<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 18 Apr 2026 19:09:07 +0530</lastBuildDate>
        <atom:link href="https://kannada.asianetnews.com/rss/sandalwood" rel="self" type="application/rss+xml"/>
        <item>
            <title><![CDATA[ದರ್ಶನ್ ಹಣ ಲಪಟಾಯಿಸಿದ್ದು ನಿಜಾನಾ? 8 ವರ್ಷದ ಬಳಿಕ, 'ಸೋತಿದ್ದೀನಿ, ಸತ್ತಿಲ್ಲ' ಅಂತ ಗುಡುಗಿದ್ಯಾಕೆ ಮಲ್ಲಿ?]]></title>
            <link>https://kannada.asianetnews.com/sandalwood/darshan-thoogudeepa-former-personal-assistant-mallikarjun-pressmeet-highlights-is-here-to-know/articleshow-0wgfy6y</link>
            <guid isPermaLink="true">https://kannada.asianetnews.com/sandalwood/darshan-thoogudeepa-former-personal-assistant-mallikarjun-pressmeet-highlights-is-here-to-know/articleshow-0wgfy6y</guid>
            <pubDate>Thu, 16 Apr 2026 12:52:26 +0530</pubDate>
            <description><![CDATA[&lt;p&gt;'ಪ್ರೇಮಬರಹ ಸಿನಿಮಾದಿಂದ ಅವ್ರ ನಡುವೆ ವೈಮನಸ್ಸು ಮೂಡಿದೆ ಅನ್ನೋದು ಗೊತ್ತಿಲ್ಲ.. ನಾನು ದರ್ಶನ್ ಸರ್ ಅವ್ರ ಒಂದು ರೂಪಾಯಿ ಖರ್ಚ್ ಮಾಡಿಲ್ಲ.. ನಾನು ಹಣ ದುರ್ಬಳಕೆ ಮಾಡಿದ್ದೀನಿ ಅಂತ ದರ್ಶನ್ ಸರ್ ಹೇಳಿಲ್ಲ.. ಯಾರ್ಯಾರೋ ಅಂತಹ ಸುಳ್ಳು ಸುದ್ದಿ ಹರಡಿಸಿದ್ರು..' ಎಂದಿರುವ &amp;nbsp;ಮಲ್ಲಿಕಾರ್ಜುನ್ ಇನ್ನೂ ಏನಂದ್ರು ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpajd0x2e4xkcvtxxmynv2gv,imgname-darshan-pa-mallikarjun-1776323822498.jpg" type="image/jpeg" height="390" width="690"/>
            <content:encoded><![CDATA[&lt;p&gt;ಬರೋಬ್ಬರಿ 8 ವರ್ಷ ಅಜ್ಞಾತವಾಸದಲ್ಲಿದ್ದ ಮಲ್ಲಿ, ಅಂದರೆ ನಟ ದರ್ಶನ್ ತೂಗುದೀಪ ಅವರ ಮಾಜಿ ಆಪ್ತ ಸಹಾಯಕ ಮಲ್ಲಿಕಾರ್ಜುನ್ (Mallikarjun) ಇಂದು ತಾವು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು? ಇಲ್ಲಿದೆ ನೋಡಿ..&lt;/p&gt;&lt;p&gt;ಹಲವರಿಗೆ ಸಾಲ ತೀರಿಸಬೇಕಿದ್ದ ಹಿನ್ನೆಲೆಯಲ್ಲಿ ಯಾವುದೋ ಮುನಿಸಿನಿಂದ ದಾಸನಿಂದ ಮಲ್ಲಿ ದೂರವಾಗಿದ್ದಾರೆ ಎಂಬ ಮಾತು ಓಡಾಡುತ್ತಿತ್ತು. ದರ್ಶನ್ ನೆರಳಿನಂತಿದ್ದ ಆಪ್ತ ಸಹಾಯಕ ಮಲ್ಲಿಕಾರ್ಜುನ್ ಅವರು ಇದ್ದಕ್ಕಿದ್ದಂತೆ ಬೆಂಗಳೂರು ಬಿಟ್ಟಿದ್ದರು.&lt;/p&gt;&lt;p&gt;'ನನ್ನಿಂದ ಎಷ್ಟೋ ಜನಕ್ಕೆ ನೋವಾಗಿದೆ, ಎಲ್ಲರಲ್ಲೂ ಕ್ಷಮೆ ಕೇಳ್ತೀನಿ, ಉದ್ದೇಶಪೂರ್ವಕವಾಗಿ ಯಾವುದನ್ನೂ ಮಾಡಿಲ್ಲ, ಎಲ್ಲಿ ಎಡವಿದೆ ಅಂತ ಗೊತ್ತಾಗಲಿಲ್ಲ, ವಿಧಿ ನನ್ ಹತ್ರ ಆಟವಾಡಿಬಿಡ್ತು' ಎಂದು ಮೊದಲಿಗೆ ಹೇಳಿದ್ದಾರೆ. ಬಳಿಕ ಮಲ್ಲಿ ಮಾತು ಕಂಟಿನ್ಯೂ ಮಾಡಿದ್ದಾರೆ.&lt;/p&gt;&lt;p&gt;'2000ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟೆ. ಮೊದಲ ಸಲ ಚಿತ್ರ ಕೈ ಹಿಡಿಲಿಲ್ಲ. ಲಾಸ್ ತುಂಬಾ ಆಗಿಬಿಡ್ತು. ಆದರೆ ಇವತ್ತಲ್ಲ ನಾಳೆ ಗೆಲ್ತಿನಿ ಅಂತಿದ್ದೆ.&lt;/p&gt;&lt;p&gt;ತೆಲುಗು ಸಿನಿಮಾಗಳು ನಷ್ಟ ಆಯ್ತು, ಬೆಂಗಳೂರು ಬಿಡುವಾಗ ಬರೀ ಕೈಯಲ್ಲಿ ಇದ್ದೆ, ಹೋಟೆಲ್ ವ್ಯವಹಾರ ಕೂಡ ಇತ್ತು, ಆಗ ಸ್ವಲ್ಪ ದುಡ್ಡು ಓಡಾಡ್ತಿತ್ತು.&lt;/p&gt;&lt;p&gt;ದಿನಕರ್ ಜೊತೆ ಕ್ಲೋಸ್ ಆಗಿದ್ದೆ. ತೂಗುದೀಪ ಪ್ರೊಡಕ್ಷನ್ಸ್ ನನ್ನ ಮಗನಂತೆ ನೋಡಿಕೊಂಡ್ರು. ದರ್ಶನ್ ನನ್ನ ಸ್ವಂತ ಅಣ್ಣನಂತೆ ಇದ್ರು. ಸಾಲ ಮಾಡಿಕೊಂಡು ಊರು ಬಿಟ್ಟೆ. ನನ್ನ ಹೆಂಡತಿ ಮುಗ್ಧೆ, ಅವಳಿಗೆ ಏನು ಗೊತ್ತಿರಲಿಲ್ಲ. 8 ಕೋಟಿಗೂ ಹೆಚ್ಚು ಸಾಲ ಮಾಡಿದ್ದೆ. ಸಾಯೋಕೆ ನನಗೆ ಧೈರ್ಯ ಇರಲಿಲ್ಲ. ಸಾಯಬೇಕು ಅಂತಿದ್ದಾಗ 1 ಫೋನ್ ಬಂತು. ನನ್ನ ತಮ್ಮನ ಮದುವೆ ಫಿಕ್ಸ್ ಆಗಿತ್ತು. ನನಗೆ ಶಾಕ್ ಆಗಿಬಿಡ್ತು. ಸಾಯೋ ಕಾರ್ಯಕ್ರಮ ಮುಂದಕ್ಕೆ ಹಾಕಿದೆ..' ಎಂದು ಹೇಳುತ್ತ ಹಳೆಯ ಕಷ್ಣದ ದಿನಗಳ ನೆನೆದು ಕಣ್ಣೀರಾಕಿದ್ದಾರೆ ಮಲ್ಲಿಕಾರ್ಜುನ್.&lt;/p&gt;&lt;p&gt;ಮಾತನ್ನಾಡುತ್ತ ಮಲ್ಲಿಕಾರ್ಜುನ್ ಅವರು- 'ನಾನು ಸ್ವಲ್ಪ ಹೆದರಿದ್ದೀನಿ, ಪ್ಲೀಸ್ ನನಗೆ ಕಂಫರ್ಟ್ ಜೋನ್ ಕ್ರಿಯೇಟ್ ಮಾಡಿ.. ಪ್ರೆಸ್ ಮೀಟ್ ಮಾಡೊಕು ನನ್ನ ಬಳಿ ಹಣ ಇರಲಿಲ್ಲ. ನಾನು ಸೋತಿರುವಂತ ವ್ಯಕ್ತಿ ನಾನು ಸತ್ತಿಲ್ಲ.. ದರ್ಶನ್ ಕೇಸ್ ನಲ್ಲೂ ನನ್ ಹೆಸರು ಬಂತು. ಅರ್ಜುನ್ ಸರ್ಜಾಗೆ 2 ಚೆಕ್ ಕೊಟ್ಟೆ. ಅದು ಬೌನ್ಸ್ ಆಗಿ ಸರ್ಚ್ ವಾರೆಂಟ್ ಬಂತು, ನಂಗೆ ಕಿವಿ ಅಪರೇಷನ್ ಆಯ್ತು.&lt;/p&gt;&lt;p&gt;ಬೆಂಗಳೂರಿಗೆ ಬಂದಮೇಲೆ ದಿನಕರ್ ಮೀಟ್ ಆದೆ.. ಆಮೇಲೆ ಆರೋಗ್ಯ ಕೆಟ್ಟು 7 ತಿಂಗಳು ಬೆಡ್ ರೆಸ್ಟ್ ನಲ್ಲಿದ್ದೆ.. ನಾನು 23-24 ಜನರಿಂದ ಹಣ ತೆಗೆದುಕೊಂಡಿದ್ದೇನೆ. ಎಲ್ಲರ ಮನೆಗೂ ಹೋದೆ ಮನವಿ ಮಾಡಿಕೊಂಡೆ. ನಾನು ಸೋತಿದ್ದೀನಿ ಸತ್ತಿಲ್ಲ ಅಂದೆ.. ಎಲ್ಲರೂ ಧೈರ್ಯ ಹೇಳಿ ಕಳಿಸಿದ್ರು..&lt;/p&gt;&lt;p&gt;ದರ್ಶನ್ ಸರ್ ಹೆಸರಲ್ಲಿ ಹಣ ತಗೋಂಡಿದ್ದೀನಿ ಅನ್ನೊದ ಒಂದು ಕಡೆ ಪ್ರೂವ್ ಮಾಡಿ.. ನಾನು ಹಣ ತಗೊಂಡ್ ಇದ್ರೆ ಹೇಳಿದ ಕೆಲಸ ಮಾಡ್ತಿನಿ.. ಅಂತೆ ಕಂತೆಗಳು ಬರೋದು ಸಹಜ... ನಾನು ಬೆಂಗಳೂರಿಗೆ ಬಂದ ತಕ್ಷಣ ದಿನಕರ್ ಅವ್ರನ್ನ ಭೇಟಿ ಮಾಡಿದೆ.. ನಾನು ಬೆಂಗಳೂರಿಗೆ ಬಂದಾಗ ದರ್ಶನ್ ಸರ್ ಬೇಲ್ ಮೇಲೆ&zwnj; ಹೊರಗೆ ಬಂದಿದ್ರು.. ದಿನಕರ್ ಜೊತೆ ನಡೆದ ಎಲ್ಲಾ ವಿಚಾರವನ್ನು ನಾನು ಹೇಳಿದೆ..&lt;/p&gt;&lt;p&gt;ಅದಕ್ಕೆ ದಿನಕರ್ ಸರ್- 'ಹೋಗ್ಲಿ ಬಿಡು ನಿನ್ನ ಪಾಡಿಗೆ ನೀನು ಇರು.. ಅಂದ್ರು. ನಾನು 'ದರ್ಶನ್ ಸರ್ ಭೇಟಿ ಮಾಡಬೇಕು' ಅಂತ ಹೇಳಿದೆ.. ದಿನಕರ್ ಅವರು 'ಸದ್ಯಕ್ಕೆ ಬೇಡ' ಅಂತ ನನಗೆ ಹೇಳಿದ್ರು.&lt;/p&gt;&lt;p&gt;ಸೆಲೆಬ್ರಿಟಿ ಇವೆಂಟ್ ಮೇನೇಜ್ಮೆಂಟ್ ಕಂಪನಿ ಮಾಡಬೇಕು ಅನ್ಕೊಂಡಿದ್ದೀನಿ. ದರ್ಶನ್ ಸರ್ ನನ್ನ ಬಹಳ ಚೆನ್ನಾಗಿ ನೋಡ್ಕೊಂಡಿದ್ದಾರೆ&lt;/p&gt;&lt;p&gt;ಅವ್ರು ಆದಷ್ಟು ಬೇಗ ನಿರಪರಾಧಿ ಅಂತ ಜೈಲಿಂದ ಹೊರಗೆ ಬರ್ಲಿ..&lt;/p&gt;&lt;p&gt;ದರ್ಶನ್ ಸರ್ ಮತ್ತೆ ಕೆಲಸಕ್ಕೆ ಕರೆದ್ರೆ ನಾನು ಕೆಲಸ ಮಾಡ್ತಿನಿ. ಅಲ್ಲಿಂದ ಹೊರಟ ನಾನು ಇಡೀ ದೇಶ ಸುತ್ತಿದ್ದೀನಿ... ಎಲ್ಲರನ್ನು ಬಿಟ್ಟು 7ವರ್ಷ ಸುತ್ತಿದ್ದೀನಿ.. ಈ ಏಳು ವರ್ಷ ನನಗೆ ಸಾಡೆ ಸಾತ್ ಇತ್ತು.. ನಂತ್ರ ನಾನು ನೇಪಾಳಕ್ಕೆ ಹೋಗಿ ನನ್ನ ಸ್ನೇಹಿತನ ಮನೆಯಲ್ಲಿ ಜಾಗ ಪಡೆದುಕೊಂಡೆ. ಆ ನಂತ್ರ ನನಗೆ ಪಶ್ಚಾತ್ತಾಪ ಕಾಡತೊಡಗಿತು.. ಮತ್ತೆ ಫ್ಯಾಮಿಲಿ ಜೊತೆ ಹೋಗಬೇಕು ಅನಿಸ್ತು.. ನನ್ನ ತಂದೆ ಸತ್ತಾಗಲೂ ನನಗೆ ಹೋಗಲು ಆಗಲಿಲ್ಲ.. ನನ್ನ ತಾಯಿ ಸತ್ತಾಗಲೂ ನಾನು ಅವರಿಗೆ ಹಿಡಿ ಮಣ್ಣಾಕಲು ಸಾಧ್ಯವಾಗಲಿಲ್ಲ.&lt;/p&gt;&lt;p&gt;ಇದರಿಂದ ನಾನಗೆ ಬೇಸರ ಆಯ್ತು.. ಇದೇ ವೇಳೆ ದರ್ಶನ್ ಅವರ ಕೊಲೆ ವಿಚಾರ ನಡೆದಿತ್ತು.. ಅದರಲ್ಲೂ ನನ್ನ ಹೆಸರು ಉಲ್ಲೇಖ ಆಗಿತ್ತು. ಆ ನಂತ್ರ ಪ್ರೇಮಬರಹ ಸಿನಿಮಾ&zwnj; ವಿಚಾರದಲ್ಲಿ ನಾನು ಅರ್ಜುನ್ ಸರ್ಜಾ ಅವರಿಗೆ ಸೆಕ್ಯೂರಿಟಿ ಉದ್ದೇಶದಿಂದ ಕೊಟ್ಟಿದ್ದೆ.. ಆ ಚೆಕ್ ಬೌನ್ಸ್ ಆಗಿದ್ದರಿಂದ ನನ್ನ ಮೇಲೆ ಸರ್ಚ್ ವಾರೆಂಟ್ ಇಶ್ಯೂ ಮಾಡಿದ್ರು. ಅಗ ನಾನು ಬೇಲ್ ತಗೊಂಡು, ದಿನಕರ್ ಅವರನ್ನು ಭೇಟಿ ಮಾಡ್ದೆ.. ಆಗ ದರ್ಶನ್ ಅವರು ಬೇಲ್ ತಗೊಂಡು ಆಚೆ ಬಂದಿದ್ರು.. ಆದ್ರೆ ಭೇಟಿ ಆಗಲಿಲ್ಲ..&lt;/p&gt;&lt;p&gt;ನಾನು ಸಾಲ ಕೊಡಬೇಕಿದ್ದ ಎಲ್ಲರನ್ನೂ ಭೇಟಿ ಆಗಿದ್ದೇನೆ.. ಎಲ್ಲರೂ ನನಗೆ ನಿಮ್ಮ ಹತ್ರ ಇದ್ದಾಗ ಕೊಡಿ ಅಂತ ಹೇಳಿದ್ದಾರೆ. ದರ್ಶನ್ ಅವರ ಐರಾವತ ಸಿನಿಮಾ ಶೂಟಿಂಗ್ ವೇಳೆ ಒಂದು ಕೋಟಿ ಸಾಲ ಕೊಟ್ಟ ನನಗೆ ಸಹಾಯ ಮಾಡಿದ್ರು. ದರ್ಶನ್ ಸರ್ ಗೂ ನನ್ನ ಸಾಲಕ್ಮೂ ಯಾವುದೇ ಸಂಬಂಧ ಇಲ್ಲ.. ದರ್ಶನ್ ಹಾಗೂ ಧ್ರು ಸರ್ಜಾ ಅವರ ಜಗಳ ನನಗೇ ಗೊತ್ತಿಲ್ಲ&lt;/p&gt;&lt;p&gt;'ದರ್ಶನ್ ಅವರು ಹೇಳಿದ್ದಕ್ಕೆ ನಾನು ಪ್ರೇಮ ಬರಹ ಸಿನಿಮಾವನ್ನು ಡಿಸ್ಟ್ರಿಬ್ಯೂಟ್ ಮಾಡಿದ್ದೇನೆ. ಆ&zwnj; ಸಿನಿಮಾಗೆ ಸುಮಾರು ಒಂದೂವರೆ ಕೋಟಿ ಖರ್ಚು ಮಾಡಿದ್ದೆ.. ಕಲೆಕ್ಷನ್ ಆಗಿದ್ದು ಒಂದೂವರೆ ಕೋಟಿ. ನನ್ನ ಎಲ್ಲಾ ಖರ್ಚು ಕಳೆದು 48 ಲಕ್ಷ ಕೊಡಬೇಕಿತ್ತು.. ನಾನು ಕೊಡಬೇಕಿದ್ದ ಹಣದಲ್ಲಿ ಒಂದು ಲಕ್ಷ ಲೆಕ್ಕ ಹೆಚ್ಚು ಕಡಿಮೆ ಆಯ್ತು. ಆಗ ಅರ್ಜುನ್ ಸರ್ಜಾ ಈ ವಿಚಾರವನ್ನು ದರ್ಶನ್ ವರಿಗೆ ಹೇಳ್ತೀನಿ ಅಂದಾಗ ನಾನು ಮತ್ತೆ ಲೆಕ್ಕಹಾಕಿ 5 ಲಕ್ಷ ಕೊಡಬೇಕಾಗಿ ಬಂತು. ನಾನು ದರ್ಶನ್ ಅವರ ಹೆಸರೇಳಿ ಯಾವುದೇ ಹಣ ಸಂಗ್ರಹಿಸಿಲ್ಲ.. ಆ ರೀತಿ ಮಾಡಿದ್ರೆ ಅದನ್ನ ಪ್ರೂವ್ ಮಾಡಿ..&lt;/p&gt;&lt;p&gt;ದರ್ಶನ್ ಸರ್ ಮತ್ತು ಧ್ರುವ ಅವ್ರ ನಡುವೆ ಮನಸ್ತಾಪದ ಬಗ್ಗೆ ನನಗೆ ಗೊತ್ತಿಲ್ಲ.. ನಾ&zwnj;ನು ಊರು ಬಿಡುವ ಮುಂಚೆ ದರ್ಶನ್ ಸರ್ ಧ್ರುವ ಅವ್ರು ತುಂಬಾ ಚೆನ್ನಾಗಿದ್ರು.. ಅದ್ರೆ ಈಗ ಅವ್ರ ಬಾಂದವ್ಯ ಹೇಗಿದೆ ಗೊತ್ತಿಲ್ಲ&lt;/p&gt;&lt;p&gt;ಪ್ರೇಮಬರಹ ಸಿನಿಮಾದಿಂದ ಅವ್ರ ನಡುವೆ ವೈಮನಸ್ಸು ಮೂಡಿದೆ ಅನ್ನೋದು ಗೊತ್ತಿಲ್ಲ.. ನಾನು ದರ್ಶನ್ ಸರ್ ಅವ್ರ ಒಂದು ರೂಪಾಯಿ ಖರ್ಚ್ ಮಾಡಿಲ್ಲ.. ನಾನು ಹಣ ದುರ್ಬಳಕೆ ಮಾಡಿದ್ದೀನಿ ಅಂತ ದರ್ಶನ್ ಸರ್ ಹೇಳಿಲ್ಲ.. ಯಾರ್ಯಾರೋ ಅಂತಹ ಸುಳ್ಳು ಸುದ್ದಿ ಹರಡಿಸಿದ್ರು.. ನಾನು ಈಗಲೂ ದೇವರ ಮುಂದೆ ನನಗೆ ನನ್ನ ಮಗನಿಗೆ ಬೇಡಲ್ಲ, ಅದ್ರೆ ದರ್ಶನ್, ದಿನಕರ್ ಬಗ್ಗೆ ಬೇಡಿ ಕೊಳ್ತೀನಿ, ದರ್ಶನ್ ಸರ್&zwnj;ಗೆ ಒಳ್ಳೆದಾಗಲಿ, ಅದಷ್ಟು ಹೊರಗೆ ಬರಲಿ' ಎಂದಿದ್ದಾರೆ. ಮಾತಿನ ಮಧ್ಯೆ ಸಾಕಷ್ಟು ಅಳು, ಪಶ್ಚಾತ್ತಾಪ ಅವರನ್ನು ಕಾಡಿದೆ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/darshan-thoogudeepa-former-personal-assistant-mallikarjun-pressmeet-highlights-is-here-to-know/articleshow-0wgfy6y"/>
        </item>
        <item>
            <title><![CDATA[ಕೂಲಿ ಕೆಲ್ಸ ಮಾಡಿದ್ದೆ, ಜೈಲೂ ಸೇರಿದೆ: Amruthadhaare ನಟ ರಾಣವ್​ ಬದುಕಿನ ಯಾರೂ ತಿಳಿಯದ ಸತ್ಯ]]></title>
            <link>https://kannada.asianetnews.com/gallery/tv-talk/amruthadhaare-jaidev-urf-ranav-gowda-about-his-early-life-struggle-and-jail-experience-suc-4p340t0</link>
            <guid isPermaLink="true">https://kannada.asianetnews.com/gallery/tv-talk/amruthadhaare-jaidev-urf-ranav-gowda-about-his-early-life-struggle-and-jail-experience-suc-4p340t0</guid>
            <pubDate>Fri, 17 Apr 2026 12:15:06 +0530</pubDate>
            <description><![CDATA[&lt;p&gt;ಅಮೃತಧಾರೆ ಸೀರಿಯಲ್ ಖ್ಯಾತಿಯ ನಟ ಜೈದೇವ್ ಅಲಿಯಾಸ್ ರಾಣವ್ ಗೌಡ, ಸಹನಟಿ ರಾಧಾ ಭಗವತಿ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ನಟನಾ ಪಯಣದ ಹಿಂದಿನ ಕಷ್ಟಹಂಚಿಕೊಂಡಿದ್ದು, ಕೂಲಿ ಕೆಲಸ ಮಾಡಿದ್ದರಿಂದ ಹಿಡಿದು ಜೈಲು ಸೇರಿದ್ದರ ಬಗ್ಗೆಯೂ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd2r7zd1dmtwbjt0c6zn3ps,imgname-amruthadhaare-ranav-gowda-1776408076269.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಸೀರಿಯಲ್ ಖ್ಯಾತಿಯ ನಟ ಜೈದೇವ್ ಅಲಿಯಾಸ್ ರಾಣವ್ ಗೌಡ, ಸಹನಟಿ ರಾಧಾ ಭಗವತಿ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ನಟನಾ ಪಯಣದ ಹಿಂದಿನ ಕಷ್ಟಹಂಚಿಕೊಂಡಿದ್ದು, ಕೂಲಿ ಕೆಲಸ ಮಾಡಿದ್ದರಿಂದ ಹಿಡಿದು ಜೈಲು ಸೇರಿದ್ದರ ಬಗ್ಗೆಯೂ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare Serial) ಜೈದೇವ್​ ಉರ್ಫ್​ ರಾಣವ್​ ಗೌಡ ಅವರು ಇದೀಗ ಇದೇ ಸೀರಿಯಲ್​ ಹಳೆಯ ಮಲ್ಲಿ ಅರ್ಥಾತ್​ ಭಾರ್ಗವಿ ಎಲ್​ಎಲ್​ಬಿ ನಟಿ ರಾಧಾ ಭಗವತಿ ಅವರ ಜೊತೆ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ಈ ವರ್ಷವೇ ತಮ್ಮ ಮದುವೆ ಎಂದು ಎಂಗೇಜ್​ಮೆಂಟ್​ ಆಗಿರೋ ಈ ಜೋಡಿ ಘೋಷಿಸಿದೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ಇದೀಗ ನಟ ರಾಣವ್​ ಅವರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ಪರಿಯ ಸಕ್ಸಸ್​ ನಟನಾಗಿ ಬರಲು ತಾವು ಪಟ್ಟಿರುವ ಕಷ್ಟಗಳ ದಿನಗಳನ್ನು ನಟ ನೆನೆದಿದ್ದಾರೆ. ಚಂದನ್​ ಕೆ.ಶೆಟ್ಟಿ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಎಂಜಿನಿಯರಿಂಗ್​ ಅರ್ಧಂದರ್ಧ ಕಲಿತ ಮೇಲೆ ಜೀವನದಲ್ಲಿ ಸಾಕಷ್ಟು ಅಪ್ಸ್ ಅಂಡ್ ಡೌನ್ಸ್ ಆಯ್ತು. ಸಿಮೆಂಟ್ ಕೆಲಸ, ಕೂಲಿ ಕೆಲಸನೂ ಮಾಡಬೇಕಾಯ್ತು. ಲೇಬರ್ ಆಗಿ ಐದಾರು ವರ್ಷ ದುಡಿದೆ. ದುಡ್ಡಿನ ವ್ಯಾಲ್ಯೂ ಗೊತ್ತಾಗ್ಲಿ ಅಂತಾನೆ ನಮ್ಮ ತಂದೆ ಇಂಥ ಸ್ಟೆಪ್​ ತೆಗೆದುಕೊಂಡಿದ್ರು. ಸೋ ನಾನು ಅದಕ್ಕೆ ಚಾಲೆಂಜಿಂಗ್ ಆಗಿ ನಾನು ಏನು ಕೊಡ್ತೀರೋ ಕೊಡಿ ಅದು ಏನು ಮಾಡ್ಬೇಕೋ ಹೇಳಿ ಮಾಡ್ತೀನಿ ಅಂತ ನಾನು ರೆಡಿ ಆಗಿದ್ದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅದಾದ ಬಳಿಕ ಬಿಸಿನೆಸ್​ಗೆ ಕೈ ಹಾಕಿದೆ. ಅದು ಲಾಸ್ ಆಯ್ತು. ಸಿಮೆಂಟ್ ಬಿಸಿನೆಸ್ ಆಗಿತ್ತು ಅದು, ಆರು ತಿಂಗಳು ಚೆನ್ನಾಗಿಯೇ ನಡೆಯಿತು. ಕಮಿಟ್ಮೆಂಟ್ ಜಾಸ್ತಿ ಇತ್ತು. ಸೋ ಎಲ್ಲಾನು ಬಿಟ್ಟುಬಿಟ್ಟೆ ಎಂದಿದ್ದಾರೆ ರಾಣವ್​.&lt;/p&gt;&lt;img&gt;&lt;p&gt;ಆದರೆ ಆ ಸಂದರ್ಭದಲ್ಲಿ ಕಾವೇರಿ ಗಲಾಟೆ ನಡೆಯುತ್ತಿತ್ತು. ಅಲ್ಲಿಗೆ ಹೋಗಿ ಸೆಂಟ್ರಲ್​ ಜೈಲು ಸೇರುವ ಸ್ಥಿತಿ ಬಂತು. ಅಲ್ಲೆಲ್ಲ ಹೋಗಿ ಇದ್ದು ಬಂದದ್ದು ಸುಮಾರು ಜನಕ್ಕೆ ಗೊತ್ತಿಲ್ಲ ಬಿಡಿ. ಆ ಸಮಯದಲ್ಲಿ ತುಲಾ ರಾಶಿಗೆ ಸಾಡೇಸಾತಿ ನಡೆಯುತ್ತಿತ್ತು. ನನ್ನ ಅಮ್ಮ ನನ್ನನ್ನು ಎಚ್ಚರಿಸುತ್ತಲೇ ಇದ್ದರು. ಆದರೆ ಅವೆಲ್ಲಾ ಏನೂ ಇಲ್ಲಮ್ಮ, ಸುಮ್​ಸುಮ್ನೆ ನಂಬಬೇಡ ಎಂದಿದ್ದೆ. ಆಮೇಲೆ ಗೊತ್ತಾಯ್ತು, ಜೈಲಿಗೆ ಸೇರಬೇಕಾಯ್ತು ಎಂದಿದ್ದಾರೆ ನಟ.&lt;/p&gt;&lt;img&gt;&lt;p&gt;ಎಲ್ಲಾ ಆದ ಮೇಲೆ ಒಂದು ಫೈನ್ ಡೇ ಡಿಸೈಡ್ ಮಾಡಿದೆ. ನನ್ನ ಬಣ್ಣದ ಬದುಕಿನ ಆಸೆ ಏನಿದೆ ಅದನ್ನು ಈಡೇರಿಸಿಕೊಳ್ಳೋಣ ಎಂದು. ಇಂಡಸ್ಟ್ರಿಗೆ ಹೋಗೋಣ ಅಂತ ಅಂದ್ಬಿಟ್ಟು ಒಂದು ದಿನ ಡಿಸೈಡ್ ಮಾಡಿದೆ. ನಂತರದ ಪಯಣವೂ ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಪ್ರಯತ್ನದ ಬಳಿಕ ಅಂತೂ ನನ್ನ ಆಸೆ ಈಡೇರಿದೆ. ಈಗ ಇಲ್ಲಿಯೇ ಮುಂದುವರೆದಿದ್ದೇನೆ ಎಂದಿದ್ದಾರೆ ನಟ.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-jaidev-urf-ranav-gowda-about-his-early-life-struggle-and-jail-experience-suc-4p340t0"/>
        </item>
        <item>
