<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 20 Aug 2026 12:55:25 +0530</lastBuildDate>
        <atom:link href="https://kannada.asianetnews.com/rss/sandalwood" rel="self" type="application/rss+xml"/>
        <item>
            <title><![CDATA[Anupama Gowda: ವಿದಾಯದ ನುಡಿ ಹೇಳಿ ಫ್ಯಾನ್ಸ್​ಗೆ ಬಿಗ್​ ಶಾಕ್​ ಕೊಟ್ಟ ಆ್ಯಂಕರ್​ ಅನುಪಮಾ ಗೌಡ: ಏನಾಯ್ತು ನಟಿಗೆ]]></title>
            <link>https://kannada.asianetnews.com/entertainment/anchor-anupama-gowda-gave-a-big-shock-to-fans-by-saying-goodbye-what-happened-to-the-actress-suc/articleshow-19vlvvx</link>
            <guid isPermaLink="true">https://kannada.asianetnews.com/entertainment/anchor-anupama-gowda-gave-a-big-shock-to-fans-by-saying-goodbye-what-happened-to-the-actress-suc/articleshow-19vlvvx</guid>
            <pubDate>Tue, 18 Aug 2026 12:27:36 +0530</pubDate>
            <description><![CDATA[ಖ್ಯಾತ ನಿರೂಪಕಿ ಮತ್ತು ನಟಿ ಅನುಪಮಾ ಗೌಡ, 8 ವರ್ಷಗಳ ಆ್ಯಂಕರಿಂಗ್ ಪಯಣಕ್ಕೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಅವರು, ಈ ಅನಿರೀಕ್ಷಿತ ನಿರ್ಧಾರಕ್ಕೆ ಕಾರಣ ಹಾಗೂ ತಮ್ಮ ಮನದ ನೋವನ್ನು ಬಿಚ್ಚಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09tegvpbg7mdew0wxcrm9n3,imgname-anupama-gowda-1787036124022.jpg" type="image/jpeg" height="390" width="690"/>
            <content:encoded><![CDATA[&lt;p&gt;ಆ್ಯಂಕರ್ ಎಂದಾಕ್ಷಣ ಕೆಲವೇ ಕೆಲವು ಜನ ನೆನಪಾಗ್ತಾರೆ. ಅವರಲ್ಲಿ ಒಬ್ಬರು ಆ್ಯಂಕರ್​ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು ನಟಿಯೂ ಆಗಿರುವ ಅನುಪಮಾ ಗೌಡ. ಇವರ ಆ್ಯಂಕರಿಂಗ್​ ಪಯಣಕ್ಕೆ 8 ವರ್ಷಗಳಾಗಿವೆ. ಇದೀಗ ಅವರು ತಮ್ಮ ಆ್ಯಂಕರಿಂಗ್​ ಕ್ಷೇತ್ರಕ್ಕೆ ಗುಡ್​ಬೈ ಹೇಳಿದ್ದು, ಈ ಕುರಿತು ವಿಡಿಯೋ ಮಾಡಿ ಅಭಿಮಾನಿಗಳಿಗೆ ಬಿಗ್​ ಶಾಕ್​ ನೀಡಿದ್ದಾರೆ. ತಮ್ಮ ನಿರೂಪಣಾ ವೃತ್ತಿಗೆ ನಿವೃತ್ತಿ ಘೋಷಿಸಿರೋ ಅನುಪಮಾ ಗೌಡ ಅವರು, ಇದನ್ನು ತಮ್ಮ ಜಾಲತಾಣದಲ್ಲಿ ಶೇರ್​ಮಾಡಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ಆ್ಯಂಕರಿಂಗ್​ ಪಯಣದ ಕುರಿತು ಮಾತನಾಡಿರುವ ನಟಿ, ನಾನು 2016ರಲ್ಲಿಯೇ ನಿರೂಪಕಿಯಾಗಬೇಕಿತ್ತು. ಆದರೆ 2 ವರ್ಷಗಳ ಸಮಯ ತೆಗೆದುಕೊಂಡು ಮೊದಲ ಬಾರಿಗೆ ವೇದಿಕೆ ಹತ್ತಿದ್ದು 2018 ಜೂ.22ರಂದು. ಅಲ್ಲಿಂದ ಪ್ರಾರಂಭವಾದ ಈ ಪ್ರಯಾಣ ಕೊನೆಗೊಂಡಿದ್ದು 2026ರ ಮೇ 05. ಅದು ಅನಿರೀಕ್ಷಿತವಾಗಿ ಒಲಿದು ಬಂದ ನಿವೃತ್ತಿ. ಏನೂ ಗೊತ್ತಿಲ್ಲದ್ದಿದ್ದ ನನಗೆ ಕನ್ನಡ ಕಲಿಸಿ, ವೇದಿಕೆ ಮೇಲೆ ನಿಲ್ಲೋದನ್ನು ಕಲಿಸಿಕೊಟ್ಟು.. ನನ್ನನ್ನು ನಿರೂಪಕಿಯಾಗಿ ಮಾಡಿ ಇಲ್ಲಿಯವರೆಗೂ ಬರಲು ನನ್ನ ಹಿಂದೆ ನಿಂತವರು ಹಲವರು. ನನ್ನ ನಿರೂಪಣೆಯ ಜರ್ನಿಯಲ್ಲಿ ಅತ್ಯುತ್ತಮ ವ್ಯಕ್ತಿಗಳು ಪರಿಚಯವಾದ್ರು, ಅವರೆಲ್ಲರೊಂದಿಗಿನ ಸಂಬಂಧವನ್ನು ನಾನು ನನ್ನ ಜೀವನದುದ್ದಕ್ಕೂ ಇಟ್ಟುಕೊಳ್ತೀನಿ ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ತುಂಬಾ ಕಲಿತಿದ್ದೇನೆ&lt;/strong&gt;&lt;/h2&gt;&lt;p&gt;ನಾನು ನನ್ನೊಳಗಿನ ಕಲಾವಿದೆಗೆ ತೃಪ್ತಿಪಡಿಸಬೇಕು ಅನ್ನೋದೇ ಈ ನಿರ್ಧಾರಕ್ಕೆ ಕಾರಣ.. ನಿಮ್ಮಿಂದ ತುಂಬಾ ಕಲಿತಿದ್ದೀನಿ, ತುಂಬಾ ಪ್ರೀತಿ ಕೊಟ್ಟಿದೀರಿ. ಎಲ್ಲರಿಗೂ ಥ್ಯಾಂಕ್ಯೂ.. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತೆ. ಮುಂದೆ ಬೇರೆ ಬೇರೆ ದಾರಿಗಳಿವೆ. ಮುಂದೆ ಜೀವನ ಇನ್ನೂ ಚೆನ್ನಾಗಿದೆ. ಈ ವಿದಾಯಕ್ಕೆ ಇದು ಸರಿಯಾದ ಸಮಯ.. ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ಅನುಪಮಾ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಅಷ್ಟಕ್ಕೂ ಏನಾಯ್ತು?&lt;/strong&gt;&lt;/h3&gt;&lt;p&gt;ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ. ನೀವೆಲ್ಲ ಸಾಕಮ್ಮ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ&rsquo; ಎಂದು ನೊಂದು ನುಡಿದಂತಿದೆ ಅನುಪಮಾ. &lsquo;ಸೀರಿಯಲ್​ಗೆ ಮತ್ತೆ ಬರುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ&rsquo; ಎಂದೂ ಹೇಳಿದ್ದಾರೆ. ಮಜಾ ಭಾರತ​&rsquo;, &lsquo;ಕನ್ನಡ ಕೋಗಿಲೆ&rsquo;, &lsquo;ರಾಜಾ ರಾಣಿ&rsquo;, &lsquo;ನಮ್ಮಮ್ಮ ಸೂಪರ್ ಸ್ಟಾರ್&rsquo;, &lsquo;ಸುವರ್ಣ ಸೂಪರ್​ಸ್ಟಾರ್ಸ್&rsquo;, &lsquo;ಸುವರ್ಣ ಜ್ಯಾಕ್​ಪಾಟ್&rsquo;, &lsquo;ಗರ್ಲ್ಸ್ vs ಬಾಯ್ಸ್&rsquo;, &lsquo;ಕ್ವಾಟ್ಲೆ ಕಿಚನ್&rsquo; ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಕೊನೆಯ ಶೋ ಅನ್ನು ಅವರಿಗೆ ಪೂರ್ಣವಾಗಿ ಮುಗಿಸುವ ಅವಕಾಶವೂ ಸಿಕ್ಕಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/anchor-anupama-gowda-gave-a-big-shock-to-fans-by-saying-goodbye-what-happened-to-the-actress-suc/articleshow-19vlvvx"/>
        </item>
        <item>
            <title><![CDATA[ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್ ಶುರುವಾಗೋ ಡೇಟ್ 'ಇದು'.. 12 ಸಾವಿರ ಸ್ಕ್ರೀನ್‌ಗಳಲ್ಲಿ 'ರಾಕಿ ಭಾಯ್‌' ಯಶ್ ಅಬ್ಬರ!]]></title>
            <link>https://kannada.asianetnews.com/entertainment/toxic-a-fairy-tale-for-grown-ups-advance-booking-starts-from-21-august-2026-in-whole-world/articleshow-1osuuin</link>
            <guid isPermaLink="true">https://kannada.asianetnews.com/entertainment/toxic-a-fairy-tale-for-grown-ups-advance-booking-starts-from-21-august-2026-in-whole-world/articleshow-1osuuin</guid>
            <pubDate>Wed, 19 Aug 2026 15:45:14 +0530</pubDate>
            <description><![CDATA[&lt;p&gt;'ಟಾಕ್ಸಿಕ್' ಸಿನಿಮಾವನ್ನು ಬರೋಬ್ಬರಿ 12,000ಕ್ಕೂ ಹೆಚ್ಚು ಸ್ಕ್ರೀನ್&zwnj;ಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಾರತದ ಸಿನಿಮಾವೊಂದು ಈ ಮಟ್ಟಕ್ಕೆ ಜಾಗತಿಕವಾಗಿ ಅಬ್ಬರಿಸುತ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಡಿಮ್ಯಾಂಡ್ ಹೆಚ್ಚಾದಂತೆ ಈ ಪರದೆಗಳ ಸಂಖ್ಯೆ ಇನ್ನೂ ಏರಿಕೆಯಾಗೋದು ಗ್ಯಾರಂಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cpf9qy7a4x3rezrcymwztc,imgname-whatsapp-image-2026-08-07-at-4.37.55-pm-1787132618494.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Toxic: A Fairy Tale for Grown-ups Advance Booking Starts: ಯಶ್&zwnj; ನಟನೆಯ ʻಟಾಕ್ಸಿಕ್&zwnj;ʼ ಚಿತ್ರದ ಮುಂಗಡ ಬುಕಿಂಗ್ ವರಮಹಾಲಕ್ಷ್ಮಿ ಹಬ್ಬ, 25 ಆಗಸ್ಟ್ 2026ರಂದು ಶುರುವಾಗಲಿದೆ.&lt;/strong&gt;&lt;/p&gt;&lt;p&gt;'ಟಾಕ್ಸಿಕ್' ಅಬ್ಬರಕ್ಕೆ ಮುಹೂರ್ತ ಫಿಕ್ಸ್: 12 ಸಾವಿರ ಪರದೆಗಳಲ್ಲಿ ರಾಕಿ ಭಾಯ್ ಅಲೆ - ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಬರ್ತಿದ್ದಾನೆ 'ಗ್ಲೋಬಲ್ ಸ್ಟಾರ್'!&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಿಂದ ಜಾಗತಿಕ ಮಟ್ಟದವರೆಗೆ ತನ್ನ ಸಾಮ್ರಾಜ್ಯ ವಿಸ್ತರಿಸಿರೋ 'ರಾಕಿಂಗ್ ಸ್ಟಾರ್' ಯಶ್ ಅವರ ಮುಂದಿನ ಅಸ್ತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಈಗ ಇಡೀ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದೆ. 'ಕೆಜಿಎಫ್' ನಂತರ ಯಶ್ ಯಾವ ಸಿನಿಮಾ ಮಾಡ್ತಾರೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಹಬ್ಬವೋ ಹಬ್ಬ! ಹೌದು, 'ಟಾಕ್ಸಿಕ್' ಸಿನಿಮಾದ ಬಿಡುಗಡೆಯ ದಿನಗಣನೆ ಅಧಿಕೃತವಾಗಿ ಶುರುವಾಗಿದ್ದು, ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ವೇದಿಕೆ ಸಿದ್ಧವಾಗಿದೆ.&lt;/p&gt;&lt;h2&gt;ವರಮಹಾಲಕ್ಷ್ಮಿ ಹಬ್ಬಕ್ಕೆ 'ಟಾಕ್ಸಿಕ್' ಟಿಕೆಟ್ ಗಿಫ್ಟ್!&lt;/h2&gt;&lt;p&gt;ಯಶ್ ಅವರ ಸಿನಿಮಾಗಳೆಂದರೆ ಅಲ್ಲಿ ಒಂದು ಪ್ಲ್ಯಾನಿಂಗ್ ಇರುತ್ತೆ. ಅದರಂತೆ, ವರಮಹಾಲಕ್ಷ್ಮಿ ಹಬ್ಬದ ಸಡಗರದಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಆಗಸ್ಟ್ 26 ರಂದು ಸಿನಿಮಾ ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಅದಕ್ಕಿಂತ ಐದು ದಿನ ಮೊದಲೇ ಅಂದರೆ ಆಗಸ್ಟ್ 21 ರಿಂದಲೇ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಲಿದೆ. ಹಬ್ಬದ ದಿನವೇ ರಾಕಿ ಭಾಯ್ ನೋಡಲು ಟಿಕೆಟ್ ಬುಕ್ ಮಾಡೋ ಅವಕಾಶ ಸಿಕ್ಕಿರೋದಕ್ಕೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.&lt;/p&gt;&lt;p&gt;12 ಸಾವಿರ ಸ್ಕ್ರೀನ್&zwnj;ಗಳಲ್ಲಿ 'ಟಾಕ್ಸಿಕ್' ಆರ್ಭಟ!&lt;/p&gt;&lt;p&gt;ಈಗ ಕೇಳಿ ಬರ್ತಿರೋ ಅಸಲಿ ಸುದ್ದಿ ಅಂದ್ರೆ, ಈ ಚಿತ್ರದ ಸ್ಕೇಲ್! 'ಟಾಕ್ಸಿಕ್' ಸಿನಿಮಾವನ್ನು ಬರೋಬ್ಬರಿ 12,000ಕ್ಕೂ ಹೆಚ್ಚು ಸ್ಕ್ರೀನ್&zwnj;ಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಾರತದ ಸಿನಿಮಾವೊಂದು ಈ ಮಟ್ಟಕ್ಕೆ ಜಾಗತಿಕವಾಗಿ ಅಬ್ಬರಿಸುತ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಡಿಮ್ಯಾಂಡ್ ಹೆಚ್ಚಾದಂತೆ ಈ ಪರದೆಗಳ ಸಂಖ್ಯೆ ಇನ್ನೂ ಏರಿಕೆಯಾಗೋದು ಗ್ಯಾರಂಟಿ. ಮೊದಲ ದಿನವೇ ಈ ಸಿನಿಮಾ ನೂರಾರು ಕೋಟಿ ಲೂಟಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ.&lt;/p&gt;&lt;p&gt;ದಿಗ್ಗಜರ ಕೈಯಲ್ಲಿ ವಿತರಣೆಯ ಜವಾಬ್ದಾರಿ&lt;/p&gt;&lt;p&gt;ಈ ಚಿತ್ರದ ಹಿಂದೆ ದೊಡ್ಡ ದೊಡ್ಡ ಸಂಸ್ಥೆಗಳೇ ನಿಂತಿವೆ. ಕರ್ನಾಟಕದಲ್ಲಿ ಯಶ್ ಅವರ 'ಮಾನ್&zwnj;ಸ್ಟರ್ ಮೈಂಡ್ ಕ್ರಿಯೇಷನ್ಸ್' ಮತ್ತು 'ಕೆವಿಎನ್ ಪ್ರೊಡಕ್ಷನ್ಸ್' ಜಂಟಿಯಾಗಿ ಆರ್ಭಟಿಸಲಿದ್ದರೆ, ಆಂಧ್ರ-ತೆಲಂಗಾಣದಲ್ಲಿ ಖ್ಯಾತ ನಿರ್ಮಾಪಕ ದಿಲ್ ರಾಜು ಸಾಥ್ ನೀಡಿದ್ದಾರೆ. ಇನ್ನು ಉತ್ತರ ಭಾರತದಲ್ಲಿ ಎಎ ಫಿಲ್ಮ್ಸ್, ಕೇರಳದಲ್ಲಿ ಪನೋರಮಾ ಮತ್ತು ತಮಿಳುನಾಡಿನಲ್ಲಿ ಥಿಂಕ್ ಸ್ಟುಡಿಯೋಸ್ ಸಿನಿಮಾ ಹಂಚಿಕೆ ಮಾಡಲಿವೆ. ವಿಶೇಷ ಅಂದ್ರೆ, ಹಾಲಿವುಡ್&zwnj;ನ ಖ್ಯಾತ 'ಲಯನ್ಸ್&zwnj;ಗೇಟ್' ಸಂಸ್ಥೆ ಇಂಗ್ಲಿಷ್ ಆವೃತ್ತಿಯ ಜವಾಬ್ದಾರಿ ಹೊತ್ತುಕೊಂಡಿದೆ. ಅಂದ್ರೆ, ಇದು ಕೇವಲ ಪ್ಯಾನ್ ಇಂಡಿಯಾ ಅಲ್ಲ, ಪಕ್ಕಾ ಪ್ಯಾನ್ ವರ್ಲ್ಡ್ ಸಿನಿಮಾ!&lt;/p&gt;&lt;h3&gt;ತಾರಾಬಳಗದ ಮೆರುಗು - ಗೀತು ಮೋಹನ್&zwnj;ದಾಸ್ ಮ್ಯಾಜಿಕ್!&lt;/h3&gt;&lt;p&gt;ಗೀತು ಮೋಹನ್&zwnj;ದಾಸ್ ನಿರ್ದೇಶನದ ಈ ಗ್ಯಾಂಗ್&zwnj;ಸ್ಟರ್ ಕಥೆಯಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಅವರಂತಹ ಲೇಡಿ ಸೂಪರ್ ಸ್ಟಾರ್&zwnj;ಗಳಿದ್ದಾರೆ. ಜೊತೆಗೆ ಹುಮಾ ಖುರೇಷಿ ಮತ್ತು ಅಕ್ಷಯ್ ಒಬೆರಾಯ್ ಅವರಂತ ಪ್ರತಿಭಾನ್ವಿತ ನಟರ ದಂಡೇ ಇದೆ. ರಾಜೀವ್ ರವಿ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕೆ ದೊಡ್ಡ ಶಕ್ತಿಯಾಗಲಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಆಗಸ್ಟ್ 26 ಕ್ಕೆ ಇಡೀ ವಿಶ್ವದ ಸಿನಿಮಾ ಪ್ರೇಮಿಗಳ ಕಣ್ಣು ಭಾರತದ ಕಡೆಗೆ ಇರಲಿದೆ. ರಾಕಿ ಭಾಯ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮರಳಲು ಕೇವಲ ಕೆಲವೇ ದಿನಗಳು ಬಾಕಿ ಇವೆ!Prepare for the Toxic storm!&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/toxic-a-fairy-tale-for-grown-ups-advance-booking-starts-from-21-august-2026-in-whole-world/articleshow-1osuuin"/>
        </item>
        <item>
            <title><![CDATA[ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್‌ ಖುಷಿ ಕೊಡಲಿಲ್ಲ: ಅನುಪಮಾ ಗೌಡ ವಿಶೇಷ ಸಂದರ್ಶನ]]></title>
            <link>https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo</link>
            <guid isPermaLink="true">https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo</guid>
            <pubDate>Wed, 19 Aug 2026 23:47:07 +0530</pubDate>
            <description><![CDATA[&lt;p&gt;ನಾನು ಹೋಸ್ಟ್&zwnj; ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು ಎಂದು ಅನುಪಮಾ ಗೌಡ ಸಂದರ್ಶನದಲ್ಲಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dhd72gvzpt5x7ns7k0mpy0,imgname-jvj-1787160861776.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ನಿರೂಪಣೆಯಿಂದ ದೂರವಾಗಬೇಕೆಂಬ ನಿರ್ಧಾರಕ್ಕೆ ಕಾರಣ ಏನು?&lt;/strong&gt;&lt;/p&gt;&lt;p&gt;ನಾನು ಹೋಸ್ಟ್&zwnj; ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು. ಮನಸ್ಸಿಗೆ ತೃಪ್ತಿ ಕೊಡದ ಕೆಲಸ ಬೇಡವೆನಿಸಿ ಈ ನಿರ್ಧಾರ ತೆಗೆದುಕೊಂಡೆ.&lt;/p&gt;&lt;p&gt;&lt;strong&gt;* ಆ್ಯಂಕರಿಂಗ್&zwnj;ಗೆ ವಿದಾಯ ಹೇಳಲು ಬೇರೆ ಕಾರಣಗಳಿವೆ ಅಂತಿದ್ದಾರಲ್ಲ?&lt;/strong&gt;&lt;/p&gt;&lt;p&gt;ಅದೆಲ್ಲವೂ ಸುಳ್ಳು. ನಾನು ಮಾಡುತ್ತಿದ್ದ ಕೆಲಸ ನಾನೇ ಎಂಜಾಯ್&zwnj; ಮಾಡಕ್ಕೆ ಆಗುತ್ತಿಲ್ಲ, ಇದರ ಜೊತೆಗೆ ವರ್ಷದಲ್ಲಿ ನಾನು ಎರಡೇ ಶೋ ಮಾಡುತ್ತಿದ್ದೆ. ಈ ಎರಡೂ ಶೋಗಳಿಂದ ವರ್ಷದಲ್ಲಿ 6 ತಿಂಗಳು ಕೆಲಸ, ಉಳಿದ 6 ತಿಂಗಳು ಖಾಲಿ ಕೂರಬೇಕಿತ್ತು. ಹಾಗಾಗಿ ಬೇರೆ ಏನಾದರು ಸ್ವಂತವಾಗಿ ಮಾಡೋ ಯೋಚನೆಯಿಂದ ನಿರೂಪಣೆ ಬಿಟ್ಟಿದ್ದು.&lt;/p&gt;&lt;p&gt;&lt;strong&gt;* ನಿಮ್ಮ ಮತ್ತು ಕಲರ್ಸ್&zwnj; ವಾಹಿನಿಯ ನಂಟು ಹಳೆಯದು. ಬೇರೆ ಶೋಗಳು ನಿಮಗೆ ಕೊಡಬಹುದಿತ್ತಲ್ಲ?&lt;/strong&gt;&lt;/p&gt;&lt;p&gt;ಈ ವಿಚಾರದಲ್ಲಿ ನಾನು ಯಾರ ಮೇಲೂ ಆರೋಪ ಮಾಡಲಾರೆ. ಯಾಕೆಂದರೆ ಅವರಿಗೂ ವಾಹಿನಿಯಲ್ಲಿ ಶೋಗಳು ಅಪ್ರೂವ್&zwnj; ಆಗುತ್ತಿರಲಿಲ್ಲ. ಬಂದ ಶೋಗಳನ್ನು ನನಗೆ ಕೊಡುತ್ತಿದ್ದರು. 9 ಶೋಗಳಿಗೆ ಹೋಸ್ಟ್&zwnj; ಆಗಿದ್ದೇನೆ. ಇದಕ್ಕಿಂತ ಇನ್ನೇನು ಬೇಕು!?&lt;/p&gt;&lt;p&gt;&lt;strong&gt;* ನಿರೂಪಣೆ ಜೊತೆಗೆ ಖಾಲಿ ಇರುವಾಗ ಬೇರೆ ಕೆಲಸಗಳನ್ನೂ ಮಾಡಬಹುದಿತ್ತಲ್ಲ?&lt;/strong&gt;&lt;/p&gt;&lt;p&gt;ಎರಡು ದೋಣಿಯ ಪ್ರಯಾಣ ಅಭ್ಯಾಸ ಇಲ್ಲ. ಸಿನಿಮಾ ಅಂದರೆ ಸಿನಿಮಾ, ನಿರೂಪಣೆ ಅಂದ್ರೆ ನಿರೂಪಣೆ ಮಾತ್ರ. ಆ್ಯಂಕರಿಂಗ್&zwnj; ಜೊತೆಗೆ ಖಾಲಿ ಇರೋ ಆರು ತಿಂಗಳಲ್ಲಿ ಏನಂತ ಮಾಡಲಿ. ಎಂಟು ವರ್ಷ ಆ್ಯಂಕರಿಂಗ್&zwnj; ಮಾಡಿದ್ದೇನೆ.&lt;/p&gt;&lt;p&gt;&lt;strong&gt;* ಸ್ವಂತವಾಗಿ ಏನಾದರು ಮಾಡಬೇಕು ಅಂದ್ರಿ, ಏನು?&lt;/strong&gt;&lt;/p&gt;&lt;p&gt;ಸದ್ಯಕ್ಕೆ ಒಂದು ಸಿನಿಮಾ ಶೂಟಿಂಗ್&zwnj; ಮುಗಿಸಿದ್ದೇನೆ. ಒಂದು ವೆಬ್&zwnj; ಸರಣಿ ಆಗಿದೆ. ನಾನೇ ಒಂದು ಕಿರು ಚಿತ್ರ ನಿರ್ದೇಶಿಸಿದ್ದು, ಈಗ ಅದರ ಎಡಿಟಿಂಗ್&zwnj; ನಡೆಯುತ್ತಿದ್ದೆ. &lsquo;ಪ್ರೆಸ್ಟೀಜ್&zwnj;&rsquo; ಎಂಬುದು ಆ ಕಿರುಚಿತ್ರದ ಹೆಸರು. ಕಲಾವಿದರ ಕೆರಿಯರ್&zwnj; ಯಾವಾಗ ಶುರುವಾಗುತ್ತೆ, ಯಾವಾಗ ನಿಂತೋಗುತ್ತೆ, ಮತ್ತೆ ಯಾವಾಗ ಓಪನ್&zwnj; ಆಗುತ್ತೆ ಅಂತ ಗೊತ್ತಿರಲ್ಲ.&lt;/p&gt;&lt;p&gt;&lt;strong&gt;* &lsquo;ಆ ಕರಾಳ ರಾತ್ರಿ&rsquo; ಚಿತ್ರದ ನಂತರ ನಿಮಗೆ ಸಿನಿಮಾಗಳು ಅವಕಾಶಗಳು ಬರಲಿಲ್ಲವೇ?&lt;/strong&gt;&lt;/p&gt;&lt;p&gt;ಬಂದಿದ್ದವು. ಆದರೆ, ಎಲ್ಲಾ ಪಾತ್ರಗಳಲ್ಲೂ ಅದೇ &lsquo;ಆ ಕರಾಳ ರಾತ್ರಿ&rsquo; ಚಿತ್ರದ ನೆರಳು. ಒಂದೇ ರೀತಿಯ ಪಾತ್ರದ 10 ಸಿನಿಮಾ ಮಾಡೋದಕ್ಕಿಂತ ಒಂದು ಸಿನಿಮಾ ಮಾಡಬೇಕು ಅನ್ನೋ ನಿಲುವು ನನ್ನದು. ಹಾಗೆ ಬಂದಿದ್ದೆಲ್ಲ ಒಪ್ಪಿಕೊಂಡಿದ್ದರೆ ಕನಿಷ್ಠ 15 ಸಿನಿಮಾಗಳಲ್ಲಿ ನಟಿಸುತ್ತಿದ್ದೆ.&lt;/p&gt;&lt;p&gt;&lt;strong&gt;* ಹೌದು, ಈಗ ನಿಮ್ಮ ಆದಾಯ ಏನು?&lt;/strong&gt;&lt;/p&gt;&lt;p&gt;ಇಲ್ಲಿಯವರೆಗೂ ನಿರೂಪಣೆಯಿಂದ ಬರುತ್ತಿತ್ತು. ಈಗ ಮೊದಲಿಗಿಂತ ಸೋಷಿಯಲ್&zwnj; ಮೀಡಿಯಾ ಸ್ಟ್ರಾಂಗ್&zwnj; ಆಗಿದೆ. ಇನ್&zwnj;ಸ್ಟಗ್ರಾಮ್&zwnj; ಕೋಲಾಬರೇಷನ್&zwnj;, ಪ್ರಚಾರಗಳಿಂದ ಆದಾಯ ಬರುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo"/>
