<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 07 May 2026 18:21:23 +0530</lastBuildDate>
        <atom:link href="https://kannada.asianetnews.com/rss/relationship" rel="self" type="application/rss+xml"/>
        <item>
            <title><![CDATA[ದಳ'ಪತಿ' ವಿನ್​ ಆಗುತ್ತಲೇ ಪತ್ನಿ ಸಂಗೀತಾ ಮಿಸ್ಸಿಂಗ್​? 500 ಕೋಟಿ ಒಡತಿ ಹೋಗಿದ್ದೆಲ್ಲಿ- ಗೆಲುವಿಗೆ ರಿಯಾಕ್ಷನ್​ ಏನು]]></title>
            <link>https://kannada.asianetnews.com/relationship/thalapathy-vijays-wife-sangeeta-is-missing-since-he-wins-the-election-where-is-she-suc/articleshow-14ik9bg</link>
            <guid isPermaLink="true">https://kannada.asianetnews.com/relationship/thalapathy-vijays-wife-sangeeta-is-missing-since-he-wins-the-election-where-is-she-suc/articleshow-14ik9bg</guid>
            <pubDate>Wed, 06 May 2026 13:11:07 +0530</pubDate>
            <description><![CDATA[ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯಲಿರುವ ದಳಪತಿ ವಿಜಯ್ ಅವರ ರಾಜಕೀಯ ಗೆಲುವಿನ ನಡುವೆಯೇ, ಅವರ ಪತ್ನಿ ಸಂಗೀತಾ ಜೊತೆಗಿನ ವಿಚ್ಛೇದನ ಪ್ರಕರಣ ಹೊಸ ತಿರುವು ಪಡೆದಿದೆ. ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ಜಂಟಿ ಅರ್ಜಿ ಸಲ್ಲಿಸಿದ್ದು, ಸದ್ಯ ಲಂಡನ್&zwnj;ನಲ್ಲಿರುವ ಸಂಗೀತಾ ಅವರ ಅನುಪಸ್ಥಿತಿ ಚರ್ಚೆಗೆ ಗ್ರಾಸವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpmts7zm0gpq8m1g7w23txtr,imgname-sangeetha-vijay-1776668155891.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಗ ಎಲ್ಲೆಲ್ಲೂ ತಮಿಳುನಾಡಿನ ಚುನಾವಣೆಯ ಸುದ್ದಿ. ಅದಕ್ಕೆ ಕಾರಣ ನಟನಾಗಿದ್ದ ದಳಪತಿ ವಿಜಯ್​ ಅವರು ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇವರ ಹೆಸರು ಬಂದಾಗಲೆಲ್ಲಾ ಇವರ ಜೊತೆ ನಟಿ ತ್ರಿಷಾ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಇದಾಗಲೇ ವಿಜಯ್​ ಅವರ ವೋಟಿಂಗ್​ ರಿಸಲ್ಟ್​ ಬರುತ್ತಲೇ ತ್ರಿಷಾ ಅವರ ಮನೆಗೆ ಓಡೋಡಿ ಬಂದು ಸುದ್ದಿ ಮಾಡಿದ್ದರು. ಅಷ್ಟಕ್ಕೂ ಮೇ 4 ತ್ರಿಷಾ ಅವರ ಹುಟ್ಟುಹಬ್ಬದಂದೇ ದಳಪತಿ ಅವರಿಗೆ ವಿಜಯದ ಮಾಲೆ ಕೊರಳಿಗೆ ಬಿದ್ದಿತ್ತು. ಆದರೆ ಇವುಗಳ ನಡುವೆಯೇ ಇದೀಗ ವಿಜಯ್​ ಅವರ ಪತ್ನಿ ಸಂಗೀತಾ ಎಲ್ಲಿ ಹೋದರು ಎನ್ನುವ ಮಾತುಗಳು ಕೇಳಿಬರುತ್ತಿವೆ.&lt;/p&gt;&lt;h2&gt;&lt;strong&gt;ಡಿವೋರ್ಸ್​ ಪ್ರಕರಣ&lt;/strong&gt;&lt;/h2&gt;&lt;p&gt;ಅಷ್ಟಕ್ಕೂ ದಳಪತಿ ವಿಜಯ್ (Thalapathy Vijay divorce c ase) ಮತ್ತು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ನಡುವಿನ ವಿಚ್ಛೇದನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿಜಯ್ ಅವರ ವಿವಾಹೇತರ ಸಂಬಂಧಗಳು ಮತ್ತು ಗಂಭೀರ ವೈವಾಹಿಕ ಸಮಸ್ಯೆಗಳ ಆರೋಪ ಹೊರಿಸಿ ಸಂಗೀತಾ ಇತ್ತೀಚೆಗೆ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿ ಸದ್ದು ಮಾಡಿದ್ದಾರೆ. ಆದರೆ ಇದೀಗ ಅವರ ಈ ಕೇಸ್​ಗೆ ಭಾರಿ ಟ್ವಿಸ್ಟ್​ ಸಿಕ್ಕಿತ್ತು. ಫೆಬ್ರವರಿ 24 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಕೇಸ್ ದಾಖಲಿಸಿದ್ದರು. ಕೋರ್ಟ್​ ಆದೇಶದ ಪ್ರಕಾರ ಇವತ್ತು (ಏಪ್ರಿಲ್ 20) ವಿಚಾರಣೆ ವೇಳೆ ಇಬ್ಬರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕಿತ್ತು. ರಾಜಕೀಯ ಚುನಾವಣೆ ಮತ್ತು ಭದ್ರತಾ ಕಾರಣಗಳಿಂದಾಗಿ ವಿಜಯ್ ಅವರು ಖುದ್ದಾಗಿ ಕೋರ್ಟ್&zwnj;ಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಕೇಸ್​ ಕುತೂಹಲದ ತಿರುವು ಪಡೆದುಕೊಂಡಿದೆ.&lt;/p&gt;&lt;h3&gt;&lt;strong&gt;ಪರಸ್ಪರ ಕಾದಾಟ&lt;/strong&gt;&lt;/h3&gt;&lt;p&gt;ಅದೇನೆಂದರೆ, ಇಲ್ಲಿಯವರೆಗೆ ಇಬ್ಬರೂ ಪರಸ್ಪರ ಕಾದಾಟ ನಡೆಸಿದ್ದರು. ಆದರೆ ಇದೀಗ ವಿಜಯ್ ಮತ್ತು ಸಂಗೀತಾ ಇಬ್ಬರೂ ಸೇರಿ ಒಂದು ಹೊಸ ಜಂಟಿ ಅರ್ಜಿ (Joint Petition) ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆಯೊಂದಿಗೆ ನಾವು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಇಷ್ಟು ದಿನ ನಡೆಯುತ್ತಿದ್ದ ವಾದ-ಪ್ರತಿವಾದಗಳಿಗೆ ಫುಲ್ ಸ್ಟಾಪ್ ಇಟ್ಟಂತಾಗಿದ್ದು, ನ್ಯಾಯಾಧೀಶರು ಪ್ರಕರಣವನ್ನು ಜೂನ್ 15 ಕ್ಕೆ ಮುಂದೂಡಿದ್ದಾರೆ. ಇಂದು ಸಲ್ಲಿಸಿದ್ದ ಅರ್ಜಿಯಲ್ಲಿ, ಚುನಾವಣಾ ಕೆಲಸದ ಕಾರಣದಿಂದಾಗಿ ವಿಜಯ್ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಿಲ್ಲ ಮತ್ತು ವೀಡಿಯೊ ಕಾನ್ಫರೆನ್ಸ್ ಮೂಲಕ ಈ ವಿಷಯವನ್ನು ಆಲಿಸಲು ಅವಕಾಶ ನೀಡಬೇಕೆಂದು ಕೋರಿದ್ದರು ವಿಜಯ್​. ಆದರೆ ಅದನ್ನು ಸದ್ಯ ಕೋರ್ಟ್​ ಒಪ್ಪದೇ ಇಬ್ಬರ ಮ್ಯೂಚುವಲ್​ ಪಿಟಿಷನ್​ ಕೇಸ್​​ ಅನ್ನು ಜೂನ್ 15 ಕ್ಕೆ ಮುಂದೂಡಿದ್ದು, ಅಂದು ಇಬ್ಬರ ಹಾಜರಿ ಅವಶ್ಯ ಎಂದಿದೆ ಕೋರ್ಟ್​.&lt;/p&gt;&lt;h3&gt;&lt;strong&gt;ಸಂಗೀತಾ ಎಲ್ಲಿ?&lt;/strong&gt;&lt;/h3&gt;&lt;p&gt;ಆದರೆ ಇದರ ನಡುವೆಯೇ ಇದೀಗ ಸಂಗೀತಾ ಎಲ್ಲಿ ಎನ್ನುವ ಸಂಶಯ ಕಾಡುತ್ತಿದೆ. ಅಷ್ಟಕ್ಕೂ ಸಂಗೀತಾ ಅವರು ಸುಮಾರು 500 ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ. ಶ್ರೀಲಂಕಾದ ತಮಿಳು ಕುಟುಂಬಕ್ಕೆ ಸೇರಿದ ಇವರು ಲಂಡನ್&zwnj;ನಲ್ಲಿ ಬೆಳೆದವರು. ಸದ್ಯ ಇವರು ಲಂಡನ್&zwnj;ನಲ್ಲಿ ನೆಲೆಸಿದ್ದು, ವಿಚ್ಛೇದನ ಪ್ರಕ್ರಿಯೆಗಳ ನಡುವೆ ತಮ್ಮ ಕುಟುಂಬದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ವಿಜಯ್ ಅವರು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದರೂ, ಸಂಗೀತಾ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಲಂಡನ್&zwnj;ನಲ್ಲಿಯೇ ಉಳಿದರು. ಇತ್ತೀಚೆಗೆ 25 ವರ್ಷಗಳ ದಾಂಪತ್ಯ ಜೀವನದ ನಂತರ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಅವರ ರಾಜಕೀಯ ಯಶಸ್ಸಿನ ನಡುವೆಯೂ, ಸಂಗೀತಾ ಲಂಡನ್&zwnj;ನಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರ ಮೊದಲ ರಿಯಾಕ್ಷನ್​ ಹೇಗಿರಬಹುದು ಎಂದು ಜನರು ಕಾದು ಕಾದು ಸುಸ್ತಾಗಿದ್ದಾರೆ. ಆದರೆ ಮಿಸ್ಸಿಂಗ್​ ಆಗಿರೋ ಸಂಗೀತಾ ಸದ್ಯ ಸದ್ದು ಮಾಡುತ್ತಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/thalapathy-vijays-wife-sangeeta-is-missing-since-he-wins-the-election-where-is-she-suc/articleshow-14ik9bg"/>
        </item>
        <item>
            <title><![CDATA[ವೈದ್ಯಕೀಯ ವಿಸ್ಮಯ: ನಿಮಿಷಗಳ ಅಂತರದಲ್ಲಿ ಜನಿಸಿದ ಅವಳಿ ಸಹೋದರಿಯರ ತಂದೆ ಬೇರೆ ಬೇರೆ!]]></title>
            <link>https://kannada.asianetnews.com/relationship/uk-twins-different-biological-fathers-heteropaternal-superfecundation-rare-case-san/articleshow-1z2dgv3</link>
            <guid isPermaLink="true">https://kannada.asianetnews.com/relationship/uk-twins-different-biological-fathers-heteropaternal-superfecundation-rare-case-san/articleshow-1z2dgv3</guid>
            <pubDate>Tue, 05 May 2026 19:57:29 +0530</pubDate>
            <description><![CDATA[&lt;p&gt;ಯುಕೆಯಲ್ಲಿ 49 ವರ್ಷಗಳ ಹಿಂದೆ ಜನಿಸಿದ ಅವಳಿ ಸಹೋದರಿಯರು, ಡಿಎನ್&zwnj;ಎ ಪರೀಕ್ಷೆಯ ಮೂಲಕ ತಮಗೆ ಬೇರೆ ಬೇರೆ ಜೈವಿಕ ತಂದೆಯರಿದ್ದಾರೆ ಎಂಬ ಆಘಾತಕಾರಿ ಸತ್ಯವನ್ನು ಕಂಡುಕೊಂಡಿದ್ದಾರೆ. 'ಹೆಟೆರೊಪಟರ್ನಲ್ ಸೂಪರ್&zwnj;ಫೆಕಂಡೇಶನ್' ಎಂಬ ಅಪರೂಪದ ವೈದ್ಯಕೀಯ ವಿದ್ಯಮಾನ ಇದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqw8a6s8r61aw7nvxzn6vepk,imgname-whatsapp-image-2026-05-05-at-7.48.19-pm-1777990966056.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್ (ಮೇ.5): &lt;/strong&gt;ಯುಕೆಯಲ್ಲಿ ಅತ್ಯಂತ ಅಪರೂಪದ ಮತ್ತು ವೈದ್ಯಕೀಯವಾಗಿ ದಾಖಲಾದ ಘಟನೆಯೊಂದು ಬೆಳಕಿಗೆ ಬಂದಿದೆ. ಸುಮಾರು 49 ವರ್ಷಗಳ ಹಿಂದೆ ಅವಳಿಗಳಾಗಿ ಜನಿಸಿದ ಇಬ್ಬರು ಸಹೋದರಿಯರು, ತಮ್ಮ 40ರ ದಶಕದ ಅಂತ್ಯದಲ್ಲಿ ತಮಗೆ ಜನ್ಮ ನೀಡಿದ ತಂದೆ ಒಬ್ಬನೇ ಅಲ್ಲ ಎಂಬ ಆಘಾತಕಾರಿ ಸತ್ಯವನ್ನು ತಿಳಿದುಕೊಂಡಿದ್ದಾರೆ. ನಾಟಿಂಗ್&zwnj;ಹ್ಯಾಮ್&zwnj;ನಲ್ಲಿ 1976 ರಲ್ಲಿ ಕೇವಲ ನಿಮಿಷಗಳ ಅಂತರದಲ್ಲಿ ಜನಿಸಿದ ಮಿಚೆಲ್ ಮತ್ತು ಲಾವಿನಿಯಾ ಓಸ್ಬೋರ್ನ್ (49), ಇತ್ತೀಚೆಗೆ ಮನೆಯಲ್ಲೇ ಡಿಎನ್&zwnj;ಎ (DNA) ಪರೀಕ್ಷೆ ಮಾಡಿಕೊಂಡಾಗ ಈ ಸತ್ಯ ಬಯಲಾಗಿದೆ. ಪರೀಕ್ಷಾ ವರದಿಯ ಪ್ರಕಾರ, ಈ ಇಬ್ಬರಿಗೂ ತಾಯಿ ಒಬ್ಬರೇ ಆಗಿದ್ದರೂ, ಜೈವಿಕವಾಗಿ ಇವರು ತಂದೆ ಬೇರೆಯಾಗಿರುವ 'ಸಹೋದರಿಯರು'.&lt;/p&gt;&lt;p&gt;ವೈದ್ಯಕೀಯ ವಿಜ್ಞಾನದಲ್ಲಿ ಇದನ್ನು 'ಹೆಟೆರೊಪಟರ್ನಲ್ ಸೂಪರ್&zwnj;ಫೆಕಂಡೇಶನ್' (Heteropaternal superfecundation) ಎಂದು ಕರೆಯಲಾಗುತ್ತದೆ. ಒಬ್ಬ ಮಹಿಳೆ ತನ್ನ ಋತುಚಕ್ರದ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಅಂಡಾಣುಗಳನ್ನು ಬಿಡುಗಡೆ ಮಾಡಿದಾಗ ಮತ್ತು ಆ ಪ್ರತ್ಯೇಕ ಅಂಡಾಣುಗಳು ಬೇರೆ ಬೇರೆ ಪುರುಷರ ವೀರ್ಯಾಣುಗಳೊಂದಿಗೆ ಫಲಿತಗೊಂಡಾಗ ಇಂತಹ ಅಪರೂಪದ ವಿದ್ಯಮಾನ ಸಂಭವಿಸುತ್ತದೆ. ಜಾಗತಿಕವಾಗಿ ಇಂತಹ ಕೇವಲ ಎರಡು ಡಜನ್ ಪ್ರಕರಣಗಳು ಮಾತ್ರ ವರದಿಯಾಗಿದ್ದು, ಯುಕೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ ಎಂದು ಬಿಬಿಸಿ (BBC) ವರದಿ ಮಾಡಿದೆ.&lt;/p&gt;&lt;p&gt;ಈ ಸತ್ಯ ತಿಳಿದಾಗ ಲಾವಿನಿಯಾ ಅವರಿಗೆ ಆಘಾತ ಮತ್ತು ಅಳುಕು ಎರಡೂ ಒಟ್ಟಿಗೆ ಎದುರಾಯಿತು. &quot;ಬಹುಶಃ ಸುಪ್ತಪ್ರಜ್ಞೆಯಲ್ಲಿ ನನಗೆ ಇದು ಮೊದಲೇ ತಿಳಿದಿತ್ತೇನೋ,&quot; ಎಂದು ಅವರು ಬಿಬಿಸಿಗೆ ತಿಳಿಸಿದ್ದಾರೆ. ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅವರು, &quot;ನನ್ನ ಬದುಕಿನಲ್ಲಿ ನನಗೆ ಸೇರಿದವಳು ಎನ್ನಲು ಅವಳೊಬ್ಬಳೇ ಇದ್ದಳು, ಈಗ ಅವಳೂ ನನ್ನವಳಲ್ಲ (ಪೂರ್ಣ ಸಹೋದರಿಯಲ್ಲ) ಎಂಬ ಸತ್ಯ ಕಠಿಣವಾಗಿತ್ತು,&quot; ಎಂದು ಭಾವುಕರಾದರು. ಆದರೆ ಮಿಚೆಲ್ ಇದನ್ನು ಭಿನ್ನವಾಗಿ ಸ್ವೀಕರಿಸಿದ್ದಾರೆ. &quot;ನನಗೇನು ಅಚ್ಚರಿಯಾಗಲಿಲ್ಲ. ಇದು ತುಂಬಾ ವಿಚಿತ್ರ ಮತ್ತು ಅಪರೂಪದ ಸಂಗತಿಯಾದರೂ, ಈಗ ಎಲ್ಲದಕ್ಕೂ ಒಂದು ಅರ್ಥ ಸಿಕ್ಕಂತಾಗಿದೆ,&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಹುಡುಕಾಟ ಮತ್ತು ಸತ್ಯದ ದರ್ಶನ&lt;/strong&gt;&lt;/h2&gt;&lt;p&gt;ಈ ಸಹೋದರಿಯರ ಬಾಲ್ಯ ಅಷ್ಟು ಸುಲಭವಾಗಿರಲಿಲ್ಲ. ತಾಯಿ ಸ್ಥಿರವಾದ ಜೀವನ ಒದಗಿಸಲು ಪರದಾಡುತ್ತಿದ್ದ ಕಾರಣ, ಇವರು ಬಾಲ್ಯದಲ್ಲಿ ಹಲವು ಪೋಷಕ ಕೇಂದ್ರಗಳ ನಡುವೆ ಬೆಳೆದಿದ್ದರು. ಹಾಗಾಗಿ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ನೆಚ್ಚಿಕೊಂಡಿದ್ದರು. ಬಾಲ್ಯದಿಂದಲೂ ತಂದೆಯ ಬಗ್ಗೆ ಅಸ್ಪಷ್ಟತೆ ಇತ್ತು. ತಾಯಿ 'ಜೇಮ್ಸ್' ಎಂಬುವವರನ್ನು ಇವರ ತಂದೆ ಎಂದು ಗುರುತಿಸಿದ್ದರು. ಆದರೆ ಮಿಚೆಲ್ ಅವರು ಜೇಮ್ಸ್ ಅವರ ಫೋಟೋ ನೋಡಿದಾಗ ತಮ್ಮ ಹೋಲಿಕೆ ಇಲ್ಲದ್ದನ್ನು ಗಮನಿಸಿ ಡಿಎನ್&zwnj;ಎ ಪರೀಕ್ಷೆ ಮಾಡಿಸಿದಾಗ ಆತ ತಂದೆಯಲ್ಲ ಎಂಬುದು ಸಾಬೀತಾಯಿತು.&lt;/p&gt;&lt;p&gt;ನಂತರ ನಡೆದ ತನಿಖೆಯಲ್ಲಿ ಮಿಚೆಲ್ ಅವರಿಗೆ 'ಅಲೆಕ್ಸ್' ಎಂಬುವವರ ಪರಿಚಯವಾಗಿ, ಅವನೇ ತನ್ನ ಜೈವಿಕ ತಂದೆ ಎಂದು ತಿಳಿದುಬಂತು. ಇತ್ತ ಲಾವಿನಿಯಾ ಮೊದಲು ಪರೀಕ್ಷೆಗೆ ಹಿಂಜರಿದರೂ, ನಂತರ ಮಾಡಿಸಿದಾಗ ಅಲೆಕ್ಸ್ ತನ್ನ ತಂದೆಯಲ್ಲ ಎಂಬುದು ದೃಢಪಟ್ಟಿತು. ಅಂತಿಮವಾಗಿ ಲಾವಿನಿಯಾ ತನ್ನ ತಂದೆ 'ಆರ್ಥರ್' ಎಂಬುವವರನ್ನು ಲಂಡನ್&zwnj;ನಲ್ಲಿ ಭೇಟಿಯಾದರು.&lt;/p&gt;&lt;h2&gt;&lt;strong&gt;ಬಾಂಧವ್ಯದ ಹೊಸ ಆರಂಭ&lt;/strong&gt;&lt;/h2&gt;&lt;p&gt;ಲಾವಿನಿಯಾ ಈಗ ತನ್ನ ಜೈವಿಕ ತಂದೆ ಆರ್ಥರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ನಿರಂತರವಾಗಿ ಭೇಟಿಯಾಗುತ್ತಿದ್ದಾರೆ. &quot;ದಶಕಗಳಿಂದ ನನ್ನಲ್ಲಿದ್ದ ಅನಾಥ ಪ್ರಜ್ಞೆ ಈಗ ದೂರವಾಗಿದೆ,&quot; ಎಂದು ಅವರು ಹೇಳಿದ್ದಾರೆ. ಆರ್ಥರ್ ಅವರು ಮಿಚೆಲ್ ಅವರನ್ನೂ ಪ್ರೀತಿಯಿಂದ ಬರಮಾಡಿಕೊಂಡಿದ್ದು, ತಮಗೆ ಅವರು ತಂದೆಯ ಸಮಾನ ಎಂದು ಮಿಚೆಲ್ ತಿಳಿಸಿದ್ದಾರೆ. ದುರದೃಷ್ಟವಶಾತ್, ಮಿಚೆಲ್ ಅವರಿಗೆ ಡಿಎನ್&zwnj;ಎ ವರದಿ ಬಂದ ದಿನವೇ ಅವರ ತಾಯಿ ನಿಧನರಾಗಿದ್ದರು. ಇದರಿಂದಾಗಿ ಅವರ ಮನಸ್ಸಿನಲ್ಲಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದಂತಾಯಿತು. ಆರ್ಥರ್ ಅವರ ಪ್ರಕಾರ, ಆಕೆಯ ಕಠಿಣ ಸಮಯದಲ್ಲಿ ಅವರು ಜೊತೆಯಾಗಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>relationship</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/uk-twins-different-biological-fathers-heteropaternal-superfecundation-rare-case-san/articleshow-1z2dgv3"/>
        </item>
        <item>
            <title><![CDATA[Karna Serial: ನಿಧಿ-ಕರ್ಣ ಎಂಗೇಜ್​ಮೆಂಟ್​ ನೋಡಿ ವೀಕ್ಷಕರು ಶಾಕ್​! ಆ ತಲೆ ಎಲ್ಲಿದೆ ಕೇಳ್ತಿದ್ದಾರೆ ನೆಟ್ಟಿಗರು]]></title>
