<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 24 Jun 2026 20:18:38 +0530</lastBuildDate>
        <atom:link href="https://kannada.asianetnews.com/rss/ramanagara" rel="self" type="application/rss+xml"/>
        <item>
            <title><![CDATA[ರಾಮನಗರಕ್ಕೆ 5ನೇ ಬಾರಿಮುಖ್ಯಮಂತ್ರಿ ಹುದ್ದೆ ಭಾಗ್ಯ? ಮೊದಲ ಐವರು ಯಾರು?]]></title>
            <link>https://kannada.asianetnews.com/politics/will-ramanagara-district-get-its-5th-cm-rav/articleshow-1mhsmd7</link>
            <guid isPermaLink="true">https://kannada.asianetnews.com/politics/will-ramanagara-district-get-its-5th-cm-rav/articleshow-1mhsmd7</guid>
            <pubDate>Fri, 29 May 2026 08:43:31 +0530</pubDate>
            <description><![CDATA[ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದ್ದು, ಇದು ಬೆಂಗಳೂರು ದಕ್ಷಿಣ ಜಿಲ್ಲೆಗೆ ಐದನೇ ಸಿಎಂ ಕೊಡುಗೆಯಾಗಲಿದೆ. ಈ ಹಿಂದೆ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ದೇವೇಗೌಡ ಹಾಗೂ ಕುಮಾರಸ್ವಾಮಿ ಈ ಜಿಲ್ಲೆಯಿಂದ ಸಿಎಂ ಆಗಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01ksps9v1xpj32wfc58z61rk3e,imgname-siddaramaiah-and-dk-shivakumar--2--1779954936893.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮೇ.29): &lt;/strong&gt;ಕರುನಾಡಿಗೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿರುವ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(KPCC President DK Shivakumar) ಮೂಲಕ ಐದನೇ ಬಾರಿಗೆ ಸಿಎಂ(5th Chief Ministers from Ramanagara) ಗಾದಿ ಒಲಿಯುತ್ತಿದೆಯೇ ಎಂಬ ಕುತೂಹಲ ಮೂಡಿದೆ.&lt;/p&gt;&lt;p&gt;ಸರಾಜ್ಯದಲ್ಲಿ ಹಲವು ತಿಂಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ಇತಿಶ್ರೀ ಹಾಡಲಾಗಿದೆ. ಸಿದ್ದರಾಮಯ್ಯ(Siddaramaiah)ನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ(resignation) ಸಲ್ಲಿಸಿದ್ದು, ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬ ಸಂದೇಶ ನೀಡಿದ್ದಾರೆ.&lt;/p&gt;&lt;p&gt;8ನೇ ಬಾರಿ ವಿಧಾನಸಭೆ ಪ್ರವೇಶಿಸಿರುವ ಡಿ.ಕೆ.ಶಿವಕುಮಾರ್ ಸೋಲಿಲ್ಲದ ಸರದಾರ, ಕಾಂಗ್ರೆಸ್ ಪಕ್ಷದಲ್ಲಿ ಡೈನಾಮಿಕ್ ಲೀಡರ್ ಎಂದೇ ಬಿಂಬಿತಗೊಂಡವರು. ಈಗ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಿಂದ ಮುಖ್ಯಮಂತ್ರಿ ಗಾದಿ ಅಲಂಕರಿಸಿದ ಕಾಂಗ್ರೆಸ್&zwnj;ನ ಎರಡನೇ ನಾಯಕ ಎಂಬ ಪ್ರಶಂಸೆಗೆ ಪಾತ್ರರಾಗಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.&lt;/p&gt;&lt;p&gt;ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಮೂಲತಃ ರಾಮನಗರದವರು. 1952 ಮತ್ತು 1957ರ ಚುನಾವಣೆಗಳಲ್ಲಿ ರಾಮನಗರ ಕ್ಷೇತ್ರದಿಂದ ಕೆಂಗಲ್ ಆಯ್ಕೆಯಾಗಿದ್ದರು. 1952ರಲ್ಲಿ ಸಿಎಂ ಪಟ್ಟ ಅವರಿಗೆ ಒಲಿದು ಬಂದಿತ್ತು. 1983ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಜನತಾಪಕ್ಷದ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆಗೆ ಮುಖ್ಯಮಂತ್ರಿ ಹುದ್ದೆ ಒಲಿದಿತ್ತು. ಈಗ ಡಿಕೆಶಿಗೆ ಅವಕಾಶ ಸಿಕ್ಕರೆ ಕನಕಪುರ ಕ್ಷೇತ್ರಕ್ಕೆ 2ನೇ ಬಾರಿ ಸಿಎಂ ಹುದ್ದೆ ಲಭಿಸಿದಂತಾಗುತ್ತದೆ.&lt;/p&gt;&lt;h2&gt;ಗೌಡರ ಕುಟುಂಬಕ್ಕೆ 3 ಬಾರಿ ಅವಕಾಶ:&lt;/h2&gt;&lt;p&gt;1994ರಲ್ಲಿ ರಾಮನಗರದಿಂದಲೇ ಗೆದ್ದ ದೇವೇಗೌಡರು ಮುಖ್ಯಮಂತ್ರಿ ಹುದ್ದೆಗೇರಿ 17 ತಿಂಗಳು ಆಡಳಿತ ನಡೆಸಿದರು. ಇನ್ನು, 2004ರಲ್ಲಿ ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಪ್ರವೇಶಿಸಿದ ಕುಮಾರಸ್ವಾಮಿ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದಲ್ಲಿ 20 ತಿಂಗಳು ಮುಖ್ಯಮಂತ್ರಿಯಾದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/will-ramanagara-district-get-its-5th-cm-rav/articleshow-1mhsmd7"/>
        </item>
        <item>
            <title><![CDATA[ಬಿಜೆಪಿ ನಿಜವಾಗಿಯೂ ಜೆಡಿಎಸ್ ಪಕ್ಷವನ್ನು ಮುಗಿಸುತ್ತಿದೆಯೇ? ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/mla-hc-balakrishna-slams-bjp-over-jds-alliance-rift-gvd/articleshow-1qv44hm</link>
            <guid isPermaLink="true">https://kannada.asianetnews.com/karnataka-districts/mla-hc-balakrishna-slams-bjp-over-jds-alliance-rift-gvd/articleshow-1qv44hm</guid>
            <pubDate>Wed, 10 Jun 2026 22:57:25 +0530</pubDate>
            <description><![CDATA[&lt;p&gt;ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಮೂಡುತ್ತಿರುವ ಬಗ್ಗೆ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಮಹತ್ವದ ಹೇಳಿಕೆ ನೀಡಿದ್ದಾರೆ. ಬಿಜೆಪಿ ಹಂತ ಹಂತವಾಗಿ ಜೆಡಿಎಸ್ ಪಕ್ಷವನ್ನು ಮುಗಿಸುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx0eq5przgsx0jehvwdys4mv,imgname-bfb-1749140870872.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜೂ.10): &lt;/strong&gt;ಬಿಜೆಪಿ - ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಆಗುತ್ತಿದೆ ಅಂತ ಕೆಲ ನಾಯಕರು ನನ್ನ ಹತ್ತಿರ ಚರ್ಚೆ ಮಾಡಿದ್ದಾರೆ. ಬಹುಶಃ ಜೆಡಿಎಸ್ ಪಕ್ಷವನ್ನು ಹಂತ ಹಂತವಾಗಿ ಮುಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದರು.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದೇವೇಗೌಡರು ಕೇಳಿದ ತಕ್ಷಣವೇ ಕಾಂಗ್ರೆಸ್ ರಾಜ್ಯಸಭೆಗೆ ಅವಕಾಶ ಮಾಡಿಕೊಟ್ಟು ಗೌರವಯುತವಾಗಿ ನಡೆಸಿಕೊಂಡಿತ್ತು. ಆದರೆ, ಬಿಜೆಪಿಯಲ್ಲಿ ಅಂತಹ ವಾತಾವರಣ ಇಲ್ಲ. ಜೆಡಿಎಸ್ ನವರೇ ಬಿಜೆಪಿಯವರ ಮೇಲೆ ಬಿದ್ದು ಹೋಗಿದ್ದಾರೆ. ಅವರು ಕರೆಯದೇ ಇದ್ದರೂ ಹೋಗಿರೋದಕ್ಕೆ ಸಮಸ್ಯೆ ಆಗಿದೆ ಎಂದರು.&lt;/p&gt;&lt;p&gt;ರಾಜ್ಯದಲ್ಲಿ ಖಾತೆ ವಿಚಾರವಾಗಿ ಗೊಂದಲ ಉಂಟಾಗಿದೆಯಲ್ಲ ಎಂಬ ಪ್ರಶ್ನೆಗೆ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಕೃಷ್ಣಬೈರೇಗೌಡರು ಯಾವುದೋ ಕಾರಣಕ್ಕೆ ದೆಹಲಿಗೆ ಹೋದರೆ ಅದನ್ನೇ ಅಸಮಾಧಾನ, ಗೊಂದಲ ಅಂತ ನೀವು ಸುದ್ದಿ ಮಾಡುತ್ತೀರಿ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ವಿಚಾರಗಳು ಇರುತ್ತವೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಗೊಂದಲ ಅನ್ನೋದು ಸರಿಯಲ್ಲ&lt;/strong&gt;&lt;/h2&gt;&lt;p&gt;ಹಿರಿಯ ನಾಯಕರು ಏನೋ ಒಂದು ಸಣ್ಣಪುಟ್ಟದ್ದನ್ನು ಕೇಳಿದ್ದಾರೆ. ಅದನ್ನೇ ದೊಡ್ಡ ಗೊಂದಲ ಅನ್ನೋದು ಸರಿಯಲ್ಲ. ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದೇನೆ. ಅವರು ತೀರ್ಮಾನ ಮಾಡಿ ಕೊಟ್ಟರೆ ಸಂತೋಷ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.&lt;/p&gt;&lt;p&gt;ಬಹುಶಃ ರಾಜ್ಯಸಭಾ ಚುನಾವಣೆ ಹಾಗೂ ಪರಿಷತ್ ಚುನಾವಣೆ ಆದಮೇಲೆ ಸಂಪುಟ ವಿಸ್ತರಣೆ ಆಗಬಹುದು. ಈ ಬಗ್ಗೆ ನಮ್ಮ ಸಿಎಂ ಹಾಗೂ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ನನಗೆ ಮಂತ್ರಿಸ್ಥಾನ ಕೊಡಬೇಕೆಂದು ಜಿಲ್ಲೆಯ ಜನರೂ ಕೇಳುತ್ತಿದ್ದಾರೆ. ಆದರೆ, ಅಂತಿಮ ತೀರ್ಮಾನ ಹೈಕಮಾಂಡ್ ನದ್ದು ಎಂದು ಹೇಳಿದರು.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mla-hc-balakrishna-slams-bjp-over-jds-alliance-rift-gvd/articleshow-1qv44hm"/>
        </item>
        <item>
            <title><![CDATA[Bidadi Township: ಕುಮಾರಸ್ವಾಮಿ ಚಾಮುಂಡಿ ಮೇಲೆ ಪ್ರಮಾಣ ಮಾಡಲಿ: ಶಾಸಕ ಎಚ್.ಸಿ.ಬಾಲಕೃಷ್ಣ ಸವಾಲು]]></title>
            <link>https://kannada.asianetnews.com/karnataka-districts/bidadi-township-row-hc-balakrishna-challenge-hd-kumaraswamy-ramanagara-gvd/articleshow-2ahvu9m</link>
            <guid isPermaLink="true">https://kannada.asianetnews.com/karnataka-districts/bidadi-township-row-hc-balakrishna-challenge-hd-kumaraswamy-ramanagara-gvd/articleshow-2ahvu9m</guid>
            <pubDate>Tue, 16 Jun 2026 00:27:40 +0530</pubDate>
            <description><![CDATA[&lt;p&gt;Bidadi Township ಯೋಜನೆಯನ್ನು 2018ರಲ್ಲಿ ಕೈಬಿಡಲು ಒಪ್ಪಿಕೊಂಡಿದ್ದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರು ಚಾಮುಂಡೇಶ್ವರಿ ದೇವಿ ಮೇಲೆ ಪ್ರಮಾಣ ಮಾಡಿ ತೋರಿಸಲಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸವಾಲು ಹಾಕಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv66aed2afva21evz00vjyn9,imgname-jvjv-1781545646498.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜೂ.16): &lt;/strong&gt;ಬಿಡದಿ ಟೌನ್&zwnj;ಶಿಪ್ ಯೋಜನೆಯನ್ನು 2018ರಲ್ಲಿ ಕೈಬಿಡಲು ಒಪ್ಪಿಕೊಂಡಿದ್ದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರು ಚಾಮುಂಡೇಶ್ವರಿ ದೇವಿ ಮೇಲೆ ಪ್ರಮಾಣ ಮಾಡಿ ತೋರಿಸಲಿ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಯೋಜನೆ ಕುಮಾರಸ್ವಾಮಿಯವರ ಕನಸಿನ ಕೂಸು ಎಂಬುದರಲ್ಲಿ ಎರಡು ಮಾತಿಲ್ಲ. ಸಮಸ್ಯೆ ಹುಟ್ಟು ಹಾಕಿದವರೇ ಈಗ ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;ಬಿಡದಿ ಟೌನ್&zwnj;ಶಿಪ್&zwnj;ಗೆ ಸಂಬಂಧಿಸಿದ ನೋಟಿಫಿಕೇಶನ್&zwnj; ಯಾರ ಅವಧಿಯಲ್ಲಿ ಹೊರಬಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ 2018ರಲ್ಲೇ ರೆಡ್&zwnj; ಝೋನ್&zwnj; ತೆರವುಗೊಳಿಸಬೇಕಾಗಿತ್ತು. ಯೋಜನೆ ಕೈಬಿಡುವಂತೆ ರೈತರು ಮನವಿ ಮಾಡಿದರೂ, ಆಗ ಕುಮಾರಸ್ವಾಮಿ ಅದನ್ನು ತಮ್ಮ &quot;ಕನಸಿನ ಕೂಸು&quot; ಎಂದು ಹೇಳಿದ್ದರು. ಈಗ ಅದೇ ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ರಾಜಕೀಯ ದ್ವಂದ್ವ ಎಂದು ಟೀಕಿಸಿದರು.&lt;/p&gt;&lt;p&gt;ರೈತರಿಗೆ ಪರಿಹಾರ ನೀಡುವ ವಿಚಾರದಲ್ಲೂ ಕುಮಾರಸ್ವಾಮಿ ಅವರೇ ಶೇಕಡ 40ರಷ್ಟು ಅಭಿವೃದ್ಧಿ ಪಡಿಸಿದ ಭೂಮಿ ನೀಡುವ ತೀರ್ಮಾನ ಮಾಡಿದ್ದರು ಎಂದು ವಿಡಿಯೋ ಸಾಕ್ಷ್ಯ ಪ್ರದರ್ಶಿಸಿದ ಬಾಲಕೃಷ್ಣ, ಪ್ರಸ್ತುತ ಸರ್ಕಾರ ವಸತಿ ಪ್ರದೇಶಕ್ಕೆ ಶೇ.50 ಹಾಗೂ ವಾಣಿಜ್ಯ ಪ್ರದೇಶಕ್ಕೆ ಶೇ.45ರಷ್ಟು ಅಭಿವೃದ್ಧಿ ಪಡಿಸಿದ ಭೂಮಿ ನೀಡಲು ಮುಂದಾಗಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಚರ್ಚೆಗೆ ಆಹ್ವಾನ&lt;/strong&gt;&lt;/h2&gt;&lt;p&gt;ಭೂಸ್ವಾಧೀನಕ್ಕೆ ಬಹುತೇಕ ರೈತರು ಒಪ್ಪಿಗೆ ನೀಡಿದ್ದಾರೆ. ನೋಟಿಫಿಕೇಶನ್&zwnj; ಆಗಿರುವ ಯೋಜನೆಯನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಇವತ್ತಲ್ಲ ನಾಳೆ ಆ ಪ್ರದೇಶ ಅಭಿವೃದ್ಧಿಯಾಗಲೇಬೇಕು. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅಭಿವೃದ್ಧಿ ನಡೆಯಬಾರದು ಎಂಬ ಕಾರಣಕ್ಕೆ ವಿರೋಧಿಸಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ರಿಯಲ್ ಎಸ್ಟೇಟ್ ದಲ್ಲಾಳಿ ಎಂದು ಕರೆಯುವ ಮುನ್ನ ತಮ್ಮ ಆಸ್ತಿ ಬಗ್ಗೆ ಉತ್ತರಿಸಬೇಕು. ಎಲ್ಲರೂ ಗಾಜಿನ ಮನೆಯಲ್ಲಿ ಇದ್ದಾರೆ. ಚರ್ಚೆಗೆ ಬರಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಬಾಲಕೃಷ್ಣ ಚರ್ಚೆಗೆ ಆಹ್ವಾನಿಸಿದರು.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bidadi-township-row-hc-balakrishna-challenge-hd-kumaraswamy-ramanagara-gvd/articleshow-2ahvu9m"/>
