<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Apr 2026 21:21:20 +0530</lastBuildDate>
        <atom:link href="https://kannada.asianetnews.com/rss/relationship" rel="self" type="application/rss+xml"/>
        <item>
            <title><![CDATA[ಮಕ್ಕಳು ಕೆಟ್ಟ ಪದ ಬಳಸುತ್ತಾರಾ? ಸುಲಭವಾಗಿ ತೆಗೆದುಕೊಳ್ಳಬೇಡಿ! ಇದರ ಹಿಂದೆ ಮನೋವೈಜ್ಞಾನಿಕ ಕಾರಣವಿದೆ!]]></title>
            <link>https://kannada.asianetnews.com/gallery/life/parenting-guide-how-to-stop-children-from-using-bad-words-gvd-4c60h1w</link>
            <guid isPermaLink="true">https://kannada.asianetnews.com/gallery/life/parenting-guide-how-to-stop-children-from-using-bad-words-gvd-4c60h1w</guid>
            <pubDate>Fri, 17 Apr 2026 21:21:17 +0530</pubDate>
            <description><![CDATA[&lt;p&gt;ಮಕ್ಕಳು ಕೆಟ್ಟ ಪದಗಳನ್ನು ಬಳಸುವುದನ್ನು ನಿಲ್ಲಿಸುವುದು ಹೇಗೆ? ಚಿಕ್ಕ ಮಕ್ಕಳು ದೊಡ್ಡವರನ್ನು ನೋಡಿ ಮಾತು ಕಲಿಯುವುದು ಸಹಜ. ಆದರೆ, ಕೆಲವೊಮ್ಮೆ ಅರ್ಥ ತಿಳಿಯದೆ ಕೆಟ್ಟ ಪದ ಬಳಸಿದಾಗ ನಾವು ನಕ್ಕು ಸುಮ್ಮನಾಗುತ್ತೇವೆ. ಈ ಸಣ್ಣ ತಪ್ಪು ಅವರ ನಡವಳಿಕೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfj5910zm96akft4y9wzvtvp,imgname-3-1769062302751.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಕ್ಕಳು ಕೆಟ್ಟ ಪದಗಳನ್ನು ಬಳಸುವುದನ್ನು ನಿಲ್ಲಿಸುವುದು ಹೇಗೆ? ಚಿಕ್ಕ ಮಕ್ಕಳು ದೊಡ್ಡವರನ್ನು ನೋಡಿ ಮಾತು ಕಲಿಯುವುದು ಸಹಜ. ಆದರೆ, ಕೆಲವೊಮ್ಮೆ ಅರ್ಥ ತಿಳಿಯದೆ ಕೆಟ್ಟ ಪದ ಬಳಸಿದಾಗ ನಾವು ನಕ್ಕು ಸುಮ್ಮನಾಗುತ್ತೇವೆ. ಈ ಸಣ್ಣ ತಪ್ಪು ಅವರ ನಡವಳಿಕೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಗೊತ್ತಾ?&lt;/p&gt;&lt;img&gt;&lt;p&gt;ಮಕ್ಕಳು ಚಿಕ್ಕವರಿದ್ದಾಗ ದೊಡ್ಡವರನ್ನು ನೋಡಿ ಹೊಸ ಪದಗಳನ್ನು ಕಲಿಯುವುದು ಸಾಮಾನ್ಯ. ಆದರೆ, ಅವರು ಕೆಟ್ಟ ಪದ ಬಳಸಿದಾಗ ನಾವು ನಕ್ಕರೆ, ಅದು ಅವರ ಭವಿಷ್ಯದ ನಡವಳಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.&lt;/p&gt;&lt;img&gt;&lt;p&gt;ಮನೋವಿಜ್ಞಾನದ ಪ್ರಕಾರ, ಮಕ್ಕಳು ಒಂದು ಪದವನ್ನು ಬಳಸಿದಾಗ ದೊಡ್ಡವರು ಹೇಗೆ ಪ್ರತಿಕ್ರಿಯಿಸುತ್ತಾರೋ, ಅದರ ಆಧಾರದ ಮೇಲೆ ಆ ಅಭ್ಯಾಸವನ್ನು ಮುಂದುವರಿಸುತ್ತಾರೆ. ಕೆಟ್ಟ ಪದಕ್ಕೆ ನಾವು ನಕ್ಕರೆ, 'ಇದು ತಮಾಷೆಯಾಗಿದೆ, ಮತ್ತೆ ಹೇಳಿದರೆ ಎಲ್ಲರೂ ನಗುತ್ತಾರೆ' ಎಂದು ಅವರು ಭಾವಿಸುತ್ತಾರೆ. ಇದೇ ಅವರಿಗೆ ರೂಢಿಯಾಗಿಬಿಡುತ್ತದೆ.&lt;/p&gt;&lt;img&gt;&lt;p&gt;ಮಕ್ಕಳ ಮಾತಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ, ಅವರು ಅದನ್ನೇ ಮತ್ತೆ ಮತ್ತೆ ಮಾಡುತ್ತಾರೆ. ಕೆಟ್ಟ ಪದ ಬಳಸಿದಾಗ ನಾವು ಕೋಪಗೊಂಡರೂ, ನಕ್ಕರೂ ಅದು ಅವರಿಗೆ ಪ್ರೋತ್ಸಾಹ ನೀಡಿದಂತೆ. ಹಾಗಾಗಿ, ಅತಿಯಾಗಿ ಪ್ರತಿಕ್ರಿಯಿಸದೆ, ಸಮಾಧಾನದಿಂದ ಅದನ್ನು ಸರಿಪಡಿಸಬೇಕು.&lt;/p&gt;&lt;img&gt;&lt;p&gt;ಮಕ್ಕಳು ಕೆಟ್ಟ ಪದ ಕಲಿಯಲು ಮುಖ್ಯ ಕಾರಣ ಅವರ ಸುತ್ತಮುತ್ತಲಿನ ವಾತಾವರಣ. ಮನೆಯಲ್ಲಿ ದೊಡ್ಡವರು ಮಾತನಾಡುವುದು, ಸ್ನೇಹಿತರು, ಟಿವಿ, ಮೊಬೈಲ್ ಫೋನ್ ಎಲ್ಲವೂ ಕಾರಣವಾಗಬಹುದು. ಮಕ್ಕಳು ಏನು ನೋಡುತ್ತಾರೆ, ಯಾರೊಂದಿಗೆ ಬೆರೆಯುತ್ತಾರೆ ಎಂಬುದನ್ನು ಪೋಷಕರು ಗಮನಿಸುವುದು ಬಹಳ ಮುಖ್ಯ.&lt;/p&gt;&lt;img&gt;&lt;p&gt;ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಕೆಟ್ಟ ಪದಗಳನ್ನು ಬಳಸಲು ಕಲಿತರೆ, ಶಾಲೆ, ಹೊರಗಡೆ ಹೀಗೆ ಎಲ್ಲಾ ಕಡೆ ಅದನ್ನೇ ಬಳಸುತ್ತಾರೆ. ಇದರಿಂದ ಅವರ ಸ್ನೇಹ ಸಂಬಂಧ ಹಾಳಾಗಬಹುದು, ಶಿಕ್ಷಕರೊಂದಿಗೂ ಸಮಸ್ಯೆ ಬರಬಹುದು. ಕೋಪ ಬಂದಾಗ ಕೆಟ್ಟ ಪದ ಬಳಸುವುದು ಅವರ ಸ್ವಭಾವವೇ ಆಗಿಬಿಡುತ್ತದೆ.&lt;/p&gt;&lt;img&gt;&lt;p&gt;ಇದನ್ನು ತಪ್ಪಿಸಲು, ಮೊದಲು ಪೋಷಕರು ಮಕ್ಕಳ ಮುಂದೆ ಒಳ್ಳೆಯ ಪದಗಳನ್ನು ಬಳಸಬೇಕು. ಮಕ್ಕಳು ಕೆಟ್ಟ ಪದ ಬಳಸಿದರೆ, 'ಹೀಗೆ ಮಾತನಾಡಿದರೆ ಬೇರೆಯವರ ಮನಸ್ಸಿಗೆ ನೋವಾಗುತ್ತದೆ' ಎಂದು ಮೃದುವಾಗಿ ತಿಳಿಸಿ. ಅವರಿಂದ ಎಲ್ಲಿ ಕಲಿತರು ಎಂದು ತಿಳಿದುಕೊಂಡರೆ, ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು. ಅವರು ಚೆನ್ನಾಗಿ ಮಾತನಾಡಿದಾಗ ಪ್ರಶಂಸಿಸಿ. ಆಗಲೇ ಅವರು ಜವಾಬ್ದಾರಿಯುತವಾಗಿ ಬೆಳೆಯುತ್ತಾರೆ.&lt;/p&gt;]]></content:encoded>
            <category>relationship</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/life/parenting-guide-how-to-stop-children-from-using-bad-words-gvd-4c60h1w"/>
        </item>
        <item>
            <title><![CDATA[ಮುದುಕಿ ಬೇಕಾದ್ರೂ ಅನ್ನಿ, ​ ಆಂಟಿ ಮಾತ್ರ ಹೇಳ್ಬೇಡಿ ಪ್ಲೀಸ್: ನಟಿ ವಿದ್ಯಾ ಮೂರ್ತಿ ಖಡಕ್​ ವಾರ್ನಿಂಗ್​]]></title>
            <link>https://kannada.asianetnews.com/gallery/tv-talk/serial-actress-vidhya-murthy-says-not-call-her-aunty-can-call-granny-suc-3gr5qpr</link>
            <guid isPermaLink="true">https://kannada.asianetnews.com/gallery/tv-talk/serial-actress-vidhya-murthy-says-not-call-her-aunty-can-call-granny-suc-3gr5qpr</guid>
            <pubDate>Fri, 17 Apr 2026 20:09:52 +0530</pubDate>
            <description><![CDATA[&lt;p&gt;ಹಿರಿಯ ನಟಿ ವಿದ್ಯಾ ಮೂರ್ತಿ ಅವರು 35ಕ್ಕೂ ಹೆಚ್ಚು ಸೀರಿಯಲ್&zwnj;ಗಳು, 500ಕ್ಕೂ ಹೆಚ್ಚು ನಾಟಕಗಳು ಮತ್ತು ಹಲವಾರು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮನ್ನು 'ಆಂಟಿ' ಎಂದು ಕರೆಯುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdxpsnmtsb5e6qgwhz47zx5,imgname-vidhya-murthy-01-1776436340404.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಿರಿಯ ನಟಿ ವಿದ್ಯಾ ಮೂರ್ತಿ ಅವರು 35ಕ್ಕೂ ಹೆಚ್ಚು ಸೀರಿಯಲ್&zwnj;ಗಳು, 500ಕ್ಕೂ ಹೆಚ್ಚು ನಾಟಕಗಳು ಮತ್ತು ಹಲವಾರು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮನ್ನು 'ಆಂಟಿ' ಎಂದು ಕರೆಯುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಮಾಯಾಮೃಗ ಸೀರಿಯಲ್​ನಿಂದ ಹಿಡಿದು ಮುಕ್ತ, ಮುಕ್ತ ಮುಕ್ತ, ದಂಡಪಿಂಡಗಳು , ಮೌನರಾಗ , ಪ್ರೀತಿ ಇಲ್ಲದ ಮೇಲೆ , ಮನ್ವಂತರ , ಪಾ.ಪ.ಪಾಂಡು , ಸಿಲ್ಲಿ ಲಲ್ಲಿ , ಅಡಚಣೆಗಾಗಿ ಕ್ಷಮಿಸಿ , ಜೋಗುಳ , ಜೊತೆಜೊತೆಯಲಿ , ನಿಗೂಢ ರಾತ್ರಿ , ಶಾಂತಂ ಪಾಪಂ , ಮನೆಯೊಂದು ಮೂರು ಬಾಗಿಲು , ಸ್ತ್ರೀ , ಮಗಳು ಜಾನಕಿ ಸೇರಿ ಹಿಟ್ಲರ್​ ಕಲ್ಯಾಣದ ನಾಯಕ ಎಜೆಯ ತಾಯಿಯ ಪಾತ್ರ ಮಾಡುವವರೆಗೆ 35ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿರುವವರು ನಟಿ ವಿದ್ಯಾ ಮೂರ್ತಿ.&lt;/p&gt;&lt;img&gt;&lt;p&gt;ರಂಗಭೂಮಿಯಿಂದ ಹಿರಿತೆರೆ, ಕಿರುತೆರೆಯಲ್ಲಿ ಛಾಪು ಮೂಡಿಸಿದ ನಟಿ ಈಕೆ. 500ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ. ಊರ್ವಶಿ , ಸ್ಪರ್ಶ , ಮತದಾನ , ವಂಶಿ , ಪೃಥ್ವಿ , ಕಿಚ್ಚ ಹುಚ್ಚ , ಚಂದು , ಬೇರು , ಮಾಲ್ಗುಡಿ ಡೇಸ್ , ಶಿವಾಜಿ ಸೂರತ್ಕಲ್ , ಅಣ್ಣಾಬಾಂಡ್ , ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಾಹೀರಾತುಗಳಲ್ಲಿ ರೂಪದರ್ಶಿಯಾಗಿದ್ದಾರೆ, ಲೇಖನವನ್ನೂ ಬರೆಯುವ ಮೂಲಕ ಲೇಖಕಿಯೂ ಆಗಿದ್ದಾರೆ.&lt;/p&gt;&lt;img&gt;&lt;p&gt;ಇಂತಿಪ್ಪ ನಟಿ, ಇದೀಗ ಕುತೂಹಲದ ಮಾತೊಂದನ್ನು ಹೇಳಿದ್ದಾರೆ. sowjanya.storesಗೆ ನೀಡಿರುವ ಸಂದರ್ಶನದಲ್ಲಿ ಪತಿ ಜೊತೆ ಆಗಮಿಸಿದ್ದ ನಟಿ, ನನ್ನನ್ನು ಆಂಟಿ, ಗಿಂಟಿ ಎಂದು ಕರೆಯಬೇಡಿ. ಅಜ್ಜಿ ಬೇಕಾದ್ದರೂ ಅನ್ನಿ. ಆದ್ರೆ ಆಂಟಿ ಮಾತ್ರ ಹೇಳಬೇಡಿ, ಮೇಡಂ ಅನ್ನೋದೂ ಇಷ್ಟ ಆಗಲ್ಲ. &amp;nbsp;ಕನ್ನಡದಲ್ಲಿ ಏನು ಬೇಕಾದ್ರೂ ಕರೀರಿ. ಅಮ್ಮ ಅನ್ನಿ, ವಿದ್ಯಾಮ್ಮ ಅನ್ನಿ, ಅದೂ ಬೇಡ್ವಾ ಮುದುಕಿ ಬೇಕಾದರೂ ಅನ್ನಿ ಆದ್ರೆ ಆಂಟಿ ಮಾತ್ರ ಹೇಳಬೇಡಿ ಎನ್ನುವ ಮೂಲಕ ಈ ಶಬ್ದದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ನಟಿಯ ಕುರಿತು ಹೇಳುವುದಾದರೆ, 1956ರ ಜುಲೈ 18ರಂದು ಜನಿಸಿರುವ ಇವರಿಗೆ ಈಗ 70 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಅದೇ ಸೌಂದರ್ಯ ಕಾಪಾಡಿಕೊಂಡು ಬಂದಿದ್ದಾರೆ. ಜೊತೆಗೆ ಅದೇ ಪಟಪಟ ಮಾತು, ಹುಮ್ಮಸ್ಸು ಇನ್ನೂ ಅವರಲ್ಲಿ ಇದೆ. ಶಾಲೆ-ಕಾಲೇಜುಗಳ ದಿನದಿಂದಲೇ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂದಿಟ್ಟ ನಟಿ ಆಗಲೇ ಸಿಕ್ಕಾಪಟ್ಟೆ ಬಹುಮಾನ ತರ್ತಿದ್ರಂತೆ.&lt;/p&gt;&lt;img&gt;&lt;p&gt;ಡಿಗ್ರಿಯಾದ ಮೇಲೆ ಮದುವೆ, ಮಕ್ಕಳು ಆಯಿತು. ಬಣ್ಣದ ಲೋಕದಿಂದ ದೂರವಾದರು. ಅಮ್ಮ ತೀರಿಕೊಂಡ ಮೇಲೆ, ಖಿನ್ನತೆಗೆ ಜಾರಿದಾಗ ಪತಿಯೇ , ನಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಗೀತಾ ರಾಮಾನುಜಂ ಅವರನ್ನು ಭೇಟಿಯಾಗಿ ಜಿ.ವಿ.ಅಯ್ಯರ್ ನಿರ್ದೇಶನದ ಭಗವದ್ಗೀತೆ ಚಿತ್ರದಲ್ಲಿ ಸಣ್ಣ ಪಾತ್ರವನ್ನು ಗಿಟ್ಟಿಸಿಕೊಂಡರು.&lt;/p&gt;&lt;img&gt;&lt;p&gt;ಬಳಿಕ ಗೀತಾ ರಾಮಾನುಜಂ ನಿರ್ದೇಶನದ ಯಶೋಧರಾ ನಾಟಕದಲ್ಲಿ ಯಶೋಧರೆ ಪಾತ್ರ ಮಾಡಿದರು. ಅಲ್ಲಿಂದ ವಿದ್ಯಾಮೂರ್ತಿ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಂಸಾರ, ವೃತ್ತಿ ಎರಡನ್ನು ತೂಗಿಸಿಕೊಂಡು ಹೋಗುತ್ತಿದ್ದರು.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/serial-actress-vidhya-murthy-says-not-call-her-aunty-can-call-granny-suc-3gr5qpr"/>
        </item>
        <item>
            <title><![CDATA[ಸಿಎಂ ಸಿದ್ದರಾಮಯ್ಯ ಬಗ್ಗೆ ನಟಿ ಉಮಾಶ್ರಿ ಇದೆಂಥ ಮಾತು- ವ್ಹಾರೆವ್ಹಾ ಎಂದ ನೆಟ್ಟಿಗರು]]></title>
            <link>https://kannada.asianetnews.com/politics/actress-umashree-praising-cm-siddaramaiah-and-his-behaviour-suc/articleshow-f6ltlsw</link>
            <guid isPermaLink="true">https://kannada.asianetnews.com/politics/actress-umashree-praising-cm-siddaramaiah-and-his-behaviour-suc/articleshow-f6ltlsw</guid>
            <pubDate>Fri, 17 Apr 2026 18:27:59 +0530</pubDate>
            <description><![CDATA[ಖ್ಯಾತ ನಟಿ ಉಮಾಶ್ರೀ ಅವರು ಸಂದರ್ಶನವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಕ್ತಿತ್ವ ಮತ್ತು ಕೊಡುಗೆಗಳನ್ನು ಮನಸಾರೆ ಹೊಗಳಿದ್ದಾರೆ. ಅವರೊಬ್ಬ ಶ್ರೇಷ್ಠ ವ್ಯಕ್ತಿ, ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ ಎಂದು ಬಣ್ಣಿಸಿದ್ದು, ಈ ಹೇಳಿಕೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdr92akq8k9q0pdq4ap9xkj,imgname-umashree-about-cm-1776430647635.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟನೆಯಲ್ಲಿ ನಂಬರ್ 1, ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರದೊಳಕ್ಕೆ ಹೋಗಿ ಅದನ್ನು ಮೈಮೇಲೆ ಆಹ್ವಾನಿಸಿಕೊಂಡು ನಟನೆ ಮಾಡುವ ಪರಿಯಿಂದಲೇ ಅಸಂಖ್ಯ ಅಭಿಮಾನಿಗಳನ್ನು ಗಳಿಸಿದವರು ನಟಿ ಉಮಾಶ್ರೀ. ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಪುಟ್ಟಕ್ಕನ ಪಾತ್ರದ ಮೂಲಕ ಇನ್ನೂ ಜನರಿಗೆ ಹತ್ತಿರವಾದವರು ನಟಿ. 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು, 'ಗುಲಾಬಿ ಟಾಕೀಸ್' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ನಟಿ ಮಾತ್ರವಲ್ಲದೇ, ರಾಜಕೀಯದಲ್ಲಿಯೂ ಮುಂದು ಉಮಾಶ್ರೀ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ 2013 ರಿಂದ 2018ರವರೆಗೆ ಸೇವೆ ಸಲ್ಲಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೈಮರೆತು ವರ್ಣನೆ&lt;/strong&gt;&lt;/h2&gt;&lt;p&gt;ಇದೀಗ ನಟಿ, ಸಿದ್ದರಾಮಯ್ಯ ಅವರ ಬಗ್ಗೆ ಕೆಲವೊಂದು ಮಾತುಗಳನ್ನಾಡಿದ್ದು, ಅದಕ್ಕೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಮೆಂಟ್ಸ್​ ಮಾಡುತ್ತಿದ್ದಾರೆ. sabhewithsaba ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ನಿರೂಪಕಿ, ಸಿದ್ದರಾಮಯ್ಯ ಅವರ ಬಗ್ಗೆ ಹೇಳಿ ಅಂದಾಗ, ನಟಿಯ ಹಾವಭಾವವೇ ಬದಲಾಗಿ ಹೋಯ್ತು. ಸಿದ್ದರಾಮಯ್ಯನವರ ಗುಣಗಾನದಲ್ಲಿ ತಮ್ಮ ಮೈಯನ್ನೇ ಮರೆತ ನಟಿ, ಅವರ ಒಂದೊಂದೇ ಒಳ್ಳೆಯ ಕೆಲಸಗಳನ್ನು, ಅವರ ಒಳ್ಳೆಯ ಗುಣಗಳನ್ನು ಹೇಳತೊಡಗಿದರು.&lt;/p&gt;&lt;h3&gt;&lt;strong&gt;ಪದಗಳೇ ಸಾಕಾಗಲ್ಲ&lt;/strong&gt;&lt;/h3&gt;&lt;p&gt;ಸಿದ್ದರಾಮಯ್ಯನವರದ್ದು ಗ್ರೇಟ್​ ಪರ್ಸನ್ಯಾಲಿಟಿ. ಹ್ಯೂಮನ್​. ಅವರ ಬಗ್ಗೆ ನನ್ನಂಥವರು ಮಾತನಾಡಲಿಕ್ಕೆ ಪದಗಳೇ ಸಾಕಾಗುವುದಿಲ್ಲ, ಅಂಥ ಒಂದು ವ್ಯಕ್ತಿತ್ವ. ಅವರಿವರು ಏನೇನೋ ಹೇಳಬಹುದು. ಆದರೆ ಅವರ ಹತ್ತಿರ ಇದ್ದು ಕಂಡವರಿಗೆ ಅವರು ಏನು ಎನ್ನುವುದು ಗೊತ್ತಿದೆ. ಪ್ರೀತಿಯನ್ನು ಹಂಚುವುದನ್ನು ಅವರಿಂದ ನೋಡಿ ಕಲಿಯಬೇಕು. ಅಯ್ಯೋ ಎಷ್ಟು ಚೆಂದ, ಗ್ರಾಮ್ಯ ಎಂದು ಬಣ್ಣಸಿದ್ದಾರೆ ನಟಿ. ಅವರಿಗೆ ಯಾರಾದರೂ ಇಷ್ಟ ಆದರು ಎಂದುಬಿಟ್ಟರೆ ಅವರು ಬೈದರೂ ಸ್ವೀಟ್​ ಆಗಿರುತ್ತದೆ. ಅವರು ಈ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳು ಇರಬಹುದು, ಎಲ್ಲರನ್ನೂ ಸಮಾನವಾಗಿ ಕಾಣುವಂಥದ್ದು ಇರಬಹುದು, ಪ್ರತಿಭೆಗಳನ್ನು ಹುಡುಕಿ ಅವಕಾಶ ಕೊಡುವುದು, ನಂಬಿದವರ ಕೈಹಿಡಿಯುವುದು... ಹೀಗೆ ಹೇಳುತ್ತಾ ಹೋದರೆ ಪದಗಳೇ ಸಾಕಾಗುವುದಿಲ್ಲ ಎಂದು ನಟಿ ಹೊಗಳಿದ್ದಾರೆ.&lt;/p&gt;&lt;h3&gt;&lt;strong&gt;ನೆಟ್ಟಿಗರು ಏನಂದ್ರು?&lt;/strong&gt;&lt;/h3&gt;&lt;p&gt;ಸಿದ್ದರಾಮಯ್ಯನವರ ಅಭಿಮಾನಿಗಳು ನಟಿಯ ಮಾತಿಗೆ ಭಲೆ ಭಲೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರ ವ್ಯಕ್ತಿತ್ವವೇ ಅಂಥದ್ದು ಎನ್ನುತ್ತಿದ್ದಾರೆ. ಇನ್ನು ಆಗದವರು ನಟನೆ ಓವರ್​ ಆಯ್ತು ಎನ್ನುತ್ತಿದ್ದಾರೆ. ಮತ್ತೆ ಕೆಲವರು ನಟಿಯಾಗಿ ನಿಮ್ಮ ಮೇಲೆ ಅಭಿಮಾನ ಇತ್ತು, ಆದರೆ ನೀವು ಈ ರೀತಿ ಮಾತನಾಡಿದ್ದು ಕೇಳಿ ಯಾಕೋ ಇದ್ದ ಅಭಿಮಾನವೂ ಹೋಯ್ತು ಎನ್ನುತ್ತಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/politics/actress-umashree-praising-cm-siddaramaiah-and-his-behaviour-suc/articleshow-f6ltlsw"/>