            <link>https://kannada.asianetnews.com/gallery/tv-talk/karna-serial-nidhi-and-karna-engagement-got-over-in-weird-situation-suc-2lkmqth</link>
            <guid isPermaLink="true">https://kannada.asianetnews.com/gallery/tv-talk/karna-serial-nidhi-and-karna-engagement-got-over-in-weird-situation-suc-2lkmqth</guid>
            <pubDate>Wed, 06 May 2026 17:23:05 +0530</pubDate>
            <description><![CDATA[ಕರ್ಣ ಧಾರಾವಾಹಿಯಲ್ಲಿ, ನಿಧಿ ಮತ್ತು ಅರ್ಜುನ್ ನಿಶ್ಚಿತಾರ್ಥವನ್ನು ವಿಲನ್ ರಮೇಶ್ ಏರ್ಪಡಿಸುತ್ತಾನೆ. ಆದರೆ, ಕರ್ಣನು ಒಂದು ವಿಶಿಷ್ಟ ಯೋಜನೆಯ ಮೂಲಕ, ಕತ್ತಲೆಯಲ್ಲಿ ತಾನೇ ನಿಧಿಗೆ ಉಂಗುರ ತೊಡಿಸಿ ನಿಶ್ಚಿತಾರ್ಥವನ್ನು ತನ್ನದಾಗಿಸಿಕೊಳ್ಳುತ್ತಾನೆ. ಈ ವಿಚಿತ್ರ ಐಡಿಯಾ ನೋಡಿ ವೀಕ್ಷಕರು ಅಚ್ಚರಿಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyhy6qndgassd9eb0m1gamz,imgname-karna-03-1778068167413.jpg" type="image/jpeg" height="390" width="690"/>
            <content:encoded><![CDATA[ಕರ್ಣ ಧಾರಾವಾಹಿಯಲ್ಲಿ, ನಿಧಿ ಮತ್ತು ಅರ್ಜುನ್ ನಿಶ್ಚಿತಾರ್ಥವನ್ನು ವಿಲನ್ ರಮೇಶ್ ಏರ್ಪಡಿಸುತ್ತಾನೆ. ಆದರೆ, ಕರ್ಣನು ಒಂದು ವಿಶಿಷ್ಟ ಯೋಜನೆಯ ಮೂಲಕ, ಕತ್ತಲೆಯಲ್ಲಿ ತಾನೇ ನಿಧಿಗೆ ಉಂಗುರ ತೊಡಿಸಿ ನಿಶ್ಚಿತಾರ್ಥವನ್ನು ತನ್ನದಾಗಿಸಿಕೊಳ್ಳುತ್ತಾನೆ. ಈ ವಿಚಿತ್ರ ಐಡಿಯಾ ನೋಡಿ ವೀಕ್ಷಕರು ಅಚ್ಚರಿಗೊಂಡಿದ್ದಾರೆ.&lt;img&gt;&lt;p&gt;ಸದ್ಯ ಕರ್ಣ ಸೀರಿಯಲ್​ (Karna Serial)ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಸಿಕ್ಕಿದೆ. ಹೇಗಾದ್ರೂ ಮಾಡಿ ನಿಧಿ ಮತ್ತು ಅರ್ಜುನ್​ ಮದುವೆಯನ್ನು ಮಾಡಿಯೇ ತೀರಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾನೆ ವಿಲನ್​ ರಮೇಶ್​. ಅದೇ ಇನ್ನೊಂದೆಡೆ, ತನ್ನ ಅಕ್ಕ ನಿತ್ಯಾ ಕರ್ಣನನ್ನು ಲವ್​ ಮಾಡ್ತಿರೋ ವಿಷಯ ತಿಳಿದಿರುವ ನಿಧಿ, ಅಕ್ಕ ಮತ್ತು ಕರ್ಣ ಒಂದಾಗಿ ಇರಬೇಕು ಎಂದು ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಹೊರಟಿದ್ದಾಳೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ನಿಧಿ ಮತ್ತು ಅರ್ಜುನ್​ ಎಂಗೇಜ್​ಮೆಂಟ್​ ಆಗುವ ಕಾಲ ಬಂದಿದೆ. ಮೊದಲಿಗೆ ನಿಧಿ ಏಕೆ ಹೀಗೆ ತನ್ನನ್ನು ಅವಾಯ್ಡ್​ ಮಾಡುತ್ತಿದ್ದಾಳೆ ಎಂದು ಕರ್ಣನಿಗೆ ತಿಳಿದಿರಲಿಲ್ಲ. ಆದರೆ ಕೊನೆಗೆ ವಿಷಯ ತಿಳಿದಿದೆ. ಆದ್ದರಿಂದ ರಮೇಶ್​ಗೆ ಅವನದ್ದೇ ಭಾಷೆಯಲ್ಲಿ ತಿರುಗೇಟು ಕೊಡಲು ಮುಂದಾಗಿದ್ದಾನೆ.&lt;/p&gt;&lt;img&gt;&lt;p&gt;ಎಂಗೇಜ್​ಮೆಂಟ್​ಗೆ ತಾನೇ ಖುದ್ದು ನಿಂತು ಎಲ್ಲಾ ಕಾರ್ಯ ಮಾಡುತ್ತಿರುವುದನ್ನು ನೋಡಿ ರಮೇಶ್​ಗೆ ತಲೆ ತಿರುಗಿದೆ. ಏನೋ ಎಡವಟ್ಟು ಆಗ್ತಿದೆ ಎಂದು ಎನ್ನಿಸಿದೆ. ಆದರೂ ಕರ್ಣ ಯಾಕೆ ನಿಧಿ ಮತ್ತು ಅರ್ಜುನನ ಎಂಗೇಜ್​ಮೆಂಟ್​ಗೆ ಇಷ್ಟು ಉತ್ಸುಕನಾಗಿದ್ದಾನೆ ಎನ್ನೋದು ಅವನಿಗೆ ಗೊತ್ತಾಗ್ತಿಲ್ಲ.&lt;/p&gt;&lt;img&gt;&lt;p&gt;ಇದೀಗ ಎಂಗೇಜ್​ಮೆಂಟ್​ ನಡೆಯುತ್ತಿದೆ. ಇಲ್ಲೇ ಇರೋದು ವಿಶೇಷ. ಅರ್ಜುನ್​ನನ್ನು ಮಹಡಿ ಮೇಲೆ ಕಳಿಸಿರುವ ಕರ್ಣ, ಅಲ್ಲಿಂದ ಒಂದು ದಾರ ಬಿಟ್ಟಿದ್ದಾನೆ. ಆ ದಾರವನ್ನು ನಿಧಿಯ ಬೆರಳಿಗೆ ಸುತ್ತಿದ್ದಾನೆ. ಅರ್ಜುನ್​ ಅಲ್ಲಿಂದ ಉಂಗುರ ಹಾಕಿದರೆ ಅದು ನಿಧಿಯ ಬೆರಳಿಗೆ ಬರುತ್ತದೆ ಎನ್ನುವುದು ಲಾಜಿಕ್​!&lt;/p&gt;&lt;img&gt;&lt;p&gt;ಕೊನೆಗೆ ದಾರ ಕೆಳಗೆ ಬರುವ ಸಮಯದಲ್ಲಿಯೇ ಲೈಟ್​ ಆಫ್ ಮಾಡಲಾಗಿದೆ. ಬೆರಳಿನ ಹತ್ತಿರ ಉಂಗುರ ಬಂದಾಗ ಕರ್ಣ ಆ ಉಂಗುರವನ್ನು ತಾನೇ ನಿಧಿಗೆ ತೊಡಿಸಿದ್ದಾನೆ. ಅಲ್ಲಿಗೆ ಕರ್ಣ ಮತ್ತು ನಿಧಿ ಎಂಗೇಜ್​ಮೆಂಟ್​ ಮುಗಿದಿದೆ.&lt;/p&gt;&lt;img&gt;&lt;p&gt;ಇದನ್ನು ನೋಡಿದ ವೀಕ್ಷಕರಿಗೆ ಖುಷಿಯಾದರೂ, ಇಂಥ ಐಡಿಯಾ ಕೊಟ್ಟಿರೋ ತಲೆ ಯಾರದ್ದು ಎಂದು ಪ್ರಶ್ನಿಸುತ್ತಿದ್ದಾರೆ. ದಾರದಿಂದ ಉಂಗುರ ಬಂದರೆ, ಅದು ನೇರವಾಗಿ ಬೆರಳಿಗೆ ಹೋಗಿ ಕುಳಿತುಕೊಳ್ಳಲು ಸಾಧ್ಯನಾ ಎನ್ನುವುದು ಅವರ ಪ್ರಶ್ನೆ. ಇಂಥ ಹುಚ್ಚು ಲಾಜಿಕ್​ ಎಲ್ಲಿಯೂ ನೋಡಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದರೆ, ಇಂಥದ್ದೊಂದು ವಿಭಿನ್ನ ಐಡಿಯಾ ಬಂದವರಿಗೆ ದೊಡ್ಡ ಸಲಾಂ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಒಟ್ಟಿನಲ್ಲಿ ಈ ಪ್ಲ್ಯಾನ್​ ಮಾಡಿರೋ ಹಿಂದಿನ ತಲೆ ಎಲ್ಲಿದೆ ಎಂದು ಹುಡುಕಾಟ ನಡೆಸುತ್ತಿದ್ದಾರೆ ವೀಕ್ಷಕರು!&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-nidhi-and-karna-engagement-got-over-in-weird-situation-suc-2lkmqth"/>
        </item>
        <item>
            <title><![CDATA[ಭಾರತದ ವಿವಿಧ ರಾಜ್ಯಗಳಲ್ಲಿ ಪತ್ನಿಯರು ತಮ್ಮ ಗಂಡನನ್ನು ಹೇಗೆ ಕರೆಯುತ್ತಾರೆ ಗೊತ್ತಾ?]]></title>
            <link>https://kannada.asianetnews.com/webstories/relationship/how-wives-address-husbands-in-different-indian-states-gvd-2mk4c0v</link>
            <guid isPermaLink="true">https://kannada.asianetnews.com/webstories/relationship/how-wives-address-husbands-in-different-indian-states-gvd-2mk4c0v</guid>
            <pubDate>Tue, 05 May 2026 18:45:27 +0530</pubDate>
            <description><![CDATA[&lt;p&gt;ನಮ್ಮ ದೇಶ ಸಾಂಸ್ಕೃತಿಕ ವೈವಿಧ್ಯತೆಯಿಂದ ತುಂಬಿದೆ. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಭಾಷೆ, ಸಂಪ್ರದಾಯಗಳಿವೆ. ಅದೇ ರೀತಿ, ಗಂಡನನ್ನು ಕರೆಯುವ ರೀತಿ ಕೂಡ ಭಿನ್ನವಾಗಿರುತ್ತದೆ. ಯಾವೆಲ್ಲಾ ರಾಜ್ಯಗಳಲ್ಲಿ ಪತ್ನಿಯರು ಪತಿಯನ್ನು ಏನೆಂದು ಕರೆಯುತ್ತಾರೆಂದು ಇಲ್ಲಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jv54vt699z6tjzjxmb0jfjaj,imgname-hindu-traditions-and-beleifs-cover-1747150825673.jpg" type="image/jpeg" height="390" width="690"/>
            <category>relationship</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/relationship/how-wives-address-husbands-in-different-indian-states-gvd-2mk4c0v"/>
        </item>
        <item>
            <title><![CDATA[ಸಣ್ಣ ವಿಷಯ ದೊಡ್ಡ ದುರಂತ, ಯೂಟ್ಯೂಬ್‌ ನೋಡಿ ಹೆಂಡತಿಯ ಹತ್ಯೆ]]></title>
            <link>https://kannada.asianetnews.com/gallery/relationship/andhra-husband-ends-his-wife-life-over-weight-gain-after-youtube-search-suh-3mxsd9e</link>
            <guid isPermaLink="true">https://kannada.asianetnews.com/gallery/relationship/andhra-husband-ends-his-wife-life-over-weight-gain-after-youtube-search-suh-3mxsd9e</guid>
            <pubDate>Wed, 06 May 2026 13:31:20 +0530</pubDate>
            <description><![CDATA[&lt;p&gt;YouTube ಕಟ್ಟಿಕೊಂಡ ಹೆಂಡತಿ ದಪ್ಪ ಆಗುತ್ತಿದ್ದಾಳೆ ಎಂದು ಯೂಟ್ಯೂಬ್&zwnj;ನಲ್ಲಿ ಸರ್ಚ್ ಮಾಡಿ ಆಕೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದ ಈ ಘಟನೆಯಲ್ಲಿ ನಿಜವಾಗಿ ನಡೆದಿದ್ದೇನು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqy0v8ec8t5xyb1b4yzgfhtg,imgname-murder-1778050245068.jpg" type="image/jpeg" height="390" width="690"/>
            <content:encoded><![CDATA[&lt;p&gt;YouTube ಕಟ್ಟಿಕೊಂಡ ಹೆಂಡತಿ ದಪ್ಪ ಆಗುತ್ತಿದ್ದಾಳೆ ಎಂದು ಯೂಟ್ಯೂಬ್&zwnj;ನಲ್ಲಿ ಸರ್ಚ್ ಮಾಡಿ ಆಕೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದ ಈ ಘಟನೆಯಲ್ಲಿ ನಿಜವಾಗಿ ನಡೆದಿದ್ದೇನು ಗೊತ್ತಾ?&lt;/p&gt;&lt;img&gt;ಈ ಕಾಲದಲ್ಲಿ ಮಾನವ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅದರಲ್ಲೂ ಗಂಡ-ಹೆಂಡತಿಯ ಸಂಬಂಧ ತೀರಾ ದುರ್ಬಲವಾಗಿದೆ. ಜೀವನಪೂರ್ತಿ ಜೊತೆಗಿರಬೇಕಾದವರು ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಿದ್ದಾರೆ. ಇನ್ನು ಕೆಲವರು ಮತ್ತಷ್ಟು ಕ್ರೂರವಾಗಿ ನಡೆದುಕೊಳ್ಳುತ್ತಾರೆ, ತಮ್ಮ ಜೀವನ ಸಂಗಾತಿಯನ್ನೇ ಕೊಂದುಬಿಡುತ್ತಾರೆ. ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದ ಹೆಂಡತಿ, ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದ ಗಂಡ, ಇಂತಹ ಸುದ್ದಿಗಳನ್ನು ನಾವು ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿದ್ದೇವೆ. ಆದರೆ ಇಲ್ಲೊಬ್ಬ ದುರುಳ, ಹೆಂಡತಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಪ್ರಾಣ ತೆಗೆದಿದ್ದಾನೆ. ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.&lt;img&gt;&lt;p&gt;ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದುಟೂರು ನಿವಾಸಿ ಕಿರಣ್, ಮದ್ದೂರಿನ ಪದ್ಮಜಾಳನ್ನು ಮದುವೆಯಾಗಿದ್ದ. ಮದುವೆ ಸಮಯದಲ್ಲಿ ಪದ್ಮಜಾ ಸ್ವಲ್ಪ ದಪ್ಪಗಿದ್ದಳು. ಆದರೆ ಆಕೆಯ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಕಿರಣ್, ಮನೆ ಅಳಿಯನಾಗಿ ಹೋಗಿದ್ದ. ಈ ದಂಪತಿ ಮದ್ದೂರಿನ ಹೊಸಕೋಟೆಯಲ್ಲಿ ವಾಸವಾಗಿದ್ದರು. ಇವರಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ಸಾಫ್ಟ್&zwnj;ವೇರ್ ಇಂಜಿನಿಯರ್ ಆಗಿದ್ದ ಕಿರಣ್, ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ. ಕೆಲವು ಕಾಲ ಇವರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಕಿರಣ್, ಹೆಂಡತಿಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ಆಕೆ ದಪ್ಪಗಿದ್ದು, ಸುಂದರವಾಗಿಲ್ಲ ಎಂದು ಭಾವಿಸಿದ್ದ. ಸಣ್ಣಗಾಗುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ. ಆದರೂ ಪದ್ಮಜಾ ತೂಕ ಇಳಿಸಿಕೊಳ್ಳದಿದ್ದಾಗ, ಆಕೆಯನ್ನು ತೊಡೆದುಹಾಕಲು ನಿರ್ಧರಿಸಿದ.&lt;/p&gt;&lt;img&gt;ಹೆಂಡತಿಯನ್ನು ಸುಲಭವಾಗಿ ಕೊಲ್ಲುವುದು ಹೇಗೆಂದು ಕಿರಣ್ ಯೂಟ್ಯೂಬ್&zwnj;ನಲ್ಲಿ ಹುಡುಕಾಡಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ಈ ವೇಳೆ ಆತನಿಗೆ ಒಂದು ಫೋನ್ ನಂಬರ್ ಸಿಕ್ಕಿದ್ದು, ಅವರಿಗೆ ಕರೆ ಮಾಡಿ ಕೊರಿಯರ್ ಮೂಲಕ ವಿಷ ತರಿಸಿಕೊಂಡಿದ್ದಾನೆ. ಪದ್ಮಜಾ ಕುಟುಂಬದವರಿಗೆ ಅನುಮಾನ ಬಾರದಿರಲೆಂದು, ತನ್ನ ಸ್ವಂತ ಊರಾದ ಪ್ರೊద్దుಟೂರಿನಲ್ಲಿ ಕೊಲೆಗೆ ಪ್ಲಾನ್ ಮಾಡಿದ್ದಾನೆ. ತಂದೆ-ತಾಯಿಯನ್ನು ನೋಡಿ ಬರೋಣ ಎಂದು ಹೇಳಿ ಪತ್ನಿ ಪದ್ಮಜಾಳನ್ನು ಪ್ರೊద్దుಟೂರಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಗೆ ಅನುಮಾನ ಬಾರದಂತೆ ಪ್ರೀತಿ ತೋರಿಸಿದ್ದಾನೆ. ಈ ನಡುವೆ, ಪಾಲ್&zwnj;ಕೋವಾ ತಂದು ಅದರಲ್ಲಿ ವಿಷ ಬೆರೆಸಿ ಪದ್ಮಜಾಗೆ ತಿನ್ನಿಸಿದ್ದಾನೆ. ಗಂಡ ಪ್ರೀತಿಯಿಂದ ಕೊಡುತ್ತಿದ್ದಾನೆ ಎಂದು ಆ ಅಮಾಯಕಿ ಪಾಲ್&zwnj;ಕೋವಾ ತಿಂದಿದ್ದಾಳೆ. ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆದರೆ ವಿಷ ತಿಂದರೂ ಪದ್ಮಜಾ ಸಾಯಲಿಲ್ಲ. ಆಗ ಕಿರಣ್, ಆಕೆಯ ಮುಖದ ಮೇಲೆ ದಿಂಬಿಟ್ಟು ಉಸಿರುಗಟ್ಟಿಸಿದ್ದಾನೆ. ಒದ್ದಾಡಿದ ಆಕೆ ಕೊನೆಗೆ ಪ್ರಾಣ ಬಿಟ್ಟಿದ್ದಾಳೆ. ನಂತರ, ತನ್ನ ಹೆಂಡತಿ ಹೃದಯಾಘಾತದಿಂದ ಸತ್ತಿದ್ದಾಳೆಂದು ಎಲ್ಲರನ್ನೂ ನಂಬಿಸಲು ಪ್ರಯತ್ನಿಸಿದ್ದಾನೆ.&lt;img&gt;ಕಿರಣ್ ಹೇಳಿದ ಮಾತನ್ನು ಪದ್ಮಜಾಳ ತವರು ಮನೆಯವರೂ ನಂಬಿದ್ದರು. ಆಕೆ ನಿಜವಾಗಿಯೂ ಹೃದಯಾಘಾತದಿಂದ ಸತ್ತಿದ್ದಾಳೆಂದೇ ಭಾವಿಸಿದ್ದರು. ಆದರೆ ಪೊಲೀಸರ ಎಂಟ್ರಿಯಿಂದ ಆತನ ಪ್ಲಾನ್ ಫೇಲ್ ಆಯಿತು. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ಪೋಸ್ಟ್&zwnj;ಮಾರ್ಟಂ ಮಾಡಿಸಿದರು. ಆಗ ನಿಜವಾದ ಸತ್ಯ ಹೊರಬಂತು. ಆಕೆಯ ದೇಹದಲ್ಲಿ ವಿಷದ ಅಂಶ ಪತ್ತೆಯಾಯಿತು. ನಂತರ ಪೊಲೀಸರು ತಮ್ಮದೇ ಶೈಲಿಯಲ್ಲಿ ಕಿರಣ್&zwnj;ನನ್ನು ವಿಚಾರಿಸಿದಾಗ, ಆತ ಸತ್ಯ ಬಾಯ್ಬಿಟ್ಟಿದ್ದಾನೆ. ತಾನೇ ಹೆಂಡತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ರಿಮಾಂಡ್&zwnj;ಗೆ ಕಳುಹಿಸಿದ್ದಾರೆ.]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/andhra-husband-ends-his-wife-life-over-weight-gain-after-youtube-search-suh-3mxsd9e"/>
        </item>
        <item>
            <title><![CDATA[ಈ 4 ರಾಶಿಯ ಮಹಿಳೆಯರು ಸಿಕ್ಕಾಪಟ್ಟೆ ಬುದ್ಧಿವಂತರು, ಪ್ರೀತಿಯಲ್ಲಿ ಇವ್ರನ್ನ ಮೋಸ ಮಾಡೋಕೆ ಆಗಲ್ಲ!]]></title>
            <link>https://kannada.asianetnews.com/gallery/relationship/astrology-insights-four-female-zodiac-signs-you-can-never-deceive-in-love-suh-67mvtyx</link>
            <guid isPermaLink="true">https://kannada.asianetnews.com/gallery/relationship/astrology-insights-four-female-zodiac-signs-you-can-never-deceive-in-love-suh-67mvtyx</guid>
