<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 26 Jun 2026 12:43:53 +0530</lastBuildDate>
        <atom:link href="https://kannada.asianetnews.com/rss/raichur" rel="self" type="application/rss+xml"/>
        <item>
            <title><![CDATA[ಕಾಲಿಗೆ ಪೊರಕೆ ತಾಗಿದ್ದಕ್ಕೆ ಬೈದ ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಥಳಿಸಿದ ಮಹಿಳೆ!]]></title>
            <link>https://kannada.asianetnews.com/gallery/karnataka-districts/raichur-woman-throws-chili-powder-in-customer-eyes-beats-him-up-after-he-scolded-her-for-touching-her-leg-with-broom-mrq-097tesq</link>
            <guid isPermaLink="true">https://kannada.asianetnews.com/gallery/karnataka-districts/raichur-woman-throws-chili-powder-in-customer-eyes-beats-him-up-after-he-scolded-her-for-touching-her-leg-with-broom-mrq-097tesq</guid>
            <pubDate>Wed, 10 Jun 2026 08:08:27 +0530</pubDate>
            <description><![CDATA[ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್&zwnj;ನಲ್ಲಿ, ಪೊರಕೆ ತಾಗಿದ್ದಕ್ಕೆ ಕೋಪಗೊಂಡ ಗ್ರಾಹಕನೊಬ್ಬ ಮಹಿಳಾ ಸಿಬ್ಬಂದಿಗೆ ಬೈದಿದ್ದಾನೆ. ಇದರಿಂದ ಕೆರಳಿದ ಮಹಿಳೆ, ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಪೊರಕೆಯಿಂದಲೇ ಥಳಿಸಿದ್ದಾರೆ. ಈ ಬೀದಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktqns5jr69mv7byjq943p73q,imgname-raichur--3--1781058541144.jpg" type="image/jpeg" height="390" width="690"/>
            <content:encoded><![CDATA[ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್&zwnj;ನಲ್ಲಿ, ಪೊರಕೆ ತಾಗಿದ್ದಕ್ಕೆ ಕೋಪಗೊಂಡ ಗ್ರಾಹಕನೊಬ್ಬ ಮಹಿಳಾ ಸಿಬ್ಬಂದಿಗೆ ಬೈದಿದ್ದಾನೆ. ಇದರಿಂದ ಕೆರಳಿದ ಮಹಿಳೆ, ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಪೊರಕೆಯಿಂದಲೇ ಥಳಿಸಿದ್ದಾರೆ. ಈ ಬೀದಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;img&gt;&lt;p&gt;ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್ ಮಹಿಳಾ ಸಿಬ್ಬಂದಿ ಕಸ ಗುಡಿಸುತ್ತಿದ್ದಾಗ, ಅಲ್ಲಿಗೆ ಬಂದಿದ್ದ ಗ್ರಾಹಕನೊಬ್ಬನ ಕಾಲಿಗೆ ಆಕಸ್ಮಿಕವಾಗಿ ಪೊರಕೆ ತಾಗಿದೆ. ಇದರಿಂದ ಕೋಪಗೊಂಡ ಗ್ರಾಹಕ ಮಹಿಳಾ ಸಿಬ್ಬಂದಿಗೆ ಸಾರ್ವಜನಿಕರ ಎದುರೇ ಏಕವಚನದಲ್ಲಿ ಮನಬಂದಂತೆ ಬೈದಿದ್ದಾನೆ.&lt;/p&gt;&lt;img&gt;&lt;p&gt;ಗ್ರಾಹಕನ ನಿಂದನೆಯಿಂದ ಕೆಂಡಾಮಂಡಲವಾದ ಮಹಿಳಾ ಸಿಬ್ಬಂದಿ ತಿರುಮಲಾ ಎಂಬವವರು ತಕ್ಷಣ ಕ್ಯಾಂಟೀನ್&zwnj;ನ ಕಿಚನ್&zwnj;ಗೆ ಓಡಿಹೋಗಿ ಖಾರದ ಪುಡಿ ತಂದು ಗ್ರಾಹಕನ ಕಣ್ಣಿಗೆ ಎರಚಿದ್ದಾರೆ. ನಂತರ ಬಸ್&zwnj; ನಿಲ್ದಾಣದಲ್ಲಿ ಅದೇ ಪೊರಕೆಯಿಂದ ಗ್ರಾಹಕನಿಗೆ ಥಳಿಸಿದ್ದಾರೆ.&lt;/p&gt;&lt;img&gt;&lt;p&gt;ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ನೂರಾರು ಸಾರ್ವಜನಿಕರ ಮುಖಾಂತರವೇ ಇಬ್ಬರೂ ಬೀದಿ ಜಗಳಕ್ಕೆ ನಿಂತು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ಹೈಡ್ರಾಮಾ ನಡೆದಿರುವ ರಾಯಚೂರಿನ ಕೇಂದ್ರ ಬಸ್ ನಿಲ್ದಾಣವು ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;4 ವಿಧಗಳಲ್ಲಿ ತ್ಯಾಜ್ಯ ವಿಂಗಡಿಸದಿದ್ದರೆ ಪ್ರಕರಣ ದಾಖಲಿಸಿ ದಂಡ ಹಾಕಿ; ಮುಖ್ಯಾಧಿಕಾರಿ ಎಚ್ಚರಿಕೆ&lt;/strong&gt;&lt;/p&gt;&lt;img&gt;&lt;p&gt;ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್&zwnj;ನಲ್ಲಿ ಮೇ 24ರಂದು ಈ ಘಟನೆ ನಡೆದಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ. ಗ್ರಾಹಕನ ಹೆಸರು ತಿಳಿದು ಬಂದಿಲ್ಲ. ಸದ್ಯ ಈ ವಿಡಿಯೋ ರಾಯಚೂರು ಭಾಗದಲ್ಲಿ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು: ಗಜೇಂದ್ರಗಡ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ!&lt;/strong&gt;&lt;/p&gt;]]></content:encoded>
            <category>raichur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/raichur-woman-throws-chili-powder-in-customer-eyes-beats-him-up-after-he-scolded-her-for-touching-her-leg-with-broom-mrq-097tesq"/>
        </item>
        <item>
            <title><![CDATA[ಹೃದಯಾಘಾತಕ್ಕೆ ಕುಸಿದು ಬಿದ್ದು ಮೃತಪಟ್ಟ ರಾಯಚೂರಿನ 37ರ ಹರೆಯದ ಪೊಲೀಸ್ ಪೇದೆ]]></title>
            <link>https://kannada.asianetnews.com/karnataka-districts/raichur-on-duty-police-constable-37-dies-after-suffering-heart-attack/articleshow-0gnxcrc</link>
            <guid isPermaLink="true">https://kannada.asianetnews.com/karnataka-districts/raichur-on-duty-police-constable-37-dies-after-suffering-heart-attack/articleshow-0gnxcrc</guid>
            <pubDate>Thu, 25 Jun 2026 08:31:18 +0530</pubDate>
            <description><![CDATA[&lt;p&gt;ಕೆಲಸದ ವೇಳೆ ತೀವ್ರ ಎದೆನೋವು ಹಾಗೂ ಎಡಗೈ ಸೆಳೆತ ಕಾಣಿಸಿಕೊಂಡ ಕಾರಣ ಸ್ಥಳೀಯ ಆಸ್ಪತ್ರೆಗೆ ಕೆರದೊಯ್ಯಲಾಗಿತ್ತು. ಇಂಜೆಕ್ಷನ್&zwnj;ಗೆ ಸಿದ್ಧತೆ ನಡೆಸುತ್ತಿದ್ದಂತೆ ಕುಳಿತಿದ್ದ ಪೊಲೀಸ್ ಪೇದೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvybjx28hrnvsz23xq7b1tjc,imgname-raichur-cop-passes-away-1782356472904.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜೂ.25) &lt;/strong&gt;ರಾಯಚೂರಿನಲ್ಲಿ ಹೃದಾಯಾಘಾಚಕ್ಕೆ ಪೊಲೀಸ್ ಕಾನ್ಸ್&zwnj;ಸ್ಟೇಬಲ್ ಬಲಿಯಾದ ಘಟನೆ ನಡೆದಿದೆ. ರಾಯಚೂರು ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಣುಕಾ ರಾಜ್, ಮೊಹರಂ ಹಬ್ಬದ ಭದ್ರತೆಗೆ ನಿಯೋಜನೆಗೊಂಡಿದ್ದರು. ಕರ್ತವ್ಯದ ವೇಳೆ ತೀವ್ರ ಎದೆನೋವು ಹಾಗೂ ಎಡೆಗೈ ಸೆಳೆತ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡ ರೇಣುಕಾ ರಾಜ್&zwnj;ನನ್ನು ಪೊಲೀಸರು ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆರೆತರಲಾಗಿತ್ತು. ಆರೋಗ್ಯ ಕೇಂದ್ರದ ಕುರ್ಚಿಯಲ್ಲಿ ಕುಳಿದಿದ್ದ ರೇಣುಕಾ ರಾಜ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. 37ರ ಹರೆಯದ ಪೊಲೀಸ್ ಪೇದೆ ರೇಣುಕಾರಾಜ್ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;h2&gt;ಸ್ಥಳೀಯ ಆಸ್ಪತ್ರೆ ಕುರ್ಚಿಯಿಂದ ಕುಸಿದು ಬಿದ್ದ ಪೇದೆ&lt;/h2&gt;&lt;p&gt;ದೇವದುರ್ಗ ಠಾಣೆ ಸಿಪಿಐ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಣುಕಾ ರಾಜ್, ಇದೇ ಇದೇ ಜೂನ್ 23 ರಂದು ಮೊಹರಂ ಬಂದೋಬಸ್ತ್ ಗಾಗಿ ನಿಯೋಜನೆಗೊಂಡಿದ್ದರು. ಈ ವೇಳೆ ರಾತ್ರಿ 10.30 ರ ಸುಮಾರಿಗೆ ರೇಣುಕಾ ರಾಜ್&zwnj;ಗೆ ಎದೆನೋವು ಕಾಣಿಸಿಕೊಂಡಿದೆ. ಕೆಲಸದ ನಡುವೆ ಒದ್ದಾಡಿದ ರೇಣುಕಾ ರಾಜ್&zwnj;ನನ್ನು ತಕ್ಷಣವೇ ಸಿಪಿಐ ಜೀಪ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂಜೆಕ್ಷನ್ ಗೆ ಸಿದ್ಧತೆ ನಡೆಸುತ್ತಿದ್ದಂತೆ ಇತ್ತ ರೇಣುಕಾ ರಾಜ್ ಪ್ರಾಣಬಿಟ್ಟಿದ್ದಾರೆ.&lt;/p&gt;&lt;p&gt;30 ಸೆಕೆಂಡ್&zwnj;ನಲ್ಲಿ ಸಾವು&lt;/p&gt;&lt;p&gt;ಆಸ್ಪತ್ರೆ ಚೇರ್ ಮೇಲೆ ಕುಳಿತಿದ್ದ ರೇಣುಕಾ ರಾಜ್ ತೀವ್ರ ಒದ್ದಾಡಿದ್ದಾರೆ. ಎದೆನೋವು ಹೆಚ್ಚಾಗಿದೆ. ಅಸ್ವಸ್ಥಗೊಂಡ ರೇಣುಕಾ ರಾಜ್ ಕುಳಿತಲ್ಲಿಂದಲೇ ಕುಸಿದು ಬಿದ್ದಿದ್ದಾರೆ. ಕೇವಲ 30 ಸೆಕೆಂಡ್&zwnj;ನಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ರಾಯಚೂರು ಜಿಲ್ಲಾ ಪೊಲೀಸ್ ಘಟಕದಿಂದ ಮೃತ ಕಾನ್ಸ್ ಟೇಬಲ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ರೇಣುಕಾ ರಾಜ್ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಆಮದಿಹಾಳ ಗ್ರಾಮದ ಮೂಲದವರು. ಪೊಲೀಸ್ ಪೇದೆ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ನಿರಂತರ ಕೆಲಸ, ಒತ್ತಡಗಳಿಂದ ಆರೋಗ್ಯ ಕೆಟ್ಟಿರುವ ಸಾಧ್ಯತ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಘಟನೆ ಇದೀಗ ಹಲವರನ್ನು ಬೆಚ್ಚಿ ಬೀಳಿಸಿದೆ. ಹೃದಾಯಾಘಾತ ಸಮಸ್ಯೆಗಳು ತೀವ್ರಗೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ. ಉತ್ತಮ ಆಹಾರ ಶೈಲಿ, &amp;nbsp;ಜೀವನ ಪದ್ಧತಿ, ವ್ಯಾಯಮಾ ಅಭ್ಯಾಸಗಳು ಬೆಳೆಸಿಕೊಂಡರೆ ಆತಂಕದಿಂದ ದೂರವಿರಲು ಸಾಧ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. &amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>raichur</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/raichur-on-duty-police-constable-37-dies-after-suffering-heart-attack/articleshow-0gnxcrc"/>
        </item>
        <item>
            <title><![CDATA[ಗ್ಯಾರಂಟಿ ಪರಿಷ್ಕರಣೆ ಮಧ್ಯೆ ರಾಜ್ಯದ 16 ಲಕ್ಷ ಜನರ ಪಿಂಚಣಿ ಸ್ಥಗಿತ! ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ವೃದ್ಧರು!]]></title>
            <link>https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr</link>
            <guid isPermaLink="true">https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr</guid>
            <pubDate>Wed, 17 Jun 2026 12:41:12 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಪರಿಶೀಲನೆಯ ನೆಪದಲ್ಲಿ ಸುಮಾರು 16 ಲಕ್ಷ ಫಲಾನುಭವಿಗಳ ಮಾಸಿಕ ಪಿಂಚಣಿಯನ್ನು ಸ್ಥಗಿತಗೊಳಿಸಿದೆ. ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರಂತಹ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಕಳೆದ ಮೂರು ತಿಂಗಳಿಂದ ನಿಂತುಹೋಗಿದ್ದು, ಬಡವರು ಮತ್ತು ಅಸಹಾಯಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k38860vgzn4ast8mffce4zr2,imgname-welfare-pension-1755844903792.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ನೀಡುತ್ತಿದ್ದ ಮಾಸಿಕ ಪಿಂಚಣಿಯನ್ನು (ಮಾಸಾಶನ) ದಿಢೀರನೆ ಸ್ಥಗಿತಗೊಳಿಸಿರುವುದು ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಂತಹ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ನಡುವೆಯೇ, ಬಡವರು ಹಾಗೂ ಅಸಹಾಯಕರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಕಳೆದ ಮೂರು ತಿಂಗಳಿಂದ ರಾಜ್ಯದ ಸುಮಾರು 16 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ಹಣ ತಲುಪುತ್ತಿಲ್ಲ. ರಾಜ್ಯದಲ್ಲಿನ ಈ ಪಿಂಚಣಿ ಸ್ಥಗಿತದ ಸಂಪೂರ್ಣ ವಿವರ, ಕಾರಣಗಳು ಮತ್ತು ಇದರಿಂದ ಜನಸಾಮಾನ್ಯರ ಮೇಲಾಗಿರುವ ಪರಿಣಾಮಗಳ ಕುರಿತಾದ ಸಮಗ್ರ ವರದಿ ಇಲ್ಲಿದೆ.&lt;/p&gt;&lt;h2&gt;16 ಲಕ್ಷ ಜನರಿಗೆ ಬಿಗ್ ಶಾಕ್: ಯಾರೆಲ್ಲ ಸಂಕಷ್ಟದಲ್ಲಿದ್ದಾರೆ?&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 82.71 ಲಕ್ಷ ಪಿಂಚಣಿ ಫಲಾನುಭವಿಗಳಿದ್ದಾರೆ. ಇವರಲ್ಲಿ ಅರ್ಹರಲ್ಲದವರನ್ನು ಪತ್ತೆಹಚ್ಚುವ ನೆಪದಲ್ಲಿ ಸರ್ಕಾರವು ಬರೋಬ್ಬರಿ 16 ಲಕ್ಷ ಜನರನ್ನು ಪಿಂಚಣಿ ಪಟ್ಟಿಯಿಂದ ಕೈಬಿಟ್ಟಿದೆ. ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ಕೆಳಗಿನ ಯೋಜನೆಗಳ ಆಶ್ರಯ ಪಡೆದಿದ್ದವರು ಬೀದಿಗೆ ಬೀಳುವಂತಾಗಿದೆ.