<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 10 Aug 2026 16:15:09 +0530</lastBuildDate>
        <atom:link href="https://kannada.asianetnews.com/rss/raichur" rel="self" type="application/rss+xml"/>
        <item>
            <title><![CDATA[ಬೇಸಿಗೆ ಆಗಿ ಬದಲಾಯ್ತು ಮಳೆಗಾಲ, ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ 3 ರಿಂದ 4 ಡಿಗ್ರಿ ಸೆ ಉಷ್ಣಾಂಶ ಏರಿಕೆ!]]></title>
            <link>https://kannada.asianetnews.com/state/karnataka-news-bangalore-weather-monsoon-turns-into-summer-temp-rises-by-4-degree-celsius-gdp/articleshow-02quw1m</link>
            <guid isPermaLink="true">https://kannada.asianetnews.com/state/karnataka-news-bangalore-weather-monsoon-turns-into-summer-temp-rises-by-4-degree-celsius-gdp/articleshow-02quw1m</guid>
            <pubDate>Tue, 14 Jul 2026 10:52:06 +0530</pubDate>
            <description><![CDATA[ನೈರುತ್ಯ ಮಾನ್ಸೂನ್ ದುರ್ಬಲಗೊಂಡಿದ್ದರಿಂದ ಕರ್ನಾಟಕದಲ್ಲಿ ಮಳೆಗಾಲದಲ್ಲಿಯೇ ಬೇಸಿಗೆಯಂತಹ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರು, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ತಾಪಮಾನ ಏರಿಕೆಯಾಗಿದ್ದು, ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಮಳೆಯ ಕೊರತೆಯಿಂದ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx5tdpvafqg5scjr5dypyfwv,imgname-summer-1-1783680654186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಜೂನ್, ಜುಲೈ ತಿಂಗಳು ಬಂತೆಂದರೆ ಸಾಮಾನ್ಯವಾಗಿ ವರುಣನ ಆರ್ಭಟ ಜೋರಾಗಿರುತ್ತದೆ. ಅಲ್ಲಲ್ಲಿ ಅವಾಂತರಗಳು ಆಗುತ್ತಿರುತ್ತವೆ. ಆದರೆ ಈ ಬಾರಿ ರಾಜ್ಯದಲ್ಲಿ ಮಳೆಗಾಲ ಚಿತ್ರಣವೇ ಉಲ್ಟಾ ಆದಂತಾಗಿದೆ. ಮಳೆಗಾಲದಲ್ಲಿ ಜನರು ಬೇಸಿಗೆಯ ಬಿಸಿಲಿನ ಬೇಗೆಯನ್ನು ಅನುಭವಿಸುವಂತಾಗಿದೆ. ನೈರುತ್ಯ ಮಾನ್ಸೂನ್ ಮಾರುತಗಳು ದುರ್ಬಲಗೊಂಡಿರುವುದರಿಂದ ರಾಜ್ಯಾದ್ಯಂತ ಮಳೆಯ ಪ್ರಮಾಣ ಗಣನೀಯವಾಗಿ ಕುಸಿತವಾಗಿದ್ದು, ತಾಪಮಾನದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಉಷ್ಣಾಂಶ ಏರಿಕೆಯಾಗಿದೆ. ಜನರು ಸೆಕೆ ವಾತಾವರಣಕ್ಕೆ ಹೈರಾಣಾಗಿದ್ದಾರೆ&lt;/p&gt;&lt;h2&gt;ಬೇಸಿಗೆಯಂತಾದ ಮಳೆಗಾಲ: ಕಂಗಾಲಾದ ಬೆಂಗಳೂರಿಗರು&lt;/h2&gt;&lt;p&gt;ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮಳೆಗಾಲದ ಈ ಸಮಯದಲ್ಲಿ ತೀವ್ರ ತಂಪಾದ ವಾತಾವರಣ ಇರುತ್ತಿತ್ತು. ವಾಡಿಕೆಯಂತೆ ಇಲ್ಲಿನ ಗರಿಷ್ಠ ಉಷ್ಣಾಂಶ 28.3 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಬೇಕಿತ್ತು. ಆದರೆ ಪ್ರಸ್ತುತ ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 32.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಅಂದರೆ, ವಾಡಿಕೆಗಿಂತ 4.1 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಉಷ್ಣಾಂಶ ಏರಿಕೆಯಾಗಿದ್ದು, ಬೆಂಗಳೂರಿಗರು ಬಿಸಿಲ ಬೇಗೆಗೆ ಬೆಂದು ಹೋಗುತ್ತಿದ್ದಾರೆ.&lt;/p&gt;&lt;p&gt;5 ವರ್ಷಗಳ ಬಳಿಕ ನಗರದಲ್ಲಿ ಜುಲೈ ತಿಂಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. 2021ರ ಜುಲೈನಲ್ಲಿ ಗರಿಷ್ಠ ತಾಪಮಾನ 32.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಪುನಃ ಪ್ರಸಕ್ತ ಜುಲೈನಲ್ಲಿ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಅಂಕಿ-ಅಂಶಗಳು ತಿಳಿಸಿವೆ. ಇನ್ನು ಎಚ್&zwnj;ಎಎಲ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸರಾಸರಿಗಿಂತ 4.4 ಡಿಗ್ರಿ ಸೆಲ್ಸಿಯಸ್ ಹೆಚ್ಚು. ಕಳೆದ 17 ದಿನಗಳಿಂದ ನಗರದಲ್ಲಿ ಮಳೆಯಾಗಿಲ್ಲ. ಮೋಡಗಳು ಇಲ್ಲದ ಕಾರಣ ಕಳೆದ 1 ವಾರದಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಜು.17ರವರೆಗೂ ನಗರದಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.&lt;/p&gt;&lt;p&gt;ರಾಜಧಾನಿ ಮಾತ್ರವಲ್ಲದೆ ಮೈಸೂರು, ಗದಗ, ಕೊಪ್ಪಳ ಹಾಗೂ ಬೆಂಗಳೂರಿನ ಹೆಚ್&zwnj;ಎಎಲ್ (HAL) ವಿಮಾನ ನಿಲ್ದಾಣ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ವ್ಯಾಪ್ತಿಯಲ್ಲೂ ತಾಪಮಾನದಲ್ಲಿ ಬರೋಬ್ಬರಿ 4 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಹೆಚ್ಚಳ ಕಂಡುಬಂದಿದೆ.&lt;/p&gt;&lt;h2&gt;ರಾಯಚೂರಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲು&lt;/h2&gt;&lt;p&gt;ಇನ್ನು ರಾಜ್ಯದಲ್ಲೇ ಅತಿ ಹೆಚ್ಚು ಬಿಸಿಲಿನ ತಾಪಕ್ಕೆ ತುತ್ತಾಗಿರುವುದು ರಾಯಚೂರು ಜಿಲ್ಲೆ. ಈ ಅವಧಿಯಲ್ಲಿ ರಾಯಚೂರಿನಲ್ಲಿ ಸಾಮಾನ್ಯವಾಗಿ 33.1 ಡಿಗ್ರಿ ಸೆಲ್ಸಿಯಸ್ ವಾಡಿಕೆ ಉಷ್ಣಾಂಶ ಇರಬೇಕಿತ್ತು. ಆದರೆ ಈಗ ಅಲ್ಲಿ ಬರೋಬ್ಬರಿ 38.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಂದರೆ ವಾಡಿಕೆಗಿಂತ 5.3 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ತಾಪಮಾನ ಏರಿಕೆಯಾಗಿದ್ದು, ಜಿಲ್ಲೆಯ ಜನತೆ ಬಿಸಿಲ ಝಳಕ್ಕೆ ತತ್ತರಿಸಿ ಹೋಗಿದ್ದಾರೆ.