ಉತ್ತರ ನೀಡುತ್ತದೆ. ಸಾಯಿ ರಾಮ್,&quot; ಎಂದು ಕಾವ್ಯ ಗೌಡ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h2&gt;&lt;strong&gt;ಕಾವ್ಯ ಗೌಡಗೆ ಮೆಚ್ಚುಗೆ&lt;/strong&gt;&lt;/h2&gt;&lt;p&gt;ಕಾವ್ಯ ಗೌಡ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಅಭಿಮಾನಿಗಳು ಅವರ ಸಂವೇದನಾಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಸ್ನೇಹಿತೆಯ ಪರವಾಗಿ ನಿಂತು ಧೈರ್ಯ ತುಂಬಿದ ಕಾವ್ಯ ಗೌಡ ಅವರ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದು, ಕೃಷಿ ತಾಪಂಡ ಕೂಡ ಈ ನೋವಿನ ಸಮಯವನ್ನು ಧೈರ್ಯದಿಂದ ಎದುರಿಸಲಿ ಎಂದು ಹಾರೈಸುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/radha-ramana-actress-kavya-gowda-emotional-message-to-krishi-thapanda-gvd/articleshow-8byut0m"/>
        </item>
        <item>
            <title><![CDATA[ಹಸಿವು, ಅವಮಾನ, ಬಡತನ... ತಾಯಿಯ ಒಂದು ಮಾತು ನನ್ನ ಬದುಕು ಬದಲಿಸಿತು: ಜಗ್ಗೇಶ್ ಭಾವುಕ ಪೋಸ್ಟ್!]]></title>
            <link>https://kannada.asianetnews.com/sandalwood/jaggesh-inspiring-journey-mother-changed-my-life-facebook-post-gvd/articleshow-0imkmz9</link>
            <guid isPermaLink="true">https://kannada.asianetnews.com/sandalwood/jaggesh-inspiring-journey-mother-changed-my-life-facebook-post-gvd/articleshow-0imkmz9</guid>
            <pubDate>Tue, 07 Jul 2026 16:32:57 +0530</pubDate>
            <description><![CDATA[&lt;p&gt;ನವರಸ ನಾಯಕ ಜಗ್ಗೇಶ್ ತಮ್ಮ ಅಧಿಕೃತ ಫೇಸ್&zwnj;ಬುಕ್ ಖಾತೆಯಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದು, ಬಾಲ್ಯದಿಂದ ಯಶಸ್ಸಿನ ಶಿಖರ ತಲುಪುವವರೆಗಿನ ತಮ್ಮ ಜೀವನದ ಹೋರಾಟದ ಪಯಣವನ್ನು ನೆನಪಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy3wfjj4ypdtsbtf33f71gb,imgname-bjb-1783422139986.png" type="image/jpeg" height="390" width="690"/>
            <content:encoded><![CDATA[&lt;p&gt;ಹಿರಿಯ ನಟ, ನವರಸ ನಾಯಕ ಜಗ್ಗೇಶ್ ತಮ್ಮ ಅಧಿಕೃತ ಫೇಸ್&zwnj;ಬುಕ್ ಖಾತೆಯಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದು, ಬಾಲ್ಯದಿಂದ ಯಶಸ್ಸಿನ ಶಿಖರ ತಲುಪುವವರೆಗಿನ ತಮ್ಮ ಜೀವನದ ಹೋರಾಟದ ಪಯಣವನ್ನು ನೆನಪಿಸಿಕೊಂಡಿದ್ದಾರೆ. ಬಾಲ್ಯ ಮತ್ತು ಯೌವನದ ದಿನಗಳಲ್ಲಿ ಆರ್ಥಿಕ ಸಂಕಷ್ಟ, ಹಸಿವು, ಅವಮಾನ, ಅವಕಾಶಗಳ ಕೊರತೆ ಹಾಗೂ ಜೀವನದ ಹಲವು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ದಾಗಿ ಜಗ್ಗೇಶ್ ತಿಳಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ತಂದೆ-ತಾಯಿಯ ಮೇಲೆಯೂ ಅಸಮಾಧಾನ ಮೂಡುತ್ತಿತ್ತು. ಆದರೆ ಜೀವನದಲ್ಲಿ ಎಂದಿಗೂ ಕುಗ್ಗದಂತೆ ಮಾಡಿದವರು ತಮ್ಮ ತಾಯಿ ಎಂದು ಅವರು ಭಾವುಕರಾಗಿ ಸ್ಮರಿಸಿದ್ದಾರೆ.&lt;/p&gt;&lt;p&gt;&quot;ಭಕ್ತಿ, ಪ್ರಾಮಾಣಿಕ ಶ್ರಮ, ತಾಳ್ಮೆ ಮತ್ತು ನಿರಂತರ ಅಭ್ಯಾಸವೇ ಬದುಕಿನ ನಿಜವಾದ ಬಂಡವಾಳ&quot; ಎಂದು ತಾಯಿ ಹೇಳುತ್ತಿದ್ದ ಮಾತುಗಳು ತಮ್ಮ ಜೀವನದ ದಿಕ್ಕನ್ನೇ ಬದಲಿಸಿವೆ ಎಂದು ಜಗ್ಗೇಶ್ ಬರೆದಿದ್ದಾರೆ. ವಿಶೇಷವಾಗಿ, &quot;ಗೆದ್ದರೆ ಸನ್ಮಾನ... ಸೋತರೆ ಅಪಮಾನ&quot; ಎಂಬ ತಾಯಿಯ ಮಾತು ಪ್ರತಿಯೊಂದು ಹೆಜ್ಜೆಯಲ್ಲೂ ತಮ್ಮನ್ನು ಮುನ್ನಡೆಸಿದ ದಾರಿದೀಪವಾಗಿತ್ತು ಎಂದು ತಿಳಿಸಿದ್ದಾರೆ. ಇಂದು ತಾಯಿ ತಮ್ಮೊಂದಿಗಿಲ್ಲದಿದ್ದರೂ, ಆಕೆಯ ಆದರ್ಶಗಳು ಮತ್ತು ಬದುಕಿನ ಪಾಠಗಳೇ ಪ್ರತಿದಿನ ತಮ್ಮನ್ನು ಮುನ್ನಡೆಸುತ್ತಿವೆ ಎಂದು ಜಗ್ಗೇಶ್ ಭಾವುಕರಾಗಿ ಹೇಳಿದ್ದಾರೆ. ಜೀವನದಲ್ಲಿ ಎದುರಾದ ಪ್ರತಿಯೊಂದು ಕಷ್ಟವೂ ತಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಜಗ್ಗೇಶ್&zwnj; ಪೋಸ್ಟ್&zwnj;ನಲ್ಲಿ ಏನಿದೆ?&lt;/strong&gt;&lt;/p&gt;&lt;p&gt;ಯೌವನದ ದಿನದಲ್ಲಿ ನನಗೆ ಯಾರು ಸಹಾಯ ಮಾಡಲಿಲ್ಲಾ ಕೋಪ! ಎಲ್ಲರಿಗು ಇಷ್ಟಪಟ್ಟ ವಸ್ತು ಕೊಡಿಸೋ ತಂದೆ-ತಾಯಿ ನನಗೇಕಿಲ್ಲಾ ಕೋಪ! ಸ್ನೇಹಿತರ ಜೊತೆ ವಾರಕ್ಕೊಂದು ಸಿನಿಮ ಹೋಟಲ್ ದೋಸೆಗೆ ಕಾಸುಕೊಡಲ್ಲಾ ಅಪ್ಪ ಕೋಪ! ಕಾಲೇಜಿಗೆ ಒಳ್ಳೆ ಬಟ್ಟೆ ಶೋ ಧರಿಸಿ ಸೈಕಲ್ ನಲ್ಲಿ ಹೋಗಬೇಕು ಅಪ್ಪ ಕ್ಯಾರೆ ಅನ್ನನು ಕೋಪ!&lt;/p&gt;&lt;p&gt;ಈ ಮುಖಕ್ಕೆ ಒಬ್ಬಳು ಪ್ರೇಮಿ ಸಿಕ್ಕಳು ಚಾಕ್ಲೇಟ್ ಕೊಡಿಸಲು ಕಾಸಿಲ್ಲಾ ಕೋಪ! ನನ್ನ ಇಷ್ಟದ ಕ್ಷೇತ್ರ ಕಲಾರಂಗದಲ್ಲಿ ನನ್ನ ನೋಡಿದರೆ ಎಲ್ಲರಿಗು ವಾಕರಿಕೆ ಓಡಿಸುತ್ತದ್ದರು ಹೊರಗೆ ಕೋಪ! ಹೈಲ್ಯಾಂಡ್ ಹೋಟೆಲ್ ಪುಟ್ಪಾತ್ ನಲ್ಲಿ ನಿಂತು ಬರುವ ತಾರೆಗಳ ನೋಡಿ ನನಗೇಕಿಲ್ಲಾ ಈ ಯೋಗ ಕೋಪ!