<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 13 Sep 2026 07:18:18 +0530</lastBuildDate>
        <atom:link href="https://kannada.asianetnews.com/rss/ramanagara" rel="self" type="application/rss+xml"/>
        <item>
            <title><![CDATA[ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?]]></title>
            <link>https://kannada.asianetnews.com/karnataka-districts/hd-deve-gowda-and-hdk-join-forces-against-congress-over-bidadi-township-land-acquisition-gdp-videoshow-4wewhv1</link>
            <guid isPermaLink="true">https://kannada.asianetnews.com/karnataka-districts/hd-deve-gowda-and-hdk-join-forces-against-congress-over-bidadi-township-land-acquisition-gdp-videoshow-4wewhv1</guid>
            <pubDate>Wed, 15 Jul 2026 17:56:36 +0530</pubDate>
            <description><![CDATA[&lt;p&gt;ಬಿಡದಿ &amp;nbsp; ಟೌನ್&zwnj;ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯು ತೀವ್ರಗೊಂಡಿದ್ದು, ಇದನ್ನು ವಿರೋಧಿಸಿದ ರೈತರ ಮೇಲೆ ಪೊಲೀಸರು 'ಕೊಲೆ ಯತ್ನ' ಪ್ರಕರಣ ದಾಖಲಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರೈತರ ಪರ ಹೋರಾಟಕ್ಕಿಳಿದಿದ್ದಾರೆ&lt;/p&gt;]]></description>
            <media:content url="https://geo.dailymotion.com/player/x1tbu.html?video=xapfbf6" medium="video" height="768" width="1024"/>
            <content:encoded><![CDATA[&lt;p&gt;ರಾಮನಗರ/ಬೆಂಗಳೂರು: ಬಿಡದಿ ಸ್ಮಾರ್ಟ್ ಸಿಟಿ ಟೌನ್&zwnj;ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯು ಈಗ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಭೂಸ್ವಾಧೀನವನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ಪೊಲೀಸರು 'ಕೊಲೆ ಯತ್ನ'ದಂತಹ ಗಂಭೀರ ಪ್ರಕರಣಗಳನ್ನು ದಾಖಲಿಸುತ್ತಿದ್ದಂತೆ, ಬಿಡದಿಯ ಭೂ ಹೋರಾಟಕ್ಕೆ ರಾಜಕೀಯ ಬಣ್ಣ ಬಂದಿದೆ. ರೈತರ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಂಟಿ ಹೋರಾಟಕ್ಕೆ ಧುಮುಕಿದ್ದು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಗಾಗಿ ಭೂಮಿ ಸರ್ವೆ ಮಾಡಲು ಹೋದ ಜಲಮಂಡಳಿ ಮತ್ತು ಕಂದಾಯ ಅಧಿಕಾರಿಗಳ ತಂಡವನ್ನು ರೈತರು ಅಡ್ಡಗಟ್ಟಿದಾಗ ಗಲಾಟೆ ಆರಂಭವಾಗಿದೆ. ರಾಮನಗರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಮುರಳಿ ನೀಡಿದ ದೂರಿನ ಆಧಾರದ ಮೇಲೆ ಬಿಡದಿ ಪೊಲೀಸರು ರೈತರ ವಿರುದ್ಧ 2 ಪ್ರತ್ಯೇಕ ಎಫ್&zwnj;ಐಆರ್ ದಾಖಲಿಸಿದ್ದಾರೆ.&lt;/p&gt;&lt;p&gt;ಭೂಸ್ವಾಧೀನದ ಪರವಾಗಿರುವ ರೈತರ ಜಮೀನಿನ ಸರ್ವೆಗೆ ಅಧಿಕಾರಿಗಳು ಹೋದಾಗ, ಯೋಜನೆಯನ್ನು ವಿರೋಧಿಸುತ್ತಿರುವ ರೈತರು ಮತ್ತು ಮಹಿಳೆಯರು ಪೊರಕೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ನಿಮ್ಮನ್ನು ಜೀವಂತ ಬಿಡುವುದಿಲ್ಲ &amp;nbsp;ಎಂದು ಕ್ರಿಮಿನಲ್ ಬೆದರಿಕೆ ಹಾಕಿ, ಕಲ್ಲಿನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ&quot; ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;]]></content:encoded>
            <category>ramanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hd-deve-gowda-and-hdk-join-forces-against-congress-over-bidadi-township-land-acquisition-gdp-videoshow-4wewhv1"/>
        </item>
        <item>
            <title><![CDATA[ರಾಮನಗರದಲ್ಲಿ ತಯಾರಾದ ಖೋಟಾ ನೋಟು ಯಾವುದಕ್ಕೆ ಬಳಸಲಾಗ್ತಿತ್ತು ಗೊತ್ತಾ? ಪೊಲೀಸರಿಂದ ಸೀಕ್ರೆಟ್ ರಿವೀಲ್!]]></title>
            <link>https://kannada.asianetnews.com/karnataka-districts/ramanagara-fake-currency-racket-busted-seven-arrested-notes-used-to-real-estate-sat/articleshow-5inalgi</link>
            <guid isPermaLink="true">https://kannada.asianetnews.com/karnataka-districts/ramanagara-fake-currency-racket-busted-seven-arrested-notes-used-to-real-estate-sat/articleshow-5inalgi</guid>
            <pubDate>Thu, 03 Sep 2026 09:01:00 +0530</pubDate>
            <description><![CDATA[&lt;p&gt;ರಾಮನಗರದ ಶಾಂತಿಲಾಲ್ ಬಡಾವಣೆಯಲ್ಲಿ ಖೋಟಾ ನೋಟು ತಯಾರಿಸುತ್ತಿದ್ದ ಅಡ್ಡೆ ಮೇಲೆ ದಿಢೀರ್ ದಾಳಿ! ₹5 ಲಕ್ಷ ಮೌಲ್ಯದ ನಕಲಿ ನೋಟು ಸಿದ್ಧಪಡಿಸುತ್ತಿದ್ದ 7 ಆರೋಪಿಗಳನ್ನು ಐಜೂರು ಪೊಲೀಸರು ಬಂಧಿಸಿದ್ದಾರೆ. ಆದರೆ, ಖೋಟಾ ನೋಟು ಎಲ್ಲಿ ಬಳಕೆಯಾಗ್ತಿತ್ತು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1jn11wmf6b3bz2fgchenf03,imgname-ramanagara-fake-currency-printing-1788406171540.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಸೆ.03): ರೇ&lt;/strong&gt;ಷ್ಮೆ ನಗರಿ ರಾಮನಗರದಲ್ಲಿ ಭಾರೀ ಖೋಟಾ ನೋಟು ದಂಧೆಯೊಂದು ಬಯಲಾಗಿದೆ. ನಗರದ ನಿರ್ಮಾಣ ಹಂತದ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿರುವ ಪೊಲೀಸರು, ₹5 ಲಕ್ಷ ಮುಖಬೆಲೆಯ ನಕಲಿ ನೋಟು ತಯಾರಿಸಲು ಸಿದ್ಧಪಡಿಸಲಾಗಿದ್ದ 10 ಪೇಪರ್ ಬಂಡಲ್&zwnj;ಗಳನ್ನು ವಶಪಡಿಸಿಕೊಂಡು, ಜಾಲದಲ್ಲಿದ್ದ 7 ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಆದರೆ, ಈ ಹಣ ಎಲ್ಲಿಗೆ ಬಳಕೆ ಆಗ್ತಿತ್ತು ಗೊತ್ತಾ? ಇಲ್ಲಿದೆ ಮಾಹಿತಿ.&lt;/p&gt;&lt;p&gt;ನಗರದ ಶಾಂತಿಲಾಲ್ ಲೇಔಟ್&zwnj;ನಲ್ಲಿ ಈ ಅಕ್ರಮ ದಂಧೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ನಗರ ವೃತ್ತ ಆರಕ್ಷಕ ನಿರೀಕ್ಷಕ (ಸಿಪಿಐ) ರಮೇಶ್ ಅವರ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಸ್ಥಳದಲ್ಲಿದ್ದ ಆರೋಪಿಗಳು ₹200 ಮತ್ತು ₹500 ಮುಖಬೆಲೆಯ ನಕಲಿ ನೋಟುಗಳಿಗೆ ಪೇಪರ್ ತಯಾರಿಸುತ್ತಿದ್ದಾಗ ರೆಡ್&zwnj;ಹ್ಯಾಂಡ್&zwnj; ಆಗಿ ಸಿಕ್ಕಿಬಿದ್ದಿದ್ದಾರೆ.&lt;/p&gt;&lt;h2&gt;&lt;strong&gt;ಬಂಧಿತ ಆರೋಪಿಗಳು ಯಾರು?&lt;/strong&gt;&lt;/h2&gt;&lt;p&gt;ಮನೆ ಮಾಲೀಕ ಸಂತೋಷ್, ಜಾಲದ ಸೂತ್ರಧಾರ ಸಂಪತ್, ಗೋವಿಂದರಾಜು, ರೇಣುಕಾರಾಜ್, ರಾಜೇಶ್, ಶಿವರಾಜ್ ಹಾಗೂ ಸತೀಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಹಲವರು ಸ್ಥಳೀಯರೇ ಆಗಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಕಮಿಷನ್ ಆಸೆಗೆ ಬಿದ್ದು ಮನೆ ಕೊಟ್ಟಿದ್ದ ಮಾಲೀಕ!&lt;/strong&gt;&lt;/h2&gt;&lt;p&gt;ಮನೆ ಮಾಲೀಕ ಸಂತೋಷ್ ಮೂಲತಃ ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದವನು. ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಈತ, ಆ ಹಣದಲ್ಲಿ ಜಾಗ ಖರೀದಿಸಿ ಶಾಂತಿಲಾಲ್ ಲೇಔಟ್&zwnj;ನಲ್ಲಿ ಮನೆ ಕಟ್ಟಿಸುತ್ತಿದ್ದ. ಈತನ ಬಳಿ ಬಂದ ಆರೋಪಿ ಸಂಪತ್, &lsquo;ಎಷ್ಟು ಖೋಟಾ ನೋಟುಗಳು ತಯಾರಾಗುತ್ತವೆಯೋ, ಅಷ್ಟು ಹೆಚ್ಚು ಕಮಿಷನ್ ಕೊಡುತ್ತೇವೆ&rsquo; ಎಂದು ಆಮಿಷವೊಡ್ಡಿದ್ದ. ಹಣದ ದುರಾಸೆಗೆ ಬಿದ್ದ ಸಂತೋಷ್, ಕಳೆದ 10 ದಿನಗಳಿಂದ ತನ್ನ ನಿರ್ಮಾಣ ಹಂತದ ಮನೆಯನ್ನೇ ನಕಲಿ ನೋಟುಗಳ ಅಡ್ಡೆಯನ್ನಾಗಿ ಮಾಡಲು ಜಾಗ ಬಿಟ್ಟುಕೊಟ್ಟಿದ್ದಲ್ಲದೆ, ತಾನೂ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ. ಇನ್ನು ಖೋಟಾ ನೋಟುಗಳನ್ನು ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ಸಾಮಗ್ರಿ ಖರೀದಿ ಹಾಗೂ ಕಾರ್ಮಿಕರಿಗೆ ಕೊಡಲು ಯೋಜನೆ ರೂಪಿಸಿದ್ದನು.&lt;/p&gt;&lt;h2&gt;&lt;strong&gt;ಇಲ್ಲಿ ಪೇಪರ್ ರೆಡಿ, ಫಿನಿಶಿಂಗ್ ಬೇರೆ ಕಡೆ!&lt;/strong&gt;&lt;/h2&gt;&lt;p&gt;ಪೊಲೀಸರು ದಾಳಿ ನಡೆಸಿದ ವೇಳೆ ಸುಮಾರು ₹5 ಲಕ್ಷ ಮೌಲ್ಯದ ನಕಲಿ ನೋಟು ತಯಾರಿಕೆಗೆ ಬಳಸುವ ವಿಶೇಷ ಪೇಪರ್&zwnj;ಗಳನ್ನು ಆರೋಪಿಗಳು ಸಿದ್ಧಪಡಿಸುತ್ತಿದ್ದರು. ಇಲ್ಲಿ ಕೇವಲ ಕಚ್ಚಾ ಪೇಪರ್&zwnj;ಗಳನ್ನು ಸಿದ್ಧಪಡಿಸಿ, ನಂತರ ಅದನ್ನು ಬೇರೆಡೆಗೆ ರವಾನೆ ಮಾಡಿ ಅಂತಿಮ ಮುದ್ರಣ (ಫಿನಿಶಿಂಗ್) ನೀಡುವ ವ್ಯವಸ್ಥೆ ಮಾಡಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಸ್ಥಳದಲ್ಲಿ ಟೇಬಲ್, ಪೇಪರ್ ಬಂಡಲ್&zwnj;ಗಳು, ಕೆಮಿಕಲ್, ರಾಸಾಯನಿಕ ಲೇಪಿತ ಬಟ್ಟೆ, ಗ್ಲಾಸ್ ಫಿಲ್ಮ್ ಸೇರಿದಂತೆ ನಕಲಿ ನೋಟು ತಯಾರಿಕೆಗೆ ಬಳಸುವ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ತನಿಖೆಗೆ ವಿಶೇಷ ತಂಡ ರಚನೆ: ಎಸ್ಪಿ ರೋಹನ್ ಜಗದೀಶ್&lt;/strong&gt;&lt;/h2&gt;&lt;p&gt;ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರೋಹನ್ ಜಗದೀಶ್ ಹಾಗೂ ಡಿವೈಎಸ್ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಎಸ್ಪಿ ರೋಹನ್ ಜಗದೀಶ್, &quot;ಈ ಜಾಲದ ಹಿಂದೆ ಇನ್ನಷ್ಟು ಅಂತಾರಾಜ್ಯ ಕಿಂಗ್&zwnj;ಪಿನ್&zwnj;ಗಳು ಇರುವ ಶಂಕೆ ಇದೆ. ಇಲ್ಲಿ ತಯಾರಾದ ಪೇಪರ್&zwnj;ಗಳನ್ನು ಎಲ್ಲಿಗೆ ಕಳುಹಿಸಲಾಗುತ್ತಿತ್ತು? ನಕಲಿ ನೋಟುಗಳಿಗೆ ಅಂತಿಮ ರೂಪ ನೀಡುತ್ತಿದ್ದವರು ಯಾರು? ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಪ್ರಕರಣದ ಆಳ-ಅಗಲ ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ,&quot; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಪ್ರಸ್ತುತ ಈ ಸಂಬಂಧ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/ramanagara-fake-currency-racket-busted-seven-arrested-notes-used-to-real-estate-sat/articleshow-5inalgi"/>
        </item>
        <item>
            <title><![CDATA[ತೆಂಗಿನ ಮರದಲ್ಲಿ ಬಿಟ್ಟ ಕಂದು ಬಣ್ಣದ ಹೀರೇಕಾಯಿ? ರಾಮನಗರದ ರೈತನ ತೋಟದಲ್ಲಿ ವಿಸ್ಮಯ! ಏನಿದು]]></title>
            <link>https://kannada.asianetnews.com/karnataka-districts/ridge-gourd-style-coconut-in-ramanagara-due-to-lack-of-water-gone-viral-suc/articleshow-7e2smqw</link>
            <guid isPermaLink="true">https://kannada.asianetnews.com/karnataka-districts/ridge-gourd-style-coconut-in-ramanagara-due-to-lack-of-water-gone-viral-suc/articleshow-7e2smqw</guid>
            <pubDate>Wed, 26 Aug 2026 20:11:30 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಬರಗಾಲದಿಂದ ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ಇದರ ನಡುವೆ, ರಾಮನಗರದ ಲಿಂಗೇಗೌಡದೊಡ್ಡಿಯ ರೈತ ಶಿವಣ್ಣ ಅವರ ತೋಟದಲ್ಲಿ ಹೀರೇಕಾಯಿಯಂತೆ ಉದ್ದವಾದ ವಿಚಿತ್ರ ತೆಂಗಿನಕಾಯಿ ಬೆಳೆದು ಅಚ್ಚರಿ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0z893y5w1mt8r8kag690m5d,imgname-coconut-1787755270084.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಮನಗರ: ಈ ಬಾರಿ ಎಲ್ಲೆಲ್ಲೂ ಬರ. ಬರಗಾಲದಿಂದ ಜನರು ತತ್ತರಿಸಿ ಹೋಗಿದ್ದಾರೆ. ಕೆಲವು ದೇಶಗಳಲ್ಲಿ ಪ್ರವಾಹದಿಂದ ಅಸಂಖ್ಯ ಜನರು ಸಾವಿಗೀಡಾಗಿದ್ದರೆ, ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮಳೆಯೇ ಇಲ್ಲ. ನೈಸರ್ಗಿಕ ವಿಕೋಪದಿಂದಾಗಿ, ಅಗತ್ಯ ವಸ್ತುಗಳು ಕೂಡ ಗಗನಕ್ಕೆ ಏರುತ್ತಿವೆ. ಇನ್ನು ತೆಂಗಿನ ಕಾಯಿ ಬೆಲೆ ಕೂಡ ವಿಪರೀತ ಹೆಚ್ಚಾಗಿದೆ. ಒಂದೆಡೆ ಮಳೆಯ ಕೊರತೆ, ಇನ್ನೊಂದೆಡೆ ನುಸಿಪೀಡೆ ಸಮಸ್ಯೆ ಇವುಗಳಿಂದ ತೆಂಗಿನ ಮರಕ್ಕೆ ಭಾರಿ ಹೊಡೆತ ಬಿದ್ದಿದೆ. ತೆಂಗಿನ ಮರ ಮಾತ್ರವಲ್ಲದೇ ಅಡಕೆ ಬೆಳೆಗಾರರೂ ತತ್ತರಿಸಿಹೋಗಿದ್ದಾರೆ. ಅಷ್ಟೇ ಅಲ್ಲದೇ, ತೋಟ, ಹೊಲಗಳಿಗೆ ನೀರು ಇಲ್ಲದೇ ಜನರು ಆಕಾಶದತ್ತ ಮುಖ ಮಾಡುವಂತಾಗಿದೆ.&lt;/p&gt;&lt;h2&gt;&lt;strong&gt;ತೆಂಗಿನಕಾಯಿ ಬೆಲೆ ಗಗನಕ್ಕೆ&lt;/strong&gt;&lt;/h2&gt;&lt;p&gt;ಕರ್ನಾಟಕದಲ್ಲಿ ಪ್ರಸ್ತುತ ತೆಂಗಿನಕಾಯಿ ಸರಾಸರಿ ಸಗಟು ಬೆಲೆಯು ಪ್ರತಿ ಕ್ವಿಂಟಾಲ್&zwnj;ಗೆ ಸುಮಾರು ₹23,200 ಇದೆ.ಪ್ರತಿ ತೆಂಗಿನಕಾಯಿಗೆ ಮಾರುಕಟ್ಟೆ ಹಾಗೂ ಗಾತ್ರದ ಆಧಾರದ ಮೇಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ₹25 ರಿಂದ ₹45 ವರೆಗೆ ಇದೆ. ಆದರೆ 45 ರೂಪಾಯಿ ತೆಂಗಿನ ಕಾಯಿ ಸರಿಯಾಗಿ ಬಳಸಿದರೆ ಒಂದು ದಿನಕ್ಕೂ ಸಾಕಾಗುವುದಿಲ್ಲ ಎನ್ನುವ ರೀತಿಯಲ್ಲಿ ಚಿಕ್ಕದಾಗಿದೆ. ಇನ್ನು 25-30 ರೂಪಾಯಿಗಳ ತೆಂಗಿನಕಾಯಿಯಂತೂ ಹೇಳುವುದೇ ಬೇಡ ಬಿಡಿ!&lt;/p&gt;&lt;h3&gt;&lt;strong&gt;ಹೀರೇಕಾಯಿ ರೂಪ ಪಡೆದ ತೆಂಗಿನಕಾಯಿ&lt;/strong&gt;&lt;/h3&gt;&lt;p&gt;ಇದರ ನಡುವೆಯೇ, ರಾಮನಗರದಲ್ಲೊಂದು ವಿಸ್ಮಯ ನಡೆದಿದೆ. ಲಿಂಗೇಗೌಡದೊಡ್ಡಿಯ ರೈತ ಶಿವಣ್ಣ ಅವರ ತೋಟದ ತೆಂಗಿನಮರವೊಂದರಲ್ಲಿ ಹೀರೇಕಾಯಿಯ ಮಾದರಿಯಲ್ಲಿ ಉದ್ದನೆಯ ತೆಂಗಿನಕಾಯಿ ಬೆಳೆದಿದೆ. ಅಷ್ಟಕ್ಕೂ ಇದು ನೀರಿನ ಕೊರತೆಯಿಂದ ಹೀಗೆ ಆಗಿದ್ದಿರಬಹುದು.&lt;/p&gt;&lt;p&gt;ಆದರೆ ನೋಡಲು ಇದು ಹೀರೇಕಾಯಿಯನ್ನು ಹೋಲುವ ರೀತಿಯಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ಮೊದಲ ಬಾರಿಗೆ ತಮ್ಮ ತೋಟದಲ್ಲಿ ಈ ರೀತಿಯ ತೆಂಗಿನಕಾಯಿ ದೊರೆತಿದ್ದು, ಇದನ್ನು ನೋಡಿದಾಗ ತಮಗೂ ಅಚ್ಚರಿಯಾಯಿತು ಎಂದು ಶಿವಣ್ಣ ತಿಳಿಸಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/ridge-gourd-style-coconut-in-ramanagara-due-to-lack-of-water-gone-viral-suc/articleshow-7e2smqw"/>
        </item>
        <item>
            <title><![CDATA[ರೇಷ್ಮೆಗೂಡಿಗೆ ಬಂಪರ್ ಬೆಲೆ: ಕೆಜಿಗೆ 1100 ರು. ಹೊಸ ದಾಖಲೆ; ಬೆಲೆ ಏರಿಕೆಗೆ ಕಾರಣ ಏನು?]]></title>
            <link>https://kannada.asianetnews.com/karnataka-districts/the-price-of-double-bred-cocoons-in-the-ramanagara-silkworm-market-has-reached-a-new-record-of-rs-1100-per-kg-mrq/articleshow-bdcppnx</link>
