<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 17 Jun 2026 20:33:31 +0530</lastBuildDate>
        <atom:link href="https://kannada.asianetnews.com/rss/relationship" rel="self" type="application/rss+xml"/>
        <item>
            <title><![CDATA[Bengaluru: ಲವ್ ಮಾಡಿ ಸಾಯೋದಕ್ಕೆ ನಿರ್ಧಾರ, ಲೇಡಿಸ್ ಫಸ್ಟ್ ಎಂದ ಪ್ರಿಯಕರ; 22ರ ಭವಾನಿ ಸಾವು, ಆಟೋ ಅಂಕಲ್ ಎಸ್ಕೇಪ್!]]></title>
            <link>https://kannada.asianetnews.com/karnataka-districts/bengaluru-love-tragedy-22-year-old-girl-bhavani-dies-pact-with-married-auto-driver/articleshow-y5hdmzm</link>
            <guid isPermaLink="true">https://kannada.asianetnews.com/karnataka-districts/bengaluru-love-tragedy-22-year-old-girl-bhavani-dies-pact-with-married-auto-driver/articleshow-y5hdmzm</guid>
            <pubDate>Wed, 17 Jun 2026 19:17:24 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬನ ಪ್ರೀತಿಯ ಬಲೆಗೆ ಬಿದ್ದ 22 ವರ್ಷದ ಯುವತಿ ಭವಾನಿ, ಇಬ್ಬರೂ ಒಟ್ಟಿಗೆ ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ವಿಷ ಕುಡಿಯುವ ನಾಟಕವಾಡಿದ ಪ್ರಿಯಕರ ಬದುಕುಳಿದಿದ್ದು, ಯುವತಿ ಮಾತ್ರ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvax8vj2c89m83pcrh9a38ry,imgname-magadi-bhavani-death-bengaluru-1781703929409.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: ಪ್ರೀ&lt;/strong&gt;ತಿ ಎನ್ನುವುದು ಎಷ್ಟು ಸುಂದರವೋ, ಅಷ್ಟೇ ಅಪಾಯಕಾರಿ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಆಟೋ ಚಾಲಕನೊಬ್ಬನ ಪ್ರೇಮಪಾಶಕ್ಕೆ ಬಿದ್ದ 22 ವರ್ಷದ ಯುವತಿ ಭವಾನಿ, ಹೆತ್ತವರ ಭಯಕ್ಕೆ ಹಾಗೂ ಪ್ರಿಯಕರನ ಮಾತು ನಂಬಿ ಸಾವಿಗೆ ಶರಣಾಗಿದ್ದಾಳೆ. ದುರಂತವೆಂದರೆ ಇಬ್ಬರೂ ಸಾಯೋಣ ಎಂದು ವಿಷ ಕುಡಿದಿದ್ದರೂ, ಯುವತಿ ಸಾವನ್ನಪ್ಪಿದ್ದಾಳೆ. ಆದರೆ ನಾನು ವಿಷ ಕುಡಿಯುತ್ತೇನೆಂದು ಬಾಯಿ ಮೇಲೆ ವಿಷ ಹಾಕಿಕೊಂಡು ನಾಟಕವಾಡಿದ ಆಟೋ ಅಂಕಲ್ ಪ್ರಿಯಕರ ಮಾತ್ರ ಸಾವಿನಿಂದ ಪಾರಾಗಿದ್ದಾನೆ.&lt;/p&gt;&lt;h2&gt;&lt;strong&gt;ಯಾರು ಈ ಭವಾನಿ?:&lt;/strong&gt;&lt;/h2&gt;&lt;p&gt;ಮಾಗಡಿ ಮೂಲದ ಭವಾನಿ ಎರಡು ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಳು. ಮೊಬೈಲ್ ಅಂಗಡಿಯೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಈಕೆ, ಸ್ವತಂತ್ರವಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಮಗಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಹೆತ್ತವರು ಇತ್ತೀಚೆಗಷ್ಟೇ ಆಕೆಗೆ ಮದುವೆ ನಿಶ್ಚಯಿಸುವ ಬಗ್ಗೆ ಮಾತನಾಡಿದ್ದರು. ಭವಾನಿ ಕೂಡ ಅದಕ್ಕೆ ಒಪ್ಪಿಗೆ ನೀಡಿ ಬೆಂಗಳೂರಿಗೆ ಮರಳಿದ್ದಳು. ಆದರೆ, ಮರಳಿದ ಎರಡೇ ದಿನಕ್ಕೆ ಆಕೆ ಹೆಣವಾಗಿ ಪತ್ತೆಯಾಗಿದ್ದಾಳೆ.&lt;/p&gt;&lt;h3&gt;&lt;strong&gt;ಆಟೋ ಚಾಲಕನೊಂದಿಗೆ ಲವ್ ಸ್ಟೋರಿ:&lt;/strong&gt;&lt;/h3&gt;&lt;p&gt;ತನಿಖೆಯ ವೇಳೆ ಪೊಲೀಸರಿಗೆ ಈಕೆಯ ನಿಗೂಢ ಸಾವಿನ ಹಿಂದಿನ ಕಥೆ ಬಯಲಾಗಿದೆ. ಭವಾನಿಗೆ ಆಟೋ ಚಾಲಕನೊಬ್ಬನ ಪರಿಚಯವಾಗಿ ಅದು ಪ್ರೀತಿಯಾಗಿ ಬದಲಾಗಿತ್ತು. ಆದರೆ ಆ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದೆ ಎಂಬ ಸುಳಿವಿಲ್ಲದೇ ಇಬ್ಬರೂ ಲಿವಿಂಗ್ ಟುಗೆದರ್ ರೀತಿಯಲ್ಲಿ ಒಟ್ಟಿಗೆ ಇದ್ದರು. ಇನ್ನು ಆಟೋ ಡ್ರೈವರ್ ಮಾತ್ರ ತಾನೇ ಮದುವೆಯಾಗುವ ಹುಡುಗಿ ಎಂದು ಹೇಳಿಕೊಂಡು ಆಗಾಗ ಮನೆಗೆ ಬಂದು ಹೋಗುತ್ತಿದ್ದನು. ಆದರೆ, ಕೆಲವು ದಿನಗಳು ಕಳೆದಂತೆ ಈತನಿಗಾಗಲೇ ಮದುವೆಯಾಗಿ ಒಂದು ಮಗನೂ ಇದ್ದ ಎಂಬ ಸತ್ಯ ಭವಾನಿಗೆ ತಿಳಿದಿದೆ. ಆಗ ಯುವತಿ ಈಗಾಗಲೇ ಮದುವೆಯಾದ ಪ್ರಿಯಕರನೊಂದಿಗೆ 2ನೇ ಮದುವೆಗೆ ಮನೆಯಲ್ಲಿ ಒಪ್ಪುವುದಿಲ್ಲ ಎಂಬ ಭಯ ಆಕೆಗೆ ಕಾಡತೊಡಗಿತ್ತು.&lt;/p&gt;&lt;p&gt;ಹೀಗಾಗಿ, ಮನೆಯವರು ತೋರಿಸಿದ ಹುಡುಗನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಒಪ್ಪಿಗೆಯನ್ನೂ ಕೊಟ್ಟಿದ್ದಳು. ಆದರೆ, ಇಲ್ಲಿ ಮದುವೆಯಾಗಿರುವ ಆಟೋ ಅಂಕಲ್&zwnj;ನನ್ನು ಬಿಟ್ಟಿರಲಾಗದೇ ಆತನೊಂದಿಗೆ ಮದುವೆಯಾಗಿ ಹೆತ್ತವರಿಗೆ ಮುಖ ತೋರಿಸಲಾಗದ ಸಂಕಟದಿಂದ ಪರದಾಡುತ್ತಿದ್ದಳು. ಆಗ, ಭವಾನಿ ವಾಸವಿದ್ದ ಮನೆಗೆ ಬಂದ ಆಟೋ ಡ್ರೈವರ್ ನಾವಿಬ್ಬರೂ ಒಟ್ಟಾಗಿ ಸಾಯೋಣ ಎಂದು ಆಕೆಯನ್ನು ಒಪ್ಪಿಸಿದ್ದಾನೆ. ನಂತರ, ವಿಷ ಸೇವನೆ ಮಾಡಿ ಸಾಯುವುದಕ್ಕೆ ತೀರ್ಮಾನಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಾಯುವ ಮುನ್ನ ನಡೆದಿದ್ದೇನು?:&lt;/strong&gt;&lt;/h2&gt;&lt;p&gt;ಮನೆಯಲ್ಲಿ ಇಬ್ಬರೂ ವಿಷ ಕುಡಿದಿದ್ದಾರೆ. ಈ ವೇಳೆ ಪ್ರಿಯಕರ ತಾನು ಸ್ವಲ್ಪ ವಿಷ ಕುಡಿದು, ಉಳಿದದ್ದನ್ನು ಬಾವಿ ಮೇಲೆ ಚೆಲ್ಲಿಕೊಂಡಿದ್ದಾನೆ. ಕೊನೆಗೆ ತನಗೆ ಹೆಂಡತಿ-ಮಕ್ಕಳಿರುವ ಬಗ್ಗೆ ತಿಳಿದು ತಾನು ಸಾಯಬಾರದು ಎಂದು, ಆದರೆ ಯುವತಿ ಸಾಯಬೇಕೆಂದು ಆಕೆಯ ಕತ್ತು ಹಿಸುಕಿದ್ದಾನೆ ಎನ್ನಲಾಗಿದೆ. ಪರಿಣಾಮವಾಗಿ ಭವಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆದರೆ ವಿಷ ಕುಡಿದಂತೆ ನಾಟಕವಾಡಿದ್ದ ಪ್ರಿಯಕರ ಮಾತ್ರ ಸಾವಿನಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-love-tragedy-22-year-old-girl-bhavani-dies-pact-with-married-auto-driver/articleshow-y5hdmzm"/>
        </item>
        <item>
            <title><![CDATA[Chanakya Niti: ಹುಡುಗರೇ.. ಹುಡುಗಿಯರ ಮನ ಗೆಲ್ಲಬೇಕಾ? ಚಾಣಕ್ಯ ಹೇಳಿದ ರಹಸ್ಯ ಗುಣಗಳಿವು!]]></title>
            <link>https://kannada.asianetnews.com/gallery/relationship/qualities-men-must-have-to-attract-women-according-to-chanakya-niti-gvd-kf7fg05</link>
            <guid isPermaLink="true">https://kannada.asianetnews.com/gallery/relationship/qualities-men-must-have-to-attract-women-according-to-chanakya-niti-gvd-kf7fg05</guid>
            <pubDate>Wed, 17 Jun 2026 19:12:50 +0530</pubDate>
            <description><![CDATA[&lt;p&gt;Chanakya Niti: ಹುಡುಗಿಯರಿಗೆ ಕೇವಲ ಆಸ್ತಿ, ಸೌಂದರ್ಯ ಇರೋ ಹುಡುಗ್ರು ಮಾತ್ರ ಇಷ್ಟ ಆಗ್ತಾರೆ ಅಂತಾ ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ ಚಾಣಕ್ಯನ ಪ್ರಕಾರ, ಮಹಿಳೆಯರು ಪುರುಷರಲ್ಲಿ ಯಾವ ಗುಣಗಳನ್ನು ಹೆಚ್ಚು ಇಷ್ಟಪಡುತ್ತಾರೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvax0ngjm7484v80r7aw7nps,imgname-cchn-1781703661074.png" type="image/jpeg" height="390" width="690"/>
            <content:encoded><![CDATA[&lt;p&gt;Chanakya Niti: ಹುಡುಗಿಯರಿಗೆ ಕೇವಲ ಆಸ್ತಿ, ಸೌಂದರ್ಯ ಇರೋ ಹುಡುಗ್ರು ಮಾತ್ರ ಇಷ್ಟ ಆಗ್ತಾರೆ ಅಂತಾ ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ ಚಾಣಕ್ಯನ ಪ್ರಕಾರ, ಮಹಿಳೆಯರು ಪುರುಷರಲ್ಲಿ ಯಾವ ಗುಣಗಳನ್ನು ಹೆಚ್ಚು ಇಷ್ಟಪಡುತ್ತಾರೆ ಗೊತ್ತಾ?&lt;/p&gt;&lt;img&gt;&lt;p&gt;ನೀತಿಶಾಸ್ತ್ರದ ಪಂಡಿತ ಚಾಣಕ್ಯ ಎಲ್ಲರಿಗೂ ಚಿರಪರಿಚಿತ. ಅವರ ಸೂತ್ರಗಳನ್ನು ಇಂದಿಗೂ ಅನೇಕರು ಪಾಲಿಸುತ್ತಾರೆ. ಚಾಣಕ್ಯ ನೀತಿಯನ್ನು ಅನುಸರಿಸಿದರೆ ಜೀವನದಲ್ಲಿ ಯಶಸ್ಸು, ಸಂಪತ್ತು ಮತ್ತು ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಚಾಣಕ್ಯನ ಪ್ರಕಾರ, ಮಹಿಳೆಯರು ಪುರುಷರಲ್ಲಿ ಏನನ್ನು ನೋಡುತ್ತಾರೆ? ಯಾವ ಗುಣಗಳನ್ನು ನೋಡಿ ಇಷ್ಟಪಡುತ್ತಾರೆ? ಕೇವಲ ಸೌಂದರ್ಯ, ಹಣ ಇದ್ದರೆ ಸಾಕೇ? ಈ ಬಗ್ಗೆ ಈಗ ತಿಳಿಯೋಣ.&lt;/p&gt;&lt;img&gt;&lt;p&gt;ಮಹಿಳೆಯರು ಪುರುಷರಲ್ಲಿ ಸೌಂದರ್ಯಕ್ಕಿಂತ ಹೆಚ್ಚಾಗಿ ತಾಳ್ಮೆಯನ್ನು ನೋಡುತ್ತಾರೆ. ಅದರಲ್ಲೂ ತಾವು ಹೇಳುವುದನ್ನು ಅವರು ಕೇಳುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದಕ್ಕೆ ಹೆಚ್ಚು ಗಮನ ಕೊಡುತ್ತಾರೆ. ತಾವು ಹೇಳುವ ವಿಷಯಗಳನ್ನು ಶ್ರದ್ಧೆಯಿಂದ ಕೇಳಬೇಕೆಂದು ಬಯಸುತ್ತಾರೆ. ತಮ್ಮ ಮಾತುಗಳನ್ನು ಕೇಳದೆ ನಿರ್ಲಕ್ಷ್ಯ ಮಾಡುವ ಹುಡುಗರು ಮಹಿಳೆಯರಿಗೆ ಇಷ್ಟವಾಗುವುದಿಲ್ಲ.&lt;/p&gt;&lt;img&gt;&lt;p&gt;ಪ್ರತಿಯೊಬ್ಬ ಹುಡುಗನಲ್ಲಿಯೂ ಮಹಿಳೆಯರು ಮೊದಲು ನೋಡುವುದೇ ಪ್ರಾಮಾಣಿಕತೆ. ತಮ್ಮ ಜೀವನಕ್ಕೆ ಬರುವ ಹುಡುಗ ತುಂಬಾ ಪ್ರಾಮಾಣಿಕನಾಗಿರಬೇಕು ಎಂದು ಬಯಸುತ್ತಾರೆ. ಪ್ರಾಮಾಣಿಕವಾಗಿರುವವರು ತಮ್ಮನ್ನು ಎಂದಿಗೂ ಮೋಸ ಮಾಡುವುದಿಲ್ಲ ಮತ್ತು ಜೀವನಪೂರ್ತಿ ಸಂತೋಷವಾಗಿ ನೋಡಿಕೊಳ್ಳುತ್ತಾರೆ ಎಂದು ನಂಬುತ್ತಾರೆ. ಅಂತಹ ವ್ಯಕ್ತಿಯನ್ನೇ ಅವರು ಬಯಸುತ್ತಾರೆ. ಅಷ್ಟೇ ಅಲ್ಲ, ತಮ್ಮೊಂದಿಗೆ ಬಹಳ ಗೌರವದಿಂದ ಇರಬೇಕು, ನಾಲ್ಕು ಜನರ ಮುಂದೆ ಅವಮಾನಿಸಬಾರದು ಎಂದೂ ನಿರೀಕ್ಷಿಸುತ್ತಾರೆ.&lt;/p&gt;&lt;img&gt;&lt;p&gt;ಹುಡುಗರಲ್ಲಿರುವ ಹಾಸ್ಯ ಪ್ರಜ್ಞೆಯನ್ನು (ಕಾಮಿಡಿ ಸೆನ್ಸ್) ಹುಡುಗಿಯರು ತುಂಬಾ ಇಷ್ಟಪಡುತ್ತಾರೆ. ಯಾವಾಗಲೂ ನಗುತ್ತಾ, ಸುತ್ತಮುತ್ತಲಿನವರನ್ನು ನಗಿಸುತ್ತಾ ಇರುವವರ ಕಡೆಗೆ ಮಹಿಳೆಯರು ಬೇಗನೆ ಆಕರ್ಷಿತರಾಗುತ್ತಾರೆ. ಉತ್ತಮ ಹಾಸ್ಯ ಪ್ರಜ್ಞೆ ಇರುವ ಹುಡುಗರೊಂದಿಗೆ ಇದ್ದರೆ ಜೀವನದಲ್ಲಿ ಹೆಚ್ಚು ಸಂತೋಷವಾಗಿರಬಹುದು ಎಂದು ಅವರು ನಂಬುತ್ತಾರೆ.&lt;/p&gt;]]></content:encoded>
            <category>relationship</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/relationship/qualities-men-must-have-to-attract-women-according-to-chanakya-niti-gvd-kf7fg05"/>
        </item>
        <item>
            <title><![CDATA[ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಗಂಡನನ್ನ ಏನೆಂದು ಕರೆಯುತ್ತಾರೆ ಗೊತ್ತಾ?]]></title>
            <link>https://kannada.asianetnews.com/webstories/relationship/how-husbands-are-addressed-in-various-indian-states-mrq-09u6g8g</link>
            <guid isPermaLink="true">https://kannada.asianetnews.com/webstories/relationship/how-husbands-are-addressed-in-various-indian-states-mrq-09u6g8g</guid>
            <pubDate>Wed, 17 Jun 2026 15:40:51 +0530</pubDate>
            <description><![CDATA[&lt;p&gt;ನಮ್ಮ ದೇಶ ಸಾಂಸ್ಕೃತಿಕ ವೈವಿಧ್ಯತೆಯಿಂದ ತುಂಬಿದೆ. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಭಾಷೆ, ಸಂಪ್ರದಾಯಗಳಿವೆ. ಅದೇ ರೀತಿ, ಗಂಡನನ್ನು ಕರೆಯುವ ರೀತಿ ಕೂಡ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಯಾವ ರಾಜ್ಯದಲ್ಲಿ ಹೆಂಡತಿಯರು ತಮ್ಮ ಗಂಡನನ್ನು ಏನೆಂದು ಕರೆಯುತ್ತಾರೆ ಅನ್ನೋದನ್ನು ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk3ke7h0emgdkjkgbf8fmpzt,imgname-rashmika-mandanna-vijay-deverakonda--11--1772868804128.jpg" type="image/jpeg" height="390" width="690"/>
            <category>relationship</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/relationship/how-husbands-are-addressed-in-various-indian-states-mrq-09u6g8g"/>
        </item>
        <item>
            <title><![CDATA[Lucky Zodiac Signs: ಈ 5 ರಾಶಿಯ ಮಹಿಳೆಯರು ಪತ್ನಿಯಾಗಿ ಬಂದರೆ, ನಿಮ್ಮ ಲೈಫೇ ಚೇಂಜ್ ಆಗುತ್ತೆ!]]></title>
            <link>https://kannada.asianetnews.com/gallery/relationship/top-5-female-zodiac-signs-for-a-happy-marriage-suh-1d4xg83</link>
            <guid isPermaLink="true">https://kannada.asianetnews.com/gallery/relationship/top-5-female-zodiac-signs-for-a-happy-marriage-suh-1d4xg83</guid>
            <pubDate>Wed, 17 Jun 2026 11:02:16 +0530</pubDate>
            <description><![CDATA[&lt;p&gt;ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯ ಮಹಿಳೆಯರು ನಮ್ಮ ಜೀವನಕ್ಕೆ ಬಂದರೆ ಸಾಕು, ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತೆ, ಮನೆ ತುಂಬಾ ಸಂತೋಷ ತುಂಬಿರುತ್ತೆ. ಆ 5 ಅದೃಷ್ಟದ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmhg8sfxadr5hes3hc0dcz0f,imgname-money-is-money-for-these-3-zodiac-signs-with-the-conjunction-of-venus-and-moon-1774408984061.jpg" type="image/jpeg" height="390" width="690"/>