        </item>
        <item>
            <title><![CDATA[ಕಿರಿಯ ತಮಿಳು ನಟನಿಗೆ ‘ಸರ್’ ಎಂದ ಶಿವಣ್ಣ: ‘ನಿಮ್ಮ ಸ್ಥಾನವೇ ಬೇರೆ’ ಎಂದು ಬೇಸರ ವ್ಯಕ್ತಪಡಿಸಿದ ಕನ್ನಡಿಗರು]]></title>
            <link>https://kannada.asianetnews.com/entertainment/shivanna-praises-pradeep-ranganathan-his-sir-remark-sparks-discussion-gvd/articleshow-630hsig</link>
            <guid isPermaLink="true">https://kannada.asianetnews.com/entertainment/shivanna-praises-pradeep-ranganathan-his-sir-remark-sparks-discussion-gvd/articleshow-630hsig</guid>
            <pubDate>Wed, 19 Aug 2026 20:06:58 +0530</pubDate>
            <description><![CDATA[&lt;p&gt;Shivarajkumar Viral Video: ಸ್ಯಾಂಡಲ್&zwnj;ವುಡ್&zwnj;ನ ಹ್ಯಾಟ್ರಿಕ್ ಹೀರೋ ಶಿವರಾಜ್&zwnj;ಕುಮಾರ್ ಅವರ ಸರಳತೆ ಹಾಗೂ ಕಿರಿಯ ನಟರನ್ನು ಪ್ರೋತ್ಸಾಹಿಸುವ ಗುಣಕ್ಕೆ ಅಭಿಮಾನಿಗಳಿಂದ ಸದಾ ಮೆಚ್ಚುಗೆ ವ್ಯಕ್ತವಾಗುತ್ತಿರುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0d7739rk038b60f71tqqwzx,imgname-hvhvh-1787150175544.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಹ್ಯಾಟ್ರಿಕ್ ಹೀರೋ ಶಿವರಾಜ್&zwnj;ಕುಮಾರ್ ಅವರ ಸರಳತೆ ಹಾಗೂ ಕಿರಿಯ ನಟರನ್ನು ಪ್ರೋತ್ಸಾಹಿಸುವ ಗುಣಕ್ಕೆ ಅಭಿಮಾನಿಗಳಿಂದ ಸದಾ ಮೆಚ್ಚುಗೆ ವ್ಯಕ್ತವಾಗುತ್ತಿರುತ್ತದೆ. ಆದರೆ ಇದೀಗ ಇದೇ ಶಿವಣ್ಣ ಅವರ ಮಾತಿನಲ್ಲೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ತಮಿಳು ನಟ ಪ್ರದೀಪ್ ರಂಗನಾಥನ್ ಅವರನ್ನು ಶಿವರಾಜ್&zwnj;ಕುಮಾರ್ ಹೊಗಳಿರುವ ವಿಡಿಯೋವೊಂದು ವೈರಲ್ ಆಗಿದ್ದು, ಕೆಲ ಕನ್ನಡಿಗರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಪ್ರದೀಪ್ ರಂಗನಾಥನ್&zwnj;ಗೆ ಶಿವಣ್ಣ ಮೆಚ್ಚುಗೆ&lt;/strong&gt;&lt;/p&gt;&lt;p&gt;ಇತ್ತೀಚೆಗೆ ನಡೆದ ಆನಂದ ವಿಕಟನ್ ಪ್ರಶಸ್ತಿ ಸಮಾರಂಭದಲ್ಲಿ ಶಿವರಾಜ್&zwnj;ಕುಮಾರ್ ಭಾಗವಹಿಸಿದ್ದರು. ಈ ವೇಳೆ &lsquo;ಟೂರಿಸ್ಟ್ ಫ್ಯಾಮಿಲಿ&rsquo; ಚಿತ್ರದ ಅಭಿನಯಕ್ಕಾಗಿ ನಟ ಅಭಿಷನ್ ಜೀವಿಂತ್ ಅವರಿಗೆ ಶಿವಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಅಭಿಷನ್ ಅವರ ಅಭಿನಯ ಹಾಗೂ ನಿರ್ದೇಶಕ ಗೌತಮ್ ಶಿವರಾಮನ್ ಅವರ ಕಥೆ, ನಿರ್ದೇಶನದ ಬಗ್ಗೆ ಶಿವಣ್ಣ ಮೆಚ್ಚುಗೆಯ ಮಾತುಗಳನ್ನಾಡಿದರು. &lsquo;ಟೂರಿಸ್ಟ್ ಫ್ಯಾಮಿಲಿ&rsquo; ಸಿನಿಮಾ ನೋಡಿದ ಬಳಿಕ ತಮಗೆ ತುಂಬಾ ಸಂತೋಷವಾಯಿತು. ಅಭಿಷನ್ ಅವರ ಪಾತ್ರ ತಮ್ಮ ಮನಸ್ಸಿಗೆ ತಟ್ಟಿತು. ಅವರ ನಿರ್ದೇಶನ ಶೈಲಿಯೂ ಬಹಳ ಇಷ್ಟವಾಯಿತು ಎಂದು ಶಿವರಾಜ್&zwnj;ಕುಮಾರ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತಮಿಳಿನ ಯುವ ನಟ ಪ್ರದೀಪ್ ರಂಗನಾಥನ್ ಬಗ್ಗೆಯೂ ಶಿವಣ್ಣ ಮಾತನಾಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಾನು ನಿಮ್ಮ ಅಭಿಮಾನಿ&rsquo; ಎಂದ ಶಿವಣ್ಣ&lt;/strong&gt;&lt;/p&gt;&lt;p&gt;ಪ್ರದೀಪ್ ರಂಗನಾಥನ್ ಅವರನ್ನು ಹೊಗಳಿದ ಶಿವರಾಜ್&zwnj;ಕುಮಾರ್, ಅವರ ಸಿನಿಮಾಗಳನ್ನು ತಾವು ಇಷ್ಟಪಡುವುದಾಗಿ ಹೇಳಿದ್ದಾರೆ. ಅಲ್ಲದೆ, ಪ್ರದೀಪ್ ಅವರಿಗೆ &lsquo;ಸರ್&rsquo; ಎಂದು ಸಂಬೋಧಿಸಿ ತಲೆ ಬಾಗಿ ನಮಸ್ಕರಿಸಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರದೀಪ್ ರಂಗನಾಥನ್ ಅವರು ನಟ ಧನುಷ್ ಅವರ ಅಭಿಮಾನಿ ಎಂಬ ವಿಚಾರವನ್ನು ಉಲ್ಲೇಖಿಸಿದ ಶಿವಣ್ಣ, ಅವರನ್ನು ನೋಡಿದಾಗ ಧನುಷ್ ಅವರನ್ನು ನೋಡಿದಂತಾಗುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ತಾನು ಕೂಡ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಶಿವಣ್ಣ ಮಾತಿಗೆ ಕೆಲ ಕನ್ನಡಿಗರ ಬೇಸರ&lt;/strong&gt;&lt;/p&gt;&lt;p&gt;ಶಿವಣ್ಣ ಅವರ ಈ ನಡೆಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕನ್ನಡಿಗರು ಅಸಮಾಧಾನ ಹೊರಹಾಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದಶಕಗಳ ಅನುಭವ ಹೊಂದಿರುವ ಶಿವರಾಜ್&zwnj;ಕುಮಾರ್, ಕಡಿಮೆ ಸಿನಿಮಾಗಳನ್ನು ಮಾಡಿರುವ ಯುವ ನಟನಿಗೆ ಈ ರೀತಿ &lsquo;ಸರ್&rsquo; ಎಂದು ಸಂಬೋಧಿಸುವ ಅಗತ್ಯವೇನಿತ್ತು? ಎಂದು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ. &lsquo;ಶಿವಣ್ಣ ಅವರಂತಹ ಹಿರಿಯ ನಟರು ಯುವ ಕಲಾವಿದರನ್ನು ಗೌರವಿಸುವುದು ಒಳ್ಳೆಯ ವಿಚಾರ. ಆದರೆ ಕನ್ನಡದ ಹಿರಿಯ ನಟನೊಬ್ಬ ಕಿರಿಯ ನಟನಿಗೆ ತಲೆಬಾಗಿ ನಮಸ್ಕರಿಸುವ ದೃಶ್ಯವನ್ನು ನೋಡಲು ಮುಜುಗರವಾಗುತ್ತಿದೆ&rsquo; ಎಂಬ ಅಭಿಪ್ರಾಯವೂ ಕೆಲವರಿಂದ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;&lsquo;ಇಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದೀರಿ, ನೀವು ಸರ್ ಅಲ್ಲವೇ?&rsquo;&lt;/strong&gt;&lt;/h2&gt;&lt;p&gt;ವೈರಲ್ ಕ್ಲಿಪ್ ಹಂಚಿಕೊಂಡಿರುವ ಕೆಲ ಅಭಿಮಾನಿಗಳು, ಶಿವರಾಜ್&zwnj;ಕುಮಾರ್ ಅವರ ಸಿನಿ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. 20ಕ್ಕೂ ಹೆಚ್ಚು ಯಶಸ್ವಿ ಸಿನಿಮಾಗಳನ್ನು ನೀಡಿರುವ, ದಶಕಗಳ ಅನುಭವ ಹೊಂದಿರುವ ಶಿವಣ್ಣ ಅವರು ಕಿರಿಯ ನಟನಿಗೆ ಇಷ್ಟು ಗೌರವ ತೋರಿಸುವ ಅಗತ್ಯವಿತ್ತೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇನ್ನೂ ಕೆಲವರು ಮಾತ್ರ ಶಿವಣ್ಣ ಅವರ ನಡೆಗೆ ಬೆಂಬಲ ವ್ಯಕ್ತಪಡಿಸಿದ್ದು, ಹಿರಿಯ ನಟನೊಬ್ಬ ಕಿರಿಯ ಕಲಾವಿದನ ಪ್ರತಿಭೆಯನ್ನು ಗುರುತಿಸಿ ಗೌರವಿಸುವುದು ಅವರ ದೊಡ್ಡತನ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ಯುವ ನಟನ ಮೇಲಿನ ಶಿವಣ್ಣ ಅವರ ಮೆಚ್ಚುಗೆಗಿಂತ ಅವರು ಬಳಸಿದ ಸಂಬೋಧನೆ ಹಾಗೂ ತಲೆಬಾಗಿ ನಮಸ್ಕರಿಸಿದ ಕ್ಷಣವೇ ಇದೀಗ ಚರ್ಚೆಯ ಕೇಂದ್ರಬಿಂದುವಾಗಿದೆ. ವೈರಲ್ ವಿಡಿಯೋಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಶಿವಣ್ಣ ಅವರ ಅಭಿಮಾನಿಗಳಲ್ಲೂ ಚರ್ಚೆ ಮುಂದುವರಿದಿದೆ.&lt;/p&gt;&lt;p&gt;I&rsquo;m a huge fan of @dhanushkraja, whenever I see you, I feel like seeing #Dhanush.~ Kannada Superstar Shiva rajKumar.#OM #Dhanush #ShivaRajkumar #KannadaSuperstar pic.twitter.com/UdVbaxzj69&lt;/p&gt;&lt;p&gt;&mdash; Dhanush Karthick.D (@DhanushKarthiDK) August 18, 2026&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/shivanna-praises-pradeep-ranganathan-his-sir-remark-sparks-discussion-gvd/articleshow-630hsig"/>
        </item>
        <item>
            <title><![CDATA[ರಕ್ತಸಿಕ್ತ ಲುಕ್‌ನಲ್ಲಿ ದೊಡ್ಮನೆ ಕುಡಿ: ಕೈಯಲ್ಲಿ ಲಾಂಗ್, ಹೆಗಲ ಮೇಲೆ ಮೋನಿಷಾ: ‘ಸಿಟಿಲೈಟ್ಸ್’ ಮೇಕಿಂಗ್ ವಿಡಿಯೋ ವೈರಲ್]]></title>
            <link>https://kannada.asianetnews.com/sandalwood/city-lights-making-video-vinay-rajkumar-and-monisha-rugged-looks-go-viral-gvd/articleshow-928akw7</link>
            <guid isPermaLink="true">https://kannada.asianetnews.com/sandalwood/city-lights-making-video-vinay-rajkumar-and-monisha-rugged-looks-go-viral-gvd/articleshow-928akw7</guid>
            <pubDate>Wed, 19 Aug 2026 17:33:48 +0530</pubDate>
            <description><![CDATA[&lt;p&gt;City Lights Kannada Movie: ದುನಿಯಾ ವಿಜಯ್ ನಿರ್ದೇಶನದ ಈ ಚಿತ್ರದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್&zwnj;ಕುಮಾರ್ ಹಾಗೂ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cyf5qyfv0hn236nmhd1v5q,imgname-bjb-1787141003006.png" type="image/jpeg" height="390" width="690"/>
            <content:encoded><![CDATA[&lt;p&gt;ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿರುವ &lsquo;ಸಿಟಿಲೈಟ್ಸ್&rsquo; ಸಿನಿಮಾ ಈಗಾಗಲೇ ಸ್ಯಾಂಡಲ್&zwnj;ವುಡ್&zwnj;ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ದುನಿಯಾ ವಿಜಯ್ ನಿರ್ದೇಶನದ ಈ ಚಿತ್ರದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್&zwnj;ಕುಮಾರ್ ಹಾಗೂ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರತಂಡ ರಿಲೀಸ್ ಮಾಡಿರುವ ಮೇಕಿಂಗ್ ವಿಡಿಯೋ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;p&gt;&lsquo;ಸಲಗ&rsquo; ಹಾಗೂ &lsquo;ಭೀಮ&rsquo; ಚಿತ್ರಗಳ ಬಳಿಕ ದುನಿಯಾ ವಿಜಯ್ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಈ ಬಾರಿ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಗಮನ ಸೆಳೆದಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೋ ಮಾತ್ರ ಚಿತ್ರದ ಕಥೆ ಹಾಗೂ ಪಾತ್ರಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;&lt;p&gt;&lt;strong&gt;ರಕ್ತಸಿಕ್ತ ಅವತಾರದಲ್ಲಿ ವಿನಯ್; ಲಾಂಗ್ ಹಿಡಿದ ಮೋನಿಷಾ!&lt;/strong&gt;&lt;/p&gt;&lt;p&gt;ಮೇಕಿಂಗ್ ವಿಡಿಯೋದಲ್ಲಿ ವಿನಯ್ ರಾಜ್&zwnj;ಕುಮಾರ್ ಸಂಪೂರ್ಣ ರಗಡ್ ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತ ಮುಖದೊಂದಿಗೆ ಕೈಯಲ್ಲಿ ಲಾಂಗ್ ಹಿಡಿದು ನಿಂತಿರುವ ವಿನಯ್, ತಮ್ಮ ಹೆಗಲ ಮೇಲೆ ಮೋನಿಷಾ ಅವರನ್ನು ಕೂರಿಸಿಕೊಂಡಿರುವ ದೃಶ್ಯ ಗಮನ ಸೆಳೆಯುತ್ತಿದೆ. ಇನ್ನೊಂದೆಡೆ ಮೋನಿಷಾ ಕೂಡ ಕೈಯಲ್ಲಿ ಮಚ್ಚು ಹಿಡಿದು ಖಡಕ್ ಪೋಸ್ ನೀಡಿದ್ದಾರೆ. ವಿಶೇಷವೆಂದರೆ, ನಟಿ ಯಾವ ರೀತಿ ಪೋಸ್ ನೀಡಬೇಕು ಎಂಬುದನ್ನು ದುನಿಯಾ ವಿಜಯ್ ಸ್ವತಃ ವಿವರಿಸುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ. ಮೇಕಿಂಗ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಈ ಬ್ಲಡಿ ಹಾಗೂ ಆ್ಯಕ್ಷನ್ ಝಲಕ್ ನೋಡಿ, &lsquo;ಸಿಟಿಲೈಟ್ಸ್&rsquo;ನಲ್ಲಿ ವಿನಯ್ ಮತ್ತು ಮೋನಿಷಾ ಅವರ ಪಾತ್ರಗಳು ಹೇಗಿರಲಿವೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.&lt;/p&gt;&lt;p&gt;&lt;strong&gt;ಹಳ್ಳಿ ದಂಪತಿ, ಬೆಂಗಳೂರು ಬದುಕು... &lsquo;ಸಿಟಿಲೈಟ್ಸ್&rsquo; ಕಥೆಯೇನು?&lt;/strong&gt;&lt;/p&gt;&lt;p&gt;&lsquo;ಸಿಟಿಲೈಟ್ಸ್&rsquo; ಕೇವಲ ಆ್ಯಕ್ಷನ್ ಸಿನಿಮಾ ಮಾತ್ರವಲ್ಲ. ದೊಡ್ಡ ಕನಸುಗಳನ್ನು ಹೊತ್ತು ಹಳ್ಳಿಯಿಂದ ಬೆಂಗಳೂರಿಗೆ ಬರುವ ಗ್ರಾಮೀಣ ದಂಪತಿಯ ಬದುಕು, ಮಹಾನಗರದ ಕಠಿಣ ವಾಸ್ತವ ಮತ್ತು ಬದುಕಿಗಾಗಿ ಅವರು ನಡೆಸುವ ಹೋರಾಟದ ಸುತ್ತ ಕಥೆ ಸಾಗಲಿದೆ. ನಗರದ ವೇಗದ ಬದುಕಿನಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು, ಜೀವನ ನಿರ್ವಹಣೆಗಾಗಿ ಅವರು ಮಾಡುವ ಕೆಲಸಗಳು ಹಾಗೂ ಅವರ ಬದುಕಿನ ಮತ್ತೊಂದು ಮುಖವನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಹೆಣ್ಣುಮಕ್ಕಳ ಬದುಕಿನ ಸುತ್ತವೇ ಕಥೆ ಹೆಚ್ಚು ಕೇಂದ್ರೀಕೃತವಾಗಿದೆ ಎಂದು ದುನಿಯಾ ವಿಜಯ್ ಈ ಹಿಂದೆ ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆಯ ಮುನ್ನವೇ ವಿಭಿನ್ನ ನಿರೀಕ್ಷೆ ಮೂಡಿಸಿದೆ.&lt;/p&gt;&lt;p&gt;&lt;strong&gt;ಉಮಾಶ್ರೀಗೆ ವಿಶೇಷ ಪಾತ್ರ&lt;/strong&gt;&lt;/p&gt;&lt;p&gt;ಸಮಾಜದಲ್ಲಿ ಮಂಗಳಮುಖಿಯರನ್ನು ಗೌರವದಿಂದ ಕಾಣಬೇಕು ಎಂಬ ಸಂದೇಶವನ್ನೂ ಸಿನಿಮಾದ ಮೂಲಕ ನೀಡುವ ಉದ್ದೇಶ ಚಿತ್ರತಂಡಕ್ಕಿದೆ. ಈ ಕಾರಣಕ್ಕಾಗಿ ಹಿರಿಯ ನಟಿ ಉಮಾಶ್ರೀ ಅವರಿಗೆ ಪ್ರಮುಖ ಪಾತ್ರವೊಂದನ್ನು ನೀಡಲಾಗಿದೆ. ಚಿತ್ರದ ಕಥಾವಸ್ತು ಹಾಗೂ ಪಾತ್ರಗಳ ವಿನ್ಯಾಸದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಸಿನಿಮಾ ಬಿಡುಗಡೆಯಾದ ಬಳಿಕ ಈ ಪಾತ್ರಗಳು ಹೇಗೆ ಮೂಡಿಬರಲಿವೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;p&gt;&lt;strong&gt;&lsquo;ಕಂದಮ್ಮ&rsquo;, &lsquo;ಬಾವ ಬಾವ&rsquo; ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ&lt;/strong&gt;&lt;/p&gt;&lt;p&gt;ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾದಲ್ಲಿ ಒಟ್ಟು ಐದರಿಂದ ಆರು ಹಾಡುಗಳಿದ್ದು, ಈಗಾಗಲೇ ಬಿಡುಗಡೆಯಾಗಿರುವ &lsquo;ಕಂದಮ್ಮ&rsquo; ಹಾಗೂ &lsquo;ಬಾವ ಬಾವ&rsquo; ರ್ಯಾಪ್ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ. ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದು, ವಿಜಯ್ ಕುಮಾರ್ ಹಾಗೂ ವಿಕ್ರಮ್ ಆರ್ಯ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಿನಿಮಾದ ವಿತರಣೆಯ ಜವಾಬ್ದಾರಿ ಹೊತ್ತಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.&lt;/p&gt;&lt;h2&gt;&lt;strong&gt;ಮೋನಿಷಾ ವಿಜಯ್&zwnj;ಗೆ &lsquo;ಸಿಟಿಲೈಟ್ಸ್&rsquo; ದೊಡ್ಡ ಎಂಟ್ರಿ!&lt;/strong&gt;&lt;/h2&gt;&lt;p&gt;&lsquo;ಸಿಟಿಲೈಟ್ಸ್&rsquo; ಮತ್ತೊಂದು ಕಾರಣಕ್ಕೂ ವಿಶೇಷ. ದುನಿಯಾ ವಿಜಯ್ ತಮ್ಮ ಎರಡನೇ ಪುತ್ರಿ ಮೋನಿಷಾ ವಿಜಯ್ ಅವರನ್ನು ಇದೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯಿಸುತ್ತಿದ್ದಾರೆ. ವಿನಯ್ ರಾಜ್&zwnj;ಕುಮಾರ್ ಅವರ ವಿಭಿನ್ನ ಲುಕ್, ಮೋನಿಷಾ ಅವರ ಆ್ಯಕ್ಷನ್ ಅವತಾರ ಹಾಗೂ ದುನಿಯಾ ವಿಜಯ್ ನಿರ್ದೇಶನ-ಈ ಮೂರು ಅಂಶಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಸೆಪ್ಟೆಂಬರ್ 18ರಂದು &lsquo;ಸಿಟಿಲೈಟ್ಸ್&rsquo; ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಗ್ರಾಮೀಣ ಬದುಕು, ಬೆಂಗಳೂರಿನ ಕಠಿಣ ವಾಸ್ತವ, ಮಹಿಳೆಯರ ಹೋರಾಟ ಮತ್ತು ಆ್ಯಕ್ಷನ್&zwnj;ನ ಮಿಶ್ರಣದೊಂದಿಗೆ ಬರುತ್ತಿರುವ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/city-lights-making-video-vinay-rajkumar-and-monisha-rugged-looks-go-viral-gvd/articleshow-928akw7"/>