            <guid isPermaLink="true">https://kannada.asianetnews.com/karnataka-districts/the-price-of-double-bred-cocoons-in-the-ramanagara-silkworm-market-has-reached-a-new-record-of-rs-1100-per-kg-mrq/articleshow-bdcppnx</guid>
            <pubDate>Thu, 03 Sep 2026 06:29:52 +0530</pubDate>
            <description><![CDATA[ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದ್ವಿತಳಿ ಗೂಡಿನ ದರ ಪ್ರತಿ ಕೆ.ಜಿಗೆ 1,100 ರೂ. ತಲುಪಿ ಹೊಸ ದಾಖಲೆ ಬರೆದಿದೆ. ಮಿಶ್ರತಳಿ ಗೂಡಿಗೂ ಗರಿಷ್ಠ 881 ರೂ. ಬೆಲೆ ಬಂದಿದ್ದು, ಮಳೆ ಕೊರತೆಯಿಂದ ಆವಕ ಕಡಿಮೆಯಾಗಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಈ ಅನಿರೀಕ್ಷಿತ ಧಾರಣೆಯಿಂದ ರೇಷ್ಮೆ ಬೆಳೆಗಾರರಲ್ಲಿ ಸಂತಸ ಮನೆಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1jca9dhbpcgdpkfj1r61z8j,imgname--silk-worm-1788397036977.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಂ.ಅಫ್ರೋಜ್ ಖಾನ್&amp;nbsp;&lt;/strong&gt;&lt;/p&gt;&lt;p&gt;&lt;strong&gt;ರಾಮನಗರ&lt;/strong&gt;: ಮೂರು ದಿನಗಳ ಹಿಂದೆ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ 1025 ರು.ಗೆ ಮಾರಾಟವಾಗಿದ್ದ ದ್ವಿತಳಿ (ಬೈವೋಲ್ಟಿನ್) ಗೂಡಿನ ದರ ಬುಧವಾರ 1,100 ರುಪಾಯಿಗೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆಯಿತು. ಮಿಶ್ರತಳಿ ಗೂಡಿಗೂ ಬಂಪರ್ ಬೆಲೆ ಬಂದಿದ್ದು ಪ್ರತಿ ಕೆ.ಜಿ.ಗೆ ಗರಿಷ್ಠ 881 ರು.ಗೆ ಮಾರಾಟವಾಯಿತು.&lt;/p&gt;&lt;p&gt;ಇದೀಗ ರೇಷ್ಮೆಗೂಡಿಗೆ ಬಂಗಾರದ ಬೆಲೆ ಬಂದಿದ್ದು, ಕಳೆದ ಒಂದು ವಾರದಿಂದ ಏರುಗತಿಯಲ್ಲಿರುವ ಧಾರಣೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕಳೆದ ಒಂದು ತಿಂಗಳಿಂದ 900 ರು. ಗಡಿಯ ಆಸುಪಾಸಿನಲ್ಲಿದ್ದ ದ್ವಿತಳಿ ದರ 3 ದಿನಗಳ ಹಿಂದೆ 1025 ರು.ಗಳ ಗಡಿ ದಾಟಿತ್ತು. ಇಂದು 1100 ರುಪಾಯಿಗಳಿಗೆ ತಲುಪಿ ಬಿಕರಿಯಾಗಿದೆ. ಅದೇ ರೀತಿ, ಮಿಶ್ರತಳಿ ದರ ಕೂಡ ಏರುಗತಿಯಲ್ಲಿ ಸಾಗುತ್ತಿದೆ. ಕಳೆದೊಂದು ತಿಂಗಳಿಂದ ಪ್ರತಿ ಕೆಜಿಗೆ ಗರಿಷ್ಠ 600ಕ್ಕೆ ಮಾರಾಟವಾಗುತ್ತಿದ್ದ ಗೂಡು, ಕಳೆದ ಮೂರು ದಿನಗಳಿಂದ 806 ರಿಂದ 810ರ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಅದೂ ಕೂಡ 881 ರು.ಗಳ ಬೆಲೆ ಮಾರಾಟವಾಗಿದೆ. ಎರಡೂ ತಳಿಯ ಗೂಡುಗಳಿಗೆ ಉತ್ತಮ ದರ ಸಿಕ್ಕಿರುವುದು ಬೆಳೆಗಾರರು ಸಂತಸಗೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಬೆಲೆ ಏರಿಕೆ ಏಕೆ?&lt;/strong&gt;&lt;/h2&gt;&lt;p&gt;ಮಳೆ ಕೊರತೆಯಿಂದಾಗಿ ಆವಕ ಕಡಿಮೆಯಾಗಿರುವುದೇ ಬೆಲೆ ಹೆಚ್ಚಳಕ್ಕೆ ಕಾರಣ. ಮೊದಲು 500-600 ಲಾಟ್&zwnj;ಗಳು ಬರುತ್ತಿದ್ದವು. ಇದೀಗ 330- 360 ಲಾಟ್&zwnj;ಗಳು ಮಾತ್ರ ಬರುತ್ತಿವೆ. ರಾಜ್ಯದಿಂದ ಮಾತ್ರವಲ್ಲದೆ ನೆರೆಯ ತಮಿಳುನಾಡಿನಿಂದ 30-40, ಆಂಧ್ರದಿಂದಲೂ 2-3, ಮಹಾರಾಷ್ಟ್ರ, ಕೇರಳದಿಂದಲೂ 2-3 ಲಾಟ್&zwnj;ಗಳಷ್ಟು ರೇಷ್ಮೆಗೂಡು ಬರುತ್ತಿದೆ.&lt;/p&gt;&lt;p&gt;ಮಾರುಕಟ್ಟೆಗೆ ಬರುತ್ತಿರುವ ರೇಷ್ಮೆಗೂಡಿನ ಪ್ರಮಾಣ ಕಡಿಮೆಯಾಗಿದೆ. ಇನ್ನೊಂದೆಡೆ ಕಚ್ಚಾ ರೇಷ್ಮೆ ಬೆಲೆಯೂ ಏರಿಕೆಯಾಗಿರುವುದರಿಂದ ರೇಷ್ಮೆಗೂಡಿಗೆ ಬೇಡಿಕೆ ಬಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ ಒಳ್ಳೆಯ ಬೆಲೆ ಸಿಗುತ್ತಿದೆ. ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.&lt;/p&gt;&lt;p&gt;ಬಿರು ಬಿಸಿಲಿನಿಂದ ರೇಷ್ಮೆ ಬೆಳೆಯುವುದು ಕಷ್ಟ. ಹೆಚ್ಚಿನ ಇಳುವರಿಯೂ ಬಾರದ ಕಾರಣ ಮಾರುಕಟ್ಟೆಗೆ ಹೆಚ್ಚಿನ ಗೂಡು ಬರುತ್ತಿಲ್ಲ. ಗೂಡಿನ ಕೊರತೆಯಿಂದಲೇ ಕಚ್ಚಾ ರೇಷ್ಮೆ ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ರೇಷ್ಮೆಗೂಡು ಬಾರದ ಕಾರಣ ದಿನೇದಿನೆ ಬೆಲೆ ಏರಿಕೆಯಾಗುತ್ತಿದೆ ಎಂದು ರೇಷ್ಮೆಗೂಡು ಮಾರುಕಟ್ಟೆಯ ಉಪ ನಿರ್ದೇಶಕ ಕೈಲಾಸಮೂರ್ತಿ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.&lt;/p&gt;&lt;h3&gt;&lt;strong&gt;ಸೊಪ್ಪಿಗೂ ರೋಗ&lt;/strong&gt;&lt;/h3&gt;&lt;p&gt;ಮತ್ತೊಂದೆಡೆ ಹಿಪ್ಪು ನೇರಳೆ ಸೊಪ್ಪು ಭಾರಿ ಸೂಕ್ಷ್ಮವಾಗಿದ್ದು ರೋಗಗಳ ಹಾವಳಿ ಹೆಚ್ಚಾಗಿದೆ. ನೀರಿನ ಕೊರತೆಯಿಂದ ಸೊಪ್ಪನ್ನು ಬೆಳೆಯುವುದೇ ಕಷ್ಟವಾಗಿದೆ. ಸೊಪ್ಪಿನ ಕೊರತೆಯೂ ಹೆಚ್ಚಿರುವುದರಿಂದ ಬೆಲೆಯೂ ದುಬಾರಿಯಾಗಿದೆ. ತೋಟಗಾರಿಕೆ ಬೆಳೆಗಳ ಆರ್ಭಟದಲ್ಲಿ ರೇಷ್ಮೆ ಕೃಷಿಯ ವಿಸ್ತೀರ್ಣವೂ ದಿನೇ ದಿನೆ ಕಡಿಮೆಯಾಗುತ್ತಿದೆ. ಹಿಪ್ಪುನೇರಳೆ ಸೊಪ್ಪು ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ರೇಷ್ಮೆಗೂಡಿನ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ತೋಟಗಾರಿಕೆ ಬೆಳೆಗಳ ಕಡೆ ಮುಖ ಮಾಡಿದ್ದ ರೈತರು ಈಗ ಮತ್ತೊಮ್ಮೆ ರೇಷ್ಮೆ ಕೃಷಿಯತ್ತ ಚಿತ್ತ ಹರಿಸುವಂತಾಗಿದೆ.&lt;/p&gt;&lt;h3&gt;&lt;strong&gt;ಆನ್&zwnj;ಲೈನ್ ಬಿಟ್ಟಿಂಗ್-ಕಟ್ಟುನಿಟ್ಟಿನ ಕ್ರಮ&lt;/strong&gt;&lt;/h3&gt;&lt;p&gt;ಏಷ್ಯಾದ ಅತಿದೊಡ್ಡ ರೇಷ್ಮೆಗೂಡು ಮಾರುಕಟ್ಟೆಯಾದ ರಾಮನಗರ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿನ ಹರಾಜು ಪ್ರಕ್ರಿಯೆ ಸಂಪೂರ್ಣ ಆನ್&zwnj;ಲೈನ್&zwnj;ನಲ್ಲಿ ನಡೆಯಲಿದೆ. ಆನ್&zwnj;ಲೈನ್ ಬಿಟ್ಟಿಂಗ್&zwnj;, ಸಿಸಿ ಟಿವಿ ಕ್ಯಾಮರಾ ಕಣ್ಣಾವಲು, ಸುಧಾರಿತ ತಂತ್ರಜ್ಞಾನಗಳಿಂದಾಗಿ ರೇಷ್ಮೆ ಗೂಡಿನ ಮಾರುಕಟ್ಟೆಯ ಎಲ್ಲಾ ವ್ಯವಹಾರಗಳು ಆಧುನಿಕ ತಂತ್ರಜ್ಞಾನದ ಸಹಾಯದಿಂದ ನಡೆಯುತ್ತಿದೆ. ಹಾಗೂ ರೈತ ಸ್ನೇಹಿ ವ್ಯವಸ್ಥೆಯನ್ನು ಮಾರುಕಟ್ಟೆಯಲ್ಲಿ ಅಳವಡಿಸಿಕೊಂಡಿರುವುದು ರೈತರಿಗೆ ಉತ್ತಮ ಬೆಲೆ ಸಿಗುವುದಕ್ಕೆ ಕಾರಣ ಎನ್ನುತ್ತಾರೆ ಮಾರುಕಟ್ಟೆ ಅಧಿಕಾರಿಗಳು.&lt;/p&gt;&lt;p&gt;ಐದು ವರ್ಷದ ಬಳಿಕ ಪ್ರತಿ ಕೆ.ಜಿಗೆ 1025 ರು.ಗಳಿಗೆ ತಲುಪಿದ್ದ ದ್ವಿತಳಿ ರೇಷ್ಮೆಗೂಡಿನ ದರ ಪ್ರತಿ 1100 ರುಪಾಯಿ ತಲುಪಿದೆ. ಮಿಶ್ರತಳಿ ದರವು 881 ರುಪಾಯಿಗೆ ಮುಟ್ಟಿದೆ. ಮುಂದೆ ಮತ್ತಷ್ಟು ದರ ಏರಿಕೆಯಾಗುವ ನಿರೀಕ್ಷೆ ಇದೆ.&lt;/p&gt;&lt;p&gt;ಕೈಲಾಸಮೂರ್ತಿ, ಉಪ ನಿರ್ದೇಶಕ, ರಾಮನಗರ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/the-price-of-double-bred-cocoons-in-the-ramanagara-silkworm-market-has-reached-a-new-record-of-rs-1100-per-kg-mrq/articleshow-bdcppnx"/>
        </item>
        <item>
            <title><![CDATA[ಬಿಡದಿ ಟೌನ್‌ಶಿಪ್ ಕೈಬಿಡದಿದ್ದರೆ ವಿಧಾನ ಸೌಧದ ಮುಂದೆ ಧರಣಿ ಕೂರುವೆ: ಮಾಜಿ ಪ್ರಧಾನಿ ಗೌಡರಿಂದ ಸರ್ಕಾರಕ್ಕೆ ಎಚ್ಚರಿಕೆ]]></title>
            <link>https://kannada.asianetnews.com/karnataka-districts/i-will-protest-at-vidhana-soudha-former-pm-hd-deve-gowda-over-bidadi-township-project-gdp/articleshow-bl9ve2k</link>
            <guid isPermaLink="true">https://kannada.asianetnews.com/karnataka-districts/i-will-protest-at-vidhana-soudha-former-pm-hd-deve-gowda-over-bidadi-township-project-gdp/articleshow-bl9ve2k</guid>
            <pubDate>Tue, 14 Jul 2026 18:02:39 +0530</pubDate>
            <description><![CDATA[ಬಿಡದಿ ಉಪನಗರ ಯೋಜನೆಯ ಭೂಸ್ವಾಧೀನವನ್ನು ವಿರೋಧಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಯೋಜನೆ ಕೈಬಿಡದಿದ್ದರೆ ವಿಧಾನಸೌಧದ ಬಳಿ ಧರಣಿ ಕೂರುವುದಾಗಿ ಎಚ್ಚರಿಸಿರುವ ಅವರು, ಇದು ₹20,000 ಕೋಟಿಯ ಯೋಜನೆಯಾಗಿದ್ದು, ಬಡ ರೈತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxg9pnr9t5d3ygnqy28kwg1x,imgname-hd-devegowda-1784032220937.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಬಿಡದಿ ಉಪನಗರ (ಟೌನ್&zwnj;ಶಿಪ್) ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ಭಾಗದ ರೈತರು ನಡೆಸುತ್ತಿರುವ ಹೋರಾಟಕ್ಕೆ ಈಗ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ನೇರವಾಗಿ ಧುಮುಕಿದ್ದಾರೆ. ಬಿಡದಿ ಯೋಜನೆಯನ್ನು ತಕ್ಷಣವೇ ಕೈಬಿಡದಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ತಾವೇ ಖುದ್ದಾಗಿ ಧರಣಿ ಕೂರುವುದಾಗಿ ದೇವೇಗೌಡರು ತೀವ್ರ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ವಿವರಗಳನ್ನು ಬಹಿರಂಗಪಡಿಸಿದರು. ಬಿಡದಿ ಭಾಗದ ಬಡ ರೈತರ ಪರವಾಗಿ ಜೆಡಿಎಸ್ ಸಂಪೂರ್ಣವಾಗಿ ನಿಲ್ಲಲಿದ್ದು, ಸರ್ಕಾರದ ಮುಂದಿನ ನಿರ್ಧಾರಕ್ಕಾಗಿ 4 ರಿಂದ 5 ದಿನಗಳ ಗಡುವು ನೀಡುವುದಾಗಿ ಪ್ರಕಟಿಸಿದರು.&lt;/p&gt;&lt;h2&gt;ಪತ್ರ ಬರೆದು 20 ದಿನವಾದ್ರೂ ಹಿಂಬರಹ ನೀಡುವ ಸೌಜನ್ಯ ಸಿಎಂಗೆ ಇಲ್ಲ!&lt;/h2&gt;&lt;p&gt;ಸುದ್ದಿಗೋಷ್ಠಿಯಲ್ಲಿ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದೇವೇಗೌಡರು, &quot;ಕಳೆದ ಜೂನ್ 25 ರಂದೇ ನಾನು ಬಿಡದಿ ಉಪನಗರ ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಪತ್ರ ಬರೆದು 20 ದಿನ ಕಳೆದರೂ ಸಿಎಂ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಕನಿಷ್ಠ ಪಕ್ಷ ಪತ್ರ ತಲುಪಿದೆ ಎಂಬ ಹಿಂಬರಹ (Endorsement) ನೀಡುವ ಸೌಜನ್ಯವೂ ಸಿಎಂಗೆ ಇಲ್ಲದಂತಾಗಿದೆ. ನನಗೀಗ ಯಾವುದೇ ಅಧಿಕಾರ ಇಲ್ಲದಿರಬಹುದು, ಆದರೆ ನಾನು ಒಬ್ಬ ಮಾಜಿ ಪ್ರಧಾನಿ ಎನ್ನುವ ಕನಿಷ್ಠ ಪ್ರಜ್ಞೆಯೂ ಸರ್ಕಾರಕ್ಕೆ ಇದ್ದಂತಿಲ್ಲ. ಮುಖ್ಯಮಂತ್ರಿಗಳೂ ಕೂಡ ರೈತನ ಮಗನೇ ಆಗಿದ್ದು, ರೈತರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ನಂಬಿಕೆ ನನಗಿನ್ನೂ ಇದೆ ಎಂದರು.&lt;/p&gt;&lt;h2&gt;₹20,000 ಕೋಟಿ ಯೋಜನೆಯ ಅಸಲಿ ರಹಸ್ಯವೇನು?&lt;/h2&gt;&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಯ ಹಿಂದೆ ಬೃಹತ್ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ಗಂಭೀರ ಆರೋಪ ಮಾಡಿದ ದೇವೇಗೌಡರು, ಕಾಂಗ್ರೆಸ್ ಹೈಕಮಾಂಡ್ ಒಲಿಸಿಕೊಳ್ಳಲು ಏನೇನು ಆಶ್ವಾಸನೆಗಳನ್ನು ಕೊಟ್ಟು ಬಂದಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತು. ಆ ವ್ಯವಸ್ಥೆಯನ್ನು ಪೂರ್ಣಗೊಳಿಸಲು ಮತ್ತು ಹೈಕಮಾಂಡ್&zwnj;ಗೆ ನೀಡಿರುವ ಭರವಸೆ ಈಡೇರಿಸಲು ಈ ಬಿಡದಿ ಟೌನ್&zwnj;ಶಿಪ್ ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಬರೋಬ್ಬರಿ ₹20,000 ಕೋಟಿ ಮೊತ್ತದ ಬೃಹತ್ ಯೋಜನೆ. ಇದನ್ನು ಬಹಳ ದಿನ ಬಚ್ಚಿಡಲು ಸಾಧ್ಯವಿಲ್ಲ. ಹೈಕಮಾಂಡ್&zwnj;ಗೆ ಕೊಟ್ಟ ಆಶ್ವಾಸನೆ ಪೂರೈಸಲು ಬೇರೆ ಮಾರ್ಗಗಳು ಸಾಕಷ್ಟಿವೆ, ಅದನ್ನು ಬಳಸಿಕೊಳ್ಳಿ. ಆದರೆ ಬಡ ರೈತರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಡಿ.ಕೆ. ಶಿವಕುಮಾರ್ ಹೆಸರು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಹತ್ತಿರ ಜಮೀನು ಸರ್ವೆ ಮಾಡಲು ಜನರನ್ನು ಕಳಿಸಿರಲಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಬಂದ ಕೇವಲ ಒಂದು ತಿಂಗಳೊಳಗೆ ಇದೆಲ್ಲಾ ಯಾಕೆ ಶುರುವಾಗಿದೆ? ಇದರ ಹಿಂದಿನ ಉದ್ದೇಶವೇನು ಎಂಬುದು ಜಗಜ್ಜಾಹೀರಾಗಿದೆ ಎಂದರು.&lt;/p&gt;&lt;h2&gt;40 ಸಾವಿರ ಸೈಟುಗಳು ಖಾಲಿ ಇರುವಾಗ ಬಿಡದಿ ಮೇಲೇಕೆ ಕಣ್ಣು?&lt;/h2&gt;&lt;p&gt;ಬೆಂಗಳೂರಿನಲ್ಲಿ ಈಗಾಗಲೇ ಸಾವಿರಾರು ನಿವೇಶನಗಳು ಹಂಚಿಕೆಯಾಗದೆ ಉಳಿದಿರುವಾಗ ಹೊಸದಾಗಿ ರೈತರ ಜಮೀನು ಕಿತ್ತುಕೊಳ್ಳುವ ಅಗತ್ಯವೇನಿದೆ ಎಂದು ದೇವೇಗೌಡರು ಪ್ರಶ್ನಿಸಿದರು. ಸರ್ಕಾರದ ಹಿರಿಯ ಸಚಿವರೇ ಹೇಳಿರುವ ಪ್ರಕಾರ, ಬಿಡಿಎ ಅಭಿವೃದ್ಧಿಪಡಿಸಿರುವ ಲೇಔಟ್&zwnj;ಗಳಲ್ಲಿ 20 ಸಾವಿರಕ್ಕೂ ಹೆಚ್ಚು ನಿವೇಶನಗಳು ಖಾಲಿ ಇವೆ. ನಾಡಪ್ರಭು ಕೆಂಪೇಗೌಡ ಲೇಔಟ್ ಹಾಗೂ ಡಾ. ಶಿವರಾಮ್ ಕಾರಂತ ಲೇಔಟ್ ಸೇರಿದಂತೆ ಹೊಸ ಬಡಾವಣೆಗಳನ್ನೆಲ್ಲಾ ಸೇರಿಸಿದರೆ ಒಟ್ಟು 40 ಸಾವಿರಕ್ಕೂ ಹೆಚ್ಚು ನಿವೇಶನಗಳು ಹಂಚಿಕೆಯಾಗದೆ ಖಾಲಿ ಬಿದ್ದಿವೆ. ಪರಿಸ್ಥಿತಿ ಹೀಗಿದ್ದರೂ ಬಿಡದಿ ಟೌನ್&zwnj;ಶಿಪ್ ಮೇಲೆ ಇವರಿಗೆ ಯಾಕೆ ಇಷ್ಟೊಂದು ಕಣ್ಣು? ಎಂದು ಖಾರವಾಗಿ ಪ್ರಶ್ನಿಸಿದರು.&lt;/p&gt;&lt;h2&gt;ಸಣ್ಣ ಹಿಡುವಳಿದಾರರ ಬದುಕು ಬೀದಿಗೆ ಸುಳ್ಳು ಹೇಳ್ತಿದೆ ಸರ್ಕಾರ!&lt;/h2&gt;&lt;p&gt;ಸರ್ಕಾರ ಜಮೀನು ಸ್ವಾಧೀನದ ವಿಚಾರದಲ್ಲಿ ಸತ್ಯಾಂಶವನ್ನು ಮುಚ್ಚಿಟ್ಟು ಮಾತನಾಡುತ್ತಿದೆ ಎಂದು ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು:&lt;/p&gt;&lt;p&gt;&lt;strong&gt;2 ಸಾವಿರಕ್ಕೂ ಹೆಚ್ಚು ಸಣ್ಣ ರೈತರು:&lt;/strong&gt; ಈ ಯೋಜನೆಯಡಿ ಸುಮಾರು 2,800 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹೊರಟಿದೆ. ಈ ಭಾಗದಲ್ಲಿ ಕೇವಲ 1 ರಿಂದ 5 ಗುಂಟೆ ಜಮೀನು ಹೊಂದಿರುವ 2,000ಕ್ಕೂ ಹೆಚ್ಚು ಬಡ ಸಣ್ಣ ಹಿಡುವಳಿದಾರರಿದ್ದಾರೆ. ಆ ಭಾಗದಲ್ಲಿ ಪ್ರತಿದಿನ 50 ಸಾವಿರ ಲೀಟರ್ ಹಾಲು ಕರೆಯಲಾಗುತ್ತದೆ. ರೈತರು ಇದನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ಇವರನ್ನೆಲ್ಲಾ ಒಕ್ಕಲೆಬ್ಬಿಸಿ ಎಲ್ಲಿಗೆ ಕಳುಹಿಸುತ್ತೀರಿಯೇ? ಎಂದು ಪ್ರಶ್ನಿಸಿದರು.&lt;/p&gt;&lt;p&gt;&lt;strong&gt;17 ಎಕರೆಯ ಸುಳ್ಳು ಲೆಕ್ಕ:&lt;/strong&gt; &quot;ಕೇವಲ ಶೇ. 40 ರಷ್ಟು ಜನರು ಮಾತ್ರ ದುಡ್ಡು ಕೊಡಿ, ನಮ್ಮ ತಕರಾರಿಲ್ಲ ಎನ್ನುತ್ತಿದ್ದಾರೆ. ಅಂತಹವರ ಒಟ್ಟು ಜಮೀನು ಇರುವುದು ಕೇವಲ 17 ಎಕರೆ ಮಾತ್ರ! ಅದರಲ್ಲಿ ಉಳಿದದ್ದು ಸರ್ಕಾರದ ಗೋಮಾಳ. ಆದರೆ ಸರ್ಕಾರ ಮಾತ್ರ ಈಗಾಗಲೇ 500 ಎಕರೆ ಸ್ವಾದೀನ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದೆ. ಉಳಿದ ಬಡ ಹೆಣ್ಣುಮಕ್ಕಳು ಮತ್ತು ರೈತರು ತಮ್ಮ ಜೀವನಾಧಾರವಾದ ಭೂಮಿಯನ್ನು ಉಳಿಸಿಕೊಳ್ಳಲು ಅಧಿಕಾರಿಗಳನ್ನು ತಡೆದು ಹೋರಾಟ ಮಾಡುತ್ತಿದ್ದಾರೆ.&lt;/p&gt;&lt;p&gt;ಎಚ್&zwnj;ಡಿಕೆ ಅವಧಿಯಲ್ಲೇ ಯೋಜನೆ ಕೈಬಿಡಲಾಗಿತ್ತು: &quot;ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ನಾಯಕರೇ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಆ ಸಂದರ್ಭದಲ್ಲಿ ರೈತರ ಹಿತದೃಷ್ಟಿಯಿಂದ ಕುಮಾರಸ್ವಾಮಿಯವರು ನೋಟಿಫಿಕೇಶನ್ ಮಾಡುವುದನ್ನು ಕೈಬಿಟ್ಟಿದ್ದರು. ಆದರೆ ಈಗಿನ ಸಿಎಂ ತಾವೇನೋ ಕುಮಾರಸ್ವಾಮಿ ಮಾಡಿದ್ದನ್ನು ಮುಂದುವರಿಸುತ್ತಿರುವುದಾಗಿ ಮಾತನಾಡುತ್ತಿದ್ದಾರೆ.