            <content:encoded><![CDATA[&lt;p&gt;ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯ ಮಹಿಳೆಯರು ನಮ್ಮ ಜೀವನಕ್ಕೆ ಬಂದರೆ ಸಾಕು, ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತೆ, ಮನೆ ತುಂಬಾ ಸಂತೋಷ ತುಂಬಿರುತ್ತೆ. ಆ 5 ಅದೃಷ್ಟದ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ವೃಷಭ ರಾಶಿಯ ಮಹಿಳೆಯರು ಪತ್ನಿಯಾದರೆ, ಅವರು ಗಂಡನ ಕಷ್ಟ-ಸುಖಗಳನ್ನು ಮೊದಲು ಅರ್ಥಮಾಡಿಕೊಳ್ಳುತ್ತಾರೆ. ಎಷ್ಟೇ ದೊಡ್ಡ ಸಮಸ್ಯೆ ಬಂದರೂ ಗಂಡನನ್ನು ಕೈಬಿಡುವುದಿಲ್ಲ. ಇವರು ಮನೆಯಲ್ಲಿದ್ದರೆ ಹಣದ ಕೊರತೆ ಎಂಬ ಮಾತೇ ಇರುವುದಿಲ್ಲ. ಯಾಕೆಂದರೆ ಇವರು ಬಜೆಟ್ ನಿರ್ವಹಣೆಯಲ್ಲಿ ಎತ್ತಿದ ಕೈ.&lt;/p&gt;&lt;img&gt;&lt;p&gt;ಕರ್ಕಾಟಕ ರಾಶಿಯ ಮಹಿಳೆಯರು ತಮ್ಮ ಗಂಡನನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ. ಆಫೀಸ್&zwnj;ನಿಂದ ಸುಸ್ತಾಗಿ ಬಂದರೆ, ಒಂದು ಕಪ್ ಕಾಫಿ ಜೊತೆ ಅವರು ತೋರಿಸುವ ಪ್ರೀತಿಯೇ ಎಲ್ಲಾ ಟೆನ್ಶನ್ ದೂರ ಮಾಡುತ್ತದೆ. ಇವರು ಗಂಡನ ಕುಟುಂಬ ಮತ್ತು ಸಂಬಂಧಿಕರನ್ನು ಮನಸಾರೆ ಪ್ರೀತಿಸುತ್ತಾರೆ.&lt;/p&gt;&lt;img&gt;&lt;p&gt;ಕನ್ಯಾ ರಾಶಿಯ ಮಹಿಳೆಯರು ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ. ಗಂಡನ ವೃತ್ತಿಜೀವನದ ಬೆಳವಣಿಗೆಗೆ ಇವರು ನೀಡುವ ಐಡಿಯಾಗಳು ಅದ್ಭುತವಾಗಿರುತ್ತವೆ. ಮನೆಯನ್ನು ನಿರ್ವಹಿಸುವುದರಲ್ಲಿ ಇವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಇವರು ಗಂಡನಿಗೆ ಉತ್ತಮ ಪತ್ನಿ ಮಾತ್ರವಲ್ಲ, ಅತ್ಯುತ್ತಮ ಮಾರ್ಗದರ್ಶಕರೂ ಆಗಿರುತ್ತಾರೆ.&lt;/p&gt;&lt;img&gt;&lt;p&gt;ತುಲಾ ರಾಶಿಯ ಮಹಿಳೆಯರು ಇರುವ ಮನೆಯಲ್ಲಿ ಜಗಳಕ್ಕೆ ಜಾಗವೇ ಇರುವುದಿಲ್ಲ. ಗಂಡ ಮತ್ತು ಅತ್ತೆಯ ನಡುವೆ ಸಣ್ಣ ಮನಸ್ತಾಪ ಬಂದರೂ, ಅದನ್ನು ಮಾತನಾಡಿ ಸುಂದರವಾಗಿ ಬಗೆಹರಿಸುತ್ತಾರೆ. ಯಾವಾಗಲೂ ನಗುಮೊಗದಿಂದ ಇದ್ದು, ಗಂಡನ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುವುದರಲ್ಲಿ ಇವರು ನಿಸ್ಸೀಮರು.&lt;/p&gt;&lt;img&gt;&lt;p&gt;ಧನು ರಾಶಿಯ ಮಹಿಳೆಯರು ಪತ್ನಿಯಾಗಿ ಬಂದರೆ, ಜೀವನವು ಒಂದು ರೋಲರ್ ಕೋಸ್ಟರ್ ಸವಾರಿಯಂತೆ ಮಜವಾಗಿರುತ್ತದೆ. ಅವರು ಗಂಡನನ್ನು ಎಂದಿಗೂ ಬೇಸರದಿಂದ ಇರಲು ಬಿಡುವುದಿಲ್ಲ. ಪಾಸಿಟಿವ್ ಎನರ್ಜಿ, ಪ್ರಯಾಣ ಮಾಡುವುದು, ಹೊಸದಾಗಿ ಯೋಚಿಸುವುದು - ಹೀಗೆ ಎಲ್ಲದರಲ್ಲೂ ಗಂಡನ ಬೆಸ್ಟ್ ಫ್ರೆಂಡ್ ಆಗಿಬಿಡುತ್ತಾರೆ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/top-5-female-zodiac-signs-for-a-happy-marriage-suh-1d4xg83"/>
        </item>
        <item>
            <title><![CDATA[ಮಾಜಿ-ಹಾಲಿ ನಡುವೆ ಆಮೀರ್​ ಖಾನ್​ ಫುಲ್​ ಖುಷ್​- ಇನ್ನೊಂದು ದಾಖಲೆ ಬರೆದು ಶಾಕ್​ ಕೊಟ್ಟ ನಟ]]></title>
            <link>https://kannada.asianetnews.com/gallery/entertainment/aamir-khans-ex-wife-kiran-rao-and-bride-to-be-gauri-spratt-share-a-laugh-inside-car-suc-1e7xaxz</link>
            <guid isPermaLink="true">https://kannada.asianetnews.com/gallery/entertainment/aamir-khans-ex-wife-kiran-rao-and-bride-to-be-gauri-spratt-share-a-laugh-inside-car-suc-1e7xaxz</guid>
            <pubDate>Wed, 17 Jun 2026 17:36:24 +0530</pubDate>
            <description><![CDATA[&lt;p&gt;ಬಾಲಿವುಡ್ ನಟ ಆಮೀರ್ ಖಾನ್, ಬೆಂಗಳೂರಿನ ಗೌರಿ ಸ್ಪ್ರಾಟ್ ಜೊತೆ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಇಬ್ಬರು ಹಿಂದೂ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿರುವ ಆಮೀರ್, ಇದೀಗ &amp;nbsp;ಇನ್ನೊಂದು ಅಚ್ಚರಿ ಮೂಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvaqd0nzv539rwdgryt9v2xy,imgname-aamir-khan-1781697774271.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟ ಆಮೀರ್ ಖಾನ್, ಬೆಂಗಳೂರಿನ ಗೌರಿ ಸ್ಪ್ರಾಟ್ ಜೊತೆ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಇಬ್ಬರು ಹಿಂದೂ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿರುವ ಆಮೀರ್, ಇದೀಗ &amp;nbsp;ಇನ್ನೊಂದು ಅಚ್ಚರಿ ಮೂಡಿಸಿದ್ದಾರೆ.&lt;/p&gt;&lt;img&gt;&lt;p&gt;ಎಲ್ಲರಿಗೂ ತಿಳಿದಿರುವಂತೆ ಬಾಲಿವುಡ್​ ಖಾನ್​ ನಟರ ಪತ್ನಿಯರೆಲ್ಲಾ ಹಿಂದೂಗಳೇ. ಶಾರುಖ್ ಖಾನ್​ ಪತ್ನಿ ಗೌರಿ ಖಾನ್​ ಆದ್ರೆ ಆಮೀರ್​ ಖಾನ್​ ಇದಾಗಲೇ ಇಬ್ಬರು ಹೆಂಡ್ತಿಯರಿಗೆ ಡಿವೋರ್ಸ್​ ಕೊಟ್ಟಿದ್ದಾರೆ. ಅವರ ಹೆಸರು ರೀನಾ ಮತ್ತು ಕಿರಣ್​. ಸದ್ಯ ಗೌರಿ ಎನ್ನುವವರ ಜೊತೆ ಸುತ್ತಾಡುತ್ತಿದ್ದು, ಶೀಘ್ರದಲ್ಲಿಯೇ ಇವರ ಮದುವೆ ಎಂದೂ ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಜುಲೈನಲ್ಲಿ ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಅವರ ವಿವಾಹಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. 61ನೇ ವಯಸ್ಸಿನಲ್ಲಿ ಮೂರನೆಯ ಮದುವೆ ಆಗುತ್ತಿರುವುದಕ್ಕೆ ಇದಾಗಲೇ ಸಾಕಷ್ಟು ಟ್ರೋಲ್​​ ಕೂಡ ಎದುರಿಸುತ್ತಿರುವ ನಟ, ಮೂವರೂ ಪತ್ನಿಯರನ್ನು ಹಿಂದೂವೇ ಆಯ್ಕೆ ಮಾಡಿಕೊಂಡಿರುವುದಕ್ಕೂ ಸಾಕಷ್ಟು ಟೀಕೆ ಎದುರಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್​ನಲ್ಲಿ ಇದೊಂದು ದಾಖಲೆ ಎಂದೇ ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಇದರ ನಡುವೆ ಇದೀಗ ಅಭಿಮಾನಿಗಳು ಶಾಕ್​ ಆಗುವಂಥ ಇನ್ನೊಂದು ಘಟನೆ ನಡೆದಿದೆ. ಅದೇನೆಂದರೆ, ಆಮೀರ್​ ಖಾನ್​ ಹಾಲಿ ಮತ್ತು ಭಾವಿ ಪತ್ನಿಯರ ಜೊತೆ ಒಂದೇ ಕಾರಿನಲ್ಲಿ ಹೋಗುತ್ತಿದ್ದಾರೆ. ಇದ್ಯಾವ ರೀತಿಯ ಸಂಬಂಧವಯ್ಯಾ ಎಂದು ಹಲವರು ಪ್ರಶ್ನಿಸುತ್ತಿದ್ದರೆ, ಕಿರಣ್​ ಅವರ ನಡವಳಿಕೆಗೂ ಸಾಕಷ್ಟು ಅಚ್ಚರಿ ಮೂಡಿಬರುತ್ತಿದೆ. ಅಷ್ಟೇ ಅಲ್ಲದೇ, ಆಮೀರ್​ ಖಾನ್​ ಮುಂದೆ ಕುಳಿತಿದ್ದರೆ, ಕಿರಣ್ ಮತ್ತು ಗೌರಿ ಹಿಂದಿನ ಸೀಟಿನಲ್ಲಿ ನಗುತ್ತಿದ್ದಾರೆ. ಅವರ ಜೊತೆ ಮಗ ಆಜಾದ್ ಕೂಡ ಇದ್ದಾನೆ! ನಾರ್ಹವಾಗಿ, ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ, ಎರಡನೇ ಪತ್ನಿ ಕಿರಣ್ ರಾವ್ ಮತ್ತು ವಧು-ವರ ಗೌರಿ ಶನಿವಾರ ಆಸ್ಕರ್ ವಿಜೇತ ಲಗಾನ್&zwnj;ನ 25 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.&lt;/p&gt;&lt;img&gt;&lt;p&gt;ಗೌರಿ ಸ್ಪ್ರಾಟ್ ಮೂಲತಃ ಬೆಂಗಳೂರಿನವರಾಗಿದ್ದು, ತಮ್ಮ ಜೀವನದ ಬಹುಪಾಲು ಸಮಯವನ್ನು ಅಲ್ಲಿಯೇ ಕಳೆದಿದ್ದಾರೆ. ಅವರು ಬೆಂಗಳೂರಿನಲ್ಲಿ ಸಲೂನ್ ಹೊಂದಿದ್ದ ರೀಟಾ ಸ್ಪ್ರಾಟ್ ಅವರ ಪುತ್ರಿ.ಅವರ ಲಿಂಕ್ಡ್&zwnj;ಇನ್ ಪ್ರೊಫೈಲ್ ಪ್ರಕಾರ, ಗೌರಿ ಬ್ಲೂ ಮೌಂಟೇನ್ ಶಾಲೆಯಲ್ಲಿ ಅಧ್ಯಯನ ಮಾಡಿ 2004 ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ FDA ಸ್ಟೈಲಿಂಗ್ &amp;amp; ಫೋಟೋಗ್ರಫಿ ಎಂಬ ಫ್ಯಾಷನ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಪ್ರೊಫೈಲ್ ಪ್ರಕಾರ, ಅವರು ಪ್ರಸ್ತುತ ಮುಂಬೈನಲ್ಲಿ BBlunt ಸಲೂನ್ ಅನ್ನು ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ ಅವರಿಗೆ ಏಳು ವರ್ಷದ ಮಗುವಿದೆ.&lt;/p&gt;&lt;img&gt;&lt;p&gt;ಆಮೀರ್ ಖಾನ್ 1986 ರಲ್ಲಿ ಬಾಲ್ಯದ ಪ್ರಿಯತಮೆ ರೀನಾ ದತ್ತಾ ಅವರನ್ನು ರಹಸ್ಯ, ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಅವರು ಮಗ ಜುನೈದ್ ಮತ್ತು ಮಗಳು ಇರಾ ಅವರ ಪೋಷಕರಾಗಿದ್ದಾರೆ. ಜುನೈದ್ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ, ಆದರೆ ಇರಾ ಮಾನಸಿಕ ಆರೋಗ್ಯ ಜಾಗೃತಿಗಾಗಿ ವಕೀಲರಾಗಿದ್ದಾರೆ.16 ವರ್ಷಗಳ ದಾಂಪತ್ಯದ ನಂತರ ದಂಪತಿಗಳು 2002 ರಲ್ಲಿ ವಿಚ್ಛೇದನ ಪಡೆದರು.&lt;/p&gt;&lt;img&gt;&lt;p&gt;ಆಮೀರ್ ಖಾನ್ 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. 2001 ರ ಲಗಾನ್ ಚಿತ್ರದ ಸೆಟ್&zwnj;ಗಳಲ್ಲಿ ಇಬ್ಬರೂ ಭೇಟಿಯಾದರು, ಅಲ್ಲಿ ಅವರು ಸಹಾಯಕ ನಿರ್ದೇಶಕಿಯಾಗಿದ್ದರು. ಅವರು 2021 ರಲ್ಲಿ ವಿಚ್ಛೇದನ ಪಡೆದರು.ಅವರು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದ ತಮ್ಮ ಮಗ ಆಜಾದ್ ಅವರನ್ನು ಸಹ-ಪೋಷಕರಾಗಿ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/aamir-khans-ex-wife-kiran-rao-and-bride-to-be-gauri-spratt-share-a-laugh-inside-car-suc-1e7xaxz"/>
        </item>
        <item>
            <title><![CDATA[ಮದುವೆಯಾಗಿ 3 ತಿಂಗಳ ಬಳಿಕ ಪತಿ ವಿಜಯ್ ಬಗ್ಗೆ ಹೀಗ್ ಹೇಳಿದ್ಯಾಕೆ ರಶ್ಮಿಕಾ ಮಂದಣ್ಣ? ಇಲ್ಲೇನೋ ಇದೆ ಗುಟ್ಟು!]]></title>
            <link>https://kannada.asianetnews.com/gallery/entertainment/rashmika-mandanna-says-vijay-deverakonda-is-my-friend-and-he-became-my-husband-too-is-a-great-this-in-my-life-1tby7yd</link>
            <guid isPermaLink="true">https://kannada.asianetnews.com/gallery/entertainment/rashmika-mandanna-says-vijay-deverakonda-is-my-friend-and-he-became-my-husband-too-is-a-great-this-in-my-life-1tby7yd</guid>
            <pubDate>Wed, 17 Jun 2026 12:11:45 +0530</pubDate>
            <description><![CDATA[&lt;p&gt;ಗುಟ್ಟಾಗಿ ಪ್ರೀತಿಸಿ, ಮಾಧ್ಯಮಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈ 'ಲವ್ ಬರ್ಡ್ಸ್' 3 ತಿಂಗಳ ಹಿಂದೆ ಮದುವೆಯೂ ಆಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ವಿಜಯ್ ತಾಳಿ ಕಟ್ಟುವಾಗ ರಶ್ಮಿಕಾ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಇದೀಗ ರಶ್ಮಿಕಾ ವಿಜಯ್ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. !&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk3ke7h0emgdkjkgbf8fmpzt,imgname-rashmika-mandanna-vijay-deverakonda--11--1772868804128.jpg" type="image/jpeg" height="390" width="690"/>
            <content:encoded><![CDATA[&lt;p&gt;ಗುಟ್ಟಾಗಿ ಪ್ರೀತಿಸಿ, ಮಾಧ್ಯಮಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈ 'ಲವ್ ಬರ್ಡ್ಸ್' 3 ತಿಂಗಳ ಹಿಂದೆ ಮದುವೆಯೂ ಆಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ವಿಜಯ್ ತಾಳಿ ಕಟ್ಟುವಾಗ ರಶ್ಮಿಕಾ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಇದೀಗ ರಶ್ಮಿಕಾ ವಿಜಯ್ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. !&lt;/p&gt;&lt;img&gt;&lt;p&gt;&quot;ಬೆಸ್ಟ್ ಫ್ರೆಂಡ್ ಈಗ ಬಾಳಸಂಗಾತಿ: ರಶ್ಮಿಕಾ-ವಿಜಯ್ ಲವ್ ಸ್ಟೋರಿಯ ಮಧುರ ರಹಸ್ಯ!&quot;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಿಂದ ಶುರುವಾಗಿ ಬಾಲಿವುಡ್&zwnj;ವರೆಗೆ ತಮ್ಮ ಪ್ರತಿಭೆ, ಸ್ಮೈಲ್&zwnj;ನಿಂದಲೇ 'ನ್ಯಾಷನಲ್ ಕ್ರಶ್' ಎನಿಸಿಕೊಂಡವರು ರಶ್ಮಿಕಾ ಮಂದಣ್ಣ (Rashmika Mandanna). ಇತ್ತ 'ರೌಡಿ ಸ್ಟಾರ್' ವಿಜಯ್ ದೇವರಕೊಂಡ (Vijay Devarakonda) ಎಂದರೆ ಪಡ್ಡೆ ಹುಡುಗಿಯರಿಗೆ ಎಲ್ಲಿಲ್ಲದ ಕ್ರೇಜ್. ತೆರೆಯ ಮೇಲೆ 'ಗೀತ ಗೋವಿಂದಂ' ಎನ್ನುತ್ತಾ ಮೋಡಿ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಒಂದಾಗಲಿ ಎಂದು ಕೋಟ್ಯಂತರ ಅಭಿಮಾನಿಗಳು ಹಾರೈಸುತ್ತಿದ್ದರು. ಆ ಹಾರೈಕೆ ಕಳೆದ ಫೆಬ್ರವರಿಯಲ್ಲಿ ನನಸಾಯಿತು.&lt;/p&gt;&lt;img&gt;&lt;p&gt;ಏಳು ವರ್ಷಗಳ ಕಾಲ ಗುಟ್ಟಾಗಿ ಪ್ರೀತಿಸಿ, ಹತ್ತಾರು ಬಾರಿ ಮಾಧ್ಯಮಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈ 'ಲವ್ ಬರ್ಡ್ಸ್' ಕೊನೆಗೂ ಮದುವೆಯೆಂಬ ಬಂಧಕ್ಕೆ ಒಳಗಾದರು. ಮದುವೆಯ ದಿನ ವಿಜಯ್ ತಾಳಿ ಕಟ್ಟುವಾಗ ರಶ್ಮಿಕಾ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಅದು ಬರಿ ಕಣ್ಣೀರಲ್ಲ, ಏಳು ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಪ್ರೀತಿಯ ಗೆಲುವಿನ ಸಂಕೇತವಾಗಿತ್ತು. ಮದುವೆಯ ನಂತರವೂ ಈ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಿಂತಿಲ್ಲ.&lt;/p&gt;&lt;img&gt;&lt;p&gt;ಇತ್ತೀಚೆಗೆ ರಶ್ಮಿಕಾ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಲು ಮುಂದಾದರು. &quot;ಕ್ಯೂ ಅಂಡ್ ಎ&quot; (Q&amp;amp;A) ಸೆಷನ್&zwnj;ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ರಶ್ಮಿಕಾ ಬಹಳ ಕೂಲ್ ಆಗಿಯೇ ಉತ್ತರಿಸುತ್ತಿದ್ದರು. ಅಲ್ಲಿ ಒಬ್ಬ ಅಭಿಮಾನಿ ಒಂದು ಅದ್ಭುತ ಪ್ರಶ್ನೆ ಕೇಳಿದ: &quot;ನಿಮ್ಮ ಜೀವನದಲ್ಲಿ ನೀವು ಮಾಡಿರುವ ಅತ್ಯಂತ ಸಂತೋಷದ ಕೆಲಸ ಯಾವುದು?