        </item>
        <item>
            <title><![CDATA[ಕನ್ನಡದ ನಟ ಗ್ಲೋಬಲ್ ಸ್ಟಾರ್‌ ಆಗಿದ್ದು ಹೇಗೆ? ಈ ಸೀಕ್ರೆಟ್ ಹಿಂದಿನ 'ಮಹಾಮಂತ್ರ'ದ ಸ್ಟೋರಿ ಇಲ್ಲಿದೆ ನೋಡಿ!]]></title>
            <link>https://kannada.asianetnews.com/entertainment/discover-the-secret-success-mantra-behind-rocking-star-yash-journey-to-becoming-a-global-icon/articleshow-a9crnfx</link>
            <guid isPermaLink="true">https://kannada.asianetnews.com/entertainment/discover-the-secret-success-mantra-behind-rocking-star-yash-journey-to-becoming-a-global-icon/articleshow-a9crnfx</guid>
            <pubDate>Wed, 19 Aug 2026 13:05:37 +0530</pubDate>
            <description><![CDATA[&lt;p&gt;ಇಂದು ಯಶ್ ಜಗತ್ತನ್ನೇ ಗೆಲ್ಲಲು ಹೊರಟಿದ್ದಾರೆ. ಇಡೀ ಭಾರತವೇ ಯಶ್ ಸಕ್ಸಕ್ ಸ್ವಾಗತಿಸಲು ಎದುರುನೋಡುತ್ತಿದೆ. ಯಶ್ ನಟನೆ-ನಿರ್ಮಾಣದ 'ಟಾಕ್ಸಿಕ್' ಸಿನಿಮಾ ತೆರೆಗೆ ಬಂದು ಹೊಸ ಇತಿಹಾಸ ಸೃಷ್ಟಿಸಲು ಇನ್ನೇನು 7 ದಿನಗಳಷ್ಟೇ ಬಾಕಿ..! ಈ ಸಕ್ಸಸ್ ಸ್ಟೋರಿ ಹಿಂದಿನ ಮಹಾಮಂತ್ರದ ಸೀಕ್ರೆಟ್ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cf3eeckp8vfnpvjjbp6x2f,imgname-rocking-star-yash--3--1787124890060.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Brand Yash- Rocking Star Yash-Successful Story from Sandalwood to Hollywood: ಬ್ರ್ಯಾಂಡ್ 'ಯಶ್': ಗಾಂಧಿನಗರದ ಗಲ್ಲಿಯಿಂದ ಗ್ಲೋಬಲ್ ಗತ್ತಿನವರೆಗೆ - ರಾಕಿ ಭಾಯ್ ಅನ್-ಟೋಲ್ಡ್ ಸ್ಟೋರಿ!&lt;/strong&gt;&lt;/p&gt;&lt;p&gt;ಕನ್ನಡ ಚಿತ್ರರಂಗದ ಇತಿಹಾಸವನ್ನು 'KGF' ಗಿಂತ ಮೊದಲು ಮತ್ತು 'KGF' ನಂತರ ಎಂದು ವಿಭಾಗಿಸಬಹುದು. ಅಂದು ಮೈಸೂರಿನಿಂದ ಬೆಂಗಳೂರಿಗೆ ಪುಡಿಗಾಸು ಹಿಡಿದುಕೊಂಡು ಬಂದ ಒಬ್ಬ ಸಾಮಾನ್ಯ ಹುಡುಗ, ಇಂದು ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಅದು ಬೇರೆ ಯಾರೂ ಅಲ್ಲ, 'ರಾಕಿಂಗ್ ಸ್ಟಾರ್' ಯಶ್. ಯಶ್ ಅವರ ಛಲಕ್ಕೆ ಸಂದ ಜಯ ಇದು ಎನ್ನಬಹುದು.&lt;/p&gt;&lt;h2&gt;ಜಗತ್ತೇ ತಿರುಗಿನೋಡುವಂತೆ ಬೆಳೆದ ಯಶ್; ಈ ಸೀಕ್ರೆಟ್ ಹಿಂದಿನ &lsquo;ಮಹಾಮಂತ್ರ&rsquo; ಏನು?&lt;/h2&gt;&lt;p&gt;ಯಶ್ ಈಗ ಕೇವಲ ಹಿಟ್ ಅಥವಾ ಫ್ಲಾಪ್&zwnj;ಗಳ ಲೆಕ್ಕಾಚಾರದಲ್ಲಿಲ್ಲ. ಅವರು ದಾಟಿರೋ ಹಂತವೇ ಬೇರೆ. &quot;ಟಾಕ್ಸಿಕ್ ಚಿತ್ರದ ಕಂಟೆಂಟ್ ಏನಾದರೂ ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಕನೆಕ್ಟ್ ಆದರೆ, ಬಾಕ್ಸ್ ಆಫೀಸ್&zwnj;ನಲ್ಲಿ ₹2000 ಕೋಟಿ ಕಲೆಕ್ಷನ್ ದಾಟಿದರೂ ಅಚ್ಚರಿಯಿಲ್ಲ&quot; ಎನ್ನುವುದು ಹಲವರ ಲೆಕ್ಕಾಚಾರ. ಟಾಕ್ಸಿಕ್ ಮಾತ್ರವಲ್ಲ, ನವೆಂಬರ್&zwnj;ನಲ್ಲಿ ಯಶ್ ರಾವಣನಾಗಿ ನಟಿಸಿರುವ 'ರಾಮಾಯಣ' ಕೂಡ ತೆರೆಗೆ ಬರುತ್ತಿದೆ. ಈ ಮೂಲಕ ನಟ ಯಶ್ ಅವರು ಕೇವಲ 2 ತಿಂಗಳ ಅವಧಿಯಲ್ಲಿ ಇಡೀ ಜಗತ್ತಿನ ತೆರೆಯಲ್ಲಿ ಮಿಂಚಲಿದ್ದಾರೆ. ಹೀಗಾಗಿ, ನಟ ಯಶ್ ಅವರು ಗ್ಲೋಬಲ್ ಲೆವೆಲ್&zwnj;ನಲ್ಲಿ ಮಿಂಚಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗೋದು ಖಂಡಿತ!&lt;/p&gt;&lt;h3&gt;ರಿಂಗ್&zwnj;ಟೋನ್&zwnj;ನಿಂದ ಡಿನ್ನರ್&zwnj; ಟೇಬಲ್&zwnj;ವರೆಗೆ: ಒಂದು ಮಾಂತ್ರಿಕ ಪಯಣ&lt;/h3&gt;&lt;p&gt;ಯಶ್ ಅವರ ಜೀವನವೇ ಒಂದು ದೊಡ್ಡ ಮ್ಯಾನಿಫೆಸ್ಟೇಷನ್ (Manifestation). &quot;ರಾಜಾಹುಲಿ ಸಿನಿಮಾದ ಸಮಯದಲ್ಲಿ ಯಶ್ ಮೊಬೈಲ್&zwnj;ನಲ್ಲಿ ಶಾರುಖ್ ಖಾನ್ ಅವರ 'ಡಾನ್' ಚಿತ್ರದ ಬಿಜಿಎಂ ರಿಂಗ್&zwnj;ಟೋನ್ ಆಗಿತ್ತು. ವಿಶೇಷವೆಂದರೆ, ಇಂದು ಅದೇ ಶಾರುಖ್ ಖಾನ್ ಅವರು ಯಶ್ ಅವರನ್ನು ಪ್ರೀತಿಯಿಂದ ಡಿನ್ನರ್&zwnj;ಗೆ ಆಹ್ವಾನಿಸುತ್ತಾರೆ! ಇದನ್ನು ಭಾರೀ ದೊಡ್ಡ ಯಶಸ್ಸು ಎನ್ನಲೇಬೇಕು. ಶಾರುಖ್ ಖಾನ್ ನಟನೆಯ 'ಝೀರೋ' ಚಿತ್ರದ ಎದುರು 'KGF' ಬಿಡುಗಡೆಯಾಗಿ ಸೂಪರ್ ಹಿಟ್ ಆದಾಗಲೂ ಕನ್ನಡಿಗ ಯಶ್ ಅಹಂಕಾರದ ಬದಲು ವಿನಯವಂತಿಕೆ ಮೆರೆದು 'ಉತ್ತಮ ಸಂಸ್ಕಾರ' ಏನೆಂದು ತೋರಿಸಿಕೊಟ್ಟಿದ್ದಾರೆ.&lt;/p&gt;&lt;p&gt;ಮುಂಬೈನ ಗೇಟ್&zwnj;ವೇ ಆಫ್ ಇಂಡಿಯಾದಲ್ಲಿ 'ಮಾಸ್ಟರ್ ಪೀಸ್' ಶೂಟಿಂಗ್ ನಡೆಯುತ್ತಿದ್ದಾಗ ನಡೆದ ಘಟನೆ ಯಶ್ ಅವರು ಅಂದೇ ಹೊಂದಿದ್ದ ದೂರದೃಷ್ಟಿಯನ್ನು ತಿಳಿಸುತ್ತದೆ. ಆವತ್ತು ಅಲ್ಲಿನ ಜನರು ಯಶ್ ಅವರನ್ನ ಗುರುತಿಸಿ ಮಾತನಾಡಿಸುತ್ತಿದ್ದಾಗಲೇ ಯಶ್ 'ಮುಂದೊಂದು ದಿನ ಕನ್ನಡ ಸಿನಿಮಾವನ್ನ ಇಡೀ ದೇಶಕ್ಕೆ ಎತ್ಕೊಂಡು ಹೋಗ್ಬೇಕು&quot; ಎಂದಿರುವುದು ಈಗ ಸುದ್ದಯಾಗುತ್ತಿದೆ.&lt;/p&gt;&lt;p&gt;ಯಶಸ್ಸಿನ ಶಿಖರದಲ್ಲೂ ಅದೇ ಸರಳತೆ!&lt;/p&gt;&lt;p&gt;ಯಶ್ ಎಷ್ಟೇ ದೊಡ್ಡ ಸ್ಟಾರ್ ಆದರೂ ತನ್ನ ಹಳೆಯ ಗೆಳೆಯರನ್ನು ಮರೆತಿಲ್ಲ ಎಂಬುದು ಅವರ ಸರಳತನ ಹಾಗೂ ವಿನಯವಂತಿಕೆಗೆ ಸಾಕ್ಷಿ. ಜೊತೆಗೆ, ನಟ ಯಶ್ರ ಅವರು ತಮ್ಮ ಜೊತೆಗಿದ್ದ ಹಳೆಯ ಕಲಾವಿದರ ಜೊತೆಗೆ, ಹೊಸ ಪ್ರತಿಭೆಗಳಿಗೆ ಕೂಡ ಅವಕಾಶ ಕೊಡುವುದನ್ನು ಎಂದಿಗೂ ಮರೆತಿಲ್ಲ. 'ಉಗ್ರಂ' ಸಿನಿಮಾ ನೋಡಿ ಪ್ರಶಾಂತ್ ನೀಲ್ ಅವರ ವಿಷನ್ ಗುರುತಿಸಿದ್ದು ಇದೇ ರಾಕಿ ಭಾಯ್. ನಾಲ್ಕು ವರ್ಷದ ಹಿಂದೆ, ಮಲಯಾಳಂ ನಿರ್ದೇಶಕಿ ಗೀತು ಮೋಹನ್&zwnj;ದಾಸ್ ಅವರಿಗೆ 'ಟಾಕ್ಸಿಕ್' ಜವಾಬ್ದಾರಿ ಕೊಟ್ಟಿದ್ದೂ ಕೂಡ ಅವರ ಪ್ರತಿಭೆಯ ಮೇಲೆ ನಂಬಿಕೆಗೆ ಸಾಕ್ಷಿ.&lt;/p&gt;&lt;p&gt;ಇಂದು ಯಶ್ ಜಗತ್ತನ್ನೇ ಗೆಲ್ಲಲು ಹೊರಟಿದ್ದಾರೆ. ಅವರ ಈ ಪಯಣಕ್ಕೆ ಎಲ್ಲಾ ಕನ್ನಡಿಗರ ಬೆಂಬಲ ಸದಾ ಇರಲಿದೆ. ಇಡೀ ಭಾರತವೇ ಯಶ್ ಸಕ್ಸಕ್ ಸ್ವಾಗತಿಸಲು ಎದುರುನೋಡುತ್ತಿದೆ. ಇನ್ನೇನು 7 ದಿನಗಳಷ್ಟೇ ಬಾಕಿ ಯಶ್ ನಟನೆ-ನಿರ್ಮಾಣದ 'ಟಾಕ್ಸಿಕ್' ಸಿನಿಮಾ ತೆರೆಗೆ ಬಂದು ಹೊಸ ಇತಿಹಾಸ ಸೃಷ್ಟಿಸಲು! ಕನ್ನಡದ ಸಿನಿಮಾ, ಆದರೆ, ಯಶ್ ಹೇಳುವಂತೆ ಭಾರತೀಯ ಚಿತ್ರವೊಂದು ಇಂದು ಜಾಗತಿಕ ಚಿತ್ರವಾಗುವ ಅಪೂರ್ವ ಘಳಿಗೆಗೆ ಕೌಂಟ್&zwnj;ಡೌನ್ ನಡೆಯುತ್ತಿದೆ. ಟಾಕ್ಸಿಕ್ ಹಬ್ಬ ಆಚರಿಸಲು ಕನ್ನಡನಾಡು, ಭಾರತ ಸೇರಿದಂತೆ ಇಡೀ ಜಗತ್ತು ಸಜ್ಜಾಗುತ್ತಿದೆ!&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/discover-the-secret-success-mantra-behind-rocking-star-yash-journey-to-becoming-a-global-icon/articleshow-a9crnfx"/>
        </item>
        <item>
            <title><![CDATA[‘ಒಂದು ವೃತ್ತಕ್ಕೆ ಎಷ್ಟು ಸೈಡ್ಸ್‌ ಇರುತ್ತವೆ?’: ಬಿಗ್‌ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ವಿನಯ್ ಗೌಡ ಎಡವಟ್ಟು? ಭರ್ಜರಿ ಟ್ರೋಲ್]]></title>
            <link>https://kannada.asianetnews.com/tv-talk/bigg-boss-kannada-13-vinay-gowda-gets-trolled-over-circle-has-two-sides-remark-gvd/articleshow-aqryffl</link>
            <guid isPermaLink="true">https://kannada.asianetnews.com/tv-talk/bigg-boss-kannada-13-vinay-gowda-gets-trolled-over-circle-has-two-sides-remark-gvd/articleshow-aqryffl</guid>
            <pubDate>Wed, 19 Aug 2026 21:28:40 +0530</pubDate>
            <description><![CDATA[&lt;p&gt;&lsquo;ಅಗ್ನಿಪರೀಕ್ಷೆ&rsquo;ಯ ಹೊಸ ಪ್ರೋಮೋದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡ್ಯಾನ್ಸ್ ಮಾಡುತ್ತಾ ವೇದಿಕೆಗೆ ಎಂಟ್ರಿ ಕೊಡುತ್ತಾನೆ. ತಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದರೂ ಜಡ್ಜ್&zwnj;ಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪ್ರಶ್ನಿಸುತ್ತಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dbxcaz4sn2x4x5ca4vgg7d,imgname-jvjv-1787155099998.png" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ &lsquo;ಅಗ್ನಿಪರೀಕ್ಷೆ&rsquo; ವೇದಿಕೆ ಸಖತ್ ಸದ್ದು ಮಾಡುತ್ತಿದೆ. ಸ್ಪರ್ಧಿಗಳ ವಿಭಿನ್ನ ವರ್ತನೆ, ಜಡ್ಜ್&zwnj;ಗಳ ಪ್ರಶ್ನೆ-ಉತ್ತರಗಳ ನಡುವೆ ಇದೀಗ ತೀರ್ಪುಗಾರ ವಿನಯ್ ಗೌಡ ಕೇಳಿದ ಒಂದು ಪ್ರಶ್ನೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆಗೆ ಕಾರಣವಾಗಿದೆ. &lsquo;ಒಂದು ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತವೆ?&rsquo; ಎಂಬ ಪ್ರಶ್ನೆ ಕೇಳಿದ ವಿನಯ್, ಅದಕ್ಕೆ ನೀಡಿದ ವಿವರಣೆಯಿಂದಲೇ ನೆಟ್ಟಿಗರ ಟ್ರೋಲ್&zwnj;ಗೆ ಗುರಿಯಾಗಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಿಮ್ಮ ಪ್ರಶ್ನೆಯೇ ತಪ್ಪು!&rsquo; ಎಂದ ಸ್ಪರ್ಧಿ&lt;/strong&gt;&lt;/p&gt;&lt;p&gt;&lsquo;ಅಗ್ನಿಪರೀಕ್ಷೆ&rsquo;ಯ ಹೊಸ ಪ್ರೋಮೋದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡ್ಯಾನ್ಸ್ ಮಾಡುತ್ತಾ ವೇದಿಕೆಗೆ ಎಂಟ್ರಿ ಕೊಡುತ್ತಾನೆ. ತಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದರೂ ಜಡ್ಜ್&zwnj;ಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಜಡ್ಜ್ ಶ್ರುತಿ, &lsquo;ನಮ್ಮ ಪ್ರತಿಕ್ರಿಯೆಗಾಗಿ ಕಾಯದೆ ಹೀಗೆ ಕಾಮೆಂಟ್ ಮಾಡಬಾರದು&rsquo; ಎಂದು ಹೇಳುತ್ತಾರೆ. ಆದರೆ ಯುವಕ ಮಾತ್ರ ತಾನು ಇರುವುದೇ ಹೀಗೆ ಎಂದು ಖಡಕ್ ಆಗಿ ಉತ್ತರಿಸುತ್ತಾನೆ. ನಂತರ ನಿರೂಪಕ ನಿರಂಜನ್ ದೇಶಪಾಂಡೆ, &lsquo;ನಿಮ್ಮನ್ನೇ ಯಾಕೆ ಆಯ್ಕೆ ಮಾಡಬೇಕು?&rsquo; ಎಂದು ಕೇಳಿದಾಗಲೂ, &lsquo;ನೀವು ಕೇಳುತ್ತಿರುವ ಪ್ರಶ್ನೆಯೇ ತಪ್ಪು&rsquo; ಎಂದು ತಿರುಗೇಟು ನೀಡುತ್ತಾನೆ. ಈ ಉತ್ತರವೇ ವೇದಿಕೆಯಲ್ಲಿ ಮತ್ತಷ್ಟು ಕುತೂಹಲ ಮೂಡಿಸುತ್ತದೆ.&lt;/p&gt;&lt;p&gt;&lt;strong&gt;&lsquo;ವೃತ್ತಕ್ಕೆ ಎಷ್ಟು ಸೈಡ್ಸ್?&rsquo; ಎಂದು ಕೇಳಿದ ವಿನಯ್ ಗೌಡ&lt;/strong&gt;&lt;/p&gt;&lt;p&gt;ಸ್ಪರ್ಧಿಯ ಆತ್ಮವಿಶ್ವಾಸವನ್ನು ಗಮನಿಸಿದ ವಿನಯ್ ಗೌಡ, ಆತನ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತಾರೆ. ಬಳಿಕ ಇದ್ದಕ್ಕಿದ್ದಂತೆ, &lsquo;ಒಂದು ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತವೆ?&rsquo; ಎಂದು ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಸ್ಪರ್ಧಿ, &lsquo;ವೃತ್ತಕ್ಕೆ ಯಾವುದೇ ಸೈಡ್ಸ್ ಇರುವುದಿಲ್ಲ&rsquo; ಎಂದು ಉತ್ತರಿಸುತ್ತಾನೆ. ಆದರೆ ಇಲ್ಲೇ ಅಸಲಿ ಟ್ವಿಸ್ಟ್ ಎದುರಾಗುತ್ತದೆ. ಸ್ಪರ್ಧಿಯ ಉತ್ತರವನ್ನು ಒಪ್ಪಿಕೊಳ್ಳುವ ಬದಲು ವಿನಯ್ ಗೌಡ, &lsquo;ವೃತ್ತಕ್ಕೆ ಎರಡು ಸೈಡ್ಸ್ ಇರುತ್ತವೆ. ಒಂದು ಇನ್&zwnj;ಸೈಡ್, ಇನ್ನೊಂದು ಔಟ್&zwnj;ಸೈಡ್&rsquo; ಎಂದು ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದೇ ಮಾತು ಈಗ ನೆಟ್ಟಿಗರ ಟ್ರೋಲ್&zwnj;ಗೆ ಕಾರಣ!&lt;/strong&gt;&lt;/p&gt;&lt;p&gt;ವಿನಯ್ ಗೌಡ ಅವರ ಈ ಉತ್ತರದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. ಸಾಮಾನ್ಯ ಜ್ಯಾಮಿತಿಯಲ್ಲಿ ವೃತ್ತಕ್ಕೆ ನೇರ ಅಂಚುಗಳು ಅಥವಾ &lsquo;ಸೈಡ್ಸ್&rsquo; ಇರುವುದಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಹಲವರು ವಿನಯ್ ಅವರ ಲಾಜಿಕ್ ಅನ್ನು ಪ್ರಶ್ನಿಸಿದ್ದಾರೆ. &lsquo;ಸ್ಪರ್ಧಿ ಸರಿಯಾದ ಉತ್ತರ ಕೊಟ್ಟಿದ್ದರೂ, ವಿನಯ್ ಗೌಡ ತಪ್ಪು ಲಾಜಿಕ್ ಕೊಟ್ಟು ಕೌಂಟರ್ ಕೊಡಲು ಹೋಗಿದ್ದಾರೆ&rsquo; ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನೂ ಕೆಲವರು ಈ ಪ್ರೋಮೋವನ್ನು ತಮಾಷೆಯಾಗಿ ತೆಗೆದುಕೊಂಡು ಮೀಮ್ಸ್ ಹಾಗೂ ಟ್ರೋಲ್&zwnj;ಗಳನ್ನು ಹಂಚಿಕೊಳ್ಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಅಗ್ನಿಪರೀಕ್ಷೆ&rsquo;ಯಲ್ಲಿ ಶುರುವಾಯಿತಾ ಟ್ರೋಲ್ ಪರೀಕ್ಷೆ?&lt;/strong&gt;&lt;/h2&gt;&lt;p&gt;ಬಿಗ್&zwnj;ಬಾಸ್ ಕನ್ನಡ ಸೀಸನ್ 13ಕ್ಕೂ ಮುನ್ನ ಪ್ರಸಾರವಾಗುತ್ತಿರುವ &lsquo;ಅಗ್ನಿಪರೀಕ್ಷೆ&rsquo; ಈಗಾಗಲೇ ಸ್ಪರ್ಧಿಗಳಿಂದ ಗಮನ ಸೆಳೆಯುತ್ತಿದೆ. ಆದರೆ ಈ ಬಾರಿ ಸ್ಪರ್ಧಿಗಿಂತ ಹೆಚ್ಚಾಗಿ ತೀರ್ಪುಗಾರರೊಬ್ಬರ ಪ್ರಶ್ನೆಯೇ ಸೋಷಿಯಲ್ ಮೀಡಿಯಾದ ಚರ್ಚೆಯ ಕೇಂದ್ರವಾಗಿದೆ. ಅಂತಿಮವಾಗಿ ಈ ಎಪಿಸೋಡ್&zwnj;ನಲ್ಲಿ ವಿನಯ್ ಗೌಡ ಅವರ ಪ್ರಶ್ನೆಗೆ ಸಂಬಂಧಿಸಿದಂತೆ ಇನ್ನೇನು ತಿರುವು ಸಿಗಲಿದೆ? ಆ ಸ್ಪರ್ಧಿಯ ಆಯ್ಕೆ ಆಗುತ್ತಾನಾ? ಎಂಬ ಕುತೂಹಲವೂ ಮೂಡಿದೆ. ಒಟ್ಟಿನಲ್ಲಿ, &lsquo;ವೃತ್ತಕ್ಕೆ ಎಷ್ಟು ಸೈಡ್ಸ್?&rsquo; ಎಂಬ ಒಂದೇ ಪ್ರಶ್ನೆ &lsquo;ಅಗ್ನಿಪರೀಕ್ಷೆ&rsquo; ಪ್ರೋಮೋಗೆ ಹೊಸದೊಂದು ಟ್ರೋಲ್ ಆಂಗಲ್ ಕೊಟ್ಟಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-kannada-13-vinay-gowda-gets-trolled-over-circle-has-two-sides-remark-gvd/articleshow-aqryffl"/>
        </item>
        <item>
            <title><![CDATA[‘ಮಾತನಾಡೋದು ಸುಲಭ, ಮಾಡೋದು ಕಷ್ಟ’: 'ರಾಧಾ ಮಿಸ್‌' ಶ್ವೇತಾ ಮಾತಿಗೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆ]]></title>
            <link>https://kannada.asianetnews.com/tv-talk/it-s-easy-to-talk-hard-to-act-shwetha-prasad-post-sparks-discussion-gvd/articleshow-by2e3sy</link>
            <guid isPermaLink="true">https://kannada.asianetnews.com/tv-talk/it-s-easy-to-talk-hard-to-act-shwetha-prasad-post-sparks-discussion-gvd/articleshow-by2e3sy</guid>
