<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 30 Jul 2026 10:21:45 +0530</lastBuildDate>
        <atom:link href="https://kannada.asianetnews.com/rss/relationship" rel="self" type="application/rss+xml"/>
        <item>
            <title><![CDATA[ಅಪ್ಪ-ಅಮ್ಮನೇ ಹಿಂಗಾದ್ರೆ ವಿದೇಶದಲ್ಲಿರೋ ಮಕ್ಕಳ ಪಾಡೇನು? ತಿಂಗಳಿಗೆ 70 ಸಾವಿರ ಕಳಿಸಿದ್ರೂ ಸಾಲುತ್ತಿಲ್ಲ! 25 ಲಕ್ಷ ಕೇಳಿದ ಪೋಷಕರು]]></title>
            <link>https://kannada.asianetnews.com/relationship/canada-nri-son-monthly-rs-70000-sent-indian-parents-chit-fund-kameti-emotional-blackmail-viral-story/articleshow-20gmvg8</link>
            <guid isPermaLink="true">https://kannada.asianetnews.com/relationship/canada-nri-son-monthly-rs-70000-sent-indian-parents-chit-fund-kameti-emotional-blackmail-viral-story/articleshow-20gmvg8</guid>
            <pubDate>Sun, 26 Jul 2026 12:09:09 +0530</pubDate>
            <description><![CDATA[&lt;p&gt;ವಿದೇಶದಲ್ಲಿ ದುಡಿಯುವ ಮಗ ತಿಂಗಳಿಗೆ 70 ಸಾವಿರ ರೂ. ಹಣವನ್ನು ಕಳಿಸಿದರೂ ಅದು ಇಲ್ಲಿ ಜೀವನ ಮಾಡಲು ಸಾಕಾಗುತ್ತಿಲ್ಲ ಎಂದು ದೂರು ಹೇಳಿದ್ದಾರೆ. ಪೋಷಕರು ಮನೆ ಖರ್ಚಿಗೆ ಕಳಿಸಿದ ಹಣ ಚೀಟಿಗೆ ಹಾಕಿ, &amp;nbsp;25 ಲಕ್ಷ ವಾಪಸ್ ಕೇಳುತ್ತಿದ್ದಾರೆ! ಈ ಯುವಕನ ಕಥೆ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyehjmjdvttn4vxjnp6j9e8a,imgname-relationship-story-1785047110221.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿದೇಶದಲ್ಲಿ ಕೆಲಸ ಮಾಡಿ (Working abroad) ತಾಯ್ನಾಡಿನಲ್ಲಿರುವ ಮನೆಗೆ ದುಡ್ಡು ಕಳಿಸುವ ಎಷ್ಟೋ ಯುವಕರು ಇಂಥದ್ದೇ ಸಮಸ್ಯೆ ಫೇಸ್ ಮಾಡ್ತಾರೆ. ಆದರೆ, ಹೊರಗಡೆ ಹೇಳಿಕೊಳ್ಳಲಾಗದೆ ಒಳಗೆಯೇ ಕೊರಗುತ್ತಾರೆ. ಇದೀಗ ಕೆನಡಾದಲ್ಲಿ (Canada) ಕೆಲಸ ಮಾಡುವ 22 ವರ್ಷದ ಯುವಕನೊಬ್ಬ ಇದೇ ರೀತಿಯ ಸಂಕಷ್ಟಕ್ಕೆ ಸಿಲುಕಿ, ಸಲಹೆ ಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾನೆ. ತನ್ನ ಕುಟುಂಬಕ್ಕೆ ತಾನೇ ಏಕೈಕ ಆದಾಯದ ಮೂಲವಾಗಿದ್ದು (Sole breadwinner), ಪ್ರತಿ ತಿಂಗಳು ಭಾರಿ ಮೊತ್ತವನ್ನು ಮನೆಗೆ ಕಳಿಸಿದರೂ ಪೋಷಕರ ಹಣಕಾಸಿನ ಶಿಸ್ತು ಇಲ್ಲದ ವರ್ತನೆಯಿಂದ (Financial indiscipline) ಆತ ರೋಸಿಹೋಗಿದ್ದಾನೆ.&lt;/p&gt;&lt;h2&gt;&lt;strong&gt;70 ಸಾವಿರದಲ್ಲಿ 50 ಸಾವಿರ 'ಚಿಟ್ ಫಂಡ್ಸ್&zwnj;' ಪಾಲು!&lt;/strong&gt;&lt;/h2&gt;&lt;p&gt;ಈ ಯುವಕ ಭಾರತದಲ್ಲಿರುವ ತನ್ನ ಕುಟುಂಬಕ್ಕೆ (ಅಪ್ಪ, ಅಮ್ಮ ಮತ್ತು ತಂಗಿ) ಪ್ರತಿ ತಿಂಗಳು ಬರೋಬ್ಬರಿ 70,000 ರೂ. ಮನೆಗೆ ಕಳಿಸುತ್ತಿದ್ದಾನೆ. ಭಾರತದಲ್ಲಿ ಮೂರರಿಂದ ಐದು ಜನರ ಒಂದು ಕುಟುಂಬಕ್ಕೆ ಆತ ಕಳಿಸುವ ದುಡ್ಡು ಧಾರಾಳವಾಗಿ ಸಾಕಾಗುತ್ತೆ. ಆದರೆ, ಆತನ ಪೋಷಕರು ಈ ಹಣದ ಬಹುಪಾಲು ಮೊತ್ತವನ್ನು ಚಿಟ್ ಫಂಡ್ಸ್&zwnj; (Chit funds / Kameti) ಅಥವಾ ಇತರೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.&lt;/p&gt;&lt;p&gt;'ನನ್ನ ತಾಯಿ ₹25,000 ಮತ್ತು ತಂದೆ ₹25,000 ಚಿಟ್&zwnj; ಫಂಡ್&zwnj;ಗೆ ಹಣ ಕಟ್ಟುತ್ತಾರೆ. ಇದನ್ನ ಅವರು ಒಂದು ಕಡ್ಡಾಯ ಉಳಿತಾಯ (Forced savings) ಅಂದುಕೊಂಡಿದ್ದಾರೆ. ಆದರೆ, ಇದರಿಂದ ಒಂದು ವರ್ಷದವರೆಗೆ ಅವರ ಹಣ ಲಾಕ್ ಆಗುತ್ತೆ. ನಾನು ಕಳಿಸೋ ₹70,000 ರೂಪಾಯಿಯಲ್ಲಿ ₹50,000 ಹೀಗೆ ತೆಗೆದಿಟ್ಟರೆ, ದಿನಸಿ, ಕರೆಂಟ್ ಬಿಲ್, ತಂಗಿಯ ಸ್ಕೂಲ್ ಅಡ್ಮಿಷನ್ ಫೀಸ್ ಸೇರಿದಂತೆ ಇಡೀ ಮನೆ ಖರ್ಚಿಗೆ ಕೇವಲ ₹20,000 ರೂಪಾಯಿ ಮಾತ್ರ ಉಳಿಯುತ್ತೆ. ಈ ಹಣದಲ್ಲಿ ಜೀವನ ನಡೆಸೋಕೆ ಸಾಧ್ಯವಾಗುತ್ತಿಲ್ಲ' ಎಂದು ನೆರೆಹೊರೆಯಬರು ಹಾಗೂ ಸಂಬಂಧಿಕರ ಮುಂದೆ ಅಳಲು ತೋಡಿಕೊಂಡು ನನ್ನನ್ನ ಕೆಟ್ಟವನಂತೆ ಬಿಂಬಿಸುತ್ತಿದ್ದಾರೆ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.&lt;/p&gt;&lt;h2&gt;&lt;strong&gt;ಮಗನಿಗೆ ಹೆಚ್ಚುವರಿ ಹಣದ ಡಿಮ್ಯಾಂಡ್&lt;/strong&gt;&lt;/h2&gt;&lt;p&gt;ಮನೆ ಖರ್ಚಿಗೆ ದುಡ್ಡು ಸಾಲಲ್ಲ ಅಂತ ಪೋಷಕರು ಪದೇ ಪದೇ ದೂರಿದಾಗ, ಯುವಕ ಅನಿವಾರ್ಯವಾಗಿ ಹೆಚ್ಚು ಹಣ ಕಳಿಸಬೇಕಾಗಿ ಬರುತ್ತಿದೆ. ಇದು ವಿದೇಶದಲ್ಲಿರುವ ಅವನಿಗೆ ಆರ್ಥಿಕವಾಗಿ ದೊಡ್ಡ ಹೊಡೆತ (Financial burden) ನೀಡುತ್ತಿದೆ. 'ಹೀಗೆ ದೂರು ಹೇಳಿ ಹೇಳಿ, ಇತ್ತೀಚೆಗೆ ಪ್ರತಿ ತಿಂಗಳು ಕಳಿಸೋ ₹70,000 ಜೊತೆಗೆ ಹೆಚ್ಚುವರಿಯಾಗಿ ₹25,000 ಕಳಿಸಬೇಕಾಯ್ತು. ಇದು ಕೆನಡಾದಲ್ಲಿನ ನನ್ನ ಸ್ವಂತ ಬಜೆಟ್&zwnj; (Personal budget) ಅನ್ನೇ ಹಾಳು ಮಾಡಿದೆ' ಅಂತ ಯುವಕ ಬೇಸರ ವ್ಯಕ್ತಪಡಿಸಿದ್ದಾನೆ.&lt;/p&gt;&lt;h2&gt;&lt;strong&gt;ನನ್ನ 25 ಲಕ್ಷ ವಾಪಸ್ ಕೊಡು ಎಂದ ಪೋಷಕರು!&lt;/strong&gt;&lt;/h2&gt;&lt;p&gt;ಮನೆಯ ಮೂಲ ಅಗತ್ಯಗಳಿಗೇ ದುಡ್ಡಿಲ್ಲದಿದ್ದಾಗ ಈ ರೀತಿ ಚಿಟ್&zwnj; ಫಂಡ್&zwnj;ಗಳಿಗೆ ಸೇರಬೇಡಿ ಅಂತ ಯುವಕ ಹೇಳಿದರೂ ಪೋಷಕರು ಕೇಳೋಕೆ ತಯಾರಿಲ್ಲ. 'ನನ್ನ ಸ್ವಂತ ಜೀವನವನ್ನೇ ಬದಿಗಿಟ್ಟು, ಪೋಷಕರಿಗೆ ಹೀಗೆ ಹಣ ಸಂಪಾದಿಸಿ ಕೊಡೋಕೆಂದೇ ಕೆನಡಾದಲ್ಲಿ ಕೆಲಸ ಮಾಡ್ತಿದ್ದೀನಿ. ನನಗೆ ಈಗಲೇ ಸುಸ್ತಾಗಿದೆ (Completely burnt out)' ಅಂತ ಯುವಕ ಹೇಳಿದ್ದಾನೆ.&lt;/p&gt;&lt;p&gt;ಪೋಷಕರಿಗೆ ಸಹಾಯ ಮಾಡೋಕೆ ಆತ ಹಿಂದೇಟು ಹಾಕಿಲ್ಲ, ಆದರೆ ಪ್ರತಿ ತಿಂಗಳು ಇಷ್ಟೊಂದು ಹಣ ಕಳಿಸಿದರೂ ಚೀಟಿಗೆ ಕಟ್ಟಲು ಹಣ ಸಾಲುತ್ತಿಲ್ಲ ಎನ್ನುತ್ತಿದ್ದಾರೆ. ಮಗ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, 'ಹಾಗಾದರೆ, ನಿನ್ನ ಓದಿಗೆ ಹಾಗೂ ಕೆನಡಾಗೆ ಕಳುಹಿಸಲು ನಾವು ಖರ್ಚು ಮಾಡಿದ 25 ಲಕ್ಷ ರೂ.ಗಳನ್ನು (25 Lakhs) ಈಗಲೇ ವಾಪಸ್ ಕೊಡು' ಎಂದು ಪೋಷಕರು ಎಮೋಷನಲ್ ಬ್ಲಾಕ್&zwnj;ಮೇಲ್ (Emotional blackmail) ಮಾಡಲು ಶುರು ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;I&rsquo;m 22 y.o male in Canada and supporting my family in India, but I feel like I&rsquo;m just funding their kametis (those chit-funds) Need advice/vent.by u/Ok-Being1322 in personalfinanceindia&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ನೆಟ್ಟಿಗರ ಬೆಂಬಲ&lt;/strong&gt;&lt;/h2&gt;&lt;p&gt;ಈ ಪೋಸ್ಟ್&zwnj;ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಯುವಕನ ಪರ ನಿಂತಿದ್ದಾರೆ. 'ಪೋಷಕರ ಜೊತೆ ಮುಕ್ತವಾಗಿ ಮಾತನಾಡು. ಇದುವರೆಗೆ ಕಳಿಸಿದ ಹಣವನ್ನು ಲೆಕ್ಕ ಹಾಕಿ, ಅದನ್ನೇ ಅವರು ಕೇಳುತ್ತಿರುವ 25 ಲಕ್ಷಕ್ಕೆ ಇಎಂಐ (EMI) ರೂಪದಲ್ಲಿ ಜಮಾ ಮಾಡಿಕೊಳ್ಳಿ ಎಂದು ಹೇಳು. ಪೋಷಕರೇ ಆಗಿದ್ದರೂ, ಹಣಕಾಸಿನ ವಿಚಾರದಲ್ಲಿ ಒಂದು ಗಡಿ (Financial boundaries) ಇರಲೇಬೇಕು' ಎಂದು ಹಲವರು ಕಮೆಂಟ್ ಮೂಲಕ ಸೂಕ್ತ ಸಲಹೆಗಳನ್ನು ನೀಡಿದ್ದಾರೆ.&lt;/p&gt;&lt;p&gt;ಮಗನ ಭವಿಷ್ಯದ ಬಗ್ಗೆ ಯೋಚಿಸದೆ ಕೇವಲ 'ಚಿಟ್ ಫಂಡ್' ಹಿಂದೆ ಬಿದ್ದಿರುವ ಪೋಷಕರ ಈ ವರ್ತನೆ ಸರಿನಾ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ.&lt;/p&gt;]]></content:encoded>
            <category>relationship</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/canada-nri-son-monthly-rs-70000-sent-indian-parents-chit-fund-kameti-emotional-blackmail-viral-story/articleshow-20gmvg8"/>
        </item>
        <item>
            <title><![CDATA[ಪ್ರತಿಭಟನೆ ಅಂತ ದೆಹಲಿಗೆ ಹೋದ ವಿದ್ಯಾರ್ಥಿ ಮದುವೆ ಮಾಡ್ಕೊಂಡು ಮನೆಗೆ ಬಂದ ! ಜಂತರ್‌ಮಂತರ್‌ನಲ್ಲಿ ಅರಳಿದ ಪ್ರೀತಿ]]></title>
            <link>https://kannada.asianetnews.com/relationship/bihar-student-finds-love-at-jantar-mantar-protest-marries-fellow-protester/articleshow-28v2iag</link>
            <guid isPermaLink="true">https://kannada.asianetnews.com/relationship/bihar-student-finds-love-at-jantar-mantar-protest-marries-fellow-protester/articleshow-28v2iag</guid>
            <pubDate>Tue, 28 Jul 2026 12:48:51 +0530</pubDate>
            <description><![CDATA[&lt;p&gt;ಜಂತರ್ ಮಂತರ್&zwnj; ನಲ್ಲಿ ನಡೆದ ನೀಟ್&zwnj; ಪ್ರತಿಭಟನೆ ವೇಳೆ ಬರೀ ಪ್ರತಿಭಟನೆ ಅಲ್ಲ ಅನೇಕ ವಿಷ್ಯಗಳು ಕಾಣಸಿಕ್ಕಿವೆ. ಅಲ್ಲಿಯೇ ಪ್ರೀತಿಗೆ ಬಿದ್ದು ಮದುವೆಯಾದ ಜೋಡಿಯೊಂದು ಈಗ ಎಲ್ಲರ ಗಮನ ಸೆಳೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyks98hawstpx3hcjef72wca,imgname-protest-marriage-1785222963754.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಒಬ್ಬರ ಬದುಕು ಅನಿರೀಕ್ಷಿತ ತಿರುವು ಕಂಡಿದೆ. ವಿದ್ಯಾರ್ಥಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವತಿ ಮೇಲೆ ಪ್ರೀತಿ ಚಿಗುರಿದ್ದು, ಇಬ್ಬರೂ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಅವರಿಬ್ಬರ ವಿಡಿಯೋ ಈಗ ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗಿದೆ.&lt;/p&gt;&lt;h2&gt;ಪ್ರತಿಭಟನೆಗೆ ಬಂದ ಹುಡುಗಿ ಮೇಲೆ ಪ್ರೀತಿ&lt;/h2&gt;&lt;p&gt;ವರದಿಗಳ ಪ್ರಕಾರ, ಬಿಹಾರ ಮೂಲದ ವಿದ್ಯಾರ್ಥಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಯ ಜಂತರ್ ಮಂತರ್ಗೆ ಬಂದಿದ್ದರು. ಪ್ರತಿಭಟನೆ ಸುಮಾರು 15 ದಿನಗಳ ಕಾಲ ನಡೆದಿದೆ. ವಿದ್ಯಾರ್ಥಿ ಹೇಳಿಕೆ ಪ್ರಕಾರ, ಪೊಲೀಸರ ಏಟಿಗೆ ವಿದ್ಯಾರ್ಥಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದ. ಈ ಸಂದರ್ಭದಲ್ಲಿ ಹುಡುಗಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಿದ್ದಲ್ಲದೆ, ವಿದ್ಯಾರ್ಥಿ ಆರೈಕೆ ಮಾಡಿದ್ದಾಳೆ. ಆಹಾರ ತಂದುಕೊಡುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಬೆಂಬಲ ನೀಡಿದ್ದಾಳೆ. ಇದು ಇಬ್ಬರನ್ನು ಇನ್ನಷ್ಟು ಹತ್ತಿರ ಮಾಡಿದೆ. ಆತ್ಮೀಯತೆ ಪ್ರೀತಿಗೆ ತಿರುಗಿದೆ.&lt;/p&gt;&lt;p&gt;ಕೊನೆಯಲ್ಲಿ ವಿದ್ಯಾರ್ಥಿನಿ ತನ್ನ ಮನಸ್ಸಿನ ಭಾವನೆ ಹಂಚಿಕೊಂಡಿದ್ದಾಳೆ. ವಿದ್ಯಾರ್ಥಿಯನ್ನು ಬಿಟ್ಟಿರೋಕೆ ಸಾಧ್ಯವಿಲ್ಲ ಅಂತ ಹುಡುಗಿ ಹೇಳಿದ್ದಾಳೆ. ಮೊದಲೇ ಪ್ರೀತಿಗೆ ಬಿದ್ದಿದ್ದ ವಿದ್ಯಾರ್ಥಿ ತಮ್ಮ ಭಾವನೆಯನ್ನೂ ಹೇಳಿಕೊಂಡಿದ್ದಾನೆ. ನಂತರ ಇಬ್ಬರೂ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಬಳಿಕ ಬಿಹಾರಕ್ಕೆ ಮರಳಿದ್ದಾರೆ .&lt;/p&gt;&lt;p&gt;ಈ ವಿಡಿಯೋ ಸೋಶಿಯಲ್&zwnj; ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವರು ಇದನ್ನು ಬಾಲಿವುಡ್ ಸಿನಿಮಾಗಳಿಗೆ ಹೋಲಿಸಿ ಹಾಸ್ಯಮಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಪ್ರೊಟೆಸ್ಟ್ ನೇ ಬನಾ ದಿ ಜೋಡಿ, ಪ್ರೊಟೆಸ್ಟ್: ಏಕ್ ಪ್ರೇಮ್ ಕಥಾ, ಧರ್ಮೇಂದ್ರನೇ ಜೋಡಿ ಮಾಡಿಸಿದ್ರು ಎಂಬಂತಹ ಪ್ರತಿಕ್ರಿಯೆಗಳು ವೈರಲ್ ಆಗಿವೆ. ಇನ್ನೂ ಕೆಲವರು ಪ್ರತಿಭಟನೆಯನ್ನೂ ಗೆದ್ದರು, ಪ್ರೀತಿಯೂ ಸಿಕ್ಕಿತು ಅಂತ ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;https://kannada.asianetnews.com/news-entertainment/cricketer-arshdeep-singh-introduces-samreen-kaur-as-my-person-and-here-is-everything-to-know-about-their-love-story/articleshow-shihx9k&lt;/p&gt;&lt;p&gt;ಬರೀ ಪ್ರತಿಭಟನೆಯಲ್ಲಿ ನೋಡಿ, ಮಾತನಾಡಿ, ಪ್ರೀತಿ ಮಾಡಿ, ಮದುವೆ ಆಗೋಕೆ ಸಾಧ್ಯವಾ? ಇವರಿಬ್ಬರಿಗೂ ಮೊದಲೇ ಪರಿಚಯ ಇತ್ತಾ? ಪ್ರತಿಭಟನೆ ಮದುವೆ ಆಗಲು ನೆಪವಾ ಎಂಬ ಪ್ರಶ್ನೆಗಳು ಈಗ ಬಳಕೆದಾರರಿಗೆ ಶುರುವಾಗಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by India Tales | News | Memes | Culture (@thetalesindia)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Roopa Hegde</dc:creator>
            <atom:link href="https://kannada.asianetnews.com/relationship/bihar-student-finds-love-at-jantar-mantar-protest-marries-fellow-protester/articleshow-28v2iag"/>
        </item>
        <item>
            <title><![CDATA[Viral News: ಬರೋಬ್ಬರಿ 9 ವರ್ಷ ಕಿರಿಯ ಸ್ಟಾರ್ ಕ್ರಿಕೆಟರ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್? ವೈರಲ್‌ ವಿಡಿಯೋ ಅಸಲಿಯತ್ತೇನು?]]></title>
            <link>https://kannada.asianetnews.com/entertainment/the-news-that-a-romance-has-started-between-actress-mrunal-thakur-and-cricketer-yashasvi-jaiswal-is-going-viral/articleshow-5nhn1ds</link>
            <guid isPermaLink="true">https://kannada.asianetnews.com/entertainment/the-news-that-a-romance-has-started-between-actress-mrunal-thakur-and-cricketer-yashasvi-jaiswal-is-going-viral/articleshow-5nhn1ds</guid>
            <pubDate>Tue, 28 Jul 2026 11:40:23 +0530</pubDate>