&quot;&lt;/p&gt;&lt;img&gt;&lt;p&gt;ಈ ಪ್ರಶ್ನೆಗೆ ರಶ್ಮಿಕಾ ಅಷ್ಟೇ ಆಪ್ತವಾಗಿ ಉತ್ತರಿಸಿದ್ದಾರೆ. &quot;ನನ್ನ ಜೀವನದ ಅತ್ಯಂತ ಸುಂದರ ನಿರ್ಧಾರ ಎಂದರೆ ಅದು ನನ್ನ ಆತ್ಮೀಯ ಸ್ನೇಹಿತನನ್ನೇ (Best Friend) ಮದುವೆಯಾಗಿರುವುದು&quot; ಎಂದು ಹೇಳುವ ಮೂಲಕ ವಿಜಯ್ ಅವರೇ ತನ್ನ ಬೆಸ್ಟ್ ಫ್ರೆಂಡ್ ಎಂಬ ಸತ್ಯವನ್ನು ಜಗತ್ತಿಗೆ ಸಾರಿದ್ದಾರೆ. ಸಾಮಾನ್ಯವಾಗಿ ಪ್ರೀತಿಸಿದವರು ಮದುವೆಯಾದಾಗ ಸಿಗುವ ಖುಷಿಗಿಂತ, ಒಬ್ಬ ಒಳ್ಳೆಯ ಗೆಳೆಯನೇ ಪತಿಯಾದಾಗ ಸಿಗುವ ನೆಮ್ಮದಿ ದೊಡ್ಡದು ಎಂಬುದು ರಶ್ಮಿಕಾ ಮಾತುಗಳ ಒಳಾರ್ಥವಾಗಿತ್ತು.&lt;/p&gt;&lt;img&gt;&lt;p&gt;ಈ ಜೋಡಿಯ ಕೆಮಿಸ್ಟ್ರಿ ಮದುವೆಗಿಂತ ಮುಂಚೆಯೇ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಸಿನಿಮಾ ಸೆಟ್&zwnj;ಗಳಲ್ಲಿ ಕಿತ್ತಾಡುತ್ತಾ, ತಮಾಷೆ ಮಾಡುತ್ತಾ ಬೆಳೆದ ಸ್ನೇಹ ಇಂದು ದಾಂಪತ್ಯಕ್ಕೆ ನಾಂದಿ ಹಾಡಿದೆ. ಮದುವೆಯಾದ ಮೇಲೆ ಹಂಚಿಕೊಂಡಿದ್ದ ಮೊದಲ ಪೋಸ್ಟ್&zwnj;ನಲ್ಲೂ ರಶ್ಮಿಕಾ, ವಿಜಯ್ ತನ್ನ ಬದುಕಿನ ಆಧಾರಸ್ತಂಭ ಎಂದು ಹೊಗಳಿದ್ದರು. ಈಗ ಮತ್ತೊಮ್ಮೆ &quot;ನಾನು ಮಾಡಿರೋ ಬೆಸ್ಟ್ ಕೆಲಸ ಅಂದ್ರೆ ಅದು ವಿಜಯ್ ಜೊತೆಗಿನ ಮದುವೆ&quot; ಎಂದು ಹೇಳುವ ಮೂಲಕ ತಮ್ಮ ಪತಿಯ ಮೇಲಿನ ಅಗಾಧ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ರಶ್ಮಿಕಾ ಮಂದಣ್ಣ ಈಗ ಕೇವಲ ತೆರೆಯ ಮೇಲಿನ ನಾಯಕಿಯಲ್ಲ, ವಿಜಯ್ ಜೀವನದ ಹೀರೊಯಿನ್ ಕೂಡ ಹೌದು. ಈ ಸ್ಟಾರ್ ಜೋಡಿಯ ಪ್ರೇಮ ಪುರಾಣವನ್ನು ಕೇಳಿ ಅಭಿಮಾನಿಗಳು &quot;ಇದು ಪಕ್ಕಾ ಫಿಲ್ಮಿ ಸ್ಟೈಲ್ ಲವ್ ಸ್ಟೋರಿ&quot; ಎಂದು ಸಂಭ್ರಮಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಗೆಳೆಯನೇ ಗಂಡನಾದಾಗ ಸಿಗುವ ಕಿಕ್ಕೇ ಬೇರೆ ಅಲ್ವೇ? ಈ ಜೋಡಿಯ ದಾಂಪತ್ಯ ಜೀವನ ಹೀಗೆ ನೂರು ಕಾಲ ಸುಖವಾಗಿರಲಿ ಎಂಬುದು ಅಭಿಮಾನಿಗಳ ಹಾರೈಕೆ.&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/entertainment/rashmika-mandanna-says-vijay-deverakonda-is-my-friend-and-he-became-my-husband-too-is-a-great-this-in-my-life-1tby7yd"/>
        </item>
        <item>
            <title><![CDATA[ಹೊಸ ಡ್ರೆಸ್ ನೋಡಲು ಬಾರೋ ಎಂದು ಕರೆದ ಪ್ರೇಯಸಿ:  ಕರೆಗೆ ಓಗೊಟ್ಟು ಬಂದು ಹೆಣವಾದ ಪ್ರಿಯಕರ]]></title>
            <link>https://kannada.asianetnews.com/crime/lover-death-after-came-to-see-his-girlfriends-new-cloth-and-caught-by-girls-father-suc/articleshow-68wa90u</link>
            <guid isPermaLink="true">https://kannada.asianetnews.com/crime/lover-death-after-came-to-see-his-girlfriends-new-cloth-and-caught-by-girls-father-suc/articleshow-68wa90u</guid>
            <pubDate>Wed, 17 Jun 2026 14:29:31 +0530</pubDate>
            <description><![CDATA[ಬಿಹಾರದ ಜಮುಯಿಯಲ್ಲಿ, ಪ್ರೇಯಸಿ ಆರತಿ ಹೊಸ ಡ್ರೆಸ್ ನೋಡಲು ಕರೆದಿದ್ದಾಳೆಂದು ಹೋದ ಪ್ರೇಮಿ ಸಣ್ಣಲಾಲ್&zwnj;ನನ್ನು, ಯುವತಿಯ ತಂದೆಯೇ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ನಂತರ ಆತನ ಶವವನ್ನು ಜಲಾಶಯಕ್ಕೆ ಎಸೆದಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvacwraq2yx27407fmnps84e,imgname-lover-s-death-1781686755671.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಹಾರದ ಜಮುಯಿ ಜಿಲ್ಲೆಯ ಚಪೋಲವಾ ಗ್ರಾಮದಲ್ಲಿ ಪ್ರೀತಿಯ ಹೆಸರಿನಲ್ಲಿ ಅತ್ಯಂತ ಆಘಾತಕಾರಿ ಮತ್ತು ಕ್ರೂರ ಘಟನೆಯೊಂದು ನಡೆದಿದೆ. ಆರತಿ ಎಂಬ ಯುವತಿ ತನ್ನ ಪ್ರೇಮಿ ಸಣ್ಣಲಾಲ್&zwnj;ಗೆ ಫೋನ್ ಮಾಡಿ, &ldquo;ನಾನು ಹೊಸ ಡ್ರೆಸ್ ತಂದಿದ್ದೇನೆ, ನೋಡಲು ಬಾ&rdquo; ಎಂದು ಕರೆದಿದ್ದಾಳೆ. ಪ್ರೇಯಸಿಯ ಮಾತನ್ನು ಕೇಳಿ ಸಂತೋಷಗೊಂಡ ಸಣ್ಣಲಾಲ್ ತನ್ನ ಬೈಕ್ ಹತ್ತಿ ಸುಮಾರು ಎಪ್ಪತ್ತು ಕಿಲೋಮೀಟರ್ ದೂರವನ್ನು ಕೇವಲ ಮೂರು ಗಂಟೆಗಳಲ್ಲಿ ಕ್ರಮಿಸಿ, ರಾತ್ರಿ ಒಂಬತ್ತುವರೆ ಗಂಟೆಗೆ ಆಕೆಯ ಮನೆಯ ಹತ್ತಿರ ತಲುಪಿದ್ದಾನೆ.&lt;/p&gt;&lt;h2&gt;&lt;strong&gt;ನೋಡಿದ ಹುಡುಗಿಯ ತಂದೆ&lt;/strong&gt;&lt;/h2&gt;&lt;p&gt;ತನ್ನ ಸ್ನೇಹಿತ ಮನೋಜ್ ಜೊತೆ ಆಕೆಯ ಮನೆಯ ಕಡೆಗೆ ಹೋಗುತ್ತಿದ್ದಾಗ, ಹುಡುಗಿಯ ತಂದೆ ಇವರನ್ನು ಮೇಲುಗಡೆಯಿಂದ ನೋಡಿಬಿಟ್ಟಿದ್ದಾರೆ. ತನ್ನ ಮಗಳ ಲವರ್​ ಎಂದು ತಿಳಿದ ತಕ್ಷಣ, ಸಿಡಿಮಿಡಿಗೊಂಡ ತಂದೆ, ಕೂಡಲೇ ಸಣ್ಣಲಾಲ್ ಮೇಲೆ ದಾಳಿ ಮಾಡಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಸ್ನೇಹಿತ ಮನೋಜ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.&lt;/p&gt;&lt;h3&gt;&lt;strong&gt;ಹೆಣವಾಗಿ ಹೋದ&lt;/strong&gt;&lt;/h3&gt;&lt;p&gt;ಅಷ್ಟರಲ್ಲಿಯೇ ಹುಡುಗಿಯ ಮನೆಯವರು ಸಣ್ಣಲಾಲ್ ಶವವನ್ನು ಜಲಾಶಯದಲ್ಲಿ ಬೀಸಾಡಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸ್ನೇಹಿತೆ ಖರೀದಿ ಮಾಡಿದ ಹೊಸ ಡ್ರೆಸ್​ ನೋಡಲು ಬಂದವ ಹೆಣವಾಗಿ ಹೋಗಿದ್ದಾನೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/crime/lover-death-after-came-to-see-his-girlfriends-new-cloth-and-caught-by-girls-father-suc/articleshow-68wa90u"/>
        </item>
        <item>
            <title><![CDATA[Baba Vanga: 2026 ರ ಕೊನೆಯ 4 ತಿಂಗಳುಗಳು 4 ರಾಶಿಗೆ ಸಂಪತ್ತು, ಬಾಬಾ ವಂಗಾ ಭವಿಷ್ಯ]]></title>
            <link>https://kannada.asianetnews.com/gallery/relationship/baba-vanga-prediction-for-2026-going-viral-year-last-4-months-special-for-four-zodiac-signs-suh-9ivoa00</link>
            <guid isPermaLink="true">https://kannada.asianetnews.com/gallery/relationship/baba-vanga-prediction-for-2026-going-viral-year-last-4-months-special-for-four-zodiac-signs-suh-9ivoa00</guid>
            <pubDate>Wed, 17 Jun 2026 11:30:47 +0530</pubDate>
            <description><![CDATA[&lt;p&gt;ಬಾಬಾ ವಂಗಾ ಭವಿಷ್ಯ: ಬಾಬಾ ವಂಗಾ ಅವರ ವೈರಲ್ ಭವಿಷ್ಯವಾಣಿಯ ಪ್ರಕಾರ, 2026 ರ ಕೊನೆಯ 4 ತಿಂಗಳುಗಳಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು ಸಂಪತ್ತನ್ನು ಗಳಿಸುತ್ತವೆ? ನಿಮ್ಮ ರಾಶಿಚಕ್ರ ಚಿಹ್ನೆ ಈ ಪಟ್ಟಿಯಲ್ಲಿದೆಯೇ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp04kc9g3vcjpfv11c8k9576,imgname-baba-vanga-prediction-1775973806384.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಬಾ ವಂಗಾ ಭವಿಷ್ಯ: ಬಾಬಾ ವಂಗಾ ಅವರ ವೈರಲ್ ಭವಿಷ್ಯವಾಣಿಯ ಪ್ರಕಾರ, 2026 ರ ಕೊನೆಯ 4 ತಿಂಗಳುಗಳಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು ಸಂಪತ್ತನ್ನು ಗಳಿಸುತ್ತವೆ? ನಿಮ್ಮ ರಾಶಿಚಕ್ರ ಚಿಹ್ನೆ ಈ ಪಟ್ಟಿಯಲ್ಲಿದೆಯೇ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬಾಬಾ ವಂಗಾ ಮತ್ತು ಜ್ಯೋತಿಷ್ಯದ ಪ್ರಕಾರ, ವರ್ಷದ ಕೊನೆಯ 4 ತಿಂಗಳುಗಳಲ್ಲಿ 4 ರಾಶಿಚಕ್ರ ಚಿಹ್ನೆಗಳು ತುಂಬಾ ಅದೃಷ್ಟಶಾಲಿಯಾಗಿರುತ್ತವೆ ಎಂಬ ಸೂಚನೆಗಳಿವೆ, ಆ ಅದೃಷ್ಟ ರಾಶಿಚಕ್ರ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳೋಣ.&lt;/p&gt;&lt;img&gt;&lt;p&gt;ಬಾಬಾ ವಂಗಾ ಅವರ ವೈರಲ್ ಭವಿಷ್ಯವಾಣಿಯ ಪ್ರಕಾರ, ವರ್ಷದ ಕೊನೆಯ ನಾಲ್ಕು ತಿಂಗಳುಗಳು ವೃಷಭ ರಾಶಿಯವರಿಗೆ ಶುಭವಾಗಿರುತ್ತವೆ. ಈ ರಾಶಿಚಕ್ರ ಚಿಹ್ನೆಯಡಿಯಲ್ಲಿ ಜನಿಸಿದ ಜನರು ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಅವರು ತಮ್ಮ ವೃತ್ತಿ ಮತ್ತು ಉದ್ಯೋಗದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಾರೆ. ಪ್ರೇಮ ಸಂಬಂಧಗಳು ಸಹ ಪ್ರವರ್ಧಮಾನಕ್ಕೆ ಬರುತ್ತವೆ. ನೀವು ಕೆಲವು ಪ್ರಯತ್ನಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು.&lt;/p&gt;&lt;img&gt;&lt;p&gt;ಬಾಬಾ ವಂಗಾ ಅವರ ವೈರಲ್ ಭವಿಷ್ಯವಾಣಿಯ ಪ್ರಕಾರ, 2026 ರ ಕೊನೆಯ ನಾಲ್ಕು ತಿಂಗಳುಗಳು, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ಮಿಥುನ ರಾಶಿಯವರಿಗೆ ಅತ್ಯುತ್ತಮವಾಗಿರುತ್ತವೆ. ಸಂಪತ್ತು ಮತ್ತು ಸಮೃದ್ಧಿಯಲ್ಲಿ ಹೆಚ್ಚಳವಾಗುತ್ತದೆ. ಕೆಲಸದಲ್ಲಿ ಬಡ್ತಿ ಪಡೆಯುವ ಬಲವಾದ ಸಾಧ್ಯತೆಯಿದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ.&lt;/p&gt;&lt;img&gt;&lt;p&gt;ಬಾಬಾ ವಂಗಾ ಅವರ ವೈರಲ್ ಭವಿಷ್ಯವಾಣಿಯ ಪ್ರಕಾರ, ವರ್ಷದ ಕೊನೆಯ ನಾಲ್ಕು ತಿಂಗಳುಗಳು ನಿಮಗೆ ಆರ್ಥಿಕ ಲಾಭದ ತಿಂಗಳುಗಳಾಗಿರುತ್ತವೆ. ನೀವು ಬಹಳಷ್ಟು ಹಣವನ್ನು ಗಳಿಸುವಿರಿ. ವಿದೇಶ ಪ್ರವಾಸ ಮಾಡುವ ಅವಕಾಶವನ್ನು ನೀವು ಪಡೆಯಬಹುದು. ನಿಮಗೆ ಇದ್ದಕ್ಕಿದ್ದಂತೆ ದೊಡ್ಡ ಲಾಭಗಳು ಸಿಗಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಹೆಚ್ಚು ಬಲವಾಗಿರುತ್ತದೆ.&lt;/p&gt;&lt;img&gt;&lt;p&gt;ಬಾಬಾ ವಂಗಾ ಅವರ ವೈರಲ್ ಭವಿಷ್ಯವಾಣಿಯ ಪ್ರಕಾರ, ವರ್ಷದ ಕೊನೆಯ ನಾಲ್ಕು ತಿಂಗಳುಗಳು ನಿಮ್ಮ ರಾಶಿಚಕ್ರ ಚಿಹ್ನೆಗೆ ವೃತ್ತಿ ಮತ್ತು ಉದ್ಯೋಗದ ವಿಷಯದಲ್ಲಿ ಪ್ರಮುಖವಾಗಿರುತ್ತವೆ. ನೀವು ಸಾಲ ಮುಕ್ತರಾಗಿರುತ್ತೀರಿ. ಹಣ ಪಡೆಯುವ ಸಾಧ್ಯತೆಯಿದೆ. ಅಪಾಯಕಾರಿ ಉದ್ಯಮಗಳಿಂದ ನೀವು ಸಾಕಷ್ಟು ಲಾಭ ಗಳಿಸುವಿರಿ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/baba-vanga-prediction-for-2026-going-viral-year-last-4-months-special-for-four-zodiac-signs-suh-9ivoa00"/>
        </item>
        <item>
            <title><![CDATA['ಕಣ್‌ ಕಣ್ಣ ಸಲಿಗೆ' ನಟಿ ಸಪ್ತಪದಿ ತುಳಿಯಲು ಸಜ್ಜು? ಶರ್ಮಿಳಾ ಮಾಂಡ್ರೆ ಕೈ ಹಿಡಿಯಲಿರುವ ಆ 'ಮಹಾರಾಜ' ಯಾರು ಗೊತ್ತಾ?]]></title>
            <link>https://kannada.asianetnews.com/entertainment/kannada-film-navagraha-actress-sharmiela-mandre-is-set-to-marry-sudhan-sundaram-the-producer-of-the-movie-maharaja/articleshow-9tx7ica</link>
            <guid isPermaLink="true">https://kannada.asianetnews.com/entertainment/kannada-film-navagraha-actress-sharmiela-mandre-is-set-to-marry-sudhan-sundaram-the-producer-of-the-movie-maharaja/articleshow-9tx7ica</guid>
            <pubDate>Wed, 17 Jun 2026 13:43:40 +0530</pubDate>
            <description><![CDATA[&lt;p&gt;ನಟಿ ಶರ್ಮಿಳಾ ಮಾಂಡ್ರೆ ಫ್ಯಾನ್ಸ್&zwnj;ನಲ್ಲಿ ಈಗ ಒಂದೇ ಪ್ರಶ್ನೆ ಕಾಡುತ್ತಿದೆ. ಮದುವೆಯ ನಂತರ ಶರ್ಮಿಳಾ ಮಾಂಡ್ರೆ ಬಣ್ಣದ ಲೋಕಕ್ಕೆ ಗುಡ್&zwnj;ಬೈ ಹೇಳ್ತಾರಾ? ಅಥವಾ ನಟನೆಯನ್ನು ಮುಂದುವರಿಸುತ್ತಾರಾ? ಸುಧನ್ ಸುಂದರಂ ಮತ್ತು ಶರ್ಮಿಳಾ ಅವರ ಈ ಹೊಸ ಇನ್ನಿಂಗ್ಸ್ ಈ ಪ್ರಶ್ನೆಗೆ ಉತ್ತರ ಕೊಡಬೇಕಷ್ಟೇ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva6kennmyc4syqtrzkn2y4w,imgname-sharmiela-mandre-1781680159412.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&quot;ಕಣ್&zwnj; ಕಣ್ಣ ಸಲಿಗೆ ಈಗ ನಿಜವಾದ ದಾಂಪತ್ಯಕ್ಕೆ! ಸ್ಯಾಂಡಲ್&zwnj;ವುಡ್ ಗ್ಲಾಮರ್ ಬ್ಯೂಟಿ ಶರ್ಮಿಳಾ ಮಾಂಡ್ರೆ ಕೈ ಹಿಡಿಯಲಿರುವ ಆ 'ಮಹಾರಾಜ' ಯಾರು?&quot;&lt;/strong&gt;&lt;/p&gt;&lt;p&gt;ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಮಿಂಚಿದ್ದ ನಟನಟಿಯರು ಒಬ್ಬೊಬ್ಬರಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದು ಗೊ &amp;nbsp; ತ್ತಿರೋ ಸಂಗತಿ. ಅದಿತಿ ಪ್ರಭುದೇವ, ವಸಿಷ್ಠ ಸಿಂಹ-ಹರಿಪ್ರಿಯಾ, ಡಾಲಿ ಧನಂಜಯ್ ಹೀಗೆ ಸಾಲು ಸಾಲು ತಾರೆಯರು ದಾಂಪತ್ಯಕ್ಕೆ ಕಾಲಿಟ್ಟು ಸಾಕಷ್ಟು ಕಾಲವಾಗಿದೆ. ಇದೀಗ, ಇದೇ ಸಾಲಿಗೆ ಸೇರಲಿದ್ದಾರೆ ಎಂಬ ಸುದ್ದಿ ಕೊಟ್ಟಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ. ತನ್ನ ಸ್ನಿಗ್ಧ ಸೌಂದರ್ಯ ಮತ್ತು ಮನೋಜ್ಞ ನಟನೆಯಿಂದ ಸುಮಾರು ಒಂದೂವರೆ ದಶಕಗಳಿಂದ ಕನ್ನಡಿಗರ ಮನಗೆದ್ದಿರುವ 'ಸಜನಿ' ಶರ್ಮಿಳಾ ಮಾಂಡ್ರೆ (Sharmiela Mandre) ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ!&lt;/p&gt;&lt;p&gt;ಕಾಲಿವುಡ್ ನಿರ್ಮಾಪಕನ ಜೊತೆ 'ಕಣ್&zwnj; ಕಣ್ಣ ಸಲಿಗೆ'&lt;/p&gt;&lt;p&gt;ನಟಿ ಶರ್ಮಿಳಾ ಮಾಂಡ್ರೆ ಮದುವೆಯಾಗಲಿರುವ ಆ ಅದೃಷ್ಟವಂತ ಯಾರು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಅವರು ಬೇರೆ ಯಾರೂ ಅಲ್ಲ, ತಮಿಳು ಚಿತ್ರರಂಗದ ಯಶಸ್ವಿ ನಿರ್ಮಾಪಕ ಸುಧನ್ ಸುಂದರಂ. ಇತ್ತೀಚೆಗೆ ಬಾಕ್ಸ್ ಆಫೀಸ್&zwnj;ನಲ್ಲಿ ಧೂಳೆಬ್ಬಿಸಿದ, ವಿಜಯ್ ಸೇತುಪತಿ ನಟನೆಯ 'ಮಹಾರಾಜ' ಸಿನಿಮಾವನ್ನು ನಿರ್ಮಿಸಿದ್ದು ಇದೇ ಸುಧನ್ ಸುಂದರಂ. ತೆರೆಯ ಹಿಂದೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸುಧನ್ (Sudhan Sundaram), ಈಗ ಶರ್ಮಿಳಾ ಅವರ ಜೀವನದ 'ರಿಯಲ್ ಹೀರೊ' ಆಗಿ ಎಂಟ್ರಿ ಕೊಡುತ್ತಿದ್ದಾರೆ.&lt;/p&gt;&lt;h2&gt;ಜೂನ್ 25ಕ್ಕೆ ಶುಭ ಮುಹೂರ್ತ?&lt;/h2&gt;&lt;p&gt;ಬಲ್ಲ ಮೂಲಗಳ ಪ್ರಕಾರ, ಈ ಜೋಡಿಯ ನಿಶ್ಚಿತಾರ್ಥ ಜೂನ್ 25ರಂದು ಅತ್ಯಂತ ಸರಳವಾಗಿ, ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ನಿಶ್ಚಿತಾರ್ಥ ಸರಳವಾಗಿದ್ದರೂ, ಮದುವೆ ಮಾತ್ರ ಅತ್ಯಂತ ಅದ್ಧೂರಿಯಾಗಿ ತಮಿಳುನಾಡು ಅಥವಾ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ. ಸದ್ಯಕ್ಕೆ ಈ ಬಗ್ಗೆ ಶರ್ಮಿಳಾ ಆಗಲಿ ಅಥವಾ ಸುಧನ್ ಆಗಲಿ ಅಧಿಕೃತ ಮುದ್ರೆ ಒತ್ತಿಲ್ಲವಾದರೂ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆಗಲೇ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.&lt;/p&gt;&lt;h3&gt;ನವಗ್ರಹದ ಕಿರಣ ಈಗ ಮನೆಯ ಸೊಸೆ!&lt;/h3&gt;&lt;p&gt;2007ರಲ್ಲಿ 'ಸಜನಿ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಶರ್ಮಿಳಾ, ಅಂದಿನಿಂದ ಇಂದಿನವರೆಗೆ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ನವಗ್ರಹ' ಚಿತ್ರದಲ್ಲಿ ಶರ್ಮಿಳಾ ಅವರ ನಟನೆ ಮತ್ತು 'ಕಣ್&zwnj; ಕಣ್ಣ ಸಲಿಗೆ' ಹಾಡು ಇಂದಿಗೂ ಎವರ್&zwnj;ಗ್ರೀನ್. ಇತ್ತೀಚೆಗೆ ದರ್ಶನ್ ಅವರ 'ಡೆವಿಲ್' ಚಿತ್ರದಲ್ಲೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಶರ್ಮಿಳಾ, ಈಗ ಪರಭಾಷೆಯ ನಿರ್ಮಾಪಕನನ್ನೇ ವರಿಸುತ್ತಿರುವುದು ವಿಶೇಷ.&lt;/p&gt;&lt;p&gt;ನಟಿಯಾಗಿ ಮಾತ್ರವಲ್ಲ, ನಿರ್ಮಾಪಕಿಯಾಗಿಯೂ ಸೈ!&lt;/p&gt;&lt;p&gt;ಶರ್ಮಿಳಾ ಕೇವಲ ಕ್ಯಾಮೆರಾ ಮುಂದೆ ನಿಲ್ಲುವ ನಟಿಯಲ್ಲ, ಅವರು ಕ್ಯಾಮೆರಾ ಹಿಂದೆ ಬಂಡವಾಳ ಹೂಡುವ ಧೈರ್ಯವಂತ ನಿರ್ಮಾಪಕಿಯೂ ಹೌದು. ಈಗಾಗಲೇ ಕನ್ನಡ ಮತ್ತು ತಮಿಳಿನ ಕೆಲವು ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ, ಸಿನಿಮಾ ಕ್ಷೇತ್ರದವರನ್ನೇ ಮದುವೆಯಾಗುತ್ತಿರುವುದು ಅವರ ವೃತ್ತಿಜೀವನಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ ಎಂಬುದು ಸಿನಿಮಾ ಪಂಡಿತರ ಲೆಕ್ಕಾಚಾರ.&lt;/p&gt;&lt;p&gt;ಆದರೆ ಅಭಿಮಾನಿಗಳಲ್ಲಿ ಈಗ ಒಂದೇ ಪ್ರಶ್ನೆ ಕಾಡುತ್ತಿದೆ. ಮದುವೆಯ ನಂತರ ಶರ್ಮಿಳಾ ಮಾಂಡ್ರೆ ಬಣ್ಣದ ಲೋಕಕ್ಕೆ ಗುಡ್&zwnj;ಬೈ ಹೇಳ್ತಾರಾ? ಅಥವಾ ನಟನೆಯನ್ನು ಮುಂದುವರಿಸುತ್ತಾರಾ? ಸುಧನ್ ಸುಂದರಂ ಮತ್ತು ಶರ್ಮಿಳಾ ಅವರ ಈ ಹೊಸ ಇನ್ನಿಂಗ್ಸ್ ಸುಖಮಯವಾಗಿರಲಿ ಎಂದು ಆಶಿಸೋಣ. ಅಧಿಕೃತ ಘೋಷಣೆಗಾಗಿ ಇಡೀ ಸ್ಯಾಂಡಲ್&zwnj;ವುಡ್ ಕಾದು ಕುಳಿತಿದೆ!&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/kannada-film-navagraha-actress-sharmiela-mandre-is-set-to-marry-sudhan-sundaram-the-producer-of-the-movie-maharaja/articleshow-9tx7ica"/>
        </item>
        <item>
            <title><![CDATA[ಸುಖ ದಾಂಪತ್ಯಕ್ಕೆ ಪತಿಯ ಯಾವ ಬದಿಯಲ್ಲಿ ಪತ್ನಿ ಮಲಗಿದ್ರೆ ಒಳ್ಳೆಯದು?]]></title>
            <link>https://kannada.asianetnews.com/webstories/relationship/according-vastu-shastra-which-side-of-the-husband-is-best-for-the-wife-to-sleep-on-for-a-happy-marriage-mrq-9un5h7s</link>
            <guid isPermaLink="true">https://kannada.asianetnews.com/webstories/relationship/according-vastu-shastra-which-side-of-the-husband-is-best-for-the-wife-to-sleep-on-for-a-happy-marriage-mrq-9un5h7s</guid>
            <pubDate>Wed, 17 Jun 2026 13:57:56 +0530</pubDate>
            <description><![CDATA[ಶಾಸ್ತ್ರಗಳ ಪ್ರಕಾರ, ದಾಂಪತ್ಯ ಜೀವನ ಸುಖಮಯವಾಗಿರಲು ಪತಿ-ಪತ್ನಿಯರು ಮಲಗುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಪತ್ನಿಯು ಯಾವಾಗಲೂ ಪತಿಯ ಎಡಭಾಗದಲ್ಲಿ ಮಲಗಬೇಕು ಎಂದು ಶಾಸ್ತ್ರ ಹೇಳುತ್ತದೆ, ಇದು ಸಂಬಂಧದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಸಂತೋಷವನ್ನು ತರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvaapg53s9h83je94nwdejx5,imgname-couple--5--1781684453539.jpg" type="image/jpeg" height="390" width="690"/>
            <category>relationship</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/relationship/according-vastu-shastra-which-side-of-the-husband-is-best-for-the-wife-to-sleep-on-for-a-happy-marriage-mrq-9un5h7s"/>
        </item>
        <item>
            <title><![CDATA[ಗುಟ್ಟಾಗಿ ಮದುವೆಯಾಗಿದ್ದು ಏಕೆ? ಕೊನೆಗೂ ಮೌನ ಮುರಿದ ಅಮೃತವರ್ಷಿಣಿ ನಟಿ ರಜಿನಿ ಹೇಳಿದ್ದೇನು]]></title>
            <link>https://kannada.asianetnews.com/gallery/relationship/amrutha-varshini-actress-rajini-about-her-secret-marriage-suc-aaa8upg</link>
            <guid isPermaLink="true">https://kannada.asianetnews.com/gallery/relationship/amrutha-varshini-actress-rajini-about-her-secret-marriage-suc-aaa8upg</guid>
            <pubDate>Mon, 15 Jun 2026 19:35:52 +0530</pubDate>
            <description><![CDATA['ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ತಮ್ಮ ಜಿಮ್ ಟ್ರೈನರ್ ಅರುಣ್ ಗೌಡ ಅವರೊಂದಿಗಿನ ರಹಸ್ಯ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಒಳ್ಳೆಯ ವಿಷಯಗಳನ್ನು ಮೊದಲೇ ಹೇಳಿದರೆ ನಡೆಯುವುದಿಲ್ಲ ಎಂಬ ನಂಬಿಕೆಯಿಂದ ಮದುವೆಯನ್ನು ಸರಳವಾಗಿ ಮತ್ತು ಗುಟ್ಟಾಗಿ ಮಾಡಿಕೊಂಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv5sm0dx8x22990avdw3f57m,imgname-rajini-and-arun-1781532328381.jpg" type="image/jpeg" height="390" width="690"/>
            <content:encoded><![CDATA['ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ತಮ್ಮ ಜಿಮ್ ಟ್ರೈನರ್ ಅರುಣ್ ಗೌಡ ಅವರೊಂದಿಗಿನ ರಹಸ್ಯ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಒಳ್ಳೆಯ ವಿಷಯಗಳನ್ನು ಮೊದಲೇ ಹೇಳಿದರೆ ನಡೆಯುವುದಿಲ್ಲ ಎಂಬ ನಂಬಿಕೆಯಿಂದ ಮದುವೆಯನ್ನು ಸರಳವಾಗಿ ಮತ್ತು ಗುಟ್ಟಾಗಿ ಮಾಡಿಕೊಂಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.&lt;img&gt;&lt;p&gt;'ಅಮೃತವರ್ಷಿಣಿ', ಹಿಟ್ಲರ್&zwnj; ಕಲ್ಯಾಣ, &lsquo;ನೀ ಇರಲು ಜೊತೆಯಲಿ&rsquo; ಸೇರಿ ಹಲವಾರು ಸೀರಿಯಲ್&zwnj;ಗಳಲ್ಲಿ ನಟಿಸಿ ಮನೆಮಾತಾಗಿರೋ ನಟಿ ರಜಿನಿ ಸದ್ದಿಲ್ಲದೇ ಮದುವೆಯಾಗಿದ್ದು ಏಕೆ ಎನ್ನುವುದು ಇಂದಿಗೂ ಹಲವರಲ್ಲಿ ಇರುವ ಸಂದೇಹ.&lt;/p&gt;&lt;img&gt;&lt;p&gt;ಇವರು ಮದುವೆಯಾಗಿ ಕೆಲವು ತಿಂಗಳುಗಳೇ ಕಳೆದಿವೆ. ಕಳೆದ ನವೆಂಬರ್&zwnj; 10ರಂದು ಜಿಮ್&zwnj; ಟ್ರೈನರ್&zwnj; ಅರುಣ್&zwnj; ಗೌಡ ಅವರ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇವರು ಮದುವೆಗೂ ಮುನ್ನ ಸುಮಾರು ಎರಡು ವರ್ಷಗಳಿಂದ ರೀಲ್ಸ್ ಮಾಡಿ ಸೋಷಿಯಲ್&zwnj; ಮೀಡಿಯಾದಲ್ಲಿ ವಿಡಿಯೋಗಳನ್ನು ಅಪ್&zwnj;ಲೋಡ್&zwnj; ಮಾಡುತ್ತಿದ್ದರು. ಆಗಲೇ ಇವರಿಬ್ಬರು ಲವ್&zwnj;ನಲ್ಲಿದ್ದಾರೆ ಎಂಬ ಡೌಟ್&zwnj; ಇತ್ತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ರಜಿನಿ ಅವರು &ldquo;ನಾವು ಸ್ನೇಹಿತರು&rdquo; ಎಂದು ಹೇಳಿದ್ದರು.&lt;/p&gt;&lt;img&gt;&lt;p&gt;ಇಬ್ಬರೂ ಜೊತೆಯಾಗಿ ಹಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ನಾವಿಬ್ಬರು ಆ ರೀತಿ ಅಲ್ಲ, ಬರಿಯ ಸ್ನೇಹಿತರು ಎಂದು ಕೊನೆಯವರೆಗೂ ಮದುವೆಯ ಬಗ್ಗೆ ಮಾತನಾಡಲಿಲ್ಲ ರಜಿನಿ ಅಥವಾ ಅರುಣ್. ಈ ಜೋಡಿ ಬಗ್ಗೆ ಅವರ ಅಭಿಮಾನಿಗಳಿಗೆ ಅನುಮಾನ ಮೂಡಿದ್ದರೂ ಇಲ್ಲ ಇಲ್ಲ ಎನ್ನುತ್ತಲೇ ಕೊನೆಗೆ ಸಿಂಪಲ್&zwnj; ಆಗಿ ಮದುವೆಯಾಗಿದ್ದರು.&lt;/p&gt;&lt;img&gt;&lt;p&gt;ಈ ಹಿಂದೆಯೇ ಇವರಿಬ್ಬರು ಮದುವೆ ಆಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಬಗ್ಗೆ ಮಾತನಾಡಿದ್ದ ರಜಿನಿ ಅವರು &ldquo; ನಾನು ಮದುವೆ ಆದರೆ ಮಾತ್ರ ಎಲ್ಲರನ್ನು ಕರೆದು ಮದುವೆ ಆಗುವೆ. ನನ್ನ ಜೊತೆ ವಿಡಿಯೋ ಮಾಡುವ ಅರುಣ್&zwnj; ಗೌಡ ವಿಡಿಯೋ ಪಾರ್ಟನರ್&zwnj;, ನನ್ನ ಒಳ್ಳೆಯ ಸ್ನೇಹಿತ ಅಷ್ಟೇ. ಸ್ನೇಹಿತರಾಗಿದ್ದವರು ಮದುವೆ ಆದರೆ ತಪ್ಪಿಲ್ಲ. ಅದೆಲ್ಲ ಅವರವರಿಗೆ ಬಿಟ್ಟಿದ್ದು ಎಂದು ಹೇಳಿದ್ದರು.&lt;/p&gt;&lt;img&gt;&lt;p&gt;ಇದೀಗ ತಾವು ಏಕೆ ಸೈಲೆಂಟ್&zwnj; ಆಗಿ ಮದ್ವೆಯಾದ್ವಿ ಎನ್ನುವ ಬಗ್ಗೆ ನಟಿ ಮಾತನಾಡಿದ್ದಾರೆ. ಅಷ್ಟಕ್ಕೂ ಸೆಲೆಬ್ರಿಟಿಗಳ ಮದುವೆ ಎಂದರೆ ಒಂದು ವರ್ಷದಿಂದಲೇ ಭಾರಿ ಸುದ್ದಿ ಸದ್ದು ಮಾಡುತ್ತದೆ. ಆದರೆ ಇನ್ನೇನು ಮದುವೆಯ ಹತ್ತಿರ ಇದೆ ಎನ್ನುವಾಗ ರಜಿನಿ ಮತ್ತು ಅರುಣ್&zwnj; ಅವರ ಮದ್ವೆ ವಿಷ್ಯ ಬಹಿರಂಗಗೊಂಡಿತ್ತು.&lt;/p&gt;&lt;img&gt;&lt;p&gt;ಇದರ ಬಗ್ಗೆ ಈಗ ಹೇಳಿರುವ ನಟಿ, ತುಂಬಾ ಒಳ್ಳೆಯ ವಿಷ್ಯಗಳು ಮೊದಲೇ ಹೇಳಿದರೆ ಅದು ಆಗುವುದಿಲ್ಲ ಎನ್ನುತ್ತಾರೆ. ಹಾಗೆ ಆಗುವುದು ನಮಗೆ ಇಷ್ಟವಿರಲಿಲ್ಲ. ನಾವು ಜೊತೆಯಾಗಿ ಚೆನ್ನಾಗಿ ಇರಬೇಕು, ಆದ್ದರಿಂದ ಈ ಒಳ್ಳೆಯ ವಿಷ್ಯವನ್ನು ಮೊದಲೇ ಹೇಳಲು ಇಬ್ಬರಿಗೂ ಇಷ್ಟವಿಲ್ಲದೇ ಹೇಳಲಿಲ್ಲ ಎಂದಿದ್ದಾರೆ. ಅರುಣ್&zwnj;ಗೂ ಸಿಂಪಲ್&zwnj; ಆಗಿ ರಿಜಿಸ್ಟರ್&zwnj; ಮದುವೆಯಾಗುವ ಆಸೆ ಇತ್ತು. ನಾನೇ ಸ್ವಲ್ಪ ಒತ್ತಾಯ ಮಾಡಿದ್ದರಿಂದ ದೇವಾಲಯದಲ್ಲಿ ಮದುವೆ ಆದ್ವಿ. ಇದನ್ನು ಬಿಟ್ಟರೆ ಇನ್ನೇನು ಬೇರೆ ವಿಷ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ರಜಿನಿ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/amrutha-varshini-actress-rajini-about-her-secret-marriage-suc-aaa8upg"/>
        </item>
        <item>
            <title><![CDATA[belagavi Soldier murder: ದೇಶದ ಗಡಿ ಕಾಯುತ್ತಾ ಜನರ ಜೀವ ಕಾಪಾಡಿದ ಯೋಧನನ್ನ ವಿಮೆ ಹಣಕ್ಕಾಗಿ ಕೊಲೆ ಮಾಡಿದ ಹೆಂಡತಿ!]]></title>
            <link>https://kannada.asianetnews.com/karnataka-districts/belagavi-retired-soldier-murder-case-insurance-money-wife-lover-arrested/articleshow-ba0z5qe</link>
            <guid isPermaLink="true">https://kannada.asianetnews.com/karnataka-districts/belagavi-retired-soldier-murder-case-insurance-money-wife-lover-arrested/articleshow-ba0z5qe</guid>
            <pubDate>Mon, 15 Jun 2026 22:22:28 +0530</pubDate>
