<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 20 Aug 2026 11:34:04 +0530</lastBuildDate>
        <atom:link href="https://kannada.asianetnews.com/rss/relationship" rel="self" type="application/rss+xml"/>
        <item>
            <title><![CDATA[ಪತ್ನಿಯ ಓದಿಗಾಗಿ ಕೂಲಿಯನ್ನೂ ಮಾಡಿದ, ಜಮೀನೂ ಮಾರಿದ: ಕೆಲಸ ಸಿಕ್ಕ ಮೇಲೆ ಸತಿ ಶಿರೋಮಣಿ ಮಾಡಿದ್ದೇನು]]></title>
            <link>https://kannada.asianetnews.com/relationship/husband-worked-as-a-laborer-and-sold-his-land-for-his-wifes-education-but-she-eloped-with-lover-suc/articleshow-42sczve</link>
            <guid isPermaLink="true">https://kannada.asianetnews.com/relationship/husband-worked-as-a-laborer-and-sold-his-land-for-his-wifes-education-but-she-eloped-with-lover-suc/articleshow-42sczve</guid>
            <pubDate>Wed, 05 Aug 2026 18:06:43 +0530</pubDate>
            <description><![CDATA[ಪತ್ನಿಯ ಓದಿನ ಕನಸಿಗಾಗಿ ಕೂಲಿ ಮಾಡಿ, ಜಮೀನು ಮಾರಿ ತ್ಯಾಗ ಮಾಡಿದ ಗಂಡ ಅಮನ್ ಕುಮಾರ್. ಆದರೆ, ಉನ್ನತ ಉದ್ಯೋಗ ಸಿಕ್ಕ ಬಳಿಕ ಪತ್ನಿ ಗುಂಜನ್ ಕುಮಾರಿ, ಗಂಡನನ್ನೇ ತಿರಸ್ಕರಿಸಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಳು. ಪತ್ನಿಯ ವಂಚನೆಯನ್ನು ಕಣ್ಣಾರೆ ಕಂಡ ಪತಿ ಇದೀಗ ನ್ಯಾಯಕ್ಕಾಗಿ ಹೋರಾಡುತ್ತಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz8yp49dhqjcftbaw6jx0jc5,imgname-cheating-story-1785933271341.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಕೆಯ ಹೆಸರು ಗುಂಜನ್ ಕುಮಾರಿ. ಅವಳಿಗೆ ಓದುವ ಹಂಬಲ. ಆದರೂ ಅಪ್ಪ ಒತ್ತಾಯ ಮಾಡಿಸಿ ಮದುವೆ ಮಾಡಿಸಿದರು. ಆದರೆ ಆಕೆಯ ಓದುವ ಕೆಲಸಕ್ಕೆ ನೀರೆರೆದು ಪೋಷಿಸಿದ್ದು ಗಂಡ ಅಮನ್ ಕುಮಾರ್. ತನಗೆ ಒಳ್ಳೆಯ ಮಾರ್ಕ್ಸ್​ ಬಂದಿದ್ದರೂ ಮನೆಯಲ್ಲಿ ಮುಂದೆ ಓದಲು ಕಳುಹಿಸಲಿಲ್ಲ ಎಂದು ಗಂಡನ ಬಳಿ ಅಳಲು ತೋಡಿಕೊಂಡಿದ್ದರೆ, ತನ್ನ ಪತ್ನಿ ಓದಿ, ಅವಳ ಕನಸನ್ನು ನನಸು ಮಾಡಿಕೊಳ್ಳಲಿ ಎನ್ನೋದು ಒಂದೇ ಒಂದು ಆಸೆ ಈ ಗಂಡನದ್ದಾಗಿತ್ತು. ಪತ್ನಿಯ ಓದಿಗೆ ಬೇಕಾಗುವಷ್ಟು ಹಣ ಕೈಯಲ್ಲಿ ಇರಲಿಲ್ಲ. ಅದಕ್ಕಾಗಿ ಎಲ್ಲೆಲ್ಲೋ ಕೆಲಸ ಮಾಡಿದ. ಕೊನೆಗೆ ಇನ್ನೂ ದುಡ್ಡು ಸಾಲದಾಗ ಕೂಲಿಯನ್ನು ಮಾಡಿದ. ಆಗಲೂ ಹಣ ಹೊಂದಿಕೆಯಾಗಿಲ್ಲದಾಗ ಇದ್ದ ಚಿಕ್ಕ ಜಮೀನನ್ನೂ ಮಾರಿದರು ಅಮನ್ ಕುಮಾರ್. ಎಲ್ಲವೂ ಪತ್ನಿಗಾಗಿ, ಪತ್ನಿಯ ಓದಿನ ಕನಸನ್ನು ನನಸು ಮಾಡುವುದಕ್ಕಾಗಿ.&lt;/p&gt;&lt;p&gt;ಈ ನಡುವೆ ಒಂದು ಮಗು ಕೂಡ ಆಯಿತು. ಮದುವೆಯಾಗಿ 10 ವರ್ಷವೂ ಆಯಿತು. ಪತಿಯ ಶ್ರಮ ಸಾರ್ಥಕವಾಯಿತು. 2013ರಲ್ಲಿ ಮದುವೆಯಾಗಿತ್ತು ಈ ಜೋಡಿ, ಅಲ್ಲಿಂದ ಓದಿಗೆಂದು ಪತಿ ಮಾಡಿದ ತ್ಯಾಗ ಅಷ್ಟಿಷ್ಟಲ್ಲ. ಅದರ ಪರಿಣಾಮವಾಗಿ 2024ರಲ್ಲಿ ಪತ್ನಿಗೆ ಉತ್ತಮ ಉದ್ಯೋಗ ದೊರೆಯಿತು. ಕೆಲಸಕ್ಕೆ ಹೋಗಲು ಶುರು ಮಾಡಿದಳು. ಅಲ್ಲಿ ಯಾರ್ಯಾರದ್ದೋ ಪರಿಚಯವಾಯಿತು. ದೊಡ್ಡ ಹುದ್ದೆ, ದೊಡ್ಡ ಅಹಂಕಾರ. ಮನೆಯಲ್ಲಿ ಕೂಲಿ ಮಾಡುವ ಗಂಡ ಬೇಡವಾಯ್ತು. ತನ್ನ ಗಂಡನದ್ದು ಇಷ್ಟು ಚಿಕ್ಕ ಕೆಲಸ ಎಂದು ಹೇಳಿಕೊಳ್ಳಲು ಅವಳಿಂದ ಸಾಧ್ಯವಾಗಲಿಲ್ಲ. ಮನೆಯಲ್ಲಿ ಸುಮಾರು 10 ವರ್ಷದ ಮಗು ಇದ್ದರೂ, ಕಚೇರಿಯಲ್ಲಿಯೇ ಮತ್ತೊಬ್ಬನ ಜೊತೆ ಅಫೇರ್​ ಶುರು ಮಾಡಿಕೊಂಡಳು. ಬಹುಶಃ ತಾನು ಮದುವೆಯಾಗಿದ್ದ ಸುದ್ದಿಯನ್ನೂ ಆಕೆ ಹೇಳಿರಲಿಲ್ಲವೇನೋ.&lt;/p&gt;&lt;h2&gt;&lt;strong&gt;ನೋಡಬಾರದ್ದನ್ನು ನೋಡಿದ&lt;/strong&gt;&lt;/h2&gt;&lt;p&gt;ಅವರಿಬ್ಬರ ಸಂಬಂಧ ಎಲ್ಲಿಯವರೆಗೆ ಮುಂದುವರೆಯಿತು ಎಂದರೆ ಲಿವ್​ ಇನ್​ನಲ್ಲಿ ಒಟ್ಟಿಗೇ ವಾಸ ಮಾಡತೊಡಗಿದರು. ತನ್ನ ಪತ್ನಿಯಲ್ಲಿ ಆಗಿರುವ ಬದಲಾವಣೆ ಕಂಡರೂ ಪಾಪ ಈ ಗಂಡನಿಗೆ ಪತ್ನಿ ಅಂಥ ವಂಚಕಿ ಎಂದು ತಿಳಿಯುವುದಾದರೂ ಹೇಗೆ? ನಂತರ ಯಾರೋ ಈ ವಿಷಯವನ್ನು ಅಮನ್ ಕುಮಾರ್ ಅವರಿಗೆ ಮುಟ್ಟಿಸಿದಾಗ ಆರಂಭದಲ್ಲಿ ಅದನ್ನು ನಂಬಲೇ ಇಲ್ಲ. ಕೊನೆಗೆ ಪತ್ನಿ ಎಲ್ಲಿ ಇದ್ದಾಳೆ ಎನ್ನುವುದನ್ನು ಪತ್ತೆ ಹಚ್ಚಿ, ಅಲ್ಲಿಗೆ ಹೋದಾಗ ಅಲ್ಲೊಂದು ಕಾರು ನಿಂತಿತ್ತು. ಆ ಕಾರಿನ ವಿಡಿಯೋ ಮಾಡಿದ ಅಮನ್​ ಕುಮಾರ್​ ಗೇಟ್​ ತೆರೆದು ನೋಡಿದಾಗ, ಅಲ್ಲಿನ ಘಟನೆ ಕಂಡು ಕುಸಿದು ಹೋದರು. ಅಲ್ಲಿ ಪತ್ನಿ ಮತ್ತು ಆ ಮನುಷ್ಯನನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದರು!&lt;/p&gt;&lt;h3&gt;&lt;strong&gt;ಹೊಡೆಯಲು ಚಪ್ಪಲಿ ತಂದ ಪತ್ನಿ&lt;/strong&gt;&lt;/h3&gt;&lt;p&gt;ಏನು ಮಾಡಬೇಕೆಂದು ತಿಳಿಯದೇ ಅಮನ್​ ಕುಮಾರ್​, ಆ ವ್ಯಕ್ತಿಗಾಗಿ ಆತನ ಕಾರಿನ ಬಳಿ ಕಾಯುತ್ತಾ ನಿಂತರು. ಅವನು ತನ್ನ ಕೆಲಸ ಮುಗಿಸಿ ಕಾರಿನ ಬಳಿ ಬಂದಾಗ ತಡೆದು ನಿಲ್ಲಿಸಿದರು. ಅದಾಗಲೇ ಆ ವ್ಯಕ್ತಿಗೂ ಗುಂಜನ್ ಕುಮಾರಿಗೆ ಮದುವೆಯಾಗಿರುವ ವಿಷಯ ತಿಳಿದಿತ್ತು. ಇವನೇ ಅವಳ ಗಂಡ ಎಂದು ತಿಳಿದ ತಕ್ಷಣ ದಾಳಿ ಮಾಡಲು ಬಂದ. ಗದ್ದಲ ಕೇಳಿ ಗಂಡ ಬಂದಿರುವುದನ್ನು ನೋಡಿದ ಗುಂಜನ್ ಕುಮಾರಿ, ಮನೆಯೊಳಗಿನಿಂದ ಗಂಡನಿಗೆ ಹೊಡೆಯಲು ಚಪ್ಪಲಿ ತಂದಳು. ಈಗ ಅಮನ್​ ಕುಮಾರ್​ ಅವರು ಕೋರ್ಟ್​ನಲ್ಲಿ ಕೇಸು ದಾಖಲು ಮಾಡಿದ್ದಾರೆ. ಪತ್ನಿಯಿಂದ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಅದಕ್ಕೂ ಮುನ್ನ ಪತ್ನಿಯ ಎಲ್ಲಾ ಮಹಿಮೆಗಳನ್ನು ಮಾಧ್ಯಮದವರ ಮುಂದೆ ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/husband-worked-as-a-laborer-and-sold-his-land-for-his-wifes-education-but-she-eloped-with-lover-suc/articleshow-42sczve"/>
        </item>
        <item>
            <title><![CDATA[ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡ್ರಾ ದುರಂಧರ್​ ನಟಿ? ಯಾರೀ ಮಿಸ್ಟ್ರಿ ಮ್ಯಾನ್​- ಜಾಲತಾಣದಲ್ಲಿ ಹಲ್​ಚಲ್​]]></title>
            <link>https://kannada.asianetnews.com/relationship/is-dhurandhar-actress-ayesha-engaged-posts-pictures-flaunting-diamond-ring-with-a-mystery-man-suc/articleshow-ulfvbwv</link>
            <guid isPermaLink="true">https://kannada.asianetnews.com/relationship/is-dhurandhar-actress-ayesha-engaged-posts-pictures-flaunting-diamond-ring-with-a-mystery-man-suc/articleshow-ulfvbwv</guid>
            <pubDate>Wed, 19 Aug 2026 18:57:24 +0530</pubDate>
            <description><![CDATA['ಶರಾರತ್' ಹಾಡಿನ ಮೂಲಕ ಖ್ಯಾತಿ ಗಳಿಸಿದ ನಟಿ ಆಯೇಷಾ ಖಾನ್, ಇತ್ತೀಚೆಗೆ ಮಿಸ್ಟ್ರಿ ಮ್ಯಾನ್ ಜೊತೆ ವಜ್ರದ ಉಂಗುರವಿರುವ ಫೋಟೋ ಹಂಚಿಕೊಂಡು ನಿಶ್ಚಿತಾರ್ಥದ ಕುತೂಹಲ ಮೂಡಿಸಿದ್ದಾರೆ. ಆದರೆ, ಇದು ನಿಜವಾದ ನಿಶ್ಚಿತಾರ್ಥವೇ ಅಥವಾ ಕೇವಲ ಜ್ಯುವೆಲ್ಲರಿ ಬ್ರ್ಯಾಂಡ್&zwnj;ನ ಫೋಟೋಶೂಟೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಅಭಿಮಾನಿಗಳು ಸ್ಪಷ್ಟನೆಗಾಗಿ ಕಾಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0d38djvrfkfarcv422p5mbc,imgname-ayesha-khan-1787146024539.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ, ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾದ &lsquo;ಶರಾರತ್&rsquo; ಹಾಡಿನ ಮೂಲಕ ಭಾರೀ ಸದ್ದು ಮಾಡಿದ್ದ ನಟಿ ಆಯೇಷಾ ಖಾನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಗ್ಲಾಮರಸ್ ಡ್ಯಾನಸ್​ನಿಂದ ಪ್ರೇಕ್ಷಕರ ಮನ ಗೆದ್ದಿದ್ದ ಈ ನಟಿ, ಈಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿವೆ. ಈ ಹಾಡಿನ ಚಿತ್ರೀಕರಣ ನಡೆಯುತ್ತಿದ್ದಾಗ ತನಗೆ ಪೀರಿಯಡ್ಸ್​ ಆಗಿತ್ತು, ಈ ಹಾಡಿನ ಸಮಯದಲ್ಲಿ ತನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸವಾಲಿನ ಕೆಲಸವಾಗಿತ್ತು ಎಂದು ಈಚೆಗೆ ಹೇಳಿಕೊಂಡಿದ್ದು ಭಾರಿ ಸದ್ದು ಮಾಡಿದ್ದರು ನಟಿ. ಆದರೆ ಈಗ ಮತ್ತೊಂದು ವಿಷಯಕ್ಕೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗಿದ್ದಾರೆ.&lt;/p&gt;&lt;h3&gt;&lt;strong&gt;ಗುಟ್ಟಾಗಿ ನಿಶ್ಚಿತಾರ್ಥ?&lt;/strong&gt;&lt;/h3&gt;&lt;p&gt;ಅದೇನೆಂದರೆ, ನಟಿ ಆಯೇಷಾ ಖಾನ್ ಜಾಲತಾಣದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್&zwnj;ನಲ್ಲಿ ಆಕರ್ಷಕ ವಜ್ರದ ಉಂಗುರವೂ ಇದೆ. ಹೀಗಾಗಿ ಆಯೇಷಾ ಖಾನ್ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಈ ಕಥೆಯಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ. ಆಯೇಷಾ ಖಾನ್ ಇತ್ತೀಚೆಗೆ ಮಿಸ್ಟ್ರಿ ಮ್ಯಾನ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳಲ್ಲಿ ಅವರ ಕೈಯಲ್ಲಿರುವ ವಜ್ರದ ಉಂಗುರ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಆಯೇಷಾ ತಮ್ಮ ಜೊತೆಗಿರುವ ವ್ಯಕ್ತಿಯ ಮುಖವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಜೊತೆಗೆ ಕೈಯಲ್ಲಿ ಡೈಮಂಡ್ ರಿಂಗ್ ಕಾಣಿಸುತ್ತಿದ್ದರೂ, ನಿಶ್ಚಿತಾರ್ಥ ಎಂದು ಹೇಳಿಲ್ಲ. ಇದು ಯಾವುದೋ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್&zwnj;ನ ಫೋಟೋಶೂಟ್ ಆಗಿರಬಹುದು ಎಂದು ಸಹ ಹೇಳಲಾಗುತ್ತಿದೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.&lt;/p&gt;&lt;h2&gt;&lt;strong&gt;ಹಾಡಿನ ಶೂಟಿಂಗ್​ ಕುರಿತು&lt;/strong&gt;&lt;/h2&gt;&lt;p&gt;ಅಂದಹಾಗೆ, ಭಾರಿ ಹಲ್​ಚಲ್​ ಸೃಷ್ಟಿಸಿರೋ ಶರಾರತ್​ ಚಿತ್ರೀಕರಣದ ದಿನಗಳನ್ನು ಈಚೆಗೆ ನೆನೆದಿದ್ದ ನಟಿ, ಆ ಎರಡು ದಿನಗಳಲ್ಲಿ ಕೆಲಸದ ಹೊರೆ ಎಷ್ಟು ತೀವ್ರವಾಗಿತ್ತೆಂದರೆ ಸುತ್ತಲೂ ನೋಡಲು ಸಹ ಸಮಯವಿರಲಿಲ್ಲ ಎಂದು ಆಯೇಷಾ ವಿವರಿಸಿದರು. ಆ ಸಮಯದಲ್ಲಿ ಚಿತ್ರದ ವಿವಾಹದ ಸನ್ನಿವೇಶವನ್ನು ಸಹ ಚಿತ್ರೀಕರಿಸಲು ನಿರ್ಧರಿಸಲಾಗಿತ್ತು. &quot;ನಿರಂತರ ನೃತ್ಯದಿಂದ ನಮ್ಮ ಮೂಳೆಗಳು ನೋಯುತ್ತಿದ್ದವು. ನಾವು ತುಂಬಾ ದಣಿದಿದ್ದೆವು. ಚಿತ್ರೀಕರಣ ಮುಗಿದ ನಂತರ, ನನಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ. ನಾನು ತುಂಬಾ ಅಳಲು ಪ್ರಾರಂಭಿಸಿದೆ. ಆ ಕಣ್ಣೀರು ಸಂತೋಷದಿಂದಲೋ ಅಥವಾ ನೋವಿನಿಂದಲೋ? ಇದರ ಹೊರತಾಗಿಯೂ, ನಾನು ಅದನ್ನು ಪೂರ್ಣಗೊಳಿಸಿದೆ&quot; ಎಂದು ಹೇಳಿದ್ದರು.&lt;/p&gt;&lt;p&gt;ಸದ್ಯ, ಈಗ ನಟಿಯ ಈ ಫೋಟೋ ಸಾಕಷ್ಟು ಹಲ್​ಚಲ್​ ಸೃಷ್ಟಿಸಿದ್ದು, ನಟಿ ಆಯೇಷಾ ಖಾನ್ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ವೈರಲ್ ಆಗಿರುವ ವಜ್ರದ ಉಂಗುರ ಹಾಗೂ ಮಿಸ್ಟ್ರಿ ಮ್ಯಾನ್ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದಾರೆ. ಅಭಿಮಾನಿಗಳು ಅವರ ಅಧಿಕೃತ ಅನೌನ್ಸ್&zwnj;ಮೆಂಟ್ ಒಂದಕ್ಕಾಗಿ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/is-dhurandhar-actress-ayesha-engaged-posts-pictures-flaunting-diamond-ring-with-a-mystery-man-suc/articleshow-ulfvbwv"/>
        </item>
        <item>
            <title><![CDATA[​"10 ವರ್ಷದಲ್ಲಿ ಒಂದೇ ಒಂದು ತಪ್ಪು ಮಾಡಿದೆ..." - ಪತಿಯ ಶಾಕಿಂಗ್ ನಿರ್ಧಾರಕ್ಕೆ ಕಣ್ಣೀರಿಟ್ಟ ಪತ್ನಿ!]]></title>
            <link>https://kannada.asianetnews.com/relationship/one-mistake-in-10-years-woman-says-husband-ended-marriage-after-she-cheated/articleshow-4akyetg</link>
            <guid isPermaLink="true">https://kannada.asianetnews.com/relationship/one-mistake-in-10-years-woman-says-husband-ended-marriage-after-she-cheated/articleshow-4akyetg</guid>
            <pubDate>Tue, 18 Aug 2026 06:59:58 +0530</pubDate>
            <description><![CDATA[&lt;p&gt;10 ವರ್ಷಗಳ ದಾಂಪತ್ಯದಲ್ಲಿ ಒಮ್ಮೆ ತಾನು ಪತಿಗೆ ದ್ರೋಹ ಮಾಡಿದ್ದಾಗಿ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಆ ಘಟನೆಯ ಬಳಿಕ ಪತಿ ವಿಚ್ಛೇದನ ಪಡೆದು ದೂರವಾಗಿದ್ದು, ಎರಡು ವರ್ಷಗಳಿಂದ ಕ್ಷಮೆ ಕೇಳಿ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಫಲಿಸಲಿಲ್ಲ ಎನ್ನಲಾಗಿದೆ. &lsquo;ಒಂದು ತಪ್ಪಿಗಾಗಿ 10 ವರ್ಷಗಳ ಸಂಬಂಧ ಮುರಿಯಬೇಕೇ?&rsquo; ಎಂಬ ಆಕೆಯ ಹೇಳಿಕೆಗೆ ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m097t2cx63beg92jnq2c10bm,imgname-husband-wife-breakup-after-wife-s-illicit-relationship--1--1787016579479.jpg" type="image/jpeg" height="390" width="690"/>
            <content:encoded><![CDATA[&lt;p&gt;10 ವರ್ಷಗಳ ದಾಂಪತ್ಯ&hellip; ಆದರೆ ಒಂದೇ ಒಂದು ಘಟನೆ ಎಲ್ಲವನ್ನೂ ಬದಲಿಸಿತು!&lt;/p&gt;&lt;p&gt;ಹತ್ತು ವರ್ಷಗಳ ದಾಂಪತ್ಯ ಜೀವನದಲ್ಲಿ ಒಂದೇ ಒಂದು ಬಾರಿ ತಾನು ಪತಿಗೆ ದ್ರೋಹ ಮಾಡಿದ್ದಾಗಿ ಮಹಿಳೆಯೊಬ್ಬರು ಹೇಳಿಕೊಂಡಿರುವ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಆಕೆಯ ಹೇಳಿಕೆಯ ಪ್ರಕಾರ, ಆ ಒಂದು ಘಟನೆಯ ಬಳಿಕ ಪತಿ ದಾಂಪತ್ಯ ಜೀವನದಿಂದ ದೂರವಾಗಿ ವಿಚ್ಛೇದನ ಪಡೆದರು. ಎರಡು ವರ್ಷಗಳಿಂದ ತಾನು ಕ್ಷಮೆ ಕೇಳುತ್ತಾ, ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದರೂ ಪತಿ ತನ್ನ ಮಾತನ್ನು ಕೇಳಲು ಸಿದ್ಧರಾಗಿರಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ಒಂದೇ ಒಂದು ತಪ್ಪು&rsquo; ಎಂದ ಮಹಿಳೆ..!&lt;/strong&gt;&lt;/p&gt;&lt;p&gt;ವೈರಲ್ ಆಗಿರುವ ಹೇಳಿಕೆಯಲ್ಲಿ, 10 ವರ್ಷಗಳ ಮದುವೆಯಲ್ಲಿ ತಾನು ಒಮ್ಮೆ ಮಾತ್ರ ಮೋಸ ಮಾಡಿದ್ದಾಗಿ ಮಹಿಳೆ ತಿಳಿಸಿದ್ದಾರೆ.&lt;/p&gt;&lt;p&gt;ತನ್ನ ತಪ್ಪಿಗೆ ಕ್ಷಮೆ ಕೇಳಿದ್ದರೂ, ಪತಿ ಮತ್ತೊಂದು ಅವಕಾಶ ನೀಡಲಿಲ್ಲ ಎಂಬುದು ಆಕೆಯ ಅಳಲು. ಹಲವು ವರ್ಷಗಳ ಕಾಲ ಒಟ್ಟಿಗೆ ಕಟ್ಟಿಕೊಂಡ ಜೀವನ, ನೆನಪುಗಳು ಮತ್ತು ಸಂಬಂಧವನ್ನು ಒಂದು ಘಟನೆಯ ಕಾರಣಕ್ಕೆ ಹೇಗೆ ಸಂಪೂರ್ಣವಾಗಿ ಮುಗಿಸಬಹುದು ಎಂಬ ಪ್ರಶ್ನೆಯನ್ನೂ ಆಕೆ ಎತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;&lsquo;ಎರಡು ವರ್ಷಗಳಿಂದ ಕ್ಷಮೆ ಕೇಳುತ್ತಿದ್ದೇನೆ&rsquo;!&lt;/strong&gt;&lt;/p&gt;&lt;p&gt;ಮಹಿಳೆಯ ಹೇಳಿಕೆಯ ಪ್ರಕಾರ, ಘಟನೆ ನಡೆದ ನಂತರ ಎರಡು ವರ್ಷಗಳ ಕಾಲ ತಾನು ಪತಿಗೆ ಕ್ಷಮೆ ಕೇಳುತ್ತಾ, ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ.&lt;/p&gt;&lt;p&gt;ಆದರೆ ಪತಿ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ ಎನ್ನಲಾಗಿದೆ. ಅಂತಿಮವಾಗಿ ದಾಂಪತ್ಯ ಜೀವನ ವಿಚ್ಛೇದನದಲ್ಲಿ ಕೊನೆಗೊಂಡಿದೆ.&lt;/p&gt;&lt;p&gt;&lt;strong&gt;ಆದರೆ ನೆಟ್ಟಿಗರ ಪ್ರಶ್ನೆ ಬೇರೆ!&lt;/strong&gt;&lt;/p&gt;&lt;p&gt;ಮಹಿಳೆಯ ಕಥೆ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ.&lt;/p&gt;&lt;p&gt;ಬಹುತೇಕ ಪ್ರತಿಕ್ರಿಯೆಗಳಲ್ಲಿ, ವಿಚಾರವನ್ನು &lsquo;ಒಂದು ತಪ್ಪು&rsquo; ಎಂದು ಮಾತ್ರ ನೋಡುವುದು ಸರಿಯಲ್ಲ; ಅದು ದಾಂಪತ್ಯದಲ್ಲಿನ ನಂಬಿಕೆಗೆ ಬಿದ್ದ ಹೊಡೆತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;&lsquo;10 ವರ್ಷ ಮುಖ್ಯವೇ? ನಂಬಿಕೆ ಮುಖ್ಯವೇ?