<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 02 Apr 2026 15:42:39 +0530</lastBuildDate>
        <atom:link href="https://kannada.asianetnews.com/rss/ramanagara" rel="self" type="application/rss+xml"/>
        <item>
            <title><![CDATA[ಒಡಿಶಾ ಕಾಂಗ್ರೆಸ್ ಶಾಸಕರಿಗೆ ಆಪರೇಷನ್ ಕಮಲದ ಭೀತಿ ಇಲ್ಲ: ಶಾಸಕ ಎಚ್.ಸಿ. ಬಾಲಕೃಷ್ಣ]]></title>
            <link>https://kannada.asianetnews.com/politics/hc-balakrishna-reaction-odisha-mlas-resort-ramanagara-gvd/articleshow-07e1o82</link>
            <guid isPermaLink="true">https://kannada.asianetnews.com/politics/hc-balakrishna-reaction-odisha-mlas-resort-ramanagara-gvd/articleshow-07e1o82</guid>
            <pubDate>Sat, 14 Mar 2026 20:57:14 +0530</pubDate>
            <description><![CDATA[&lt;p&gt;ಒಡಿಶಾ ಶಾಸಕರು ಬಂದಿದ್ದಾರೆ. ಇದರಲ್ಲಿ ಆಪರೇಷನ್ ಕಮಲದ ಭೀತಿ ಏನೂ ಇಲ್ಲ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಅದನ್ನು ಸರಿ ಮಾಡುತ್ತೇವೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx0eq5przgsx0jehvwdys4mv,imgname-bfb-1749140870872.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮಾ.14):&lt;/strong&gt; ಚುನಾವಣೆ ಸಮಯದಲ್ಲಿ ನಾವೂ ರೆಸಾರ್ಟ್&zwnj;ಗೆ ಹೋಗ್ತೇವೆ. ಹಾಗೆಯೇ ಒಡಿಶಾ ಶಾಸಕರು ಬಂದಿದ್ದಾರೆ. ಇದರಲ್ಲಿ ಆಪರೇಷನ್ ಕಮಲದ ಭೀತಿ ಏನೂ ಇಲ್ಲ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಅದನ್ನು ಸರಿ ಮಾಡುತ್ತೇವೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು. ವಂಡರ್ ಲಾ ರೆಸಾರ್ಟ್&zwnj;ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರು ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ.&lt;/p&gt;&lt;p&gt;ಅವರನ್ನು ಸ್ವಾಗತಿಸಿ ಗೌರವಿಸೋದು ನನ್ನ ಕರ್ತವ್ಯ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ರಾಜಕೀಯ ಅಂದ ಮೇಲೆ ಇವೆಲ್ಲಾ ಸಹಜ ಎಂದರು. ನಿನ್ನೆ ಕಾಂಗ್ರೆಸ್ ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದಾರಲ್ಲ ಎಂಬ ಪ್ರಶ್ನೆಗೆ, ನಾವು 30ಕ್ಕೂ ಹೆಚ್ಚು ಶಾಸಕರು ಮೂರಕ್ಕೂ ಹೆಚ್ಚು ಬಾರಿ ಗೆದ್ದಿದ್ದೇವೆ. ಮಂತ್ರಿ ಮಂಡಲದಲ್ಲಿ ನಮಗೂ ಅವಕಾಶ ಬೇಕು. ಈಗಾಗಲೇ ಸರ್ಕಾರ ಎರಡೂವರೆ ವರ್ಷ ಪೂರೈಸಿದೆ. ಜೊತೆಗೆ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲ ಇದೆ. ಅದನ್ನೂ ಬಗೆಹರಿಸಿ ಅಂತ ಕೇಳಲು ಹೈಕಮಾಂಡ್ ಬಳಿ ಹೋಗಲು ಸಭೆ ಮಾಡಿದ್ದೇವೆ ಎಂದರು.&lt;/p&gt;&lt;p&gt;ಮಾತು ಕೊಟ್ಟಿದ್ದೀರಾ ಅಂತ ಕೇಳಲು ಹೈಕಮಾಂಡ್ ಅನ್ನು ಭೇಟಿ ಮಾಡುತ್ತೇವೆ. ಅಧಿವೇಶನ ಮುಗಿದ ಬಳಿಕ ದೆಹಲಿಗೆ ಹೋಗುತ್ತೇವೆ. ಕನಿಷ್ಠ 20 ಹಿರಿಯರಿಗೆ ಅವಕಾಶ ಕೊಡಿ ಅಂತ ಕೇಳುತ್ತೇವೆ. ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದ್ದು, ಸಮಸ್ಯೆ ಬಗೆಹರಿಸಲಿದೆ. ನಾನೇನು ಸನ್ಯಾಸಿ ಅಲ್ಲ, ಸಚಿವ ಸ್ಥಾನಕ್ಕೆ ನಾನು ಆಕಾಂಕ್ಷಿ. ನಾನು ಐದು ಬಾರಿ ಗೆದ್ದಿದ್ದೇನೆ, ಆದರೆ ಒಂದೇ ಪಕ್ಷದಲ್ಲಿ ಗೆದ್ದಿಲ್ಲ ಅನ್ನೋದು ದುರಂತ ಎಂದರು.&lt;/p&gt;&lt;h2&gt;&lt;strong&gt;ಕ್ಷೇತ್ರಕ್ಕೆ ಒಳ್ಳೆಯ ಅನುದಾನ&lt;/strong&gt;&lt;/h2&gt;&lt;p&gt;ರಾಜ್ಯ ಬಜೆಟ್ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಬಜೆಟ್&zwnj;ನಲ್ಲಿರುವ ಕೆಲಸವನ್ನೇ ಅನುಷ್ಠಾನ ಮಾಡಬೇಕೆಂಬ ಕಾನೂನು ಇಲ್ಲ. ಕ್ಯಾಬಿನೆಟ್ ನಲ್ಲಿ ಇಟ್ಟು ನಮಗೆ ಬೇಕಾದ ಕೆಲಸ ಮಾಡಿಕೊಳ್ಳಬಹುದು. ಬಜೆಟ್ ಎಂಬುದು ಸುಪ್ರೀಂ ಕೋರ್ಟ್ ಆದೇಶ ಅಲ್ಲ. ನಮಗೆ ಬೇಕಾದಾಗ ಅದನ್ನ ಬದಲಾಯಿಸಬಹುದು. ನಮಗೆ ನಾಯಕತ್ವ ಬದಲಾವಣೆ ವಿಚಾರ ಬಿಟ್ಟರೆ ಬೇರೆಲ್ಲದರಲ್ಲೂ ಸಮಾಧಾನ ಇದೆ. ನಮ್ಮ ಕ್ಷೇತ್ರಕ್ಕೆ ಒಳ್ಳೆಯ ಅನುದಾನ ಕೊಟ್ಟಿದ್ದಾರೆ. ಅಭಿವೃದ್ಧಿ ಕೆಲಸ ಆಗುತ್ತಿದೆ ಎಂದು ಬಾಲಕೃಷ್ಣ ಹೇಳಿದರು.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/hc-balakrishna-reaction-odisha-mlas-resort-ramanagara-gvd/articleshow-07e1o82"/>
        </item>
        <item>
            <title><![CDATA[ರಾಮನಗರ ನಗರಸಭೆ ಸದಸ್ಯ, ರೌಡಿಶೀಟರ್ ಅಜ್ಮತ್ ಉಲ್ಲಾ ಖಾನ್ ಮೇಲೆ ಅಟ್ಯಾಕ್; ಲಾಂಗು-ಮಚ್ಚುಗಳಿಂದ ಹಲ್ಲೆ!]]></title>
            <link>https://kannada.asianetnews.com/karnataka-districts/ramanagara-murder-attempt-on-corporator-and-rowdy-sheeter-azmath-ullah-khan-sat/articleshow-0b2xztk</link>
            <guid isPermaLink="true">https://kannada.asianetnews.com/karnataka-districts/ramanagara-murder-attempt-on-corporator-and-rowdy-sheeter-azmath-ullah-khan-sat/articleshow-0b2xztk</guid>
            <pubDate>Fri, 27 Mar 2026 18:52:24 +0530</pubDate>
            <description><![CDATA[&lt;p&gt;ರಾಮನಗರ ನಗರಸಭೆ ಸದಸ್ಯ ಹಾಗೂ ರೌಡಿಶೀಟರ್ ಅಜ್ಮತ್ ಉಲ್ಲಾ ಖಾನ್ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆಗೆ ಯತ್ನಿಸಿದ್ದಾರೆ. ದಾಳಿಯಿಂದ ಪ್ರಾಣಾಪಾಯದಿಂದ ಪಾರಾದ ಅಜ್ಮತ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಮನೆ ಮುಂದಿದ್ದ ಕಾರನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmqq1mdjeg5rm9jr1f7pv0fx,imgname-ramanagara-corporator-attack-1774617416113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮಾ.27): ಸಿ&lt;/strong&gt;ಲ್ಕ್ ಸಿಟಿ ರಾಮನಗರದಲ್ಲಿ ಇಂದು ಹಾಡಹಗಲೇ ಸಿನಿಮೀಯ ಮಾದರಿಯ ಭೀಕರ ಹಲ್ಲೆಯೊಂದು ನಡೆದಿದೆ. ರಾಮನಗರ ನಗರಸಭೆಯ ಸದಸ್ಯ ಹಾಗೂ ರೌಡಿಶೀಟರ್ ಅಜ್ಮತ್ ಉಲ್ಲಾ ಖಾನ್ (40) ಮೇಲೆ ನಾಲ್ವರು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ. ಅದೃಷ್ಟವಶಾತ್ ಅಜ್ಮತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;h3&gt;&lt;strong&gt;ರೈಲ್ವೆ ಅಂಡರ್ ಪಾಸ್ ಬಳಿ ನಡೆದ ಘೋರ ಕೃತ್ಯ:&lt;/strong&gt;&lt;/h3&gt;&lt;p&gt;ನಗರದ ರೈಲ್ವೆ ಅಂಡರ್ ಪಾಸ್ ಬಳಿ ಅಜ್ಮತ್ ಉಲ್ಲಾ ಖಾನ್ ಅವರು ತಮ್ಮ ಬೈಕ್&zwnj;ನಲ್ಲಿ ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಠಾತ್ತನೆ ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ಲಾಂಗು, ಮಚ್ಚು ಸೇರಿದಂತೆ ಹರಿತವಾದ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಸಿನಿಮೀಯ ಸ್ಟೈಲ್&zwnj;ನಲ್ಲಿ ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಅಜ್ಮತ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಆದರೆ, ಸಮಯಪ್ರಜ್ಞೆ ಮೆರೆದ ಅಜ್ಮತ್ ಕ್ಷಣಾರ್ಧದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಓಡುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಮನೆ ಬಳಿ ನುಗ್ಗಿ ಕಾರು ಪುಡಿಪುಡಿ ಮಾಡಿದ ದುಷ್ಕರ್ಮಿಗಳು:&lt;/strong&gt;&lt;/h3&gt;&lt;p&gt;ಹಲ್ಲೆ ನಡೆದ ಬಳಿಕ ಅಜ್ಮತ್ ಅಲ್ಲಿಂದ ಎಸ್ಕೇಪ್ ಆದದ್ದನ್ನು ಕಂಡು ಕೆರಳಿದ ದಾಳಿಕೋರರು ಅಷ್ಟಕ್ಕೆ ಸುಮ್ಮನಾಗಲಿಲ್ಲ. ನೇರವಾಗಿ ಅಜ್ಮತ್ ಉಲ್ಲಾ ಖಾನ್ ಅವರ ಮನೆ ಬಳಿ ನುಗ್ಗಿದ ದುಷ್ಕರ್ಮಿಗಳು, ಮನೆಯ ಮುಂದೆ ನಿಲ್ಲಿಸಲಾಗಿದ್ದ ಬಿಳಿ ಬಣ್ಣದ i20 ಕಾರನ್ನು ಪುಡಿಪುಡಿ ಮಾಡಿದ್ದಾರೆ. ಕಾರಿನ ಗಾಜುಗಳನ್ನು ಹೊಡೆದು ಹಾಕಿದ ಕಿಡಿಗೇಡಿಗಳು ಸ್ಥಳದಲ್ಲಿ ಭಯದ ವಾತಾವರಣ ನಿರ್ಮಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಜಿಲ್ಲಾಸ್ಪತ್ರೆಗೆ ದಾಖಲು - ತನಿಖೆ ಚುರುಕು:&lt;/strong&gt;&lt;/h2&gt;&lt;p&gt;ದಾಳಿಯ ವೇಳೆ ಅಜ್ಮತ್ ಅವರಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ರಾಮನಗರ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳ ಮತ್ತು ಅಜ್ಮತ್ ಅವರ ಮನೆ ಬಳಿ ಮಹಜರು ನಡೆಸಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಹಳೆ ದ್ವೇಷ ಅಥವಾ ರಾಜಕೀಯ ವೈಷಮ್ಯ ಈ ದಾಳಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.&lt;/p&gt;&lt;h3&gt;&lt;strong&gt;ನಗರದಲ್ಲಿ ಬಿಗುವಿನ ವಾತಾವರಣ:&lt;/strong&gt;&lt;/h3&gt;&lt;p&gt;ನಗರಸಭೆ ಸದಸ್ಯನ ಮೇಲೆ ಹಾಡಹಗಲೇ ಅಟ್ಟಾಡಿಸಿ ಹಲ್ಲೆ ನಡೆಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ರಾಮನಗರದಂತಹ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ರೌಡಿಸಂ ಪ್ರಕರಣಗಳು ಮರುಕಳಿಸುತ್ತಿರುವುದು ಪೋಲಿಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಸದ್ಯ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಶಾಂತಿ ಕಾಪಾಡಲು ಕ್ರಮ ವಹಿಸಲಾಗಿದೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/ramanagara-murder-attempt-on-corporator-and-rowdy-sheeter-azmath-ullah-khan-sat/articleshow-0b2xztk"/>
        </item>
        <item>
            <title><![CDATA[ಆಪರೇಷನ್ ಕಮಲದ ಭೀತಿ: ಒಡಿಶಾದ 8 ಕಾಂಗ್ರೆಸ್ ಶಾಸಕರಿಗೆ  ಟ್ರಬಲ್‌ ಶೂಟರ್‌ ಡಿಕೆಶಿ ಆತಿಥ್ಯ]]></title>
            <link>https://kannada.asianetnews.com/politics/operation-lotus-congress-mlas-from-odisha-sent-to-wonder-law-resort-in-ramanagara-mrq/articleshow-149c3pe</link>
            <guid isPermaLink="true">https://kannada.asianetnews.com/politics/operation-lotus-congress-mlas-from-odisha-sent-to-wonder-law-resort-in-ramanagara-mrq/articleshow-149c3pe</guid>
            <pubDate>Sat, 14 Mar 2026 07:08:49 +0530</pubDate>
            <description><![CDATA[&lt;p&gt;ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ 'ಆಪರೇಷನ್ ಕಮಲ'ದ ಭೀತಿಯಿಂದ ಒಡಿಶಾದ 8 ಕಾಂಗ್ರೆಸ್ ಶಾಸಕರನ್ನು ರಾಮನಗರದ ವಂಡರ್ ಲಾ ರೆಸಾರ್ಟ್&zwnj;ಗೆ ಸ್ಥಳಾಂತರಿಸಲಾಗಿದೆ. ಅಡ್ಡ ಮತದಾನ ತಡೆಯಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಶಾಸಕರ ಉಸ್ತುವಾರಿ ವಹಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkmzx4xwmsvd01spspngznh1,imgname-dk-shivakumar-with-odisha-mlas--1773452301244.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ: &lt;/strong&gt;ರಾಜ್ಯಸಭಾ ಚುನಾವಣೆಯಲ್ಲಿ &lsquo;ಆಪರೇಷನ್ ಕಮಲ&rsquo;ದ ಭೀತಿಯ ಹಿನ್ನೆಲೆಯಲ್ಲಿ ಒಡಿಶಾದ 8 ಕಾಂಗ್ರೆಸ್ ಶಾಸಕರನ್ನು ರಾಮನಗರದ ಬಿಡದಿ ಸಮೀಪವಿರುವ ವಂಡರ್ ಲಾ ರೆಸಾರ್ಟ್​ಗೆ ಶಿಫ್ಟ್ ಮಾಡಲಾಗಿದೆ.&lt;/p&gt;&lt;p&gt;ಭುವನೇಶ್ವರದಿಂದ ಬೆಂಗಳೂರಿಗೆ ಗುರುವಾರ ರಾತ್ರಿ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಕ್ತ ಚರಣ್ ದಾಸ್ ನೇತೃತ್ವದಲ್ಲಿ ಈ ಶಾಸಕರು ರಾತ್ರಿ 11 ಗಂಟೆಗೆ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರೆಲ್ಲರನ್ನು ಡಿ.ಕೆ.ಶಿವಕುಮಾರ್ ಆಪ್ತರು ಸ್ವಾಗತಿಸಿದರು.&lt;/p&gt;&lt;p&gt;ವಿಮಾನ ನಿಲ್ದಾಣದಿಂದ ಪೊಲೀಸ್ ಬಂದೋಬಸ್ತ್ ಮತ್ತು ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ನೇರವಾಗಿ ಬಿಡದಿ ಸಮೀಪವಿರುವ ವಂಡರ್ ಲಾ ರೆಸಾರ್ಟ್&zwnj;ಗೆ ಕರೆತರಲಾಯಿತು. ಈ ಶಾಸಕರೆಲ್ಲರೂ ಮೊದಲ ಬಾರಿ ಗೆದ್ದವರಾಗಿದ್ದಾರೆ. ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿರುವ ಕೈ ಶಾಸಕರು ಬೆಳಗ್ಗೆಯಿಂದ ಹೊರಗೆ ಬರಲೇ ಇಲ್ಲ. ಎಲ್ಲರು ತಮ್ಮ ಕೊಠಡಿಗಳಲ್ಲಿಯೇ ಉಳಿದು ವಿಶ್ರಾಂತಿ ಪಡೆದರು.&lt;/p&gt;&lt;p&gt;ಸಂಜೆ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್ ಅವರೊಂದಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಚುನಾವಣೆಯ ವೇಳೆ ಭುವನೇಶ್ವರಕ್ಕೆ ವಾಪಸ್​ ಹೋಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;&lt;strong&gt;ನಾಲ್ಕನೇ ಸ್ಥಾನದ ಗೆಲುವಿಗೆ ಹೋರಾಟ&lt;/strong&gt;&lt;/h2&gt;&lt;p&gt;ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್&zwnj; 16ರಂದು ಚುನಾವಣೆ ನಡೆಯಲಿದೆ. 10 ರಾಜ್ಯಗಳ ಶಾಸಕರು ರಾಜ್ಯಸಭಾ ಸದಸ್ಯರ ಆಯ್ಕೆಗೆ ಮತದಾನ ಮಾಡಲಿದ್ದಾರೆ. ಇದರಲ್ಲಿ ನಾಲ್ಕು ರಾಜ್ಯಸಭಾ ಸದಸ್ಯರನ್ನು ಒಡಿಶಾದ ಶಾಸಕರು ಚುನಾಯಿಸಲಿದ್ದಾರೆ.