            <pubDate>Wed, 19 Aug 2026 16:55:12 +0530</pubDate>
            <description><![CDATA[&lt;p&gt;ಕಿರುತೆರೆಯ ಮೂಲಕ ಗುರುತಿಸಿಕೊಂಡು, ಮಾಡೆಲಿಂಗ್ ಹಾಗೂ ನಟನೆಯಿಂದಲೂ ಗಮನ ಸೆಳೆದಿರುವ ಶ್ವೇತಾ ಪ್ರಸಾದ್ (Shwetha Prasad) ಇದೀಗ ತಮ್ಮ ಒಂದು ಪೋಸ್ಟ್&zwnj;ನಿಂದ ಸದ್ದು ಮಾಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cw4rtgcjmqaczhmb5pxxc3,imgname-bjbv-1787138564944.png" type="image/jpeg" height="390" width="690"/>
            <content:encoded><![CDATA[&lt;p&gt;ಕಿರುತೆರೆಯ ಮೂಲಕ ಗುರುತಿಸಿಕೊಂಡು, ಮಾಡೆಲಿಂಗ್ ಹಾಗೂ ನಟನೆಯಿಂದಲೂ ಗಮನ ಸೆಳೆದಿರುವ ಶ್ವೇತಾ ಪ್ರಸಾದ್ (Shwetha Prasad) ಇದೀಗ ತಮ್ಮ ಒಂದು ಪೋಸ್ಟ್&zwnj;ನಿಂದ ಸದ್ದು ಮಾಡುತ್ತಿದ್ದಾರೆ. ಗ್ಲಾಮರ್ ಲುಕ್ ಹಾಗೂ ಸಕಾರಾತ್ಮಕ ವಿಚಾರಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ, ಈ ಬಾರಿ ಹಂಚಿಕೊಂಡಿರುವ ಬರಹ ಮಾತ್ರ ಸಾಕಷ್ಟು ಗಂಭೀರ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಯಾರನ್ನೂ ನೇರವಾಗಿ ಹೆಸರಿಸದೆ, ಸಮಾಜದಲ್ಲಿ ಸತ್ಯ, ನ್ಯಾಯ ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಮಾತನಾಡುವವರ ನಡೆ-ನುಡಿಗಳ ನಡುವಿನ ವ್ಯತ್ಯಾಸವನ್ನು ಶ್ವೇತಾ ಪ್ರಶ್ನಿಸಿದ್ದಾರೆ. ಅವರ ಬರಹದ ಪ್ರತಿಯೊಂದು ಸಾಲಿನಲ್ಲೂ ಅಸಮಾಧಾನ ಹಾಗೂ ಖಡಕ್ ಸಂದೇಶ ಕಾಣಿಸುತ್ತಿದ್ದು, ಈ ಪೋಸ್ಟ್ ಯಾರನ್ನು ಉದ್ದೇಶಿಸಿದೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.&lt;/p&gt;&lt;p&gt;&lt;strong&gt;ಸ್ಟೋರಿಗಷ್ಟೇ ಸೀಮಿತವಾಗದ ಶ್ವೇತಾ!&lt;/strong&gt;&lt;/p&gt;&lt;p&gt;ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯವನ್ನು ಇನ್&zwnj;ಸ್ಟಾಗ್ರಾಂ ಸ್ಟೋರಿಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಶ್ವೇತಾ ಪ್ರಸಾದ್ ಈ ಬಾರಿ ತಮ್ಮ ಮಾತನ್ನು ನೇರವಾಗಿ ಇನ್&zwnj;ಸ್ಟಾ ಪೋಸ್ಟ್ ಮೂಲಕವೇ ಹಂಚಿಕೊಂಡಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಘಟನೆಯನ್ನು ಉಲ್ಲೇಖಿಸದೇ, ಸತ್ಯ, ನ್ಯಾಯ ಹಾಗೂ ಮಹಿಳೆಯರ ರಕ್ಷಣೆಯ ಬಗ್ಗೆ ಮಾತನಾಡುವವರನ್ನು ತಮ್ಮ ಬರಹದ ಮೂಲಕ ಪ್ರಶ್ನಿಸಿದ್ದಾರೆ. ಹೀಗಾಗಿ, ಈ ಪೋಸ್ಟ್&zwnj;ನ ಹಿಂದಿನ ಕಾರಣವೇನು ಎಂಬ ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.&lt;/p&gt;&lt;p&gt;&lt;strong&gt;&lsquo;ಮಾತನಾಡೋದು ಸುಲಭ, ಮಾಡೋದು ಕಷ್ಟ!&rsquo;&lt;/strong&gt;&lt;/p&gt;&lt;p&gt;ಶ್ವೇತಾ ತಮ್ಮ ಪೋಸ್ಟ್&zwnj;ನಲ್ಲಿ, ಸತ್ಯದ ಪರವಾಗಿ ಮಾತನಾಡುವವರು ನಿಜವಾಗಿಯೂ ಅದರ ಪರ ನಿಂತಿದ್ದರೆ, ನ್ಯಾಯದ ಬಗ್ಗೆ ಧ್ವನಿ ಎತ್ತುವವರು ಅದಕ್ಕಾಗಿ ಹೋರಾಡಿದ್ದರೆ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುವವರು ನಿಜಕ್ಕೂ ಅವರ ಬೆಂಬಲಕ್ಕೆ ನಿಂತಿದ್ದರೆ, ಸಮಾಜ ಇಷ್ಟು ಸಮಸ್ಯೆಗಳಿಂದ ಕೂಡಿರುತ್ತಿರಲಿಲ್ಲ ಎಂಬ ಅರ್ಥದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತನಾಡುವುದು, ಭರವಸೆ ನೀಡುವುದು ಹಾಗೂ ದೊಡ್ಡ ದೊಡ್ಡ ತತ್ವಗಳನ್ನು ಹೇಳುವುದು ಸುಲಭ. ಆದರೆ ಅದೇ ಮಾತುಗಳನ್ನು ತಮ್ಮ ಜೀವನದಲ್ಲೂ ಪಾಲಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಅವರು ಸೂಚಿಸಿದ್ದಾರೆ.&lt;/p&gt;&lt;p&gt;&lt;strong&gt;ಕಷ್ಟ ಬಂದಾಗಲೇ ನಿಜವಾದ ವ್ಯಕ್ತಿತ್ವ ಗೊತ್ತಾಗುತ್ತೆ!&lt;/strong&gt;&lt;/p&gt;&lt;p&gt;ಶ್ವೇತಾ ಅವರ ಬರಹದ ಪ್ರಮುಖ ಸಂದೇಶವೇನೆಂದರೆ, ವ್ಯಕ್ತಿಯ ನಿಜವಾದ ಸ್ವಭಾವ ಆತನ ಮಾತುಗಳಲ್ಲಿ ಅಲ್ಲ, ಕಠಿಣ ಪರಿಸ್ಥಿತಿಯಲ್ಲಿ ಆತ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಕಾಣಿಸುತ್ತದೆ ಎಂಬುದು. &lsquo;ಜನ ಏನು ಹೇಳುತ್ತಾರೆ?&rsquo; ಎಂಬುದಕ್ಕಿಂತ &lsquo;ಅವರು ನಿಜವಾಗಿ ಏನು ಮಾಡುತ್ತಾರೆ?&rsquo; ಎಂಬುದನ್ನೇ ಗಮನಿಸುವ ಹಂತಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ. ಈ ಸಾಲುಗಳೇ ಇದೀಗ ಅವರ ಪೋಸ್ಟ್&zwnj;ನ ಪ್ರಮುಖ ಚರ್ಚೆಯ ವಿಷಯವಾಗಿದೆ. ಯಾರನ್ನೂ ಹೆಸರಿಸದೆ ಇಷ್ಟು ನೇರವಾಗಿ ಬರೆದಿರುವುದರಿಂದ, ಶ್ವೇತಾ ಅವರ ಮನಸ್ಸಿನಲ್ಲಿರುವ ಆ ಘಟನೆ ಅಥವಾ ವಿಚಾರ ಯಾವುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.&lt;/p&gt;&lt;h2&gt;&lt;strong&gt;ಶ್ವೇತಾ ಮಾತಿಗೆ ಅಮೂಲ್ಯ ಸಾಥ್&lt;/strong&gt;&lt;/h2&gt;&lt;p&gt;ಶ್ವೇತಾ ಪ್ರಸಾದ್ ಅವರ ಈ ಪೋಸ್ಟ್&zwnj;ಗೆ ಸ್ಯಾಂಡಲ್&zwnj;ವುಡ್ ನಟಿ ಅಮೂಲ್ಯ ಕೂಡ ಪ್ರತಿಕ್ರಿಯಿಸಿದ್ದಾರೆ. ಶ್ವೇತಾ ಅವರ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿರುವ ಅಮೂಲ್ಯ, ಕಾಮೆಂಟ್&zwnj;ನಲ್ಲಿ &lsquo;True&rsquo; ಎಂದು ಬರೆದುಕೊಂಡಿದ್ದಾರೆ. ಇದೀಗ ಇಬ್ಬರು ನಟಿಯರ ಈ ಸಂಭಾಷಣೆ ನೆಟ್ಟಿಗರ ಗಮನ ಸೆಳೆದಿದೆ. ಶ್ವೇತಾ ಅವರ ಮಾತುಗಳನ್ನು ಕೆಲವರು ಕಟು ಸತ್ಯ ಎಂದು ಬಣ್ಣಿಸಿದರೆ, ಇನ್ನೂ ಕೆಲವರು ಇದು ಸಮಾಜದ ವಾಸ್ತವ ಪರಿಸ್ಥಿತಿಗೆ ಹಿಡಿದ ಕನ್ನಡಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶ್ವೇತಾ ಪ್ರಸಾದ್ ಈ ಪೋಸ್ಟ್&zwnj;ನಲ್ಲಿ ಯಾರನ್ನೂ ನೇರವಾಗಿ ಉಲ್ಲೇಖಿಸಿಲ್ಲ. ಹೀಗಾಗಿ, ಅವರು ಯಾವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ಬರಹ ಹಂಚಿಕೊಂಡಿದ್ದಾರೆ ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/it-s-easy-to-talk-hard-to-act-shwetha-prasad-post-sparks-discussion-gvd/articleshow-by2e3sy"/>
        </item>
        <item>
            <title><![CDATA[ಶಿವರಾಜ್‌ಕುಮಾರ್ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್; ಈ ಪ್ಯಾನ್ ಇಂಡಿಯಾ ಸಿನಿಮಾದ ಸ್ಪೆಷಾಲಿಟಿ ಏನ್ ಗೊತ್ತಾ?]]></title>
            <link>https://kannada.asianetnews.com/sandalwood/shivarajkumar-kurmavatar-title-teaser-released-and-do-you-know-the-specialty-of-this-pan-india-film/articleshow-dfwv81z</link>
            <guid isPermaLink="true">https://kannada.asianetnews.com/sandalwood/shivarajkumar-kurmavatar-title-teaser-released-and-do-you-know-the-specialty-of-this-pan-india-film/articleshow-dfwv81z</guid>
            <pubDate>Wed, 19 Aug 2026 22:57:53 +0530</pubDate>
            <description><![CDATA[&lt;p&gt;'ಕೂರ್ಮಾವತಾರ್' ಚಿತ್ರವನ್ನು ಹರ್ಷ ವರ್ಧನ್ ಕಡಿಯಾಲ ನಿರ್ದೇಶಿಸುತ್ತಿದ್ದು, ಬೃಹತ್ ಬಜೆಟ್&zwnj;ನಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟ-ನಟಿಯರ ದಂಡೇ ಇರಲಿದ್ದು, ಶಿವರಾಜ್&zwnj;ಕುಮಾರ್ ಜೊತೆ ತೆಲುಗು ನಟ ರಾಜ್ ತರುಣ್, ಶಿವಾಜಿ, ವರಲಕ್ಷ್ಮಿ ಶರತ್&zwnj;ಕುಮಾರ್, ಸಾಯಿ ಕುಮಾರ್ ಹೀಗೆ ದೊಡ್ಡ ತಾರಾಬಳಗ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dh0yh2axdqx5awq6bsh20b,imgname-kurmaavatar--1--1787160459810.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Shivarajkumar&rsquo;s &lsquo;Kurmaavatar&rsquo; Title Teaser Released-ಶಿವರಾಜ್&zwnj;ಕುಮಾರ್ ಅಭಿನಯದ ಪ್ಯಾನ್-ಇಂಡಿಯಾ ಸಿನಿಮಾ 'ಕೂರ್ಮಾವತಾರ್' ಅಧಿಕೃತ ಘೋಷಣೆ:&lt;/strong&gt;&lt;/p&gt;&lt;p&gt;ಕರುನಾಡ ಚಕ್ರವರ್ತಿ ಡಾ. ಶಿವರಾಜ್&zwnj;ಕುಮಾರ್ ಮತ್ತೊಂದು ಬೃಹತ್ ಪ್ಯಾನ್-ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶ್ರೀ ಮಹಾವಿಷ್ಣುವಿನ ಎರಡನೇ ಅವತಾರವಾದ 'ಕೂರ್ಮಾವತಾರ'ದ ಕಥಾಹಂದರವನ್ನು ಆಧರಿಸಿ ಸಿದ್ಧವಾಗುತ್ತಿರುವ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ 'ಕೂರ್ಮಾವತಾರ್' ಎಂದು ನಾಮಕರಣ ಮಾಡಲಾಗಿದ್ದು, ಚಿತ್ರತಂಡ ಅಧಿಕೃತ ಟೈಟಲ್ ರಿವೀಲ್ ಟೀಸರ್ ಬಿಡುಗಡೆ ಮಾಡಿದೆ.&lt;/p&gt;&lt;p&gt;ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಕೂರ್ಮಾವತಾರದ ಹಿನ್ನೆಲೆಯನ್ನು ಒಳಗೊಂಡ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಪ್ರೇಕ್ಷಕರಲ್ಲಿ ಮತ್ತು ಶಿವಣ್ಣನ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಶಿವರಾಜ್&zwnj;ಕುಮಾರ್ ಅವರ ಲುಕ್ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;p&gt;ಈ ಚಿತ್ರವನ್ನು ಹರ್ಷ ವರ್ಧನ್ ಕಡಿಯಾಲ ನಿರ್ದೇಶಿಸುತ್ತಿದ್ದು, ಪಂಚವಕ್ತ್ರ ಪಿಕ್ಚರ್ಸ್ ಹಾಗೂ ರುಕ್ವಿನಾ ಸ್ಟುಡಿಯೋಸ್ ಜಂಟಿ ಬ್ಯಾನರ್&zwnj;ಗಳ ಅಡಿಯಲ್ಲಿ ಪೂಜಿತ ಕಡಿಯಾಲ ಮತ್ತು ನರೇಂದ್ರ ಕೊಂಡ ಬೃಹತ್ ಬಜೆಟ್&zwnj;ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟ-ನಟಿಯರ ದಂಡೇ ಇರಲಿದ್ದು, ಶಿವರಾಜ್&zwnj;ಕುಮಾರ್ ಅವರೊಂದಿಗೆ ತೆಲುಗು ನಟ ರಾಜ್ ತರುಣ್, ಶಿವಾಜಿ, ವರಲಕ್ಷ್ಮಿ ಶರತ್&zwnj;ಕುಮಾರ್, ಸಾಯಿ ಕುಮಾರ್, ರಾಜಾ ರವೀಂದ್ರ, ವಿಟಿವಿ ಗಣೇಶ್, ಸಪ್ತಗಿರಿ, ಗೆಟಪ್ ಶ್ರೀನು, ಶತ್ರು, ಮಹೇಶ್ ವಿಟ್ಟ ಮತ್ತು ಅತಿರಾ ರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;p&gt;ತಾಂತ್ರಿಕವಾಗಿಯೂ ಚಿತ್ರ ಅತ್ಯುನ್ನತ ಮಟ್ಟದಲ್ಲಿ ಮೂಡಿಬರಲಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಜಗದೀಶ್ ಚೀಕಾಟಿ ಛಾಯಾಗ್ರಹಣ ಮಾಡುತ್ತಿದ್ದು, ಸಂಕಲನಕಾರ ಮಾರ್ತಾಂಡ್ ಕೆ. ವೆಂಕಟೇಶ್ ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಲೇಖಕ್ ರಾಮ್ ಹೆಚ್ಚುವರಿ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ರಾಘವ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ವಿಎಫ್&zwnj;ಎಕ್ಸ್ (VFX) ತಂತ್ರಜ್ಞಾನ ಹಾಗೂ ಅದ್ಧೂರಿ ಮೇಕಿಂಗ್&zwnj;ನೊಂದಿಗೆ ತಯಾರಾಗುತ್ತಿರುವ 'ಕೂರ್ಮಾವತಾರ್', ಭಾರತದ ಪ್ರಮುಖ ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/shivarajkumar-kurmavatar-title-teaser-released-and-do-you-know-the-specialty-of-this-pan-india-film/articleshow-dfwv81z"/>
        </item>
        <item>
            <title><![CDATA['ಕೃಷ್ಣಂ ಪ್ರಣಯ ಸಖಿ' ವೆಜ್​ ನಟಿಗೆ ಕೇರಳದಲ್ಲಿ ಗೋಮಾಂಸದ ಪ್ರಶ್ನೆ: ಆ ಪತ್ರಕರ್ತನ ಕಿಡಿಗೇಡಿತನಕ್ಕೆ ಭಾರಿ ಟೀಕೆ]]></title>
            <link>https://kannada.asianetnews.com/entertainment/malvika-sharma-asked-about-beef-in-kerala-media-ecosystem-normalises-provocations-against-hindus-suc/articleshow-e5v226g</link>
            <guid isPermaLink="true">https://kannada.asianetnews.com/entertainment/malvika-sharma-asked-about-beef-in-kerala-media-ecosystem-normalises-provocations-against-hindus-suc/articleshow-e5v226g</guid>
            <pubDate>Tue, 18 Aug 2026 12:54:52 +0530</pubDate>
            <description><![CDATA['ಖಲೀಫಾ' ಸಿನಿಮಾ ಪ್ರಚಾರಕ್ಕಾಗಿ ಕೇರಳಕ್ಕೆ ಬಂದಿದ್ದ ಸಸ್ಯಾಹಾರಿ ನಟಿ ಮಾಳವಿಕಾ ಶರ್ಮಾ ಅವರಿಗೆ ಪತ್ರಕರ್ತರೊಬ್ಬರು ಗೋಮಾಂಸ ತಿನ್ನುತ್ತೀರಾ ಎಂದು ಅನಗತ್ಯ ಪ್ರಶ್ನೆ ಕೇಳಿ ಮುಜುಗರ ಉಂಟುಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಈ ಪ್ರಶ್ನೆ ಕೇಳಲಾಗಿದೆ ಎಂದು ನೆಟ್ಟಿಗರು ಪತ್ರಕರ್ತನನ್ನು ಟ್ರೋಲ್ ಮಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09w3rz26cr0sawjk5yxz5nr,imgname-malavika-sharma-1787037869026.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳಕ್ಕೂ, ಗೋಮಾಂಸಕ್ಕೂ ಭಾರಿ ನಂಟಿದೆ. ಇಲ್ಲಿನ ಬಹುತೇಕ ಮಂದಿ ಇದನ್ನು ಸೇವಿಸುತ್ತಾರೆ. ಗೋಮಾಂಸ ಬ್ಯಾನ್​ ಆಗಿದ್ದರೂ ಕೆಲವು ಕಡೆಗಳಲ್ಲಿ ಅದು ಅವ್ಯಾಹತವಾಗಿ ಖುಲ್ಲಂಖುಲ್ಲಾ ಆಗಿಯೇ ಮಾರಾಟ ಆಗುತ್ತಿದೆ. ಹಾಗೆಂದು ಕಂಡಕಂಡವರಿಗೆಲ್ಲಾ ಗೋಮಾಂಸ ತಿನ್ನುತ್ತೀರಾ ಎನ್ನುವ ಪ್ರಶ್ನೆ ಕೇಳಿದರೆ ಹೇಗೆ? ಅಂಥದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದ್ದು, ಸಿನಿಮಾ ಪ್ರಚಾರಕ್ಕೆ ಬಂದಿರುವ ಸಸ್ಯಾಹಾರಿ ನಟಿಗೆ ಗೋಮಾಂಸ ತಿನ್ನುತ್ತೀರಾ ಎಂದು ಪತ್ರಕರ್ತನೊಬ್ಬ ಪ್ರಶ್ನೆ ಕೇಳಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಇಂದಿನ ಹಲವು ಪತ್ರಕರ್ತರಿಗೆ ಎಲ್ಲಿ, ಏನು ಕೇಳಬೇಕು ಎನ್ನುವುದು ತಿಳಿದಿಲ್ಲ ಎನ್ನುವುದು ಜಗಜ್ಜಾಹಿರವಾಗಿರುವ ಮಾತೇ. ಹಾಗೆಂದು ವೇದಿಕೆಯ ಮೇಲೆ ಒಬ್ಬರಿಗೆ ಅತೀ ಮುಜುಗರ ಆಗುವಂಥ, ಅನಗತ್ಯ ಪ್ರಶ್ನೆಗಳನ್ನು ಕೇಳಿ ಫೇಮಸ್​ ಆಗುವ ಖಯಾಲಿ ಇರುತ್ತದೆ ಎನ್ನುವುದಕ್ಕೆ ಈ ಪ್ರಶ್ನೆ ಸಾಕ್ಷಿಯಾಗಿದೆ.&lt;/p&gt;&lt;p&gt;ಇಂಥದ್ದೊಂದು ಮುಜುಗರ ಅನುಭವಿಸಿದ್ದು, ಬಹುಭಾಷಾ ನಟಿ, ಗಣೇಶ್​ ಅವರ ಜೊತೆ 'ಕೃಷ್ಣಂ ಪ್ರಣಯ ಸಖಿ' ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ಮಾಳವಿಕಾ ಶರ್ಮಾ (Malavika Sharma). ಅವರು ತಮ್ಮ ಮಲಯಾಳಿ ಸಿನಿಮಾ &quot;ಖಲೀಫಾ: ದಿ ಇಂಟ್ರೋ&quot; ಪ್ರಚಾರಕ್ಕಾಗಿ ಕೇರಳಕ್ಕೆ ಬಂದಿದ್ದರು. ಮಾಧ್ಯಮ ಸಂವಾದದ ಸಮಯದಲ್ಲಿ, ವರದಿಗಾರರೊಬ್ಬರು ನಿಮಗೆ ಗೋಮಾಂಸ ಇಷ್ಟವೇ, ಅದು ಹೇಗೆ ಎನ್ನಿಸಿತು ಎಂದು ಅನಗತ್ಯ ಪ್ರಶ್ನೆ ಕೇಳಿದ್ದಾನೆ. ಸಿನಿಮಾಕ್ಕೂ, ಈ ಪ್ರಶ್ನೆಗೂ ಏನೂ ಸಂಬಂಧವೇ ಇಲ್ಲ. ಪತ್ರಿಕಾಗೋಷ್ಠಿಗೆ ಬರುವಾಗಲೂ ಗೋಮಾಂಸದ ಕನಸನ್ನೇ ಕಾಣುತ್ತಿದ್ದ ಈ ಪತ್ರಕರ್ತ, ಇಂಥದ್ದೊಂದು ಪ್ರಶ್ನೆ ಕೇಳಿದಾಗ, ಅಲ್ಲಿ ಸ್ವಲ್ಪ ಗಲಿಬಿಲಿಯಾಯಿತು.&lt;/p&gt;&lt;h2&gt;&lt;strong&gt;ನಟಿಗೆ ಇರುಸುಮುರುಸು&lt;/strong&gt;&lt;/h2&gt;&lt;p&gt;ಅದರಲ್ಲಿಯೂ ನಟಿಗೆ ಇದರಿಂದ ಇರುಸುಮುರುಸು ಉಂಟಾಯಿತು. ಆದರೆ, ಸಮಾಧಾನದಿಂದ ನಟಿ, ನಾನು ಸಸ್ಯಾಹಾರಿ. ಮಾಂಸವೆಲ್ಲಾ ತಿನ್ನುವುದಿಲ್ಲ. ಗೋಮಾಂಸ ತಿಂದಿಲ್ಲ ಎಂದರು. ಮಾಳವಿಕಾ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ ಮತ್ತು ಪ್ರಶ್ನೆ ಕೇಳಿದ ವ್ಯಕ್ತಿ ಗಮನಾರ್ಹ ಟ್ರೋಲಿಂಗ್ ಎದುರಿಸುತ್ತಿದ್ದಾರೆ. ಆತನಿಗೆ ಬೇಕಾಗಿದ್ದು ಕೂಡ ಇದೇ ಇರಬಹುದು.&lt;/p&gt;&lt;p&gt;ಈ ಪ್ರಶ್ನೆಯು ಉದ್ದೇಶಪೂರ್ವಕವಾಗಿ ಕೇಳಿ ಪ್ರಚೋದನೆ ಉಂಟು ಮಾಡುವ ಪ್ರಶ್ನೆಯಾಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಮನರಂಜನೆಯಾಗಿ ಪರಿವರ್ತಿಸಲಾಗುತ್ತದೆ ಮತ್ತು ಗೋಮಾಂಸ ಸೇವನೆ ಬಗ್ಗೆ ಹಿಂದೂ ಸೆಲೆಬ್ರಿಟಿಗೆ ಕೇಳಿ ವಿಕೃತ ಆನಂದ ಪಡೆಯುವುದು ಆ ಸೋ ಕಾಲ್ಡ್​ ಪತ್ರಕರ್ತನ ಉದ್ದೇಶವಾಗಿತ್ತು ಎಂದೇ ಹೇಳಲಾಗುತ್ತಿದೆ.&lt;/p&gt;&lt;h3&gt;&lt;strong&gt;ಹಿಂದೂ ಭಾವನೆಗೆ ಉದ್ದೇಶಪೂರ್ವಕ ಧಕ್ಕೆ?&lt;/strong&gt;&lt;/h3&gt;&lt;p&gt;ಇನ್ನು ನಟಿ, ಮಾಳವಿಕಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಮಲಯಾಳಂ ಸಿನಿಮಾ, ತೆಲುಗು ಸಿನಿಮಾ ಮತ್ತು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಮಾಳವಿಕಾ 2018 ರಲ್ಲಿ ನೆಲ ಟಿಕೆಟ್ ಚಿತ್ರದ ಮೂಲಕ ತೆಲುಗು ಚೊಚ್ಚಲ ಪ್ರವೇಶ ಮಾಡಿದರು. ನಂತರ ಅವರು 2021 ರಲ್ಲಿ ತಮಿಳು ಚಿತ್ರ ರೆಡ್ ನಲ್ಲಿ ಕಾಣಿಸಿಕೊಂಡರು. 2022 ರಲ್ಲಿ, ಅವರು ಕಾಫಿ ವಿತ್ ಕಾದಲ್ ನಲ್ಲಿ ನಟಿಸಿದರು. 2024 ರಲ್ಲಿ, ಅವರು ಭೀಮಾದಲ್ಲಿ ಕಾಣಿಸಿಕೊಂಡರು. ಅದೇ ವರ್ಷ, ಅವರು ಹರೋಮ್ ಹರಾ ಚಿತ್ರದಲ್ಲೂ ನಟಿಸಿದರು.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/malvika-sharma-asked-about-beef-in-kerala-media-ecosystem-normalises-provocations-against-hindus-suc/articleshow-e5v226g"/>