            <description><![CDATA[&lt;p&gt;&quot;ಒಂದೇ ಕೆಫೆಗೆ ಯಾಕೆ ಹೋದರು? ಇಬ್ಬರೂ ಸೀಕ್ರೆಟ್ ಆಗಿ ಮೀಟ್ ಮಾಡಿದ್ದಾರಾ?&quot; ಎಂದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಈ ಹಿಂದೆ ಮೃಣಾಲ್ ಹೆಸರು ತಮಿಳು ನಟ ಧನುಷ್ ಜೊತೆಯೂ ಕೇಳಿಬಂದಿತ್ತು. ಆದರೆ ಈಗ ಜೈಸ್ವಾಲ್! ಏನಿದು ಹೊಸ ಲವ್ ಸ್ಟೋರಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyknc57jpf27677d9rnmszmj,imgname-yashasvi-jaiswal-mrunal-thakur-1785218864370.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಲಿವುಡ್ ಬ್ಯೂಟಿ &amp;amp; ಕ್ರಿಕೆಟ್ ಕಲಿ: ಮೃಣಾಲ್-ಜೈಸ್ವಾಲ್ ನಡುವೆ ಶುರುವಾಯ್ತಾ 'ಲವ್ವೋ ಲವ್ವು'? ವೈರಲ್ ವಿಡಿಯೋ ಹಿಂದೆ ಅಡಗಿದ ರಹಸ್ಯವೇನು?&lt;/strong&gt;&lt;/p&gt;&lt;p&gt;ಮುಂಬೈ: ಸಿನಿಮಾ ಮತ್ತು ಕ್ರಿಕೆಟ್... ಭಾರತದಲ್ಲಿ ಈ ಎರಡೂ ಕ್ಷೇತ್ರಗಳಿಗೂ ಅವಿನಾಭಾವ ಸಂಬಂಧ. ನಟಿಯರು ಮತ್ತು ಕ್ರಿಕೆಟಿಗರು ಪ್ರೀತಿಯ ಬಲೆಯಲ್ಲಿ ಬೀಳುವುದು ಇಂದು ನಿನ್ನೆಯ ಸುದ್ದಿಯಲ್ಲ. ಶರ್ಮಿಳಾ ಟಾಗೋರ್-ಪಟೌಡಿ ಕಾಲದಿಂದ ಹಿಡಿದು ಇತ್ತೀಚಿನ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿಯವರೆಗೆ ಈ 'ಪಿಚ್' ಸದಾ ರಂಗೇರಿರುತ್ತದೆ. ಈಗ ಇದೇ ಹಾದಿಯಲ್ಲಿ ಮತ್ತೊಂದು ಹೊಸ ಜೋಡಿಯ ಹೆಸರು ಜೋರಾಗಿ ಕೇಳಿಬರುತ್ತಿದೆ. ಅದುವೇ ಬಾಲಿವುಡ್&zwnj;ನ &lsquo;ಸೀತಾ ರಾಮಂ&rsquo; ಖ್ಯಾತಿಯ ಮೃಣಾಲ್ ಠಾಕೂರ್ ಮತ್ತು ಟೀಮ್ ಇಂಡಿಯಾದ ಉದಯೋನ್ಮುಖ ಸ್ಟಾರ್ ಯಶಸ್ವಿ ಜೈಸ್ವಾಲ್! ಈ ಕಥೆ ಹುಟ್ಟಿಕೊಂಡಿದ್ದು ಎಲ್ಲಿ? ಇದೆಂಥಾ ಸ್ಟೋರಿ ನೋಡಿ...&lt;/p&gt;&lt;p&gt;ಬಾಂದ್ರಾ ಕೆಫೆಯಲ್ಲಿ ಏನಾಯ್ತು?&lt;/p&gt;&lt;p&gt;ಮುಂಬೈನ ಪ್ರತಿಷ್ಠಿತ ಬಾಂದ್ರಾ ವೆಸ್ಟ್&zwnj;ನಲ್ಲಿರುವ &lsquo;ಬೂಜೀ ಕೆಫೆ&rsquo; ಈಗ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಈ ಕೆಫೆಯ ಹೊರಗೆ ಸೆರೆಹಿಡಿಯಲಾದ ಒಂದು ಪುಟ್ಟ ವಿಡಿಯೋ ಈಗ ಇಂಟರ್ನೆಟ್&zwnj;ನಲ್ಲಿ ಕಿಚ್ಚು ಹಚ್ಚಿದೆ. ವಿಡಿಯೋದಲ್ಲಿ ಏನಿದೆ ಅಂದುಕೊಂಡಿದ್ದೀರಾ? ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಕೆಫೆಯಿಂದ ಹೊರಬರುತ್ತಿದ್ದರೆ, ಒಳಗಡೆ ಮೃಣಾಲ್ ಠಾಕೂರ್ ಇರುವುದು ಕಂಡುಬಂದಿದೆ. ಅಷ್ಟೇ ಅಲ್ಲ, ಇಬ್ಬರೂ ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿದ್ದುದು ನೆಟ್ಟಿಗರ ಕಣ್ಣು ಕೆಂಪು ಮಾಡಿದೆ. &quot;ಏನೋ ನಡೀತಿದೆ ಗುರು!&quot; ಎಂಬ ಮಾತುಗಳು ಅಂದೇ ಶುರುವಾಗಿಬಿಟ್ಟವು.&lt;/p&gt;&lt;h2&gt;9 ವರ್ಷದ ಅಂತರ; ಆದರೇನು ಬಂತು ಲವ್ವಿಗಿಲ್ಲ ಅಂತರ!&lt;/h2&gt;&lt;p&gt;ಈ ಜೋಡಿಯ ಬಗ್ಗೆ ಚರ್ಚೆ ಶುರುವಾಗುತ್ತಿದ್ದಂತೆ ನೆಟ್ಟಿಗರು ಇಬ್ಬರ ಕುಂಡಲಿ ಕೆದಕಲು ಶುರು ಮಾಡಿದ್ದಾರೆ. ಮೃಣಾಲ್ ಠಾಕೂರ್ (Mrunal Thakur) ಅವರಿಗೆ ಈಗ 33 ವರ್ಷ, ಇತ್ತ ಯಶಸ್ವಿ ಜೈಸ್ವಾಲ್ (Yashasvi Jaiswal) ಇನ್ನು 24ರ ಹರೆಯದ ಹದಿಹರೆಯದ ಕಿಚ್ಚು! ಈ 9 ವರ್ಷದ ವಯಸ್ಸಿನ ಅಂತರವನ್ನು ನೋಡಿ ಅನೇಕರು ಹುಬ್ಬೇರಿಸಿದ್ದಾರೆ. &quot;ಪ್ರೀತಿಗೆ ವಯಸ್ಸಿನ ಹಂಗಿಲ್ಲ&quot; ಎಂದು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು &quot;ಇದು ಕೇವಲ ಕಾಕತಾಳೀಯ ಇರಬಹುದು&quot; ಎಂದು ವಾದಿಸುತ್ತಿದ್ದಾರೆ.&lt;/p&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ 'ಸಿಬಿಐ' ತನಿಖೆ!&lt;/p&gt;&lt;p&gt;ವಿಡಿಯೋದಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಕಾಫಿ ಕುಡಿಯುತ್ತಿರುವುದು ಅಥವಾ ಹರಟೆ ಹೊಡೆಯುತ್ತಿರುವುದು ಎಲ್ಲಿಯೂ ಕಾಣಿಸಿಲ್ಲ. ಜೈಸ್ವಾಲ್ ಗಂಭೀರವಾಗಿ ಹೊರಬರುತ್ತಿದ್ದರೆ, ಮೃಣಾಲ್ ಒಳಗಿದ್ದರು. ಆದರೂ ಬಿಡದ ನೆಟ್ಟಿಗರು, &quot;ಒಂದೇ ಕೆಫೆಗೆ ಯಾಕೆ ಹೋದರು? ಇಬ್ಬರೂ ಸೀಕ್ರೆಟ್ ಆಗಿ ಮೀಟ್ ಮಾಡಿದ್ದಾರಾ?&quot; ಎಂದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಈ ಹಿಂದೆ ಮೃಣಾಲ್ ಹೆಸರು ತಮಿಳು ನಟ ಧನುಷ್ ಜೊತೆಯೂ ಕೇಳಿಬಂದಿತ್ತು. ಆದರೆ ಈಗ ಜೈಸ್ವಾಲ್ ಎಂಟ್ರಿ ಕೊಟ್ಟ ತಕ್ಷಣ ಹಳೆಯ ಸುದ್ದಿಗಳೆಲ್ಲಾ ಮರೆಯಾಗಿವೆ.&lt;/p&gt;&lt;h3&gt;ಯಶಸ್ವಿ-ಮೃಣಾಲ್ ಮೌನವೇಕೆ?&lt;/h3&gt;&lt;p&gt;ಈ ವೈರಲ್ ವಿಡಿಯೋ ಮತ್ತು ಹಬ್ಬುತ್ತಿರುವ ವದಂತಿಗಳ ಬಗ್ಗೆ ಮೃಣಾಲ್ ಆಗಲಿ ಅಥವಾ ಯಶಸ್ವಿ ಆಗಲಿ ತುಟಿಪಿಟಕ್ ಎಂದಿಲ್ಲ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಇಂತಹ ಸುದ್ದಿಗಳು ಹುಟ್ಟಿಕೊಳ್ಳುವುದು ಸಹಜ. ಬಹುಶಃ ಇಬ್ಬರೂ ಕೇವಲ ಸ್ನೇಹಿತರಾಗಿರಬಹುದು ಅಥವಾ ಕೆಲಸದ ನಿಮಿತ್ತ ಅಲ್ಲಿ ಭೇಟಿಯಾಗಿರಬಹುದು. ಆದರೆ, ಫ್ಯಾನ್ಸ್ ಮಾತ್ರ ಈಗಾಗಲೇ ಇವರಿಬ್ಬರಿಗೂ ಒಂದು ಹೆಸರು ಇಟ್ಟು, &quot;ಹೊಸ ಜೋಡಿ&quot; ಎಂದು ಹಣೆಪಟ್ಟಿ ಹಚ್ಚಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಈ ಬಾಲಿವುಡ್ ಸುಂದರಿ ಮತ್ತು ಕ್ರಿಕೆಟ್ ಲೋಕದ 'ಯಶಸ್ವಿ' ಹುಡುಗನ ನಡುವೆ ನಿಜವಾಗಿಯೂ ಏನಾದರೂ ನಡೆಯುತ್ತಿದೆಯೇ? ಅಥವಾ ಇದು ಕೇವಲ ಸಾಮಾಜಿಕ ಜಾಲತಾಣಗಳ 'ಟೀ ಕಪ್'ನಲ್ಲಿನ ಬಿರುಗಾಳಿಯೇ? ಎಂಬುದನ್ನು ಕಾಲವೇ ಉತ್ತರಿಸಬೇಕು. ಅಲ್ಲಿಯವರೆಗೆ ಈ 'ಕಾಫಿ ಡೇಟ್' ಸುದ್ದಿ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಸೃಷ್ಟಿಸುತ್ತಲೇ ಇರುತ್ತದೆ!&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/the-news-that-a-romance-has-started-between-actress-mrunal-thakur-and-cricketer-yashasvi-jaiswal-is-going-viral/articleshow-5nhn1ds"/>
        </item>
        <item>
            <title><![CDATA[ಮದುವೆಯಾಗಿ ನಾಲ್ಕೇ ತಿಂಗಳು, ಖ್ಯಾತ ಗಾಯಕನ ಬಂಡವಾಳ ಬಯಲು ಮಾಡಿದ ಪತ್ನಿ]]></title>
            <link>https://kannada.asianetnews.com/relationship/badshah-wife-isha-rikhi-posts-cryptic-note-amid-divorce-buzz-felt-overwhelmed-by-the-power-my-husband-had-suh/articleshow-62opg8z</link>
            <guid isPermaLink="true">https://kannada.asianetnews.com/relationship/badshah-wife-isha-rikhi-posts-cryptic-note-amid-divorce-buzz-felt-overwhelmed-by-the-power-my-husband-had-suh/articleshow-62opg8z</guid>
            <pubDate>Wed, 29 Jul 2026 16:25:55 +0530</pubDate>
            <description><![CDATA[&lt;p&gt;Badshah wife Isha rikhi post ಎಲ್ಲವೂ ಸರಿಯಾಗಿದೆ ಎಂದು ನಟಿಸುವುದನ್ನು ನಿಲ್ಲಿಸಲು ಸಿದ್ಧ ಎಂದ ರ&zwj;್ಯಾಪರ್ ಬಾದ್&zwnj;ಶಾ ಪತ್ನಿ; ಇಶಾ ರಿಖಿ ಅವರ ಕ್ರಿಪ್ಟಿಕ್ ಪೋಸ್ಟ್&zwnj;ನಿಂದ ವಿಚ್ಛೇದನದ ವದಂತಿ ಮತ್ತಷ್ಟು ಜೋರು!&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypr72pdvjy816erdsnr8hnz,imgname-badshah-wife-isha-rikhi-posts-cryptic-note-amid-divorce-buzz-felt-overwhelmed-by-the-power-my-husband-had-1785322506957.jpg" type="image/jpeg" height="390" width="690"/>
            <content:encoded><![CDATA[&lt;p&gt;ಜನಪ್ರಿಯ ಗಾಯಕ ಹಾಗೂ ರ&zwj;್ಯಾಪರ್ ಬಾದ್&zwnj;ಶಾ ಅವರ ವೈಯಕ್ತಿಕ ಜೀವನ ಇದೀಗ ಮತ್ತೆ ಸುದ್ದಿಯಲ್ಲಿದೆ. ಬಾದ್&zwnj;ಶಾ ಅವರ ಪತ್ನಿ ಹಾಗೂ ನಟಿ ಇಶಾ ರಿಖಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಬಾದ್&zwnj;ಶಾ ಅವರೊಂದಿಗೆ ಇಶಾ ರಿಖಿ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ಇಬ್ಬರೂ ವಿಚ್ಛೇದನದತ್ತ ಸಾಗುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಇದೀಗ ಅಭಿಮಾನಿಗಳಲ್ಲಿ ಮೂಡಿವೆ. ಇದಕ್ಕೆ ಕಾರಣ ಇಶಾ ಹಂಚಿಕೊಂಡಿರುವ ಪೋಸ್ಟ್&zwnj;ನಲ್ಲಿನ ಕೆಲವು ಸಾಲುಗಳು. ಆದರೆ, ಇಶಾ ತಮ್ಮ ಪೋಸ್ಟ್&zwnj;ನಲ್ಲಿ ಬಾದ್&zwnj;ಶಾ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಹೀಗಾಗಿ ಅವರ ಪೋಸ್ಟ್ ನಿಜವಾಗಿಯೂ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ್ದೇ ಎಂಬುದು ಅಧಿಕೃತವಾಗಿ ಖಚಿತವಾಗಿಲ್ಲ.&lt;/p&gt;&lt;h2&gt;ನನ್ನ ಪತಿಯ ಅಧಿಕಾರ ಮತ್ತು ಪ್ರಭಾವದಿಂದ ನಾನು ಹೆದರಿದ್ದೆ&lt;/h2&gt;&lt;p&gt;ಇಶಾ ರಿಖಿ ತಮ್ಮ ಇನ್&zwnj;ಸ್ಟಾಗ್ರಾಮ್ ಪೋಸ್ಟ್&zwnj;ನಲ್ಲಿ ತಮ್ಮ ಜೀವನದಲ್ಲಿ ಎದುರಿಸಿದ ಭಯ ಮತ್ತು ಮೌನದ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದಾರೆ. ಕೆಲವು ಯುದ್ಧಗಳಲ್ಲಿ ಯಾವುದೇ ಗೋಚರ ಬಾಹ್ಯ ಚಿಹ್ನೆಗಳಿರುವುದಿಲ್ಲ. ನಾನು ಭಯದಿಂದ ದೀರ್ಘಕಾಲ ಮೌನವಾಗಿದ್ದೆ. ನನ್ನ ಪತಿಗೆ ಇರುವ ಸ್ಥಾನಮಾನ, ಅಧಿಕಾರ ಮತ್ತು ಸಂಪನ್ಮೂಲಗಳಿಂದ ನಾನು ಬೆದರಿಸಲ್ಪಟ್ಟಿದ್ದೆ. ಮೌನವಾಗಿರುವುದೇ ಸುರಕ್ಷಿತ ಎಂದು ನಾನು ನನ್ನನ್ನು ನಾನೇ ಮನವರಿಕೆ ಮಾಡಿಕೊಂಡೆ ಎಂಬ ಅರ್ಥದಲ್ಲಿ ಅವರು ಬರೆದಿದ್ದಾರೆ.&lt;/p&gt;&lt;p&gt;ನನ್ನ ಮೌನ ಎಂದರೆ ನಾನು ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ ಎಂದಲ್ಲ. ಅದು ಕೇವಲ ಪರಿಸ್ಥಿತಿಯನ್ನು ನಿಭಾಯಿಸುವ ಒಂದು ಮಾರ್ಗವಾಗಿತ್ತು. ಆದರೆ ಇಂದು ನಾನು ಭಯಕ್ಕಿಂತ ಧೈರ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಇಡೀ ಕಥೆಯನ್ನು ಹೇಳಲು ನಾನು ಇನ್ನೂ ಸಿದ್ಧವಾಗಿಲ್ಲದಿರಬಹುದು. ಆದರೆ ಎಲ್ಲವೂ ಸರಿಯಾಗಿದೆ ಎಂದು ನಟಿಸುವುದನ್ನು ನಿಲ್ಲಿಸಲು ನಾನು ಸಿದ್ಧಳಾಗಿದ್ದೇನೆ ಎಂದು ಇಶಾ ಹೇಳಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.&lt;/p&gt;&lt;h2&gt;ಮದುವೆಯಾಗಿ ಆರು ತಿಂಗಳೂ ಆಗಿಲ್ಲ, ಆಗಲೇ ಬಿರುಕು?&lt;/h2&gt;&lt;p&gt;ಬಾದ್&zwnj;ಶಾ ಮತ್ತು ಇಶಾ ರಿಖಿ ಅವರ ಮದುವೆ 2026ರ ಮಾರ್ಚ್&zwnj;ನಲ್ಲಿ ನಡೆದಿತ್ತು ಎನ್ನಲಾಗಿದೆ. ಆತ್ಮೀಯವಾಗಿ ನಡೆದ ಈ ವಿವಾಹದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದ ಕೆಲವರು ಮಾತ್ರ ಭಾಗವಹಿಸಿದ್ದರು ಎಂಬ ವರದಿಗಳಿವೆ. ಇಬ್ಬರೂ ತಮ್ಮ ಮದುವೆಯನ್ನು ಖಾಸಗಿಯಾಗಿಯೇ ಇರಿಸಿಕೊಂಡಿದ್ದರು. ಆದರೆ ಬಳಿಕ ಇಶಾ ಸಾಮಾಜಿಕ ಜಾಲತಾಣದಲ್ಲಿ ಬಾದ್&zwnj;ಶಾ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ದೃಢಪಡಿಸಿದ್ದರು. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗಲೂ ಇಶಾ, ಬಾದ್&zwnj;ಶಾ ಅವರನ್ನು ತಮ್ಮ ಪತಿ ಎಂದು ಉಲ್ಲೇಖಿಸಿದ್ದರು ಎನ್ನಲಾಗಿದೆ. ಇಶಾ ಅವರ ತಾಯಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ವಿವಾಹದ ಚಿತ್ರಗಳನ್ನು ಹಂಚಿಕೊಂಡು ನವದಂಪತಿಗೆ ಶುಭ ಹಾರೈಸಿದ್ದರು. ಆದರೆ ಮದುವೆಯಾಗಿ ಆರು ತಿಂಗಳೂ ಪೂರ್ಣಗೊಳ್ಳುವ ಮುನ್ನವೇ ಇಶಾ ಅವರ ಇತ್ತೀಚಿನ ಪೋಸ್ಟ್ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;&lt;h2&gt;ಕೆಲವು ಬಿರುಗಾಳಿಗಳು ಪಾಠ ಕಲಿಸುತ್ತವೆ ಎಂದಿದ್ದ ಇಶಾ&lt;/h2&gt;&lt;p&gt;ಇಶಾ ಅವರ ಈ ಕ್ರಿಪ್ಟಿಕ್ ಪೋಸ್ಟ್&zwnj;ಗೂ ಕೆಲವೇ ದಿನಗಳ ಮೊದಲು ಅವರು ಬಾದ್&zwnj;ಶಾ ಜೊತೆಗಿನ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಲವು ಬಿರುಗಾಳಿಗಳು ಪಾಠಗಳನ್ನು ತರುತ್ತವೆ, ಮತ್ತು ಪ್ರತಿ ಪ್ರಾರ್ಥನೆಯೂ ಭರವಸೆಯನ್ನು ತರುತ್ತದೆ ಎಂಬ ಅರ್ಥದ ಸಾಲುಗಳನ್ನು ಅವರು ಬರೆದಿದ್ದರು. ಈ ಪೋಸ್ಟ್&zwnj;ಗೆ ಇಶಾ ಅವರ ಆಪ್ತ ಸ್ನೇಹಿತೆ ಹಾಗೂ ನಟಿ ಜಾಸ್ಮಿನ್ ಭಾಸಿನ್ ಕೂಡ ಪ್ರತಿಕ್ರಿಯಿಸಿ, ಧೈರ್ಯದಿಂದ ಇರುವಂತೆ ಸಲಹೆ ನೀಡಿದ್ದರು. ಇದೀಗ ಇಶಾ ಅವರ ಹೊಸ ಪೋಸ್ಟ್ ಹೊರಬಂದಿರುವ ಹಿನ್ನೆಲೆಯಲ್ಲಿ, ಈ ಹಿಂದಿನ ಪೋಸ್ಟ್ ಕೂಡ ಮತ್ತೊಮ್ಮೆ ಚರ್ಚೆಗೆ ಬಂದಿದೆ.&lt;/p&gt;&lt;h2&gt;ಇಶಾಗೆ ಸ್ನೇಹಿತರು, ಆಪ್ತರಿಂದ ಬೆಂಬಲ&lt;/h2&gt;&lt;p&gt;ಇಶಾ ರಿಖಿ ಅವರ ಪೋಸ್ಟ್ ವೈರಲ್ ಆದ ಬಳಿಕ ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಅವರಿಗೆ ಬೆಂಬಲ ಸೂಚಿಸುತ್ತಿರುವುದು ಗಮನ ಸೆಳೆದಿದೆ. ಆಪ್ತ ಸ್ನೇಹಿತರೊಬ್ಬರು ಇಶಾಗೆ ಬೆಂಬಲ ಸೂಚಿಸಿ, &ldquo;ನೀವು ಏನನ್ನು ಅನುಭವಿಸಿದ್ದೀರಿ ಮತ್ತು ಇನ್ನೂ ಅನುಭವಿಸುತ್ತಿದ್ದೀರಿ ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ನೀವು ಪ್ರತಿಯೊಂದು ಸವಾಲನ್ನೂ ಪ್ರಾಮಾಣಿಕತೆ, ಸತ್ಯ ಮತ್ತು ಸ್ವಾಭಿಮಾನದಿಂದ ಎದುರಿಸಿದ್ದೀರಿ ಎಂಬುದು ನನಗೆ ಮತ್ತು ನಿಮ್ಮ ಹತ್ತಿರವಿರುವ ಎಲ್ಲರಿಗೂ ತಿಳಿದಿದೆ. ದೃಢವಾಗಿರಿ, ನಾವು ನಿಮ್ಮೊಂದಿಗೆ ಮತ್ತು ಸತ್ಯದೊಂದಿಗೆ ಇದ್ದೇವೆ&rdquo; ಎಂಬ ಅರ್ಥದಲ್ಲಿ ಬರೆದಿದ್ದಾರೆ. ಇನ್ನೊಬ್ಬರು &ldquo;ಭಯಪಡದೆ ದೃಢವಾಗಿ ಇರಿ ಎಂದು ಹೇಳಿದ್ದರೆ, ಮತ್ತೊಬ್ಬ ಆಪ್ತ ಸ್ನೇಹಿತರು ಇಶಾ ಅವರನ್ನು ಬಲಶಾಲಿ ಮತ್ತು ಸುಂದರ ಎಂದು ಹೊಗಳಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಇಶಾ ಅವರ ಪೋಸ್ಟ್ ಹಿಂದಿನ ನಿಜವಾದ ಕಾರಣವೇನು ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.&lt;/p&gt;&lt;h2&gt;ಇಶಾ ರಿಖಿ ಯಾರು?&lt;/h2&gt;&lt;p&gt;ಬಾದ್&zwnj;ಶಾ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಗಳಿಸಿದ್ದರೆ, ಇಶಾ ರಿಖಿ ಕೂಡ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಮತ್ತು ಮಾಡೆಲ್. 1993ರ ಸೆಪ್ಟೆಂಬರ್ 9ರಂದು ಚಂಡೀಗಢದಲ್ಲಿ ಜನಿಸಿದ ಇಶಾ ಅಲ್ಲಿಯೇ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ ಎನ್ನಲಾಗಿದೆ. ಅವರು 12ನೇ ತರಗತಿಯಲ್ಲಿದ್ದಾಗಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ನಂತರ ಪಂಜಾಬಿ ಚಿತ್ರರಂಗದಲ್ಲಿ ತಮ್ಮ ನಟನಾ ವೃತ್ತಿಜೀವನ ಆರಂಭಿಸಿದ ಇಶಾ, 2013ರಲ್ಲಿ ಸಿಪ್ಪಿ ಗಿಲ್ ಅವರೊಂದಿಗೆ &lsquo;ಜಟ್ ಬಾಯ್ಸ್ ಪುಟ್ ಜಟ್ಟನ್ ದೇ&rsquo; ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಬಳಿಕ ಅಮರಿಂದರ್ ಗಿಲ್ ಜೊತೆ &lsquo;ಹ್ಯಾಪಿ ಗೋ ಲಕ್ಕಿ&rsquo; ಸೇರಿದಂತೆ ಹಲವು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ.&lt;/p&gt;&lt;h2&gt;ಬಾಲಿವುಡ್&zwnj;ನಲ್ಲೂ ನಟಿಸಿರುವ ಇಶಾ&lt;/h2&gt;&lt;p&gt;ಪಂಜಾಬಿ ಚಿತ್ರಗಳ ಜೊತೆಗೆ ಇಶಾ ರಿಖಿ ಬಾಲಿವುಡ್&zwnj;ನಲ್ಲೂ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ &lsquo;ನವಾಬ್ಜಾದೆ&rsquo; ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದಲ್ಲದೆ ಹಲವು ಜಾಹೀರಾತುಗಳಲ್ಲೂ ಅವರು ಕಾಣಿಸಿಕೊಂಡಿದ್ದು, ಅಕ್ಷಯ್ ಕುಮಾರ್, ಸೋನಮ್ ಕಪೂರ್ ಹಾಗೂ ಅಮಿತಾಭ್ ಬಚ್ಚನ್ ಅವರಂತಹ ಜನಪ್ರಿಯ ನಟರೊಂದಿಗೆ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/relationship/badshah-wife-isha-rikhi-posts-cryptic-note-amid-divorce-buzz-felt-overwhelmed-by-the-power-my-husband-had-suh/articleshow-62opg8z"/>
        </item>
        <item>
            <title><![CDATA[ಬಿಗ್‌ ಬಾಸ್ ಗೆದ್ದರೂ ರಕ್ಷಿತಾ ಶೆಟ್ಟಿ ಈಗ ಒಂಟಿ? 'ಕ್ಲೋಸ್' ಆಗಿದ್ದವರು ಫೋನ್ ಪಿಕ್ ಮಾಡ್ತಿಲ್ಲ ಏಕೆ?  'ಶಾಕಿಂಗ್' ಸತ್ಯ ಇಲ್ಲಿದೆ!]]></title>
            <link>https://kannada.asianetnews.com/tv-talk/is-no-one-who-was-close-to-bigg-boss-season-12-runner-up-rakshita-shetty-supporting-her-anymore/articleshow-6qmkeem</link>
            <guid isPermaLink="true">https://kannada.asianetnews.com/tv-talk/is-no-one-who-was-close-to-bigg-boss-season-12-runner-up-rakshita-shetty-supporting-her-anymore/articleshow-6qmkeem</guid>
            <pubDate>Mon, 27 Jul 2026 11:16:37 +0530</pubDate>