&lt;/p&gt;&lt;p&gt;ಈ ಪೈಕಿ ನಾಲ್ಕನೇ ಸ್ಥಾನಕ್ಕೆ ಯಾವುದೇ ಪಕ್ಷದ ಬಳಿ ಸ್ಪಷ್ಟ ಸಂಖ್ಯಾ ಬಲ ಇಲ್ಲದ ಕಾರಣ, ಒಡಿಶಾ ರಾಜಕೀಯದಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದೆ. ಆಡಳಿತಾರೂಢ ಬಿಜೆಪಿ &lsquo;ಆಪರೇಷನ್ ಕಮಲ&rsquo;ದ ಮೂಲಕ ಅಡ್ಡ ಮತದಾನಕ್ಕೆ ಯತ್ನಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.&lt;/p&gt;&lt;p&gt;ಬಿಜೆಪಿ ನಾಯಕರು ಅಡ್ಡ ಮತದಾನ ಮಾಡಿಸುವ ಭೀತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ತನ್ನದೇ ಆಡಳಿತವಿರುವ ಕರ್ನಾಟಕಕ್ಕೆ ಸ್ಥಳಾಂತರಿಸಿದೆ. ಕಾಂಗ್ರೆಸ್&zwnj;ನ 14 ಶಾಸಕರಲ್ಲಿ 8 ಮಂದಿ ಬಿಡದಿ ಬಳಿಯ ವಂಡರ್ ಲಾ ರೆಸಾರ್ಟ್&zwnj;ನಲ್ಲಿ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಗಲಿಗೆ ಶಾಸಕರ ಉಸ್ತುವಾರಿ ವಹಿಸಲಾಗಿದೆ.&lt;/p&gt;&lt;p&gt;ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಬಿಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಖ್ಯಾತ ಮೂತ್ರಪಿಂಡ ತಜ್ಞ ದತ್ತೇಶ್ವರ ಹೋಟಾ ಅವರನ್ನು ಕಣಕ್ಕಿಳಿಸಿವೆ. ಪ್ರಖ್ಯಾತ ಹೋಟೆಲ್ ಉದ್ಯಮಿ ಮತ್ತು ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರು ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆದರೆ, ಬಿಜೆಪಿಗರು ಬಿಜೆಡಿ ಮತ್ತು ಕಾಂಗ್ರೆಸ್&zwnj; ಶಾಸಕರನ್ನು ಅಡ್ಡಮತದಾನಕ್ಕೆ ಪ್ರಚೋದಿಸಬಹುದು ಎಂಬ ಆತಂಕ ಎರಡೂ ಪಕ್ಷಗಳಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Glad to meet our Congress MLAs from Odisha in Bengaluru along with Odisha Pradesh Congress Committee President Shri Bhakta Charan Das and interact with them.Their unity and determination show that no attempt can weaken the resolve of Congress leaders to stand together and&hellip; pic.twitter.com/fgdoBWCd64&lt;/p&gt;&lt;p&gt;&mdash; DK Shivakumar (@DKShivakumar) March 13, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಆದ್ದರಿಂದಲೇ, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರು ತಮ್ಮ ಪಕ್ಷದ 14 ಶಾಸಕರ ಪೈಕಿ 8 ಮಂದಿಯನ್ನು ರೆಸಾರ್ಟ್&zwnj;ಗೆ ಕರೆ ತಂದಿದ್ದಾರೆ. ಎದುರಾಳಿ ಪಕ್ಷಗಳು ತಮ್ಮ ಶಾಸಕರನ್ನು ಸೆಳೆಯದಂತೆ ತಡೆಯುವುದು ಕಾಂಗ್ರೆಸ್&zwnj;ನ ತಂತ್ರ ಮತ್ತು ಉದ್ದೇಶವಾಗಿದೆ.&lt;/p&gt;&lt;p&gt;ರಾಜ್ಯಸಭೆ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿಯ ಗೆಲುವಿಗೆ 30 ಪ್ರಾಶಸ್ತ್ಯದ ಮತಗಳು ಬೇಕಿವೆ. ಹೀಗಾಗಿ ಬಿಜೆಪಿ ಇಬ್ಬರನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಹುದು. ಸ್ವತಂತ್ರ ಅಭ್ಯರ್ಥಿಯ ಗೆಲುವಿಗೆ 11 ಮತಗಳ ಅವಶ್ಯಕತೆ ಇದೆ. ಹೀಗಾಗಿ, ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುವ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರು ಅಡ್ಡಮತದಾನ ಮಾಡದಂತೆ ಅವರನ್ನು ರೆಸಾರ್ಟ್​ಗೆ ಶಿಫ್ಟ್ ಮಾಡಲಾಗಿದೆ.&lt;/p&gt;&lt;p&gt;ಇಂದು ರಾತ್ರಿ ಮತ್ತಷ್ಟು ಶಾಸಕರು ಆಗಮಿಸುವ ಸಾಧ್ಯತೆ ಇದೆ. ಶಾಸಕರನ್ನು ಕರೆತರಲು ಈಗಾಗಲೇ ಕರ್ನಾಟಕದ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣಕ್ಕೆ ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ಶಾಸಕರು ತಂಗಿರುವ ಕಾರಣ ರೆಸಾರ್ಟ್&zwnj; ಸುತ್ತಲೂ ಬಿಗಿ ಪೊಲೀಸ್&zwnj; ಭದ್ರತೆ ಕಲ್ಪಿಸಲಾಗಿದೆ.&lt;/p&gt;&lt;h3&gt;&lt;strong&gt;ಆಪರೇಷನ್ ಕಮಲ&rsquo; ಭೀತಿ ಇಲ್ಲ: ಬಾಲಕೃಷ್ಣ&lt;/strong&gt;&lt;/h3&gt;&lt;p&gt;ರಾಮನಗರ: ಚುನಾವಣೆ ಸಮಯದಲ್ಲಿ ನಾವೂ ರೆಸಾರ್ಟ್&zwnj;ಗೆ ಹೋಗುತ್ತೇವೆ. ಹಾಗೆಯೇ ಒಡಿಶಾ ಶಾಸಕರು ಬಂದಿದ್ದಾರೆ. ಇದರಲ್ಲಿ ಆಪರೇಷನ್ ಕಮಲದ ಭೀತಿ ಏನೂ ಇಲ್ಲ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಅದನ್ನು ಸರಿ ಮಾಡುತ್ತೇವೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು. ವಂಡರ್ ಲಾ ರೆಸಾರ್ಟ್&zwnj;ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರು ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ. ಅವರನ್ನು ಸ್ವಾಗತಿಸಿ ಗೌರವಿಸೋದು ನನ್ನ ಕರ್ತವ್ಯ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/operation-lotus-congress-mlas-from-odisha-sent-to-wonder-law-resort-in-ramanagara-mrq/articleshow-149c3pe"/>
        </item>
        <item>
            <title><![CDATA[ಪೊಲೀಸರ ಮುಂದೆಯೇ ಚಾಕು ಹಿಡಿದು ತೂರಾಡಿದ ಕನಕಪುರ ಕುಡುಕ; ಖಾಕಿಗೆ ಅವಾಜ್ ಹಾಕಿದ ವಿಡಿಯೋ ವೈರಲ್!]]></title>
            <link>https://kannada.asianetnews.com/karnataka-districts/bengaluru-south-kanakapura-drunk-man-knife-nuisance-in-front-police-viral-video-sat/articleshow-405koeg</link>
            <guid isPermaLink="true">https://kannada.asianetnews.com/karnataka-districts/bengaluru-south-kanakapura-drunk-man-knife-nuisance-in-front-police-viral-video-sat/articleshow-405koeg</guid>
            <pubDate>Sun, 22 Mar 2026 20:50:12 +0530</pubDate>
            <description><![CDATA[&lt;p&gt;ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ರಸ್ತೆಯಲ್ಲಿ, ಪೊಲೀಸರ ಮುಂದೆಯೇ ಮಚ್ಚು ಹಿಡಿದು ಅಟ್ಟಹಾಸ ಮೆರೆದಿದ್ದಾನೆ. ಈ ಘಟನೆಯು ಸಾರ್ವಜನಿಕ ಸುರಕ್ಷತೆಗೆ ಸವಾಲಾಗಿದ್ದು, ಯುವಜನತೆಯಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ವರ್ತನೆಗೆ ಕನ್ನಡಿ ಹಿಡಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmb23m7xp44133zmjpv8vh3t,imgname-kanakapura-drunken-man-1774192808187.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮಾ.22): ಮ&lt;/strong&gt;ದ್ಯದ ನಶೆ ಮತ್ತು ಮಿತಿಮೀರಿದ ಅಹಂಕಾರ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ರಸ್ತೆಯಲ್ಲಿ ಮಚ್ಚು ಹಿಡಿದು ಅಟ್ಟಹಾಸ ಮೆರೆದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗರಿಕರ ಆತಂಕಕ್ಕೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಪೊಲೀಸರ ಮುಂದೆಯೇ ಮಚ್ಚು ಹಿಡಿದು ತೂರಾಟ!&lt;/strong&gt;&lt;/h3&gt;&lt;p&gt;ಈ ಘಟನೆಯಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ಕಿಡಿಗೇಡಿ ಪೊಲೀಸರ ಕಣ್ಣ ಮುಂದೆಯೇ ಮಚ್ಚು ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದರೂ, ಕಾನೂನಿನ ಬಗ್ಗೆ ಎಳ್ಳಷ್ಟೂ ಭಯವಿಲ್ಲದೆ ವರ್ತಿಸಿದ್ದಾನೆ. ಕುಡಿದ ಅಮಲಿನಲ್ಲಿ ತೂರಾಡುತ್ತಾ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ದಾರಿಹೋಕರಿಗೆ ತೊಂದರೆ ನೀಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಪೊಲೀಸರ ಸಮ್ಮುಖದಲ್ಲೇ ಇಂತಹ ದರ್ಪ ತೋರುವುದು ನಮ್ಮ ಸಮಾಜದ ಶಿಸ್ತು ಮತ್ತು ಕಾನೂನು ಸುವ್ಯವಸ್ಥೆಗೆ ಎಸಗಿದ ಅಪಮಾನವಾಗಿದೆ.&lt;/p&gt;&lt;p&gt;Alcohol, Attitude, and a Knife: A Recipe for Chaos in Kanakapura Karnataka&amp;nbsp;Drunken Misconduct on the Streets of Kanakapura Raises Serious ConcernsA disturbing video from Kanakapura, Karnataka, has gone viral, showing a drunk man openly holding a knife and behaving aggressively&hellip; pic.twitter.com/TnFpfWosUs&lt;/p&gt;&lt;p&gt;&mdash; Karnataka Portfolio (@karnatakaportf) March 22, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ದಾರಿ ತಪ್ಪುತ್ತಿರುವ ಯುವಜನತೆ:&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಕಾನೂನಿನ ಬಗ್ಗೆ ಗೌರವ ಕಡಿಮೆಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಶಿಸ್ತು, ಸಂಯಮ ಮತ್ತು ನಾಗರಿಕ ಜವಾಬ್ದಾರಿಯನ್ನು ಮರೆತು, ಮದ್ಯದ ನಶೆಯಲ್ಲಿ ಅಥವಾ ಅಹಂಕಾರದಿಂದ ಇಂತಹ ಕೃತ್ಯಗಳನ್ನು ಎಸಗುವುದನ್ನು ಕೆಲವರು 'ಆ್ಯಟಿಟ್ಯೂಡ್' ಎಂದು ಭಾವಿಸುತ್ತಿರುವುದು ದುರಂತ. ಆದರೆ, ಸಾರ್ವಜನಿಕರ ಜೀವಕ್ಕೆ ಅಪಾಯ ತರುವ ಈ ವರ್ತನೆ ಧೈರ್ಯವಲ್ಲ, ಬದಲಾಗಿ ಇದು ಹೇಡಿತನ ಮತ್ತು ಅಜವಾಬ್ದಾರಿಯ ಲಕ್ಷಣವಾಗಿದೆ.&lt;/p&gt;&lt;h3&gt;&lt;strong&gt;ಸಾರ್ವಜನಿಕ ಸುರಕ್ಷತೆಗೆ ಸವಾಲು:&lt;/strong&gt;&lt;/h3&gt;&lt;p&gt;ರಸ್ತೆಯಲ್ಲಿ ಸಂಚರಿಸುವ ಅಮಾಯಕ ಜನರಿಗೆ ಇಂತಹ ಕಿಡಿಗೇಡಿಗಳಿಂದ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸಬಹುದು. ಅಮಲಿನಲ್ಲಿರುವ ವ್ಯಕ್ತಿಗೆ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿರುವುದಿಲ್ಲ. ಕೈಯಲ್ಲಿ ಮಾರಕಾಸ್ತ್ರವಿದ್ದಾಗ ಅದು ಜೀವಹಾನಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಪೊಲೀಸರ ಎದುರೇ ಇಷ್ಟು ಧೈರ್ಯದಿಂದ ವರ್ತಿಸುವವನು, ಇನ್ನು ಪೊಲೀಸರಿಲ್ಲದ ಜಾಗದಲ್ಲಿ ಜನಸಾಮಾನ್ಯರ ಮೇಲೆ ಯಾವ ರೀತಿ ದಾಳಿ ಮಾಡಬಹುದು ಎಂಬ ಪ್ರಶ್ನೆ ಈಗ ಮೂಡಿದೆ.&lt;/p&gt;&lt;h2&gt;&lt;strong&gt;ಸಮಾಜಕ್ಕೆ ಎಚ್ಚರಿಕೆಯ ಗಂಟೆ:&lt;/strong&gt;&lt;/h2&gt;&lt;p&gt;ಈ ಘಟನೆಯು ಕೇವಲ ಒಬ್ಬ ವ್ಯಕ್ತಿಯ ವರ್ತನೆಯಲ್ಲ, ಬದಲಾಗಿ ನಮ್ಮ ಸಮಾಜದಲ್ಲಿ ಬೆಳೆಯುತ್ತಿರುವ ಅರಾಜಕತೆಯ ಸಂಕೇತವಾಗಿದೆ. ಯುವ ಪೀಳಿಗೆಗೆ ಜೀವನದ ಮೌಲ್ಯಗಳನ್ನು, ಕಾನೂನಿನ ಕಟ್ಟುನಿಟ್ಟಿನ ಬಗ್ಗೆ ಪಾಠ ಮಾಡಬೇಕಾದ ಅನಿವಾರ್ಯತೆ ಇದೆ. ನಿಜವಾದ ಶಕ್ತಿ ಇರುವುದು ಅಸಹಾಯಕರ ಮೇಲೆ ಮಾರಕಾಸ್ತ್ರ ತೋರುವುದರಲ್ಲಿ ಅಲ್ಲ, ಬದಲಾಗಿ ತನ್ನ ಮೇಲೆ ತಾನು ನಿಯಂತ್ರಣ ಹೊಂದುವುದರಲ್ಲಿ ಮತ್ತು ಸಮಾಜಕ್ಕೆ ಗೌರವ ನೀಡುವುದರಲ್ಲಿ ಅಡಗಿದೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-south-kanakapura-drunk-man-knife-nuisance-in-front-police-viral-video-sat/articleshow-405koeg"/>
        </item>
        <item>
            <title><![CDATA[ಕೈ ಶಾಸಕರಿಂದ ಸಿದ್ದು ಬಜೆಟ್ ಬಗ್ಗೆ ಅಸಮಾಧಾನ; ಅಭಿವೃದ್ಧಿಗೆ ಡಿಕೆಶಿ ಹಿಂದೆ ಬೀಳಬೇಕು ಎಂದ ಶಾಸಕ ಇಕ್ಬಾಲ್ ಹುಸೇನ್!]]></title>
            <link>https://kannada.asianetnews.com/politics/ramanagara-mla-iqbal-hussain-unhappy-with-karnataka-budget-dk-shivakumar-next-cm-hint-sat/articleshow-54u0grz</link>
            <guid isPermaLink="true">https://kannada.asianetnews.com/politics/ramanagara-mla-iqbal-hussain-unhappy-with-karnataka-budget-dk-shivakumar-next-cm-hint-sat/articleshow-54u0grz</guid>
            <pubDate>Fri, 13 Mar 2026 12:56:02 +0530</pubDate>