            <title><![CDATA[ರೈಟರ್ಸ್ ರೂಮ್- ಅಂದ್ರೇನದು ಥೋಥೋ ಛೇಛೇ: ಕಥೆಗಳಿಲ್ಲವೇ ಅಥವಾ ಅವಕಾಶಗಳಿಲ್ಲವೇ?]]></title>
            <link>https://kannada.asianetnews.com/sandalwood/kannada-film-industry-writers-importance-problem-analysis-gvd/articleshow-7633wqq</link>
            <guid isPermaLink="true">https://kannada.asianetnews.com/sandalwood/kannada-film-industry-writers-importance-problem-analysis-gvd/articleshow-7633wqq</guid>
            <pubDate>Fri, 17 Apr 2026 16:35:11 +0530</pubDate>
            <description><![CDATA[&lt;p&gt;ಒಂದು ಸಂಜೆ ಹೊತ್ತು ಕಿರುತೆರೆಯಲ್ಲಿರುವವರೊಬ್ಬರು ಮಾತನಾಡುತ್ತಿದ್ದರು. ಚಿತ್ರರಂಗ, ಕನ್ನಡ ವೆಬ್&zwnj; ಸೀರೀಸ್&zwnj;ಗಳ ಕುರಿತು ಮಾತುಕತೆ ಆಗುತ್ತಿತ್ತು. ಕನ್ನಡ ಚಿತ್ರರಂಗದ ಕುರಿತು ಥೋಥೋ ಛೇಛೇ ನಡೆಯುತ್ತಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdhv3pnzaggjrt4ms8jdqty,imgname-jvkk-1776423898837.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಇಂಟ್ರೋವರ್ಟ್&zwnj; ರಿಪೋರ್ಟರ್&zwnj;&lt;/strong&gt;&lt;/p&gt;&lt;p&gt;&lsquo;ಕನ್ನಡದಲ್ಲಿ ರೈಟರ್ಸೇ ಇಲ್ಲ, ಮುಂಬೈನಲ್ಲಿ ಭಯಂಕರ ರೈಟರ್&zwnj;ಗಳಿದ್ದಾರೆ&rsquo;.- ಒಂದು ಸಂಜೆ ಹೊತ್ತು ಕಿರುತೆರೆಯಲ್ಲಿರುವವರೊಬ್ಬರು ಮಾತನಾಡುತ್ತಿದ್ದರು. ಚಿತ್ರರಂಗ, ಕನ್ನಡ ವೆಬ್&zwnj; ಸೀರೀಸ್&zwnj;ಗಳ ಕುರಿತು ಮಾತುಕತೆ ಆಗುತ್ತಿತ್ತು. ಕನ್ನಡ ಚಿತ್ರರಂಗದ ಕುರಿತು ಥೋಥೋ ಛೇಛೇ ನಡೆಯುತ್ತಿತ್ತು. ಮತ್ತದೇ ಗೋಳುಗಳಿಗೆ, ಅದದೇ ತುಕ್ಕು ಹಿಡಿದ ಲಾಂಗುಗಳಿಗೆ ನಾಲ್ಕು ಹನಿ ಕಣ್ಣೀರು ಹಾಕಲಾಯಿತು. ಕೊನೆಗೂ ಅವರಾಡಿದ ಒಂದು ಮಾತು ಕಾಡಲು ಶುರುವಾಯಿತು. ನಮ್ಮಲ್ಲಿ ಬರಹಗಾರರಿಲ್ಲವೇ?&lt;/p&gt;&lt;p&gt;ಕೆಲವು ತಿಂಗಳ ಹಿಂದಿನ ಘಟನೆ ನೆನಪಾಯಿತು. ಒಬ್ಬ ಬರಹಗಾರರನ್ನು ಒಬ್ಬ ನಿರ್ದೇಶಕರು ಸಂಪರ್ಕಿಸಿದರು. ಬರಹಗಾರರು ಹೋಗಿ ನಾಲ್ಕು ದಿನ ಚರ್ಚೆಯಲ್ಲಿ ಪಾಲ್ಗೊಂಡರು. ಬರಹಗಾರರು ನೇರವಾಗಿ, ದಿಟ್ಟವಾಗಿ ನಾಲ್ಕು ಉಲ್ಟಾ ಪ್ರಶ್ನೆಗಳನ್ನು ಎಸೆದರು. ಆ ಪ್ರಶ್ನೆಗಳು ಭಾರಿ ಆದುವು. ಮುಂದಿನ ಚರ್ಚೆಗೆ ಕರೆ ಬರಲಿಲ್ಲ. ಆ ಸಿನಿಮಾ ಬಿಡುಗಡೆ ಆದ ದಿನ ಬರಹಗಾರರು ಆ ನಾಲ್ಕು ಪ್ರಶ್ನೆಗಳನ್ನು ಕನಿಷ್ಠ ನಿರ್ಮಾಪಕರಾದರೂ ಕೇಳಿಸಿಕೊಳ್ಳಬೇಕಿತ್ತು ಎಂದು ನೊಂದುಕೊಂಡು ಹೋದರು. ಆ ನಿರ್ಮಾಪಕರು ಮತ್ತೆ ಸಿನಿಮಾ ಮಾಡುವ ಶಕ್ತಿಯನ್ನು ಉಳಿಸಿಕೊಂಡಿಲ್ಲ.&lt;/p&gt;&lt;h2&gt;&lt;strong&gt;ಇದು ಪರಿಸ್ಥಿತಿ.&lt;/strong&gt;&lt;/h2&gt;&lt;p&gt;1. ದೇಶ ಕಂಡ ಶ್ರೇಷ್ಠ ನಿರ್ದೇಶಕ ಎಸ್&zwnj;.ಎಸ್&zwnj;. ರಾಜಮೌಳಿಯವರ ಸಿನಿಮಾಗಳ ಕತೆ ಬರೆಯುವುದು ಅವರ ತಂದೆ ವಿಜಯೇಂದ್ರ ಪ್ರಸಾದ್&zwnj;. ಅವರದೇ ಆದ ಒಂದು ಬರಹಗಾರರ ತಂಡ ಇಟ್ಟುಕೊಂಡಿದ್ದಾರೆ. ಅಲ್ಲಿ ದೃಶ್ಯಗಳನ್ನೆಲ್ಲಾ ನಿರೂಪಿಸಿದ ಬಳಿಕವೇ ಅವರು ಸಿನಿಮಾ ಮಾಡುವುದು.&lt;/p&gt;&lt;p&gt;2. ಪುಷ್ಪ ನಿರ್ದೇಶಕ ಸುಕುಮಾರ್&zwnj; ಅವರ ಬರಹಗಾರರ ತಂಡದ ಹೆಸರೇ ಸುಕುಮಾರ್&zwnj; ರೈಟಿಂಗ್ಸ್&zwnj;.&lt;/p&gt;&lt;p&gt;3. ಕ್ರಿಸ್ಟೋಫರ್&zwnj; ನೋಲಾನ್&zwnj; ತನ್ನ ಸಹೋದರ ಜೊನಾಥನ್ ನೋಲನ್&zwnj; ಜೊತೆ ಸೇರಿ ಬರೆಯುತ್ತಾರೆ.&lt;/p&gt;&lt;p&gt;4. ಓಟಿಟಿಗಳ ಬಹುತೇಕ ಸೀರೀಸ್&zwnj;ಗಳು ರೈಟರ್ಸ್&zwnj; ರೂಮ್&zwnj;ನಲ್ಲಿ ತಯಾರಾಗುತ್ತವೆ. &lsquo;ಫ್ಯಾಮಿಲ್ ಮ್ಯಾನ್&zwnj;&rsquo; ಖ್ಯಾತಿಯ ರಾಜ್&zwnj; ಮತ್ತು ಡಿಕೆಯ ರೈಟರ್&zwnj;ಗಳ ತಂಡವೇ ಇದೆ.&lt;/p&gt;&lt;p&gt;5. ಮಲಯಾಳಂ ಸಿನಿಮಾಗಳ ಕ್ರೆಡಿಟ್&zwnj; ಲಿಸ್ಟ್&zwnj; ನೋಡಿದರೆ ಅದರ ನಿರ್ದೇಶಕರೇ ಬೇರೆ, ಬರಹಗಾರರೇ ಬೇರೆ.&lt;/p&gt;&lt;p&gt;ಲೆಕ್ಕ ಹಾಕುತ್ತಾ ಹೋದರೆ ಇಂಥಾ ಸಾಕಷ್ಟು ಮಾಹಿತಿ ಸಿಗುತ್ತವೆ. ನಮ್ಮಲ್ಲೂ ನಾಲ್ಕೈದು ಜನ ಕೂತು ಚರ್ಚೆ ನಡೆಸುವ ಕ್ರಮ ಇಲ್ಲ ಅಂತಲ್ಲ. ಅವರಲ್ಲಿ ಎಷ್ಟು ಜನ ಬರಹಗಾರರಿದ್ದಾರೆ ಮತ್ತು ಅವರನ್ನು ಎಷ್ಟು ಪ್ರೊಫೆಷನಲ್&zwnj; ಆಗಿ ದುಡಿಸಿಕೊಳ್ಳಲಾಗುತ್ತದೆ ಎಂದು ನೋಡಿದರೆ ಮತ್ತೆ ಥೋಥೋ ಛೇಛೇ ಅನ್ನಬೇಕಾಗುತ್ತದೆ. ಒಮ್ಮೆ ಯೋಚಿಸಿ ನೋಡಿ, ಕನ್ನಡದಲ್ಲಿ ಯಾವ ನಿರ್ದೇಶಕರು ರೈಟರ್ಸ್&zwnj; ರೂಮ್&zwnj; ಇಟ್ಟುಕೊಂಡಿದ್ದಾರೆ? ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು ಮತ್ತಿತರರು ಎಷ್ಟು ರೈಟರ್&zwnj;ಗಳನ್ನು ವೃತ್ತಿಪರವಾಗಿ ನಡೆಸಿಕೊಂಡು ಬೆಳೆಸಿದ್ದಾರೆ?&lt;/p&gt;&lt;p&gt;ಉತ್ತರವಾಗಿ ಎರಡು ಹನಿ ಕಣ್ಣೀರು. ಸ್ಟಾರ್&zwnj;ಗಳು ತಮ್ಮದೇ ಆದ ಕತೆ ಹೆಣೆಯುತ್ತಾರೆ, ನಿರ್ದೇಶಕರು ತಾವು ಮಾಡಿದ್ದೇ ಕತೆ ಎಂದುಕೊಂಡಿರುತ್ತಾರೆ, ನಿರ್ಮಾಪಕರು ಸ್ಟಾರ್&zwnj;ಗಳೇ ಸರಿ- ನಿರ್ದೇಶಕರೇ ಸರಿ ಎಂಬ ಭಾವನೆಯಲ್ಲಿರುತ್ತಾರೆ. ಇಗೋ ಜಗತ್ತನ್ನೇ ಆಳುತ್ತದೆ. ಅದಕ್ಕೆ ಕನ್ನಡ ಮನರಂಜನಾ ಕ್ಷೇತ್ರಕ್ಕೆ ಬರಹಗಾರರ ಕೊರತೆ ಕಾಣುತ್ತಿದೆ.&lt;/p&gt;&lt;p&gt;ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ನೋಡುವವರಿಗೆ ಉಳಿದ ಬರಹಗಳೆಲ್ಲಾ ಕುಬ್ಜವಾಗಿಯೇ ಕಾಣುತ್ತದೆ. ತಾನು ಮಾಡಿದ ನಿರ್ಧಾರದಿಂದ ಎರಡು ಗೆಲುವು ಸಿಕ್ಕರೆ ಆಗ ತಾನು ಹೇಳಿದ್ದೇ ಸತ್ಯವಾಗುತ್ತದೆ. ಅಲ್ಲಿಂದ ಆ ಸೀನು, ಇಲ್ಲಿಂದ ಈ ಕಾನ್ಸೆಪ್ಟು ಎತ್ತಿಕೊಳ್ರೋ, ನಮ್&zwnj; ಸ್ಟೈಲಲ್ಲಿ ಬದಲಾವಣೆ ಮಾಡಿಕೊಳ್ರೋ ಅನ್ನುವುದೇ ಕತೆಯಾಗುತ್ತದೆ. ಸ್ವಂತಿಕೆಗೆ ಬೆಲೆ ಸಿಕ್ಕದಾಗ ಸೂಕ್ಷ್ಮ ಮನಸ್ಸಿನ ಬರಹಗಾರ ಒಂದು ಹೆಜ್ಜೆ ಹಿಂದೆ ಸರಿಯುತ್ತಾನೆ. ಮೀಡಿಯೋಕರ್&zwnj; ಐಡಿಯಾಗಳು ಮಾತ್ರವೇ ಉಳಿಯುತ್ತವೆ. ಆ ಐಡಿಯಾಗಳಿವೆ ಜೀವವಿಲ್ಲ, ಶಾಶ್ವತ ಗುಣವಿಲ್ಲ ಎಂಬುದು ಅರ್ಥವಾದಾಗ ತಡವಾಗಿರುತ್ತದೆ.&lt;/p&gt;&lt;p&gt;&lsquo;ಕಾಂತಾರ&rsquo;, &lsquo;ಕೆಜಿಎಫ್&rsquo;, &lsquo;ಕಾಟೇರ&rsquo;, &lsquo;ಸು ಫ್ರಂ ಸೋ&rsquo; ಬರೆದವರೆಲ್ಲಾ ಕನ್ನಡದವರೇ ಅಲ್ಲವೇ. ನಮ್ಮವರೇ ಅಲ್ಲವೇ. ಚಿ. ಉದಯ್&zwnj;ಶಂಕರ್&zwnj; ಅವರಿಗೆ ಅಣ್ಣಾವ್ರು ಕೊಡುತ್ತಿದ್ದ ಮರ್ಯಾದೆ ಇವತ್ತಿಗೂ ಚಿತ್ರಪ್ರೇಮಿಗಳಿಗೆ ಮರೆಯಲು ಸಾಧ್ಯವಾಗಿದೆಯೇ. ಸಾಧ್ಯವಾದರೆ ಬರಹಗಾರರನ್ನು ಬೆಳೆಸಿ. ವೃತ್ತಿಪರವಾಗಿ ನಡೆಸಿಕೊಳ್ಳಿ. ಪರಭಾಷೆಯ ರೈಟರ್&zwnj;ಗಳಿಗೆ ಏನೇನು ದುಡ್ಡು, ಸೌಲಭ್ಯ ಕೊಡುತ್ತೀರೋ ಅದನ್ನೆಲ್ಲಾ ಕೊಡಿ. ರೈಟರ್ಸ್&zwnj; ರೂಮ್&zwnj; ಕಟ್ಟಿಕೊಳ್ಳಿ. ಅವರನ್ನು ಘನತೆಯಿಂದ ನೋಡಿಕೊಳ್ಳಿ.&lt;/p&gt;&lt;p&gt;ಆಗ ಸಿನಿಮಾ ಘನತೆ, ವೆಬ್&zwnj; ಸೀರೀಸ್&zwnj; ಘನತೆ, ಚಿತ್ರರಂಗದ ಘನತೆ ಎಲ್ಲವೂ ಹೆಚ್ಚುತ್ತದೆ. ಇಷ್ಟೆಲ್ಲಾ ಮಾಡದೆ, ಕನ್ನಡದಲ್ಲಿ ಬರಹಗಾರರು ಇಲ್ಲ ಅಂತ ದಯವಿಟ್ಟು ಹೇಳಬೇಡಿ. ಸಿನಿಮಾಗಳು, ವೆಬ್&zwnj; ಸೀರೀಸ್&zwnj;ಗಳು ಸೋಲುವುದನ್ನು ನೋಡುವುದಕ್ಕಿಂತ ಜಾಸ್ತಿ ನೋವಾಗುತ್ತದೆ.&lt;/p&gt;]]></content:encoded>
            <category>sandalwood</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sandalwood/kannada-film-industry-writers-importance-problem-analysis-gvd/articleshow-7633wqq"/>
        </item>
        <item>
            <title><![CDATA[ಎಂಥ ಕಚೇರಿಗೂ ನಾವ್ ರೆಡಿ! ಹಿನ್ನೆಲೆ ಗಾಯನಕ್ಕಿಂತ ಕಾನ್ಸರ್ಟ್‌ಗಳಲ್ಲಿ ಹೆಚ್ಚು ಲಾಭ]]></title>
            <link>https://kannada.asianetnews.com/sandalwood/live-concerts-changing-kannada-singers-business-success-story-gvd/articleshow-7umm6xn</link>
            <guid isPermaLink="true">https://kannada.asianetnews.com/sandalwood/live-concerts-changing-kannada-singers-business-success-story-gvd/articleshow-7umm6xn</guid>
            <pubDate>Fri, 17 Apr 2026 16:19:14 +0530</pubDate>
            <description><![CDATA[&lt;p&gt;ಸಿನಿಮಾದ ಹಿನ್ನೆಲೆ ಗಾಯನಕ್ಕಿಂತ ಕಾನ್ಸರ್ಟ್&zwnj;ಗಳಲ್ಲೇ ಇವರು ಬ್ಯುಸಿ. ಹಣ, ಪ್ರಸಿದ್ಧಿ ಎರಡೂ ಇಲ್ಲಿ ಸಮೃದ್ಧ. ಅಂದಹಾಗೆ ಬೆಂಗಳೂರಿನಲ್ಲಿ ಮುಂದಿನ ವಾರ ಇರುವ ಇವರ ಕಾನ್ಸರ್ಟ್&zwnj;ಗೆ 900 ರು.ನಿಂದ 3000 ರು.ತನಕ ಟಿಕೆಟ್&zwnj; ದರ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdgxxf0m7ck3gqx6fcsejaq,imgname-vhcvkk-1776422942176.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಪ್ರಿಯಾ ಕೆರ್ವಾಶೆ&lt;/strong&gt;&lt;/p&gt;&lt;p&gt;&lsquo;ಎ ಸೂಪರ್&zwnj; ಸ್ಪೆಷಲ್&zwnj; ಗಿಗ್&zwnj; - ನೋ ಫಿಲಂ ಸಾಂಗ್ಸ್&zwnj;, ನೋ ಸೇಫ್ಟಿ ನೆಟ್&zwnj;&rsquo;. ಕನ್ನಡದ ಖ್ಯಾತ ಗಾಯಕ, ಸಂಗೀತ ನಿರ್ದೇಶಕರೊಬ್ಬರ ಮುಂದಿನ ವಾರದ ಕಾನ್ಸರ್ಟ್&zwnj;ನ ಟ್ಯಾಗ್&zwnj;ಲೈನ್&zwnj; ಇದು. ಈ ವರ್ಷವಿಡೀ ವಿಶ್ವಾದ್ಯಂತ ಇವರ ಕಾನ್ಸರ್ಟ್&zwnj; ಬುಕ್&zwnj; ಆಗಿದೆ. ಏಪ್ರಿಲ್&zwnj; ಮೇ ತಿಂಗಳಲ್ಲಿ ಬೆಂಗಳೂರು, ದೆಹಲಿ ಸೇರಿ ದೇಶದೊಳಗೆ ಸಂಗೀತದ ರಸರಾತ್ರಿಗಳು ನಡೆದರೆ , ಜೂನ್&zwnj; ಜುಲೈ ನಂತರ ಯುನೈಟೆಡ್&zwnj; ಕಿಂಗ್&zwnj;ಡಮ್&zwnj;ನ ಹಲವೆಡೆ &lsquo;ನಿನ್ನ ಪೂಜೆಗೆ ಬಂದೆ ಮಾದೇಶ್ವರಾ..&rsquo; ಹಾಡು ಅನುರಣಿಸಲಿವೆ.&lt;/p&gt;&lt;p&gt;ಸದ್ಯಕ್ಕೆ ಸಿನಿಮಾದ ಹಿನ್ನೆಲೆ ಗಾಯನಕ್ಕಿಂತ ಕಾನ್ಸರ್ಟ್&zwnj;ಗಳಲ್ಲೇ ಇವರು ಬ್ಯುಸಿ. ಹಣ, ಪ್ರಸಿದ್ಧಿ ಎರಡೂ ಇಲ್ಲಿ ಸಮೃದ್ಧ. ಅಂದಹಾಗೆ ಬೆಂಗಳೂರಿನಲ್ಲಿ ಮುಂದಿನ ವಾರ ಇರುವ ಇವರ ಕಾನ್ಸರ್ಟ್&zwnj;ಗೆ 900 ರು.ನಿಂದ 3000 ರು.ತನಕ ಟಿಕೆಟ್&zwnj; ದರ ಇದೆ. ವಾರಕ್ಕೂ ಮೊದಲೇ ಟಿಕೆಟ್&zwnj;ಗಳು ಖಾಲಿಯಾಗುತ್ತಿವೆ. ಅಲ್ಲಿಗೆ ಒಂದು ಕಾಲದಲ್ಲಿ ಹಣ, ಪ್ರಸಿದ್ಧಿಗೆ ಸಿನಿಮಾ ಹಿನ್ನೆಲೆ ಗಾಯನವನ್ನೇ ನೆಚ್ಚಿಕೊಂಡಿದ್ದ ಗಾಯಕರ ಬ್ಯುಸಿನೆಸ್&zwnj; ಡೈನಾಮಿಕ್ಸ್&zwnj; ಇಂದು ಬದಲಾಗಿದೆ. ನಷ್ಟದಲ್ಲಿರುವ ಸಿನಿಮಾರಂಗಕ್ಕಿಂತಲೂ ಹೆಚ್ಚಿನ ಲಾಭ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗಿ ಲೈವ್&zwnj;ನಲ್ಲಿ ಹಾಡುವುದರಿಂದ ಅವರಿಗೆ ಸಿಗುತ್ತಿದೆ.&lt;/p&gt;&lt;p&gt;ಸಿನಿಮಾದ ಹಿನ್ನೆಲೆ ಗಾಯಕರನ್ನಿಟ್ಟುಕೊಂಡು ದೊಡ್ಡ ದೊಡ್ಡ ಲೈವ್&zwnj; ಕಾನ್ಸರ್ಟ್&zwnj;ಗಳು ಬೆಂಗಳೂರು, ಮುಂಬೈಯಂಥಾ ಮಹಾನಗರಗಳಿಂದ ಹಿಡಿದು ಅಮೆರಿಕಾ, ಯುಕೆಯಂಥಾ ಹೊರದೇಶಗಳಲ್ಲೂ ಜನಪ್ರಿಯವಾಗುತ್ತಿವೆ. ಸಿನಿಮಾಗಳ ಪ್ರಾಜೆಕ್ಟ್&zwnj;ಗಳಿಗಿಂತ ಹೆಚ್ಚಿನ ಮೊತ್ತವನ್ನು ಗಾಯಕರು ಒಂದೇ ರಾತ್ರಿಯಲ್ಲಿ ಪಡೆಯುತ್ತಾರೆ. ಮ್ಯೂಸಿಕ್&zwnj; ಕಾನ್ಸರ್ಟ್&zwnj;ಗಳ ಕ್ರೇಜ್&zwnj; ಜೋರಾಗುತ್ತಿರುವಂತೆ ನಮ್ಮ ಗಾಯಕರ ಸಂಭಾವನೆಯೂ ಏರುತ್ತಲೇ ಇದೆ. ಒಂದು ರಾತ್ರಿಯ ಮ್ಯೂಸಿಕ್&zwnj; ಕಾನ್ಸರ್ಟ್&zwnj;ಗೆ ಕೆಲವು ಲಕ್ಷಗಳಿಂದ ಕೋಟಿಯವರೆಗೆ ಸಂಭಾವನೆ ಪಡೆಯುವ ಗಾಯಕರು ನಮ್ಮಲ್ಲಿದ್ದಾರೆ.&lt;/p&gt;&lt;p&gt;ಸಂಜಿತ್&zwnj; ಹೆಗ್ಡೆ ಸದ್ಯ ಯುಕೆ, ಐರ್ಲೆಂಡ್&zwnj;ನಲ್ಲಿ &lsquo;ಮಾಯಾವಿ&rsquo;ಯ ಮ್ಯಾಜಿಕ್&zwnj; ಮಾಡುತ್ತಿದ್ದಾರೆ. ಈ ಪ್ರತಿಭಾನ್ವಿತ ಗಾಯಕ ಅದೆಷ್ಟು ದೇಶಗಳಲ್ಲಿ ಅದೆಷ್ಟು ಗಲ್ಲಿಗಳಲ್ಲಿ ಅದೆಷ್ಟು ಲಕ್ಷ ಜನರನ್ನು ಕನ್ನಡ ಹಾಡುಗಳ ಮೂಲಕ ಕುಣಿಸಿದ್ದಾರೆ ಅಂತ ಲೆಕ್ಕ ಇಟ್ಟವರ್ಯಾರು. ಈ ಹುಡುಗನಿಗೆ ಇನ್ನೂ 27 ವರ್ಷ. ತನಗೆ ಹೆಸರು ತಂದುಕೊಟ್ಟ ಹಿನ್ನೆಲೆ ಗಾಯನಕ್ಕಿಂತ ಸದ್ಯ ಕಾನ್ಸರ್ಟ್&zwnj;ನಲ್ಲೇ ಜಗತ್ತು ತಿರುಗುತ್ತಿದ್ದಾರೆ. &lsquo;ಕರೆಯೋಲೆ&rsquo;ಯಂಥಾ ಆಲ್ಬಂ ಸೇರಿ ಬೇರೆ ಬೇರೆ ಮ್ಯೂಸಿಕಲ್&zwnj; ಪ್ಲಾಟ್&zwnj;ಫಾರ್ಮ್&zwnj;ಗಳನ್ನು ಎಕ್ಸ್&zwnj;ಪ್ಲೋರ್ ಮಾಡುತ್ತಿದ್ದಾರೆ.&lt;/p&gt;&lt;p&gt;ಚಂದನ್&zwnj; ಶೆಟ್ಟಿ ಕಿಕ್ಕೇರಿಸುವ ಕನ್ನಡದ ಹಿನ್ನೆಲೆ ಗಾಯಕ. ಸಿನಿಮಾ ಹಾಡುಗಳಿಗಿಂತಲೂ ಖ್ಯಾತಿ, ಹಣ, ವಿವಾದ ತಂದುಕೊಟ್ಟದ್ದು ಮ್ಯೂಸಿಕ್&zwnj; ಆಲ್ಬಂ. ಪಾರ್ಟಿಗಳಲ್ಲಿ ಇವತ್ತಿಗೂ ಇವರ &lsquo;ಮೂರೇ ಮೂರು ಪೆಗ್ಗಿಗೆ&rsquo; ಹಾಡು ಇರಲೇಬೇಕು. ಸದ್ಯ &lsquo;ಡಯಾನಾಮೈಟ್&zwnj;&rsquo; ಮುಂದಿನವಾರ ರಿಲೀಸ್&zwnj; ಆಗುತ್ತಿರುವ ಇವರ ಹೊಸ ಇಂಗ್ಲಿಷ್&zwnj; ಆಲ್ಬಂ. &lsquo;ಇಂಡಿಪೆಂಡೆಂಟ್&zwnj; ಗಾಯಕ ಅಂತ ಗುರುತಿಸಿಕೊಳ್ಳಬೇಕಾದ್ರೆ ಸಂಗೀತ, ಗಾಯನ, ಪ್ರಚಾರ, ಸ್ಟೇಜ್&zwnj; ಪರ್ಫಾಮೆನ್ಸ್&zwnj;, ಸಾಮಾಜಿಕ ಬದ್ಧತೆ ಬಹಳ ಮುಖ್ಯ&rsquo; ಅಂತಾರೆ. ವಿಜಯ ಪ್ರಕಾಶ್&zwnj;, ಅಜನೀಶ್&zwnj; ಲೋಕನಾಥ್&zwnj;, ಅರ್ಜುನ್&zwnj; ಜನ್ಯಾ, ಗುರುಕಿರಣ್&zwnj; ಸೇರಿ ಸಾಕಷ್ಟು ಮಂದಿ ಸಿನಿಮಾ ಹಿನ್ನೆಲೆ ಗಾಯಕರು ಹಿನ್ನೆಲೆ ಗಾಯನಕ್ಕಿಂತ ಬೇರೆ ಆಯಾಮಗಳಲ್ಲೇ ದುಡಿಮೆ ಕಂಡುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಶ್ರೀಮಂತ ಗಾಯಕ&lt;/strong&gt;&lt;/h2&gt;&lt;p&gt;ಇದೆಲ್ಲ ನಮ್ಮೂರ ಗಾಯಕರ ಕಥೆ ಆಯ್ತು. &lsquo;ಕಾಂತಾರ 2&rsquo; ಸಿನಿಮಾ ಬಂದಾಗ ದೊಡ್ಡ ಸೌಂಡ್&zwnj; ಮಾಡಿದ್ದು ದಿಲ್ಜಿತ್&zwnj; ದೋಸಾಂಜ್&zwnj; ಎಂಬ ಅದ್ಭುತ ಗಾಯಕ. ಒಂದು ಲೈವ್&zwnj; ಶೋಗೆ 4 ಕೋಟಿಯಿಂದ 30 ಕೋಟಿವರೆಗೂ ಪಡೆಯುತ್ತಾರೆ. ಪ್ರೈವೇಟ್&zwnj; ಜೆಟ್&zwnj;ನಲ್ಲಿ ಓಡಾಡುತ್ತಾರೆ. ದೇಶದ ಅತಿ ಶ್ರೀಮಂತ ಗಾಯಕರಲ್ಲೊಬ್ಬರು. ಪಂಜಾಬ್&zwnj; ಹಾಡುಗಳನ್ನು ವಿಶ್ವಾದ್ಯಂತ ಫೇಮಸ್&zwnj; ಮಾಡಿರೋ ಈ ಗಾಯಕ ಸಿನಿಮಾಕ್ಕಿಂತ ಕಾನ್ಸರ್ಟ್&zwnj;ಗಳ ಮೂಲಕವೇ ಜಗತ್ತಿನ ಗಮನ ಸೆಳೆದವರು. ಅದ್ಭುತ ಗಾಯನ, ತನ್ನ ಬೇರುಗಳ ಬಗೆಗಿನ ಅಮಿತ ಪ್ರೀತಿಯನ್ನು ಇಟ್ಟುಕೊಂಡೇ ಅದನ್ನೇ ಬ್ಯುಸಿನೆಸ್&zwnj; ಆಗಿ ಪರಿವರ್ತಿಸಿಕೊಂಡವರು. ಲೈವ್&zwnj; ಕಾನ್ಸರ್ಟ್&zwnj; ಮೂಲಕ ಕೋಟ್ಯಂತರ ದುಡಿಯಬಹುದು ಅನ್ನುವುದನ್ನು ದೇಶಕ್ಕೆ ತೋರಿಸಿಕೊಟ್ಟ ಗಾಯಕ.&lt;/p&gt;&lt;p&gt;ಮೊನ್ನೆ ಮೊನ್ನೆ ಸಿನಿಮಾ ಹಿನ್ನೆಲೆ ಗಾಯನದಿಂದ ಹಿಂದೆ ಸರಿದ ಅರಿಜಿತ್&zwnj; ಸಿಂಗ್&zwnj; ಅವರ ಎರಡೂವರೆ ಗಂಟೆಗಳ ಕಾನ್ಸರ್ಟ್&zwnj; ಸಂಭಾವನೆಯ 14 ಕೋಟಿ ರು.ನಿಂದ ಆರಂಭವಾಗುತ್ತದೆ. ಅದ್ಭುತ ಕಂಠಸಿರಿಯ ಜೊತೆಗೆ ಮಾನವೀಯತೆಯ ಮೂಲಕವೂ ಗಮನಸೆಳೆವ ಈ ಪ್ರಸಿದ್ಧ ಗಾಯಕ ಇದೀಗ ಹಿನ್ನೆಲೆ ಗಾಯನದಿಂದ ಹೊರಬಂದರೂ ತನ್ನ ಜನಪ್ರಿಯತೆ, ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಒಟ್ಟಿನಲ್ಲಿ ಗಾಯನ ಕ್ಷೇತ್ರದ ಟ್ರೆಂಡ್&zwnj; ಬದಲಾಗಿದೆ. ಸೊಗಸಾಗಿ ಹಾಡುವ ಗಾಯಕ, ಗಾಯಕಿಯರು ಸಿನಿಮಾದಿಂದಾಚೆ ಹೊಸ ಜಗತ್ತು ಕಂಡುಕೊಂಡಿದ್ದಾರೆ. ಸದ್ಯಕ್ಕೆ ಅದೇ ಅವರನ್ನು ಪೋಷಿಸುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sandalwood/live-concerts-changing-kannada-singers-business-success-story-gvd/articleshow-7umm6xn"/>