&rsquo;&lt;/strong&gt;&lt;/p&gt;&lt;p&gt;ಈ ಘಟನೆಯಿಂದ ಒಂದು ದೊಡ್ಡ ಪ್ರಶ್ನೆ ಎದುರಾಗಿದೆ.&lt;/p&gt;&lt;p&gt;ಒಂದು ದಾಂಪತ್ಯದಲ್ಲಿ ಹಲವು ವರ್ಷಗಳ ಪ್ರೀತಿ, ಒಟ್ಟಿನ ಜೀವನ ಮತ್ತು ನೆನಪುಗಳಿದ್ದರೆ, ಸಂಗಾತಿಯ ಒಂದು ಬಾರಿ ಮಾಡಿದ ದ್ರೋಹವನ್ನು ಕ್ಷಮಿಸಬೇಕೇ? ಅಥವಾ ನಂಬಿಕೆ ಒಮ್ಮೆ ಮುರಿದರೆ ಸಂಬಂಧವನ್ನು ಕೊನೆಗೊಳಿಸುವ ಹಕ್ಕು ಮತ್ತೊಬ್ಬ ಸಂಗಾತಿಗಿದೆಯೇ?&lt;/p&gt;&lt;p&gt;ಈ ಪ್ರಶ್ನೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದೇ ರೀತಿಯ ಉತ್ತರ ಸಿಕ್ಕಿಲ್ಲ.&lt;/p&gt;&lt;p&gt;&lt;strong&gt;ಇದನ್ನು ಕೇವಲ &lsquo;ತಪ್ಪು&rsquo; ಎನ್ನಬಹುದೇ?&lt;/strong&gt;&lt;/p&gt;&lt;p&gt;ಮಹಿಳೆ ಅದನ್ನು &lsquo;ಒಂದು ತಪ್ಪು&rsquo; ಎಂದು ವಿವರಿಸಿದರೂ, ನೆಟ್ಟಿಗರ ಒಂದು ವರ್ಗವು ಅದನ್ನು ಕೇವಲ ಒಂದು ತಪ್ಪಾಗಿ ನೋಡಲು ನಿರಾಕರಿಸಿದೆ.&lt;/p&gt;&lt;p&gt;ಅವರ ವಾದದ ಪ್ರಕಾರ, ವಿಷಯವು ಎಷ್ಟು ಬಾರಿ ನಡೆದಿದೆ ಎಂಬುದಕ್ಕಿಂತ ಸಂಗಾತಿಯ ಮೇಲಿದ್ದ ನಂಬಿಕೆ ಮುರಿದಿರುವುದು ಮುಖ್ಯ. ವರದಿಯಲ್ಲೂ ಇದೇ ರೀತಿಯ ಪ್ರತಿಕ್ರಿಯೆಗಳು ಪ್ರಮುಖವಾಗಿ ಕಾಣಿಸಿಕೊಂಡಿವೆ.&lt;/p&gt;&lt;p&gt;ಕ್ಷ&lt;strong&gt;ಮೆ ಕೇಳುವುದು ಸಾಕೇ? ಎರಡನೇ ಅವಕಾಶ ಕೊಡಬೇಕೇ?&lt;/strong&gt;&lt;/p&gt;&lt;p&gt;ದಾಂಪತ್ಯದಲ್ಲಿ ತಪ್ಪು ನಡೆದಾಗ ಕ್ಷಮೆ, ಪ್ರಾಮಾಣಿಕತೆ ಮತ್ತು ಸಂಬಂಧವನ್ನು ಮರುನಿರ್ಮಿಸುವ ಪ್ರಯತ್ನಕ್ಕೆ ಅವಕಾಶವಿರಬೇಕೇ ಎಂಬ ಚರ್ಚೆಯೂ ಈ ಘಟನೆಯಿಂದ ಹುಟ್ಟಿದೆ.&lt;/p&gt;&lt;p&gt;ಆದರೆ ಮತ್ತೊಂದೆಡೆ, ಕ್ಷಮಿಸಬೇಕೇ ಅಥವಾ ಸಂಬಂಧವನ್ನು ಮುಗಿಸಬೇಕೇ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ನಿರ್ಧಾರ. ಒಂದು ಸಂಬಂಧದಲ್ಲಿ ಉಳಿಯುವುದು ಅಥವಾ ಹೊರಬರುವುದು ಎರಡೂ ಆಯ್ಕೆಗಳಿಗೆ ವೈಯಕ್ತಿಕ ಮಿತಿಗಳು ಮತ್ತು ಭಾವನೆಗಳು ಕಾರಣವಾಗಬಹುದು.&lt;/p&gt;&lt;p&gt;&lt;strong&gt;ಈ ಘಟನೆಯಿಂದ ಎದುರಾದ ದೊಡ್ಡ ಪ್ರಶ್ನೆ!&lt;/strong&gt;&lt;/p&gt;&lt;p&gt;ಈ ಕಥೆ ಕೇವಲ ಒಂದು ದಾಂಪತ್ಯದ ಅಂತ್ಯದ ಬಗ್ಗೆ ಅಲ್ಲ. ಪ್ರೀತಿ, ನಂಬಿಕೆ, ಕ್ಷಮೆ ಮತ್ತು ದ್ರೋಹದ ನಡುವೆ ಸಂಬಂಧದಲ್ಲಿ ಯಾವುದು ಹೆಚ್ಚು ಮಹತ್ವದ್ದು? ಎಂಬ ಪ್ರಶ್ನೆಯನ್ನೂ ಇದು ಎತ್ತಿದೆ.&lt;/p&gt;&lt;p&gt;10 ವರ್ಷಗಳ ಸಂಬಂಧದ ಮೌಲ್ಯವನ್ನು ಒಂದು ಘಟನೆ ಅಳಿಸಿಬಿಡಬಹುದೇ? ಅಥವಾ ಒಂದು ಬಾರಿ ಮುರಿದ ನಂಬಿಕೆಯನ್ನು ವರ್ಷಗಳ ನೆನಪುಗಳಿಂದಲೂ ಮರಳಿ ಕಟ್ಟಲು ಸಾಧ್ಯವಿಲ್ಲವೇ?&lt;/p&gt;&lt;p&gt;ಇದೇ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&ldquo;JUST ONCE.&rdquo;She cheated once.He ended a 10-year marriage.And now the story is being framed around how could he throw away ten years over one mistake? pic.twitter.com/FEwtd3dPhr&lt;/p&gt;&lt;p&gt;&mdash; The Forgotten &lsquo;Man&rsquo; &zwj;⚖️ (@SamSiff) August 16, 2026&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Chandrashekar GS</dc:creator>
            <atom:link href="https://kannada.asianetnews.com/relationship/one-mistake-in-10-years-woman-says-husband-ended-marriage-after-she-cheated/articleshow-4akyetg"/>
        </item>
        <item>
            <title><![CDATA[ಗಿಲ್ಲಿ ನಿಮ್ಮ ಕ್ರಶ್ಶಾ ಕೇಳ್ದೋರಿಗೆ ಮುಟ್ಟಿಕೊಳ್ಳೋ ಉತ್ತರ ಕೊಟ್ಟ Rakshita Shetty: ಮತ್ತೆ ಪ್ರಶ್ನೆ ಕೇಳೋ ಸಾಹಸ ಮಾಡಲ್ಲ]]></title>
            <link>https://kannada.asianetnews.com/relationship/rakshita-shettys-strong-answer-for-those-who-asked-about-gilli-nata-and-crush-suc/articleshow-9unfl4t</link>
            <guid isPermaLink="true">https://kannada.asianetnews.com/relationship/rakshita-shettys-strong-answer-for-those-who-asked-about-gilli-nata-and-crush-suc/articleshow-9unfl4t</guid>
            <pubDate>Tue, 18 Aug 2026 18:44:53 +0530</pubDate>
            <description><![CDATA[ಬಿಗ್&zwnj;ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ, ತಮಗೂ ಗಿಲ್ಲಿ ನಟನಿಗೂ ಇರುವ ಸಂಬಂಧದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಂದ ಬೇಸತ್ತಿದ್ದಾರೆ. 'ಕ್ರಷ್' ಇದೆಯೇ ಎಂಬ ಪ್ರಶ್ನೆಗೆ, ಮೀನಿನ ಸಾಂಬಾರಿಗೆ ಮಸಾಲೆ ಅರೆಯುವುದನ್ನು 'ಕ್ರಷ್' ಎನ್ನುತ್ತೇವೆ ಎಂದು ಉತ್ತರಿಸಿ, ಸ್ನೇಹವನ್ನು ಕೇವಲ ಪ್ರೀತಿಯ ದೃಷ್ಟಿಯಿಂದ ನೋಡುವವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ag4zkdb1g0y1cgfdk73zxx,imgname-rakshita-shetty-1787058880109.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಷೋ ಅಥವಾ ಸೀರಿಯಲ್​ಗಳಲ್ಲಿ ಒಂದು ಜೋಡಿ ಫೇಮಸ್​ ಆಯ್ತು ಎಂದಾಕ್ಷಣ, ಅವರಿಬ್ಬರ ಮಧ್ಯೆ ಸಂಬಂಧ ತಂದು, ಅದನ್ನು ಅಸಹ್ಯ ಎನ್ನುವಷ್ಟರಮಟ್ಟಿಗೆ ಮುಂದಕ್ಕೆ ಕರೆದುಕೊಂಡು ಹೋಗುವ ದೊಡ್ಡ ವರ್ಗವೇ ಇದೆ. ಗಂಡು-ಹೆಣ್ಣು ಒಟ್ಟಿಗೆ ಇದ್ದರೆ ಸಾಕು, ಅವರಿಗೆ ಮುಜುಗರ ಆಗುವಂಥ ಪ್ರಶ್ನೆ ಕೇಳುವ ಚಾಳಿ ಹಲವರದ್ದು. ಕೆಲವೊಮ್ಮೆ ಎಐ ಫೋಟೋದ ಮೂಲಕ, ಆ ನಟ-ನಟಿಯರಿಗೆ ಅಸಹ್ಯ ಆಗುವಂಥ ಚಿತ್ರಗಳನ್ನು ತಾವೇ ಚಿತ್ರಿಸುವುದು ಉಂಟು. ಸ್ನೇಹವನ್ನು ಕೂಡ ಬರೀ ಲವರ್ಸ್​ ದೃಷ್ಟಿಯಲ್ಲಿಯೇ ನೋಡುವ ಮನಸ್ಥಿತಿಯವರು ಹಲವರು. ಅವರ ತಲೆಯಲ್ಲಿ ತುಂಬಿರುವುದು ಇಂಥ ವಿಚಾರಗಳೇ. ಅದಕ್ಕಾಗಿ ಎಲ್ಲಿಯಾದರೂ, ಸೆಲೆಬ್ರಿಟಿಗಳು ಕಂಡಾಗ ಬೇರೊಬ್ಬರ ಹೆಸರು ಹೇಳಿ ಸಂಬಂಧಗಳ ಬಗ್ಗೆ ಕೇಳುತ್ತಾ ಅವರಿಗೆ ಮುಜುಗರ ಮಾಡುತ್ತಾರೆ.&lt;/p&gt;&lt;p&gt;ಅದೇ ರೀತಿ, ಬಿಗ್​ಬಾಸ್​ 12ರಲ್ಲಿ ಸದ್ದು ಮಾಡಿದ್ದ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿಗೂ ಇಂಥದ್ದೇ ಪ್ರಶ್ನೆಗಳು ಎದುರಾಗುತ್ತವೆ. ತಮಗೆ ಗಿಲ್ಲಿ ನಟನಂಥ ಹುಡುಗ ಬೇಕು ಎಂದು ರಕ್ಷಿತಾ (Bigg Boss Rakshita Shetty) ಹೇಳಿದ ಮಾತುಗಳನ್ನೇ ಇಟ್ಟುಕೊಂಡು, ಆಕೆ ಹೋದಲ್ಲಿ, ಬಂದಲ್ಲಿ ಗಿಲ್ಲಿ ನಟನ ಪ್ರಶ್ನೆ ಕೇಳಲಾಗುತ್ತದೆ. ಆದರೆ ತುಳುನಾಡಿನ ಈ ಬೆಡಗಿ ಪ್ರತಿಬಾರಿಯೂ ತನ್ನದೇ ಆದ ರೀತಿಯಲ್ಲಿ ಪ್ರಶ್ನೆ ಕೇಳಿದವರನ್ನು ಕಕ್ಕಾಬಿಕ್ಕಿ ಮಾಡುವುದು ಉಂಟು. ಇದೀಗ ಅಂಥದ್ದೇ ಇನ್ನೊಂದು ಪ್ರಶ್ನೆಗೆ ಉತ್ತರಿಸಿರುವ ರಕ್ಷಿತಾ, ಪ್ರಶ್ನೆ ಕೇಳಿದವರು ಮುಟ್ಟಿಕೊಳ್ಳುವ ಹಾಗೆ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಮೀನಿನ ಸಾಂಬಾರ್ ಮಾಡುವಾಗ...&lt;/strong&gt;&lt;/h2&gt;&lt;p&gt;ನಿಮಗೆ ಗಿಲ್ಲಿಯ ಮೇಲೆ ಕ್ರಷ್​ ಇದ್ಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇದರಿಂದ ಗರಂ ಆದ ರಕ್ಷಿತಾ ಕ್ರಷ್​ ಎಂದ್ರೆ ಏನು ಎಂದು ಪ್ರಶ್ನಿಸಿದ್ದಾರೆ. ಕ್ರಷ್​ ಎಂದರೆ ಜಸ್ಟ್​ ಇಷ್ಟ ಆಯ್ತು ಅಂತ ಅಷ್ಟೇ ಎಂದು ಉತ್ತರ ಬಂತು. ಅದಕ್ಕೆ ರಕ್ಷಿತಾ ಶೆಟ್ಟಿ, ನಮ್ಮ ಕಡೆ ಮೀನಿನ ಸಾಂಬಾರು ಮಾಡುವಾಗ ಎಲ್ಲಾ ಮಸಾಲೆ ಹಾಕಿ ಅದನ್ನು ಪುಡಿ ಪುಡಿ ಮಾಡ್ತೇವೆ, ಅದಕ್ಕೆ ಕ್ರಷ್​ ಅಂತೇವೆ, ನೀವು ಹೇಳ್ತಿರೋದು ನನಗೆ ಅರ್ಥ ಆಗ್ತಿಲ್ಲಾ ಎಂದಾಗ, ಪುನಃ ಅಲ್ಲಿದ್ದೋರು ಸುಮ್ಮನೇ ಇಷ್ಟ ಆಯ್ತು ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಇಷ್ಟ ಎಂದ್ರೆ ಏನರ್ಥ?&lt;/strong&gt;&lt;/h3&gt;&lt;p&gt;ಅದಕ್ಕೆ ರೊಚ್ಚಿಗೆದ್ದ ರಕ್ಷಿತಾ, ಇಷ್ಟ ಆಯ್ತು ಅಂದರೆ ಏನು, ನನಗೆ ಎಲ್ಲರೂ ಇಷ್ಟ ಆಗ್ತಾರೆ. ಅಣ್ಣ-ತಂಗಿ ಸಂಬಂಧದಲ್ಲೂ ಇಷ್ಟ ಇದೆ. ಸ್ನೇಹದಲ್ಲೂ ಇಷ್ಟ ಇದೆ. ಗಂಡ-ಹೆಂಡತಿನೂ ಇಷ್ಟ ಪಡ್ತಾರೆ. ಅದರಲ್ಲಿ ಏನಿದೆ ಎಂದು ಸ್ನೇಹ ಎನ್ನೋದನ್ನು ಬರೀ ಕಾಮುಕ ದೃಷ್ಟಿಯಿಂದಲೇ ನೋಡುವವರಿಗೆ ತಿರುಗೇಟು ನೀಡಿ, ಅವರ ಬಾಯಿ ಮುಚ್ಚಿಸಿದ್ದಾರೆ ರಕ್ಷಿತಾ ಶೆಟ್ಟಿ. ಬೆಂಕಿ ಉತ್ತರ ಇದು ಎಂದು ಕಮೆಂಟ್ಸ್​ ಸುರಿಮಳೆಯೇ ಸುರಿಯುತ್ತಿದೆ. ಎಲ್ಲವೂ ಒಂದು ಹಂತಕ್ಕೆ ಚೆಂದ. ಪದೇ ಪದೇ ಅದೇ ಪ್ರಶ್ನೆ ಕೇಳಿ ಸೆಲೆಬ್ರಿಟಿಗಳನ್ನು ಮುಜುಗರ ಉಂಟು ಮಾಡಬೇಡಿ, ನಿಮ್ಮ ಈ ಬುದ್ಧಿ ಪದೇಪದೇ ತೋರಿಸಬೇಡಿ ಎಂದೆಲ್ಲಾ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/rakshita-shettys-strong-answer-for-those-who-asked-about-gilli-nata-and-crush-suc/articleshow-9unfl4t"/>
        </item>
        <item>
            <title><![CDATA[ನಕ್ಸಲರ ಮಗುವಿಗೆ ಎದೆಹಾಲುಣಿಸಿ ಅಮ್ಮನಾದ ಮಕ್ಕಳ ಕಲ್ಯಾಣ ಸಚಿವೆ: ಭಾವುಕ ವಿಡಿಯೋ ವೈರಲ್​]]></title>
            <link>https://kannada.asianetnews.com/relationship/nepal-minister-sita-badi-breastfeeds-rescued-17-day-old-baby-after-finding-children-suc/articleshow-9wvxmpt</link>
            <guid isPermaLink="true">https://kannada.asianetnews.com/relationship/nepal-minister-sita-badi-breastfeeds-rescued-17-day-old-baby-after-finding-children-suc/articleshow-9wvxmpt</guid>
            <pubDate>Wed, 19 Aug 2026 13:41:04 +0530</pubDate>
            <description><![CDATA[&lt;p&gt;ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸೀತಾ ಬಾಡಿ, ಶಿಥಿಲಾವಸ್ಥೆಯಲ್ಲಿದ್ದ ಮಕ್ಕಳ ಕೇಂದ್ರದಿಂದ ರಕ್ಷಿಸಲ್ಪಟ್ಟ ನವಜಾತ ಶಿಶುವಿಗೆ ಎದೆಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ. ನಿರಂತರವಾಗಿ ಅಳುತ್ತಿದ್ದ 17 ದಿನದ ಮಗುವನ್ನು ಸಮಾಧಾನಪಡಿಸಲು ಬೇರೆ ದಾರಿ ಇಲ್ಲದಿದ್ದಾಗ, ಸಚಿವರು ಸ್ವತಃ ಹಾಲುಣಿಸಿ ತಾಯಿ ಪ್ರೀತಿ ತೋರಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ch596z113yg6wa89eg8smg,imgname-sita-badi-1787127047391.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಠ್ಮಂಡು: &lt;/strong&gt;ನೇಪಾಳದಲ್ಲಿ ಮಹಿಳಾ ಸಚಿವೆಯೊಬ್ಬರು ಮಾಡಿರುವ ಪುಣ್ಯ ಕಾರ್ಯವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ, ಮಹಿಳಾ, ಮಕ್ಕಳ ಮತ್ತು ಹಿರಿಯ ನಾಗರಿಕರ ಸಚಿವೆ ಸೀತಾ ಬಾಡಿ ನವಜಾತ ಶಿಶುವಿಗೆ ಹಾಲುಣಿಸುತ್ತಿರುವುದನ್ನು ಕಾಣಬಹುದು. ಜನರು ಅವರ ಕೃತ್ಯವನ್ನು ಪ್ರೀತಿ ಮತ್ತು ಮಾನವೀಯತೆಯ ಉದಾಹರಣೆ ಎಂದು ಕರೆಯುತ್ತಿದ್ದಾರೆ.&lt;/p&gt;&lt;h2&gt;&lt;strong&gt;ನಕ್ಸಲೈಟ್​ ಮಗು&lt;/strong&gt;&lt;/h2&gt;&lt;p&gt;ಆದರೆ ಈ ಕಥೆಯ ಅತ್ಯಂತ ಗಮನಾರ್ಹ ವಿಷಯವೆಂದರೆ ಆ ಮಗು ಸಚಿವರ ಸ್ವಂತ ಮಗಳಲ್ಲ. ಕಳಪೆ ಸ್ಥಿತಿಯಿಂದಾಗಿ ಕಠ್ಮಂಡುವಿನ ನಕ್ಸಲೈಟ್ ಮಕ್ಕಳ ದೇವಾಲಯದಿಂದ ರಕ್ಷಿಸಲ್ಪಟ್ಟ 20 ಮಕ್ಕಳಲ್ಲಿ ಈ 17 ದಿನಗಳ ಹೆಣ್ಣು ಮಗುವೂ ಸೇರಿತ್ತು. ಸೀತಾ ಅವರು, ವೈದ್ಯಕೀಯ ತಂಡದೊಂದಿಗೆ ಮಕ್ಕಳನ್ನು ಭೇಟಿ ಮಾಡಿದರು. ವೈದ್ಯರು ಅವರನ್ನು ಪರೀಕ್ಷಿಸಿದರು ಮತ್ತು ಅವರಲ್ಲಿ ಹಲವರು ಕಣ್ಣಿನ ಸೋಂಕು, ಚರ್ಮದ ಸಮಸ್ಯೆಗಳು ಮತ್ತು ತೀವ್ರ ಕೆಮ್ಮಿನಿಂದ ಬಳಲುತ್ತಿದ್ದಾರೆ ಎಂದು ಕಂಡುಕೊಂಡರು. ಸಚಿವರು ಮಕ್ಕಳನ್ನು ನೋಡಿಕೊಳ್ಳುವುದಲ್ಲದೆ, ಅವರನ್ನು ಸ್ವಚ್ಛಗೊಳಿಸಲು ಮತ್ತು ಸ್ನಾನ ಮಾಡಲು ಸಹಾಯ ಮಾಡಿದರು. ನಂತರ, 17 ದಿನಗಳ ಹೆಣ್ಣು ಮಗು ನಿರಂತರವಾಗಿ ಅಳಲು ಪ್ರಾರಂಭಿಸಿತು. ಅವಳನ್ನು ಶಾಂತಗೊಳಿಸಲು ಪ್ರಯತ್ನಗಳು ನಡೆದವು, ಆದರೆ ಅವಳು ಅಳುತ್ತಲೇ ಇದ್ದಳು. ಆ ಸಮಯದಲ್ಲಿ ಅವಳಿಗೆ ಆಹಾರ ನೀಡಲು ಯಾವುದೇ ಫಾರ್ಮುಲಾ ಹಾಲು ಅಥವಾ ಬೇರೆ ಯಾವುದೇ ಮಾರ್ಗವಿರಲಿಲ್ಲ. ನಂತರ ಸೀತಾ ಮಗುವನ್ನು ತನ್ನ ತೋಳುಗಳಲ್ಲಿ ತೆಗೆದುಕೊಂಡು ಅವಳಿಗೆ ಹಾಲುಣಿಸಿದರು.&lt;/p&gt;&lt;h3&gt;&lt;strong&gt;ಮಕ್ಕಳ ರಕ್ಷಣೆ&lt;/strong&gt;&lt;/h3&gt;&lt;p&gt;ಜುಲೈ 18 ರಂದು, ಸರ್ಕಾರಿ ತಂಡವು ನೇಪಾಳ ಮಕ್ಕಳ ಸಂಘಟನೆಯ ಬಾಲ ಮಂದಿರ ಕೇಂದ್ರದಿಂದ 20 ಮಕ್ಕಳನ್ನು ರಕ್ಷಿಸಿತು. ಇದರಲ್ಲಿ ಕೇವಲ 15 ದಿನಗಳಿಂದ 2 ವರ್ಷ ವಯಸ್ಸಿನ 12 ಗಂಡು ಮಕ್ಕಳು ಮತ್ತು 8 ಹುಡುಗಿಯರು ಸೇರಿದ್ದರು. ಮಳೆಗಾಲದಲ್ಲಿ, ಕೇಂದ್ರದ ಸ್ಥಿತಿ ನಿರಂತರವಾಗಿ ಹದಗೆಟ್ಟಿತ್ತು. ಎರಡು ವರ್ಷದೊಳಗಿನ ಮಕ್ಕಳನ್ನು ಇರಿಸಲಾಗಿದ್ದ ಕೋಣೆಗೆ ಕೊಳಚೆ ನೀರು ಪ್ರವೇಶಿಸಿತ್ತು. ಪರಿಸ್ಥಿತಿ ತುಂಬಾ ಭೀಕರವಾಗಿತ್ತು, ಸಿಬ್ಬಂದಿ ಮಕ್ಕಳನ್ನು ಆಡಳಿತ ಕಚೇರಿಗೆ ಸ್ಥಳಾಂತರಿಸಬೇಕಾಯಿತು. ರಕ್ಷಣಾ ತಂಡದಲ್ಲಿ ಸಚಿವರ ಸಚಿವಾಲಯ, ಕಠ್ಮಂಡು ಮೆಟ್ರೋಪಾಲಿಟನ್ ಸಿಟಿ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳು ಮತ್ತು ಪೊಲೀಸರು ಇದ್ದರು.&lt;/p&gt;&lt;p&gt;ರಕ್ಷಣಾ ತಂಡದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಪ್ರಕಾರ, ಪರಿಸ್ಥಿತಿಗಳು ಅತ್ಯಂತ ಭೀಕರವಾಗಿದ್ದವು. 20 ಚಿಕ್ಕ ಮಕ್ಕಳನ್ನು ಒಂದೇ ಮಹಡಿಯ ಚಾಪೆಯ ಮೇಲೆ ಇರಿಸಲಾಗಿತ್ತು, ಅವರ ಮುಂದೆ ಒಣಗಿದ ತ್ವರಿತ ನೂಡಲ್ಸ್ ಹರಡಲಾಗಿತ್ತು ಎಂದು ವರದಿಯಾಗಿದೆ. ಒಳಚರಂಡಿ ನೀರು ಕೋಣೆಗೆ ಪ್ರವೇಶಿಸಿದ್ದರಿಂದ ಮಕ್ಕಳನ್ನು ಸ್ಥಳಾಂತರಿಸಬೇಕಾಯಿತು.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/nepal-minister-sita-badi-breastfeeds-rescued-17-day-old-baby-after-finding-children-suc/articleshow-9wvxmpt"/>
        </item>
        <item>
            <title><![CDATA[Maternity Leave: 3ನೇ ಮಗು ಹುಟ್ಟಿದರೆ ಒಂದು ವರ್ಷದ ಹೆರಿಗೆ ರಜೆ: ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿ]]></title>
            <link>https://kannada.asianetnews.com/women/vijay-government-to-give-women-employees-365-days-maternity-leave-for-third-child-suc/articleshow-afu2ggn</link>
            <guid isPermaLink="true">https://kannada.asianetnews.com/women/vijay-government-to-give-women-employees-365-days-maternity-leave-for-third-child-suc/articleshow-afu2ggn</guid>
            <pubDate>Wed, 19 Aug 2026 13:28:26 +0530</pubDate>