&lt;/p&gt;&lt;h2&gt;ರೈತರ ಮೇಲಿನ ಎಫ್&zwnj;ಐಆರ್ (FIR) ವಾಪಸ್ ಪಡೆಯಿರಿ&lt;/h2&gt;&lt;p&gt;ಬಿಡದಿಯಲ್ಲಿ ನಡೆದ ರೈತರ ಪ್ರತಿಭಟನೆಯ ವೇಳೆ ಕಲ್ಲು ತೂರಾಟ ನಡೆದು, ಇನ್ಸ್&zwnj;ಪೆಕ್ಟರ್&zwnj;ಗೆ ಸಣ್ಣ ಗಾಯವಾಗಿರುವ ಘಟನೆಗೆ ಸಂಬಂಧಿಸಿದಂತೆ ರೈತರ ಮೇಲೆ ದಾಖಲಾಗಿರುವ ಎಫ್&zwnj;ಐಆರ್ ಅನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ದೇವೇಗೌಡರು ಒತ್ತಾಯಿಸಿದರು.&quot;ನಿನ್ನೆಯ ಘಟನೆಯಿಂದಾಗಿ ಕುಮಾರಸ್ವಾಮಿ ಅವರಿಗೆ ತೀವ್ರ ನೋವಾಗಿದೆ. ಅವರು ರೈತರಿಗೆ ಹೋರಾಟ ಮುಂದುವರಿಸಲು ಧೈರ್ಯ ತುಂಬಿದ್ದು, ನಾವೂ ಜೊತೆಗಿರುತ್ತೇವೆ ಎಂದಿದ್ದಾರೆ. ರೆವೆನ್ಯೂ ಅಧಿಕಾರಿಗಳ ಕಂಪ್ಲೇಂಟ್ ಆಧರಿಸಿ ರೈತರ ಮೇಲೆ ಎಫ್&zwnj;ಐಆರ್ ಹಾಕಲಾಗಿದೆ. ಆದರೆ ಎಸ್ಪಿ ಅವರು ಡಿಸಿ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ. ಇನ್ಸ್&zwnj;ಪೆಕ್ಟರ್&zwnj;ಗೆ ಸಣ್ಣ ಗಾಯವಾಗಿದೆಯೇ ಹೊರತು ಆಸ್ಪತ್ರೆಯಲ್ಲಿ ಮಲಗುವಂತ ಪೆಟ್ಟು ಯಾರಿಗೂ ಬಿದ್ದಿಲ್ಲ. ರೈತರ ನೋವನ್ನ ಅರ್ಥ ಮಾಡ್ಕೋಬೇಕು, ಅವರು ಜೀವನ ಮಾಡಬೇಕಲ್ಲ. ರೈತರ ಆಕ್ರೋಶದ ಪ್ರಚೋದನೆಗೆ ಕಾರಣ ಯಾರು ಎಂಬುದನ್ನು ಸರ್ಕಾರ ಯೋಚಿಸಬೇಕು. ಸದ್ಯಕ್ಕೆ ಸರ್ವೆ ಕಾರ್ಯವನ್ನು ನಿಲ್ಲಿಸಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು.&lt;/p&gt;&lt;h2&gt;ವಿಪಕ್ಷಗಳ ಒಗ್ಗಟ್ಟು: 5 ದಿನಗಳ ಗಡುವು&lt;/h2&gt;&lt;p&gt;ಬಿಡದಿ ರೈತರ ಹೋರಾಟಕ್ಕೆ ಸುಪ್ರೀಂ ಕೋರ್ಟ್&zwnj;ನ ನಿವೃತ್ತ ನ್ಯಾಯಾಧೀಶರು ಸಹ ಬೆಂಬಲ ಸೂಚಿಸಿದ್ದು, ಯೋಜನೆ ಕೈಬಿಡುವಂತೆ ಹೇಳಿದ್ದಾರೆ. ಅಲ್ಲದೆ, ಈ ಹೋರಾಟಕ್ಕೆ ಬಿಜೆಪಿ ನಾಯಕರು ಹಾಗೂ ಪ್ರಮುಖವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರವಾಗಿ ಪ್ರತಿಕ್ರಿಯಿಸಿ, ರೈತರಿಗೆ ಬೆಂಬಲ ನೀಡಿದ್ದಕ್ಕಾಗಿ ದೇವೇಗೌಡರು ಧನ್ಯವಾದ ಸಲ್ಲಿಸಿದರು.&lt;/p&gt;&lt;p&gt;&quot;ನಾನು ಹೋರಾಟದ ಜಾಗಕ್ಕೆ ಹೋದರೆ ತಕ್ಷಣವೇ ದೇವೇಗೌಡರು ಬಂದು ರೈತರನ್ನು ಪ್ರಚೋದಿಸಿದರು ಎಂದು ನನ್ನ ಮೇಲೆ ಆರೋಪ ಮಾಡುತ್ತಾರೆ. ಕುಮಾರಸ್ವಾಮಿ ರಾಮನಗರದಲ್ಲಿ ಬಂದು ನೆಲೆಸಿ 30 ವರ್ಷಗಳಾಗಿವೆ. ನಮಗೆ ಆ ಭಾಗದ ರೈತರ ನೋವು ಗೊತ್ತು. ಈಗ ಸರ್ಕಾರಕ್ಕೆ 4 ರಿಂದ 5 ದಿನಗಳ ಕಾಲಾವಕಾಶ ನೀಡುತ್ತೇನೆ. ಸರ್ಕಾರದ ನಡವಳಿಕೆ ಮತ್ತು ನಿರ್ಧಾರವನ್ನು ಕಾದು ನೋಡಿ, ಮುಂದಿನ ಹೋರಾಟದ ಕಾರ್ಯರೂಪವನ್ನು ಸಿದ್ಧಪಡಿಸುತ್ತೇನೆ. ಬಿಡದಿ ಯೋಜನೆ ಕೈಬಿಡದಿದ್ದರೆ ನಾನು ಗಾಂಧಿ ಪ್ರತಿಮೆ ಎದುರು ಧರಣಿ ಕೂರುವುದು ಶತಸಿದ್ಧ ಎಂದು ಮಾಜಿ ಪ್ರಧಾನಿ ಹೆಚ್&zwnj; ಡಿಕ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಿರಿಯ ನಾಯಕ ದೇವೇಗೌಡರ ಈ ಧರಣಿ ಎಚ್ಚರಿಕೆಯು ಸದ್ಯ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕಾವೇರಿರುವ ಬಿಡದಿ ಭೂಸ್ವಾಧೀನದ ಹೋರಾಟಕ್ಕೆ ಮತ್ತಷ್ಟು ಬಲ ತಂದಿದೆ.&lt;/p&gt;]]></content:encoded>
            <category>ramanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/i-will-protest-at-vidhana-soudha-former-pm-hd-deve-gowda-over-bidadi-township-project-gdp/articleshow-bl9ve2k"/>
        </item>
        <item>
            <title><![CDATA[ಬಿಡದಿಯಲ್ಲಿ 'ದೆಹಲಿ ಮಾದರಿ' GEN Z ಹೋರಾಟ? ಭೂಮಿ ಉಳಿಸಲು ರೈತ ಮಕ್ಕಳು ಮಾಸ್ಟರ್ ಪ್ಲಾನ್]]></title>
            <link>https://kannada.asianetnews.com/ramanagara/delhi-model-gen-z-protest-in-bidadi-farmer-kids-master-plan-to-save-land-gkn/articleshow-c8qva03</link>
            <guid isPermaLink="true">https://kannada.asianetnews.com/ramanagara/delhi-model-gen-z-protest-in-bidadi-farmer-kids-master-plan-to-save-land-gkn/articleshow-c8qva03</guid>
            <pubDate>Tue, 28 Jul 2026 14:13:00 +0530</pubDate>
            <description><![CDATA[ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಈಗ ಯುವ ಶಕ್ತಿ ಸೇರ್ಪಡೆಯಾಗಿದೆ. &quot;ಇಂದು ನಮ್ಮ ಭೂಮಿಗಾಗಿ, ನಾಳೆ ನಿಮ್ಮ ಭವಿಷ್ಯಕ್ಕಾಗಿ&quot; ಎಂಬ ಘೋಷವಾಕ್ಯದೊಂದಿಗೆ ರೈತ ಮಕ್ಕಳು ಹೋರಾಟದ ಕಣಕ್ಕಿಳಿಯುತ್ತಿದ್ದು, ಇದು ಸರ್ಕಾರಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw477h9pj302255109xvaxrb,imgname----------------------40--1782553232694.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ: &lt;/strong&gt;ಬಿಡದಿ ಸ್ಮಾರ್ಟ್ ಸಿಟಿ ಅಥವಾ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್&zwnj;ಶಿಪ್ (GBIT) ಯೋಜನೆಗೆ ಈಗ ಹೊಸ ವಿಘ್ನ ಎದುರಾಗಿದೆ. ಇಷ್ಟು ದಿನ ಹಿರಿಯ ರೈತರಷ್ಟೇ ನಡೆಸುತ್ತಿದ್ದ ಈ ಹೋರಾಟಕ್ಕೆ ಈಗ ಯುವ ಶಕ್ತಿ ಅಥವಾ 'ಜೆನ್-ಜಿ' (Generation Z) ಎಂಟ್ರಿ ಕೊಡಲು ಸಜ್ಜಾಗಿದೆ. &quot;ಇಂದು ನಮ್ಮ ಭೂಮಿಗಾಗಿ, ನಾಳೆ ನಿಮ್ಮ ಭವಿಷ್ಯಕ್ಕಾಗಿ&quot; ಎಂಬ ಘೋಷವಾಕ್ಯದೊಂದಿಗೆ ರೈತ ಮಕ್ಕಳು ಹೋರಾಟದ ಕಣಕ್ಕಿಳಿಯುತ್ತಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.&lt;/p&gt;&lt;p&gt;ಬಿಡದಿಯ ಫಲವತ್ತಾದ ಕೃಷಿ ಭೂಮಿಯನ್ನು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಈಗಾಗಲೇ ಬಿಡದಿ ಭಾಗದ ರೈತರು ಬೀದಿಗಿಳಿದಿದ್ದಾರೆ. ಈ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರೈತರು ಈಗ ತಮ್ಮ ಮನೆಯ ಯುವಕರನ್ನು, ಅಂದರೆ 'ಜೆನ್-ಜಿ' ಮಕ್ಕಳನ್ನು ಹೋರಾಟಕ್ಕೆ ಆಹ್ವಾನಿಸುತ್ತಿದ್ದಾರೆ. ಈಗಾಗಲೇ ಬಿಡದಿಯಲ್ಲಿ ಸೋಷಿಯಲ್ ಮೀಡಿಯಾ ಮತ್ತು ಪೋಸ್ಟರ್&zwnj;ಗಳ ಮೂಲಕ ಅಭಿಯಾನವೊಂದು ತೀವ್ರಗೊಂಡಿದೆ.&lt;/p&gt;&lt;p&gt;&lt;strong&gt;GEN Z-ರೈತ ಮಕ್ಕಳೇ ನಿಮ್ಮ ಸಮಯ ಈಗ ಬಂದಿದೆ&lt;/strong&gt;&lt;/p&gt;&lt;p&gt;&lt;strong&gt;ನೀವೂ ಬರದಿದ್ದರೆ ನಾಳೆ ನಿಮ್ಮ ಭವಿಷ್ಯ ಇರಲ್ಲ&lt;/strong&gt;&lt;/p&gt;&lt;p&gt;&lt;strong&gt;ಇಂದು ನಮ್ಮ ಭೂಮಿಗಾಗಿ, ನಾಳೆ ನಿಮ್ಮ ಭವಿಷ್ಯಕ್ಕಾಗಿ ಹೋರಾಡೋಣ&lt;/strong&gt;&lt;/p&gt;&lt;p&gt;&lt;strong&gt;ಎಂಬ ಬರಹಗಳಿರುವ ಪೋಸ್ಟರ್&zwnj;ಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿವೆ.&lt;/strong&gt;&lt;/p&gt;&lt;h2&gt;&lt;strong&gt;ದೆಹಲಿ ಮಾದರಿಯ ಹೋರಾಟಕ್ಕೆ ಸಿದ್ಧತೆ?&lt;/strong&gt;&lt;/h2&gt;&lt;p&gt;ಇತ್ತೀಚೆಗೆ ನೀಟ್ ಅಕ್ರಮ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ತೀವ್ರ ಹೋರಾಟ ನಡೆದಿತ್ತು. ಅದೇ ಮಾದರಿಯನ್ನು ಬಿಡದಿಯಲ್ಲೂ ಅಳವಡಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ರೈತ ಮಕ್ಕಳೇ ಮುಂದಾಳತ್ವ ವಹಿಸಿಕೊಂಡು 'ಸೇವ್ ಬಿಡದಿ' (Save Bidadi) ಹ್ಯಾಶ್&zwnj;ಟ್ಯಾಗ್ ಮೂಲಕ ಆನ್&zwnj;ಲೈನ್ ಆಂದೋಲನವನ್ನೂ ತೀವ್ರಗೊಳಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಬಿಡದಿ ಟೌನ್&zwnj;ಶಿಪ್ ಯೋಜನೆ?&lt;/strong&gt;&lt;/h2&gt;&lt;p&gt;ಬೆಂಗಳೂರು-ಮೈಸೂರು ಕಾರಿಡಾರ್&zwnj;ನಲ್ಲಿ ಕರ್ನಾಟಕ ಸರ್ಕಾರ ಪ್ರಸ್ತಾಪಿಸಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯ ಮುಖ್ಯಾಂಶಗಳು ಹೀಗಿವೆ. ಸುಮಾರು 7,400 ರಿಂದ 9,000 ಎಕರೆ ಪ್ರದೇಶದಲ್ಲಿ ಸುಮಾರು ₹18,133 ಕೋಟಿ ವೆಚ್ಚದಲ್ಲಿ ಟೌನ್&zwnj;ಶಿಪ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ. ಇದು ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಸಿಟಿ. ತಂತ್ರಜ್ಞಾನ, ಕೈಗಾರಿಕೆಗಳು ಮತ್ತು ವಸತಿ ಸಮುಚ್ಚಯಗಳನ್ನು ಒಳಗೊಂಡ ಇಂಟಿಗ್ರೇಟೆಡ್ ಟೌನ್&zwnj;ಶಿಪ್ ಇದಾಗಿದೆ.&lt;/p&gt;&lt;h2&gt;&lt;strong&gt;ರೈತರ ಆಕ್ರೋಶಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಸರ್ಕಾರವು ಅಭಿವೃದ್ಧಿ ಮತ್ತು AI ನಗರ ಎಂಬ ಹೆಸರಿನಲ್ಲಿ ಬಿಡದಿ ಸುತ್ತಮುತ್ತಲಿನ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸುತ್ತಿದೆ ಎಂಬುದು ರೈತರ ನೇರ ಆರೋಪ. ನಮಗೆ ಸ್ಮಾರ್ಟ್ ಸಿಟಿಗಿಂತ ಭೂಮಿ ಮುಖ್ಯ. ಭೂಮಿ ಹೋದರೆ ಮುಂದಿನ ತಲೆಮಾರಿಗೆ ಅನ್ನ ಕೊಡುವವರಾರು? ಎಂಬ ಪ್ರಶ್ನೆ ರೈತ ಮಕ್ಕಳದ್ದಾಗಿದೆ. ಹೈಕೋರ್ಟ್&zwnj;ನಲ್ಲಿ ಸಲ್ಲಿಸಲಾಗಿದ್ದ ಪಿಐಎಲ್ (PIL) ತಿರಸ್ಕೃತಗೊಂಡಿದ್ದರೂ, ರೈತರು ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ಈಗ ಜೆನ್-ಜಿ ಯುವಕರ ಸೇರ್ಪಡೆಯೊಂದಿಗೆ ಬಿಡದಿ ಹೋರಾಟ ಮತ್ತಷ್ಟು ಬಲಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಒಂದು ವೇಳೆ ರೈತ ಮಕ್ಕಳು ಪೂರ್ಣ ಪ್ರಮಾಣದಲ್ಲಿ ಬೀದಿಗಿಳಿದರೆ, ಇದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಬಿಡದಿಯಲ್ಲಿ ಟೌನ್&zwnj;ಶಿಪ್ ನಿರ್ಮಾಣವಾಗುತ್ತೋ ಅಥವಾ ರೈತರ ಭೂಮಿ ಉಳಿಯುತ್ತೋ ಎಂಬುದು ಈಗ ಯುವ ಶಕ್ತಿಯ ಹೋರಾಟದ ಮೇಲೆ ನಿಂತಿದೆ.&lt;/p&gt;]]></content:encoded>
            <category>ramanagara</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/ramanagara/delhi-model-gen-z-protest-in-bidadi-farmer-kids-master-plan-to-save-land-gkn/articleshow-c8qva03"/>
        </item>
        <item>
            <title><![CDATA[ಬಂಟ್ವಾಳ ಘಟನೆ ಮಾಸುವ ಮುನ್ನ ಮತ್ತೊಬ್ಬ 16ರ ಹುಡಗಿ ಬಲಿ; ಪ್ರೇಯಸಿ ಕೊಂದು ತೋಟದಲ್ಲಿ ಹೂತುಹಾಕಿದ ಪ್ರೇಮಿ!]]></title>
            <link>https://kannada.asianetnews.com/karnataka-districts/kanakapura-minor-girl-murder-suresh-prarthana-shot-dead-buried-plantation/articleshow-cy95wwu</link>
            <guid isPermaLink="true">https://kannada.asianetnews.com/karnataka-districts/kanakapura-minor-girl-murder-suresh-prarthana-shot-dead-buried-plantation/articleshow-cy95wwu</guid>
            <pubDate>Fri, 17 Jul 2026 19:09:03 +0530</pubDate>
            <description><![CDATA[ರಾಮನಗರ ಜಿಲ್ಲೆಯ ಕನಕಪುರದಲ್ಲಿ, ಪ್ರೀತಿಸಿದ ಅಪ್ರಾಪ್ತ ಯುವತಿಯ ಮೇಲೆ ಸಂಶಯಗೊಂಡ ಪ್ರಿಯಕರ, ಆಕೆಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ನಂತರ ಸಾಕ್ಷ್ಯ ನಾಶಪಡಿಸಲು ಶವವನ್ನು ತೋಟದಲ್ಲಿ ಹೂತುಹಾಕಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxr4n7sdzxdtx1j4vgap3j16,imgname-kanakapura-girl-murder-1784295366443.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜು.17): ಮಂ&lt;/strong&gt;ಗಳೂರಿನ ಬಂಟ್ವಾಳದ ಬಸ್ ನಿಲ್ದಾಣದಲ್ಲಿ ಹಾಡಹಗಲೇ ಪ್ರೀತಿಯನ್ನೊಪ್ಪಿಕೊಳ್ಳದ 22ರ ಯುವತಿಯನ್ನು ಕೊಚ್ಚಿ ಕೊಲೆ ಮಾಡಿರುವ ಗಂಭೀರ ಘಟನೆ ಮಾಸುವ ಮುನ್ನವೇ, ಕನಕಪುರದಲ್ಲಿ 16ರ ಹುಡುಗಿಯನ್ನು ಗುಂಡಿಕ್ಕಿ ಕೊಂದು ತೋಟದಲ್ಲಿ ಹೂತು ಹಾಕಿರುವ ಘಟನೆ ಹೊರಬಿದ್ದಿದೆ.&lt;/p&gt;&lt;p&gt;ಈ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಕೆಂಪಲನಾಥ ಗ್ರಾಮದಲ್ಲಿ ನಡೆದಿದೆ. ಪ್ರೀತಿಸಿದ ಅಪ್ರಾಪ್ತ ಯುವತಿಯ ಮೇಲೆ ಸಂಶಯಗೊಂಡ ಯುವಕನೊಬ್ಬ, ಆಕೆಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ತೋಟದಲ್ಲಿ ಹೂತುಹಾಕಿರುವ ಬರ್ಬರ ಕೃತ್ಯ ಬಯಲಾಗಿದೆ. ಸಾತನೂರು ಹೋಬಳಿಯ ಕುರುಬಳ್ಳಿ ಗ್ರಾಮದ ನಿವಾಸಿಯಾದ 16 ವರ್ಷದ ಅಪ್ರಾಪ್ತೆ ಪ್ರಾರ್ಥನ ಮೃತ ದುರ್ದೈವಿ. ಅದೇ ಗ್ರಾಮದ ಸುರೇಶ್ ಎಂಬಾತನ ಜೊತೆ ಪ್ರಾರ್ಥನ ಪ್ರೀತಿಯಲ್ಲಿದ್ದಳು ಎನ್ನಲಾಗಿದೆ. ಕಳೆದ ಒಂದು ವಾರದ ಹಿಂದೆ ಸುರೇಶ್, ಪ್ರಾರ್ಥನಾಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದನು.&lt;/p&gt;&lt;h2&gt;&lt;strong&gt;ಕೊಲೆಗೆ ಕಾರಣವೇನು?:&lt;/strong&gt;&lt;/h2&gt;&lt;p&gt;ಆರೋಪಿ ಸುರೇಶ್ ಮತ್ತು ಪ್ರಾರ್ಥನ ಕೆಂಪಲನಾಥ ಗ್ರಾಮದ ತೋಟವೊಂದರಲ್ಲಿದ್ದರು. ಈ ಸಂದರ್ಭದಲ್ಲಿ ಪ್ರಾರ್ಥನ ಬೇರೊಬ್ಬ ಯುವಕನಿಗೆ ಮೊಬೈಲ್&zwnj;ನಲ್ಲಿ ಮೆಸೇಜ್ ಮಾಡುತ್ತಿದ್ದಳು ಎಂಬ ಅನುಮಾನ ಸುರೇಶ್&zwnj;ಗೆ ಬಂದಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಸುರೇಶ್, ಮನೆಯಲ್ಲಿದ್ದ ನಾಡಬಂದೂಕನ್ನು ತೆಗೆದು ಅಪ್ರಾಪ್ತ ಪ್ರಾರ್ಥನಾಳಿಗೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿ ಪ್ರಾರ್ಥನ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.&lt;/p&gt;&lt;h2&gt;&lt;strong&gt;ಶವ ಹೂತುಹಾಕಿ ನಾಪತ್ತೆ:&lt;/strong&gt;&lt;/h2&gt;&lt;p&gt;ಹತ್ಯೆಯ ನಂತರ ಗಾಬರಿಗೊಂಡ ಆರೋಪಿ ಸುರೇಶ್, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪ್ರಾರ್ಥನಾಳ ಶವವನ್ನು ತೋಟದಲ್ಲೇ ಗುಂಡಿ ತೋಡಿ ಹೂತುಹಾಕಿದ್ದಾನೆ. ಯುವತಿ ನಾಪತ್ತೆಯಾದ ಬಗ್ಗೆ ದೂರು ದಾಖಲಾದ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡ ಕೋಡಿಹಳ್ಳಿ ಪೊಲೀಸರು, ಆರೋಪಿ ಸುರೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಭೀಕರ ಸತ್ಯ ಹೊರಬಂದಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಕ್ರಮ:&lt;/strong&gt;&lt;/h2&gt;&lt;p&gt;ಸದ್ಯ ಆರೋಪಿ ಸುರೇಶ್ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಡಿದ್ದು (ಸೋಮವಾರ) ಮೃತದೇಹವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆಯಿಂದ ಜಿಲ್ಲೆಯಾದ್ಯಂತ ಭೀತಿ ಮತ್ತು ಆಕ್ರೋಶ ವ್ಯಕ್ತವಾಗಿದೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kanakapura-minor-girl-murder-suresh-prarthana-shot-dead-buried-plantation/articleshow-cy95wwu"/>
        </item>
        <item>
            <title><![CDATA[ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್]]></title>