            <pubDate>Thu, 07 May 2026 16:16:54 +0530</pubDate>
            <description><![CDATA[&lt;p&gt;Female Zodiac Signs ಜ್ಯೋತಿಷ್ಯದ ಪ್ರಕಾರ, 4 ರಾಶಿಯ ಮಹಿಳೆಯರು ಅತ್ಯಂತ ಬುದ್ಧಿವಂತರು. ಪ್ರೀತಿಯಲ್ಲಿ ಇವರನ್ನು ಮೋಸಗೊಳಿಸುವುದು ಅಸಾಧ್ಯವಂತೆ. ಹಾಗಾದ್ರೆ ಆ ರಾಶಿಗಳು ಯಾವುವು? ಈ ಬಗ್ಗೆ ಇಲ್ಲಿ ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0wb9jndjeag0tf6tkp6fxv,imgname-4-smartest-female-zodiac-signs--1--1778146190933.jpg" type="image/jpeg" height="390" width="690"/>
            <content:encoded><![CDATA[&lt;p&gt;Female Zodiac Signs ಜ್ಯೋತಿಷ್ಯದ ಪ್ರಕಾರ, 4 ರಾಶಿಯ ಮಹಿಳೆಯರು ಅತ್ಯಂತ ಬುದ್ಧಿವಂತರು. ಪ್ರೀತಿಯಲ್ಲಿ ಇವರನ್ನು ಮೋಸಗೊಳಿಸುವುದು ಅಸಾಧ್ಯವಂತೆ. ಹಾಗಾದ್ರೆ ಆ ರಾಶಿಗಳು ಯಾವುವು? ಈ ಬಗ್ಗೆ ಇಲ್ಲಿ ನೋಡೋಣ.&lt;/p&gt;&lt;img&gt;ವೃಶ್ಚಿಕ ರಾಶಿಯ ಮಹಿಳೆಯರಿಗೆ ಸತ್ಯಕ್ಕಿಂತ ಪ್ರಾಮಾಣಿಕತೆ ಹೆಚ್ಚು ಮುಖ್ಯ. ಪ್ಲುಟೋ ಗ್ರಹದ ಆಡಳಿತದಲ್ಲಿರುವುದರಿಂದ, ಇವರು ಯಾವುದೇ ವಿಷಯವನ್ನು ಆಳವಾಗಿ ವಿಶ್ಲೇಷಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಯಾರಾದರೂ ಸುಳ್ಳು ಹೇಳಿದಾಗ, ಅವರ ದೇಹ ಭಾಷೆ, ಮಾತಿನ ರೀತಿ ಮತ್ತು ಕಣ್ಣಿನ ಚಲನೆಯನ್ನು ನೋಡಿಯೇ ಸತ್ಯವನ್ನು ಗ್ರಹಿಸುತ್ತಾರೆ. ಇವರ ಬಳಿ ಒಮ್ಮೆ ಸುಳ್ಳು ಹೇಳಿ ಸಿಕ್ಕಿಬಿದ್ದರೆ, ಮತ್ತೆ ಅವರ ನಂಬಿಕೆ ಗಳಿಸುವುದು ತುಂಬಾ ಕಷ್ಟ. ಹಾಗಾಗಿ, ಕಹಿ ಸತ್ಯವಾದರೂ ನೇರವಾಗಿ ಹೇಳಿಬಿಡುವುದು ನಿಮ್ಮ ಸಂಬಂಧಕ್ಕೆ ಒಳ್ಳೆಯದು.&lt;img&gt;ಕನ್ಯಾ ರಾಶಿಯ ಮಹಿಳೆಯರು ಎಲ್ಲವನ್ನೂ ತರ್ಕಬದ್ಧವಾಗಿ ನೋಡುತ್ತಾರೆ. ನೀವು ಹೇಳುವ ಸುಳ್ಳಿನಲ್ಲಿರುವ ವಿರೋಧಾಭಾಸಗಳನ್ನು ಇವರು ಬಹಳ ಸುಲಭವಾಗಿ ಪತ್ತೆ ಮಾಡುತ್ತಾರೆ. ವಿವರಗಳನ್ನು ಗಮನಿಸುವುದರಲ್ಲಿ ಇವರು ಎತ್ತಿದ ಕೈ. ನೀವು ನಿನ್ನೆ ಹೇಳಿದ್ದಕ್ಕೂ ಇಂದು ಹೇಳಿದ್ದಕ್ಕೂ ಸಣ್ಣ ವ್ಯತ್ಯಾಸವಿದ್ದರೂ, ಅದನ್ನೇ ಇಟ್ಟುಕೊಂಡು ನೀವು ಏನನ್ನೋ ಮುಚ್ಚಿಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಇವರ ಬುದ್ಧಿವಂತಿಕೆಯನ್ನು ಕಡೆಗಣಿಸಿ ಸುಳ್ಳು ಹೇಳುವುದು, ಇವರಿಗೆ ಮಾಡುವ ದೊಡ್ಡ ಅವಮಾನ ಎಂದು ಅವರು ಭಾವಿಸುತ್ತಾರೆ. ಆದ್ದರಿಂದ ಈ ರಾಶಿಯ ಮಹಿಳೆಯರ ಬಳಿ ಜಾಗರೂಕರಾಗಿರಿ.&lt;img&gt;ಮೀನ ರಾಶಿಯ ಮಹಿಳೆಯರು ತುಂಬಾ ಸೌಮ್ಯರು ಎಂದು ನೀವು ಭಾವಿಸಿದರೆ, ನಿಮ್ಮನ್ನು ನೀವೇ ಮೋಸ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ. ಇವರು ಇತರರ ಮನಸ್ಸಿನ ಭಾವನೆಗಳನ್ನು ಗ್ರಹಿಸುವ ಅದ್ಭುತ ಶಕ್ತಿಯನ್ನು ಹೊಂದಿರುತ್ತಾರೆ. ಒಬ್ಬ ವ್ಯಕ್ತಿ ಮಾತನಾಡುವಾಗ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಇವರ ಆರನೇ ಇಂದ್ರಿಯ ತೋರಿಸಿಕೊಡುತ್ತದೆ. ನೀವು ಮಾತಿನಲ್ಲಿ ಎಷ್ಟೇ ಜಾಲಗಾರಿಕೆ ಮಾಡಿದರೂ, ನಿಮ್ಮ ಮನಸ್ಸಿನಲ್ಲಿರುವ ಅಪ್ರಾಮಾಣಿಕತೆಯನ್ನು ಇವರ ಒಳಮನಸ್ಸು ತಕ್ಷಣವೇ ಹಿಡಿದುಬಿಡುತ್ತದೆ. ವಂಚನೆಯನ್ನು ಅರಿತರೆ ಇವರು ಮೌನವಾಗಿ ದೂರ ಸರಿಯುತ್ತಾರೆಯೇ ಹೊರತು, ಅದನ್ನು ಸುಲಭವಾಗಿ ಮರೆಯುವುದಿಲ್ಲ.&lt;img&gt;&lt;p&gt;ಸಿಂಹ ರಾಶಿಯ ಮಹಿಳೆಯರು ರಾಜಮನೆತನದ ಗುಣಗಳನ್ನು ಹೊಂದಿರುತ್ತಾರೆ. ನಿಷ್ಠೆ ಮತ್ತು ಪ್ರಾಮಾಣಿಕತೆಯೇ ಇವರ ತಾರಕ ಮಂತ್ರ. ಇವರು ತಮ್ಮ ಸಂಗಾತಿಗೆ ಎಲ್ಲವನ್ನೂ ಕೊಡುತ್ತಾರೆ, ಆದರೆ ಪ್ರತಿಯಾಗಿ ನಿರೀಕ್ಷಿಸುವುದು ಸತ್ಯವನ್ನು ಮಾತ್ರ. ಇವರ ಬಳಿ ಸುಳ್ಳು ಹೇಳುವುದು ತಮ್ಮ ಗೌರವಕ್ಕೆ ಮಾಡಿದ ಅವಮಾನ ಎಂದು ಇವರು ಪರಿಗಣಿಸುತ್ತಾರೆ. ಒಮ್ಮೆ ಸುಳ್ಳು ಹೇಳಿ ಸಿಕ್ಕಿಬಿದ್ದರೆ, ಇವರ ಕೋಪ ಜ್ವಾಲಾಮುಖಿಯಂತೆ ಸ್ಫೋಟಗೊಳ್ಳುತ್ತದೆ. ಪ್ರಾಮಾಣಿಕರನ್ನು ತಲೆಯ ಮೇಲೆ ಹೊತ್ತುಕೊಂಡು ಮೆರೆಸುವ ಇವರು, ವಂಚನೆಯನ್ನು ಎಂದಿಗೂ ಸಹಿಸುವುದಿಲ್ಲ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/astrology-insights-four-female-zodiac-signs-you-can-never-deceive-in-love-suh-67mvtyx"/>
        </item>
        <item>
            <title><![CDATA[Chankaya Niti: ಪತ್ನಿಯಾದವಳು ಗಂಡನಿಗೆ ಈ ಮೂರು ವಾಕ್ಯವನ್ನು ಎಂದಿಗೂ ಹೇಳಲೇಬಾರದು]]></title>
            <link>https://kannada.asianetnews.com/gallery/relationship/dont-say-these-three-lines-to-your-husband-as-per-chanakya-niti-suc-6na147q</link>
            <guid isPermaLink="true">https://kannada.asianetnews.com/gallery/relationship/dont-say-these-three-lines-to-your-husband-as-per-chanakya-niti-suc-6na147q</guid>
            <pubDate>Thu, 07 May 2026 17:09:09 +0530</pubDate>
            <description><![CDATA[ಚಾಣಕ್ಯ ನೀತಿಯ ಪ್ರಕಾರ, ಸುಖಿ ದಾಂಪತ್ಯಕ್ಕಾಗಿ ಪತ್ನಿಯು ತನ್ನ ಪತಿಗೆ ಕೆಲವು ಮಾತುಗಳನ್ನು ಹೇಳಬಾರದು. ಗಂಡನ ಪೌರುಷವನ್ನು ಪ್ರಶ್ನಿಸುವುದು, ಬೇರೆಯವರೊಂದಿಗೆ ಹೋಲಿಸುವುದು ಮತ್ತು ಬೇರೆಯವರನ್ನು ಮದುವೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುವುದು ಸಂಬಂಧದಲ್ಲಿ ಬಿರುಕು ಮೂಡಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kr13pvxay16p79c4b5m88w9c,imgname-chanakya-niti-1778153910186.jpg" type="image/jpeg" height="390" width="690"/>
            <content:encoded><![CDATA[ಚಾಣಕ್ಯ ನೀತಿಯ ಪ್ರಕಾರ, ಸುಖಿ ದಾಂಪತ್ಯಕ್ಕಾಗಿ ಪತ್ನಿಯು ತನ್ನ ಪತಿಗೆ ಕೆಲವು ಮಾತುಗಳನ್ನು ಹೇಳಬಾರದು. ಗಂಡನ ಪೌರುಷವನ್ನು ಪ್ರಶ್ನಿಸುವುದು, ಬೇರೆಯವರೊಂದಿಗೆ ಹೋಲಿಸುವುದು ಮತ್ತು ಬೇರೆಯವರನ್ನು ಮದುವೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುವುದು ಸಂಬಂಧದಲ್ಲಿ ಬಿರುಕು ಮೂಡಿಸಬಹುದು.&lt;img&gt;&lt;p&gt;ಗಂಡ-ಹೆಂಡತಿ ನಡುವೆ ಜಗಳ ಆಗುವುದು ಸರ್ವೇ ಸಾಮಾನ್ಯ. ಆದರೆ ಜಗಳದ ಭರದಲ್ಲಿಯೋ ಅಥವಾ ಸುಖಾಸುಮ್ಮನೆ ತಮಾಷೆಗೋ ಆಡುವ ಒಂದೇ ಒಂದು ಮಾತು, ದಾಂಪತ್ಯ ಜೀವನವನ್ನೇ ಬುಡಮೇಲು ಮಾಡಬಲ್ಲುದು. ಮಾತು ಆಡಿದ ಮೇಲೆ ಮುಗಿಯಿತು, ಮುತ್ತು ಒಡೆದ ಮೇಲೆ ಮುಗಿಯಿತು ಎಂದು ಹಿರಿಯಲು ಹೇಳಿರುವುದು ಸುಮ್ಮನೇ ಅಲ್ಲ.&lt;/p&gt;&lt;img&gt;&lt;p&gt;ಇದೇ ಕಾರಣಕ್ಕೆ ಎಷ್ಟೇ ಕೋಪ ಇದ್ದರೂ ಅಥವಾ ತಮಾಷೆಯ ಮೂಡ್​ನಲ್ಲಿ ಇದ್ದರೂ ಕೆಲವೊಮ್ಮೆ ಕೆಲವು ಶಬ್ದಗಳು ಗಂಡನಿಗೋ ಅಥವಾ ಹೆಂಡತಿಗೋ ಕೋಪ ತರಿಸಬಹುದು. ಅವರ ಇಗೋ ಹರ್ಟ್​ ಆಗಬಹುದು, ಇದರಿಂದ ಸಂಬಂಧವೇ ಹಾಳಾಗಬಹುದು.&lt;/p&gt;&lt;img&gt;&lt;p&gt;ಇದೇ ಕಾರಣಕ್ಕೆ ಚಾಣಕ್ಯ ನೀತಿಯಲ್ಲಿ ಪತ್ನಿಯಾದವಳು ಗಂಡನಿಗೆ ಎಂದಿಗೂ ಈ ಮೂರು ಮಾತನ್ನು ಹೇಳಲೇಬಾರದು ಎಂದು ಉಲ್ಲೇಖಿಸಲಾಗಿದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಗೌರವ ಉಳಿಸಿಕೊಳ್ಳಲು, ಗಂಡ-ಹೆಂಡತಿಯ ನಡುವೆ ಕೆಲವು ಮಾತುಗಳನ್ನು ಆಡದಿರುವುದು ಉತ್ತಮ ಎನ್ನುವುದು ಇದರಲ್ಲಿ ತಿಳಿಸಲಾಗಿದೆ. ಹಾಗಿದ್ದರೆ ಆ ಮೂರು ಮಾತುಗಳು ಯಾವುದು ಎಂದು ನೋಡೋಣ:&lt;/p&gt;&lt;img&gt;&lt;p&gt;ಮೊದಲನೆಯದ್ದು ನೀನು ಗಂಡಸಾ ಎನ್ನುವುದು. ಗಂಡಸು, ಗಂಡಸ್ತನ ಎನ್ನುವುದು ಪುರುಷನಿಗೆ ಅಹಂ ಮಾತಾಗಿರುತ್ತದೆ. ನೀನು ಗಂಡಸೇ ಎಂದು ಪ್ರಶ್ನಿಸಿದರೆ ಅದು ಬೇರೆ ಬೇರೆ ಸ್ವರೂಪವನ್ನು ಪಡೆಯುವ ಮೂಲಕ, ಆತನ ಅಹಂಗೆ ಧಕ್ಕೆ ತರುತ್ತದೆ. ನೀವು ಕೆಲವೊಮ್ಮೆ ಈ ಮಾತನ್ನು ತಮಾಷೆಗೆ ಹೇಳಿರಬಹುದು. ಆದರೆ ಆ ಕ್ಷಣದಲ್ಲಿ ಆತ ಅದನ್ನು ತಮಾಷೆ ಎಂದು ತೆಗೆದುಕೊಂಡರೂ ಇದು ದೀರ್ಘಕಾಲದಲ್ಲಿ ಸಂಬಂಧದ ಮೇಲೆ ಬಿರುಕು ಮೂಡುತ್ತದೆ. ಆದ್ದರಿಂದ ಯಾವತ್ತಿಗೂ ನೀನೊಬ್ಬ ಗಂಡಸಾ ಎಂದು ಪ್ರಶ್ನಿಸಲೇಬಾರದು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.&lt;/p&gt;&lt;img&gt;&lt;p&gt;ಎರಡನೆಯದ್ದು, ನಾನು ನಿಮ್ಮ ಜೊತೆ ಅಲ್ಲದೇ ಬೇರೆಯವರ ಜೊತೆ ಮದ್ವೆಯಾಗಿದ್ದರೆ ತುಂಬಾ ಚೆನ್ನಾಗಿರುತ್ತಿದೆ ಎನ್ನುವ ಮಾತು. ಈ ಮಾತನ್ನು ಸಾಮಾನ್ಯವಾಗಿ ಕೋಪದ ಭರದಲ್ಲಿ ಹೇಳುವುದು ಇದೆ. ಆದರೆ ಇದು ಗಂಡಸರ ಇಗೋ ಹರ್ಟ್​ ಮಾಡುತ್ತದೆ. ತಾನು ಇವಳಿಗಾಗಿ ಇಷ್ಟೆಲ್ಲಾ ಮಾಡುತ್ತಿದ್ದರೂ, ಈ ರೀತಿಯಾಗಿ ಹೇಳುತ್ತಿದ್ದಾಳಲ್ಲ ಎನ್ನಿಸುವುದು ಉಂಟು. ಇದು ಕೇವಲ ಗಂಡಸರಿಗೆ ಮಾತ್ರವಲ್ಲ, ಗಂಡನಾದವ ಹೆಂಡತಿಗೆ ಹೇಳಿದ್ರೂ ಹೀಗೆಯೇ ಆಗುವುದು ಉಂಟು. ಆದ್ದರಿಂದ ಪತಿ-ಪತ್ನಿ ಇಬ್ಬರೂ ಈ ಮಾತನ್ನು ತಮಾಷೆಗಾದರೂ ಹೇಳಬಾರದು ಎನ್ನುತ್ತದೆ ಚಾಣಕ್ಯ ನೀತಿ.&lt;/p&gt;&lt;img&gt;&lt;p&gt;ಇನ್ನು. ಬೇರೆಯವರೊಂದಿಗೆ ಹೋಲಿಕೆ ಮಾಡುವುದು. ಬೇರೆಯವರ ಗಂಡ ಹೀಗಿದ್ದಾನೆ, ನನ್ನ ಸ್ನೇಹಿತೆ ಗಂಡ ಹಾಗಿದ್ದಾನೆ, ಪಕ್ಕದ ಮನೆಯವರನ್ನು ನೋಡಿ ಕಲಿಯಿರಿ, ಎಷ್ಟು ಒಳ್ಳೆಯವನಿದ್ದಾನೆ ನೋಡಿ ಅವನು.. ನೀವು ನೋಡಿದ್ರೆ ಹೀಗೆ ಎಂದು ಹೋಲಿಕೆ ಮಾಡುವುದು. ಇದು ಪುರುಷರ ಆತ್ಮಾಭಿಮಾನಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ ಅಪ್ಪಿ-ತಪ್ಪಿಯೂ ಇದನ್ನು ಹೇಳಬಾರದು ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/dont-say-these-three-lines-to-your-husband-as-per-chanakya-niti-suc-6na147q"/>
        </item>
        <item>
            <title><![CDATA[ತಲೆಯಿಲ್ಲದ ಹುಡುಗನೊಬ್ಬ ಮರಗಳೊಳಗೆ ಕಣ್ಮರೆಯಾದ ಈ ಕಥೆ ಗೊತ್ತೇ?]]></title>
            <link>https://kannada.asianetnews.com/gallery/relationship/travel-7-most-haunted-place-in-india-that-will-scare-your-soul-know-the-location-name-suh-87boxqg</link>
            <guid isPermaLink="true">https://kannada.asianetnews.com/gallery/relationship/travel-7-most-haunted-place-in-india-that-will-scare-your-soul-know-the-location-name-suh-87boxqg</guid>
            <pubDate>Wed, 06 May 2026 15:04:49 +0530</pubDate>
            <description><![CDATA[&lt;p&gt;haunted place ನೀವು ಸಾಹಸ ಪ್ರಿಯರಾಗಿದ್ದರೆ ಮತ್ತು ಭಯಾನಕ ಕಥೆಗಳಲ್ಲಿ ಆಸಕ್ತಿ ಹೊಂದಿದ್ದರೆ, ಭಾರತದಲ್ಲಿ ನಿಗೂಢ ಘಟನೆಗಳಿಗೆ ಹೆಸರುವಾಸಿಯಾದ ಅನೇಕ ಸ್ಥಳಗಳಿವೆ. ಈ ಸ್ಥಳಗಳಿಗೆ ಸಂಬಂಧಿಸಿದ ಕಥೆಗಳು ತುಂಬಾ ಭಯಾನಕವಾಗಿದ್ದು, ಜನರು ಹಗಲು ಹೊತ್ತಿನಲ್ಲಿಯೂ ಸಹ ಅಲ್ಲಿಗೆ ಒಂಟಿಯಾಗಿ ಹೋಗಲು ಹಿಂಜರಿಯುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqy9qpxrjjw3k560m2nqkwyt,imgname-travel-7-most-haunted-place-in-india-1778059566007.jpeg" type="image/jpeg" height="390" width="690"/>
            <content:encoded><![CDATA[&lt;p&gt;haunted place ನೀವು ಸಾಹಸ ಪ್ರಿಯರಾಗಿದ್ದರೆ ಮತ್ತು ಭಯಾನಕ ಕಥೆಗಳಲ್ಲಿ ಆಸಕ್ತಿ ಹೊಂದಿದ್ದರೆ, ಭಾರತದಲ್ಲಿ ನಿಗೂಢ ಘಟನೆಗಳಿಗೆ ಹೆಸರುವಾಸಿಯಾದ ಅನೇಕ ಸ್ಥಳಗಳಿವೆ. ಈ ಸ್ಥಳಗಳಿಗೆ ಸಂಬಂಧಿಸಿದ ಕಥೆಗಳು ತುಂಬಾ ಭಯಾನಕವಾಗಿದ್ದು, ಜನರು ಹಗಲು ಹೊತ್ತಿನಲ್ಲಿಯೂ ಸಹ ಅಲ್ಲಿಗೆ ಒಂಟಿಯಾಗಿ ಹೋಗಲು ಹಿಂಜರಿಯುತ್ತಾರೆ.&lt;/p&gt;&lt;img&gt;&lt;p&gt;ಭಂಗಾರ್ ಕೋಟೆ, ರಾಜಸ್ಥಾನ: ಭಾರತದ ಅತ್ಯಂತ ದೆವ್ವದ ತಾಣವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಎಎಸ್ಐ ಸೂರ್ಯಾಸ್ತದ ನಂತರ ಪ್ರವೇಶವನ್ನು ನಿಷೇಧಿಸುತ್ತದೆ. ದಂತಕಥೆಯ ಪ್ರಕಾರ ಮಾಂತ್ರಿಕನೊಬ್ಬ ಹಾಕಿದ ಕರಾಳ ಶಾಪದ ಬಗ್ಗೆ ಹೇಳುತ್ತದೆ. ಶಿಥಿಲಗೊಂಡ, ಛಾವಣಿಯಿಲ್ಲದ ಕಲ್ಲಿನ ರಚನೆಗಳ ಮೂಲಕ ಪ್ರತಿಧ್ವನಿಸುವ ಧ್ವನಿ ಮತ್ತು ಭೂತದ ಹೆಜ್ಜೆಗಳು ಎಂದು ಸಂದರ್ಶಕರು ವರದಿ ಮಾಡುತ್ತಾರೆ.&lt;/p&gt;&lt;img&gt;&lt;p&gt;ಕುಲಧಾರ ಗ್ರಾಮ, ರಾಜಸ್ಥಾನ: ದಬ್ಬಾಳಿಕೆಯ ಮಂತ್ರಿಯಿಂದ ಪಲಾಯನಗೈದ ಪಾಲಿವಾಲ್ ಬ್ರಾಹ್ಮಣರು ರಾತ್ರೋರಾತ್ರಿ ಈ ಪಾಳುಬಿದ್ದ ಗ್ರಾಮವನ್ನು ಖಾಲಿ ಮಾಡಿದರು. ಯಾರೂ ಅಲ್ಲಿ ಮತ್ತೆ ನೆಲೆಸಲು ಸಾಧ್ಯವಾಗದಂತೆ ಅವರು ಭೂಮಿಯನ್ನು ಶಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇಂದು, ಇದು ಈಗ ದೆವ್ವದ ಅವಶೇಷಗಳ ಗುಂಪಾಗಿ ಉಳಿದಿದೆ ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ಗುಜರಾತ್&zwnj;ನ ಡುಮಾಸ್ ಬೀಚ್: ಹಿಂದೂಗಳ ಸಮಾಧಿ ಸ್ಥಳವಾಗಿ ಬಳಸಲಾಗುವ ಈ ಕಪ್ಪು ಮರಳಿನ ಬೀಚ್ ಪಿಸುಮಾತುಗಳು ಮತ್ತು ಕಣ್ಮರೆಯಾಗುವ ಜನರಿಗೆ ಹೆಸರುವಾಸಿಯಾಗಿದೆ. ಗಾಳಿಯು ಪ್ರಕ್ಷುಬ್ಧ ಆತ್ಮಗಳ ಕೂಗನ್ನು ಹೊತ್ತೊಯ್ಯುತ್ತದೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಾರೆ ಮತ್ತು ನಾಯಿಗಳು ತೀರದ ಖಾಲಿ ಪ್ರದೇಶಗಳಲ್ಲಿ ಉದ್ರಿಕ್ತವಾಗಿ ಬೊಗಳುತ್ತವೆ ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಶನಿವಾರವಾಡ ಕೋಟೆ, ಪುಣೆ: ಈ ಕೋಟೆಯು ಯುವ ಪೇಶ್ವೆ ರಾಜಕುಮಾರನ ಆತ್ಮದಿಂದ ಕಾಡುತ್ತಿದೆ ಎಂದು ಹೇಳಲಾಗುತ್ತದೆ, ಅವನನ್ನು ಅವನ ಸಂಬಂಧಿಕರೇ ಕ್ರೂರವಾಗಿ ಹತ್ಯೆ ಮಾಡಿದರು. ಹುಣ್ಣಿಮೆಯ ರಾತ್ರಿಗಳಲ್ಲಿ, &quot;ಕಾಕಾ ಮಾಲಾ ವಾಚಾ&quot; (ಚಿಕ್ಕಪ್ಪ, ನನ್ನನ್ನು ರಕ್ಷಿಸು) ಎಂಬ ಅವನ ದುಃಖದ ಕೂಗು ಬೃಹತ್ ಕಲ್ಲಿನ ಗೋಡೆಗಳಿಂದ ಪ್ರತಿಧ್ವನಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.&lt;/p&gt;&lt;img&gt;&lt;p&gt;ಮೀರತ್&zwnj;ನ ಜಿಪಿ ಬ್ಲಾಕ್: ಈ ಪಾಳುಬಿದ್ದ ಎರಡು ಅಂತಸ್ತಿನ ಕಟ್ಟಡವು ಒಂದೇ ಮೇಣದಬತ್ತಿಯ ಮುಂದೆ ನಾಲ್ವರು ಪುರುಷರು ಮದ್ಯಪಾನ ಮಾಡುತ್ತಿರುವ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಇತರರು ಕೆಂಪು ಉಡುಪಿನಲ್ಲಿದ್ದ ಮಹಿಳೆಯೊಬ್ಬರು ಮನೆಯಿಂದ ಹೊರಬಂದರು, ಆದರೆ ಹತ್ತಿರ ಬಂದಾಗ ಗಾಳಿಯಲ್ಲಿ ಮಾಯವಾದರು ಎಂದು ವರದಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಡೌ ಹಿಲ್, ಕುರ್ಸಿಯಾಂಗ್: ಡೌ ಹಿಲ್ ರಸ್ತೆ ಮತ್ತು ಅರಣ್ಯ ಕಚೇರಿಯ ನಡುವಿನ &quot;ಡೆತ್ ರೋಡ್&quot; ನಲ್ಲಿ ತಲೆಯಿಲ್ಲದ ಹುಡುಗನೊಬ್ಬ ಮರಗಳೊಳಗೆ ಕಣ್ಮರೆಯಾಗುತ್ತಾನೆ ಎಂದು ಹೇಳಲಾಗುತ್ತದೆ. ಸುತ್ತಮುತ್ತಲಿನ ಬೋರ್ಡಿಂಗ್ ಶಾಲೆಗಳು ರಾತ್ರಿಯಲ್ಲಿ ಖಾಲಿ ಕಾರಿಡಾರ್&zwnj;ಗಳಿಂದ ಬರುವ ಹೆಜ್ಜೆಗಳು ಮತ್ತು ನಗುವಿನ ಶಬ್ದಗಳನ್ನು ಸಹ ವರದಿ ಮಾಡಲಾಗಿದೆ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/travel-7-most-haunted-place-in-india-that-will-scare-your-soul-know-the-location-name-suh-87boxqg"/>