        </item>
        <item>
            <title><![CDATA[ಹನಿಮೂನ್​ಗೆ 50 ಮಂದಿ, ಹೆಸ್ರು ಹೇಳಲು 3 ತಿಂಗ್ಳು!  ಕೋಟೆ ಪ್ರಭಾಕರ್​ ಲವ್​ಸ್ಟೋರಿಗೆ ನಾಚಿದ Amruthadhaare ಭೂಮಿಕಾ]]></title>
            <link>https://kannada.asianetnews.com/gallery/relationship/jodi-number-1-kote-prabhakar-and-malathi-couple-about-their-love-life-suc-obyy8bo</link>
            <guid isPermaLink="true">https://kannada.asianetnews.com/gallery/relationship/jodi-number-1-kote-prabhakar-and-malathi-couple-about-their-love-life-suc-obyy8bo</guid>
            <pubDate>Fri, 17 Apr 2026 18:10:46 +0530</pubDate>
            <description><![CDATA[&lt;p&gt;ನಟ ಕೋಟೆ ಪ್ರಭಾಕರ್ ಮತ್ತು ಅವರ ಪತ್ನಿ ಮಾಲತಿ 'ಜೋಡಿ ನಂಬರ್ 1' ವೇದಿಕೆಯಲ್ಲಿ ತಮ್ಮ 30 ವರ್ಷಗಳ ದಾಂಪತ್ಯದ ಸ್ವಾರಸ್ಯಕರ ಕಥೆಯನ್ನು ಹಂಚಿಕೊಂಡಿದ್ದಾರೆ. ಮದುವೆಗೆ ಕಾಲು ನೋಡಿ ಒಪ್ಪಿಕೊಂಡಿದ್ದು, 50 ಜನರೊಂದಿಗೆ ಹನಿಮೂನ್&zwnj;ಗೆ ಹೋಗಿದ್ದು ಸೇರಿದಂತೆ ಹಲವು ತಮಾಷೆಯ ಘಟನೆಗಳನ್ನು ಅವರು ಬಹಿರಂಗಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdpyttx4rxeaj7cn676jv66,imgname-jodi-number-1776429263709.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ಕೋಟೆ ಪ್ರಭಾಕರ್ ಮತ್ತು ಅವರ ಪತ್ನಿ ಮಾಲತಿ 'ಜೋಡಿ ನಂಬರ್ 1' ವೇದಿಕೆಯಲ್ಲಿ ತಮ್ಮ 30 ವರ್ಷಗಳ ದಾಂಪತ್ಯದ ಸ್ವಾರಸ್ಯಕರ ಕಥೆಯನ್ನು ಹಂಚಿಕೊಂಡಿದ್ದಾರೆ. ಮದುವೆಗೆ ಕಾಲು ನೋಡಿ ಒಪ್ಪಿಕೊಂಡಿದ್ದು, 50 ಜನರೊಂದಿಗೆ ಹನಿಮೂನ್&zwnj;ಗೆ ಹೋಗಿದ್ದು ಸೇರಿದಂತೆ ಹಲವು ತಮಾಷೆಯ ಘಟನೆಗಳನ್ನು ಅವರು ಬಹಿರಂಗಪಡಿಸಿದರು.&lt;/p&gt;&lt;img&gt;&lt;p&gt;ಓಂ, ಎಕೆ 47, ಅಸುರ, ಸಾರಥಿ ಸೇರಿದಂತೆ ಹಲವಾರು ಹಿಟ್​ ಚಿತ್ರಗಳಲ್ಲಿ, 250ಕ್ಕೂ ವಿವಿಧ ಸಿನಿಮಾಗಳಲ್ಲಿ ಖಳ ನಾಯಕ ಹಾಗೂ ಪೋಷಕ ಪಾತ್ರದಲ್ಲಿ ಜನಮನ ಗೆದ್ದಿರುವವರು ಕೋಟೆ ಪ್ರಭಾಕರ. ಲುಕ್ಕು, ನಟನೆ ಎಲ್ಲವೂ ವಿನಲ್​ ರೀತಿ. ಆದರೆ, ಒಳ ಮನಸ್ಸು ಮಾತ್ರ ಸಿಕ್ಕಾಪಟ್ಟೆ ಸಾಫ್ಟ್ ಎನ್ನುತ್ತಲೇ ಜೀ ಕನ್ನಡದ ಜೋಡಿ ನಂಬರ್​ 1 ವೇದಿಕೆಯ ಮೇಲೆ ತಮ್ಮ ಲವ್​ಸ್ಟೋರಿ ತೆರೆದಿಟ್ಟಿದ್ದಾರೆ ಪ್ರಭಾಕರ್​ ಮತ್ತು ಅವರ ಪತ್ನಿ ಮಾಲತಿ.&lt;/p&gt;&lt;img&gt;&lt;p&gt;ಮದುವೆಯಾಗಿ 30 ವರ್ಷಗಳ ಸಾರ್ಥಕ ಜೀವನ ನಡೆಸುತ್ತಿರುವ ಈ ಜೋಡಿಯ ಸ್ಟೋರಿ ಮಾತ್ರ ಸಕತ್​ ಇಂಟರೆಸ್ಟಿಂಗ್​ ಆಗಿದೆ. ಮದುವೆಯಾಗಿ ಮೂರು ತಿಂಗಳಾದರೂ ಮಾಲತಿ ಎಂದು ಕರೆಯಲಿಲ್ಲವಂತೆ ನಟ. ಅದೊಮ್ಮೆ ಮನೆಯಲ್ಲಿ ನೆಂಟರು ಬಂದಾಗ, ಅಡುಗೆ ಮಾಡುತ್ತಿದ್ದೆ. ನೆಂಟರು ಬಂದ ಗಾಬರಿಯಲ್ಲಿ ಅವರು ಮಾಲತಿ ಎಂದು ಕರೆದುಬಿಟ್ಟರು. ನನಗೆ ದಿಕ್ಕೇ ತೋಚದಾಯಿತು, ಗಾಬರಿಯಿಂದ ಕೈಯಲ್ಲಿದ್ದ ಅಡುಗೆ ಪಾತ್ರೆಯನ್ನೇ ಬಿಟ್ಟುಬಿಟ್ಟೆ ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಮಾಲತಿ. ಈ ಷೋಗೆ ಅತಿಥಿಯಾಗಿ ಬಂದಿರೋ ಅಮೃತಧಾರೆ ಭೂಮಿಕಾ ಉರ್ಫ್​ ಛಾಯಾ ಸಿಂಗ್​ ಅವರು, ಇದನ್ನು ಕೇಳಿ ಬಿದ್ದೂ ಬಿದ್ದೂ ನಕ್ಕಿದ್ದಾರೆ.&lt;/p&gt;&lt;img&gt;&lt;p&gt;ಮದುವೆಗೆ ಹುಡುಗಿ ನೋಡಲು ಬಂದಾಗ, ಹೋಗಿ ಹೋಗಿ ಗಿಣಿಯನ್ನ ಗಿಡುಗನಿಗೆ ಕೊಡ್ತಿದ್ದೀರಾ. ಅವನು ನೋಡಿದ್ರೆ ಹಂಗವ್ನೆ&rsquo; ಅಂತ ನೆರೆ ಮನೆಯವರು ಹೇಳಿದ್ದರಂತೆ. ಆಗ ಗುಣ ನೋಡಿ ಹೆಣ್ಣು ಕೊಡಬೇಕಮ್ಮಾ ಎಂದು ನನ್ನ ಅಪ್ಪ ಹೇಳಿದ್ದರು. ಅದು ನಿಜವಾಯ್ತು. ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ತಾರೆ ಎಂದರು ಮಾಲತಿ. ಇದೇ ವೇಳೆ ಮದುವೆಗೆ ಹುಡುಗಿ ನೋಡಲು ಹೋದಾಗ ಮುಖ ನೋಡಲು ಭಯವಾಗಿ ಬರೀ ಕಾಲು ನೋಡಿ ಹುಡುಗಿಯನ್ನು ಒಪ್ಪಿಕೊಂಡಿದ್ರಂತೆ ನಟ!&lt;/p&gt;&lt;img&gt;&lt;p&gt;ಈ ವೇಳೆ ಹನಿಮೂನ್​ ಬಗ್ಗೆಯೂ ಮಾತನಾಡಿದೆ ಜೋಡಿ. ನಮ್ಮ ಹನಿಮೂನ್&zwnj;ಗೆ 50 ಜನ ಹೋಗಿದ್ವಿ. ಒಂದು ಬಸ್ ಮಾಡಿದ್ದರು. ನಮಗೆ ಅಂತ ಬೇರೆ ರೂಮ್​ ಇತ್ತು. ಆದ್ರೆ ನಮ್ಮ ಅತ್ತೆ ಅವನು ಆ ರೂಮ್&zwnj;ನಲ್ಲಿರಲಿ.. ನೀನು ಈ ರೂಮ್&zwnj;ನಲ್ಲಿರು ಎಂದುಬಿಟ್ಟರು. ಹೀಗೆ ಹನಿಮೂನ್​ ಮುಗೀತು ಎಂದು ನಕ್ಕಿದ್ದಾರೆ ಮಾಲತಿ.&lt;/p&gt;&lt;img&gt;&lt;p&gt;ಇದೇ ವೇಳೆ, ಮೂವತ್ತು ವರ್ಷಗಳ ಈ ಪಯಣದಲ್ಲಿ ದೇವತೆಯಂತೆ ನನ್ನನ್ನು ನೋಡಿಕೊಂಡಿದ್ದಾರೆ ಮಾಲತಿ ಎಂದು ನಟ, ಪತ್ನಿಯ ಗುಣಗಾನ ಮಾಡಿದ್ದಾರೆ. ನಾನು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ ಅಂದ್ರೆ ಅದಕ್ಕೆ ಕಾರಣ ಇವರು. ನನ್ನ ಹೆಂಡತಿಯಿಂದಲೇ ನಾನು ಉದ್ಧಾರ ಆಗಿದ್ದು ಎಂದಿದ್ದಾರೆ.&lt;/p&gt;&lt;img&gt;&lt;p&gt;ಖಳ ನಟ ಆಗಿರುವ ಕಾರಣ ಹೆಚ್ಚಿನ ಸಿನಿಮಾಗಳಲ್ಲಿ ಇವರು ಸಾಯುವ ಸೀನ್&zwnj; ಇರುತ್ತೆ. ಅದನ್ನೆಲ್ಲಾ ನಾನು ನೋಡಲ್ಲ. ಟಿವಿಯಲ್ಲಿ ಹಾಕಿದರೂ ನೋಡಲ್ಲ ಎಂದು ಮಾಲತಿ ಹೇಳಿದರೆ, ಅಲ್ಲಿ ನನ್ನದು ಖಳನಟನ ರೋಲ್​, ಆದರೆ ಈ ವೇದಿಕೆಯಲ್ಲಿ ನನಗೆ ಹೀರೋ ರೀತಿ ಫೀಲ್​ ಆಗತ್ತೆ ಎಂದು ಪ್ರಭಾಕರ್​ ಕಣ್ಣೀರಾದರು.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/jodi-number-1-kote-prabhakar-and-malathi-couple-about-their-love-life-suc-obyy8bo"/>
        </item>
        <item>
            <title><![CDATA[Bigg Boss ಸೂರಜ್​ ಸಿಂಗ್​- ರಾಶಿಕಾ ಕೊಟ್ಟರು ಗುಡ್​ನ್ಯೂಸ್​: ಚಿನ್ನ ಖರೀದಿಸ್ತಾ ಜೋಡಿ ಹೇಳಿದ್ದೇನು?]]></title>
            <link>https://kannada.asianetnews.com/gallery/relationship/rashika-shetty-and-suraj-singh-in-an-gold-showroom-advertisement-suc-ikfego9</link>
            <guid isPermaLink="true">https://kannada.asianetnews.com/gallery/relationship/rashika-shetty-and-suraj-singh-in-an-gold-showroom-advertisement-suc-ikfego9</guid>
            <pubDate>Fri, 17 Apr 2026 17:14:04 +0530</pubDate>
            <description><![CDATA[&lt;p&gt;ಬಿಗ್​ಬಾಸ್​ 12ರ ಕ್ಯೂಟ್​ ಜೋಡಿ ಎನಿಸಿಕೊಂಡಿದ್ದ ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ, ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನದ ಮಳಿಗೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. &amp;nbsp;ತಮ್ಮಿಬ್ಬರ ನಡುವೆ ಇರುವುದು ಗೆಳೆತನ ಮಾತ್ರ ಎಂದು ಈ ಜೋಡಿ ಸ್ಪಷ್ಟಪಡಿಸಿದ್ದು, ಈ ಮಳಿಗೆಗೆ ಬಂದದ್ದೇಕೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdkxqdpgcbnkheezdg2g43x,imgname-rashika-shetty-and-suraj-singh-1776426081718.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್​ಬಾಸ್​ 12ರ ಕ್ಯೂಟ್​ ಜೋಡಿ ಎನಿಸಿಕೊಂಡಿದ್ದ ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ, ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನದ ಮಳಿಗೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. &amp;nbsp;ತಮ್ಮಿಬ್ಬರ ನಡುವೆ ಇರುವುದು ಗೆಳೆತನ ಮಾತ್ರ ಎಂದು ಈ ಜೋಡಿ ಸ್ಪಷ್ಟಪಡಿಸಿದ್ದು, ಈ ಮಳಿಗೆಗೆ ಬಂದದ್ದೇಕೆ?&lt;/p&gt;&lt;img&gt;&lt;p&gt;ಬಿಗ್​ಬಾಸ್​ 12 (Bigg Boss 12)ರ ಕ್ಯೂಟ್​ ಜೋಡಿಗಳಲ್ಲಿ ಒಂದಾಗಿದ್ದು ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಜೋಡಿ. ರಾಶಿಕಾ ಶೆಟ್ಟಿ ಅವರು, ಮನೆಯಲ್ಲಿ ಹೆಚ್ಚು ಸದ್ದು ಮಾಡಿದ್ದೇ ಸೂರಜ್​ ಸಿಂಗ್​ ಅವರ ಜೊತೆಗಿನ ಆತ್ಮೀಯ ಒಡನಾಟದಿಂದ. ಸೂರಜ್​ ಅವರು ವೈಲ್ಡ್​ಕಾರ್ಡ್​ ಎಂಟ್ರಿ ಕೊಟ್ಟಾಗ ಈ ಮನೆಯ ಸುಂದರಿಗೆ ಗುಲಾಬಿ ಕೊಡಬೇಕು ಎಂದಾಗ ಅವರು ಅದನ್ನು ಕೊಟ್ಟಿದ್ದು ರಾಶಿಕಾ ಅವರಿಗೆ.&lt;/p&gt;&lt;img&gt;&lt;p&gt;ಅಲ್ಲಿಂದಲೇ ಅವರ ಸ್ನೇಹ ಶುರುವಾಗಿತ್ತು. ಒಂದು ಹಂತದಲ್ಲಿ ಬಿಗ್​ಬಾಸ್​ ವೀಕ್ಷಕರಿಗೆ ರಾಶಿಕಾ ಶೆಟ್ಟಿ ಅವರೇ ಸೂರಜ್​ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಎನ್ನಿಸಿದ್ದು ಉಂಟು. ಅವರ ಜೊತೆಯಲ್ಲಿಯೇ ಇರುವುದು, ಅವರ ಬಳಿ ಮಾತ್ರ ಮಾತನಾಡುವುದು... ಇಂಥ ಘಟನೆಗಳು ಹಲವಾರು ನಡೆದಿದ್ದವು. ಆ ಬಳಿಕ ಸೂರಜ್​ ಅವರು ಎಲಿಮಿನೇಟ್​ ಆಗಿ ಹೊರಕ್ಕೆ ಬಂದಾಗ, ರಾಶಿಕಾ ಶೆಟ್ಟಿ ಬಿಕ್ಕಿಬಿಕ್ಕಿ ಅತ್ತಿದ್ದರಿಂದಲೂ ಇವರಿಬ್ಬರ ನಡುವೆ ಸಮ್​ಥಿಂಗ್​ ಇದೆ ಎಂದೇ ಹೇಳಲಾಗುತ್ತಿತ್ತು. ಹೊರಗೆ ಬಂದ ಮೇಲೂ ಈ ಜೋಡಿಗೆ ಇದೇ ವಿಷಯವಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು.&lt;/p&gt;&lt;img&gt;&lt;p&gt;ಇದೀಗ ಮತ್ತೆ ಈ ಜೋಡಿ ಸಕತ್​ ಸೌಂಡ್​ ಮಾಡಿದೆ. ಅದೇನೆಂದರೆ ಇನ್ನೇನು ಅಕ್ಷಯ ತೃತೀಯ ಹಬ್ಬ ಹತ್ತಿರವಿದೆ. ಇದರ ಬೆನ್ನಲ್ಲೇ ಈ ಜೋಡಿ ಚಿನ್ನದ ಖರೀದಿ ಮಾಡಿದೆ. ರಾಶಿಕಾ ಶೆಟ್ಟಿ ಸೂರಜ್​ ಸಿಂಗ್​ ಇಬ್ಬರೂ ಚಿನ್ನದ ಮಳಿಗೆಯೊಂದರಲ್ಲಿ ಕಾಣಿಸಿಕೊಂಡು ಚಿನ್ನಾಭರಣ ಪ್ರಿಯರಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಏನಿದು ಗುಡ್​ನ್ಯೂಸ್​ ಅಂತ ಕೇಳ್ತೀರಾ. ಅಂಥದ್ದೇನೂ ಇಲ್ಲ. ಚಿನ್ನದ ಮಳಿಗೆಯೊಂದರ ಪ್ರಚಾರಕ್ಕಾಗಿ ಇದಾಗಲೇ ಹಲವಾರು ಸೆಲೆಬ್ರಿಟಿಗಳು ಬಂದಿದ್ದು, ಅದೇ ರೀತಿ ಸೂರಜ್​ ಮತ್ತು ರಾಶಿಕಾ ಶೆಟ್ಟಿಯನ್ನು ಪ್ರೊಮೋಷನ್​ಗಾಗಿ ಕರೆಸಲಾಗಿದೆ. ಸೆಲೆಬ್ರಿಟಿಗಳು ಚಿನ್ನ ಖರೀದಿ ಮಾಡಿದಂತೆ ತೋರಿಸಿದರೆ, ಜನರು ಆಕರ್ಷಿತರಾಗಿ ಖರೀದಿ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೀಗೆ ಚಿನ್ನ ಖರೀದಿ ಮಾಡಿದಂತೆ ತೋರಿಸಲಾಗುತ್ತದೆ ಅಷ್ಟೇ. ಹಿಂದೆ ಬಿಗ್​ಬಾಸ್​​ ವಿನ್ನರ್​ ಗಿಲ್ಲಿನಟನಿಗೆ ಕೆಜಿಗಟ್ಟಲೆ ಚಿನ್ನ ಹಾಕಿದಾಗ, ಅದನ್ನು ಅವರು ವಾಪಸ್​ ಮಾಡಿರಲಿಲ್ಲವೆ, ಇದೂ ಕೂಡ ಹಾಗೆನೇ.&lt;/p&gt;&lt;img&gt;&lt;p&gt;ಇದಾಗಲೇ ಈ ಜೋಡಿ, ತಮ್ಮಿಬ್ಬರ ನಡುವೆ ಅಂಥದ್ದೇನೂ ಇಲ್ಲ, ಒಳ್ಳೆಯ ಗೆಳೆತನ ಅಷ್ಟೇ ಎಂದಿದೆ. ಸೂರಜ್​ ಅವರು ಎಷ್ಟು ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅದಕ್ಕಾಗಿಯೇ ಅವರ ಮೇಲೆ ಸ್ನೇಹ ಇರೋದು ನಿಜ. ಅವರ ಪವಿತ್ರ ಬಂಧನ ಸಿನಿಮಾ ಪ್ರಮೋಷನ್​ಗೂ ನಾನು ನನ್ನೆಲ್ಲಾ ಕಮಿಟ್​ಮೆಂಟ್​ ಬಿಟ್ಟು ಹೋಗಿದ್ದು ಕೂಡ ಇದೇ ಕಾರಣಕ್ಕೆ ಎಂದಿದ್ದರು ರಾಶಿಕಾ (Bigg Boss Rashika Shetty)&lt;/p&gt;&lt;img&gt;&lt;p&gt;ಬಿಗ್​ಬಾಸ್​ ಮನೆಯಲ್ಲಿ ನನ್ನ ಪವಿತ್ರ ಬಂಧನ ಯಾರ ಜೊತೆ ಎಂದು ಹೇಳುವುದಾದರೆ, ಅದು ಸೂರಜ್​ ಜೊತೆಗೆನೇ. ಅವರು ಬಿಗ್​ಬಾಸ್​ ಮನೆಗೆ ಬಂದಿರಲಿಲ್ಲವೆಂದರೆ, ನನಗೆ ಯಾರ ಜೊತೆನೂ ಫ್ರೆಂಡ್​ಷಿಪ್​ ಆಗ್ತಾ ಇರಲಿಲ್ಲ. ಯಾರ ಜೊತೆನೂ ಕಂಫರ್ಟ್​ ಎನ್ನಿಸುತ್ತಾ ಇರಲಿಲ್ಲ ಎಂದಿದ್ದರು. ಸೂರಜ್​ ಕೂಡ ತಾವಿಬ್ಬರೂ ಒಳ್ಳೆಯ ಫ್ರೆಂಡ್ಸ್​ ಅಷ್ಟೇ ಎಂದಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/rashika-shetty-and-suraj-singh-in-an-gold-showroom-advertisement-suc-ikfego9"/>
        </item>
        <item>
            <title><![CDATA[ಕೂಲಿ ಕೆಲ್ಸ ಮಾಡಿದ್ದೆ, ಜೈಲೂ ಸೇರಿದೆ: Amruthadhaare ನಟ ರಾಣವ್​ ಬದುಕಿನ ಯಾರೂ ತಿಳಿಯದ ಸತ್ಯ]]></title>
            <link>https://kannada.asianetnews.com/gallery/tv-talk/amruthadhaare-jaidev-urf-ranav-gowda-about-his-early-life-struggle-and-jail-experience-suc-4p340t0</link>
            <guid isPermaLink="true">https://kannada.asianetnews.com/gallery/tv-talk/amruthadhaare-jaidev-urf-ranav-gowda-about-his-early-life-struggle-and-jail-experience-suc-4p340t0</guid>
            <pubDate>Fri, 17 Apr 2026 12:15:06 +0530</pubDate>