            <description><![CDATA[ತಮಿಳುನಾಡು ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಮೂರನೇ ಮಗುವಿನ ಜನನಕ್ಕೂ ಹೆರಿಗೆ ರಜೆಯನ್ನು 12 ವಾರಗಳಿಂದ 365 ದಿನಗಳಿಗೆ (ಒಂದು ವರ್ಷ) ವಿಸ್ತರಿಸಿದೆ. ಈ ಹಿಂದೆ ಮೊದಲ ಎರಡು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಲಭ್ಯವಿತ್ತು, ಆದರೆ ಈಗ ಮೂರನೇ ಮಗುವಿಗೂ ಪೂರ್ಣ ವೇತನ ಸಹಿತ ಒಂದು ವರ್ಷದ ರಜೆ ಅನ್ವಯವಾಗಲಿದೆ ಎಂದು ಸಚಿವ ಡಿ. ಶರತ್&zwnj;ಕುಮಾರ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzrg064bt3b1qvp56x2wzgae,imgname-surya-grahan-pregnant-women-myths-facts-1786454743179.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ತಮಿಳುನಾಡು ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಪ್ರಮುಖ ಪರಿಹಾರವನ್ನು ಘೋಷಿಸಿದೆ, ಅವರ ಮೂರನೇ ಮಗುವಿನ ಜನನಕ್ಕೆ ಹೆರಿಗೆ ರಜೆಯನ್ನು 12 ವಾರಗಳಿಂದ 365 ದಿನಗಳಿಗೆ (ಒಂದು ವರ್ಷ) ಹೆಚ್ಚಿಸಿದೆ. ಈ ಕುರಿತು ವಿಧಾನಸಭೆಯಲ್ಲಿ ಇಲಾಖಾ ಬೇಡಿಕೆಗಳ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ತಮಿಳುನಾಡು ಸಚಿವ ಡಿ. ಶರತ್&zwnj;ಕುಮಾರ್ ಈ ಘೋಷಣೆ ಮಾಡಿದರು. ಇಲ್ಲಿಯವರೆಗೆ, ಮೊದಲ ಎರಡು ಮಕ್ಕಳಿಗೆ ಮಾತ್ರ 365 ದಿನಗಳ ರಜೆ ನೀಡಲಾಗುತ್ತಿತ್ತು, ಆದರೆ ಮೂರನೇ ಮಗುವಿಗೆ ಮಿತಿ 12 ವಾರಗಳಾಗಿತ್ತು, ಅದನ್ನು ಈಗ ಸಮೀಕರಿಸಲಾಗಿದೆ ಎಂದು ಅವರು ವಿವರಿಸಿದರು.&lt;/p&gt;&lt;p&gt;ತಮಿಳುನಾಡು ವಿಧಾನಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಸಚಿವರು, ಸರ್ಕಾರವು ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ ಎಂದು ಹೇಳಿದರು. ಶೀಘ್ರದಲ್ಲೇ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (ಎಸ್&zwnj;ಎಸ್&zwnj;ಸಿ, ಆರ್&zwnj;ಆರ್&zwnj;ಬಿ, ಐಬಿಪಿಎಸ್ ಮತ್ತು ಟಿಎನ್&zwnj;ಪಿಎಸ್&zwnj;ಸಿ) ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ &quot;ವೆಟ್ರಿ ಪಾಠೈ&quot; ಅಪ್ಲಿಕೇಶನ್&zwnj;ನ ಅಭಿವೃದ್ಧಿಯನ್ನು ಸಹ ಅವರು ಘೋಷಿಸಿದರು.&lt;/p&gt;&lt;h2&gt;&lt;strong&gt;ಸುಪ್ರೀಂ ಕೋರ್ಟ್ ಮಾರ್ಗಸೂಚಿ&lt;/strong&gt;&lt;/h2&gt;&lt;p&gt;ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಮತ್ತು ರಾಜ್ಯ ತಿದ್ದುಪಡಿಗಳ ಪ್ರಕಾರ, ಎರಡು ಅಥವಾ ಅದಕ್ಕಿಂತ ಹೆಚ್ಚು ಬದುಕುಳಿದ ಮಕ್ಕಳನ್ನು ಹೊಂದಿರುವ ಮಹಿಳೆಯರಿಗೆ 12 ವಾರಗಳ (84 ದಿನಗಳು) ರಜೆಗೆ ಅರ್ಹತೆ ಇತ್ತು. ಪ್ರಸ್ತುತ ನಿಯಮಗಳ ಪ್ರಕಾರ, ಎರಡಕ್ಕಿಂತ ಕಡಿಮೆ ಮಕ್ಕಳಿರುವ ನಿಯಮಿತ ಮಹಿಳಾ ಉದ್ಯೋಗಿಗಳಿಗೆ ಮಾತ್ರ 365 ದಿನಗಳ ರಜೆಗೆ ಅರ್ಹತೆ ಇತ್ತು. ಕಳೆದ ಕೆಲವು ವರ್ಷಗಳಿಂದ ರಾಜ್ಯ ಸರ್ಕಾರವು ಹೆರಿಗೆ ರಜೆ ಅವಧಿಯನ್ನು ಕ್ರಮೇಣ ಹೆಚ್ಚಿಸಿದೆ. ಆರಂಭಿಕ 90 ದಿನಗಳ ರಜೆಯನ್ನು 2011 ರಲ್ಲಿ 6 ತಿಂಗಳುಗಳಿಗೆ, ನಂತರ 2016 ರಲ್ಲಿ 9 ತಿಂಗಳುಗಳಿಗೆ ಮತ್ತು ನಂತರ ಜುಲೈ 2021 ರಲ್ಲಿ ಪೂರ್ಣ 365 ದಿನಗಳಿಗೆ (ಒಂದು ವರ್ಷ) ಹೆಚ್ಚಿಸಲಾಯಿತು.&lt;/p&gt;&lt;h3&gt;&lt;strong&gt;3ನೇ ಮಗುವಿಗೂ ಅನ್ವಯ&lt;/strong&gt;&lt;/h3&gt;&lt;p&gt;ಸುಪ್ರೀಂ ಕೋರ್ಟ್ ನಿರ್ದೇಶನಗಳು ಮತ್ತು ರಾಜ್ಯ ಸರ್ಕಾರದ ತಿದ್ದುಪಡಿಗಳ ಅಡಿಯಲ್ಲಿ, ಎರಡು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ಮಹಿಳಾ ಉದ್ಯೋಗಿಗಳು ಪೂರ್ಣ ವೇತನದೊಂದಿಗೆ 12 ವಾರಗಳ (84 ದಿನಗಳು) ಹೆರಿಗೆ ರಜೆಗೆ ಮಾತ್ರ ಅರ್ಹರಾಗಿದ್ದರು. ವಿಜಯನಗರ ಸರ್ಕಾರ ಘೋಷಿಸಿದ ಒಂದು ವರ್ಷದ ಹೆರಿಗೆ ರಜೆ ಈಗ ಮೂರನೇ ಮಗುವಿಗೆ ಸಹ ಅನ್ವಯಿಸುತ್ತದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/women/vijay-government-to-give-women-employees-365-days-maternity-leave-for-third-child-suc/articleshow-afu2ggn"/>
        </item>
        <item>
            <title><![CDATA[ಚಿಕ್ಕಬಾಣಾವರ ಅಪ್ಪ-ಮಗನ ಸಾವಿನ ಕೇಸಿಗೆ ಬಿಗ್ ಟ್ವಿಸ್ಟ್; ಪ್ರಿಯಕರನೊಂದಿಗೆ ಮಾಡಿದ ಮಸಲತ್ತು ಬಿಚ್ಚಿಟ್ಟ ಹೆಂಡತಿ!]]></title>
            <link>https://kannada.asianetnews.com/gallery/bengaluru-urban/chikkabanavara-double-murder-case-wife-harini-and-lover-arrested-for-killing-husband-and-son-d9lsukt</link>
            <guid isPermaLink="true">https://kannada.asianetnews.com/gallery/bengaluru-urban/chikkabanavara-double-murder-case-wife-harini-and-lover-arrested-for-killing-husband-and-son-d9lsukt</guid>
            <pubDate>Tue, 18 Aug 2026 09:35:34 +0530</pubDate>
            <description><![CDATA[&lt;p&gt;ಚಿಕ್ಕಬಾಣಾವರದಲ್ಲಿ ಗಂಡ ಹಾಗೂ 5 ವರ್ಷದ ಮಗ ಸತ್ತಿದ್ದರೂ ತನಗೆ ಗೊತ್ತೇ ಇಲ್ಲವೆಂದು ಕಥೆ ಕಟ್ಟಿದ್ದ ಹೆಂಡತಿ ಪೊಲೀಸರು ಚೆನ್ನಾಗಿ ರುಬ್ಬುತ್ತಿದ್ದಂತೆ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಪ್ರಿಯಕರನೊಂದಿಗೆ ಸೇರಿಕೊಂಡು ಗಂಡ ಹಾಗೂ ಮಗುವಿನ ಕಥೆ ಮುಗಿಸಿದ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09g8ysttaj9xee6htq86cbw,imgname-bengaluru-chikkabanavara-husband-and-son-murder--1--1787025455930.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಬಾಣಾವರದಲ್ಲಿ ಗಂಡ ಹಾಗೂ 5 ವರ್ಷದ ಮಗ ಸತ್ತಿದ್ದರೂ ತನಗೆ ಗೊತ್ತೇ ಇಲ್ಲವೆಂದು ಕಥೆ ಕಟ್ಟಿದ್ದ ಹೆಂಡತಿ ಪೊಲೀಸರು ಚೆನ್ನಾಗಿ ರುಬ್ಬುತ್ತಿದ್ದಂತೆ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಪ್ರಿಯಕರನೊಂದಿಗೆ ಸೇರಿಕೊಂಡು ಗಂಡ ಹಾಗೂ ಮಗುವಿನ ಕಥೆ ಮುಗಿಸಿದ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಗಂಡ ಹಾಗೂ 5 ವರ್ಷದ ಮಗ ಸತ್ತಿದ್ದರೂ ತನಗೆ ಗೊತ್ತೇ ಇಲ್ಲವೆಂದು ಕಥೆ ಕಟ್ಟಿದ್ದ ಹೆಂಡತಿ ಪೊಲೀಸರು ಚೆನ್ನಾಗಿ ರುಬ್ಬುತ್ತಿದ್ದಂತೆ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಪ್ರಿಯಕರನೊಂದಿಗೆ ಸೇರಿಕೊಂಡು ಗಂಡ ಹಾಗೂ ಮಗುವನ್ನು ಕೊಲೆ ಮಾಡಿದ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.&lt;/p&gt;&lt;img&gt;&lt;p&gt;ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಸಮೀಪದ ಗುಡ್ಡೆ ಬಸವಪುರದಲ್ಲಿ ಅಭಿನಂದನ್ (33) ಹಾಗೂ ಆತನ 5 ವರ್ಷದ ಪುತ್ರ ಯದುವೀರ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಮೇಲ್ನೋಟಕ್ಕೆ ಇದು ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿತ್ತು. ಈ ಘಟನೆ ಸಂಬಂಧ ಮೃತನ ಪತ್ನಿ ಹರಿಣಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಸಹಜ ಸಾವು ಎಂದು ಹೇಳುತ್ತಿದ್ದರೂ, ಪೊಲೀಸರು ತನಿಖೆಯ ಸ್ಟೈಲ್ ಚೇಂಗ್ ಮಾಡಿದಾಗ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.&lt;/p&gt;&lt;img&gt;&lt;p&gt;ಮನೆಗೆ ಸೇರಿಸಿಕೊಂಡಿದ್ದೇ ತಪ್ಪಾಯ್ತು?&lt;/p&gt;&lt;p&gt;ಕೆಲವು ದಿನಗಳ ಹಿಂದೆ ಮನೆಯಿಂದ ಬೇರೊಬ್ಬನ ಜೊತೆಗೆ ಓಡಿ ಹೋಗಿದ್ದ ಹರಿಣಿ 3 ತಿಂಗಳ ಬಳಿಕ ಮನೆಗೆ ವಾಪಸ್ ಬಂದಿದ್ದಳು. ಆದರೆ, ಮನೆಯಲ್ಲಿ ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನೂ ಮತ್ತೆ ಸಂಸಾರ ಮಾಡಿಕೊಂಡು ಹೋಗುವಂತೆ ಬುದ್ಧಿ ಹೇಳಿ ಒಂದುಗೂಡಿಸಿದ್ದರು. ಆದರೆ, ಹೀಗೆ ಮನೆಯಿಂದ ಓಡಿಹೋಗಿದ್ದವಳನ್ನು ಕ್ಷಮಿಸಿ ಮನೆಗೆ ವಾಪಸ್ ಸೇರಿಸಿಕೊಂಡಿದ್ದೇ ಗಂಡನ ದೊಡ್ಡ ತಪ್ಪಾಗಿ ಹೋಯ್ತು. ಇತ್ತ ಹರಿಣಿ ಮಾತ್ರ ತನ್ನ ಪ್ರಿಯಕರನ ಸಹವಾಸವನ್ನು ಬಿಟ್ಟಿರಲಿಲ್ಲ. ಗಂಡನಿಗೆ ಚಟ್ಟ ಕಟ್ಟಿ ಪ್ರಿಯಕರನೊಂದಿಗೆ ಸುಖವಾಗಿರಬಹುದು ಎಂದು ಯೋಜನೆ ರೂಪಿಸಿದ್ದಳು. ಇದಕ್ಕೆ ಆಕೆಯ ಪ್ರಿಯಕರನೂ ಸಾಥ್ ನೀಡಿದ್ದನು.&lt;/p&gt;&lt;img&gt;&lt;p&gt;&lt;strong&gt;ಮಗ ಕೊಲೆ ನೋಡಿದನೆಂದು ಅವನ ಉಸಿರು ನಿಲ್ಲಿಸಿದಳು&lt;/strong&gt;&lt;/p&gt;&lt;p&gt;ಭಾನುವಾರ ರಾತ್ರಿ 11 ಗಂಟೆಗೆ ಪ್ರಿಯಕರ ವಿನಯ್&zwnj;ನನ್ನು ಕರೆಸಿಕೊಂಡಿದ್ದಾಳೆ. ಪ್ರಿಯಕರ ಮನೆಗೆ ಬರುವ ವೇಳೆಗೆ ಸಿಸಿ ಕ್ಯಾಮೆರಾ ಆಫ್ ಮಾಡಿದ್ದಾಳೆ. ರಾತ್ರಿ ಹಾಸಿಗೆಯಲ್ಲಿ ಮಲಗಿದ್ದ ಗಂಡ ಅಭಿನಂದನ್ ತಲೆಗೆ ದಪ್ಪನೆಯ ಸೌಟ್&zwnj;ನಿಂದ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಆದರೆ, ಗಂಡನಿಗೆ ಹೊಡೆದು ಕೊಲೆ ಮಾಡದೋದನ್ನ ತನ್ನ 5 ವರ್ಷದ ಮಗ ಯದುವೀರ್ ನೋಡಿದ್ದನು. ಈ ಮಗು ಕೊಲೆ ಮಾಡುವುದನ್ನುನೋಡಿದಗ್ದರಿಂದ ನಾಳೆ ನಮಗೆ ತೊಂದರೆಯಾಗ್ತಾನೆ ಎಂದು ಪ್ಲಾನ್ ಮಾಡಿ ಮಗನನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಇದಕ್ಕೆ ಆಕೆಯ ಪ್ರಿಯಕರನೂ ಸಾಥ್ ನೀಡಿದ್ದಾನೆ.&lt;/p&gt;&lt;img&gt;&lt;p&gt;ಇನ್ನು ಗಂಡನ ತಲೆಗೆ ಹೊಡೆತ ಬಿದ್ದು, ಮನೆಯಲ್ಲಿ ರಕ್ತಸ್ರಾವ ಉಂಟಾಗಿತ್ತು. ಪೊಲೀಸರಿಗೆ ಕೊಲೆಯ ಸುಳಿವು ಸಿಗಬಾರದೆಂದು ಎಲ್ಲ ರಕ್ತವನ್ನೂ ತೊಳೆದು ಕ್ಲೀನ್ ಮಾಡಿದ್ದರು.ಜೊತೆಗೆ, ಅಭಿನಂದನ್ ರಕ್ತದ ಕಲೆ ಬಟ್ಟೆ ಬದಲಾಯಿಸಿ ರಾತ್ರೋ ರಾತ್ರಿ ಒಗೆದುಹಾಕಿದ್ದಳು. ನಂತರ, ಗಂಡನೇ ನಿದ್ದೆಯಲ್ಲಿ ಮಗುವಿನ ಮೇಲೆ ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿದ್ದಳು. ಕೊಲೆಯ ಪ್ಲಾನ್ ಸಕ್ಸಸ್ ನಂತರ ವಿನಯ್ ಅಲ್ಲಿಂದ ಪರಾರಿಯಾಗಿದ್ದನು. ಇದೀಗ ಪೊಲೀಸರು ಆರೋಪಿ ವಿನಯ್ ಬೆನ್ನು ಬಿದ್ದಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suvarna News</dc:creator>
            <atom:link href="https://kannada.asianetnews.com/gallery/bengaluru-urban/chikkabanavara-double-murder-case-wife-harini-and-lover-arrested-for-killing-husband-and-son-d9lsukt"/>
        </item>
        <item>
            <title><![CDATA[ಅಕ್ಕನ ಮದುವೆಯಾಗಲು ಬಂದ ಭಾವನೇ ನಾದಿನಿಯ ಬುಟ್ಟಿಗೆ ಹಾಕೊಂಡ; ನಾನು ನನ್ನ ಹೆಂಡ್ತೀರು ಕಥೆ ವೈರಲ್!]]></title>
            <link>https://kannada.asianetnews.com/viral/bengaluru-husband-cheats-wife-gets-sister-in-law-pregnant-at-family-wedding-temple-marriage/articleshow-fmr8f2l</link>
            <guid isPermaLink="true">https://kannada.asianetnews.com/viral/bengaluru-husband-cheats-wife-gets-sister-in-law-pregnant-at-family-wedding-temple-marriage/articleshow-fmr8f2l</guid>
            <pubDate>Wed, 19 Aug 2026 15:45:28 +0530</pubDate>
            <description><![CDATA[ಬೆಂಗಳೂರಿನಲ್ಲಿ, ಪತ್ನಿಯ ತಂಗಿಯ ಮದುವೆ ಮನೆಯಲ್ಲಿ ಭಾವ-ನಾದಿನಿಯರ ನಡುವೆ ಅತಿಯಾದ ಸಲಿಗೆಯು ಅಕ್ರಮ ಸಂಬಂಧಕ್ಕೆ ತಿರುಗುತ್ತದೆ. ನಾದಿನಿ ಗರ್ಭಿಣಿಯಾದಾಗ ಸತ್ಯ ಬಯಲಾಗಿದ್ದು, ಅಂತಿಮವಾಗಿ ಕುಟುಂಬದ ಒತ್ತಡಕ್ಕೆ ಮಣಿದು ಪತಿಯು ತನ್ನ ಪತ್ನಿಯ ಎದುರೇ ನಾದಿನಿಯನ್ನು ಮದುವೆಯಾಗುವ ಮೂಲಕ ಮೊದಲ ಪತ್ನಿಯ ಬದುಕನ್ನು ಕತ್ತಲೆಗೆ ತಳ್ಳುತ್ತಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0cr70f0gtmd2maqvbrekgrt,imgname-bengaluru-wife-and-sister-1787134444000.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.19): ನಂ&lt;/strong&gt;ಬಿಕೆ ಮತ್ತು ಗೌರವವೇ ಯಾವುದೇ ದಾಂಪತ್ಯ ಜೀವನದ ಭದ್ರ ಬುನಾದಿ. ಆದರೆ, ಕೆಲವೊಮ್ಮೆ ಕುಟುಂಬದೊಳಗಿನ 'ಅತಿಯಾದ ಸಲಿಗೆ' ಮತ್ತು 'ಮಿತಿಮೀರಿದ ವರ್ತನೆ' ಇಡೀ ಸಂಸಾರವನ್ನೇ ಹೇಗೆ ಧ್ವಂಸ ಮಾಡಬಲ್ಲದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಮನಕಲಕುವ ಘಟನೆಯೇ ಸಾಕ್ಷಿ. ಮದುವೆ ಮನೆಯ ಸಂಭ್ರಮದಲ್ಲಿ ತಮಾಷೆಯಾಗಿ ಆರಂಭವಾದ ಭಾವ-ನಾದಿನಿಯ ಒಡನಾಟ, ಕೊನೆಗೆ ಪತ್ನಿಯ ಬದುಕನ್ನೇ ಕತ್ತಲಾಗಿಸಿದ ನೈಜ ಕಥೆಯಿದು.&lt;/p&gt;&lt;h2&gt;&lt;strong&gt;ಮದುವೆ ಮನೆಯಲ್ಲಿ ಆರಂಭವಾದ &lsquo;ಸಲಿಗೆ&rsquo;:&lt;/strong&gt;&lt;/h2&gt;&lt;p&gt;ಬೆಂಗಳೂರು ಮೂಲದ ದಂಪತಿ, ಪತ್ನಿಯ ತಂಗಿಯ (ನಾದಿನಿ) ಮದುವೆ ಸಮಾರಂಭಕ್ಕಾಗಿ ಒಂದು ವಾರ ಮುಂಚಿತವಾಗಿಯೇ ತವರು ಮನೆಗೆ ತೆರಳಿದ್ದರು. ಮದುವೆ ಸಿದ್ಧತೆಗಳ ನಡುವೆ, ಪತಿಯು ಪತ್ನಿಯ ತಂಗಿಯೊಂದಿಗೆ ಅತಿಯಾಗಿ ಬೆರೆಯಲು (ತುಂಬಾ ಕ್ಲೋಸ್) ಶುರುಮಾಡಿದ್ದನು. ಆರಂಭದಲ್ಲಿ ಇದನ್ನು ಕುಟುಂಬದ ಸದಸ್ಯರು ಕೇವಲ 'ಭಾವ-ನಾದಿನಿಯ ತಮಾಷೆಯ ಒಡನಾಟ' ಎಂದೇ ಭಾವಿಸಿದ್ದರು. ಪತ್ನಿಯೂ ಕೂಡ ಗಂಡ ಮತ್ತು ತಂಗಿ ನಗುತ್ತಾ ಆಡುತ್ತಿದ್ದ ತಮಾಷೆಗಳನ್ನು ಕಂಡು ಸಂತೋಷಪಟ್ಟು, ತಾನೇ ಸ್ವತಃ ಅವರ ವಿಡಿಯೋಗಳನ್ನು ಮೊಬೈಲ್&zwnj;ನಲ್ಲಿ ರೆಕಾರ್ಡ್ ಮಾಡಿಕೊಂಡು ನಗುತ್ತಿದ್ದಳು. ಆದರೆ, ಆ ಮುಗ್ಧ ಪತ್ನಿಗೆ ತಿಳಿದಿರಲಿಲ್ಲ&mdash; ತಮಾಷೆಯ ಪರದೆಯ ಹಿಂದೆ ಇಬ್ಬರ ನಡುವೆ ಸಂಬಂಧದ ಸೂಕ್ಷ್ಮತೆಯ ಗಡಿ ದಾಟಿದ ರಹಸ್ಯ ಅಕ್ರಮ ಸಂಬಂಧ ಶುರುವಾಗಿದೆ ಎಂದು!&lt;/p&gt;&lt;h2&gt;&lt;strong&gt;ಅಕ್ಕನಿಗೆ ತಿಳಿಯದಂತೆ ರಹಸ್ಯ ಪ್ರೇಮ:&lt;/strong&gt;&lt;/h2&gt;&lt;p&gt;ಮದುವೆಯ ಗದ್ದಲ, ಜನರ ಓಡಾಟದ ನಡುವೆಯೇ ಯಾರಿಗೂ ಅನುಮಾನ ಬಾರದಂತೆ ಇಬ್ಬರೂ ಏಕಾಂತದಲ್ಲಿ ದೈಹಿಕವಾಗಿ ಒಂದಾಗಿದ್ದರು. ಮದುವೆ ಮುಗಿದ ನಂತರ ಗಂಡ-ಹೆಂಡತಿ ಎಂದಿನಂತೆ ತಮ್ಮ ಮನೆಗೆ ವಾಪಸ್ ಬಂದಿದ್ದರು. ಆದರೆ, ಕೆಲವೇ ದಿನಗಳಲ್ಲಿ ಪತಿಗೆ ನಾದಿನಿಯಿಂದ ಬಂದ ಆ ಒಂದು ಫೋನ್ ಕಾಲ್ ಎಲ್ಲವನ್ನೂ ಬುಡಮೇಲು ಮಾಡಿತು! 'ನಾನು ಗರ್ಭಿಣಿಯಾಗಿದ್ದೇನೆ, ನನ್ನನ್ನು ನೀವೇ ಮದುವೆಯಾಗಬೇಕು' ಎಂದು ಹೇಳುತ್ತಾ ಅಳುವುದಕ್ಕೆ ಪ್ರಾರಂಭಿಸಿದ್ದಾಳೆ.&lt;/p&gt;&lt;h2&gt;&lt;strong&gt;ಗರ್ಭಪಾತಕ್ಕೆ ಪ್ರಯತ್ನಿಸಿ ಗುಟ್ಟು ರಟ್ಟಾಯ್ತು:&lt;/strong&gt;&lt;/h2&gt;&lt;p&gt;ಹೆಂಡತಿಯ ತಂಗಿ ತನ್ನಿಂದ ಗರ್ಭಿಣಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಬೆಚ್ಚಿಬಿದ್ದ ಪತಿ, ಮಗುವನ್ನು ಅಬಾರ್ಷನ್ (ಗರ್ಭಪಾತ) ಮಾಡಿಸುವಂತೆ ನಾದಿನಿಗೆ ದುಂಬಾಲು ಬಿದ್ದನು. ಆದರೆ ಆಕೆ ಇದಕ್ಕೆ ಒಪ್ಪದೆ, ನೇರವಾಗಿ ತನ್ನ ತಂದೆ-ತಾಯಿಯ ಎದುರೇ ವಿಷಯವನ್ನು ಹೇಳಿಕೊಂಡಿದ್ದಾಳೆ. ಕುಟುಂಬಸ್ಥರು ಸಿಟ್ಟಿಗೆದ್ದು ಅಳಿಯನ ಮನೆಗೆ ಧಾವಿಸಿ, ಆತನ ಪತ್ನಿ (ಅಕ್ಕ) ಎದುರೇ ಇಡೀ ಸತ್ಯವನ್ನು ಬಿಚ್ಚಿಟ್ಟರು. ತಾನು ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ್ದ ಪತಿ ಹಾಗೂ ಸ್ವಂತ ತಂಗಿಯೇ ತನಗೆ ಬೆನ್ನಿಗೆ ಚೂರಿ ಹಾಕಿದ್ದನ್ನು ಕಂಡು ಪತ್ನಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾಳೆ.&lt;/p&gt;&lt;h2&gt;&lt;strong&gt;ದೇವಸ್ಥಾನದಲ್ಲಿ ಎರಡನೇ ಮದುವೆ:&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಆತನ ಪತ್ನಿ ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರೂ, ಅತ್ತ ಗರ್ಭಿಣಿಯಾದ ತಂಗಿಯ ಭವಿಷ್ಯ ಮತ್ತು ಕುಟುಂಬದ ಮರ್ಯಾದೆಯ ಪ್ರಶ್ನೆ ಎದುರಾಯಿತು. ಇತ್ತ ಗಂಡನೂ ಕೂಡ ತಪ್ಪಿನ ಹೊಣೆ ಹೊತ್ತು ನಾದಿನಿಯನ್ನು ಮದುವೆಯಾಗಲು ಒಪ್ಪಿಕೊಂಡನು. ಅಂತಿಮವಾಗಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ದೇವಸ್ಥಾನವೊಂದರಲ್ಲಿ ಇಬ್ಬರಿಗೂ ಸರಳ ವಿವಾಹ ಮಾಡಿಸಲಾಯಿತು. ತನ್ನ ಕಣ್ಣೆದುರೇ ಗಂಡ ಮತ್ತೊಬ್ಬಳ (ಸ್ವಂತ ತಂಗಿ) ಕೊರಳಿಗೆ ತಾಳಿ ಕಟ್ಟುವುದನ್ನು ಕಂಡು ಅಸಹಾಯಕ ಪತ್ನಿ ಮೂಕವೇದನೆಯಿಂದ ಕಣ್ಣೀರಿಟ್ಟಳು. 'ಆರಂಭದಲ್ಲೇ ಇಬ್ಬರ ಅತಿಯಾದ ಸಲಿಗೆಗೆ ಮಿತಿ ಹಾಕಿದ್ದರೆ ಇಂದು ನನ್ನ ಸಂಸಾರ ಉಳಿಯುತ್ತಿತ್ತೇನೋ' ಎಂದು ಆಕೆ ಕೊರಗುವಂತಾಯಿತು.&lt;/p&gt;&lt;h2&gt;&lt;strong&gt;ಈ ಘಟನೆ ನೀಡುವ ಪ್ರಮುಖ ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಪ್ರತಿಯೊಂದು ಸಂಬಂಧಕ್ಕೂ ಒಂದು ಸೂಕ್ಷ್ಮತೆಯ 'ಗಡಿ' (Boundary) ಇರಲೇಬೇಕು. ತಮಾಷೆ, ಹರಟೆ ಎಂಬ ಹೆಸರಿನಲ್ಲಿ ಆ ಗಡಿಯನ್ನು ಮೀರಿದಾಗ ಇಡೀ ಕುಟುಂಬವೇ ಸರ್ವನಾಶವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಎಚ್ಚರಿಕೆಯ ಗಂಟೆ.&lt;/p&gt;&lt;p&gt;&lt;strong&gt;ಸೂಚನೆ:&lt;/strong&gt; ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧಿತ ಪೋಸ್ಟ್ ವೈರಲ್ ಆಗುತ್ತಿದೆ.&lt;/p&gt;]]></content:encoded>
            <category>relationship</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/bengaluru-husband-cheats-wife-gets-sister-in-law-pregnant-at-family-wedding-temple-marriage/articleshow-fmr8f2l"/>
        </item>