&lt;/p&gt;&lt;h2&gt;ಒಣ ಹವೆ ಮುಂದುವರಿಕೆ: ಹವಾಮಾನ ಇಲಾಖೆ ಮಾಹಿತಿ&lt;/h2&gt;&lt;p&gt;ನೈರುತ್ಯ ಮಾನ್ಸೂನ್ (Southwest Monsoon) ತೀವ್ರವಾಗಿ ದುರ್ಬಲಗೊಂಡಿರುವುದೇ ಈ ಹಠಾತ್ ಹವಾಮಾನ ಬದಲಾವಣೆಗೆ ಮುಖ್ಯ ಕಾರಣ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯ ಕೊರತೆಯಿಂದಾಗಿ ಈಗಿರುವ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದ್ದು, ವಿಶೇಷವಾಗಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದಿದೆ. ಮುಂಬರುವ ದಿನಗಳಲ್ಲೂ ಮಳೆ ಚುರುಕಾಗದಿದ್ದರೆ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-news-bangalore-weather-monsoon-turns-into-summer-temp-rises-by-4-degree-celsius-gdp/articleshow-02quw1m"/>
        </item>
        <item>
            <title><![CDATA[ಹೃದಯಾಘಾತಕ್ಕೆ ಕುಸಿದು ಬಿದ್ದು ಮೃತಪಟ್ಟ ರಾಯಚೂರಿನ 37ರ ಹರೆಯದ ಪೊಲೀಸ್ ಪೇದೆ]]></title>
            <link>https://kannada.asianetnews.com/karnataka-districts/raichur-on-duty-police-constable-37-dies-after-suffering-heart-attack/articleshow-0gnxcrc</link>
            <guid isPermaLink="true">https://kannada.asianetnews.com/karnataka-districts/raichur-on-duty-police-constable-37-dies-after-suffering-heart-attack/articleshow-0gnxcrc</guid>
            <pubDate>Thu, 25 Jun 2026 08:31:18 +0530</pubDate>
            <description><![CDATA[&lt;p&gt;ಕೆಲಸದ ವೇಳೆ ತೀವ್ರ ಎದೆನೋವು ಹಾಗೂ ಎಡಗೈ ಸೆಳೆತ ಕಾಣಿಸಿಕೊಂಡ ಕಾರಣ ಸ್ಥಳೀಯ ಆಸ್ಪತ್ರೆಗೆ ಕೆರದೊಯ್ಯಲಾಗಿತ್ತು. ಇಂಜೆಕ್ಷನ್&zwnj;ಗೆ ಸಿದ್ಧತೆ ನಡೆಸುತ್ತಿದ್ದಂತೆ ಕುಳಿತಿದ್ದ ಪೊಲೀಸ್ ಪೇದೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvybjx28hrnvsz23xq7b1tjc,imgname-raichur-cop-passes-away-1782356472904.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜೂ.25) &lt;/strong&gt;ರಾಯಚೂರಿನಲ್ಲಿ ಹೃದಾಯಾಘಾಚಕ್ಕೆ ಪೊಲೀಸ್ ಕಾನ್ಸ್&zwnj;ಸ್ಟೇಬಲ್ ಬಲಿಯಾದ ಘಟನೆ ನಡೆದಿದೆ. ರಾಯಚೂರು ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಣುಕಾ ರಾಜ್, ಮೊಹರಂ ಹಬ್ಬದ ಭದ್ರತೆಗೆ ನಿಯೋಜನೆಗೊಂಡಿದ್ದರು. ಕರ್ತವ್ಯದ ವೇಳೆ ತೀವ್ರ ಎದೆನೋವು ಹಾಗೂ ಎಡೆಗೈ ಸೆಳೆತ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡ ರೇಣುಕಾ ರಾಜ್&zwnj;ನನ್ನು ಪೊಲೀಸರು ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆರೆತರಲಾಗಿತ್ತು. ಆರೋಗ್ಯ ಕೇಂದ್ರದ ಕುರ್ಚಿಯಲ್ಲಿ ಕುಳಿದಿದ್ದ ರೇಣುಕಾ ರಾಜ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. 37ರ ಹರೆಯದ ಪೊಲೀಸ್ ಪೇದೆ ರೇಣುಕಾರಾಜ್ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;h2&gt;ಸ್ಥಳೀಯ ಆಸ್ಪತ್ರೆ ಕುರ್ಚಿಯಿಂದ ಕುಸಿದು ಬಿದ್ದ ಪೇದೆ&lt;/h2&gt;&lt;p&gt;ದೇವದುರ್ಗ ಠಾಣೆ ಸಿಪಿಐ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಣುಕಾ ರಾಜ್, ಇದೇ ಇದೇ ಜೂನ್ 23 ರಂದು ಮೊಹರಂ ಬಂದೋಬಸ್ತ್ ಗಾಗಿ ನಿಯೋಜನೆಗೊಂಡಿದ್ದರು. ಈ ವೇಳೆ ರಾತ್ರಿ 10.30 ರ ಸುಮಾರಿಗೆ ರೇಣುಕಾ ರಾಜ್&zwnj;ಗೆ ಎದೆನೋವು ಕಾಣಿಸಿಕೊಂಡಿದೆ. ಕೆಲಸದ ನಡುವೆ ಒದ್ದಾಡಿದ ರೇಣುಕಾ ರಾಜ್&zwnj;ನನ್ನು ತಕ್ಷಣವೇ ಸಿಪಿಐ ಜೀಪ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂಜೆಕ್ಷನ್ ಗೆ ಸಿದ್ಧತೆ ನಡೆಸುತ್ತಿದ್ದಂತೆ ಇತ್ತ ರೇಣುಕಾ ರಾಜ್ ಪ್ರಾಣಬಿಟ್ಟಿದ್ದಾರೆ.&lt;/p&gt;&lt;p&gt;30 ಸೆಕೆಂಡ್&zwnj;ನಲ್ಲಿ ಸಾವು&lt;/p&gt;&lt;p&gt;ಆಸ್ಪತ್ರೆ ಚೇರ್ ಮೇಲೆ ಕುಳಿತಿದ್ದ ರೇಣುಕಾ ರಾಜ್ ತೀವ್ರ ಒದ್ದಾಡಿದ್ದಾರೆ. ಎದೆನೋವು ಹೆಚ್ಚಾಗಿದೆ. ಅಸ್ವಸ್ಥಗೊಂಡ ರೇಣುಕಾ ರಾಜ್ ಕುಳಿತಲ್ಲಿಂದಲೇ ಕುಸಿದು ಬಿದ್ದಿದ್ದಾರೆ. ಕೇವಲ 30 ಸೆಕೆಂಡ್&zwnj;ನಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ರಾಯಚೂರು ಜಿಲ್ಲಾ ಪೊಲೀಸ್ ಘಟಕದಿಂದ ಮೃತ ಕಾನ್ಸ್ ಟೇಬಲ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ರೇಣುಕಾ ರಾಜ್ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಆಮದಿಹಾಳ ಗ್ರಾಮದ ಮೂಲದವರು. ಪೊಲೀಸ್ ಪೇದೆ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ನಿರಂತರ ಕೆಲಸ, ಒತ್ತಡಗಳಿಂದ ಆರೋಗ್ಯ ಕೆಟ್ಟಿರುವ ಸಾಧ್ಯತ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಘಟನೆ ಇದೀಗ ಹಲವರನ್ನು ಬೆಚ್ಚಿ ಬೀಳಿಸಿದೆ. ಹೃದಾಯಾಘಾತ ಸಮಸ್ಯೆಗಳು ತೀವ್ರಗೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ. ಉತ್ತಮ ಆಹಾರ ಶೈಲಿ, &amp;nbsp;ಜೀವನ ಪದ್ಧತಿ, ವ್ಯಾಯಮಾ ಅಭ್ಯಾಸಗಳು ಬೆಳೆಸಿಕೊಂಡರೆ ಆತಂಕದಿಂದ ದೂರವಿರಲು ಸಾಧ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. &amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>raichur</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/raichur-on-duty-police-constable-37-dies-after-suffering-heart-attack/articleshow-0gnxcrc"/>
