<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 27 May 2026 22:59:58 +0530</lastBuildDate>
        <atom:link href="https://kannada.asianetnews.com/rss/relationship" rel="self" type="application/rss+xml"/>
        <item>
            <title><![CDATA[ಒಂದು ವರ್ಷ ಕೈ-ಕೈ ಹಿಡಿದು ಪ್ರೀತಿಸಿ ಮದುವೆಯಾದ ಹೆಂಡತಿ, 12 ದಿನದ ಬಳಿಕ 'ಗಂಡಸು' ಎಂಬ ಸತ್ಯ ಹೊರಬಿತ್ತು!]]></title>
            <link>https://kannada.asianetnews.com/relationship/indonesia-marriage-scam-young-man-disguised-as-woman-viral-news-sat/articleshow-00vuouc</link>
            <guid isPermaLink="true">https://kannada.asianetnews.com/relationship/indonesia-marriage-scam-young-man-disguised-as-woman-viral-news-sat/articleshow-00vuouc</guid>
            <pubDate>Mon, 25 May 2026 15:07:52 +0530</pubDate>
            <description><![CDATA[&lt;p&gt;ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವಕನಿಗೆ, 12 ದಿನಗಳ ನಂತರ ತನ್ನ ಪತ್ನಿ ಹೆಣ್ಣಲ್ಲ, ಬದಲಾಗಿ ಆಸ್ತಿಗಾಗಿ ವಂಚಿಸಲು ಬಂದ ಪುರುಷ ಎಂಬ ಆಘಾತಕಾರಿ ಸತ್ಯ ತಿಳಿದುಬಂದಿದೆ. ಒಂದು ವರ್ಷದ ಪ್ರೀತಿಯ ನಾಟಕ ಎಲ್ಲೆಡೆ ಚರ್ಚೆಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksf7x2bxg7mdt1sxv7hb98st,imgname-indonesia-marriage-scam-1779701811581.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರೀತಿ ಕುರುಡು ಎನ್ನುವ ಮಾತಿದೆ, ಆದರೆ ಇಲ್ಲೊಬ್ಬ ಯುವಕನ ಪ್ರೀತಿ ಅವನನ್ನೇ ದಾರಿ ತಪ್ಪಿಸಿ ಅಕ್ಷರಶಃ ಪಂಗನಾಮ ಹಾಕಿದೆ. ಒಂದು ವರ್ಷ ಕಾಲ ಪ್ರೀತಿಸಿ, ಸಂಪ್ರದಾಯಬದ್ಧವಾಗಿ ಮದುವೆಯಾದ 12 ದಿನಗಳ ನಂತರ, ತನ್ನ ಪತ್ನಿ ಹೆಣ್ಣಲ್ಲ ಬದಲಾಗಿ ಗಂಡು ಎಂಬ ಆಘಾತಕಾರಿ ಸತ್ಯ ಪತಿಗೆ ತಿಳಿದುಬಂದಿದೆ. ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ನಡೆದ ಈ ಘಟನೆ ಈಗ ವಿಶ್ವದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಪ್ರೀತಿ:&lt;/strong&gt;&lt;/h3&gt;&lt;p&gt;ಇಂಡೋನೇಷ್ಯಾದ ನಾರಿಂಗುಲ್ ನಿವಾಸಿಯಾಗಿರುವ 26 ವರ್ಷದ ಯುವಕ (ಹೆಸರು ಎಕೆ - AK), 2023 ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ 'ಅದಿನಾ ಕನ್ಜಾ' ಎಂಬ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಸುಮಾರು ಒಂದು ವರ್ಷ ಕಾಲ ಇಬ್ಬರೂ ಪರಸ್ಪರ ಭೇಟಿಯಾಗುತ್ತಿದ್ದರು. ಆದರೆ, ಪ್ರತಿ ಬಾರಿ ಭೇಟಿಯಾದಾಗಲೂ ಅದಿನಾ ಕನ್ಜಾ ಮುಖವನ್ನು ಪೂರ್ತಿಯಾಗಿ ಮುಚ್ಚುವ ಮುಸ್ಲಿಂ ಸಂಪ್ರದಾಯದ 'ನಿಕಾಬ್' ಧರಿಸುತ್ತಿದ್ದಳು. ತಾನು ಧರ್ಮನಿಷ್ಠ ಮಹಿಳೆಯಾದ್ದರಿಂದ ಮುಖ ತೋರಿಸುವುದಿಲ್ಲ ಎಂದು ಅವಳು ಹೇಳಿದಾಗ, ಎಕೆ ಅದನ್ನು ಗೌರವದಿಂದ ಒಪ್ಪಿಕೊಂಡಿದ್ದನು.&lt;/p&gt;&lt;h2&gt;&lt;strong&gt;ಸರಳ ವಿವಾಹ:&lt;/strong&gt;&lt;/h2&gt;&lt;p&gt;ಒಂದು ವರ್ಷದ ಪ್ರೀತಿಯ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಮದುವೆಯ ಮಾತುಕತೆ ಬಂದಾಗ, ತನಗೆ ಯಾರೂ ಕುಟುಂಬದವರಿಲ್ಲ, ತಾನೊಬ್ಬ ಅನಾಥೆ ಎಂದು ಅದಿನಾ ಕನ್ಜಾ ನಂಬಿಸಿದ್ದಳು. ಈ ಕಾರಣದಿಂದಾಗಿ ಏಪ್ರಿಲ್ 12 ರಂದು ಎಕೆ ಅವರ ಮನೆಯಲ್ಲೇ ಅತ್ಯಂತ ಸರಳವಾಗಿ ಮದುವೆ ಸಮಾರಂಭ ನಡೆಯಿತು. ಮದುವೆಯ ನಂತರವೂ ಅದಿನಾ ತನ್ನ ನಿಕಾಬ್ (ಹಿಜಾಬ್) ತೆಗೆಯಲು ನಿರಾಕರಿಸುತ್ತಿದ್ದಳು.&lt;/p&gt;&lt;p&gt;&lt;strong&gt;ಅನುಮಾನ ಮೂಡಿದ್ದು ಹೇಗೆ?&lt;/strong&gt;&lt;/p&gt;&lt;h3&gt;ಮದುವೆಯಾದ 12 ದಿನಗಳ ಕಾಲ ಅದಿನಾ ಪತಿಯ ಕುಟುಂಬದವರೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದಳು ಮತ್ತು ಮನೆಯಲ್ಲೂ ಮುಖವನ್ನು ಮುಚ್ಚಿಕೊಂಡೇ ಇರುತ್ತಿದ್ದಳು. ಇದರಿಂದ ಅನುಮಾನಗೊಂಡ ಎಕೆ, ಅವಳ ಹಿನ್ನೆಲೆಯನ್ನು ಹುಡುಕುತ್ತಾ ಅವಳು ಹೇಳಿದ್ದ ಹಳೆಯ ವಿಳಾಸಕ್ಕೆ ಹೋದಾಗ ಆಘಾತಕಾರಿ ಸತ್ಯಗಳು ಹೊರಬಂದವು. ಅದಿನಾ ಹೇಳಿದಂತೆ ಅವಳು ಅನಾಥೆಯಲ್ಲ, ಅವಳ ತಂದೆ-ತಾಯಿ ಇಬ್ಬರೂ ಬದುಕಿದ್ದರು!&lt;/h3&gt;&lt;h2&gt;&lt;strong&gt;ಅದಿನಾ ಅಸಲಿಗೆ ವೇಷ ಮರೆಸಿಕೊಂಡ ಪುರುಷ:&lt;/strong&gt;&lt;/h2&gt;&lt;p&gt;ಎಕೆ ತನ್ನ ಪತ್ನಿಯ ಪೋಷಕರನ್ನು ಭೇಟಿಯಾದಾಗ, ಅವರಿಗೆ ತಮ್ಮ ಮಗನ ಮದುವೆಯ ಬಗ್ಗೆ ಕಿಂಚಿತ್ತೂ ಸುಳಿವಿರಲಿಲ್ಲ. ತನಿಖೆಯ ನಂತರ ತಿಳಿದುಬಂದ ವಿಷಯವೇನೆಂದರೆ, ಅದಿನಾ ಕನ್ಜಾ ಎಂಬ ಹೆಸರಿನಲ್ಲಿ ಎಕೆ ಜೊತೆ ಸಂಸಾರ ಮಾಡುತ್ತಿದ್ದವಳು ಹೆಣ್ಣಲ್ಲ, ಬದಲಾಗಿ 2020 ರಿಂದ ಹೆಣ್ಣಿನ ವೇಷ ಧರಿಸುತ್ತಿದ್ದ 'ಇಎಸ್ ಹೆಚ್' ಎಂಬ ವೇಷ ಮರೆಸಿಕೊಂಡ ಪುರುಷ ಎಂಬುದು ಪತ್ತೆಯಾಗಿದೆ.&lt;/p&gt;&lt;h3&gt;&lt;strong&gt;ವಂಚನೆಯ ಉದ್ದೇಶ:&lt;/strong&gt;&lt;/h3&gt;&lt;p&gt;ತಕ್ಷಣ ಪೊಲೀಸರಿಗೆ ದೂರು ನೀಡಿದಾಗ, ಪುರುಷ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಎಕೆ ಕುಟುಂಬದ ಆಸ್ತಿಯನ್ನು ಲೂಟಿ ಮಾಡುವ ಉದ್ದೇಶದಿಂದ ತಾನು ಹೆಣ್ಣಿನ ವೇಷ ಧರಿಸಿ ಪ್ರೀತಿಯ ನಾಟಕವಾಡಿ ಮದುವೆಯಾಗಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ವರ್ಷ ಕಾಲ ಜೊತೆಯಲ್ಲಿದ್ದರೂ ತನ್ನ ಸಂಗಾತಿ ಗಂಡು ಎಂಬುದನ್ನು ಪತ್ತೆಹಚ್ಚಲು ಎಕೆಗೆ ಸಾಧ್ಯವಾಗದಿರುವುದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>relationship</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/indonesia-marriage-scam-young-man-disguised-as-woman-viral-news-sat/articleshow-00vuouc"/>
        </item>
        <item>
            <title><![CDATA[ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕೊಲೆಗಾರ ವೈದ್ಯ ಗಂಡನ ರಹಸ್ಯ ಬಯಲು ಮಾಡಿದ 6 ಸಾಕ್ಷಿಗಳಿವು!]]></title>
            <link>https://kannada.asianetnews.com/gallery/karnataka-districts/bengaluru-dr-kruthika-reddy-murder-case-husband-doctor-mahendra-reddy-uses-propofol-overdose-to-murder-wife-gdp-0tclagv</link>
            <guid isPermaLink="true">https://kannada.asianetnews.com/gallery/karnataka-districts/bengaluru-dr-kruthika-reddy-murder-case-husband-doctor-mahendra-reddy-uses-propofol-overdose-to-murder-wife-gdp-0tclagv</guid>
            <pubDate>Tue, 26 May 2026 13:49:41 +0530</pubDate>
            <description><![CDATA[&lt;p&gt;ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ, ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ ಅರಿವಳಿಕೆ ಔಷಧಿಯ ಅಧಿಕ ಡೋಸ್ ನೀಡಿ ಕೊಲೆ ಮಾಡಿದ್ದಾನೆ. ಪರಸ್ತ್ರೀ ಸಂಬಂಧದ ಹಿನ್ನೆಲೆಯಲ್ಲಿ, ಗೂಗಲ್&zwnj;ನಲ್ಲಿ ಕೊಲೆಗೆ ಸಂಚು ರೂಪಿಸಿದ್ದು, ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k97ysy91j13t5bnb9p3t5ar8,imgname-bengaluru-doctor-murder-case-1762277521697.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ, ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ ಅರಿವಳಿಕೆ ಔಷಧಿಯ ಅಧಿಕ ಡೋಸ್ ನೀಡಿ ಕೊಲೆ ಮಾಡಿದ್ದಾನೆ. ಪರಸ್ತ್ರೀ ಸಂಬಂಧದ ಹಿನ್ನೆಲೆಯಲ್ಲಿ, ಗೂಗಲ್&zwnj;ನಲ್ಲಿ ಕೊಲೆಗೆ ಸಂಚು ರೂಪಿಸಿದ್ದು, ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಸಿಲಿಕಾನ್ ಸಿಟಿಯ ಮಾರತ್ತಹಳ್ಳಿಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಡಾಕ್ಟರ್ ಕೃತಿಕಾ ರೆಡ್ಡಿ ಅವರ ಸಾವು ಸಾಮಾನ್ಯ ಸಾವಲ್ಲ, ಬದಲಿಗೆ ಆಕೆಯ ಪತಿ, ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ನಡೆಸಿದ ವ್ಯವಸ್ಥಿತ ಕೊಲೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್&zwnj;ಎಸ್&zwnj;ಎಲ್ (FSL) ವರದಿ ಬಳಿಕ ಈ ಪ್ರಕರಣದ ದಿಕ್ಕು ಬದಲಾಯಿತು. ಕೃತಿಕಾ ಮೃತಪಟ್ಟ ನಂತರವೂ ಮಹೇಂದ್ರ ರೆಡ್ಡಿ ಮೊಬೈಲ್&zwnj;ನಲ್ಲಿ ಚಾಟ್ ಮಾಡುತ್ತಿದ್ದುದು ಮತ್ತು ಪೇ-ಟಿಎಂ ಬಳಸುತ್ತಿದ್ದುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಯಿತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಪುರಾವೆಗಳು ಲಭ್ಯವಾಗಿದೆ.&lt;/p&gt;&lt;img&gt;&lt;p&gt;ಮನೆಯಲ್ಲೇ ಪತ್ನಿಗೆ ಚಿಕಿತ್ಸೆ ನೀಡುವ ನೆಪವೊಡ್ಡಿ, ಇಂಟ್ರಾವೀನಸ್ (IV) ಮೂಲಕ ಅತಿಯಾದ ಡೋಸ್ ಅರವಳಿಕೆ (ಅನಸ್ತೇಶಿಯಾ) ನೀಡಿ ಈತ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಸದ್ಯ ಮರತ್&zwnj;ಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ನ್ಯಾಯಾಲಯಕ್ಕೆ 1200 ಪುಟಗಳ ಬೃಹತ್ ಚಾರ್ಜ್&zwnj;ಶೀಟ್ ಸಲ್ಲಿಸಿದ್ದಾರೆ. ಸೆಷನ್ಸ್ ನ್ಯಾಯಾಲಯವು ಈಗಾಗಲೇ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇದೀಗ ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣ ಕೊಲೆಗೆ ಡಾ ಮಹೇಂದ್ರ ನಿಂದ ಖತರ್ನಾಕ್ ಪ್ಲಾನ್ ಬಹಿರಂಗವಾಗಿದೆ.&lt;/p&gt;&lt;img&gt;&lt;p&gt;ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿಯನ್ನು ಕೊಲ್ಲಲು ಇಂಟರ್ನೆಟ್ ಅನ್ನು ಹೇಗೆ ಬಳಸಿಕೊಂಡಿದ್ದ ಎಂಬ ಆಘಾತಕಾರಿ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಔಷಧಿ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದ ಮಹೇಂದ್ರ ರೆಡ್ಡಿ ಕೇವಲ ಆಪರೇಷನ್ ಥಿಯೇಟರ್&zwnj;ನಲ್ಲಿ ಮಾತ್ರ ಕಟ್ಟುನಿಟ್ಟಾಗಿ ಬಳಸಬೇಕಾಗಿದ್ದ 'ಪ್ರೊಪೋಫಾಲ್' (Propofol) ಎಂಬ ಅರವಳಿಕೆ ಔಷಧಿಯನ್ನು ತಾನು ವೈದ್ಯನೆಂಬ ಕಾರಣಕ್ಕೆ ಸುಲಭವಾಗಿ ಖರೀದಿಸಿದ್ದ.&lt;/p&gt;&lt;img&gt;&lt;p&gt;ಈ ಔಷಧಿ ಹೇಗೆ ಕೆಲಸ ಮಾಡುತ್ತದೆ? ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀಡಬೇಕು? ಮತ್ತು ಎಷ್ಟು ದಿನಗಳ ಕಾಲ ನಿರಂತರವಾಗಿ ನೀಡಿದರೆ ವ್ಯಕ್ತಿ ಸಾವನ್ನಪ್ಪುತ್ತಾನೆ? ಎಂಬುದರ ಬಗ್ಗೆ ಈತ ಗೂಗಲ್&zwnj;ನಲ್ಲಿ ತೀವ್ರವಾಗಿ ಸರ್ಚ್ ಮಾಡಿದ್ದ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ. ಕೇವಲ ಆಪರೇಷನ್ ಥಿಯೇಟರ್&zwnj;ನಲ್ಲಿ ಮಾತ್ರ ಬಳಸಬೇಕಾಗಿದ್ದ ಆ ಅನಸ್ತೇಶಿಯಾವನ್ನು ಓವರ್ ಡೋಸೇಜ್ ನಲ್ಲಿ ಮನೆಯಲ್ಲೇ ಪತ್ನಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಕೊಟ್ಟಿದ್ದ&lt;/p&gt;&lt;img&gt;&lt;p&gt;ಕೃತಿಕಾ ಅವರ ದೇಹದ ತೂಕಕ್ಕೆ ಕೇವಲ 7 ರಿಂದ 8 ಎಂಎಲ್ (ML) ಅನಸ್ತೇಶಿಯಾ ನೀಡಬೇಕಿತ್ತು. ಆದರೆ ಮಹೇಂದ್ರ ರೆಡ್ಡಿ ಗೂಗಲ್ ನಲ್ಲಿ ಆತ ಪಡೆದ ಮಾಹಿತಿಯ ಆಧಾರದ ಮೇಲೆ ಆಕೆಗೆ ಬರೋಬ್ಬರಿ 15 ಎಂಎಲ್&zwnj;ನಷ್ಟು ಅತಿಯಾದ ಡೋಸ್ ನೀಡಿ ಉಸಿರುಗಟ್ಟುವಂತೆ ಮಾಡಿ ಕೊಂದಿದ್ದಾನೆ. ಬಳಿಕ ಆತ ತನ್ನ ಪ್ರಿಯತಮೆಗೆ &quot;ನಾನೇ ಆಕೆಯನ್ನು ಕೊಂದಿದ್ದೇನೆ&quot; ಎಂದು ಒಪ್ಪಿಕೊಂಡಿರುವ ವಾಟ್ಸಾಪ್ ಸಂದೇಶ ಪತ್ತೆಯಾಗಿದೆ.&lt;/p&gt;&lt;img&gt;&lt;p&gt;ಆರಂಭದಲ್ಲಿ ಇದನ್ನು ಕಾಯಿಲೆಯಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಮಹೇಂದ್ರ ರೆಡ್ಡಿ ಪ್ರಯತ್ನಿಸಿದ್ದ. ಆದರೆ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಗಳು ಪ್ರಕರಣದ ದಿಕ್ಕನ್ನೇ ಬದಲಿಸಿದವು. ಪೊಲೀಸರು ಕಲೆಹಾಕಿದ ಪ್ರಮುಖ ಸಾಕ್ಷಿಗಳು ಹೀಗಿವೆ:&lt;/p&gt;&lt;p&gt;1. ಫ್ರೋಫಾಪಾಲ್ ಖರೀದಿ ಮಾಡಿದ್ದಕ್ಕೆ ಸಾಕ್ಷಿ ಪತ್ತೆ&lt;/p&gt;&lt;p&gt;2. ಇಂಜೆಕ್ಷನ್ ಕೊಟ್ಟಿದ್ದಕ್ಕೆ ಕ್ಯಾನ್ ಮತ್ತು ಮೃತ ದೇಹದಲ್ಲಿ ಅರವಳಿಕೆ ಅಂಶ ಪತ್ತೆ&lt;/p&gt;&lt;p&gt;3. ಮೊಬೈಲ್ ನಲ್ಲಿ ಕೊಲೆ ಮಾಡಿದ ಬಳಿಕ ಓರ್ವರಿಗೆ ಚಾಟ್ ಮಾಡಿದ್ದ&lt;/p&gt;&lt;p&gt;4. ಚಾಟ್ ಮಾಡಿದ್ದು ಡೇಟಾರ ರೀಟ್ರೀವ್ ವೇಳೆ ಪತ್ತೆ&lt;/p&gt;&lt;p&gt;5. ತಾನೇ ಕೊಂದಿರೋದಾಗಿ ಪ್ರಿಯತಮೆಗೆ ಮೆಸೇಜ್&lt;/p&gt;&lt;p&gt;6.ಅನಸ್ತೇಶಿಯ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿರೋದು ಪತ್ತೆ&amp;nbsp;&lt;/p&gt;&lt;img&gt;&lt;p&gt;ಈ ಕೊಲೆಯ ಹಿಂದೆ ಆರೋಪಿ ವೈದ್ಯನ ಪರಸ್ತ್ರೀ ಸಂಬಂಧವೇ ಮುಖ್ಯ ಕಾರಣ ಎಂಬುದು ಸಾಬೀತಾಗಿದೆ. ವೈದ್ಯಕೀಯ ವೃತ್ತಿ ಧರ್ಮಕ್ಕೆ ದ್ರೋಹ ಬಗೆದು, ಪ್ರಾಣ ರಕ್ಷಿಸಬೇಕಾದ ಇಂಜೆಕ್ಷನ್ ಅನ್ನೇ ಪ್ರಾಣ ತೆಗೆಯಲು ಬಳಸಿದ ಈ ಕಾಮುಕ ಹಾಗೂ ಕ್ರೂರಿ ವೈದ್ಯನಿಗೆ ಕಠಿಣ ಶಿಕ್ಷೆ ಕೊಡಿಸಲು ಪೊಲೀಸರು ಭದ್ರವಾದ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಂಗ ಹೋರಾಟಕ್ಕೆ ಸಜ್ಜಾಗಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bengaluru-dr-kruthika-reddy-murder-case-husband-doctor-mahendra-reddy-uses-propofol-overdose-to-murder-wife-gdp-0tclagv"/>
        </item>
        <item>
            <title><![CDATA[ಯುವತಿ ಡ್ರೆಸ್ಸಲ್ಲೇನಿದೆ ಏನಿದೆ ಎಂದು ಹುಡುಕಿದ ಮರಿ ಕೋತಿ: ಮಗನ ಹಿಡಿದೆಳೆದ ಅಮ್ಮ- ಕ್ಯೂಟ್​ ವಿಡಿಯೋ ವೈರಲ್]]></title>
            <link>https://kannada.asianetnews.com/viral/baby-monkey-inside-ladys-frock-and-mother-pulled-it-video-viral-suc/articleshow-2m9bg10</link>
            <guid isPermaLink="true">https://kannada.asianetnews.com/viral/baby-monkey-inside-ladys-frock-and-mother-pulled-it-video-viral-suc/articleshow-2m9bg10</guid>