        </item>
        <item>
            <title><![CDATA[ದಶಕಗಳಿಗೂ ಹೆಚ್ಚು ಕಾಲ ಸೌಂದರ್ಯ-ಪ್ರತಿಭೆಯ 'ದರ್ಶನ' ಮಾಡಿಸಿರೋ ನಟಿ ಡಿಂಪಲ್‌ ಕ್ವೀನ್ ಅಂದಕ್ಕೆ ಸರಿಸಾಟಿ ಯಾರು?]]></title>
            <link>https://kannada.asianetnews.com/gallery/sandalwood/sandalwood-dimple-queen-fame-actress-rachita-ram-colourful-photos-to-watch-here-a7ig4h9</link>
            <guid isPermaLink="true">https://kannada.asianetnews.com/gallery/sandalwood/sandalwood-dimple-queen-fame-actress-rachita-ram-colourful-photos-to-watch-here-a7ig4h9</guid>
            <pubDate>Thu, 16 Apr 2026 13:57:00 +0530</pubDate>
            <description><![CDATA[&lt;p&gt;&quot;ಯಾರ ದೃಷ್ಟಿಯೂ ಬೀಳದಿರಲಿ, ನಮ್ಮ ನೆಚ್ಚಿನ ನಟಿ ದೇವಲೋಕದ ಅಪ್ಸರೆಯಂತೆ ಕಾಣುತ್ತಿದ್ದಾರೆ&quot; ಎಂದು ಅಭಿಮಾನಿಗಳು ಕಾಮೆಂಟ್ ಬಾಕ್ಸ್&zwnj;ನಲ್ಲಿ ಹಾರ್ಟ್ ಎಮೋಜಿಗಳ ಸುರಿಮಳೆಗೈಯುತ್ತಿದ್ದಾರೆ. ರಚಿತಾ ಅವರ ಈ ಹೊಸ ಲುಕ್ ಸ್ಯಾಂಡಲ್&zwnj;ವುಡ್&zwnj;ನ ಗ್ಲಾಮರ್ ಅಖಾಡದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpany6cwhtp7mp6s06dev2f7,imgname-rachita-ram--1--1776327530907.jpg" type="image/jpeg" height="390" width="690"/>
            <content:encoded><![CDATA[&lt;p&gt;&quot;ಯಾರ ದೃಷ್ಟಿಯೂ ಬೀಳದಿರಲಿ, ನಮ್ಮ ನೆಚ್ಚಿನ ನಟಿ ದೇವಲೋಕದ ಅಪ್ಸರೆಯಂತೆ ಕಾಣುತ್ತಿದ್ದಾರೆ&quot; ಎಂದು ಅಭಿಮಾನಿಗಳು ಕಾಮೆಂಟ್ ಬಾಕ್ಸ್&zwnj;ನಲ್ಲಿ ಹಾರ್ಟ್ ಎಮೋಜಿಗಳ ಸುರಿಮಳೆಗೈಯುತ್ತಿದ್ದಾರೆ. ರಚಿತಾ ಅವರ ಈ ಹೊಸ ಲುಕ್ ಸ್ಯಾಂಡಲ್&zwnj;ವುಡ್&zwnj;ನ ಗ್ಲಾಮರ್ ಅಖಾಡದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ 'ಬುಲ್ ಬುಲ್' ಬೆಡಗಿಯ ಕಿಚ್ಚು: ರಚಿತಾ ರಾಮ್ ಫೋಟೋ ನೋಡಿ ಫ್ಯಾನ್ಸ್ ಫಿದಾ!&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಲ್ಲಿ ನಾಯಕಿಯರು ಬರುತ್ತಾರೆ, ಹೋಗುತ್ತಾರೆ. ಆದರೆ ದಶಕ ಕಳೆದರೂ ಅದೇ ಕ್ರೇಜ್, ಅದೇ ಸೌಂದರ್ಯ ಮತ್ತು ಅದೇ 'ಡಿಂಪಲ್' ಜಾದೂ ಉಳಿಸಿಕೊಂಡಿರುವ ನಟಿ ಎಂದರೆ ಅದು ರಚಿತಾ ರಾಮ್ ಮಾತ್ರ. ಕನ್ನಡ ಚಿತ್ರರಂಗದ 'ಗುಳಿಗೆನ್ನೆಯ ಚೆಲುವೆ' ಎಂದೇ ಖ್ಯಾತರಾಗಿದ್ದಾರೆ ರಚಿತಾ ರಾಮ್!&lt;/p&gt;&lt;img&gt;&lt;p&gt;ಇಂಟರ್ನೆಟ್&zwnj;ನಲ್ಲಿ ಟೆಂಪರೇಚರ್ ಹೆಚ್ಚಿಸಿದ ಡಿಂಪಲ್ ಕ್ವೀನ್!&lt;/p&gt;&lt;p&gt;ಸಾಮಾನ್ಯವಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುವ ರಚಿತಾ, ಇತ್ತೀಚೆಗೆ ಹಂಚಿಕೊಂಡಿರುವ ಬೋಲ್ಡ್ ಮತ್ತು ಸ್ಟೈಲಿಶ್ ಫೋಟೋಶೂಟ್ ಈಗ ಸಖತ್ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;&quot;ಯಾರ ದೃಷ್ಟಿಯೂ ಬೀಳದಿರಲಿ, ನಮ್ಮ ನೆಚ್ಚಿನ ನಟಿ ದೇವಲೋಕದ ಅಪ್ಸರೆಯಂತೆ ಕಾಣುತ್ತಿದ್ದಾರೆ&quot; ಎಂದು ಅಭಿಮಾನಿಗಳು ಕಾಮೆಂಟ್ ಬಾಕ್ಸ್&zwnj;ನಲ್ಲಿ ಹಾರ್ಟ್ ಎಮೋಜಿಗಳ ಸುರಿಮಳೆಗೈಯುತ್ತಿದ್ದಾರೆ. ರಚಿತಾ ಅವರ ಈ ಹೊಸ ಲುಕ್ ಸ್ಯಾಂಡಲ್&zwnj;ವುಡ್&zwnj;ನ ಗ್ಲಾಮರ್ ಅಖಾಡದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ದಶಕದ ಯಶಸ್ವಿ ಪಯಣ: 'ಬುಲ್&zwnj; ಬುಲ್'ನಿಂದ 'ಕ್ರಿಮಿನಲ್'ವರೆಗೆ!&lt;/p&gt;&lt;p&gt;ರಚಿತಾ ರಾಮ್ ಅವರ ಸಿನಿಮಾ ಜರ್ನಿ ನಿಜಕ್ಕೂ ಒಂದು ಸ್ಪೂರ್ತಿ. 2013ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಬುಲ್ ಬುಲ್' ಸಿನಿಮಾ ಮೂಲಕ ಬೆಳ್ಳಿತೆರೆಗೆ ಅಡಿ ಇಟ್ಟಾಗ, ಇಡೀ ಕರ್ನಾಟಕವೇ ಈ ಹುಡುಗಿಯ ನಗುವಿಗೆ ಮರುಳಾಗಿತ್ತು.&lt;/p&gt;&lt;img&gt;&lt;p&gt;ಅಲ್ಲಿಂದ ಇಲ್ಲಿಯವರೆಗೆ ಸುಮಾರು 10 ವರ್ಷಗಳ ಕಾಲ ಸತತವಾಗಿ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಾ, ಕನ್ನಡದ 'ಮೋಸ್ಟ್ ವಾಂಟೆಡ್' ನಟಿಯಾಗಿ ಬೆಳೆದಿದ್ದಾರೆ. ಪುನೀತ್ ರಾಜ್&zwnj;ಕುಮಾರ್, ಸುದೀಪ್, ಧ್ರುವ ಸರ್ಜಾ ಅವರಂತಹ ದಿಗ್ಗಜರ ಜೊತೆ ನಟಿಸಿ ಸೈ ಎನಿಸಿಕೊಂಡಿರುವ ಇವರು, ಇಂದಿಗೂ ಸ್ಯಾಂಡಲ್&zwnj;ವುಡ್&zwnj;ನ ನಂಬರ್ ಒನ್ ರೇಸ್&zwnj;ನಲ್ಲಿದ್ದಾರೆ.&lt;/p&gt;&lt;img&gt;&lt;p&gt;ಧ್ರುವ ಸರ್ಜಾ ಜೊತೆ 'ಕ್ರಿಮಿನಲ್' ಕೆಮಿಸ್ಟ್ರಿ ಹೇಗಿರಲಿದೆ?&lt;/p&gt;&lt;p&gt;ಸದ್ಯಕ್ಕೆ ಸಿನಿರಸಿಕರ ಕಣ್ಣು ರಚಿತಾ ನಟನೆಯ 'ಕ್ರಿಮಿನಲ್' ಚಿತ್ರದ ಮೇಲಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಅಬ್ಬರದ ಜೊತೆ ರಚಿತಾ ಅವರ ಕ್ಯೂಟ್ ಅಭಿನಯ ಹೇಗೆ ಮಿಕ್ಸ್ ಆಗಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಈ ಚಿತ್ರದಲ್ಲಿ ರಚಿತಾ ಕೇವಲ ಗ್ಲಾಮರ್ ಗೊಂಬೆಯಾಗಿ ಉಳಿಯದೆ, ಕಥೆಗೆ ಪೂರಕವಾದ ಒಂದು ತೂಕದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.&lt;/p&gt;&lt;img&gt;&lt;p&gt;ಪರಭಾಷೆಯಲ್ಲೂ ರಚಿತಾ ಅಬ್ಬರ!&lt;/p&gt;&lt;p&gt;ಕನ್ನಡಿಗರ ಹೆಮ್ಮೆಯ ಈ ನಟಿ ಕಳೆದ ವರ್ಷ ಸೂಪರ್&zwnj;ಸ್ಟಾರ್ ರಜನಿಕಾಂತ್ ಅವರ 'ಜೈಲರ್' ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು. ಸಣ್ಣ ಪಾತ್ರವಾದರೂ ಅತಿ ದೊಡ್ಡ ಸ್ಟಾರ್ ಜೊತೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಬ್ರ್ಯಾಂಡ್ ವ್ಯಾಲ್ಯೂ ಅನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಸ್ಯಾಂಡಲ್&zwnj;ವುಡ್ ಗಡಿ ದಾಟಿಯೂ ರಚಿತಾ ಹೆಸರು ಈಗ ಕೇಳಿಬರುತ್ತಿರುವುದು ಅಭಿಮಾನಿಗಳಿಗೆ ಹೆಮ್ಮೆಯ ವಿಷಯ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಸಿನಿಮಾಗಳ ಆಯ್ಕೆಯಲ್ಲಿ ಜಾಣ್ಮೆ ಮೆರೆಯುತ್ತಿರುವ ರಚಿತಾ ರಾಮ್, ಹೊಸ ಹೊಸ ಫೋಟೋಶೂಟ್&zwnj;ಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಈ ರಂಗಿನಾಟ ಹೀಗೆಯೇ ಮುಂದುವರಿಯಲಿ, ಅವರ ಗುಳಿಗೆನ್ನೆ ನಗು ಕನ್ನಡದ ತೆರೆಯ ಮೇಲೆ ಸದಾ ಮಿಂಚುತ್ತಿರಲಿ ಎನ್ನುವುದೇ ಸಿನಿರಸಿಕರ ಆಶಯ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/sandalwood/sandalwood-dimple-queen-fame-actress-rachita-ram-colourful-photos-to-watch-here-a7ig4h9"/>
        </item>
        <item>
            <title><![CDATA[ಚಂದನ್ ಶೆಟ್ಟಿ ಜೀವನದಲ್ಲಿ ಬ್ಯೂಟಿಫುಲ್ ಬಿರುಗಾಳಿ, 'ಬಿಗ್ ಬಾಸ್' ವಿನ್ನರ್‌ಗೆ ಸಿಕ್ಕೇ ಬಿಟ್ರು ಹೊಸ ಜೊತೆಗಾತಿ!]]></title>
            <link>https://kannada.asianetnews.com/sandalwood/chandan-shetty-new-album-video-song-dianamyt-to-launch-soon/articleshow-afn1hvo</link>
            <guid isPermaLink="true">https://kannada.asianetnews.com/sandalwood/chandan-shetty-new-album-video-song-dianamyt-to-launch-soon/articleshow-afn1hvo</guid>
            <pubDate>Sat, 18 Apr 2026 16:41:40 +0530</pubDate>
            <description><![CDATA[&lt;p&gt;ಚಂದನ್ ಶೆಟ್ಟಿ ಇಷ್ಟು ದಿನ ಕನ್ನಡದಲ್ಲಿ ಸೂಪರ್ ಹಿಟ್​ರಾಪ್ ಹಾಡುಗಳನ್ನ ಕೊಟ್ಟಿದ್ದಾರೆ. ಚಂದನ್ ಬತ್ತಳಿಕೆಯಲ್ಲಿ ಬಂದ ಒಂದೊಂದು ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿವೆ. ಈಗ ಚಂದನ್ ಕನಸು ಮತ್ತಷ್ಟು ದೊಡ್ಡದಾಗಿದ್ದು, ಇಂಗ್ಲೀಷ್​​ನಲ್ಲಿ ರಾಪ್​ ಹಾಡೊಂದನ್ನ ರೆಡಿ ಮಾಡಿದ್ದಾರೆ. ಆ ಸಾಂಗ್​​ &lsquo;ಡಯಾನಾ-ಮೈಟ್&rsquo;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpg3xhtmzz6ne0e90fp86wsa,imgname-chandan-shetty-diana-1776509962068.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬ್ಯೂಟಿಫುಲ್ ಹುಡುಗಿಯೊಬ್ಳು ಜೊತೆಯಾಗಿದ್ದಾರೆ&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ರಾಪ್ ಸ್ಟಾರ್​ಚಂದನ್ ಶೆಟ್ಟಿ (Chandan Shetty) ಎರಡನೇ ಮ್ಯಾರೇಜ್ ಬಗ್ಗೆ ಇತ್ತೀಚೆಗೆ ಭಾರಿ ಚರ್ಚೆ ಆಗಿತ್ತು. 'ಈಗ ಒಕೆ, ಆದ್ರೆ ವಯಸ್ಸಾದ ಮೇಲೆ ಒಂಟಿತನ ಕಾಡುತ್ತೆ' ಅಂತ ಮದುವೆ ಬಗ್ಗೆ ಫಿಲಾಸಫಿ ಮಾತಾಡಿದ್ರು ಚಂದನ್ ಶೆಟ್ಟಿ. ಇದೀಗ ಚಂದನ್ ತನ್ನ ಜೀವನದಲ್ಲಿ ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ. ಈ ಹೆಜ್ಜೆಯ ಜೊತೆ ಬ್ಯೂಟಿಫುಲ್ ಹುಡುಗಿಯೊಬ್ಳು ಜೊತೆಯಾಗಿದ್ದಾರೆ. ಹಾಗಾದ್ರೆ ಏನಿದು ಚಂದನ್​ನವ ಜೀವನದ ಕತೆ ನೋಡೋಣ ಬನ್ನಿ.&lt;/p&gt;&lt;h2&gt;ರಾಪ್ ಸ್ಟಾರ್​ಜೀವನದಲ್ಲಿ ಬ್ಯೂಟಿಫುಲ್ ಬಿರುಗಾಳಿ; ಚಂದನ್ ಶೆಟ್ಟಿಗೆ ಸಿಕ್ಕೇ ಬಿಟ್ರು ಹೊಸ ಜೊತೆಗಾರ್ತಿ..!&lt;/h2&gt;&lt;p&gt;ಹೌದು, ಕನ್ನಡ ಸಂಗೀತ ಲೋಖಕ್ಕೆ ರಾಪ್ ಅನ್ನೋ ಹೊಸ ಅನುಭವ ಕೊಟ್ಟು ಗೆದ್ದು ಈಗಲೂ ಗೆಲ್ಲುತ್ತಿರೋ ಸ್ಟಾರ್ ಸಿಂಗರ್, ಬಿಗ್​ ಮ್ಯೂಜಿಷಿಯನ್​ಅಂದ್ರೆ ಅದು ಚಂದನ್ ಶೆಟ್ಟಿ. ಎಷ್ಟೇ ಜನ ರಾಪರ್ಸ್​ಬಂದ್ರೂ ಕೂಡ ತನ್ನ ಅದೇ ಕಂನ್ಸೆಸ್ಟೆನ್ಸಿಯನ್ನ ಕಂಟಿನ್ಯೂ ಮಾಡಿರೋ ಚಂದನ್ ಶೆಟ್ಟಿ ಕನ್ನಡದ ರಾಪ್ ಲೋಕದ ನಂಬರ್ ಒನ್ ಸಿಂಗರ್.. ಇದೀಗ ಚಂದನ್ ಶೆಟ್ಟಿ ಱಪ್ ಜೀವನದಲ್ಲಿ ಹೊಂದೊಂದು ಬ್ಯೂಟಿಫುಲ್ ಆಗಿರೋ ಬಿರುಗಾಳಿ ಎಂಟ್ರಿ ಆಗಿದೆ.&lt;/p&gt;&lt;p&gt;ರಾಪ್ ಲೋಕದಲ್ಲಿ ಚಂದನ್​ ಶೆಟ್ಟಿ ಹೊಸ ಅಧ್ಯಾಯ; ಚಂದನ್​ ಕನಸು ನನಸು ಮಾಡಿದ ಬ್ಯೂಟಿ ಡಯಾನಾ!&lt;/p&gt;&lt;p&gt;ಹೌದು, ಚಂದನ್ ಶೆಟ್ಟಿ ಇಷ್ಟು ದಿನ ಕನ್ನಡದಲ್ಲಿ ಸೂಪರ್ ಹಿಟ್​ ರಾಪ್ ಹಾಡುಗಳನ್ನ ಕೊಟ್ಟಿದ್ದಾರೆ. ಚಂದನ್ ಬತ್ತಳಿಕೆಯಲ್ಲಿ ಬಂದ ಒಂದೊಂದು ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿವೆ. ಈಗ ಚಂದನ್ ಕನಸು ಮತ್ತಷ್ಟು ದೊಡ್ಡದಾಗಿದ್ದು, ಇಂಗ್ಲೀಷ್​​ನಲ್ಲಿ ರಾಪ್​ ಹಾಡೊಂದನ್ನ ರೆಡಿ ಮಾಡಿದ್ದಾರೆ. ಆ ಸಾಂಗ್​​ಗೆ ಡಯಾನಾ-ಮೈಟ್ ಎಂದು ಹೆಸರಿಟ್ಟಿದ್ದಾರೆ. ಡಯಾನಾ ಮೈಟ್ ಸಿಕ್ಕಿದ್ದೇಗೆ ಚಂದನ್ ಸ್ಚಚ್ಚಂದವಾಗಿ ಹೇಳಿದ್ದಾರೆ.&lt;/p&gt;&lt;h3&gt;ಚಂದನ್ ಶೆಟ್ಟಿ, ರಾಪ್ ಸಿಂಗರ್.. ಮೈಸೂರಿನ ಬಣ್ಣದ ಚಿಟ್ಟೆ ಈ ಡಯಾನಾ&lt;/h3&gt;&lt;p&gt;ಚಂದನ್​ರಾಪ್ ಹಾಡಿನಲ್ಲಿ ಬರುತ್ತಿರೋ ಈ ಬಣ್ಣದ ಚಿಟ್ಟೆ ಮೈಸೂರಿನ ಹುಡುಗಿ. ಚಂದನ್ ಗೂ ಮೈಸೂರಿಗೂ ಅದೇನು ನಂಟೋ ಏನೋ. ಡಿವೋರ್ಸ್ ಕೊಟ್ಟಿರೋ ಮಾಜಿ ಪತ್ನಿ ನಿವೇದಿತಾ ಕೂಡ ಮೈಸೂರು ಹುಡುಗಿ. ಈಗ ಚಂದನ್ ತನ್ನ ಡ್ರೀಮ್ ಪ್ರಾಜೆಕ್ಟ್​ ಇಂಗ್ಲೀಷ್​​ನ ಱಪ್​ ಹಾಡಿಗೆ ಸಿಕ್ಕಿರೋ ಈ ಡಯಾನಾ ಕೂಡ ಮೈಸೂರಿನವರೇ.&lt;/p&gt;&lt;p&gt;ಮೈಸೂರಿನ ಈ ಡಯಾನಾ ಚಂದನ್ ಗೆ ಸಿಕ್ಕಿದ್ದೇಗೆ ಗೊತ್ತಾ..?&lt;/p&gt;&lt;p&gt;ಡಯಾನಾ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿ ಚಂದನ್ ಶೆಟ್ಟಿಗೆ ಕನೆಕ್ಟ್ ಆಗಿದ್ದಂತೆ. ಈ ಪರಿಚಯ ಇಬ್ಬರು ಬೇಟಿಯಾಗಿದ್ರಂತೆ. ಕೊನೆಗೆ ಈ ಡಯಾನಾ ಒಳ್ಳೆ ರಾಪ್​ ಸಿಂಗರ್​ ಅಂತ ಗೊತ್ತಾಗಿ ಈಗ ಬರುತ್ತಿರೋ ಇಂಗ್ಲೀಷ್ ಹಾಡನ್ನ ಅವರಿಂದಲೇ ಹಾಡಿಸಿದ್ದಾರೆ. ಹೀಗಾಗಿ ಡಯಾನಾ ಅನ್ನೋ ಹೆಸರನ್ನೆ ತಮ್ಮ ಆಲ್ಬಂಗೆ ಇಟ್ಟಿದ್ದಾರೆ. ಡಯಾನಾ ಜೊತೆಗೆ ಮೈಟ್ ಅನ್ನೋದನ್ನು ಸೇರಿಸಿದ್ದಾರೆ. ಹಾಗಾಗಿಯೇ 'ಡಯಾನಾ ಮೈಟ್' ಅನ್ನುವ ಹೆಸರು ಬಂದಿದೆ. ಇದೇ ಏಪ್ರಿಲ್ 23ರಕ್ಕೆ ಆ ಡಯಾನಾ ಮೈಟ್​ ಱಪ್ ಆಲ್ಬಂ ಹೊರ ಬರ್ತಾ ಇದೆ.&lt;/p&gt;&lt;p&gt;ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ &amp;amp; ವಿಡಿಯೋ ನೋಡಿ..&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/chandan-shetty-new-album-video-song-dianamyt-to-launch-soon/articleshow-afn1hvo"/>
        </item>
        <item>
            <title><![CDATA[ಶೂಟಿಂಗ್, ನಿರ್ಮಾಪಕನ ಕಿರುಕುಳದ ಬಗ್ಗೆ ದುಃಖ ತೋಡಿಕೊಂಡ ಕಾಂತಾರ ಸಿನಿಮಾ ನಟಿ]]></title>
            <link>https://kannada.asianetnews.com/gallery/sandalwood/kantara-movie-actress-prathimaa-naik-on-casting-couch-experience-from-producer-bczp9k5</link>
            <guid isPermaLink="true">https://kannada.asianetnews.com/gallery/sandalwood/kantara-movie-actress-prathimaa-naik-on-casting-couch-experience-from-producer-bczp9k5</guid>
            <pubDate>Sat, 18 Apr 2026 13:07:50 +0530</pubDate>