&lt;/p&gt;&lt;ul&gt; &lt;li&gt;ವೃದ್ಧಾಪ್ಯ ವೇತನ (ಹಿರಿಯ ನಾಗರಿಕರು)&lt;/li&gt; &lt;li&gt;ವಿಧವಾ ಪಿಂಚಣಿ (ಪತಿಯನ್ನು ಕಳೆದುಕೊಂಡ ಮಹಿಳೆಯರು)&lt;/li&gt; &lt;li&gt;ಸಂಧ್ಯಾ ಸುರಕ್ಷಾ ಯೋಜನೆ&lt;/li&gt; &lt;li&gt;ವಿಕಲಾಂಗರ ಪಿಂಚಣಿ&lt;/li&gt;&lt;/ul&gt;&lt;p&gt;ಪ್ರತಿ ತಿಂಗಳು ಈ 82 ಲಕ್ಷ ಫಲಾನುಭವಿಗಳ ಪಿಂಚಣಿಗಾಗಿ ಸರ್ಕಾರ ಸುಮಾರು 400 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿತ್ತು. ಆದರೆ, ಈಗ 16 ಲಕ್ಷ ಜನರಿಗೆ ಕೊಕ್ ನೀಡಿರುವುದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 150 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಉಳಿತಾಯವಾಗುತ್ತಿದೆ.&lt;/p&gt;&lt;h2&gt;ಪಿಂಚಣಿ ಸ್ಥಗಿತಗೊಳ್ಳಲು ಮುಖ್ಯ ಕಾರಣಗಳೇನು?&lt;/h2&gt;&lt;p&gt;ಸರ್ಕಾರದ ವತಿಯಿಂದ ನಡೆಸಲಾದ ಇಲಾಖಾ ಪರಿಶೀಲನೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಈ ಪಿಂಚಣಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಮುಖ್ಯ ಕಾರಣಗಳು ಕೂಡ ನೀಡಲಾಗಿದೆ.&lt;/p&gt;&lt;p&gt;&lt;strong&gt;ವಿಳಾಸ ಬದಲಾವಣೆ: &lt;/strong&gt;ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ನೀಡಿದ್ದ ವಿಳಾಸದಲ್ಲಿ ಸದ್ಯಕ್ಕೆ ವಾಸವಿಲ್ಲದ ಕಾರಣಕ್ಕಾಗಿ 2.21 ಲಕ್ಷ ಜನರ ಪಿಂಚಣಿ ರದ್ದಾಗಿದೆ.&lt;/p&gt;&lt;p&gt;&lt;strong&gt;ಆದಾಯ ಪ್ರಮಾಣ ಪತ್ರದ ಕೊರತೆ: &lt;/strong&gt;ಕಾಲಮಿತಿಯೊಳಗೆ ಹೊಸ ಆದಾಯ ಪ್ರಮಾಣ ಪತ್ರವನ್ನು (Income Certificate) ಸಲ್ಲಿಸದ ಕಾರಣಕ್ಕೆ 45,853 ಜನರಿಗೆ ಪಿಂಚಣಿ ನಿಲ್ಲಿಸಲಾಗಿದೆ.&lt;/p&gt;&lt;p&gt;&lt;strong&gt;ದಾಖಲೆಗಳ ಕೊರತೆ: &lt;/strong&gt;ಭೌತಿಕ ಪರಿಶೀಲನೆ (Physical Verification) ನಡೆಸುವಾಗ ಸೂಕ್ತ ಮತ್ತು ನಿಖರವಾದ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಅಂದರೆ 13,23,932 ಜನರ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ.&lt;/p&gt;&lt;h2&gt;ಜಿಲ್ಲಾವಾರು ಸ್ಥಗಿತಗೊಂಡ ಪಿಂಚಣಿದಾರರ ವಿವರ&lt;/h2&gt;&lt;p&gt;ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಪಿಂಚಣಿ ಕಳೆದುಕೊಂಡವರ ಸಂಖ್ಯೆ ಅತ್ಯಂತ ಹೆಚ್ಚಾಗಿದ್ದು, ಆ ವಿವರಗಳು ಹೀಗಿವೆ:&lt;/p&gt;&lt;p&gt;ಜಿಲ್ಲೆ ಪಿಂಚಣಿ ಕಳೆದುಕೊಂಡವರ ಸಂಖ್ಯೆ&lt;/p&gt;&lt;ul&gt; &lt;li&gt;ಬೆಳಗಾವಿ 1,38,215 ಜನರು&lt;/li&gt; &lt;li&gt;ಮೈಸೂರು 1,06,305 ಜನರು&lt;/li&gt; &lt;li&gt;ದಾವಣಗೆರೆ 95,297 ಜನರು&lt;/li&gt; &lt;li&gt;ರಾಯಚೂರು 90,995 ಜನರು&lt;/li&gt;&lt;/ul&gt;&lt;h2&gt;ಪ್ರಸ್ತುತ ಪಿಂಚಣಿ ದರಗಳು (ಯಾರಿಗೆ ಎಷ್ಟು ಸಿಗುತ್ತಿತ್ತು?)&lt;/h2&gt;&lt;p&gt;ಸರ್ಕಾರವು ವಿವಿಧ ವರ್ಗದ ಜನರಿಗೆ ನೀಡುತ್ತಿದ್ದ ಮಾಸಿಕ ಆರ್ಥಿಕ ನೆರವಿನ ವಿವರ ಹೀಗಿದೆ.&lt;/p&gt;&lt;p&gt;&lt;strong&gt;ವಿಧವಾ ವೇತನ:&lt;/strong&gt; ಪ್ರತಿ ತಿಂಗಳು 800 ರೂಪಾಯಿಗಳು.&lt;/p&gt;&lt;p&gt;&lt;strong&gt;ವೃದ್ಧಾಪ್ಯ ಪಿಂಚಣಿ:&lt;/strong&gt; 60 ರಿಂದ 65 ವರ್ಷದೊಳಗಿನವರಿಗೆ 800 ರೂಪಾಯಿ ಹಾಗೂ 65 ವರ್ಷ ಮೇಲ್ಪಟ್ಟವರಿಗೆ 1,200 ರೂಪಾಯಿಗಳು.&lt;/p&gt;&lt;p&gt;&lt;strong&gt;ವಿಕಲಾಂಗರ ಪಿಂಚಣಿ:&lt;/strong&gt;&lt;/p&gt;&lt;p&gt;25% ವಿಕಲಾಂಗ ಹೊಂದಿರುವವರಿಗೆ: 800 ರೂಪಾಯಿಗಳು.&lt;/p&gt;&lt;p&gt;50% ವಿಕಲಾಂಗ ಹೊಂದಿರುವವರಿಗೆ: 1,200 ರೂಪಾಯಿಗಳು.&lt;/p&gt;&lt;p&gt;75% ಕಿಂತ ಹೆಚ್ಚು ವಿಕಲಾಂಗ ಹೊಂದಿರುವವರಿಗೆ: 2,000 ರೂಪಾಯಿಗಳು.&lt;/p&gt;&lt;h2&gt;ಕಚೇರಿಗಳಿಗೆ ಅಲೆಯುತ್ತಿರುವ ವೃದ್ಧರು!&lt;/h2&gt;&lt;p&gt;ಮೂರು ತಿಂಗಳಾಯಿತು ಸರ್, ಕೈಗೆ ಒಂದು ರೂಪಾಯಿ ಪಿಂಚಣಿ ಹಣ ಬಂದಿಲ್ಲ. ನೆಮ್ಮದಿ ಕೇಂದ್ರ, ತಹಶೀಲ್ದಾರ್ ಕಚೇರಿ ಅಂತ ಕೇಳಿದ್ರೆ 'ಆ ಆಫೀಸ್&zwnj;ಗೆ ಹೋಗಿ, ಈ ಆಫೀಸ್&zwnj;ಗೆ ಹೋಗಿ' ಅಂತ ಅಲೆದಾಡಿಸುತ್ತಿದ್ದಾರೆ. ವಯಸ್ಸಾದ ಕಾಲದಲ್ಲಿ ನಮಗೆ ನಡೆದಾಡಲು ಶಕ್ತಿಯಿಲ್ಲ. ಬದುಕು ಸಾಗಿಸುವುದು ತುಂಬಾ ಕಷ್ಟವಾಗಿದೆ. ಎಂದು ಪಿಂಚಣಿ ಕಳೆದುಕೊಂಡ ಹಿರಿಯ ನಾಗರಿಕರ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ದೈನಂದಿನ ಮನೆ ಖರ್ಚಿಗೆ, ಕೈಗೊಂದು ಮಾತ್ರೆ-ಔಷಧಿ ಖರೀದಿಸಲು ಈ ಪಿಂಚಣಿ ಹಣವನ್ನೇ ನಂಬಿಕೊಂಡಿದ್ದ ಅಸಹಾಯಕ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಸರ್ಕಾರದ ಈ ಕ್ರಮದಿಂದ ಕಂಗಾಲಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗ್ಯಾರಂಟಿ ಯೋಜನೆಗಳ ಹೊಂದಾಣಿಕೆಗಾಗಿ ಬಡವರ ಪಿಂಚಣಿಗೆ ಕತ್ತರಿ ಹಾಕಲಾಗಿದೆಯೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣವೇ ಪಿಂಚಣಿ ಬಿಡುಗಡೆ ಮಾಡಬೇಕೆಂಬುದು ಸಂತ್ರಸ್ತರ ತೀವ್ರ ಒತ್ತಾಯವಾಗಿದೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr"/>
        </item>
        <item>
            <title><![CDATA[ಕರ್ನಾಟಕದಿಂದ ಸೋಲಾಪುರ ಮಾರ್ಗವಾಗಿ ಹೋಗುವ ಹಲವು ರೈಲು ಸಂಚಾರ ನಿರ್ಬಂಧ, ಜೂ. 5ರಿಂದ10ರವರೆಗೆ ಹಲವು ಟ್ರೈನ್ ರದ್ದು!]]></title>
            <link>https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</link>
            <guid isPermaLink="true">https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</guid>
            <pubDate>Fri, 05 Jun 2026 12:14:53 +0530</pubDate>
            <description><![CDATA[ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ನಡೆಯುತ್ತಿರುವ ಮೇಲ್ದರ್ಜೆ ಕಾಮಗಾರಿಯಿಂದಾಗಿ ಕೇಂದ್ರ ರೈಲ್ವೆಯು ಜೂನ್ 5 ರಿಂದ 10 ರವರೆಗೆ ಹಲವು ರೈಲುಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ಕೆಲವು ರೈಲುಗಳ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ ಹಾಗೂ ಸೋಲಾಪುರ-ಕಲಬುರಗಿ ವಿಶೇಷ ರೈಲು ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks4rgymmydvxhdywfct5zw88,imgname-indian-railways--2--1779350141588.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ಮೇಲ್ದರ್ಜೆ ಕಾಮಗಾರಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಇಂಟರ್&zwnj;ಲಾಕಿಂಗ್&zwnj;ನ್ನು ನಿಯೋಜಿಸಲು ಪೂರ್ವ-ಇಂಟರ್&zwnj;ಲಾಕಿಂಗ್ ಅಲ್ಲದ ಮತ್ತು ಇಂಟರ್&zwnj;ಲಾಕಿಂಗ್ ಅಲ್ಲದ ಕೆಲಸದಿಂದಾಗಿ ಜೂನ್ 5ರಿಂದ 10ರವರೆಗೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಹಲವು ರೈಲುಗಳ ಮೇಲೆ ಸಂಚಾರ ನಿರ್ಬಂಧ ವಿಧಿಸಿದೆ.&lt;/p&gt;&lt;h2&gt;ನಿಯಂತ್ರಣ ಯಾವ ರೈಲುಗಳ ಮೇಲೆ ?&lt;/h2&gt;&lt;p&gt;ಜೂನ್&zwnj; 5 ರಂದು ರೈಲು ಸಂಖ್ಯೆ 11311 ಸೋಲಾಪುರ-ಹಾಸನ ಎಕ್ಸ್&zwnj;ಪ್ರೆಸ್ ಹಾಗೂ ರೈಲು ಸಂಖ್ಯೆ 17308 ಬಾಗಲಕೋಟೆ- ಮೈಸೂರು ಬಸವಾ ಎಕ್ಸ್&zwnj;ಪ್ರೆಸ್ ಸಂಚಾರದ ಮೇಲೆ 45 ನಿಮಿಷಗಳ ನಿಯಂತ್ರಣವಿರಲಿದೆ. ಜೂ. 8 ರಂದು ರೈಲು ಸಂಖ್ಯೆ 18520 ಎಲ್&zwnj;ಟಿಟಿ ಮುಂಬೈ- ವಿಶಾಖಪಟ್ಟಣ ಎಕ್ಸ್&zwnj;ಪ್ರೆಸ್ಜೂ 2 ಗಂಟೆ, ರೈಲು ಸಂಖ್ಯೆ 01465 ಸೋಲಾಪುರ-ಕಲಬುರಗಿ ವಿಶೇಷ 1 ಗಂಟೆ 30 ನಿಮಿಷ, ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ 30 ನಿಮಿಷ, ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 30 ನಿಮಿಷ ನಿಯಂತ್ರಣದಲ್ಲಿರಲಿವೆ.&lt;/p&gt;&lt;p&gt;ಜೂನ್&zwnj; 9 ರಂದು ರೈಲು ಸಂಖ್ಯೆ 16382 ಕನ್ಯಾಕುಮಾರಿ-ಪುಣೆ ಎಕ್ಸ್&zwnj;ಪ್ರೆಸ್ 1 ಗಂಟೆ 15 ನಿಮಿಷ, ರೈಲು ಸಂಖ್ಯೆ 11020 ಭುವನೇಶ್ವರ- ಸಿಎಸ್&zwnj;ಎಂಟಿ ಮುಂಬೈ ಎಕ್ಸ್&zwnj;ಪ್ರೆಸ್ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.&lt;/p&gt;&lt;h2&gt;ಕೆಲವು ರೈಲು ಮಾರ್ಗ ಬದಲಾವಣೆ:&lt;/h2&gt;&lt;p&gt;ರೈಲು ಸಂಖ್ಯೆ 57662 ವಿಜಯಪುರ-ರಾಯಚೂರು ಪ್ಯಾಸೆಂಜರ್ ಜೂ. 5 ರಿಂದ 10 ರ ವರೆಗೆ ವಿಜಯಪುರ-ಹೋಟ್ಗಿ-ವಾಡಿ ಮಾರ್ಗ, ರೈಲು ಸಂಖ್ಯೆ 57661 ರಾಯಚೂರು-ವಿಜಯಪುರ ಪ್ಯಾಸೆಂಜರ್ ವಾಡಿ-ಹೋಟ್ಗಿ-ವಿಜಯಪುರ ಮೂಲಕ ಮಾರ್ಗ ಬದಲಾವಣೆ ಮಾಡಲಾಗುತ್ತದೆ.&lt;/p&gt;&lt;p&gt;ಕೆಳಗಿನ ರೈಲುಗಳನ್ನು ನಿರ್ದಿಷ್ಟಪಡಿಸಿದಂತೆ ಮರುಹೊಂದಿಸಲಾಗುತ್ತದೆ. ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ ಜೂ. 10 ರಂದು 2 ಗಂಟೆ 20 ನಿಮಿಷಗಳ ಕಾಲ ಮತ್ತು ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 2 ಗಂಟೆ 15 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ.&lt;/p&gt;&lt;p&gt;ರೈಲು ಸಂಖ್ಯೆ 01465 ಸೋಲಾಪುರ- ಕಲಬುರಗಿ ಮತ್ತು ರೈಲು ಸಂಖ್ಯೆ 01466 ಕಲಬುರಗಿ- ಸೋಲಾಪುರ ಈ ರೈಲು ಜೂ. 10 ರಂದು ರದ್ದು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep"/>
        </item>
        <item>
            <title><![CDATA[ಮಂತ್ರಾಲಯಕ್ಕೆ ಹೋಗೋ ಭಕ್ತರ ಗಮನಕ್ಕೆ, ಕರ್ನಾಟಕದ ಛತ್ರದಲ್ಲಿ ಬತ್ತಿದ ಬೋರ್‌ವೆಲ್, ನೀರಿನ ಅಭಾವಕ್ಕೆ ವಸತಿಗೃಹ ಬಂದ್!]]></title>
            <link>https://kannada.asianetnews.com/karnataka-districts/mantralaya-karnataka-choultry-shuts-50-rooms-due-to-water-crisis-gdp/articleshow-6askfth</link>
            <guid isPermaLink="true">https://kannada.asianetnews.com/karnataka-districts/mantralaya-karnataka-choultry-shuts-50-rooms-due-to-water-crisis-gdp/articleshow-6askfth</guid>
            <pubDate>Mon, 25 May 2026 13:28:17 +0530</pubDate>
            <description><![CDATA[ಮಂತ್ರಾಲಯದಲ್ಲಿ ಕರ್ನಾಟಕದ ಭಕ್ತರಿಗಾಗಿ ನಿರ್ಮಿಸಲಾದ ಕರ್ನಾಟಕ ಛತ್ರವು ತೀವ್ರ ನೀರಿನ ಅಭಾವದಿಂದಾಗಿ ಮುಚ್ಚಲ್ಪಟ್ಟಿದೆ. ಬೋರ್&zwnj;ವೆಲ್&zwnj;ಗಳ ವೈಫಲ್ಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 50 ಕೋಣೆಗಳ ವಸತಿ ಗೃಹಕ್ಕೆ ಬೀಗ ಹಾಕಲಾಗಿದ್ದು, ರಾಯರ ದರ್ಶನಕ್ಕೆ ಬರುವ ಭಕ್ತರು ವಸತಿ ಸೌಕರ್ಯವಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksf27623vvv1qd5f13b07g1s,imgname-mantralaya-karnataka-choultry-1779695851587.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು: &lt;/strong&gt;ಮಂತ್ರಾಲಯಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತರಿಗೆ ವಸತಿ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಸುಸಜ್ಜಿತ ಕರ್ನಾಟಕ ಛತ್ರವನ್ನು (ವಸತಿ ಗೃಹ) ನಿರ್ಮಿಸಲಾಗಿದೆ. ರಾಯರ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಇಲ್ಲಿ ಒಟ್ಟು 50 ಕೋಣೆಗಳ (ರೂಂ) ವ್ಯವಸ್ಥೆ ಇದೆ. ಆದರೆ, ಪ್ರಸ್ತುತ ಈ ವಸತಿ ಗೃಹದಲ್ಲಿ ತೀವ್ರ ಸ್ವರೂಪದ ನೀರಿನ ಅಭಾವ ತಲೆದೋರಿದೆ. ಛತ್ರದ ಆವರಣದಲ್ಲಿರುವ 50 ರೂಂಗಳಿಗೆ ನೀರು ಸರಬರಾಜು ಮಾಡಲು ಎರಡು ಬೋರ್&zwnj;ವೆಲ್&zwnj;ಗಳನ್ನು ಅವಲಂಬಿಸಲಾಗಿತ್ತು. ಆದರೆ, ಸಮರ್ಪಕ ನಿರ್ವಹಣೆಯಿಲ್ಲದೆ ಇದರಲ್ಲಿ ಒಂದು ಬೋರ್&zwnj;ವೆಲ್ ಸಂಪೂರ್ಣವಾಗಿ ಕೆಟ್ಟು ನಿಂತಿದೆ. ಇನ್ನುಳಿದ ಮತ್ತೊಂದು ಬೋರ್&zwnj;ವೆಲ್&zwnj;ನಲ್ಲಿ ಬೇಸಿಗೆಯ ಭೀಕರ ತಾಪ ಹಾಗೂ ಅಂತರ್ಜಲ ಕುಸಿತದಿಂದಾಗಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆ ಬೋರ್&zwnj;ವೆಲ್&zwnj;ನಿಂದ ಆಗೊಮ್ಮೆ ಈಗೊಮ್ಮೆ ಅಲ್ಪಸ್ವಲ್ಪ ನೀರು ಬರುತ್ತಿದೆಯಾದರೂ, ಅದು ಇಡೀ ವಸತಿ ಗೃಹದ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.