            <description><![CDATA[&lt;p&gt;ನಿವೃತ್ತ ಯೋಧ ಸಂದೀಪ ಮಂಜರಗಿ ಅವರ ಸಾವಿನ ಪ್ರಕರಣವು ಭಯಾನಕ ತಿರುವು ಪಡೆದಿದೆ. 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ, ಪತ್ನಿ ಸುಮಾ ತನ್ನ ಪ್ರಿಯಕರನೊಂದಿಗೆ ಸೇರಿ ಆಸ್ಪತ್ರೆಯಲ್ಲಿಯೇ ವಿಷ ನೀಡಿ ಪತಿಯನ್ನು ಹತ್ಯೆ ಮಾಡಿದ್ದಾಳೆ. ವಿಮೆ ಹಣ ಹಂಚಿಕೆ ಜಗಳದಿಂದಾಗಿ ಈ ಸಂಚು ಬಯಲಾಗಿದ್ದು, 9 ಜನರ ಬಂಧನವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv62x7n6v0s6y7vhqaqbb6gq,imgname-belagavi-soldier-sandeep-murder-case-accused--1--1781542067878.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಜೂ.15): ದೇ&lt;/strong&gt;ಶ ಕಾಯುವ ನಿವೃತ್ತ ಯೋಧನೊಬ್ಬನ ಸಾವಿನ ಪ್ರಕರಣ ಈಗ ಭಯಾನಕ ತಿರುವು ಪಡೆದುಕೊಂಡಿದೆ. ಕೇವಲ 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಸ್ವಂತ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿರುವ ರೋಚಕ ಕಥೆಯನ್ನು ಬೆಳಗಾವಿ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಸಂಬಂಧ ಪತ್ನಿ ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ನಿವೃತ್ತ ಯೋಧ ಸಂದೀಪ ಮಂಜರಗಿ (46) ಈ ಪ್ರಕರಣದ ದುರ್ದೈವಿ. ಕೆಲವು ದಿನಗಳ ಹಿಂದೆ ಸಣ್ಣ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂದೀಪ್ ಅವರನ್ನು ಅವರ ಪತ್ನಿ ಸುಮಾ, ಘಟಪ್ರಭಾದ ಜೆಜೆ ಕೋ-ಆಪರೇಟಿವ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅದೇ ಆಸ್ಪತ್ರೆಯಲ್ಲಿ ಪತಿಯ ಪ್ರಾಣ ತೆಗೆಯಲು ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕ ಕಿರಾತಕ ಸಂಚು ರೂಪಿಸಿದ್ದರು.&lt;/p&gt;&lt;h2&gt;&lt;strong&gt;ಆಸ್ಪತ್ರೆಯಲ್ಲೇ ಸೈಲೆಂಟ್ ಕೊಲೆ:&lt;/strong&gt;&lt;/h2&gt;&lt;p&gt;ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆತನಿಗೆ ನಿದ್ದೆ ಮಾತ್ರೆಗಳನ್ನು ನೀಡಲಾಗಿತ್ತು. ಅಷ್ಟಕ್ಕೇ ಸುಮ್ಮನಾಗದ ಆರೋಪಿಗಳು, ಆಸ್ಪತ್ರೆಯ ಸಲೈನ್ ಬಾಟಲಿಯ ಮೂಲಕವೇ ವಿಷಪ್ರಾಶನ ಮಾಡಿಸಿ ಪತಿಯನ್ನು ಹತ್ಯೆ ಮಾಡಿದ್ದಾರೆ. ಈ ಕೃತ್ಯಕ್ಕೆ ಸುಮಾ ಮತ್ತು ಪುಂಡಲೀಕನಿಗೆ ಅಪ್ಪಾಸಾಬ್ ನಾಯಿಕವಾಡಿ, ಚನ್ನಪ್ಪಾ ಅಡವಿಸ್ವಾಮಿಮಠ ಸೇರಿದಂತೆ ಒಟ್ಟು 9 ಜನ ಸಾಥ್ ನೀಡಿದ್ದರು.&lt;/p&gt;&lt;h2&gt;&lt;strong&gt;ಪೊಲೀಸರಿಗೂ ಲಂಚ, ವರದಿ ತಿದ್ದುಪಡಿ:&lt;/strong&gt;&lt;/h2&gt;&lt;p&gt;ಕೊಲೆಯ ನಂತರ ಎಫ್&zwnj;ಎಸ್&zwnj;ಎಲ್ (FSL) ವರದಿಯಲ್ಲಿ ವಿಷಪ್ರಾಶನದ ಬಗ್ಗೆ ಉಲ್ಲೇಖವಾಗಿತ್ತು. ಆದರೆ, 2 ಕೋಟಿ ರೂಪಾಯಿ ವಿಮೆ ಹಣ ಸಿಗಬೇಕೆಂಬ ಉದ್ದೇಶದಿಂದ ಆರೋಪಿಗಳು ಹಣದ ಆಮಿಷವೊಡ್ಡಿ ಎಫ್&zwnj;ಎಸ್&zwnj;ಎಲ್ ವರದಿಯನ್ನೇ ತಿದ್ದುಪಡಿ ಮಾಡಿಸಲು ಪ್ರಯತ್ನಿಸಿದ್ದರು. ಇದಕ್ಕೆ ಕೆಲವು ಪೊಲೀಸ್ ಸಿಬ್ಬಂದಿಯೂ ಸಹಕರಿಸಿದ್ದರು ಎಂಬ ಸ್ಫೋಟಕ ಮಾಹಿತಿ ಸುದ್ದಿಗೋಷ್ಠಿಯಲ್ಲಿ ಹೊರಬಂದಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಬಾಂಬ್ ಸಿಡಿಸಿದ ಇನ್ಶೂರೆನ್ಸ್ ಜಗಳ:&lt;/strong&gt;&lt;/h2&gt;&lt;p&gt;ಇಷ್ಟೆಲ್ಲಾ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದು ವಿಮೆ ಹಣದ ಹಂಚಿಕೆಯ ವಿಚಾರದಲ್ಲಿ! ಸಂದೀಪ್ ಅವರ ಹೆಸರಿನಲ್ಲಿದ್ದ 2 ಕೋಟಿ ರೂ. ವಿಮೆ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಪತ್ನಿ ಸುಮಾ ಮತ್ತು ಪ್ರಿಯಕರ ಪುಂಡಲೀಕ ನಡುವೆ ಜಗಳ ಆರಂಭವಾಗಿತ್ತು. ಈ ಸುಳಿವು ಬೆನ್ನಟ್ಟಿದ ಯಮಕನಮರಡಿ ಮತ್ತು ಘಟಪ್ರಭಾ ಪೊಲೀಸರು ತನಿಖೆ ನಡೆಸಿದಾಗ ಈ ಭೀಕರ ಹತ್ಯಾಕಾಂಡ ಬಯಲಾಗಿದೆ. ಬೆಳಗಾವಿ ಎಸ್&zwnj;ಪಿ ಕೆ. ರಾಮರಾಜನ್ ಅವರು ಸುದ್ದಿಗೋಷ್ಠಿ ನಡೆಸಿ, ಪ್ರಕರಣದ ಹಂತ ಹಂತದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ಮತ್ತು ದಕ್ಷತೆಯಿಂದ ಕೆಲಸ ಮಾಡಿದ ಪೊಲೀಸ್ ತಂಡವನ್ನು ಶ್ಲಾಘಿಸಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/belagavi-retired-soldier-murder-case-insurance-money-wife-lover-arrested/articleshow-ba0z5qe"/>
        </item>
        <item>
            <title><![CDATA[Bigg Boss ರಕ್ಷಿತಾ ಶೆಟ್ಟಿ ಈಗ ಸಾಫ್ಟ್​ವೇರ್​  ಎಂಜಿನಿಯರ್​: ಉದ್ಯೋಗ ಸಿಕ್ಕಿದ್ದು ಹೇಗೆ]]></title>
            <link>https://kannada.asianetnews.com/gallery/tv-talk/bigg-boss-rakshita-shetty-and-maja-bharat-raghavendra-new-reels-suc-c13ciim</link>
            <guid isPermaLink="true">https://kannada.asianetnews.com/gallery/tv-talk/bigg-boss-rakshita-shetty-and-maja-bharat-raghavendra-new-reels-suc-c13ciim</guid>
            <pubDate>Tue, 16 Jun 2026 20:01:52 +0530</pubDate>
            <description><![CDATA[ಬಿಗ್&zwnj;ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು 'ಮಜಾ ಭಾರತ'ದ ರಾಘವೇಂದ್ರ ಜೊತೆಯಾಗಿ ಮಾಡಿದ ರೀಲ್ಸ್ ವೈರಲ್ ಆಗಿದೆ. ಇದರಲ್ಲಿ ರಕ್ಷಿತಾ ಸಾಫ್ಟ್&zwnj;ವೇರ್ ಎಂಜಿನಿಯರ್ ಆಗಿ ಡೆಡ್&zwnj;ಲೈನ್ ಫಜೀತಿಯನ್ನು ಹಾಸ್ಯಮಯವಾಗಿ ತೋರಿಸಿದ್ದು, ರಾಘವೇಂದ್ರ ಮ್ಯಾನೇಜರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv8d8fc1s30fr3232396jkkd,imgname-rakshita-shetty-01-1781620030849.jpg" type="image/jpeg" height="390" width="690"/>
            <content:encoded><![CDATA[ಬಿಗ್&zwnj;ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು 'ಮಜಾ ಭಾರತ'ದ ರಾಘವೇಂದ್ರ ಜೊತೆಯಾಗಿ ಮಾಡಿದ ರೀಲ್ಸ್ ವೈರಲ್ ಆಗಿದೆ. ಇದರಲ್ಲಿ ರಕ್ಷಿತಾ ಸಾಫ್ಟ್&zwnj;ವೇರ್ ಎಂಜಿನಿಯರ್ ಆಗಿ ಡೆಡ್&zwnj;ಲೈನ್ ಫಜೀತಿಯನ್ನು ಹಾಸ್ಯಮಯವಾಗಿ ತೋರಿಸಿದ್ದು, ರಾಘವೇಂದ್ರ ಮ್ಯಾನೇಜರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.&lt;img&gt;&lt;p&gt;Bigg Boss ರಕ್ಷಿತಾ ಶೆಟ್ಟಿ ಹವಾ ಇನ್ನೂ ನಿಂತಿಲ್ಲ. ಇದಾಗಲೇ ರಕ್ಷಿತಾ 'ಮಜಾ ಭಾರತ' ಖ್ಯಾತಿಯ ನಟ ರಾಘವೇಂದ್ರ ಅವರ ಜೊತೆ ಸಾಕಷ್ಟು ರೀಲ್ಸ್​ ಮಾಡಿದ್ದಾರೆ. ತಮ್ಮ ಸ್ತ್ರೀವೇಷದ ಮೂಲಕ 'ರಾಗಿಣಿ' ಎಂದೇ ಜನಪ್ರಿಯರಾಗಿರುವ ರಾಘವೇಂದ್ರ ಮತ್ತು ರಕ್ಷಿತಾ ಶೆಟ್ಟಿ ಜೊತೆಯಾಗಿ ಹೊಸಹೊಸ ಹವಾ ಸೃಷ್ಟಿಸುತ್ತಲೇ ಇದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ ರಕ್ಷಿತಾ ಶೆಟ್ಟಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿರುವ ವಿಡಿಯೋ ಒಂದು ವೈರಲ್​ ಆಗಿದೆ. ಇದನ್ನು ಖುದ್ದು ರಕ್ಷಿತಾ ಅವರೇ ಶೇರ್​ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಇದು ಇದೇ ಜೋಡಿ ಸಾಫ್ಟ್​ವೇರ್​ ಉದ್ಯೋಗಿಯ ಡೆಡ್​ಲೈನ್​ ಫಜೀತಿಯನ್ನು ತೋರಿಸುತ್ತದೆ. ಇದರಲ್ಲಿ ರಕ್ಷಿತಾ ಶೆಟ್ಟಿ (Bigg Boss Rakshita Shetty) ಸಾಫ್ಟ್​ವೇರ್​ ಎಂಜಿನಿಯರ್​ ಆಗಿದ್ದು, ಡೆಡ್​ಲೈನ್​ ಬಂದರೂ ಕೆಲಸ ಮಾಡಲು ಆಗದೇ ಫಜೀತಿ ಪಡುವ ಹಾಸ್ಯಮಯ ಪ್ರಸಂಗ ಇದಾಗಿದೆ.&lt;/p&gt;&lt;img&gt;&lt;p&gt;ಇದರಲ್ಲಿ ರಾಘವೇಂದ್ರ ಅವರು ಮ್ಯಾನೇಜರ್​ ಆಗಿದ್ದಾರೆ. ರಕ್ಷಿತಾಶೆಟ್ಟಿಗೆ ಅವರೇ ಮ್ಯಾನೇಜರ್​ ಎಂದು ತಿಳಿಯದೇ ಡೆಡ್​ಲೈನ್​ ಕೊಟ್ಟಿರೋ ಮ್ಯಾನೇಜರ್​ ಅನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿರುವ ರೀಲ್ಸ್​ ಇದಾಗಿದೆ.&amp;nbsp;&lt;/p&gt;&lt;img&gt;&lt;p&gt;ಇಬ್ಬರೂ ಕಾಮೇಡಿಯನ್​ ಒಟ್ಟಿಗೇ ಸೇರಿದ್ರೆ ಏನಾಗತ್ತೆ ಎನ್ನೋದನ್ನು ಇದರಲ್ಲಿ ತೋರಿಸಲಾಗಿದೆ. ಇವರಿಬ್ಬರ ಕಾಂಬೀನೇಷನ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದಾಗಲೇ ಈ ಜೋಡಿ ಇಂಥದ್ದೇ ಕಾಮಿಡಿ ವಿಷ್ಯ ಇಟ್ಟುಕೊಂಡು ಹಲವು ರೀಲ್ಸ್​ ಮಾಡಿವೆ.&lt;/p&gt;&lt;img&gt;&lt;p&gt;ರಾಘವೇಂದ್ರ ಎನ್ನೋಕ್ಕಿಂತ ರಾಗಿಣಿ ಎಂದೇ ಫೇಮಸ್​ ಆದವರು 'ಮಜಾ ಭಾರತ' ಖ್ಯಾತಿಯ ನಟ. ಸ್ತ್ರೀವೇಷದಲ್ಲಿ ಹೆಣ್ಣುಮಕ್ಕಳನ್ನೂ ನಾಚಿಸುವ ಹಾಗೆ ನಟಿಸುವುದರಲ್ಲಿ ಎತ್ತಿದ ಕೈ ಯಾರದ್ದು ಎಂದು ಕೇಳಿದರೆ ಕಿರುತೆರೆ ವೀಕ್ಷಕರಿಗೆ ಮೊದಲಿಗೆ ನೆನಪಾಗುವುದು ರಾಘವೇಂದ್ರ. ರಾಗಿಣಿ ಎಂದೇ ಫೇಮಸ್​ ಆಗಿರೋ ಕಾಮಿಡಿ ಹೀರೋ ರಾಘು ಅಂದ್ರೆ ಒಂದು ಲೆವೆಲ್​ ಮೇಲೆಯೇ. ಶಿವಮೊಗ್ಗ ಜಿಲ್ಲೆಯ ಸಾಗರದವರಾದ ರಾಘವೇಂದ್ರ ಹುಡುಗಿ ಪಾತ್ರದ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿದ್ದಾರೆ, ಹಾಗೆ ಕದ್ದಿದ್ದಾರೆ ಕೂಡ. ಇವರು ಸ್ತ್ರೀವೇಷ ಹಾಕಿದರೆನೇ ನೋಡಲು ಸೊಗಸು ಎನ್ನುವಷ್ಟರ ಮಟ್ಟಿಗೆ ವೀಕ್ಷಕರು ಇವರನ್ನು ಹಾಗೆಯೇ ನೋಡಲು ಬಯಸುವುದು ಇದೆ. ಆದರೆ ಇದೀಗ ರಕ್ಷಿತಾ ಜೊತೆ ರಿಯಲ್​ ವೇಷದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-rakshita-shetty-and-maja-bharat-raghavendra-new-reels-suc-c13ciim"/>
        </item>
        <item>
            <title><![CDATA[ಯಾರ ಮೇಲೂ ಡಿಪೆಂಡ್‌ ಆಗ್ಬೇಡಿ; ಮದುವೆ ಬಗ್ಗೆ ಫಸ್ಟ್‌ ಟೈಮ್‌ ಮಾತನಾಡಿದ ಅಂಬಾನಿ ಸೊಸೆ Radhika Merchant]]></title>
            <link>https://kannada.asianetnews.com/gallery/india-news/mukesh-ambani-daughter-in-law-radhika-merchant-on-marriage-woman-d30292s</link>
            <guid isPermaLink="true">https://kannada.asianetnews.com/gallery/india-news/mukesh-ambani-daughter-in-law-radhika-merchant-on-marriage-woman-d30292s</guid>
            <pubDate>Tue, 16 Jun 2026 12:29:18 +0530</pubDate>
            <description><![CDATA[&lt;p&gt;Mukesh Ambani Sister In Law Radhika Merchant: ಮುಖೇಶ್ ಅಂಬಾನಿ ಅವರಿಗೆ ಹೇಗೆ ಪರಿಚಯದ ಅಗತ್ಯವಿಲ್ಲವೋ, ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್&zwnj;ಗೂ ಈಗ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗೆ ಅವರು ಆಡಿದ ಮಾತುಗಳು ಸದ್ಯ ವೈರಲ್ ಆಗುತ್ತಿವೆ. ಅನಂತ್&zwnj; ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್&zwnj; ಕೂಡ ಉದ್ಯಮಿ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3tx4qaktr0wmg08gzsyhd7z,imgname-radhika-merchant-anant-ambani-1756470861139.jpg" type="image/jpeg" height="390" width="690"/>
            <content:encoded><![CDATA[&lt;p&gt;Mukesh Ambani Sister In Law Radhika Merchant: ಮುಖೇಶ್ ಅಂಬಾನಿ ಅವರಿಗೆ ಹೇಗೆ ಪರಿಚಯದ ಅಗತ್ಯವಿಲ್ಲವೋ, ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್&zwnj;ಗೂ ಈಗ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗೆ ಅವರು ಆಡಿದ ಮಾತುಗಳು ಸದ್ಯ ವೈರಲ್ ಆಗುತ್ತಿವೆ. ಅನಂತ್&zwnj; ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್&zwnj; ಕೂಡ ಉದ್ಯಮಿ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಗಳು 2024ರಲ್ಲಿ ಅದ್ದೂರಿಯಾಗಿ ನಡೆದವು. ಈ ಸಮಯದಲ್ಲಿ, ರಾಧಿಕಾ ಮರ್ಚೆಂಟ್ ಇಂಟರ್ನೆಟ್&zwnj;ನಲ್ಲಿ ಭಾರಿ ವೈರಲ್ ಆದರು. ಅನಂತ್ ಅಂಬಾನಿ ದಪ್ಪಗಿದ್ದರೂ, ರಾಧಿಕಾ ಕೇವಲ ಹಣಕ್ಕಾಗಿ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದರು. ಆದರೆ, ರಾಧಿಕಾ ಆ ಕಾಮೆಂಟ್&zwnj;ಗಳಿಗೆ ತಲೆಕೆಡಿಸಿಕೊಂಡಿರಲಿಲ್ಲ. ಇತ್ತೀಚೆಗೆ, ತಮ್ಮ ಮದುವೆ, ಪತಿ ಮತ್ತು ಮಹಿಳೆಯರು ಆರ್ಥಿಕವಾಗಿ ಏಕೆ ಸ್ವತಂತ್ರರಾಗಬೇಕು ಎಂಬುದರ ಕುರಿತು ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಭಾರತದಲ್ಲಿ ನಡೆದ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಚಳುವಳಿಯ ಪ್ರಧಾನ ಕಚೇರಿಯ ಸಭೆಯೊಂದರಲ್ಲಿ ರಾಧಿಕಾ ಮಾತನಾಡಿದರು. ಮದುವೆಯಲ್ಲಿ ಸಮಾನತೆ ಮತ್ತು ಮಹಿಳೆಯರಿಗೆ ಆರ್ಥಿಕ ಸಮಾನತೆ ಏಕೆ ಮುಖ್ಯ ಎಂಬುದನ್ನು ಅವರು ವಿವರಿಸಿದರು. ಮಹಿಳೆಯರು ಎಂದಿಗೂ ಇತರರನ್ನು ಅವಲಂಬಿಸಬಾರದು ಮತ್ತು ಜೀವನದಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ರಾಧಿಕಾ ಹೇಳಿದರು.&lt;/p&gt;&lt;img&gt;&lt;p&gt;ಮಹಿಳೆಯರು ಯಾರ ಮಗಳಾಗಿದ್ದರೂ, ಯಾರ ಸೊಸೆಯಾಗಿದ್ದರೂ ಹಣದ ವಿಷಯದಲ್ಲಿ ಯಾರ ಮೇಲೂ ಅವಲಂಬಿತರಾಗಬಾರದು ಎಂದು ರಾಧಿಕಾ ಹೇಳಿದರು. 'ನೀವು ಯಾರ ಮಗಳು, ಯಾರ ಹೆಂಡತಿ, ನಿಮಗೆ ಜೀವನದಲ್ಲಿ ಎಷ್ಟೇ ಸೌಕರ್ಯಗಳಿದ್ದರೂ ಅದು ಮುಖ್ಯವಲ್ಲ. ನೀವು ಜೀವನದಲ್ಲಿ ನಿಮಗಾಗಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದರೆ, ನೀವು ಆರ್ಥಿಕವಾಗಿ ಬೆಳೆದು ತೋರಿಸಬೇಕು. ಹಣದ ವಿಷಯದಲ್ಲಿ ಇತರರ ಮೇಲೆ ಅವಲಂಬಿತರಾಗಬಾರದು' ಎಂದು ರಾಧಿಕಾ ಹೇಳಿದ್ದಾರೆ. ಅಂಬಾನಿ ಸೊಸೆಯಾಗಿದ್ದರೂ, ರಾಧಿಕಾ ಮಹಿಳಾ ಉದ್ಯಮಿಯಾಗಿ ತಮ್ಮದೇ ಆದ ಗುರುತನ್ನು ಗಳಿಸಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/mukesh-ambani-daughter-in-law-radhika-merchant-on-marriage-woman-d30292s"/>
        </item>
        <item>
            <title><![CDATA[IT ಸಿಟಿಗಳಲ್ಲಿ ಯಾಕೆ ಹೆಚ್ಚಾಗ್ತಿದೆ Co-living ಟ್ರೆಂಡ್… ಜನ ಇದನ್ನ ಇಷ್ಟಪಡೋದಕ್ಕೆ ಕಾರಣ ಏನು?]]></title>
            <link>https://kannada.asianetnews.com/relationship/co-living-culture-increasing-in-it-cities-know-about-it/articleshow-d7ib461</link>
            <guid isPermaLink="true">https://kannada.asianetnews.com/relationship/co-living-culture-increasing-in-it-cities-know-about-it/articleshow-d7ib461</guid>
            <pubDate>Tue, 16 Jun 2026 22:29:50 +0530</pubDate>