        </item>
        <item>
            <title><![CDATA[ಅರ್ಜುನ್ ದೇವ್ ತಳು-ಕನ್ನಡ ಸಿನಿಮಾ ಟಾಸ್‌ಗೆ ಶಿಲ್ಪಾ ಗಣೇಶ್ ಸಾರಥ್ಯ, ಮೊದಲ ಹಾಡು ರಿಲೀಸ್]]></title>
            <link>https://kannada.asianetnews.com/entertainment/tulunadu-star-arjun-dev-tulu-kannada-film-toss-led-by-shilpa-ganesh-first-song-released/articleshow-hb7dlm0</link>
            <guid isPermaLink="true">https://kannada.asianetnews.com/entertainment/tulunadu-star-arjun-dev-tulu-kannada-film-toss-led-by-shilpa-ganesh-first-song-released/articleshow-hb7dlm0</guid>
            <pubDate>Tue, 18 Aug 2026 15:02:17 +0530</pubDate>
            <description><![CDATA[&lt;p&gt;ತುಳುನಾಡಿನ ಸೂಪರ್ ಸ್ಟಾರ್ ಅರ್ಜುನ್ ದೇವ್ ಟಾಸ್ ಚಿತ್ರಕ್ಕೆ ಶಿಲ್ಪಾ ಗಣೇಶ್ ಸಾರಥ್ಯದ ಗೋಲ್ಡನ್ ಮೂವೀಸ್ ಸಾಥ್ ನೀಡಿದೆ. ಕನ್ನಡ ಹಾಗೂ ತುಳು ಭಾಷೆಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಸೆ.18ಕ್ಕೆ ಬಿಡುಗಡೆಯಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0a3cw4da0mty0ba114sfx0s,imgname-arjun-dev-tulu-kannada-movie-toss-1787045507205.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.18) &lt;/strong&gt;ತುಳು ನಾಡಿನ&zwnj; ಸೂಪರ್ ಸ್ಟಾರ್ ಅರ್ಜುನ್ ದೇವ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಚಿತ್ರ ಟಾಸ್ ಸೆಪ್ಟೆಂಬರ್ 18ಕ್ಕೆ ಬಿಡುಗಡೆಯಾಗಹುತ್ತಿದೆ. ಡಾ.ದೇವದಾಸ್ ಕಾಪಿಕಾಡ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದ ಈ ಸಿನಿಮಾ ವಿಶೇಷ ಅಂದರೆ ತುಳು ಹಾಗೂ ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ , ಜೋಯೆಲ್ ಶರ್ಮನ್ ಡಿಸೋಜಾ ಛಾಯಾಗ್ರಹಣ,ಯಾಶ್ವಿನ್ ಕೆ ಶೆಟ್ಟಿಗೇರ್ ಸಂಕಲನ ಟಾಸ್ ಚಿತ್ರಕ್ಕಿದೆ. ಅದ್ಧೂರಿ ಸಿನಿಮಾಗೆ ಶಿಲ್ಪಾ ಗಣೇಶಾ ಸಾರಥ್ಯದ ಗೋಲ್ಡನ್ ಮೂವೀಸ್ ಅರ್ಪಿಸು ಅಿಕಾ ಪ್ರೊಡಕ್ಷನ್ ಹಾಗೂ ಬಿ.ಆರ್.ಬಿ ಪ್ರೊಡಕ್ಷನ್ಸ್ ನಿರ್ಮಾಣ ಜವಾಬ್ದಾರಿ ಹೊತ್ತಿಕೊಂಡಿದೆ.&lt;/p&gt;&lt;h2&gt;ಸಿನಿಮಾದಲ್ಲಿ ಸು ಫ್ರಮ್ ಸೋ ಖ್ಯಾತಿಯ ಶನೀಲ್ ಗೌತಮ್ ಸೇವೆ&lt;/h2&gt;&lt;p&gt;ಸುಫ್ರಮ್ ಸೋ ಖ್ಯಾತಿಯಾ ಶನೀಲ್ ಗೌತಮ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರೋದು ವಿಶೇಷ. ಟಾಸ್ ಸಿನಿಮಾ ನೋಡಿ ಮೆಚ್ಚಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ರವರು ಈ ಚಿತ್ರವನ್ನ ಗೋಲ್ಡನ್ ಮೂವೀಸ್ ಬ್ಯಾನರ್ ಮೂಲಕ ಅರ್ಪಿಸ್ತಿದ್ದಾರೆ. ಪ್ರಚಾರ ಆರಂಭಿಸಿರೋ ಚಿತ್ರತಂಡ ಚಿತ್ರದ ಮೊದಲ ಹಾಡನ್ನ ಬಿಡುಗಡೆ ಮಾಡಿದ್ದಾರೆ..&lt;/p&gt;&lt;p&gt;ಹೆಲೋ ಹೆಲೋ ನೀಲಾಂಬರಿ ಅನ್ನೋ ಮೆಲೋಡಿ ಡ್ಯುಯೆಟ್ ಹಾಡಲ್ಲಿ ಅರ್ಜುನ್ ದೇವ್ ಮತ್ತು ನಾಯಕಿ ಸುತೇಜ್ ಶೆಟ್ಟಿ ಕೆಮಿಸ್ಟ್ರಿ ಆಕರ್ಷಕವಾಗಿದೆ.. ಮಣಿಕಾಂತ್ ಕದ್ರಿ ಟ್ಯೂನ್, ಯೋಗರಾಜ್ ಭಟ್ ಸಾಹಿತ್ಯವಿರೋ ಈ ಹಾಡನ್ನ ಅರ್ಮಾನ್ ಮಾಲೀಕ್ ಹಾಡಿದ್ದಾರೆ..ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಹಾಡು ಲಭ್ಯವಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಟಾಸ್ ಸಿನಿಮಾದ ಹಾಡು ಮತ್ತು ಮೇಕಿಂಗ್ ಗುಣಮಟ್ಟ ನಿರೀಕ್ಷೆ ಹುಟ್ಟಿಸ್ತಿದೆ... ಅಂದ್ಹಾಗೆ ಈ ಹಾಡಿನ ಮೂಲಕ&zwnj;&zwnj;ಪ್ರಚಾರ ಕೆಲಸಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ ಸದ್ಯದಲ್ಲೇ ಪತ್ರಿಕಾಗೋಷ್ಠಿ ಮೂಲಕ ಉಳಿದ ವಿಷ್ಯಗಳನ್ನ ಹಂಚಿಕೊಳ್ಳೊ ಯೋಜನೆಯಲ್ಲಿದ್ದು, ಚಿತ್ರವನ್ನ ಸೆಪ್ಟೆಂಬರ್ 18ಕ್ಕೆ ಬಿಡುಗಡೆ ಮಾಡೋ ಸನ್ನಾಹದಲ್ಲಿದೆ.&lt;/p&gt;]]></content:encoded>
            <category>sandalwood</category>
            <dc:creator>Chethan Kumar</dc:creator>
            <atom:link href="https://kannada.asianetnews.com/entertainment/tulunadu-star-arjun-dev-tulu-kannada-film-toss-led-by-shilpa-ganesh-first-song-released/articleshow-hb7dlm0"/>
        </item>
        <item>
            <title><![CDATA[ಡಾ. ವಿಷ್ಣುವರ್ಧನ್ 'ಅಮೃತ ಮಹೋತ್ಸವ' ಅಧಿಕೃತ ಲೋಗೋ ಅನಾವರಣ; 'ಈವೆಂಟ್' ಯಾವಾಗ, ಎಲ್ಲಿ?]]></title>
            <link>https://kannada.asianetnews.com/sandalwood/dr-vishnuvardhan-75th-birth-anniversary-program-scheduled-for-september-27th-at-nandi-link-ground-in-bengaluru/articleshow-ir0auww</link>
            <guid isPermaLink="true">https://kannada.asianetnews.com/sandalwood/dr-vishnuvardhan-75th-birth-anniversary-program-scheduled-for-september-27th-at-nandi-link-ground-in-bengaluru/articleshow-ir0auww</guid>
            <pubDate>Wed, 19 Aug 2026 21:15:53 +0530</pubDate>
            <description><![CDATA[&lt;p&gt;ನಿರ್ದೇಶಕ ಡಾ.ರಾಜೇಂದ್ರ ಸಿಂಗ್ ಬಾಬು ಅವರು, ಡಾ. ವಿಷ್ಣುವರ್ಧನ್ ಅವರ ನೆನಪುಗಳನ್ನು ಸದಾ ಜೀವಂತವಾಗಿಡಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು. ಅವರೊಂದಿಗೆ ಕೆಲಸ ಮಾಡಿದ ಎಲ್ಲ ನಿರ್ದೇಶಕರು, ನಟ-ನಟಿಯರು, ನಿರ್ಮಾಪಕರು ಹಾಗೂ ತಂತ್ರಜ್ಞರನ್ನು ಈ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dazpmng9gb5j5d3v82k9ya,imgname-whatsapp-image-2026-08-19-at-6.59.07-pm--1--1787154127509.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Dr Vishnuvardhan 75 Birthday Event at Nandi Link Ground: ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ಅಂಗವಾಗಿ ಸೆಪ್ಟೆಂಬರ್ 27ರಂದು ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ ಅವರು, ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಜೀವನ, ಸಾಧನೆ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಸೆಪ್ಟೆಂಬರ್ 27ರಂದು ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ ಮೈದಾನದಲ್ಲಿ &lsquo;ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ&rsquo;ವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;&lt;img&gt;&lt;/p&gt;&lt;h2&gt;ಡಾ. ವಿಷ್ಣುವರ್ಧನ್ ವ್ಯಕ್ತಿತ್ವ ಮತ್ತು ಸಾಧನೆ&lt;/h2&gt;&lt;p&gt;ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಇಡೀ ಚಿತ್ರರಂಗ ಒಗ್ಗೂಡಿ ಸಂಭ್ರಮಿಸಿದ ಉದಾಹರಣೆಗಳು ವಿರಳವಾಗಿವೆ. ಈ ಹಿನ್ನೆಲೆಯಲ್ಲಿ ಅವರ 75ನೇ ಜನ್ಮವರ್ಷವನ್ನು ಅಮೃತಮಹೋತ್ಸವವಾಗಿ ಆಚರಿಸುವ ಮೂಲಕ ಅವರ ಸಾಧನೆಗಳ ಮೇಲೆ ಮತ್ತೆ ಮತ್ತೆ ಬೆಳಕು ಚೆಲ್ಲಲು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಲು ಇದು ಮಹತ್ವದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.&lt;/p&gt;&lt;p&gt;ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕನ್ನಡ ಚಿತ್ರರಂಗದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಸಾಹಿತ್ಯ ಕ್ಷೇತ್ರದ ಗಣ್ಯರು ಹಾಗೂ ಸಂಗೀತ ಕ್ಷೇತ್ರದ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ದಿನವಿಡೀ ನಡೆಯಲಿರುವ ಈ ಮಹೋತ್ಸವದಲ್ಲಿ ಡಾ. ವಿಷ್ಣುವರ್ಧನ್ ಅವರ ಜೀವನ ಮತ್ತು ಸಾಧನೆಗಳನ್ನು ಅನಾವರಣಗೊಳಿಸುವ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಅಭಿಮಾನಿಗಳಿಗೆ ಇದು ವಿಶಿಷ್ಟ ಮತ್ತು ರೋಮಾಂಚನಕಾರಿ ಅನುಭವವಾಗಲಿದೆ ಎಂದರು.&lt;/p&gt;&lt;p&gt;ನಂತರ ಮಾತನಾಡಿದ ನಿರ್ದೇಶಕ ಡಾ.ರಾಜೇಂದ್ರ ಸಿಂಗ್ ಬಾಬು ಅವರು, ಡಾ. ವಿಷ್ಣುವರ್ಧನ್ ಅವರ ನೆನಪುಗಳನ್ನು ಸದಾ ಜೀವಂತವಾಗಿಡಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು. ಅವರೊಂದಿಗೆ ಕೆಲಸ ಮಾಡಿದ ಎಲ್ಲ ನಿರ್ದೇಶಕರು, ನಟ-ನಟಿಯರು, ನಿರ್ಮಾಪಕರು ಹಾಗೂ ತಂತ್ರಜ್ಞರನ್ನು ಈ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.&lt;/p&gt;&lt;h3&gt;ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ&lt;/h3&gt;&lt;p&gt;ನಟ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಸುಂದರ್ ರಾಜ್ ಅವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಸಮಸ್ತ ಚಿತ್ರರಂಗ ಸಕ್ರಿಯವಾಗಿ ಭಾಗವಹಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ &lsquo;ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ&rsquo;ದ ಅಧಿಕೃತ ಲೋಗೋವನ್ನು ಅನಾವರಣಗೊಳಿಸಲಾಯಿತು.&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/dr-vishnuvardhan-75th-birth-anniversary-program-scheduled-for-september-27th-at-nandi-link-ground-in-bengaluru/articleshow-ir0auww"/>
        </item>
        <item>
            <title><![CDATA[ಮೆಲ್ಬೋರ್ನ್ ರೆಡ್ ಕಾರ್ಪೆಟ್‌ನಲ್ಲಿ ಕರ್ನಾಟಕದ ಕಂಪು: ರೇಷ್ಮೆ ಪಂಚೆ, ಗಂಡಭೇರುಂಡ ಕುರ್ತಾದಲ್ಲಿ ರಿಷಬ್ ಶೆಟ್ಟಿ!]]></title>
            <link>https://kannada.asianetnews.com/entertainment/silk-dhoti-and-gandaberunda-rishab-shettys-iffm-look-is-all-about-karnataka-gvd/articleshow-iwg3kbv</link>
            <guid isPermaLink="true">https://kannada.asianetnews.com/entertainment/silk-dhoti-and-gandaberunda-rishab-shettys-iffm-look-is-all-about-karnataka-gvd/articleshow-iwg3kbv</guid>
            <pubDate>Mon, 17 Aug 2026 22:40:48 +0530</pubDate>
            <description><![CDATA[&lt;p&gt;Rishab Shetty IFFM: ಮೆಲ್ಬೋರ್ನ್&zwnj;ನ ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್&zwnj;ನಲ್ಲಿ ನಟ ರಿಷಬ್ ಶೆಟ್ಟಿ ತಮ್ಮ ತವರು ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m089zf6a5385vmf3fse97te5,imgname-2-1786985299146.png" type="image/jpeg" height="390" width="690"/>
            <content:encoded><![CDATA[&lt;p&gt;ಮೆಲ್ಬೋರ್ನ್&zwnj;ನ ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್&zwnj;ನಲ್ಲಿ ನಟ ರಿಷಬ್ ಶೆಟ್ಟಿ ತಮ್ಮ ತವರು ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದಾರೆ. ಭಾರತೀಯ ಚಿತ್ರೋತ್ಸವ ಮೆಲ್ಬೋರ್ನ್ (IFFM) ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಯಾವುದೇ ಅದ್ಧೂರಿ ಅಥವಾ ಪ್ರಯೋಗಾತ್ಮಕ ಫ್ಯಾಷನ್ ಮೊರೆ ಹೋಗದೆ, ಸರಳವಾದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕೂಡ ತಮ್ಮ ಕರ್ನಾಟಕದ ಬೇರುಗಳನ್ನು ಮರೆಯದೆ, ಸಂಪ್ರದಾಯದ ಉಡುಗೆಯಲ್ಲೇ ಸ್ಟೈಲ್ ಸ್ಟೇಟ್&zwnj;ಮೆಂಟ್ ನೀಡಿರುವ ರಿಷಬ್ ಅವರ ಲುಕ್ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;p&gt;&lt;strong&gt;ಕೈಮಗ್ಗದ ಶುದ್ಧ ರೇಷ್ಮೆ ಪಂಚೆಯಲ್ಲಿ ರಿಷಬ್ ಶೆಟ್ಟಿ&lt;/strong&gt;&lt;/p&gt;&lt;p&gt;ಮೆಲ್ಬೋರ್ನ್&zwnj;ನಲ್ಲಿ ನಡೆದ IFFM ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಕಪ್ಪು ಕುರ್ತಾ ಹಾಗೂ ಕೈಮಗ್ಗದಲ್ಲಿ ತಯಾರಿಸಲಾದ ಶುದ್ಧ ರೇಷ್ಮೆಯ ಪಂಚೆ ಧರಿಸಿದ್ದರು. ಸಾಮಾನ್ಯವಾಗಿ ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್&zwnj;ಗಳಲ್ಲಿ ಕಾಣಿಸುವ ಅದ್ಧೂರಿ ಫ್ಯಾಷನ್&zwnj;ಗಿಂತ ಭಿನ್ನವಾಗಿ, ರಿಷಬ್ ಅವರ ಸರಳ ಸಾಂಪ್ರದಾಯಿಕ ಲುಕ್ ಎಲ್ಲರ ಗಮನ ಸೆಳೆಯಿತು. ಐವರಿ ಬಣ್ಣದ ಪಂಚೆಗೆ ಜರಿ ಅಂಚು ನೀಡಲಾಗಿದ್ದು, ಉಡುಪಿಗೆ ಸೊಗಸಾದ ಶ್ರೀಮಂತಿಕೆ ತಂದಿತ್ತು. ಇದಕ್ಕೆ ಕಪ್ಪು ಸಿಲ್ಕ್-ಕಾಟನ್ ಕುರ್ತಾ ಜೋಡಿಸಲಾಗಿತ್ತು. ಕಪ್ಪು ಮತ್ತು ಐವರಿ ಬಣ್ಣಗಳ ಕಾಂಬಿನೇಷನ್&zwnj;ಗೆ ಸಣ್ಣ ಪ್ರಮಾಣದ ಗೋಲ್ಡ್ ಡೀಟೇಲಿಂಗ್ ಮತ್ತಷ್ಟು ಎಲಿಗಂಟ್ ಲುಕ್ ನೀಡಿತ್ತು. ಸರಳತೆ ಹಾಗೂ ಸಾಂಪ್ರದಾಯಿಕತೆಯ ನಡುವೆ ಬ್ಯಾಲೆನ್ಸ್ ಕಾಯ್ದುಕೊಂಡಿದ್ದ ಈ ಲುಕ್, ರೆಡ್ ಕಾರ್ಪೆಟ್&zwnj;ಗೆ ಸೂಕ್ತವಾಗಿಯೇ ಕಾಣಿಸಿಕೊಂಡಿತು.&lt;img&gt;&lt;/p&gt;&lt;p&gt;&lt;strong&gt;ಕುರ್ತಾದ ಮೇಲಿದ್ದ ಗಂಡಭೇರುಂಡವೇ ಹೈಲೈಟ್!&lt;/strong&gt;&lt;/p&gt;&lt;p&gt;ರಿಷಬ್ ಶೆಟ್ಟಿ ಅವರ ಈ ಉಡುಪಿನಲ್ಲಿ ಎಲ್ಲರ ಗಮನ ಸೆಳೆದ ಪ್ರಮುಖ ಅಂಶವೆಂದರೆ ಕುರ್ತಾದ ಮೇಲೆ ಕಸೂತಿ ಮಾಡಲಾಗಿದ್ದ ಗಂಡಭೇರುಂಡ. ಕರ್ನಾಟಕದೊಂದಿಗೆ ಆಳವಾದ ನಂಟು ಹೊಂದಿರುವ ಗಂಡಭೇರುಂಡವು ಶಕ್ತಿ, ಸಾಮರ್ಥ್ಯ ಹಾಗೂ ಸ್ಥೈರ್ಯದ ಸಂಕೇತವಾಗಿ ಗುರುತಿಸಿಕೊಂಡಿದೆ. ರಿಷಬ್ ಅವರ ಕುರ್ತಾದ ಮೇಲೆ ಇದು ಯಾವುದೇ ಅದ್ಧೂರಿ ಅಲಂಕಾರದಂತೆ ಕಾಣಿಸದೆ, ಕರ್ನಾಟಕದೊಂದಿಗೆ ಅವರ ವೈಯಕ್ತಿಕ ನಂಟನ್ನು ಸಾರುವ ಸಣ್ಣ ಆದರೆ ಅರ್ಥಪೂರ್ಣ ಸಂಕೇತವಾಗಿ ಮೂಡಿಬಂದಿತ್ತು. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ತೋರಿಸಲು ಅದ್ಧೂರಿ ವಿನ್ಯಾಸ ಅಥವಾ ಓವರ್&zwnj; ದಿ ಟಾಪ್ ಸ್ಟೈಲಿಂಗ್ ಅಗತ್ಯವಿಲ್ಲ ಎಂಬುದನ್ನೂ ರಿಷಬ್ ಅವರ ಲುಕ್ ತೋರಿಸಿಕೊಟ್ಟಿದೆ.