&lt;/p&gt;&lt;h2&gt;ಅಧಿಕಾರಿಗಳ ನಿರ್ಲಕ್ಷ್ಯ - ಭಕ್ತರ ಆಕ್ರೋಶ:&lt;/h2&gt;&lt;p&gt;ಬೋರ್&zwnj;ವೆಲ್ ರಿಪೇರಿ ಹಾಗೂ ಅದಕ್ಕೆ ಮರುಪೂರಣ (ರಿಚಾರ್ಜ್) ವ್ಯವಸ್ಥೆ ಮಾಡುವಲ್ಲಿ ಸಂಬಂಧಪಟ್ಟ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯ ಮತ್ತು ಮೈಗಳ್ಳತನದಿಂದಾಗಿ ಬೋರ್&zwnj;ವೆಲ್ ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿದೆ. ಇದರ ನೇರ ಪರಿಣಾಮವನ್ನು ರಾಯರ ದರ್ಶನಕ್ಕೆ ಸಾಲು ಸಾಲಾಗಿ ಬರುತ್ತಿರುವ ಭಕ್ತರು ಎದುರಿಸುವಂತಾಗಿದೆ. ದೂರದ ಊರುಗಳಿಂದ ನೆಮ್ಮದಿಯ ದರ್ಶನಕ್ಕಾಗಿ ಬರುವ ಭಕ್ತರು, ಕರ್ನಾಟಕ ಛತ್ರದಲ್ಲಿ ಕೋಣೆಗಳು ಸಿಗದೇ ತೀವ್ರ ಪರದಾಡುವಂತಾಗಿದೆ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಭಕ್ತರು ವಸತಿ ಸೌಕರ್ಯವಿಲ್ಲದೆ ನಿರಾಶರಾಗಿ ವಾಪಸ್ ಹೋಗುತ್ತಿದ್ದಾರೆ.&lt;/p&gt;&lt;h2&gt;ವಸತಿ ಗೃಹಕ್ಕೆ ಬೀಗ!&lt;/h2&gt;&lt;p&gt;ನೀರಿನ ತೀವ್ರ ಅಭಾವವಿರುವ ಕಾರಣ 50 ಕೋಣೆಗಳಿಗೂ ಸದ್ಯ ಬೀಗ ಹಾಕಲಾಗಿದ್ದು, ಭಕ್ತರಿಗೆ ಕೋಣೆಗಳನ್ನು ನೀಡಲಾಗುತ್ತಿಲ್ಲ. ಈ ಕುರಿತು ವಸತಿ ಗೃಹದ ಸಿಬ್ಬಂದಿಯು ಪ್ರವೇಶ ದ್ವಾರದಲ್ಲಿ, ನೀರಿನ ಅಭಾವವಿರುವುದರಿಂದ ರೂಂಗಳನ್ನು ನೀಡಲಾಗುವುದಿಲ್ಲ. ದಯವಿಟ್ಟು ಭಕ್ತಾದಿಗಳು ಸಹಕರಿಸಬೇಕು ಎಂದು ಸಾರ್ವಜನಿಕ ಪ್ರಕಟಣೆಯ ನೋಟಿಸ್ ಬೋರ್ಡ್ ಹಾಕಿದ್ದಾರೆ. ಸಿಬ್ಬಂದಿಯ ಈ ಧೋರಣೆ ಮತ್ತು ವ್ಯವಸ್ಥೆಯ ವೈಫಲ್ಯಕ್ಕೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;ತಕ್ಷಣದ ಕ್ರಮಕ್ಕೆ ಭಕ್ತರ ಆಗ್ರಹ:&lt;/h2&gt;&lt;p&gt;ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಕರ್ನಾಟಕದಿಂದ ಧಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಅಧೀನದಲ್ಲಿರುವ ವಸತಿ ಗೃಹವೇ ನಿರ್ವಹಣೆಯಿಲ್ಲದೆ ಮುಚ್ಚಿರುವುದು ದುರದೃಷ್ಟಕರ. ಆದ್ದರಿಂದ, ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಕೆಟ್ಟುಹೋಗಿರುವ ಬೋರ್&zwnj;ವೆಲ್&zwnj;ಗಳನ್ನು ಸಮರೋಪಾದಿಯಲ್ಲಿ ರಿಪೇರಿ ಮಾಡಿಸಬೇಕು. ವಸತಿ ಗೃಹಕ್ಕೆ ಶಾಶ್ವತ ನೀರಿನ ಸೌಕರ್ಯ&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mantralaya-karnataka-choultry-shuts-50-rooms-due-to-water-crisis-gdp/articleshow-6askfth"/>
        </item>
        <item>
            <title><![CDATA[Puneeth kerehalli: ರಾಯರ ಮಠಕ್ಕೆ ಹೋಗಿದ್ದ ಪುನೀತ್ ಕೆರೆಹಳ್ಳಿಗೆ ರಾಯಚೂರು ಪೊಲೀಸರ ದರ್ಶನ! ಮಂತ್ರಾಲಯದಲ್ಲಿ ನೋಟಿಸ್ ಕೊಟ್ಟಿದ್ದು ಸರಿಯೇ?]]></title>
            <link>https://kannada.asianetnews.com/state/puneeth-kerehalli-row-raichur-police-notice-at-mantralayam-while-he-was-visiting-raghavendra-swamy-rav/articleshow-7dfen7i</link>
            <guid isPermaLink="true">https://kannada.asianetnews.com/state/puneeth-kerehalli-row-raichur-police-notice-at-mantralayam-while-he-was-visiting-raghavendra-swamy-rav/articleshow-7dfen7i</guid>
            <pubDate>Wed, 10 Jun 2026 08:53:56 +0530</pubDate>
            <description><![CDATA[&lt;p&gt;ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳಿದ್ದ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ, ರಾಯಚೂರಿನ ಹಿಂದೂ ಮಹೋತ್ಸವಕ್ಕೆ ಆಗಮಿಸದಂತೆ ರಾಯಚೂರು ಪೊಲೀಸರು ನೋಟಿಸ್ ನೀಡಿದ್ದಾರೆ. ಇದು ಆಂಧ್ರಪ್ರದೇಶದ ವ್ಯಾಪ್ತಿಯಾಗಿದ್ದು, ಇಲ್ಲಿ ನೋಟಿಸ್ ನೀಡಿದ್ದಕ್ಕೆ ಕೆರೆಹಳ್ಳಿ ಪೊಲೀಸರ ನಡುವೆ ವಾಗ್ವಾದ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktqrebbsc9adhtz77jsszcjp,imgname-----------------------2026-06-10t084457.653-1781061332345.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು(ಜೂ.10):&lt;/strong&gt; ಹಿಂದೂಪರ ಹೋರಾಟಗಾರ ಪುನೀತ್&zwnj; ಕೆರೆಹಳ್ಳಿ(Puneeth kerehalli)ಯವರು ರಾಘವೇಂದ್ರ ಸ್ವಾಮಿ(Mantralaya Raghavendra temple)ಯ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಆಗಮಿಸಿದ್ದ ವೇಳೆ, ರಾಯಚೂರಿನ ಹಿಂದೂ ಸಮ್ಮೇಳನಕ್ಕೆ ಆಗಮಿಸದಂತೆ ರಾಯಚೂರು ಪೊಲೀಸರು ನೋಟಿಸ್&zwnj; ನೀಡಿದ ವಿಷಯವಾಗಿ ಪುನೀತ್&zwnj; ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.&lt;/p&gt;&lt;h2&gt;ರಾಯಚೂರು ಪೊಲೀಸರ ವಿರುದ್ಧ ಪುನೀತ್ ಗರಂ&lt;/h2&gt;&lt;p&gt;ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಿಂತ ಮುಂಚೆ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಪುನೀತ್&zwnj; ಕೆರೆಹಳ್ಳಿ ಅವರ ಬಳಿಗೆ ಬಂದ ರಾಯಚೂರು ಜಿಲ್ಲೆ ಪೊಲೀಸರು, ಹಿಂದೂ ಮಹೋತ್ಸವಕ್ಕೆ ಬರದಂತೆ ನೋಟಿಸ್&zwnj; ನೀಡಿದರು. ಇದರಿಂದ ಸಿಟ್ಟಿಗೆದ್ದ ಪುನೀತ್&zwnj; ಕೆರೆಹಳ್ಳಿ, ಇದು ಆಂಧ್ರಪ್ರದೇಶ. ರಾಯರ ಮಠಕ್ಕೆ ಬಂದಿದ್ದೇನೆ. ರಾಯಚೂರಿಗೆ ಬಂದ ಮೇಲೆ ನೀವು ನಿಮ್ಮ ಅಧಿಕಾರ ಚಲಾಯಿಸಿ ಎಂದು ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;ಘಟನೆಯ ವಿಡಿಯೋ ವೈರಲ್:&lt;/h2&gt;&lt;p&gt;ಘಟನೆಯ ವಿಡಿಯೋ ವೈರಲ್ ಆಗಿದ್ದು, ಹಿಂದೂಪರ ಮುಖಂಡನಿಗೆ ನೋಟಿಸ್ ಕೊಡುವ ಪೊಲೀಸರ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿನ್ನೂ ರಾಯಚೂರು ಗಡಿಪ್ರವೇಶ ಮಾಡಿಲ್ಲ. ಮಂತ್ರಾಲಯ ಆಂಧ್ರ ವ್ಯಾಪ್ತಿಯಲ್ಲಿದೆ. ಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಹೋಗುವಾಗ ಹಿಂಬಾಲಿಸಿ ಪುನೀತ್ ಕೆರೆಹಳ್ಳಿಯವರಿಗೆ ನೋಟಿಸ್ ನೀಡುತ್ತಾರೆಂದರೆ ಏನರ್ಥ? ರಾಜ್ಯ ಸರ್ಕಾರದ ಒತ್ತಡಕ್ಕೊಳಗಾಗಿ ಕಾನೂನು ಪಾಲಿಸದೆ ಮೇಲಿನವರು ಹೇಳಿದಂತೆ ಕೇಳುವ ಪೊಲೀಸರು ಸುಖಾಸುಮ್ಮನೆ ಪುನೀತ್ ಕೆರೆಹಳ್ಳಿಯವರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇನ್ನೊಂದೆಡೆ ಮಂಗಳೂರಿನವರು ಎಂದು ಹೇಳಲಾದ ಅನ್ಯಕೋಮಿನ ವ್ಯಕ್ತಿಗಳು ಬಹಿರಂಗವಾಗಿ ಪುನಿತ್ ಕೆರೆಹಳ್ಳಿಯವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅವರ ಫೋಟೋ ಫೋನ್ ನಂಬರ್ ಸಹಿತ ಇದ್ದರೂ, ಪೊಲೀಸರು ಯಾಕೆ ಬಂಧಿಸಿಲ್ಲ? ರಕ್ಷಣೆ ನೀಡಬೇಕಾದ ನೀವು(ಪೊಲೀಸ್ ಇಲಾಖೆ) ಅಧಿಕಾರದಲ್ಲಿರುವ ರಾಜಕಾರಣಿಗಳ ಮೂಗಿನ ನೇರಕ್ಕೆ ನಡೆದುಕೊಳ್ಳುವ ಮೂಲಕ ನೀವು ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದೀರಿ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಕಡೆ ಜೀವ ಬೆದರಿಕೆ ಹಾಕಿದರೂ ಬಂಧಿಸದ ಪೊಲೀಸರು, ಇನ್ನೊಂದೆಡೆ ಹಿಂದೂ ಕಾರ್ಯಕ್ರಮಕ್ಕೆ ಹೋಗದಂತೆ ನಿರ್ಬಂಧಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt; Suppressing the Voice of Democracy: Misuse of Law Against a Hindu Activist?&amp;nbsp;In a democratic system, every Indian citizen has the constitutional right to travel anywhere within the country and raise their voice. However, looking at recent events, it raises a serious concern:&hellip; pic.twitter.com/PSIeh1Rj4U&lt;/p&gt;&lt;p&gt;&mdash; Puneeth Kerehalli (@Puneeth74353549) June 9, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/puneeth-kerehalli-row-raichur-police-notice-at-mantralayam-while-he-was-visiting-raghavendra-swamy-rav/articleshow-7dfen7i"/>
        </item>
        <item>
            <title><![CDATA[GESCOM Shocking: ಕರೆಂಟ್‌ ಕಟ್‌ ಮಾಡಿದ್ದಕ್ಕೆ ಜೆಸ್ಕಾಂ ಕಚೇರಿಗೇ ಬೆಂಕಿ ಹಚ್ಚಿ ಸುಟ್ಟ ರೈತ!]]></title>
            <link>https://kannada.asianetnews.com/gallery/karnataka-districts/raichur-farmer-sets-fire-to-gescom-office-for-power-cut-rav-aez7tm5</link>
            <guid isPermaLink="true">https://kannada.asianetnews.com/gallery/karnataka-districts/raichur-farmer-sets-fire-to-gescom-office-for-power-cut-rav-aez7tm5</guid>
            <pubDate>Thu, 25 Jun 2026 05:22:05 +0530</pubDate>
            <description><![CDATA[&lt;p&gt;ಬಿಲ್&zwnj; ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಜೆಸ್ಕಾಂ ಸಿಬ್ಬಂದಿ ಕ್ರಮದಿಂದ ಕೋಪಗೊಂಡ ರೈತನೊಬ್ಬ ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್&zwnj; ಸರಬರಾಜು ಕಂಪನಿ) ಕಚೇರಿಗೇ ಬೆಂಕಿ ಇಟ್ಟ ಘಟನೆ ರಾಯಚೂರು ಜಿಲ್ಲೆಯ ಮಲ್ಲಟ ಗ್ರಾಮದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvy05jr9kesqm5p3m7czr0r7,imgname-----------------------2026-06-25t050805.937-1782344502025.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಲ್&zwnj; ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಜೆಸ್ಕಾಂ ಸಿಬ್ಬಂದಿ ಕ್ರಮದಿಂದ ಕೋಪಗೊಂಡ ರೈತನೊಬ್ಬ ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್&zwnj; ಸರಬರಾಜು ಕಂಪನಿ) ಕಚೇರಿಗೇ ಬೆಂಕಿ ಇಟ್ಟ ಘಟನೆ ರಾಯಚೂರು ಜಿಲ್ಲೆಯ ಮಲ್ಲಟ ಗ್ರಾಮದಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಬಿಲ್&zwnj; ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಜೆಸ್ಕಾಂ ಸಿಬ್ಬಂದಿ ಕ್ರಮದಿಂದ ಕೋಪಗೊಂಡ ರೈತನೊಬ್ಬ ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್&zwnj; ಸರಬರಾಜು ಕಂಪನಿ) ಕಚೇರಿಗೇ ಬೆಂಕಿ ಇಟ್ಟ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಜೆಸ್ಕಾಂ ಉಪ ಕಚೇರಿಯಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಹಳ್ಳಿಹೊಸೂರು ಗ್ರಾಮದ ಶಿವಪ್ಪ ಬಸನಗೌಡ ಗಡಿಗಿ ಎಂಬಾತ 11 ಸಾವಿರ ರು.ಗಳ ವಿದ್ಯುತ್ ಬಿಲ್&zwnj; ಬಾಕಿ ಉಳಿಸಿಕೊಂಡಿದ್ದ. ಬಾಕಿ ಬಿಲ್&zwnj; ಹಣ ಪಾವತಿಸುವಂತೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು.&amp;nbsp;&lt;/p&gt;&lt;img&gt;&lt;p&gt;ಆದರೂ, ಬಾಕಿ ಬಿಲ್&zwnj; ಹಣ ಪಾವತಿಸಿರಲಿಲ್ಲ. ಹೀಗಾಗಿ, ಜೆಸ್ಕಾಂ ಸಿಬ್ಬಂದಿ ರಿಚರ್ಡ್ ಎಂಬುವರು ಮೇಲಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.&lt;/p&gt;&lt;img&gt;&lt;p&gt;ಇದರಿಂದ ಆಕ್ರೋಶಗೊಂಡ ಶಿವಪ್ಪ ಬುಧವಾರ ಮಲ್ಲಟ ಗ್ರಾಮದ ಜೆಸ್ಕಾಂ ಉಪ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ. ಹಲ್ಲೆಗೆ ಹೆದರಿ ಸಿಬ್ಬಂದಿ ತಪ್ಪಿಸಿಕೊಂಡು ಕಚೇರಿಯಿಂದ ಹೊರಗೆ ಬರುತ್ತಿದ್ದಂತೆ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪುಂಡಾಟ ಮೆರೆದಿದ್ದಾನೆ.&lt;/p&gt;&lt;img&gt;&lt;p&gt;ಇದರಿಂದಾಗಿ ಕಚೇರಿಯ ದಾಖಲೆಗಳು, ಕಂಪ್ಯೂಟರ್, ಲ್ಯಾಪ್&zwnj;ಟಾಪ್, ಬ್ಯಾಟರಿ ಮತ್ತು ನಗದು ಸೇರಿದಂತೆ ಸುಮಾರು 1 ಲಕ್ಷ ರು. ಮೌಲ್ಯದ ಸಾರ್ವಜನಿಕ ಸ್ವಾಮ್ಯದ ಆಸ್ತಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿರವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/raichur-farmer-sets-fire-to-gescom-office-for-power-cut-rav-aez7tm5"/>
        </item>
        <item>
            <title><![CDATA[TB Dam ನೋಡೋಕೆ ಮುಗಿಬಿದ್ದ ಪ್ರವಾಸಿಗರು!; ಲೇಸರ್ ಲೈಟಿಂಗ್ ನೆರಳಿನಲ್ಲಿ ಚಿನ್ನದ ನದಿಯಂತಾದ ತುಂಗಭದ್ರಾ ಒಡಲು!]]></title>
            <link>https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo</link>