        <item>
            <title><![CDATA[₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗ; 'ರಾಹುಲ್ ಗಾಂಧಿ' ಕಾರಣಕ್ಕೆ ಮದುವೆಯನ್ನೇ ರಿಜೆಕ್ಟ್ ಮಾಡಿದ ಹುಡುಗಿ!]]></title>
            <link>https://kannada.asianetnews.com/viral/young-woman-rejects-marriage-proposal-40-lakh-package-groom-rahul-gandhi-role-model-viral-post/articleshow-ggy1t2p</link>
            <guid isPermaLink="true">https://kannada.asianetnews.com/viral/young-woman-rejects-marriage-proposal-40-lakh-package-groom-rahul-gandhi-role-model-viral-post/articleshow-ggy1t2p</guid>
            <pubDate>Tue, 18 Aug 2026 10:32:32 +0530</pubDate>
            <description><![CDATA[&lt;p&gt;ಮದುವೆಗೆ ಹುಡುಗನನ್ನು ನೋಡುವಾಗ ಆತನ ರೂಪ, ಆಸ್ತಿ, ಕುಟುಂಬ ಮತ್ತು ಮುಖ್ಯವಾಗಿ ಆತನ ವಾರ್ಷಿಕ ಆದಾಯವನ್ನು (ಪ್ಯಾಕೇಜ್) ನೋಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ, ವರ್ಷಕ್ಕೆ ಬರೋಬ್ಬರಿ ₹40 ಲಕ್ಷ ದುಡಿಯುವ, ನೋಡಲು ಹ್ಯಾಂಡ್&zwnj;ಸಮ್ ಆಗಿರುವ ಯುವಕನ ಮದುವೆ ಪ್ರಪೋಸಲ್ ಅನ್ನು 'ರಾಹುಲ್ ಗಾಂಧಿ' ಕಾರಣಕ್ಕೆ ತಿರಸ್ಕರಿಸಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09kqg2nfkq5b1akffpnq61a,imgname-marriage-proposal-rejected-by-reason-rahul-gandhi-1787029078101.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಮದುವೆ ನಿಶ್ಚಯಿಸುವಾಗ ಕೇವಲ ಜಾತಿ, ಜಾತಕ ಮತ್ತು ಹುಡುಗನ ಆದಾಯವಷ್ಟೇ ಅಲ್ಲದೆ, ರಾಜಕೀಯ ಸಿದ್ಧಾಂತಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದಕ್ಕೆ ಇಲ್ಲೊಂದು ವಿಚಿತ್ರ ಹಾಗೂ ಅಚ್ಚರಿಯ ಉದಾಹರಣೆ ಸಿಕ್ಕಿದೆ. ವಾರ್ಷಿಕ ₹40 ಲಕ್ಷ ದುಡಿಯುವ, ಸುಂದರವಾಗಿದ್ದ ವರನೊಬ್ಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತಮ್ಮ 'ರೋಲ್ ಮಾಡೆಲ್' (Role Model) ಎಂದು ಹಾಕಿಕೊಂಡಿದ್ದ ಕಾರಣಕ್ಕಾಗಿಯೇ ಆತನ ಮದುವೆ ಪ್ರಸ್ತಾಪವನ್ನು ಯುವತಿಯೊಬ್ಬಳು ನೇರವಾಗಿ ತಿರಸ್ಕರಿಸಿದ್ದಾಳೆ!&lt;/p&gt;&lt;p&gt;ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ (Twitter) ಆರೂಹಿ ರೆಡ್ಡಿ (Aaruhi Reddy) ಎಂಬ ಯುವತಿ ಹಂಚಿಕೊಂಡಿರುವ ಈ ಪೋಸ್ಟ್ ಇದೀಗ ಭಾರಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಆರೂಹಿ ರೆಡ್ಡಿ ಅವರ ಪೋಸ್ಟ್&zwnj;ನಲ್ಲೇನಿದೆ?&lt;/strong&gt;&lt;/h2&gt;&lt;p&gt;&lt;strong&gt;ಯುವತಿ ತನ್ನ ಟ್ವೀಟ್&zwnj;ನಲ್ಲಿ ಹೀಗೆ ಬರೆದುಕೊಂಡಿದ್ದಾರೆ:&lt;/strong&gt;&lt;/p&gt;&lt;p&gt;'ಇತ್ತೀಚೆಗೆ ನನಗೆ ಒಂದು ಮದುವೆಯ ಪ್ರಪೋಸಲ್ ಬಂದಿತ್ತು. ಹುಡುಗ ನೋಡಲು ಹ್ಯಾಂಡ್&zwnj;ಸಮ್ ಆಗಿದ್ದ, ವಾರ್ಷಿಕ ₹40 ಲಕ್ಷದ ಭರ್ಜರಿ ಪ್ಯಾಕೇಜ್ ಇತ್ತು ಮತ್ತು ಆತನ ಕುಟುಂಬವೂ ಅತ್ಯಂತ ಪ್ರತಿಷ್ಠಿತವಾಗಿತ್ತು. ಆದರೆ, ಕೇವಲ ಒಂದೇ ಒಂದು ಕಾರಣಕ್ಕಾಗಿ ನಾನು ಆತನನ್ನು ರಿಜೆಕ್ಟ್ ಮಾಡಿದೆ!&lt;/p&gt;&lt;p&gt;ಅದೇನೆಂದರೆ, ಆತನ ಇನ್&zwnj;ಸ್ಟಾಗ್ರಾಮ್ ಪ್ರೊಫೈಲ್ ನೋಡಿದಾಗ, ಆತ ರಾಹುಲ್ ಗಾಂಧಿಯನ್ನು ತನ್ನ ರೋಲ್ ಮಾಡೆಲ್ ಎಂದು ಹಾಕಿಕೊಂಡಿದ್ದ. ಸತತವಾಗಿ ಸೋಲುವ ವ್ಯಕ್ತಿಯನ್ನು ರೋಲ್ ಮಾಡೆಲ್ ಎಂದು ಪರಿಗಣಿಸುವವರ ಐಕ್ಯೂ (IQ) ಮಟ್ಟ ಎಷ್ಟಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ. ಅಂತಹವರು ತಮ್ಮ ಮಕ್ಕಳಿಗೆ ಗುಲಾಮಗಿರಿ, ದೇಶವಿರೋಧಿ ಮತ್ತು ಹಿಂದೂ ವಿರೋಧಿ ಮನಸ್ಥಿತಿಯನ್ನು ಬಿಟ್ಟು ಇನ್ನೇನು ಕಲಿಸಲು ಸಾಧ್ಯ?'&lt;/p&gt;&lt;p&gt;ಮುಂದುವರಿದು, 'ನನ್ನ ಪಾಲಿಗೆ ಹಣ, ಆಕರ್ಷಕ ರೂಪ ಅಥವಾ ದೊಡ್ಡ ವೃತ್ತಿಜೀವನಕ್ಕಿಂತ ನನ್ನ ದೇಶ ಮತ್ತು ನನ್ನ ಸನಾತನ ಧರ್ಮವೇ ಮುಖ್ಯ. ಒಬ್ಬ ಹೆಮ್ಮೆಯ ರಾಷ್ಟ್ರವಾದಿ ಹಿಂದೂ ಆಗಿ, ಇಂಥವರನ್ನು ನನ್ನ ಜೀವನ ಸಂಗಾತಿಯಾಗಿ ಎಂದಿಗೂ ಸ್ವೀಕರಿಸಲು ಸಾಧ್ಯವಿಲ್ಲ' ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಮಹಾಸಮರ:&lt;/strong&gt;&lt;/h2&gt;&lt;p&gt;ಆರೂಹಿ ಅವರ ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಎರಡು ಬಣಗಳಾಗಿ ಒಡೆದು ಕಾಮೆಂಟ್&zwnj;ಗಳ ಸುರಿಮಳೆಗೈದಿದ್ದಾರೆ:&lt;/p&gt;&lt;p&gt;&lt;strong&gt;ಹುಡುಗನ ಪರವಾಗಿ ನೆಟ್ಟಿಗರ ಕಮೆಂಟ್&zwnj;ಗಳು:&lt;/strong&gt;&lt;/p&gt;&lt;p&gt;'ಆ ಹುಡುಗ ವಿಶ್ವದಲ್ಲೇ ಅತ್ಯಂತ ಅದೃಷ್ಟವಂತ! ಇಂತಹ ಸಂಕುಚಿತ ಮನಸ್ಥಿತಿಯ ಹುಡುಗಿಯಿಂದ ಆತ ಬಚಾವಾಗಿದ್ದಾನೆ.'&lt;/p&gt;&lt;p&gt;'ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕನಾಗಿ ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವುದು ರಾಹುಲ್ ಗಾಂಧಿ ಅವರ ಕರ್ತವ್ಯ. ಅದಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ವ್ಯಕ್ತಿಯ ಸ್ವಂತಿಕೆ ಮತ್ತು ಅಭಿಪ್ರಾಯವನ್ನು ಗೌರವಿಸದ ಹುಡುಗಿಗೆ ಐಕ್ಯೂ ಎಷ್ಟಿದೆ ಎಂದು ತಿಳಿಯುತ್ತದೆ' ಎಂದು ಹಲವರು ಟೀಕಿಸಿದ್ದಾರೆ.&lt;/p&gt;&lt;p&gt;&lt;strong&gt;ಹುಡುಗಿಯ ಪರ ಕಮೆಂಟ್&zwnj;ಗಳು:&lt;/strong&gt;&lt;/p&gt;&lt;p&gt;'ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ರಾಜಕೀಯ ಮತ್ತು ಧಾರ್ಮಿಕ ಸಿದ್ಧಾಂತಗಳು ಹೊಂದಾಣಿಕೆಯಾಗುವುದು ಬಹಳ ಮುಖ್ಯ. ಹಣಕ್ಕಿಂತ ಸಿದ್ಧಾಂತ ಮುಖ್ಯ ಎಂದು ತೋರಿಸಿದ ಆಕೆಯ ನಿರ್ಧಾರ ಸರಿ' ಎಂದು ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಕಾರ್ಪೊರೇಟ್ ಜಗತ್ತಿನಲ್ಲಿ ಲಕ್ಷಾಂತರ ರೂಪಾಯಿ ದುಡಿಯುವ ಯುವಕನಿಗೆ ಕೇವಲ 'ರಾಜಕೀಯ ನಾಯಕನ ಮೇಲಿನ ಅಭಿಮಾನ'ವೇ ಮದುವೆಗೆ ಮುಳುವಾಗಿ ಪರಿಣಮಿಸಿದ್ದು ಇಂಟರ್ನೆಟ್ ಜಗತ್ತಿನಲ್ಲಿ ನಗೆ ಹಾಗೂ ಗಂಭೀರ ಚರ್ಚೆ ಎರಡನ್ನೂ ಹುಟ್ಟುಹಾಕಿದೆ.&lt;/p&gt;&lt;p&gt;I recently got a marriage proposal.The guy was good-looking, had an impressive ₹40 lakh package, and came from a good family.But I rejected him for just one reason&mdash;on his Instagram profile, I saw that he considered Rahul Gandhi his role model.If someone considers a Loser&hellip;&lt;/p&gt;&lt;p&gt;&mdash; Aaruhi Reddy  (@CuteAaruhi4) August 17, 2026&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/young-woman-rejects-marriage-proposal-40-lakh-package-groom-rahul-gandhi-role-model-viral-post/articleshow-ggy1t2p"/>
        </item>
        <item>
            <title><![CDATA["ಜನರ ಮಧ್ಯೆ ಇದ್ದರೂ ಯಾರೂ ಜೊತೆಗಿಲ್ಲ..." ವೈರಲ್ ಆಯ್ತು ಬೆಂಗಳೂರಿನ ಮಹಿಳೆಯ ಒಂಟಿತನದ ವಿಡಿಯೋ!]]></title>
            <link>https://kannada.asianetnews.com/bengaluru-urban/less-human-contact-than-during-covid-bengaluru-nutritionists-loneliness-video-goes-viral/articleshow-gp82xhw</link>
            <guid isPermaLink="true">https://kannada.asianetnews.com/bengaluru-urban/less-human-contact-than-during-covid-bengaluru-nutritionists-loneliness-video-goes-viral/articleshow-gp82xhw</guid>
            <pubDate>Tue, 18 Aug 2026 14:15:04 +0530</pubDate>
            <description><![CDATA[&lt;p&gt;ಬೆಂಗಳೂರಿನ ಟ್ರಾಫಿಕ್, ದೀರ್ಘ ಪ್ರಯಾಣ, ವಲಸೆ ಜನಸಂಖ್ಯೆ ಮತ್ತು ಸಾರ್ವಜನಿಕ ಸ್ಥಳಗಳ ಕೊರತೆಯಿಂದ ಸಾಮಾಜಿಕ ಸಂಪರ್ಕ ಕಡಿಮೆಯಾಗುತ್ತಿದೆ ಎಂದು ನ್ಯೂಟ್ರಿಷನಿಸ್ಟ್ ರೆಬೆಕ್ಕಾ ಪಿಂಟೋ ಹೇಳಿದ್ದಾರೆ. ಕೋವಿಡ್&zwnj;ಗಿಂತಲೂ ಈಗ ಕಡಿಮೆ ಮಾನವ ಸಂಪರ್ಕವಿದೆ ಎಂಬ ಅವರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09pacrgc48khjgt7yexeadq,imgname-bengaluru-nutritionalists-video-goes-viral--1--1787031794448.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಜೀವನಶೈಲಿ, ಟ್ರಾಫಿಕ್ ಮತ್ತು ಸಾಮಾಜಿಕ ಸಂಪರ್ಕದ ಬಗ್ಗೆ ನ್ಯೂಟ್ರಿಷನಿಸ್ಟ್ ರೆಬೆಕ್ಕಾ ಪಿಂಟೋ ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೋವಿಡ್&zwnj; ಸಮಯಕ್ಕಿಂತಲೂ ಈಗ ಕಡಿಮೆ ಜನರೊಂದಿಗೆ ಸಂಪರ್ಕ ಹೊಂದಿರುವ ಅನುಭವವಾಗುತ್ತಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರಿನಲ್ಲಿ ಒಂಟಿತನ ಏಕೆ ಹೆಚ್ಚುತ್ತಿದೆ?&lt;/strong&gt;&lt;/p&gt;&lt;p&gt;ರೆಬೆಕ್ಕಾ ಪಿಂಟೋ ಅವರ ಪ್ರಕಾರ, ಬೆಂಗಳೂರಿನ ದೀರ್ಘ ಪ್ರಯಾಣದ ಸಮಯ ಮತ್ತು ಭಾರೀ ಟ್ರಾಫಿಕ್ ಜನರು ಪರಸ್ಪರ ಭೇಟಿಯಾಗುವುದನ್ನೇ ಕಷ್ಟವಾಗಿಸುತ್ತಿದೆ. ಚಿಕ್ಕದೊಂದು ಭೇಟಿಗೂ ಹೆಚ್ಚು ಸಮಯ ಬೇಕಾಗುವುದರಿಂದ ಸ್ನೇಹಿತರು ಮತ್ತು ಪರಿಚಿತರನ್ನು ನಿಯಮಿತವಾಗಿ ಭೇಟಿಯಾಗುವ ಅವಕಾಶ ಕಡಿಮೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸಾಮಾಜಿಕ ಜೀವನಕ್ಕೂ ಹಣ ಖರ್ಚು ಮಾಡಬೇಕೇ?&rsquo;&lt;/strong&gt;&lt;/p&gt;&lt;p&gt;ಬೆಂಗಳೂರಿನಲ್ಲಿ ಜನರು ಒಟ್ಟಾಗಿ ಸಮಯ ಕಳೆಯಲು ಸಾಕಷ್ಟು ಚಟುವಟಿಕೆಗಳಿದ್ದರೂ, ಹಣ ಖರ್ಚು ಮಾಡದೆ ಕುಳಿತು ಮಾತನಾಡಲು ಅಥವಾ ಸಮಯ ಕಳೆಯಲು ಸಾರ್ವಜನಿಕ ಸ್ಥಳಗಳ ಕೊರತೆ ಇದೆ ಎಂಬುದು ಅವರ ಮತ್ತೊಂದು ವಾದ.&lt;/p&gt;&lt;p&gt;ಕೆಫೆ, ರೆಸ್ಟೋರೆಂಟ್ ಸೇರಿದಂತೆ ಹಣ ಪಾವತಿಸಬೇಕಾದ ಸ್ಥಳಗಳೇ ಭೇಟಿಯ ಪ್ರಮುಖ ತಾಣಗಳಾಗುತ್ತಿವೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ವಲಸೆ ಜನಸಂಖ್ಯೆಯೂ ಒಂದು ಕಾರಣ?&lt;/strong&gt;&lt;/p&gt;&lt;p&gt;ಬೆಂಗಳೂರಿನ ಮತ್ತೊಂದು ವೈಶಿಷ್ಟ್ಯವೆಂದರೆ ದೇಶದ ವಿವಿಧ ಭಾಗಗಳಿಂದ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಬರುವ ಜನರ ದೊಡ್ಡ ಸಂಖ್ಯೆಯಾಗಿದೆ. ನಗರದ ಈ ತಾತ್ಕಾಲಿಕ ಅಥವಾ ವಲಸೆ ಸ್ವರೂಪವೂ ಜನರು ಆಳವಾದ ಸಾಮಾಜಿಕ ಬಾಂಧವ್ಯ ಬೆಳೆಸಿಕೊಳ್ಳುವುದಕ್ಕೆ ಸವಾಲಾಗಬಹುದು ಎಂದು ಪಿಂಟೋ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಒಟ್ಟಾಗಿ ಆಚರಿಸುವ ಸಂಸ್ಕೃತಿ ಕಡಿಮೆಯೇ?&rsquo;&lt;/strong&gt;&lt;/p&gt;&lt;p&gt;ಕೋಲ್ಕತ್ತಾದ ದುರ್ಗಾ ಪೂಜೆ, ಮುಂಬೈನ ಗಣೇಶ ವಿಸರ್ಜನೆ ಮತ್ತು ಅಹಮದಾಬಾದ್&zwnj;ನ ಉತ್ತರಾಯಣದಂತಹ ದೊಡ್ಡ ಸಮುದಾಯ ಆಚರಣೆಗಳು ಜನರನ್ನು ಒಟ್ಟುಗೂಡಿಸುತ್ತವೆ. ಆದರೆ ಬೆಂಗಳೂರಿನಲ್ಲಿ ಇಂತಹ ನಗರವ್ಯಾಪಿ ಸಾಮೂಹಿಕ ಸಾಂಸ್ಕೃತಿಕ ಅನುಭವ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;ನೆಟ್ಟಿಗರಿಂದ ಭಿನ್ನಾಭಿಪ್ರಾಯ!&lt;/strong&gt;&lt;/p&gt;&lt;p&gt;ವಿಡಿಯೋ ವೈರಲ್ ಆದ ಬೆನ್ನಲ್ಲೇ ಬೆಂಗಳೂರಿನ ನಿವಾಸಿಗಳಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ. ಕೆಲವರು ಟ್ರಾಫಿಕ್ ಮತ್ತು ಸಂಪರ್ಕದ ಸಮಸ್ಯೆಗಳು ನಿಜವೆಂದು ಒಪ್ಪಿಕೊಂಡರೆ, ಇನ್ನು ಕೆಲವರು ಬೆಂಗಳೂರಿನಲ್ಲಿ ಸಾಮಾಜಿಕವಾಗಿ ಬೆರೆಯಲು ಸಾಕಷ್ಟು ಉಚಿತ ಸಾರ್ವಜನಿಕ ಸ್ಥಳಗಳಿವೆ ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಬೆಂಗಳೂರು ಅಷ್ಟೊಂದು ಒಂಟಿ ನಗರವಲ್ಲ!&rsquo;&lt;/strong&gt;&lt;/p&gt;&lt;p&gt;ಕಬ್ಬನ್ ಪಾರ್ಕ್, ಲಾಲ್&zwnj;ಬಾಗ್ ಸೇರಿದಂತೆ ಸಾರ್ವಜನಿಕ ಸ್ಥಳಗಳು, ಬೀದಿ ಮೇಳಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರು ಹಣ ಖರ್ಚು ಮಾಡದೆ ಪರಸ್ಪರ ಬೆರೆಯಲು ಅವಕಾಶ ನೀಡುತ್ತವೆ ಎಂದು ಕೆಲ ನೆಟ್ಟಿಗರು ವಾದಿಸಿದ್ದಾರೆ.&lt;/p&gt;&lt;p&gt;ಬೆಂಗಳೂರು ದೇಶದ ಅತ್ಯಂತ ಕಾಸ್ಮೋಪಾಲಿಟನ್ ನಗರಗಳಲ್ಲಿ ಒಂದಾಗಿದ್ದು, ವಿವಿಧ ರಾಜ್ಯಗಳ ಜನರು ಹಲವು ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತಾರೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.&lt;/p&gt;&lt;p&gt;&lt;strong&gt;ವೈಯಕ್ತಿಕ ಅನುಭವದಿಂದ ಹುಟ್ಟಿದ ಪ್ರಶ್ನೆ..?&lt;/strong&gt;&lt;/p&gt;&lt;p&gt;ತಮ್ಮ ಅಭಿಪ್ರಾಯಗಳು ವೈಯಕ್ತಿಕ ಒಂಟಿತನದ ಅನುಭವದಿಂದ ಪ್ರಭಾವಿತವಾಗಿರಬಹುದು ಎಂದು ಪಿಂಟೋ ಅವರೇ ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ತಮ್ಮ ದೃಷ್ಟಿಕೋನವನ್ನು ಪ್ರಶ್ನಿಸುವಂತೆ ಅವರು ಇತರರಿಗೂ ಆಹ್ವಾನ ನೀಡಿದ್ದಾರೆ.&lt;/p&gt;View this post on Instagram&lt;p&gt;A post shared by Rebbecca (@dr.rebeccapinto)&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Chandrashekar GS</dc:creator>
            <atom:link href="https://kannada.asianetnews.com/bengaluru-urban/less-human-contact-than-during-covid-bengaluru-nutritionists-loneliness-video-goes-viral/articleshow-gp82xhw"/>
        </item>
        <item>
            <title><![CDATA[ನಾರ್ಸಿಸಿಸ್ಟ್ ನಡವಳಿಕೆ ಅಂದ್ರೆ ಏನು? ಪುನೀತ್ ರಾಜ್‌ಕುಮಾರ್ ಜತೆ ವಿಭಿನ್ನ ಪಾತ್ರದಲ್ಲಿ ನಟಿಸಿದ್ದ ಈ ನಟಿ ಬ್ರೇಕ್‌ಅಪ್ ಮಾಡಿಕೊಂಡಿದ್ದೇಕೆ?]]></title>
            <link>https://kannada.asianetnews.com/gallery/relationship/what-is-narcissistic-behavior-5-warning-signs-you-should-never-ignore-in-a-relationship-gxngygl</link>
            <guid isPermaLink="true">https://kannada.asianetnews.com/gallery/relationship/what-is-narcissistic-behavior-5-warning-signs-you-should-never-ignore-in-a-relationship-gxngygl</guid>
            <pubDate>Tue, 18 Aug 2026 12:36:48 +0530</pubDate>
