<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 18 Jun 2026 21:20:54 +0530</lastBuildDate>
        <atom:link href="https://kannada.asianetnews.com/rss/sandalwood" rel="self" type="application/rss+xml"/>
        <item>
            <title><![CDATA[Telegram ಅನ್ನು ಖಾಯಂ ಆಗಿ ಬ್ಯಾನ್‌ ಮಾಡಿ: ಚಿತ್ರರಂಗ ಉಳಿಸಲು ಕೇಂದ್ರ ಸರ್ಕಾರಕ್ಕೆ ಉಮೇಶ್ ಬಣಕಾರ್ ಪತ್ರ]]></title>
            <link>https://kannada.asianetnews.com/sandalwood/telegram-permanent-ban-demand-umesh-banakar-movie-piracy-gvd/articleshow-26xg00v</link>
            <guid isPermaLink="true">https://kannada.asianetnews.com/sandalwood/telegram-permanent-ban-demand-umesh-banakar-movie-piracy-gvd/articleshow-26xg00v</guid>
            <pubDate>Thu, 18 Jun 2026 17:29:23 +0530</pubDate>
            <description><![CDATA[&lt;p&gt;Telegram Ban: ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್&zwnj;ಗೆ ತಾತ್ಕಾಲಿಕ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರ, ಇದೀಗ ಅದನ್ನು ಖಾಯಂ ಬ್ಯಾನ್ ಮಾಡಬೇಕು ಎಂದು ಉಮೇಶ್ ಬಣಕಾರ್ ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd9k4zjhrr9hf53scagez4m,imgname-bvj-1781783958513.png" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್&zwnj; ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್&zwnj; ಅನ್ನು ಜೂನ್&zwnj; 22ರವರೆಗೂ ಕೇಂದ್ರ ಸರ್ಕಾರ ಬ್ಯಾನ್&zwnj; ಮಾಡಿದೆ. ಆದರೆ, ಇದನ್ನು ಖಾಯಂ ಆಗಿ ಬ್ಯಾನ್&zwnj; ಮಾಡಿ ಎಂದು ಒತ್ತಾಯಿಸಿ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಉಮೇಶ್&zwnj; ಬಣಕಾರ್&zwnj; ಅವರು ಪತ್ರ ಬರೆದಿದ್ದಾರೆ.&lt;/p&gt;&lt;p&gt;ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಟೆಲಿಗ್ರಾಂ ತಾತ್ಕಲಿಕವಾಗಿ ಬ್ಯಾನ್&zwnj; ಮಾಡಿದೆ. ಆದರೆ, ಇದೇ ಆ್ಯಪ್&zwnj;ನಿಂದ ಪೈರಸಿ ಆಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜಿಎಸ್&zwnj;ಟಿ ಮೂಲಕ ಬರುವ ಕೋಟ್ಯಾಂತರ ರೂಪಾಯಿಗಳ ವರಮಾನ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ದಿನವೇ ಟೆಲಿಗ್ರಾಂ ಆ್ಯಪ್&zwnj;ನಲ್ಲಿ ಸಿನಿಮಾಗಳು ಪ್ರಸಾರಗೊಳ್ಳುತ್ತಿದೆ.&lt;/p&gt;&lt;p&gt;ಇದು ಅಪಾಯಕಾರಿ ಎಂದು 2024ರಲ್ಲೇ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಕೇಂದ್ರ ಸಚಿವರು, ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರುಗಳಿಗೆ ಪತ್ರ ಬರೆಯಲಾಗಿತ್ತು. ಈಗ ಟೆಲಿಗ್ರಾಂ ಆ್ಯಪ್&zwnj; ಅನ್ನು ಸಂಪೂರ್ಣವಾಗಿ ಬ್ಯಾನ್&zwnj; ಮಾಡುವುದಕ್ಕೆ ಸೂಕ್ತ ಕಾಲ. ನೀಟ್&zwnj; ಪರೀಕ್ಷೆಯ ಹಿನ್ನೆಲೆಯಲ್ಲಿ ಬ್ಯಾನ್&zwnj; ಆಗಿರುವ ಟೆಲಿಗ್ರಾಂ ಆ್ಯಪ್&zwnj; ಖಾಯಂ ಆಗಿ ಬ್ಯಾನ್&zwnj; ಮಾಡಿ, ಭಾರತೀಯ ಚಿತ್ರರಂಗವನ್ನು ಉಳಿಸಿ ಎಂದಿದ್ದಾರೆ ಉಮೇಶ್&zwnj; ಬಣಕಾರ್&zwnj;.&lt;/p&gt;&lt;h2&gt;&lt;strong&gt;ಚಿಯಾನ್&zwnj; ವಿಕ್ರಮ್ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ&lt;/strong&gt;&lt;/h2&gt;&lt;p&gt;&lsquo;ಕಿರಿಕ್&zwnj; ಪಾರ್ಟಿ&rsquo; ನಟಿ ಸಂಯುಕ್ತಾ ಹೆಗ್ಡೆ ತಮಿಳಿನ ಚಿಯಾನ್&zwnj; ವಿಕ್ರಮ್&zwnj; ಅವರ 63ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಕ್ರಮ್&zwnj; ಜೊತೆಗೆ &lsquo;ಇರು ಮುಗನ್&zwnj;&rsquo; ಚಿತ್ರವನ್ನು ನಿರ್ದೇಶಿಸಿದ್ದ ಆನಂದ್&zwnj; ಶಂಕರ್&zwnj; ಈ ಚಿತ್ರವನ್ನು ಕೂಡ ನಿರ್ದೇಶನ ಮಾಡಲಿದ್ದಾರೆ. ಫ್ಯಾಮಿಲಿ, ಆ್ಯಕ್ಷನ್&zwnj; ಹಾಗೂ ಮನರಂಜನೆಯಿಂದ ಕೂಡಿರುವ ಈ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. &lsquo;ಕೋಮಲಿ&rsquo; ಹಾಗೂ &lsquo;ಮನ್ಮಥ ಲೀಲೈ&rsquo; ಚಿತ್ರಗಳ ನಂತರ ಮತ್ತೊಮ್ಮೆ ಕಾಲಿವುಡ್&zwnj;ಗೆ ಎಂಟ್ರಿ ಆಗಿದ್ದಾರೆ.&lt;/p&gt;&lt;p&gt;&lt;strong&gt;ಕೆವಿಎನ್&zwnj;ನಿಂದ ಮೋಡ ಕವಿದ ವಾತಾರಣ ವಿತರಣೆ: &lt;/strong&gt;ಸಿಂಪಲ್&zwnj; ಸುನಿ ನಿರ್ದೇಶನದ &lsquo;ಮೋಡ ಕವಿದ ವಾತಾವರಣ&rsquo; ಚಿತ್ರವು ಇದೇ ಜೂನ್&zwnj; 26ಕ್ಕೆ ತೆರೆಗೆ ಬರುದ್ದು, ಕೆವಿಎನ್&zwnj; ಪ್ರೊಡಕ್ಷನ್&zwnj; ಈ ಚಿತ್ರವನ್ನು ವಿತರಣೆ ಮಾಡಲಿದೆ. ಚಿತ್ರದ ನಾಯಕನಾಗಿ ಶೀಲಂ, ನಾಯಕಿಯರಾಗಿ ಸಾತ್ವಿಕ ಹಾಗೂ ಮೋಕ್ಷ ಅಭಿನಯಿಸಿದ್ದಾರೆ. &lsquo;ಈಗಿನ ಕಾಲದ ಪ್ರೇಮ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಚಿತ್ರದ ವಿತರಣೆಗೆ ಮುಂದಾಗಿರುವುದು ಖುಷಿ &rsquo; ಎಂದಿದ್ದಾರೆ ಸಿಂಪಲ್ ಸುನಿ.&lt;/p&gt;&lt;p&gt;&lt;strong&gt;ಹಲ್ಕಾ ಡಾನ್&zwnj; ಚಿತ್ರಕ್ಕೆ ಅರವಿಂದ್&zwnj; ಬೋಳಾರ್&zwnj;:&lt;/strong&gt; ಪ್ರಮೋದ್&zwnj; ನಟನೆಯ &lsquo;ಹಲ್ಕಾ ಡಾನ್&zwnj;&rsquo; ಚಿತ್ರಕ್ಕೆಅರವಿಂದ್&zwnj; ಬೋಳಾರ್&zwnj; ಸೇರ್ಪಡೆಯಾಗಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಕೆ.ಪಿ. ಶ್ರೀಕಾಂತ್&zwnj; ನಿರ್ಮಿಸುತ್ತಿದ್ದಾರೆ. ಚಲ ನಿರ್ದೇಶನ ಮಾಡುತ್ತಿದ್ದಾರೆ. ಸಾಕಷ್ಟು ಕಲಾವಿದರು ಚಿತ್ರಕ್ಕೆ ಸೇರಿಕೊಳ್ಳುತ್ತಿದ್ದಾರೆ. ಈಗ ಅರವಿಂದ್&zwnj; ಬೋಳಾರ್&zwnj; ಸರದಿ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/telegram-permanent-ban-demand-umesh-banakar-movie-piracy-gvd/articleshow-26xg00v"/>
        </item>
        <item>
            <title><![CDATA[Megha Shetty: ನಂಗೆ ಗ್ಲಾಮರ್‌ಗಿಂತ ಕಥೆ ಮುಖ್ಯ : ಮೇಘಾ ಶೆಟ್ಟಿಗೆ 'ಕುಸುಮ' ಪಾತ್ರ ಯಾಕೆ ಇಷ್ಟು ಸ್ಪೆಷಲ್?]]></title>
            <link>https://kannada.asianetnews.com/gallery/sandalwood/megha-shetty-gramayana-movie-kusuma-character-vinay-rajkumar-gvd-80o0203</link>
            <guid isPermaLink="true">https://kannada.asianetnews.com/gallery/sandalwood/megha-shetty-gramayana-movie-kusuma-character-vinay-rajkumar-gvd-80o0203</guid>
            <pubDate>Thu, 18 Jun 2026 17:46:37 +0530</pubDate>
            <description><![CDATA[&lt;p&gt;Gramayana ಚಿತ್ರದ &lsquo;ಏನೇ ಹೇಳು ಕುಸುಮ&rsquo; ಹಾಡು ಬಿಡುಗಡೆಯಾಗಿದೆ. ಜುಲೈ 3ರಂದು ತೆರೆಗೆ ಬರುತ್ತಿರುವ ಈ ಚಿತ್ರದಲ್ಲಿ ಕುಸುಮ ಪಾತ್ರ ನಿರ್ವಹಿಸಿರುವ ನಟಿ ಮೇಘಾ ಶೆಟ್ಟಿ, ಗ್ಲಾಮರ್&zwnj;ಗಿಂತ ಕಥೆಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdadwxe4ezfbdxayf6bz3ww,imgname-vj-1781784834990.png" type="image/jpeg" height="390" width="690"/>
            <content:encoded><![CDATA[&lt;p&gt;Gramayana ಚಿತ್ರದ &lsquo;ಏನೇ ಹೇಳು ಕುಸುಮ&rsquo; ಹಾಡು ಬಿಡುಗಡೆಯಾಗಿದೆ. ಜುಲೈ 3ರಂದು ತೆರೆಗೆ ಬರುತ್ತಿರುವ ಈ ಚಿತ್ರದಲ್ಲಿ ಕುಸುಮ ಪಾತ್ರ ನಿರ್ವಹಿಸಿರುವ ನಟಿ ಮೇಘಾ ಶೆಟ್ಟಿ, ಗ್ಲಾಮರ್&zwnj;ಗಿಂತ ಕಥೆಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾ ಆಯ್ಕೆ ವೇಳೆ ಯಾವತ್ತೂ ನನ್ನ ಗಮನ ಕಥೆಯ ಮೇಲಿರುತ್ತದೆ. ಗ್ಲಾಮರ್&zwnj;ಗಿಂತ ನನಗೆ ಕಥೆ ಮುಖ್ಯವಾಗುತ್ತದೆ. ಇದು ನಟಿ ಮೇಘಾ ಶೆಟ್ಟಿ ಮಾತು.&lt;/p&gt;&lt;img&gt;&lt;p&gt;ಮೇಘಾ ಶೆಟ್ಟಿ ನಟನೆಯ &lsquo;ಗ್ರಾಮಾಯಣ&rsquo; ಚಿತ್ರ ಜುಲೈ 3ರಂದು ತೆರೆಗೆ ಬರುತ್ತಿದೆ. ಈ ಚಿತ್ರ &lsquo;ಏನೇ ಹೇಳು ಕುಸುಮ&rsquo; ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್&zwnj;ನಲ್ಲಿ ಬಿಡುಗಡೆಯಾಗಿದೆ.&lt;/p&gt;&lt;img&gt;&lt;p&gt;&lsquo;ನನ್ನ ಅಕ್ಕನ ಹೆಸರು ಕುಸುಮಾ. ಅವಳ ಹೆಸರಿನಲ್ಲೇ ಈ ಚಿತ್ರದ ಹಾಡಿದೆ. ಹೀಗಾಗಿ ನನಗೆ ಬಹಳ ಕನೆಕ್ಟ್&zwnj; ಆಯ್ತು. ಒಂದೇ ದಿನದಲ್ಲಿ ಈ ಹಾಡಿನ ಶೂಟಿಂಗ್&zwnj; ನಡೆದಿತ್ತು&rsquo; ಎಂದೂ ಮೇಘಾ ಶೆಟ್ಟಿ ಹೇಳಿದರು.&lt;/p&gt;&lt;img&gt;&lt;p&gt;ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಕುಸುಮ ನನ್ನ ಪಾತ್ರದ ಹೆಸರು. ಯಾವುದಕ್ಕೂ ಹೆದರದ ಗಂಡು ಹುಡುಗನ ಹಾಗೆ ವರ್ತಿಸುವ ಹಠಮಾರಿ ಹೆಣ್ಣಿನ ಪಾತ್ರ ನನ್ನದು ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ವಿನಯ್&zwnj; ರಾಜ್&zwnj;ಕುಮಾರ್&zwnj; ಈ ಚಿತ್ರದ ನಾಯಕ. ಇದು ನಾನು ನಾಯಕನಾಗಿ ನಟಿಸಿರುವ 9ನೇ ಚಿತ್ರ ಎಂದರು. ದೇವನೂರು ಚಂದ್ರ ನಿರ್ದೇಶನವಿದೆ. ಲಹರಿ ಸಂಸ್ಥೆ ಚಿತ್ರ ನಿರ್ಮಿಸಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/megha-shetty-gramayana-movie-kusuma-character-vinay-rajkumar-gvd-80o0203"/>
        </item>
        <item>
            <title><![CDATA['ಕಣ್‌ ಕಣ್ಣ ಸಲಿಗೆ' ನಟಿ ಸಪ್ತಪದಿ ತುಳಿಯಲು ಸಜ್ಜು? ಶರ್ಮಿಳಾ ಮಾಂಡ್ರೆ ಕೈ ಹಿಡಿಯಲಿರುವ ಆ 'ಮಹಾರಾಜ' ಯಾರು ಗೊತ್ತಾ?]]></title>
            <link>https://kannada.asianetnews.com/entertainment/kannada-film-navagraha-actress-sharmiela-mandre-is-set-to-marry-sudhan-sundaram-the-producer-of-the-movie-maharaja/articleshow-9tx7ica</link>
            <guid isPermaLink="true">https://kannada.asianetnews.com/entertainment/kannada-film-navagraha-actress-sharmiela-mandre-is-set-to-marry-sudhan-sundaram-the-producer-of-the-movie-maharaja/articleshow-9tx7ica</guid>
            <pubDate>Wed, 17 Jun 2026 13:43:40 +0530</pubDate>
            <description><![CDATA[&lt;p&gt;ನಟಿ ಶರ್ಮಿಳಾ ಮಾಂಡ್ರೆ ಫ್ಯಾನ್ಸ್&zwnj;ನಲ್ಲಿ ಈಗ ಒಂದೇ ಪ್ರಶ್ನೆ ಕಾಡುತ್ತಿದೆ. ಮದುವೆಯ ನಂತರ ಶರ್ಮಿಳಾ ಮಾಂಡ್ರೆ ಬಣ್ಣದ ಲೋಕಕ್ಕೆ ಗುಡ್&zwnj;ಬೈ ಹೇಳ್ತಾರಾ? ಅಥವಾ ನಟನೆಯನ್ನು ಮುಂದುವರಿಸುತ್ತಾರಾ? ಸುಧನ್ ಸುಂದರಂ ಮತ್ತು ಶರ್ಮಿಳಾ ಅವರ ಈ ಹೊಸ ಇನ್ನಿಂಗ್ಸ್ ಈ ಪ್ರಶ್ನೆಗೆ ಉತ್ತರ ಕೊಡಬೇಕಷ್ಟೇ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva6kennmyc4syqtrzkn2y4w,imgname-sharmiela-mandre-1781680159412.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&quot;ಕಣ್&zwnj; ಕಣ್ಣ ಸಲಿಗೆ ಈಗ ನಿಜವಾದ ದಾಂಪತ್ಯಕ್ಕೆ! ಸ್ಯಾಂಡಲ್&zwnj;ವುಡ್ ಗ್ಲಾಮರ್ ಬ್ಯೂಟಿ ಶರ್ಮಿಳಾ ಮಾಂಡ್ರೆ ಕೈ ಹಿಡಿಯಲಿರುವ ಆ 'ಮಹಾರಾಜ' ಯಾರು?&quot;&lt;/strong&gt;&lt;/p&gt;&lt;p&gt;ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಮಿಂಚಿದ್ದ ನಟನಟಿಯರು ಒಬ್ಬೊಬ್ಬರಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದು ಗೊ &amp;nbsp; ತ್ತಿರೋ ಸಂಗತಿ. ಅದಿತಿ ಪ್ರಭುದೇವ, ವಸಿಷ್ಠ ಸಿಂಹ-ಹರಿಪ್ರಿಯಾ, ಡಾಲಿ ಧನಂಜಯ್ ಹೀಗೆ ಸಾಲು ಸಾಲು ತಾರೆಯರು ದಾಂಪತ್ಯಕ್ಕೆ ಕಾಲಿಟ್ಟು ಸಾಕಷ್ಟು ಕಾಲವಾಗಿದೆ. ಇದೀಗ, ಇದೇ ಸಾಲಿಗೆ ಸೇರಲಿದ್ದಾರೆ ಎಂಬ ಸುದ್ದಿ ಕೊಟ್ಟಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ. ತನ್ನ ಸ್ನಿಗ್ಧ ಸೌಂದರ್ಯ ಮತ್ತು ಮನೋಜ್ಞ ನಟನೆಯಿಂದ ಸುಮಾರು ಒಂದೂವರೆ ದಶಕಗಳಿಂದ ಕನ್ನಡಿಗರ ಮನಗೆದ್ದಿರುವ 'ಸಜನಿ' ಶರ್ಮಿಳಾ ಮಾಂಡ್ರೆ (Sharmiela Mandre) ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ!&lt;/p&gt;&lt;p&gt;ಕಾಲಿವುಡ್ ನಿರ್ಮಾಪಕನ ಜೊತೆ 'ಕಣ್&zwnj; ಕಣ್ಣ ಸಲಿಗೆ'&lt;/p&gt;&lt;p&gt;ನಟಿ ಶರ್ಮಿಳಾ ಮಾಂಡ್ರೆ ಮದುವೆಯಾಗಲಿರುವ ಆ ಅದೃಷ್ಟವಂತ ಯಾರು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಅವರು ಬೇರೆ ಯಾರೂ ಅಲ್ಲ, ತಮಿಳು ಚಿತ್ರರಂಗದ ಯಶಸ್ವಿ ನಿರ್ಮಾಪಕ ಸುಧನ್ ಸುಂದರಂ. ಇತ್ತೀಚೆಗೆ ಬಾಕ್ಸ್ ಆಫೀಸ್&zwnj;ನಲ್ಲಿ ಧೂಳೆಬ್ಬಿಸಿದ, ವಿಜಯ್ ಸೇತುಪತಿ ನಟನೆಯ 'ಮಹಾರಾಜ' ಸಿನಿಮಾವನ್ನು ನಿರ್ಮಿಸಿದ್ದು ಇದೇ ಸುಧನ್ ಸುಂದರಂ. ತೆರೆಯ ಹಿಂದೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸುಧನ್ (Sudhan Sundaram), ಈಗ ಶರ್ಮಿಳಾ ಅವರ ಜೀವನದ 'ರಿಯಲ್ ಹೀರೊ' ಆಗಿ ಎಂಟ್ರಿ ಕೊಡುತ್ತಿದ್ದಾರೆ.&lt;/p&gt;&lt;h2&gt;ಜೂನ್ 25ಕ್ಕೆ ಶುಭ ಮುಹೂರ್ತ?&lt;/h2&gt;&lt;p&gt;ಬಲ್ಲ ಮೂಲಗಳ ಪ್ರಕಾರ, ಈ ಜೋಡಿಯ ನಿಶ್ಚಿತಾರ್ಥ ಜೂನ್ 25ರಂದು ಅತ್ಯಂತ ಸರಳವಾಗಿ, ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ನಿಶ್ಚಿತಾರ್ಥ ಸರಳವಾಗಿದ್ದರೂ, ಮದುವೆ ಮಾತ್ರ ಅತ್ಯಂತ ಅದ್ಧೂರಿಯಾಗಿ ತಮಿಳುನಾಡು ಅಥವಾ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ. ಸದ್ಯಕ್ಕೆ ಈ ಬಗ್ಗೆ ಶರ್ಮಿಳಾ ಆಗಲಿ ಅಥವಾ ಸುಧನ್ ಆಗಲಿ ಅಧಿಕೃತ ಮುದ್ರೆ ಒತ್ತಿಲ್ಲವಾದರೂ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆಗಲೇ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.&lt;/p&gt;&lt;h3&gt;ನವಗ್ರಹದ ಕಿರಣ ಈಗ ಮನೆಯ ಸೊಸೆ!&lt;/h3&gt;&lt;p&gt;2007ರಲ್ಲಿ 'ಸಜನಿ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಶರ್ಮಿಳಾ, ಅಂದಿನಿಂದ ಇಂದಿನವರೆಗೆ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ನವಗ್ರಹ' ಚಿತ್ರದಲ್ಲಿ ಶರ್ಮಿಳಾ ಅವರ ನಟನೆ ಮತ್ತು 'ಕಣ್&zwnj; ಕಣ್ಣ ಸಲಿಗೆ' ಹಾಡು ಇಂದಿಗೂ ಎವರ್&zwnj;ಗ್ರೀನ್. ಇತ್ತೀಚೆಗೆ ದರ್ಶನ್ ಅವರ 'ಡೆವಿಲ್' ಚಿತ್ರದಲ್ಲೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಶರ್ಮಿಳಾ, ಈಗ ಪರಭಾಷೆಯ ನಿರ್ಮಾಪಕನನ್ನೇ ವರಿಸುತ್ತಿರುವುದು ವಿಶೇಷ.&lt;/p&gt;&lt;p&gt;ನಟಿಯಾಗಿ ಮಾತ್ರವಲ್ಲ, ನಿರ್ಮಾಪಕಿಯಾಗಿಯೂ ಸೈ!&lt;/p&gt;&lt;p&gt;ಶರ್ಮಿಳಾ ಕೇವಲ ಕ್ಯಾಮೆರಾ ಮುಂದೆ ನಿಲ್ಲುವ ನಟಿಯಲ್ಲ, ಅವರು ಕ್ಯಾಮೆರಾ ಹಿಂದೆ ಬಂಡವಾಳ ಹೂಡುವ ಧೈರ್ಯವಂತ ನಿರ್ಮಾಪಕಿಯೂ ಹೌದು. ಈಗಾಗಲೇ ಕನ್ನಡ ಮತ್ತು ತಮಿಳಿನ ಕೆಲವು ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ, ಸಿನಿಮಾ ಕ್ಷೇತ್ರದವರನ್ನೇ ಮದುವೆಯಾಗುತ್ತಿರುವುದು ಅವರ ವೃತ್ತಿಜೀವನಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ ಎಂಬುದು ಸಿನಿಮಾ ಪಂಡಿತರ ಲೆಕ್ಕಾಚಾರ.&lt;/p&gt;&lt;p&gt;ಆದರೆ ಅಭಿಮಾನಿಗಳಲ್ಲಿ ಈಗ ಒಂದೇ ಪ್ರಶ್ನೆ ಕಾಡುತ್ತಿದೆ. ಮದುವೆಯ ನಂತರ ಶರ್ಮಿಳಾ ಮಾಂಡ್ರೆ ಬಣ್ಣದ ಲೋಕಕ್ಕೆ ಗುಡ್&zwnj;ಬೈ ಹೇಳ್ತಾರಾ? ಅಥವಾ ನಟನೆಯನ್ನು ಮುಂದುವರಿಸುತ್ತಾರಾ? ಸುಧನ್ ಸುಂದರಂ ಮತ್ತು ಶರ್ಮಿಳಾ ಅವರ ಈ ಹೊಸ ಇನ್ನಿಂಗ್ಸ್ ಸುಖಮಯವಾಗಿರಲಿ ಎಂದು ಆಶಿಸೋಣ. ಅಧಿಕೃತ ಘೋಷಣೆಗಾಗಿ ಇಡೀ ಸ್ಯಾಂಡಲ್&zwnj;ವುಡ್ ಕಾದು ಕುಳಿತಿದೆ!&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/kannada-film-navagraha-actress-sharmiela-mandre-is-set-to-marry-sudhan-sundaram-the-producer-of-the-movie-maharaja/articleshow-9tx7ica"/>
        </item>
        <item>
            <title><![CDATA[Doddanna: ಶಂಕರ್‌ನಾಗ್‌ಗೆ ಟೆನ್ಷನ್‌, ರಾಜ್‌ಕುಮಾರ್‌ಗೆ ಶಿಸ್ತು: ದೊಡ್ಡಣ್ಣ ಹೇಳಿದ ರಹಸ್ಯ ಘಟನೆ ವೈರಲ್‌!]]></title>
            <link>https://kannada.asianetnews.com/gallery/sandalwood/doddanna-reveals-shankar-nag-and-rajkumar-discipline-story-memory-gvd-9y3n492</link>
            <guid isPermaLink="true">https://kannada.asianetnews.com/gallery/sandalwood/doddanna-reveals-shankar-nag-and-rajkumar-discipline-story-memory-gvd-9y3n492</guid>
            <pubDate>Wed, 17 Jun 2026 16:23:15 +0530</pubDate>
            <description><![CDATA[&lt;p&gt;Doddanna: 160 ಕೆಜಿ ತೂಕದ ಬಗ್ಗೆ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಡಾ.ರಾಜ್&zwnj;ಕುಮಾರ್&zwnj; ಮತ್ತು ಶಂಕರ್ ನಾಗ್&zwnj; ಅವರ ಶಿಸ್ತು, ಸಮಯಪಾಲನೆ ಹಾಗೂ 'ಒಂದು ಮುತ್ತಿನ ಕಥೆ' ಚಿತ್ರದ ಶೂಟಿಂಗ್&zwnj; ವೇಳೆ ನಡೆದ ವಿಶೇಷ ಘಟನೆಯನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvakb1h03rz1xm98h7cb4qta,imgname-bk-1781693515296.png" type="image/jpeg" height="390" width="690"/>
            <content:encoded><![CDATA[&lt;p&gt;Doddanna: 160 ಕೆಜಿ ತೂಕದ ಬಗ್ಗೆ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಡಾ.ರಾಜ್&zwnj;ಕುಮಾರ್&zwnj; ಮತ್ತು ಶಂಕರ್ ನಾಗ್&zwnj; ಅವರ ಶಿಸ್ತು, ಸಮಯಪಾಲನೆ ಹಾಗೂ 'ಒಂದು ಮುತ್ತಿನ ಕಥೆ' ಚಿತ್ರದ ಶೂಟಿಂಗ್&zwnj; ವೇಳೆ ನಡೆದ ವಿಶೇಷ ಘಟನೆಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಾನು 160 ಕೆಜಿ ಇದ್ದೀನಿ, ಇತ್ತೀಚೆಗೆ 47 ಕೆಜಿ ಕಡಿಮೆ ಮಾಡಿದ್ದೀನಿ. ನಾನ್ಯಾಕೆ ತೆಳ್ಳಗಾಗಲು ಒದ್ದಾಡಬೇಕು, ನಂದು ಫುಲ್&zwnj; ಮೀಲ್ಸ್&zwnj;. ಸುಂದರ್&zwnj;ರಾಜ್&zwnj;, ರಾಮಕೃಷ್ಣ ಮೊದಲಾದವರೆಲ್ಲ ಮಧ್ಯರಾತ್ರಿವರೆಗೆ ಕೂತರೂ ಮರುದಿನ ಬೆಳಗ್ಗೆ ಬೇಗ ಎದ್ದು ಓಡೋದು ನೋಡಿದ್ರೆ ಏನು ಹೇಳೋದೋ ಗೊತ್ತಾಗಲ್ಲ.&lt;/p&gt;&lt;img&gt;&lt;p&gt;ಇದು ಹಿರಿಯ ಪೋಷಕ ನಟ ದೊಡ್ಡಣ್ಣ ಮಾತು. ಸುದ್ದಿಗೋಷ್ಠಿಯೊಂದರಲ್ಲಿ ತನ್ನ ತೂಕದ ಬಗ್ಗೆ ಮಾತನಾಡುತ್ತಲೇ ಡಾ.ರಾಜ್&zwnj;ಕುಮಾರ್&zwnj;, ಶಂಕರ್&zwnj;ನಾಗ್&zwnj; ಅವರ ಶಿಸ್ತಿನ ಬಗ್ಗೆಯೂ ದೊಡ್ಡಣ್ಣ ಮಾತನಾಡಿದರು. ಒಂದು ಮುತ್ತಿನ ಕಥೆ ಸಿನಿಮಾದ ಶೂಟಿಂಗ್&zwnj;.&lt;/p&gt;&lt;img&gt;&lt;p&gt;ಆ ದಿನ ಶೂಟಿಂಗ್&zwnj; ಮುಗಿದಾಗ ಬಹಳ ಲೇಟ್&zwnj; ಆಗಿತ್ತು. ಡಾ.ರಾಜ್&zwnj;ಕುಮಾರ್&zwnj; ಬೆಳಗಿನ ಜಾವ ಎರಡು ಗಂಟೆ ಆದರೂ ಅಭಿಮಾನಿಗಳೊಂದಿಗೆ ಮಾತನಾಡುತ್ತಲೇ ಇದ್ದರು. ಆ ಸಿನಿಮಾದ ನಿರ್ದೇಶಕರಾಗಿದ್ದ ಶಂಕರ್&zwnj;ನಾಗ್&zwnj; ಅವರಿಗೆ ಪೇಚಾಟ. ಮರುದಿನ ಆರು ಗಂಟೆಗೆ ಶೂಟಿಂಗ್&zwnj; ಇತ್ತು.&lt;/p&gt;&lt;img&gt;&lt;p&gt;ನನ್ನನ್ನು ಐದಕ್ಕೆ ಎಬ್ಬಿಸಿದರು. ಇಷ್ಟೊತ್ತಿಗೆ ಯಾರೂ ಬಂದಿರಲ್ಲ ಎಂದು ನಾನು ಬೈದುಕೊಳ್ಳುತ್ತ ಸೆಟ್&zwnj;ಗೆ ಬಂದರೆ ಅಲ್ಲಾಗಲೇ ರಾಜ್&zwnj;ಕುಮಾರ್&zwnj; ಫುಲ್&zwnj; ರೆಡಿಯಾಗಿ ಮೇಕಪ್&zwnj; ಹಾಕಿಸಿಕೊಳ್ಳುತ್ತಿದ್ದರು ಎಂದು ದೊಡ್ಡಣ್ಣ ವಿವರಿಸಿದರು.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/doddanna-reveals-shankar-nag-and-rajkumar-discipline-story-memory-gvd-9y3n492"/>
        </item>
        <item>
            <title><![CDATA[Om Praksah Rao: ನಿಂತ್ ನಿಂತಲ್ಲೇ ಹೀರೋಯಿನ್ ಜೊತೆ ಕಾಡಲ್ಲಿ ನಡೆದ ಘಟನೆ ಬಿಚ್ಚಿಟ್ಟ ಓಂ ಪ್ರಕಾಶ್ ರಾವ್!]]></title>
            <link>https://kannada.asianetnews.com/tv-talk/director-om-prakash-rao-cooking-incident-actress-jackfruit-barfi-klattle-kitchen/articleshow-aovm500</link>
            <guid isPermaLink="true">https://kannada.asianetnews.com/tv-talk/director-om-prakash-rao-cooking-incident-actress-jackfruit-barfi-klattle-kitchen/articleshow-aovm500</guid>
            <pubDate>Wed, 17 Jun 2026 21:40:39 +0530</pubDate>
            <description><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಹಲವು ವೇದಿಕೆಗಳಲ್ಲಿ ತಮ್ಮ ಮಾತಿನಿಂದಲೇ ಕಾಂಟ್ರವರ್ಸಿ ಮತ್ತು ಕಾಮಿಡಿ ಮಾಡುತ್ತಿರುವ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಕಿರುತೆರೆಗೆ ಬಂದಿದ್ದಾರೆ. ಇದೀಗ ಮಾಧ್ಯಮವೊಂದಕ್ಕೆ ನಟಿಯೊಂದಿಗೆ ಕಾಡಿನಲ್ಲಿ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvb5ftva0x7hfzpa2bsfb8nm,imgname-om-praksah-rao-1781712546666.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಟರೂ ಆಗಿರುವ ಓಂ ಪ್ರಕಾಶ್ ರಾವ್ ಅವರು ಶೂಟಿಂಗ್ ಲೊಕೇಶನ್ ನೋಡಲು ನಟಿಯನ್ನು ಕರೆದುಕೊಂಡು ಹೋದಾಗ ನಡೆದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ದಟ್ಟ ಕಾಡಿನಲ್ಲಿ ಕಾರು ನಿಲ್ಲಿಸಿದಾಗ ನಟಿ ಕೇಳಿದ್ದನ್ನು ಹೇಗೆ ಪೂರೈಸಿದರು ಎಂಬುದನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಕ್ಲಾಟ್ಲೆ ಕಿಚನ್&zwnj;ಗೆ ಹೇಗೆ ಸೆಲೆಕ್ಟ್ ಆದರು ಎಂಬುದನ್ನು ಹೇಳುತ್ತಾ, ನಟಿಯೊಂದಿಗೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ನಮ್ಮ ಸಿನಿಮಾ ಹೀರೋಯಿನ್ ಜೊತೆಗೆ ಲೊಕೇಶನ್ ನೋಡೋದಕ್ಕೆ ಹೋಗಿದ್ದೆವು. ಅವರು ನನ್ನನ್ನ ಸುಬ್ಬ ಎಂದು ಕರೆಯುತ್ತಿದ್ದರು. ನಾನು ಅವರಿಗೆ ಸುಬ್ಬಲಕ್ಷ್ಮಿ ಎಂದು ಹೆಸರಿಟ್ಟಿದ್ದೇನೆ. ಕುದುರೆಮುಖ ರೋಡಲ್ಲಿ ಹೋಗುವಾಗ ಕಾಡಿನ ಮಧ್ಯದಲ್ಲಿ ಕಾರ್ಕಳದಲ್ಲಿ ಕಾರು ನಿಲ್ಲಿಸಿದ್ದೆವು. ಆಗ ನನಗೆ ತುಂಬಾ ಹೊಟ್ಟೆ ಹಸಿವು ಎಂದು ಹೇಳಿದರು. ಸುಮ್ಮನಿರು ನೀನು ನನ್ನ ತಲೇನೂ ತಿನ್ನಬೇಡ, ನನ್ನನ್ನೂ ತಿನ್ನಬೇಡ. ನಿನಗೆ ರೆಡಿ ಮಾಡಿರೋ ಹೊಟ್ಟೆ ತುಂಬಾ ಊಟ ಬೇಕು ಅಲ್ವಾ ಅಡುಗೆ ಮಾಡಿಕೊಡ್ತೇನೆ ಸುಮ್ಮನಿರು ಎಂದು ಹೇಳಿದೆ.&lt;/p&gt;&lt;h2&gt;&lt;strong&gt;ಸ್ಥಳದಲ್ಲೇ ಸಿದ್ಧವಾಯಿತು ಹಲಸಿನ ಹಣ್ಣಿನ ಬರ್ಫಿ!&lt;/strong&gt;&lt;/h2&gt;&lt;p&gt;ಆಗ ನಾನು ಅಡುಗೆ ಮಾಡೋದಕ್ಕೆ ಏನಾದರೂ ಸಿಗುತ್ತಾ ಎಂದು ನೋಡಿದಾಗ ಒಲೆ ಹಚ್ಚೋಕೆ ಸೌದೆಗಳು ಸಿಕ್ಕವು. ಹಳ್ಳೀಲಿ ಅವರರಿವರ ಮನೆಯಲ್ಲಿ ಹೋಗಿ ಬೆಲ್ಲ ಹಾಗೂ ಹಲಸಿನ ಹಣ್ಣು ಕೊಯ್ದಿದ್ದರು ಅದನ್ನ ಇಸ್ಕೊಂಡು ಬಂದೆ. ಜೊತೆಗೆ ಒಂದಷ್ಟು ತೆಂಗಿನಕಾಯಿ ತೆಗೆದುಕೊಂಡು ಬಂದೆ. ಜೊತೆಗೆ ಪಕ್ಕದಲ್ಲಿಯೇ ಇದ್ದ ಮನೆಯಲ್ಲಿ ಒಂದು ಹಂಚು ಇಸ್ಕೊಂಡು ಒಲೆ ಸಿದ್ಧಪಡಿಸಿ ಸೌದೆಗೆ ಬೆಂಕಿಹಚ್ಚಿ ಹಲಸಿನ ಹಣ್ಣಿನ ಬರ್ಫಿಯನ್ನು ಮಾಡಿಕೊಟ್ಟೆ. ಅದು ಸುಬ್ಬಲಕ್ಷ್ಮಿಗೆ ತುಂಬಾ ಇಷ್ಟ ಆಯ್ತು. ಅದನ್ನು ತಿಂದು ನಾನೂ ತಿಂದು ಖುಷಿಪಟ್ಟಿದ್ದೆ. ನಾನು ಈಗ ಅದನ್ನೇ ಕ್ಲಾಟ್ಲೆ ಕಿಚನ್&zwnj;ನಲ್ಲಿ ಮಾಡಬೇಕು ಎಂದು ಓಂ ಪ್ರಕಾಶ್ ರಾವ್ ಅವರು ಹೇಳಿದರು.&lt;/p&gt;&lt;h2&gt;&lt;strong&gt;ತರಹೇವಾರಿ ಅಡುಗೆ ಮಾಡುವ ನಳಪಾಕ&lt;/strong&gt;&lt;/h2&gt;&lt;p&gt;ನಾನು ಎಲ್ಲಾರ ಜೊತೆಗೆ ಹೋಗಿಲ್ಲ. ಒಂದಿಬ್ಬರ ಜೊತೆಗೆ ಲೊಕೇಶನ್ ನೋಡಲು ಹೋದಾಗ ಈ ತರಹದ ಅಡುಗೆ ಮಾಡಿದ್ದೇನೆ. ಇನ್ನು ಉಪ್ಪಿಟ್ಟು, ದೋಸೆ, ಪೂರಿ, ಚಟ್ನಿ, ಗಸಗಸೆ ಪಾಯಸ ಮಾಡ್ತೇನೆ. ದೋಸೆ ಹಿಟ್ಟಿಗೆ ಅಕ್ಕಿ, ಉದ್ದಿನಬೇಳೆ ಹಾಕಿ ಸ್ವಲ್ಪ ಒಗ್ಗರಣೆ ಹಾಕಿಕೊಳ್ಳಬಹುದು. ನಾನು ಮೊಟ್ಟೆ ದೋಸೆ ತಿನ್ನಲು ಇಷ್ಟಪಡ್ತೇನೆ ಎಂದು ತಮಗೆ ಸಿದ್ಧಿಸಿರುವ ಅಡುಗೆ ಕಲೆಯನ್ನು ತಿಳಿಸಿದರು.&lt;/p&gt;]]></content:encoded>
            <category>sandalwood</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/tv-talk/director-om-prakash-rao-cooking-incident-actress-jackfruit-barfi-klattle-kitchen/articleshow-aovm500"/>
        </item>
        <item>
            <title><![CDATA[ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ]]></title>
            <link>https://kannada.asianetnews.com/entertainment/kannada-producer-chinnegowda-wife-and-vijay-raghavendra-sri-murali-mother-jayamma-passed-away-videoshow-bq6qylf</link>