        </item>
        <item>
            <title><![CDATA[ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್:  6 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!]]></title>
            <link>https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</link>
            <guid isPermaLink="true">https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</guid>
            <pubDate>Wed, 08 Jul 2026 11:25:56 +0530</pubDate>
            <description><![CDATA[ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಮೆಗಾ ಆಪರೇಷನ್&zwnj;ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx04edrp64anbam01r602epp,imgname-lokayukta-raids-in-across-karnataka-1783489836822.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿದಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಇಂದು ಮುಂಜಾನೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನೂರಾರು ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಈ ಮೆಗಾ ಆಪರೇಷನ್ ಕೈಗೊಂಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;ಧಾರವಾಡ ಮತ್ತು ಶಿವಮೊಗ್ಗ: ಎಸಿಎಫ್ ಕಿರಣ್ ಅಂಗಡಿಗೆ ಶಾಕ್!&lt;/h2&gt;&lt;p&gt;ಶಿವಮೊಗ್ಗದ ಅರಣ್ಯ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಗಿ ಸೇವೆ ಸಲ್ಲಿಸುತ್ತಿರುವ ಕಿರಣ್ ಅಂಗಡಿ ಅವರಿಗೆ ಸೇರಿದ ಧಾರವಾಡ ಮತ್ತು ಶಿವಮೊಗ್ಗದ ಒಟ್ಟು ೫ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಧಾರವಾಡದ ಲೋಕಾ ಎಸ್ಪಿ ಸಿದ್ದಲಿಂಗಪ್ಪ ಹಾಗೂ ಶಿವಮೊಗ್ಗದ ಲೋಕಾಯುಕ್ತ ಇನ್&zwnj;ಸ್ಪೆಕ್ಟರ್ ವೀರಬಸಪ್ಪ ಕುಶಲಾಪೂರ ಮತ್ತು ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರುವ ಐಷಾರಾಮಿ ಮನೆ, ಅಳ್ನಾವರ ರಸ್ತೆಯಲ್ಲಿರುವ ಫಾರ್ಮ್ ಹೌಸ್, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪತ್ನಿಯ ಹೆಸರಿನಲ್ಲಿದೆ ಎನ್ನಲಾದ ಉದ್ಯಮ) ಹಾಗೂ ಅವರ ಸೋದರ ಮಾವನ ಮನೆಗಳ ಮೇಲೆ ಶೋಧ ನಡೆಸಲಾಗುತ್ತಿದೆ.&lt;/p&gt;&lt;h2&gt;ಶಿವಮೊಗ್ಗದ ಕಚೇರಿ ಮೇಲೂ ದಾಳಿ&lt;/h2&gt;&lt;p&gt;ಇತ್ತ ಶಿವಮೊಗ್ಗದ ಆಲ್ಕೋಳ ರಸ್ತೆಯಲ್ಲಿರುವ ಕಿರಣ್ ಅಂಗಡಿ ಅವರ ಅರಣ್ಯ ಸಂಶೋಧನಾ ಕಚೇರಿಯ ಮೇಲೂ ಲೋಕಾಯುಕ್ತ ತಂಡ ತಪಾಸಣೆ ನಡೆಸುತ್ತಿದೆ. ದಾಳಿಯ ವೇಳೆ ಅಧಿಕಾರಿ ಕಿರಣ್ ಅಂಗಡಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಐದು ಜನರ ಅಧಿಕಾರಿಗಳ ತಂಡ ಸದ್ಯ ದಾಖಲೆಗಳನ್ನು ಜಾಲಾಡುತ್ತಿದೆ.&lt;/p&gt;&lt;h2&gt;ರಾಯಚೂರು: ಕೆಬಿಜೆಎನ್&zwnj;ಎಲ್ ಇಇ ಬಸನಗೌಡಗೆ ಸೇರಿದ 7 ಕಡೆ ದಾಳಿ&lt;/h2&gt;&lt;p&gt;ರಾಯಚೂರಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಕಾರ್ಯನಿರ್ವಾಹಕ ಇಂಜಿನಿಯರ್ (EE) ಬಸನಗೌಡ ಅವರ ವಿರುದ್ಧ ಲೋಕಾಯುಕ್ತರು ತನಿಖೆ ತೀವ್ರಗೊಳಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ 7 ಪ್ರತ್ಯೇಕ ತಂಡಗಳು ಏಕಕಾಲದಲ್ಲಿ 7 ಕಡೆ ಧಾಳಿ ನಡೆಸಿವೆ. ಬಸನಗೌಡ ಅವರ ರಾಯಚೂರು ನಗರದ ಎಚ್.ಆರ್.ಬಿ ಲೇಔಟ್&zwnj;ನಲ್ಲಿರುವ ಮನೆ, ಯಕ್ಲಾಸಪುರದ ಸೆಲೆಬ್ರಿಟಿ ಗಾರ್ಡನ್&zwnj;ನಲ್ಲಿರುವ ಅಣ್ಣನ ಮನೆ ಹಾಗೂ ಯಕ್ಲಾಪುರದ ತೋಟದ ಮನೆಯಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ.&lt;/p&gt;&lt;h2&gt;ಬಾರ್ ಮತ್ತು ಪೆಟ್ರೋಲ್ ಬಂಕ್ ಪತ್ತೆ&lt;/h2&gt;&lt;p&gt;ಬಸನಗೌಡ ಅವರ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ನಾಯರಾ ಪೆಟ್ರೋಲ್ ಬಂಕ್, ಅದರ ಪಕ್ಕದಲ್ಲೇ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಗೋದಾಮಿನ (Warehouse) ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ದೇವದುರ್ಗ ತಾಲೂಕಿನ ಚಿಕ್ಕ ಹೊನ್ನಕುಣಿ ವ್ಯಾಪ್ತಿಯ ಕೆಬಿಜೆಎನ್&zwnj;ಎಲ್ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.&lt;/p&gt;&lt;h2&gt;ಚಿತ್ರದುರ್ಗ ಆರ್&zwnj;ಎಫ್&zwnj;ಒ ಮತ್ತು ಪ್ರೊಫೆಸರ್ ಮನೆಗೆ ಅಧಿಕಾರಿಗಳ ಎಂಟ್ರಿ&lt;/h2&gt;&lt;p&gt;ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇಬ್ಬರು ಪ್ರಮುಖ ಅಧಿಕಾರಿಗಳ ಆಸ್ತಿಪಾಸ್ತಿಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿದೆ. ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿರುವ ವಲಯ ಅರಣ್ಯಾಧಿಕಾರಿ (RFO) ದುಗ್ಗಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರೊಫೆಸರ್ ಶಂಕರ್ ಅವರ ಮನೆ ಹಾಗೂ ತೋಟದ ಮೇಲೂ ಲೋಕಾಯುಕ್ತರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.