            <description><![CDATA[&lt;p&gt;ಬಿಗ್&zwnj; ಬಾಸ್ ಗೆದ್ದ ಖುಷಿಯಲ್ಲಿರುವ ರಕ್ಷಿತಾ ಶೆಟ್ಟಿಗೆ ಅವರ ಹಳೆಯ &lsquo;ಗೆಳೆಯರ&rsquo; ವರ್ತನೆ ಸ್ವಲ್ಪ ಬೇಸರ ತರಿಸಿರಬಹುದು. ಆದರೂ ರಕ್ಷಿತಾ ಒಬ್ಬ ಅದ್ಭುತ ಆಟಗಾರ್ತಿ ಎಂಬುದನ್ನು ಒಪ್ಪಿಕೊಂಡಿರುವ ಜಾಹ್ನವಿ, ಶೋ ಯಶಸ್ಸಿಗೆ ತಾವೆಲ್ಲರೂ ಕೊಟ್ಟ &lsquo;ಮಸಾಲಾ&rsquo; ಕೂಡ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyh1fcb0fp4mfde7p6c97f0q,imgname-rakshitha-shetty-1785130889567.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಿಗ್ ಬಾಸ್ ರನ್ನರ್&zwnj; ಅಪ್&zwnj; ರಕ್ಷಿತಾ ಶೆಟ್ಟಿ ಗುಟ್ಟು ರಟ್ಟು..!?&lt;/strong&gt;&lt;/p&gt;&lt;p&gt;ಬಿಗ್&zwnj; ಬಾಸ್ ಕನ್ನಡದ ರಿಯಾಲಿಟಿ ಶೋ ಎಂದರೆ ಅಲ್ಲಿ ಬರೀ ಆಟವಷ್ಟೇ ಇರುವುದಿಲ್ಲ, ಬದಲಾಗಿ ಸಂಬಂಧಗಳ ಜಟಾಪಟಿ, ಸ್ನೇಹದ ನಾಟಕ ಮತ್ತು ಕಿತ್ತಾಟಗಳ ದೊಡ್ಡ ಸರಣಿಯೇ ಇರುತ್ತದೆ. ಮನೆ ಒಳಗಿದ್ದಾಗ &lsquo;ನನ್ನ ಪ್ರಾಣ ನಿನಗೆ, ನಿನ್ನ ಪ್ರಾಣ ನನಗೆ&rsquo; ಎನ್ನುವಂತೆ ಇದ್ದವರು ಹೊರಬಂದ ಮೇಲೆ ಅದೇ ಸ್ನೇಹವನ್ನು ಮುಂದುವರಿಸುತ್ತಾರಾ? ಈ ಪ್ರಶ್ನೆಗೆ ಈಗ ಬಿಗ್&zwnj; ಬಾಸ್ ಖ್ಯಾತಿಯ ನಿರೂಪಕಿ ಜಾಹ್ನವಿ ನೀಡಿರುವ ಹೇಳಿಕೆ ಹೊಸ ಸಂಚಲನ ಮೂಡಿಸಿದೆ.&lt;/p&gt;&lt;p&gt;ಹೌದು, ಬಿಗ್&zwnj; ಬಾಸ್ ಕನ್ನಡ 12 ಸೀಸನ್&zwnj;ನ ವಿನ್ನರ್ ಆಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿ (Rakshita Shetty) ಅವರಿಗೆ ಈಗ ಹೊರಗಿನ ಪ್ರಪಂಚದಲ್ಲಿ ಯಾರೂ ಸಾಥ್ ನೀಡುತ್ತಿಲ್ಲವೇ? ಅಂದು ಮನೆಯೊಳಗೆ ರಕ್ಷಿತಾ ಜೊತೆ ಹಗಲಿರುಳು ಅಂಟಿಕೊಂಡಿದ್ದವರು ಇಂದು ಅವರ ಫೋನ್ ಕೂಡ ರಿಸೀವ್ ಮಾಡುತ್ತಿಲ್ಲವಂತೆ! ಈ ಕಹಿ ಸತ್ಯವನ್ನು ಸ್ವತಃ ಜಾಹ್ನವಿ ಮಾಧ್ಯಮವೊಂದರ ಮುಂದೆ ಬಿಚ್ಚಿಟ್ಟಿದ್ದಾರೆ.&lt;/p&gt;&lt;h2&gt;ಫೋನ್ ಎತ್ತದ &lsquo;ಕ್ಲೋಸ್&rsquo; ಫ್ರೆಂಡ್ಸ್!&lt;/h2&gt;&lt;p&gt;ಬಿಗ್&zwnj; ಬಾಸ್ ಮನೆಯೊಳಗೆ ಕೆಲವರು ರಕ್ಷಿತಾ ಅವರ ಪರವಾಗಿ ನಿಂತು, ಅವರ ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದರು. ಆದರೆ ಶೋ ಮುಗಿದು ದಿನಗಳು ಕಳೆಯುತ್ತಿದ್ದಂತೆ ಆ ಸ್ನೇಹವೆಲ್ಲವೂ ಬಣ್ಣಗೆಟ್ಟಿದೆ ಎನ್ನಲಾಗುತ್ತಿದೆ. ಜಾಹ್ನವಿ ಹೇಳುವ ಪ್ರಕಾರ, &quot;ರಕ್ಷಿತಾ ಶೆಟ್ಟಿ ಈಗ ಒಂಟಿಯಾಗಿದ್ದಾರೆ. ಮನೆಯೊಳಗೆ ಆಕೆಯ ಜೊತೆ ತುಂಬಾ ಕ್ಲೋಸ್ ಆಗಿದ್ದವರು ಈಗ ಆಕೆಯ ಕಾಲ್ ಪಿಕ್ ಮಾಡುತ್ತಿಲ್ಲ. ಇದು ನೋಡಲು ಒಂತರಾ ನಾಟಕದಂತೆ ಕಾಣುತ್ತಿದೆ,&quot; ಎಂದು ನೇರವಾಗಿ ಕಿಡಿಕಾರಿದ್ದಾರೆ.&lt;/p&gt;&lt;p&gt;ಮಸಾಲಾ ಮತ್ತು ರಿಯಾಲಿಟಿ ಶೋಗಳ ಗುಟ್ಟು:&lt;/p&gt;&lt;p&gt;ಇದೇ ವೇಳೆ ಶೋ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆಯೂ ಜಾಹ್ನವಿ ಮಾತನಾಡಿದ್ದಾರೆ. &quot;ರಿಯಾಲಿಟಿ ಶೋಗಳಿಗೆ ಯಾವಾಗಲೂ ಮಸಾಲಾ ಬೇಕು. ಅದಕ್ಕೆ ತಕ್ಕಂತೆ ಶೋ ಡಿಸೈನ್ ಆಗಿರುತ್ತದೆ. ನಾವು ಅಲ್ಲಿ ಜಗಳ ಆಡಿದರೆ ಜನ ಕ್ಯೂರಿಯಾಸಿಟಿಯಿಂದ ನೋಡುತ್ತಾರೆ. ಆದರೆ ಹೊರಗೆ ಬಂದ ಮೇಲೆ ಪರಿಸ್ಥಿತಿಯೇ ಬೇರೆ ಇರುತ್ತದೆ. ನಾವು ಮನೆಯೊಳಗೆ ವಿಲನ್&zwnj;ಗಳಂತೆ ಕಂಡಿರಬಹುದು, ರಕ್ಷಿತಾಗೆ ಸಿಂಪಥಿ ಸಿಕ್ಕಿರಬಹುದು. ಆದರೆ ಈಗ ಅವಳ ಜೊತೆ ಇದ್ದವರೇ ಫೋನ್ ಎತ್ತುತ್ತಿಲ್ಲ ಎಂದರೆ, ಅಂದು ಅವರು ಮಾಡಿದ್ದೆಲ್ಲವೂ ಕೇವಲ ಜನಗಳ ಕಣ್ಣಿಗೆ ಒಳ್ಳೆಯವರಾಗಲು ಮಾಡಿದ ಡ್ರಾಮಾನಾ?&quot; ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;ಬದಲಾದ ಸಂಬಂಧಗಳ ಲೆಕ್ಕಾಚಾರ:&lt;/h3&gt;&lt;p&gt;ಕುತೂಹಲದ ಸಂಗತಿಯೆಂದರೆ, ಬಿಗ್&zwnj; ಬಾಸ್ ಮನೆಯಲ್ಲಿ ಜಾಹ್ನವಿ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಸಿಕ್ಕಾಪಟ್ಟೆ ಜಗಳಗಳು ನಡೆಯುತ್ತಿದ್ದವು. ಅಂದು ಒಬ್ಬರಿಗೊಬ್ಬರು ಮುಖ ನೋಡದ ಹಂತಕ್ಕೆ ಹೋಗಿದ್ದರು. ಆದರೆ ಈಗ ಕಾಲ ಬದಲಾಗಿದೆ. &quot;ನಾನು ಪ್ರಸ್ತುತ ಅಶ್ವಿನಿ ಮತ್ತು ರಾಶಿಕಾ ಜೊತೆ ಮಾತ್ರ ಸಂಪರ್ಕದಲ್ಲಿದ್ದೇನೆ. ನಾವು ಇವತ್ತಿಗೂ ಚೆನ್ನಾಗಿದ್ದೇವೆ. ಆದರೆ ರಕ್ಷಿತಾ ಜೊತೆಗಿದ್ದ ಇತರ ಹುಡುಗಿಯರು ಮಾತ್ರ ಸಂಪರ್ಕಕ್ಕೆ ಸಿಗುತ್ತಿಲ್ಲ,&quot; ಎಂದು ಜಾಹ್ನವಿ ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಬಿಗ್&zwnj; ಬಾಸ್ ಗೆದ್ದ ಖುಷಿಯಲ್ಲಿರುವ ರಕ್ಷಿತಾ ಶೆಟ್ಟಿಗೆ ಅವರ ಹಳೆಯ &lsquo;ಗೆಳೆಯರ&rsquo; ವರ್ತನೆ ಸ್ವಲ್ಪ ಬೇಸರ ತರಿಸಿರಬಹುದು. ಆದರೂ ರಕ್ಷಿತಾ ಒಬ್ಬ ಅದ್ಭುತ ಆಟಗಾರ್ತಿ ಎಂಬುದನ್ನು ಒಪ್ಪಿಕೊಂಡಿರುವ ಜಾಹ್ನವಿ, ಶೋ ಯಶಸ್ಸಿಗೆ ತಾವೆಲ್ಲರೂ ಕೊಟ್ಟ &lsquo;ಮಸಾಲಾ&rsquo; ಕೂಡ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಬಿಗ್&zwnj; ಬಾಸ್ ಸ್ನೇಹಗಳು ಕೇವಲ ಕ್ಯಾಮೆರಾ ಮುಗಿಯುವವರೆಗೆ ಮಾತ್ರವೇ ಎಂಬ ಚರ್ಚೆ ಈಗ ಗಾಂಧಿನಗರದ ಗಲ್ಲಿಗಳಲ್ಲಿ ಜೋರಾಗಿ ಕೇಳಿಬರುತ್ತಿದೆ.&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/is-no-one-who-was-close-to-bigg-boss-season-12-runner-up-rakshita-shetty-supporting-her-anymore/articleshow-6qmkeem"/>
        </item>
        <item>
            <title><![CDATA[ಬಾಬಾ ವಂಗಾ ಭವಿಷ್ಯ: ಈ 5 ರಾಶಿಗೆ ಮುಂದಿನ 7 ದಿನಗಳಲ್ಲಿ ಹಣ, ನಿಮ್ಮ ಕೆಲಸದಲ್ಲಿ ನಿಮಗೆ ದೊಡ್ಡ ಅವಕಾಶ, ಅದೃಷ್ಟ]]></title>
            <link>https://kannada.asianetnews.com/gallery/festivals/baba-vanga-prediction-weekly-lucky-zodiac-signs-27-july-to-2-august-2026-suh-8kekxpp</link>
            <guid isPermaLink="true">https://kannada.asianetnews.com/gallery/festivals/baba-vanga-prediction-weekly-lucky-zodiac-signs-27-july-to-2-august-2026-suh-8kekxpp</guid>
            <pubDate>Sun, 26 Jul 2026 08:47:21 +0530</pubDate>
            <description><![CDATA[&lt;p&gt;Baba vanga prediction weekly lucky zodiac signs 27 july to 2 august 2026 ಜ್ಯೋತಿಷ್ಯದ ಪ್ರಕಾರ, ಜುಲೈ ಕೊನೆಯ ವಾರ ಜುಲೈ 27 ರಿಂದ ಆಗಸ್ಟ್ 2 ರವರೆಗೆ ಇರುತ್ತದೆ. ಈ ವಾರ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತವೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kye6s5p8f38vnd353tpe0qtx,imgname-baba-vanga-prediction-weekly-lucky-zodiac-signs-27-july-to-2-august-2026-1785035790023.jpg" type="image/jpeg" height="390" width="690"/>
            <content:encoded><![CDATA[&lt;p&gt;Baba vanga prediction weekly lucky zodiac signs 27 july to 2 august 2026 ಜ್ಯೋತಿಷ್ಯದ ಪ್ರಕಾರ, ಜುಲೈ ಕೊನೆಯ ವಾರ ಜುಲೈ 27 ರಿಂದ ಆಗಸ್ಟ್ 2 ರವರೆಗೆ ಇರುತ್ತದೆ. ಈ ವಾರ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತವೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಭವಿಷ್ಯವಾಣಿಗಳ ಪ್ರಕಾರ, ಜುಲೈ 27 ರಿಂದ ಆಗಸ್ಟ್ 2 ರವರೆಗಿನ ಅವಧಿಯು ವೃಷಭ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ಈ ಅವಧಿಯಲ್ಲಿ, ನೀವು ಹಣಕಾಸಿನ ವಿಷಯಗಳಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ಹಠಾತ್ ಆರ್ಥಿಕ ಲಾಭದ ಸಾಧ್ಯತೆಯಿದೆ. ಅಲ್ಲದೆ, ಕಾರ್ಮಿಕ ವರ್ಗದ ಜನರು ಕೆಲಸದಲ್ಲಿ ಹಿರಿಯ ಸಹೋದ್ಯೋಗಿಗಳಿಂದ ಉತ್ತಮ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಎಲ್ಲಾ ದಿನಗಳನ್ನು ಸಂತೋಷದಿಂದ ಕಳೆಯುತ್ತೀರಿ. ಅಲ್ಲದೆ, ವ್ಯಾಪಾರ ಮಾಡುವ ಜನರು ವ್ಯವಹಾರದಲ್ಲಿ ಅನೇಕ ಅದೃಷ್ಟವನ್ನು ಪಡೆಯುತ್ತಾರೆ.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಪ್ರಕಾರ, ಸಿಂಹ ರಾಶಿಯವರಿಗೆ ಹೊಸ ವಾರ ಆತ್ಮವಿಶ್ವಾಸದ ವಾರವಾಗಿರುತ್ತದೆ. ಈ ಅವಧಿಯಲ್ಲಿ, ನೀವು ಯಾವುದೇ ತೊಂದರೆಗಳನ್ನು ಎದುರಿಸಬೇಕಾಗಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿಷಯಗಳು ನಡೆಯುತ್ತವೆ. ಅಲ್ಲದೆ, ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಮನೆಯಲ್ಲಿನ ವಾತಾವರಣವು ಸಂತೋಷದಿಂದ ಕೂಡಿರುತ್ತದೆ. ಹೊಸ ವಿಷಯಗಳನ್ನು ಸಾಧಿಸಲು ನೀವು ತುಂಬಾ ಉತ್ಸುಕರಾಗಿರುತ್ತೀರಿ.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಭವಿಷ್ಯವಾಣಿಗಳ ಪ್ರಕಾರ, ಮುಂಬರುವ ವಾರವು ತುಲಾ ರಾಶಿಯವರಿಗೆ ಅನೇಕ ಶುಭ ಫಲಿತಾಂಶಗಳನ್ನು ತರುತ್ತದೆ. ಈ ಅವಧಿಯಲ್ಲಿ, ನಿಮಗೆ ಅದೃಷ್ಟ ಸಿಗುತ್ತದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಅಲ್ಲದೆ, ಸ್ನೇಹಿತರ ಸಹಕಾರವು ನಿಮಗೆ ಪ್ರಯೋಜನಕಾರಿಯಾಗಿದೆ. ನಿಮ್ಮ ಸಂಗಾತಿಯ ಸಹವಾಸವು ನಿಮಗೆ ಮುಖ್ಯವಾಗಿರುತ್ತದೆ. ಸಮಾಜದಲ್ಲಿ ಕೆಲವು ಪ್ರತಿಷ್ಠಿತ ಜನರನ್ನು ನೀವು ಭೇಟಿಯಾಗುತ್ತೀರಿ.&lt;/p&gt;&lt;img&gt;&lt;p&gt;ವೃಶ್ಚಿಕ ರಾಶಿಯವರಿಗೆ ವಾರದ ಆರಂಭವು ತುಂಬಾ ಒಳ್ಳೆಯದಾಗಿರುತ್ತದೆ. ಈ ಅವಧಿಯಲ್ಲಿ, ಕೆಲಸ ಮಾಡುವ ವರ್ಗದ ಜನರಿಗೆ ಸಂಬಳ ಹೆಚ್ಚಳವಾಗುವ ಸಾಧ್ಯತೆಯಿದೆ. ಹಲವು ದಿನಗಳಿಂದ ಬಾಕಿ ಉಳಿದಿದ್ದ ಹಣವನ್ನು ನೀವು ಮರಳಿ ಪಡೆಯುತ್ತೀರಿ. ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಮತ್ತು ಗೌರವ ಸಿಗುತ್ತದೆ. ಮನೆಯಲ್ಲಿನ ವಾತಾವರಣವೂ ಆಹ್ಲಾದಕರವಾಗಿರುತ್ತದೆ.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಭವಿಷ್ಯವಾಣಿಗಳ ಪ್ರಕಾರ, ಹೊಸ ವಾರವು ಮಕರ ರಾಶಿಯವರಿಗೆ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಉತ್ತಮವಾಗಿರುತ್ತದೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಅಲ್ಲದೆ, ನೀವು ಹಣವನ್ನು ಹೂಡಿಕೆ ಮಾಡಲು ಬಯಸಿದರೆ, ಈ ಅವಧಿಯು ನಿಮಗೆ ಶುಭವಾಗಿರುತ್ತದೆ. ನೀವು ಹೊಸ ವಾಹನವನ್ನು ಖರೀದಿಸಬಹುದು.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/baba-vanga-prediction-weekly-lucky-zodiac-signs-27-july-to-2-august-2026-suh-8kekxpp"/>
        </item>
        <item>
            <title><![CDATA[CJP ಮುಂದಿನ ಟಾಸ್ಕ್​ ರಾಹುಲ್​ ಗಾಂಧಿ ಮದ್ವೆ: ಖುದ್ದು ಅಕ್ಕ ಪ್ರಿಯಾಂಕಾ ಜಿರಳೆಗಳಿಗೆ ಹೀಗೊಂದು ಮನವಿ]]></title>
            <link>https://kannada.asianetnews.com/relationship/convince-rahul-to-get-married-priyanka-gandhis-request-to-cjp-protester-who-is-turning-heads-suc/articleshow-aws76r8</link>
            <guid isPermaLink="true">https://kannada.asianetnews.com/relationship/convince-rahul-to-get-married-priyanka-gandhis-request-to-cjp-protester-who-is-turning-heads-suc/articleshow-aws76r8</guid>
            <pubDate>Tue, 28 Jul 2026 20:50:19 +0530</pubDate>
            <description><![CDATA[ದಿನಗೂಲಿ ಕಾರ್ಮಿಕ ಮೊಹಮ್ಮದ್ ಇರ್ಫಾನ್, ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಕಾರ್ಮಿಕರ ಹಕ್ಕುಗಳು ಮತ್ತು ಸಂವಿಧಾನದ ಬಗ್ಗೆ ಚರ್ಚಿಸಿದರು. ಈ ಭೇಟಿಯ ಹಿಂದೆ, ರಾಹುಲ್ ಗಾಂಧಿಯವರ ಮದುವೆಗೆ ಅವರನ್ನು ಒಪ್ಪಿಸುವಂತೆ ಪ್ರಿಯಾಂಕಾ ಗಾಂಧಿ ತಮಾಷೆಯಾಗಿ ಇರ್ಫಾನ್&zwnj;ಗೆ ಹೇಳಿದ್ದ ಸ್ವಾರಸ್ಯಕರ ಘಟನೆಯೂ ಇದೆ. ನಂತರ ರಾಹುಲ್ ಗಾಂಧಿ ಇರ್ಫಾನ್ ಅವರ ಮನೆಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kymmzf5rtjq6489kkj7jnw3k,imgname-priyanka-gandhi-1785252003000.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿಯ ಜಂತರ್ ಮಂತರ್&zwnj;ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ಬಳಿಕ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ನೀಡಾಯ್ತು. ಪಿಚ್ಚರ್​ ಅಭೀ ಭೀ ಬಾಕಿ ಹೈ ಎಂದಿದ್ದಾರೆ ಸಂಸ್ಥಾಪಕ ಅಭಿಜೀತ್​ ದೀಪ್ಕೆ. ಪಂಜಾಬ್​ ಪರೀಕ್ಷೆ ಪತ್ರಿಕೆ ಲೀಕ್​ ಬಗ್ಗೆ ಹೋಗಿ ಪ್ರತಿಭಟನೆ ಮಾಡಿ ಎಂದು ಬಿಜೆಪಿ ಬೆಂಬಲಿಗರು ಕೇಳಿರುವ ಕಾರಣ, ಸ್ವಲ್ಪಕಾಲ ತಣ್ಣಗಾಗಿದ್ದಾರೆ ಜಿರಳೆಗಳು. ಇದರಿಂದ ಇವರ ಪ್ರತಿಭಟನೆಯ ಹಿಂದಿನ ಉದ್ದೇಶ ವಿದ್ಯಾರ್ಥಿಗಳ ಹಿತದೃಷ್ಟಿಯೋ ಅಥವಾ ಕೇಂದ್ರದ ವಿರುದ್ಧ ಯಾರದ್ದೋ ಕೈವಾಡದಿಂದ ನಡೆಸಿರುವ ಪಿತೂರಿಯೋ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ನಡುವೆಯೇ, 56 ವರ್ಷಗಳ ರಾಹುಲ್​ ಗಾಂಧಿ ಮದುವೆಯನ್ನು ಟಾಸ್ಕ್​ ಆಗಿ ಕೊಟ್ಟಿದ್ದಾರೆ ಅಕ್ಕ ಪ್ರಿಯಾಂಕಾ ಗಾಂಧಿ.&lt;/p&gt;&lt;p&gt;ಪ್ರತಿಭಟನೆಯ ಸಮಯದಲ್ಲಿ, ಮದುವೆಗೆ ರಾಹುಲ್ ಗಾಂಧಿ ಅವರ ಮನವೊಲಿಸುವಂತೆ ಪ್ರಿಯಾಂಕಾ ಮೇಡಂ ತಮಗೆ ಹೇಳಿರುವುದಾಗಿ ದಿನಗೂಲಿ ಕಾರ್ಮಿಕ ಮೊಹಮ್ಮದ್ ಇರ್ಫಾನ್ ಮಾಧ್ಯಮಗಳಿಗೆ ಹೇಳಿದ್ದಾರೆ. 'ದಿ ಲಲ್ಲಂಟಾಪ್' ಗೆ ನೀಡಿರುವ ಸಂದರ್ಶನದಲ್ಲಿ, ಈ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಮನೆಗೆ ಬರುವ ಮೊದಲು, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಫೋನ್&zwnj;ನಲ್ಲಿ ಮಾತನಾಡಿದ್ದರು ಎಂದು ಇರ್ಫಾನ್ ಹೇಳಿದ್ದಾರೆ. ಸಂಭಾಷಣೆಯ ಸಮಯದಲ್ಲಿ, ಪ್ರಿಯಾಂಕಾ ಗಾಂಧಿ ತಮಾಷೆಯಾಗಿ ಇರ್ಫಾನ್&zwnj;ಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಅವರನ್ನು ಮದುವೆಯಾಗುವಂತೆ ಮನವೊಲಿಸಲು ಪ್ರಯತ್ನಿಸುವಂತೆ ಹೇಳಿದರು, ಏಕೆಂದರೆ ರಾಹುಲ್ ಗಾಂಧಿ ಅವರ ಮಾತನ್ನು ಕೇಳುವುದಿಲ್ಲ. ಅದಕ್ಕೇ ನನಗೆ ಹೇಳಿದರು ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಯಾರೀ ಇರ್ಫಾನ್​?&lt;/strong&gt;&lt;/h2&gt;&lt;p&gt;35 ವರ್ಷದ ಇರ್ಫಾನ್ ಐಸ್ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ ಮತ್ತು ಸವ್ಡಾ ಜೆಜೆ ಕಾಲೋನಿಯಲ್ಲಿ ಚಿಕ್ಕದೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಅಂಗನವಾಡಿ ಹಂತದವರೆಗೆ ಮಾತ್ರ ಔಪಚಾರಿಕ ಶಿಕ್ಷಣವನ್ನು ಪಡೆದಿದ್ದಾರೆ ಮತ್ತು ಓದಲು ಮತ್ತು ಬರೆಯಲು ಸಾಕಷ್ಟು ತೊಂದರೆ ಅನುಭವಿಸಿ ಶಾಲೆಯನ್ನು ಬಿಟ್ಟಿದ್ದಾರೆ. ಇದರ ಹೊರತಾಗಿಯೂ, ಅವರು ಗೂಗಲ್ ವಾಯ್ಸ್ ಸರ್ಚ್ ಮತ್ತು ಯೂಟ್ಯೂಬ್ ವೀಡಿಯೊಗಳ ಮೂಲಕ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಕಾರ್ಮಿಕರ ಹಕ್ಕುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಾರೆ.&lt;/p&gt;&lt;h3&gt;&lt;strong&gt;ಸಂವಿಧಾನ ಉಳಿಸೋದು ನನ್ನ ಕರ್ತವ್ಯ&lt;/strong&gt;&lt;/h3&gt;&lt;p&gt;ಸಂದರ್ಶನದ ಸಮಯದಲ್ಲಿ, ಇರ್ಫಾನ್, ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಅಸಂಘಟಿತ ಕಾರ್ಮಿಕರ ಗೌರವಾನ್ವಿತ ಜೀವನೋಪಾಯದ ಹಕ್ಕುಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ರಾಹುಲ್ ಗಾಂಧಿ ಅವರ ಅಭಿಪ್ರಾಯಗಳನ್ನು ಗಂಭೀರವಾಗಿ ಆಲಿಸಿರುವುದಾಗಿ ತಿಳಿಸಿದ್ದಾರೆ. ತಮ್ಮ ಕುಟುಂಬವನ್ನು ಸಂಸತ್ ಭವನಕ್ಕೆ ಭೇಟಿ ನೀಡಲು ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ. ಪ್ರಚಾರಕ್ಕಾಗಿ ಸಿಜೆಪಿ ಪ್ರತಿಭಟನೆ ಮಾಡಲಿಲ್ಲ, ಬದಲಾಗಿ ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಲು ಈ ಪ್ರತಿಭಟನೆ ಎಂದಿದ್ದಾರೆ. ನಾನು ರಾಹುಲ್ ಗಾಂಧಿಯವರ ಬಳಿ ಯಾವುದೇ ವೈಯಕ್ತಿಕ ಬೇಡಿಕೆಗಳನ್ನು ಇಡಲಿಲ್ಲ. ದೇಶದ ಕಾರ್ಮಿಕರು ಮತ್ತು ಬಡವರ ಪರವಾಗಿ ಧ್ವನಿ ಎತ್ತುವುದು ನನ್ನ ಕೆಲಸ ಎಂದಿದ್ದಾರೆ.&lt;/p&gt;&lt;p&gt;ರಾಹುಲ್ ಗಾಂಧಿ ಇರ್ಫಾನ್ ಅವರ ಮನೆಗೆ ಭೇಟಿ ನೀಡಿದರು. ಈ ವಿಡಿಯೋ ವೈರಲ್ ಆದ ನಂತರ, ರಾಹುಲ್ ಗಾಂಧಿ ಸೋಮವಾರ ಇರ್ಫಾನ್ ಅವರ ಮನೆಗೆ ಭೇಟಿ ನೀಡಿದ್ದರು. ರಾಹುಲ್ ಗಾಂಧಿ ಅವರಿಂದ ತಮಗಾಗಿ ಏನನ್ನೂ ಕೇಳಿಲ್ಲ ಎಂದು ಇರ್ಫಾನ್ ಹೇಳಿದ್ದಾರೆ. ಬಡವರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮಾತ್ರ ಅವರು ವಿನಂತಿಸಿದರು.&lt;/p&gt;&lt;p&gt;&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/convince-rahul-to-get-married-priyanka-gandhis-request-to-cjp-protester-who-is-turning-heads-suc/articleshow-aws76r8"/>
        </item>
        <item>
            <title><![CDATA[Shocking: ವಿಜಯಲಕ್ಷ್ಮೀ ಮಾಡಿದ್ದ ಪೋಸ್ಟ್ ರಿಪೀಟ್ ಮಾಡಿದ್ದೇಕೆ ಧನ್ವೀರ್ ಗೌಡ, 'ಬೇರೆ ಏನೋ ಇದೆ ಇಲ್ಲಿ..' ಅಂತಿರೋ ನೆಟ್ಟಿಗರು!]]></title>
            <link>https://kannada.asianetnews.com/sandalwood/sandalwood-actor-dhanveer-gowda-repeats-darshan-wife-vijayalakshmi-old-post-after-he-meets-actor-darshan-in-jail/articleshow-cune80y</link>