        </item>
        <item>
            <title><![CDATA[ಬಿಡದಿ ಟೌನ್‌ಶಿಪ್‌ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಪಾದಯಾತ್ರೆಗೆ ಭರ್ಜರಿ ಜನ ಸ್ಪಂದನೆ]]></title>
            <link>https://kannada.asianetnews.com/karnataka-districts/huge-response-to-jds-leader-nikhil-kumaraswamy-s-walk-against-bidadi-township-mrq/articleshow-2hkk6mt</link>
            <guid isPermaLink="true">https://kannada.asianetnews.com/karnataka-districts/huge-response-to-jds-leader-nikhil-kumaraswamy-s-walk-against-bidadi-township-mrq/articleshow-2hkk6mt</guid>
            <pubDate>Mon, 22 Jun 2026 06:54:39 +0530</pubDate>
            <description><![CDATA[ಬಿಡದಿ ಟೌನ್&zwnj;ಶಿಪ್&zwnj; ಯೋಜನೆ ವಿರೋಧಿಸಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ನಮ್ಮ ಭೂಮಿ-ನಮ್ಮ ಹಕ್ಕು' ಘೋಷಣೆಯೊಂದಿಗೆ ಬೃಹತ್ ಪಾದಯಾತ್ರೆ ನಡೆಯಿತು. ಈ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಿಖಿಲ್, ರೈತರ ಭೂಮಿ ಉಳಿಸಲು ಕಾನೂನು ಹೋರಾಟಕ್ಕೂ ಸಿದ್ಧ ಎಂದರು. ಪಾದಯಾತ್ರೆ ವೇಳೆ ಯೋಜನೆ ಪರ-ವಿರೋಧ ಬಣಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kvpemp0y7xr4g66w9jebb0w1,imgname--bidadi-township-1782091241502.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ: &lt;/strong&gt;ಬಿಡದಿ ಟೌನ್&zwnj;ಶಿಪ್&zwnj; (ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ) ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಭಾನುವಾರ ಬೃಹತ್ ಪಾದಯಾತ್ರೆ ನಡೆಯಿತು. ಬೆಳಗ್ಗೆ 11.30ಕ್ಕೆ ಅಂಚಿಪುರ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಹೊಸೂರುವರೆಗೆ 8 ಗ್ರಾಮಗಳ ವ್ಯಾಪ್ತಿಯಲ್ಲಿ 11 ಕಿ.ಮೀ. ದೂರ ಸಾಗಿತು. ಬಳಿಕ, ಹೊಸೂರಿನಲ್ಲಿ ಬಹಿರಂಗ ಸಭೆಯೊಂದಿಗೆ ಮೊದಲ ಹಂತದ ಪಾದಯಾತ್ರೆ ಸಮಾಪ್ತಿಗೊಂಡಿತು.&lt;/p&gt;&lt;p&gt;ಬೆಳಗ್ಗೆ 11.30ಕ್ಕೆ ಅಂಚಿಪುರ ಗ್ರಾಮಕ್ಕೆ ಆಗಮಿಸಿದ ನಿಖಿಲ್&zwnj; ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಅಂಚಿಪುರ ಗ್ರಾಮದ ಶಕ್ತಿದೇವತೆ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, &lsquo;ನಮ್ಮ ಭೂಮಿ-ನಮ್ಮ ಹಕ್ಕು&rsquo; ಘೋಷಣೆಯೊಂದಿಗೆ ನಿಖಿಲ್&zwnj; ಪಾದಯಾತ್ರೆಗೆ ಚಾಲನೆ ನೀಡಿದರು. ಆದರೆ, ಪಾದಯಾತ್ರೆಯಲ್ಲಿ ಎಲ್ಲಿಯೂ ಜೆಡಿಎಸ್ ಪಕ್ಷದ ಬಾವುಟಗಳನ್ನು ಬಳಸಲಿಲ್ಲ. ಬದಲಿಗೆ, ಪ್ರತಿಭಟನಾಕಾರರು ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ಪಾದಯಾತ್ರೆಯಲ್ಲಿ ಸಾಗಿದರು. ಜೆಡಿಎಸ್ ಶಾಸಕರು ಸೇರಿ ಸುಮಾರು ಎರಡೂವರೆ ಸಾವಿರ ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.&lt;/p&gt;&lt;h2&gt;&lt;strong&gt;ದೇವನಹಳ್ಳಿಲಿ ಡಿನೋಟಿಫಿಕೇಷನ್ಮಾ ಡಿದ ಸಿದ್ದು ಜೈಲಿಗೆ ಹೋದ್ರಾ?&lt;/strong&gt;&lt;/h2&gt;&lt;p&gt;ಈ ಮಧ್ಯೆ, ಮೆರೆವೇಗೌಡನದೊಡ್ಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್&zwnj; ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ಮಾತೆತ್ತಿದರೆ ಕುಮಾರಣ್ಣ ರೆಡ್ ಜೋನ್ ಮಾಡಿ ನೋಟಿಫಿಕೇಷನ್ ಹೊರಡಿಸಿದರು. ಆದರೆ, ಡಿನೋಟಿಫಿಕೇಷನ್ ಮಾಡಿ ನಾನು ಜೈಲಿಗೆ ಹೋಗಲ್ಲ ಅಂತ ಹೇಳುತ್ತಾರೆ. ಆದರೆ, ನಿಮ್ಮದೇ ಸರ್ಕಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ದೇವನಹಳ್ಳಿಯಲ್ಲಿ ಡಿನೋಟಿಫಿಕೇಷನ್ ಮಾಡಿದರು. ಅವರು ಜೈಲಿಗೆ ಹೋದರಾ? ಈಗ ನೀವು ಡಿನೋಟಿಫಿಕೇಷನ್ ಮಾಡಿದರೆ ಮಾತ್ರ ಜೈಲಿಗೆ ಹೋಗುತ್ತೀರಾ ಎಂದು ಲೇವಡಿ ಮಾಡಿದರು.&lt;/p&gt;&lt;p&gt;ಸಿದ್ದರಾಮಯ್ಯನವರು ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಕೈ ಬಿಟ್ಟರು. ನೀವು ಇಲ್ಲಿ ರೈತರ ಭೂಮಿ ಕೈಬಿಡಿ, ಇದೇ ಜಿಲ್ಲೆಯಿಂದ ಮುಖ್ಯಮಂತ್ರಿ ಆಗಿದ್ದೀರಿ. ಜನರ ಬಳಿ ಕಾಡಿ ಬೇಡಿ ಪೆನ್ನು ಪೇಪರ್ ಪಡೆದಿದ್ದೀರಿ, ಈಗ ರೈತರ ಪರ ನಿಮ್ಮ ಪೆನ್ನು, ಪೇಪರ್ ಉಪಯೋಗಿಸಿ ಎಂದು ಆಗ್ರಹಿಸಿದರು.&lt;/p&gt;&lt;p&gt;ರೈತರು ಬೇಡ ಅಂದಿದ್ದಕ್ಕೆ ಕುಮಾರಸ್ವಾಮಿ ಈ ಯೋಜನೆ ಕೈಬಿಟ್ಟಿದ್ದರು. ಕುಮಾರಸ್ವಾಮಿ ಯಾವತ್ತೂ ರೈತರ ವಿರುದ್ಧ ತೀರ್ಮಾನ ಮಾಡಿಲ್ಲ. ನಾವು ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ. ನಾವು ಹೋರಾಟದಿಂದ ಹೆದರಿ ಓಡಿ ಹೋಗುವುದಿಲ್ಲ. ಯಾರ ಬೆದರಿಕೆಗೂ ದೇವೇಗೌಡರ ಕುಟುಂಬ ಹೆದರಲ್ಲ. ರೈತರ ಜೊತೆ ವಿಧಾನಸೌಧ ಚಲೋ ಮಾಡಲು ಸಿದ್ಧ. ಇದರ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.&lt;/p&gt;&lt;h3&gt;&lt;strong&gt;ಬೇನಾಮಿ ಆಸ್ತಿ ಸಾಬೀತುಪಡಿಸಿ&lt;/strong&gt;&lt;/h3&gt;&lt;p&gt;ಕುಮಾರಸ್ವಾಮಿಯವರು ಈ ಭಾಗದಲ್ಲಿ 100 ಎಕರೆ ಬೇನಾಮಿ ಹೊಂದಿದ್ದಾರೆ ಅಂತ ಸ್ಥಳೀಯ ಶಾಸಕರು ಆರೋಪಿಸಿದ್ದಾರೆ. ಅದನ್ನು ಸಾಬೀತು ಮಾಡಿದರೆ ಆ ಜಮೀನನ್ನು ನಾನು ಶಾಲೆಗೆ ಅಥವಾ ಆಸ್ಪತ್ರೆಗೆ ದಾನ ಮಾಡುತ್ತೇನೆ ಎಂದು ಸವಾಲು ಹಾಕಿದರು.&lt;/p&gt;&lt;p&gt;ಕೇತಗಾನಹಳ್ಳಿ ಗ್ರಾಮದಲ್ಲಿ 1985ರಲ್ಲಿ ನಮ್ಮ ತಂದೆ ಜಾಗ ಖರೀದಿ ಮಾಡಿದ್ದಾರೆ. ಯಾರ ತಲೆ ಒಡೆದು ಅದನ್ನು ಖರೀದಿ ಮಾಡಿಲ್ಲ. ಸಿನಿಮಾ ಹಂಚಿಕೆ ಮಾಡಿದ ಹಣದಲ್ಲಿ ಆ ಜಮೀನನ್ನು ಖರೀದಿ ಮಾಡಿದ್ದೇವೆ. ನಮ್ಮ ತಾಯಿಯ ಹೆಸರಲ್ಲಿ 27 ಎಕರೆ, ನನ್ನ ಹೆಸರಲ್ಲಿ 5&zwnj; ಎಕರೆ ಜಾಗವನ್ನು ಕೋವಿಡ್ ಸಮಯದಲ್ಲಿ ಖರೀದಿ ಮಾಡಿದ್ದೇವೆ. ನಮ್ಮ ಜಾಗದಲ್ಲಿ ವಾಣಿಜ್ಯ ಕಟ್ಟಡ ಕಟ್ಟಿಲ್ಲ. ರೈತರಿಗೆ ಅನುಕೂಲ ಮಾಡಲು ಹಾಲಿನ ಉತ್ಪನ್ನಗಳ ಉತ್ಪಾದನೆಗೆ ಅದನ್ನು ಬಳಸಲು ಇಟ್ಟಿದ್ದೇವೆ ಎಂದು ಹೇಳಿದರು.&lt;/p&gt;&lt;p&gt;&lt;strong&gt;ಅಂಚಿಪುರ ಕಾಲೋನಿಯಲ್ಲಿ ಉದ್ವಿಗ್ನ ವಾತಾವರಣ:&lt;/strong&gt;&lt;/p&gt;&lt;p&gt;ಪಾದಯಾತ್ರೆ ಅಂಚಿಪುರ ಕಾಲೋನಿಗೆ ಬಂದಾಗ ಕಾಲೋನಿಯ ವೃತ್ತದಲ್ಲಿ ಅಳವಡಿಸಿದ್ದ ಟೌನ್ ಶಿಪ್ ಪರವಾದ ಫ್ಲೆಕ್ಸ್&zwnj;ಗಳನ್ನು ಪ್ರತಿಭಟನಾಕಾರರು ಹರಿದು ಹಾಕಿದರು. ಇದು ಯೋಜನೆ ಪರವಾಗಿದ್ದ ದಲಿತ ಮುಖಂಡರನ್ನು ಕೆರಳಿಸಿತು.&lt;/p&gt;&lt;p&gt;ಈ ವೇಳೆ, ನಿಖಿಲ್&zwnj; ಅವರು ಕಾಲೋನಿಯ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಯೋಜನೆಯ ಪರವಾಗಿರುವವರ ಜತೆ ಮಾತುಕತೆ ನಡೆಸಲು ಮುಂದಾದರು. ಆಗ ದಲಿತ ಮುಖಂಡರು ಕೈಯಲ್ಲಿ ಯೋಜನೆ ಪರವಾದ ಫ್ಲೆಕ್ಸ್&zwnj;ಗಳನ್ನು ಹಿಡಿದು ಪಾದಯಾತ್ರಿಗಳಿಗೆ ಎದುರಾದರು.&lt;/p&gt;&lt;p&gt;ನಮ್ಮ ಭೂಮಿಯನ್ನು ಟೌನ್&zwnj;ಶಿಪ್&zwnj;ಗೆ ಕೊಡುತ್ತೇವೆ. ಅದನ್ನು ಪ್ರಶ್ನಿಸಲು ನೀವ್ಯಾರು ಎಂದರು. ಈ ವೇಳೆ, ಪ್ರತಿಭಟನಾಕಾರರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.&lt;/p&gt;&lt;p&gt;ಯಾರ ಉದ್ಧಾರಕ್ಕಾಗಿ ಸಾಲ ತೆಗೆದುಕೊಂಡು ಯೋಜನೆ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿಯ ಜೊತೆ ಕಮಿಷನ್ ಪಡೆಯಲು ಯೋಜನೆ ಮಾಡುತ್ತಿದ್ದೀರಾ? ಏನೇ ಯೋಜನೆ ಮಾಡಿದರೂ ಮುಖ್ಯಮಂತ್ರಿಗಳು ₹30 ಸಾವಿರ ಕೋಟಿ ವೆಚ್ಚದ್ದೇ ಮಾಡುತ್ತಾರೆ. ಸುರಂಗ ರಸ್ತೆ, ಕಸದ ಟೆಂಡರ್ ಎಲ್ಲಾ ₹30 ಸಾವಿರ ಕೋಟಿ ಯೋಜನೆಗಳು. ಅದಕ್ಕಿಂತ ಕಮ್ಮಿ ನಮ್ಮ ಸಿಎಂ ಮುಟ್ಟೋದೆ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.&lt;/p&gt;&lt;p&gt;&amp;nbsp;&lt;/p&gt;&lt;p&gt;ಎಲ್ಲೋ ದೂರದಲ್ಲಿ ಕುಳಿತು &quot;80% ರೈತರು ಬಿಡದಿ ಟೌನ್&zwnj;ಶಿಪ್ ಯೋಜನೆಗೆ ಒಪ್ಪಿದ್ದಾರೆ&quot; ಎಂದು ಹೇಳುವ ಮುಖ್ಯಮಂತ್ರಿಗಳೇ!ಬನ್ನಿ, ನಮ್ಮ ರೈತ ಮಹಿಳೆಯರ ಅಳಲನ್ನು ಆಲಿಸಿ.&amp;nbsp;ಇಂದು &quot;ಅಂಚಿಪುರ ಗ್ರಾಮದಿಂದ ಹೊಸೂರು ವರೆಗೆ&quot; ನಡೆದ ಪಾದಯಾತ್ರೆಯ ವೇಳೆ ರೈತ ತಾಯಂದಿರು &quot;ದಯವಿಟ್ಟು ನಮ್ಮ ಭೂಮಿ ಉಳಿಸಿಕೊಡಿ&quot; ಎಂದು ಅಳಲು ತೋಡಿಕೊಂಡ ಕ್ಷಣಗಳಿವು.&amp;nbsp;ನಮ್ಮ&hellip; pic.twitter.com/Y9kH1Tkfyc&lt;/p&gt;&lt;p&gt;&mdash; Nikhil Kumar (@Nikhil_Kumar_k) June 21, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/huge-response-to-jds-leader-nikhil-kumaraswamy-s-walk-against-bidadi-township-mrq/articleshow-2hkk6mt"/>
        </item>
        <item>
            <title><![CDATA[ರಾಮನಗರ ಕಾಂಗ್ರೆಸ್‌ ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ: ಓಪನ್ ಹಾರ್ಟ್ ಸರ್ಜರಿಗೆ ಸಿದ್ಧತೆ]]></title>
            <link>https://kannada.asianetnews.com/gallery/karnataka-districts/ramanagara-congress-mla-iqbal-hussain-suffers-heart-attack-treatment-in-bengaluru-a-private-hospital-mrq-7lvs21f</link>
            <guid isPermaLink="true">https://kannada.asianetnews.com/gallery/karnataka-districts/ramanagara-congress-mla-iqbal-hussain-suffers-heart-attack-treatment-in-bengaluru-a-private-hospital-mrq-7lvs21f</guid>
            <pubDate>Mon, 15 Jun 2026 10:45:26 +0530</pubDate>
            <description><![CDATA[ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸ್ಟಂಟ್ ಅಳವಡಿಸಲಾಗಿದ್ದು, ಶೀಘ್ರದಲ್ಲೇ ಓಪನ್ ಹಾರ್ಟ್ ಸರ್ಜರಿ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kdphskv0t488bvg9wj4dsjxf,imgname-iqbal-hussain--1--1767062163296.jpg" type="image/jpeg" height="390" width="690"/>
            <content:encoded><![CDATA[ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸ್ಟಂಟ್ ಅಳವಡಿಸಲಾಗಿದ್ದು, ಶೀಘ್ರದಲ್ಲೇ ಓಪನ್ ಹಾರ್ಟ್ ಸರ್ಜರಿ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.&lt;img&gt;&lt;p&gt;ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶಾಸಕರ ಆರೋಗ್ಯ ವಿಚಾರಿಸಲು ಸಿಎಂ ಡಿಕೆ ಶಿವಕುಮಾರ್ ಹೊರಟಿದ್ದಾರೆ.&lt;/p&gt;&lt;img&gt;&lt;p&gt;ರಾತ್ರಿ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಶಾಸಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ವೈದ್ಯ ವಿ.ಕೆ.ಶ್ರೀನಿವಾಸ್ ಅವರು ಶಾಸಕರಿಗೆ ಚಿಕಿತ್ಸೆ ನೀಡುತ್ತಿದ್ದು, ಇಕ್ಬಾಲ್ ಹುಸೇನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ಎರಡು ದಿನದ ಹಿಂದೆ ಇಕ್ಬಾಲ್&zwnj; ಹುಸೇನ್ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ನಿನ್ನೆ ಇಕ್ಬಾಲ್ ಹುಸೇನ್ ಗೆ ಸ್ಟಂಟ್ ಹಾಕಲಾಗಿದೆ. ಎಲ್ಲ ಪರೀಕ್ಷೆಗಳನ್ನ ಮಾಡಿದ್ದಾಗ ಓಪನ್ ಹಾರ್ಟ್ ಸರ್ಜರಿ ಮಾಡಬೇಕಿದೆ. ನಾಳೆ ಅಥವಾ ನಾಡಿದ್ದು ಓಪನ್ ಹಾರ್ಟ್ ಸರ್ಜರಿ ಮಾಡುತ್ತೇವೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಡಾಕ್ಟರ್ ವಿ.ಕೆ.ಶ್ರೀನಿವಾಸ್ ಹೇಳಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/ramanagara-congress-mla-iqbal-hussain-suffers-heart-attack-treatment-in-bengaluru-a-private-hospital-mrq-7lvs21f"/>
        </item>
        <item>
            <title><![CDATA[ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಿರುವುದು‌ ನನ್ನ ಅದೃಷ್ಟ: ಶಾಸಕ ಇಕ್ಬಾಲ್ ಹುಸೇನ್]]></title>