            <link>https://kannada.asianetnews.com/karnataka-districts/bidadi-township-karnataka-hc-dismisses-pil-against-land-acquisition-gdp/articleshow-e64ismc</link>
            <guid isPermaLink="true">https://kannada.asianetnews.com/karnataka-districts/bidadi-township-karnataka-hc-dismisses-pil-against-land-acquisition-gdp/articleshow-e64ismc</guid>
            <pubDate>Mon, 20 Jul 2026 12:25:05 +0530</pubDate>
            <description><![CDATA[ಬಿಡದಿ ಟೌನ್&zwnj;ಶಿಪ್ ನಿರ್ಮಾಣಕ್ಕಾಗಿ ಸರ್ಕಾರ ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರ ವಾದಗಳಲ್ಲಿ ಬಲವಾದ ಕಾನೂನಾತ್ಮಕ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಎದುರಾಗಿದ್ದ ಕಾನೂನು ತೊಡಕನ್ನು ನಿವಾರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr09mn1f81qe8363nzj76xmk,imgname-----------------------2026-05-07t091841.319-1778126574639.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಬಹುನಿರೀಕ್ಷಿತ ಬಿಡದಿ ಟೌನ್&zwnj;ಶಿಪ್ ನಿರ್ಮಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘಟನೆ ಎಂಬುದು ವಾದವಾಗಿತ್ತು.ಆದರೆ ಕೋರ್ಟ್ ಇದು ಸಾರ್ವಜನಿಕ ಹಿತಾಸಕ್ತಿಯಲ್ಲಿ ಇಲ್ಲ ಎಂದು ಅರ್ಜಿ ವಜಾಗೊಳಿಸಿದೆ. ಈ ಮೂಲಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಟೌನ್&zwnj;ಶಿಪ್ ಯೋಜನೆಗೆ ಎದುರಾಗಿದ್ದ ಕಾನೂನಾತ್ಮಕ ತೊಡಕು ಒಂದು ನಿವಾರಣೆಯಾದಂತಾಗಿದೆ.&lt;/p&gt;&lt;h2&gt;ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ&lt;/h2&gt;&lt;p&gt;ಬಿಡದಿ ಟೌನ್&zwnj;ಶಿಪ್ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರಾಜೇಶ್ ಎಂಬುವವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆಯು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ನಡೆಯಿತು. ಅರ್ಜಿದಾರರ ಪರವಾಗಿ ರಾಜೇಶ್ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ವಾದಗಳನ್ನು ಮಂಡಿಸಿದರು.&lt;/p&gt;&lt;h2&gt;ಅರ್ಜಿದಾರರ ಪ್ರಮುಖ ವಾದಗಳೇನು?&lt;/h2&gt;&lt;p&gt;ವಿಚಾರಣೆ ವೇಳೆ ಅರ್ಜಿದಾರ ರಾಜೇಶ್ ಅವರು, ಬಿಡದಿ ಭಾಗದಲ್ಲಿ ಸರ್ಕಾರ ಜೂನ್ 10, 2026 ರಂದು ಹೊರಡಿಸಿರುವ ಭೂಸ್ವಾಧೀನ ಅಧಿಸೂಚನೆಯು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ವಾದಿಸಿದರು. ರಿಯಲ್ ಎಸ್ಟೇಟ್ ಉದ್ದೇಶ, ರೈತರ ಸುದೀರ್ಘ ಪ್ರತಿಭಟನೆ, ಶೇ. 80 ರಷ್ಟು ಒಪ್ಪಿಗೆಯ ನಿಯಮ ಉಲ್ಲಂಘನೆ, ಅಪೂರ್ಣ ಪರಿಹಾರದ ಭರವಸೆ ಹೀಗೆ ಹಲವು ಅಂಶಗಳನ್ನು ಕೋರ್ಟ್ ಮುಂದೆ ಉಲ್ಲೇಖಿಸಿದರು.&lt;/p&gt;&lt;p&gt;ಕರ್ನಾಟಕ ನಗರಾಭಿವೃದ್ಧಿ ಕಾಯಿದೆಯಡಿ ಕೈಗೊಳ್ಳಲಾಗಿರುವ ಈ ಭೂಸ್ವಾಧೀನದಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ. ರೈತರು ಕಷ್ಟಪಟ್ಟು ಬೆಳೆ ಬೆಳೆಯುತ್ತಿದ್ದ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಗಳಿಗಾಗಿ ಕನ್ವರ್ಟ್ ಮಾಡಲಾಗುತ್ತಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಡದಿ ಭಾಗದ ರೈತರು ಕಳೆದ 500ಕ್ಕೂ ಹೆಚ್ಚು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಕಾನೂನಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಿವೆ. ನಿಯಮಗಳ ಪ್ರಕಾರ ಭೂಸ್ವಾಧೀನಕ್ಕೆ ಶೇಕಡಾ 80 ರಷ್ಟು ರೈತರು ಒಪ್ಪಿಗೆ ಸೂಚಿಸಬೇಕು. ಆದರೆ ಸರ್ಕಾರ ರೈತರ ಒಪ್ಪಿಗೆಯ ಬಗ್ಗೆ ಯಾವುದೇ ನಿಖರ ಮಾಹಿತಿಯನ್ನು ನೀಡುತ್ತಿಲ್ಲ. ಮಾಹಿತಿ ಹಕ್ಕು ಕಾಯಿದೆ (RTI) ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಸೂಕ್ತ ಮಾಹಿತಿ ಒದಗಿಸಿಲ್ಲ. ಭೂಮಿ ಕಳೆದುಕೊಂಡವರಿಗೆ ಕೇವಲ ಸೈಟ್ ನೀಡುವುದಾಗಿ ಹೇಳಲಾಗುತ್ತಿದೆಯೇ ಹೊರತು, ಕಾನೂನಾತ್ಮಕವಾಗಿ ಸೂಕ್ತ ರೀತಿಯಲ್ಲಿ ಪರಿಹಾರ ವಿತರಿಸುತ್ತಿಲ್ಲ. ಹಾಗಾಗಿ ತಕ್ಷಣವೇ ಈ ಅಧಿಸೂಚನೆಗೆ ತಡೆ ನೀಡಬೇಕು ಎಂದು ಕೋರ್ಟ್ ಮುಂದೆ ಮನವಿ ಮಾಡಿದರು.&lt;/p&gt;&lt;h2&gt;ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನೆ&lt;/h2&gt;&lt;p&gt;ವಾದ ಪ್ರತಿವಾದ ಆಲಿಸುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು, &quot;ನಗರಾಭಿವೃದ್ಧಿ ಕಾಯಿದೆಯ ಯಾವ ನಿರ್ದಿಷ್ಟ ಕಾನೂನು ಇಲ್ಲಿ ಉಲ್ಲಂಘನೆಯಾಗಿದೆ?&quot; ಎಂದು ಪ್ರಶ್ನಿಸಿದರು.&lt;/p&gt;&lt;p&gt;ಅರ್ಜಿದಾರರು ಮಂಡಿಸಿದ ವಾದಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಹೈಕೋರ್ಟ್ ವಿಭಾಗೀಯ ಪೀಠವು, &quot;ಕಾನೂನುಬಾಹಿರವಾಗಿ ಭೂಸ್ವಾಧೀನ ಮಾಡಲಾಗುತ್ತಿದೆ, ಕಾನೂನು ಪಾಲನೆ ಆಗುತ್ತಿಲ್ಲ ಹಾಗೂ ರೈತರಿಗೆ ಸರಿಯಾಗಿ ಪರಿಹಾರ ನೀಡುತ್ತಿಲ್ಲ&quot; ಎಂಬ ಅರ್ಜಿದಾರರ ವಾದಗಳಲ್ಲಿ ಯಾವುದೇ ಬಲವಾದ ಕಾನೂನಾತ್ಮಕ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟಿತು. ಈ ವಾದಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠವು, ಅಂತಿಮವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತು.&lt;/p&gt;]]></content:encoded>
            <category>ramanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bidadi-township-karnataka-hc-dismisses-pil-against-land-acquisition-gdp/articleshow-e64ismc"/>
        </item>
        <item>
            <title><![CDATA[ಬಿಡದಿ ಟೌನ್‌ಶಿಪ್: ಡಿಕೆಶಿಗೆ ದುರ್ಯೋಧನನ ಹಠ, ಇದರಿಂದ್ಲೇ ನಾಶ: ಅಶೋಕ್‌ ವಾಗ್ದಾಳಿ]]></title>
            <link>https://kannada.asianetnews.com/politics/bidadi-township-row-lop-r-ashok-slams-cm-dk-shivakumar-at-ramanagar-rav/articleshow-eg9xogz</link>
            <guid isPermaLink="true">https://kannada.asianetnews.com/politics/bidadi-township-row-lop-r-ashok-slams-cm-dk-shivakumar-at-ramanagar-rav/articleshow-eg9xogz</guid>
            <pubDate>Mon, 10 Aug 2026 05:58:38 +0530</pubDate>
            <description><![CDATA[&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆ ಜಾರಿಗೊಳಿಸದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಈ ಯೋಜನೆಯನ್ನು ದುರ್ಯೋಧನನ ಹಠಕ್ಕೆ ಹೋಲಿಸಿದ ಅವರು, ಇದನ್ನು ಮುಂದುವರೆಸಿದರೆ ಕಾಂಗ್ರೆಸ್ ಸರ್ಕಾರಕ್ಕೆ ದುರ್ಯೋಧನನ ಗತಿಯೇ ಬರುತ್ತದೆ ಎಂದು ಎಚ್ಚರಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzmh05pj9dzsxh7wvgvek5sb,imgname-----------------------2026-08-10t055604.229-1786321573586.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಆ.10) &lt;/strong&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಅವರೇ ಬಿಡದಿ ಟೌನ್&zwnj;ಶಿಪ್&zwnj;(Bidadi Township) ಜಾರಿ ಮಾಡುವುದಾಗಿ ದುರ್ಯೋಧನನ ರೀತಿ ಹಠ ಮಾಡಬೇಡಿ. ಇಲ್ಲದಿದ್ದರೆ ದುರ್ಯೋಧನನಿಗೆ ಆದ ಗತಿಯೇ ನಿಮಗೂ ಆಗುತ್ತದೆ. ಈ ಟೌನ್&zwnj;ಶಿಪ್ ವಿರುದ್ಧದ ಹೋರಾಟವೇ ಕಾಂಗ್ರೆಸ್ ಸರ್ಕಾರದ ಕೊನೆ ಮೊಳೆಯಾಗುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.&lt;/p&gt;&lt;p&gt;ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್&zwnj;ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ನೇತೃತ್ವದಲ್ಲಿ ಪ್ರಾರಂಭವಾದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇದೊಂದು ದುಷ್ಟ ಸರ್ಕಾರ, ದುಷ್ಟ ಮುಖ್ಯಮಂತ್ರಿ. ಇವರ ವಿರುದ್ಧವೇ ಈ ಹೋರಾಟ ನಡೆಯುತ್ತಿದೆ ಎಂದರು.&lt;/p&gt;&lt;h2&gt;ಬಿಡದಿ ಟೌನ್&zwnj;ಶಿಪ್ ಜಾರಿ ಮಾಡಿದರೆ ಉಳಿಗಾಲವಿಲ್ಲ:&lt;/h2&gt;&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆ ಜಾರಿ ವಿಚಾರದಲ್ಲಿ ಕಾಂಗ್ರೆಸ್&zwnj; ರಚಿಸಿದ್ದ ಸತ್ಯ ಶೋಧನಾ ಸಮತಿ ವರದಿಯಲ್ಲಿ ಈ ಯೋಜನೆ ಮಾಡಿದರೆ ಉಳಿಗಾಲ ಇಲ್ಲವೆಂದು ತಿಳಿಸಿದೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಆ ವರದಿಯನ್ನು ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ ನಿಮ್ಮ ಯೋಗ್ಯತೆ ರಾಜ್ಯದ ಜನರ ಮುಂದೆ ಹರಾಜಾಗುತ್ತದೆ ಎಂದು ಎಚ್ಚರಿಸಿದರು.&lt;/p&gt;&lt;h3&gt;ರೈತರ ಭೂಮಿ ಮುಟ್ಟಿದರೆ ಸರ್ವನಾಶ&lt;/h3&gt;&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ, ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಿತ್ತು. ಆ ಸಮಿತಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸದಸ್ಯರಾಗಿದ್ದರು. ಆ ಸಮಿತಿ ಕೊಟ್ಟ ವರದಿಯಲ್ಲಿ ಟೌನ್ ಶಿಪ್ ಮಾಡುವುದು ಬೇಡ, ರೈತರ ಭೂಮಿಯನ್ನು ಮುಟ್ಟಿದರೆ ಸರ್ವನಾಶ ಆಗುತ್ತೇವೆಂದು ಸಮಿತಿ ಸದಸ್ಯರಾಗಿದ್ದ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದರು ಎಂದು ತಿಳಿಸಿದರು.&lt;/p&gt;&lt;p&gt;ಅಲ್ಲದೆ, ವಿಧಾನಸಭೆ ಅಧಿವೇಶನದಲ್ಲೂ ಡಿ.ಕೆ.ಶಿವಕುಮಾರ್ ಯೋಜನೆ ಜಾರಿ ಮಾಡುವುದಿಲ್ಲ ಎಂದಿದ್ದರು. ಆದರೆ ಈಗ ಅದೇ ಡಿ.ಕೆ.ಶಿವಕುಮಾರ್ ಯಾವ ಮುಖ ಇಟ್ಟುಕೊಂಡು ಯೋಜನೆಯನ್ನು ಜಾರಿ ಮಾಡಲು ಹೊರಟಿದ್ದಾರೆ. ಪ್ರಾಯಶ್ಚಿತ್ತ ಯಾರು ಮಾಡಿಕೊಳ್ಳಬೇಕು ಎಂದು ಆರ್&zwnj;.ಅಶೋಕ್ ಪ್ರಶ್ನಿಸಿದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bidadi-township-row-lop-r-ashok-slams-cm-dk-shivakumar-at-ramanagar-rav/articleshow-eg9xogz"/>
        </item>
        <item>
            <title><![CDATA[ಕುಮಾರಸ್ವಾಮಿ ತಮ್ಮ ಹೆಂಡ್ತಿಯ ಫೋನನ್ನೇ ಟ್ಯಾಪ್‌ ಮಾಡಿಸಿದ್ದರು; ಬೇಕಿದ್ರೆ ದಾಖಲೆ ಕೊಡ್ತೇನೆ: ಸಚಿವ ಬಾಲಕೃಷ್ಣ ಗಂಭೀರ ಆರೋಪ]]></title>
            <link>https://kannada.asianetnews.com/politics/union-minister-hd-kumaraswamy-tapped-his-wife-s-phone-shocking-stats-by-hc-balakrishna-rav/articleshow-g98h74f</link>
            <guid isPermaLink="true">https://kannada.asianetnews.com/politics/union-minister-hd-kumaraswamy-tapped-his-wife-s-phone-shocking-stats-by-hc-balakrishna-rav/articleshow-g98h74f</guid>
            <pubDate>Sun, 30 Aug 2026 09:12:19 +0530</pubDate>
            <description><![CDATA[ಕೇಂದ್ರ ಸಚಿವ ಕುಮಾರಸ್ವಾಮಿಯವರು ತಮ್ಮ ಪತ್ನಿಯ ಫೋನ್ ಕೂಡ ಟ್ಯಾಪಿಂಗ್ ಮಾಡಿಸಿದ್ದಾರೆ ಎಂದು ಸಚಿವ ಎಚ್.ಸಿ.ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ಗನ್ ಪಾಯಿಂಟ್ ಆರೋಪವನ್ನು ನಿರಾಕರಿಸಿದ ಅವರು, ಕುಮಾರಸ್ವಾಮಿಯವರು ತಮ್ಮ ಮಗನ ಬೆಳವಣಿಗೆಯನ್ನೂ ಸಹಿಸುವುದಿಲ್ಲ ಎಂದು ಟೀಕಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv66aed2afva21evz00vjyn9,imgname-jvjv-1781545646498.png" type="image/jpeg" height="390" width="690"/>
            <content:encoded><![CDATA[&lt;p&gt;ಮಾಗಡಿ/ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿಯವರು ತಮ್ಮ ಪಿಎಗಳು, ಸ್ವಾಮೀಜಿಗಳು ಮಾತ್ರವಲ್ಲ, ಸ್ವಂತ ಪತ್ನಿಯ ಫೋನ್ ಅನ್ನೂ ಟ್ಯಾಪಿಂಗ್ ಮಾಡಿದ್ದಾರೆ. ಅಂತಹ ವ್ಯಕ್ತಿ ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಆರೋಪಿಸಿದ್ದಾರೆ.&lt;/p&gt;&lt;h2&gt;ಬೇಕಿದ್ದರೆ ಫೋನ್ ಟ್ಯಾಪಿಂಗ್ ದಾಖಲೆ ಬಿಡುಗಡೆ ಮಾಡ್ತೇನೆ&lt;/h2&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಮಾಜದ ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಮಾಡಿಸಿದವರು ಈಗ ಸಮಾಜಕ್ಕೆ ಬುದ್ಧಿ ಹೇಳುತ್ತಾರೆ. ಏನಾದರೂ ಟ್ರಾನ್ಸ್&zwnj;ಫರ್ ಮಾಡಿಸಿ ಬಿಡುತ್ತಾರೆ ಅಂತ ಸ್ವಂತ ಪತ್ನಿಯ ಪೋನನ್ನೇ ಟ್ಯಾಪಿಂಗ್ ಮಾಡಿಸಿದರು. ಹೆಂಡತಿ ಮೇಲೆಯೇ ಅವರಿಗೆ ನಂಬಿಕೆ ಇಲ್ಲ. ಅಂತಹ ಮನಸ್ಥಿತಿ ಇರುವಂತಹ ವ್ಯಕ್ತಿ ಅವರು. ಬೇಕಿದ್ದರೆ ಫೋನ್ ಟ್ಯಾಪಿಂಗ್ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದರು.&lt;/p&gt;&lt;h3&gt;ನನ್ನ ಶೂಟ್ ಮಾಡಲಿ, ಇಲ್ಲ ಅವರೇ ಮಾಡಿಕೊಳ್ಳಲಿ&lt;/h3&gt;&lt;p&gt;ನನ್ನ ಮೇಲೆ ಗನ್ ಪಾಯಿಂಟ್ ಆರೋಪ ಮಾಡುತ್ತಾರೆ. ಅದು ಯಾವ ಗನ್ ಎಂದು ಆ ಗನ್&zwnj;ನ್ನು ಅವರಿಗೆ ತರಲು ಹೇಳಿ. ಒಂದೋ ನನ್ನನ್ನು ಶೂಟ್ ಮಾಡಲಿ, ಇಲ್ಲ ಅವರೇ ಶೂಟ್ ಮಾಡಿಕೊಳ್ಳಲಿ. ಸುಮ್ಮನೆ ಹಿಟ್ ಆ್ಯಂಡ್ ರನ್ ಕೇಸ್, ಉಡಾಫೆ ಮಾತು ಬೇಡ. ನನ್ನ ಹತ್ತಿರ ಗನ್ನೂ ಇಲ್ಲ, ಲೈಸೆನ್ಸೂ ಇಲ್ಲ. ಇಂತಹ ಆರೋಪ ಮಾಡೋಕೆ ಅವರಿಗೆ ನಾಚಿಕೆ ಆಗಬೇಕು ಎಂದರು.&lt;/p&gt;&lt;p&gt;ಗನ್ ತೋರಿಸೋದು, ಕತ್ತಿ ತೋರಿಸೋದು ನನ್ನ ರಾಜಕೀಯ ಜೀವನದಲ್ಲೇ ಇಲ್ಲ. ತಮ್ಮ ಆರೋಪವನ್ನು ಅವರು ಸಾಬೀತು ಮಾಡಲಿ. ಇಲ್ಲದಿದ್ದರೆ ಕ್ಷಮೆ ಕೇಳಲಿ ಎಂದು ಕಿಡಿಕಾರಿದರು.&lt;/p&gt;&lt;p&gt;ಮನಸ್ಸು ಮಾಡಿದರೆ ಕುಮಾರಸ್ವಾಮಿಯವರು ತಮ್ಮ ಮಗನನ್ನು ಸಂಸದನನ್ನಾಗಿ ಮಾಡಬಹುದಿತ್ತು. ಅವರು ಮಗನ ಬೆಳವಣಿಗೆಯನ್ನೂ ಸಹಿಸದ ವ್ಯಕ್ತಿ ಎಂದು ಟೀಕಿಸಿದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/union-minister-hd-kumaraswamy-tapped-his-wife-s-phone-shocking-stats-by-hc-balakrishna-rav/articleshow-g98h74f"/>
        </item>
        <item>
            <title><![CDATA['ಪ್ರಾಯಶ್ಚಿತ ಯಾತ್ರೆಗೆ ಸ್ವಾಗತ..' ಬಿಡದಿ ಟೌನ್‌ಶಿಪ್ ಜಟಾಪಟಿ, ಜೆಡಿಎಸ್ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್!]]></title>
            <link>https://kannada.asianetnews.com/politics/bidadi-township-row-congress-counters-jds-padayatra-ramanagar-rav/articleshow-h4aw5qu</link>