            <guid isPermaLink="true">https://kannada.asianetnews.com/sandalwood/sandalwood-actor-dhanveer-gowda-repeats-darshan-wife-vijayalakshmi-old-post-after-he-meets-actor-darshan-in-jail/articleshow-cune80y</guid>
            <pubDate>Wed, 29 Jul 2026 12:52:38 +0530</pubDate>
            <description><![CDATA[&lt;p&gt;'ದರ್ಶನ್ ಹೇಗಿದ್ದಾರೆ ಎಂಬ ಮಾಧ್ಯಮದ ಅನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿರುವ ನಟ ಧನ್ವೀರ್ ಗೌಡ, 'ಪರವಾಗಿಲ್ಲ' ಎಂದಷ್ಟೇ ಹೇಳಿದ್ದಾರೆ. ಹಾಗಿದ್ರೆ ನಿಜವಾಗಿಯೂ ದರ್ಶನ್-ಧನ್ವೀರ್ ಮಧ್ಯೆ ಏನಾಗುತ್ತಿದೆ? ನಿನ್ನೆ ಧನ್ವೀರ್ ಗೌಡ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಏಕೆ ಹೋಗಿಲ್ಲ. ಚರ್ಚೆ ಜೋರಾಗಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypbb658pazadexvsbx6nt86,imgname-dhanveer-gowda-darshan-vijayalakshmi-1785309010087.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಏನಾಗ್ತಿದೆ ದರ್ಶನ್-ವಿಜಯಲಕ್ಷ್ಮೀ ಹಾಗೂ ಧನ್ವೀರ್ ಮಧ್ಯೆ?&amp;nbsp;&lt;/strong&gt;&lt;/p&gt;&lt;p&gt;Dhanveer Gowda Post after Darshan Thoogudeepa Meet: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್ ಅವರನ್ನು ನಿನ್ನೆ (28 ಜುಲೈ 2026) ದರ್ಶನ್ ಆಪ್ತ ಸ್ನೇಹಿತ ಹಾಗೂ ನಟ ಧನ್ವೀರ್ ಗೌಡ (Dhanveer Gowda) ಭೇಟಿಯಾಗಿ ಮಾತನ್ನಾಡಿಕೊಂಡು ಬಂದಿದ್ದಾರೆ. ಈ ಮೊದಲು ಕೂಡ ಧನ್ವೀರ್ ಅವರು ದರ್ಶನ್ (Darshan Thoogudeepa) ಅವರನ್ನು ಭೇಟಿಯಾಗಿ ಬಂದಿದ್ದರು. ಆದರೆ, ಈ ಭೇಟಿಯ ಬಳಿಕ ನಟ ಧನ್ವೀರ್ ಗೌಡ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಇನ್&zwnj;ಸ್ಟಾಗ್ರಾಂನಲ್ಲಿ ಮಾಡಿರೋ ಪೋಸ್ಟ್&zwnj; ಇದೀಗ ತೀವ್ರ ಕುತೂಹಲ ಹಾಗೂ ಸಂಚಲನ ಸೃಷ್ಟಿಸಿದೆ. ಹಾಗಿದ್ದರೆ ನಟ ಧನ್ವೀರ್ ಗೌಡ ಅದೇನು ಪೋಸ್ಟ್ ಮಾಡಿದ್ದಾರೆ. ಅದೇನು ಅಂತ ಮುಂದೆ ನೋಡಿ..&lt;/p&gt;&lt;p&gt;ಹೌದು, ನಿನ್ನೆ ತಮ್ಮ ಆಪ್ತ ಸ್ನೇಹಿತ ದರ್ಶನ್ ತೂಗುದೀಪ ಅವರನ್ನು ಜೈಲಿಗೆ ಹೋಗಿ ಭೇಟಿ ಮಾಡಿ ವಾಪಸ್ ಆದ ಬಳಿಕ ನಟ ಧನ್ವೀರ್ ಗೌಡ ಅವರು ಮಾಡಿರೋ ಪೋಸ್ಟ್&zwnj; ಹೀಗಿದೆ. ಕೃಷ್ಣನ ಫೋಟೋ ಕಾರ್ಡ್&zwnj;ನಲ್ಲಿ 'ಪಡೆದುಕೊಂಡ ಮೇಲೆ.... ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ.... ಅದು ವಸ್ತುವಾಗಲಿ, ವ್ಯಕ್ತಿಯಾಗಲಿ....' ಎಂದು ಬರೆದಿರುವ ಪೋಸ್ಟ್ ಮಾಡಿದ್ದಾರೆ ಧನ್ವೀರ್ ಗೌಡ. ಇದೇ ಪೋಸ್ಟ್&zwnj; ಅನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ಕೆಲವು ದಿನಗಳ ಹಿಂದೆ ಜೈಲಿನಲ್ಲಿ ಪತಿ ದರ್ಶನ್ ಭೇಟಿ ಮಾಡಿ ಬಂದ ಬಳಿಕ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಪೋಸ್ಟ್ ಮಾಡಿದ್ದರು. ಒಂದೇ ರೀತಿಯಲ್ಲಿ ಈ ಇಬ್ಬರೂ, ಅಂದರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಗೌಡ ಪೋಸ್ಟ್ ಮಾಡುವ ಮೂಲಕ ಹೊಸ ಕುತೂಹಲ ಹಾಗೂ ಸಂಶಯಕ್ಕೆ ಕಾರಣರಾಗಿದ್ದಾರೆ.&lt;/p&gt;&lt;h2&gt;ಈ ಪೋಸ್ಟ್ ಅಸಲಿಯತ್ತೇನು?&lt;/h2&gt;&lt;p&gt;ಹಾಗಿದ್ದರೆ ಈ ಪೋಸ್ಟ್ ಅಸಲಿಯತ್ತೇನು? ಅದ್ಯಾಕೆ ಇಬ್ಬರೂ (ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಗೌಡ) ಒಂದೇ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಸತ್ಯ ಸಂಗತಿ ಅವರಿಗೇ ಗೊತ್ತು. ಆದರೆ ಇಬ್ಬರೂ ಹಾಕಿರುವ ಒಂದೇ ಪೋಸ್ಟ್ ಇದೀಗ, ಇಲ್ಲಸಲ್ಲದ ಚರ್ಚೆಗೆ, ಕುತೂಹಲಕ್ಕೆ ಹಾಗು 'ಅವರ ನಡುವೆ ಏನೋ ಸರಿಯಿಲ್ಲ ಅಥವಾ ಎಲ್ಲವೂ ಸರಿಯಿಲ್ಲ' ಎಂಬ ಮಾತುಗಳಿಗೆ ಕಾರಣವಾಗಿದೆ. ಹಾಗಿದ್ದರೆ ಅಸಲೀಯತ್ತು ಏನು? ಏಕೆ ಇಬ್ಬರೂ ಒಂದೇ ರೀತಿಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಅದೂ ಕೂಡ ಜೈಲಿನ್ಲಲಿ ನಟ ದರ್ಶನ್ ಅವರನ್ನು ಬೇಟಿಯಾಗಿ ಬಂದ ಮೇಲೆ!?&lt;/p&gt;&lt;p&gt;&lt;img&gt;&lt;/p&gt;&lt;h3&gt;ಧನ್ವೀರ್ ಕ್ಯಾಮೆರಾ ಮುಂದೆ ಹೇಳಿರೋ ಮಾತು?!&lt;/h3&gt;&lt;p&gt;ದರ್ಶನ್ ಭೇಟಿಯಾಗಿ ಬಂದ ನಟ ಧನ್ವೀರ್ ಕ್ಯಾಮೆರಾ ಮುಂದೆ ಹೇಳಿರೋ ಮಾತು ಒಂದೇ ಶಬ್ದ. 'ದರ್ಶನ್ ಹೇಗಿದ್ದಾರೆ ಎಂಬ ಮಾಧ್ಯಮದ ಅನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿರುವ ನಟ ಧನ್ವೀರ್ ಗೌಡ, 'ಪರವಾಗಿಲ್ಲ' ಎಂದಷ್ಟೇ ಹೇಳಿದ್ದಾರೆ. ಹಾಗಿದ್ರೆ ನಿಜವಾಗಿಯೂ ದರ್ಶನ್-ಧನ್ವೀರ್ ಮಧ್ಯೆ ಏನಾಗುತ್ತಿದೆ? ನಿನ್ನೆ ಧನ್ವೀರ್ ಗೌಡ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಏಕೆ ಹೋಗಿಲ್ಲ. ವಿಜಯಲಕ್ಷ್ಮೀ ಹಾಗೂ ಧನ್ವೀರ್ ಮಧ್ಯೆ ಸಮಸ್ಯೆ ಆಗಿದೆಯಾ ಅಥವಾ ದರ್ಶನ್ ಧನ್ವೀರ್ ಮಧ್ಯೆ ಮನಸ್ತಾಪ ಮೂಡಿದೆಯಾ? ಹೀಗೆ ಹಲವಾರು ಪ್ರಶ್ನೆಗಳು ಈಗ ಕನ್ನಡದ ಸಿನಿರಸಿಕರು, ದರ್ಶನ್ ಆಪ್ತರು ಸೇರಿದಂತೆ ದರ್ಶನ್ ಅಭಿಮಾನಿಗಳ ವಲಯದಲ್ಲಿ ಮೂಡತೊಡಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಷ್ಟೇ!&lt;/p&gt;&lt;p&gt;ಒಟ್ಟಿನಲ್ಲಿ, ಸ್ಯಾಂಡಲ್&zwnj;ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್&zwnj; ಅವರ ಕ್ಲೋಸ್ ಸರ್ಕಲ್&zwnj;ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೇಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ &lsquo;ಸ್ನೇಹವೆಂದರೆ ಸ್ನೇಹ, ಪ್ರೀತಿ ಎಂದರೆ ಪ್ರೀತಿ-ನಮ್ಮಿಬ್ಬರ ನಡುವಿನ ಗೌರವಾದರ ಹಾಗೇ ಇದೆ&rsquo; ಎಂಬುದನ್ನು ಈ ಮೂಲಕ ಜಗತ್ತಿಗೆ ಹೇಳುತ್ತಿದ್ದಾರಾ? ಅಥವಾ ಬೇರೇನೋ ಆಗ್ತಿದ್ಯಾ? ಕಾಲವೇ ಉತ್ತರ ಕೊಡಬೇಕಿದೆ ಎನ್ನೋದು ಸೂಕ್ತ!&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-actor-dhanveer-gowda-repeats-darshan-wife-vijayalakshmi-old-post-after-he-meets-actor-darshan-in-jail/articleshow-cune80y"/>
        </item>
        <item>
            <title><![CDATA[ಒಂದು ಪೋಸ್ಟ್‌ಕಾರ್ಡ್ ಬದಲಿಸಿದ ಇತಿಹಾಸ! ಜೆಆರ್‌ಡಿ ಟಾಟಾಗೆ ಸುಧಾ ಮೂರ್ತಿ ಬರೆದ ಪತ್ರ ಮಹಿಳೆಯರಿಗೆ ತೆರೆದ ಹೊಸ ದಾರಿ.!]]></title>
            <link>https://kannada.asianetnews.com/viral/the-postcard-that-changed-tatas-hiring-policy-sudha-murtys-inspiring-story/articleshow-go69pzg</link>
            <guid isPermaLink="true">https://kannada.asianetnews.com/viral/the-postcard-that-changed-tatas-hiring-policy-sudha-murtys-inspiring-story/articleshow-go69pzg</guid>
            <pubDate>Wed, 29 Jul 2026 10:10:15 +0530</pubDate>
            <description><![CDATA[&lt;p&gt;1974ರಲ್ಲಿ ಟೆಲ್ಕೊ ಉದ್ಯೋಗ ಜಾಹೀರಾತಿನಲ್ಲಿ &quot;ಮಹಿಳೆಯರು ಅರ್ಜಿ ಸಲ್ಲಿಸಬೇಕಾಗಿಲ್ಲ&quot; ಎಂಬ ಸಾಲು ಕಂಡ ಸುಧಾ ಮೂರ್ತಿ, ಜೆಆರ್&zwnj;ಡಿ ಟಾಟಾಗೆ ಪೋಸ್ಟ್&zwnj;ಕಾರ್ಡ್ ಬರೆದು ಲಿಂಗ ತಾರತಮ್ಯವನ್ನು ಪ್ರಶ್ನಿಸಿದರು. ಅದರ ಪರಿಣಾಮವಾಗಿ ಸಂದರ್ಶನದ ಅವಕಾಶ ಪಡೆದು ಟೆಲ್ಕೊದ ಮೊದಲ ಮಹಿಳಾ ಎಂಜಿನಿಯರ್ ಆದರು. ಅವರ ಧೈರ್ಯ ಮಹಿಳೆಯರಿಗೆ ಹೊಸ ಉದ್ಯೋಗ ಅವಕಾಶಗಳ ದಾರಿ ತೆರೆದಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyp2rar7wacchmybjpgn2mtc,imgname-sudha-murty-jrd-tata-1785300003591.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಖ್ಯಾತ ಲೇಖಕಿ, ಸಮಾಜಸೇವಕಿ ಮತ್ತು ಇನ್ಫೋಸಿಸ್ ಫೌಂಡೇಶನ್&zwnj;ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಇಂದು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಆದರೆ ಅವರ ಯಶೋಗಾಥೆ ಆರಂಭವಾದದ್ದು ಒಂದು ಧೈರ್ಯದ ನಿರ್ಧಾರದಿಂದ. ಉದ್ಯೋಗ ಜಾಹೀರಾತಿನಲ್ಲಿ ಕಂಡ ಲಿಂಗ ತಾರತಮ್ಯವನ್ನು ಪ್ರಶ್ನಿಸಿ ಅವರು ಜೆಆರ್&zwnj;ಡಿ ಟಾಟಾಗೆ ಬರೆದ ಒಂದು ಪೋಸ್ಟ್&zwnj;ಕಾರ್ಡ್ ಅವರ ಜೀವನವನ್ನಷ್ಟೇ ಅಲ್ಲ, ಭಾರತೀಯ ಕೈಗಾರಿಕಾ ಕ್ಷೇತ್ರದಲ್ಲಿನ ಮಹಿಳೆಯರ ಅವಕಾಶಗಳನ್ನೂ ಬದಲಿಸಿತು.&lt;/p&gt;&lt;p&gt;&lt;strong&gt;'ಮಹಿಳೆಯರು ಅರ್ಜಿ ಸಲ್ಲಿಸಬೇಕಾಗಿಲ್ಲ' ಎಂಬ ಸಾಲು ಹುಟ್ಟಿಸಿದ ಪ್ರಶ್ನೆ:&lt;/strong&gt;&lt;/p&gt;&lt;p&gt;1974ರಲ್ಲಿ ಬೆಂಗಳೂರಿನ ಇಂಡಿಯನ್ ಇನ್&zwnj;ಸ್ಟಿಟ್ಯೂಟ್ ಆಫ್ ಸೈನ್ಸ್&zwnj;ನಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದ ಸುಧಾ ಮೂರ್ತಿ, ಟೆಲ್ಕೊ (ಈಗಿನ ಟಾಟಾ ಮೋಟಾರ್ಸ್) ಕಂಪನಿಯ ಉದ್ಯೋಗ ಜಾಹೀರಾತು ನೋಡಿದರು. ಅದರ ಕೊನೆಯಲ್ಲಿ &quot;ಮಹಿಳೆಯರು ಅರ್ಜಿ ಸಲ್ಲಿಸಬೇಕಾಗಿಲ್ಲ&quot; ಎಂಬ ಸಾಲು ಅವರ ಗಮನ ಸೆಳೆಯಿತು. ಸಮಾನ ಅವಕಾಶಗಳನ್ನು ಪ್ರತಿಪಾದಿಸುವ ಟಾಟಾ ಸಮೂಹದಿಂದ ಇಂತಹ ನಿಲುವು ನಿರೀಕ್ಷಿಸದ ಅವರು, ನೇರವಾಗಿ ಜೆಆರ್&zwnj;ಡಿ ಟಾಟಾಗೆ ಪೋಸ್ಟ್&zwnj;ಕಾರ್ಡ್ ಬರೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಒಂದು ಪತ್ರದಿಂದ ತೆರೆಯಿತು ಅದೃಷ್ಟದ ಬಾಗಿಲು..!&lt;/strong&gt;&lt;/p&gt;&lt;p&gt;ಕೆಲವೇ ದಿನಗಳಲ್ಲಿ ಸುಧಾ ಮೂರ್ತಿಗೆ ಟೆಲ್ಕೊದಿಂದ ಸಂದರ್ಶನಕ್ಕೆ ಆಹ್ವಾನ ಬಂತು. ಕಂಪನಿಯ ವೆಚ್ಚದಲ್ಲೇ ಪುಣೆಗೆ ತೆರಳಿದ ಅವರು, ತಾಂತ್ರಿಕ ಸಂದರ್ಶನದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಕಾರ್ಖಾನೆ ವಾತಾವರಣದಲ್ಲಿ ಮಹಿಳೆಯರನ್ನು ನೇಮಿಸದಿರುವುದು ಕಂಪನಿಯ ಹಿಂದಿನ ನೀತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರೂ, &quot;ಮೊದಲ ಹೆಜ್ಜೆ ಯಾರಾದರೂ ಇಡಲೇಬೇಕು&quot; ಎಂಬ ಆತ್ಮವಿಶ್ವಾಸದ ಉತ್ತರದಿಂದ ಅವರು ಎಲ್ಲರ ಮನ ಗೆದ್ದರು.&lt;/p&gt;&lt;p&gt;&lt;strong&gt;ಟೆಲ್ಕೊದ ಮೊದಲ ಮಹಿಳಾ ಎಂಜಿನಿಯರ್..!&lt;/strong&gt;&lt;/p&gt;&lt;p&gt;ಸಂದರ್ಶನದ ಬಳಿಕ ಸುಧಾ ಮೂರ್ತಿ ಟೆಲ್ಕೊದ ಅಂಗಡಿ ಮಹಡಿಯಲ್ಲಿ ಕೆಲಸ ಮಾಡಿದ ಮೊದಲ ಮಹಿಳಾ ಎಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಭಾರತೀಯ ಕೈಗಾರಿಕಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೊಸ ಅವಕಾಶಗಳ ಬಾಗಿಲು ತೆರೆದ ಮಹತ್ವದ ಘಟ್ಟವಾಗಿತ್ತು.&lt;/p&gt;&lt;p&gt;&lt;strong&gt;ಜೆಆರ್&zwnj;ಡಿ ಟಾಟಾ ನೀಡಿದ ಜೀವನ ಪಾಠ!&lt;/strong&gt;&lt;/p&gt;&lt;p&gt;1982ರಲ್ಲಿ ಇನ್ಫೋಸಿಸ್ ಆರಂಭಿಸಲು ಟೆಲ್ಕೊ ತೊರೆಯುವಾಗ ಸುಧಾ ಮೂರ್ತಿಗೆ ಜೆಆರ್&zwnj;ಡಿ ಟಾಟಾ ನೀಡಿದ ಸಲಹೆ ಇಂದಿಗೂ ಪ್ರಸ್ತುತವಾಗಿದೆ. &quot;ಯಾವತ್ತೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಯಶಸ್ಸು ಸಿಕ್ಕಾಗ ಸಮಾಜಕ್ಕೆ ಮರಳಿ ಕೊಡಿ&quot; ಎಂಬ ಅವರ ಮಾತು ಸುಧಾ ಮೂರ್ತಿಯ ಬದುಕಿನ ಮಾರ್ಗದರ್ಶಕವಾಯಿತು.&lt;/p&gt;&lt;p&gt;&lt;strong&gt;ಇಂದಿಗೂ ಪ್ರೇರಣೆಯಾಗಿರುವ ಕಥೆ..!&lt;/strong&gt;&lt;/p&gt;&lt;p&gt;ಇಂದು ಎಂಜಿನಿಯರಿಂಗ್ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಸಾವಿರಾರು ಮಹಿಳೆಯರು ಮುನ್ನಡೆಯುತ್ತಿದ್ದಾರೆ. ಒಂದು ಸರಳ ಪೋಸ್ಟ್&zwnj;ಕಾರ್ಡ್ ಅನ್ಯಾಯವನ್ನು ಪ್ರಶ್ನಿಸಿ, ವ್ಯವಸ್ಥೆಯಲ್ಲಿ ಬದಲಾವಣೆ ತರಬಲ್ಲದು ಎಂಬುದಕ್ಕೆ ಸುಧಾ ಮೂರ್ತಿಯ ಈ ಕಥೆಯೇ ಅತ್ಯುತ್ತಮ ಉದಾಹರಣೆ.&lt;/p&gt;]]></content:encoded>
            <category>relationship</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/the-postcard-that-changed-tatas-hiring-policy-sudha-murtys-inspiring-story/articleshow-go69pzg"/>
        </item>
        <item>
            <title><![CDATA[ಪ್ರಪೋಸಲ್ಸ್‌ ಬರ್ತಿದ್ರೂ ಜಿರಳೆ ದೀಪ್ಕೆ ಇನ್ನೂ ಮದ್ವೆಯಾಕಾಗಿಲ್ಲ? ಶಾಕಿಂಗ್‌ ಸತ್ಯ ರಿವೀಲ್‌ ಮಾಡಿದ ಅಮ್ಮ]]></title>
            <link>https://kannada.asianetnews.com/relationship/why-is-cjps-abhijeet-dipke-turning-down-marriage-proposals-his-mother-reveals-suc/articleshow-hgz561m</link>
            <guid isPermaLink="true">https://kannada.asianetnews.com/relationship/why-is-cjps-abhijeet-dipke-turning-down-marriage-proposals-his-mother-reveals-suc/articleshow-hgz561m</guid>
            <pubDate>Wed, 29 Jul 2026 19:45:58 +0530</pubDate>
            <description><![CDATA[&lt;p&gt;'ಕಾಕ್ರೋಚ್&zwnj; ಜನತಾ ಪಕ್ಷ'ದಿಂದ ಫೇಮಸ್ ಆದ ಅಭಿಜೀತ್&zwnj; ದೀಪ್ಕೆಗೆ ಸಾಕಷ್ಟು ಮದುವೆ ಪ್ರಪೋಸಲ್&zwnj;ಗಳು ಬರುತ್ತಿವೆ. ಆದರೂ 30 ವರ್ಷವಾದ ದೀಪ್ಕೆ ಯಾಕೆ ಮದುವೆಯಾಗುತ್ತಿಲ್ಲ ಎಂಬ ರಹಸ್ಯವನ್ನು ಅವರ ತಾಯಿ ಅನಿತಾ ದೀಪ್ಕೆ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq3p0wm6ytq5jnrssjtvdv2,imgname-abhijeet-deepke-1785334530964.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಕ್ರೋಚ್&zwnj; ಜನತಾ ಪಕ್ಷ (CJP) ಆರಂಭಿಸಿ ಅಲ್ಪ ಸಮಯದಲ್ಲಿಯೇ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿಯೂ ಫೇಮಸ್&zwnj; ಆಗಿ ರಾತ್ರೋರಾತ್ರಿ ಹೀರೋ ಫೇಮಸ್&zwnj; ಆದವರು ಅಭಿಜೀತ್&zwnj; ದೀಪ್ಕೆ. ಮೊದಲ ಪ್ರತಿಭಟನೆಯಲ್ಲಿಯೇ ಕೇಂದ್ರ ಸಚಿವರ ರಾಜೀನಾಮ ಪಡೆದು ಒಂದಷ್ಟು ಮಂದಿಗೆ ಹೀರೋ ಆಗಿ ಮೆರೆದಿದ್ದಾರೆ. ಇದೀಗ ಅವರಿಗೆ ಮ್ಯಾರೇಜ್&zwnj; ಪ್ರಪೋಸಲ್ಸ್&zwnj; ಕೂಡ ಸಾಕಷ್ಟು ಬರುತ್ತಿದೆಯಂತೆ.&lt;/p&gt;&lt;p&gt;ಅಂದಹಾಗೆ ಅಭಿಜೀತ್&zwnj; ಅವರಿಗೆ ಈಗ 30 ವರ್ಷ ವಯಸ್ಸು. ಕಳೆದ ಎರಡು ವರ್ಷಗಳಿಂದ ಅಭಿಜೀತ್&zwnj; ಅವರಿಗೆ ಪ್ರಪೋಸಲ್ಸ್&zwnj; ಬರುತ್ತಲೇ ಇವೆಯಂತೆ. ಆದರೆ ಮದುವೆಗೆ ತಮ್ಮ ಮಗ ಒಪ್ತಿಲ್ಲ ಎಂದಿದ್ದಾರೆ ಅವರ ಅಮ್ಮ ಅನಿತಾ ದೀಪ್ಕೆ . ನನಗೂ ಮಗನ ಮದುವೆ ನೋಡುವ ಆಸೆ, ಆದರೆ ಅವನು ಮಾತ್ರ ಮದುವೆಗೆ ಒಪ್ತಿಲ್ಲ ಎಂದಿದ್ದಾರೆ ಅವರು. ಇದೀಗ ಅದರ ಕಾರಣವನ್ನೂ ಬಹಿರಂಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮಗ ಯಾಕೆ ಮದ್ವೆ ಆಗ್ತಿಲ್ಲ ಎಂದು ಅಮ್ಮನ ಕಾರಣ&lt;/strong&gt;&lt;/h2&gt;&lt;p&gt;&quot;ಕಳೆದ ಎರಡು ವರ್ಷಗಳಿಂದ ನಮಗೆ ಮದುವೆಗೆ ಪ್ರಸ್ತಾವನೆಗಳು ಬರುತ್ತಿವೆ. ನಾವು ಹೆಚ್ಚು ಆಸಕ್ತಿ ಹೊಂದಿದ್ದೇವೆ. ಆದರೆ ಅಭಿಜೀತ್&zwnj;, ಆರ್ಥಿಕವಾಗಿ ಸ್ಥಿರವಾದ ನಂತರವೇ ಮದುವೆಯಾಗುವುದಾಗಿ ನಿರಂತರವಾಗಿ ಹೇಳುತ್ತಿದ್ದಾನೆ ಎಂದಿದ್ದಾರೆ ಅಮ್ಮ. &quot;ಅವನು 'ನನ್ನ ಅಧ್ಯಯನ ಮುಗಿದ ನಂತರ ನನಗೆ ಏನಾದರೂ ಸಂಪಾದಿಸಲು ಬಿಡಿ. ಇಲ್ಲದಿದ್ದರೆ, ನಾನು ಹೇಗೆ ಮದುವೆಯಾಗುತ್ತೇನೆ?' ಎಂದು ನಮಗೆ ಹೇಳಿದನು, ನಮ್ಮಲ್ಲಿ ಸಾಕಷ್ಟು ಹಣವಿದೆ ಎಂದು ನಾನು ಅವನಿಗೆ ಹೇಳಿದೆ, ಆದರೆ ಅವನು ತನಗಾಗಿ ಸಂಪಾದಿಸಲು ಬಯಸುತ್ತೇನೆ ಎಂದು ಹೇಳಿದನು. ಅವನು ತುಂಬಾ ಪ್ರಾಮಾಣಿಕರಾಗಿದ್ದು, ಆತ ತಮ್ಮ ಮದುವೆಗೆ ಬಟ್ಟೆಗಳನ್ನು ಹೊರತುಪಡಿಸಿ ಬೇರೆ ಏನನ್ನೂ ತೆಗೆದುಕೊಳ್ಳುವುದಿಲ್ಲ&quot; ಎಂದರು.&lt;/p&gt;&lt;h3&gt;&lt;strong&gt;ಇಲ್ಲೂ ಬಿಡ್ತಿಲ್ಲ ಟ್ರೋಲಿಗರು!&lt;/strong&gt;&lt;/h3&gt;&lt;p&gt;&quot;ನಾವು ಸದ್ಯ ಯಾವುದೇ ಹುಡುಗಿಯನ್ನು ನೋಡಿಲ್ಲ. ಅವನು ಈ ಬಗ್ಗೆ ನಮಗೆ ಏನನ್ನೂ ಹೇಳಿಲ್ಲ. ಅವನ ಒಪ್ಪಿಗೆ ಪಡೆದೇ ಹುಡುಗಿ ನೋಡುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೂ ಸಿಕ್ಕಾಪಟ್ಟೆ ನೆಗೆಟಿವ್&zwnj; ಕಮೆಂಟ್ಸ್&zwnj; ಬರುತ್ತಿವೆ. ಪ್ರತಿಭಟನೆಯ ನಂತರ ಆರ್ಥಿಕವಾಗಿ ತುಂಬಾ ಸ್ವತಂತ್ರವಾಗಿದ್ದು, ಪ್ರತಿಭಟನೆ ಮುಂದುವರೆಯಲು ಇನ್ನೂ ಹೆಚ್ಚು ಹಣ ಹರಿದು ಬರುತ್ತದೆ. ಆಮೇಲಾದ್ರೂ ಮಗನ ಇಚ್ಛೆಯಂತೆ ಮದುವೆ ಮಾಡಿ ಅಂತಿದ್ದಾರೆ ಕೆಲವು ನೆಟ್ಟಿಗರು. ಮತ್ತೆ ಕೆಲವರು ಅಮೆರಿಕದಲ್ಲಿ ಬಿಳಿ ಹೆಂಡ್ತಿಯನ್ನು ನೋಡಿಕೊಂಡಿರಬೇಕು ಬಿಡಿ ಎನ್ನುತ್ತಿದ್ದರೆ, ಪಾಕಿಸ್ತಾನಿ, ಖಲಿಸ್ತಾನಿಗಳ ಬೆಂಬಲ ಇರುವಾಗ ಒಳ್ಳೆಯ ಹುಡುಗಿ ಸಿಗ್ತಾಳೆ, ಆರ್ಥಿಕವಾಗಿಯೂ ಸಿಕ್ಕಾಪಟ್ಟೆ ಸ್ವತಂತ್ರ ಆದ್ಮೇಲೆ ಮದುವೆ ಮಾಡಿ ಅಂತಿದ್ದಾರೆ!&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/why-is-cjps-abhijeet-dipke-turning-down-marriage-proposals-his-mother-reveals-suc/articleshow-hgz561m"/>
