<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 09 Sep 2026 17:24:10 +0530</lastBuildDate>
        <atom:link href="https://kannada.asianetnews.com/rss/relationship" rel="self" type="application/rss+xml"/>
        <item>
            <title><![CDATA[ಪತ್ನಿ ಸುನೀತಾ ಆರೋಪಗಳ ಬೆನ್ನಲ್ಲೇ ಫ್ಯಾನ್ಸ್‌ ಬೆಂಬಲ ಕೋರಿದ್ದೇಕೆ ಬಾಲಿವುಡ್ ನಟ ಗೋವಿಂದ?]]></title>
            <link>https://kannada.asianetnews.com/entertainment/tensions-rise-as-sunita-ahuja-fumes-over-rumors-of-govinda-link-up-with-a-actress-and-the-actor-expects-fans-support/articleshow-3bqqnyh</link>
            <guid isPermaLink="true">https://kannada.asianetnews.com/entertainment/tensions-rise-as-sunita-ahuja-fumes-over-rumors-of-govinda-link-up-with-a-actress-and-the-actor-expects-fans-support/articleshow-3bqqnyh</guid>
            <pubDate>Sun, 06 Sep 2026 12:52:58 +0530</pubDate>
            <description><![CDATA[&lt;p&gt;1987ರಲ್ಲಿ ರಹಸ್ಯವಾಗಿ ಶುರುವಾದ ಇವರ ಪ್ರೇಮಕಥೆ, ಈಗ ಅಕ್ಷರಶಃ ಬೀದಿಗೆ ಬಂದಂತಾಗಿದೆ. ನಾಲ್ಕು ವರ್ಷಗಳ ಕಾಲ ತಮ್ಮ ಮದುವೆಯನ್ನು ಗುಟ್ಟಾಗಿಟ್ಟಿದ್ದ ಈ ಜೋಡಿ, ಈಗ ತಮ್ಮ ಜಗಳವನ್ನು ಮುಚ್ಚಿಡಲು ವಿಫಲವಾಗಿದೆ. ಅಭಿಮಾನಿಗಳು ಮಾತ್ರ ತಮ್ಮ ಪ್ರೀತಿಯ 'ಚೀಚಿ' ಮತ್ತೆ ನಗುನಗುತ್ತಾ ಸುನೀತಾ ಅವರ ಜೊತೆ ಒಂದಾಗಲಿ ಎಂದು ಆಶಿಸುತ್ತಿದ್ದಾರೆ. ಆದರೆ.. ಏನಾಗ್ತಿದೆ? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fnppz0v93kx9yy59exqwb4,imgname-sunita-ahuja-govinda-divorce-1787232476128.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Actor Govinda-Sunita Ahuja-Komal Rani-Bollywood Gossip-Govinda Divorce Rumors-Celebrity Marital Discord-ಚೀಚಿ ಸಂಸಾರದಲ್ಲಿ 'ರಿಯಲ್' ಡ್ರಾಮಾ: ಗೋವಿಂದ-ಸುನೀತಾ ನಡುವೆ ಶುರುವಾಯ್ತಾ ವಿಚ್ಛೇದನದ ಕೌಂಟ್&zwnj;ಡೌನ್?&lt;/strong&gt;&lt;/p&gt;&lt;p&gt;ಬೆಳ್ಳಿತೆರೆ ಮೇಲೆ ತಮ್ಮ ಅದ್ಭುತ ಡ್ಯಾನ್ಸ್ ಮತ್ತು ಕಾಮಿಡಿ ಟೈಮಿಂಗ್ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ನಗಿಸಿದ್ದ 'ಹೀರೋ ನಂಬರ್ 1' ಗೋವಿಂದ, ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ದೊಡ್ಡದೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಬಾಲಿವುಡ್ ಗಲ್ಲಿಗಳಲ್ಲಿ ಕೇಳಿಬರುತ್ತಿರುವ ಬಿಸಿಬಿಸಿ ಸುದ್ದಿಯೆಂದರೆ, ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ 37 ವರ್ಷಗಳ ದಾಂಪತ್ಯ ಜೀವನದ ನೌಕೆ ಈಗ ಸುಳಿಯಲ್ಲಿ ಸಿಲುಕಿದೆ! ಅನೈತಿಕ ಸಂಬಂಧ ಮತ್ತು ವಿಚ್ಛೇದನದ ವದಂತಿಗಳು ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ.&lt;/p&gt;&lt;h2&gt;ಆಕಾಶದತ್ತ ಮುಖ ಮಾಡಿದ ನಟ: ಅಸಲಿ ಕಥೆಯೇನು?&lt;/h2&gt;&lt;p&gt;ಸೆಪ್ಟೆಂಬರ್ 7ರ ಶನಿವಾರ ಸಂಜೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೋವಿಂದ ಕಾಣಿಸಿಕೊಂಡಾಗ, ಎಲ್ಲರ ಕಣ್ಣು ಅವರ ಮುಖದ ಮೇಲಿತ್ತು. ಅಲ್ಲಿ ಗೋವಿಂದ ನೀಡಿದ ಹೇಳಿಕೆ ಮಾತ್ರ ಸಖತ್ ನಿಗೂಢವಾಗಿತ್ತು. ಪತ್ನಿ ಸುನೀತಾ ಅವರ ಹೆಸರನ್ನು ಎತ್ತದೆ, ಆದರೆ ಅವರೊಂದಿಗಿನ ಬಿರುಕಿನ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಗೋವಿಂದ, &quot;ಆಕಾಶದಲ್ಲಿ ಹಲವು ವಿಷಯಗಳು ಬರೆಯಲ್ಪಟ್ಟಿವೆ. ಅವೆಲ್ಲವೂ ಬೇಗನೆ ಕ್ಲಿಯರ್ ಆಗಲಿ ಮತ್ತು ನನಗೆ ಅದನ್ನು ಸರಿಪಡಿಸಲು ಶಕ್ತಿ ಸಿಗಲಿ ಎಂದು ನಾನು ತಾಯಿಯಲ್ಲಿ ಪ್ರಾರ್ಥಿಸುತ್ತೇನೆ&quot; ಎಂದಿದ್ದಾರೆ. ಈ 'ಆಕಾಶದಲ್ಲಿ ಬರೆಯಲ್ಪಟ್ಟಿರುವ ವಿಷಯಗಳು' ಅಂದರೆ ಸಂಸಾರದ ಕಲಹವೇ ಎಂಬುದು ಈಗ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ!&lt;/p&gt;&lt;h3&gt;ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಸಂಘರ್ಷ!&lt;/h3&gt;&lt;p&gt;ಒಂದೆಡೆ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದರೆ, ಇನ್ನೊಂದೆಡೆ ಗೋವಿಂದ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. &lsquo;ರೂಪಾ&rsquo; ಮತ್ತು &lsquo;ದುನಿಯಾದಾರಿ&rsquo; ಎಂಬ ಎರಡು ಸಿನಿಮಾಗಳ ಮೂಲಕ ಸ್ಯಾಂಡಲ್&zwnj;ವುಡ್ ಮಾದರಿಯಲ್ಲೇ ಬಾಲಿವುಡ್&zwnj;ಗೆ ಕಂಬ್ಯಾಕ್ ಮಾಡುತ್ತಿರುವ ಗೋವಿಂದ, &quot;ನನಗೆ ನಿಮ್ಮ ಬೆಂಬಲ ಬೇಕು&quot; ಎಂದು ಅಭಿಮಾನಿಗಳ ಮುಂದೆ ಅಕ್ಷರಶಃ ಮನವಿ ಮಾಡಿದ್ದಾರೆ. ಸಂಸಾರದ ಕಿರಿಕಿರಿ ನಡುವೆಯೂ ನಟನೆಯ ಹಸಿವು ಅವರನ್ನು ಕಾಡುತ್ತಿರುವುದು ಸ್ಪಷ್ಟವಾಗಿದೆ.&lt;/p&gt;&lt;h3&gt;ಬಿರುಕಿಗೆ ಕಾರಣ 'ಮೂರನೇ ವ್ಯಕ್ತಿ'?&lt;/h3&gt;&lt;p&gt;ಇತ್ತೀಚೆಗೆ ನಟಿ ಕೋಮಲ್ ರಾಣಿ ಸ್ವರ್ಣಕರ್ ಜೊತೆ ಗೋವಿಂದ ಅವರ ಹೆಸರು ಕೇಳಿಬರುತ್ತಿರುವುದು ಸುನೀತಾ ಅವರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಹಿಂದೆ ರಿಯಾಲಿಟಿ ಶೋಗಳಲ್ಲಿ &quot;ಗೋವಿಂದಗೆ ಎಷ್ಟೇ ಅಫೇರ್ ಇದ್ದರೂ ಕೊನೆಗೆ ಅವರು ನನ್ನ ಬಳಿಯೇ ಬರುತ್ತಾರೆ&quot; ಎಂದು ನಗುನಗುತ್ತಲೇ ಹೇಳುತ್ತಿದ್ದ ಸುನೀತಾ, ಈ ಬಾರಿ ಮಾತ್ರ ವಿಚ್ಛೇದನದ ಗಂಭೀರ ಚಿಂತನೆಯಲ್ಲಿದ್ದಾರಂತೆ. ಇದಕ್ಕೆ ಪ್ರತಿಯಾಗಿ ಗೋವಿಂದ ಕೂಡ ಸುಮ್ಮನೆ ಕುಳಿತಿಲ್ಲ; &quot;ಮಿತಿ ಮೀರಬೇಡಿ&quot; ಎಂದು ಸಾರ್ವಜನಿಕವಾಗಿಯೇ ಪತ್ನಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ!&lt;/p&gt;&lt;p&gt;1987ರಲ್ಲಿ ರಹಸ್ಯವಾಗಿ ಶುರುವಾದ ಇವರ ಪ್ರೇಮಕಥೆ, ಈಗ ಅಕ್ಷರಶಃ ಬೀದಿಗೆ ಬಂದಂತಾಗಿದೆ. ನಾಲ್ಕು ವರ್ಷಗಳ ಕಾಲ ತಮ್ಮ ಮದುವೆಯನ್ನು ಗುಟ್ಟಾಗಿಟ್ಟಿದ್ದ ಈ ಜೋಡಿ, ಈಗ ತಮ್ಮ ಜಗಳವನ್ನು ಮುಚ್ಚಿಡಲು ವಿಫಲವಾಗಿದೆ. ಅಭಿಮಾನಿಗಳು ಮಾತ್ರ ತಮ್ಮ ಪ್ರೀತಿಯ 'ಚೀಚಿ' ಮತ್ತೆ ನಗುನಗುತ್ತಾ ಸುನೀತಾ ಅವರ ಜೊತೆ ಒಂದಾಗಲಿ ಎಂದು ಆಶಿಸುತ್ತಿದ್ದಾರೆ. ಆದರೆ, ಗೋವಿಂದ ಅವರ ಮೌನ ಮತ್ತು ಸುನೀತಾ ಅವರ ಸಿಟ್ಟು ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕು!&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/tensions-rise-as-sunita-ahuja-fumes-over-rumors-of-govinda-link-up-with-a-actress-and-the-actor-expects-fans-support/articleshow-3bqqnyh"/>
        </item>
        <item>
            <title><![CDATA[ಮದುವೆಗೆ ಮುನ್ನ ಹುಡುಗನ ಆಯ್ಕೆ ವೇಳೆ ಈ ಎರಡು ವಿಷ್ಯ ಗಮನಿಸಿ, ಡಿವೋರ್ಸ್‌ ತಪ್ಪಿಸಿ]]></title>
            <link>https://kannada.asianetnews.com/relationship/what-to-look-for-in-husband-before-marriage-divorce-lawyer-tips/articleshow-57xxweg</link>
            <guid isPermaLink="true">https://kannada.asianetnews.com/relationship/what-to-look-for-in-husband-before-marriage-divorce-lawyer-tips/articleshow-57xxweg</guid>
            <pubDate>Mon, 07 Sep 2026 11:26:27 +0530</pubDate>
            <description><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಡಿವೋರ್ಸ್&zwnj; ಹೆಚ್ಚಾಗ್ತಿದೆ. ಜನರು ಸಣ್ಣ ವಿಷ್ಯಕ್ಕೆ ದೂರ ಆಗ್ತಿದ್ದಾರೆ. ಮದುವೆಯಾಗಿ ತಿಂಗಳಿಗೆ ಬೇರೆಯಾಗ್ತಿರುವ ಜೋಡಿ ನೋಡಿದ ಲಾಯರ್&zwnj;, ಮದುವೆಯಾಗುವ ಹುಡುಗಿಯರಿಗೆ ಕಿವಿ ಮಾತು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1x6wnnm63zch9a1f09mj6jy,imgname-marriage-secrets-1788760446644.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ಬರೀ ಇಬ್ಬರ ನಡುವೆ ನಡೆಯೋದಲ್ಲ. ಎರಡು ಕುಟುಂಬಗಳನ್ನು ಒಂದು ಮಾಡುವಂತಹದ್ದು. ಎರಡು ವಿಭಿನ್ನ ವ್ಯಕ್ತಿತ್ವಗಳು ಮತ್ತು ಎರಡು ಜೀವನಶೈಲಿಗಳು ಒಂದಾಗುವ ನಿರ್ಧಾರ. ಹೀಗಾಗಿ ಮದುವೆಗಾಗಿ ಹುಡುಗನನ್ನು ಆಯ್ಕೆ ಮಾಡುವಾಗ ಸಾಮಾನ್ಯವಾಗಿ ಉದ್ಯೋಗ, ಸಂಬಳ, ಕುಟುಂಬದ ಹಿನ್ನೆಲೆ, ಆಸ್ತಿ-ಪಾಸ್ತಿ ಹೀಗೆ ಹಲವು ವಿಷಯಗಳನ್ನು ನೋಡಲಾಗುತ್ತದೆ. ಆದರೆ ಇವೆಲ್ಲಕ್ಕಿಂತಲೂ ಮುಖ್ಯವಾದ ಕೆಲವು ಗುಣಗಳು ವ್ಯಕ್ತಿಯಲ್ಲಿರಬೇಕು ಎನ್ನುತ್ತಾರೆ ಡಿವೋರ್ಸ್&zwnj; ಲಾಯರ್.&lt;/p&gt;&lt;h2&gt;ಮದುವೆಯಾಗೋ ಮುನ್ನ ಏನು ನೋಡ್ಬೇಕು?&lt;/h2&gt;&lt;p&gt;ಮದುವೆಗೂ ಮುನ್ನ ಹುಡುಗನ ಬಗ್ಗೆ ಎರಡು ಪ್ರಮುಖ ವಿಷಯಗಳನ್ನು ಗಮನಿಸಬೇಕು ಎನ್ನುತ್ತಾರೆ ಲಾಯರ್. ಮದುವೆಯಾಗಲಿರುವ ವ್ಯಕ್ತಿ ನಿಮ್ಮನ್ನು ಎಷ್ಟು ಗೌರವಿಸುತ್ತಾನೆ ಎಂಬುದು ಬಹಳ ಮುಖ್ಯ. ನಿಮ್ಮ ಮಾತಿಗೆ ಬೆಲೆ ಕೊಡುತ್ತಾನೆಯೇ, ನೀವು ಮಾತನಾಡುವಾಗ ಗಮನವಿಟ್ಟು ಕೇಳುತ್ತಾನೆಯೇ, ನಿಮ್ಮ ಅಭಿಪ್ರಾಯ ತನ್ನ ಅಭಿಪ್ರಾಯಕ್ಕಿಂತ ಭಿನ್ನವಾಗಿದ್ದರೂ ಅದನ್ನು ಗೌರವಿಸುತ್ತಾನೆಯೇ ಎಂಬುದನ್ನು ಗಮನಿಸಬೇಕು.&lt;/p&gt;&lt;p&gt;ಕೇವಲ ಪ್ರೀತಿಯ ಮಾತುಗಳು ಅಥವಾ ದುಬಾರಿ ಉಡುಗೊರೆಗಳಿಂದ ಒಳ್ಳೆಯ ಜೀವನ ಸಂಗಾತಿಯನ್ನು ಗುರುತಿಸಲು ಸಾಧ್ಯವಿಲ್ಲ. ನಿಮ್ಮೊಂದಿಗೆ ಸಮಯ ಕಳೆಯಲು ಆತ ನಿಜವಾಗಿಯೂ ಆಸಕ್ತಿ ತೋರಿಸುತ್ತಾನೆಯೇ, ನಿಮ್ಮ ಸಂತೋಷ ಮತ್ತು ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆಯೇ ಎಂಬುದನ್ನು ನೋಡಬೇಕು.&lt;/p&gt;&lt;p&gt;ನಿಮ್ಮ ಕುಟುಂಬ, ನಿಮ್ಮ ಬೆಳೆದು ಬಂದ ರೀತಿ ಮತ್ತು ನಿಮ್ಮ ವೈಯಕ್ತಿಕ ಇಷ್ಟ-ಕಷ್ಟಗಳನ್ನು ಗೌರವಿಸುವ ಮನಸ್ಸು ಆತನಲ್ಲಿದೆಯೇ ಎಂಬುದೂ ಮುಖ್ಯ. ನಿಮ್ಮನ್ನು ತನ್ನ ಇಷ್ಟಕ್ಕೆ ತಕ್ಕಂತೆ ಬದಲಾಯಿಸಲು ಪ್ರಯತ್ನಿಸುವ ವ್ಯಕ್ತಿಗಿಂತ, ನಿಮ್ಮ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಸ್ವೀಕರಿಸುವ ವ್ಯಕ್ತಿಯೊಂದಿಗೆ ದಾಂಪತ್ಯ ಜೀವನ ಹೆಚ್ಚು ಸುಗಮವಾಗಿರಬಹುದು.&lt;/p&gt;&lt;h3&gt;ಕೋಪ ಬಂದಾಗ ವರ್ತನೆ ಹೇಗಿರುತ್ತೆ?&lt;/h3&gt;&lt;p&gt;ಮದುವೆಗೂ ಮುನ್ನ ಎಲ್ಲರೂ ತಮ್ಮ ಉತ್ತಮ ಮುಖವನ್ನು ತೋರಿಸುತ್ತಾರೆ. ಆದರೆ ಒಬ್ಬ ವ್ಯಕ್ತಿಯ ನಿಜವಾದ ಸ್ವಭಾವ ಕೋಪ, ಒತ್ತಡ ಮತ್ತು ಸಮಸ್ಯೆಯ ಸಮಯದಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗಾಗಿ ಹುಡುಗನಿಗೆ ಕೋಪ ಬಂದಾಗ ಆತ ಹೇಗೆ ವರ್ತಿಸುತ್ತಾನೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ಸಣ್ಣ ವಿಷಯಕ್ಕೂ ಕೂಗುತ್ತಾನೆಯೇ, ಎದುರಿನವರನ್ನು ಅವಮಾನಿಸುತ್ತಾನೆಯೇ, ತನ್ನ ಕೋಪಕ್ಕೆ ಇತರರನ್ನು ಹೊಣೆ ಮಾಡುತ್ತಾನೆಯೇ ಅಥವಾ ಸ್ವಲ್ಪ ಸಮಯ ತೆಗೆದುಕೊಂಡು ಶಾಂತವಾಗಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾನೆಯೇ ಎಂಬುದನ್ನು ಗಮನಿಸಬೇಕು.&lt;/p&gt;&lt;p&gt;ಹೊರಗಿನ ಕೆಲಸದ ಒತ್ತಡ ಅಥವಾ ಬೇರೆ ಸಮಸ್ಯೆಗಳ ಕೋಪವನ್ನು ಪ್ರತಿದಿನ ಮನೆಗೆ ಬಂದು ಸಂಗಾತಿಯ ಮೇಲೆ ತೋರಿಸುವುದು ಆರೋಗ್ಯಕರ ಸಂಬಂಧದ ಲಕ್ಷಣವಲ್ಲ. ದಾಂಪತ್ಯದಲ್ಲಿ ಸಮಸ್ಯೆಗಳು ಬಂದಾಗ ಇಬ್ಬರೂ ಪರಸ್ಪರ ಕೇಳಿಕೊಂಡು, ಮಾತನಾಡಿಕೊಂಡು ಪರಿಹಾರ ಹುಡುಕುವ ಮನೋಭಾವ ಹೊಂದಿರುವುದು ಅಗತ್ಯ.&lt;/p&gt;&lt;p&gt;&lt;strong&gt;ಸಣ್ಣ ಸ್ವಭಾವವೇ ಮುಖ್ಯ&lt;/strong&gt;&lt;/p&gt;&lt;p&gt;ಒಬ್ಬ ವ್ಯಕ್ತಿ ತನ್ನ ಬಗ್ಗೆ ಹೇಳಿಕೊಳ್ಳುವ ಮಾತುಗಳಿಗಿಂತ ಆತ ಇತರರೊಂದಿಗೆ ಹೇಗೆ ವರ್ತಿಸುತ್ತಾನೆ ಎಂಬುದು ಹೆಚ್ಚು ಹೇಳುತ್ತದೆ. ಉದಾಹರಣೆಗೆ, ಹೋಟೆಲ್ನಲ್ಲಿ ವೇಟರ್ ಜೊತೆ ಹೇಗೆ ಮಾತನಾಡುತ್ತಾನೆ, ಡ್ರೈವರ್ ಅಥವಾ ಕೆಲಸ ಮಾಡುವ ವ್ಯಕ್ತಿಯನ್ನು ಗೌರವದಿಂದ ನೋಡುತ್ತಾನೆ, ಸಣ್ಣ ತಪ್ಪಾದಾಗ ತಕ್ಷಣ ಕೋಪಗೊಳ್ಳುತ್ತಾನೆಯೇ, ತನ್ನಿಂದ ತಪ್ಪಾದರೆ ಕ್ಷಮೆ ಕೇಳಲು ಸಿದ್ಧನಿದ್ದಾನೆಯೇ, ಇಂಥ ಸಾಮಾನ್ಯ ಸಂದರ್ಭಗಳಲ್ಲಿ ಆತನ ವರ್ತನೆಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಮದುವೆಯ ಆರಂಭದಲ್ಲಿ ಕಾಣಿಸುವ ಸಣ್ಣ ವರ್ತನೆಗಳೇ ಮುಂದೆ ದಾಂಪತ್ಯ ಜೀವನದಲ್ಲಿ ದೊಡ್ಡ ಸಮಸ್ಯೆಗಳಾಗಬಹುದು.&lt;/p&gt;&lt;p&gt;&lt;strong&gt;ಆತುರ ಬೇಡ&lt;/strong&gt;&lt;/p&gt;&lt;p&gt;ಮೊದಲ ಭೇಟಿಯಲ್ಲೇ ಒಬ್ಬ ವ್ಯಕ್ತಿಯ ಸಂಪೂರ್ಣ ಸ್ವಭಾವ ತಿಳಿದುಕೊಳ್ಳುವುದು ಕಷ್ಟ. ಚೆನ್ನಾಗಿ ಮಾತನಾಡುವುದು, ಒಳ್ಳೆಯ ಕೆಲಸ ಮಾಡುವುದು ಅಥವಾ ಆಕರ್ಷಕ ವ್ಯಕ್ತಿತ್ವ ಹೊಂದಿರುವುದು ಮಾತ್ರ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಸಾಕಾಗುವುದಿಲ್ಲ. ಮದುವೆಗೂ ಮುನ್ನ ವಿವಿಧ ಸಂದರ್ಭಗಳಲ್ಲಿ ಆ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಸಣ್ಣ ಭಿನ್ನಾಭಿಪ್ರಾಯ ಬಂದಾಗ ಹೇಗೆ ಪ್ರತಿಕ್ರಿಯಿಸುತ್ತಾನೆ, ನಿರ್ಧಾರವನ್ನು ಹೇಗೆ ಗೌರವಿಸುತ್ತಾನೆ ಎಲ್ಲವನ್ನೂ ಅರಿಯಬೇಕು. ವಿಶೇಷವಾಗಿ ಮದುವೆಯಂತಹ ದೊಡ್ಡ ನಿರ್ಧಾರದಲ್ಲಿ, ಕುಟುಂಬದ ಒತ್ತಡ ಅಥವಾ ವಯಸ್ಸಿನ ಕಾರಣಕ್ಕೆ ಆತುರಪಡದೆ ವ್ಯಕ್ತಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಒಳ್ಳೆಯದು.&lt;/p&gt;&lt;p&gt;ಮದುವೆ ಯಶಸ್ವಿಯಾಗಲು ಕೇವಲ ಪ್ರೀತಿ ಇದ್ದರೆ ಸಾಕಾಗುವುದಿಲ್ಲ. ಗೌರವ, ನಂಬಿಕೆ, ಸಂವಹನ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವ ಗುಣವೂ ಬೇಕಾಗುತ್ತದೆ. ಜೀವನದಲ್ಲಿ ಸಂತೋಷದ ದಿನಗಳು ಮಾತ್ರ ಇರುವುದಿಲ್ಲ. ಕಷ್ಟ, ಹಣಕಾಸಿನ ಸಮಸ್ಯೆ, ಕುಟುಂಬದ ವಿಚಾರ, ಆರೋಗ್ಯದ ಸಮಸ್ಯೆ ಅಥವಾ ಬೇರೆ ಒತ್ತಡಗಳು ಎದುರಾಗಬಹುದು. ಅಂತಹ ಸಂದರ್ಭಗಳಲ್ಲಿ ಸಂಗಾತಿ ಹೇಗೆ ವರ್ತಿಸುತ್ತಾನೆ ಎಂಬುದೇ ದಾಂಪತ್ಯದ ನಿಜವಾದ ಪರೀಕ್ಷೆ.&lt;/p&gt;]]></content:encoded>
            <category>relationship</category>
            <dc:creator>Roopa Hegde</dc:creator>