&lt;/p&gt;&lt;p&gt;ಬೆಳಗಿನಿಂದ ಸಂಜೆಯವರೆಗು ಗಾಂಧಿನಗರ ಪಾತ್ರಕ್ಕೆ ಅಲೆದಾಟ ಹಸಿವು ಊಟವಿಲ್ಲದೆ ಕೋಪ! ನನಗೆ ಅಂತ ಯಾರಿಲ್ಲವೆ ಎಂದು ಬಂದ ಕೋಪಕ್ಕೆ ಸಾಂತ್ವನ ಹೇಳಿ ಹುರಿದುಂಬಿಸಿ ಭುಜತಟ್ಟಿ ಏಳು ಎದ್ದೇಳು ನಿನಗೆ ನಾನು ಜನ್ಮ ನೀಡಿದ್ದೆ ಗೆಲ್ಲಲು,ಗದ್ದು ವಂಶಕ್ಕೆ ಕಳಶಪ್ರಾಯವಾಗಲು ಮಗನೆ... ನೀನು ಗೆಲ್ಲಬೇಕೆಂದರೆ ನಿನ್ನ ನೀನು ಸೈನಿಕನಂತೆ ತಯಾರು ಮಾಡಿಕೋ, ಮಾಡುವ ಕಾಯಕ ಅಭ್ಯಾಸ ಮಾಡಿಕೋ, ಅರ್ಜುನ ಕೃಷ್ಣನ ಜೊತೆಯಲ್ಲಿ ಇಟ್ಟುಕೊಂಡಂತೆ ಭಕ್ತಿ ರೂಡಿಸಿಕೋ, ಅಣಕ ಅಪಮಾನ ಮಾಡುವವರ ಗಮನಿಸದೆ ನಿನ್ನ ಗುರಿಯ ಕಡೆ ಹೆಜ್ಜೆಹಾಕು ಸಾಧಕನಾಗುವೆ, ಒಂದು ನೆನಪಿಡು ಗೆದ್ದರೆ ಮಾತ್ರ ಸನ್ಮಾನ ಸೋತರೆ ಅಪಮಾನ ಎಂದು ಬದುಕಿನ ಯುದ್ಧಕ್ಕೆ ತಯಾರು ಮಾಡಿಬಿಟ್ಟಳು ಅಮ್ಮ ನನ್ನ ದೇವರು.&lt;/p&gt;&lt;p&gt;ಮುಂದೆ ಅವಳು ಹೇಳಿದಂತೆ ಬದುಕು ಸಾಧಿಸಿ ಗೆದ್ದೆ ಅದನ್ನು ನೋಡಲು ಅಮ್ಮನೆ ಇಲ್ಲಾ ನನ್ನ 30ನೆ ವಯಸ್ಸಿಗೆ ಯಾತ್ರೆ ಮುಗಿಸಿ ನನ್ನ ಮುಂದಿನ ಗೋಡೆಯ ಮೇಲೆ ಶಾಶ್ವತ ಚಿತ್ರವಾದಳು... ಯುವ ಮನಸುಗಳೆ ಯಾವುದೆ ಆಗಲು ಈ ಜಗದಲ್ಲಿ ಅವರವರ ಧರ್ಮದ ದೇವರ ಮೇಲಿನ ಭಕ್ತಿ, ತಾಳ್ಮೆ, ಶ್ರಮ, ಸಮಯಪ್ರಜ್ಞೆ, ನಿರಂತರ ಅಭ್ಯಾಸ, ಉತ್ತಮ ಜನರ ಒಡನಾಟ ಅಭ್ಯಾಸ ಮಾಡಿಕೊಳ್ಳಬೇಕು.. ಯಾವುದೆ ಸಾಧನೆ ಒಂದೆ ದಿನ ಆಗದು. ಕಾದವ ಮೇಧಾವಿ ನುಗ್ಗಿದವ ಮೂರ್ಖ. ನಿಮ್ಮ ಗೆಲುವಿಗೆ ನನ್ನ ಜೀವನದ ಶ್ರಮದಕಥೆ ಸ್ಪೂರ್ಥಿಯಾಗಲಿ ಎಂಬ ಆಶಯ. ಶುಭಮಸ್ತು. #ತಾಯಿದೇವರು ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸಾಮಾಜಿಕ ಜಾಲತಾಣಗಳಲ್ಲಿ ವೈರಲ್&lt;/strong&gt;&lt;/h2&gt;&lt;p&gt;ತಮ್ಮ ಬರಹದ ಮೂಲಕ ಇಂದಿನ ಯುವಕರಿಗೂ ಜಗ್ಗೇಶ್ ಮಹತ್ವದ ಸಂದೇಶ ನೀಡಿದ್ದಾರೆ. ಯಶಸ್ಸಿಗೆ ಯಾವುದೇ ಶಾರ್ಟ್&zwnj;ಕಟ್ ಇಲ್ಲ. ನಿರಂತರ ಪರಿಶ್ರಮ, ತಾಳ್ಮೆ, ಶಿಸ್ತು ಮತ್ತು ಉತ್ತಮ ವ್ಯಕ್ತಿಗಳ ಒಡನಾಟವೇ ವ್ಯಕ್ತಿಯನ್ನು ಸಾಧನೆಯತ್ತ ಕೊಂಡೊಯ್ಯುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ. ಜಗ್ಗೇಶ್ ಅವರ ಈ ಸ್ಪೂರ್ತಿದಾಯಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಹೋರಾಟದ ಬದುಕಿಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ತಾಯಿಯ ಮೇಲಿನ ಅವರ ಅಪಾರ ಗೌರವಕ್ಕೂ ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/jaggesh-inspiring-journey-mother-changed-my-life-facebook-post-gvd/articleshow-0imkmz9"/>
        </item>
        <item>
            <title><![CDATA['ಪ್ರೀತಿ, ಅಭಿಮಾನ ಮಾತ್ರ ತಗೊಂಡು ಬನ್ನಿ': ಅಭಿಮಾನಿಗಳಿಗೆ ಶಿವಣ್ಣನ ವಿಶೇಷ ಮನವಿಯೇನು?]]></title>
            <link>https://kannada.asianetnews.com/sandalwood/shivarajkumar-birthday-fans-asked-not-to-bring-gifts-gvd/articleshow-8mp27vq</link>
            <guid isPermaLink="true">https://kannada.asianetnews.com/sandalwood/shivarajkumar-birthday-fans-asked-not-to-bring-gifts-gvd/articleshow-8mp27vq</guid>
            <pubDate>Tue, 07 Jul 2026 16:07:41 +0530</pubDate>
            <description><![CDATA[&lt;p&gt;ಶಿವರಾಜ್&zwnj;ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ 64ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy2enz392mvxkgwwwygygq2,imgname-bjnb-1783420639203.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಸೇರಿದಂತೆ ಹಲವು ಬಿರುದುಗಳಿಂದ ಕನ್ನಡಿಗರ ಹೃದಯ ಗೆದ್ದಿರುವ ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾ. ಶಿವರಾಜ್&zwnj;ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ 64ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಶಿವಣ್ಣ ಅಭಿಮಾನಿಗಳಲ್ಲಿ ಹೃದಯಸ್ಪರ್ಶಿ ಮನವಿಯೊಂದನ್ನು ಮಾಡಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿರುವ ಶಿವರಾಜ್&zwnj;ಕುಮಾರ್, &quot;ಸಿಗೋಣ ಜುಲೈ 12ಕ್ಕೆ... ಪ್ರೀತಿ, ಅಭಿಮಾನ ಮಾತ್ರ ತಗೊಂಡು ಬನ್ನಿ&quot; ಎಂಬ ಭಾವನಾತ್ಮಕ ಕ್ಯಾಪ್ಷನ್ ಮೂಲಕ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.