            <guid isPermaLink="true">https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo</guid>
            <pubDate>Wed, 24 Jun 2026 20:59:22 +0530</pubDate>
            <description><![CDATA[&lt;p&gt;ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್&zwnj;ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvx3pn214ctd15f65z9mtdn3,imgname-tungabhadra-dam--2--1782314652737.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್&zwnj;ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.&amp;nbsp;&lt;/p&gt;&lt;img&gt;&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ನಾಳೆ (ಜೂನ್ 25) ಐತಿಹಾಸಿಕ ಕ್ಷಣವೊಂದು ದಾಖಲಾಗಲಿದೆ. ಜಲಾಶಯಕ್ಕೆ ಅಳವಡಿಸಲಾಗಿರುವ ನೂತನ ಕ್ರಸ್ಟ್ ಗೇಟ್&zwnj;ಗಳ ಅಧಿಕೃತ ಲೋಕಾರ್ಪಣೆ ಕಾರ್ಯಕ್ರಮ ನಾಳೆ ನೆರವೇರಲಿದ್ದು, ಈ ಸಂಭ್ರಮದ ಹಿನ್ನೆಲೆಯಲ್ಲಿ ಇಡೀ ಜಲಾಶಯವನ್ನು ವಿದ್ಯುತ್ ದೀಪಾಲಂಕಾರದಿಂದ ಅತ್ಯಂತ ಆಕರ್ಷಕವಾಗಿ ಶೃಂಗರಿಸಲಾಗಿದೆ. ಸಿಎಂ ಡಿಕೆ ಶಿವಕುಮಾರ್&zwnj;, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್&zwnj; ರೆಡ್ಡಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದರೊಂದಿಗೆ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿಆರ್&zwnj; ಪಾಟೀಲ್&zwnj; ಕೂಡ ಇರಲಿದ್ದಾರೆ.&lt;/p&gt;&lt;img&gt;&lt;p&gt;ಹೊಸ ಕ್ರಸ್ಟ್ ಗೇಟ್&zwnj;ಗಳ ಲೋಕಾರ್ಪಣೆಯ ಸಂಭ್ರಮಕ್ಕಾಗಿ ತುಂಗಭದ್ರಾ ಆಣೆಕಟ್ಟನ್ನು ವಧುವಿನಂತೆ ಸಜ್ಜುಗೊಳಿಸಲಾಗಿದೆ. ಇಡೀ ಜಲಾಶಯದ ಆಣೆಕಟ್ಟಿನ ಮೇಲೆ ಮೈಲಿಗಟ್ಟಲೆ ಸಾಲು ಸಾಲಾಗಿ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿಯ ವೇಳೆಗೆ ಜಲಾಶಯದ ನೀರು ಮತ್ತು ಗೋಡೆಗಳ ಮೇಲೆ ಪ್ರತಿಫಲಿಸುತ್ತಿರುವ ದೀಪಗಳ ಬೆಳಕು ನೋಡುಗರ ಕಣ್ಣು ಕೋರೈಸುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಕಳೆದ ಅವಧಿಯಲ್ಲಿ ಜಲಾಶಯದ ಪ್ರಮುಖ ಕ್ರಸ್ಟ್ ಗೇಟ್ (ಗೇಟ್ ನಂ. 19) ಕೊಚ್ಚಿ ಹೋಗಿ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ, ಯುದ್ಧೋಪಾದಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಸ್ಟಾಪ್ ಲಾಗ್ ಮತ್ತು ಕ್ರಸ್ಟ್ ಗೇಟ್&zwnj;ಗಳನ್ನು ಸಿದ್ಧಪಡಿಸಲಾಗಿತ್ತು. ಈ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಳೆ ಅಧಿಕೃತವಾಗಿ ಇವುಗಳನ್ನು ಸಾರ್ವಜನಿಕ ಸೇವೆಗೆ ಹಾಗೂ ರೈತರ ಹಿತದೃಷ್ಟಿಯಿಂದ ಲೋಕಾರ್ಪಣೆ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಹೊಸ ಗೇಟ್&zwnj;ಗಳ ಉದ್ಘಾಟನೆಗೆ ಸಾಕ್ಷಿಯಾಗಲಿರುವ ವಿಜಯನಗರದ ತುಂಗಭದ್ರಾ ಆಣೆಕಟ್ಟಿನ ಉದ್ದಕ್ಕೂ ಎಲ್ಇಡಿ (LED) ದೀಪಗಳ ಭವ್ಯ ಮಾಲೆಯನ್ನು ಹಾಕಲಾಗಿದೆ. ವಿವಿಧ ಬಣ್ಣಗಳ ಲೇಸರ್ ಮತ್ತು ಫ್ಲಡ್ ಲೈಟ್&zwnj;ಗಳ ನೆರಳಿನಾಟವು ಜಲಾಶಯಕ್ಕೆ ಹೊಸ ಕಳೆಯನ್ನು ತಂದಿದ್ದು, ಜಲಾಶಯದ ಹಿನ್ನೀರು ಚಿನ್ನದ ನದಿಯಂತೆ ಮಿನುಗುತ್ತಿದೆ.&lt;/p&gt;&lt;img&gt;&lt;p&gt;ಹಿಂದೆ ಗೇಟ್ ಮುರಿದು ಕೋಟ್ಯಂತರ ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗಿ, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭಾರಿ ಆತಂಕ ಮೂಡಿಸಿತ್ತು. ಆದರೆ ಈಗ ಇಂಜಿನಿಯರ್&zwnj;ಗಳು ಮತ್ತು ತಜ್ಞರ ಶ್ರಮದಿಂದ ಹೊಸ ಗೇಟ್&zwnj;ಗಳು ಯಶಸ್ವಿಯಾಗಿ ಅಳವಡಿಕೆಯಾಗಿ, ಡ್ಯಾಂ ಸಂಪೂರ್ಣ ಸುರಕ್ಷಿತವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯ ಕಾರ್ಯಕ್ರಮವು ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;img&gt;&lt;p&gt;ಜಲಾಶಯದ ಈ ಅಭೂತಪೂರ್ವ ದೀಪಾಲಂಕಾರದ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಪ್ರವಾಸಿಗರು ಇಂದಿನಿಂದಲೇ ಜಲಾಶಯದತ್ತ ಧಾವಿಸುತ್ತಿದ್ದಾರೆ. ಮುಸ್ಸಂಜೆಯ ವೇಳೆ ಇಡೀ ಆಣೆಕಟ್ಟು ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್&zwnj;ಗಳಲ್ಲಿ ಸೆರೆಹಿಡಿಯುತ್ತಿದ್ದು, ಪ್ರವಾಸಿ ತಾಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;img&gt;&lt;p&gt;ನಾಳೆ ನಡೆಯಲಿರುವ ಈ ಕ್ರಸ್ಟ್ ಗೇಟ್&zwnj;ಗಳ ಉದ್ಘಾಟನೆಯು ಕೇವಲ ಒಂದು ತಾಂತ್ರಿಕ ಕಾರ್ಯಕ್ರಮವಾಗಿರದೆ, ಕೋಟ್ಯಂತರ ಎಕರೆ ಕೃಷಿ ಭೂಮಿಯ ಜಲ ಭದ್ರತೆಯ ಸಂಕೇತವಾಗಿದೆ. ಯಾವುದೇ ತಾಂತ್ರಿಕ ದೋಷ ಬರದಂತೆ ಅತ್ಯಂತ ಭದ್ರವಾಗಿ ಈ ಗೇಟ್&zwnj;ಗಳನ್ನು ವಿನ್ಯಾಸಗೊಳಿಸಲಾಗಿದ್ದು, ನಾಳೆಯಿಂದ ಜಲಾಶಯವು ಸಂಪೂರ್ಣ ಸಾಮರ್ಥ್ಯದೊಂದಿಗೆ ನೀರನ್ನು ಸಂಗ್ರಹಿಸಲು ಸನ್ನದ್ಧವಾಗಲಿದೆ.&lt;/p&gt;]]></content:encoded>
            <category>raichur</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo"/>
        </item>
        <item>
            <title><![CDATA[ರಾಯಚೂರು ಜಿಲ್ಲೆಯ 29 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ: ಜಿಲ್ಲಾಧಿಕಾರಿಗಳಿಂದ ಆದೇಶ]]></title>
            <link>https://kannada.asianetnews.com/karnataka-districts/muharram-celebrations-banned-in-29-villages-of-raichur-district-order-from-the-district-collector-mrq/articleshow-fko5oqn</link>
            <guid isPermaLink="true">https://kannada.asianetnews.com/karnataka-districts/muharram-celebrations-banned-in-29-villages-of-raichur-district-order-from-the-district-collector-mrq/articleshow-fko5oqn</guid>
            <pubDate>Thu, 18 Jun 2026 09:22:49 +0530</pubDate>
            <description><![CDATA[&lt;p&gt;ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯ &amp;nbsp;29 ಗ್ರಾಮಗಳಲ್ಲಿ ಮೊಹರಂ ಹಬ್ಬದ ಸಾರ್ವಜನಿಕ ಆಚರಣೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿಗಳು ಕರ್ನಾಟಕ ಪೋಲೀಸ್ ಕಾಯ್ದೆ 1963ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcdeevvxkfkcr6hy2yg7btd,imgname-moharram-1781754444667.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ಜಿಲ್ಲೆಯ ಸಿಂಧನೂರು, ಮಾನ್ವಿ, ಸಿರವಾರ, ದೇವದುರ್ಗ ಹಾಗೂ ಮಸ್ಕಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೊಹರಂ ಹಬ್ಬವನ್ನು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ಕರ್ನಾಟಕ ಪೋಲೀಸ್ ಕಾಯ್ದೆ 1963ರ ಕಲಂ 35ರನ್ವಯ ನಿಷೇಧಿಸಲಾಗಿದೆ.&lt;/p&gt;&lt;h2&gt;&lt;strong&gt;ಯಾವ ಗ್ರಾಮಗಳಲ್ಲಿ ನಿಷೇಧ?&lt;/strong&gt;&lt;/h2&gt;&lt;p&gt;ಜಿಲ್ಲೆಯ ಸಿಂಧನೂರು ಪೊಲೀಸ್ ಠಾಣೆ ವ್ಯಾಪ್ತಿಯ ಗಿಣಿವಾರ, ಉಪ್ಪಳ, ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ನಿಡಿಗೊಳ-ತಿಡಿಗೋಳ, ಹತ್ತಿಗುಡ್ಡ, ಕುರಕುಂದಾ, ಚಿಕ್ಕಬೇರ್ಗಿ, ಬಳಗಾನೂರು ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಬಳ್ (ಯು), ರಾಗಲಪರ್ವಿ, ಮಾನವಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿಹಾಳ, ಜಾನೇಕಲ್, ಮದ್ಲಾಪೂರು, ಜಾಗೀರ ಪನ್ನೂರು, ಮಲ್ಲಿನ ಮಡಗು, ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯ ಸಿರವಾರ ಪಟ್ಟಣ, ಕಡದಿನ್ನಿ, ಬೊಮ್ಮನಾಳ, ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕವಿತಾಳ ಪಟ್ಟಣ, ಹಿರೆಬಾದರದಿನ್ನಿ, ಬಾಗಲವಾಡ, ಅಮೀನಗಡ, ಗೂಗೆಬಾಳ, ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ತಲೇಖಾನ್, ಸಂತೆಕಲ್ಲೂರು, ಮುಸಲಿ ಕಾರಲಕುಂಟೆ, ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂಚೋಡಿ, ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಖಾನಾಪೂರು, ಬುದ್ದಿನ್ನಿ, ರಾಮದುರ್ಗ, ಹಿರೇಬೂದೂರು ಸೇರಿದಂತೆ ಒಟ್ಟು 29 ಗ್ರಾಮಗಳು&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Kartavya App: ಕರ್ತವ್ಯ ಆ್ಯಪ್&zwnj;ನಲ್ಲಿ ನೋಂದಣಿ ಮಾಡದ 2.13 ಲಕ್ಷ ನೌಕರರು! ಸಿಎಂ ಸೂಚನೆಗೂ ಬೆಲೆ ಇಲ್ಲವೇ?&lt;/strong&gt;&lt;/p&gt;&lt;h3&gt;&lt;strong&gt;ಜಿಲ್ಲಾಧಿಕಾರಿಗಳಿಂದ ಆದೇಶ&lt;/strong&gt;&lt;/h3&gt;&lt;p&gt;ಸಾರ್ವಜನಿಕರ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಬುಧವಾರದಿಂದ ಜೂ.26 ರವರೆಗೆ ಆಚರಿಸಲಿರುವ ಮೋಹರಂ ಹಬ್ಬವನ್ನು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಈ ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಮೆರವಣಿಗೆಯನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಪೂವಿತಾ ಎಸ್. ಅವರು ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪುಲಸಾನಿಒಡ್ಡು ಗ್ರಾಮದಲ್ಲಿ ಅಪರೂಪದ ವೀರರಗುಡಿ ಪತ್ತೆ; ರಾಜರ ಬೇಟೆಯ ಪರಾಕ್ರಮ ಅನಾವರಣ&lt;/strong&gt;&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/muharram-celebrations-banned-in-29-villages-of-raichur-district-order-from-the-district-collector-mrq/articleshow-fko5oqn"/>
        </item>
        <item>
            <title><![CDATA[ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: ರಾಯರ ದರ್ಶನ ಸುಲಭ]]></title>
            <link>https://kannada.asianetnews.com/gallery/karnataka-districts/indian-railways-mangaluru-central-to-mantralaya-direct-special-express-train-service-for-four-weeks-mrq-gbmzhi3</link>
            <guid isPermaLink="true">https://kannada.asianetnews.com/gallery/karnataka-districts/indian-railways-mangaluru-central-to-mantralaya-direct-special-express-train-service-for-four-weeks-mrq-gbmzhi3</guid>
            <pubDate>Sat, 06 Jun 2026 06:50:53 +0530</pubDate>
