<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 22 Jul 2026 14:03:48 +0530</lastBuildDate>
        <atom:link href="https://kannada.asianetnews.com/rss/raichur" rel="self" type="application/rss+xml"/>
        <item>
            <title><![CDATA[ಬೇಸಿಗೆ ಆಗಿ ಬದಲಾಯ್ತು ಮಳೆಗಾಲ, ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ 3 ರಿಂದ 4 ಡಿಗ್ರಿ ಸೆ ಉಷ್ಣಾಂಶ ಏರಿಕೆ!]]></title>
            <link>https://kannada.asianetnews.com/state/karnataka-news-bangalore-weather-monsoon-turns-into-summer-temp-rises-by-4-degree-celsius-gdp/articleshow-02quw1m</link>
            <guid isPermaLink="true">https://kannada.asianetnews.com/state/karnataka-news-bangalore-weather-monsoon-turns-into-summer-temp-rises-by-4-degree-celsius-gdp/articleshow-02quw1m</guid>
            <pubDate>Tue, 14 Jul 2026 10:52:06 +0530</pubDate>
            <description><![CDATA[ನೈರುತ್ಯ ಮಾನ್ಸೂನ್ ದುರ್ಬಲಗೊಂಡಿದ್ದರಿಂದ ಕರ್ನಾಟಕದಲ್ಲಿ ಮಳೆಗಾಲದಲ್ಲಿಯೇ ಬೇಸಿಗೆಯಂತಹ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರು, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ತಾಪಮಾನ ಏರಿಕೆಯಾಗಿದ್ದು, ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಮಳೆಯ ಕೊರತೆಯಿಂದ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx5tdpvafqg5scjr5dypyfwv,imgname-summer-1-1783680654186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಜೂನ್, ಜುಲೈ ತಿಂಗಳು ಬಂತೆಂದರೆ ಸಾಮಾನ್ಯವಾಗಿ ವರುಣನ ಆರ್ಭಟ ಜೋರಾಗಿರುತ್ತದೆ. ಅಲ್ಲಲ್ಲಿ ಅವಾಂತರಗಳು ಆಗುತ್ತಿರುತ್ತವೆ. ಆದರೆ ಈ ಬಾರಿ ರಾಜ್ಯದಲ್ಲಿ ಮಳೆಗಾಲ ಚಿತ್ರಣವೇ ಉಲ್ಟಾ ಆದಂತಾಗಿದೆ. ಮಳೆಗಾಲದಲ್ಲಿ ಜನರು ಬೇಸಿಗೆಯ ಬಿಸಿಲಿನ ಬೇಗೆಯನ್ನು ಅನುಭವಿಸುವಂತಾಗಿದೆ. ನೈರುತ್ಯ ಮಾನ್ಸೂನ್ ಮಾರುತಗಳು ದುರ್ಬಲಗೊಂಡಿರುವುದರಿಂದ ರಾಜ್ಯಾದ್ಯಂತ ಮಳೆಯ ಪ್ರಮಾಣ ಗಣನೀಯವಾಗಿ ಕುಸಿತವಾಗಿದ್ದು, ತಾಪಮಾನದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಉಷ್ಣಾಂಶ ಏರಿಕೆಯಾಗಿದೆ. ಜನರು ಸೆಕೆ ವಾತಾವರಣಕ್ಕೆ ಹೈರಾಣಾಗಿದ್ದಾರೆ&lt;/p&gt;&lt;h2&gt;ಬೇಸಿಗೆಯಂತಾದ ಮಳೆಗಾಲ: ಕಂಗಾಲಾದ ಬೆಂಗಳೂರಿಗರು&lt;/h2&gt;&lt;p&gt;ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮಳೆಗಾಲದ ಈ ಸಮಯದಲ್ಲಿ ತೀವ್ರ ತಂಪಾದ ವಾತಾವರಣ ಇರುತ್ತಿತ್ತು. ವಾಡಿಕೆಯಂತೆ ಇಲ್ಲಿನ ಗರಿಷ್ಠ ಉಷ್ಣಾಂಶ 28.3 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಬೇಕಿತ್ತು. ಆದರೆ ಪ್ರಸ್ತುತ ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 32.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಅಂದರೆ, ವಾಡಿಕೆಗಿಂತ 4.1 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಉಷ್ಣಾಂಶ ಏರಿಕೆಯಾಗಿದ್ದು, ಬೆಂಗಳೂರಿಗರು ಬಿಸಿಲ ಬೇಗೆಗೆ ಬೆಂದು ಹೋಗುತ್ತಿದ್ದಾರೆ.&lt;/p&gt;&lt;p&gt;5 ವರ್ಷಗಳ ಬಳಿಕ ನಗರದಲ್ಲಿ ಜುಲೈ ತಿಂಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. 2021ರ ಜುಲೈನಲ್ಲಿ ಗರಿಷ್ಠ ತಾಪಮಾನ 32.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಪುನಃ ಪ್ರಸಕ್ತ ಜುಲೈನಲ್ಲಿ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಅಂಕಿ-ಅಂಶಗಳು ತಿಳಿಸಿವೆ. ಇನ್ನು ಎಚ್&zwnj;ಎಎಲ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸರಾಸರಿಗಿಂತ 4.4 ಡಿಗ್ರಿ ಸೆಲ್ಸಿಯಸ್ ಹೆಚ್ಚು. ಕಳೆದ 17 ದಿನಗಳಿಂದ ನಗರದಲ್ಲಿ ಮಳೆಯಾಗಿಲ್ಲ. ಮೋಡಗಳು ಇಲ್ಲದ ಕಾರಣ ಕಳೆದ 1 ವಾರದಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಜು.17ರವರೆಗೂ ನಗರದಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.&lt;/p&gt;&lt;p&gt;ರಾಜಧಾನಿ ಮಾತ್ರವಲ್ಲದೆ ಮೈಸೂರು, ಗದಗ, ಕೊಪ್ಪಳ ಹಾಗೂ ಬೆಂಗಳೂರಿನ ಹೆಚ್&zwnj;ಎಎಲ್ (HAL) ವಿಮಾನ ನಿಲ್ದಾಣ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ವ್ಯಾಪ್ತಿಯಲ್ಲೂ ತಾಪಮಾನದಲ್ಲಿ ಬರೋಬ್ಬರಿ 4 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಹೆಚ್ಚಳ ಕಂಡುಬಂದಿದೆ.&lt;/p&gt;&lt;h2&gt;ರಾಯಚೂರಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲು&lt;/h2&gt;&lt;p&gt;ಇನ್ನು ರಾಜ್ಯದಲ್ಲೇ ಅತಿ ಹೆಚ್ಚು ಬಿಸಿಲಿನ ತಾಪಕ್ಕೆ ತುತ್ತಾಗಿರುವುದು ರಾಯಚೂರು ಜಿಲ್ಲೆ. ಈ ಅವಧಿಯಲ್ಲಿ ರಾಯಚೂರಿನಲ್ಲಿ ಸಾಮಾನ್ಯವಾಗಿ 33.1 ಡಿಗ್ರಿ ಸೆಲ್ಸಿಯಸ್ ವಾಡಿಕೆ ಉಷ್ಣಾಂಶ ಇರಬೇಕಿತ್ತು. ಆದರೆ ಈಗ ಅಲ್ಲಿ ಬರೋಬ್ಬರಿ 38.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಂದರೆ ವಾಡಿಕೆಗಿಂತ 5.3 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ತಾಪಮಾನ ಏರಿಕೆಯಾಗಿದ್ದು, ಜಿಲ್ಲೆಯ ಜನತೆ ಬಿಸಿಲ ಝಳಕ್ಕೆ ತತ್ತರಿಸಿ ಹೋಗಿದ್ದಾರೆ.&lt;/p&gt;&lt;h2&gt;ಒಣ ಹವೆ ಮುಂದುವರಿಕೆ: ಹವಾಮಾನ ಇಲಾಖೆ ಮಾಹಿತಿ&lt;/h2&gt;&lt;p&gt;ನೈರುತ್ಯ ಮಾನ್ಸೂನ್ (Southwest Monsoon) ತೀವ್ರವಾಗಿ ದುರ್ಬಲಗೊಂಡಿರುವುದೇ ಈ ಹಠಾತ್ ಹವಾಮಾನ ಬದಲಾವಣೆಗೆ ಮುಖ್ಯ ಕಾರಣ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯ ಕೊರತೆಯಿಂದಾಗಿ ಈಗಿರುವ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದ್ದು, ವಿಶೇಷವಾಗಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದಿದೆ. ಮುಂಬರುವ ದಿನಗಳಲ್ಲೂ ಮಳೆ ಚುರುಕಾಗದಿದ್ದರೆ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-news-bangalore-weather-monsoon-turns-into-summer-temp-rises-by-4-degree-celsius-gdp/articleshow-02quw1m"/>
        </item>
        <item>
            <title><![CDATA[ಕಾಲಿಗೆ ಪೊರಕೆ ತಾಗಿದ್ದಕ್ಕೆ ಬೈದ ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಥಳಿಸಿದ ಮಹಿಳೆ!]]></title>
            <link>https://kannada.asianetnews.com/gallery/karnataka-districts/raichur-woman-throws-chili-powder-in-customer-eyes-beats-him-up-after-he-scolded-her-for-touching-her-leg-with-broom-mrq-097tesq</link>
            <guid isPermaLink="true">https://kannada.asianetnews.com/gallery/karnataka-districts/raichur-woman-throws-chili-powder-in-customer-eyes-beats-him-up-after-he-scolded-her-for-touching-her-leg-with-broom-mrq-097tesq</guid>
            <pubDate>Wed, 10 Jun 2026 08:08:27 +0530</pubDate>
            <description><![CDATA[ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್&zwnj;ನಲ್ಲಿ, ಪೊರಕೆ ತಾಗಿದ್ದಕ್ಕೆ ಕೋಪಗೊಂಡ ಗ್ರಾಹಕನೊಬ್ಬ ಮಹಿಳಾ ಸಿಬ್ಬಂದಿಗೆ ಬೈದಿದ್ದಾನೆ. ಇದರಿಂದ ಕೆರಳಿದ ಮಹಿಳೆ, ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಪೊರಕೆಯಿಂದಲೇ ಥಳಿಸಿದ್ದಾರೆ. ಈ ಬೀದಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktqns5jr69mv7byjq943p73q,imgname-raichur--3--1781058541144.jpg" type="image/jpeg" height="390" width="690"/>
            <content:encoded><![CDATA[ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್&zwnj;ನಲ್ಲಿ, ಪೊರಕೆ ತಾಗಿದ್ದಕ್ಕೆ ಕೋಪಗೊಂಡ ಗ್ರಾಹಕನೊಬ್ಬ ಮಹಿಳಾ ಸಿಬ್ಬಂದಿಗೆ ಬೈದಿದ್ದಾನೆ. ಇದರಿಂದ ಕೆರಳಿದ ಮಹಿಳೆ, ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಪೊರಕೆಯಿಂದಲೇ ಥಳಿಸಿದ್ದಾರೆ. ಈ ಬೀದಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;img&gt;&lt;p&gt;ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್ ಮಹಿಳಾ ಸಿಬ್ಬಂದಿ ಕಸ ಗುಡಿಸುತ್ತಿದ್ದಾಗ, ಅಲ್ಲಿಗೆ ಬಂದಿದ್ದ ಗ್ರಾಹಕನೊಬ್ಬನ ಕಾಲಿಗೆ ಆಕಸ್ಮಿಕವಾಗಿ ಪೊರಕೆ ತಾಗಿದೆ. ಇದರಿಂದ ಕೋಪಗೊಂಡ ಗ್ರಾಹಕ ಮಹಿಳಾ ಸಿಬ್ಬಂದಿಗೆ ಸಾರ್ವಜನಿಕರ ಎದುರೇ ಏಕವಚನದಲ್ಲಿ ಮನಬಂದಂತೆ ಬೈದಿದ್ದಾನೆ.&lt;/p&gt;&lt;img&gt;&lt;p&gt;ಗ್ರಾಹಕನ ನಿಂದನೆಯಿಂದ ಕೆಂಡಾಮಂಡಲವಾದ ಮಹಿಳಾ ಸಿಬ್ಬಂದಿ ತಿರುಮಲಾ ಎಂಬವವರು ತಕ್ಷಣ ಕ್ಯಾಂಟೀನ್&zwnj;ನ ಕಿಚನ್&zwnj;ಗೆ ಓಡಿಹೋಗಿ ಖಾರದ ಪುಡಿ ತಂದು ಗ್ರಾಹಕನ ಕಣ್ಣಿಗೆ ಎರಚಿದ್ದಾರೆ. ನಂತರ ಬಸ್&zwnj; ನಿಲ್ದಾಣದಲ್ಲಿ ಅದೇ ಪೊರಕೆಯಿಂದ ಗ್ರಾಹಕನಿಗೆ ಥಳಿಸಿದ್ದಾರೆ.&lt;/p&gt;&lt;img&gt;&lt;p&gt;ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ನೂರಾರು ಸಾರ್ವಜನಿಕರ ಮುಖಾಂತರವೇ ಇಬ್ಬರೂ ಬೀದಿ ಜಗಳಕ್ಕೆ ನಿಂತು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ಹೈಡ್ರಾಮಾ ನಡೆದಿರುವ ರಾಯಚೂರಿನ ಕೇಂದ್ರ ಬಸ್ ನಿಲ್ದಾಣವು ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;4 ವಿಧಗಳಲ್ಲಿ ತ್ಯಾಜ್ಯ ವಿಂಗಡಿಸದಿದ್ದರೆ ಪ್ರಕರಣ ದಾಖಲಿಸಿ ದಂಡ ಹಾಕಿ; ಮುಖ್ಯಾಧಿಕಾರಿ ಎಚ್ಚರಿಕೆ&lt;/strong&gt;&lt;/p&gt;&lt;img&gt;&lt;p&gt;ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್&zwnj;ನಲ್ಲಿ ಮೇ 24ರಂದು ಈ ಘಟನೆ ನಡೆದಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ. ಗ್ರಾಹಕನ ಹೆಸರು ತಿಳಿದು ಬಂದಿಲ್ಲ. ಸದ್ಯ ಈ ವಿಡಿಯೋ ರಾಯಚೂರು ಭಾಗದಲ್ಲಿ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು: ಗಜೇಂದ್ರಗಡ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ!&lt;/strong&gt;&lt;/p&gt;]]></content:encoded>
            <category>raichur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/raichur-woman-throws-chili-powder-in-customer-eyes-beats-him-up-after-he-scolded-her-for-touching-her-leg-with-broom-mrq-097tesq"/>
        </item>
        <item>
            <title><![CDATA[ಹೃದಯಾಘಾತಕ್ಕೆ ಕುಸಿದು ಬಿದ್ದು ಮೃತಪಟ್ಟ ರಾಯಚೂರಿನ 37ರ ಹರೆಯದ ಪೊಲೀಸ್ ಪೇದೆ]]></title>
            <link>https://kannada.asianetnews.com/karnataka-districts/raichur-on-duty-police-constable-37-dies-after-suffering-heart-attack/articleshow-0gnxcrc</link>
            <guid isPermaLink="true">https://kannada.asianetnews.com/karnataka-districts/raichur-on-duty-police-constable-37-dies-after-suffering-heart-attack/articleshow-0gnxcrc</guid>
            <pubDate>Thu, 25 Jun 2026 08:31:18 +0530</pubDate>