            <description><![CDATA[&lt;p&gt;ಪುನೀತ್ ರಾಜ್&zwnj;ಕುಮಾರ್ ಜತೆ ನಟಸಾರ್ವಭೌಮ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ಬಾಯ್&zwnj;ಫ್ರೆಂಡ್ ಬಾಯ್&zwnj;ಫ್ರೆಂಡ್ ಒಬ್ಬ 'ನಾರ್ಸಿಸಿಸ್ಟ್' ಆಗಿದ್ದ, ಅದಕ್ಕೇ ಬ್ರೇಕಪ್ ಮಾಡಿಕೊಂಡೆ ಎಂದಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01fz7psegx5ngeyray8nvm6351,imgname-anupama-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ಪುನೀತ್ ರಾಜ್&zwnj;ಕುಮಾರ್ ಜತೆ ನಟಸಾರ್ವಭೌಮ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ಬಾಯ್&zwnj;ಫ್ರೆಂಡ್ ಬಾಯ್&zwnj;ಫ್ರೆಂಡ್ ಒಬ್ಬ 'ನಾರ್ಸಿಸಿಸ್ಟ್' ಆಗಿದ್ದ, ಅದಕ್ಕೇ ಬ್ರೇಕಪ್ ಮಾಡಿಕೊಂಡೆ ಎಂದಿದ್ದರು.&lt;/p&gt;&lt;img&gt;&lt;p&gt;ನಾನು ಪ್ರೀತಿಸಿದ್ದೇ ದೊಡ್ಡ ತಪ್ಪಾ? ನನ್ನದೇನೂ ತಪ್ಪಿಲ್ಲದಿದ್ದರೂ, ಎಲ್ಲವೂ ನನ್ನದೇ ತಪ್ಪು ಎಂದು ಅವರು ನನ್ನನ್ನು ನಂಬಿಸಿದ್ದರು. ನನ್ನ ವ್ಯಕ್ತಿತ್ವವನ್ನೇ ಕುಗ್ಗಿಸುವಂತೆ ಮಾಡಿದ್ದರು. ಹೀಗೆಂದು ನಟಿ ಅನುಪಮಾ ಪರಮೇಶ್ವರನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಮಾಜಿ ಬಾಯ್&zwnj;ಫ್ರೆಂಡ್ ಬಗ್ಗೆ ಹೇಳಿ ಸಂಚಲನ ಮೂಡಿಸಿದ್ದರು. ಹಾಗಿದ್ರೆ ಈ ನಾರ್ಸಿಸಿಸ್ಟ್ ನಡವಳಿಕೆ ಅಂದ್ರೆ ಏನು? ಅದನ್ನು ಗುರುತಿಸೋದು ಹೇಗೆ?&lt;/p&gt;&lt;img&gt;&lt;p&gt;ಬ್ರೇಕಪ್ ನಂತರ, ಆತ ಒಬ್ಬ 'ನಾರ್ಸಿಸಿಸ್ಟ್' (Narcissist) ಎಂದು ಓಪನ್ ಆಗಿ ಹೇಳಿಕೊಂಡಿದ್ದರು. ಅಷ್ಟಕ್ಕೂ ಅನುಪಮಾಗೆ ಅಷ್ಟೊಂದು ನರಕ ತೋರಿಸಿದ ಆ 'ನಾರ್ಸಿಸಿಸ್ಟ್ ನಡವಳಿಕೆ' ಅಂದ್ರೆ ಏನು? ಈ ಮನಸ್ಥಿತಿ ಇರುವವರು ಹೇಗೆ ವರ್ತಿಸುತ್ತಾರೆ? ಮನಃಶಾಸ್ತ್ರಜ್ಞರು ಏನು ಹೇಳ್ತಾರೆ ನೋಡೋಣ. ಮನಃಶಾಸ್ತ್ರದ ಪ್ರಕಾರ, ನಾರ್ಸಿಸಿಸಂ ಅಂದರೆ, ತಮ್ಮ ಬಗ್ಗೆ ತಾವೇ ಅತಿಯಾಗಿ ಭಾವಿಸಿಕೊಂಡು, ಬೇರೆಯವರ ಭಾವನೆಗಳನ್ನು ಸಂಪೂರ್ಣವಾಗಿ ತುಳಿದುಹಾಕುವ ಸ್ವಾರ್ಥ ಮನೋಭಾವ.&lt;/p&gt;&lt;img&gt;&lt;p&gt;ಅನುಪಮಾ ಹೇಳಿದಂತೆ, ಇಂಥವರು ಒಂದು ದಿನ ವಿಪರೀತ ಪ್ರೀತಿ ತೋರಿಸುತ್ತಾರೆ, ಮರುದಿನವೇ ಸಣ್ಣ ವಿಷಯಕ್ಕೂ ರಾಕ್ಷಸರಂತೆ ಬದಲಾಗುತ್ತಾರೆ. ನಂತರ, ತಮ್ಮದೇನೂ ತಪ್ಪಿಲ್ಲ ಎಂಬಂತೆ ಬಂದು ಕ್ಷಮೆ ಕೇಳಿ ಅಳುತ್ತಾರೆ. ಈ ರೀತಿಯ ಸೈಕಲಾಜಿಕಲ್ ಡ್ರಾಮಾದಿಂದ ಎದುರಿಗಿದ್ದವರನ್ನು ಗೊಂದಲಕ್ಕೆ ತಳ್ಳುತ್ತಾರೆ.&lt;/p&gt;&lt;img&gt;&lt;p&gt;ತಪ್ಪು ತಮ್ಮದೇ ಇದ್ದರೂ, ಮಾತಿನ ಚಾಕಚಕ್ಯತೆಯಿಂದ ಅದನ್ನು ಬೇರೆಯವರ ಮೇಲೆ ಹಾಕುತ್ತಾರೆ. &quot;ನಿನ್ನಿಂದಲೇ ನಾನು ಹೀಗೆ ನಡೆದುಕೊಳ್ಳಬೇಕಾಯಿತು&quot; ಎಂದು ನಂಬಿಸಿ, ಎದುರಿಗಿದ್ದವರೇ ತಪ್ಪಿತಸ್ಥರೆಂಬ ಭಾವನೆ ಬರುವಂತೆ ಮಾಡುತ್ತಾರೆ.&lt;/p&gt;&lt;img&gt;&lt;p&gt;&quot;ಆ ಸಂಬಂಧದಲ್ಲಿ ನನ್ನ ವ್ಯಕ್ತಿತ್ವವೇ ಕುಸಿದುಹೋದಂತೆ ಅನಿಸಿತು&quot; ಎಂದು ಅನುಪಮಾ ಹೇಳಿದ್ದರು. ನಾರ್ಸಿಸಿಸ್ಟ್&zwnj;ಗಳು ತಮ್ಮ ಸಂಗಾತಿಯ ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ನಾಶಮಾಡಿ, ಅವರು ತಮ್ಮ ಮೇಲೆ ಮಾತ್ರ ಅವಲಂಬಿತರಾಗುವಂತೆ ಮಾಡುತ್ತಾರೆ. ಸಂಬಂಧದಲ್ಲಿ ಎಷ್ಟೇ ಹಿಂಸೆ ನೀಡಿದರೂ, ಹೊರಗಿನ ಪ್ರಪಂಚದ ಮುಂದೆ ಅಥವಾ ಕೊನೆಯಲ್ಲಿ ತಾವೇ ಬಲಿಪಶುಗಳು (Victims) ಎಂದು ಬಿಂಬಿಸಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಸಂಗಾತಿ ಎಷ್ಟೇ ಮಾನಸಿಕ ಯಾತನೆ ಅನುಭವಿಸುತ್ತಿದ್ದರೂ ಇವರಿಗೆ ಅದರ ಬಗ್ಗೆ ಕಾಳಜಿ ಇರುವುದಿಲ್ಲ. ಎಲ್ಲವೂ ತಮ್ಮ ಅಧಿಪತ್ಯ ಮತ್ತು ತಮ್ಮ ಅಗತ್ಯಗಳ ಸುತ್ತಲೇ ಇರಬೇಕೆಂದು ಬಯಸುತ್ತಾರೆ. ನಾರ್ಸಿಸಿಸ್ಟ್ ಮನಸ್ಥಿತಿ ಇರುವವರ ಜೊತೆ ಪ್ರೀತಿಯಲ್ಲಿರುವುದು ಎಂದರೆ ಪ್ರತಿದಿನ ಮಾನಸಿಕ ಯುದ್ಧ ಮಾಡಿದಂತೆ. ಇಂತಹ ನಡವಳಿಕೆ ಹುಡುಗಿಯರಲ್ಲೇ ಇರಲಿ, ಹುಡುಗರಲ್ಲೇ ಇರಲಿ, ಅವರೊಂದಿಗೆ ಜೀವನ ನಡೆಸುವುದು ತುಂಬಾ ಕಷ್ಟ. ಅಂತಹ ಸಂಬಂಧದಿಂದ ಹೊರಬರುವುದೇ ಉತ್ತಮ.&lt;/p&gt;]]></content:encoded>
            <category>relationship</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/relationship/what-is-narcissistic-behavior-5-warning-signs-you-should-never-ignore-in-a-relationship-gxngygl"/>
        </item>
        <item>
            <title><![CDATA['ಬ್ರೇಕಪ್‌ ಸತ್ಯ' ಎಂದ ಅನುಪಮಾ ಆರೋಪಕ್ಕೆ ಎಕ್ಸ್‌-ಬಾಯ್‌ಫ್ರೆಂಡ್‌ ನಟ ಧ್ರುವ ವಿಕ್ರಮ್ ಹೇಳಿರೋ 'LOVE' ಸೀಕ್ರೆಟ್ ಇದು..!]]></title>
            <link>https://kannada.asianetnews.com/entertainment/following-anupama-explosive-claims-about-their-breakup-here-is-the-secret-statement-from-ex-boyfriend-dhruva-vikram/articleshow-hwb8lgn</link>
            <guid isPermaLink="true">https://kannada.asianetnews.com/entertainment/following-anupama-explosive-claims-about-their-breakup-here-is-the-secret-statement-from-ex-boyfriend-dhruva-vikram/articleshow-hwb8lgn</guid>
            <pubDate>Wed, 19 Aug 2026 14:43:44 +0530</pubDate>
            <description><![CDATA[&lt;p&gt;'ಬೈಸನ್ ಕಾಳಮಾದನ್' ಸಿನಿಮಾದ ಸೆಟ್&zwnj;ನಲ್ಲಿ ಚಿಗುರಿದ ಈ ಸ್ನೇಹ ಪ್ರೀತಿಯಾಗಿ ಅರಳಿತ್ತು ಎನ್ನಲಾಗಿದೆ. ಈಗ ಇಬ್ಬರ ನಡುವೆ ಬಿರುಕು ಮೂಡಿದ್ದು'ತನ್ನ ಆತ್ಮಾಭಿಮಾನಕ್ಕಾಗಿ ಸಂಬಂಧದಿಂದ ಹೊರಬಂದೆ' ಎಂದು ನಟಿ ಅನುಪಮಾ ಹೇಳುತ್ತಿದ್ದರೆ, ಅತ್ತ ಧ್ರುವ ವಿಕ್ರಮ್ ಈ ಆರೋಪಗಳಿಂದ ಕಂಗೆಟ್ಟಿದ್ದಾರೆ. ಆ ಸೀಕ್ರೆಟ್ ಬಗ್ಗೆ ಏನ್ ಹೇಳಿದಾರೆ ಧ್ರುವ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ckqy9gwvrr42ykwf6ab5n8,imgname-dhruv-vikram-anupama-anupama-parameswaran-1787129755952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Anupama's tears to Dhruva Vikram breaking his silence: Here is the secret behind this sensational love story! ಅನುಪಮಾ ಕಣ್ಣೀರು-ಮೌನ ಮುರಿದ ಧ್ರುವ ವಿಕ್ರಮ್: ಸಂಚಲನ ಮೂಡಿಸಿದ ಈ ಪ್ರೇಮಕಥೆ ಸೀಕ್ರೆಟ್ ಇಲ್ಲಿದೆ ನೋಡಿ!&lt;/strong&gt;&lt;/p&gt;&lt;p&gt;ಗ್ಲಾಮರ್ ಲೋಕದಲ್ಲಿ ಪ್ರೀತಿ, ಪ್ರೇಮ, ಬ್ರೇಕಪ್&zwnj;ಗಳು ಸರ್ವೇ ಸಾಮಾನ್ಯ ಎನಿಸಿದರೂ, ಕೆಲವು ಜೋಡಿಗಳ ವಿಚ್ಛೇದನ ಮಾತ್ರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗುತ್ತವೆ. ಸದ್ಯ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಂತಹದ್ದೇ ಒಂದು 'ಹಾಟ್ ಟಾಪಿಕ್' ಎಂದರೆ ಅದು ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್ ಮತ್ತು ತಮಿಳು ನಟ ಧ್ರುವ ವಿಕ್ರಮ್ ಅವರ ನಡುವಿನ ಮುನಿಸು. ಇಷ್ಟು ದಿನ ಕೇವಲ ಊಹಾಪೋಹವಾಗಿದ್ದ ಇವರ ಸಂಬಂಧದ ಕಥೆ, ಈಗ ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪದ ಹಂತಕ್ಕೆ ಬಂದು ನಿಂತಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಏನಿದು ನಾರ್ಸಿಸಿಸಮ್ ಕಿರಿಕ್?&lt;/h2&gt;&lt;p&gt;ಎಲ್ಲವೂ ಶುರುವಾಗಿದ್ದು ಅನುಪಮಾ ಪರಮೇಶ್ವರನ್ ನೀಡಿದ ಒಂದು ಸ್ಫೋಟಕ ಸಂದರ್ಶನದಿಂದ. ಸಾಮಾನ್ಯವಾಗಿ ನಗುನಗುತಲೇ ಇರೋ ಈ ನಟಿ, ತಮ್ಮ ಮಾಜಿ ಪ್ರಿಯತಮನ ಬಗ್ಗೆ ಮಾತನಾಡುತ್ತಾ 'ನಾರ್ಸಿಸಿಸಮ್' (Narcissism) ಎಂಬ ಪದ ಬಳಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಅಂದರೆ, ಎದುರಿಗಿರುವ ವ್ಯಕ್ತಿಯ ಭಾವನೆಗಳಿಗೆ ಕಿಂಚಿತ್ತೂ ಬೆಲೆ ಕೊಡದೆ ಕೇವಲ ತನ್ನ ಬಗ್ಗೆಯೇ ಯೋಚಿಸುವ ಸ್ವಭಾವ. &quot;ಕಳೆದ ಎರಡು ವರ್ಷಗಳ ಸಂಬಂಧದಲ್ಲಿ ನಾನು ಈ ನಾರ್ಸಿಸಿಸಮ್&zwnj;ನಿಂದಾಗಿ ಮಾನಸಿಕವಾಗಿ ಜರ್ಜರಿತವಾಗಿದ್ದೆ. ಹೊರಗಡೆ ನಗುನಗುತಲೇ ಕಾಣಿಸಿಕೊಳ್ಳುತ್ತಿದ್ದರೂ, ಒಳಗೆ ಅನುಭವಿಸಿದ ನೋವು ಅಷ್ಟಿಷ್ಟಲ್ಲ&quot; ಎಂದು ಅನುಪಮಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಕೆಂಪು ಚೂಡಿದಾರ್ ಮತ್ತು ಆ ಕಣ್ಣೀರಿನ ಕಥೆ!&lt;/p&gt;&lt;p&gt;ಅನುಪಮಾ ತಮ್ಮ ಬದುಕಿನ ಅತ್ಯಂತ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಒಂದು ಭಾವನಾತ್ಮಕ ಘಟನೆಯನ್ನು ವಿವರಿಸಿದ್ದಾರೆ. ಅದು 'ಪರದಾ' ಚಿತ್ರದ ಪ್ರಚಾರದ ಸಮಯ. ಕೆಂಪು ಬಣ್ಣದ ಚೂಡಿದಾರ್ ಧರಿಸಿ ಪತ್ರಿಕಾಗೋಷ್ಠಿಯಲ್ಲಿ ಕುಳಿತಿದ್ದ ಅನುಪಮಾ ಅವರಿಗೆ ಪತ್ರಕರ್ತರೊಬ್ಬರು ಕೇಳಿದ ಒಂದು ಪ್ರಶ್ನೆ ಅವರ ಹಳೆಯ ನೋವನ್ನು ಕೆದಕಿತ್ತು. &quot;ನಾನು ಯಾವುದೇ ಮುಖವಾಡ ಹಾಕಿಕೊಂಡು ಮನೆಯಿಂದ ಹೊರಬರುವವಳಲ್ಲ. ಆದರೆ ಅಂದು ವೇದಿಕೆಯ ಮೇಲೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಎಷ್ಟೇ ಕಷ್ಟ ಬಂದರೂ ವೇದಿಕೆಯ ಮೇಲೆ ಅಳುವ ಹುಡುಗಿ ನಾನಲ್ಲ, ಆದರೂ ಅಂದು ಸುಮ್ಮನಿರಲಾಗಲಿಲ್ಲ&quot; ಎಂದು ಅವರು ಕಣ್ಣೀರು ಹಾಕಿದ ಕ್ಷಣವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;h3&gt;ಮೌನ ಮುರಿದ ಧ್ರುವ ವಿಕ್ರಮ್: ಎಕ್ಸ್&zwnj;-ಬಾಯ್&zwnj;ಫ್ರೆಂಡ್ ಹೇಳಿದ್ದೇನು?&lt;/h3&gt;&lt;p&gt;ಅನುಪಮಾ ಅವರ ಈ ಹೇಳಿಕೆಗಳು ನೇರವಾಗಿ 'ಬೈಸನ್ ಕಾಳಮಾದನ್' ಸಿನಿಮಾದ ಸಹನಟ ಧ್ರುವ ವಿಕ್ರಮ್ ಅವರ ಕಡೆಗೆ ಬೆರಳು ತೋರಿಸುತ್ತಿದ್ದವು. ಯಾಕೆಂದರೆ ಇವರಿಬ್ಬರ ಡೇಟಿಂಗ್ ವದಂತಿಗಳು ಅಷ್ಟರಮಟ್ಟಿಗೆ ಹಬ್ಬಿದ್ದವು. ತನ್ನ ಮೇಲೆ ಕೇಳಿಬಂದ 'ನಾರ್ಸಿಸಿಸ್ಟ್' ಎಂಬ ಪರೋಕ್ಷ ಆರೋಪಕ್ಕೆ ಧ್ರುವ ವಿಕ್ರಮ್ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. &quot;ಪ್ರೀತಿಯಲ್ಲಿ ವಾಸ್ತವವಾಗಿರುವುದು ಮುಖ್ಯ. ಪ್ರೀತಿಸುವವರನ್ನು ರಕ್ಷಿಸುವುದು ಕೂಡ ಅಷ್ಟೇ ಮುಖ್ಯ. ಆದರೆ ಈ ಇಡೀ ಬೆಳವಣಿಗೆ ಮತ್ತು ನನ್ನ ಮೇಲೆ ಕೇಳಿಬರುತ್ತಿರುವ ಆರೋಪಗಳು ನನ್ನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿವೆ&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆ ಮೂಲಕ ತಾವು ಯಾರನ್ನೂ ನೋಯಿಸಿಲ್ಲ ಎಂಬರ್ಥದಲ್ಲಿ ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;p&gt;ಬೆಳ್ಳಿತೆರೆಯ ಪ್ರೇಮ ಮತ್ತು ವಾಸ್ತವದ ಕಹಿ:&lt;/p&gt;&lt;p&gt;'ಬೈಸನ್ ಕಾಳಮಾದನ್' ಸಿನಿಮಾದ ಸೆಟ್&zwnj;ನಲ್ಲಿ ಚಿಗುರಿದ ಈ ಸ್ನೇಹ ಪ್ರೀತಿಯಾಗಿ ಅರಳಿತ್ತು ಎಂಬುದು ಅಭಿಮಾನಿಗಳ ನಂಬಿಕೆ. ಆದರೆ ಚಿತ್ರೀಕರಣ ಮುಗಿಯುವ ಹೊತ್ತಿಗೆ ಇಬ್ಬರ ನಡುವೆ ಬಿರುಕು ಮೂಡಿದ್ದು ಈಗ ಜಗಜ್ಜಾಹೀರಾಗಿದೆ. ಅನುಪಮಾ ಅವರು ತನ್ನ ಆತ್ಮಾಭಿಮಾನಕ್ಕಾಗಿ ಸಂಬಂಧದಿಂದ ಹೊರಬಂದೆ ಎಂದು ಹೇಳುತ್ತಿದ್ದರೆ, ಇತ್ತ ಧ್ರುವ ವಿಕ್ರಮ್ ಈ ಆರೋಪಗಳಿಂದ ಕಂಗೆಟ್ಟಿದ್ದಾರೆ. ಗ್ಲಾಮರ್ ಲೋಕದ ಈ ಸುಂದರ ಪ್ರೇಮಕಥೆ ಹೀಗೆ ಕಹಿಯಾಗಿ ಅಂತ್ಯಗೊಳ್ಳುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅನುಪಮಾ ಪರವಾಗಿ ದೊಡ್ಡ ಅಲೆ ಎದ್ದಿದ್ದು, ಹುಡುಗಿಯರು ತಮ್ಮ ಆತ್ಮಾಭಿಮಾನ ಬಿಟ್ಟು ಕೊಡಬಾರದು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ.&lt;/p&gt;&lt;p&gt;ಒಟ್ಟಿನಲ್ಲಿ, ಬಣ್ಣದ ಲೋಕದ ಈ ತಾರೆಯರ ಖಾಸಗಿ ಬದುಕು ಈಗ ಬೀದಿಗೆ ಬಂದಿದ್ದು, ಯಾರು ಸರಿ, ಯಾರು ತಪ್ಪು ಎಂಬ ಚರ್ಚೆ ಮಾತ್ರ ಇನ್ನೂ ಮುಗಿದಿಲ್ಲ!&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/following-anupama-explosive-claims-about-their-breakup-here-is-the-secret-statement-from-ex-boyfriend-dhruva-vikram/articleshow-hwb8lgn"/>
        </item>
        <item>
            <title><![CDATA[ಫಸ್ಟ್ ನೈಟ್ ನಲ್ಲೇ ಶಾಕ್ ಕೊಟ್ಟ ಪತ್ನಿ! 2 ವರ್ಷದ ಡಿವೋರ್ಸ್ ಕದನಕ್ಕೆ ಗಂಡ ಕಳೆದುಕೊಂಡಿದ್ದು ಲಕ್ಷಾಂತರ ರೂ.!]]></title>
            <link>https://kannada.asianetnews.com/viral/wife-allegedly-said-i-dont-like-you-on-first-night-2-year-divorce-cost-man-10-lakh/articleshow-kxlg04i</link>
            <guid isPermaLink="true">https://kannada.asianetnews.com/viral/wife-allegedly-said-i-dont-like-you-on-first-night-2-year-divorce-cost-man-10-lakh/articleshow-kxlg04i</guid>
            <pubDate>Wed, 19 Aug 2026 10:37:15 +0530</pubDate>
            <description><![CDATA[&lt;p&gt;ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅನುಭವದ ಪ್ರಕಾರ, ಮದುವೆಗೂ ಮುನ್ನ 8 ತಿಂಗಳು ಪರಿಚಯವಿದ್ದ ಪತ್ನಿ ಮೊದಲ ರಾತ್ರಿಯೇ ತಾನು ಆತನನ್ನು ಇಷ್ಟಪಡುವುದಿಲ್ಲ, ಕುಟುಂಬದ ಒತ್ತಡದಿಂದ ಮದುವೆಯಾಗಿದ್ದಾಗಿ ಹೇಳಿದ್ದಾಳೆ. ಬಳಿಕ ದಂಪತಿ ವಿಚ್ಛೇದನ ಪಡೆದಿದ್ದು, 2 ವರ್ಷಗಳ ಪ್ರಕ್ರಿಯೆಗೆ ₹10 ಲಕ್ಷ ಖರ್ಚಾಯಿತು ಎಂದು ಆತ ಹೇಳಿಕೊಂಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0arw8kxa0701p794j08bmjk,imgname-husband-gets-shock-from-wife-on-first-night-itself--1--1787068031613.jpeg" type="image/jpeg" height="390" width="690"/>
            <content:encoded><![CDATA[&lt;p&gt;ಅರೇಂಜ್ಡ್ ಮ್ಯಾರೇಜ್ ಬಳಿಕ ಎದುರಾದ ಅನುಭವವೊಂದನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ವ್ಯಕ್ತಿಯ ಹೇಳಿಕೆಯ ಪ್ರಕಾರ, ಮದುವೆಗೂ ಮುನ್ನ ಸುಮಾರು ಎಂಟು ತಿಂಗಳು ಇಬ್ಬರೂ ಪರಸ್ಪರ ಪರಿಚಯ ಹೊಂದಿದ್ದರು. ಆದರೆ ಮದುವೆಯಾದ ಮೊದಲ ರಾತ್ರಿಯೇ ಪತ್ನಿ ತಾನು ಆತನನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾಳೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಮದುವೆಗೂ ಮುನ್ನ ಎಲ್ಲವೂ ಸರಿಯಾಗಿತ್ತು?&lt;/strong&gt;&lt;/p&gt;&lt;p&gt;ವ್ಯಕ್ತಿಯ ಹೇಳಿಕೆಯಂತೆ, ಮದುವೆಗೂ ಮುನ್ನ ಇಬ್ಬರ ನಡುವೆ ಆತ್ಮೀಯತೆ ಇತ್ತು. ಕೈ ಹಿಡಿದುಕೊಳ್ಳುವುದು ಸೇರಿದಂತೆ ಹಲವು ಸಂದರ್ಭಗಳಲ್ಲಿ ಆಕೆ ಆರಾಮವಾಗಿಯೇ ವರ್ತಿಸುತ್ತಿದ್ದಳು ಎಂದು ಆತ ಹೇಳಿಕೊಂಡಿದ್ದಾನೆ. ದೈಹಿಕ ಸಂಬಂಧವನ್ನು ಮದುವೆಯವರೆಗೆ ಮುಂದೂಡಲು ಆಕೆ ಬಯಸಿದ್ದಾಗಿ ತಿಳಿಸಿದ್ದಳು, ಅದನ್ನು ತಾನು ಗೌರವಿಸಿದ್ದಾಗಿ ಆತ ಹೇಳಿದ್ದಾನೆ.&lt;/p&gt;&lt;p&gt;&lt;strong&gt;ಮೊದಲ ರಾತ್ರಿಯಲ್ಲೇ ಬಯಲಾಯ್ತು ಕಹಿ ಸತ್ಯ!&lt;/strong&gt;&lt;/p&gt;&lt;p&gt;ಮದುವೆಯ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು ಎನ್ನುವುದು ಆತನ ಆರೋಪ. ಮೊದಲ ರಾತ್ರಿಯೇ ಪತ್ನಿ ತಾನು ಆತನನ್ನು ಇಷ್ಟಪಡುವುದಿಲ್ಲ ಹಾಗೂ ಕುಟುಂಬದ ಒತ್ತಡದಿಂದ ಮದುವೆಯಾಗಬೇಕಾಯಿತು ಎಂದು ಹೇಳಿದ್ದಾಳೆ ಎನ್ನಲಾಗಿದೆ. ತನ್ನ ಪೋಷಕರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದರಿಂದ ಮದುವೆಗೆ ಮುನ್ನ ಈ ವಿಚಾರ ಹೇಳಲು ಸಾಧ್ಯವಾಗಲಿಲ್ಲ ಎಂದೂ ಆಕೆ ಹೇಳಿದ್ದಾಳೆ ಎಂದು ಆತ ವಿವರಿಸಿದ್ದಾನೆ.&lt;/p&gt;&lt;p&gt;&lt;strong&gt;ದೈಹಿಕ ಸಂಬಂಧಕ್ಕೂ ಆತ ಒಪ್ಪಲಿಲ್ಲ!&lt;/strong&gt;&lt;/p&gt;&lt;p&gt;ಪತ್ನಿ ದೈಹಿಕ ಸಂಬಂಧಕ್ಕೆ ಒಪ್ಪಿಗೆ ನೀಡಿದರೂ, ಆಕೆ ಮನಸ್ಸಿನಿಂದ ಈ ಸಂಬಂಧವನ್ನು ಬಯಸುತ್ತಿಲ್ಲ ಎಂಬ ಭಾವನೆ ತನಗೆ ಬಂದಿದ್ದರಿಂದ ತಾನು ಅದನ್ನು ಒಪ್ಪಲಿಲ್ಲ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ. ಬಳಿಕ ದಂಪತಿ ವಿಚ್ಛೇದನಕ್ಕೆ ಮುಂದಾದರು.&lt;/p&gt;&lt;p&gt;&lt;strong&gt;2 ವರ್ಷಗಳ ಬಳಿಕ ವಿಚ್ಛೇದನ, ₹10 ಲಕ್ಷ ವೆಚ್ಚ!&lt;/strong&gt;&lt;/p&gt;&lt;p&gt;ವಿಚ್ಛೇದನ ಪ್ರಕ್ರಿಯೆಗೆ ಎಷ್ಟು ಹಣ ಮತ್ತು ಸಮಯ ಬೇಕಾಯಿತು ಎಂಬ ಪ್ರಶ್ನೆಗೆ ಆತ ₹10 ಲಕ್ಷ ವೆಚ್ಚವಾಯಿತು ಹಾಗೂ ಪ್ರಕರಣ ಮುಗಿಯಲು 2 ವರ್ಷ ಬೇಕಾಯಿತು ಎಂದು ಉತ್ತರಿಸಿದ್ದಾನೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.&lt;/p&gt;&lt;p&gt;&lt;strong&gt;ನೆಟ್ಟಿಗರಿಂದ ಪರ-ವಿರೋಧದ ಚರ್ಚೆ!&lt;/strong&gt;&lt;/p&gt;&lt;p&gt;ಕೆಲವರು ಆತನ ಅನುಭವಕ್ಕೆ ಸಹಾನುಭೂತಿ ವ್ಯಕ್ತಪಡಿಸಿದರೆ, ಮತ್ತಷ್ಟು ಮಂದಿ ಪ್ರಕರಣದ ವಿವರಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇನ್ನೊಂದೆಡೆ, ವೈವಾಹಿಕ ಸಂಬಂಧದಲ್ಲಿ ಇಬ್ಬರ ಒಪ್ಪಿಗೆ ಮತ್ತು ಸ್ವತಂತ್ರ ನಿರ್ಧಾರಕ್ಕೆ ಮಹತ್ವವಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಪೂರ್ಣ ಘಟನೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅನುಭವವಾಗಿದ್ದು, ಅದರ ಎಲ್ಲ ವಿವರಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿದೆ ಎಂದು ಪರಿಗಣಿಸಬಾರದು.&lt;/p&gt;&lt;p&gt;This is brootal. Feel bad for the dude pic.twitter.com/PkaSlhWklx&lt;/p&gt;&lt;p&gt;&mdash; Shark (@fintech_shark) August 17, 2026&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/wife-allegedly-said-i-dont-like-you-on-first-night-2-year-divorce-cost-man-10-lakh/articleshow-kxlg04i"/>