            <guid isPermaLink="true">https://kannada.asianetnews.com/politics/bidadi-township-row-congress-counters-jds-padayatra-ramanagar-rav/articleshow-h4aw5qu</guid>
            <pubDate>Fri, 07 Aug 2026 10:49:19 +0530</pubDate>
            <description><![CDATA[&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಗೆ ಕಾಂಗ್ರೆಸ್ ಪಕ್ಷವು 'ಪ್ರಾಯಶ್ಚಿತ ಯಾತ್ರೆ' ಎಂದು ವ್ಯಂಗ್ಯವಾಡಿ ಬ್ಯಾನರ್&zwnj;ಗಳನ್ನು ಹಾಕುವ ಮೂಲಕ ತಿರುಗೇಟು ನೀಡಿದೆ. ಈ ರಾಜಕೀಯ ಸಂಘರ್ಷವು ಇದೀಗ ರಾಮನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzd9m5y6j2yys2zksd56dszp,imgname-whatsapp-image-2026-08-07-at-10.02.02-am-1786078959558.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜು.7)&lt;/strong&gt;: ಬಿಡದಿ ಟೌನ್&zwnj;ಶಿಪ್ ಯೋಜನೆ(Bidadi township plan)ಯನ್ನು ವಿರೋಧಿಸಿ ಜೆಡಿಎಸ್(JDS) ಪಕ್ಷ ಆಗಸ್ಟ್ 9, 10 ಮತ್ತು 11 ಮೂರು ದಿನಗಳ ಕಾಲ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್&zwnj;ವರೆಗೆ 38 ಕಿಮೀ ಬೃಹತ್ ಪಾದಯಾತ್ರೆ ನಡೆಸಲು ಸಜ್ಜಾಗಿರುವ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಕೂಡ ಜೆಡಿಎಸ್&zwnj; ಪಾದಯಾತ್ರೆಗೆ ಕೌಂಟರ್ ನೀಡಲಾರಂಭಿಸಿದೆ.&lt;/p&gt;&lt;h2&gt;ಪ್ರಾಯಶ್ಚಿತ ಯಾತ್ರೆಗೆ ಸ್ವಾಗತ:&lt;/h2&gt;&lt;p&gt;ಜೆಡಿಎಸ್ ನಡೆಯಲಿರುವ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್ ಕೊಟ್ಟಿದ್ದು, 'ಪ್ರಾಯಶ್ಚಿತ ಯಾತ್ರೆಗೆ ಸ್ವಾಗತ' ಎಂದು ಬರೆದಿರುವ ಬ್ಯಾನರ್ ನನ್ನು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಯುವ ಹಾಕುವ ಮೂಲಕ ಜೆಡಿಎಸ್&zwnj; ಕೌಂಟರ್ ನೀಡಿದ್ದಾರೆ.&lt;/p&gt;&lt;p&gt;ಜೆಡಿಎಸ್ ಆರಂಭಿಸಲಿರುವ ಬಿಡದಿ ಬೈರಮಂಗಲ ಕ್ರಾಸ್&zwnj;ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಬ್ಯಾನರ್ ಅಳಡಿಸಿದ್ದು, ಹೆಚ್&zwnj;ಡಿಕೆ ಬಿಎಸ್&zwnj;ವೈ ತಮ್ಮ ಪುತ್ರರ ಕೈ ಹಿಡಿದುಕೊಂಡು ಪಾದಯಾತ್ರೆ ನಡೆಸುವ ರೀತಿ ವ್ಯಂಗ್ಯ ಮಾಡಲಾಗಿದೆ.ಬಿಡದಿ ಟೌನ್&zwnj;ಶಿಪ್ ರೂವಾರಿಗಳಾದ ಜೆಡಿಎಸ್ ಬಿಜೆಪಿಯವರ ಪ್ರಾಯಶ್ಚಿತ ಯಾತ್ರೆಗೆ ಸ್ವಾಗತ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.&lt;/p&gt;&lt;p&gt;ಸದ್ಯ ಎರಡು ಕಡೆಯ ಕಾರ್ಯಕರ್ತರು ಸೋಶಿಯಲ್ ಮೀಡಿಯಾ ಬಳಸಿಕೊಂಡು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/bidadi-township-row-congress-counters-jds-padayatra-ramanagar-rav/articleshow-h4aw5qu"/>
        </item>
        <item>
            <title><![CDATA[ವಿಶ್ವದರ್ಜೆಯ ಎಐ ಸಿಟಿಯಾಗಿ ಬಿಡದಿ ಅಭಿವೃದ್ಧಿ: ಮುಖ್ಯಮಂತ್ರಿ ಡಿಕೆಶಿ, ರೈತರಿಗೆ ಬಂಪರ್ ಆಫರ್!]]></title>
            <link>https://kannada.asianetnews.com/state/bidadi-township-project-to-become-world-class-ai-city-says-dk-shivakumar-promises-rs-3-crore-land-compensation-gdp/articleshow-hwcl0z5</link>
            <guid isPermaLink="true">https://kannada.asianetnews.com/state/bidadi-township-project-to-become-world-class-ai-city-says-dk-shivakumar-promises-rs-3-crore-land-compensation-gdp/articleshow-hwcl0z5</guid>
            <pubDate>Mon, 10 Aug 2026 09:11:55 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್&zwnj;ಶಿಪ್&zwnj; ಯೋಜನೆಯನ್ನು ವಿಶ್ವದರ್ಜೆಯ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲಾಗುವುದು ಮತ್ತು ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kww8fr199rqc444bvyh4z0yt,imgname-bj-1783359856680.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬಿಡದಿ ಟೌನ್&zwnj;ಶಿಪ್&zwnj; ವಿರುದ್ಧ ಜೆಡಿಎಸ್, ಬಿಜೆಪಿ ನಾಯಕರು ಪಾದಯಾತ್ರೆ, ರೈತರಿಂದ ಪ್ರತಿಭಟನೆ ಆರಂಭಿಸಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ಈ ಟೌನ್&zwnj;ಶಿಪ್&zwnj; ಅನ್ನು ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಈ ಸಂಬಂಧ ಮುಖ್ಯಮಂತ್ರಿ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಸಂದೇಶ ನೀಡಿರುವ ಅವರು, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್&zwnj;ಶಿಪ್&zwnj; ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಬೆಂಗಳೂರು ದಕ್ಷಿಣದ ಚಿತ್ರಣ ಬದಲು:&lt;/h2&gt;&lt;p&gt;ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣದ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ. ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿ ರು.ಗಳಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಹಣದ ಬದಲು ಭೂಮಿ ಬಯಸುವ ರೈತರಿಗೆ ಶೇ.50 ಅಭಿವೃದ್ಧಿಪಡಿಸಿದ ಜಾಗ ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿ ಎಂದು ರೈತರ ಬಳಿ ಮನವಿ ಮಾಡಿಕೊಂಡಿದ್ದಾರೆ.&lt;/p&gt;&lt;h2&gt;ಪಾದಯಾತ್ರೆಯ ಮಾಡಲು ದಳಕ್ಕೆ ಹಕ್ಕು ಇದೆ: ಸಿಎಂ&lt;/h2&gt;&lt;p&gt;ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಸತ್ಯ ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಅಧಿವೇಶನದಲ್ಲಿ ಬಂದು ಚರ್ಚೆ ಮಾಡಲಿ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ, ಪಾದಯಾತ್ರೆ ಮಾಡುವ ಹಕ್ಕಿದೆ. ಅವರು ಏನು ಬೇಕಾದರೂ ಮಾಡಲಿ. ಅಧಿವೇಶನದಲ್ಲಿ ಬಂದು ಮಾತನಾಡಲಿ. ಎಲ್ಲೆಲ್ಲಿ ದೂರು ನೀಡುತ್ತಾರೋ ನೀಡಲಿ, ನಾವು ಯಾರಿಗೂ ಬಲವಂತ ಮಾಡುತ್ತಿಲ್ಲ. ಯಾವ ಸಂದರ್ಭದಲ್ಲಿ ಯಾವ ಉತ್ತರ ಕೊಡಬೇಕೋ ಕೊಡುತ್ತೇವೆ ಎಂದು ತಿಳಿಸಿದರು.&lt;/p&gt;]]></content:encoded>
            <category>ramanagara</category>
            <dc:creator>Gowthami K</dc:creator>
            <atom:link href="https://kannada.asianetnews.com/state/bidadi-township-project-to-become-world-class-ai-city-says-dk-shivakumar-promises-rs-3-crore-land-compensation-gdp/articleshow-hwcl0z5"/>
        </item>
        <item>
            <title><![CDATA[ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ]]></title>
            <link>https://kannada.asianetnews.com/karnataka-districts/bidadi-land-acquisition-farmers-protest-byramangala-gvd-videoshow-i6t2xrp</link>
            <guid isPermaLink="true">https://kannada.asianetnews.com/karnataka-districts/bidadi-land-acquisition-farmers-protest-byramangala-gvd-videoshow-i6t2xrp</guid>
            <pubDate>Wed, 15 Jul 2026 18:28:38 +0530</pubDate>
            <description><![CDATA[&lt;p&gt;Bidadi Farmers Protest: ಭೂ ಸಮೀಕ್ಷೆಗೆ ಆಗಮಿಸಿದ್ದ ಅಧಿಕಾರಿಗಳ ವಿರುದ್ಧ ರೈತರು ಹಾಗೂ ರೈತ ಮಹಿಳೆಯರು ಆಕ್ರೋಶ ಹೊರಹಾಕಿದ ಪರಿಣಾಮ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.&lt;/p&gt;]]></description>
            <media:content url="https://geo.dailymotion.com/player/x1tbu.html?video=xapf9uu" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜು.15): &lt;/strong&gt;ಬಿಡದಿ ಸಮೀಪದ ಬೈರಮಂಗಲ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಭೂ ಸಮೀಕ್ಷೆಗೆ ಆಗಮಿಸಿದ್ದ ಅಧಿಕಾರಿಗಳ ವಿರುದ್ಧ ರೈತರು ಹಾಗೂ ರೈತ ಮಹಿಳೆಯರು ಆಕ್ರೋಶ ಹೊರಹಾಕಿದ ಪರಿಣಾಮ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಭೂಸ್ವಾಧೀನಕ್ಕಾಗಿ ಅಧಿಕಾರಿಗಳು ಸರ್ವೇ ನಡೆಸಲು ಮುಂದಾಗುತ್ತಿದ್ದಂತೆಯೇ ನೂರಾರು ರೈತರು ಅವರನ್ನು ತಡೆದು ಪ್ರತಿಭಟನೆ ನಡೆಸಿದರು. ಕೆಲ ರೈತ ಮಹಿಳೆಯರು ಪೊರಕೆ ಹಿಡಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆ, ಪ್ರತಿಭಟನಾಕಾರರು ಅಧಿಕಾರಿಗಳ ವಾಹನಗಳನ್ನು ಮುತ್ತಿಗೆ ಹಾಕಿದರು. ಈ ವೇಳೆ ಭೂ ಸಮೀಕ್ಷೆಗೆ ಬಂದ ಕೆಲವು ವಾಹನಗಳ ಗಾಜುಗಳು ಜಖಂಗೊಂಡ ಘಟನೆ ಕೂಡ ನಡೆಯಿತು.&lt;/p&gt;&lt;p&gt;ಸರ್ಕಾರ ಯಾವುದೇ ಕಾರಣಕ್ಕೂ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. &quot;ಬಲವಂತವಾಗಿ ಸರ್ವೇ ನಡೆಸಲು ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ&quot; ಎಂದು ಎಚ್ಚರಿಕೆ ನೀಡಿದ ಕೆಲ ರೈತರು ಕ್ರಿಮಿನಾಶಕದ ಬಾಟಲಿಗಳನ್ನು ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ರೈತರೊಂದಿಗೆ ನೇರ ಮಾತುಕತೆ ನಡೆಸಿದ ಅವರು, ಕಾನೂನು ಕೈಗೆತ್ತಿಕೊಳ್ಳದಂತೆ ಮನವಿ ಮಾಡಿದರು. ಆದರೆ, ರೈತರು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. &quot;ನಮ್ಮ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲು ಯತ್ನಿಸಿದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ&quot; ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಇದೇ ವೇಳೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಿಡಿಯೋ ಸಂದೇಶದ ಮೂಲಕ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿದರು. ಶಾಂತಿಯುತ ಹೋರಾಟ ನಡೆಸುವಂತೆ ಮನವಿ ಮಾಡಿದ ಅವರು, ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಭೂಸ್ವಾಧೀನ ಪ್ರಕ್ರಿಯೆ ಕುರಿತು ಸರ್ಕಾರ ಮತ್ತು ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭೂಸ್ವಾಧೀನ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆ, ಬೈರಮಂಗಲದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bidadi-land-acquisition-farmers-protest-byramangala-gvd-videoshow-i6t2xrp"/>
        </item>
        <item>
            <title><![CDATA[ಮಗಳ ಕಣ್ಮುಂದೆಯೇ ಜೀವ ಚೆಲ್ಲಿದ ತಂದೆ! ಊಟ ಮಾಡುವಾಗಲೇ ಎದೆನೋವು.. ಮುಂದಾಗಿದ್ದೇನು?]]></title>
            <link>https://kannada.asianetnews.com/karnataka-districts/a-man-heart-attacked-and-dies-in-front-of-his-dauhter-in-manchanashettahalli-ramanaggar-taluku-rav/articleshow-lg5438n</link>
            <guid isPermaLink="true">https://kannada.asianetnews.com/karnataka-districts/a-man-heart-attacked-and-dies-in-front-of-his-dauhter-in-manchanashettahalli-ramanaggar-taluku-rav/articleshow-lg5438n</guid>
            <pubDate>Sun, 06 Sep 2026 11:39:08 +0530</pubDate>
            <description><![CDATA[&lt;p&gt;Ramanagara heart attack ರಾಮನಗರ ತಾಲೂಕಿನ ಮಂಚನಶೆಟ್ಟಹಳ್ಳಿ ಗ್ರಾಮದಲ್ಲಿ, ಶಿವಲಿಂಗಯ್ಯ ಎಂಬುವವರು ಊಟ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಗಳು ಮತ್ತು ಅಳಿಯನ ಕಣ್ಣೆದುರೇ ನಡೆದ ಈ ದುರಂತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1tnaszmbmk68hxzsc76y5g4,imgname-ramanaggara-heart-attack-incident-1788674926580.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಸೆ.6):&lt;/strong&gt; ಊಟ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ವ್ಯಕ್ತಿಯೊಬ್ಬರು ಮಗಳು ಹಾಗೂ ಅಳಿಯನ ಕಣ್ಣುಮುಂದೆಯೇ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ರಾಮನಗರ ತಾಲೂಕಿನ ಮಂಚನಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಶಿವಲಿಂಗಯ್ಯ, ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ, ಘಟನೆ ಆಗಸ್ಟ್ 22 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಕುಸಿದುಬಿಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ&lt;/h2&gt;&lt;p&gt;ಊಟ ಮಾಡುವಾಗ ಶಿವಲಿಂಗಯ್ಯನಿಗೆ ಪದೇಪದೆ ಎದೆ ನೋವು ಕಾಣಿಸಿಕೊಂಡಿದೆ. ಎದೆಯಲ್ಲಿ ನೋವು ಆಗ್ತಿರೋದ್ರಿಂದ ಮತ್ತೆ ಎದೆ ಮುಟ್ಟಿಕೊಳ್ಳುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಇತ್ತ ಪಕ್ಕದಲ್ಲಿ ಮಗಳು ಮತ್ತು ಅಳಿಯ ಊಟಕ್ಕೆ ಕುಳಿತಿರುವುದು ವಿಡಿಯೋದಲ್ಲಿ ಕಾಣಿಸಿದೆ. ಇದು ಸಾಮಾನ್ಯ ನೋವು ಎಂದೆನಿಸಿತೋ ಏನೋ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಊಟ ನಿಲ್ಲಿಸಿ ನೀರು ಕುಡಿದಿದ್ದಾರೆ, ನೀರು ಕುಡಿದ ಕೆಲವೇ ಕ್ಷಣದಲ್ಲಿ ಕುಸಿದು ಬಿದ್ದಿದ್ದಾರೆ. ಇತ್ತ ಕುಸಿದು ಬಿದ್ದಿದ್ದು ತಕ್ಷಣ ಮಗಳು ಅಳಿಯನ ಗಮನಕ್ಕೆ ಬಂದಿಲ್ಲ. ಬಳಿಕ ಅಪ್ಪ ಕುಸಿದುಬಿದ್ದಿದ್ದು ಕಂಡು ಮಗಳು ಓಡಿಬಂದು ಸೋಫಾ ಮೇಲೆ ಕುಡಿಸಿ ಸಿಪಿಆರ್ ಮಾಡಿದ್ದಾಳೆ. ಆದರೂ ಸ್ಪಂದಿಸದೇ ಸ್ಥಳದಲ್ಲೇ ತಂದೆ ಶಿವಲಿಂಗಯ್ಯ ಸಾವನ್ನಪ್ಪಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/a-man-heart-attacked-and-dies-in-front-of-his-dauhter-in-manchanashettahalli-ramanaggar-taluku-rav/articleshow-lg5438n"/>
        </item>
        <item>
            <title><![CDATA[Credit war:  ಕವಲುದಾರಿ ಹಿಡಿದ ಮೈತ್ರಿ: ಜೆಡಿಎಸ್ - ಬಿಜೆಪಿ ದೋಸ್ತಿಗಳ ಮಧ್ಯೆ ಕ್ರೆಡಿಟ್ ವಾರ್]]></title>
            <link>https://kannada.asianetnews.com/politics/bidadi-township-row-credit-war-between-jds-and-bjp-allies-rav/articleshow-pnr3cw6</link>