            <description><![CDATA[&lt;p&gt;ಅಮೃತಧಾರೆ ಸೀರಿಯಲ್ ಖ್ಯಾತಿಯ ನಟ ಜೈದೇವ್ ಅಲಿಯಾಸ್ ರಾಣವ್ ಗೌಡ, ಸಹನಟಿ ರಾಧಾ ಭಗವತಿ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ನಟನಾ ಪಯಣದ ಹಿಂದಿನ ಕಷ್ಟಹಂಚಿಕೊಂಡಿದ್ದು, ಕೂಲಿ ಕೆಲಸ ಮಾಡಿದ್ದರಿಂದ ಹಿಡಿದು ಜೈಲು ಸೇರಿದ್ದರ ಬಗ್ಗೆಯೂ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd2r7zd1dmtwbjt0c6zn3ps,imgname-amruthadhaare-ranav-gowda-1776408076269.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಸೀರಿಯಲ್ ಖ್ಯಾತಿಯ ನಟ ಜೈದೇವ್ ಅಲಿಯಾಸ್ ರಾಣವ್ ಗೌಡ, ಸಹನಟಿ ರಾಧಾ ಭಗವತಿ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ನಟನಾ ಪಯಣದ ಹಿಂದಿನ ಕಷ್ಟಹಂಚಿಕೊಂಡಿದ್ದು, ಕೂಲಿ ಕೆಲಸ ಮಾಡಿದ್ದರಿಂದ ಹಿಡಿದು ಜೈಲು ಸೇರಿದ್ದರ ಬಗ್ಗೆಯೂ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare Serial) ಜೈದೇವ್​ ಉರ್ಫ್​ ರಾಣವ್​ ಗೌಡ ಅವರು ಇದೀಗ ಇದೇ ಸೀರಿಯಲ್​ ಹಳೆಯ ಮಲ್ಲಿ ಅರ್ಥಾತ್​ ಭಾರ್ಗವಿ ಎಲ್​ಎಲ್​ಬಿ ನಟಿ ರಾಧಾ ಭಗವತಿ ಅವರ ಜೊತೆ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ಈ ವರ್ಷವೇ ತಮ್ಮ ಮದುವೆ ಎಂದು ಎಂಗೇಜ್​ಮೆಂಟ್​ ಆಗಿರೋ ಈ ಜೋಡಿ ಘೋಷಿಸಿದೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ಇದೀಗ ನಟ ರಾಣವ್​ ಅವರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ಪರಿಯ ಸಕ್ಸಸ್​ ನಟನಾಗಿ ಬರಲು ತಾವು ಪಟ್ಟಿರುವ ಕಷ್ಟಗಳ ದಿನಗಳನ್ನು ನಟ ನೆನೆದಿದ್ದಾರೆ. ಚಂದನ್​ ಕೆ.ಶೆಟ್ಟಿ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಎಂಜಿನಿಯರಿಂಗ್​ ಅರ್ಧಂದರ್ಧ ಕಲಿತ ಮೇಲೆ ಜೀವನದಲ್ಲಿ ಸಾಕಷ್ಟು ಅಪ್ಸ್ ಅಂಡ್ ಡೌನ್ಸ್ ಆಯ್ತು. ಸಿಮೆಂಟ್ ಕೆಲಸ, ಕೂಲಿ ಕೆಲಸನೂ ಮಾಡಬೇಕಾಯ್ತು. ಲೇಬರ್ ಆಗಿ ಐದಾರು ವರ್ಷ ದುಡಿದೆ. ದುಡ್ಡಿನ ವ್ಯಾಲ್ಯೂ ಗೊತ್ತಾಗ್ಲಿ ಅಂತಾನೆ ನಮ್ಮ ತಂದೆ ಇಂಥ ಸ್ಟೆಪ್​ ತೆಗೆದುಕೊಂಡಿದ್ರು. ಸೋ ನಾನು ಅದಕ್ಕೆ ಚಾಲೆಂಜಿಂಗ್ ಆಗಿ ನಾನು ಏನು ಕೊಡ್ತೀರೋ ಕೊಡಿ ಅದು ಏನು ಮಾಡ್ಬೇಕೋ ಹೇಳಿ ಮಾಡ್ತೀನಿ ಅಂತ ನಾನು ರೆಡಿ ಆಗಿದ್ದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅದಾದ ಬಳಿಕ ಬಿಸಿನೆಸ್​ಗೆ ಕೈ ಹಾಕಿದೆ. ಅದು ಲಾಸ್ ಆಯ್ತು. ಸಿಮೆಂಟ್ ಬಿಸಿನೆಸ್ ಆಗಿತ್ತು ಅದು, ಆರು ತಿಂಗಳು ಚೆನ್ನಾಗಿಯೇ ನಡೆಯಿತು. ಕಮಿಟ್ಮೆಂಟ್ ಜಾಸ್ತಿ ಇತ್ತು. ಸೋ ಎಲ್ಲಾನು ಬಿಟ್ಟುಬಿಟ್ಟೆ ಎಂದಿದ್ದಾರೆ ರಾಣವ್​.&lt;/p&gt;&lt;img&gt;&lt;p&gt;ಆದರೆ ಆ ಸಂದರ್ಭದಲ್ಲಿ ಕಾವೇರಿ ಗಲಾಟೆ ನಡೆಯುತ್ತಿತ್ತು. ಅಲ್ಲಿಗೆ ಹೋಗಿ ಸೆಂಟ್ರಲ್​ ಜೈಲು ಸೇರುವ ಸ್ಥಿತಿ ಬಂತು. ಅಲ್ಲೆಲ್ಲ ಹೋಗಿ ಇದ್ದು ಬಂದದ್ದು ಸುಮಾರು ಜನಕ್ಕೆ ಗೊತ್ತಿಲ್ಲ ಬಿಡಿ. ಆ ಸಮಯದಲ್ಲಿ ತುಲಾ ರಾಶಿಗೆ ಸಾಡೇಸಾತಿ ನಡೆಯುತ್ತಿತ್ತು. ನನ್ನ ಅಮ್ಮ ನನ್ನನ್ನು ಎಚ್ಚರಿಸುತ್ತಲೇ ಇದ್ದರು. ಆದರೆ ಅವೆಲ್ಲಾ ಏನೂ ಇಲ್ಲಮ್ಮ, ಸುಮ್​ಸುಮ್ನೆ ನಂಬಬೇಡ ಎಂದಿದ್ದೆ. ಆಮೇಲೆ ಗೊತ್ತಾಯ್ತು, ಜೈಲಿಗೆ ಸೇರಬೇಕಾಯ್ತು ಎಂದಿದ್ದಾರೆ ನಟ.&lt;/p&gt;&lt;img&gt;&lt;p&gt;ಎಲ್ಲಾ ಆದ ಮೇಲೆ ಒಂದು ಫೈನ್ ಡೇ ಡಿಸೈಡ್ ಮಾಡಿದೆ. ನನ್ನ ಬಣ್ಣದ ಬದುಕಿನ ಆಸೆ ಏನಿದೆ ಅದನ್ನು ಈಡೇರಿಸಿಕೊಳ್ಳೋಣ ಎಂದು. ಇಂಡಸ್ಟ್ರಿಗೆ ಹೋಗೋಣ ಅಂತ ಅಂದ್ಬಿಟ್ಟು ಒಂದು ದಿನ ಡಿಸೈಡ್ ಮಾಡಿದೆ. ನಂತರದ ಪಯಣವೂ ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಪ್ರಯತ್ನದ ಬಳಿಕ ಅಂತೂ ನನ್ನ ಆಸೆ ಈಡೇರಿದೆ. ಈಗ ಇಲ್ಲಿಯೇ ಮುಂದುವರೆದಿದ್ದೇನೆ ಎಂದಿದ್ದಾರೆ ನಟ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-jaidev-urf-ranav-gowda-about-his-early-life-struggle-and-jail-experience-suc-4p340t0"/>
        </item>
        <item>
            <title><![CDATA[ಬೆಂಗಳೂರು: ಪ್ರೀತಿ ನಿರಾಕರಿಸಿದ ಹಿಂದೂ ಮಾಡೆಲ್‌ಗೆ ಹಿಗ್ಗಾ ಮುಗ್ಗಾ ಥಳಿಸಿದ ಜುಹೇದ್!]]></title>
            <link>https://kannada.asianetnews.com/karnataka-districts/bengaluru-model-assaulted-by-man-who-refused-marriage-proposal-arrested-after-complaint-gdp/articleshow-7oileug</link>
            <guid isPermaLink="true">https://kannada.asianetnews.com/karnataka-districts/bengaluru-model-assaulted-by-man-who-refused-marriage-proposal-arrested-after-complaint-gdp/articleshow-7oileug</guid>
            <pubDate>Thu, 16 Apr 2026 11:34:47 +0530</pubDate>
            <description><![CDATA[ಬೆಂಗಳೂರಿನ ಪುಲಕೇಶಿನಗರದಲ್ಲಿ, ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕೆ ಒಡಿಶಾ ಮೂಲದ ಯುವತಿ ಮತ್ತು ಆಕೆಯ ಸ್ನೇಹಿತೆಯ ಮೇಲೆ ಜುಹೇದ್ ಎಂಬಾತ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpae6a4kh0jfwa7qfjd8myxs,imgname-bengaluru-model-assault-case-1776319408274.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಹಿಂದೂ ಯುವತಿ ಮದುವೆ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಪುಲಕೇಶಿನಗರ ಪೊಲೀಸರು ಜುಹೇದ್ (30) ಎಂಬಾತನನ್ನು ಬಂಧಿಸಿದ್ದಾರೆ. ಒಡಿಶಾ ಮೂಲದ ಯುವತಿ ಹಾಗೂ ಆಕೆಯ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಿದ ಆರೋಪ ಇದ್ದು ಈತನ ಮೇಲೆ ದೂರು ದಾಖಲಿಸಲಾಗಿದೆ.&lt;/p&gt;&lt;p&gt;ದೂರುದಾರ ಯುವತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾಳೆ. ಆಕೆ ತನ್ನ ಸ್ನೇಹಿತೆಯೊಂದಿಗೆ ಪುಲಕೇಶಿನಗರ ಪ್ರದೇಶದಲ್ಲಿ ವಾಸವಾಗಿದ್ದಳು. ಇದೇ ವೇಳೆ ಆರೋಪಿ ಜುಹೇದ್ ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿದ್ದನು. ಕೆಲವು ವರ್ಷಗಳ ಹಿಂದೆ ಒಂದೇ ಪ್ರಾಜೆಕ್ಟ್&zwnj;ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಇವರಿಬ್ಬರಿಗೂ ಪರಿಚಯವಾಗಿತ್ತು.&lt;/p&gt;&lt;h2&gt;ಮದುವೆಯಾಗುವಂತೆ ಒತ್ತಾಯ ಒಪ್ಪದ್ದಕ್ಕೆ ಹಲ್ಲೆ&lt;/h2&gt;&lt;p&gt;ಆ ಪರಿಚಯದ ಬಳಿಕ ಜುಹೇದ್, 2024ರಿಂದ ಯುವತಿಯ ಹಿಂದೆ ಬಿದ್ದು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದನೆಂದು ಯುವತಿ ಆರೋಪಿಸಿದ್ದು, ನನ್ನ ಬಳಿ ಅದಕ್ಕೆ ಸಾಕ್ಷಿ ಇದೆ ಎಂದು ವಿಡಿಯೋ ಬಿಡುಗಡೆ ಮಾಡಿ ಆರೋಪಿಸಿದ್ದಾಳೆ. ಯಾವಾಗ ಜುಹೇದ್&zwnj; ನನ್ನು ಮದುವೆಯಾಗಲು ನಿರಾಕರಿಸಿದಳೋ ಅಂದಿನಿಂದ ಆಕೆಗೆ ಪ್ರಾಣ ಬೆದರಿಕೆ ಹಾಕುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಸ್ನೇಹಿತೆ ಮೇಲೂ ಹಲ್ಲೆ ನಡೆಸಿದ ಆರೋಪಿ&lt;/h2&gt;&lt;p&gt;ಇತ್ತೀಚೆಗೆ ಆರೋಪಿ ತನ್ನ ಡಿಪಿಯಲ್ಲಿ ಕೂಡ ಯುವತಿಯ ಫೋಟೋವನ್ನು ಹಾಕಿಕೊಂಡಿದ್ದನಂತೆ. ಇದನ್ನು ಪ್ರಶ್ನಿಸಲು ಮಂಗಳವಾರ ಯುವತಿ ತನ್ನ ಸ್ನೇಹಿತೆಯೊಂದಿಗೆ ಆರೋಪಿ ಮನೆಯ ಬಳಿ ತೆರಳಿದ್ದಳು. ಈ ವೇಳೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿ, ಆರೋಪಿ ಇಬ್ಬರ ಮೇಲೂ ಥಳಿಸಿ ರಕ್ತ ಬರುವಂತೆ ಹೊಡೆದಿದ್ದಾನೆ.&lt;/p&gt;&lt;p&gt;ಈ ಸಂಬಂಧ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪುಲಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ಆರೋಪಿ ಜುಹೇದ್ ಅನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿಸಲಾಗಿದೆ. ಈ ಘಟನೆ ನಗರದಲ್ಲಿ ಮಹಿಳೆಯರ ಮೇಲಿನ ಹಲ್ಲೆಗಳ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿ ಹೆಚ್ಚಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.&lt;/p&gt;]]></content:encoded>
            <category>relationship</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-model-assaulted-by-man-who-refused-marriage-proposal-arrested-after-complaint-gdp/articleshow-7oileug"/>
        </item>
        <item>
            <title><![CDATA[TCS Love Jihad ಬೇಧಿಸಲು ಟಾಯ್ಲೆಟ್​ ತೊಳೆದ ಪೊಲೀಸರು! ಹಿಂದೂಗಳ ಬುರ್ಖಾ ಸೆಲ್ಫಿ- ಸಿನಿಮಾ ಮೀರಿಸೋ ಸ್ಟೋರಿ]]></title>
            <link>https://kannada.asianetnews.com/india-news/tcs-love-jihad-case-lady-police-in-guise-of-house-keepers-suc/articleshow-7s2s2ns</link>
            <guid isPermaLink="true">https://kannada.asianetnews.com/india-news/tcs-love-jihad-case-lady-police-in-guise-of-house-keepers-suc/articleshow-7s2s2ns</guid>
            <pubDate>Thu, 16 Apr 2026 20:28:00 +0530</pubDate>
            <description><![CDATA[ನಾಸಿಕ್&zwnj;ನ ಟಾಟಾ ಕನ್ಸಲ್ಟೆನ್ಸಿ (ಟಿಸಿಎಸ್) ಕಚೇರಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳಾ ಕಾನ್ಸ್&zwnj;ಟೇಬಲ್&zwnj;ಗಳು ಹೌಸ್ ಕೀಪಿಂಗ್ ಸಿಬ್ಬಂದಿಯ ಮಾರುವೇಷದಲ್ಲಿ ಸಾಕ್ಷ್ಯ ಸಂಗ್ರಹಿಸಿ, ಹಿಂದೂ ಯುವತಿಯರನ್ನು ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಜಾಲದ ಕಿಂಗ್&zwnj;ಪಿನ್ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbcqyxhb77ezfwdqc1esy7v,imgname-love-jihad-1776351443889.jpg" type="image/jpeg" height="390" width="690"/>
            <content:encoded><![CDATA[&lt;p&gt;ಲವ್​ ಜಿಹಾದ್​ ಎನ್ನೋದು ಇದೀಗ ಭಾರಿ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ದಿ ಕೇರಳ ಸ್ಟೋರಿಯಲ್ಲಿ ತೋರಿದ ಪ್ರತಿಯೊಂದು ಅಂಶದಂತೆ, ಅದೇ ಮಾದರಿಯಲ್ಲಿ ಪ್ರತಿಯೊಂದು ಲವ್ ಜಿಹಾದ್​ (Love Jihad) ನಡೆಯುತ್ತಿದೆ. ಅದೇ ಒಬ್ಬಳು ಹುಡುಗಿ, ಅದೇ ಬುದ್ಧಿ ಇಲ್ಲದ ಹಿಂದೂ ಹುಡುಗಿಯರು, ಅದೇ ರೀತಿಯ ಬ್ರೈನ್​ ವಾಷ್​, ಅಲ್ಲೊಬ್ಬ ಸ್ಮಾರ್ಟ್​ ಹುಡುಗ, ಹುಡುಗನನ್ನು ಪರಿಚಯ ಮಾಡಿಸುವ ಅವನ ಗ್ಯಾಂಗ್​ನವರು, ಆ ಹುಡುಗನ ಶ್ರೀಮಂತಿಕೆಗೋ, ಲವ್​ ಮಾಡುವ ವಿಧಾನಕ್ಕೋ ಇನ್ನಾವುದಕ್ಕೋ ಮನಸೋಲುವ ಹಿಂದೂ ಹುಡುಗಿಯರು... ಎಲ್ಲವೂ ಸೇಮ್​ ಟು ಸೇಮ್​. ಅದೂ ಸೋ ಕಾಲ್ಡ್​ ಎಜುಕೇಟೆಡ್​ ಎನ್ನುವ ಹುಡುಗಿಯರು ಎನ್ನುವುದು ಮಾತ್ರ ತೀವ್ರ ಅಚ್ಚರಿ ತರುವಂಥ ಹಾಗೂ ಅಷ್ಟೇ ನಿಗೂಢವಾಗಿರುವ ವಿಷಯವಾಗಿದೆ.&lt;/p&gt;&lt;h2&gt;&lt;strong&gt;ಟಾಟಾ ಕನ್ಸಲ್​ಟೆನ್ಸಿಯ ಲವ್​ ಜಿಹಾದ್​&lt;/strong&gt;&lt;/h2&gt;&lt;p&gt;ಇದೀಗ ಮಹಾರಾಷ್ಟ್ರದ ನಾಸಿಕ್​ನಲ್ಲಿ ಟಾಟಾ ಕನ್ಸಲ್​ಟೆನ್ಸಿಯ ಲವ್​ ಜಿಹಾದ್​ ಪ್ರಕರಣ ಮಾತ್ರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹಿಂದೂ ಅಪ್ಪ-ಅಮ್ಮ ತಮ್ಮ ಹೆಣ್ಣುಮಕ್ಕಳು ಉದ್ಯೋಗಕ್ಕೇ ಕಳುಹಿಸಲು ಬೆದರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಕಿಂಗ್​ಪಿನ್​ ನಿದಾ ಖಾನ್​ (Nida Khan- Love Jihad). ಅಷ್ಟಕ್ಕೂ ಈ ಪ್ರಕರಣವನ್ನು ಭೇದಿಸಲು ಪೊಲೀಸರು ಸಿನಿಮಾ ಸ್ಟೋರಿಯನ್ನೂ ಮೀರುವ ರೀತಿಯಲ್ಲಿ ಕಾರ್ಯಾಚರಣೆ ಮಾಡಿರುವ ಸಂಗತಿ ಇದೀಗ ಬಯಲಿದೆ ಬಂದಿದೆ.&lt;/p&gt;&lt;h3&gt;&lt;strong&gt;ಪೊಲೀಸರು ಮಾಡಿದ್ದೇನು?&lt;/strong&gt;&lt;/h3&gt;&lt;p&gt;ಮೊದಲಿಗೆ ನಾಲ್ಕು ಜನ ಫೀಮೇಲ್ ಕಾನ್​ಸ್ಟೆಬಲ್​ಗಳನ್ನು ಟಿಸಿಎಸ್ ನ ಒಳಗಡೆ ಕೆಲಸಕ್ಕೆ ಅಂತ ಸೇರಿಸಿದರು, ಅದೂ ಮಾರುವಷದಲ್ಲಿ. ಹೌಸ್ ಕೀಪಿಂಗ್ ಕೆಲಸವದು. ಅಷ್ಟಕ್ಕೂ ಈ ಕಂಪೆನಿಯಲ್ಲಿ ಜಾಬ್ ತಗೊಳ್ಬೇಕು ಅಂತಂದ್ರೆ ಅದಕ್ಕೆ ಅದರದೇ ಆದ ಕ್ವಾಲಿಫಿಕೇಶನ್ ಇರುತ್ತದೆ. ಆದರೆ ಹೌಸ್​ ಕೀಪಿಂಗ್​ ಔಟ್​ ಸೋರ್ಸ್​ ಮಾಡುವ ಕಾರಣ ಆ ಏಜೆನ್ಸಿಗೆ ಹೋದ ಪೊಲೀಸರು ನಮ್ಮವರು ನಾಲ್ಕು ಜನ ಅಲ್ಲಿ ಕೆಲಸಕ್ಕೆ ಕಳಿಸಿ ಎಂದರು. ಪಾಪ ಅಲ್ಲಿ ಅವರ ಕೆಲಸ ಕಸ ಗುಡಿಸುವುದು, ಟಾಯ್ಲೆಟ್ ಕ್ಲೀನ್ ಮಾಡುವುದು, ನೆಲ ಒರೆಸುವುದು, ಕಾಫಿ ಟೀ ಕೊಡುವುದು ಇತ್ಯಾದಿ.&lt;/p&gt;&lt;p&gt;ಕೊನೆಗೆ ಒಂದೊಂದೇ ಸಾಕ್ಷ್ಯ ಸಂಗ್ರಹ ಮಾಡಿದರು. ಅಲ್ಲಿಯ ಲವ್​ ಜಿಹಾದ್​ನ ದೊಡ್ಡ ಪ್ರಪಂಚವೇ ತೆರೆದುಕೊಂಡಿತು. ಒಂದೊಂದೇ ಸಾಕ್ಷ ಸಂಗ್ರಹ ಮಾಡಿದ ಬಳಿಕ ಕೊನೆಗೆ ಒಬ್ಬ ಸಿಕ್ಕ. ಪೊಲೀಸರು ಅವನನ್ನು ಅರೆಸ್ಟ್ ಮಾಡಿಕೊಂಡು ಬಂದರು. ಅವನು ನನಗೇನೂ ಗೊತ್ತಿಲ್ಲ ಎಂದ, ಇನ್ನೊಬ್ಬನ ಹೆಸರು ಹೇಳಿದ. ಅವನ ಮೊಬೈಲ್ ತೆಗೆದರೆ ಹಿಂದೂ ಹುಡುಗಿಯರು ಹಿಜಾಬ್ ಹಾಕೊಂಡು ನಿಕಾಬ್ ಹಾಕೊಂಡು ಕಳಿಸಿರುವ ಫೋಟೋಗಳು ಸೆಲ್ಫಿಗಳು ಅವನ ಮೊಬೈನ್​ನಲ್ಲಿ ಕಂಡವು. ಹಿಂದೂ ಹುಡುಗಿಯರನ್ನು ಮರಳು ಮಾಡುವ ಹಿಂದೆ ನಿದಾ ಖಾನ್ ಕೈವಾಡ ಇರುವುದು ತಿಳಿಯಿತು. ಪೊಲೀಸರು ತನ್ನ ಚೇಲಾಗಳನ್ನು ಅರೆಸ್ಟ್​ ಮಾಡುತ್ತಿದ್ದಂತೆಯೇ ಆಕೆ ಎಸ್ಕೇಪ್​ ಆಗಿದ್ದಾಳೆ.&lt;/p&gt;&lt;h3&gt;&lt;strong&gt;ಬುರ್ಖಾ ನಮಾಜ್​&lt;/strong&gt;&lt;/h3&gt;&lt;p&gt;ಅಷ್ಟಕ್ಕೂ ಈ ಹಿಂದೂ ಹುಡುಗಿಯರು ಇವರ ಬಲೆಗೆ ಬಿದ್ದು, ಮನೆಯಲ್ಲಿ ಯಾರಿಗೂ ತಿಳಿಯದಂತೆ ಬುರ್ಖಾ ಹಾಕಿಕೊಂಡು ನಮಾಜ್​ ಮಾಡುತ್ತಾ, ತಾನು ಇದೆಲ್ಲಾ ಮಾಡುತ್ತಿದ್ದೇನೆ ಎಂದು ಈ ಅರೆಸ್ಟ್​ ಆದ ಆಸಾಮಿಗೆ ಫೋಟೋ ಕಳಿಸುತ್ತಿದ್ದುದು ತಿಳಿಯಿತು. ಇವೆಲ್ಲರೂ ಶ್ರೀಮಂತ ಮನೆತನದವರಾಗಿದ್ದರಿಂದ ಅವರಿಗೇ ಆದ ಸೆಪೆರೇಟ್​ ರೂಮ್​ಗಳು ಇರುತ್ತಿದ್ದುದರಿಂದ ಅಪ್ಪ-ಅಮ್ಮನಿಗೆ ತಮ್ಮ ಮಗಳು ಹೀಗೆಲ್ಲಾ ಮಾಡುತ್ತಿದ್ದಾಳೆ ಎನ್ನೋದು ಅರಿವೇ ಇರಲಿಲ್ಲ. ಕೊನೆಗೆ ಒಬ್ಬಳ ಪೋಷಕರಿಗೆ ಮಗಳ ಸ್ವಭಾವದ ಬಗ್ಗೆ ಡೌಟ್​ ಬರುತ್ತಲೇ ವಿಷಯ ಬೆಳಕಿಗೆ ಬಂದು, ಪೊಲೀಸರು ಮಾರುವೇಷದ ಕಾರ್ಯಾಚರಣೆ ನಡೆಸಿದ್ದಾರೆ.&lt;/p&gt;&lt;p&gt;ನಿದಾ ಖಾನ್​ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದಾಳೆ. ಅದು ಎಷ್ಟು ವ್ಯವಸ್ಥಿತ ಪ್ರದೇಶ ಎಂದರೆ ಎಲ್ಲರೂ ಮುಸ್ಲಿಂಮರು, ಎಲ್ಲರೂ ಬುರ್ಖಾ ಹಾಕಿಕೊಂಡವರು. ಆದ್ದರಿಂದ ಪೊಲೀಸರಿಗೆ ಅವಳನ್ನು ಹಿಡಿಯುವುದೇ ದೊಡ್ಡ ತಲೆನೋವಾಗಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/tcs-love-jihad-case-lady-police-in-guise-of-house-keepers-suc/articleshow-7s2s2ns"/>
        </item>
        <item>
            <title><![CDATA[TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ]]></title>