            <description><![CDATA[&lt;p&gt;Co-living : ಇತ್ತೀಚಿನ ದಿನಗಳಲ್ಲಿ, ಪ್ರಮುಖ ಐಟಿ ನಗರಗಳ ಯುವಕರಲ್ಲಿ &quot;Co-living&rdquo; ಹುಚ್ಚು ವೇಗವಾಗಿ ಬೆಳೆಯುತ್ತಿದೆ. ಆದರೆ ಇದು ಕೇವಲ ಕೂಲ್ ಜೀವನಶೈಲಿಯೇ ಅಥವಾ ಅದರ ಹಿಂದೆ ಏನಾದರೂ ಸತ್ಯವಿದೆಯೇ? ಕೋ ಲಿವಿಂಗ್ ನಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ತಿಳಿಯಿರಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9hgerc5gn175wz24d6g3yr1,imgname-co-living-1762598019461.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಐಟಿ ಸಿಟಿಗಳಲ್ಲಿ ಯಾಕೆ ಹೆಚ್ಚಾಗ್ತಿದೆ Co-living&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ, ಪ್ರಮುಖ ಮಹಾನಗರಗಳು ಮತ್ತು ಐಟಿ ನಗರಗಳಲ್ಲಿ ಜೀವನಶೈಲಿಯ ವಿಷಯಕ್ಕೆ ಬಂದಾಗ, ಈ ಒಂದು ಹೊಸ ಪದವು ಹೆಚ್ಚಾಗಿ ಕೇಳಿಬರುತ್ತಿದೆ ಅದು ಸಹ-ಜೀವನ (Co-living). ಒಂದು ಕಾಲದಲ್ಲಿ ವಿದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸಂಸ್ಕೃತಿ ಈಗ ಪ್ರಮುಖ ಭಾರತೀಯ ಐಟಿ ಕೇಂದ್ರಗಳಿಗೆ (ಹೈದರಾಬಾದ್, ಬೆಂಗಳೂರು, ಪುಣೆ ಮತ್ತು ನೋಯ್ಡಾದಂತಹ) ಹರಡಿದೆ. ಈ ನಗರಗಳಲ್ಲಿ ಕೆಲಸ ಮಾಡುವ ಯುವ ಜನರು ಮದುವೆ ಆಗದೆ ಆಹಾರ, ಕೊಠಡಿಗಳು ಮತ್ತು ಹಾಸಿಗೆಗಳನ್ನು ಹಂಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಟ್ರೆಂಡ್ ವೇಗವಾಗಿ ಬೆಳೆಯುತ್ತಿದೆ. ಆದರೆ ಇದು ಕೇವಲ ಹೊಸ ಲೈಫ್ ಸ್ಟೈಲ್ ಟ್ರೆಂಡ್ ಮಾತ್ರ ಅಲ್ಲ, ಅ ಯುವಜನರಲ್ಲಿ ಬದಲಾಗುತ್ತಿರುವ ಮನಸ್ಥಿತಿಯಿಂದಾಗಿ ಈ ಸಂಸ್ಕೃತಿ ಟ್ರೆಂಡ್ ನಲ್ಲಿದೆ.&lt;/p&gt;&lt;h3&gt;&lt;strong&gt;ಏನಿದು Co-living?. ಯುವಜನರಲ್ಲಿ ಏಕೆ ಜನಪ್ರಿಯತೆ ಗಳಿಸುತ್ತಿದೆ?&lt;/strong&gt;&lt;/h3&gt;&lt;p&gt;ಸಹಜೀವನ( Co-living) ಎಂದರೆ ಇಬ್ಬರು ವ್ಯಕ್ತಿಗಳು (ಗಂಡು ಮತ್ತು ಹೆಣ್ಣು), ಯಾವುದೇ ಸಾಮಾಜಿಕ ಅಥವಾ ಕಾನೂನು ಬಾಧ್ಯತೆಯಿಲ್ಲದೆ (ಉದಾಹರಣೆಗೆ ಮದುವೆ), ಒಂದೇ ಸೂರಿನಡಿ ಪಾರ್ಟ್ನರ್ ಗಳಾಗಿ ಒಟ್ಟಿಗೆ ವಾಸಿಸುತ್ತಾರೆ, ತಮ್ಮ ಖರ್ಚು ಮತ್ತು ವೈಯಕ್ತಿಕ ಜೀವನವನ್ನು ಹಂಚಿಕೊಳ್ಳುತ್ತಾರೆ. ಯುವಜನರು ಈ ಟ್ರೆಂಡ್ ನತ್ತ ಆಕರ್ಷಿತರಾಗಲು ಹಲವಾರು ಪ್ರಮುಖ ಕಾರಣಗಳಿವೆ:&lt;/p&gt;&lt;p&gt;&lt;strong&gt;ಆರ್ಥಿಕ ಸ್ವಾತಂತ್ರ್ಯ: &lt;/strong&gt;ದೊಡ್ಡ ನಗರಗಳಲ್ಲಿ, ಒಂದೇ ಫ್ಲಾಟ್&zwnj;ನ ಬಾಡಿಗೆ, ವಿದ್ಯುತ್ ಬಿಲ್, ವೈ-ಫೈ ಮತ್ತು ಆಹಾರಕ್ಕಾಗಿ ಪಾವತಿಸುವುದು ನಿಮ್ಮ ಜೇಬಿಗೆ ಹೊರೆಯಾಗಬಹುದು. ಇಬ್ಬರು ಜೊತೆಗಿದ್ದರೆ ಈ ವೆಚ್ಚಗಳನ್ನು ಹಂಚಿಕೊಳ್ಳಬಹುದು. ಇದರಿಂದ ಐಷಾರಾಮಿ ಜೀವನಶೈಲಿಯನ್ನೂ ಸಹ ಬಜೆಟ್&zwnj;ನೊಂದಿಗೆ ಎಂಜಾಯ್ ಮಾಡಲು ಸಹಾಯ ಮಾಡುತ್ತದೆ.&lt;/p&gt;&lt;p&gt;&lt;strong&gt;ಒಂಟಿಯಾಗಿ ಇರಬೇಕಾಗಿಲ್ಲ: &lt;/strong&gt;ಇತರ ನಗರಗಳಲ್ಲಿ ತಮ್ಮ ಕುಟುಂಬಗಳಿಂದ ದೂರವಾಗಿ ಒಂಟಿಯಾಗಿ ವಾಸಿಸುವ ಯುವಜನರಿಗೆ ಒಂಟಿತನವು ಒಂದು ಪ್ರಮುಖ ಸಮಸ್ಯೆಯಾಗಿದೆ. ಅಂತಹ ಸಂದರ್ಭಗಳಲ್ಲಿ, Co-living ಅವರಿಗೆ ಭಾವನಾತ್ಮಕ ಬೆಂಬಲ ಮತ್ತು ಒಡನಾಟವನ್ನು ಒದಗಿಸುತ್ತದೆ.&lt;/p&gt;&lt;p&gt;&lt;strong&gt;ಸಂಪೂರ್ಣ ಸ್ವಾತಂತ್ರ್ಯ: &lt;/strong&gt;ಪೋಷಕರು ಅಥವಾ ಸಮಾಜದ ನಿರ್ಬಂಧಗಳಿಂದ ದೂರವಾಗಿ, ಯುವಕರು ಈ ಸಂಸ್ಕೃತಿಯನ್ನು ತಮ್ಮ ಇಚ್ಛೆಯಂತೆ ತಮ್ಮ ಜೀವನವನ್ನು ನಡೆಸುವ ಮಾರ್ಗವಾಗಿ ನೋಡುತ್ತಾರೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ನಗರಗಳು ಈಗ ವಿಶೇಷ Co-living ಹಾಸ್ಟೆಲ್&zwnj;ಗಳು ಮತ್ತು ಪಿಜಿಗಳಿಂದ ತುಂಬಿವೆ, ಇದು ಯುವಜನರ ಆದ್ಯತೆಗಳು ಮತ್ತು ಗೌಪ್ಯತೆಗೆ ಅನುಗುಣವಾಗಿ ಸೌಲಭ್ಯಗಳನ್ನು ನೀಡುತ್ತದೆ.&lt;/p&gt;&lt;h3&gt;&lt;strong&gt;Co-living ಹಿಂದಿರುವ ಅಪಾಯಗಳು&lt;/strong&gt;&lt;/h3&gt;&lt;p&gt;ಈ ಟ್ರೆಂಡ್ ಮೊದಲ ನೋಟದಲ್ಲಿ ಕೂಲ್ ಮತ್ತು ಸುಲಭವಾಗಿ ಕಂಡುಬಂದರೂ, ಅದರ ವಾಸ್ತವತೆ ಮತ್ತು ಇನ್ನೊಂದು ಮುಖ ಭಯ ಹುಟ್ಟಿಸುತ್ತದೆ. ಈ ಅಲ್ಪಾವಧಿಯ ಸಂಬಂಧಗಳಳಿಂದಾಗಿ, ತಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವ ಯುವಜನರ ಸಂಖ್ಯೆ ಹೆಚ್ಚುತ್ತಿದೆ ಎಂದು ಮನಶ್ಶಾಸ್ತ್ರಜ್ಞರು ಮತ್ತು ಸಲಹೆಗಾರರು ತಿಳಿಸುತ್ತಾರೆ. ಇನ್ನು ಈ ಸಂಬಂಧದಲ್ಲಿ ಯಾವುದೇ ಸಾಮಾಜಿಕ ಅಥವಾ ಕಾನೂನು ಬಾಧ್ಯತೆಗಳಿಲ್ಲದ ಕಾರಣ, ಜನರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೂ ಸುಲಭವಾಗಿ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ, ಯುವಕರು (ವಿಶೇಷವಾಗಿ ಹುಡುಗಿಯರು) ಭಾವನಾತ್ಮಕವಾಗಿ ಕನೆಕ್ಟ್ ಆಗಿ ಮತ್ತೆ ಡಿಪ್ರೆಶನ್ ಗೆ ಜಾರುವ ಸಾಧ್ಯತೆ ಕೂಡ ಇದೆ. ಅನೇಕ ಬಾರಿ ಯುವಕರು ದುರುದ್ದೇಶಗಳಿಗಾಗಿ Co-living ನಲ್ಲಿದ್ದುಕೊಂಡು, ಸಂಗಾತಿಯನ್ನು ದೈಹಿಕ ಸುಖಕ್ಕಾಗಿ ಬಳಸಿಕೊಳ್ಳುವುದರಿಂದ ಅನಗತ್ಯ ಗರ್ಭಧಾರಣೆ ಅಥವಾ ಗರ್ಭಪಾತದಂತಹ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಇದು ಅವರ ವೃತ್ತಿಜೀವನದ ಮೇಲೂ ನೇರ ಪರಿಣಾಮ ಬೀರುತ್ತದೆ.&lt;/p&gt;]]></content:encoded>
            <category>relationship</category>
            <dc:creator>Pavna Das</dc:creator>
            <atom:link href="https://kannada.asianetnews.com/relationship/co-living-culture-increasing-in-it-cities-know-about-it/articleshow-d7ib461"/>
        </item>
        <item>
            <title><![CDATA[Chanakya Niti: ಪತ್ನಿಯನ್ನು ಈ 4 ಜಾಗಕ್ಕೆ ಅಪ್ಪಿತಪ್ಪಿಯೂ ಕರೆದುಕೊಂಡು ಹೋಗಬೇಡಿ ಅಂತಾರೆ ಚಾಣಕ್ಯ!]]></title>
            <link>https://kannada.asianetnews.com/relationship/chanakya-niti-four-places-a-husband-should-not-take-his-wife-gvd/articleshow-g9wzqn4</link>
            <guid isPermaLink="true">https://kannada.asianetnews.com/relationship/chanakya-niti-four-places-a-husband-should-not-take-his-wife-gvd/articleshow-g9wzqn4</guid>
            <pubDate>Tue, 16 Jun 2026 17:32:07 +0530</pubDate>
            <description><![CDATA[&lt;p&gt;Chanakya Niti For Married Life: ಚಾಣಕ್ಯ ನೀತಿಯ ಪ್ರಕಾರ, ಗಂಡ ತನ್ನ ಹೆಂಡತಿಯನ್ನು ಯಾವ 4 ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು? ಕುಟುಂಬದ ಸುರಕ್ಷತೆ ಮತ್ತು ಗೌರವದ ಬಗ್ಗೆ ಚಾಣಕ್ಯರು ನೀಡಿದ ಸಲಹೆಗಳೇನು?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv84yeqwkd8w8g728qgzwr9w,imgname-jvj-1781611313916.png" type="image/jpeg" height="390" width="690"/>
            <content:encoded><![CDATA[&lt;p&gt;ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನ, ಕುಟುಂಬ, ಸಮಾಜ ಮತ್ತು ಸಂಬಂಧಗಳ ಬಗ್ಗೆ ಹಲವಾರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಇಂದಿನ ಕಾಲದಲ್ಲೂ ಚಾಣಕ್ಯರ ನೀತಿಗಳು ನಮಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ದಾರಿದೀಪವಾಗಿವೆ. ಚಾಣಕ್ಯರು ತಮ್ಮ ಒಂದು ನೀತಿಯಲ್ಲಿ, ಪತಿಯು ತನ್ನ ಪತ್ನಿಯನ್ನು ಮರೆತೂ ಕೂಡ ಕರೆದುಕೊಂಡು ಹೋಗಬಾರದ ಕೆಲವು ಸ್ಥಳಗಳ ಬಗ್ಗೆ ಹೇಳಿದ್ದಾರೆ. ಹಾಗೆ ಮಾಡಿದರೆ ಅನಾಹುತ ಆಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ. ಆ 4 ಸ್ಥಳಗಳು ಯಾವುವು ಎಂದು ಮುಂದೆ ತಿಳಿಯೋಣ..&lt;/p&gt;&lt;p&gt;&lt;strong&gt;ಶತ್ರುಗಳು ಅಥವಾ ವಿರೋಧಿಗಳ ನಡುವೆ&lt;/strong&gt;&lt;/p&gt;&lt;p&gt;ಚಾಣಕ್ಯರ ಪ್ರಕಾರ, ಶತ್ರುಗಳು ಅಥವಾ ನಿಮ್ಮನ್ನು ವಿರೋಧಿಸುವ ಜನರು ಇರುವ ಜಾಗಕ್ಕೆ ಪತ್ನಿಯನ್ನು ಕರೆದುಕೊಂಡು ಹೋಗಬಾರದು. ಯಾಕಂದ್ರೆ, ನಿಮ್ಮ ಜೊತೆ ಪತ್ನಿ ಇರುವುದನ್ನು ನೋಡಿ ವಿರೋಧಿಗಳು ನಿಮ್ಮ ದೌರ್ಬಲ್ಯದ ಲಾಭ ಪಡೆಯಬಹುದು. ಅಂತಹ ಸ್ಥಳಗಳಲ್ಲಿ ಪತ್ನಿಯ ಸುರಕ್ಷತೆಗೂ ಅಪಾಯ ಉಂಟಾಗಬಹುದು. ಹೀಗಾಗಿ ಇಂತಹ ಕಡೆಗಳಿಗೆ ಹೆಂಡತಿಯನ್ನು ಕರೆದೊಯ್ಯಬೇಡಿ.&lt;/p&gt;&lt;p&gt;&lt;strong&gt;ರಹಸ್ಯ ಚರ್ಚೆಗಳಲ್ಲಿ&lt;/strong&gt;&lt;/p&gt;&lt;p&gt;ಗಂಡ ಯಾವುದಾದರೂ ರಹಸ್ಯ ಚರ್ಚೆಯಲ್ಲಿ ಭಾಗವಹಿಸಲು ಹೋಗುತ್ತಿದ್ದರೆ, ಅಂತಹ ಜಾಗಕ್ಕೂ ಪತ್ನಿಯನ್ನು ಕರೆದುಕೊಂಡು ಹೋಗಬಾರದು. ಒಂದು ವೇಳೆ ಮನೆಯಲ್ಲೇ ಅಂತಹ ಚರ್ಚೆ ನಡೆಯುತ್ತಿದ್ದರೆ, ಪತ್ನಿಯನ್ನು ಅದರಿಂದ ದೂರ ಇಡಬೇಕು. ಚಾಣಕ್ಯರ ಪ್ರಕಾರ, ಯಾವುದೇ ಯೋಜನೆಯ ಯಶಸ್ಸು ಅದರ ಗೌಪ್ಯತೆಯನ್ನು ಅವಲಂಬಿಸಿರುತ್ತದೆ. ಮಹಿಳೆಯರ ಸ್ವಭಾವ ಚಂಚಲವಾಗಿರುತ್ತದೆ, ಅವರು ಮಾತಿನ ಭರದಲ್ಲಿ ರಹಸ್ಯಗಳನ್ನು ಬೇರೆಯವರಿಗೆ ಹೇಳಿಬಿಡಬಹುದು ಎಂದು ಚಾಣಕ್ಯರು ಹೇಳುತ್ತಾರೆ.&lt;/p&gt;&lt;p&gt;&lt;strong&gt;ವಿವಾದ ಅಥವಾ ಜಗಳದ ಸ್ಥಳ&lt;/strong&gt;&lt;/p&gt;&lt;p&gt;ಈಗಾಗಲೇ ಉದ್ವಿಗ್ನತೆ, ಜಗಳ ಅಥವಾ ವಿವಾದ ನಡೆಯುತ್ತಿರುವ ಸ್ಥಳಕ್ಕೆ ಪತ್ನಿಯನ್ನು ಕರೆದೊಯ್ಯುವುದು ಸರಿಯಲ್ಲ. ಅಂತಹ ಸ್ಥಳಗಳಲ್ಲಿ ಪರಿಸ್ಥಿತಿ ಯಾವಾಗ ಬೇಕಾದರೂ ಹದಗೆಡಬಹುದು. ಇದರಿಂದ ನಿಮ್ಮ ಜೊತೆಗೆ ನಿಮ್ಮ ಪತ್ನಿಯ ಜೀವಕ್ಕೂ ಅಪಾಯವಾಗಬಹುದು. ನೀವು ಒಬ್ಬರೇ ಇದ್ದರೆ ನಿಮ್ಮನ್ನು ರಕ್ಷಿಸಿಕೊಳ್ಳಬಹುದು, ಆದರೆ ಪತ್ನಿ ಜೊತೆಗಿದ್ದರೆ ನೀವು ದುರ್ಬಲರಾಗಬಹುದು. ಹಾಗಾಗಿ ಇಂತಹ ತಪ್ಪು ಮಾಡುವುದನ್ನು ತಪ್ಪಿಸಬೇಕು.&lt;/p&gt;&lt;p&gt;&lt;strong&gt;ಅಪಾಯಕಾರಿ ಪ್ರಯಾಣದಲ್ಲಿ&lt;/strong&gt;&lt;/p&gt;&lt;p&gt;ನೀವು ಜೀವಕ್ಕೆ ಅಪಾಯವಿರುವಂತಹ ಪ್ರಯಾಣಕ್ಕೆ ಹೋಗಬೇಕಿದ್ದರೆ, ಉದಾಹರಣೆಗೆ ಕಾಡು, ಯುದ್ಧಭೂಮಿ, ಅಂತಹ ಕಡೆಗಳಿಗೆ ಪತ್ನಿಯನ್ನು ಮರೆತೂ ಕೂಡ ಕರೆದುಕೊಂಡು ಹೋಗಬೇಡಿ. ಪತ್ನಿಯ ಸಂಪೂರ್ಣ ಜವಾಬ್ದಾರಿ ಗಂಡನ ಮೇಲಿರುತ್ತದೆ. ಇಂತಹ ಸ್ಥಳಗಳಲ್ಲಿ ಪತ್ನಿಯ ಬಗ್ಗೆ ಗಮನ ಹರಿಸುವುದು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ, ಅಂತಹ ಪ್ರಯಾಣವನ್ನು ಮುಂದೂಡಿ ಅಥವಾ ಪ್ರಯಾಣ ಅನಿವಾರ್ಯವಾದರೆ ಪತ್ನಿಯನ್ನು ಜೊತೆಗೆ ಕರೆದೊಯ್ಯಬೇಡಿ.&lt;/p&gt;&lt;h2&gt;&lt;strong&gt;ಗಮನಿಸಿ&lt;/strong&gt;&lt;/h2&gt;&lt;p&gt;ಈ ಲೇಖನದಲ್ಲಿರುವ ಮಾಹಿತಿಯನ್ನು ಧಾರ್ಮಿಕ ಗ್ರಂಥಗಳು, ವಿದ್ವಾಂಸರು ಮತ್ತು ಜ್ಯೋತಿಷಿಗಳಿಂದ ಪಡೆಯಲಾಗಿದೆ. ಈ ಮಾಹಿತಿಯನ್ನು ಓದುಗರಿಗೆ ತಲುಪಿಸುವುದು ನಮ್ಮ ಉದ್ದೇಶವಷ್ಟೇ. ಓದುಗರು ಇದನ್ನು ಕೇವಲ ಮಾಹಿತಿಗಾಗಿ ಮಾತ್ರ ಪರಿಗಣಿಸಬೇಕು.&lt;/p&gt;]]></content:encoded>
            <category>relationship</category>
            <dc:creator>Govindaraj S</dc:creator>
            <atom:link href="https://kannada.asianetnews.com/relationship/chanakya-niti-four-places-a-husband-should-not-take-his-wife-gvd/articleshow-g9wzqn4"/>
        </item>
        <item>
            <title><![CDATA[ನಟಿ ಸಂಚಿತಾ ಉಗಾಲೆಗೆ 22ಕ್ಕೆ ಜೀವನ ಬೋರಾಯ್ತಾ? ಹೆಚ್ಚಾಗ್ತಿರುವ ಯುವಕರ ಆತ್ಮ*ಹತ್ಯೆಗೆ ಕಾರಣ ಏನು?]]></title>
            <link>https://kannada.asianetnews.com/gallery/health-life/actress-sanchita-ugale-death-22-age-why-are-young-people-dying-by-dies-nbk8dc2</link>
            <guid isPermaLink="true">https://kannada.asianetnews.com/gallery/health-life/actress-sanchita-ugale-death-22-age-why-are-young-people-dying-by-dies-nbk8dc2</guid>
            <pubDate>Mon, 15 Jun 2026 19:31:06 +0530</pubDate>
            <description><![CDATA[&lt;p&gt;actress sanchita ugale death : ಹೊಸ ಕನಸು ಬೆನ್ನೇರಿ, ಟ್ರಿಪ್, ಪಾರ್ಟಿ, ಜಾಬ್ ಅಂತ ಬ್ಯುಸಿ ಇರುವ ವಯಸ್ಸಿನಲ್ಲಿ ಆತ್ಮ*ಹತ್ಯೆ ಮಾಡಿಕೊಳ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಯುವಕರ್ಯಾಕೆ ಜೀವ ಮುಗಿಸುವ ನಿರ್ಧಾರ ತೆಗೆದುಕೊಳ್ತಿದ್ದಾರೆ ಎಂಬ ದೊಡ್ಡ ಪ್ರಶ್ನೆ ಶುರುವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv5rppk0fdvrd35h8ajhbfr9,imgname-actress-sanchita-ugale-1781531368032.jpg" type="image/jpeg" height="390" width="690"/>