            <guid isPermaLink="true">https://kannada.asianetnews.com/entertainment/kannada-producer-chinnegowda-wife-and-vijay-raghavendra-sri-murali-mother-jayamma-passed-away-videoshow-bq6qylf</guid>
            <pubDate>Wed, 17 Jun 2026 18:35:06 +0530</pubDate>
            <description><![CDATA[&lt;p&gt;ಹಿರಿಯ ನಿರ್ಮಾಪಕ ಚಿನ್ನೇಗೌಡರ ಪತ್ನಿ, ವಿಜಯ್ ರಾಘವೇಂದ್ರ - ಶ್ರೀಮುರಳಿಯವರ ತಾಯಿ ಜಯಮ್ಮ ವಿಧಿವಶರಾಗಿದ್ದಾರೆ. ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಈ ಇಬ್ಬರು ಅದ್ಭುತ ನಟರನ್ನ ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಮ್ಮೆಯ ತಾಯಿ ಜಯಮ್ಮ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xagcte6" medium="video" height="768" width="1024"/>
            <content:encoded><![CDATA[&lt;p&gt;ಹಿರಿಯ ನಿರ್ಮಾಪಕ ಚಿನ್ನೇಗೌಡರ ಪತ್ನಿ, ವಿಜಯ್ ರಾಘವೇಂದ್ರ - ಶ್ರೀಮುರಳಿಯವರ ತಾಯಿ ಜಯಮ್ಮ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗದ​ಈ ಇಬ್ಬರೂ ಸ್ಟಾರ್ ನಟರು ಅವರಮ್ಮನ ಮುದ್ದಿನ ಮಕ್ಕಳು. ಈ ಹಿಂದೆ ಹಲವು ಬಾರಿ ತಮ್ಮ ತಾಯಿ ಹೇಗೆ ತಮ್ಮ ಯಶಸ್ಸಿಗೆ ಕಾರಣ ಅನ್ನೋದನ್ನ ಹೇಳಿದ್ರು. ಇದೀಗ ಅಮ್ಮನನ್ನ ಕಳೆದುಕೊಂಡು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ ವಿಜಯ್ ರಾಘವೇಂದ್ರ &amp;amp; ಶ್ರೀಮುರಳಿ.&lt;/p&gt;&lt;p&gt;ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ..!ಇಬ್ಬರು ತಾರೆಯರ ಯಶಸ್ಸಿನ ಹಿಂದಿತ್ತು ತಾಯಿಯ ಹರಕೆ..!ಜಯಮ್ಮ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್&zwnj;ವುಡ್ ಗಣ್ಯರುಚಿನ್ನಾರಿಮುತ್ತ ಖ್ಯಾತಿಯ ನಟ ವಿಜಯ್ ರಾಘವೇಂದ್ರ ಮತ್ತು ರೋರಿಂಗ್ ಸ್ಟಾರ್ ಖ್ಯಾತಿಯ ಶ್ರೀಮುರುಳಿ ಈ ಇಬ್ಬರನ್ನೂ ಹತ್ತಿರದವರು ಜಯಮ್ಮನ ಮಕ್ಕಳು ಅಂತಾನೇ ಕರೀತಿದ್ರು. ಯಾಕಂದ್ರೆ ಇವರ ತಾಯಿಯ ಹೆಸರು ಜಯಮ್ಮ ಮತ್ತು ಈ ಇಬ್ಬರೂ ಆ ಜಯಮ್ಮನ ಮುದ್ದಿನ ಮಕ್ಕಳು.&lt;/p&gt;&lt;p&gt;ನಿರ್ಮಾಪಕ ಚಿನ್ನೇಗೌಡರ ಪತ್ನಿಮತ್ತು ಇಬ್ಬರು ಅದ್ಭುತ ನಟರನ್ನ ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಮ್ಮೆಯ ತಾಯಿ ಜಯಮ್ಮ ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.ಹೆಚ್ಚಿನ ಮಾಹಿತಿಗೆ &lsquo;ಸಿನಿಮಾ ಹಂಗಾಮ&rsquo; ವಿಡಿಯೋ ನೋಡಿ...&amp;nbsp;&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/kannada-producer-chinnegowda-wife-and-vijay-raghavendra-sri-murali-mother-jayamma-passed-away-videoshow-bq6qylf"/>
        </item>
        <item>
            <title><![CDATA[Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!]]></title>
            <link>https://kannada.asianetnews.com/sandalwood/kannada-cinema-news-moda-kavida-vaatavarana-sharmila-mandre-marriage-gvd-videoshow-cecoxrw</link>
            <guid isPermaLink="true">https://kannada.asianetnews.com/sandalwood/kannada-cinema-news-moda-kavida-vaatavarana-sharmila-mandre-marriage-gvd-videoshow-cecoxrw</guid>
            <pubDate>Thu, 18 Jun 2026 17:16:21 +0530</pubDate>
            <description><![CDATA[&lt;p&gt;Cine Express: ಮೋಡ ಕವಿದ ವಾತಾವರಣ ಚಿತ್ರದ ಹೀರೋ ಟೀಸರ್ ಬಿಡುಗಡೆ, ಬಾಲನ್ ದಿ ಬಾಯ್ ಚಿತ್ರದ ಕೀಲಿ ಕೈ ಹಾಡು ರಿಲೀಸ್, ಲವ್ ಸೀಸನ್ಸ್ ಸಿನಿಮಾ ಬಿಡುಗಡೆಗೆ ಸಜ್ಜು ಸಂಪೂರ್ಣ ಮಾಹಿತಿ ಇಲ್ಲಿ ಓದಿ.&lt;/p&gt;]]></description>
            <media:content url="https://geo.dailymotion.com/player/x1tbu.html?video=xagk5ry" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ಮೋಡ ಕವಿದ ವಾತಾವರಣ ಸಿನಿಮಾದ ಹೀರೋ ಟೀಸರ್ ರಿಲೀಸ್: &lt;/strong&gt;ಒಂದು ಸರಳ ಪ್ರೇಮಕಥೆ ಸಿನಿಮಾ ಬಳಿಕ ನಿರ್ದೇಶಕ ಸಿಂಪಲ್ ಸುನಿ ಭತ್ತಳಿಕೆಯಿಂದ ಬರ್ತಿರುವ ಮತ್ತೊಂದು &amp;nbsp;ಪ್ರೇಮ ಕಥೆ ಸಿನಿಮಾ ಮೋಡ ಕವಿದ ವಾತಾವರಣ. ಇದೇ ತಿಂಗಳ 26ಕ್ಕೆ ಬಿಡುಗಡೆಯಾಗುತ್ತಿರುವ ಮೋಡ ಕವಿದ ವಾತಾವರಣ ಚಿತ್ರದ ನಾಯಕನ ಟೀಸರ್​ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಚಿತ್ರತಂಡ ಸಿನಿಮಾದ ಟೀಸರ್ ಅನಾವರಣ ಮಾಡಿದೆ. ಈ ಸಿನಿಮಾದ ಮೂಲಕ ಸಿಂಪಲ್ ಸಿನಿ ಶಿಷ್ಯ ಶೀಲಮ್ ನಾಯಕನಾಗಿ ನಟಿಸುತ್ತಿದ್ದಾರೆ. ಸೈಂಟಿಫಿಕ್&zwnj; ಫಿಕ್ಷನ್&zwnj; ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಕೆವಿಎನ್ ನಿರ್ಮಾಣದ 'ಬಾಲನ್ ದಿ ಬಾಯ್' ಸಿನಿಮಾದಿಂದ ಬಂತು ಕೀಲಿ ಕೈ ಹಾಡು:&lt;/strong&gt; ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ʻಕೆವಿಎನ್&zwnj; ಪ್ರೊಡಕ್ಷನ್ಸ್&zwnj;ʼ ಮಲಯಾಳಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ʻಮಂಜುಮ್ಮೆಲ್&zwnj; ಬಾಯ್ಸ್&zwnj;ʼ ಚಿತ್ರದ ನಿರ್ದೇಶಕ ಚಿದಂಬರಂ ಸಾರಥ್ಯದಲ್ಲಿ ಮೂಡಿ ಬರ್ತಿರುವ ಬಾಲನ್ ದಿ ಬಾಯ್ ಸಿನಿಮಾಗೆ ಕೆವಿಎನ್ ಹಣ ಹಾಕಿದೆ. ಇದೀಗ ಸಿನಿಮಾದ ಹಾಡು ಬಿಡುಗಡೆ ಆಗಿದೆ. ಈ ಹಾಡಿಗೆ ಸುಶಿನ್ ಶ್ಯಾಮ್ ಸಂಗೀತ, ಅನ್ವರ್ ಅಲಿ ಸಾಹಿತ್ಯ, &amp;nbsp;ನೀಲಾ ರಾಜ್ ಧ್ವನಿಯಾಗಿದ್ದಾರೆ. ಓರ್ವ ಬಾಲಕನ ಸುತ್ತ ಸಾಗುವ ಕಥೆಗೆ ಸಸ್ಪೆನ್ಸ್, ಥ್ರಿಲ್ ಅಂಶಗಳನ್ನು ಬಾಲನ್ ದಿ ಬಾಯ್ ಸಿನಿಮಾದಲ್ಲಿ ಹೇಳಲಾಗಿದೆ.&lt;/p&gt;&lt;p&gt;&lt;strong&gt;ಲವ್ ಸೀಸನ್ಸ್ &amp;nbsp;ಬಿಡುಗಡೆಗೆ ಸಿದ್ಧ: &lt;/strong&gt;ಕೃತ್ವಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಮೂರು ಹಾಡುಗಳು ಬಿಡುಗಡೆ ಆಗಿದ್ದು, ದೊಡ್ಡ ಹಿಟ್ ಆಗಿವೆ. ಈ ಸಂಬಂಧವಾಗಿ ಪತ್ರಿಕಾಗೋಷ್ಠಿಯ ಮೂಲಕ ಹಾಡುಗಳ ಗೆಲುವಿನ ಸಿಹಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಸಂಗೀತ ನಿರ್ದೇಶಕರು, ಗಾಯಕ, ಗಾಯಕಿಯರು ಹಾಗೂ ಸಾಹಿತ್ಯ ಬರೆದವರ ಮೂಲಕವೇ ಈ ಗೆಲುವನ್ನು ಚಿತ್ರತಂಡ ಸಂಭ್ರಮಿಸಿದೆ. ಚಿತ್ರವನ್ನ ಎನ್.ಆರ್ ಮಂಜುನಾಥ್ ನಿರ್ಮಾಣ ಮಾಡಿದ್ದು, &amp;nbsp;ಕೃತ್ವಿಕ್ ನಿರ್ದೇಶನ ಇದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಸಾಹಿತ್ಯ, ವೀರ್ ಸಮರ್ಥ್ ಸಂಗೀತ ಚಿತ್ರಕ್ಕಿದ್ದು, &amp;nbsp;ಮುಕುಂದ ರಾಮಸ್ವಾಮಿ, ಶ್ವೇತಾ ಕೊಗ್ಲೂರ್, ದಿಯಾ ಕೀರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.&lt;/p&gt;&lt;p&gt;&lt;strong&gt;ನಟಿ ಶರ್ಮಿಳಾ ಮಾಂಡ್ರೆ ಮದುವೆ ಫಿಕ್ಸ್​.. ವರ ಯಾರು ಗೊತ್ತಾ?: &lt;/strong&gt;ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ತಮಿಳು ನಿರ್ಮಾಪಕನನ್ನ ಕೈ ಹಿಡಿಯುತ್ತಿದ್ದಾರೆ ಅಂತ ವರಧಿ ಅಗಿದೆ. ನಿರ್ಮಾಪಕ ಸುಧನ್ ಸುಂಧರಮ್ ಎಂಬುವವರ ಜೊತೆ ಶರ್ಮಿಳಾ ಮದುವೆ ನಡೆಯಲಿದ್ದು ಎಲ್ಲಾ ತಯಾರಿಗಳು ಆಗಿದೆ. ಜೂನ್ 25ರಂದು ನಿರ್ಮಾಪಕ ಸುಧನ್ ಸುಂಧರಮ್ ಹಾಗೂ ನಟಿ ಶರ್ಮಿಳಾ ಮಾಂಡ್ರೆ ಮದುವೆ ಎಂಗೇಜ್&zwnj;ಮೆಂಟ್ ನಡೆಲಿದೆ. ಇದೇ ವರ್ಷ ಮದುವೆ ನೆರವೇರಿಸಲು ಎರಡೂ ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-cinema-news-moda-kavida-vaatavarana-sharmila-mandre-marriage-gvd-videoshow-cecoxrw"/>
        </item>
        <item>
            <title><![CDATA[ಜೈಲಿನಲ್ಲಿ ಪವಿತ್ರಾ ಗೌಡಗೆ ರಾಜಾತಿಥ್ಯ, ಕಾಲೊತ್ತುವ ಸಿಬ್ಬಂದಿ, ಮನೆಯಿಂದ ಊಟದ ಆರೋಪ: ದೂರು ದಾಖಲು]]></title>
            <link>https://kannada.asianetnews.com/gallery/entertainment/pavitra-gowda-gets-all-facilities-in-jail-says-sandhya-nagaraj-complaint-lodge-suc-e505quz</link>
            <guid isPermaLink="true">https://kannada.asianetnews.com/gallery/entertainment/pavitra-gowda-gets-all-facilities-in-jail-says-sandhya-nagaraj-complaint-lodge-suc-e505quz</guid>
            <pubDate>Thu, 18 Jun 2026 17:28:39 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಸಂಧ್ಯಾ ಎಂಬುವವರು ಆರೋಪಿಸಿದ್ದಾರೆ. ಮನೆಯೂಟ, ಮೇಕಪ್ ಸೌಲಭ್ಯದ ಜೊತೆಗೆ ಸಿಬ್ಬಂದಿ ಕಾಲು ಒತ್ತುತ್ತಾರೆ ಎಂದಿದ್ದು, ಈ ಆರೋಪ ಮಾಡಿದವರ ವಿರುದ್ಧ ದೂರು ದಾಖಲಾಗಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd9c26ghwhnzegpxcb5y8b2,imgname-pavitra-gowda-and-sandhya-1781783726288.jpg" type="image/jpeg" height="390" width="690"/>
            <content:encoded><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಸಂಧ್ಯಾ ಎಂಬುವವರು ಆರೋಪಿಸಿದ್ದಾರೆ. ಮನೆಯೂಟ, ಮೇಕಪ್ ಸೌಲಭ್ಯದ ಜೊತೆಗೆ ಸಿಬ್ಬಂದಿ ಕಾಲು ಒತ್ತುತ್ತಾರೆ ಎಂದಿದ್ದು, ಈ ಆರೋಪ ಮಾಡಿದವರ ವಿರುದ್ಧ ದೂರು ದಾಖಲಾಗಿದೆ. &amp;nbsp;&lt;/p&gt;&lt;img&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ವಿಡಿಯೋ ವೈರಲ್​ ಆಗಿ, ಅದು ಸಾಕಷ್ಟು ಸದ್ದು ಮಾಡಿತ್ತು. ಆ ಬಳಿಕ, ಇದರಿಂದಾಗಿ ಜೈಲಿನ ಕೆಲವು ಸಿಬ್ಬಂದಿ ಕೆಲಸ ಕೂಡ ಕಳೆದುಕೊಂಡಿದ್ದರು. ಇದೀಗ ಅದೇ ಆರೋಪ ಇದೇ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ (Pavitra Gowda) ಅವರ ಮೇಲೆ ಮಾಡಲಾಗಿದೆ.&lt;/p&gt;&lt;img&gt;&lt;p&gt;ಸಂಧ್ಯಾ ಪವಿತ್ರಾ ನಾಗರಾಜ್ ಎನ್ನುವವರು ಪವಿತ್ರಾ ಗೌಡ ವಿರುದ್ಧ ಇಂಥದ್ದೊಂದು ಆರೋಪವನ್ನು ಮಾಧ್ಯಮದ ಎದುರು ಮಾಡಿದ್ದು, ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸಂಧ್ಯಾ ಅವರು ಜೈಲಿಗೆ ಹೋಗಿದ್ದರು. ಅಲ್ಲಿ ಪವಿತ್ರಾ ಗೌಡ ಅವರಿಗೆ ರಾಜಾತಿಥ್ಯ ನೀಡುತ್ತಿರುವುದಾಗಿ ಅವರು ಆರೋಪಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಮನೆಯೂಟ ಬರುತ್ತೆ, ಐಷಾರಾಮಿಯಾಗಿ ಜೈಲಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟೇ ಅಲ್ಲದೇ, ಸಂಧ್ಯಾ ಅವರು ಇನ್ನೂ ಕೆಲವು ಆಪಾದನೆ ಮಾಡಿದ್ದಾರೆ. ಜೈಲಿನ ಭದ್ರತಾ ಸಿಬ್ಬಂದಿ ಪವಿತ್ರಾಗೌಡ ಅವರ ಕಾಲು ಒತ್ತುತ್ತಾರೆ. ಅವರೇ ಊಟವನ್ನೂ ತೆಗೆದುಕೊಂಡು ಕೊಡುತ್ತಾರೆ. ಸಿಬ್ಬಂದಿಗಳೇ ಮನೆಯಿಂದ ಬಾಕ್ಸ್ ತಗೊಂಡು ಬರ್ತಾರೆ ಎಂಬೆಲ್ಲಾ ಆರೋಪ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಜೈಲಿನಲ್ಲಿ ಮೇಕಪ್ ಮಾಡಿಕೊಳ್ಳೋಕೆ ವ್ಯವಸ್ಥೆ ಇದೆ, ಆದ್ದರಿಂದ ಪವಿತ್ರಾ ಗೌಡ ಅವರು ಸಾಕಷ್ಟು ಎಂಜಾಯ್​ ಮಾಡುತ್ತಿದ್ದಾರೆ,, ದರ್ಶನ್​ಗೆ ಯಾವುದೇ ಸೌಲಭ್ಯಗಳು ಸಿಕ್ತಿಲ್ಲ, ಪವಿತ್ರಾಗೌಡಗೆ ಅಲ್ಲಿರೋ ಭದ್ರತಾ ಸಿಬ್ಬಂದಿಯೇ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂದು ಹೇಳಿದ್ದು, ಇದೀಗ ಸಂಧ್ಯಾ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಇಂಥದ್ದೊಂದು ಗಂಭೀರ ಆರೋಪ ಮಾಡಿರುವ ಸಂಧ್ಯಾ ವಿರುದ್ಧ ಈಗ ಭದ್ರತಾ ಸಿಬ್ಬಂದಿಯಾಗಿರುವ ರಶ್ಮಿ ಎನ್ನುವವರು ದೂರು ದಾಖಲು ಮಾಡಿದ್ದಾರೆ. ಸಂಧ್ಯಾ ವಿರುದ್ಧ ಎನ್​​ಸಿಆರ್ (Non-Cognizable Report) ದಾಖಲಾಗಿದೆ. ಸಂಧ್ಯಾ ಅವರ ವಿರುದ್ಧ ಎಫ್​ಐಆರ್ ದಾಖಲಾತಿಗೆ ಪೊಲೀಸರು ಕೋರ್ಟ್ ಅನುಮತಿ ಕೇಳಿದ್ದಾರೆ. ಸದ್ಯ ಕೋರ್ಟ್ ಅನುಮತಿಗಾಗಿ ಪೊಲೀಸರು ಕಾಯ್ತಿದ್ದಾರೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ ಪವಿತ್ರಾ ಗೌಡ ಅವರು, ಜೈಲಿನಲ್ಲಿ ಆತ್ಮಕಥೆ ಬರೆಯುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಬಂದಿದೆ. ಇದರಲ್ಲಿ ಏನು ಇರಲಿವೆ, ರೇಣುಕಾಸ್ವಾಮಿ ಕೊಲೆಯ ಬಗ್ಗೆ ಹೇಳ್ತಾರಾ, ತಮ್ಮ ಮತ್ತು ದರ್ಶನ್​ ಸ್ನೇಹದ ಬಗ್ಗೆ ವಿವರಿಸ್ತಾರಾ ಅಥವಾ ಇನ್ನೇನು ಇರಲಿದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿದೆ.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/pavitra-gowda-gets-all-facilities-in-jail-says-sandhya-nagaraj-complaint-lodge-suc-e505quz"/>