            <description><![CDATA[&lt;p&gt;Actress Prathima Naik: ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ನಟಿ ಪ್ರತಿಮಾ ನಾಯಕ್ ಅವರು ಚಿತ್ರರಂಗದಲ್ಲಿ ಕಾಸ್ಟಿಂಗ್&zwnj; ಕೌಚ್&zwnj; ಅನುಭವವನ್ನು ಹಂಚಿಕೊಂಡಿದ್ದಾರೆ. ಓರ್ವ ನಿರ್ಮಾಪಕ ರಾತ್ರಿ ಅನುಚಿತವಾಗಿ ವರ್ತಿಸಲು ರೆಡಿಯಾದ ಘಟನೆಯನ್ನು ಕನ್ನಡ ಪಿಚ್ಚರ್&zwnj; ಯುಟ್ಯೂಬ್&zwnj; ಚಾನೆಲ್&zwnj; ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfr4znaa6ee5xqkjtc2c523,imgname-new-project---2026-04-18t125921.426-1776497622698.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Prathima Naik: ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ನಟಿ ಪ್ರತಿಮಾ ನಾಯಕ್ ಅವರು ಚಿತ್ರರಂಗದಲ್ಲಿ ಕಾಸ್ಟಿಂಗ್&zwnj; ಕೌಚ್&zwnj; ಅನುಭವವನ್ನು ಹಂಚಿಕೊಂಡಿದ್ದಾರೆ. ಓರ್ವ ನಿರ್ಮಾಪಕ ರಾತ್ರಿ ಅನುಚಿತವಾಗಿ ವರ್ತಿಸಲು ರೆಡಿಯಾದ ಘಟನೆಯನ್ನು ಕನ್ನಡ ಪಿಚ್ಚರ್&zwnj; ಯುಟ್ಯೂಬ್&zwnj; ಚಾನೆಲ್&zwnj; ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಚಿತ್ರರಂಗವು ಒಂಥರ ಬಣ್ಣದ ಲೋಕ. ಇಲ್ಲಿ ಒಂದಿಷ್ಟು ಕರಾಳ ಮುಖಗಳೂ ಇವೆ. 'ಕಾಂತಾರ' ಸಿನಿಮಾದಲ್ಲಿ 'ವಸಂತಕ್ಕ' ಪಾತ್ರದ ಮೂಲಕ ಜನಪ್ರಿಯರಾದ ಪ್ರತಿಮಾ ಅವರು, ಕಾಸ್ಟಿಂಗ್ ಕೌಚ್ ಮಾದರಿಯ ಕಿರುಕುಳ ಎದುರಿಸಿದ್ದೆ, ನಿರ್ಮಾಪಕ ಬೆದರಿಕೆ ಹಾಕಿದ್ದನು ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸಾಗರದಲ್ಲಿ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ, ದಿನವಿಡೀ ಶೂಟಿಂಗ್ ಮುಗಿಸಿ ಪ್ರತಿಮಾ ನಾಯಕ್ ಅವರು ತಮ್ಮ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಸರಿಯಾಗಿ&zwnj; ಮಧ್ಯರಾತ್ರಿ 12 ಗಂಟೆಗೆ ಯಾರೋ ಬಂದು ಅವರ ರೂಮ್&zwnj; ಬಾಗಿಲನ್ನು ಜೋರಾಗಿ ಬಡಿದಿದ್ದಾರೆ. ಯಾರೆಂದು ಕಿಟಕಿಯಲ್ಲಿ ನೋಡಿದಾಗ ಅಲ್ಲಿ ಆ ಸಿನಿಮಾದ ನಿರ್ಮಾಪಕ ನಿಂತಿದ್ದಾರೆ.&amp;nbsp;&lt;/p&gt;&lt;p&gt;ಪ್ರತಿಮಾ ಅವರು ಆಗ &quot;ಯಾಕೆ ಸರ್ ಈ ಟೈಮ್&zwnj;ಗೆ ಬಂದಿದ್ದೀರಿ?&quot; ಎಂದು ಪ್ರತಿಮಾ ಕೇಳಿದಾಗ, ಆ ನಿರ್ಮಾಪಕ &quot;ನಿಮ್ಮ ಪಾತ್ರದ ಬಗ್ಗೆ ಡಿಸ್ಕಸ್ ಮಾಡಬೇಕು, ಬಾಗಿಲು ತೆರೆಯಿರಿ&quot; ಎಂದಿದ್ದಾನೆ. ಆಗ ಪ್ರತಿಮಾ ಅವರು &quot;ಸರ್, ಪಾತ್ರದ ಬಗ್ಗೆ ಚರ್ಚೆ ಮಾಡಲು ಇದು ಸಮಯವಲ್ಲ. ಏನಿದ್ದರೂ ಬೆಳಗ್ಗೆ ಡೈರೆಕ್ಟರ್ ಜೊತೆ ಮಾತಾಡಿ. ಈಗ ಬಾಗಿಲು ತೆಗೆಯಲು ಸಾಧ್ಯವಿಲ್ಲ&quot; ಎಂದು ನೇರವಾಗಿ ಹೇಳಿದ್ದಾರೆ. ಇದು ನಿರ್ಮಾಪಕನಿಗೆ ಸಿಟ್ಟು ತರಿಸಿದೆ.&lt;/p&gt;&lt;img&gt;&lt;p&gt;ಬಾಗಿಲು ತೆಗೆಯದಿದ್ದಕ್ಕೆ ಆ ನಿರ್ಮಾಪಕ ಪ್ರತಿಮಾ ಅವರ ಮೇಲೆ ಸೇಡು ತೀರಿಸಿಕೊಳ್ಳಲು ರೆಡಿಯಾಗಿದ್ದನು. ಮಾರನೇ ದಿನ ಕಾಡಿನ ಮಧ್ಯೆ ಶೂಟಿಂಗ್ ನಡೆಯುತ್ತಿದ್ದಾಗ ಪ್ರತಿಮಾ ಅವರಿಗೆ ಪಿರಿಯಡ್ಸ್ (Menstruation) ಸಮಸ್ಯೆಯಾಗಿ ಆರೋಗ್ಯ ಹದಗೆಟ್ಟಿತ್ತು. ಅತೀವ ನೋವಿನಲ್ಲಿದ್ದ ಅವರು ರೂಮಿಗೆ ಹೋಗಲು ಗಾಡಿಯ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡರು.&amp;nbsp;&lt;/p&gt;&lt;p&gt;ಆದರೆ, ನಿರ್ಮಾಪಕ ಉದ್ದೇಶಪೂರ್ವಕವಾಗಿಯೇ ಗಾಡಿ ಕಳಿಸದೆ ಸತಾಯಿಸಿದ್ದಾನೆ. ಗಂಟೆಗಳ ಕಾಲ ಕಾದರೂ ಯಾರೂ ಸಹಾಯಕ್ಕೆ ಬಾರದಿದ್ದಾಗ, ಪ್ರತಿಮಾ ಅವರು ಅನಿವಾರ್ಯವಾಗಿ ಆ ಕಾಡಿನ ದಾರಿಯಲ್ಲೇ ಸುಮಾರು 2-3 ಕಿಲೋಮೀಟರ್ ನಡ್ಕೊಂಡು ಮುಖ್ಯ ರಸ್ತೆಗೆ ಬಂದು ತಲುಪಿದ್ದರು.&lt;/p&gt;&lt;img&gt;&lt;p&gt;ಪ್ರತಿಮಾ ಅವರು ಒಬ್ಬರೇ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಗಾಬರಿಯಾದ ನಿರ್ಮಾಪಕ, ಕಾರ್ ತೆಗೆದುಕೊಂಡು ಬಂದು ಅವರನ್ನು ತಡೆದಿದ್ದಾನೆ. ಅಲ್ಲಿಯೂ ಆತನ ಅಹಂಕಾರ ಕಡಿಮೆಯಾಗಿರಲಿಲ್ಲ. &quot;ಏನಮ್ಮಾ ಸೀನ್ ಕ್ರಿಯೇಟ್ ಮಾಡ್ತಾ ಇದ್ದೀಯಾ? ನೀನು ಬಾಗಿಲು ತೆಗಿತಿಯೋ ಇಲ್ವೋ ನೋಡ್ತೀನಿ. ನಿನ್ನನ್ನ ಈ ಇಂಡಸ್ಟ್ರಿಯಲ್ಲಿ ಇಲ್ಲದ ಹಾಗೆ ಮಾಡ್ತೀನಿ&quot; ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಮಾ ಅವರು &quot;ನೋಡಪ್ಪ, ನನಗೆ ಈ ಇಂಡಸ್ಟ್ರಿಯಿಂದಲೇ ಬದುಕು ಆಗಬೇಕಿಲ್ಲ. ನನ್ನ ಕೆಲಸವನ್ನು ನಾನು ದೇವರೆಂದು ನಂಬಿದ್ದೇನೆ. ನೀನು ಏನು ಮಾಡ್ತೀಯೋ ಮಾಡಿಕೋ, ನಾನು ನಿನ್ನ ಗಾಡಿಯಲ್ಲಿ ಬರಲ್ಲ&quot; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಆ ಘಟನೆಯ ನಂತರ ಆ ನಿರ್ಮಾಪಕ ಚಿತ್ರರಂಗದಲ್ಲಿ ಪ್ರತಿಮಾ ನಾಯಕ್ ಅವರ ಬಗ್ಗೆ ಅಪಪ್ರಚಾರ ಮಾಡಿದ್ದರಂತೆ. &quot;ಪ್ರತಿಮಾ ಸೆಟ್ಟಿಗೆ ಬಂದರೆ ಕೆಲಸ ಕೆಡಿಸ್ತಾರೆ, ಕಿರಿಕಿರಿ ಮಾಡ್ತಾರೆ&quot; ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರಂತೆ. ಇದರಿಂದಾಗಿ ಒಂದೆರಡು ವರ್ಷ ಅವರಿಗೆ ಅವಕಾಶಗಳು ಕಡಿಮೆಯಾಗಿದ್ದವು. ಆದರೆ, ಸತ್ಯ ಹೆಚ್ಚು ಕಾಲ ಅಡಗಿರಲಿಲ್ಲ. ಈ ಬಗ್ಗೆ ಪ್ರತಿಮಾ ಅವರೇ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ಗಿರೀಶ್ ಕಾಸರವಳ್ಳಿ ಅವರಂತಹ ದಿಗ್ಗಜ ನಿರ್ದೇಶಕರು ಪ್ರತಿಮಾರ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದರು. ಇಂದು ಅವರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ತಮ್ಮದೇ ಆದ ಗೌರವ ಸಂಪಾದಿಸಿದ್ದಾರೆ. &quot;ನನ್ನನ್ನು ಪ್ರೀತಿಸುವ ಒಂದು ಗುಂಪು ಇವತ್ತಿಗೂ ನನ್ನ ಕೈ ಬಿಟ್ಟಿಲ್ಲ&quot; ಎನ್ನುವ ಪ್ರತಿಮಾ ನಾಯಕ್, ಶೋಷಣೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಹೊಸ ಕಲಾವಿದರಿಗೆ ಸ್ಫೂರ್ತಿಯಾಗಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/sandalwood/kantara-movie-actress-prathimaa-naik-on-casting-couch-experience-from-producer-bczp9k5"/>
        </item>
        <item>
            <title><![CDATA[ಸಿಎಂ ಸಿದ್ದರಾಮಯ್ಯ ಬಗ್ಗೆ ನಟಿ ಉಮಾಶ್ರಿ ಇದೆಂಥ ಮಾತು- ವ್ಹಾರೆವ್ಹಾ ಎಂದ ನೆಟ್ಟಿಗರು]]></title>
            <link>https://kannada.asianetnews.com/politics/actress-umashree-praising-cm-siddaramaiah-and-his-behaviour-suc/articleshow-f6ltlsw</link>
            <guid isPermaLink="true">https://kannada.asianetnews.com/politics/actress-umashree-praising-cm-siddaramaiah-and-his-behaviour-suc/articleshow-f6ltlsw</guid>
            <pubDate>Fri, 17 Apr 2026 18:27:59 +0530</pubDate>
            <description><![CDATA[ಖ್ಯಾತ ನಟಿ ಉಮಾಶ್ರೀ ಅವರು ಸಂದರ್ಶನವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಕ್ತಿತ್ವ ಮತ್ತು ಕೊಡುಗೆಗಳನ್ನು ಮನಸಾರೆ ಹೊಗಳಿದ್ದಾರೆ. ಅವರೊಬ್ಬ ಶ್ರೇಷ್ಠ ವ್ಯಕ್ತಿ, ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ ಎಂದು ಬಣ್ಣಿಸಿದ್ದು, ಈ ಹೇಳಿಕೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdr92akq8k9q0pdq4ap9xkj,imgname-umashree-about-cm-1776430647635.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟನೆಯಲ್ಲಿ ನಂಬರ್ 1, ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರದೊಳಕ್ಕೆ ಹೋಗಿ ಅದನ್ನು ಮೈಮೇಲೆ ಆಹ್ವಾನಿಸಿಕೊಂಡು ನಟನೆ ಮಾಡುವ ಪರಿಯಿಂದಲೇ ಅಸಂಖ್ಯ ಅಭಿಮಾನಿಗಳನ್ನು ಗಳಿಸಿದವರು ನಟಿ ಉಮಾಶ್ರೀ. ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಪುಟ್ಟಕ್ಕನ ಪಾತ್ರದ ಮೂಲಕ ಇನ್ನೂ ಜನರಿಗೆ ಹತ್ತಿರವಾದವರು ನಟಿ. 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು, 'ಗುಲಾಬಿ ಟಾಕೀಸ್' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ನಟಿ ಮಾತ್ರವಲ್ಲದೇ, ರಾಜಕೀಯದಲ್ಲಿಯೂ ಮುಂದು ಉಮಾಶ್ರೀ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ 2013 ರಿಂದ 2018ರವರೆಗೆ ಸೇವೆ ಸಲ್ಲಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೈಮರೆತು ವರ್ಣನೆ&lt;/strong&gt;&lt;/h2&gt;&lt;p&gt;ಇದೀಗ ನಟಿ, ಸಿದ್ದರಾಮಯ್ಯ ಅವರ ಬಗ್ಗೆ ಕೆಲವೊಂದು ಮಾತುಗಳನ್ನಾಡಿದ್ದು, ಅದಕ್ಕೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಮೆಂಟ್ಸ್​ ಮಾಡುತ್ತಿದ್ದಾರೆ. sabhewithsaba ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ನಿರೂಪಕಿ, ಸಿದ್ದರಾಮಯ್ಯ ಅವರ ಬಗ್ಗೆ ಹೇಳಿ ಅಂದಾಗ, ನಟಿಯ ಹಾವಭಾವವೇ ಬದಲಾಗಿ ಹೋಯ್ತು. ಸಿದ್ದರಾಮಯ್ಯನವರ ಗುಣಗಾನದಲ್ಲಿ ತಮ್ಮ ಮೈಯನ್ನೇ ಮರೆತ ನಟಿ, ಅವರ ಒಂದೊಂದೇ ಒಳ್ಳೆಯ ಕೆಲಸಗಳನ್ನು, ಅವರ ಒಳ್ಳೆಯ ಗುಣಗಳನ್ನು ಹೇಳತೊಡಗಿದರು.&lt;/p&gt;&lt;h3&gt;&lt;strong&gt;ಪದಗಳೇ ಸಾಕಾಗಲ್ಲ&lt;/strong&gt;&lt;/h3&gt;&lt;p&gt;ಸಿದ್ದರಾಮಯ್ಯನವರದ್ದು ಗ್ರೇಟ್​ ಪರ್ಸನ್ಯಾಲಿಟಿ. ಹ್ಯೂಮನ್​. ಅವರ ಬಗ್ಗೆ ನನ್ನಂಥವರು ಮಾತನಾಡಲಿಕ್ಕೆ ಪದಗಳೇ ಸಾಕಾಗುವುದಿಲ್ಲ, ಅಂಥ ಒಂದು ವ್ಯಕ್ತಿತ್ವ. ಅವರಿವರು ಏನೇನೋ ಹೇಳಬಹುದು. ಆದರೆ ಅವರ ಹತ್ತಿರ ಇದ್ದು ಕಂಡವರಿಗೆ ಅವರು ಏನು ಎನ್ನುವುದು ಗೊತ್ತಿದೆ. ಪ್ರೀತಿಯನ್ನು ಹಂಚುವುದನ್ನು ಅವರಿಂದ ನೋಡಿ ಕಲಿಯಬೇಕು. ಅಯ್ಯೋ ಎಷ್ಟು ಚೆಂದ, ಗ್ರಾಮ್ಯ ಎಂದು ಬಣ್ಣಸಿದ್ದಾರೆ ನಟಿ. ಅವರಿಗೆ ಯಾರಾದರೂ ಇಷ್ಟ ಆದರು ಎಂದುಬಿಟ್ಟರೆ ಅವರು ಬೈದರೂ ಸ್ವೀಟ್​ ಆಗಿರುತ್ತದೆ. ಅವರು ಈ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳು ಇರಬಹುದು, ಎಲ್ಲರನ್ನೂ ಸಮಾನವಾಗಿ ಕಾಣುವಂಥದ್ದು ಇರಬಹುದು, ಪ್ರತಿಭೆಗಳನ್ನು ಹುಡುಕಿ ಅವಕಾಶ ಕೊಡುವುದು, ನಂಬಿದವರ ಕೈಹಿಡಿಯುವುದು... ಹೀಗೆ ಹೇಳುತ್ತಾ ಹೋದರೆ ಪದಗಳೇ ಸಾಕಾಗುವುದಿಲ್ಲ ಎಂದು ನಟಿ ಹೊಗಳಿದ್ದಾರೆ.&lt;/p&gt;&lt;h3&gt;&lt;strong&gt;ನೆಟ್ಟಿಗರು ಏನಂದ್ರು?&lt;/strong&gt;&lt;/h3&gt;&lt;p&gt;ಸಿದ್ದರಾಮಯ್ಯನವರ ಅಭಿಮಾನಿಗಳು ನಟಿಯ ಮಾತಿಗೆ ಭಲೆ ಭಲೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರ ವ್ಯಕ್ತಿತ್ವವೇ ಅಂಥದ್ದು ಎನ್ನುತ್ತಿದ್ದಾರೆ. ಇನ್ನು ಆಗದವರು ನಟನೆ ಓವರ್​ ಆಯ್ತು ಎನ್ನುತ್ತಿದ್ದಾರೆ. ಮತ್ತೆ ಕೆಲವರು ನಟಿಯಾಗಿ ನಿಮ್ಮ ಮೇಲೆ ಅಭಿಮಾನ ಇತ್ತು, ಆದರೆ ನೀವು ಈ ರೀತಿ ಮಾತನಾಡಿದ್ದು ಕೇಳಿ ಯಾಕೋ ಇದ್ದ ಅಭಿಮಾನವೂ ಹೋಯ್ತು ಎನ್ನುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/politics/actress-umashree-praising-cm-siddaramaiah-and-his-behaviour-suc/articleshow-f6ltlsw"/>
        </item>
        <item>
            <title><![CDATA[INCA Award ಸಮಾರಂಭದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದು ಬೀಗಿದ ರುಕ್ಷ್ಮಿಣಿ  ವಸಂತ್]]></title>
            <link>https://kannada.asianetnews.com/gallery/sandalwood/rukmini-vasanth-received-best-actress-award-inca-award-for-kantara-chapter-1-fp2xme2</link>
            <guid isPermaLink="true">https://kannada.asianetnews.com/gallery/sandalwood/rukmini-vasanth-received-best-actress-award-inca-award-for-kantara-chapter-1-fp2xme2</guid>
            <pubDate>Sat, 18 Apr 2026 12:20:54 +0530</pubDate>
            <description><![CDATA[&lt;p&gt;Rukmini Vasanth: ಕಾಂತಾರ ಚಾಪ್ಟರ್ 1 ಚೆಲುವೆ ರುಕ್ಮಿಣಿ ವಸಂತ್ INCA Award ಸಮಾರಂಭದಲ್ಲಿ ದಂತದ ಗೊಂಬೆಯಂತೆ ಮಿಂಚಿದ್ದಾರೆ. ಐವರಿ ಬಣ್ಣದ ಗೌನ್ ತೊಟ್ಟ ಚೆಲುವೆ ಫೋಟೊ ಹಂಚಿಕೊಂಡಿದ್ದು, ಕನಕವತಿ ಪಾತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಬೀಗಿದ್ದಾರೆ ಸುಂದರಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfnmsy1geg86sz19k6qdk59,imgname-rukmini-vasanth-1776494995392.jpg" type="image/jpeg" height="390" width="690"/>
            <content:encoded><![CDATA[&lt;p&gt;Rukmini Vasanth: ಕಾಂತಾರ ಚಾಪ್ಟರ್ 1 ಚೆಲುವೆ ರುಕ್ಮಿಣಿ ವಸಂತ್ INCA Award ಸಮಾರಂಭದಲ್ಲಿ ದಂತದ ಗೊಂಬೆಯಂತೆ ಮಿಂಚಿದ್ದಾರೆ. ಐವರಿ ಬಣ್ಣದ ಗೌನ್ ತೊಟ್ಟ ಚೆಲುವೆ ಫೋಟೊ ಹಂಚಿಕೊಂಡಿದ್ದು, ಕನಕವತಿ ಪಾತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಬೀಗಿದ್ದಾರೆ ಸುಂದರಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಚಂದನದಲ್ಲಿ ಮಿಂಚಿ ಇದೀಗ ಕಾಲಿವುಡ್, ಟಾಲಿವುಡ್, ಬಾಲಿವುಡ್ ನಲ್ಲೂ ಮಿಂಚಲು ರೆಡಿಯಾಗಿರುವ ನಟಿ ರುಕ್ಮಿಣಿ ವಸಂತ್,ಇದೀಗ INCA ಪ್ರಶಸ್ತಿ ಸಮಾರಂಭದಲ್ಲಿ, ಅತ್ಯುತ್ತಮ ಕನ್ನಡ ನಟಿ ಪ್ರಶಸ್ತಿ ಪಡೆದು ಬೀಗಿದ್ದಾರೆ. ಸಮಾರಂಭದಲ್ಲಿ ಐವರಿ ಗೌನ್ ನಲ್ಲಿ ರುಕ್ಮಿಣಿ ಮಿಂಚುತ್ತಿದ್ದಾರೆ.&lt;/p&gt;&lt;img&gt;&lt;p&gt;INCA ಪ್ರಶಸ್ತಿ ಸಮಾರಂಭದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಕನಕವತಿ ಪಾತ್ರಕ್ಕೆ ಅತ್ಯುತ್ತಮ ಕನ್ನಡ ನಟಿ ಪ್ರಶಸ್ತಿ ಪಡೆದ ರುಕ್ಮಿಣಿ ವಸಂತ್, ಪ್ರಶಸಿ ಸ್ವೀಕರಿಸಲು ಐವರಿ ಬಣ್ಣಾದ ಲಾಂಗ್ ಗೌನ್ ಧರಿಸಿ, ಬನ್ ಹೇರ್ ಸ್ಟೈಲ್ ಮಾಡಿ, ಸಿಂಪಲ್ ಆಗಿ ಒಂದು ಕಿವಿಯೋಲೆ ಧರಿಸಿ ಸಿಕ್ಕಾಪಟ್ಟೆ ಮಿಂಚಿದ್ದಾರೆ.&lt;/p&gt;&lt;img&gt;&lt;p&gt;INCA-2026 (ಇಂಡಿಯನ್ ನ್ಯಾಷನಲ್ ಸಿನಿ ಅಕಾಡೆಮಿ ಅವಾರ್ಡ್ಸ್) ಪ್ರಶಸ್ತಿ ಸಮಾರಂಭವನ್ನು ಕರಣ್ ಜೋಹರ್ ಮತ್ತು ರಾಣಾ ದಗ್ಗುಬಾಟಿ ನಿರೂಪಣೆ ಮಾಡಿದ್ದು, ರುಕ್ಮಿಣಿ ವಸಂತ್ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರುತ್ತಿದ್ದಂತೆ ಕರಣ್ ಜೋಹರ್ ಅಪ್ಪಿಕೊಂಡು, ವೇದಿಕೆಗೆ ಸ್ವಾಗತಿಸಿದರು.&lt;/p&gt;&lt;img&gt;&lt;p&gt;ರುಕ್ಮಿಣಿ ವಸಂತ್ ಪ್ರಶಸ್ತಿ ಪಡೆಯುವುದಕ್ಕೂ ಮುನ್ನ ಮಾತನಾಡಿ ಕಾಂತಾರ ಚಾಪ್ಟರ್ 1 ಚಿತ್ರ ಸ್ಪೆಷಲ್ ಆಗಿದೆ. ಈ ಚಿತ್ರಕ್ಕೆ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ತುಂಬಾನೆ ಖುಷಿ ಇದೆ. ಅಷ್ಟೆ ಎಕ್ಸೈಟ್ ಕೂಡ ಆಗಿದ್ದೇನೆ ಎಂದು ಚಂದನವನದ ಸುಂದರಿ ರುಕ್ಮಿಣಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;INCA ಅವಾರ್ಡ್ ಸಮಾರಂಭದಲ್ಲಿ ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಒಟ್ಟು ನಾಲ್ಕು ಪ್ರಶಸ್ತಿಬಂದಿವೆ. ಅತ್ಯುತ್ತಮ ನಟ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನ ರಿಷಬ್ ಶೆಟ್ರು ಪಡೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ರುಕ್ಮಿಣಿ ವಸಂತ್ ನಗುವಿಗೆ ಅಭಿಮಾನಿಗಳು ಮನಸೋತಿದ್ದು, ಬ್ಯೂಟಿಫುಲ್, ದಂತದ ಗೊಂಬೆ, ದೇವತೆ ಎಂದು ಹೊಗಳಿದ್ದಾರೆ. ಅಂದಹಾಗೆ ರುಕ್ಮಿಣಿ ಶೀಘ್ರದಲ್ಲಿ ಟಾಕ್ಸಿಕ್ ಸಿನಿಮಾ ಮೂಲಕ ಕನ್ನಡಿಗರ ಮುಂದೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಇವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.&lt;/p&gt;]]></content:encoded>
            <category>sandalwood</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/rukmini-vasanth-received-best-actress-award-inca-award-for-kantara-chapter-1-fp2xme2"/>
        </item>
        <item>
            <title><![CDATA[ಯಶ್ ಕೆಜಿಎಫ್ 2ಗೆ ನಾಲ್ಕು ವರ್ಷ: ಭಾರತೀಯ ಸಿನಿಮಾ ಸ್ಟೈಲ್ ಬದಲಿಸಿದ ರಾಕಿಂಗ್ ಸ್ಟಾರ್]]></title>
            <link>https://kannada.asianetnews.com/sandalwood/kgf-2-changed-indian-cinema-style-yash-ramayana-toxic-impact-gvd/articleshow-icps6fg</link>