            <description><![CDATA[&lt;p&gt;ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಬಜೆಟ್&zwnj;ನಲ್ಲಿ ತಮ್ಮ ಕ್ಷೇತ್ರಕ್ಕೆ ಅನುದಾನ ಸಿಗದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳ ಮೇಲಿನ ನಂಬಿಕೆ ಹುಸಿಯಾಗಿದೆ ಎಂದಿರುವ ಅವರು, ಇನ್ನು ಮುಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಗತಿ ಎಂದು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdphskv17kk6dswzg0r1ydrw,imgname-iqbal-hussain--4--1767062163297.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮಾ.13): ಕ&lt;/strong&gt;ರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಕುರಿತು ಸ್ವಪಕ್ಷದ ಶಾಸಕರೇ ಈಗ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರು, 'ಬಜೆಟ್ ನನಗೆ ಸಮಾಧಾನ ತಂದಿಲ್ಲ, ಮುಖ್ಯಮಂತ್ರಿಗಳ ಮೇಲಿದ್ದ ನಂಬಿಕೆ ಹುಸಿಯಾಗಿದೆ' ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಿಎಂಗೆ ಫೋಟೋ ತೋರಿಸಿದರೂ ಸಿಗದ ಅನುದಾನ!&lt;/strong&gt;&lt;/h2&gt;&lt;p&gt;ರಾಮನಗರದ ಮೊಟ್ಟೆದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಇಕ್ಬಾಲ್ ಹುಸೇನ್, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಜೆಟ್&zwnj;ನಲ್ಲಿ ಆದ್ಯತೆ ಸಿಗದಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. 'ನನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೆ. ಭಕ್ಷಿಕೆರೆ ಏರಿ ಹೊಡೆದು ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಫೋಟೋ ಸಹಿತ ಮಾಹಿತಿ ನೀಡಿದ್ದೆ. ರಸ್ತೆ, ಚರಂಡಿ ಹಾಗೂ ನೀರಾವರಿ ಯೋಜನೆಗಳಿಗಾಗಿ ವಿಶೇಷ ಅನುದಾನ ನೀಡುವಂತೆ ನಾಲ್ಕೈದು ಬಾರಿ ಕೇಳಿಕೊಂಡಿದ್ದೆ. ಪಾರದರ್ಶಕವಾಗಿ ಅನುದಾನ ಸಿಗಲಿದೆ ಎಂಬ ನಂಬಿಕೆ ನನಗಿತ್ತು. ಆದರೆ ಈಗ ಆ ನಂಬಿಕೆ ಹುಸಿಯಾಗಿದೆ' ಎಂದು ನೋವು ತೋಡಿಕೊಂಡಿದ್ದಾರೆ.&amp;nbsp;&lt;/p&gt;&lt;p&gt;ಜೊತೆಗೆ, ಈ ಹಿಂದೆ ಇದ್ದ ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಹೊಸದಾಗಿ ಆಯ್ಕೆಯಾದ ನನಗೆ ಜನರ ನಿರೀಕ್ಷೆಗಳನ್ನು ಪೂರೈಸಲು ಹೆಚ್ಚಿನ ಅನುದಾನದ ಅಗತ್ಯವಿತ್ತು. ಆದರೆ ಸಿಎಂ ಕಡೆಯಿಂದ ಸೂಕ್ತ ಸ್ಪಂದನೆ ಸಿಗದಿರುವುದು ನನಗೆ ವೈಯಕ್ತಿಕವಾಗಿ ನೋವುಂಟು ಮಾಡಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಈಗ ಡಿಸಿಎಂ ಡಿಕೆಶಿಯೇ ನಮಗೆ ಗತಿ!&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿಗಳಿಂದ ಕೆಲಸವಾಗದ ಹಿನ್ನೆಲೆಯಲ್ಲಿ, ಇಕ್ಬಾಲ್ ಹುಸೇನ್ ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರತ್ತ ಮುಖ ಮಾಡಿದ್ದಾರೆ. 'ಇನ್ನು ಮುಂದೆ ನಾವು ಡಿಸಿಎಂ ಹಿಂದೆಯೇ ಹೋಗಬೇಕು. ನಮ್ಮ ಕಷ್ಟ-ಸುಖಗಳನ್ನೆಲ್ಲ ಅವರ ಮೇಲೆಯೇ ಹಾಕಬೇಕು. ರಾಮನಗರ ಜಿಲ್ಲೆ ಅವರದ್ದೂ ಹೌದು, ಕ್ಷೇತ್ರದ ಜವಾಬ್ದಾರಿ ಅವರ ಮೇಲೂ ಇದೆ. ಹಿಂದೆ ಅವರಿಂದಲೇ ನಾನು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಂಡಿದ್ದೆ. ಮುಂದೆಯೂ ಅವರ ಮೇಲೆಯೇ ಭಾರ ಹಾಕಬೇಕಿದೆ' ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದರು.&lt;/p&gt;&lt;h2&gt;&lt;strong&gt;ಯುಗಾದಿ ಬಳಿಕ ಡಿಕೆಶಿ ಸಿಎಂ? ಕುತೂಹಲ ಮೂಡಿಸಿದ ಹೇಳಿಕೆ&lt;/strong&gt;&lt;/h2&gt;&lt;p&gt;ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ವಿಚಾರದ ಬಗ್ಗೆಯೂ ಇಕ್ಬಾಲ್ ಹುಸೇನ್ ಮಾರ್ಮಿಕವಾಗಿ ಮಾತನಾಡಿದ್ದಾರೆ. &quot;ನಮ್ಮ ಗುರುಗಳು (ಡಿಕೆಶಿ) ಜಪದಿಂದ ಇನ್ನೂ ಎದ್ದಿಲ್ಲ. ಬಹುಶಃ ಯುಗಾದಿ ಹಬ್ಬದ ಬಳಿಕ ನಮ್ಮ ಗುರುಗಳು ಎಚ್ಚರವಾಗುತ್ತಾರೆ. ಸದ್ಯ ಅಧಿವೇಶನ ನಡೆಯುತ್ತಿದೆ, ಯುಗಾದಿ ಬಳಿಕ ರಾಜ್ಯಕ್ಕೆ ಒಂದು ಒಳ್ಳೆಯ ಸುದ್ದಿ ಸಿಗಲಿದೆ. ಡಿಕೆಶಿ ಅವರ ಶ್ರಮಕ್ಕೆ ತಕ್ಕ ರಿಸಲ್ಟ್ ಸಿಕ್ಕೇ ಸಿಗುತ್ತದೆ,&quot; ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ.&lt;/p&gt;&lt;p&gt;ಶಾಸಕ ಇಕ್ಬಾಲ್ ಹುಸೇನ್ ಅವರ ಈ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ತಲ್ಲಣ ಮೂಡಿಸಿವೆ. ಒಂದೆಡೆ ಬಜೆಟ್ ಅನುದಾನದ ಅಸಮಾಧಾನ, ಇನ್ನೊಂದೆಡೆ ಡಿಕೆಶಿ ಸಿಎಂ ಪಟ್ಟಕ್ಕೇರುವ ಸುಳಿವು ನೀಡಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳ ವಿರುದ್ಧವೇ ಶಾಸಕರೊಬ್ಬರು ಬಹಿರಂಗವಾಗಿ ನಂಬಿಕೆ ಹುಸಿಯಾಗಿದೆ ಎಂದು ಹೇಳಿರುವುದು ಸಿದ್ದರಾಮಯ್ಯ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಯುಗಾದಿ ಹಬ್ಬದ ನಂತರ ಕರ್ನಾಟಕ ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸಲಿವೆ ಎಂಬುದು ಈಗ ಕುತೂಹಲದ ಸಂಗತಿಯಾಗಿದೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/ramanagara-mla-iqbal-hussain-unhappy-with-karnataka-budget-dk-shivakumar-next-cm-hint-sat/articleshow-54u0grz"/>
        </item>
        <item>
            <title><![CDATA[ಪೋಕ್ಸೋ ಕೇಸ್‌ ಹಾಕ್ತೀವಿ ಅಂತಾ ಬೆದರಿಸಿ ವ್ಯಕ್ತಿಯಿಂದ ₹65 ಲಕ್ಷ ಕಿತ್ತ ಐವರು ಮಹಿಳೆಯರ ಖತರ್ನಾಕ್ ಗ್ಯಾಂಗ್!]]></title>
            <link>https://kannada.asianetnews.com/karnataka-districts/ramanagara-5-women-extort-rs-65-lakh-from-man-with-pocso-case-threat-rav/articleshow-8lgmop3</link>
            <guid isPermaLink="true">https://kannada.asianetnews.com/karnataka-districts/ramanagara-5-women-extort-rs-65-lakh-from-man-with-pocso-case-threat-rav/articleshow-8lgmop3</guid>
            <pubDate>Wed, 01 Apr 2026 11:59:23 +0530</pubDate>
            <description><![CDATA[ರಾಮನಗರದಲ್ಲಿ ಐವರು ಮಹಿಳೆಯರ ಗ್ಯಾಂಗ್, ಥಿಯೇಟರ್ ಮಾಲೀಕರೊಬ್ಬರಿಗೆ ಪೋಕ್ಸೊ ಕೇಸ್ ಹಾಕುವುದಾಗಿ ಬೆದರಿಸಿ ₹65 ಲಕ್ಷ ಸುಲಿಗೆ ಮಾಡಿದೆ. ಮದುವೆಯಾಗುವುದಾಗಿ ನಂಬಿಸಿ, ಹಂತ ಹಂತವಾಗಿ ಹಣ ಪಡೆದ ಈ ಗ್ಯಾಂಗ್ ವಿರುದ್ಧ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn3vcdn7qp2wawjk1xxr2qwk,imgname----------------------27--1775024617127.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಏ.1): &lt;/strong&gt;ಐವರು ಮಹಿಳೆಯರ ಗ್ಯಾಂಗ್&zwnj;ವೊಂದು ವ್ಯಕ್ತಿಯೊಬ್ಬರಿಗೆ ಪೋಕ್ಸೊ ಕೇಸ್ ಹಾಕಿಸಿ ಜೈಲಿಗೆ ಕಳಿಸ್ತೇವೆ ಎಂದು ಬೆದರಿಸಿ ₹65 ಲಕ್ಷ ರೂಪಾಯಿ ಕಿತ್ತುಕೊಂಡ ಆಘಾತಕಾರಿ ಘಟನೆ ರಾಮನಗರದಲ್ಲಿ ನಡೆದಿದೆ.&lt;/p&gt;&lt;h2&gt;ಐವರು ಮಹಿಳೆಯರ ಖತರ್ನಾಕ್ ಗ್ಯಾಂಗ್&lt;/h2&gt;&lt;p&gt;ಈ ಐವರು ಮಹಿಳೆಯರ ಗ್ಯಾಂಗ್&zwnj; ಸಾಮಾನ್ಯರಲ್ಲ. 52 ವರ್ಷದ ಥಿಯೇಟರ್ ಮಾಲೀಕರೊಬ್ಬರಿಂದ ಬರೋಬ್ಬರಿ ₹65 ಲಕ್ಷ ಸುಲಿಗೆ ಮಾಡಿದ್ದಾರೆ. ಶಂಕರ್ ಚಿತ್ರ ಮಂದಿರದ ಮಾಲೀಕ ಎನ್.ಮಂಜುನಾಥ್ ವಂಚನೆಗೊಳಗಾದವರು. 7 ವರ್ಷಗಳ ಹಿಂದೆ ಪತ್ನಿ ಬಿಟ್ಟು ಹೋದ ನಂತರ ಮಂಜುನಾಥ್ ಏಕಾಂಗಿಯಾಗಿದ್ದರು. ಆರೇಳು ತಿಂಗಳ ಹಿಂದೆ ಲತಾ ಎಂಬ ಮಹಿಳೆ ಥಿಯೇಟರ್&zwnj;ಗೆ ಸಿನಿಮಾ ನೋಡಲು ಬಂದಾಗ ಮಂಜುನಾಥ್&zwnj;ರನ್ನು ಪರಿಚಯ ಮಾಡಿಕೊಂಡು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾಳೆ.&amp;nbsp;&lt;/p&gt;&lt;p&gt;ನಂತರ ಆಕೆ ಗಗನ ಮತ್ತು ಅಪೂರ್ವ ಎಂಬುವರನ್ನು ಪರಿಚಯಿಸಿದ್ದಾಳೆ. ಈ ಎಲ್ಲಾ ಮಹಿಳೆಯರು ಮೊದಲು ಸಣ್ಣ ಮೊತ್ತದಲ್ಲಿ ಸುಲಿಗೆ ಮಾಡಿ, ನಂತರ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ನಿರಾಕರಿಸಿದಾಗಲೆಲ್ಲ ಪೋಕ್ಸೊ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ಒಟ್ಟು ₹65 ಲಕ್ಷ ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ramanagara-5-women-extort-rs-65-lakh-from-man-with-pocso-case-threat-rav/articleshow-8lgmop3"/>
        </item>
        <item>
            <title><![CDATA[ಒಡಿಶಾ ಕಾಂಗ್ರೆಸ್ ಶಾಸಕರಿಗೆ 5 ಕೋಟಿ ಆಮಿಷ: ಬಿಡದಿಯಲ್ಲಿ ನಾಲ್ವರ ವಿರುದ್ಧ ಪ್ರಕರಣ]]></title>
            <link>https://kannada.asianetnews.com/karnataka-districts/operation-lotus-5-crore-cheque-odisha-congress-mlas-case-against-four-in-bidadi-mrq/articleshow-b18apxk</link>
            <guid isPermaLink="true">https://kannada.asianetnews.com/karnataka-districts/operation-lotus-5-crore-cheque-odisha-congress-mlas-case-against-four-in-bidadi-mrq/articleshow-b18apxk</guid>
            <pubDate>Tue, 17 Mar 2026 07:30:17 +0530</pubDate>
            <description><![CDATA[ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್&zwnj;ನಲ್ಲಿ ತಂಗಿದ್ದ ಒಡಿಶಾ ಕಾಂಗ್ರೆಸ್ ಶಾಸಕರಿಗೆ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ₹5 ಕೋಟಿ ಆಮಿಷವೊಡ್ಡಿ, ಕೊಲೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಶಾಸಕ ಅಶೋಕ್ ಕುಮಾರ್ ದಾಸ್ ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkr3f24cn55q95rg0y14nxwp,imgname-whatsapp-image-2026-03-13-at-6.34.46-pm-1773556697228.jpeg" type="image/jpeg" height="390" width="690"/>
            <content:encoded><![CDATA[&lt;h3&gt;ರಾಮನಗರ: ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್&zwnj;ನಲ್ಲಿ ವಾಸ್ತವ್ಯ ಹೂಡಿದ್ದ ಒಡಿಶಾದ ಕಾಂಗ್ರೆಸ್ ಶಾಸಕರಿಗೆ ₹5 ಕೋಟಿ ಆಮಿಷವೊಡ್ಡುವುದರ ಜೊತೆಗೆ ಕೊಲೆ ಬೆದರಿಕೆ ಹಾಕಿದ್ದ ನಾಲ್ವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/h3&gt;&lt;p&gt;ಒಡಿಶಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ ಅಶೋಕ್ ಕುಮಾರ್ ದಾಸ್ ನೀಡಿದ ದೂರಿನ ಮೇರೆಗೆ ಬೀರೇಂದ್ರ ಪ್ರಸಾದ್, ಸುರೇಶ್, ಅಜಿತ್ ಕುಮಾರ್ ಸಾಹು ಹಾಗೂ ಸಿಮಾಚಲ ಮೊಹಕುದ್ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ದೂರಿನಲ್ಲಿ ಏನಿದೆ?:&lt;/strong&gt;&lt;/h2&gt;&lt;p&gt;ಮಾರ್ಚ್ 16ರಂದು ಒಡಿಶಾದಲ್ಲಿ ರಾಜ್ಯಸಭಾ ಚುನಾವಣೆ ನಡೆಯುತ್ತಿದೆ. ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಿಜೆಪಿ ಸರ್ಕಾರ, ಕಾಂಗ್ರೆಸ್ ಶಾಸಕರನ್ನು ಅಪಹರಿಸಲು ಪ್ರಯತ್ನಿಸುತ್ತಿದೆ. ಆದ್ದರಿಂದ 8 ಮಂದಿ ಕಾಂಗ್ರೆಸ್ ಶಾಸಕರು ಸುರಕ್ಷತೆಗಾಗಿ ಮಾರ್ಚ್ 12 ರಂದು ಬೆಂಗಳೂರಿಗೆ ಬಂದು ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್&zwnj;ನಲ್ಲಿ ವಾಸ್ತವ್ಯ ಹೂಡಿದ್ದೇವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Hassan: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಅದಲು ಬದಲು: 6 ವಿದ್ಯಾರ್ಥಿಗಳಿಗೆ ಅನ್ಯಾಯ&lt;/strong&gt;&lt;/p&gt;&lt;p&gt;&lt;strong&gt;ಕೊಲ್ಲುವುದಾಗಿ ಬೆದರಿಕೆ&lt;/strong&gt;&lt;/p&gt;&lt;p&gt;&amp;nbsp;ಮಾರ್ಚ್ 15ರ ಬೆಳಗ್ಗೆ ನಾಲ್ವರು ಅಪರಿಚಿತ ವ್ಯಕ್ತಿಗಳು ಕಾಂಗ್ರೆಸ್&zwnj;ನ ಕೆಲವು ಶಾಸಕರನ್ನು ಸಂಪರ್ಕಿಸಿ, ಬಿಜೆಪಿ ಪರವಾಗಿ ಮತ ಚಲಾಯಿಸಲು ತಲಾ ₹5 ಕೋಟಿ ಲಂಚ ನೀಡಲು ಪ್ರಯತ್ನಿಸಿದರು. ಆದರೆ, ನಮ್ಮ ಶಾಸಕರು ಅವರ ಪ್ರಸ್ತಾಪವನ್ನು ತಿರಸ್ಕರಿಸಿದಾಗ ಒಡಿಶಾಗೆ ಬಂದರೆ ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅಶೋಕ್ ಕುಮಾರ್ ದಾಸ್ ದೂರಿನಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Belagavi Banner war: ಖಮೇನಿಯ ಚಿತ್ರ ಹಾಕಿದ್ದಕ್ಕೆ ನೆತನ್ಯಾಹು ಭಾವಚಿತ್ರ ಹಾಕಿದ ಶ್ರೀರಾಮಸೇನೆ!&lt;/strong&gt;&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/operation-lotus-5-crore-cheque-odisha-congress-mlas-case-against-four-in-bidadi-mrq/articleshow-b18apxk"/>
        </item>
        <item>
            <title><![CDATA[ರಾಮನಗರ: ಅತ್ತೆ ಸೊಸೆ ಜಗಳ: 19 ವರ್ಷದ ಗರ್ಭಿಣಿ ಸೊಸೆ ನಯನಾ ಸಾವಿಗೆ ಶರಣು]]></title>
            <link>https://kannada.asianetnews.com/gallery/state/ramanagara-quarrel-with-mother-in-law-19-year-old-pregnant-daughter-in-law-died-d2lhx9i</link>
            <guid isPermaLink="true">https://kannada.asianetnews.com/gallery/state/ramanagara-quarrel-with-mother-in-law-19-year-old-pregnant-daughter-in-law-died-d2lhx9i</guid>
            <pubDate>Thu, 12 Mar 2026 12:47:10 +0530</pubDate>
            <description><![CDATA[&lt;p&gt;&lt;strong&gt;Ramanagara pregnant woman died: &lt;/strong&gt;ರಾಮನಗರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಮನನೊಂದು 19 ವರ್ಷದ ಗರ್ಭಿಣಿ ನಯನಾ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkgbqq4ptdbjpgh2q5rxdddw,imgname-ramnagar-pregnant-death--2--1773296934038.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Ramanagara pregnant woman died: &lt;/strong&gt;ರಾಮನಗರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಮನನೊಂದು 19 ವರ್ಷದ ಗರ್ಭಿಣಿ ನಯನಾ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ.&lt;/p&gt;&lt;img&gt;&lt;p&gt;ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಗರ್ಭಿಣಿ ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ರಾಮನಗರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೀದರ್: ಶಾಲಾ ಕಟ್ಟಡದಿಂದ ಜಿಗಿದು 10ನೇ ಕ್ಲಾಸ್ ಬಾಲಕಿ ಸಾವಿಗೆ ಶರಣು&lt;/strong&gt;&lt;/p&gt;&lt;img&gt;&lt;p&gt;19 ವರ್ಷದ ನಯನ ಸಾವಿಗೆ ಶರಣಾದ ಗರ್ಭಿಣಿ. ಒಂದೂವರೆ ವರ್ಷದ ಹಿಂದೆ ನಾಗರಾಜು ಎಂಬುವವರ ಜೊತೆ ಈಕೆಯ ಮದುವೆ ಮಾಡಿಸಲಾಗಿತ್ತು..&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;ಮಡಿಕೇರಿಯ ಭಾಗಮಂಡಲದಲ್ಲಿ ಸಹಜೀವನ ನಡೆಸುತ್ತಿದ್ದ ಜೋಡಿಯ ಕೊಲೆ: ಮಹಿಳೆ ಸೋದರನಿಂದ ಕೃತ್ಯ&lt;/p&gt;&lt;img&gt;&lt;p&gt;ಮೃತ ನಯನಾ 5 ತಿಂಗಳ ಗರ್ಭಿಣಿಯಾಗಿದ್ದರು. ಇತ್ತೀಚೆಗೆ ಅತ್ತೆ, ಸೊಸೆ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಪದೇ ಪದೇ ಸಣ್ಣಪುಟ್ಟ ವಿಚಾರಗಳಿಗೆ ಅತ್ತೆ ಸೊಸೆ ಮಧ್ಯೆ ಗಲಾಟೆ ನಡೆಯುತ್ತಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Prison break:ಜೈಲಿನಿಂದ ತಪ್ಪಿಸಿಕೊಳ್ಳಲು ನಿರಂತರ 5 ವರ್ಷ ಸುರಂಗ ಕೊರೆದ ಕೈದಿ ತಲುಪಿದ್ದು ಎಲ್ಲಿಗೆ?&lt;/strong&gt;&lt;/p&gt;&lt;img&gt;&lt;p&gt;ಇದೇ ವಿಚಾರವಾಗಿ ಮನನೊಂದು ಗರ್ಭಿಣಿ ನಯನಾ ರಾತ್ರಿ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದಯವಿಟ್ಟು ನನ್ನ ಬೆಳೆ ಖರೀದಿಸಿ... ನನ್ನ ಮಗಳ ಮದುವೆ ನಾಳೆ: ಮಾರುಕಟ್ಟೆಯಲ್ಲಿ ಅಳಲು ಶುರು ಮಾಡಿದ ರೈತ&lt;/strong&gt;&lt;/p&gt;&lt;img&gt;&lt;p&gt;ನಯನ ಸಾವಿನ ಹಿನ್ನೆಲೆ ಆಕೆಯ ಪತಿ ನಾಗರಾಜು ಹಾಗೂ ಮಾವ ಜಯರಾಮ್ ಎಂಬುವವರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರವೂ ಹುಟ್ಟಿದ ಕಂದ: ಇದು ಸರ್ಕಾರದ ಲೋಪ ಮಗು ಸಾಕಲು ಆರ್ಥಿಕ ನೆರವು ಬೇಕು ಎಂದ ದಂಪತಿ&lt;/strong&gt;&lt;/p&gt;]]></content:encoded>