            <pubDate>Wed, 27 May 2026 21:22:23 +0530</pubDate>
            <description><![CDATA[ಮಂಗಗಳ ಕಿತಾಪತಿಗಳು ಕೆಲವೊಮ್ಮೆ ತೊಂದರೆ ನೀಡಿದರೆ, ಇನ್ನು ಕೆಲವು ನಗು ತರಿಸುತ್ತವೆ. ಯುವತಿಯ ಡ್ರೆಸ್​ ಒಳಗೆ ಹೊಕ್ಕ ಮರಿ ಕೋತಿಯನ್ನು ಅದರ ತಾಯಿ ಹೊರಗೆಳೆದು ಡ್ರೆಸ್ ಸರಿಪಡಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಈ ಲೇಖನವು ಮಂಗಗಳ ತುಂಟಾಟದ ವಿವಿಧ ಮುಖಗಳನ್ನು ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksn1y7br0g1vdacnj60kbnhm,imgname-viral-video-1779896884600.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನುಷ್ಯರ ಪೂರ್ವಜರು ಎಂದೇ ಖ್ಯಾತಿ ಪಡೆದಿರುವ ಮಂಗಗಳು ಮಾಡುವ ಕಿತಾಪತಿಗಳು ಒಂದೆರಡಲ್ಲ ಬಿಡಿ. ಅವುಗಳ ಆಟ ನೋಡುವುದಕ್ಕೆ ಎಷ್ಟು ಚೆಂದವೋ, ಅತಿಯಾಗಿ ಪ್ರಾಣಕ್ಕೆ ಸಂಚಕಾರ ತರುವುದೂ ಉಂಟು. ದೇವಸ್ಥಾನ, ಪ್ರವಾಸಿ ತಾಣಗಳಲ್ಲಿ ಮಂಗಗಳು ಕೊಡುವ ಉಪದ್ರವಗಳ ಬಗ್ಗೆ ತಿಳಿದದ್ದೇ. ಬ್ಯಾಗ್​ ಕಳ್ಳತನ ಮಾಡುವುದು, ಮೈಮೇಲೆ ಬಿದ್ದು ಪ್ರಾಣಕ್ಕೂ ಕುತ್ತು ತರುವುದು, ಕೈಯಲ್ಲಿ ಏನಾದರೂ ಆಹಾರ ಪೊಟ್ಟಣ ಹಿಡಿದುಕೊಂಡಿದ್ದರೆ ಅದನ್ನು ಕಸಿಯಲು ಬಂದು ಕಚ್ಚುವುದೂ ಇದೆ. ಇವೆಲ್ಲವುಗಳ ಹೊರತಾಗಿಯೂ ಮಂಗಗಳು ಸುಮ್ಮನೇ ಇದ್ದಾಗ ಅವುಗಳ ಆಟವನ್ನು ನೋಡುವುದೇ ಬಲು ಸೊಗಸು. ಇದು ಒಂದೆಡೆಯಾದರೆ, ನಿತ್ಯ ಜೀವನದಲ್ಲಿ ಮಂಗಗಳ ಮಾಡುವ ಕಿತಾಪತಿಗಳು ಒಂದೆರಡಲ್ಲ. ಇನ್ನು ಮಲೆನಾಡು ಪ್ರದೇಶಗಳಲ್ಲಂತೂ ಮಂಗನ ಕಾಟದಿಂದ ಜನಜೀವನ ದಿನನಿತ್ಯವೂ ನರಕವೇ ಆಗಿಬಿಟ್ಟಿದೆ. ಮನೆಯಂಗಳದಲ್ಲಿ ಒಂದೂ ಬೆಳೆಯನ್ನೂ ಬೆಳೆಯಲು ಬಿಡುವುದಿಲ್ಲ, ತೋಟಕ್ಕೆ ಗುಂಪು ಗುಂಪಾಗಿ ನುಗ್ಗಿತು ಎಂದರೆ ಕಥೆ ಮುಗಿದಂತೆಯೇ. ಅದೇನಿದ್ದರೂ ಮಂಗಗಳನ್ನು ಅಪರೂಪಕ್ಕೆ ನೋಡುವವರಿಗೆ ಅವುಗಳ ಆಟ ಮಾತ್ರ ಚೆಂದವೋ ಚಂದ.&lt;/p&gt;&lt;h2&gt;&lt;strong&gt;ನಕ್ಕು ನಗಿಸುವ ವಿಡಿಯೋ&lt;/strong&gt;&lt;/h2&gt;&lt;p&gt;ಇದೀಗ ಅಂಥದ್ದೇ ಒಂದು ನಕ್ಕು ನಗಿಸುವಂಥ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಫ್ರಾಕ್​ ಧರಿಸಿ ನಿಂತಿರುವ ಯುವತಿಯನ್ನು ನೋಡಬಹುದಾಗಿದೆ. ಒಂದು ಮರಿಕೋತಿಯು ಆಕೆಯ ಡ್ರೆಸ್​ ಒಳಗೆ ಹೊಕ್ಕಿದೆ. ಅಲ್ಲಿ ಕಿತಾಪತಿ ಶುರುವಿಟ್ಟುಕೊಂಡಿದೆ. ಅದನ್ನು ಅಲ್ಲಿಯೇ ಇದ್ದ ಆ ಮರಿಯ ಅಮ್ಮ ನೋಡಿದೆ. ಪುಸಕ್ಕನೆ ಯುವತಿಯ ಡ್ರೆಸ್​ ಒಳಗೆ ಹೊಕ್ಕ ಮರಿಯನ್ನು ಹೊರಕ್ಕೆ ಎಳೆದು ನಂತರ ಆಕೆಯ ಡ್ರೆಸ್​ ಸರಿ ಮಾಡಿದೆ. ಇಷ್ಟು ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ನೆಟ್ಟಿಗರು ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗಿಸಿಕೊಂಡಿದ್ದಾರೆ. ಸೋ ಕ್ಯೂಟ್​ ಎನ್ನುತ್ತಿದ್ದಾರೆ.&lt;/p&gt;&lt;p&gt;ಈಚೆಗಷ್ಟೇ ಮಂಗವೊಂದರಿಂದಾಗಿ ಇಡೀ ಶ್ರೀಲಂಕಾ ದೇಶದಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಿ ಕಾರ್ಗತ್ತಲು ಕವಿದಿದ್ದು ಸುದ್ದಿಯಾಗಿತ್ತು. ಶ್ರೀಲಂಕಾದ ಪಣದುರದಲ್ಲಿರುವ ವಿದ್ಯುತ್ ಗ್ರಿಡ್&zwnj;ನ ಸಬ್&zwnj;ಸ್ಟೇಷನ್&zwnj;ನಲ್ಲಿ ಕೋತಿಯೊಂದು ತಂತಿಯ ಮೇಲೆ ಹೋಗು ಸಂದರ್ಭದಲ್ಲಿ ಗ್ರಿಡ್​ಗೆ ಸಿಲುಕಿಬಿಟ್ಟಿತ್ತು. ಇದು ಇಡೀ ದೇಶಕ್ಕೆ ವಿದ್ಯುತ್​ ಪೂರೈಕೆ ಮಾಡುವ ಮುಖ್ಯ ಗ್ರಿಡ್​. ಆದ್ದರಿಂದ ವಿದ್ಯುತ್ ಸರಬರಾಜು ಸ್ಥಗಿತವಾಗಿತ್ತು. ಇದರಿಂದ ಮುಖ್ಯವಾಗಿ ಆಸ್ಪತ್ರೆಗಳಲ್ಲಿ ಕೋಲಾಹ ಉಂಟಾಗಿತ್ತು. ಒಂದು ಗಂಟೆಯ ಬಳಿಕ ಆಸ್ಪತ್ರೆ ಮತ್ತು ಇತರ ಪ್ರಮುಖ ಸ್ಥಾಪನೆಗಳಲ್ಲಿ ಬೇರೆ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗಿತ್ತು. ಆದರೆ ಇಡೀ ದೇಶಕ್ಕೆ ವಿದ್ಯುತ್ ನೀಡಲು ಹಲವಾರು ಗಂಟೆಗಳು ಹಿಡಿದವು. ಇಡೀ ದೇಶದಲ್ಲಿ ಏಕಾಏಕಿ ವಿದ್ಯುತ್​ ವ್ಯತ್ಯಯವಾಗಿ ಕೋಲಾಹಲ ಸೃಷ್ಟಿಯಾಗಿತ್ತು. ಬಳಿಕ ಇದಕ್ಕೆ ಕಾರಣ ಹುಡುಕಿದಾಗ, ಕೊಲಂಬೊ ಉಪನಗರದಲ್ಲಿ ಮಂಗವೊಂದು ವಿದ್ಯುತ್ ಗ್ರಿಡ್ ಗೆ ಸಿಲುಕಿದ ಪರಿಣಾಮ ಈ ಘಟನೆ ಸಂಭವಿಸಿರುವುದಾಗಿ ತಿಳಿದಿತ್ತು. ಅದಕ್ಕೆ ಕಾರಣ ತಿಳಿದು ಅದನ್ನು ಸರಿಪಡಿಸುವಷ್ಟರಲ್ಲಿ ರಾತ್ರಿಯಿಡೀ ಲಂಕೆಯ ಜನರು ಕತ್ತಲಿನಲ್ಲಿ ಕಳೆಯುವಂತಾಯಿತು. ವಿದ್ಯುತ್​ ಸಹಾಯದಿಂದ ಮಾಡುವ ಎಲ್ಲಾ ಕಾರ್ಯಗಳೂ ಸ್ಥಗಿತಗೊಂಡಿದ್ದವು!&lt;/p&gt;&lt;h3&gt;&lt;strong&gt;ಮಂಗನ ಕಿತಾಪತಿ&lt;/strong&gt;&lt;/h3&gt;&lt;p&gt;ಹೀಗೆ ನಿತ್ಯ ಜೀವನದಲ್ಲಿ ಮಂಗಗಳ ಮಾಡುವ ಕಿತಾಪತಿಗಳು ಒಂದೆರಡಲ್ಲ. ಇನ್ನು ಮಲೆನಾಡು ಪ್ರದೇಶಗಳಲ್ಲಂತೂ ಮಂಗನ ಕಾಟದಿಂದ ಜನಜೀವನ ದಿನನಿತ್ಯವೂ ನರಕವೇ ಆಗಿಬಿಟ್ಟಿದೆ. ಮನೆಯಂಗಳದಲ್ಲಿ ಒಂದೂ ಬೆಳೆಯನ್ನೂ ಬೆಳೆಯಲು ಬಿಡುವುದಿಲ್ಲ, ತೋಟಕ್ಕೆ ಗುಂಪು ಗುಂಪಾಗಿ ನುಗ್ಗಿತು ಎಂದರೆ ಕಥೆ ಮುಗಿದಂತೆಯೇ. ಅದೇನಿದ್ದರೂ ಮಂಗಗಳನ್ನು ಅಪರೂಪಕ್ಕೆ ನೋಡುವವರಿಗೆ ಅವುಗಳ ಆಟ ಮಾತ್ರ ಚೆಂದವೋ ಚಂದ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Tammy (@yonghui086)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/viral/baby-monkey-inside-ladys-frock-and-mother-pulled-it-video-viral-suc/articleshow-2m9bg10"/>
        </item>
        <item>
            <title><![CDATA[ತ್ರಿಶಾ ಜೊತೆ ಸೂರ್ಯ ಅಲ್ಲ, ವಿಜಯ್ ನಟಿಸಬೇಕಿತ್ತು; ಆದ್ರೆ ದಳಪತಿ ಕೈತಪ್ಪಿ ಆ ಸ್ಟಾರ್ ಪಾಲಾಗಿದ್ದು ಹೇಗೆ?]]></title>
            <link>https://kannada.asianetnews.com/gallery/cine-world/thalapathy-vijay-was-supposed-to-play-as-hero-in-karuppu-with-trisha-but-how-did-it-go-to-suriya-secret-is-here-7d3wewn</link>
            <guid isPermaLink="true">https://kannada.asianetnews.com/gallery/cine-world/thalapathy-vijay-was-supposed-to-play-as-hero-in-karuppu-with-trisha-but-how-did-it-go-to-suriya-secret-is-here-7d3wewn</guid>
            <pubDate>Mon, 25 May 2026 14:38:35 +0530</pubDate>
            <description><![CDATA[&lt;p&gt;'ಕರುಪ್ಪು' ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಅಕ್ಷರಶಃ ಧೂಳೆಬ್ಬಿಸಿದೆ. ಈಗಾಗಲೇ 200 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಸಿನಿಮಾ ಸೂರ್ಯ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸೂರ್ಯ ಗೆಲುವಿನ ನಗೆ ಬೀರಿದ್ದಾರೆ.. ಆದ್ರೆ, ಇದು ವಿಜಯ್ ಸಿನಿಮಾ ಆಗಬೇಕಾಗಿತ್ತು!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks4tc7h6wpp0rkaph2mwd8wy,imgname-vijay-trisha-suriya-1779352084006.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕರುಪ್ಪು' ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಅಕ್ಷರಶಃ ಧೂಳೆಬ್ಬಿಸಿದೆ. ಈಗಾಗಲೇ 200 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಸಿನಿಮಾ ಸೂರ್ಯ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸೂರ್ಯ ಗೆಲುವಿನ ನಗೆ ಬೀರಿದ್ದಾರೆ.. ಆದ್ರೆ, ಇದು ವಿಜಯ್ ಸಿನಿಮಾ ಆಗಬೇಕಾಗಿತ್ತು!&lt;/p&gt;&lt;img&gt;&lt;p&gt;ದಳಪತಿ ವಿಜಯ್ ಮಾಡಬೇಕಿದ್ದ 'ಕರುಪ್ಪು' ಸೂರ್ಯನ ಪಾಲಾಗಿದ್ದು ಹೇಗೆ? ಬಾಕ್ಸ್ ಆಫೀಸ್ ಸದ್ದಿನ ಹಿಂದೆ ಅಡಗಿದೆ ದೊಡ್ಡ ರಹಸ್ಯ!&lt;/p&gt;&lt;p&gt;ಸಿನಿಮಾ ರಂಗದಲ್ಲಿ 'ಟೈಮಿಂಗ್' ಅನ್ನೋದು ಬಹಳ ಮುಖ್ಯ. ಒಬ್ಬರು ಬಿಟ್ಟಿದ್ದನ್ನು ಇನ್ನೊಬ್ಬರು ಹಿಡಿದು ಸೂಪರ್ ಸ್ಟಾರ್ ಆಗುವುದು ಇಲ್ಲಿ ಕಾಮನ್. ಈಗ ಸೌತ್ ಇಂಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ 'ಕರುಪ್ಪು' (Karuppu). ಈ ಚಿತ್ರ ಸೂರ್ಯ (Suriya) ಮತ್ತು ತ್ರಿಶಾ ಕೃಷ್ಣನ್ (Trisha Krishnan) ಅಭಿಮಾನಿಗಳಿಗೆ ಹಬ್ಬವನ್ನೇ ನೀಡಿದೆ. ಆದರೆ, ಈ ಸಿನಿಮಾದ ಯಶಸ್ಸಿನ ಹಿಂದೆ ಒಂದು ನಂಬಲಾಗದ ಟ್ವಿಸ್ಟ್ ಇದೆ! ಹೌದು, ಈ ಸಿನಿಮಾದಲ್ಲಿ ಸೂರ್ಯ ಅವರ ಜಾಗದಲ್ಲಿ ದಳಪತಿ ವಿಜಯ್ ಇರಬೇಕಿತ್ತು. ಅಷ್ಟಕ್ಕೂ ಈ 'ಬ್ಲಾಕ್&zwnj;ಬಸ್ಟರ್' ಕಥೆ ವಿಜಯ್ ಕೈತಪ್ಪಿದ್ದು ಹೇಗೆ? ಇಲ್ಲಿದೆ ನೋಡಿ ಇನ್ಸೈಡ್ ಸ್ಟೋರಿ!&lt;/p&gt;&lt;img&gt;&lt;p&gt;200 ಕೋಟಿ ಕ್ಲಬ್ ಸೇರಿದ 'ಕರುಪ್ಪು' ಕಮಾಲ್!&lt;/p&gt;&lt;p&gt;ನಿರ್ದೇಶಕ ಆರ್.ಜೆ. ಬಾಲಾಜಿ ಆಕ್ಷನ್ ಕಟ್ ಹೇಳಿರುವ 'ಕರುಪ್ಪು' ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಅಕ್ಷರಶಃ ಧೂಳೆಬ್ಬಿಸಿದೆ. ಈಗಾಗಲೇ 200 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಸಿನಿಮಾ ಸೂರ್ಯ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸೂರ್ಯ ಅವರಿಗೆ ಈ ಸಿನಿಮಾ ಹೊಸ ಸಂಜೀವಿನಿಯಂತೆ ಸಿಕ್ಕಿದೆ. ಮೇ ತಿಂಗಳಲ್ಲಿ ರಿಲೀಸ್ ಆದ ಈ ಸಿನಿಮಾ ಸೂರ್ಯ-ತ್ರಿಶಾ ಕಾಂಬಿನೇಷನ್&zwnj;ನ ಮ್ಯಾಜಿಕ್ ಅನ್ನು ಮತ್ತೆ ತೆರೆ ಮೇಲೆ ತಂದಿದೆ. ಆದರೆ, ಇದೆಲ್ಲವೂ ಶುರುವಾಗಿದ್ದು ದಳಪತಿ ವಿಜಯ್ ಅವರ ಮನೆಯಲ್ಲಿ!&lt;/p&gt;&lt;img&gt;&lt;p&gt;&quot;ನಾವೇ ಮಾಡೋಣ...&quot; ಎಂದಿದ್ದರು ವಿಜಯ್!&lt;/p&gt;&lt;p&gt;ನಿರ್ದೇಶಕ ಆರ್.ಜೆ. ಬಾಲಾಜಿ ಮೊದಲು ಈ ಕಥೆಯನ್ನು ಸಿದ್ಧಪಡಿಸಿದ್ದು ದಳಪತಿ ವಿಜಯ್&zwnj;ಗಾಗಿಯೇ. 2023ರ ಆಗಸ್ಟ್&zwnj;ನಲ್ಲಿ ಬಾಲಾಜಿ ಅವರು ವಿಜಯ್ ಅವರನ್ನು ಭೇಟಿ ಮಾಡಿ ಕಥೆ ವಿವರಿಸಿದ್ದರು. ಕಥೆ ಕೇಳಿದ ತಕ್ಷಣ ವಿಜಯ್ ಎಷ್ಟು ಎಕ್ಸೈಟ್ ಆಗಿದ್ದರೆಂದರೆ, &quot;ಬಾಲಾಜಿ, ಈ ಸ್ಕ್ರಿಪ್ಟ್ ಸಖತ್ ಆಗಿದೆ, ನಾವೇ ಈ ಸಿನಿಮಾ ಮಾಡೋಣ&quot; ಎಂದು ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟಿದ್ದರು. ವಿಜಯ್ ಅವರಂತಹ ಸೂಪರ್ ಸ್ಟಾರ್ ಸ್ವತಃ ಆಫರ್ ಕೊಟ್ಟ ಮೇಲೆ ಕೇಳಬೇಕೆ? ಬಾಲಾಜಿ ಕೂಡ ಖುಷಿಯಾಗಿದ್ದರು.&lt;/p&gt;&lt;img&gt;&lt;p&gt;ಟ್ವಿಸ್ಟ್ ಕೊಟ್ಟ ರಾಜಕೀಯ ಮತ್ತು ಸ್ಕ್ರಿಪ್ಟ್ ತಿದ್ದುಪಡಿ!&lt;/p&gt;&lt;p&gt;ಆದರೆ, ಇಲ್ಲಿಯೇ ನೋಡಿ ವಿಧಿಯಾಟ ಶುರುವಾಗಿದ್ದು. ಸ್ಕ್ರಿಪ್ಟ್ ತುಂಬಾ ಇಷ್ಟವಾದರೂ, ಆರ್.ಜೆ. ಬಾಲಾಜಿಗೆ ಸ್ಕ್ರೀನ್&zwnj;ಪ್ಲೆಯಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಮಾಡಬೇಕಿತ್ತು. &quot;ಸರ್, ನನಗೆ ಈ ಕಥೆಯನ್ನು ಇನ್ನಷ್ಟು ಪಳಗಿಸಲು ಸ್ವಲ್ಪ ಸಮಯ ಬೇಕು&quot; ಎಂದು ಬಾಲಾಜಿ ಕೇಳಿಕೊಂಡರು. ಇದೇ ಸಮಯದಲ್ಲಿ ವಿಜಯ್ ಅವರ ಜೀವನದಲ್ಲಿ ದೊಡ್ಡ ಬದಲಾವಣೆ ಸಂಭವಿಸಿತು. ಅವರು ಸಿನಿಮಾ ರಂಗಕ್ಕೆ ಗುಡ್&zwnj;ಬೈ ಹೇಳಿ ಸಕ್ರಿಯ ರಾಜಕೀಯಕ್ಕೆ (TVK ಪಕ್ಷ) ಧುಮುಕುವ ನಿರ್ಧಾರ ಮಾಡಿದರು. ಸಿನಿಮಾ ಸೆಟ್ಟೇರುವ ಮೊದಲೇ ವಿಜಯ್ ರಾಜಕೀಯದ ಜವಾಬ್ದಾರಿಗಳಲ್ಲಿ ಬ್ಯುಸಿಯಾದರು.&lt;/p&gt;&lt;img&gt;&lt;p&gt;ಸೂರ್ಯನ ಪಾಲಾದ 'ಲಕ್ಕಿ ಚಾನ್ಸ್'!&lt;/p&gt;&lt;p&gt;ಕಥೆ ರೆಡಿಯಾಗಿದೆ, ಆದರೆ ಹೀರೋ ಇಲ್ಲ ಎಂಬ ಸ್ಥಿತಿ ಬಂದಾಗ ಬಾಲಾಜಿ ಅವರು ಸೂರ್ಯ ಅವರನ್ನು ಸಂಪರ್ಕಿಸಿದರು. ಕಥೆಯ ಡಿಫರೆಂಟ್ ಕಾನ್ಸೆಪ್ಟ್ ಇಷ್ಟಪಟ್ಟ ಸೂರ್ಯ ತಕ್ಷಣ ಓಕೆ ಅಂದರು. ಹೀಗೆ ವಿಜಯ್ ಮಾಡಬೇಕಿದ್ದ 'ಕರುಪ್ಪು' ಸೂರ್ಯನ 45ನೇ ಸಿನಿಮಾವಾಗಿ ತೆರೆಕಂಡಿತು. ಸದ್ಯ ಈ ಸಿನಿಮಾ ಥಿಯೇಟರ್&zwnj;ಗಳಲ್ಲಿ ಹಬ್ಬ ಮಾಡುತ್ತಿದೆ.&lt;/p&gt;&lt;img&gt;&lt;p&gt;ನಿರ್ದೇಶಕ ಬಾಲಾಜಿ ಇತ್ತೀಚೆಗೆ ಈ ರಹಸ್ಯ ಬಿಚ್ಚಿಡುತ್ತಾ, &quot;ವಿಜಯ್ ಸರ್ ನೀಡಿದ ಫೀಡ್&zwnj;ಬ್ಯಾಕ್ ಕಥೆ ಚೆನ್ನಾಗಿ ಮೂಡಿಬರಲು ನೆರವಾಯಿತು. ಅವರು ಈಗ ರಾಜಕೀಯದಲ್ಲಿ ಸಿಎಂ ಆಗಿ ಭರವಸೆ ಜನರಲ್ಲಿ ಮೂಡಿಸಿದ್ದಾರೆ, ನನಗೂ ಆ ನಂಬಿಕೆ ಇದೆ&quot; ಎಂದು ತಮ್ಮ ಹಳೆಯ ಹೀರೋ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ದಳಪತಿ ಕೈತಪ್ಪಿದ ಈ ಸಿನಿಮಾ ಸೂರ್ಯನಿಗೆ ಬರೋಬ್ಬರಿ 200 ಕೋಟಿಯ ಉಡುಗೊರೆ ನೀಡಿದೆ. ಸೂರ್ಯ-ತ್ರಿಶಾ ಕೆಮಿಸ್ಟ್ರಿ ಮತ್ತು ಆರ್.ಜೆ ಬಾಲಾಜಿಯ ಮೇಕಿಂಗ್ ಈ ವರ್ಷದ ದೊಡ್ಡ ಸಕ್ಸಸ್ ಸ್ಟೋರಿಯಾಗಿ ಉಳಿದುಕೊಂಡಿದೆ!&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/thalapathy-vijay-was-supposed-to-play-as-hero-in-karuppu-with-trisha-but-how-did-it-go-to-suriya-secret-is-here-7d3wewn"/>
        </item>
        <item>
            <title><![CDATA[PHOTOS: ಅನೇಕ ವರ್ಷಗಳ ಬಳಿಕ ನಟ ಉಪೇಂದ್ರ ಮನೆಯಲ್ಲಿ ಮದುವೆ; ಎಂಗೇಜ್‌ ಆದ ನಟ ನಿರಂಜನ್‌ ಸುಧೀಂದ್ರ!]]></title>
            <link>https://kannada.asianetnews.com/gallery/cine-world/actor-upendra-brother-son-niranjan-sudhindra-and-dr-sanjana-raj-engagement-photos-8wshiil</link>
            <guid isPermaLink="true">https://kannada.asianetnews.com/gallery/cine-world/actor-upendra-brother-son-niranjan-sudhindra-and-dr-sanjana-raj-engagement-photos-8wshiil</guid>
            <pubDate>Tue, 26 May 2026 09:38:49 +0530</pubDate>