        </item>
        <item>
            <title><![CDATA[ಶಾಕಿಂಗ್ ಸತ್ಯ: ದಳಪತಿ ವಿಜಯ್ ತಂದೆ ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಡೈರೆಕ್ಟರ್; ಎಷ್ಟೋ ಜನಕ್ಕೆ ಗೊತ್ತಿಲ್ಲ!]]></title>
            <link>https://kannada.asianetnews.com/cine-world/vijay-joseph-who-is-winning-big-in-tamil-nadu-politics-is-son-of-director-sa-chandrasekhar-directed-films-in-kannada/articleshow-dhhrew4</link>
            <guid isPermaLink="true">https://kannada.asianetnews.com/cine-world/vijay-joseph-who-is-winning-big-in-tamil-nadu-politics-is-son-of-director-sa-chandrasekhar-directed-films-in-kannada/articleshow-dhhrew4</guid>
            <pubDate>Mon, 04 May 2026 14:39:42 +0530</pubDate>
            <description><![CDATA[&lt;p&gt;ಇಂದು ಜಗತ್ತೇ ಮೆಚ್ಚುವ ಸೂಪರ್ ಸ್ಟಾರ್ ವಿಜಯ್ ಅವರನ್ನು ಬೆಳ್ಳಿತೆರೆಗೆ ತಂದಿದ್ದೇ ಈ ತಂದೆ. ವಿಜಯ್ ಬಾಲನಟನಾಗಿ ಮಿಂಚಿದ ಹಲವು ಚಿತ್ರಗಳನ್ನು ಇವರೇ ನಿರ್ದೇಶಿಸಿದ್ದರು. ಅಷ್ಟೇ ಅಲ್ಲ, ವಿಜಯ್ ಅವರನ್ನು ನಾಯಕನನ್ನಾಗಿ ಮಾಡಿ 'ನಾಲಯ ತೀರ್ಪು' ಚಿತ್ರದ ಮೂಲಕ ಅದ್ದೂರಿಯಾಗಿ ಲಾಂಚ್ ಮಾಡಿದರು. ಕನ್ನಡದ ಜೊತೆ ನಂಟೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqs3gsqkjwfyszp7y9kpzfb1,imgname-thalapathy-vijay-sa-chandrasekhar-1777885275891.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಳಪತಿ ವಿಜಯ್ ತಂದೆ ಯಾರು ಗೊತ್ತಾ?&lt;/strong&gt;&lt;/p&gt;&lt;p&gt;ಇಡೀ ದಕ್ಷಿಣ ಭಾರತದ ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ಈಗ ಕೇಳಿಬರುತ್ತಿರುವ ಒಂದೇ ಹೆಸರು 'ದಳಪತಿ' ವಿಜಯ್! ಅವರು ಕಟ್ಟಿದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ ತಮಿಳುನಾಡು ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ವಿಜಯ್ (Thalapathy Vijay) ರಾಜಕೀಯದ 'ರಜನಿಕಾಂತ್' ಆಗಿ ಹೊರಹೊಮ್ಮುತ್ತಿದ್ದಂತೆ, ಇತ್ತ ನೆಟ್ಟಿಗರು ಅವರ ವೈಯಕ್ತಿಕ ಜೀವನದ ಬಗ್ಗೆ ಜಾಲಾಡಲು ಶುರು ಮಾಡಿದ್ದಾರೆ. ಈ ವೇಳೆ ಒಂದು ರೋಚಕ ವಿಷಯ ಬೆಳಕಿಗೆ ಬಂದಿದೆ&mdash;ಅದು ವಿಜಯ್ ಅವರ ತಂದೆ ಮತ್ತು ನಮ್ಮ ಕನ್ನಡ ಚಿತ್ರರಂಗದ ನಡುವಿನ ಅಚ್ಚರಿಯ ನಂಟು!&lt;/p&gt;&lt;h2&gt;ಯಾರು ಈ ಎಸ್. ಎ. ಚಂದ್ರಶೇಖರ್?&lt;/h2&gt;&lt;p&gt;ವಿಜಯ್ ಅವರ ತಂದೆ ಎಸ್. ಎ. ಚಂದ್ರಶೇಖರ್ (SAC) ಕೇವಲ ತಮಿಳು ಚಿತ್ರರಂಗಕ್ಕೆ ಸೀಮಿತವಾದ ಹೆಸರಲ್ಲ. ಮಧುರೈ ಮೂಲದ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಇವರು, ಸಿನಿಮಾ ಮೇಲಿನ ಹುಚ್ಚು ಮೋಹದಿಂದ ಚೆನ್ನೈಗೆ ಬಂದು ಸಣ್ಣಪುಟ್ಟ ಕೆಲಸ ಮಾಡಿದರು. ನಂತರ ಸಹಾಯಕ ನಿರ್ದೇಶಕರಾಗಿ ಬೆಳೆದು, 1981ರಲ್ಲಿ 'ಸತ್ತಂ ಒರುವಿರುಂಬು' ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದರು. ಆದರೆ, ಇವರಿಗೂ ಕರ್ನಾಟಕಕ್ಕೂ ಇರುವ ಸಂಬಂಧ ಎಷ್ಟೋ ಜನರಿಗೆ ತಿಳಿದಿಲ್ಲ!&lt;/p&gt;&lt;h3&gt;ಕನ್ನಡದ 'ದಿಗ್ಗಜ'ರಿಗೆ ಆಕ್ಷನ್ ಕಟ್ ಹೇಳಿದ್ದ ಚಾಣಕ್ಯ!&lt;/h3&gt;&lt;p&gt;ಹೌದು, ದಳಪತಿ ವಿಜಯ್ ತಂದೆ ಕನ್ನಡದ ಖ್ಯಾತ ನಿರ್ದೇಶಕರೂ ಹೌದು. ಅವರು ಸ್ಯಾಂಡಲ್&zwnj;ವುಡ್&zwnj;ನ ಇಬ್ಬರು ಮಹಾನ್ ದಿಗ್ಗಜರಾದ ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಸಿನಿಮಾ ಮಾಡಿದ್ದಾರೆ. ಅಂಬರೀಷ್ ಅವರ ವೃತ್ತಿಜೀವನಕ್ಕೆ ಮಾಸ್ ಇಮೇಜ್ ತಂದುಕೊಟ್ಟ 'ನ್ಯಾಯ ಎಲ್ಲಿದೆ', 'ಗೆದ್ದ ಮಗ', 'ಹಸಿದ ಹೆಬ್ಬುಲಿ' ಸಿನಿಮಾಗಳನ್ನು ನಿರ್ದೇಶಿಸಿದ್ದೇ ಇದೇ ಚಂದ್ರಶೇಖರ್! ಇನ್ನು ವಿಷ್ಣುವರ್ಧನ್ ಅವರ ಅಭಿನಯದ 'ಸಿಂಹ ಘರ್ಜನೆ' ಮತ್ತು 'ಗೆಲುವು ನನ್ನದೆ' ಚಿತ್ರಗಳಿಗೂ ಇವರೇ ಸಾರಥಿ. ಸಮಾಜದ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಕ್ರಾಂತಿಕಾರಿ ಕಥೆಗಳನ್ನು ಕನ್ನಡದಲ್ಲಿ ಕಟ್ಟಿ ಕೊಟ್ಟ ಹೆಗ್ಗಳಿಕೆ ಇವರದ್ದು.&lt;/p&gt;&lt;p&gt;'ದಳಪತಿ' ಎಂಬ ಸಾಮ್ರಾಜ್ಯ ಕಟ್ಟಿದ ಶಿಲ್ಪಿ!&lt;/p&gt;&lt;p&gt;ಇಂದು ಜಗತ್ತೇ ಮೆಚ್ಚುವ ಸೂಪರ್ ಸ್ಟಾರ್ ವಿಜಯ್ ಅವರನ್ನು ಬೆಳ್ಳಿತೆರೆಗೆ ತಂದಿದ್ದೇ ಈ ತಂದೆ. ವಿಜಯ್ ಬಾಲನಟನಾಗಿ ಮಿಂಚಿದ ಹಲವು ಚಿತ್ರಗಳನ್ನು ಇವರೇ ನಿರ್ದೇಶಿಸಿದ್ದರು. ಅಷ್ಟೇ ಅಲ್ಲ, ವಿಜಯ್ ಅವರನ್ನು ನಾಯಕನನ್ನಾಗಿ ಮಾಡಿ 'ನಾಲಯ ತೀರ್ಪು' ಚಿತ್ರದ ಮೂಲಕ ಅದ್ದೂರಿಯಾಗಿ ಲಾಂಚ್ ಮಾಡಿದರು. ವಿಜಯ್ ಅವರ ಆರಂಭಿಕ ಯಶಸ್ಸಿನ ಹಿಂದೆ ತಂದೆಯ ಮಾರ್ಗದರ್ಶನ ಮತ್ತು ಅವರ ಗಟ್ಟಿ ಸಿನಿಮಾಗಳ ಶಕ್ತಿ ಇತ್ತು.&lt;/p&gt;&lt;p&gt;ಕಣ್ಣೀರು ತರಿಸುವ ಕೌಟುಂಬಿಕ ಹಿನ್ನೆಲೆ:&lt;/p&gt;&lt;p&gt;ಚಂದ್ರಶೇಖರ್ ಅವರ ಪತ್ನಿ ಶೋಭಾ ಚಂದ್ರಶೇಖರ್ ಖ್ಯಾತ ಗಾಯಕಿ. ಈ ದಂಪತಿಗೆ ವಿಜಯ್ ಜೊತೆಗೆ ವಿದ್ಯಾ ಎಂಬ ಮಗಳಿದ್ದಳು. ಆದರೆ ದುರದೃಷ್ಟವಶಾತ್ ವಿದ್ಯಾ ಬಾಲ್ಯದಲ್ಲೇ ಮರಣ ಹೊಂದಿದಳು. ಮಗಳ ನೆನಪಿಗಾಗಿ ಇವರು 'ವಿದ್ಯಾ ಫಿಗರ್ಸ್' ಎಂಬ ಬ್ಯಾನರ್ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಮಗಳಿಗೆ ಗೌರವ ಸಲ್ಲಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ವಿಜಯ್ ಅವರ ರಕ್ತದಲ್ಲೇ ಸಿನಿಮಾ ಮತ್ತು ಹೋರಾಟದ ಗುಣವಿದೆ. ತಂದೆ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಿನಿಮಾಗಳನ್ನು ಮಾಡಿದ್ದರೆ, ಮಗ ಈಗ ರಾಜಕೀಯದಲ್ಲಿ ಕ್ರಾಂತಿ ಮಾಡಲು ಹೊರಟಿದ್ದಾರೆ. ಕನ್ನಡದ ನೆಲದಲ್ಲಿ ಬೆಳೆದ ಈ ನಂಟು ದಳಪತಿ ಅಭಿಮಾನಿಗಳಿಗೆ ನಿಜಕ್ಕೂ ಹೆಮ್ಮೆಯ ವಿಷಯ!&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/vijay-joseph-who-is-winning-big-in-tamil-nadu-politics-is-son-of-director-sa-chandrasekhar-directed-films-in-kannada/articleshow-dhhrew4"/>
        </item>
        <item>
            <title><![CDATA[ದಿಯಾ ಮದ್ವೆ ಫಿಕ್ಸ್​ ಆಗಿದೆ ಕಣೋ, ನಿನ್​ ಹುಡ್ಗಿ ಜೊತೆ ಹೋಗು: Amruthadhaare ಜೈದೇವ್​ಗೆ ಫ್ಯಾನ್ಸ್​ ಬುದ್ಧಿಮಾತು]]></title>
            <link>https://kannada.asianetnews.com/gallery/tv-talk/amruthadhaare-serial-fans-not-happy-with-jaidevs-present-situation-suc-fgwpuna</link>
            <guid isPermaLink="true">https://kannada.asianetnews.com/gallery/tv-talk/amruthadhaare-serial-fans-not-happy-with-jaidevs-present-situation-suc-fgwpuna</guid>
            <pubDate>Wed, 06 May 2026 19:42:54 +0530</pubDate>
            <description><![CDATA[ಸಹಸ್ರಾರು ಕೋಟಿ ಒಡೆಯನಾಗಿದ್ದ 'ಅಮೃತಧಾರೆ' ಸೀರಿಯಲ್&zwnj;ನ ಜೈದೇವ್ ಈಗ ಬೀದಿಗೆ ಬಿದ್ದಿದ್ದಾನೆ. ಪತ್ನಿ ದಿಯಾ ತಿರಸ್ಕರಿಸಿದ ನಂತರ, ಅವನ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ವಿಲನ್ ಪಾತ್ರವಾದರೂ ಜೈದೇವ್&zwnj;ನ ಈ ದುಸ್ಥಿತಿಯನ್ನು ಅಭಿಮಾನಿಗಳು ಸಹಿಸುತ್ತಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kqysycj3gmxa6j7fpk3jhew5,imgname-amruthadhaare-1778076561986.jpg" type="image/jpeg" height="390" width="690"/>
            <content:encoded><![CDATA[ಸಹಸ್ರಾರು ಕೋಟಿ ಒಡೆಯನಾಗಿದ್ದ 'ಅಮೃತಧಾರೆ' ಸೀರಿಯಲ್&zwnj;ನ ಜೈದೇವ್ ಈಗ ಬೀದಿಗೆ ಬಿದ್ದಿದ್ದಾನೆ. ಪತ್ನಿ ದಿಯಾ ತಿರಸ್ಕರಿಸಿದ ನಂತರ, ಅವನ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ವಿಲನ್ ಪಾತ್ರವಾದರೂ ಜೈದೇವ್&zwnj;ನ ಈ ದುಸ್ಥಿತಿಯನ್ನು ಅಭಿಮಾನಿಗಳು ಸಹಿಸುತ್ತಿಲ್ಲ.&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare)ನಲ್ಲಿ ಸದ್ಯ ಜೈದೇವನ ಸ್ಥಿತಿ ನೋಡಲು ಆಗುತ್ತಿಲ್ಲ. ಸಹಸ್ರಾರು ಕೋಟಿ ಒಡೆಯನಾಗಿರೋ ಜೈದೇವ್​ ಈಗ ತುತ್ತು ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ.&lt;/p&gt;&lt;img&gt;&lt;p&gt;ಪತ್ನಿ ದಿಯಾಳ ಮನೆಯ ಮುಂದೆ ಬಂದು, ಆತ ಗೋಳಾಡುತ್ತಿದ್ದಾನೆ. ನನ್ನನ್ನು ನಾಯಿಯ ಥರ ನೋಡಬೇಡ, ಹೀಗೆ ಮಾಡಬೇಡ. ನಾನು ಬೀದಿಗೆ ಬಂದಿದ್ದೇನೆ ಎಂದೆಲ್ಲಾ ಅಳುತ್ತಿದ್ದರೂ, ಅವಳು ಕಾರಿನಲ್ಲಿ ಕೇರೇ ಮಾಡದೇ ಹೋಗಿದ್ದಾಳೆ.&lt;/p&gt;&lt;img&gt;&lt;p&gt;ಈ ದೃಶ್ಯಗಳನ್ನು ನೋಡಿದ ಜೈದೇವ್​ ಫ್ಯಾನ್ಸ್​ಗೆ ಭಾರಿ ನೋವು ಉಂಟಾಗಿದೆ. ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ವಿಲನ್​ಗಳನ್ನು ಕಂಡರೆ ಹೊರಗಡೆ ಅವರೇನಾದ್ರೂ ಸಿಕ್ಕರೆ ಅವರು ನಿಜಕ್ಕೂ ವಿಲನ್​ಗಳೇ ಎನ್ನುವ ಹಾಗೆ ಹಲವು ಅಭಿಮಾನಿಗಳು ಮಾಡುವುದು ಉಂಟು. ಆದರೆ ಜೈದೇವ್​ ವಿಷ್ಯದಲ್ಲಿ ಹಾಗಲ್ಲ.&lt;/p&gt;&lt;img&gt;&lt;p&gt;ಜೈದೇವ್​ ಪಾತ್ರಧಾರಿ ರಾಣವ್​ ಗೌಡ ಅವರ ಫ್ಯಾನ್ಸ್​ಗೆ ಜೈದೇವ್​ ವಿಲನ್​ ಆಗಿದ್ರೂ ಚೆಂದನೇ. ಮೆರೆಯುತ್ತಿದ್ದ ಜೈದೇವ್​ನನ್ನು ಈ ರೀತಿ ಬೀದಿಯಲ್ಲಿ ನೋಡುವುದು ಅವರಿಗೆ ಇಷ್ಟವಾಗುತ್ತಿಲ್ಲ.&lt;/p&gt;&lt;img&gt;&lt;p&gt;ಅಷ್ಟಕ್ಕೂ ರಾಣವ್​ ಗೌಡ ಅವರ ಮದುವೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ನ ರಾಧಾ ಭಗವತಿ ಅವರ ಜೊತೆ ನೆರವೇರಲಿದೆ. ಅದಕ್ಕಾಗಿಯೇ ಭಾವಿ ಗಂಡನನ್ನು ಕರ್ಕೊಂಡು ಹೋಗು, ನಟನ ಸ್ಥಿತಿ ನೋಡಲು ಆಗ್ತಿಲ್ಲ ಎಂದು ಗೋಗರೆಯುತ್ತಿದ್ದಾರೆ ಸೀರಿಯಲ್​​ ಪ್ರೇಮಿಗಳು. ಅದೇ ಇನ್ನೊಂದೆಡೆ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರ ಮದುವೆಯೂ ಫಿಕ್ಸ್​ ಆಗಿರೋದ್ರಿಂದ ಇವಳನ್ನು ಬಿಟ್ಟುಬಿಡು ಎನ್ನುತ್ತಿದ್ದಾರೆ ಫ್ಯಾನ್ಸ್​.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಜೈದೇವ್​ ಕ್ಯಾರೆಕ್ಟರ್​ ಹೀಗೆ ಬೀದಿಗೆ ಬಂದಿರುವುದನ್ನು ಹಲವರು ಸಹಿಸುತ್ತಿಲ್ಲ. ವಿಲನ್​ ಆಗಿರೋ ಆತನಿಗೆ ಇದು ಸರಿಯಾದ ಶಿಕ್ಷೆ ಎಂದು ಮತ್ತೆ ಕೆಲವರು ಹೇಳುತ್ತಿದ್ದರೂ, ಅಭಿಮಾನಿಗಳು ಮಾತ್ರ ನಿರಾಶರಾಗಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-serial-fans-not-happy-with-jaidevs-present-situation-suc-fgwpuna"/>
        </item>
        <item>
            <title><![CDATA[ಅಕ್ಕನಿಗಿಂತ್ಲೂ ಒಂದ್ ಹೆಜ್ಜೆ ಮುಂದೆ..? ಒಂದೇ ಒಂದು ಹಾಡಿಗೆ ಪ್ಯಾನ್ ಇಂಡಿಯಾ ಸಿಂಗರ್ ಆಗಿರೋ ಮಂಗ್ಲಿ ತಂಗಿ!]]></title>
            <link>https://kannada.asianetnews.com/gallery/cine-world/tollywood-famous-singer-mangli-sister-indravathi-chauhan-became-pan-india-singing-star-now-g6o88bl</link>
            <guid isPermaLink="true">https://kannada.asianetnews.com/gallery/cine-world/tollywood-famous-singer-mangli-sister-indravathi-chauhan-became-pan-india-singing-star-now-g6o88bl</guid>
            <pubDate>Wed, 06 May 2026 13:05:13 +0530</pubDate>