        </item>
        <item>
            <title><![CDATA[ಮದುವೆಯ ಬಗ್ಗೆ ಕೊನೆಗೂ ಮೌನ ಮುರಿದ 'Jagaddhatri'! ನಟಿ ಮೋಕ್ಷಿತಾ ಪೈ ಕೊಟ್ಟ ನ್ಯೂಸ್​ ಏನು]]></title>
            <link>https://kannada.asianetnews.com/gallery/relationship/jagaddhatri-mokshitha-pai-finally-breaks-silence-about-marriage-what-did-she-says-suc-lh3y8o9</link>
            <guid isPermaLink="true">https://kannada.asianetnews.com/gallery/relationship/jagaddhatri-mokshitha-pai-finally-breaks-silence-about-marriage-what-did-she-says-suc-lh3y8o9</guid>
            <pubDate>Mon, 17 Aug 2026 20:27:11 +0530</pubDate>
            <description><![CDATA['ಪಾರು' ಖ್ಯಾತಿಯ ಮೋಕ್ಷಿತಾ ಪೈ 'ಜಗದ್ಧಾತ್ರಿ' ಸೀರಿಯಲ್ ಮೂಲಕ ಕಮ್&zwnj;ಬ್ಯಾಕ್ ಮಾಡುತ್ತಿದ್ದಾರೆ. ಈ ಲೇಖನದಲ್ಲಿ, ಅವರ ಮದುವೆ ಕುರಿತ ಪ್ರಶ್ನೆಗಳಿಗೆ ಉತ್ತರ, ಅವರ ವೈಯಕ್ತಿಕ ಜೀವನದ ನೋವಿನ ಕಥೆ ಮತ್ತು ನಟನೆಗೆ ಅವಕಾಶ ನೀಡಿದ ದಿಲೀಪ್ ರಾಜ್ ಅವರನ್ನು ಸ್ಮರಿಸಿದ ಕ್ಷಣಗಳ ಬಗ್ಗೆ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m083ba0jht2rt9caq59qbmj0,imgname-mokshita-pai-1786978347025.jpg" type="image/jpeg" height="390" width="690"/>
            <content:encoded><![CDATA['ಪಾರು' ಖ್ಯಾತಿಯ ಮೋಕ್ಷಿತಾ ಪೈ 'ಜಗದ್ಧಾತ್ರಿ' ಸೀರಿಯಲ್ ಮೂಲಕ ಕಮ್&zwnj;ಬ್ಯಾಕ್ ಮಾಡುತ್ತಿದ್ದಾರೆ. ಈ ಲೇಖನದಲ್ಲಿ, ಅವರ ಮದುವೆ ಕುರಿತ ಪ್ರಶ್ನೆಗಳಿಗೆ ಉತ್ತರ, ಅವರ ವೈಯಕ್ತಿಕ ಜೀವನದ ನೋವಿನ ಕಥೆ ಮತ್ತು ನಟನೆಗೆ ಅವಕಾಶ ನೀಡಿದ ದಿಲೀಪ್ ರಾಜ್ ಅವರನ್ನು ಸ್ಮರಿಸಿದ ಕ್ಷಣಗಳ ಬಗ್ಗೆ ವಿವರಿಸಲಾಗಿದೆ.&lt;img&gt;&lt;p&gt;ಮೋಕ್ಷಿತಾ ಪೈ ಎಂದರೆ ಹಲವರಿಗೆ ತಿಳಿಯಲಿಕ್ಕಿಲ್ಲ. 'ಕರುಣೆಯ ಪೈರು, ನಮ್ಮ ಪಾರು...' ಎಂದಾಕ್ಷಣ ಪಾರು ನೆನಪಿಗೆ ಬರ್ತಾಳೆ. ಅವಳೇ ಮೋಕ್ಷಿತಾ ಪೈ. ಬಿಗ್​ಬಾಸ್​​ ಮೂಲಕವೂ ಫೇಮಸ್​ ಆಗಿದ್ದ ಮೋಕ್ಷಿತಾ ಪೈ (Mokshitha Pai) ಅವರು ಈಗ ಜಗದ್ಧಾತ್ರಿ ಸೀರಿಯಲ್​ ಮೂಲಕ ತೆರೆಗೆ ಜಬರ್ದಸ್ತ್​ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ನಾಯಕಿ ಮೋಕ್ಷಿತಾ ಪೈ ಎನ್ನುವುದು ಇದಾಗಲೇ ಬಿಡುಗಡೆಯಾಗಿರುವ ಪ್ರೊಮೋದಿಂದ ತಿಳಿದುಬಂದಿದೆ. ಇದರ ನಡುವೆಯೇ, ಕವಿತಾ ಗೌಡ ಕೂಡ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಟ ವಿಜಯ ಸೂರ್ಯ ನಾಯಕನಾಗಿದ್ದಾರೆ. ಈ ಸೀರಿಯಲ್​ ಆರಂಭಕ್ಕೆ ಎಲ್ಲರೂ ಕಾಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ನಟಿ ಮೋಕ್ಷಿತಾ ಪೈ ಅವರಿಗೆ ಹೋದಲ್ಲಿ, ಬಂದಲ್ಲಿ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಗೂಗಲ್​ ದಾಖಲೆಯ ಪ್ರಕಾರ ನಟಿಗೆ ಈಗ 30 ವರ್ಷ ವಯಸ್ಸು. ಈ ದಾಖಲೆಯ ಪ್ರಕಾರ ನಟಿ ಹುಟ್ಟಿರುವುದು ಅಕ್ಟೋಬರ್ 22, 1995ರಂದು (ಗೂಗಲ್​ ದಾಖಲೆಯನ್ನು ಸಂಪೂರ್ಣವಾಗಿ ನಂಬಲು ಬರುವುದಿಲ್ಲ!). ಆದ್ದರಿಂದ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.&lt;/p&gt;&lt;img&gt;&lt;p&gt;ಕಾರ್ಯಕ್ರಮವೊಂದಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ, ನಟಿ ಮೋಕ್ಷಿತಾ ಪೈ ಅವರಿಗೆ ಇದೇ ಪ್ರಶ್ನೆ ಎದುರಾಯಿತು. ಅದಕ್ಕೆ ನಟಿ, ಮೊದಲು ನನಗೆ ಸುಧಾರಿಸಿಕೊಳ್ಳಲು ಟೈಮ್​ ಕೊಡಿ. ಹಲವು ತಿಂಗಳ ಬಳಿಕ ಒಂದೊಳ್ಳೆ ಆಫರ್​ ಬಂದಿದೆ. (ಜಗದ್ಧಾತ್ರಿ ಸೀರಿಯಲ್​). ಅದರ ಕಡೆಗೆ ಮೊದಲು ಗಮನ ಹರಿಸುತ್ತೇನೆ. ಮದುವೆಯಾದರೆ ಮೊದಲು ನಿಮಗೇ ತಿಳಿಸುವೆ ಎಂದು ಚಟಾಕಿ ಹಾರಿಸಿದರು.&lt;/p&gt;&lt;img&gt;&lt;p&gt;ಅಂದಹಾಗೆ, ನಟಿ ಈಚೆಗೆ ನಿಧನರಾದ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್​ ರಾಜ್​ ಅವರನ್ನು ನೆನೆದಿದ್ದರು. ಏಕೆಂದರೆ ಸೀರಿಯಲ್​​ಗೆ ಮೋಕ್ಷಿತಾ ಅವರನ್ನು ಕರೆತಂದದ್ದೇ ಅವರು. 'ನನಗೆ ನಟನೆ ಎಂದರೆ ಏನು ಎಂದೇ ತಿಳಿದಿರಲಿಲ್ಲ. ಆದರೆ ಪಾರು ಸೀರಿಯಲ್​ನ ಲೀಡ್​ ರೋಲ್​ಗೆ ದಿಲೀಪ್​ ರಾಜ್​ ಸರ್​ ಅವರು ಆಯ್ಕೆ ಮಾಡಿದರು. ಇದೆಲ್ಲಾ ನನ್ನ ಕೈಯಲ್ಲಿ ಆಗಲ್ಲ ಸರ್​ ಎಂದು ಕೈಮುಗಿದು ಬೇಡಿಕೊಂಡರೂ ಕೇಳಲಿಲ್ಲ. ಆಗತ್ತೆ ಬನ್ನಿ ಎಂದು ಧೈರ್ಯ ತುಂಬಿದ್ದ ಪರಿಣಾಮ ಇಂದು ಈ ಮಟ್ಟಿನ ಯಶಸ್ಸು ಸಿಕ್ಕಿದೆ' ಎಂದಿದ್ದರು ನಟಿ.&lt;/p&gt;&lt;img&gt;&lt;p&gt;ಅಂದಹಾಗೆ, ಮೋಕ್ಷಿತಾ ಪೈ ಅವರ ಜೀವನ ನೋವಿನಿಂದ ಕೂಡಿದೆ. ಮೋಕ್ಷಿತಾ ಪೈ ಅವರ ಸಹೋದರ ವಿಕಲಚೇತನ ಆಗಿದ್ದಾರೆ. 22 ವರ್ಷವಾಗಿದ್ದರೂ ಇಂದಿಗೂ ಅವರು 8 ವರ್ಷದ ಮಕ್ಕಳ ರೀತಿ ಇದ್ದರೆ, ಅವರ ಬುದ್ದಿ ಇನ್ನೂ 8 ತಿಂಗಳ ಮಗುವಿನ ಹಾಗೆ ಇದೆ. ಈ ಬಗ್ಗೆ ಬಿಗ್&zwnj; ಬಾಸ್&zwnj; ವೇದಿಕೆಯಲ್ಲೂ ಮೋಕ್ಷಿತಾ ಪೈ ಮಾತನಾಡಿದ್ದರು. ತಮ್ಮನ ಬಗ್ಗೆ ಹೇಳುವಾಗಲೆಲ್ಲಾ ಭಾವುಕರಾಗುವ ಮೋಕ್ಷಿತಾ ಪೈ, ಬಿಗ್&zwnj; ಬಾಸ್&zwnj; ವೇದಿಕೆಯಲ್ಲೂ ಸುದೀಪ್&zwnj; ಈ ಬಗ್ಗೆ ಪ್ರಶ್ನೆ ಮಾಡಿದಾಗ, ನನ್ನ ತಮ್ಮನಿಗೆ ನಾನು ಅಕ್ಕನೂ ಹೌದು, ಅಮ್ಮನೂ ಹೌದು. ಆತನ ಬಗ್ಗೆ ಹೆಚ್ಚು ಮಾತನಾಡೋದು ಇಷ್ಟವಿಲ್ಲ ಎಂದು ಹೇಳಿ ಸುಮ್ಮನಾಗಿದ್ದರು.&lt;/p&gt;&lt;img&gt;&lt;p&gt;'ನನ್ನ ಬಾಲ್ಯ ಎಲ್ಲರಿದ್ದ ಹಾಗೆ ಇದ್ದಿರಲೇ ಎಲ್ಲ. ಎಲ್ಲರ ಬಾಲ್ಯದಲ್ಲಿ, ತಮಾಷೆ, ತರಲೆಗಳು ಇರುತ್ತವೆ. ನನ್ನ ಬಾಲ್ಯದಲ್ಲಿ ಅಂಥ ಸಂಗತಿಗಳೇ ಇದ್ದಿರಲಿಲ್ಲ. ನನಗೆ ಬುದ್ಧಿಮಾಂದ್ಯನಾದ ಒಬ್ಬ ತಮ್ಮನಿದ್ದಾನೆ. ಆತನ ನೋಡಿಕೊಳ್ಳುವ ಕಾರಣದಿಂದಾಗಿ ಚಿಕ್ಕಂದಿನಿಂದಲೇ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಗಳಿದ್ದವು. ನಾನೇ ದೊಡ್ಡವಳಾಗಿದ್ದ ಕಾರಣಕ್ಕೆ ಆತನನ್ನೆ ನೋಡಿಕೊಳ್ಳಬೇಕಾಗುತ್ತಿತ್ತು. ಆತ ಒಂದು ಮಗು ಥರ ಇದ್ದಾನೆ' ಎಂದು ಈ ಹಿಂದೆ ನಟಿ ಹೇಳಿದ್ದರು.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/jagaddhatri-mokshitha-pai-finally-breaks-silence-about-marriage-what-did-she-says-suc-lh3y8o9"/>
        </item>
        <item>
            <title><![CDATA[ಪ್ಯಾರೀಸ್ ಫೋಟೋ ರಹಸ್ಯ  ಬಯಲಾಯ್ತು! Bigg Boss ಸ್ಪಂದನಾ  ಜೊತೆಗಿನ ಆ ಹುಡುಗ ಯಾರು? ಮದುವೆ ಯಾವಾಗ]]></title>
            <link>https://kannada.asianetnews.com/gallery/relationship/bigg-boss-spandana-somanna-about-boyfriend-and-talked-about-marriage-suc-ll22xsw</link>
            <guid isPermaLink="true">https://kannada.asianetnews.com/gallery/relationship/bigg-boss-spandana-somanna-about-boyfriend-and-talked-about-marriage-suc-ll22xsw</guid>
            <pubDate>Mon, 17 Aug 2026 21:19:48 +0530</pubDate>
            <description><![CDATA[ಬಿಗ್​ಬಾಸ್​ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ, ಪ್ಯಾರೀಸ್ ಪ್ರವಾಸದ ಫೋಟೋ ಹಂಚಿಕೊಂಡಿದ್ದು, ಅದರಲ್ಲಿರುವ ಹುಡುಗ ಸೂರಜ್ ಸಿಂಗ್ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಅದು ಸೂರಜ್ ಅಲ್ಲ, ಶೀಘ್ರದಲ್ಲೇ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡುವುದಾಗಿ ಸ್ಪಂದನಾ ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m086jpeqx6k93dqtj4e7prk8,imgname-spandana-somanna-1786981734871.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ, ಪ್ಯಾರೀಸ್ ಪ್ರವಾಸದ ಫೋಟೋ ಹಂಚಿಕೊಂಡಿದ್ದು, ಅದರಲ್ಲಿರುವ ಹುಡುಗ ಸೂರಜ್ ಸಿಂಗ್ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಅದು ಸೂರಜ್ ಅಲ್ಲ, ಶೀಘ್ರದಲ್ಲೇ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡುವುದಾಗಿ ಸ್ಪಂದನಾ ಸ್ಪಷ್ಟಪಡಿಸಿದ್ದಾರೆ.&lt;img&gt;&lt;p&gt;ಬಿಗ್​ಬಾಸ್​​ ಮೂಲಕ ಖ್ಯಾತಿ ಪಡೆದವರು ನಟಿ ಸ್ಪಂದನಾ ಸೋಮಣ್ಣ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇವರು, ಇತ್ತೀಚೆಗೆ ತಮ್ಮ ಇನ್&rsquo;ಸ್ಟಾಗ್ರಾಂನಲ್ಲಿ ಪ್ಯಾರೀಸ್ ನ ಐಫೆಲ್ ಟವರ್ ಹಿನ್ನೆಲೆಯಲ್ಲಿ, ಹುಡುಗನೊಬ್ಬನ ಕೈಹಿಡಿದು ಸಂತೋಷದಿಂದ ನಡೆಯುತ್ತಿರುವ ಫೋಟೊ ಶೇರ್ ಮಾಡಿದ್ದು, ಅದರ ಜೊತೆಗೆ Plot Twist : Paris was not the Main Character! ಎಂದು ಬರೆದುಕೊಂಡಿದ್ದರು.&lt;/p&gt;&lt;img&gt;&lt;p&gt;ಆ ಫೋಟೋ ನೋಡಿದವರು ಇವರು ಬಿಗ್​ಬಾಸ್​ ಸೂರಜ್​ ಸಿಂಗ್​ ಎಂದೇ ಹೇಳಿದ್ದರು. ಏಕೆಂದರೆ ಹಿಂದಿನಿಂದ ಅವರು ಹಾಗೆಯೇ ಕಾಣಿಸುತ್ತಿದ್ದರು. ಇದೀಗ ಸ್ಪಂದನಾ ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆ ಎದುರಾಗುತ್ತಿದೆ.&lt;/p&gt;&lt;img&gt;&lt;p&gt;ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಸ್ಪಂದನಾ ಅವರಿಗೆ ಇದೇ ಪ್ರಶ್ನೆ ಕೇಳಲಾಗಿದೆ. ಪ್ಯಾರೀಸ್​ನಲ್ಲಿ ಇರುವ ಹುಡುಗ ಸೂರಜ್​ ಸಿಂಗ್​ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ, ಇದು ನಿಜನಾ ಎಂದು ಪ್ರಶ್ನಿಸಲಾಗಿದೆ.&lt;/p&gt;&lt;img&gt;&lt;p&gt;ಅದಕ್ಕೆ ನಟಿ, ಇಲ್ಲಪ್ಪಾ, ನಾವಿಬ್ಬರೂ ಮಾತನಾಡದೇ ತುಂಬಾ ತಿಂಗಳುಗಳೇ ಆಗಿವೆ. ಮದುವೆಯ ಬಗ್ಗೆ ಅಪ್​ಡೇಟ್​ ಕೊಡುತ್ತೇನೆ. ಶೀಘ್ರದಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಪ್ಯಾರೀಸ್​ ಟೂರಿನ ಬಗ್ಗೆ ಪ್ರಶ್ನಿಸಿದಾಗ ಸ್ಪಂದನಾ, ನಾಚಿ ನೀರಾದರು. ಟೂರ್​ ತುಂಬಾ ಚೆನ್ನಾಗಿತ್ತು. ಜನರು ನಮಗೆ ಇಷ್ಟೊಂದು ಪ್ರೀತಿ ಕೊಡುವಾಗ ಪರ್ಸನಲ್​ ಲೈಫ್​ ಬಗ್ಗೆಯೂ ಗೊತ್ತಿರಲಿ ಎಂದು ಫೋಟೋ ಹಾಕಿದ್ದೆ. ಆದರೆ ಅವರು ಸೂರಜ್​ ಸಿಂಗ್​ ಅಲ್ಲ. ಅವರ ಬಗ್ಗೆ ಶೀಘ್ರದಲ್ಲಿ ಹೇಳುವೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಸ್ಪಂದನಾ ಈಚೆಗೆ ಇನ್ನೊಂದು ಪೋಸ್ಟ್​ ಶೇರ್​ ಮಾಡಿದ್ದರು. ಅದರಲ್ಲಿ ಅವರು, ನಾನು ಕೆಲಸಕ್ಕಾಗಿ ಹೊಸ ನಗರಕ್ಕೆ ಸ್ಥಳಾಂತರಗೊಂಡು 3 ವರ್ಷಗಳಾಗಿವೆ. ನನ್ನ ಸ್ವಂತ ಜೀವನವನ್ನು ನಿರ್ಮಿಸಲು ನಾನು ನನ್ನ ಮನೆ, ನನ್ನ ಜನರು ಮತ್ತು ಪರಿಚಿತ ಎಲ್ಲವನ್ನೂ ಬಿಟ್ಟು ಬಂದಿದ್ದೇನೆ. ಇದು ಯಾವಾಗಲೂ ಸುಲಭವಾಗಿರಲಿಲ್ಲ, ಆದರೆ ಇದು ನನ್ನ ಬಗ್ಗೆ, ಸ್ವಾತಂತ್ರ್ಯ, ನನ್ನ ಸ್ವಂತ ಸಹವಾಸದಲ್ಲಿ ಸೌಕರ್ಯ ಮತ್ತು ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವ ಬಗ್ಗೆ ನನಗೆ ತುಂಬಾ ಕಲಿಸಿದೆ ಎಂದು ನಟಿ ಶೇರ್​ ಮಾಡಿಕೊಂಡಿದ್ದರು.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/bigg-boss-spandana-somanna-about-boyfriend-and-talked-about-marriage-suc-ll22xsw"/>
        </item>
        <item>
            <title><![CDATA[Karna Serial ರೋಚಕ ಟ್ವಿಸ್ಟ್​: ಕರ್ಣನೇ ಮಗ ಎನ್ನೋ ಸತ್ಯ ಸೀತಾಗೂ ತಿಳಿಯಿತು! ಸೀರಿಯಲ್​ ಮುಕ್ತಾಯ?]]></title>
            <link>https://kannada.asianetnews.com/gallery/tv-talk/karna-serial-bhuvaneshwari-urf-seetha-also-came-to-know-about-karnas-truth-suc-o1x4zdy</link>
            <guid isPermaLink="true">https://kannada.asianetnews.com/gallery/tv-talk/karna-serial-bhuvaneshwari-urf-seetha-also-came-to-know-about-karnas-truth-suc-o1x4zdy</guid>
            <pubDate>Tue, 18 Aug 2026 17:28:23 +0530</pubDate>
            <description><![CDATA[&lt;p&gt;ಕರ್ಣ ಸೀರಿಯಲ್​ನಲ್ಲಿ, ತನ್ನ ಮಗನೆಂದು ರಮೇಶ್&zwnj;ಗೆ ಸತ್ಯ ತಿಳಿದರೂ ಹೇಳಲಾಗದ ಸ್ಥಿತಿಯಲ್ಲಿದ್ದಾನೆ. ಇತ್ತ, ಆಸ್ಪತ್ರೆಯಲ್ಲಿರುವ ಕರ್ಣನನ್ನು ನೋಡಲು ಬಂದ ಸೀತಾ, ಅವನನ್ನು ಸ್ಪರ್ಶಿಸಿದಾಗ ತಾಯ್ತನದ ಅನುಭೂತಿ ಪಡೆದು ಆಘಾತಕ್ಕೊಳಗಾಗುತ್ತಾಳೆ. ಈ ಸ್ಪರ್ಶದಿಂದ ಕರ್ಣನಲ್ಲಿ ಚಲನೆ ಕಾಣಿಸಿಕೊಂಡಿದ್ದು, ಮುಂದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0abpw0vzm8ze7p1pwwpjhs3,imgname-k.-serial-00-1787054223387.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ಣ ಸೀರಿಯಲ್​ನಲ್ಲಿ, ತನ್ನ ಮಗನೆಂದು ರಮೇಶ್&zwnj;ಗೆ ಸತ್ಯ ತಿಳಿದರೂ ಹೇಳಲಾಗದ ಸ್ಥಿತಿಯಲ್ಲಿದ್ದಾನೆ. ಇತ್ತ, ಆಸ್ಪತ್ರೆಯಲ್ಲಿರುವ ಕರ್ಣನನ್ನು ನೋಡಲು ಬಂದ ಸೀತಾ, ಅವನನ್ನು ಸ್ಪರ್ಶಿಸಿದಾಗ ತಾಯ್ತನದ ಅನುಭೂತಿ ಪಡೆದು ಆಘಾತಕ್ಕೊಳಗಾಗುತ್ತಾಳೆ. ಈ ಸ್ಪರ್ಶದಿಂದ ಕರ್ಣನಲ್ಲಿ ಚಲನೆ ಕಾಣಿಸಿಕೊಂಡಿದ್ದು, ಮುಂದೇನು?&lt;/p&gt;&lt;img&gt;&lt;p&gt;ಕರ್ಣ ಸೀರಿಯಲ್​ನಲ್ಲಿ (Karna Serial) ಇದಾಗಲೇ ಕರ್ಣನೇ ತನ್ನ ಮಗ ಎನ್ನುವ ಸತ್ಯ ರಮೇಶ್​ಗೆ ತಿಳಿದಿದೆ. ಆದರೆ ಅದನ್ನು ತಿಳಿಯುವ ಮೊದಲೇ ರಮೇಶ್​ ತನ್ನ ಸ್ವಂತ ಮಗನನ್ನೇ ಕೊಲೆಮಾಡಲು ನೋಡಿ ಎಲ್ಲರ ಕಣ್ಣಿನಲ್ಲಿ ಅಪರಾಧಿಯಾಗಿದ್ದಾನೆ.&lt;/p&gt;&lt;img&gt;&lt;p&gt;ಅವನನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಅವನೇ ತನ್ನ ಮಗ ಎಂದು ಹೇಳುವುದಕ್ಕೂ ಅವನಿಂದ ಸಾಧ್ಯವಾಗುತ್ತಿಲ್ಲ. ತಪ್ಪಿತಸ್ಥ ಭಾವನೆಯಲ್ಲಿ ಕರ್ಣ ಇದ್ದಾನೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ, ಕರ್ಣನಿಗೆ ತಾನು ಆ್ಯಕ್ಸಿಡೆಂಟ್​ ಮಾಡಿಸಿರುವುದಾಗಿ ನಯನತಾರಾ ಭುವನೇಶ್ವರಿ ಉರ್ಫ್​ ಸೀತಾಗೆ ಹೇಳಿದಾಗ ಅವಳಿಗೆ ಅದ್ಯಾಕೋ ಸಂಕಟವಾಗುತ್ತದೆ. ತನ್ನ ಹಗೆತನ ಏನಿದ್ದರೂ ಕೆಲಸದಲ್ಲಿಯೇ ವಿನಾ ಜೀವ ತೆಗೆಯುವ ಮಟ್ಟಿಗೆ ಅಲ್ಲ ಎಂದು ನಯನತಾರಾ ಮೇಲೆ ಕೈ ಮಾಡಲು ಹೋಗುತ್ತಾಳೆ ಅವಳು.&lt;/p&gt;&lt;img&gt;&lt;p&gt;ಕೊನೆಗೆ ಕರ್ಣನನ್ನು ನೋಡಲು ಆಸ್ಪತ್ರೆಗೆ ಬರುತ್ತಾಳೆ. ತನ್ನ ಕೈಮೀರಿ ಇಂಥದ್ದೊಂದು ನಡೆದು ಹೋಯಿತು ಎಂದು ಮರಗುತ್ತಾಳೆ.&lt;/p&gt;&lt;img&gt;&lt;p&gt;ಅದೇ ಸಮಯದಲ್ಲಿ ಕರ್ಣನನ್ನು ಮುಟ್ಟುತ್ತಾಳೆ. ಹೀಗೆ ಆಗುತ್ತಲೇ ಆಕೆಯ ಮೈಯಲ್ಲೆಲ್ಲಾ ರೋಮಾಂಚನವಾಗುತ್ತದೆ. ಅದ್ಯಾವುದೋ ಅಮ್ಮನ ಶಕ್ತಿ ಆಕೆಯಲ್ಲಿ ಜಾಗೃತವಾಗುತ್ತದೆ. ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುತ್ತಾರಲ್ಲ, ಹಾಗೆ ಆಗಿ ಅವಳಿಗೆ ಶಾಕ್​ ಆಗುತ್ತದೆ.&lt;/p&gt;&lt;img&gt;&lt;p&gt;ಅಮ್ಮನ ಸ್ಪರ್ಶ ಆಗುತ್ತಿದ್ದಂತೆಯೇ ಕರ್ಣನಲ್ಲಿ ಚಲನೆ ಕಾಣಿಸುತ್ತದೆ. ಭುವನೇಶ್ವರಿಗೆ ಕರ್ಣನನ್ನು ಮುಟ್ಟುತ್ತಿದ್ದಂತೆಯೇ ಅದೇನೋ ಸಂಕಟ ಉಂಟಾಗುತ್ತದೆ. ಹಾಗಿದ್ದರೆ, ಕರ್ಣನೇ ತನ್ನ ಮಗ ಎನ್ನುವ ಸತ್ಯ ತಿಳಿಯತ್ತಾ? ಸೀರಿಯಲ್​ನಲ್ಲಿ ಇಷ್ಟು ಆದರೆ ಮುಂದೇನು ಇರುತ್ತೆ ಎನ್ನುವ ಕುತೂಹಲ ಸದ್ಯಕ್ಕಿದೆ!&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-bhuvaneshwari-urf-seetha-also-came-to-know-about-karnas-truth-suc-o1x4zdy"/>
        </item>
        <item>
            <title><![CDATA[​ಹಳೆಯ ಪ್ರೇಮಿಯನ್ನ ಭೇಟಿಯಾಗೋಕೆ ಇಲ್ಲಿಗೆ ಹೋದ್ರೆ ಸಾಕು; ಎಲ್ಲಿದೆ ಈ 'ಲವ್ ಮಾರ್ಕೆಟ್'?]]></title>
            <link>https://kannada.asianetnews.com/viral/love-market-vietnam-ex-lovers-reunite-every-year-suh/articleshow-pk03uz7</link>
            <guid isPermaLink="true">https://kannada.asianetnews.com/viral/love-market-vietnam-ex-lovers-reunite-every-year-suh/articleshow-pk03uz7</guid>