            <atom:link href="https://kannada.asianetnews.com/relationship/what-to-look-for-in-husband-before-marriage-divorce-lawyer-tips/articleshow-57xxweg"/>
        </item>
        <item>
            <title><![CDATA[ಬರ್ತಿದೆ Bhagyalakshmi ಪಾರ್ಟ್​-2! Bigg Boss ಮನೆಯಲ್ಲಿ ತಾಂಡವ್​, ಶ್ರೇಷ್ಠಾ ಜೊತೆ ಭಾಗ್ಯನೂ ಎಂಟ್ರಿ?]]></title>
            <link>https://kannada.asianetnews.com/gallery/tv-talk/bhagyalakshmi-serial-part-2-is-coming-bigg-boss-13-wit-tandav-shreshta-bhagya-may-enters-show-suc-5unnnsc</link>
            <guid isPermaLink="true">https://kannada.asianetnews.com/gallery/tv-talk/bhagyalakshmi-serial-part-2-is-coming-bigg-boss-13-wit-tandav-shreshta-bhagya-may-enters-show-suc-5unnnsc</guid>
            <pubDate>Sun, 06 Sep 2026 16:08:23 +0530</pubDate>
            <description><![CDATA[&lt;p&gt;ಬಿಗ್&zwnj;ಬಾಸ್ 13ಗೆ ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ತಾಂಡವ್ (ಸುದರ್ಶನ್) ಮತ್ತು ಶ್ರೇಷ್ಠಾ (ಕಾವ್ಯಾ) ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಾಂಡವ್ ಅವರ ನಿಜವಾದ ಪತ್ನಿ ಸಂಗೀತಾ ಜೊತೆಗೆ, ಭಾಗ್ಯ (ಸುಷ್ಮಾ) ಕೂಡ ಸ್ಪರ್ಧಿಸುವ ಸಾಧ್ಯತೆಯಿದ್ದು, 'ಭಾಗ್ಯಲಕ್ಷ್ಮಿ ಪಾರ್ಟ್-2' ಮಾಡುವ ನಿರೀಕ್ಷೆ ಹುಟ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v4k2fpvbn8jh6h2hmq4zzy,imgname-bigg-boss-13-1788690926070.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ 13ಗೆ ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ತಾಂಡವ್ (ಸುದರ್ಶನ್) ಮತ್ತು ಶ್ರೇಷ್ಠಾ (ಕಾವ್ಯಾ) ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಾಂಡವ್ ಅವರ ನಿಜವಾದ ಪತ್ನಿ ಸಂಗೀತಾ ಜೊತೆಗೆ, ಭಾಗ್ಯ (ಸುಷ್ಮಾ) ಕೂಡ ಸ್ಪರ್ಧಿಸುವ ಸಾಧ್ಯತೆಯಿದ್ದು, 'ಭಾಗ್ಯಲಕ್ಷ್ಮಿ ಪಾರ್ಟ್-2' ಮಾಡುವ ನಿರೀಕ್ಷೆ ಹುಟ್ಟಿಸಿದೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​ 13 (Bigg Boss Kannada 13) ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಇಂದೇ ಷೋ ಆರಂಭವಾಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ಕೆಲವು ಸ್ಪರ್ಧಿಗಳನ್ನು ರಿವೀಲ್​ ಮಾಡಲಾಗಿದೆ. ಅದರಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ತಾಂಡವ್​ ಉರ್ಫ್​ ಸುದರ್ಶನ್​ ರಂಗನಾಥ್​ ಹಾಗೂ ಶ್ರೇಷ್ಠಾ ಉರ್ಫ್​ ಕಾವ್ಯಾ ಗೌಡ ಎಂಟ್ರಿಯಾಗಿದೆ. ಕುತೂಹಲ ಎಂದರೆ, ಈ ಬಾರಿಯ ಸೀಸನ್​ನಲ್ಲಿ ಭಾಗ್ಯಲಕ್ಷ್ಮಿ ಅರ್ಥಾತ್​ ನಟಿ ಸುಷ್ಮಾ ಕೆ.ರಾವ್​ ಕೂಡ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಇದೆ.&lt;/p&gt;&lt;img&gt;&lt;p&gt;ಈ ಹಿನ್ನೆಲೆಯಲ್ಲಿ ಈ ಬಾರಿಯ ಬಿಗ್​ಬಾಸ್​ ಭಾಗ್ಯಲಕ್ಷ್ಮಿ ಪಾರ್ಟ್​-2 (Bhagyalakshmi Part-2) ಆಗುವ ಸಾಧ್ಯತೆ ಇದೆ ಎಂದೇ ನೆಟ್ಟಿಗರು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. ಹೀಗೆ ಆದರೆ ಬಿಗ್​ಬಾಸ್ ಸಕತ್​ ಇಂಟರೆಸ್ಟಿಂಗ್​ ಆಗಲಿದೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ ಕುತೂಹಲದ ವಿಷ್ಯ ಏನಪ್ಪಾ ಎಂದರೆ ತಾಂಡವ್​ ಅರ್ಥಾತ್​ ಸುದರ್ಶನ್​ ರಂಗಪ್ರಸಾದ್​ ಅವರ ರಿಯಲ್​ ಪತ್ನಿ, ಸಂಗೀತಾ ಕೂಡ ಬಿಗ್​ಬಾಸ್​​ಗೆ ಇದಾಗಲೇ ಎಂಟ್ರಿಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಇವರಿಬ್ಬರನ್ನೂ ನೋಡಿದ ಸುದರ್ಶನ್​ ಅವರು ಹೌಹಾರಿದ್ದು, ಇಬ್ಬರೂ ಜಗಳ ಮಾಡಿಕೊಂಡರೆ ನಾನು ಏನು ಮಾಡಿಕೊಳ್ಳಲಪ್ಪ ಎಂದು ಹೇಳಿರುವ ಪ್ರೊಮೋ ಅನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿಕೊಂಡಿದೆ.&lt;/p&gt;&lt;img&gt;&lt;p&gt;ಇದೀಗ ಇವರಿಬ್ಬರ ನಡುವೆ, ಭಾಗ್ಯಳ ಎಂಟ್ರಿನೂ ಆಗಿಬಿಟ್ಟರೆ, ಭಾಗ್ಯಲಕ್ಷ್ಮಿ ಸೀರಿಯಲ್​ ಮುಗಿಯಿತು ಎಂದು ಬೇಸರ ಪಟ್ಟುಕೊಳ್ಳುತ್ತಿರುವವರಿಗೆ ಸಕತ್​ ಖುಷಿ ಕೊಡುವ ಸುದ್ದಿ ಆಗಲಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bhagyalakshmi-serial-part-2-is-coming-bigg-boss-13-wit-tandav-shreshta-bhagya-may-enters-show-suc-5unnnsc"/>
        </item>
        <item>
            <title><![CDATA[ಲವ್​ ಬ್ರೇಕಪ್​, ಮದುವೆ, ಡಿಪ್ರೆಷನ್​, ಮೋಸ: Lakshmi Nivasa ನಟಿ ಅನಿಕಾ ಸಿಂಧ್ಯಾ ಓಪನ್​ ಮಾತು]]></title>
            <link>https://kannada.asianetnews.com/gallery/entertainment/real-life-love-breakup-depression-cheating-lakshmi-nivasa-actress-anika-sindhya-suc-7vnco2r</link>
            <guid isPermaLink="true">https://kannada.asianetnews.com/gallery/entertainment/real-life-love-breakup-depression-cheating-lakshmi-nivasa-actress-anika-sindhya-suc-7vnco2r</guid>
            <pubDate>Mon, 07 Sep 2026 19:29:05 +0530</pubDate>
            <description><![CDATA[&lt;p&gt;'ಲಕ್ಷ್ಮೀ ನಿವಾಸ' ಖ್ಯಾತಿಯ ನಟಿ ಅನಿಕಾ ಸಿಂಧ್ಯ ಅವರು ತಮ್ಮ ಪ್ರೀತಿಯಲ್ಲಿನ ಮೋಸ ಮತ್ತು ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರೀತಿಸಿದ ವ್ಯಕ್ತಿಗಿಂತ, ಆತನಿಗಾಗಿ ವ್ಯರ್ಥ ಮಾಡಿದ ಸಮಯದ ಬಗ್ಗೆ ಹೆಚ್ಚು ಪಶ್ಚಾತ್ತಾಪವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y29t9nfked1wree9bmsem6,imgname-anikha-sindya-1788789188917.jpg" type="image/jpeg" height="390" width="690"/>
            <content:encoded><![CDATA[&lt;p&gt;'ಲಕ್ಷ್ಮೀ ನಿವಾಸ' ಖ್ಯಾತಿಯ ನಟಿ ಅನಿಕಾ ಸಿಂಧ್ಯ ಅವರು ತಮ್ಮ ಪ್ರೀತಿಯಲ್ಲಿನ ಮೋಸ ಮತ್ತು ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರೀತಿಸಿದ ವ್ಯಕ್ತಿಗಿಂತ, ಆತನಿಗಾಗಿ ವ್ಯರ್ಥ ಮಾಡಿದ ಸಮಯದ ಬಗ್ಗೆ ಹೆಚ್ಚು ಪಶ್ಚಾತ್ತಾಪವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಲಕ್ಷ್ಮೀ ಬಾರಮ್ಮ ಸೇರಿದಂತೆ 50ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟಿಸಿ, ಸುಮಾರು ಎಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರೊ ನಟಿ ಅನಿಕಾ ಸಿಂಧ್ಯ. ಯಾಹೂ, ಜೊತೆಜೊತೆಯಲಿ, ನೆನಪಿರಲಿ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ್ದರೂ, ನನ್ನಂಥವಳಿಗೆ ಸಿನಿಮಾ ಇಂಡಸ್ಟ್ರಿ ಉಸಾಬರಿಯೇ ಬೇಡ ಎಂದುಕೊಂಡು ಸಿನಿಮಾದಿಂದ ಹೊರಕ್ಕೆ ಬಂದು ಸೀರಿಯಲ್​ಗಳಲ್ಲಿಯೇ ಮಿಂಚುತ್ತಿರುವ ಅನಿಕಾ ಅವರು ಸೀರಿಯಲ್​ ಪ್ರೇಮಿಗಳ ಫೆವರೆಟ್​ ವಿಲನ್​ ಕೂಡ ಹೌದು. ಸದ್ಯ ಅವರು ಲಕ್ಷ್ಮೀ ನಿವಾಸದಲ್ಲಿ (Lakshmi Nivasa Serial) ನೀಲು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಈಗ ನಟಿಸಿರುವ ಹಲವಾರು ಸೀರಿಯಲ್​ಗಳಲ್ಲಿ ಇವರದ್ದು ನೆಗೆಟಿವ್​ ರೋಲ್​ಗಳೇ. ಒಂದು ನೆಗೆಟಿವ್​ ರೋಲ್​ ಹಿಟ್​ ಆಯಿತು ಎಂದಾಕ್ಷಣ ಸಹಜವಾಗಿ ಅದೇ ರೋಲ್​ಗಳು ನಟ-ನಟಿಯರನ್ನು ಹುಡುಕಿ ಬರುವುದು ಇದೆ. ಅವರಿಗೆ ಇಷ್ಟ ಇರಲಿ, ಇಲ್ಲದೇ ಇರಲಿ, ಇಂಥ ರೋಲ್​ ಮಾಡುವುದು ಅನಿವಾರ್ಯ ಎನ್ನುವ ಸನ್ನಿವೇಶವೂ ಎದುರಾಗಿಬಿಡುತ್ತದೆ. ಅಂಥವರಲ್ಲಿ ಒಬ್ಬರು ಅನಿಕಾ.&lt;/p&gt;&lt;img&gt;&lt;p&gt;ಇದೀಗ ನಟಿ, ತಮ್ಮ ಲವ್​ ಫೇಲ್ಯೂರ್​ ಮತ್ತು ಡಿಪ್ರೆಷನ್​ ಬಗ್ಗೆ ಮಾತನಾಡಿದ್ದಾರೆ. SumanTv Kannada Entertainmentಗೆ ನೀಡಿರುವ ಸಂದರ್ಶನದಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ. ನಾನು ಪ್ರೀತಿಯಲ್ಲಿ ಮೋಸ ಹೋದೆ. ಆದರೆ ಆ ಹುಡುಗನನ್ನು ಕಳೆದುಕೊಂಡೆ ಅಂತ ಡಿಪ್ರೆಷನ್​ಗೆ ನಾನು ಹೋಗಲಿಲ್ಲ. ಆದರೆ ನನ್ನ ಜೀವನದ ಅಮೂಲ್ಯ ವರ್ಷಗಳನ್ನು ಆತನಿಗಾಗಿ ಕಳೆದುಬಿಟ್ಟೆನಲ್ಲ ಎಂದು ಒಂದು ರೀತಿ ಡಿಪ್ರೆಷನ್​ ಆಯ್ತು. ಅದನ್ನು ಖಿನ್ನತೆ ಎನ್ನಲು ಆಗದು. ನನ್ನನ್ನು ನಾನು ಹೀಲ್​ ಮಾಡಿಕೊಳ್ಳಲು ಕೊಟ್ಟಿರುವ ಟೈಮ್​ ಅದು ಎಂದಿದ್ದಾರೆ ನಟಿ ಅನಿಕಾ.&lt;/p&gt;&lt;img&gt;&lt;p&gt;ನಾನು ಅರ್ಜೆಂಟ್​ನಲ್ಲಿ ಯಾಕೆ ಟೈಂ ವೇಸ್ಟ್​ ಮಾಡಿಕೊಂಡೆ. ಆ ಬಾವಿಯೊಳಗೆ ತರಾತುರಿಯಲ್ಲಿ ಯಾಕೆ ಬಿದ್ದೆ, ಈಗಿರುವ ಮೈಂಡ್​ಸೆಟ್​, ಕೂಲ್​ ಆಗಿ ಯೋಚನೆ ಮಾಡುವುದು ಯಾಕೆ ಆ ಟೈಮ್​ನಲ್ಲಿ ನನಗೆ ಬರಲಿಲ್ಲ ಎನ್ನುವ ಬಗ್ಗೆ ನೋವಾಗ್ತಿದೆ. ಇದರಿಂದ ನನಗೆ ರಿಗ್ರೇಟ್​ ಇದೆಯೇ ವಿನಾ ಆ ವ್ಯಕ್ತಿ ಹೋದ ಎನ್ನುವ ಬಗ್ಗೆ ಬೇಸರ ಇಲ್ಲ ಎಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಪಾರ್ಟನರ್​ಗಳಿಗೆ ಬ್ರಾಡ್​ ಮೈಂಡೆಡ್​ ಮುಖ್ಯ. ಅವರಿಗೆ ಅದೇ ರೀತಿಯ ಮೆಂಟ್ಯಾಲಿಟಿ ಇರಬೇಕು. ಇಲ್ಲದಿದ್ದರೆ ಜೀವನ ತುಂಬಾ ಕಷ್ಟ ಎಂದಿದ್ದಾರೆ ನಟಿ. ಪತ್ನಿ ಆ್ಯಕ್ಟ್​ ಮಾಡಿದರೆ ಓಕೆ ಅನ್ನಬೇಕು, ಸಪೋರ್ಟ್​ ಮಾಡಬೇಕು. ಇಲ್ಲದಿದ್ದರೆ, ನಟಿಯಾದವಳು ನನಗೆ ಆ್ಯಕ್ಟಿಂಗ್​ ಬೇಡ, ಗೃಹಿಣಿಯಾಗಿ ಇರ್ತೇನೆ ಎಂದು ಒಪ್ಪಿಕೊಳ್ಳಬೇಕು. ಹೀಗೆ ಇಬ್ಬರ ಮನಸ್ಥಿತಿ ಇದ್ದರಷ್ಟೇ ಲೈಫ್​ ಸಕ್ಸಸ್​ ಆಗುತ್ತದೆ ಎಂದಿದ್ದಾರೆ ಅನಿಕಾ.&lt;/p&gt;&lt;img&gt;&lt;p&gt;ಇನ್ನು ನಟಿಯ ಕುರಿತು ಹೇಳುವುದಾದರೆ, ಕಾದಂಬರಿ ಸೀಡಿಯಲ್​ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ, ಹೆಚ್ಚಾಗಿ ಕಾಣಿಸಿಕೊಂಡದ್ದು ನೆಗೆಟಿವ್ ಪಾತ್ರಗಳಲ್ಲಿ. ಡಾಕ್ಟರ್ ಆಗಬೇಕೆಂದುಕೊಂಡಿದ್ದ ಅನಿಕಾ ಅವರಿಗೆ ಬಣ್ಣದ ಲೋಕ ಒಲಿದಿದ್ದೂ ಅಚಾನಕ್​ ಆಗಿಯೇ. ಖಳನಾಯಕಿಯಾಗಿಯೇ ಗುರುತಿಸಿಕೊಂಡಿರುವ ಅನಿಕಾ ತಾವು ಯಾವ ರೋಲ್​ಗೂ ಇದುವರೆಗೆ ಆಡಿಶನ್ ಕೊಟ್ಟಿಲ್ಲ ಎಂದು ಈ ಹಿಂದೆ ಹೇಳಿದ್ದರು. ಮೊದಲೆಲ್ಲಾ ಡೈಲಾಗ್ ಡೆಲಿವರಿ ಬಗ್ಗೆ ನಿರ್ದೇಶಕರು ಗಮನ ಕೊಡುತ್ತಿದ್ದರು. ಈಗ ಆಡಿಷನ್​ ಹೆಚ್ಚಾಗಿ ಮಾಡ್ತಾರೆ ಜೊತೆಗೆ ಲುಕ್ ಟೆಸ್ಟಿಗೆ ಪ್ರಾಮುಖ್ಯತೆ ಇದೆ. ಆದರೆ ನಾನು ಶುರು ಮಾಡಿದಾಗ ಹೀಗೆಲ್ಲಾ ಇರಲಿಲ್ಲ ಎಂದು ನಟಿ ಹೇಳಿದ್ದಾರೆ. ಆಕಾಶದೀಪ, ಗುಪ್ತಗಾಮಿನಿ, ಕುಂಕುಮಭಾಗ್ಯ, ಕಂಕಣ, ನನ್ನವಳು, ಆಕಾಶದೀಪ, ಸುಕನ್ಯಾ, ಮನೆಮಗಳು, ಶುಭಮಂಗಳ, ಮಂದಾರ, ಸೂರ್ಯಕಾಂತಿ, ಲಕ್ಷ್ಮಿ ಬಾರಮ್ಮ ಹೀಗೆ ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಲಕ್ಷ್ಮಿ ಬಾರಮ್ಮ ಸೀರಿಯಲ್​ನಲ್ಲಿ ವಿಲನ್​ ಕುಮುದಾ ರೋಲ್​ ಸಕತ್​ ಹೆಸರು ತಂದುಕೊಟ್ಟಿತು.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/real-life-love-breakup-depression-cheating-lakshmi-nivasa-actress-anika-sindhya-suc-7vnco2r"/>
        </item>
        <item>
            <title><![CDATA[Bigg Boss 13: 'ಭಾಗ್ಯಲಕ್ಷ್ಮಿ' ತಾಂಡವ್​ಗಾಗಿ ರಿಯಲ್​ ಮತ್ತು ರೀಲ್​ ಹೆಂಡ್ತೀರ ನಡುವೆ ಶುರುವಾಗೇ ಬಿಟ್ಟಿತು ಸಮರ]]></title>
            <link>https://kannada.asianetnews.com/gallery/tv-talk/bigg-boss-13-the-battle-between-the-real-and-reel-wives-of-bhagya-lakshmi-tandav-suc-9v7imfh</link>
            <guid isPermaLink="true">https://kannada.asianetnews.com/gallery/tv-talk/bigg-boss-13-the-battle-between-the-real-and-reel-wives-of-bhagya-lakshmi-tandav-suc-9v7imfh</guid>
            <pubDate>Mon, 07 Sep 2026 20:03:37 +0530</pubDate>
            <description><![CDATA[&lt;p&gt;'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ತಾಂಡವ್ ಪಾತ್ರಧಾರಿ ಸುದರ್ಶನ್, ಅವರ ರಿಯಲ್ ಪತ್ನಿ ಸಂಗೀತಾ ಮತ್ತು ರೀಲ್ ಪತ್ನಿ ಕಾವ್ಯಾ ಗೌಡ ಬಿಗ್&zwnj;ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ 'ತಾಂಡವ್ ಯಾರ ಗಂಡ' ಎಂಬ ವಿಷಯವಾಗಿ ಇಬ್ಬರು ಪತ್ನಿಯರ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y4f5w5fvpk1207ywrhw5rq,imgname-bigg-boss-13-1788791461765.jpg" type="image/jpeg" height="390" width="690"/>
            <content:encoded><![CDATA[&lt;p&gt;'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ತಾಂಡವ್ ಪಾತ್ರಧಾರಿ ಸುದರ್ಶನ್, ಅವರ ರಿಯಲ್ ಪತ್ನಿ ಸಂಗೀತಾ ಮತ್ತು ರೀಲ್ ಪತ್ನಿ ಕಾವ್ಯಾ ಗೌಡ ಬಿಗ್&zwnj;ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ 'ತಾಂಡವ್ ಯಾರ ಗಂಡ' ಎಂಬ ವಿಷಯವಾಗಿ ಇಬ್ಬರು ಪತ್ನಿಯರ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ನಡೆದಿದೆ.&lt;/p&gt;&lt;img&gt;&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ತಾಂಡವ್​ನ ರೀಲ್​ ಹೆಂಡ್ತಿ ಶ್ರೇಷ್ಠಾ ಉರ್ಫ್​ ಕಾವ್ಯಾ ಗೌಡ ಮತ್ತು ರಿಯಲ್​ ಹೆಂಡ್ತಿ ಸಂಗೀತಾ ಇಬ್ಬರನ್ನೂ ಬಿಗ್​ಬಾಸ್​ಗೆ ಕರೆಸಲಾಗಿದ್ದು, ಇವರ ನಡುವೆ ಮಾತಿನ ಸಮರ ಶುರುವಾಗಿಬಿಟ್ಟಿದೆ!&lt;/p&gt;&lt;img&gt;&lt;p&gt;ತಾಂಡವ್​ ಪಾತ್ರಧಾರಿ ಉರ್ಫ್​ ಸುದರ್ಶನ್​ ರಂಗಪ್ರಸಾದ್​ ಅವರು ಮೊದಲ ದಿನ ಇಬ್ಬರೂ ಈ ಷೋನಲ್ಲಿ ಇರೋದನ್ನು ನೋಡಿ, ಅಯ್ಯಯ್ಯೋ ಇಬ್ಬರೂ ಕಚ್ಚಾಡಿಕೊಂಡರೆ ಏನು ಮಾಡೋದು ಎಂದು ಪ್ರಶ್ನೆ ಮಾಡಿದ್ದರು. ಇದೀಗ ಇಲ್ಲಿ ರಿಯಲ್​ ಆಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಆಗಿದ್ದೇನೆಂದರೆ, ಕಾವ್ಯಾ ಗೌಡ ಅವರು, ಸುದರ್ಶನ್​ ನನ್ನ ಫ್ರೆಂಡ್​ ಅಷ್ಟೇ. ತಾಂಡವ್​ ಮೊದಲು ನನಗೆ ಫ್ರೆಂಡ್​ ಆಗಿದ್ರು, ಆಮೇಲೆ ಲವ್​ ಆಯ್ತು, ಆಮೇಲೆ ಮದುವೆಯಾದೆ. ಈಗ ಸುದರ್ಶನ್​ ನನ್ನ ಫ್ರೆಂಡ್​ ಅಷ್ಟೇ ಎಂದಿದ್ದಾರೆ.&lt;/p&gt;&lt;img&gt;&lt;p&gt;ಆದರೆ ಅಲ್ಲಿದ್ದವರು ಎಲ್ಲರೂ ಇಬ್ಬರ ಕಾಲೆಳೆದಿದ್ದಾರೆ. ಸಂಗೀತಾ ಅವರು, ಸುದರ್ಶನ್​ ಈಗ ನನ್ನ ರಿಯಲ್​ ಗಂಡ ಎಂದಿದ್ದರೆ, ಅಲ್ಲಿರುವ ಸ್ಪರ್ಧಿಗಳು, ಇಬ್ಬರಲ್ಲಿ ಅವರು ಯಾರ ಗಂಡ ಎನ್ನೋದನ್ನು ಮೊದಲು ಸರಿಯಾಗಿ ಕನ್​ಫರ್ಮ್​ ಮಾಡಿಕೊಳ್ಳಿ ಎಂದರು.&lt;/p&gt;&lt;img&gt;&lt;p&gt;ಹಾಸ್ಯದ ರೂಪದಲ್ಲಿ ಈ ಸಂಭಾಷಣೆ ನಡೆದಿದೆ. ಕಾವ್ಯಾ ಅವರು, ಸುದರ್ಶನ್​ ಅಲ್ಲಿ ನನ್ನ ಗಂಡ ಆಗಿದ್ರು, ಈಗ ನನ್ನ ಗಂಡ ಅಲ್ಲ ಅಂತಿದ್ರೆ, ಸಂಗೀತಾ ಅವರು ಈಗ ನನ್ನ ಗಂಡ ಎಂದಿದ್ದಾರೆ. ಅಲ್ಲಿದ್ದೋರು ಅವರು ಯಾರ ಗಂಡನಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಈ ಸಂಭಾಷಣೆ ಹಾಸ್ಯದ ರೂಪದಲ್ಲಿ ನಡೆದಿದ್ದು, ಮುಂದೆ ಹೋಗುತ್ತಾ ಯಾರ ನಡುವೆ ದ್ವೇಷ ಹುಟ್ಟುತ್ತದೆ, ರಿಯಲ್​ ಆಗಿ ಯಾರು ಕಿತ್ತಾಟ ಮಾಡುತ್ತಾರೆ ಎಂದು ನೋಡಬೇಕಿದೆಯಷ್ಟೇ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-13-the-battle-between-the-real-and-reel-wives-of-bhagya-lakshmi-tandav-suc-9v7imfh"/>