            <link>https://kannada.asianetnews.com/gallery/women/what-is-nida-khans-connection-with-the-delhi-red-fort-blast-case-as-tcs-nashik-suc-8fr8ln2</link>
            <guid isPermaLink="true">https://kannada.asianetnews.com/gallery/women/what-is-nida-khans-connection-with-the-delhi-red-fort-blast-case-as-tcs-nashik-suc-8fr8ln2</guid>
            <pubDate>Thu, 16 Apr 2026 17:10:14 +0530</pubDate>
            <description><![CDATA[&lt;p&gt;ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ, ಮಾನವ ಸಂಪನ್ಮೂಲ ಅಧಿಕಾರಿ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ. ಇದೀಗ ಈಕೆಯ ಕೈವಾಡ ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲೂ ಇರಬಹುದೆಂಬ ಆತಂಕಕಾರಿ ವರದಿ ಬಂದಿದೆ. ಏನಿದು ಕೇಸ್​?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb19bwy2h5habv6a7yg5vq8,imgname-nida-khan-1776339431326.jpg" type="image/jpeg" height="390" width="690"/>
            <content:encoded><![CDATA[&lt;p&gt;ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ, ಮಾನವ ಸಂಪನ್ಮೂಲ ಅಧಿಕಾರಿ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ. ಇದೀಗ ಈಕೆಯ ಕೈವಾಡ ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲೂ ಇರಬಹುದೆಂಬ ಆತಂಕಕಾರಿ ವರದಿ ಬಂದಿದೆ. ಏನಿದು ಕೇಸ್​?&lt;/p&gt;&lt;img&gt;&lt;p&gt;ಹಿಂದೂಗಳು ತಮ್ಮ ಹೆಣ್ಣುಮಕ್ಕಳನ್ನು ಉದ್ಯೋಗಕ್ಕೆ ಬಿಡಲು ಹೆದರುವ ಸ್ಥಿತಿ ನಿರ್ಮಾಣ ಆಗಿರುವ ಆತಂಕಕಾರಿ ಘಟನೆ ನಡೆಯುತ್ತಿದೆ. ಎಜುಕೇಟೆಡ್​ ಎನ್ನಿಸಿಕೊಂಡಿರುವ ಹೆಣ್ಣುಮಕ್ಕಳ ಬ್ರೈನ್​ವಾಷ್​ ಮಾಡಿ ಲವ್​ಜಿಹಾದ್​ಗೆ ಬಳಸಿಕೊಂಡು, ಅವರ ಬಾಳನ್ನು ನರಕ ಮಾಡುತ್ತಿರುವ TCS ಕಾರ್ಪೋರೇಟ್ ಕಂಪೆನಿ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ದೇಶ ಬೆಚ್ಚಿಬಿದ್ದಿದೆ. ಇದರ ರೂವಾರಿಯೇ ನಿದಾ ಖಾನ್​.&lt;/p&gt;&lt;img&gt;&lt;p&gt;ಮಹಾರಾಷ್ಟ್ರದ ನಾಸಿಕ್&zwnj;ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿರುವ ಅತೀ ದೊಡ್ಡ ಕಾರ್ಪೋರೇಟ್ ಜಿಹಾದ್ ಪ್ರಕರಣದಲ್ಲಿ ಈಗಾಗಲೇ 6 ಟೀಮ್ ಲೀಡರ್ಸ್ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ (HR) ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ಇದರ ಬೆನ್ನಲ್ಲೇ ಇದೀಗ ಶಾಕಿಂಗ್​ ಎನ್ನುವಂಥ ಘಟನೆ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ದೆಹಲಿಯಲ್ಲಿ ಕಳೆದ ವರ್ಷ ನಡೆದಿರುವ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲಿ ಈಕೆಯ ಕೈವಾಡ ಇದೆ ಎನ್ನುವ ಆತಂಕಕಾರಿ ವರದಿ ಇದೀಗ ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಇದಾಗಲೇ ಬಂಧಿಸಲ್ಪಟ್ಟ ಡಾ. ಶಾಹೀನ್ ಶಾಹಿದ್ ಜೊತೆ ನಿದಾ ಖಾನ್​ಗೆ ಲಿಂಕ್​ ಇದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ!&lt;/p&gt;&lt;img&gt;&lt;p&gt;ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿದಾ ಖಾನ್​ ಮತ್ತು ಶಾಹೀನ್​ ಶಾಹಿದ್​ ಸಂಪರ್ಕದಲ್ಲಿ ಇರುವುದು ತಿಳಿದುಬಂದಿದ್ದರೂ, ಬಾಂಬ್​ಬ್ಲಾಸ್​​ ಕೇಸ್​ ಬಗ್ಗೆ ಇನ್ನಷ್ಟೇ ಆಳವಾದ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗ ಆರಂಭಿಕ ತನಿಖೆಯಿಂದ ಹಾಗೂ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್&zwnj;ಗಳನ್ನು ಗಮನಿಸಿದಾಗ, ನಿದಾ ಖಾನ್ ದೆಹಲಿಯಲ್ಲಿ ಡಾ. ಶಾಹೀನ್ ಶಾಹಿದ್ ಳನ್ನು ಭೇಟಿಯಾಗಿರುವುದು ಖಚಿತವಾಗಿದೆ.&lt;/p&gt;&lt;img&gt;&lt;p&gt;ಕೆಂಪು ಕೋಟೆ ಸ್ಫೋಟ ಪ್ರಕರಣವು ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಒಳಗೊಂಡಿದ್ದರೆ, ನಾಸಿಕ್​ ಪ್ರಕರಣ, ಕೆಲಸದ ಸ್ಥಳದಲ್ಲಿ ಕಿರುಕುಳ, ಬಲವಂತ ಮತ್ತು ಉದ್ಯೋಗಿ ದೂರುಗಳ ಮೇಲೆ ಕ್ರಮ ಕೈಗೊಳ್ಳದಿರುವ ಆರೋಪದ ಮೇಲೆ ಕೇಂದ್ರೀಕೃತವಾಗಿದೆ. ಆದ್ದರಿಂದ ನಿದಾ ಖಾನ್ ಮತ್ತು ಡಾ. ಶಾಹೀನ್ ಶಾಹಿದ್ ನಡುವೆ ಯಾವುದೇ ನೇರ ಸಂಬಂಧದ ಅಧಿಕೃತ ದೃಢೀಕರಣವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿಯೂ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ.&lt;/p&gt;&lt;img&gt;&lt;p&gt;ಲೈ0ಗಿಕ ಕಿರುಕುಳ, ಪ್ರೀತಿ ಹಾಗೂ ಮೋಸ, ಅತ್ಯಾ**ರ, ಮತಾಂತರ ಸೇರಿದಂತೆ 6ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳ ಹಿಂದಿನ ಪ್ರಮುಖ ಆರೋಪಿಗಳ ಪೈಕಿ ಹೆಚ್ಆರ್ ನಿದಾ ಖಾನ್ ಕೂಡ ಒಬ್ಬರು. ಟಿಸಿಎಸ್ ಕಂಪನಿಯಲ್ಲಿ ತಮ್ಮ ಸಮುದಾಯದವರಿಗೆ ಅರ್ಹತೆ ಇಲ್ಲದಿದ್ದರೂ ಅವಕಾಶ ನೀಡುತ್ತಿದ್ದ ನಿಧಾ ಖಾನ್ ಬಳಿಕ ಲವ್ ಜಿಹಾದ್&zwnj;ಗೆ ಪ್ರೇರಣೆ ನೀಡಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/women/what-is-nida-khans-connection-with-the-delhi-red-fort-blast-case-as-tcs-nashik-suc-8fr8ln2"/>
        </item>
        <item>
            <title><![CDATA[ಬಾಬಾ ವಂಗಾ ಪ್ರಕಾರ 2026 ರ ಅಂತ್ಯದ ವೇಳೆಗೆ ಈ ರಾಶಿಗೆ ಶ್ರೀಮಂತಿಕೆ, ಕೈ ತುಂಬಾ ಹಣ]]></title>
            <link>https://kannada.asianetnews.com/gallery/relationship/baba-vanga-predictions-for-2026-lucky-zodiac-sign-become-rich-and-get-name-fame-success-wealth-suh-b1izo0i</link>
            <guid isPermaLink="true">https://kannada.asianetnews.com/gallery/relationship/baba-vanga-predictions-for-2026-lucky-zodiac-sign-become-rich-and-get-name-fame-success-wealth-suh-b1izo0i</guid>
            <pubDate>Fri, 17 Apr 2026 10:54:46 +0530</pubDate>
            <description><![CDATA[&lt;p&gt;Baba vanga predictions for 2026 ಬಾಬಾ ವಂಗಾಈ ಭವಿಷ್ಯವಾಣಿಯ ಪ್ರಕಾರ 12 ರಾಶಿಚಕ್ರ ಚಿಹ್ನೆಗಳಲ್ಲಿ ಐದು ರಾಶಿಚಕ್ರ ಚಿಹ್ನೆಗಳು 2026 ರ ಅಂತ್ಯದ ಮೊದಲು ಉತ್ತಮ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಇದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmd6keaxwafp1begn0s0e02z,imgname-these-5-zodiac-signs-have-a-chance-of-getting-a-new-job-in-the-new-year-2026-1765430088268-1774264629597.jpg" type="image/jpeg" height="390" width="690"/>
            <content:encoded><![CDATA[&lt;p&gt;Baba vanga predictions for 2026 ಬಾಬಾ ವಂಗಾಈ ಭವಿಷ್ಯವಾಣಿಯ ಪ್ರಕಾರ 12 ರಾಶಿಚಕ್ರ ಚಿಹ್ನೆಗಳಲ್ಲಿ ಐದು ರಾಶಿಚಕ್ರ ಚಿಹ್ನೆಗಳು 2026 ರ ಅಂತ್ಯದ ಮೊದಲು ಉತ್ತಮ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಇದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು 2026 ರ ಅಂತ್ಯದ ಮೊದಲು ಬಗೆಹರಿಯುತ್ತವೆ. ಕಚೇರಿ ಕೆಲಸಗಳು ವರ್ಷವಿಡೀ ಸುಗಮವಾಗಿ ನಡೆಯುತ್ತವೆ ಮತ್ತು ಗುರಿಗಳನ್ನು ಸಮಯಕ್ಕೆ ಸರಿಯಾಗಿ ಸಾಧಿಸಲಾಗುತ್ತದೆ. ಇದಲ್ಲದೆ, ನೆರೆಹೊರೆಯವರೊಂದಿಗಿನ ಸಂಬಂಧಗಳು ಗಮನಾರ್ಹವಾಗಿ ಸುಧಾರಿಸುತ್ತವೆ, ದೈನಂದಿನ ಸಂಘರ್ಷಗಳಿಂದ ಪರಿಹಾರವನ್ನು ಒದಗಿಸುತ್ತವೆ.&lt;/p&gt;&lt;img&gt;&lt;p&gt;ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2026 ರಲ್ಲಿ, ಸಿಂಹ ರಾಶಿಯವರು ಅನಗತ್ಯ ಚಿಂತೆಗಳನ್ನು ಬಿಟ್ಟು ದೇವರನ್ನು ಧ್ಯಾನಿಸಿದರೆ ಹೆಚ್ಚು ಸಂತೋಷವಾಗಿರುತ್ತಾರೆ. ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಇದಲ್ಲದೆ, ಪ್ರಯೋಜನಕಾರಿ ಅವಕಾಶಗಳು ಉದ್ಭವಿಸುತ್ತವೆ.&lt;/p&gt;&lt;img&gt;&lt;p&gt;ತುಲಾ ರಾಶಿಯವರು 2026 ರ ಅಂತ್ಯದ ಮೊದಲು ಸ್ವಂತ ವಾಹನವನ್ನು ಹೊಂದುವ ಸಂತೋಷವನ್ನು ಅನುಭವಿಸುವ ಸಾಧ್ಯತೆಯಿದೆ. ಇದಲ್ಲದೆ, ಕಚೇರಿಯಲ್ಲಿನ ಕೆಲಸವು ಹೆಚ್ಚಿನ ಸಮಯ ನಿಮ್ಮನ್ನು ಸಂತೋಷವಾಗಿರಿಸುತ್ತದೆ ಏಕೆಂದರೆ ನೀವು ಬಯಸಿದ್ದನ್ನು ಮಾಡುತ್ತೀರಿ. ನೀವು ಶೀಘ್ರದಲ್ಲೇ ಆರ್ಥಿಕ ಲಾಭವನ್ನು ಅನುಭವಿಸುವ ನಿರೀಕ್ಷೆಯಿದೆ, ಆದರೆ ನೀವು ತಾಳ್ಮೆಯಿಂದಿರಬೇಕು.&lt;/p&gt;&lt;img&gt;&lt;p&gt;ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2026 ರ ಅಂತ್ಯದ ಮೊದಲು, ವೃಶ್ಚಿಕ ರಾಶಿಯವರಿಗೆ ಜೀವನದಲ್ಲಿ ದೊಡ್ಡದನ್ನು ಸಾಧಿಸುವ ಅವಕಾಶ ಸಿಗುತ್ತದೆ. ಅವರು ಸಮಾಜದಲ್ಲಿ ಮನ್ನಣೆ ಪಡೆಯುತ್ತಾರೆ ಮತ್ತು ಹೆಚ್ಚಿನ ಗೌರವವನ್ನು ಪಡೆಯುತ್ತಾರೆ. ಇದಲ್ಲದೆ, ಅನಾರೋಗ್ಯಗಳು ಸಹ ನಿಮ್ಮಿಂದ ದೂರವಾಗುತ್ತವೆ.&lt;/p&gt;&lt;img&gt;&lt;p&gt;ವಿಶೇಷ ವ್ಯಕ್ತಿಯೊಂದಿಗಿನ ಸಂಪರ್ಕವು ಕೆಲವು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸುತ್ತದೆ. ಹೆಚ್ಚುವರಿಯಾಗಿ, ಈ ವರ್ಷ ನಿಮಗೆ ಸಮಾಜದಲ್ಲಿ ಮತ್ತು ಮನೆಯಲ್ಲಿ ಹೊಸ ಮನ್ನಣೆಯನ್ನು ತರುತ್ತದೆ. ಯಾವುದೇ ಕೌಟುಂಬಿಕ ಘರ್ಷಣೆಗಳು ಬಗೆಹರಿಯುತ್ತವೆ ಮತ್ತು 2026 ರ ಅಂತ್ಯದ ಮೊದಲು ಸಂಬಂಧಗಳು ಬಲಗೊಳ್ಳುತ್ತವೆ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/baba-vanga-predictions-for-2026-lucky-zodiac-sign-become-rich-and-get-name-fame-success-wealth-suh-b1izo0i"/>
        </item>
        <item>
            <title><![CDATA[ಶಾರುಖ್​ ಖಾನ್​ Vs ಸೆ*ಕ್ಸ್:  ಬಾಲಿವುಡ್​ ಹಸಿಬಿಸಿ ರಾಣಿ ನೇಹಾ ಧೂಪಿಯಾ ಮಾತಿಗೆ ಬಿ-ಟೌನ್​ ಕಿಡಿ]]></title>
            <link>https://kannada.asianetnews.com/gallery/entertainment/neha-dhupia-says-bollywood-must-have-shah-rukh-khan-or-intimacy-suc-daqmqyv</link>
            <guid isPermaLink="true">https://kannada.asianetnews.com/gallery/entertainment/neha-dhupia-says-bollywood-must-have-shah-rukh-khan-or-intimacy-suc-daqmqyv</guid>
            <pubDate>Thu, 16 Apr 2026 23:02:48 +0530</pubDate>
            <description><![CDATA[&lt;p&gt;ನಟಿ ನೇಹಾ ಧೂಪಿಯಾ ಅವರು 'ಬಾಲಿವುಡ್&zwnj;ನಲ್ಲಿ ಶಾರುಖ್ ಖಾನ್ ಅಥವಾ ಸೆ*ಕ್ಸ್ ಮಾತ್ರ ಮಾರಾಟವಾಗುತ್ತದೆ' ಎಂದು ನೀಡಿದ್ದ ಹಳೆಯ ಹೇಳಿಕೆಯೊಂದು ಮತ್ತೆ ವೈರಲ್ ಆಗಿದೆ. 'ಜೂಲಿ' ಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ನೇಹಾ, ಶಾರುಖ್&zwnj; ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpbnjmj26vhhs7qgem7gzt7f,imgname-neha-dhupia-and-shah-rukh-khan-1776360706626.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ನೇಹಾ ಧೂಪಿಯಾ ಅವರು 'ಬಾಲಿವುಡ್&zwnj;ನಲ್ಲಿ ಶಾರುಖ್ ಖಾನ್ ಅಥವಾ ಸೆ*ಕ್ಸ್ ಮಾತ್ರ ಮಾರಾಟವಾಗುತ್ತದೆ' ಎಂದು ನೀಡಿದ್ದ ಹಳೆಯ ಹೇಳಿಕೆಯೊಂದು ಮತ್ತೆ ವೈರಲ್ ಆಗಿದೆ. 'ಜೂಲಿ' ಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ನೇಹಾ, ಶಾರುಖ್&zwnj; ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕಿಂಗ್​ ಖಾನ್​ ಎಂದೇ ಫೇಮಸ್​ ಆಗಿರೋ ಶಾರುಖ್​ ಖಾನ್​ ಈಚೆಗೆ ಒಂದರ ಮೇಲೊಂದು ಹಿಟ್​ ಚಿತ್ರಗಳನ್ನು ನೀಡಿ ಮಕಾಡೆ ಮಲಗಿದ್ದ ಬಾಲಿವುಡ್​ಗೆ ಮರುಜೀವ ಕೊಟ್ಟಿದ್ದರು. ಹಿಂದೊಮ್ಮೆ ಐದಾರು ವರ್ಷಗಳವರೆಗೆ ಫ್ಲಾಪ್​​ ಮೇಲೆ ಫ್ಲಾಪ್​ ಚಿತ್ರ ಕೊಟ್ಟಿದ್ದ ನಟ ಕೊನೆಗೆ ಅಂತೂ ಬ್ಲಾಕ್​ಬಸ್ಟರ್​ ಸಿನಿಮಾ ಕೊಟ್ಟರು. ಪಾಕಿಸ್ತಾನದ ಮೇಲೆ ತಮ್ಮ ಪ್ರೀತಿಯನ್ನು ಆಗಾಗ್ಗೆ ತೋರಿಸುತ್ತಾ ಟ್ರೋಲ್​ ಆಗ್ತಿರೋ, ಈ ಬಾಲಿವುಡ್​ ಬಾದ್​ಶಾ ಬಗ್ಗೆ ಹಸಿಬಿಸಿ ದೃಶ್ಯಗಳಿಂದಲೇ ಫೇಮಸ್​ ಆಗಿರೋ ನಟಿ ನೇಹಾ ಧೂಪಿಕಾ ನೀಡಿರುವ ಹೇಳಿಕೆಯೊಂದು ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ.&lt;/p&gt;&lt;img&gt;&lt;p&gt;ಸೆ*ಕ್ಸ್​ ಬಾಂಬ್​ಗಳೆಂದೇ ಹೇಳಲಾಗುವ ನಟಿಯರಾದ ಮಲ್ಲಿಕಾ ಶೆರಾವತ್, ಬಿಪಾಶಾ ಬಸು (Bipasha Basu) ಅವರನ್ನು ಹಿಂದೆ ಹಾಕಲು ಯಾವ ರೀತಿಯಾದರೂ ದೇಹ ಪ್ರದರ್ಶನಕ್ಕೆ ಸಿದ್ಧ ಎನ್ನುವುದು ನೇಹಾ ಧೂಪಿಯಾ ಮಾತು. ಅಷ್ಟಕ್ಕೂ ಈಕೆ ಫೇಮಸ್​ ಆಗಿದ್ದು, 2004ರಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಬಾಲಿವುಡ್​ನ 'ಜೂಲಿ' (Julie) ಶ್ರೀಮಂತ ಉದ್ಯಮಿಯೊಬ್ಬ ವೇಶ್ಯೆಯ ಜೊತೆಗೆ ಪ್ರೀತಿಗೆ ಬಿದ್ದು ಆಕೆಯನ್ನು ಮದುವೆಯಾಗಲು ಹಂಬಲಿಸುವ ಕಥೆಯುಳ್ಳ ಚಿತ್ರವಿದು. ಈ ಚಿತ್ರದಲ್ಲಿ ವೇಶ್ಯೆ ಜೂಲಿಯ ಪಾತ್ರದಲ್ಲಿ ನಟಿಸಿದ್ದಾಕೆ ನೇಹಾ ಧೂಪಿಯಾ.&lt;/p&gt;&lt;img&gt;&lt;p&gt;ಬಹುತೇಕ ನಗ್ನ ರೀತಿಯಲ್ಲಿ ಈಕೆಯನ್ನು ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ. ಬ್ಯಾಕ್​ಲೆಸ್​ ಡ್ರೆಸ್​ನಲ್ಲಿ ಈಕೆ ಕಾಣಿಸಿಕೊಂಡಿದ್ದರಿಂದ ಹಾಗೂ ಹಸಿಬಿಸಿ ದೃಶ್ಯಗಳು ಇದ್ದುದರಿಂದ ಆಗಿನ ಸಂದರ್ಭದಲ್ಲಿ ನೇಹಾ ಬಹಳ ಚರ್ಚೆಗೆ ಕೂಡ ಒಳಗಾಗಿದ್ದರು. ಈ ಬಗ್ಗೆ ನೇಹಾ ಸ್ವಲ್ಪವೂ ಬೇಸರ ಪಟ್ಟುಕೊಂಡಿರಲಿಲ್ಲ. 'ಜೂಲಿ ಚಿತ್ರದಲ್ಲಿ ಪ್ರಣಯದ ದೃಶ್ಯಗಳಿವೆ, ನನ್ನ ನಗ್ನ ಬೆನ್ನು ತೋರಿಸಲಾಗಿದೆ. ನನಗೆ ಲೈಂಗಿ*ಕತೆಯ ಟ್ಯಾಗ್ ಕೊಡಲಾಗಿದೆ. ಇದಕ್ಕೆ ನನಗೆ ಸ್ವಲ್ಪವೂ ಬೇಜಾರಿಲ್ಲ ಎಂದಿದ್ದರು.&lt;/p&gt;&lt;img&gt;&lt;p&gt;ಇದೀಗ ನಟಿ ಶಾರುಖ್​ ಮೇಲೆ ಪ್ರೀತಿ ಮೆರೆದಿದ್ದಾರೆ. ಬಾಲಿವುಡ್​ ಚಿತ್ರಗಳು ಸಕ್ಸಸ್​ ಆಗಬೇಕಾದರೆ ಒಂದೋ ಶಾರುಖ್​ ಖಾನ್​ ಇರಬೇಕಂತೆ, ಇಲ್ಲವೇ ಸೆ*ಕ್ಸ್ ಇರಬೇಕು ಎನ್ನೋದು ಈಕೆಯ ಹೇಳಿಕೆ. 'ಈಗಿನ ಕಾಲದ ಸಿನಿಮಾಗಳಲ್ಲಿ ಶಾರುಖ್​ ಖಾನ್​ ಇರಬೇಕು ಇಲ್ಲವೇ ಚಿತ್ರದಲ್ಲಿ ಲೈಂಗಿ*ಕತೆ ಇರಬೇಕು. ಅದಕ್ಕಾಗಿ ನಾನು ಬೇಕಾದರೆ ಮುಂದಿನ 5 ಸಿನಿಮಾಗಳಲ್ಲಿ ಶಾರುಖ್​ಗಾಗಿ ಯಾವ ರೀತಿ ಡ್ರೆಸ್​ ಹಾಕಲೂ ರೆಡಿ ಇದ್ದೇನೆ ಎಂದಿದ್ದರು ನಟಿ.&lt;/p&gt;&lt;img&gt;&lt;p&gt;ಪಠಾಣ್ ಸಿನಿಮಾದ ಶಾರುಖ್ ಖಾನ್ ಅವರ ಅರೆನಗ್ನ ದೇಹದ ಫೋಟೋ ಹಂಚಿಕೊಂಡಿದ್ದ ನೇಹಾ ಧೂಪಿಯಾ ಅವರು, 'ಶಾರುಖ್ ಖಾನ್ ಅವರೇ, ನಾವು ನಿಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಬರಿಯ ಮಾತಿನಲ್ಲಿ ಹೇಳುವುದು ತೀರಾ ಕಷ್ಟ. ದೀಪಿಕಾ ಪಡುಕೋಣೆ (Deepika Padukone) ಅವರೇ... ನಿಮ್ಮ ತಂತ್ರ ಮತ್ತು ಕಾಂತಿಯಿಂದ ನೀವು ಪಠಾಣ್​ ಚಿತ್ರಕ್ಕೆ ಕಿಚ್ಚು ಹಚ್ಚಿದ್ದೀರಿ ಎಂದಿದ್ದರು.&lt;/p&gt;&lt;img&gt;&lt;p&gt;ಶಾರುಖ್​ ಇಲ್ಲದಿದ್ದರೆ ಚಿತ್ರ ಓಡುವುದಿಲ್ಲ ಎನ್ನುವ ಅವರ ಮಾತಿಗೆ ಹಲವಾರು ನಟರು ಕಿಡಿ ಕಾರಿದ್ದಾರೆ. ನೀವು ಯಾವ ಕಾಲದಲ್ಲಿ ಇದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಖಾನ್​ ಸಾಹೇಬ್ರು ಬಾಲಿವುಡ್​ಗೆ ಅನಿವಾರ್ಯವಲ್ಲ, ಬೇಕಾದಷ್ಟು ಒಳ್ಳೆಯ ನಟರು, ದೇಶಭಕ್ತರು ಬಾಲಿವುಡ್​ನಲ್ಲಿ ಇದ್ದಾರೆ. ದೇಶಪ್ರೇಮದ ವಿಷ್ಯ ಬಂದಾಗ ಬಾಯಿಮುಚ್ಚಿಕೊಂಡಿರುವ ಇಂಥ ನಟರು ನಿಮಗೇ ಪ್ರೀತಿ ಎಂದು ಕಿಡಿ ಕಾರಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/neha-dhupia-says-bollywood-must-have-shah-rukh-khan-or-intimacy-suc-daqmqyv"/>