            <description><![CDATA[&lt;p&gt;ನಟ ಉಪೇಂದ್ರ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರು ಆಗಿದೆ. ಇವರ ಅಣ್ಣನ ಮಗ, ನಟ ನಿರಂಜನ್&zwnj; ಸುಧೀಂದ್ರ ಅವರು ಎಂಗೇಜ್&zwnj; ಆಗಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ನಡೆದ ಈ ನಿಶ್ಚಿತಾರ್ಥದ ಫೋಟೋಗಳು ಇಲ್ಲಿವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksh727h01xvgjzhe2k7t016p,imgname-new-project---2026-05-26t092547.670-1779768040992.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ಉಪೇಂದ್ರ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರು ಆಗಿದೆ. ಇವರ ಅಣ್ಣನ ಮಗ, ನಟ ನಿರಂಜನ್&zwnj; ಸುಧೀಂದ್ರ ಅವರು ಎಂಗೇಜ್&zwnj; ಆಗಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ನಡೆದ ಈ ನಿಶ್ಚಿತಾರ್ಥದ ಫೋಟೋಗಳು ಇಲ್ಲಿವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಟ ಉಪೇಂದ್ರ ಅವರ ಅಣ್ಣ ಸುಧೀಂದ್ರರ ಮಗ ನಿರಂಜನ್&zwnj; ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬಸ್ಥರ ಸಾಕ್ಷಿಯಾಗಿ ಈ ಎಂಗೇಜ್&zwnj;ಮೆಂಟ್&zwnj; ನಡೆದಿದೆ.&lt;/p&gt;&lt;img&gt;&lt;p&gt;ಯಾವುದು ಸುಳಿವು ಇಲ್ಲದೆ ಈ ನಿಶ್ಚಿತಾರ್ಥ ನಡೆದಿದೆ. ನಿರಂಜನ್&zwnj; ಅವರು ಚಿತ್ರರಂಗದಲ್ಲಿದ್ದರೂ ಕೂಡ, ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ ಎಂಬ ಸುಳಿವು ಇರಲಿಲ್ಲ.&lt;/p&gt;&lt;img&gt;&lt;p&gt;ನಿರಂಜನ್&zwnj; ಅವರು ಕೆಲ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ, ಇವರಿಗೆ ನಿಜವಾದ ಬ್ರೇಕ್&zwnj; ಸಿಗಬೇಕಿದೆ.&lt;/p&gt;&lt;img&gt;&lt;p&gt;ಮನೆಯಲ್ಲಿ ಮದುವೆ ಸಂಭ್ರಮ ಶುರು ಆಗಿದ್ದು, ಪ್ರಿಯಾಂಕಾ ಉಪೇಂದ್ರ ಅವರು ಖುಷಿಯಿಂದ ಭಾಗಿ ಆಗಿದ್ದಾರೆ.&lt;/p&gt;&lt;img&gt;&lt;p&gt;ಸಂಜನಾ ರಾಜ್&zwnj; ಅವರು ವೃತ್ತಿಯಲ್ಲಿ ಡಾಕ್ಟರ್&zwnj; ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.&lt;/p&gt;&lt;img&gt;&lt;p&gt;ಪ್ರಿಯಾಂಕಾ ಉಪೇಂದ್ರ ಅವರು ಅಕ್ಕ ಮುಂತಾದವರ ಜೊತೆ ಕಾಣಿಸಿಕೊಂಡಿದ್ದು ಹೀಗೆ..&lt;/p&gt;&lt;img&gt;&lt;p&gt;ಸಂಜನಾ ರಾಜ್&zwnj; ಹಾಗೂ ನಿರಂಜನ್&zwnj; ಅವರದ್ದು ಅರೇಂಜ್&zwnj; ಮ್ಯಾರೇಜ್?&zwnj; ಲವ್&zwnj; ಎಂಬ ಬಗ್ಗೆ ಮಾಹಿತಿ ಇಲ್ಲ.&lt;/p&gt;&lt;img&gt;&lt;p&gt;ನಟ ಉಪೇಂದ್ರ ಮಗಳು ಐಶ್ವರ್ಯಾ ಸೀರೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ನಟ ಉಪೇಂದ್ರ ಅವರ ತುಂಬಿದ ಕುಟುಂಬದ ಫೋಟೋ ಇಲ್ಲಿದೆ&amp;nbsp;&lt;/p&gt;&lt;img&gt;&lt;p&gt;ನಿರಂಜನ್&zwnj; ಸುಧೀಂದ್ರ ಅವರು ಸಂಜನಾಗೆ ಉಂಗುರ ತೊಡಿಸಿದ್ದು..&amp;nbsp;&lt;/p&gt;&lt;img&gt;&lt;p&gt;ಈ ಹೊಸ ಜೋಡಿಗೆ ಅನೇಕರು ಶುಭ ಹಾರೈಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ನಿರಂಜನ್&zwnj; ಸುಧೀಂದ್ರ ಅವರ ಮದುವೆ ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ.&amp;nbsp;&lt;/p&gt;&lt;img&gt;&lt;p&gt;ನಿರಂಜನ್&zwnj; ಸುಧೀಂದ್ರ ಅವರ ಮದುವೆಗೆ ಚಿತ್ರರಂಗದವರು ಬರಬಹುದು ಎನ್ನಲಾಗಿದೆ.&amp;nbsp;&lt;/p&gt;]]></content:encoded>
            <category>relationship</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/actor-upendra-brother-son-niranjan-sudhindra-and-dr-sanjana-raj-engagement-photos-8wshiil"/>
        </item>
        <item>
            <title><![CDATA[ಚಂದ ಕಾಣುವ ದೊಡ್ಡ ಅಪಾರ್ಟ್‌ಮೆಂಟ್‌ಗೆ ಹೊರಟ್ರಾ? ಸಾಫ್ಟ್‌ವೇರ್ ಇಂಜಿನಿಯರ್ ಬಿಚ್ಚಿಟ್ಟ ಈ ಕಹಿ ಸತ್ಯವನ್ನೊಮ್ಮೆ ಓದಿ]]></title>
            <link>https://kannada.asianetnews.com/relationship/techies-viral-warning-why-young-couples-should-avoid-high-rise-societies/articleshow-ap92vht</link>
            <guid isPermaLink="true">https://kannada.asianetnews.com/relationship/techies-viral-warning-why-young-couples-should-avoid-high-rise-societies/articleshow-ap92vht</guid>
            <pubDate>Wed, 27 May 2026 12:41:16 +0530</pubDate>
            <description><![CDATA[&lt;p&gt;&lt;strong&gt;Gated Community Issues: &lt;/strong&gt;ಹೊರನೋಟಕ್ಕೆ ಐಷಾರಾಮಿ ಮತ್ತು ಶಿಸ್ತಿನಿಂದ ಕೂಡಿರುವಂತೆ ಕಾಣುವ ಬೃಹತ್ ಗೇಟೆಡ್ ಕಮ್ಯುನಿಟಿಗಳ ಗೋಡೆಗಳ ಹಿಂದೆ, ನಿವಾಸಿಗಳ ನೆಮ್ಮದಿ ಕೆಡಿಸುವ 'ಪವರ್ ಟ್ರಿಪ್' ಸಂಸ್ಕೃತಿ ಅಡಗಿದೆಯೇ? ಹೈದರಾಬಾದ್&zwnj;ನ ಸಾಫ್ಟ್&zwnj;ವೇರ್ ಇಂಜಿನಿಯರ್ ಒಬ್ಬರು ಅನುಭವಿಸಿದ ಕಹಿ ಘಟನೆಗಳು ಈಗ ಅಪಾರ್ಟ್&zwnj;ಮೆಂಟ್ ಆಡಳಿತ ಮಂಡಳಿಗಳ ಸರ್ವಾಧಿಕಾರ ಮತ್ತು ಯುವಜನತೆಯ ವೈಯಕ್ತಿಕ ಸ್ವಾತಂತ್ರ್ಯದ ನಡುವಿನ ದೊಡ್ಡ ಚರ್ಚೆಗೆ ನಾಂದಿ ಹಾಡಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knv6hxw9ms0mtheq0h4e3je0,imgname-new-project---2026-04-10t133103.992-1775808083849.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇ&lt;/strong&gt;ತ್ತೀಚಿನ ದಿನಗಳಲ್ಲಿ ದೊಡ್ಡ ಗೇಟೆಡ್ ಕಮ್ಯುನಿಟಿಗಳಲ್ಲಿ ವಾಸಿಸುವುದು ಒಂದು ಪ್ರತಿಷ್ಠೆಯ ಮತ್ತು ಐಷಾರಾಮಿ ಸಂಕೇತವಾಗಿ ಮಾರ್ಪಟ್ಟಿದೆ. ಆದರೆ, ಸಾಫ್ಟ್&zwnj;ವೇರ್ ಇಂಜಿನಿಯರ್ ಶ್ರವಣ್ ವೆಂಕಟರಾಮನ್ ಅವರು ಹಂಚಿಕೊಂಡಿರುವ ಕಹಿ ಅನುಭವವು ಈ ಹೊಳೆಯುವ ಗೋಡೆಗಳ ಹಿಂದಿನ ಕರಾಳ ಮುಖವನ್ನು ಅನಾವರಣಗೊಳಿಸಿದೆ. ಹೈ-ರೈಸ್ ಸೊಸೈಟಿಗಳಲ್ಲಿ ವಾಸಿಸುವ ಯುವ ದಂಪತಿ ಮತ್ತು ಬ್ಯಾಚುಲರ್ಸ್&zwnj; ಎದುರಿಸುತ್ತಿರುವ &quot;ವೃದ್ಧರ ಸರ್ವಾಧಿಕಾರ&quot; ಮತ್ತು &quot;ಪವರ್ ಟ್ರಿಪ್&quot; ಸಂಸ್ಕೃತಿಯ ಬಗ್ಗೆ ಅವರು ಎಕ್ಸ್ (X) ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ಇದು ಈಗ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ.&lt;/p&gt;&lt;h2&gt;&lt;strong&gt;ತಮ್ಮದೇ ಮನೆಯಲ್ಲಿ ಅಪರಿಚಿತರಂತೆ ಬದುಕು&lt;/strong&gt;&lt;/h2&gt;&lt;p&gt;ಶ್ರವಣ್ ಅವರ ವಾದದ ಪ್ರಕಾರ, ಬೃಹತ್ ಅಪಾರ್ಟ್&zwnj;ಮೆಂಟ್&zwnj;ಗಳ 'ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್' (RWA) ಸಮಿತಿಗಳಲ್ಲಿ ಹೆಚ್ಚಾಗಿ ವಯಸ್ಸಾದ ನಿವೃತ್ತ ವ್ಯಕ್ತಿಗಳೇ ತುಂಬಿರುತ್ತಾರೆ. ಇವರು ತಮ್ಮ ಬಿಡುವಿನ ವೇಳೆಯನ್ನು ಇತರರ ಖಾಸಗಿ ಜೀವನವನ್ನು ನಿಯಂತ್ರಿಸಲು ಬಳಸುತ್ತಿದ್ದಾರೆ ಎಂಬುದು ಅವರ ಮುಖ್ಯ ಆರೋಪ. ಯುವಕರ ಜೀವನಶೈಲಿ, ಮನೆಗೆ ಬರುವ ಅತಿಥಿಗಳು, ಆಹಾರ ಪದ್ಧತಿ ಅಥವಾ ಕನಿಷ್ಠ ದೂರು ನೀಡುವ ಹಕ್ಕಿನ ಮೇಲೆ ಇವರು ಅನಗತ್ಯ ನಿರ್ಬಂಧಗಳನ್ನು ಹೇರುತ್ತಾರೆ. ಒಂದು ವೇಳೆ ಯಾರಾದರೂ ಈ ಸಮಿತಿಯ ಅಸಂಬದ್ಧ ನಿರ್ಧಾರಗಳನ್ನು ಪ್ರಶ್ನಿಸಿದರೆ, ಅವರನ್ನು ಸಾರ್ವಜನಿಕವಾಗಿ ಅವಮಾನಿಸಲಾಗುತ್ತದೆ. ಅದರಲ್ಲೂ ಬಾಡಿಗೆದಾರರನ್ನು ಇವರು ಕೇವಲ ಹಣ ನೀಡುವ ಯಂತ್ರಗಳಂತೆ ಕಾಣುತ್ತಾರೆಯೇ ಹೊರತು ಸಮಾನ ಗೌರವವಿರುವ ನಿವಾಸಿಗಳಂತೆ ನಡೆಸಿಕೊಳ್ಳುವುದಿಲ್ಲ. ಹೀಗಾಗಿ ಅನೇಕ ಯುವಕರು ತಮ್ಮದೇ ಮನೆಯಲ್ಲಿ ಅಪರಿಚಿತರಂತೆ ಬದುಕುವಂತಾಗಿದೆ.&lt;/p&gt;&lt;h2&gt;&lt;strong&gt;ವಾಟ್ಸಾಪ್ ಗ್ರೂಪ್&zwnj;ನಲ್ಲಿ ಪ್ರಶ್ನಿಸಿದ್ದಕ್ಕೆ ಕೆಂಡಾಮಂಡಲ&lt;/strong&gt;&lt;/h2&gt;&lt;p&gt;ಶ್ರವಣ್ ಅವರು ಹೈದರಾಬಾದ್&zwnj;ನಲ್ಲಿ ಎದುರಿಸಿದ ಘಟನೆ ಈ ಚರ್ಚೆಗೆ ಪ್ರಬಲ ನಾಂದಿ ಹಾಡಿತು. ಅವರ ಮನೆಯಲ್ಲಿ ಕಳ್ಳತನ ನಡೆದಾಗ, ಅವರು ರಕ್ಷಣೆಗಾಗಿ ಸಿಸಿಟಿವಿ ಫೂಟೇಜ್ ಕೇಳಿದರು. ಆದರೆ ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ ಎಂಬ ಬೇಜವಾಬ್ದಾರಿಯುತ ಉತ್ತರ ಬಂದಿತು. ಈ ಬಗ್ಗೆ ನಿವಾಸಿಗಳ ವಾಟ್ಸಾಪ್ ಗ್ರೂಪ್&zwnj;ನಲ್ಲಿ ಮಾಹಿತಿ ಹಂಚಿಕೊಂಡು, ಸುರಕ್ಷತೆಗಾಗಿ ವೈಯಕ್ತಿಕ ಕ್ಯಾಮೆರಾ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಕ್ಕೆ RWA ಪದಾಧಿಕಾರಿಗಳು ಕೆಂಡಾಮಂಡಲವಾದರು. ಮರುದಿನ ಅವರನ್ನು ಕ್ಲಬ್&zwnj;ಹೌಸ್&zwnj;ಗೆ ಕರೆಸಿದ ಅಧ್ಯಕ್ಷರು, ಸುರಕ್ಷತೆಯ ಲೋಪದ ಬಗ್ಗೆ ಕ್ರಮ ಕೈಗೊಳ್ಳುವ ಬದಲು &quot;ಸೊಸೈಟಿಯ ಮಾನ ಮರ್ಯಾದೆ ಮತ್ತು ಘನತೆಯನ್ನು ಹಾಳು ಮಾಡುತ್ತಿದ್ದೀಯಾ&quot; ಎಂದು ಎಲ್ಲರ ಮುಂದೆ ಕಿರುಚಾಡಿ ಅವಮಾನಿಸಿದರು. ಇದು ಸಮಕಾಲೀನ ಅಪಾರ್ಟ್&zwnj;ಮೆಂಟ್ ಸಂಸ್ಕೃತಿಯಲ್ಲಿರುವ ಗಂಭೀರ ಆಡಳಿತಾತ್ಮಕ ಪಿಡುಗನ್ನು ಎತ್ತಿ ತೋರಿಸುತ್ತದೆ.&lt;/p&gt;&lt;h3&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ&lt;/strong&gt;&lt;/h3&gt;&lt;p&gt;ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ಯುವಕರು ತಮಗಾದ ನೈತಿಕ ಪೊಲೀಸ್&zwnj;ಗಿರಿ ಮತ್ತು ಪ್ರೈವೆಸಿಯ ಉಲ್ಲಂಘನೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಸೆಕ್ಯೂರಿಟಿ ಗಾರ್ಡ್&zwnj;ಗಳು ಅತಿಥಿಗಳ ಮೇಲೆ ಮಾಡುವ ಅತಿಯಾದ ವಿಚಾರಣೆ ಮತ್ತು ಪ್ರೊಫೈಲಿಂಗ್ ಬಗ್ಗೆ ದೂರಿದ್ದಾರೆ. ಆದರೆ, ಇನ್ನೊಂದೆಡೆ ಕೆಲವು ಹಿರಿಯರು &quot;ಸಾವಿರಾರು ಜನರು ಇರುವ ಕಡೆ ಶಿಸ್ತು, ಶಾಂತಿ ಮತ್ತು ಸುರಕ್ಷತೆ ಕಾಪಾಡಲು ಇಂತಹ ಕಠಿಣ ನಿಯಮಗಳು ಅನಿವಾರ್ಯ&quot; ಎಂದು ಸಮಿತಿಯ ಪರವಾಗಿ ವಾದಿಸಿದ್ದಾರೆ.&lt;/p&gt;&lt;p&gt;ಕೊನೆಯದಾಗಿ ಶ್ರವಣ್ ಅವರ ಕಿವಿಮಾತು ಏನೆಂದರೆ, &quot;ಯುವಕರು ಅತಿಯಾದ ಕಣ್ಗಾವಲು ಮತ್ತು ಕಿರಿಕಿರಿ ಇರುವ ದೊಡ್ಡ ಸೊಸೈಟಿಗಳಿಗಿಂತ 25-30 ಮನೆಗಳಿರುವ ಸಣ್ಣ ಕಟ್ಟಡಗಳಲ್ಲಿ ವಾಸಿಸುವುದು ನೆಮ್ಮದಿಯ ದೃಷ್ಟಿಯಿಂದ ಉತ್ತಮ.&quot; ಇದು ಹಳೆಯ ಸಂಪ್ರದಾಯವಾದಿ ಆಲೋಚನೆ ಮತ್ತು ಹೊಸ ತಲೆಮಾರಿನ ವೈಯಕ್ತಿಕ ಸ್ವಾತಂತ್ರ್ಯದ ನಡುವಿನ ತೀವ್ರ ಸಂಘರ್ಷವಾಗಿ ಮಾರ್ಪಟ್ಟಿದೆ. ಇಂತಹ ಪ್ರವೃತ್ತಿ ಮುಂದುವರಿದರೆ ಗೇಟೆಡ್ ಕಮ್ಯುನಿಟಿಗಳು ಕೇವಲ ಕಾಂಕ್ರೀಟ್ ಜೈಲುಗಳಾಗಿ ಉಳಿಯಲಿವೆ.&lt;/p&gt;&lt;p&gt;If you're a bachelor/young couple with kids, as much as possible avoid high rises and opt for G+3 G+4 type places with &amp;lt; 25 units houses.&amp;nbsp;The old people in high rises (who also happen to be part of RWAs) are becoming mentally deranged and pretty insane at this point.&lt;/p&gt;&lt;p&gt;&mdash; Shravan Venkataraman (@theBuoyantMan) May 25, 2026&lt;/p&gt;]]></content:encoded>
            <category>relationship</category>
            <dc:creator>Ashwini HR</dc:creator>
            <atom:link href="https://kannada.asianetnews.com/relationship/techies-viral-warning-why-young-couples-should-avoid-high-rise-societies/articleshow-ap92vht"/>
        </item>
        <item>
            <title><![CDATA[ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ತಾರಾ ಜೋಡಿ: ವಾರ್ಷಿಕೋತ್ಸವದ ಸಂಭ್ರಮ- ಕ್ಯೂಟ್​ ಫೋಟೋಸ್​]]></title>
            <link>https://kannada.asianetnews.com/gallery/relationship/shreerastu-shubhamastu-lavanya-bharadwaj-and-shashi-couple-wedding-anniversary-suc-dltbs6d</link>
            <guid isPermaLink="true">https://kannada.asianetnews.com/gallery/relationship/shreerastu-shubhamastu-lavanya-bharadwaj-and-shashi-couple-wedding-anniversary-suc-dltbs6d</guid>
            <pubDate>Mon, 25 May 2026 13:03:45 +0530</pubDate>
            <description><![CDATA[&lt;p&gt;'ಶ್ರೀರಸ್ತು ಶುಭಮಸ್ತು' ಖ್ಯಾತಿಯ ಲಾವಣ್ಯ ಭಾರದ್ವಾಜ್ ಮತ್ತು 'ಅಮೃತಧಾರೆ' ಖ್ಯಾತಿಯ ಶಶಿ ಹೆಗ್ಡೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿವಾಹ ವಾರ್ಷಿಕೋತ್ಸವದಂದು ಸುದ್ದಿಯನ್ನು ಹಂಚಿಕೊಂಡಿದ್ದು, 'ರಾಜಾ ರಾಣಿ' ಧಾರಾವಾಹಿಯಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ &amp;nbsp;ಪ್ರೇಮಕಥೆ ಕುತೂಹಲಕಾರಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksf0metkpxq2w8bxgftjmzz5,imgname-lavanya-and-shashi-1779694189395.jpg" type="image/jpeg" height="390" width="690"/>
            <content:encoded><![CDATA[&lt;p&gt;'ಶ್ರೀರಸ್ತು ಶುಭಮಸ್ತು' ಖ್ಯಾತಿಯ ಲಾವಣ್ಯ ಭಾರದ್ವಾಜ್ ಮತ್ತು 'ಅಮೃತಧಾರೆ' ಖ್ಯಾತಿಯ ಶಶಿ ಹೆಗ್ಡೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿವಾಹ ವಾರ್ಷಿಕೋತ್ಸವದಂದು ಸುದ್ದಿಯನ್ನು ಹಂಚಿಕೊಂಡಿದ್ದು, 'ರಾಜಾ ರಾಣಿ' ಧಾರಾವಾಹಿಯಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ &amp;nbsp;ಪ್ರೇಮಕಥೆ ಕುತೂಹಲಕಾರಿಯಾಗಿದೆ.&lt;/p&gt;&lt;img&gt;&lt;p&gt;ಶ್ರೀರಸ್ತು ಶುಭಮಸ್ತು ಪೂರ್ಣಿ ಅರ್ಥಾತ್​ ನಟಿ ಲಾವಣ್ಯ ಭಾರದ್ವಾಜ್​ ಮತ್ತು ಅಮೃತಧಾರೆಯಲ್ಲಿ ಜೀವ ಪಾತ್ರಧಾರಿಯಾಗಿದ್ದ ಶಶಿ ದಂಪತಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ಅರ್ಥಾತ್​ ಮೇ 25 ಈ ಜೋಡಿಯ ವಿವಾಹ ವಾರ್ಷಿಕೋತ್ಸವ.&lt;/p&gt;&lt;img&gt;&lt;p&gt;ವಿವಾಹ ವಾರ್ಷಿಕೋತ್ಸವದ ಶುಭ ಗಳಿಗೆಯಲ್ಲಿ ಜೋಡಿ ಕ್ಯೂಟ್​ ಫೋಟೋಗಳನ್ನು ಶೇರ್​ ಮಾಡಿಕೊಂಡಿದೆ. ಇದರಲ್ಲಿ ಲಾವಣ್ಯ ಅವರು ತುಂಬು ಗರ್ಭಿಣಿಯಾಗಿದ್ದು ವಾರ್ಷಿಕೋತ್ಸವದ ನಿಮಿತ್ತ ಪತಿಯ ಜೊತೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಲಾವಣ್ಯ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದು, ಆಗಾಗ್ಗೆ ಹಲವಾರು ರೀಲ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.&lt;/p&gt;&lt;img&gt;&lt;p&gt;ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು.&lt;/p&gt;&lt;img&gt;&lt;p&gt;&lsquo;ರಾಜಾ ರಾಣಿ&rsquo; ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ.&lt;/p&gt;&lt;img&gt;&lt;p&gt;ಮದುವೆಯಾಗಿ ವರ್ಷದ ಬಳಿಕ ಈ ಜೋಡಿ ಈಚೆಗೆ ಮನಾಲಿಗೆ ಹೋಗಿ ಪ್ರವಾಸ ಮಾಡಿದ್ದು, ಇದು ನಮ್ಮ ಹನಿಮೂನ್​ ಎಂದು ತಮಾಷೆ ಮಾಡಿದ್ದರು. ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ತಂದೆ, ಲಾವಣ್ಯ ಹುಟ್ಟಿದ ಬಗ್ಗೆ ತಿಳಿಸಿದ್ದರು. ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್&zwnj; ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/shreerastu-shubhamastu-lavanya-bharadwaj-and-shashi-couple-wedding-anniversary-suc-dltbs6d"/>