        </item>
        <item>
            <title><![CDATA[ಕಳ್ಳತನ ಮಾಡಿ ಐವರು ಗರ್ಲ್​ಫ್ರೆಂಡ್ಸ್​ ಮ್ಯಾನೇಜ್​ ಮಾಡ್ತಿದ್ದ ಕಿಲಾಡಿ ತಾತ! 63ರ ವೃದ್ಧನ ಸ್ಟೋರಿ ಕೇಳಿ]]></title>
            <link>https://kannada.asianetnews.com/crime/a-63-year-old-man-who-stole-and-managed-five-girlfriends-hear-the-story-of-a-old-man-suc/articleshow-b3w2n07</link>
            <guid isPermaLink="true">https://kannada.asianetnews.com/crime/a-63-year-old-man-who-stole-and-managed-five-girlfriends-hear-the-story-of-a-old-man-suc/articleshow-b3w2n07</guid>
            <pubDate>Mon, 07 Sep 2026 14:05:01 +0530</pubDate>
            <description><![CDATA[63 ವರ್ಷದ ಬಂಧು ಸಿಂಗ್ ಎಂಬಾತ ತನ್ನ ಐವರು ಗೆಳತಿಯರ ಐಷಾರಾಮಿ ಜೀವನ ಮತ್ತು ದುಬಾರಿ ಖರ್ಚುಗಳನ್ನು ಪೂರೈಸಲು ಕಳ್ಳತನದ ಹಾದಿ ಹಿಡಿದಿದ್ದ. ಈತನ ಕಥೆ ಕೇಳಿ ಪೊಲೀಸರೇ ಬೆರಗಾಗಿದ್ದು, ಈ ವೃದ್ಧನ ಅಪರಾಧದ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1xg2zt2174vvj3v3nn5vdzr,imgname-bandhu-singh-1788770090818.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ, ಅನೇಕ ಜನರು ವೃದ್ಧಾಪ್ಯದಲ್ಲಿ ಶಾಂತಿಯುತ ಜೀವನವನ್ನು ನಡೆಸಲು ಬಯಸುತ್ತಾರೆ. ಆ ಶಾಂತಿ ಸಿಗುವುದು ಒಬ್ಬೊಬ್ಬರಿಗೆ ಒಂದೊಂದು ರೀತಿ. ಕೆಲವರು ತೀರ್ಥಯಾತ್ರೆ ಮಾಡಲು ಹೊರಟರೆ, ಮತ್ತೆ ಕೆಲವರು ಮಕ್ಕಳು, ಮೊಮ್ಮಕ್ಕಳ ಜೊತೆ ಸಮಯ ಕಳೆಯುತ್ತಾರೆ, ಮತ್ತೆ ಕೆಲವರು, ಸಮಯದ ಅಭಾವದಿಂದ ಇಷ್ಟು ವರ್ಷಗಳಿಂದ ಸಾಧ್ಯವಾಗದ ತಮ್ಮ ಹಾಬಿ ಮೇಲೆ ಗಮನ ಹರಿಸುತ್ತಾರೆ. ಒಟ್ಟಿನಲ್ಲಿ ತಮ್ಮ ಜೀವನಕ್ಕೆ ಏನು ಖುಷಿ ಬೇಕೋ ಅದನ್ನೇ ಮಾಡುತ್ತಾರೆ. ಇಲ್ಲೊಬ್ಬ 63 ಕಿಲಾಡಿ ತಾತ ಮಾಡಿದ್ದೂ ಅದನ್ನೇ. ಆದರೆ ಈತನ ಹಾಬಿ ಸ್ವಲ್ಪ ಭಿನ್ನವಾಗಿತ್ತು. ಅದೇ ಈಗ ಆತನನ್ನು ಪೊಲೀಸರ ಅತಿಥಿಯನ್ನಾಗಿ ಮಾಡಿದೆ. ಈ ಅಜ್ಜನ ಸ್ಟೋರಿ ಮತ್ತೀಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ.&lt;/p&gt;&lt;p&gt;ಅಂದಹಾಗೆ 63ರ ಈ ಅಜ್ಜನ ಹೆಸರು ಬಂಧು ಸಿಂಗ್. ಸರಿಯಾದ ಆದಾಯವಿಲ್ಲದಿದ್ದರೂ, ಐಷಾರಾಮಿ ಮತ್ತು ದುಬಾರಿ ಜೀವನವನ್ನು ನಡೆಸಲು ಕಳ್ಳತನದ ಮಾರ್ಗ ಹಿಡಿದಿದ್ದ ಈ ತಾತ. ಇದು ಅವನಿಗೆ ಅನಿವಾರ್ಯವೂ ಆಗಿತ್ತು. ಅದಕ್ಕೆ ಕಾರಣ, ಈ ವಯಸ್ಸಿನಲ್ಲಿ ಅವನು ಐವರು ಸ್ನೇಹಿತೆಯರನ್ನು ಮ್ಯಾನೇಜ್​ ಮಾಡಬೇಕಿತ್ತು! ಅವರ ಪೈಕಿ ಇಬ್ಬರಿಗೆ ಇವನಿಂದ ಮಕ್ಕಳೂ ಆಗಿದ್ದವು. ತನ್ನ ಐದು ಗೆಳತಿಯರ ಮೋಜನ್ನು ಪೂರೈಸಲು ಮತ್ತು ಅವರ ದುಬಾರಿ ಖರ್ಚುಗಳನ್ನು ಪೂರೈಸಲು ಕಳ್ಳತನದತ್ತ ಮುಖ ಮಾಡಿದ್ದ ಅಜ್ಜ, ಈಗ ಕಂಬಿ ಎಣಿಸುತ್ತಿದ್ದಾನೆ.&lt;/p&gt;&lt;h2&gt;&lt;strong&gt;ತಾತನ ಲೈಫ್​ಸ್ಟೈಲ್​ಗೆ ಪೊಲೀಸರೇ ಬೆರಗಾದ್ರು&lt;/strong&gt;&lt;/h2&gt;&lt;p&gt;ಬಂಧು ಸಿಂಗ್ ಸ್ಟೋರಿಯನ್ನು ತನಿಖೆಯ ವೇಳೆ ಕೇಳಿದ ಪೊಲೀಸರೇ ಅವಕ್ಕಾಗಿದ್ದಾರೆ. ತನಿಖೆಯಲ್ಲಿ ಬಂಧು ಸಿಂಗ್ ಐದು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆಂದು ತಿಳಿದುಬಂದಿದೆ. ಅವನ ವೃದ್ಧಾಪ್ಯವನ್ನು ಲೆಕ್ಕಿಸದೆ, ಅವನು ತನ್ನ ಪ್ರೇಯಸಿಗಳೊಂದಿಗೆ ಮೋಜು ಮಾಡಲು ಕಳ್ಳತನವನ್ನು ಆಶ್ರಯಿಸಿದನು. ಬಂಧು ಸಿಂಗ್&zwnj;ನ ಗೆಳತಿಯರು ಅತ್ಯಂತ ಐಷಾರಾಮಿ ಮತ್ತು ದುಬಾರಿ ಜೀವನಶೈಲಿಯನ್ನು ಬಯಸಿದ್ದ. ಅವರ ಆಸೆಗಳನ್ನು ಪೂರೈಸಲು ಮತ್ತು ಅವರ ದುಬಾರಿ ವೆಚ್ಚಗಳನ್ನು ಪೂರೈಸಲು ಅವನಿಗೆ ಯಾವಾಗಲೂ ದೊಡ್ಡ ಪ್ರಮಾಣದ ಹಣದ ಅಗತ್ಯವಿತ್ತು. ಆದರೆ ಅವನಿಗೆ ಸರಿಯಾದ ಆದಾಯದ ಮೂಲವಿರಲಿಲ್ಲ. ಇದರಿಂದಾಗಿ, ಸುಲಭವಾಗಿ ಹಣ ಗಳಿಸಲು ಅವನು ಕಳ್ಳತನವನ್ನು ತನ್ನ ವೃತ್ತಿಯಾಗಿ ಆರಿಸಿಕೊಂಡನು.&lt;/p&gt;&lt;p&gt;ಬಂಧು ಸಿಂಗ್ ತನ್ನ ಗೆಳತಿಯರ ಖರ್ಚುಗಳನ್ನು ಭರಿಸಲು ಪ್ರತಿದಿನ ಯಾವುದಾದರೂ ಮನೆ ಅಥವಾ ಅಂಗಡಿಗೆ ನುಗ್ಗುತ್ತಿದ್ದನು. ರಾತ್ರಿಯಲ್ಲಿ ಅವನು ವಿಸ್ತಾರವಾದ ಯೋಜನೆಗಳನ್ನು ರೂಪಿಸುತ್ತಿದ್ದನು ಮತ್ತು ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ಕಳ್ಳತನ ಮಾಡುತ್ತಿದ್ದನು ಎಂದು ಪೊಲೀಸರು ಬಹಿರಂಗಪಡಿಸಿದರು. ಈ ಕಥೆಯಲ್ಲಿ ಇನ್ನೂ ಆಘಾತಕಾರಿ ಸಂಗತಿಯೆಂದರೆ ಬಂಧು ಸಿಂಗ್&zwnj;ನ ಐದು ಗೆಳತಿಯರಲ್ಲಿ ಇಬ್ಬರು ಗರ್ಭಿಣಿಯಾದರು ಮತ್ತು ಮಕ್ಕಳಿಗೆ ಜನ್ಮ ನೀಡಿದರು. ಇದರೊಂದಿಗೆ, ಮಕ್ಕಳನ್ನು ಬೆಳೆಸುವ ವೆಚ್ಚದ ಜೊತೆಗೆ, ಅವನ ಗೆಳತಿಯರ ವಿವಿಧ ಐಷಾರಾಮಿ ಆಸೆಗಳನ್ನು ಪೂರೈಸಲು ಅವನಿಗೆ ದೊಡ್ಡ ಪ್ರಮಾಣದ ಹಣದ ಅಗತ್ಯವಿತ್ತು. ಅದಕ್ಕಾಗಿಯೇ ಅವನು ಪ್ರತಿದಿನ ಬಹಳ ಚಾಣಾಕ್ಷತನದಿಂದ ಮತ್ತು ಕುತಂತ್ರದಿಂದ ಕದಿಯುತ್ತಲೇ ಇದ್ದನು.&lt;/p&gt;&lt;h3&gt;&lt;strong&gt;ಬಂಧಿಸುವಲ್ಲಿ ಯಶಸ್ವಿ&lt;/strong&gt;&lt;/h3&gt;&lt;p&gt;ಕೊನೆಗೂ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಬಂಧು ಸಿಂಗ್​ನನ್ನು ಬಂಧಿಸಿ ತನಿಖೆ ನಡೆಸಿದಾಗ, ಅವನ ಐಷಾರಾಮಿ ಜೀವನಶೈಲಿಯ ನಿಜವಾದ ಬಣ್ಣ ಮತ್ತು ಕಳ್ಳತನದ ಹಿಂದಿನ ಐದು ಗೆಳತಿಯರು ಬೆಳಕಿಗೆ ಬಂದರು. ಚಿಕ್ಕ ವಯಸ್ಸಿನಿಂದಲೂ ಕಳ್ಳತನ ಮಾಡುತ್ತಾ ಬಂದಿರುವ ಬಂಧು ಸಿಂಗ್, ವೃದ್ಧಾಪ್ಯ ತಲುಪಿದ ನಂತರವೂ ಅದೇ ಹಾದಿಯಲ್ಲಿ ಮುಂದುವರೆದನು. ಈ ಅಜ್ಜನ ವಿಚಿತ್ರ ಜೀವನಶೈಲಿ ಮತ್ತು ಅವನ ಅಪರಾಧಗಳ ಕಥೆ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಈ ವಿಷಯ ಹಿಂದೆ ಯಾವಾಗಲೋ ಸಂಭವಿಸಿದ್ದರೂ.. ಈಗ, ಸಾಮಾಜಿಕ ಮಾಧ್ಯಮದಿಂದ ಮತ್ತೆ ವೈರಲ್​ ಆಗುತ್ತಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/crime/a-63-year-old-man-who-stole-and-managed-five-girlfriends-hear-the-story-of-a-old-man-suc/articleshow-b3w2n07"/>
        </item>
        <item>
            <title><![CDATA['ತಾಯಿಯ ಕಾಲಿಗೆ ಬಿದ್ದು ಮಾಡಿದ ತಪ್ಪಿಗೆ ಕ್ಷಮೆ ಕೇಳು' ಆಸ್ತಿ ಕಬಳಿಸಲು ಯತ್ನಿಸಿದ ಮಗನಿಗೆ ಸುಪ್ರೀಂ ಕೋರ್ಟ್‌ ಮಾನವೀಯತೆಯ ಪಾಠ!]]></title>
            <link>https://kannada.asianetnews.com/relationship/supreme-court-praise-mother-blessings-dismisses-son-property-plea-san/articleshow-c4gqp0h</link>
            <guid isPermaLink="true">https://kannada.asianetnews.com/relationship/supreme-court-praise-mother-blessings-dismisses-son-property-plea-san/articleshow-c4gqp0h</guid>
            <pubDate>Wed, 09 Sep 2026 17:24:05 +0530</pubDate>
            <description><![CDATA[ಆಸ್ತಿ ವಿವಾದದಲ್ಲಿ ಹೆತ್ತವರನ್ನೇ ನ್ಯಾಯಾಲಯಕ್ಕೆ ಎಳೆದಿದ್ದ ಮಗನಿಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮೊದಲು ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಬುದ್ಧಿಮಾತು ಹೇಳಿದ ನ್ಯಾಯಪೀಠ, ಮಗ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0w4ca6ctjah6wx6nwyqbcds,imgname-supreme-court-tmc-rebel-mps-abhishek-banerjee-disqualification-petition-om-birla-notice-1787650517196.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.9): &lt;/strong&gt;ಆಸ್ತಿ ವಿವಾದಕ್ಕಾಗಿ ಹೆತ್ತ ತಂದೆ-ತಾಯಿಯನ್ನೇ ನ್ಯಾಯಾಲಯಕ್ಕೆ ಎಳೆದು ತಂದಿದ್ದ ಮಗನಿಗೆ ಸುಪ್ರೀಂ ಕೋರ್ಟ್ ಕಾನೂನಿನ ಜೊತೆಗೆ ಮಾನವೀಯ ಸಂಬಂಧಗಳ ಮಹತ್ವವನ್ನು ನೆನಪಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಮಗನಿಗೆ ಮೊದಲು ನಿನ್ನ ತಾಯಿಯ ಬಳಿಗೆ ಹೋಗಿ, ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿ ಆಶೀರ್ವಾದ ಪಡೆದುಕೋ ಎಂದು ಮೌಖಿಕವಾಗಿ ಬುದ್ಧಿಮಾತು ಹೇಳಿದ್ದಲ್ಲದೆ, ಆತ ಸಲ್ಲಿಸಿದ್ದ ಅರ್ಜಿಯನ್ನೇ ವಜಾಗೊಳಿಸಿದೆ. ತಂದೆ-ತಾಯಿಗೆ ಸೇರಿದ ಆಸ್ತಿಯ ಮೊದಲ ಮಹಡಿಯಲ್ಲಿ ವಾಸವಿದ್ದ ಮಗ ಮತ್ತು ಸೊಸೆ, ಇಡೀ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಹೆತ್ತವರ ಮೇಲೆ ದೌರ್ಜನ್ಯ ಎಸಗುತ್ತಿದ್ದರು ಎಂಬುದು ಈ ಪ್ರಕರಣದ ಪ್ರಮುಖ ಆರೋಪವಾಗಿತ್ತು.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ&lt;/strong&gt;&lt;/h2&gt;&lt;p&gt;ಲೈವ್ ಲಾ (Live Law) ವರದಿಯ ಪ್ರಕಾರ, ಈ ಪ್ರಕರಣವು ದೆಹಲಿಯಲ್ಲಿರುವ ಬೃಹತ್ ಆಸ್ತಿಯೊಂದಕ್ಕೆ ಸಂಬಂಧಿಸಿದ್ದಾಗಿದೆ. ಈ ಆಸ್ತಿಯ ಸಂಪೂರ್ಣ ಒಡೆತನವನ್ನು ತಂದೆ-ತಾಯಿ ಹೊಂದಿದ್ದರು. ಅವರು ಪ್ರೀತಿ ಮತ್ತು ಕರುಣೆಯಿಂದ ತಮ್ಮ ಮಗ ಮತ್ತು ಸೊಸೆಗೆ ಯಾವುದೇ ಬಾಡಿಗೆಯನ್ನು ಪಡೆಯದೆ ಮೊದಲ ಮಹಡಿಯಲ್ಲಿ ವಾಸಿಸಲು ಅವಕಾಶ ನೀಡಿದ್ದರು. ಅಂದರೆ, ಮಗ ಮತ್ತು ಸೊಸೆಗೆ ಆ ಆಸ್ತಿಯಲ್ಲಿ ಯಾವುದೇ ಕಾನೂನಾತ್ಮಕ ಅಥವಾ ಒಡೆತನದ ಹಕ್ಕಿರಲಿಲ್ಲ, ಬದಲಾಗಿ ಕೇವಲ ಹೆತ್ತವರ ಅನುಮತಿಯ ಮೇರೆಗೆ ವಾಸಿಸುವ ಹಕ್ಕಷ್ಟೇ ಇತ್ತು.&lt;/p&gt;&lt;p&gt;ಆದರೆ, ದಿನಕಳೆದಂತೆ ಮಗ ಮತ್ತು ಆತನ ಪತ್ನಿ ತಮ್ಮ ತಂದೆ-ತಾಯಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ತೀವ್ರ ಒತ್ತಡ ಹೇರಿದ್ದರು. ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ, ಹೆತ್ತವರು ಮಗನೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದಾಗಿ ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ (Public Notice) ನೀಡಿದ್ದರು.&lt;/p&gt;&lt;h2&gt;&lt;strong&gt;ನಕಲಿ ದಾಖಲೆಗಳ ಸೃಷ್ಟಿ ಮತ್ತು ಎಫ್&zwnj;ಐಆರ್&lt;/strong&gt;&lt;/h2&gt;&lt;p&gt;ತಂದೆ-ತಾಯಿಯ ಆರೋಪದ ಪ್ರಕಾರ, ಮಗ ಮತ್ತು ಸೊಸೆ ಆಸ್ತಿಯ ಒಡೆತನ ಸಾಧಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಇದರಿಂದ ಬೇಸತ್ತ ತಂದೆ-ತಾಯಿ ಮಗನ ವಿರುದ್ಧ ಎಫ್&zwnj;ಐಆರ್ ದಾಖಲಿಸಿ, ಆತನಿಗೆ ನೀಡಿದ್ದ ವಾಸದ ಅನುಮತಿಯನ್ನು ಕಾಯಿದೆಯನ್ವಯ ರದ್ದುಗೊಳಿಸಿ, ತಕ್ಷಣವೇ ಮೊದಲ ಮಹಡಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದರು.&lt;/p&gt;&lt;h2&gt;&lt;strong&gt;ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಟು ಮಾತು&lt;/strong&gt;&lt;/h2&gt;&lt;p&gt;ಸುಪ್ರೀಂ ಕೋರ್ಟ್&zwnj;ನ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಜಸ್ಟಿಸ್ ಶರ್ಮಾ ಅವರು ಮಗನ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನೀನು ತಕ್ಷಣವೇ ನಿನ್ನ ತಾಯಿಯ ಬಳಿಗೆ ಹಿಂತಿರುಗಬೇಕು, ಆಕೆಯ ಕಾಲಿಗೆ ಬಿದ್ದು ಮಾಡಿದ ತಪ್ಪಿಗೆ ಕ್ಷಮೆ ಕೇಳಿ, ಆಕೆಯ ಆಶೀರ್ವಾದವನ್ನು ಪಡೆಯಬೇಕು ಎಂದು ಹೇಳಿದರು. ನ್ಯಾಯಾಲಯದಲ್ಲಿದ್ದ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, 'ತಾಯಿಯೊಂದಿಗೆ ಮಗ ಈ ರೀತಿ ನಡೆದುಕೊಳ್ಳುವುದು ತಪ್ಪಲ್ಲವೇ?'ಎಂದು ಪ್ರಶ್ನಿಸಿದರು.&lt;/p&gt;&lt;h2&gt;&lt;strong&gt;ಟ್ರಯಲ್ ಕೋರ್ಟ್ ಹಾಗೂ ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ&lt;/strong&gt;&lt;/h2&gt;&lt;p&gt;ತಮ್ಮ ಆಸ್ತಿಯನ್ನು ಮರಳಿ ಪಡೆಯಲು, ಮಗ-ಸೊಸೆಗೆ ಶಾಶ್ವತ ತಡೆಯಾಜ್ಞೆ ನೀಡಲು ಹಾಗೂ ನಷ್ಟ ಪರಿಹಾರ ಕೋರಿ ತಂದೆ-ತಾಯಿ ವಿಚಾರಣಾ ನ್ಯಾಯಾಲಯದ (Trial Court) ಮೆಟ್ಟಿಲೇರಿದ್ದರು. ಟ್ರಯಲ್ ಕೋರ್ಟ್ ತಂದೆ-ತಾಯಿಯೇ ಆಸ್ತಿಯ ನಿಜವಾದ ಮಾಲೀಕರು ಎಂದು ತೀರ್ಪು ನೀಡಿ, ಮಗನಿಗೆ ನೀಡಿರುವ ಅನುಮತಿಯನ್ನು ಸರಿಯಾಗಿಯೇ ರದ್ದುಗೊಳಿಸಿರುವುದರಿಂದ ತಕ್ಷಣವೇ ಮನೆ ಖಾಲಿ ಮಾಡುವಂತೆ ಮಗ ಹಾಗೂ ಸೊಸೆಗೆ ಆದೇಶಿಸಿತ್ತು.&lt;/p&gt;&lt;p&gt;ಈ ಆದೇಶವನ್ನು ಪ್ರಶ್ನಿಸಿ ಮಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರೂ, ಏಪ್ರಿಲ್ 17 ರಂದು ದೆಹಲಿ ಹೈಕೋರ್ಟ್ ಟ್ರಯಲ್ ಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮಗ ಸುಪ್ರೀಂ ಕೋರ್ಟ್&zwnj;ನಲ್ಲಿ ವಿಶೇಷ ರಜೆ ಅರ್ಜಿ (Special Leave Petition) ಸಲ್ಲಿಸಿದ್ದನು. ಇದೀಗ ಸುಪ್ರೀಂ ಕೋರ್ಟ್ ಕೂಡ ಮಗನ ಅರ್ಜಿಯನ್ನು ವಜಾಗೊಳಿಸಿದ್ದು, ಕೆಳ ನ್ಯಾಯಾಲಯಗಳ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.&lt;/p&gt;]]></content:encoded>
            <category>relationship</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/supreme-court-praise-mother-blessings-dismisses-son-property-plea-san/articleshow-c4gqp0h"/>