            <category>ramanagara</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/ramanagara-quarrel-with-mother-in-law-19-year-old-pregnant-daughter-in-law-died-d2lhx9i"/>
        </item>
        <item>
            <title><![CDATA[ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣ, ಕೇಂದ್ರ ಸಚಿವ ಕುಮಾರಸ್ವಾಮಿಗೆ ಸುಪ್ರೀಂನಿಂದ ಅನಿರೀಕ್ಷಿತ ತಿರುವು]]></title>
            <link>https://kannada.asianetnews.com/state/ketaganahalli-land-encroachment-case-supreme-court-rejects-urgent-hearing-plea-relief-for-hd-kumaraswamy-gdp/articleshow-e5u5d3v</link>
            <guid isPermaLink="true">https://kannada.asianetnews.com/state/ketaganahalli-land-encroachment-case-supreme-court-rejects-urgent-hearing-plea-relief-for-hd-kumaraswamy-gdp/articleshow-e5u5d3v</guid>
            <pubDate>Thu, 02 Apr 2026 14:15:36 +0530</pubDate>
            <description><![CDATA[ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣದ ತುರ್ತು ವಿಚಾರಣೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಸಾಮಾನ್ಯ ಕ್ರಮದಲ್ಲೇ ವಿಚಾರಣೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kb384tqyt6sdh4e1t4hr3erm,imgname-hd-kumaraswamy-1764267027198.png" type="image/jpeg" height="390" width="690"/>
            <content:encoded><![CDATA[&lt;p&gt;ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ರಿಲೀಫ್ ದೊರೆತಿದ್ದು, ತುರ್ತು ವಿಚಾರಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಪ್ರಕರಣವನ್ನು ತಕ್ಷಣವೇ ವಿಚಾರಣೆ ನಡೆಸಬೇಕೆಂಬ ಬೇಡಿಕೆಗೆ ನ್ಯಾಯಾಲಯ ಸ್ಪಷ್ಟ ನಿರಾಕರಣೆ ನೀಡಿದೆ.&lt;/p&gt;&lt;h2&gt;ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ&lt;/h2&gt;&lt;p&gt;ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿತ್ತು. ಇತ್ತೀಚೆಗೆ ನಡೆದ ಸರ್ವೇ ಕಾರ್ಯಗಳ ಹಿನ್ನೆಲೆಯಲ್ಲಿ ಪ್ರಕರಣ ತುರ್ತು ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ, ಈ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿ, ಪ್ರಕರಣವನ್ನು ಸಾಮಾನ್ಯ ವಿಚಾರಣೆಯ ಕ್ರಮದಲ್ಲಿಯೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.&lt;/p&gt;&lt;h2&gt;ವಾದ-ಪ್ರತಿವಾದ&lt;/h2&gt;&lt;p&gt;ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಯ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ವಾದ ಮಂಡಿಸಿದರು. ಮತ್ತೊಂದೆಡೆ, ಕುಮಾರಸ್ವಾಮಿ ಪರ ವಕೀಲರು ತುರ್ತು ವಿಚಾರಣೆಯ ಅಗತ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ, ಪ್ರಕರಣವನ್ನು ಸಾಮಾನ್ಯ ಕ್ರಮದಲ್ಲಿ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ವಾದವನ್ನು ಗಮನಿಸಿದ ಪೀಠವು ತುರ್ತು ವಿಚಾರಣೆಗೆ ಅವಕಾಶ ನೀಡದೆ, ನಿಯಮಿತ ಕ್ರಮದಲ್ಲೇ ವಿಚಾರಣೆ ನಡೆಯಲಿದೆ ಎಂದು ಹೇಳಿದೆ.&lt;/p&gt;&lt;h2&gt;ನ್ಯಾಯಾಂಗ ನಿಂದನೆ ಪ್ರಕರಣ&lt;/h2&gt;&lt;p&gt;ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ನ್ಯಾಯಾಂಗ ನಿಂದನೆ (Contempt of Court) ಪ್ರಕರಣದಲ್ಲಿ ತಮ್ಮ ವಿರುದ್ಧ ಇರುವ ಆರೋಪಗಳನ್ನು ಪ್ರಶ್ನಿಸಿ ಎಚ್.ಡಿ. ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣವನ್ನು ಸಾಮಾನ್ಯ ವಿಚಾರಣೆಯ ಕ್ರಮದಲ್ಲಿ ಮುಂದುವರಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿರುವುದರಿಂದ, ಮುಂದಿನ ದಿನಗಳಲ್ಲಿ ವಿಚಾರಣೆಯ ವೇಳಾಪಟ್ಟಿ ನಿಗದಿಯಾಗಲಿದೆ. ಇತ್ತ, ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಪ್ರಕರಣದ ಅಂತಿಮ ತೀರ್ಪಿನತ್ತ ಎಲ್ಲರ ಗಮನ ಹರಿದಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ&lt;/h2&gt;&lt;p&gt;ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರ ವಿರುದ್ಧ ಭೂಕಬಳಿಕೆ ಆರೋಪ ಕೇಳಿ ಬಂದಿತ್ತು. ತನಿಖೆ ನಡೆಸಿದ್ದ ಲೋಕಾಯುಕ್ತ, ಒತ್ತುವರಿ ತೆರವಿಗೆ ಸೂಚಿಸಿತ್ತು. ಆದರೆ, ಲೋಕಾಯುಕ್ತದ ಸೂಚನೆ ಬಳಿಕವೂ ಅಧಿಕಾರಿಗಳು ಒತ್ತುವರಿ ತೆರವಿಗೆ ಮುಂದಾಗಿರಲಿಲ್ಲ. ಕೇತಗಾನಹಳ್ಳಿಯಲ್ಲಿ 14 ಎಕರೆ ಸರ್ಕಾರಿ ಭೂಮಿ ಒತ್ತುವರಿ ಆರೋಪವಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಈ ವರದಿ ಮೇರೆಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್&zwnj; 2020ರಲ್ಲಿ ಆದೇಶಿಸಿತ್ತು. ಆದರೆ, ಇದನ್ನು ಜಾರಿಗೊಳಿಸದ ಹಿನ್ನೆಲೆಯಲ್ಲಿ ಸಮಾಜ ಪರಿವರ್ತನಾ ಸಮುದಾಯ ಸಂಘಟನೆ ಸರ್ಕಾರದ ವಿರುದ್ಧ ಹೈಕೋರ್ಟ್&zwnj;ಗೆ ಸಿವಿಲ್&zwnj; ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಿಚಾರಣೆಯಲ್ಲಿ ಭಾಗಿಯಾಗುವಂತೆ ಕುಮಾರಸ್ವಾಮಿಗೆ ಸೂಚಿಸಿತ್ತು. ಈ ನ್ಯಾಯಾಂಗ ನಿಂದನೆ ಆದೇಶ ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂ ಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿದ್ದರು.&lt;/p&gt;&lt;p&gt;ಈ ಮೇಲ್ಮನವಿ ಬಗ್ಗೆ ಹೈಕೋರ್ಟ್&zwnj; ಗಮನಕ್ಕೆ ತಂದು ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ಬಳಿಕ ಹೈಕೋರ್ಟ್&zwnj; ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿತ್ತು. ಈ ನಡುವೆ ರಾಜ್ಯ ಸರ್ಕಾರ ಕೇತಗಾನಹಳ್ಳಿ ವಿವಿಧ ಸರ್ವೆ ಸಂಖ್ಯೆಗಳಲ್ಲಿ ಒತ್ತುವರಿಯಾಗಿರುವ 14 ಎಕರೆ ಜಮೀನಿನ ಮಾಲೀಕತ್ವ ಕುರಿತು ವಿಚಾರಣೆ ನಡೆಸಲು ಐಎಎಸ್&zwnj; ಅಧಿಕಾರಿ ಆಮ್ನಾನ್&zwnj; ಆದಿತ್ಯ ಬಿಸ್ವಾಸ್&zwnj; ನೇತೃತ್ವದಲ್ಲಿ ಎಸ್ಐಟಿ ರಚಿಸಿ ಆದೇಶಿಸಿತ್ತು. ಇದನ್ನು ಕುಮಾರಸ್ವಾಮಿ ಹೈಕೋರ್ಟ್&zwnj;ನಲ್ಲಿ ಪ್ರಶ್ನಿಸಿದ್ದರು. ಎಸ್&zwnj;ಐಟಿ ತನಿಖೆಗೆ ಹೈಕೋರ್ಟ್&zwnj; ಏಕದಸ್ಯ ಪೀಠ ಮಧ್ಯಂತರ ತಡೆ ನೀಡಿತ್ತು. ಬಳಿಕ ರಾಜ್ಯ ಸರ್ಕಾರದ ಮನವಿ ಮೇರೆಗೆ ಹೈಕೋರ್ಟ್&zwnj;ನ ದ್ವಿಸದಸ್ಯ ಪೀಠ ಈ ಮಧ್ಯಂತರ ತಡೆ ತೆರವುಗೊಳಿಸಿತ್ತು. ಹೀಗಾಗಿ ಎಚ್&zwnj;.ಡಿ.ಕುಮಾರಸ್ವಾಮಿ ಅವರು ಸಂಕಷ್ಟಕ್ಕೆ ಸಿಲುಕಿದರು. ಈ ಸರ್ಕಾರಿ ಭೂಮಿ ಒತ್ತವರಿ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ಸುದೀರ್ಘ ಕಾನೂನು ಹೋರಾಟ ನಡೆಸಿದರು.&lt;/p&gt;]]></content:encoded>
            <category>ramanagara</category>
            <dc:creator>Gowthami K</dc:creator>
            <atom:link href="https://kannada.asianetnews.com/state/ketaganahalli-land-encroachment-case-supreme-court-rejects-urgent-hearing-plea-relief-for-hd-kumaraswamy-gdp/articleshow-e5u5d3v"/>
        </item>
        <item>
            <title><![CDATA[ಡಿ.ಕೆ.ಶಿವಕುಮಾರ್ ಭಧ್ರಕೋಟೆಯಲ್ಲಿರೋ ಒಡಿಶಾ ಶಾಸಕರಿಗೆ ಆಪರೇಷನ್ ಕಮಲ; ಬ್ಲ್ಯಾಂಕ್ ಚೆಕ್ ಸಮೇತ ಸಿಕ್ಕಿಬಿದ್ದ ಮುಖಂಡರು!]]></title>
            <link>https://kannada.asianetnews.com/gallery/politics/odisha-congress-mlas-operation-bjp-bidadi-wonderla-resort-state-bank-of-india-blank-checks-found-sat-im1bu4i</link>
            <guid isPermaLink="true">https://kannada.asianetnews.com/gallery/politics/odisha-congress-mlas-operation-bjp-bidadi-wonderla-resort-state-bank-of-india-blank-checks-found-sat-im1bu4i</guid>
            <pubDate>Sun, 15 Mar 2026 12:19:51 +0530</pubDate>
            <description><![CDATA[&lt;p&gt;ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ರಕ್ಷಣೆಯಲ್ಲಿ ಬಿಡದಿ ರೆಸಾರ್ಟ್&zwnj;ನಲ್ಲಿದ್ದ ಒಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು 'ಆಪರೇಷನ್ ಕಮಲ'ಕ್ಕೆ ಯತ್ನ ನಡೆದಿದೆ. ಬ್ಲ್ಯಾಂಕ್ ಚೆಕ್&zwnj;ಗಳ ಸಮೇತ ಬಂದಿದ್ದ ವ್ಯಕ್ತಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkr3dkxpy2j51f6dgdrrh80n,imgname-odisha-congress-mla-s-operation-bjp--1--1773556649909.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ರಕ್ಷಣೆಯಲ್ಲಿ ಬಿಡದಿ ರೆಸಾರ್ಟ್&zwnj;ನಲ್ಲಿದ್ದ ಒಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು 'ಆಪರೇಷನ್ ಕಮಲ'ಕ್ಕೆ ಯತ್ನ ನಡೆದಿದೆ. ಬ್ಲ್ಯಾಂಕ್ ಚೆಕ್&zwnj;ಗಳ ಸಮೇತ ಬಂದಿದ್ದ ವ್ಯಕ್ತಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು ದಕ್ಷಿಣ/ರಾಮನಗರ (ಮಾ.15): &lt;/strong&gt;ದೇಶದ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಪಾಲಿನ 'ಟ್ರಬಲ್ ಶೂಟರ್' ಎಂದೇ ಖ್ಯಾತಿ ಪಡೆದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭದ್ರಕೋಟೆಯಲ್ಲೇ ಹೈವೋಲ್ಟೇಜ್ ರಾಜಕೀಯ ಡ್ರಾಮಾ ನಡೆದಿದೆ. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿಯ ರೆಸಾರ್ಟ್&zwnj;ನಲ್ಲಿ ವಾಸ್ತವ್ಯ ಹೂಡಿರುವ ಒಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು 'ಆಪರೇಷನ್ ಕಮಲ'ಕ್ಕೆ ಯತ್ನ ನಡೆದಿದ್ದು, ಬ್ಲ್ಯಾಂಕ್ ಚೆಕ್&zwnj;ಗಳ ಸಮೇತ ಬಂದಿದ್ದ ವ್ಯಕ್ತಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.&lt;/p&gt;&lt;img&gt;&lt;p&gt;ನಾಳೆ ಒಡಿಶಾದಲ್ಲಿ ರಾಜ್ಯಸಭಾ ಚುನಾವಣೆ ನಡೆಯಲಿದೆ. ಈ ವೇಳೆ ಶಾಸಕರ ಕುದುರೆ ವ್ಯಾಪಾರ ನಡೆಯುವ ಭೀತಿಯಿಂದಾಗಿ ಒಡಿಶಾ ಕಾಂಗ್ರೆಸ್ ಶಾಸಕರನ್ನು ಡಿ.ಕೆ. ಶಿವಕುಮಾರ್ ಅವರ ರಕ್ಷಣೆಯಲ್ಲಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ರಾಮನಗರ ಜಿಲ್ಲೆಯ ಬಿಡದಿ ಸಮೀಪದ 'ವಂಡರ್ ಲಾ' ರೆಸಾರ್ಟ್&zwnj;ನಲ್ಲಿ ಈ ಶಾಸಕರಿಗೆ ವಾಸ್ತವ್ಯ ಕಲ್ಪಿಸಲಾಗಿತ್ತು. ಆದರೆ, ಶಾಸಕರು ಬೆಂಗಳೂರಿಗೆ ಬಂದರೂ ಆಪರೇಷನ್ ಕಮಲದ ಕರಿನೆರಳು ಮಾತ್ರ ಅವರನ್ನು ಬೆನ್ನಟ್ಟಿದೆ.&lt;/p&gt;&lt;img&gt;&lt;p&gt;ಒಡಿಶಾದಿಂದ ಬಂದಿದ್ದ ಮೂವರು ವ್ಯಕ್ತಿಗಳು ಶಾಸಕರು ತಂಗಿದ್ದ ಅದೇ ವಂಡರ್ ಲಾ ರೆಸಾರ್ಟ್&zwnj;ನಲ್ಲಿ ರೂಂ ಬುಕ್ ಮಾಡಿಕೊಂಡಿದ್ದರು. ಶಾಸಕರ ಜೊತೆ ಮಾತುಕತೆ ನಡೆಸಿ ಅವರನ್ನು ತಮ್ಮತ್ತ ಸೆಳೆಯಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಶಾಸಕರನ್ನು ಖರೀದಿ ಮಾಡಲು ಈ ವ್ಯಕ್ತಿಗಳು ತಮ್ಮೊಂದಿಗೆ ಸಹಿ ಮಾಡಿರುವ 'ಬ್ಲ್ಯಾಂಕ್ ಚೆಕ್'ಗಳನ್ನು (ಸಹಿ ಮಾಡಿದ ಖಾಲಿ ಚೆಕ್) ತಂದಿದ್ದರು. ಈ ಚೆಕ್&zwnj;ಗಳು ಒಡಿಶಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಗೆ ಸೇರಿದವು ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಶಾಸಕರನ್ನು ಭೇಟಿ ಮಾಡಲು ಈ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾಗ ಅನುಮಾನಗೊಂಡ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅವರನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಅವರ ಬಳಿ ಬ್ಲ್ಯಾಂಕ್ ಚೆಕ್&zwnj;ಗಳು ಪತ್ತೆಯಾಗಿದ್ದು, ಆಪರೇಷನ್ ಕಮಲದ ಹೂರಣ ಬಯಲಾಗಿದೆ. ತಕ್ಷಣವೇ ಕಾರ್ಯಕರ್ತರು ಆ ಮೂವರನ್ನು ಹಿಡಿದು ಕೂರಿಸಿದ್ದು, ಬಿಡದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮಾಹಿತಿ ಸಿಗುತ್ತಿದ್ದಂತೆಯೇ ಬಿಡದಿ ಪೊಲೀಸರು ರೆಸಾರ್ಟ್&zwnj;ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರು ತಂದಿದ್ದ ಬ್ಲ್ಯಾಂಕ್ ಚೆಕ್ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಯಾರ ಪರವಾಗಿ ಬಂದಿದ್ದರು? ಇವರಿಗೆ ಹಣದ ಆಮಿಷ ಒಡ್ಡಲು ಸೂಚಿಸಿದವರು ಯಾರು? ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.&amp;nbsp;&lt;/p&gt;&lt;p&gt;'ಡಿ.ಕೆ. ಶಿವಕುಮಾರ್ ಅವರ ರಕ್ಷಣೆಯಲ್ಲಿದ್ದರೂ ಬಿಜೆಪಿ ಇಂತಹ ಕೆಳಮಟ್ಟದ ರಾಜಕಾರಣಕ್ಕೆ ಇಳಿದಿದೆ. ಬ್ಲ್ಯಾಂಕ್ ಚೆಕ್ ಹಿಡಿದು ಶಾಸಕರನ್ನು ಖರೀದಿ ಮಾಡಲು ಬಂದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ' ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹಣದ ಬಲ ಬಳಸುತ್ತಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.&lt;/p&gt;&lt;img&gt;&lt;p&gt;ನಾಳೆ ಚುನಾವಣೆ ನಡೆಯಲಿರುವ ಕಾರಣ, ಉಳಿದಿರುವ ಕೆಲವೇ ಗಂಟೆಗಳಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಶಾಸಕರ ಖರೀದಿ ನಡೆಯದಂತೆ ರೆಸಾರ್ಟ್ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಡಿ.ಕೆ. ಶಿವಕುಮಾರ್ ಅವರ ತವರಲ್ಲೇ ನಡೆದ ಈ ಆಪರೇಷನ್ ಕಮಲ ಯತ್ನ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/politics/odisha-congress-mlas-operation-bjp-bidadi-wonderla-resort-state-bank-of-india-blank-checks-found-sat-im1bu4i"/>