            <description><![CDATA[&lt;p&gt;ಕೆಲಸದ ವೇಳೆ ತೀವ್ರ ಎದೆನೋವು ಹಾಗೂ ಎಡಗೈ ಸೆಳೆತ ಕಾಣಿಸಿಕೊಂಡ ಕಾರಣ ಸ್ಥಳೀಯ ಆಸ್ಪತ್ರೆಗೆ ಕೆರದೊಯ್ಯಲಾಗಿತ್ತು. ಇಂಜೆಕ್ಷನ್&zwnj;ಗೆ ಸಿದ್ಧತೆ ನಡೆಸುತ್ತಿದ್ದಂತೆ ಕುಳಿತಿದ್ದ ಪೊಲೀಸ್ ಪೇದೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvybjx28hrnvsz23xq7b1tjc,imgname-raichur-cop-passes-away-1782356472904.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜೂ.25) &lt;/strong&gt;ರಾಯಚೂರಿನಲ್ಲಿ ಹೃದಾಯಾಘಾಚಕ್ಕೆ ಪೊಲೀಸ್ ಕಾನ್ಸ್&zwnj;ಸ್ಟೇಬಲ್ ಬಲಿಯಾದ ಘಟನೆ ನಡೆದಿದೆ. ರಾಯಚೂರು ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಣುಕಾ ರಾಜ್, ಮೊಹರಂ ಹಬ್ಬದ ಭದ್ರತೆಗೆ ನಿಯೋಜನೆಗೊಂಡಿದ್ದರು. ಕರ್ತವ್ಯದ ವೇಳೆ ತೀವ್ರ ಎದೆನೋವು ಹಾಗೂ ಎಡೆಗೈ ಸೆಳೆತ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡ ರೇಣುಕಾ ರಾಜ್&zwnj;ನನ್ನು ಪೊಲೀಸರು ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆರೆತರಲಾಗಿತ್ತು. ಆರೋಗ್ಯ ಕೇಂದ್ರದ ಕುರ್ಚಿಯಲ್ಲಿ ಕುಳಿದಿದ್ದ ರೇಣುಕಾ ರಾಜ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. 37ರ ಹರೆಯದ ಪೊಲೀಸ್ ಪೇದೆ ರೇಣುಕಾರಾಜ್ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;h2&gt;ಸ್ಥಳೀಯ ಆಸ್ಪತ್ರೆ ಕುರ್ಚಿಯಿಂದ ಕುಸಿದು ಬಿದ್ದ ಪೇದೆ&lt;/h2&gt;&lt;p&gt;ದೇವದುರ್ಗ ಠಾಣೆ ಸಿಪಿಐ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಣುಕಾ ರಾಜ್, ಇದೇ ಇದೇ ಜೂನ್ 23 ರಂದು ಮೊಹರಂ ಬಂದೋಬಸ್ತ್ ಗಾಗಿ ನಿಯೋಜನೆಗೊಂಡಿದ್ದರು. ಈ ವೇಳೆ ರಾತ್ರಿ 10.30 ರ ಸುಮಾರಿಗೆ ರೇಣುಕಾ ರಾಜ್&zwnj;ಗೆ ಎದೆನೋವು ಕಾಣಿಸಿಕೊಂಡಿದೆ. ಕೆಲಸದ ನಡುವೆ ಒದ್ದಾಡಿದ ರೇಣುಕಾ ರಾಜ್&zwnj;ನನ್ನು ತಕ್ಷಣವೇ ಸಿಪಿಐ ಜೀಪ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂಜೆಕ್ಷನ್ ಗೆ ಸಿದ್ಧತೆ ನಡೆಸುತ್ತಿದ್ದಂತೆ ಇತ್ತ ರೇಣುಕಾ ರಾಜ್ ಪ್ರಾಣಬಿಟ್ಟಿದ್ದಾರೆ.&lt;/p&gt;&lt;p&gt;30 ಸೆಕೆಂಡ್&zwnj;ನಲ್ಲಿ ಸಾವು&lt;/p&gt;&lt;p&gt;ಆಸ್ಪತ್ರೆ ಚೇರ್ ಮೇಲೆ ಕುಳಿತಿದ್ದ ರೇಣುಕಾ ರಾಜ್ ತೀವ್ರ ಒದ್ದಾಡಿದ್ದಾರೆ. ಎದೆನೋವು ಹೆಚ್ಚಾಗಿದೆ. ಅಸ್ವಸ್ಥಗೊಂಡ ರೇಣುಕಾ ರಾಜ್ ಕುಳಿತಲ್ಲಿಂದಲೇ ಕುಸಿದು ಬಿದ್ದಿದ್ದಾರೆ. ಕೇವಲ 30 ಸೆಕೆಂಡ್&zwnj;ನಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ರಾಯಚೂರು ಜಿಲ್ಲಾ ಪೊಲೀಸ್ ಘಟಕದಿಂದ ಮೃತ ಕಾನ್ಸ್ ಟೇಬಲ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ರೇಣುಕಾ ರಾಜ್ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಆಮದಿಹಾಳ ಗ್ರಾಮದ ಮೂಲದವರು. ಪೊಲೀಸ್ ಪೇದೆ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ನಿರಂತರ ಕೆಲಸ, ಒತ್ತಡಗಳಿಂದ ಆರೋಗ್ಯ ಕೆಟ್ಟಿರುವ ಸಾಧ್ಯತ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಘಟನೆ ಇದೀಗ ಹಲವರನ್ನು ಬೆಚ್ಚಿ ಬೀಳಿಸಿದೆ. ಹೃದಾಯಾಘಾತ ಸಮಸ್ಯೆಗಳು ತೀವ್ರಗೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ. ಉತ್ತಮ ಆಹಾರ ಶೈಲಿ, &amp;nbsp;ಜೀವನ ಪದ್ಧತಿ, ವ್ಯಾಯಮಾ ಅಭ್ಯಾಸಗಳು ಬೆಳೆಸಿಕೊಂಡರೆ ಆತಂಕದಿಂದ ದೂರವಿರಲು ಸಾಧ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. &amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>raichur</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/raichur-on-duty-police-constable-37-dies-after-suffering-heart-attack/articleshow-0gnxcrc"/>
        </item>
        <item>
            <title><![CDATA[ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್:  6 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!]]></title>
            <link>https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</link>
            <guid isPermaLink="true">https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</guid>
            <pubDate>Wed, 08 Jul 2026 11:25:56 +0530</pubDate>
            <description><![CDATA[ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಮೆಗಾ ಆಪರೇಷನ್&zwnj;ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx04edrp64anbam01r602epp,imgname-lokayukta-raids-in-across-karnataka-1783489836822.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿದಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಇಂದು ಮುಂಜಾನೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನೂರಾರು ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಈ ಮೆಗಾ ಆಪರೇಷನ್ ಕೈಗೊಂಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;ಧಾರವಾಡ ಮತ್ತು ಶಿವಮೊಗ್ಗ: ಎಸಿಎಫ್ ಕಿರಣ್ ಅಂಗಡಿಗೆ ಶಾಕ್!&lt;/h2&gt;&lt;p&gt;ಶಿವಮೊಗ್ಗದ ಅರಣ್ಯ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಗಿ ಸೇವೆ ಸಲ್ಲಿಸುತ್ತಿರುವ ಕಿರಣ್ ಅಂಗಡಿ ಅವರಿಗೆ ಸೇರಿದ ಧಾರವಾಡ ಮತ್ತು ಶಿವಮೊಗ್ಗದ ಒಟ್ಟು ೫ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಧಾರವಾಡದ ಲೋಕಾ ಎಸ್ಪಿ ಸಿದ್ದಲಿಂಗಪ್ಪ ಹಾಗೂ ಶಿವಮೊಗ್ಗದ ಲೋಕಾಯುಕ್ತ ಇನ್&zwnj;ಸ್ಪೆಕ್ಟರ್ ವೀರಬಸಪ್ಪ ಕುಶಲಾಪೂರ ಮತ್ತು ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರುವ ಐಷಾರಾಮಿ ಮನೆ, ಅಳ್ನಾವರ ರಸ್ತೆಯಲ್ಲಿರುವ ಫಾರ್ಮ್ ಹೌಸ್, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪತ್ನಿಯ ಹೆಸರಿನಲ್ಲಿದೆ ಎನ್ನಲಾದ ಉದ್ಯಮ) ಹಾಗೂ ಅವರ ಸೋದರ ಮಾವನ ಮನೆಗಳ ಮೇಲೆ ಶೋಧ ನಡೆಸಲಾಗುತ್ತಿದೆ.&lt;/p&gt;&lt;h2&gt;ಶಿವಮೊಗ್ಗದ ಕಚೇರಿ ಮೇಲೂ ದಾಳಿ&lt;/h2&gt;&lt;p&gt;ಇತ್ತ ಶಿವಮೊಗ್ಗದ ಆಲ್ಕೋಳ ರಸ್ತೆಯಲ್ಲಿರುವ ಕಿರಣ್ ಅಂಗಡಿ ಅವರ ಅರಣ್ಯ ಸಂಶೋಧನಾ ಕಚೇರಿಯ ಮೇಲೂ ಲೋಕಾಯುಕ್ತ ತಂಡ ತಪಾಸಣೆ ನಡೆಸುತ್ತಿದೆ. ದಾಳಿಯ ವೇಳೆ ಅಧಿಕಾರಿ ಕಿರಣ್ ಅಂಗಡಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಐದು ಜನರ ಅಧಿಕಾರಿಗಳ ತಂಡ ಸದ್ಯ ದಾಖಲೆಗಳನ್ನು ಜಾಲಾಡುತ್ತಿದೆ.&lt;/p&gt;&lt;h2&gt;ರಾಯಚೂರು: ಕೆಬಿಜೆಎನ್&zwnj;ಎಲ್ ಇಇ ಬಸನಗೌಡಗೆ ಸೇರಿದ 7 ಕಡೆ ದಾಳಿ&lt;/h2&gt;&lt;p&gt;ರಾಯಚೂರಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಕಾರ್ಯನಿರ್ವಾಹಕ ಇಂಜಿನಿಯರ್ (EE) ಬಸನಗೌಡ ಅವರ ವಿರುದ್ಧ ಲೋಕಾಯುಕ್ತರು ತನಿಖೆ ತೀವ್ರಗೊಳಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ 7 ಪ್ರತ್ಯೇಕ ತಂಡಗಳು ಏಕಕಾಲದಲ್ಲಿ 7 ಕಡೆ ಧಾಳಿ ನಡೆಸಿವೆ. ಬಸನಗೌಡ ಅವರ ರಾಯಚೂರು ನಗರದ ಎಚ್.ಆರ್.ಬಿ ಲೇಔಟ್&zwnj;ನಲ್ಲಿರುವ ಮನೆ, ಯಕ್ಲಾಸಪುರದ ಸೆಲೆಬ್ರಿಟಿ ಗಾರ್ಡನ್&zwnj;ನಲ್ಲಿರುವ ಅಣ್ಣನ ಮನೆ ಹಾಗೂ ಯಕ್ಲಾಪುರದ ತೋಟದ ಮನೆಯಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ.&lt;/p&gt;&lt;h2&gt;ಬಾರ್ ಮತ್ತು ಪೆಟ್ರೋಲ್ ಬಂಕ್ ಪತ್ತೆ&lt;/h2&gt;&lt;p&gt;ಬಸನಗೌಡ ಅವರ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ನಾಯರಾ ಪೆಟ್ರೋಲ್ ಬಂಕ್, ಅದರ ಪಕ್ಕದಲ್ಲೇ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಗೋದಾಮಿನ (Warehouse) ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ದೇವದುರ್ಗ ತಾಲೂಕಿನ ಚಿಕ್ಕ ಹೊನ್ನಕುಣಿ ವ್ಯಾಪ್ತಿಯ ಕೆಬಿಜೆಎನ್&zwnj;ಎಲ್ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.&lt;/p&gt;&lt;h2&gt;ಚಿತ್ರದುರ್ಗ ಆರ್&zwnj;ಎಫ್&zwnj;ಒ ಮತ್ತು ಪ್ರೊಫೆಸರ್ ಮನೆಗೆ ಅಧಿಕಾರಿಗಳ ಎಂಟ್ರಿ&lt;/h2&gt;&lt;p&gt;ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇಬ್ಬರು ಪ್ರಮುಖ ಅಧಿಕಾರಿಗಳ ಆಸ್ತಿಪಾಸ್ತಿಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿದೆ. ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿರುವ ವಲಯ ಅರಣ್ಯಾಧಿಕಾರಿ (RFO) ದುಗ್ಗಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರೊಫೆಸರ್ ಶಂಕರ್ ಅವರ ಮನೆ ಹಾಗೂ ತೋಟದ ಮೇಲೂ ಲೋಕಾಯುಕ್ತರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.&lt;/p&gt;&lt;h2&gt;ಕಲಬುರಗಿ ಜೇಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಫ್ಲ್ಯಾಟ್ ಮೇಲೆ ದಾಳಿ&lt;/h2&gt;&lt;p&gt;ಕಲಬುರಗಿಯಲ್ಲಿ ಜೆಸ್ಕಾಂ (GESCOM) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಅಮೃತರಾವ್ ಯಲಾಲ್ ಅವರಿಗೆ ಸೇರಿದ ಕಚೇರಿ ಹಾಗೂ ಮನೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ ತಂಡ ದಾಳಿ ಮಾಡಿದೆ. ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿರುವ ನಿವಾಸ, ಬಸವ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಫ್ಲ್ಯಾಟ್, ಮತ್ತು ಕೊತ್ತಂಬರಿ ಲೇಔಟ್&zwnj;ನಲ್ಲಿರುವ ಜೇಸ್ಕಾಂ ಕಚೇರಿಗಳ ಮೇಲೆ ದಾಳಿಯಾಗಿದೆ. ಇದಲ್ಲದೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮನೆಯ ಮೇಲೂ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಎಇಇ ಅಮೃತರಾವ್ ಅವರು ಜಾಗೃತಿ ಕಾಲೋನಿಯಲ್ಲಿ 'ಪ್ಲಾಟಿನಂ ಸ್ಟುಡಿಯೋ' ಎಂಬ ಹೈಟೆಕ್ ಸ್ಟುಡಿಯೋ ಹೊಂದಿದ್ದು, ನಂದೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫ್ಲ್ಯಾಟ್ ಹಾಗೂ ವಿವಿಧೆಡೆ 20 ಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;ತುಮಕೂರು ಸಣ್ಣ ನೀರಾವರಿ ಇಲಾಖೆ ಎಇಇ ಮನೆ ಮೇಲೆ ಲೋಕಾ ದಾಳಿ&lt;/h2&gt;&lt;p&gt;ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇ ಆಗಿರುವ ಮಧುಸೂದನ್ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಮಧುಸೂದನ್ ಮನೆ. ಸಣ್ಣ ನೀರಾವರಿ ಇಲಾಖೆ ತಿಪಟೂರು ಉಪವಿಭಾಗದಲ್ಲಿ ಎಇಇ ಆಗಿ ಕೆಲಸ ಮಾಡುತ್ತಿರುವ ಮಧುಸೂದನ್ ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಲೋಕಾ ದಾಳಿ. ಮಧುಸೂದನ್ ಮನೆಯನ್ನ ಪರಿಶೀಲನೆ ನಡೆಸುತ್ತಿರುವ ಲೋಕಾ ಟೀಮ್. ಸದ್ಯ ಎಲ್ಲಾ ಕಡೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ಚಿನ್ನಾಭರಣ, ನಗದು ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಬೇಕಿದೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet"/>
        </item>
        <item>
            <title><![CDATA[Raichuru Shocking: ಮಕ್ಕಳಿಗೆ ಕೊಡ್ಬೇಕಿದ್ದ 50,000 ಐರನ್‌ ಮಾತ್ರೆ ಶಾಲೆಯ ಟಾಯ್ಲೆಟ್‌ನಲ್ಲಿ ಪತ್ತೆ!]]></title>
            <link>https://kannada.asianetnews.com/education/5000-iron-tablets-found-in-a-toilet-gurugunta-government-school-raichur-rav/articleshow-2eo2p5g</link>
            <guid isPermaLink="true">https://kannada.asianetnews.com/education/5000-iron-tablets-found-in-a-toilet-gurugunta-government-school-raichur-rav/articleshow-2eo2p5g</guid>
            <pubDate>Wed, 22 Jul 2026 05:27:15 +0530</pubDate>
            <description><![CDATA[&lt;p&gt;ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಸರ್ಕಾರಿ ಶಾಲೆಯಲ್ಲಿ, ಮಕ್ಕಳಿಗೆ ವಿತರಿಸಬೇಕಿದ್ದ 50,000ಕ್ಕೂ ಹೆಚ್ಚು ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದು ನಾಶಪಡಿಸಲಾಗಿದೆ. ಈ ಘಟನೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky3gxc9s7sca1nnj283gyxvk,imgname-----------------------2026-07-22t051053.199-1784677314873.jpg" type="image/jpeg" height="390" width="690"/>