        </item>
        <item>
            <title><![CDATA[ಮದುವೆ ಮಂಟಪದಲ್ಲೇ ವಧು-ವರರ ರೊಮಾನ್ಸ್​: ದಂಗಾದ ಪುರೋಹಿತರು- ವಿಡಿಯೋ ವೈರಲ್]]></title>
            <link>https://kannada.asianetnews.com/viral/a-funny-wedding-moment-went-viral-when-a-pandit-stopped-the-bride-and-groom-suc/articleshow-fcvya14</link>
            <guid isPermaLink="true">https://kannada.asianetnews.com/viral/a-funny-wedding-moment-went-viral-when-a-pandit-stopped-the-bride-and-groom-suc/articleshow-fcvya14</guid>
            <pubDate>Tue, 26 May 2026 22:09:09 +0530</pubDate>
            <description><![CDATA[ಮದುವೆ ಮಂಟಪದಲ್ಲಿ ವಧು-ವರರು ರೊಮ್ಯಾಂಟಿಕ್ ಆಗಿ ಕಿಸ್ ಮಾಡಲು ಮುಂದಾದಾಗ, ಪುರೋಹಿತರು ಮಧ್ಯ ಪ್ರವೇಶಿಸಿ ಅವರನ್ನು ತಡೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುರೋಹಿತರ ನಡೆ ಸರಿ-ತಪ್ಪಿನ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksjjddj08w7jmbabdrjgvdxv,imgname-viral-marriage-1779813496384.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಚಿನ ದಿನಗಳಲ್ಲಿ ಲವ್​ ಮ್ಯಾರೇಜ್​ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮದುಮಕ್ಕಳ ನಡುವೆ ಮದುವೆಗೂ ಮುನ್ನವೇ ಅನ್ಯೋನ್ಯತೆ ಬೆಳೆದಿರುತ್ತದೆ. ಅಲ್ಲಿ ನಾಚಿಕೆ, ಅಂಜಿಕೆ ಎನ್ನೋದು ಬಹಳ ಕಡಿಮೆಯೇ. ಆದ್ದರಿಂದ ಎಲ್ಲರ ಎದುರೇ ರೊಮಾನ್ಸ್​ ಮಾಡಲು ಅವರು ಅಂಜುವುದಿಲ್ಲ. ಆದರೆ, ಮದುವೆಯ ದಿನ ಮದುಮಕ್ಕಳು ನಾಚಿಕೆ ಬಿಟ್ಟರೂ, ಅಲ್ಲಿ ಬಂದಿರುವ ಜನರು ಇವರನ್ನು ನೋಡಿ ಕಣ್ಣುಮುಚ್ಚಿಕೊಳ್ಳುವ ಸ್ಥಿತಿಯೂ ಇಂದು ಸರ್ವೇ ಸಾಮಾನ್ಯ ಎನ್ನಿಸಿಬಿಟ್ಟಿದ್ದು, ಅಂಥದ್ದೇ ಒಂದು ವಿಡಿಯೋ ವೈರಲ್​ ಆಗ್ತಿದೆ.&lt;/p&gt;&lt;h2&gt;&lt;strong&gt;ರೊಮಾನ್ಸ್ ಶುರು&lt;/strong&gt;&lt;/h2&gt;&lt;p&gt;ಇದರಲ್ಲಿ ಮದುಮಕ್ಕಳು ಮದುಮಕ್ಕಳು, ಮದುವೆ ಮಾಡಿಸಲು ಬಂದ ಪಂಡಿತರು ಹಾಗೂ ಜನರ ಎದುರೇ ರೊಮಾನ್ಸ್​ ಶುರು ಮಾಡಿಕೊಂಡು ಬಿಟ್ಟರು. ಕಿಸ್ಸಿಂಗ್​ ಮಾಡಲು ಮುಂದಾದರು. ಇದನ್ನು ನೋಡಿದ ಪುರೋಹಿತರಿಗೆ ಮುಜುಗರ ಆಗಿ, ಮಧ್ಯೆ ಬಂದು, ಬ್ರೇಕ್​ ಹಾಕಿದರು. ಇದರ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ.&lt;/p&gt;&lt;h3&gt;&lt;strong&gt;ವೈರಲ್​ ವಿಡಿಯೋದಲ್ಲಿ ಏನಿದೆ?&lt;/strong&gt;&lt;/h3&gt;&lt;p&gt;ಈಗ ವೈರಲ್​ ಆಗ್ತಿರೋ ವಿಡಿಯೋದಲ್ಲಿ, ವಧು ಕ್ಯಾಮೆರಾಮನ್&zwnj;ಗಳೊಂದಿಗೆ ಮದುವೆಯ ಸ್ಥಳಕ್ಕೆ ಹಜಾರದಿಂದ ನಡೆದುಕೊಂಡು ಹೋಗುವುದನ್ನು ನೋಡಬಹುದು. ವಧು ಮದುವೆಯ ಸ್ಥಳವನ್ನು ತಲುಪಿದಾಗ, ವರನು ವಧುವನ್ನು ಮೊಣಕಾಲು ಊರಿ ಅವಳಿಗೆ ಕಿಸ್​ ಮಾಡುತ್ತಾನೆ. ನಂತರ, ಕ್ಯಾಮೆರಾಮನ್&zwnj;ಗಳ ಸೂಚನೆಯಂತೆ ಇಬ್ಬರೂ ಮದುವೆಯ ಸ್ಥಳದಲ್ಲಿ ಅಪ್ಪಿಕೊಂಡು ನಿಲ್ಲುತ್ತಾರೆ. ವರನು ವಧುವಿನ ಕೆನ್ನೆಗೆ ಮೃದುವಾದ ಮುತ್ತು ನೀಡುತ್ತಾನೆ, ಮತ್ತು ಅಲ್ಲಿ ನೆರೆದಿದ್ದ ಅತಿಥಿಗಳು ಚಪ್ಪಾಳೆ ತಟ್ಟುವುದನ್ನು ವೀಡಿಯೊದಲ್ಲಿ ಕೇಳಬಹುದು.&lt;/p&gt;&lt;p&gt;ಆಗಮಿಸಿದ ಪುರೋಹಿತ&lt;/p&gt;&lt;p&gt;ಏತನ್ಮಧ್ಯೆ, ಅನಿರೀಕ್ಷಿತವಾಗಿ ಅಲ್ಲಿಗೆ ಆಗಮಿಸಿದ ಪುರೋಹಿತ, ವರನನ್ನು ವಧುವಿನಿಂದ ಬಲವಂತವಾಗಿ ಎಳೆದು ಇಬ್ಬರ ನಡುವೆ ನಿಲ್ಲುತ್ತಾನೆ. ಇದರೊಂದಿಗೆ, ವಧು ನಿರಾಶೆಯಿಂದ ಮದುವೆ ಸ್ಥಳದಿಂದ ಹೊರಹೋಗುವುದನ್ನು ಕಾಣಬಹುದು. ಈ ವಿಡಿಯೋ ನೋಡಿದ ಹಲವರು ಪುರೋಹಿತನ ವಿರುದ್ಧ ಕಿಡಿ ಕಾರುತ್ತಿದ್ದರೆ, ಮತ್ತೆ ಕೆಲವರು ಅವರು ಮಾಡಿದ್ದು ಸರಿ ಇದೆ ಎನ್ನುತ್ತಿದ್ದಾರೆ. ಪುರೋಹಿತರನ್ನು ದುಡ್ಡು ಕೊಟ್ಟು ಕರೆಸಿರುವುದು. ಅವರ ಕೆಲಸ ಮದುವೆ ಮಾಡಿಸುವುದು ಅಷ್ಟೇ. ಇವೆಲ್ಲಾ ಅಧಿಕ ಪ್ರಸಂಗ ಮಾಡಬಾರದು ಎಂದು ಕೆಲವರು ವಧು-ವರರ ಪರವಾಗಿ ನಿಂತಿದ್ದರೆ, ಮತ್ತೆ ಕೆಲವರು, ಪುರೋಹಿತರು ಮಾಡಿದ್ದು ಸರಿಯಿದೆ. ಸಾರ್ವಜನಿಕವಾಗಿ ಈ ರೀತಿ ಮಾಡುವುದು ಅಸಭ್ಯ ಎನ್ನಿಸುತ್ತದೆ. ಅವರಿಗೆ ಸ್ವಲ್ಪ ತಲೆ ಇರಬೇಕು. ಮದುವೆಯ ಬಳಿಕ ಏಕಾಂತದಲ್ಲಿ ಏನು ಬೇಕಾದ್ರೂ ಮಾಡಲಿ, ಇದು ಅತಿಯಾಯಿತು ಎನ್ನುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Been_social (@been_social)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/viral/a-funny-wedding-moment-went-viral-when-a-pandit-stopped-the-bride-and-groom-suc/articleshow-fcvya14"/>
        </item>
        <item>
            <title><![CDATA[ರೋಲ್ಸ್​ ರಾಯ್​ ಕಾರಿನ ಜೊತೆ 70ರ ಅಜ್ಜ ಫ್ರೀ: 20ರ ಸುಂದ್ರಿಯ ಭರ್ಜರಿ ಮದುವೆ- ಯುವಕರ ಹೊಟ್ಟೆಯಲ್ಲಿ ಬೆಂಕಿ]]></title>
            <link>https://kannada.asianetnews.com/relationship/a-70-year-old-saudi-man-hakim-babar-zia-married-a-20-year-old-woman-suc/articleshow-hztkfgr</link>
            <guid isPermaLink="true">https://kannada.asianetnews.com/relationship/a-70-year-old-saudi-man-hakim-babar-zia-married-a-20-year-old-woman-suc/articleshow-hztkfgr</guid>
            <pubDate>Mon, 25 May 2026 14:15:25 +0530</pubDate>
            <description><![CDATA[ಸೌದಿ ಅರೇಬಿಯಾದಲ್ಲಿ 70 ವರ್ಷದ ವೃದ್ಧರೊಬ್ಬರು 20 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಯುವತಿಯನ್ನು ಒಪ್ಪಿಸಲು, ವರನು ರೋಲ್ಸ್ ರಾಯ್ಸ್ ಕಾರು ಮತ್ತು 5 ಕೆ.ಜಿ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು, ಈ ಸುದ್ದಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksf4y0v3f5r29vv74js83kzt,imgname-strange-marriage-1779698697059.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದು ಎಷ್ಟೋ ಗಂಡುಮಕ್ಕಳು ಹೆಣ್ಣೇ ಸಿಕ್ತಿಲ್ಲ ಎಂದು ಗೋಳೋ ಎನ್ನುತ್ತಿದ್ದಾರೆ. ಇಂದಿನ ಬಹುತೇಕ ಹೆಣ್ಣುಮಕ್ಕಳ ಡಿಮಾಂಡ್​ ಕೇಳಿ ಗಂಡುಮಕ್ಕಳು ಮದ್ವೆನೇ ಬೇಡ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವು ಗಂಡುಮಕ್ಕಳು ಲಕ್ಷ ಲಕ್ಷ ದುಡಿದರೂ, ಸುರಸುಂದರ ಆಗಿದ್ರೂ ಯಾಕೋ ಮದುವೆಗೆ ಕಂಕಣ ಭಾಗ್ಯ ಕೂಡಿ ಬರುವುದೇ ಇಲ್ಲ. ಅದಕ್ಕೇ ಹೇಳೋದು ಮದುವೆ ಸ್ವರ್ಗದಲ್ಲಿಯೇ ಆಗಿರತ್ತೆ ಅಂತ. ಆದರೆ ಕೆಲವು ಗಂಡಸರಿಗೆ ಮಾತ್ರ ಒಂದಲ್ಲ, ಸ್ವರ್ಗದಲ್ಲಿಯೇ ನಾಲ್ಕೈದು ಮದುವೆನೂ ಆಗಿರುತ್ತೋ ಗೊತ್ತಿಲ್ಲ, ಅದಕ್ಕಾಗಿಯೇ ಈ ಭೂಮಿಯ ಮೇಲೂ ಅಷ್ಟೇ ಮಕ್ಕಳಾದರೆ, ಒಂದು ಡಜನ್​ಗೂ ಹೆಚ್ಚು ಮಕ್ಕಳು ಹುಟ್ಟುತ್ತಾರೆ.&lt;/p&gt;&lt;h2&gt;&lt;strong&gt;ಅಜ್ಜನ ಮದುವೆ&lt;/strong&gt;&lt;/h2&gt;&lt;p&gt;ಅದಕ್ಕಿಂತಲೂ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಇಲ್ಲಿ ವರನಿಗೆ 70 ವರ್ಷ, ವಧುವಿಗೆ 20 ವರ್ಷ. ಕೆಲ ದಿನಗಳ ಹಿಂದಷ್ಟೇ ಇಂಥದ್ದೊಂದು ಕೇಸ್​, ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದ ಕೈಲಾ ಭಟ್ಟ ಪ್ರದೇಶದಲ್ಲಿ ನಡೆದಿತ್ತು. ಸಮಾಜವಾದಿ ಪಕ್ಷದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಹಾಜಿ ಖಲೀಲ್ ಅವರ ನಾಲ್ಕನೇ ಮದುವೆಯ ಬಗ್ಗೆ ಇದೀಗ ಭಾರಿ ವಿವಾದ ಸೃಷ್ಟಿಸಿತ್ತು. ಹಾಜಿ ಖಲೀಲ್​ ಅವರ ಎರಡನೇ ಪತ್ನಿ ನಜ್ರೀನ್ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿರುವ ಕಾರಣ ವಿಷಯ ಬೆಳಕಿಗೆ ಬಂದಿತ್ತು.&lt;/p&gt;&lt;h3&gt;&lt;strong&gt;20ರ ಚೆಲುವೆ&lt;/strong&gt;&lt;/h3&gt;&lt;p&gt;ಆದರೆ ಈ ಕೇಸ್​ನಲ್ಲಿ ಸದ್ಯ ಯಾರೂ ದೂರು ಕೊಡಲಿಲ್ಲ. ಏಕೆಂದ್ರೆ ಇದು ನಡೆದಿರುವುದು ಸೌದಿ ಅರೇಬಿಯಾದಲ್ಲಿ. ಹಕೀಮ್ ಬಾಬರ್ ಜಿಯಾ ಎಂಬ 70 ವರ್ಷದ ಅಜ್ಜನ ಮದುವೆ ಮೊಮ್ಮಗಳ ವಯಸ್ಸಿನ ಅರ್ಥಾತ್​ 20ರ ಚೆಲುವೆಯ ಜೊತೆ ಆಗಿದೆ. ಹಾಗೆಂದು ಆಕೆ ಏನೂ ಈ ಮದುವೆಗೆ ಸುಮ್ಮನೇ ಒಪ್ಪಿಕೊಳ್ಳಲಿಲ್ಲ ಬಿಡಿ. ಹಕೀಮ್​ ಬಾಬಾ ಈಕೆಗೆ ರೋಲ್ಸ್​ ರಾಯ್ಸ್​ ಕಾರಿನ ಜೊತೆ 5 ಕೆ.ಜಿ ಚಿನ್ನ ಗಿಫ್ಟ್​ ಕೊಟ್ಟಿದ್ದಾನಂತೆ. ಅದಕ್ಕಾಗಿ ಮದುವೆಯಾಗಿದ್ದು, ಈ ಕಾರಿನ ಜೊತೆನೋ ಅಥ್ವಾ ಅಜ್ಜನ ಜೊತೆನೋ ಅನ್ನೋದು ಕನ್​ಫ್ಯೂಸ್​ ಇದೆ. ಅದೇನೇ ಆದ್ರೂ, ಇದರ ಸುದ್ದಿ ವೈರಲ್​ ಆಗುತ್ತಲೇ ಯುವಕರಂತೂ ಹೊಟ್ಟೆ ಉರಿದುಕೊಂಡದ್ದು ನಿಜ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/a-70-year-old-saudi-man-hakim-babar-zia-married-a-20-year-old-woman-suc/articleshow-hztkfgr"/>
        </item>
        <item>
            <title><![CDATA[ಮದುವೆಯ ನಂತರ ಈ ಸಂಖ್ಯೆಯನ್ನು ಹೊಂದಿರುವ ಜನರ ಅದೃಷ್ಟ ಇದ್ದಕ್ಕಿದ್ದಂತೆ ಬದಲಾಗುತ್ತದೆ]]></title>
            <link>https://kannada.asianetnews.com/gallery/relationship/numerology-mulank-seven-luck-change-after-marriage-birth-date-7-16-and-25-life-prediction-ank-jyotish-suh-ioau7pw</link>
            <guid isPermaLink="true">https://kannada.asianetnews.com/gallery/relationship/numerology-mulank-seven-luck-change-after-marriage-birth-date-7-16-and-25-life-prediction-ank-jyotish-suh-ioau7pw</guid>
            <pubDate>Wed, 27 May 2026 14:43:09 +0530</pubDate>
            <description><![CDATA[&lt;p&gt;ವ್ಯಕ್ತಿಯ ಜನ್ಮ ಸಂಖ್ಯೆಯನ್ನು ನಿರ್ಧರಿಸುವ ಮೂಲಕ, ನೀವು ಅವರ ಜೀವನ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು. ಸಂಖ್ಯಾಶಾಸ್ತ್ರವು ಜನನ ಸಂಖ್ಯೆಗಳನ್ನು ಹೊಂದಿರುವ ಜನರನ್ನು ಮದುವೆಯ ನಂತರ ಅವರ ಜೀವನವು ಬದಲಾಗುತ್ತದೆ ಎಂಬುದನ್ನು ವಿವರಿಸುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksc5vf90er9txhvv5vqeh0a0,imgname-tamil-news--34--1779598998815.png" type="image/jpeg" height="390" width="690"/>
            <content:encoded><![CDATA[&lt;p&gt;ವ್ಯಕ್ತಿಯ ಜನ್ಮ ಸಂಖ್ಯೆಯನ್ನು ನಿರ್ಧರಿಸುವ ಮೂಲಕ, ನೀವು ಅವರ ಜೀವನ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು. ಸಂಖ್ಯಾಶಾಸ್ತ್ರವು ಜನನ ಸಂಖ್ಯೆಗಳನ್ನು ಹೊಂದಿರುವ ಜನರನ್ನು ಮದುವೆಯ ನಂತರ ಅವರ ಜೀವನವು ಬದಲಾಗುತ್ತದೆ ಎಂಬುದನ್ನು ವಿವರಿಸುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಸಂಖ್ಯಾಶಾಸ್ತ್ರದ ಪ್ರಕಾರ, 7 ನೇ ಸಂಖ್ಯೆ ಹೊಂದಿರುವ ಜನರು ಮದುವೆಯ ನಂತರ ತಮ್ಮ ಜೀವನದಲ್ಲಿ ಹಠಾತ್ ಬದಲಾವಣೆಯನ್ನು ಅನುಭವಿಸುತ್ತಾರೆ. ಅವರ ಅದೃಷ್ಟ ಹೊಳೆಯುತ್ತದೆ. ಈ ಜನರು ಮದುವೆಯ ನಂತರ ಬಹಳಷ್ಟು ಅದೃಷ್ಟವನ್ನು ಪಡೆಯುತ್ತಾರೆ. ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು 7 ನೇ ಸಂಖ್ಯೆಯನ್ನು ತಮ್ಮ ಸಂಖ್ಯೆಯಾಗಿ ಹೊಂದಿರುತ್ತಾರೆ. 7 ನೇ ಸಂಖ್ಯೆ ಹೊಂದಿರುವವರಿಗೆ ಕೇತು ಆಡಳಿತ ಗ್ರಹ. ಕೇತುವಿನ ಪ್ರಭಾವದಡಿಯಲ್ಲಿ, ಈ ಜನರು ನಿಗೂಢ, ಆಧ್ಯಾತ್ಮಿಕ ಮತ್ತು ಬುದ್ಧಿವಂತರು. ಕೇತು ಗಣೇಶನೊಂದಿಗೆ ಸಂಬಂಧ ಹೊಂದಿದ್ದಾನೆ. ಗಣೇಶ ಅವರ ಮೇಲೆ ವಿಶೇಷ ಆಶೀರ್ವಾದಗಳಿವೆ.&lt;/p&gt;&lt;img&gt;&lt;p&gt;7 ನೇ ಸಂಖ್ಯೆಯುಳ್ಳ ಜನರು ಜೀವನದಲ್ಲಿ ಅನೇಕ ಹೋರಾಟಗಳನ್ನು ಎದುರಿಸುತ್ತಾರೆ. ಮದುವೆಗೆ ಮೊದಲು, ಅವರು ತಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಅಡೆತಡೆಗಳನ್ನು ಎದುರಿಸುತ್ತಾರೆ. ಅವರ ಆರ್ಥಿಕ ಪರಿಸ್ಥಿತಿ ಹೆಚ್ಚಾಗಿ ಏರಿಳಿತಗೊಳ್ಳುತ್ತದೆ. ಕೇತು ಗ್ರಹದ ಪ್ರಭಾವದಿಂದಾಗಿ, ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ. ಆದಾಗ್ಯೂ, ಮದುವೆಯ ನಂತರ, ಅವರ ಜೀವನವು ಬದಲಾಗುತ್ತದೆ ಮತ್ತು ಅವರು ಯಶಸ್ಸನ್ನು ಸಾಧಿಸುತ್ತಾರೆ.&lt;/p&gt;&lt;img&gt;&lt;p&gt;ಮದುವೆಯ ನಂತರ, ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಅದೃಷ್ಟದಿಂದ ಅವರಿಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಮದುವೆಯ ನಂತರ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಜೀವನವು ಸಂತೋಷದಾಯಕವಾಗುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ. 7 ನೇ ಸಂಖ್ಯೆ ಇರುವವರಿಗೆ, ಮದುವೆಯು ಜೀವನದಲ್ಲಿ ಒಂದು ಮಹತ್ವದ ತಿರುವು ಎಂದು ಸಾಬೀತುಪಡಿಸುತ್ತದೆ. ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳುತ್ತವೆ.&lt;/p&gt;&lt;img&gt;&lt;p&gt;7 ನೇ ಸಂಖ್ಯೆ ಹೊಂದಿರುವ ಜನರು ಉತ್ತಮ ವೃತ್ತಿಜೀವನವನ್ನು ಹೊಂದಿರುತ್ತಾರೆ. ಅವರು ಬರವಣಿಗೆ, ಆಧ್ಯಾತ್ಮಿಕತೆ ಮತ್ತು ಶಿಕ್ಷಣದಲ್ಲಿ ವೃತ್ತಿಜೀವನವನ್ನು ಮುಂದುವರಿಸಬಹುದು. ಅವರ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಅವರ ಸಂಗಾತಿಯು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ, ಸಂಬಂಧಕ್ಕೆ ಸ್ಥಿರತೆ ಮತ್ತು ಸಂತೋಷವನ್ನು ತರುತ್ತಾರೆ. ಅವರು ಕೇತು ಗ್ರಹದೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಗಣೇಶನನ್ನು ಪೂಜಿಸಬೇಕು ಮತ್ತು ಓಂ ಗಣ ಗಣಪತಯೇ ನಮಃ ಮತ್ತು ಓಂ ಕೇನ್ ಕೇತವೇ ನಮಃ ಎಂಬ ಮಂತ್ರಗಳನ್ನು ಪಠಿಸಬೇಕು.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/numerology-mulank-seven-luck-change-after-marriage-birth-date-7-16-and-25-life-prediction-ank-jyotish-suh-ioau7pw"/>