&lt;/p&gt;&lt;p&gt;&lt;strong&gt;ಗ್ಲೋಬಲ್ ರೆಡ್ ಕಾರ್ಪೆಟ್&zwnj;ನಲ್ಲಿ ಕರ್ನಾಟಕದ ಸಂಸ್ಕೃತಿ&lt;/strong&gt;&lt;/p&gt;&lt;p&gt;ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್&zwnj;ಗಳಲ್ಲಿ ಸಾಮಾನ್ಯವಾಗಿ ವಿಭಿನ್ನ ಸಿಲೂಯೆಟ್&zwnj;ಗಳು, ಪ್ರಯೋಗಾತ್ಮಕ ಫ್ಯಾಷನ್, ಸ್ಟೇಟ್&zwnj;ಮೆಂಟ್ ಆಕ್ಸೆಸರೀಸ್&zwnj;ಗಳು ಗಮನ ಸೆಳೆಯುತ್ತವೆ. ಆದರೆ ರಿಷಬ್ ಶೆಟ್ಟಿ ಈ ಬಾರಿ ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೈಮಗ್ಗದ ಬಟ್ಟೆ, ಸಾಂಪ್ರದಾಯಿಕ ಪಂಚೆ, ಸರಳ ಕುರ್ತಾ ಹಾಗೂ ಗಂಡಭೇರುಂಡದ ಕಸೂತಿ-ಇವೆಲ್ಲವೂ ಸೇರಿ ಯಾವುದೇ ಅತಿಯಾದ ಸ್ಟೈಲಿಂಗ್ ಇಲ್ಲದೆ ಕರ್ನಾಟಕದ ಸೊಗಡನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದಿವೆ. ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ರಿಷಬ್ ಶೆಟ್ಟಿ ಅವರ ನಂಟು ಹೊಸದೇನಲ್ಲ. ತಮ್ಮ ಸಿನಿಮಾ ಹಾಗೂ ಸಾರ್ವಜನಿಕ ಬದುಕಿನಲ್ಲೂ ಅವರು ಕನ್ನಡ ನಾಡಿನ ಸಂಸ್ಕೃತಿಯೊಂದಿಗೆ ಸದಾ ಗುರುತಿಸಿಕೊಂಡಿದ್ದಾರೆ. ಇದೀಗ ಮೆಲ್ಬೋರ್ನ್ ರೆಡ್ ಕಾರ್ಪೆಟ್&zwnj;ನಲ್ಲೂ ಅದೇ ನಂಟು ಮತ್ತೊಮ್ಮೆ ಎದ್ದು ಕಾಣಿಸಿದೆ.&lt;/p&gt;&lt;p&gt;&lt;strong&gt;&lsquo;ಕರ್ನಾಟಕವನ್ನು ಬದಲಿಸಿ ತೋರಿಸುವ&rsquo; ಬದಲು ಹಾಗೆಯೇ ಕೊಂಡೊಯ್ದ ರಿಷಬ್!&lt;/strong&gt;&lt;/p&gt;&lt;p&gt;ಅಂತರರಾಷ್ಟ್ರೀಯ ಪ್ರೇಕ್ಷಕರಿಗಾಗಿ ಕರ್ನಾಟಕದ ಸಾಂಪ್ರದಾಯಿಕ ಉಡುಗೆಯನ್ನು ಹೊಸ ರೀತಿಯಲ್ಲಿ ಬದಲಿಸಿ ತೋರಿಸುವ ಬದಲು, ತಮ್ಮ ಸಂಸ್ಕೃತಿಯನ್ನು ಅದರ ಸಹಜ ರೂಪದಲ್ಲೇ ರಿಷಬ್ ಶೆಟ್ಟಿ ಜಾಗತಿಕ ವೇದಿಕೆಗೆ ಕೊಂಡೊಯ್ದಿದ್ದಾರೆ.&lt;/p&gt;&lt;h2&gt;&lt;strong&gt;ಇದೇ ಅವರ IFFM ಲುಕ್&zwnj;ನ ವಿಶೇಷತೆ&lt;/strong&gt;&lt;/h2&gt;&lt;p&gt;ಜಾಗತಿಕ ರೆಡ್ ಕಾರ್ಪೆಟ್&zwnj;ನಲ್ಲಿ ಗಮನ ಸೆಳೆಯಲು ಯಾವಾಗಲೂ ಅದ್ಧೂರಿತನವೇ ಬೇಕಿಲ್ಲ. ಕೆಲವೊಮ್ಮೆ ಸರಳತೆ, ಸಂಪ್ರದಾಯ ಮತ್ತು ತನ್ನ ನೆಲದ ಮೇಲಿನ ಹೆಮ್ಮೆ ಕೂಡ ಅತ್ಯಂತ ಪರಿಣಾಮಕಾರಿ ಫ್ಯಾಷನ್ ಸ್ಟೇಟ್&zwnj;ಮೆಂಟ್ ಆಗಬಲ್ಲದು ಎಂಬುದನ್ನು ರಿಷಬ್ ಶೆಟ್ಟಿ ತಮ್ಮ ಲುಕ್ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/silk-dhoti-and-gandaberunda-rishab-shettys-iffm-look-is-all-about-karnataka-gvd/articleshow-iwg3kbv"/>
        </item>
        <item>
            <title><![CDATA[Toxic Countdown Day 07: ಟಾಕ್ಸಿಕ್ ಕೌಂಟ್‌ಡೌನ್ 07.. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದ ನಿರೀಕ್ಷೆಗಳೇನು? ಸ್ಪೆಷಲ್‌ ಸ್ಟೋರಿ ಇಲ್ಲಿದೆ ನೋಡಿ!]]></title>
            <link>https://kannada.asianetnews.com/entertainment/countdown-for-yash-toxic-has-started-and-it-is-just-07-days-left-for-the-release-date-on-26-august-2026/articleshow-l3140li</link>
            <guid isPermaLink="true">https://kannada.asianetnews.com/entertainment/countdown-for-yash-toxic-has-started-and-it-is-just-07-days-left-for-the-release-date-on-26-august-2026/articleshow-l3140li</guid>
            <pubDate>Wed, 19 Aug 2026 12:10:42 +0530</pubDate>
            <description><![CDATA[&lt;p&gt;ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 09 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cby3rc44mwe9kwy2t9rrb0,imgname-whatsapp-image-2026-08-18-at-8.36.28-pm-1787121569548.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Release Date-Rocking Star Yash-Toxic Movie Countdown 07: ಯಶ್&zwnj; ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ 07.&lt;/strong&gt;&lt;/p&gt;&lt;p&gt;ಕನ್ನಡಿಗ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಹವಾ ಇಡೀ ಜಗತ್ತನ್ನೇ ಆವರಿಸಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ ಚಾಲನೆಯಲ್ಲಿದೆ. ಇನ್ನೇನು ಕೇವಲ 07 ದಿನಗಳಷ್ಟೇ ಬಾಕಿ ಇದೆ. ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿಮಾ ಪ್ರೇಮಿಗಳಿಗೆ ಟಾಕ್ಸಿಕ್ ಬಿಡುಗಡೆಯನ್ನು ಒಂದು ರಾಷ್ಟ್ರೀಯ ಹಬ್ಬದಂತೆ ಆಚರಿಸಲಿದ್ದಾರೆ. ಟಾಕ್ಸಿಕ್&zwnj; ತೆರೆಯ ಮೇಲೆ ಕಾಣಿಸಿಕೊಳ್ಳಲು ಇನ್ನು 07 ದಿನಗಳಷ್ಟೇ ಬಾಕಿ ಇದ್ದು, ಪರದೆಯಲ್ಲಿ ಈ ಸಿನಿಮಾ ಕಣ್ತುಂಬಿಕೊಳ್ಳಲು ಕನ್ನಡಿಗರು ಸೇರಿದಂತೆ ಜಗತ್ತಿನಾದ್ಯಂತ ಸಿನಿರಸಿಕರು ಹಗಲಿರುಳೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.&lt;/p&gt;&lt;p&gt;ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್&zwnj;ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಆದರೆ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಕೂಡ ಡಬ್ ಆಗಿ ಬಿಡುಗಡೆ ಕಾಣಲಿದೆ. ಹಾಲಿವುಡ್ ಸೇರಿದಂತೆ, ಜಗತ್ತಿನ ಖ್ಯಾತ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಮೂಡಿ ಬಂದಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಈ ಮೂಲಕ ಕನ್ನಡ ಸಿನಿಮಾ ಇದೇ ಮೊದಲ ಬಾರಿಗೆ ಜಗತ್ತಿನಾದ್ಯಂತ ಹಾಲಿವುಡ್ ಸಿನಿಮಾದಂತೆ ರಿಲೀಸ್ ಆಗಲಿದೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ಜಗತ್ತಿನಾದ್ಯಂತ ಮೆರೆದಾಡಲಿದೆ. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿ ಎಂದು ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಹಾಗೂ ಸಿನಿಮಾ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.&lt;/p&gt;&lt;h2&gt;ನಮಿತ್ ಮಲ್ಹೋತ್ರಾ ಹಾಗೂ ಯಶ್ ಪಾರ್ಟ್&zwnj;ನರ್&zwnj;ಶಿಪ್&zwnj;&lt;/h2&gt;&lt;p&gt;ನಮಿತ್ ಮಲ್ಹೋತ್ರಾ ಹಾಗೂ ಯಶ್ ಪಾರ್ಟ್&zwnj;ನರ್&zwnj;ಶಿಪ್&zwnj; ನಿರ್ಮಾಣದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಕೂಡ ಈ ಬಜೆಟ್&zwnj;ನಲ್ಲಿ ಸೇರಿಕೊಂಡಿದೆ. ಈಗಾಗಲೇ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಸೃಷ್ಟಿಯಾಗಿದ್ದು, ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಸಿನಿಮಾ ಬಾಕ್ಸ್&zwnj; ಆಫೀಸ್ ಪಂಡಿತರ ಹೇಳುತ್ತಿದ್ದಾರೆ. ನಟ ಯಶ್ ಅವರು ತಮ್ಮ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ಬರೋಬ್ಬರಿ 4.5 ವರ್ಷಗಳಷ್ಟಿ ಸಮಯವನ್ನು ಮೀಸಲಾಗಿಟ್ಟು, ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಮೂಲಕ 'ಪ್ಯಾನ್ ವರ್ಲ್ಡ್' ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಇನ್ನೇನು ಟಾಕ್ಸಿಕ್ ಕೇವಲ 07 ದಿನಗಳ ಬಳಿಕ ತೆರೆಯ ಮೇಲೆ ರಾರಾಜಿಸಲಿದೆ. ಹಾಗೇ, ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ಅಂದರೆ 08 ನವೆಂಬರ್ 2026ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ.&lt;/p&gt;&lt;p&gt;ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 09 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಬಹಳಷ್ಟು ಸಾಕಷ್ಟು ನಿರೀಕ್ಷೆ ಮೂಡಿಸಿದೆ.&lt;/p&gt;&lt;h3&gt;ಜಗತ್ತಿನಾದ್ಯಂತ ಟಾಕ್ಸಿಕ್ ಹಬ್ಬಕ್ಕೆ ಕೌಂಟ್&zwnj;ಡೌನ್&lt;/h3&gt;&lt;p&gt;ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್&zwnj;ಡೌನ್ ಚಾಲ್ತಿಯಲ್ಲಿದೆ. ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ 'ಆಪ್&zwnj; ಕಿ ಅದಾಲತ್&zwnj;'ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 07ರ ಕೌಂಟ್&zwnj;ಡೌನ್&zwnj;ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 06. ಪ್ರತಿದಿನದ ಅಪ್&zwnj;ಡೇಟ್&zwnj;ಗಾಗಿ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/countdown-for-yash-toxic-has-started-and-it-is-just-07-days-left-for-the-release-date-on-26-august-2026/articleshow-l3140li"/>
        </item>
        <item>
            <title><![CDATA[ಜಿಮ್ ಇಲ್ಲ, ಡಯಟ್ ಇಲ್ಲ.. ಯಶ್ ಪತ್ನಿ ರಾಧಿಕಾ ಫಿಟ್ ಆಗಿರಲು ಮಾಡೋ ಈ 3 ಅಭ್ಯಾಸಗಳೇ ಕಾರಣ!]]></title>
            <link>https://kannada.asianetnews.com/sandalwood/no-gym-no-diet-radhika-pandit-reveals-her-3-simple-fitness-secrets-gvd/articleshow-mi1stci</link>
            <guid isPermaLink="true">https://kannada.asianetnews.com/sandalwood/no-gym-no-diet-radhika-pandit-reveals-her-3-simple-fitness-secrets-gvd/articleshow-mi1stci</guid>
            <pubDate>Wed, 19 Aug 2026 16:23:41 +0530</pubDate>
            <description><![CDATA[&lt;p&gt;ರಾಧಿಕಾ ಫಿಟ್ ಆಗಿರಲು ಪ್ರತಿದಿನ ಜಿಮ್&zwnj;ಗೆ ಹೋಗುವುದಿಲ್ಲ. ಅದೇ ರೀತಿ ಕಠಿಣ ಡಯಟ್ ಅಥವಾ ಕ್ರ್ಯಾಶ್ ಡಯಟ್ ಕೂಡ ಫಾಲೋ ಮಾಡುವುದಿಲ್ಲ. ಬದಲಿಗೆ ಸರಳವಾದ ಕೆಲವು ಅಭ್ಯಾಸಗಳನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ctemev9r5msmy9vh5sa4v4,imgname-bjn-1787136791003.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಟಾಕ್ಸಿಕ್&rsquo; ಚಿತ್ರದ ಮೂಲಕ ಮತ್ತೊಮ್ಮೆ ಭರ್ಜರಿ ಸುದ್ದಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ಒಂದು ಕಾಲದಲ್ಲಿ ಸ್ಯಾಂಡಲ್&zwnj;ವುಡ್&zwnj;ನ ಟಾಪ್ ಹೀರೋಯಿನ್ ಆಗಿದ್ದ ರಾಧಿಕಾ, ಇದೀಗ ಸಿನಿಮಾಗಳಿಂದ ದೂರವಿದ್ದರೂ ತಮ್ಮ ಫಿಟ್&zwnj;ನೆಸ್ ಹಾಗೂ ಆಕ್ಟಿವ್ ಲೈಫ್&zwnj;ಸ್ಟೈಲ್&zwnj;ನಿಂದ ಗಮನ ಸೆಳೆಯುತ್ತಾರೆ.&lt;/p&gt;&lt;p&gt;ವಿಶೇಷ ಅಂದರೆ, ರಾಧಿಕಾ ಫಿಟ್ ಆಗಿರಲು ಪ್ರತಿದಿನ ಜಿಮ್&zwnj;ಗೆ ಹೋಗುವುದಿಲ್ಲ. ಅದೇ ರೀತಿ ಕಠಿಣ ಡಯಟ್ ಅಥವಾ ಕ್ರ್ಯಾಶ್ ಡಯಟ್ ಕೂಡ ಫಾಲೋ ಮಾಡುವುದಿಲ್ಲ. ಬದಲಿಗೆ ಸರಳವಾದ ಕೆಲವು ಅಭ್ಯಾಸಗಳನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಂಡಿದ್ದಾರೆ. ಹಾಗಾದರೆ ರಾಧಿಕಾ ಅವರ ಫಿಟ್&zwnj;ನೆಸ್ ಸೀಕ್ರೆಟ್ ಏನು?&lt;/p&gt;&lt;p&gt;&lt;strong&gt;ಜಿಮ್ ಇಲ್ಲ, ಕಠಿಣ ಡಯಟ್ ಕೂಡ ಇಲ್ಲ!&lt;/strong&gt;&lt;/p&gt;&lt;p&gt;ಹಳೆಯ ಸಂದರ್ಶನವೊಂದರಲ್ಲಿ ರಾಧಿಕಾ ಪಂಡಿತ್ ತಮ್ಮ ಫಿಟ್&zwnj;ನೆಸ್ ಬಗ್ಗೆ ಮಾತನಾಡಿದ್ದರು. ತಾವು ಮೊದಲಿನಿಂದಲೂ ಸಣ್ಣ ಮೈಕಟ್ಟಿನವರಾಗಿದ್ದು, ಇದೇ ಕಾರಣಕ್ಕೆ ಕೆಲವು ಸಿನಿಮಾಗಳ ಅವಕಾಶಗಳನ್ನು ಕಳೆದುಕೊಂಡಿದ್ದೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ಫಿಟ್ ಆಗಲು ಗಂಟೆಗಟ್ಟಲೆ ಟ್ರೆಡ್&zwnj;ಮಿಲ್ ಮೇಲೆ ಓಡುವುದು ಅಥವಾ ಕಠಿಣ ಡಯಟ್ ಮಾಡುವುದು ತಮ್ಮಿಂದ ಸಾಧ್ಯವಿಲ್ಲ ಎಂದು ರಾಧಿಕಾ ಸ್ಪಷ್ಟವಾಗಿ ಹೇಳಿದ್ದರು. ಹೀಗಾಗಿ ತಮಗೆ ಇಷ್ಟವಾಗುವ ಮತ್ತು ಸುಲಭವಾಗಿ ಅನುಸರಿಸಬಹುದಾದ ರೀತಿಯಲ್ಲಿ ಫಿಟ್&zwnj;ನೆಸ್ ರೂಟೀನ್ ರೂಪಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಫಿಟ್ ಆಗಿರಲು ರಾಧಿಕಾ ಮಾಡುವ 3 ಕೆಲಸಗಳು: &lt;/strong&gt;ರಾಧಿಕಾ ಅವರ ಫಿಟ್&zwnj;ನೆಸ್ ರೂಟೀನ್ ತುಂಬಾ ಸರಳವಾಗಿದೆ. ಜಿಮ್&zwnj;ಗೆ ಹೋಗುವ ಬದಲು ದೈಹಿಕ ಚಟುವಟಿಕೆಗಳನ್ನು ತಮ್ಮ ದಿನಚರಿಯಲ್ಲಿ ಸೇರಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;1. ಜುಂಬಾ ಮತ್ತು ಡ್ಯಾನ್ಸ್&lt;/strong&gt;&lt;/p&gt;&lt;p&gt;ರಾಧಿಕಾಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಹೀಗಾಗಿ ಕ್ಯಾಲೊರಿ ಬರ್ನ್ ಮಾಡಲು ಅವರು ಜುಂಬಾ ಅಥವಾ ನಾರ್ಮಲ್ ಡ್ಯಾನ್ಸ್ ಮಾಡುತ್ತಾರೆ. ಡ್ಯಾನ್ಸ್ ಮೂಲಕ ವರ್ಕೌಟ್ ಮಾಡಿದಂತೆಯೂ ಆಗುತ್ತದೆ, ಜೊತೆಗೆ ಮನಸ್ಸಿಗೂ ಖುಷಿ ಸಿಗುತ್ತದೆ.&lt;/p&gt;&lt;p&gt;&lt;strong&gt;2. ಸೂರ್ಯ ನಮಸ್ಕಾರ, ಯೋಗ ಮತ್ತು ಎಕ್ಸರ್ಸೈಸ್&lt;/strong&gt;&lt;/p&gt;&lt;p&gt;ಬೆಳಗ್ಗೆ ಎದ್ದ ಬಳಿಕ ಸೂರ್ಯ ನಮಸ್ಕಾರ, ಯೋಗ ಅಥವಾ ಸರಳವಾದ ವ್ಯಾಯಾಮಗಳನ್ನು ಮಾಡುವುದು ಅವರ ದಿನಚರಿಯ ಮತ್ತೊಂದು ಭಾಗ. ದೇಹವನ್ನು ಆಕ್ಟಿವ್ ಆಗಿಡಲು ಇದು ಸಹಾಯ ಮಾಡುತ್ತದೆ.&lt;/p&gt;&lt;p&gt;&lt;strong&gt;3. 30 ನಿಮಿಷ ವಾಕಿಂಗ್&lt;/strong&gt;&lt;/p&gt;&lt;p&gt;ಇದರ ಜೊತೆಗೆ ಪ್ರತಿದಿನ ಸುಮಾರು 30 ನಿಮಿಷ ವಾಕ್ ಮಾಡುವ ಅಭ್ಯಾಸವೂ ರಾಧಿಕಾ ಅವರದ್ದು. ಫಿಟ್&zwnj;ನೆಸ್&zwnj;ಗಾಗಿ ದುಬಾರಿ ಜಿಮ್&zwnj;ಗಿಂತಲೂ ನಿಯಮಿತವಾಗಿ ನಡೆಯುವುದು ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಮುಖ್ಯ ಎಂಬುದು ಅವರ ನಂಬಿಕೆ.&lt;/p&gt;&lt;p&gt;&lt;strong&gt;ಮೆಡಿಟೇಷನ್ ಬದಲು ಈ ಅಭ್ಯಾಸಗಳು!&lt;/strong&gt;&lt;/p&gt;&lt;p&gt;ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಲು ರಾಧಿಕಾ ಮೆಡಿಟೇಷನ್ ಮಾಡುವುದಿಲ್ಲವಂತೆ. ಬದಲಿಗೆ ತಮ್ಮ ನೆಚ್ಚಿನ ಹಾಡುಗಳನ್ನು ಕೇಳುವುದು, ಸಿನಿಮಾಗಳನ್ನು ನೋಡುವುದು ಮತ್ತು ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಪುಸ್ತಕ ಓದುವುದು ಅವರಿಗೆ ತುಂಬಾ ಇಷ್ಟ. ಕೆಲವೊಮ್ಮೆ ಇದರ ಜೊತೆಗೆ ಹಾಟ್ ಚಾಕೊಲೇಟ್ ಕೂಡ ಸವಿಯುತ್ತಾರೆ. ಈ ರೀತಿಯ ಸಣ್ಣ ಸಣ್ಣ ಅಭ್ಯಾಸಗಳೇ ತಮ್ಮ ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತವೆ ಎಂದು ರಾಧಿಕಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಊಟದ ವಿಚಾರದಲ್ಲೂ ಸಿಂಪಲ್ ರೂಟೀನ್&lt;/strong&gt;&lt;/p&gt;&lt;p&gt;ರಾಧಿಕಾ ಪಂಡಿತ್ ಸಸ್ಯಾಹಾರಿ. ಅವರ ಆಹಾರ ಪದ್ಧತಿಯೂ ತುಂಬಾ ಸರಳವಾಗಿದೆ. ದಿನದಲ್ಲಿ ಸಾಮಾನ್ಯವಾಗಿ ಹೊಟ್ಟೆ ತುಂಬಾ ಊಟ ಮಾಡುವ ಅವರು, ರಾತ್ರಿ ವೇಳೆ ತರಕಾರಿ, ರೊಟ್ಟಿ ಮತ್ತು ಸಲಾಡ್&zwnj;ನಂತಹ ಹಗುರವಾದ ಆಹಾರವನ್ನು ಸೇವಿಸುತ್ತಾರೆ. ಸ್ನ್ಯಾಕ್ಸ್&zwnj;ಗಾಗಿ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ಆಯ್ಕೆ ಮಾಡುತ್ತಾರೆ. ರಾತ್ರಿ ಸುಮಾರು 8 ಗಂಟೆಯೊಳಗೆ ಊಟ ಮುಗಿಸಿಕೊಳ್ಳುವ ಅಭ್ಯಾಸವೂ ಅವರಿಗಿದೆ. ತಮ್ಮ ದೇಹ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ ಮತ್ತು ಬೆಳಗ್ಗೆ ಫ್ರೆಶ್ ಆಗಿ ಎದ್ದೇಳುತ್ತೇನೆ ಎಂದು ರಾಧಿಕಾ ಹಿಂದಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.&lt;/p&gt;&lt;h2&gt;&lt;strong&gt;ಫಿಟ್&zwnj;ನೆಸ್ ಅಂದ್ರೆ ದೇಹಕ್ಕೆ ಶಿಕ್ಷೆ ಕೊಡುವುದಲ್ಲ!&lt;/strong&gt;&lt;/h2&gt;&lt;p&gt;ರಾಧಿಕಾ ಅವರ ಫಿಟ್&zwnj;ನೆಸ್ ಮಂತ್ರ ತುಂಬಾ ಸರಳ. ಫಿಟ್ ಆಗಿರಲು ನಮ್ಮ ದೇಹಕ್ಕೆ ಕಠಿಣ ಶಿಕ್ಷೆ ನೀಡುವ ಅಗತ್ಯವಿಲ್ಲ. ಬದಲಿಗೆ ನಮಗೆ ಹೊಂದುವ ಆರೋಗ್ಯಕರ ದಿನಚರಿಯನ್ನು ರೂಪಿಸಿಕೊಂಡು ಅದನ್ನು ನಿಯಮಿತವಾಗಿ ಪಾಲಿಸುವುದು ಮುಖ್ಯ. ಜುಂಬಾ ಅಥವಾ ಡ್ಯಾನ್ಸ್, ಯೋಗ ಮತ್ತು ಸೂರ್ಯ ನಮಸ್ಕಾರ, ವಾಕಿಂಗ್-ಈ ಮೂರು ಸರಳ ಅಭ್ಯಾಸಗಳನ್ನೇ ತಮ್ಮ ದಿನಚರಿಯ ಭಾಗವಾಗಿಸಿಕೊಂಡಿರುವ ರಾಧಿಕಾ, ಇಂದಿಗೂ ಫಿಟ್ ಹಾಗೂ ಆಕ್ಟಿವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/no-gym-no-diet-radhika-pandit-reveals-her-3-simple-fitness-secrets-gvd/articleshow-mi1stci"/>