            <guid isPermaLink="true">https://kannada.asianetnews.com/sandalwood/kgf-2-changed-indian-cinema-style-yash-ramayana-toxic-impact-gvd/articleshow-icps6fg</guid>
            <pubDate>Fri, 17 Apr 2026 16:47:00 +0530</pubDate>
            <description><![CDATA[&lt;p&gt;ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಅವರ ಹೇರ್&zwnj;ಸ್ಟೈಲ್&zwnj;, ಗಡ್ಡದ ವಿನ್ಯಾಸ ಎಷ್ಟು ಫೇಮಸ್&zwnj; ಆಯ್ತು ಅಂದರೆ ಸದಾ ಗಡ್ಡ, ಮೀಸೆ ಬೋಳಿಸಿಕೊಂಡಿರುತ್ತಿದ್ದ ಬಾಲಿವುಡ್&zwnj; ಹೀರೋಗಳೆಲ್ಲ ಕುರುಚಲು ಗಡ್ಡ, ದಪ್ಪ ಮೀಸೆಯ ಸ್ಟೈಲಿಗೆ ಶರಣಾದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gfrpw3zhwc58d3zwpg0pywn9,imgname-rrr-5.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಶ್&zwnj; ಇದೀಗ ಹಾಲಿವುಡ್&zwnj; ಅಂಗಳದಲ್ಲಿ ನಿಂತು &lsquo;ರಾಮಾಯಣ&rsquo; ಮತ್ತು &lsquo;ಟಾಕ್ಸಿಕ್&zwnj;&rsquo; ಸಿನಿಮಾಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಅಮೆರಿಕಾದ ಲಾಸ್&zwnj; ವೇಗಾಸ್&zwnj;ನ ಬೀದಿಗಳಲ್ಲಿ ಅವರು ನಟಿಸಿರುವ ರಾವಣನ ಕಟೌಟ್&zwnj; ರಾರಾಜಿಸುತ್ತಿದೆ.&lt;/p&gt;&lt;p&gt;ಜೇಮ್ಸ್&zwnj; ಕ್ಯಾಮರಾನ್&zwnj;ನಂಥಾ ಜಗದ್ವಿಖ್ಯಾತ ನಿರ್ದೇಶಕರು, ಲಕೀತ್ ಸ್ಟ್ಯಾನ್&zwnj;ಫೀಲ್ಡ್, ಆ್ಯಡಂ ಸ್ಕಾಟ್&zwnj;, ಟಾಮ್&zwnj; ಕ್ರೂಸ್&zwnj;ರಂಥಾ ಸ್ಟಾರ್&zwnj;ಗಳ ಜೊತೆಗೆ ನಿಂತ, ಹಾಲಿವುಡ್&zwnj; ಅಂಗಳದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಏಕೈಕ ನಟ ಎನಿಸಿಕೊಂಡಿದ್ದಾರೆ. ಅವರು ಇಂದು ಹಾಲಿವುಡ್&zwnj; ಲೆವೆಲ್&zwnj;ಗೆ ಬೆಳೆಯಲು ಮೆಟ್ಟಿಲಾದದ್ದೇ &lsquo;ಕೆಜಿಎಫ್&zwnj;&rsquo; ಸಿನಿಮಾ. ಈ ಸಿನಿಮಾದ ಎರಡನೇ ಭಾಗ ಬಂದು ಇದೀಗ ನಾಲ್ಕು ವರ್ಷಗಳಾಗಿವೆ.&lt;/p&gt;&lt;p&gt;ಈ ಸಿನಿಮಾದಲ್ಲಿ ಯಶ್&zwnj; ಅವರ ಹೇರ್&zwnj;ಸ್ಟೈಲ್&zwnj;, ಗಡ್ಡದ ವಿನ್ಯಾಸ ಎಷ್ಟು ಫೇಮಸ್&zwnj; ಆಯ್ತು ಅಂದರೆ ಸದಾ ಗಡ್ಡ, ಮೀಸೆ ಬೋಳಿಸಿಕೊಂಡಿರುತ್ತಿದ್ದ ಬಾಲಿವುಡ್&zwnj; ಹೀರೋಗಳೆಲ್ಲ ಕುರುಚಲು ಗಡ್ಡ, ದಪ್ಪ ಮೀಸೆಯ ಸ್ಟೈಲಿಗೆ ಶರಣಾದರು. ಇಂದಿಗೂ ಆ ಸ್ಟೈಲ್&zwnj; ಜೀವಂತವಿದೆ. ಆಮೇಲೆ ಬಂದ ಅನೇಕ ಭಾರತೀಯ ಸಿನಿಮಾಗಳು ಕೆಜಿಎಫ್&zwnj;ನಿಂದ ಸ್ಫೂರ್ತಿ ಪಡೆದವು.&lt;/p&gt;&lt;h2&gt;&lt;strong&gt;ಕೆಜಿಎಫ್&zwnj; ಭಾರತೀಯ ಚಿತ್ರರಂಗಕ್ಕೆ ಕೊಟ್ಟ ನಾಲ್ಕು ಮಹತ್ವದ ಕಾಣಿಕೆ ಅಂದರೆ;&lt;/strong&gt;&lt;/h2&gt;&lt;p&gt;1. ಲಾರ್ಜರ್&zwnj; ದ್ಯಾನ್&zwnj; ಲೈಫ್&zwnj; ಕಾನ್ಸೆಪ್ಟ್&zwnj;&lt;/p&gt;&lt;p&gt;2. ಹಸಿವು, ಪವರ್&zwnj; ಮತ್ತು ಕಂಟ್ರೋಲ್&zwnj; ಎಂಬ ಲೇಯರ್&zwnj;ನಡಿ ಹೊಸ ಸ್ಟೋರಿ ಟೆಲ್ಲಿಂಗ್&zwnj;&lt;/p&gt;&lt;p&gt;3. ಮಾಸ್&zwnj; ಹೀರೋನ ಹೊಸ ಮಾದರಿ.&lt;/p&gt;&lt;p&gt;4. ಪವರ್&zwnj;ಫುಲ್&zwnj; ಸ್ಟೈಲ್&zwnj; ಐಕಾನ್&zwnj;.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kgf-2-changed-indian-cinema-style-yash-ramayana-toxic-impact-gvd/articleshow-icps6fg"/>
        </item>
        <item>
            <title><![CDATA[Bigg Boss ಸೂರಜ್​ ಸಿಂಗ್​- ರಾಶಿಕಾ ಕೊಟ್ಟರು ಗುಡ್​ನ್ಯೂಸ್​: ಚಿನ್ನ ಖರೀದಿಸ್ತಾ ಜೋಡಿ ಹೇಳಿದ್ದೇನು?]]></title>
            <link>https://kannada.asianetnews.com/gallery/relationship/rashika-shetty-and-suraj-singh-in-an-gold-showroom-advertisement-suc-ikfego9</link>
            <guid isPermaLink="true">https://kannada.asianetnews.com/gallery/relationship/rashika-shetty-and-suraj-singh-in-an-gold-showroom-advertisement-suc-ikfego9</guid>
            <pubDate>Fri, 17 Apr 2026 17:14:04 +0530</pubDate>
            <description><![CDATA[&lt;p&gt;ಬಿಗ್​ಬಾಸ್​ 12ರ ಕ್ಯೂಟ್​ ಜೋಡಿ ಎನಿಸಿಕೊಂಡಿದ್ದ ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ, ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನದ ಮಳಿಗೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. &amp;nbsp;ತಮ್ಮಿಬ್ಬರ ನಡುವೆ ಇರುವುದು ಗೆಳೆತನ ಮಾತ್ರ ಎಂದು ಈ ಜೋಡಿ ಸ್ಪಷ್ಟಪಡಿಸಿದ್ದು, ಈ ಮಳಿಗೆಗೆ ಬಂದದ್ದೇಕೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdkxqdpgcbnkheezdg2g43x,imgname-rashika-shetty-and-suraj-singh-1776426081718.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್​ಬಾಸ್​ 12ರ ಕ್ಯೂಟ್​ ಜೋಡಿ ಎನಿಸಿಕೊಂಡಿದ್ದ ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ, ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನದ ಮಳಿಗೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. &amp;nbsp;ತಮ್ಮಿಬ್ಬರ ನಡುವೆ ಇರುವುದು ಗೆಳೆತನ ಮಾತ್ರ ಎಂದು ಈ ಜೋಡಿ ಸ್ಪಷ್ಟಪಡಿಸಿದ್ದು, ಈ ಮಳಿಗೆಗೆ ಬಂದದ್ದೇಕೆ?&lt;/p&gt;&lt;img&gt;&lt;p&gt;ಬಿಗ್​ಬಾಸ್​ 12 (Bigg Boss 12)ರ ಕ್ಯೂಟ್​ ಜೋಡಿಗಳಲ್ಲಿ ಒಂದಾಗಿದ್ದು ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಜೋಡಿ. ರಾಶಿಕಾ ಶೆಟ್ಟಿ ಅವರು, ಮನೆಯಲ್ಲಿ ಹೆಚ್ಚು ಸದ್ದು ಮಾಡಿದ್ದೇ ಸೂರಜ್​ ಸಿಂಗ್​ ಅವರ ಜೊತೆಗಿನ ಆತ್ಮೀಯ ಒಡನಾಟದಿಂದ. ಸೂರಜ್​ ಅವರು ವೈಲ್ಡ್​ಕಾರ್ಡ್​ ಎಂಟ್ರಿ ಕೊಟ್ಟಾಗ ಈ ಮನೆಯ ಸುಂದರಿಗೆ ಗುಲಾಬಿ ಕೊಡಬೇಕು ಎಂದಾಗ ಅವರು ಅದನ್ನು ಕೊಟ್ಟಿದ್ದು ರಾಶಿಕಾ ಅವರಿಗೆ.&lt;/p&gt;&lt;img&gt;&lt;p&gt;ಅಲ್ಲಿಂದಲೇ ಅವರ ಸ್ನೇಹ ಶುರುವಾಗಿತ್ತು. ಒಂದು ಹಂತದಲ್ಲಿ ಬಿಗ್​ಬಾಸ್​ ವೀಕ್ಷಕರಿಗೆ ರಾಶಿಕಾ ಶೆಟ್ಟಿ ಅವರೇ ಸೂರಜ್​ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಎನ್ನಿಸಿದ್ದು ಉಂಟು. ಅವರ ಜೊತೆಯಲ್ಲಿಯೇ ಇರುವುದು, ಅವರ ಬಳಿ ಮಾತ್ರ ಮಾತನಾಡುವುದು... ಇಂಥ ಘಟನೆಗಳು ಹಲವಾರು ನಡೆದಿದ್ದವು. ಆ ಬಳಿಕ ಸೂರಜ್​ ಅವರು ಎಲಿಮಿನೇಟ್​ ಆಗಿ ಹೊರಕ್ಕೆ ಬಂದಾಗ, ರಾಶಿಕಾ ಶೆಟ್ಟಿ ಬಿಕ್ಕಿಬಿಕ್ಕಿ ಅತ್ತಿದ್ದರಿಂದಲೂ ಇವರಿಬ್ಬರ ನಡುವೆ ಸಮ್​ಥಿಂಗ್​ ಇದೆ ಎಂದೇ ಹೇಳಲಾಗುತ್ತಿತ್ತು. ಹೊರಗೆ ಬಂದ ಮೇಲೂ ಈ ಜೋಡಿಗೆ ಇದೇ ವಿಷಯವಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು.&lt;/p&gt;&lt;img&gt;&lt;p&gt;ಇದೀಗ ಮತ್ತೆ ಈ ಜೋಡಿ ಸಕತ್​ ಸೌಂಡ್​ ಮಾಡಿದೆ. ಅದೇನೆಂದರೆ ಇನ್ನೇನು ಅಕ್ಷಯ ತೃತೀಯ ಹಬ್ಬ ಹತ್ತಿರವಿದೆ. ಇದರ ಬೆನ್ನಲ್ಲೇ ಈ ಜೋಡಿ ಚಿನ್ನದ ಖರೀದಿ ಮಾಡಿದೆ. ರಾಶಿಕಾ ಶೆಟ್ಟಿ ಸೂರಜ್​ ಸಿಂಗ್​ ಇಬ್ಬರೂ ಚಿನ್ನದ ಮಳಿಗೆಯೊಂದರಲ್ಲಿ ಕಾಣಿಸಿಕೊಂಡು ಚಿನ್ನಾಭರಣ ಪ್ರಿಯರಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಏನಿದು ಗುಡ್​ನ್ಯೂಸ್​ ಅಂತ ಕೇಳ್ತೀರಾ. ಅಂಥದ್ದೇನೂ ಇಲ್ಲ. ಚಿನ್ನದ ಮಳಿಗೆಯೊಂದರ ಪ್ರಚಾರಕ್ಕಾಗಿ ಇದಾಗಲೇ ಹಲವಾರು ಸೆಲೆಬ್ರಿಟಿಗಳು ಬಂದಿದ್ದು, ಅದೇ ರೀತಿ ಸೂರಜ್​ ಮತ್ತು ರಾಶಿಕಾ ಶೆಟ್ಟಿಯನ್ನು ಪ್ರೊಮೋಷನ್​ಗಾಗಿ ಕರೆಸಲಾಗಿದೆ. ಸೆಲೆಬ್ರಿಟಿಗಳು ಚಿನ್ನ ಖರೀದಿ ಮಾಡಿದಂತೆ ತೋರಿಸಿದರೆ, ಜನರು ಆಕರ್ಷಿತರಾಗಿ ಖರೀದಿ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೀಗೆ ಚಿನ್ನ ಖರೀದಿ ಮಾಡಿದಂತೆ ತೋರಿಸಲಾಗುತ್ತದೆ ಅಷ್ಟೇ. ಹಿಂದೆ ಬಿಗ್​ಬಾಸ್​​ ವಿನ್ನರ್​ ಗಿಲ್ಲಿನಟನಿಗೆ ಕೆಜಿಗಟ್ಟಲೆ ಚಿನ್ನ ಹಾಕಿದಾಗ, ಅದನ್ನು ಅವರು ವಾಪಸ್​ ಮಾಡಿರಲಿಲ್ಲವೆ, ಇದೂ ಕೂಡ ಹಾಗೆನೇ.&lt;/p&gt;&lt;img&gt;&lt;p&gt;ಇದಾಗಲೇ ಈ ಜೋಡಿ, ತಮ್ಮಿಬ್ಬರ ನಡುವೆ ಅಂಥದ್ದೇನೂ ಇಲ್ಲ, ಒಳ್ಳೆಯ ಗೆಳೆತನ ಅಷ್ಟೇ ಎಂದಿದೆ. ಸೂರಜ್​ ಅವರು ಎಷ್ಟು ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅದಕ್ಕಾಗಿಯೇ ಅವರ ಮೇಲೆ ಸ್ನೇಹ ಇರೋದು ನಿಜ. ಅವರ ಪವಿತ್ರ ಬಂಧನ ಸಿನಿಮಾ ಪ್ರಮೋಷನ್​ಗೂ ನಾನು ನನ್ನೆಲ್ಲಾ ಕಮಿಟ್​ಮೆಂಟ್​ ಬಿಟ್ಟು ಹೋಗಿದ್ದು ಕೂಡ ಇದೇ ಕಾರಣಕ್ಕೆ ಎಂದಿದ್ದರು ರಾಶಿಕಾ (Bigg Boss Rashika Shetty)&lt;/p&gt;&lt;img&gt;&lt;p&gt;ಬಿಗ್​ಬಾಸ್​ ಮನೆಯಲ್ಲಿ ನನ್ನ ಪವಿತ್ರ ಬಂಧನ ಯಾರ ಜೊತೆ ಎಂದು ಹೇಳುವುದಾದರೆ, ಅದು ಸೂರಜ್​ ಜೊತೆಗೆನೇ. ಅವರು ಬಿಗ್​ಬಾಸ್​ ಮನೆಗೆ ಬಂದಿರಲಿಲ್ಲವೆಂದರೆ, ನನಗೆ ಯಾರ ಜೊತೆನೂ ಫ್ರೆಂಡ್​ಷಿಪ್​ ಆಗ್ತಾ ಇರಲಿಲ್ಲ. ಯಾರ ಜೊತೆನೂ ಕಂಫರ್ಟ್​ ಎನ್ನಿಸುತ್ತಾ ಇರಲಿಲ್ಲ ಎಂದಿದ್ದರು. ಸೂರಜ್​ ಕೂಡ ತಾವಿಬ್ಬರೂ ಒಳ್ಳೆಯ ಫ್ರೆಂಡ್ಸ್​ ಅಷ್ಟೇ ಎಂದಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/rashika-shetty-and-suraj-singh-in-an-gold-showroom-advertisement-suc-ikfego9"/>
        </item>
        <item>
            <title><![CDATA[ಭಾರತದಲ್ಲಿ ಹೇಳದ Toxic ಚಿತ್ರದ ಬಹುದೊಡ್ಡ ಗುಟ್ಟು ಅಮೆರಿಕದಲ್ಲಿ ರಿವೀಲ್‌ ಮಾಡಿದ ಯಶ್​! ನಟ ಹೇಳಿದ್ದೇನು?]]></title>
            <link>https://kannada.asianetnews.com/gallery/sandalwood/yash-about-toxic-movies-interesting-fact-in-usa-in-an-interview-suc-luxpi5k</link>
            <guid isPermaLink="true">https://kannada.asianetnews.com/gallery/sandalwood/yash-about-toxic-movies-interesting-fact-in-usa-in-an-interview-suc-luxpi5k</guid>
            <pubDate>Wed, 15 Apr 2026 22:14:53 +0530</pubDate>
            <description><![CDATA[ಅಮೆರಿಕದಲ್ಲಿ ನಡೆದ ಸಂದರ್ಶನವೊಂದರಲ್ಲಿ ನಟ ಯಶ್ ತಮ್ಮ ಮಹತ್ವಾಕಾಂಕ್ಷೆಯ 'ಟಾಕ್ಸಿಕ್' ಚಿತ್ರದ ಕುರಿತು ಮಾತನಾಡಿದ್ದಾರೆ. ಈ ಚಿತ್ರವು ಮೇಲ್ನೋಟಕ್ಕೆ ಗ್ಯಾಂಗ್&zwnj;ಸ್ಟರ್ ಸಿನಿಮಾದಂತೆ ಕಂಡರೂ, ಇದು ವಾಸ್ತವದಲ್ಲಿ ಹಲವು ಪದರಗಳನ್ನು ಹೊಂದಿರುವ ಸೈಕಲಾಜಿಕಲ್ ಥ್ರಿಲ್ಲರ್ ಆಗಿದೆ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp90f29qkdhmf891jp9qzgjd,imgname-yash-on-toxic-1776271460663.jpg" type="image/jpeg" height="390" width="690"/>
            <content:encoded><![CDATA[ಅಮೆರಿಕದಲ್ಲಿ ನಡೆದ ಸಂದರ್ಶನವೊಂದರಲ್ಲಿ ನಟ ಯಶ್ ತಮ್ಮ ಮಹತ್ವಾಕಾಂಕ್ಷೆಯ 'ಟಾಕ್ಸಿಕ್' ಚಿತ್ರದ ಕುರಿತು ಮಾತನಾಡಿದ್ದಾರೆ. ಈ ಚಿತ್ರವು ಮೇಲ್ನೋಟಕ್ಕೆ ಗ್ಯಾಂಗ್&zwnj;ಸ್ಟರ್ ಸಿನಿಮಾದಂತೆ ಕಂಡರೂ, ಇದು ವಾಸ್ತವದಲ್ಲಿ ಹಲವು ಪದರಗಳನ್ನು ಹೊಂದಿರುವ ಸೈಕಲಾಜಿಕಲ್ ಥ್ರಿಲ್ಲರ್ ಆಗಿದೆ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.&lt;img&gt;&lt;p&gt;ಯಶ್&zwnj; ಅವರ ಟಾಕ್ಸಿಕ್&zwnj; ಚಿತ್ರ ಇದಾಗಲೇ ಸಾಕಷ್ಟು ಹವಾ ಸೃಷ್ಟಿಸಿದೆ. ಇದರ ಟ್ರೈಲರ್&zwnj; ಬಿಡುಗಡೆಯಾಗುತ್ತಲೇ ನೆಗೆಟಿವ್&zwnj; ಕಮೆಂಟ್&zwnj; ಮೂಲಕ ಸಾಕಷ್ಟು ಹಲ್&zwnj;ಚಲ್&zwnj; ಸೃಷ್ಟಿಸಿತ್ತು. ಇದಾಗಲೇ ಈ ಚಿತ್ರ ಬಿಡುಗಡೆಯಾಬೇಕಿತ್ತು. ಆದರೆ ವಿಶ್ವಾದ್ಯಂತ ಇದನ್ನು ಬಿಡುಗಡೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಯುದ್ಧದ ಭೀತಿ ಇರುವ ಕಾರಣ ಇದರ ಬಿಡುಗಡೆ ಮಾಡಿಲ್ಲ ಎನ್ನುತ್ತಿದೆಯಾದರೂ, ದುರಂಧರ್&zwnj;-2 ನಿಂದಾಗಿ ಇದರ ಬಿಡುಗಡೆ ಮಾಡಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ. ಸದ್ಯ ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಅದೇನೇ ಇದ್ದರೂ, ಸದ್ಯ ಯಶ್ ನಟನೆಯ ರಾಮಾಯಣ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಈ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಲಾಸ್ ಏಂಜಲ್ಸ್​​ನಲ್ಲಿ ನಡೆದ ಸಿನಿಮಾಕಾನ್ 2026 ನಲ್ಲಿ &lsquo;ರಾಮಾಯಣ&rsquo; ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿದ್ದಾಗ ಟಾಕ್ಸಿಕ್&zwnj; ಸಿನಿಮಾದ ಕುತೂಹಲದ ವಿಷಯವನ್ನು ಶೇರ್&zwnj; ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;&lsquo;ಟಾಕ್ಸಿಕ್&rsquo; ಬಹಳ ಮಹಾತ್ವಾಕಾಂಕ್ಷೆಯ ಸಿನಿಮಾ. ಮೊದಲ ಬಾರಿಗೆ ನಾವು ಆ ಸಿನಿಮಾವನ್ನು ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್​​ನಲ್ಲೂ ಚಿತ್ರೀಕರಣ ಮಾಡಿದ್ದೇವೆ&rsquo; ಎಂದಿರುವ ಯಶ್&zwnj;, ಈ ಚಿತ್ರವು ಹಲವು ಪದರಗಳನ್ನು ಒಳಗೊಂಡ ಸೂಕ್ಷ್ಮವಾದ ಕತೆಯನ್ನು ಹೊಂದಿದೆ. ಮೇಲ್ನೋಟಕ್ಕೆ ಬೇರೆ ರೀತಿಯಾಗಿದ್ದು, ಅದರ ಆಳ ಹೊಕ್ಕಾಗಿ ಅದು ಬೇರೆಯದ್ದೇ ಅನುಭವ ಕೊಡುತ್ತದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಈ ಬಗ್ಗೆ ವಿವರಣೆ ನೀಡಿರುವ ನಟ, ಮೇಲ್ನೋಟಕ್ಕೆ ಈ ಚಿತ್ರವು ಗ್ಯಾಂಗ್​​ಸ್ಟರ್ ಎನಿಸಬಹುದಾದರೂ ಅದರಲ್ಲಿ ಇರುವ ಅಂಶಗಳು ಬೇರೆ. ಅದೇ ರೀತಿ, ಹಿಂಸಾತ್ಮಕ, ಆಕ್ಷನ್ ಚಿತ್ರ ಎಂದು ನೋಡಿದಾಗ ಅನ್ನಿಸಿದರೂ, ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಆಗಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಈ ಚಿತ್ರದಲ್ಲಿ, ಮಾನವೀಯ ಅಂಶಗಳನ್ನು ಸಾರುವ ಅಂಶಗಳೂ ಇವೆ ಎಂದು ಯಶ್&zwnj; ಹೇಳಿದ್ದಾರೆ. ಈ ಸಿನಿಮಾ, ಒಂದು ಡಾರ್ಕ್ ಅಥವಾ ಋಣಾತ್ಮಕ ಪಾತ್ರವನ್ನು ಬಹಳ ಭಿನ್ನ ರೀತಿಯಲ್ಲಿ ಪ್ರೆಸೆಂಟ್ ಮಾಡುತ್ತದೆ. ಹಿಂಸಾಚಾರ, ಲೈಂಗಿಕತೆಗೆ ಹೆಚ್ಚು ಒತ್ತು ನೀಡಿದಂತೆ ಕಾಣಿಸುತ್ತಿದೆ. ಆದರೆ, ಈ ಚಿತ್ರಕ್ಕಾಗಿ ತಂತ್ರಜ್ಞರು ವಿಭಿನ್ನ ರೀತಿಯಲ್ಲಿ ಕೆಲಸ ಮಾಡಿದ್ದಾರೆ, ಒಳಗೆ ತಿರುಳೇ ಬೇರೆ ಇದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಇದೇ ವೇಳೆ ಚಿತ್ರದ ನಿರ್ದೇಶಕರನ್ನೂ ಶ್ಲಾಘಿಸಿರುವ ಯಶ್&zwnj;, ಗೀತು ಮೋಹನ್​​ದಾಸ್, ಗ್ಯಾಂಗ್​​ಸ್ಟರ್ ಸಿನಿಮಾವನ್ನು ಸಂಪೂರ್ಣ ಭಿನ್ನ ದೃಷ್ಟಿಕೋನದಿಂದ ಕಟ್ಟಿಕೊಟ್ಟಿದ್ದಾರೆ. ನಾನಂತೂ ಆ ಸಿನಿಮಾನಲ್ಲಿ ನಟಿಸುವುದನ್ನು ಎಂಜಾಯ್ ಮಾಡಿದ್ದೇನೆ. ಸಿನಿಮಾ ಕಣ್ಣಿಗೆ ಹಬ್ಬವೇ ಆಗಲಿದೆ. ಜೊತೆಗೆ ಸಿನಿಮಾ ನೋಡುವ ಪ್ರೇಕ್ಷಕರ ಮನಸ್ಸಿನ ಮೇಲೂ ಸಹ ಗಾಢ ಪರಿಣಾಮವನ್ನು ಆ ಸಿನಿಮಾ ಬೀರಲಿದೆ&rsquo;ಎಂದಿದ್ದಾರೆ ಯಶ್.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/yash-about-toxic-movies-interesting-fact-in-usa-in-an-interview-suc-luxpi5k"/>