        </item>
        <item>
            <title><![CDATA[ಈ ಮೂಲಾಂಕದವರು ಇವರನ್ನ ಲವ್ ಮಾಡಿದ್ರೆ ಕಷ್ಟ ಕಷ್ಟ, ನಂಬಿದ್ರೆ ನಿರಾಸೆ, ನೋವು]]></title>
            <link>https://kannada.asianetnews.com/gallery/astrology/why-root-number-6-faces-betrayal-in-love-2-numbers-they-should-avoid-itsre3b</link>
            <guid isPermaLink="true">https://kannada.asianetnews.com/gallery/astrology/why-root-number-6-faces-betrayal-in-love-2-numbers-they-should-avoid-itsre3b</guid>
            <pubDate>Sun, 26 Jul 2026 18:23:29 +0530</pubDate>
            <description><![CDATA[&lt;p&gt;Numerology Root Number 6: ಅಂಕಜ್ಯೋತಿಷ್ಯದಲ್ಲಿ ಈ ಮೂಲಾಂಕಕ್ಕೆ ವಿಶೇಷ ಸ್ಥಾನವಿದೆ. ಶುಕ್ರನ ಅಧಿಪತ್ಯ ಹೊಂದಿರುವ ಇವರು ಪ್ರೀತಿಯ ವಿಷಯದಲ್ಲಿ ಅತ್ಯಂತ ಪ್ರಾಮಾಣಿಕರು. ಆದರೆ ಇವರ ಇದೇ ಗುಣವೇ ಇವರಿಗೆ ಶಾಪವಾಗುವುದು ಹೇಗೆ? ಯಾರಿಂದ ಇವರು ದೂರವಿರಬೇಕು? ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyf70nvzh892aav3tz0vdfx4,imgname-thumbnail---2026-07-26t180353.152-1785069590398.jpg" type="image/jpeg" height="390" width="690"/>
            <content:encoded><![CDATA[&lt;p&gt;Numerology Root Number 6: ಅಂಕಜ್ಯೋತಿಷ್ಯದಲ್ಲಿ ಈ ಮೂಲಾಂಕಕ್ಕೆ ವಿಶೇಷ ಸ್ಥಾನವಿದೆ. ಶುಕ್ರನ ಅಧಿಪತ್ಯ ಹೊಂದಿರುವ ಇವರು ಪ್ರೀತಿಯ ವಿಷಯದಲ್ಲಿ ಅತ್ಯಂತ ಪ್ರಾಮಾಣಿಕರು. ಆದರೆ ಇವರ ಇದೇ ಗುಣವೇ ಇವರಿಗೆ ಶಾಪವಾಗುವುದು ಹೇಗೆ? ಯಾರಿಂದ ಇವರು ದೂರವಿರಬೇಕು? ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಮೋಸ ಅಥವಾ ನಿರಾಸೆ ಕಟ್ಟಿಟ್ಟ ಬುತ್ತಿ&lt;/strong&gt;ಅಂಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಮೂಲಾಂಕಕ್ಕೂ ತನ್ನದೇ ಆದ ವಿಶಿಷ್ಟ ಸ್ವಭಾವ, ಆಲೋಚನಾ ಲಹರಿ ಮತ್ತು ಸಂಬಂಧಗಳನ್ನು ನಿಭಾಯಿಸುವ ಶೈಲಿ ಇರುತ್ತದೆ. ಮೂಲಾಂಕ 6 ರ ಅಧಿಪತಿ 'ಶುಕ್ರ' (Venus). ಶುಕ್ರ ಗ್ರಹವನ್ನು ಪ್ರೀತಿ, ಆಕರ್ಷಣೆ, ಸೌಂದರ್ಯ ಮತ್ತು ಸಂಬಂಧಗಳ ಕಾರಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಮೂಲಾಂಕ 6 ರಲ್ಲಿ ಜನಿಸಿದವರು ಪ್ರೀತಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ ಮತ್ತು ಸಂಬಂಧಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಲು ಪ್ರಯತ್ನಿಸುತ್ತಾರೆ.&lt;/p&gt;&lt;p&gt;ಆದರೆ, ಇದೇ ಸ್ವಭಾವವು ಹಲವು ಬಾರಿ ಇವರಿಗೆ ಮುಳುವಾಗುತ್ತದೆ. ಅಂಕಜ್ಯೋತಿಷ್ಯದ ಪ್ರಕಾರ, ಕೆಲವು ನಿರ್ದಿಷ್ಟ ಮೂಲಾಂಕದ ವ್ಯಕ್ತಿಗಳೊಂದಿಗೆ ಇವರ ಹೊಂದಾಣಿಕೆ ಸರಿಯಾಗಿ ಇರುವುದಿಲ್ಲ. ಅಂತಹವರೊಂದಿಗೆ ಸಂಬಂಧ ಬೆಳೆಸಿದರೆ ಇವರಿಗೆ ಅಂತಿಮವಾಗಿ ಮೋಸ ಅಥವಾ ನಿರಾಸೆಯೇ ಕಾಯ್ದಿರುತ್ತದೆ.&lt;/p&gt;&lt;img&gt;&lt;p&gt;&lt;strong&gt;ಯಾವ ಮೂಲಾಂಕದವರ ಬಗ್ಗೆ ಎಚ್ಚರಿಕೆಯಿಂದ ಇರ್ಬೇಕು?&lt;/strong&gt;&lt;strong&gt;ಮೂಲಾಂಕ 3&lt;/strong&gt;ಮೂಲಾಂಕ 3 ರ ವ್ಯಕ್ತಿಗಳು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ ಮತ್ತು ಸ್ವತಂತ್ರ ವಿಚಾರದವರಾಗಿರುತ್ತಾರೆ. ಅವರಿಗೆ ತಮ್ಮ ಸ್ವಾತಂತ್ರ್ಯವೇ ಮುಖ್ಯ. ಈ ಕಾರಣದಿಂದಾಗಿ, ಅತಿಯಾದ ಭಾವನಾತ್ಮಕ ಸಂಬಂಧ ಬಯಸುವ ಮೂಲಾಂಕ 6 ರ ವ್ಯಕ್ತಿಗಳೊಂದಿಗೆ ಇವರ ಆದ್ಯತೆಗಳು ಹೊಂದಿಕೆಯಾಗುವುದಿಲ್ಲ. ಇದು ಪದೇ ಪದೇ ತಪ್ಪು ತಿಳುವಳಿಕೆಗೆ ಕಾರಣವಾಗಬಹುದು.&lt;/p&gt;&lt;img&gt;&lt;p&gt;&lt;strong&gt;ಮೂಲಾಂಕ 5&lt;/strong&gt;ಇವರು ಬದಲಾವಣೆ ಮತ್ತು ಸಾಹಸಗಳನ್ನು ಇಷ್ಟಪಡುವವರು. ಒಂದೇ ಕಡೆ ಕಟ್ಟುಬಿದ್ದು ಇರಲು ಇವರು ಇಷ್ಟಪಡುವುದಿಲ್ಲ. ಆದರೆ ಮೂಲಾಂಕ 6 ರವರು ಸ್ಥಿರವಾದ ಮತ್ತು ದೀರ್ಘಕಾಲದ ಸಂಬಂಧವನ್ನು ಬಯಸುತ್ತಾರೆ. ಈ ಜೀವನಶೈಲಿಯ ವ್ಯತ್ಯಾಸವು ಸಂಬಂಧದಲ್ಲಿ ಬಿರುಕು ಮೂಡಿಸಬಹುದು.&lt;/p&gt;&lt;img&gt;&lt;p&gt;&lt;strong&gt;ಮೂಲಾಂಕ 6 ಪ್ರೀತಿಯಲ್ಲಿ ಮೋಸ ಹೋಗಲು ಕಾರಣಗಳೇನು?&lt;/strong&gt;&lt;strong&gt;ಅತಿಯಾದ ಭಾವುಕತೆ: &lt;/strong&gt;ಇವರು ಹೃದಯದಿಂದ ಸಂಬಂಧಗಳನ್ನು ನಿಭಾಯಿಸುತ್ತಾರೆ. ಯಾರಾದರೂ ಇಷ್ಟವಾದರೆ ತಕ್ಷಣವೇ ಅವರನ್ನು ನಂಬಿಬಿಡುತ್ತಾರೆ. ವ್ಯಕ್ತಿಯ ಪೂರ್ವಾಪರ ಅರಿಯದೆ ಪ್ರೀತಿಯಲ್ಲಿ ಮುಳುಗುವುದು ಇವರಿಗೆ ಸಮಸ್ಯೆಯಾಗುತ್ತದೆ.&lt;/p&gt;&lt;p&gt;&lt;strong&gt;ಕುರುಡು ನಂಬಿಕೆ: &lt;/strong&gt;ಇವರು ಅತ್ಯಂತ ಪ್ರಾಮಾಣಿಕರು, ಹಾಗಾಗಿ ಎದುರಿಗಿರುವ ವ್ಯಕ್ತಿಯೂ ಅಷ್ಟೇ ಪ್ರಾಮಾಣಿಕ ಎಂದು ಭಾವಿಸುತ್ತಾರೆ. ನಂಬಿಕೆಗೆ ಅರ್ಹರಲ್ಲದ ವ್ಯಕ್ತಿಯನ್ನು ಅತಿಯಾಗಿ ನಂಬಿ ನಂತರ ನೋವುಣ್ಣುತ್ತಾರೆ.&lt;/p&gt;&lt;p&gt;&lt;strong&gt;ಅತಿಯಾದ ಹೊಂದಾಣಿಕೆ: &lt;/strong&gt;ಸಂಬಂಧವನ್ನು ಉಳಿಸಿಕೊಳ್ಳಲು ಇವರು ತಮ್ಮ ಇಷ್ಟಕಷ್ಟಗಳನ್ನು ಬದಿಗಿಟ್ಟು ಯಾವುದಕ್ಕೂ ಸಿದ್ಧರಾಗುತ್ತಾರೆ. ಈ ಅತಿಯಾದ ಹೊಂದಾಣಿಕೆಯ ಗುಣವನ್ನೇ ಎದುರಿಗಿರುವವರು ಇವರ ದೌರ್ಬಲ್ಯವೆಂದು ಭಾವಿಸಿ ಮೋಸ ಮಾಡುತ್ತಾರೆ.&lt;/p&gt;&lt;p&gt;ಹೀಗಾಗಿ, ಮೂಲಾಂಕ 6 ರವರು ಸಂಬಂಧ ಬೆಳೆಸುವ ಮೊದಲು ಎದುರಿಗಿರುವವರ ಸ್ವಭಾವವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.&lt;/p&gt;]]></content:encoded>
            <category>relationship</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/astrology/why-root-number-6-faces-betrayal-in-love-2-numbers-they-should-avoid-itsre3b"/>
        </item>
        <item>
            <title><![CDATA[ತಡವಾಗಿ ಮದುವೆಯಾದ್ರೆ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ಲೈಫ್ ಫುಲ್ ಸೆಟಲ್ ಆಗುತ್ತೆ!]]></title>
            <link>https://kannada.asianetnews.com/gallery/relationship/astrology-reveals-3-zodiac-signs-that-find-success-after-late-marriage-suh-lsn4pgx</link>
            <guid isPermaLink="true">https://kannada.asianetnews.com/gallery/relationship/astrology-reveals-3-zodiac-signs-that-find-success-after-late-marriage-suh-lsn4pgx</guid>
            <pubDate>Sun, 26 Jul 2026 13:56:48 +0530</pubDate>
            <description><![CDATA[&lt;p&gt;ಲೇಟಾಗಿ ಮದುವೆಯಾದ್ರೆ ಲೈಫ್ ಹಾಳಾಯ್ತು ಅಂತ ಚಿಂತೆ ಮಾಡ್ಬೇಡಿ, ಜ್ಯೋತಿಷ್ಯದ ಪ್ರಕಾರ, ಈ 3 ರಾಶಿಯವರಿಗೆ ತಡವಾದ ಮದುವೆಯೇ ಅದೃಷ್ಟ, ಸಂಪತ್ತು ಮತ್ತು ಸಂತೋಷದ ದಾಂಪತ್ಯವನ್ನು ತಂದುಕೊಡುತ್ತದಂತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyer2a3rjrwkf6654xrjeg9y,imgname-astrology-reveals-3-zodiac-signs-that-find-success-after-late-marriage-1785053915256.jpg" type="image/jpeg" height="390" width="690"/>
            <content:encoded><![CDATA[&lt;p&gt;ಲೇಟಾಗಿ ಮದುವೆಯಾದ್ರೆ ಲೈಫ್ ಹಾಳಾಯ್ತು ಅಂತ ಚಿಂತೆ ಮಾಡ್ಬೇಡಿ, ಜ್ಯೋತಿಷ್ಯದ ಪ್ರಕಾರ, ಈ 3 ರಾಶಿಯವರಿಗೆ ತಡವಾದ ಮದುವೆಯೇ ಅದೃಷ್ಟ, ಸಂಪತ್ತು ಮತ್ತು ಸಂತೋಷದ ದಾಂಪತ್ಯವನ್ನು ತಂದುಕೊಡುತ್ತದಂತೆ.&lt;/p&gt;&lt;img&gt;&lt;p&gt;ಇವತ್ತಿನ ಸಮಾಜದಲ್ಲಿ, 25 ರಿಂದ 30 ವರ್ಷದೊಳಗೆ ಮದುವೆ ಆಗಿಲ್ಲ ಅಂದ್ರೆ ಸಾಕು, ಅನೇಕರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಸಂಬಂಧಿಕರ ಪ್ರಶ್ನೆಗಳು, ಸಾಮಾಜಿಕ ಒತ್ತಡ, ಭವಿಷ್ಯದ ಬಗ್ಗೆ ಭಯ ಹೆಚ್ಚಾಗಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರ ಇದನ್ನು ಬೇರೆ ದೃಷ್ಟಿಕೋನದಲ್ಲಿ ನೋಡುತ್ತದೆ. ಪ್ರತಿಯೊಬ್ಬರಿಗೂ ಮದುವೆಯಾಗಬೇಕಾದ ಸಮಯವನ್ನು ಗ್ರಹಗಳ ಚಲನೆ ನಿರ್ಧರಿಸುತ್ತದೆ ಎಂದು ನಂಬಲಾಗಿದೆ. ಕೆಲವರಿಗೆ ಶನಿಯು ನಿಧಾನವಾಗಿ ಫಲ ನೀಡುವುದರಿಂದ ಮದುವೆ ತಡವಾಗಬಹುದು. ಆದರೆ ಇದೇ ವಿಳಂಬ, ಜೀವನದಲ್ಲಿ ಅತ್ಯಂತ ಸೂಕ್ತವಾದ ಸಂಗಾತಿ ಮತ್ತು ದೀರ್ಘಕಾಲದ ದಾಂಪತ್ಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ಮಕರ ರಾಶಿಯ ಅಧಿಪತಿ ಶನಿ. ಶನಿಯು ಯಾವುದೇ ವಿಷಯವನ್ನು ಅವಸರವಾಗಿ ನೀಡುವುದಿಲ್ಲ, ಆದರೆ ನೀಡುವ ಫಲವು ದೀರ್ಘಕಾಲ ಇರುತ್ತದೆ ಎಂಬುದು ಜ್ಯೋತಿಷ್ಯದ ನಂಬಿಕೆ.&amp;nbsp;&lt;/p&gt;&lt;p&gt;ತಡವಾದ ಮದುವೆ ಮಕರ ರಾಶಿಯವರಿಗೆ ಯಾಕೆ ಒಳ್ಳೆಯದು? &amp;nbsp;ಯುವ ವಯಸ್ಸಿನಲ್ಲಿ ವೃತ್ತಿ ಮತ್ತು ಆರ್ಥಿಕ ಅಡಿಪಾಯ ಗಟ್ಟಿಯಾಗಿರುತ್ತದೆ. &bull; ನಂತರ ಮದುವೆಯಾಗುವುದರಿಂದ ಕುಟುಂಬದ ಜವಾಬ್ದಾರಿಯನ್ನು ಸುಲಭವಾಗಿ ನಿಭಾಯಿಸಬಹುದು. &bull; ಜೀವನ ಸಂಗಾತಿಯನ್ನು ನಿಧಾನವಾಗಿ ಆಯ್ಕೆ ಮಾಡುವ ಅವಕಾಶ ಸಿಗುತ್ತದೆ. &amp;nbsp;ಕುಟುಂಬದಲ್ಲಿ ತಿಳುವಳಿಕೆ ಮತ್ತು ಪರಸ್ಪರ ಗೌರವ ಹೆಚ್ಚಾಗುತ್ತದೆ.&amp;nbsp;&lt;/p&gt;&lt;p&gt;ಮದುವೆಯ ನಂತರ ಏನು ಬದಲಾವಣೆ? ಹಣದ ಹರಿವು ಹೆಚ್ಚಾಗಬಹುದು. &bull; ಆಸ್ತಿ ಮಾಡುವ ಅವಕಾಶಗಳು ಸೃಷ್ಟಿಯಾಗಬಹುದು. &bull; ದಂಪತಿಗಳ ನಡುವೆ ನಂಬಿಕೆ ಬಲಗೊಳ್ಳುತ್ತದೆ. &bull; ಕುಟುಂಬದಲ್ಲಿ ದೀರ್ಘಕಾಲದ ಶಾಂತಿ ನೆಲೆಸಬಹುದು.&lt;/p&gt;&lt;img&gt;&lt;p&gt;ಕನ್ಯಾ ರಾಶಿಯವರು ಯಾವುದೇ ವಿಷಯವನ್ನು ಆಳವಾಗಿ ವಿಶ್ಲೇಷಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗಾಗಿ ಮದುವೆಯ ವಿಷಯದಲ್ಲೂ ಅವರು ಅವಸರ ಮಾಡುವುದಿಲ್ಲ.&amp;nbsp;&lt;/p&gt;&lt;p&gt;ಲೇಟ್ ಮ್ಯಾರೇಜ್ ಯಾಕೆ ಉತ್ತಮ? ಜೀವನ ಸಂಗಾತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಆಯ್ಕೆ ಮಾಡುತ್ತಾರೆ. &bull; ವೃತ್ತಿಯಲ್ಲಿ ನೆಲೆನಿಂತ ನಂತರ ಮದುವೆ ನಡೆಯುತ್ತದೆ. &bull; ಕೌಟುಂಬಿಕ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಕಡಿಮೆಯಾಗಬಹುದು. &bull; ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವ ಮನಸ್ಥಿತಿ ಬೆಳೆಯುತ್ತದೆ.&amp;nbsp;&lt;/p&gt;&lt;p&gt;ಇದರಿಂದ ಸಿಗುವ ಲಾಭಗಳು ಕುಟುಂಬದಲ್ಲಿ ಅನಗತ್ಯ ವಾಗ್ವಾದಗಳು ಕಡಿಮೆಯಾಗುತ್ತವೆ. &bull; ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ಯೋಜಿಸಲು ಸಾಧ್ಯವಾಗುತ್ತದೆ. &bull; ಮನಃಶಾಂತಿ ಮತ್ತು ದಂಪತಿಗಳ ನಡುವಿನ ಒಗ್ಗಟ್ಟು ಹೆಚ್ಚಾಗಬಹುದು.&lt;/p&gt;&lt;img&gt;&lt;p&gt;ಕುಂಭ ರಾಶಿಯವರು ತಮ್ಮ ಕನಸುಗಳು ಮತ್ತು ಗುರಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ, ಜವಾಬ್ದಾರಿಗಳು ಮತ್ತು ವೈಯಕ್ತಿಕ ಗುರಿಗಳ ನಡುವೆ ಸಮತೋಲನ ಸಾಧಿಸುವುದು ಕಷ್ಟವಾಗಬಹುದು.&amp;nbsp;&lt;/p&gt;&lt;p&gt;ತಡ ವಯಸ್ಸಿನಲ್ಲಿ ಮದುವೆ ಯಾಕೆ ವಿಶೇಷ? &bull; ಮಾನಸಿಕ ಪ್ರಬುದ್ಧತೆ ಹೆಚ್ಚಾಗುತ್ತದೆ. &bull; ಸಂಬಂಧಗಳನ್ನು ತಾಳ್ಮೆಯಿಂದ ನಿಭಾಯಿಸುವ ಸಾಮರ್ಥ್ಯ ಬೆಳೆಯುತ್ತದೆ.&amp;nbsp;&lt;/p&gt;&lt;p&gt;ಆರ್ಥಿಕ ಸ್ಥಿತಿ ಸದೃಢವಾದ ನಂತರ ಮದುವೆ ನಡೆಯುತ್ತದೆ. &amp;nbsp;ಕೌಟುಂಬಿಕ ಜೀವನದಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾಗಿರುತ್ತದೆ. ಮದುವೆಯ ನಂತರ ದಂಪತಿಗಳ ನಡುವೆ ಆಳವಾದ ಸ್ನೇಹ ಬೆಳೆಯಬಹುದು. &bull; ವೃತ್ತಿ ಮತ್ತು ಕುಟುಂಬ ಜೀವನದಲ್ಲಿ ಸಮತೋಲನ ಸಿಗುತ್ತದೆ. &bull; ಭವಿಷ್ಯದ ಯೋಜನೆಗಳನ್ನು ಒಟ್ಟಾಗಿ ಯಶಸ್ವಿಯಾಗಿ ಕಾರ್ಯಗತಗೊಳಿಸಬಹುದು.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/astrology-reveals-3-zodiac-signs-that-find-success-after-late-marriage-suh-lsn4pgx"/>
        </item>
        <item>
            <title><![CDATA[ಬ್ರೇಕ್‌-ಅಪ್‌ನಿಂದ ಕುಗ್ಗಲಿಲ್ಲ... ಮಗಳ ಭವಿಷ್ಯಕ್ಕಾಗಿ ಪುಸ್ತಕ ಹಿಡಿದು ಕಷ್ಟಕ್ಕೆ ಸಡ್ಡು ಹೊಡೆದ 'ಸೂಪರ್ ಮಾಮ್'!]]></title>
            <link>https://kannada.asianetnews.com/viral/she-left-her-toddler-at-home-to-finish-college-now-her-story-is-inspiring-thousands/articleshow-ntxcz40</link>
            <guid isPermaLink="true">https://kannada.asianetnews.com/viral/she-left-her-toddler-at-home-to-finish-college-now-her-story-is-inspiring-thousands/articleshow-ntxcz40</guid>
            <pubDate>Sat, 25 Jul 2026 19:00:14 +0530</pubDate>