            <description><![CDATA[&lt;p&gt;ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಸಿನೆಪಲ್ಲೆ ತಾಂಡಾದಲ್ಲಿ ಜನಿಸಿದ ಈ ಬಂಜಾರ (ಲಂಬಾಣಿ) ಕುವರಿ, ಬಾಲ್ಯದಿಂದಲೇ ಕಲೆಯ ಮಡಿಲಲ್ಲಿ ಬೆಳೆದವರು. ಮೊದಲು 'ಬೋಲ್ ಬೇಬಿ ಬೋಲ್' ಎಂಬ ರಿಯಾಲಿಟಿ ಶೋ ಮೂಲಕ ಕ್ಯಾಮೆರಾ ಎದುರಿಸಿದ ಇಂದ್ರವತಿ, ನಂತರ 'ಜಾಜಿಮೊಗುಲಾಲಿ' ಹಾಡಿನ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqy2jssq4bpbvkzg3phdg9df,imgname-indravathi-chauhan--1--1778052065079.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಸಿನೆಪಲ್ಲೆ ತಾಂಡಾದಲ್ಲಿ ಜನಿಸಿದ ಈ ಬಂಜಾರ (ಲಂಬಾಣಿ) ಕುವರಿ, ಬಾಲ್ಯದಿಂದಲೇ ಕಲೆಯ ಮಡಿಲಲ್ಲಿ ಬೆಳೆದವರು. ಮೊದಲು 'ಬೋಲ್ ಬೇಬಿ ಬೋಲ್' ಎಂಬ ರಿಯಾಲಿಟಿ ಶೋ ಮೂಲಕ ಕ್ಯಾಮೆರಾ ಎದುರಿಸಿದ ಇಂದ್ರವತಿ, ನಂತರ 'ಜಾಜಿಮೊಗುಲಾಲಿ' ಹಾಡಿನ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟರು.&lt;/p&gt;&lt;img&gt;&lt;p&gt;ಸಿನಿಮಾ ರಂಗದಲ್ಲಿ 'ಲಕ್' ಎಂಬುದು ಯಾವಾಗ ಯಾರ ಕೈ ಹಿಡಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ದಶಕಗಳ ಕಾಲ ಚಿತ್ರರಂಗದಲ್ಲಿದ್ದರೂ ಸಿಗದ ಹೆಸರು, ಇನ್ನು ಕೆಲವರಿಗೆ ಒಂದೇ ಒಂದು ಹಾಡಿನ ಮೂಲಕ ಸಿಕ್ಕಿಬಿಡುತ್ತದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ಅದು 'ಊ ಅಂಟಾವಾ ಮಾವ..' ಖ್ಯಾತಿಯ ಗಾಯಕಿ ಇಂದ್ರವತಿ ಚೌಹಾಣ್. ಜನಪ್ರಿಯ ಗಾಯಕಿ ಮಂಗ್ಲಿ ಅವರ ತಂಗಿ (Indravathi Chauhan) ಎಂಬ ಗುರುತಿನೊಂದಿಗೆ ಕೆರಿಯರ್ ಆರಂಭಿಸಿದ ಇವರು, ಇಂದು ತಮ್ಮದೇ ಆದ ಸ್ವತಂತ್ರ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸೋಶಿಯಲ್ ಮೀಡಿಯಾದ 'ಸೆನ್ಸೇಷನಲ್ ಸ್ಟಾರ್'!&lt;/p&gt;&lt;p&gt;ಇಂದ್ರವತಿ ಚೌಹಾಣ್ ಕೇವಲ ಮೈಕ್ ಹಿಡಿದು ಹಾಡುವ ಗಾಯಕಿ ಮಾತ್ರವಲ್ಲ, ಇನ್&zwnj;ಸ್ಟಾಗ್ರಾಮ್ ಅಂತಹ ವೇದಿಕೆಗಳಲ್ಲಿ ಮಿಲಿಯನ್ ಫಾಲೋವರ್ಸ್&zwnj;ಗಳನ್ನು ಹೊಂದಿರುವ ಡಿಜಿಟಲ್ ಸ್ಟಾರ್ ಕೂಡ ಹೌದು. ಆಗಾಗ ತಮ್ಮ ಗ್ಲಾಮರಸ್ ಫೋಟೋಶೂಟ್ ಮತ್ತು ಜಾನಪದ ಶೈಲಿಯ ವಿಡಿಯೋಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಿರುತ್ತಾರೆ. ಇಂದಿನ ಯುವಜನತೆಗೆ ಜಾನಪದ ಸಂಗೀತವನ್ನೂ ಎಷ್ಟು ಕಿಕ್ ಕೊಡುವಂತೆ ನೀಡಬಹುದು ಎಂಬುದನ್ನು ಇಂದ್ರವತಿ ಸಾಬೀತುಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಇಡೀ ದೇಶವನ್ನೇ ಉರ್ಪಿ ಎಬ್ಬಿಸಿದ ಆ 'ಒಂದೇ ಒಂದು' ಹಾಡು!&lt;/p&gt;&lt;p&gt;ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರು 'ಪುಷ್ಪ' ಚಿತ್ರದ 'ಊ ಅಂಟಾವಾ ಮಾವ..' ಹಾಡಿಗೆ ಧ್ವನಿ ಹುಡುಕುತ್ತಿದ್ದಾಗ ಅವರಿಗೆ ಕಂಡಿದ್ದು ಇಂದ್ರವತಿ. ಸಮಂತಾ ಅವರ ಬೆಂಕಿಯಂತಹ ನರ್ತನಕ್ಕೆ ಇಂದ್ರವತಿ ಅವರ ಆ ಕಂಚಿನ ಕಂಠ, ಆ 'ರಾ ಕೆನೆಸ್' (Rawness) ಪಕ್ಕಾ ಮ್ಯಾಚ್ ಆಯಿತು. ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು.&amp;nbsp;&lt;/p&gt;&lt;img&gt;&lt;p&gt;ಈ ಹಾಡಿಗಾಗಿ 2022 ರಲ್ಲಿ ಇಂದ್ರವತಿ 'ಅತ್ಯುತ್ತಮ ಹಿನ್ನೆಲೆ ಗಾಯಕಿ' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಯಾವುದೇ ಶಾಸ್ತ್ರೀಯ ಸಂಗೀತದ ತರಬೇತಿ ಇಲ್ಲದಿದ್ದರೂ, ಅವರ ಧ್ವನಿಯಲ್ಲಿರುವ ನೈಸರ್ಗಿಕ ಶಕ್ತಿ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.&lt;/p&gt;&lt;img&gt;&lt;p&gt;ರಿಯಾಲಿಟಿ ಶೋ ಟು ಸಿನಿಮಾ ಸ್ಟಾರ್!&lt;/p&gt;&lt;p&gt;ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಸಿನೆಪಲ್ಲೆ ತಾಂಡಾದಲ್ಲಿ ಜನಿಸಿದ ಈ ಬಂಜಾರ (ಲಂಬಾಣಿ) ಕುವರಿ, ಬಾಲ್ಯದಿಂದಲೇ ಕಲೆಯ ಮಡಿಲಲ್ಲಿ ಬೆಳೆದವರು. ಮೊದಲು 'ಬೋಲ್ ಬೇಬಿ ಬೋಲ್' ಎಂಬ ರಿಯಾಲಿಟಿ ಶೋ ಮೂಲಕ ಕ್ಯಾಮೆರಾ ಎದುರಿಸಿದ ಇಂದ್ರವತಿ, ನಂತರ 'ಜಾರ್ಜ್ ರೆಡ್ಡಿ' ಚಿತ್ರದ 'ಜಾಜಿಮೊಗುಲಾಲಿ' ಹಾಡಿನ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟರು. ಅಕ್ಕ ಮಂಗ್ಲಿ ಅವರ ಪ್ರೋತ್ಸಾಹ ಮತ್ತು ಇವರ ಕಠಿಣ ಪರಿಶ್ರಮ ಇಂದು ಇವರನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಿಸಿದೆ.&amp;nbsp;&lt;/p&gt;&lt;img&gt;&lt;p&gt;ಲಂಬಾಣಿ ಸಂಸ್ಕೃತಿಯ ರಾಯಭಾರಿ:&lt;/p&gt;&lt;p&gt;1996ರ ಮಾರ್ಚ್ 5 ರಂದು ಜನಿಸಿದ ಇಂದ್ರವತಿ, ತಮ್ಮ ಮೂಲ ಬೇರುಗಳನ್ನು ಎಂದಿಗೂ ಮರೆತವರಲ್ಲ. ತಮ್ಮ ಸಮುದಾಯದ ಸಾಂಪ್ರದಾಯಿಕ ಹಾಡುಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಭಾರತೀಯ ವಿದ್ಯಾಭವನದಲ್ಲಿ ಶಿಕ್ಷಣ ಮುಗಿಸಿರುವ ಇವರು, ಇಂದು ಕೇವಲ ಗಾಯಕಿ ಮಾತ್ರವಲ್ಲದೆ ಅದ್ಭುತ ನರ್ತಕಿಯೂ ಹೌದು.&lt;/p&gt;&lt;img&gt;&lt;p&gt;ಅಕ್ಕ ಮಂಗ್ಲಿ ಜಾನಪದ ಲೋಕದ ರಾಣಿಯಾಗಿದ್ದರೆ, ತಂಗಿ ಇಂದ್ರವತಿ ಸಿನಿಮಾ ಲೋಕದ ಮೋಹಕ ಗಾಯಕಿ. ಒಟ್ಟಿನಲ್ಲಿ ಈ ಇಬ್ಬರು ಸೋದರಿಯರು ದಕ್ಷಿಣ ಭಾರತದ ಸಂಗೀತ ಲೋಕವನ್ನು ಆಳುತ್ತಿದ್ದಾರೆ ಎನ್ನೋದ್ರಲ್ಲಿ ಎರಡು ಮಾತಿಲ್ಲ!&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/tollywood-famous-singer-mangli-sister-indravathi-chauhan-became-pan-india-singing-star-now-g6o88bl"/>
        </item>
        <item>
            <title><![CDATA[Amruthadhaare ರೋಚಕ ಟ್ವಿಸ್ಟ್‌: ಕಳೆದು ಹೋದ ಮಗಳೇ ಗೌತಮ್‌ ಪಾಲಿನ ವಿಲನ್‌? ಯಾರೀಕೆ]]></title>
            <link>https://kannada.asianetnews.com/gallery/tv-talk/amruthadhaare-serial-twist-missing-daughter-as-villain-to-gowtham-suc-llqwxa8</link>
            <guid isPermaLink="true">https://kannada.asianetnews.com/gallery/tv-talk/amruthadhaare-serial-twist-missing-daughter-as-villain-to-gowtham-suc-llqwxa8</guid>
            <pubDate>Tue, 05 May 2026 20:02:57 +0530</pubDate>
            <description><![CDATA[&lt;p&gt;&lsquo;ಅಮೃತಧಾರೆ&rsquo; ಧಾರಾವಾಹಿಯಲ್ಲಿ ಜ್ಯೋತಿಷಿಯೊಬ್ಬರು ಗೌತಮ್ ಜೀವಕ್ಕೆ ಹೆತ್ತ ಮಗಳಿಂದಲೇ ಅಪಾಯವಿದೆ ಎಂದು ನುಡಿದಿದ್ದಾರೆ. ಇದರಿಂದ ಭೂಮಿಕಾ ಮತ್ತೊಮ್ಮೆ ಗರ್ಭಿಣಿಯಾಗುತ್ತಾಳಾ ಅಥವಾ ಸದ್ಯ ಇರುವ ಮಗಳಿಂದ ತೊಂದರೆಯೇ ಎಂಬ ಗೊಂದಲ ಮೂಡಿದೆ. ಆದರೆ, ಕಳೆದುಹೋದ ಅವಳಿ ಮಗಳಿಂದಲೇ &amp;nbsp;ಕಂಟಕ ಎನ್ನಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqw8sm0v3623th65j5t2zytr,imgname-missing-girl-1777991471131.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಅಮೃತಧಾರೆ&rsquo; ಧಾರಾವಾಹಿಯಲ್ಲಿ ಜ್ಯೋತಿಷಿಯೊಬ್ಬರು ಗೌತಮ್ ಜೀವಕ್ಕೆ ಹೆತ್ತ ಮಗಳಿಂದಲೇ ಅಪಾಯವಿದೆ ಎಂದು ನುಡಿದಿದ್ದಾರೆ. ಇದರಿಂದ ಭೂಮಿಕಾ ಮತ್ತೊಮ್ಮೆ ಗರ್ಭಿಣಿಯಾಗುತ್ತಾಳಾ ಅಥವಾ ಸದ್ಯ ಇರುವ ಮಗಳಿಂದ ತೊಂದರೆಯೇ ಎಂಬ ಗೊಂದಲ ಮೂಡಿದೆ. ಆದರೆ, ಕಳೆದುಹೋದ ಅವಳಿ ಮಗಳಿಂದಲೇ &amp;nbsp;ಕಂಟಕ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಅಮೃತಧಾರೆ ಸೀರಿಯಲ್&zwnj; (Amruthadhaare Serial) ಇದೀಗ ರೋಚಕ ಹಂತ ತಲುಪಿದೆ. ಇನ್ನೇನು ಸೀರಿಯಲ್&zwnj; ಮುಗಿಯತ್ತೆ ಎಂದುಕೊಂಡಾಗಲೇ ಅದು ಮುಗಿಯಲ್ಲ ಎನ್ನುವುದು ತಿಳಿದಿದೆ. ಇದಕ್ಕೆ ಕಾರಣ, ಜ್ಯೋತಿಷಿ ಕೊಟ್ಟ ಹಿಂಟ್&zwnj;.&lt;/p&gt;&lt;img&gt;&lt;p&gt;ಭೂಮಿಕಾ ಮತ್ತೆ ಗರ್ಭಿಣಿಯಾಗ್ತಾಳೆ ಎಂದಿರೋ ಜ್ಯೋತಿಷಿ, ಹೆತ್ತ ಮಗಳಿಂದಲೇ ಗೌತಮ್&zwnj; ಜೀವಕ್ಕೆ ಅಪಾಯ ಎಂದಿದ್ದಾರೆ. ಆದರೆ ಇಲ್ಲಿ ನಿಜವಾಗಿಯೂ ವೀಕ್ಷಕರನ್ನು ಗೊಂದಲಗೊಳಿಸಲು ಹೀಗೆ ಹೇಳಲಾಗಿದೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಇದರ ಅರ್ಥ, ಭೂಮಿಕಾ ಗರ್ಭಿಣಿ ಆಗ್ತಾಳೋ, ಬಿಡ್ತಾಳೋ ಆದರೆ, ನಿಮಗೆ ಹುಟ್ಟಿದ ಮಗಳಿಂದಲೇ ತೊಂದರೆ ಎಂದರೆ, ಅದು ಕಳೆದು ಹೋಗಿರುವ ಅವಳಿ ಮಗಳು ಎನ್ನುವುದು ವೀಕ್ಷಕರ ಅಭಿಪ್ರಾಯ.&lt;/p&gt;&lt;img&gt;&lt;p&gt;ಸದ್ಯ ಭೂಮಿಕಾ ಮತ್ತು ಗೌತಮ್ ಬಳಿ ಇರುವಾಕೆಯೇ ಅವರ ನಿಜವಾದ ಮಗಳು ಇರಬಹುದು. ಸೀರಿಯಲ್&zwnj; ಎಂಡ್&zwnj;ನಲ್ಲಿ ಹೀಗೆ ಮಾಡಿ ಸೀರಿಯಲ್&zwnj; ಮುಗಿಸ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಅದನ್ನು ಸದ್ಯ ಮುಗಿಸುವ ಹಾಗೆ ಕಾಣಿಸುವುದಿಲ್ಲ.&lt;/p&gt;&lt;img&gt;&lt;p&gt;ಜ್ಯೋತಿಷಿಯ ಈ ಮಾತಿನಿಂದ ಇನ್ನೂ ಕೆಲವು ವರ್ಷ ಅಮೃತಧಾರೆ ಮುಂದುವರೆಯುವಂತೆ ಕಾಣುತ್ತಿದೆ. ಇದರ ಅರ್ಥ, ಮಗಳಿಂದ ತೊಂದರೆ ಎಂದರೆ ಅದು ಕಳೆದು ಹೋಗಿರುವ ಮಗಳಿಂದ ಎನ್ನುವುದು ಈಗ ನಿಶ್ಚಿತವಾಗಿದೆ. ಹಾಗಿದ್ದರೆ ಆ ಮಗಳು ಎಲ್ಲಿದ್ದಾಳೆ ಎನ್ನುವುದು ಸದ್ಯಕ್ಕಿರುವ ಕುತೂಹಲ.&lt;/p&gt;&lt;img&gt;&lt;p&gt;ಜ್ಯೋತಿಷಿಯ ಮಾತು ಕೇಳಿ ಕೆಲವರು ಭೂಮಿಕಾ &amp;nbsp;ಮತ್ತು ಗೌತಮ್​ಗೆ ಇನ್ನೊಂದು ಹೆಣ್ಣುಮಗು ಹುಟ್ಟುತ್ತದೆ. ಅದರಿಂದ ಸಮಸ್ಯೆ ಆಗಬಹುದು ಎಂದು ಹೇಳುತ್ತಿದ್ದರಾದರೂ, ಸದ್ಯದ ಮಟ್ಟಿಗೆ ಮಿಸ್ಸಿಂಗ್​ ಮಗಳ ಬಗ್ಗೆ ಇನ್ನೂ ತೋರಿಸದ ಕಾರಣದಿಂದ ಆಕೆಯೇ ವಿಲನ್​ ಆಗಿ ಬಂದು ತೊಂದರೆ ಕೊಡಬಹುದು ಎನ್ನಲಾಗುತ್ತಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-serial-twist-missing-daughter-as-villain-to-gowtham-suc-llqwxa8"/>
        </item>
        <item>
            <title><![CDATA[Vijay Trisha: ಸಿನಿಮಾದಲ್ಲಿ ಜೋಡಿ ಜೊತೆಗೆ ವೈರಲ್ ವದಂತಿಯವರೆಗೆ, ವಿಜಯ್-ತ್ರಿಶಾ ಸಂಬಂಧ ನಿಜವಾಗಿಯೂ ಏನು?]]></title>
            <link>https://kannada.asianetnews.com/gallery/cine-world/the-enduring-bond-of-vijay-and-trisha-from-ghilli-to-goat-to-know-here-as-many-has-more-curiosity-lx7vsf9</link>
            <guid isPermaLink="true">https://kannada.asianetnews.com/gallery/cine-world/the-enduring-bond-of-vijay-and-trisha-from-ghilli-to-goat-to-know-here-as-many-has-more-curiosity-lx7vsf9</guid>
            <pubDate>Mon, 04 May 2026 18:20:49 +0530</pubDate>
            <description><![CDATA[&lt;p&gt;ತಮಿಳು ಸಿನಿಮಾದ ಅಚ್ಚುಮೆಚ್ಚಿನ ಜೋಡಿ ವಿಜಯ್ ಮತ್ತು ತ್ರಿಶಾ ಅವರ ಸ್ನೇಹ, ಹಲವು ಹಿಟ್ ಚಿತ್ರಗಳ ನಂತರವೂ ಮುಂದುವರೆದಿದೆ. ವಿಜಯ್ ರಾಜಕೀಯ ಪ್ರವೇಶದ ನಂತರ, ಇವರಿಬ್ಬರ ಸಂಬಂಧದ ಬಗೆಗಿನ ವದಂತಿಗಳು ಮತ್ತು ಜನರ ಕುತೂಹಲ ಇನ್ನೂ ಹೆಚ್ಚಾಗಿದೆ. ಹಾಗಿದ್ದರೆ ಅಸಲಿಯತ್ತೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqsge4tkx52dtztp50f65qpn,imgname-trisha-krishnan-thalapathy-vijay-1777898820435.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳು ಸಿನಿಮಾದ ಅಚ್ಚುಮೆಚ್ಚಿನ ಜೋಡಿ ವಿಜಯ್ ಮತ್ತು ತ್ರಿಶಾ ಅವರ ಸ್ನೇಹ, ಹಲವು ಹಿಟ್ ಚಿತ್ರಗಳ ನಂತರವೂ ಮುಂದುವರೆದಿದೆ. ವಿಜಯ್ ರಾಜಕೀಯ ಪ್ರವೇಶದ ನಂತರ, ಇವರಿಬ್ಬರ ಸಂಬಂಧದ ಬಗೆಗಿನ ವದಂತಿಗಳು ಮತ್ತು ಜನರ ಕುತೂಹಲ ಇನ್ನೂ ಹೆಚ್ಚಾಗಿದೆ. ಹಾಗಿದ್ದರೆ ಅಸಲಿಯತ್ತೇನು?&lt;/p&gt;&lt;img&gt;&lt;p&gt;ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಇಷ್ಟಪಟ್ಟ ಜೋಡಿಗಳಲ್ಲಿ ವಿಜಯ್ ಮತ್ತು ತ್ರಿಶಾ ಕೂಡ ಒಬ್ಬರು. ಇವರಿಬ್ಬರು ಜೊತೆಯಾಗಿ ನಟಿಸಿದ ಚಿತ್ರಗಳು ಯಶಸ್ವಿಯಾಗಿದ್ದಲ್ಲದೆ, ತೆರೆಯಾಚೆಗೂ ಇವರ ಸ್ನೇಹ ಆಗಾಗ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ವಿಜಯ್ ರಾಜಕೀಯ ಪ್ರವೇಶದೊಂದಿಗೆ, ಈ ಸ್ನೇಹ ಮತ್ತೊಮ್ಮೆ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಇವರಿಬ್ಬರು ಕೆಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ನಾನಾ ಚರ್ಚೆಗಳಿಗೆ ಕಾರಣವಾಯಿತು. ಅದರಲ್ಲೂ ಒಂದು ಮದುವೆ ಆರತಕ್ಷತೆಯಲ್ಲಿ ಜೊತೆಯಾಗಿ ಭಾಗವಹಿಸಿದ್ದು ಅಭಿಮಾನಿಗಳ ಗಮನ ಸೆಳೆಯಿತು.&amp;nbsp;&lt;/p&gt;&lt;img&gt;&lt;p&gt;ಇದರಿಂದ ಇವರ ಸಂಬಂಧದ ಬಗ್ಗೆ ವದಂತಿಗಳು ಹೆಚ್ಚಾದವು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಖಚಿತತೆ ನೀಡದೆ, 'ನಾವು ಒಳ್ಳೆಯ ಸ್ನೇಹಿತರು' ಎಂದೇ ಹೇಳುತ್ತಾ ಬಂದಿದ್ದಾರೆ.&lt;/p&gt;&lt;img&gt;&lt;p&gt;ಇವರಿಬ್ಬರು ಜೊತೆಯಾಗಿ ನಟಿಸಿದ ಪ್ರಮುಖ ಚಿತ್ರಗಳಲ್ಲಿ ಗಿಲ್ಲಿ, ತಿರುಪಾಚಿ, ಆತಿ, ಕುರುವಿ ಮತ್ತು ಇತ್ತೀಚಿನ ಲಿಯೋ ಸೇರಿವೆ. 'ಗಿಲ್ಲಿ' ಚಿತ್ರದಲ್ಲಿ ಕಬಡ್ಡಿ ಆಟಗಾರನಾಗಿ ವಿಜಯ್ ನಟಿಸಿದ ವೇಲು ಪಾತ್ರ ಮತ್ತು ತ್ರಿಶಾ ಅವರ ಧನಲಕ್ಷ್ಮಿ ಪಾತ್ರಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ತಿರುಪಾಚಿ ಮತ್ತು ಆತಿ ಚಿತ್ರಗಳಲ್ಲಿ ಇವರ ಕೆಮಿಸ್ಟ್ರಿ ಅಭಿಮಾನಿಗಳನ್ನು ಸೆಳೆಯಿತು. ಕುರುವಿ ಮತ್ತು ಲಿಯೋ ಚಿತ್ರಗಳಲ್ಲೂ ಈ ಜೋಡಿ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಇತ್ತೀಚೆಗೆ 'ಗೋಟ್' ಚಿತ್ರದ ಹಾಡೊಂದರಲ್ಲಿ ತ್ರಿಶಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಹಲವು ವರ್ಷಗಳ ಗ್ಯಾಪ್ ನಂತರವೂ, ಆಗಾಗ ಇಂತಹ ಅಪರೂಪದ ಜೋಡಣೆ ಇವರ ಸ್ನೇಹ ಇನ್ನೂ ಗಟ್ಟಿಯಾಗಿದೆ ಎಂಬುದನ್ನು ತೋರಿಸುತ್ತದೆ.&lt;/p&gt;&lt;img&gt;&lt;p&gt;ವಿಜಯ್ ರಾಜಕೀಯದಲ್ಲಿ ಸಕ್ರಿಯರಾಗುತ್ತಿರುವ ಈ ಸಮಯದಲ್ಲಿ, ಅವರ ವೈಯಕ್ತಿಕ ಜೀವನವೂ ಮತ್ತೆ ಚರ್ಚೆಯ ವಿಷಯವಾಗಿದೆ. ಅದರಲ್ಲೂ ಅವರ ಕೌಟುಂಬಿಕ ಜೀವನದ ಬಗೆಗಿನ ವದಂತಿಗಳು ಮತ್ತು ತ್ರಿಶಾ ಜೊತೆಗಿನ ಫೋಟೋಗಳನ್ನು ಜನರು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಂಡರು. ಇದರಿಂದಾಗಿ ಇವರ ಸ್ನೇಹದ ಬಗ್ಗೆ ಮತ್ತೊಮ್ಮೆ ಕುತೂಹಲ ಹೆಚ್ಚಾಗಿದೆ.&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/the-enduring-bond-of-vijay-and-trisha-from-ghilli-to-goat-to-know-here-as-many-has-more-curiosity-lx7vsf9"/>
        </item>
        <item>
            <title><![CDATA[ದಳಪತಿ ವಿಜಯ್-ತ್ರಿಶಾ ಕೃಷ್ಣನ್ ನಡುವಿನ ವಯಸ್ಸಿನ ಅಂತರ ಎಷ್ಟು?  ಈಗ್ಯಾಕೆ ಈ ಮ್ಯಾಟರ್ ಸುತ್ತಾಡ್ತಿದೆ?]]></title>
            <link>https://kannada.asianetnews.com/cine-world/the-relationship-and-the-age-gap-between-thalapathy-vijay-and-actress-trisha-krishnan/articleshow-n0xt4is</link>