        </item>
        <item>
            <title><![CDATA[ಬಿಗ್​ಬಾಸ್ 13​ನಲ್ಲಿ ಅರುಣ್​ ಹೆಸ್ರು ನೋಡಿ ನಂಗೂ ಆಶ್ಚರ್ಯ ಆಯ್ತು: ನಟಿ ರಜಿನಿ ಏನಂದ್ರು ಕೇಳಿ]]></title>
            <link>https://kannada.asianetnews.com/gallery/entertainment/actress-rajini-says-she-was-surprised-after-seeing-hubby-arun-name-in-bigg-boss-13-viral-suc-ebrnksv</link>
            <guid isPermaLink="true">https://kannada.asianetnews.com/gallery/entertainment/actress-rajini-says-she-was-surprised-after-seeing-hubby-arun-name-in-bigg-boss-13-viral-suc-ebrnksv</guid>
            <pubDate>Thu, 18 Jun 2026 18:06:05 +0530</pubDate>
            <description><![CDATA[ನಟಿ ರಜಿನಿ ಅವರ ಪತಿ ಅರುಣ್ ಗೌಡ ಬಿಗ್&zwnj;ಬಾಸ್&zwnj;ಗೆ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಮಾತನಾಡಿದ ರಜಿನಿ, ತನಗೂ ಈ ಸುದ್ದಿ ಕೇಳಿ ಅಚ್ಚರಿಯಾಯಿತಾದರೂ, ಅವರು ಬಿಗ್&zwnj;ಬಾಸ್&zwnj;ಗೆ ಹೋಗಬೇಕೆಂಬುದು ನನ್ನ ಇಚ್ಛೆ ಎಂದು ಹೇಳಿದ್ದಾರೆ. ಇದರಿಂದ ಅವರು ಜನರೊಂದಿಗೆ ಬೆರೆಯಲು ಕಲಿಯುತ್ತಾರೆ ಎಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvdbmxvar42wmzycq4jzcs8k,imgname-rajini-and-arun-gowda-1781786113898.jpg" type="image/jpeg" height="390" width="690"/>
            <content:encoded><![CDATA[ನಟಿ ರಜಿನಿ ಅವರ ಪತಿ ಅರುಣ್ ಗೌಡ ಬಿಗ್&zwnj;ಬಾಸ್&zwnj;ಗೆ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಮಾತನಾಡಿದ ರಜಿನಿ, ತನಗೂ ಈ ಸುದ್ದಿ ಕೇಳಿ ಅಚ್ಚರಿಯಾಯಿತಾದರೂ, ಅವರು ಬಿಗ್&zwnj;ಬಾಸ್&zwnj;ಗೆ ಹೋಗಬೇಕೆಂಬುದು ನನ್ನ ಇಚ್ಛೆ ಎಂದು ಹೇಳಿದ್ದಾರೆ. ಇದರಿಂದ ಅವರು ಜನರೊಂದಿಗೆ ಬೆರೆಯಲು ಕಲಿಯುತ್ತಾರೆ ಎಂದಿದ್ದಾರೆ.&lt;img&gt;&lt;p&gt;ಹಿಂದೆಂದಿನ ಸೀಸನ್​ಗಿಂತಲೂ ಬಿಗ್​ಬಾಸ್​ನ 13ನೇ ಸೀಸನ್​ ಬಹಳ ಸ್ಪೆಷಲ್​ ಆಗಿದೆ. ಅದಕ್ಕೆ ಕಾರಣ, ಈ ಸಲ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿರೋದು. ಅದಕ್ಕಾಗಿಯೇ ಕಲರ್ಸ್​ ವಾಹಿನಿ ಇದಾಗಲೇ ಹಲವಾರು ಪ್ರೊಮೋಗಳನ್ನು ಬಿಡುತ್ತಲೇ ಇದ್ದು, ಇದಾಗಲೇ ಸಹಸ್ರಾರು ಮಂದಿ ಆಡಿಷನ್​ನಲ್ಲಿ ಭಾಗಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ ಹಲವರ ಹೆಸರು ಇದರಲ್ಲಿ ಕೇಳಿಬರುತ್ತಿದೆ. ಪ್ರತಿಬಾರಿಯಂತೆಯೇ ಈ ಬಾರಿಯೂ ಇವರು ಹೋಗ್ತಾರೆ, ಅವರು ಹೋಗ್ತಾರೆ ಎಂದೇ ಹೇಳಲಾಗುತ್ತಿದ್ದು, ಅಂಥ ಸೆಲೆಬ್ರಿಟಿಗಳನ್ನು ಮಾಧ್ಯಮಗಳು ಮಾತನಾಡಿಸುವುವದು ಇದೆ.&lt;/p&gt;&lt;img&gt;&lt;p&gt;ಅದೇ ರೀತಿ, ಇದೀಗ 'ಅಮೃತವರ್ಷಿಣಿ', ಹಿಟ್ಲರ್&zwnj; ಕಲ್ಯಾಣ, &lsquo;ನೀ ಇರಲು ಜೊತೆಯಲಿ&rsquo; ಸೇರಿ ಹಲವಾರು ಸೀರಿಯಲ್&zwnj;ಗಳಲ್ಲಿ ನಟಿಸಿ ಮನೆಮಾತಾಗಿರೋ ನಟಿ ರಜಿನಿ ಅವರ ಪತಿ ಜಿಮ್&zwnj; ಟ್ರೈನರ್&zwnj; ಅರುಣ್&zwnj; ಗೌಡ ಅವರು ಈ ಬಾರಿಯ ಸೀಸನ್​ನಲ್ಲಿ ಹೋಗಬಹುದು ಎಂದೇ ಕೆಲವರು ಅಂದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಬಗ್ಗೆ ನಟಿ ರಜಿನಿ ಫೋಕಸ್​ ಕನ್ನಡ ಚಾನೆಲ್​ ಜೊತೆ ಮಾತನಾಡಿದ್ದಾರೆ. ನನಗೂ ಈ ವಿಷ್ಯ ಕೇಳಿ ಅಚ್ಚರಿ ಆಯ್ತು. ವೈರಲ್​ ಆಗ್ತಿರೋ ಸುದ್ದಿ ಕೇಳಿ ನಾನೂ ಅರುಣ್​ಗೆ ನೀನು ಹೋಗ್ತಿಯಾ ಎಂದು ಕೇಳಿದೆ. ಆದರೆ ಆತ ಇದಕ್ಕೆಲ್ಲಾ ಒಪ್ಪುವುದಿಲ್ಲ. ಆತ ಹೋದರೆ ನನಗೆ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅರುಣ್​ ಜನರ ಜೊತೆ ಬೆರೆಯುವುದು ಕಡಿಮೆ. ಆದ್ದರಿಂದ ಅವರನ್ನು ಬಿಗ್​ಬಾಸ್​ಗೆ ತಳ್ಳಿ ಸ್ವಲ್ಪ ಮಾತು ಕಲಿಸಬೇಕಿದೆ. ಹೋದ ಬಾರಿ ಮ್ಯೂಟಂಟ್​ ರಘು ಹೋಗಿದ್ರು. ಅದೇ ರೀತಿ ಬಾಲಿ ಬಿಲ್ಡರ್​ ಒಬ್ಬರು ಹೋದ್ರೆ ಅದಕ್ಕೂ ಪ್ರಚಾರ ಸಿಕ್ಕ ಹಾಗೆ ಆಗುತ್ತದೆ. ಅವನು ಹೋಗಬೇಕು ಎನ್ನೋದು ನನ್ನ ಇಚ್ಛೆ ಕೂಡ ಎಂದಿದ್ದಾರೆ ರಜಿನಿ.&lt;/p&gt;&lt;img&gt;&lt;p&gt;ಅಂದಹಾಗೆ ಈ ಜೋಡಿ, ಇಬ್ಬರೂ ಜೊತೆಯಾಗಿ ಹಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ನಾವಿಬ್ಬರು ಆ ರೀತಿ ಅಲ್ಲ, ಬರಿಯ ಸ್ನೇಹಿತರು ಎಂದು ಕೊನೆಯವರೆಗೂ ಮದುವೆಯ ಬಗ್ಗೆ ಮಾತನಾಡಲಿಲ್ಲ ರಜಿನಿ ಅಥವಾ ಅರುಣ್. ಈ ಜೋಡಿ ಬಗ್ಗೆ ಅವರ ಅಭಿಮಾನಿಗಳಿಗೆ ಅನುಮಾನ ಮೂಡಿದ್ದರೂ ಇಲ್ಲ ಇಲ್ಲ ಎನ್ನುತ್ತಲೇ ಕೊನೆಗೆ ಸಿಂಪಲ್&zwnj; ಆಗಿ ಮದುವೆಯಾಗಿದ್ದರು.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/actress-rajini-says-she-was-surprised-after-seeing-hubby-arun-name-in-bigg-boss-13-viral-suc-ebrnksv"/>
        </item>
        <item>
            <title><![CDATA[Darshan ಕೇಸ್‌ನಲ್ಲಿ ಕೋರ್ಟ್ ನೀಡಿದ ಹೊಸ ಸೂಚನೆ ಏನು? ಅಭಿಮಾನಿಗಳಲ್ಲಿ ಆತಂಕ!]]></title>
            <link>https://kannada.asianetnews.com/sandalwood/darshan-renukaswamy-case-update-court-orders-faster-hearing-gvd/articleshow-gb3i17p</link>
            <guid isPermaLink="true">https://kannada.asianetnews.com/sandalwood/darshan-renukaswamy-case-update-court-orders-faster-hearing-gvd/articleshow-gb3i17p</guid>
            <pubDate>Tue, 16 Jun 2026 18:55:20 +0530</pubDate>
            <description><![CDATA[&lt;p&gt;Darshan Case: ಸೋಮವಾರ ಸಿಸಿಹೆಚ್-59 ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ನಡೆದಿದೆ. ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv89jhd6qq92dc2tj362y0y9,imgname-hch-1781616166310.png" type="image/jpeg" height="390" width="690"/>
            <content:encoded><![CDATA[&lt;p&gt;ಸೋಮವಾರ ಸಿಸಿಹೆಚ್-59 ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ನಡೆದಿದೆ. ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ. ಆದ್ರೆ ವಿಚಾರಣೆ ವೇಳೆ ಪವಿತ್ರಾ ಕಿಲ ಕಿಲ ಅಂತಿದ್ರೆ, ದರ್ಶನ್ ಮಾತ್ರ ವಿಲ ವಿಲ ಅಂತ ಒದ್ದಾಡ್ತಾ ಇದ್ರು. ಅಷ್ಟಕ್ಕೂ ಇದರ ಹಿಂದೆ ಒಂದು ದೊಡ್ಡ ಮ್ಯಾಟರ್ರೇ ಇದೆ.. ಏನದು ಮ್ಯಾಟರ್..? ದರ್ಶನ್ ಎ-2 ಆರೋಪಿ ಆಗಿರೋ ರೇಣುಕಾಸ್ವಾಮಿ ಮರ್ಡರ್ ಕೇಸ್ CCH-59 ನ್ಯಾಯಾಲಯ ವರ್ಗಾವಣೆ ಆಗಿದ್ದು, ಅಲ್ಲಿ ವಿಚಾರಣೆ ಮುಂದುವರೆದಿದೆ.&lt;/p&gt;&lt;p&gt;ಸೋಮವಾರ ನಡೆದ ವಿಚಾರಣೆಗೆ ದರ್ಶನ್ , ಪವಿತ್ರಾ ಸೇರಿದಂತೆ ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಾಗಿತ್ತು. ಈ ವೇಳೆ ದರ್ಶನ್ ಫುಲ್ ಟೆನ್ಷನ್​ನಲ್ಲಿ ಇದ್ದಂತೆ ಕಾಣ್ತಾ ಇದ್ರೆ , ಪವಿತ್ರಾ ಮಾತ್ರ ರಿಲ್ಯಾಕ್ಸ್ ಮೂಡ್​ನಲ್ಲಿರುವಂತೆ ಕಾಣ್ತಾ ಇತ್ತು. ಇದಕ್ಕೆ ಕಾರಣ ಏನು ಅಂತ ನೋಡೋದಾದ್ರೆ ಈ ಹಿಂದೆ ಸುಪ್ರೀಂ ಕೋರ್ಟ್​ನಲ್ಲಿ ದರ್ಶನ್ , ಬೇಲ್​ ಗೆ ಅರ್ಜಿ ಸಲ್ಲಿಸಿದ ವೇಳೆ ಕೋರ್ಟ್ ಇನ್ನೂ ಒಂದು ವರ್ಷ ತ್ವರಿತ ವಿಚಾರಣೆ ನಡೆಯಲಿ ಆ ಬಳಿಕ ಬೇಲ್ ವಿಚಾರಣೆ ಅಂದುಬಿಟ್ಟಿತ್ತು.&lt;/p&gt;&lt;p&gt;ಇನ್ನೂ ಒಂದು ವರ್ಷ ಜೈಲು ಕೋಣೆಯಿಂದ ಹೊರಬರೋದಕ್ಕೆ ಆಗೋದಿಲ್ಲ ಅನ್ನೋದು ಗೊತ್ತಾದಾಗಿನಿಂದ ದರ್ಶನ್ ಮಂಕಾಗಿ ಹೋಗಿದ್ದಾರೆ. ಜೈಲಿನಲ್ಲಿ ತನಗೆ ಬೇಕಾದ ಸೌಲತ್ತುಗಳು ಸಿಗ್ತಾ ಇಲ್ಲ ಅಂತ ಒದ್ದಾಡ್ತಾ ಇರೋ ದರ್ಶನ್​ಗೆ ಇನ್ನೂ ಒಂದ್ವರ್ಷ ಇದೇ ಸ್ಥೀತಿಯಲ್ಲಿ ಕಳೀಬೇಕು ಅನ್ನೋದನ್ನ ಒಪ್ಪಿಕೊಳ್ಳೋದಕ್ಕೆ ಆಗ್ತಾ ಇಲ್ಲ. ಹೌದು ಪವಿತ್ರಾ ಗೌಡ ಕೂಡ ದರ್ಶನ್ ಇರುವ ಪರಪ್ಪನ ಅಗ್ರಹಾರದಲ್ಲೇ ಇದ್ದಾರೆ. ಆದ್ರೆ ಆಕೆ ಇರೋದು ಮಹಿಳಾ ಬ್ಯಾರಕ್​ನಲ್ಲಿ. ಇತ್ತೀಚಿಗೆ ಕೆಲವರು ಪವಿತ್ರಾಗೆ ಜೈಲಿನಲ್ಲಿ ರಾಜಾತಿಥ್ಯ ಸಿಕ್ತಾ ಇದೆ ಅಂತ ಹೇಳಿದ್ರು. ಆಕೆ ಫುಲ್ ಆರಾಮಾಗಿ ಇದ್ದಾಳೆ ಅಂತಲೂ ಹೇಳಿದ್ರು.&lt;/p&gt;&lt;p&gt;ಜೈಲಿನಲ್ಲಿ ಪುರುಷರ ಬ್ಯಾರಕ್​ಗೆ ಹೋಲಿಸಿದ್ರೆ, ಮಹಿಳಾ ಬ್ಯಾರಕ್​ನಲ್ಲಿ ಅಷ್ಟೇನೂ ಕಠಿಣ ನಿಯಮ ಇರೋದಿಲ್ಲ. ಪುರುಷರ ಸೆಲ್​ನಲ್ಲಿ ಮಧ್ಯ, ಸಿಗರೇಟ್, ಗಾಂಜಾ, ಡ್ರಗ್ಸ್ ನಂತಹ ಚಟುವಟಿಕೆ ನಡೆಯುತ್ವೆ ಆದ್ದರಿಂದ ಅಧಿಕಾರಿಗಳು ಸಿಕ್ಕಾಪಟ್ಟೆ ಸ್ಕ್ರಿಕ್ಟ್ ಆಗಿರ್ತಾರೆ. ಜೊತೆಗೆ ಇಂಥಾ ವಿಚಾರಗಳು ಹೊರಬಂದು, ಜೈಲರ್ಸ್ ಕುತ್ತಿಗೆಗೆ ಬರುತ್ವೆ. ಸೋ ಪುರುಷರ ಬ್ಯಾರಕ್​ನ ಸಿಕ್ಕಾಪಟ್ಟೆ ಸ್ಕ್ರಿಕ್ಟ್ ಆಗಿ ನೋಡಿಕೊಳ್ಳಲಾಗುತ್ತೆ. ಅಲ್ಲಿನ ಮ್ಯಾನುವೆಲ್ ಹೊರತು ಪಡಿಸಿ ಇನ್ಯಾವುದೇ ಸೌಲಭ್ಯ ಕೊಡೋದಿಲ್ಲ.&lt;/p&gt;&lt;p&gt;ದರ್ಶನ್​ರಂಥಾ ಸೆಲೆಬ್ರಿಟಿಗಳನ್ನಂತೂ ಬ್ಯಾರಕ್​ನಲ್ಲಿ ಕೂಡಿಹಾಕಿಬಿಡ್ತಾರೆ. ದರ್ಶನ್​ಗೆ ಹೋಲಿಸಿದ್ರೆ ಮಹಿಳಾ ಬ್ಯಾರಕ್​ನಲ್ಲಿ ಪವಿತ್ರಾ ಯಾವ ಕಿರಿ ಕಿರಿ ಇಲ್ಲದೇ ಆರಾಮಾಗಿದ್ದಾರೆ. ಸೋಮವಾರ ಕೋರ್ಟ್​ನಲ್ಲಿ ಅವರ ಮುಖಬಾವ ನೋಡಿದ್ರೇನೇ ದರ್ಶನ್ ಮತ್ತು ಪವಿತ್ರಾ ಯಾವ ಸ್ಥಿತಿಯಲ್ಲಿದ್ದಾರೆ ಅನ್ನೋದನ್ನ ಊಹೆ ಮಾಡಬಹುದು. ಹೌದು ಪ್ರಸ್ತುತ ಕೋರ್ಟ್​ನಲ್ಲಿ ಆಗಿರೋ ಹೊಸ ಬೆಳವಣಿಗೆ ಏನು ಅಂದ್ರೆ ಪ್ರತಿ ದಿನ ಈ ಪ್ರಕರಣದ ವಿಚಾರಣೆ ನಡೆಸಲು ಎಸ್ಪಿಪಿ ಮನವಿ ಸಲ್ಲಿಸಿದ್ರು. ಪ್ರತಿ ದಿನ ವಿಚಾರಣೆಗೆ ಸಹಕರಿಸಲು ಪ್ರಾಸಿಕ್ಯೂಷನ್ ಸಿದ್ದವಾಗಿದೆ ಅಂತ ಕೋರ್ಟ್​ಗೆ ತಿಳಿಸಿದ್ರು.&lt;/p&gt;&lt;p&gt;ಈ ಹಿಂದೆ ಸುಪ್ರೀಂ ಕೋರ್ಟ್ ಒಂದು ವರ್ಷದಲ್ಲಿ 60 ಪ್ರಮುಖ ಸಾಕ್ಷಿಗಳ ವಿಚಾರಣೆಗೆ ಸೂಚಿಸಿದೆ, ಸೋ ಪ್ರಕರಣದ ವಿಚಾರಣೆ ಅನಗತ್ಯ ಮುಂದೂಡಿಕೆ ಮಾಡದಂತೆ ಎಸ್ಪಿಪಿ ಮನವಿ ಸಲ್ಲಿಸಿದ್ದಾರೆ. ಇನ್ನೂ ದರ್ಶನ್ ಪರ ವಕೀಲ ಸುನೀನ್, ಸಾಕ್ಷಿ ಒಬ್ಬರ ಕ್ರಾಸ್ ಎಕ್ಸಾಮಿನೇಷನ್ ಗೆ ಸಮಯ ಕೋರಿದ್ದರು. ಆದ್ರೆ ಸಾಕ್ಷಿಯ ಪಾಟೀಸವಾಲ್ ಗೆ ಸಮಯ ನೀಡದಂತೆ ಎಸ್ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ರು. ಇನ್ನೂ ಇದನ್ನ ಆಲಿಸಿದ ನ್ಯಾಯಮೂರ್ತಿಗಳು,ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತ್ವರಿತ ವಿಚಾರಣೆಗೆ ಸಹಕರಿಸಿ ಅಂತ ಆರೋಪಿಗಳ ಪರ ವಕೀಲರಿಗೆ ಸೂಚನೆ ಕೊಟ್ರು.&lt;/p&gt;&lt;p&gt;ಇದಕ್ಕೆ ಒಪ್ಪಿಕೊಂಡ ದರ್ಶನ್ ಪರ ವಕೀಲರುಪ್ರಾಸಿಕ್ಯೂಷನ್ ಯಾವ 60 ಪ್ರಮುಖ ಸಾಕ್ಷಿಗಳನ್ನ ವಿಚಾರಣೆಗೆ ಕರೆಯಲು ಮುಂದಾಗಿದೆ ಎಂಬ ಪಟ್ಟಿ ನೀಡಲು ಕೇಳಿಕೊಂಡ್ರು. ವಾರದಲ್ಲಿ ನಾಲ್ಕು ದಿನ ವಿಚಾರಣೆಗೆ ಕೋರ್ಟ್ ಸಮ್ಮತಿ ಕೊಟ್ಟಿದೆ. ಅಗತ್ಯವಿದ್ದಲ್ಲಿ ಐದನೇ ದಿನದ ವಿಚಾರಣೆಗೂ ಸಿದ್ದವಿರಲು ವಕೀಲರಿಗೆ ಸೂಚನೆ ನೀಡಲಿದೆ. ವಾರಕ್ಕೆ ಕನಿಷ್ಠ ಇಬ್ಬರ ಸಾಕ್ಷಿಗಳ&zwnj; ವಿಚಾರಣೆ ತಿಂಗಳಿಗೆ ಕನಿಷ್ಠ 8 ಸಾಕ್ಷಿಗಳ ವಿಚಾರಣೆ ಮುಗಿಸಲು ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರಿಗೆ ಸೂಚನೆ ನೀಡಿದೆ.&lt;/p&gt;&lt;h2&gt;&lt;strong&gt;ಒಂದು ವರ್ಷದಲ್ಲಿ ಪ್ರಮುಖ ಹಂತಕ್ಕೆ ಬರಲಿದೆ ಕೇಸ್..!&lt;/strong&gt;&lt;/h2&gt;&lt;p&gt;ಹೌದು ಈ ಬೆಳವಣಿಗೆ ನೋಡ್ತಾ ಇದ್ರೆ ಒಂದು ಕಡೆಗೆ ದರ್ಶನ್ ನಿಟ್ಟುಸಿರು ಬಿಡಬಹುದು. ಯಾಕಂದರೆ ಸುಪ್ರೀಂ ಸೂಚನೆ ಅನುಸಾರ ಇನ್ನೊಂದು ವರ್ಷದಲ್ಲಿ ಈ ಕೇಸ್ ಪ್ರಮುಖ ಹಂತಕ್ಕೆ ಬರಲಿದೆ. ಆಗ ದರ್ಶನ್​ಗೆ ಬೇಲ್ ಸಿಗೋ ಸಾಧ್ಯತೆ ಇರುತ್ತೆ. ಆದ್ರೆ ಕೇಸ್ ಕೊನೆಯ ಹಂತಕ್ಕೆ ಬರೋದ್ರಿಂದ ಜಡ್ಜ್​​ಮೆಂಟ್ ಕೂಡ ಅಷ್ಟೇ ಬೇಗ ಬರುತ್ತೆ. ಸೋ ಒಂದು ವೇಳೆ ದರ್ಶನ್ ವಿರುದ್ದ ತೀರ್ಪು ಬಂದರೆ ಮತ್ತೆ ದರ್ಶನ್ ಜೈಲು ಸೇರಬೇಕಾಗುತ್ತೆ. ಅದ್ರಲ್ಲೂ ಕೋರ್ಟ್ ಶಿಕ್ಷೆ ಕೊಟ್ಟಷ್ಟು ವರ್ಷ ಪರ್ಮನೆಂಟ್ ಆಗಿ ಜೈಲು ಪಾಲಾಗಬೇಕಾಗುತ್ತೆ. ಸೋ ತ್ವರಿತ ವಿಚಾರಣೆ ಒಂದು ಕಡೆಗೆ ದರ್ಶನ್​ಗೆ ರಿಲೀಫ್ ತಂದರೂ, ಇನ್ನೊಂದು ಕಡೆಗೆ ಬೇಗ ತನ್ನ ವಿರುದ್ದ ತೀರ್ಪು ಬರುತ್ತಾ ಅನ್ನೋ ಢವ ಢವ ಕೂಡ ಶುರುವಾಗಿಬಿಟ್ಟಿದೆ..!&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/darshan-renukaswamy-case-update-court-orders-faster-hearing-gvd/articleshow-gb3i17p"/>