            <content:encoded><![CDATA[&lt;h2&gt;ರಾಯಚೂರಿನ ಗುರುಗುಂಟಾದ ಶಾಲೇಲಿ ಘಟನೆ&lt;/h2&gt;&lt;p&gt;&lt;strong&gt;&amp;nbsp;ಲಿಂಗಸುಗೂರು(ರಾಯಚೂರು) (ಜು.22)&lt;/strong&gt;&lt;/p&gt;&lt;p&gt;ಜಿಲ್ಲೆಯಲ್ಲಿ ಇತ್ತೀಚೆಗೆ ಪೌಷ್ಟಿಕ ಹಾಲಿನ ಪುಡಿ ದನದ ಕೊಟ್ಟಿಗೆಯಲ್ಲಿ ಪತ್ತೆಯಾದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಘಟನೆ ನಾಗರಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿತರಿಸಬೇಕಾದ 50,000ಕ್ಕೂ ಅಧಿಕ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶಿಕ್ಷಣ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಲಿಂಗಸುಗೂರು ತಾಲೂಕಿನ ಗುರುಗುಂಟಾದ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸಬೇಕಾದ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದಿದ್ದಾರೆ.&lt;/p&gt;&lt;p&gt;ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಮಾಕಾಪುರ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಡಬ್ಲೂಐಎಫ್ಎಸ್ ಮಾತ್ರೆಗಳಾದ ಪಿಂಕ್ ಮತ್ತು ಬ್ಲೂ ಮಾತ್ರೆಗಳು 2015ಅ.15ರಿಂದ 2017ಸೆ.17ರವರೆಗೆ ಅವಧಿ ಹೊಂದಿದ್ದು, ಬ್ಯಾಚ್ ಸಂಖ್ಯೆ ಐಎಫ್&zwnj;ಒ 039 ಎಂಬುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ವಶಕ್ಕೆ ಪಡೆದ ಮಾತ್ರೆಗಳನ್ನು ಮುಂದಿನ ಆದೇಶದವರೆಗೂ ಗುರುಗುಂಟಾದಲ್ಲಿರುವ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರದಲ್ಲಿ ಇರಿಸಲಾಗಿದೆ. ಐರನ್ ಮಾತ್ರೆಗಳನ್ನು ಮಕ್ಕಳಿಗೆ ನೀಡದೇ ಶೌಚಾಲಯದಲ್ಲಿ ಬೇಕಾಬಿಟ್ಟಿ ಎಸೆದ ಪ್ರಕರಣ ಶಿಕ್ಷಕರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.&lt;/p&gt;&lt;p&gt;ಘಟನೆ ಸಂಬಂಧ ಮಕ್ಕಳಿಗೆ ಮಾತ್ರೆಗಳು ಏಕೆ ವಿತರಣೆ ಮಾಡಿಲ್ಲ ಎಂದು ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮುಖ್ಯ ಶಿಕ್ಷಕರಿಗೆ ಜು.13ರಂದು ನೋಟಿಸ್ ನೀಡಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/5000-iron-tablets-found-in-a-toilet-gurugunta-government-school-raichur-rav/articleshow-2eo2p5g"/>
        </item>
        <item>
            <title><![CDATA[ಗ್ಯಾರಂಟಿ ಪರಿಷ್ಕರಣೆ ಮಧ್ಯೆ ರಾಜ್ಯದ 16 ಲಕ್ಷ ಜನರ ಪಿಂಚಣಿ ಸ್ಥಗಿತ! ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ವೃದ್ಧರು!]]></title>
            <link>https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr</link>
            <guid isPermaLink="true">https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr</guid>
            <pubDate>Wed, 17 Jun 2026 12:41:12 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಪರಿಶೀಲನೆಯ ನೆಪದಲ್ಲಿ ಸುಮಾರು 16 ಲಕ್ಷ ಫಲಾನುಭವಿಗಳ ಮಾಸಿಕ ಪಿಂಚಣಿಯನ್ನು ಸ್ಥಗಿತಗೊಳಿಸಿದೆ. ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರಂತಹ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಕಳೆದ ಮೂರು ತಿಂಗಳಿಂದ ನಿಂತುಹೋಗಿದ್ದು, ಬಡವರು ಮತ್ತು ಅಸಹಾಯಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k38860vgzn4ast8mffce4zr2,imgname-welfare-pension-1755844903792.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ನೀಡುತ್ತಿದ್ದ ಮಾಸಿಕ ಪಿಂಚಣಿಯನ್ನು (ಮಾಸಾಶನ) ದಿಢೀರನೆ ಸ್ಥಗಿತಗೊಳಿಸಿರುವುದು ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಂತಹ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ನಡುವೆಯೇ, ಬಡವರು ಹಾಗೂ ಅಸಹಾಯಕರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಕಳೆದ ಮೂರು ತಿಂಗಳಿಂದ ರಾಜ್ಯದ ಸುಮಾರು 16 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ಹಣ ತಲುಪುತ್ತಿಲ್ಲ. ರಾಜ್ಯದಲ್ಲಿನ ಈ ಪಿಂಚಣಿ ಸ್ಥಗಿತದ ಸಂಪೂರ್ಣ ವಿವರ, ಕಾರಣಗಳು ಮತ್ತು ಇದರಿಂದ ಜನಸಾಮಾನ್ಯರ ಮೇಲಾಗಿರುವ ಪರಿಣಾಮಗಳ ಕುರಿತಾದ ಸಮಗ್ರ ವರದಿ ಇಲ್ಲಿದೆ.&lt;/p&gt;&lt;h2&gt;16 ಲಕ್ಷ ಜನರಿಗೆ ಬಿಗ್ ಶಾಕ್: ಯಾರೆಲ್ಲ ಸಂಕಷ್ಟದಲ್ಲಿದ್ದಾರೆ?&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 82.71 ಲಕ್ಷ ಪಿಂಚಣಿ ಫಲಾನುಭವಿಗಳಿದ್ದಾರೆ. ಇವರಲ್ಲಿ ಅರ್ಹರಲ್ಲದವರನ್ನು ಪತ್ತೆಹಚ್ಚುವ ನೆಪದಲ್ಲಿ ಸರ್ಕಾರವು ಬರೋಬ್ಬರಿ 16 ಲಕ್ಷ ಜನರನ್ನು ಪಿಂಚಣಿ ಪಟ್ಟಿಯಿಂದ ಕೈಬಿಟ್ಟಿದೆ. ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ಕೆಳಗಿನ ಯೋಜನೆಗಳ ಆಶ್ರಯ ಪಡೆದಿದ್ದವರು ಬೀದಿಗೆ ಬೀಳುವಂತಾಗಿದೆ.&lt;/p&gt;&lt;ul&gt; &lt;li&gt;ವೃದ್ಧಾಪ್ಯ ವೇತನ (ಹಿರಿಯ ನಾಗರಿಕರು)&lt;/li&gt; &lt;li&gt;ವಿಧವಾ ಪಿಂಚಣಿ (ಪತಿಯನ್ನು ಕಳೆದುಕೊಂಡ ಮಹಿಳೆಯರು)&lt;/li&gt; &lt;li&gt;ಸಂಧ್ಯಾ ಸುರಕ್ಷಾ ಯೋಜನೆ&lt;/li&gt; &lt;li&gt;ವಿಕಲಾಂಗರ ಪಿಂಚಣಿ&lt;/li&gt;&lt;/ul&gt;&lt;p&gt;ಪ್ರತಿ ತಿಂಗಳು ಈ 82 ಲಕ್ಷ ಫಲಾನುಭವಿಗಳ ಪಿಂಚಣಿಗಾಗಿ ಸರ್ಕಾರ ಸುಮಾರು 400 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿತ್ತು. ಆದರೆ, ಈಗ 16 ಲಕ್ಷ ಜನರಿಗೆ ಕೊಕ್ ನೀಡಿರುವುದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 150 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಉಳಿತಾಯವಾಗುತ್ತಿದೆ.&lt;/p&gt;&lt;h2&gt;ಪಿಂಚಣಿ ಸ್ಥಗಿತಗೊಳ್ಳಲು ಮುಖ್ಯ ಕಾರಣಗಳೇನು?&lt;/h2&gt;&lt;p&gt;ಸರ್ಕಾರದ ವತಿಯಿಂದ ನಡೆಸಲಾದ ಇಲಾಖಾ ಪರಿಶೀಲನೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಈ ಪಿಂಚಣಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಮುಖ್ಯ ಕಾರಣಗಳು ಕೂಡ ನೀಡಲಾಗಿದೆ.&lt;/p&gt;&lt;p&gt;&lt;strong&gt;ವಿಳಾಸ ಬದಲಾವಣೆ: &lt;/strong&gt;ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ನೀಡಿದ್ದ ವಿಳಾಸದಲ್ಲಿ ಸದ್ಯಕ್ಕೆ ವಾಸವಿಲ್ಲದ ಕಾರಣಕ್ಕಾಗಿ 2.21 ಲಕ್ಷ ಜನರ ಪಿಂಚಣಿ ರದ್ದಾಗಿದೆ.&lt;/p&gt;&lt;p&gt;&lt;strong&gt;ಆದಾಯ ಪ್ರಮಾಣ ಪತ್ರದ ಕೊರತೆ: &lt;/strong&gt;ಕಾಲಮಿತಿಯೊಳಗೆ ಹೊಸ ಆದಾಯ ಪ್ರಮಾಣ ಪತ್ರವನ್ನು (Income Certificate) ಸಲ್ಲಿಸದ ಕಾರಣಕ್ಕೆ 45,853 ಜನರಿಗೆ ಪಿಂಚಣಿ ನಿಲ್ಲಿಸಲಾಗಿದೆ.&lt;/p&gt;&lt;p&gt;&lt;strong&gt;ದಾಖಲೆಗಳ ಕೊರತೆ: &lt;/strong&gt;ಭೌತಿಕ ಪರಿಶೀಲನೆ (Physical Verification) ನಡೆಸುವಾಗ ಸೂಕ್ತ ಮತ್ತು ನಿಖರವಾದ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಅಂದರೆ 13,23,932 ಜನರ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ.&lt;/p&gt;&lt;h2&gt;ಜಿಲ್ಲಾವಾರು ಸ್ಥಗಿತಗೊಂಡ ಪಿಂಚಣಿದಾರರ ವಿವರ&lt;/h2&gt;&lt;p&gt;ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಪಿಂಚಣಿ ಕಳೆದುಕೊಂಡವರ ಸಂಖ್ಯೆ ಅತ್ಯಂತ ಹೆಚ್ಚಾಗಿದ್ದು, ಆ ವಿವರಗಳು ಹೀಗಿವೆ:&lt;/p&gt;&lt;p&gt;ಜಿಲ್ಲೆ ಪಿಂಚಣಿ ಕಳೆದುಕೊಂಡವರ ಸಂಖ್ಯೆ&lt;/p&gt;&lt;ul&gt; &lt;li&gt;ಬೆಳಗಾವಿ 1,38,215 ಜನರು&lt;/li&gt; &lt;li&gt;ಮೈಸೂರು 1,06,305 ಜನರು&lt;/li&gt; &lt;li&gt;ದಾವಣಗೆರೆ 95,297 ಜನರು&lt;/li&gt; &lt;li&gt;ರಾಯಚೂರು 90,995 ಜನರು&lt;/li&gt;&lt;/ul&gt;&lt;h2&gt;ಪ್ರಸ್ತುತ ಪಿಂಚಣಿ ದರಗಳು (ಯಾರಿಗೆ ಎಷ್ಟು ಸಿಗುತ್ತಿತ್ತು?)&lt;/h2&gt;&lt;p&gt;ಸರ್ಕಾರವು ವಿವಿಧ ವರ್ಗದ ಜನರಿಗೆ ನೀಡುತ್ತಿದ್ದ ಮಾಸಿಕ ಆರ್ಥಿಕ ನೆರವಿನ ವಿವರ ಹೀಗಿದೆ.&lt;/p&gt;&lt;p&gt;&lt;strong&gt;ವಿಧವಾ ವೇತನ:&lt;/strong&gt; ಪ್ರತಿ ತಿಂಗಳು 800 ರೂಪಾಯಿಗಳು.&lt;/p&gt;&lt;p&gt;&lt;strong&gt;ವೃದ್ಧಾಪ್ಯ ಪಿಂಚಣಿ:&lt;/strong&gt; 60 ರಿಂದ 65 ವರ್ಷದೊಳಗಿನವರಿಗೆ 800 ರೂಪಾಯಿ ಹಾಗೂ 65 ವರ್ಷ ಮೇಲ್ಪಟ್ಟವರಿಗೆ 1,200 ರೂಪಾಯಿಗಳು.&lt;/p&gt;&lt;p&gt;&lt;strong&gt;ವಿಕಲಾಂಗರ ಪಿಂಚಣಿ:&lt;/strong&gt;&lt;/p&gt;&lt;p&gt;25% ವಿಕಲಾಂಗ ಹೊಂದಿರುವವರಿಗೆ: 800 ರೂಪಾಯಿಗಳು.&lt;/p&gt;&lt;p&gt;50% ವಿಕಲಾಂಗ ಹೊಂದಿರುವವರಿಗೆ: 1,200 ರೂಪಾಯಿಗಳು.&lt;/p&gt;&lt;p&gt;75% ಕಿಂತ ಹೆಚ್ಚು ವಿಕಲಾಂಗ ಹೊಂದಿರುವವರಿಗೆ: 2,000 ರೂಪಾಯಿಗಳು.&lt;/p&gt;&lt;h2&gt;ಕಚೇರಿಗಳಿಗೆ ಅಲೆಯುತ್ತಿರುವ ವೃದ್ಧರು!&lt;/h2&gt;&lt;p&gt;ಮೂರು ತಿಂಗಳಾಯಿತು ಸರ್, ಕೈಗೆ ಒಂದು ರೂಪಾಯಿ ಪಿಂಚಣಿ ಹಣ ಬಂದಿಲ್ಲ. ನೆಮ್ಮದಿ ಕೇಂದ್ರ, ತಹಶೀಲ್ದಾರ್ ಕಚೇರಿ ಅಂತ ಕೇಳಿದ್ರೆ 'ಆ ಆಫೀಸ್&zwnj;ಗೆ ಹೋಗಿ, ಈ ಆಫೀಸ್&zwnj;ಗೆ ಹೋಗಿ' ಅಂತ ಅಲೆದಾಡಿಸುತ್ತಿದ್ದಾರೆ. ವಯಸ್ಸಾದ ಕಾಲದಲ್ಲಿ ನಮಗೆ ನಡೆದಾಡಲು ಶಕ್ತಿಯಿಲ್ಲ. ಬದುಕು ಸಾಗಿಸುವುದು ತುಂಬಾ ಕಷ್ಟವಾಗಿದೆ. ಎಂದು ಪಿಂಚಣಿ ಕಳೆದುಕೊಂಡ ಹಿರಿಯ ನಾಗರಿಕರ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ದೈನಂದಿನ ಮನೆ ಖರ್ಚಿಗೆ, ಕೈಗೊಂದು ಮಾತ್ರೆ-ಔಷಧಿ ಖರೀದಿಸಲು ಈ ಪಿಂಚಣಿ ಹಣವನ್ನೇ ನಂಬಿಕೊಂಡಿದ್ದ ಅಸಹಾಯಕ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಸರ್ಕಾರದ ಈ ಕ್ರಮದಿಂದ ಕಂಗಾಲಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗ್ಯಾರಂಟಿ ಯೋಜನೆಗಳ ಹೊಂದಾಣಿಕೆಗಾಗಿ ಬಡವರ ಪಿಂಚಣಿಗೆ ಕತ್ತರಿ ಹಾಕಲಾಗಿದೆಯೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣವೇ ಪಿಂಚಣಿ ಬಿಡುಗಡೆ ಮಾಡಬೇಕೆಂಬುದು ಸಂತ್ರಸ್ತರ ತೀವ್ರ ಒತ್ತಾಯವಾಗಿದೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr"/>
        </item>
        <item>
            <title><![CDATA[Puneeth kerehalli: ರಾಯರ ಮಠಕ್ಕೆ ಹೋಗಿದ್ದ ಪುನೀತ್ ಕೆರೆಹಳ್ಳಿಗೆ ರಾಯಚೂರು ಪೊಲೀಸರ ದರ್ಶನ! ಮಂತ್ರಾಲಯದಲ್ಲಿ ನೋಟಿಸ್ ಕೊಟ್ಟಿದ್ದು ಸರಿಯೇ?]]></title>
            <link>https://kannada.asianetnews.com/state/puneeth-kerehalli-row-raichur-police-notice-at-mantralayam-while-he-was-visiting-raghavendra-swamy-rav/articleshow-7dfen7i</link>
            <guid isPermaLink="true">https://kannada.asianetnews.com/state/puneeth-kerehalli-row-raichur-police-notice-at-mantralayam-while-he-was-visiting-raghavendra-swamy-rav/articleshow-7dfen7i</guid>
            <pubDate>Wed, 10 Jun 2026 08:53:56 +0530</pubDate>