            <guid isPermaLink="true">https://kannada.asianetnews.com/cine-world/the-relationship-and-the-age-gap-between-thalapathy-vijay-and-actress-trisha-krishnan/articleshow-n0xt4is</guid>
            <pubDate>Wed, 06 May 2026 11:40:31 +0530</pubDate>
            <description><![CDATA[&lt;p&gt;2004ರಲ್ಲಿ ಬಂದ 'ಗಿಲ್ಲಿ' ಸಿನಿಮಾ ನೆನಪಿದೆಯೇ? ಆ ಚಿತ್ರದ 'ಅಪ್ಪಾಡಿ ಪೋಡು' ಹಾಡಿಗೆ ಇಡೀ ಸೌತ್ ಇಂಡಿಯಾ ಸ್ಟೆಪ್ ಹಾಕಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಕ್ರೇಜ್ 'ತಿರುಪಾಚಿ', 'ಆದಿ' ಮತ್ತು 'ಕುರುವಿ' ಸಿನಿಮಾಗಳ ಮೂಲಕ ಮುಂದುವರಿಯಿತು. ಇತ್ತೀಚೆಗೆ 'ಲಿಯೋ' ಸಿನಿಮಾದಲ್ಲಿ ಮತ್ತೆ ಒಂದಾದ ಈ ಜೋಡಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjjbh0n6svjfe0jhzmz525xa,imgname-whatsapp-image-2026-02-28-at-8.15.47-pm-1772290081446.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಳಪತಿ ವಿಜಯ್-ತ್ರಿಶಾ ಲವ್ ಸ್ಟೋರಿ; ಈ ಜೋಡಿಯ ನಡುವೆ ಎಷ್ಟಿದೆ ಗೊತ್ತಾ ಏಜ್ ಗ್ಯಾಪ್?&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸದ್ಯಕ್ಕೆ ಕೇಳಿಬರುತ್ತಿರುವ ಅತೀ ದೊಡ್ಡ ಬಿಸಿ ಬಿಸಿ ಸುದ್ದಿ ಎಂದರೆ ಅದು 'ದಳಪತಿ' ವಿಜಯ್ (Thalapathy Vijay) ಮತ್ತು 'ಸೌತ್ ಕ್ವೀನ್' ತ್ರಿಶಾ ಕೃಷ್ಣನ್ (Trisha Krishan) ಅವರ ಸ್ನೇಹ! ಹೌದು, ತಮಿಳುನಾಡಿನ ರಾಜಕೀಯ ಅಖಾಡದಲ್ಲಿ ವಿಜಯ್ ಧೂಳೆಬ್ಬಿಸುತ್ತಿದ್ದರೆ, ಇತ್ತ ಸೋಶಿಯಲ್ ಮೀಡಿಯಾದ ಗಾಸಿಪ್ ಗಲ್ಲಿಗಳಲ್ಲಿ ಇವರಿಬ್ಬರ ಡೇಟಿಂಗ್ ವದಂತಿಗಳು ಹಲ್ ಚಲ್ ಸೃಷ್ಟಿಸಿವೆ.&lt;/p&gt;&lt;p&gt;ಯಶಸ್ಸಿನ ಹಿಂದೆ 'ಮಿಸ್ಟ್ರಿ ಗರ್ಲ್' ಕೈವಾಡ?&lt;/p&gt;&lt;p&gt;ದಳಪತಿ ವಿಜಯ್ ತಮ್ಮ 30 ವರ್ಷಗಳ ಸಿನಿಮಾ ಕೆರಿಯರ್ ಬದಿಗಿಟ್ಟು, 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಅಧಿವೇಶನದಲ್ಲೇ ವಿಜಯ್ ತೋರಿಸಿದ ಪವರ್ ನೋಡಿ ವಿರೋಧಿಗಳೇ ದಂಗಾಗಿದ್ದಾರೆ. ಆದರೆ, ಈ ವಿಜಯೋತ್ಸವದ ನಡುವೆ ಎಲ್ಲರ ಕಣ್ಣು ನೆಟ್ಟಿದ್ದು ನಟಿ ತ್ರಿಶಾ ಮೇಲೆ! ವಿಜಯ್ ಅವರ ಪ್ರತಿಯೊಂದು ಯಶಸ್ಸನ್ನು ತ್ರಿಶಾ ಸಂಭ್ರಮಿಸುತ್ತಿರುವ ರೀತಿ ನೋಡಿ, ಅಭಿಮಾನಿಗಳು &quot;ಇವರ ನಡುವೆ ಏನೋ ನಡೀತಿದೆ!&quot; ಎಂದು ಗುಸುಗುಸು ಶುರು ಮಾಡಿದ್ದಾರೆ.&lt;/p&gt;&lt;h2&gt;ವಯಸ್ಸಿನ ಲೆಕ್ಕಾಚಾರ: ಯಾರು ದೊಡ್ಡವರು?&lt;/h2&gt;&lt;p&gt;ಈ ಜೋಡಿ ಒಂದಾಗುತ್ತಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ, ಜನ ಇವರಿಬ್ಬರ ವಯಸ್ಸಿನ ಅಂತರದ ಬಗ್ಗೆ ಗೂಗಲ್&zwnj;ನಲ್ಲಿ ಹುಡುಕಾಡಲು ಶುರು ಮಾಡಿದ್ದಾರೆ.&lt;/p&gt;&lt;p&gt;ದಳಪತಿ ವಿಜಯ್: ಜೂನ್ 22, 1974 ರಂದು ಜನಿಸಿದ ವಿಜಯ್ ಅವರಿಗೆ ಈಗ 51 ವರ್ಷ. ಅರ್ಧ ಶತಕ ಬಾರಿಸಿದರೂ ದಳಪತಿ ಇಂದಿಗೂ ಕಾಲೇಜು ಹುಡುಗನಂತೆ ಕಾಣುತ್ತಾರೆ!&lt;/p&gt;&lt;p&gt;ತ್ರಿಶಾ ಕೃಷ್ಣನ್: ಮೇ 4, 1983 ರಂದು ಜನಿಸಿದ ತ್ರಿಶಾಗೆ ಈಗ 41 ವರ್ಷ.&lt;/p&gt;&lt;p&gt;ಅಂದರೆ, ವಿಜಯ್ ಮತ್ತು ತ್ರಿಶಾ ನಡುವೆ ಸುಮಾರು 8 ರಿಂದ 9 ವರ್ಷಗಳ ವಯಸ್ಸಿನ ಅಂತರವಿದೆ. ವಯಸ್ಸು ಎಷ್ಟೇ ಇರಲಿ, ಇಂದಿಗೂ ಇವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಹೊಸ ಜೋಡಿಗಳಿಗೂ ಪೈಪೋಟಿ ನೀಡುವಂತಿದೆ.&lt;/p&gt;&lt;p&gt;'ಗಿಲ್ಲಿ'ಯಿಂದ ಶುರುವಾದ ಮ್ಯಾಜಿಕ್!&lt;/p&gt;&lt;p&gt;2004ರಲ್ಲಿ ಬಂದ 'ಗಿಲ್ಲಿ' ಸಿನಿಮಾ ನೆನಪಿದೆಯೇ? ಆ ಚಿತ್ರದ 'ಅಪ್ಪಾಡಿ ಪೋಡು' ಹಾಡಿಗೆ ಇಡೀ ಸೌತ್ ಇಂಡಿಯಾ ಸ್ಟೆಪ್ ಹಾಕಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಕ್ರೇಜ್ 'ತಿರುಪಾಚಿ', 'ಆದಿ' ಮತ್ತು 'ಕುರುವಿ' ಸಿನಿಮಾಗಳ ಮೂಲಕ ಮುಂದುವರಿಯಿತು. ಇತ್ತೀಚೆಗೆ 'ಲಿಯೋ' ಸಿನಿಮಾದಲ್ಲಿ ಮತ್ತೆ ಒಂದಾದ ಈ ಜೋಡಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದರು.&lt;/p&gt;&lt;h3&gt;ಸಂಗೀತಾ ಜೊತೆಗಿನ ವಿಚ್ಛೇದನ ವದಂತಿ!&lt;/h3&gt;&lt;p&gt;ಮತ್ತೊಂದೆಡೆ, ವಿಜಯ್ ತಮ್ಮ ಪತ್ನಿ ಸಂಗೀತಾರಿಂದ ದೂರವಾಗುತ್ತಿದ್ದಾರೆ ಎಂಬ ಸುದ್ದಿಯೂ ಕಾಡ್ಗಿಚ್ಚಿನಂತೆ ಹಬ್ಬಿದೆ. ಕಳೆದ ಕೆಲವು ಕಾರ್ಯಕ್ರಮಗಳಲ್ಲಿ ಸಂಗೀತಾ ಕಾಣಿಸಿಕೊಳ್ಳದಿರುವುದು ಮತ್ತು ತ್ರಿಶಾ ಅವರ ಸತತ ಸಾಮೀಪ್ಯ ಈ ಅನುಮಾನಕ್ಕೆ ತುಪ್ಪ ಸುರಿದಂತಾಗಿದೆ. ಆದರೆ, ಈ ಬಗ್ಗೆ ವಿಜಯ್ ಆಗಲಿ ಅಥವಾ ತ್ರಿಶಾ ಆಗಲಿ ಎಲ್ಲಿಯೂ ಅಧಿಕೃತವಾಗಿ ಬಾಯಿ ಬಿಟ್ಟಿಲ್ಲ.&lt;/p&gt;&lt;p&gt;ರಾಜಕೀಯದಲ್ಲಿ ರಾರಾಜಿಸುತ್ತಿರುವ ವಿಜಯ್ ಮತ್ತು ಲೇಡಿ ಸೂಪರ್ ಸ್ಟಾರ್ ತ್ರಿಶಾ ನಿಜವಾಗಿಯೂ ಒಂದಾಗುತ್ತಾರಾ? ಅಥವಾ ಇದೆಲ್ಲಾ ಕೇವಲ 'ರೀಲ್' ಸುದ್ದಿಯೇ? ಇದಕ್ಕೆ ಕಾಲವೇ ಉತ್ತರ ನೀಡಬೇಕು. ಅಲ್ಲಿಯವರೆಗೂ ಈ 'ಗಿಲ್ಲಿ' ಜೋಡಿಯ ಗಾಸಿಪ್ ರಂಜನೆ ನೀಡುವುದಂತೂ ಗ್ಯಾರಂಟಿ!&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/the-relationship-and-the-age-gap-between-thalapathy-vijay-and-actress-trisha-krishnan/articleshow-n0xt4is"/>
        </item>
        <item>
            <title><![CDATA[ತ್ರಿಶಾ ಸಿಎಂ ಆಗ್ತಾರಾ? ದಳಪತಿ 'ಗೆಳತಿ'ಯ ರಾಜಕೀಯ ಎಂಟ್ರಿ ಫಿಕ್ಸ್? ತ್ರಿಶಾಗೆ ತಿರುಚ್ಚಿ ಟಿಕೆಟ್?]]></title>
            <link>https://kannada.asianetnews.com/cine-world/speculations-surface-that-actress-trisha-might-contest-from-the-trichy-seat-won-by-thalapathy-vijay/articleshow-rdlxct2</link>
            <guid isPermaLink="true">https://kannada.asianetnews.com/cine-world/speculations-surface-that-actress-trisha-might-contest-from-the-trichy-seat-won-by-thalapathy-vijay/articleshow-rdlxct2</guid>
            <pubDate>Wed, 06 May 2026 21:16:22 +0530</pubDate>
            <description><![CDATA[&lt;p&gt;ದಳಪತಿ ವಿಜಯ್​ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ, ಎಲ್ಲರ ಚಿತ್ತ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ. ಅದ್ರಲ್ಲೂ ದಶಕಗಳ ಹಿಂದೆ ತ್ರಿಷಾ ಸಂದರ್ಶನವೊಂದರಲ್ಲಿ ನಾನು ತಮಿಳುನಾಡು ಸಿಎಂ ಆಗ್ತಿನಿ ಅಂದಿದ್ರು. ಅದೀಗ ನಿಜವಾಗುತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyzfq779sbn3zenx41tefrd,imgname-thalapathy-vijay-trisha-krishanan-1778082372839.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯ್ ಪಾಲಿನ ವಿಜಯ ದೇವತೆಯಾದ ತ್ರಿಷಾ; ದಳಪತಿ ಜೊತೆಗೆ ರಾಜಕೀಯಕ್ಕೆ ಬರ್ತಾರಾ ತ್ರಿಷಾ..?&lt;/strong&gt;&lt;/p&gt;&lt;p&gt;ದಳಪತಿ ವಿಜಯ್ (Thalapathy Vijay) ತಮಿಳುನಾಡು ಚುನಾವಣೆಯಲ್ಲಿ ಗೆದ್ದಿದ್ದೇ ಗೆದ್ದಿದ್ದು, ವಿಜಯ್ ಗಿಂತ ಹೆಚ್ಚಾಗಿ ತ್ರಿಷಾ ಕೃಷ್ಣನ್ (Trisha Krishnan) ಹೆಸರು ಚಾಲ್ತಿಗೆ ಬಂದಿದೆ. ಅಸಲಿಗೆ ವಿಜಯ್-ತ್ರಿಷಾ ಸಂಬಂಧದ ಬಗೆಗಿನ ಗಾಸಿಪ್​ ಬಹಳಷ್ಟು ದಿನಗಳಿಂದ ಇದೆ. ಈ ನಡುವೆ ವಿಜಯ್ ಜೊತೆ ತ್ರಿಷಾನೂ ರಾಜಕೀಯ ಬರ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಅಷ್ಟೇ ಅಲ್ಲ ಹಿಂದೊಮ್ಮೆ ಸಂದರ್ಶನದಲ್ಲಿ ತಾನುಆದ್ರೆ ಮುಖ್ಯಮಂತ್ರಿಯೇ ಆಗ್ತಿನಿ ಅಂದಿದ್ದ ತ್ರಿಷಾ ಮಾತುಗಳು ಈಗ ಹೊಸ ಅರ್ಥ ಪಡೆದುಕೊಂಡಿವೆ.&lt;/p&gt;&lt;p&gt;ನಾನು ತಮಿಳು ಸಿಎಂ ಆಗ್ತಿನಿ : ತ್ರಿಷಾ ಪಂಚ್ ಡೈಲಾಗ್, ದಳಪತಿ ಗೆಳತಿಯ ರಾಜಕೀಯ ಎಂಟ್ರಿ ಫಿಕ್ಸ್..!&lt;/p&gt;&lt;p&gt;ಯೆಸ್ ದಳಪತಿ ವಿಜಯ್​ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ , ಎಲ್ಲರ ಚಿತ್ತ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ. ಅದ್ರಲ್ಲೂ ದಶಕಗಳ ಹಿಂದೆ ತ್ರಿಷಾ ಸಂದರ್ಶನವೊಂದರಲ್ಲಿ ನಾನು ತಮಿಳುನಾಡು ಸಿಎಂ ಆಗ್ತಿನಿ ಅಂದಿದ್ದ ವಿಡಿಯೋ ಈಗ ವೈರಲ್ ಆಗ್ತಾ ಇದೆ.&lt;/p&gt;&lt;h2&gt;ಈಗ ಈ ಮಾತಿಗೆ ಹೊಸ ಅರ್ಥ ಬಂದಿದೆ&lt;/h2&gt;&lt;p&gt;ಆಗ ತ್ರಿಷಾ ಈಗ ತಮಾಷೆಗೆ ಈ ಮಾತು ಹೇಳಿದ್ರೋ, ಅಥವಾ ಸೀರಿಯಸ್ ಆಗಿ ಹೇಳಿದ್ರೋ, ಈಗ ಈ ಮಾತಿಗೆ ಹೊಸ ಅರ್ಥ ಬಂದಿದೆ. ನಿಮಗೆಲ್ಲಾ ಗೊತ್ತಿರೋ ಹಾಗೆ ದಳಪತಿ ವಿಜಯ್, ಪತ್ನಿ ಸಂಗೀತಾ ಜೊತೆ ವಿಚ್ಛೆಧನಕ್ಕೆ ಮುಂದಾಗಿದ್ದಾರೆ. ವಿಜಯ್ ಮತ್ತು ತ್ರಿಷಾ ನಡುವೆ ಬಹುಕಾಲದಿಂದ ನಂಟು ಇದ್ದು, ಇವರಿಬ್ಬರ ಅಫೇರ್ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಹರಿದಾಡಿವೆ. ತಮ್ಮ ಸಂಬಂಧದ ಬಗ್ಗೆ ಇವರು ಬಹಿರಂಗವಾಗಿ ಹೇಳಿಕೊಂಡಿಲ್ಲವಾದ್ರೂ ಅದೊಂಥರಾ ಓಪನ್ ಸೀಕ್ರೆಟ್.&lt;/p&gt;&lt;p&gt;ಚುನಾವಣಾ ಫಲಿತಾಂಶದ ದಿನ ತ್ರಿಷಾ ಹುಟ್ಟುಹಬ್ಬ ಕೂಡ ಇದ್ದು, ತಿರುಪತಿ ದೇಗುಲಕ್ಕೆ ನಟಿ ತೆರಳಿದ್ರು. ಅಲ್ಲಿಂದ ಸೀದಾ ದಳಪತಿ ವಿಜಯ್ ನಿವಾಸಕ್ಕೆ ಆಗಮಿಸಿದ್ರು. ಅಷ್ಟೊತ್ತಿಗೆ ಟಿವಿಕೆ ವಿಜಯೋತ್ಸವ ಖಚಿತವಾಗಿತ್ತು. ತ್ರಿಷಾ ಮೊಗದಲ್ಲೂ ಸಂತಸದ ಕಾಂತಿ ನಳನಳಿಸ್ತಾ ಇತ್ತು.&lt;/p&gt;&lt;p&gt;2 ಕ್ಷೇತ್ರಗಳಲ್ಲಿಯೂ ವಿಜಯ್ ಜಯ.. ತ್ರಿಷಾಗೆ ತಿರುಚ್ಚಿ ಟಿಕೆಟ್..?&lt;/p&gt;&lt;p&gt;ಹೌದು ವಿಜಯ್ ಪೆರಂಬೂರು ಮತ್ತು ತಿರುಚ್ಚಿ ಎರಡು ಕಡೆಗೆ ಸ್ಪರ್ಧೆ ಮಾಡಿದ್ದು, ಎರಡೂ ಕಡೆ ವಿಜಯ ಸಾಧಿಸಿದ್ದಾರೆ. ಪೆರಂಬೂರನ್ನ ಉಳಿಸಿಕೊಂಡು, ತಿರುಚ್ಚಿಗೆ ರಾಜಿನಾಮೆ ಕೊಡೋದು ಬಹುತೇಕ ಫಿಕ್ಸ್. ಮತ್ತು ತಿರುಚ್ಚಿ ಟಿಕೆಟ್​ನ ತ್ರಿಷಾಗೆ ಕೊಡ್ತಾರೆ ಅಂತ ಸುದ್ದಿಯಾಗಿದೆ.&lt;/p&gt;&lt;p&gt;ಅಸಲಿಗೆ ಚುನಾವಣೆ ಸಮಯದಲ್ಲಿ ಅನೇಕ ರಾಜಕೀಯ ನಾಯಕರು ತ್ರಿಷಾ ಮತ್ತು ವಿಜಯ್ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರು. ವಿಜಯ್ ಪತ್ನಿ ಇದೇ ಸಮಯದಲ್ಲಿ , ಡಿವೋರ್ಸ್ ಅಪ್ಲೈ ಮಾಡಿದ್ರು. ಇವೆಲ್ಲಾ ವಿಜಯ್​ಗೆ ಮೈನಸ್ ಆಗ್ತಾವೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ತಮಿಳುನಾಡು ಜನ ಅದೆಲ್ಲವನ್ನೂ ಮೀರಿ ವಿಜಯ್ ಪಾರ್ಟಿಯನ್ನ ಬೆಂಬಲಿಸಿದ್ದಾರೆ. ಅಲ್ಲಿಗೆ ವಿಜಯ್ ತ್ರಿಷಾ ಸಂಬಂಧಕ್ಕೆ ಒಂದು ರೀತಿ ಅಧಿಕೃತ ಮುದ್ರೆ ಬಿದ್ದಂತೆ ಅಗಿದೆ. ಅದ್ರಲ್ಲೂ ಅಂದಿನ ಎಂ.ಜಿ.ಆರ್ ಮತ್ತು ಜಯಲಲಿತಾ ಜೋಡಿ ಜೊತೆಗೆ ಜನರು ವಿಜಯ್ ತ್ರಿಷಾರನ್ನ ಹೋಲಿಕೆ ಮಾಡ್ತಾ ಇದ್ದಾರೆ. ಇದೇ ಕಾರಣಕ್ಕೆ, ಎಂಜಿ ಆರ್ ಬಳಿಕ ಜಯಲಲಿತಾ ಸಿಎಂ ಆದಂತೆ, ಮುಂದೊಮ್ಮೆ ತ್ರಿಷಾ ಸಿಎಂ ಆಗಬಹುದು ಎಂಬುದು ಹಲವರ ಲೆಕ್ಕಾಚಾರ!&amp;nbsp;&lt;/p&gt;&lt;h3&gt;ವಿಜಯ್ ಪಾಲಿನ ವಿಜಯ ದೇವತೆಯಾದ ತ್ರಿಷಾ..!&lt;/h3&gt;&lt;p&gt;ಅಸಲಿಗೆ ತ್ರಿಶಾ ಅಂಡ್ ವಿಜಯ್ 2004ರಲ್ಲಿ ಮೊದಲ ಬಾರಿ ಗಿಲ್ಲಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ರು. ಗಿಲ್ಲಿ ಮೂವಿ ಸೂಪರ್ ಡೂಪರ್ ಹಿಟ್ ಆಗಿ ಇವರದ್ದು ಹಿಟ್ ಪೇರ್ ಅನ್ನಿಸಿಕೊಂಡಿತ್ತು.&lt;/p&gt;&lt;p&gt;ಇನ್ನೂ 2005 ಮತ್ತು 2006ರಲ್ಲಿ ತಿರುಪಾಚಿ, ಆತಿ ಸಿನಿಮಾಗಳಲ್ಲಿ ಕೂಡ ವಿಜಯ್ ಌಂಡ್ ತ್ರಿಶಾ ಜೋಡಿಯಾಗಿ ನಟಿಸಿ ಮೋಡಿ ಮಾಡಿದ್ರು. 2008ರಲ್ಲಿ ಮತ್ತೆ ಕುರುವಿ ಮೂವಿನಲ್ಲಿ ಜೊತೆಯಾಗಿ ಮಿಂಚಿದ್ರು. ಆದ್ರೆ ಆ ಸಮಯದಲ್ಲಿ ಇಬ್ಬರ ನಡುವೆ ಗೆಳೆತನ ಮಾತ್ರ ಇತ್ತು.&lt;/p&gt;&lt;p&gt;2023ರಲ್ಲಿ , 15 ವರ್ಷಗಳ ನಂತರ ಮತ್ತೆ ಲಿಯೋ ಸಿನಿಮಾದಲ್ಲಿ ಇಬ್ಬರೂ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ರು. ಆ ಸಮಯದಲ್ಲಿ ವಿಜಯ್ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಅತ್ತ ಎಂಗೇಜ್​ಮೆಂಟ್ ಮುರಿದುಕೊಂಡಿದ್ದ ತ್ರಿಷಾ ಕೂಡ ಒಬ್ಬಂಟಿ ಆಗಿದ್ರು. ಅಲ್ಲಿಂದಲೇ ಇಬ್ಬರ ನಡುವೆ ಆತ್ಮೀಯತೆ ಬೆಳಿತು ಅಂತ ಹೇಳಲಾಗುತ್ತೆ.&lt;/p&gt;&lt;p&gt;ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟು , ನಾನಾ ಸವಾಲು ಎದುರಿಸಿದ ಸಮಯದಲ್ಲಿ ತ್ರಿಷಾ ವಿಜಯ್​ಗೆ ಬೆನ್ನೆಲುಬಾಗಿ ನಿಂತುಕೊಂಡ್ರು. ಸೋ ವಿಜಯ್​ರ ಈ ಗೆಲುವಿನಲ್ಲಿ, ತ್ರಿಷಾ ಪಾತ್ರ ಇದೆ. ವಿಜಯ್ ಪಾಲಿನ ವಿಜಯ ದೇವತೆ ತ್ರಿಷಾ ಅಂತಿದ್ದಾರೆ ಫ್ಯಾನ್ಸ್.&lt;/p&gt;&lt;p&gt;ಎನಿ ವೇ ತ್ರಿಷಾ ಜಸ್ಟ್ ದಳಪತಿ ಬೆನ್ನ ಹಿಂದೆ ಇರ್ತಾರೋ, ಅಥವಾ ವಿಜಯ್ ಜೊತೆ ಜೊತೆಗೆ ರಾಜಕೀಯಕ್ಕೂ ಬರ್ತಾರೋ? ಮುಂದೊಂದು ದಿನ ಸಿಎಂ ಆಗ್ತಾರಾ? ಅನ್ನೋದು ಸದ್ಯದ ಕುತೂಹಲ...!&lt;/p&gt;&lt;p&gt;ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ...&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/speculations-surface-that-actress-trisha-might-contest-from-the-trichy-seat-won-by-thalapathy-vijay/articleshow-rdlxct2"/>
        </item>
        <item>
            <title><![CDATA[ಮೇ 14 ರಿಂದ ಈ 6 ರಾಶಿಗೆ ಲಕ್ಷ್ಮಿಯಿಂದ ಧನ-ಸಂಪತ್ತು, ಬುಧ ಮತ್ತು ಶುಕ್ರನಿಂದ ಹಣವು ಹಣವೇ!]]></title>
            <link>https://kannada.asianetnews.com/gallery/relationship/mercury-venus-parivartan-yoga-from-may-14-6-zodiac-signs-get-lakshmi-kataksham-suh-t0a2rez</link>
            <guid isPermaLink="true">https://kannada.asianetnews.com/gallery/relationship/mercury-venus-parivartan-yoga-from-may-14-6-zodiac-signs-get-lakshmi-kataksham-suh-t0a2rez</guid>