        </item>
        <item>
            <title><![CDATA[ಬಿಗ್‌ ಬಾಸ್‌ನಿಂದ 2-3 ಸಲ ಆಫರ್‌ ಬಂದರೂ ‌'ರಾಮಾಚಾರಿ' ನಟ ರಿತ್ವಿಕ್ ಹೋಗದಿರುವ ಸೀಕ್ರೆಟ್ ಕೊನೆಗೂ ಬಯಲಾಯ್ತು!]]></title>
            <link>https://kannada.asianetnews.com/gallery/tv-talk/the-secret-behind-why-ramachari-actor-rithvik-krupakar-rejected-bigg-boss-offers-2-or-3-times-finally-revealed-mfezzpe</link>
            <guid isPermaLink="true">https://kannada.asianetnews.com/gallery/tv-talk/the-secret-behind-why-ramachari-actor-rithvik-krupakar-rejected-bigg-boss-offers-2-or-3-times-finally-revealed-mfezzpe</guid>
            <pubDate>Sat, 18 Apr 2026 12:18:06 +0530</pubDate>
            <description><![CDATA[&lt;p&gt;&lsquo;ಬಿಗ್ ಬಾಸ್ ಕನ್ನಡ&rsquo; ಸೀಸನ್ 12 ಇತ್ತೀಚೆಗಷ್ಟೇ ಮುಕ್ತಾಯ ಕಂಡಿದೆ. ಈ ಸೀಸನ್&zwnj;ನಲ್ಲಿ ರಿತ್ವಿಕ್ ಕೃಪಾಕರ್ ಸ್ಪರ್ಧಿಯಾಗಿ ಬರುತ್ತಾರೆ ಎಂಬ ಬಲವಾದ ವದಂತಿಗಳಿದ್ದವು. ಈ ಬಗ್ಗೆ ಮಾತನಾಡಿರುವ ಅವರು, &quot;ನನಗೆ ಕೇವಲ ಈ ಸೀಸನ್ ಮಾತ್ರವಲ್ಲದೆ, ಸೀಸನ್ 10 ಮತ್ತು 11ಕ್ಕೆ ಕೂಡ ಕರೆ ಬಂದಿತ್ತು'.' ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfmz8vjkft8r4mt3ygyp921,imgname-rithvik-krupakar-1776494289778.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಬಿಗ್ ಬಾಸ್ ಕನ್ನಡ&rsquo; ಸೀಸನ್ 12 ಇತ್ತೀಚೆಗಷ್ಟೇ ಮುಕ್ತಾಯ ಕಂಡಿದೆ. ಈ ಸೀಸನ್&zwnj;ನಲ್ಲಿ ರಿತ್ವಿಕ್ ಕೃಪಾಕರ್ ಸ್ಪರ್ಧಿಯಾಗಿ ಬರುತ್ತಾರೆ ಎಂಬ ಬಲವಾದ ವದಂತಿಗಳಿದ್ದವು. ಈ ಬಗ್ಗೆ ಮಾತನಾಡಿರುವ ಅವರು, &quot;ನನಗೆ ಕೇವಲ ಈ ಸೀಸನ್ ಮಾತ್ರವಲ್ಲದೆ, ಸೀಸನ್ 10 ಮತ್ತು 11ಕ್ಕೆ ಕೂಡ ಕರೆ ಬಂದಿತ್ತು'.' ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಭಿಮಾನಿಗಳಿಗಾಗಿ &lsquo;ಬಿಗ್ ಬಾಸ್&rsquo; ಆಫರ್ ಬೇಡವೆಂದ ರಾಮಾಚಾರಿ! ರಿತ್ವಿಕ್ ಕೃಪಾಕರ್ ಬಿಚ್ಚಿಟ್ಟ ಸೀಕ್ರೆಟ್ ಏನು?&lt;/p&gt;&lt;p&gt;ಕನ್ನಡ ಕಿರುತೆರೆಯ ಇತಿಹಾಸದಲ್ಲಿ &lsquo;ರಾಮಾಚಾರಿ&rsquo; ಧಾರಾವಾಹಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಈ ಸೀರಿಯಲ್ ಮೂಲಕ ಮನೆಮಾತಾಗಿರುವ ನಟ ರಿತ್ವಿಕ್ ಕೃಪಾಕರ್ ಇಂದು ಕನ್ನಡಿಗರ ನೆಚ್ಚಿನ ನಟ. ರಾಮಾಚಾರಿ ಪಾತ್ರಕ್ಕೆ ಅವರು ನೀಡಿದ ಜೀವ ಅಂತಹದ್ದು.&lt;/p&gt;&lt;img&gt;&lt;p&gt;ಸದ್ಯ ಈ ಜನಪ್ರಿಯ ಧಾರಾವಾಹಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದರೂ, ರಿತ್ವಿಕ್ ಬಗ್ಗೆ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅಭಿಮಾನಿಗಳು ಅವರ ಮುಂದಿನ ನಡೆ ಏನು? ಅವರು ಬಿಗ್ ಬಾಸ್ ಮನೆಗೆ ಹೋಗುತ್ತಾರಾ? ಎಂದು ಕಾತರದಿಂದ ಕಾಯುತ್ತಿದ್ದರು. ಈಗ ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ರಿತ್ವಿಕ್ ಉತ್ತರ ನೀಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ಆಫರ್ ತಿರಸ್ಕರಿಸಿದ್ದು ಯಾಕೆ?&lt;/p&gt;&lt;p&gt;ರಿಯಾಲಿಟಿ ಶೋಗಳ ರಾಜ &lsquo;ಬಿಗ್ ಬಾಸ್ ಕನ್ನಡ&rsquo; ಸೀಸನ್ 12 ಇತ್ತೀಚೆಗಷ್ಟೇ ಮುಕ್ತಾಯ ಕಂಡಿದೆ. ಈ ಸೀಸನ್&zwnj;ನಲ್ಲಿ ರಿತ್ವಿಕ್ ಕೃಪಾಕರ್ ಸ್ಪರ್ಧಿಯಾಗಿ ಬರುತ್ತಾರೆ ಎಂಬ ಬಲವಾದ ವದಂತಿಗಳಿದ್ದವು. ಈ ಬಗ್ಗೆ ಮಾತನಾಡಿರುವ ಅವರು, &quot;ನನಗೆ ಕೇವಲ ಈ ಸೀಸನ್ ಮಾತ್ರವಲ್ಲದೆ, ಸೀಸನ್ 10 ಮತ್ತು 11ಕ್ಕೆ ಕೂಡ ಕರೆ ಬಂದಿತ್ತು. ಸೀಸನ್ 12ರಲ್ಲಿ ನನ್ನ ಗೆಳೆಯ ಧನುಷ್ ಜೊತೆ ನಾನೂ ಬಿಗ್ ಬಾಸ್ ಮನೆಗೆ ಹೋಗಬೇಕಿತ್ತು. ಆದರೆ ಕೆಲವು ವೈಯಕ್ತಿಕ ಕಾರಣಗಳು ಮತ್ತು ಪ್ರಮುಖವಾಗಿ 'ರಾಮಾಚಾರಿ' ಧಾರಾವಾಹಿಯಿಂದಾಗಿ ಅದು ಸಾಧ್ಯವಾಗಲಿಲ್ಲ&quot; ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಭಿಮಾನಿಗಳ ಮೇಲಿರುವ ಪ್ರೀತಿಯೇ ರಿತ್ವಿಕ್ ಅವರನ್ನು ಬಿಗ್ ಬಾಸ್&zwnj;ನಿಂದ ದೂರ ಉಳಿಸಿತ್ತು. &quot;ನಾನು ಬಿಗ್ ಬಾಸ್ ಮನೆಗೆ ಹೋದರೆ ರಾಮಾಚಾರಿ ಧಾರಾವಾಹಿಯನ್ನು ಅರ್ಧಕ್ಕೇ ನಿಲ್ಲಿಸಬೇಕಿತ್ತು. ಅಷ್ಟೊಂದು ಪ್ರೀತಿ ಕೊಟ್ಟ ಅಭಿಮಾನಿಗಳಿಗೆ ಬೇಸರ ಮಾಡುವುದು ನನಗೆ ಇಷ್ಟವಿರಲಿಲ್ಲ. ಸೀರಿಯಲ್ ಮುಗಿಯುವವರೆಗೆ ನಾನು ಅಲ್ಲಿಗೆ ಹೋಗದಿರಲು ನಿರ್ಧರಿಸಿದೆ&quot; ಎಂದು ತಮ್ಮ ವೃತ್ತಿ ಬದ್ಧತೆಯನ್ನು ಮೆರೆದಿದ್ದಾರೆ.&lt;/p&gt;&lt;img&gt;&lt;p&gt;ಅರ್ಹತೆಯ ಬಗ್ಗೆ ರಿತ್ವಿಕ್ ವಿನಮ್ರ ಮಾತು:&lt;/p&gt;&lt;p&gt;ಇಷ್ಟು ದೊಡ್ಡ ಜನಪ್ರಿಯತೆ ಇದ್ದರೂ ರಿತ್ವಿಕ್ ಅವರಲ್ಲಿ ಗರ್ವವಿಲ್ಲ. ಬಿಗ್ ಬಾಸ್ ವೇದಿಕೆಯ ಬಗ್ಗೆ ಮಾತನಾಡುತ್ತಾ, &quot;ನಾನು ಇನ್ನೂ ಒಂದು ಧಾರಾವಾಹಿ ಮಾಡಿದ್ದೇನಷ್ಟೇ. ಅಷ್ಟು ದೊಡ್ಡ ವೇದಿಕೆಗೆ ಹೋಗಲು ನಾನಿನ್ನೂ ಅರ್ಹನಲ್ಲ ಎಂದು ನನಗೆ ಅನ್ನಿಸುತ್ತದೆ. ಕನಿಷ್ಠ ಐದಾರು ಪ್ರಾಜೆಕ್ಟ್ ಮಾಡಿದ ಮೇಲೆ ಆ ಬಗ್ಗೆ ಯೋಚಿಸಬಹುದು. ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ಖಂಡಿತ ನೋಡೋಣ&quot; ಎನ್ನುವ ಮೂಲಕ ತಮ್ಮ ಸರಳತೆಯನ್ನು ಸಾಬೀತುಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಗಿಲ್ಲಿ ನಟನ ಗೆಲುವಿಗೆ ಹರ್ಷ:&lt;/p&gt;&lt;p&gt;ಬಿಗ್ ಬಾಸ್ ವಿಜೇತ 'ಗಿಲ್ಲಿ ನಟ' ಶಿವರಾಜ್ ಬಗ್ಗೆ ಮಾತನಾಡಿದ ರಿತ್ವಿಕ್, &quot;ಶಿವರಾಜ್ ಆರಂಭದಿಂದಲೂ ಅದ್ಭುತವಾಗಿ ಆಡಿದ್ದಾರೆ. ಅವರ ಮನರಂಜನೆ ಎಲ್ಲರಿಗೂ ಇಷ್ಟವಾಗಿದೆ. ಅವರು ಗೆದ್ದಿರುವುದು ನನಗೆ ತುಂಬಾ ಖುಷಿ ತಂದಿದೆ. ಹಾಗೆಯೇ ನನ್ನ ಗೆಳೆಯ ಧನುಷ್ ಕೂಡ ಟಾಸ್ಕ್ ಮಾಸ್ಟರ್ ಆಗಿ ಹೆಸರು ಮಾಡಿದ್ದು ಹೆಮ್ಮೆಯ ವಿಷಯ&quot; ಎಂದು ಸಹನಟರ ಯಶಸ್ಸನ್ನು ಕೊಂಡಾಡಿದ್ದಾರೆ.&lt;/p&gt;&lt;img&gt;&lt;p&gt;ಮುಂದಿನ ಪ್ಲಾನ್ ಏನು?&lt;/p&gt;&lt;p&gt;ರಾಮಾಚಾರಿಯಾಗಿ ಮಿಂಚಿದ್ದ ರಿತ್ವಿಕ್ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಶೀಘ್ರದಲ್ಲೇ ಹೊಸ ಧಾರಾವಾಹಿಯೊಂದರ ಮೂಲಕ ಅವರು ತೆರೆಗೆ ಬರಲಿದ್ದು, ಅಲ್ಲಿ ಅವರ ಲುಕ್ ಸುದೀಪ್ ಅವರ &lsquo;ಹುಚ್ಚ&rsquo; ಸಿನಿಮಾ ಶೈಲಿಯಲ್ಲಿ ಇರಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.&lt;/p&gt;&lt;img&gt;&lt;p&gt;ಇದರ ಜೊತೆಗೆ ಸ್ಯಾಂಡಲ್&zwnj;ವುಡ್&zwnj;ಗೂ ಪಾದಾರ್ಪಣೆ ಮಾಡಲು ಅವರು ಸಿದ್ಧತೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ರಾಮಾಚಾರಿ ಖ್ಯಾತಿಯ ಈ ನಟನ ಮುಂದಿನ ಇನ್ನಿಂಗ್ಸ್ ಮೇಲೆ ಅಭಿಮಾನಿಗಳು ಕೋಟಿ ಕಣ್ಣು ಇಟ್ಟಿದ್ದಾರೆ. ಕಿರುತೆರೆಯಲ್ಲಿ ಮೋಡಿ ಮಾಡಿದ ಈ ಪ್ರತಿಭೆ ಬೆಳ್ಳಿತೆರೆಯ ಮೇಲೂ ಧೂಳೆಬ್ಬಿಸಲಿ ಎಂಬುದು ಎಲ್ಲರ ಹಾರೈಕೆ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/tv-talk/the-secret-behind-why-ramachari-actor-rithvik-krupakar-rejected-bigg-boss-offers-2-or-3-times-finally-revealed-mfezzpe"/>
        </item>
        <item>
            <title><![CDATA[ಕರಾವಳಿ ಕನ್ನಡ ಸೊಗಡಿನ ಹೊಸ ಸಿನಿಮಾ ವಾದಿರಾಜ ವಾಲಗ ಮಂಡಳಿ: ಅಂತಿಮ ಹಂತದಲ್ಲಿ ಚಿತ್ರೀಕರಣ]]></title>
            <link>https://kannada.asianetnews.com/sandalwood/vadiraja-valaga-mandali-kannada-movie-shashiraj-kavoor-gvd/articleshow-nt71pxc</link>
            <guid isPermaLink="true">https://kannada.asianetnews.com/sandalwood/vadiraja-valaga-mandali-kannada-movie-shashiraj-kavoor-gvd/articleshow-nt71pxc</guid>
            <pubDate>Thu, 16 Apr 2026 16:42:05 +0530</pubDate>
            <description><![CDATA[&lt;p&gt;ಕರಾವಳಿ ಕನ್ನಡದ ಸೊಗಡಿನ ಭಾಷೆಯೊಂದಿಗೆ, ಹೊಸತನದ ಕಥಾವಸ್ತುವಿನೊಂದಿಗೆ, ವಿಭಿನ್ನ ನಿರೂಪಣೆ ಹೊಂದಿರುವ ವಿವಿಎಂ ಕನ್ನಡ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಏಪ್ರಿಲ್&zwnj; 18ರಿಂದ ಪ್ರಾರಂಭಗೊಂಡು ಏಪ್ರಿಲ್&zwnj; 30ಕ್ಕೆ ಪೂರ್ಣಗೊಳ್ಳಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpaztx9fw7pvfrnksn1k08ak,imgname-vjvjv-1776337909038.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಕಾಂತಾರ&rsquo; ಚಿತ್ರದ ಅತ್ಯಂತ ಜನಪ್ರಿಯ &lsquo;ವರಾಹ ರೂಪಂ ದೈವ ವರಿಷ್ಟಂ&rsquo; ಹಾಡು ಬರೆದಿದ್ದ ಶಶಿರಾಜ್ ಕಾವೂರು ಅವರು ಇದೀಗ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. &lsquo;ವಾದಿರಾಜ ವಾಲಗ ಮಂಡಳಿ&rsquo; (ವಿವಿಎಂ) ಎಂಬ ಹೆಸರಿನ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾವನ್ನು ಎಂ.ಎನ್.ಆರ್. ಪ್ರೊಡಕ್ಷನ್ ಲಾಂಛನದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನಿರ್ಮಿಸುತ್ತಿದ್ದಾರೆ.&lt;/p&gt;&lt;p&gt;ಅಪ್ಪಟ ಕರಾವಳಿ ಕನ್ನಡದ ಸೊಗಡಿನ ಭಾಷೆಯೊಂದಿಗೆ, ಹೊಸತನದ ಕಥಾವಸ್ತುವಿನೊಂದಿಗೆ, ವಿಭಿನ್ನ ನಿರೂಪಣೆ ಹೊಂದಿರುವ ವಿವಿಎಂ ಕನ್ನಡ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಏಪ್ರಿಲ್&zwnj; 18ರಿಂದ ಪ್ರಾರಂಭಗೊಂಡು ಏಪ್ರಿಲ್&zwnj; 30ಕ್ಕೆ ಪೂರ್ಣಗೊಳ್ಳಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪ್ರಕ್ರಿಯೆ ಮೇ-ಜೂನ್&zwnj;ನಲ್ಲಿ ನಡೆಯಲಿದ್ದು ಆಗಸ್ಟ್ ತಿಂಗಳಲ್ಲಿ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.&lt;/p&gt;&lt;p&gt;&lsquo;ಚಿತ್ರದ ಕಥೆಯ ಒಂದು ಎಳೆಯನ್ನು ಕೇಳಿಯೇ ಕಥೆಯನ್ನು ಓಕೆ ಅಂದಿರುವ ನಿರ್ಮಾಪಕ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಚಿತ್ರದ ಶೂಟಿಂಗ್&zwnj;ಗೆ ಎಲ್ಲೂ ಅಡೆತಡೆಯಾಗದಂತೆ ನಿರ್ಮಾಣದ ವಿಷಯದಲ್ಲಿ ಎಲ್ಲೂ ರಾಜಿಯಾಗದಂತೆ ನೋಡಿಕೊಂಡಿದ್ದಾರೆ. ಅವರಿಗೆ ಬೆಂಬಲವಾಗಿ ಸಹ ನಿರ್ಮಾಪಕರಾಗಿ ಜಯಪ್ರಕಾಶ್ ತುಂಬೆ ಇದ್ದಾರೆ&rsquo; ಎನ್ನುತ್ತಾರೆ ಚಿತ್ರದ ನಿರ್ದೇಶಕ ಶಶಿರಾಜ್ ರಾವ್ ಕಾವೂರು.&lt;/p&gt;&lt;h2&gt;&lt;strong&gt;ಪ್ರಮುಖ ಪಾತ್ರದಲ್ಲಿ ನವೀನ್ ಡಿ. ಪಡೀಲ್&lt;/strong&gt;&lt;/h2&gt;&lt;p&gt;ಕರಾವಳಿಯ ಆಯ್ದ ಕಲಾವಿದರ ಸಮ್ಮಿಲನ ಈ ಚಿತ್ರದಲ್ಲಿದೆ. ನವೀನ್ ಡಿ. ಪಡೀಲ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಮೈಮ್ ರಾಮ ದಾಸ್, ಪುಷ್ಪರಾಜ್ ಬೊಳ್ಳೂರು ಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕ ನಟರಾಗಿ ಹಾಗೂ ವೇನ್ಯ ರೈ ಮತ್ತು ತನ್ವಿ ರಾವ್ ನಾಯಕಿಯರಾಗಿ ನಟಿಸುತ್ತಿದ್ದಾರೆ.&lt;/p&gt;&lt;p&gt;ಕುಟುಂಬ ಸಮೇತ ನೋಡುವ ಸಿನಿಮಾ ಕರ್ನಾಟಕದ ಜನತೆಗೆ ವಿಭಿನ್ನವಾದ, ಸಂಪೂರ್ಣ ಮನರಂಜನೆ ಹಾಗೂ ಸದಭಿರುಚಿಯ ಚಿತ್ರ ನೀಡಬೇಕೆಂಬುದು ನನ್ನ ಹಲವು ವರ್ಷಗಳ ಕನಸು. ಅದು ವಾದಿರಾಜ ವಾಲಗ ಮಂಡಳಿಯ ಮೂಲಕ ನನಸಾಗುತ್ತಿದೆ. ಈ ಸಿನಿಮಾ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಿನಿಮಾಗೆ ಬೇಕಾದ ಅತ್ಯುತ್ತಮ ತಂತ್ರಜ್ಞರನ್ನು ಕರೆಸಿದ್ದೇವೆ. ಚಿತ್ರದ ಕೆಲವು ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವುದರಲ್ಲಿ ಅನುಮಾನವಿಲ್ಲ. ಚಿತ್ರ ಉತ್ತಮ ರೀತಿಯಲ್ಲಿ ಮೂಡಿಬಂದಿದ್ದು ಕುಟುಂಬ ಸಮೇತ ಕುಳಿತು ನೋಡಿ ಸವಿಯಬಹುದಾದ ಒಳ್ಳೆಯ ಸಿನಿಮಾ ಇದಾಗಲಿದೆ.- ಡಾ. ಎಂ.ಎನ್. ರಾಜೇಂದ್ರ ಕುಮಾರ್, ನಿರ್ಮಾಪಕರು&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/vadiraja-valaga-mandali-kannada-movie-shashiraj-kavoor-gvd/articleshow-nt71pxc"/>
        </item>
        <item>
            <title><![CDATA[ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?]]></title>
            <link>https://kannada.asianetnews.com/cine-world/bollywood-and-hollywood-creates-lie-news-about-yash-upcimng-movie-toxic-release-date-videoshow-qwsvxw0</link>
            <guid isPermaLink="true">https://kannada.asianetnews.com/cine-world/bollywood-and-hollywood-creates-lie-news-about-yash-upcimng-movie-toxic-release-date-videoshow-qwsvxw0</guid>
            <pubDate>Fri, 17 Apr 2026 18:25:40 +0530</pubDate>
            <description><![CDATA[&lt;p&gt;ಯಶ್​ಗೆ ಉರ್​ ತುಂಬಾ ದುಶ್ಮನ್​ಗಳು ಹುಟ್ಟಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಯಶ್​ ಬೆಳೆದು ನಿಂತಿರೋ ರೀತಿ. ಯಶ್​ ಟಾಕ್ಸಿಕ್​ ಸಿನಿಮಾ ಇನ್ನೇನು ಬಿಡುಗಡೆ ಹೊಸ್ತಿಲಿನಲ್ಲಿದೆ. ಆದ್ರೆ ಆ ಸಿನಿಮಾವನ್ನ ಮಣ್ಣು ಮುಕ್ಕಿಸಬೇಕು ಅಂತ ಒಂದಷ್ಟು ಜನ ಹೊಂಚು ಹಾಕಿ ಕೂತಂತೆ ಕಾಣುತ್ತಿದೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xa5pvei" medium="video" height="768" width="1024"/>