            <description><![CDATA[&lt;p&gt;ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳಿದ್ದ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ, ರಾಯಚೂರಿನ ಹಿಂದೂ ಮಹೋತ್ಸವಕ್ಕೆ ಆಗಮಿಸದಂತೆ ರಾಯಚೂರು ಪೊಲೀಸರು ನೋಟಿಸ್ ನೀಡಿದ್ದಾರೆ. ಇದು ಆಂಧ್ರಪ್ರದೇಶದ ವ್ಯಾಪ್ತಿಯಾಗಿದ್ದು, ಇಲ್ಲಿ ನೋಟಿಸ್ ನೀಡಿದ್ದಕ್ಕೆ ಕೆರೆಹಳ್ಳಿ ಪೊಲೀಸರ ನಡುವೆ ವಾಗ್ವಾದ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktqrebbsc9adhtz77jsszcjp,imgname-----------------------2026-06-10t084457.653-1781061332345.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು(ಜೂ.10):&lt;/strong&gt; ಹಿಂದೂಪರ ಹೋರಾಟಗಾರ ಪುನೀತ್&zwnj; ಕೆರೆಹಳ್ಳಿ(Puneeth kerehalli)ಯವರು ರಾಘವೇಂದ್ರ ಸ್ವಾಮಿ(Mantralaya Raghavendra temple)ಯ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಆಗಮಿಸಿದ್ದ ವೇಳೆ, ರಾಯಚೂರಿನ ಹಿಂದೂ ಸಮ್ಮೇಳನಕ್ಕೆ ಆಗಮಿಸದಂತೆ ರಾಯಚೂರು ಪೊಲೀಸರು ನೋಟಿಸ್&zwnj; ನೀಡಿದ ವಿಷಯವಾಗಿ ಪುನೀತ್&zwnj; ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.&lt;/p&gt;&lt;h2&gt;ರಾಯಚೂರು ಪೊಲೀಸರ ವಿರುದ್ಧ ಪುನೀತ್ ಗರಂ&lt;/h2&gt;&lt;p&gt;ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಿಂತ ಮುಂಚೆ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಪುನೀತ್&zwnj; ಕೆರೆಹಳ್ಳಿ ಅವರ ಬಳಿಗೆ ಬಂದ ರಾಯಚೂರು ಜಿಲ್ಲೆ ಪೊಲೀಸರು, ಹಿಂದೂ ಮಹೋತ್ಸವಕ್ಕೆ ಬರದಂತೆ ನೋಟಿಸ್&zwnj; ನೀಡಿದರು. ಇದರಿಂದ ಸಿಟ್ಟಿಗೆದ್ದ ಪುನೀತ್&zwnj; ಕೆರೆಹಳ್ಳಿ, ಇದು ಆಂಧ್ರಪ್ರದೇಶ. ರಾಯರ ಮಠಕ್ಕೆ ಬಂದಿದ್ದೇನೆ. ರಾಯಚೂರಿಗೆ ಬಂದ ಮೇಲೆ ನೀವು ನಿಮ್ಮ ಅಧಿಕಾರ ಚಲಾಯಿಸಿ ಎಂದು ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;ಘಟನೆಯ ವಿಡಿಯೋ ವೈರಲ್:&lt;/h2&gt;&lt;p&gt;ಘಟನೆಯ ವಿಡಿಯೋ ವೈರಲ್ ಆಗಿದ್ದು, ಹಿಂದೂಪರ ಮುಖಂಡನಿಗೆ ನೋಟಿಸ್ ಕೊಡುವ ಪೊಲೀಸರ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿನ್ನೂ ರಾಯಚೂರು ಗಡಿಪ್ರವೇಶ ಮಾಡಿಲ್ಲ. ಮಂತ್ರಾಲಯ ಆಂಧ್ರ ವ್ಯಾಪ್ತಿಯಲ್ಲಿದೆ. ಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಹೋಗುವಾಗ ಹಿಂಬಾಲಿಸಿ ಪುನೀತ್ ಕೆರೆಹಳ್ಳಿಯವರಿಗೆ ನೋಟಿಸ್ ನೀಡುತ್ತಾರೆಂದರೆ ಏನರ್ಥ? ರಾಜ್ಯ ಸರ್ಕಾರದ ಒತ್ತಡಕ್ಕೊಳಗಾಗಿ ಕಾನೂನು ಪಾಲಿಸದೆ ಮೇಲಿನವರು ಹೇಳಿದಂತೆ ಕೇಳುವ ಪೊಲೀಸರು ಸುಖಾಸುಮ್ಮನೆ ಪುನೀತ್ ಕೆರೆಹಳ್ಳಿಯವರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇನ್ನೊಂದೆಡೆ ಮಂಗಳೂರಿನವರು ಎಂದು ಹೇಳಲಾದ ಅನ್ಯಕೋಮಿನ ವ್ಯಕ್ತಿಗಳು ಬಹಿರಂಗವಾಗಿ ಪುನಿತ್ ಕೆರೆಹಳ್ಳಿಯವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅವರ ಫೋಟೋ ಫೋನ್ ನಂಬರ್ ಸಹಿತ ಇದ್ದರೂ, ಪೊಲೀಸರು ಯಾಕೆ ಬಂಧಿಸಿಲ್ಲ? ರಕ್ಷಣೆ ನೀಡಬೇಕಾದ ನೀವು(ಪೊಲೀಸ್ ಇಲಾಖೆ) ಅಧಿಕಾರದಲ್ಲಿರುವ ರಾಜಕಾರಣಿಗಳ ಮೂಗಿನ ನೇರಕ್ಕೆ ನಡೆದುಕೊಳ್ಳುವ ಮೂಲಕ ನೀವು ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದೀರಿ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಕಡೆ ಜೀವ ಬೆದರಿಕೆ ಹಾಕಿದರೂ ಬಂಧಿಸದ ಪೊಲೀಸರು, ಇನ್ನೊಂದೆಡೆ ಹಿಂದೂ ಕಾರ್ಯಕ್ರಮಕ್ಕೆ ಹೋಗದಂತೆ ನಿರ್ಬಂಧಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt; Suppressing the Voice of Democracy: Misuse of Law Against a Hindu Activist?&amp;nbsp;In a democratic system, every Indian citizen has the constitutional right to travel anywhere within the country and raise their voice. However, looking at recent events, it raises a serious concern:&hellip; pic.twitter.com/PSIeh1Rj4U&lt;/p&gt;&lt;p&gt;&mdash; Puneeth Kerehalli (@Puneeth74353549) June 9, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/puneeth-kerehalli-row-raichur-police-notice-at-mantralayam-while-he-was-visiting-raghavendra-swamy-rav/articleshow-7dfen7i"/>
        </item>
        <item>
            <title><![CDATA[GESCOM Shocking: ಕರೆಂಟ್‌ ಕಟ್‌ ಮಾಡಿದ್ದಕ್ಕೆ ಜೆಸ್ಕಾಂ ಕಚೇರಿಗೇ ಬೆಂಕಿ ಹಚ್ಚಿ ಸುಟ್ಟ ರೈತ!]]></title>
            <link>https://kannada.asianetnews.com/gallery/karnataka-districts/raichur-farmer-sets-fire-to-gescom-office-for-power-cut-rav-aez7tm5</link>
            <guid isPermaLink="true">https://kannada.asianetnews.com/gallery/karnataka-districts/raichur-farmer-sets-fire-to-gescom-office-for-power-cut-rav-aez7tm5</guid>
            <pubDate>Thu, 25 Jun 2026 05:22:05 +0530</pubDate>
            <description><![CDATA[&lt;p&gt;ಬಿಲ್&zwnj; ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಜೆಸ್ಕಾಂ ಸಿಬ್ಬಂದಿ ಕ್ರಮದಿಂದ ಕೋಪಗೊಂಡ ರೈತನೊಬ್ಬ ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್&zwnj; ಸರಬರಾಜು ಕಂಪನಿ) ಕಚೇರಿಗೇ ಬೆಂಕಿ ಇಟ್ಟ ಘಟನೆ ರಾಯಚೂರು ಜಿಲ್ಲೆಯ ಮಲ್ಲಟ ಗ್ರಾಮದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvy05jr9kesqm5p3m7czr0r7,imgname-----------------------2026-06-25t050805.937-1782344502025.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಲ್&zwnj; ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಜೆಸ್ಕಾಂ ಸಿಬ್ಬಂದಿ ಕ್ರಮದಿಂದ ಕೋಪಗೊಂಡ ರೈತನೊಬ್ಬ ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್&zwnj; ಸರಬರಾಜು ಕಂಪನಿ) ಕಚೇರಿಗೇ ಬೆಂಕಿ ಇಟ್ಟ ಘಟನೆ ರಾಯಚೂರು ಜಿಲ್ಲೆಯ ಮಲ್ಲಟ ಗ್ರಾಮದಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಬಿಲ್&zwnj; ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಜೆಸ್ಕಾಂ ಸಿಬ್ಬಂದಿ ಕ್ರಮದಿಂದ ಕೋಪಗೊಂಡ ರೈತನೊಬ್ಬ ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್&zwnj; ಸರಬರಾಜು ಕಂಪನಿ) ಕಚೇರಿಗೇ ಬೆಂಕಿ ಇಟ್ಟ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಜೆಸ್ಕಾಂ ಉಪ ಕಚೇರಿಯಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಹಳ್ಳಿಹೊಸೂರು ಗ್ರಾಮದ ಶಿವಪ್ಪ ಬಸನಗೌಡ ಗಡಿಗಿ ಎಂಬಾತ 11 ಸಾವಿರ ರು.ಗಳ ವಿದ್ಯುತ್ ಬಿಲ್&zwnj; ಬಾಕಿ ಉಳಿಸಿಕೊಂಡಿದ್ದ. ಬಾಕಿ ಬಿಲ್&zwnj; ಹಣ ಪಾವತಿಸುವಂತೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು.&amp;nbsp;&lt;/p&gt;&lt;img&gt;&lt;p&gt;ಆದರೂ, ಬಾಕಿ ಬಿಲ್&zwnj; ಹಣ ಪಾವತಿಸಿರಲಿಲ್ಲ. ಹೀಗಾಗಿ, ಜೆಸ್ಕಾಂ ಸಿಬ್ಬಂದಿ ರಿಚರ್ಡ್ ಎಂಬುವರು ಮೇಲಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.&lt;/p&gt;&lt;img&gt;&lt;p&gt;ಇದರಿಂದ ಆಕ್ರೋಶಗೊಂಡ ಶಿವಪ್ಪ ಬುಧವಾರ ಮಲ್ಲಟ ಗ್ರಾಮದ ಜೆಸ್ಕಾಂ ಉಪ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ. ಹಲ್ಲೆಗೆ ಹೆದರಿ ಸಿಬ್ಬಂದಿ ತಪ್ಪಿಸಿಕೊಂಡು ಕಚೇರಿಯಿಂದ ಹೊರಗೆ ಬರುತ್ತಿದ್ದಂತೆ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪುಂಡಾಟ ಮೆರೆದಿದ್ದಾನೆ.&lt;/p&gt;&lt;img&gt;&lt;p&gt;ಇದರಿಂದಾಗಿ ಕಚೇರಿಯ ದಾಖಲೆಗಳು, ಕಂಪ್ಯೂಟರ್, ಲ್ಯಾಪ್&zwnj;ಟಾಪ್, ಬ್ಯಾಟರಿ ಮತ್ತು ನಗದು ಸೇರಿದಂತೆ ಸುಮಾರು 1 ಲಕ್ಷ ರು. ಮೌಲ್ಯದ ಸಾರ್ವಜನಿಕ ಸ್ವಾಮ್ಯದ ಆಸ್ತಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿರವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/raichur-farmer-sets-fire-to-gescom-office-for-power-cut-rav-aez7tm5"/>
        </item>
        <item>
            <title><![CDATA[10 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!]]></title>
            <link>https://kannada.asianetnews.com/crime/ex-gp-president-murder-over-10-rupees-petrol-bunk-fight-gvd-videoshow-c7rxrxh</link>
            <guid isPermaLink="true">https://kannada.asianetnews.com/crime/ex-gp-president-murder-over-10-rupees-petrol-bunk-fight-gvd-videoshow-c7rxrxh</guid>
            <pubDate>Sat, 11 Jul 2026 16:15:56 +0530</pubDate>
            <description><![CDATA[&lt;p&gt;ಆತ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ.. ಕಾಂಗ್ರೆಸ್​​ ಕಾರ್ಯಕರ್ತ.. ಒಳ್ಳೆ ಮನುಷ್ಯ ಅನ್ನಿಸಿಕೊಂಡಿದ್ದ.. ತನ್ನ ಗ್ರಾಮದಲ್ಲಿ ಯಾವುದೆ ರಾಜಿ ಪಂಚಾಯ್ತಿ ಇದ್ರೂ ಈತನೆ ಮುಂದಾಳತ್ವ ವಹಿಸಿಕೊಂಡು ತೊಂದರೆಗಳನ್ನ ನಿವಾರಣೆ ಮಾಡ್ತಿದ್ದ.&lt;/p&gt;]]></description>
            <media:content url="https://geo.dailymotion.com/player/x1tbu.html?video=xaobo2y" medium="video" height="768" width="1024"/>
            <content:encoded><![CDATA[&lt;p&gt;ಆತ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ.. ಕಾಂಗ್ರೆಸ್​​ ಕಾರ್ಯಕರ್ತ.. ಒಳ್ಳೆ ಮನುಷ್ಯ ಅನ್ನಿಸಿಕೊಂಡಿದ್ದ.. ತನ್ನ ಗ್ರಾಮದಲ್ಲಿ ಯಾವುದೆ ರಾಜಿ ಪಂಚಾಯ್ತಿ ಇದ್ರೂ ಈತನೆ ಮುಂದಾಳತ್ವ ವಹಿಸಿಕೊಂಡು ತೊಂದರೆಗಳನ್ನ ನಿವಾರಣೆ ಮಾಡ್ತಿದ್ದ.. ಆವತ್ತೊಂದು ದಿನ ಪಕ್ಕದೂರಿನಲ್ಲಿದ್ದ ಪೆಟ್ರೋಲ್​ ಬಂಕ್​ನಲ್ಲಿ ತನ್ನದೇ ಗ್ರಾಮದ ಹುಡುಗ ಕಿರಿಕ್​ ಮಾಡಿಕೊಂಡಿದ್ದಾನೆ ಅನ್ನೋ ಮೆಸೆಜ್​ ಬರುತ್ತೆ.. ಈತ ಕೂಡಲೇ ಜಗಳ ಬಿಡಿಸೋಕೆ ಅಂತ ಹೋಗಿದ್ದಾನೆ.. ಅಷ್ಟೇ... ಜಗಳ ಬಿಡಿಸಲು ಬಂದವನು ಹೆಣವಾಗಿದ್ದ.. ಪೊಲೀಸರು ತನಿಖೆ ಶುರು ಮಾಡ್ತಾರೆ.. ಆಗಲೇ ನೋಡಿ ಗೊತ್ತಾಗೋದು ಅದು 10 ರೂಪಾಯಿಗಾಗಿ ನಡೆದಿದ್ದ ಕೊಲೆ ಅಂತ.. ಅಷ್ಟಕ್ಕೂ ಏನದು 10 ರೂಪಾಯಿಯ ಗಲಾಟೆ..? ಈತನನ್ನ ಕೊಂದವಱರು..? ಸಣ್ಣ ಕಿರಿಕ್​ ಒಬ್ಬನ ಜೀವವನ್ನೇ ತಗೆದ ಕಥೆಯೇ ಇವತ್ತಿನ ಎಫ್​​.ಐ.ಆರ್​​. ಯಾರದ್ದೋ ಜಗಳ.. ಯಾರದ್ದೋ ಕಿರಿಕ್​​.. ಆದ್ರೆ ಪಾಪಾ ಮೇಘನಾಥ ಹೆಣವಾದ.. ಇನ್ನೂ ಆ ಹುಡುಗರೂ ಕೂಡ ಈಗ ತಮ್ಮ ಜೀವನವನ್ನ ಕಂಡುಕೊಳ್ತಿದ್ರು.&lt;/p&gt;&lt;p&gt;ಮನೆಗೆ ಅವರೇ ಆಸರೆಯಾಗಿದ್ರು.. ಅವರೂ ಈಗ ಜೈಲು ಸೇರೋ ಮೂಲಕ ತಮ್ಮ ಭವಿಷ್ಯವನ್ನ ತಾವೇ ಹಾಳು ಮಾಡಿಕೊಂಡರು. ಅವರಿಬ್ಬರೂ ಮೂರು ವರ್ಷದಿಂದ ಪ್ರೀತಿಸುತ್ತಿದ್ರಂತೆ.. ಆದ್ರೆ ಆಕೆ ಇನ್ನೂ 10ನೇ ಕ್ಲಾಸ್​​ ಹುಡುಗಿ.. ಈತ ಏಸ್​​ ಗಾಡಿ ಡ್ರೈವರ್​​.. ಆಕೆ ಹಿಂದೂ ಆದರೆ ಅವನು ಮುಸ್ಲಿಂ.. ಮೂರು ವರ್ಷ ಯಾವುದೇ ಪ್ರಾಬ್ಲಂ ಇರಲಿಲ್ಲ.. ಆದ್ರೆ ಮೊನ್ನೆ ರಾತ್ರಿ ಇದ್ದಕ್ಕಿದ್ದಂತೆ ಆತ ಹುಡುಗಿಯ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ಮಾಡಿದ್ದ.. ಅಷ್ಟೇ ಅಲ್ಲ ತಾನೂ ಚಾಕು ಹಾಕಿಕೊಂಡಿದ್ದ.. ಯಾಕೆ ಹೀಗೆ ಮಾಡಿದ ಅಂತ ಪೊಲೀಸರು ವಿಚಾರಣೆ ಮಾಡಿದಾಗ ಅಲ್ಲಿ ಬಂದಿದ್ದು ಹುಡುಗಿಯ ಕಿತಾಪತಿ ಕೆಲಸ. ಎಲ್ಲವೂ ಕನ್​​​​ಫ್ಯೂಷನ್​​.. ಆದ್ರೆ ಇವತ್ತಿನ ಎರಡು ಸ್ಟೋರಿ ಕೂಡ ಬಾಳಿ ಬದುಕಬೇಕಿದ್ದ ಯುವಕರದ್ದೇ.. ಇದನ್ನೆಲ್ಲಾ ನೋಡ್ತಿದ್ರೆ ನಮ್ಮ ಯುವಜನತೆ ಎತ್ತ ಸಾಗ್ತಿದ್ದಾರೆ ಅಂತ ಭಯವಾಗುತ್ತೆ.&lt;/p&gt;]]></content:encoded>
            <category>raichur</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/ex-gp-president-murder-over-10-rupees-petrol-bunk-fight-gvd-videoshow-c7rxrxh"/>
        </item>
        <item>
            <title><![CDATA[TB Dam ನೋಡೋಕೆ ಮುಗಿಬಿದ್ದ ಪ್ರವಾಸಿಗರು!; ಲೇಸರ್ ಲೈಟಿಂಗ್ ನೆರಳಿನಲ್ಲಿ ಚಿನ್ನದ ನದಿಯಂತಾದ ತುಂಗಭದ್ರಾ ಒಡಲು!]]></title>
            <link>https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo</link>
            <guid isPermaLink="true">https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo</guid>
            <pubDate>Wed, 24 Jun 2026 20:59:22 +0530</pubDate>