        </item>
        <item>
            <title><![CDATA[Karna Serial ರೋಚಕ ಟ್ವಿಸ್ಟ್​: ಈಡೇರಿತು ಭುವೇಶ್ವರಿಯ ಆಸೆ; ಮಗನಿಗಿಟ್ಟ ಬಾಳೆಯಲ್ಲಿ ಕರ್ಣನ ಊಟ]]></title>
            <link>https://kannada.asianetnews.com/gallery/tv-talk/karna-serial-exciting-twist-bhuveswaris-wish-comes-true-mother-and-son-together-suc-entspx6</link>
            <guid isPermaLink="true">https://kannada.asianetnews.com/gallery/tv-talk/karna-serial-exciting-twist-bhuveswaris-wish-comes-true-mother-and-son-together-suc-entspx6</guid>
            <pubDate>Wed, 09 Sep 2026 13:33:54 +0530</pubDate>
            <description><![CDATA[ಕರ್ಣ ಸೀರಿಯಲ್​ನಲ್ಲಿ ಅಪ್ಪ-ಮಗ ಒಂದಾದ ನಂತರ, ಇದೀಗ ಅಮ್ಮ-ಮಗನ ಮಿಲನದ ಕ್ಷಣ ಹತ್ತಿರವಾಗಿದೆ. ತನ್ನ ಮಗನಿಗಾಗಿ ಹಾತೊರೆಯುತ್ತಿರುವ ತಾಯಿ ಭುವನೇಶ್ವರಿಯ ಕಣ್ಣೆದುರೇ ಕರ್ಣ ಬಂದರೂ, ಅವರಿಬ್ಬರಿಗೂ ಸತ್ಯ ತಿಳಿದಿಲ್ಲ. ಕರುಳಿನ ಸಂಬಂಧದ ಈ ಸತ್ಯ ಯಾವಾಗ ಬಹಿರಂಗವಾಗುತ್ತದೆ ಎನ್ನುವುದೇ ಕಥೆಯ ತಿರುವು.]]></description>
            <media:content url="https://static.asianetnews.com/images/w-1280,h-720,format-jpg,imgid-01m22jx21m80xcjn0fxtg6pcbe,imgname-karna-serial-00-1788940814388.jpg" type="image/jpeg" height="390" width="690"/>
            <content:encoded><![CDATA[ಕರ್ಣ ಸೀರಿಯಲ್​ನಲ್ಲಿ ಅಪ್ಪ-ಮಗ ಒಂದಾದ ನಂತರ, ಇದೀಗ ಅಮ್ಮ-ಮಗನ ಮಿಲನದ ಕ್ಷಣ ಹತ್ತಿರವಾಗಿದೆ. ತನ್ನ ಮಗನಿಗಾಗಿ ಹಾತೊರೆಯುತ್ತಿರುವ ತಾಯಿ ಭುವನೇಶ್ವರಿಯ ಕಣ್ಣೆದುರೇ ಕರ್ಣ ಬಂದರೂ, ಅವರಿಬ್ಬರಿಗೂ ಸತ್ಯ ತಿಳಿದಿಲ್ಲ. ಕರುಳಿನ ಸಂಬಂಧದ ಈ ಸತ್ಯ ಯಾವಾಗ ಬಹಿರಂಗವಾಗುತ್ತದೆ ಎನ್ನುವುದೇ ಕಥೆಯ ತಿರುವು.&lt;img&gt;&lt;p&gt;ಕರ್ಣ ಸೀರಿಯಲ್​ನಲ್ಲಿ (Karna Serial) ರಮೇಶನೇ ತನ್ನ ಅಪ್ಪ ಎನ್ನುವ ಸತ್ಯ ಕರ್ಣನಿಗೆ ತಿಳಿದಿದೆ. ರಮೇಶನೇ ಈ ಸತ್ಯವನ್ನು ಹೇಳಿದ್ದು, ಇದರಿಂದ ಅಪ್ಪ-ಮಗ ಒಂದಾಗಿ ಆಗಿದೆ.&lt;/p&gt;&lt;img&gt;&lt;p&gt;ಈಗ ಏನಿದ್ದರೂ ಸೀತಾ ಉರ್ಫ್​ ಭುವನೇಶ್ವರಿ ಮತ್ತು ಕರ್ಣ- ಅಮ್ಮ, ಮಗ ಒಂದಾಗಬೇಕಿದೆ. ಭುವನೇಶ್ವರಿಗೆ ಕರ್ಣನನ್ನು ನೋಡಿದಾಗ ಹೆತ್ತ ಕರುಳು ಚುರುಕ್​ ಎನ್ನುತ್ತಿದೆ. ಕಣ್ಣು ಅರಿಯದಿದ್ದರೂ, ಕರುಳು ಅರಿಯುತ್ತೆ ಎನ್ನುವ ಸ್ಥಿತಿ ಆಕೆಯದ್ದು.&lt;/p&gt;&lt;img&gt;&lt;p&gt;ಇದೀಗ, ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಿಂದ ತನ್ನ ಮಗನಿಗಾಗಿ ಭುವನೇಶ್ವರಿ ಹಾತೊರೆದಿದ್ದಾಳೆ. ಮಕ್ಕಳಿಗೆ ಪ್ರಸಾದದ ರೂಪದಲ್ಲಿ ಊಟದ ವ್ಯವಸ್ಥೆಯನ್ನು ಮಾಡಿಸಿ, ಮಗನಿಗಾಗಿ ಹಂಬಲಿಸಿದ್ದಾಳೆ.&lt;/p&gt;&lt;img&gt;&lt;p&gt;ಅಲ್ಲಿಗೆ ಬಂದವನು ಕರ್ಣ. ಪೂಜೆಯ ದಿನ ನಿಮ್ಮನ್ನು ನೋಡಲು ಬಂದಿರುವೆ ಎಂದು ಕರ್ಣ ಹೇಳಿದ್ದಾನೆ. ಕೊನೆಗೆ ಊಟಕ್ಕೆ ಇಟ್ಟ ಬಾಳೆ ಎಲೆಯ ಎದುರಿಗೆ ಕುಳಿತಿದ್ದಾನೆ.&lt;/p&gt;&lt;img&gt;&lt;p&gt;ಅಲ್ಲಿಗೆ ಬಂದ ಭುವನೇಶ್ವರಿಯ ಅಸಿಸ್ಟೆಂಟ್​, ಏನು ತಪ್ಪು ಮಾಡಿದ್ರಿ? ಇದು ಭುವನೇಶ್ವರಿ ಅವರು ತಮ್ಮ ಮಗನಿಗಾಗಿ ಇಟ್ಟಿದ್ದು ಎಂದಾಗ ಏಳಲು ಕರ್ಣ ಮುಂದಾಗಿದ್ದಾನೆ.&lt;/p&gt;&lt;img&gt;&lt;p&gt;ಆಗ ಭುವನೇಶ್ವರಿ, ಪರವಾಗಿಲ್ಲ. ಊಟಕ್ಕೆ ಕುಳಿತವರನ್ನು ಎಬ್ಬಿಸಬಾರದು. ಊಟ ಮಾಡು ಎಂದು ಕರ್ಣನ ಸಮೀಪ ಹೋದಾಗ, ಅವಳಿಗೆ ರೋಮಾಂಚನವಾಗಿದೆ. ಯಾವುದೋ ತಾಯಿಯ ಶಕ್ತಿ ತನ್ನನ್ನು ಸೆಳೆಯುತ್ತಿದೆ ಎಂದು ಎನ್ನಿಸಿದೆ. ಅಮ್ಮ- ಮಗ ಕಣ್ಣೆದುರೇ ಇದ್ದರೂ ಸತ್ಯ ತಿಳಿದಿಲ್ಲ. ತಿಳಿದರೆ ಮಾಲತಿಯ ಪಾಡು ಏನು ಎನ್ನೋದು ನೋಡಬೇಕಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-exciting-twist-bhuveswaris-wish-comes-true-mother-and-son-together-suc-entspx6"/>
        </item>
        <item>
            <title><![CDATA['ಒಳ್ಳೆಯ ಸ್ನೇಹಿತನಾಗಿರುವ ಸಂಗಾತಿ ಸಿಕ್ಕರೆ..': ಮದುವೆ ಬಗ್ಗೆ ನಟಿ ರಮ್ಯಾ ನಿಲುವೇನು?]]></title>
            <link>https://kannada.asianetnews.com/sandalwood/kannada-actress-ramya-divya-spandana-talks-marriage-and-relationships-i-haven-t-found-that-person-yet-gvd/articleshow-i52fgud</link>
            <guid isPermaLink="true">https://kannada.asianetnews.com/sandalwood/kannada-actress-ramya-divya-spandana-talks-marriage-and-relationships-i-haven-t-found-that-person-yet-gvd/articleshow-i52fgud</guid>
            <pubDate>Mon, 07 Sep 2026 17:11:46 +0530</pubDate>
            <description><![CDATA[&lt;p&gt;ಸ್ಯಾಂಡಲ್&zwnj;ವುಡ್ ನಟಿ ರಮ್ಯಾ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಮದುವೆಗಿಂತ ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ ಎಂದಿದ್ದಾರೆ. ಸೂಕ್ತ ಸಂಗಾತಿ ಸಿಕ್ಕರೆ ಮದುವೆ ಉತ್ತಮ ಎಂದು ಹೇಳಿರುವ ಅವರು, ಸದ್ಯ ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xt5593gdwn0w7zhhw8y643,imgname-mlmn-1788780647715.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಮೋಹಕ ತಾರೆ ರಮ್ಯಾ ಅವರ ಮದುವೆ ವಿಚಾರ ಆಗಾಗ್ಗೆ ಚರ್ಚೆಗೆ ಬರುತ್ತಲೇ ಇರುತ್ತದೆ. ಅಭಿಮಾನಿಗಳು ಕೂಡ &lsquo;ರಮ್ಯಾ ಯಾವಾಗ ಮದುವೆಯಾಗುತ್ತಾರೆ?&rsquo; ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿರುತ್ತಾರೆ. ಇದೀಗ ಇದೇ ಪ್ರಶ್ನೆಗೆ ಸ್ವತಃ ರಮ್ಯಾ ಉತ್ತರಿಸಿದ್ದು, ಅವರ ಮಾತುಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.&lt;/p&gt;&lt;p&gt;ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ನಬಿಲಾ ಜಮಾಲ್ ಅವರು ನಟಿ ರಮ್ಯಾ ಅವರಿಗೆ ಮದುವೆ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಮ್ಯಾ, ಮದುವೆಯನ್ನು ಜೀವನದ ಅನಿವಾರ್ಯ ಗುರಿಯಂತೆ ನೋಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. &lsquo;ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ&rsquo; ಎಂದು ಹೇಳಿದ ರಮ್ಯಾ, ವ್ಯಕ್ತಿಯ ಗುರುತು ಅಥವಾ ಸಂತೋಷವನ್ನು ಮದುವೆಯೇ ನಿರ್ಧರಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lsquo;ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗುವುದಿಲ್ಲ. ಮದುವೆಯಾಗದೇ ಇದ್ದರೂ ನಾವು ಖುಷಿಯಾಗಿರಬಹುದು. ಜೀವನದಲ್ಲಿ ಖುಷಿಯಾಗಿರುವುದೇ ಎಲ್ಲಕ್ಕಿಂತ ಮುಖ್ಯ. ಒಂದೋ ಮದುವೆಯಾಗಿರಬೇಕು ಅಥವಾ ಖುಷಿಯಾಗಿರಬೇಕು ಎಂಬ ರೀತಿಯಲ್ಲಿ ಸಮಾಜ ನೋಡುವುದು ಸರಿಯಲ್ಲ. ನಿಮಗೆ ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು&rsquo; ಎಂದು ರಮ್ಯಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಒಳ್ಳೆಯ ಸ್ನೇಹಿತನಾಗಿರುವ ಸಂಗಾತಿ ಸಿಕ್ಕರೆ..&rsquo;&lt;/strong&gt;&lt;/p&gt;&lt;p&gt;ಮದುವೆಯ ಬಗ್ಗೆ ಸಂಪೂರ್ಣವಾಗಿ ನಕಾರಾತ್ಮಕವಾಗಿ ಮಾತನಾಡದ ರಮ್ಯಾ, ಸೂಕ್ತ ಸಂಗಾತಿ ಸಿಕ್ಕರೆ ವೈವಾಹಿಕ ಜೀವನವೂ ಸುಂದರವಾಗಿರಬಹುದು ಎಂದು ಹೇಳಿದ್ದಾರೆ. &lsquo;ಮದುವೆಯಾಗಿಯೂ ಖುಷಿಯಾಗಿ ಇರಬಹುದು. ನಿಮಗೆ ಹೊಂದಿಕೆಯಾಗುವಂತಹ ಸಂಗಾತಿ ಸಿಕ್ಕರೆ ಅದು ಚೆನ್ನಾಗಿರುತ್ತದೆ. ಅವರು ನಿಮ್ಮ ಉತ್ತಮ ಸ್ನೇಹಿತರಾಗಿದ್ದು, ಅವರೊಂದಿಗೆ ಇಡೀ ಜೀವನ ಕಳೆಯಲು ನೀವು ಬಯಸಿದರೆ ಮದುವೆ ಉತ್ತಮ ನಿರ್ಧಾರವಾಗಬಹುದು&rsquo; ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಮನುಷ್ಯರ ಬದುಕಿನಲ್ಲಿ ಬದಲಾವಣೆ ಸಹಜ. ಕಾಲ ಕಳೆದಂತೆ ನಮ್ಮ ಆಲೋಚನೆಗಳು, ಮೌಲ್ಯಗಳು ಮತ್ತು ಆದ್ಯತೆಗಳು ಬದಲಾಗುತ್ತವೆ. ಹೀಗಾಗಿ ಮದುವೆಯಲ್ಲಿ ಇಬ್ಬರ ನಡುವಿನ ಹೊಂದಾಣಿಕೆ ಮತ್ತು ಒಂದೇ ರೀತಿಯ ಮೌಲ್ಯಗಳು ಮುಖ್ಯ ಎಂದು ರಮ್ಯಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ&rsquo;&lt;/strong&gt;&lt;/h2&gt;&lt;p&gt;ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ರಮ್ಯಾ, ಸದ್ಯಕ್ಕೆ ಮದುವೆ ಅಥವಾ ಸಂಬಂಧದ ಬಗ್ಗೆ ತಾವು ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ. &lsquo;ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ. ನಾನು ಆ ಬಗ್ಗೆ ಗಮನ ಕೂಡ ಹರಿಸುತ್ತಿಲ್ಲ. ಕೆಲಸ ಮಾಡುವುದರಲ್ಲಿ ಬ್ಯುಸಿ ಆಗಿದ್ದೇನೆ. ರಿಲೇಷನ್&zwnj;ಶಿಪ್&zwnj;ಗೆ ಸಮಯ ಬೇಕು&rsquo; ಎಂದು ರಮ್ಯಾ ಹೇಳಿದ್ದಾರೆ.&lt;/p&gt;&lt;p&gt;ರಮ್ಯಾ ಅವರ ಈ ಮಾತುಗಳು ಇದೀಗ ಅಭಿಮಾನಿಗಳಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿವೆ. ಸದ್ಯ ಮದುವೆಯ ವಿಚಾರದಲ್ಲಿ ಯಾವುದೇ ಆತುರವಿಲ್ಲ ಎಂಬುದನ್ನು ನಟಿ ಸ್ಪಷ್ಟಪಡಿಸಿದ್ದು, ಸೂಕ್ತ ವ್ಯಕ್ತಿ ಸಿಕ್ಕಾಗ ಮಾತ್ರ ಆ ಬಗ್ಗೆ ಯೋಚಿಸುವ ಮನಸ್ಥಿತಿಯಲ್ಲಿರುವಂತೆ ಕಾಣಿಸುತ್ತಿದೆ. ಇನ್ನೊಂದೆಡೆ, ರಮ್ಯಾ ಅವರು ಸಿನಿಮಾಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವರ ಅಭಿಮಾನಿಗಳ ಬಹುಕಾಲದ ಬೇಡಿಕೆಯಾಗಿದೆ. ಮದುವೆಗಿಂತ ತಮ್ಮ ಸಂತೋಷ ಮತ್ತು ವೃತ್ತಿಜೀವನಕ್ಕೆ ಆದ್ಯತೆ ನೀಡುತ್ತಿರುವ ರಮ್ಯಾ ಅವರ ನಿಲುವಿಗೆ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>relationship</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-actress-ramya-divya-spandana-talks-marriage-and-relationships-i-haven-t-found-that-person-yet-gvd/articleshow-i52fgud"/>
        </item>
        <item>
            <title><![CDATA[ಓದಿಗಾಗಿ ಅಮ್ಮ ಮಾರಿದ್ದರು ಮಾಂಗಲ್ಯ: ಇಂದು ಸಹಸ್ರಾರು ಜೀವ ಉಳಿಸಿದ ಪುತ್ರಿ-  ಜೇವರ್ಗಿಯ ಕ್ಯಾನ್ಸರ್​ ತಜ್ಞೆಯ ಯಶೋಗಾಥೆ]]></title>
            <link>https://kannada.asianetnews.com/women/unsung-heroes-from-selling-fruits-to-mastering-oncology-dr-vijayalakshmi-deshmane-transformed-cancer-care-suc/articleshow-k4smamg</link>
            <guid isPermaLink="true">https://kannada.asianetnews.com/women/unsung-heroes-from-selling-fruits-to-mastering-oncology-dr-vijayalakshmi-deshmane-transformed-cancer-care-suc/articleshow-k4smamg</guid>
            <pubDate>Mon, 07 Sep 2026 18:47:34 +0530</pubDate>
            <description><![CDATA[ಕಲಬುರಗಿಯ ಕಡುಬಡತನದಲ್ಲಿ ಹುಟ್ಟಿ, ತಾಯಿಯು ತನ್ನ ಮಾಂಗಲ್ಯವನ್ನು ಮಾರಿ ಓದಿಸಿದ್ದರಿಂದ ದೇಶದ ಖ್ಯಾತ ಕ್ಯಾನ್ಸರ್ ತಜ್ಞೆಯಾದವರು ಡಾ. ವಿಜಯಲಕ್ಷ್ಮಿ ದೇಶಮಾನೆ. ತಮ್ಮ ಅವಿರತ ವೈದ್ಯಕೀಯ ಸೇವೆಗಾಗಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಇವರ ಜೀವನಗಾಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1y085fwt7t5v9ypr73p28qv,imgname-vijayalakshmi-deshmane-1788787037692.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೋಬಾಳ್ ಗ್ರಾಮದ ಅತ್ಯಂತ ಕಡು ಬಡತನದ ಮನೆ ಅದು. ತರಕಾರಿ ಮಾರಿ ಜೀವನ ಸಾಗಿಸುತ್ತಿತ್ತು ಈ ಕುಟುಂಬ. ತುತ್ತು ಅನ್ನಕ್ಕೂ ಪರದಾಟ. ಮನೆಯಲ್ಲಿ ಎಲ್ಲರೂ ಅನಕ್ಷರಸ್ಥರೇ. ಆದರೆ ಆ ಮನೆಯನ್ನು ಬೆಳಗಲು ಬಂದಾಕೆಯೇ ವಿಜಯಲಕ್ಷ್ಮಿ. ಈ ಪುಟ್ಟ ಕಂದ, ನಿಜಕ್ಕೂ ಈ ಮನೆಗೆ ವಿಜಯಲಕ್ಷ್ಮಿಯೇ ಆದಳು. ಮನೆಯಲ್ಲಿ ಬಡತನ, ಈ ಮಗುವಿನ ಅದೃಷ್ಟವನ್ನು ಅಳಿಸಲು ಆಗಲೇ ಇಲ್ಲ. ತಮ್ಮ ಮಗಳು ತಮ್ಮಂತೆಯೇ ಆಗಬಾರದು ಎನ್ನುವ ಕಾರಣಕ್ಕೆ ಇದ್ದ ಒಂದೇ ಒಂದು ಚಿನ್ನದ ಮಾಂಗಲ್ಯವನ್ನು ಮಾರಿ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿದ್ದರು ಆ ಅಮ್ಮ. ಇಂದು ಅದೇ ಮಗಳು ದೇಶ ಕಂಡ ಅಪರೂಪದ ಕ್ಯಾನ್ಸರ್ ತಜ್ಞೆಯಾದರು. ಕಳೆದ ವರ್ಷ, ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾದರು.&lt;/p&gt;&lt;p&gt;ಹೌದು. ಇವರೇ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ. ಕಲಬುರಗಿ ಜಿಲ್ಲೆಯ ಚಮ್ಮಾರ ಸಮುದಾಯದಿಂದ ಪದ್ಮಶ್ರೀ ಪಡೆದ ಮೊದಲ ವ್ಯಕ್ತಿ ಅವರಾಗಿದ್ದಾರೆ. ಈ ಹಿಂದೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗೆ ಅದರಲ್ಲಿಯೂ ಸಿನಿಮಾ ತಾರೆಯರಿಗೆ ಅಷ್ಟೇ ಸೀಮಿತವಾಗಿದ್ದ ಪದ್ಮ ಪ್ರಶಸ್ತಿಗಳು ಕಳೆದ 12 ವರ್ಷಗಳಲ್ಲಿ ಬದಲಾಗಿದೆ. ಹಳ್ಳಿ ಮೂಲೆಗಳಲ್ಲಿ ಇರುವ ಪ್ರತಿಭಾನ್ವಿತರನ್ನು, ಯಾರೂ ಗಮನಿಸಿದ, ಪ್ರಚಾರವನ್ನೂ ಬಯಸದ ಸುಪ್ತ ಪ್ರತಿಭೆಗಳನ್ನು, ಜನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ತಣ್ಣಗೇ ಕೆಲಸ ಮಾಡುತ್ತಿರುವ ಎಲೆಮರೆಯ ಕಾಯಿಗಳಿಗೆ ಈ ಪ್ರಶಸ್ತಿ ಲಭಿಸುತ್ತಿದೆ. ಅದೇ ರೀತಿ, ನಾಡು ಕಂಡ ಅಪರೂಪದ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.