            <guid isPermaLink="true">https://kannada.asianetnews.com/politics/bidadi-township-row-credit-war-between-jds-and-bjp-allies-rav/articleshow-pnr3cw6</guid>
            <pubDate>Sun, 19 Jul 2026 07:25:59 +0530</pubDate>
            <description><![CDATA[&lt;p&gt;ಬಿಡದಿ ಟೌನ್ ಶಿಪ್) ಯೋಜನೆ ಪರವಾಗಿ ಮತ್ತು ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿ ತಾರಕಕ್ಕೇರಿದೆ. ಮತ್ತೊಂದೆಡೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxw1038k9c9e2nstcmapt3qb,imgname-----------------------2026-07-19t071834.056-1784425745682.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜು.19):&lt;/strong&gt; ಬಿಡದಿ ಟೌನ್ ಶಿಪ್) ಯೋಜನೆ ಪರವಾಗಿ ಮತ್ತು ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿ ತಾರಕಕ್ಕೇರಿದೆ. ಮತ್ತೊಂದೆಡೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.&lt;/p&gt;&lt;p&gt;ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಈ ವಿಚಾರ ಸದ್ಯ ರಾಜ್ಯ ಮಾತ್ರವಲ್ಲದೆ ದೇಶದಲ್ಲಿಯೂ ಚರ್ಚೆಯಾಗುತ್ತಿರುವ ಹಾಗೂ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿದೆ.&lt;/p&gt;&lt;h2&gt;ಜೆಡಿಎಸ್ ಹೋರಾಟಕ್ಕೆ ರೈತ, ಕನ್ನಡ ಸಂಘಟನೆಗಳ ಬಲ&lt;/h2&gt;&lt;p&gt;ಭೂ ಸ್ವಾಧೀನ ವಿರುದ್ಧ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಮಿತಿ ರಚಿಸಿಕೊಂಡು ಹೋರಾಟ ಆರಂಭಿಸಿದರು. ಬೈರಮಂಗಲ ವೃತ್ತವನ್ನೇ ಚಳವಳಿಯ ಕೇಂದ್ರ ಸ್ಥಳವನ್ನಾಗಿ ಮಾಡಿಕೊಂಡಿತು. ರೈತರ ಹೋರಾಟಕ್ಕೆ ಅನೇಕ ರೈತ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿ ಶಕ್ತಿ ತುಂಬಿದವು. ಜೆಡಿಎಸ್ ಹೋರಾಟವನ್ನು ಬೆಂಬಲಿಸಿದ್ದು ಮಾತ್ರವಲ್ಲದೆ ಸಂಪೂರ್ಣವಾಗಿ ಭಾಗವಹಿಸಿತು. ಅದಾದ ಬಳಿಕ ಬಿಜೆಪಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತು..&lt;/p&gt;&lt;p&gt;ಇದೀಗ ಟೌನ್ ಶಿಪ್ ಯೋಜನೆ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಹೋರಾಟ ತೀವ್ರಗೊಳಿಸಿವೆ. ಆದರೆ, ಉಭಯ ಪಕ್ಷಗಳ ನಾಯಕರು ಒಗ್ಗಟ್ಟು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿಯೇ ಟೌನ್ ಶಿಪ್ ವಿರುದ್ಧದ ಹೋರಾಟ ಕವಲು ದಾರಿಯಲ್ಲಿ ಸಾಗಿದೆ.&lt;/p&gt;&lt;h3&gt;ದಳ - ಕಮಲದಲ್ಲಿ ಮೂಡದ ಮೈತ್ರಿ:&lt;/h3&gt;&lt;p&gt;ಈಗ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಇದ್ದರೂ, ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಎರಡೂ ಪಕ್ಷಗಳ ನಡುವೆ ಮೈತ್ರಿ ಮೂಡಿಲ್ಲ. ಆಡಳಿತಾರೂಢ ಕಾಂಗ್ರೆಸ್&zwnj; ಸರ್ಕಾರದ ವಿರುದ್ಧ ಎರಡು ಪ್ರಮುಖ ವಿರೋಧ ಪಕ್ಷಗಳ ಭಿನ್ನ ನಡೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.&lt;/p&gt;&lt;p&gt;ಈ ಟೌನ್&zwnj;ಶಿಪ್ ಯೋಜನೆ ವಿರೋಧಿಸಿ ಕಳೆದ 495 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಚಳವಳಿಯ ವೇದಿಕೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಕಾಣಿಸಿಕೊಂಡಿಲ್ಲ. ಯೋಜನೆ ವಿರುದ್ಧದ ಸುದ್ದಿಗೋಷ್ಠಿಗಳಾಗಲಿ ಅಥವಾ ಯೋಜನಾ ವ್ಯಾಪ್ತಿಯ ಗ್ರಾಮಗಳಿಗೆ ಭೀಟಿ ನೀಡುವ ವಿಚಾರದಲ್ಲಿಯೂ ಎರಡೂ ಪಕ್ಷದ ನಾಯಕರು ಒಗ್ಗಟ್ಟು ಪ್ರದರ್ಶಿಸುತ್ತಿಲ್ಲ.&lt;/p&gt;&lt;p&gt;ಕೆಲ ದಿನಗಳ ಹಿಂದೆಯಷ್ಟೇ ಯೋಜನಾ ಪ್ರದೇಶದ ಗ್ರಾಮಗಳಲ್ಲಿ ಜೆಡಿಎಸ್&zwnj; ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ನಡೆಸಿದಾಗ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿರವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿ ಬೈರಮಂಗಲ ವೃತ್ತಕ್ಕೆ ಭೇಟಿ ನೀಡಿದ್ದರು. ಆಗಲೂ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸುಳಿದಿರಲಿಲ್ಲ.&lt;/p&gt;&lt;p&gt;ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ನೇತೃತ್ವದ ಬಿಜೆಪಿ ನಿಯೋಗ ಗ್ರಾಮಗಳಿಗೆ ಬಂದಾಗ ಜೆಡಿಎಸ್&zwnj; ಮುಖಂಡರು ಹಾಗೂ ಕಾರ್ಯಕರ್ತರು ಕಾಣಿಸಿಕೊಳ್ಳಲಿಲ್ಲ.&lt;/p&gt;&lt;h3&gt;3 ದಿನ ಕಾಲ್ನಡಿಗೆಗೆ ಜೆಡಿಎಸ್ ಪ್ಲ್ಯಾನ್&zwnj;:&lt;/h3&gt;&lt;p&gt;ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ನಡೆಸಿದ ಹೋರಾಟದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಆದರೀಗ ಜೆಡಿಎಸ್ ನಾಯಕರು ತರಾತುರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಬಿಜೆಪಿಗೂ ಮೊದಲೇ ಪಾದಯಾತ್ರೆ ದಿನಾಂಕ ಘೋಷಣೆ ಮಾಡಿದೆ. &zwnj;&lt;/p&gt;&lt;p&gt;ಜೆಡಿಎಸ್ ಜುಲೈ 30, 31 ಮತ್ತು ಆಗಸ್ಟ್ 1 ರಂದು ಸುಮಾರು 38 ಕಿಲೋಮೀಟರ್&zwnj;ಗಳ 3 ದಿನಗಳ ಕಾಲ ಪಾದಯಾತ್ರೆ ನಡೆಸಲು ಉದ್ದೇಶಿಸಿದೆ. ಬಿಜೆಪಿ ನಾಯಕರು ನಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿದರೆ ಒಟ್ಟಾಗಿ ಹೋಗಬಹುದು ಎಂದು ಜೆಡಿಎಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಉಭಯ ಪಕ್ಷಗಳು ಸೇರಿ ಹೋರಾಟ ನಡೆಸುವ ಕುರಿತು ಎರಡೂ ಪಕ್ಷಗಳ ನಾಯಕರ ಮಟ್ಟದಲ್ಲಿ ತೀರ್ಮಾನವಾಗಬೇಕು ಎನ್ನುತ್ತಾರೆ ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು.&lt;/p&gt;&lt;p&gt;ಬಿಡದಿ ಟೌನ್ ಶಿಪ್ ಯೋಜನೆಗಾಗಿ ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಕಂದಾಯ ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ 15 ತಿಂಗಳ ಹಿಂದೆಯೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಜೂನ್ 10ರಂದು 3 ಗ್ರಾಮ ಹಾಗೂ ಜುಲೈ 15ರಂದು 4 ಕಂದಾಯ ಗ್ರಾಮಗಳ ಭೂ ಸ್ವಾಧೀನಕ್ಕಾಗಿ ಫೈನಲ್ ನೋಟಿಫಿಕೇಷನ್ ಹೊರ ಬಿದ್ದಿದೆ. ಮೊದಲ ಹಂತದಲ್ಲಿನ 518 ಎಕರೆ 45 ಗುಂಟೆ ಮತ್ತು ಎರಡನೇ ಹಂತದಲ್ಲಿನ 4941 ಎಕರೆ 59 ಗುಂಟೆ ಸೇರಿ ಒಟ್ಟು 5460 ಎಕರೆ 4 ಗುಂಟೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದಂತಾಗಿದೆ. ಇನ್ನು 2 ಕಂದಾಯ ಗ್ರಾಮಗಳ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ಮಾತ್ರ ಬಾಕಿ ಉಳಿದಿದೆ.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bidadi-township-row-credit-war-between-jds-and-bjp-allies-rav/articleshow-pnr3cw6"/>
        </item>
        <item>
            <title><![CDATA[ಬಿಡದಿ ಟೌನ್‌ಶಿಪ್ ತಾತ್ಕಾಲಿಕ ಸ್ಥಗಿತ, 3 ತಿಂಗಳಲ್ಲಿ ಸಮಿತಿ ರಚನೆ: ಸಿಎಂ ಡಿಕೆಶಿ ಸುದೀರ್ಘ ಸುದ್ದಿಗೋಷ್ಠಿ ಸಾರಾಂಶ]]></title>
            <link>https://kannada.asianetnews.com/karnataka-districts/bidadi-township-row-dk-shivakumar-hits-back-at-hd-kumaraswamy-with-dokuments-review-committee-project-gdp/articleshow-qbz2rpi</link>
            <guid isPermaLink="true">https://kannada.asianetnews.com/karnataka-districts/bidadi-township-row-dk-shivakumar-hits-back-at-hd-kumaraswamy-with-dokuments-review-committee-project-gdp/articleshow-qbz2rpi</guid>
            <pubDate>Wed, 15 Jul 2026 14:56:33 +0530</pubDate>
            <description><![CDATA[ಬಿಡದಿ ಟೌನ್&zwnj;ಶಿಪ್ ಯೋಜನೆ ವಿವಾದದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್, ಈ ಯೋಜನೆಗೆ ಅಡಿಪಾಯ ಹಾಕಿದ್ದೇ ಕುಮಾರಸ್ವಾಮಿ ಸರ್ಕಾರ ಎಂದು ದಾಖಲೆ ಸಮೇತ ಆರೋಪಿಸಿದ್ದಾರೆ. ರೈತರ ಒಪ್ಪಿಗೆಯಿಲ್ಲದೆ ಭೂಸ್ವಾಧೀನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿ, ಸದ್ಯಕ್ಕೆ ಯೋಜನೆ ಸ್ಥಗಿತಗೊಳಿಸಿ ಸಮಿತಿ ರಚಿಸುವುದಾಗಿ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxjhbbc4n19mjqk19hbzy63z,imgname-dk-shivakumar--9--1784107347332.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬಿಡದಿ ಟೌನ್&zwnj;ಶಿಪ್ (ಉಪನಗರ) ಯೋಜನೆ ವಿವಾದದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವ ಹೆಚ್&zwnj; ಡಿ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅತ್ಯಂತ ತೀಕ್ಷ್ಣ ಹಾಗೂ ವ್ಯವಸ್ಥಿತ ದಾಖಲೆಗಳೊಂದಿಗೆ ಮಾಧ್ಯಮಗೋಷ್ಠಿ ನಡೆಸಿದ ಡಿಕೆಶಿ , ಈ ಇಡೀ ಯೋಜನೆಯ ಇತಿಹಾಸವನ್ನು ಬಿಚ್ಚಿಡುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ.&lt;/p&gt;&lt;h2&gt;&quot;ನಾನು ಈ ಯೋಜನೆಯ ಪಿತಾಮಹನಲ್ಲ&quot;&lt;/h2&gt;&lt;p&gt;&quot;ಬಿಡದಿಯಲ್ಲಿ ನಿನ್ನೆ ನಡೆದ ಘಟನೆ ನನಗೆ ತೀವ್ರ ನೋವುಂಟು ಮಾಡಿದೆ. ನಮ್ಮ ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಕೊಡಲಾಗಿದೆ. ರೈತರನ್ನು ತಪ್ಪು ದಾರಿಗೆ ಎಳೆಯುವ ವ್ಯವಸ್ಥಿತ ಸಂಚು ರಾಜಕೀಯವಾಗಿ ನಡೆಯುತ್ತಿದೆ. ಆದರೆ ನಾನಿಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ ಬಿಡದಿ ಟೌನ್&zwnj;ಶಿಪ್ ಯೋಜನೆ ನನ್ನ ಕನಸಿನ ಯೋಜನೆಯಲ್ಲ, ಇದಕ್ಕೆ ನಾನೇನೂ ಮುನ್ನುಡಿ ಬರೆದಿಲ್ಲ. ಮುನ್ನುಡಿ ಬರೆದವರು ನೀವು. ನಾನು ಕೇವಲ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ, ಅಂದಿನ ಸರ್ಕಾರಗಳ ಆದೇಶದಂತೆ ಕೆಲಸ ಮಾಡುತ್ತಿದ್ದೇನೆ ಅಷ್ಟೇ.&quot; ಎಂದರು.&lt;/p&gt;&lt;p&gt;ವೈಯಕ್ತಿಕವಾಗಿ ನಾನು ವ್ಯವಸಾಯ ಮಾಡದಿದ್ದರೂ, ಜನ್ಮತಃ ನಾನೊಬ್ಬ ರೈತನ ಮಗ. ರೈತರ ಕಷ್ಟ, ಶ್ರಮ ಮತ್ತು ಅವರ ನೋವು ನನಗೆ ಚೆನ್ನಾಗಿ ಗೊತ್ತಿದೆ. ಯಾರಿಗೆ ನೋವುಂಟು ಮಾಡುವುದು ಕೂಡ ನನಗೆ ಇಷ್ಟವಿಲ್ಲ&quot; ಎಂದರು.&lt;/p&gt;&lt;h2&gt;ಟೌನ್&zwnj;ಶಿಪ್ ಅಡಿಪಾಯ ಹಾಕಿದ್ದು ಯಾರು?&lt;/h2&gt;&lt;p&gt;ಬಿಡದಿ ಟೌನ್&zwnj;ಶಿಪ್ ವಿಷಯದಲ್ಲಿ ಜೆಡಿಎಸ್ ನಾಯಕರು ನಡೆಸುತ್ತಿರುವ ಹೋರಾಟ ಕೇವಲ ರಾಜಕೀಯ ಗಿಮಿಕ್ ಎಂದ ಡಿ.ಕೆ. ಶಿವಕುಮಾರ್, ಯೋಜನೆಗೆ ಅಡಿಪಾಯ ಹಾಕಿದ ದಿನಾಂಕಗಳನ್ನು ಕಾಗದಪತ್ರಗಳ ಸಮೇತ ಜನರ ಮುಂದಿಟ್ಟರು.&lt;/p&gt;&lt;p&gt;&lt;strong&gt;ಸೆಪ್ಟೆಂಬರ್ 23, 2006: &lt;/strong&gt;ಅಂದು ರಾಜ್ಯದಲ್ಲಿದ್ದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು ಮತ್ತು ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾಗಿದ್ದರು. ಅವರದೇ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಸುತ್ತಮುತ್ತ 5 ಸಮಗ್ರ ಉಪನಗರಗಳನ್ನು (ಟೌನ್&zwnj;ಶಿಪ್&zwnj;ಗಳನ್ನು) ಅಭಿವೃದ್ಧಿಪಡಿಸಬೇಕು ಎಂದು ತೀರ್ಮಾನಿಸಲಾಗಿತ್ತು.&lt;/p&gt;&lt;p&gt;&lt;strong&gt;ಜೂನ್ 28, 2006: &lt;/strong&gt;ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಸಮಗ್ರ ಉಪನಗರ ನಿರ್ಮಾಣಕ್ಕೆ ಗ್ಲೋಬಲ್ ಟೆಂಡರ್ ಕರೆಯಲು ಕುಮಾರಸ್ವಾಮಿ ನೇತೃತ್ವದ ಸರ್ಕಾರವೇ ನಿರ್ಧರಿಸಿತ್ತು.&lt;/p&gt;&lt;p&gt;&lt;strong&gt;ನವೆಂಬರ್ 29, 2006:&lt;/strong&gt; ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದಂತೆ ಬಿಡದಿ ಯೋಜನಾ ಪ್ರದೇಶದ ಜಮೀನುಗಳಲ್ಲಿ ಯಾವುದೇ ಖಾಸಗಿ ಪ್ರಾಧಿಕಾರವಾಗಲಿ ಅಥವಾ ಯಾರೇ ಆಗಲಿ ಯಾವುದೇ ಕಾಮಗಾರಿಗೆ ಅನುಮತಿ ನೀಡಬಾರದು ಎಂದು ಆದೇಶಿಸಿ ಆ ಇಡೀ ಪ್ರದೇಶವನ್ನು 'ರೆಡ್ ಝೋನ್' ಮಾಡಲಾಗಿತ್ತು. ಅಲ್ಲಿನ ವಸತಿ, ವಾಣಿಜ್ಯ ಮತ್ತು ಹಳ್ಳಿಯ ಮನೆಗಳನ್ನು ಒಕ್ಕಲೆಬ್ಬಿಸಲು ಅಂದೇ ಅವಕಾಶ ಕಲ್ಪಿಸಲಾಗಿತ್ತು.&lt;/p&gt;&lt;p&gt;&lt;strong&gt;ಜೂನ್ 11, 2007: &lt;/strong&gt;ಅಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಆರ್. ಅಶೋಕ್ ಅವರು ಸಚಿವರಾಗಿದ್ದಾಗ ಮಂಡಾಲಹಳ್ಳಿ ಸೇರಿದಂತೆ ಮತ್ತೆರಡು ಗ್ರಾಮಗಳನ್ನು ಈ ಯೋಜನೆಗೆ ಸೇರಿಸಲಾಯಿತು.&lt;/p&gt;&lt;p&gt;&lt;strong&gt;2010 ಹಾಗೂ 2011:&lt;/strong&gt; ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಜಾಗತಿಕ ಟೆಂಡರ್ ಮುಂದುವರೆಸಲಾಯಿತು. ನಂತರ ನವೆಂಬರ್ 16, 2011 ರಂದು ರೈತರಿಗೆ ಪ್ರತಿ ಎಕರೆಗೆ ಗರಿಷ್ಠ 22 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿತ್ತು.&lt;/p&gt;&lt;p&gt;&lt;strong&gt;ಹೊಸ ಹೂಡಿಕೆಗೆ ಚಾಲನೆ&lt;/strong&gt;&lt;/p&gt;&lt;p&gt;2019 ಮತ್ತು ನಂತರ ರಾಜ್ಯಕ್ಕೆ ಹೊಸ ಬಂಡವಾಳ ಹೂಡಿಕೆ ತರಲು ಟೌನ್&zwnj;ಶಿಪ್ ಅಗತ್ಯವಿದೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದ್ದರು.&lt;/p&gt;&lt;p&gt;&quot;ಹೀಗೆ ಹಂತ ಹಂತವಾಗಿ ಈ ಇಡೀ ಯೋಜನೆಯನ್ನು ರೂಪಿಸಿ, ರೈತರ ಭೂಮಿಯನ್ನು ರೆಡ್ ಝೋನ್ ವ್ಯಾಪ್ತಿಗೆ ತಂದು, ರಿಯಲ್ ಎಸ್ಟೇಟ್&zwnj;ಗೆ ದಾರಿ ಮಾಡಿಕೊಟ್ಟಿದ್ದೇ ಕುಮಾರಸ್ವಾಮಿ ಅಣ್ಣನವರು. ಇಂದು ಅದೇ ಆದೇಶಗಳನ್ನು ನಾನು ಜಾರಿಗೊಳಿಸುತ್ತಿದ್ದರೆ ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ,&quot; ಎಂದು ಡಿಕೆಶಿ ವ್ಯಂಗ್ಯವಾಡಿದರು.&lt;/p&gt;&lt;h2&gt;ನಿಮ್ಮ ಕುಟುಂಬದ 36 ಎಕರೆ ಭೂಮಿ ಹೇಗೆ ಬಚಾವಾಯಿತು?&quot;&lt;/h2&gt;&lt;p&gt;ಜೆಡಿಎಸ್ ನಾಯಕರನ್ನು ನೇರವಾಗಿ ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, &quot;ನಾನು ರಿಯಲ್ ಎಸ್ಟೇಟ್ ದಂಧೆ ಮಾಡಿದ್ದೇನಾ ಅಣ್ಣಾ, ಅಪ್ಪಾಜಿ? ಯಾರು ಮಾಡಿದ್ದು ಈ ಕೆಲಸವನ್ನು? ಯಾರು ನಿಮಗೆ ರಾಜಕೀಯವಾಗಿ ಬದುಕು ಕೊಟ್ಟರೋ, ಅವರ ಮನೆಗಳನ್ನು, ಆಸ್ತಿಗಳನ್ನು ಕಿತ್ತುಕೊಳ್ಳಲು ಅಂದು ರೂಪಿಸಿದ ಮೋಸದ ಸಂಚನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ?&quot; ಎಂದು ಆಕ್ರೋಶ ಹೊರಹಾಕಿದರು.&lt;/p&gt;&lt;p&gt;&quot;ಇದೇ ಟೌನ್&zwnj;ಶಿಪ್ ವ್ಯಾಪ್ತಿಯಲ್ಲಿ ನಿಮ್ಮ ಕುಟುಂಬಸ್ಥರು 36 ಎಕರೆ ಜಮೀನು ತಗೊಂಡಿದ್ದಾರೆ. ಆದರೆ ಅಚ್ಚರಿಯೆಂದರೆ ಅದರಲ್ಲಿ ನಿಮ್ಮ ಒಂದು ಎಕರೆ ಜಮೀನು ಕೂಡ ಭೂಸ್ವಾಧೀನವಾಗಿಲ್ಲ! ನಿಮ್ಮ ಕ್ಯಾತಗಾನಹಳ್ಳಿ ಜಮೀನು ಏಕೆ ಬಿಡದಿ ಇಂಡಸ್ಟ್ರಿಯಲ್ ಟೌನ್&zwnj;ಗೆ ಒಳಪಡಲಿಲ್ಲ? ಅದರ ಪಕ್ಕದಲ್ಲೇ ಒಂದು ರಸ್ತೆ ಮಾಡಿ, ಭೂಸ್ವಾಧೀನ ಮಾಡಿ ಅಲ್ಲಿ ಭಾರಿ ಪರಿಹಾರ ಪಡೆದುಕೊಂಡಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು?&quot;&lt;/p&gt;&lt;p&gt;&quot;ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ, ನೀವು ಆದೇಶ ಮಾಡಿ 15 ವರ್ಷಗಳಾಗಿತ್ತು. ಆಗ ಅದೇ ಟೌನ್&zwnj;ಶಿಪ್ ಭೂಮಿಗೆ 80 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಪರಿಹಾರ ಕೊಡಿಸಿದ್ರಲ್ಲ, ಆಗ ನಿಮ್ಮ ಹೋರಾಟದ ಧ್ವನಿ ಎಲ್ಲಿ ಹೋಗಿತ್ತು? ಆಗ ನಿಮಗೆ ವಿಧಾನಸೌಧದ ಗಾಂಧಿ ಪ್ರತಿಮೆ ನೆನಪಾಗಲಿಲ್ಲವೇ? ಇಂದು ಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬಂದಾಗ ಇರುವ ಛಲ ಅಂದು ಯಡಿಯೂರಪ್ಪ ಅವರ ಮಗ ಪ್ರತಿಭಟನೆಗೆ ಹೋದಾಗ ನಿಮಗೆ ಯಾಕೆ ಇರಲಿಲ್ಲ?&quot; ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.&lt;/p&gt;&lt;h2&gt;2-3 ತಿಂಗಳಲ್ಲಿ ಸಮಿತಿ ರಚನೆ, ಅಲ್ಲಿಯವರೆಗೆ ಟೌನ್ಶಿಪ್ ಯೋಜನೆ ಸ್ಥಗಿತ&lt;/h2&gt;&lt;p&gt;ಪ್ರತಿಭಟನೆಯ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದನ್ನು ತೀವ್ರವಾಗಿ ಖಂಡಿಸಿದ ಡಿ.ಕೆ. ಶಿವಕುಮಾರ್ , ನಮ್ಮ ಅಧಿಕಾರಿಗಳಿಗೆ ಯಾವ ತಾಯಂದಿರು ಕೂಡ ಪೊರಕೆಯಲ್ಲಿ ಹೊಡೆಯುವುದು ಬೇಡ. ನಿಮಗೆ ಹೊಡೆಯಬೇಕು ಎನಿಸಿದರೆ ನನಗೆ ಬಂದು ಹೊಡೆಯಿರಿ, ನಾನು ಸಿದ್ಧನಿದ್ದೇನೆ. ಅಧಿಕಾರಿಗಳು ಕೇವಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾನು ಯಾರ ಜಮೀನನ್ನೂ ಬಲವಂತವಾಗಿ ಕಿತ್ತುಕೊಳ್ಳುವುದಿಲ್ಲ. ಯಾರಿಗೆ ಸರ್ಕಾರ ನಿಗದಿಪಡಿಸಿದ ಹಣ ಬೇಕೋ ಅವರು ಜಮೀನು ಕೊಟ್ಟು ಪರಿಹಾರ ಪಡೆಯಬಹುದು. ಇಷ್ಟವಿಲ್ಲದಿದ್ದರೆ ತಮ್ಮ ಭೂಮಿಯನ್ನು ತಾವೇ ಇಟ್ಟುಕೊಂಡು ನೆಮ್ಮದಿಯಾಗಿ ಇರಬಹುದು. ರೈತರು ಒಪ್ಪಿದರೆ ಮಾತ್ರ ಯೋಜನೆ ನಡೆಯುತ್ತದೆ. ರೈತರ ಕಷ್ಟ ಸುಖಗಳನ್ನು ಮತ್ತು ಕಾಯ್ದೆಯ ಲೀಗಲ್ ಪಾಯಿಂಟ್&zwnj;ಗಳನ್ನು ಪರಿಶೀಲಿಸಲು ಇನ್ನು ಎರಡು ತಿಂಗಳಲ್ಲಿ ಒಂದು ವಿಶೇಷ ಸಮಿತಿ ರಚನೆ ಮಾಡುತ್ತೇನೆ. ಅಲ್ಲಿಯವರೆಗೆ ಕುಮಾರಸ್ವಾಮಿ ಮಾಡಿದ ಆ 'ರೆಡ್ ಝೋನ್' ಆದೇಶವನ್ನು ನಾನು ಸದ್ಯಕ್ಕೆ ಮುಟ್ಟಲು ಹೋಗುವುದಿಲ್ಲ. ಅದು ಹೇಗಿದೆಯೋ ಹಾಗೇ ಇರಲಿ ಎಂದು ಹೇಳಿದರು.&lt;/p&gt;&lt;h2&gt;&quot;ಜೈಲು ನನಗೇನು ಹೊಸದಲ್ಲ!&quot;&lt;/h2&gt;&lt;p&gt;ತಮ್ಮನ್ನು ಜೈಲಿಗೆ ಕಳುಹಿಸುವ ಸಂಚಿನ ಬಗ್ಗೆಯೂ ಮಾತನಾಡಿದ ಡಿ.ಕೆ. ಶಿವಕುಮಾರ್, ತಾವು ಯಾವುದಕ್ಕೂ ಹೆದರುವುದಿಲ್ಲ ಎಂದರು. &quot;ನನ್ನನ್ನು ಜೈಲಿಗೆ ಕಳುಹಿಸಲು ಹುನ್ನಾರ ನಡೆಯುತ್ತಿದೆ. ಇವತ್ತು ಕೂಡ ಡಿಕೆಶಿ ಜೈಲಿಗೆ ಹೋಗ್ತಾರೆ ಎಂದು ಕುಮಾರಣ್ಣ ಹೇಳುತ್ತಿದ್ದಾರೆ. ಕುಮಾರಣ್ಣ, ನಿಮ್ಮ ಬಳಿ ಒಳ್ಳೆಯ ವಕೀಲರಿದ್ದಾರೆ. ನನ್ನನ್ನು ಜೈಲಿಗೆ ಕಳಿಸುವ ಕಾಲ ಸಮೀಪಿಸುತ್ತಿದೆ ಎಂದು ನೀವೇ ಹೇಳುತ್ತಿದ್ದೀರಿ. ಅದಕ್ಕೂ ನಾನು ಸಿದ್ಧನಿದ್ದೇನೆ. ಜೈಲು ನನಗೇನು ಹೊಸದಲ್ಲ. ನೋವು ಅನುಭವಿಸಿ ಬೆಂದವನು ನಾನು. ನನ್ನ ಉಸಿರಿರುವ ತನಕ ಜನಸೇವೆ ಮಾಡುವುದೇ ನನ್ನ ಧರ್ಮ. ಈ ಪೆನ್ನು ಮತ್ತು ಪೇಪರ್ ರಾಜ್ಯದ ಜನತೆಗೆ ಸೀಮಿತವಾಗಿರುತ್ತದೆ . ಜೈಲು ನನಗೇನು ಹೊಸದಲ್ಲ. ಜೈಲಿನಿಂದ ಬಂದು ಸಿಎಂ ಆಗಿದ್ದೇನೆ. ನೀವು ಚನ್ನಪಟ್ಟಣದಲ್ಲಿ ಕೂತು ಏನು ಮಾತನಾಡುತ್ತಿದ್ದೀರಿ ಮತ್ತು ರೈತರೊಂದಿಗೆ ಏನು ರಾಜಕೀಯ ಗೇಮ್ ಆಡುತ್ತಿದ್ದೀರಿ ಎಂಬ ಪೂರ್ಣ ಅರಿವು ನನಗಿದೆ ಎಂದು ಸವಾಲು ಹಾಕಿದರು.&lt;/p&gt;&lt;p&gt;ತಾವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವರಾಗಿದ್ದಾಗ ಕೇವಲ 6 ಲಕ್ಷ ರೂಪಾಯಿಗೆ ರೈತರ ಮನವೊಲಿಸಿ ಭೂಸ್ವಾಧೀನ ಮಾಡಿದ್ದನ್ನು ನೆನಪಿಸಿದ ಅವರು, ಇಂದು ಆ ಭಾಗದ ರೈತರ ಆಸ್ತಿ ಮೌಲ್ಯ ಎಷ್ಟಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು. ಒಟ್ಟಾರೆಯಾಗಿ, ಜೆಡಿಎಸ್ ನಾಯಕರು ತಮ್ಮದೇ ಹಳೆಯ ನಿರ್ಧಾರಗಳನ್ನು ಮರೆತು, ರಾಜಕೀಯ ಲಾಭಕ್ಕಾಗಿ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.&lt;/p&gt;]]></content:encoded>
            <category>ramanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bidadi-township-row-dk-shivakumar-hits-back-at-hd-kumaraswamy-with-dokuments-review-committee-project-gdp/articleshow-qbz2rpi"/>
        </item>
        <item>
            <title><![CDATA[₹30,000 ಗೃಹಿಣಿಯ ಮಾಸಿಕ ಆದಾಯ; ಮಹಿಳೆ ಕುಟುಂಬಕ್ಕೆ ₹59.69 ಲಕ್ಷ ಪರಿಹಾರ ಕೊಡಿ - ಹೈಕೋರ್ಟ್]]></title>
            <link>https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk</link>
            <guid isPermaLink="true">https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk</guid>
            <pubDate>Sun, 13 Sep 2026 07:18:12 +0530</pubDate>
            <description><![CDATA[&lt;p&gt;ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯೊಬ್ಬರ ಮಾಸಿಕ ಕಾಲ್ಪನಿಕ ಆದಾಯವನ್ನು ₹30,000 ಎಂದು ಪರಿಗಣಿಸಿರುವ ಹೈಕೋರ್ಟ್, ವಿಮಾ ಕಂಪನಿಗೆ ₹59.69 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ನ್ಯಾಯಾಧಿಕರಣ ನೀಡಿದ್ದ ₹11.18 ಲಕ್ಷ ಪರಿಹಾರವನ್ನು ರದ್ದುಗೊಳಿಸಿ, ಗೃಹಿಣಿಯರ ಶ್ರಮ ಮತ್ತು ಕೊಡುಗೆಯನ್ನು ಕನಿಷ್ಠ ಆದಾಯದಲ್ಲಿ ಅಳೆಯಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2c6y2zc6g00saxgcr9sjfeh,imgname-karnataka-high-court--2--1789263809513.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): ಮ&lt;/strong&gt;ನೆ ಕೆಲಸ ನಿರ್ವಹಿಸುವ ಗೃಹಿಣಿಯರ ನಿಸ್ವಾರ್ಥ ಶ್ರಮ ಮತ್ತು ಕುಟುಂಬಕ್ಕೆ ಅವರು ನೀಡುವ ಕೊಡುಗೆಯನ್ನು ಕೇವಲ ಕನಿಷ್ಠ ವೇತನದ ಅಡಿಯಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ 37 ವರ್ಷದ ಗೃಹಿಣಿಯೊಬ್ಬರ ಮಾಸಿಕ ಕಾಲ್ಪನಿಕ ಆದಾಯವನ್ನು ಬರೋಬ್ಬರಿ ₹30,000 ಎಂದು ಪರಿಗಣಿಸಿರುವ ನ್ಯಾಯಾಲಯ, ಮೃತರ ಕುಟುಂಬಕ್ಕೆ ₹59.69 ಲಕ್ಷ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.&lt;/p&gt;&lt;p&gt;ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ (MACT) ನೀಡಿದ್ದ ₹11.18 ಲಕ್ಷ ಪರಿಹಾರ ಆದೇಶವನ್ನು ರದ್ದುಪಡಿಸುವಂತೆ ಕೋರಿ ವಿಮಾ ಕಂಪನಿ ಮತ್ತು ಪರಿಹಾರದ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.&lt;/p&gt;&lt;h2&gt;&lt;strong&gt;ಪರಿಹಾರ ಮೊತ್ತ ₹11.18 ಲಕ್ಷದಿಂದ ₹59.69 ಲಕ್ಷಕ್ಕೆ ಏರಿಕೆ:&lt;/strong&gt;&lt;/h2&gt;&lt;p&gt;ನ್ಯಾಯಾಧಿಕರಣ ಈ ಹಿಂದೆ ನಿಗದಿಪಡಿಸಿದ್ದ ₹11.18 ಲಕ್ಷ ಪರಿಹಾರವನ್ನು ರದ್ದುಗೊಳಿಸಿದ ಹೈಕೋರ್ಟ್, ಮೃತರ ಮಗನಿಗೆ ಪರಿಷ್ಕೃತ ಮೊತ್ತವಾದ ಒಟ್ಟು ₹59,69,000 (ಶೇ.9ರಷ್ಟು ವಾರ್ಷಿಕ ಬಡ್ಡಿ ಸಹಿತ) ಪಾವತಿಸಲು ನ್ಯಾಷನಲ್ ಇನ್ಶೂರೆನ್ಸ್ ಕಂಪನಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗೃಹಿಣಿಯರ ಶ್ರಮವನ್ನು ಗುರುತಿಸುವ ವೇಳೆ ಸುಪ್ರೀಂ ಕೋರ್ಟ್&zwnj;ನ &lsquo;ಶಿಶು ಪಾಲ್ ವಿರುದ್ಧ ಸುರ್ಜೀತ್&rsquo; ಪ್ರಕರಣದ ಐತಿಹಾಸಿಕ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಗೃಹಿಣಿಯೊಬ್ಬರು ಕುಟುಂಬಕ್ಕೆ ನೀಡುವ ಸೇವೆ ಅಮೂಲ್ಯವಾದುದು. ಹೀಗಾಗಿ ಅವರ ಮಾಸಿಕ ಕಾಲ್ಪನಿಕ ಆದಾಯವನ್ನು ₹30 ಸಾವಿರ ಎಂದು ನಿಗದಿಪಡಿಸಿ, ಅದಕ್ಕೆ ಭವಿಷ್ಯದ ಗಳಿಕೆಯ ಶೇ.40 ಭಾಗವನ್ನು ಸೇರಿಸಿ ನ್ಯಾಯಾಲಯ ಈ ಬೃಹತ್ ಪರಿಹಾರ ಮೊತ್ತವನ್ನು ಅಂತಿಮಗೊಳಿಸಿದೆ.&lt;/p&gt;&lt;h2&gt;&lt;strong&gt;ವಿಮಾ ಕಂಪನಿಯ ವಾದ ತಳ್ಳಿಹಾಕಿದ ಪೀಠ:&lt;/strong&gt;&lt;/h2&gt;&lt;p&gt;'ದ್ವಿಚಕ್ರ ವಾಹನಕ್ಕೆ ಹಸು ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿದೆ. ಕ್ರಿಮಿನಲ್ ನ್ಯಾಯಾಲಯದಲ್ಲಿ ಬೈಕ್ ಸವಾರ ಖುಲಾಸೆಗೊಂಡಿರುವುದರಿಂದ ಈ ಅಪಘಾತಕ್ಕೆ ವಿಮಾ ಕಂಪನಿ ಹೊಣೆಯಾಗುವುದಿಲ್ಲ' ಎಂದು ವಿಮಾ ಸಂಸ್ಥೆಯ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ಹೈಕೋರ್ಟ್, ವಿಮಾ ಕಂಪನಿಯು ಪರಿಹಾರ ಪಾವತಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.&lt;/p&gt;&lt;p&gt;ಪ್ರಕರಣದ ಹಿನ್ನೆಲೆ:&lt;/p&gt;&lt;p&gt;2011ರ ಅಕ್ಟೋಬರ್&zwnj;ನಲ್ಲಿ ಪುಟ್ಟತಾಯಮ್ಮ (37) ಅವರು ತಮ್ಮ ಪತಿ ಮಾಯಣ್ಣ ಗೌಡ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಾಮನಗರ ಜಿಲ್ಲೆಯ ಬಿಡದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ 45 ದಿನಗಳ ಕಾಲ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.&lt;/p&gt;&lt;p&gt;ಇದರ ವಿರುದ್ಧ ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ಕೋರಿ ಮೃತರ ಸಂಬಂಧಿಕರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣದ ಮೆಟ್ಟಿಲೇರಿದ್ದರು. ನ್ಯಾಯಾಧಿಕರಣವು ₹11.18 ಲಕ್ಷ ಪರಿಹಾರ ನೀಡಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ವಿಮಾ ಕಂಪನಿ ಹಾಗೂ ಮೃತರ ಕುಟುಂಬಸ್ಥರು ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಗೃಹಿಣಿಯ ಗೌರವ ಮತ್ತು ಸ್ಥಾನಮಾನವನ್ನು ಎತ್ತಿಹಿಡಿದು ಪರಿಹಾರವನ್ನು ಬರೋಬ್ಬರಿ ₹59.69 ಲಕ್ಷಕ್ಕೆ ಹೆಚ್ಚಿಸಿದೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk"/>
        </item>
        <item>
            <title><![CDATA[ಬಿಡದಿ ಟೌನ್‌ಶಿಪ್ ಯೋಜನೆ: ಡಿಕೆ ಬಗ್ಗೆ ಹೆಚ್‌ಡಿ ಕುಮಾರಸ್ವಾಮಿ ಗಂಭೀರ ಆರೋಪ! ಏನಿದು ಮಂತ್ಲಿ ಅಗ್ರಿಮೆಂಟ್?]]></title>
            <link>https://kannada.asianetnews.com/politics/bidadi-jds-padayatra-will-end-congress-rule-says-hd-kumaraswamy-rav/articleshow-t51xhb4</link>
            <guid isPermaLink="true">https://kannada.asianetnews.com/politics/bidadi-jds-padayatra-will-end-congress-rule-says-hd-kumaraswamy-rav/articleshow-t51xhb4</guid>
            <pubDate>Mon, 10 Aug 2026 12:14:20 +0530</pubDate>
            <description><![CDATA[&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಯು ದೆಹಲಿ ನಾಯಕರಿಗೆ ಮಾಸಿಕ ಹಣ ಪಾವತಿಸುವ ಡಿಕೆ ಶಿವಕುಮಾರ್ ಅವರ ಒಪ್ಪಂದದ ಭಾಗವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಬ್ರಹ್ಮಾಂಡ ಭ್ರಷ್ಟಾಚಾರದ ಯೋಜನೆಯು ಕಾಂಗ್ರೆಸ್ ಸರ್ಕಾರಕ್ಕೆ ಮರಣಶಾಸನವಾಗಲಿದೆ, ರೈತರು ಮೋಸ ಹೋಗಬಾರದು ಎಂದು ಎಚ್ಚರಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzn6jznhzx96ygbw7sb17hzv,imgname-----------------------2026-08-10t120049.309-1786344210097.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಆ.10): &lt;/strong&gt;ದ ಗ್ರೇಟ್ ಡಿ.ಕೆ.ಶಿವಕುಮಾರ್(The Great DK Shivakumar) ಅ&zwj;ವರು ದೆಹಲಿಯಲ್ಲಿರುವ ಕಾಂಗ್ರೆಸ್ ಅಧಿನಾಯಕರಿಗೆ ಮಂತ್ಲಿ ಕೊಡುವುದಾಗಿ ಅಗ್ರಿಮೆಂಟ್ ಮಾಡಿಕೊಂಡು ಬಂದಿದ್ದಾರೆ. ಅಲ್ಲಿಗೆ ಹಣ ಕೊಡಲು ಬಿಡದಿ ಟೌನ್&zwnj;ಶಿಪ್ ಯೋಜನೆ(Bidadi Township) ಮಾಡುತ್ತಿದ್ದಾರೆ. ಈ ಪಾದಯಾತ್ರೆಯೇ ಕಾಂಗ್ರೆಸ್ ಸರ್ಕಾರಕ್ಕೆ ಮರಣ ಶಾಸನವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.&lt;/p&gt;&lt;p&gt;ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದ ಪಾದಯಾತ್ರೆಗೆ ಚಾಲನೆ ನೀಡಿದ ಅವರು, ಮುಖ್ಯಮಂತ್ರಿ ಸ್ಥಾನ ನೀಡಿದ್ದಕ್ಕಾಗಿ ಡಿ.ಕೆ.ಶಿವಕುಮಾರ್ ಪ್ರತಿ ತಿಂಗಳು ಹಣ ಕೊಡುವ ಅಗ್ರಿಮೆಂಟ್ ಮಾಡಿಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.&lt;/p&gt;&lt;p&gt;ರಾಜ್ಯ ಕಾಂಗ್ರೆಸ್ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬೈರಮಂಗಲದಿಂದ ಕೈಗೊಂಡಿರುವ ಬಿಡದಿ ಟೌನ್&zwnj;ಶಿಪ್ ವಿರೋಧಿ ಪಾದಯಾತ್ರೆ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ದಿಕ್ಸೂಚಿ ಜತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮರಣಶಾಸನವೂ ಆಗಲಿದೆ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಈ ಪಾದಯಾತ್ರೆ ಮೂಲಕ ರೈತರು ಅಡಿಪಾಯ ಹಾಕಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;ರೈತರು ಮರುಳಾಗಬೇಡಿ:&lt;/h2&gt;&lt;p&gt;ಮುಖ್ಯಮಂತ್ರಿ ಟೌನ್&zwnj;ಶಿಪ್ ಯೋಜನೆ ವಿಷಯದಲ್ಲಿ ಅತಿ ಕಾಳಜಿ ವಹಿಸುತ್ತಿದ್ದಾರೆ. ಯಾರಿಗೋ ಲಾಭ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ. ಇದುವರೆಗೂ ಒಂದು ಎಕರೆಗೆ ₹2 ಕೋಟಿ ಭೂ ಪರಿಹಾರ ಕೊಡುವುದಾಗಿ ಹೇಳುತ್ತಿದ್ದವರು ಇವತ್ತು ಬೆಳಗ್ಗೆ ವೀಡಿಯೋ ಮಾಡಿ ಒಂದು ಎಕರೆಗೆ ₹3 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ನೀವು (ರೈತರು) ಮರುಳಾಗಬೇಡಿ. ಈ ಮುಖ್ಯಮಂತ್ರಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ರೈತರನ್ನು ಎಚ್ಚರಿಸಿದರು.&lt;/p&gt;&lt;h3&gt;ನೈಸ್ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ:&lt;/h3&gt;&lt;p&gt;ನೈಸ್ (ಬಿಎಂಐಸಿ) ಯೋಜನೆಗೆ ಭೂಸ್ವಾಧೀನ ಮಾಡಿಕೊಂಡು 30 ವರ್ಷ ಕಳೆದರೂ ಭೂಮಿ ಕಳೆದುಕೊಂಡವರಿಗೆ ಪರಿಹಾರ ಮತ್ತು ನಿವೇಶನ ಕೊಟ್ಟಿಲ್ಲ. ಬಿಡದಿಯಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ಒಂದು ಎಕರೆಗೆ 3 ಕೋಟಿ ಕೊಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಯಾವ ಆಧಾರದ ಮೇಲೆ ಹೇಳಿದ್ದಾರೆ. ಇದೇನು ಚೌಕಾಸಿ ವ್ಯಾಪಾರವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.&lt;/p&gt;&lt;p&gt;ಬಿಡದಿ ಟೌನ್&zwnj;ಶಿಪ್ ಹಾಗೂ ನೈಸ್ ಬ್ರಹ್ಮಾಂಡ ಭ್ರಷ್ಟಾಚಾರದ ಯೋಜನೆಗಳಾಗಿವೆ. ಎರಡೂ ಯೋಜನೆಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆಯೇ. ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯ ಸತ್ಯ ಶೋಧನಾ ಸಮಿತಿಯಲ್ಲಿ 2ನೇ ಹೆಸರು ಡಿ.ಕೆ.ಶಿವಕುಮಾರ್ ಅವರದ್ದಾಗಿದೆ. 2 ಸಾವಿರ ಎಕರೆ ನೋಟಿಫಿಕೇಷನ್ ಆಗಿದೆಯೆಂದು ಸಮಿತಿಯಲ್ಲಿ ಹೇಳಿದ್ದರಲ್ಲ. ಆ ಭೂಮಿ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿದರು.&lt;/p&gt;&lt;h3&gt;ನಾನು ಅಧಿಸೂಚನೆ ಹೊರಡಿಸಿರಲಿಲ್ಲ:&lt;/h3&gt;&lt;p&gt;2006-07ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ, ಆ ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಡದಿ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರವೇ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದೇಶಗಳಂತೆ ರಸ್ತೆ, ಬೃಹತ್ ಕಾರ್ಖಾನೆ, ಉದ್ಯೋಗ ನಿರ್ಮಿಸಿ ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದಾರೆ. ಇದನ್ನು ನಂಬಬೇಕೇ. ಹೀಗೆ ಹೇಳುತ್ತಿರುವ ಇವರು ಕನಕಪುರದಲ್ಲಿ ದಲಿತರ ಭೂಮಿಯನ್ನು ಲೂಟಿ ಹೊಡೆದಿದ್ದಾರೆ ಎಂದು ಎಚ್&zwnj;ಡಿಕೆ ಆರೋಪ ಮಾಡಿದರು.&lt;/p&gt;&lt;h3&gt;ಫಲವತ್ತಾದ ಭೂಮಿ:&lt;/h3&gt;&lt;p&gt;ಬಿಡದಿ ಟೌನ್&zwnj;ಶಿಪ್ ಭಾಗದಲ್ಲಿ 6 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಜೊತೆಗೆ ರೇಷ್ಮೆ, ಮಾವು, ಅಡಿಕೆ, ತೆಂಗು ಎಲ್ಲವೂ ಇದೆ. ಇಂತಹ ಭೂಮಿಯನ್ನು ಅವರೇ ನೀಡಿದ್ದ ಸತ್ಯಶೋಧನಾ ಸಮಿತಿ ವರದಿಗೆ ವಿರುದ್ಧವಾಗಿ ಟೌನ್&zwnj;ಶಿಪ್ ಮಾಡಲು ಹೊರಟಿದ್ದಾರೆ. ದಲ್ಲಾಳಿಗಳು ಮಾತ್ರ ಜಮೀನು ಕೊಡುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿ ಹಾಗೂ ಭೂಮಿಯನ್ನೇ ನಂಬಿ ಬದುಕುತ್ತಿರುವ ರೈತರು ಹೋರಾಟ ಮಾಡುತ್ತಿದ್ದಾರೆ. ಅವರ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ ಎಂದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bidadi-jds-padayatra-will-end-congress-rule-says-hd-kumaraswamy-rav/articleshow-t51xhb4"/>