            <description><![CDATA[&lt;p&gt;ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್&zwnj;ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvx3pn214ctd15f65z9mtdn3,imgname-tungabhadra-dam--2--1782314652737.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್&zwnj;ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.&amp;nbsp;&lt;/p&gt;&lt;img&gt;&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ನಾಳೆ (ಜೂನ್ 25) ಐತಿಹಾಸಿಕ ಕ್ಷಣವೊಂದು ದಾಖಲಾಗಲಿದೆ. ಜಲಾಶಯಕ್ಕೆ ಅಳವಡಿಸಲಾಗಿರುವ ನೂತನ ಕ್ರಸ್ಟ್ ಗೇಟ್&zwnj;ಗಳ ಅಧಿಕೃತ ಲೋಕಾರ್ಪಣೆ ಕಾರ್ಯಕ್ರಮ ನಾಳೆ ನೆರವೇರಲಿದ್ದು, ಈ ಸಂಭ್ರಮದ ಹಿನ್ನೆಲೆಯಲ್ಲಿ ಇಡೀ ಜಲಾಶಯವನ್ನು ವಿದ್ಯುತ್ ದೀಪಾಲಂಕಾರದಿಂದ ಅತ್ಯಂತ ಆಕರ್ಷಕವಾಗಿ ಶೃಂಗರಿಸಲಾಗಿದೆ. ಸಿಎಂ ಡಿಕೆ ಶಿವಕುಮಾರ್&zwnj;, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್&zwnj; ರೆಡ್ಡಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದರೊಂದಿಗೆ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿಆರ್&zwnj; ಪಾಟೀಲ್&zwnj; ಕೂಡ ಇರಲಿದ್ದಾರೆ.&lt;/p&gt;&lt;img&gt;&lt;p&gt;ಹೊಸ ಕ್ರಸ್ಟ್ ಗೇಟ್&zwnj;ಗಳ ಲೋಕಾರ್ಪಣೆಯ ಸಂಭ್ರಮಕ್ಕಾಗಿ ತುಂಗಭದ್ರಾ ಆಣೆಕಟ್ಟನ್ನು ವಧುವಿನಂತೆ ಸಜ್ಜುಗೊಳಿಸಲಾಗಿದೆ. ಇಡೀ ಜಲಾಶಯದ ಆಣೆಕಟ್ಟಿನ ಮೇಲೆ ಮೈಲಿಗಟ್ಟಲೆ ಸಾಲು ಸಾಲಾಗಿ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿಯ ವೇಳೆಗೆ ಜಲಾಶಯದ ನೀರು ಮತ್ತು ಗೋಡೆಗಳ ಮೇಲೆ ಪ್ರತಿಫಲಿಸುತ್ತಿರುವ ದೀಪಗಳ ಬೆಳಕು ನೋಡುಗರ ಕಣ್ಣು ಕೋರೈಸುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಕಳೆದ ಅವಧಿಯಲ್ಲಿ ಜಲಾಶಯದ ಪ್ರಮುಖ ಕ್ರಸ್ಟ್ ಗೇಟ್ (ಗೇಟ್ ನಂ. 19) ಕೊಚ್ಚಿ ಹೋಗಿ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ, ಯುದ್ಧೋಪಾದಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಸ್ಟಾಪ್ ಲಾಗ್ ಮತ್ತು ಕ್ರಸ್ಟ್ ಗೇಟ್&zwnj;ಗಳನ್ನು ಸಿದ್ಧಪಡಿಸಲಾಗಿತ್ತು. ಈ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಳೆ ಅಧಿಕೃತವಾಗಿ ಇವುಗಳನ್ನು ಸಾರ್ವಜನಿಕ ಸೇವೆಗೆ ಹಾಗೂ ರೈತರ ಹಿತದೃಷ್ಟಿಯಿಂದ ಲೋಕಾರ್ಪಣೆ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಹೊಸ ಗೇಟ್&zwnj;ಗಳ ಉದ್ಘಾಟನೆಗೆ ಸಾಕ್ಷಿಯಾಗಲಿರುವ ವಿಜಯನಗರದ ತುಂಗಭದ್ರಾ ಆಣೆಕಟ್ಟಿನ ಉದ್ದಕ್ಕೂ ಎಲ್ಇಡಿ (LED) ದೀಪಗಳ ಭವ್ಯ ಮಾಲೆಯನ್ನು ಹಾಕಲಾಗಿದೆ. ವಿವಿಧ ಬಣ್ಣಗಳ ಲೇಸರ್ ಮತ್ತು ಫ್ಲಡ್ ಲೈಟ್&zwnj;ಗಳ ನೆರಳಿನಾಟವು ಜಲಾಶಯಕ್ಕೆ ಹೊಸ ಕಳೆಯನ್ನು ತಂದಿದ್ದು, ಜಲಾಶಯದ ಹಿನ್ನೀರು ಚಿನ್ನದ ನದಿಯಂತೆ ಮಿನುಗುತ್ತಿದೆ.&lt;/p&gt;&lt;img&gt;&lt;p&gt;ಹಿಂದೆ ಗೇಟ್ ಮುರಿದು ಕೋಟ್ಯಂತರ ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗಿ, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭಾರಿ ಆತಂಕ ಮೂಡಿಸಿತ್ತು. ಆದರೆ ಈಗ ಇಂಜಿನಿಯರ್&zwnj;ಗಳು ಮತ್ತು ತಜ್ಞರ ಶ್ರಮದಿಂದ ಹೊಸ ಗೇಟ್&zwnj;ಗಳು ಯಶಸ್ವಿಯಾಗಿ ಅಳವಡಿಕೆಯಾಗಿ, ಡ್ಯಾಂ ಸಂಪೂರ್ಣ ಸುರಕ್ಷಿತವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯ ಕಾರ್ಯಕ್ರಮವು ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;img&gt;&lt;p&gt;ಜಲಾಶಯದ ಈ ಅಭೂತಪೂರ್ವ ದೀಪಾಲಂಕಾರದ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಪ್ರವಾಸಿಗರು ಇಂದಿನಿಂದಲೇ ಜಲಾಶಯದತ್ತ ಧಾವಿಸುತ್ತಿದ್ದಾರೆ. ಮುಸ್ಸಂಜೆಯ ವೇಳೆ ಇಡೀ ಆಣೆಕಟ್ಟು ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್&zwnj;ಗಳಲ್ಲಿ ಸೆರೆಹಿಡಿಯುತ್ತಿದ್ದು, ಪ್ರವಾಸಿ ತಾಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;img&gt;&lt;p&gt;ನಾಳೆ ನಡೆಯಲಿರುವ ಈ ಕ್ರಸ್ಟ್ ಗೇಟ್&zwnj;ಗಳ ಉದ್ಘಾಟನೆಯು ಕೇವಲ ಒಂದು ತಾಂತ್ರಿಕ ಕಾರ್ಯಕ್ರಮವಾಗಿರದೆ, ಕೋಟ್ಯಂತರ ಎಕರೆ ಕೃಷಿ ಭೂಮಿಯ ಜಲ ಭದ್ರತೆಯ ಸಂಕೇತವಾಗಿದೆ. ಯಾವುದೇ ತಾಂತ್ರಿಕ ದೋಷ ಬರದಂತೆ ಅತ್ಯಂತ ಭದ್ರವಾಗಿ ಈ ಗೇಟ್&zwnj;ಗಳನ್ನು ವಿನ್ಯಾಸಗೊಳಿಸಲಾಗಿದ್ದು, ನಾಳೆಯಿಂದ ಜಲಾಶಯವು ಸಂಪೂರ್ಣ ಸಾಮರ್ಥ್ಯದೊಂದಿಗೆ ನೀರನ್ನು ಸಂಗ್ರಹಿಸಲು ಸನ್ನದ್ಧವಾಗಲಿದೆ.&lt;/p&gt;]]></content:encoded>
            <category>raichur</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo"/>
        </item>
        <item>
            <title><![CDATA[ರಾಯಚೂರಲ್ಲಿ ದಾರುಣ ಘಟನೆ.. ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಕಂದಮ್ಮ ಬಲಿ]]></title>
            <link>https://kannada.asianetnews.com/raichur/raichuru-incident-one-and-half-year-old-baby-died-due-to-street-dogs-attack-gkn/articleshow-f7dh7mn</link>
            <guid isPermaLink="true">https://kannada.asianetnews.com/raichur/raichuru-incident-one-and-half-year-old-baby-died-due-to-street-dogs-attack-gkn/articleshow-f7dh7mn</guid>
            <pubDate>Thu, 16 Jul 2026 09:25:41 +0530</pubDate>
            <description><![CDATA[ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 18 ತಿಂಗಳ ಮಗು ಸಾವನ್ನಪ್ಪಿದೆ. ಮನೆಯಿಂದ ಹೊರಬಂದ ಮಗುವಿನ ಮೇಲೆ ಚಿಕನ್ ಅಂಗಡಿ ಬಳಿ ಜಮಾಯಿಸಿದ್ದ ನಾಯಿಗಳು ದಾಳಿ ಮಾಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxmgzh147tzd3a313ymk7bc8,imgname-raichuru-street-dog-attack-on-baby-1784174068772.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಇಂದು ಅತ್ಯಂತ ದಾರುಣ ಘಟನೆಯೊಂದು ಸಂಭವಿಸಿದೆ. ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 18 ತಿಂಗಳ ಮಗು ಪ್ರಾಣ ಕಳೆದುಕೊಂಡಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹಂಚಿನಾಳ ಕ್ಯಾಂಪ್&zwnj;ನಲ್ಲಿ ಈ ಘಟನೆ ನಡೆದಿದೆ. ಅಬ್ದುಲ್ ರಜಾಕ್ ಮತ್ತು ನದಾಫ್ ದಂಪತಿಯ ಪುತ್ರಿ ಅನಂ (18 ತಿಂಗಳು) ಮೃತಪಟ್ಟ ದುರ್ದೈವಿ. ಮಗು ಮನೆಯಲ್ಲಿ ಮಲಗಿದ್ದಾಗ ಎಚ್ಚರಗೊಂಡು ಪೋಷಕರಿಗೆ ತಿಳಿಯದಂತೆ ರಸ್ತೆಗೆ ಬಂದಿದೆ. ಈ ವೇಳೆ ಹತ್ತಿರದಲ್ಲಿದ್ದ ಚಿಕನ್ ಅಂಗಡಿಯ ಬಳಿ ಜಮಾಯಿಸಿದ್ದ ಬೀದಿ ನಾಯಿಗಳ ಹಿಂಡು ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿವೆ. ನಾಯಿಗಳು ಮಗುವನ್ನು ಮನಬಂದಂತೆ ಕಚ್ಚಿ ಎಳೆದಾಡಿವೆ. ಮಗುವಿನ ಚೀರಾಟ ಕೇಳಿ ಪೋಷಕರು ತಕ್ಷಣ ಸ್ಥಳಕ್ಕೆ ಓಡಿ ಬಂದಿದ್ದಾರೆ.&lt;/p&gt;&lt;h2&gt;&lt;strong&gt;ದಾರಿ ಮಧ್ಯೆಯೇ ಕೊನೆಯುಸಿರೆಳೆದ ಮಗು&lt;/strong&gt;&lt;/h2&gt;&lt;p&gt;ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ಸಿಂಧನೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು. ದುರಾದೃಷ್ಟವಶಾತ್, ರಿಮ್ಸ್ ಆಸ್ಪತ್ರೆಗೆ ತಲುಪುವ ಮುನ್ನವೇ ಮಗು ದಾರಿ ಮಧ್ಯೆ ಕೊನೆಯುಸಿರೆಳೆದಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಭೇಟಿ&lt;/strong&gt;&lt;/h2&gt;&lt;p&gt;ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಿಂಧನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕನ್ ಅಂಗಡಿಗಳ ಬಳಿ ಎಸೆಯಲಾಗುವ ಮಾಂಸದ ತ್ಯಾಜ್ಯದಿಂದಾಗಿ ಬೀದಿ ನಾಯಿಗಳು ಗುಂಪುಗೂಡುತ್ತಿದ್ದು, ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಸುಗೂಸಿನ ಸಾವು ಹಂಚಿನಾಳ ಕ್ಯಾಂಪ್&zwnj;ನಲ್ಲಿ ಶೋಕ ಸಾಗರ ಮುಳುಗಿಸಿದೆ.&lt;/p&gt;]]></content:encoded>
            <category>raichur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/raichur/raichuru-incident-one-and-half-year-old-baby-died-due-to-street-dogs-attack-gkn/articleshow-f7dh7mn"/>
        </item>
        <item>
            <title><![CDATA[ರಾಯಚೂರು ಜಿಲ್ಲೆಯ 29 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ: ಜಿಲ್ಲಾಧಿಕಾರಿಗಳಿಂದ ಆದೇಶ]]></title>
            <link>https://kannada.asianetnews.com/karnataka-districts/muharram-celebrations-banned-in-29-villages-of-raichur-district-order-from-the-district-collector-mrq/articleshow-fko5oqn</link>
            <guid isPermaLink="true">https://kannada.asianetnews.com/karnataka-districts/muharram-celebrations-banned-in-29-villages-of-raichur-district-order-from-the-district-collector-mrq/articleshow-fko5oqn</guid>
            <pubDate>Thu, 18 Jun 2026 09:22:49 +0530</pubDate>
            <description><![CDATA[&lt;p&gt;ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯ &amp;nbsp;29 ಗ್ರಾಮಗಳಲ್ಲಿ ಮೊಹರಂ ಹಬ್ಬದ ಸಾರ್ವಜನಿಕ ಆಚರಣೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿಗಳು ಕರ್ನಾಟಕ ಪೋಲೀಸ್ ಕಾಯ್ದೆ 1963ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcdeevvxkfkcr6hy2yg7btd,imgname-moharram-1781754444667.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ಜಿಲ್ಲೆಯ ಸಿಂಧನೂರು, ಮಾನ್ವಿ, ಸಿರವಾರ, ದೇವದುರ್ಗ ಹಾಗೂ ಮಸ್ಕಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೊಹರಂ ಹಬ್ಬವನ್ನು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ಕರ್ನಾಟಕ ಪೋಲೀಸ್ ಕಾಯ್ದೆ 1963ರ ಕಲಂ 35ರನ್ವಯ ನಿಷೇಧಿಸಲಾಗಿದೆ.&lt;/p&gt;&lt;h2&gt;&lt;strong&gt;ಯಾವ ಗ್ರಾಮಗಳಲ್ಲಿ ನಿಷೇಧ?&lt;/strong&gt;&lt;/h2&gt;&lt;p&gt;ಜಿಲ್ಲೆಯ ಸಿಂಧನೂರು ಪೊಲೀಸ್ ಠಾಣೆ ವ್ಯಾಪ್ತಿಯ ಗಿಣಿವಾರ, ಉಪ್ಪಳ, ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ನಿಡಿಗೊಳ-ತಿಡಿಗೋಳ, ಹತ್ತಿಗುಡ್ಡ, ಕುರಕುಂದಾ, ಚಿಕ್ಕಬೇರ್ಗಿ, ಬಳಗಾನೂರು ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಬಳ್ (ಯು), ರಾಗಲಪರ್ವಿ, ಮಾನವಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿಹಾಳ, ಜಾನೇಕಲ್, ಮದ್ಲಾಪೂರು, ಜಾಗೀರ ಪನ್ನೂರು, ಮಲ್ಲಿನ ಮಡಗು, ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯ ಸಿರವಾರ ಪಟ್ಟಣ, ಕಡದಿನ್ನಿ, ಬೊಮ್ಮನಾಳ, ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕವಿತಾಳ ಪಟ್ಟಣ, ಹಿರೆಬಾದರದಿನ್ನಿ, ಬಾಗಲವಾಡ, ಅಮೀನಗಡ, ಗೂಗೆಬಾಳ, ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ತಲೇಖಾನ್, ಸಂತೆಕಲ್ಲೂರು, ಮುಸಲಿ ಕಾರಲಕುಂಟೆ, ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂಚೋಡಿ, ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಖಾನಾಪೂರು, ಬುದ್ದಿನ್ನಿ, ರಾಮದುರ್ಗ, ಹಿರೇಬೂದೂರು ಸೇರಿದಂತೆ ಒಟ್ಟು 29 ಗ್ರಾಮಗಳು&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Kartavya App: ಕರ್ತವ್ಯ ಆ್ಯಪ್&zwnj;ನಲ್ಲಿ ನೋಂದಣಿ ಮಾಡದ 2.13 ಲಕ್ಷ ನೌಕರರು! ಸಿಎಂ ಸೂಚನೆಗೂ ಬೆಲೆ ಇಲ್ಲವೇ?&lt;/strong&gt;&lt;/p&gt;&lt;h3&gt;&lt;strong&gt;ಜಿಲ್ಲಾಧಿಕಾರಿಗಳಿಂದ ಆದೇಶ&lt;/strong&gt;&lt;/h3&gt;&lt;p&gt;ಸಾರ್ವಜನಿಕರ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಬುಧವಾರದಿಂದ ಜೂ.26 ರವರೆಗೆ ಆಚರಿಸಲಿರುವ ಮೋಹರಂ ಹಬ್ಬವನ್ನು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಈ ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಮೆರವಣಿಗೆಯನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಪೂವಿತಾ ಎಸ್. ಅವರು ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪುಲಸಾನಿಒಡ್ಡು ಗ್ರಾಮದಲ್ಲಿ ಅಪರೂಪದ ವೀರರಗುಡಿ ಪತ್ತೆ; ರಾಜರ ಬೇಟೆಯ ಪರಾಕ್ರಮ ಅನಾವರಣ&lt;/strong&gt;&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/muharram-celebrations-banned-in-29-villages-of-raichur-district-order-from-the-district-collector-mrq/articleshow-fko5oqn"/>