            <link>https://kannada.asianetnews.com/karnataka-districts/dk-shivakumar-becoming-cm-is-our-luck-ramanagara-mla-iqbal-hussain-gvd/articleshow-7mkzg5t</link>
            <guid isPermaLink="true">https://kannada.asianetnews.com/karnataka-districts/dk-shivakumar-becoming-cm-is-our-luck-ramanagara-mla-iqbal-hussain-gvd/articleshow-7mkzg5t</guid>
            <pubDate>Tue, 02 Jun 2026 21:48:59 +0530</pubDate>
            <description><![CDATA[&lt;p&gt;ರಾಮನಗರ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ತರಲು ನನ್ನನ್ನು ಆಯ್ಕೆ ಮಾಡಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನ್ನ&zwnj; ಪಾಲಿನ&zwnj; ಅದೃಷ್ಟ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq9jbccfv1jtq5pbcr3wq8xd,imgname-mla-iqbal-hussain-dk-shivakumar-1777363956111.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜೂ.02):&lt;/strong&gt; ರಾಮನಗರ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ತರಲು ನನ್ನನ್ನು ಆಯ್ಕೆ ಮಾಡಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನ್ನ&zwnj; ಪಾಲಿನ&zwnj; ಅದೃಷ್ಟ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಸಹಕಾರದಿಂದ ಕ್ಷೇತ್ರದಲ್ಲಿ ಹಲವು ಕೆಲಸಗಳು ನಡೆದಿವೆ. ಮುಂದುವರಿದ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಸಾಕಾರವಾಗಲಿದ್ದು, ರಾಜ್ಯದ ಎಲ್ಲ ವರ್ಗದ ಜನರ ಬಗ್ಗೆ ಚಿಂತನೆ, ದೂರದೃಷ್ಟಿತ್ವ ಇಟ್ಟುಕೊಂಡಿರುವ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಉತ್ತಮ ಆಡಳಿತ ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.&lt;/p&gt;&lt;p&gt;ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕಿರುವುದು ಜಿಲ್ಲೆಯ ಜನರ ಸಂತಸ ಹೆಚ್ಚಿಸಿರುವುದು ಒಂದೆಡೆಯಾದರೆ, ಜಿಲ್ಲೆಯ ಹಿರಿಮೆಯೂ ಸಹ ಹೆಚ್ಚಿಸಿದೆ. ಡಿಕೆ ಬ್ರದರ್ ಕನಸು ನಮ್ಮ&zwnj; ಕನಸಾಗಿದೆ. ದೇಶದೆಲ್ಲೆಡೆ ಅವರದೇ ಆದ ಅಭಿಮಾನಿಗಳ ಬಳಗವಿದ್ದು, ಅವರಿಗೂ ಮುಖ್ಯಮಂತ್ರಿ ಹುದ್ದೆ ಸಿಕ್ಕಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಮನಗರ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಳ್ಳಲಿದ್ದು, ನಗರದಲ್ಲಿ ಶೇಕಡ 70ರಷ್ಟು ಭಾಗ ಯುಜಿಡಿ ಕೆಲಸ ಆಗಬೇಕಿದೆ. ಇದಕ್ಕಾಗಿ 300 ಕೋಟಿ ರುಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇನ್ನು ರಸ್ತೆ, ಚರಂಡಿಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣದಂತಹ ಹತ್ತು ಹಲವು ಅಭಿವೃದ್ಧಿ ಕೆಲಸಗಳು ನಡೆಯಬೇಕಿದ್ದು, ಅವೆಲ್ಲವೂ ಇನ್ನೆರೆಡು ವರ್ಷಗಳಲ್ಲಿ ಪೂರ್ಣಗೊಂಡು ಕ್ಷೇತ್ರದ ಚಿತ್ರಣ ಬದಲಾಗಲಿದೆ ಎಂದು ಹೇಳಿದರು.&lt;/p&gt;&lt;p&gt;ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಆಶೀರ್ವಾದದಿಂದ ಜಿಲ್ಲೆಯ ಜನರ ಕನಸಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಚಾಲನೆ ಸಿಕ್ಕಿದೆ. ನಗರದಲ್ಲಿ ಕುಡಿಯುವ ನೀರು, ಸೂರು ಕಲ್ಪಿಸಲು 300 ಎಕರೆಗೂ ಹೆಚ್ಚು ಸರ್ಕಾರಿ ಜಮೀನು ಗುರುತಿಸಿರುವುದು, ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ, ಸಾಗುವಳ ಚೀಟಿಗಳ ವಿತರಣೆ, ಸೇತುವೆಗಳ ನಿರ್ಮಾಣ, ಕೆರೆ ತುಂಬಿಸುವುದು, ಅರ್ಕಾವತಿ&zwnj; ನದಿ ದಂಡೆಯಲ್ಲಿ ಪಾರ್ಕ್ ನಿರ್ಮಾಣದಂತಹ ಹತ್ತು ಹಲವು ಯೋಜನೆಗಳು ಕ್ಷೇತ್ರದಲ್ಲಿ ಸಾಕಾರವಾಗುತ್ತಿವೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಅಪಪ್ರಚಾರಗಳಿಗೆ ತಲೆಕೆಡಿಸಿಕೊಳ್ಳುವುದು ಬೇಡ&lt;/strong&gt;&lt;/h2&gt;&lt;p&gt;ರಾಮನಗರದ ಇತಿಹಾಸ ಉಳ್ಳ ಅರ್ಕೇಶ್ವರ ದೇವಾಲಯ, ಪೀರನ್ ಷಾ ವಲಿ ದರ್ಗಾ ಹಾಗೂ ಜನವಸತಿ ಪ್ರದೇಶಗಳನ್ನು ಉಳಿಸಿಕೊಂಡು ಅರ್ಕಾವತಿ ನದಿ ದಂಡೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ನಾನೊಬ್ಬ ಜನರ ಪ್ರತಿನಿಧಿಯಾಗಿದ್ದು, ಜನರಿಗೆ ವಿರುದ್ಧವಾದ ಕೆಲಸ ಮಾಡುವುದಿಲ್ಲ. ದೇವಾಲಯ ಮತ್ತು ದರ್ಗಾಕ್ಕೆ ಅನುದಾನ ತಂದುಕೊಟ್ಟು ಅಭಿವೃದ್ಧಿ ಮಾಡುತ್ತಿದ್ದೇನೆ. ಕೆಲವರು ಪ್ರಚಾರಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಅದಕ್ಕೆಲ್ಲ ನಾನು ತಲೆ&zwnj;ಕಡೆಸಿಕೊಳ್ಳುವುದಿಲ್ಲ. ಸಾರ್ವಜನಿಕರು ಆ ವಿಷಯದ ಬಗ್ಗೆ ತಲೆ&zwnj;ಕೆಡಿಸಿಕೊಳ್ಳುವುದು ಬೇಡ.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dk-shivakumar-becoming-cm-is-our-luck-ramanagara-mla-iqbal-hussain-gvd/articleshow-7mkzg5t"/>
        </item>
        <item>
            <title><![CDATA[Mandya Tourism: ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಐವರ ಜಲಸಮಾಧಿ; ಫೋಟೋ ಕ್ರೇಜ್‌ಗೆ ಒಂದೇ ಕುಟುಂಬದವರ ಸಾವು!]]></title>
            <link>https://kannada.asianetnews.com/karnataka-districts/mandya-tourist-spot-muthathi-cauvery-river-drowning-five-of-family-dead/articleshow-7py3q8l</link>
            <guid isPermaLink="true">https://kannada.asianetnews.com/karnataka-districts/mandya-tourist-spot-muthathi-cauvery-river-drowning-five-of-family-dead/articleshow-7py3q8l</guid>
            <pubDate>Wed, 24 Jun 2026 20:18:32 +0530</pubDate>
            <description><![CDATA[&lt;p&gt;ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ನಡೆದ ಭೀಕರ ದುರಂತದಲ್ಲಿ, ಚನ್ನಪಟ್ಟಣ ಮೂಲದ ಒಂದೇ ಕುಟುಂಬದ ಐವರು ಸದಸ್ಯರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ದೇವರ ದರ್ಶನದ ನಂತರ ನದಿಯ ಬಳಿ ಫೋಟೋ ತೆಗೆಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvx1n371xv88cknjm0nzp62k,imgname-mandya-muthathi-kaveri-river-tragedy-1782312504545.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜೂ.24): ಜಿ&lt;/strong&gt;ಲ್ಲೆಯ ಮಳವಳ್ಳಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯಕ್ಷೇತ್ರ ಮುತ್ತತ್ತಿಯಲ್ಲಿ ಬುಧವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದೆ. ಕಾವೇರಿ ನದಿಯಲ್ಲಿ ಫೋಟೋ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ಐವರು ಸದಸ್ಯರು ನದಿ ಪಾಲಾಗಿದ್ದಾರೆ. ಈ ಮನಕಲಕುವ ಘಟನೆಯು ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ.&lt;/p&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ಕುಟುಂಬ ಮುತ್ತತ್ತಿಯ ಪ್ರಸಿದ್ಧ ಮುತ್ತತ್ತಿರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿತ್ತು. ದೇವರ ದರ್ಶನ ಮುಗಿಸಿದ ಕುಟುಂಬದ ಸದಸ್ಯರು, ಸಂಜೆ ಸುಮಾರು 4.45 ರ ಸುಮಾರಿಗೆ ಮುತ್ತತ್ತಿಯ ಪಕ್ಕದಲ್ಲಿ ಹರಿಯುವ ಕಾವೇರಿ ನದಿ ತೀರಕ್ಕೆ ತೆರಳಿದ್ದಾರೆ. ನದಿಯ ಹರಿವಿನ ಮಧ್ಯೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಮೃತರ ವಿವರ:&lt;/strong&gt;&lt;/h2&gt;&lt;p&gt;ಈ ಜಲಸಮಾಧಿಯಲ್ಲಿ ಮೃತಪಟ್ಟವರೆಲ್ಲರೂ ಚನ್ನಪಟ್ಟಣದ ಒಂದೇ ಕುಟುಂಬದವರು ಎಂದು ಗುರುತಿಸಲಾಗಿದೆ. ಮೃತರನ್ನು ವಿಜಯಮ್ಮ (50), ಶ್ವೇತಾ (38), ಪ್ರಿಯಾಂಕ (28), ಚೈತ್ರ (20) ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಫೋಟೋ ತೆಗೆದುಕೊಳ್ಳುವ ಆತುರದಲ್ಲಿ ಅಥವಾ ನದಿಯ ಆಳ ತಿಳಿಯದೆ ಒಬ್ಬರು ನೀರಿಗೆ ಜಾರಿದ್ದು, ಅವರನ್ನು ಉಳಿಸಲು ಹೋದ ಉಳಿದವರು ಕೂಡ ನೀರಿನ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ಕಾರ್ಯಾಚರಣೆ ಮತ್ತು ಪೊಲೀಸ್ ಭೇಟಿ:&lt;/strong&gt;&lt;/h2&gt;&lt;p&gt;ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಪ್ರವಾಸಿಗರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಹಲಗೂರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಲೇ ಕಾರ್ಯಾಚರಣೆ ಆರಂಭಿಸಿ ಐವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಸ್ತುತ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.&lt;/p&gt;&lt;p&gt;ಮುತ್ತತ್ತಿಯ ಕಾವೇರಿ ನದಿ ಸ್ಥಳದಲ್ಲಿ ಈ ಹಿಂದೆಯೂ ಇಂತಹ ಅನೇಕ ಅಪಾಯಕಾರಿ ಘಟನೆಗಳು ನಡೆದಿವೆ. &amp;nbsp;ಆದರೂ ಪ್ರವಾಸಿಗರು ಎಚ್ಚರಿಕೆ ಫಲಕಗಳನ್ನು ನಿರ್ಲಕ್ಷಿಸಿ ನೀರಿಗಿಳಿಯುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ. ದೇವರಿಗೆ ಬಂದ ಸಂಭ್ರಮದಲ್ಲಿದ್ದ ಕುಟುಂಬವೊಂದು ಈಗ ಮಸಣ ಸೇರಿರುವುದು ಚನ್ನಪಟ್ಟಣದಲ್ಲಿ ಶೋಕದ ಛಾಯೆ ಮೂಡಿಸಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mandya-tourist-spot-muthathi-cauvery-river-drowning-five-of-family-dead/articleshow-7py3q8l"/>
        </item>
        <item>
            <title><![CDATA[Rain Yellow Alert: ಮುಂದಿನ 3 ಗಂಟೆ ಭಾರಿ ಎಲ್ಲೋ ಅಲರ್ಟ್‌, ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ]]></title>
            <link>https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</link>
            <guid isPermaLink="true">https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</guid>
            <pubDate>Fri, 12 Jun 2026 18:03:12 +0530</pubDate>
            <description><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktxwvsdz0hykz097kg2gb48y,imgname-bengaluru-rains--2--1781267293631.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.&lt;img&gt;&lt;p&gt;ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಈ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' (Yellow Alert) ಘೋಷಿಸಿದೆ.&lt;/p&gt;&lt;img&gt;&lt;p&gt;ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ Yellow Alert ನೀಡಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಈಗಾಗಲೇ ವರುಣನ ಆರ್ಭಟ ಶುರುವಾಗಿದೆ. ಪ್ರಮುಖವಾಗಿ ವಿಧಾನಸೌಧ, ವಸಂತನಗರ, ಶಿವಾಜಿನಗರ, ಕೆ.ಆರ್. ಸರ್ಕಲ್ ಪರಿಸರದಲ್ಲಿ ಭಾರಿ ಮಳೆಯಾಗುತ್ತಿರುವುದು ವರದಿಯಾಗಿದೆ.&lt;/p&gt;&lt;img&gt;&lt;p&gt;ನಗರದ ಪ್ರಮುಖ ಆಯಕಟ್ಟಿನ ಜಾಗಗಳಾದ ಕೆ.ಆರ್. ಮಾರ್ಕೆಟ್, ಚಿಕ್ಕಪೇಟೆ, ಯಶವಂತಪುರ ಹಾಗೂ ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಮಳೆ ಸುರಿಯುತ್ತಿದ್ದು, ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ.&lt;/p&gt;&lt;img&gt;&lt;p&gt;ಕಚೇರಿ ಹಾಗೂ ಇತರೆ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಈ ದಿಢೀರ್ ಮಳೆಯಿಂದಾಗಿ ಪರದಾಡುವಂತಾಗಿದೆ. ರಸ್ತೆಯಲ್ಲೇ ಸಿಲುಕಿಕೊಂಡ ಬೈಕ್ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಹತ್ತಿರದ ಬಸ್ ನಿಲ್ದಾಣಗಳು ಹಾಗೂ ಫ್ಲೈಓವರ್&zwnj;ಗಳ ಕೆಳಗೆ ಆಶ್ರಯ ಪಡೆದಿರುವುದು ಕಂಡುಬಂದಿದೆ.&lt;/p&gt;]]></content:encoded>