        </item>
        <item>
            <title><![CDATA[Bidadi Township row: ನಮ್ಮ ಪಾಲಿಗೆ ಸರ್ಕಾರ ಸತ್ತೋಗಿದೆ..; ಪಿಂಡ ಪಿಂಡ ಪ್ರದಾನ ಮಾಡಿದ ಬಿಡದಿ ರೈತರು!]]></title>
            <link>https://kannada.asianetnews.com/state/bidadi-township-row-haarohalli-farmers-protest-against-karnataka-government-rav/articleshow-towfviy</link>
            <guid isPermaLink="true">https://kannada.asianetnews.com/state/bidadi-township-row-haarohalli-farmers-protest-against-karnataka-government-rav/articleshow-towfviy</guid>
            <pubDate>Thu, 16 Jul 2026 05:00:37 +0530</pubDate>
            <description><![CDATA[&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಗಾಗಿ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ್ದನ್ನು ವಿರೋಧಿಸಿ ರೈತರು 495 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ನಿರ್ಧಾರದಿಂದ ಆಕ್ರೋಶಗೊಂಡ ರೈತರು, 'ನಮ್ಮ ಪಾಲಿಗೆ ಸರ್ಕಾರ ಸತ್ತೋಗಿದೆ' ಎಂದು ಘೋಷಣೆ ಕೂಗುತ್ತಾ, ಪಿಂಡ ಪ್ರದಾನ ಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxm1vy0e9qb0xmeyd9qpvbhv,imgname-----------------------2026-07-16t045958.317-1784158222350.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ಸರ್ಕಾರದ ವಿರುದ್ಧ ಬಿಡದಿ ರೈತರ ಆಕ್ರೋಶ । ನಮ್ಮ ಪಾಲಿಗೆ ಸರ್ಕಾರ ಸತ್ತೋಗಿದೆ: ಘೋಷಣೆ&lt;/p&gt;&lt;p&gt;&lt;strong&gt;&amp;nbsp;ರಾಮನಗರ (ಜು.16): &lt;/strong&gt;ಬಿಡದಿ ಟೌನ್&zwnj;ಶಿಪ್ ಯೋಜನೆ(Bidadi Township projec) ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು(Farmers protest) ಬುಧವಾರ ರಾಜ್ಯ ಸರ್ಕಾರದಿಂಧ ನಾಲ್ಕು ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಬಿಡದಿ-ಹಾರೋಹಳ್ಳಿ ಮಾರ್ಗದ ರಸ್ತೆಯಲ್ಲಿ ಪಿಂಡ ಪ್ರದಾನದ ಅಣಕು ಪ್ರದರ್ಶನ ಮಾಡುವ ಮೂಲಕ ಕಾಂಗ್ರೆಸ್&zwnj; ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;ನಮ್ಮ ಪಾಲಿಗೆ ಸರ್ಕಾರ ಸತ್ತೋಗಿದೆ..&lt;/h2&gt;&lt;p&gt;ಜಿಲ್ಲೆಯ ಬಿಡದಿ-ಹಾರೋಹಳ್ಳಿ ರಸ್ತೆಯಲ್ಲಿ ಬುಧವಾರ ತಟ್ಟೆಯಲ್ಲಿ ಮಣ್ಣು ಹಿಡಿದುಕೊಂಡು ವಾಹನಗಳನ್ನು ತಡೆದು ಪ್ರತಿಭಟಿಸಿದ ರೈತರು, ರಾಜ್ಯ ಸರ್ಕಾರಕ್ಕೆ ಪಿಂಡ ಪ್ರದಾನ ಮಾಡಿ ನಮ್ಮ ಪಾಲಿಗೆ ಸರ್ಕಾರ ಸತ್ತೋಗಿದೆ ಎಂದು ಘೋಷಣೆ ಕೂಗಿದರು.&lt;/p&gt;&lt;p&gt;ರೈತರ ಪ್ರತಿಭಟನೆಯನ್ನು ಜೆಡಿಎಸ್ ಕೃಪಾಪೋಷಿತ ನಾಟಕ ಎಂದು ಹೇಳುವ ಮೂಲಕ ಶಾಸಕ ಬಾಲಕೃಷ್ಣ ರೈತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಸ್ವಾಭಿಮಾನದಿಂದ ಜೀವನ ಮಾಡುತ್ತಿರುವ ಮಹಿಳೆಯರನ್ನು ನಾಟಕ ಮಾಡುವವರು ಅಂದಿದ್ದಾರೆ. ಕೂಡಲೇ ಬಾಲಕೃಷ್ಣ ರೈತ ಮಹಿಳೆಯರ ಕ್ಷಮೆ ಕೇಳಬೇಕು. ಇಲ್ಲವಾದರೆ ಬಾಲಕೃಷ್ಣ ಮನೆ ಮುಂದೆ ಧರಣಿ ನಡೆಸುವುದಾಗಿ ರೈತ ಮಹಿಳೆಯರು ಎಚ್ಚರಿಕೆ ನೀಡಿದರು.&lt;/p&gt;&lt;h3&gt;495 ದಿನಗಳಿಂದ ನಾವು ಪ್ರತಿಭಟನೆ ನಡೆಸುತ್ತಿರುವ ರೈತರು&lt;/h3&gt;&lt;p&gt;ಕಳೆದ 495 ದಿನಗಳಿಂದ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಯೋಜನೆಯನ್ನು ವಿರೋಧ ಮಾಡುತ್ತಿದ್ದೇವೆ. ಆದರೂ ಸಹ ನಮ್ಮ ಮಾತಿಗೆ ಮನ್ನಣೆ ನೀಡದೆ ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ. ನಾವು ಯಾವುದೇ ಕಾರಣಕ್ಕೂ ಭೂಮಿಯನ್ನು ನೀಡುವುದಿಲ್ಲ ಎಂದು ರೈತರು ಬಿಗಿಪಟ್ಟು ಹಿಡಿದರು.&lt;/p&gt;&lt;p&gt;ರೈತರು ರಸ್ತೆ ಮಧ್ಯದಲ್ಲಿ ಕುರ್ಚಿಗಳ ಮೇಲೆ ಕುಳಿತು ಒನಕೆ ಹಿಡಿದು ಪ್ರತಿಭಟಿಸಿದ್ದರಿಂದ ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಪೊಲೀಸರು ರೈತರ ಮನವೊಲೀಸಿ ರಸ್ತೆ ತಡೆ ತೆರವುಗೊಳಿಸಿದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bidadi-township-row-haarohalli-farmers-protest-against-karnataka-government-rav/articleshow-towfviy"/>
        </item>
        <item>
            <title><![CDATA[Bengaluru South: 54 ಕೋಟಿ ವೆಚ್ಚ, 6 ಎಕರೆ ಜಾಗದಲ್ಲಿ 888 ಮನೆಗಳ ನಿರ್ಮಾಣಕ್ಕೆ ಮೂಹರ್ತ]]></title>
            <link>https://kannada.asianetnews.com/karnataka-districts/bengaluru-south-construction-of-888-houses-on-6-acres-of-land-at-a-cost-of-rs-54-crores-launched-mrq/articleshow-x83dhkl</link>
            <guid isPermaLink="true">https://kannada.asianetnews.com/karnataka-districts/bengaluru-south-construction-of-888-houses-on-6-acres-of-land-at-a-cost-of-rs-54-crores-launched-mrq/articleshow-x83dhkl</guid>
            <pubDate>Sat, 22 Aug 2026 11:21:20 +0530</pubDate>
            <description><![CDATA[&lt;p&gt;5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 888 ಮನೆಗಳ ನಿರ್ಮಾಣಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಜಮೀನು ವಿವಾದಗಳಿಂದ ಸ್ಥಗಿತಗೊಂಡಿದ್ದ ಈ ಯೋಜನೆಯು, ಶಾಸಕ ಇಕ್ಬಾಲ್ ಹುಸೇನ್ ಅವರ ಪ್ರಯತ್ನದಿಂದಾಗಿ ಶಿಡ್ಲುಕಲ್ಲು ಗ್ರಾಮದಲ್ಲಿ ₹54 ಕೋಟಿ ವೆಚ್ಚದಲ್ಲಿ ಕಾರ್ಯಗತಗೊಳ್ಳಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0m07p2d0fsbpv7mxwq9skag,imgname-bengaluru-south-1787377735757.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಂ.ಅಫ್ರೋಜ್ ಖಾನ್&lt;/strong&gt;&lt;/p&gt;&lt;p&gt;&lt;strong&gt;ರಾಮನಗರ: ಕ&lt;/strong&gt;ಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ 888 ಮನೆಗಳನ್ನು ನಿರ್ಮಿಸುವ ಕಾರ್ಯಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.&lt;/p&gt;&lt;p&gt;ರಾಮನಗರ ಟೌನಿನಲ್ಲಿರುವ ಸೂರು ಮತ್ತು ನಿವೇಶನ ಇಲ್ಲದ ಕೊಳಚೆ ಪ್ರದೇಶದ ನಿವಾಸಿಗಳು, ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಸೂರು ಕಲ್ಪಿಸುವ ಈ ವಸತಿ ಯೋಜನೆ ಜಮೀನಿನ ವಿವಾದದಿಂದಾಗಿ ಕಾರ್ಯಗತಗೊಂಡಿರಲಿಲ್ಲ.&lt;/p&gt;&lt;p&gt;ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ರವರು ಸಂಸದರಾಗಿದ್ದ ಅವಧಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರೊಂದಿಗೆ ಜಮೀನಿನ ವಿವಾದ ಬಗೆಹರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆನಂತರ ಇಕ್ಬಾಲ್ ಹುಸೇನ್ ಅವರೇ ವಿಶೇಷ ಕಾಳಜಿ ವಹಿಸಿ ಜಮೀನನ್ನು ಗುರುತಿಸುವ ಜೊತೆಗೆ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಹಂತಕ್ಕೆ ತಂದಿದ್ದಾರೆ.&lt;/p&gt;&lt;h2&gt;&lt;strong&gt;6 ಎಕರೆಯಲ್ಲಿ 888 ಮನೆಗಳ ನಿರ್ಮಾಣ&amp;nbsp;&lt;/strong&gt;&lt;/h2&gt;&lt;p&gt;ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಶಿಡ್ಲುಕಲ್ಲು ಗ್ರಾಮದ ಸರ್ವೇ ನಂಬರ್ 29ರಲ್ಲಿನ 6 ಎಕರೆ 38 ಗುಂಟೆ ಜಮೀನಿನಲ್ಲಿ ಸುಮಾರು ₹54 ಕೋಟಿ ವೆಚ್ಚದಲ್ಲಿ 888 ಮನೆಗಳು ನಿರ್ಮಾಣಗೊಳ್ಳಲಿವೆ. ಒಂದು ಬ್ಲಾಕಿನಲ್ಲಿ ಜಿ + 4 ವಿನ್ಯಾಸದಲ್ಲಿ 37 ಮನೆಗಳಂತೆ ಒಟ್ಟು 24 ಬ್ಲಾಕ್ ಗಳಲ್ಲಿ 888 ಮನೆಗಳು ನಿರ್ಮಾಣವಾಗಲಿವೆ.&lt;/p&gt;&lt;p&gt;ಇದರಲ್ಲಿ ಮನೆಗಳ ನಿರ್ಮಾಣಕ್ಕೆ ₹49 ಕೋಟಿ 32 ಲಕ್ಷ, ಮೂಲ ಸೌಕರ್ಯ ಕಲ್ಪಿಸಲು ₹1 ಕೋಟಿ 11 ಲಕ್ಷ ವೆಚ್ಚವಾಗಲಿದೆ. ಪ್ರತಿಯೊಂದು ಮನೆ 27.22 ಚದರ ವಿಸ್ತೀರ್ಣ ಇರಲಿದ್ದು, ಒಂದು ಮನೆ ₹5 ಲಕ್ಷ 55 ಸಾವಿರ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.&lt;/p&gt;&lt;p&gt;ನಗರದ ವಿವಿಧ ಕೊಳಚೆ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಯೋಜನೆ ಅಡಿಯಲ್ಲಿ 888 ಮನೆಗಳನ್ನು ನಿರ್ಮಿಸಲು 2018-19ನೇ ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್) ವತಿಯಿಂದ ಮಂಜೂರಾಗಿತ್ತು. ಈ ವರ್ಷದ ಸೆಪ್ಟೆಂಬರ್ ತಿಂಗಳೊಳಗೆ ಮನೆಗಳ ನಿರ್ಮಾಣ ಪ್ರಾರಂಭವಾಗದಿದ್ದರೆ ಎಲ್ಲ ಮನೆಗಳು ರದ್ದುಗೊಳ್ಳುತ್ತಿದ್ದವು.&lt;/p&gt;&lt;p&gt;ಹೀಗಾಗಿ ಆ.22ರಂದು ಶಾಸಕ ಇಕ್ಬಾಲ್ ಹುಸೇನ್ ರವರ ಅಧ್ಯಕ್ಷತೆಯಲ್ಲಿ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಮತ್ತು ವಸತಿ ಸಚಿವ ಜಮೀರ್ ಅಹಮದ್ ರವರು ಮನೆಗಳ ನಿರ್ಮಾಣ ಕಾರ್ಯಕ್ಕೆ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಕೊತ್ತಿಪುರ - ದೊಡ್ಡಮಣ್ಣುಗುಡ್ಡೆಯಲ್ಲಿ ವಿವಾದ :&lt;/strong&gt;&lt;/p&gt;&lt;p&gt;ಈ ಮೊದಲು 2021ರ ಡಿಸೆಂಬರ್ 20ರಂದು ಸ್ಲಂ ಬೋರ್ಡಿಗೆ ಸೇರಿದ ಕೊತ್ತಿಪುರ ಸರ್ವೇ ನಂ.96 ಮತ್ತು 97ರಲ್ಲಿ 7 ಎಕರೆ 35 ಗುಂಟೆ ಜಮೀನಿನಲ್ಲಿ ವಸತಿ ಯೋಜನೆ ಪ್ರಾರಂಭಿಸಲು ಹೋದಾಗ ಮೂಲ ಮಾಲೀಕರು ಅಡ್ಡಿ ಪಡಿಸಿದ್ದರು. ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಯಥಾಸ್ಥಿತಿ ಕಾಪಾಡಲು ಆದೇಶಿಸಿತು. ವ್ಯಾಜ್ಯ ಇತ್ಯರ್ಥವಾಗದ ಕಾರಣ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಲಿಲ್ಲ.&lt;/p&gt;&lt;p&gt;2006ರಲ್ಲಿ ಸ್ಲಂ ಬೋರ್ಡಿಗೆ ಮಂಜೂರಾಗಿದ್ದ ದೊಡ್ಡಮಣ್ಣುಗುಡ್ಡೆ ಸರ್ವೇ ನಂ.1ರ 30 ಎಕರೆ 30 ಗುಂಟೆ ಜಮೀನನ್ನು ಮನೆಗಳ ನಿರ್ಮಾಣಕ್ಕಾಗಿ ಗುತ್ತಿಗೆದಾರರಿಗೆ 2022ರ ನವೆಂಬರ್ 15ರಂದು ಸ್ಥಳ ಹಸ್ತಾಂತರಿಸಾಗಿತ್ತು. ಆ ಪ್ರದೇಶದಲ್ಲಿ ಕಾಮಗಾರಿ ಪ್ರಾರಂಭಿಸಲು ಹೋದಾಗ ಅರಣ್ಯ ಇಲಾಖೆಯವರು ಸದರಿ ಜಮೀನು ತಮ್ಮ ಇಲಾಖೆಗೆ ಸೇರಿದೆ ಎಂದು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು.&lt;/p&gt;&lt;p&gt;ಕೊನೆಗೆ ಸ್ಲಂ ಬೋರ್ಡ್ ಬದಲಿ ಜಾಗ ನೀಡುವಂತೆ ರಾಮನಗರ ತಹಸೀಲ್ದಾರ್ ಗೆ ಪತ್ರ ಬರೆದಿತ್ತು. ಆನಂತರ ಜಿಲ್ಲಾಧಿಕಾರಿಗಳು ಶಿಡ್ಲುಕಲ್ಲು ಗ್ರಾಮದ ಸರ್ವೇ ನಂ.29ರಲ್ಲಿನ 6 ಎಕರೆ 38 ಗುಂಟೆ ಜಮೀನನ್ನು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಗೆ ಕೊಳಚೆ ಪ್ರದೇಶದ ವಿವಿಧ ನಿವಾಸಿಗಳನ್ನು ಸ್ಥಳಾಂತರ ಮಾಡುವ ಉದ್ದೇಶಕ್ಕಾಗಿ ಮಂಜೂರು ಮಾಡಿ ಹಸ್ತಾಂತರ ಮಾಡಿದೆ. ಇದೀಗ ಆ ಜಾಗದಲ್ಲಿಯೇ 888 ಮನೆಗಳು ನಿರ್ಮಾಣಗೊಳ್ಳಲಿವೆ.&lt;/p&gt;&lt;p&gt;&lt;strong&gt;ಅನುದಾನದ ವಿವರ&lt;/strong&gt;&lt;/p&gt;&lt;p&gt;ಅನುದಾನದ ಪಾಲು, ಎಸ್ಸಿ - ಎಸ್ಟಿ, ಇತರೆ ವರ್ಗ&lt;/p&gt;&lt;p&gt;ಭಾರತ ಸರ್ಕಾರ, 1.50 ಲಕ್ಷ, 1.50 ಲಕ್ಷ&lt;/p&gt;&lt;p&gt;ಕರ್ನಾಟಕ ಸರ್ಕಾರ, 2 ಲಕ್ಷ, 1.20 ಲಕ್ಷ&lt;/p&gt;&lt;p&gt;ಫಲಾನುಭವಿ ಪಾಲು, 1 ಲಕ್ಷ, 1 ಲಕ್ಷ&lt;/p&gt;&lt;p&gt;ಕ.ಸರ್ಕಾರದ ವಿಶೇಷ ಅನುದಾನ, 1.55 ಲಕ್ಷ, 1.85 ಲಕ್ಷ&lt;/p&gt;&lt;p&gt;ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಸೂರು ಕಲ್ಪಿಸಲು ಡಿ.ಕೆ.ಸುರೇಶ್ ರವರು ಸಂಸದರಾಗಿದ್ದಾಗ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ ರಾಮನಗರಕ್ಕೆ 888 ಮನೆಗಳನ್ನು ಮಂಜೂರು ಮಾಡಿಸಿದ್ದರು. ಇದರ ಅನುಷ್ಠಾನಕ್ಕೆ ಜಮೀನಿನ ಸಮಸ್ಯೆ ಅಡ್ಡಿಯಾಗಿತ್ತು. ಎಲ್ಲ ಅಡೆತಡೆಗಳು ನಿವಾರಣೆಯಾಗಿ ಶಿಡ್ಲುಕಲ್ಲು ಗ್ರಾಮದ 6 ಎಕರೆಯಲ್ಲಿ ಮನೆಗಳು ನಿರ್ಮಾಣಗೊಳ್ಳಲಿವೆ ಎಂದು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಹೇಳುತ್ತಾರೆ.&lt;/p&gt;&lt;p&gt;ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ 888 ಮನೆಗಳನ್ನು ನಿರ್ಮಿಸಲು 2018-19ನೇ ಸಾಲಿನಲ್ಲಿ ಸ್ಲಂ ಬೋರ್ಡಿನಿಂದ ಮಂಜೂರಾಗಿತ್ತು. ಕೊತ್ತಿಪುರ ಮತ್ತು ದೊಡ್ಡಮಣ್ಣುಗುಡ್ಡೆಯಲ್ಲಿ ಜಮೀನಿನ ಸಮಸ್ಯೆಯಿಂದ ಕಾರ್ಯಗತಗೊಳ್ಳಲಿಲ್ಲ. ಈಗ ಶಿಡ್ಲುಕಲ್ಲು ಗ್ರಾಮದಲ್ಲಿ 1 ಬ್ಲಾಕಿನಲ್ಲಿ ಜಿ + 4 ವಿನ್ಯಾಸದಲ್ಲಿ 37 ಮನೆಗಳಂತೆ ಒಟ್ಟು 24 ಬ್ಲಾಕ್ ಗಳಲ್ಲಿ 888 ಮನೆಗಳು ನಿರ್ಮಾಣವಾಗಲಿವೆ ಎಂದು ಸ್ಲಂ ಬೋರ್ಡ್ ಎಇಇ ಚೇತನ್ ಕುಮಾರ ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bengaluru-south-construction-of-888-houses-on-6-acres-of-land-at-a-cost-of-rs-54-crores-launched-mrq/articleshow-x83dhkl"/>
        </item>
    </channel>
</rss>