        </item>
        <item>
            <title><![CDATA['ಅಂತ್ಯವಾಯ್ತು' ಎಂದವನ ಬದುಕೇ ಅಂತ್ಯ!  ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಸಾವು]]></title>
            <link>https://kannada.asianetnews.com/karnataka-districts/devadurga-three-students-died-after-the-roof-of-a-building-collapsed-in-raichur-mrq/articleshow-in0g2ec</link>
            <guid isPermaLink="true">https://kannada.asianetnews.com/karnataka-districts/devadurga-three-students-died-after-the-roof-of-a-building-collapsed-in-raichur-mrq/articleshow-in0g2ec</guid>
            <pubDate>Mon, 29 Jun 2026 08:45:32 +0530</pubDate>
            <description><![CDATA[ರಾಯಚೂರಿನಲ್ಲಿ ಕಟ್ಟಡವೊಂದರ ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಒಬ್ಬರಾದ ನಾಗರಾಜ್, 'ಅಂತ್ಯವಾಯ್ತು' ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದು ವಿಪರ್ಯಾಸವಾಗಿದೆ. ಈ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw8nvs8yjk74gcaczkknp5qr,imgname-raichur-death-1782702794014.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು: &lt;/strong&gt;ಇಲ್ಲಿನ ಬಸ್&zwnj;ನಿಲ್ದಾಣ ಹತ್ತಿರದ ವಿಆರ್&zwnj;ಎಲ್ ಕಚೇರಿ ಬಳಿ ಕಟ್ಟಡವೊಂದರ ಚಾವಣಿ ಕುಸಿದು ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಅರ್ಜುನ್ ಎಂಬಾತ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ,&lt;/p&gt;&lt;p&gt;ನಾಗರಾಜ್ ಕ್ಯಾದಿಗ್ಗೇರಾ (21), ರವಿ ಕುಮಾರ ಸಮುದ್ರ (22) ಸ್ಥಳದಲ್ಲಿಯೇ ಮೃತಪಟ್ಟವರು. ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿಗಳಾದ ಅರ್ಜುನ ಕೋತಿಗುಡ್ಡ, ಪ್ರಭು ಮಾತ್ಪಳ್ಳಿ ಹಾಗೂ ಉಮೇಶ ಎಚ್.ಎನ್.ತಾಂಡಾರನ್ನು ಹೆಚ್ಚಿನ ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇವರಲ್ಲಿ ಅರ್ಜುನ್ ಸಾವನ್ನಪ್ಪಿದ್ದಾನೆ.&amp;nbsp;&lt;/p&gt;&lt;h2&gt;&lt;strong&gt;&lsquo;ಅಂತ್ಯವಾಯ್ತು&rsquo; ಎಂಬ ಕಿರುಚಿತ್ರ&lt;/strong&gt;&lt;/h2&gt;&lt;p&gt;ನಾಗರಾಜ ಕ್ಯಾದಿಗ್ಗೇರಾ ಎಂಬ ವಿದ್ಯಾರ್ಥಿ &lsquo;ಅಂತ್ಯವಾಯ್ತು&rsquo; ಎಂಬ ಕಿರುಚಿತ್ರ ತಯಾರಿಸಿದ್ದು, ಅದೇ ಕಟ್ಟಡದ ಮೇಲ್ಭಾಗದಲ್ಲಿರುವ ಶ್ರೀ ಗುರು ಫೊಟೋ ಸ್ಟುಡಿಯೋದಲ್ಲಿ ಕೆಲಸದ ನಿಮಿತ್ಯ ವಿದ್ಯಾರ್ಥಿಗಳು ತೆರಳಿದ್ದರು. ಭಾನುವಾರ ಸ್ಟುಡಿಯೋ ಬಂದ್ ಮಾಡಿದ್ದರಿಂದ ಅವರನ್ನು ಮೊಬೈಲ್&zwnj;ನಲ್ಲಿ ಸಂಪರ್ಕಿಸಲು ಪ್ರಯತ್ನಿಸುತ್ತಿರುವಾಗ ಈ ಘಟನೆ ಜರುಗಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಎಲ್&zwnj; ನಿನೋ ಎಫೆಕ್ಟ್, ತುಂಗಭದ್ರಾ ಜಲಾಶಯಕ್ಕೆ ಎಂಟು ದಿನಗಳಿಂದ ಶೂನ್ಯ ನೀರಿನ ಒಳಹರಿವು&lt;/strong&gt;&lt;/p&gt;&lt;p&gt;ಶಾಸಕಿ ಕರೆಮ್ಮ ಜಿ.ನಾಯಕ ಭೇಟಿ ನೀಡಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಜೀವ ನದಿ ನೇತ್ರಾವತಿ ಒಡಲಿಗೆ ನೇರವಾಗಿ ವಸತಿ ಸಮುಚ್ಚಯಗಳಿಂದ ಶೌಚಾಲಯದ ತ್ಯಾಜ್ಯ ನೀರು!&lt;/strong&gt;&lt;/p&gt;&lt;p&gt;&lt;/p&gt;]]></content:encoded>
            <category>raichur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/devadurga-three-students-died-after-the-roof-of-a-building-collapsed-in-raichur-mrq/articleshow-in0g2ec"/>
        </item>
        <item>
            <title><![CDATA[ರಾಯಚೂರಿನ 200 ಕೋಟಿ ರೂ. ಹಗರಣ: ದರ್ವೇಶ್ ಕಂಪನಿ ರಹಸ್ಯವೇ ಗೊತ್ತಾಗ್ತಿಲ್ಲ, ಸೂಜಾ ಸಿಕ್ತಿಲ್ಲ!]]></title>
            <link>https://kannada.asianetnews.com/karnataka-districts/raichur-darvesh-group-scam-investors-left-in-limbo-as-rs-200-crore-fraud-mastermind-evades-cid-for-2-years-gdp/articleshow-lp5b0og</link>
            <guid isPermaLink="true">https://kannada.asianetnews.com/karnataka-districts/raichur-darvesh-group-scam-investors-left-in-limbo-as-rs-200-crore-fraud-mastermind-evades-cid-for-2-years-gdp/articleshow-lp5b0og</guid>
            <pubDate>Mon, 15 Jun 2026 15:32:10 +0530</pubDate>
            <description><![CDATA[ರಾಯಚೂರಿನಲ್ಲಿ &lsquo;ದರ್ವೇಶ್ ಗ್ರೂಪ್ ಆಫ್ ಕಂಪನಿ&rsquo; ಅಧಿಕ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದೆ. ಕಂಪನಿಯ ಮಾಲೀಕ ಮಹಮ್ಮದ್ ಸೂಜಾ ನಾಪತ್ತೆಯಾಗಿದ್ದು, ಎರಡು ವರ್ಷಗಳಿಂದ ಸಿಐಡಿ ತನಿಖೆ ನಡೆದರೂ ಆತ ಸಿಕ್ಕಿಲ್ಲ. ಇದೀಗ ಹಣ ಕಳೆದುಕೊಂಡ ಸಂತ್ರಸ್ತರು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv5bb6q2tcgvb5rfvq8937p6,imgname-raichur-darvesh-group-scam-1781517359838.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು: &lt;/strong&gt;ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ವಂಚನೆ ಬಳಿಕ ಅದೇ ರೀತಿಯ ಒದೊಂದೇ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದೀಗ ರಾಯಚೂರಿನಲ್ಲಿ ಇದೇ ರೀತಿಯ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಧಿಕ ಲಾಭ ಹಾಗೂ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು, ಇದೀಗ &lsquo;ದರ್ವೇಶ್ ಗ್ರೂಪ್ ಆಫ್ ಕಂಪನಿ&rsquo; (Darvesh Group of Companies) ಸಾರ್ವಜನಿಕರಿಗೆ ನಾಮ ಹಾಕಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕಂಪನಿಯ ಮಾಲೀಕ ಮಹಮ್ಮದ್ ಸೂಜಾ ಎಂಬಾತ ನೂರಾರು ಹೂಡಿಕೆದಾರರ ನೂರಾರು ಕೋಟಿ ಹಣವನ್ನು ಎತ್ತುವಳಿ ಮಾಡಿಕೊಂಡು ರಾತ್ರೋರಾತ್ರಿ ನಾಪತ್ತೆಯಾಗಿದ್ದು, ಇತ್ತ ಹೂಡಿಕೆದಾರರು ಬೀದಿಗೆ ಬಿದ್ದಿದ್ದಾರೆ. ಮೂಲಗಳ ಪ್ರಕಾರ, ಈ ವಂಚನೆಯ ಜಾಲ ಬರೋಬ್ಬರಿ 200 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡ ನೂರಾರು ಹೂಡಿಕೆದಾರರು ಈಗ ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;h2&gt;ಎರಡು ವರ್ಷಗಳಿಂದ ಸಿಐಡಿ ತನಿಖೆ, ಆದರೂ ಸಿಕ್ಕಿಲ್ಲ ಮಾಲೀಕ!&lt;/h2&gt;&lt;p&gt;ಈ ಮಹಾಮೋಸದ ಕುರಿತು ದೂರು ದಾಖಲಾದ ಬೆನ್ನಲ್ಲೇ ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಸರ್ಕಾರ ಇದನ್ನು ಸಿಐಡಿ (CID) ತನಿಖೆಗೆ ಒಪ್ಪಿಸಿತ್ತು. ಕಳೆದ ಎರಡು ವರ್ಷಗಳಿಂದ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೂ, ಇದುವರೆಗೆ ದರ್ವೇಶ್ ಕಂಪನಿಯ ಮುಖ್ಯ ಸೂತ್ರಧಾರ ಮಹಮ್ಮದ್ ಸೂಜಾನನ್ನು ಬಂಧಿಸಲು ಸಾಧ್ಯವಾಗಿಲ್ಲ. ಎರಡು ವರ್ಷ ಕಳೆದರೂ ವಂಚಕ ಮಾಲೀಕ ಪತ್ತೆಯಾಗದಿರುವುದು ಹೂಡಿಕೆದಾರರಲ್ಲಿ ಆಕ್ರೋಶ ಮತ್ತು ಅಸಹಾಯಕತೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಬೇರೆ ದಾರಿ ಕಾಣದ ನೂರಾರು ಹೂಡಿಕೆದಾರರು ಇದೀಗ ನ್ಯಾಯಕ್ಕಾಗಿ ನ್ಯಾಯಾಲಯದ (Court) ಮೆಟ್ಟಿಲೇರಿದ್ದಾರೆ.&lt;/p&gt;&lt;h2&gt;ಕಡು ಬಿಸಿಲಿನಲ್ಲಿ ಹೂಡಿಕೆದಾರರು ಹಾಗೂ ಏಜೆಂಟರ ಗೋಳಾಟ!&lt;/h2&gt;&lt;p&gt;ದರ್ವೇಶ್ ಕಂಪನಿಯನ್ನು ನಂಬಿ ಹಣ ಹೂಡಿಕೆ ಮಾಡಿದವರು ಕಳೆದ ಎರಡು ವರ್ಷಗಳಿಂದ ತಮ್ಮ ಹಣ ವಾಪಸ್ ಪಡೆಯಲು ತೀವ್ರ ಪರದಾಟ ನಡೆಸುತ್ತಿದ್ದಾರೆ. ಈ ವಂಚನೆ ಜಾಲದಿಂದಾಗಿ ಕೇವಲ ಹೂಡಿಕೆದಾರರು ಮಾತ್ರವಲ್ಲದೆ, ಕಂಪನಿಯಲ್ಲಿದ್ದ ಸ್ಥಳೀಯ ಏಜೆಂಟರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿದ್ದ ಏಜೆಂಟರಿಗೆ ಈಗ ಹೂಡಿಕೆದಾರರು ಹಣ ಕೇಳಿ ಒತ್ತಾಯಿಸುತ್ತಿರುವುದರಿಂದ ಅವರು ಯಾರಿಗೆ ಮುಖ ತೋರಿಸಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ.&lt;/p&gt;&lt;h2&gt;ಬೀದಿಗಿಳಿದು ಹೋರಾಟ:&lt;/h2&gt;&lt;p&gt;ತಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಂಡಿರುವ ನೂರಾರು ಜನ ಸಂತ್ರಸ್ತರು, ರಾಯಚೂರಿನ ಉರಿ ಬಿಸಿಲನ್ನೂ ಲೆಕ್ಕಿಸದೆ ಸದ್ಯ ಮುಚ್ಚಿ ಹೋಗಿರುವ ದರ್ವೇಶ್ ಕಂಪನಿಯ ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ. &quot;ನಮ್ಮ ರಕ್ತದ ಹಣ ನಮಗೆ ವಾಪಸ್ ಸಿಗಬೇಕು, ವಂಚಕ ಮಾಲೀಕನನ್ನು ತಕ್ಷಣ ಬಂಧಿಸಬೇಕು&quot; ಎಂದು ಉರಿ ಬಿಸಿಲಿನಲ್ಲೇ ಹೋರಾಟ ನಡೆಸುತ್ತಾ ಹೂಡಿಕೆದಾರರು ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಇಂತಹ ನಕಲಿ ಹಣಕಾಸು ಸಂಸ್ಥೆಗಳು ಮತ್ತು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಕಂಪನಿಗಳು ಅಧಿಕ ಬಡ್ಡಿಯ ಆಮಿಷ ಒಡ್ಡಿ ಸಾರ್ವಜನಿಕರನ್ನು ವಂಚಿಸುತ್ತಿರುವುದು ಹೆಚ್ಚಾಗುತ್ತಿದ್ದು, ಇಂತಹ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮುನ್ನ ಜನರು ಎಚ್ಚರದಿಂದ ಇರಬೇಕಾಗಿದೆ. ಸದ್ಯ ಸಿಐಡಿ ಮತ್ತು ನ್ಯಾಯಾಲಯದ ಮೇಲೆಯೇ ಹೂಡಿಕೆದಾರರು ತಮ್ಮ ಸಂಪೂರ್ಣ ಭರವಸೆಯನ್ನು ಇಟ್ಟಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/raichur-darvesh-group-scam-investors-left-in-limbo-as-rs-200-crore-fraud-mastermind-evades-cid-for-2-years-gdp/articleshow-lp5b0og"/>
        </item>
        <item>
            <title><![CDATA[Mantralaya: ಮಂತ್ರಾಲಯ ಮಠದ ಹುಂಡಿ ಎಣಿಕೆ: ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ! ಚಿನ್ನ ಬೆಳ್ಳಿ ಎಷ್ಟು?]]></title>
            <link>https://kannada.asianetnews.com/gallery/karnataka-districts/over-rs-3-crore-deposited-in-mantralaya-raghavendra-temple-hundi-in-21-days-rav-ofd9t35</link>
            <guid isPermaLink="true">https://kannada.asianetnews.com/gallery/karnataka-districts/over-rs-3-crore-deposited-in-mantralaya-raghavendra-temple-hundi-in-21-days-rav-ofd9t35</guid>
            <pubDate>Fri, 26 Jun 2026 12:43:48 +0530</pubDate>
            <description><![CDATA[&lt;p&gt;Mantalaya hundi collection: ರಾಯಚೂರಿನ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಜೂನ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನೀಡಿದ ಚಿನ್ನ ಬೆಳ್ಳಿಯಷ್ಟು ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw1bphbsty1pj0krdbj42mvm,imgname----------------------7--1782457255289.jpg" type="image/jpeg" height="390" width="690"/>