            <description><![CDATA[&lt;p&gt;ಜೂನ್ ತಿಂಗಳ ಪ್ರಯಾಣಿಕರ ದಟ್ಟಣೆ ನಿವಾರಿಸಲು ಭಾರತೀಯ ರೈಲ್ವೆ ಇಲಾಖೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್&zwnj; ರೈಲುಗಳ ಸೇವೆಯನ್ನು ಘೋಷಿಸಿದೆ. ಯಲಹಂಕ, ಕೆಆರ್ ಪುರಂ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktd7em5c4wh3891yacknghy3,imgname-mangaluru-to-mantralaya--2--1780707971244.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೂನ್ ತಿಂಗಳ ಪ್ರಯಾಣಿಕರ ದಟ್ಟಣೆ ನಿವಾರಿಸಲು ಭಾರತೀಯ ರೈಲ್ವೆ ಇಲಾಖೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್&zwnj; ರೈಲುಗಳ ಸೇವೆಯನ್ನು ಘೋಷಿಸಿದೆ. ಯಲಹಂಕ, ಕೆಆರ್ ಪುರಂ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;&lt;img&gt;&lt;p&gt;ಜೂನ್ ತಿಂಗಳ ಪ್ರವಾಸ ಮತ್ತು ಉದ್ಯೋಗದ ನಿಮಿತ್ತ ರೈಲುಗಳಲ್ಲಿ ಉಂಟಾಗಿರುವ ಜನದಟ್ಟಣೆ ನಿಯಂತ್ರಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಹೆಚ್ಚುವರಿ ಸೀಟುಗಳ ಬೇಡಿಕೆ ಪೂರೈಸಲು 4 ರೌಂಡ್ ಟ್ರಿಪ್&zwnj;ಗಳ (ನಾಲ್ಕು ವಾರ ಕಾಲ) ವಿಶೇಷ ಎಕ್ಸ್&zwnj;ಪ್ರೆಸ್&zwnj; ರೈಲುಗಳ ಸೇವೆ ಪ್ರಕಟಿಸಲಾಗಿದೆ.&lt;/p&gt;&lt;img&gt;&lt;p&gt;ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 07097 ಹೈದರಾಬಾದ್-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್&zwnj;ಪ್ರೆಸ್&zwnj; ಜೂ.3 ರಿಂದ ಜೂ.24 ರವರೆಗೆ ಪ್ರತಿ ಬುಧವಾರ ಸಂಚರಿಸಲಿದೆ. ಈ ರೈಲು ಹೈದರಾಬಾದ್&zwnj;ನಿಂದ ಮುಂಜಾನೆ 4.20 ಕ್ಕೆ ಹೊರಟು, ಮರುದಿನ ಬೆಳಗ್ಗೆ 9.30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ&lt;/p&gt;&lt;img&gt;&lt;p&gt;ಪ್ರಯಾಣಿಕರ ಬಜೆಟ್ ಮತ್ತು ಆದ್ಯತೆಗಳಿಗೆ ತಕ್ಕಂತೆ ಈ ವಿಶೇಷ ರೈಲಿನಲ್ಲಿ ಒಟ್ಟು 24 ಬೋಗಿಗಳನ್ನು ಅಳವಡಿಸಲಾಗಿದೆ. 3 ಎಸಿ 2-ಟೈರ್ ಕೋಚ್&zwnj;ಗಳು, 5 ಎಸಿ 3-ಟೈರ್ ಕೋಚ್&zwnj;ಗಳು, ೧೦ ಸ್ಲೀಪರ್ ಕ್ಲಾಸ್ ಕೋಚ್&zwnj;ಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಕೋಚ್&zwnj;ಗಳು, 2 ಲಗೇಜ್ ಹಾಗೂ ಬ್ರೇಕ್ ವ್ಯಾನ್&zwnj;ಗಳು ಇರಲಿವೆ.&lt;/p&gt;&lt;img&gt;&lt;p&gt;ಈ ರೈಲು ತನ್ನ ಪ್ರಯಾಣದ ಅವಧಿಯಲ್ಲಿ ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ಸೇಡಂ, ಯಾದಗಿರಿ, ರಾಯಚೂರು, ಮಂತ್ರಾಲಯಂ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಸೇರಿದಂತೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಯೆಲಹಂಕ ಮತ್ತು ಕೃಷ್ಣರಾಜಪುರಂ (ಕೆಆರ್ ಪುರಂ), ಬಂಗಾರಪೇಟೆ ಹಾಗೂ ತಮಿಳುನಾಡು-ಕೇರಳದ ಸೇಲಂ, ಈರೋಡ್, ಪಾಲ್ಘಾಟ್, ಕೋಜಿಕೋಡ್, ಕಣ್ಣೂರು ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ನಿಲ್ಲಲಿದೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/indian-railways-mangaluru-central-to-mantralaya-direct-special-express-train-service-for-four-weeks-mrq-gbmzhi3"/>
        </item>
        <item>
            <title><![CDATA[Raichur: ಕಾಯಿಪಲ್ಲೆ ಖರೀದಿ ನೆಪದಲ್ಲಿ ಬಂಡಾರ ಎರಚಿ ಹಣವನ್ನು ದೋಚಿದ ಸಾಧುವೇಷದ ಕದೀಮರು]]></title>
            <link>https://kannada.asianetnews.com/gallery/karnataka-districts/gang-of-thieves-robbed-a-money-under-the-pretext-of-buying-vegetables-maski-raichur-mrq-gtloc6p</link>
            <guid isPermaLink="true">https://kannada.asianetnews.com/gallery/karnataka-districts/gang-of-thieves-robbed-a-money-under-the-pretext-of-buying-vegetables-maski-raichur-mrq-gtloc6p</guid>
            <pubDate>Mon, 08 Jun 2026 06:37:08 +0530</pubDate>
            <description><![CDATA[&lt;p&gt;ಮಸ್ಕಿ ಪಟ್ಟಣದಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಬಂದ ಐವರ ಗ್ಯಾಂಗ್, ಅಂಗಡಿ ಮಾಲೀಕನ ಮೇಲೆ ಕುಂಕುಮ ಮತ್ತು ಬಂಡಾರ ಎರಚಿ ಮತ್ತು ಬರುವಂತೆ ಮಾಡಿದೆ. ನಂತರ ಗಲ್ಲಾಪೆಟ್ಟಿಗೆಯಲ್ಲಿದ್ದ 1 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktjbyggbc27w8w97aj9wxr45,imgname-maski--1--1780880458251.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಸ್ಕಿ ಪಟ್ಟಣದಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಬಂದ ಐವರ ಗ್ಯಾಂಗ್, ಅಂಗಡಿ ಮಾಲೀಕನ ಮೇಲೆ ಕುಂಕುಮ ಮತ್ತು ಬಂಡಾರ ಎರಚಿ ಮತ್ತು ಬರುವಂತೆ ಮಾಡಿದೆ. ನಂತರ ಗಲ್ಲಾಪೆಟ್ಟಿಗೆಯಲ್ಲಿದ್ದ 1 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದೆ.&amp;nbsp;&lt;/p&gt;&lt;img&gt;&lt;p&gt;ಕಾಯಿಪಲ್ಲೆ (ತರಕಾರಿ) ಖರೀದಿ ನೆಪದಲ್ಲಿ ತರಕಾರಿ ಅಂಗಡಿಗೆ ಬಂದು ಕುಂಕುಮ, ಬಂಡಾರ ಎರಚಿ ಮತ್ತು ಬರುವಂತೆ ಮಾಡಿ 1 ಲಕ್ಷ ರು. ಹಣ ದೋಚಿದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆದಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;img&gt;&lt;p&gt;ಭಾನುವಾರ ಸಂತೆ ಹಿನ್ನೆಲೆಯಲ್ಲಿ ಸ್ಥಳೀಯ ಲಕ್ಷ್ಮೀ ವೆಂಕಟೇಶ್ವರ ಹೆಸರಿನ ತರಕಾರಿ ಮಳಿಗೆ ಆಗಮಿಸಿದ ಐದು ಜನರ ಗ್ಯಾಂಗ್ ಮಳಿಗೆ ಮಾಲೀಕ ಮೌನೇಶ್ ಜೊತೆಗೆ ವ್ಯಾಪಾರದ ಮಾತುಗಳನ್ನಾಡಿ ವಿವಿಧ ಕಾಯಿಪಲ್ಲೆಗಳನ್ನು ಪ್ಯಾಕ್ ಮಾಡಿಸಿದ್ದು, ಬ್ಯಾಗ್ ತೆಗೆದುಕೊಳ್ಳುವ ನೆಪದಲ್ಲಿ ಒಂದು ರೂಪಾಯಿ ನಾಣ್ಯವನ್ನು ಕೆಳಗಡೆ ಬಿಸಾಕಿದ್ದಾರೆ.&lt;/p&gt;&lt;img&gt;&lt;p&gt;ಈ ವೇಳೆ ಮೌನೇಶ್ ಕಾಯಿನ್ ತೆಗೆಯಲು ಕೆಳಗಡೆ ಬಗ್ಗಿ ಎದ್ದಾಗ ಗಮನ ಬೇರೆಡೆಗೆ ಸೆಳೆಯುವಂತೆ ಮಾಡಿ ಕುಂಕುಮ, ಬಂಡಾರವನ್ನು ಎಸೆದು ಮಾತು ಬಾರದಂತೆ ಮಾಡಿ ಸುಮ್ಮನೆ ಕುಳಿತಾಗ ಗಲ್ಲಾಪೆಟ್ಟಿಗೆಯಲ್ಲಿದ್ದ 1 ಲಕ್ಷ ರು. ನಗದನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಘಟನೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಸಿಂಧನೂರು ನಗರದಲ್ಲಿ ಸಹ ಸಾಧುವೇಷದಲ್ಲಿ ಆಗಮಿಸಿದ ಕೆಲವರು ಔಷಧಿ ಅಂಗಡಿಯಲ್ಲಿ ಕುಡಿಯುವ ನೀರಿನ ಕೇಳೋ ನೆಪದಲ್ಲಿ ಮಾಲೀಕರಿಗೆ ಹೂವು ಕೊಟ್ಟು ಮತ್ತು ಬರುವಂತೆ ಮಾಡಿ ವಂಚಿಸಿದ್ದ ಘಟನೆ ಮಾಸುವ ಮುನ್ನವೇ ಅಂತದ್ದೇ ಕೃತ್ಯ ಮಸ್ಕಿಯಲ್ಲಿ ನಡೆದಿರುವುದು ಆ ಭಾಗದ ವ್ಯಾಪಾರಿಗಳು, ಜನರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನೀರು ಕೇಳ್ತಾರೆ, ಹೂವಿನ ಆಶೀರ್ವಾದ ಮಾಡ್ತಾರೆ; ಮಾಯವಾಗುತ್ತೆ ನಿಮ್ಮಲ್ಲಿರೋ ಚಿನ್ನ-ಹಣ!&lt;/strong&gt;&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/gang-of-thieves-robbed-a-money-under-the-pretext-of-buying-vegetables-maski-raichur-mrq-gtloc6p"/>
        </item>
        <item>
            <title><![CDATA[ಮಂಗಳೂರು-ಹೈದರಾಬಾದ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು, 24ಕೋಚ್‌,4 ಟ್ರಿಪ್,3 ರಾಜ್ಯ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ]]></title>
            <link>https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx</link>
            <guid isPermaLink="true">https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx</guid>
            <pubDate>Tue, 02 Jun 2026 15:53:57 +0530</pubDate>
            <description><![CDATA[&lt;p&gt;ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆ ಘೋಷಿಸಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ಸುತ್ತಿನ ಸಂಚಾರ ನಡೆಸಲಿರುವ ಈ ರೈಲು, ತೆಲಂಗಾಣ, ಕರ್ನಾಟಕ, ಮತ್ತು ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0gwrjmwtt8zae7c8ssgk4mn,imgname-thane-railway-station-1752913693340.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆ ಘೋಷಿಸಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ಸುತ್ತಿನ ಸಂಚಾರ ನಡೆಸಲಿರುವ ಈ ರೈಲು, ತೆಲಂಗಾಣ, ಕರ್ನಾಟಕ, ಮತ್ತು ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;&lt;img&gt;&lt;p&gt;ಮಂಗಳೂರು: ಬೇಸಿಗೆಯ ನಂತರದ ದಿನಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ. ಈ ವಿಶೇಷ ರೈಲು ಪ್ರಸಕ್ತ ಜೂನ್ ತಿಂಗಳಿನಲ್ಲಿ ಒಟ್ಟು ನಾಲ್ಕು ಸುತ್ತಿನ (4 Trips) ಸಂಚಾರವನ್ನು ನಡೆಸಲಿದ್ದು, ತೆಲಂಗಾಣ, ಕರ್ನಾಟಕದ ಒಳನಾಡು ಹಾಗೂ ಕೇರಳದ ಕರಾವಳಿ ಭಾಗದ ಪ್ರಯಾಣಿಕರಿಗೆ ತಡೆರಹಿತ ಕನೆಕ್ಟಿವಿಟಿ ಕಲ್ಪಿಸಲಿದೆ.&lt;/p&gt;&lt;img&gt;&lt;p&gt;ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಈ ವಿಶೇಷ ರೈಲಿನ ಸಂಪೂರ್ಣ ವೇಳಾಪಟ್ಟಿ ಹಾಗೂ ಕೋಚ್&zwnj;ಗಳ ವಿವರ ಈ ಕೆಳಗಿನಂತಿದೆ:&lt;/p&gt;&lt;h3&gt;ರೈಲು ಸಂಚಾರದ ದಿನ ಹಾಗೂ ವೇಳಾಪಟ್ಟಿ&lt;/h3&gt;&lt;p&gt;1. ಹೈದರಾಬಾದ್&zwnj;ನಿಂದ ಮಂಗಳೂರಿಗೆ (ರೈಲು ಸಂಖ್ಯೆ: 07097)&lt;/p&gt;&lt;p&gt;ಸಂಚಾರದ ಅವಧಿ: ಜೂನ್ 3 ರಿಂದ ಜೂನ್ 24 ರವರೆಗೆ ಪ್ರತಿ ಬುಧವಾರ ಈ ರೈಲು ಚಲಿಸಲಿದೆ.&lt;/p&gt;&lt;p&gt;ಸಮಯ: ಹೈದರಾಬಾದ್ ನಿಲ್ದಾಣದಿಂದ ಬುಧವಾರ ಮುಂಜಾನೆ 4:20 ಕ್ಕೆ ಹೊರಡುವ ಈ ರೈಲು, ಮರುದಿನ (ಗುರುವಾರ) ಮುಂಜಾನೆ 9:30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.&lt;/p&gt;&lt;p&gt;2. ಮಂಗಳೂರಿನಿಂದ ಹೈದರಾಬಾದ್&zwnj;ಗೆ (ರೈಲು ಸಂಖ್ಯೆ: 07098) - ಹಿಂತಿರುಗುವ ಪ್ರಯಾಣ&lt;/p&gt;&lt;p&gt;ಸಂಚಾರದ ಅವಧಿ: ಜೂನ್ 4 ರಿಂದ ಜೂನ್ 25 ರವರೆಗೆ ಪ್ರತಿ ಗುರುವಾರ ಈ ರೈಲು ಸಂಚರಿಸಲಿದೆ.&lt;/p&gt;&lt;p&gt;ಸಮಯ: ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಗುರುವಾರ ರಾತ್ರಿ 8:00 ಗಂಟೆಗೆ ಹೊರಡುವ ರೈಲು, ಶನಿವಾರ ಮುಂಜಾನೆ 4:00 ಗಂಟೆಗೆ ಹೈದರಾಬಾದ್ ತಲುಪಲಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲಿಗೆ ಒಟ್ಟು 24 ಬೋಗಿಗಳನ್ನು (Coaches) ಅಳವಡಿಸಲಾಗಿದೆ. ಇದು ವಿಭಿನ್ನ ಆರ್ಥಿಕ ಪರಿಸ್ಥಿತಿ ಹಾಗೂ ಆದ್ಯತೆಗಳನ್ನು ಹೊಂದಿರುವ ಎಲ್ಲಾ ವರ್ಗದ ಪ್ರಯಾಣಿಕರಿಗೂ ಆಸನ ಸೌಲಭ್ಯವನ್ನು ಖಚಿತಪಡಿಸಲಿದೆ. ಬೋಗಿಗಳ ಸಂಯೋಜನೆ ಈ ಕೆಳಗಿನಂತಿದೆ:&lt;/p&gt;&lt;p&gt;ಎಸಿ 2-ಟೈರ್ ಕೋಚ್&zwnj;ಗಳು: 03&lt;/p&gt;&lt;p&gt;ಎಸಿ 3-ಟೈರ್ ಕೋಚ್&zwnj;ಗಳು: 05&lt;/p&gt;&lt;p&gt;ಸ್ಲೀಪರ್ ಕ್ಲಾಸ್ ಕೋಚ್&zwnj;ಗಳು: 10&lt;/p&gt;&lt;p&gt;ಸಾಮಾನ್ಯ ದ್ವಿತೀಯ ದರ್ಜೆ (General) ಕೋಚ್&zwnj;ಗಳು: 04&lt;/p&gt;&lt;p&gt;ಲಗೇಜ್-ಕಮ್-ಬ್ರೇಕ್ ವ್ಯಾನ್&zwnj;ಗಳು: 02&lt;/p&gt;&lt;img&gt;&lt;p&gt;ಈ ವಿಶೇಷ ರೈಲು ತನ್ನ ಸುದೀರ್ಘ ಪ್ರಯಾಣದ ಅವಧಿಯಲ್ಲಿ ಮೂರೂ ರಾಜ್ಯಗಳ ಪ್ರಮುಖ ವಾಣಿಜ್ಯ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ನಿಲುಗಡೆ ಪಡೆಯಲಿದೆ.&lt;/p&gt;&lt;p&gt;&lt;strong&gt;ತೆಲಂಗಾಣ ಮತ್ತು ಆಂಧ್ರ ಭಾಗ: &lt;/strong&gt;ಬೇಗಂಪೇಟ್, ಲಿಂಗಂಪಲ್ಲಿ, ವಿಕ್ರಾಬಾದ್, ರಾಯಚೂರು, ಮಂತ್ರಾಲಯ ರಸ್ತೆ (ಶ್ರೀ ರಾಘವೇಂದ್ರ ಸ್ವಾಮಿ ಮಠದ ಭಕ್ತರಿಗೆ ಅನುಕೂಲ), ಗುಂತಕಲ್, ಅನಂತಪುರ, ಧರ್ಮಾವರಂ ಮತ್ತು ಹಿಂದೂಪುರ.&lt;/p&gt;&lt;p&gt;&lt;strong&gt;ಕರ್ನಾಟಕದ ಒಳನಾಡು (ಬೆಂಗಳೂರು ಭಾಗ): &lt;/strong&gt;ಸೇಡಂ, ಸೂಳೇಹಳ್ಳಿ ಪಶ್ಚಿಮ, ಯಾದಗಿರಿ, ಕೃಷ್ಣ, ಯಲಹಂಕ, ಕೃಷ್ಣರಾಜಪುರಂ (KR ಪುರಂ) ಮತ್ತು ಬಂಗಾರಪೇಟೆ.&lt;/p&gt;&lt;p&gt;&lt;strong&gt;ತಮಿಳುನಾಡು ಮತ್ತು ಕೇರಳ ಭಾಗ: &lt;/strong&gt;ಕುಪ್ಪಂ, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪುರ್, ಪಾಲಕ್ಕಾಡ್ ಜಂಕ್ಷನ್, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನೂರು, ಕಾಞಂಗಾಡ್ ಮತ್ತು ಕಾಸರಗೋಡು.&lt;/p&gt;&lt;img&gt;&lt;p&gt;ಪ್ರಸ್ತುತ ಜೂನ್ ತಿಂಗಳಿನಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಳ್ಳುತ್ತಿರುವುದರಿಂದ ಹಾಗೂ ಉದ್ಯೋಗ ನಿಮಿತ್ತ ಮತ್ತು ಪ್ರವಾಸೋದ್ಯಮಕ್ಕಾಗಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸಾಮಾನ್ಯ ರೈಲುಗಳಲ್ಲಿ ಭಾರಿ ವೇಟಿಂಗ್ ಲಿಸ್ಟ್ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಪರಿಚಯಿಸಿರುವ ಈ ವಿಶೇಷ ಸೇವೆಯು ನಿಯಮಿತ ರೈಲುಗಳ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.&lt;/p&gt;&lt;img&gt;&lt;p&gt;ಕೆಲಸದ ನಿಮಿತ್ತ ಐಟಿ ಹಬ್&zwnj;ಗಳಾದ ಹೈದರಾಬಾದ್-ಬೆಂಗಳೂರಿಗೆ ಸಂಚರಿಸುವವರಿಗೆ, ಪ್ರವಾಸಿಗರಿಗೆ ಹಾಗೂ ಕರಾವಳಿ ಮತ್ತು ಮಂತ್ರಾಲಯ ಕ್ಷೇತ್ರಗಳಿಗೆ ಕೌಟುಂಬಿಕ ಭೇಟಿ ನೀಡುವ ಧಾರ್ಮಿಕ ಪ್ರಯಾಣಿಕರಿಗೆ ಈ ರೈಲು ಅತ್ಯಂತ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣದ ಅನುಭವವನ್ನು ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx"/>
        </item>
        <item>
            <title><![CDATA[ಮಂತ್ರಾಲಯದಲ್ಲಿ ಭೀಕರ ದುರಂತ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐವರು ನೀರು ಪಾಲು]]></title>