&lt;/p&gt;&lt;h2&gt;ಕಲಬುರಗಿ ಜೇಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಫ್ಲ್ಯಾಟ್ ಮೇಲೆ ದಾಳಿ&lt;/h2&gt;&lt;p&gt;ಕಲಬುರಗಿಯಲ್ಲಿ ಜೆಸ್ಕಾಂ (GESCOM) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಅಮೃತರಾವ್ ಯಲಾಲ್ ಅವರಿಗೆ ಸೇರಿದ ಕಚೇರಿ ಹಾಗೂ ಮನೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ ತಂಡ ದಾಳಿ ಮಾಡಿದೆ. ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿರುವ ನಿವಾಸ, ಬಸವ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಫ್ಲ್ಯಾಟ್, ಮತ್ತು ಕೊತ್ತಂಬರಿ ಲೇಔಟ್&zwnj;ನಲ್ಲಿರುವ ಜೇಸ್ಕಾಂ ಕಚೇರಿಗಳ ಮೇಲೆ ದಾಳಿಯಾಗಿದೆ. ಇದಲ್ಲದೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮನೆಯ ಮೇಲೂ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಎಇಇ ಅಮೃತರಾವ್ ಅವರು ಜಾಗೃತಿ ಕಾಲೋನಿಯಲ್ಲಿ 'ಪ್ಲಾಟಿನಂ ಸ್ಟುಡಿಯೋ' ಎಂಬ ಹೈಟೆಕ್ ಸ್ಟುಡಿಯೋ ಹೊಂದಿದ್ದು, ನಂದೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫ್ಲ್ಯಾಟ್ ಹಾಗೂ ವಿವಿಧೆಡೆ 20 ಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;ತುಮಕೂರು ಸಣ್ಣ ನೀರಾವರಿ ಇಲಾಖೆ ಎಇಇ ಮನೆ ಮೇಲೆ ಲೋಕಾ ದಾಳಿ&lt;/h2&gt;&lt;p&gt;ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇ ಆಗಿರುವ ಮಧುಸೂದನ್ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಮಧುಸೂದನ್ ಮನೆ. ಸಣ್ಣ ನೀರಾವರಿ ಇಲಾಖೆ ತಿಪಟೂರು ಉಪವಿಭಾಗದಲ್ಲಿ ಎಇಇ ಆಗಿ ಕೆಲಸ ಮಾಡುತ್ತಿರುವ ಮಧುಸೂದನ್ ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಲೋಕಾ ದಾಳಿ. ಮಧುಸೂದನ್ ಮನೆಯನ್ನ ಪರಿಶೀಲನೆ ನಡೆಸುತ್ತಿರುವ ಲೋಕಾ ಟೀಮ್. ಸದ್ಯ ಎಲ್ಲಾ ಕಡೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ಚಿನ್ನಾಭರಣ, ನಗದು ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಬೇಕಿದೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet"/>
        </item>
        <item>
            <title><![CDATA[Raichuru Shocking: ಮಕ್ಕಳಿಗೆ ಕೊಡ್ಬೇಕಿದ್ದ 50,000 ಐರನ್‌ ಮಾತ್ರೆ ಶಾಲೆಯ ಟಾಯ್ಲೆಟ್‌ನಲ್ಲಿ ಪತ್ತೆ!]]></title>
            <link>https://kannada.asianetnews.com/education/5000-iron-tablets-found-in-a-toilet-gurugunta-government-school-raichur-rav/articleshow-2eo2p5g</link>
            <guid isPermaLink="true">https://kannada.asianetnews.com/education/5000-iron-tablets-found-in-a-toilet-gurugunta-government-school-raichur-rav/articleshow-2eo2p5g</guid>
            <pubDate>Wed, 22 Jul 2026 05:27:15 +0530</pubDate>
            <description><![CDATA[&lt;p&gt;ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಸರ್ಕಾರಿ ಶಾಲೆಯಲ್ಲಿ, ಮಕ್ಕಳಿಗೆ ವಿತರಿಸಬೇಕಿದ್ದ 50,000ಕ್ಕೂ ಹೆಚ್ಚು ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದು ನಾಶಪಡಿಸಲಾಗಿದೆ. ಈ ಘಟನೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky3gxc9s7sca1nnj283gyxvk,imgname-----------------------2026-07-22t051053.199-1784677314873.jpg" type="image/jpeg" height="390" width="690"/>
            <content:encoded><![CDATA[&lt;h2&gt;ರಾಯಚೂರಿನ ಗುರುಗುಂಟಾದ ಶಾಲೇಲಿ ಘಟನೆ&lt;/h2&gt;&lt;p&gt;&lt;strong&gt;&amp;nbsp;ಲಿಂಗಸುಗೂರು(ರಾಯಚೂರು) (ಜು.22)&lt;/strong&gt;&lt;/p&gt;&lt;p&gt;ಜಿಲ್ಲೆಯಲ್ಲಿ ಇತ್ತೀಚೆಗೆ ಪೌಷ್ಟಿಕ ಹಾಲಿನ ಪುಡಿ ದನದ ಕೊಟ್ಟಿಗೆಯಲ್ಲಿ ಪತ್ತೆಯಾದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಘಟನೆ ನಾಗರಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿತರಿಸಬೇಕಾದ 50,000ಕ್ಕೂ ಅಧಿಕ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶಿಕ್ಷಣ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಲಿಂಗಸುಗೂರು ತಾಲೂಕಿನ ಗುರುಗುಂಟಾದ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸಬೇಕಾದ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದಿದ್ದಾರೆ.&lt;/p&gt;&lt;p&gt;ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಮಾಕಾಪುರ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಡಬ್ಲೂಐಎಫ್ಎಸ್ ಮಾತ್ರೆಗಳಾದ ಪಿಂಕ್ ಮತ್ತು ಬ್ಲೂ ಮಾತ್ರೆಗಳು 2015ಅ.15ರಿಂದ 2017ಸೆ.17ರವರೆಗೆ ಅವಧಿ ಹೊಂದಿದ್ದು, ಬ್ಯಾಚ್ ಸಂಖ್ಯೆ ಐಎಫ್&zwnj;ಒ 039 ಎಂಬುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ವಶಕ್ಕೆ ಪಡೆದ ಮಾತ್ರೆಗಳನ್ನು ಮುಂದಿನ ಆದೇಶದವರೆಗೂ ಗುರುಗುಂಟಾದಲ್ಲಿರುವ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರದಲ್ಲಿ ಇರಿಸಲಾಗಿದೆ. ಐರನ್ ಮಾತ್ರೆಗಳನ್ನು ಮಕ್ಕಳಿಗೆ ನೀಡದೇ ಶೌಚಾಲಯದಲ್ಲಿ ಬೇಕಾಬಿಟ್ಟಿ ಎಸೆದ ಪ್ರಕರಣ ಶಿಕ್ಷಕರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.&lt;/p&gt;&lt;p&gt;ಘಟನೆ ಸಂಬಂಧ ಮಕ್ಕಳಿಗೆ ಮಾತ್ರೆಗಳು ಏಕೆ ವಿತರಣೆ ಮಾಡಿಲ್ಲ ಎಂದು ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮುಖ್ಯ ಶಿಕ್ಷಕರಿಗೆ ಜು.13ರಂದು ನೋಟಿಸ್ ನೀಡಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/5000-iron-tablets-found-in-a-toilet-gurugunta-government-school-raichur-rav/articleshow-2eo2p5g"/>