            <category>ramanagara</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy"/>
        </item>
        <item>
            <title><![CDATA[ಎಸ್‌ಐಆರ್ ವೇಳೆ ಮತ ಹೋದರೆ ಯಾವ ಗ್ಯಾರಂಟಿಯೂ ಸಿಗಲ್ಲ: ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ]]></title>
            <link>https://kannada.asianetnews.com/karnataka-districts/if-the-vote-is-lost-during-sir-there-will-be-no-guarantee-cm-dk-shivakumar-warns-mrq/articleshow-cesh4bd</link>
            <guid isPermaLink="true">https://kannada.asianetnews.com/karnataka-districts/if-the-vote-is-lost-during-sir-there-will-be-no-guarantee-cm-dk-shivakumar-warns-mrq/articleshow-cesh4bd</guid>
            <pubDate>Mon, 08 Jun 2026 08:04:36 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಕಳೆದುಕೊಂಡರೆ ಗೃಹಲಕ್ಷ್ಮೀ, ಗೃಹಜ್ಯೋತಿಯಂತಹ ಸರ್ಕಾರಿ ಗ್ಯಾರಂಟಿ ಯೋಜನೆಗಳ ಪ್ರಯೋಜನವೂ ಸಿಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktjh83xb800me90ta1b1f57e,imgname-cm-dk-shivakumar-1780886015915.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ: &lt;/strong&gt;ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್&zwnj;ಐಆರ್&zwnj;) ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಎಸ್&zwnj;ಐಆರ್&zwnj; ವೇಳೆ ಮತ ಹಕ್ಕು ಕಳೆದುಕೊಂಡವರಿಗೆ ಗ್ಯಾರಂಟಿ ಸ್ಕೀಂಗಳು ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಹೇಳಿದ್ದಾರೆ.&lt;/p&gt;&lt;p&gt;ನಮ್ಮ ಮತ ಇದೆ ಎಂದು ಭಾವಿಸಿ ಸುಮ್ಮನಾದರೆ ಮತ ಹೋಗುತ್ತದೆ. ಹಾಗಾದಾಗ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸದಿದ್ದರೆ ಮತವೂ ಇಲ್ಲ ಜೊತೆಗೆ ಯಾವುದೇ ಸರ್ಕಾರಿ ಯೋಜನೆಗಳ ಲಾಭವೂ ಸಿಗುವುದಿಲ್ಲ. ಗೃಹಲಕ್ಷ್ಮೀ, ಗೃಹಜ್ಯೋತಿ ಯಾವುದೂ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.&lt;/p&gt;&lt;h2&gt;&lt;strong&gt;ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ&lt;/strong&gt;&lt;/h2&gt;&lt;p&gt;ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಅವರು ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿ, ಸಿಎಂ ಆಗುವ ತಮ್ಮ ಕನಸನ್ನು ನನಸಾಗಿಸಲು ಹರಸಿದ ತವರೂರಿನ ಜನತೆಗೆ ಕೃತಜ್ಞತೆ ಅರ್ಪಿಸಿದರು. ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನ 21 ಗ್ರಾಮ ಪಂಚಾಯತ್&zwnj; ವ್ಯಾಪ್ತಿಯ ಗ್ರಾಮಗಳಲ್ಲಿ ನಡೆದ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.&lt;/p&gt;&lt;p&gt;ಸಾರ್ವಜನಿಕರಿಗೆ ತೊಂದರೆ ಆಗಬಹುದಾದ &lsquo;ಜೀರೋ ಟ್ರಾಫಿಕ್&rsquo; ಕಾರು ಪ್ರಯಾಣ ತಪ್ಪಿಸಲು ಸಿಎಂ ಅವರು ಬೆಳಗ್ಗೆ ವಿಧಾನಸೌಧದ ಎದುರಿನ ಮೆಟ್ರೋ ಸ್ಟೇಷನ್&zwnj;ನಿಂದ ಕನಕಪುರ ರಸ್ತೆಯ ಕೊನೇ ಮೆಟ್ರೋ ಸ್ಟೇಷನ್&zwnj;ರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಪ್ರಯಾಣ ಮುಂದುವರಿಸಿದರು. ಸಿಎಂ ಅವರಿಗೆ ಹಾರೋಹಳ್ಳಿ, ಕನಕಪುರದ ಪ್ರವೇಶದ್ವಾರ ತುಂಗಣಿ ಸೇರಿ ಹಲವೆಡೆ ಅದ್ಧೂರಿ ಸ್ವಾಗತ ಕೋರಲಾಯಿತು. ಕ್ರೇನ್&zwnj; ಬಳಸಿ ಬೃಹತ್&zwnj; ಸೇಬಿನ ಹಾರ ಹಾಕಿ, ಜೈಕಾರ ಕೂಗಿ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು.&lt;/p&gt;&lt;p&gt;ತವರಿನ ಜನತೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎಂ, ಎಸ್&zwnj;ಐಆರ್&zwnj; ಬಗ್ಗೆ ಪ್ರಸ್ತಾಪಿಸಿದರು. ಯಾರೂ ತಮ್ಮ ಮತವನ್ನು ಬೇರೆ ಕಡೆಗೆ ವರ್ಗಾಯಿಸಬೇಡಿ. ನಿಮ್ಮ ಊರಿನಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಿ. ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.&lt;/p&gt;&lt;h3&gt;&lt;strong&gt;ನಿಮ್ಮ ಮತವನ್ನು ಕನಕಪುರ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಿ&lt;/strong&gt;&lt;/h3&gt;&lt;p&gt;ಎಸ್&zwnj;ಐಆರ್&zwnj;ಗೆ ಅರ್ಜಿ ಸಲ್ಲಿಸದಿದ್ದರೆ ಮತವೂ ಇಲ್ಲ, ಜೊತೆಗೆ ಯಾವುದೇ ಸರ್ಕಾರಿ ಯೋಜನೆಗಳ ಲಾಭವೂ ಸಿಗುವುದಿಲ್ಲ. ಗೃಹಲಕ್ಷ್ಮೀ, ಗೃಹಜ್ಯೋತಿ ಯಾವುದೂ ಸಿಗುವುದಿಲ್ಲ. ನಿಮ್ಮ ಮತವನ್ನು ಕನಕಪುರ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/if-the-vote-is-lost-during-sir-there-will-be-no-guarantee-cm-dk-shivakumar-warns-mrq/articleshow-cesh4bd"/>
        </item>
        <item>
            <title><![CDATA[Ramanagara: ರೈತರ ಕಣ್ಣೀರಿನ ಶಾಪ ತಟ್ಟದೆ ಬಿಡಲ್ಲ: ಡಿಕೆಶಿ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ]]></title>
            <link>https://kannada.asianetnews.com/karnataka-districts/chalavadi-narayanaswamy-slams-dk-shivakumar-over-bidadi-farmers-land-issue-gvd/articleshow-ctzfshm</link>
            <guid isPermaLink="true">https://kannada.asianetnews.com/karnataka-districts/chalavadi-narayanaswamy-slams-dk-shivakumar-over-bidadi-farmers-land-issue-gvd/articleshow-ctzfshm</guid>
            <pubDate>Thu, 18 Jun 2026 22:57:29 +0530</pubDate>
            <description><![CDATA[&lt;p&gt;Ramanagara ಜಿಲ್ಲೆಯ ಬಿಡದಿ ಭಾಗದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಛಲವಾದಿ ನಾರಾಯಣಸ್ವಾಮಿ, ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೈತರ ಭೂಮಿ ಕಸಿದುಕೊಳ್ಳಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbp38hzpjqfqqa55asc6khkx,imgname-----------------------2025-12-05t072014.775-1764899440630.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜೂ.18): &lt;/strong&gt;ರೈತನಾದವನಿಗೆ ಮಾತ್ರ ಕೃಷಿಕರ ಕಷ್ಟ ಗೊತ್ತಾಗುತ್ತೆ. ಜಲ್ಲಿ ಕಲ್ಲು, ಬಂಡೆ ಹೊಡೆಯುವರಿಗೆಲ್ಲ ರೈತರ ಕಷ್ಟ ಗೊತ್ತಾಗಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಚಳವಳಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಣ್ಣೀರು ಹಾಕಿದ ರೈತರ ಶಾಪ ತಟ್ಟದೆ ಬಿಡುವುದಿಲ್ಲ.&lt;/p&gt;&lt;p&gt;ನಿಮ್ಮಿಂದ ಆ ಶಾಪ ತಡೆದುಕೊಳ್ಳಲು ಆಗಲ್ಲ. ಆದ್ದರಿಂದ ರೈತರ ಕೃಷಿ ಭೂಮಿಯನ್ನು ಬಿಟ್ಟು ಬಿಡಿ ಎಂದರು. ನಿಜವಾದ ರೖತನ ಮಗ ಈ ರೀತಿ ಕೃಷಿಕರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾರರು. ನೀವು ನಿಜವಾಗಿಯೂ ರೈತನ ಮಗಾನ ಎಂಬ ಅನುಮಾನ ಕಾಡುತ್ತಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಐದು ತುಂಡು ಮಾಡಿದಿರಿ. ಆದರೂ ಜನರು ತಡೆದುಕೊಂಡಿದ್ದಾರೆ. ಈಗಿಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಇಷ್ಟೊಂದು ಹಠ ಏಕೆಂದು ಪ್ರಶ್ನಿಸಿದರು.&lt;/p&gt;&lt;h2&gt;&lt;strong&gt;ಮುಗ್ಧ ರೈತರನ್ನು ಸಂಕಷ್ಟಕ್ಕೆ ದೂಡಬೇಡಿ&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿಗಳು ಕನಕಪುರ ಭಾಗದ ರೈತರ ಭೂಮಿಗೆ ಚಿನ್ನದ ಬೆಲೆ ಬರುತ್ತದೆ ಅಂತ ಹೇಳುತ್ತಾರೆ. ಅಲ್ಲಿ ಭೂಮಿ ಮಾರಬೇಡಿ ಎನ್ನುವ ನೀವು, ಇಲ್ಲೇಕೆ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದೀರಾ. ಬಿಡದಿ ಭಾಗದ ರೈತರು ಭೂಮಿಯಲ್ಲಿ ಚಿನ್ನವನ್ನೇ ಬೆಳೆಯುತ್ತಿದ್ದಾರೆ. ದಯವಿಟ್ಟು ರೈತರನ್ನು ಬಿಟ್ಟುಬಿಡಿ ಎಂದು ಹೇಳಿದರು.&lt;/p&gt;&lt;p&gt;ರಿಯಲ್ ಎಸ್ಟೇಟ್ ಮಾಡಲು ಬೇರೆ ಮಾರ್ಗಗಳಿವೆ. ಅದಕ್ಕಾಗಿ ಮುಗ್ಧ ರೈತರನ್ನು ಸಂಕಷ್ಟಕ್ಕೆ ದೂಡಬೇಡಿ. ಈ ಯೋಜನೆಗೆ ಯಾವುದಾದರು ಒಂದೆರೆಡು ಕೇಸು ಬಿದ್ದರೆ ಎರಡು ಮೂರು ವರ್ಷ ಎಳೆದುಕೊಂಡು ಹೋಗುತ್ತದೆ. ಆ ವೇಳೆಗೆ ಬಿಜೆಪಿ - ಜೆಡಿಎಸ್ ನೇತೃತ್ವದ ಎನ್ ಡಿಎ ಸರ್ಕಾರ ಬಂದಿರುತ್ತದೆ. ಒಂದೂವರೆ ವರ್ಷದಲ್ಲಿ ಟೌನ್ ಶಿಪ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.&lt;/p&gt;&lt;p&gt;ಬಿಡದಿ ಭಾಗದಲ್ಲಿ ಅರ್ಧ ಎಕರೆ ಭೂಮಿ ಪಾಳು ಬಿದ್ದಿಲ್ಲ. ಇಲ್ಲಿರುವ ತೆಂಗು, ಅಡಿಕೆ, ಮಾವು, ಸಪೋಟ, ರೇಷ್ಮೆ, ಹೈನುಗಾರಿಕೆ ನೋಡಿದರೆ ರೖೆತರು ಮೖೆಗಳ್ಳರಲ್ಲ ಎಂಬುದು ಸಾಬೀತಾಗಿದೆ. ನೀರಾವರಿ ಭೂಮಿಯನ್ನು ಏಕೆ ಕಸಿದುಕೊಳ್ಳುತ್ತೀರಾ. ಚಿಕ್ಕಬಳ್ಳಾಪುರ ಆದ ಮೇಲೆ ಬೇಕಾದಷ್ಟು ಬರಡು ಭೂಮಿ ಇದೆ. ಅಲ್ಲಿ ಬೇಕಾದರೆ ನಾನೇ 15 ಸಾವಿರ ಭೂಮಿ ಕೊಡಿಸುತ್ತೇನೆ ಬನ್ನಿ ಎಂದು ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chalavadi-narayanaswamy-slams-dk-shivakumar-over-bidadi-farmers-land-issue-gvd/articleshow-ctzfshm"/>
        </item>
        <item>
            <title><![CDATA[ಗ್ರೇಟರ್ ಬೆಂಗಳೂರು ಆಸ್ತಿ ತೆರಿಗೆ: ಪ್ರಸಕ್ತ ಹಣಕಾಸು ವರ್ಷದ ಎರಡೂವರೆ ತಿಂಗಳಲ್ಲೇ ದಾಖಲೆಯ ₹2,949 ಕೋಟಿ ಸಂಗ್ರಹ]]></title>
            <link>https://kannada.asianetnews.com/karnataka-districts/greater-bengaluru-authority-records-a-massive-rs2949-crore-property-tax-collection-in-just-2-5-months-gdp/articleshow-g16g2pd</link>
            <guid isPermaLink="true">https://kannada.asianetnews.com/karnataka-districts/greater-bengaluru-authority-records-a-massive-rs2949-crore-property-tax-collection-in-just-2-5-months-gdp/articleshow-g16g2pd</guid>
            <pubDate>Wed, 10 Jun 2026 16:51:24 +0530</pubDate>