            <pubDate>Wed, 19 Aug 2026 16:05:45 +0530</pubDate>
            <description><![CDATA[&lt;p&gt;ಎಕ್ಸ್&zwnj; ಜೊತೆ ಮತ್ತೆ ಮಾತನಾಡುವುದೇ ದೊಡ್ಡ ಸಮಸ್ಯೆ ಎಂದುಕೊಳ್ಳುವ ಕಾಲ ಇದು. ಆದರೆ ವಿಯೆಟ್ನಾಂನಲ್ಲಿ ಮಾತ್ರ ಮಾಜಿ ಪ್ರೇಮಿಗಳು ವರ್ಷಕ್ಕೊಮ್ಮೆ ಭೇಟಿಯಾಗಿ ಮಾತನಾಡಲು, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅವಕಾಶ ನೀಡುವ ವಿಶಿಷ್ಟ ಸಂಪ್ರದಾಯವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0csazbf7jqh3dwya5kkks01,imgname-love-market-vietnam-ex-lovers-reunite-every-year-1787135622511.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಕ್ಸ್&zwnj; ಜೊತೆ ಮತ್ತೆ ಮಾತನಾಡುವುದೇ ದೊಡ್ಡ ಸಮಸ್ಯೆ ಎಂದುಕೊಳ್ಳುವ ಕಾಲ ಇದು. ಆದರೆ ವಿಯೆಟ್ನಾಂನಲ್ಲಿ ಮಾತ್ರ ಮಾಜಿ ಪ್ರೇಮಿಗಳು ವರ್ಷಕ್ಕೊಮ್ಮೆ ಭೇಟಿಯಾಗಿ ಮಾತನಾಡಲು, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅವಕಾಶ ನೀಡುವ ವಿಶಿಷ್ಟ ಸಂಪ್ರದಾಯವಿದೆ. ಇದನ್ನು &lsquo;ಖೌ ವೈ ಲವ್ ಮಾರ್ಕೆಟ್&zwnj;&rsquo; (Khau Vai Love Market) ಎಂದು ಕರೆಯಲಾಗುತ್ತದೆ. ವಿಯೆಟ್ನಾಂನ ಹಾ ಜಿಯಾಂಗ್ ಪ್ರಾಂತ್ಯದಲ್ಲಿ ನಡೆಯುವ ಈ ವಿಶಿಷ್ಟ ಮಾರುಕಟ್ಟೆಗೆ ಪ್ರೇಮಿಗಳು ಮಾತ್ರವಲ್ಲ, ಸಿಂಗಲ್ಸ್&zwnj;, ವಿವಾಹಿತ ಜೋಡಿಗಳು ಮತ್ತು ಮಾಜಿ ಪ್ರೇಮಿಗಳೂ ಆಗಮಿಸುತ್ತಾರೆ. ಪ್ರೀತಿಯನ್ನು ಆಚರಿಸುವ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಇದು ವರ್ಷಗಳಿಂದ ನಡೆದುಕೊಂಡು ಬಂದಿದೆ.&lt;/p&gt;&lt;h2&gt;ನೂರಾರು ವರ್ಷಗಳ ಹಿಂದಿನ ಪ್ರೇಮಕಥೆಯೇ ಮೂಲ&lt;/h2&gt;&lt;p&gt;ಈ ಲವ್&zwnj; ಮಾರ್ಕೆಟ್&zwnj;ನ ಹಿಂದೆ ಒಂದು ಹಳೆಯ ಪ್ರೇಮಕಥೆಯಿದೆ. ನುಂಗ್ ಸಮುದಾಯದ ಬಾ ಎಂಬ ಯುವಕ ಮತ್ತು ಗಿಯಾಯ್ ಸಮುದಾಯದ ಉಟ್ ಎಂಬ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರೂ ಬೇರೆ ಬೇರೆ ಜನಾಂಗ ಮತ್ತು ಸಂಪ್ರದಾಯಗಳಿಗೆ ಸೇರಿದವರಾಗಿದ್ದರಿಂದ ಕುಟುಂಬಗಳು ಅವರ ಪ್ರೀತಿಗೆ ಒಪ್ಪಿಗೆ ನೀಡಲಿಲ್ಲ. ತಮ್ಮ ಪ್ರೀತಿಗಾಗಿ ಕುಟುಂಬಗಳ ನಡುವೆ ಸಂಘರ್ಷ ಉಂಟಾಗಬಾರದು ಎಂದು ನಿರ್ಧರಿಸಿದ ಈ ಜೋಡಿ, ಒಂದು ವಿಶೇಷ ಒಪ್ಪಂದ ಮಾಡಿಕೊಂಡರು. ವರ್ಷಕ್ಕೆ ಒಮ್ಮೆ ಖೌ ವೈನಲ್ಲಿ ಭೇಟಿಯಾಗೋಣ ಎಂದು ಇಬ್ಬರೂ ನಿರ್ಧರಿಸಿದರು. ಈ ಭೇಟಿ ಸಂಪ್ರದಾಯವಾಗಿ ಮುಂದುವರಿದು, ನಂತರ ಖೌ ವೈ ಲವ್ ಮಾರ್ಕೆಟ್&zwnj;ಗೆ ಕಾರಣವಾಯಿತು ಎಂದು ಹೇಳಲಾಗುತ್ತದೆ.&lt;/p&gt;&lt;h2&gt;ಎಕ್ಸ್&zwnj; ಜೊತೆ ಭೇಟಿಯಾಗಲು ಇಲ್ಲಿದೆ &lsquo;ಸ್ಪೆಷಲ್ ಡೇ&rsquo;&lt;/h2&gt;&lt;p&gt;ಇಂದಿಗೂ ವರ್ಷಕ್ಕೊಮ್ಮೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಾಜಿ ಪ್ರೇಮಿಗಳು ಭೇಟಿಯಾಗಬಹುದು. ಹಳೆಯ ಸಂಬಂಧವನ್ನು ಮತ್ತೆ ಆರಂಭಿಸಲೇಬೇಕು ಎಂಬ ನಿಯಮವಿಲ್ಲ. ಬದಲಾಗಿ, ಹಳೆಯ ಸ್ನೇಹಿತನಂತೆ ಭೇಟಿಯಾಗಿ ಮಾತನಾಡುವುದು, ಹಳೆಯ ನೆನಪುಗಳನ್ನು ಹಂಚಿಕೊಳ್ಳುವುದು ಮತ್ತು ನಂತರ ತಮ್ಮ ತಮ್ಮ ಜೀವನಕ್ಕೆ ಮರಳುವುದು ಈ ಸಂಪ್ರದಾಯದ ವಿಶೇಷತೆ. ಇದು ಸಿಂಗಲ್ಸ್&zwnj;ಗೂ ಹೊಸ ಸಂಗಾತಿಯನ್ನು ಹುಡುಕುವ ಅವಕಾಶ ನೀಡುತ್ತದೆ. ವಿವಾಹಿತ ದಂಪತಿಗಳೂ ಕಾರ್ಯಕ್ರಮಕ್ಕೆ ಆಗಮಿಸಿ ಅಲ್ಲಿನ ಸಾಂಸ್ಕೃತಿಕ ವಾತಾವರಣವನ್ನು ಆನಂದಿಸುತ್ತಾರೆ. ಕೆಲವರು ತಮ್ಮ ಸಂಬಂಧದಲ್ಲಿನ ಹಳೆಯ ಆತ್ಮೀಯತೆಯನ್ನು ಮತ್ತೆ ನೆನಪಿಸಿಕೊಳ್ಳಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಾರೆ.&lt;/p&gt;&lt;h2&gt;ಲವ್&zwnj; ಮಾರ್ಕೆಟ್&zwnj;ನಲ್ಲಿ ಏನೆಲ್ಲಾ ಇರುತ್ತೆ?&lt;/h2&gt;&lt;p&gt;ಇದು ಕೇವಲ ಮಾಜಿ ಪ್ರೇಮಿಗಳ ಭೇಟಿಯ ಸ್ಥಳವಲ್ಲ. ವಿವಿಧ ಸಮುದಾಯಗಳ ಜನರು ಸಾಂಪ್ರದಾಯಿಕ ಉಡುಗೆಗಳಲ್ಲಿ ಇಲ್ಲಿ ಸೇರಿಕೊಳ್ಳುತ್ತಾರೆ. ಜಾನಪದ ಸಂಗೀತ, ನೃತ್ಯ, ಸ್ಥಳೀಯ ಆಹಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಮಾರುಕಟ್ಟೆಯ ಪ್ರಮುಖ ಆಕರ್ಷಣೆಗಳಾಗಿವೆ. ಮೂರನೇ ಚಂದ್ರ ಮಾಸದ 27ನೇ ದಿನದಂದು, ಸಾಮಾನ್ಯವಾಗಿ ಏಪ್ರಿಲ್&zwnj; ಅಥವಾ ಮೇ ತಿಂಗಳಲ್ಲಿ ಈ ಆಚರಣೆ ನಡೆಯುತ್ತದೆ.&lt;/p&gt;&lt;h2&gt;2021ರಲ್ಲಿ ಸಿಕ್ಕಿತು ರಾಷ್ಟ್ರೀಯ ಮಾನ್ಯತೆ&lt;/h2&gt;&lt;p&gt;ಖೌ ವೈ ಲವ್ ಮಾರ್ಕೆಟ್&zwnj;ಗೆ 2021ರಲ್ಲಿ ವಿಯೆಟ್ನಾಂನ ಸಂಸ್ಕೃತಿ ಸಚಿವಾಲಯ ರಾಷ್ಟ್ರೀಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂಬ ಅಧಿಕೃತ ಮಾನ್ಯತೆ ನೀಡಿದೆ. ಇದೀಗ ಈ ಕಾರ್ಯಕ್ರಮ ಸ್ಥಳೀಯ ಸಂಸ್ಕೃತಿಯ ಭಾಗವಾಗಿರುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುತ್ತಿದೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿಯೂ ಇದು ಪಾತ್ರವಹಿಸುತ್ತಿದೆ.&lt;/p&gt;&lt;h2&gt;&lsquo;ಎಕ್ಸ್&zwnj;&rsquo; ಎಂದರೆ ಯಾವಾಗಲೂ ವೈರಿಯಲ್ಲ&lt;/h2&gt;&lt;p&gt;ಖೌ ವೈ ಲವ್ ಮಾರ್ಕೆಟ್&zwnj; ಒಂದು ವಿಭಿನ್ನ ಸಂದೇಶವನ್ನೂ ನೀಡುತ್ತದೆ. ಸಂಬಂಧ ಮುಗಿದ ಬಳಿಕವೂ ಹಿಂದಿನ ವ್ಯಕ್ತಿಯನ್ನು ಗೌರವದಿಂದ ನೆನಪಿಸಿಕೊಳ್ಳಬಹುದು. ಮಾತನಾಡಬಹುದು, ಹಳೆಯ ದಿನಗಳನ್ನು ನೆನಪಿಸಿಕೊಂಡು ನಗಬಹುದು ಮತ್ತು ಯಾವುದೇ ಗೊಂದಲವಿಲ್ಲದೆ ತಮ್ಮ ಜೀವನಕ್ಕೆ ಮರಳಬಹುದು ಎಂಬ ಮನೋಭಾವ ಇಲ್ಲಿದೆ. ಆದರೆ ಒಂದು ಪ್ರಶ್ನೆ ಮಾತ್ರ ಉಳಿಯುತ್ತದೆ: ನಿಮ್ಮ ಸಂಗಾತಿ ವರ್ಷಕ್ಕೊಮ್ಮೆ ತಮ್ಮ ಎಕ್ಸ್&zwnj; ಅನ್ನು ಭೇಟಿಯಾಗಲು ಹೋಗುತ್ತೇನೆ ಎಂದರೆ ನೀವು ಒಪ್ಪಿಕೊಳ್ಳುತ್ತೀರಾ?&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/love-market-vietnam-ex-lovers-reunite-every-year-suh/articleshow-pk03uz7"/>
        </item>
        <item>
            <title><![CDATA['ತಂದೆ ತುತ್ತು ಕಲಸಿ ನನ್ನ ಬಾಯಿಗೆ ಇಡ್ತಿದ್ರು..' ಶಾಲಾ ದಿನಗಳ  ನೆನಪು ಬಿಚ್ಚಿಟ್ಟ ಸೌರವ್ ಗಂಗೂಲಿ; ಪೋಷಕರಿಗೆ ಇಲ್ಲಿದೆ ಮಹತ್ವದ ಪಾಠ!]]></title>
            <link>https://kannada.asianetnews.com/relationship/sourav-ganguly-shares-childhood-memory-father-feeding-parenting-lesson-san/articleshow-rux7gfo</link>
            <guid isPermaLink="true">https://kannada.asianetnews.com/relationship/sourav-ganguly-shares-childhood-memory-father-feeding-parenting-lesson-san/articleshow-rux7gfo</guid>
            <pubDate>Tue, 18 Aug 2026 21:40:14 +0530</pubDate>
            <description><![CDATA[&lt;p&gt;ಟೀಮ್&zwnj; ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ತಮ್ಮ ಬಾಲ್ಯದಲ್ಲಿ ಪ್ರತಿದಿನ ಶಾಲೆಗೆ ಹೋಗುವ ಮುನ್ನ ತಂದೆ ಪ್ರೀತಿಯಿಂದ ಕೈತುತ್ತು ನೀಡುತ್ತಿದ್ದ ಸುಂದರ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0aszvn72qmeba5c39d72nh0,imgname-sourav-ganguly-childhood-1787069197991.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಂ&lt;/strong&gt;ದಿನ ಅತ್ಯಾಧುನಿಕ ಹಾಗೂ ವೇಗದ ಜೀವನಶೈಲಿಯಲ್ಲಿ ಪೋಷಕರಿಗೆ ಮುಂಜಾನೆಯ ಸಮಯವೆಂದರೆ ಅದೊಂದು ದೊಡ್ಡ ಸವಾಲು. ಮಕ್ಕಳನ್ನು ಬೇಗನೆ ಎಬ್ಬಿಸಿ, ಶಾಲಾ ಸಮವಸ್ತ್ರ ಧರಿಸಿ, ಟಿಫಿನ್ ಬಾಕ್ಸ್ ಪ್ಯಾಕ್ ಮಾಡಿ ಸಮಯಕ್ಕೆ ಸರಿಯಾಗಿ ಶಾಲೆಗೆ ಕಳುಹಿಸುವುದರಲ್ಲೇ ಪೋಷಕರ ಅರ್ಧ ಶಕ್ತಿ ಹೋಗಿರುತ್ತದೆ. ಆದರೆ, ಟೀಮ್&zwnj; ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಶಾಲಾ ದಿನಗಳ ಬೆಳಗಿನ ವಾತಾವರಣವೇ ಸಂಪೂರ್ಣ ಭಿನ್ನವಾಗಿತ್ತು. ಗಂಗೂಲಿಗೆ ಮುಂಜಾನೆಯ ಉಪಹಾರವೆಂದರೆ ಕೇವಲ ಒಂಟಿಯಾಗಿ ತಿನ್ನುವ ಆಹಾರವಾಗಿರಲಿಲ್ಲ; ಬದಲಿಗೆ ಪ್ರತಿದಿನ ಶಾಲೆಗೆ ಹೋಗುವ ಮುನ್ನ ಅವರ ತಂದೆ ಸ್ವತಃ ತಮ್ಮ ಕೈಯಾರೇ ಅನ್ನ ಕಲಸಿ ಬಾಯಿಗೆ ತುತ್ತು ನೀಡುತ್ತಿದ್ದ ಅತ್ಯಂತ ಪ್ರೀತಿಯ ಕ್ಷಣವಾಗಿತ್ತು!&lt;/p&gt;&lt;p&gt;'ಓಹ್! ಕಲ್ಕತ್ತಾ' (Oh! Calcutta) ಪಾಡ್&zwnj;ಕಾಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ, ತಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ತಂದೆಯೊಂದಿಗೆ ಕಳೆಯುತ್ತಿದ್ದ ಸುಂದರ ನೆನಪುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿದಿನ ಬೆಳಿಗ್ಗೆ ತಂದೆಯೇ ಸ್ವತಃ ಊಟ ಉಣಿಸುತ್ತಿದ್ದರು&lt;/strong&gt;&lt;/h2&gt;&lt;p&gt;ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ದಾದಾ, &quot;ನಾನು ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಗೆ ಶಾಲೆಗೆ ಹೋಗಬೇಕಿತ್ತು. ಆ ಸಮಯದಲ್ಲಿ ತಂದೆ ನನ್ನ ಪಕ್ಕದಲ್ಲೇ ಕುಳಿತು, ಅನ್ನಕ್ಕೆ ಮಾಂಸ (ಮೀಟ್) ಹಾಗೂ ಲಿಂಬೆ ರಸವನ್ನು ಸೇರಿಸಿ, ಚೆನ್ನಾಗಿ ಕಿವುಚಿ ತಮ್ಮ ಸ್ವಂತ ಕೈಯಾರೇ ನನಗೆ ಉಣಿಸುತ್ತಿದ್ದರು. ಕೇವಲ ತಟ್ಟೆಗೆ ಬಡಿಸಿ ತಿನ್ನಲು ಹೇಳುತ್ತಿರಲಿಲ್ಲ, ಬದಲಾಗಿ ಪ್ರತಿಯೊಂದು ತುತ್ತನ್ನೂ ಅವರೇ ಎತ್ತಿ ನನ್ನ ಬಾಯಿಗೆ ಇಡುತ್ತಿದ್ದರು. ನನ್ನ ಇಡೀ ಶಾಲಾ ಜೀವನದ ಪ್ರತಿದಿನವೂ ಇದು ನಡೆಯುತ್ತಿತ್ತು&quot; ಎಂದು ಭಾವುಕರಾಗಿ ಹೇಳಿದ್ದಾರೆ.&lt;/p&gt;&lt;p&gt;ಪಾಡ್&zwnj;ಕಾಸ್ಟ್ ನಿರೂಪಕರು ಅಚ್ಚರಿಯಿಂದ 'ಬೆಳಿಗ್ಗೆ 8 ಗಂಟೆಗೇ ಮಾಂಸದ ಅಡುಗೆ ತಿನ್ನುತ್ತಿದ್ದಿರಾ?' ಎಂದು ಪ್ರಶ್ನಿಸಿದಾಗ, &quot;ಹೌದು, ಬೆಳಿಗ್ಗೆ 8 ಗಂಟೆಗೆ ಈ ರೀತಿ ಪೌಷ್ಟಿಕ ಆಹಾರ ತಿಂದರೆ ಇಡೀ ದಿನ ಹಸಿವಿನ ಚಿಂತೆ ಇರುತ್ತಿರಲಿಲ್ಲ&quot; ಎಂದು ನಗುತ್ತಾ ಉತ್ತರಿಸಿದ್ದಾರೆ. ಆದರೆ, ಗಂಗೂಲಿ ಅವರಿಗೆ ತಟ್ಟೆಯಲ್ಲಿದ್ದ ಆಹಾರಕ್ಕಿಂತ ಹೆಚ್ಚಾಗಿ, ತಮ್ಮ ತಂದೆ ತಮಗಾಗಿ ನೀಡುತ್ತಿದ್ದ ಆ ಬೆಲೆಕಟ್ಟಲಾಗದ ಸಮಯವೇ ಇಂದಿಗೂ ಅಮೂಲ್ಯವಾಗಿ ಉಳಿದಿದೆ.&lt;/p&gt;&lt;h2&gt;&lt;strong&gt;ಕುಟುಂಬದ ದೈನಂದಿನ ದಿನಚರಿ ಹಾಗೂ ತಂದೆಯ ಪ್ರೀತಿ&lt;/strong&gt;&lt;/h2&gt;&lt;p&gt;ಕುಟುಂಬದ ವಾತಾವರಣದ ಬಗ್ಗೆ ಮಾತನಾಡಿದ ಅವರು, 'ಬೆಳಿಗ್ಗೆ ಎದ್ದ ತಕ್ಷಣ ನಾನು ಶಾಲೆಗೆ ಹೊರಡುತ್ತಿದ್ದೆ, ಸಂಜೆ 5 ಗಂಟೆಗೆ ಮನೆಗೆ ಮರಳುತ್ತಿದ್ದೆ. ಹೀಗಾಗಿ ಬೆಳಗಿನ ಆ ಸಮಯವೇ ನಮ್ಮ ತಂದೆಗೆ ನನ್ನೊಂದಿಗೆ ಕಳೆಯಲು ಸಿಗುತ್ತಿದ್ದ ಏಕೈಕ ಸಮಯವಾಗಿತ್ತು. ಬೆಳಿಗ್ಗೆ ನನ್ನ ತಾಯಿ ಮತ್ತು ಐದು ಜನ ಚಿಕ್ಕಮ್ಮಂದಿರು ದೇವರ ಪೂಜಾ ಕೋಣೆಯಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿರುತ್ತಿದ್ದರು. ಆದರೆ ನನ್ನ ತಂದೆ ಮಾತ್ರ ನನಗೆ ಊಟ ಮಾಡಿಸಿ ಶಾಲೆಗೆ ಕಳುಹಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಅದೊಂದು ಬೇರೆಯದೇ ಪ್ರಪಂಚವಾಗಿತ್ತು, ಅತ್ಯದ್ಭುತ ನೆನಪುಗಳು&quot; ಎಂದು ಮೆಲುಕು ಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಇಂದಿನ ಪೋಷಕರಿಗೆ ಗಂಗೂಲಿ ಕಥೆಯಲ್ಲಿರುವ ಅದ್ಭುತ ಪಾಠ&lt;/strong&gt;&lt;/h2&gt;&lt;p&gt;ಸೌರವ್ ಗಂಗೂಲಿ ಅವರ ಈ ನೆನಪು ಕೇವಲ ಬೆಳಗಿನ ಉಪಹಾರಕ್ಕೆ ಮಾಂಸ ತಿನ್ನುವುದರ ಬಗ್ಗೆಯಾಗಲಿ ಅಥವಾ ಮಗುವಿಗೆ ಕೈಯಿಂದ ಊಟ ಮಾಡಿಸುವುದರ ಬಗ್ಗೆಯಾಗಲಿ ಅಲ್ಲ. ಬದಲಿಗೆ, ದಿನದ ಆರಂಭದಲ್ಲಿ ಮಗುವಿನೊಂದಿಗೆ ಪೋಷಕರು ಕಂಡುಕೊಳ್ಳುವ 'ಸಣ್ಣ ಹಾಗೂ ನಿರಂತರ ಭಾವನಾತ್ಮಕ ಬಾಂಧವ್ಯ'ದ ಕುರಿತಾಗಿದೆ.&lt;/p&gt;&lt;p&gt;ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಬೆಲೆಬಾಳುವ ಉಡುಗೊರೆಗಳು, ಅದ್ಧೂರಿ ಪ್ರವಾಸಗಳು ಅಥವಾ ಹುಟ್ಟುಹಬ್ಬದ ಆಚರಣೆಗಳ ಮೂಲಕ ಪ್ರೀತಿ ತೋರಿಸಲು ಬಯಸುತ್ತಾರೆ. ಆದರೆ, ಮಕ್ಕಳಿಗೆ ಪ್ರಾಯಶಃ ನೆನಪಿನಲ್ಲಿ ಉಳಿಯುವುದು ಇಂತಹ ದೈನಂದಿನ ಸಣ್ಣಪುಟ್ಟ ಪ್ರೀತಿಯ ಕ್ಷಣಗಳು ಮಾತ್ರ.&lt;/p&gt;&lt;h2&gt;&lt;strong&gt;ಪೋಷಕರು ಅನುಸರಿಸಬಹುದಾದ 5 ಸರಳ ಸಲಹೆಗಳು&lt;/strong&gt;&lt;/h2&gt;&lt;p&gt;&lt;strong&gt;ಉಪಹಾರದ ಸಮಯದ ಮಾತುಕತೆ: &lt;/strong&gt;ಬೆಳಗಿನ ತಿಂಡಿ ಸಮಯದಲ್ಲಿ ಫೋನ್ ಬದಿಗಿಟ್ಟು ಕನಿಷ್ಠ 10 ನಿಮಿಷ ಮಗುವಿನೊಂದಿಗೆ ಕಳೆಯಿರಿ. 'ಹೌದು' ಅಥವಾ 'ಇಲ್ಲ' ಎಂದು ಮಾತ್ರ ಉತ್ತರಿಸಲಾಗದ ಪ್ರೀತಿಯ ಪ್ರಶ್ನೆಗಳನ್ನು ಕೇಳಿ.&lt;/p&gt;&lt;p&gt;&lt;strong&gt;ಶಾಲೆಯ ಗೇಟ್&zwnj; ಬಳಿಯ ಪ್ರೀತಿ: &lt;/strong&gt;ಮಗು ಶಾಲೆಗೆ ಹೋಗುವ ಮುನ್ನ ಕನಿಷ್ಠ ಎರಡು ನಿಮಿಷ ಪ್ರೀತಿಯಿಂದ ಮಾತುಕತೆ ನಡೆಸಿ.&lt;/p&gt;&lt;p&gt;&lt;strong&gt;ಶಾಲೆಯಿಂದ ಬಂದ ನಂತರದ ಸಂವಾದ:&lt;/strong&gt; ಶಾಲೆಯಿಂದ ಬಂದ ತಕ್ಷಣ ಅಂಕಗಳು ಅಥವಾ ಹೋಂವರ್ಕ್ ಬಗ್ಗೆ ಕೇಳುವ ಬದಲು, &quot;ಇಂದು ನಿನಗೆ ನಗು ತಂದ ಘಟನೆ ಯಾವುದು?&quot; ಎಂದು ವಿಚಾರಿಸಿ.&lt;/p&gt;&lt;p&gt;&lt;strong&gt;ರಾತ್ರಿಯ ಪ್ರೀತಿಯ ಕ್ಷಣ (Bedtime Connect):&lt;/strong&gt; ಮಲಗುವ ಮುನ್ನ 5 ನಿಮಿಷಗಳ ಕಾಲ ಮಗುವಿಗೆ ಯಾವುದೇ ಸಲಹೆ, ತಿದ್ದುಪಡಿ ಅಥವಾ ತೀರ್ಪು ನೀಡದೆ ಅವರು ಹೇಳುವುದನ್ನು ತಾಳ್ಮೆಯಿಂದ ಆಲಿಸಿ.&lt;/p&gt;&lt;p&gt;&lt;strong&gt;ವಾರಾಂತ್ಯದ ಸ್ಪೆಷಲ್: &lt;/strong&gt;ವಾರಾಂತ್ಯದಲ್ಲಿ ಮಗುವಿಗೆ ಇಷ್ಟವಾದ ಬೆಳಗಿನ ಉಪಹಾರವನ್ನು ಅವರ ಜೊತೆಗೂಡಿ ತಯಾರಿಸಿ.&lt;/p&gt;&lt;p&gt;ಮಕ್ಕಳು ದೊಡ್ಡವರಾದಂತೆ ಈ ಅಭ್ಯಾಸಗಳು ಬದಲಾಗಬಹುದು, ಆದರೆ ತಂದೆ-ತಾಯಿಯ ಪ್ರೀತಿ ನೀಡಿದ ಆ ಬೆಚ್ಚಗಿನ ಭಾವನೆ ಮಗುವಿನ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತದೆ ಎಂಬುದಕ್ಕೆ ಗಂಗೂಲಿಯವರ ಈ ನೆನಪೇ ಜೀವಂತ ಸಾಕ್ಷಿ!&lt;/p&gt;]]></content:encoded>
            <category>relationship</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/sourav-ganguly-shares-childhood-memory-father-feeding-parenting-lesson-san/articleshow-rux7gfo"/>
        </item>
        <item>
            <title><![CDATA[ಕ್ಯಾರೆಟ್​ನಲ್ಲಿ ಸಿಕ್ಕಿತು ವಜ್ರದ ಉಂಗುರ! ಸಿನಿಮಾ ಸ್ಟೋರಿ ಮೀರಿಸೋ ರೋಚಕ ನೈಜ ಘಟನೆ]]></title>
            <link>https://kannada.asianetnews.com/viral/a-diamond-ring-was-found-in-a-carat-an-exciting-real-life-incident-that-goes-beyond-the-movie-story-suc/articleshow-us0t9kd</link>
            <guid isPermaLink="true">https://kannada.asianetnews.com/viral/a-diamond-ring-was-found-in-a-carat-an-exciting-real-life-incident-that-goes-beyond-the-movie-story-suc/articleshow-us0t9kd</guid>
            <pubDate>Tue, 18 Aug 2026 19:06:57 +0530</pubDate>