&lt;/p&gt;&lt;p&gt;&lt;strong&gt;&quot;ಕೇಕ್, ಹಾರ, ಶಾಲು ಬೇಡ... ನಿಮ್ಮ ಪ್ರೀತಿಯೇ ಸಾಕು&quot;&lt;/strong&gt;&lt;/p&gt;&lt;p&gt;ವಿಡಿಯೊದಲ್ಲಿ ಮಾತನಾಡಿರುವ ಶಿವರಾಜ್&zwnj;ಕುಮಾರ್, &quot;ಎಲ್ಲರಿಗೂ ನಮಸ್ಕಾರ. ಜುಲೈ 12 ನನ್ನ ಹುಟ್ಟುಹಬ್ಬ. ನೀವು ಪ್ರತಿವರ್ಷದಂತೆ ಈ ಬಾರಿಯೂ ಬರ್ತೀರ ಅನ್ನೋದು ನನಗೆ ಗೊತ್ತಿದೆ. ಆದರೆ ಈ ಬಾರಿ ನನ್ನದೊಂದು ಸಣ್ಣ ಮನವಿ ಇದೆ. ಯಾವುದೇ ಉಡುಗೊರೆ ತರಬೇಡಿ. ವಿಶೇಷವಾಗಿ ಕೇಕ್, ಹಾರ, ಶಾಲು ಯಾವುದೂ ಬೇಡ. ನಿಮ್ಮೆಲ್ಲರ ಪರವಾಗಿ ನಾನೇ ಒಂದು ಕೇಕ್ ಕಟ್ ಮಾಡ್ತೀನಿ. ನಿಮ್ಮ ಪ್ರೀತಿ, ಶುಭಾಶಯಗಳೇ ನನಗೆ ದೊಡ್ಡ ಉಡುಗೊರೆ. ಎಲ್ಲರೂ ಬನ್ನಿ... ಭೇಟಿಯಾಗೋಣ... ಸಂತೋಷವಾಗಿ ಸಮಯ ಕಳೆಯೋಣ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಶಿವಣ್ಣನ ಮನವಿ&lt;/strong&gt;&lt;/p&gt;&lt;p&gt;ಶಿವಣ್ಣನ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಭಾವುಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. &quot;ಅಪ್ಪು ಒಮ್ಮೆ ಹೇಳಿದ್ದರು... 'ನನಗೂ ನಮ್ಮ ಅಣ್ಣನಿಗೂ ವಯಸ್ಸೇ ಆಗಲ್ಲ.' ಹ್ಯಾಪಿ ಬರ್ತ್&zwnj;ಡೇ ಶಿವಣ್ಣ&quot; ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, &quot;ಹ್ಯಾಪಿ ಬರ್ತ್&zwnj;ಡೇ ದೇವ್ರು&quot; ಎಂದು ಶುಭ ಹಾರೈಸಿದ್ದಾರೆ. ಇನ್ನೋರ್ವ ನೆಟ್ಟಿಗರ ಕಾಮೆಂಟ್ ಗಮನ ಸೆಳೆಯುವಂತಿದ್ದು, &quot;ಸ್ಯಾಂಡಲ್&zwnj;ವುಡ್&zwnj;ನ ಹಲವು ನಟರು ಹುಟ್ಟುಹಬ್ಬದಂದು ಮನೆಯಲ್ಲಿ ಇರಲ್ಲ ಎಂದು ಹೇಳುತ್ತಾರೆ. ಆದರೆ ದೊಡ್ಡಮನೆಯ ಶಿವಣ್ಣ ಮಾತ್ರ 'ಬನ್ನಿ' ಎಂದು ಆಹ್ವಾನಿಸುತ್ತಾರೆ. ದೊಡ್ಡಮನೆಯವರು ಅನ್ನೋದು ಮನೆಗೆ ಅಲ್ಲ, ಮನಸ್ಸಿಗೆ&quot; ಎಂದು ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಶಿವಣ್ಣ&lt;/strong&gt;&lt;/h2&gt;&lt;p&gt;ಸಿನಿಮಾ ವಿಚಾರಕ್ಕೆ ಬಂದರೆ, ಶಿವರಾಜ್&zwnj;ಕುಮಾರ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಸದ್ಯ 10ಕ್ಕೂ ಹೆಚ್ಚು ಸಿನಿಮಾಗಳನ್ನು ಕೈಯಲ್ಲಿ ಹೊಂದಿದ್ದಾರೆ.&lt;/p&gt;&lt;p&gt;ಅವುಗಳಲ್ಲಿ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರವೂ ಒಂದು. ಈ ಸಿನಿಮಾದಲ್ಲಿ ಶಿವರಾಜ್&zwnj;ಕುಮಾರ್ ಜೊತೆಗೆ ನಟರಾಕ್ಷಸ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಮೇಲೆ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ನಡುವೆ, ಯಾವುದೇ ಆಡಂಬರವಿಲ್ಲದೆ &quot;ಪ್ರೀತಿ ಮತ್ತು ಅಭಿಮಾನ ಮಾತ್ರ ಸಾಕು&quot; ಎಂದು ಅಭಿಮಾನಿಗಳಿಗೆ ಮನವಿ ಮಾಡಿರುವ ಶಿವಣ್ಣನ ಸರಳತೆ ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/shivarajkumar-birthday-fans-asked-not-to-bring-gifts-gvd/articleshow-8mp27vq"/>
        </item>
        <item>
            <title><![CDATA[ದರ್ಶನ್‌ಗೇ ಚಾಲೆಂಜ್.. ಬೇಲ್‌ಗಾಗಿ ಪದೇ ಪದೇ ಅರ್ಜಿ ಹಾಕ್ತಿದ್ರೂ 'ವಜಾ' ಆಗ್ತಿರೋದ್ಯಾಕೆ?]]></title>
            <link>https://kannada.asianetnews.com/sandalwood/sandalwood-actor-darshan-recent-bail-cancelled-and-life-became-challenge-for-him/articleshow-ft6lz5z</link>
            <guid isPermaLink="true">https://kannada.asianetnews.com/sandalwood/sandalwood-actor-darshan-recent-bail-cancelled-and-life-became-challenge-for-him/articleshow-ft6lz5z</guid>
            <pubDate>Mon, 06 Jul 2026 22:00:04 +0530</pubDate>
            <description><![CDATA[&lt;p&gt;ದಾಸ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಹೋಗುವ ಮೊದಲೇ ರಿಜೆಕ್ಟ್ ಆಗಿದೆ. ಈ ಪ್ರಕರಣದ ಟ್ರಯಲ್ ಅನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwp36b1jv3gq4p2t66ddzp7w,imgname-drashan-renukaswamy--1--1783152978994.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್​ವುಡ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ಪಟ್ಟಕ್ಕೇರಿದ್ದ ದರ್ಶನ್ (Darshan Bail), ನನಗೆ ಚಾಲೆಂಜ್ ಹಾಕೋರು ಯಾರು ಇಲ್ಲ ಅಂತ ಮರೆಯುತ್ತಿದ್ರು. ಅದು ರೀಲ್​ಮೇಲೆ ಮಾತ್ರ. ಆದ್ರೆ ರಾಯಲ್ ಆಗಿರಬೇಕಿದ್ದ ದಾಸನ ರಿಯಲ್ ಲೈಫ್​ನಲ್ಲಿ ಎದುರಾಗಿರೋ ಚಾಲೆಂಜ್​ಗಳು ಒಂದೆರೆಡಲ್ಲ. ಬೇಲ್ ಪಡೆದು ಜೈಲಿನಿಂದ ಹೊರ ಬರೋದಕ್ಕೆ ಮತ್ತೆ ಮತ್ತೆ ಪ್ರಯತ್ನ ಪಟ್ಟರೂ ದರ್ಶನ್ ಡಿಬಾರ್ ಆಗುತ್ತಿದ್ದಾರೆ. ಈ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ.&lt;/p&gt;&lt;p&gt;ನಟ ದರ್ಶನ್ ಬದುಕು ಕೊಲೆ ಆರೋಪದ ಬವಣೆಯಲ್ಲೇ ಬಳಲಿ ಬೆಂಡಾಗಿದೆ. ಪರಪ್ಪನ ಅಗ್ರಹಾರ ಜೈಲು ದಾಸನ ಆವಾಸ ಸ್ಥಾನ ಆಗಿ ಎರಡು ವರ್ಷ ಆಗುತ್ತಿದೆ. ಜೈಲು ಹಕ್ಕಿ ಆಗಿರೋ ಸ್ಯಾಂಡಲ್​ವುಡ್​ನ ಈ ಬಣ್ಣದ ಹಕ್ಕಿ ಈಗ ಹೊರ ಬರೋದಕ್ಕೆ ಏನೆಲ್ಲಾ ದಾರಿಗಳಿವೆಯೋ ಎಲ್ಲವನ್ನೂ ಹುಡುಕುತ್ತಿದ್ದಾರೆ.&lt;/p&gt;&lt;p&gt;ಬೇಲ್​​ಗಾಗಿ ಪದೇ ಪದೇ ಅರ್ಜಿ.. ದರ್ಶನ್ ಡಿಬಾರ್.!&lt;/p&gt;&lt;p&gt;ದಾಸನ ಅರ್ಜಿ.. ನ್ಯಾಯ ಪೀಠಕ್ಕೆ ಯೋಗ್ಯವಲ್ಲ ಎಂದ ರಿಜಿಸ್ಟರ್..!&lt;/p&gt;&lt;p&gt;ಹೌದು, ನಟ ದರ್ಶನ್ ಬೇಲ್ ಪಡೆಯೋಕೆ ಸುಪ್ರಿಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಆದ್ಮೇಲೆ ಇನ್ನೊಂದು ವರ್ಷದಲ್ಲಿ ಈ ಕೊಲೆ ಪ್ರಕರಣದ ವಿಚಾರಣೆ ಮುಗಿಸಿ ಅಂತ ಸುಪ್ರೀಂ ಕೋರ್ಟ್​ ನ್ಯಾಯಪೀಠ ಹೇಳಿತ್ತು. ಆದ್ರೆ ಈ ಆದೇಶದಲ್ಲಿ ಪ್ರಕರಣ ಸ್ವರೂಪ, ವಿಚಾರಣೆಯ ಅವಧಿಯಲ್ಲಿ ಒಂದಷ್ಟು ಮಾರ್ಪಾಡು ತರಬೇಕೆಂದು ಅಂತ ದರ್ಶನ್ ಪರ ವಕೀಲರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ರು. ಅಲ್ಲೂ ಈಗ ದಾಸನಿಗೆ ಶಾಕ್ ಆಗಿದೆ.&lt;/p&gt;&lt;p&gt;ದಾಸ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಹೋಗುವ ಮೊದಲೇ ರಿಜೆಕ್ಟ್ ಆಗಿದೆ. ಈ ಪ್ರಕರಣದ ಟ್ರಯಲ್ ಅನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಆ ಸಂದರ್ಭದಲ್ಲಿ ಮತ್ತೆ ಜಾಮೀನಿಗೆ ಸಂಬಂಧಿಸಿದಂತೆ ದರ್ಶನ್ ಅರ್ಜಿ ಸಲ್ಲಿಸಬಹುದೆಂಬ ಅವಕಾಶವನ್ನೂ ಸೂಚಿಸಿತ್ತು. ಆದರೂ ದಾಸ ಮತ್ತೆ ಅರ್ಜಿ ಸಲ್ಲಿಸಿದ್ದು ಆ ಅರ್ಜಿ&lt;/p&gt;&lt;p&gt;ಕೋರ್ಟ್ ನಲ್ಲಿ ಡಿಬಾರ್ ಆಗಿದೆ.&lt;/p&gt;&lt;p&gt;ಸುಪ್ರೀಂ ಕೋರ್ಟ್&zwnj;ನಲ್ಲಿ ಮರುಪರಿಶೀಲನಾ ಅರ್ಜಿಗಳು ನೇರವಾಗಿ ನ್ಯಾಯಮೂರ್ತಿಗಳ ಮುಂದೆ ಹೋಗುವುದಿಲ್ಲ. ಮೊದಲು ರಿಜಿಸ್ಟ್ರಾರ್ ಹಂತದಲ್ಲಿ ಅವುಗಳ ತಾಂತ್ರಿಕ ಹಾಗೂ ಕಾನೂನುಪರ ಪರಿಶೀಲನೆ ನಡೆಯುತ್ತದೆ. ಅರ್ಜಿಯಲ್ಲಿ ತುರ್ತು, ಗಂಭೀರ ಅಥವಾ ಮರುಪರಿಶೀಲನೆಗೆ ಅಗತ್ಯವಾದ ಅಂಶಗಳಿದ್ದರೆ ಮಾತ್ರ ಅದು ನ್ಯಾಯ ಪೀಠಕ್ಕೆ ವಿಚಾರಣೆಗೆ ಬರುತ್ತೆ. ದರ್ಶನ್ ಸಲ್ಲಿಸಿದ್ದ ಅರ್ಜಿಯಲ್ಲಿ ಅಂತಹ ವಿಶೇಷ ಅಂಶಗಳಿಲ್ಲ ಹಿನ್ನೆಲೆ ಪೀಠದ ಮುಂದೆ ಇಡದೇ ರಿಜಿಸ್ಟ್ರಾರ್ ತಿರಸ್ಕರಿಸಿದ್ದಾರೆ. ಒಟ್ನಲ್ಲಿ ದಾಸ ಪರಪ್ಪನ ಅಗ್ರಹಾರ ಬಾಹುಬಂಧನಲ್ಲಿ ಇನ್ನೊಂದು ವರ್ಷ ಗಟ್ಟಿಯಾಗಿ ಇರಬೇಕಿದೆ.&lt;/p&gt;&lt;p&gt;ಹೆಚ್ಚಿನ ಮಾಹಿತಿಗಾಗಿ 'ಸಿನಿಮಾ ಹಂಗಾಮ ನೋಡಿ..&lt;/p&gt;&lt;p&gt;&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-actor-darshan-recent-bail-cancelled-and-life-became-challenge-for-him/articleshow-ft6lz5z"/>
        </item>
        <item>
            <title><![CDATA[ರಿಷಬ್ ಶೆಟ್ಟಿ ನೆರವಿನಿಂದ ಬದಲಾದ ಬದುಕು: ಗ್ರಾಮಸ್ಥರಿಂದ ಕಣ್ಣೀರಿನ ಕೃತಜ್ಞತೆ, ವಿಡಿಯೋ ವೈರಲ್]]></title>
            <link>https://kannada.asianetnews.com/sandalwood/rishab-shetty-birthday-students-thank-foundation-video-goes-viral-gvd/articleshow-ofrn8h4</link>
            <guid isPermaLink="true">https://kannada.asianetnews.com/sandalwood/rishab-shetty-birthday-students-thank-foundation-video-goes-viral-gvd/articleshow-ofrn8h4</guid>
            <pubDate>Tue, 07 Jul 2026 17:02:42 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಸಿನಿ ತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy5jpf5xvndg6wr4nbs2cnv,imgname-gnk-1783423916517.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಸಿನಿ ತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಫೌಂಡೇಶನ್ ಬಿಡುಗಡೆ ಮಾಡಿರುವ ವಿಶೇಷ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದೆ.&lt;/p&gt;&lt;p&gt;ಸಿನಿಮಾಗಳ ಮೂಲಕ ಮಾತ್ರವಲ್ಲ, ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ, ತಮ್ಮ ಫೌಂಡೇಶನ್ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಾ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಈ ನೆರವಿನಿಂದ ಬದುಕು ಬದಲಾಗಿರುವ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ವಿಡಿಯೋದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ನಟನಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;&lt;p&gt;&lt;strong&gt;&quot;ರಿಷಬ್ ಸರ್ ನೆರವಿಲ್ಲದಿದ್ದರೆ ನನ್ನ ಓದು ನಿಂತು ಹೋಗುತ್ತಿತ್ತು&quot;&lt;/strong&gt;&lt;/p&gt;&lt;p&gt;ವಿಡಿಯೋದಲ್ಲಿ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು, &quot;ಒಂದೂವರೆ ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡೆವು. ಮನೆಯ ಸಂಪೂರ್ಣ ಜವಾಬ್ದಾರಿ ತಾಯಿಯ ಮೇಲಿತ್ತು. ಅಂತಹ ಕಷ್ಟದ ಸಮಯದಲ್ಲಿ ರಿಷಬ್ ಶೆಟ್ಟಿ ಸರ್ ನೀಡಿದ ವಿದ್ಯಾರ್ಥಿವೇತನ ನನ್ನ ಶಿಕ್ಷಣ ಮುಂದುವರಿಸಲು ದೊಡ್ಡ ಆಸರೆಯಾಯಿತು&quot; ಎಂದು ಭಾವುಕರಾಗಿ ಹೇಳಿದ್ದಾಳೆ.