&lt;/p&gt;&lt;h2&gt;&lt;strong&gt;ಶ್ರೀಕೃಷ್ಣನ ಅಪ್ಪಟ ಭಕ್ತೆ&lt;/strong&gt;&lt;/h2&gt;&lt;p&gt;ಶ್ರೀಕೃಷ್ಣನ ಅಪ್ಪಟ ಭಕ್ತೆಯಾಗಿರುವ ಡಾ. ವಿಜಯಲಕ್ಷ್ಮಿ ಅವರು, ಪೋಷಕರ ಬೆಂಬಲ ಹಾಗೂ ಕಠಿಣ ಪರಿಶ್ರಮ ಮತ್ತು ಶ್ರೀಕೃಷ್ಣನ ಕೃಪೆ ನನಗೆ ದಾರಿ ತೋರಿಸಿದೆ ಎಂದು ಅವರು ಹೇಳಿದರು. ನನ್ನ ಪೋಷಕರು ಅನಕ್ಷರಸ್ಥರಾಗಿದ್ದರೂ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ನಿರ್ಧರಿಸಿದ್ದರು. ಅಂದ ಹಾಗೆ, ಇವರ ಅಪ್ಪ-ಅಮ್ಮಂದಿರಿಗೆ ಎಂಟು ಜನ ಮಕ್ಕಳು. ಬಡತನಕ್ಕೆ ಮಕ್ಕಳು ಹೆಚ್ಚು ಎನ್ನುತ್ತಾರಲ್ಲ ಹಾಗೆ. ಆದರೆ ವಿಜಯಲಕ್ಷ್ಮಿ ಅವರ ಅಪ್ಪ-ಅಮ್ಮ ಎಂಟು ಜನ ಮಕ್ಕಳಲ್ಲಿ ಆರು ಮಂದಿ ಪಿಎಚ್&zwnj;ಡಿ ಪಡೆದು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಜಯಲಕ್ಷ್ಮಿ ಅವರು ಹಿರಿಯವರು. ಇವರು ಎಂಬಿಬಿಎಸ್ ಮತ್ತು ಎಂಎಸ್ ಮುಗಿಸಿದ್ದಾರೆ.&lt;/p&gt;&lt;p&gt;1955 ರಲ್ಲಿ ವಿಜಯಲಕ್ಷ್ಮಿ ದೇಶ್ಮನೆ ಜನಿಸಿದರು. ಅವರ ತಂದೆ ಬಾಬು ರಾವ್ ದೇಶ್ಮನೆ ಎಂಎಸ್&zwnj;ಕೆ ಮಿಲ್&zwnj;ನಲ್ಲಿ ಕಾರ್ಮಿಕರಾಗಿದ್ದರು. ಅವರ ತಾಯಿ ರತ್ನಮ್ಮ ತರಕಾರಿ ಮಾರಾಟಗಾರರಾಗಿದ್ದರು, ಅವರು ಬೆಳಿಗ್ಗೆ ಮನೆ ಮನೆಗೆ ತೆರಳಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು ಮತ್ತು ನಂತರ ಗಾಜಿಪುರ ಪ್ರದೇಶದಲ್ಲಿ ತಮ್ಮ ಸರಕುಗಳನ್ನು ಮಾರಾಟ ಮಾಡುತ್ತಿದ್ದರು. ಡಾ. ದೇಶ್ಮನೆ ಅವರು ಗಾಜಿಪುರದ ಚಕ್ಕರಗಟ್ಟ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಮತ್ತು ಕನ್ನಡ ಮಾಧ್ಯಮದಲ್ಲಿ ಗಂಗಾಂಬಿಕಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಅವರು ಓದುತ್ತಿರುವಾಗಲೂ, ಅವರು ತಮ್ಮ ತಾಯಿ ತರಕಾರಿಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದ್ದರು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.&lt;/p&gt;&lt;h3&gt;&lt;strong&gt;ಬಾಲ್ಯದ ದಿನಗಳು&lt;/strong&gt;&lt;/h3&gt;&lt;p&gt;ಕಾರ್ಮಿಕರಾಗಿದ್ದ ನನ್ನ ತಂದೆ ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ ಇಎಸ್&zwnj;ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಾನು ಐದನೇ ತರಗತಿಯಲ್ಲಿದ್ದಾಗಿನಿಂದ, ನಾನು ಎಂಬಿಬಿಎಸ್ ಮುಗಿಸುವವರೆಗೆ, ಅವರು ನನಗೆ ಶಸ್ತ್ರಚಿಕಿತ್ಸಕನಾಗಲು ಹೇಳುತ್ತಿದ್ದರು. ಎಸ್&zwnj;ಬಿ ವಸತಿ ಶಾಲೆಯಲ್ಲಿ ನನ್ನ ಪಿಯುಸಿ ಎರಡನೇ ವರ್ಷವನ್ನು ಮುಗಿಸಿದೆ. ನಾನು ಎಂಬಿಬಿಎಸ್ ಸೇರುವಾಗ, ನಾವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದೆವು ಮತ್ತು ನನ್ನ ತಾಯಿ ಕೋರ್ಸ್&zwnj;ಗೆ ಶುಲ್ಕವನ್ನು ಪಾವತಿಸಲು ತನ್ನ ಮಂಗಳಸೂತ್ರವನ್ನು ಮಾರಿದರು ಎಂದು ಅವರು ಸ್ಮರಿಸಿದ್ದಾರೆ.&lt;/p&gt;&lt;p&gt;ನಾನು 1984 ರಲ್ಲಿ ಕೆಎಂಸಿಯಲ್ಲಿ ಎಂಬಿಬಿಎಸ್ ಮತ್ತು ಬಳ್ಳಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಎಸ್ ಮುಗಿಸಿದೆ. ಕೋರ್ಸ್ ಮುಗಿಸಿದ ತಕ್ಷಣ, ನಾನು ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿವಾಸಿ ವೈದ್ಯೆಯಾಗಿ ಸೇರಿಕೊಂಡೆ. 1994 ರಲ್ಲಿ, ನಾನು ಮೊದಲ ಮಹಿಳಾ ಪ್ರಾಧ್ಯಾಪಕಿಯಾದೆ. ನಂತರ ನಾನು ಡೀನ್, ಎಚ್&zwnj;ಒಡಿ ಮತ್ತು ನಿರ್ದೇಶಕಿಯೂ ಆದೆ ಎಂದು ಅವರು ತಿಳಿಸಿದ್ದಾರೆ. 2016 ರಲ್ಲಿ, ಅವರಿಗೆ ಹೃದಯಾಘಾತವಾಯಿತು. ಅವರು ಚಿಕಿತ್ಸೆ ಪಡೆಯುತ್ತಿರುವಾಗ, ಬಿಜೆಪಿ ನಾಯಕ ಅನಂತ್ ಕುಮಾರ್ ಅವರನ್ನು ಪಂಜಾಬ್&zwnj;ನ ಮೊಹಾಲಿಯಲ್ಲಿರುವ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥೆಯಾಗಿ ಸೇರಲು ಕೇಳಿಕೊಂಡರು. ನಾನು ಶ್ರೀಕೃಷ್ಣನ ಕಟ್ಟಾ ಭಕ್ತೆಯಾಗಿರುವುದರಿಂದ ಈ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ ಎಂದು ಅವರು ಹೇಳಿದರು. ಜನರಿಗೆ ಸೇವೆ ಸಲ್ಲಿಸಲು ಅಡ್ಡಿಯಾಗುತ್ತದೆ ಎಂದು ಭಾವಿಸಿ ಅವರು ಅವಿವಾಹಿತರಾಗಿಯೇ ಉಳಿದಿದ್ದಾಗಿ ತಿಳಿಸಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/women/unsung-heroes-from-selling-fruits-to-mastering-oncology-dr-vijayalakshmi-deshmane-transformed-cancer-care-suc/articleshow-k4smamg"/>
        </item>
        <item>
            <title><![CDATA[ರ‍್ಯಾಪಿಡೋ ಪಾರ್ಸೆಲ್ ಬುಕ್ ಮಾಡಿದ ಮಹಿಳೆಗೆ ‘I Love You’ ಮೆಸೇಜ್! ಚಾಲಕನ ಹಠಾತ್ ಪ್ರೇಮ ನಿವೇದನೆಗೆ ಯುವತಿ ಕಂಗಾಲು!]]></title>
            <link>https://kannada.asianetnews.com/viral/rapido-driver-allegedly-sends-i-love-you-to-woman-rider-linkedin-post-sparks-outrage/articleshow-lz2012q</link>
            <guid isPermaLink="true">https://kannada.asianetnews.com/viral/rapido-driver-allegedly-sends-i-love-you-to-woman-rider-linkedin-post-sparks-outrage/articleshow-lz2012q</guid>
            <pubDate>Mon, 07 Sep 2026 08:33:40 +0530</pubDate>
            <description><![CDATA[&lt;p&gt;ರ&zwj;್ಯಾಪಿಡೋ ಮೂಲಕ ಪಾರ್ಸೆಲ್&zwnj; ಡೆಲಿವರಿ ಬುಕ್&zwnj; ಮಾಡಿದ ಮಹಿಳೆಗೆ ಚಾಲಕ ಖಾಸಗಿ ಸಂಖ್ಯೆಗೆ &lsquo;ಐ ಲವ್ ಯೂ&rsquo; ಸೇರಿದಂತೆ ಅಸಭ್ಯ ಸಂದೇಶ ಕಳುಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆ ಲಿಂಕ್ಡ್&zwnj;ಇನ್&zwnj;ನಲ್ಲಿ ಘಟನೆ ಹಂಚಿಕೊಂಡ ಬಳಿಕ ಪೋಸ್ಟ್&zwnj; ವೈರಲ್&zwnj; ಆಗಿದ್ದು, ರಾಪಿಡೋ ಸುರಕ್ಷತಾ ಕ್ರಮಗಳ ಬಗ್ಗೆ ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vdhz864kb9vqh32wpd2xjy,imgname-rapido-driver-allegedly-sends--i-love-you--to-woman--1--1788700327173.jpg" type="image/jpeg" height="390" width="690"/>
            <content:encoded><![CDATA[&lt;h2&gt;ರ&zwj;್ಯಾಪಿಡೋ ಪಾರ್ಸೆಲ್ ಬುಕ್ ಮಾಡಿದ ಮಹಿಳೆಗೆ &lsquo;ಐ ಲವ್ ಯೂ&rsquo; ಮೆಸೇಜ್!&lt;/h2&gt;&lt;p&gt;ಆನ್&zwnj;ಲೈನ್&zwnj; ಕ್ಯಾಬ್&zwnj; ಮತ್ತು ಡೆಲಿವರಿ ಸೇವೆಗಳನ್ನು ಬಳಸುವ ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ರ&zwj;್ಯಾಪಿಡೋ ಮೂಲಕ ಪಾರ್ಸೆಲ್&zwnj; ಡೆಲಿವರಿ ಬುಕ್&zwnj; ಮಾಡಿದ್ದ ಮಹಿಳೆಯೊಬ್ಬರಿಗೆ ಚಾಲಕ ಖಾಸಗಿ ಸಂಖ್ಯೆಗೆ ಅಸಭ್ಯ ಸಂದೇಶ ಕಳುಹಿಸಿದ್ದಾನೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h3&gt;ಪಾರ್ಸೆಲ್&zwnj; ಡೆಲಿವರಿ ಬಳಿಕ ಖಾಸಗಿ ಸಂದೇಶ&lt;/h3&gt;&lt;p&gt;ಡಿಜಿಟಲ್ ರೆಪ್ಯುಟೇಷನ್&zwnj; ಕ್ಷೇತ್ರದಲ್ಲಿ ಕೆಲಸ ಮಾಡುವ ಗೀತಿಕಾ ಶ್ರೀವಾಸ್ತವ ಅವರು ತಮ್ಮ ಅನುಭವವನ್ನು ಲಿಂಕ್ಡ್&zwnj;ಇನ್&zwnj;ನಲ್ಲಿ ಹಂಚಿಕೊಂಡಿದ್ದಾರೆ. ಪಾರ್ಸೆಲ್&zwnj; ಡೆಲಿವರಿ ಬಳಿಕ ರ&zwj;್ಯಾಪಿಡೋ ಚಾಲಕ ತಮ್ಮ ವೈಯಕ್ತಿಕ ಮೊಬೈಲ್&zwnj; ಸಂಖ್ಯೆಗೆ ಸಂದೇಶ ಕಳುಹಿಸಲು ಆರಂಭಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.&lt;/p&gt;&lt;p&gt;ಚಾಲಕ ಯಾವುದೇ ಮುನ್ನೋಟವಿಲ್ಲದೆ &lsquo;ಐ ಲವ್ ಯೂ&rsquo; ಎಂದು ಮೆಸೇಜ್&zwnj; ಮಾಡಿದ್ದಾನೆ. ನಂತರ &lsquo;ಹೇಗಿದ್ದೀರಾ?&rsquo; ಎಂಬ ರೀತಿಯ ವೈಯಕ್ತಿಕ ಪ್ರಶ್ನೆಗಳನ್ನೂ ಕೇಳಿದ್ದಾನೆ ಎಂದು ಗೀತಿಕಾ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ದೂರು ನೀಡುವುದಾಗಿ ಹೇಳಿದರೂ ವ್ಯಂಗ್ಯ?&lt;/strong&gt;&lt;/p&gt;&lt;p&gt;ಚಾಲಕನ ವರ್ತನೆಯಿಂದ ಅಸಮಾಧಾನಗೊಂಡ ಗೀತಿಕಾ, ಪೊಲೀಸ್&zwnj; ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ಚಾಲಕ &lsquo;ಹೌದು, ದೂರು ನೀಡಿ&rsquo; ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾನೆ ಎನ್ನಲಾಗಿದೆ. ರ&zwj;್ಯಾಪಿಡೋದಲ್ಲೇ ದೂರು ನೀಡಿ ಎಂದು ಹೇಳುವ ಮೂಲಕ ತನ್ನ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಂತೆ ವರ್ತಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.&lt;/p&gt;&lt;p&gt;ಇದಾದ ಬಳಿಕ ಗೀತಿಕಾ ಆತನ ಸಂಖ್ಯೆಯನ್ನು ಬ್ಲಾಕ್&zwnj; ಮಾಡಿ, ಘಟನೆ ಕುರಿತು ಲಿಂಕ್ಡ್&zwnj;ಇನ್&zwnj;ನಲ್ಲಿ ಪೋಸ್ಟ್&zwnj; ಹಾಕಿದ್ದಾರೆ. &ldquo;ಪಾರ್ಸೆಲ್&zwnj; ಬುಕ್&zwnj; ಮಾಡುವುದೂ ಮಹಿಳೆಯರಿಗೆ ಸುರಕ್ಷಿತವಾಗಿಲ್ಲವೇ?&rdquo; ಎಂಬ ಪ್ರಶ್ನೆಯನ್ನು ಅವರು ರ&zwj;್ಯಾಪಿಡೋ ಸಂಸ್ಥೆಯ ಮುಂದಿಟ್ಟಿದ್ದಾರೆ.&lt;/p&gt;&lt;p&gt;&lt;strong&gt;ರ&zwj;್ಯಾಪಿಡೋ ಪ್ರತಿಕ್ರಿಯೆಗೆ ನೆಟ್ಟಿಗರ ಅಸಮಾಧಾನ&lt;/strong&gt;&lt;/p&gt;&lt;p&gt;ಗೀತಿಕಾ ಅವರ ಪೋಸ್ಟ್&zwnj; ವೈರಲ್&zwnj; ಆದ ಬಳಿಕ ರ&zwj;್ಯಾಪಿಡೋ ಸಪೋರ್ಟ್&zwnj; ತಂಡ ಪ್ರತಿಕ್ರಿಯಿಸಿ, ನಡೆದ ಅನುಭವಕ್ಕೆ ವಿಷಾದ ವ್ಯಕ್ತಪಡಿಸಿದೆ. ಗ್ರಾಹಕರ ಸುರಕ್ಷತೆ ಮತ್ತು ಗೌರವಕ್ಕೆ ಸಂಸ್ಥೆ ಆದ್ಯತೆ ನೀಡುತ್ತದೆ ಎಂದು ತಿಳಿಸಿ, ರೈಡ್&zwnj; ಐಡಿ ಹಾಗೂ ಮೊಬೈಲ್&zwnj; ಸಂಖ್ಯೆಯನ್ನು ಹಂಚಿಕೊಳ್ಳುವಂತೆ ಕೇಳಿದೆ.&lt;/p&gt;&lt;p&gt;ಆದರೆ, ಈ ಪ್ರತಿಕ್ರಿಯೆ ಕೇವಲ ಸಿದ್ಧ ಮಾದರಿಯ ಉತ್ತರದಂತಿದೆ ಎಂದು ಕೆಲವರು ಟೀಕಿಸಿದ್ದಾರೆ. ಆರೋಪಿತ ಚಾಲಕನ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಈ ಘಟನೆ ವೈಯಕ್ತಿಕ ಮಾಹಿತಿಯ ದುರುಪಯೋಗ, ಮಹಿಳಾ ಸುರಕ್ಷತೆ ಮತ್ತು ಡೆಲಿವರಿ ಸಿಬ್ಬಂದಿಯ ಹೊಣೆಗಾರಿಕೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/rapido-driver-allegedly-sends-i-love-you-to-woman-rider-linkedin-post-sparks-outrage/articleshow-lz2012q"/>
        </item>
        <item>
            <title><![CDATA[10ನೇ ವಯಸ್ಸಲ್ಲೇ ಉದ್ಯಮಿಯಾದ ಮಗನ ಜೊತೆ ಬಾಲಿವುಡ್​ ಬ್ಯೂಟಿ ಶಿಲ್ಪಾ ಶೆಟ್ಟಿ: ಅಪರೂಪದ ವಿಡಿಯೋ ವೈರಲ್​]]></title>
            <link>https://kannada.asianetnews.com/gallery/life/shilpa-shetty-with-her-son-who-became-a-businessman-at-the-age-of-10-rare-video-goes-viral-suc-mfggckl</link>
            <guid isPermaLink="true">https://kannada.asianetnews.com/gallery/life/shilpa-shetty-with-her-son-who-became-a-businessman-at-the-age-of-10-rare-video-goes-viral-suc-mfggckl</guid>
            <pubDate>Mon, 07 Sep 2026 17:14:34 +0530</pubDate>
            <description><![CDATA[&lt;p&gt;ನಟಿ ಶಿಲ್ಪಾ ಶೆಟ್ಟಿ 10 ವರ್ಷದ ಮಗ ವಿಯಾನ್ ಜೊತೆಗೆ ಕಾಣಿಸಿಕೊಂಡಿರುವ ಅಪರೂಪದ ವಿಡಿಯೋ ವೈರಲ್​ ಆಗಿದೆ. ತಮ್ಮ ಎರಡನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ ನಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xtssega1txen90z11mgge3,imgname-shilpa-shetty-1788781323728.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಶಿಲ್ಪಾ ಶೆಟ್ಟಿ 10 ವರ್ಷದ ಮಗ ವಿಯಾನ್ ಜೊತೆಗೆ ಕಾಣಿಸಿಕೊಂಡಿರುವ ಅಪರೂಪದ ವಿಡಿಯೋ ವೈರಲ್​ ಆಗಿದೆ. ತಮ್ಮ ಎರಡನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ ನಟಿ.&lt;/p&gt;&lt;img&gt;&lt;p&gt;ನಟಿ ಶಿಲ್ಪಾ ಶೆಟ್ಟಿ ಎಂದರೇನೇ ವಯಸ್ಸೇ ಆಗದ ನಟಿಯ ಪೈಕಿ ಒಬ್ಬರು ಎಂದು ಗುರುತಿಸಿಕೊಳ್ಳುವವರು. ಕಳೆದ ಜೂನ್​ಗೆ ನಟಿಗೆ 51 ವರ್ಷ ಮುಗಿದಿದೆ. ಇದರ ಹೊರತಾಗಿಯೂ ನಟಿ ಇನ್ನೂ 25-30ರ ಚೆಲುವೆಯಂತೆ ಕಂಗೊಳಿಸುತ್ತಾರೆ. ಮೇಕಪ್​ಗಿಂತಲೂ ಹೆಚ್ಚಾಗಿ ನಟಿಯ ಸೌಂದರ್ಯದ ರಹಸ್ಯ ಡಯೆಟ್​ ಜೊತೆ ಯೋಗ ಮತ್ತು ಧ್ಯಾನ. ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ದಂಪತಿ ಮದುವೆಗೆ ಈಗ 17 ವರ್ಷಗಳ ಸಂಭ್ರಮ. 2009ರಲ್ಲಿ ಮದುವೆಯಾಗಿದ್ದ ಜೋಡಿ 2012 ರಲ್ಲಿ ತಮ್ಮ ಮೊದಲ ಮಗು ವಿಯಾನ್&zwnj;ಗೆ ಅಪ್ಪ-ಅಮ್ಮ ಆದರು. ವಿಯಾನ್​ಗೆ ಈಗ 14 ವರ್ಷ. ಬಳಿಕ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸಮೀಶಾ ಎಂಬ ಮಗಳನ್ನು ದಂಪತಿ ಪಡೆದುಕೊಂಡಿದ್ದಾರೆ. ಈ ಪುಟಾಣಿಗೆ ಈಗ ಆರು ವರ್ಷ ವಯಸ್ಸು.&lt;/p&gt;&lt;img&gt;&lt;p&gt;ಶಿಲ್ಪಾ ಶೆಟ್ಟಿ ಅವರು ಮಕ್ಕಳ ಜೊತೆ ಓಪನ್​ ಆಗಿ ಕಾಣಿಸಿಕೊಳ್ಳುವುದು ಅಪರೂಪ. ಕೆಲ ದಿನಗಳ ಹಿಂದೆ ಅವರು ಮಗಳ ಜೊತೆ ಕಾಣಿಸಿಕೊಂಡಿದ್ದ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಇದೀಗ ಅವರು ಮಗ ವಿಯಾನ್​ ಜೊತೆ ಕಾಣಿಸಿಕೊಂಡಿದ್ದು, ಇದರ ವಿಡಿಯೋಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮಗ ವಿಯಾನ್ ತನ್ನ 10ನೇ ವಯಸ್ಸಿನಲ್ಲಿಯೇ ಬಿಜಿನೆಸ್​ ಪ್ರಾರಂಭಿಸಿದ್ದಾನೆ. ಶಿಲ್ಪಾ ಅವರು ಈ ಕುರಿತು ಅಂದು ಪೋಸ್ಟ್​ ಶೇರ್​ ಮಾಡಿಕೊಂಡಿದ್ದರು. ತನ್ನ ಮಗನ ಸ್ಟಾರ್ಟ್ಅಪ್ ಕಲ್ಪನೆಯನ್ನು ಘೋಷಿಸುವ ಮತ್ತು ಅವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ನೀಕರ್ಸ್ ಜೋಡಿಯನ್ನು ಪ್ರದರ್ಶಿಸುವ ವಿಡಿಯೋ ಪೋಸ್ಟ್ ಮಾಡಿದ್ದರು.&lt;/p&gt;&lt;img&gt;&lt;p&gt;ವಿಯಾನ್ 4,999 ರೂಪಾಯಿಂದ ಪ್ರಾರಂಭವಾಗುವ VR KICKSS ಹೆಸರಿನಲ್ಲಿ ಕಸ್ಟಮೈಸ್ ಮಾಡಿದ ಸರಕುಗಳನ್ನು ಮಾರಾಟ ಮಾಡುತ್ತಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿರುವ ಶಿಲ್ಪಾ &quot;ನನ್ನ ಮಗ ವಿಯಾನ್ ರಾಜ್, ಬಿಜಿನೆಸ್​ ಆರಂಭಿಸಿದ್ದಾನೆ. ಪುಟ್ಟ ಮಕ್ಕಳು ಮತ್ತು ಅವರ ದೊಡ್ಡ ಕನಸುಗಳನ್ನು ಯಾವಾಗಲೂ ಪ್ರೋತ್ಸಾಹಿಸಬೇಕು ಎನ್ನುವುದು ಇದರ ಉದ್ದೇಶ. ಸಾಹಸೋದ್ಯಮದ ಕಲ್ಪನೆ ಮತ್ತು ಪರಿಕಲ್ಪನೆಯಿಂದ ವಿನ್ಯಾಸಗಳವರೆಗೆ, ಮತ್ತು ವಿಡಿಯೋ ಕೂಡ ಎಲ್ಲವೂ ಮಗನದ್ದೇ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟಿ ಬಾಡಿಗೆ ತಾಯ್ತನದ ಮೂಲಕ ಇನ್ನೊಂದು ಮಗುವನ್ನು ಪಡೆದಿರುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಎರಡನೇ ಮಗು ಪಡೆಯಲು 5 ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಬಾಡಿಗೆ ತಾಯ್ತನತದ ಮೂಲಕ ಮಗುವನ್ನು ಪಡೆದುಕೊಂಡೆ ಎಂದಿದ್ದರು. 