            <description><![CDATA[&lt;p&gt;12ನೇ ತರಗತಿಯ ನಂತರ ಮದುವೆ, ಬಳಿಕ ತಾಯ್ತನ ಮತ್ತು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಿದ ಮೋಹನಾ, ಮಗಳ ಭವಿಷ್ಯಕ್ಕಾಗಿ ಮತ್ತೆ ಕಾಲೇಜಿಗೆ ಸೇರಿದರು. ಕುಟುಂಬ ಹಾಗೂ ಕಾಲೇಜಿನ ಬೆಂಬಲದೊಂದಿಗೆ ಪದವಿ ಪೂರ್ಣಗೊಳಿಸಿದ ಅವರು ಈಗ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದತ್ತ ಹೆಜ್ಜೆಯಿಡುತ್ತಿದ್ದು, ಮಹಿಳೆಯರಿಗೆ ಶಿಕ್ಷಣವೇ ದೊಡ್ಡ ಶಕ್ತಿ ಎಂದು ಸಂದೇಶ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kychpvaqaz7cas3jbeshgc9d,imgname-24-year-old-mohana-with-her-5-year-old-daughter-deeksha-1784980139350.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮದುವೆ ಮತ್ತು ತಾಯ್ತನದ ಬಳಿಕವೂ ಶಿಕ್ಷಣದ ಕನಸು ಜೀವಂತವಾಗಿತ್ತು..&lt;/strong&gt;&lt;/p&gt;&lt;p&gt;ಜೀವನದಲ್ಲಿ ಅನಿರೀಕ್ಷಿತ ಸವಾಲುಗಳು ಬಂದರೂ, ಕನಸುಗಳನ್ನು ಕೈಬಿಡದವರು ಅಂತಿಮವಾಗಿ ಯಶಸ್ಸಿನ ದಾರಿ ಕಂಡುಕೊಳ್ಳುತ್ತಾರೆ. ಯುವ ತಾಯಿ ಮೋಹನಾ ಅವರ ಜೀವನ ಇದಕ್ಕೆ ಅತ್ಯುತ್ತಮ ಉದಾಹರಣೆ. 12ನೇ ತರಗತಿ ಮುಗಿದ ತಕ್ಷಣ ಮದುವೆಯಾದ ಅವರು, ಕೋವಿಡ್ ಸಾಂಕ್ರಾಮಿಕ, ಗರ್ಭಧಾರಣೆ ಮತ್ತು ತಾಯ್ತನದ ಕಾರಣದಿಂದ ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯಿತು. ಆದರೆ ಓದಿನ ಮೇಲಿನ ಆಸಕ್ತಿ ಎಂದಿಗೂ ಕಡಿಮೆಯಾಗಲಿಲ್ಲ.&lt;/p&gt;&lt;p&gt;&lt;strong&gt;ವೈಯಕ್ತಿಕ ಸಂಕಷ್ಟವೇ ಹೊಸ ಆರಂಭಕ್ಕೆ ಕಾರಣವಾಯಿತು!&lt;/strong&gt;&lt;/p&gt;&lt;p&gt;ವೈಯಕ್ತಿಕ ಜೀವನದಲ್ಲಿ ಎದುರಾದ ಕಠಿಣ ಪರಿಸ್ಥಿತಿಯ ಬಳಿಕ, ತಮ್ಮ ಮತ್ತು ಮಗಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಶಿಕ್ಷಣವೇ ಮುಖ್ಯ ಮಾರ್ಗ ಎಂಬುದನ್ನು ಮೋಹನಾ ಅರಿತುಕೊಂಡರು. ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂಬ ದೃಢ ನಿರ್ಧಾರದಿಂದ ಅವರು ಮತ್ತೆ ಕಾಲೇಜಿಗೆ ಸೇರ್ಪಡೆಯಾದರು.&lt;/p&gt;&lt;p&gt;&lt;strong&gt;ತಾಯ್ತನ ಮತ್ತು ಕಾಲೇಜು ಜೀವನದ ಕಠಿಣ ಸಮತೋಲನ..!&lt;/strong&gt;&lt;/p&gt;&lt;p&gt;ಕಾಲೇಜು ಓದುತ್ತಿದ್ದ ದಿನಗಳಲ್ಲಿ ಅವರ ಮಗಳು ಇನ್ನೂ ಚಿಕ್ಕವಳಾಗಿದ್ದಳು. ಕಾಲೇಜಿಗೆ ಹೋಗುವ ಸಮಯದಲ್ಲಿ ಮಗುವಿನ ಆರೈಕೆಯ ಜವಾಬ್ದಾರಿಯನ್ನು ತಾಯಿ ಹೊತ್ತುಕೊಂಡರು. ತರಗತಿಗಳು, ಪರೀಕ್ಷೆಗಳು, ಅಸೈನ್&zwnj;ಮೆಂಟ್&zwnj;ಗಳ ಜೊತೆಗೆ ಮನೆ ಜವಾಬ್ದಾರಿಗಳನ್ನೂ ಸಮತೋಲನಗೊಳಿಸುವುದು ಸುಲಭವಾಗಿರಲಿಲ್ಲ. ಮಗಳು ಅನಾರೋಗ್ಯಕ್ಕೆ ಒಳಗಾದಾಗ ಆಸ್ಪತ್ರೆಗೂ ಓಡಾಡಬೇಕಾಗುತ್ತಿತ್ತು. ಆದರೂ ಯಾವುದೇ ಹಂತದಲ್ಲೂ ಓದನ್ನು ಕೈಬಿಡುವ ಯೋಚನೆ ಮಾಡಲಿಲ್ಲ.&lt;/p&gt;&lt;p&gt;&lt;strong&gt;ಕುಟುಂಬ ಮತ್ತು ಕಾಲೇಜಿನ ಬೆಂಬಲವೇ ದೊಡ್ಡ ಶಕ್ತಿ..!&lt;/strong&gt;&lt;/p&gt;&lt;p&gt;ಮೋಹನಾ ಅವರ ಹೋರಾಟದಲ್ಲಿ ಕುಟುಂಬದ ಬೆಂಬಲ ಅತ್ಯಂತ ಪ್ರಮುಖವಾಗಿತ್ತು. ವಿಶೇಷವಾಗಿ ತಾಯಿ ನೀಡಿದ ಸಹಕಾರ ಅವರ ಶಿಕ್ಷಣ ಮುಂದುವರಿಸಲು ನೆರವಾಯಿತು. ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಹ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತರಗತಿಯ ವೇಳೆಯಲ್ಲಿ ವಿಶೇಷ ಸಡಿಲಿಕೆ ನೀಡಿದರು. ಶುಲ್ಕದಲ್ಲೂ ನೆರವು ನೀಡಿ ಅವರ ಕನಸಿಗೆ ಬೆಂಬಲವಾಗಿ ನಿಂತರು.&lt;/p&gt;&lt;p&gt;&lt;strong&gt;ಮಗಳ ಜೊತೆ ಬೆಳೆದ ಕನಸು..!&lt;/strong&gt;&lt;/p&gt;&lt;p&gt;ಮಗಳು ಕಿಂಡರ್&zwnj;ಗಾರ್ಟನ್&zwnj;ಗೆ ಹೋಗುತ್ತಿದ್ದರೆ, ತಾಯಿ ಕಾಲೇಜಿಗೆ ತೆರಳುತ್ತಿದ್ದರು. ಕೆಲವೊಮ್ಮೆ ಮಗಳು ಕಾಲೇಜಿಗೂ ಭೇಟಿ ನೀಡುತ್ತಿದ್ದಳು. ಉಪನ್ಯಾಸಕರು ಮತ್ತು ಸಹಪಾಠಿಗಳ ಪ್ರೀತಿಯಿಂದ ಆಕೆಯೂ ಕಾಲೇಜಿನ ಒಂದು ಭಾಗವಾಗಿಬಿಟ್ಟಳು. ಈ ಅನುಭವ ಮೋಹನಾ ಅವರಿಗೆ ಮತ್ತಷ್ಟು ಆತ್ಮವಿಶ್ವಾಸ ನೀಡಿತು.&lt;/p&gt;&lt;p&gt;&lt;strong&gt;ಇದೀಗ ಹೊಸ ಗುರಿಯತ್ತ ಹೆಜ್ಜೆ..!&lt;/strong&gt;&lt;/p&gt;&lt;p&gt;ಪ್ರಸ್ತುತ ಮೋಹನಾ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ MBA ಪದವಿ ಪಡೆಯುವ ಯೋಜನೆ ಹೊಂದಿದ್ದು, ದೂರಸ್ಥ ಉದ್ಯೋಗಾವಕಾಶಗಳನ್ನೂ ಅನ್ವೇಷಿಸುತ್ತಿದ್ದಾರೆ. ತಮ್ಮ ವೃತ್ತಿಜೀವನದ ಜೊತೆಗೆ ಮಗಳ ಭವಿಷ್ಯವನ್ನೂ ಭದ್ರಗೊಳಿಸುವ ಕನಸಿನತ್ತ ಸಾಗುತ್ತಿದ್ದಾರೆ.&lt;/p&gt;&lt;p&gt;&lt;strong&gt;ಮಹಿಳೆಯರಿಗೆ ಶಿಕ್ಷಣವೇ ದೊಡ್ಡ ಶಕ್ತಿ..!&lt;/strong&gt;&lt;/p&gt;&lt;p&gt;ತಮ್ಮ ಜೀವನಾನುಭವದ ಆಧಾರದ ಮೇಲೆ ಮೋಹನಾ ನೀಡುವ ಸಂದೇಶ ಸ್ಪಷ್ಟವಾಗಿದೆ. ಮಹಿಳೆಯರಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಅತ್ಯಂತ ಅಗತ್ಯ. ಜೀವನ ಯಾವ ಕ್ಷಣದಲ್ಲಾದರೂ ಬದಲಾಗಬಹುದು. ಅಂತಹ ಸಂದರ್ಭಗಳಲ್ಲಿ ತಮ್ಮ ಕಾಲಿನ ಮೇಲೆ ನಿಲ್ಲಲು ಶಿಕ್ಷಣವೇ ನಿಜವಾದ ಶಕ್ತಿ. ಅವರ ಕಥೆ ಕೇವಲ ಯಶೋಗಾಥೆಯಲ್ಲ; ಸಂಕಷ್ಟದ ನಡುವೆಯೂ ಧೈರ್ಯ, ಪರಿಶ್ರಮ ಮತ್ತು ಶಿಕ್ಷಣದ ಮಹತ್ವವನ್ನು ಸಾರುವ ಪ್ರೇರಣಾದಾಯಕ ಜೀವನಪಾಠವಾಗಿದೆ.&lt;/p&gt;]]></content:encoded>
            <category>relationship</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/she-left-her-toddler-at-home-to-finish-college-now-her-story-is-inspiring-thousands/articleshow-ntxcz40"/>
        </item>
        <item>
            <title><![CDATA[ಕಳೆದ ವರ್ಷ ಗರ್ಭಿಣಿಯಾಗಿದ್ದಾಗಲೇ ಅಕ್ರಮ ಸಂಬಂಧ ಇಟ್ಕೊಂಡು ಸಿಕ್ಕಿಬಿದ್ದ ಗಂಡ: ಒಂದೇ ವರ್ಷದಲ್ಲಿ ಸಾಧಿಸಿದ ನಟಿ]]></title>
            <link>https://kannada.asianetnews.com/entertainment/actress-asmitha-husband-extramarital-affair-during-pregnancy-career-success-suh/articleshow-o88ctag</link>
            <guid isPermaLink="true">https://kannada.asianetnews.com/entertainment/actress-asmitha-husband-extramarital-affair-during-pregnancy-career-success-suh/articleshow-o88ctag</guid>
            <pubDate>Mon, 27 Jul 2026 09:18:08 +0530</pubDate>
            <description><![CDATA[&lt;p&gt;Studio One Golden Icon Awards: ಜೀವನದಲ್ಲಿ ಎದುರಾದ ಕಷ್ಟಗಳ ನಡುವೆಯೂ ಛಲ ಬಿಡದೆ ಮುನ್ನಡೆದರೆ ಯಶಸ್ಸು ಸಾಧ್ಯ ಎಂಬುದಕ್ಕೆ ತಮಿಳು ನಟಿ, ಮೇಕಪ್&zwnj; ಆರ್ಟಿಸ್ಟ್&zwnj; ಅಷ್ಮಿತಾ &amp;nbsp;ಅವರ ಪಯಣವೇ ಸಾಕ್ಷಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kygtswaxpgm2kj1f4kk4k0w0,imgname-actress-asmitha-husband-extramarital-affair-during-pregnancy-career-success-1785123893597.jpg" type="image/jpeg" height="390" width="690"/>
            <content:encoded><![CDATA[&lt;p&gt;Makeup Artist Asmitha | Studio One Golden Icon Awards: ಜೀವನದಲ್ಲಿ ಎದುರಾದ ಕಷ್ಟಗಳ ನಡುವೆಯೂ ಛಲ ಬಿಡದೆ ಮುನ್ನಡೆದರೆ ಯಶಸ್ಸು ಸಾಧ್ಯ ಎಂಬುದಕ್ಕೆ ತಮಿಳು ನಟಿ, ಮೇಕಪ್&zwnj; ಆರ್ಟಿಸ್ಟ್&zwnj; ಅಷ್ಮಿತಾ ಅವರ ಪಯಣವೇ ಸಾಕ್ಷಿ. ವೈಯಕ್ತಿಕ ಜೀವನದಲ್ಲಿ ಎದುರಾದ ಸವಾಲುಗಳ ನಡುವೆಯೂ ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆ ಮಾಡಿದ ಅಸ್ಮಿತಾ, ಇದೀಗ ಪ್ರತಿಷ್ಠಿತ Studio One Golden Icon Award ಸ್ವೀಕರಿಸಿ ಸಂಭ್ರಮಿಸಿದ್ದಾರೆ.&lt;/p&gt;&lt;p&gt;ಮೇಕಪ್ ಹಾಗೂ ಬ್ಯೂಟಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಸ್ಮಿತಾ, ಈ ವಿಶೇಷ ಪ್ರಶಸ್ತಿ ತಮ್ಮ ವೃತ್ತಿಜೀವನದ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಎಂದು ಹೇಳಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ತಮ್ಮ ಸಂತಸವನ್ನು ಹಂಚಿಕೊಂಡಿರುವ ಅವರು, ತಮ್ಮ ಯಶಸ್ಸಿನ ಹಿಂದೆ ನಿಂತ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.&lt;/p&gt;&lt;p&gt;ಅಸ್ಮಿತಾ ಅವರ ಪಯಣ ಅಷ್ಟು ಸುಲಭವಾಗಿರಲಿಲ್ಲ. ವೈಯಕ್ತಿಕ ಜೀವನದಲ್ಲಿ ಎದುರಾದ ಕಷ್ಟಗಳು ಮತ್ತು ಸವಾಲುಗಳ ನಡುವೆಯೂ ಅವರು ತಮ್ಮ ವೃತ್ತಿಯನ್ನು ಮುಂದುವರಿಸಿದರು. ವಿಶೇಷವಾಗಿ ಅಸ್ಮಿತಾ ಅವರ ಜೀವನದಲ್ಲಿ ಅತ್ಯಂತ ಕಠಿಣ ಸಮಯ ಎದುರಾಗಿದ್ದು, ಅವರು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಎನ್ನಲಾಗಿದೆ. ಆ ಸಮಯದಲ್ಲಿ ಪತಿ ವಿಷ್ಣು ಅಕ್ರಮ ಸಂಬಂಧ ಹೊಂದಿರುವ ವಿಚಾರ ತಿಳಿದುಬಂದಿದ್ದು, ಇದು ಅಸ್ಮಿತಾ ಅವರಿಗೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಆಗಾ ಅಷ್ಮಿತಾ ಅವರು ಸೋಶಿಯಲ್&zwnj; ಮೀಡಿಯಾ ಪೋಸ್ಟ್&zwnj; ಹಂಚಿಕೊಂಡು &ldquo;ನನ್ನ ರಕ್ತ, ಬೆವರಿನ ಶ್ರಮ, ಅವಿರತ ಪರಿಶ್ರಮದಿಂದ ಕಟ್ಟಿಕೊಂಡಿರುವ ನನ್ನ ಬ್ರಾಂಡ್&zwnj;ನ ರಕ್ಷಣೆಗಾಗಿ, ಸುತ್ತಮುತ್ತಲಿನ ಘಟನೆಗಳ ವಿರುದ್ಧ ಈಗ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಇದು ಸಹಾನುಭೂತಿಗಾಗಲೀ ಅಥವಾ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಾಗಲೀ ಅಲ್ಲ. ಇದು ನಾನು ವರ್ಷಗಳಿಂದ ಕಟ್ಟಿಕೊಂಡಿರುವುದನ್ನು ರಕ್ಷಿಸಿಕೊಳ್ಳುವುದರ ಕುರಿತು ಈ ಪೋಸ್ಟ್&zwnj; ಹಂಚಿಕೊಳ್ತಿದ್ದೇನೆ&rdquo; ಎಂದಿದ್ದರು.&lt;/p&gt;&lt;p&gt;ಈಗ ಒಂದೆಡೆ ಗರ್ಭಾವಸ್ಥೆ, ಮತ್ತೊಂದೆಡೆ ವೈಯಕ್ತಿಕ ಬದುಕಿನಲ್ಲಿನ ನೋವು&mdash;ಈ ಎರಡನ್ನೂ ಎದುರಿಸುತ್ತಲೇ ಅವರು ತಮ್ಮ ವೃತ್ತಿಜೀವನವನ್ನು ಮುಂದುವರಿಸಿದರು.ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ತಮ್ಮ ಕನಸುಗಳನ್ನು ಬಿಟ್ಟುಕೊಡಬಾರದು ಎಂಬುದನ್ನು ಅವರು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಇವರು 10,000ಕ್ಕೂ ಹೆಚ್ಚು ಜನರಿಗೆ ಮೇಕಪ್ ತರಬೇತಿ ನೀಡಿದ್ದಾರೆ. ಇದೀಗ Studio One Golden Icon Award ದೊರೆತಿರುವುದು ಅಸ್ಮಿತಾ ಅವರ ವೃತ್ತಿಜೀವನಕ್ಕೆ ಮತ್ತೊಂದು ದೊಡ್ಡ ಗೌರವವಾಗಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ತಮ್ಮನ್ನು ಬೆಂಬಲಿಸಿದ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬ್ಯೂಟಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಳ್ಳಲು ಸಾಕಷ್ಟು ಪರಿಶ್ರಮಪಟ್ಟಿರುವ ಅಸ್ಮಿತಾ, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಈ ಪ್ರಶಸ್ತಿ ತಮ್ಮ ಕೆಲಸಕ್ಕೆ ಸಿಕ್ಕಿರುವ ವಿಶೇಷ ಮನ್ನಣೆ ಎಂದು ಭಾವುಕರಾಗಿದ್ದಾರೆ.&lt;/p&gt;&lt;p&gt;ವೈಯಕ್ತಿಕ ಬದುಕಿನ ಸವಾಲುಗಳನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡು ವೃತ್ತಿಜೀವನದಲ್ಲಿ ಮುನ್ನಡೆದ ಅಸ್ಮಿತಾ ಅವರ ಕಥೆ ಇದೀಗ ಅನೇಕರಿಗೆ ಸ್ಫೂರ್ತಿಯಾಗಿದೆ. ಒಂದೇ ವರ್ಷದಲ್ಲಿ ವೈಯಕ್ತಿಕ ನೋವಿನ ನಡುವೆಯೂ ವೃತ್ತಿಯಲ್ಲಿ ಸಾಧನೆ ಮಾಡಿ ಪ್ರಶಸ್ತಿ ಗೆದ್ದಿರುವ ಅಸ್ಮಿತಾ, ಕಷ್ಟದ ಸಮಯದಲ್ಲೂ ಕನಸುಗಳನ್ನು ಬೆನ್ನಟ್ಟುವವರಿಗೆ ಮಾದರಿಯಾಗಿದ್ದಾರೆ. ಇಂದು ಅಸ್ಮಿತಾ ಅವರು ಪಡೆದಿರುವ Studio One Golden Icon Award ಕೇವಲ ಒಂದು ಪ್ರಶಸ್ತಿಯಲ್ಲ; ಹಲವು ಸವಾಲುಗಳನ್ನು ಎದುರಿಸಿ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅವರ ಪರಿಶ್ರಮ ಮತ್ತು ಬದ್ಧತೆಗೆ ಸಿಕ್ಕಿರುವ ಗೌರವವಾಗಿದೆ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/entertainment/actress-asmitha-husband-extramarital-affair-during-pregnancy-career-success-suh/articleshow-o88ctag"/>
        </item>
        <item>
            <title><![CDATA[ಗುರು ಪೂರ್ಣಿಮೆಗೆ ನೆಚ್ಚಿನ ಶಿಕ್ಷಕರಿಗಾಗಿ ಮನೆಯಲ್ಲೇ ಮಾಡಿ ಸುಂದರ ಕಾರ್ಡ್​: ಸೂಪರ್​ ಐಡಿಯಾಸ್​ ನಿಮಗಾಗಿ]]></title>
            <link>https://kannada.asianetnews.com/gallery/relationship/make-a-beautiful-card-at-home-for-your-favorite-teacher-on-guru-purnima-super-ideas-for-you-suc-pgwfgwy</link>
            <guid isPermaLink="true">https://kannada.asianetnews.com/gallery/relationship/make-a-beautiful-card-at-home-for-your-favorite-teacher-on-guru-purnima-super-ideas-for-you-suc-pgwfgwy</guid>
            <pubDate>Tue, 28 Jul 2026 22:38:32 +0530</pubDate>
            <description><![CDATA[&lt;p&gt;ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಶಿಕ್ಷಕರಿಗೆ ಕೈಯಿಂದ ಮಾಡಿದ ಕಾರ್ಡ್&zwnj;ಗಳನ್ನು ನೀಡಿ ಗೌರವ ಸಲ್ಲಿಸಿ. 3D ಕಾರ್ಡ್&zwnj;ಗಳು, ಗುರು-ಶಿಷ್ಯರ ರೇಖಾಚಿತ್ರಗಳು, ಶ್ಲೋಕಗಳು ಮತ್ತು ಹೂವಿನ ಅಲಂಕಾರಗಳನ್ನು ಬಳಸಿ ಸುಲಭವಾಗಿ ಹಾಗೂ ಸುಂದರವಾಗಿ ಕಾರ್ಡ್&zwnj;ಗಳನ್ನು ತಯಾರಿಸುವ &amp;nbsp;ಐಡಿಯಾ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymtxh32eadfhzzzwb11x76f,imgname-guru-poornima-1785258230882.jpg" type="image/jpeg" height="390" width="690"/>
            <content:encoded><![CDATA[&lt;p&gt;ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಶಿಕ್ಷಕರಿಗೆ ಕೈಯಿಂದ ಮಾಡಿದ ಕಾರ್ಡ್&zwnj;ಗಳನ್ನು ನೀಡಿ ಗೌರವ ಸಲ್ಲಿಸಿ. 3D ಕಾರ್ಡ್&zwnj;ಗಳು, ಗುರು-ಶಿಷ್ಯರ ರೇಖಾಚಿತ್ರಗಳು, ಶ್ಲೋಕಗಳು ಮತ್ತು ಹೂವಿನ ಅಲಂಕಾರಗಳನ್ನು ಬಳಸಿ ಸುಲಭವಾಗಿ ಹಾಗೂ ಸುಂದರವಾಗಿ ಕಾರ್ಡ್&zwnj;ಗಳನ್ನು ತಯಾರಿಸುವ &amp;nbsp;ಐಡಿಯಾ ನೀಡಲಾಗಿದೆ.&lt;/p&gt;&lt;img&gt;&lt;p&gt;ನಾಳೆ ಅರ್ಥಾತ್​ ಜುಲೈ 29 ಗುರು ಪೂರ್ಣಿಮೆ. ನಿಮ್ಮ ಗುರುಗಳನ್ನು ನೆನಪಿಸಿಕೊಳ್ಳುವ ದಿನವಿದು. ಗುರು ಪೂರ್ಣಿಮಾದಂದು ಶಿಕ್ಷಕರಿಗೆ ಸುಲಭ ಮತ್ತು ಸುಂದರವಾದ ಕೈಯಿಂದ ಮಾಡಿದ ಕಾರ್ಡ್ ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ. 3D ಕಾರ್ಡ್&zwnj;ಗಳು, ವೃತ್ತ ಕಾರ್ಡ್&zwnj;ಗಳು, ಶ್ಲೋಕಗಳು, ಹೂವಿನ ಅಲಂಕಾರಗಳು ಮತ್ತು ಗುರು-ಶಿಷ್ಯ ರೇಖಾಚಿತ್ರಗಳನ್ನು ಬಳಸಿಕೊಂಡು ನೀವು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಸುಂದರವಾಗಿ ಶುಭಾಶಯ ಹೇಳಬಹುದಾಗಿದೆ.&lt;/p&gt;&lt;img&gt;&lt;p&gt;ಗುರು ಪೂರ್ಣಿಮಾದ ವಿಶೇಷ ಸಂದರ್ಭದಲ್ಲಿ ಮಕ್ಕಳು ತಮ್ಮ ಶಿಕ್ಷಕರಿಗೆ ಸುಂದರವಾದ ಕೈಯಿಂದ ಮಾಡಿದ ಕಾರ್ಡ್&zwnj;ಗಳನ್ನು ನೀಡಬಹುದು. ಕಾರ್ಡ್&zwnj;ನಲ್ಲಿ ಗುರು ಮತ್ತು ಶಿಷ್ಯರ ಸುಂದರವಾದ ಚಿತ್ರವನ್ನು ಬಿಡಿ ಮತ್ತು ಅಂಚುಗಳನ್ನು ಹೂವುಗಳು ಮತ್ತು ಎಲೆಗಳಿಂದ ಅಲಂಕರಿಸಿ. ನೀವು ನಿಮ್ಮ ಗುರುಗಳಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಸುಂದರವಾದ ಸಂದೇಶಗಳನ್ನು ಬರೆಯಬಹುದು.&lt;/p&gt;&lt;img&gt;&lt;p&gt;ಸ್ಕೆಚ್ ಪೆನ್ನುಗಳನ್ನು ಬಳಸಿ ಕಾರ್ಡ್&zwnj;ಗಳನ್ನು ರಚಿಸಿ. ನಿಮಗೆ ಚಿತ್ರ ಬಿಡಿಸಲು ಸಾಧ್ಯವಾಗದಿದ್ದರೆ, ವರ್ಣರಂಜಿತ ಪುಸ್ತಕಗಳು, ದೀಪಗಳು ಇತ್ಯಾದಿಗಳನ್ನು ಚಿತ್ರಿಸಲು ಮತ್ತು ಕಾರ್ಡ್&zwnj;ನಲ್ಲಿ &quot;ಗುರು ಪೂರ್ಣಿಮಾ ಶುಭಾಶಯಗಳು&quot; ಎಂದು ಬರೆಯಲು ಪ್ರಯತ್ನಿಸಿ.&lt;/p&gt;&lt;img&gt;&lt;p&gt;ಗುರು ಪೂರ್ಣಿಮಾದಂದು ನಿಮ್ಮ ಶಿಕ್ಷಕರ ಆಶೀರ್ವಾದ ಪಡೆಯುವುದು ಬಹಳ ಮುಖ್ಯವಾಗಿರುತ್ತದೆ. ಆಶೀರ್ವಾದ ಎಂದರೆ ಕೇವಲ ಅವರ ಪಾದಗಳನ್ನು ಸ್ಪರ್ಶಿಸುವುದು ಮಾತ್ರವಲ್ಲದೆ ನಿಮ್ಮ ಹೃದಯಪೂರ್ವಕ ಆಲೋಚನೆಗಳನ್ನು ಕೈಯಿಂದ ಮಾಡಿದ ಕಾರ್ಡ್&zwnj;ನಲ್ಲಿ ಬರೆಯಬಹುದು. ಕೈಯಿಂದ ಮಾಡಿದ ಕಾರ್ಡ್ ನಿಮ್ಮ ಭಾವನೆಗಳನ್ನು ಸೆರೆಹಿಡಿಯುತ್ತದೆ ಮತ್ತು ಶಿಕ್ಷಕರು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಕ್ಷಣವೇ ಅರ್ಥಮಾಡಿಕೊಳ್ಳುತ್ತಾರೆ. ನೀವು ಚಿತ್ರ ಬಿಡಿಸುವಲ್ಲಿ ಉತ್ತಮರಾಗಿದ್ದರೆ, ಸರಳ ಕಾಗದದ ಮೇಲೆ ಮಂಡಲ ಕಲೆಯನ್ನು ರಚಿಸುವ ಮೂಲಕ ನೀವು ಸುಂದರವಾದ ಕಾರ್ಡ್ ಅನ್ನು ರಚಿಸಬಹುದು. ಮಧ್ಯದಲ್ಲಿ ಒಂದು ಜಾಗವನ್ನು ಬಿಡಿ ಮತ್ತು ಅದರ ಮೇಲೆ &quot;ಹ್ಯಾಪಿ ಗುರು ಪೂರ್ಣಿಮಾ&quot; ಎಂದು ಬರೆಯಿರಿ. ನೀವು ಬಯಸಿದರೆ, ನೀವು ವೀಣೆ ಅಥವಾ ನವಿಲು ಗರಿಗಳ ವಿನ್ಯಾಸದ ವರ್ಣರಂಜಿತ ಚಿತ್ರವನ್ನು ಸಹ ಸೇರಿಸಬಹುದು.&lt;/p&gt;&lt;img&gt;&lt;p&gt;ನೀವು ರೇಖಾಚಿತ್ರ ಬರೆಯುವಲ್ಲಿ ತೊಂದರೆ ಅನುಭವಿಸುತ್ತಿದ್ದರೆ, ಪರವಾಗಿಲ್ಲ. ಕಾಗದವನ್ನು ವಿವಿಧ ವಿನ್ಯಾಸಗಳಾಗಿ ಕತ್ತರಿಸುವ ಮೂಲಕ ನೀವು 3D-ಕಾಣುವ ಕಾರ್ಡ್&zwnj;ಗಳನ್ನು ಸಹ ರಚಿಸಬಹುದು. ಗುರು ಪೂರ್ಣಿಮೆಗಾಗಿ ಸುಂದರವಾದ 3D ಹೂವಿನ ವಿನ್ಯಾಸಗಳನ್ನು ರಚಿಸಿ ಮತ್ತು ಸ್ಕೆಚ್ ಪೆನ್&zwnj;ನಿಂದ &quot;ಗುರು ಪೂರ್ಣಿಮಾ&quot; ಎಂದು ಬರೆಯಿರಿ. ನೀವು ಗುರುಗಳ ಪಾದಗಳನ್ನು ಸಹ ಸೆಳೆಯಬಹುದು, ಅದು ತುಂಬಾ ಸುಂದರವಾಗಿ ಕಾಣುತ್ತದೆ.&lt;/p&gt;&lt;img&gt;&lt;p&gt;ನಿಮಗೆ ವಿನ್ಯಾಸ ಅಥವಾ ಕತ್ತರಿಸುವುದು ಹೇಗೆ ಎಂದು ತಿಳಿದಿಲ್ಲದಿದ್ದರೆ, ಸರಳ A4 ಕಾಗದದ ಮೇಲೆ ಗುರುಗಳಿಗೆ ಸಂಬಂಧಿಸಿದ ಶ್ಲೋಕವನ್ನು ಬರೆದು ವಿವಿಧ ಬಣ್ಣಗಳಲ್ಲಿ ಹೂವುಗಳನ್ನು ಅಂಟಿಸಿ. ಈ ಕಾರ್ಡ್ ತುಂಬಾ ಪ್ರಭಾವಶಾಲಿಯಾಗಿ ಕಾಣುತ್ತದೆ ಮತ್ತು ನಿಮ್ಮ ಶಿಕ್ಷಕರು ಖಂಡಿತವಾಗಿಯೂ ಇದನ್ನು ಇಷ್ಟಪಡುತ್ತಾರೆ.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/make-a-beautiful-card-at-home-for-your-favorite-teacher-on-guru-purnima-super-ideas-for-you-suc-pgwfgwy"/>