        </item>
        <item>
            <title><![CDATA[Toxic Countdown Day 09: 'ಟಾಕ್ಸಿಕ್' ಕೌಂಟ್‌ಡೌನ್ 09.. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ಏನೆಲ್ಲಾ ಇದೆ? ಈ ಸ್ಪೆಷಲ್‌ ಸ್ಟೋರಿ ನೋಡಿ!]]></title>
            <link>https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-09-days-to-go/articleshow-n06oaqg</link>
            <guid isPermaLink="true">https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-09-days-to-go/articleshow-n06oaqg</guid>
            <pubDate>Tue, 18 Aug 2026 13:18:30 +0530</pubDate>
            <description><![CDATA[&lt;p&gt;ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ ಆಪ್&zwnj; ಕಿ ಅದಾಲತ್&zwnj;ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 09ರ ಕೌಂಟ್&zwnj;ಡೌನ್&zwnj;ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 08.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09x9jk2yych61nr961cf14p,imgname-whatsapp-image-2026-08-18-at-12.49.42-pm-1787039107682.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Release Date-Rocking Star Yash-Toxic Movie Countdown 09: ಯಶ್&zwnj; ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ 09.&lt;/strong&gt;&lt;/p&gt;&lt;p&gt;ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಬ್ಬದ ಹವಾ ಜೋರಾಗಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ ಚಾಲನೆಯಲ್ಲಿದೆ. ಇನ್ನೇನು ಕೇವಲ 09 ದಿನಗಳಷ್ಟೇ ಬಾಕಿ ಇದೆ. ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿರಸಿಕರಿಗೆ ಟಾಕ್ಸಿಕ್ ಬಿಡುಗಡೆ ಎಂಬುದು ಒಂದು ಹಬ್ಬದಂತೆ. ಟಾಕ್ಸಿಕ್&zwnj; ತೆರೆಯ ಮೇಲೆ ಕಾಣಿಸಿಕೊಳ್ಳಲು ಇನ್ನು 09 ದಿನಗಳಷ್ಟೇ ಬಾಕಿ ಇದ್ದು, ಪರದೆಯಲ್ಲಿ ಈ ಸಿನಿಮಾ ಕಣ್ತುಂಬಿಕೊಳ್ಳಲು ಕನ್ನಡಿಗರು ಸೇರಿದಂತೆ ಜಗತ್ತಿನಾದ್ಯಂತ ಸಿನಿರಸಿಕರು ಹಗಲಿರುಳೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.&lt;/p&gt;&lt;h2&gt;ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್&zwnj;ದಾಸ್ ನಿರ್ದೇಶನ&lt;/h2&gt;&lt;p&gt;ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್&zwnj;ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಆದರೆ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಡಬ್ ಆಗಿರುವ ವರ್ಷನ್ ಬಿಡುಗಡೆ ಆಗಲಿದೆ. ಹಾಲಿವುಡ್ ತಂತ್ರಜ್ಞರು ಸೇರಿದಂತೆ, ಜಗತ್ತಿನ ಖ್ಯಾತ ಟೆಕ್ನಿಷಿಯನ್ಸ್&zwnj; ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಮೂಡಿ ಬಂದಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಈ ಮುಳಕ ಕನ್ನಡ ಸಿನಿಮಾ ಇದೇ ಮೊದಲ ಬಾರಿಗೆ ಜಗತ್ತಿನಾದ್ಯಂತ ಹಾಲಿವುಡ್ ಸಿನಿಮಾದಂತೆ ರಿಲೀಸ್ ಆಗಲಿದೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ವಿಶ್ವದಾದ್ಯಂತ ಮೆರೆದಾಡಲಿದೆ.&lt;/p&gt;&lt;p&gt;ನಮಿತ್ ಮಲ್ಹೋತ್ರಾ ಹಾಗೂ ಯಶ್ ಪಾರ್ಟ್&zwnj;ನರ್&zwnj;ಶಿಪ್&zwnj;ನಲ್ಲಿ ಟಾಕ್ಸಿಕ್ ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಕೂಡ ಈ ಬಜೆಟ್&zwnj;ನಲ್ಲಿ ಸೇರಿಕೊಂಡಿದೆ. ಈಗಾಗಲೇ ಸಿನಿಮಾದ ಬಗ್ಗೆ ಅಪರಿಮಿತ ನಿರೀಕ್ಷೆ ಸೃಷ್ಟಿಯಾಗಿದ್ದು, ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂಬುದು ಸಿನಿಮಾ ಬಾಕ್ಸ್&zwnj; ಆಫೀಸ್ ಪಂಡಿತರ ಲೆಕ್ಕಾಚಾರ. ನಟ ಯಶ್ ಅವರು ತಮ್ಮ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ಬರೋಬ್ಬರಿ 4.5 ವರ್ಷ ಕೊಟ್ಟು ಬಿಗ್ ಬಜೆಟ್ ಹಾಗೂ ರಿಚ್ ಮೂಲಕ ಪ್ಯಾನ್ ವರ್ಲ್ಡ್ ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಇನ್ನೇನು ಟಾಕ್ಸಿಕ್ ಕೇವಲ 9 ದಿನಗಳ ಬಳಿಕ ತೆರೆಯ ಮೇಲೆ ರಾರಾಜಿಸಲಿದೆ. ಹಾಗೇ, ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ಅಂದರೆ 08 ನವೆಂಬರ್ 2026ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ.&lt;/p&gt;&lt;p&gt;ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 09 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು, ಅಂದರೆ ನಯನಾತಾರಾ, ಕನ್ನಡತಿ ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಬಹಳಷ್ಟು ನಿರೀಕ್ಷೆ ಮೂಡಿಸಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್&zwnj;ಡೌನ್ ಶುರುವಾಗಿದೆ. ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ ಆಪ್&zwnj; ಕಿ ಅದಾಲತ್&zwnj;ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 09ರ ಕೌಂಟ್&zwnj;ಡೌನ್&zwnj;ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 08. ಎಲ್ಲಾ ದಿನಗಳ ಅಪ್&zwnj;ಡೇಟ್&zwnj;ಗೆ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-09-days-to-go/articleshow-n06oaqg"/>
        </item>
        <item>
            <title><![CDATA[ವೆಬ್‌ಸೀರಿಸ್ ಜಗತ್ತಿಗೆ ಪ್ರಿಯಾಂಕಾ ಉಪೇಂದ್ರ, ನಿಶ್ವಿಕಾ ನಾಯ್ಡು ಎಂಟ್ರಿ: ಇಲ್ಲಿದೆ ಕುತೂಹಲಕಾರಿ ಮಾಹಿತಿ]]></title>
            <link>https://kannada.asianetnews.com/sandalwood/priyanka-upendra-nishvika-naidu-make-their-web-series-debuts-gvd/articleshow-qrga8tb</link>
            <guid isPermaLink="true">https://kannada.asianetnews.com/sandalwood/priyanka-upendra-nishvika-naidu-make-their-web-series-debuts-gvd/articleshow-qrga8tb</guid>
            <pubDate>Mon, 17 Aug 2026 18:45:30 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದಲ್ಲಿ ವೆಬ್&zwnj;ಸೀರಿಸ್&zwnj;ಗಳತ್ತ ಮುಖ ಮಾಡುತ್ತಿರುವ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಟ್ರೀಮಿಂಗ್ ಪ್ಲಾಟ್&zwnj;ಫಾರ್ಮ್&zwnj;ಗಳು ವಿಭಿನ್ನ ಫಾರ್ಮ್ಯಾಟ್&zwnj;ಗಳು ಹಾಗೂ ಕಥೆಗಳಿಗೆ ಅವಕಾಶ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07xrv2v6g27cmtkb33pvvc8,imgname-knk-1786972499035.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ತಾರೆಯರ ಗಮನ ಇದೀಗ ವೆಬ್&zwnj;ಸೀರಿಸ್&zwnj;ಗಳತ್ತವೂ ಹರಿಯುತ್ತಿದೆ. ವಿಭಿನ್ನ ಕಥೆಗಳು, ದೀರ್ಘಾವಧಿಯ ನಿರೂಪಣೆ ಹಾಗೂ ಹೊಸ ರೀತಿಯ ಪಾತ್ರಗಳಿಗೆ ಡಿಜಿಟಲ್ ವೇದಿಕೆ ಅವಕಾಶ ಕಲ್ಪಿಸುತ್ತಿರುವ ಹಿನ್ನೆಲೆಯಲ್ಲಿ, ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹಲವು ನಟ-ನಟಿಯರು ಓಟಿಟಿ ಜಗತ್ತಿನತ್ತ ಹೆಜ್ಜೆ ಹಾಕುತ್ತಿದ್ದಾರೆ.&lt;/p&gt;&lt;p&gt;&lt;strong&gt;ವೆಬ್&zwnj;ಸೀರಿಸ್&zwnj;ಗೆ ಪ್ರಿಯಾಂಕಾ ಉಪೇಂದ್ರ, ನಿಶ್ವಿಕಾ ನಾಯ್ಡು ಎಂಟ್ರಿ!&lt;/strong&gt;&lt;/p&gt;&lt;p&gt;ಕನ್ನಡ ಚಿತ್ರರಂಗದಲ್ಲಿ ವೆಬ್&zwnj;ಸೀರಿಸ್&zwnj;ಗಳತ್ತ ಮುಖ ಮಾಡುತ್ತಿರುವ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಟ್ರೀಮಿಂಗ್ ಪ್ಲಾಟ್&zwnj;ಫಾರ್ಮ್&zwnj;ಗಳು ವಿಭಿನ್ನ ಫಾರ್ಮ್ಯಾಟ್&zwnj;ಗಳು ಹಾಗೂ ಕಥೆಗಳಿಗೆ ಅವಕಾಶ ನೀಡುತ್ತಿರುವುದರಿಂದ, ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟರು ಇದೀಗ ಡಿಜಿಟಲ್ ಜಗತ್ತಿನಲ್ಲೂ ಹೊಸ ಬಗೆಯ ಪಾತ್ರಗಳು ಹಾಗೂ ದೀರ್ಘಾವಧಿಯ ಕಥನಗಳನ್ನು ಪ್ರಯೋಗಿಸಲು ಮುಂದಾಗಿದ್ದಾರೆ.&lt;/p&gt;&lt;p&gt;ಒಂದೆಡೆ ಸಂಜನಾ ಆನಂದ್ ವೆಬ್&zwnj;ಸೀರಿಸ್&zwnj;ನಿಂದ ಬೆಳ್ಳಿತೆರೆಗೆ ಬಂದಿದ್ದರೆ, &lsquo;ದಿಯಾ&rsquo; ಖ್ಯಾತಿಯ ಖುಷಿ ರವಿ &lsquo;ಅಯ್ಯನ ಮನೆ&rsquo; ವೆಬ್&zwnj;ಸೀರಿಸ್ ಮೂಲಕ ಗಮನ ಸೆಳೆದಿದ್ದರು. ಕೌಟುಂಬಿಕ ಡ್ರಾಮಾ, ಸಸ್ಪೆನ್ಸ್ ಹಾಗೂ ಮಿಸ್ಟರಿಯನ್ನು ಒಳಗೊಂಡಿದ್ದ &lsquo;ಅಯ್ಯನ ಮನೆ&rsquo;ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ಇದರ ಎರಡನೇ ಭಾಗದ ಕೆಲಸವೂ ನಡೆಯುತ್ತಿದೆ. ಇದೀಗ ಈ ಸಾಲಿಗೆ ಮತ್ತೊಂದು ಜನಪ್ರಿಯ ಹೆಸರು ಸೇರ್ಪಡೆಯಾಗಿದೆ. ಪ್ರಿಯಾಂಕಾ ಉಪೇಂದ್ರ ವೆಬ್&zwnj;ಸೀರಿಸ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.&lt;/p&gt;&lt;p&gt;ಹಲವು ಭಾಷೆಗಳಲ್ಲಿ ನಟಿಸಿರುವ ಪ್ರಿಯಾಂಕಾ, &lsquo;ಕೋಟಿಗೊಬ್ಬ&rsquo;, &lsquo;ಮಲ್ಲ&rsquo;, &lsquo;H2O&rsquo;, &lsquo;ಶ್ರೀಮತಿ&rsquo;, &lsquo;ಮಮ್ಮಿ ಸೇವ್ ಮೀ&rsquo;, &lsquo;ದೇವಕಿ&rsquo; ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಪ್ರಿಯಾಂಕಾ &lsquo;ಕಾರ್ಪೊರೇಟ್ ಲವ್ ಸ್ಟೋರಿ&rsquo; ಎಂಬ 50 ಎಪಿಸೋಡ್&zwnj;ಗಳ ವೆಬ್&zwnj;ಸೀರಿಸ್&zwnj;ನಲ್ಲಿ ನಟಿಸುತ್ತಿದ್ದು, ಶೂಟಿಂಗ್&zwnj;ನಲ್ಲಿ ಬ್ಯುಸಿಯಾಗಿದ್ದಾರೆ. ಜನಪ್ರಿಯ ಕೊರಿಯನ್ ರೊಮ್ಯಾಂಟಿಕ್ ಡ್ರಾಮಾಗಳಿಂದ ಪ್ರೇರಣೆ ಪಡೆದಿರುವ ಈ ಸೀರಿಸ್&zwnj;ನಲ್ಲಿ ಪ್ರಿಯಾಂಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಓಟಿಟಿಗೆ ನಿಶ್ವಿಕಾ ನಾಯ್ಡು ಎಂಟ್ರಿ&lt;/strong&gt;&lt;/p&gt;&lt;p&gt;ಇದೇ ವೇಳೆ, ನಟಿ ನಿಶ್ವಿಕಾ ನಾಯ್ಡು ಕೂಡ ಡಿಜಿಟಲ್ ಜಗತ್ತಿನತ್ತ ಹೆಜ್ಜೆ ಇಡುತ್ತಿದ್ದಾರೆ. &lsquo;ಆಪರೇಷನ್ ಬಂಗಾರಿ&rsquo; ಎಂಬ ವೆಬ್&zwnj;ಸೀರಿಸ್ ಮೂಲಕ ಅವರು ಓಟಿಟಿಗೆ ಎಂಟ್ರಿ ಕೊಡುತ್ತಿದ್ದು, ಈ ಕಥೆ ನೈಜ ಘಟನೆಯೊಂದರಿಂದ ಪ್ರೇರಿತವಾಗಿದೆ ಎನ್ನಲಾಗಿದೆ. &lsquo;ಅಮ್ಮ ಐ ಲವ್ ಯೂ&rsquo;, &lsquo;ವಾಸ್ತು ಪ್ರಕಾರ&rsquo;, &lsquo;ಜೆಂಟಲ್&zwnj;ಮ್ಯಾನ್&rsquo; ಹಾಗೂ &lsquo;ಗುರು ಶಿಷ್ಯರು&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಿಶ್ವಿಕಾ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಪಡೆದಿದ್ದಾರೆ. ಸುದೀಪ್ ಅಭಿನಯದ &lsquo;ಮ್ಯಾಕ್ಸ್&rsquo; ಚಿತ್ರದ ಜನಪ್ರಿಯ ಹಾಡಿನಲ್ಲಿ ಕಾಣಿಸಿಕೊಂಡು ಕೂಡ ಗಮನ ಸೆಳೆದಿದ್ದರು. ಅಲ್ಲದೆ, ಜನಪ್ರಿಯ ರಿಯಾಲಿಟಿ ಶೋವೊಂದಕ್ಕೆ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ವೆಬ್&zwnj;ಸೀರಿಸ್ ಮೂಲಕ ನಿಶ್ವಿಕಾಗೆ ಹಲವು ಎಪಿಸೋಡ್&zwnj;ಗಳಲ್ಲಿ ಹಂತ ಹಂತವಾಗಿ ಬೆಳೆಯುವ ಪಾತ್ರವೊಂದನ್ನು ನಿರ್ವಹಿಸುವ ಅವಕಾಶ ಸಿಗಲಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ನಾಗಭೂಷಣ್ ಈಗಾಗಲೇ ಡಿಜಿಟಲ್ ದಾರಿಯಲ್ಲಿ&lt;/strong&gt;&lt;/p&gt;&lt;p&gt;ನಟ ನಾಗಭೂಷಣ್ ಈಗಾಗಲೇ ಈ ಡಿಜಿಟಲ್ ಪಯಣ ಆರಂಭಿಸಿದ್ದಾರೆ. ಅವರು ಶ್ರೀನಿಧಿ ಬೆಂಗಳೂರು ಜೊತೆ ಕೈಜೋಡಿಸಿ &lsquo;ಜೆರಾಕ್ಸ್&rsquo; ವೆಬ್&zwnj;ಸೀರಿಸ್&zwnj;ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಚಿತ್ರಮಂದಿರದ ಎರಡು ಗಂಟೆಗಳ ಅವಧಿಯೊಳಗೆ ಹೇಳಲು ಸಾಧ್ಯವಾಗದಂತಹ ಕಥೆಗಳನ್ನು ಡಿಜಿಟಲ್ ವೇದಿಕೆಗಳ ಮೂಲಕ ಹೇಳುವ ಪ್ರಯತ್ನಕ್ಕೆ ಈ ಯೋಜನೆಯೂ ಮತ್ತೊಂದು ಉದಾಹರಣೆಯಾಗಿದೆ.&lt;/p&gt;&lt;h2&gt;&lt;strong&gt;ಓಟಿಟಿ ಕೇವಲ ಮತ್ತೊಂದು ರಿಲೀಸ್ ಪ್ಲಾಟ್&zwnj;ಫಾರ್ಮ್ ಅಲ್ಲ!&lt;/strong&gt;&lt;/h2&gt;&lt;p&gt;ಕಲಾವಿದರಿಗೆ ಓಟಿಟಿ ಕೇವಲ ಮತ್ತೊಂದು ಬಿಡುಗಡೆ ವೇದಿಕೆಯಲ್ಲ. ವೆಬ್&zwnj;ಸೀರಿಸ್&zwnj;ಗಳು ದೀರ್ಘ ಕಥನ, ವಿಭಿನ್ನ ಪಾತ್ರಗಳು ಹಾಗೂ ಹಲವು ಎಪಿಸೋಡ್&zwnj;ಗಳಲ್ಲಿ ಪಾತ್ರದ ಬೆಳವಣಿಗೆಯನ್ನು ತೋರಿಸುವ ಅವಕಾಶವನ್ನು ನೀಡುತ್ತವೆ. ಇದೇ ವೇಳೆ ನಿರ್ದೇಶಕರಿಗೂ ಎರಡು ಗಂಟೆಗಳ ಸಿನಿಮಾದ ಚೌಕಟ್ಟಿಗೆ ಸೀಮಿತವಾಗದೆ ಕಥೆಯನ್ನು ವಿಸ್ತಾರವಾಗಿ ಹೇಳುವ ಸ್ವಾತಂತ್ರ್ಯ ಸಿಗುತ್ತದೆ. ಇನ್ನು ಸಂಜನಾ ಆನಂದ್, ಖುಷಿ ರವಿ ಅವರ ಬಳಿಕ ಇದೀಗ ಪ್ರಿಯಾಂಕಾ ಉಪೇಂದ್ರ ಹಾಗೂ ನಿಶ್ವಿಕಾ ನಾಯ್ಡು ಕೂಡ ವೆಬ್&zwnj;ಸೀರಿಸ್ ಜಗತ್ತಿಗೆ ಕಾಲಿಡುತ್ತಿರುವುದು ಕನ್ನಡದ ಡಿಜಿಟಲ್ ಸ್ಪೇಸ್ ಮತ್ತಷ್ಟು ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡದ ಸ್ಟಾರ್&zwnj;ಗಳು ಓಟಿಟಿಯತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/priyanka-upendra-nishvika-naidu-make-their-web-series-debuts-gvd/articleshow-qrga8tb"/>
        </item>
        <item>
            <title><![CDATA[ಗ್ಲಾಮರ್‌ನಿಂದ ಆಧ್ಯಾತ್ಮಿಕತೆಯತ್ತ: ಕಾಮಾಕ್ಯ ದೇವಿ ದರ್ಶನ ಪಡೆದ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ!]]></title>
            <link>https://kannada.asianetnews.com/tv-talk/niveditha-gowda-visits-kamakhya-temple-calls-the-spiritual-journey-peaceful-gvd/articleshow-uythbtv</link>
            <guid isPermaLink="true">https://kannada.asianetnews.com/tv-talk/niveditha-gowda-visits-kamakhya-temple-calls-the-spiritual-journey-peaceful-gvd/articleshow-uythbtv</guid>
            <pubDate>Wed, 19 Aug 2026 19:47:06 +0530</pubDate>