            <content:encoded><![CDATA[&lt;p&gt;ದೊಡ್ಡ ಸುಳ್ಳು ಸುದ್ದಿ ಹಬ್ಬಿಸಿದ ಟಾಲಿವುಡ್​ ಜಗತ್ತು:&amp;nbsp;ರಾಕಿಂಗ್ ಸ್ಟಾರ್ ಯಶ್​(Rocking Star Yash)​ ಇವತ್ತು ದೊಡ್ಡ ಸೂಪರ್ ಸ್ಟಾರ್.. ಹಾಲಿವುಡ್​​ ಜಗತ್ತೂ ಕೂಡ ಯಶ್​ರನ್ನ ಕರೆದು ಕೂರಿಸಿಕೊಂಡು ಸಂದರ್ಶನ ಮಾಡುತ್ತಿದೆ. ಅಲ್ಲಿಗೆ ಯಶ್​​​​ಗೆ ದುಶ್ಮನ್​​ಗಳು ಹುಟ್ಟಿಕೊಳ್ಳದೇ ಇರುತ್ತಾರಾ..? ಇದ್ದೇ ಇರ್ತಾರೆ ಅಲ್ವಾ.. ಈಗ ಟಾಕ್ಸಿಕ್​ಅನ್ನ ವಿಶ್ವದಾದ್ಯಂತಯ ತೆರೆಗೆ ತರೋಕೆ ಓಡಾಡುತ್ತಿರೋ ಯಶ್​ಗೆ ಪಕ್ಕದ ಮನೆಯೇ ದೊಡ್ಡ ದುಶ್ಮನ್​ ಆಗಿ ಕಾಡುತ್ತಿದೆ. ಹಾಗಾದ್ರೆ ಯಾವ್ದು ಆ ಪಕ್ಕದ ಮನೆ..? ಯಶ್​ ಮೇಲೆ ಯಾಕೆ ಅಷ್ಟೊಂದು ಶತೃತ್ವ..? ನೋಡೋಣ &amp;nbsp;ಬನ್ನಿ..&lt;/p&gt;&lt;p&gt;ರಾಕಿಗೆ ಇದ್ದಾರಾ ಊರ್​ ತುಂಬಾ ದುಶ್ಮನ್..?ರಾಕಿಂಗ್ ಸ್ಟಾರ್ ಯಶ್​ರ ಮಾಸ್ಟರ್ ಪೀಸ್ ಸಿನಿಮಾ ಡೈಲಾಗ್ ನಿಮಗೆಲ್ಲಾ ನೆನಪಿರಬಹುದು. ರಾಕಿ ಅಂದು ನಮ್ಮನ್ನ ಕಂಡ್ರೆ ಉರ್ಕೋಳ್ಳೋರು ಒಬ್ರಾ ಇಬ್ರಾ, ದುಷ್ಮನ್ ಕಹಾ ಹೈ ಅಂದ್ರೆ ಊರ್ ತುಂಬಾ ಹೈ&quot; ಅಂತ ಸಖತ್ ಆಗಿ ಡೈಲಾಗ್ ಹೊಡೆದಿದ್ರು...&lt;/p&gt;&lt;p&gt;ಪಕ್ಕದ ಮನೆಯಲ್ಲೇ ಇದ್ದಾರೆ ಯಶ್ ಗೆ ವಿರೋಧಿಗಳು: ಈ ಡೈಲಾಗ್ ಈಗ ಪದೇ ಪದೆ ಯಶ್ ನಿಜ ಜೀವನದಲ್ಲಿ ನಿಜ ಅನ್ನಿಸೋಕೆ ಶುರುವಾಗುತ್ತಿದೆ. ಯಶ್​ಗೆ ಉರ್​ ತುಂಬಾ ದುಶ್ಮನ್​ಗಳು ಹುಟ್ಟಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಯಶ್​ ಬೆಳೆದು ನಿಂತಿರೋ ರೀತಿ. ಯಶ್​ ಟಾಕ್ಸಿಕ್​ ಸಿನಿಮಾ ಇನ್ನೇನು ಬಿಡುಗಡೆ ಹೊಸ್ತಿಲಿನಲ್ಲಿದೆ. ಆದ್ರೆ ಆ ಸಿನಿಮಾವನ್ನ ಮಣ್ಣು ಮುಕ್ಕಿಸಬೇಕು ಅಂತ ಒಂದಷ್ಟು ಜನ ಹೊಂಚು ಹಾಕಿ ಕೂತಂತೆ ಕಾಣುತ್ತಿದೆ. ಅದು ಬಾಲಿವುಡ್​​ನಿಂದ ಹಿಡಿದು ಟಾಲಿವುಡ್​ ವರೆಗೂ..&lt;/p&gt;&lt;p&gt;ಯಶ್​ಟಾಕ್ಸಿಕ್ ಬಗ್ಗೆ ಟಾಲಿವುಡ್ ನಲ್ಲಿ ಅಪ ಪ್ರಚಾರ..!ಹೌದು, ನಟ ಯಶ್​​​​ ಬಾಕ್ಸಾಫೀಸ್​​ನ ಕಿಂಗ್​. ಯಶ್​ ಸಿನಿಮಾ ಬಂದ್ರೆ ಬೇರೆ ಸ್ಟಾರ್​ಗಳೆಲ್ಲಾ ಪಕ್ಕಕ್ಕೆ ಸರಿದು ಬಿಡ್ತಾರೆ. ಈಗ ಜೂನ್​​ 4ಕ್ಕೆ ಟಾಕ್ಸಿಕ್​​ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಅಷ್ಟರಲ್ಲಾಗೆ ಟಾಲಿವುಡ್​​ನಲ್ಲಿ ಟಾಕ್ಸಿಕ್​​ ಬಗ್ಗೆ ಅಪ ಪ್ರಚಾರ ಮಾಡೋ ದೊಡ್ಡ ನೆಟ್​ವರ್ಕ್​ ಒಂದು ಬೆಳೆದು ನಿಂತಿದೆ.&lt;/p&gt;&lt;p&gt;ಯಶ್​ಟಾಕ್ಸಿಕ್ ರಿಲೀಸ್ ಮುಂದಕ್ಕೆ ಹೋಯ್ತು; ದೊಡ್ಡ ಸುಳ್ಳು ಸುದ್ದಿ ಹಬ್ಬಿಸಿದ ಟಾಲಿವುಡ್​ ಜಗತ್ತುಸದ್ಯ 'ಟಾಕ್ಸಿಕ್' ಚಿತ್ರದಿಂದ ಟಾಲಿವುಡ್ ಮಂದಿಗೆ ಢವ ಢವ ಶುರುವಾಗಿದೆ. ಅದಕ್ಕೆ ಕಾರಣ ಅದೇ ತಿಂಗಳು ರಾಮ್&zwnj;ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆ ಆಗುತ್ತಿದೆ. 'ಟಾಕ್ಸಿಕ್' ರಾಯನ ಆರ್ಭಟದ ನಡುವೆ 'ಪೆದ್ದಿ' ಕಳೆದು ಹೋಗುವ ಭೀತಿ ಶುರುವಾದಂತೆ ಕಾಣುತ್ತಿದೆ. ಅದೇ ಕಾರಣಕ್ಕೆ ಈಗ 'ಟಾಕ್ಸಿಕ್' ವಿರುದ್ಧ ಟಾಲಿವುಡ್​ ಜಗತ್ತಿನಾಧ್ಯಂತ ನೆಗೆಟಿವ್ ಹಬ್ಬಿಸುವ ಕೆಲಸ ನಡೆಯುತ್ತಿದೆ.&amp;nbsp;ಜೂನ್ 4ಕ್ಕೆ 'ಪೆದ್ದಿ' ಸಿನಿಮಾ ತೆರೆಗೆ ಬರಲಿದೆ, ಅದೇ ಕಾರಣಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಪೋಸ್ಟ್&zwnj;ಪೋನ್ ಆಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.&lt;/p&gt;&lt;p&gt;ಅಷ್ಟೆ ಅಲ್ಲ ಟಾಕ್ಸಿಕ್​ ಕ್ರೇಜ್​ ತೆಲುಗು ನಾಡಿನಲ್ಲಿ ಭಾರಿ ಜೋರಾಗಿದೆ. ಟಾಕ್ಸಿಕ್​ನ ಟೀಸರ್ ಬಂದಾಗ ಆಂದ್ರ, ಹೈದರಾಬಾದ್​​​​ ಟೆರಿಟೋರಿಯಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಆದ್ರೆ ಈಗ ರಾಮ್​ ಚರಣ್​ರ ಪೆದ್ದಿ ಟಾಕ್ಸಿಕ್​ ಜೊತೆ ಕಾಂಪೀಟ್ ಮಾಡೋ ಸೂಚನೆ ಬರುತ್ತಿದ್ದಂತೆ, ಟಾಕ್ಸಿಕ್ ಹವಾ ಕಡಿಮೆ ಆಗಿದೆ. ಟೀಸರ್​ ಸೋತಿದೆ ಅಂತ ಕೆಲ ತೆಲುಗು ಮಂದಿ ಯಶ್​ ಸಿನಿಮಾದ ಅಪಪ್ರಚಾರಕ್ಕೆ&amp;nbsp;ಕೆಲವೇ ತಿಂಗಳ ಹಿಂದೆ ಬಾಲಿವುಡ್ ಮಂದಿ 'ರಾಮಾಯಣ' ಚಿತ್ರದ ವಿಚಾರದಲ್ಲಿ ಯಶ್ ಅವರನ್ನು ಕೆಳಗಿಳಿಸಿ ಮಾತನಾಡಿದ್ರು.&lt;/p&gt;&lt;p&gt;ರಾಮಾಯಣದಲ್ಲಿ ಕೆಲವೇ ನಿಮಿಷಗಳಷ್ಟೇ ಯಶ್ ಕಾಣಿಸಿಕೊಳ್ತಾರೆ. 'ರಾಮಾಯಣ' ಚಿತ್ರದಲ್ಲಿ ಯಶ್&zwnj;ಗೆ ಅವಕಾಶ ಕಮ್ಮಿ. ರಣ್ಬೀರ್ ದರ್ಬಾರ್ ಹೆಚ್ಚು ಎಂದು ಟ್ರೋಲ್ ಮಾಡಿದ್ರು. ಈಗ ತೆಲುಗುನಲ್ಲಿ ಟಾಕ್ಸಿಕ್​ಅನ್ನ ಬೀಳಿಸೋ ಹುನ್ನಾರ ಶುರುವಾಗಿದೆ. 120 ಕೋಟಿ ರೂ.ಗೆ ದಿಲ್ ರಾಜು 'ಟಾಕ್ಸಿಕ್' ಚಿತ್ರದ ತೆಲುಗು ರೈಟ್ಸ್ ಕೊಂಡುಕೊಂಡಿದ್ದಾರೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಅಲ್ಲಿ ಬಿಡುಗಡೆ ಆಗಲಿದ್ದು, ಆಡಿಕೊಳ್ಳೋರ ಬಾಯಿಗೆ ಅಂದು ಬಿಸಿ ತುಪ್ಪ ಟಾಕ್ಸಿಕ್ ಆಗಲಿದೆಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/bollywood-and-hollywood-creates-lie-news-about-yash-upcimng-movie-toxic-release-date-videoshow-qwsvxw0"/>
        </item>
        <item>
            <title><![CDATA[ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ]]></title>
            <link>https://kannada.asianetnews.com/gallery/sandalwood/sanvi-sudeep-shares-beautiful-childhood-memories-with-dad-sudeep-uh0cf2c</link>
            <guid isPermaLink="true">https://kannada.asianetnews.com/gallery/sandalwood/sanvi-sudeep-shares-beautiful-childhood-memories-with-dad-sudeep-uh0cf2c</guid>
            <pubDate>Fri, 17 Apr 2026 18:35:11 +0530</pubDate>
            <description><![CDATA[&lt;p&gt;ಸುದೀಪ್ ಪುತ್ರಿ ಸಾನ್ವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಂದೆಯ ಜೊತೆಗಿನ ವಿಶೇಷವಾದ ಸುಂದರ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಸುದೀಪ್ ಜೊತೆಗೆ ಮುದ್ದಾಗಿ ಆಡಿದ, ತರಲೆ ಮಾಡಿದ ಮಧುರ ಕ್ಷಣಗಳನ್ನು ಸಾನ್ವಿ ಮೆಲುಕು ಹಾಕಿದ್ದು, ಸದ್ಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdrmx4nqtbwg9pbknq9em75,imgname-sanvi-sudeep-1776431035539.jpg" type="image/jpeg" height="390" width="690"/>
            <content:encoded><![CDATA[&lt;p&gt;ಸುದೀಪ್ ಪುತ್ರಿ ಸಾನ್ವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಂದೆಯ ಜೊತೆಗಿನ ವಿಶೇಷವಾದ ಸುಂದರ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಸುದೀಪ್ ಜೊತೆಗೆ ಮುದ್ದಾಗಿ ಆಡಿದ, ತರಲೆ ಮಾಡಿದ ಮಧುರ ಕ್ಷಣಗಳನ್ನು ಸಾನ್ವಿ ಮೆಲುಕು ಹಾಕಿದ್ದು, ಸದ್ಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಇದೀಗ ಸಾನ್ವಿ ತಮ್ಮ ತಂದೆ ಕಿಚ್ಚನ ಜೊತೆಗೆ ಬಾಲ್ಯದಲ್ಲಿ ಮಾಡಿದ ತುಂಟಾಟ, ಆಟಗಳನ್ನು ನೆನಪಿಸಿಕೊಂಡು ಮುದ್ದಾದ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿವೆ.&lt;/p&gt;&lt;img&gt;&lt;p&gt;ಸಾನ್ವಿ ಇನ್ನೂ ಪುಟ್ಟ ಹುಡುಗಿಯಾಗಿರುವಾಗ ಅಪ್ಪ ಕಿಚ್ಚ ಸುದೀಪ್ ಜೊತೆಗೆ ಸೆಲ್ಫಿ ತೆಗೆದುಕೊಂಡಿರುವ, ಇಬ್ಬರು ಫನ್ನಿ ಫೇಸ್ ಮಾಡಿರುವ, ಅಪ್ಪ-ಅಮ್ಮನ ಜೊತೆಗಿನ ಮುದ್ದಾದ ಫ್ಯಾಮಿಲಿ ಫೋಟೊ, ನೀರಿನ ಗುಳ್ಳೆ ಜೊತೆ ಆಡುತ್ತಿರುವ ಫೋಟೊ ಹಂಚಿಕೊಂಡು Replaying memories ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಸಾನ್ವಿಯ ಮುದ್ದಾದ ಬಾಲ್ಯದ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿವೆ. ಕಿಚ್ಚ ಸುದೀಪ್ ಅಭಿಮಾನಿಗಳು, ತಮ್ಮ ಫೇವರಿಟ್ ನಟ ಅಪ್ಪನಾಗಿ ಮಗಳ ಜೊತೆ ಯಾವ ರೀತಿ ಬಾಂಧವ್ಯ ಹೊಂದಿದ್ದರು ಅನ್ನೋದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಾನ್ವಿ ಸುದೀಪ್ ಅವರು ನಟನೆಗೆ ಬರಲಿದ್ದಾರೆ ಎನ್ನಲಾಗಿತ್ತು, ನಟನೆಯ ಒಂದಷ್ಟು ತುಣುಕುಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಸಾನ್ವಿ ಗಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಮಿಳು ಸೇರಿ ಕನ್ನಡದ ಹಲವು ಸಿನಿಮಾಗಳಿಗೆ ಸಾನ್ವಿ ಹಾಡು ಹಾಡಿದ್ದಾರೆ.&lt;/p&gt;&lt;img&gt;&lt;p&gt;ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾದ ನಿಶ್ವಿಕಾ ನಾಯ್ಡು ಹೆಜ್ಜೆ ಹಾಕಿರುವ ಮಸ್ತ್ ಮಲೈಕಾ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಡ್ಯಾನ್ಸ್ ಆಂಥಮ್ ನ್ನು 50 ಮಿಲಿಯನ್ ಜನ ವೀಕ್ಷಿಸುವ ಮೂಲಕ ದಾಖಲೆ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲ ಈ ಹಾಡಿಗಾಗಿ ಸಾನ್ವಿ ಸುದೀಪ್ ಗೆ ಈ ಬಾರಿಗೆ ಚಂದನವನ ಕ್ರಿಟಿಕ್ಸ್ ಅವಾರ್ಡ್ ಕೂಡ ಲಭ್ಯವಾಗಿತ್ತು.&lt;/p&gt;&lt;img&gt;&lt;p&gt;ಸಾನ್ವಿ ಸುದೀಪ್ ಮಸ್ತ್ ಮಲಿಕಾ ಹಾಡು ಮಾತ್ರವಲ್ಲ, ಇನ್ನಷ್ಟೇ ಬಿಡುಗಡೆಯಾಗಲಿರುವ ಮ್ಯಾಂಗೋ ಪಚ್ಚ ಸಿನಿಮಾದ ಅರಗಿಣಿ ಹಾಡು, ಜಿಮ್ಮಿ ಸಿನಿಮಾದ ಹಾಡು, ತೆಲುಗಿನಲ್ಲಿ ನಾಣಿ ಅಭಿನಯದ ಹಿಟ್ 3 ಸಿನಿಮಾದ ಹಾಡನ್ನೂ ಕೂಡ ಸಾನ್ವಿ ಸುದೀಪ್ ಹಾಡಿದ್ದರು.&lt;/p&gt;]]></content:encoded>
            <category>sandalwood</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/sanvi-sudeep-shares-beautiful-childhood-memories-with-dad-sudeep-uh0cf2c"/>
        </item>
        <item>
            <title><![CDATA[ಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ ಭೇಟಿ: ಪತಿಯನ್ನ ನೋಡಲು ನಟ ಧನ್ವೀರ್ ಜೊತೆ ಆಗಮಿಸಿದ ದರ್ಶನ್ ಪತ್ನಿ!]]></title>
            <link>https://kannada.asianetnews.com/gallery/bengaluru-urban/darshan-wife-vijayalakshmi-visits-jail-with-actor-dhanveer-renukaswamy-case-san-vd9dqla</link>
            <guid isPermaLink="true">https://kannada.asianetnews.com/gallery/bengaluru-urban/darshan-wife-vijayalakshmi-visits-jail-with-actor-dhanveer-renukaswamy-case-san-vd9dqla</guid>
            <pubDate>Thu, 16 Apr 2026 16:12:07 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್&zwnj;ಗೆ ಪತ್ನಿ ವಿಜಯಲಕ್ಷ್ಮಿ ಅವರು ನಿರಂತರವಾಗಿ ಬೆಂಬಲ ನೀಡುತ್ತಿದ್ದಾರೆ. ಇಂದಿನ ಜೈಲು ಭೇಟಿಯ ವೇಳೆ, ಅವರೊಂದಿಗೆ ನಟ ಧನ್ವೀರ್ ಗೌಡ ಕೂಡ ಕಾಣಿಸಿಕೊಂಡು ದರ್ಶನ್&zwnj;ಗೆ ಧೈರ್ಯ ತುಂಬಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kcdac7am0vz4q6s79w1rxtma,imgname-new-project--3--1765678652755.jpg" type="image/jpeg" height="390" width="690"/>
            <content:encoded><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್&zwnj;ಗೆ ಪತ್ನಿ ವಿಜಯಲಕ್ಷ್ಮಿ ಅವರು ನಿರಂತರವಾಗಿ ಬೆಂಬಲ ನೀಡುತ್ತಿದ್ದಾರೆ. ಇಂದಿನ ಜೈಲು ಭೇಟಿಯ ವೇಳೆ, ಅವರೊಂದಿಗೆ ನಟ ಧನ್ವೀರ್ ಗೌಡ ಕೂಡ ಕಾಣಿಸಿಕೊಂಡು ದರ್ಶನ್&zwnj;ಗೆ ಧೈರ್ಯ ತುಂಬಿದ್ದಾರೆ.&lt;img&gt;&lt;p&gt;ದರ್ಶನ್ ಅವರು ಜೈಲು ಸೇರಿದ ದಿನದಿಂದಲೂ ಪತ್ನಿ ವಿಜಯಲಕ್ಷ್ಮಿ ಅವರು ಪತಿಯ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಕಾನೂನು ಹೋರಾಟದ ನಡುವೆಯೂ ಪ್ರತಿ ಬಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಯೋಗಕ್ಷೇಮ ವಿಚಾರಿಸುತ್ತಿರುವ ಅವರು, ಇಂದು ಕೂಡ ಚಾಚು ತಪ್ಪದೆ ಪರಪ್ಪನ ಅಗ್ರಹಾರಕ್ಕೆ ಆಗಮಿಸಿ ಪತಿಯನ್ನು ಭೇಟಿಯಾದರು.&lt;/p&gt;&lt;img&gt;&lt;p&gt;ಇಂದಿನ ಭೇಟಿಯ ವಿಶೇಷವೆಂದರೆ ವಿಜಯಲಕ್ಷ್ಮಿ ಅವರ ಜೊತೆಗೆ ಸ್ಯಾಂಡಲ್&zwnj;ವುಡ್ ನಟ ಧನ್ವೀರ್ ಗೌಡ ಕೂಡ ಕಾಣಿಸಿಕೊಂಡರು. ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಧನ್ವೀರ್, ವಿಜಯಲಕ್ಷ್ಮಿ ಅವರೊಂದಿಗೆ ಜೈಲಿಗೆ ಆಗಮಿಸಿ ದರ್ಶನ್ ಅವರನ್ನು ಕಂಡು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.&lt;/p&gt;&lt;img&gt;&lt;p&gt;ನಟ ದರ್ಶನ್ ಅವರಿಗೆ ಜೈಲು ವಾಸ ಹೊಸದೇನಲ್ಲ. ಈ ಹಿಂದೆ ಕೂಡ ವೈಯಕ್ತಿಕ ಕಾರಣಗಳಿಂದ ಜೈಲು ಸೇರಿದ್ದ ಅವರು, ಇದೀಗ ರೇಣುಕಾಸ್ವಾಮಿ ಕೊಲೆ ಎಂಬ ಪ್ರಕರಣದಲ್ಲಿ ಎರಡನೇ ಬಾರಿಗೆ ಪರಪ್ಪನ ಅಗ್ರಹಾರದ ಕಂಬಿ ಎಣಿಸುವಂತಾಗಿದೆ. ಚಿತ್ರರಂಗದ 'ದಾಸ'ನಿಗೆ ಈ ಬಾರಿ ಕಾನೂನಿನ ಸಂಕಷ್ಟ ಮತ್ತಷ್ಟು ಕಠಿಣವಾಗಿದೆ.&lt;/p&gt;&lt;img&gt;&lt;p&gt;ಜೈಲಿನ ಭೇಟಿಯ ವೇಳೆ ದರ್ಶನ್ ಮತ್ತು ವಿಜಯಲಕ್ಷ್ಮಿ ನಡುವೆ ಕೆಲಕಾಲ ಮಾತುಕತೆ ನಡೆದಿದೆ. ಮನೆಯ ಪರಿಸ್ಥಿತಿ, ಮಗನ ಯೋಗಕ್ಷೇಮ ಹಾಗೂ ಕೇಸ್&zwnj;ನ ಮುಂದಿನ ಬೆಳವಣಿಗೆಗಳ ಬಗ್ಗೆ ದರ್ಶನ್ ಅವರು ಪತ್ನಿಯ ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಸಂಕಷ್ಟದ ಸಮಯದಲ್ಲಿ ಪತ್ನಿಯ ಭೇಟಿ ದರ್ಶನ್&zwnj;ಗೆ ಮಾನಸಿಕ ಸ್ಥೈರ್ಯ ನೀಡಿದೆ.&lt;/p&gt;&lt;img&gt;&lt;p&gt;ದರ್ಶನ್ ಪತ್ನಿ ಮತ್ತು ನಟ ಧನ್ವೀರ್ ಜೈಲಿಗೆ ಬರುತ್ತಿದ್ದಂತೆ ಮಾಧ್ಯಮಗಳು ಮುತ್ತಿಗೆ ಹಾಕಿದವು. ಆದರೆ ಯಾವುದಕ್ಕೂ ಪ್ರತಿಕ್ರಿಯೆ ನೀಡದ ವಿಜಯಲಕ್ಷ್ಮಿ ಅವರು ನೇರವಾಗಿ ಒಳಕ್ಕೆ ತೆರಳಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿರುವ ಈ ಸಮಯದಲ್ಲಿ ದರ್ಶನ್ ಅವರ ಪ್ರತಿ ನಡೆಯೂ ಕುತೂಹಲ ಕೆರಳಿಸಿದೆ.&lt;/p&gt;]]></content:encoded>
            <category>sandalwood</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/darshan-wife-vijayalakshmi-visits-jail-with-actor-dhanveer-renukaswamy-case-san-vd9dqla"/>
        </item>
        <item>
            <title><![CDATA[ಸಿಂಪಲ್ ಸೀರೆಯಲ್ಲೂ ರಾಯಲ್ ಲುಕ್… ರಾಧಿಕಾ ಪಂಡಿತ್ ಅಂದಕ್ಕೆ ಫ್ಯಾನ್ಸ್ ಫಿದಾ]]></title>
            <link>https://kannada.asianetnews.com/gallery/sandalwood/radhika-pandit-beautiful-saree-look-goes-viral-viq95hd</link>
            <guid isPermaLink="true">https://kannada.asianetnews.com/gallery/sandalwood/radhika-pandit-beautiful-saree-look-goes-viral-viq95hd</guid>
            <pubDate>Wed, 15 Apr 2026 20:24:28 +0530</pubDate>