            <description><![CDATA[ನೂತನ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) 2026-27ನೇ ಹಣಕಾಸು ವರ್ಷದ ಆರಂಭದಲ್ಲೇ ದಾಖಲೆಯ ₹2,949.55 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಶೇ. 5ರ ರಿಯಾಯಿತಿ ವಿಸ್ತರಣೆ ಮತ್ತು 'ಬಿ-ಟು-ಎ' ಖಾತಾ ಯೋಜನೆ ಈ ಯಶಸ್ಸಿಗೆ ಕಾರಣವಾಗಿದ್ದು, ಪ್ರಾಧಿಕಾರವು ತೆರಿಗೆ ಬಾಕಿದಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk82q6byytxcv8x2jjv36378,imgname-----------------------2026-03-09t064657.095-1773019044222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಪ್ರಸಕ್ತ 2026-27ನೇ ಹಣಕಾಸು ವರ್ಷದ ಆರಂಭಿಕ ತಿಂಗಳುಗಳಲ್ಲೇ ಆಸ್ತಿ ತೆರಿಗೆ ಸಂಗ್ರಹದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಜಿಬಿಎ ವ್ಯಾಪ್ತಿಯ ಐದು ನಗರ ನಿಗಮಗಳಿಂದ ಏಪ್ರಿಲ್ 1 ರಿಂದ ಜೂನ್ 9 ರವರೆಗಿನ ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ ಒಟ್ಟು 2,949.55 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದೆ.&lt;/p&gt;&lt;p&gt;ಪ್ರಸಕ್ತ ಹಣಕಾಸು ವರ್ಷಕ್ಕೆ ಪ್ರಾಧಿಕಾರವು ನಿಗದಿಪಡಿಸಿಕೊಂಡಿರುವ ವಾರ್ಷಿಕ ರೂ. 6,000 ಕೋಟಿ ಗುರಿಯಲ್ಲಿ ಈಗಾಗಲೇ ಶೇಕಡಾ 47 ರಿಂದ 48.8 ರಷ್ಟು ಸಾಧನೆಯಾಗಿದೆ. ವರ್ಷದ ಇನ್ನುಳಿದ ಒಂಬತ್ತು ತಿಂಗಳುಗಳು ಬಾಕಿ ಇರುವಾಗಲೇ ಗುರಿಯ ಅರ್ಧದಷ್ಟು ತೆರಿಗೆ ಸಂಗ್ರಹವಾಗಿರುವುದು ಅಧಿಕಾರಿಗಳ ಆತ್ಮವಿಶ್ವಾಸವನ್ನು ದುಪ್ಪಟ್ಟುಗೊಳಿಸಿದೆ.&lt;/p&gt;&lt;h2&gt;ತೆರಿಗೆ ಸಂಗ್ರಹದ ಭರ್ಜರಿ ಏರಿಕೆಗೆ ಪ್ರಮುಖ ಕಾರಣಗಳೇನು?&lt;/h2&gt;&lt;p&gt;ಜಿಬಿಎ ಕಂದಾಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಬಾರಿ ದಾಖಲೆ ಪ್ರಮಾಣದಲ್ಲಿ ತೆರಿಗೆ ಹರಿದು ಬರಲು ಪ್ರಮುಖವಾಗಿ ಎರಡು ಕಾರಣಗಳು ಕಾರಣವಾಗಿವೆ.&lt;/p&gt;&lt;h3&gt;ಶೇ. 5 ರಷ್ಟು ಆರಂಭಿಕ ರಿಯಾಯಿತಿ ವಿಸ್ತರಣೆ:&lt;/h3&gt;&lt;p&gt;ಹಣಕಾಸು ವರ್ಷದ ಆರಂಭದಲ್ಲೇ ವಾರ್ಷಿಕ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸುವ ಸಾರ್ವಜನಿಕರಿಗೆ ಜಿಬಿಎ ಶೇಕಡಾ 5 ರಷ್ಟು ಪ್ರೋತ್ಸಾಹಕ ರಿಯಾಯಿತಿಯನ್ನು (Rebate) ಪ್ರಕಟಿಸಿತ್ತು. ಸಾರ್ವಜನಿಕರಿಂದ ವ್ಯಕ್ತವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪರಿಗಣಿಸಿ ಈ ರಿಯಾಯಿತಿ ಅವಧಿಯನ್ನು ಇತ್ತೀಚೆಗೆ ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಈ ಪ್ರೋತ್ಸಾಹ ಧನದ ಸೌಲಭ್ಯವನ್ನು ಪಡೆಯಲು ನಾಗರಿಕರು ಮುಗಿಬಿದ್ದಿರುವುದು ಆರಂಭಿಕ ಸಂಗ್ರಹದ ವೇಗವನ್ನು ಹೆಚ್ಚಿಸಿದೆ.&lt;/p&gt;&lt;h3&gt;'ಬಿ-ಟು-ಎ' ಖಾತಾ ಯೋಜನೆ:&lt;/h3&gt;&lt;p&gt;ದೀರ್ಘಕಾಲದಿಂದ ತೆರಿಗೆ ಜಾಲದಿಂದ ಹೊರಗುಳಿದಿದ್ದ ಆಸ್ತಿಗಳನ್ನು ಕಾನೂನುಬದ್ಧ ವ್ಯಾಪ್ತಿಗೆ ತರಲು ಜಿಬಿಎ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ 'ಬಿ-ಟು-ಎ' ಖಾತಾ ಪರಿವರ್ತನೆ ಯೋಜನೆಯು ಪ್ರಾಧಿಕಾರದ ಆದಾಯ ಹೆಚ್ಚಳಕ್ಕೆ ಮತ್ತೊಂದು ಪ್ರಮುಖ ಬಲ ನೀಡಿದೆ.&lt;/p&gt;&lt;h3&gt;ಐದು ನಗರ ನಿಗಮಗಳ ತೆರಿಗೆ ಪ್ರಗತಿ:&lt;/h3&gt;&lt;p&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ಪ್ರಮುಖ ನಗರ ನಿಗಮಗಳ ಪೈಕಿ ತೆರಿಗೆ ಪಾವತಿಯಲ್ಲಿ ವಲಯವಾರು ತೀವ್ರ ಪೈಪೋಟಿ ಕಂಡುಬಂದಿದೆ.&lt;/p&gt;&lt;p&gt;ಬೆಂಗಳೂರು ಪೂರ್ವ ನಗರ ಪಾಲಿಕೆ (BECC): ಸುಮಾರು ₹788 ರಿಂದ ₹792 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಇಡೀ ಪ್ರಾಧಿಕಾರದಲ್ಲೇ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ.&lt;/p&gt;&lt;p&gt;ಪಶ್ಚಿಮ ನಗರ ನಿಗಮ: ತೆರಿಗೆ ಸಂಗ್ರಹದಲ್ಲಿ ದ್ವಿತೀಯ ಸ್ಥಾನದಲ್ಲಿದೆ.&lt;/p&gt;&lt;p&gt;ಕೇಂದ್ರ ನಗರ ನಿಗಮ: ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.&lt;/p&gt;&lt;p&gt;ದಕ್ಷಿಣ ನಗರ ನಿಗಮ: ನಾಲ್ಕನೇ ಸ್ಥಾನದಲ್ಲಿದೆ.&lt;/p&gt;&lt;p&gt;ಬೆಂಗಳೂರು ಉತ್ತರ ನಗರ ಪಾಲಿಕೆ: ಕೇವಲ ₹456 ಕೋಟಿ ಸಂಗ್ರಹದೊಂದಿಗೆ ಅತ್ಯಂತ ಕಡಿಮೆ ಆದಾಯ ದಾಖಲಿಸಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.&lt;/p&gt;&lt;h2&gt;ಬಾಕಿದಾರರಿಗೆ ಬಿಸಿ ಮುಟ್ಟಿಸುತ್ತಿರುವ ಜಿಬಿಎ: ಕಠಿಣ ಕ್ರಮದ ಎಚ್ಚರಿಕೆ&lt;/h2&gt;&lt;p&gt;ಸದ್ಯ ಪ್ರಾಧಿಕಾರವು ಪ್ರತಿ ವಾರ ಸರಾಸರಿ 10 ಕೋಟಿಯಿಂದ 13 ಕೋಟಿ ರೂಪಾಯಿಗಳವರೆಗೆ ಆಸ್ತಿ ತೆರಿಗೆಯನ್ನು ನಿರಂತರವಾಗಿ ಸಂಗ್ರಹಿಸುತ್ತಿದೆ. ಇದರ ನಡುವೆಯೂ ದೀರ್ಘಕಾಲದಿಂದ ತೆರಿಗೆ ಪಾವತಿಸದ ದೊಡ್ಡ ಮೊತ್ತದ ಬಾಕಿದಾರರ (Defaulters) ವಿರುದ್ಧ ಜಿಬಿಎ ಕಠಿಣ ಕಾನೂನು ಕ್ರಮಗಳನ್ನು ಆರಂಭಿಸಿದೆ.&lt;/p&gt;&lt;p&gt;ಈಗಾಗಲೇ ಹಲವು ಆಸ್ತಿ ಮಾಲೀಕರಿಗೆ ಅಧಿಕೃತ ನೋಟಿಸ್ ಜಾರಿ ಮಾಡಲಾಗಿದ್ದು, ತೆರಿಗೆ ಪಾವತಿಗೆ ಅಂತಿಮ ಗಡುವು ನೀಡಲಾಗಿದೆ. ಆದಾಗ್ಯೂ ಸ್ಪಂದಿಸದ ಕೆಲವು ಗಂಭೀರ ವಾಣಿಜ್ಯ ಕಟ್ಟಡಗಳ (Commercial Buildings) ಮಾಲೀಕರಿಗೆ ಶಾಕ್ ನೀಡಿರುವ ನಾಗರಿಕ ಸಂಸ್ಥೆಗಳು, ಬಾಕಿ ವಸೂಲಾತಿಗಾಗಿ ಕಟ್ಟಡಗಳನ್ನೇ ಮುಟ್ಟುಗೋಲು ಹಾಕಿಕೊಳ್ಳುವ (Seizure) ಪ್ರಕ್ರಿಯೆಯನ್ನು ಅಧಿಕೃತವಾಗಿ ತೇಜಸ್ಗೊಳಿಸಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/greater-bengaluru-authority-records-a-massive-rs2949-crore-property-tax-collection-in-just-2-5-months-gdp/articleshow-g16g2pd"/>
        </item>
        <item>
            <title><![CDATA[ಬಿಡದಿ ಟೌನ್‌ಶಿಪ್: 9ರಲ್ಲಿ 3 ಗ್ರಾಮಗಳ 498 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ]]></title>
            <link>https://kannada.asianetnews.com/karnataka-districts/bidadi-township-final-notification-for-land-acquisition-of-498-acres-in-3-out-of-9-villages-mrq/articleshow-g2gf48k</link>
            <guid isPermaLink="true">https://kannada.asianetnews.com/karnataka-districts/bidadi-township-final-notification-for-land-acquisition-of-498-acres-in-3-out-of-9-villages-mrq/articleshow-g2gf48k</guid>
            <pubDate>Sat, 13 Jun 2026 11:05:02 +0530</pubDate>
            <description><![CDATA[&lt;p&gt;ರೈತರ ಪರ-ವಿರೋಧದ ನಡುವೆಯೂ, ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್&zwnj;ಶಿಪ್) ಯೋಜನೆಗಾಗಿ 9 ಗ್ರಾಮಗಳ ಪೈಕಿ 3 ಗ್ರಾಮಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktzqkq2dnytzchv4h38qvdcj,imgname-bidadi-township-1781328895053.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ:&lt;/strong&gt; ರೈತರ ಪರ-ವಿರೋಧದ ನಡುವೆಯೂ ರಾಜ್ಯ ಸರ್ಕಾರ ಭಾರತದ ಮೊದಲ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆಗಾಗಿ 9 ಕಂದಾಯ ಗ್ರಾಮಗಳ ಪೈಕಿ 3 ಗ್ರಾಮಗಳ ಭೂ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಿದೆ.&lt;/p&gt;&lt;p&gt;ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುತ್ತಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗಾಗಿ ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯ - 367.15 ಎಕರೆ, ಮಂಡಲಹಳ್ಳಿ - 70.37 ಎಕರೆ ಹಾಗೂ ವಡೇರಹಳ್ಳಿ - 61.2 ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರ ಬಿದ್ದಿದೆ.&lt;/p&gt;&lt;p&gt;ಈ ಯೋಜನೆಗೆ ರಾಮನಗರ ತಾಲೂಕು ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಬೈರಮಂಗಲ, ಬನ್ನಿಗಿರಿ, ಹೊಸೂರು, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಕೆ.ಜಿ.ಗೊಲ್ಲರಪಾಳ್ಯ, ಮಂಡಲಹಳ್ಳಿ, ಅರಳಾಳುಸಂದ್ರ ಹಾಗೂ ಹಾರೋಹಳ್ಳಿ ತಾಲೂಕು ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಸೇರಿ ಒಟ್ಟು 9 ಕಂದಾಯ ಗ್ರಾಮಗಳ&lt;/p&gt;&lt;p&gt;ಸುಮಾರು 7881 ಎಕರೆ ಸ್ವಾಧೀನಕ್ಕೆ ಒಳಪಡಲಿದ್ದು, ಇದರಲ್ಲಿ ಖಾಸಗಿ ಮಾಲೀಕತ್ವದ 6731 ಎಕರೆ ಜಮೀನು ಇದೆ.&lt;/p&gt;&lt;h2&gt;&lt;strong&gt;498 ಎಕರೆ 54 ಗುಂಟೆ ಭೂ ಸ್ವಾಧೀನಕ್ಕೆ ಅಧಿಸೂಚನೆ&lt;/strong&gt;&lt;/h2&gt;&lt;p&gt;ಬಿಡದಿ ಹೋಬಳಿಯಲ್ಲಿ ಸುಮಾರು 20 ಸಾವಿರ ಕೋಟಿ ವೆಚ್ಚದಲ್ಲಿ ಅನುಷ್ಠಾನಕ್ಕೆ ತರುತ್ತಿರುವ ಸಮಗ್ರ ಉಪನಗರ ನಿರ್ಮಾಣಕ್ಕಾಗಿ ಒಟ್ಟು 7881 ಎಕರೆ ಭೂ ಸ್ವಾಧೀನಕ್ಕಾಗಿ 2025ರ ಮಾ.12ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಭೂ ಸ್ವಾಧೀನ ಕಾಯ್ದೆಗಳ ಪ್ರಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಒಂದು ವರ್ಷದೊಳಗಾಗಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಒಂದು ವೇಳೆ ಆಡಳಿತಾತ್ಮಕ ಕಾರಣಗಳಿಂದಾಗಿ ಇದು ಸಾಧ್ಯವಾಗದಿದ್ದಲ್ಲಿ, ಅವಧಿಯನ್ನು ವಿಸ್ತರಿಸುವ ಅವಕಾಶ ಸರ್ಕಾರಕ್ಕೆ ಇತ್ತು. ಅದರಂತೆಯೇ ನಗರಾಭಿವದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಂತಿಮ ಅಧಿಸೂಚನೆ ಪ್ರಕಟಿಸುವ ಅವಧಿಯನ್ನು 2027ರ ಮಾ.11ರವರೆಗೆ ವಿಸ್ತರಿಸಿದ್ದರು. ಇದೀಗ 498 ಎಕರೆ 54 ಗುಂಟೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ.&lt;/p&gt;&lt;p&gt;ವರ್ಕ್-ಲಿವ್-ಪ್ಲೇ ಮಾದರಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲು ಮೇ 7 ರಂದು ಸಚಿವ ಸಂಪುಟ ಅನುಮೋದನೆ ನೀಡಿತ್ತು. ಅಂತಿಮ ಅಧಿಸೂಚನೆಯಲ್ಲಿ ಆಕಾರ್ ಬಂದ್ ಹಾಗೂ ಪಹಣಿಯಲ್ಲಿ ವ್ಯತ್ಯಾಸವಿದ್ದರೆ ಆಕಾರ್ ಬಂದ್ ವಿಸ್ತೀರ್ಣವೇ ಅಂತಿಮವೆಂದು ಪರಿಗಣಿಸಲಾಗಿದೆ.&lt;/p&gt;&lt;p&gt;ಸರ್ಕಾರಿ ಸರ್ವೆ ನಂಬರ್&zwnj;ಗಳಲ್ಲಿ ಭೂ ಮಂಜೂರಾತಿಯಾಗಿ ದುರಸ್ಥಿಯಾಗದೇ ಇರುವ ಪ್ರಕರಣಗಳಲ್ಲಿ ಭೂಮಾಲೀಕತ್ವದ ವಿಸ್ತೀರ್ಣದ ನಿರ್ಧರಣೆಯನ್ನು 2012ರ ಸರ್ಕಾರದ ಸುತ್ತೋಲೆಯಂತೆ ನಿರ್ಣಯಿಸಲಾಗಿದೆ. ಅಲ್ಲದೆ, ಸರ್ಕಾರಿ ಸರ್ವೆ ನಂಬರ್ ಗಳಲ್ಲಿನ ಭೂ ಮಂಜೂರಾತಿ ಪ್ರಕರಣಗಳಲ್ಲಿ ಪರಿಹಾರ ಅರ್ಹತೆಯನ್ನು ಕಂದಾಯ ಇಲಾಖೆಯ ನೈಜತೆ ವರದಿಯನುಸಾರ ತೀರ್ಮಾನಿಸಿ ಕ್ರಮವಹಿಸಲು ಸೂಚಿಸಲಾಗಿದೆ.&lt;/p&gt;&lt;h3&gt;&lt;strong&gt;6 ಗ್ರಾಮಗಳ 7 ಸಾವಿರ ಎಕರೆ ಬಾಕಿ:&lt;/strong&gt;&lt;/h3&gt;&lt;p&gt;ಟೌನ್ ಶಿಪ್ ಯೋಜನೆ ವಿರೋಧಿಸಿ ಒಂದೆಡೆ ರೈತರು 450ಕ್ಕೂ ಹೆಚ್ಚು ದಿನಗಳಿಂದ ಹೋರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಯೋಜನೆ ಪರವಾಗಿರುವ ರೈತರು ಶೀಘ್ರ ಭೂ ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು.&lt;/p&gt;&lt;p&gt;ಕೊನೆಗೆ ಡಿ.ಕೆ.ಶಿವಕುಮಾರ್ ರವರು ಜೂನ್ ತಿಂಗಳಲ್ಲಿ 9 ಕಂದಾಯ ಗ್ರಾಮಗಳ ಪೈಕಿ ತಲಾ 3 ಗ್ರಾಮಗಳ ಭೂ ಸ್ವಾಧೀನ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವುದಾಗಿ ಘೋಷಿಸಿದ್ದರು. ಅದರಂತೆ ಜೂನ್ 11ರಂದು ಮೊದಲ ಹಂತದಲ್ಲಿ ಬಿಡದಿ ಹೋಬಳಿಯ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮ ವ್ಯಾಪ್ತಿಯ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರ ಬಿದ್ದಿದೆ. ಇನ್ನು 6 ಗ್ರಾಮಗಳ ಸುಮಾರು 7 ಸಾವಿರ ಎಕರೆ ಭೂ ಸ್ವಾಧೀನ ಅಂತಿಮ ಅಧಿಸೂಚನೆ ಬಾಕಿಯಿದೆ.&lt;/p&gt;&lt;table&gt; &lt;tbody&gt;  &lt;tr&gt;   &lt;td&gt;ಗ್ರಾಮ&lt;/td&gt;   &lt;td&gt;ಭೂಸ್ವಾಧೀನ ವಿಸ್ತೀರ್ಣ&lt;/td&gt;   &lt;td&gt;ನಿಗದಿ ಪಡಿಸಿರುವ ದರ(ಪ್ರತಿ ಎಕರೆಗೆ)&lt;/td&gt;  &lt;/tr&gt;  &lt;tr&gt;   &lt;td&gt;ಕೆಂಪಯ್ಯನಪಾಳ್ಯ&lt;/td&gt;   &lt;td&gt;367.15 ಎಕರೆ&lt;/td&gt;   &lt;td&gt;207.30 ಲಕ್ಷ&lt;/td&gt;  &lt;/tr&gt;  &lt;tr&gt;   &lt;td&gt;ಮಂಡಲಹಳ್ಳಿ&lt;/td&gt;   &lt;td&gt;70.37 ಎಕರೆ&lt;/td&gt;   &lt;td&gt;214.50 ಲಕ್ಷ&lt;/td&gt;  &lt;/tr&gt;  &lt;tr&gt;   &lt;td&gt;ವಡೇರಹಳ್ಳಿ&lt;/td&gt;   &lt;td&gt;61.02 ಎಕರೆ&lt;/td&gt;   &lt;td&gt;14.50 ಲಕ್ಷ&lt;/td&gt;  &lt;/tr&gt; &lt;/tbody&gt;&lt;/table&gt;&lt;p&gt;ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಿರುವ ರೈತರಿಗೆ ಜೂನ್ 15ರಿಂದ ಪರಿಹಾರ ಮೊತ್ತ ಬಿಡುಗಡೆ ಆಗಲಿದೆ. ಈಗಾಗಲೇ ಪರಿಹಾರ ಮೊತ್ತ ಕೋರಿ 200ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಒಂದೇ ಕಂತಿನಲ್ಲಿ ಭೂ ಪರಿಹಾರ ನೀಡಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಹೇಳುತ್ತಾರೆ.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bidadi-township-final-notification-for-land-acquisition-of-498-acres-in-3-out-of-9-villages-mrq/articleshow-g2gf48k"/>
        </item>
        <item>
            <title><![CDATA[ಭೂ ಸ್ವಾಧೀನ ಕೈಬಿಟ್ರೆ ನಾನೇ ಸಿಎಂಗೆ ಸನ್ಮಾನ ಮಾಡುತ್ತೇನೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್]]></title>
            <link>https://kannada.asianetnews.com/karnataka-districts/basanagouda-patil-yatnal-warning-to-dk-shivakumar-bidadi-township-gvd/articleshow-g8v96ii</link>