            <description><![CDATA[&lt;p&gt;ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿವೇದಿತಾ ಗೌಡ ಇದೀಗ ಆಧ್ಯಾತ್ಮಿಕ ಪ್ರವಾಸವೊಂದರ ಮೂಲಕ ಗಮನ ಸೆಳೆದಿದ್ದಾರೆ. ಈ ಆಧ್ಯಾತ್ಮಿಕ ಪಯಣದ ಅನುಭವವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0d63bk524t3pxc6svddtmsq,imgname-jbjv-1787149004389.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿವೇದಿತಾ ಗೌಡ ಇದೀಗ ಆಧ್ಯಾತ್ಮಿಕ ಪ್ರವಾಸವೊಂದರ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡದ ಬಿಗ್&zwnj;ಬಾಸ್ ಮಾಜಿ ಸ್ಪರ್ಧಿ ಹಾಗೂ &lsquo;ಗಿಚ್ಚಿ ಗಿಲಿಗಿಲಿ&rsquo; ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿರುವ ನಿವೇದಿತಾ, ಅಸ್ಸಾಂನ ಪ್ರಸಿದ್ಧ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ಗುವಾಹಟಿಯ ಕಾಮಾಕ್ಯ ಕ್ಷೇತ್ರದವರೆಗೆ ಕೈಗೊಂಡ ತಮ್ಮ ಪ್ರವಾಸದ ಸುಂದರ ಕ್ಷಣಗಳನ್ನು ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ದೇವಸ್ಥಾನದ ದರ್ಶನದ ಜೊತೆಗೆ ತಮ್ಮ ಈ ಆಧ್ಯಾತ್ಮಿಕ ಪಯಣದ ಅನುಭವವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಕಾಮಾಕ್ಯ ದೇವಿ ದರ್ಶನದ ಆಸೆ ಕೊನೆಗೂ ಈಡೇರಿತು!&lt;/strong&gt;&lt;/p&gt;&lt;p&gt;ಕಾಮಾಕ್ಯ ದೇವಿಯ ದರ್ಶನ ಪಡೆಯಬೇಕು ಎಂಬುದು ಬಹಳ ದಿನಗಳ ತಮ್ಮ ಆಸೆಯಾಗಿತ್ತು ಎಂದು ನಿವೇದಿತಾ ಹೇಳಿದ್ದಾರೆ. ಇದೀಗ ಆ ಆಸೆ ಈಡೇರಿದ್ದು, ಈ ಪ್ರಯಾಣ ತಮ್ಮ ಪಾಲಿಗೆ ವಿಶೇಷ ಅನುಭವವಾಗಿದೆ ಎಂದು ತಿಳಿಸಿದ್ದಾರೆ. &lsquo;ಶ್ರದ್ಧೆ, ಸಂಸ್ಕೃತಿ, ಮನಮೋಹಕ ಅನುಭವಗಳು ಹಾಗೂ ಮರೆಯಲಾಗದ ನೆನಪುಗಳಿಂದ ಕೂಡಿದ ಸುಂದರ ಪಯಣ. ಮನಸ್ಸಿಗೆ ನೆಮ್ಮದಿ ನೀಡಿದ ಪ್ರಯಾಣ&rsquo; ಎಂಬ ಅರ್ಥದಲ್ಲಿ ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ನಿವೇದಿತಾ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರವಾಸದ ವಿವಿಧ ಕ್ಷಣಗಳು ಹಾಗೂ ಕಾಮಾಕ್ಯ ಕ್ಷೇತ್ರದ ವಾತಾವರಣವನ್ನು ಕಾಣಬಹುದಾಗಿದೆ.&lt;/p&gt;&lt;p&gt;&lt;strong&gt;51 ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಕ್ಯ ಕ್ಷೇತ್ರ&lt;/strong&gt;&lt;/p&gt;&lt;p&gt;ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಸ್ಥಾನ ದೇಶದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ನಿಲಾಚಲ ಬೆಟ್ಟದ ಮೇಲಿರುವ ಈ ಪ್ರಸಿದ್ಧ ದೇವಾಲಯಕ್ಕೆ ದೇಶದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಕಾಮಾಕ್ಯ ದೇವಿಯನ್ನು ಶಕ್ತಿಯ ಸ್ವರೂಪವಾಗಿ ಆರಾಧಿಸಲಾಗುತ್ತದೆ. ಇಲ್ಲಿ ಸಾಮಾನ್ಯ ದೇವಾಲಯಗಳಂತೆ ದೇವಿಯ ಮೂರ್ತಿಯನ್ನು ಪೂಜಿಸುವ ಬದಲು, ಪವಿತ್ರ ಯೋನಿ ಆಕಾರದ ಶಿಲೆಯನ್ನು ದೇವಿಯ ಸ್ವರೂಪವಾಗಿ ಪೂಜಿಸುವ ವಿಶಿಷ್ಟ ಪರಂಪರೆ ಇದೆ.&lt;/p&gt;&lt;p&gt;&lt;strong&gt;ಅಂಬುಬಾಚಿ ಮೇಳದ ವೇಳೆ ವಿಶೇಷ ಆಚರಣೆ&lt;/strong&gt;&lt;/p&gt;&lt;p&gt;ಕಾಮಾಕ್ಯ ದೇವಾಲಯಕ್ಕೆ ಸಂಬಂಧಿಸಿದ ಪ್ರಮುಖ ಆಚರಣೆಗಳಲ್ಲಿ ಅಂಬುಬಾಚಿ ಮೇಳವೂ ಒಂದು. ದೇವಿಯ ಋತುಸ್ರಾವದ ಅವಧಿಯನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಪ್ರತಿವರ್ಷ ಜೂನ್&zwnj;ನಲ್ಲಿ ವಿಶೇಷ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವಾಲಯವನ್ನು ಕೆಲವು ದಿನಗಳ ಕಾಲ ಮುಚ್ಚಲಾಗುತ್ತದೆ. ಈ ವಿಶಿಷ್ಟ ಧಾರ್ಮಿಕ ಆಚರಣೆ ಹಾಗೂ ದೇವಾಲಯದ ಪುರಾತನ ಪರಂಪರೆಯಿಂದಾಗಿ ಕಾಮಾಕ್ಯ ಕ್ಷೇತ್ರ ದೇಶದ ಪ್ರಮುಖ ಆಧ್ಯಾತ್ಮಿಕ ಪ್ರವಾಸಿ ತಾಣಗಳಲ್ಲೊಂದಾಗಿದೆ.&lt;/p&gt;&lt;h2&gt;&lt;strong&gt;ಸೆಲೆಬ್ರಿಟಿಗಳಿಗೂ ನೆಚ್ಚಿನ ಆಧ್ಯಾತ್ಮಿಕ ತಾಣ&lt;/strong&gt;&lt;/h2&gt;&lt;p&gt;ಕಾಮಾಕ್ಯ ದೇವಿಯ ದರ್ಶನಕ್ಕೆ ಇತ್ತೀಚಿನ ವರ್ಷಗಳಲ್ಲಿ ಹಲವು ಸೆಲೆಬ್ರಿಟಿಗಳು ಭೇಟಿ ನೀಡಿದ್ದಾರೆ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಾಗೂ ತಮಿಳು ನಟ ಸೂರ್ಯ ದಂಪತಿ ಕೂಡ ಈ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದೀಗ ನಿವೇದಿತಾ ಗೌಡ ಕೂಡ ಕಾಮಾಕ್ಯ ದೇವಿಯ ದರ್ಶನ ಪಡೆದುಕೊಂಡಿದ್ದು, ತಮ್ಮ ಪ್ರವಾಸದ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಗ್ಲಾಮರ್ ಹಾಗೂ ಮನರಂಜನೆಯ ಸುದ್ದಿಗಳ ನಡುವೆ ನಿವೇದಿತಾ ಅವರ ಈ ಆಧ್ಯಾತ್ಮಿಕ ಪಯಣವೂ ಇದೀಗ ಗಮನ ಸೆಳೆಯುತ್ತಿದೆ.&lt;/p&gt;View this post on Instagram&lt;p&gt;A post shared by Niveditha Gowda  (@niveditha__gowda)&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/niveditha-gowda-visits-kamakhya-temple-calls-the-spiritual-journey-peaceful-gvd/articleshow-uythbtv"/>
        </item>
        <item>
            <title><![CDATA[‘ಬ್ರಿಡ್ಜರ್ಟನ್ ಮೀಟ್ಸ್ ಕರ್ನಾಟಕ’: ನಟ ದುನಿಯಾ ವಿಜಯ್​ ಪುತ್ರಿ ಮೋನಿಷಾ ‘ಸೌತ್ ಇಂಡಿಯನ್ ಡ್ರೀಮ್’ ಲುಕ್ ವೈರಲ್!]]></title>
            <link>https://kannada.asianetnews.com/gallery/sandalwood/monisha-vijay-stuns-in-mysore-silk-saree-her-south-indian-dream-look-wins-hearts-gvd-ybggg6o</link>
            <guid isPermaLink="true">https://kannada.asianetnews.com/gallery/sandalwood/monisha-vijay-stuns-in-mysore-silk-saree-her-south-indian-dream-look-wins-hearts-gvd-ybggg6o</guid>
            <pubDate>Wed, 19 Aug 2026 18:13:32 +0530</pubDate>
            <description><![CDATA[&lt;p&gt;&lsquo;ಸೌತ್ ಇಂಡಿಯನ್ ಡ್ರೀಮ್&rsquo; ಎಂಬ ಕಾನ್ಸೆಪ್ಟ್&zwnj;ನಲ್ಲಿ ಸಿದ್ಧಪಡಿಸಿಕೊಂಡಿರುವ ತಮ್ಮ ಲುಕ್&zwnj;ನ ಹಿಂದಿನ ಕಥೆಯನ್ನು ಮೋನಿಷಾ ಹಂಚಿಕೊಂಡಿದ್ದಾರೆ. ತಮ್ಮ ಈ ವಿಶೇಷ ಲುಕ್&zwnj;ಗೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0d0fcmfqyxaq34bfy6t4s9k,imgname-ma-1787143107215.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಸೌತ್ ಇಂಡಿಯನ್ ಡ್ರೀಮ್&rsquo; ಎಂಬ ಕಾನ್ಸೆಪ್ಟ್&zwnj;ನಲ್ಲಿ ಸಿದ್ಧಪಡಿಸಿಕೊಂಡಿರುವ ತಮ್ಮ ಲುಕ್&zwnj;ನ ಹಿಂದಿನ ಕಥೆಯನ್ನು ಮೋನಿಷಾ ಹಂಚಿಕೊಂಡಿದ್ದಾರೆ. ತಮ್ಮ ಈ ವಿಶೇಷ ಲುಕ್&zwnj;ಗೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;img&gt;&lt;p&gt;ದುನಿಯಾ ವಿಜಯ್ ಅವರ ಎರಡನೇ ಪುತ್ರಿ ಮೋನಿಷಾ ವಿಜಯ್ ಸದ್ಯ &lsquo;ಸಿಟಿಲೈಟ್ಸ್&rsquo; ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಿರುವ ಮೋನಿಷಾ, ವಿಭಿನ್ನ ಲುಕ್&zwnj;ಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಇದೀಗ &lsquo;ಸೌತ್ ಇಂಡಿಯನ್ ಡ್ರೀಮ್&rsquo; ಎಂಬ ಕಾನ್ಸೆಪ್ಟ್&zwnj;ನಲ್ಲಿ ಸಿದ್ಧಪಡಿಸಿಕೊಂಡಿರುವ ತಮ್ಮ ಲುಕ್&zwnj;ನ ಹಿಂದಿನ ಕಥೆಯನ್ನು ಮೋನಿಷಾ ಹಂಚಿಕೊಂಡಿದ್ದಾರೆ. ತಮ್ಮ ಈ ವಿಶೇಷ ಲುಕ್&zwnj;ಗೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಹೇಗೆ ರೂಪಿಸಲಾಯಿತು ಎಂಬುದನ್ನು ಮೋನಿಷಾ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಲುಕ್&zwnj;ನ ಹಿಂದಿನ ಐಡಿಯಾ ತುಂಬಾ ಸರಳವಾಗಿತ್ತು. &lsquo;ಬ್ರಿಡ್ಜರ್ಟನ್&rsquo; ವೈಬ್&zwnj;ಗೆ ದಕ್ಷಿಣ ಭಾರತದ, ಅದರಲ್ಲೂ ಕರ್ನಾಟಕದ ಸೊಗಡನ್ನು ಸೇರಿಸಬೇಕು ಎಂಬ ಆಲೋಚನೆ ಇತ್ತು ಎಂದು ಮೋನಿಷಾ ಹೇಳಿದ್ದಾರೆ. ಅದೇ ಕಾರಣಕ್ಕೆ ಸಾಂಪ್ರದಾಯಿಕ ಕರ್ನಾಟಕದ ಸ್ಪರ್ಶವಿರುವ KSIC ಮೈಸೂರು ಸಿಲ್ಕ್ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ಯಾಸ್ಟೆಲ್ ಶೇಡ್&zwnj;ನ ಈ ಸೀರೆಯನ್ನು ಸಾಫ್ಟ್ ಡೈಮಂಡ್ಸ್, ಯೂನಿಕಾರ್ನ್ ಇನ್&zwnj;ಸ್ಪೈರ್ಡ್ ಬಳೆಗಳು ಹಾಗೂ ಮಲ್ಲಿಗೆಯ ಹೂವಿನೊಂದಿಗೆ ಮತ್ತಷ್ಟು ಸುಂದರವಾಗಿ ಅಲಂಕರಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಲುಕ್&zwnj;ನ ಪ್ರತಿಯೊಂದು ಅಂಶವನ್ನೂ ಒಂದೇ ಥೀಮ್&zwnj;ಗೆ ಹೊಂದುವಂತೆ ಆಯ್ಕೆ ಮಾಡಲಾಗಿದೆ ಎಂದು ಮೋನಿಷಾ ಹೇಳಿದ್ದಾರೆ. ಈ ಲುಕ್ ಹೇಗಿರಬೇಕು ಎಂಬ ಚಿತ್ರಣ ಬಹಳ ದಿನಗಳಿಂದ ತಮ್ಮ ಮನಸ್ಸಿನಲ್ಲೇ ಇತ್ತು. ಕೊನೆಗೆ ಅದನ್ನು ನಿಜವಾಗಿಸುವ ಅವಕಾಶ ಸಿಕ್ಕಿದ್ದು ಖುಷಿಯಾಗಿದೆ ಎಂದು ತಿಳಿಸಿದ್ದಾರೆ. ಸ್ಟೈಲಿಸ್ಟ್ ಶ್ರೀನಿಧಿ ಸಾವಂತ್ ಅವರು ಈ ಸಂಪೂರ್ಣ ಲುಕ್ ಅನ್ನು ಸುಂದರವಾಗಿ ರೂಪಿಸಲು ಸಹಾಯ ಮಾಡಿದ್ದಾರೆ ಎಂದು ಮೋನಿಷಾ ಧನ್ಯವಾದ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಲುಕ್&zwnj;ಗೆ ಅಭಿಮಾನಿಗಳು ತೋರಿಸಿರುವ ಪ್ರೀತಿಗೆ ಮೋನಿಷಾ ಸಂತಸ ವ್ಯಕ್ತಪಡಿಸಿದ್ದಾರೆ. ತಮಗೂ ಈ ಲುಕ್ ತುಂಬಾ ಇಷ್ಟವಾಗಿದ್ದು, ಅಭಿಮಾನಿಗಳಿಗೂ ಅಷ್ಟೇ ಇಷ್ಟವಾಗಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ. ಮೋನಿಷಾ ಅವರ ಈ &lsquo;ಸೌತ್ ಇಂಡಿಯನ್ ಡ್ರೀಮ್&rsquo; ಲುಕ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.&lt;/p&gt;&lt;img&gt;&lt;p&gt;ಸಾಂಪ್ರದಾಯಿಕ ಮೈಸೂರು ಸಿಲ್ಕ್ ಸೀರೆಯೊಂದಿಗೆ ಮಾಡಿರುವ ಮಾಡರ್ನ್ ಸ್ಟೈಲಿಂಗ್&zwnj;ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ &lsquo;ಸಿಟಿಲೈಟ್ಸ್&rsquo; ಪ್ರಮೋಷನ್&zwnj;ಗಾಗಿ ಮೋನಿಷಾ ಆಯ್ಕೆ ಮಾಡಿಕೊಂಡಿರುವ ಈ ಲುಕ್&zwnj;ನಲ್ಲಿ ಕರ್ನಾಟಕದ ಪರಂಪರೆ, ದಕ್ಷಿಣ ಭಾರತದ ಸೊಬಗು ಹಾಗೂ &lsquo;ಬ್ರಿಡ್ಜರ್ಟನ್&rsquo; ಪ್ರೇರಿತ ಫ್ಯಾಷನ್-ಈ ಮೂರು ಅಂಶಗಳ ಸುಂದರ ಮಿಶ್ರಣ ಕಾಣಿಸುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/monisha-vijay-stuns-in-mysore-silk-saree-her-south-indian-dream-look-wins-hearts-gvd-ybggg6o"/>
        </item>
        <item>
            <title><![CDATA[Toxic Countdown Day 06: ಟಾಕ್ಸಿಕ್ ಕೌಂಟ್‌ಡೌನ್ 06.. ಇಂಗ್ಲಿಷ್ ಟ್ರೇಲರ್ ಬಿಡುಗಡೆಗೆ ಬಳಿಕ ಯಶ್ ಸಿನಿಮಾದ ಕ್ರೇಜ್ ಹೇಗಿದೆ? ಈ ಸ್ಟೋರಿ ನೋಡಿ!]]></title>
            <link>https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-06-days-to-go/articleshow-zogc7xx</link>
            <guid isPermaLink="true">https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-06-days-to-go/articleshow-zogc7xx</guid>
            <pubDate>Thu, 20 Aug 2026 12:53:28 +0530</pubDate>
            <description><![CDATA[&lt;p&gt;ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0f0v2e866t10v7vzjt40aw2,imgname-whatsapp-image-2026-08-18-at-8.36.29-pm--1--1787210598856.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Release Date-Rocking Star Yash-Toxic Movie Countdown 06: ಯಶ್&zwnj; ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ 06; ಇಂಗ್ಲಿಷ್ ಟ್ರೇಲರ್ ಬಿಡುಗಡೆ ಬಳಿಕ ಟಾಕ್ಸಿಕ್ ಕ್ರೇಜ್ ವಿದೇಶದಲ್ಲಿ ಹೇಗಿದೆ?&lt;/strong&gt;&lt;/p&gt;&lt;p&gt;ಸದ್ಯದಲ್ಲೇ 'ಪ್ಯಾನ್ ವರ್ಲ್ಡ್ ಸ್ಟಾರ್' ಆಗಲಿರುವ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಹವಾ ಇಡೀ ಜಗತ್ತನ್ನೇ ವ್ಯಾಪಿಸಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ ನಡೆಯುತ್ತಿದೆ. ಇನ್ನೇನು, ರಾಕಿ ಭಾಯ್ ಟಾಕ್ಸಿಕ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕೇವಲ 06 ದಿನಗಳಷ್ಟೇ ಬಾಕಿ ಇದೆ. ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿಮಾ ಪ್ರೇಮಿಗಳು ಟಾಕ್ಸಿಕ್ ಬಿಡುಗಡೆಯನ್ನು ಒಂದು ರಾಷ್ಟ್ರೀಯ ಹಬ್ಬದಂತೆ ಆಚರಿಸಲಿದ್ದಾರೆ. ಕರ್ನಾಟಕ, ಭಾರತ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಟಾಕ್ಸಿಕ್ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಮೂಡಿದೆ.&lt;/p&gt;&lt;p&gt;ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್&zwnj;ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಕೂಡ ಡಬ್ ಆಗಿ ಬಿಡುಗಡೆ ಆಗಲಿದೆ. ಹಾಲಿವುಡ್ ಸೇರಿದಂತೆ, ಜಗತ್ತಿನ ಖ್ಯಾತ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಮೂಡಿ ಬಂದಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಈ ಮೂಲಕ ಕನ್ನಡ ಸಿನಿಮಾ ಇದೇ ಮೊದಲ ಬಾರಿಗೆ ಜಗತ್ತಿನಾದ್ಯಂತ ಹಾಲಿವುಡ್ ಸಿನಿಮಾದಂತೆ ರಿಲೀಸ್ ಆಗಲಿದೆ. ಜಗತ್ತಿನಾದ್ಯಂತ 12000 ಸ್ಕ್ರೀನ್&zwnj;ಗಳಲ್ಲಿ ಟಾಕ್ಸಿಕ್ ತೆರೆಕಾಣಲಿದೆ.&lt;/p&gt;&lt;p&gt;ನಮಿತ್ ಮಲ್ಹೋತ್ರಾ ಹಾಗೂ ಯಶ್ ಜಂಟಿ ನಿರ್ಮಾಣದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಕೂಡ ಈ ಬಜೆಟ್&zwnj;ನಲ್ಲಿ ಸೇರಿಕೊಂಡಿದೆ. ಅಪಾರ ನಿರೀಕ್ಷೆ ಸೃಷ್ಟಿಯಾಗಿರುವ ಈ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಸಿನಿಮಾ ಬಾಕ್ಸ್&zwnj; ಆಫೀಸ್ ಪಂಡಿತರ ಹೇಳುತ್ತಿದ್ದಾರೆ. ನಟ ಯಶ್ ಅವರು ತಮ್ಮ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ಬರೋಬ್ಬರಿ 4.5 ವರ್ಷಗಳಷ್ಟಿ ಸಮಯವನ್ನು ಮೀಸಲಾಗಿಟ್ಟು, ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಮೂಲಕ 'ಪ್ಯಾನ್ ವರ್ಲ್ಡ್' ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಇನ್ನೇನು ಟಾಕ್ಸಿಕ್ ಕೇವಲ 06 ದಿನಗಳ ಬಳಿಕ ತೆರೆಯ ಮೇಲೆ ರಾರಾಜಿಸಲಿದೆ. ಹಾಗೇ, ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ಅಂದರೆ 08 ನವೆಂಬರ್ 2026ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ.&lt;/p&gt;&lt;p&gt;ನಿನ್ನೆ ಟಾಕ್ಸಿಕ್ ಸಿನಿಮಾ ಟ್ರೇಲರ್&zwnj;ನ ಇಂಗ್ಲಿಷ್ ವರ್ಷನ್ ಬಿಡುಗಡೆ ಆಗಿದ್ದು, ಸಖತ್ ಕ್ರೇಜ್ ಸೃಷ್ಟಿಸಿದೆ. ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 06 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಬಹಳಷ್ಟು ಸಾಕಷ್ಟು ನಿರೀಕ್ಷೆ ಮೂಡಿಸಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್&zwnj;ಡೌನ್ ಚಾಲ್ತಿಯಲ್ಲಿದೆ. ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ 'ಆಪ್&zwnj; ಕಿ ಅದಾಲತ್&zwnj;'ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಮಾರ್ಮಿಕ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 06ರ ಕೌಂಟ್&zwnj;ಡೌನ್&zwnj;ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 05. ಪ್ರತಿದಿನದ ಅಪ್&zwnj;ಡೇಟ್&zwnj;ಗಾಗಿ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-06-days-to-go/articleshow-zogc7xx"/>
        </item>
    </channel>
</rss>