        </item>
        <item>
            <title><![CDATA[ಗಿಲ್ಲಿನ ಮದ್ವೆಯಾಗ್ತೀರಾ ಎಂದು Bigg Boss ಕಾವ್ಯಾನ ಕೇಳಿದ ಪುಟಾಣಿ: ಆದ್ರೆ ಆಗಿದ್ದೇ ಬೇರೆ]]></title>
            <link>https://kannada.asianetnews.com/gallery/tv-talk/child-asked-bigg-boss-kavaya-shaiva-about-marriage-with-gilli-netizens-trolls-suc-fkshg12</link>
            <guid isPermaLink="true">https://kannada.asianetnews.com/gallery/tv-talk/child-asked-bigg-boss-kavaya-shaiva-about-marriage-with-gilli-netizens-trolls-suc-fkshg12</guid>
            <pubDate>Thu, 16 Apr 2026 13:23:13 +0530</pubDate>
            <description><![CDATA[&lt;p&gt;ಗಿಚ್ಚಿಗಿಲಿಗಿಲಿ ರಿಯಾಲಿಟಿ ಷೋನಲ್ಲಿ, ಬಿಗ್​ಬಾಸ್​ ಖ್ಯಾತಿಯ ಕಾವ್ಯಾ ಶೈವಗೆ 'ಗಿಲ್ಲಿ ನಟ'ನನ್ನು ಮದುವೆಯಾಗುತ್ತೀರಾ ಎಂದು ಪುಟಾಣಿ ಬಾಲಕಿಯೊಬ್ಬಳು ಕೇಳಿದ್ದು &amp;nbsp;ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಸ್ಯದ ಹೆಸರಿನಲ್ಲಿ ಮಕ್ಕಳ ಬಾಯಲ್ಲಿ &amp;nbsp;ಇಂಥ ವಿಷ್ಯ ಹೇಳಿಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpam80axrb93pmhvbh8c5npm,imgname-gichichi-gili-gili-show-1776325755229.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಿಚ್ಚಿಗಿಲಿಗಿಲಿ ರಿಯಾಲಿಟಿ ಷೋನಲ್ಲಿ, ಬಿಗ್​ಬಾಸ್​ ಖ್ಯಾತಿಯ ಕಾವ್ಯಾ ಶೈವಗೆ 'ಗಿಲ್ಲಿ ನಟ'ನನ್ನು ಮದುವೆಯಾಗುತ್ತೀರಾ ಎಂದು ಪುಟಾಣಿ ಬಾಲಕಿಯೊಬ್ಬಳು ಕೇಳಿದ್ದು &amp;nbsp;ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಸ್ಯದ ಹೆಸರಿನಲ್ಲಿ ಮಕ್ಕಳ ಬಾಯಲ್ಲಿ &amp;nbsp;ಇಂಥ ವಿಷ್ಯ ಹೇಳಿಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.&amp;nbsp;&lt;/p&gt;&lt;img&gt;&lt;p&gt;ಬಿಗ್​ಬಾಸ್​ (Bigg Boss) ನಲ್ಲಿ ಹವಾ ಸೃಷ್ಟಿಸಿದ್ದ ಜೋಡಿ ಎಂದರೆ ಗಿಲ್ಲಿ ನಟ ಮತ್ತು ಕಾವ್ಯಾ ಶೈವ. ಆಟಕ್ಕೋಸ್ಕರ ಬಿಗ್​ಬಾಸ್ ಮನೆಯಲ್ಲಿ ಒಂದಷ್ಟು ದಿನ ತಮಾಷೆ ಎಲ್ಲವೂ ನಡೆದಿತ್ತು. ಆದರೆ ಇವರಿಬ್ಬರೂ ಮದುವೆಯಾಗುತ್ತಾರೆ ಎಂದೆಲ್ಲಾ ಸುದ್ದಿ ಹರಡಿತ್ತು. ಎಷ್ಟೋ ಮಂದಿ ಇವರಿಬ್ಬರ ಮದುವೆ ಮಾಡಿಸಿ, ಎಐ ಮೂಲಕ ಮಕ್ಕಳನ್ನೂ ಮಾಡಿಸಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಯಾವುದೇ ಸೀರಿಯಲ್​ ಅಥವಾ ರಿಯಾಲಿಟಿ ಷೋನಲ್ಲಿ ಒಂದು ಜೋಡಿ ವೀಕ್ಷಕರಿಗೆ ಇಷ್ಟ ಆಯ್ತು ಎಂತಾದರೆ, ರಿಯಲ್​ ಲೈಫ್​ನಲ್ಲಿ ಅವರಿಬ್ಬರೂ ಮದುವೆಯಾಗದೇ ಇದ್ದರೆ, ತಾವೇ ಮದುವೆ ಮಾಡಿಸಿಬಿಡುತ್ತಾರೆ. ಹೀಗೆಲ್ಲಾ ಮಾಡಬೇಡಿ ಎಂದು ಕೊನೆಗೆ ದಮ್ಮಯ್ಯ ಎಂದು ವೀಕ್ಷಕರ ಕಾಲು ಹಿಡಿಯುವ ಪ್ರಸಂಗವೂ ಕೆಲವೊಮ್ಮೆ ನಟ-ನಟಿಯರಿಗೆ ಬರುವುದು ಉಂಟು.&lt;/p&gt;&lt;img&gt;&lt;p&gt;ಆದರೆ, ಹಾಸ್ಯದ ಹೆಸರಿನಲ್ಲಿ ಚಿಕ್ಕ ಮಕ್ಕಳ ಬಾಯಲ್ಲಿಯೂ ಮದುವೆ, ಲವ್​ ಎಂದೆಲ್ಲಾ ಹೇಳಿಸುವ ವಿಷಯ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಈಗ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.&lt;/p&gt;&lt;img&gt;&lt;p&gt;ಗಿಚ್ಚಿಗಿಲಿಗಿಲಿ ಷೋನಲ್ಲಿ ಬಿಗ್​ಬಾಸ್​​ನ ಕಾವ್ಯಾ ಶೈವ ಮತ್ತು ಸ್ಪಂದನಾ ಅತಿಥಿಯಾಗಿ ಬಂದಿದ್ದಾರೆ. ಇದು ಹೆಸರಿಗೆ ಚಿಕ್ಕಮಕ್ಕಳ ಷೋ. ಹಲವಾರು ಮಕ್ಕಳು ತಮ್ಮ ಟ್ಯಾಲೆಂಟ್​ ತೋರಿಸಲು ಇಂಥ ವೇದಿಕೆ ಅವಕಾಶ ಕಲ್ಪಿಸುತ್ತಿದೆ ನಿಜ. ಆದರೆ ಪ್ರತಿಯೊಂದು ರಿಯಾಲಿಟಿ ಷೋನಲ್ಲಿಯೂ ಮಕ್ಕಳು ಮಾತನಾಡುವುದು ರಿಯಲ್​ ಎಂದು ವೀಕ್ಷಕರಿಗೆ ತೋರಿಸಿದರೂ, ಅದು ಮೊದಲೇ ಅವರಿಗೆ ಹೇಳಿಕೊಟ್ಟಿರುತ್ತಾರೆ. ಆದರೆ ವೀಕ್ಷಕರಿಗೆ ಅದು ಅರ್ಥವಾಗುವುದಿಲ್ಲವಷ್ಟೇ. ಅದಕ್ಕೆ ತಕ್ಕಂತೆ ಅಲ್ಲಿರುವ ತೀರ್ಪುಗಾರರೂ ಇದೇ ಮೊದಲ ಬಾರಿಗೆ ಕೇಳಿದಂತೆ ಬಿದ್ದೂ ಬಿದ್ದೂ ನಗುವುದು ನಡೆದೇ ಇರುತ್ತದೆ. ಇದರ ಹೆಸರೇ ರಿಯಾಲಿಟಿ ಷೋ.&lt;/p&gt;&lt;img&gt;&lt;p&gt;ಇದೀಗ ಈ ಕಾರ್ಯಕ್ರಮದಲ್ಲಿ ಪುಟಾಣಿ ಬಾಲಕಿಗೆ ಇದೇ ಪ್ರಶ್ನೆಯನ್ನು ಕೇಳಿಸಲಾಗಿದೆ. ಮದುವೆ, ಲವ್​ ಎಂದರೇನು ಎಂದೇ ಆಕೆಗೆ ಗೊತ್ತಿದ್ದಂತೆ ಇಲ್ಲ. ಆದರೆ ಈ ಬಾಲಕಿ ಕಾವ್ಯಾ ಶೈವಗೆ ನೀವು ಗಿಲ್ಲಿನ ಮದ್ವೆಯಾಗ್ತೀರಾ ಎಂದು ಕೇಳುತ್ತಾಳೆ. ಅದು ಭಾರಿ ಜೋಕ್​ ಎನ್ನುವಂತೆ ಅಲ್ಲಿರುವ ತೀರ್ಪುಗಾರರು ಬಿದ್ದೂ ಬಿದ್ದೂ ನಗುತ್ತಾರೆ.&lt;/p&gt;&lt;img&gt;&lt;p&gt;ಇದರ ಬಗ್ಗೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೆಲವರು ವ್ಹಾವ್​ ಮಗುವಿನದ್ದು ಏನು ಟ್ಯಾಲೆಂಟ್​ ಎನ್ನುತ್ತಿದ್ದರೆ, ರಿಯಾಲಿಟಿ ಷೋಗಳ ರಿಯಾಲಿಟಿ ತಿಳಿದವರು ಮಾತ್ರ ಹಾಸ್ಯದ ಹೆಸರಿನಲ್ಲಿ ಈ ರೀತಿ ಮಕ್ಕಳ ಬಾಯಲ್ಲಿ ಹೇಳುವುದು ನಿಲ್ಲಬೇಕು. ಒಂದು ವೇಳೆ ಇದನ್ನೇ ಹಾಸ್ಯ ಎಂದು ತಿಳಿಯುವುದಾದರೆ, ಜಡ್ಜಸ್​ ಬಾಯಲ್ಲೋ ಅಥವಾ ಆ್ಯಂಕರ್​ಗಳ ಮೂಲಕವೋ ಹೇಳಿಸಿ. ಇದು ದೊಡ್ಡ ವಿಷ್ಯ ಅಲ್ಲವಾದರೂ, ಇದೇ ರೀತಿಯ ಹಲವಾರು ಮಾತುಗಳು ಕೆಲವು ರಿಯಾಲಿಟಿ ಷೋಗಳಲ್ಲಿ ಮಕ್ಕಳ ಬಾಯಲ್ಲಿ ಹೇಳಿಸುವುದು ಸರಿ ಕಾಣುವುದಿಲ್ಲ ಎನ್ನುತ್ತಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/child-asked-bigg-boss-kavaya-shaiva-about-marriage-with-gilli-netizens-trolls-suc-fkshg12"/>
        </item>
        <item>
            <title><![CDATA[ಬಾಬಾ ವಂಗಾ ಪ್ರಕಾರ ಡಿಸೆಂಬರ್ 31 2026 ರವರೆಗೆ ಈ 4 ರಾಶಿಗೆ ದೊಡ್ಡ ಕಷ್ಟ, ಸಮಸ್ಯೆ]]></title>
            <link>https://kannada.asianetnews.com/gallery/relationship/baba-vanga-predictions-2026-danger-looms-over-4-zodiac-signs-until-december-31-suh-hff4sog</link>
            <guid isPermaLink="true">https://kannada.asianetnews.com/gallery/relationship/baba-vanga-predictions-2026-danger-looms-over-4-zodiac-signs-until-december-31-suh-hff4sog</guid>
            <pubDate>Fri, 17 Apr 2026 15:16:11 +0530</pubDate>
            <description><![CDATA[&lt;p&gt;Baba vanga predictions 2026 ಬಾಬಾ ವಂಗಾ ಪ್ರಕಾರ 2026 ರಲ್ಲಿ 12 ರಾಶಿಚಕ್ರ ಚಿಹ್ನೆಗಳಲ್ಲಿ ನಾಲ್ಕು ಚಿಹ್ನೆಗಳು ವಿಶೇಷವಾಗಿ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಅವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಈ ನಾಲ್ಕು ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ನೋಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcxhkx7fj4vn8566kg19p06h,imgname-zodiac-sign--10--1766223115503.jpg" type="image/jpeg" height="390" width="690"/>
            <content:encoded><![CDATA[&lt;p&gt;Baba vanga predictions 2026 ಬಾಬಾ ವಂಗಾ ಪ್ರಕಾರ 2026 ರಲ್ಲಿ 12 ರಾಶಿಚಕ್ರ ಚಿಹ್ನೆಗಳಲ್ಲಿ ನಾಲ್ಕು ಚಿಹ್ನೆಗಳು ವಿಶೇಷವಾಗಿ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಅವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಈ ನಾಲ್ಕು ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ನೋಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ ಮೇಷ ರಾಶಿಯವರು 2026 ರಲ್ಲಿ ಅನೇಕ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ನಿಮ್ಮ ಚಂಚಲ ಸ್ವಭಾವವನ್ನು ನೀವು ನಿಯಂತ್ರಿಸದಿದ್ದರೆ, ನೀವು ಆಗಾಗ್ಗೆ ಯಾರೊಂದಿಗಾದರೂ ಜಗಳವಾಡುತ್ತೀರಿ. ಇದಲ್ಲದೆ, ನೀವು ನಿಮ್ಮ ಕೋಪವನ್ನು ಸಹ ನಿಯಂತ್ರಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;ಅತಿಯಾಗಿ ಯೋಚಿಸುವ ಅಭ್ಯಾಸವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಇದಲ್ಲದೆ ಇತರರನ್ನು ಟೀಕಿಸುವುದನ್ನು ತಪ್ಪಿಸಿ. ಈ ವರ್ಷ (2026) ನೀವು ಆತ್ಮವಿಶ್ವಾಸದ ನಷ್ಟ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೊಳಗಾಗಬಹುದು.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಧನು ರಾಶಿಯ ಜನರು 2026 ರಲ್ಲಿ ಉತ್ಸಾಹದಿಂದಾಗಿ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಇದರಿಂದಾಗಿ ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ವಿವಿಧ ತೊಂದರೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ, ನೀಡಿದ ಭರವಸೆಯನ್ನು ಈಡೇರಿಸದ ಕಾರಣ ಒತ್ತಡವೂ ಹೆಚ್ಚಾಗುತ್ತದೆ.&lt;/p&gt;&lt;img&gt;&lt;p&gt;ಅಜಾಗರೂಕ ಕ್ರಿಯೆಗಳು ಹಾನಿಯನ್ನುಂಟುಮಾಡುತ್ತವೆ. ಇದಲ್ಲದೆ, ಮನಸ್ಸು ಚಂಚಲವಾಗಿರುತ್ತದೆ. ನಿಮ್ಮ ಸಂಬಂಧಗಳ ಬಗ್ಗೆ ಸಾಧ್ಯವಾದಷ್ಟು ಸ್ಪಷ್ಟವಾಗಿರಿ ಮತ್ತು ಸುಳ್ಳು ಭರವಸೆಗಳನ್ನು ನೀಡುವುದನ್ನು ತಪ್ಪಿಸಿ. ಈ ವರ್ಷ ನೀವು ಹಿಂದೆ ಮಾಡಿದ ಯಾವುದೇ ತಪ್ಪುಗಳ ಪರಿಣಾಮಗಳನ್ನು ಸಹ ಅನುಭವಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಭವಿಷ್ಯವಾಣಿಗಳ ಪ್ರಕಾರ, ವೃಷಭ, ಸಿಂಹ, ತುಲಾ, ವೃಶ್ಚಿಕ ಮತ್ತು ಮೀನ ರಾಶಿಯ ಅಡಿಯಲ್ಲಿ ಜನಿಸಿದ ಜನರು 2026 ರ ವರ್ಷ ಮುಗಿಯುವ ಮೊದಲು ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಕೆಲವು ಜನರು ತಮ್ಮ ಸಂಬಂಧಗಳನ್ನು ಬಲಪಡಿಸಲು ಅವಕಾಶವನ್ನು ಪಡೆದರೆ, ಅನೇಕ ಜನರು ತಮ್ಮ ಸೌಕರ್ಯ ಮತ್ತು ಅನುಕೂಲತೆಗಳಲ್ಲಿ ಹೆಚ್ಚಳವನ್ನು ನೋಡುತ್ತಾರೆ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/baba-vanga-predictions-2026-danger-looms-over-4-zodiac-signs-until-december-31-suh-hff4sog"/>
        </item>
        <item>
            <title><![CDATA[ಖಾತು ಶ್ಯಾಮ್ ಬಾಬಾ ಅವರಿಗೆ ಈ 3 ರಾಶಿ ಪ್ರಿಯ, ಖ್ಯಾತಿ ಮತ್ತು ಹಣ ಪಕ್ಕಾ]]></title>
            <link>https://kannada.asianetnews.com/gallery/relationship/khatu-shyam-favourite-rashi-vrishabh-tula-maka-baba-shyam-hamara-priya-zodiac-signs-suh-hktdcip</link>
            <guid isPermaLink="true">https://kannada.asianetnews.com/gallery/relationship/khatu-shyam-favourite-rashi-vrishabh-tula-maka-baba-shyam-hamara-priya-zodiac-signs-suh-hktdcip</guid>
            <pubDate>Thu, 16 Apr 2026 16:10:31 +0530</pubDate>
            <description><![CDATA[&lt;p&gt;ಖಾತು ಶ್ಯಾಮ್ ಬಾಬಾ ಯಾವುದೇ ಕಷ್ಟದಲ್ಲಿರುವ ವ್ಯಕ್ತಿಯನ್ನು ನೋಡಲು ಸಹಿಸುವುದಿಲ್ಲ. ಜ್ಯೋತಿಷ್ಯದಲ್ಲಿ ಮೂರು ರಾಶಿಗಳನ್ನು ಖಾತು ಶ್ಯಾಮ್ ಬಾಬಾ ಅವರ ನೆಚ್ಚಿನವರೆಂದು ಪರಿಗಣಿಸಲಾಗುತ್ತದೆ. ಬಾಬಾ ಅವರನ್ನು ಪ್ರತಿ ಹಂತದಲ್ಲೂ ಬೆಂಬಲಿಸುತ್ತಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpaxn0wrntmb2bjwazkbq19y,imgname-khatu-shyam-1776335618968.jpg" type="image/jpeg" height="390" width="690"/>