            <guid isPermaLink="true">https://kannada.asianetnews.com/karnataka-districts/basanagouda-patil-yatnal-warning-to-dk-shivakumar-bidadi-township-gvd/articleshow-g8v96ii</guid>
            <pubDate>Tue, 09 Jun 2026 22:28:57 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;ಗೆ ಆ ದೇವರು ಅಜ್ಜಯ್ಯ ರೈತರ ಜಮೀನು ಉಳಿಸುಂತಹ ಬುದ್ಧಿ ಕೊಡಲೆಂದು ನಾನು ಪ್ರಾರ್ಥನೆ ಮಾಡುವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2envnsn93ej4mncgm43djx3,imgname-fotojet--9--1754986829621.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜೂ.09): &lt;/strong&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;ಗೆ ಆ ದೇವರು ಅಜ್ಜಯ್ಯ ರೈತರ ಜಮೀನು ಉಳಿಸುಂತಹ ಬುದ್ಧಿ ಕೊಡಲೆಂದು ನಾನು ಪ್ರಾರ್ಥನೆ ಮಾಡುವೆ. ಭೂ ಸ್ವಾಧೀನ ಕೈಬಿಟ್ಟರೆ ಮುಖ್ಯಮಂತ್ರಿಗಳಿಗೆ ನಾನೇ ಸನ್ಮಾನ ಮಾಡುತ್ತೇನೆ. ಇಲ್ಲದಿದ್ದರೆ ನಾನೂ ಆಹೋರಾತ್ರಿ ಧರಣಿ ಕೂರುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.&lt;/p&gt;&lt;p&gt;ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಯೋಜನೆ ವಿಷಯವನ್ನು ನಾನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಈ ಭಾಗದ ಶಾಸಕರು ಮಾತನಾಡಲಿ. ಅದಕ್ಕೆ ಸರಿಯಾಗಿ ಉತ್ತರ ಕೊಟ್ಟು ಮುಖ್ಯಮಂತ್ರಿಗಳು ದೊಡ್ಡ ಮನಸ್ಸು ಮಾಡಿ ಭೂ ಸ್ವಾಧೀನ ಕೈಬಿಡಲಿ. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸೋಣ ಎಂದರು.&lt;/p&gt;&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ತಮ್ಮ ಸ್ವ ಕ್ಷೇತ್ರಕ್ಕೆ ಹೋಗಿ, ಅಲ್ಲಿ ಯಾವ ರೈತರು ಜಮೀನು ಮಾರಾಟ ಮಾಡಬೇಡಿ. ನೀರಾವರಿ ಮಾಡುತ್ತೇನೆ ಅನ್ನುತ್ತಾರೆ. ಆದರೆ, ಅವರದ್ದೇ ಜಿಲ್ಲೆಯ ಬಿಡದಿ ರೈತರ ಜಮೀನನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.&lt;/p&gt;&lt;p&gt;ಟೌನ್ ಶಿಪ್ ಹೆಸರಿನಲ್ಲಿ ಸರ್ಕಾರ ಬಲವಂತದಿಂದ 9600 ಎಕರೆ ರೈತರ ಫಲವತ್ತಾದ ಭೂಮಿ ಕಸಿದುಕೊಳ್ಳಲು ಮುಂದಾಗಿದೆ. ಈ ಹಿಂದೆ ವರದಿ ನೀಡಿದಾಗ 2700 ಎಕರೆ ಸರ್ಕಾರಿ ಗೋಮಾಳ ಇತ್ತು. ಈಗ 750 ಎಕರೆ ಮಾತ್ರ ಎಂದು ದಾಖಲೆ ತೋರಿಸುತ್ತಿದ್ದಾರೆ. ಇಷ್ಟು ದೊಡ್ಡ ಕೃಷಿ ಪ್ರದೇಶವನ್ನು ವಿಧಾನಸಭೆಯಲ್ಲಿ ಬರಡು ಭೂಮಿ ಅಂತ ವಾದಿಸುತ್ತಿದ್ದಾರೆ.&lt;/p&gt;&lt;p&gt;ಇದು ಕೃಷಿಗೆ ಯೋಗ್ಯವಿಲ್ಲ ಅಂತ ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ನಾನು ಬೆಳಗ್ಗೆಯಿಂದ ಎಲ್ಲೆಡೆ ವೀಕ್ಷಣೆ ಮಾಡಿದ್ದೇನೆ. ಬೆಂಗಳೂರಿನ ಪಕ್ಕದಲ್ಲಿರುವ ಈ ಬಿಡದಿ ಭಾಗ ದೊಡ್ಡ ಮಲೆನಾಡು, ಕಾಶ್ಮೀರದಂತೆ ಇದೆ. ಇಲ್ಲಿ ರೈತರು ಮಿಶ್ರ ಬೆಳೆ, ತೋಟಗಾರಿಕೆ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಹೈನುಗಾರಿಕೆ ಮೂಲಕ 40 ರಿಂದ 50 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ&zwnj;. ಇಂತಹ ಭೂಮಿಯಲ್ಲಿ ಟೌನ್ ಶಿಪ್ ಮಾಡುವುದು ಸರಿಯಲ್ಲ. ಸ್ವತಃ ಸಿಎಂ ಬಂದು ಬಿಡದಿ ಸ್ವರ್ಗವನ್ನು ನೋಡಲಿ ಎಂದು ಸಲಹೆ ನೀಡಿದರು.&lt;/p&gt;&lt;h2&gt;&lt;strong&gt;ದ್ವಂದ್ವ ನೀತಿ ಬೇಡ&lt;/strong&gt;&lt;/h2&gt;&lt;p&gt;ಟೌನ್ ಶಿಪ್ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ಏನು ಮಾಡುತ್ತಾರೆ. ಯಾರು ರೈತರ ಪರವಾಗಿ ಇದ್ದಾರೆ ಎಂಬುದು ಗೊತ್ತಿಲ್ಲ. ರೈತರ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿ ಮೊಸಳೆ ಕಣ್ಣೀರು ಸುರಿಸುವ ನಾಯಕರು ಇದ್ದಾರೆ. ಇಲ್ಲಿ ರೈತರಿಗೆ ಒಂದು ಹೇಳುತ್ತಾರೆ, ವಿಧಾನಸಭೆಯೊಳಗೆ ಇನ್ನೊಂದು ಹೇಳುತ್ತಾರೆ. ಇಂತಹ ದ್ವಂದ್ವ ನೀತಿ ಬೇಡ. ವಿಪಕ್ಷ ನಾಯಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.&lt;/p&gt;&lt;p&gt;ಈ ಯೋಜನೆಯಲ್ಲಿ ವಿಪಕ್ಷದವರು ಪಾಲುದಾರರಾಗಿದ್ದಾರೆ ಎನ್ನುವ ಸಂಶಯವೂ ಬರುತ್ತಿದೆ. ಇದು ನೀವು ಮಾಡುತ್ತಿರುವ ಡಬಲ್ ಗೇಮ್. ಸದನದೊಳಗೊಂದು, ಹೊರಗೊಂದು ಮಾತನಾಡಿದರೆ ಜನರು ಒಪ್ಪುವುದಿಲ್ಲ ಎಂದು ವಿಪಕ್ಷಗಳ ವಿರುದ್ಧವೇ ಕಿಡಿಕಾರಿದರು.&lt;/p&gt;&lt;p&gt;ಜುಲೈ 15ರ ನಂತರ ಬೆಳಗಾವಿ ಅಧಿವೇಶನ ಕರೆಯುತ್ತಾರೆಂಬ ಸುದ್ದಿ ಇದೆ. ಅಲ್ಲಿ ಮತ್ತೆ ನಾನು ಈ ವಿಚಾರ ಪ್ರಸ್ತಾಪ ಮಾಡುತ್ತೇನೆ. ಆರ್ ಅಶೋಕ್ ಮತ್ತು ಸನ್ಮಾನ್ಯ ವಿಜಯೇಂದ್ರ ಏನು ಮಾಡುತ್ತಾರೊ ನೋಡೋಣ. ಅವರ ಹೇಳಿಕೆಗೆ ಬರುವ ಕಮೆಂಟ್ಸ್ ನೋಡಿದರೆ, ಅವರು ಮೆಣಸಿನ ಗಿಡಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯತ್ನಾಳ್ ವ್ಯಂಗ್ಯವಾಡಿದರು.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basanagouda-patil-yatnal-warning-to-dk-shivakumar-bidadi-township-gvd/articleshow-g8v96ii"/>
        </item>
        <item>
            <title><![CDATA[Bidadi township: ಬಿಡದಿ ಟೌನ್‌ಶಿಪ್‌ ರೈತರಿಗೆ ಬಂಪರ್ ಪರಿಹಾರ: ಪ್ರತಿ ಎಕರೆಗೆ ₹2.30 ಕೋಟಿ ಚೆಕ್ ವಿತರಣೆ!]]></title>
            <link>https://kannada.asianetnews.com/gallery/karnataka-districts/bengaluru-south-bidadi-township-land-compensation-farmers-2-crore-per-acre-mla-hc-balakrishna-gfbblv8</link>
            <guid isPermaLink="true">https://kannada.asianetnews.com/gallery/karnataka-districts/bengaluru-south-bidadi-township-land-compensation-farmers-2-crore-per-acre-mla-hc-balakrishna-gfbblv8</guid>
            <pubDate>Fri, 19 Jun 2026 20:17:24 +0530</pubDate>
            <description><![CDATA[&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸರ್ಕಾರವು ಪರಿಹಾರ ಚೆಕ್ ವಿತರಣೆ ಆರಂಭಿಸಿದೆ. ಪ್ರತಿ ಎಕರೆಗೆ 2.30 ಕೋಟಿ ರೂ. ಹಾಗೂ ಬೆಳೆಗಳಿಗೆ ಪ್ರತ್ಯೇಕ ಪರಿಹಾರ ನೀಡಲಾಗುತ್ತಿದ್ದು, ಶಾಸಕ ಬಾಲಕೃಷ್ಣ ಅವರು ರೈತರಿಗೆ ಹಣ ಖಾತೆಗೆ ಜಮೆಯಾಗುವ ಭರವಸೆ ನೀಡಿದ್ದಾರೆ. ಈ ಗ್ರಾಮಗಳ ಹಣ ವಿತರಣೆ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvg50n2p48dk3531dkh69v7r,imgname-bidadi-township-land-compensation-1781879821398.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸರ್ಕಾರವು ಪರಿಹಾರ ಚೆಕ್ ವಿತರಣೆ ಆರಂಭಿಸಿದೆ. ಪ್ರತಿ ಎಕರೆಗೆ 2.30 ಕೋಟಿ ರೂ. ಹಾಗೂ ಬೆಳೆಗಳಿಗೆ ಪ್ರತ್ಯೇಕ ಪರಿಹಾರ ನೀಡಲಾಗುತ್ತಿದ್ದು, ಶಾಸಕ ಬಾಲಕೃಷ್ಣ ಅವರು ರೈತರಿಗೆ ಹಣ ಖಾತೆಗೆ ಜಮೆಯಾಗುವ ಭರವಸೆ ನೀಡಿದ್ದಾರೆ. ಈ ಗ್ರಾಮಗಳ ಹಣ ವಿತರಣೆ ಆಗಿದೆ.&lt;/p&gt;&lt;img&gt;&lt;p&gt;&lt;strong&gt;ರಾಮನಗರ (ಜೂ.19): ರಾ&lt;/strong&gt;ಜ್ಯದ ಬಹುಚರ್ಚಿತ ಬಿಡದಿ ಟೌನ್&zwnj;ಶಿಪ್ (Bidadi Township) ಯೋಜನೆಯ ಜಟಾಪಟಿಗಳ ನಡುವೆಯೇ, ಭೂಮಿ ಕಳೆದುಕೊಳ್ಳುವ ರೈತರಿಗೆ ಭೂ ಪರಿಹಾರದ ಚೆಕ್ ವಿತರಿಸುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBDA) ವತಿಯಿಂದ ಯೋಜನೆಯ ಪಾಲುದಾರರು ಹಾಗೂ ಭೂಮಿ ನೀಡಲು ಸಮ್ಮತಿಸಿರುವ ರೈತರಿಗೆ ಶನಿವಾರ ಸಾಂಕೇತಿಕವಾಗಿ ಪರಿಹಾರದ ಚೆಕ್&zwnj;ಗಳನ್ನು ವಿತರಿಸಲಾಯಿತು. ಒಂದು ಎಕರೆಗೆ 2.30 ಕೋಟಿ ಪರಿಹಾರವನ್ನು ನೀಡಿದೆ.&lt;/p&gt;&lt;img&gt;&lt;p&gt;ರಾಮನಗರದ ಕಂದಾಯ ಭವನದಲ್ಲಿರುವ ಜಿಬಿಡಿಎ (GBDA) ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹಾಗೂ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜು ಅವರು ಫಲಾನುಭವಿ ರೈತರಿಗೆ ಚೆಕ್ ಹಸ್ತಾಂತರಿಸಿದರು. ಮೊದಲ ಹಂತದಲ್ಲಿ ಯೋಜನೆಗೆ ಒಪ್ಪಿಗೆ ನೀಡಿರುವ ಕೆಂಪಯ್ಯನಪಾಳ್ಯ ಗ್ರಾಮದ 7 ಮಂದಿ ಭೂ ಮಾಲೀಕರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಯಿತು.&lt;/p&gt;&lt;img&gt;&lt;p&gt;&lt;strong&gt;ಎಕರೆಗೆ 2.30 ಕೋಟಿ ರೂಪಾಯಿ ಪರಿಹಾರ!&lt;/strong&gt;&lt;/p&gt;&lt;p&gt;ರೈತರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವು ಭಾರಿ ಕುತೂಹಲ ಮೂಡಿಸಿದೆ. ಅಂತಿಮ ಅಧಿಸೂಚನೆಗೆ ಒಳಪಟ್ಟಿರುವ ಗ್ರಾಮಗಳಲ್ಲಿ ಪ್ರತಿ ಎಕರೆ ಜಮೀನಿಗೆ ಬರೋಬ್ಬರಿ 2 ಕೋಟಿ 30 ಲಕ್ಷದ 7 ಸಾವಿರ ರೂಪಾಯಿ ಪರಿಹಾರ ಹಣವನ್ನು ನಿಗದಿಪಡಿಸಲಾಗಿದೆ. ಕೇವಲ ಭೂಮಿಗೆ ಮಾತ್ರವಲ್ಲದೆ, ಜಮೀನಿನಲ್ಲಿ ಬೆಳೆದ ಬೆಳೆಗಳಿಗೂ ಪ್ರತ್ಯೇಕ ಮತ್ತು ವೈಜ್ಞಾನಿಕವಾಗಿ ಹೆಚ್ಚಿನ ಪರಿಹಾರವನ್ನು ನೀಡಲಾಗುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಬೆಳೆಗಳ ಪರಿಹಾರದ ವಿವರ ಇಂತಿದೆ:&lt;/strong&gt;&lt;/p&gt;&lt;ul&gt; &lt;li&gt;ತೆಂಗಿನ ಮರ (ಒಂದಕ್ಕೆ): ₹40,446&lt;/li&gt; &lt;li&gt;ಮಾವಿನ ಗಿಡ (ಒಂದಕ್ಕೆ): ₹62,000&lt;/li&gt; &lt;li&gt;ಅಡಿಕೆ ಮರ (ಒಂದಕ್ಕೆ): ₹7,440&lt;/li&gt; &lt;li&gt;ಬಾಳೆ (ಪ್ರತಿ ಎಕರೆಗೆ): ₹10.86 ಲಕ್ಷ&lt;/li&gt; &lt;li&gt;ರೇಷ್ಮೆ (ಪ್ರತಿ ಎಕರೆಗೆ): ₹14 ಲಕ್ಷ&lt;/li&gt; &lt;li&gt;ಹಲಸು (ಪ್ರತಿ ಎಕರೆಗೆ): ₹42,750&lt;/li&gt; &lt;li&gt;ಹುಣಸೆ (ಪ್ರತಿ ಎಕರೆಗೆ): ₹53,310&amp;nbsp;&amp;nbsp;&lt;/li&gt;&lt;/ul&gt;&lt;p&gt;ವಿಶೇಷವೆಂದರೆ, ಕೇವಲ ಒಂದು ಗುಂಟೆ ಜಮೀನು ಕಳೆದುಕೊಳ್ಳುವ ಸಣ್ಣ ರೈತರಿಗೂ ನ್ಯಾಯ ಒದಗಿಸಲು ಜಿಬಿಡಿಎ ಮುಂದಾಗಿದೆ. ಅಂತಹ ರೈತರಿಗೆ 5 ಲಕ್ಷ ರೂಪಾಯಿಗಳ ಇಡಿಗಂಟು ಪರಿಹಾರ ನೀಡಲು ನಿರ್ಧರಿಸಲಾಗಿದೆ.&lt;/p&gt;&lt;img&gt;&lt;p&gt;ಶಾಸಕ ಬಾಲಕೃಷ್ಣ ಅವರ ಸವಾಲು:&lt;/p&gt;&lt;p&gt;ಚೆಕ್ ವಿತರಿಸಿ ಮಾತನಾಡಿದ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ವಿರೋಧ ಪಕ್ಷಗಳ ಟೀಕೆಗೆ ಕಡಕ್ ಉತ್ತರ ನೀಡಿದ್ದಾರೆ. &quot;ಯೋಜನೆಗೆ ಒಪ್ಪಿಗೆ ನೀಡಿ ನೋಟಿಸ್ ಪಡೆದಿರುವ ರೈತರಿಗೆ ಒಂದು ವಾರದೊಳಗೆ ಅವರ ಖಾತೆಗೆ ಹಣ ಸಂದಾಯವಾಗಲಿದೆ. ಒಂದು ವೇಳೆ ರೈತರಿಗೆ ಹಣ ಕೊಡಿಸಲು ಸಾಧ್ಯವಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ&quot; ಎಂದು ಸವಾಲು ಹಾಕಿದ್ದಾರೆ. ರೈತರಿಗೆ ಯಾವುದೇ ಆತಂಕ ಬೇಡ, ಸರ್ಕಾರ ಅವರ ಬೆನ್ನಿಗಿದೆ ಎಂದು ಅವರು ಭರವಸೆ ನೀಡಿದರು.&lt;/p&gt;&lt;img&gt;&lt;p&gt;&lt;strong&gt;ಯಾವ ಗ್ರಾಮಗಳಿಗೆ ಮೊದಲ ಹಂತದ ಪರಿಹಾರ?&lt;/strong&gt;&lt;/p&gt;&lt;p&gt;ಸದ್ಯ ಟೌನ್&zwnj;ಶಿಪ್ ಯೋಜನೆಯ ಒಟ್ಟು 9 ಗ್ರಾಮಗಳ ಪೈಕಿ ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ವಡೇರಹಳ್ಳಿ ಗ್ರಾಮಗಳ ಒಟ್ಟು 519 ಎಕರೆ ಪ್ರದೇಶಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ನಾಳೆಯಿಂದ ಅಂತಿಮ ಅಧಿಸೂಚನೆಗೆ ಒಳಪಟ್ಟಿರುವ ಈ ಗ್ರಾಮಗಳ ಉಳಿದ ರೈತರಿಗೂ ಹಂತ ಹಂತವಾಗಿ ಪರಿಹಾರ ನೀಡಲು ಜಿಬಿಡಿಎ ಸರ್ವ ಸಿದ್ಧತೆ ಮಾಡಿಕೊಂಡಿದೆ. ಟೌನ್&zwnj;ಶಿಪ್ ವಿರೋಧದ ನಡುವೆಯೂ ರೈತರು ಸ್ವಯಂಪ್ರೇರಿತರಾಗಿ ಭೂಮಿ ನೀಡಲು ಮುಂದೆ ಬರುತ್ತಿರುವುದು ಮತ್ತು ಸರ್ಕಾರ ಆಕರ್ಷಕ ಪರಿಹಾರ ನೀಡುತ್ತಿರುವುದು ಯೋಜನೆಯ ವೇಗವನ್ನು ಹೆಚ್ಚಿಸಿದೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/bengaluru-south-bidadi-township-land-compensation-farmers-2-crore-per-acre-mla-hc-balakrishna-gfbblv8"/>
        </item>
        <item>
            <title><![CDATA[ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಸರಣಿ ಅಪಘಾತದಲ್ಲಿ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಕಾರು ಜಖಂ]]></title>
            <link>https://kannada.asianetnews.com/gallery/state/former-mla-kb-chandrashekhar-car-damaged-in-bengaluru-mysuru-expressway-chain-collision-gx5lhfs</link>