        </item>
        <item>
            <title><![CDATA[Controversy: ದರ್ಶನ್‌ಗಾಗಿ ಒಂಟಿ ಹೋರಾಟ: ಪತಿ, ಮಗನಿಗಾಗಿ ಧೈರ್ಯಲಕ್ಷ್ಮಿ ಆದ ವಿಜಯಲಕ್ಷ್ಮಿ!]]></title>
            <link>https://kannada.asianetnews.com/sandalwood/vijayalakshmi-darshan-fight-against-boss-movie-gvd/articleshow-gzsp0gf</link>
            <guid isPermaLink="true">https://kannada.asianetnews.com/sandalwood/vijayalakshmi-darshan-fight-against-boss-movie-gvd/articleshow-gzsp0gf</guid>
            <pubDate>Thu, 18 Jun 2026 16:22:22 +0530</pubDate>
            <description><![CDATA[&lt;p&gt;Cinema Hungama: ಸ್ಯಾಂಡಲ್&zwnj;ವುಡ್&zwnj; ಸುಲ್ತಾನನಾಗಿ ಮೆರೆದ ನಟ ದರ್ಶನ್ ಈಗ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಇದ್ದಾರೆ. ಆದರೆ, ಹೊರಗಡೆ ಅವರ ಬಿಡುಗಡೆಗಾಗಿ ಒಬ್ಬ ಒಂಟಿ ಮಹಿಳೆ ಅಹೋರಾತ್ರಿ ಹೋರಾಡ್ತಾ ಇದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd5rd3akz4zrcnfzz12hd9r,imgname-jvcj-1781779936361.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj; ಸುಲ್ತಾನನಾಗಿ ಮೆರೆದ ನಟ ದರ್ಶನ್ ಈಗ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಇದ್ದಾರೆ. ಆದರೆ, ಹೊರಗಡೆ ಅವರ ಬಿಡುಗಡೆಗಾಗಿ ಒಬ್ಬ ಒಂಟಿ ಮಹಿಳೆ ಅಹೋರಾತ್ರಿ ಹೋರಾಡ್ತಾ ಇದ್ದಾರೆ. ಅವರೇ ವಿಜಯಲಕ್ಷ್ಮಿ ದರ್ಶನ್. ಪತಿಯ ಬಿಡುಗಡೆಯ ಕಾನೂನು ಹೋರಾಟ ಒಂದು ಕಡೆಯಾದರೆ, ದರ್ಶನ್ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧದ ಹೋರಾಟ ಇನ್ನೊಂದು ಕಡೆ. ವಿಜಯಲಕ್ಷ್ಮಿ ಬದುಕು ಈಗ ಬರೀ ಹೋರಾಟದ ಕಣವಾಗಿಬಿಟ್ಟಿದೆ. ಸವಾಲುಗಳು ಒಬ್ಬ ಮನುಷ್ಯನನ್ನ ಎಷ್ಟು ಗಟ್ಟಿಗೊಳಿಸುತ್ತವೆ ಎಂಬುದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿನೇ ಸಾಕ್ಷಿ.&lt;/p&gt;&lt;p&gt;ದರ್ಶನ್ ಹೊರಗಿದ್ದಾಗ ತಾವಾಯ್ತು ತಮ್ಮ ಪಾಡಾಯ್ತು ಅಂತ ಇದ್ದವರು ವಿಜಯಲಕ್ಷ್ಮೀ. ಆದ್ರೆ ಪತಿ ದರ್ಶನ್ ಜೈಲು ಪಾಲಾದ ದಿನದಿಂದ ಹಿಡಿದು ಇಂದಿನವರೆಗೂ ವಿಜಯಲಕ್ಷ್ಮಿ ಧೃತಿಗೆಟ್ಟಿಲ್ಲ. ಪ್ರತಿ ಹೆಜ್ಜೆಯಲ್ಲೂ ಕಾನೂನಿನ ಹೋರಾಟ ನಡೆಸುತ್ತಿದ್ದಾರೆ. ಸುದೀರ್ಘ ಕಾನೂನು ಪ್ರಕ್ರಿಯೆ, ಕೋರ್ಟ್ ಕಚೇರಿ ಅಲೆದಾಟ, ವಕೀಲರ ಭೇಟಿ... ಹೀಗೆ ಪತಿಯನ್ನ ಮನೆಗೆ ಕರೆತರಲು ಈ ಹೆಣ್ಣುಮಗಳು ಪಡುತ್ತಿರುವ ಶ್ರಮ ಸಾಮಾನ್ಯದ್ದಲ್ಲ. ಜೈಲಿಗೆ ಆಗಾಗ ಭೇಟಿ ಕೊಡ್ತಾ, ಕುಗ್ಗಿ ಹೋಗಿರುವ ಪತಿಯನ್ನ ಸಂತೈಸೋದು. ಕೇಸ್​ ವಿಚಾರಕ್ಕೆ ಸಂಬಂಧ ಪಟ್ಟ ಕೆಲಸಗಳನ್ನ ನೋಡಿಕೊಳ್ಳೋದು. ಜೊತೆಗೆ ಮಗನನ್ನ ನೋಡಿಕೊಳ್ಳೋ ಹೊಣೆ ವಿಜಯಲಕ್ಷ್ಮೀ ಮೇಲಿದೆ.&lt;/p&gt;&lt;p&gt;ಇದೆಲ್ಲದರ ನಡುವೆ ದರ್ಶನ್ ಪರವಾಗಿ ಅಭಿಮಾನಿಗಳ ಜೊತೆಗೂ ವಿಜಯಲಕ್ಷ್ಮೀ ಟಚ್​​ನಲ್ಲಿ ಇದ್ದಾರೆ. ಕಳೆದ ಡಿಸೆಂಬರ್​ನಲ್ಲಿ ತೆರೆಕಂಡ ದರ್ಶನ್ ನಟನೆಯ ದಿ ಡೆವಿಲ್ ಚಿತ್ರವನ್ನ ಖುದ್ದು ವಿಜಯಲಕ್ಷ್ಮೀ ಪ್ರಚಾರ ಮಾಡಿದ್ರು. ಹೌದು ಕಷ್ಟದಲ್ಲಿದ್ದಾಗ ಕೈ ಹಿಡಿಯಬೇಕಾದವರೇ, ಆ ಕಷ್ಟವನ್ನ ಬಂಡವಾಳ ಮಾಡಿಕೊಳ್ಳಲು ನಿಂತರೆ ಹೇಗಿರುತ್ತೆ? ಸದ್ಯ ದರ್ಶನ್​ದೂ ಅದೇ ಪರಿಸ್ಥಿತಿ ಆಗಿದೆ. ರೇಣುಕಾಸ್ವಾಮಿ ಕೇಸ್​ನ ಹೋಲುವ ದೃಶ್ಯಗಳನ್ನ ಇಟ್ಟುಕೊಂಡು ಬಾಸ್ ಅನ್ನೋ ಹೆಸರಲ್ಲಿ ಸಿನಿಮಾ ಮಾಡಿದೆ ಒಂದು ಚಿತ್ರತಂಡ. ದರ್ಶನ್ ರನ್ನ ಫ್ಯಾನ್ಸ್ ಡಿ ಬಾಸ್ ಅಂತಾರೆ. ಅಂತೆಯೇ ಈ ಸಿನಿತಂಡದವರು ತಮ್ಮ ಸಿನಿಮಾಗೆ ಬಾಸ್ ಅಂತಲೇ ಹೆಸರಿಟ್ಟಿದ್ದಾರೆ.&lt;/p&gt;&lt;p&gt;ಟೀಸರ್​ನಲ್ಲಿರೋ ಸೀನ್ಸ್ ನೋಡ್ತಾ ಇದ್ರೆ ಇದು, ಯಾರ ಕಥೆ.. ಏನ್ ಕಥೆ ಅನ್ನೋದು ಚಿಕ್ಕಮಕ್ಕಳಿಗೂ ಅರ್ಥ ಆಗುತ್ತೆ. ಸದ್ಯ &lsquo;ಬಾಸ್' ಹೆಸರಿನಲ್ಲಿ ಚಿತ್ರ ಮಾಡಲು ಹೊರಟವರ ವಿರುದ್ಧ ವಿಜಯಲಕ್ಷ್ಮಿ ಯುದ್ಧ ಸಾರಿದ್ದಾರೆ. ದರ್ಶನ್ ಇಮೇಜ್ ಮತ್ತು ಅವರ ಪರಿಸ್ಥಿತಿಯನ್ನ ಬಳಸಿಕೊಂಡು ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವವರ ವಿರುದ್ಧ ವಿಜಯಲಕ್ಷ್ಮಿ ಕೆಂಡಾಮಂಡಲವಾಗಿದ್ದಾರೆ. ನಗರ ಸಿವಿಲ್ ನ್ಯಾಯಾಲಯ ಈ ಹಿಂದೆ ಬಾಸ್ ಚಿತ್ರದ ಬಿಡುಗಡೆಗೆ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನ ತೆರವುಗೊಳಿಸಿ ರಿಲೀಸ್​ಗೆ ಅವಕಾಶ ನೀಡಿತ್ತು. ಅದರ ಬೆನ್ನಲ್ಲೇ ಚಿತ್ರತಂಡ ಜೂನ್ 19ರಂದು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಸದ್ಯ ಹೈಕೋರ್ಟ್ ಮೆಟ್ಟಿಲೇರಿ ಇದರ ರಿಲೀಸ್ ನಿಲ್ಲಿಸೋದಕ್ಕೆ ವಿಜಯಲಕ್ಷ್ಮೀ ಸಜ್ಜಾಗಿದ್ದಾರೆ.&lt;/p&gt;&lt;h2&gt;&lt;strong&gt;ಪತಿ, ಮಗನಿಗಾಗಿ ಧೈರ್ಯಲಕ್ಷ್ಮಿ ಆದ ವಿಜಯಲಕ್ಷ್ಮಿ..!&lt;/strong&gt;&lt;/h2&gt;&lt;p&gt;ಹೌದು ಒಂದೆಡೆ ಕಾನೂನು ಸಮರ, ಇನ್ನೊಂದೆಡೆ ಚಿತ್ರರಂಗದ ಒಳಗಿನ ವಿರೋಧಿಗಳ ವಿರುದ್ಧದ ಹೋರಾಟ. ಆದರೆ ಇವೆಲ್ಲದರ ನಡುವೆ ವಿಜಯಲಕ್ಷ್ಮಿ ಒಬ್ಬ ತಾಯಿಯೂ ಹೌದು. ಮಗ ವಿನೀಶ್&zwnj;ನ ಭವಿಷ್ಯವನ್ನ ರೂಪಿಸುವ ದೊಡ್ಡ ಜವಾಬ್ದಾರಿಯೂ ಅವರ ಮೇಲಿದೆ. ಸಮಾಜದ ನೂರಾರು ಕಟು ಮಾತುಗಳು, ಹಿತಶತ್ರುಗಳ ಕುತಂತ್ರಗಳು... ಇಷ್ಟೆಲ್ಲಾ ಒತ್ತಡಗಳ ನಡುವೆಯೂ ವಿಜಯಲಕ್ಷ್ಮಿ ತನ್ನ ಮಗನಿಗಾಗಿ ಧೈರ್ಯಲಕ್ಷ್ಮಿ ಆಗಿದ್ದಾರೆ. ಮನೆಗೆ ಆಧಾರವಾಗಿದ್ದ ಪತಿ ದೂರವಿದ್ದರೂ, ತಾನೇ ಆಲದ ಮರದಂತೆ ಕುಟುಂಬವನ್ನ ಕಾಯ್ತಾ ಇದ್ದಾರೆ. ವಿಜಯಲಕ್ಷ್ಮಿ ಅವರ ಈ ತಾಳ್ಮೆ ಮತ್ತು ಧೈರ್ಯವನ್ನ ಕಂಡು ಈಕೆ ನಿಜಕ್ಕೂ ಧೈರ್ಯಲಕ್ಷ್ಮಿ ಅಂತಿದ್ದಾರೆ ಫ್ಯಾನ್ಸ್.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/vijayalakshmi-darshan-fight-against-boss-movie-gvd/articleshow-gzsp0gf"/>
        </item>
        <item>
            <title><![CDATA[Reels ಲೋಕದಲ್ಲಿ ಕಿಚ್ಚು ಹಚ್ಚಿದ ನಿವೇದಿತಾ ಗೌಡ-ಕಿಶನ್ ಜೋಡಿ: ವೈರಲ್ ಆಯ್ತು ರೊಮ್ಯಾಂಟಿಕ್ ಡ್ಯಾನ್ಸ್!]]></title>
            <link>https://kannada.asianetnews.com/gallery/tv-talk/niveditha-gowda-kishan-bilagali-hey-navile-reels-viral-video-gvd-pmo6df7</link>
            <guid isPermaLink="true">https://kannada.asianetnews.com/gallery/tv-talk/niveditha-gowda-kishan-bilagali-hey-navile-reels-viral-video-gvd-pmo6df7</guid>
            <pubDate>Thu, 18 Jun 2026 21:20:50 +0530</pubDate>
            <description><![CDATA[&lt;p&gt;Social Media Viral Video: ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ 'ಹೇ ನವಿಲೇ' ರೀಲ್ಸ್&zwnj;ನಲ್ಲಿ ನಿವೇದಿತಾ ಗೌಡ ಮತ್ತು ಕಿಶನ್ ಬಿಲಗಲಿ ಮನಮೋಹಕ ಹೆಜ್ಜೆ ಹಾಕಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdppaeegvqsrr4gp6098j48,imgname-fh-1781797693902.png" type="image/jpeg" height="390" width="690"/>
            <content:encoded><![CDATA[&lt;p&gt;Social Media Viral Video: ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ 'ಹೇ ನವಿಲೇ' ರೀಲ್ಸ್&zwnj;ನಲ್ಲಿ ನಿವೇದಿತಾ ಗೌಡ ಮತ್ತು ಕಿಶನ್ ಬಿಲಗಲಿ ಮನಮೋಹಕ ಹೆಜ್ಜೆ ಹಾಕಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ.&lt;/p&gt;&lt;img&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಡ್ಯಾನ್ಸರ್ ಕಿಶನ್ ಬಿಲಗಲಿ ತಮ್ಮ ವಿಭಿನ್ನ ಡ್ಯಾನ್ಸ್ ರೀಲ್ಸ್&zwnj;ಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.&lt;/p&gt;&lt;img&gt;&lt;p&gt;ನಟಿಯರೊಂದಿಗೆ ರೊಮ್ಯಾಂಟಿಕ್ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಯುವಜನರ ಮೆಚ್ಚುಗೆ ಪಡೆದಿರುವ ಕಿಶನ್, ಇದೀಗ ನಿವೇದಿತಾ ಗೌಡ ಜೊತೆಗಿನ ಹೊಸ ರೀಲ್ಸ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.&lt;/p&gt;&lt;img&gt;&lt;p&gt;'ಹೇ... ನವಿಲೇ' ಹಾಡಿಗೆ ನಿವೇದಿತಾ ಗೌಡ ಮತ್ತು ಕಿಶನ್ ಬಿಲಗಲಿ ಜೋಡಿಯಾಗಿ ಮನಮೋಹಕ ಹೆಜ್ಜೆ ಹಾಕಿದ್ದಾರೆ. ನವಿಲಿನ ಥೀಮ್ ಆಧಾರಿತ ಈ ವಿಡಿಯೋದಲ್ಲಿ ಇಬ್ಬರೂ ವಿಶೇಷ ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ.&lt;/p&gt;&lt;img&gt;&lt;p&gt;ನವಿಲುಗರಿಯಿಂದ ಪ್ರೇರಿತವಾದ ಕಾಸ್ಟ್ಯೂಮ್&zwnj;ನಲ್ಲಿ ನಿವೇದಿತಾ ಮಿಂಚಿದರೆ, ಕಿಶನ್ ಕೂಡ ನವಿಲಿನ ಬಣ್ಣಗಳ ಶೈಲಿಯಲ್ಲೇ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಸರಳವಾದರೂ ಆಕರ್ಷಕ ನೃತ್ಯ ಸಂಯೋಜನೆಯೊಂದಿಗೆ ಮೂಡಿಬಂದಿರುವ ಈ ರೀಲ್ಸ್&zwnj;ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;img&gt;&lt;p&gt;ಅಪ್&zwnj;ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿರುವ ವಿಡಿಯೋಗೆ ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್&zwnj;ಗಳು ಹರಿದುಬಂದಿವೆ. ಕಾಮೆಂಟ್ ವಿಭಾಗದಲ್ಲಿ ಫೈರ್ ಹಾಗೂ ಹಾರ್ಟ್ ಇಮೋಜಿಗಳ ಸುರಿಮಳೆಯೇ ಹರಿದಿದೆ.&lt;/p&gt;&lt;img&gt;&lt;p&gt;&quot;ಅಮೇಜಿಂಗ್&quot;, &quot;ಡ್ಯಾಶಿಂಗ್ ಜೋಡಿ&quot;, &quot;ಪರ್ಫೆಕ್ಟ್ ಕೆಮಿಸ್ಟ್ರಿ&quot; ಎಂಬ ಪ್ರತಿಕ್ರಿಯೆಗಳು ಹೆಚ್ಚಾಗಿ ಕಂಡುಬಂದಿವೆ. ಒಟ್ಟಾರೆ, ಕಿಶನ್ ಬಿಲಗಲಿ ಮತ್ತು ನಿವೇದಿತಾ ಗೌಡ ಅವರ ಈ ಹೊಸ ಡ್ಯಾನ್ಸ್ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ ನೆಟ್ಟಿಗರ ಮನ ಗೆಲ್ಲುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/tv-talk/niveditha-gowda-kishan-bilagali-hey-navile-reels-viral-video-gvd-pmo6df7"/>
        </item>
        <item>
            <title><![CDATA[ಪತಿ, ಮಕ್ಕಳ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಅಮೂಲ್ಯ]]></title>
            <link>https://kannada.asianetnews.com/gallery/sandalwood/actress-amulya-visits-tirupati-with-husband-and-family-rg7suk0</link>
            <guid isPermaLink="true">https://kannada.asianetnews.com/gallery/sandalwood/actress-amulya-visits-tirupati-with-husband-and-family-rg7suk0</guid>
            <pubDate>Thu, 18 Jun 2026 18:01:33 +0530</pubDate>
            <description><![CDATA[&lt;p&gt;ಗೋಲ್ಡನ್ ಬ್ಯೂಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಹಾಗೂ ಮಕ್ಕಳಾದ ಅಥರ್ವ್ ಮತ್ತು ಅಧವ್ ಜೊತೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ದರ್ಶನ ಪಡೆದು ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdbbt2mmcxmmfms4tqhzr5w,imgname-amulya-1781785815123.jpg" type="image/jpeg" height="390" width="690"/>