&lt;/p&gt;&lt;p&gt;ಇನ್ನೊಬ್ಬ ಪೋಷಕರು, &quot;ಮಕ್ಕಳ ಶಾಲಾ ಶುಲ್ಕ ಕಟ್ಟುವುದೇ ನಮಗೆ ದೊಡ್ಡ ಸವಾಲಾಗಿತ್ತು. ಅವರಿಗೆ ಇಷ್ಟಪಟ್ಟ ಶಿಕ್ಷಣ ಕೊಡಲು ಸಾಧ್ಯವಾಗುತ್ತಿರಲಿಲ್ಲ. ರಿಷಬ್ ಶೆಟ್ಟಿ ಫೌಂಡೇಶನ್&zwnj;ನ ಸಹಾಯ ನಮ್ಮ ಕುಟುಂಬಕ್ಕೆ ಹೊಸ ಭರವಸೆ ನೀಡಿತು&quot; ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಗ್ರಾಮಸ್ಥರೂ ನಟನ ಸಾಮಾಜಿಕ ಕಾಳಜಿಯನ್ನು ಕೊಂಡಾಡಿದ್ದು, &quot;ತಾವೊಬ್ಬರೇ ಬೆಳೆಯದೇ, ತಮ್ಮ ಊರಿನ ಮಕ್ಕಳ ಭವಿಷ್ಯಕ್ಕೂ ಬೆಳಕು ನೀಡುತ್ತಿದ್ದಾರೆ. ಅವರ ಸಹಾಯ ಅನೇಕ ಕುಟುಂಬಗಳ ಬದುಕು ಬದಲಿಸಿದೆ&quot; ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಕೆಲವರು ಮಾತನಾಡುವ ವೇಳೆ ಭಾವುಕರಾಗಿರುವ ದೃಶ್ಯಗಳೂ ವಿಡಿಯೋದಲ್ಲಿವೆ.&lt;/p&gt;&lt;p&gt;&lt;strong&gt;&quot;ಒಂದು ಸಣ್ಣ ಒಳ್ಳೆಯ ಕಾರ್ಯ, ನಾಳೆಯ ಉಜ್ವಲ ಸಮಾಜ&quot;&lt;/strong&gt;&lt;/p&gt;&lt;p&gt;ವಿಡಿಯೋದೊಂದಿಗೆ ಫೌಂಡೇಶನ್ ಮಹತ್ವದ ಸಂದೇಶವನ್ನೂ ಹಂಚಿಕೊಂಡಿದೆ. &quot;ಶಿಕ್ಷಣವು ಕೇವಲ ಜೀವನ ಬದಲಿಸುವುದಲ್ಲ, ಭವಿಷ್ಯ ರೂಪಿಸುವ ಶಕ್ತಿ ಹೊಂದಿದೆ. ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಗೂ ಕನಸು ಕಾಣುವ ಅವಕಾಶ ಸಿಗಬೇಕು ಎಂಬ ನಂಬಿಕೆಯಿಂದ ವಿದ್ಯಾರ್ಥಿವೇತನ ಯೋಜನೆ ನಡೆಸುತ್ತಿದ್ದೇವೆ. ಪ್ರತಿಯೊಂದು ನೆರವೂ ಉಜ್ವಲ ಭವಿಷ್ಯ ಮತ್ತು ಉತ್ತಮ ಸಮಾಜದತ್ತ ನಮ್ಮ ಸಣ್ಣ ಹೆಜ್ಜೆಯಾಗಿದೆ&quot; ಎಂದು ತಿಳಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, &quot;ರಿಯಲ್ ಹೀರೋ&quot;, &quot;ಮಾನವೀಯತೆಗೆ ಮತ್ತೊಂದು ಹೆಸರು ರಿಷಬ್ ಶೆಟ್ಟಿ&quot;, &quot;ಇದೇ ನಿಜವಾದ ಸ್ಟಾರ್&zwnj;ಡಮ್&quot; ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಹುಟ್ಟುಹಬ್ಬದ ಶುಭಾಶಯ ಕೋರಿ, ಅವರ ಮುಂದಿನ ಸಿನಿಮಾಗಳಿಗಾಗಿ ಕಾತರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮುಂದಿನ ಸಿನಿಮಾಗಳಲ್ಲಿ ರಿಷಬ್ ಬ್ಯುಸಿ&lt;/strong&gt;&lt;/h2&gt;&lt;p&gt;ಸಿನಿಮಾ ವಿಚಾರಕ್ಕೆ ಬಂದರೆ, ರಿಷಬ್ ಶೆಟ್ಟಿ ಹಲವು ಬಹುನಿರೀಕ್ಷಿತ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್&zwnj;ಗಳ ಬಗ್ಗೆ ಸಿನಿಪ್ರಿಯರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದ್ದು, ನಟನ ಹೊಸ ಅವತಾರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Rishab ShettyFoundation (@rishabshettyfoundation)&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/rishab-shetty-birthday-students-thank-foundation-video-goes-viral-gvd/articleshow-ofrn8h4"/>
        </item>
        <item>
            <title><![CDATA[Ramesh Aravind: ಮಧುರ ದಾಂಪತ್ಯ  ಜೀವನದ ಗುಟ್ಟು ಬಿಚ್ಚಿಟ್ಟು, ಪತ್ನಿಗೆ ಆನಿವರ್ಸರಿ ಶುಭ ಕೋರಿದ ನಟ ರಮೇಶ್ ಅರವಿಂದ್]]></title>
            <link>https://kannada.asianetnews.com/gallery/sandalwood/actor-ramesh-aravind-celebrates-his-wedding-anniversary-today-opcstxa</link>
            <guid isPermaLink="true">https://kannada.asianetnews.com/gallery/sandalwood/actor-ramesh-aravind-celebrates-his-wedding-anniversary-today-opcstxa</guid>
            <pubDate>Tue, 07 Jul 2026 16:23:02 +0530</pubDate>
            <description><![CDATA[&lt;p&gt;Ramesh Aravind: ಕನ್ನಡದ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊಗಳನ್ನು ಹಂಚಿಕೊಂಡು, ಪತ್ನಿಗೆ ಶುಭ ಕೋರಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy36f5dg8nbjnc1crazcjk3,imgname-ramesh-aravind-1783421418668.jpg" type="image/jpeg" height="390" width="690"/>