        </item>
        <item>
            <title><![CDATA[Amruthadhaare ಸೆಟ್​ನಲ್ಲಿ ಮಗ ಗೌತಮ್​ ಜೊತೆ ಲೇಡಿ ವಿಲನ್​ ಶಕುಂತಲಾ ಹೇಗೆ ಇರ್ತಾರೆ ನೋಡಿ]]></title>
            <link>https://kannada.asianetnews.com/gallery/tv-talk/amruthadhaare-gowtham-and-shakuntala-urf-rajesh-natarana-and-vanitha-vasu-photo-suc-km08oq1</link>
            <guid isPermaLink="true">https://kannada.asianetnews.com/gallery/tv-talk/amruthadhaare-gowtham-and-shakuntala-urf-rajesh-natarana-and-vanitha-vasu-photo-suc-km08oq1</guid>
            <pubDate>Mon, 25 May 2026 11:12:05 +0530</pubDate>
            <description><![CDATA['ಅಮೃತಧಾರೆ' ಧಾರಾವಾಹಿಯಲ್ಲಿ ಖಳನಾಯಕಿ ತಾಯಿ ಶಕುಂತಲಾ ಮತ್ತು ಮಗ ಗೌತಮ್ ಪಾತ್ರಗಳು ಜನಪ್ರಿಯವಾಗಿವೆ. ಆದರೆ ಈ ಪಾತ್ರಗಳನ್ನು ನಿರ್ವಹಿಸುತ್ತಿರುವ ವನಿತಾ ವಾಸು ಮತ್ತು ರಾಜೇಶ್ ನಟರಂಗ ಅವರು ನಿಜ ಜೀವನದಲ್ಲಿ ಉತ್ತಮ ಸ್ನೇಹಿತರಾಗಿದ್ದು, ಈ ಕುರಿತು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksetaxxgb8y65f73z75s1q04,imgname-rajesh-nataranga-and-vanitha-vasu-1779687585712.jpg" type="image/jpeg" height="390" width="690"/>
            <content:encoded><![CDATA['ಅಮೃತಧಾರೆ' ಧಾರಾವಾಹಿಯಲ್ಲಿ ಖಳನಾಯಕಿ ತಾಯಿ ಶಕುಂತಲಾ ಮತ್ತು ಮಗ ಗೌತಮ್ ಪಾತ್ರಗಳು ಜನಪ್ರಿಯವಾಗಿವೆ. ಆದರೆ ಈ ಪಾತ್ರಗಳನ್ನು ನಿರ್ವಹಿಸುತ್ತಿರುವ ವನಿತಾ ವಾಸು ಮತ್ತು ರಾಜೇಶ್ ನಟರಂಗ ಅವರು ನಿಜ ಜೀವನದಲ್ಲಿ ಉತ್ತಮ ಸ್ನೇಹಿತರಾಗಿದ್ದು, ಈ ಕುರಿತು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;img&gt;&lt;p&gt;ತುಂಬಾ ಒಳ್ಳೆಯ ಮಗ, ತೀರಾ ಕೆಟ್ಟ ಅಮ್ಮ ಅರ್ಥಾತ್​ ಚಿಕ್ಕಮ್ಮ. ಇದು ಬಹುತೇಕ ಸೀರಿಯಲ್​ಗಳಲ್ಲಿ ಮಾಮೂಲಾಗಿದೆ. ಅದೇ ರೀತಿ ಅಮೃತಧಾರೆ (Amruthadhaare)ಯಲ್ಲಿ ಕೂಡ.&lt;/p&gt;&lt;img&gt;&lt;p&gt;ಇಲ್ಲಿ ವಿಲನ್​ ಶಕುಂತಲಾ ಮತ್ತು ಮಗ ಗೌತಮ್​ ಸ್ಟೋರಿ. ಇದೀಗ ತನ್ನ ಸ್ವಂತ ಮಗ ಜೈದೇವ್​ ಮನೆಯಿಂದ ಒದ್ದು ಹೊರಹಾಕಿದ ಬಳಿಕ ಶಕುಂತಲಾಗೆ ಗೌತಮ್​ ಗತಿಯಾದ್ರೂ, ಸ್ವಂತ ಮಗನ ಮೇಲಿನ ವ್ಯಾಮೋಹ ಮಾತ್ರ ಹೋಗಿಲ್ಲ. ಅಷ್ಟಕ್ಕೂ ಹುಟ್ಟುಗುಣ ಸುಟ್ಟರೂ ಹೋಗಲ್ವಲ್ಲಾ ಹಾಗೆನೇ ಇದು.&lt;/p&gt;&lt;img&gt;&lt;p&gt;ಸೀರಿಯಲ್​ನಲ್ಲಿ ಗೌತಮ್​ ಪಾತ್ರಧಾರಿಯಾಗಿ ರಾಜೇಶ್​ ನಟರಂಗ (Rajesh Nataranga) ಹಾಗೂ ಶಕುಂತಲಾ ಆಗಿ ವನಿತಾ ವಾಸು ನಟಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಸೀರಿಯಲ್​ನಲ್ಲಿ ಈ ಅಮ್ಮ-ಮಗ ಹೇಗೆ ಇರಲಿ, ರಿಯಲ್​ ಲೈಫ್​ನಲ್ಲಿ ಮಾತ್ರ ರಾಜೇಶ್​ ಮತ್ತು ವನಿತಾ ವಾಸು ಅವರ ತುಂಬಾ ಒಳ್ಳೆಯ ಫ್ರೆಂಡ್ಸ್​. ಈ ಕುರಿತು ನಟಿ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸೀರಿಯಲ್​ ನಮಗೆ ಸಹೊದ್ಯೋಗಿಯನ್ನಾಗಿ ಮಾಡಿದೆ. ಆದರೆ ರಿಯಲ್​ ಲೈಫ್​ನಲ್ಲಿ ನಾವಿಬ್ಬರೂ ಫ್ರೆಂಡ್ಸ್​ ಎಂದು ನಟಿ ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-gowtham-and-shakuntala-urf-rajesh-natarana-and-vanitha-vasu-photo-suc-km08oq1"/>
        </item>
        <item>
            <title><![CDATA[Love Jihad ಎಲ್ಲರಂತಲ್ಲ ನನ್ನ... ಎಂದು ಹಿಂದೆ ಹೋದವಳಿಗೆ ಬೆತ್ತಲು ಮಾಡಿದ! ಹಿಂದೂ ಸಂಘಟನೆಗೆ ಸಿಕ್ಕಿಬಿದ್ದ ಹುಬ್ಬಳ್ಳಿಯವ]]></title>
            <link>https://kannada.asianetnews.com/crime/another-love-jihad-in-hubballi-hindu-organisation-found-muslim-youth-suc/articleshow-km3osfh</link>
            <guid isPermaLink="true">https://kannada.asianetnews.com/crime/another-love-jihad-in-hubballi-hindu-organisation-found-muslim-youth-suc/articleshow-km3osfh</guid>
            <pubDate>Mon, 25 May 2026 12:15:42 +0530</pubDate>
            <description><![CDATA[ಹುಬ್ಬಳ್ಳಿಯಲ್ಲಿ 'ಲವ್ ಜಿಹಾದ್' ಪ್ರಕರಣಗಳು ಹೆಚ್ಚುತ್ತಿದ್ದು, ಐಷಾರಾಮಿ ಜೀವನದ ಆಮಿಷವೊಡ್ಡಿ ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಲಾಗುತ್ತಿದೆ. ಮಾದಕ ದ್ರವ್ಯ ನೀಡಿ, ಅಶ್ಲೀಲ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡುವ ಜಾಲದ ಬಗ್ಗೆ ಈ ಲೇಖನ ಎಚ್ಚರಿಸುತ್ತದೆ. ಇತ್ತೀಚೆಗೆ ನಡೆದ ಸಾಜಿದ್ ಉಣಕಲ್ ಪ್ರಕರಣವೂ ಸೇರಿದಂತೆ, ಇಂತಹ ಘಟನೆಗಳ ಬಗ್ಗೆ ಪೊಲೀಸರು ಮತ್ತು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksexy7gvrbzwxpdxdxb5jq20,imgname-love-jihad-1779691363867.jpg" type="image/jpeg" height="390" width="690"/>
            <content:encoded><![CDATA[&lt;p&gt;ಥಳುಕು ಬಳುಕು, ಬಣ್ಣಬಣ್ಣದ ಮಾತು, ಐಷಾರಾಮಿ ಕಾರು, ಬೈಕು, ಹೀರೋಗಳ ಸ್ಟೈಲ್​ನಲ್ಲಿ ಹೇರ್​ಸ್ಟೈಲ್​, ದಿನವೂ ಪಿಕ್​ ಅಪ್​ ಡ್ರಾಪ್​, ಶ್ರೀಮಂತಿಕೆ, ಇಂಥ ಕನಸನ್ನು ಕಾಣುವುದು ಎಲ್ಲಿಯವರೆಗೆ ಹಿಂದೂ ಯುವತಿಯರು ಬಿಡುವುದಿಲ್ಲವೋ ಅಲ್ಲಿಯವರೆಗೆ ಅಂಥವರೇ ಬೆತ್ತಲಾಗುವುದು ಗ್ಯಾರೆಂಟಿ ಎನ್ನುವುದು ಪದೇ ಪದೇ ಸಾಬೀತಾಗುತ್ತಿದ್ದರೂ ನನ್ನವ ಎಲ್ಲರಂಥವನಲ್ಲ ಎಂದರೆ ನಿಮ್ಮ ವಿಡಿಯೋಗಳು ಪೋ*ರ್ನ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಆಗಿಯೋ, ಇಲ್ಲವೇ ಮಕ್ಕಳನ್ನು ಹೆರುವ ಮಷಿನ್​ ಆಗಿಯೋ, ಬೀದಿಗೆ ಬರುವುದೋ ಕೊನೆಗೆ ಆ*ತ್ಮಹತ್ಯೆ ಒಂದೇ ದಾರಿ ಎಂದುಕೊಳ್ಳುವುದೋ ತಪ್ಪಲ್ಲ ಎಂದು ಪೊಲೀಸರು, ಹಿಂದೂ ಸಂಘಟನೆಗಳು ದಿನನಿತ್ಯವೂ ಎಚ್ಚರಿಕೆಯನ್ನು ಕೊಡುತ್ತಲೇ ಇದ್ದಾರೆ.&lt;/p&gt;&lt;p&gt;ಅದೆಷ್ಟೋ ಹಿಂದೂ ಯುವತಿಯರು ನರಕದ ಬಾಯಿಗೆ ಹೋಗಿ ಹೇಳಿಕೊಳ್ಳಲಾಗದ ಸಂಕಷ್ಟ ಅನುಭವಿಸುತ್ತ ಕೊನೆಗೆ ಸಾವಿನ ಹಾದಿ ಹಿಡಿದಿರುವ ಬಗ್ಗೆ ಪೊಲೀಸರು ಪತ್ರಿಕಾಗೋಷ್ಠಿ ಮಾಡಿ ಎಚ್ಚರ ಕೊಡುತ್ತಲೇ ಇದ್ದರೂ, ನಾನು ಎಜುಕೇಟೆಡ್​, ನನಗೆ ಇವೆಲ್ಲಾ ಬುದ್ಧಿಮಾತು ನಿಮ್ಮಿಂದ ಕಲಿಯಬೇಕಿಲ್ಲ ಎನ್ನುವ ಯುವತಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.&lt;/p&gt;&lt;h2&gt;&lt;strong&gt;ಲವ್​ ಜಿಹಾದ್​ ಕೇಂದ್ರ&lt;/strong&gt;&lt;/h2&gt;&lt;p&gt;ಇದಾಗಲೇ ಹುಬ್ಬಳ್ಳಿಯ ಲವ್​ ಜಿಹಾದ್​ ಕೇಂದ್ರವಾಗಿದೆ. ಹುಬ್ಬಳ್ಳಿಯ ಜಿಮ್​ ಓನರ್​ ಸಮೀರ್​ ಮುಲ್ಲಾ ಸೇರಿದಂತೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೊಬೈಲ್​ಗಳಲ್ಲಿ ಹಿಂದೂ ಯುವತಿಯರ ಅಶ್ಲೀಲ ಫೋಟೋಗಳು ಪತ್ತೆಯಾಗಿವೆ. ಕೆಲವೊಂದನ್ನು ಖುದ್ದು ಯುವತಿಯರೇ ಖುಷಿಯಿಂದ ತೆಗೆದುಕೊಂಡರೆ, ಇನ್ನು ಕೆಲವು ಮಾದಕ ದ್ರವ್ಯ ನೀಡಿಯೋ ಅಥವಾ ಇನ್ನೇನೋ ಕೊಟ್ಟು ಯುವತಿಯರನ್ನು ಬೆತ್ತಲು ಮಾಡಿ, ರೇ*ಪ್ ಮಾಡಿರುವ ವಿಡಿಯೋ ಅವು. ಇಷ್ಟಾದರೂ ಯುವತಿಯರು ಥಳಕು ಬಳುಕಿನದ್ದಕ್ಕೆ ಮೊರೆ ಹೋಗುತ್ತಿರುವುದು ಹುಬ್ಬಳ್ಳಿಯಿಂದಲೇ ವರದಿಯಾಗಿದೆ. ​&lt;/p&gt;&lt;h3&gt;&lt;strong&gt;ಬ್ರೈನ್​ವಾಷ್​&lt;/strong&gt;&lt;/h3&gt;&lt;p&gt;ಕಾಲೇಜು ಯುವತಿಯೊಬ್ಬಳ ಬ್ರೈನ್​ವಾಷ್​ ಮಾಡಿ ಆಕೆಯನ್ನುತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಸಾಜಿದ್ ಉಣಕಲ್ ಎಂಬಾತ ಹಿಂದೂ ಸಂಘಟನೆ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹುಬ್ಬಳ್ಳಿಯ ಸಾಗರ್ ಕಾಲೋನಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿರುವ ಈತ ಆಕೆಗೆ ಮಾದಕ ದ್ರವ್ಯ ನೀಡಿ ಬೆತ್ತಲುಮಾಡಿದ್ದ ಎನ್ನುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಜರಂಗದಳ, ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನ ಮನೆಗೆ ತೆರಳಿ ಯುವಕನಿಗೆ ಥಳಿಸಿ ಯುವತಿಯನ್ನು ಮನೆಗೆ ಕಳುಹಿಸಿದ್ದಾರೆ. ಈ ಸಂಬಂಧ ಅಶೋಕ ನಗರ ಠಾಣೆ ಪೊಲೀಸರು ಸಾಜಿದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/crime/another-love-jihad-in-hubballi-hindu-organisation-found-muslim-youth-suc/articleshow-km3osfh"/>
        </item>
        <item>
            <title><![CDATA[Karna Serial: ನಿತ್ಯಾ ಬಾಳಲ್ಲಿ ಮತ್ತೊಮ್ಮೆ ಬಿರುಗಾಳಿ: ತೇಜಸ್​ಗೆ ಮದ್ವೆ ಆಗೋಯ್ತು- ನಿತ್ಯಾ ಇನ್ನು ವಿಲನ್​?]]></title>
            <link>https://kannada.asianetnews.com/gallery/tv-talk/karna-serial-twist-tejas-already-got-married-and-nithya-again-become-single-suc-lhgqw0v</link>
            <guid isPermaLink="true">https://kannada.asianetnews.com/gallery/tv-talk/karna-serial-twist-tejas-already-got-married-and-nithya-again-become-single-suc-lhgqw0v</guid>
            <pubDate>Tue, 26 May 2026 21:39:21 +0530</pubDate>
            <description><![CDATA[ಕರ್ಣ ಮತ್ತು ನಿಧಿ ಮದುವೆಯಾಗಿ ಒಂದಾಗಿದ್ದಾರೆ. ಆದರೆ, ಅತ್ತ ತೇಜಸ್ ಬೇರೊಬ್ಬಳನ್ನು ಮದುವೆಯಾಗಿ ನಿತ್ಯಾಳಿಗೆ ಕೈಕೊಟ್ಟಿದ್ದಾನೆ. ಇದರಿಂದ ಒಂಟಿಯಾದ ನಿತ್ಯಾ, ಕರ್ಣ-ನಿಧಿ ಬಾಳಲ್ಲಿ ವಿಲನ್ ಆಗಿ ಎಂಟ್ರಿ ಕೊಡುತ್ತಾಳಾ ಎಂಬ ಕುತೂಹಲ ಮೂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksjggq0kx66w4cpfg73g0vxq,imgname-nidhi-01-1779811507219.jpg" type="image/jpeg" height="390" width="690"/>
            <content:encoded><![CDATA[ಕರ್ಣ ಮತ್ತು ನಿಧಿ ಮದುವೆಯಾಗಿ ಒಂದಾಗಿದ್ದಾರೆ. ಆದರೆ, ಅತ್ತ ತೇಜಸ್ ಬೇರೊಬ್ಬಳನ್ನು ಮದುವೆಯಾಗಿ ನಿತ್ಯಾಳಿಗೆ ಕೈಕೊಟ್ಟಿದ್ದಾನೆ. ಇದರಿಂದ ಒಂಟಿಯಾದ ನಿತ್ಯಾ, ಕರ್ಣ-ನಿಧಿ ಬಾಳಲ್ಲಿ ವಿಲನ್ ಆಗಿ ಎಂಟ್ರಿ ಕೊಡುತ್ತಾಳಾ ಎಂಬ ಕುತೂಹಲ ಮೂಡಿದೆ.&lt;img&gt;&lt;p&gt;ಕರ್ಣ ಸೀರಿಯಲ್​ (Karna Serial) ಇದೀಗ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕಾಣುತ್ತಿದೆ. ನಿಧಿ ಮತ್ತು ಕರ್ಣನ ಮದುವೆ ಆಗಿದೆ. ಅವರು ಮೊದಲ ರಾತ್ರಿಯ ಸಂಭ್ರಮದಲ್ಲಿ ಇದ್ದಾರೆ. ಇವರಿಬ್ಬರ ಮದುವೆಯಾಗಿರುವುದು ಅಭಿಮಾನಿಗಳಲ್ಲಿ ಭಾರಿ ಖುಷಿ ತಂದಿದೆ.&lt;/p&gt;&lt;img&gt;&lt;p&gt;ಅತ್ತ ತೇಜಸ್​ ಎಂಟ್ರಿ ಕೊಟ್ಟಿದ್ದರಿಂದ ಇನ್ನೇನು ಸೀರಿಯಲ್​ ಮುಗಿದೇ ಹೋಯ್ತಲ್ಲ. ತೇಜಸ್​ ಮತ್ತು ನಿತ್ಯಾ ಮದುವೆಯಾಗಿಬಿಡುತ್ತಾರೆ. ಅಲ್ಲಿಗೆ ಎಲ್ಲವೂ ಸುಸೂತ್ರವಾಗಿದೆ ಎನ್ನಲಾಗಿತ್ತು.&lt;/p&gt;&lt;img&gt;&lt;p&gt;ಆದರೆ, ಆಗಿದ್ದೇ ಬೇರೆ. ತಾನು ಮಾಡಿದ ತಪ್ಪಿಗೆ ನಿತ್ಯಾಳ ಕಾಲು ಹಿಡಿದು ಕ್ಷಮೆ ಕೋರಿದ್ದಾನೆ ತೇಜಸ್​. ಆದರೆ ಮದುವೆ ಮಾತ್ರ ಆಗಲು ಸಾಧ್ಯವಿಲ್ಲ ಎಂದಿದ್ದಾನೆ.&lt;/p&gt;&lt;img&gt;&lt;p&gt;ಇದಕ್ಕೆ ಕಾರಣ, ಇದಾಗಲೇ ನಿತ್ಯಾ ಮೇಲಿನ ಸಿಟ್ಟಿನಲ್ಲಿ ತೇಜಸ್ ಬೇರೆ ಮದುವೆಯಾಗಿದ್ದಾನೆ. ರಮೇಶ್​ ಮಾಡಿದ ಕುತಂತ್ರದಿಂದ ನಿತ್ಯಾಳ ಮಗು ತನ್ನದಲ್ಲ ಎಂದು ಹೇಳಿದ್ದ ತೇಜಸ್​, ನಿತ್ಯಾ ಕರ್ಣನನ್ನು ಮದುವೆಯಾದ ಕಾರಣದಿಂದ ಕೋಪದಿಂದ ಮತ್ತೊಂದು ಮದುವೆಯಾಗಿದ್ದಾನೆ.&lt;/p&gt;&lt;img&gt;&lt;p&gt;ಈಗ ನಿತ್ಯಾ ಅಕ್ಷರಶಃ ತತ್ತರಿಸಿ ಹೋಗಿದ್ದಾಳೆ. ತೇಜಸ್​ ಕೈಕೊಟ್ಟಾಯ್ತು. ಪ್ರೀತಿಸಿದ ಕರ್ಣನ ಮದುವೆಯಾಯಿತು. ಇನ್ನು ಅವಳು ಒಂಟಿ. ಈ ರೀತಿ ಪ್ರೀತಿ ಕಳೆದುಕೊಂಡ ಒಂಟಿ ಹೆಣ್ಣು ಭಾರಿ ಅಪಾಯ. ಈಕೆಯೇ ನಿಧಿ ಮತ್ತು ಕರ್ಣನ ಪಾಲಿಗೆ ವಿಲನ್​ ಆಗುವಳಾ ಎನ್ನುವ ಸಂದೇಹ ಕಾಡುತ್ತಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-twist-tejas-already-got-married-and-nithya-again-become-single-suc-lhgqw0v"/>
        </item>
        <item>
            <title><![CDATA[Tragedy- Akash Puri: ಪುರಿ ಜಗನ್ನಾಥ್ ಮಗ ಬಿಚ್ಚಿಟ್ಟ ರಹಸ್ಯ.. ಸ್ಟಾರ್ ಡೈರೆಕ್ಟರ್ ಮಗ ಹಣವಿಲ್ಲದೇ ಹಾಸ್ಟೆಲ್‌ ಸೇರಬೇಕಾಯ್ತು!]]></title>
            <link>https://kannada.asianetnews.com/cine-world/akash-puri-discloses-that-puri-jagannadh-couple-sent-their-children-to-a-hostel-to-shield-them-from-the-family-poverty/articleshow-mmenbo7</link>
            <guid isPermaLink="true">https://kannada.asianetnews.com/cine-world/akash-puri-discloses-that-puri-jagannadh-couple-sent-their-children-to-a-hostel-to-shield-them-from-the-family-poverty/articleshow-mmenbo7</guid>
            <pubDate>Wed, 27 May 2026 22:59:50 +0530</pubDate>