            <pubDate>Thu, 07 May 2026 10:36:13 +0530</pubDate>
            <description><![CDATA[&lt;p&gt;May 14 ಬುಧ ಮತ್ತು ಶುಕ್ರನ ಸಂಚಾರವು ಈ ಆರು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರಲಿದೆ. ಈ ತಿಂಗಳ 14 ರಿಂದ 29 ರವರೆಗೆ, ನಿಮ್ಮ ಆದಾಯ ಹೆಚ್ಚಾಗುವುದಲ್ಲದೆ, ನಿಮ್ಮ ಹೊಸ ಉದ್ಯೋಗ ಮತ್ತು ವಿವಾಹ ಪ್ರಯತ್ನಗಳು ಸಹ ಫಲ ನೀಡುತ್ತವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmhg8sfxadr5hes3hc0dcz0f,imgname-money-is-money-for-these-3-zodiac-signs-with-the-conjunction-of-venus-and-moon-1774408984061.jpg" type="image/jpeg" height="390" width="690"/>
            <content:encoded><![CDATA[&lt;p&gt;May 14 ಬುಧ ಮತ್ತು ಶುಕ್ರನ ಸಂಚಾರವು ಈ ಆರು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರಲಿದೆ. ಈ ತಿಂಗಳ 14 ರಿಂದ 29 ರವರೆಗೆ, ನಿಮ್ಮ ಆದಾಯ ಹೆಚ್ಚಾಗುವುದಲ್ಲದೆ, ನಿಮ್ಮ ಹೊಸ ಉದ್ಯೋಗ ಮತ್ತು ವಿವಾಹ ಪ್ರಯತ್ನಗಳು ಸಹ ಫಲ ನೀಡುತ್ತವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈ ರಾಶಿಚಕ್ರ ಚಿಹ್ನೆಯು ಈ ಪರಿವರ್ತನಾ ಯೋಗದಿಂದಾಗಿ ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಹಲವು ದಿಕ್ಕುಗಳಿಂದ ಆದಾಯ ಹೆಚ್ಚಾಗುತ್ತದೆ. ಗೃಹ ಮತ್ತು ವಾಹನ ಯೋಗಗಳು ಸಿಗುವ ಸಾಧ್ಯತೆಯೂ ಇದೆ. ಆಸ್ತಿ ವಿವಾದಗಳು ಸಕಾಲಿಕವಾಗಿ ಬಗೆಹರಿಯುತ್ತವೆ. ಆದಾಯದ ಮೂಲಗಳು ವಿಸ್ತರಿಸುವ ಸೂಚನೆಗಳಿವೆ. ಪೋಷಕರಿಂದ ಆಸ್ತಿ ಪಡೆಯುವ ಸಾಧ್ಯತೆ ಇದೆ. ಪ್ರಯಾಣವು ತುಂಬಾ ಲಾಭದಾಯಕವಾಗಿರುತ್ತದೆ. ಸಂಬಳ, ಭತ್ಯೆಗಳು ಮತ್ತು ಆದಾಯ ಹೆಚ್ಚಾಗುತ್ತದೆ.&lt;/p&gt;&lt;img&gt;&lt;p&gt;ಧನದ ಅಧಿಪತಿ ಬುಧ ಮತ್ತು ಶುಕ್ರನ ಸಂಚಾರದಿಂದಾಗಿ ಈ ರಾಶಿಯವರು ಮುಟ್ಟುವುದೆಲ್ಲವೂ ಚಿನ್ನವಾಗುತ್ತದೆ. ಆದಾಯವನ್ನು ಹೆಚ್ಚಿಸುವ ಯಾವುದೇ ಸಣ್ಣ ಪ್ರಯತ್ನವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಬಾಕಿ ಇರುವ ಹಣದ ಜೊತೆಗೆ, ಬಾಕಿ ಮತ್ತು ಬಾಕಿಗಳು ಸಂಗ್ರಹವಾಗುತ್ತವೆ. ಆಸ್ತಿ ಲಾಭವಾಗುತ್ತದೆ. ಕೆಲಸದಲ್ಲಿ ಭಾರಿ ಸಂಬಳ ಮತ್ತು ಭತ್ಯೆಗಳೊಂದಿಗೆ ಬಡ್ತಿಯ ಸಾಧ್ಯತೆಯಿದೆ. ವೃತ್ತಿ ಮತ್ತು ವ್ಯವಹಾರವು ಆದಾಯದ ವಿಷಯದಲ್ಲಿ ಹೊಸ ಎತ್ತರವನ್ನು ತಲುಪುತ್ತದೆ. ಶ್ರೀಮಂತ ಕುಟುಂಬದ ವ್ಯಕ್ತಿಯೊಂದಿಗೆ ವಿವಾಹವು ಖಚಿತವಾಗಿರುತ್ತದೆ.&lt;/p&gt;&lt;img&gt;&lt;p&gt;ಈ ರಾಶಿಚಕ್ರದವರಿಗೆ ಈ ರಾಶಿಚಕ್ರದ ಪರಿವರ್ತನೆಯಿಂದ ಹೆಚ್ಚಿನ ಲಾಭವಾಗುತ್ತದೆ. ದಶಮ ಮತ್ತು ಲಾಭಾಧಿಪತಿಯ ನಡುವಿನ ಪರಿವರ್ತನೆಯಿಂದಾಗಿ, ಆದಾಯದಲ್ಲಿ ಎರಡು ಪಟ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹಠಾತ್ ಆರ್ಥಿಕ ಲಾಭದ ಸಾಧ್ಯತೆ ಇದೆ. ಆಸ್ತಿಯ ಮೌಲ್ಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆಸ್ತಿ ವಿವಾದಗಳು ಸಕಾರಾತ್ಮಕವಾಗಿ ಬಗೆಹರಿಯುತ್ತವೆ. ಮದುವೆ ಮತ್ತು ಉದ್ಯೋಗ ಪ್ರಯತ್ನಗಳಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ. ಕೆಲಸದಲ್ಲಿ ಸಂಬಳ ಮತ್ತು ಭತ್ಯೆಗಳಲ್ಲಿ ಗಮನಾರ್ಹ ಹೆಚ್ಚಳದ ಸಾಧ್ಯತೆ ಇದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಅಶಾಂತಿಯ ಪರಿಸ್ಥಿತಿ ಇರುತ್ತದೆ.&lt;/p&gt;&lt;img&gt;&lt;p&gt;ಈ ರಾಶಿಚಕ್ರದವರು ಭಾಗ್ಯ ಮತ್ತು ದಶಮಾಧಿಪತಿಗಳ ನಡುವೆ ಪರಿವರ್ತನೆಯನ್ನು ಅನುಭವಿಸುತ್ತಿದ್ದಾರೆ, ಆದ್ದರಿಂದ ಉದ್ಯೋಗದಲ್ಲಿ ಪ್ರಾಮುಖ್ಯತೆ ಮತ್ತು ಸ್ಥಾನಮಾನ ಹೆಚ್ಚಾಗುವ ಸಾಧ್ಯತೆಯಿದೆ. ಸಂಬಳ ಮತ್ತು ಭತ್ಯೆಗಳು ನಿರೀಕ್ಷೆಗಳನ್ನು ಮೀರಿ ಹೆಚ್ಚಾಗುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಭಾರಿ ಸಂಬಳ ಮತ್ತು ಭತ್ಯೆಗಳೊಂದಿಗೆ ಕೆಲಸ ಸಿಗುವ ಸಾಧ್ಯತೆಯಿದೆ. ಈ ರಾಶಿಚಕ್ರ ಚಿಹ್ನೆಗೆ ಸಂಭವಿಸುವ ಬಹುತೇಕ ಎಲ್ಲವೂ ಚಿನ್ನವಾಗಿ ಬದಲಾಗುತ್ತದೆ. ಉತ್ತಮ ಉದ್ಯೋಗಕ್ಕೆ ಬದಲಾಗುವ ಸಾಧ್ಯತೆಯಿದೆ. ಷೇರು ವ್ಯಾಪಾರವು ತುಂಬಾ ಲಾಭದಾಯಕವಾಗಿರುತ್ತದೆ.&lt;/p&gt;&lt;img&gt;&lt;p&gt;ಈ ರಾಶಿಚಕ್ರ ಚಿಹ್ನೆಯು ಐದನೇ ಮತ್ತು ಆರನೇ ಅಧಿಪತಿಗಳ ನಡುವಿನ ಪರಿವರ್ತನೆಯಿಂದಾಗಿ ಹೆಚ್ಚಿನ ಅದೃಷ್ಟವನ್ನು ಹೊಂದಿರುತ್ತದೆ. ಆದಾಯವು ಹಲವು ರೀತಿಯಲ್ಲಿ ಹೆಚ್ಚಾಗುತ್ತದೆ. ಮನಸ್ಸಿನ ಆಸೆಗಳು ಈಡೇರುತ್ತವೆ. ಯಾವುದೇ ಆರ್ಥಿಕ ಪ್ರಯತ್ನವು ಯಶಸ್ವಿಯಾಗುತ್ತದೆ. ಮನೆ ಮತ್ತು ವಾಹನ ಸೌಲಭ್ಯಗಳು ಹೆಚ್ಚಾಗುತ್ತವೆ. ನಿರುದ್ಯೋಗಿಗಳು ಮತ್ತು ಉದ್ಯೋಗಿಗಳಿಗೆ ವಿದೇಶದಿಂದ ಕೊಡುಗೆಗಳು ಸಿಗುತ್ತವೆ. ವೃತ್ತಿಪರ ಮತ್ತು ಉದ್ಯೋಗದ ಕಾರಣಗಳಿಗಾಗಿ ಅವರು ವಿದೇಶಕ್ಕೆ ಹೋಗಬೇಕಾಗುತ್ತದೆ. ಅವರು ಆರ್ಥಿಕ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ.&lt;/p&gt;&lt;img&gt;&lt;p&gt;ನಾಲ್ಕನೇ ಮತ್ತು ಐದನೇ ಮನೆಗಳ ನಡುವೆ ಸಂಚಾರ ಮಾಡುತ್ತಿರುವುದರಿಂದ, ಸೆಲೆಬ್ರಿಟಿಗಳೊಂದಿಗೆ ಲಾಭದಾಯಕ ಸಂಪರ್ಕಗಳು ಉಂಟಾಗುತ್ತವೆ. ಪಾಲುದಾರಿಕೆ ವ್ಯವಹಾರಗಳು ನಿರೀಕ್ಷೆಗೂ ಮೀರಿ ಬೆಳೆಯುತ್ತವೆ. ಮನೆ ಮತ್ತು ವಾಹನ ಸೌಲಭ್ಯಗಳು ಸೃಷ್ಟಿಯಾಗುತ್ತವೆ. ಸರ್ಕಾರದಿಂದ ಉತ್ತಮ ಮನ್ನಣೆ ಮತ್ತು ಆರ್ಥಿಕ ಲಾಭಗಳು ಬರುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭ ದೊರೆಯುತ್ತದೆ. ಉದ್ಯೋಗ ಸ್ಥಾನಮಾನದ ಜೊತೆಗೆ, ಸಂಬಳವೂ ಅಪೇಕ್ಷಿತ ಮಟ್ಟಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/mercury-venus-parivartan-yoga-from-may-14-6-zodiac-signs-get-lakshmi-kataksham-suh-t0a2rez"/>
        </item>
        <item>
            <title><![CDATA[ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?]]></title>
            <link>https://kannada.asianetnews.com/karnataka-districts/karnataka-psi-files-complaint-over-love-dispute-with-former-woman-constable-gdp-videoshow-tbvaht8</link>
            <guid isPermaLink="true">https://kannada.asianetnews.com/karnataka-districts/karnataka-psi-files-complaint-over-love-dispute-with-former-woman-constable-gdp-videoshow-tbvaht8</guid>
            <pubDate>Thu, 07 May 2026 14:47:31 +0530</pubDate>
            <description><![CDATA[ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ಒಬ್ಬರು, ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಲೇಡಿ ಕಾನ್ಸ್​​ಟೇಬಲ್ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆಕೆ ಬೇರೊಬ್ಬರೊಂದಿಗೆ ಮದುವೆಯಾಗುತ್ತಿದ್ದು, ಅದನ್ನು ನಿಲ್ಲಿಸುವಂತೆ ಕೋರಿ ಪಿಎಸ್ಐ ಮತ್ತೊಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xa8e0gq" medium="video" height="768" width="1024"/>
            <content:encoded><![CDATA[&lt;p&gt;ಆತ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್​​.. ಕಷ್ಟಪಟ್ಟು ಓದಿ ಆ ಹುದ್ದೆಗೇರಿದ್ರು.. ಕ್ರೈಂ ಆಗಲಿ.. ಮೋಸವಾಗಲಿ.. ಕಳ್ಳತನವಾಗಲಿ.. ಆ ಭಾಗದ ಜನ ಈತನ ಬಳಿಯೇ ಬರ್ತಿದ್ರು.. ಪ್ರತೀ ನಿತ್ಯ ಹತ್ತಾರು ಮಂದಿಯ ಕಷ್ಟ ಆಲಿಸುತ್ತಿದ್ದ ಇದೇ ಪೊಲೀಸಪ್ಪ ಇವತ್ತು ತಾನೇ ನ್ಯಾಯ ಕೊಡಿಸಿ ಅಂತ ಮತ್ತೊಂದು ಪೊಲೀಸ್​​ ಠಾಣೆ ಏರಿದ್ದಾನೆ.. ಇನ್ನೂ ಆತನಿಗೆ ಮೋಸವಾಗಿರೋದು ತನ್ನದೇ ಠಾಣೆಯಲ್ಲಿ ಒಂದು ಸಮಯದಲ್ಲಿ ಕೆಲಸ ಮಾಡ್ತಿದ್ದ ಲೇಡಿ ಕಾನ್ಸ್​​ಟೇಬಲ್​ನಿಂದ.. ಆ ಲೇಡಿ ಕಾನ್ಸ್​ಟೇಬಲ್​ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ್ರಂತೆ.. ಅಷ್ಟಕ್ಕೂ ಆ ಲೇಡಿ ಕಾನ್ಸ್​​ಟೇಬಲ್​ ಯಾರು..? ಇವರ ಪ್ರೀತಿ ಹುಟ್ಟಿದ್ದೇಗೆ..? ಆಕೆ ಮಾಡಿದ ಮೋಸ ಎಂಥದ್ದು..? ಒಂದು ಪೊಲೀಸ್​​ ಲವ್​ ಸ್ಟೋರಿಯ ಕಂಪ್ಲೀಟ್​​ ಡಿಟೇಲ್ಸ್​​ ಇವತ್ತಿನ ಎಫ್​​.ಐ.ಆರ್​​&lt;/p&gt;&lt;p&gt;ಇವತ್ತು ಪೊಲೀಸಪ್ಪನ ಲವ್​ ಸ್ಟೋರಿ ಬೀದಿಗೆ ಬಂದಿದೆ.. ನಾಳೆ ಆ ಹೆಣ್ಣುಮಗಳ ಮದುವೆ.. &amp;nbsp;ಮದುವೆ ನಿಲ್ಲಿಸಿ ಅಂತ ಪಿಎಸ್​​ಐ ಠಾಣೆ ಮೆಟ್ಟಿಲ್ಲೇರಿದ್ದಾರೆ.. ಮುಂದೆ ಏನ್ಮಾಡಬೇಕು ಅನ್ನೋದನ್ನ ಕಾನೂನು ಹೆಳುತ್ತೆ.. ಆದ್ರೆ ಒಬ್ಬ ಹೆಣ್ಣುಮಗಳು ನೀನು ಬೇಡ ಅಂತ ತಿರಸ್ಕರಿಸಿ ಹೊಸ ದಾರಿಯನ್ನ ಹಿಡಿದಿದ್ದಾಳೆ.. ಅವಳ ಪಾಡಿಗೆ ಅವಳನ್ನ ಬಿಟ್ರೆ ಒಳ್ಳೆದು..&amp;nbsp;&lt;/p&gt;]]></content:encoded>
            <category>relationship</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-psi-files-complaint-over-love-dispute-with-former-woman-constable-gdp-videoshow-tbvaht8"/>
        </item>
        <item>
            <title><![CDATA[ರಾಹುಲ್ ಗಾಂಧಿ ಬಿಜೆಪಿಗೆ ​ಬಂದ್ರೆ ಮದ್ವೆಯಾಗ್ತಾರಂತೆ ಕಂಗನಾ ರಣಾವತ್​? ನಟಿಯ ಪ್ರತಿಕ್ರಿಯೆ ವೈರಲ್​]]></title>
            <link>https://kannada.asianetnews.com/gallery/relationship/kangana-ranaut-offered-to-marry-rahul-gandhi-if-he-joins-bjp-actor-reacts-to-viral-post-suc-yobk06e</link>
            <guid isPermaLink="true">https://kannada.asianetnews.com/gallery/relationship/kangana-ranaut-offered-to-marry-rahul-gandhi-if-he-joins-bjp-actor-reacts-to-viral-post-suc-yobk06e</guid>
            <pubDate>Tue, 05 May 2026 20:51:11 +0530</pubDate>
            <description><![CDATA[&lt;p&gt;ನಟಿ ಮತ್ತು ಸಂಸದೆ ಕಂಗನಾ ರಣಾವತ್, ರಾಹುಲ್ ಗಾಂಧಿ ಕುರಿತು ತಾವು ಹೇಳಿಕೆ ನೀಡಿದ್ದಾರೆ ಎನ್ನಲಾದ ನಕಲಿ ಪೋಸ್ಟ್ ವಿರುದ್ಧ ಕಿಡಿಕಾರಿದ್ದಾರೆ. ಈ ವೈರಲ್ ಸುದ್ದಿಯನ್ನು ನೀಚತನದ್ದು ಎಂದು ಕರೆದಿರುವ ಅವರು, ಸುಳ್ಳು ಹರಡುವವರಿಗೆ ಎಚ್ಚರಿಕೆ ನೀಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqwbm1qnvv2a3gkxkmn8pqzt,imgname-rahul-gandhi-and-kangana-ranaut-1777994434293.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಮತ್ತು ಸಂಸದೆ ಕಂಗನಾ ರಣಾವತ್, ರಾಹುಲ್ ಗಾಂಧಿ ಕುರಿತು ತಾವು ಹೇಳಿಕೆ ನೀಡಿದ್ದಾರೆ ಎನ್ನಲಾದ ನಕಲಿ ಪೋಸ್ಟ್ ವಿರುದ್ಧ ಕಿಡಿಕಾರಿದ್ದಾರೆ. ಈ ವೈರಲ್ ಸುದ್ದಿಯನ್ನು ನೀಚತನದ್ದು ಎಂದು ಕರೆದಿರುವ ಅವರು, ಸುಳ್ಳು ಹರಡುವವರಿಗೆ ಎಚ್ಚರಿಕೆ ನೀಡಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಬಾಲಿವುಡ್ ನಟಿ ಮತ್ತು ಹಿಮಾಚಲ ಪ್ರದೇಶದ ಮಂಡಿಯ ಸಂಸದೆ ಕಂಗನಾ ರಣಾವತ್​ ಕಾಂಟ್ರವರ್ಸಿಗಳಿಂದಲೇ ಫೇಮಸ್​ ಆಗಿರುವವರು. ಇದಕ್ಕೆ ಕಾರಣ, ಇದ್ದದ್ದನ್ನು ಇದ್ದ ಹಾಗೆ ನೇರಾನೇರ ಹೇಳಿ ಕಾಂಟ್ರವರ್ಸಿ ಕ್ರಿಯೇಟ್​ ಮಾಡುತ್ತಲೇ ಇರುತ್ತಾರೆ. ಇನ್ನು ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರನ್ನು ಕಂಡರಂತೂ ಕಂಗನಾಗೆ ಇನ್ನಿಲ್ಲದ ಕೋಪ. ರಾಹುಲ್​ ಗಾಂಧಿ ಅವರು ಹೊರದೇಶಗಳಿಗೆ ಹೋಗಿ ಭಾರತದ ಮರ್ಯಾದೆ ತೆಗೆಯುವಾಗ, ಸಂಸತ್ತಿನಲ್ಲಿ ಅಲ್ಲಿ ಸಂಬಂಧವಿಲ್ಲದ್ದನ್ನು ಮಾತನಾಡುವಾಗಲೆಲ್ಲಾ ಅವರ ತಲೆಯ ಮೇಲೆ ಹೊಡೆದಂತೆ ಕಂಗನಾ ಎದುರೆದುರಿಗೇ ಬೈಯುವಂಥವರು.&lt;/p&gt;&lt;img&gt;&lt;p&gt;ಕಂಗನಾ ಪದೇ ಪದೇ ರಾಹುಲ್​ ಗಾಂಧಿ ಅವರನ್ನು ಟಾರ್ಗೆಟ್​ ಮಾಡುವುದನ್ನು ಕಂಡು ಕಂಡು ಸಾಕಾಗಿರುವ ರಾಹುಲ್​ ಅಭಿಮಾನಿಗಳು ಇದೀಗ ಒಂದು ಪೋಸ್ಟ್​ ಅನ್ನು ವೈರಲ್​ ಮಾಡಿದ್ದರು. ಅದರಲ್ಲಿ ಕಂಗನಾ ಅವರು, ರಾಹುಲ್​ ಗಾಂಧಿ ಬಿಜೆಪಿಗೆ ಬಂದರೆ ನಾನು ಅವರನ್ನು ಮದುವೆಯಾಗಲು ಸಿದ್ಧ ಎಂದು ಬರೆಯಲಾಗಿತ್ತು. ಇದನ್ನು ಕಂಗನಾ ಅವರೇ ಬರೆದಂತೆ ಬಿಂಬಿಸಲಾಗಿತ್ತು.&lt;/p&gt;&lt;img&gt;&lt;p&gt;ಇದು ನಕಲಿ ಪೋಸ್ಟ್​ ಎನ್ನುವುದು ಎಂಥವರಿಗೂ ತಿಳಿಯುತ್ತದೆ. ಆದರೆ ಇಂಥದ್ದಕ್ಕೇ ಕಾಯುವ ವಿಕೃತ ಮನಸ್ಸುಗಳು ಈ ಪೋಸ್ಟ್​ ಹಂಚಿಕೊಂಡು ನಟಿಯ ಬಗ್ಗೆ ಇಲ್ಲಸಲ್ಲದ ಕಮೆಂಟ್​ ಮಾಡುತ್ತಿದ್ದರು. ಪೋಸ್ಟ್​ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಸಿಡಿದೆದ್ದಿದ್ದಾರೆ ನಟಿ, ಸಂಸದೆ ಕಂಗನಾ.&lt;/p&gt;&lt;img&gt;&lt;p&gt;ಈ ನಕಲಿ ಸುದ್ದಿ ಅತ್ಯಂತ ನೀಚತನದ್ದಾಗಿದೆ ಎಂದು ಬರೆದು ಕಂಗನಾ ತಮ್ಮ ಇನ್&zwnj;ಸ್ಟಾಗ್ರಾಮ್ ಕಥೆಯಲ್ಲಿ ನಕಲಿ ಪೋಸ್ಟ್ ಅನ್ನು ಮರು ಹಂಚಿಕೊಂಡಿದ್ದಾರೆ. ರಾಜಕೀಯದಲ್ಲಿಯೂ ಮಹಿಳೆಯರಿಗೆ ಯಾವುದೇ ಘನತೆ ಉಳಿದಿಲ್ಲ ಎಂದು ಕಂಗನಾ ವಿಷಾದಿಸಿದ್ದಾರೆ. ಅಂತಹ ಸುಳ್ಳುಗಳನ್ನು ಹರಡುವವರಿಗೆ ಅವರು ಎಚ್ಚರಿಕೆ ನೀಡಿದರು, ಅವರು ತಮ್ಮ ಕಾರ್ಯಗಳ ಬಗ್ಗೆ ನಾಚಿಕೆಪಡಬೇಕು ಎಂದು ಹೇಳಿದರು. ಅಂತಹ ಯಾವುದೇ ಅಗ್ಗದ ನಡವಳಿಕೆಯನ್ನು ನಾನು ಕ್ಷಮಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕೆಲ ದಿನಗಳ ಹಿಂದೆ ನಟ, ಸಂಸದ ಚಿರಾಗ್​ ಪಾಸ್ವಾನ್​ ಜೊತೆ ಕಂಗನಾ ಅವರ ಮದುವೆ ಎನ್ನುವ ಸುದ್ದಿ ವೈರಲ್​ ಮಾಡಲಾಗಿತ್ತು. ನಟಿ ಇನ್ನೂ ಸಿಂಗಲ್​ ಆಗಿರುವ ಕಾರಣ, ಯಾರ್ಯಾರು ಸಿಂಗಲ್​ ಇದ್ದಾರೋ ಅವರ ಹೆಸರಿನ ಜೊತೆ ನಟಿಯ ಹೆಸರನ್ನು ಸೇರಿಸಿ ವೈರಲ್ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಅಂದಹಾಗೆ ಕಂಗನಾ ಸದ್ಯ, &quot;ಕ್ವೀನ್ 2&quot; ಗಾಗಿ ತಯಾರಿಯಲ್ಲಿ ನಿರತರಾಗಿದ್ದಾರೆ. ತಮ್ಮ ನಟನಾ ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸುತ್ತಿದ್ದಾರೆ ಮತ್ತು ಅವರ ರಾಜಕೀಯ ವೃತ್ತಿಜೀವನವನ್ನು ಸಹ ಮುಂದುವರಿಸುತ್ತಿದ್ದಾರೆ. ಕೆಲಸದ ವಿಚಾರಕ್ಕೆ ಬಂದರೆ, ಅವರು ಶೀಘ್ರದಲ್ಲೇ ತಮ್ಮ &quot;ಕ್ವೀನ್&quot; ಚಿತ್ರದ ಮುಂದುವರಿದ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ವಿಕಾಸ್ ಬಹ್ಲ್ ಈ ಯೋಜನೆಗೆ ಸಿದ್ಧತೆಗಳನ್ನು ಚುರುಕುಗೊಳಿಸಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/kangana-ranaut-offered-to-marry-rahul-gandhi-if-he-joins-bjp-actor-reacts-to-viral-post-suc-yobk06e"/>