        </item>
        <item>
            <title><![CDATA[Bengaluru: ಹುಸ್ಕೂರು ಗೇಟ್‌ ಮೆಟ್ರೋ ಸ್ಟೇಷನ್‌ನಲ್ಲಿ ಹಳಿಗೆ ಜಿಗಿದು ಪತ್ರಕರ್ತ ರಾಜೇಶ್‌ ಹೀರೇಮಠ್‌ ಸಾವು]]></title>
            <link>https://kannada.asianetnews.com/bengaluru-urban/journalist-rajesh-hiremath-dies-after-jumping-on-huskur-road-metro-track-san/articleshow-52wk7ic</link>
            <guid isPermaLink="true">https://kannada.asianetnews.com/bengaluru-urban/journalist-rajesh-hiremath-dies-after-jumping-on-huskur-road-metro-track-san/articleshow-52wk7ic</guid>
            <pubDate>Mon, 27 Jul 2026 20:18:31 +0530</pubDate>
            <description><![CDATA[ಬೆಂಗಳೂರಿನ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತ ರಾಜೇಶ್ ಹಿರೇಮಠ್ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಬಿಟ್ಟಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಘಟನೆಯಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kyj0edkzq7dhazetejcxz30c,imgname-namma-metro-1785163363966.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಲೆಕ್ಟ್ರಾನಿಕ್ಸ್ ಸಿಟಿ, ಬೆಂಗಳೂರು (ಜು. 27):&lt;/strong&gt; ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ಯೆಲ್ಲೋ ಲೈನ್&zwnj;ನ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತರೊಬ್ಬರು ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಭೀಕರ ಘಟನೆ ನಡೆದಿದೆ. ಉತ್ತರ ಕರ್ನಾಟಕ ಮೂಲದ ರಾಜೇಶ್ ಹಿರೇಮಠ್ (35) ಮೃತಪಟ್ಟ ವ್ಯಕ್ತಿ. ಇವರು ಖಾಸಗಿ ನ್ಯೂಸ್ ಚಾನೆಲ್ ಒಂದರಲ್ಲಿ (ನ್ಯೂಸ್ ಫಸ್ಟ್) ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ. ರಾಯಚೂರು ಮೂಲದ ರಾಜೇಶ್&zwnj; ಹೀರೇಮಠ, ನ್ಯೂಸ್ ಫಸ್ಟ್ ಪ್ರೈಮ್ ಯೂಟ್ಯೂಬ್ ಇಂಗ್ಲಿಷ್ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮುನ್ನ ಡೆಕ್ಕನ್&zwnj; ಹೆರಾಲ್ಡ್&zwnj;ನಲ್ಲೂ ಕೆಲಸ ಮಾಡಿದ್ದರು. ಕೆಲವು ಮೂಲಗಳ ಪ್ರಕಾರ ಕಳೆದು ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ. ಇತ್ತೀಚೆಗೆ ತೀರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.&lt;/p&gt;&lt;p&gt;ಇಂದು ಸಂಜೆ ಸುಮಾರು 5:50ರ ವೇಳೆಗೆ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣಕ್ಕೆ ಬಂದ 30-35 ವರ್ಷ ವಯಸ್ಸಿನ ರಾಜೇಶ್ ಹಿರೇಮಠ್, ಏಕಾಏಕಿ ಮೆಟ್ರೋ ಹಳಿಗೆ ಹಾರಿದ್ದಾರೆ. ಘಟನೆ ನಡೆದ ತಕ್ಷಣವೇ ಮೆಟ್ರೋ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ತಕ್ಷಣವೇ ರಕ್ಷಣೆಗೆ ಧಾವಿಸಿ, ಹಳಿಗೆ ಬಿದ್ದಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿ ದೊಡ್ಡ ಅನಾಹುತವನ್ನು ತಪ್ಪಿಸಲು ಯತ್ನಿಸಿದರು.&lt;/p&gt;&lt;p&gt;ಆದರೆ, ಹಳಿಗೆ ಹಾರಿದ ರಭಸಕ್ಕೆ ರಾಜೇಶ್ ಅವರಿಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದವು. ವಿಷಯ ತಿಳಿದ ತಕ್ಷಣವೇ ಹೆಬ್ಬಗೋಡಿ ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಸ್ಥಳಕಕ್ಕೆ ಆಗಮಿಸಿ, ಹಳಿಯ ಮೇಲೆ ಸಿಲುಕಿದ್ದ ವ್ಯಕ್ತಿಯನ್ನು ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದರು. ಬಳಿಕ ಅಂಬ್ಯುಲೆನ್ಸ್ ಮೂಲಕ ನಗರದ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದಾಗಲೇ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು. ಕೊನೆಗೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಭೇಟಿ, ಮಹಜರು&lt;/strong&gt;&lt;/h2&gt;&lt;p&gt;ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜಿತಾ ಹಾಗೂ ಹೆಬ್ಬಗೋಡಿ ಪೊಲೀಸರು ಹುಸ್ಕೂರು ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿರುವ ಪೊಲೀಸರು, ಆತ್ಮಹ*ಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೆಟ್ರೋ ಸಂಚಾರದಲ್ಲಿ ವ್ಯತ್ಯಯ&lt;/strong&gt;&lt;/h2&gt;&lt;p&gt;ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದ ಹಿನ್ನೆಲೆಯಲ್ಲಿ, ಆರ್.ವಿ. ರೋಡ್ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ಮಾರ್ಗದಲ್ಲಿ ಕೆಲ ಕಾಲ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದರು. ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಸ್ಥಳದಲ್ಲಿದ್ದ ಮೃತದೇಹವನ್ನು ತೆರವುಗೊಳಿಸಿದ ಬಳಿಕ ಮೆಟ್ರೋ ಸಂಚಾರವನ್ನು ಯಥಾಸ್ಥಿತಿಗೆ ತರಲಾಯಿತು.&lt;/p&gt;]]></content:encoded>