            <content:encoded><![CDATA[&lt;p&gt;Ramesh Aravind: ಕನ್ನಡದ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊಗಳನ್ನು ಹಂಚಿಕೊಂಡು, ಪತ್ನಿಗೆ ಶುಭ ಕೋರಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಮತ್ತು ಅವರ ಪತ್ನಿ ಅರ್ಚನಾ ತಮ್ಮ ದಾಂಪತ್ಯ ಜೀವನದ ಮತ್ತೊಂದು ಸುಂದರ ಮೈಲಿಗಲ್ಲನ್ನು ಸಂಭ್ರಮಿಸಿದ್ದಾರೆ. ವಿವಾಹ ವಾರ್ಷಿಕೋತ್ಸವದ ಈ ವಿಶೇಷ ಸಂದರ್ಭದಲ್ಲಿ ರಮೇಶ್ ಅರವಿಂದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು ಇದು ಅಭಿಮಾನಿಗಳ ಮನ ಗೆದ್ದಿದೆ.&lt;/p&gt;&lt;img&gt;&lt;p&gt;ರಮೇಶ್ ಅರವಿಂದ್ ತಮ್ಮ ಪತ್ನಿಯೊಂದಿಗೆ ಇರುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದು, ಜೀವನದ ಏಳು-ಬೀಳುಗಳಲ್ಲೂ ಜೊತೆ ನಿಂತಿರುವ ಸಂಗಾತಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಪರಸ್ಪರ ಗೌರವ, ಪ್ರೀತಿ ಮತ್ತು ವಿಶ್ವಾಸವೇ ತಮ್ಮ ದಾಂಪತ್ಯದ ದೊಡ್ಡ ಬಲ ಎಂಬ ಸಂದೇಶವನ್ನು ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ಸಿನಿತಾರೆಯರು ಮುದ್ದಾದ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.&lt;/p&gt;&lt;img&gt;&lt;p&gt;ಜುಲೈ 7 ಇಂದು ನಾವು ಹಂಚಿಕೊಂಡ ಜೀವನದ ಮತ್ತೊಂದು ವರ್ಷವನ್ನು ಪ್ರವೇಶಿಸುತ್ತೇವೆ.ಅವಳು ನಿರಂತರವಾಗಿ ಕಾಳಜಿ ವಹಿಸುತ್ತಾಳೆ. ನಮ್ಮ ಜೀವನ ಏರಿಳಿತಗಳ ರೋಲರ್ ಕೋಸ್ಟರ್ ಆಗಿದೆ. ಹೆಚ್ಚಾಗಿ ವಿನೋದ, ಸಂತೋಷ, ನಗುವಿನಿಂದ ಕೂಡಿದ್ದರೆ, ಸ್ವಲ್ಪವೇ ಸ್ವಲ್ಪ ಕಣ್ಣೀರು, ಭಯ ಸಣ್ಣ ನಿರಾಶೆಯೂ ಸೇರಿರುತ್ತವೆ. ಆದರೆ ನಮಗೆ ನಿಜವಾಗಿ ಬೇಕಾಗಿರೋದು ಏನು? ಎನ್ನುವುದಷ್ಟೇ ಮುಖ್ಯ. ಹಾಗಾಗಿ ನಾವು ಬೇಗನೆ ರಿಪೇರಿ, ರಿಚಾರ್ಜ್, ರಿಫ್ರೆಶ್ ಆಗಿ ಮತ್ತೆ ನಗುತ್ತಾ, ಉತ್ತಮ ಸಮಯ ಕಳೆಯುತ್ತೇವೆ. ಎನ್ನುತ್ತಾ ತಮ್ಮ ದಾಂಪತ್ಯ ಜೀವನದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ರಮೇಶ್ ಅರವಿಂದ್ ಮತ್ತು ಅರ್ಚನಾ ಅವರದ್ದು ಪ್ರೇಮ ವಿವಾಹ, ಇವರದ್ದು ಇಂಟರ್ ಕಾಲೇಜ್ ಕಾಂಪೀಟೀಶನ್ ಸಮಯದಲ್ಲಿ ಶುರುವಾದ ಪ್ರೇಮ.ಆದರೆ ಕುಟುಂಬದ ಒಪ್ಪಿಗೆಯೊಂದಿಗೆ ನಡೆದಿತ್ತು. ಮದುವೆಯಾದ ಬಳಿಕವೂ ಅರ್ಚನಾ ಸದಾ ರಮೇಶ್ ಅವರ ವೃತ್ತಿಜೀವನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಿನಿಮಾ, ನಿರ್ದೇಶನ, ಟಿವಿ ಕಾರ್ಯಕ್ರಮಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ ರಮೇಶ್ ಅವರ ಹಿಂದೆ ಪತ್ನಿಯ ಪ್ರೋತ್ಸಾಹ ಮತ್ತು ಬೆಂಬಲ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ವತಃ ರಮೇಶ್ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಒಂದು ಸಂದರ್ಶನದಲ್ಲಿ ರಮೇಶ್ ಅರವಿಂದ್ ಮತ್ತು ಅರ್ಚನಾ, ಯಶಸ್ವಿ ದಾಂಪತ್ಯದ ರಹಸ್ಯವನ್ನು ಹಂಚಿಕೊಂಡಿದ್ದರು. &quot;ದಾಂಪತ್ಯ ಜೀವನದಲ್ಲಿ 'ನಾನು' ಎನ್ನುವುದಕ್ಕಿಂತ 'ನಾವು' ಎನ್ನುವ ಭಾವನೆಗೆ ಹೆಚ್ಚು ಆದ್ಯತೆ ನೀಡಿದರೆ ಸಂಬಂಧ ಸುಂದರವಾಗಿರುತ್ತದೆ&quot; ಎಂದು ಇಬ್ಬರೂ ಹೇಳಿದ್ದರು. ಇದೇ ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಅವರ ದಾಂಪತ್ಯವನ್ನು ಹಲವು ವರ್ಷಗಳಿಂದ ಗಟ್ಟಿಯಾಗಿ ಉಳಿಸಿದೆ.&lt;/p&gt;&lt;img&gt;&lt;p&gt;ರಮೇಶ್ ಅರವಿಂದ್ ಅವರ ಕರಿಯರ್ ಬಗ್ಗೆ ಹೇಳುವುದಾದರೆ, ಸಾಲು ಸಾಲು ಸಿನಿಮಾಗಳಲ್ಲಿ ರಮೇಶ್ ನಟಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ &lsquo;ಯುವರ್ ಸಿನ್ಸಿಯರ್ಲಿ ರಾಮ್&rsquo; ಹಾಗೂ ಹಾರರ್ ಥ್ರಿಲ್ಲರ್ ಸಿನಿಮಾ &lsquo;ಡೈಜಿ&rsquo;ಯಲ್ಲಿ ರಮೇಶ್ ಅರವಿಂದ್ ನಟಿಸುತ್ತಿದ್ದಾರೆ. ಕರಿಯರ್ ಜೊತೆಗೆ ತಮ್ಮ ಕುಟುಂಬದೊಂದಿಗೂ ಸಹ ರಮೇಶ್ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/actor-ramesh-aravind-celebrates-his-wedding-anniversary-today-opcstxa"/>
        </item>
        <item>
            <title><![CDATA[Rishab Shetty Birthday: ಗ್ರಾಂಡ್‌ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ]]></title>
            <link>https://kannada.asianetnews.com/gallery/sandalwood/sandalwood-actor-and-director-rishab-shetty-birthday-celebration-to-know-here-qssrsmv</link>
            <guid isPermaLink="true">https://kannada.asianetnews.com/gallery/sandalwood/sandalwood-actor-and-director-rishab-shetty-birthday-celebration-to-know-here-qssrsmv</guid>
            <pubDate>Tue, 07 Jul 2026 11:05:56 +0530</pubDate>