        </item>
        <item>
            <title><![CDATA[ಹಣ್ಣು ಕೊಟ್ಟ ಅಜ್ಜಿಯ ಸಾವಿಗೆ ಕಂಬನಿ ಮಿಡಿದ ಕಪಿರಾಯ; ಮೃತದೇಹದ ಮೇಲೆ ಮಲಗಿ ಕೋತಿಯ ಮೂಕರೋಧನೆ!]]></title>
            <link>https://kannada.asianetnews.com/gallery/karnataka-districts/ramanagara-channapatna-monkey-mourns-death-of-old-woman-parvathamma-sat-ky55m0g</link>
            <guid isPermaLink="true">https://kannada.asianetnews.com/gallery/karnataka-districts/ramanagara-channapatna-monkey-mourns-death-of-old-woman-parvathamma-sat-ky55m0g</guid>
            <pubDate>Tue, 31 Mar 2026 17:38:02 +0530</pubDate>
            <description><![CDATA[&lt;p&gt;ಚನ್ನಪಟ್ಟಣದಲ್ಲಿ, ತನಗೆ ನಿತ್ಯ ಅನ್ನ ಹಾಗೂ ಹಣ್ಣುಗಳನ್ನ ನೀಡುತ್ತಿದ್ದ 80 ವರ್ಷದ ಅಜ್ಜಿ ಪಾರ್ವತಮ್ಮನವರ ಸಾವಿಗೆ ಮಂಗವೊಂದು ಕಂಬನಿ ಮಿಡಿದಿದೆ. ಅಜ್ಜಿಯ ಮೃತದೇಹದ ಮೇಲೆ ಮಲಗಿ ರೋದಿಸಿದ ಈ ಮೂಕ ಪ್ರಾಣಿಯ ಪ್ರೀತಿ, ಮಾನವ ಮತ್ತು ಪ್ರಾಣಿಗಳ ನಡುವಿನ ಅಪರೂಪದ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn1w6hy9b7922h69p0kbqmvk,imgname-ramanagara-monkey--1774958364616.jpg" type="image/jpeg" height="390" width="690"/>
            <content:encoded><![CDATA[&lt;p&gt;ಚನ್ನಪಟ್ಟಣದಲ್ಲಿ, ತನಗೆ ನಿತ್ಯ ಅನ್ನ ಹಾಗೂ ಹಣ್ಣುಗಳನ್ನ ನೀಡುತ್ತಿದ್ದ 80 ವರ್ಷದ ಅಜ್ಜಿ ಪಾರ್ವತಮ್ಮನವರ ಸಾವಿಗೆ ಮಂಗವೊಂದು ಕಂಬನಿ ಮಿಡಿದಿದೆ. ಅಜ್ಜಿಯ ಮೃತದೇಹದ ಮೇಲೆ ಮಲಗಿ ರೋದಿಸಿದ ಈ ಮೂಕ ಪ್ರಾಣಿಯ ಪ್ರೀತಿ, ಮಾನವ ಮತ್ತು ಪ್ರಾಣಿಗಳ ನಡುವಿನ ಅಪರೂಪದ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.&lt;/p&gt;&lt;img&gt;&lt;p&gt;&lt;strong&gt;ರಾಮನಗರ (ಮಾ.31): ಪ್ರಾ&lt;/strong&gt;ಣಿಗಳಿಗೆ ಭಾಷೆ ಇಲ್ಲದಿರಬಹುದು, ಆದರೆ ಅವುಗಳಿಗೆ ಮನುಷ್ಯರಿಗಿಂತಲೂ ಹೆಚ್ಚಿನ ಭಾವನೆಗಳಿರುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತನಗೆ ನಿತ್ಯ ಪ್ರೀತಿಯಿಂದ ತುತ್ತು ಅನ್ನ ನೀಡುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಾಗ, ಆಕೆಯ ಅಗಲಿಕೆಯನ್ನು ಸಹಿಸಲಾಗದ ಮಂಗವೊಂದು ಮೃತದೇಹದ ಮೇಲೆ ಮಲಗಿ ಕಣ್ಣೀರಿಟ್ಟ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಪ್ರಾಣಿ ಮತ್ತು ಮಾನವನ ನಡುವಿನ ಅಪರೂಪದ ಬಾಂಧವ್ಯಕ್ಕೆ ಸಾಕ್ಷಿಯಾಗಿ ಕಣ್ಣೀರು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಚನ್ನಪಟ್ಟಣ ತಾಲೂಕಿನ ಬಿ.ವಿ. ಹಳ್ಳಿ ಗ್ರಾಮದಲ್ಲಿ ಪಾರ್ವತಮ್ಮ (80) ಎಂಬ ವೃದ್ಧೆ ವಾಸವಾಗಿದ್ದರು. ವಯೋಸಹಜ ಕಾಯಿಲೆಯಿಂದ ಅವರು ಇತ್ತೀಚೆಗೆ ನಿಧನರಾದರು. ಆದರೆ ಅವರ ಸಾವಿಗೆ ಇಡೀ ಗ್ರಾಮ ಕಣ್ಣೀರು ಹಾಕುವುದಕ್ಕಿಂತಲೂ ಹೆಚ್ಚಾಗಿ, ಒಂದು ಮಂಗ ತೋರಿಸಿದ ಮಮತೆ ಎಲ್ಲರ ಮನಕಲಕುವಂತೆ ಮಾಡಿದೆ. ಪಾರ್ವತಮ್ಮ ಅವರು ಬದುಕಿದ್ದಾಗ ತಮ್ಮ ಮನೆ ಬಳಿ ಬರುತ್ತಿದ್ದ ಕೋತಿಗೆ ನಿತ್ಯವೂ ತಿಂಡಿ, ಹಣ್ಣು ಮತ್ತು ಅನ್ನವನ್ನು ನೀಡುತ್ತಿದ್ದರು. ಮನೆಯ ಸದಸ್ಯರಂತೆಯೇ ಆ ಕೋತಿಯನ್ನು ಅವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.&lt;/p&gt;&lt;img&gt;&lt;p&gt;ಪಾರ್ವತಮ್ಮ ಅವರು ಮೃತಪಟ್ಟ ವಿಷಯ ತಿಳಿದ ಕೂಡಲೇ ಅಲ್ಲಿಗೆ ಬಂದ ಕಪಿರಾಯ, ಅಜ್ಜಿಯ ಮೃತದೇಹವನ್ನು ಕಂಡು ಮೂಕರೋದನೆ ಮಾಡಿದೆ. ಅಜ್ಜಿಯ ಮುಖದ ಬಳಿ ಕುಳಿತು ತಬ್ಬಿಕೊಳ್ಳಲು ಪ್ರಯತ್ನಿಸಿತು. ಅಷ್ಟಕ್ಕೇ ನಿಲ್ಲದೆ, ಮೃತದೇಹದ ಮೇಲೆ ಮಲಗಿ ಆಕೆಯ ಅಗಲಿಕೆಗೆ ಮರುಗಿದೆ. ಅಜ್ಜಿ ಇನ್ನು ಏಳುವುದಿಲ್ಲ ಎಂಬ ಸತ್ಯ ಆ ಮೂಕ ಪ್ರಾಣಿಗೂ ಅರ್ಥವಾದಂತೆ ಭಾಸವಾಗುತ್ತಿತ್ತು. ಸುಮ್ಮನೆ ಕುಳಿತು ಕಣ್ಣೀರು ಹಾಕುತ್ತಿದ್ದ ಆ ಮಂಗನ ಕಂಡು ಅಲ್ಲಿ ನೆರೆದಿದ್ದ ನೂರಾರು ಗ್ರಾಮಸ್ಥರು ಆಶ್ಚರ್ಯ ಚಕಿತರಾದರು.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಕೋತಿಗಳು ಜನರ ಆಹಾರಕ್ಕಾಗಿ ಕಾಟ ನೀಡುತ್ತವೆ ಅಥವಾ ಕಿರಿಕಿರಿ ಮಾಡುತ್ತವೆ. ಆದರೆ ಈ ಗ್ರಾಮದಲ್ಲಿ ಪಾರ್ವತಮ್ಮ ಮತ್ತು ಈ ಮಂಗನ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆದಿತ್ತು. ಅಜ್ಜಿ ನೀಡುತ್ತಿದ್ದ ಪ್ರೀತಿ ಮತ್ತು ಆಹಾರಕ್ಕೆ ಆ ಮಂಗ ಅಷ್ಟೊಂದು ಆಭಾರಿಯಾಗಿತ್ತು. ಅಂತಿಮ ದರ್ಶನದ ವೇಳೆ ಜನರು ಮೃತದೇಹದ ಬಳಿ ಹೋದರೂ ಮಂಗ ಮಾತ್ರ ಅಲ್ಲಿಂದ ಕದಲದೆ ಅಜ್ಜಿಯ ಮೇಲೆಯೇ ಮಲಗಿತ್ತು. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.&lt;/p&gt;&lt;img&gt;&lt;p&gt;'ನಾವೆಲ್ಲರೂ ಅಜ್ಜಿಯ ಸಾವಿಗೆ ಮರುಕ ವ್ಯಕ್ತಪಡಿಸುತ್ತಿದ್ದೇವೆ, ಆದರೆ ಈ ಮೂಕ ಪ್ರಾಣಿ ತೋರಿಸುತ್ತಿರುವ ಪ್ರೀತಿ ನಿಜಕ್ಕೂ ದೊಡ್ಡದು. ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಅನ್ನೋದು ಈ ಘಟನೆಯಿಂದ ಸಾಬೀತಾಗಿದೆ' ಎಂದು ಬಿ.ವಿ. ಹಳ್ಳಿಯ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಅಂತಿಮ ಸಂಸ್ಕಾರದವರೆಗೂ ಆ ಮಂಗ ಅಜ್ಜಿಯ ಜೊತೆಯಲ್ಲೇ ಇದ್ದು ತನ್ನ ನಿಷ್ಠೆಯನ್ನು ಮೆರೆದಿದೆ.&amp;nbsp;&lt;/p&gt;&lt;p&gt;ಈ ಘಟನೆಯು ಕೇವಲ ಒಂದು ಸಾವಿನ ಸುದ್ದಿಯಲ್ಲ, ಇದು ಪ್ರಕೃತಿ ಮತ್ತು ಮಾನವನ ನಡುವಿನ ಮಮಕಾರದ ಸಂಕೇತವಾಗಿದೆ. ನಿಸ್ವಾರ್ಥ ಪ್ರೀತಿ ನೀಡಿದರೆ ಪ್ರಾಣಿಗಳು ಕೂಡ ಮನುಷ್ಯರಿಗಾಗಿ ಪ್ರಾಣ ನೀಡುತ್ತವೆ ಅಥವಾ ರೋದಿಸುತ್ತವೆ ಎಂಬುದಕ್ಕೆ ಇದು ಜ್ವಲಂತ ಉದಾಹರಣೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/ramanagara-channapatna-monkey-mourns-death-of-old-woman-parvathamma-sat-ky55m0g"/>
        </item>
        <item>
            <title><![CDATA[ಯುಗಾದಿ ಬಳಿಕ ಡಿಕೆಶಿಗೆ ಸಿಎಂ ಪಟ್ಟ? ಶಾಸಕ ಇಕ್ಬಾಲ್ ಹುಸೇನ್ ಅಚ್ಚರಿ ಹೇಳಿಕೆ,  ಸಿಎಂ ವಿರುದ್ಧ ಬೇಸರಗೊಂಡಿದ್ದೇಕೆ?]]></title>
            <link>https://kannada.asianetnews.com/karnataka-districts/will-dk-shivakumar-become-cm-after-ugadi-mla-iqbal-hussain-s-big-claim/articleshow-l2x18sl</link>
            <guid isPermaLink="true">https://kannada.asianetnews.com/karnataka-districts/will-dk-shivakumar-become-cm-after-ugadi-mla-iqbal-hussain-s-big-claim/articleshow-l2x18sl</guid>
            <pubDate>Fri, 13 Mar 2026 07:44:13 +0530</pubDate>
            <description><![CDATA[&lt;p&gt;ಶಾಸಕ ಇಕ್ಬಾಲ್ ಹುಸೇನ್ ಅವರು ಯುಗಾದಿ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ರಾಮನಗರ ಕ್ಷೇತ್ರ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಬಜೆಟ್&zwnj;ನಲ್ಲಿ ಅನುದಾನ ಸಿಗದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೇಸರ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdphskv1nrs6c4jtmwp6870x,imgname-iqbal-hussain--3--1767062163297.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮಾ.13): &lt;/strong&gt;ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಯುಗಾದಿ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಹಿ ಸುದ್ದಿ ಸಿಗುವ ವಿಶ್ವಾಸವಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು 6 ವರ್ಷಗಳನ್ನು ಪೂರೈಸಿರುವುದು ಸಂತಸ ತಂದಿದೆ. ನಮ್ಮ ನಾಯಕರ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರಿಗೆ ಭವಿಷ್ಯವಿದ್ದು ಯುಗಾದಿ ನಂತರ ದೇವರು ಅವರಿಗೆ ಸಿಹಿಸುದ್ದಿ ಕೊಡುತ್ತಾನೆ ಎಂದರು.&lt;/p&gt;&lt;h2&gt;ರಾಜ್ಯ ಬಜೆಟ್ ನಿರಾಸೆ ತರಿಸಿದೆ:&lt;/h2&gt;&lt;p&gt;ಕ್ಷೇತ್ರದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಆದರೆ, ಈ ಸಾಲಿನ ಬಜೆಟ್&zwnj; ನಲ್ಲಿ ಅನುದಾನ ನೀಡದಿರುವುದು ನನಗೆ ಬಹಳ ನಿರಾಸೆಯಾಗಿದೆ ಇಕ್ಬಾಲ್&zwnj;ಹುಸೇನ್ ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ಕೃಷಿ, ರೇಷ್ಮೆ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಭಕ್ಷಿಕೆರೆ ಹೊಡದು ಸೀರಳ್ಳ ನೆರೆಯಿಂದ ಉಂಟಾದ ಅನಾಹುತಗಳನ್ನು ಸರಿಪಡಿಸಲು ಅನುದಾನ ಕೊಡುವಂತೆ ನಾನೇ ಖುದ್ಧಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೆ. ಅವರು ಚಿಂತನೆ ನಡೆಸಿ ರಾಮನಗರಕ್ಕೆ ಅನುದಾನ ನೀಡುತ್ತಾರೆ ಎಂಬ ವಿಶ್ವಾಸ, ನಂಬಿಕೆ ಇಟ್ಟಿದ್ದೆ. ಆದರೆ, ಬಜೆಟ್&zwnj;ನಲ್ಲಿ ಅದು ಸಾಕಾರವಾಗದಿರುವುದು ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;ಜಿಲ್ಲೆಯ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ತಾಲ್ಲೂಕುಗಳು ಬೆಂಗಳೂರಿಗೆ ಸಮೀಪವಿದ್ದು, ಒಂದು ದಿನದ ಪ್ರವಾಸಿ ಸರ್&zwnj;ಕ್ಯೂಟ್ ಮಾಡಲು ಸಂಗಮ, ರೇವಣಸಿದ್ದೇಶ್ವರ ಬೆಟ್ಟ, ಜಾನಪದ ಲೋಕ, ಕಣ್ವ ಜಲಾಶಯ, ರಾಮದೇವರ ಬೆಟ್ಟ, ಸಾವನದುರ್ಗ, ಮಂಚನಬೆಲೆ ಜಲಾಶಯಗಳಂತಹ ಹಲವು ಇತಿಹಾಸವಿರುವ ತಾಣಗಳು ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿವೆ. ಈ ಸಾಲಿನ ಬಜೆಟ್&zwnj;ನಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೆ. ಅದು ಕೂಡ ಸಾಕಾರವಾಗಿಲ್ಲ. ಅದಕ್ಕೆ ಆದ್ಯತೆ ಕೊಟ್ಟಿದ್ದರೆ ಪ್ರವಾಸಿ ತಾಣಗಳ ಅಭಿವೃದ್ದಿ ಜೊತೆಗೆ ರೆವಿನ್ಯೂ ಸಹ ಬರುತ್ತಿತ್ತು ಎಂದು ಇಕ್ಬಾಲ್ ಹುಸೇನ್ ಹೇಳಿದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/will-dk-shivakumar-become-cm-after-ugadi-mla-iqbal-hussain-s-big-claim/articleshow-l2x18sl"/>
        </item>
        <item>
            <title><![CDATA[ಪ್ರಸಿದ್ಧ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ರಾಮನಗರದಲ್ಲಿ ನಿಲುಗಡೆಗೆ ಒಪ್ಪಿಗೆ, ಸಂಸದ ಸಂತಸ]]></title>
            <link>https://kannada.asianetnews.com/karnataka-districts/wodeyar-superfast-express-to-stop-at-ramanagara-railways-approves-new-halt-between-bengaluru-and-mysuru-gdp/articleshow-o5lof7e</link>
            <guid isPermaLink="true">https://kannada.asianetnews.com/karnataka-districts/wodeyar-superfast-express-to-stop-at-ramanagara-railways-approves-new-halt-between-bengaluru-and-mysuru-gdp/articleshow-o5lof7e</guid>
            <pubDate>Wed, 25 Mar 2026 16:04:13 +0530</pubDate>