2012ರಲ್ಲಿ ವಿಹಾನ್ ಹುಟ್ಟಿದ ಬಳಿಕ ನಾವೆಲ್ಲರೂ ತುಂಬಾ ಖುಷಿಯಾಗಿದ್ದೆವು. ಆದಾದ ಬಳಿಕ ನಾವು ಪ್ಲಾನಿಂಗ್ ಮಾಡುತ್ತಿದ್ದೆವು. ಮತ್ತೊಂದು ಮಗು ಪಡೆಯಲು ನಾನು 5 ವರ್ಷ ಪ್ರಯತ್ನಿಸುತ್ತಿದ್ದೆ. ನಾನು ಆ ಸಮಯದಲ್ಲಿ &lsquo;ನಿಕಮ್ಮಾ&rsquo; ಹಾಗೂ &lsquo;ಹಂಗಾಮ&rsquo; ಚಿತ್ರದ ಚಿತ್ರೀಕರಣವನ್ನು ಸೈನ್ ಮಾಡಿ ಡೇಟ್ಸ್ ಮುಂದೂಡಿದ್ದೆ. ಆದರೆ ಮಗು ಹುಟ್ಟುವುದು ಸಾಧ್ಯವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ನನ್ನ ದೇಹವು ಗರ್ಭಧಾರಣೆಗೆ ಸ್ಪಂದಿಸುತ್ತಿರಲಿಲ್ಲ. ಇನ್ನೊಂದು ಮಗುವನ್ನು ಪಡೆಯಲು ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆ ಅಡ್ಡಿಯಾಯಿತು. ಈ ಸಮಸ್ಯೆಯಿಂದ ಹಲವಾರು ಬಾರಿ ಗರ್ಭಪಾತವಾಗಿತ್ತು ಎಂದು ಶಿಲ್ಪಾ ಶೆಟ್ಟಿ ತಿಳಿಸಿದರು.&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟಿ ಬಾಡಿಗೆ ತಾಯ್ತನದ ಮೂಲಕ ಇನ್ನೊಂದು ಮಗುವನ್ನು ಪಡೆದಿರುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಎರಡನೇ ಮಗು ಪಡೆಯಲು 5 ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಬಾಡಿಗೆ ತಾಯ್ತನತದ ಮೂಲಕ ಮಗುವನ್ನು ಪಡೆದುಕೊಂಡೆ ಎಂದಿದ್ದರು. 2012ರಲ್ಲಿ ವಿಹಾನ್ ಹುಟ್ಟಿದ ಬಳಿಕ ನಾವೆಲ್ಲರೂ ತುಂಬಾ ಖುಷಿಯಾಗಿದ್ದೆವು. ಆದಾದ ಬಳಿಕ ನಾವು ಪ್ಲಾನಿಂಗ್ ಮಾಡುತ್ತಿದ್ದೆವು. ಮತ್ತೊಂದು ಮಗು ಪಡೆಯಲು ನಾನು 5 ವರ್ಷ ಪ್ರಯತ್ನಿಸುತ್ತಿದ್ದೆ. ನಾನು ಆ ಸಮಯದಲ್ಲಿ &lsquo;ನಿಕಮ್ಮಾ&rsquo; ಹಾಗೂ &lsquo;ಹಂಗಾಮ&rsquo; ಚಿತ್ರದ ಚಿತ್ರೀಕರಣವನ್ನು ಸೈನ್ ಮಾಡಿ ಡೇಟ್ಸ್ ಮುಂದೂಡಿದ್ದೆ. ಆದರೆ ಮಗು ಹುಟ್ಟುವುದು ಸಾಧ್ಯವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ನನ್ನ ದೇಹವು ಗರ್ಭಧಾರಣೆಗೆ ಸ್ಪಂದಿಸುತ್ತಿರಲಿಲ್ಲ. ಇನ್ನೊಂದು ಮಗುವನ್ನು ಪಡೆಯಲು ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆ ಅಡ್ಡಿಯಾಯಿತು. ಈ ಸಮಸ್ಯೆಯಿಂದ ಹಲವಾರು ಬಾರಿ ಗರ್ಭಪಾತವಾಗಿತ್ತು ಎಂದು ಶಿಲ್ಪಾ ಶೆಟ್ಟಿ ತಿಳಿಸಿದರು.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/shilpa-shetty-with-her-son-who-became-a-businessman-at-the-age-of-10-rare-video-goes-viral-suc-mfggckl"/>
        </item>
        <item>
            <title><![CDATA[Deepika Padukone: 2ನೇ ಮಗುವಿಗೆ ಕ್ಷಣಗಣನೆ; ಮಗಳ ಹುಟ್ಟುಹಬ್ಬಕ್ಕೆ ಬೇಬಿಬಂಪ್​ ಷೋ- ಕ್ಯೂಟ್​ ಫೋಟೋಸ್​]]></title>
            <link>https://kannada.asianetnews.com/gallery/relationship/deepika-padukone-countdown-to-2nd-child-baby-bump-show-for-daughters-birthday-cute-photos-suc-r2wvwec</link>
            <guid isPermaLink="true">https://kannada.asianetnews.com/gallery/relationship/deepika-padukone-countdown-to-2nd-child-baby-bump-show-for-daughters-birthday-cute-photos-suc-r2wvwec</guid>
            <pubDate>Tue, 08 Sep 2026 20:19:58 +0530</pubDate>
            <description><![CDATA[ನಟಿ ದೀಪಿಕಾ ಪಡುಕೋಣೆ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಏಳು ತಿಂಗಳ ಗರ್ಭಿಣಿಯಾಗಿದ್ದರೂ, ಅವರು 'ರಾಕಾ' ಚಿತ್ರಕ್ಕಾಗಿ ಡ್ಯೂಪ್ ಬಳಸದೆ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸುತ್ತಿದ್ದು, ಅವರ ಈ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಚಿತ್ರತಂಡದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m20qqm32v25h4hvxsk7msbvz,imgname-deepika-padukone-and-ranveer-singh-01-1788878770274.jpg" type="image/jpeg" height="390" width="690"/>
            <content:encoded><![CDATA[ನಟಿ ದೀಪಿಕಾ ಪಡುಕೋಣೆ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಏಳು ತಿಂಗಳ ಗರ್ಭಿಣಿಯಾಗಿದ್ದರೂ, ಅವರು 'ರಾಕಾ' ಚಿತ್ರಕ್ಕಾಗಿ ಡ್ಯೂಪ್ ಬಳಸದೆ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸುತ್ತಿದ್ದು, ಅವರ ಈ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಚಿತ್ರತಂಡದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.&lt;img&gt;&lt;p&gt;ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಈಗ ಎರಡನೆಯ ಬಾರಿ ಅಮ್ಮ ಆಗ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮಗು ಹುಟ್ಟಲಿದೆ. ಸೆಪ್ಟೆಂಬರ್ 8, 2024ರಂದು ಮೊದಲ ಮಗುವನ್ನು ಬರಮಾಡಿಕೊಂಡಿದ್ದ ದೀಪಿಕಾ ಮತ್ತು ರಣವೀರ್​ ಸಿಂಗ್​ ಜೋಡಿ ಈಗ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಎರಡನೆಯ ಮಗು ಕೂಡ ಇದೇ ದಿನದಂದು ಹುಟ್ಟುವ ನಿರೀಕ್ಷೆ ಇಟ್ಟುಕೊಂಡಿದ್ದಂತಿದೆ ದಂಪತಿ. ಆದರೆ ಇನ್ನೊಂದು ವಾರದಲ್ಲಿ ಮಗು ಬರುವ ನಿರೀಕ್ಷೆ ಇದೆ.&lt;/p&gt;&lt;img&gt;&lt;p&gt;ಇದೀಗ ದಂಪತಿಯ ಮಗಳು ದುವಾಗೆ ಎರಡು ವರ್ಷಗಳ ಸಂಭ್ರಮ. ಈ ಸಂಭ್ರಮದಂದೇ ಎರಡನೆಯ ಮಗುವಿನ ಬೇಬಿಬಂಪ್​ ಷೋ ಮಾಡಿಸಿಕೊಂಡಿದ್ದಾರೆ ದೀಪಿಕಾ ಪಡುಕೋಣೆ. ಈ ಹಿಂದೆ ಮೊದಲ ಮಗುವಿನ ಬೇಬಿ ಬಂಪ್​ ಷೋ ಮಾಡಿಸಿಕೊಂಡಾಗ ಸಾಕಷ್ಟು ಟ್ರೋಲ್​ಗೂ ಒಳಗಾಗಿದ್ದರು. ಇದಕ್ಕೆ ಕಾರಣ, ಅವರು ಬೇಬಿ ಬಂಪ್​ ಹೆಸರಿನಲ್ಲಿ ಧರಿಸಿದ್ದ ಬಟ್ಟೆಯ ಬಗ್ಗೆ ಸಾಕಷ್ಟು ಮಂದಿ ಟೀಕೆ ಮಾಡಿದ್ದರು. ಇದೀಗ ನಟಿ, ಮತ್ತೊಮ್ಮೆ ಬೇಬಿ ಬಂಪ್​ ಷೋಮಾಡಿಸಿಕೊಂಡಿದ್ದು, ಮೊದಲಿಗಿಂತ ಈಗ ಪರವಾಗಿಲ್ಲ. ಇಷ್ಟಾದರೂ ನೋಡುವ ಹಾಗೆ ಇದೆ ಎನ್ನುವ ಕಮೆಂಟ್ಸ್​ ಬರುತ್ತಿವೆ.&lt;/p&gt;&lt;img&gt;&lt;p&gt;ಅದೇನೇ ಇದ್ದರೂ, ಅಷ್ಟಕ್ಕೂ ಸಿನಿಮಾಗಳ ವಿಷಯಕ್ಕೆ ಬಂದಾಗ ಎಂದಿಗೂ ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವ ನಟಿಯೇ ಅಲ್ಲ ದೀಪಿಕಾ. ಇದೇ ಕಾರಣಕ್ಕೆ ಇಂದಿಗೂ ಅವರನ್ನು ಚಿತ್ರರಂಗದಲ್ಲಿ ನಂಬರ್ ಒನ್ ನಟಿ ಎಂದೇ ಪರಿಗಣಿಸಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಈ ಏಳನೆ ತಿಂಗಳಿನಲ್ಲಿಯೂ ಅವರು ತಮ್ಮ ಸಿನಿಮಾದ ಮೇಲೆ ತೋರಿಸುತ್ತಿರುವ ಪ್ರೀತಿ!&lt;/p&gt;&lt;img&gt;&lt;p&gt;ನಟಿ ದೀಪಿಕಾ, ಶೀಘ್ರದಲ್ಲೇ ಅಲ್ಲು ಅರ್ಜುನ್ ಜೊತೆ ರಾಕಾ ಮೂವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರು ಚಿತ್ರಕ್ಕಾಗಿ ಆಕ್ಷನ್ ಸನ್ನಿವೇಶಗಳನ್ನೂ ಮಾಡಬೇಕಾಗಿದೆ. ಆದರೆ ಏಳು ತಿಂಗಳ ಗರ್ಭಿಣಿ ಹೊರತಾಗಿಯೂ ದೀಪಿಕಾ ಆ್ಯಕ್ಷನ್​ ದೃಶ್ಯಗಳಿಗೆ ಡ್ಯೂಪ್​ ಬಳಸದೇ ಖುದ್ದು ಮಾಡಿದ್ದರು.&lt;/p&gt;&lt;img&gt;&lt;p&gt;ದೀಪಿಕಾ ಪ್ರತಿದಿನ ರಾಕಾ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅವರ ಎಂಟು ಗಂಟೆಗಳ ಕೆಲಸದ ಪಾಳಿಗಳು ಮತ್ತು ಅವರ ಕೆಲಸ-ಜೀವನದ ಸಮತೋಲನವನ್ನು ಸಮತೋಲನಗೊಳಿಸುವ ನಡುವೆ, ದೀಪಿಕಾ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ದೈಹಿಕವಾಗಿ ಆಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದರು.&lt;/p&gt;&lt;img&gt;&lt;p&gt;ಏಳು ತಿಂಗಳ ಗರ್ಭಾವಸ್ಥೆಯಲ್ಲಿಯೂ ಸಹ, ದೀಪಿಕಾ ಮಾತೃತ್ವ ರಜೆಗೆ ಹೋಗುವ ಮೊದಲು ಈ ಯೋಜನೆಯನ್ನು ಪೂರ್ಣಗೊಳಿಸುವ ಮತ್ತು ಚಿತ್ರದ ಹೆಚ್ಚಿನ ಬೇಡಿಕೆಗಳನ್ನು ಯಶಸ್ವಿಯಾಗಿ ಪೂರೈಸುವತ್ತ ತನ್ನ ಸಂಪೂರ್ಣ ಗಮನವನ್ನು ಕೇಂದ್ರೀಕರಿಸುತ್ತಿದ್ದರು.&lt;/p&gt;&lt;img&gt;&lt;p&gt;&quot;ರಾಕಾ&quot; ತಂಡವು ದೀಪಿಕಾ ಪಡುಕೋಣೆ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ತುಂಬಾ ಪ್ರಭಾವಿತವಾಗಿದೆ. ತಂಡದ ಸದಸ್ಯರೊಬ್ಬರು, &quot;ದೀಪಿಕಾ ಮಾತೃತ್ವ ರಜೆಗೆ ಹೋಗುವ ಮೊದಲು ಚಿತ್ರವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ದೃಢನಿಶ್ಚಯ ಮಾಡಿದ್ದರು. ಕೆಲವು ಸಾಹಸ ಸನ್ನಿವೇಶಗಳು ಅತ್ಯಂತ ಕಷ್ಟಕರ ಮತ್ತು ದಣಿದಿದ್ದವು, ಆದರೆ ಈ ಸವಾಲುಗಳ ಹೊರತಾಗಿಯೂ, ಅವರು ಎಲ್ಲವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಸೆಟ್&zwnj;ನಲ್ಲಿರುವ ಎಲ್ಲರೂ ಅವರ ಮನೋಭಾವವನ್ನು ಹೊಗಳಿದ್ದಾರೆ. ಮನೆಯಲ್ಲಿ ಅವರಿಗೆ ಒಂದೂವರೆ ವರ್ಷದ ಮಗಳಿದ್ದಾಳೆ, ಆಕೆಗೆ ಅವಳು ತನ್ನ ಪೂರ್ಣ ಸಮಯ ಮತ್ತು ಪ್ರೀತಿಯನ್ನು ನೀಡುತ್ತಾಳೆ ಎಂಬುದು ಗಮನಿಸಬೇಕಾದ ಸಂಗತಿ ಎಂದಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/deepika-padukone-countdown-to-2nd-child-baby-bump-show-for-daughters-birthday-cute-photos-suc-r2wvwec"/>
        </item>
        <item>
            <title><![CDATA[Bigg Boss: ಪತ್ನಿ ಬಳಿ ಮಾತ್ರ ಇದನ್ನು ಟ್ರೈ ಮಾಡ್ಲೇ ಬೇಡಿ: ಸ್ಪರ್ಧಿಗಳಿಗೆ ಓಂ ಪ್ರಕಾಶ್​ ಕಿವಿಮಾತು]]></title>
            <link>https://kannada.asianetnews.com/gallery/tv-talk/bigg-boss-13-dont-try-this-only-with-your-wife-om-prakashs-advice-to-contestants-suc-shvuriv</link>
            <guid isPermaLink="true">https://kannada.asianetnews.com/gallery/tv-talk/bigg-boss-13-dont-try-this-only-with-your-wife-om-prakashs-advice-to-contestants-suc-shvuriv</guid>
            <pubDate>Tue, 08 Sep 2026 19:52:13 +0530</pubDate>
            <description><![CDATA[ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಬಿಗ್ ಬಾಸ್&zwnj;ಗೆ ಎರಡನೇ ಬಾರಿಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ ಸ್ಪರ್ಧಿಗಳಿಗೆ ಹೆಂಡತಿಯ ಎದುರು ಗೆಲ್ಲಲು ಪ್ರಯತ್ನಿಸಬೇಡಿ ಎಂದು ಕಿವಿಮಾತು ಹೇಳಿದ್ದು, ಸುದೀಪ್ ಅವರ ಪಯಣವನ್ನು ಟೆಸ್ಟ್ ಮ್ಯಾಚ್&zwnj;ಗೆ ಹೋಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m20p6xgjhx9ewr8kb964190x,imgname-bigg-boss-13-1788877174290.jpg" type="image/jpeg" height="390" width="690"/>
            <content:encoded><![CDATA[ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಬಿಗ್ ಬಾಸ್&zwnj;ಗೆ ಎರಡನೇ ಬಾರಿಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ ಸ್ಪರ್ಧಿಗಳಿಗೆ ಹೆಂಡತಿಯ ಎದುರು ಗೆಲ್ಲಲು ಪ್ರಯತ್ನಿಸಬೇಡಿ ಎಂದು ಕಿವಿಮಾತು ಹೇಳಿದ್ದು, ಸುದೀಪ್ ಅವರ ಪಯಣವನ್ನು ಟೆಸ್ಟ್ ಮ್ಯಾಚ್&zwnj;ಗೆ ಹೋಲಿಸಿದ್ದಾರೆ.&lt;img&gt;&lt;p&gt;ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಎರಡನೇ ಬಾರಿಗೆ ಬಿಗ್ ಬಾಸ್​ಗೆ ಬಂದಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಬಿಗ್ ಹಿಟ್ ನೀಡಿದ ʻಹುಚ್ಚʼ ಸಿನಿಮಾದ ನಿರ್ದೇಶಕರೇ ಈ ಓಂ ಪ್ರಕಾಶ್ ರಾವ್. ಈ ಹಿಂದೆ ಅವರು ಬಿಗ್​ಬಾಸ್​ ಮನೆಗೆ ಬಂದಿದ್ದರೂ, ಅನಾರೋಗ್ಯ ಕಾರಣದಿಂದ ಹೊರಕ್ಕೆ ಹೋಗಿದ್ದರು. ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.&lt;/p&gt;&lt;img&gt;&lt;p&gt;ಇವರಿದ್ದರೆ ಹಾಸ್ಯಕ್ಕೆ ಕೊರತೆ ಇಲ್ಲ ಎಂದೇ ಹೇಳಲಾಗುತ್ತಿದೆ. ಆದ್ದರಿಂದ ಅವರ ಹಾಸ್ಯದ ತುಣುಕುಗಳು ಇನ್ನಷ್ಟೇ ಒಂದೊಂದೇ ಹೊರಬರಬೇಕಿದೆ. ಅವರೀಗ ಬಿಗ್​ಬಾಸ್​ ಸ್ಪರ್ಧಿಗಳಿಗೆ ಒಂದು ಕಿವಿಮಾತು ಹೇಳಿಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅದೇನೆಂದರೆ, ಪ್ರಪಂಚದಲ್ಲಿ ಎಲ್ಲಿ ಬೇಕಾದ್ರೂ ಗೆಲ್ಲೋಕೆ ಟ್ರೈ ಮಾಡಿ, ಆದ್ರೆ ಹೆಂಡ್ತಿ ಎದುರು ಮಾತ್ರ ಇದನ್ನು ಟ್ರೈ ಮಾಡಬೇಡಿ ಎಂದಿದ್ದಾರೆ. ಇದಕ್ಕೆ ಅಲ್ಲಿ ಇದ್ದವರು ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಬಳಿಕ, ಗಗನ್​ ಚಿನ್ನಪ್ಪ ಅವರು, ನನ್ನ ಅಪ್ಪನೂ ಹಾಗೆ ಹೇಳ್ತಾರೆ ಎಂದರು.&lt;/p&gt;&lt;img&gt;&lt;p&gt;ಅಂದಹಾಗೆ, ʻಹುಚ್ಚʼ ಸಿನಿಮಾದಲ್ಲಿ ನಾಯಕಿ ರೇಖಾ ದಾಸ್ ಅವರ ಅಕ್ಕನ ಪಾತ್ರದಲ್ಲಿ ನಟಿಸಿದ್ದವರೇ ಓಂ ಪ್ರಕಾಶ್ ಅವರ ಧರ್ಮಪತ್ನಿ. ಇದನ್ನು ಬಿಗ್​ಬಾಸ್​ ವೇದಿಕೆ ಮೇಲೆ ಸುದೀಪ್ ಹೇಳಿದ್ದರು.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ, ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕೊಟ್ಟʻಹುಚ್ಚʼ ಸಿನಿಮಾದ ನೆನಪುಗಳನ್ನ ಮೆಲುಕು ಹಾಕಿದರು. &ldquo;ಹುಚ್ಚ ಸಿನಿಮಾದಲ್ಲಿ ನಾಯಕಿ ರೇಖಾ ವೇದವ್ಯಾಸ್ ಅವರ ಅಕ್ಕನ ಪಾತ್ರದಲ್ಲಿ ನಟಿಸಿದ್ದವರೇ ಓಂ ಪ್ರಕಾಶ್ ಅವರ ಪತ್ನಿ. ನನ್ನ ಸಿನಿಮಾದ ಕ್ಲೈಮ್ಯಾಕ್ಸ್ ಏನಾಯ್ತೋ ಗೊತ್ತಿಲ್ಲ, ಆದರೆ ಇವರ ಜೀವನದ ಕ್ಲೈಮ್ಯಾಕ್ಸ್ ಮಾತ್ರ ಎಕ್ಸ್​ಟ್ರಾ ಆರ್ಡಿನರಿ ಎಂದರು.&lt;/p&gt;&lt;img&gt;&lt;p&gt;ಓಂ ಪ್ರಕಾಶ್ ರಾವ್ ಅವರ ಬಿಗ್ ಬಾಸ್ ಪಯಣವನ್ನ ಕ್ರಿಕೆಟ್​ಗೆ ಹೋಲಿಸಿದ ಸುದೀಪ್, &ldquo;ಕೆಲವರು ಬಿಗ್ ಬಾಸ್&zwnj;ಗೆ 20-20 ಮ್ಯಾಚ್ ತರಹ ಬಂದು ಹೋಗ್ತಾರೆ. ಇನ್ನು ಕೆಲವರಿಗೆ 50 ಓವರ್&zwnj;ಗಳ ಇನ್ನಿಂಗ್ಸ್. ಆದರೆ ನೀವು ಮಾತ್ರ ಇದನ್ನ ಟೆಸ್ಟ್ ಮ್ಯಾಚ್ ಮಾಡಿಕೊಂಡು ಬಿಟ್ಟಿದ್ದೀರ&rdquo; ಎಂದರು.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-13-dont-try-this-only-with-your-wife-om-prakashs-advice-to-contestants-suc-shvuriv"/>
        </item>
        <item>
            <title><![CDATA[ನಾಳೆ 9/9: ನಿಮ್ಮ ಜೀವನ ಬದಲಿಸುವ ರಹಸ್ಯ ದಿನವಿದು- ವರ್ಷಕ್ಕೊಮ್ಮೆ ಬರುವ ಅವಕಾಶವಿದು; ಕನಸು ನನಸಾಗಿಸಿಕೊಳ್ಳಲು ಹೀಗೆ ಮಾಡಿ]]></title>