            <content:encoded><![CDATA[&lt;p&gt;ಖಾತು ಶ್ಯಾಮ್ ಬಾಬಾ ಯಾವುದೇ ಕಷ್ಟದಲ್ಲಿರುವ ವ್ಯಕ್ತಿಯನ್ನು ನೋಡಲು ಸಹಿಸುವುದಿಲ್ಲ. ಜ್ಯೋತಿಷ್ಯದಲ್ಲಿ ಮೂರು ರಾಶಿಗಳನ್ನು ಖಾತು ಶ್ಯಾಮ್ ಬಾಬಾ ಅವರ ನೆಚ್ಚಿನವರೆಂದು ಪರಿಗಣಿಸಲಾಗುತ್ತದೆ. ಬಾಬಾ ಅವರನ್ನು ಪ್ರತಿ ಹಂತದಲ್ಲೂ ಬೆಂಬಲಿಸುತ್ತಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂದಿನ ಕಲಿಯುಗದಲ್ಲಿ ಖಾತು ಶ್ಯಾಮ್ ಬಾಬಾ ಅತ್ಯಂತ ಪೂಜ್ಯ ದೇವತೆಗಳಲ್ಲಿ ಒಬ್ಬರು, ಅವರನ್ನು ಶ್ರೀಕೃಷ್ಣನ ಅವತಾರವೆಂದು ಪರಿಗಣಿಸಲಾಗುತ್ತದೆ. ಕೆಲವರು ಖಾತು ಶ್ಯಾಮ್ ಅವರನ್ನು ಸೋತವರನ್ನು ಬೆಂಬಲಿಸುವ ಮತ್ತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವರೆಂದು ಪೂಜಿಸಲ್ಪಡುತ್ತಾರೆ.ಅವರು ಕಷ್ಟದ ಸಮಯದಲ್ಲಿ ಎಂದಿಗೂ ವ್ಯಕ್ತಿಯನ್ನು ಕೈಬಿಡುವುದಿಲ್ಲ. ಜ್ಯೋತಿಷ್ಯವು ಖಾತು ಶ್ಯಾಮ್ ಬಾಬಾ ಅವರ ಮೂರು ನೆಚ್ಚಿನ ರಾಶಿಚಕ್ರ ಚಿಹ್ನೆಗಳನ್ನು ಸಹ ಉಲ್ಲೇಖಿಸುತ್ತದೆ&lt;/p&gt;&lt;img&gt;&lt;p&gt;ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ವೃಷಭ ರಾಶಿಯನ್ನು ಖತು ಶ್ಯಾಮ್ ಬಾಬಾ ಅವರ ನೆಚ್ಚಿನ ರಾಶಿಚಕ್ರ ಚಿಹ್ನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಶುಕ್ರ ರಾಶಿಯಲ್ಲಿ ಜನಿಸಿದವರನ್ನು ಬಾಬಾ ತೊಂದರೆಯಲ್ಲಿ ನೋಡುವುದಿಲ್ಲ, ಬದಲಾಗಿ ಪ್ರತಿ ಹಂತದಲ್ಲೂ ಅವರನ್ನು ಬೆಂಬಲಿಸುತ್ತಾರೆ.&lt;/p&gt;&lt;img&gt;&lt;p&gt;ಖತು ಶ್ಯಾಮ್ ಬಾಬಾ ತುಲಾ ರಾಶಿಯಲ್ಲಿ ಜನಿಸಿದವರಿಗೆ ದಯಾಳು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ತುಲಾ ರಾಶಿಯವರು ಕಷ್ಟದ ಸಮಯದಲ್ಲಿ ನಿಜವಾದ ಹೃದಯದಿಂದ ಬಾಬಾ ಅವರನ್ನು ಪೂಜಿಸಿದರೆ, ಖತು ಶ್ಯಾಮ್ ಅವರನ್ನು ಎಂದಿಗೂ ಕೈಬಿಡುವುದಿಲ್ಲ ಮತ್ತು ಬದಲಾಗಿ ಅವರು ಮಾಡುವ ಎಲ್ಲದರಲ್ಲೂ ಯಶಸ್ಸನ್ನು ನೀಡುತ್ತಾರೆ.&lt;/p&gt;&lt;img&gt;&lt;p&gt;ವೃಷಭ ಮತ್ತು ತುಲಾ ರಾಶಿಯ ಜೊತೆಗೆ ಮಕರ ರಾಶಿಯನ್ನು ಸಹ ಖತು ಶ್ಯಾಮ್ ಬಾಬಾ ಅವರ ನೆಚ್ಚಿನ ರಾಶಿಚಕ್ರ ಚಿಹ್ನೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಬಾಬಾ ಅವರನ್ನು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ಬೆಂಬಲಿಸುತ್ತಾರೆ ಮತ್ತು ಅವರ ಅದೃಷ್ಟವನ್ನು ಬಲಪಡಿಸುತ್ತಾರೆ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/khatu-shyam-favourite-rashi-vrishabh-tula-maka-baba-shyam-hamara-priya-zodiac-signs-suh-hktdcip"/>
        </item>
        <item>
            <title><![CDATA[Karna Serial: ಮೂತಿ ಸೊಟ್ಟ ಮಾಡಿದ್ರೂ ಅರ್ಜುನ್​ಗೆ ಇಷ್ಟವಾಗಿಬಿಟ್ಟಳು ನಿಧಿ; ಕರ್ಣನ ಲವ್​ಸ್ಟೋರಿ ಭವಿಷ್ಯ ಏನು]]></title>
            <link>https://kannada.asianetnews.com/gallery/tv-talk/karna-serial-twist-arjun-accepted-nidhi-for-marriage-suc-i9rfmym</link>
            <guid isPermaLink="true">https://kannada.asianetnews.com/gallery/tv-talk/karna-serial-twist-arjun-accepted-nidhi-for-marriage-suc-i9rfmym</guid>
            <pubDate>Wed, 15 Apr 2026 22:49:49 +0530</pubDate>
            <description><![CDATA[ಕರ್ಣ ಮತ್ತು ನಿಧಿಯನ್ನು ಬೇರೆ ಮಾಡಲು ರಮೇಶ್ ಮಾಡಿದ ಪ್ಲ್ಯಾನ್ ಯಶಸ್ವಿಯಾಗಿದ್ದು, ನಿಧಿಯನ್ನು ಮದುವೆಯಾಗಲು ಬಂದ ಹ್ಯಾಂಡ್​ಸಮ್​ ಡಾಕ್ಟರ್ ಅರ್ಜುನ್, ನಿಧಿಯನ್ನು ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಕರ್ಣ ಮತ್ತು ನಿಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp92avrvp5193wa30p5nj2vp,imgname-karna-serial-1776273420059.jpg" type="image/jpeg" height="390" width="690"/>
            <content:encoded><![CDATA[ಕರ್ಣ ಮತ್ತು ನಿಧಿಯನ್ನು ಬೇರೆ ಮಾಡಲು ರಮೇಶ್ ಮಾಡಿದ ಪ್ಲ್ಯಾನ್ ಯಶಸ್ವಿಯಾಗಿದ್ದು, ನಿಧಿಯನ್ನು ಮದುವೆಯಾಗಲು ಬಂದ ಹ್ಯಾಂಡ್​ಸಮ್​ ಡಾಕ್ಟರ್ ಅರ್ಜುನ್, ನಿಧಿಯನ್ನು ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಕರ್ಣ ಮತ್ತು ನಿಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;img&gt;&lt;p&gt;ಕರ್ಣ ಸೀರಿಯಲ್​ (Karna Serial) ಇದೀಗ ಕುತೂಹಲದ ಹಂತ ತಲುಪಿದೆ. ಕರ್ಣ ಮತ್ತು ನಿಧಿಯನ್ನು ದೂರ ಮಾಡಲು ರಮೇಶ್​ ಇನ್ನಿಲ್ಲದಂತೆ ಪ್ಲ್ಯಾನ್​ ಮಾಡುತ್ತಿದ್ದಾನೆ.&lt;/p&gt;&lt;img&gt;&lt;p&gt;ಅದರ ಭಾಗವಾಗಿ ನಿಧಿಗೆ ಬೇರೆ ಮದುವೆ ಮಾಡಲು ಹುಡುಗನನ್ನು ನೋಡಿದ್ದಾನೆ. ಹುಡುಗ ಬಂದಾಗ ಆತನನ್ನು ಹೇಗಾದರೂ ಓಡಿಸಬಹುದು ಎಂದು ಕರ್ಣ ಮತ್ತು ನಿಧಿ ಪ್ಲ್ಯಾನ್​ ಮಾಡಿ ಇದಕ್ಕೆ ಒಪ್ಪಿದ್ದರು.&lt;/p&gt;&lt;img&gt;&lt;p&gt;ಆದರೆ ಆಗಿದ್ದೇ ಬೇರೆ. ಅಲ್ಲಿ ಬಂದವ ಹ್ಯಾಂಡ್​ಸಮ್​ ಅರ್ಜುನ್​. ಅರ್ಜುನ ಒಬ್ಬ ಡಾಕ್ಟರ್​, ಹಾರ್ಟ್​ ಸರ್ಜನ್​. ಸಿಕ್ಕಾಪಟ್ಟೆಯ ಒಳ್ಳೆಯ ಯುವಕ. ಅವನು ಬಂದವನೇ ನಿಧಿಯನ್ನು ನೋಡಿದ್ದಾನೆ.&lt;/p&gt;&lt;img&gt;&lt;p&gt;ಅರ್ಜುನ್ ಎಲ್ಲರಿಗೂ ಇಷ್ಟ ಆಗಿಬಿಟ್ಟಿದ್ದಾನೆ. ಅವನು ತನ್ನನ್ನು ಒಪ್ಪಿಕೊಳ್ಳಬಾರದು ಎಂದು ನಿಧಿ ಸೊಟ್ಟ ಮೂತಿ ಮಾಡಿ ಬಂದಿದ್ದಾಳೆ.&lt;/p&gt;&lt;img&gt;&lt;p&gt;ಆದರೂ ಕರ್ಣ ನಿಧಿಯನ್ನು ಒಪ್ಪಿಕೊಂಡು ಬಿಟ್ಟಿದ್ದಾನೆ. ಎಲ್ಲರಿಗೂ ಖುಷಿಯೋ ಖುಷಿ. ನಿಧಿ ಮತ್ತು ಕರ್ಣ ಮಾತ್ರ ಇಂಗು ತಿಂದ ಮಂಗನಂತಾಗಿದ್ದರೆ, ತನ್ನ ಪ್ಲ್ಯಾನ್​ ಸಕ್ಸಸ್​ ಆಗಿರೋ ಖುಷಿಯಲ್ಲಿ ಇದ್ದಾನೆ ರಮೇಶ್​.&lt;/p&gt;&lt;img&gt;&lt;p&gt;ಈಗೇನಿದ್ದರೂ ನಿಧಿ ಮತ್ತು ಕರ್ಣ ತಮ್ಮ ಲವ್​ಸ್ಟೋರಿಯನ್ನು ಎಲ್ಲರ ಎದುರು ಹೇಳಲೇಬೇಕಿದೆ. ಅದಕ್ಕೆ ಅವಕಾಶ ಸಿಗುತ್ತಾ ಎನ್ನುವುದು ಮುಂದಿರುವ ಪ್ರಶ್ನೆ. ಈಗ ಬಂದಿರುವ ಅರ್ಜುನ್​ನನ್ನು ನೋಡಿದರೆ, ಅವರಿಬ್ಬರೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಇಷ್ಟು ಬೇಗ ಅವಕಾಶ ಸಿಗುವುದಿಲ್ಲ ಎಂದೇ ಅನ್ನಿಸುತ್ತಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-twist-arjun-accepted-nidhi-for-marriage-suc-i9rfmym"/>
        </item>
        <item>
            <title><![CDATA[ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು, ಈ ರಾಜ್ಯದ ಮಹಿಳೆಯರೇ ಅತೀ ಹೆಚ್ಚು ಕುಡುಕರು]]></title>
            <link>https://kannada.asianetnews.com/gallery/relationship/surprising-list-of-indian-states-where-women-drink-the-most-suh-iw47khl</link>
            <guid isPermaLink="true">https://kannada.asianetnews.com/gallery/relationship/surprising-list-of-indian-states-where-women-drink-the-most-suh-iw47khl</guid>
            <pubDate>Thu, 16 Apr 2026 13:03:26 +0530</pubDate>
            <description><![CDATA[&lt;p&gt;Women Alcohol Consumption ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಮಹಿಳೆಯರು ಅತಿ ಹೆಚ್ಚು ಮದ್ಯಪಾನ ಮಾಡುವ ಟಾಪ್ 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-90804cc6-d452-4f8a-b892-7d14d7d74bc2,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;Women Alcohol Consumption ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಮಹಿಳೆಯರು ಅತಿ ಹೆಚ್ಚು ಮದ್ಯಪಾನ ಮಾಡುವ ಟಾಪ್ 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಇಲ್ಲಿದೆ.&lt;/p&gt;&lt;img&gt;ಅರುಣಾಚಲ ಪ್ರದೇಶದಲ್ಲಿ 15 ರಿಂದ 49 ವರ್ಷ ವಯಸ್ಸಿನ ಶೇ. 26ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಈ ರಾಜ್ಯದ ಸಂಸ್ಕೃತಿಯಲ್ಲಿ ಮದ್ಯಪಾನಕ್ಕೆ ವಿಶೇಷ ಸ್ಥಾನವಿದೆ. ಇಲ್ಲಿ ಅತಿಥಿಗಳಿಗೆ 'ಅಪೊಂಗ್' (ಅಕ್ಕಿ ಬಿಯರ್), ಓಪೋ, ಮಧುವಾದಂತಹ ಸಾಂಪ್ರದಾಯಿಕ ಪಾನೀಯಗಳನ್ನು ನೀಡಿ ಸತ್ಕರಿಸಲಾಗುತ್ತದೆ. ಹಬ್ಬ, ಸಾಂಪ್ರದಾಯಿಕ ಆಚರಣೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಇವು ಸಾಮಾನ್ಯ. ಹೀಗಾಗಿಯೇ ಅರುಣಾಚಲ ಪ್ರದೇಶ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.&lt;img&gt;&lt;p&gt;ತೆಲಂಗಾಣ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಹಬ್ಬ, ಆಚರಣೆ ಮತ್ತು ಪಾರ್ಟಿಗಳ ಸಮಯದಲ್ಲಿ ಮದ್ಯಪಾನ ಮಾಡುವುದು ಸಾಮಾನ್ಯ. ಈ ದಕ್ಷಿಣ ಭಾರತದ ರಾಜ್ಯದಲ್ಲಿ ಶೇ. 6.7ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ನಗರ ಪ್ರದೇಶದ ಮಹಿಳೆಯರಿಗಿಂತ ಗ್ರಾಮೀಣ ಮಹಿಳೆಯರೇ ಹೆಚ್ಚು ಮದ್ಯಪಾನ ಮಾಡುತ್ತಾರೆ.&amp;nbsp;&lt;/p&gt;&lt;img&gt;&lt;p&gt;ಸಿಕ್ಕಿಂ ರಾಜ್ಯದಲ್ಲಿ ಶೇ. 16.2ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಇದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಧಾರ್ಮಿಕ ಆಚರಣೆಗಳು, ಹಬ್ಬಗಳಂತಹ ಕಾರ್ಯಕ್ರಮಗಳಲ್ಲಿ ಮದ್ಯವನ್ನು ಬಳಸುವುದು ಸಾಮಾನ್ಯವಾಗಿದೆ.&amp;nbsp;&lt;/p&gt;&lt;img&gt;ಅಸ್ಸಾಂನಲ್ಲಿ ಶೇ. 7.3ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಈಶಾನ್ಯದ ಇತರ ಎರಡು ರಾಜ್ಯಗಳಂತೆಯೇ, ಅಸ್ಸಾಂನ ಬುಡಕಟ್ಟು ಸಮುದಾಯಗಳು ಮದ್ಯ ತಯಾರಿಕೆ ಮತ್ತು ಸೇವನೆಯ ಸುದೀರ್ಘ ಸಂಪ್ರದಾಯವನ್ನು ಹೊಂದಿವೆ. ಅವರಿಗೆ, ಮದ್ಯಪಾನವು ಜೀವನಶೈಲಿಯ ಭಾಗವಾಗಿರುವಂತೆಯೇ ಒಂದು ಧಾರ್ಮಿಕ ಆಚರಣೆಯೂ ಆಗಿದೆ.&lt;img&gt;ಜಾರ್ಖಂಡ್&zwnj;ನಲ್ಲಿ ಶೇ. 6.1ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಇವರಲ್ಲಿ ಹೆಚ್ಚಿನವರು ಹಲವು ವರ್ಷಗಳಿಂದ ಮೂಲೆಗುಂಪಾದ ಬುಡಕಟ್ಟು ಸಮುದಾಯಗಳಿಗೆ ಸೇರಿದವರು. ಉದ್ಯೋಗಾವಕಾಶಗಳು ಕಡಿಮೆ ಇರುವುದರಿಂದ, ಈ ಸಮುದಾಯಗಳಲ್ಲಿ ಹಲವರು ತಮ್ಮ ಸವಾಲುಗಳನ್ನು ಎದುರಿಸಲು ಮದ್ಯದ ಮೊರೆ ಹೋಗುತ್ತಾರೆ.&lt;img&gt;ಪಟ್ಟಿಯಲ್ಲಿರುವ ಏಕೈಕ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶೇ. 5ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಸಾಮಾಜಿಕ ಪದ್ಧತಿಗಳು, ಒತ್ತಡ ಮತ್ತು ಮಹಿಳೆಯರು ಕುಡಿಯಲು ಪ್ರಾರಂಭಿಸುವ ವಯಸ್ಸು ಇದರ ಮೇಲೆ ಪ್ರಭಾವ ಬೀರುತ್ತವೆ.&lt;img&gt;ಛತ್ತೀಸ್&zwnj;ಗಢದಲ್ಲಿ ಸುಮಾರು ಶೇ. 5ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಇದು ರಾಜ್ಯವನ್ನು ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರಿಸಿದೆ. ಒತ್ತಡ ಮತ್ತು ಮಹಿಳೆಯರಿಗೆ ಅವಕಾಶಗಳ ಕೊರತೆಯು ಈ ಸಂಖ್ಯೆಗೆ ಪ್ರಮುಖ ಕಾರಣವಾಗಿದೆ. ಗ್ರಾಮೀಣ ಜನರಲ್ಲಿ ಮದ್ಯಪಾನವು ಸಾಮಾನ್ಯ ಅಭ್ಯಾಸವಾಗಿದೆ. ಅಲ್ಲಿನ ಆಚರಣೆಗಳು, ಹಬ್ಬಗಳಲ್ಲಿ ಇದನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಈ ಟಾಪ್ 7 ಪಟ್ಟಿಯಲ್ಲಿ ತಮಿಳುನಾಡು ರಾಜ್ಯವು ಸ್ಥಾನ ಪಡೆದಿಲ್ಲ ಎಂಬುದು ಗಮನಾರ್ಹ.]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/surprising-list-of-indian-states-where-women-drink-the-most-suh-iw47khl"/>
        </item>
        <item>
            <title><![CDATA[Bhagyalakshmi Serial: ಮೊದಲ ರಾತ್ರಿ ಮೊದಲೇ ಭಾಗ್ಯ ಎಡವಟ್ಟು- ಶೂಟಿಂಗ್​ನಲ್ಲಿ ಮುಖ ಮುಚ್ಚಿಕೊಂಡ ನಟಿ]]></title>
            <link>https://kannada.asianetnews.com/gallery/tv-talk/bhagyalakshmi-serial-making-video-gone-viral-suc-nq2d9ni</link>
            <guid isPermaLink="true">https://kannada.asianetnews.com/gallery/tv-talk/bhagyalakshmi-serial-making-video-gone-viral-suc-nq2d9ni</guid>
            <pubDate>Thu, 16 Apr 2026 15:34:55 +0530</pubDate>
            <description><![CDATA[ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯ ಮತ್ತು ಆದಿ ಒಂದಾಗಿದ್ದು, ನಾದಿನಿಯರ ಕಾಟ ಶುರುವಾಗಿದೆ. ಇದರ ನಡುವೆ, ಶೂಟಿಂಗ್ ವೇಳೆ ನಡೆದ ತಮಾಷೆಯ ಘಟನೆಯೊಂದರಲ್ಲಿ, ಮೊದಲ ರಾತ್ರಿಗೂ ಮುನ್ನ ಭಾಗ್ಯ ಆದಿಯ ಟೋಪಿ ಕಿತ್ತ ವಿಡಿಯೋ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpavv7yebw2t9krqwwdaav6f,imgname-bhagyalakshmi-04-1776333725646.jpg" type="image/jpeg" height="390" width="690"/>
            <content:encoded><![CDATA[ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯ ಮತ್ತು ಆದಿ ಒಂದಾಗಿದ್ದು, ನಾದಿನಿಯರ ಕಾಟ ಶುರುವಾಗಿದೆ. ಇದರ ನಡುವೆ, ಶೂಟಿಂಗ್ ವೇಳೆ ನಡೆದ ತಮಾಷೆಯ ಘಟನೆಯೊಂದರಲ್ಲಿ, ಮೊದಲ ರಾತ್ರಿಗೂ ಮುನ್ನ ಭಾಗ್ಯ ಆದಿಯ ಟೋಪಿ ಕಿತ್ತ ವಿಡಿಯೋ ವೈರಲ್ ಆಗಿದೆ.&lt;img&gt;&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial)ನಲ್ಲಿ ಸದ್ಯ ಭಾಗ್ಯ ಮತ್ತು ಆದಿ ಒಂದಾಗಿದ್ದಾರೆ. ಇದೀಗ ಭಾಗ್ಯ 2.0 ಶುರುವಾಗಿದೆ. ಸೀರಿಯಲ್​ ಮುಗಿಯತ್ತೆ ಅಂದುಕೊಂಡಾಗಲೇ ಈಗ ಮತ್ತೊಂದು ಗೋಳಾಟ ಶುರುವಾಗುವ ಹಾಗಿದೆ.&lt;/p&gt;&lt;img&gt;&lt;p&gt;ಭಾಗ್ಯ ಮನೆಯ ಒಳಕ್ಕೆ ಕಾಲಿಡುತ್ತಲೇ ನಾದಿನಿಯರ ಕಾಟ ಶುರುವಾಗಿದೆ. ಭಾಗ್ಯ ಒಂದು ಕಡೆ ಹಿಂಸೆ ಪಟ್ಟಿದ್ದು ಸಾಲದು ಎನ್ನುವಂತೆ ಇದೀಗ ಮತ್ತೊಂದು ಮನೆಯಲ್ಲಿಯೂ ನರಕ ಶುರುವಾಗಿದ್ದು, ಮತ್ತೊಂದಿಷ್ಟು ವರ್ಷ ಈಕೆಯ ಇನ್ನೊಂದು ಗೋಳಾಟ ನೋಡಬೇಕಾ ಎನ್ನುವ ಹಾಗಿದೆ ಸ್ಥಿತಿ. ಅದೇ ಇನ್ನೊಂದೆಡೆ, ತಾಂಡವ್​ ಕೂಡ ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯ್ತಿದ್ದು, ಆತನಿಗೆ ಕನ್ನಿಕಾ ಸಾಥ್​ ಕೊಡಲಿದ್ದಾಳೆ.&lt;/p&gt;&lt;img&gt;&lt;p&gt;ಇವೆಲ್ಲಾ ಗೋಳಿನ ನಡುವೆ ಫನ್ನಿ ವಿಡಿಯೋ ಒಂದು ವೈರಲ್​ ಆಗಿದೆ. ಈಗ ಭಾಗ್ಯ ಮತ್ತು ಆದಿಯ ಮೊದಲ ರಾತ್ರಿ ನಡೆಯಬೇಕಿದೆ. ಭಾಗ್ಯಳನ್ನು ಮನೆ ತುಂಬಿಸಿಕೊಂಡು ಆಗಿದೆ.&lt;/p&gt;&lt;img&gt;&lt;p&gt;ಆದರೆ ಶೂಟಿಂಗ್​ ವೇಳೆ, ಆದಿಯ ಟೋಪಿ ಮತ್ತು ಹಾರವನ್ನು ಎಳೆದುಬಿಟ್ಟಿದ್ದಾರೆ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​. ಅಯ್ಯೋ ಇದು ನನ್ನ ಕೈಗೆ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;img&gt;&lt;p&gt;ಕಿತ್ತವಳು ನಾನಲ್ಲ, ನಾನವಳಲ್ಲ ಎಂದು ತಮಾಷೆ ಮಾಡಿದ್ದಾರೆ ಸುಷ್ಮಾ. ಅಷ್ಟಕ್ಕೂ ಸುಷ್ಮಾ ಅವರು ಶೂಟಿಂಗ್​ ಟೈಮ್​ನಲ್ಲಿ ಸಕತ್​ ತಮಾಷೆ ಮಾಡುತ್ತಿರುತ್ತಾರೆ. ಇದೀಗಲೂ ಅಂಥದ್ದೇ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅದಕ್ಕೆ ನೆಟ್ಟಿಗರು ಅಯಯ್ಯೋ ಫಸ್ಟ್​ನೈಟ್​ಗೂ ಮೊದ್ಲೇ ಎಲ್ಲಾ ಬಿಚ್ಚಿಬಿಟ್ರಾ ಎಂದು ನಟಿಯ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಭಾಗ್ಯಳ ಹೊಸ ಜೀವನ ಇನ್ನು ಹೇಗಿರುತ್ತೋ ನೋಡಬೇಕಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bhagyalakshmi-serial-making-video-gone-viral-suc-nq2d9ni"/>