            <content:encoded><![CDATA[&lt;p&gt;actress sanchita ugale death : ಹೊಸ ಕನಸು ಬೆನ್ನೇರಿ, ಟ್ರಿಪ್, ಪಾರ್ಟಿ, ಜಾಬ್ ಅಂತ ಬ್ಯುಸಿ ಇರುವ ವಯಸ್ಸಿನಲ್ಲಿ ಆತ್ಮ*ಹತ್ಯೆ ಮಾಡಿಕೊಳ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಯುವಕರ್ಯಾಕೆ ಜೀವ ಮುಗಿಸುವ ನಿರ್ಧಾರ ತೆಗೆದುಕೊಳ್ತಿದ್ದಾರೆ ಎಂಬ ದೊಡ್ಡ ಪ್ರಶ್ನೆ ಶುರುವಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಟಿ ಸಂಚಿತಾ ಉಗಾಲೆ ಮುಂಬೈನಲ್ಲಿ 22 ನೇ ವಯಸ್ಸಿನಲ್ಲಿ ಆತ್ಮ*ಹತ್ಯೆ ಮಾಡ್ಕೊಂಡು ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ. ಬರೀ ನಟಿ ಮಾತ್ರ ಅಲ್ಲ, ಇತ್ತೀಚಿನ ದಿನಗಳಲ್ಲಿ ಆತ್ಮ*ಹತ್ಯೆ ಮಾಡ್ಕೊಳ್ತಿರುವ ಯುವಕರ ಸಂಖ್ಯೆ ಹೆಚ್ಚಾಗ್ತಿದೆ. ಸಣ್ಣಪುಟ್ಟ ಕಾರಣಕ್ಕೆ ಯುವಕರು ಆತ್ಮ*ಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಹೊರಗೆ ಸಂತೋಷವಾಗಿ ಕಾಣುವ ವ್ಯಕ್ತಿಯೂ ಅಂತಹ ಹೆಜ್ಜೆ ಹೇಗೆ ಇಡ್ತಾರೆ ಎಂಬ ಪ್ರಶ್ನೆ ಮೂಡಿದೆ.&lt;/p&gt;&lt;img&gt;&lt;p&gt;ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ ದೇಶದ ಯುವಜನರಲ್ಲಿ ಆತ್ಮ*ಹತ್ಯೆ ಸಂಖ್ಯೆ ಹೆಚ್ಚಾಗಿದೆ. 2024 ರಲ್ಲಿ 14,488 ಯುವಕರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.ಇದು 2023 ಕ್ಕೆ ಹೋಲಿಸಿದರೆ ಶೇಕಡಾ 4.3ರಷ್ಟು ಹೆಚ್ಚಿದೆ. ಈ ವರ್ಷ ಇದ್ರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಂತೋಷವಾಗಿ ಕಾಣಿಸಿಕೊಳ್ಳುವ ವ್ಯಕ್ತಿ ದಿಢೀರನೆ ಆತ್ಮ*ಹತ್ಯೆ ನಿರ್ಧಾರ ತೆಗೆದುಕೊಳ್ತಿದ್ದಾನೆ.ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸಸ್ನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಓಂಪ್ರಕಾಶ್ ಪ್ರಕಾರ, ಯುವಜನರಲ್ಲಿ ಹೆಚ್ಚುತ್ತಿರುವ ಆತ್ಮ*ಹತ್ಯೆ ಗಳಿಗೆ ಹಲವು ಕಾರಣಗಳಿವೆ. ಯುವಜನರಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದೆ. ವೃತ್ತಿಜೀವನದ ಉದ್ವಿಗ್ನತೆಗಳು, ಭವಿಷ್ಯದ ಬಗ್ಗೆ ಚಿಂತೆಗಳು, ಬದಲಾಗುತ್ತಿರುವ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಸ್ಪರ್ಧೆಯು ಅವರನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತಿದೆ.&amp;nbsp;&lt;/p&gt;&lt;img&gt;&lt;p&gt;ಈಗ ಪ್ರತಿಯೊಂದು ಕ್ಷೇತ್ರದಲ್ಲೂ ತೀವ್ರ ಸ್ಪರ್ಧೆ ಇದೆ. ತಮ್ಮನ್ನು ತಾವು ಮುನ್ನಡೆಸುವ ಅನ್ವೇಷಣೆಯಲ್ಲಿ, ಯುವಕರು ತಮ್ಮ ಮಾನಸಿಕ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ. ಕೆಲವೊಮ್ಮೆ ಅವರು ತಮ್ಮ ಸಾಮರ್ಥ್ಯಗಳನ್ನು ಮೀರಿ ನಿರೀಕ್ಷೆಗಳನ್ನು ಇಡುತ್ತಿದ್ದಾರೆ. ಆದರೆ ಯಶಸ್ಸನ್ನು ಸಾಧಿಸಲು ವಿಫಲವಾದಾಗ, ಅವರು ಖಿನ್ನತೆಗೆ ಬಲಿಯಾಗ್ತಾರೆ. ಇದು ಸೋಶಿಯಲ್ ಮೀಡಿಯಾ ಯುಗ. ಜನರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸಾವಿರಾರು ಫಾಲೋವರ್ಸ್ ಹೊಂದಿದ್ದಾರೆ. ಆದರೆ ನಿಜ ಜೀವನದಲ್ಲಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲ. ಯುವಕರು ಈಗ ತಮ್ಮ ಭಾವನೆಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ತಿದ್ದಾರೆ. ಕೆಲವರು ತಮ್ಮ ಸಮಸ್ಯೆಗಳನ್ನು ಚಾಟ್ ಜಿಪಿಟಿಯಲ್ಲಿ ಹಂಚಿಕೊಳ್ತಿದ್ದಾರೆಯೇ ವಿನಃ ಸ್ನೇಃಹಿತರು, ಕುಟುಂಬಸ್ಥರ ಬಳಿ ಹೇಳ್ತಿಲ್ಲ. ಈ ಕಾರಣದಿಂದಾಗಿ, ಅನೇಕ ಸಂದರ್ಭಗಳಲ್ಲಿ, ವ್ಯಕ್ತಿಯ ದುಃಖಕ್ಕೆ ಸೂಕ್ತ ಪರಿಹಾರ ಸಿಗೋದಿಲ್ಲ. ಅದ ಖಿನ್ನತೆಯಾಗಿ ಬದಲಾಗ್ತಿದೆ.&lt;/p&gt;&lt;img&gt;&lt;p&gt;ಜೀವನದ ಎಲ್ಲ ಮಾರ್ಗ ಬಂದ್ ಆಗಿದೆ ಮುಂದೇ ಏನೂ ಇಲ್ಲ ಎಂದಾಗ ವ್ಯಕ್ತಿ ಆತ್ಮ*ಹತ್ಯೆ ಗೆ ಮುಂದಾಗ್ತಾನೆ. =ಇದರರ್ಥ ಅವರು ಯಾವಾಗಲೂ ದುಃಖಿತರಾಗಿ ಕಾಣ್ತಾರೆ ಎಂದಲ್ಲ. ಕೆಲವು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಯು ಹೊರಗೆ ಸಾಮಾನ್ಯವಾಗಿ ಕಾಣಿಸಬಹುದು, ಆದರೆ ಅವನ ಒಳಗೆ ತೀವ್ರವಾದ ನಬೋವಿರುತ್ತದೆ. ತಮ್ಮ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅಂತಹ ವ್ಯಕ್ತಿಯು ಖಿನ್ನತೆಯಿಂದ ಬಳಲುತ್ತಿರಬಹುದು. ಖಿನ್ನತೆಯು ಆತ್ಮ*ಹತ್ಯೆ ಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;img&gt;&lt;p&gt;ಮೆದುಳಿನಲ್ಲಿನ ರಾಸಾಯನಿಕ ಅಸಮತೋಲನದಿಂದ ಖಿನ್ನತೆ ಉಂಟಾಗುತ್ತದೆ. ಖಿನ್ನತೆಯು ಹಲವಾರು ಹಂತಗಳನ್ನು ಹೊಂದಿದೆ. ಆರಂಭದಲ್ಲಿ, ಮಾನಸಿಕ ಆರೋಗ್ಯ ಹದಗೆಡುತ್ತದೆ. ವ್ಯಕ್ತಿಯು ಆಸಕ್ತಿ ಕಳೆದುಕೊಳ್ಳುತ್ತಾನೆ. ಒಂಟಿಯಾಗಿರಲು ಬಯಸುತ್ತಾನೆ ಮತ್ತು ಕಿರಿಕಿರಿಗೊಳ್ಳುತ್ತಾನೆ. ಈ ಸಮಯದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಿದರೆ, ಖಿನ್ನತೆಯು ಉಲ್ಬಣಗೊಳ್ಳುತ್ತದೆ ಮತ್ತು ಅದರ ಅಂತಿಮ ಹಂತವನ್ನು ತಲುಪುತ್ತದೆ. ಖಿನ್ನತೆಯ ಅಂತಿಮ ಹಂತದಲ್ಲಿ, ತಾರ್ಕಿಕ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ವ್ಯಕ್ತಿಯು ತಮ್ಮ ಜೀವನ ಅರ್ಥಹೀನ ಎಂದು ಭಾವಿಸಲು ಪ್ರಾರಂಭಿಸುತ್ತಾನೆ. ಅವರು ತಮ್ಮ ಜೀವನವನ್ನು ಕೊನೆಗೊಳಿಸಲು ಯೋಚಿಸುತ್ತಾರೆ ಮತ್ತು ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದಾಗ್ಯೂ, ಇದು ರಾತ್ರೋರಾತ್ರಿ ಸಂಭವಿಸುವುದಿಲ್ಲ. ಆತ್ಮಹತ್ಯಾ ಆಲೋಚನೆಗಳು ಕ್ರಮೇಣ ಬೆಳೆಯುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ಲಕ್ಷಣಗಳು ಗೋಚರಿಸುತ್ತವೆ.&lt;/p&gt;&lt;img&gt;&lt;p&gt;ಯಾವಾಗಲೂ ಒಂಟಿತನ ಅನುಭವಿಸುವ, ನಿದ್ರೆಯ ಕೊರತೆ ಎದುರಿಸುವ, ಮೊದಲಿಗಿಂತ ಕಡಿಮೆ ಅಥವಾ ಹೆಚ್ಚು ಹಸಿವನ್ನು ಅನುಭವಿಸುವ, ಮನಸ್ಸಿನಲ್ಲಿ ಯಾವಾಗಲೂ ನಕಾರಾತ್ಮಕ ಆಲೋಚನೆ ಮಾಡುವ, ಸ್ವತಃ ಪ್ರೀತಿಯನ್ನು ಕಳೆದುಕೊಳ್ಳುವ, ಯಾವಾಗಲೂ ಆಲಸ್ಯ ಅನುಭವಿಸುವ ವ್ಯಕ್ತಿಗೆ ಅಪಾಯ ಹೆಚ್ಚು.ಕುಟುಂಬಸ್ಥರು, ಸ್ನೇಹಿತರಲ್ಲಿ ಈ ಲಕ್ಷಣಗಳನ್ನು ನೀವು ಗಮನಿಸಿದರೆ ಅವರ ಬಗ್ಗೆ ಸ್ವಲ್ಪ ಗಮನ ನೀಡಿ. ಮೊದಲು ಅವರ ಸಮಸ್ಯೆಯನ್ನು ಆಲಿಸಿ, ಅರ್ಥಮಾಡಿಕೊಳ್ಳಿ. ಮನೋವೈದ್ಯರನ್ನು ಸಂಪರ್ಕಿಸಿ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದಲ್ಲಿ ಅಪಾಯ ಕಡಿಮೆ.&lt;/p&gt;&lt;img&gt;&lt;p&gt;ನಿಮಗೆ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದರೆ, ನೀವು ಟೆಲಿಮಾನಸ್ನಿಂದ ಸಹಾಯ ಪಡೆಯಬಹುದು. ಇದು ಭಾರತ ಸರ್ಕಾರದ ರಾಷ್ಟ್ರೀಯ ಟೆಲಿಮಾನಸ್ ಆರೋಗ್ಯ ಉಪಕ್ರಮವಾಗಿದೆ. ದೇಶದ ಜನರಿಗೆ ದಿನದ 24 ಗಂಟೆಗಳು, ವಾರದ 7 ದಿನಗಳು ಉಚಿತ ಮಾನಸಿಕ ಆರೋಗ್ಯ ಸಮಾಲೋಚನೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ನಿಮ್ಮ ಗುರುತು ಮತ್ತು ಸಂಪೂರ್ಣ ಸಂಭಾಷಣೆಯನ್ನು ಗೌಪ್ಯವಾಗಿಡಲಾಗುತ್ತದೆ.&lt;/p&gt;]]></content:encoded>
            <category>relationship</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/health-life/actress-sanchita-ugale-death-22-age-why-are-young-people-dying-by-dies-nbk8dc2"/>
        </item>
        <item>
            <title><![CDATA[ಐಶ್ವರ್ಯ ಸಿಂಧೋಗಿಗೆ ಅಂಗಡಿಯಿಂದ ಹೊಸ ಸೀರೆ ಗಿಫ್ಟ್​: ಶಿಶಿರ್​ ಹೇಳಿದ್ದು ಕೇಳಿ ನಾಚಿ ನೀರಾದ ನಟಿ]]></title>
            <link>https://kannada.asianetnews.com/gallery/tv-talk/aishwarya-shindhogi-saree-matter-inside-showroom-shishir-sharstris-comment-viral-suc-qw79f3x</link>
            <guid isPermaLink="true">https://kannada.asianetnews.com/gallery/tv-talk/aishwarya-shindhogi-saree-matter-inside-showroom-shishir-sharstris-comment-viral-suc-qw79f3x</guid>
            <pubDate>Mon, 15 Jun 2026 19:18:10 +0530</pubDate>
            <description><![CDATA[ಬಿಗ್ ಬಾಸ್ ಜೋಡಿ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಅವರ ಸೀರೆ ಮಳಿಗೆಯ ಪ್ರಮೋಷನಲ್ ವಿಡಿಯೋ ವೈರಲ್ ಆಗಿದೆ. ಶಿಶಿರ್ ಆಡಿದ ಮಾತಿಗೆ ಐಶ್ವರ್ಯ ನಾಚಿ ನೀರಾಗಿದ್ದು, ಈ ಜೋಡಿ ತಮ್ಮಿಬ್ಬರ ನಡುವೆ ಇರುವುದು ಸ್ನೇಹವಷ್ಟೇ, ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv0p79ea1npn1znn57pptxky,imgname-shishir-sharstri-and-aishwarya-shindhogi-1781360993738.jpg" type="image/jpeg" height="390" width="690"/>
            <content:encoded><![CDATA[ಬಿಗ್ ಬಾಸ್ ಜೋಡಿ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಅವರ ಸೀರೆ ಮಳಿಗೆಯ ಪ್ರಮೋಷನಲ್ ವಿಡಿಯೋ ವೈರಲ್ ಆಗಿದೆ. ಶಿಶಿರ್ ಆಡಿದ ಮಾತಿಗೆ ಐಶ್ವರ್ಯ ನಾಚಿ ನೀರಾಗಿದ್ದು, ಈ ಜೋಡಿ ತಮ್ಮಿಬ್ಬರ ನಡುವೆ ಇರುವುದು ಸ್ನೇಹವಷ್ಟೇ, ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;img&gt;&lt;p&gt;ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಬಿಗ್​ಬಾಸ್​ ಜೋಡಿ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್​ ಶಾಸ್ತ್ರಿ ವಿಡಿಯೋಗಳು ಸಕತ್​ ವೈರಲ್​ ಆಗುತ್ತಿವೆ. ಸೀರೆ ಮಳಿಗೆಯೊಂದರ ಪ್ರಮೋಷನ್​ ಸಲುವಾಗಿ ಈ ಜೋಡಿ ಕಾಣಿಸಿಕೊಂಡಿದ್ದು, ಈ ಕ್ಯೂಟ್​ ಜೋಡಿಯ ಬಗ್ಗೆ ಬಗೆಬಗೆ ರೀತಿಯಲ್ಲಿ ಸುದ್ದಿಗಳು ಸದ್ದು ಮಾಡುತ್ತಿವೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಬಿಗ್&zwnj;ಬಾಸ್&zwnj; ಮನೆಯಲ್ಲಿ ಲವ್&zwnj;, ರೊಮಾನ್ಸ್&zwnj; ಮಾಮೂಲು. ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಆದರೆ ಹಾಗೆ ಮಾಡದೇ ʼಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್&zwnj;ಷಿಪ್&zwnj; ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ (Aishwarya Sindhogi) ಮತ್ತು ಶಿಶಿರ್&zwnj; ಶಾಸ್ತ್ರಿ (Shishir Shastry). ಇಂದಿಗೂ ಇವರಿಬ್ಬರೂ ಕ್ಯೂಟ್​ ಕಪಲ್​ ಆಗಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಸೀರೆ ಮಳಿಗೆಯೊಂದರಲ್ಲಿ ಅಂಗಡಿಯವ ಕಪ್ಪು ಬಣ್ಣದ ಸೀರೆಯನ್ನು ಐಶ್ವರ್ಯ ಅವರಿಗೆ ಸೆರಗಿನ ರೀತಿಯಲ್ಲಿ ತೊಡಿಸಿದ್ದಾರೆ. ಆ ಸಮಯದಲ್ಲಿ ಸೀರೆಯಲ್ಲಿ ಮಿಂಚಿದ ಸ್ನೇಹಿತೆಯ ಕಂಡು ತಮಾಷೆ ಮಾಡಿದ್ದಾರೆ ಶಿಶಿರ್​. ಅವರ ಮಾತಿಗೆ ನಾಚಿ ನೀರಾಗಿದ್ದಾರೆ ಐಶ್ವರ್ಯ ಸಿಂಧೋಗಿ.&lt;/p&gt;&lt;img&gt;&lt;p&gt;ಐಶ್ವರ್ಯ ಅವರಿಗೆ ಸೆರಗು ಹಾಕುವ ಸಮಯದಲ್ಲಿಯೇ ಈ ಮಾತನ್ನು ಹೇಳಿದ್ದರಿಂದ ಐಶ್ವರ್ಯ ಸಿಂಧೋಗಿ ದೊಡ್ಡದಾಗಿ ಬಾಯಿ ತೆರೆದು ಛೀ ಛೀ ಎಂದು ನಾಚಿ ನೀರಾಗಿದ್ದಾರೆ. ಇದರ ವಿಡಿಯೋ ಅಷ್ಟೇ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.&lt;/p&gt;&lt;img&gt;&lt;p&gt;ತಾವು ಬರೀ ಸ್ನೇಹಿತರು ಎಂದು ಹೇಳಿಕೊಂಡಿರೋ ಜೋಡಿ, ಇದಾಗಲೇ ಹಲವು ಬಾರಿ ಒಟ್ಟಿಗೇ ಕಾಣಿಸಿಕೊಂಡಿದ್ದಿದೆ. ಮೈ ಚಳಿ ಬಿಟ್ಟು ಸ್ಟೆಪ್​ ಹಾಕಿದ್ದು ಇದೆ. ಇದೀಗ ಈ ಜೋಡಿಯ ಮತ್ತೊಂದು ಫೋಟೋಶೂಟ್​ ವೈರಲ್​ ಆಗುತ್ತಿದ್ದು, ಇದನ್ನು ನೋಡಿದ ಮೇಲೂ ಏನಿಲ್ಲ, ಏನಿಲ್ಲ ಹೇಳ್ತೀರಾ ಎಂದು ಅಭಿಮಾನಿಗಳು ಕೇಳ್ತಿದ್ದಾರೆ.&lt;/p&gt;&lt;img&gt;&lt;p&gt;ಆದರೆ ಇದುವರೆಗೂ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿರಲಿಲ್ಲ. ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ, ಅವರು, ನಮಗಿಬ್ಬರಿಗೂ ಸಾಕಷ್ಟು ಮದುವೆ ಪ್ರಪೋಸಲ್&zwnj; ಬಂದಿವೆ. ನಾವಿಬ್ಬರೂ ಬ್ಯುಸಿನೆಸ್&zwnj; ಪಾರ್ಟನರ್&zwnj; ಆಗಬಹುದು ಅಷ್ಟೇ, ಆದರೆ ಸಂಗಾತಿಗಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಈ ಮೂಲಕ ನಾವು ಪ್ರೇಮಿಗಳಲ್ಲ, ಮದುವೆ ಆಗಲ್ಲ ಎಂದಿದ್ದರು.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/aishwarya-shindhogi-saree-matter-inside-showroom-shishir-sharstris-comment-viral-suc-qw79f3x"/>
        </item>
        <item>
            <title><![CDATA[ಒಬ್ನೇ ಇರೋ ಖುಷಿನೇ ಬೇರೆ, ಮದ್ವೆ ಯಾಕೆ ಅನ್ನೋದಾ ಗಟ್ಟಿಮೇಳದ ವಿಕ್ರಾಂತ್​? ಹುಡುಗಿಯರ ಹಾರ್ಟ್​ ಬ್ರೇಕ್ ಮಾಡಿದ ನಟ]]></title>
            <link>https://kannada.asianetnews.com/gallery/relationship/gattimela-vikranth-urf-abhishek-ramdas-about-marriage-and-not-interested-in-that-suc-t8027bw</link>
            <guid isPermaLink="true">https://kannada.asianetnews.com/gallery/relationship/gattimela-vikranth-urf-abhishek-ramdas-about-marriage-and-not-interested-in-that-suc-t8027bw</guid>
            <pubDate>Wed, 17 Jun 2026 18:36:47 +0530</pubDate>
            <description><![CDATA['ಗಟ್ಟಿಮೇಳ' ಖ್ಯಾತಿಯ ನಟ ಅಭಿಷೇಕ್ ರಾಮದಾಸ್ ಇತ್ತೀಚೆಗೆ ತಮ್ಮ ಸಹೋದರಿಯ ಮದುವೆಯನ್ನು ನೆರವೇರಿಸಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲವೆಂದಿರುವ ಅವರು, ವೃತ್ತಿಜೀವನದತ್ತ ಗಮನ ಹರಿಸುವುದಾಗಿ ಮತ್ತು ಒಂಟಿ ಜೀವನವನ್ನು ಆನಂದಿಸುವುದಾಗಿ ಹೇಳಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvatzzcdhk6d19ps2n5m72z9,imgname-abhishek-ramdas-1781701541261.jpg" type="image/jpeg" height="390" width="690"/>