            <link>https://kannada.asianetnews.com/astrology/what-the-9-and-9-portal-is-asking-you-to-put-down-write-one-powerful-affirmation-9-times-for-9-days-suc/articleshow-stvc4aw</link>
            <guid isPermaLink="true">https://kannada.asianetnews.com/astrology/what-the-9-and-9-portal-is-asking-you-to-put-down-write-one-powerful-affirmation-9-times-for-9-days-suc/articleshow-stvc4aw</guid>
            <pubDate>Tue, 08 Sep 2026 18:17:23 +0530</pubDate>
            <description><![CDATA[ಸಂಖ್ಯಾಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ 9 (9/9) ಒಂದು ಚಕ್ರದ ಅಂತ್ಯ ಮತ್ತು ಹೊಸ ಆರಂಭವನ್ನು ಸೂಚಿಸುವ ಶಕ್ತಿಶಾಲಿ ದಿನವಾಗಿದೆ. ಈ ದಿನದಂದು, ಹಳೆಯ ನಕಾರಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡಿ, ಧ್ಯಾನ ಮತ್ತು ಕೆಲವು ಆಚರಣೆಗಳ ಮೂಲಕ ಹೊಸ ಆಸೆಗಳನ್ನು ಈಡೇರಿಸಿಕೊಳ್ಳಲು ಬ್ರಹ್ಮಾಂಡವು ಅವಕಾಶ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m20gwvra9j08gszc97nqtypq,imgname-09-09-portal-1788871601930.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾಳೆ ಅರ್ಥಾತ್​ ಸೆಪ್ಟೆಂಬರ್​ 9. ಸೆಪ್ಟೆಂಬರ್​ 9ನೇ ತಿಂಗಳಾಗಿರುವ ಹಿನ್ನೆಲೆಯಲ್ಲಿ 09ನೇ ತಾರೀಖು ಬರುವ ಕಾರಣದಿಂದ 09/09. ಆಗಲಿದೆ. ಇದು ಪೂರ್ಣಗೊಳ್ಳುವ ಶಕ್ತಿಯೊಂದಿಗೆ ಸಂಬಂಧಿಸಿದ ಪ್ರಬಲ ದಿನಾಂಕವಾಗಿದೆ. ನೀವು ಒಂದು ಅಧ್ಯಾಯವನ್ನು ಮುಚ್ಚಲು ಸಿದ್ಧರಾಗಿದ್ದರೆ, ಹೊಸತನಕ್ಕೆ ದಾರಿ ಮಾಡಿಕೊಡಲು ಇದು ಅತ್ಯಂತ ಸುಸಮಯವಾಗಿದೆ. ಸಂಖ್ಯಾಶಾಸ್ತ್ರದಲ್ಲಿ, ಒಂಬತ್ತು ಒಂದು ಚಕ್ರದ ಅಂತ್ಯವನ್ನು ಪ್ರತಿನಿಧಿಸುತ್ತದೆ. ಇದು ಅನುಭವದ ಬುದ್ಧಿವಂತಿಕೆ ಮತ್ತು ಅದರ ಮೊದಲು ಬಂದ ಎಲ್ಲವನ್ನೂ ಹೊಂದಿರುವ ಅಂತಿಮ ಏಕ-ಅಂಕಿಯ ಸಂಖ್ಯೆಯಾಗಿದೆ. ಅಂತ್ಯಗಳು ನಷ್ಟ, ದುಃಖ ಅಥವಾ ದುಃಖದ ಬಗ್ಗೆಯೇ ಇರಬೇಕಾಗಿಲ್ಲ. ಕೆಲವು ಸನ್ನಿವೇಶಗಳು ತಮ್ಮದೇ ಆದ ಹಾದಿಯಲ್ಲಿ ಸಾಗುತ್ತವೆ. ಪ್ರತಿಯೊಂದು ಅಂತ್ಯವು ಹೊಸದಕ್ಕೆ ಜಾಗವನ್ನು ಸೃಷ್ಟಿಸುತ್ತದೆ ಮತ್ತು 9 ನಿಮ್ಮೊಂದಿಗೆ ಎಲ್ಲವನ್ನೂ ಮುಂದಕ್ಕೆ ತರಲು ಸಾಧ್ಯವಿಲ್ಲ ಎಂದು ನಿಮಗೆ ನೆನಪಿಸುತ್ತದೆ. ಕೆಲವೊಮ್ಮೆ ನಿಮ್ಮ ಭವಿಷ್ಯಕ್ಕಾಗಿ ನೀವು ಮಾಡಬಹುದಾದ ಅತ್ಯಂತ ಶಕ್ತಿಶಾಲಿ ವಿಷಯವೆಂದರೆ ಅದರ ಉದ್ದೇಶವನ್ನು ಈಗಾಗಲೇ ಪೂರೈಸಿರುವುದನ್ನು ಗುರುತಿಸುವುದು.&lt;/p&gt;&lt;h2&gt;&lt;strong&gt;ಏನಿದು 9/9 ಪೋರ್ಟಲ್?&lt;/strong&gt;&lt;/h2&gt;&lt;p&gt;ಒಂಬತ್ತನೇ ತಿಂಗಳ ಒಂಬತ್ತನೇ ದಿನವು ಒಂಬತ್ತು ಶಕ್ತಿಯ ಎರಡು ಪ್ರಮಾಣವನ್ನು ರಚಿಸಿದಾಗ 9/9 ಪೋರ್ಟಲ್ ಸಂಭವಿಸುತ್ತದೆ. ಒಂಬತ್ತು ಪೂರ್ಣತೆ, ಬುದ್ಧಿವಂತಿಕೆ, ಕರುಣೆ, ಕ್ಷಮೆ ಮತ್ತು ಶರಣಾಗತಿಯೊಂದಿಗೆ ಸಂಬಂಧ ಹೊಂದಿದೆ. ದೀರ್ಘ ಪ್ರಯಾಣದ ಕೊನೆಯಲ್ಲಿ ನೀವು ಅಂತಿಮವಾಗಿ ಹಿಂತಿರುಗಿ ನೋಡಿದಾಗ ಮತ್ತು ನೀವು ಅದರ ಮಧ್ಯದಲ್ಲಿದ್ದಾಗ ನೋಡಲಾಗದ ಏನನ್ನಾದರೂ ಅರ್ಥಮಾಡಿಕೊಳ್ಳುವ ಕ್ಷಣ ಎಂದು ಭಾವಿಸಿ.&lt;/p&gt;&lt;p&gt;9-9 ಪೋರ್ಟಲ್ ಅಭಿವ್ಯಕ್ತಿ (9/9 Portal Manifestation) ಎಂಬುದು ಸಂಖ್ಯಾಶಾಸ್ತ್ರ (Numerology) ಮತ್ತು ಆಧ್ಯಾತ್ಮಿಕ ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರವಾದ ದಿನವೆಂದು ಪರಿಗಣಿಸಲ್ಪಟ್ಟಿದೆ. ಪ್ರತಿ ವರ್ಷದ ಸೆಪ್ಟೆಂಬರ್ 9 ರಂದು (9ನೇ ತಿಂಗಳ 9ನೇ ದಿನ) ಈ ಕಾಸ್ಮಿಕ್ ಗೇಟ್&zwnj;ವೇ ತೆರೆದುಕೊಳ್ಳುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, 9 ಎಂಬ ಸಂಖ್ಯೆಯು ಪೂರ್ಣತೆ (Completion), ಮುಕ್ತಾಯ, ಆಧ್ಯಾತ್ಮಿಕ ಜ್ಞಾನ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ. ಈ ದಿನದಂದು ಬ್ರಹ್ಮಾಂಡದ ಶಕ್ತಿಯು ನಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು (Manifestation) ಮತ್ತು ಹಳೆಯ ನೆಗೆಟಿವ್ ಎನರ್ಜಿಯನ್ನು ಹೊರಹಾಕಲು ನಮಗೆ ಅದ್ಭುತ ಅವಕಾಶವನ್ನು ನೀಡುತ್ತದೆ.&lt;/p&gt;&lt;h3&gt;&lt;strong&gt;9-9 ಪೋರ್ಟಲ್&zwnj;ನ ಮುಖ್ಯ ಅಧ್ಯಾತ್ಮಿಕ ಮಹತ್ವಗಳು:&lt;/strong&gt;&lt;/h3&gt;&lt;p&gt;ಹಳೆಯ ಚಕ್ರಗಳ ಮುಕ್ತಾಯ: ನಿಮ್ಮ ಜೀವನದಲ್ಲಿ ನಿಮಗೆ ಒಳಿತನ್ನು ಮಾಡದ ಹಳೆಯ ಅಭ್ಯಾಸಗಳು, ವಿಷಕಾರಿ ಸಂಬಂಧಗಳು ಅಥವಾ ನಕಾರಾತ್ಮಕ ಆಲೋಚನೆಗಳನ್ನು ಕೊನೆಗೊಳಿಸಲು ಇದು ಸೂಕ್ತ ಸಮಯ.&lt;/p&gt;&lt;p&gt;ಕರ್ಮದ ಬಿಡುಗಡೆ ಮತ್ತು ಚಿಕಿತ್ಸೆ (Karmic Release): ಹಳೆಯ ಕರ್ಮಗಳ ಬಂಧನದಿಂದ ಮುಕ್ತಿ ಪಡೆಯಲು, ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳಲು ಮತ್ತು ಭಾವನಾತ್ಮಕವಾಗಿ ಗುಣಮುಖರಾಗಲು ಈ ದಿನದ ಶಕ್ತಿ ನೆರವಾಗುತ್ತದೆ.&lt;/p&gt;&lt;p&gt;ಉನ್ನತ ಉದ್ದೇಶದ ಜೋಡಣೆ: ನಿಮ್ಮ ಆತ್ಮದ ನಿಜವಾದ ಉದ್ದೇಶ (Soul Purpose) ಏನೆಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಬ್ರಹ್ಮಾಂಡದೊಂದಿಗೆ ನಿಮ್ಮ ಮನಸ್ಸನ್ನು ಜೋಡಿಸಲು ಇದು ಸಹಾಯ ಮಾಡುತ್ತದೆ.&lt;/p&gt;&lt;h3&gt;&lt;strong&gt;ನೀವೇನು ಮಾಡಬೇಕು?&lt;/strong&gt;&lt;/h3&gt;&lt;p&gt;ಈ ದಿನದ ಧನಾತ್ಮಕ ಶಕ್ತಿಯನ್ನು ಬಳಸಿಕೊಂಡು ನಿಮ್ಮ ಆಸೆಗಳನ್ನು ಶೀಘ್ರವಾಗಿ ಈಡೇರಿಸಿಕೊಳ್ಳಲು ಈ ಕೆಳಗಿನ ಸರಳ ಆಚರಣೆಗಳನ್ನು (Rituals) ಮಾಡಬಹುದು:&lt;/p&gt;&lt;p&gt;1. ಬಿಡುಗಡೆ ಪತ್ರ ಬರೆಯುವುದು (The Release Letter)ಒಂದು ಬಿಳಿ ಕಾಗದವನ್ನು ತೆಗೆದುಕೊಳ್ಳಿ.ನಿಮ್ಮ ಜೀವನದಿಂದ ನೀವು ಯಾವುದನ್ನು ದೂರ ಮಾಡಬೇಕೆಂದುಕೊಂಡಿದ್ದೀರೋ (ಭಯ, ಆತಂಕ, ಹಳೆಯ ನೆನಪುಗಳು, ಕೆಟ್ಟ ಅಭ್ಯಾಸಗಳು) ಅವುಗಳನ್ನು ಬರೆಯಿರಿ.ಅದನ್ನು ಓದಿ, ಮನಸ್ಸಿನಲ್ಲೇ ಬ್ರಹ್ಮಾಂಡಕ್ಕೆ ಧನ್ಯವಾದ ತಿಳಿಸಿ, ಆ ಕಾಗದವನ್ನು ಸುರಕ್ಷಿತವಾಗಿ ಸುಟ್ಟುಹಾಕಿ ಅಥವಾ ಹರಿದು ಹಾಕಿ. ಇದು ನಿಮ್ಮ ಹಳೆಯ ಶಕ್ತಿಯನ್ನು ಮುಕ್ತಗೊಳಿಸುತ್ತದೆ&lt;/p&gt;&lt;p&gt;2. 9&times;9 ಅಭಿವ್ಯಕ್ತಿ ವಿಧಾನ (9x9 Manifestation Method)ನೀವು ಜೀವನದಲ್ಲಿ ಏನನ್ನು ಸಾಧಿಸಬೇಕು ಅಥವಾ ಪಡೆಯಬೇಕು ಎಂದುಕೊಂಡಿದ್ದೀರೋ ಅದನ್ನು ಒಂದು ಧನಾತ್ಮಕ ವಾಕ್ಯದಲ್ಲಿ (Affirmation) ಬರೆಯಿರಿ.ಉದಾಹರಣೆಗೆ: &quot;ನಾನು ಸಂಪೂರ್ಣವಾಗಿ ಆರೋಗ್ಯಶಾಲಿಯಾಗಿದ್ದೇನೆ ಮತ್ತು ಸಂತೋಷವಾಗಿದ್ದೇನೆ&quot;.ಈ ವಾಕ್ಯವನ್ನು ಸತತ 9 ದಿನಗಳ ಕಾಲ ಪ್ರತಿದಿನ 9 ಬಾರಿ ಬರೆಯಿರಿ (ಸೆಪ್ಟೆಂಬರ್ 9 ರಿಂದ ಪ್ರಾರಂಭಿಸಿ)&lt;/p&gt;&lt;p&gt;3. ಧ್ಯಾನ ಮತ್ತು ಜರ್ನಲಿಂಗ್ (Meditation &amp;amp; Journaling)ಸೆಪ್ಟೆಂಬರ್ 9 ರಂದು ಬೆಳಗ್ಗೆ ಅಥವಾ ರಾತ್ರಿ 9:09 ಗಂಟೆಗೆ ಶಾಂತವಾಗಿ ಕುಳಿತು ಧ್ಯಾನ ಮಾಡಿ.ನಿಮ್ಮ ಮುಂದಿನ ಜೀವನದ ಗುರಿಗಳು ಮತ್ತು ಕನಸುಗಳನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ (Journaling)&lt;/p&gt;&lt;p&gt;ನೆನಪಿರಲಿ: 9-9 ಪೋರ್ಟಲ್ ಎಂದರೆ ಕೇವಲ ಆಸೆಗಳನ್ನು ಕೇಳುವುದಲ್ಲ, ಹೊಸ ಬದಲಾವಣೆಗಳಿಗೆ ಜಾಗ ಮಾಡಿಕೊಡಲು ಹಳೆಯದನ್ನು ಪ್ರೀತಿಯಿಂದ ಬಿಟ್ಟುಕೊಡುವುದಾಗಿದೆ (Letting Go).&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/astrology/what-the-9-and-9-portal-is-asking-you-to-put-down-write-one-powerful-affirmation-9-times-for-9-days-suc/articleshow-stvc4aw"/>
        </item>
        <item>
            <title><![CDATA[ಸ್ಪಿತಿ ಕಣಿವೆಯಲ್ಲಿ ಬೌದ್ಧ ಭಿಕ್ಕುಗಳ ಜೊತೆ ಫುಟ್‌ಬಾಲ್ ಆಡಿ ನೆಟ್ಟಿಗರ ಮನಗೆದ್ದ ವಿಶೇಷ ಅತಿಥಿ!]]></title>
            <link>https://kannada.asianetnews.com/relationship/golden-retriever-dog-pawnaldo-plays-football-with-monks-in-spiti-valley-viral-video-gdp/articleshow-u4ipchy</link>
            <guid isPermaLink="true">https://kannada.asianetnews.com/relationship/golden-retriever-dog-pawnaldo-plays-football-with-monks-in-spiti-valley-viral-video-gdp/articleshow-u4ipchy</guid>
            <pubDate>Mon, 07 Sep 2026 13:37:19 +0530</pubDate>
            <description><![CDATA[ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ಮಠವೊಂದರಲ್ಲಿ, 'ಮಾಫು' ಎಂಬ ಗೋಲ್ಡನ್ ರಿಟ್ರೈವರ್ ನಾಯಿಯು ಯುವ ಬೌದ್ಧ ಭಿಕ್ಕುಗಳೊಂದಿಗೆ ಫುಟ್&zwnj;ಬಾಲ್ ಆಡಿದೆ. ಈ ಮುದ್ದಾದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಮನಗೆದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1xe7fd8akhs2mpdh3y9egyc,imgname-golden-retriever-dog-1788768140712.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಿಮಾಚಲ ಪ್ರದೇಶದ ನಯನಮನೋಹರ ಸ್ಪಿತಿ ಕಣಿವೆಯ ಬೌದ್ಧ ಭಿಕ್ಕುಗಳ ಮಠವೊಂದರಲ್ಲಿ ಅದ್ಭುತ ಹಾಗೂ ಮುದ್ದಾದ ಘಟನೆಯೊಂದು ನಡೆದಿದೆ. ಅಲ್ಲಿನ ಯುವ ಬೌದ್ಧ ಭಿಕ್ಕುಗಳು ಫುಟ್&zwnj;ಬಾಲ್ ಆಡುತ್ತಿದ್ದಾಗ, 'ಮಾಫು' ಹೆಸರಿನ ಗೋಲ್ಡನ್ ರಿಟ್ರೈವರ್ ತಳಿಯ ನಾಯಿಯೊಂದು ಅವರೊಂದಿಗೆ ಸೇರಿಕೊಂಡು ಅತ್ಯಂತ ಉತ್ಸಾಹದಿಂದ ಆಟವಾಡಿದೆ. ಈ ಅಪರೂಪದ ಹಾಗೂ ಕಣ್ಣಿಗೆ ತಂಪು ನೀಡುವ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಲಕ್ಷಾಂತರ ಜನರ ಹೃದಯ ಗೆದ್ದಿದೆ.&lt;/p&gt;&lt;h2&gt;ಖುಷಿ ಹಂಚಿದ ಮುದ್ದಾದ ವೀಡಿಯೊ:&lt;/h2&gt;&lt;p&gt;Instagram ನ @thepawsomelifeofmurphy ಎಂಬ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ನಾವು ಸ್ಪಿತಿಯಲ್ಲಿರುವ ಮಠವೊಂದರ ಬಳಿ ನಿಂತಾಗ ಈ ಸುಂದರ ಕ್ಷಣ ಎದುರಾಯಿತು. ಮಾಫು ತಕ್ಷಣವೇ ಅಲ್ಲಿದ್ದ ಯುವ ಸನ್ಯಾಸಿಗಳ ಫುಟ್&zwnj;ಬಾಲ್ ಪಂದ್ಯವನ್ನು ಸೇರಿಕೊಂಡ. ಈ ಯುವ ಸನ್ಯಾಸಿಗಳೊಂದಿಗೆ ಆಡುವುದು ಖಂಡಿತವಾಗಿಯೂ ಅವನ ನೆಚ್ಚಿನ ಕ್ಷಣಗಳ ಪಟ್ಟಿಗೆ ಸೇರಿರುತ್ತದೆ ಎಂದು ಭಾವಿಸುತ್ತೇನೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.&lt;/p&gt;&lt;h2&gt;ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್&zwnj;ಗಳ ಮಹಾಪೂರ:&lt;/h2&gt;&lt;p&gt;ಆಟದಲ್ಲಿ ಸಂಪೂರ್ಣವಾಗಿ ತಲ್ಲೀನವಾಗಿದ್ದ ಮಾಫುವಿನ ಈ ತುಂಟತನ ಹಾಗೂ ಚೇಷ್ಟೆಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ವೀಡಿಯೊ ನೋಡಿದ ಜನರು ಕಾಮೆಂಟ್ ಬಾಕ್ಸ್&zwnj;ನಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;'ಪಾವ್ನಾಲ್ಡೊ' ನಾಯಕ: &lt;/strong&gt;ಫುಟ್&zwnj;ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರು ಮತ್ತು ನಾಯಿಯ ಪಂಜವನ್ನು (Paw) ಸಂಯೋಜಿಸಿ, ಬಳಕೆದಾರರೊಬ್ಬರು ತಮಾಷೆಯಾಗಿ &quot;ಇವನೇ ನಿಜವಾದ ಪಾವ್ನಾಲ್ಡೊ ! ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ನಿಷ್ಕಲ್ಮಶ ಪ್ರೀತಿ&lt;/strong&gt;: ಮತ್ತೊಬ್ಬರು, ಇದು ಶುದ್ಧ ಸಂತೋಷ! ನಾಯಿಗಳು ಪ್ರೀತಿ ಮತ್ತು ನಿಷ್ಠೆಯ ಸಂಕೇತ. ಅವು ನಮ್ಮಿಂದ ಏನನ್ನೂ ಬಯಸದೆ, ತಮ್ಮ ಇಡೀ ಹೃದಯವನ್ನೇ ನಮಗೆ ನೀಡುತ್ತವೆ. ಮಾಫು ತನ್ನ ಸುತ್ತಲಿನ ಎಲ್ಲರಿಗೂ ನಗು ಮತ್ತು ಸಂತೋಷ ತಂದಿದ್ದಾನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಅಭಿಮಾನಿಗಳ ಶ್ಲಾಘನೆ: &lt;/strong&gt;&quot;ಇಂದು ನಾನು ಇಂಟರ್ನೆಟ್&zwnj;ನಲ್ಲಿ ನೋಡಿದ ಅತ್ಯಂತ ಸುಂದರವಾದ ವೀಡಿಯೊ ಇದಾಗಿದೆ,&quot; ಎಂದು ಹಲವರು ಹೇಳಿದ್ದರೆ, ಇನ್ನು ಕೆಲವರು &quot;ಮಫ್ಫು, ನಾನು ನಿನ್ನ ದೊಡ್ಡ ಅಭಿಮಾನಿ! ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಹಿಮಾಲಯದ ಕಣಿವೆಯಲ್ಲಿ ಯುವ ಬಿಕ್ಕುಗಳು ಹಾಗೂ ಈ ಮುದ್ದಾದ ನಾಯಿಯ ನಡುವೆ ನಡೆದ ಈ ಅನಿರೀಕ್ಷಿತ ಫುಟ್&zwnj;ಬಾಲ್ ಆಟವು, ಕೇವಲ ಅಲ್ಲಿಗಷ್ಟೇ ಅಲ್ಲದೆ ಜಾಲತಾಣದಲ್ಲೂ ಖುಷಿಯ ಅಲೆಯನ್ನೇ ಎಬ್ಬಿಸಿದೆ.&lt;/p&gt;]]></content:encoded>
            <category>relationship</category>
            <dc:creator>Gowthami K</dc:creator>
            <atom:link href="https://kannada.asianetnews.com/relationship/golden-retriever-dog-pawnaldo-plays-football-with-monks-in-spiti-valley-viral-video-gdp/articleshow-u4ipchy"/>
        </item>
        <item>
            <title><![CDATA[ದೇವರಿಗೆ ದೀಪ ಹಚ್ಚಿ ಪ್ರತಿದಿನ ಉಳಿಯುವ ಬತ್ತಿಯನ್ನು ಕಸದ ಬುಟ್ಟಿಗೆ ಎಸೆಯೋ ತಪ್ಪು ಮಾಡಬೇಡಿ, ಹೀಗೆ ಮಾಡಿ]]></title>
            <link>https://kannada.asianetnews.com/astrology/dont-through-winks-which-you-use-to-lighting-lamp-in-front-of-god-suc/articleshow-y9sf7zl</link>
            <guid isPermaLink="true">https://kannada.asianetnews.com/astrology/dont-through-winks-which-you-use-to-lighting-lamp-in-front-of-god-suc/articleshow-y9sf7zl</guid>
            <pubDate>Sat, 05 Sep 2026 18:43:39 +0530</pubDate>