            <content:encoded><![CDATA[&lt;p&gt;Mantalaya hundi collection: ರಾಯಚೂರಿನ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಜೂನ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನೀಡಿದ ಚಿನ್ನ ಬೆಳ್ಳಿಯಷ್ಟು ತಿಳಿಯಿರಿ.&lt;/p&gt;&lt;img&gt;&lt;p&gt;ರಾಯಚೂರು (ಜೂ.26): ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಜೂನ್ ತಿಂಗಳ ಹುಂಡಿಯ ಎಣಿಕೆ ಕಾರ್ಯ ನಡೆಯಿತು. ಈ ಬಾರಿಯೂ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 21 ದಿನಗಳಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ರೂಪಾಯಿ ಜಮೆಯಾಗಿದೆ ಎಂದು ಮಂತ್ರಾಲಯದ ಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮಂತ್ರಾಲಯ ರಾಯರ ಭಕ್ತರು ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶ, ವಿದೇಶಗಳಿಂದ ದರ್ಶನಕ್ಕೆ ಆಗಮಿಸುತ್ತಾರೆ. ರಾಯರ ದರ್ಶನ ಪಡೆದು ನಗದು ಹಣ, ಚಿನ್ನ ಬೆಳ್ಳಿಯನ್ನೇ ಕಾಣಿಕೆಯಾಗಿ ಅರ್ಪಿಸುತ್ತಾರೆ. ಈ ಬಾರಿಯೂ 67ಗ್ರಾಂ. ಚಿನ್ನ, 511ಗ್ರಾಂ ಬೆಳ್ಳಿ ಆಭರಣಗಳನ್ನ ಭಕ್ತರು ಕಾಣಿಕೆ ಅರ್ಪಿಸಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಬಾರಿ ಮೇ ತಿಂಗಳ ಹುಂಡಿಯಲ್ಲಿ 22 ದಿನದಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಚಿನ್ನ ಬೆಳ್ಳಿ ಕಾಣಿಕೆ ಸ್ವಲ್ಪ ಇಳಿಮುಖವಾಗಿತ್ತು.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/over-rs-3-crore-deposited-in-mantralaya-raghavendra-temple-hundi-in-21-days-rav-ofd9t35"/>
        </item>
        <item>
            <title><![CDATA[ಸಿಂಧನೂರು ಕೆರೆ ನೀರಿನ ಪ್ರಮಾಣ ಕುಸಿತ: ನಗರಕ್ಕೆ ಕುಡಿಯುವ ನೀರಿಗೆ ಎದುರಾಗುತ್ತಾ ಸಂಕಷ್ಟ?]]></title>
            <link>https://kannada.asianetnews.com/karnataka-districts/the-water-level-of-the-sindhanur-city-lake-has-dropped-three-months-worth-of-savings-mrq/articleshow-oh425ud</link>
            <guid isPermaLink="true">https://kannada.asianetnews.com/karnataka-districts/the-water-level-of-the-sindhanur-city-lake-has-dropped-three-months-worth-of-savings-mrq/articleshow-oh425ud</guid>
            <pubDate>Sun, 05 Jul 2026 10:24:42 +0530</pubDate>
            <description><![CDATA[ಸಿಂಧನೂರು ನಗರದ ಜೀವನಾಡಿಯಾದ ಕೆರೆಯ ನೀರಿನ ಮಟ್ಟ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ. ಸದ್ಯ ತುರ್ವಿಹಾಳ ಕೆರೆಯಿಂದ ನೀರು ಪೂರೈಸಲಾಗುತ್ತಿದ್ದು, ಇನ್ನೂ ಮೂರು ತಿಂಗಳಿಗಾಗುವಷ್ಟು ಸಂಗ್ರಹವಿದೆ. ನಾಗರಿಕರು ನೀರನ್ನು ಮಿತವಾಗಿ ಬಳಸುವಂತೆ ಪೌರಾಯುಕ್ತರು ಮನವಿ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr9wwax0ve15fntea9jnmb8,imgname-sindhanuru-lake-1783227117917.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ತುರ್ವಿಹಾಳ ಪಟ್ಟಣ ಸಮೀಪದಲ್ಲಿರುವ ಬೃಹತ್ ಕುಡಿಯುವ ನೀರಿನ ಕೆರೆ ಸಿಂಧನೂರು ನಗರದ ಜೀವಸೆಲೆಯಾಗಿದ್ದು, ಸದ್ಯ ಕೆರೆ ನೀರಿನ ಪ್ರಮಾಣ ಕುಸಿತಕಂಡು ನಾಗರಿಕರಿಗೆ ಆತಂಕ ತಂದೊಡ್ಡಿದೆ.&lt;/p&gt;&lt;p&gt;ಸದ್ಯ ಕುಡಿಯುವ ನೀರಿನ ಕೆರೆಯಲ್ಲಿ ಸದ್ಯ ಅಂದಾಜು ಒಂದೂವರೆಯಿಂದ ಎರಡು ಮೀಟರ್ ನೀರಿನ ಸಂಗ್ರಹವಿದೆ. ಹಾಗಾಗಿ ಪ್ರಸ್ತುತ ತುರ್ವಿಹಾಳ ಕೆರೆಯಿಂದ ನೇರವಾಗಿ ನೀರನ್ನು ನಗರದ 31 ವಾರ್ಡ್&zwnj;ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಕುಡಿಯುವ ನೀರಿನ ಉದ್ದೇಶಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿದ ವೇಳೆ ತುರ್ವಿಹಾಳ ಕೆರೆ ಹಾಗೂ ನಗರದ ಕುಡಿಯುವ ನೀರಿನ ಕೆರೆಯಲ್ಲಿ ನೀರು ಸಂಗ್ರಹಿಸಲಾಗಿತ್ತು. ಬೇಸಿಗೆಯ ಕಾರಣ ದಿಂದ ನೀರಿನ ಬೇಡಿಕೆ ಹೆಚ್ಚಿ ನಗರದ ಕುಡಿಯುವ ನೀರಿನ ಕೆರೆ ಬೇಗನೆ ಖಾಲಿಯಾಗಿದ್ದು, ತುರ್ವಿಹಾಳ ಕೆರೆಯೇ ಆಸರೆಯಾಗಿದೆ.&lt;/p&gt;&lt;h2&gt;&lt;strong&gt;ನೀರನ್ನು ಮಿತವಾಗಿ ಬಳಸಿ:&lt;/strong&gt;&lt;/h2&gt;&lt;p&gt;ಸದ್ಯ ಸಿಂಧನೂರು ಕೆರೆಯಲ್ಲಿ ನೀರು ಕಡಿಮೆ ಇರಬಹುದು, ಆದರೆ ತುರ್ವಿಹಾಳ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಲಾಗಿದೆ. ಅಂದಾಜು ಇನ್ನೂ ಮೂರು ಇಲ್ಲವೇ ಮೂರುವರೇ ತಿಂಗಳಿಗಾಗುವಷ್ಟು ನೀರಿನ ಸಂಗ್ರಹವಿದೆ. ಹಾಗಾಗಿ ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ಈಗ ಪ್ರತಿ 8 ದಿನಕ್ಕೊಮ್ಮೆ ಆಯಾ ವಾರ್ಡ್&zwnj;ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಒಂದೆರಡು ದಿನ ಹೆಚ್ಚು ಕಡಿಮೆ ಆಗಬಹುದು. ಆದರೆ ನೀರಿನ ಕೊರತೆ ಮಾತ್ರ ಇಲ್ಲ. ಆದರೆ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ನಗರಸಭೆಯ ಪೌರಾಯುಕ್ತ ಹೇಳುತ್ತಾರೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/the-water-level-of-the-sindhanur-city-lake-has-dropped-three-months-worth-of-savings-mrq/articleshow-oh425ud"/>
        </item>
        <item>
            <title><![CDATA[ಸಿಂಧನೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ 332 ವಿದ್ಯಾರ್ಥಿಗಳಿಗೆ ನಾಲ್ವರೇ ಉಪನ್ಯಾಸಕರು]]></title>
            <link>https://kannada.asianetnews.com/karnataka-districts/four-lecturers-for-332-students-at-the-government-pre-university-college-in-sindhanur-raichur-mrq/articleshow-qclw2bx</link>
            <guid isPermaLink="true">https://kannada.asianetnews.com/karnataka-districts/four-lecturers-for-332-students-at-the-government-pre-university-college-in-sindhanur-raichur-mrq/articleshow-qclw2bx</guid>
            <pubDate>Mon, 06 Jul 2026 05:59:21 +0530</pubDate>
            <description><![CDATA[ಸಿಂಧನೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೂ, ಉಪನ್ಯಾಸಕರ ತೀವ್ರ ಕೊರತೆ ಎದುರಾಗಿದೆ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ 332 ವಿದ್ಯಾರ್ಥಿಗಳಿಗೆ ಕೇವಲ ನಾಲ್ವರು ಉಪನ್ಯಾಸಕರಿದ್ದು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪಾಲಕರು ಹಾಗೂ ವಿದ್ಯಾರ್ಥಿಗಳು ಶೀಘ್ರ ಪರಿಹಾರಕ್ಕಾಗಿ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwtd10a8j6ba4494ydnn8cf1,imgname-sindhanur-college-1783297507656.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರಹ್ಲಾದ ಗುಡಿ&lt;/strong&gt;&lt;/p&gt;&lt;p&gt;&lt;strong&gt;ರಾಯಚೂರು:&lt;/strong&gt; ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರಿಲ್ಲ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಬರೋಬ್ಬರಿ 332ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕೇವಲ 4 ಜನ ಉಪನ್ಯಾಸಕರು ಪಾಠ ಬೋಧನೆಗೆ ದಿನವೂ ಹರಸಾಹಸ ಪಡುತ್ತಿದ್ದಾರೆ.&lt;/p&gt;&lt;p&gt;2025-26ನೇ ಸಾಲಿನಲ್ಲಿ ಈ ಕಾಲೇಜಿನ ವಿವಿಧ ವಿಭಾಗದ ದ್ವಿತೀಯ ಪಿಯಸಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಪಾಸಾದ ಹಿನ್ನೆಲೆಯಲ್ಲಿ, ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾವಕಾಶ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನ್ಯಾಸಕರನ್ನು ನೇಮಕ ಮಾಡದೇ ಇರುವುದರಿಂದ ಪಠ್ಯ ಹಾಗೂ ಲ್ಯಾಬ್ (ಪ್ರಯೋಗಾಲಯ) ಚಟುವಟಿಕೆಗಳನ್ನು ನಿಗದಿಯಂತೆ ಕೈಗೊಳ್ಳಲು ಉಪನ್ಯಾಸಕರಿಗೆ ಹೊರೆಯಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಬಡ ವಿದ್ಯಾರ್ಥಿಗಳಿಗೆ ಈ ಕಾಲೇಜು ಆಧಾರಸ್ತಂಭ&lt;/strong&gt;&lt;/h2&gt;&lt;p&gt;&amp;nbsp;ಖಾಸಗಿ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಿ ಅಭ್ಯಾಸ ಮಾಡಲಾಗದ ಬಡ ಮತ್ತು ಮಧ್ಯಮ ವರ್ಗದ ಬಹಳಷ್ಟು ವಿದ್ಯಾರ್ಥಿಗಳಿಗೆ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಶೈಕ್ಷಣಿಕವಾಗಿ ಆಧಾರಸ್ತಂಭವಾಗಿದೆ. ಆದರೆ ಈ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕಾಗಿದೆ.&lt;/p&gt;&lt;p&gt;ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ 208, ದ್ವಿತೀಯ ಪಿಯುಸಿ 124 ಒಟ್ಟು 332, ಕಲಾ 120 ಹಾಗೂ ವಾಣಿಜ್ಯ ವಿಭಾಗದಲ್ಲಿ 85 ವಿದ್ಯಾರ್ಥಿಗಳು ಕಲಿಯುತ್ತಾರೆ. ವಿಜ್ಞಾನ ವಿಭಾಗ ಮತ್ತು ಕಲಾ ವಿಭಾಗದಲ್ಲಿ ಉಪನ್ಯಾಸಕರ ಕೊರತೆ ಉಂಟಾಗಿದೆ.&lt;/p&gt;&lt;h3&gt;&lt;strong&gt;ವಿಜ್ಞಾನ ವಿಭಾಗದ ಉಪನ್ಯಾಸಕರ ನೇಮಕಾತಿ ಅವಶ್ಯಕ&lt;/strong&gt;&lt;/h3&gt;&lt;p&gt;&ldquo;ವಿಜ್ಞಾನ ವಿಭಾಗಕ್ಕೆ ಪ್ರಸಕ್ತ ಸಾಲಿನಲ್ಲಿ 208 ವಿದ್ಯಾರ್ಥಿಗಳು ನೋಂದಣಿ ಪಡೆದುಕೊಂಡಿದ್ದಾರೆ. 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನವೂ ತರಗತಿಗಳಿಗೆ ಹಾಜರಾಗುತ್ತಾರೆ. ಇಷ್ಟು ವಿದ್ಯಾರ್ಥಿಗಳಿಗೆ ಒಂದೇ ಬಾರಿಗೆ ಕ್ಲಾಸ್ ಮಾಡಲಾಗುತ್ತಿದ್ದು, ಎರಡು ಸೆಕ್ಷನ್ ಆದರೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಾಧ್ಯ. ಈಗ ಸದ್ಯ ಕೇವಲ ಇಬ್ಬರು ಖಾಯಂ ಹಾಗೂ ಇಬ್ಬರು ಅತಿಥಿಗಳು ಸೇರಿ ಒಟ್ಟು ನಾಲ್ಕು ಜನ ಉಪನ್ಯಾಸಕರಿದ್ದು, ಆದಷ್ಟು ಬೇಗ ಹೆಚ್ಚುವರಿ ಉಪನ್ಯಾಸಕರನ್ನು ನೇಮಕ ಮಾಡಬೇಕು&rdquo; ಎಂದು ವಿದ್ಯಾರ್ಥಿ ಪಾಲಕರೊಬ್ಬರು ಒತ್ತಾಯಿಸಿದ್ದಾರೆ.&lt;/p&gt;&lt;h3&gt;&lt;strong&gt;ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆ&lt;/strong&gt;&lt;/h3&gt;&lt;p&gt;&ldquo;ಕಲಾ ವಿಭಾಗಕ್ಕೆ ಒಬ್ಬರೇ ಸಮಾಜಶಾಸ್ತ್ರ &amp;nbsp;ಉಪನ್ಯಾಸಕರಿದ್ದು, ಆದರೆ ಅವರನ್ನೂ ಸಹ 3 ದಿನ ಅಂಬಾಮಠದ ಕಾಲೇಜಿಗೆ ಎರವಲು ಸೇವೆಗೆ ನಿಯೋಜಿಸಲಾಗಿದೆ. ಇದರಿಂದ ಪಠ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಸಮಸ್ಯೆಯಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 120 ವಿದ್ಯಾರ್ಥಿಗಳಿದ್ದು, ಅವರಿಗೆ ಪಾಠ ಬೋಧನೆ ಜೊತೆಗೆ ಗ್ರಾಮೀಣ ಪ್ರದೇಶದ ಇನ್ನೊಂದು ಕಾಲೇಜಿಗೆ ಬೋಧಿಸಲು ಉಪನ್ಯಾಸಕರು ಅಲೆದಾಡುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಮಸ್ಯೆಯಾಗಿದೆ. ಹಾಗಾಗಿ ಸಮಾಜಶಾಸ್ತ&ccedil; ಉಪನ್ಯಾಸಕರನ್ನು ಪ್ರಸ್ತುತ ಕಾಲೇಜಿನಲ್ಲೇ ಉಳಿಸಿ, ಅಂಬಾಮಠ ಕಾಲೇಜಿಗೆ ಬೇರೊಬ್ಬ ಅತಿಥಿ ಉಪನ್ಯಾಸಕರನ್ನು ನೇಮಿಸಿ ಸಮಸ್ಯೆ ಪರಿಹರಿಸಬೇಕೆಂದು ವಿದ್ಯಾರ್ಥಿ ಪಾಲಕರು&rdquo; ಮನವಿ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಜನಪ್ರತಿನಿಧಿಗಳು ಗಮನಹರಿಸಲಿ&lt;/strong&gt;&lt;/h3&gt;&lt;p&gt;ಕಳೆದ ಕೆಲವು ದಿನಗಳಿಂದ ಕಾಲೇಜು ತರಗತಿಗಳು ಆರಂಭವಾಗಿದ್ದು, ಆದಷ್ಟು ಶೀಘ್ರ ಸ್ಥಳೀಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನ ಸೆಳೆದು ವಿಜ್ಞಾನ ವಿಭಾಗಕ್ಕೆ ಇನ್ನೂ 4 ಜನ ಉಪನ್ಯಾಸಕರನ್ನು ನೇಮಿಸಬೇಕು ಹಾಗೂ ಕಲಾ ವಿಭಾಗದ ಸಮಾಜಶಾಸ್ತ&ccedil; ಉಪನ್ಯಾಸಕರನ್ನು ಬೇರೆ ಕಾಲೇಜಿಗೆ ಎರವಲು ಸೇವೆಗೆ ನಿಯೋಜಿಸಿರುವುದನ್ನು ರದ್ದುಪಡಿಸಬೇಕು ಹಾಗೂ ಕಾಲೇಜಿಗೆ ಅವಶ್ಯವಿರುವ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ವಿದ್ಯಾರ್ಥಿ ಪಾಲಕರಾದ ಸೋಮನಾಥ, ಬಸವರಾಜ ಹಾಗೂ ನಾಗರಾಜ ಅವರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/four-lecturers-for-332-students-at-the-government-pre-university-college-in-sindhanur-raichur-mrq/articleshow-qclw2bx"/>
        </item>
        <item>
            <title><![CDATA[ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ; ಇಂದು ಅಂತ್ಯಕ್ರಿಯೆ]]></title>
            <link>https://kannada.asianetnews.com/gallery/karnataka-districts/former-congress-mla-from-raichur-city-constituency-syed-yasin-passes-away-today-mrq-qp3a1xp</link>