            <link>https://kannada.asianetnews.com/crime/mantralayam-tungabhadra-river-drowning-tragedy-five-dead-gvd/articleshow-kddeq4u</link>
            <guid isPermaLink="true">https://kannada.asianetnews.com/crime/mantralayam-tungabhadra-river-drowning-tragedy-five-dead-gvd/articleshow-kddeq4u</guid>
            <pubDate>Mon, 01 Jun 2026 21:22:32 +0530</pubDate>
            <description><![CDATA[&lt;p&gt;ಪಕ್ಕದ ಆಂಧ್ರಪ್ರದೇಶದ ರಾಜ್ಯದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ವಡ್ಲ ಸತೀಶ್..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1y5eq6fjadjn05kq1176wb,imgname-vj-1780329134822.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜೂ.01): &lt;/strong&gt;ಪಕ್ಕದ ಆಂಧ್ರಪ್ರದೇಶದ ರಾಜ್ಯದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ವಡ್ಲ ಸತೀಶ್ (35) ಇವರ ಪುತ್ರ ಯುವನ್ ಚಂದ್ರ(5) ಮಂತ್ರಾಲಯ ನಿವಾಸಿ ರಾಘವೇಂದ್ರ (28), ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ನಿವಾಸಿ ವಡ್ಲ ಧನು (23) ಹಾಗೂ ಅನಂತಪುರದ ನಿವಾಸಿ ಸಂಧ್ಯಾ (22) ನೀರುಪಾಲಾದವರು ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಆಗಮಿಸಿದ್ದ ಇವರುಗಳು, ಶನಿವಾರ ಸಂಜೆ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಬಾಲಕ ಯುವನ್ ಚಂದ್ರ ನೀರಲ್ಲಿ ಮುಳುಗಲು ಪ್ರಾರಂಭಿಸಿದ್ದಾನೆ. ಈತನ ರಕ್ಷಣೆಗಾಗಿ ಉಳಿದ ಐವರು ನದಿಯ ಆಳಕ್ಕಿಳಿದಿದ್ದು ನಾಲ್ವರೂ ಕೊಚ್ಚಿಕೊಂಡು ಹೋಗಿದ್ದಾರೆ. ಇವರಲ್ಲಿ ಯುವತಿ ಅಪರ್ಣಾ ಅದೋನಿ ಎಂಬವರು ಪಾರಾಗಿ ತಡ ಸೇರಿ ಸ್ಥಳೀಯರು ಹಾಗೂ ಕುಟುಂಬದವರಿಗೆ ಘಟನೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ದುರಂತದ ವಿಷಯ ತಿಳಿದ ಮಂತ್ರಾಲಯ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪರಿಣತ ಈಜುಗಾರರು ಕಂಟ್ರಿ ಬೋಟ್&zwnj;ಗಳನ್ನು ಬಳಸಿ ಶನಿವಾರ ರಾತ್ರಿ 8:30ರವರೆಗೆ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಧನು ಎಂಬ ಯುವಕನ ಮೃತದೇಹ ಸಿಕ್ಕಿದ್ದು, ಭಾನುವಾರ ಬೆಳಗ್ಗೆ ಯುವನ್ ಚಂದ್ರ ಹಾಗೂ ಆತನ ತಂದೆ ವಡ್ಲ ಸತೀಶ್ ಮೃತದೇಹಗಳು ಪತ್ತೆಯಾಗಿವೆ.&lt;/p&gt;&lt;h2&gt;&lt;strong&gt;ಕುಟುಂಬಸ್ಥರಿಗೆ ಹಸ್ತಾಂತರ&lt;/strong&gt;&lt;/h2&gt;&lt;p&gt;ಮೃತದೇಹಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು, ಸ್ಥಳೀಯ ಮೀನುಗಾರರೊಂದಿಗೆ ಉಳಿದ ಇಬ್ಬರಿಗೆ ಶೋಧಾಕಾರ್ಯವನ್ನು ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಆಂಧ್ರಪ್ರದೇಶ ಸಚವರಾದ ನಿಮ್ಮಲಾ ರಾಮನಾಯ್ಡು ಮತ್ತು ಟಿ.ಜಿ.ಭರತ್ ಹಾಗೂ ಎಮ್ಮಿಗನೂರು ಡಿವೈಎಸ್ಪಿ ಭಾರ್ಗವಿ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸತ್ಯನಾರಾಯಣ ಪೂಜೆ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣವಿದ್ದ ಮನೆ ಮಾಡಿದ್ದ ಮನೆಯಲ್ಲಿ ದುರ್ಘಟನೆಯಿಂದ ಸೂತಕದ ಛಾಯೆ ಆವರಿಸಿದೆ.&lt;/p&gt;]]></content:encoded>
            <category>raichur</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/mantralayam-tungabhadra-river-drowning-tragedy-five-dead-gvd/articleshow-kddeq4u"/>
        </item>
        <item>
            <title><![CDATA[ರಾಯಚೂರಿನ 200 ಕೋಟಿ ರೂ. ಹಗರಣ: ದರ್ವೇಶ್ ಕಂಪನಿ ರಹಸ್ಯವೇ ಗೊತ್ತಾಗ್ತಿಲ್ಲ, ಸೂಜಾ ಸಿಕ್ತಿಲ್ಲ!]]></title>
            <link>https://kannada.asianetnews.com/karnataka-districts/raichur-darvesh-group-scam-investors-left-in-limbo-as-rs-200-crore-fraud-mastermind-evades-cid-for-2-years-gdp/articleshow-lp5b0og</link>
            <guid isPermaLink="true">https://kannada.asianetnews.com/karnataka-districts/raichur-darvesh-group-scam-investors-left-in-limbo-as-rs-200-crore-fraud-mastermind-evades-cid-for-2-years-gdp/articleshow-lp5b0og</guid>
            <pubDate>Mon, 15 Jun 2026 15:32:10 +0530</pubDate>
            <description><![CDATA[ರಾಯಚೂರಿನಲ್ಲಿ &lsquo;ದರ್ವೇಶ್ ಗ್ರೂಪ್ ಆಫ್ ಕಂಪನಿ&rsquo; ಅಧಿಕ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದೆ. ಕಂಪನಿಯ ಮಾಲೀಕ ಮಹಮ್ಮದ್ ಸೂಜಾ ನಾಪತ್ತೆಯಾಗಿದ್ದು, ಎರಡು ವರ್ಷಗಳಿಂದ ಸಿಐಡಿ ತನಿಖೆ ನಡೆದರೂ ಆತ ಸಿಕ್ಕಿಲ್ಲ. ಇದೀಗ ಹಣ ಕಳೆದುಕೊಂಡ ಸಂತ್ರಸ್ತರು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv5bb6q2tcgvb5rfvq8937p6,imgname-raichur-darvesh-group-scam-1781517359838.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು: &lt;/strong&gt;ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ವಂಚನೆ ಬಳಿಕ ಅದೇ ರೀತಿಯ ಒದೊಂದೇ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದೀಗ ರಾಯಚೂರಿನಲ್ಲಿ ಇದೇ ರೀತಿಯ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಧಿಕ ಲಾಭ ಹಾಗೂ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು, ಇದೀಗ &lsquo;ದರ್ವೇಶ್ ಗ್ರೂಪ್ ಆಫ್ ಕಂಪನಿ&rsquo; (Darvesh Group of Companies) ಸಾರ್ವಜನಿಕರಿಗೆ ನಾಮ ಹಾಕಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕಂಪನಿಯ ಮಾಲೀಕ ಮಹಮ್ಮದ್ ಸೂಜಾ ಎಂಬಾತ ನೂರಾರು ಹೂಡಿಕೆದಾರರ ನೂರಾರು ಕೋಟಿ ಹಣವನ್ನು ಎತ್ತುವಳಿ ಮಾಡಿಕೊಂಡು ರಾತ್ರೋರಾತ್ರಿ ನಾಪತ್ತೆಯಾಗಿದ್ದು, ಇತ್ತ ಹೂಡಿಕೆದಾರರು ಬೀದಿಗೆ ಬಿದ್ದಿದ್ದಾರೆ. ಮೂಲಗಳ ಪ್ರಕಾರ, ಈ ವಂಚನೆಯ ಜಾಲ ಬರೋಬ್ಬರಿ 200 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡ ನೂರಾರು ಹೂಡಿಕೆದಾರರು ಈಗ ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;h2&gt;ಎರಡು ವರ್ಷಗಳಿಂದ ಸಿಐಡಿ ತನಿಖೆ, ಆದರೂ ಸಿಕ್ಕಿಲ್ಲ ಮಾಲೀಕ!&lt;/h2&gt;&lt;p&gt;ಈ ಮಹಾಮೋಸದ ಕುರಿತು ದೂರು ದಾಖಲಾದ ಬೆನ್ನಲ್ಲೇ ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಸರ್ಕಾರ ಇದನ್ನು ಸಿಐಡಿ (CID) ತನಿಖೆಗೆ ಒಪ್ಪಿಸಿತ್ತು. ಕಳೆದ ಎರಡು ವರ್ಷಗಳಿಂದ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೂ, ಇದುವರೆಗೆ ದರ್ವೇಶ್ ಕಂಪನಿಯ ಮುಖ್ಯ ಸೂತ್ರಧಾರ ಮಹಮ್ಮದ್ ಸೂಜಾನನ್ನು ಬಂಧಿಸಲು ಸಾಧ್ಯವಾಗಿಲ್ಲ. ಎರಡು ವರ್ಷ ಕಳೆದರೂ ವಂಚಕ ಮಾಲೀಕ ಪತ್ತೆಯಾಗದಿರುವುದು ಹೂಡಿಕೆದಾರರಲ್ಲಿ ಆಕ್ರೋಶ ಮತ್ತು ಅಸಹಾಯಕತೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಬೇರೆ ದಾರಿ ಕಾಣದ ನೂರಾರು ಹೂಡಿಕೆದಾರರು ಇದೀಗ ನ್ಯಾಯಕ್ಕಾಗಿ ನ್ಯಾಯಾಲಯದ (Court) ಮೆಟ್ಟಿಲೇರಿದ್ದಾರೆ.&lt;/p&gt;&lt;h2&gt;ಕಡು ಬಿಸಿಲಿನಲ್ಲಿ ಹೂಡಿಕೆದಾರರು ಹಾಗೂ ಏಜೆಂಟರ ಗೋಳಾಟ!&lt;/h2&gt;&lt;p&gt;ದರ್ವೇಶ್ ಕಂಪನಿಯನ್ನು ನಂಬಿ ಹಣ ಹೂಡಿಕೆ ಮಾಡಿದವರು ಕಳೆದ ಎರಡು ವರ್ಷಗಳಿಂದ ತಮ್ಮ ಹಣ ವಾಪಸ್ ಪಡೆಯಲು ತೀವ್ರ ಪರದಾಟ ನಡೆಸುತ್ತಿದ್ದಾರೆ. ಈ ವಂಚನೆ ಜಾಲದಿಂದಾಗಿ ಕೇವಲ ಹೂಡಿಕೆದಾರರು ಮಾತ್ರವಲ್ಲದೆ, ಕಂಪನಿಯಲ್ಲಿದ್ದ ಸ್ಥಳೀಯ ಏಜೆಂಟರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿದ್ದ ಏಜೆಂಟರಿಗೆ ಈಗ ಹೂಡಿಕೆದಾರರು ಹಣ ಕೇಳಿ ಒತ್ತಾಯಿಸುತ್ತಿರುವುದರಿಂದ ಅವರು ಯಾರಿಗೆ ಮುಖ ತೋರಿಸಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ.&lt;/p&gt;&lt;h2&gt;ಬೀದಿಗಿಳಿದು ಹೋರಾಟ:&lt;/h2&gt;&lt;p&gt;ತಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಂಡಿರುವ ನೂರಾರು ಜನ ಸಂತ್ರಸ್ತರು, ರಾಯಚೂರಿನ ಉರಿ ಬಿಸಿಲನ್ನೂ ಲೆಕ್ಕಿಸದೆ ಸದ್ಯ ಮುಚ್ಚಿ ಹೋಗಿರುವ ದರ್ವೇಶ್ ಕಂಪನಿಯ ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ. &quot;ನಮ್ಮ ರಕ್ತದ ಹಣ ನಮಗೆ ವಾಪಸ್ ಸಿಗಬೇಕು, ವಂಚಕ ಮಾಲೀಕನನ್ನು ತಕ್ಷಣ ಬಂಧಿಸಬೇಕು&quot; ಎಂದು ಉರಿ ಬಿಸಿಲಿನಲ್ಲೇ ಹೋರಾಟ ನಡೆಸುತ್ತಾ ಹೂಡಿಕೆದಾರರು ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಇಂತಹ ನಕಲಿ ಹಣಕಾಸು ಸಂಸ್ಥೆಗಳು ಮತ್ತು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಕಂಪನಿಗಳು ಅಧಿಕ ಬಡ್ಡಿಯ ಆಮಿಷ ಒಡ್ಡಿ ಸಾರ್ವಜನಿಕರನ್ನು ವಂಚಿಸುತ್ತಿರುವುದು ಹೆಚ್ಚಾಗುತ್ತಿದ್ದು, ಇಂತಹ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮುನ್ನ ಜನರು ಎಚ್ಚರದಿಂದ ಇರಬೇಕಾಗಿದೆ. ಸದ್ಯ ಸಿಐಡಿ ಮತ್ತು ನ್ಯಾಯಾಲಯದ ಮೇಲೆಯೇ ಹೂಡಿಕೆದಾರರು ತಮ್ಮ ಸಂಪೂರ್ಣ ಭರವಸೆಯನ್ನು ಇಟ್ಟಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/raichur-darvesh-group-scam-investors-left-in-limbo-as-rs-200-crore-fraud-mastermind-evades-cid-for-2-years-gdp/articleshow-lp5b0og"/>
        </item>
        <item>
            <title><![CDATA[ಮಂತ್ರಾಲಯ ರಾಯರ ಹುಂಡಿ ಎಣಿಕೆ: ಕೇವಲ 22 ದಿನದಲ್ಲಿ ₹4.35 ಕೋಟಿ ಕಾಣಿಕೆ! ಬೆಲೆ ಏರಿಕೆ ನಡುವೆಯೇ ಭಕ್ತರು ನೀಡಿದ ಚಿನ್ನ ಬೆಳ್ಳಿ ಎಷ್ಟು?]]></title>
            <link>https://kannada.asianetnews.com/gallery/karnataka-districts/mantralayam-hundi-counting-rs-4-35-crore-collection-in-just-22-days-rav-lxflyvp</link>
            <guid isPermaLink="true">https://kannada.asianetnews.com/gallery/karnataka-districts/mantralayam-hundi-counting-rs-4-35-crore-collection-in-just-22-days-rav-lxflyvp</guid>
            <pubDate>Thu, 04 Jun 2026 08:54:04 +0530</pubDate>
            <description><![CDATA[&lt;p&gt;ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಈ ಬಾರಿ ಚಿನ್ನ ಬೆಳ್ಳಿ ಕಾಣಿಕೆ ಇಳಿಮುಖವಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt89nprsdcwj4p1f0crych21,imgname-----------------------2026-06-04t083750.389-1780542528280.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಈ ಬಾರಿ ಚಿನ್ನ ಬೆಳ್ಳಿ ಕಾಣಿಕೆ ಇಳಿಮುಖವಾಗಿದೆ.&amp;nbsp;&lt;/p&gt;&lt;img&gt;&lt;p&gt;ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಬೆಲೆ ಹೆಚ್ಚಳದ ಪರಿಣಾಮದಿಂದ ಚಿನ್ನ ಬೆಳ್ಳಿಯ ಕಾಣಿಕೆ ಮಾತ್ರ ಇಳಿಮುಖವಾಗಿದೆ.&lt;/p&gt;&lt;img&gt;&lt;p&gt;ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಿಂದ ಭಕ್ತರು ರಾಯರ ದರ್ಶನಕ್ಕೆ ಬರುತ್ತಾರೆ. ದರ್ಶನ ಪಡೆದ ಭಕ್ತರು ಕಾಣಿಕೆ ಸಲ್ಲಿಸದೆ ಹೋಗುವುದಿಲ್ಲ. ಈ ಬಾರಿ ಮೇ-ಜೂನ್ ತಿಂಗಳಲ್ಲಿ ಅಂದರೆ ಕೇವಲ 22 ದಿನಗಳಲ್ಲಿ ದಾಖಲೆಯ ಹಣ ಸಂಗ್ರವಾಗಿದೆ.&lt;/p&gt;&lt;img&gt;&lt;p&gt;ಮಂತ್ರಾಲಯದ ರಾಯರ ದರ್ಶನಕ್ಕೆ ಬರುವವರು ದರ್ಶನ ಬಳಿಕ ಹುಂಡಿಗೆ ಕೇವಲ ನಗದು ಮಾತ್ರವಲ್ಲದೆ ಕೆಲವು ಭಕ್ತರು ಚಿನ್ನ, ಬೆಳ್ಳಿ ಆಭರಣಗಳನ್ನೂ ರಾಯರಿಗೆ ಸಮರ್ಪಿಸಿದ್ದಾರೆ. ಈ ಬಾರಿ ಹುಂಡಿಯಲ್ಲಿ 46 ಗ್ರಾಂ ಚಿನ್ನ ಹಾಗೂ 750 ಗ್ರಾಂ ಬೆಳ್ಳಿ ಆಭರಣ ಸಂಗ್ರಹವಾಗಿದೆ. ಹುಂಡಿ ಎಣಿಕೆ ವೇಳೆ ಈ ಆಭರಣಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ ಎಂದು ಮಂತ್ರಾಲಯ ಮಠದ ಮೂಲಗಳು ತಿಳಿಸಿವೆ.&lt;/p&gt;&lt;img&gt;&lt;p&gt;&amp;nbsp;ಕಳೆದ ಆರು ತಿಂಗಳ ಅಂಕಿ-ಅಂಶಗಳ ಲೆಕ್ಕ ಹಾಕಿ ನೋಡಿದರೆ ಚಿನ್ನ ಮತ್ತು ಬೆಳ್ಳಿ ಕಾಣಿಕೆಗಳಲ್ಲಿ ಸ್ವಲ್ಪ ಇಳಿಮುಖವಾಗಿದೆ. ಜನವರಿಯಲ್ಲಿ 28 ಗ್ರಾಂ ಚಿನ್ನ, 1278 ಗ್ರಾಂ ಬೆಳ್ಳಿ ಸಂಗ್ರವಾಗಿತ್ತು.ಫೆಬ್ರವರಿಯಲ್ಲಿ 28 ಗ್ರಾಂ ಚಿನ್ನ ಹಾಗೂ 1000 ಗ್ರಾಂ ಬೆಳ್ಳಿ ಸಂಗ್ರಹ. ಮಾರ್ಚ್&zwnj;ನಲ್ಲಿ 14 ಗ್ರಾಂ ಚಿನ್ನ ಮತ್ತು 2163 ಗ್ರಾಂ ಬೆಳ್ಳಿ, ಏಪ್ರಿಲ್&zwnj;ನಲ್ಲಿ 47 ಗ್ರಾಂ ಚಿನ್ನ ಹಾಗೂ 592 ಗ್ರಾಂ ಬೆಳ್ಳಿ ಕಾಣಿಕೆ ನೀಡಿದ್ದ ಭಕ್ತರು. ಮೇ ತಿಂಗಳಲ್ಲಿ 15 ಗ್ರಾಂ ಚಿನ್ನ ಮತ್ತು 751 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ.&amp;nbsp;&lt;/p&gt;&lt;p&gt;ಈ ಬಾರಿ 46 ಗ್ರಾಂ ಚಿನ್ನ ಮತ್ತು 750 ಗ್ರಾಂ ಬೆಳ್ಳಿ ಕಾಣಿಕೆ ನೀಡಿರುವ ಭಕ್ತರು. ಒಟ್ಟಾರೆ ದೇಶಾದ್ಯಂತ ಚಿನ್ನ ಬೆಳ್ಳಿ ಬೆಲೆಗಳು ಗಗನಕ್ಕೇರಿರುವ ಹಿನ್ನೆಲೆ ಭಕ್ತರು ಆಭರಣ ರೂಪದಲ್ಲಿ ಹಿಂದಿನಷ್ಟು ಕಾಣಿಕೆ ನಿಡುತ್ತಿಲ್ಲ ಎಂಬು ತಿಳಿದುಬಂದಿದೆ. ಆದರೆ ನಗದು ಕಾಣಿಕೆಯಲ್ಲಿ ಮಾತ್ರ ಯಾವುದೇ ಕುಸಿತ ಕಂಡಿಲ್ಲ. ಪ್ರತಿ ಬಾರಿಯೂ ಕಾಣಿಕೆ ಸಂಗ್ರಹ ಹೆಚ್ಚುತ್ತಿದೆ ಎಂದ ಮಂತ್ರಾಲಯ ಮಠವೇ ಈ ಮಾಹಿತಿಯನ್ನು ಪ್ರಕಟಿಸಿದೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/mantralayam-hundi-counting-rs-4-35-crore-collection-in-just-22-days-rav-lxflyvp"/>