        </item>
        <item>
            <title><![CDATA[Amruthadhaare ಭೂಮಿಕಾ ಧರಿಸಿದ ಕಾಲ್ಗೆಜ್ಜೆಗೀಗ ಭಾರಿ ಡಿಮಾಂಡ್​: ಪತಿ ತೊಡಿಸಿದರೆ ಆಗುವುದೇನು?]]></title>
            <link>https://kannada.asianetnews.com/gallery/astrology/amruthadhaare-serial-gowtham-gifted-payal-to-bhoomika-astrological-importance-suc-z9lfa8i</link>
            <guid isPermaLink="true">https://kannada.asianetnews.com/gallery/astrology/amruthadhaare-serial-gowtham-gifted-payal-to-bhoomika-astrological-importance-suc-z9lfa8i</guid>
            <pubDate>Thu, 07 May 2026 17:38:59 +0530</pubDate>
            <description><![CDATA[ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಪ್ರೀತಿಯಿಂದ ಭೂಮಿಕಾಳ ಕಾಲಿಗೆ ಗೆಜ್ಜೆ ತೊಡಿಸಿದ್ದಾನೆ. ಈ ಘಟನೆಯು ಕೇವಲ ಪ್ರೀತಿಯ ಸಂಕೇತವಲ್ಲ, ಬದಲಾಗಿ ಪತಿ ಪತ್ನಿಯ ಕಾಲಿಗೆ ಗೆಜ್ಜೆ ತೊಡಿಸುವುದರ ಹಿಂದೆ ಆಳವಾದ ಸಾಂಪ್ರದಾಯಿಕ ಮತ್ತು ಜ್ಯೋತಿಷ್ಯದ ಮಹತ್ವವಿದೆ ಎಂದು ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr151h7v75qf3dew0fhm90jn,imgname-gejje-04-1778155308283.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಪ್ರೀತಿಯಿಂದ ಭೂಮಿಕಾಳ ಕಾಲಿಗೆ ಗೆಜ್ಜೆ ತೊಡಿಸಿದ್ದಾನೆ. ಈ ಘಟನೆಯು ಕೇವಲ ಪ್ರೀತಿಯ ಸಂಕೇತವಲ್ಲ, ಬದಲಾಗಿ ಪತಿ ಪತ್ನಿಯ ಕಾಲಿಗೆ ಗೆಜ್ಜೆ ತೊಡಿಸುವುದರ ಹಿಂದೆ ಆಳವಾದ ಸಾಂಪ್ರದಾಯಿಕ ಮತ್ತು ಜ್ಯೋತಿಷ್ಯದ ಮಹತ್ವವಿದೆ ಎಂದು ವಿವರಿಸಲಾಗಿದೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare Serial) ಅಂದ್ರೆನೇ ಅದೊಂದು ರೀತಿಯಲ್ಲಿ ದಾಂಪತ್ಯದ ರಸದೌತಣವನ್ನು ಉಣಬಡಿಸುವ ಧಾರಾವಾಣಿ ಎಂದುಕೊಳ್ಳುವುದು ಇದೆ. ಇದಾಗಲೇ ಈ ಸೀರಿಯಲ್​ ಸಂಪೂರ್ಣವಾಗಿ ಮುಗಿಯುವ ಹಂತಕ್ಕೆ ಬಂದಿದ್ದರೂ, ಇನ್ನೊಂದೇನೋ ಎಳೆ ತಂದು ಸೀರಿಯಲ್​ ಎಳೆಯುತ್ತಿರುವುದಕ್ಕೂ ಇದೇ ಕಾರಣ, ಇದು ಸೀರಿಯಲ್​ ವೀಕ್ಷಕರ ಪ್ರೀತಿ, ಟಿಆರ್​ಪಿಯ ಏರಿಕೆ. ಇದೀಗ ಸೀರಿಯಲ್​ನಲ್ಲಿ ಗೌತಮ್​ಗೆ ಮಗಳಿಂದಲೇ ಆಪತ್ತು ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಇದರಿಂದಾಗಿ, ಅದು ಯಾವ ಮಗಳು, ಮಿಸ್ಸಿಂಗ್​ ಆಗಿರೋ ಮಗಳೇ, ಇನ್ನೊಂದು ಮಗು ಹುಟ್ಟುತ್ತಾ... ಹೀಗೆ ಹಲವಾರು ರೀತಿಯಲ್ಲಿ ಸಸ್ಪೆನ್ಸ್ ಇಟ್ಟಿದ್ದಾರೆ ನಿರ್ದೇಶಕರು. ಆದ್ದರಿಂದ ಈ ಸೀರಿಯಲ್​ ಇನ್ನೊಂದು ವರ್ಷ ಎಳೆಯುವುದಂತೂ ಖಂಡಿತ.&lt;/p&gt;&lt;img&gt;&lt;p&gt;ಅದರ ನಡುವೆಯೇ, ಗೌತಮ್​ ತನ್ನ ಮೂಲ ಮನೆಯನ್ನು ಮತ್ತೆ ವಾಪಸ್​ ಪಡೆದಿದ್ದು, ಅದಕ್ಕೆ ಹೋಗಲು ಕುಟುಂಬ ಸಜ್ಜಾಗುತ್ತಿದೆ. ಮನೆಯಲ್ಲಿ ಪೂಜೆಗೆಂದು ಗೌತಮ್​ ಭೂಮಿಕಾಗೆ ಹೊಸ ಸೀರೆ ಕೊಡಿಸಿದ್ದರೆ, ಭೂಮಿಕಾ ಕೂಡ ಪತಿಗೆ ಹೊಸ ಡ್ರೆಸ್​​ ಕೊಡಿಸಿದ್ದಾಳೆ. ಆದರೆ ಇಲ್ಲಿ ಗಮನ ಸೆಳೆದಿದ್ದು ಭೂಮಿಕಾಗೆ ಗೌತಮ್​ ತೊಡಿಸಿದ ಗೆಜ್ಜೆ.&lt;/p&gt;&lt;img&gt;&lt;p&gt;ಈ ಗೆಜ್ಜೆಗೆ ಈಗ ಭಾರಿ ಡಿಮಾಂಡ್​ ಬಂದಿದೆ. ಅದಕ್ಕೆ ಕಾರಣ, ಗೌತಮ್​ ಪ್ರೀತಿಯಿಂದ ಭೂಮಿಕಾಗೆ ಅದನ್ನು ತೊಡಿಸಿದ್ದಾನೆ. ಇದನ್ನು ನೋಡಿ ವೀಕ್ಷಕರು ಪುಳಕಿತರಾಗಿದ್ದಾರೆ. ಅಷ್ಟಕ್ಕೂ ಬೇರೆ ಬೇರೆ ಸಂಪ್ರದಾಯದವರು ಗೆಜ್ಜೆಯನ್ನು ಧರಿಸುವುದು ಮಾಮೂಲಾಗಿದ್ದರೂ, ಹಿಂದೂ ಸಂಪ್ರದಾಯಕ್ಕೂ, ಗೆಜ್ಜೆಗೂ ತುಂಬಾ ಹತ್ತಿರ ನಂಟಿದೆ. ಅದರಲ್ಲಿಯೂ ಪತಿಯಾದವನು ಪತ್ನಿಯ ಕಾಲಿಗೆ ಖುದ್ದು ತೊಡಿಸಿದರೆ, ಅದಕ್ಕೂ ಒಂದು ಅರ್ಥವಿದೆ. ಅದೇ ಅರ್ಥದಲ್ಲಿಯೂ ಈ ಸೀರಿಯಲ್​ನಲ್ಲಿ ಗೌತಮ್, ಪತ್ನಿ​ ಕಾಲಿಗೆ ಗೆಜ್ಜೆ ತೊಡಿಸಿದ್ದಾನೆ.&lt;/p&gt;&lt;img&gt;&lt;p&gt;ಅನೇಕ ಸಂಪ್ರದಾಯಗಳಲ್ಲಿ, ವಿಶೇಷವಾಗಿ ಭಾರತೀಯ ಸಂಸ್ಕೃತಿಯಲ್ಲಿ, ಗಂಡನು ತನ್ನ ಹೆಂಡತಿಗೆ ಉಡುಗೊರೆಯಾಗಿ ನೀಡುವ ಗೆಜ್ಜೆ, ಗಮನಾರ್ಹವಾದ ಭಾವನಾತ್ಮಕ, ಸಾಂಪ್ರದಾಯಿಕ ಮತ್ತು ಜ್ಯೋತಿಷ್ಯ ಅರ್ಥವನ್ನು ಹೊಂದಿದೆ. ಇದನ್ನು ಹೆಚ್ಚಾಗಿ ವಿವಾಹಿತ ಮಹಿಳೆಯ 16 ಅಲಂಕಾರಗಳ (ಶೃಂಗಾರ) ಭಾಗವೆಂದು ಪರಿಗಣಿಸಲಾಗುತ್ತದೆ ಮತ್ತು ಪ್ರೀತಿ, ರಕ್ಷಣೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ಮಹತ್ವವೂ ಈ ರೀತಿ ಗೆಜ್ಜೆ ತೊಡಿಸುವುದಕ್ಕೆ ಇದೆ. ಬೆಳ್ಳಿಯ ಕಾಲ್ಗೆಜ್ಜೆಗಳು ಜ್ಯೋತಿಷ್ಯದಲ್ಲಿ ಚಂದ್ರನೊಂದಿಗೆ ಸಂಬಂಧ ಹೊಂದಿವೆ. ಅವುಗಳನ್ನು ಧರಿಸುವುದರಿಂದ ಭಾವನೆಗಳನ್ನು ಶಾಂತಗೊಳಿಸಬಹುದು, ಮಾನಸಿಕ ಸ್ಥಿರತೆಯನ್ನು ಸುಧಾರಿಸಬಹುದು ಮತ್ತು ವೈವಾಹಿಕ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಬಹುದು, ವಿಶೇಷವಾಗಿ ಹೆಂಡತಿಯ ಜಾತಕದಲ್ಲಿ ಚಂದ್ರ ದುರ್ಬಲವಾಗಿದ್ದರೆ, ಗಂಡನಾದವ ಹೀಗೆ ತೊಡಿಸಿದರೆ ಆ ದೋಷ ಹೋಗುತ್ತದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕಾಲ್ಗೆಜ್ಜೆಗಳ ಶಬ್ದವು ದುಷ್ಟಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಗಳನ್ನು ದೂರವಿಡುತ್ತದೆ ಎಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ, ಇದು ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಹೆಂಡತಿಗೆ ಉಡುಗೊರೆಯಾಗಿ ನೀಡುವುದು ಪ್ರೀತಿಯ ಸಂಕೇತವಾಗಿದೆ, ಅವಳನ್ನು ಗೌರವಿಸುತ್ತದೆ ಮತ್ತು ಜೀವಮಾನದ ಬದ್ಧತೆಯನ್ನು ದೃಢೀಕರಿಸುತ್ತದೆ. ಜ್ಯೋತಿಷ್ಯವನ್ನು ಮೀರಿ, ಬೆಳ್ಳಿಯ ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳು ರೋಗನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ ಮತ್ತು ಕಾಲುಗಳಲ್ಲಿ ನೋವು ಅಥವಾ ಮರಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/astrology/amruthadhaare-serial-gowtham-gifted-payal-to-bhoomika-astrological-importance-suc-z9lfa8i"/>
        </item>
        <item>
            <title><![CDATA[ಇನ್‌ಸ್ಟಾದಲ್ಲಿ ಗೆಳತಿಯೊಂದಿಗೆ ಚಾಟಿಂಗ್-‌ ಡೇಟಿಂಗ್‌ ಕರೆದಾಗ ಸತ್ಯ ಗೊತ್ತಾಗಿ ರೊಚ್ಚಿಗೆದ್ದ ಗಂಡ]]></title>
            <link>https://kannada.asianetnews.com/relationship/husband-meets-instagram-girlfriend-at-temple-only-to-find-his-own-wife-waiting-with-the-police/articleshow-zequrb4</link>
            <guid isPermaLink="true">https://kannada.asianetnews.com/relationship/husband-meets-instagram-girlfriend-at-temple-only-to-find-his-own-wife-waiting-with-the-police/articleshow-zequrb4</guid>
            <pubDate>Thu, 07 May 2026 15:10:59 +0530</pubDate>
            <description><![CDATA[&lt;p&gt;&lt;strong&gt;Instagram trap: &lt;/strong&gt;ಇಂದಿನ ಡಿಜಿಟಲ್ ಕಾಲದಲ್ಲಿ ನಂಬಿಕೆ ದ್ರೋಹ ಎಸಗುವವರಿಗೆ ತಂತ್ರಜ್ಞಾನವೇ ಹೇಗೆ ಮುಳುವಾಗಬಹುದು ಎಂಬುದಕ್ಕೆ ಈ ಘಟನೆ ಒಂದು ಅತ್ಯುತ್ತಮ ಉದಾಹರಣೆ. ಪ್ರೇಯಸಿಯನ್ನು ಭೇಟಿಯಾಗಲು ಮಂದಿರಕ್ಕೆ ಬಂದವನಿಗೆ ಅಲ್ಲಿ ತನ್ನ ಹೆಂಡತಿಯೇ ಎದುರಾದಾಗ ಆತ ಬೆಚ್ಚಿಬಿದ್ದ ಪ್ರಸಂಗ ಇಡೀ ದೇಶಾದ್ಯಂತ ಈಗ ಭಾರಿ ಸಂಚಲನ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0wnhve3pwqgz6ahhn1m396,imgname-thumbnail---2026-05-07t150240.335-1778146527086.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉ&lt;/strong&gt;ತ್ತರ ಪ್ರದೇಶದ ಪ್ರಯಾಗ್&zwnj;ರಾಜ್ ಜಿಲ್ಲೆಯ ದಾರಾಗಂಜ್ ಪ್ರದೇಶದಲ್ಲಿ ಇತ್ತೀಚೆಗೆ ಸಿನಿಮಾ ಕಥೆಯನ್ನೂ ಮೀರಿಸುವಂತಹ ಅತ್ಯಂತ ರೋಚಕ ಹಾಗೂ ವಿಶಿಷ್ಟ ಘಟನೆಯೊಂದು ನಡೆದಿದೆ. ಪರ ಸ್ತ್ರೀಯರ ವ್ಯಾಮೋಹದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯೇ ಹೂಡಿದ ಜಾಲದಲ್ಲಿ ಅರಿಯದೇ ಬಂದು ಸಿಲುಕಿ, ಈಗ ಪೊಲೀಸ್ ಅತಿಥಿಯಾಗಿ ಜೈಲು ಕಂಬಿ ಎಣಿಸುವಂತಾಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.&lt;/p&gt;&lt;h2&gt;&lt;strong&gt;ಮದುವೆಯಾದ ಕೆಲವೇ ದಿನಕ್ಕೆ ತನ್ನ ವರಸೆ ತೋರಿಸಿದ ಗಂಡ&lt;/strong&gt;&lt;/h2&gt;&lt;p&gt;ನವಾಬಗಂಜ್ ನಿವಾಸಿ ಸೋನಿ ತ್ರಿಪಾಠಿ ಮತ್ತು ಪ್ರತಾಪ್&zwnj;ಗಢದ ಕಿಸುನದಾಸ್ ಗ್ರಾಮದ ಪ್ರಭುದತ್ ತ್ರಿಪಾಠಿ ಅಲಿಯಾಸ್ ರಾಜಾ ಎಂಬುವವರಿಗೆ ಸುಮಾರು 9 ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ ಇವರ ಸಂಸಾರದಲ್ಲಿ ಆರಂಭದಿಂದಲೂ ಸುಖವಿರಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಪ್ರಭುದತ್ ವಿನಾಕಾರಣ ಗಲಾಟೆ ಮಾಡಿ ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದನು. ಕಳೆದ 5 ವರ್ಷಗಳಿಂದ ಸೋನಿ ತನ್ನ ಒಂದು ವರ್ಷದ ಮಗಳೊಂದಿಗೆ ತವರು ಮನೆಯಲ್ಲೇ ಅತ್ಯಂತ ಕಷ್ಟದಲ್ಲಿ ಆಶ್ರಯ ಪಡೆದಿದ್ದಳು. ಈ ಸುದೀರ್ಘ ಅವಧಿಯಲ್ಲಿ ಪತಿ ಒಮ್ಮೆಯೂ ಆಕೆಯ ಯೋಗಕ್ಷೇಮ ವಿಚಾರಿಸಿರಲಿಲ್ಲ ಅಥವಾ ಮಗುವಿನ ಕನಿಷ್ಠ ಜವಾಬ್ದಾರಿಯನ್ನೂ ಸಹ ನಿಭಾಯಿಸಿರಲಿಲ್ಲ.&lt;/p&gt;&lt;h2&gt;&lt;strong&gt;ಯಾರು ಆ 'ಹುಡುಗಿ'?&lt;/strong&gt;&lt;/h2&gt;&lt;p&gt;ತನ್ನನ್ನು ಮತ್ತು ಹಸುಗೂಸನ್ನು ನಿರ್ಲಕ್ಷಿಸಿ ಬೇರೆ ಹುಡುಗಿಯರ ಹಿಂದೆ ಅಲೆದಾಡುತ್ತಿದ್ದ ಪತಿಗೆ ಸರಿಯಾದ ಪಾಠ ಕಲಿಸಲು ಸೋನಿ ಒಂದು ಮಾಸ್ಟರ್ ಪ್ಲಾನ್ ರೂಪಿಸಿದಳು. ಆಕೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ತನ್ನ ಅಸ್ತಿತ್ವವನ್ನು ಸಂಪೂರ್ಣವಾಗಿ ಮರೆಮಾಚಿ ಒಂದು ಹೊಸ ಐಡಿಯನ್ನು ಸೃಷ್ಟಿಸಿ ತನ್ನ ಪತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದಳು. ತನ್ನ ಪತ್ನಿಯನ್ನೇ ಗುರುತಿಸಲಾಗದಷ್ಟು ಕಾಮ ಕುರುಡಾಗಿದ್ದ ಪ್ರಭುದತ್, ಆಕೆಯನ್ನು ಬೇರೆ ಯಾರೋ ಸುಂದರ ಹುಡುಗಿ ಎಂದು ಭಾವಿಸಿ ದಿನವಿಡೀ ನಿರಂತರವಾಗಿ ಚಾಟಿಂಗ್ ಮಾಡಲು ಆರಂಭಿಸಿದನು. ಇಬ್ಬರ ನಡುವೆ ಹಲವು ದಿನಗಳ ಕಾಲ ಪ್ರೇಮ ಸಲ್ಲಾಪದ ಸಂಭಾಷಣೆಗಳು ಸಾಗಿದವು. ತನ್ನ ಸಂಸಾರದ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಪತಿ, ಆ ಅಪರಿಚಿತ ಹುಡುಗಿಯನ್ನು ಹೇಗಾದರೂ ಮಾಡಿ ಒಮ್ಮೆಯಾದರೂ ಖುದ್ದಾಗಿ ಭೇಟಿಯಾಗಲೇಬೇಕೆಂದು ಹಠ ಹಿಡಿದನು.&lt;/p&gt;&lt;h2&gt;&lt;strong&gt;ಮಂದಿರದಲ್ಲಿ ಇದ್ದದ್ದು ಪ್ರೇಯಸಿಯಲ್ಲ!&lt;/strong&gt;&lt;/h2&gt;&lt;p&gt;ಪತಿಯ ಆಸೆಯಂತೆಯೇ ಮೇ 2 ರಂದು ದಾರಾಗಂಜ್&zwnj;ನ ನಾಗವಾಸುಕಿ ಮಂದಿರದಲ್ಲಿ ಭೇಟಿಯಾಗಲು ಸಮಯ ನಿಗದಿಪಡಿಸಲಾಯಿತು. ಪ್ರಭುದತ್ ತನ್ನ ಹೊಸ 'ಪ್ರೇಯಸಿ'ಯನ್ನು ಭೇಟಿಯಾಗುವ ಮಹದಾಸೆಯಿಂದ ಸಂಭ್ರಮದಿಂದ ಮಂದಿರಕ್ಕೆ ಬಂದನು. ಆದರೆ ಅಲ್ಲಿ ತನ್ನ ಎದುರಿಗೆ ನಗುತ್ತಾ ನಿಂತಿರುವ ಪತ್ನಿ ಸೋನಿಯನ್ನು ಕಂಡು ಆತನಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ತಾನು ಪತ್ನಿಯ ಕೈಗೆ ಸಿಕ್ಕಿಬಿದ್ದಿರುವುದು ಮತ್ತು ತನ್ನ ಬಣ್ಣ ಪೂರ್ಣವಾಗಿ ಬಯಲಾಗಿರುವುದು ತಿಳಿದಾಗ ಆತ ಮಂದಿರದಲ್ಲೇ ದೊಡ್ಡ ರಂಪಾಟ ಶುರುಮಾಡಿದನು. ಆತ ವಿವೇಚನೆ ಕಳೆದುಕೊಂಡು ಕೋಪದಿಂದ ಸೋನಿಯ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದನು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;&lt;strong&gt;ಅಂತಿಮವಾಗಿ ಜೈಲು ಪಾಲು&lt;/strong&gt;&lt;/h3&gt;&lt;p&gt;ಮಂದಿರದ ಆವರಣದಲ್ಲಿ ಗಲಾಟೆ ತೀವ್ರವಾಗುತ್ತಿದ್ದಂತೆ ಜನರು ಜಮಾಯಿಸಿದರು ಮತ್ತು ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಹಲ್ಲೆ ನಡೆಸುತ್ತಿದ್ದ ಪ್ರಭುದತ್&zwnj;ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಸೋನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಿವಿಧ ಗಂಭೀರ ಸೆಕ್ಷನ್&zwnj;ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ಪತಿಗೆ ಪಾಠ ಕಲಿಸಲು ಪತ್ನಿ ಸೋನಿ ನಡೆಸಿದ ಈ 'ಆಪರೇಷನ್ ಇನ್&zwnj;ಸ್ಟಾಗ್ರಾಮ್' ಈಗ ಇಡೀ ಉತ್ತರ ಪ್ರದೇಶದಲ್ಲಿ ಮತ್ತು ದೇಶಾದ್ಯಂತ ಭಾರಿ ಚರ್ಚೆಗೆ ಹಾಗೂ ಆಶ್ಚರ್ಯಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>relationship</category>
            <dc:creator>Ashwini HR</dc:creator>
            <atom:link href="https://kannada.asianetnews.com/relationship/husband-meets-instagram-girlfriend-at-temple-only-to-find-his-own-wife-waiting-with-the-police/articleshow-zequrb4"/>
        </item>
    </channel>
</rss>