            <guid isPermaLink="true">https://kannada.asianetnews.com/gallery/karnataka-districts/former-congress-mla-from-raichur-city-constituency-syed-yasin-passes-away-today-mrq-qp3a1xp</guid>
            <pubDate>Sun, 12 Jul 2026 11:27:23 +0530</pubDate>
            <description><![CDATA[&lt;p&gt;ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ (74) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯರಾಗಿದ್ದ ಯಾಸೀನ್ ಅವರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxae51vac7g49m594a3hwe7d,imgname-yaseen--3--1783835559786.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ (74) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯರಾಗಿದ್ದ ಯಾಸೀನ್ ಅವರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.&lt;/p&gt;&lt;img&gt;&lt;p&gt;ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್&zwnj;ನ ಮಾಜಿ ಶಾಸಕರಾದ ಸೈಯದ್ ಯಾಸೀನ್ ಅವರು ಇಂದು ಮುಂಜಾನೆ 8:45 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸೈಯದ್ ಯಾಸೀನ್ ಅವರಿಗೆ 74 ವರ್ಷ ವಯಸ್ಸು ಆಗಿತ್ತು.&lt;/p&gt;&lt;img&gt;&lt;p&gt;ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೈಯದ್ ಯಾಸೀನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಮಾಜಿ ಶಾಸಕರು ಪತ್ನಿ ಹಾಗೂ ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿದ್ದಾರೆ. ಇವರು ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯನಾಗಿದ್ದರು.&lt;/p&gt;&lt;img&gt;&lt;p&gt;ರಾಯಚೂರು ಜಿಲ್ಲಾ ಕಾಂಗ್ರೆಸ್&zwnj;ನ ಪ್ರಭಾವಿ ರಾಜಕಾರಣಿಯಾಗಿದ್ದ ಸೈಯದ್ ಯಾಸೀನ್ ಅವರು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಒಟ್ಟು ಆರು ಬಾರಿ ಸ್ಪರ್ಧಿಸಿದ್ದರು. ಈ ಪೈಕಿ 1999 ಮತ್ತು 2008 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.&lt;/p&gt;&lt;img&gt;&lt;p&gt;ಸೈಯದ್ ಯಾಸೀನ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮತ್ತು ಕೆಪಿಸಿಸಿಯ (KPCC) ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.&lt;/p&gt;&lt;img&gt;&lt;p&gt;ಸದ್ಯ ಸೈಯದ್ ಯಾಸೀನ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ರಾಯಚೂರಿಗೆ ರವಾನಿಸಲಾಗುತ್ತಿದ್ದು, ಇಂದು ಸಂಜೆ ರಾಯಚೂರು ನಗರದ ಕಮಲಿವಾಲೆ ಬಾಬಾ ಕಬರಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.&lt;/p&gt;]]></content:encoded>
            <category>raichur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/former-congress-mla-from-raichur-city-constituency-syed-yasin-passes-away-today-mrq-qp3a1xp"/>
        </item>
        <item>
            <title><![CDATA[NH 150C Project: ಬಿಸಿಲುನಾಡು ರಾಯಚೂರು ಆಗಲಿದೆ ಹೈವೇಗಳ ಹಬ್: ದೆಹಲಿಯಲ್ಲಿ ಮಹತ್ವದ ಸಭೆ]]></title>
            <link>https://kannada.asianetnews.com/india-news/raichur-yadgir-highway-projects-update-nhai-reviews-nh-150c-nh-748-gvd/articleshow-rrzo5hg</link>
            <guid isPermaLink="true">https://kannada.asianetnews.com/india-news/raichur-yadgir-highway-projects-update-nhai-reviews-nh-150c-nh-748-gvd/articleshow-rrzo5hg</guid>
            <pubDate>Tue, 16 Jun 2026 21:13:53 +0530</pubDate>
            <description><![CDATA[&lt;p&gt;NH 150C Project: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ಸಂಸದ ಜಿ ಕುಮಾರ ನಾಯಕ ಭೇಟಿ &zwnj;ಮಾಡಿದ್ರು.&zwnj;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv8hmkt6v2gq0qbramw03kxb,imgname-nkn-1781624622918.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜೂ.16):&lt;/strong&gt; ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ರಾಯಚೂರು&ndash;ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕ ಭೇಟಿ &zwnj;ಮಾಡಿದ್ರು.&zwnj; ಕಲ್ಯಾಣ ಕರ್ನಾಟಕ ಪ್ರದೇಶದ ಮೂಲಕ ಹಾದು ಹೋಗುವ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಕುರಿತು ಸವಿಸ್ತಾರ ಚರ್ಚೆ ನಡೆಸಿದರು.&lt;/p&gt;&lt;p&gt;ಸಭೆಯಲ್ಲಿ ವಿಶೇಷವಾಗಿ ರಾಯಚೂರು&ndash;ಯಾದಗಿರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಾದ NH-150Cರ ಎರಡು ಪ್ಯಾಕೇಜುಗಳು, NH-748 ರ ಮೂರು ಪ್ಯಾಕೇಜುಗಳು ಹೊಸದಾಗಿ ಪ್ರಸ್ತಾಪಿಸಲಾದ NH-167 ಮಾರ್ಗಸೂಚಿ ಹಾಗೂ NH-150A ರಸ್ತೆ ಅಗಲೀಕರಣ ಯೋಜನೆಗಳ ಪ್ರಗತಿ ಬಗ್ಗೆ ಸಮಗ್ರವಾಗಿ ಪರಿಶೀಲನೆ &zwnj;ನಡೆಸಲಾಯ್ತು.&lt;/p&gt;&lt;p&gt;ಇನ್ನೂ ಇದೇ ವೇಳೆ ಹೈವೇ ಜೊತೆಗೆ ರಸ್ತೆ ಅಗಲೀಕರಣ, ಅಗತ್ಯವಿರುವ ಸ್ಥಳಗಳಲ್ಲಿ ಬೈಪಾಸ್&zwnj;ಗಳ ನಿರ್ಮಾಣ, ಸರ್ವಿಸ್ ರಸ್ತೆಗಳ ಅಭಿವೃದ್ಧಿ, ಅಪಘಾತ ತಡೆಗೆ ಸುರಕ್ಷತಾ ಕ್ರಮಗಳ ಅಳವಡಿಕೆ ಹಾಗೂ ಕಾಮಗಾರಿಗಳ ಗುಣಮಟ್ಟವನ್ನು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ವಹಿಸುವ ಕುರಿತು ಸಮಗ್ರ ಚರ್ಚೆ ನಡೆಯಿತು. ಅಲ್ಲದೆ ಭೂಸ್ವಾಧೀನ, ತಾಂತ್ರಿಕ ಅನುಮೋದನೆಗಳು ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿ ಉಂಟಾಗುವ ಅಡಚಣೆಗಳನ್ನು ತ್ವರಿತವಾಗಿ ಪರಿಹರಿಸುವ ಅಗತ್ಯತೆಯನ್ನೂ ಒತ್ತಿ ಹೇಳಲಾಯಿತು.&lt;/p&gt;&lt;h2&gt;&lt;strong&gt;ಹೈವೇಗಳು ಬಂದ್ರೆ ರಾಯಚೂರು ಆಗಲಿದೆ ರೋಡ್ ಗಳ ಹಬ್!&lt;/strong&gt;&lt;/h2&gt;&lt;p&gt;ಕಲ್ಯಾಣ ಕರ್ನಾಟಕ ಭಾಗದ ಜನರ ಬಹುಕಾಲದ ಬೇಡಿಕೆಯಾದ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆ ಈ ಯೋಜನೆಗಳ ಮೂಲಕ ಸಾಕಾರಗೊಳ್ಳಲಿದ್ದು, ಕೃಷಿ, ಕೈಗಾರಿಕೆ, ವ್ಯಾಪಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು. ಉತ್ತಮ ಗುಣಮಟ್ಟದ ರಸ್ತೆ ಜಾಲದಿಂದ ಹೂಡಿಕೆ ಅವಕಾಶಗಳು ಹೆಚ್ಚುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಅವರು ಮನವರಿಕೆ ಮಾಡಿದರು.&lt;/p&gt;&lt;p&gt;ಸಭೆಯಲ್ಲಿ NHAI ಅಧ್ಯಕ್ಷರಾದ ಸಂತೋಷ್ ಯಾದವ್ ಅವರು ಪ್ರಾಧಿಕಾರದ ಸಂಪೂರ್ಣ ಸಹಕಾರ ಜೊತೆಗೆ ಭರವಸೆ ನೀಡಿದ್ದು, ಸಾರ್ವಜನಿಕರಿಗೆ ಶೀಘ್ರದಲ್ಲಿ ಉತ್ತಮ ರಸ್ತೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲು ಬದ್ಧತೆ ವ್ಯಕ್ತಪಡಿಸಿದರು. ಯೋಜನೆಗಳ ಅನುಷ್ಠಾನದಲ್ಲಿ ಗುಣಮಟ್ಟ ಮತ್ತು ಸಮಯ ಪಾಲನೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.&lt;/p&gt;&lt;p&gt;ಈ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪೂರ್ಣಗೊಂಡ ಬಳಿಕ ರಾಯಚೂರು&ndash;ಯಾದಗಿರಿ ಸೇರಿದಂತೆ ಸಮಗ್ರ ಕಲ್ಯಾಣ ಕರ್ನಾಟಕ ಪ್ರದೇಶದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದ್ದು, ರಸ್ತೆ ಸುರಕ್ಷತೆ ಹೆಚ್ಚುವುದರೊಂದಿಗೆ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ ಎಂದು ಸಂಸದ ಜಿ. ಕುಮಾರ್ &zwnj;ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Govindaraj S</dc:creator>
            <atom:link href="https://kannada.asianetnews.com/india-news/raichur-yadgir-highway-projects-update-nhai-reviews-nh-150c-nh-748-gvd/articleshow-rrzo5hg"/>
        </item>
        <item>
            <title><![CDATA[ರಾಯಚೂರು: ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಡಿವೈಡರ್ ಡಿಕ್ಕಿ; 'ಕಣ್ಣು ಮಂಜಾಗಿ' ಹತ್ತಿಸಿದ ಎಂದ ಭೂಪ!]]></title>
            <link>https://kannada.asianetnews.com/gallery/karnataka-districts/raichur-drunk-man-crashes-divider-electric-pole-incident-in-city-rav-ugsrt8w</link>
            <guid isPermaLink="true">https://kannada.asianetnews.com/gallery/karnataka-districts/raichur-drunk-man-crashes-divider-electric-pole-incident-in-city-rav-ugsrt8w</guid>
            <pubDate>Wed, 10 Jun 2026 10:16:06 +0530</pubDate>
            <description><![CDATA[&lt;p&gt;ರಾಯಚೂರು ನಗರದಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಯರ್ರಾಬಿರ್ರಿ ಕಾರು ಚಾಲಯಿಸಿ ಡಿವೈಡರ್&zwnj;ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರ ವಿಚಾರಣೆ ವೇಳೆ &lsquo;ಕಣ್ಣು ಮಂಜಾಗಿ&rsquo; ಹತ್ತಿಸಿದೆ ಸಾರ್ ಎಂದಿರುವ ಭೂಪನಿಗೆ ಏನು ಹೇಳಬೇಕು?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktqwqkk400m68b4whdzh20ag,imgname-----------------------2026-06-10t095958.280-1781065829988.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಯಚೂರು ನಗರದಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಯರ್ರಾಬಿರ್ರಿ ಕಾರು ಚಾಲಯಿಸಿ ಡಿವೈಡರ್&zwnj;ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರ ವಿಚಾರಣೆ ವೇಳೆ &lsquo;ಕಣ್ಣು ಮಂಜಾಗಿ&rsquo; ಹತ್ತಿಸಿದೆ ಸಾರ್ ಎಂದಿರುವ ಭೂಪನಿಗೆ ಏನು ಹೇಳಬೇಕು?&amp;nbsp;&lt;/p&gt;&lt;img&gt;&lt;p&gt;ಕಂಠಪೂರ್ತಿ ಕುಡಿದು ಯರ್ರಾಬಿರ್ರಿ ಕಾರು ಚಲಾಯಿಸಿದ ಕುಡುಕನೋರ್ವ ಅವಾಂತರ ಸೃಷ್ಟಿಸಿದ್ದಾನೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬಿಟ್ಟು ಡಿವೈಡರ್ ಮೇಲೆ ಹತ್ತಿ ಹೊಡೆದ ಘಟನೆ ರಾಯಚೂರು ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ನಡೆದಿದೆ.&lt;/p&gt;&lt;img&gt;&lt;p&gt;ಡಿವೈಡರ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಕಾರು ರಭಸವಾಗಿ &amp;nbsp;ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದುಬಿದ್ದಿದೆ, ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಇಷ್ಟಾದರೂ ಅದೃಷ್ಟವಶಾತ್ ಕಾರು ಚಾಲಕ ಪವಾಡ ಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.&lt;/p&gt;&lt;img&gt;&lt;p&gt;ಕಾರು ಡಿಕ್ಕಿಯಾದ ರಭವಸಕ್ಕೆ ದೊಡ್ಡ ಅನಾಹುತವೇ ಆಗುತ್ತಿತ್ತು. ಅದೃಷ್ಟವಶಾಂತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಡಿಕ್ಕಿ ಹೊಡೆದ ತಕ್ಷಣಕ್ಕೆ ಸ್ಥಳೀಯರು ತಕ್ಷಣ ಸಹಾಯಕ್ಕೆ ದಾವಿಸಿ ಬಂದರು.&lt;/p&gt;&lt;img&gt;&lt;p&gt;ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಚಾಲಕ ಶ್ರೀನಿವಾಸ ಗೌಡ ಎಂಬಾತನ ವಿಚಾರಿಸಿದಾಗ 'ಕಣ್ಣು ಮಂಜಾಗಿ ಡಿವೈಡರ್ ಮೇಲೆ ಕಾರು ಹತ್ತಿಸಿದ್ದೇನೆ' ಎಂದು ಹೇಳಿದ್ದಾನೆ! ಕುಡಿದು ಕಾರು ಚಲಾಯಿಸಿದರೆ ಕಣ್ಣು ಮಂಜಾಗದೆ ಇನ್ನೇನಾಗುತ್ತೆ? ಎಂದ ಪೊಲೀಸರು.&lt;/p&gt;&lt;img&gt;&lt;p&gt;ಘಟನೆ ಸಂಬಂಧ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂಬುದು ತಿಳಿದುಬಂದಿದೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/raichur-drunk-man-crashes-divider-electric-pole-incident-in-city-rav-ugsrt8w"/>
        </item>
    </channel>
</rss>