            <description><![CDATA[ಬೆಂಗಳೂರು-ಮೈಸೂರು ಮಾರ್ಗದ ಪ್ರಸಿದ್ಧ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲಿಗೆ ಇನ್ನು ಮುಂದೆ ರಾಮನಗರ ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಲಾಗಿದೆ. ಜನಪ್ರತಿನಿಧಿಗಳ ನಿರಂತರ ಪ್ರಯತ್ನದ ಫಲವಾಗಿ ಈ ಬಹುದಿನಗಳ ಬೇಡಿಕೆ ಈಡೇರಿದ್ದು, ಇದು ಸ್ಥಳೀಯ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmj8tmcakn8k19r35zqqpj0n,imgname-wodeyar-superfast-express-ramanagara-stop-1774434734474.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ:&lt;/strong&gt; ಬೆಂಗಳೂರು&ndash;ಮೈಸೂರು ಮಾರ್ಗದಲ್ಲಿ ಸಂಚರಿಸುವ ಪ್ರಸಿದ್ಧ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲು ಈಗಿನಿಂದ ರಾಮನಗರ ರೈಲು ನಿಲ್ದಾಣದಲ್ಲೂ ನಿಲುಗಡೆಗೊಳ್ಳಲಿದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದ್ದು, ಸ್ಥಳೀಯ ಪ್ರಯಾಣಿಕರಿಗೆ ಇದು ಬಹು ದಿನಗಳ ಬೇಡಿಕೆಗೆ ಸಿಕ್ಕ ಮಹತ್ವದ ಯಶಸ್ಸಾಗಿದೆ.&lt;/p&gt;&lt;h2&gt;ರೈಲು ವೇಳಾಪಟ್ಟಿ ಮತ್ತು ಸಂಚಾರ ವಿವರ&lt;/h2&gt;&lt;p&gt;ಪ್ರತಿದಿನ ಮಧ್ಯಾಹ್ನ 3.15ಕ್ಕೆ ಬೆಂಗಳೂರಿನಿಂದ ಹೊರಡುವ ಈ ರೈಲು, ಸಂಜೆ 5.45ಕ್ಕೆ ಮೈಸೂರು ತಲುಪುತ್ತದೆ. ಸುಮಾರು 139 ಕಿಲೋಮೀಟರ್ ದೂರವನ್ನು ಕೇವಲ 2 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುವ ಈ ರೈಲು ವೇಗ ಹಾಗೂ ಸಮಯಪಾಲನೆಗಾಗಿ ಪ್ರಸಿದ್ಧವಾಗಿದೆ. ಈವರೆಗೆ ಈ ರೈಲು ಕೇವಲ ಕೆಂಗೇರಿ ಮತ್ತು ಮಂಡ್ಯ ರೈಲು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಹೊಂದಿತ್ತು. ಇದೀಗ ರಾಮನಗರವನ್ನು ಹೊಸ ನಿಲ್ದಾಣವಾಗಿ ಸೇರಿಸಿರುವುದರಿಂದ, ಆ ಭಾಗದ ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಲಿದೆ.&lt;/p&gt;&lt;h2&gt;ಜನಪ್ರತಿನಿಧಿಗಳ ನಿರಂತರ ಪ್ರಯತ್ನ ಫಲ&lt;/h2&gt;&lt;p&gt;ರಾಮನಗರದಲ್ಲಿ ರೈಲು ನಿಲುಗಡೆ ಕಲ್ಪಿಸಬೇಕೆಂಬ ಬೇಡಿಕೆಯನ್ನು ಹಲವಾರು ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತಂದಿದ್ದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಇಕ್ಬಾಲ್ ಹುಸೇನ್ ಇವರು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಲ್ಲಿ ಮನವಿ ಸಲ್ಲಿಸಿದ್ದರು. ಇದರ ಜೊತೆಗೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ಈ ಬೇಡಿಕೆಯನ್ನು ಮುಂದಿಟ್ಟಿದ್ದರು. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಇದೀಗ ರಾಮನಗರದಲ್ಲಿ ನಿಲುಗಡೆಗೆ ಅನುಮತಿ ದೊರೆತಿದೆ.&lt;/p&gt;&lt;h2&gt;ಸ್ಥಳೀಯರಿಗೆ ಸಿಗುವ ಪ್ರಯೋಜನಗಳು&lt;/h2&gt;&lt;p&gt;ಈ ಹೊಸ ನಿಲುಗಡೆಯಿಂದ ರಾಮನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಹಲವಾರು ಪ್ರಯೋಜನಗಳು ಲಭ್ಯವಾಗಲಿವೆ:&lt;/p&gt;&lt;ul&gt; &lt;li&gt;ಬೆಂಗಳೂರು ಮತ್ತು ಮೈಸೂರು ನಡುವೆ ಸುಲಭ ಸಂಚಾರ&lt;/li&gt; &lt;li&gt;ದೈನಂದಿನ ಪ್ರಯಾಣಿಕರಿಗೆ ಸಮಯ ಮತ್ತು ವೆಚ್ಚ ಉಳಿತಾಯ&lt;/li&gt; &lt;li&gt;ಪ್ರವಾಸೋದ್ಯಮ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ&lt;/li&gt; &lt;li&gt;ರಸ್ತೆ ಸಾರಿಗೆಯ ಮೇಲಿನ ಒತ್ತಡ ಕಡಿಮೆ&lt;/li&gt;&lt;/ul&gt;&lt;h2&gt;ಇನ್ನಷ್ಟು ರೈಲು ನಿಲುಗಡೆಗೆ ಬೇಡಿಕೆ&lt;/h2&gt;&lt;p&gt;ಒಡೆಯರ್ ಎಕ್ಸ್&zwnj;ಪ್ರೆಸ್ ಜೊತೆಗೆ ಮೈಲಾಡತುರೈ ಎಕ್ಸ್&zwnj;ಪ್ರೆಸ್ ರೈಲುಗೂ ರಾಮನಗರದಲ್ಲಿ ನಿಲುಗಡೆ ಕಲ್ಪಿಸಬೇಕೆಂಬ ಬೇಡಿಕೆ ಕೂಡ ಮುಂದುವರಿದಿದೆ. ಈ ಬಗ್ಗೆ ರೈಲ್ವೆ ಇಲಾಖೆ ಮುಂದಿನ ದಿನಗಳಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ರಾಮನಗರದಲ್ಲಿ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್&zwnj;ಪ್ರೆಸ್ ನಿಲುಗಡೆ ಅನುಮತಿ ದೊರೆತಿರುವುದು ಸ್ಥಳೀಯ ಜನರಿಗೆ ಮಹತ್ವದ ಸಾಧನೆಯಾಗಿದೆ. ಜನಪ್ರತಿನಿಧಿಗಳ ನಿರಂತರ ಪ್ರಯತ್ನ ಮತ್ತು ಸಾರ್ವಜನಿಕರ ಬೇಡಿಕೆಯ ಫಲವಾಗಿ ಈ ನಿರ್ಧಾರ ಜಾರಿಯಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸೌಲಭ್ಯಗಳು ಸಿಗುವ ನಿರೀಕ್ಷೆ ಮೂಡಿಸಿದೆ.&lt;/p&gt;&lt;h2&gt;ಜನರ ಧ್ವನಿಗೆ ಜಯ ಎಂದು ಸಂತಸ ವ್ಯಕ್ತಪಡಿಸಿದ ಸಂಸದ ಡಾ.ಸಿ ಎನ್ ಮಂಜುನಾಥ್&lt;/h2&gt;&lt;p&gt;ರಾಮನಗರದಲ್ಲಿ ಒಡೆಯರ್ ಎಕ್ಸಪ್ರೆಸ್ ರೈಲು ನಿಲುಗಡಗೆ ಕೇಂದ್ರ ರೈಲ್ವೆ ಇಲಾಖೆ ಆದೇಶ ಹೊರಡಿಸಿರುವುದು ಅತ್ಯಂತ ಸಂತೋಷಕರ ಹಾಗೂ ಐತಿಹಾಸಿಕ ಬೆಳವಣಿಗೆಯಾಗಿದೆ.&lt;/p&gt;&lt;p&gt;ರಾಮನಗರ ಹಾಗೂ ಚನ್ನಪಟ್ಟಣ ಭಾಗದ ಜನರ ಬಹುಕಾಲದ ಬೇಡಿಕೆ ಇಂದು ಈಡೇರಿದಂತಾಗಿದೆ. ಈ ಭಾಗದ ಪ್ರಯಾಣಿಕರು, ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು ಹಾಗೂ ವ್ಯಾಪಾರಸ್ಥರು ಎದುರಿಸುತ್ತಿದ್ದ ಸಂಚಾರದ ತೊಂದರೆಗಳನ್ನು ಮನಗಂಡು, ಈ ನಿಲುಗಡೆ ಅತ್ಯಂತ ಅಗತ್ಯವಾಗಿತ್ತು. ಜನರ ಈ ನ್ಯಾಯಸಮ್ಮತ ಬೇಡಿಕೆಯನ್ನು ಈಡೇರಿಸಲು ನಾನು ನಿರಂತರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೆ.&lt;/p&gt;&lt;p&gt;ಈ ಸಂಬಂಧ ಹಲವು ಬಾರಿ ಪತ್ರಗಳ ಮೂಲಕ ಮನವಿ ಸಲ್ಲಿಸುವುದರ ಜೊತೆಗೆ, ಖುದ್ದಾಗಿ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ರೈಲ್ವೇ ಖಾತೆ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ, ರಾಮನಗರದಲ್ಲಿ ಈ ರೈಲು ನಿಲುಗಡೆಯ ಅಗತ್ಯತೆ ಮತ್ತು ಜನರಿಗೆ ಆಗುವ ಅನುಕೂಲಗಳನ್ನು ವಿವರವಾಗಿ ಮನವರಿಕೆ ಮಾಡಿಕೊಟ್ಟಿದ್ದೆ. ಈ ಪ್ರಯತ್ನಗಳಿಗೆ ಇಂದು ಸಕಾರಾತ್ಮಕ ಫಲ ದೊರೆತಿರುವುದು ಅಪಾರ ಸಂತೋಷವನ್ನುಂಟುಮಾಡಿದೆ.&lt;/p&gt;&lt;p&gt;ನನ್ನ ಮನವಿಗೆ ಸ್ಪಂದಿಸಿ, ರಾಮನಗರದಲ್ಲಿ ಒಡೆಯರ್ ಎಕ್ಸಪ್ರೆಸ್ ನಿಲುಗಡಗೆ ಅನುಮೋದನೆ ನೀಡಿದ ಕೇಂದ್ರ ರೈಲ್ವೇ ಸಚಿವರಾದ Ashwini Vaishnaw, ರೈಲ್ವೇ ರಾಜ್ಯ ಖಾತೆ ಸಚಿವರಾದ ವಿ ಸೋಮಣ್ಣ ಹಾಗೂ ಈ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.&lt;/p&gt;&lt;p&gt;ಈ ನಿರ್ಧಾರದಿಂದ ರಾಮನಗರ ಮತ್ತು ಚನ್ನಪಟ್ಟಣ ಭಾಗದ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳೊಂದಿಗೆ ಸಂಪರ್ಕ ಮತ್ತಷ್ಟು ಸುಗಮವಾಗುವುದರಿಂದ ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆಗಳು ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ವಿಶೇಷವಾಗಿ ದೈನಂದಿನ ಪ್ರಯಾಣಿಕರಿಗೆ ಇದು ದೊಡ್ಡ ಮಟ್ಟದ ನೆರವಾಗಲಿದೆ. ಮುಂದಿನ ದಿನಗಳಲ್ಲಿ ಕೂಡ ಜನರ ಅಗತ್ಯಗಳನ್ನು ಮನಗಂಡು, ಈ ಭಾಗದ ಅಭಿವೃದ್ಧಿಗೆ ಇನ್ನಷ್ಟು ಸೌಲಭ್ಯಗಳನ್ನು ತರಲು ನಾನು ಬದ್ಧನಾಗಿದ್ದೇನೆ. ಎಂದು ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/wodeyar-superfast-express-to-stop-at-ramanagara-railways-approves-new-halt-between-bengaluru-and-mysuru-gdp/articleshow-o5lof7e"/>
        </item>
        <item>
            <title><![CDATA[ಡಿಕೆಶಿ, ಪ್ರಿಯಾಂಕ್ ಖರ್ಗೆ ರೀತಿ ನಮಗೂ ಮಂತ್ರಿ ಪದವಿ ಕೊಡಿ: ಮಂತ್ರಿಗಿರಿಗಾಗಿ ಇಕ್ಬಾಲ್ ಪಟ್ಟು!]]></title>
            <link>https://kannada.asianetnews.com/politics/karnataka-cabinet-reshuffle-iqbal-hussain-urges-high-command-for-ministerial-berth-rav/articleshow-pw2pynm</link>
            <guid isPermaLink="true">https://kannada.asianetnews.com/politics/karnataka-cabinet-reshuffle-iqbal-hussain-urges-high-command-for-ministerial-berth-rav/articleshow-pw2pynm</guid>
            <pubDate>Sun, 22 Mar 2026 07:39:54 +0530</pubDate>
            <description><![CDATA[&lt;p&gt;ಕಾಂಗ್ರೆಸ್&zwnj; ಶಾಸಕ ಇಕ್ಬಾಲ್ ಹುಸೇನ್ ಅವರು, ಮೊದಲ ಹಾಗೂ ಎರಡನೇ ಬಾರಿ ಗೆದ್ದ ಸುಮಾರು 55 ಶಾಸಕರಿಗೆ ಮುಂಬರುವ ಸಂಪುಟ ಪುನಾರಚನೆಯಲ್ಲಿ ಮಂತ್ರಿಗಿರಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ತಮ್ಮ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdphskv0t488bvg9wj4dsjxf,imgname-iqbal-hussain--1--1767062163296.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮಾ.22):&lt;/strong&gt; ಮೊದಲ ಬಾರಿಗೆ ಹಾಗೂ ಎರಡನೇ ಬಾರಿ ಗೆದ್ದವರಿಗೆ ಈ ಬಾರಿಯ ಸಂಪುಟ ಪುನಾರಚನೆ ವೇಳೆ ಮಂತ್ರಿಗಿರಿ ನೀಡಲಿ ಎಂದು ಕಾಂಗ್ರೆಸ್&zwnj; ಶಾಸಕ ಇಕ್ಬಾಲ್ ಹುಸೇನ್ ಆಗ್ರಹಿಸಿದ್ದಾರೆ.&amp;nbsp;&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ ಖರ್ಗೆ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾಗ ಸಚಿವರಾಗಿದ್ದರು. ಹಾಗಾಗಿ, ಈಗಲೂ ಮೊದಲ ಬಾರಿ ಗೆದ್ದವರನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ. ಸುಮಾರು 55 ಮಂದಿ ಸೇರಿ, ಒಟ್ಟಿಗೆ ಊಟ ಮಾಡಿ, ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ನಮ್ಮ ಮನವಿಯನ್ನು ಮುಖ್ಯಮಂತ್ರಿಗೆ ತಿಳಿಸಿದ್ದೇವೆ. ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸುವ ವಿಶ್ವಾಸ ಇದೆ ಎಂದು ಹೇಳಿದರು.&lt;/p&gt;&lt;p&gt;ಮೂರು-ನಾಲ್ಕು ಬಾರಿ ಗೆದ್ದ ಶಾಸಕರು ಸಭೆ ಮಾಡಿ, ಮುಖ್ಯಮಂತ್ರಿಗಳಲ್ಲಿ ಸಚಿವ ಪದವಿಗೆ ಮನವಿ ಮಾಡಿದ್ದಾರೆ. ಹಾಗಾಗಿ, ಮೊದಲ ಬಾರಿ ಹಾಗೂ ಎರಡು ಬಾರಿ ಗೆದ್ದ ಶಾಸಕರು ಕೂಡ ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-cabinet-reshuffle-iqbal-hussain-urges-high-command-for-ministerial-berth-rav/articleshow-pw2pynm"/>
        </item>
        <item>
            <title><![CDATA[ಡಿಕೆಶಿ ಭದ್ರಕೋಟೆಗೆ ನುಗ್ಗಿದ ಆಪರೇಷನ್ ಕಮಲ; ಬಿಡದಿ ರೆಸಾರ್ಟ್‌ನಿಂದ ಖರ್ಗೆ ಕಣ್ಗಾವಲಿನಲ್ಲಿಡಲು ಬೆಂಗಳೂರಿಗೆ ಶಿಫ್ಟ್!]]></title>
            <link>https://kannada.asianetnews.com/politics/odisha-congress-mlas-poaching-attempt-bengaluru-blank-checks-seized-dk-shivakumar-sat/articleshow-q4k5xab</link>
            <guid isPermaLink="true">https://kannada.asianetnews.com/politics/odisha-congress-mlas-poaching-attempt-bengaluru-blank-checks-seized-dk-shivakumar-sat/articleshow-q4k5xab</guid>
            <pubDate>Sun, 15 Mar 2026 15:10:06 +0530</pubDate>
            <description><![CDATA[&lt;p&gt;ಒಡಿಶಾ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ, ಬೆಂಗಳೂರಿನ ರೆಸಾರ್ಟ್&zwnj;ನಲ್ಲಿದ್ದ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸಿದ 'ಆಪರೇಷನ್ ಕಮಲ' ಯತ್ನ ವಿಫಲವಾಗಿದೆ. ಡಿ.ಕೆ. ಶಿವಕುಮಾರ್ ಈ ಪ್ರಯತ್ನವನ್ನು ವಿಫಲಗೊಳಿಸಿದ್ದು, ₹5 ಕೋಟಿ ರೂ. ಚೆಕ್ ಹಿಡಿದು ಬಂದವರನ್ನ ಪೊಲೀಸರಿಗೆ ಒಪ್ಪಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkr3f24cn55q95rg0y14nxwp,imgname-whatsapp-image-2026-03-13-at-6.34.46-pm-1773556697228.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮಾ.15): ಒ&lt;/strong&gt;ಡಿಶಾ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗುತ್ತಾರೆ ಎಂಬ ಭಯದಿಂದ 8 ಶಾಸಕರನ್ನು ಡಿ.ಕೆ. ಶಿವಕುಮಾರ್ ಬಳಿ ಕಳಿಸಲಾಗಿದೆ. ಆದರೆ, ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭದ್ರಕೋಟೆಯೊಳಗೆ ನುಗ್ಗಿದ ಆಪರೇಷನ್ ಕಮಲ ತಂಡ, ನೋಟಿನ ಮೂಲಕ ವೋಟು ಖರೀದಿಸುವಲ್ಲಿ ವಿಫಲವಾಗಿದೆ. ಇದೀಗ ಬಿಡದಿ ರೆಸಾರ್ಟ್&zwnj;ನಿಂದ ಕೈ ಶಾಸಕರನ್ನು ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ಕರೆದೊಯ್ದು ನಂತರ, ಬೆಂಗಳೂರಿನಲ್ಲಿರುವ ಖಾಸಗಿ ಹೋಟೆಲ್&zwnj;ಗೆ ಶಿಫ್ಟ್ ಮಾಡುವುದಕ್ಕೆ ಕೈ ಹೈಕಮಾಂಡ್ ಮುಂದಾಗಿದೆ.&lt;/p&gt;&lt;p&gt;ಹೌದು, ಒಡಿಶಾ ರಾಜ್ಯಸಭಾ ಚುನಾವಣೆಗೂ ಮುನ್ನ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹೈಡ್ರಾಮಾ ನಡೆದಿದೆ. ಕುದುರೆ ವ್ಯಾಪಾರದ ಭೀತಿಯಿಂದ ಬೆಂಗಳೂರಿನಲ್ಲಿ ಆಶ್ರಯ ಪಡೆದಿರುವ ಒಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ನಡೆದ ಬಿಜೆಪಿಯ 'ಆಪರೇಷನ್ ಕಮಲ' ಯತ್ನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಫಲಗೊಳಿಸಿದ್ದಾರೆ. ಬ್ಲ್ಯಾಂಕ್ ಚೆಕ್ ಸಮೇತ ಬಂದಿದ್ದ ವ್ಯಕ್ತಿಗಳನ್ನು ರೆಸಾರ್ಟ್&zwnj;ನಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.&lt;/p&gt;&lt;h2&gt;&lt;strong&gt;5 ಕೋಟಿ ರೂ. ಆಫರ್ ಮತ್ತು ಬ್ಲ್ಯಾಂಕ್ ಚೆಕ್ ಹೂರಣ:&lt;/strong&gt;&lt;/h2&gt;&lt;p&gt;ಈ ಕುರಿತು ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, 'ನಮ್ಮ ಒಡಿಶಾ ಶಾಸಕರು ಬಿಡದಿಯ ರೆಸಾರ್ಟ್&zwnj;ನಲ್ಲಿದ್ದರು. ಬಿಜೆಪಿಯವರು ಬ್ಯಾಟರಾಯನಪುರ ಸುರೇಶ್ ಎಂಬ ವ್ಯಕ್ತಿಯ ಮೂಲಕ ಅದೇ ರೆಸಾರ್ಟ್&zwnj;ನಲ್ಲಿ ರೂಂ ಬುಕ್ ಮಾಡಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಿಗ್ಗೆ ನಮ್ಮ ಶಾಸಕರನ್ನು ಭೇಟಿಯಾಗಿ ತಲಾ 5 ಕೋಟಿ ರೂಪಾಯಿ ಹಣದ ಆಫರ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಒಡಿಶಾದ ಎಸ್&zwnj;ಬಿಐ ಬ್ಯಾಂಕಿನ ಸಹಿ ಮಾಡಿದ ಬ್ಲ್ಯಾಂಕ್ ಚೆಕ್&zwnj;ಗಳನ್ನು ತೋರಿಸಿ ಬಿಜೆಪಿಗೆ ಮತ ಹಾಕುವಂತೆ ಆಮಿಷ ಒಡ್ಡಿದ್ದಾರೆ. ಒಟ್ಟು ನಾಲ್ವರು ಬಂದಿದ್ದರು, ಅದರಲ್ಲಿ ಇಬ್ಬರನ್ನು ನಮ್ಮವರು ಬ್ಲ್ಯಾಂಕ್ ಚೆಕ್ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ' ಎಂದು ವಿವರಿಸಿದರು.