        </item>
        <item>
            <title><![CDATA[ರಾಜ್ಯದಲ್ಲಿ ಮಳೆ ಅಬ್ಬರ: ರಾಯಚೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು, ವಿಜಯನಗರದಲ್ಲಿ ಪಪ್ಪಾಯಿ ಬೆಳೆ ನಾಶ!]]></title>
            <link>https://kannada.asianetnews.com/karnataka-districts/karnataka-rain-havoc-raichur-lightning-death-vijayanagara-papaya-crop-loss-sat/articleshow-n5vhd0s</link>
            <guid isPermaLink="true">https://kannada.asianetnews.com/karnataka-districts/karnataka-rain-havoc-raichur-lightning-death-vijayanagara-papaya-crop-loss-sat/articleshow-n5vhd0s</guid>
            <pubDate>Sun, 17 May 2026 18:23:55 +0530</pubDate>
            <description><![CDATA[ರಾಜ್ಯದ ಹಲವೆಡೆ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯು ತೀವ್ರ ಹಾನಿಯನ್ನುಂಟುಮಾಡಿದೆ. ರಾಯಚೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟರೆ, ವಿಜಯನಗರ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ರೈತ ದಂಪತಿಯ ಮೂರು ಎಕರೆ ಪಪ್ಪಾಯಿ ಬೆಳೆ ಸಂಪೂರ್ಣ ನಾಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krtztbercysg2xknpx78hc1t,imgname-karnataka-rain--1--1779022245336.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು/ವಿಜಯನಗರ: ರಾ&lt;/strong&gt;ಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಮಳೆ ಅನಾಹುತಗಳಿಗೆ ಓರ್ವ ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರೆ, ವಿಜಯನಗರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ರೈತರ ವರ್ಷದ ಶ್ರಮವೆಲ್ಲಾ ಮಣ್ಣು ಪಾಲಾಗಿದೆ.&lt;/p&gt;&lt;h3&gt;&lt;strong&gt;ರಾಯಚೂರು: ಸಿಡಿಲು ಬಡಿತಕ್ಕೆ ಕರಿಯಪ್ಪ ಸಾವು&lt;/strong&gt;&lt;/h3&gt;&lt;p&gt;ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಕೋಮಲಾಪುರ್ ಗ್ರಾಮದಲ್ಲಿ ಸಿಡಿಲು ಬಡಿದು 45 ವರ್ಷದ ಕರಿಯಪ್ಪ ಗೆನ್ನಾಕಿಹಾಳ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮದ ಜಮೀನಿನಲ್ಲಿ ಟ್ರಾಕ್ಟರ್&zwnj;ಗೆ ಗೊಬ್ಬರ ತುಂಬುವ ಕೆಲಸದಲ್ಲಿ ನಿರತರಾಗಿದ್ದಾಗ ಈ ದುರಂತ ಸಂಭವಿಸಿದೆ. ಕರಿಯಪ್ಪ ಅವರೊಂದಿಗೆ ಕೆಲಸ ಮಾಡುತ್ತಿದ್ದ ಬಸವರಾಜ್ ಎಂಬುವವರಿಗೂ ಸಿಡಿಲು ಬಡಿದಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;h2&gt;&lt;strong&gt;ರೈತ ದಂಪತಿಯ ಬಾಳಲ್ಲಿ ಬಿರುಗಾಳಿ&lt;/strong&gt;&lt;/h2&gt;&lt;p&gt;ಮತ್ತೊಂದೆಡೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಮಳೆ ಹಾನಿ ತೀವ್ರವಾಗಿದೆ. ತಾಲ್ಲೂಕಿನ ಕೆಂಗಲಹಟ್ಟಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಪಪ್ಪಾಯಿ ಬೆಳೆ ಸಂಪೂರ್ಣ ನೆಲಸಮವಾಗಿದೆ. ರೈತ ದಂಪತಿಗಳಾದ ಸೀತಮ್ಮ ಮತ್ತು ಜಿ.ಎಸ್. ದೊಡ್ಡಪ್ಪ ಅವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ 200ಕ್ಕೂ ಹೆಚ್ಚು ಪಪ್ಪಾಯಿ ಗಿಡಗಳು ಧರೆಗುರುಳಿವೆ.&lt;/p&gt;&lt;p&gt;ಈ ರೈತ ದಂಪತಿ ಸುಮಾರು 6 ತಿಂಗಳ ಹಿಂದೆ 3 ಲಕ್ಷ ರೂಪಾಯಿ ಸಾಲ-ಸೋಲ ಮಾಡಿ ಪಪ್ಪಾಯಿ ಬೆಳೆ ಹಾಕಿದ್ದರು. ಇನ್ನೇನು ಮೂರು ತಿಂಗಳಲ್ಲಿ ಬೆಳೆ ಕೈಗೆ ಬರಬೇಕಿತ್ತು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಪ್ರಕೃತಿ ಮುನಿಸು ಭಾರಿ ಆಘಾತ ನೀಡಿದೆ. 'ಬೆಳೆದಿದ್ದ ಗಿಡಗಳು ಮಣ್ಣು ಪಾಲಾಗಿರುವುದನ್ನು ಕಂಡು ನಮಗೆ ದಿಕ್ಕು ತೋಚದಂತಾಗಿದೆ ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ:&lt;/strong&gt;&lt;/h3&gt;&lt;p&gt;ಸಿಡಿಲು ಬಡಿತಕ್ಕೆ ಬಲಿಯಾದ ಕರಿಯಪ್ಪ ಅವರ ಕುಟುಂಬಕ್ಕೆ ಹಾಗೂ ಬೆಳೆ ಕಳೆದುಕೊಂಡು ಕಂಗಾಲಾಗಿರುವ ವಿಜಯನಗರದ ರೈತ ದಂಪತಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮುಂಗಾರು ಪೂರ್ವ ಮಳೆ (Pre-monsoon rain) ತೀವ್ರಗೊಳ್ಳುತ್ತಿರುವುದರಿಂದ ರೈತರು ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹವಾಮಾನದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-rain-havoc-raichur-lightning-death-vijayanagara-papaya-crop-loss-sat/articleshow-n5vhd0s"/>
        </item>
        <item>
            <title><![CDATA[Mantralaya: ಮಂತ್ರಾಲಯ ಮಠದ ಹುಂಡಿ ಎಣಿಕೆ: ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ! ಚಿನ್ನ ಬೆಳ್ಳಿ ಎಷ್ಟು?]]></title>
            <link>https://kannada.asianetnews.com/gallery/karnataka-districts/over-rs-3-crore-deposited-in-mantralaya-raghavendra-temple-hundi-in-21-days-rav-ofd9t35</link>
            <guid isPermaLink="true">https://kannada.asianetnews.com/gallery/karnataka-districts/over-rs-3-crore-deposited-in-mantralaya-raghavendra-temple-hundi-in-21-days-rav-ofd9t35</guid>
            <pubDate>Fri, 26 Jun 2026 12:43:48 +0530</pubDate>
            <description><![CDATA[&lt;p&gt;Mantalaya hundi collection: ರಾಯಚೂರಿನ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಜೂನ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನೀಡಿದ ಚಿನ್ನ ಬೆಳ್ಳಿಯಷ್ಟು ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw1bphbsty1pj0krdbj42mvm,imgname----------------------7--1782457255289.jpg" type="image/jpeg" height="390" width="690"/>
            <content:encoded><![CDATA[&lt;p&gt;Mantalaya hundi collection: ರಾಯಚೂರಿನ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಜೂನ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನೀಡಿದ ಚಿನ್ನ ಬೆಳ್ಳಿಯಷ್ಟು ತಿಳಿಯಿರಿ.&lt;/p&gt;&lt;img&gt;&lt;p&gt;ರಾಯಚೂರು (ಜೂ.26): ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಜೂನ್ ತಿಂಗಳ ಹುಂಡಿಯ ಎಣಿಕೆ ಕಾರ್ಯ ನಡೆಯಿತು. ಈ ಬಾರಿಯೂ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 21 ದಿನಗಳಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ರೂಪಾಯಿ ಜಮೆಯಾಗಿದೆ ಎಂದು ಮಂತ್ರಾಲಯದ ಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮಂತ್ರಾಲಯ ರಾಯರ ಭಕ್ತರು ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶ, ವಿದೇಶಗಳಿಂದ ದರ್ಶನಕ್ಕೆ ಆಗಮಿಸುತ್ತಾರೆ. ರಾಯರ ದರ್ಶನ ಪಡೆದು ನಗದು ಹಣ, ಚಿನ್ನ ಬೆಳ್ಳಿಯನ್ನೇ ಕಾಣಿಕೆಯಾಗಿ ಅರ್ಪಿಸುತ್ತಾರೆ. ಈ ಬಾರಿಯೂ 67ಗ್ರಾಂ. ಚಿನ್ನ, 511ಗ್ರಾಂ ಬೆಳ್ಳಿ ಆಭರಣಗಳನ್ನ ಭಕ್ತರು ಕಾಣಿಕೆ ಅರ್ಪಿಸಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಬಾರಿ ಮೇ ತಿಂಗಳ ಹುಂಡಿಯಲ್ಲಿ 22 ದಿನದಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಚಿನ್ನ ಬೆಳ್ಳಿ ಕಾಣಿಕೆ ಸ್ವಲ್ಪ ಇಳಿಮುಖವಾಗಿತ್ತು.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/over-rs-3-crore-deposited-in-mantralaya-raghavendra-temple-hundi-in-21-days-rav-ofd9t35"/>
        </item>
        <item>
            <title><![CDATA[LPG Gas Crisis: ರಾಜ್ಯದಲ್ಲಿ ಮತ್ತೆ ಗ್ಯಾಸ್ ಟ್ರಬಲ್: ಏಜೆನ್ಸಿಗಳಿಂದಲೇ ಕಾಳಸಂತೇಲಿ ಮಾರಾಟ, ರಾಯಚೂರು, ಯಾದಗಿರಿ, ಹಾಸನ ಜನರು ಹೈರಾಣು]]></title>
            <link>https://kannada.asianetnews.com/state/lpg-gas-crisis-returns-in-karnataka-people-struggle-despite-cylinder-availability-rav/articleshow-q4v0rpl</link>
            <guid isPermaLink="true">https://kannada.asianetnews.com/state/lpg-gas-crisis-returns-in-karnataka-people-struggle-despite-cylinder-availability-rav/articleshow-q4v0rpl</guid>
            <pubDate>Sun, 24 May 2026 05:44:09 +0530</pubDate>