        </item>
        <item>
            <title><![CDATA[ಭಾರತೀಯನನ್ನು ಮದುವೆಯಾದ ಇಟಲಿ ಯುವತಿ: ಅತ್ತೆ ಹೀಗೆ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದ ಸೊಸೆ]]></title>
            <link>https://kannada.asianetnews.com/viral/italian-woman-shares-what-she-surprised-life-in-an-indian-family-after-marriage-suh/articleshow-q6fvrdn</link>
            <guid isPermaLink="true">https://kannada.asianetnews.com/viral/italian-woman-shares-what-she-surprised-life-in-an-indian-family-after-marriage-suh/articleshow-q6fvrdn</guid>
            <pubDate>Mon, 27 Jul 2026 12:44:38 +0530</pubDate>
            <description><![CDATA[&lt;p&gt;ಭಾರತೀಯ ಕುಟುಂಬಕ್ಕೆ ಮದುವೆಯಾಗಿ ಬಂದ ಇಟಲಿ ಮೂಲದ ಮಹಿಳೆಯೊಬ್ಬರು, ಭಾರತೀಯ ಕುಟುಂಬದ ಜೀವನಶೈಲಿ ಮತ್ತು ಸಂಸ್ಕೃತಿಯಲ್ಲಿ ತಮಗೆ ಅಚ್ಚರಿ ಮೂಡಿಸಿದ ಮೂರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyh6r9bmpw69yfs4d8r4n54c,imgname-italian-woman-shares-what-she-surprised-life-in-an-indian-family-after-marriage-1785136424308.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕುಟುಂಬಕ್ಕೆ ಮದುವೆಯಾಗಿ ಬಂದ ಇಟಲಿ ಮೂಲದ ಮಹಿಳೆಯೊಬ್ಬರು, ಭಾರತೀಯ ಕುಟುಂಬದ ಜೀವನಶೈಲಿ ಮತ್ತು ಸಂಸ್ಕೃತಿಯಲ್ಲಿ ತಮಗೆ ಅಚ್ಚರಿ ಮೂಡಿಸಿದ ಮೂರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅನುಭವದ ಕುರಿತು ಅವರು ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರತೀಯ ಸಂಸ್ಕೃತಿಯ ಬಗ್ಗೆ ವಿದೇಶಿ ಮಹಿಳೆಯೊಬ್ಬರು ನೀಡಿರುವ ಈ ಪ್ರಾಮಾಣಿಕ ಅಭಿಪ್ರಾಯ ನೆಟ್ಟಿಗರ ಗಮನ ಸೆಳೆದಿದೆ.&lt;/p&gt;&lt;p&gt;ಇಟಲಿ ಕುಟುಂಬದಲ್ಲಿ ಬೆಳೆದ ಕ್ರಿಸ್ಸಿ ವರುಘೀಸ್ (Chrissy Varughese), ಭಾರತೀಯ ಕುಟುಂಬಕ್ಕೆ ಸೊಸೆಯಾಗಿ ಬಂದ ನಂತರ ತಮಗೆ ಎದುರಾದ ಸಾಂಸ್ಕೃತಿಕ ವ್ಯತ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಕುಟುಂಬದ ಆಹಾರ ಪದ್ಧತಿ, ಅತಿಥಿ ಸತ್ಕಾರ ಮತ್ತು ಕುಟುಂಬದವರ ನೇರ ಮಾತಿನ ಶೈಲಿ ತಮ್ಮನ್ನು ಅಚ್ಚರಿಗೊಳಿಸಿತು ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಭಾರತೀಯ ಮನೆಗಳಲ್ಲಿ ಯಾರನ್ನೂ ಹಸಿವಿನಿಂದ ಇರಲು ಬಿಡಲ್ಲ&lt;/h2&gt;&lt;p&gt;ಕ್ರಿಸ್ಸಿ ಅವರನ್ನು ಅಚ್ಚರಿಗೊಳಿಸಿದ ಮೊದಲ ವಿಚಾರವೆಂದರೆ ಭಾರತೀಯ ಕುಟುಂಬಗಳಲ್ಲಿರುವ ಆಹಾರದ ಮೇಲಿನ ವಿಶೇಷ ಕಾಳಜಿ. ಭಾರತೀಯ ಮನೆಗಳಲ್ಲಿ ಅತಿಥಿಗಳು ಅಥವಾ ಕುಟುಂಬದ ಸದಸ್ಯರು ಊಟ ಮಾಡಿದ ಬಳಿಕವೂ &lsquo;ಇನ್ನೂ ಸ್ವಲ್ಪ ತಿನ್ನಿ&rsquo; ಎಂದು ಪದೇಪದೇ ಒತ್ತಾಯಿಸುವುದು ಸಾಮಾನ್ಯ. ಆದರೆ ಇಟಲಿ ಕುಟುಂಬದ ಸಂಸ್ಕೃತಿಗೆ ಹೋಲಿಸಿದರೆ ಇದು ತಮಗೆ ವಿಭಿನ್ನವಾಗಿ ಕಂಡಿತು ಎಂದು ಕ್ರಿಸ್ಸಿ ಹೇಳಿದ್ದಾರೆ.&lt;/p&gt;&lt;p&gt;ಹೊಟ್ಟೆ ತುಂಬಿದೆ ಎಂದು ಹೇಳಿದರೂ ಭಾರತೀಯ ಕುಟುಂಬದವರು ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಮತ್ತೆ ಮತ್ತೆ ಊಟ ನೀಡಲು ಮುಂದಾಗುತ್ತಾರೆ ಎಂದು ಅವರು ಹಾಸ್ಯಮಯವಾಗಿ ವಿವರಿಸಿದ್ದಾರೆ. ಅವರ ಪ್ರಕಾರ, ಭಾರತೀಯ ಕುಟುಂಬಗಳಲ್ಲಿ ಆಹಾರ ನೀಡುವುದು ಕೇವಲ ಹೊಟ್ಟೆ ತುಂಬಿಸುವ ವಿಚಾರವಲ್ಲ. ಅದು ಕುಟುಂಬದವರ ಮೇಲಿನ ಪ್ರೀತಿ, ಕಾಳಜಿ ಮತ್ತು ಆತಿಥ್ಯವನ್ನು ವ್ಯಕ್ತಪಡಿಸುವ ಒಂದು ರೀತಿಯ ಭಾಷೆಯಾಗಿದೆ.&lt;/p&gt;&lt;h2&gt;ನೀವು ಅತಿಥಿ, ಅಡುಗೆ ಮನೆಗೆ ಹೋಗಬೇಡಿ&lt;/h2&gt;&lt;p&gt;ಕ್ರಿಸ್ಸಿ ಹಂಚಿಕೊಂಡ ಎರಡನೇ ಅನುಭವ ಭಾರತೀಯರ ಅತಿಥಿ ಸತ್ಕಾರ. ಇಟಲಿ ಕುಟುಂಬದಲ್ಲಿ ಅತಿಥಿಗಳು ಮನೆಗೆ ಬಂದಾಗ, ಕೆಲವೊಮ್ಮೆ ಎಲ್ಲರೂ ಸೇರಿ ಅಡುಗೆ ಕೆಲಸದಲ್ಲಿ ಕೈಜೋಡಿಸುವುದು ಸಾಮಾನ್ಯವಾಗಿರಬಹುದು. ಆದರೆ ತಮ್ಮ ಪತಿಯ ಭಾರತೀಯ ಕುಟುಂಬದಲ್ಲಿ ಅತಿಥಿಗಳಿಗೆ ವಿಶೇಷ ಗೌರವ ನೀಡಲಾಗುತ್ತದೆ ಎಂದು ಕ್ರಿಸ್ಸಿ ಹೇಳಿದ್ದಾರೆ. ಅತಿಥಿಗಳು ಅಡುಗೆಮನೆಗೆ ಹೋಗಿ ಕೆಲಸ ಮಾಡುವ ಬದಲು ಆರಾಮವಾಗಿ ಕುಳಿತುಕೊಂಡು ಊಟವನ್ನು ಆನಂದಿಸಬೇಕು ಎಂಬ ಮನೋಭಾವವನ್ನು ಅವರು ಗಮನಿಸಿದ್ದಾರೆ.&lt;/p&gt;&lt;p&gt;ನೀವು ಅತಿಥಿ. ನೀವು ಕುಳಿತುಕೊಂಡು ಎಂಜಾಯ್ ಮಾಡಿ. ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ&rsquo; ಎಂಬ ರೀತಿಯ ಆತಿಥ್ಯವನ್ನು ಭಾರತೀಯ ಕುಟುಂಬದಲ್ಲಿ ಕಂಡಿರುವುದಾಗಿ ಅವರು ತಿಳಿಸಿದ್ದಾರೆ. ಈ ವಿಚಾರವೂ ಭಾರತೀಯ ಕುಟುಂಬದ ಸಂಸ್ಕೃತಿಯ ಬಗ್ಗೆ ತಮಗೆ ಹೊಸ ಅನುಭವ ನೀಡಿತು ಎಂದು ಕ್ರಿಸ್ಸಿ ಹೇಳಿದ್ದಾರೆ.&lt;/p&gt;&lt;h2&gt;ನಿಮ್ಮ ಹುಬ್ಬು ಮಾಡಿಸಿಕೊಳ್ಳಿ&rsquo; ಎಂದರೂ ಬೇಸರ ಮಾಡಿಕೊಳ್ಳಬಾರದು&lt;/h2&gt;&lt;p&gt;ಕ್ರಿಸ್ಸಿ ಅವರನ್ನು ಅಚ್ಚರಿಗೊಳಿಸಿದ ಮೂರನೇ ವಿಚಾರವೆಂದರೆ ಭಾರತೀಯ ಕುಟುಂಬದವರ ನೇರ ಮಾತಿನ ಶೈಲಿ. ಕುಟುಂಬದ ಸದಸ್ಯರು ತಮ್ಮ ಉಡುಗೆ, ಲುಕ್ ಅಥವಾ ರೂಪದ ಬಗ್ಗೆ ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಆರಂಭದಲ್ಲಿ ಅವರಿಗೆ ವಿಚಿತ್ರವಾಗಿ ಕಂಡಿತಂತೆ.&lt;/p&gt;&lt;p&gt;ಉದಾಹರಣೆಗೆ ನೀವು ಹುಬ್ಬು ಮಾಡಿಸಿಕೊಳ್ಳಬೇಕು&rsquo; ಅಥವಾ &lsquo;ನಿಮ್ಮ ಲೆಹೆಂಗಾಗೆ ಈ ಚೋಲಿ ಚೆನ್ನಾಗಿ ಕಾಣುತ್ತಿಲ್ಲ&rsquo; ಎಂಬಂತಹ ನೇರ ಅಭಿಪ್ರಾಯಗಳನ್ನು ಕೇಳಿದಾಗ, ಆರಂಭದಲ್ಲಿ ತಮ್ಮ ಮೇಲೆ ಯಾರಿಗಾದರೂ ಕೋಪವಿದೆಯೇ ಎಂದು ಅವರು ಭಾವಿಸಿದ್ದರಂತೆ. ಆದರೆ ನಂತರ ಭಾರತೀಯ ಕುಟುಂಬಗಳಲ್ಲಿನ ಇಂತಹ ನೇರ ಮಾತುಗಳು ಸಾಮಾನ್ಯ ಸಂಭಾಷಣೆಯ ಭಾಗವಾಗಿರಬಹುದು ಎಂಬುದನ್ನು ಅರ್ಥಮಾಡಿಕೊಂಡೆ ಎಂದು ಕ್ರಿಸ್ಸಿ ಹೇಳಿದ್ದಾರೆ.&lt;/p&gt;&lt;h2&gt;ಭಾರತೀಯ ಕುಟುಂಬದಿಂದ ಸಾಕಷ್ಟು ಕಲಿತಿದ್ದೇನೆ&lt;/h2&gt;&lt;p&gt;ಭಾರತೀಯ ಮತ್ತು ಇಟಲಿ ಕುಟುಂಬಗಳ ಸಂಸ್ಕೃತಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದರೂ, ಈ ಅನುಭವ ತಮ್ಮ ಪಾಲಿಗೆ ಅತ್ಯಂತ ಸಂತಸದಾಯಕವಾಗಿದೆ ಎಂದು ಕ್ರಿಸ್ಸಿ ಹೇಳಿದ್ದಾರೆ. ಭಾರತೀಯ ಕುಟುಂಬಕ್ಕೆ ಸೊಸೆಯಾಗಿ ಬಂದ ನಂತರ ಹೊಸ ಸಂಸ್ಕೃತಿ, ಹೊಸ ಸಂಪ್ರದಾಯಗಳು ಮತ್ತು ಕುಟುಂಬದ ಹೊಸ ರೀತಿಯ ಜೀವನಶೈಲಿಯನ್ನು ಕಲಿಯಲು ಸಾಧ್ಯವಾಗಿದೆ. ಅದೇ ಸಮಯದಲ್ಲಿ ತಮ್ಮ ಇಟಲಿ ಕುಟುಂಬದ ಸಂಪ್ರದಾಯಗಳನ್ನೂ ಹೊಸ ಕುಟುಂಬದೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.&lt;/p&gt;]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/italian-woman-shares-what-she-surprised-life-in-an-indian-family-after-marriage-suh/articleshow-q6fvrdn"/>
        </item>
        <item>
            <title><![CDATA[45ನೇ ವಯಸ್ಸಿಗೆ ಅಮ್ಮನಾದ ಶಿವಣ್ಣನ ನಾಯಕಿ ಪದ್ಮಪ್ರಿಯಾ: ನಟಿಯ ಕುತೂಹಲದ ಸ್ಟೋರಿ ಇಲ್ಲಿದೆ]]></title>
            <link>https://kannada.asianetnews.com/gallery/life/shivarajkumars-tamassu-actress-padmapriya-became-a-mother-at-the-age-of-45-suc-qbroleo</link>
            <guid isPermaLink="true">https://kannada.asianetnews.com/gallery/life/shivarajkumars-tamassu-actress-padmapriya-became-a-mother-at-the-age-of-45-suc-qbroleo</guid>
            <pubDate>Sun, 26 Jul 2026 19:20:10 +0530</pubDate>
            <description><![CDATA[ಶಿವರಾಜ್​ಕುಮಾರ್​ ಅಭಿನಯದ 'ತಮಸ್ಸು' ಸಿನಿಮಾ ಖ್ಯಾತಿಯ ನಟಿ ಪದ್ಮಪ್ರಿಯಾ ಜಾನಕಿರಾಮನ್ ಅವರು 45ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. ಮಗು ಜನಿಸಿ ಒಂದು ವರ್ಷದ ಬಳಿಕ, ಮಗುವಿನ ಪುಟ್ಟ ಕೈಗಳ ಫೋಟೋ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyfapp7pesweapafma4pydkk,imgname-padmapriya-00-1785073457398.jpg" type="image/jpeg" height="390" width="690"/>
            <content:encoded><![CDATA[ಶಿವರಾಜ್​ಕುಮಾರ್​ ಅಭಿನಯದ 'ತಮಸ್ಸು' ಸಿನಿಮಾ ಖ್ಯಾತಿಯ ನಟಿ ಪದ್ಮಪ್ರಿಯಾ ಜಾನಕಿರಾಮನ್ ಅವರು 45ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. ಮಗು ಜನಿಸಿ ಒಂದು ವರ್ಷದ ಬಳಿಕ, ಮಗುವಿನ ಪುಟ್ಟ ಕೈಗಳ ಫೋಟೋ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.&lt;img&gt;&lt;p&gt;2010ರಲ್ಲಿ ಬಿಡುಗಡೆಯಾದ ನಟ ಶಿವರಾಜ್​ಕುಮಾರ್​, ಹರ್ಷಿಕಾ ಪೂಣಚ್ಚ ಅಭಿನಯದ ತಮಸ್ಸು ಸಿನಿಮಾದಲ್ಲಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದ ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿಯೂ ಛಾಪು ಮೂಡಿಸಿರೋ ಬಹುಭಾಷಾ ನಟಿ ಪದ್ಮಪ್ರಿಯಾ ಜಾನಕಿರಾಮನ್​ (Padma Priya Janakiraman) ಇದೀಗ 45ನೇ ವಯಸ್ಸಿನಲ್ಲಿ ಅಮ್ಮನಾಗಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಹಲವು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ-ಪುರಸ್ಕಾರಗಳನ್ನ ಪಡೆದುಕೊಂಡಿರೋ ನಟಿ ಈಗ ಅಮ್ಮ ಆಗಿದ್ದಾರೆ.&lt;/p&gt;&lt;img&gt;&lt;p&gt;ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟೀವ್​ ಆಗಿದ್ದರೂ ಗರ್ಭಿಣಿಯಾಗಿದ್ದನ್ನು ಕಾಣದಂತೆ ರೀಲ್ಸ್​ ಮಾಡುತ್ತಿದ್ದ ನಟಿ, ಎಲ್ಲರಿಗೂ ಈಗ ಗುಡ್​ನ್ಯೂಸ್​ ನೀಡಿ ಶಾಕ್​ ನೀಡಿದ್ದಾರೆ. ಕಳೆದ ವರ್ಷವೇ ಮಗುವಾಗಿದ್ದು, ಇದೀಗ ಒಂದು ವರ್ಷದ ಬಳಿಕ ಅದನ್ನು ರಿವೀಲ್​ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಮಗುವಿನ ಪುಟ್ಟ ಕೈಗಳ ಫೋಟೋವನ್ನ ಶೇರ್&zwnj; ಮಾಡಿಕೊಳ್ಳುವ ಮೂಲಕ ತಾವು ತಾಯಿಯಾಗಿರುವ ವಿಚಾರವನ್ನ ರಿವೀಲ್&zwnj; ಮಾಡಿದ್ದಾರೆ. ʻಜೀವನದ 365 ದಿನಗಳುʼ ಎಂದು ಕ್ಯಾಪ್ಷನ್&zwnj; ಕೊಟ್ಟು ಅಮ್ಮನಾದ ವಿಷಯವನ್ನು ಶೇರ್​ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಪದ್ಮಪ್ರಿಯಾ ಅವರು, 2014ರಲ್ಲಿ ಜಾಸ್ಮಿನ್ ಶಾ ಅವರನ್ನು ಮದುವೆಯಾಗಿದ್ದರು. ಇವರು AAP ಪಕ್ಷದ ನಾಯಕ. ಮದುವೆಯಾದ ಬಳಿಕ ಕೆಲವು ಸಿನಿಮಾದಲ್ಲಿ ನಟಿಸಿ ಆಮೇಲೆ ಕೊಂಚ ದೂರ ಸರಿದಿದ್ದರು. ಬಳಿಕ ಅಮ್ಮನಾಗಿದ್ದರೂ ಅದನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ದಿಢೀರ್​ ಎಂದು ಅಭಿಮಾನಿಗಳಿಗೆ ಅಚ್ಚರಿ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಗರ್ಭಧಾರಣೆಯ ಫೋಟೋಶೂಟ್&zwnj; ಅಥವಾ ಸೀಮಂತ ಶಾಸ್ತ್ರದ ಫೋಟೋಗಳನ್ನ ಶೇರ್&zwnj; ಮಾಡಿಕೊಳ್ಳುತ್ತಾರೆ. ಆದರೆ, ಪದ್ಮಪ್ರಿಯಾ ಹಾಗೇನೂ ಮಾಡದೇ, ಗರ್ಭಿಣಿಯಾಗಿದ್ದರೂ, ಬಳಿಕ ಮಗುವಾಗಿದ್ದರೂ ಎಲ್ಲವೂ ಸೀಕ್ರೇಟ್​ ಆಗಿಯೇ ಇಟ್ಟಿದ್ದರು. ಈಗ ಮಗುವಿನ ಮುಖ ಅಥವಾ ಲಿಂಗವನ್ನ ಅವರು ಇನ್ನೂ ಬಹಿರಂಗಪಡಿಸಿಲ್ಲ. ಕೇವಲ ಮಗುವಿನ ಕೈಗಳ ಫೋಟೋ ಮಾತ್ರ ಶೇರ್&zwnj; ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೇರಳ ಮೂಲದ ಪದ್ಮಪ್ರಿಯಾ, ಟಾಲಿವುಡ್ ಸಿನಿಮಾನಲ್ಲಿ 2004ರಲ್ಲಿ ನಿರ್ಮಾಣವಾಗಿದ್ದ &lsquo;ಸೀನು ವಾಸಂತಿ ಲಕ್ಷ್ಮಿ&rsquo; ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮಲಯಾಳಂ ಸಿನಿಮಾಗೆ ಅದೇ ವರ್ಷ ಮುಮ್ಮಟ್ಟಿ ಅವರ &lsquo;ಕಾಳ್ಚ&rsquo; ಮೂಲಕ ಗಮನ ಸೆಳೆದಿದ್ದರು. ಕನ್ನಡದಲ್ಲಿ ತಮಸ್ಸು, 5 ಒಂದ್ಲ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾಗಳು ಅಷ್ಟು ಹಿಟ್ ಆಗಿರಲಿಲ್ಲ. ಆದರೆ ಮಲಯಾಳಂನಲ್ಲಿ ಸ್ಟಾರ್ ಡಮ್ ಪಡೆದುಕೊಂಡಿದ್ದು, ಇವರು ಕೊನೆಯದಾಗಿ 2022ರಲ್ಲಿ &lsquo;ವಂಡರ್ ಉಮೆನ್&rsquo; ಸಿನಿಮಾದಲ್ಲಿ ನಟಿಸಿದ್ದರು.&lt;/p&gt;]]></content:encoded>
            <category>relationship</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/shivarajkumars-tamassu-actress-padmapriya-became-a-mother-at-the-age-of-45-suc-qbroleo"/>
        </item>
        <item>
            <title><![CDATA["NRI ಬೇಡ, ನಮ್ಮೂರ ಹುಡುಗನೇ ಸಾಕು!" ಸ್ವದೇಶಿ ಯುವಕರನ್ನೇ ಹೆಚ್ಚು ಇಷ್ಟಪಡುತ್ತಿರುವುದೇಕೆ ಭಾರತೀಯ ಯುವತಿಯರು?"]]></title>
            <link>https://kannada.asianetnews.com/viral/are-nri-marriages-becoming-less-attractive-heres-what-the-debate-says/articleshow-qcq02zb</link>
            <guid isPermaLink="true">https://kannada.asianetnews.com/viral/are-nri-marriages-becoming-less-attractive-heres-what-the-debate-says/articleshow-qcq02zb</guid>
            <pubDate>Mon, 27 Jul 2026 07:09:34 +0530</pubDate>
            <description><![CDATA[&lt;p&gt;NRI ವರರಿಗೆ ಭಾರತದಲ್ಲಿ ಹಿಂದಿನಷ್ಟು ಬೇಡಿಕೆ ಇಲ್ಲವೇ ಎಂಬ ಪ್ರಶ್ನೆ ರೆಡ್ಡಿಟ್&zwnj;ನಲ್ಲಿ ವೈರಲ್ ಆಗಿದೆ. ವಿದೇಶಕ್ಕೆ ತೆರಳಿದ ಬಳಿಕ ವೃತ್ತಿಜೀವನ, ಆರ್ಥಿಕ ಸ್ವಾತಂತ್ರ್ಯ, ವೀಸಾ ಸಮಸ್ಯೆಗಳು ಮತ್ತು ಜೀವನಶೈಲಿಯ ಬದಲಾವಣೆಗಳ ಬಗ್ಗೆ ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kygkjs5sm3r97kx199ajam1k,imgname-marriage-trends-shift-as-indian-women-prioritise-compatibility-over-location--1--1785116320953.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;NRI ವರರ ಕ್ರೇಜ್ ಕಡಿಮೆಯಾಗುತ್ತಿದೆಯೇ? ಭಾರತೀಯ ಮಹಿಳೆಯರ ಹೊಸ ಆದ್ಯತೆಗಳ ಬಗ್ಗೆ ವೈರಲ್ ಚರ್ಚೆ..!&lt;/strong&gt;&lt;/p&gt;&lt;p&gt;ದಶಕಗಳಿಂದ ಅಮೆರಿಕ, ಕೆನಡಾ, ಯುರೋಪ್ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ (NRI) ವರರನ್ನು ಮದುವೆಯಾಗುವುದು ಅನೇಕ ಭಾರತೀಯ ಕುಟುಂಬಗಳ ಕನಸಾಗಿತ್ತು. ಉತ್ತಮ ಸಂಬಳ, ವಿದೇಶಿ ಜೀವನಶೈಲಿ, ಉತ್ತಮ ಭವಿಷ್ಯ ಮತ್ತು ಪೌರತ್ವದ ಅವಕಾಶಗಳು NRI ವರರಿಗೆ ವಿಶೇಷ ಬೇಡಿಕೆಯನ್ನು ತಂದುಕೊಟ್ಟಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಈ ಮನೋಭಾವದಲ್ಲಿ ಬದಲಾವಣೆ ಕಂಡುಬರುತ್ತಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.&lt;/p&gt;&lt;p&gt;&lt;strong&gt;ರೆಡ್ಡಿಟ್ ಪೋಸ್ಟ್ ಹುಟ್ಟುಹಾಕಿದ ಹೊಸ ಚರ್ಚೆ..!&lt;/strong&gt;&lt;/p&gt;&lt;p&gt;ರೆಡ್ಡಿಟ್&zwnj;ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್&zwnj;ನಲ್ಲಿ, ಭಾರತದಲ್ಲಿ NRI ವರರಿಗೆ ಸೂಕ್ತ ವಧುಗಳನ್ನು ಹುಡುಕುವುದು ಹಿಂದಿನಷ್ಟು ಸುಲಭವಾಗಿಲ್ಲವೇ ಎಂಬ ಪ್ರಶ್ನೆ ಕೇಳಲಾಗಿದೆ. ಪೋಸ್ಟ್ ಬರೆದ ವ್ಯಕ್ತಿಯ ಪ್ರಕಾರ, ಉತ್ತಮ ಉದ್ಯೋಗ ಮತ್ತು ಆರ್ಥಿಕ ಸ್ಥಿರತೆ ಹೊಂದಿದ್ದರೂ ಹಲವು NRI ಪುರುಷರು ಮದುವೆ ಮಾತುಕತೆಯಲ್ಲಿ ನಿರಾಕರಣೆಯನ್ನು ಎದುರಿಸುತ್ತಿದ್ದಾರೆ.&lt;/p&gt;&lt;p&gt;ಅವರ ಅಭಿಪ್ರಾಯದಲ್ಲಿ, ಕೆಲವು ಕುಟುಂಬಗಳು NRI ವರರ ಬಗ್ಗೆ ಮೊದಲೇ ಕೆಲವು ಊಹೆಗಳನ್ನು ಮಾಡಿಕೊಂಡಿರುವುದರಿಂದ ಈ ಪರಿಸ್ಥಿತಿ ಉಂಟಾಗುತ್ತಿದೆ.&lt;/p&gt;&lt;p&gt;&lt;strong&gt;ಏಕೆ ಹೆಚ್ಚುತ್ತಿದೆ ಹಿಂಜರಿಕೆ?