            <category>raichur</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/journalist-rajesh-hiremath-dies-after-jumping-on-huskur-road-metro-track-san/articleshow-52wk7ic"/>
        </item>
        <item>
            <title><![CDATA[ಕರ್ನಾಟಕದಲ್ಲಿ ಕಳವಳ ಮೂಡಿಸಿದ ರೈತರಿಗೆ ಬರೋ ನಿಗೂಢ ಕಿಡ್ನಿ ಕಾಯಿಲೆ, ಸೂಕ್ತ ತನಿಖೆಗೆ ಸರ್ಕಾರ ನಿರ್ದೇಶನ]]></title>
            <link>https://kannada.asianetnews.com/karnataka-districts/karnataka-ckdu-kidney-disease-farmers-investigation-parliamentary-panel-san/articleshow-5ededr2</link>
            <guid isPermaLink="true">https://kannada.asianetnews.com/karnataka-districts/karnataka-ckdu-kidney-disease-farmers-investigation-parliamentary-panel-san/articleshow-5ededr2</guid>
            <pubDate>Mon, 10 Aug 2026 16:15:01 +0530</pubDate>
            <description><![CDATA[&lt;p&gt;ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರೈತರು ಮತ್ತು ಕಾರ್ಮಿಕರಲ್ಲಿ 'ಅಜ್ಞಾತ ಮೂಲದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ' (CKDu) ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kznm8k185q4j3p0h6entqmyr,imgname-rising-ckdu-cases-in-karnataka-farmers-1786358549544.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.10): &lt;/strong&gt;ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ 'ಅಜ್ಞಾತ ಮೂಲದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ' (CKDu - Chronic Kidney Disease of Unknown Aetiology) ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರು, ರೈತರು ಮತ್ತು ದೈಹಿಕ ಶ್ರಮ ವಹಿಸುವ ಕಾರ್ಮಿಕರಲ್ಲಿ ಈ ನಿಗೂಢ ಕಿಡ್ನಿ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಮತ್ತು ಕಟ್ಟುನಿಟ್ಟಿನ ಜಾಗೃತ ಜಾಲವನ್ನು ರೂಪಿಸುವಂತೆ ಸಂಸದೀಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.&lt;/p&gt;&lt;p&gt;ಹೆಸರೇ ಸೂಚಿಸುವಂತೆ ಈ ರೋಗಕ್ಕೆ ನಿಖರವಾದ ಕಾರಣಗಳು ಏನೆಂಬುದು ಇನ್ನೂ ತಿಳಿದುಬಂದಿಲ್ಲ. ತೀವ್ರತರವಾದ ಶಾಖದ ವಾತಾವರಣ, ಬಿಸಿಲಿಗೆ ಮೈಯೊಡ್ಡುವುದು ಹಾಗೂ ಕೀಟನಾಶಕಗಳ ಬಳಕೆ ಸೇರಿದಂತೆ ಹಲವು ಸಾಧ್ಯತೆಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಭಾರತದ ಸುಮಾರು 15 ರಾಜ್ಯಗಳಲ್ಲಿ ಈ &lsquo;ಸಿಕೆಡಿಯು&rsquo; (CKDu) ಇರುವುದು ಸಂಶೋಧನೆಯಿಂದ ತಿಳಿದುಬಂದಿದೆ.&lt;/p&gt;&lt;p&gt;&quot;ಅಜ್ಞಾತ ಕಾರಣಗಳ ಮೂತ್ರಪಿಂಡ ಕಾಯಿಲೆಯಿಂದ (CKDu) ಬಾಧಿತವಾಗಿರುವ ಆಂಧ್ರಪ್ರದೇಶ, ಒಡಿಶಾ ಮತ್ತು ಕರ್ನಾಟಕದ ನಿರ್ದಿಷ್ಟ ಪ್ರದೇಶಗಳಲ್ಲಿ ವಾಸಿಸುವ ಕೃಷಿಕರು ಹಾಗೂ ಕಾರ್ಮಿಕ ವರ್ಗದವರ ಆರೋಗ್ಯ ತಪಾಸಣೆಗೆ ತಕ್ಷಣವೇ ಹೆಚ್ಚಿನ ಆದ್ಯತೆ ನೀಡಬೇಕಿದೆ,&quot; ಎಂದು ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ಸಂಸದೀಯ ಸಚಿವಾಲಯದ ಸ್ಥಾಯಿ ಸಮಿತಿಯು ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.&lt;/p&gt;&lt;h2&gt;&lt;strong&gt;ಕರ್ನಾಟಕದಲ್ಲೂ ಸಿಕೆಡಿಯು ರೋಗದ ಕ್ಲಸ್ಟರ್&zwnj;ಗಳು&lt;/strong&gt;&lt;/h2&gt;&lt;p&gt;ಭಾರತದಲ್ಲಿ ಈ ರೋಗದ ಪ್ರಮಾಣದ ಕುರಿತು 2021 ರಲ್ಲಿ ನಡೆದ ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯು ಸಿಕೆಡಿಯು ರೋಗದ ಪ್ರಮುಖ &lsquo;ಕ್ಲಸ್ಟರ್&rsquo; (ಹೆಚ್ಚು ಪ್ರಕರಣಗಳಿರುವ ಪ್ರದೇಶ) ಆಗಿ ಹೊರಹೊಮ್ಮಿದೆ. ಅದೇ ರೀತಿ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಛತ್ತೀಸ್&zwnj;ಗಢ, ಒಡಿಶಾ, ಮಹಾರಾಷ್ಟ್ರ ಮತ್ತು ತೆಲಂಗಾಣದ ಹಲವು ಜಿಲ್ಲೆಗಳಿಂದಲೂ ಇಂತಹ ಪ್ರಕರಣಗಳು ವರದಿಯಾಗಿವೆ. ಸುಮಾರು 30 ವರ್ಷಗಳ ಹಿಂದೆ ಮಧ್ಯ ಅಮೆರಿಕದ ದೇಶಗಳಲ್ಲಿ ಕಬ್ಬು ಕತ್ತರಿಸುವ ಕಾರ್ಮಿಕರಲ್ಲಿ ಈ ರೋಗವು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ತದನಂತರ ಉತ್ತರ ಶ್ರೀಲಂಕಾದಲ್ಲೂ ಇದು ಬೆಳಕಿಗೆ ಬಂದಿತ್ತು ಎಂದು ಆರೋಗ್ಯ ತಜ್ಞರು ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಭಾರತದಲ್ಲಿ ದಶಕದ ಹಿಂದೆ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಯಾದ ಶ್ರೀಕಾಕುಲಂನ 'ಉದ್ದಾನಂ' ಎಂಬ ಪ್ರದೇಶದಲ್ಲಿ ಯಾವುದೇ ನಿಖರ ಕಾರಣವಿಲ್ಲದೆ ಸಾಲು ಸಾಲು ಕಿಡ್ನಿ ವೈಫಲ್ಯ ಪ್ರಕರಣಗಳು ವರದಿಯಾದಾಗ ಈ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 2015 ರ ವೇಳೆಗೆ ಈ ಪ್ರದೇಶದಲ್ಲಿ ಅಂದಾಜು 34,000 ಜನರು ಸಿಕೆಡಿಯುಗೆ ತುತ್ತಾಗಿದ್ದರು ಮತ್ತು ಸುಮಾರು 4,500 ಜನರು ಸಾವನ್ನಪ್ಪಿದ್ದರು.&lt;/p&gt;&lt;h2&gt;&lt;strong&gt;ಗ್ರಾಮೀಣ ಜನಸಂಖ್ಯೆಯ ಶೇ. 