            <description><![CDATA[&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ತಮ್ಮ &amp;nbsp;ಹುಟ್ಟುಹಬ್ಬವನ್ನು ನಿನ್ನೆ ರಾತ್ರಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಿನ್ನೆ ಬೆಂಗಳೂರಿನ 'ಕಿಂಗ್ಸ್&zwnj; ಕ್ಲಬ್'ನಲ್ಲಿ ತಮ್ಮ ಕುಟುಂಬ, ಮಾಧ್ಯಮ ಮಿತ್ರರು, ಆಪ್ತ ಸ್ನೇಹಿತಬಳಗದೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxgn1xy0mz8zx2461vr9a1h,imgname-rishab-shetty-1783401973693.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ತಮ್ಮ &amp;nbsp;ಹುಟ್ಟುಹಬ್ಬವನ್ನು ನಿನ್ನೆ ರಾತ್ರಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಿನ್ನೆ ಬೆಂಗಳೂರಿನ 'ಕಿಂಗ್ಸ್&zwnj; ಕ್ಲಬ್'ನಲ್ಲಿ ತಮ್ಮ ಕುಟುಂಬ, ಮಾಧ್ಯಮ ಮಿತ್ರರು, ಆಪ್ತ ಸ್ನೇಹಿತಬಳಗದೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ಹುಟ್ಟುಹಬ್ಬವನ್ನು (Rishab Shetty Birthday) ನಿನ್ನೆ ರಾತ್ರಿ ಅದ್ದೂರಿಯಾಗಿ ಆಚರಿಸಲಾಗಿದೆ. 43ನೇ ವಯಸ್ಸಿಗೆ ಕಾಲಿಟ್ಟ ನಟ ರಿಷಬ್ ಶೆಟ್ಟಿಯವರು ನಿನ್ನೆ ಬೆಂಗಳೂರಿನ 'ಕಿಂಗ್ಸ್&zwnj; ಕ್ಲಬ್'ನಲ್ಲಿ ತಮ್ಮ ಕುಟುಂಬ, ಮಾಧ್ಯಮ ಮಿತ್ರರು, ಆಪ್ತ ಸ್ನೇಹಿತರು ಹಾಗೂ ಬಂಧುಬಳಗದವರೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕಿಂಗ್ಸ್&zwnj; ಕ್ಲಬ್ ಜಗಮಗಿಸುವ ಬೆಳಕು ಹಾಗೂ ಹೂಗಳಿಂದ ಅಲಂಕೃತವಾದ ಭವ್ಯವಾದ ವೇದಿಕೆಯಲ್ಲಿ ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳು ಹಾಗೂ ಆಪ್ತರ ಜೊತೆಯಲ್ಲಿ ನಟ ರಿಷಬ್ ಶೆಟ್ಟಿಯವರು ತಮ್ಮ ಬರ್ತ್&zwnj;ಡೇ ಸೆಲೆಬ್ರೇಶನ್ ಮಾಡಿಕೊಂಡಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್&zwnj; ಮಧ್ಯೆ ಬಿಡುವು ಮಾಡಿಕೊಂಡಿರುವ ರಿಷಬ್ ಶೆಟ್ಟಿಯವರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುವ ಮೂಲಕ ಲೈಫ್ ಖುಷಿಯನ್ನು ಸ್ವತಃ ಹೆಚ್ಚಿಸಿಕೊಂಡಿದ್ದಲ್ಲದೇ ಫ್ಯಾನ್ಸ್ ಹಾಗೂ ಪ್ರಪಂಚದೊಂದಿಗೆ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪ್ರಸ್ತುತ ರಿಷಬ್ ಶೆಟ್ಟಿಯವರು 'ಜೈ ಹನುಮಾನ್' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಜೊತೆಗೆ &lsquo;ಛತ್ರಪತಿ ಶಿವಾಜಿ ಮಹಾರಾಜ್&rsquo; ಚಿತ್ರಕ್ಕೂ ಸಿದ್ಧವಾಗುತ್ತಿದ್ದಾರೆ. ಈ ಮೂಲಕ ಕನ್ನಡ ಸಿನಿಮಾದ ಜೊತೆಗೆ ಮರಾಠಿ ಹಾಗೂ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಮಿಂಚುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯಕ್ಕೆ ತಮ್ಮದೇ ನಿರ್ದೇಶನದ &lsquo;ಕಾಂತಾರ ಚಾಪ್ಟರ್ 2&rsquo; ರೂಪಿಸುವ ಕಾರ್ಯದಲ್ಲಿದ್ದಾರೆ. ಜೊತೆಗೆ ಮಲಯಾಳಂನ ಖ್ಯಾತ ಬರಹಗಾರ ಎಂ.ಟಿ. ವಾಸುದೇವ ನಾಯರ್ ಅವರ &lsquo;ರಂಡಮೂಳಂ&rsquo; ಕೃತಿಯನ್ನು ಸಿನಿಮಾವಾಗಿಸುವ ಮಹೋನ್ನತ ಯೋಜನೆಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. &lsquo;ರಂಡಮೂಳಂ&rsquo; ಅವರ ಮ್ಯಾಗ್ನಂ ಓಪಸ್ ಸಿನಿಮಾ ಆಗಲಿದ್ದು, ಅವರ ತಂಡ ಸಂಶೋಧನಾ ಕೆಲಸದಲ್ಲಿ ನಿರತವಾಗಿದೆ. ಮುಂದೆ ಆದಷ್ಟು ಬೇಗ ಸಿನಿಮಾ ಬರಹದ ಮೂಲಕ ತೆರೆಯ ಮೇಲೆ ಬರುವ ಸಿದ್ಧತೆಯಲ್ಲಿದೆ.&lt;/p&gt;&lt;img&gt;&lt;p&gt;ಬಹುತೇಕರಿಗೆ ಗೊತ್ತಿರುವಂತೆ, ರಿಷಬ್ ಶೆಟ್ಟಿ ಸುಮ್ಮನೇ ಸಮಯ ವ್ಯರ್ಥ ಮಾಡುವವರಲ್ಲ. ಜೈ ಹನುಮಾನ್ ಚಿತ್ರದಲ್ಲಿ ಅವರು ನಟನೆ ಮಾತ್ರ ಮಾಡುತ್ತಿರುವುದರಿಂದ ಉಳಿದ ಸಮಯದಲ್ಲಿ ಬೇರೆ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಕಂಟೆಂಟ್ ಇರುವ ಸಿನಿಮಾ ನಿರ್ಮಾಣ ಮಾಡುವ ಯೋಜನೆಯನ್ನು ಕೂಡ ಅವರು ಪ್ಲಾನ್ ಮಾಡುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.&lt;/p&gt;&lt;img&gt;&lt;p&gt;ಸಿನಿಮಾ ಹೊರತಾಗಿಯೂ ಕಲೆ, ಸಂಸ್ಕೃತಿಗೆ ಗೌರವ ಕೊಡುವ ರಿಷಬ್ ಶೆಟ್ಟುಯವರು ಇತ್ತೀಚೆಗೆ ಊರಿನಲ್ಲಿ ಯಕ್ಷಗಾನ, ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅದರಲ್ಲಿ ಅವರ ಮಗ ರಣ್ವಿತ್ ಶೆಟ್ಟಿ ಯಕ್ಷಗಾನದಲ್ಲಿ ಪಾತ್ರ ಮಾಡುವ ಮೂಲಕ ಮೊಟ್ಟಮೊದಲ ಬಾರಿಗೆ ಬಣ್ಣ ಹಚ್ಚಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;ರಿಷಬ್ ಶೆಟ್ಟಿಯವರು ದತ್ತು ಪಡೆದಿರುವ ಸರ್ಕಾರಿ ಶಾಲೆಯ ಉನ್ನತಿ ಕಡೆಗೂ ಅವರು ಗಮನ ಹರಿಸಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತರಾಗಿಲ್ಲ. ಅವರ ಸೀಮಾವಲಯ ವಿಸ್ತಾರವಾಗಿದೆ. ಹಾಗೆ ವಿಸ್ತಾರಗೊಂಡ ವ್ಯಕ್ತಿಗಳು ಬೇರಿನ ಕುರಿತು ಆಲೋಚಿಸುವುದು ಬಹಳ ಅಪರೂಪ. ರಿಷಬ್ ಮಾತ್ರ ಕನ್ನಡತನವನ್ನು ಉಸಿರಾಡುತ್ತಿರುವುದು, ಸಂಸ್ಕೃತಿಗೆ ನಿಷ್ಠರಾಗಿರುವುದು ಅವರ ಹೆಗ್ಗಳಿಕೆ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/sandalwood/sandalwood-actor-and-director-rishab-shetty-birthday-celebration-to-know-here-qssrsmv"/>