            <guid isPermaLink="true">https://kannada.asianetnews.com/gallery/state/former-mla-kb-chandrashekhar-car-damaged-in-bengaluru-mysuru-expressway-chain-collision-gx5lhfs</guid>
            <pubDate>Sat, 06 Jun 2026 19:19:39 +0530</pubDate>
            <description><![CDATA[&lt;p&gt;ಬೆಂಗಳೂರು ಮೈಸೂರು ಎಕ್ಸ್&zwnj;ಪ್ರೇಸ್&zwnj;ವೇನಲ್ಲಿ ಸರಣಿ ಅಪಘಾತ ಸಂಭವಿಸಿದೆ. 5ಕ್ಕೂ ಹೆಚ್ಚು ವಾಹನಗಳು ಅಪಘಾಕ್ಕೀಡಾಗಿದೆ. ಅಪಘಾತದಲ್ಲಿ ಮಾಜಿ ಶಾಸಕ ಸಂಚರಿಸುತ್ತಿದ್ದ ಕಾರು ಜಖಂ ಗೊಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktejtgfvcs1tfbr5g4q0zz2b,imgname-former-legislator-kb-chandrashekhar-escapes-unhurt-1780753449467.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಮೈಸೂರು ಎಕ್ಸ್&zwnj;ಪ್ರೇಸ್&zwnj;ವೇನಲ್ಲಿ ಸರಣಿ ಅಪಘಾತ ಸಂಭವಿಸಿದೆ. 5ಕ್ಕೂ ಹೆಚ್ಚು ವಾಹನಗಳು ಅಪಘಾಕ್ಕೀಡಾಗಿದೆ. ಅಪಘಾತದಲ್ಲಿ ಮಾಜಿ ಶಾಸಕ ಸಂಚರಿಸುತ್ತಿದ್ದ ಕಾರು ಜಖಂ ಗೊಂಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬೆಂಗಳೂರು ಮೈಸೂರು ಎಕ್ಸ್&zwnj;ಪ್ರೇಸ್ ವೇನಲ್ಲಿ ಸರಣಿ ಅಪಘಾತ ಸಂಭವಿಸಿದೆ. 5ಕ್ಕೂ ಹೆಚ್ಚು ಕಾರುಗಳು, ಗೂಡ್ಸ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ರಾಮನಗರದ ಜಯಪುರು ಗೇಟ್ ಬಳಿಕ ಅಪಘಾತ ಸಂಭವಿಸಿದೆ. ಅತೀ ವೇಗದಲ್ಲಿದ್ದ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಚಲಿಸುತ್ತಿದ್ದ ಕಾರು ಜಖಂ ಗೊಂಡಿದೆ.&lt;/p&gt;&lt;img&gt;&lt;p&gt;ಕೆಆರ್ ಪೇಟೆ ಮಾಜಿ ಶಾಸಕರ ಕೆಬಿ ಚಂದ್ರಶೇಕರ್ ಫಾರ್ಚುನರ್ ಕಾರಿನ ಮೂಲಕ ಇದೇ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಾಜಿ ಶಾಸಕರ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಠವಶಾತ್ ಕೆಬಿ ಚಂದ್ರಶೇಖರ್ ಅಪಾಯದಿಂದ ಪಾರಾಗಿದ್ದಾರೆ.&lt;/p&gt;&lt;img&gt;&lt;p&gt;ಕೆಬಿ ಚಂದ್ರಶೇಖರ್ ಕಾರಿನ ಮುಂಭಾಗ ಹಾಗೂ ಕೋ ಡ್ರೈವರ್ ಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ವೇಗವಾಗಿ ಸಾಗುತ್ತಿದ್ದ ವೇಳೆ ಆ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಕೆಬಿ ಚಂದ್ರಶೇಖರ್ ಬೇರೆ ವಾಹನದಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.&lt;/p&gt;&lt;img&gt;&lt;p&gt;ಸರಣಿ ಅಪಘಾತದಲ್ಲಿ ಕಾರಿನ ಚಾಲಕರು, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಅತೀ ವೇಗವಾಗಿದ್ದ ಕಾರಣ ಕೆಲ ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿದೆ. ಹೆದ್ದಾರಿಯಲ್ಲಿ ಮತ್ತೆ ಅಪಘಾತಗಳ ಸರಣಿ ಹೆಚ್ಚಾಗುತ್ತಿದೆ.&lt;/p&gt;&lt;img&gt;&lt;p&gt;ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶನಿವಾರ ಆಗಿರುವ ಕಾರಣ ಹೆದ್ದಾರಿಯಲ್ಲಿ ವಿಪರೀತ ವಾಹನಗಳು ಪ್ರಯಾಣಿಸುತ್ತಿದೆ. ಹೀಗಾಗಿ ತಕ್ಷಣವೇ ಕಾರ್ಯಪ್ರವತ್ತರಾದ ಪೊಲೀಸರು ವಾಹನಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/former-mla-kb-chandrashekhar-car-damaged-in-bengaluru-mysuru-expressway-chain-collision-gx5lhfs"/>
        </item>
        <item>
            <title><![CDATA[2028ರಲ್ಲೂ ಅವಕಾಶ ನೀಡಿ, ಜನರ ಋಣ ತೀರಿಸುತ್ತೇನೆ: ಕಬ್ಬಾಳಮ್ಮ ಸನ್ನಿಧಿಯಲ್ಲಿ ಡಿಕೆಶಿ ಭಾವುಕ!]]></title>
            <link>https://kannada.asianetnews.com/politics/dk-shivakumar-emotional-speech-at-kabbalu-village-kanakapura-gvd/articleshow-ocrhtot</link>
            <guid isPermaLink="true">https://kannada.asianetnews.com/politics/dk-shivakumar-emotional-speech-at-kabbalu-village-kanakapura-gvd/articleshow-ocrhtot</guid>
            <pubDate>Sun, 07 Jun 2026 21:53:03 +0530</pubDate>
            <description><![CDATA[&lt;p&gt;ಕಬ್ಬಾಳು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದ್ದು, ತಾಯಿ ಕಬ್ಬಾಳಮ್ಮನಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಜನರ ಆಶೀರ್ವಾದವೇ ತಮ್ಮ ರಾಜಕೀಯ ಶಕ್ತಿಯ ಮೂಲ ಎಂದು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksv7rz4mjztq8gs1n62sy86v,imgname-dk-shivakumar-1780104330388.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನಕಪುರ (ಜೂ.07): &lt;/strong&gt;ಕಬ್ಬಾಳು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದ್ದು, ತಾಯಿ ಕಬ್ಬಾಳಮ್ಮನಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಜನರ ಆಶೀರ್ವಾದವೇ ತಮ್ಮ ರಾಜಕೀಯ ಶಕ್ತಿಯ ಮೂಲ ಎಂದು ಹೇಳಿದ್ದಾರೆ. ರಾತ್ರಿ ತಡವಾದರೂ ಸಾವಿರಾರು ಅಭಿಮಾನಿಗಳು ಅವರನ್ನು ನೋಡಲು ಕಾದು ನಿಂತಿದ್ದ ದೃಶ್ಯ ಕಾರ್ಯಕ್ರಮದ ವಿಶೇಷವಾಗಿತ್ತು.&lt;/p&gt;&lt;p&gt;&quot;ನಿಮ್ಮ ಹಾಗೂ ರಾಜ್ಯ ಸರ್ಕಾರದ ಪರವಾಗಿ ತಾಯಿ ಕಬ್ಬಾಳಮ್ಮನಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. 1985ರ ಮೊದಲು ಮತ್ತು ನಂತರ ಕನಕಪುರ ಹೇಗೆ ಅಭಿವೃದ್ಧಿಯಾಗಿದೆ ಎಂಬುದು ನಿಮ್ಮ ಕಣ್ಣೆದುರೇ ಇದೆ. ಕಬ್ಬಾಳಮ್ಮ ದೇವಾಲಯ ಇಂದು ಇಡೀ ರಾಜ್ಯದ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ,&quot; ಎಂದು ಅವರು ಹೇಳಿದರು.&lt;/p&gt;&lt;p&gt;ಬೆಂಗಳೂರು ದಕ್ಷಿಣ ಜಿಲ್ಲೆ ರಚನೆಯ ಬಳಿಕ ಈ ಭಾಗದ ಆಸ್ತಿ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಿದ ಸಿಎಂ, &quot;ಜನರಿಗೆ ನೀಡಿದ ಮಾತಿನಂತೆ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ₹2,000, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, 10 ಕೆಜಿ ಅಕ್ಕಿ ಸೇರಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ&quot; ಎಂದು ತಿಳಿಸಿದರು. ಜನರ ಬೆಂಬಲದಿಂದಲೇ ತಮ್ಮ ರಾಜಕೀಯ ಪಯಣ ಸಾಧ್ಯವಾಗಿದೆ ಎಂದು ಹೇಳಿದ ಅವರು, &quot;ನಿಮ್ಮೆಲ್ಲರ ಶ್ರಮ ಮತ್ತು ಆಶೀರ್ವಾದದಿಂದ ನನಗೆ ಈ ಶಕ್ತಿ ಸಿಕ್ಕಿದೆ. ನೀವು ಕೊಟ್ಟ ಶಕ್ತಿಯನ್ನು ಇಡೀ ರಾಜ್ಯದ ಅಭಿವೃದ್ಧಿಗೆ ಸಮರ್ಪಿಸುತ್ತೇನೆ&quot; ಎಂದರು.&lt;/p&gt;&lt;p&gt;ಅಧಿಕಾರ ಹಂಚಿಕೆ ವಿಚಾರವನ್ನು ಉಲ್ಲೇಖಿಸಿದ ಸಿಎಂ, &quot;ಕೇಂದ್ರದ ನಾಯಕರು ಹಾಗೂ ನಮ್ಮ ಪಕ್ಷದ ಹಿರಿಯರು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಅದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ವಿಧಾನಸೌಧದ ಮುಂದೆ ಪ್ರಮಾಣವಚನ ಸ್ವೀಕರಿಸಬೇಕು ಎಂದುಕೊಂಡಿದ್ದೆ. ಆದರೆ ಯಾವುದೇ ಗೊಂದಲ ಉಂಟಾಗಬಾರದೆಂಬ ಕಾರಣಕ್ಕೆ ಗ್ಲಾಸ್ ಹೌಸ್&zwnj;ನಲ್ಲಿ ಪ್ರಮಾಣವಚನ ಸ್ವೀಕರಿಸಿದೆ&quot; ಎಂದು ಹೇಳಿದರು.&lt;/p&gt;&lt;p&gt;&quot;ನೀವೆಲ್ಲರೂ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾನೇ ನಿಮ್ಮ ಬಳಿಗೆ ಬಂದಿದ್ದೇನೆ. ನೀವು ನನಗೆ ಎಂಟು ಬಾರಿ ಶಾಸಕ ಸ್ಥಾನ ನೀಡಿದ್ದೀರಿ, ಸಚಿವನನ್ನಾಗಿ ಮಾಡಿದ್ದೀರಿ, ಈಗ ಮುಖ್ಯಮಂತ್ರಿ ಸ್ಥಾನವನ್ನೂ ನೀಡಿದ್ದೀರಿ. ಈ ಜಿಲ್ಲೆಯ ಗೌರವ ಉಳಿಸುವ ಕೆಲಸವನ್ನು ನಮ್ಮ ಪಕ್ಷ ಮಾಡಿದೆ&quot; ಎಂದು ಕೃತಜ್ಞತೆ ವ್ಯಕ್ತಪಡಿಸಿದರು.&lt;/p&gt;&lt;p&gt;2028ರ ಚುನಾವಣೆಯನ್ನು ಉಲ್ಲೇಖಿಸಿದ ಅವರು, &quot;ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮ್ಮ ಬೆಂಬಲ ಅಗತ್ಯ. ಮುಂದೆಯೂ ಅವಕಾಶ ನೀಡಿ, ಮತ್ತೊಮ್ಮೆ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಬೇಕು&quot; ಎಂದು ಮನವಿ ಮಾಡಿದರು. ಮೆಡಿಕಲ್ ಕಾಲೇಜು ಯೋಜನೆ ಕುರಿತು ಮಾತನಾಡಿದ ಸಿಎಂ, &quot;ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ. ಇನ್ನೊಂದು ತಿಂಗಳೊಳಗೆ ಅದರ ಶಂಕುಸ್ಥಾಪನೆ ನೆರವೇರಲಿದೆ&quot; ಎಂದು ಘೋಷಿಸಿದರು.&lt;/p&gt;&lt;h2&gt;&lt;strong&gt;ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ&lt;/strong&gt;&lt;/h2&gt;&lt;p&gt;ಭೂ ಹಕ್ಕುಗಳ ಕುರಿತು ಮಾತನಾಡಿದ ಅವರು, &quot;ನಮ್ಮ ಸರ್ಕಾರ 6ನೇ ಗ್ಯಾರಂಟಿಯಾಗಿ 'ಭೂ ಗ್ಯಾರಂಟಿ' ಯೋಜನೆಯನ್ನು ಜಾರಿಗೆ ತಂದಿದೆ. ಯಾವುದೇ ಸರ್ಕಾರಿ ಕೆಲಸಕ್ಕಾಗಿ ಯಾರಿಗೂ ಒಂದು ರೂಪಾಯಿ ಲಂಚ ನೀಡಬೇಡಿ. ಜನರ ಹಕ್ಕುಗಳನ್ನು ಕಾಪಾಡುವುದು ನಮ್ಮ ಸರ್ಕಾರದ ಬದ್ಧತೆ&quot; ಎಂದು ಹೇಳಿದರು. ಕೊನೆಯಲ್ಲಿ, &quot;ನೀವು ನನಗೆ ನೀಡಿರುವ ಪ್ರೀತಿ, ವಿಶ್ವಾಸ ಮತ್ತು ಶಕ್ತಿಯ ಋಣ ತೀರಿಸಲು ನಾನು ನಿಮ್ಮ ನಡುವೆ ಬಂದಿದ್ದೇನೆ. ನಿಮ್ಮ ಗೌರವ ಮತ್ತು ಜಿಲ್ಲೆಯ ಹೆಮ್ಮೆ ಉಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ&quot; ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/dk-shivakumar-emotional-speech-at-kabbalu-village-kanakapura-gvd/articleshow-ocrhtot"/>
        </item>
        <item>
            <title><![CDATA[R Ashok ದಲ್ಲಾಳಿ ಪದ ಪ್ರಯೋಗಿಸಿದ್ದಕ್ಕೆ ಕ್ಷಮೆ ಕೇಳಲಿ: ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು]]></title>
            <link>https://kannada.asianetnews.com/karnataka-districts/hc-balakrishna-slams-r-ashok-over-broker-comment-demands-apology-gvd/articleshow-plf957g</link>
            <guid isPermaLink="true">https://kannada.asianetnews.com/karnataka-districts/hc-balakrishna-slams-r-ashok-over-broker-comment-demands-apology-gvd/articleshow-plf957g</guid>
            <pubDate>Wed, 17 Jun 2026 00:28:36 +0530</pubDate>