            <content:encoded><![CDATA[&lt;p&gt;ಗೋಲ್ಡನ್ ಬ್ಯೂಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಹಾಗೂ ಮಕ್ಕಳಾದ ಅಥರ್ವ್ ಮತ್ತು ಅಧವ್ ಜೊತೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ದರ್ಶನ ಪಡೆದು ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಅಮೂಲ್ಯ ಅವರು ಇತ್ತೀಚೆಗೆ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಪತಿ ಜಗದೀಶ್, ಮಕ್ಕಳು ಹಾಗೂ ಕುಟುಂಬ ಸದಸ್ಯರೊಂದಿಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.&lt;/p&gt;&lt;img&gt;&lt;p&gt;ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಪತಿ ಜೊತೆ ಅಲಿಪಿರಿ ಮೆಟ್ಟಿಲೇರಿ, ಕಾಲ್ನಡಿಗೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪತಿ ಜಗದೀಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಿಮ್ಮಪ್ಪನ ದರ್ಶನದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ದೇವಾಲಯದ ದರ್ಶನದ ಬಳಿಕ ಅಮೂಲ್ಯ ತಮ್ಮ ಕುಟುಂಬದ ಜೊತೆ ದೇಗುಲದ ಮುಂದೆ ನಿಂತು ತೆಗೆದಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿವೆ.ಅಮೂಲ್ಯ ಸಿಂಪಲ್ ಆಗಿ ಸೀರೆಯುಟ್ಟಿದ್ದರೆ, ಜಗದೀಶ್ ಪಂಚೆ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ..&lt;/p&gt;&lt;img&gt;&lt;p&gt;ಚಂದನವನದ ಸುಂದರಿ ಅಮೂಲ್ಯ ಮದುವೆಯ ನಂತರ ಸಿನಿಮಾಗಳಿಂದ ಸ್ವಲ್ಪ ದೂರ ಉಳಿದಿದ್ದಾರೆ. ಕುಟುಂಬ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಆಧವ್ ಮತ್ತು ಅಥರ್ವ್ ಎನ್ನುವ ಅವಳಿ ಮಕ್ಕಳ ತಾಯಿಯಾದ ಬಳಿಕ ನಟಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಶೀಘ್ರದಲ್ಲಿ ಸಿನಿಮಾಗೆ ಹಿಂದಿರುಗಲಿದ್ದಾರೆ.&lt;/p&gt;&lt;img&gt;&lt;p&gt;ಅಮೂಲ್ಯ ಅವರನ್ನು ಮತ್ತೆ ಬೆಳ್ಳಿ ಪರದೆಯಲ್ಲಿ ನೋಡಲು ವೀಕ್ಷಕರು ಕಾಯುತ್ತಿದ್ದು, ಕೆಲವು ಸಮಯಗಳ ಹಿಂದೆ ನಟಿ &lsquo;ಪಿಕಾಬೂ&rsquo; ಎನ್ನುವ ಹೊಸ ಸಿನಿಮಾದಲ್ಲಿ ನಟಿಸಿರುವುದಾಗಿ ತಿಳಿಸಿದ್ದರು. ಅಭಿಮಾನಿಗಳು ಸಖತ್ ಖುಷಿಯಾಗಿದ್ದರು. ಶ್ರೀರಾಮ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದಾರೆ ಫ್ಯಾನ್ಸ್.&lt;/p&gt;]]></content:encoded>
            <category>sandalwood</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/actress-amulya-visits-tirupati-with-husband-and-family-rg7suk0"/>
        </item>
        <item>
            <title><![CDATA[Sanvi Sudeep: ನನ್ನ ಮೈಮೇಲೆ ಟ್ಯಾಟೂ ಹಾಕ್ಕೊಳ್ಳೋದಕ್ಕೆ ಪರ್ಮಿಶನ್ ತಗೋಬೇಕಾ: ಸಾನ್ವಿ ಫುಲ್ ಫೈರ್!]]></title>
            <link>https://kannada.asianetnews.com/gallery/sandalwood/sanvi-sudeep-ganesha-tattoo-controversy-reply-to-trolls-gvd-t7viybb</link>
            <guid isPermaLink="true">https://kannada.asianetnews.com/gallery/sandalwood/sanvi-sudeep-ganesha-tattoo-controversy-reply-to-trolls-gvd-t7viybb</guid>
            <pubDate>Tue, 16 Jun 2026 22:28:13 +0530</pubDate>
            <description><![CDATA[&lt;p&gt;Ganesha Tattoo Controversy: ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡು ವಿವಾದಕ್ಕೆ ಕಾರಣರಾಗಿದ್ದ ಸುದೀಪ್&zwnj; ಪುತ್ರಿ, ಗಾಯಕಿ ಸಾನ್ವಿ ಸುದೀಪ್&zwnj; ಇದೀಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv8kw9z5fknntw9t2thgn7gj,imgname-jvj-1781626972133.png" type="image/jpeg" height="390" width="690"/>
            <content:encoded><![CDATA[&lt;p&gt;Ganesha Tattoo Controversy: ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡು ವಿವಾದಕ್ಕೆ ಕಾರಣರಾಗಿದ್ದ ಸುದೀಪ್&zwnj; ಪುತ್ರಿ, ಗಾಯಕಿ ಸಾನ್ವಿ ಸುದೀಪ್&zwnj; ಇದೀಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡು ವಿವಾದಕ್ಕೆ ಕಾರಣರಾಗಿದ್ದ ಸುದೀಪ್&zwnj; ಪುತ್ರಿ, ಗಾಯಕಿ ಸಾನ್ವಿ ಸುದೀಪ್&zwnj; ಇದೀಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. &lsquo;ನಿಮ್ಮಿಂದ ಪರ್ಮಿಶನ್&zwnj; ತಗೊಂಡು ನನ್ನ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಕಾ, ನನ್ನ ಪ್ರತೀ ನಿರ್ಧಾರಕ್ಕೂ ನಿಮ್ಮ ಅನುಮತಿ ಪಡೆಯಬೇಕಾ&rsquo; ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;&lsquo;ನೀವೇನೇ ಕಾಮೆಂಟ್&zwnj; ಮಾಡಿದರೂ ನಾನೇನೂ ಕೇರ್&zwnj; ಮಾಡಲ್ಲ, ಆದರೆ ನನ್ನೊಬ್ಬಳ ಬಗ್ಗೆ ಟ್ರೋಲ್&zwnj; ಮಾಡಲು ಅದೆಷ್ಟು ಎನರ್ಜಿ ವೇಸ್ಟ್ ಮಾಡುತ್ತಿದ್ದೀರಲ್ಲಾ, ಅದು ಶೋಚನೀಯ. ನೀವು ಜನರ ಗಮನ ಸೆಳೆಯಲು ಹೀಗೆಲ್ಲ ಮಾಡಿರಬಹುದು, ನಿಮ್ಮ ಆ ಆಸೆಯೂ ಈಡೇರಲಿ ಬಿಡಿ&rsquo; ಎಂದಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಸಾನ್ವಿ ತಂದೆ ಸುದೀಪ್&zwnj; ಅವರನ್ನು ಓಲ್ಡ್&zwnj; ಮ್ಯಾನ್&zwnj; ಅಂದಿದ್ದಕ್ಕೆ ಒಂದಿಷ್ಟು ಮಂದಿ ತಗಾದೆ ತೆಗೆದಿದ್ದರು. ಅದಕ್ಕೂ ಸಾನ್ವಿ ಪ್ರತಿಕ್ರಿಯೆ ನೀಡಿದ್ದಾರೆ. &lsquo;ನಾನು ಸುದೀಪ್&zwnj; ಮಗಳು. ನನ್ನ ಪಾಲಿಗೆ ಅವರು ಯಾವತ್ತೂ ಓಲ್ಡ್&zwnj; ಮ್ಯಾನ್&zwnj; ಆಗಿರುತ್ತಾರೆ. ದ್ವೇಷಿಸಲು ನಿಮಗೊಂದು ಸಣ್ಣ ಕಾರಣ ಸಿಕ್ಕರೂ ಸಾಕಾಗುತ್ತದೆ. ಆದರೆ ಹೀಗೆಲ್ಲ ಸಮಯ ವ್ಯರ್ಥ ಮಾಡುವ ಬದಲು ಒಳ್ಳೆ ಕೆಲಸಗಳಿಗೆ ನಿಮ್ಮ ಸಮಯ ವಿನಿಯೋಗಿಸಿ&rsquo; ಎಂದಿದ್ದಾರೆ.&lt;/p&gt;&lt;img&gt;&lt;p&gt;ಏನೂ ಸಾಧನೆ ಮಾಡದೇ ಎಷ್ಟೆಲ್ಲ ಮಾತಾಡ್ತಾಳೆ ಬ್ಲಾ ಬ್ಲಾ ಬ್ಲಾ ಅಂತೆಲ್ಲ ನೀವು ಹೇಳಬಹುದು, ನಿಮ್ಮ ಮಾತು ನಿಜವೇ. ಹಾಗೆಂದು ನೀವು ಹೇಳಿದ್ದೆಲ್ಲ ಕೇಳಿಕೊಂಡು ಇರಲಿಕ್ಕಾಗದು. ನೀವು ತೆರೆಯ ಹಿಂದೆ ಹೇಡಿಗಳ ಹಾಗೆ ಅವಿತು ಕುಳಿತು ನಮ್ಮ ಬಗ್ಗೆ ತೀರ್ಪು ಕೊಡುವವರಂತೆ ಮಾತನಾಡುತ್ತೀರಿ. ನಮ್ಮ ಬದುಕಿನ ಪ್ರತೀ ಸನ್ನಿವೇಶವನ್ನೂ ಇದೇ ರೀತಿ ನೋಡುತ್ತೀರಿ.&lt;/p&gt;&lt;img&gt;&lt;p&gt;ನಿಮ್ಮಿಂದಾಗಿ ಅಪ್ಪನ ಬರ್ತ್&zwnj;ಡೇಯನ್ನು ಆಚರಿಸಲು ಅಥವಾ ಆಪ್ತರ ಕೊನೆಯ ಕ್ಷಣಗಳಲ್ಲಿ ಭಾಗವಹಿಸಲು ನಮಗೆ ಸಾಧ್ಯವಾಗುವುದಿಲ್ಲ. ನಮ್ಮ ಕುಟುಂಬವನ್ನು ನಿಮ್ಮ ಮನರಂಜನೆಗೆ ಬಳಸಿಕೊಂಡಿದ್ದೀರಿ. ಸದಾ ತೀರ್ಪು ಕೊಡಲು ಕಾಯುತ್ತಿರುತ್ತೀರಿ. ನೀವ್ಯಾರು ಅಂತ ನನಗೆ ಗೊತ್ತಿಲ್ಲ ಅಂದುಕೊಳ್ಳಬೇಡಿ, ಅನೇಕ ಸಲ ನನ್ನ ಭೇಟಿಯಾಗಿದ್ದೀರಿ ಮತ್ತು ನಿಮ್ಮ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಕೇಳುತ್ತಿರುತ್ತೀರಿ. ಸೋ ಸ್ಯಾಡ್&zwnj; ಎಂದು ನೋವು ತೋಡಿಕೊಂಡಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/sanvi-sudeep-ganesha-tattoo-controversy-reply-to-trolls-gvd-t7viybb"/>
        </item>
        <item>
            <title><![CDATA[Bossಗೆ ಎದುರಾಯ್ತು ಮತ್ತೊಂದು ಸಂಕಷ್ಟ:  ಹೈಕೋರ್ಟ್​ ಮೆಟ್ಟಿಲೇರಿದ ದರ್ಶನ್​, ವಿಜಯಲಕ್ಷ್ಮಿ]]></title>
            <link>https://kannada.asianetnews.com/gallery/sandalwood/boss-movie-darshan-and-vijyalakshmi-petition-to-court-suc-u0oiqu0</link>
            <guid isPermaLink="true">https://kannada.asianetnews.com/gallery/sandalwood/boss-movie-darshan-and-vijyalakshmi-petition-to-court-suc-u0oiqu0</guid>
            <pubDate>Wed, 17 Jun 2026 13:22:12 +0530</pubDate>
            <description><![CDATA[&lt;p&gt;ವಿ. ಲವ ನಿರ್ದೇಶನದ 'ಬಾಸ್' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದ ಕಥೆಯು ನಟ ದರ್ಶನ್ ಅವರ ಪ್ರಕರಣವನ್ನು ಹೋಲುತ್ತದೆ ಎಂಬ ಕಾರಣಕ್ಕೆ, ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಚಿತ್ರದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva90ybg1cd5ky9k8jft9a48,imgname-boss-movie-1781682698608.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿ. ಲವ ನಿರ್ದೇಶನದ 'ಬಾಸ್' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದ ಕಥೆಯು ನಟ ದರ್ಶನ್ ಅವರ ಪ್ರಕರಣವನ್ನು ಹೋಲುತ್ತದೆ ಎಂಬ ಕಾರಣಕ್ಕೆ, ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಚಿತ್ರದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ನಾಡಿದ್ದು ಅರ್ಥಾತ್​ ಇದೇ 19ರಂದು ಬಿಡುಗಡೆಯಾಗಬೇಕಿದ್ದ ಬಾಸ್​ ಸಿನಿಮಾಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ವಿ. ಲವ ನಿರ್ದೇಶನದ Boss Movie ಆರಂಭದಿಂದಲೂ ವಿವಾದದ ಸುಳಿಯಲ್ಲಿಯೇ ಸಿಲುಕಿದ್ದು, ಬಿಡುಗಡೆಯ ಹೊತ್ತಿನಲ್ಲಿಯೇ ಮತ್ತೊಂದು ಸಂಕಷ್ಟ ಚಿತ್ರತಂಡಕ್ಕೆ ಎದುರಾಗಿದೆ.&lt;/p&gt;&lt;img&gt;&lt;p&gt;ಅದೇನೆಂದರೆ, ಈ ಚಿತ್ರದ ಬಿಡುಗಡೆಗೆ ಕೋರಿ ವಿಜಯಲಕ್ಷ್ಮಿ ಮತ್ತು ದರ್ಶನ್​ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಈ ಚಿತ್ರದ ಟೀಸರ್​ ಬಿಡುಗಡೆಯಾದಾಗಿನಿಂದಲೂ ಇದು ಗದ್ದಲ ಸೃಷ್ಟಿಸುತ್ತಲೇ ಇದೆ. ತನಿಷ್ ಶಿವಣ್ಣ ನಟನೆಯ ಈ ಚಿತ್ರದ ಟೀಸರ್ ಬಿಡುಗಡೆ ಆದ ದಿನದಿಂದಲೂ ವಿವಾದ ಶುರು ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ ಎಂಬುದನ್ನು ಟೀಸರ್​ನಲ್ಲಿ ಉಲ್ಲೇಖಿಸಲಾಗಿತ್ತು. ಟೀಸರ್ ನೋಡಿದರೆ ನಟ ದರ್ಶನ್ (Darshan) ಕೇಸ್ ರೀತಿಯೇ ಈ ಸಿನಿಮಾದ ಕಥೆ ಇದೆ ಎಂಬ ಅನುಮಾನ ಮೂಡುತ್ತದೆ. ಆ ಕಾರಣದಿಂದ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು &lsquo;ಬಾಸ್&rsquo; ಸಿನಿಮಾದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.&lt;/p&gt;&lt;img&gt;&lt;p&gt;ಈ ಮೊದಲು ಸೆಷನ್ಸ್ ಕೋರ್ಟ್​​ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು ಚಿತ್ರಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿ ಅವರ ಅರ್ಜಿ ವಜಾಗೊಂಡಿತು. ಅದರಿಂದ ಚಿತ್ರತಂಡ ಬಿಡುಗಡೆಗೆ ಸಿದ್ಧವಾಗಿರುವ ಬೆನ್ನಲ್ಲೇ ಮತ್ತೆ ಈಗ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಜೂನ್ 19ರಂದು ಸಿನಿಮಾ ರಿಲೀಸ್ ಎಂದು ಮಾಧ್ಯಮಗಳಲ್ಲಿ ಜಾಹೀರಾತು ಕೂಡ ನೀಡಲಾಗಿದ್ದು, ಈಗ ಸಂಕಷ್ಟ ಬಂದಿದೆ.&lt;/p&gt;&lt;img&gt;&lt;p&gt;ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ಪ್ರಮಾಣಪತ್ರ ಸಿಕ್ಕಿದೆ. ಯು/ಎ ಪ್ರಮಾಣಪತ್ರವನ್ನು ನೀಡಲಾಗಿದೆ. &lsquo;ಬಾಸ್&rsquo; ಸಿನಿಮಾದ ಬಿಡುಗಡೆಗೆ ಈ ಮೊದಲು ಸೆಷನ್ಸ್ ಕೋರ್ಟ್ ನೀಡಿದ್ದ ಅನುಮತಿಯನ್ನು ಈಗ ಹೈಕೋರ್ಟ್ ಎತ್ತಿ ಹಿಡಿಯುತ್ತಾ ಅಥವಾ ಚಿತ್ರಕ್ಕೆ ತಡೆ ನೀಡುತ್ತಾ ಎಂಬುದು ಗೊತ್ತಾಗಬೇಕಿದೆ.&lt;/p&gt;&lt;img&gt;&lt;p&gt;ಇದು ರೇಣುಕಾಸ್ವಾಮಿ ಕೊ*ಲೆ ಪ್ರಕರಣವನ್ನು (Renukaswamy Case) ಆಧರಿಸಿದ ಸಿನಿಮಾ ಎಂದೇ ಹೇಳಲಾಗುತ್ತಿತ್ತು. ಇದೀಗ ಈ ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆಯೇ ಮತ್ತೊಂದು ಕಾನೂನು ಬೆಳವಣಿಗೆ ನಡೆದಿದ್ದು, ಹೀಗಾಗಿ ಬಾಸ್ ಸಿನಿಮಾ ಬಿಡುಗಡೆ ಆಗುವುದು ಬಹುತೇಕ ಅನುಮಾನವಾಗಿದೆ.&lt;/p&gt;]]></content:encoded>
            <category>sandalwood</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/boss-movie-darshan-and-vijyalakshmi-petition-to-court-suc-u0oiqu0"/>
        </item>
        <item>
            <title><![CDATA[Snake Rescue: ಕೈಯಲ್ಲೇ ಹಾವು ಹಿಡಿದು ರಕ್ಷಿಸಿದ ನಟ ಜಗ್ಗೇಶ್: ನವರಸ ನಾಯಕನ ವಿಡಿಯೋ ವೈರಲ್!]]></title>
            <link>https://kannada.asianetnews.com/gallery/sandalwood/actor-jaggesh-rescues-snake-in-tumakuru-farm-viral-video-gvd-u5stguk</link>
            <guid isPermaLink="true">https://kannada.asianetnews.com/gallery/sandalwood/actor-jaggesh-rescues-snake-in-tumakuru-farm-viral-video-gvd-u5stguk</guid>
            <pubDate>Thu, 18 Jun 2026 20:38:52 +0530</pubDate>