&lt;/p&gt;&lt;h2&gt;&lt;strong&gt;ಗುಜರಾತ್ ಶಾಸಕರ ಘಟನೆ ನೆನಪಿಸಿಕೊಂಡ ಡಿಕೆಶಿ:&lt;/strong&gt;&lt;/h2&gt;&lt;p&gt;ಶಾಸಕರ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಹಿಂದೆ ಗುಜರಾತ್ ಶಾಸಕರು ರಾಜ್ಯಕ್ಕೆ ಬಂದಿದ್ದಾಗ ತಾವು ಎದುರಿಸಿದ ಐಟಿ ರೈಡ್ ಮತ್ತು ನೋವುಗಳನ್ನು ನೆನಪಿಸಿಕೊಂಡರು. 'ಅಂದು ಕೂಡ ನಾನು ಶಾಸಕರನ್ನು ರಕ್ಷಿಸಿದ್ದೆ. ಅದಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸಿದೆ. ಈಗ ಒಡಿಶಾ ಶಾಸಕರಿಗೆ ಆಮಿಷ ನೀಡಲು ಬಂದವರಿಗೆ ಯಾವ ರೀತಿ 'ರಿಪೇರಿ' ಮಾಡಬೇಕೋ ಅದನ್ನು ಮಾಡಿದ್ದೇವೆ. ನಮ್ಮ ಶಾಸಕರು ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲ' ಎಂದು ಗುಡುಗಿದರು.&lt;/p&gt;&lt;h2&gt;&lt;strong&gt;ಖರ್ಗೆ ಭೇಟಿ ಮತ್ತು ಹೋಟೆಲ್ ಶಿಫ್ಟ್:&lt;/strong&gt;&lt;/h2&gt;&lt;p&gt;ಒಡಿಶಾ ಕಾಂಗ್ರೆಸ್ ಶಾಸಕರು ಇಂದು ಸಂಜೆ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದರು. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಈ ಭೇಟಿಯಲ್ಲಿ ನಾಳಿನ ರಾಜ್ಯಸಭಾ ಚುನಾವಣೆ ಕುರಿತು ಚರ್ಚಿಸಲಾಯಿತು. ಭದ್ರತೆಯ ದೃಷ್ಟಿಯಿಂದ ಹಾಗೂ ನಾಳೆ ಬೆಳಿಗ್ಗೆ ಒಡಿಶಾಗೆ ತೆರಳಲು ಅನುಕೂಲವಾಗುವಂತೆ ಶಾಸಕರನ್ನು ಬಿಡದಿಯಿಂದ ದೇವನಹಳ್ಳಿ ಏರ್&zwnj;ಪೋರ್ಟ್ ಬಳಿ ಇರುವ 'ಡಬಲ್ ಟ್ರೀ ಬೈ ಹಿಲ್ಟನ್' ಹೋಟೆಲ್&zwnj;ಗೆ ಶಿಫ್ಟ್ ಮಾಡಲಾಗಿದೆ. ಹೋಟೆಲ್ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.&lt;/p&gt;&lt;h2&gt;&lt;strong&gt;ಉಪ ಚುನಾವಣೆ ಮತ್ತು ದಾವಣಗೆರೆ ಗೊಂದಲ:&lt;/strong&gt;&lt;/h2&gt;&lt;p&gt;ಇದೇ ವೇಳೆ ರಾಜ್ಯದ ಉಪ ಚುನಾವಣೆ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಚುನಾವಣೆ ಘೋಷಣೆಯಾದರೆ ಒಳ್ಳೆಯದೇ, ನಾವು ಸಿದ್ಧರಾಗಿದ್ದೇವೆ. ನಾಯಕರ ಜೊತೆ ಈಗಾಗಲೇ ಚರ್ಚಿಸಿದ್ದೇವೆ.ದಾವಣಗೆರೆ ಕಾಂಗ್ರೆಸ್&zwnj;ನಲ್ಲಿನ ಗೊಂದಲದ ಬಗ್ಗೆ ಕೇಳಿದ ಪ್ರಶ್ನೆಗೆ ಅಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷ ಏನು ಹೇಳುತ್ತದೆಯೋ ಅದನ್ನು ಎಲ್ಲರೂ ಮಾಡಲೇಬೇಕು. ಪಕ್ಷದ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು. ಒಟ್ಟಾರೆಯಾಗಿ ಒಡಿಶಾ ರಾಜ್ಯಸಭಾ ಚುನಾವಣೆಯ ಕಾವು ಈಗ ಬೆಂಗಳೂರಿನಲ್ಲಿ ಜೋರಾಗಿದ್ದು, ಟ್ರಬಲ್ ಶೂಟರ್ ಖ್ಯಾತಿಯ ಡಿಕೆಶಿ ಮತ್ತೊಮ್ಮೆ ಶಾಸಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/odisha-congress-mlas-poaching-attempt-bengaluru-blank-checks-seized-dk-shivakumar-sat/articleshow-q4k5xab"/>
        </item>
        <item>
            <title><![CDATA[ತಮಿಳುನಾಡು ಸಿಎಂ ಸ್ಟಾಲಿನ್‌ರಿಂದ ಡಿಕೆಶಿ ಎನ್‌ಒಸಿ ತೆಗೆದುಕೊಂಡು ಬರಲಿ: ನಿಖಿಲ್ ಕುಮಾರಸ್ವಾಮಿ]]></title>
            <link>https://kannada.asianetnews.com/politics/nikhil-kumaraswamy-slams-dk-shivakumar-mekedatu-project-karnataka-gvd/articleshow-qgg4r14</link>
            <guid isPermaLink="true">https://kannada.asianetnews.com/politics/nikhil-kumaraswamy-slams-dk-shivakumar-mekedatu-project-karnataka-gvd/articleshow-qgg4r14</guid>
            <pubDate>Thu, 26 Mar 2026 20:14:15 +0530</pubDate>
            <description><![CDATA[&lt;p&gt;ಮೇಕೆದಾಟು ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಎನ್ ಒಸಿ ತೆಗೆದುಕೊಂಡು ಬರಲಿ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jdyxfep0fmty5zj9fgq4yphm,imgname--.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮಾ.26):&lt;/strong&gt; ಮೇಕೆದಾಟು ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಎನ್ ಒಸಿ ತೆಗೆದುಕೊಂಡು ಬರಲಿ. ಮರುದಿನವೇ ಕೇಂದ್ರದ ಅನುಮತಿಗೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿರವರು ಹೋರಾಟ ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.&lt;/p&gt;&lt;p&gt;ರಾಮನಗರದ ಚಿಕ್ಕೇಗೌಡನದೊಡ್ಡಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನೆನೆಗುದಿಗೆ ಬಿದ್ದ ಎತ್ತಿನ ಹೊಳೆ ಯೋಜನೆಗೆ ಮರುಜೀವ ಪಡೆಯಲು ದೇವೇಗೌಡರು ಸದನದಲ್ಲಿ ಅಂಗಲಾಚಿ ಬೇಡಿದ್ದಾರೆ. ದೇವೇಗೌಡರ ಹಿರಿತನಕ್ಕೆ ಕೇಂದ್ರ ನಾಯಕರು ಕ್ಲಿಯರೆನ್ಸ್ ಕೊಟ್ಟಿದ್ದಾರೆ. ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲು ದೇವೇಗೌಡ ಮತ್ತು ಕುಮಾರಸ್ವಾಮಿ ಬದ್ಧರಾಗಿದ್ದಾರೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಸಿದ್ರಾಮಣ್ಣ ಕೇರಳದ ಮುಖ್ಯಮಂತ್ರಿನಾ?:&lt;/strong&gt; ಮಾನ್ಯ ಸಿದ್ದರಾಮಯ್ಯನವರು ಕೇರಳದ ಮುಖ್ಯಮಂತ್ರಿಯೋ ಅಥವಾ ಕರ್ನಾಟಕದ ಮುಖ್ಯಮಂತ್ರಿಯೋ? ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅತಿವೃಷ್ಟಿಯಾಗಿತ್ತು. ಆಗ ರೈತರು ಪರಿಹಾರ ಕೇಳಿದ್ದರು, ಅವರ ಕೂಗು ಸಿದ್ದರಾಮಯ್ಯ ಅವರಿಗೆ ಕೇಳಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಗುಡುಗಿದರು. ರಾಜ್ಯ ಸರ್ಕಾರ ₹10 ಕೋಟಿ ಅನುದಾನ ನೀಡಿರುವ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು, ಕೇರಳದಲ್ಲಿ ಭೂಕುಸಿತದಿಂದ ಜನರಿಗೆ ನೋವಾದರೆ, ಅಲ್ಲಿನ ಸಿಎಂ ಪರಿಹಾರ ಘೋಷಣೆ ಮಾಡಬೇಕು. ಆದರೆ, ತಮ್ಮ ಕುರ್ಚಿ ಬಿಗಿ ಪಡಿಸಿಕೊಳ್ಳಲು, ಹೈಕಮಾಂಡ್ ವಿಶ್ವಾಸ ಗಳಿಸಲು ರಾಜ್ಯದ ತೆರಿಗೆ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು .&lt;/p&gt;&lt;p&gt;ರಾಜ್ಯದ ಎರಡು ಬೈ ಎಲೆಕ್ಷನ್&zwnj; ವಿಚಾರವಾಗಿ ಮಾತನಾಡಿದ ಅವರು, ಎರಡೂ ಕ್ಷೇತ್ರದ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಭಾಗಿಯಾಗಿದ್ದರು. ದೆಹಲಿಯಲ್ಲಿ ಅಧಿವೇಶನ ನಡೆಯುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಸಹ ಪ್ರಚಾರ ಮಾಡುತ್ತಾರೆ, ಜೆಡಿಎಸ್ ನಾಯಕರು ಕೂಡ ಹೋಗಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು. ದೇವೇಗೌಡ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಎನ್&zwnj;ಡಿಎ ನೇರ ಆಯ್ಕೆ ಮಾಡಲು ತೀರ್ಮಾನದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಇದು ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರ. ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದರು.&lt;/p&gt;&lt;p&gt;ಜಿ.ಟಿ.ದೇವೇಗೌಡರು ಜೆಡಿಎಸ್&zwnj;ನಿಂದ ಮತ್ತೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಕಳೆದ ಬಾರಿ&zwnj; ಜೆಡಿಎಸ್ ಚಿಹ್ನೆಯಲ್ಲಿ ನಿಂತು ಗೆದ್ದಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಏನು&zwnj; ಮಾಡಬೇಕು ಎಂಬುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ , ಮುಖಂಡರಾದ ದೊರೆಸ್ವಾಮಿ, ಕೃಷ್ಣಮೂರ್ತಿ (ಕಿಟ್ಟಿ) ,ಚಂದ್ರಣ್ಣ, ಸಂತೋಷ್, ಶ್ರೀಮೂರ್ತಿ, ಮೋಹನ್ , ರವಿ ಮತ್ತಿತರರು ಹಾಜರಿದ್ದರು.&lt;/p&gt;&lt;h2&gt;&lt;strong&gt;ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ&lt;/strong&gt;&lt;/h2&gt;&lt;p&gt;ರಾಮನಗರ ತಾಲೂಕಿನ ಕಸಬಾ ಹೋಬಳಿಯ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ಎಸ್ ಟಿಆರ್ ಆರ್ (ಸ್ಯಾಟಲೈಟ್ ಟೌನ್&zwnj; ರಿಂಗ್ ರೋಡ್) ಯೋಜನೆಯ ರಸ್ತೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿಯನ್ನು ಕಳೆದುಕೊಂಡ ರೈತರನ್ನು ಭೇಟಿ ಮಾಡಿದ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಹವಾಲುಗಳನ್ನು ಆಲಿಸಿದರು.&lt;/p&gt;&lt;p&gt;ರೈತರ ಎಲ್ಲಾ ಮನವಿಗಳಿಗೆ ಸ್ಪಂದಿಸಿ 40 ಜನ ಸದಸ್ಯರನ್ನು ಒಳಗೊಂಡ ನಿಯೋಗವನ್ನು ರಚನೆ ಮಾಡಿ, ಖುದ್ದಾಗಿ ದೆಹಲಿಯಲ್ಲಿ ಕೇಂದ್ರ ಸಚಿವರಾದ ಎಚ್.ಡಿ ಕುಮಾರಣ್ಣನವರನ್ನು ಭೇಟಿ ಮಾಡಿಸುತ್ತೇನೆ. ಭೂಸ್ವಾಧೀನದ ಪರಿಹಾರದ ಹಣವನ್ನ ಶೀಘ್ರವಾಗಿ ಕೇಂದ್ರ ಸರ್ಕಾರದಿಂದ ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು.&lt;/p&gt;]]></content:encoded>
            <category>ramanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/nikhil-kumaraswamy-slams-dk-shivakumar-mekedatu-project-karnataka-gvd/articleshow-qgg4r14"/>
        </item>
        <item>
            <title><![CDATA[ಡಿಕೆಶಿ ಭೇಟಿಯಾದ ಕಾಡುಗಳ್ಳ ವೀರಪ್ಪನ್ ಪುತ್ರಿ! ವಿದ್ಯಾರಾಣಿಯ ರಾಜಕೀಯ ನಡೆ ಏನು? ಕುತೂಹಲ]]></title>
            <link>https://kannada.asianetnews.com/state/veerappan-s-daughter-vidya-rani-meets-dk-shivakumar-at-ramanagar-rav/articleshow-qz0owe9</link>
            <guid isPermaLink="true">https://kannada.asianetnews.com/state/veerappan-s-daughter-vidya-rani-meets-dk-shivakumar-at-ramanagar-rav/articleshow-qz0owe9</guid>
            <pubDate>Sat, 14 Mar 2026 07:28:58 +0530</pubDate>
            <description><![CDATA[ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರು ರಾಮನಗರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಈ ಹಿಂದೆ ಬಿಜೆಪಿ ತೊರೆದು ನಾಮ್ ತಮಿಲರ್ ಕಚ್ಚಿ ಪಕ್ಷ ಸೇರಿದ್ದ ವಿದ್ಯಾರಾಣಿ ಅವರ ಈ ಭೇಟಿಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkn0pcvp6nge26vm4kxczgfy,imgname-1-1773453128566.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮಾ.14)&lt;/strong&gt;: ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಶುಕ್ರವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದು ಕುತೂಹಲ ಮೂಡಿಸಿದೆ.&lt;/p&gt;&lt;p&gt;ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್&zwnj;ನಲ್ಲಿ ವಾಸ್ತವ್ಯ ಹೂಡಿರುವ ಒಡಿಶಾ ರಾಜ್ಯದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಆಗಮಿಸಿದ ವೇಳೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿದ್ಯಾರಾಣಿ ದೇವರ ಫೋಟೋ ನೀಡಿ ಆಶೀರ್ವಾದ ಪಡೆದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಕೊನೆಯುಸಿರು ಇರುವವರೆಗೂ ರಾಜಕೀಯದಲ್ಲಿ ಇರ್&zwj;ತೀನಿ: ಸಿದ್ದು - ನನ್ನನ್ನು ಬೆಳೆಸಿದಂತೆ ಪುತ್ರ ಯತೀಂದ್ರಗೂ ಆಶೀರ್ವದಿಸಿ&lt;/p&gt;&lt;h2&gt;ವಿದ್ಯಾರಾಣಿ ರಾಜಕೀಯ ಪ್ರವೇಶ:&lt;/h2&gt;&lt;p&gt;2020ರಲ್ಲಿ ತಮಿಳುನಾಡು ರಾಜಕಾರಣಕ್ಕೆ ಪ್ರವೇಶಿಸಿದ ವಿದ್ಯಾರಾಣಿ ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಆನಂತರ ಬಿಜೆಪಿ ತೊರೆದ ಅವರು, ನಾಮ್ ತಮಿಲರ್ ಕಚ್ಚಿ (ಎನ್&zwnj;ಟಿಕೆ) ಪಕ್ಷ ಸೇರ್ಪಡೆಯಾಗಿದ್ದಾರೆ. ಈಗ ಡಿಕೆಶಿ ತಮ್ಮನ್ನು ಭೇಟಿಯಾದ ವಿದ್ಯಾರಾಣಿ ಅವರೊಂದಿಗೆ ಮಾತುಕತೆ ನಡೆಸಲು ಪ್ರತ್ಯೇಕವಾಗಿ ಅವಕಾಶ ನೀಡುವುದಾಗಿ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಶುದ್ಧ ಭಕ್ತಿ ಇದ್ದರೆ ಮಾತ್ರವೇ ದೇವರು ಒಲಿಯುತ್ತಾನೆ: ಧರ್ಮಗಳ ಬಗ್ಗೆ ಸಿಎಂ ಹೇಳಿದ್ದೇನು?&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/veerappan-s-daughter-vidya-rani-meets-dk-shivakumar-at-ramanagar-rav/articleshow-qz0owe9"/>
        </item>
        <item>
            <title><![CDATA[ಅನ್ನದ ಋಣ ಮುಗಿಯಿತು: ಹಸಿದು ಬಂದಾಗ ಅನ್ನ ಹಾಕುತ್ತಿದ್ದ ಅಜ್ಜಿಯ ಸಾವು, ಪಾರ್ಥಿವ ಶರೀರ ತಬ್ಬಿ ಕಣ್ಣೀರು ಸುರಿಸಿದ ಮಂಗ!]]></title>
            <link>https://kannada.asianetnews.com/karnataka-districts/heartbreaking-monkey-grieves-and-hugs-body-of-elderly-woman-who-fed-him-daily-at-ramanagar-rav/articleshow-s8ovkdi</link>
            <guid isPermaLink="true">https://kannada.asianetnews.com/karnataka-districts/heartbreaking-monkey-grieves-and-hugs-body-of-elderly-woman-who-fed-him-daily-at-ramanagar-rav/articleshow-s8ovkdi</guid>