            <description><![CDATA[&lt;p&gt;Karnataka Politics: ವಿಪಕ್ಷ ನಾಯಕ ಆರ್.ಅಶೋಕ್ ರವರು ಮುಖ್ಯಮಂತ್ರಿಗಳಿಗೆ ದಲ್ಲಾಳಿ ಅನ್ನುವ ಪದ ಉಪಯೋಗಿಸಿದ್ದು ನಮಗೆ ಬೇಸರ ತಂದಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hcfkfnbfnng8h79m1zz9v9dr,imgname-vqcsv.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜೂ.17): &lt;/strong&gt;ವಿಪಕ್ಷ ನಾಯಕ ಆರ್.ಅಶೋಕ್ ರವರು ಮುಖ್ಯಮಂತ್ರಿಗಳಿಗೆ ದಲ್ಲಾಳಿ ಅನ್ನುವ ಪದ ಉಪಯೋಗಿಸಿದ್ದು ನಮಗೆ ಬೇಸರ ತಂದಿದೆ. ವಿಪಕ್ಷ ನಾಯಕ ಅಂದರೆ ಶಾಡೋ ಸಿಎಂ ಇದ್ದಂಗೆ. ಅವರು ನಮ್ಮಂಥ ಶಾಸಕರುಗಳಿಗೆ ಮಾದರಿಯಾಗಿರಬೇಕು. ನಮಗೆ ಬುದ್ದಿ ಹೇಳುವ ಅವರೂ ಕೂಡಾ ಬುದ್ದಿ ಕಲಿಯಬೇಕು ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್.ಅಶೋಕ್ ಟ್ವೀಟ್ ಗೆ ನಾನೂ ಕೂಡ ಟ್ವೀಟ್ ನಲ್ಲೇ ಉತ್ತರ ಕೊಟ್ಟಿದ್ದೀನಿ. ಅಶೋಕಣ್ಣನ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ, ಅವರು ಕೂಡ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದರು.&lt;/p&gt;&lt;p&gt;ಸಚಿವ ಸ್ಥಾನ ಸಿಗಲೆಂದು ಬಾಲಕೃಷ್ಣ ಮುಖ್ಯಮಂತ್ರಿಗಳನ್ನು ಒಲೈಕೆ ಮಾಡುತ್ತಿದ್ದಾರೆ&zwnj;ಯೇ ಎಂಬ ಪ್ರಶ್ನೆಗೆ, ಹಾಗಾದರೆ ಮುಂದೆ ಬಿಜೆಪಿ ಸರ್ಕಾರ ಬಂದರೆ ನನ್ನನ್ನು ಸಿಎಂ ಮಾಡಲೆಂದು ಅಶೋಕ್ ಹೀಗೆ ಮಾತನಾಡುತ್ತಿದ್ದಾರಾ. ಸಿಎಂಗೆ ಬೈದರೆ ಮುಂದೆ ಬಿಜೆಪಿ ನನ್ನನ್ನು ಮುಖ್ಯಮಂತ್ರಿ ಮಾಡುತ್ತೆ ಅಂತ ಅಶೋಕ್ ಹೀಗೆಲ್ಲ ಮಾತನಾಡ್ತಿದ್ದಾರಾ. ಅವರು ಅದನ್ನು ಒಪ್ಪಿಕೊಂಡರೆ ಅವರ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಟಾಂಗ್ ನೀಡಿದರು.&lt;/p&gt;&lt;h2&gt;&lt;strong&gt;ಯಾರು ಸತ್ಯಹರಿಶ್ಚಂದ್ರರಲ್ಲ&lt;/strong&gt;&lt;/h2&gt;&lt;p&gt;ಈ ಹಿಂದೆ ಬಿ.ಎಸ್.ಯಡಿಯೂರಪ್ಪರವರ ಮುಖ್ಯಮಂತ್ರಿ ಆಗಿದ್ದಾಗ ಕೆಐಎಡಿಬಿಗೆ 1 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಂಡಾಗ ಅದರ ವಿರುದ್ಧ ನಾನೇ ಹೋರಾಟ ಮಾಡಿದ್ದೆ. ಆಗ ಯಡಿಯೂರಪ್ಪರವರ ನನ್ನನ್ನು ಕರೆದು ಹೋರಾಟ ಮಾಡಬೇಡಿ. ಇದನ್ನು ಕೈಬಿಡಲು ಸಾಧ್ಯವಿಲ್ಲ. ರೆಡ್ ಜೋನ್ ಆಗಿರುವುದರಿಂದ ಒಳ್ಳೆಯ ಬೆಲೆ ಕೊಡಿಸುತ್ತೇನೆ ಎಂದು ಹೇಳಿದ್ದರು. ಈಗ ಯೋಜನೆ ಬಗ್ಗೆ ಮಾತನಾಡಲು ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ. ಆವತ್ತು ವಿಜಯೇಂದ್ರರವರು ಇದ್ದರು. ಬೇಕಾದರೆ ದಾಖಲೆ ಕೊಡುತ್ತೇನೆ ಎಂದು ಹೇಳಿದರು.&lt;/p&gt;&lt;p&gt;ಕುಮಾರಸ್ವಾಮಿ ಬಹಳ ಬುದ್ಧಿವಂತರು. ಟೌನ್ ಶಿಪ್ ಯೋಜನಾ ವ್ಯಾಪ್ತಿಯಲ್ಲಿ ಅವರ ಶ್ರೀಮತಿ ಮತ್ತು ಮಗನ ಹೆಸರಲ್ಲಿ 60 ಎಕರೆ ಇದೆ. ಅದರ ಬಗ್ಗೆ ಮಾತನಾಡಿ ಅಂದರೆ ಕೇತಗಾನಹಳ್ಳಿ ಜಮೀನಿನ ಬಗ್ಗೆ ಮಾತನಾಡುತ್ತಾರೆ. ಎಲ್ಲರೂ ಗಾಜಿನ ಮನೆಯಲ್ಲಿ ಕೂತಿದ್ದೇವೆ. ಸುಮ್ಮನೆ ಕಲ್ಲು ಹೊಡೆಯುವುದು ಬೇಡ. ಯಾರು ಸತ್ಯಹರಿಶ್ಚಂದ್ರರು ಅಂತ ಎದೆ ತಟ್ಟಿಕೊಳ್ಳೋದು ಬೇಡ ಎಂದರು.&lt;/p&gt;&lt;p&gt;ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರೇ ರಿಯಲ್ ಎಸ್ಟೇಟ್, ಬಿಸಿನೆಸ್ ಮಾಡಿದೀನಿ ಅಂತ ಹೇಳಿಕೊಂಡಿದ್ದಾರೆ. ಅವರಂತೆ ಕುಮಾರಸ್ವಾಮಿ ಕೂಡಾ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ ನೋಡೋಣ. ಅಶೋಕ್ ಮತ್ತು ಕುಮಾರಸ್ವಾಮಿ ಕುಟುಂಬದವರ ಆದಾಯ ಎಷ್ಟಿದೆ, ಅದು ಎಲ್ಲಿಂದ ಬಂತು ಅಂತ ಅ&zwj;ವರುಗಳೇ ವಿಮರ್ಶೆ ಮಾಡಲಿ ಎಂದು ತಿರುಗೇಟು ನೀಡಿದರು.&lt;/p&gt;&lt;p&gt;ಡಿಕೆಶಿ ಸುಳ್ಳು ಹೇಳುವುದಿಲ್ಲ, ಸತ್ಯ ಹೇಳುತ್ತಾರೆ. ಅವರ ಆದಾಯ ನೋಡಿ ದೇಶದಲ್ಲಿ ಇರುವ ಎಲ್ಲಾ ಇಲಾಖೆಯಿಂದಲೂ ತನಿಖೆ ಮಾಡಿಸಿದರು. ಏನು ಸಿಗಲಿಲ್ಲ. ಸುಪ್ರೀಂ ಕೋರ್ಟಿನಲ್ಲಿ ಆ ಪ್ರಕರಣಗಳು ವಜಾಗೊಂಡಿವೆ. ಕುಮಾರಸ್ವಾಮಿ ಮತ್ತು ಅಶೋಕ್ ರವರು ಆ ತನಿಖೆಗಳಿಗೆ ಒಪ್ಪಿಕೊಳ್ಳುತ್ತಾರಾ. ನಾವು ಅವರ ಕುಟುಂಬದ ಆಸ್ತಿ ಎಲ್ಲ ತನಿಖೆಯಾಗಲಿ ಅಂತ ನಾವೂ ಆಗ್ರಹ ಮಾಡುತ್ತೇವೆ ಎಂದು ಬಾಲಕೃಷ್ಣ ಹೇಳಿದರು.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/hc-balakrishna-slams-r-ashok-over-broker-comment-demands-apology-gvd/articleshow-plf957g"/>
        </item>
        <item>
            <title><![CDATA[ಡಿಕೆ ಸರ್ಕಾರದಲ್ಲಿ ಚುರುಕಾದ ಇಕ್ಬಾಲ್ ಹುಸೇನ್; ಮಂಚನಬೆಲೆ ಜಲಾಶಯದ ಬಲ ದಂಡೆ ವೀಕ್ಷಿಸಿದ ಶಾಸಕ]]></title>
            <link>https://kannada.asianetnews.com/karnataka-districts/ramanagar-mla-iqbal-hussain-looking-at-the-right-bank-of-manchanabele-reservoir-rav/articleshow-qt9ufaa</link>
            <guid isPermaLink="true">https://kannada.asianetnews.com/karnataka-districts/ramanagar-mla-iqbal-hussain-looking-at-the-right-bank-of-manchanabele-reservoir-rav/articleshow-qt9ufaa</guid>
            <pubDate>Fri, 05 Jun 2026 12:42:24 +0530</pubDate>
            <description><![CDATA[ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಮಂಚನಬೆಲೆ ಜಲಾಶಯದ ಬಲದಂಡೆ ನಾಲೆಯ ದುಸ್ಥಿತಿಯನ್ನು ವೀಕ್ಷಿಸಿದರು. ಮುರಿದು ಬಿದ್ದ ಸ್ಲ್ಯಾಬ್&zwnj;ಗಳಿಂದಾಗಿ ನೀರು ಹರಿಯಲು ಉಂಟಾಗಿರುವ ತಡೆಯನ್ನು ನಿವಾರಿಸಿ, ರೈತರಿಗೆ ಅನುಕೂಲವಾಗುವಂತೆ ಕೂಡಲೇ ನಾಲೆ ದುರಸ್ಥಿಪಡಿಸಲು ಎಂಜಿನಿಯರ್&zwnj;ಗಳಿಗೆ ಸೂಚನೆ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01ktb9zab58fyx5t66ffz3tyc4,imgname-----------------------2026-06-05t123415.780-1780643506533.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜೂ.5)&lt;/strong&gt; ಮಂಚನಬೆಲೆ ಜಲಾಶಯದ ಬಲದಂಡೆ ನಾಲೆಯಲ್ಲಿ ನೀರು ಹರಿಯಲು ತೊಡಕಾಗಿರುವ ಸ್ಥಳವನ್ನು ಶಾಸಕ ಇಕ್ಬಾಲ್ ಹುಸೇನ್ ರವರು ಎಂಜಿನಿಯರ್ ಗಳೊಂದಿಗೆ &zwj;ವೀಕ್ಷಣೆ ಮಾಡಿದರು.&lt;/p&gt;&lt;p&gt;ಮಂಚನಬೆಲೆ ಜಲಾಶಯದ ಸನಿಹದ ಗುಡ್ಡದಲ್ಲಿ ಹಾದು ಹೋಗಿರುವ ಬಲದಂಡೆ ನಾಲೆ ಮೇಲೆ ಹಾಕಿರುವ ಸ್ಲ್ಯಾಬ್ ಗಳು ಮುರಿದು ಬಿದ್ದಿರುವುದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ನಾಲೆಯ ಸ್ಥಿತಿಗತಿ ವೀಕ್ಷಿಸಿದರು.&lt;/p&gt;&lt;p&gt;ಜಲಾಶಯದಿಂದ ಸುಮಾರು 400 ಮೀಟರ್ ವರೆಗಿನ ಬಲದಂಡೆ ನಾಲೆ ದುಸ್ಥಿತಿಯಲ್ಲಿದ್ದು, ನಾಲೆಯೊಳಗೆ ಸ್ಲ್ಯಾಬ್ ಗಳು, ಕಲ್ಲು ಮಣ್ಣು ತುಂಬಿಕೊಂಡಿದೆ. ಅದನ್ನು ತೆರವುಗೊಳಿಸಿ ನಾಲೆಯನ್ನು ದುರಸ್ಥಿ ಪಡಿಸಿದ ಬಳಿಕವಷ್ಟೇ ನೀರು ಸರಾಗವಾಗಿ ಹರಿಯಲಿದ್ದು, ಈ ಸಂಬಂಧ ಶಾಸಕರು ಮಂಚನಬೆಲೆ ಯೋಜನಾ ವಿಭಾಗದ ಎಇಇ ಉಮೇರಾ ಅವರಿಗೆ ಕೆಲ ಸೂಚನೆಗಳನ್ನು ನೀಡಿದರು.&lt;/p&gt;&lt;p&gt;ಈಗಾಗಲೇ ಕಸಬಾ ಹೋಬಳಿ ವ್ಯಾಪ್ತಿಯ ರೈತರ ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲು ಎಡದಂಡೆ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಅದೇ ರೀತಿಯಲ್ಲಿ ಬಲದಂಡೆ ನಾಲೆಯನ್ನು ದುರಸ್ಥಿ ಪಡಿಸಿ ಕೂಡಲೇ ನೀರು ಹರಿಸುವಂತೆ ಶಾಸಕರು ಎಂಜಿನಿಯರ್ ಗೆ ತಾಕೀತು ಮಾಡಿದರು.&lt;/p&gt;&lt;p&gt;ಈ ಬಲ ಮತ್ತು ಎಡ ದಂಡೆ ನಾಲೆಗಳನ್ನು ಸುಮಾರು 70 ಲಕ್ಷ ರುಪಾಯಿ ವೆಚ್ಚದಲ್ಲಿ ದುರಸ್ಥಿ ಪಡಿಸಲಾಗಿದ್ದು, ಈಗಾಗಲೇ ಎಡದಂಡೆ ನಾಲೆಯಲ್ಲಿ ಸುಮಾರು 20 ಕಿ.ಮೀ.ವರೆಗೆ ನೀರು ಹರಿಯುತ್ತಿದೆ. ಬಲದಂಡೆ ನಾಲೆಯಲ್ಲಿ ಸುಮಾರು 400 ಮೀಟರ್ ವರೆಗೆ ಸಮಸ್ಯೆ ಎದುರಾಗಿದ್ದು, ಅದನ್ನು ಸರಿಪಡಿಸಿದ ಬಳಿಕವಷ್ಟೇ ಅಡೆತಡೆಯಿಲ್ಲದೆ ನಾಲೆಯಲ್ಲಿ ನೀರು ಹರಿಯಲಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.&lt;/p&gt;&lt;p&gt;ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ಸಾಗುವಳಿ ಸಮಿತಿ ಸದಸ್ಯ ಕೆ.ರವಿ, ಕೆಡಿಪಿ ಸದಸ್ಯ ಮುಕುಂದ, ಯುವ ಕಾಂಗ್ರೆಸ್ ಮುಖಂಡರಾದ ಗುರುಪ್ರಸಾದ್ , ರಂಜಿತ್ ಮತ್ತಿತರರು ಹಾಜರಿದ್ದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ramanagar-mla-iqbal-hussain-looking-at-the-right-bank-of-manchanabele-reservoir-rav/articleshow-qt9ufaa"/>
        </item>
        <item>
            <title><![CDATA[ತಾಯಿಯ ಫೋಟೋ ಹಂಚಿಕೊಂಡ ಸಿಎಂ ಡಿಕೆಶಿ: ಪೋಸ್ಟ್‌ನಲ್ಲಿ ಅಡಗಿದ್ದ ಭಾವನಾತ್ಮಕ ಕಥೆ ಏನು?]]></title>
            <link>https://kannada.asianetnews.com/gallery/politics/dk-shivakumar-emotional-speech-kanakapura-native-village-visit-gowramma-post-gvd-rn7o2pe</link>
            <guid isPermaLink="true">https://kannada.asianetnews.com/gallery/politics/dk-shivakumar-emotional-speech-kanakapura-native-village-visit-gowramma-post-gvd-rn7o2pe</guid>
            <pubDate>Sun, 07 Jun 2026 20:46:24 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹುಟ್ಟೂರಾದ ದೊಡ್ಡ ಆಲಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದರು. ಇದೇ ವೇಳೆ ತಮ್ಮ ತಾಯಿ ಗೌರಮ್ಮ ಅವರನ್ನು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kth9perfbjfbjhkewgptvg4m,imgname-k-1780844542734.png" type="image/jpeg" height="390" width="690"/>
            <content:encoded><![CDATA[&lt;p&gt;ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹುಟ್ಟೂರಾದ ದೊಡ್ಡ ಆಲಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದರು. ಇದೇ ವೇಳೆ ತಮ್ಮ ತಾಯಿ ಗೌರಮ್ಮ ಅವರನ್ನು..&lt;/p&gt;&lt;img&gt;&lt;p&gt;&lt;strong&gt;ಕನಕಪುರ (ಜೂ.07): &lt;/strong&gt;ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹುಟ್ಟೂರಾದ ದೊಡ್ಡ ಆಲಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದರು. ಇದೇ ವೇಳೆ ತಮ್ಮ ತಾಯಿ ಗೌರಮ್ಮ ಅವರನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಕೂಡ ಗಮನ ಸೆಳೆಯಿತು. ಬೆಳಗ್ಗಿನಿಂದ ಕನಕಪುರ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಾಯಿ ಗೌರಮ್ಮ ಅವರೊಂದಿಗಿನ ಹಳೆಯ ಫೋಟೋವನ್ನು ಹಂಚಿಕೊಂಡು, &quot;ಬದುಕಿನ ಸಮರದಲ್ಲಿ ನಾನು ಗೆದ್ದ ಪ್ರತಿಯೊಂದು ಪ್ರಶಸ್ತಿಯೂ ಅವಳ ತ್ಯಾಗಕ್ಕೆ ಸಂದ ಗೌರವ. ನನ್ನ 'ಗೌರ'ವವ'ಮ್ಮ'&quot; ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ದೊಡ್ಡ ಆಲಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, &quot;ಇಂದು ದೊಡ್ಡ ಆಲಹಳ್ಳಿಯ ಇತಿಹಾಸದಲ್ಲಿ ವಿಶೇಷ ದಿನ. ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಆಗಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಇದು ನನಗೊಬ್ಬನಿಗೆ ಸಿಕ್ಕ ಗೌರವವಲ್ಲ, ಇಡೀ ಕನಕಪುರ ಹಾಗೂ ದೊಡ್ಡ ಆಲಹಳ್ಳಿ ಜನತೆಗೆ ಸಿಕ್ಕ ಗೌರವ&quot; ಎಂದು ಹೇಳಿದರು.&lt;/p&gt;&lt;img&gt;&lt;p&gt;&quot;ಸಾಕಷ್ಟು ಜನರು ತ್ಯಾಗ ಮಾಡಿದ್ದಾರೆ, ಆಶೀರ್ವಾದ ನೀಡಿದ್ದಾರೆ. ನಾನು ಇಲ್ಲಿ ಮುಖ್ಯಮಂತ್ರಿ ಆಗಿ ಬಂದಿಲ್ಲ, ನಿಮ್ಮ ಮನೆಯ ಮಗನಾಗಿ, ನಿಮ್ಮ ಸಹೋದರನಾಗಿ ಬಂದಿದ್ದೇನೆ&quot; ಎಂದು ಡಿಕೆಶಿ ಹೇಳಿದರು.&lt;/p&gt;&lt;img&gt;&lt;p&gt;ರಾಜಕೀಯ ಹೋರಾಟದ ದಿನಗಳನ್ನು ನೆನಪಿಸಿಕೊಂಡ ಅವರು, &quot;ಬಿಜೆಪಿಯವರು ನನ್ನನ್ನು ಜೈಲಿಗೆ ಕಳುಹಿಸಿದರು. ಆದರೂ ನೀವು ಹರಿಕೆ ಕಟ್ಟಿಕೊಂಡು ಆಶೀರ್ವಾದ ಮಾಡಿದ್ದೀರಿ. ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್&zwnj;ಗೆ 136 ಸ್ಥಾನಗಳು ಬಂದವು. ಅಧಿಕಾರ ಹಸ್ತಾಂತರ ಸ್ವಲ್ಪ ತಡವಾದರೂ ಅಂತಿಮವಾಗಿ ಜನರ ಆಶಯ ಗೆದ್ದಿದೆ&quot; ಎಂದು ಹೇಳಿದರು.&lt;/p&gt;&lt;img&gt;&lt;p&gt;ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಎಲ್ಲರನ್ನೂ ಒಗ್ಗೂಡಿಸುವ ಸಂದೇಶ ನೀಡಿದ ಸಿಎಂ, &quot;ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೂ ನನ್ನ ಮನೆ ಬಾಗಿಲು ಸದಾ ತೆರೆದಿದೆ. ರಾಜಕೀಯ ಬೇರೆ, ಜನರ ಅಭಿವೃದ್ಧಿ ಬೇರೆ&quot; ಎಂದು ಹೇಳಿದರು.&lt;/p&gt;&lt;img&gt;&lt;p&gt;ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡಿದ ಅವರು, &quot;ಸುಮಾರು ₹800 ಕೋಟಿ ವೆಚ್ಚದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ. ನಿಮ್ಮ ಋಣವನ್ನು ನಾನು ಧರ್ಮದಿಂದ ತೀರಿಸುತ್ತೇನೆ. ಈ ಊರು ಹಿಂದೆ ಹೇಗಿತ್ತು, ಈಗ ಹೇಗಿದೆ ಎಂಬುದು ನಿಮಗೆ ಗೊತ್ತಿದೆ. ಊರಿಗೆ ಬೇಕಾದ ಅನೇಕ ಮೂಲಸೌಕರ್ಯಗಳನ್ನು ಈಗಾಗಲೇ ಒದಗಿಸಿದ್ದೇವೆ&quot; ಎಂದು ತಿಳಿಸಿದರು.&lt;/p&gt;&lt;img&gt;&lt;p&gt;&quot;ರಸ್ತೆ ಅಗಲೀಕರಣ ವೇಳೆ ಕೆಲವರಿಗೆ ತೊಂದರೆ ಆಗಿರಬಹುದು. ಆದರೆ ಇಂದು ಅದೇ ಅಭಿವೃದ್ಧಿಗೆ ಕಾರಣವಾಗಿದ್ದು, ಆಸ್ತಿ ಮೌಲ್ಯ ಹೆಚ್ಚಳಕ್ಕೂ ಸಹಕಾರಿಯಾಗಿದೆ&quot; ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಹುಟ್ಟೂರಿನ ಜನರ ಆಶೀರ್ವಾದ ಮತ್ತು ಬೆಂಬಲವೇ ತಮ್ಮ ರಾಜಕೀಯ ಬದುಕಿನ ಶಕ್ತಿ ಎಂದು ಹೇಳಿದ ಮುಖ್ಯಮಂತ್ರಿ, ಜನರ ಗೌರವ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/politics/dk-shivakumar-emotional-speech-kanakapura-native-village-visit-gowramma-post-gvd-rn7o2pe"/>
        </item>
    </channel>
</rss>