            <description><![CDATA[&lt;p&gt;Actor Jaggesh: ತಮ್ಮ ತೋಟದಲ್ಲಿ ನೀರಿನ ತೊಟ್ಟಿಗೆ ಬಿದ್ದಿದ್ದ ಹಾವನ್ನು ನಟ ಜಗ್ಗೇಶ್ ರಕ್ಷಿಸಿದ್ದಾರೆ. ಈ ವಿಡಿಯೋವನ್ನು ಅವರು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdkwr1mnn3bv66e6vra16dh,imgname-k-1781794758708.png" type="image/jpeg" height="390" width="690"/>
            <content:encoded><![CDATA[&lt;p&gt;Actor Jaggesh: ತಮ್ಮ ತೋಟದಲ್ಲಿ ನೀರಿನ ತೊಟ್ಟಿಗೆ ಬಿದ್ದಿದ್ದ ಹಾವನ್ನು ನಟ ಜಗ್ಗೇಶ್ ರಕ್ಷಿಸಿದ್ದಾರೆ. ಈ ವಿಡಿಯೋವನ್ನು ಅವರು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;&lt;strong&gt;ತುಮಕೂರು (ಜೂ.18): &lt;/strong&gt;ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿರುವ ತಮ್ಮ ತೋಟದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಹಾವೊಂದನ್ನು ನಟ ಜಗ್ಗೇಶ್ ರಕ್ಷಿಸಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೋವನ್ನು ಅವರು ತಮ್ಮ ಇನ್&zwnj;ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ತೋಟದಲ್ಲಿರುವ ನೀರಿನ ತೊಟ್ಟಿಗೆ ಬಿದ್ದಿದ್ದ ಹಾವು ಹೊರಬರಲಾಗದೆ ಪರದಾಡುತ್ತಿತ್ತು. ಇದನ್ನು ಗಮನಿಸಿದ ಜಗ್ಗೇಶ್ ಸ್ವತಃ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿ, ಬಳಿಕ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಘಟನೆಯ ಬಗ್ಗೆ ಪೋಸ್ಟ್ ಮಾಡಿರುವ ಜಗ್ಗೇಶ್, &quot;ಕಾಕತಾಳೀಯ ಎಂಬಂತೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬಗ್ಗೆ ಮಾತನಾಡುತ್ತ ಕುಳಿತಿದ್ದ ವೇಳೆ ಈ ಹಾವು ಕಾಣಿಸಿತು. ನಂಬಿದವರ ಬಳಿ ದೇವರ ವಾಸ ಇರುತ್ತದೆ ಎನ್ನುವ ಭಾವನೆ ಮೂಡಿತು&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹಾವನ್ನು ರಕ್ಷಿಸಿ ಜೀವ ಉಳಿಸಿದ ಜಗ್ಗೇಶ್ ಅವರ ಮಾನವೀಯ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/actor-jaggesh-rescues-snake-in-tumakuru-farm-viral-video-gvd-u5stguk"/>
        </item>
        <item>
            <title><![CDATA[ಸೊಪ್ಪಿನ ಸಾರು, ರಾಗಿ ಮುದ್ದೆ ನೆನೆದು…. ಜಯಮ್ಮ ನಿಧನಕ್ಕೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ ಮಾನ್ಯಾ]]></title>
            <link>https://kannada.asianetnews.com/gallery/sandalwood/actress-manya-naidus-emotional-post-on-sri-muralis-mother-jayamma-ugdyhgk</link>
            <guid isPermaLink="true">https://kannada.asianetnews.com/gallery/sandalwood/actress-manya-naidus-emotional-post-on-sri-muralis-mother-jayamma-ugdyhgk</guid>
            <pubDate>Thu, 18 Jun 2026 12:39:13 +0530</pubDate>
            <description><![CDATA[&lt;p&gt;ಇತ್ತೀಚೆಗೆ ನಿಧನರಾದ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ ಅವರ ನಿಧನಕ್ಕೆ ನಟಿ ಮಾನ್ಯಾ ನಾಯ್ಡು ಸಂತಾಪ ಕೋರಿದ್ದು, ಅವರ ಜೊತೆಗಿನ ಫೋಟೊಗಳನ್ನು ಹಂಚಿಕೊಂಡು, ಅವರೊಂದಿಗೆ ಕಳೆದ ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ ಶಂಭು ನಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcrta3kgpe1tcf877vjwp9x,imgname-manya-naidu1-1781766367346.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ ನಿಧನರಾದ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ ಅವರ ನಿಧನಕ್ಕೆ ನಟಿ ಮಾನ್ಯಾ ನಾಯ್ಡು ಸಂತಾಪ ಕೋರಿದ್ದು, ಅವರ ಜೊತೆಗಿನ ಫೋಟೊಗಳನ್ನು ಹಂಚಿಕೊಂಡು, ಅವರೊಂದಿಗೆ ಕಳೆದ ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ ಶಂಭು ನಟಿ.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ಶ್ರೀಮುರಳಿ ಮತ್ತು ವಿಜಯ್ ರಾಘವೇಂದ್ರ ಅವರ ತಾಯಿ ಜಯಮ್ಮ ಚಿನ್ನೇಗೌಡ ಇತ್ತೀಚೆಗೆ ನಿಧನರಾಗಿದ್ದು, ಅವರ ನಿಧನಕ್ಕೆ ನಟಿ ಮಾನ್ಯಾ ನಾಯ್ಡು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ನಟಿ ಮಾನ್ಯಾ ನಾಯ್ಡು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಜಯಮ್ಮ ಹಾಗೂ ಶ್ರೀಮುರಳಿ ಕುಟುಂಬದ ಜೊತೆಗಿನ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದು, ಅದರ ಜೊತೆಗೆ ಅವರೊಂದಿಗೆ ಕಳೆದ ಸಮಯ, ಅವರು ತೋರಿದ ಪ್ರೀತಿ ಹಾಗೂ ಅವರು ಮಾಡಿಕೊಟ್ಟ ಆಹಾರವನ್ನು ಸಹ ನೆನಪಿಸಿಕೊಂಡು ಭಾವುಕರಾಗಿದ್ದಾರೆ.&lt;/p&gt;&lt;img&gt;&lt;p&gt;&quot;ಪ್ರೀತಿಯ ಅಮ್ಮಾ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.ನಿಮ್ಮನ್ನು ಮತ್ತು ನಿಮ್ಮ ಸುಂದರ ನಗುವನ್ನು ನಾವು ಸದಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಶಂಭು ಸಿನಿಮಾ ಸಂದರ್ಭವನ್ನೂ ಸಹ ನೆನಪಿಸಿಕೊಂಡಿದ್ದಾರೆ ಮಾನ್ಯಾ.&lt;/p&gt;&lt;img&gt;&lt;p&gt;ಮಾನ್ಯಾ ಶ್ರೀಮುರಳಿ ಜೊತೆ 'ಶಂಭು' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿರುವ ಮಾನ್ಯ, &quot;ನಾನು ಇನ್ನೂ ಆ ಸೊಪ್ಪಿನ ಸಾರು ಮತ್ತು ರಾಗಿ ಮುದ್ದೆಯನ್ನು ನೆನಪಿಸಿಕೊಳ್ಳುತ್ತೇನೆ. ಶಂಭು ಚಿತ್ರದ ಶೂಟಿಂಗ್ ವೇಳೆ ನೀವು ಪ್ರೀತಿಯಿಂದ ಲೊಕೇಶನ್&zwnj;ಗೆ ಕಳುಹಿಸುತ್ತಿದ್ದ ಆ ಊಟವನ್ನು ಮರೆಯಲು ಸಾಧ್ಯವಿಲ್ಲ&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಲ್ಲದೆ ಚಿನ್ನೇಗೌಡ, ಶ್ರೀಮುರಳಿ, ವಿದ್ಯಾ, ಪ್ರಿನ್ಸ್, ಅವ ತಲ್ಲಿ, ರಾಗು, ಶೌರ್ಯ ಸೇರಿದಂತೆ ಇಡೀ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಮಾನ್ಯಾ, ಈ ದುಃಖದ ಸಂದರ್ಭದಲ್ಲಿ ದೇವರು ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಮಾನ್ಯಾ ಅವರ ಈ ಪೋಸ್ಟ್&zwnj;ಗೆ ಅಭಿಮಾನಿಗಳು ಮತ್ತು ಸಿನಿರಂಗದ ಹಲವರು ಪ್ರತಿಕ್ರಿಯೆ ನೀಡಿ ಜಯಮ್ಮ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ನಟಿ ಮಾನ್ಯಾ ನಾಯ್ಡು ಶ್ರೀಮುರಳಿ ಜೊತೆ &lsquo;ಶಂಭು&rsquo;ಸಿನಿಮಾದಲ್ಲಿ 20 ವರ್ಷಗಳ ಹಿಂದೆ ನಟಿಸಿದ್ದರು. ಅಂದಿನಿಂದ ಇಲ್ಲಿವರೆಗೆ ಶ್ರೀಮುರಳಿ ಕುಟುಂಬದ ಜೊತೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ಸದ್ಯ ಸಿನಿಮಾ ಬಿಟ್ಟು ನ್ಯೂಯಾರ್ಕ್ ನಲ್ಲಿ ನೆಲೆಸಿರುವ ನಟಿ ಭಾರತಕ್ಕೆ ಬಂದಾಗ ಶ್ರೀಮುರಳಿ ಕುಟುಂಬವನ್ನು ಭೇಟಿಯಾಗುತ್ತಿರುತ್ತಾರೆ.&lt;/p&gt;]]></content:encoded>
            <category>sandalwood</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/actress-manya-naidus-emotional-post-on-sri-muralis-mother-jayamma-ugdyhgk"/>
        </item>
        <item>
            <title><![CDATA[Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ]]></title>
            <link>https://kannada.asianetnews.com/sandalwood/sandalwood-movie-updates-8-glimpse-oorabba-trailer-boys-never-compromise-teaser-gvd-videoshow-vzwec5o</link>
            <guid isPermaLink="true">https://kannada.asianetnews.com/sandalwood/sandalwood-movie-updates-8-glimpse-oorabba-trailer-boys-never-compromise-teaser-gvd-videoshow-vzwec5o</guid>
            <pubDate>Tue, 16 Jun 2026 19:21:30 +0530</pubDate>
            <description><![CDATA[&lt;p&gt;Sandalwood Movie Updates: ಈಗ ಮದುವೆ ಸೀಸನ್ ಮುಗಿದಿದೆ. ಇದೀಗ ಸ್ಯಾಂಡಲ್​ವುಡ್​​ನಲ್ಲಿ ನಾಗುಗೆ ವಧು ಬೇಕಾಗಿದೆ ಅನ್ನೋ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಹಾಡುಗಳು ಹಾಡು ಟ್ರೈಲರ್ ರಿಲೀಸ್ ಆಗಿದೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xag5acm" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಹುಟ್ಟುಹಬ್ಬಕ್ಕೆ '8' ಚಿತ್ರ ಗ್ಲಿಂಪ್ಸ್ ರಿಲೀಸ್: &lt;/strong&gt;ಉದ್ಯಮಿ ಅರವಿಂದ್​ ವೆಂಕಟೇಶ್​ ರೆಡ್ಡಿ ಈಗ ಸ್ಯಾಂಡಲ್​ವುಡ್​ಗು ಎಂಟ್ರಿ ಕೊಟ್ಟಿದ್ದಾರೆ. ಅರವಿಂದ್ ವೆಂಕಟೇಶ್ ರೆಡ್ಡಿ ಜನ್ಮದಿನದ ವಿಶೇಷ ಅಂಗವಾಗಿ, AVR Entertainment ಬ್ಯಾನರ್​​ನಲ್ಲಿ ನಿರ್ಮಾಣ ಆಗುತ್ತಿರೋ ಬಹು ನಿರೀಕ್ಷಿತ &lsquo;8&rsquo;ದ ವಿಶೇಷ ಗ್ಲಿಂಪ್ಸ್​ ರಿಲೀಸ್ ಆಗಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ನಟ ಅನುರಾಗ್ ಕಶ್ಯಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೀವನದಲ್ಲಿ ದೊರೆಯುವ ಎರಡನೇ ಅವಕಾಶ ಎಂಬ ಗಂಭೀರವಾದ ವಿಷಯವನ್ನು 8 ಸಿನಿಮಾದಲ್ಲಿ ಹೇಳಲಾಗ್ತಿದೆ. 8 ಸಿನಿಮಾದ ಶೂಟಿಂಗ್ ಕೂಡ ಮುಗಿದಿದ್ದು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.&lt;/p&gt;&lt;p&gt;&lt;strong&gt;&quot;ನಾಗುಗೆ ವಧು ಬೇಕಾಗಿದೆ&quot; ಹಾಡು, ಟ್ರೇಲರ್ ಬಿಡುಗಡೆ: &lt;/strong&gt;ಈಗ ಮದುವೆ ಸೀಸನ್ ಮುಗಿದಿದೆ. ಇದೀಗ ಸ್ಯಾಂಡಲ್​ವುಡ್​​ನಲ್ಲಿ ನಾಗುಗೆ ವಧು ಬೇಕಾಗಿದೆ ಅನ್ನೋ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಹಾಡುಗಳು ಹಾಡು ಟ್ರೈಲರ್ ರಿಲೀಸ್ ಆಗಿದೆ. ಈಗ ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಇದಕ್ಕೆ ಕಾರಣಗಳು ಹಲವಾರು. ಇಂತಹ ಪ್ರಸ್ತುತ ಪರಿಸ್ಥಿತಿಯನ್ನಿಟ್ಟುಕೊಂಡು ನಿರ್ದೇಶಕ ಆರ್ ಕೆ &quot;ನಾಗುಗೆ ವಧು ಬೇಕಾಗಿದೆ&quot; ಸಿನಿಮಾ ಮಾಡಿದ್ದಾರೆ. ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಟ್ರೇಲರ್ ಹಾಗೂ ಹಾಡುಗಳನ್ನು ಅನಾವರಣ ಮಾಡಿದ್ದಾರೆ. ಚಿತ್ರದಲ್ಲಿ ದತ್ತು ಪೂಜಾರಿ, ರೇಖಾದಾಸ್, ಅಪೂರ್ವ ಶ್ರೀ, ಸೋನಿಕಾ ಸೋಮಣ್ಣ ನಟಿಸಿದ್ದಾರೆ.&lt;/p&gt;&lt;p&gt;&lt;strong&gt;ಭಾಯ್ಸ್ ನೆವರ್ ಕಾಂಪ್ರಮೈಸ್ ಟೀಸರ್ ಬಿಡುಗಡೆ: &lt;/strong&gt;ಈ ಹಿಂದೆ ಜಸ್ಟ್ ಮದ್ವೇಲಿ, ರಾಜಣ್ಣನ ಮಗ ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಜಲಗೆರೆ ಅವರು &amp;nbsp;ಇದೀಗ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. 'ಬಾಯ್ಸ್ ನೆವರ್ ಕಾಂಪ್ರಮೈಸ್'ಎಂಬ ಚಿತ್ರಕ್ಕೆ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಚಿತ್ರದಲ್ಲಿ ಸಾಮ್ರಾಟ್, ನಕ್ಷತ್ರ, ಸುಪ್ರಿತ್ ಕಾಟಿ, ಸೀತಾರಾಮ, ಮಂಡ್ಯಸಿದ್ದು, ರಾಜೀವ್ ರೆಡ್ಡಿ, ಉಮೇಶ್ ಕಿನ್ನಾಳ, ಗಜೇಂದ್ರ, ಹೇಮಂತ್ ಗೌಡ, ರಾಜರಾಜ ಚೋಳ ಸೇರಿದಂತೆ ಬಹುತೇಕ ಹೊಸ ಮುಖಗಳೇ ಬಣ್ಣ ಹಚ್ಚಿದ್ದಾರೆ. ಮಾರಿ ಗೋಲ್ಡ್ ಸ್ಡುಡಿಯೋಸ್ ಮೂಲಕ ಉಜ್ವಲ ನಾಗರಾಜ ಜಲಗೆರೆ ಚಿತ್ರ ನಿರ್ಮಿಸಿದ್ದಾರೆ.&lt;/p&gt;&lt;p&gt;&lt;strong&gt;ಸ್ಯಾಂಡಲ್​ವುಡ್​​ನಲ್ಲಿ ಶುರುವಾಗುತ್ತಿದೆ ದೊಡ್ಡ &quot;ಊರಬ್ಬ&quot;: &lt;/strong&gt;ಮಾಗಡಿ ತಾಲ್ಲೂಕಿನ ಸುಪ್ರಸಿದ್ದ ಉಜ್ಜಿನಿ ಚೌಡೇಶ್ವರಿ ಜಾತ್ರೆ, ಅದರ ಹಿನ್ನೆಲೆಯಲ್ಲಿ ನಡೆಯುವ ಕಥೆ ಇಟ್ಟುಕೊಂಡು ನಿರ್ದೇಶಕ ಲಕ್ಕಿ ಶಂಕರ್ &amp;nbsp;&quot;ಊರಬ್ಬ&quot; ಎಂಬ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಇದೀಗ ಊರಬ್ಬ ಸಿನಿಮಾದ ಟ್ರೈಲರ್​ ಬಿಡುಗಡೆ ಆಗಿದೆ. ಒನ್ಸ್ ಮೋರ್ ಕೌರವ ಖ್ಯಾತಿಯ ನರೇಶ್ ಗೌಡ, ತನಿಷಾ ಕುಪ್ಪಂಡ, ಪಾಯಲ್ ಚಂಗಪ್ಪ, ಸಿದ್ದು ಮೂಲಿಮನಿ ಮಿತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕುಣಿಗಲ್ ಶಾಸಕ ರಂಗನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಟ್ರೈಲರ್ ಲಾಚ್ ಮಾಡಿ ಶುಭ ಹಾರೈಸಿದ್ದಾರೆ. ಚಿತ್ರಕ್ಕೆ ನರೇಶ್ ಗೌಡ ಬಂಡವಾಳ ಹೂಡಿದ್ದಾರೆ.&lt;/p&gt;]]></content:encoded>
            <category>sandalwood</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/sandalwood-movie-updates-8-glimpse-oorabba-trailer-boys-never-compromise-teaser-gvd-videoshow-vzwec5o"/>