            <description><![CDATA[&lt;p&gt;&quot;ನಮ್ಮಪ್ಪನ ಜೇಬಿನಲ್ಲಿ ಕೇವಲ 200 ರೂಪಾಯಿ ಇದ್ದಾಗಲೇ ಅಮ್ಮ ಅವರನ್ನು ಮದುವೆಯಾಗಿದ್ದು. ಕಷ್ಟದ ಕಾಲದಲ್ಲಿ ಅಮ್ಮನೇ ಅಪ್ಪನಿಗೆ ಬೆನ್ನೆಲುಬಾಗಿ ನಿಂತವರು. ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksn6z5c2hm6jrecdqde8z2kw,imgname-akash-puri-1779902158209.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿನಿಮಾ ಸ್ಟೈಲ್&zwnj;ನಲ್ಲೇ ಇದೆ ಈ ಸ್ಟಾರ್ ಡೈರೆಕ್ಟರ್ ಲೈಫ್ ಸ್ಟೋರಿ! ನೂರಾರು ಕೋಟಿ ಕಳೆದುಕೊಂಡು ಬೀದಿಗೆ ಬಂದಿದ್ದರೇ ಪುರಿ ಜಗನ್ನಾಥ್? ಮಗ ಆಕಾಶ್ ಬಿಚ್ಚಿಟ್ಟ ಶಾಕಿಂಗ್ ಸತ್ಯ!&lt;/strong&gt;&lt;/p&gt;&lt;p&gt;ಟಾಲಿವುಡ್ ಅಂಗಳ ಟ್ರಾಜಿಡಿ ಸ್ಟೋರಿ!&lt;/p&gt;&lt;p&gt;ಸಿನಿಮಾ ಅಂದಮೇಲೆ ಅಲ್ಲಿ ಬಣ್ಣದ ಲೋಕ ಮಾತ್ರವಲ್ಲ, ಕತ್ತಲೆಯ ಹಾದಿಯೂ ಇರುತ್ತದೆ ಅನ್ನೋದಕ್ಕೆ ಲೈವ್ ಎಕ್ಸಾಂಪಲ್ ಅಂದರೆ ಅದು ಡೈರೆಕ್ಟರ್ ಪುರಿ ಜಗನ್ನಾಥ್ (Puri Jagannadh)! 'ಬದ್ರಿ' ಸಿನಿಮಾದಿಂದ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, 'ಪೋಕಿರಿ', 'ಈಡಿಯಟ್' ಅಂತಹ ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ನೀಡಿದ ಈ ಕ್ರೇಜಿ ಡೈರೆಕ್ಟರ್ ಅಕ್ಷರಶಃ ಟಾಲಿವುಡ್ ಅನ್ನು ಆಳಿದವರು. ಮಹೇಶ್ ಬಾಬು, ಪವನ್ ಕಲ್ಯಾಣ್ ಅವರಂತಹ ಸೂಪರ್ ಸ್ಟಾರ್&zwnj;ಗಳ ಕೆರಿಯರ್ ಗ್ರಾಫ್ ಬದಲಿಸಿದ ಪುರಿ, ಒಂದು ಕಾಲದಲ್ಲಿ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದ ಕಿಂಗ್ ಮೇಕರ್. ಆದರೆ, ಇದೀಗ ಅವರ ಮಗ ಆಕಾಶ್ ಪುರಿ ಹೇಳಿರುವ ಮಾತುಗಳು ಕೇಳಿದರೆ ಸಿನಿಮಾ ಪ್ರೇಮಿಗಳ ಕಣ್ಣಾಲಿಗಳು ಒದ್ದೆಯಾಗುವುದು ಖಂಡಿತ!&lt;/p&gt;&lt;p&gt;&lt;img&gt;&lt;/p&gt;&lt;h2&gt;ಪರಾಜಯದ ಸುಳಿಗೆ ಸಿಲುಕಿದ ಪುರಿ:&lt;/h2&gt;&lt;p&gt;ಯಶಸ್ಸಿನ ಶಿಖರದಲ್ಲಿದ್ದಾಗಲೇ ಪುರಿ ಜಗನ್ನಾಥ್ ಅವರ ಕಾಲ ಬುಡದ ನೆಲ ಕುಸಿಯಿತು. ಮಾಡಿದ ಸಿನಿಮಾಗಳು ಬಾಕ್ಸ್ ಆಫೀಸ್&zwnj;ನಲ್ಲಿ ಮಕಾಡೆ ಮಲಗಿದವು. ಫಾರ್ಮ್ ಕಳೆದುಕೊಂಡ ಪುರಿ ಜಗನ್ನಾಥ್ ಅವರ ಮಾರುಕಟ್ಟೆ ಕುಸಿಯಿತು. ಆದರೆ, ಕೇವಲ ಸಿನಿಮಾ ಸೋಲು ಮಾತ್ರ ಅವರನ್ನ ಕುಗ್ಗಿಸಲಿಲ್ಲ; ಬದಲಾಗಿ ಅವರು ಅತಿಯಾಗಿ ನಂಬಿದ್ದ ಆಪ್ತರೇ ಅವರಿಗೆ ಬೆನ್ನಿಗೆ ಚೂರಿ ಹಾಕಿದರು. ನೂರಾರು ಕೋಟಿ ಮೌಲ್ಯದ ಆಸ್ತಿ ಮತ್ತು ಹಾರ್ಡ್ ವರ್ಕ್ ಮಾಡಿ ಗಳಿಸಿದ ಹಣವೆಲ್ಲಾ ಮೋಸದಿಂದಾಗಿ ಮಣ್ಣು ಪಾಲಾಯಿತು.&lt;/p&gt;&lt;p&gt;&lt;img&gt;&lt;/p&gt;&lt;p&gt;&quot;ನಾಯಿಗಳಿಗೆ ಆಹಾರ ನೀಡಲೂ ಕಾಸಿರಲಿಲ್ಲ!&quot;:&lt;/p&gt;&lt;p&gt;ಒಂದು ಸಂದರ್ಶನದಲ್ಲಿ ಪುರಿ ಜಗನ್ನಾಥ್ ಅವರೇ ಹೇಳಿಕೊಂಡಂತೆ, &quot;ನನ್ನ ಮನೆಯಲ್ಲಿದ್ದ ಸಾಕು ನಾಯಿಗಳಿಗೆ ಊಟ ಹಾಕಲು ಕೂಡ ನನ್ನ ಬಳಿ ಹಣವಿರಲಿಲ್ಲ.&quot; ಈ ಮಾತು ಅಕ್ಷರಶಃ ಟಾಲಿವುಡ್&zwnj;ಗೆ ಶಾಕ್ ನೀಡಿತ್ತು. ಇದನ್ನು ಈಗ ಅವರ ಮಗ ಆಕಾಶ್ ಪುರಿ ಕೂಡ ಧೃಢಪಡಿಸಿದ್ದಾರೆ. ಆ ಕರಾಳ ದಿನಗಳ ಬಗ್ಗೆ ಮಾತನಾಡುತ್ತಾ, &quot;ನಾವು ಮನೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದೆವು. ಅಪ್ಪ ಅನುಭವಿಸುತ್ತಿದ್ದ ಕಷ್ಟ ನಮಗೆ ಮತ್ತು ತಂಗಿಗೆ ಗೊತ್ತಾಗಬಾರದು ಎಂದು ಅಮ್ಮ ನಮ್ಮನ್ನು ದೂರದ ಹಾಸ್ಟೆಲ್&zwnj;ಗೆ ಸೇರಿಸಿ ಓದಿಸಿದಳು. ಆ 5 ವರ್ಷಗಳು ನಮ್ಮ ಕುಟುಂಬ ಪಟ್ಟ ಪಾಡು ಹೇಳತೀರದು&quot; ಎಂದು ಭಾವುಕರಾಗಿದ್ದಾರೆ.&lt;/p&gt;&lt;h3&gt;ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಆಕಾಶ್:&lt;/h3&gt;&lt;p&gt;ಇದೇ ಸಮಯದಲ್ಲಿ ಪುರಿ ಜಗನ್ನಾಥ್ ಮತ್ತು ಅವರ ಪತ್ನಿ ಲಾವಣ್ಯ ನಡುವೆ ಬಿರುಕು ಮೂಡಿದೆ, ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಸಿಪ್&zwnj;ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದಕ್ಕೆ ಆಕಾಶ್ ಖಡಕ್ ಉತ್ತರ ನೀಡಿದ್ದಾರೆ. &quot;ನಮ್ಮಪ್ಪನ ಜೇಬಿನಲ್ಲಿ ಕೇವಲ 200 ರೂಪಾಯಿ ಇದ್ದಾಗಲೇ ಅಮ್ಮ ಅವರನ್ನು ಮದುವೆಯಾಗಿದ್ದು. ಕಷ್ಟದ ಕಾಲದಲ್ಲಿ ಅಮ್ಮನೇ ಅಪ್ಪನಿಗೆ ಬೆನ್ನೆಲುಬಾಗಿ ನಿಂತವರು. ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಇದೆಲ್ಲಾ ಕೇವಲ ಸುಳ್ಳು ಸುದ್ದಿ&quot; ಎಂದು ಅಪ್ಪ-ಅಮ್ಮನ ಬಾಂಧವ್ಯವನ್ನು ಎತ್ತಿ ಹಿಡಿದಿದ್ದಾರೆ.&lt;/p&gt;&lt;p&gt;ಮತ್ತೆ ಪುಟಿದೇಳುವ ಮುನ್ಸೂಚನೆ:&lt;/p&gt;&lt;p&gt;ಸದ್ಯ ಪುರಿ ಜಗನ್ನಾಥ್ ಅವರು ವಿಜಯ್ ಸೇತುಪತಿ ಅವರಂತಹ ಪ್ರತಿಭಾವಂತರ ಜೊತೆ ಹೊಸ ಪ್ರಾಜೆಕ್ಟ್&zwnj;ಗೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲದೆ, ನಟ ರಾಮ್ ಪೋತಿನೇನಿ ಜೊತೆಗೂ ಕೆಲಸ ಮಾಡುತ್ತಿದ್ದಾರೆ. ಅಂದು ನೂರಾರು ಕೋಟಿ ಕಳೆದುಕೊಂಡು ಶೂನ್ಯಕ್ಕೆ ಇಳಿದಿದ್ದ ಪುರಿ ಜಗನ್ನಾಥ್, ಇಂದು ಮತ್ತೆ ಪೀನಿಕ್ಸ್ ಹಕ್ಕಿಯಂತೆ ಎದ್ದು ಬರಲು ಸಿದ್ಧರಾಗುತ್ತಿದ್ದಾರೆ.&lt;/p&gt;&lt;p&gt;ಸಿನಿಮಾ ಅಂದರೆ ಬರಿ ಲೈಟ್ಸ್, ಕ್ಯಾಮೆರಾ, ಆಕ್ಷನ್ ಮಾತ್ರವಲ್ಲ; ಅದರ ಹಿಂದೆ ಇಂತಹ ರೋಚಕ ಮತ್ತು ನೋವಿನ ಕಥೆಗಳೂ ಇರುತ್ತವೆ ಎಂಬುದಕ್ಕೆ ಈ ಸ್ಟಾರ್ ಡೈರೆಕ್ಟರ್ ಜೀವನವೇ ಸಾಕ್ಷಿ!&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/akash-puri-discloses-that-puri-jagannadh-couple-sent-their-children-to-a-hostel-to-shield-them-from-the-family-poverty/articleshow-mmenbo7"/>
        </item>
        <item>
            <title><![CDATA[Shock News: ಸಾಕ್ಷಿ ಶಿವಾನಂದ್ ಲೈಫಲ್ಲಿ ಘೋರ ದುರಂತ; ಆತನ ಫೋನ್‌ಕಾಲ್‌ಗೆ ಹೆದರಿ ಇದ್ದಕ್ಕಿದ್ದಂತೆ ನಾಪತ್ತೆಯಾದ ನಟಿ!]]></title>
            <link>https://kannada.asianetnews.com/cine-world/sakshi-shivanand-driven-away-from-mumbai-by-calls-from-an-underworld-linked-producer-then-acted-in-south-indian-films/articleshow-nb379s5</link>
            <guid isPermaLink="true">https://kannada.asianetnews.com/cine-world/sakshi-shivanand-driven-away-from-mumbai-by-calls-from-an-underworld-linked-producer-then-acted-in-south-indian-films/articleshow-nb379s5</guid>
            <pubDate>Wed, 27 May 2026 18:05:54 +0530</pubDate>
            <description><![CDATA[&lt;p&gt;ಸಾಕ್ಷಿ ಶಿವಾನಂದ್, ಮೊದಲು ಕನ್ನಡಕ್ಕೆ ಬಂದಿದ್ದು &lsquo;ಗಲಾಟೆ ಅಲಿಯಂದಿರು&rsquo; ಮೂಲಕ. ಆದರೆ ಆಕೆಗೆ ಬಾಲಿವುಡ್&zwnj;ನಲ್ಲಿ &lsquo;ಆಪ್ಕೋ ಪೆಹಲೆ ಭಿ ಕಹಿ ದೇಖಾ ಹೈ&rsquo; ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತು. ಇಡೀ ಭಾರತವೇ ಆಕೆಯತ್ತ ತಿರುಗಿ ನೋಡುವಷ್ಟರಲ್ಲಿ ಆಕೆಗೆ ಒಂದು ದೊಡ್ಡ ಶಾಕ್ ಕಾದಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmpy0vvx06hk6afq3vf30qe,imgname-sakshi-shivanand-1779885343611.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಣ್ಣದ ಲೋಕದ &lsquo;ಸೈನಿಕ&rsquo; ಸುಂದರಿ ಸಾಕ್ಷಿ ಶಿವಾನಂದ್ ರಾತ್ರೋರಾತ್ರಿ ಮಾಯವಾಗಿದ್ದೇಕೆ?&lt;/strong&gt;&lt;/p&gt;&lt;p&gt;90ರ ದಶಕದ ಕೊನೆಯಲ್ಲಿ ಬೆಳ್ಳಿತೆರೆಯನ್ನು ಆಳಿದ ಸುಂದರಿಯರಲ್ಲಿ ಸಾಕ್ಷಿ ಶಿವಾನಂದ್ (Sakshi Shivanand) ಹೆಸರು ಮುಂಚೂಣಿಯಲ್ಲಿತ್ತು. &lsquo;ಸೈನಿಕ&rsquo; ಚಿತ್ರದಲ್ಲಿ ಯೋಗಿ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ ಆಕೆಯ ಕೆಮಿಸ್ಟ್ರಿ ಇಂದಿಗೂ ಅಭಿಮಾನಿಗಳ ಮನದಲ್ಲಿ ಹಚ್ಚ ಹಸಿರು. ಆದರೆ, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಈ ನಟಿ ಚಿತ್ರರಂಗದಿಂದ &lsquo;ವ್ಯಾನಿಶ್&rsquo; ಆದದ್ದು ಒಂದು ದೊಡ್ಡ ಮಿಸ್ಟರಿ. ಅಸಲಿಗೆ, ಆಕೆಯ ಜೀವನದಲ್ಲಿ ನಡೆದ ಆ ಘಟನೆಗಳು ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ!&lt;/p&gt;&lt;h2&gt;ಮುಂಬೈ ಹುಡುಗಿಯ ಬಾಲಿವುಡ್ ಬ್ರೇಕ್ ಹಾಗೂ ಭೂಗತ ಲೋಕದ ಭಯ!&lt;/h2&gt;&lt;p&gt;1977ರಲ್ಲಿ ಮುಂಬೈನಲ್ಲಿ ಜನಿಸಿದ ಸಾಕ್ಷಿ ಶಿವಾನಂದ್, ಮೊದಲು ಕನ್ನಡಕ್ಕೆ ಬಂದಿದ್ದು &lsquo;ಗಲಾಟೆ ಅಲಿಯಂದಿರು&rsquo; ಮೂಲಕ. ಆದರೆ ಆಕೆಗೆ ಬಾಲಿವುಡ್&zwnj;ನಲ್ಲಿ &lsquo;ಆಪ್ಕೋ ಪೆಹಲೆ ಭಿ ಕಹಿ ದೇಖಾ ಹೈ&rsquo; ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತು. ಇಡೀ ಭಾರತವೇ ಆಕೆಯತ್ತ ತಿರುಗಿ ನೋಡುವಷ್ಟರಲ್ಲಿ ಆಕೆಗೆ ಒಂದು ದೊಡ್ಡ ಶಾಕ್ ಕಾದಿತ್ತು. ಅದು &lsquo;ಅಂಡರ್&zwnj;ವರ್ಲ್ಡ್ ಮಾಫಿಯಾ&rsquo;! ಸಾಕ್ಷಿ ನಟಿಸಬೇಕಿದ್ದ ಚಿತ್ರವೊಂದಕ್ಕೆ ಭೂಗತ ಲೋಕದ ನಂಟಿತ್ತು. ಅಷ್ಟೇ ಅಲ್ಲದೆ, ಪ್ರಾಣ ಬೆದರಿಕೆಯ ಕರೆಗಳು ಬರಲು ಶುರುವಾದಾಗ ಸಾಕ್ಷಿ ಭಯಭೀತರಾದರು. ಬಾಲಿವುಡ್ ಎನ್ನುವುದು ಅಂದು ಮಾಫಿಯಾದ ಕಪಿಮುಷ್ಟಿಯಲ್ಲಿತ್ತು. ಪ್ರಾಣ ಉಳಿಸಿಕೊಳ್ಳಲು ಸಾಕ್ಷಿ ರಾತ್ರೋರಾತ್ರಿ ಫೋನ್ ನಂಬರ್ ಬದಲಿಸಿ, ಮುಂಬೈಗೆ ಗುಡ್&zwnj;ಬೈ ಹೇಳಿ ದಕ್ಷಿಣ ಭಾರತಕ್ಕೆ ಓಡಿಬಂದಿದ್ದರು!&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ಮತ್ತು ಟಾಲಿವುಡ್&zwnj;ನ &lsquo;ಲಕ್ಕಿ ಗರ್ಲ್&rsquo;:&lt;/p&gt;&lt;p&gt;ಮುಂಬೈನಿಂದ ಓಡಿಬಂದ ಸಾಕ್ಷಿಗೆ ದಕ್ಷಿಣ ಭಾರತದ ಚಿತ್ರರಂಗ ಕೈ ಹಿಡಿಯಿತು. ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು, ಅಕ್ಕಿನೇನಿ ನಾಗಾರ್ಜುನ ಅವರಂತಹ ಸೂಪರ್&zwnj;ಸ್ಟಾರ್&zwnj;ಗಳ ಜೊತೆ ನಟಿಸಿ &lsquo;ಸ್ಟಾರ್ ನಾಯಕಿ&rsquo; ಎನಿಸಿಕೊಂಡರು. ಕನ್ನಡದಲ್ಲಿ ಉಪೇಂದ್ರ ಅವರ &lsquo;ನಗುವ ನಯನ&rsquo; ಮತ್ತು &lsquo;ಸೈನಿಕ&rsquo; ಚಿತ್ರಗಳು ಆಕೆಯನ್ನು ಕನ್ನಡಿಗರ ಮನೆಮಾತಾಗಿಸಿದವು. ಸುಂದರ ಕಣ್ಣುಗಳು ಮತ್ತು ಸಹಜ ನಟನೆಯಿಂದ ಆಕೆ ಸಾವಿರಾರು ಯುವಕರ ಹಾರ್ಟ್ ಬ್ರೇಕ್ ಮಾಡಿದ್ದರು.&lt;/p&gt;&lt;h3&gt;ಮದುವೆಯ ನಂತರ ಶುರುವಾಯ್ತು ಅಸಲಿ ಸಿನಿಮಾ!&lt;/h3&gt;&lt;h3&gt;ಸಾಗರ್ ಎಂಬುವವರನ್ನು ಮದುವೆಯಾದ ನಂತರ ಸಾಕ್ಷಿ ಬಣ್ಣದ ಲೋಕದಿಂದ ದೂರವಾಗಿ ಸಂಸಾರ ನೌಕೆಯಲ್ಲಿ ಮುಳುಗಿದರು. ಆದರೆ, 2019ರಲ್ಲಿ ಸಾಕ್ಷಿ ಹೆಸರು ಮತ್ತೆ ಹೆಡ್&zwnj;ಲೈನ್ಸ್&zwnj;ಗೆ ಬಂತು. ಇದಕ್ಕೆ ಕಾರಣ ಅವರ ಸ್ವಂತ ತಂಗಿ, ನಟಿ ಶಿಲ್ಪಾ ಆನಂದ್ (ಓಹನ್ನಾ ಶಿವಾನಂದ್) ಮಾಡಿದ ಆಘಾತಕಾರಿ ಆರೋಪ! &quot; ನನ್ನ ಅಕ್ಕ ಸಾಕ್ಷಿ ಮತ್ತು ಆಕೆಯ ಅತ್ತೆ ಭಾವನಾ ಸೇರಿ ನನ್ನನ್ನು ಮತ್ತು ತಾಯಿಯನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ. ವಿಮಾ ಹಣಕ್ಕಾಗಿ ಅವರು ಈ ಕ್ರಿಮಿನಲ್ ಪ್ಲಾನ್ ಮಾಡಿದ್ದಾರೆ&quot; ಎಂದು ಶಿಲ್ಪಾ ಸೋಶಿಯಲ್ ಮೀಡಿಯಾದಲ್ಲಿ ಬಾಂಬ್ ಸಿಡಿಸಿದ್ದರು. ಈ ಕೌಟುಂಬಿಕ ಕಲಹ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿತ್ತು.&lt;/h3&gt;&lt;p&gt;ಈಗ ಸಾಕ್ಷಿ ಶಿವಾನಂದ್ ಎಲ್ಲಿದ್ದಾರೆ?&lt;/p&gt;&lt;p&gt;ಸಿನಿಮಾಗಳಿಂದ ಸಂಪೂರ್ಣ ದೂರವಿರುವ ಸಾಕ್ಷಿ, ಈಗ ತಮ್ಮ ಖಾಸಗಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ವಿದೇಶಗಳಲ್ಲಿ ಹೆಚ್ಚಾಗಿ ಕಾಲ ಕಳೆಯುವ ಅವರು, ಗ್ಲಾಮರ್ ಪ್ರಪಂಚದ ಚಕ್ರವ್ಯೂಹದಿಂದ ಹೊರಬಂದು ನೆಮ್ಮದಿಯ ಜೀವನ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಅಷ್ಟಾಗಿ ಸಕ್ರಿಯವಾಗಿರದ ಸಾಕ್ಷಿ, ಇಂದಿಗೂ ತಮ್ಮ ಹಳೆಯ ಅಭಿಮಾನಿಗಳ ಪಾಲಿಗೆ &lsquo;ಸೈನಿಕ&rsquo;ನ ಮುದ್ದಾದ ಹುಡುಗಿಯಾಗಿಯೇ ಉಳಿದಿದ್ದಾರೆ.&lt;/p&gt;&lt;p&gt;ಒಬ್ಬ ನಟಿ ಮಾಫಿಯಾಕ್ಕೆ ಹೆದರಿ ಓಡಿ ಬಂದದ್ದು, ಸ್ಟಾರ್ ನಾಯಕಿಯಾಗಿ ಮೆರೆದದ್ದು ಮತ್ತು ಕೊನೆಯಲ್ಲಿ ಕುಟುಂಬದ ಕಲಹಕ್ಕೆ ಸಿಲುಕಿದ್ದು ನಿಜಕ್ಕೂ ಸಾಕ್ಷಿ ಶಿವಾನಂದ್ ಜೀವನವನ್ನು ಒಂದು ಟ್ರಾಜಿಡಿ ಸಿನಿಮಾದಂತೆ ಮಾಡಿದೆ. ಆದರೂ, ಆಕೆಯ ಹಳೆಯ ಸಿನಿಮಾಗಳು ಇಂದಿಗೂ ನಮಗೆ ಆ &lsquo;ಗೋಲ್ಡನ್ ಎರಾ&rsquo;ವನ್ನು ನೆನಪಿಸುತ್ತಲೇ ಇರುತ್ತವೆ.&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/sakshi-shivanand-driven-away-from-mumbai-by-calls-from-an-underworld-linked-producer-then-acted-in-south-indian-films/articleshow-nb379s5"/>
        </item>
        <item>
            <title><![CDATA[ಭಗವಾನ್‌ ಹನುಮನಿಂದ ಈ 5 ವಿಷಯಗಳನ್ನ ಕಲಿತರೆ ನಿಮ್ಮ ಇಡೀ ಜೀವನವೇ ಬದಲಾಗುತ್ತೆ]]></title>
            <link>https://kannada.asianetnews.com/gallery/relationship/5-life-lessons-to-learn-from-lord-hanuman-to-transform-your-life-nryhgo2</link>
            <guid isPermaLink="true">https://kannada.asianetnews.com/gallery/relationship/5-life-lessons-to-learn-from-lord-hanuman-to-transform-your-life-nryhgo2</guid>
            <pubDate>Wed, 27 May 2026 19:14:55 +0530</pubDate>
            <description><![CDATA[&lt;p&gt;Life Lessons from Lord Hanuman: ಜೀವನದಲ್ಲಿ ಅನೇಕ ರೀತಿಯ ಕಷ್ಟಗಳು ಬರುತ್ತವೆ, ಆದರೆ ಕೆಟ್ಟ ಸಮಯದಲ್ಲಿ ಧೈರ್ಯವನ್ನು ಕಳೆದುಕೊಳ್ಳಬಾರದು. ಹನುಮಂತನು ನಮಗೆ ಇದನ್ನೇ ಕಲಿಸುತ್ತಾನೆ. ಪ್ರತಿಯೊಬ್ಬರೂ ಹನುಮಂತನಿಂದ ಕಲಿಯಲೇಬೇಕಾದ 5 ಪ್ರಮುಖ ಅಂಶಗಳ ಬಗ್ಗೆ ನಾವು ಇಲ್ಲಿ ತಿಳಿಸುತ್ತಿದ್ದೇವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk8tpk5xh8k1kcgnfwc4585c,imgname-why-sindoor-offered-to-hanuman-1773044190397.jpg" type="image/jpeg" height="390" width="690"/>