&lt;/strong&gt;&lt;/p&gt;&lt;p&gt;ಪೋಸ್ಟ್&zwnj;ನಲ್ಲಿ ಉಲ್ಲೇಖಿಸಲಾದ ಪ್ರಮುಖ ಕಾರಣಗಳಲ್ಲಿ, ವಿದೇಶಕ್ಕೆ ತೆರಳಿದ ಬಳಿಕ ಜೀವನದಲ್ಲಿ ಅನಿಶ್ಚಿತತೆ, ಸಂಬಂಧಗಳಲ್ಲಿ ಬದಲಾವಣೆ, ಸಾಂಸ್ಕೃತಿಕ ಹೊಂದಾಣಿಕೆ ಸಮಸ್ಯೆ ಹಾಗೂ ಸಾಮಾಜಿಕ ಒಂಟಿತನದ ಆತಂಕ ಪ್ರಮುಖವಾಗಿವೆ. ಕೆಲವರು NRI ವರರು ಮದುವೆಯ ನಂತರ ಬದಲಾಗಬಹುದು ಅಥವಾ ವಿದೇಶದಲ್ಲಿ ಈಗಾಗಲೇ ಸಂಬಂಧ ಹೊಂದಿರಬಹುದು ಎಂಬ ಅನುಮಾನವೂ ವ್ಯಕ್ತಪಡಿಸುತ್ತಾರೆ ಎಂದು ಪೋಸ್ಟ್&zwnj;ನಲ್ಲಿ ಹೇಳಲಾಗಿದೆ.&lt;/p&gt;&lt;p&gt;&lt;strong&gt;ವೃತ್ತಿಜೀವನ ಬಿಟ್ಟು ವಿದೇಶಕ್ಕೆ ಹೋಗಲು ಮಹಿಳೆಯರು ಸಿದ್ಧರಿಲ್ಲವೇ?&lt;/strong&gt;&lt;/p&gt;&lt;p&gt;ಚರ್ಚೆಯಲ್ಲಿ ಭಾಗವಹಿಸಿದ ಅನೇಕ ಮಹಿಳೆಯರು, ಭಾರತದಲ್ಲಿ ಉತ್ತಮ ಉದ್ಯೋಗ, ಆರ್ಥಿಕ ಸ್ವಾವಲಂಬನೆ ಮತ್ತು ಕುಟುಂಬದ ಬೆಂಬಲವಿರುವಾಗ, ಕೇವಲ ಮದುವೆಗಾಗಿ ಎಲ್ಲವನ್ನೂ ತ್ಯಜಿಸಿ ಅವಲಂಬಿತ (Dependent) ವೀಸಾದ ಮೇಲೆ ವಿದೇಶಕ್ಕೆ ಹೋಗುವುದು ದೊಡ್ಡ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಅವರ ಪ್ರಕಾರ, ವಿದೇಶದಲ್ಲಿ ಕೆಲಸ ಸಿಗುವ ಖಾತರಿ ಇಲ್ಲದಿರುವುದು, ವೀಸಾ ನಿರ್ಬಂಧಗಳು ಹಾಗೂ ವೃತ್ತಿಜೀವನದಲ್ಲಿ ವಿರಾಮ ಉಂಟಾಗುವ ಸಾಧ್ಯತೆ ಅನೇಕ ಮಹಿಳೆಯರನ್ನು ಮರುಚಿಂತನೆಗೆ ದೂಡುತ್ತಿದೆ.&lt;/p&gt;&lt;p&gt;&lt;strong&gt;ಭಾರತದಲ್ಲೇ ಉತ್ತಮ ಜೀವನಮಟ್ಟ?&lt;/strong&gt;&lt;/p&gt;&lt;p&gt;ಕೆಲವು ನೆಟ್ಟಿಗರು ಭಾರತದಲ್ಲಿಯೇ ಉತ್ತಮ ಆದಾಯ ಹೊಂದಿರುವವರಿಗೆ ಗುಣಮಟ್ಟದ ಜೀವನ ನಡೆಸಲು ಸಾಕಷ್ಟು ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮನೆ ಸಹಾಯಕರು, ಅಡುಗೆ ಸಹಾಯ, ಕುಟುಂಬದ ಬೆಂಬಲ ಮತ್ತು ಪರಿಚಿತ ಸಾಮಾಜಿಕ ವಾತಾವರಣ ಭಾರತದಲ್ಲೇ ಹೆಚ್ಚು ಅನುಕೂಲಕರವಾಗಿದೆ ಎಂದು ಹಲವರು ತಿಳಿಸಿದ್ದಾರೆ.&lt;/p&gt;&lt;p&gt;ಇದಕ್ಕೆ ವಿರುದ್ಧವಾಗಿ, ವಿದೇಶದಲ್ಲಿ ಇದೇ ಸೌಲಭ್ಯಗಳನ್ನು ಪಡೆಯಲು ಹೆಚ್ಚಿನ ವೆಚ್ಚ ಹಾಗೂ ಸ್ವತಃ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.&lt;/p&gt;&lt;p&gt;&lt;strong&gt;ಎಲ್ಲಾ NRI ವರರಿಗೂ ಇದು ಅನ್ವಯಿಸುತ್ತದೆಯೇ?&lt;/strong&gt;&lt;/p&gt;&lt;p&gt;ಚರ್ಚೆಯಲ್ಲಿ ಭಾಗವಹಿಸಿದ ಕೆಲವರು, ಕೆಲವು ನಕಾರಾತ್ಮಕ ಅನುಭವಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಘಟನೆಗಳ ಆಧಾರದ ಮೇಲೆ ಎಲ್ಲ NRI ವರರನ್ನು ಒಂದೇ ರೀತಿಯಲ್ಲಿ ನೋಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯನ್ನೂ ಅವರ ವ್ಯಕ್ತಿತ್ವ, ಮೌಲ್ಯಗಳು ಮತ್ತು ಜೀವನದ ದೃಷ್ಟಿಕೋನದ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಬದಲಾಗುತ್ತಿರುವ ಮದುವೆ ಟ್ರೆಂಡ್?&lt;/strong&gt;&lt;/p&gt;&lt;p&gt;ಈ ವೈರಲ್ ಪೋಸ್ಟ್&zwnj;ನಲ್ಲಿರುವ ಅಭಿಪ್ರಾಯಗಳನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ. ಆದರೆ, ಇಂದಿನ ಯುವಜನರಲ್ಲಿ ಆರ್ಥಿಕ ಸ್ವಾತಂತ್ರ್ಯ, ವೃತ್ತಿಜೀವನದ ಬೆಳವಣಿಗೆ, ಜೀವನದ ಗುಣಮಟ್ಟ ಮತ್ತು ವೈಯಕ್ತಿಕ ಆಯ್ಕೆಗಳು ಮದುವೆ ನಿರ್ಧಾರಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತಿವೆ ಎಂಬ ಚರ್ಚೆಗೆ ಇದು ಮತ್ತೊಮ್ಮೆ ವೇದಿಕೆ ಒದಗಿಸಿದೆ.&lt;/p&gt;]]></content:encoded>
            <category>relationship</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/are-nri-marriages-becoming-less-attractive-heres-what-the-debate-says/articleshow-qcq02zb"/>
        </item>
        <item>
            <title><![CDATA[ಕುಚ್‌ಕುಚ್ ಹೋಗಯಾ.. ಕಾಶ್ಮೀರದ ಸುಂದರಿ ಸಮ್ರೀನ್ ಕೌರ್ ಲವ್ವಲ್ಲಿ ಅರ್ಷ್‌ದೀಪ್ ಸಿಂಗ್ ಬಿದ್ದಿದ್ದು ಪಕ್ಕಾ ಆಯ್ತು!]]></title>
            <link>https://kannada.asianetnews.com/news-entertainment/cricketer-arshdeep-singh-introduces-samreen-kaur-as-my-person-and-here-is-everything-to-know-about-their-love-story/articleshow-shihx9k</link>
            <guid isPermaLink="true">https://kannada.asianetnews.com/news-entertainment/cricketer-arshdeep-singh-introduces-samreen-kaur-as-my-person-and-here-is-everything-to-know-about-their-love-story/articleshow-shihx9k</guid>
            <pubDate>Mon, 27 Jul 2026 18:51:26 +0530</pubDate>
            <description><![CDATA[&lt;p&gt;ಮೈದಾನದಲ್ಲಿ ಬ್ಯಾಟರ್&zwnj;ಗಳನ್ನು ನಡುಗಿಸುವ ಅರ್ಶದೀಪ್ ಈಗ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ಅಭಿಮಾನಿಗಳಂತೂ ಈ ಹೊಸ ಜೋಡಿಯನ್ನು ನೋಡಿ &quot;ಪರ್ಫೆಕ್ಟ್ ಮ್ಯಾಚ್&quot; ಎಂದು ಸಂಭ್ರಮಿಸುತ್ತಿದ್ದಾರೆ! ಆದರೆ, ಈ ಲವ್&zwnj; ಸ್ಟೋರಿಯಿಂದ ಈ ಇಬ್ಬರ ಕೆರಿಯರ್ ಸಮಸ್ಯೆ ಎದುರಿಸದೇ ಇರಲಿ ಎಂದೂ ಕೂಡ ಹಲವರು ಹಾರೈಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhv8rhce4ncdgcaxsbjjvtf,imgname-arshdeep-singh-samreen-kaur-1785157935660.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟೀಮ್ ಇಂಡಿಯಾ ವೇಗಿ ಅರ್ಶದೀಪ್ ಸಿಂಗ್ 'ಕ್ಲೀನ್ ಬೌಲ್ಡ್'! ಯಾರೀಕೆ ಅರ್ಶದೀಪ್ ಮನಗೆದ್ದ ಸುಂದರಿ ಸಮ್ರೀನ್ ಕೌರ್?&lt;/strong&gt;&lt;/p&gt;&lt;p&gt;ಮೈದಾನದಲ್ಲಿ ಘಾತಕ ಯಾರ್ಕರ್&zwnj;ಗಳ ಮೂಲಕ ಎದುರಾಳಿ ಬ್ಯಾಟರ್&zwnj;ಗಳ ವಿಕೆಟ್ ಹಾರಿಸುವ ಅರ್ಶದೀಪ್ ಸಿಂಗ್ (Arshdeep Singh) ಈಗ ತಾವೇ 'ಕ್ಲೀನ್ ಬೌಲ್ಡ್' ಆಗಿದ್ದಾರೆ! ಹೌದು, ಕಳೆದ ಕೆಲವು ತಿಂಗಳುಗಳಿಂದ ಅರ್ಷ್&zwnj;ದೀಪ್ ಸಿಂಗ್ ಯಾರ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗುಸುಗುಸು ಸುದ್ದಿಗೆ ಈಗ ಅವರೇ ಸ್ವತಃ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಅತೀ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿರೋ ಈ ಕ್ರಿಕೆಟರ್, ಮಾಡೆಲ್ ಮತ್ತು ನಟಿ ಸಮ್ರೀನ್ ಕೌರ್ (Samreen Kaur) ಅವರನ್ನು 'ನನ್ನ ಪ್ರೀತಿಯ ವ್ಯಕ್ತಿ' (My Person) ಎಂದು ಜಗತ್ತಿಗೆ ಪರಿಚಯಿಸಿದ್ದಾರೆ. ಇನ್ನು ಈ ಪೋಸ್ಟ್ ನೋಡಿದ ಅಭಿಮಾನಿಗಳು &quot;ಅರ್ಶದೀಪ್ ಜೀವನದ ಅತ್ಯುತ್ತಮ ವಿಕೆಟ್ ಇದು&quot; ಎಂದು ಕಾಮೆಂಟ್ ಮಾಡುತ್ತಾ ಹಾರೈಸುತ್ತಿದ್ದಾರೆ.&lt;/p&gt;&lt;p&gt;ಯಾರು ಈ ಸಮ್ರೀನ್ ಕೌರ್? ಬ್ಯೂಟಿ ವಿತ್ ಬ್ರೈನ್!&lt;/p&gt;&lt;p&gt;ಅಷ್ಟಕ್ಕೂ ಅರ್ಶದೀಪ್ ಹೃದಯ ಕದ್ದ ಈ ಸಮ್ರೀನ್ ಕೌರ್ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಸೆಪ್ಟೆಂಬರ್ 7, 1999 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಸಮ್ರೀನ್ ಕೌರ್, ಮಾಡೆಲಿಂಗ್ ಲೋಕದ ಖ್ಯಾತ ಮುಖ. 2018ರ 'ಫೆಮಿನಾ ಮಿಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯಲ್ಲಿ ತಮ್ಮ ರಾಜ್ಯವನ್ನು ಪ್ರತಿನಿಧಿಸಿ ಫೈನಲಿಸ್ಟ್ ಆಗಿ ಗುರುತಿಸಿಕೊಂಡಿದ್ದರು. ಸಮ್ರೀನ್ ಬರೀ ಸುಂದರಿ ಅಷ್ಟೇ ಅಲ್ಲ, ವಿದ್ಯಾಭ್ಯಾಸದಲ್ಲೂ ಸೈ ಎನಿಸಿಕೊಂಡಿದ್ದಾರೆ. ಪುಣೆಯ ಖ್ಯಾತ ಸಿಂಬಯೋಸಿಸ್ ಕಾಲೇಜಿನಿಂದ ಬಿಕಾಂ (ಆನರ್ಸ್) ಪದವಿ ಪಡೆದಿದ್ದಾರೆ.&lt;/p&gt;&lt;h2&gt;ಬೆಳ್ಳಿತೆರೆಯಲ್ಲಿ ಸಮ್ರೀನ್ ಹವಾ:&lt;/h2&gt;&lt;p&gt;ಮಾಡೆಲಿಂಗ್ ನಂತರ ನಟನೆಯತ್ತ ವಾಲಿದ ಸಮ್ರೀನ್, ಕಬೀರ್ ಖಾನ್ ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ '83' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ZEE5 ನ 'ನೈಲ್ ಪಾಲಿಶ್' ಮತ್ತು ಪಂಜಾಬಿ ಸಿನಿಮಾ 'ಸರ್ದಾರ್ ಜಿ 2' ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಾದ್&zwnj;ಶಾ, ಗುರು ರಾಂಧವಾ, ಜುಬಿನ್ ನೌಟಿಯಾಲ್, ಜಸ್ ಮಾನಕ್ ಮತ್ತು ಮನಿಂದರ್ ಬುಟ್ಟರ್ ಅವರಂತಹ ಖ್ಯಾತ ಗಾಯಕರ ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫಾಲೋಯಿಂಗ್ ಸಂಪಾದಿಸಿದ್ದಾರೆ.&lt;/p&gt;&lt;p&gt;ಆಶಿಶ್ ಚಂಚಲಾನಿ ಜೊತೆ ತಳುಕು ಹಾಕಿಕೊಂಡಿದ್ದ ಹೆಸರು!&lt;/p&gt;&lt;p&gt;ಅರ್ಶದೀಪ್ ಅವರೊಂದಿಗೆ ಅಧಿಕೃತವಾಗಿ ಕಾಣಿಸಿಕೊಳ್ಳುವ ಮೊದಲು, ಸಮ್ರೀನ್ ಹೆಸರು ಖ್ಯಾತ ಯೂಟ್ಯೂಬರ್ ಆಶಿಶ್ ಚಂಚಲಾನಿ ಜೊತೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗಾಸಿಪ್ ಹಬ್ಬಿತ್ತು. ಆದರೆ, ಆಗ ಸಮ್ರೀನ್ &quot;ನಾವಿಬ್ಬರೂ ಕೇವಲ ಆತ್ಮೀಯ ಸ್ನೇಹಿತರು ಅಷ್ಟೇ&quot; ಎಂದು ಸ್ಪಷ್ಟನೆ ನೀಡಿದ್ದರು.&lt;/p&gt;&lt;h3&gt;ಐಪಿಎಲ್ ಕ್ರೀಡಾಂಗಣದಲ್ಲಿ ಶುರುವಾದ ಪ್ರೇಮದ ಗುಮಾನಿ!&lt;/h3&gt;&lt;p&gt;ಅರ್ಶದೀಪ್ ಮತ್ತು ಸಮ್ರೀನ್ ಪ್ರೀತಿಯ ವಿಷಯ ಮೊದಲು ಚರ್ಚೆಗೆ ಬಂದಿದ್ದು ಐಪಿಎಲ್ 2024ರ ಸಮಯದಲ್ಲಿ. ಪಂಜಾಬ್ ಕಿಂಗ್ಸ್ ಪರ ಆಡುವ ಅರ್ಶದೀಪ್ ಅವರನ್ನು ಬೆಂಬಲಿಸಲು ಸಮ್ರೀನ್ ಪದೇ ಪದೇ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅರ್ಶದೀಪ್ ವಿಕೆಟ್ ಪಡೆದಾಗಲೆಲ್ಲಾ ಸಮ್ರೀನ್ ಅವರ ಮುಖದಲ್ಲಿ ಅರಳುತ್ತಿದ್ದ ನಗು ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿಯನ್ನು ಮೂಡಿಸಿತ್ತು. ಈಗ ಅರ್ಶದೀಪ್ ಅವರೇ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಅಧಿಕೃತ ಮೊಹರು ಒತ್ತಿದ್ದು, ಪ್ರೇಮಿಗಳ ಪಟ್ಟಿಗೆ ಹೊಸ ಜೋಡಿಯ ಎಂಟ್ರಿಯಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಮೈದಾನದಲ್ಲಿ ಬ್ಯಾಟರ್&zwnj;ಗಳನ್ನು ನಡುಗಿಸುವ ಅರ್ಶದೀಪ್ ಈಗ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ಅಭಿಮಾನಿಗಳಂತೂ ಈ ಹೊಸ ಜೋಡಿಯನ್ನು ನೋಡಿ &quot;ಪರ್ಫೆಕ್ಟ್ ಮ್ಯಾಚ್&quot; ಎಂದು ಸಂಭ್ರಮಿಸುತ್ತಿದ್ದಾರೆ!&lt;/p&gt;&lt;p&gt;ಸಂಕ್ಷಿಪ್ತವಾಗಿ: ಜಮ್ಮು ಕಾಶ್ಮೀರದ ಸುಂದರಿ ಸಮ್ರೀನ್ ಕೌರ್ ಈಗ ಅರ್ಶದೀಪ್ ಸಿಂಗ್ ಅವರ ಬಾಳಸಂಗಾತಿಯಾಗಿ ಬರಲು ಸಿದ್ಧರಾಗಿದ್ದಾರೆ. ವಿವಾದಗಳಿಗಿಂತ ಹೆಚ್ಚಾಗಿ ತಮ್ಮ ನಟನೆ ಮತ್ತು ಸೌಂದರ್ಯದಿಂದ ಸದ್ದು ಮಾಡಿದ್ದ ಸಮ್ರೀನ್, ಈಗ ಟೀಮ್ ಇಂಡಿಯಾದ 'ಫ್ಯೂಚರ್ ಸ್ಟಾರ್' ಪತ್ನಿಯಾಗುವ ಹಾದಿಯಲ್ಲಿದ್ದಾರೆ. ಇನ್ಮುಂದೆ ಅಸಲಿ ಮಜಾ ಶುರು!&lt;/p&gt;]]></content:encoded>
            <category>relationship</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/cricketer-arshdeep-singh-introduces-samreen-kaur-as-my-person-and-here-is-everything-to-know-about-their-love-story/articleshow-shihx9k"/>
        </item>
        <item>
            <title><![CDATA[ಹೆಂಡ್ತೀನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಗಂಡಂದಿರ ರಾಶಿಗಳಿವು]]></title>
            <link>https://kannada.asianetnews.com/gallery/festivals/zodiac-signs-that-make-the-most-loving-husbands-suh-tmglsyi</link>
            <guid isPermaLink="true">https://kannada.asianetnews.com/gallery/festivals/zodiac-signs-that-make-the-most-loving-husbands-suh-tmglsyi</guid>
            <pubDate>Mon, 27 Jul 2026 15:11:05 +0530</pubDate>
            <description><![CDATA[&lt;p&gt;ಗಂಡ-ಹೆಂಡತಿಯ ನಡುವಿನ ಪರಸ್ಪರ ಗೌರವವೇ ದಾಂಪತ್ಯದ ಬುನಾದಿ. ಜ್ಯೋತಿಷ್ಯದ ಪ್ರಕಾರ, ಹೆಂಡತಿಯ ಆಲೋಚನೆಗಳಿಗೆ ಹೆಚ್ಚು ಬೆಲೆ ಕೊಟ್ಟು, ಸಹನೆಯಿಂದ ನಡೆದುಕೊಳ್ಳುವ ಕೆಲವು ರಾಶಿಯ ಪುರುಷರ ಬಗ್ಗೆ ಇಲ್ಲಿ ವಿವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzb3fpp6w5hy923bxqjxd19,imgname-astrology-insights-which-3-zodiac-signs-might-marry-again-1784537005782.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಂಡ-ಹೆಂಡತಿಯ ನಡುವಿನ ಪರಸ್ಪರ ಗೌರವವೇ ದಾಂಪತ್ಯದ ಬುನಾದಿ. ಜ್ಯೋತಿಷ್ಯದ ಪ್ರಕಾರ, ಹೆಂಡತಿಯ ಆಲೋಚನೆಗಳಿಗೆ ಹೆಚ್ಚು ಬೆಲೆ ಕೊಟ್ಟು, ಸಹನೆಯಿಂದ ನಡೆದುಕೊಳ್ಳುವ ಕೆಲವು ರಾಶಿಯ ಪುರುಷರ ಬಗ್ಗೆ ಇಲ್ಲಿ ವಿವರಿಸಲಾಗಿದೆ.&lt;/p&gt;&lt;img&gt;ಒಬ್ಬ ಮಹಿಳೆಯ ಜೀವನದಲ್ಲಿ ಸರಿಯಾದ, ಪ್ರೀತಿಯುಳ್ಳ ಪತಿ ಸಿಗುವುದು ಒಂದು ದೊಡ್ಡ ವರ. ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ರಾಶಿಯು ಅವರ ಗುಣಲಕ್ಷಣಗಳನ್ನು, ವಿಶೇಷವಾಗಿ ಸಂಗಾತಿಯ ಮೇಲಿನ ಪ್ರೀತಿಯನ್ನು ನಿರ್ಧರಿಸುತ್ತದೆ. ಕೆಲವರು ಪ್ರೀತಿಯನ್ನು ನೇರವಾಗಿ ತೋರಿಸಿದರೆ, ಇನ್ನು ಕೆಲವರು ಕೃತಿಯಲ್ಲಿ ತೋರಿಸುತ್ತಾರೆ. ಹಾಗಾದರೆ, ಪತ್ನಿಯನ್ನೇ ತಮ್ಮ ಜಗತ್ತು ಎಂದು ಭಾವಿಸಿ, ಆಕೆಯ ಮೇಲೆ ಅಪಾರ ಪ್ರೀತಿ, ಗೌರವ ಮತ್ತು ರಕ್ಷಣೆ ನೀಡುವ ಆ ರಾಶಿಗಳು ಯಾವುವು ಎಂದು ನೋಡೋಣ.&lt;img&gt;ಕರ್ಕಾಟಕ ರಾಶಿಯ ಗಂಡಂದಿರು ಸಹಜವಾಗಿಯೇ ತಾಯಿಯಂತಹ ವಾತ್ಸಲ್ಯ ಹೊಂದಿರುತ್ತಾರೆ. ಚಂದ್ರ ಮನಃಕಾರಕನಾಗಿರುವುದರಿಂದ, ಹೆಂಡತಿಯ ಮುಖಭಾವ ನೋಡಿಯೇ ಆಕೆಯ ಮನಸ್ಥಿತಿಯನ್ನು ಅರಿಯುತ್ತಾರೆ. ಪತ್ನಿಯ ಸಣ್ಣಪುಟ್ಟ ಅಗತ್ಯಗಳಿಂದ ಹಿಡಿದು ಆಕೆಯ ಆರೋಗ್ಯದವರೆಗೂ ಪ್ರತಿಯೊಂದರಲ್ಲೂ ವಿಶೇಷ ಕಾಳಜಿ ವಹಿಸುತ್ತಾರೆ. ಕುಟುಂಬದಲ್ಲಿ ಶಾಂತಿ ಬಯಸುವುದರಿಂದ, ಹೆಂಡತಿಗೆ ಎಂದಿಗೂ ಮನಸ್ಸಿಗೆ ನೋವುಂಟು ಮಾಡುವುದಿಲ್ಲ.&lt;img&gt;ವೃಷಭ ರಾಶಿಯವರು ತಮ್ಮ ಜೀವನ ಸಂಗಾತಿಗೆ ಅತ್ಯಂತ ನಿಷ್ಠಾವಂತರಾಗಿರುತ್ತಾರೆ. ಇವರು ತೋರುವ ಪ್ರೀತಿ ತುಂಬಾ ಸ್ಥಿರವಾಗಿರುತ್ತದೆ. ತಮ್ಮ ಪತ್ನಿಯನ್ನು ಯಾವಾಗಲೂ ಸುರಕ್ಷಿತವಾಗಿ ಮತ್ತು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿಡಲು ಬಯಸುತ್ತಾರೆ. ಹೆಂಡತಿಯ ಬೆಳವಣಿಗೆಗೆ ಅಡ್ಡಿಯಾಗದೆ, ಆಕೆಯ ಹಿಂದೆ ದೊಡ್ಡ ಶಕ್ತಿಯಾಗಿ ನಿಲ್ಲುತ್ತಾರೆ.&lt;img&gt;ತುಲಾ ರಾಶಿಯ ಗಂಡಂದಿರು ತಮ್ಮ ಹೆಂಡತಿಯನ್ನು ಕೇವಲ ಸಂಗಾತಿಯಾಗಿ ನೋಡದೆ, ಜೀವನದ ಸಮಾನ ಪಾಲುದಾರಳು ಮತ್ತು ಆಪ್ತ ಸ್ನೇಹಿತೆಯಂತೆ ಕಾಣುತ್ತಾರೆ. ಜೀವನದ ಯಾವುದೇ ಪ್ರಮುಖ ನಿರ್ಧಾರವನ್ನು ಪತ್ನಿಯ ಅಭಿಪ್ರಾಯ ಕೇಳದೆ ತೆಗೆದುಕೊಳ್ಳುವುದಿಲ್ಲ. ಅನಿರೀಕ್ಷಿತ ಉಡುಗೊರೆಗಳನ್ನು ನೀಡಿ ಅಚ್ಚರಿಗೊಳಿಸುವುದರಲ್ಲಿ ಮತ್ತು ರೋಮ್ಯಾನ್ಸ್ ಮಾಡುವುದರಲ್ಲಿ ಇವರು ನಿಪುಣರು.&lt;img&gt;ಹೊರನೋಟಕ್ಕೆ ಸ್ವಲ್ಪ ಕಠಿಣವಾಗಿ ಕಂಡರೂ, ಹೆಂಡತಿಯ ಮೇಲಿನ ಪ್ರೀತಿಯಲ್ಲಿ ವೃಶ್ಚಿಕ ರಾಶಿಯವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಇವರ ಪ್ರೀತಿ ತುಂಬಾ ಆಳವಾಗಿರುತ್ತದೆ. ಯಾವುದೇ ಪರಿಸ್ಥಿತಿಯಲ್ಲೂ ತಮ್ಮ ಪತ್ನಿಯನ್ನು ಬಿಟ್ಟುಕೊಡುವುದಿಲ್ಲ. ಪತ್ನಿಯ ಗೌರವಕ್ಕೆ ಧಕ್ಕೆ ಬಂದರೆ, ಅವಳಿಗೆ ರಕ್ಷಣಾ ಕವಚವಾಗಿ ನಿಂತು ಹೋರಾಡುತ್ತಾರೆ.&lt;img&gt;ಮೀನ ರಾಶಿಯ ಗಂಡಂದಿರು ತಮ್ಮ ಪತ್ನಿಯನ್ನು ದೇವತೆಯಂತೆ ಕಾಣುತ್ತಾರೆ. ಹೆಂಡತಿಯ ಎಲ್ಲಾ ನ್ಯೂನತೆಗಳನ್ನು ಒಪ್ಪಿಕೊಂಡು, ನಿಬಂಧನೆಗಳಿಲ್ಲದ ಪ್ರೀತಿಯನ್ನು ಸುರಿಸುತ್ತಾರೆ. ಪತ್ನಿಯ ಕನಸು ಮತ್ತು ಆಕಾಂಕ್ಷೆಗಳಿಗೆ ರೆಕ್ಕೆ ನೀಡಿ, ಅವುಗಳನ್ನು ಈಡೇರಿಸಲು ಹೆಗಲು ಕೊಡುತ್ತಾರೆ. ಕ್ಷಮಿಸುವ ಗುಣ ಮತ್ತು ಯಾವಾಗಲೂ ಹೆಂಡತಿಯ ಮುಖದಲ್ಲಿ ನಗು ನೋಡಬೇಕೆಂಬ ಆಸೆ ಇವರದು.]]></content:encoded>
            <category>relationship</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/zodiac-signs-that-make-the-most-loving-husbands-suh-tmglsyi"/>
        </item>
    </channel>
</rss>