        </item>
        <item>
            <title><![CDATA[ಅತ್ತೆ ಅಂದ್ರೆ ಪ್ರಾಣ: ಗಂಡನ ಮನೆಗೆ ಹೊರಟು ನಿಂತ ಮಧುವಣಗಿತ್ತಿ ಅತ್ತೆಯನ್ನು ಬಿಟ್ಟಿರಲಾರದೆ ಗೋಳಾಡಿದ ಪುಟ್ಟ ಕಂದಮ್ಮ]]></title>
            <link>https://kannada.asianetnews.com/relationship/video-of-niece-and-her-mother-in-laws-bond-remembers-old-memory-to-netizens/articleshow-nsam45n</link>
            <guid isPermaLink="true">https://kannada.asianetnews.com/relationship/video-of-niece-and-her-mother-in-laws-bond-remembers-old-memory-to-netizens/articleshow-nsam45n</guid>
            <pubDate>Thu, 16 Apr 2026 16:03:26 +0530</pubDate>
            <description><![CDATA[ಸೋದರತ್ತೆಯ ಮದುವೆಯಲ್ಲಿ, ಆಕೆಯನ್ನು ಗಂಡನ ಮನೆಗೆ ಕಳುಹಿಸಲು ಒಪ್ಪದೆ ಪುಟಾಣಿಯೊಬ್ಬಳು ಬಿಕ್ಕಿ ಬಿಕ್ಕಿ ಅಳುವ ವೀಡಿಯೋವೊಂದು ವೈರಲ್ ಆಗಿದೆ. ಅತ್ತೆ-ಸೊಸೆಯ ಈ ಬಾಂಧವ್ಯವನ್ನು ತೋರಿಸುವ ವೀಡಿಯೋ, ಅನೇಕರನ್ನು ಭಾವುಕರನ್ನಾಗಿಸಿ ಅವರ ಬಾಲ್ಯದ ನೆನಪುಗಳನ್ನು ಕೆದಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpaw11mw2kparqr70br2vhq8,imgname-baby-cries-for-her-buas-bidayi-1776333915803.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಗಂಡನ ಮನೆಗೆ ಹೋಗಬೇಡ ಎಂದು ಸೋದರತ್ತೆಯನ್ನು ತಬ್ಬಿ ಹಿಡಿದು ಅತ್ತ ಮುದ್ದು ಸೊಸೆ&lt;/strong&gt;&lt;/h2&gt;&lt;p&gt;ಮನೆಯಲ್ಲಿ ಇನ್ನೂ ಮದುವೆಯಾಗದ ಅಥವಾ ಮದುವೆ ಹೊಸ್ತಿಲಲ್ಲಿರುವ ಅಪ್ಪನ ತಂಗಿಯರು(ಸೋದರತ್ತೆ) ಹಾಗೂ ಅಜ್ಜಿ ಮನೆಯಲ್ಲಿರುವ ಅಮ್ಮನ ತಂಗಿಯರೆಂದರೆ ಪುಟ್ಟ ಮಕ್ಕಳಿಗೆ ತುಂಬಾ ಪ್ರೀತಿ. ಅವರನ್ನು ಪುಟ್ಟ ಮಕ್ಕಳು ಬಹಳ ಹಚ್ಚಿಕೊಂಡಿರುತ್ತಾರೆ. ಅಪ್ಪ ಅಮ್ಮನ ಹೊರತಾಗಿ ಮನೆಯಲ್ಲಿ ಒಡನಾಡಿಗಳಂತೆ ಇರುವ ಇವರನ್ನು ಮಕ್ಕಳು ತುಂಬಾ ಹಚ್ಚಿಕೊಂಡಿರುತ್ತಾರೆ. ಅಜ್ಜಿ ಮನೆಗೆ ಹೋದಾಗ ಚಿಕ್ಕಮ್ಮ ಮನೆಯಲ್ಲಿರುವಾಗ ಅತ್ತೆ ತೋರುವ ಪ್ರೀತಿಯನ್ನು ಮಕ್ಕಳು ಯಾವತ್ತೂ ಮರೆಯುವುದಿಲ್ಲ, ಹೀಗಿರುವಾಗ ಅತ್ತೆಯನ್ನು ಮದುವೆ ಮಾಡಿ ಕೊಡುವ ಸಮಯದಲ್ಲಿ ಪುಟ್ಟ ಮಕ್ಕಳು ಆಕೆಯನ್ನು ಗಂಡನ ಮನೆಗೆ ಕಳುಹಿಸುವುದಕ್ಕೆ ಒಪ್ಪದೇ ಬಿಕ್ಕಿ ಬಿಕ್ಕಿ ಅಳುವ ವೀಡಿಯೋಗಳು ಆಗಾಗ ಇಂಟರ್&zwnj;ನೆಟ್&zwnj;ನಲ್ಲಿ ವೈರಲ್ ಆಗ್ತಿರ್ತವೆ. ಹಾಗೆಯೇ ಇಲ್ಲೊಂದು ಅತ್ತೆ ಸೊಸೆಯ ವೀಡಿಯೋವೊಂದು ಇಂಟರ್ನೆಟ್&zwnj;ನಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರಿಗೆ ಅವರ ಬಾಲ್ಯದ ನೆನಪುಗಳ ಜೊತೆ ತಮ್ಮನ್ನು ತುಂಬಾ ಪ್ರೀತಿ ಮಾಡುತ್ತಿದ್ದ ಸೋದರತ್ತೆಯ ನೆನಪು ಮಾಡುವಂತೆ ಮಾಡಿದೆ.&lt;/p&gt;&lt;h3&gt;&lt;strong&gt;ಬಾಲ್ಯದ ನೆನಪು ಕೆದಕಿದ 'ಅತ್ತೆ-ಸೊಸೆಯ' ಪ್ರೇಮ:&lt;/strong&gt;&lt;/h3&gt;&lt;p&gt;ಸೋದರತ್ತೆಯ ಮದುವೆಯಲ್ಲಿ ಓಡಾಡೋದು ಅಂದರೆ ಅದೇನೋ ಖುಷಿ ಆದರೆ ಆಕೆ ಮದುವೆಯಾಗಿ ಗಂಡನ ಮನೆಗೆ ಹೋಗ್ತಾಳೆ, ಇನ್ನೂ ನಮ್ ಜೊತೆ ಆಕೆ ಇರಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಆಕೆಯ ಮುದ್ದಿನ ಸೊಸೆಯಂದಿರು ಅಳಿಯಂದಿರು(ಅಣ್ಣನ ಮಕ್ಕಳು) ಅಳುವುದಕ್ಕೆ ಶುರು ಮಾಡುತ್ತಾರೆ ಮದುವೆಯ ಸಂಪ್ರದಾಯವೆಲ್ಲಾ ಮುಗಿದ ನಂತರ ಹೆಣ್ಣಿಳಿಸಿಕೊಡುವ ಶಾಸ್ತ್ರ(ವಿದಾಯ ಕೂಟ) ಮಾಡಲಾಗುತ್ತದೆ. ಈ ಸಮಯದಲ್ಲಿ ಹೆಣ್ಣು ಮಕ್ಕಳು ತವರು ಬಿಟ್ಟು ಹೋಗುವ ಬೇಸರದಲ್ಲಿ ಕಣ್ಣಿರಿಟ್ಟರೆ ಮತ್ತೊಂದೆಡೆ ಅವರ ಜೊತೆಗೆ ಇದ್ದ ಸೋದರನ ಪುಟ್ಟ ಮಕ್ಕಳು ಕೂಡ ಅತ್ತೆಯನ್ನು ಗಂಡನ ಮನೆಗೆ ಕಳುಹಿಸಿ ಕೊಡುವುದಕ್ಕೆ ಇಷ್ಟವಿಲ್ಲದೇ ಜೋರಾಗಿ ಅಳುತ್ತಾರೆ.&lt;/p&gt;&lt;h3&gt;&lt;strong&gt;ಸೋದರತ್ತೆಯ 'ಬೀಳ್ಕೊಡುಗೆ'ಯ ವೇಳೆ ಬಿಕ್ಕಿ ಬಿಕ್ಕಿ ಅತ್ತ ಪುಟಾಣಿ&lt;/strong&gt;&lt;/h3&gt;&lt;p&gt;ಹಾಗೆಯೇ ಇಲ್ಲಿ ಪುಟಾಣಿಯೊಂದು ಅತ್ತೆಯನ್ನು ತಬ್ಬಿ ಹಿಡಿದುಕೊಂಡು ಜೋರಾಗಿ ಅಳುತ್ತಿದ್ದು, ಈ ವೀಡಿಯೋ ಅನೇಕರನ್ನು ಭಾವುಕರನ್ನಾಗಿಸಿದೆ. PunjabCulture.in ಎಂಬ ಇನ್ಸ್ಟಾ ಪೇಜ್&zwnj;ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವಿಡಿಯೋದಲ್ಲಿ ಪುಟ್ಟ ಮಗುವನ್ನು ಮಧುವಣಗಿತ್ತಿಯ ಧಿರಿಸಿನಲ್ಲಿರುವ ಅತ್ತೆಯನ್ನು ತಬ್ಬಿ ಹಿಡಿದುಕೊಂಡು ಆಕೆಯನ್ನು ಹೋಗುವುದಕ್ಕೆ ಬಿಡದೇ ಬಿಕ್ಕಿ ಬಿಕ್ಕಿ ಅಳುತ್ತಿದೆ. ಮಗುವಿನ ಪೋಷಕರು ವಧುವಿನ ಕುಟುಂಬದವರು ಕೂಡ ಈ ಕ್ಷಣದಲ್ಲಿ ಭಾವುಕರಾಗಿದ್ದು, ಎಲ್ಲರ ಕಣ್ಣಾಲಿಗಳು ತೇವಗೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಮಗುವನ್ನು ಅತ್ತೆಯ ಕೈಯಿಂದ ಬೇರ್ಪಡಿಸುವುದಕ್ಕೆ ಕುಟುಂಬದವರು ಪ್ರಯತ್ನಿಸುವುದನ್ನು ಕಾಣಬಹುದಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಕಾಡು ಹಂದಿಗಳ ಬೆವರಿಳಿಸಿದ ಹ್ಯೂಮನಾಯ್ಡ್ ರೋಬೋಟ್: ಸಿನಿಮಾ ಶೈಲಿಯಲ್ಲಿ ಹಂದಿ ಬೇಟೆಯಾಡಿದ ಎಡ್ವರ್ಡ್&lt;/p&gt;&lt;p&gt;ವೀಡಿಯೋ ನೋಡಿದ ಒಬ್ಬರು ಈ ಸಂಬಂಧವನ್ನು ಬಣ್ಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆಯನ್ನು ಅತ್ತೆಯ ಜೊತೆ ಹೋಗುವುದಕ್ಕೆ ಬಿಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಸಂದರ್ಭಗಳನ್ನು ನೋಡುವುದಕ್ಕೆ ಸಿಗುವುದು ಬಹಳ ಅಪರೂಪ ಏಕೆಂದರೆ ಹೆಣ್ಣು ಮಕ್ಕಳು ಸಣ್ಣವರಿರಲಿ ಅಥವಾ ದೊಡ್ಡವರಿರಲಿ ಗಂಡು ಮಕ್ಕಳಿಗಿಂತ ಮೊದಲೇ ಅವರಿಗೆ ಮದುವೆ ಮಾಡಿರಲಾಗುತ್ತದೆ. ಹೀಗಾಗಿ ಈ ರೀತಿಯ ಅನುಬಂಧ ಏರ್ಪಡುವುದೇ ಬಹಳ ಕಷ್ಟ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನ್ನ ಮದುವೆಯಲ್ಲಿಯೂ ಕೂಡ ಇದೇ ರೀತಿಯ ಅನುಭವ ಆಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಅನೇಕರನ್ನು ಭಾವುಕನ್ನಾಗಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯ ದರ್ಬಾರ್: ಟೀಚರ್&zwnj;ಗೆ ಗಾಳಿ ಬೀಸಿ ಬೀಸಿ ಸುಸ್ತಾದ ಬಾಲಕ: ವೀಡಿಯೋ ವೈರಲ್&lt;/strong&gt;&lt;strong&gt;&amp;nbsp;&lt;/strong&gt;&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by PunjabCulture.in (@punjabculture.in)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Anusha Kb</dc:creator>
            <atom:link href="https://kannada.asianetnews.com/relationship/video-of-niece-and-her-mother-in-laws-bond-remembers-old-memory-to-netizens/articleshow-nsam45n"/>
        </item>
        <item>
            <title><![CDATA[ಮನೆಬಿಟ್ಟು ಓಡಿ ಹೋದ 21ರ ಹರೆಯದ ತರುಣ: ಅಮ್ಮನ ವಯಸ್ಸಿನ ಮಹಿಳೆ ಜೊತೆ ಮದುವೆ: ಆಘಾತದಲ್ಲಿ ಕುಟುಂಬ]]></title>
            <link>https://kannada.asianetnews.com/relationship/21-year-old-boy-runs-away-from-home-married-to-woman-his-mothers-age/articleshow-orzy0rr</link>
            <guid isPermaLink="true">https://kannada.asianetnews.com/relationship/21-year-old-boy-runs-away-from-home-married-to-woman-his-mothers-age/articleshow-orzy0rr</guid>
            <pubDate>Thu, 16 Apr 2026 09:43:28 +0530</pubDate>
            <description><![CDATA[&lt;p&gt;ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ 40 ವರ್ಷದ ವಿಧವೆಗಾಗಿ 21ರ ಯುವಕನೊಬ್ಬ ಮನೆ ತೊರೆದಿದ್ದಾನೆ. ಈ ಅಸಾಂಪ್ರದಾಯಿಕ ಪ್ರೇಮ ಸಂಬಂಧ ಮತ್ತು 19 ವರ್ಷಗಳ ವಯಸ್ಸಿನ ಅಂತರವು ಯುವಕನ ಕುಟುಂಬವನ್ನು ತೀವ್ರ ಆಘಾತಕ್ಕೆ ದೂಡಿದ್ದು, ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpa7ca7nhs7pkj938tgthf0p,imgname-21-year-old-marries-40-year-old-woman-1776312264949.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;40ರ ಅಂಟಿ ಪ್ರೇಮದಲ್ಲಿ ಬಿದ್ದು ಮನೆಬಿಟ್ಟು ಓಡಿ ಹೋದ 21ರ ಹರೆಯದ ಹುಡುಗ&lt;/strong&gt;&lt;/h2&gt;&lt;p&gt;ಮೊದಲೆಲ್ಲಾ, ಸಣ್ಣ ವಯಸ್ಸಿನ ಹೆಣ್ಣು ಮಕ್ಕಳನ್ನು 10 ರಿಂದ 12 ವರ್ಷಗಳ ವಯಸ್ಸಿನ ಅಂತರ ಇರುವ ವ್ಯಕ್ತಿಗಳೊಂದಿಗೆ ಸಣ್ಣ ವಯಸ್ಸಿನಲ್ಲೇ ಪೋಷಕರು ಮದುವೆ ಮಾಡುತ್ತಿದ್ದ ಉದಾಹರಣೆಗಳಿದ್ದವು. ಈಗಲೂ ಕೆಲವು ಕಡೆಗಳಲ್ಲಿ ಪೋಷಕರೇ ನಿಶ್ಚಯಿಸಿದ ವಿವಾಹಗಳಲ್ಲಿ ಈ ರೀತಿಯ ವಯಸ್ಸಿನ ಅಂತರದ ಮದುವೆಗಳು ನಡೆಯುತ್ತಿರುತ್ತವೆ. ಹುಡುಗಿ ಹುಡುಗನಿಗಿಂತ ಸಣ್ಣವಳಿರಬೇಕು ಎಂದು ನಮ್ಮ ಹಿರಿಯರು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಸಂಪೂರ್ಣ ಉಲ್ಟಾ ಆಗುತ್ತಿದೆ. ಹದಿಹರೆಯದ ಹುಡುಗರು ತಮ್ಮಗಿಂತ 10 ರಿಂದ 15 ವರ್ಷ ಹಿರಿಯರಾದ ವಿವಾಹಿತರ ಹಿಂದೆ ಬೀಳುತ್ತಿದ್ದು, ಇದರಿಂದ ಅವರ ಕುಟುಂಬಗಳು ಕಂಗಾಲಾಗುತ್ತಿವೆ. ಇದರಿಂದ ಸಾಮಾಜಿಕವಾಗಿ ಎದುರಾಗುವ ಅವಮಾನ ಟೀಕೆಗಳಿಂದಾಗಿ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ. ಸಾಮಾಜಿಕ ಜಾಲತಾಣಗಳು ಈ ಹುಚ್ಚು ಪ್ರೀತಿಗೆ ನೀರೆರೆದು ಪೋಷಿಸುತ್ತಿವೆ.&lt;/p&gt;&lt;h3&gt;&lt;strong&gt;ಮನೆಬಿಟ್ಟು ಓಡಿಹೋದ ಮಗ ಸಿಕ್ಕಿದ್ದು 19 ವರ್ಷ ಹಿರಿಯಳ ಮನೆಯಲ್ಲಿ&lt;/strong&gt;&lt;/h3&gt;&lt;p&gt;ದಿನಗಳ ಹಿಂದಷ್ಟೇ ಮೂರು ಮಕ್ಕಳ ತಾಯಿ, ವಿವಾಹಿತ ಮಹಿಳೆಯೊಬ್ಬಳ ಪ್ರೀತಿಯಲ್ಲಿ ಬಿದ್ದ 25 ವರ್ಷದ ಹುಡುಗನನ್ನು ಆಕೆಯ ಮನೆಯವರು ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಘಟನೆಯೊಂದು ಪಂಜಾಬ್&zwnj;ನಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಉತ್ತರಪ್ರದೇಶದ ಅಮ್ರೋಹಾದಲ್ಲಿ ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಮೊದಲೆಲ್ಲಾ ಹೆಣ್ಣು ಮಕ್ಕಳು ಪ್ರೀತಿಸಿ ಮನೆಬಿಟ್ಟು ಓಡಿ ಹೋಗುತ್ತಿದ್ದರು. ಆದರೆ ಈ ಪ್ರಕರಣದಲ್ಲಿ 21 ವರ್ಷದ ಹುಡುಗನೋರ್ವ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಪ್ರೀತಿಯನ್ನು ಹಿಂಬಾಲಿಸಿ ಮನೆ ಬಿಟ್ಟು ಓಡಿ ಹೋಗಿದ್ದಾನೆ.&lt;/p&gt;&lt;h3&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ 40 ವರ್ಷದ ಮಹಿಳೆ&lt;/strong&gt;&lt;/h3&gt;&lt;p&gt;ಇದು ವಿಚಿತ್ರ ಎನಿಸಿದರು ಸತ್ಯ. ಸಾಮಾಜಿಕ ಜಾಲತಾಣದಲ್ಲಿ 40ರ ಹರೆಯದ ವಿಧವೆ ಮಹಿಳೆಯ ಪ್ರೇಮ ಜಾಲಕ್ಕೆಬಿದ್ದ 21ರ ಹರೆಯದ ಹುಡುಗನೋರ್ವ ಮನೆಬಿಟ್ಟು ಓಡಿ ಹೋಗಿದ್ದು, ಇದರಿಂದ ಆತನ ಕುಟುಂಬ ಕಂಗಾಲಾಗಿದೆ. ಮಗ ನಾಪತ್ತೆಯಾದ ದಿನದಿಂದ ಆತನಿಗಾಗಿ ಹುಡುಕಾಟ ನಡೆಸಿದ ಆತನ ಕುಟುಂಬ ಕಡೆಗೆ ಬಂದು ತಲುಪಿದ್ದು, ಆಗ್ರಾದ 40 ವರ್ಷದ ಮಹಿಳೆಯ ಮನೆಗೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪ್ರೀತಿಗಾಗಿ ಪ್ರಾಣ ಬಿಟ್ಟ ಸತ್ಯವ್ವ: 12ನೇ ವಯಸ್ಸಿನಲ್ಲೇ ಮದುವೆ ಫಿಕ್ಸ್ ಮಾಡಿ ಮಗಳ ಬದುಕನ್ನೇ ಕಸಿದುಕೊಂಡ ಪೋಷಕರು&lt;/strong&gt;&lt;/p&gt;&lt;p&gt;ಹೌದು 21ರ ಹರೆಯದ ಅಮ್ರೋಹಾದ ಯುವಕನಿಗೆ ಸೋಶಿಯಲ್ ಮೀಡಿಯಾದಲ್ಲಿ ಆಗ್ರಾದ ನಿವಾಸಿಯಾಗಿದ್ದ 40 ವರ್ಷದ ಮಹಿಳೆಯ ಪರಿಚಯವಾಗಿದ್ದು, ಪರಿಚಯ ಸ್ವಲ್ಪ ಸಮಯದಲ್ಲೇ ಗಾಢವಾದ ಪ್ರೇಮಕ್ಕೆ ತಿರುಗಿದ್ದು, ಬಿಟ್ಟಿರಲಾರದ ಬಂಧವಾಗಿ ಬದಲಾಗಿದೆ. ಮಹಿಳೆಯ ಜೊತೆಗಿನ ಪ್ರೇಮ ಸಂಬಂಧದಲ್ಲಿ ಭಾವನಾತ್ಮಕವಾಗಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಪರಿಣಾಮ 21ರ ಹರೆಯದ ತರುಣ ಮನೆಯಲ್ಲಿ ಪೋಷಕರಿಗೂ ಹೇಳದೇ ಮನೆಬಿಟ್ಟು ಓಡಿ ಬಂದಿದ್ದು, ಮಹಿಳೆಯ ಜೊತೆ ವಾಸ ಮಾಡುವುದಕ್ಕೆ ಶುರು ಮಾಡಿದ್ದಾನೆ.&lt;/p&gt;&lt;p&gt;ಆದರೆ ಮನೆಯಿಂದ ಮಗ ಹಠಾತ್ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಆತನ ತಾಯಿ ಪೊಲೀಸರಿಗೆ ದೂರು ನೀಡಿ ಮಗನಿಗಾಗಿ ಹುಡುಕಾಟ ನಡೆಸಿದಾಗ ಆತ ಅಂತಿಮವಾಗಿ ಆಗ್ರಾದಲ್ಲಿ 40ರ ಹರೆಯದ ಮಹಿಳೆಯ ಜೊತೆ ಪತ್ತೆಯಾಗಿದ್ದಾನೆ. ಯುವಕನ ತಾಯಿ ಮಗನನ್ನು ಪ್ರೇಮಜಾಲದಲ್ಲಿ ಬೀಳಿಸಿದ ಮಹಿಳೆಯ ಮನೆ ತಲುಪಿದಾಗ ಅಲ್ಲಿ ದೊಡ್ಡ ಗಲಾಟೆ ನಡೆದಿದೆ. ಇದು ಎರಡು ಕುಟುಂಬಗಳನ್ನು ತೀವ್ರ ಆಘಾತಕ್ಕೀಡು ಮಾಡಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಂಟಿಯ ಸಹವಾಸ ತಂದ ಆಪತ್ತು: ಮೂರು ಮಕ್ಕಳ ತಾಯಿಯ ವ್ಯಾಮೋಹಕ್ಕೆ ಬಿದ್ದವನ ಹೊಡೆದು ಸಾಯಿಸಿದ ಮಹಿಳೆ ಕಡೆಯವರು&lt;/strong&gt;&lt;/p&gt;&lt;p&gt;ವರದಿಗಳ ಪ್ರಕಾರ ಅವರಿಬ್ಬರು ದೇಗುಲವೊಂದರಲ್ಲಿ ಯಾರಿಗೂ ಹೇಳದೇ ಯಾರ ಒಪ್ಪಿಗೆಯನ್ನು ಪಡೆಯದೇ ಮದುವೆಯಾಗಿದ್ದಾರೆ ಎನ್ನಲಾಗಿದೆ. ಯುವಕನ ಪಾಲಿಗೆ ಇದು ಪ್ರೇಮವಾದರೆ ಆತನ ಪೋಷಕರ ಪಾಲಿಗೆ ಇದು ನುಂಗಲಾರದ ತುತ್ತಾಗಿದೆ. ಅವರು ಮಗನ ಈ ಸಂಬಂಧವನ್ನು ಒಪ್ಪಿಕೊಳ್ಳಲಾಗದೇ ಚಡಪಡಿಸುತ್ತಿದ್ದಾರೆ.&lt;/p&gt;&lt;p&gt;ಇತ್ತ ಯುವಕನಿಗೆ ಇದು ನಿಜವಾದ ಪ್ರೀತಿಯೇ ಅಥವಾ ತಾತ್ಕಾಲಿಕ ಆಕರ್ಷಣೆಯೋ ತಿಳಿಯದಾಗಿದೆ. ಅವರ ನಡುವಿನ 19 ವರ್ಷದ ವಯಸ್ಸಿನ ಅಂತರ ಹಾಗೂ ಅವರ ರಹಸ್ಯ ಮದುವೆ ಕುಟುಂಬವನ್ನು ಆಘಾತಕ್ಕೆ ದೂಡಿದೆ. ಆನ್&zwnj;ಲೈನ್ ಚಾಟಿಂಗ್ ಹಾಗೂ ಪ್ರೀತಿಗೂ ವಾಸ್ತವ ಬದುಕಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಆನ್&zwnj;ಲೈನ್&zwnj;ನಲ್ಲಿ ಸಿಕ್ಕವಳಿಗಾಗಿ ಕುಟುಂಬ ತೊರೆದ ಯುವಕನ ಈ ಸ್ಟೋರಿ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;A 21-year-old boy from Amroha fell for a 40-year-old widow through reels and chats. This is how social media is changing real-life decisions.Without telling their families, they got married in a temple. For the boy, it was love; for the family, it&rsquo;s a total disaster.Is it&hellip; pic.twitter.com/xgxfxgm6Kc&lt;/p&gt;&lt;p&gt;&mdash; Rajveer (@RajveerIND) April 15, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>relationship</category>