            <content:encoded><![CDATA[&lt;p&gt;Life Lessons from Lord Hanuman: ಜೀವನದಲ್ಲಿ ಅನೇಕ ರೀತಿಯ ಕಷ್ಟಗಳು ಬರುತ್ತವೆ, ಆದರೆ ಕೆಟ್ಟ ಸಮಯದಲ್ಲಿ ಧೈರ್ಯವನ್ನು ಕಳೆದುಕೊಳ್ಳಬಾರದು. ಹನುಮಂತನು ನಮಗೆ ಇದನ್ನೇ ಕಲಿಸುತ್ತಾನೆ. ಪ್ರತಿಯೊಬ್ಬರೂ ಹನುಮಂತನಿಂದ ಕಲಿಯಲೇಬೇಕಾದ 5 ಪ್ರಮುಖ ಅಂಶಗಳ ಬಗ್ಗೆ ನಾವು ಇಲ್ಲಿ ತಿಳಿಸುತ್ತಿದ್ದೇವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜೀವನವನ್ನು ಬದಲಿಸಬಲ್ಲ ಆ 5 ವಿಷಯಗಳುಸನಾತನ ಧರ್ಮದಲ್ಲಿ ಹನುಮಂತನನ್ನು ಶಕ್ತಿ, ಬುದ್ಧಿ ಮತ್ತು ಭಕ್ತಿಯ ಪರಮೋಚ್ಚ ಸಂಕೇತವೆಂದು ಪರಿಗಣಿಸಲಾಗಿದೆ. ಹನುಮಂತನು ಜೀವನ ನಿರ್ವಹಣೆಯ (Life Management) ಅತಿದೊಡ್ಡ ಗುರು. ಇಂದಿನ ಓಟದ ಮತ್ತು ಒತ್ತಡದ ಜೀವನದಲ್ಲಿ, ನಾವು ಹನುಮಂತನಿಂದ ಕೆಲವು ವಿಷಯಗಳನ್ನು ಕಲಿತರೆ, ನಮ್ಮ ಜೀವನವು ಸಂಪೂರ್ಣವಾಗಿ ಬದಲಾಗಬಹುದು. ನಿಮ್ಮ ಜೀವನವನ್ನು ಬದಲಿಸಬಲ್ಲ ಆ 5 ವಿಷಯಗಳು ಯಾವುವು ಎಂದು ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;&lt;strong&gt;1. ಅಚಲ ಸಮರ್ಪಣೆ ಮತ್ತು ನಿಷ್ಠೆ&lt;/strong&gt;ಹನುಮಂತನ ಇಡೀ ಜೀವನವು ಪ್ರಭು ಶ್ರೀರಾಮನಿಗೆ ಸಮರ್ಪಿತವಾಗಿತ್ತು. ಇಂದಿನ ಕಾಲದಲ್ಲಿ ನಮ್ಮೊಳಗೆ ಈ 'ಸಮರ್ಪಣಾ ಭಾವ'ದ ಕೊರತೆಯಿದೆ. ನಿಮ್ಮ ವೃತ್ತಿಜೀವನವಿರಲಿ, ಓದಿರಲಿ ಅಥವಾ ಯಾವುದೇ ಸಂಬಂಧವಿರಲಿ - ಅದರ ಬಗ್ಗೆ ನಿಮಗೆ 100% ಸಮರ್ಪಣೆ ಇಲ್ಲದ ಹೊರತು ನಿಮಗೆ ಶ್ರೇಷ್ಠ ಫಲಿತಾಂಶ ಸಿಗುವುದಿಲ್ಲ. ನಮ್ಮ ಗುರಿಯ ಬಗ್ಗೆ ಸಂಪೂರ್ಣವಾಗಿ ಸಮರ್ಪಿತರಾಗಿರಬೇಕು ಎಂದು ಹನುಮಂತನು ಕಲಿಸುತ್ತಾನೆ. ಇದೇ ಯಶಸ್ಸಿನ ಮೊದಲ ಮೆಟ್ಟಿಲು.&lt;/p&gt;&lt;img&gt;&lt;p&gt;&lt;strong&gt;2. ಸಂವಹನ ಕಲೆ (Communication Skills)&lt;/strong&gt;ಹನುಮಂತನು ಲಂಕೆಯಲ್ಲಿ ಮಾತೆ ಸೀತೆಯನ್ನು ಮೊದಲ ಬಾರಿಗೆ ಭೇಟಿಯಾದಾಗ, ನೇರವಾಗಿ ಹೋಗಿ ಮಾತನಾಡಲಿಲ್ಲ. ಸೀತೆಯ ವಿಶ್ವಾಸವನ್ನು ಗೆಲ್ಲಲು ಅವರು ಮೊದಲು ಶ್ರೀರಾಮನ ಕಥೆಯನ್ನು ವಿವರಿಸಿದರು. ಹಾಗೆಯೇ, ರಾವಣನ ಸಭೆಯಲ್ಲಿ ಅತ್ಯಂತ ನಿರ್ಭಯವಾಗಿ ಮತ್ತು ಸ್ಪಷ್ಟವಾಗಿ ತಮ್ಮ ಮಾತುಗಳನ್ನು ಮಂಡಿಸಿದರು. ಇದು ನಮಗೆ ಯಾವಾಗ, ಎಲ್ಲಿ ಮತ್ತು ಯಾರೊಂದಿಗೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸುತ್ತದೆ. ಅತ್ಯುತ್ತಮ ಸಂವಹನ ಕಲೆಯು ನಿಮ್ಮನ್ನು ಗುಂಪಿನಲ್ಲಿ ವಿಭಿನ್ನವಾಗಿ ಗುರುತಿಸುವಂತೆ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;3. ಸಂಕಷ್ಟದಲ್ಲಿ ತಾಳ್ಮೆ ಮತ್ತು ಬುದ್ಧಿವಂತಿಕೆ&lt;/strong&gt;ಸಮುದ್ರವನ್ನು ದಾಟುವಾಗ ಸುರಸೆ, ಸಿಂಹಿಕೆ ಮತ್ತು ಮೈನಾಕ ಪರ್ವತದಂತಹ ಅನೇಕ ಅಡೆತಡೆಗಳು ಎದುರಾದವು. ಹನುಮಂತನು ಹೆದರಲೂ ಇಲ್ಲ, ನಿಲ್ಲಲೂ ಇಲ್ಲ. ಎಲ್ಲಿ ಬಲದ ಅಗತ್ಯವಿತ್ತೋ ಅಲ್ಲಿ ಬಲವನ್ನು ತೋರಿಸಿದನು, ಎಲ್ಲಿ ಬುದ್ಧಿಯ ಅಗತ್ಯವಿತ್ತೋ ಅಲ್ಲಿ ವಿನಯವನ್ನು ತೋರಿದನು. ಜೀವನದಲ್ಲಿ ದೊಡ್ಡ ಸಂಕಷ್ಟಗಳು ಬಂದಾಗ ಪ್ಯಾನಿಕ್ (Panic) ಆಗುವ ಬದಲು ನಿಮ್ಮ ಬುದ್ಧಿ ಮತ್ತು ತಾಳ್ಮೆಯನ್ನು ಬಳಸಿ.&lt;/p&gt;&lt;img&gt;&lt;p&gt;&lt;strong&gt;4. ಅಹಂಕಾರ ಪಡಬೇಡಿ&lt;/strong&gt;ಅಷ್ಟೊಂದು ಶಕ್ತಿಶಾಲಿಯಾಗಿದ್ದರೂ ಹನುಮಂತನಲ್ಲಿ ಅಹಂಕಾರವಿರಲಿಲ್ಲ. ಲಂಕೆಯನ್ನು ದಹಿಸಿ ಮರಳಿದಾಗ ಶ್ರೀರಾಮನು ಅವರನ್ನು ಪ್ರಶಂಸಿಸಿದರೂ, ಹನುಮಂತನು ಅದರ ಸಂಪೂರ್ಣ ಶ್ರೇಯಸ್ಸನ್ನು ಪ್ರಭುವಿನ ಕೃಪೆ ಮತ್ತು ರಾಮಮುದ್ರಿಕೆಗೆ ನೀಡಿದನು. ಇಂದಿನ ದಿನಗಳಲ್ಲಿ ಜನರು ಸಣ್ಣ ಕೆಲಸಕ್ಕೂ ದೊಡ್ಡ ಕ್ರೆಡಿಟ್ ನಿರೀಕ್ಷಿಸುತ್ತಾರೆ. ಮಹಾನತೆಯು ಕೆಲಸ ಮಾಡುವುದರಲ್ಲಿದೆಯೇ ಹೊರತು ಅದನ್ನು ಪ್ರಚಾರ ಮಾಡುವುದರಲ್ಲಿಲ್ಲ ಎಂದು ಹನುಮಂತನು ಕಲಿಸುತ್ತಾನೆ.&lt;/p&gt;&lt;img&gt;&lt;p&gt;&lt;strong&gt;5. ನಿಮ್ಮ ಶಕ್ತಿಯನ್ನು ಗುರುತಿಸಿ&lt;/strong&gt;ಹನುಮಂತನು ತನ್ನ ಶಕ್ತಿಗಳನ್ನು ಮರೆತಿದ್ದನು, ಆದರೆ ಜಾಂಬವಂತನು ಅದನ್ನು ನೆನಪಿಸಿದಾಗ ಅವರು ಸಮುದ್ರವನ್ನೇ ದಾಟಿದರು. ನಮ್ಮೊಳಗೆ ಕೂಡ ಅಪಾರ ಸಾಮರ್ಥ್ಯಗಳು ಅಡಗಿವೆ, ಬೇಕಿರುವುದು ಕೇವಲ ಆತ್ಮವಿಶ್ವಾಸ ಮತ್ತು ನಮ್ಮ 'ಸುಪ್ತ' ಶಕ್ತಿಯನ್ನು ಜಾಗೃತಗೊಳಿಸುವುದು ಮಾತ್ರ.&lt;/p&gt;]]></content:encoded>
            <category>relationship</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/relationship/5-life-lessons-to-learn-from-lord-hanuman-to-transform-your-life-nryhgo2"/>
        </item>
        <item>
            <title><![CDATA[ಡಿವೋರ್ಸ್​ ಮಗಳು ಬೇಕೋ, ಆಕೆ ಹೆಣ ಬೇಕೊ? ಗೋಡೆಗೆ ಗುದ್ದುವವರೆಗೂ ಕಾಯ್ತೀರಾ? ಕೋರ್ಟ್​ ಪ್ರಶ್ನೆ]]></title>
            <link>https://kannada.asianetnews.com/women/better-to-have-a-divorced-daughter-than-a-dead-one-why-dont-women-file-case-suc/articleshow-pq7b55f</link>
            <guid isPermaLink="true">https://kannada.asianetnews.com/women/better-to-have-a-divorced-daughter-than-a-dead-one-why-dont-women-file-case-suc/articleshow-pq7b55f</guid>
            <pubDate>Tue, 26 May 2026 12:26:51 +0530</pubDate>
            <description><![CDATA[ಭಾರತದಲ್ಲಿ ಪ್ರತಿ 90 ನಿಮಿಷಕ್ಕೆ ಒಂದರಂತೆ ವರದಕ್ಷಿಣೆ ಸಾವು ಸಂಭವಿಸುತ್ತಿದ್ದು, ನಟಿ ತ್ವಿಷಾ ಶರ್ಮಾ ಪ್ರಕರಣವು ಈ ಕರಾಳ ಸತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ದೌರ್ಜನ್ಯ ಸಹಿಸಿಕೊಳ್ಳುವ ಬದಲು ವಿಚ್ಛೇದನ ಪಡೆಯುವುದು ಉತ್ತಮವೇ ಎಂಬ ಬಗ್ಗೆ ನ್ಯಾಯಾಲಯಗಳು ಮತ್ತು ಸಮಾಜದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಈ ಲೇಖನ ವಿಶ್ಲೇಷಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kshh46t1gjhf31z9ph4n402w,imgname-high-court-case-1779778591553.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಇಂದಿಗೂ ಪ್ರತಿ 90 ನಿಮಿಷಕ್ಕೆ ಒಂದರಂತೆ ವರದಕ್ಷಿಣೆ ಸಾವು ನಡೆಯುತ್ತಿದೆ ಎಂದು ಈಚೆಗೆ ಬಂದಿರುವ ಅಂಕಿ ಅಂಶ ಹೇಳುತ್ತದೆ. ಎಷ್ಟೋಕೇಸ್​ಗಳಲ್ಲಿ ಸಾಕ್ಷ್ಯಾಧಾರಗಳೇ ಇಲ್ಲದೇ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ ಕೇಸ್​ಗಳನ್ನು ಹೆಣ್ಣುಮಕ್ಕಳು ಎಷ್ಟು ದುರುಪಯೋಗ ಮಾಡಿಕೊಂಡು ಗಂಡನ ಮನೆಯವರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆಯೋ ಅದಕ್ಕಿಂತಲೂ ಹೆಚ್ಚು ಘಟನೆಗಳಲ್ಲಿ ವರದಕ್ಷಿಣೆಗಾಗಿ ಆಕೆಯ ಕೊ*ಲೆ ಆಗುತ್ತಿದೆ. ಕೆಲವೊಂದು ಹೈಪ್ರೊಫೈಲ್​ ಕೇಸ್​ಗಳಾದರೆ ಅದು ರಾತ್ರೋರಾತ್ರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ದೇಶಾದ್ಯಂತ ಚರ್ಚೆಯಾದರೆ, ಇನ್ನೆಷ್ಟೋ ಕೇಸ್​ಗಳಲ್ಲಿ ಕೊನೆಯ ಪಕ್ಷ ಆ ಹೆಣ್ಣಿನ ಸಾವಿಗೆ ಕಾರಣವಾದ ಕ್ರೂರಿಗಳಿಗೆ ಶಿಕ್ಷೆಯೂ ಆಗದೇ ಹೋಗುವುದು ದೊಡ್ಡ ದುರಂತ.&lt;/p&gt;&lt;h2&gt;&lt;strong&gt;ತ್ವಿಷಾ ಶರ್ಮಾ ಕೇಸ್​&lt;/strong&gt;&lt;/h2&gt;&lt;p&gt;ಇದೀಗ, ನಟಿ, ಮಾಡೆಲ್​, ಮಿಸ್​ ಪುಣೆ ತ್ವಿಷಾ ಶರ್ಮಾ ಕೇಸ್​ನಿಂದ ಈ ವಿಷಯಗಳನ್ನು ಬಹುತೇಕ ಕೋರ್ಟ್​ಗಳು ಕೂಡ ಚರ್ಚೆ ಮಾಡುತ್ತಿವೆ. ಮದುವೆಯಾಗಿ ಐದೇ ತಿಂಗಳಿಗೆ ಕೊ*ಲೆಯಾಗಿರುವ ತ್ವಿಷಾ ಶರ್ಮಾಳ ಅಪರಾಧಿಗಳಾದ ಮಾಜಿ ನ್ಯಾಯಾಧೀಶೆ ಅತ್ತೆ ಕೂಡ ತಪ್ಪಿಸಿಕೊಳ್ಳಲು ಎಲ್ಲಾಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ. ಆಕೆಯನ್ನು ಇನ್ನೂ ಅರೆಸ್ಟ್​ ಮಾಡಿಲ್ಲ ಎಂದು ಜೋರಾಗಿ ಪ್ರತಿಭಟನೆಗಳೂ ನಡೆಯುತ್ತಿವೆ. ಈ ಘಟನೆಯಿಂದಾಗಿ ಇದೀಗ ಬಹುತೇಕ ಕೋರ್ಟ್​ಗಳಲ್ಲಿಯೂ ನ್ಯಾಯಾಧೀಶರು ಹೆಣ್ಣುಮಕ್ಕಳ ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದಾರೆ.&lt;/p&gt;&lt;p&gt;ಅಷ್ಟಕ್ಕೂ ತ್ವಿಷಾ ಶರ್ಮಾ ಕೇಸ್​ನಲ್ಲಿ ಆಕೆ ಕಿರುಕುಳ ಸಹಿಸಲಾಗದೇ ವಾಪಸ್​ ತವರಿಗೆ ಬರುವುದಾಗಿ ಹೇಳಿದ್ದಳು. ಅದರಂತೆ ಸಿದ್ಧತೆ ಕೂಡ ಮಾಡಿಕೊಂಡಿದ್ದಳು. ಅಷ್ಟರಲ್ಲಿಯೇ ಹೆಣವಾದಳು. ಆದರೆ ಅದೆಷ್ಟು ಮನೆಗಳಲ್ಲಿ ಹೆಣ್ಣನ್ನು ತವರಿನವರು ವಾಪಸ್​ ಕರೆಸಿಕೊಳ್ಳುತ್ತಾರೆ ಹೇಳಿ. ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ, ಗಂಡನ ಮನೆಯೇ ಅವಳಿಗೆ ಎಲ್ಲವೂ. ಏನಾದರೂ ಅಡ್ಜಸ್ಟ್​ ಮಾಡಿಕೊಳ್ಳಿ ಎನ್ನುವ ಕುಟುಂಬಗಳೇ ಹಲವು. ಏಕೆಂದರೆ, ಅವರಿಗೆ ಮಗಳು ವಾಪಸ್​ ಬಂದರೆ ಸಮಾಜ ಏನು ಹೇಳುತ್ತದೆ ಎನ್ನುವ ಭಯ. ಅಷ್ಟಕ್ಕೂ ಡಿವೋರ್ಸ್​ ಆಗಿ ಬಂದವರನ್ನು ನೋಡಿದಾಗ ಕುಹಕ ಆಡುವವರು ಕಡಿಮೆಯೆ, ಅದರಲ್ಲಿಯೂ ಹೆಂಗಸರೇ ಇದರಲ್ಲಿ ಒಂದುಕೈ ಮುಂದೆ ಎನ್ನಬಹುದು. ಅದಕ್ಕಾಗಿಯೇ ಹೆಣ್ಣು ಏನೇ ಆದರೂ ತವರು ಮನೆಯಲ್ಲಿ ಹೇಳುವುದೇ ಇಲ್ಲ, ಹೇಳಿದರೂ ಸಹಿಸಿಕೊಂಡು ಹೋಗು ಎನ್ನುವ ಉತ್ತರ. ಹೆಣ್ಣಿನ ಹುಟ್ಟು ತವರಿನಲ್ಲಿ ಆಕೆಯ ಶವ ಬರಬೇಕಾದದ್ದು ಗಂಡನ ಮನೆಯಿಂದ ಎನ್ನುವ ಮಾತಿದೆ. ಈಗಲೂ ಹಾಗೆಯೇ ಆಗುತ್ತಿದೆ.&lt;/p&gt;&lt;h3&gt;&lt;strong&gt;ಡಿವೋರ್ಸ್​ ಮಗಳು ಬೇಕಾ...?&lt;/strong&gt;&lt;/h3&gt;&lt;p&gt;ಇದರ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆಗೆ ಬಂದಾಗ ಸಾಲಿಸಿಟರಲ್​ ಜನರ್​ ಎಸ್​.ಜಿ.ಮೆಹ್ತಾ ಅವರು ಡಿವೋರ್ಸ್​ ಆಗಿರೋ ಮಗಳು ಬೇಕಾ, ಅಥವಾ ಅವಳ ಹೆಣ ಬೇಕಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಹೆಣಕ್ಕಿಂತಲೂ ಡಿವೋರ್ಸ್​ ಒಳ್ಳೆಯದು ಎಂದು ಹೇಳಿದ್ದಾರೆ. ಅದೇ ರೀತಿ ಕರ್ನಾಟಕ ಹೈಕೋರ್ಟ್​ನಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಬಗೆಗಿನ ವಿಚಾರಣೆ ವೇಳೆ, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಹೆಣ್ಣುಮಕ್ಕಳು ತಮಗೆ ತೊಂದರೆ ಆಗುತ್ತಿದೆ ಎಂದ ತಕ್ಷಣವೇ ಕಂಪ್ಲೇಂಟ್​ ಕೊಡುವುದಿಲ್ಲ. ಗೋಡೆಗೆ ಹೋಗಿ ಅವರನ್ನು ಗುದ್ದುವವರೆಗೂ ಸಹಿಸಿಕೊಂಡು ಇರುತ್ತಾರೆ. ಹೀಗೆ ಏಕೆ ಸಹಿಸಿಕೊಳ್ಳಬೇಕು, ಹೆಣ್ಣುಮಕ್ಕಳು ಹೀಗೆಲ್ಲಾ ಮಾಡಬಾರದು ಎಂದಿದ್ದಾರೆ. ಪ್ರತಿ ಬಾರಿಯೂ ಅಡ್ಜಸ್ಟ್​ ಮಾಡಿಕೊಂಡು ಹೋಗೋಣ ಎಂದುಕೊಳ್ಳುವುದು ತಪ್ಪು ಎಂದಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/women/better-to-have-a-divorced-daughter-than-a-dead-one-why-dont-women-file-case-suc/articleshow-pq7b55f"/>
        </item>
        <item>
            <title><![CDATA[ನನ್ನ ದುಡ್ಡೆಲ್ಲ ಹೊಡ್ಕೊಂಡು ಹೋದ; ಮೈಸೂರಿನ ಮಾಜಿ ಪತಿ ಕೃತ್ಯದ ಬಗ್ಗೆ ಇಂಚಿಂಚೂ ಬಿಚ್ಚಿಟ್ಟ Rakhi Sawant]]></title>
            <link>https://kannada.asianetnews.com/gallery/tv-talk/bigg-boss-rakhi-sawant-on-ex-husband-aadil-khan-mysore-q5v5fd6</link>
            <guid isPermaLink="true">https://kannada.asianetnews.com/gallery/tv-talk/bigg-boss-rakhi-sawant-on-ex-husband-aadil-khan-mysore-q5v5fd6</guid>
            <pubDate>Wed, 27 May 2026 16:00:11 +0530</pubDate>
            <description><![CDATA[&lt;p&gt;Bigg Boss Rakhi Sawant On Husband Adil Khan Durrani: ಬಿಗ್&zwnj; ಬಾಸ್&zwnj; ಶೋ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ನಗಿಸುವ ರಾಖಿ ಸಾವಂತ್&zwnj; ಅವರು ಮೈಸೂರಿನ ಆದಿಲ್&zwnj; ಖಾನ್&zwnj; ಬಗ್ಗೆ ಭಾರತಿ ಟಿವಿ ಪಾಡ್&zwnj;ಕಾಸ್ಟ್&zwnj;ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಾಜಿ ಪತಿ ಬಗ್ಗೆ ಆರೋಪ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmfep6ey8w0wk2sr4nsyakb,imgname-new-project---2026-05-27t155053.055-1779877501134.jpg" type="image/jpeg" height="390" width="690"/>
            <content:encoded><![CDATA[&lt;p&gt;Bigg Boss Rakhi Sawant On Husband Adil Khan Durrani: ಬಿಗ್&zwnj; ಬಾಸ್&zwnj; ಶೋ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ನಗಿಸುವ ರಾಖಿ ಸಾವಂತ್&zwnj; ಅವರು ಮೈಸೂರಿನ ಆದಿಲ್&zwnj; ಖಾನ್&zwnj; ಬಗ್ಗೆ ಭಾರತಿ ಟಿವಿ ಪಾಡ್&zwnj;ಕಾಸ್ಟ್&zwnj;ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಾಜಿ ಪತಿ ಬಗ್ಗೆ ಆರೋಪ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;Bigg Boss Rakhi Sawant On Husband Adil Khan: &ldquo;ನನ್ನ ಮದುವೆ ಆಗೋಕೆ ಬಂದವನು ನನ್ನನ್ನು ಲೂಠಿ ಮಾಡಿದನು. ನಾನು ಎಷ್ಟು ಹಣವನ್ನು ಸೇವ್&zwnj; ಮಾಡಿದ್ದೀನೋ ಅದನ್ನೆಲ್ಲ ಲೂಠಿ ಹೊಡೆದರು. ನಾನು ಸಿಕ್ಕಾಪಟ್ಟೆ ಮಾತನಾಡುತ್ತೀನಿ ಎಂದು ನಾನು ಅತ್ತರೂ ಕೂಡ, ಜನರು ಸೀರಿಯಸ್&zwnj; ಆಗಿ ತಗೊಳೋದಿಲ್ಲ. ನಾನು ಅತ್ತರೂ ಕೂಡ ಜನರು ನಗುತ್ತಾರೆ&rdquo; ಎಂದು ರಾಖಿ ಸಾವಂತ್&zwnj; ಹೇಳಿದ್ದಾರೆ.&lt;/p&gt;&lt;img&gt;&lt;p&gt;&ldquo;ಮುಸ್ಲಿಂ ಹುಡುಗನನ್ನು ನಾನು ಮದುವೆ ಆಗು ಅಂತ ತಾಯಿ ಹೇಳುತ್ತಿದ್ದಳು. ನಾನು ಮದುವೆ ಆದರೆ ನಿನ್ನ ಕಥೆ ಏನು ಎಂದು ನಾನು ತಾಯಿಗೆ ಹೇಳಿದೆ. ನಾನು ರೆಸ್ಟೋರೆಂಟ್&zwnj; ಅಥವಾ ಇನ್ನು ಯಾವುದಾದರೂ ಜಾಗಕ್ಕೆ ಹೋಗಿ ಮದುವೆ ಆಗು ಅಂತ ಯಾರನ್ನಾದರೂ ಕೇಳಬೇಕಾ? ನನ್ನ ಫ್ರೆಂಡ್&zwnj; ಒಬ್ಬನಿದ್ದನು, ಅವನೇ ನನ್ನ ಎಕ್ಸ್.&zwnj; ನನ್ನನ್ನು ಭೇಟಿಯಾಗಿ ನನ್ನ ಹಣವನ್ನೆಲ್ಲ ಹಾಳು ಮಾಡಿದ&rdquo; ಎಂದು ರಾಖಿ ಸಾವಂತ್&zwnj; ಹೇಳಿದ್ದಾರೆ.&lt;/p&gt;&lt;img&gt;&lt;p&gt;&ldquo;ನನ್ನ ಜೀವನ ಚೆನ್ನಾಗಿ ಆಯ್ತು, ಸೆಟಲ್&zwnj; ಆಯ್ತು ಎಂದುಕೊಂಡೆ.&zwnj; ನನ್ನ ಜೀವನ ಹಾಳಾಯ್ತು. ಒಂದು ಆಪ್&zwnj;ನಲ್ಲಿ ನನಗೆ ರಿತೇಶ್ ಪರಿಚಯ ಆದ, ಆಪ್&zwnj;ನಲ್ಲಿ ನಾನು ಕೋಟಿಗಟ್ಟಲೇ ಹಣ ದುಡಿದೆ. ಮುಂದಿನ ಜನ್ಮದಲ್ಲಿ ನನಗೆ ತಂದೆ-ತಾಯಿ ಸಿಗೋದೇ ಬೇಡ, ನನ್ನನ್ನು ಏಲಿಯನ್&zwnj; ಆದರೆ ಸಾಕು, ರಿತೇಶ್&zwnj; ನನಗೆ ತುಂಬ ಸಹಾಯ ಮಾಡಿದ್ದಾನೆ. ಬಿಗ್&zwnj; ಬಾಸ್&zwnj;ಗೆ ನನ್ನನ್ನು ಕರೆದುಕೊಂಡು ಹೋಗು ಎಂದು ಹೇಳಿದನು. ನಾನು ನನ್ನ ಪತಿ ಎಂದು ಬಿಗ್&zwnj;ಬಾಸ್&zwnj; ಶೋಗೆ ಹೋದೆ, ಸಲ್ಮಾನ್&zwnj; ಖಾನ್&zwnj; ಅವರು ನಮ್ಮಿಬ್ಬರಿಗೂ ಬೈದರು. ರಾಕೇಶ್&zwnj; ಪತ್ನಿ ಮೀಡಿಯಾದಲ್ಲಿ ರಾಖಿ ನನ್ನ ಪತಿಯನ್ನು ಕರೆದುಕೊಂಡು ಹೋದಳು ಎಂದು ಹೇಳಿದಳು. ಈಗ ರಾಕೇಶ್&zwnj;ಗೂ ಡಿವೋರ್ಸ್&zwnj; ಆಗಿದೆ, ನನ್ನಿಂದಲೇ ಡಿವೋರ್ಸ್&zwnj; ಆಗಿದೆ&quot; ಎಂದು ರಾಖಿ ಸಾವಂತ್&zwnj; ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಮೈಸೂರು ಮೂಲದ ಆದಿಲ್&zwnj; ಖಾನ್&zwnj; ಜೊತೆ ರಾಖಿ ಸಾವಂತ್&zwnj; ಅವರು ಸಾಕಷ್ಟು ಓಡಾಟ ಮಾಡಿದ್ದರು. ಆದಿಲ್&zwnj;ಗೂ ರಾಖಿಗೂ ಸಿಕ್ಕಾಪಟ್ಟೆ ವಯಸ್ಸಿನ ಅಂತರ ಇತ್ತು. ಆರಂಭದಲ್ಲಿ ಆದಿಲ್&zwnj; ಅವರೇ ರಾಖಿಗೆ ಕಾರ್&zwnj; ಗಿಫ್ಟ್&zwnj; ಮಾಡಿದ್ದಾರೆ, ಗೋಲ್ಡ್&zwnj; ಮೊಬೈಲ್&zwnj; ಗಿಫ್ಟ್&zwnj; ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. ಆ ಬಳಿಕ ಇವರಿಬ್ಬರ ಮಧ್ಯೆ ಮನಸ್ತಾಪ ಆಗಿದ್ದು, ಆದಿಲ್&zwnj; ಅವರು ಡಿವೋರ್ಸ್&zwnj; ನೀಡಿದ್ದಾರೆ. ರಾಖಿ ಸಾವಂತ್&zwnj; ಅವರು ಮೈಸೂರಿನ ಆದಿಲ್&zwnj; ಮನೆಗೆ ಬಂದು ಕೂಡ ಜಗಳ ಆಡಿದ್ದರು.&lt;/p&gt;&lt;img&gt;&lt;p&gt;&ldquo;ತಾಯಿ ಇದ್ದರೆ ನನ್ನ ಆರೋಗ್ಯದ ಬಗ್ಗೆ ಕೇಳುತ್ತಿದ್ದಳು, ಊಟ ಆಯ್ತಾ ಎಂದು ಕೇಳುತ್ತಿದ್ದಳು. ಈಗ ನಾನು ಮನೆಯಲ್ಲಿ ಒಬ್ಬಳೇ ಆಗಿದ್ದು, ಯಾರೂ ಏನೂ ಕೇಳೋವವರಿಲ್ಲ. ಪದೇ ಪದೇ ಜೈಲಿಗೆ ಹೋಗುತ್ತಿದ್ದೆ. ದುಬೈನಲ್ಲಿ ಬದುಕುತ್ತಿದ್ದೆ, ನಾನು ಭಾರತದಿಂದ ದೂರ ಆಗಿದ್ದೇನೆ ಎಂದು ಅನಿಸಿತು&rdquo; ಎಂದು ರಾಖಿ ಸಾವಂತ್&zwnj; ಅವರು ಹೇಳಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/bigg-boss-rakhi-sawant-on-ex-husband-aadil-khan-mysore-q5v5fd6"/>