        </item>
        <item>
            <title><![CDATA[OTT Releases This Month: ಲವ್‌ಸ್ಟೋರಿ, ಸಸ್ಪೆನ್ಸ್‌, ಫೀಲ್‌ ಗುಡ್‌ ಸಿನಿಮಾಗಳಿವು.. ವೀಕ್ಷಕರಿಗಂತೂ ಹಬ್ಬ..!]]></title>
            <link>https://kannada.asianetnews.com/gallery/sandalwood/ott-netflix-movie-release-this-month-july-2026-top-web-series-ux8uoho</link>
            <guid isPermaLink="true">https://kannada.asianetnews.com/gallery/sandalwood/ott-netflix-movie-release-this-month-july-2026-top-web-series-ux8uoho</guid>
            <pubDate>Tue, 07 Jul 2026 15:02:14 +0530</pubDate>
            <description><![CDATA[&lt;p&gt;Top 10 Netflix movies 2026: ಜುಲೈ ತಿಂಗಳಿನಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್&zwnj; ಆಗಿವೆ. ಲವ್&zwnj;ಸ್ಟೋರಿ, ಸಸ್ಪೆನ್ಸ್&zwnj; ಥ್ರಿಲ್ಲರ್&zwnj;, ಡ್ರಾಮಾ, ಆಕ್ಷನ್&zwnj; ಸಿನಿಮಾಗಳು ಪ್ರಸಾರ ಆಗಿವೆ. ಹಾಗಾದರೆ ಯಾವ ಸಿನಿಮಾಗಳು ರಿಲೀಸ್&zwnj; ಆಗಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxybnv4y0b1b5patt4zs37e,imgname-new-project---2026-07-07t144420.163-1783416346468.jpg" type="image/jpeg" height="390" width="690"/>
            <content:encoded><![CDATA[&lt;p&gt;Top 10 Netflix movies 2026: ಜುಲೈ ತಿಂಗಳಿನಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್&zwnj; ಆಗಿವೆ. ಲವ್&zwnj;ಸ್ಟೋರಿ, ಸಸ್ಪೆನ್ಸ್&zwnj; ಥ್ರಿಲ್ಲರ್&zwnj;, ಡ್ರಾಮಾ, ಆಕ್ಷನ್&zwnj; ಸಿನಿಮಾಗಳು ಪ್ರಸಾರ ಆಗಿವೆ. ಹಾಗಾದರೆ ಯಾವ ಸಿನಿಮಾಗಳು ರಿಲೀಸ್&zwnj; ಆಗಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;img&gt;&lt;p&gt;ತಮಿಳು ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ.&lt;/p&gt;&lt;p&gt;&quot;ಆ್ಯಕ್ಷನ್ ಕಿಂಗ್&quot; ಅರ್ಜುನ್ ಸರ್ಜಾ, ಅಭಿರಾಮಿ ಮತ್ತು ಪ್ರೀತಿ ಮುಕುಂದನ್.&lt;/p&gt;&lt;p&gt;ಮಾರ್ಷಲ್ ಆರ್ಟ್ಸ್ ಪರಿಣಿತ ಮಧ್ಯಮ ವರ್ಗದ ಕುಟುಂಬವೊಂದು ಕ್ರೂರ ಕಾರ್ಪೊರೇಟ್ ಮಾಫಿಯಾ ಎದುರು ನಡೆಸುವ ಹೋರಾಟ. ಮಹಿಳಾ ಪಾತ್ರಗಳ ರೋಮಾಂಚಕ ಸಾಹಸ ದೃಶ್ಯಗಳು ಇದರ ಹೈಲೈಟ್.&lt;/p&gt;&lt;img&gt;&lt;p&gt;ನೆಟ್&zwnj;ಫ್ಲಿಕ್ಸ್&zwnj;ನ ಜನಪ್ರಿಯ ಲೈವ್-ಆ್ಯಕ್ಷನ್ ಫ್ಯಾಂಟಸಿ ಸರಣಿ. ಮುಖ್ಯ ಪಾತ್ರಧಾರಿ 'ಆಂಗ್' ತನ್ನ ಸ್ನೇಹಿತರೊಂದಿಗೆ ಸೇರಿ ಮಣ್ಣಿನ ತತ್ವವನ್ನು (Earthbending) ಕರಗತ ಮಾಡಿಕೊಳ್ಳಲು ಸಾಗುವ ರೋಮಾಂಚಕ ಸಾಹಸದ ಪ್ರಯಾಣ.&lt;/p&gt;&lt;img&gt;&lt;p&gt;ಬಾಲಿವುಡ್ ಮಾಸ್ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ. ಸನ್ನಿ ಡಿಯೋಲ್ ಈ ಸಿನಿಮಾ ಹೀರೋ. ಸನ್ನಿ ಡಿಯೋಲ್ ಅವರು ಅತ್ಯಂತ ಸ್ಟೈಲಿಶ್ ಹಾಗೂ ಪವರ್&zwnj;ಫುಲ್ ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಂತರರಾಷ್ಟ್ರೀಯ ಪ್ರೇಮಕಥೆಯ ಸಿನಿಮಾ ಇದು. ಜೀವನದ ಕಠಿಣ ಪರಿಸ್ಥಿತಿಯಲ್ಲಿ ಭೇಟಿಯಾಗುವ ಇಬ್ಬರು ವ್ಯಕ್ತಿಗಳ ನಡುವಿನ ಒಂಟಿತನ, ಪ್ರೀತಿ ಮತ್ತು ಭಾವನಾತ್ಮಕ ಬಂಧದ ಹುಡುಕಾಟ.&lt;/p&gt;&lt;img&gt;&lt;p&gt;ಬಾಲಿವುಡ್ ರೋಮ್ಯಾಂಟಿಕ್ ಡ್ರಾಮಾ ಸಿನಿಮಾ. ವಿಕ್ರಾಂತ್ ಮಾಸ್ಸಿ ಈ ಸಿನಿಮಾದ ಹೀರೋ. ಒಂದು ಸುಂದರ ಕೆಫೆಯ ಹಿನ್ನೆಲೆಯಲ್ಲಿ ಇಂದಿನ ಯುವ ಪೀಳಿಗೆಯ ಪ್ರೀತಿ, ಸಂಬಂಧಗಳು ಮತ್ತು ಜೀವನದ ಪ್ರಯಾಣದ ಅನ್ವೇಷಣೆ.&lt;/p&gt;&lt;img&gt;&lt;p&gt;ಭಾರಿ ಬಜೆಟ್&zwnj;ನ ಪ್ಯಾನ್-ಇಂಡಿಯಾ ಆ್ಯಕ್ಷನ್ ಸಿನಿಮಾ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ. ರಾಮ್ ಚರಣ್ ಅವರು ಹಿಂದೆಂದೂ ಕಾಣದ ರಗಡ್ 'ಪೈಲ್ವಾನ್' ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನೆಟ್&zwnj;ಫ್ಲಿಕ್ಸ್&zwnj;ನ ನೈಜ-ಅಪರಾಧ (True-crime) ಸಾಕ್ಷ್ಯಚಿತ್ರ ಸರಣಿ..ನೆರೆಹೊರೆಯವರ ನಡುವಿನ ಜಗಳ, ಕಿರುಕುಳ ಮತ್ತು ಆಸ್ತಿ ವಿವಾದಗಳು ಭೀಕರ ಹಿಂಸಾಚಾರವಾಗಿ ಬದಲಾದ ನೈಜ ಘಟನೆಗಳು. ಬದುಕುಳಿದವರ ಸಾಕ್ಷ್ಯಗಳು ಮತ್ತು ಪೊಲೀಸರ ಬಾಡಿಕಾಮ್ ದೃಶ್ಯಗಳ ಮೂಲಕ ಕಥೆ ಬಿಚ್ಚಿಡಲಾಗುತ್ತದೆ.&lt;/p&gt;]]></content:encoded>
            <category>sandalwood</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/sandalwood/ott-netflix-movie-release-this-month-july-2026-top-web-series-ux8uoho"/>
        </item>
    </channel>
</rss>