            <description><![CDATA[ಪ್ರತಿನಿತ್ಯ ದೇವರ ದೀಪ ಹಚ್ಚಿದ ನಂತರ ಉಳಿಯುವ ಬತ್ತಿಯನ್ನು ಕಸಕ್ಕೆ ಎಸೆಯುವುದು ತಪ್ಪು. ಈ ಸುಟ್ಟ ಬತ್ತಿಗಳನ್ನು ಮನೆಯಲ್ಲಿನ ನಕಾರಾತ್ಮಕ ಶಕ್ತಿ ಮತ್ತು ಮಕ್ಕಳಿಗೆ ತಗುಲಿದ ದೃಷ್ಟಿ ತೆಗೆಯಲು ಹೇಗೆ ಬಳಸಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1rv6arsfjbpn09g2h5cr5w2,imgname-lamp-1788613962521.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೆಚ್ಚಿನ ಮನೆಗಳಲ್ಲಿ ಪ್ರತಿನಿತ್ಯವೂ ದೇವರಿಗೆ ದೀಪವನ್ನು ಹಚ್ಚುವುದು ವಾಡಿಕೆ. ದೇವರ ಮುಂದೆ ಒಂದು ದೀಪ ಇದ್ದರೆ ಆ ಮನೆಯಲ್ಲಿ ಶಾಂತಿ, ನೆಮ್ಮದಿ ಸದಾ ನೆಲೆಸುತ್ತದೆ ಎನ್ನುವ ನಂಬಿಕೆ ಇದೆ. ಅಷ್ಟಕ್ಕೂ ಹಿಂದೂ ಧರ್ಮದಲ್ಲಿ ದೀಪಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಕೆಲವರು ಒಂದೇ ದೀಪ ಹಚ್ಚಿದರೆ, ಮತ್ತೆ ಕೆಲವರು ದೇವರ ಇಕ್ಕೆಲಗಳಲ್ಲಿ ಎರಡು ದೀಪಗಳನ್ನು ಹಚ್ಚುವುದು ಇದೆ. ಇದಕ್ಕೆ ಪ್ರತಿನಿತ್ಯವೂ ಬತ್ತಿಯನ್ನು ಬದಲಿಸಬೇಕು ಎನ್ನುವ ಮಾತಿದೆ. ಆದರೆ ಕೆಲವರು ಒಂದು ಬತ್ತಿಯು ಸಂಪೂರ್ಣ ಸುಟ್ಟು ಕರಕಲಾಗುವವರೆಗೂ ಅದನ್ನೇ ಉರಿಸುವುದು ಇದೆ.&lt;/p&gt;&lt;p&gt;ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಪ್ರತಿನಿತ್ಯ ಎರಡು ಬತ್ತಿಗಳನ್ನು ದೇವರ ಮುಂದೆ ಇಟ್ಟು ದೀಪ ಹಚ್ಚುವುದು ವಾಡಿಕೆ. ಸಂಪ್ರದಾಯದ ಪ್ರಕಾರ, ಪ್ರತಿನಿತ್ಯವೂ ಬತ್ತಿಗಳನ್ನು ಬದಲಾಯಿಸಬೇಕು. ಆದರೆ ಹೀಗೆ ಬತ್ತಿ ಬದಲಾಯಿಸಿದಾಗ, ಅದನ್ನು ಕಸದ ಬುಟ್ಟಿಗೆ ಎಸೆಯುವವರೇ ಹೆಚ್ಚು ಮಂದಿ. ಆದರೆ, ಇದು ತಪ್ಪು ಎನ್ನುತ್ತದೆ ಶಾಸ್ತ್ರ. ದೇವರ ಮುಂದೆ ಇಟ್ಟು ಉರಿದಿರುವ ಬತ್ತಿ ಕೂಡ ಶ್ರೇಷ್ಠವಾಗಿದ್ದು, ಅದನ್ನು ಕಸದ ಬುಟ್ಟಿಗೆ ಎಸೆಯುವುದು ಸರಿಯಲ್ಲ.&lt;/p&gt;&lt;h2&gt;&lt;strong&gt;ಏನು ಮಾಡಬೇಕು?&lt;/strong&gt;&lt;/h2&gt;&lt;p&gt;ಹಾಗೆಂದು ಅದನ್ನು ಹಾಗೆಯೇ ಇಟ್ಟುಕೊಳ್ಳಲು ಆಗುವುದಿಲ್ಲ. ಗಿಡ,ಮರ ಇದ್ದರೂ ಅವುಗಳ ಬುಡದಲ್ಲಿ ಚೆಲ್ಲಿದರೆ ಪುನಃ ಅದು ಯಾರದ್ದೋ ಕಾಲ್ತುಳಿತಕ್ಕೆ ಒಳಗಾಗುತ್ತದೆ. ಕುಂಡಗಳಲ್ಲಿ ಹಾಕಿದರೆ ಎಣ್ಣೆಯ ಅಂಶ ಕುಂಡಕ್ಕೆ ಬಿದ್ದು, ಗಿಡ ಹಾಳಾಗುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲರೂ ಕಸದ ಬುಟ್ಟಿಗೇ ಹಾಕಿಬಿಡುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಇದೇ ಬತ್ತಿ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ನೆಗೆಟಿವ್​ ಎನರ್ಜಿಗಳನ್ನು ತೆಗೆಯಲು ಸಹಕಾರಿಯಾಗಿದೆ.&lt;/p&gt;&lt;h3&gt;&lt;strong&gt;ದೃಷ್ಟಿ ತೆಗೆಯಲು ಅನುಕೂಲ&lt;/strong&gt;&lt;/h3&gt;&lt;p&gt;ಹೌದು. ವಾರಕ್ಕೊಮ್ಮೆ ಒಟ್ಟುಗೂಡುವ ಬತ್ತಿನಲ್ಲಿ ಒಂದೆಡೆ ಕಲೆಕ್ಟ್​ಮಾಡಿಕೊಂಡು ಇಡಿ. ಕೊನೆಗೆ ಅದನ್ನು ಒಂದು ದೇವರ ಬಟ್ಟಲಿನಲ್ಲಿ ಅಥವಾ ಸಾಧ್ಯವಾದರೆ ಮಣ್ಣಿನ ಹಣತೆಯಲ್ಲಿ ಇಟ್ಟು, ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಬೆಂಕಿಯನ್ನು ಹಚ್ಚಿ, ಅದನ್ನು ನಿಮ್ಮ ಮಕ್ಕಳಿಗೆ ದೃಷ್ಟಿ ತೆಗೆಯಲು ಬಳಸಿ. ದೃಷ್ಟಿ ತೆಗೆಯುವುದು ಎಂದರೆ, ಸಾಮಾನ್ಯವಾಗಿ ದೃಷ್ಟಿ ಹೇಗೆ ತೆಗೆಯಲಾಗುತ್ತದೆಯೋ ಅದೇ ರೀತಿ, ಮಕ್ಕಳನ್ನು ಕುಳ್ಳರಿಸಿ ಆ ದೀಪದಿಂದ ದೃಷ್ಟಿ ತೆಗೆಯಿರಿ. ಅದು ಸಂಪೂರ್ಣ ಸುಟ್ಟು ಕರಕಲಾಗುವವರೆಗೂ ಹಾಗೆಯೇ ಇರಲಿ. ಆ ಬಳಿಕ ಬೂದಿ ಏನಾದರೂ ಇದ್ದರೆ ಅದು ಸಂಪೂರ್ಣ ತಣ್ಣಗಾದ ಮೇಲೆ ಗಿಡದ ಬುಡಕ್ಕೆ ಹಾಕಿ. ಹೀಗೆ ಮಾಡಿದರೆ ಬತ್ತಿಯನ್ನೂ ಒಳಿತಿಗೆ ಬಳಸಿದಂತೆ ಆಗುತ್ತದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/astrology/dont-through-winks-which-you-use-to-lighting-lamp-in-front-of-god-suc/articleshow-y9sf7zl"/>
        </item>
        <item>
            <title><![CDATA[Karna Serial ನಟ ಕಿರಣ್​ ರಾಜ್​ ಮೇಲೆ ಸಿಂಹದ ದಾಳಿ: ಶಾಕಿಂಗ್​ ವಿಡಿಯೋ ವೈರಲ್​- ಫ್ಯಾನ್ಸ್​ ಶಾಕ್​]]></title>
            <link>https://kannada.asianetnews.com/entertainment/karna-serial-actor-kiran-raj-attacked-by-lion-shocking-video-goes-viral-suc/articleshow-ygdkh4d</link>
            <guid isPermaLink="true">https://kannada.asianetnews.com/entertainment/karna-serial-actor-kiran-raj-attacked-by-lion-shocking-video-goes-viral-suc/articleshow-ygdkh4d</guid>
            <pubDate>Tue, 08 Sep 2026 14:03:02 +0530</pubDate>
            <description><![CDATA['ಕರ್ಣ' ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ಅವರು ಸಿಂಹಕ್ಕೆ ತರಬೇತಿ ನೀಡುವಾಗ ನಡೆದ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಾವು ಸುರಕ್ಷಿತವಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಈ ಲೇಖನವು ಅವರ ಸಮಾಜ ಸೇವೆ ಮತ್ತು ನಟನಾ ವೃತ್ತಿಜೀವನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m202bf06nd278s1ta24a6zmc,imgname-kiran-raj-1788856351750.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ಣ ಸೀರಿಯಲ್​ (Karna Serial)ನಲ್ಲಿ ಕರ್ಣನಾಗಿ ಮಿಂಚುತ್ತಿರುವ ಕರ್ಣ ಉರ್ಫ್​ ನಟ ಕಿರಣ್​ ರಾಜ್​ (Kiran Raj) ಸದ್ಯ ಸೀರಿಯಲ್​ನಲ್ಲಿ ಹೊಸ ಜೀವನ ಶುರು ಮಾಡಿದ್ದಾರೆ. ಅಪ್ಪನ ಪ್ರೀತಿಯೂ ಸಿಕ್ಕಿದ್ದು, ರಿಯಲ್​ ಅಮ್ಮ ಕಣ್ಣೆದುರು ಬರಬೇಕಿದೆ ಅಷ್ಟೇ. ಇಂತಿಪ್ಪ ಕಿರಣ್​ ರಾಜ್​ ಅವರು ಇದೀಗ ಶಾಕಿಂಗ್​ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಸಫಾರಿಗೆ ಹೋದಾಗ, ಸಿಂಹವೊಂದು ದಾಳಿ ಮಾಡಿರುವ ವಿಡಿಯೋ ಇದಾಗಿದೆ. ಇದನ್ನು ನೋಡಿದ ಕಿರಣ್​ ರಾಜ್​ ಫ್ಯಾನ್ಸ್​ ಗಾಬರಿಯಾಗಿ, ನಿಮಗೇನೂ ಆಗಿಲ್ಲ ತಾನೇ ಎಂದು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;p&gt;ಈ ವಿಡಿಯೋ ಶೇರ್​ ಮಾಡಿಕೊಂಡಿರುವ ನಟ ಕಿರಣ್​ ರಾಜ್​, ಇದು ಸಿಂಹಕ್ಕೆ ತರಬೇತಿ ನೀಡುವುದನ್ನು ಕಲಿತ ಮೊದಲ ದಿನ ಎಂದು ಬರೆದುಕೊಂಡಿದ್ದಾರೆ. ಅಲ್ಲಿ ಎರಡು ಸಿಂಹಗಳನ್ನು ನೋಡಬಹುದಾಗಿದೆ. ಈ ಸಿಂಹದ ಹೆಸರು ರೋಜರ್ ಮತ್ತು ರಾಕಿ ಎಂದಿರುವ ನಟ, ನಾವು ಶೀಘ್ರದಲ್ಲೇ ಸ್ನೇಹಿತರಾಗುತ್ತೇವೆ ಎಂದಿದ್ದಾರೆ. ಜೊತೆಗೆ, ಸಿಂಹದ ಜೊತೆ ಸ್ನೇಹ ಬೆಳೆಸಲು ಹೋದಾಗ ಕಲಿತಿರುವ ಪಾಠದ ಬಗ್ಗೆಯೂ ಅವರು ತಿಳಿಸಿದ್ದಾರೆ. ಸಿಂಹ ಯಾವಾಗಲೂ ನಿಮ್ಮನ್ನು ಬೀಳಿಸಲು ಪ್ರಯತ್ನಿಸುತ್ತದೆ, ಆದ್ದರಿಂದ ಯಾವಾಗಲೂ ಬಲವಾದ ಕಡೆಗೆ ವಾಲುತ್ತದೆ ಎಂದಿರುವ ಕಿರಣ್​ ರಾಜ್​, ದೂರ ಹೋದರೂ ಸಹ ಯಾವಾಗಲೂ ಸಿಂಹದ ಕಡೆಗೆ ಮುಖ ಇರಿಸಿ ಎಂದಿದ್ದಾರೆ. ಸಿಂಹಗಳು ನಿಮ್ಮ ಕಣ್ಣುಗಳನ್ನು ಓದಬಲ್ಲವು. ಅವು ನಿಮ್ಮನ್ನು ತಬ್ಬಿಕೊಳ್ಳಲು ಮತ್ತು ಅಪ್ಪಿಕೊಳ್ಳಲು ಇಷ್ಟಪಡುತ್ತವೆ ಎಂದಿರುವ ಕಿರಣ್​ ರಾಜ್​ ಅವರು ಸಿಂಹದ ಸ್ನೇಹ ಪರತೆಯ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;p&gt;ಇವೆಲ್ಲವುಗಳ ನಡುವೆ, ಸಿಂಹವನ್ನು ಅವರ ಮೇಲೆ ದಾಳಿ ಮಾಡಿರುವ ವಿಡಿಯೋ ನೋಡಿ ಶಾಕ್​ ಆಗಿ ಪ್ರಶ್ನೆ ಕೇಳ್ತಿರೋ ಅಭಿಮಾನಿಗಳಿಗೆ ನಟ, ನಾನು ಹುಷಾರಾಗಿ ಇದ್ದೇನೆ. ಭಯ ಪಡಬೇಡಿ. ಒಂದು ವೇಳೆ ಹುಷಾರಾಗಿ ಇರದಿದ್ದರೆ, ಈ ಪೋಸ್ಟ್​ ಹಾಕಲು ಆಗ್ತಿರಲಿಲ್ಲ ಎಂದಿದ್ದಾರೆ. ಇದರ ಹೊರತಾಗಿಯೂ ಅವರ ಫ್ಯಾನ್ಸ್, ಈ ರೀತಿಯ ಸಾಹಸಕ್ಕೆ ಕೈಹಾಕಬೇಡಿ ಎಂದು ನಟನನ್ನು ಎಚ್ಚರಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ನಟನ ಕುರಿತು&lt;/strong&gt;&lt;/h2&gt;&lt;p&gt;ಇನ್ನು ನಟನ ಕುರಿತು ಹೇಳುವುದಾದರೆ, ಕಿರಣ್​ ರಾಜ್​ (Kiran Raj) ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್​ ರಾಜ್. ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್&zwnj;ಬುಕ್&zwj;ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್&zwnj;-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಟಿಆರ್​ಪಿ ಕಿಂಗ್​&lt;/strong&gt;&lt;/h3&gt;&lt;p&gt;ಅಷ್ಟಕ್ಕೂ, ಕಿರಣ್ ರಾಜ್ ಅವರನ್ನು ಟಿಆರ್​ಪಿ ಕಿಂಗ್​ ಎಂದೇ ಹೇಳಲಾಗುತ್ತದೆ. ಕರ್ಣ ಸೀರಿಯಲ್​ನಲ್ಲಿಯೂ ಅವರು ಇದನ್ನು ಮೆಂಟೇನ್​ ಮಾಡಿಕೊಂಡು ಬಂದಿದ್ದಾರೆ. ಅವರ ನಟನೆ, ಅಭಿವ್ಯಕ್ತಿಶೀಲ ಕಣ್ಣುಗಳು ಮತ್ತು ಸಂಭಾಷಣೆ, ಕರ್ಣನ ಆಂತರಿಕ ಸಂಘರ್ಷ ಎಲ್ಲವುಗಳಲ್ಲಿಯೂ ನಟ ತಮ್ಮ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್​ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್&zwnj;ಬಾಸ್&zwnj; ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/karna-serial-actor-kiran-raj-attacked-by-lion-shocking-video-goes-viral-suc/articleshow-ygdkh4d"/>
        </item>
        <item>
            <title><![CDATA[ಫಸ್ಟ್‌ನೈಟ್‌ನಲ್ಲಿ ನವಜೋಡಿಗೆ ಎಲೆ-ಅಡಿಕೆ ತಿನ್ನುವಂತೆ ಯಾಕೆ ಹೇಳ್ತಾರೆ? ರಹಸ್ಯ ಇಲ್ಲಿದೆ]]></title>
            <link>https://kannada.asianetnews.com/gallery/relationship/viral-news-in-kannada-why-do-newlyweds-couple-have-to-eat-greens-nuts-mixed-paan-on-their-first-night-mrq-yvu897z</link>
            <guid isPermaLink="true">https://kannada.asianetnews.com/gallery/relationship/viral-news-in-kannada-why-do-newlyweds-couple-have-to-eat-greens-nuts-mixed-paan-on-their-first-night-mrq-yvu897z</guid>
            <pubDate>Sat, 05 Sep 2026 21:36:37 +0530</pubDate>
            <description><![CDATA[ಭಾರತೀಯ ಮದುವೆಗಳಲ್ಲಿ, ವಿಶೇಷವಾಗಿ ಮೊದಲ ರಾತ್ರಿಯಂದು ನವದಂಪತಿಗೆ ಎಲೆ-ಅಡಿಕೆ ನೀಡುವ ಸಂಪ್ರದಾಯವಿದೆ. ಇದು ಪ್ರೀತಿ ಮತ್ತು ಅನ್ಯೋನ್ಯತೆಯ ಸಂಕೇತವೆಂದು ಪರಿಗಣಿಸಲಾಗಿದ್ದು, ಬಾಯಿಯ ಸುವಾಸನೆಗೂ ಸಹಕಾರಿ. ಆದರೆ, ತಂಬಾಕುಯುಕ್ತ ಪಾನ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಯೂ ಈ ಲೇಖನದಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1s4s82aj0vgzanwyw4q42hh,imgname-first-night--2--1788624019530.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ಮದುವೆಗಳಲ್ಲಿ, ವಿಶೇಷವಾಗಿ ಮೊದಲ ರಾತ್ರಿಯಂದು ನವದಂಪತಿಗೆ ಎಲೆ-ಅಡಿಕೆ ನೀಡುವ ಸಂಪ್ರದಾಯವಿದೆ. ಇದು ಪ್ರೀತಿ ಮತ್ತು ಅನ್ಯೋನ್ಯತೆಯ ಸಂಕೇತವೆಂದು ಪರಿಗಣಿಸಲಾಗಿದ್ದು, ಬಾಯಿಯ ಸುವಾಸನೆಗೂ ಸಹಕಾರಿ. ಆದರೆ, ತಂಬಾಕುಯುಕ್ತ ಪಾನ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಯೂ ಈ ಲೇಖನದಲ್ಲಿದೆ.&lt;img&gt;&lt;p&gt;ಮದುವೆ ಅಂದ್ರೆ ಅದು ಹಲವು ಶಾಸ್ತ್ರಗಳನ್ನೊಳಗೊಂಡಿರುವ ಕಾರ್ಯಕ್ರಮ. ಮಾಂಗಲ್ಯಧಾರಣೆ ಮುನ್ನ ಮತ್ತು ನಂತರ ಅನೇಕ ಶಾಸ್ತ್ರಗಳನ್ನು ಆಚರಣೆ ಮಾಡಲಾಗುತ್ತದೆ. ಅಂತಹ ಪದ್ದತಿಗಳಲ್ಲಿ ಒಂದು ವಧು-ವರ ಜೊತೆಯಾಗಿ ಎಲೆ-ಅಡಿಕೆ (ಪಾನ್/ಬೀಡಾ). ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಇದನ್ನು ಆಚರಣೆ ಮಾಡಲಾಗುತ್ತದೆ. ಮದುವೆಯ ನಂತರ ದಂಪತಿಯ ಮೊದಲರಾತ್ರಿಯಲ್ಲಿ ಹಾಲು, ಹಣ್ಣುಗಳ ಜೊತೆಯಲ್ಲಿ ಎಲೆ-ಅಡಿಕೆ ನೀಡಲಾಗುತ್ತದೆ.&lt;/p&gt;&lt;img&gt;&lt;p&gt;ಭಾರತೀಯ ಸಂಸ್ಕೃತಿಯಲ್ಲಿ ಎಲೆಯನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಶುಭ ಸಮಾರಂಭಗಳು ನಡೆದ್ರೂ ಅಲ್ಲಿ ಎಲೆ ನೀಡಲಾಗುತ್ತದೆ. ಮನೆಯಲ್ಲಿ ಏನಾದ್ರೂ ಸಮಾರಂಭ ನಡೆದ್ರೂ ಊಟದ ಬಳಿಕ ಅತಿಥಿಗಳಿಗೆ ಎಲೆ-ಅಡಿಕೆ ನೀಡಲಾಗುತ್ತದೆ. ಎಲೆ-ಅಡಿಕೆ ಹಂಚಿಕೊಳ್ಳೋದರಿಂದ ಅನೋನ್ಯತೆ ಬೆಳೆಯುತ್ತೆ ಎಂಬ ಮಾತಿದೆ. ಹಾಗಾಗಿಯೇ ಫಸ್ಟ್&zwnj;ನೈಟ್&zwnj;ನಲ್ಲಿ ನವದಂಪತಿಗೆ ಎಲೆ-ಅಡಿಕೆ ತಿನ್ನುವಂತೆ ಹಿರಿಯರು ಸಲಹೆ ನೀಡುತ್ತಾರೆ.&lt;/p&gt;&lt;img&gt;&lt;p&gt;ಫಸ್ಟ್&zwnj;ನೈಟ್&zwnj;ನಲ್ಲಿ ಜೋಡಿ ಹಂಚಿಕೊಂಡು ಸುಣ್ಣ, ಎಲೆ ಮತ್ತು ಅಡಿಕೆಯನ್ನು ತಿನ್ನೋದು ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಬಿಂಬಿಸುತ್ತದೆ ಎಂಬ ಮಾತುಗಳನ್ನು ಹಿರಿಯರು ಹೇಳುತ್ತಾರೆ. ಆದ್ರೆ ಮದುವೆಯ ಮೊದಲರಾತ್ರಿಯಲ್ಲಿ ಪಾನ್ ನೀಡುವ ಆಚರಣೆ ಎಲ್ಲಾ ಭಾಗದಲ್ಲಿಯೂ ಇಲ್ಲ. ಸಂಪ್ರದಾಯ ಮತ್ತು ಆಚರಣೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತವೆ. ಇನ್ನು ಕೆಲವರ ಪ್ರಕಾರ, ಪಾನ್ ಸೇವನೆಯೂ ಜೋಡಿಯುಲ್ಲಿ ಕಾಮಾಸಕ್ತಿ ಹೆಚ್ಚಿಸುತ್ತೆ. ಆದ್ರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ.&lt;/p&gt;&lt;img&gt;&lt;p&gt;ಮದುವೆಯ ರಾತ್ರಿ ಪಾನ್ ತಿನ್ನುವ ಸಂಪ್ರದಾಯವು ಪ್ರಾಥಮಿಕವಾಗಿ ಹಳೆಯ ನಂಬಿಕೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ ಇಂದಿಗೂ ಈ ಆಚರಣೆ ಮುಂದುವರಿದುಕೊಂಡು ಬಂದಿದೆ. ಆಯುರ್ವೇದ ಪದ್ಧತಿಗಳಲ್ಲಿ ವೀಳ್ಯದ ಎಲೆಗಳನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಬಾಯಿಯ ಸುವಾಸನೆಗಾಗಿ ಎಲೆ-ಅಡಿಕೆ ತಿನ್ನಲಾಗುತ್ತದೆ. ಊಟದ ಬಳಿಕ ಪಾನ್ ತಿಂದ ನಂತರ ಬಾಯಿಯಲ್ಲಿ ಫ್ರೆಶ್ ಫೀಲ್ ಬರುತ್ತದೆ.&lt;/p&gt;&lt;img&gt;&lt;p&gt;ಎಲ್ಲಾ ರೀತಿಯ ಪಾನ್&zwnj;ಗಳು ಆರೋಗ್ಯಕ್ಕೆ ಒಳ್ಳೆಯದು ಅಲ್ಲ ಎಂಬ ಅಂಶ ನಿಮ್ಮ ಗಮನದಲ್ಲಿರಲಿ. ವಿಳ್ಯದೆಲೆ ಜೊತೆ ಕೆಲವರು ಅತಿಯಾಗಿ ತಂಬಾಕು, ಅಡಿಕೆ, ಸುಣ್ಣ ಸೇರಿದಂತೆ ಹಲವು ಪದಾರ್ಥಗಳನ್ನು ಸೇರಿಸಿಕೊಳ್ಳುತ್ತಾರೆ. ತಂಬಾಕು, ಗುಟ್ಕಾ ಅಂತ ಪ್ರಮಾಣಗಳನ್ನು ಅತಿಯಾಗಿ ಬಳಸೋದರಿಂದ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಈ ಪದಾರ್ಥಗಳು ಬಾಯಿಯ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.&lt;/p&gt;]]></content:encoded>
            <category>relationship</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/relationship/viral-news-in-kannada-why-do-newlyweds-couple-have-to-eat-greens-nuts-mixed-paan-on-their-first-night-mrq-yvu897z"/>
        </item>
    </channel>
</rss>