        </item>
        <item>
            <title><![CDATA[ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?]]></title>
            <link>https://kannada.asianetnews.com/entertainment/darshan-case-enquiry-is-in-fast-track-now-and-it-will-finish-with-in-one-year-as-the-sources-are-concerned-videoshow-x7oea0p</link>
            <guid isPermaLink="true">https://kannada.asianetnews.com/entertainment/darshan-case-enquiry-is-in-fast-track-now-and-it-will-finish-with-in-one-year-as-the-sources-are-concerned-videoshow-x7oea0p</guid>
            <pubDate>Wed, 17 Jun 2026 17:02:20 +0530</pubDate>
            <description><![CDATA[&lt;p&gt;ಕೊಲೆ ಆರೋಪ ಹೊತ್ತು ಜೈಲು ಸೇರಿರೋ ಸ್ಯಾಂಡಲ್&zwnj;ವುಡ್ ನಟ ದರ್ಶನ್ ಪ್ರಕರಣದ ವಿಚಾರಣೆಯಲ್ಲಿ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ! ಇಷ್ಟು ದಿನ ಆಮೆಗತಿಯಲ್ಲಿ ಸಾಗ್ತಾ ಇದ್ದ ಕೇಸ್, ಈಗ ಸೂಪರ್ ಫಾಸ್ಟ್ ಟ್ರ್ಯಾಕ್ ಏರಿದೆ. ಹೌದು, ದರ್ಶನ್ ಭವಿಷ್ಯ ನಿರ್ಧಾರವಾಗುವ ದಿನಗಳು ಹತ್ತಿರ ಬರುತ್ತಿವೆ. ಏನಾಗಲಿದೆ ಮುಂದೆ?&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xagcsje" medium="video" height="768" width="1024"/>
            <content:encoded><![CDATA[&lt;p&gt;ಏನಾಗಲಿದೆ ದರ್ಶನ್ ಭವಿಷ್ಯ..? ಆತಂಕದಲ್ಲಿ ಫ್ಯಾನ್ಸ್..!ಕೊಲೆ ಆರೋಪ ಹೊತ್ತು ಜೈಲು ಸೇರಿರೋ ಸ್ಯಾಂಡಲ್&zwnj;ವುಡ್ ನಟ ದರ್ಶನ್ ಪ್ರಕರಣದ ವಿಚಾರಣೆಯಲ್ಲಿ ಈಗ &amp;nbsp;ಬಿಗ್ ಟ್ವಿಸ್ಟ್ ಸಿಕ್ಕಿದೆ! ಇಷ್ಟು ದಿನ ಆಮೆಗತಿಯಲ್ಲಿ ಸಾಗ್ತಾ ಇದ್ದ &amp;nbsp;ಕೇಸ್, ಈಗ ಸೂಪರ್ ಫಾಸ್ಟ್ ಟ್ರ್ಯಾಕ್ ಏರಿದೆ. ಹೌದು, ದರ್ಶನ್ ಭವಿಷ್ಯ ನಿರ್ಧಾರವಾಗುವ ದಿನಗಳು ಹತ್ತಿರ ಬರುತ್ತಿವೆ. ಕೋರ್ಟ್ ಅಂಗಳದಲ್ಲಿ ನಡೆದಿರೋ ಆ ಮಹತ್ವದ ಬೆಳವಣಿಗೆಯಾದರೂ ಏನು? ನೋಡೋಣ ಬನ್ನಿ.&lt;/p&gt;&lt;p&gt;ಒಂದು ವರ್ಷದಲ್ಲಿ ಪ್ರಮುಖ ಹಂತಕ್ಕೆ ದಾಸನ ಕೇಸ್..!ದರ್ಶನ್&zwnj;ಗೆ ಸಿಕ್ಕೋದು ಬೇಲಾ..? ಪರ್ಮನೆಂಟ್ ಜೈಲಾ..?ಸಿಸಿಹೆಚ್-59 ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಮೇಲೆ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆಗೆ ವೇಗ ಸಿಕ್ಕಿದೆ. ಸೋಮವಾರ ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ. ಈ ವೇಳೆ ಪ್ರಾಸಿಕ್ಯೂಶನ್ ಮತ್ತು ದರ್ಶನ್ ಪರ ವಕೀಲರು ಕೋರ್ಟ್ ಮುಂದೆ ಹಲವು ಮನವಿ ಸಲ್ಲಿಸಿದ್ದಾರೆ. ಕೋರ್ಟ್ ಕೂಡ ಈಗ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇನ್ಮುಂದೆ ಈ ಕೇಸ್ ವಿಚಾರಣೆ ಮಿಂಚಿನ ವೇಗದಲ್ಲಿ ಸಾಗಲಿದೆ.ಹಾಗಿದ್ದರೆ ಏನಾಗ್ತಿದೆ ದರ್ಶನ್ ಕೇಸ್&zwnj; ಬೆಳವಣಿಗೆ? ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..&lt;/p&gt;]]></content:encoded>
            <category>sandalwood</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/darshan-case-enquiry-is-in-fast-track-now-and-it-will-finish-with-in-one-year-as-the-sources-are-concerned-videoshow-x7oea0p"/>
        </item>
        <item>
            <title><![CDATA[Bigg Boss Gilli Nata Debut Sandalwood Hero: ಕೆವಿಎನ್ ಪ್ರೊಡಕ್ಷನ್ ಸಿನಿಮಾಗೆ ಹೀರೋ ಆದ 'ಗಿಲ್ಲಿ ನಟ'!]]></title>
            <link>https://kannada.asianetnews.com/gallery/tv-talk/gilli-nata-turns-hero-with-sreeleela-kvn-productions-to-back-the-bigg-boss-winner-s-debut-film-sat-zodfgdh</link>
            <guid isPermaLink="true">https://kannada.asianetnews.com/gallery/tv-talk/gilli-nata-turns-hero-with-sreeleela-kvn-productions-to-back-the-bigg-boss-winner-s-debut-film-sat-zodfgdh</guid>
            <pubDate>Tue, 16 Jun 2026 20:16:07 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಹಾಸ್ಯನಟ ಗಿಲ್ಲಿ ನಟ ಇದೀಗ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಡಿಯೋ ಮೂಲಕ ಘೋಷಣೆ ಮಾಡಲಾಗಿದೆ. ಚಿತ್ರದ ಮುಹೂರ್ತವು ಜೂನ್ 21 ರಂದು ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv8dpc4mkke64skxfjy1ctm3,imgname-bigg-boss-gilli-nata-hero-debew-sandalwood-1781620486292.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಹಾಸ್ಯನಟ ಗಿಲ್ಲಿ ನಟ ಇದೀಗ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಡಿಯೋ ಮೂಲಕ ಘೋಷಣೆ ಮಾಡಲಾಗಿದೆ. ಚಿತ್ರದ ಮುಹೂರ್ತವು ಜೂನ್ 21 ರಂದು ನಡೆಯಲಿದೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ಸೀಸನ್ 12ರ ವಿಜೇತ ಹಾಸ್ಯನಟ ನಟರಾಜ್ ಅಲಿಯಾಸ್ ಗಿಲ್ಲಿ ನಟ ಅವರು ಇದೀಗ ತಾವು ಬೆಂಗಳೂರಿಗೆ ಬಂದಿದ್ದ ಕನಸನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಸಿನಿಮಾದಲ್ಲಿ ನಾಯಕ ನಟನಾಗಿ ಅವಕಾಶ ಸಿಕ್ಕಿದ್ದು, ಇದೇ ಜೂ.21ರಂದು ಗಿಲ್ಲಿ ಟವರ ಜನ್ಮದಿನದಂದೇ ಸಿನಿಮಾ ಮುಹೂರ್ತ ಇಟ್ಟುಕೊಳ್ಳಲಾಗಿದೆ.&amp;nbsp;&lt;/p&gt;&lt;p&gt;ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಪ್ರೊಡಕ್ಷನ್ ಸಂಸ್ಥೆಯಾದ ಹಾಗೂ ವಿವಿಧ ಭಾಷೆಗಳಲ್ಲಿ ನೂರಾರು ಕೋಟಿ ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡುವ ಕೆವಿಎನ್ ಪ್ರೊಡಕ್ಷನ್ ಗಿಲ್ಲಿ ನಟನೆಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.&lt;/p&gt;&lt;img&gt;&lt;p&gt;ನಿನ್ನೆಯೇ ನಾಳೆ ಸಂಜೆ ಒಂದು ದೊಡ್ಡ ಘೋಷಣೆ ಮಾಡುವುದಾಗಿ ಗಿಲ್ಲಿನಟ ಮುನ್ಸೂಚನೆ ನೀಡಿದ್ದರು. ಅದರಂತೆ ಇಂದು ಸಂಜೆ ಒಂದು ಹಾಸ್ಯ ವಿಡಿಯೋ ಗಿಲ್ಲಿ ನಟ ಸಿನಿಮಾಗೆ ನಾಯಕನಾಗಿ ಆಯ್ಕೆಯಾಗಿದ್ದು, ಸದ್ಯಕ್ಕೆ ಪ್ಯಾನ್ ಇಂಡಿಯಾ ನಟಿ ಶ್ರೀಲೀಲಾ ಅವರನ್ನು ಹೀರೋಯಿನ್ ಆಗಿ ಸೆಲೆಕ್ಟ್ ಮಾಡಲಾಗಿದೆ. ಈ ಬಗ್ಗೆ ವಿಡಿಯೋದಲ್ಲಿ ನಡೆದ ಸಂಭಾಷಣೆಯ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ನನಗೆ 2028ರವರೆಗೆ ಬಿಟ್ಟುಬಿಡಿ ಸರ್. ಆಲ್&zwnj; ದಿ ಬೆಸ್ಟ್ ಎಂದು ಪ್ರೊಡೂಸರ್ ಅವರು ಹೇಳುತ್ತಾರೆ. ನೀವು ಪದೇಪದೆ ಫೋನ್&zwnj; ಮಾಡಿ ತೊಂದರೆ ಕೊಡ್ತಿದ್ದರೆ ನಾನು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಫಾರಿನ್&zwnj;ಗೆ ಹೋಗಿ ಬಿಡ್ತೀನಿ. ಊಟಿ, ಕೊಡೈಕೆನಾಲ್&zwnj;ಗೆ ಹೋಗ್ತೇನೆ ಎಂದು ಸಿಟ್ಟಿನಿಂದಲೇ ಗಿಲ್ಲಿನಟ ಫೋನ್ ಕಟ್ ಮಾಡ್ತಾರೆ. ಆಗ ಎಲ್ಲಿಗೆ ಬಂದ ಡೈರೆಕ್ಟರ್, ಪ್ರೊಡೂಸರ್ ಅವರು ಗಿಲ್ಲಿ ನಟ ಅವರಿಗೆ ಕಂಗ್ರಾಟ್ಸ್ ಹೇಳುತ್ತಾ ನೀವು ಹೀರೋ ಎಂದು ಮಾತು ಆರಂಭಿಸುತ್ತಾರೆ.&lt;/p&gt;&lt;img&gt;&lt;p&gt;ಆಗ ಗಿಲ್ಲಿಗೆ ಆಶ್ಚರ್ಯವಾಗಿ ನೀವು ತಪ್ಪಾದ ಅಡ್ರೆಸ್&zwnj;ಗೆ ಬಂದಿಲ್ಲವಲ್ಲಾ ಎಂದು ಕೇಳುತ್ತಾರೆ. ಆಗ ನಾವೆಲ್ಲರೂ ಮಾತನಾಡಿಕೊಂಡೇ ನಿಮ್ಮನ್ನ ಹೀರೋ ಮಾಡುವುದಕ್ಕೆ ಸಿದ್ಧವಾಗಿ ಬಂದಿದ್ದೇವೆ ಎಂದು ಹೇಳುತ್ತಾರೆ. ಆಗ ಮನಸ್ಸಿನಲ್ಲಿ ಗಿಲ್ಲಿನಟ ಖುಷಿಪಡುತ್ತಾ, ಹೌದು, ನಾನು ಇತ್ತೀಚೆಗೆ ಜಿಮ್&zwnj;ಗೆಲ್ಲಾ ಹೋಗಿ ಫಿಟ್ ಆಗಿದ್ದೀನಿ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾರೆ.&amp;nbsp;&lt;/p&gt;&lt;img&gt;&lt;p&gt;ಮುಂದುವರೆದು, ನನಗೆ ಹೀರೋಯಿನ್ ಯಾರು ಸರ್ ಎಂದು ಗಿಲ್ಲಿ ಕೇಳಿದಾಗ ನಿರ್ದೇಶಕರು ಹಾಗೂ ಪ್ರೊಡೂಸರ್ ಅವರು ಶ್ರೀಲೀಲಾ ಅವರ ಫೋಟೋ ತೋರಿಸುತ್ತಾರೆ. ಆಗ ಡೈರೆಕ್ಟರ್ ನಿಮಗೆ ಆಸೆ ಪಡುವುದಕ್ಕೂ ಒಂದು ಮಿತಿ ಇಲ್ಲವೇ ಬೇರೆ ಫೋಟೋ ಇದೆ ಎಂದು ಹೇಳುತ್ತಾರೆ. ಆದರೆ ಅದನ್ನು ನೋಡಲಾಗುವುದಿಲ್ಲ. ಇದರ ಅರ್ಥ ಸದ್ಯಕ್ಕೆ ಶ್ರೀಲೀಲಾ ಹೀರೋಯಿನ್ ಅನ್ನುವುದು ಖಚಿತವಾಗುತ್ತಿದೆ.&lt;/p&gt;&lt;img&gt;&lt;p&gt;ನಿರ್ದೇಶಕರು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಣ ಎಂದು ಹೇಳುತ್ತಾರೆ. ಆಗ ಗಿಲ್ಲಿ ನಟ ಪ್ಯಾನ್ ಇಂಡಿಯಾ ಸಿನಿಮಾ ಬೇಡ, ಪ್ಯಾನ್ ಕರ್ನಾಟಕ ಸಿನಿಮಾ ಮಾಡೋಣ 4 ಭಾಷೆಗಳಲ್ಲಿ ಎಂದು ಗಿಲ್ಲಿ ನಟ ನಿರ್ದೆಶಕರಿಗೆ ಸಲಹೆ ನೀಡುತ್ತಾರೆ. ಆಗ ಕರ್ನಾಟಕದಲ್ಲಿ ಯಾವ ನಾಲ್ಕು ಭಾಷೆಗಳಿವೆ ಎಂದು ಕೇಳಿದಾಗ ಮಂಡ್ಯ, ಮಂಗಳೂರು, ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಷೆಗಳನ್ನು ಹೇಳುತ್ತಾರೆ.&lt;/p&gt;&lt;img&gt;&lt;p&gt;ಮುಂದುವರೆದು, ಪಾರ್ಟ್&zwnj; 2ಕ್ಕೆ ಪ್ಯಾನ್ ಡಿಸ್ಟ್ರಿಕ್ಟ್, ಪ್ಯಾನ್ ತಾಲೂಕು ಮತ್ತು ಪ್ಯಾನ್ ಪಂಚಾಯಿತಿ ಮಟ್ಟದಲ್ಲಿ ಸಿನಿಮಾ ಮಾಡೋಣ ಎಂದು ಗಿಲ್ಲಿನಟ ಸಲಹೆ ಕೊಡುತ್ತಾರೆ. ಆಗ ಪ್ರೊಡೂಸರ್ ನೀವು ಸೂಪರ್ ಟ್ಯಾಲೆಂಟ್ ಸರ್ ಎಂದು ಹೇಳುತ್ತಾರೆ. ಆದರೆ, ನಿರ್ದೇಶಕರು ಯಾಕಾದರೂ ಇವರು ಇಂತಹ ಕೆಟ್ಟ ಸಲಹೆ ಕೊಡ್ತಾರೆ ಎಂದು ಪೇಚಾಡುತ್ತಾರೆ.&lt;/p&gt;&lt;img&gt;&lt;p&gt;ಶೂಟಿಂಗ್ ಎಲ್ಲಿ ಎಂದು ಕೇಳಿದಾಗ ನಿರ್ದೇಶಕರು, ರಾಮನಗರ, ಚನ್ನಪಟ್ಟಣದಲ್ಲಿ ಸಿನಿಮಾ ಶೂಟಿಂಗ್ ಮಾಡೋಣ ಎಂದು ಹೇಳುತ್ತಾರೆ. ಆಗ ಗಿಲ್ಲಿನಟ ಫಾರಿನ್&zwnj;ಗೆ ಹೋಗೋಣ ಎನ್ನುತ್ತಾರೆ. ಡೈರೆಕ್ಟರ್ ಅವರು ಬೇರೆ ದೇಶದವರಿಗೆ ನಮ್ಮ ದೇಶ ಫಾರಿನ್ ಆಗುತ್ತಲ್ವಾ ಸರ್, ಇಲ್ಲಿಯೇ ಶೂಟಿಂಗ್ ಮಾಡೋಣ ಎಂದು ಗಿಲ್ಲಿ ಹೇಳಿದ ಪಾಯಿಂಟ್&zwnj; ಅನ್ನು ವಾಪಸ್ ಹೇಳಿ ಟಾಂಗ್ ಕೊಡ್ತಾರೆ. ಆಗ ಎಷ್ಟು ಸಂಭಾವನೆ ಕೊಡಬೇಕು ಎಂದು ಕೇಳುತ್ತಾರೆ.&lt;/p&gt;&lt;img&gt;&lt;p&gt;ಆಗ ದನಗಳ ವ್ಯಾಪಾರವನ್ನು ಮಾಡುವಾಗ ದಲ್ಲಾಳಿಗಳು ಕೈ ಮೇಲೆ ಸೋಫಾ ಕವರ್ ಮುಚ್ಚಿಕೊಂಡು ಹಾಕಿಕೊಂಡು ರೇಟ್ ಕುದುರಿಸುವ ರೀತಿಯಲ್ಲಿ ಗಿಲ್ಲಿಗೆ ಕೊಡುವ ಸಂಭಾವನೆ ಹಣದ ಬಗ್ಗೆ ಮಾತನಾಡುತ್ತಿರುತ್ತಾರೆ.&lt;/p&gt;&lt;img&gt;&lt;p&gt;ಇನ್ನೇನು ಚರ್ಚೆ ಜೋರಾಗಿ ನಡೆಯುತ್ತಿದೆ ಎನ್ನುವಾಗ ಗಿಲ್ಲಿಯ ಮನೆಯವರು ಬಂದು ಅವರ ಕೈಮೇಲಿದ್ದ ಸೋಫಾ ಕವರ್ ಅನ್ನು ತೆಗದು, ಗಾಳಿಗೆ ಬಂದು ಇಲ್ಲಿಗೆ ಬಿದ್ದಿರಬೇಕು ಎಂದು ತೆಗೆದು ಪಕ್ಕಕ್ಕೆ ಇಡುತ್ತಾರೆ. ಕೊನೆಗೆ, ಗಿಲ್ಲಿನಟ ಒಂದಷ್ಟು ಸಂಭಾವನೆಗೆ ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಇದಾದ ನಂತರ ನಾನು ಹೀರೋ ಆಗ್ತೀನಿ ಎನ್ನೋದನ್ನು ಹೊರಗೆ ಯಾರಿಗೂ ಹೇಳಬೇಡಿ ಎಂದು ಡೈರೆಕ್ಟರ್&zwnj;ಗೆ ಹೇಳುತ್ತಾರೆ. ಯಾವಾಗ ಮುಹೂರ್ತ ಎಂದು ಚರ್ಚೆ ಮಾಡುವಾಗ ಇದೇ ವೇಳೆ ಜೂ.21 ಗಿಲ್ಲಿನಟ ನನ್ನ ಬರ್ತಡೇ ಎಂದು ಹೇಳುತ್ತಾರೆ. ಆಗ ಅದೇ ದಿನಾಂಕಕ್ಕೆ ಸಿನಿಮಾ ಮುಹೂರ್ತ ಇಟ್ಟುಕೊಳ್ಳೋಣ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಈ ಚರ್ಚೆ ಮುಗಿದ ನಂತರ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಗೆ ಹೋಗಿ ಸಿನಿಮಾ ಮಾಡುವುದಕ್ಕೆ ಹಾಗೂ ಮುಹೂರ್ತಕ್ಕೆ ಎಲ್ಲರೂ ಚರ್ಚೆ ಮಾಡಿ ಶುಭಾಶಯ ಕೋರುತ್ತಾರೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಈಗಾಗಲೇ ಸಿನಿಮಾಗಳಿಗೆ ನೂರಾರು ಕೋಟಿಬಂಡವಾಳವನ್ನು ಹೂಡಿಕೆ ಮಾಡಿ ಪ್ಯಾನ್ ಇಂಡಿಯಾ ಮತ್ತು ಪ್ಯಾನ್ ವರ್ಲ್ಡ್&zwnj; ಲೆವೆಲ್&zwnj;ನಲ್ಲಿ ಹೆಸರು ಮಾಡಿದೆ. ಇದೀಗ ಗಿಲ್ಲಿ ನಟನಿಗೆ ಪ್ರೊಡಕ್ಷನ್ ಒಪ್ಪಿಕೊಂಡಿರುವುದು ಗಿಲ್ಲಿಯ ಟ್ಯಾಲೆಂಟ್&zwnj;ಗೆ ಹಿಡಿದ ಕನ್ನಡಿಯಾಗಿದೆ.&lt;/p&gt;&lt;p&gt;&lt;strong&gt;ವಿಡಿಯೋ ನೋಡಲು&lt;/strong&gt;&lt;strong&gt; ಈ ಲಿಂಕ್ ಕ್ಲಿಕ್ ಮಾಡಿ.&lt;/strong&gt;&lt;/p&gt;]]></content:encoded>
            <category>sandalwood</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/gilli-nata-turns-hero-with-sreeleela-kvn-productions-to-back-the-bigg-boss-winner-s-debut-film-sat-zodfgdh"/>
        </item>
    </channel>
</rss>