            <dc:creator>Anusha Kb</dc:creator>
            <atom:link href="https://kannada.asianetnews.com/relationship/21-year-old-boy-runs-away-from-home-married-to-woman-his-mothers-age/articleshow-orzy0rr"/>
        </item>
        <item>
            <title><![CDATA[ಕಾಲೇಜಿಗೆ ಹೋಗೋದಾಗಿ ಸುಳ್ಳಿ ಹೇಳಿ ಓಯೋ ರೂಮಿಗೆ ಹೋದ ಮಗಳು; ಬಾಯ್‌ಫ್ರೆಂಡ್ ಸಮೇತ ತಾಯಿಗೆ ಸಿಕ್ಕಿಬಿದ್ದ ವಿಡಿಯೋ ವೈರಲ್]]></title>
            <link>https://kannada.asianetnews.com/relationship/mother-catches-daughter-with-boyfriend-in-hotel-room-viral-video-scripted-or-real-sat/articleshow-v8gcz0q</link>
            <guid isPermaLink="true">https://kannada.asianetnews.com/relationship/mother-catches-daughter-with-boyfriend-in-hotel-room-viral-video-scripted-or-real-sat/articleshow-v8gcz0q</guid>
            <pubDate>Fri, 17 Apr 2026 16:30:16 +0530</pubDate>
            <description><![CDATA[&lt;p&gt;ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಸುಳ್ಳು ಹೇಳಿ, ತನ್ನ ಬಾಯ್&zwnj;ಫ್ರೆಂಡ್ ಜೊತೆ ಓಯೋ ರೂಮಿಗೆ ಹೋದ ಯುವತಿಯನ್ನು ಆಕೆಯ ತಾಯಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರಲ್ಲಿ ಚರ್ಚೆ ಶುರುವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdh628g18tjvac4kj8pe2es,imgname-oyo-room-viral-video-1776423209232.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಅ&lt;/strong&gt;ಮ್ಮಾ ನಾನು ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟ ಮಗಳು, ಮನೆಯವರ ಕಣ್ಣಿಗೆ ಮಣ್ಣೆರಚಿ ಬಾಯ್&zwnj;ಫ್ರೆಂಡ್ ಜೊತೆಗೆ ಓಯೋ ರೂಮಿಗೆ ಹೋಗಿದ್ದಾಳೆ. ಇದರ ಬೆನ್ನಲ್ಲಿಯೇ ಗ್ರಾಮಸ್ಥರ ನೆರವಿನಿಂದ ಮಗಳು ಓಯೋ ರೂಮಿನಲ್ಲಿರುವುದು ಗೊತ್ತಾದ ಕೂಡಲೇ, ಸಹಾಯಕ್ಕೆ ಒಂದಿಬ್ಬರನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದಾರೆ. ಬಾಯ್&zwnj;ಫ್ರೆಂಡ್ ಜೊತೆಗೆ ಮಗಳು ರೆಡ್ ಹ್ಯಾಂಡ್&zwnj; ಆಗಿ ಸಿಕ್ಕಿಬಿದ್ದಿದ್ದು, ಮುಂದೇನಾಯ್ತು ಎಂಬುದನ್ನು ವೈರಲ್ ವಿಡಿಯೋದಲ್ಲಿ ನೋಡಿ..&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವ ವಿಡಿಯೋಗಳು ವೈರಲ್ ಆಗುತ್ತವೆ ಮತ್ತು ಯಾಕೆ ಜನಪ್ರಿಯತೆ ಪಡೆಯುತ್ತವೆ ಎಂದು ಊಹಿಸುವುದು ಕಷ್ಟ. ಪ್ರತಿದಿನ ನೂರಾರು ವಿಡಿಯೋಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಅದರಲ್ಲಿ ಕೆಲವು ನಮ್ಮನ್ನು ನಗಿಸಿದರೆ, ಇನ್ನು ಕೆಲವು ಶಾಕ್ ನೀಡುತ್ತವೆ. ಸದ್ಯ ಇಂಟರ್ನೆಟ್&zwnj;ನಲ್ಲಿ ಇಂತಹದ್ದೇ ಒಂದು ವಿಡಿಯೋ ಸಖತ್ ಸದ್ದು ಮಾಡುತ್ತಿದ್ದು, ನೆಟ್ಟಿಗರ ನಡುವೆ ಪರ-ವಿರೋಧದ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹೋಟೆಲ್ ಕೊಠಡಿಯೊಂದರಲ್ಲಿ ತನ್ನ ಪ್ರಿಯಕರನೊಂದಿಗೆ ಇದ್ದ ಯುವತಿಯನ್ನು ಆಕೆಯ ತಾಯಿ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ದೃಶ್ಯವಿದೆ. ಈ ಘಟನೆಯು ಇಂಟರ್ನೆಟ್&zwnj;ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.&lt;/p&gt;&lt;h2&gt;&lt;strong&gt;ಏನಿದು ವೈರಲ್ ವಿಡಿಯೋ ಕಥೆ?&lt;/strong&gt;&lt;/h2&gt;&lt;p&gt;ವಿಡಿಯೋದೊಂದಿಗೆ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಯುವತಿಯೊಬ್ಬಳು ಮನೆಯಲ್ಲಿ ಕಾಲೇಜಿಗೆ ಹೋಗುವುದಾಗಿ ಸುಳ್ಳು ಹೇಳಿ ತನ್ನ ಪ್ರೇಮಿಯೊಂದಿಗೆ ಹೋಟೆಲ್ ರೂಮ್&zwnj;ಗೆ ಹೋಗಿದ್ದಾಳೆ. ಆದರೆ ಮಗಳ ಮೇಲೆ ಮೊದಲೇ ಅನುಮಾನ ಹೊಂದಿದ್ದ ತಾಯಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೆ, ಸ್ಥಳೀಯ ಪೊಲೀಸರನ್ನೂ ಜೊತೆಗೆ ಕರೆದುಕೊಂಡು ಹೋಟೆಲ್ ರೂಮ್&zwnj;ಗೆ ನುಗ್ಗಿದ್ದಾರೆ. ಹೋಟೆಲ್ ಕೊಠಡಿಯ ಬಾಗಿಲು ತೆರೆಯುತ್ತಿದ್ದಂತೆಯೇ ತಾಯಿ ಮತ್ತು ಪೊಲೀಸರು ಒಳಗೆ ಪ್ರವೇಶಿಸಿದ್ದಾರೆ.&lt;/p&gt;&lt;p&gt;ರೂಮಿನೊಳಗೆ ಮಗಳು ಮತ್ತು ಆಕೆಯ ಪ್ರಿಯಕರ ಇರುವುದನ್ನು ಕಂಡ ತಾಯಿ ವಿಪರೀತ ಕೋಪಗೊಂಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ, ತಾಯಿ ತನ್ನ ಮಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ಆಕೆಗೆ ಕೆನ್ನೆಗೆ ಬಾರಿಸುತ್ತಾರೆ. ಅಷ್ಟಕ್ಕೇ ನಿಲ್ಲದೆ ಆಕೆಯ ಜೊತೆಗಿದ್ದ ಯುವಕನಿಗೂ ಧರ್ಮದೇಟು ನೀಡುತ್ತಾರೆ. ಹೋಟೆಲ್ ರೂಮ್&zwnj;ನಲ್ಲಿ ವಾತಾವರಣ ತೀರಾ ಉದ್ವಿಗ್ನಗೊಂಡಿರುವುದನ್ನು ನಾವು ಕಾಣಬಹುದು. ಅಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಕೋಪಗೊಂಡ ತಾಯಿಯನ್ನು ಸಮಾಧಾನಪಡಿಸಲು ಮತ್ತು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಾರೆ. ಈ ಇಡೀ ಹೈಡ್ರಾಮಾವನ್ನು ರೂಮಿನಲ್ಲಿದ್ದ ಯಾರೋ ಮೊಬೈಲ್&zwnj;ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಈಗ ಅದು 'ಎಕ್ಸ್' (ಟ್ವಿಟ್ಟರ್) ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;मां आई पुलिस लेकर होटल में बेटी कॉलेज जाने को बोलकर प्रेमी के साथ रंगे हाथ पकड़ाई pic.twitter.com/ZhZZpQcnu7&lt;/p&gt;&lt;p&gt;&mdash; ROHIT SINGH (@desHi__chora) April 16, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ನಿಜವೋ ಅಥವಾ ಸುಳ್ಳೋ? ನೆಟ್ಟಿಗರ ಚರ್ಚೆ:&lt;/strong&gt;&lt;/h2&gt;&lt;p&gt;ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಬಾಕ್ಸ್&zwnj;ನಲ್ಲಿ ಎರಡು ಬಣಗಳಾಗಿ ವಿಂಗಡಣೆಯಾಗಿದ್ದಾರೆ. ಕೆಲವರು ಇದು ನಿಜವಾದ ಘಟನೆ ಎಂದು ನಂಬಿ ಕಮೆಂಟ್ ಮಾಡುತ್ತಿದ್ದಾರೆ. &lsquo;ಮನೆಯವರಿಗೆ ಸುಳ್ಳು ಹೇಳಿ ಇಂತಹ ಕೆಲಸ ಮಾಡಿದರೆ ತಕ್ಕ ಶಾಸ್ತಿಯೇ ಆಗುತ್ತದೆ&rsquo;, 'ನಂಬಿಕೆಗೆ ದ್ರೋಹ ಬಗೆದರೆ ಕೊನೆಗೆ ಇಂತಹ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗುತ್ತದೆ' ಎಂದು ಕೆಲವರು ಪೋಷಕರ ಶಿಸ್ತನ್ನು ಬೆಂಬಲಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಓಯೋ ರೂಮ್ ಬಾಗಿಲು ಹಾಕೊಳ್ಳೋದನ್ನ ಮರೆತ ಜೋಡಿ; ಮೆಟ್ರೋ ನಿಲ್ದಾಣದಿಂದ ಕೂಗಿ ಹೇಳಿದ ವ್ಯಕ್ತಿ&lt;/p&gt;&lt;p&gt;ಆದರೆ ಇನ್ನು ಬಹುಪಾಲು ಜನರು ಇದು ಕೇವಲ ಸೋಷಿಯಲ್ ಮೀಡಿಯಾ ಪ್ರಚಾರಕ್ಕಾಗಿ, ವ್ಯೂಸ್ ಹಾಗೂ ಸಬ್&zwnj;ಸ್ಕ್ರೈಬರ್ಸ್&zwnj;ಗಳನ್ನು ಗಿಟ್ಟಿಸಿಕೊಳ್ಳಲು ಮಾಡಿದ 'ಸ್ಕ್ರಿಪ್ಟೆಡ್' ಅಥವಾ ನಕಲಿ ವಿಡಿಯೋ ಎಂದು ವಾದಿಸುತ್ತಿದ್ದಾರೆ. 'ಇವರೆಲ್ಲರೂ ತುಂಬಾ ಚೆನ್ನಾಗಿ ನಟಿಸುತ್ತಿದ್ದಾರೆ, ಆಸ್ಕರ್ ಪ್ರಶಸ್ತಿ ಕೊಡಬೇಕು, 'ವ್ಯೂಸ್&zwnj;ಗಾಗಿ ಜನರನ್ನು ಮೂರ್ಖರನ್ನಾಗಿ ಮಾಡಲು ಇಂತಹ ಡ್ರಾಮಾಗಳನ್ನು ಸೃಷ್ಟಿಸುತ್ತಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇನ್&zwnj;ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್&zwnj;ಗಾಗಿ ಇಂತಹ ನಕಲಿ ಜಗಳಗಳ ವಿಡಿಯೋಗಳನ್ನು ಸೃಷ್ಟಿಸುವುದು ಒಂದು ದಂಧೆಯಾಗಿ ಮಾರ್ಪಟ್ಟಿದೆ.&lt;/p&gt;&lt;p&gt;ಈ ವಿಡಿಯೋ ನಿಜವೋ ಅಥವಾ ಕೇವಲ ನಾಟಕವೋ ಎಂಬುದು ಇನ್ನು ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೂ, ಸುಳ್ಳು ಮತ್ತು ನಂಬಿಕೆ ದ್ರೋಹದ ಮೇಲಣ ಈ ವಿಡಿಯೋ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ.&lt;/p&gt;]]></content:encoded>
            <category>relationship</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/mother-catches-daughter-with-boyfriend-in-hotel-room-viral-video-scripted-or-real-sat/articleshow-v8gcz0q"/>
        </item>
        <item>
            <title><![CDATA[ಎಲೆಕ್ಷನ್​ ಗೆಲ್ಲಲು ಒಂದೇ ಗ್ಯಾರೆಂಟಿ ಸಾಕೆಂದು ತೋರಿದ Brahmagantu ದೀಪಾ: ಕೇಸ್​ ಹಾಕಲು ವೀಕ್ಷಕರು ರೆಡಿ]]></title>
            <link>https://kannada.asianetnews.com/gallery/tv-talk/brahmagantu-serial-twist-deepa-gifted-gas-cylinder-to-ladies-club-members-suc-x7i5o7n</link>
            <guid isPermaLink="true">https://kannada.asianetnews.com/gallery/tv-talk/brahmagantu-serial-twist-deepa-gifted-gas-cylinder-to-ladies-club-members-suc-x7i5o7n</guid>
            <pubDate>Fri, 17 Apr 2026 13:39:59 +0530</pubDate>
            <description><![CDATA[ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನು ಮನೆಗೆ ತಂದ ಸೌಂದರ್ಯಳಿಗೆ ಈಗ ಸಂಕಷ್ಟ ಎದುರಾಗಿದೆ. ಮಹಿಳಾ ಮಂಡಳದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೌಂದರ್ಯಳನ್ನು ಸೋಲಿಸಲು, ದೀಪಾಳು ಉಚಿತ ಸಿಲಿಂಡರ್ ಗ್ಯಾರೆಂಟಿಯ ಆಮಿಷವೊಡ್ಡಿ ಜಾಜಿಯನ್ನು ಕಣಕ್ಕಿಳಿಸಿದ್ದಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd7mfnd50g9rcsnmr2drja8,imgname-brahmagantu-01-1776413195949.jpg" type="image/jpeg" height="390" width="690"/>
            <content:encoded><![CDATA[ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನು ಮನೆಗೆ ತಂದ ಸೌಂದರ್ಯಳಿಗೆ ಈಗ ಸಂಕಷ್ಟ ಎದುರಾಗಿದೆ. ಮಹಿಳಾ ಮಂಡಳದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೌಂದರ್ಯಳನ್ನು ಸೋಲಿಸಲು, ದೀಪಾಳು ಉಚಿತ ಸಿಲಿಂಡರ್ ಗ್ಯಾರೆಂಟಿಯ ಆಮಿಷವೊಡ್ಡಿ ಜಾಜಿಯನ್ನು ಕಣಕ್ಕಿಳಿಸಿದ್ದಾಳೆ.&lt;img&gt;&lt;p&gt;ಬ್ರಹ್ಮಗಂಟು ಸೀರಿಯಲ್​ (Brahmagantu Serial) ಸದ್ಯ ದಿಶಾ ಮತ್ತು ಸೌಂದರ್ಯಳ ನಡುವಿನ ಸಮರವಾಗಿ ಮಾರ್ಪಟ್ಟಿದೆ. ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನೇ ಚಿರುಗೆ ಮದ್ವೆ ಮಾಡಿಸಿರೋ ಸೌಂದರ್ಯಳಿಗೆ ಇದೀಗ ಸಂಕಷ್ಟ ಎದುರಾಗಿದೆ.&lt;/p&gt;&lt;img&gt;&lt;p&gt;ನಾನೇ ಸಾಕಿದಾ ಗಿಣಿ... ಎಂದು ಹಾಡುವ ಹೇಳುವ ಸ್ಥಿತಿ ಸೌಂದರ್ಯಳಿಗೆ ಬಂದಿದೆ. ಸೌಂದರ್ಯಳ ಹುಟ್ಟಡಗಿಸಲು ದೀಪಾ ದಿಶಾ ಆಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಇದೀಗ ಮಹಿಳಾ ಮಂಡಳದ ಅಧ್ಯಕ್ಷ ಸ್ಥಾನಕ್ಕೆ ಸೌಂದರ್ಯ ವಿರುದ್ಧ ಜಾಜಿಯನ್ನು ನಿಲ್ಲಿಸಿದ್ದಾಳೆ.&lt;/p&gt;&lt;img&gt;&lt;p&gt;ಪ್ರತಿಬಾರಿಯೂ ಅವಿರೋಧವಾಗಿ ಆಯ್ಕೆಯಾಗ್ತಿರೋ ಸೌಂದರ್ಯಳನ್ನು ಸೋಲಿಸೋದು ಅಷ್ಟು ಸುಲಭವಲ್ಲ ಎನ್ನೋದು ದೀಪಾಳಿಗೆ ಗೊತ್ತಿರುವ ಕಾರಣ, ಜನರು ವೋಟ್​ ಹಾಕಲು ಉಚಿತಕ್ಕಾಗಿ ಹಂಬಲಿಸೋದೂ ರಿಯಲ್​ ಲೈಫ್​ನಲ್ಲಿ ನಡೆಯುವುದನ್ನೇ ಈ ಸೀರಿಯಲ್​ನಲ್ಲಿಯೂ ತೋರಿಸಲಾಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ದೀಪಾ, ಎಲ್ಲರಿಗೂ ಕೊಟ್ಟಿರೋದು ಒಂದೇ ಗ್ಯಾರೆಂಟಿ. ಅದು ಸಿಲಿಂಡರ್​ ನೀಡೋದು. ಎಲೆಕ್ಷನ್​ ಬಂದಾಗ ಒಂದು ಮತಕ್ಕೆ 5-10 ಸಾವಿರ ಕೊಡುವುದು ಇಂದಿಗೂ ನಡೆದೇ ಇದೆ. ಅದೇ ರೀತಿ ಗ್ಯಾರೆಂಟಿಗಳ ಸುರಿಮಳೆಯೂ ಶುರುವಾಗುತ್ತದೆ. ಇದೀಗ ಸಿಲಿಂಡರ್​ ನೀಡುವ ಮೂಲಕ ದಿಶಾ ಜಾಜಿಯನ್ನು ಗೆಲ್ಲಿಸುತ್ತಿದ್ದಾಳೆ.&lt;/p&gt;&lt;img&gt;&lt;p&gt;ಸದ್ಯ ಚುನಾವಣೆ ರಿಸಲ್ಟ್​ ಬರಬೇಕಿದೆ ಅಷ್ಟೇ. ಆದರೆ ಇದು ಸೀರಿಯಲ್​ ಆಗಿರೋ ಕಾರಣ, ಅದಕ್ಕಿಂತ ಮುಖ್ಯವಾಗಿ ಮಹಿಳೆಯರಿಗೇ ಗಿಫ್ಟ್​ ಸಿಕ್ಕಮೇಲೆ ಇನ್ನು ಕೇಳಬೇಕೆ, ಜಾಜಿ ಗೆಲ್ಲೋದು ಕನ್​ಫರ್ಮ್​ ಆಗಿದೆ.&lt;/p&gt;&lt;img&gt;&lt;p&gt;ಆದರೆ, ಇದರ ಪ್ರೊಮೋ ರಿಲೀಸ್​ ಆಗುತ್ತಲೇ ಈ ಬಗ್ಗೆ ತನಿಖೆ ಮಾಡಬೇಕು ಎಂದು ನೆಟ್ಟಿಗರು ತಮಾಷೆಯಿಂದ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಕಾರಣ, ಸದ್ಯ ಸಿಲಿಂಡರ್​ ಸ್ಟಾಕ್​ ಇಲ್ಲ. ಒಬ್ಬರಿಗೆ ಒಂದು ಸಿಲಿಂಡರ್​ ಸಿಗೋದೇ ಕಷ್ಟ ಆಗಿರುವಾಗ, ಗಿಫ್ಟ್​ ಕೊಡಲು ಅಷ್ಟೆಲ್ಲಾ ಸಿಲಿಂಡರ್​ ಹೇಗೆ ಬಂದಿದೆ, ಇದರ ತನಿಖೆ ಆಗಬೇಕು ಎನ್ನುತ್ತಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್​ ಮಾರಾಟ ಆಗ್ತಿರೋ ಕಾರಣ, ಸೀರಿಯಲ್​ ಮೇಲೆ ಕೇಸ್​ ಹಾಕಬೇಕು ಎಂದು ತಮಾಷೆಯಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ!&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/brahmagantu-serial-twist-deepa-gifted-gas-cylinder-to-ladies-club-members-suc-x7i5o7n"/>
        </item>
    </channel>
</rss>