            <description><![CDATA[ಕೆನಡಾದಲ್ಲಿ 12 ವರ್ಷಗಳ ಹಿಂದೆ ತೋಟದಲ್ಲಿ ಕಳೆದುಹೋಗಿದ್ದ ವಜ್ರದ ಉಂಗುರವೊಂದು, ಮನೆಯಲ್ಲಿ ಬೆಳೆದ ಕ್ಯಾರೆಟ್​ನಲ್ಲಿ ಸಿಕ್ಕಿದೆ. ಸೊಸೆಗೆ ಸಿಕ್ಕ ಈ ಉಂಗುರವನ್ನು ನೋಡಿ ಅತ್ತೆ ಭಾವುಕರಾಗಿದ್ದು, ಈ ರೋಚಕ ಘಟನೆ ಎಲ್ಲರ ಗಮನ ಸೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ahcyqxsxkcjh5wcb8jgsbj,imgname-carrot-1787060189949.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವೊಮ್ಮೆ ಅದೃಷ್ಟ ಎನ್ನುವುದು ಹೇಗೋ ಬಂದುಬಿಡುತ್ತದೆ. ಯಾವುದೋ ಒಂದು ವಸ್ತುವನ್ನು ಅನುಭವಿಸುವ ಹಕ್ಕು ಅವರಿಗೆ ಇಲ್ಲದಾಗ, ಅದು ಏನು ಮಾಡಿದರೂ ಅವರಿಗೆ ದಕ್ಕುವುದೇ ಇಲ್ಲ, ಆ ವಸ್ತುವಿನ ಮೇಲೆ ಯಾರ ಹೆಸರು ಬರೆದಿರುತ್ತದೆಯೋ ಅದು ಅವರಿಗೇ ಸಿಗುತ್ತದೆ ಎನ್ನುವ ಮಾತಿದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಇಲ್ಲೊಂದು ರೋಚಕ ಘಟನೆ. ಮನೆಯಲ್ಲಿ ಬೆಳೆದ ಕ್ಯಾರೆಟ್​ನಲ್ಲಿ ವಜ್ರದ ಉಂಗುರ ಸಿಕ್ಕಿರುವ ಘಟನೆ ಇದಾಗಿದ್ದು, ಇದು ಸಿನಿಮಾದ ಸ್ಟೋರಿಯನ್ನು ಮೀರಿಸುವಂತೆ ಇದೆ.&lt;/p&gt;&lt;p&gt;ಈ ಘಟನೆ ನಡೆದಿರುವುದು 2014ರಲ್ಲಿ. ಕೆನಡಾದಲ್ಲಿ ನಡೆದಿರುವ ಈ ಘಟನೆ ಸೋಷಿಯಲ್​ ಮೀಡಿಯಾದಲ್ಲಿ ಮತ್ತೆ ಮತ್ತೆ ವೈರಲ್​ ಆಗುತ್ತಲೇ ಇರುತ್ತದೆ. ಇದಕ್ಕೆ ಕಾರಣ, 2014ರಲ್ಲಿ ಕಳೆದುಹೋಗಿದ್ದ ವಜ್ರದ ಉಂಗುರವೊಂದು ಕ್ಯಾರೆಟ್​ನಲ್ಲಿ 12 ವರ್ಷಗಳ ನಂತರ ಪತ್ತೆಯಾಗಿರೋ ಸ್ಟೋರಿ ಇದು. ಆಲ್ಬರ್ಟಾದಲ್ಲಿನ ನಡೆದ ಈ ಘಟನೆ ಈಗ ವಿಶ್ವದ ಗಮನ ಸೆಳೆದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;84 ವರ್ಷದ ಮೇರಿ ಗ್ರಾಂಸ್ 2014ರಲ್ಲಿ, ತೋಟದ ಕೆಲಸ ಮಾಡುವ ಸಂದರ್ಭದಲ್ಲಿ ಕಳೆ ಕೀಳುವಾಗ ವಜ್ರದ ಉಂಗುರವನ್ನು ಕಳೆದುಕೊಂಡಿದ್ದರು. ಆ ಸಮಯದಲ್ಲಿ ಅವರಿಗೆ ಅದರ ಅರಿವು ಬಂದಿರಲೇ ಇಲ್ಲ. ಆ ಬಳಿಕ ಎಲ್ಲಿ ಹುಡುಕಿದರೂ ಉಂಗುರ ಸಿಗಲೇ ಇಲ್ಲ. ಈ ವಿಷಯವನ್ನು ಅವರು ತಮ್ಮ ಮಗನ ಬಳಿ ಹೇಳಿದ್ರು ಬಿಟ್ಟರೆ, ಬೇರೆ ಯಾರ ಬಳಿಯೂ ಹೇಳುವ ಧೈರ್ಯ ಮಾಡಿರಲಿಲ್ಲ. ಆದರೆ ಮದುವೆಯ ಉಂಗುರ, ಅಷ್ಟು ಸುದೀರ್ಘ ಅವಧಿಯವರೆಗೆ ಪತಿಯ ನೆನಪಾಗಿ ಇಟ್ಟುಕೊಂಡಿದ್ದ ಉಂಗುರ ಕಾಣೆಯಾಗಿರುವ ಬಗ್ಗೆ ದುಃಖಿಸುತ್ತಲೇ ಇದ್ದಳು. ಆಗ ಅವಳ ಗಂಡ ಕೂಡ ಬದುಕಿದ್ದ. ಆದರೆ ಅವನಿಗೂ ವಿಷಯವನ್ನು ಆಕೆ ತಿಳಿಸದೇ ಗೋಪ್ಯವಾಗಿ ಇಟ್ಟುಕೊಂಡಿದ್ದಳು. ಯಾರಿಗೂ ತಿಳಿಯದಂತೆ ಅದೇ ರೀತಿಯ ಉಂಗುರ ಒಂದನ್ನು ಮಾರ್ಕೆಟ್​ನಿಂದ ಖರೀದಿಸಿ ಎಲ್ಲರಿಗೂ ಟೋಪಿ ಹಾಕಿದ್ದಳು.&lt;/p&gt;&lt;h3&gt;&lt;strong&gt;ಸೊಸೆಗೆ ಸಿಕ್ಕಿತು ಉಂಗುರ&lt;/strong&gt;&lt;/h3&gt;&lt;p&gt;ಅದಾಗಿ 12 ವರ್ಷಗಳ ಬಳಿಕ, ಅವರ ಸೊಸೆ, ಅರ್ಥಾತ್​ ಯಾರಿಗೆ ಮೇರಿ ಗ್ರಾಂಸ್ ಉಂಗುರದ ರಹಸ್ಯ ಹೇಳಿದ್ದಳೋ ಅವನ ಪತ್ನಿ ಕಾಲೀನ್ ಡೇಲಿ ತೋಟದಲ್ಲಿ ಕ್ಯಾರೆಟ್​ ಹೊರತೆಗೆದಾಗ, ಆ ಉಂಗುರ ಸಿಕ್ಕಿತು. ಉಂಗುರದ ಒಳಗೇ ಕ್ಯಾರೆಟ್​ ಹುಟ್ಟಿಕೊಂಡಿತ್ತು! ಕ್ಯಾರೆಟ್ ಉಂಗುರದ ಮೂಲಕ ನೇರವಾಗಿ ಬೆಳೆದಿತ್ತು, ಇದರಿಂದಾಗಿ ಹಲವು ವರ್ಷಗಳ ಕಾಲ ಮಣ್ಣಿನಲ್ಲಿ ಅಡಗಿಕೊಂಡಿದ್ದ ನಂತರ ಅದನ್ನು ಕಿತ್ತು ತೆಗೆಯಲು ಸಾಧ್ಯವಾಯಿತು. ಕೂಡಲೇ ಅವಳು ಅದನ್ನು ಗಂಡನಿಗೆ ತೋರಿಸಿದಳು. ಗಂಡನಿಗೆ ಇದು ತನ್ನ ಅಮ್ಮನ ಉಂಗುರವೇ ಎಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಅದೃಷ್ಟಕ್ಕೆ ಅಮ್ಮ ಬದುಕಿದ್ದಳು. ಮಗ ಅದನ್ನು ತೆಗೆದುಕೊಂಡು ಅಮ್ಮನಿಗೆ ಕೊಟ್ಟಾಗ ಆಕೆ ಕಣ್ಣೀರಾದಳು. ಆದರೆ ಪತಿಗೆ ವಿಷಯ ತಿಳಿಸಲು ಆತ ಐದು ವರ್ಷದ ಹಿಂದೆಯೇ ನಿಧನರಾಗಿಬಿಟ್ಟರು ಎಂದು ದುಃಖಿಸಿದಳು.&lt;/p&gt;&lt;p&gt;ಕ್ಯಾರೆಟ್&zwnj;ನಲ್ಲಿ ಯಾರಾದರೂ ವಜ್ರದ ಉಂಗುರವನ್ನು ಕಂಡುಕೊಂಡಿದ್ದು ಇದೇ ಮೊದಲಲ್ಲ. 2011 ರಲ್ಲಿ, ಸ್ವೀಡಿಷ್ ಮಹಿಳೆಯೊಬ್ಬರು ತಮ್ಮ ಮದುವೆಯ ಉಂಗುರವನ್ನು ಕಳೆದುಕೊಂಡ 16 ವರ್ಷಗಳ ನಂತರ ಅದನ್ನು ಕಂಡುಕೊಂಡಿದ್ದರು ಎಂದು ವರದಿಯಾಗಿದೆ!&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/viral/a-diamond-ring-was-found-in-a-carat-an-exciting-real-life-incident-that-goes-beyond-the-movie-story-suc/articleshow-us0t9kd"/>
        </item>
        <item>
            <title><![CDATA[Optical Illusion Test: ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಅದುವೇ ಹೇಳುತ್ತೆ ನಿಮ್ಮ ಅಸಲಿ ಗುಣ!]]></title>
            <link>https://kannada.asianetnews.com/relationship/optical-illusion-personality-test-crow-or-face-reveals-hidden-traits-san/articleshow-xbx0pgc</link>
            <guid isPermaLink="true">https://kannada.asianetnews.com/relationship/optical-illusion-personality-test-crow-or-face-reveals-hidden-traits-san/articleshow-xbx0pgc</guid>
            <pubDate>Wed, 19 Aug 2026 21:38:56 +0530</pubDate>
            <description><![CDATA[ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವ್ಯಕ್ತಿತ್ವದ ಪರೀಕ್ಷೆಯಾಗಿದೆ. ಇದರಲ್ಲಿ ನಿಮಗೆ ಮೊದಲು ಕಾಗೆ ಕಾಣಿಸಿದರೆ ನೀವು ಚುರುಕಾದ ಅಂತಃಪ್ರಜ್ಞೆಯುಳ್ಳವರು, ಅದೇ ಮಾನವನ ಮುಖ ಕಂಡರೆ ನೀವು ಅತಿಯಾದ ಸ್ವಯಂ-ವಿಮರ್ಶೆ ಮಾಡಿಕೊಳ್ಳುವ ಸ್ವಭಾವದವರು ಎಂಬುದನ್ನು ಸೂಚಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0dca5990kgcdzg194t0q17x,imgname-optical-illusion-1787155518761.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕ&lt;/strong&gt;ಣ್ಣುಗಳಿಗೆ ಭ್ರಮೆ ಹುಟ್ಟಿಸುವ ಆಪ್ಟಿಕಲ್ ಇಲ್ಯೂಷನ್&zwnj;ಗಳು (Optical Illusions) ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಇವು ನಮ್ಮ ವ್ಯಕ್ತಿತ್ವದ ಅಡಗಿರುವ ರಹಸ್ಯಗಳನ್ನು ಮತ್ತು ಅಂತರಂಗದ ಸ್ವಭಾವವನ್ನು ಹೊರಗೆಳೆಯುವ ಪರ್ಸನಾಲಿಟಿ ಟೆಸ್ಟ್&zwnj;ಗಳಾಗಿಯೂ ಪ್ರಸಿದ್ಧಿ ಪಡೆದಿವೆ. ಚಿತ್ರವೊಂದರಲ್ಲಿ ಹಲವು ಆಕೃತಿಗಳನ್ನು ಒಂದರೊಳಗೊಂದರಂತೆ ಸೃಷ್ಟಿಸಲಾಗಿರುತ್ತದೆ. ಅದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಾಣಿಸುವ ವಸ್ತುವಿನ ಆಧಾರದ ಮೇಲೆ ನಿಮ್ಮ ಗುಣಸ್ವಭಾವವನ್ನು ವ್ಯಾಖ್ಯಾನಿಸಲಾಗುತ್ತದೆ. ಅಚ್ಚರಿಯೆಂದರೆ, ನಿಮ್ಮ ಪಕ್ಕದಲ್ಲೇ ನಿಂತಿರುವ ಇನ್ನೊಬ್ಬ ವ್ಯಕ್ತಿಗೆ ಅದೇ ಚಿತ್ರದಲ್ಲಿ ಸಂಪೂರ್ಣ ವಿಭಿನ್ನವಾದ ಆಕೃತಿ ಮೊದಲ ನೋಟಕ್ಕೆ ಕಾಣಿಸಬಹುದು!&lt;/p&gt;&lt;h2&gt;&lt;strong&gt;ಈ ಚಿತ್ರದಲ್ಲಿ ನಿಮಗೇನು ಕಾಣಿಸುತ್ತಿದೆ?&lt;/strong&gt;&lt;/h2&gt;&lt;p&gt;ನೀವು ಇತರರನ್ನು ಬೇಗನೇ ವಿಶ್ಲೇಷಿಸುವವರೋ (Judgmental) ಅಥವಾ ನಿಮ್ಮ ಬಗ್ಗೆ ನೀವೇ ಅತಿಯಾದ ಸ್ವಯಂ-ವಿಮರ್ಶೆ (Self-critical) ಮಾಡಿಕೊಳ್ಳುವವರೋ ಎಂಬುದನ್ನು ತಿಳಿಯಲು ಈ ಪರೀಕ್ಷೆ ಮಾಡಿಕೊಳ್ಳಿ.&lt;/p&gt;&lt;h2&gt;&lt;strong&gt;ಚಿತ್ರದ ರಚನೆ ಹೇಗಿದೆ?&lt;/strong&gt;&lt;/h2&gt;&lt;p&gt;ಈ ಆಪ್ಟಿಕಲ್ ಇಲ್ಯೂಷನ್&zwnj;ನಲ್ಲಿ ನೆರಳು ಮತ್ತು ಬಂಡೆಗಳ ಆಕಾರವನ್ನು ಬಳಸಿ ಎರಡು ಸ್ಪಷ್ಟ ಚಿತ್ರಗಳನ್ನು ಅಡಗಿಸಿಡಲಾಗಿದೆ. ಇದು ಮನೋವಿಜ್ಞಾನದಲ್ಲಿ ಬಳಸುವ 'ಹಾಲೋ-ಫೇಸ್ ಎಫೆಕ್ಟ್' (Hollow-face effect) ತಂತ್ರಜ್ಞಾನದಂತೆಯೇ ಕಾರ್ಯನಿರ್ವಹಿಸುತ್ತದೆ. ಈ ಚಿತ್ರದಲ್ಲಿ ಕಪ್ಪು ಕಾಗೆಯೊಂದು ಬಂಡೆಯ ತುದಿಯಲ್ಲಿ ಕುಳಿತಂತೆ ಕಾಣುತ್ತದೆ. ಅದೇ ಸಮಯದಲ್ಲಿ ಕೆಳಗಿನ ಸಣ್ಣ ಬಂಡೆಗಳ ಗುಂಪು ಮಾನವನ ಮುಖದ ಆಕಾರವನ್ನು ರೂಪಿಸುತ್ತದೆ. ಎರಡೂ ಚಿತ್ರಗಳು ಒಂದೇ ರೀತಿಯ ಹೊರರೇಖೆಯನ್ನು ಹಂಚಿಕೊಳ್ಳುವುದರಿಂದ, ನಿಮ್ಮ ಮೆದುಳು ಮೊದಲ ನೋಟಕ್ಕೆ ಯಾವುದಾದರೂ ಒಂದನ್ನು ಮಾತ್ರ ಸ್ಪಷ್ಟವಾಗಿ ಗ್ರಹಿಸುತ್ತದೆ.&lt;/p&gt;&lt;h2&gt;&lt;strong&gt;ನಿಮಗೆ ಮೊದಲು 'ಕಾಗೆ' ಕಾಣಿಸಿದರೆ&lt;/strong&gt;&lt;/h2&gt;&lt;p&gt;ಚಿತ್ರವನ್ನು ನೋಡಿದ ತಕ್ಷಣ ನಿಮಗೆ ಮೊದಲು ಕಾಗೆ (Crow) ಗೋಚರಿಸಿದರೆ, ನೀವು ಜನರನ್ನು ಹಾಗೂ ಪರಿಸ್ಥಿತಿಯನ್ನು ತೀವ್ರವಾಗಿ ವಿಶ್ಲೇಷಿಸುವ (Judgmental) ಸ್ವಭಾವದವರಾಗಿದ್ದೀರಿ ಎಂದರ್ಥ. ಆದರೆ, ಇದು ನಕಾರಾತ್ಮಕ ಅರ್ಥದಲ್ಲಿ ಅಲ್ಲ.&lt;/p&gt;&lt;p&gt;ಇದರರ್ಥ ನೀವು ಚುರುಕಾದ ಅಂತಃಪ್ರಜ್ಞೆಯನ್ನು (Instincts) ಹೊಂದಿದ್ದೀರಿ. ವ್ಯಕ್ತಿಯೊಬ್ಬರನ್ನು ನೋಡಿದ ತಕ್ಷಣ ಅವರ ಬಗ್ಗೆ ನೀವು ತಳೆಯುವ ಮೊದಲ ಅಭಿಪ್ರಾಯ ಬಹುತೇಕ ಬಾರಿ ಸರಿಯಾಗಿರುತ್ತದೆ. ನೀವು ಕಟುವಾದ ವ್ಯಕ್ತಿಯಲ್ಲ, ಬದಲಿಗೆ ಅತ್ಯಂತ ಸೂಕ್ಷ್ಮ ಗ್ರಹಿಕೆಯುಳ್ಳವರು. ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವಾಗ ಅಥವಾ ನಿಷ್ಪಕ್ಷಪಾತವಾದ ಮೂರನೇ ವ್ಯಕ್ತಿಯ ಅಭಿಪ್ರಾಯ ಬೇಕಾದಾಗ ಜನರು ನಿಮ್ಮನ್ನು ಕಣ್ಣು ಮುಚ್ಚಿ ನಂಬುತ್ತಾರೆ.&lt;/p&gt;&lt;h2&gt;&lt;strong&gt;ನಿಮಗೆ ಮೊದಲು 'ಮಾನವನ ಮುಖ' ಕಾಣಿಸಿದರೆ&lt;/strong&gt;&lt;/h2&gt;&lt;p&gt;ಕಾಗೆಗಿಂತ ಮುಂಚಿತವಾಗಿ ನಿಮಗೆ ಮಾನವನ ಮುಖ (Human Face) ಸ್ಪಷ್ಟವಾಗಿ ಗೋಚರಿಸಿದರೆ, ನೀವು ನಿಮ್ಮ ಬಗ್ಗೆ ನೀವೇ ಅತಿಯಾಗಿ ವಿಮರ್ಶೆ ಮಾಡಿಕೊಳ್ಳುವ (Too hard on yourself) ಅಥವಾ ನಿಮ್ಮ ತಪ್ಪುಗಳನ್ನೇ ಹುಡುಕುವ ಸ್ವಭಾವದವರಾಗಿದ್ದೀರಿ ಎಂದರ್ಥ.&lt;/p&gt;&lt;p&gt;ಮನೋವಿಜ್ಞಾನದ ಪ್ರಕಾರ, ಇಂತಹ ಸ್ವಯಂ-ವಿಮರ್ಶೆಯ ಗುಣವು ಸಮಾಜದಲ್ಲಿ ಇತರರಿಂದ ಸ್ವೀಕರಿಸಲ್ಪಡಬೇಕು (Social Acceptance) ಎನ್ನುವ ಹಂಬಲದಿಂದ ಮೂಡುತ್ತದೆ. 'ಇತರರು ನನ್ನನ್ನು ವಿಮರ್ಶಿಸುವ ಅಥವಾ ಜಿಗುಪ್ಸೆ ವ್ಯಕ್ತಪಡಿಸುವ ಮುನ್ನ, ನಾನೇ ನನ್ನ ತಪ್ಪುಗಳನ್ನು ಹುಡುಕಿ ತಿದ್ದಿಕೊಂಡರೆ ನೋವು ಕಡಿಮೆಯಾಗುತ್ತದೆ' ಎನ್ನುವ ರಕ್ಷಣಾತ್ಮಕ ಕವಚವನ್ನು (Shield) ಇವರು ನಿರ್ಮಿಸಿಕೊಂಡಿರುತ್ತಾರೆ. ಇದೊಂದು ರೀತಿಯ ಹೊಂದಾಣಿಕೆಯ ಅಭ್ಯಾಸವಾಗಿದ್ದರೂ, ಕಾಲಕ್ರಮೇಣ ಇದು ವ್ಯಕ್ತಿಯ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಮತ್ತು ಅವರ ನಿಜವಾದ ಬೆಳವಣಿಗೆಗೆ ಅಡ್ಡಿಯುಂಟುಮಾಡುತ್ತದೆ.&lt;/p&gt;]]></content:encoded>
            <category>relationship</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/optical-illusion-personality-test-crow-or-face-reveals-hidden-traits-san/articleshow-xbx0pgc"/>
        </item>
        <item>
            <title><![CDATA[‘Food Divorce’ ಎಂದರೇನು? ಊಟದ ವಿಚಾರದಲ್ಲಿ ದಂಪತಿಗಳ ಜಗಳ ತಪ್ಪಿಸುವ ಹೊಸ ಟ್ರೆಂಡ್]]></title>
            <link>https://kannada.asianetnews.com/relationship/food-divorce-the-new-relationship-trend-that-helps-couples-avoid-daily-food-fights/articleshow-yt6bgy2</link>
            <guid isPermaLink="true">https://kannada.asianetnews.com/relationship/food-divorce-the-new-relationship-trend-that-helps-couples-avoid-daily-food-fights/articleshow-yt6bgy2</guid>
            <pubDate>Tue, 18 Aug 2026 22:41:23 +0530</pubDate>
            <description><![CDATA[&lt;p&gt;Food Divorce: ಮನೆಯಲ್ಲಿ ಪ್ರತಿದಿನ ಗಂಡ ಹೆಂಡತಿ ನಡುವೆ ಆಹಾರದ ಆಯ್ಕೆ, ಸಮಯ ಮತ್ತು ಅಭ್ಯಾಸಗಳಲ್ಲಿ ವ್ಯತ್ಯಾಸವಿದ್ದು, ಇದೇ ವಿಚಾರ ಪ್ರತಿದಿನ ಜಗಳಕ್ಕೆ ಕಾರಣವಾಗುತ್ತಿದ್ದರೆ, ಕೆಲವು ಜೋಡಿಗಳು ಸಮಸ್ಯೆ ಬಗೆಹರಿಸಲು ಇದೀಗ &lsquo;ಫುಡ್ ಡಿವೋರ್ಸ್&rsquo; (Food Divorce) ಎಂಬ ಸರಳ ವಿಧಾನವನ್ನು ಅನುಸರಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0axnwhzcvyss4x4j22680kr,imgname-food-divorce-1787073065533.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಏನಿದು ಫುಡ್ ಡಿವೋರ್ಸ್?&lt;/strong&gt;&lt;/h2&gt;&lt;p&gt;ಪ್ರತಿಯೊಂದು ಸಂಬಂಧದಲ್ಲೂ ಸಣ್ಣಪುಟ್ಟ ಏರಿಳಿತ, ಭಿನ್ನಾಭಿಪ್ರಾಯಗಳು ಸಹಜ. ಆದರೆ ಪ್ರತಿಯೊಂದು ವಿಚಾರವೂ ದೊಡ್ಡ ಸಮಸ್ಯೆಯಾಗಿ ಬದಲಾಗಬೇಕೆಂದಿಲ್ಲ. ಕೆಲವೊಮ್ಮೆ ದಂಪತಿಗಳ ನಡುವಿನ ಜಗಳಕ್ಕೆ ಯಾವುದೇ ಗಂಭೀರ ಕಾರಣವಿರುವುದಿಲ್ಲ. ಬದಲಾಗಿ, ಪ್ರತಿದಿನ ಎದುರಾಗುವ ಸಾಮಾನ್ಯ ಪ್ರಶ್ನೆಯೇ ಇದಕ್ಕೆ ಕಾರಣವಾಗಬಹುದು &lsquo;ಇಂದು ಊಟಕ್ಕೆ ಏನು ಮಾಡೋಣ?&rsquo; ಎನ್ನುವ ಪ್ರಶ್ಗೆಯೇ ಜಗಳಕ್ಕೆ ಕಾರಣವಾಗುತ್ತದೆ. ಹಾಗಂತ &lsquo;ಫುಡ್ ಡಿವೋರ್ಸ್&rsquo; ಎಂದರೆ ಗಂಡ-ಹೆಂಡತಿ ಅಥವಾ ಪ್ರೇಮಿಗಳು ಪರಸ್ಪರ ದೂರವಾಗುವುದು ಅಲ್ಲ. ಊಟದ ವಿಚಾರದಲ್ಲಿ ಪ್ರತಿಬಾರಿಯೂ ಒಬ್ಬರಿಗಾಗಿ ಮತ್ತೊಬ್ಬರು ತಮ್ಮ ಇಷ್ಟವನ್ನು ಬಿಟ್ಟುಕೊಡಬೇಕಾದ ಅಗತ್ಯವಿಲ್ಲ ಎಂಬುದೇ ಇದರ ಮುಖ್ಯ ಉದ್ದೇಶ. ಉದಾಹರಣೆಗೆ, ಒಬ್ಬರಿಗೆ ರೊಟ್ಟಿ-ಪಲ್ಯ ಇಷ್ಟವಿದ್ದರೆ ಮತ್ತೊಬ್ಬರಿಗೆ ನೂಡಲ್ಸ್ ತಿನ್ನಬೇಕು ಎನ್ನಿಸಬಹುದು. ಇಂತಹ ಸಂದರ್ಭದಲ್ಲಿ ಇಬ್ಬರೂ ಒಂದೇ ಆಹಾರಕ್ಕೆ ಒಪ್ಪಿಕೊಳ್ಳಲೇಬೇಕು ಎಂಬ ನಿಯಮವಿಲ್ಲ. ಒಬ್ಬರು ತಮ್ಮ ಇಷ್ಟದ ಆಹಾರ ತಿನ್ನಬಹುದು, ಮತ್ತೊಬ್ಬರು ತಮ್ಮ ಆಯ್ಕೆಯ ಆಹಾರವನ್ನು ತಿನ್ನಬಹುದು. ಜೊತೆಗೆ ಇಬ್ಬರು ಒಂದೇ ಸಮಯದಲ್ಲಿ ಊಟ ಮಾಡಬೇಕು ಎನ್ನುವ ಒತ್ತಡವೂ ಇರೋದಿಲ್ಲ.&lt;/p&gt;&lt;h3&gt;&lt;strong&gt;ಪ್ರತಿದಿನ &lsquo;ಇಂದು ಏನು ತಿನ್ನೋಣ?&rsquo; ಎಂಬ ಪ್ರಶ್ನೆಯೇ ತಲೆನೋವಾಗಿದ್ದರೆ...&lt;/strong&gt;&lt;/h3&gt;&lt;p&gt;ಬಹುತೇಕ ಮನೆಗಳಲ್ಲಿ ಸಂಜೆ ಆಗುತ್ತಿದ್ದಂತೆ ಒಂದು ಸಾಮಾನ್ಯ ಪ್ರಶ್ನೆ ಶುರುವಾಗುತ್ತದೆ&mdash;&lsquo;ಇಂದು ಏನು ತಿನ್ನೋಣ?&rsquo; ಅದಕ್ಕೆ &lsquo;ನನಗೆ ಗೊತ್ತಿಲ್ಲ, ನೀನೇ ಹೇಳು&rsquo; ಎಂಬ ಉತ್ತರ ಬರುತ್ತದೆ. ನಂತರ ಪಾಸ್ತಾ ಬೇಕೋ, ಅನ್ನ ಬೇಕೋ, ಮನೆಯ ಊಟ ಮಾಡಬೇಕೋ ಅಥವಾ ಹೊರಗಿನಿಂದ ಆರ್ಡರ್ ಮಾಡಬೇಕೋ ಎಂಬ ಚರ್ಚೆ ಶುರುವಾಗುತ್ತದೆ. ಒಂದು-ಎರಡು ದಿನ ಈ ರೀತಿಯ ಭಿನ್ನಾಭಿಪ್ರಾಯ ಸಾಮಾನ್ಯ. ಆದರೆ ಇದೇ ವಿಚಾರ ಪ್ರತಿದಿನ ಜಗಳಕ್ಕೆ ಕಾರಣವಾದರೆ, ಊಟದಂತಹ ಸರಳ ವಿಷಯವೂ ಮಾನಸಿಕ ಒತ್ತಡ ಉಂಟುಮಾಡಬಹುದು.&lt;/p&gt;&lt;p&gt;ಏನು ಅಡುಗೆ ಮಾಡಬೇಕು, ಸಾಮಗ್ರಿಗಳನ್ನು ಯಾರು ತರಬೇಕು, ಯಾರು ಅಡುಗೆ ಮಾಡಬೇಕು ಮತ್ತು ಯಾರ ಇಷ್ಟಕ್ಕೆ ಆದ್ಯತೆ ನೀಡಬೇಕು ಎಂಬ ವಿಚಾರಗಳೂ ದಿನನಿತ್ಯದ ಜವಾಬ್ದಾರಿಯಾಗಿ ಬದಲಾಗಬಹುದು. ಇಂತಹ ಸಂದರ್ಭಗಳಲ್ಲಿ &lsquo;ಫುಡ್ ಡಿವೋರ್ಸ್&rsquo; ಕೆಲವು ಜೋಡಿಗಳಿಗೆ ಈ ಒತ್ತಡವನ್ನು ಕಡಿಮೆ ಮಾಡುವ ಮಾರ್ಗವಾಗಬಹುದು.&lt;/p&gt;&lt;p&gt;&lsquo;ಫುಡ್ ಡಿವೋರ್ಸ್&rsquo; ಎಂದರೆ ಎಂದಿಗೂ ಒಟ್ಟಿಗೆ ಊಟ ಮಾಡಬಾರದು ಎಂಬ ಅರ್ಥವಲ್ಲ. ಇಬ್ಬರಿಗೂ ಇಷ್ಟವಿದ್ದಾಗ ಒಟ್ಟಿಗೆ ಊಟ ಮಾಡಬಹುದು. ವಾರಾಂತ್ಯದಲ್ಲಿ ಒಟ್ಟಿಗೆ ಬ್ರೇಕ್&zwnj;ಫಾಸ್ಟ್ ಮಾಡಬಹುದು ಅಥವಾ ವಿಶೇಷ ದಿನಗಳಲ್ಲಿ ಹೊರಗೆ ಡಿನ್ನರ್&zwnj;ಗೆ ಹೋಗಬಹುದು. ಆದರೆ ಯಾವುದಾದರೂ ದಿನ ಇಬ್ಬರ ಆಹಾರದ ಆಯ್ಕೆ ಸಂಪೂರ್ಣ ಭಿನ್ನವಾಗಿದ್ದರೆ, ಅದಕ್ಕಾಗಿ ಜಗಳ ಮಾಡುವ ಅಗತ್ಯವಿಲ್ಲ. ಒಬ್ಬರು ತಮ್ಮ ಇಷ್ಟದ ಆಹಾರವನ್ನು ತಿನ್ನಬಹುದು ಮತ್ತು ಮತ್ತೊಬ್ಬರು ತಮ್ಮ ಆಯ್ಕೆಯ ಆಹಾರ ತಿನ್ನಬಹುದು.&lt;/p&gt;&lt;p&gt;&lt;strong&gt;ಬೇರೆಬೇರೆ ಊಟ ಮಾಡುವುದು ಸಂಬಂಧಕ್ಕೆ ಕೆಟ್ಟದ್ದೇ?&lt;/strong&gt;&lt;/p&gt;&lt;p&gt;ಪ್ರತಿಯೊಂದು ಸಂಬಂಧಕ್ಕೂ ಅದರದೇ ಆದ ನಿಯಮಗಳು ಮತ್ತು ಹೊಂದಾಣಿಕೆಯ ವಿಧಾನಗಳಿರುತ್ತವೆ. ದಂಪತಿಗಳು ಪ್ರತಿಯೊಂದು ಕೆಲಸವನ್ನೂ ಒಟ್ಟಿಗೆ ಮಾಡಲೇಬೇಕು ಎಂಬ ನಿಯಮವಿಲ್ಲ. ಕೆಲವು ಜೋಡಿಗಳ ಮಲಗುವ ಮತ್ತು ಎದ್ದೇಳುವ ಸಮಯ ವಿಭಿನ್ನವಾಗಿರಬಹುದು. ಕೆಲವರ ಹವ್ಯಾಸಗಳು ಬೇರೆಬೇರೆ ಇರಬಹುದು. ಕೆಲವರು ತಮ್ಮ ಬಿಡುವಿನ ಸಮಯವನ್ನು ತಮ್ಮದೇ ಆದ ರೀತಿಯಲ್ಲಿ ಕಳೆಯಲು ಇಷ್ಟಪಡಬಹುದು. ಹಾಗೆಯೇ ಆಹಾರದ ವಿಚಾರದಲ್ಲೂ ಭಿನ್ನತೆ ಇರಬಹುದು. ಕೆಲವರಿಗೆ ಒಟ್ಟಿಗೆ ಕುಳಿತು ಊಟ ಮಾಡುವುದು ಸಂಬಂಧದ ಪ್ರಮುಖ ಭಾಗವಾಗಿರಬಹುದು. ಇನ್ನು ಕೆಲವರಿಗೆ ಅದು ಅಷ್ಟೊಂದು ಮುಖ್ಯವಾಗಿರದಿರಬಹುದು. ಹೀಗಾಗಿ, ಇಬ್ಬರೂ ಬೇರೆಬೇರೆ ಊಟ ಮಾಡುತ್ತಾರೆ ಎಂಬ ಕಾರಣಕ್ಕೆ ಮಾತ್ರ ಅವರ ಸಂಬಂಧದಲ್ಲಿ ಸಮಸ್ಯೆ ಇದೆ ಎಂದು ಹೇಳಲು ಸಾಧ್ಯವಿಲ್ಲ.&lt;/p&gt;]]></content:encoded>
            <category>relationship</category>
            <dc:creator>Pavna Das</dc:creator>
            <atom:link href="https://kannada.asianetnews.com/relationship/food-divorce-the-new-relationship-trend-that-helps-couples-avoid-daily-food-fights/articleshow-yt6bgy2"/>
        </item>
    </channel>
</rss>