18-20 ರಷ್ಟು ಜನರಿಗೆ ಬಾಧೆ&lt;/strong&gt;&lt;/h2&gt;&lt;p&gt;ಶ್ರೀಕಾಕುಲಂ ಘಟನೆಯ ನಂತರ ಸಿಕೆಡಿಯು ರೋಗವು ದೇಶದ ಹಲವು ರಾಜ್ಯಗಳಿಗೆ ಹರಡಿದೆ. ನಮ್ಮ ಅಧ್ಯಯನಗಳ ಪ್ರಕಾರ, ಈ ರೋಗಪೀಡಿತ ನಿರ್ದಿಷ್ಟ ಪ್ರದೇಶಗಳ ಶೇಕಡಾ 18 ರಿಂದ 20 ರಷ್ಟು ಗ್ರಾಮೀಣ ಜನಸಂಖ್ಯೆಯು ಈ ನಿಗೂಢ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದೆ ಎಂದು &lsquo;ದಿ ಜಾರ್ಜ್ ಇನ್&zwnj;ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಇಂಡಿಯಾ&rsquo; ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕಿಡ್ನಿ ತಜ್ಞ ಡಾ. ವಿವೇಕಾನಂದ ಝಾ ಅವರು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಸಾಮಾನ್ಯವಾಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ (CKD) ಮಧುಮೇಹ (Diabetes) ಮತ್ತು ಅಧಿಕ ರಕ್ತದೊತ್ತಡ (Hypertension) ಪ್ರಮುಖ ಕಾರಣಗಳಾಗಿರುತ್ತವೆ. ಒಟ್ಟು ಕಿಡ್ನಿ ವೈಫಲ್ಯ ಪ್ರಕರಣಗಳಲ್ಲಿ ಶೇ. 31 ರಷ್ಟು ಮಧುಮೇಹದಿಂದ ಹಾಗೂ ಶೇ. 13 ರಷ್ಟು ರಕ್ತದೊತ್ತಡದಿಂದ ಸಂಭವಿಸುತ್ತವೆ. ಆದರೆ, ಯಾವುದೇ ಸ್ಪಷ್ಟ ಕಾರಣವಿಲ್ಲದ ಈ ಸಿಕೆಡಿಯು (CKDu) ಶೇ. 16 ರಷ್ಟು ಪ್ರಕರಣಗಳಿಗೆ ಕಾರಣವಾಗಿದ್ದು, ಇದು ಹೆಚ್ಚಾಗಿ ಕಡಿಮೆ ಆದಾಯ ಹೊಂದಿರುವ ಕಿರಿಯ ವಯಸ್ಸಿನ ಕೃಷಿ ಕಾರ್ಮಿಕರನ್ನೇ ಬಲಿಪಡೆಯುತ್ತಿದೆ.&lt;/p&gt;&lt;h2&gt;&lt;strong&gt;ಸಾಧ್ಯವಿರುವ ಕಾರಣಗಳೇನು?&lt;/strong&gt;&lt;/h2&gt;&lt;p&gt;ನಿರಂತರ ಬಿಸಿಲಿನ ತಾಪಮಾನಕ್ಕೆ ಒಳಗಾಗುವುದು, ದೇಹದಲ್ಲಿ ಪದೇ ಪದೇ ನೀರಿನಂಶ ಕಡಿಮೆಯಾಗುವುದು (Recurrent Dehydration), ಕೀಟನಾಶಕಗಳ ಬಳಕೆ, ಕಲುಷಿತ ಕುಡಿಯುವ ನೀರು ಹಾಗೂ ಭಾರ ಲೋಹಗಳ (Heavy Metals) ಮಾಲಿನ್ಯದ ಕುರಿತು ವೈಜ್ಞಾನಿಕ ತನಿಖೆ ನಡೆಸಬೇಕಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ವಾಯುಗುಣ ವೈಪರೀತ್ಯಕ್ಕೂ (Climate Change) ಮತ್ತು ಸಿಕೆಡಿಯು ರೋಗಕ್ಕೂ ಇರುವ ಸಂಬಂಧವನ್ನು ಪರಿಶೀಲಿಸಬೇಕಿದೆ.&lt;/p&gt;&lt;p&gt;ಡಾ. ಝಾ ಅವರು ವಿವರಿಸುವಂತೆ, ಆರಂಭದಲ್ಲಿ ಕಬ್ಬು ಕೊಯ್ಲಿನ ನಂತರ ಉಳಿಯುವ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದಾಗ ಉಂಟಾಗುವ ತೀವ್ರ ಶಾಖವೇ ಇದಕ್ಕೆ ಮೂಲ ಕಾರಣ ಎಂದು ಭಾವಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ. ಆಂಧ್ರಪ್ರದೇಶದಲ್ಲಿ ಕಲುಷಿತ ಕುಡಿಯುವ ನೀರೇ ಕಾರಣವಿರಬಹುದು ಎಂದು ಶಂಕಿಸಿ, ಸರ್ಕಾರವು ಗ್ರಾಮಗಳಿಗೆ ಆರ್&zwnj;ಒ (RO) ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಮೇಲೆಯೂ ಪ್ರಕರಣಗಳು ಕಡಿಮೆಯಾಗಲಿಲ್ಲ ಎಂದಿದೆ.&lt;/p&gt;&lt;p&gt;&quot;ಶ್ರೀಲಂಕಾದಲ್ಲಿ ಕೀಟನಾಶಕಗಳೇ ಕಾರಣವೆಂಬ ಸಿದ್ಧಾಂತ ಮುನ್ನೆಲೆಗೆ ಬಂದು, ಅಲ್ಲಿನ ಸರ್ಕಾರ ನಿರ್ದಿಷ್ಟ ಕೀಟನಾಶಕವನ್ನು ನಿಷೇಧಿಸಿತು. ಆದರೂ ರೋಗದ ಉಲ್ಬಣ ನಿಲ್ಲದಿದ್ದಾಗ ಸರ್ಕಾರ ನಿಷೇಧವನ್ನು ಹಿಂಪಡೆಯಿತು. ಒಟ್ಟಾರೆಯಾಗಿ ಹೇಳುವುದಾದರೆ, ಈ ರೋಗದ ಹುಟ್ಟಿನ ಕುರಿತು ಯಾವುದೇ ನಿರ್ದಿಷ್ಟ ವೈಜ್ಞಾನಿಕ ಆಧಾರಗಳು ಇದುವರೆಗೆ ಸಿಕ್ಕಿಲ್ಲ,&quot; ಎಂದು ಡಾ. ಝಾ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಸದೀಯ ಸಮಿತಿಯ ಪ್ರಮುಖ ಶಿಫಾರಸುಗಳು&lt;/strong&gt;&lt;/h2&gt;&lt;p&gt;ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದ ರಾಮ್ ಗೋಪಾಲ್ ಯಾದವ್ ನೇತೃತ್ವದ ಸಂಸದೀಯ ಸಮಿತಿಯು, ಸಿಕೆಡಿಯು ತಡೆಗಟ್ಟುವಿಕೆ ಮತ್ತು ಕಣ್ಗಾವಲಿಗಾಗಿ 'ರಾಷ್ಟ್ರೀಯ ಚೌಕಟ್ಟು' (National Framework) ರಚಿಸಲು ಶಿಫಾರಸು ಮಾಡಿದೆ. ಸಿಕೆಡಿಯು ಹೆಚ್ಚಾಗಿ ಕಂಡುಬರುವ 'ಹಾಟ್&zwnj;ಸ್ಪಾಟ್&zwnj;' ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ವ್ಯವಸ್ಥೆ ಮಾಡುವುದು. ತೊಂದರೆಗೊಳಗಾಗುವ ಸಾಧ್ಯತೆ ಇರುವ ಕಾರ್ಮಿಕರಿಗೆ ನಿಯಮಿತವಾಗಿ ಉದ್ಯೋಗಸಂಬಂಧಿತ ಆರೋಗ್ಯ ತಪಾಸಣೆ (Occupational Health Screening) ನಡೆಸುವುದು. ಕೆಲಸದ ಸ್ಥಳಗಳಲ್ಲಿ ಸುರಕ್ಷಿತ ಕುಡಿಯುವ ನೀರು ಮತ್ತು ಸಾಕಷ್ಟು ನಿರ್ಜಲೀಕರಣ ತಡೆ ವ್ಯವಸ್ಥೆಗಳನ್ನು ಒದಗಿಸುವುದು ಹಾಗೂ ಹೊರಾಂಗಣದಲ್ಲಿ ದೀರ್ಘಕಾಲ ಕೆಲಸ ಮಾಡುವ ಕಾರ್ಮಿಕರಿಗೆ ನಿಯಮಿತವಾಗಿ ಕುಡಿಯುವ ನೀರಿನ ವಿರಾಮಗಳು (Hydration Breaks) ಸೇರಿದಂತೆ ಶಾಖ ತಗ್ಗಿಸುವ ಕ್ರಮಗಳನ್ನು ಜಾರಿಗೆ ತರುವುದು.&lt;/p&gt;]]></content:encoded>
            <category>raichur</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-ckdu-kidney-disease-farmers-investigation-parliamentary-panel-san/articleshow-5ededr2"/>
        </item>
        <item>
            <title><![CDATA[ಯಾದಗಿರಿ ವಿಷಾನಿಲ ದುರಂತ: ಮೂವರು ಕಾರ್ಮಿಕರು ದುರ್ಮರಣ, ಇಬ್ಬರು ಸಾವು ಬದುಕಿನ ಹೋರಾಟ!]]></title>
            <link>https://kannada.asianetnews.com/gallery/karnataka-districts/three-workers-dead-after-gas-leakage-in-chemical-factory-at-kadechur-industrial-yadgir-rav-8pm3133</link>