            <content:encoded><![CDATA['ಗಟ್ಟಿಮೇಳ' ಖ್ಯಾತಿಯ ನಟ ಅಭಿಷೇಕ್ ರಾಮದಾಸ್ ಇತ್ತೀಚೆಗೆ ತಮ್ಮ ಸಹೋದರಿಯ ಮದುವೆಯನ್ನು ನೆರವೇರಿಸಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲವೆಂದಿರುವ ಅವರು, ವೃತ್ತಿಜೀವನದತ್ತ ಗಮನ ಹರಿಸುವುದಾಗಿ ಮತ್ತು ಒಂಟಿ ಜೀವನವನ್ನು ಆನಂದಿಸುವುದಾಗಿ ಹೇಳಿಕೊಂಡಿದ್ದಾರೆ.&lt;img&gt;&lt;p&gt;'ಗಟ್ಟಿಮೇಳ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟ ಅಭಿಷೇಕ್&zwnj; ರಾಮದಾಸ್. ಅಭಿದಾಸ್&zwnj; ಅಂತಲೇ ಫೇಮಸ್​ ಆಗಿರೋ ನಟ ಸದ್ಯ ಸದ್ಯ &lsquo;ನಂದಗೋಕುಲ&rsquo; ಸೀರಿಯಲ್​ನಲ್ಲಿ ವಲ್ಲಭನಾಗಿ ಮಿಂಚುತ್ತಿದ್ದಾರೆ. ಈಚೆಗೆ ತಮ್ಮ ಸಹೋದರಿಯ ಮದುವೆ ಮಾಡಿರುವ ನಟ, ಸದ್ಯ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಆಗಿದ್ದಾರೆ.&lt;/p&gt;&lt;img&gt;&lt;p&gt;ಅಭಿಷೇಕ್ ದಾಸ್ ಅವರು ಗಟ್ಟಿಮೇಳಕ್ಕೂ ಮುನ್ನ ಸರಯೂ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ.&lt;/p&gt;&lt;img&gt;&lt;p&gt;ಇಂತಿಪ್ಪ ನಟ ಇದೀಗ ಮದುವೆಯ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ. ನನಗೆ ಇದೀ ರೀತಿಯ ಹುಡುಗಿ ಬೇಕೆಂದೇನೂ ಇಲ್ಲ. ಆದರೆ ಮದುವೆಯ ಬಗ್ಗೆ ಸದ್ಯ ಯೋಚನೆಯನ್ನೂ ಮಾಡಲಿಲ್ಲ. ಮುಂದಿನ ಐದು ವರ್ಷ ಹೇಗೆಲ್ಲಾ ದುಡ್ಡು ಸಂಪಾದನೆ ಮಾಡಬಹುದು, ಗುರಿ ಏನಿರಬೇಕು ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಹಾಗೆಯೇ ಲೈಫ್​ನಲ್ಲಿ ಯಾರಾದ್ರೂ ಎಂಟರ್​ ಆದ್ರೆ ನೋಡೋಣ. ಆದ್ರೆ ಒಂಟಿ ಇರೋದರಲ್ಲಿ ಇರೋ ಮಜಾ ಮದ್ವೆಯಾದ ಮೇಲೆ ಇರಲ್ಲ. ದುಡಿದದ್ದನ್ನೆಲ್ಲಾ ನಾನೊಬ್ಬನೇ ಎಂಜಾಯ್​ ಮಾಡಬಹುದು. ಅದಕ್ಕೆ ಮದ್ವೆ-ಗಿದ್ವೆ ಬಗ್ಗೆ ಸದ್ಯ ತಲೆ ಕೆಡಿಸಿಕೊಳ್ಳಲ್ಲ. ಒಬ್ನೇ ಇರೋದೇ ಇಷ್ಟ ಎಂದಿದ್ದಾರೆ ನಟ.&lt;/p&gt;&lt;img&gt;&lt;p&gt;ಈಚೆಗಷ್ಟೇ ಅಭಿಷೇಕ್ ಅವರು ತಮ್ಮ ತಂಗಿ ಐಶ್ವರ್ಯಾ ರಾಮದಾಸ್&zwnj; ಮದುವೆ ಮಾಡಿದ್ದರು. ಅಭಿದಾಸ್&zwnj;ಗೆ ಒಬ್ಬಳೇ ಒಬ್ಬಳು ತಂಗಿ ಇದ್ದು, ತಾಯಿ - ತಂಗಿನೇ ಇವರ ಪ್ರಪಂಚ. ಐಶ್ವರ್ಯಾ ಅವರು ಮೇಕಪ್&zwnj; ಆರ್ಟಿಸ್ಟ್&zwnj; ಆಗಿದ್ದು, ಸೆಲಿಬ್ರಿಟಿ ಮೇಕಪ್&zwnj; ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ಹರ್ಷ ಎಂಬುವವರನ್ನ ವರಿಸಿದ್ದಾರೆ. ಅಪ್ಪನ ಸ್ಥಾನದಲ್ಲಿ ನಿಂತು ಸಹೋದರಿ ಮದುವೆ ಮಾಡಿದ್ದರು ಅಭಿಷೇಕ್&zwnj; ರಾಮದಾಸ್&zwnj;.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/gattimela-vikranth-urf-abhishek-ramdas-about-marriage-and-not-interested-in-that-suc-t8027bw"/>
        </item>
        <item>
            <title><![CDATA[ಬೆಳಗಾವಿ: ವಿಧವೆ ಜತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಚಟ್ಟ ಕಟ್ಟಿದ ಗಂಡ! ಬಳೆಚೂರು, ಪ್ರಸಾದ, ಇಲಿಪಾಷಾಣ!]]></title>
            <link>https://kannada.asianetnews.com/karnataka-districts/belagavi-shockers-man-poisons-and-strangles-wife-to-continue-affair-with-widow-gdp/articleshow-xlg0f1g</link>
            <guid isPermaLink="true">https://kannada.asianetnews.com/karnataka-districts/belagavi-shockers-man-poisons-and-strangles-wife-to-continue-affair-with-widow-gdp/articleshow-xlg0f1g</guid>
            <pubDate>Wed, 17 Jun 2026 17:44:51 +0530</pubDate>
            <description><![CDATA[ಬೆಳಗಾವಿ ಜಿಲ್ಲೆಯಲ್ಲಿ, ವಿಧವೆಯೊಂದಿಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ದಾನೆ. ದೇವಸ್ಥಾನದ ಪ್ರಸಾದವೆಂದು ವಿಷ ಬೆರೆಸಿದ ಪಾನೀಯ ನೀಡಿ, ನಂತರ ಕತ್ತು ಹಿಸುಕಿ ಕೊಂದು, ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದ್ದು, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvar03frtsvt9ygz5wv2nqg3,imgname-belagavi-wife-murder-1781698399736.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ವಿಧವೆಯೊಂದಿಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಶಿಂದಿಕುರಬೆಟ್ ಗ್ರಾಮದ ಸಕ್ಕುಬಾಯಿ ಪಟಾಯತ್ (28) ಕೊಲೆಯಾದ ದುರ್ದೈವಿ. ಪ್ರಕರಣ ಸಂಬಂಧ ಆಕೆಯ ಪತಿ ಸಂತೋಷ್ ಪಟಾಯತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;ದೇವಸ್ಥಾನದ ಪ್ರಸಾದವೆಂದು ವಿಷದ ಪಾನೀಯ ನೀಡಿದ ಪತಿ&lt;/h2&gt;&lt;p&gt;ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಸಂತೋಷ್ ಪಟಾಯತ್ ತನ್ನ ಪತ್ನಿ ಸಕ್ಕುಬಾಯಿಯನ್ನು ಅಧಿಕ ಮಾಸದ ಹಿನ್ನೆಲೆಯಲ್ಲಿ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದಲ್ಲಿರುವ ಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನಕ್ಕೆ ದರ್ಶನಕ್ಕಾಗಿ ಕರೆದುಕೊಂಡು ಹೋಗಿದ್ದನು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ದ್ವಿಚಕ್ರ ವಾಹನದಲ್ಲಿ ಇಬ್ಬರೂ ಊರಿಗೆ ಹಿಂತಿರುಗುತ್ತಿದ್ದರು.&lt;/p&gt;&lt;p&gt;ಮಾರ್ಗಮಧ್ಯೆ ನಿರ್ಜನ ಪ್ರದೇಶವೊಂದರಲ್ಲಿ ಬೈಕ್ ನಿಲ್ಲಿಸಿದ ಸಂತೋಷ್, ಮೊದಲೇ ಯೋಜಿಸಿದಂತೆ ತಂಪು ಪಾನೀಯದಲ್ಲಿ ಇಲಿಪಾಷಣ ಹಾಗೂ ಬಳೆಯ ಗಾಜಿನ ಚೂರುಗಳ ಪುಡಿಯನ್ನು ಬೆರೆಸಿದ್ದನು. ಅದನ್ನು ದೇವಸ್ಥಾನದ ಪವಿತ್ರ ಪ್ರಸಾದ ಎಂದು ನಂಬಿಸಿ ಪತ್ನಿಯ ಕೈಗೆ ನೀಡಿ ಕುಡಿಯುವಂತೆ ಮಾಡಿದ್ದಾನೆ. ಪತಿಯ ಮಾತನ್ನು ಸಂಪೂರ್ಣವಾಗಿ ನಂಬಿ ಆ ಪಾನೀಯವನ್ನು ಕುಡಿದ ಸಕ್ಕುಬಾಯಿ, ಕೆಲವೇ ನಿಮಿಷಗಳಲ್ಲಿ ತೀವ್ರ ಹೊಟ್ಟೆನೋವಿನಿಂದ ನರಳಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಆಕೆ ಸಂಪೂರ್ಣವಾಗಿ ಅಸಹಾಯಕ ಸ್ಥಿತಿಗೆ ತಲುಪುತ್ತಿದ್ದಂತೆ, ರಸ್ತೆಬದಿಯಲ್ಲೇ ಆಕೆಯ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಸಂತೋಷ್ ಕೊಲೆ ಮಾಡಿದ್ದಾನೆ.&lt;/p&gt;&lt;h2&gt;ಅಪಘಾತದ ಡ್ರಾಮಾ ಮಾಡಿ ತಾನೇ ಪೊಲೀಸರಿಗೆ ಕರೆ ಮಾಡಿದ!&lt;/h2&gt;&lt;p&gt;ಕೊಲೆಯ ನಂತರ ಸಿಕ್ಕಿಬೀಳುವ ಭಯದಿಂದ ತಪ್ಪಿಸಿಕೊಳ್ಳಲು ಸಂತೋಷ್ ಹೈಡ್ರಾಮಾ ಮಾಡಿದ್ದಾನೆ. ಸಕ್ಕುಬಾಯಿಯ ಶವದ ಮೇಲೆ ತಾನು ಬಂದಿದ್ದ ಮೋಟಾರ್ ಸೈಕಲ್ ಅನ್ನು ಎಸೆದು, ಇದೊಂದು ಭೀಕರ ರಸ್ತೆ ಅಪಘಾತ ಎಂಬಂತೆ ಬಿಂಬಿಸಲು ಯತ್ನಿಸಿದ್ದಾನೆ. ಕೃತ್ಯ ಎಸಗಿದ ನಂತರ ಯಾರಿಗೂ ಸಂಶಯ ಬಾರದಂತೆ ಕೆಲವು ಗಂಟೆಗಳ ಕಾಲ ರಸ್ತೆ ಪಕ್ಕದಲ್ಲಿಯೇ ಮೃತದೇಹದೊಂದಿಗೆ ಕಾಲ ಕಳೆದಿದ್ದಾನೆ. ತದನಂತರ ತಾನೇ ಸ್ವತಃ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ತನ್ನ ಪತ್ನಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಹೇಳಿದ್ದಾನೆ.&lt;/p&gt;&lt;h2&gt;ಬಿಐಎಂಎಸ್ (BIMS) ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಸತ್ಯ&lt;/h2&gt;&lt;p&gt;ಸ್ಥಳಕ್ಕೆ ಧಾವಿಸಿದ ಪೊಲೀಸರು ಸಕ್ಕುಬಾಯಿ ಸಾವಿನ ಸುತ್ತಲಿನ ಸನ್ನಿವೇಶಗಳು ಮತ್ತು ಸಂತೋಷ್ ನೀಡಿದ ಹೇಳಿಕೆಗಳ ನಡುವೆ ತಾಳೆಯಾಗದೇ ತೀವ್ರ ಅನುಮಾನ ವ್ಯಕ್ತಪಡಿಸಿದರು. ಕೂಡಲೇ ಶವವನ್ನು ವಶಕ್ಕೆ ಪಡೆದು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (BIMS) ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಬಿಐಎಂಎಸ್ ವೈದ್ಯರು ನೀಡಿದ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯು ಇದೊಂದು ಅಪಘಾತವಲ್ಲ, ಬದಲಿಗೆ ವಿಷ ಉಣಿಸಿ, ಕತ್ತು ಹಿಸುಕಿ ಮಾಡಲಾದ ವ್ಯವಸ್ಥಿತ ಕೊಲೆ ಎಂಬುದನ್ನು ಬಯಲಿಗೆಳೆಯಿತು. ಈ ವರದಿಯ ಆಧಾರದ ಮೇಲೆ ಪೊಲೀಸರು ಸಂತೋಷ್&zwnj;ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆತ ತನ್ನ ಹೆಂಡತಿಯನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.&lt;/p&gt;&lt;h2&gt;ನಾಲ್ಕು ವರ್ಷಗಳ ಅಕ್ರಮ ಸಂಬಂಧವೇ ಕೊಲೆಗೆ ಕಾರಣ&lt;/h2&gt;&lt;p&gt;ಪೊಲೀಸ್ ತನಿಖೆಯ ವೇಳೆ ಸಂತೋಷ್ ತನ್ನ ಕೊಲೆಯ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ಮೂಲತಃ ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿಯಾದ ಸಂತೋಷ್ ಮತ್ತು ಸಕ್ಕುಬಾಯಿ ಅವರ ವಿವಾಹವಾಗಿ 9 ವರ್ಷಗಳಾಗಿದ್ದವು. ದಾಂಪತ್ಯ ಜೀವನ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ, ಕಳೆದ 4 ವರ್ಷಗಳಿಂದ ಸಂತೋಷ್ ತನ್ನ ಸ್ವಗ್ರಾಮದ ವಿಧವೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು ಎಂದು ತಿಳಿದುಬಂದಿದೆ. ತನ್ನ ಪ್ರಿಯತಮೆಯೊಂದಿಗೆ ಉಳಿದ ಜೀವನವನ್ನು ಪೂರ್ತಿಯಾಗಿ ಕಳೆಯಲು ಪತ್ನಿ ಸಕ್ಕುಬಾಯಿ ಅಡ್ಡಿಯಾಗಿದ್ದಾಳೆ ಎಂದು ಭಾವಿಸಿದ ಆತ, ಪತ್ನಿಗೆ ಚಟ್ಟ ಕಟ್ಟಿದ್ದಾನೆ.&lt;/p&gt;&lt;h2&gt;ಹಿಂಡಲಗಾ ಜೈಲು ಪಾಲಾದ ಆರೋಪಿ&lt;/h2&gt;&lt;p&gt;ಪ್ರಸ್ತುತ ಆರೋಪಿ ಸಂತೋಷ್ ಪಟಾಯತ್&zwnj;ನನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿ, ನ್ಯಾಯಾಲಯದ ಆದೇಶದ ಮೇರೆಗೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ. ಈ ಭೀಕರ ಕೊಲೆ ಪ್ರಕರಣದಲ್ಲಿ ಸಂತೋಷ್&zwnj;ನ ಪ್ರಿಯತಮೆಯಾಗಿರುವ ಆ ವಿಧವೆಯ ಪಾತ್ರ ಅಥವಾ ಪ್ರಚೋದನೆ ಏನಾದರೂ ಇದೆಯೇ ಎಂಬ ಅನುಮಾನದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/belagavi-shockers-man-poisons-and-strangles-wife-to-continue-affair-with-widow-gdp/articleshow-xlg0f1g"/>
        </item>
        <item>
            <title><![CDATA[Number 9 Numerology: ಈ ಜನ್ಮ ದಿನಾಂಕದಲ್ಲಿ ಜನಿಸಿದವರು ಪ್ರೀತಿಯಲ್ಲಿ ದುರಾದೃಷ್ಟ... ಆದರೆ ಅಪಾರ ಸಂಪತ್ತು]]></title>
            <link>https://kannada.asianetnews.com/gallery/relationship/numerology-astrology-this-birth-dates-may-yearn-for-successful-when-it-comes-to-wealth-suh-zuoxfr4</link>
            <guid isPermaLink="true">https://kannada.asianetnews.com/gallery/relationship/numerology-astrology-this-birth-dates-may-yearn-for-successful-when-it-comes-to-wealth-suh-zuoxfr4</guid>
            <pubDate>Wed, 17 Jun 2026 09:17:24 +0530</pubDate>
            <description><![CDATA[&lt;p&gt;ಪ್ರೀತಿ ಇಲ್ಲದೆಯೇ ಜೀವನದಲ್ಲಿ ಎಲ್ಲವನ್ನೂ ಪಡೆಯುವ ಕೆಲವು ಜನರಿದ್ದಾರೆ.... ಈ ಜನರು ಹೆಚ್ಚಾಗಿ ಪ್ರೀತಿಗಾಗಿ ಹಂಬಲಿಸುತ್ತಿರುತ್ತಾರೆ. ಆದರೆ ಸಂಪತ್ತಿನ ವಿಷಯಕ್ಕೆ ಬಂದಾಗ, ಅವರು ಯಾವಾಗಲೂ ಯಶಸ್ವಿಯಾಗುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqbx40wym1jvgdyfdprz4p9g,imgname-panchagrahi-yog-lucky-zodiac-signs--1--1777442358174.png" type="image/jpeg" height="390" width="690"/>
            <content:encoded><![CDATA[&lt;p&gt;ಪ್ರೀತಿ ಇಲ್ಲದೆಯೇ ಜೀವನದಲ್ಲಿ ಎಲ್ಲವನ್ನೂ ಪಡೆಯುವ ಕೆಲವು ಜನರಿದ್ದಾರೆ.... ಈ ಜನರು ಹೆಚ್ಚಾಗಿ ಪ್ರೀತಿಗಾಗಿ ಹಂಬಲಿಸುತ್ತಿರುತ್ತಾರೆ. ಆದರೆ ಸಂಪತ್ತಿನ ವಿಷಯಕ್ಕೆ ಬಂದಾಗ, ಅವರು ಯಾವಾಗಲೂ ಯಶಸ್ವಿಯಾಗುತ್ತಾರೆ.&lt;/p&gt;&lt;img&gt;&lt;p&gt;ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 9, 18 ಅಥವಾ 27 ರಂದು ಜನಿಸಿದವರು, ಅವರ ಜನ್ಮ ದಿನಾಂಕವನ್ನು ಅವಲಂಬಿಸಿ, 9 ರ ಕಾರ್ಡಿನಲ್ ಸಂಖ್ಯೆಯನ್ನು ಹೊಂದಿರುತ್ತಾರೆ. ಇದು ಶಕ್ತಿ ಮತ್ತು ಶಕ್ತಿಯ ಸಂಕೇತವಾದ ಮಂಗಳ ಗ್ರಹದಿಂದ ಪ್ರಭಾವಿತವಾಗಿರುತ್ತದೆ. ಅವರ ಆಳುವ ಗ್ರಹ ಮಂಗಳ, ಇದು ಈ ವ್ಯಕ್ತಿಗಳಿಗೆ ಶಕ್ತಿ ಮತ್ತು ಉತ್ಸಾಹವನ್ನು ತುಂಬುತ್ತದೆ.&lt;/p&gt;&lt;img&gt;&lt;p&gt;ಸಂಖ್ಯಾಶಾಸ್ತ್ರದ ಪ್ರಕಾರ, ಈ ಜನರು ಬಲವಾದ ಇಚ್ಛಾಶಕ್ತಿ ಮತ್ತು ಮಹಾನ್ ಧೈರ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಅವರು ತಮ್ಮ ಕೆಲಸವನ್ನು ಪೂರ್ಣ ಸಮರ್ಪಣೆಯೊಂದಿಗೆ ಮಾಡುತ್ತಾರೆ. ಪ್ರೀತಿಯ ವಿಷಯದಲ್ಲಿ ಈ ಜನರ ಅದೃಷ್ಟವು ತುಂಬಾ ದುರದೃಷ್ಟಕರವಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ಒಂಟಿತನವನ್ನು ಅನುಭವಿಸುತ್ತಾರೆ. ಅವರ ಪ್ರತಿಭೆ ಮತ್ತು ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಜನರು ಸಾಮಾನ್ಯವಾಗಿ ತಾವು ತ್ವರಿತ ಸ್ವಭಾವದವರು ಎಂದು ಭಾವಿಸುತ್ತಾರೆ, ಆದರೆ ಅವರು ಶುದ್ಧ ಹೃದಯವಂತರು.&lt;/p&gt;&lt;img&gt;&lt;p&gt;ಸಂಖ್ಯಾಶಾಸ್ತ್ರದ ಪ್ರಕಾರ, 9 ನೇ ಸಂಖ್ಯೆಯನ್ನು ಹೊಂದಿರುವ ಜನರು ತುಂಬಾ ಭಾವನಾತ್ಮಕರು. ಅವರ ಉತ್ಸಾಹ ಮತ್ತು ಭಾವನೆಗಳು ಇತರರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವೊಮ್ಮೆ, ಅವರ ನಿಯಂತ್ರಣ ಸ್ವಭಾವವು ಜನರನ್ನು ದೂರವಿಡಬಹುದು. ಆದರೆ ಇದರರ್ಥ ಅವರು ಕಲ್ಲಿನ ಹೃದಯ ಹೊಂದಿದ್ದಾರೆಂದು ಅರ್ಥವಲ್ಲ.&lt;/p&gt;&lt;img&gt;&lt;p&gt;ಸಂಖ್ಯಾಶಾಸ್ತ್ರದ ಪ್ರಕಾರ, 9 ನೇ ಸಂಖ್ಯೆ ಹೊಂದಿರುವ ಜನರು ತಮ್ಮ ಭಾವನಾತ್ಮಕತೆ ಮತ್ತು ಉತ್ಸಾಹದಿಂದಾಗಿ ಪ್ರೀತಿಯಲ್ಲಿ ದುರದೃಷ್ಟವನ್ನು ಎದುರಿಸಬಹುದು, ಆದರೆ ಅವರು ತಮ್ಮ ವೃತ್ತಿಜೀವನದಲ್ಲಿ ತಮ್ಮ ಕಠಿಣ ಪರಿಶ್ರಮದ ಪ್ರತಿಫಲವನ್ನು ಖಂಡಿತವಾಗಿಯೂ ಪಡೆಯುತ್ತಾರೆ. ಸಾಮಾಜಿಕ ಪ್ರತಿಷ್ಠೆ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಅವರಿಗೆ ಜಾಗತಿಕ ಮನ್ನಣೆಯನ್ನು ತರುತ್ತದೆ. ಸಲ್ಮಾನ್ ಖಾನ್ ಕೂಡ ಈ ವರ್ಗಕ್ಕೆ ಸೇರುತ್ತಾರೆ. ಅವರ ಜೀವನವನ್ನು ನೋಡಿದರೆ ಇದನ್ನು ಅರ್ಥಮಾಡಿಕೊಳ್ಳಬಹುದು&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/numerology-astrology-this-birth-dates-may-yearn-for-successful-when-it-comes-to-wealth-suh-zuoxfr4"/>
        </item>
    </channel>
</rss>