        </item>
        <item>
            <title><![CDATA[Shocking: ನಟಿ ಸೌಂದರ್ಯ ನಿಧನರಾದ ದಿನ ಆ ನಟನಿಗೆ ಚಪ್ಪಲಿಯಲ್ಲಿ ಹೊಡೆದರು.. ಇಂದು ಈ ನಟ ಎಲ್ಲಿದ್ದಾರೆ?]]></title>
            <link>https://kannada.asianetnews.com/cine-world/a-person-beats-to-bandla-ganesh-in-slippers-the-day-actress-soundarya-died-and-now-he-became-producer/articleshow-so5vnmx</link>
            <guid isPermaLink="true">https://kannada.asianetnews.com/cine-world/a-person-beats-to-bandla-ganesh-in-slippers-the-day-actress-soundarya-died-and-now-he-became-producer/articleshow-so5vnmx</guid>
            <pubDate>Mon, 25 May 2026 18:40:48 +0530</pubDate>
            <description><![CDATA[&lt;p&gt;ಆದರೆ ತಮಗೆ ಚಪ್ಪಲಿಯಿಂದ ಹೊಡೆದ ಆ 'ಸ್ಟಾರ್ ನಟ' ಯಾರು ಎಂಬುವುದನ್ನು ಈ ನಟ ಬಹಿರಂಗ ಪಡಿಸಿಲ್ಲ. ಆದರೆ 'ಅವರು ಒಳ್ಳೆಯವರೇ, ನನಗೆ ಮೊದಲೂ ಸಹಾಯ ಮಾಡಿದ್ದಾರೆ. ಆದರೆ ಅಂದು ಏಕೆ ಹಾಗೆ ಮಾಡಿದರೋ ಗೊತ್ತಿಲ್ಲ&hellip;' ಎಂದಿದ್ದಾರೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfm4cwf1y7pmb0dzs0x873q,imgname-soundarya-1779714634639.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಪ್ಪಲಿಯಲ್ಲಿ ಹೊಡೆದ ಸ್ಟಾರ್ ನಟನಿಗೆ ಬಂಡ್ಲಾ ಗಣೇಶ್ ಕೊಟ್ಟ ತಿರುಗೇಟು ಹೇಗಿದೆ?&lt;/strong&gt;&lt;/p&gt;&lt;p&gt;ಬಣ್ಣದ ಲೋಕ ಅಂದರೆ ಅಲ್ಲಿ ಬರಿ ಗ್ಲಾಮರ್ ಮಾತ್ರ ಇರಲ್ಲ, ಅದರ ಹಿಂದೆ ಕಣ್ಣೀರು, ಅವಮಾನ ಮತ್ತು ಹತಾಶೆಯ ಕರಾಳ ಕಥೆಗಳೂ ಇರುತ್ತವೆ. ಇಂದು ಟಾಲಿವುಡ್&zwnj;ನಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆಸುವ, ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡುವ 'ಬಾಕ್ ಆಫೀಸ್ ಬಾದ್&zwnj;ಶಾ' ಬಂಡ್ಲಾ ಗಣೇಶ್ (Bandla Ganesh) ಅವರ ಬದುಕಿನಲ್ಲೂ ಅಂತಹದ್ದೇ ಒಂದು ಘಟನೆ ನಡೆದಿತ್ತು. ಅಂದು ಒಬ್ಬ ಸ್ಟಾರ್ ನಟ ಇವರಿಗೆ ಶೂನಿಂದ ಹೊಡೆದಿದ್ದರಂತೆ! ಈ ಕಹಿ ನೆನಪನ್ನು ಹಂಚಿಕೊಳ್ಳುವಾಗ ಗಣೇಶ್ ಇಂದಿಗೂ ಭಾವುಕರಾಗುತ್ತಾರೆ.&lt;/p&gt;&lt;h2&gt;ಸೌಂದರ್ಯ ತೀರಿಕೊಂಡ ಆ ಕರಾಳ ದಿನ ಮತ್ತು ಆ ಅವಮಾನ!&lt;/h2&gt;&lt;p&gt;ಅದು 2004ರ ಏಪ್ರಿಲ್ 17. ಇಡೀ ದಕ್ಷಿಣ ಭಾರತದ ಚಿತ್ರರಂಗ ಅಂದು ಶೋಕ ಸಾಗರದಲ್ಲಿ ಮುಳುಗಿತ್ತು. ಕನ್ನಡದ ಹೆಮ್ಮೆಯ ನಟಿ ಸೌಂದರ್ಯ (Soundarya) ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಸುದ್ದಿಯನ್ನು ಕೇಳಿ ಇಡೀ ಇಂಡಸ್ಟ್ರಿ ಬೆಚ್ಚಿಬಿದ್ದಿತ್ತು. ಅದೇ ಕರಾಳ ದಿನದಂದು ಬಂಡ್ಲಾ ಗಣೇಶ್ ಅವರ ಬದುಕಿನಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿತು.&lt;/p&gt;&lt;p&gt;ಆಗ ಬಂಡ್ಲಾ ಗಣೇಶ್ ಕೇವಲ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ನಟ. ಒಂದು ಶೂಟಿಂಗ್ ಸ್ಪಾಟ್&zwnj;ನಲ್ಲಿ ಒಬ್ಬ ಪ್ರಮುಖ ಸ್ಟಾರ್ ನಟನ ಬಳಿ ಹೋಗಿ, ಗೌರವದಿಂದ &quot;ಸರ್.. ಸರ್..&quot; ಎಂದು ಕರೆಯುತ್ತಿದ್ದರು. ಏನಾಯ್ತೋ ಏನೋ ಗೊತ್ತಿಲ್ಲ, ಆ ಸ್ಟಾರ್ ನಟನಿಗೆ ಇದ್ದಕ್ಕಿದ್ದಂತೆ ವಿಪರೀತ ಕೋಪ ಬಂತು. ಕುಳಿತಿದ್ದ ಜಾಗದಿಂದ ಎದ್ದ ನಟ, ತನ್ನ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಎಲ್ಲರೆದುರೇ ಗಣೇಶ್&zwnj;ಗೆ ಹೊಡೆದೇ ಬಿಟ್ಟರು!&lt;/p&gt;&lt;p&gt;ಒಡೆದ ಮನಸ್ಸು ಮತ್ತು ಕೆರಳಿದ ಶಪಥ!&lt;/p&gt;&lt;p&gt;ತುಂಬಿದ ಮಂದಿಯ ನಡುವೆ ನಡೆದ ಈ ಅವಮಾನ ಗಣೇಶ್ ಅವರ ಅಂತರಾತ್ಮವನ್ನು ಬೆಚ್ಚಿಬೀಳಿಸಿತು. ಕಣ್ಣೀರು ಹಾಕುತ್ತಾ ಅಲ್ಲಿಂದ ಹೊರಬಂದ ಗಣೇಶ್, &quot;ನನ್ನ ಹತ್ತಿರ ಹಣವಿಲ್ಲ, ಅಧಿಕಾರವಿಲ್ಲ ಎಂಬ ಕಾರಣಕ್ಕೆ ತಾನೇ ನನಗೆ ಈ ರೀತಿ ಮಾಡಿದ್ದು?&quot; ಎಂದು ಹಲುಬಿದರು. ಆದರೆ ಅವರು ಅಲ್ಲಿಗೆ ಸೋತು ಸುಮ್ಮನಾಗಲಿಲ್ಲ. ಅಕ್ಷರಶಃ ಸಿನಿಮಾ ಸ್ಟೈಲ್&zwnj;ನಲ್ಲಿ ಅಂದು ಒಂದು ದೊಡ್ಡ ಶಪಥ ಮಾಡಿದರು. ತಮ್ಮ ಪಕ್ಕದಲ್ಲಿದ್ದ ಗೆಳೆಯನ ಕೈ ಹಿಡಿದು ಗಣೇಶ್ ಹೀಗೆಂದರು: &quot;ಒಂದು ದಿನ ನಾನು ಇವರಿಗಿಂತ ಹೆಚ್ಚು ಹಣ ಗಳಿಸುತ್ತೇನೆ.. ದೊಡ್ಡ ನಿರ್ಮಾಣ ಸಂಸ್ಥೆ ಕಟ್ಟುತ್ತೇನೆ.. ಅಲ್ಲಿಯವರೆಗೆ ನನ್ನ ಹೆಸರು ಗಣೇಶ್ ಅಲ್ಲ!&quot;&lt;/p&gt;&lt;h3&gt;ಸೋಲನ್ನೇ ಸೋಪಾನ ಮಾಡಿಕೊಂಡ ಸಾಧಕ&lt;/h3&gt;&lt;p&gt;ಅಂದು ಬಿದ್ದ ಆ ಶೂ ಏಟು ಬಂಡ್ಲಾ ಗಣೇಶ್ ಅವರಿಗೆ ಸ್ಫೂರ್ತಿಯ ಬೆಂಕಿಯಾಯಿತು. ನಟನೆಯನ್ನು ಬಿಟ್ಟು ನಿರ್ಮಾಣದತ್ತ ಗಮನ ಹರಿಸಿದ ಅವರು, ಪವನ್ ಕಲ್ಯಾಣ್ ಅವರ 'ಗಬ್ಬರ್ ಸಿಂಗ್' ನಂತಹ ಬ್ಲಾಕ್&zwnj;ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿ ಟಾಲಿವುಡ್&zwnj;ನ ಸ್ಟಾರ್ ನಿರ್ಮಾಪಕರಾಗಿ ಬೆಳೆದರು. ಅಂದು ಅವಮಾನಿಸಿದವರು ಇಂದು ಇವರ ಎದುರು ತಲೆತಗ್ಗಿಸುವಂತೆ ಬೆಳೆದು ತೋರಿಸಿದರು.&lt;/p&gt;&lt;p&gt;ಯಾರು ಆ ಸೀಕ್ರೆಟ್ ಸ್ಟಾರ್ ನಟ?&lt;/p&gt;&lt;p&gt;ಬಂಡ್ಲಾ ಗಣೇಶ್ ಈ ಕಥೆಯನ್ನೇನೋ ಹೇಳಿದ್ದಾರೆ, ಆದರೆ ತಮಗೆ ಚಪ್ಪಲಿಯಿಂದ ಹೊಡೆದ ಆ 'ಸ್ಟಾರ್ ನಟ' ಯಾರು ಎಂಬ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ. &quot;ಅವರು ಒಳ್ಳೆಯವರೇ, ನನಗೆ ಮೊದಲೂ ಸಹಾಯ ಮಾಡಿದ್ದಾರೆ. ಆದರೆ ಅಂದು ಏಕಾದರೋ ಗೊತ್ತಿಲ್ಲ&quot; ಎಂದು ರಹಸ್ಯ ಕಾಯ್ದುಕೊಂಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಆ ನಟ ತೆಲುಗಿನವರೋ ಅಥವಾ ಕನ್ನಡದವರೋ? ಎಂಬ ಊಹಾಪೋಹಗಳು ಹರಿದಾಡುತ್ತಿವೆ.&lt;/p&gt;&lt;p&gt;ಕೊನೆಯ ಮಾತು: ಅವಮಾನ ಎಂಬುದು ಬೆಂಕಿಯಿದ್ದಂತೆ. ಅದರಲ್ಲಿ ಬೆಂದು ಬೂದಿಯಾಗಬಹುದು ಅಥವಾ ಅದೇ ಬೆಂಕಿಯಲ್ಲಿ ಅರಗಿನಂತೆ ಅರಳಿ ಜಗತ್ತೇ ಬೆರಗಾಗುವಂತೆ ಬೆಳಗಬಹುದು. ಬಂಡ್ಲಾ ಗಣೇಶ್ ಎರಡನೇ ಹಾದಿಯನ್ನು ಆರಿಸಿಕೊಂಡು ಸಾಧಿಸಿ ತೋರಿಸಿದ್ದಾರೆ. ಇದು ಸಿನಿಮಾ ಕಥೆಗಿಂತಲೂ ರೋಚಕವಾಗಿದೆ ಅಲ್ವಾ?&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/a-person-beats-to-bandla-ganesh-in-slippers-the-day-actress-soundarya-died-and-now-he-became-producer/articleshow-so5vnmx"/>
        </item>
        <item>
            <title><![CDATA[ಮೊಮ್ಮಗಳ ವಯಸ್ಸಿನ 20ರ ಯುವತಿಯನ್ನ 4ನೇ ಮದುವೆಯಾದ 70ರ ಮಾಜಿ ಕಾರ್ಪೋರೇಟರ್ ಹಾಜಿ ಖಲೀಲ್!]]></title>
            <link>https://kannada.asianetnews.com/relationship/ghaziabad-haji-khalil-70-was-marries-20-year-old-girl-4th-marriage-controversy-sat/articleshow-zv9udt0</link>
            <guid isPermaLink="true">https://kannada.asianetnews.com/relationship/ghaziabad-haji-khalil-70-was-marries-20-year-old-girl-4th-marriage-controversy-sat/articleshow-zv9udt0</guid>
            <pubDate>Mon, 25 May 2026 14:27:47 +0530</pubDate>
            <description><![CDATA[&lt;p&gt;ಘಾಜಿಯಾಬಾದ್&zwnj;ನ 70 ವರ್ಷದ ಮಾಜಿ ಕಾರ್ಪೋರೇಟರ್ ಹಾಜಿ ಖಲೀಲ್, 20 ವರ್ಷದ ಯುವತಿಯನ್ನು ನಾಲ್ಕನೇ ಬಾರಿಗೆ ಮದುವೆಯಾಗಿದ್ದಾರೆ. ಈ ಮದುವೆಯಿಂದಾಗಿ ಅವರ ಕುಟುಂಬದಲ್ಲಿ, ವಿಶೇಷವಾಗಿ ಎರಡನೇ ಪತ್ನಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಆಸ್ತಿ ವಿವಾದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksf5kefe85dkjm133pka2dez,imgname-ghaziabad-haji-khalil-4th-marriage-1779699399150.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಘಾಜಿಯಾಬಾದ್: ಉ&lt;/strong&gt;ತ್ತರ ಪ್ರದೇಶದ 70 ವರ್ಷದ ಸಮಾಜವಾದಿ ಪಕ್ಷದ ಮಾಜಿ ಕಾರ್ಪೋರೇಟರ್ ಹಾಜಿ ಖಲೀಲ್ ಅವರು ತಮ್ಮ ಮೊಮ್ಮಗಳ ವಯಸ್ಸಿನ 20 ವರ್ಷದ ಯುವತಿಯನ್ನು ನಾಲ್ಕನೇ ಬಾರಿಗೆ ಮದುವೆಯಾಗಿದ್ದು, ಈಗ ಈ ವಿಷಯ ಪೊಲೀಸ್ ಮೆಟ್ಟಿಲೇರಿದೆ. 11 ಮಕ್ಕಳ ತಂದೆಯಾಗಿರುವ ಹಾಜಿ ಖಲೀಲ್ ಅವರ ಈ ನಿರ್ಧಾರ ಕುಟುಂಬದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಘಾಜಿಯಾಬಾದ್&zwnj;ನ ಕೈಲಾ ಭಟ್ಟಾ ಪ್ರದೇಶದ ನಿವಾಸಿಯಾಗಿರುವ ಹಾಜಿ ಖಲೀಲ್, ಇತ್ತೀಚೆಗೆ 20 ವರ್ಷದ ಯಸ್ಮೀನ್ ಎಂಬ ಯುವತಿಯನ್ನು ನಿಕಾಹ್ ಮಾಡಿಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಎರಡನೇ ಪತ್ನಿ ನಾಜ್ರೀನ್ ಮತ್ತು ಅವರ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಜ್ರೀನ್ ಅವರು ತಮ್ಮ ಮಗನೊಂದಿಗೆ ಪೊಲೀಸ್ ಕಮಿಷನರ್ ಕಚೇರಿಗೆ ಧಾವಿಸಿ, ಹಾಜಿ ಖಲೀಲ್ ವಿರುದ್ಧ ಗಂಭೀರ ದೂರು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಎರಡನೇ ಪತ್ನಿಯ ಆರೋಪಗಳು:&lt;/strong&gt;&lt;/h2&gt;&lt;p&gt;ಪೊಲೀಸರಿಗೆ ನೀಡಿದ ದೂರಿನಲ್ಲಿ ನಾಜ್ರೀನ್ ಅನೇಕ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. '1991ರಲ್ಲಿ ನನ್ನೊಂದಿಗೆ ನಿಕಾಹ್ ಆಗುವಾಗ ಖಲೀಲ್ ತಮಗೆ ಮೊದಲೇ ಮದುವೆಯಾಗಿರುವ ವಿಷಯವನ್ನು ಮುಚ್ಚಿಟ್ಟಿದ್ದರು. ಮೊದಲ ಪತ್ನಿಯಿಂದ ಅವರಿಗೆ 8 ಮಕ್ಕಳಿದ್ದಾರೆ. ನನ್ನಿಂದ ಅವರಿಗೆ ಮೂವರು ಮಕ್ಕಳಿದ್ದಾರೆ (ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು). ಈಗ 70ನೇ ವಯಸ್ಸಿನಲ್ಲಿ ಮೊಮ್ಮಗಳ ವಯಸ್ಸಿನ 20 ವರ್ಷದ ಹುಡುಗಿಯನ್ನು ಮದುವೆಯಾಗಿ ನಮ್ಮನ್ನು ಮನೆಯಿಂದ ಹೊರಹಾಕಲು ಸಂಚು ರೂಪಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.&lt;/p&gt;&lt;h3&gt;&lt;strong&gt;ಮೆಹರ್ ಆಸ್ತಿ ಮತ್ತು ಬೆದರಿಕೆ:&lt;/strong&gt;&lt;/h3&gt;&lt;p&gt;ವಿವಾದದ ಅಸಲಿ ಕೇಂದ್ರಬಿಂದು 'ಖಲೀಲನ ಆಸ್ತಿ' ಎನ್ನಲಾಗಿದೆ. ನಾಜ್ರೀನ್ ಅವರ ಪ್ರಕಾರ, ತಾವು ಪ್ರಸ್ತುತ ವಾಸವಿರುವ ಮನೆಯನ್ನು ನಿಕಾಹ್ ಸಮಯದಲ್ಲಿ 'ಮೆಹರ್' ಆಗಿ ನೀಡಲಾಗಿತ್ತು. ಆದರೆ ಈಗ ನಾಲ್ಕನೇ ಮದುವೆಯಾದ ನಂತರ, ಹಾಜಿ ಖಲೀಲ್ ಮತ್ತು ಅವರ ಹೊಸ ಪತ್ನಿ ಈ ಆಸ್ತಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ವಿರೋಧಿಸಿದರೆ ಜೈಲಿನಿಂದ ಬಂದಿರುವ ಗೂಂಡಾಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದಾರೆ ಎಂದು ನಾಜ್ರೀನ್ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಹಲವು ಮದುವೆಗಳ ಇತಿಹಾಸ:&lt;/strong&gt;&lt;/h2&gt;&lt;p&gt;ಹಾಜಿ ಖಲೀಲ್ ಅವರ ವೈವಾಹಿಕ ಜೀವನ ವಿವಾದಗಳಿಂದಲೇ ಕೂಡಿದೆ. 2010ರಲ್ಲಿ ಅವರು 3ನೇ ಮದುವೆಯಾಗಿದ್ದರು. ಆದರೆ ಆ ಹೆಂಡತಿಗೆ ಮಕ್ಕಳು ಆಗದ ಕಾರಣ ಆಕೆಗೆ ಮೂರು ಬಾರಿ 'ತಲಾಖ್' ಹೇಳಿ ದೂರ ಮಾಡಿದ್ದರು. ಈಗ ನಾಲ್ಕನೇ ಮದುವೆಯಾಗಿರುವುದು ಇಡೀ ಪ್ರದೇಶದಲ್ಲಿ ಚರ್ಚೆಯ ವಿಷಯವಾಗಿದೆ.&lt;/p&gt;&lt;h3&gt;&lt;strong&gt;ರಾಜಕೀಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಹಾಜಿ ಖಲೀಲ್ ಅವರು ಸ್ಥಳೀಯ ರಾಜಕಾರಣದಲ್ಲಿ ಹಳೆಯ ಮುಖ. 1995 ಮತ್ತು 2000ರಲ್ಲಿ ಅವರು ಇಸ್ಲಾಂನಗರ ವಾರ್ಡ್&zwnj;ನಿಂದ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದರು. ಈ ಹಿಂದೆಯೂ ಅವರ ಮೇಲೆ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಆರೋಪ ಕೇಳಿಬಂದಿತ್ತು.&lt;/p&gt;&lt;h2&gt;&lt;strong&gt;ಹಾಜಿ ಖಲೀಲ್ ಸಮರ್ಥನೆ:&lt;/strong&gt;&lt;/h2&gt;&lt;p&gt;ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಹಾಜಿ ಖಲೀಲ್, 'ಇದು ಕೇವಲ ಆಸ್ತಿ ವಿವಾದ. ನಾಜ್ರೀನ್ ನನ್ನ ಪತ್ನಿ ಎಂಬುದಕ್ಕೆ ಅವರ ಬಳಿ ಯಾವುದೇ ಸಾಕ್ಷಿ ಇಲ್ಲ, ಅವರು ಅದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಿ' ಎಂದು ಸವಾಲು ಹಾಕಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, 70ರ ಹರೆಯದ ವ್ಯಕ್ತಿಯ ನಾಲ್ಕನೇ ಮದುವೆ ಮತ್ತು ಆಸ್ತಿಗಾಗಿ ನಡೆಯುತ್ತಿರುವ ಈ ಕದನ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>relationship</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/ghaziabad-haji-khalil-70-was-marries-20-year-old-girl-4th-marriage-controversy-sat/articleshow-zv9udt0"/>
        </item>
    </channel>
</rss>