            <description><![CDATA[&lt;p&gt;ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊಗಳನ್ನು ಶೇರ್ ಮಾಡಿದ್ದು, ನಟಿಯ ಅಂದ-ಚೆಂದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಬಿಳಿ ಸೀರೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಥರ ಕಾಣಿಸ್ತಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ ಜನ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8t43hzvxxqw7fe49tfm2g7,imgname-radhika-pandit--1--1776264810045.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊಗಳನ್ನು ಶೇರ್ ಮಾಡಿದ್ದು, ನಟಿಯ ಅಂದ-ಚೆಂದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಬಿಳಿ ಸೀರೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಥರ ಕಾಣಿಸ್ತಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ ಜನ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಟಿ ರಾಧಿಕಾ ಪಂಡಿತ್ ಸಿನಿಮಾದಿಂದ ದೂರ ಉಳಿದು ವರ್ಷ ಹಲವು ಆಗಿದ್ದರೂ, ಇಂದಿಗೂ ನಟಿಯ ಕ್ರೇಜ್ ಕಡಿಮೆಯಾಗಿಲ್ಲ. ನಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡರೆ ಸಾಕು, ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಇದೀಗ ಹೊಸ ಫೋಟೊದೊಂದಿಗೆ ನಟಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ಇದೀಗ ಬಿಳಿ ಬಣ್ಣದ ಸೀರೆಯುಟ್ಟು, ಪುಟ್ಟ ಬಿಂದಿ, ಅದರ ಮೇಲೊಂದು ಕುಂಕುಮ, ಕುತ್ತಿಗೆ ಕೈಗೆ ಚಿನ್ನದ ಜ್ಯುವೆಲ್ಲರಿ ಧರಿಸಿ, ಓಪನ್ ಹೇರ್ ಬಿಟ್ಕೊಂಡು ಪೋಸ್ ಕೊಟ್ಟಿದ್ದು, ನಟಿಯ ಫೋಟೊಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;img&gt;&lt;p&gt;ಈ ಫೋಟೊದಲ್ಲಿ ಕಾಣುವಂತೆ ರಾಧಿಕಾ ಪಂಡಿತ್ ಏನೂ ಹೇವಿ ಮೇಕಪ್ ಮಾಡಿ, ಗ್ರಾಂಡ್ ಸೀರೆ ಉಟ್ಟಿಲ್ಲ. ಸಿಂಪಲ್ ಲುಕ್, ಸಿಂಪಲ್ ಮೇಕಪ್ ನಲ್ಲಿ ರಾದಿಕಾ ರಾಯಲ್ ಆಗಿ ಕಾಣಿಸುತ್ತಿದ್ದು, ನಟಿಯ ಅಂದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.&lt;/p&gt;&lt;img&gt;&lt;p&gt;ಅಭಿಮಾನಿಗಳು ರಾಧಿಕಾ ಫೋಟೊ ನೋಡಿ ನಿಮ್ಮ ಅಂದಕ್ಕೆ ಮರುಳಾಗುತ್ತಿದ್ದೇನೆ, ಮತ್ತೆ ಮತ್ತೆ ನಿಮ್ಮ ಪ್ರೀತಿಯಲ್ಲಿ ಬೀಳುತ್ತಿದ್ದೇನೆ. ಸೀರೆ ಯುಟ್ಟ ನವಿಲು ನೀನೂ..ದೃಷ್ಟಿಯಾಗ ಬಹುದುಯೇನೊಕನ್ನಡಿನೆ ಬೇಡವೆ, ನಾನು ಕನ್ನಡಿ ಆಗುವೇ ಎನ್ನುತ್ತಾ ನಟಿಯ ಅಂದವನ್ನು ಹೊಗಳಿದ್ದಾರೆ.&lt;/p&gt;&lt;img&gt;&lt;p&gt;ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ಮುಂಬೈನಲ್ಲಿರುವ ಸಮುದ್ರಕ್ಕೆ ಎದುರಾಗಿರುವ ಮನೆಯಲ್ಲಿ ನಿಂತಿರುವ ಫೋಟೊಗಳನ್ನು ಹಂಚಿಕೊಂಡಿದ್ದರು. ಈ ಫೋಟೊಗಳನ್ನು ಸ್ವತಃ ಯಶ್ ಅವರು ತೆಗೆದಿರುವುದಾಗಿ ನಟಿ ತಿಳಿಸಿದ್ದರು. ಇದರ ಜೊತೆ The way, this beholder sees me through his lens.. ಎನ್ನುವ ಕ್ಯಾಪ್ಶನ್ ಕೂಡ ಹಾಕಿದ್ದರು.&lt;/p&gt;&lt;img&gt;&lt;p&gt;ಸದ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ತಮ್ಮ ಫ್ಯಾಮಿಲಿ ಫೋಟೊ, ಕ್ಯಾಂಡೀಡ್ ಫೋಟೊಗಳನ್ನು ಹಾಗೂ ಯಶ್ ಜೊತೆಗಿನ ಮುದ್ದಾದ ಕ್ಷಣಗಳನ್ನು ನಟಿ ಶೇರ್ ಮಾಡುತ್ತಿರುತ್ತಾರೆ.&lt;/p&gt;]]></content:encoded>
            <category>sandalwood</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/radhika-pandit-beautiful-saree-look-goes-viral-viq95hd"/>
        </item>
        <item>
            <title><![CDATA[ರಾವಣನ ಹಣ್ಣು ರಾಮ ಕದ್ದ: ಪ್ರಕಾಶ್​ ರಾಜ್​ ಹೊಸ ರಾಮಾಯಣ ಸ್ಟೋರಿ; ಗೋಮಾಂಸ ಹಬ್ಬ- FIR ದಾಖಲು]]></title>
            <link>https://kannada.asianetnews.com/gallery/sandalwood/prakash-raj-contraversy-statement-against-ramayana-and-also-beef-fest-suc-vzciok2</link>
            <guid isPermaLink="true">https://kannada.asianetnews.com/gallery/sandalwood/prakash-raj-contraversy-statement-against-ramayana-and-also-beef-fest-suc-vzciok2</guid>
            <pubDate>Fri, 17 Apr 2026 12:51:11 +0530</pubDate>
            <description><![CDATA[&lt;p&gt;ಕೇರಳದ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ತಿರುಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಮತ್ತು ರಾವಣರ ಕುರಿತು ತಮ್ಮದೇ ಆದ ಕಥೆ ಕಟ್ಟಿ, ಅದನ್ನು ಹಿಂದಿ ಹೇರಿಕೆ ಮತ್ತು ಜಿಎಸ್&zwnj;ಟಿಗೆ ಹೋಲಿಸಿದ್ದು, &amp;nbsp;ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd4vy0gex4razqeq7ransrp,imgname-prakash-raj-about-ramayana-1776410294288.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ತಿರುಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಮತ್ತು ರಾವಣರ ಕುರಿತು ತಮ್ಮದೇ ಆದ ಕಥೆ ಕಟ್ಟಿ, ಅದನ್ನು ಹಿಂದಿ ಹೇರಿಕೆ ಮತ್ತು ಜಿಎಸ್&zwnj;ಟಿಗೆ ಹೋಲಿಸಿದ್ದು, &amp;nbsp;ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ನಟ ಪ್ರಕಾಶ್​ ರಾಜ್​ ಅವರಿಗೆ ಕಾಂಟ್ರವರ್ಸಿ ಮೂಲಕ ಫೇಮಸ್​ ಆಗುವುದು ಎಂದರೆ ಇನ್ನಿಲ್ಲದ ಖುಷಿ. ಸದಾ ಬಿಜೆಪಿ, ಕೇಂದ್ರ ಸರ್ಕಾರ, ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಲೇ ಒಂದಷ್ಟು ವರ್ಗವನ್ನು ಓಲೈಸಲು, ತಮ್ಮ ಮೇಲೆ ಕೇಸ್​ ಆದರೂ ಏನೂ ಆಗುವುದಿಲ್ಲ ಎನ್ನುವ ಬಂಢ ಧೈರ್ಯದಿಂದಲೇ ಹಿಂದೂಗಳ ವಿರುದ್ಧವೂ ಸಾಕಷ್ಟು ಚರ್ಚಾಸ್ಪದ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಅದರಲ್ಲಿ ಇದೀಗ ಕೇರಳಿಗರ ಓಲೈಕೆಗೆ, ಅವರ ಚಪ್ಪಾಳೆ ಗಿಟ್ಟಿಸಲು ಅಲ್ಲಿ ಕೆಲವು ಮಾತನಾಡಿದ್ದು, ಇದೀಗ ಅವರ ವಿರುದ್ಧ ಕ್ರಿಮಿನಲ್​ ಕೇಸ್​​ ದಾಖಲಾಗಿದೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಕೇರಳದಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ನಟ ರಾಮಾಯಣದ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ, ಹಿಂದಿ ಭಾಷೆ ಎಲ್ಲವನ್ನೂ ಟೀಕಿಸುವ ಭರದಲ್ಲಿ, ಶ್ರೀರಾಮಚಂದ್ರನನ್ನೇ ಉದಾಹರಣೆ ಮಾಡಿಕೊಂಡು ಕಾಂಟ್ರವರ್ಸಿ ಕ್ರಿಯೇಟ್​ ಮಾಡಿದ್ದಾರೆ ಪ್ರಕಾಶ್​ ರಾಜ್​.&lt;/p&gt;&lt;img&gt;&lt;p&gt;ಶ್ರೀರಾಮ ಉತ್ತರ ಭಾರತದವನು ಹಾಗೆಯೇ ರಾವಣ ದಕ್ಷಿಣ ಭಾರತದ ಆದಿವಾಸಿ ಅಷ್ಟೇ. ರಾಮನು ದಕ್ಷಿಣ ಭಾರತದ ಜಮೀನಿಗೆ ನುಗ್ಗಿ ಹಣ್ಣನ್ನು ಕಿತ್ತು ತಿಂದಿದ್ದಾನೆ ಎನ್ನುವ ಮೂಲಕ ತಾವೇ ಸೃಷ್ಟಿಸಿರುವ ಕಥೆಯೊಂದನ್ನು ಹೇಳಿದ್ದಾರೆ. ರಾಮ, ಲಕ್ಷ್ಮಣ, ಸೀತೆ ದಕ್ಷಿಣ ಭಾರತಕ್ಕೆ ಅವರಿಗೆ ಒಂದು ತೋಟದಲ್ಲಿ ಹಣ್ಣುಗಳು ಕಾಣುತ್ತವೆ. ಆಗ ಲಕ್ಷ್ಮಣ ಆ ಹಣ್ಣುಗಳನ್ನು ನಾವು ತಿನ್ನಬಹುದೇ ಎಂದು ರಾಮನಲ್ಲಿ ಕೇಳಿದಾಗ, ರಾಮ ಹಸಿವಾಗಿದ್ದರೆ ತಿನ್ನು ಎನ್ನುತ್ತಾನೆ. ಹಣ್ಣುಗಳನ್ನು ತಿನ್ನುವಾಗ, ಶೂರ್ಪನಕಿ ಹಾಗೂ ರಾವಣ ಬರುತ್ತಾರೆ. ಶೂರ್ಪನಕಿಗೆ ಸಿಟ್ಟು ಬಂದು ರಾವಣನಲ್ಲಿ ವಿಷಯ ಹೇಳುತ್ತಾಳೆ ಎಂದು ತಮ್ಮ ಸ್ಟೋರಿ ಆರಂಭಿಸಿದ್ದಾರೆ.&lt;/p&gt;&lt;img&gt;&lt;p&gt;ಬಳಿಕ, ರಾವಣ ಅವರಿಗೆ ಹಸಿವಾಗಿದೆ ಬಿಡು ತಿನ್ನಲಿ, ಆ ಮೇಲೆ ಮಾತಾಡೋಣ ಎನ್ನುತ್ತಾನೆ. ಅದಾದ ಬಳಿಕ ರಾವಣ, ಶೂರ್ಪನಕಿ ರಾಮ, ಲಕ್ಷ್ಮಣರ ಎದುರಿಗೆ ಹೋದಾಗ ರಾಮ ಯಾರೋ ಬುಡಕಟ್ಟ ಜನಾಂಗದವರು ಬಂದರು ಎನ್ನುತ್ತಾನೆ. ಹಣ್ಣುಗಳನ್ನು ತಿಂದಿದ್ದಕ್ಕೆ ಹಣ ನೀಡಬೇಕು ಎಂದು ರಾವಣ ಹೇಳುತ್ತಾನೆ. ಲೆಕ್ಕ ಮಾಡಿ 2000 ಸಾವಿರ ಡಾಲರ್ ಜೊತೆ ಜಿಎಸ್&zwnj;ಟಿ ಕಟ್ಟಬೇಕು ಎಂದು ಹೇಳುತ್ತಾನೆ ಎನ್ನುವುದು ಈ ಕಥೆಯ ಮುಂದುವರೆದ ಭಾಗ.&lt;/p&gt;&lt;img&gt;&lt;p&gt;ಆಗ ರಾಮ, ಲಕ್ಷ್ಮಣ ನಮ್ಮ ಬಳಿ ಹಣವಿಲ್ಲ ಹೇಳುತ್ತಾರೆ . ಆ ಸಮಯದಲ್ಲಿ ರಾವಣ ನಿಮಗೆ ಕೆಲವೊಂದು ರಿಯಾಯ್ತಿ ನೀಡುತ್ತೇವೆ ಎಂದು ಹೇಳಿದರೂ ನಮ್ಮ ಬಳಿ ಹಣ ಇಲ್ಲ ಎನ್ನುತ್ತಾನೆ ರಾಮ. ಆಗ ರಾವಣ ಹಣ್ಣುಗಳನ್ನು ತಿಂದ ಬಳಿಕ ಉಳಿದ ಬೀಜವನ್ನು ನೆಟ್ಟು ಅದನ್ನು ಗಿಡವನ್ನಾಗಿ ಮಾಡಿ ಹೋಗಿ ಎನ್ನುತ್ತಾನೆ. ಹಾಗೆಯೇ ಹೆಸರು ಕೇಳಿದಾಗ, ನಾನು ರಾಮ, ನಾವು ಉತ್ತರ ಭಾರತದವರು ಎಂದು ಹೇಳುತ್ತಾನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಕೊನೆಗೆ ಇದನ್ನು ಹಿಂದಿಗೆ ಲಿಂಕ್​ ಮಾಡಿ, ಹಿಂದಿ ಹೇರಿಕೆ ಸ್ಥಿತಿಯೂ ಇದೇ ಆಗಿದೆ. ದುಡ್ಡೇ ಇಲ್ಲದ ಮೇಲೆ ಡಿಸ್ಕೌಂಟ್​ ಕೊಟ್ರೆ ಏನು ಪ್ರಯೋಜನ ಎನ್ನುವ ರೀತಿ ಹಿಂದಿ ಹೇರಿಕೆ ಮಾಡಬೇಡಿ. ಇಲ್ಲಿ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಬೀಫ್ ಫೆಸ್ಟ್ ಮಾಡುತ್ತೇವೆ&rsquo; ಎಂದಿದ್ದಾರೆ ಪ್ರಕಾಶ್ ರಾಜ್. ರಾಮಾಯಣ ಹಾಗೂ ಬೀಫ್​ ಫೆಸ್ಟ್​ ಬಗ್ಗೆ ಮಾತನಾಡಿದ್ದಕ್ಕೆ ಕ್ರಿಮಿನಲ್​ ಕೇಸ್​ ದಾಖಲಾಗಿದೆ ಎನ್ನಲಾಗುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/prakash-raj-contraversy-statement-against-ramayana-and-also-beef-fest-suc-vzciok2"/>
        </item>
        <item>
            <title><![CDATA[ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಹೊಂಬಾಳೆ ಫಿಲಂಸ್‌ ಹೆಸರು ಹೇಳದ ರಿಷಬ್‌ ಶೆಟ್ಟಿ]]></title>
            <link>https://kannada.asianetnews.com/sandalwood/rishab-shetty-skips-hombale-films-name-at-inca-awards-kantara-chapter-1-san/articleshow-x0gkqr8</link>
            <guid isPermaLink="true">https://kannada.asianetnews.com/sandalwood/rishab-shetty-skips-hombale-films-name-at-inca-awards-kantara-chapter-1-san/articleshow-x0gkqr8</guid>
            <pubDate>Sat, 18 Apr 2026 09:13:04 +0530</pubDate>
            <description><![CDATA[&lt;p&gt;ರಿಷಬ್ ಶೆಟ್ಟಿ ನಟನೆ, ನಿರ್ದೇಶನದ 'ಕಾಂತಾರ ಚಾಪ್ಟರ್&zwnj; 1' ಚಿತ್ರಕ್ಕೆ ಐಎನ್&zwnj;ಸಿಎ ಪ್ರಶಸ್ತಿ ಲಭಿಸಿದೆ. ಆದರೆ, ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ರಿಷಬ್ ಅವರು ನಿರ್ಮಾಪಕರಾದ ಹೊಂಬಾಳೆ ಫಿಲಂಸ್&zwnj; ಹೆಸರನ್ನು ಉಲ್ಲೇಖಿಸದೇ ಇರುವುದು, ಇಬ್ಬರ ನಡುವಿನ ಭಿನ್ನಾಭಿಪ್ರಾಯದ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfajsr5xe2mvrhdv17wpnzc,imgname-rishab-shetty-avoids-hombale-inca-awards-1776406361-1776483395333.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ಸಿನಿವಾರ್ತೆ, ಬೆಂಗಳೂರು (ಏ.18): &lt;/strong&gt;ರಿಷಬ್&zwnj; ಶೆಟ್ಟಿ ನಟನೆ, ನಿರ್ದೇಶನದ &lsquo;ಕಾಂತಾರ ಚಾಪ್ಟರ್&zwnj; 1&rsquo; ಸಿನಿಮಾಕ್ಕೆ ರಾಷ್ಟ್ರಮಟ್ಟದ ಐಎನ್&zwnj;ಸಿಎ ಪ್ರಶಸ್ತಿ ಲಭಿಸಿದೆ. ರಿಷಬ್&zwnj; ಅವರಿಗೆ ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು &lsquo;ಕಾಂತಾರ 1&rsquo; ಅತ್ಯುತ್ತಮ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ನಾಯಕಿ ರುಕ್ಮಿಣಿ ವಸಂತ್&zwnj; ಅವರಿಗೂ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.&lt;/p&gt;&lt;p&gt;ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ರಿಷಬ್&zwnj; ಶೆಟ್ಟಿ ಅವರು ಸಿನಿಮಾದ ತಂತ್ರಜ್ಞರಿಗೆ, ಚಿತ್ರತಂಡದವರಿಗೆ ಕೃತಜ್ಞತೆ ಸಲ್ಲಿಸಿದರೂ ಅಪ್ಪಿತಪ್ಪಿಯೂ ನಿರ್ಮಾಪಕರ ಹೆಸರನ್ನಾಗಲೀ, ನಿರ್ಮಾಣ ಸಂಸ್ಥೆಯ ಹೆಸರನ್ನಾಗಲೀ ಹೇಳಲಿಲ್ಲ. ಹೊಂಬಾಳೆ ಫಿಲಂಸ್&zwnj; ಹಾಗೂ ರಿಷಬ್&zwnj; ಶೆಟ್ಟಿ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗೆ ರಿಷಬ್&zwnj; ಅವರ ಈ ನಡೆ ಇನ್ನಷ್ಟು ಪುಷ್ಠಿ ಒದಗಿಸಿದೆ.&lt;/p&gt;&lt;p&gt;ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್&zwnj;, &lsquo;ಕಾಂತಾರ ಎರಡೂ ಸಿನಿಮಾಗಳು ನಮ್ಮೆಲ್ಲರ ನಾಲ್ಕು ವರ್ಷಗಳ ಪರಿಶ್ರಮದ ಫಲ. ಪ್ರಗತಿ ಶೆಟ್ಟಿ ನನ್ನ ಶಕ್ತಿಯಾಗಿ ನಿಂತು ಈ ಸಿನಿಮಾ ಮಾಡಲು ಸ್ಫೂರ್ತಿಯಾಗಿದ್ದಾರೆ. ಈ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಮತ್ತು ನಾನು ನಂಬುವ ದೈವಕ್ಕೆ ಅರ್ಪಣೆ ಮಾಡುವೆ&rsquo; ಎಂದರು.&lt;/p&gt;&lt;h2&gt;&lt;strong&gt;ಮೂರು ಬಾರಿ ವೇದಿಕೆ ಏರಿದರೂ ಬರಲಿಲ್ಲ 'ಹೊಂಬಾಳೆ' ಹೆಸರು!&lt;/strong&gt;&lt;/h2&gt;&lt;p&gt;ಮುಂಬೈನಲ್ಲಿ ನಡೆದ ಪ್ರತಿಷ್ಠಿತ INCA ಅವಾರ್ಡ್ಸ್&zwnj;ನಲ್ಲಿ 'ಕಾಂತಾರ-1' ಸಿನಿಮಾ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಬಾಚಿಕೊಂಡಿತು. ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.&lt;/p&gt;&lt;p&gt;&lt;strong&gt;ಸೆಟ್ ಬಾಯ್&zwnj;ಗೆ ಧನ್ಯವಾದ, ಪ್ರೊಡಕ್ಷನ್ ಹೌಸ್&zwnj;ಗೆ ಮೌನ: &lt;/strong&gt;ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್, ಚಿತ್ರಕ್ಕಾಗಿ ದುಡಿದ ಸೆಟ್ ಬಾಯ್, ಲೈಟ್ ಬಾಯ್, ತಂತ್ರಜ್ಞರು ಹಾಗೂ ಪತ್ನಿ ಪ್ರಗತಿ ಶೆಟ್ಟಿ ಅವರಿಗೆ ಮನಸಾರೆ ಧನ್ಯವಾದ ತಿಳಿಸಿದರು. ಆದರೆ, ಇಡೀ ಸಿನಿಮಾವನ್ನು ಜಗತ್ತಿಗೆ ತಲುಪಿಸಿದ ಹೊಂಬಾಳೆ ಫಿಲ್ಮ್ಸ್ ಹೆಸರನ್ನು ಒಮ್ಮೆಯೂ ಎತ್ತಲಿಲ್ಲ.&lt;/p&gt;&lt;p&gt;&lt;strong&gt;ಅತ್ಯುತ್ತಮ ಚಿತ್ರ ಪ್ರಶಸ್ತಿ: &lt;/strong&gt;ಸಮಾರಂಭದಲ್ಲಿ ಹೊಂಬಾಳೆ ಸಂಸ್ಥೆಯ ಪ್ರತಿನಿಧಿಗಳು ಯಾರೂ ಇಲ್ಲದ ಕಾರಣ, 'ಅತ್ಯುತ್ತಮ ಚಿತ್ರ' ಪ್ರಶಸ್ತಿಯನ್ನು ಸ್ವೀಕರಿಸಲು ನಿರೂಪಕರು ರಿಷಬ್ ಅವರನ್ನೇ ಕರೆದರು. ಆ ಪ್ರಶಸ್ತಿ ಕೈ ಸೇರಿದಾಗಲೂ &quot;ಆಗ್ಲೇ ಹೇಳಿದ್ದನ್ನೇ ಇಲ್ಲಿ ಸೇರಿಸಿಕೊಳ್ಳಿ&quot; ಎಂದು ನಕ್ಕರೇ ಹೊರತು, ನಿರ್ಮಾಪಕರ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ.&lt;/p&gt;&lt;h2&gt;&lt;strong&gt;ರಶ್ಮಿಕಾ ಮಂದಣ್ಣಗೆ ಹೋಲಿಸಿದ ನೆಟ್ಟಿಗರು!&lt;/strong&gt;&lt;/h2&gt;&lt;p&gt;ಈ ಹಿಂದೆ 'ಕಿರಿಕ್ ಪಾರ್ಟಿ' ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಅವರು 'ಪರಂವಃ ಸ್ಟುಡಿಯೋಸ್' ಹೆಸರು ಹೇಳದಿದ್ದಾಗ ಕನ್ನಡಿಗರು ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದರು. ಈಗ ರಿಷಬ್ ಶೆಟ್ಟಿ ಕೂಡ ಅದೇ ಹಾದಿ ತುಳಿದಿದ್ದಾರೆಯೇ? ಉಪಕಾರ ಸ್ಮರಣೆಯನ್ನು ಮರೆತರಾ? ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;ನಿರ್ದೇಶಕ ಕರಣ್ ಜೋಹರ್ ಹಾಗೂ ನಟ ರಾಣಾ ದಗ್ಗುಬಾಟಿ ಅವರ ಒತ್ತಾಯದ ಮೇರೆಗೆ ಮಾತನಾಡಿದ ರಿಷಬ್, &quot;ಮೊದಲು ನಾನು ನಿರ್ದೇಶನ ಮಾತ್ರ ಮಾಡಬೇಕೆಂದುಕೊಂಡಿದ್ದೆ. ಆದರೆ ಪ್ರಗತಿಯೇ ನನ್ನನ್ನು ಶಿವನ ಪಾತ್ರ ಮಾಡಲು ಪ್ರೇರೇಪಿಸಿದಳು. ಆಕೆಯ ನಂಬಿಕೆಯಿಂದಲೇ ಇಂದು 'ಕಾಂತಾರ' ಈ ಮಟ್ಟಕ್ಕೆ ಬೆಳೆದಿದೆ&quot; ಎಂದು ಪತ್ನಿಗೆ ಸಲ್ಲಬೇಕಾದ ಕ್ರೆಡಿಟ್ ನೀಡಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sandalwood</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sandalwood/rishab-shetty-skips-hombale-films-name-at-inca-awards-kantara-chapter-1-san/articleshow-x0gkqr8"/>
        </item>
    </channel>
</rss>