            <description><![CDATA[&lt;p&gt;ಮಧ್ಯೆಪ್ರಾಚ್ಯ ಯುದ್ಧದಿಂದಾಗ ಕರ್ನಾಟಕ ಯಾದಗಿರಿ, ರಾಯಚೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ಯಾಸ್ ಪೂರೈಕೆ ಸಮಸ್ಯೆ ಶೋಚನೀಯವಾಗಿದೆ. ಗ್ಯಾಸ್ ಏಜೆನ್ಸಿಗಳಿಂದ ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟದಿಂದ ಮತ್ತಷ್ಟು ಸಮಸ್ಯೆ ಬಿಗಡಾಯಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks7m3mw2ycradxcbgzcd4n15,imgname-png-gas-1779446174593.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.24): &lt;/strong&gt;ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಗೃಹ ಬಳಕೆಯ ಎಲ್&zwnj;ಪಿಜಿ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದ್ದು, ಗ್ರಾಹಕರನ್ನು ಹೈರಾಣು ಮಾಡಿದೆ. ಯಾದಗಿರಿ, ರಾಯಚೂರು, ಹಾಸನದಲ್ಲಿ ಗ್ರಾಹಕರು ಬೆಳಗ್ಗೆ 5 ಗಂಟೆಯಿಂದಲೇ ಏಜೆನ್ಸಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತರೂ ಸಿಲಿಂಡರ್&zwnj; ಪಡೆಯಲಾಗದೇ ಭಾರೀ ಸಮಸ್ಯೆ ಎದುರಿಸಿದ್ದಾರೆ.&lt;/p&gt;&lt;p&gt;ಕೆಲವು ಕಡೆ ಏಜೆನ್ಸಿಗಳಿಗೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಈ ಸಮಸ್ಯೆ ಕಂಡುಬಂದಿದ್ದರೆ ಇನ್ನು ಕೆಲವು ಕಡೆ ಗ್ಯಾಸ್&zwnj; ಏಜೆನ್ಸಿ ಮಾಲೀಕರೇ ಕಾಳಸಂತೆಯಲ್ಲಿ ಸಿಲಿಂಡರ್&zwnj; ಮಾರಿಕೊಂಡ ಕಾರಣಕ್ಕೆ ಸಮಸ್ಯೆ ಎದುರಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.&lt;/p&gt;&lt;h2&gt;ಏಜೆನ್ಸಿ ವಿರುದ್ಧ ದೂರು:&lt;/h2&gt;&lt;p&gt;ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದದಲ್ಲಿ ಭಾರತ್&zwnj; ಗ್ಯಾಸ್&zwnj; ಏಜೆನ್ಸಿ ಮುಂದೆ ದಿನಪೂರ್ತಿ ಕಾದು ಕುಳಿತರೂ ಸಿಲಿಂಡರ್&zwnj; ಸಿಗುತ್ತಿಲ್ಲ. ಅಲ್ಲದೆ ಅಂಗಡಿ ಮಾಲೀಕ ಏಜೆನ್ಸಿ ಕಚೇರಿಯನ್ನು ತೆರೆಯದೆ ಕಾಳ ಸಂತೆಯಲ್ಲಿ ಸಿಲಿಂಡರ್&zwnj; ಮಾರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಪೊಲೀಸರಿಗೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ.&lt;/p&gt;&lt;p&gt;ಗ್ರಾಮದಲ್ಲಿ 2 ತಿಂಗಳಿನಿಂದಲೂ ಸಿಲಿಂಡರ್&zwnj; ವಿತರಣೆಯಲ್ಲಿ ಏರುಪೇರಾಗಿದೆ. ಗ್ಯಾಸ್&zwnj; ಬುಕ್&zwnj; ಮಾಡಿದ ಜನರು ಕೆಲಸ ಬಿಟ್ಟು ಏಜೆನ್ಸಿ ಕಚೇರಿ ಮುಂದೆ ಸಾಲಾಗಿ ಖಾಲಿ ಸಿಲಿಂಡರ್&zwnj; ಇಟ್ಟು ಕಾದು ಸುಸ್ತಾಗಿದ್ದಾರೆ. ಶನಿವಾರ ಬೆಳಗ್ಗೆ 5 ಗಂಟೆಯಿಂದಲೇ ಕಾದಿದ್ದ ಜನರು, ಹಲವು ಗಂಟೆ ಕಾದರೂ ಗ್ಯಾಸ್&zwnj; ಅಂಗಡಿ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿ ಸ್ಥಳಕ್ಕೆ ಕರೆಸಿ ಗ್ಯಾಸ್&zwnj; ಕೊಡಿಸುವಂತೆ ಮನವಿ ಮಾಡಿದ್ದಾರೆ. ಅಡುಗೆ ಅನಿಲ ಅವನ್ನು ಬುಕ್&zwnj; ಮಾಡಿ ಗ್ರಾಹಕರಿಂದ ಒಟಿಪಿ ಪಡೆದು ಬ್ಲಾಕ್&zwnj;ನಲ್ಲಿ ಸಿಲಿಂಡರ್&zwnj;ಗಳನ್ನು ಮಾರಾಟ ಮಾಡಿದ್ದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;&lt;h3&gt;ಶಾಸಕ ಸ್ಥಳಕ್ಕೆ:&lt;/h3&gt;&lt;p&gt;ಹಾಸನ ಜಿಲ್ಲೆಯ ಆಲೂರಿನಲ್ಲಿಯೂ ಸಿಲಿಂಡರ್&zwnj; ಸಮರ್ಪಕವಾಗಿ ಪೂರೈಕೆ ಆಗಿಲ್ಲ. ವಿಜಯಲಕ್ಷ್ಮೀ ಭಾರತ್ ಗ್ಯಾಸ್ ಏಜೆನ್ಸಿ ಮುಂದೆ ಜನರು ಸಾಲಗಟ್ಟಿ ನಿಂತಿದ್ದರು. ಕಳೆದ ಕೆಲವು ದಿನಗಳಿಂದ ತಾಂತ್ರಿಕ ಲೋಪದೋಷ, ಸರಬರಾಜಿನ ವಿಳಂಬ ಹಾಗೂ ವಿತರಣಾ ವ್ಯವಸ್ಥೆಯ ಗೊಂದಲದಿಂದ ಆಲೂರು ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಪರದಾಡುತ್ತಿದ್ದಾರೆ. ಶನಿವಾರ ಮಹಿಳೆಯರು ಸೇರಿ ನೂರಾರು ಮಂದಿ ಬೆಳಗ್ಗಿನಿಂದಲೇ ಸಾಲಿನಲ್ಲಿ ನಿಂತು ಗ್ಯಾಸ್ ಸಿಲಿಂಡರ್ ಪಡೆಯಲು ಹರಸಾಹಸ ಪಡುತ್ತಿದ್ದರು. ಈ ವಿಷಯ ತಿಳಿದ ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ತಕ್ಷಣ ಆಗಮಿಸಿದರು. ಏಜೆನ್ಸಿ ಮತ್ತು ಅಧಿಕಾರಿಗಳ ವಿರುದ್ಧ ಸ್ಥಳದಲ್ಲಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ಜತೆ ಚರ್ಚಿಸಿದ ಶಾಸಕ ಮಂಜು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ತಕ್ಷಣವೇ ಹೆಚ್ಚುವರಿ ಸಿಲಿಂಡರ್ ಪೂರೈಕೆ ಮಾಡುವಂತೆ ಸೂಚಿಸಿದರು. ಶಾಸಕರ ಸೂಚನೆ ಬೆನ್ನಲ್ಲೇ ತಕ್ಷಣವೇ ಮೂರು ಲಾರಿಗಳಲ್ಲಿ ಗ್ಯಾಸ್ ಸಿಲಿಂಡರ್ ತರಿಸಲಾಯಿತು.&lt;/p&gt;&lt;h3&gt;ಗ್ಯಾಸ್&zwnj;ಗೆ ಪರದಾಟ:&lt;/h3&gt;&lt;p&gt;ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಕೊರತೆ ಭುಗಿಲೆದ್ದಿದೆ. ಗ್ರಾಹಕರು ಬೆಳಗ್ಗೆಯಿಂದಲೇ ಏಜೆನ್ಸಿ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರು ನಸುಕಿನಲ್ಲೇ ಆಗಮಿಸಿ ಸರದಿಯಲ್ಲಿ ನಿಂತು ಕಾಯುತ್ತಿದ್ದರೂ ಸಿಲಿಂಡರ್&zwnj; ಸಿಗದೆ ಪರದಾಡಿದರು.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/lpg-gas-crisis-returns-in-karnataka-people-struggle-despite-cylinder-availability-rav/articleshow-q4v0rpl"/>
        </item>
        <item>
            <title><![CDATA[NH 150C Project: ಬಿಸಿಲುನಾಡು ರಾಯಚೂರು ಆಗಲಿದೆ ಹೈವೇಗಳ ಹಬ್: ದೆಹಲಿಯಲ್ಲಿ ಮಹತ್ವದ ಸಭೆ]]></title>
            <link>https://kannada.asianetnews.com/india-news/raichur-yadgir-highway-projects-update-nhai-reviews-nh-150c-nh-748-gvd/articleshow-rrzo5hg</link>
            <guid isPermaLink="true">https://kannada.asianetnews.com/india-news/raichur-yadgir-highway-projects-update-nhai-reviews-nh-150c-nh-748-gvd/articleshow-rrzo5hg</guid>
            <pubDate>Tue, 16 Jun 2026 21:13:53 +0530</pubDate>
            <description><![CDATA[&lt;p&gt;NH 150C Project: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ಸಂಸದ ಜಿ ಕುಮಾರ ನಾಯಕ ಭೇಟಿ &zwnj;ಮಾಡಿದ್ರು.&zwnj;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv8hmkt6v2gq0qbramw03kxb,imgname-nkn-1781624622918.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜೂ.16):&lt;/strong&gt; ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ರಾಯಚೂರು&ndash;ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕ ಭೇಟಿ &zwnj;ಮಾಡಿದ್ರು.&zwnj; ಕಲ್ಯಾಣ ಕರ್ನಾಟಕ ಪ್ರದೇಶದ ಮೂಲಕ ಹಾದು ಹೋಗುವ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಕುರಿತು ಸವಿಸ್ತಾರ ಚರ್ಚೆ ನಡೆಸಿದರು.&lt;/p&gt;&lt;p&gt;ಸಭೆಯಲ್ಲಿ ವಿಶೇಷವಾಗಿ ರಾಯಚೂರು&ndash;ಯಾದಗಿರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಾದ NH-150Cರ ಎರಡು ಪ್ಯಾಕೇಜುಗಳು, NH-748 ರ ಮೂರು ಪ್ಯಾಕೇಜುಗಳು ಹೊಸದಾಗಿ ಪ್ರಸ್ತಾಪಿಸಲಾದ NH-167 ಮಾರ್ಗಸೂಚಿ ಹಾಗೂ NH-150A ರಸ್ತೆ ಅಗಲೀಕರಣ ಯೋಜನೆಗಳ ಪ್ರಗತಿ ಬಗ್ಗೆ ಸಮಗ್ರವಾಗಿ ಪರಿಶೀಲನೆ &zwnj;ನಡೆಸಲಾಯ್ತು.&lt;/p&gt;&lt;p&gt;ಇನ್ನೂ ಇದೇ ವೇಳೆ ಹೈವೇ ಜೊತೆಗೆ ರಸ್ತೆ ಅಗಲೀಕರಣ, ಅಗತ್ಯವಿರುವ ಸ್ಥಳಗಳಲ್ಲಿ ಬೈಪಾಸ್&zwnj;ಗಳ ನಿರ್ಮಾಣ, ಸರ್ವಿಸ್ ರಸ್ತೆಗಳ ಅಭಿವೃದ್ಧಿ, ಅಪಘಾತ ತಡೆಗೆ ಸುರಕ್ಷತಾ ಕ್ರಮಗಳ ಅಳವಡಿಕೆ ಹಾಗೂ ಕಾಮಗಾರಿಗಳ ಗುಣಮಟ್ಟವನ್ನು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ವಹಿಸುವ ಕುರಿತು ಸಮಗ್ರ ಚರ್ಚೆ ನಡೆಯಿತು. ಅಲ್ಲದೆ ಭೂಸ್ವಾಧೀನ, ತಾಂತ್ರಿಕ ಅನುಮೋದನೆಗಳು ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿ ಉಂಟಾಗುವ ಅಡಚಣೆಗಳನ್ನು ತ್ವರಿತವಾಗಿ ಪರಿಹರಿಸುವ ಅಗತ್ಯತೆಯನ್ನೂ ಒತ್ತಿ ಹೇಳಲಾಯಿತು.&lt;/p&gt;&lt;h2&gt;&lt;strong&gt;ಹೈವೇಗಳು ಬಂದ್ರೆ ರಾಯಚೂರು ಆಗಲಿದೆ ರೋಡ್ ಗಳ ಹಬ್!&lt;/strong&gt;&lt;/h2&gt;&lt;p&gt;ಕಲ್ಯಾಣ ಕರ್ನಾಟಕ ಭಾಗದ ಜನರ ಬಹುಕಾಲದ ಬೇಡಿಕೆಯಾದ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆ ಈ ಯೋಜನೆಗಳ ಮೂಲಕ ಸಾಕಾರಗೊಳ್ಳಲಿದ್ದು, ಕೃಷಿ, ಕೈಗಾರಿಕೆ, ವ್ಯಾಪಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು. ಉತ್ತಮ ಗುಣಮಟ್ಟದ ರಸ್ತೆ ಜಾಲದಿಂದ ಹೂಡಿಕೆ ಅವಕಾಶಗಳು ಹೆಚ್ಚುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಅವರು ಮನವರಿಕೆ ಮಾಡಿದರು.&lt;/p&gt;&lt;p&gt;ಸಭೆಯಲ್ಲಿ NHAI ಅಧ್ಯಕ್ಷರಾದ ಸಂತೋಷ್ ಯಾದವ್ ಅವರು ಪ್ರಾಧಿಕಾರದ ಸಂಪೂರ್ಣ ಸಹಕಾರ ಜೊತೆಗೆ ಭರವಸೆ ನೀಡಿದ್ದು, ಸಾರ್ವಜನಿಕರಿಗೆ ಶೀಘ್ರದಲ್ಲಿ ಉತ್ತಮ ರಸ್ತೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲು ಬದ್ಧತೆ ವ್ಯಕ್ತಪಡಿಸಿದರು. ಯೋಜನೆಗಳ ಅನುಷ್ಠಾನದಲ್ಲಿ ಗುಣಮಟ್ಟ ಮತ್ತು ಸಮಯ ಪಾಲನೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.&lt;/p&gt;&lt;p&gt;ಈ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪೂರ್ಣಗೊಂಡ ಬಳಿಕ ರಾಯಚೂರು&ndash;ಯಾದಗಿರಿ ಸೇರಿದಂತೆ ಸಮಗ್ರ ಕಲ್ಯಾಣ ಕರ್ನಾಟಕ ಪ್ರದೇಶದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದ್ದು, ರಸ್ತೆ ಸುರಕ್ಷತೆ ಹೆಚ್ಚುವುದರೊಂದಿಗೆ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ ಎಂದು ಸಂಸದ ಜಿ. ಕುಮಾರ್ &zwnj;ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Govindaraj S</dc:creator>
            <atom:link href="https://kannada.asianetnews.com/india-news/raichur-yadgir-highway-projects-update-nhai-reviews-nh-150c-nh-748-gvd/articleshow-rrzo5hg"/>
        </item>
        <item>
            <title><![CDATA[ರಾಯಚೂರು: ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಡಿವೈಡರ್ ಡಿಕ್ಕಿ; 'ಕಣ್ಣು ಮಂಜಾಗಿ' ಹತ್ತಿಸಿದ ಎಂದ ಭೂಪ!]]></title>
            <link>https://kannada.asianetnews.com/gallery/karnataka-districts/raichur-drunk-man-crashes-divider-electric-pole-incident-in-city-rav-ugsrt8w</link>
            <guid isPermaLink="true">https://kannada.asianetnews.com/gallery/karnataka-districts/raichur-drunk-man-crashes-divider-electric-pole-incident-in-city-rav-ugsrt8w</guid>
            <pubDate>Wed, 10 Jun 2026 10:16:06 +0530</pubDate>
            <description><![CDATA[&lt;p&gt;ರಾಯಚೂರು ನಗರದಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಯರ್ರಾಬಿರ್ರಿ ಕಾರು ಚಾಲಯಿಸಿ ಡಿವೈಡರ್&zwnj;ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರ ವಿಚಾರಣೆ ವೇಳೆ &lsquo;ಕಣ್ಣು ಮಂಜಾಗಿ&rsquo; ಹತ್ತಿಸಿದೆ ಸಾರ್ ಎಂದಿರುವ ಭೂಪನಿಗೆ ಏನು ಹೇಳಬೇಕು?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktqwqkk400m68b4whdzh20ag,imgname-----------------------2026-06-10t095958.280-1781065829988.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಯಚೂರು ನಗರದಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಯರ್ರಾಬಿರ್ರಿ ಕಾರು ಚಾಲಯಿಸಿ ಡಿವೈಡರ್&zwnj;ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರ ವಿಚಾರಣೆ ವೇಳೆ &lsquo;ಕಣ್ಣು ಮಂಜಾಗಿ&rsquo; ಹತ್ತಿಸಿದೆ ಸಾರ್ ಎಂದಿರುವ ಭೂಪನಿಗೆ ಏನು ಹೇಳಬೇಕು?&amp;nbsp;&lt;/p&gt;&lt;img&gt;&lt;p&gt;ಕಂಠಪೂರ್ತಿ ಕುಡಿದು ಯರ್ರಾಬಿರ್ರಿ ಕಾರು ಚಲಾಯಿಸಿದ ಕುಡುಕನೋರ್ವ ಅವಾಂತರ ಸೃಷ್ಟಿಸಿದ್ದಾನೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬಿಟ್ಟು ಡಿವೈಡರ್ ಮೇಲೆ ಹತ್ತಿ ಹೊಡೆದ ಘಟನೆ ರಾಯಚೂರು ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ನಡೆದಿದೆ.&lt;/p&gt;&lt;img&gt;&lt;p&gt;ಡಿವೈಡರ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಕಾರು ರಭಸವಾಗಿ &amp;nbsp;ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದುಬಿದ್ದಿದೆ, ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಇಷ್ಟಾದರೂ ಅದೃಷ್ಟವಶಾತ್ ಕಾರು ಚಾಲಕ ಪವಾಡ ಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.&lt;/p&gt;&lt;img&gt;&lt;p&gt;ಕಾರು ಡಿಕ್ಕಿಯಾದ ರಭವಸಕ್ಕೆ ದೊಡ್ಡ ಅನಾಹುತವೇ ಆಗುತ್ತಿತ್ತು. ಅದೃಷ್ಟವಶಾಂತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಡಿಕ್ಕಿ ಹೊಡೆದ ತಕ್ಷಣಕ್ಕೆ ಸ್ಥಳೀಯರು ತಕ್ಷಣ ಸಹಾಯಕ್ಕೆ ದಾವಿಸಿ ಬಂದರು.&lt;/p&gt;&lt;img&gt;&lt;p&gt;ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಚಾಲಕ ಶ್ರೀನಿವಾಸ ಗೌಡ ಎಂಬಾತನ ವಿಚಾರಿಸಿದಾಗ 'ಕಣ್ಣು ಮಂಜಾಗಿ ಡಿವೈಡರ್ ಮೇಲೆ ಕಾರು ಹತ್ತಿಸಿದ್ದೇನೆ' ಎಂದು ಹೇಳಿದ್ದಾನೆ! ಕುಡಿದು ಕಾರು ಚಲಾಯಿಸಿದರೆ ಕಣ್ಣು ಮಂಜಾಗದೆ ಇನ್ನೇನಾಗುತ್ತೆ? ಎಂದ ಪೊಲೀಸರು.&lt;/p&gt;&lt;img&gt;&lt;p&gt;ಘಟನೆ ಸಂಬಂಧ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂಬುದು ತಿಳಿದುಬಂದಿದೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/raichur-drunk-man-crashes-divider-electric-pole-incident-in-city-rav-ugsrt8w"/>
        </item>
    </channel>
</rss>