            <pubDate>Wed, 01 Apr 2026 09:12:37 +0530</pubDate>
            <description><![CDATA[ರಾಮನಗರ ಜಿಲ್ಲೆಯಲ್ಲಿ, ತನಗೆ ನಿತ್ಯ ಆಹಾರ ನೀಡುತ್ತಿದ್ದ 85 ವರ್ಷದ ಪಾರ್ವತಮ್ಮ ಎಂಬ ವೃದ್ಧೆಯ ಸಾವಿಗೆ ಮಂಗವೊಂದು ಮರುಗಿದೆ. ವೃದ್ಧೆಯ ಪಾರ್ಥಿವ ಶರೀರವನ್ನು ಮನೆಗೆ ತಂದಾಗ, ಅಲ್ಲಿಗೆ ಬಂದ ಮಂಗವು ಶವವನ್ನು ತಬ್ಬಿಕೊಂಡು, ಮುತ್ತಿಕ್ಕಿ ಕಣ್ಣೀರಿಟ್ಟಿದ್ದು, ಈ ಮನಕಲಕುವ ದೃಶ್ಯ ಎಲ್ಲರನ್ನೂ ಬೆರಗುಗೊಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn3hj99ardj1tynzdjxhvv03,imgname----------------------24--1775014323498.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಏ.1): &lt;/strong&gt;ಕಷ್ಟ ಕಾಲದಲ್ಲಿ ಸಹಾಯ ಮಾಡಿದವರಿಗೆ ಮರಳಿ ಕೇಡು ಬಯಸುವ ಆಧುನಿಕ ಕಾಲದಲ್ಲಿ ಮಂಗವೊಂದು ತನಗೆ ಆಹಾರ ಹಾಕಿದ ವೃದ್ಧೆಯ ಸಾವಿಗೆ ಮರುಗಿದ್ದು, ಆಕೆಯ ಪಾರ್ಥಿವ ಶರೀರವನ್ನು ತಬ್ಬಿಕೊಂಡು ಮುತ್ತಿಕ್ಕಿ, ಕಣ್ಣೀರಿಟ್ಟಿರುವ ಮನಕಲಕುವ ಪ್ರಸಂಗ ರಾಮನಗರ ಜಿಲ್ಲೆಯ ರಾಯರದೊಡ್ಡಿಯಲ್ಲಿ ನಡೆದಿದೆ.&amp;nbsp;&lt;/p&gt;&lt;h2&gt;ಅನ್ನ ಕೊಟ್ಟ ಅಮ್ಮ ಇನ್ನಿಲ್ಲ, ತಬ್ಬಿ ಕಣ್ಣೀರಾಕಿದ ಮಂಗ&lt;/h2&gt;&lt;p&gt;ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ನಿವಾಸಿ ಪಾರ್ವತಮ್ಮ (85) ತಮ್ಮ ಮನೆ ಬಳಿ ಆಗಾಗ ಬರುತ್ತಿದ್ದ ಮಂಗಗಳಿಗೆ ಆಹಾರ ಕೊಡುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ಸೋಮವಾರ ರಾತ್ರಿ ಮೃತಪಟ್ಟಿದ್ದು, ಅವರ ಮೃತದೇಹವನ್ನು ಮನೆಗೆ ತರುತ್ತಿದ್ದಂತೆ ಮಂಗವೂ ಆಗಮಿಸಿ, ಶವವನ್ನು ತಬ್ಬಿಕೊಂಡು ಮುತ್ತಿಕ್ಕಿ ಕಣ್ಣೀರಿಟ್ಟಿದೆ.&lt;/p&gt;&lt;h3&gt;ಈ ದೃಶ್ಯ ಮನಕಲುಕುತ್ತೆ&lt;/h3&gt;&lt;p&gt;ಮೃತ ವೃದ್ಧೆ ಜೊತೆಗೆ ಮಾನವ ರಕ್ತ ಸಂಬಂಧವನ್ನು ಮೀರಿಸುವಂತೆ ಮಂಗ ವರ್ತಿಸಿದ್ದು, ಎಲ್ಲರನ್ನು ಬೆರಗುಗೊಳಿಸಿದೆ. ವೃದ್ಧೆ ಮತ್ತು ಮಂಗನ ಬಾಂಧವ್ಯ ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>ramanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/heartbreaking-monkey-grieves-and-hugs-body-of-elderly-woman-who-fed-him-daily-at-ramanagar-rav/articleshow-s8ovkdi"/>
        </item>
        <item>
            <title><![CDATA[ಒಂದು ವೋಟಿಗೆ ₹5 ಕೋಟಿ ಆಫರ್; 'ಆಪರೇಷನ್ ಕಮಲ' ಆಟ, ಕಾಂಗ್ರೆಸ್‌ಗೆ ಶಾಸಕರ ರಕ್ಷಣೆಯದ್ದೇ ಪರದಾಟ!]]></title>
            <link>https://kannada.asianetnews.com/politics/member-of-parliament-saptagiri-sankar-ulaka-alleges-rs-5-crore-offer-to-odisha-congress-mlas-sat/articleshow-u6sz7xv</link>
            <guid isPermaLink="true">https://kannada.asianetnews.com/politics/member-of-parliament-saptagiri-sankar-ulaka-alleges-rs-5-crore-offer-to-odisha-congress-mlas-sat/articleshow-u6sz7xv</guid>
            <pubDate>Sun, 15 Mar 2026 14:41:30 +0530</pubDate>
            <description><![CDATA[&lt;p&gt;ಒಡಿಶಾ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ 'ಆಪರೇಷನ್ ಕಮಲ'ದ ಮೂಲಕ ಶಾಸಕರಿಗೆ ತಲಾ 5 ಕೋಟಿ ರೂ. ಹಾಗೂ ಬ್ಲ್ಯಾಂಕ್ ಚೆಕ್ ಆಮಿಷವೊಡ್ಡಿದೆ ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಉಲಾಖ ಆರೋಪಿಸಿದ್ದಾರೆ. ಬಿಡದಿಯ ರೆಸಾರ್ಟ್&zwnj;ನಲ್ಲಿ ಕುದುರೆ ವ್ಯಾಪಾರ ಯತ್ನದ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkrc7ez4fmaf975hennydk74,imgname-odisha-mp-saptagiri-sankar-ulaka--1--1773565885412.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮಾ.15)): 'ಒ&lt;/strong&gt;ಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ 'ಆಪರೇಷನ್ ಕಮಲ'ದ ಮೂಲಕ ಅತಿಚೇಷ್ಟೆ ನಡೆಸುತ್ತಿದೆ. ನಮ್ಮ ಶಾಸಕರಿಗೆ ತಲಾ 5 ಕೋಟಿ ರೂಪಾಯಿ ಹಣ ಹಾಗೂ ಬ್ಲ್ಯಾಂಕ್ ಚೆಕ್&zwnj;ಗಳ ಆಮಿಷವೊಡ್ಡಲಾಗಿದೆ' ಎಂದು ಒಡಿಶಾ ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಾಖ ಗಂಭೀರವಾಗಿ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;5 ಕೋಟಿ ಆಫರ್ ಮತ್ತು ಬ್ಲ್ಯಾಂಕ್ ಚೆಕ್:&lt;/strong&gt;&lt;/h2&gt;&lt;p&gt;ಬಿಡದಿಯ ವಂಡರ್ ಲಾ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕುದುರೆ ವ್ಯಾಪಾರದ ಹೂರಣವನ್ನು ಬಯಲು ಮಾಡಿದರು. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಹರಸಾಹಸ ಪಡುತ್ತಿದೆ ಎಂದು ಆರೋಪಿಸಿದ ಸಂಸದರು, 'ನಾಲ್ವರು ವ್ಯಕ್ತಿಗಳು ರೆಸಾರ್ಟ್&zwnj;ಗೆ ಬಂದು ನಮ್ಮ ಶಾಸಕರ ಜೊತೆ ರಹಸ್ಯವಾಗಿ ಮಾತನಾಡಲು ಯತ್ನಿಸಿದ್ದಾರೆ. ಬಿಜೆಪಿಗೆ ಮತ ಹಾಕುವಂತೆ ಒತ್ತಡ ಹೇರಿದ ಅವರು, ಅದಕ್ಕೆ ಪ್ರತಿಯಾಗಿ 5 ಕೋಟಿ ರೂಪಾಯಿ ಹಣದ ಆಫರ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಹಣದ ಭರವಸೆಗಾಗಿ ಸಹಿ ಮಾಡಿರುವ ಬ್ಲ್ಯಾಂಕ್ ಚೆಕ್&zwnj;ಗಳನ್ನು ಶಾಸಕರ ಮುಂದಿಟ್ಟಿದ್ದಾರೆ' ಎಂದು ವಿವರಿಸಿದರು.&lt;/p&gt;&lt;h2&gt;&lt;strong&gt;ಒಡಿಶಾ ಸಿಎಂ ಆಪ್ತನ ವಿರುದ್ಧ ಆರೋಪ:&lt;/strong&gt;&lt;/h2&gt;&lt;p&gt;ಈ ವಂಚನೆಯ ಜಾಲದ ಹಿಂದೆ ಒಡಿಶಾದ ಉನ್ನತ ಮಟ್ಟದ ವ್ಯಕ್ತಿಗಳ ಕೈವಾಡವಿದೆ ಎಂದು ಸಪ್ತಗಿರಿ ಉಲಾಖ ದೂರಿದ್ದಾರೆ. 'ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಜ್ಹಿ ಅವರ ಆಪ್ತನೊಬ್ಬ ಇಲ್ಲಿಗೆ ಬಂದು ಶಾಸಕರ ಖರೀದಿಗೆ ಯತ್ನಿಸಿದ್ದಾನೆ. ಬಿಜೆಪಿಯ ಈ ನೀಚ ರಾಜಕಾರಣಕ್ಕೆ ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯೇ ಬೆಂಬಲ ನೀಡುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ನಮ್ಮ ಯಾವುದೇ ಶಾಸಕರು ಹಣದ ಆಮಿಷಕ್ಕೆ ಒಳಗಾಗಿಲ್ಲ. ನಮ್ಮ ಶಾಸಕರು ಪಕ್ಷಕ್ಕೆ ಮತ್ತು ಸಂವಿಧಾನಕ್ಕೆ ಬದ್ಧರಾಗಿದ್ದಾರೆ. ಆಮಿಷ ತೋರಲು ಬಂದ ವ್ಯಕ್ತಿಗಳನ್ನು ನಮ್ಮ ಸ್ಥಳೀಯ ಕಾಂಗ್ರೆಸ್ ಮುಖಂಡರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೂಲಕ ಬಿಜೆಪಿಯ ಮುಖವಾಡ ಕಳಚಿಬಿದ್ದಿದೆ' ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಪೊಲೀಸರಿಗೆ ದೂರು ದಾಖಲು:&lt;/strong&gt;&lt;/h2&gt;&lt;p&gt;ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವತಿಯಿಂದ ಬಿಡದಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಲಾಗಿದೆ. ಬ್ಲ್ಯಾಂಕ್ ಚೆಕ್ ಸಮೇತ ಸಿಕ್ಕಿಬಿದ್ದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. 'ಬಿಜೆಪಿ ಸಂವಿಧಾನದ ವಿರುದ್ಧವಾಗಿ ಅಧಿಕಾರ ಹಿಡಿಯಲು ಹೊರಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರನ್ನು ಮಾರುಕಟ್ಟೆಯ ಸರಕಿನಂತೆ ಖರೀದಿ ಮಾಡಲು ಹೊರಟಿರುವುದು ಅತ್ಯಂತ ಆತಂಕಕಾರಿ ಸಂಗತಿ' ಎಂದು ಅವರು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಒಡಿಶಾ ರಾಜ್ಯಸಭಾ ಚುನಾವಣೆಯ ಕಾವು ಈಗ ಕರ್ನಾಟಕದ ಬಿಡದಿ ರೆಸಾರ್ಟ್&zwnj;ನಲ್ಲಿ ಜೋರಾಗಿದ್ದು, ಸಂಸದ ಉಲಾಖ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/member-of-parliament-saptagiri-sankar-ulaka-alleges-rs-5-crore-offer-to-odisha-congress-mlas-sat/articleshow-u6sz7xv"/>
        </item>
        <item>
            <title><![CDATA[KSRTC ಬಸ್ ಸೀಟು ಹಿಡಿಯಲು ಹೋಗಿ ಚಕ್ರದಡಿಗೆ ಸಿಲುಕಿದ ಮಹಿಳೆ: ನಜ್ಜುಗುಜ್ಜಾದ ಕೈ, ಆಸ್ಪತ್ರೆಗೆ ದಾಖಲು!]]></title>
            <link>https://kannada.asianetnews.com/karnataka-districts/channapatna-woman-s-hand-crushed-under-ksrtc-bus-wheel-while-rushing-for-seat-sat/articleshow-x74mue5</link>
            <guid isPermaLink="true">https://kannada.asianetnews.com/karnataka-districts/channapatna-woman-s-hand-crushed-under-ksrtc-bus-wheel-while-rushing-for-seat-sat/articleshow-x74mue5</guid>
            <pubDate>Thu, 02 Apr 2026 15:42:34 +0530</pubDate>
            <description><![CDATA[&lt;p&gt;ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ, ಕೆಎಸ್&zwnj;ಆರ್&zwnj;ಟಿಸಿ ಬಸ್&zwnj;ನಲ್ಲಿ ಸೀಟ್ ಹಿಡಿಯಲು ಯತ್ನಿಸಿದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದು, ಬಸ್&zwnj;ನ ಚಕ್ರ ಅವರ ಕೈ ಮೇಲೆ ಹರಿದು ಕೈ ನಜ್ಜುಗುಜ್ಜಾಗಿದೆ. ಈ ಘಟನೆ ಬೆನ್ನಲ್ಲೇ, ಸಾರ್ವಜನಿಕರು ಕೆಎಸ್&zwnj;ಆರ್&zwnj;ಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6tp81y9z0j2d0kqk9vh90v,imgname-channapatna-ksrtc-bus-tragedy-1775124553790.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಏ.02): ಚ&lt;/strong&gt;ನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಎಸ್&zwnj;ಆರ್&zwnj;ಟಿಸಿ ಬಸ್&zwnj;ನಲ್ಲಿ ಸೀಟ್ ಹಿಡಿಯಲು ಹೋದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದು, ಬಸ್&zwnj;ನ ಚಕ್ರ ಅವರ ಕೈ ಮೇಲೆ ಹರಿದು ಕೈ ನಜ್ಜುಗುಜ್ಜಾದ ಭೀಕರ ಘಟನೆ ಗುರುವಾರ ನಡೆದಿದೆ. ಸಾರ್ವಜನಿಕ ಸಾರಿಗೆಯ ಅವ್ಯವಸ್ಥೆಯೇ ಈ ದುರಂತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತವಾಗಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಚನ್ನಪಟ್ಟಣ ತಾಲೂಕಿನ ಹೊನ್ನಾಯಕನಹಳ್ಳಿ ಗ್ರಾಮದ ನಿವಾಸಿ ಜಯಮ್ಮ (58) ಎಂಬುವವರೇ ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ದುರ್ದೈವಿ. ಚನ್ನಪಟ್ಟಣದಿಂದ ಕೆಸ್ತೂರ್ ಮಾರ್ಗವಾಗಿ ಸಂಚರಿಸುವ ಬಸ್ ಹತ್ತಲು ಜಯಮ್ಮ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಸೀಟ್ ಹಿಡಿಯಬೇಕೆಂಬ ಆತುರದಲ್ಲಿ ಬಸ್&zwnj;ನೊಂದಿಗೆ ಓಡಲು ಹೋದಾಗ ಈ ಅವಘಡ ಸಂಭವಿಸಿದೆ.&lt;/p&gt;&lt;p&gt;ಬಸ್ ಚಲಿಸುತ್ತಿರುವಾಗಲೇ ಕಿಟಕಿಯ ಮೂಲಕ ಸೀಟು ಹಿಡಿಯಲು ಪ್ರಯತ್ನಿಸಿದಾಗ ಜಯಮ್ಮ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದುರದೃಷ್ಟವಶಾತ್, ಚಲಿಸುತ್ತಿದ್ದ ಬಸ್&zwnj;ನ ಹಿಂಬದಿಯ ಚಕ್ರ ಜಯಮ್ಮ ಅವರ ಕೈ ಮೇಲೆಯೇ ಹರಿದಿದೆ. ಪರಿಣಾಮವಾಗಿ ಅವರ ಕೈ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ. ತಕ್ಷಣವೇ ಸ್ಥಳೀಯರು ಮತ್ತು ಬಸ್ ನಿಲ್ದಾಣದ ಸಿಬ್ಬಂದಿ ಅವರನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ:&lt;/strong&gt;&lt;/h2&gt;&lt;p&gt;ಈ ಘಟನೆ ತಿಳಿಯುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೆಎಸ್&zwnj;ಆರ್&zwnj;ಟಿಸಿ ಅಧಿಕಾರಿಗಳ ಬೇಜವಾಬ್ದಾರಿತನವೇ ಈ ಘಟನೆಗೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. 'ಗ್ರಾಮೀಣ ಭಾಗಗಳಿಗೆ ಸರಿಯಾದ ಪ್ರಮಾಣದಲ್ಲಿ ಬಸ್ ವ್ಯವಸ್ಥೆ ಇಲ್ಲ. ಗಂಟೆಗಟ್ಟಲೆ ಕಾದರೂ ಬಸ್&zwnj;ಗಳು ಬರುವುದಿಲ್ಲ. ಬಂದ ಒಂದು ಬಸ್ಸಿಗಾಗಿ ನೂರಾರು ಜನ ಮುಗಿಬೀಳುತ್ತಾರೆ. ಇಂತಹ ಪರಿಸ್ಥಿತಿ ಇರುವುದರಿಂದಲೇ ಜನರು ಪ್ರಾಣದ ಹಂಗು ತೊರೆದು ಸೀಟ್ ಹಿಡಿಯಲು ಓಡುತ್ತಾರೆ' ಎಂದು ಪ್ರಯಾಣಿಕರು ದೂರಿದ್ದಾರೆ.&lt;/p&gt;&lt;h3&gt;&lt;strong&gt;ಸಾರಿಗೆ ಸಂಸ್ಥೆಗೆ ಎಚ್ಚರಿಕೆ:&lt;/strong&gt;&lt;/h3&gt;&lt;p&gt;ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬಸ್&zwnj;ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಅದಕ್ಕೆ ತಕ್ಕಂತೆ ಬಸ್&zwnj;ಗಳ ಸಂಖ್ಯೆ ಹೆಚ್ಚಿಸದ ಕಾರಣ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂಬುದು ಸಾರ್ವಜನಿಕರ ವಾದ. ಮಹಿಳೆಯ ಕೈ ನಜ್ಜುಗುಜ್ಜಾದ ವಿಷಯ ತಿಳಿದು ಸಂಬಂಧಿಕರ ಆಕ್ರೋಶ ಕಟ್ಟೆ ಒಡೆದಿತ್ತು. ಸಾರಿಗೆ ಸಂಸ್ಥೆಯು ಗಾಯಾಳು ಮಹಿಳೆಯ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಮತ್ತು ಗ್ರಾಮೀಣ ಭಾಗಗಳಿಗೆ ಹೆಚ್ಚಿನ ಬಸ್&zwnj;ಗಳನ್ನು ಓಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;&lt;p&gt;ಸದ್ಯ ಜಯಮ್ಮ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚನ್ನಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;]]></content:encoded>
            <category>ramanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/channapatna-woman-s-hand-crushed-under-ksrtc-bus-wheel-while-rushing-for-seat-sat/articleshow-x74mue5"/>
        </item>
    </channel>
</rss>