            <guid isPermaLink="true">https://kannada.asianetnews.com/gallery/karnataka-districts/three-workers-dead-after-gas-leakage-in-chemical-factory-at-kadechur-industrial-yadgir-rav-8pm3133</guid>
            <pubDate>Wed, 05 Aug 2026 11:27:22 +0530</pubDate>
            <description><![CDATA[&lt;p&gt;ಯಾದಗಿರಿ ಕಡೇಚೂರು ಇಂಡಸ್ಟ್ರಿಯಲ್ ಫ್ಯಾಕ್ಟರಿಯೊಂದರಲ್ಲಿ ಗ್ಯಾಸ್ ವಿಷಾನಿಲ ಸೋರಿಕೆಯಿಂದಾಗಿ ಮಧ್ಯಪ್ರದೇಶ, ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಇನ್ನಿಬ್ಬರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್&zwnj;ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz87dnsdns08zvh9rbyvwv57,imgname-----------------------2026-08-05t111345.600-1785908877101.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾದಗಿರಿ ಕಡೇಚೂರು ಇಂಡಸ್ಟ್ರಿಯಲ್ ಫ್ಯಾಕ್ಟರಿಯೊಂದರಲ್ಲಿ ಗ್ಯಾಸ್ ವಿಷಾನಿಲ ಸೋರಿಕೆಯಿಂದಾಗಿ ಮಧ್ಯಪ್ರದೇಶ, ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಇನ್ನಿಬ್ಬರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್&zwnj;ತಿದ್ದಾರೆ.&lt;/p&gt;&lt;img&gt;&lt;p&gt;ಯಾದಗಿರಿೆಯ ಕಡೇಚೂರು ಇಂಡಸ್ಟ್ರಿಯಲ್ ಏರಿಯಾದ ಮಿಕಲ್ ಫ್ಯಾಕ್ಟರಿ ಒಂದರಲ್ಲಿ ಅವಘಡ ಸಂಭವಿಸಿ ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ ನಡೆದಿದ್ದು, ಇನ್ನಿಬ್ಬರು ಗಾಯಾಳುಗಳನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.&lt;/p&gt;&lt;p&gt;ಮೃತ ಕಾರ್ಮಿಕರು:&amp;nbsp;&lt;/p&gt;&lt;ul&gt; &lt;li&gt;ಸಂಜಯ್ ( 25)&lt;/li&gt; &lt;li&gt;ವಿಕ್ರಮ್ (25)&lt;/li&gt; &lt;li&gt;ಗಣೇಶ ( 23)(ರಿಮ್ಸ್ ಆಸ್ಪತ್ರೆಯಲ್ಲಿ ಸಾವು)&amp;nbsp;&lt;/li&gt;&lt;/ul&gt;&lt;p&gt;&lt;strong&gt;ಗಾಯಾಳುಗಳು&amp;nbsp;&lt;/strong&gt;&lt;/p&gt;&lt;ul&gt; &lt;li&gt;ಹೇಮಂತ್ (23)&lt;/li&gt; &lt;li&gt;ಶಿವಕುಮಾರ್( 25&lt;/li&gt;&lt;/ul&gt;&lt;img&gt;&lt;p&gt;ಮೃತ ಕಾರ್ಮಿಕರು ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಆಲಂಪಲ್ಲಿ ಗ್ರಾಮದವರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಸ್ವಸ್ಥಗೊಂಡಿರುವ ಹೇಮಂತ್ ಹಾಗೂ ಶಿವಕುಮಾರ್ ಎಂಬುವವರನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆ ಶಿಫ್ಟ್ ಮಾಡಲಾಗಿದ್ದು ತುರ್ತು ನಿಗಾದಲ್ಲಿ ಚಿಕಿತ್ಸೆ ಮುಂದುವರಿದೆ.&lt;/p&gt;&lt;img&gt;&lt;p&gt;ದುರಂತದಲ್ಲಿ ತೀವ್ರ ಅಸ್ವಸ್ಥಗೊಂಡಿರುವ ಗಾಯಾಳು ಹೇಮಂತ್ ಶಿವಕುಮಾರ್ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಇಂಥ ಪರಿಸ್ಥಿತಿಯಲ್ಲೂ ಕುಟುಂಬದ ಜವಾಬ್ದಾರಿ ನೆನೆದು' ನಮ್ಮನ್ನು ಬದುಕಿಸಿ' ಎಂದು ವೈದ್ಯರಿಗೆ ಕೈಮುಗಿಯುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇಬ್ಬರ ನರಳಾಟ ನೋಡಿ ವೈದ್ಯ, ಸಿಬ್ಬಂದಿಯೂ ಪ್ರತಿಕ್ರಿಯೆ ನೀಡದಂತಾಗಿದೆ.&lt;/p&gt;&lt;img&gt;&lt;p&gt;ಒಂದು ಕಡೆ ಗಾಯಾಳುಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದರೆ, ರಿಮ್ಸ್ ಆಸ್ಪತ್ರೆಯ ಹೊರಗಡೆ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಮೃತ ಗಣೇಶನ ತಾಯಿ ತೀವ್ರ ಆಘಾತಕ್ಕೊಳಾಗಿದ್ದಾರೆ.&lt;/p&gt;&lt;p&gt;&lt;strong&gt;ಶಿಫ್ಟ್ ಮುಗಿಸಿ ಮನೆಗೆ ಬಂದಿದ್ರೆ ಉಳಿತಿದ್ದ ಮಗ..&lt;/strong&gt;&lt;/p&gt;&lt;p&gt;ನನ್ನ ಮಗ ನಿನ್ನೆ ಸಂಜೆ 6 ಗಂಟೆಗೇ ಶಿಫ್ಟ್ ಮುಗಿಸಿ ಬರಬೇಕಿತ್ತು. ತನ್ನ ಕೆಲಸ ಮುಗಿಸಿ ಬಂದಿದ್ರೆ ಮಗ ಬದುಕುಳಿತಿದ್ದ ಅಂತಾ ಮೃತ ಗಣೇಶನ ತಾಯಿ ಪದ್ಮ ಕಣ್ಣೀರು. ಸಹೋದ್ಯೋಗಿ ರಜೆ ಹಾಕಿದ್ದನೋ ಏನೋ ಅವನ ಶಿಫ್ಟ್ ಮಾಡಲು ನೈಟ್ ಶಿಫ್ಟ್ ಮಾಡಲು ಫ್ಯಾಕ್ಟರಿಯಲ್ಲೇ ಉಳಿದುಬಿಟ್ಟ. ನಿನ್ನೆ ಫೋನ್ ಮಾಡಿ, ಬೇರೊಬ್ಬನ ಶಿಫ್ಟ್ ಇದೆ ಅಮ್ಮಾ ಕಂಟಿನ್ಯೂ ಮಾಡಿ ಬರ್ತಿನಿ ಅಂತಾ ಹೇಳಿದ್ದ ಮಗ ಬಾರದ ಲೋಕಕ್ಕೆ ಹೋಗಿಬಿಟ್ಟ ಎಂದು ಕಣ್ಣೀರು ಹಾಕುತ್ತಿರುವ ತಾಯಿ. ತಂದೆ ಇಲ್ಲದ ಕುಟುಂಬಕ್ಕೆ ತಾನೇ ಹೆಗಲಾಗಿ ನಿಂತಿದ್ದ ಮಗ ಗಣೇಶ ಈಗ ದುರಂತದಲ್ಲಿ ಮೃತನಾಗಿರುವುದು ತಾಯಿಯನ್ನ ಒಂಟಿಯಾಗಿಸಿದ್ದಾನೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/three-workers-dead-after-gas-leakage-in-chemical-factory-at-kadechur-industrial-yadgir-rav-8pm3133"/>
        </item>
        <item>
            <title><![CDATA[10 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!]]></title>
            <link>https://kannada.asianetnews.com/crime/ex-gp-president-murder-over-10-rupees-petrol-bunk-fight-gvd-videoshow-c7rxrxh</link>
            <guid isPermaLink="true">https://kannada.asianetnews.com/crime/ex-gp-president-murder-over-10-rupees-petrol-bunk-fight-gvd-videoshow-c7rxrxh</guid>
            <pubDate>Sat, 11 Jul 2026 16:15:56 +0530</pubDate>
            <description><![CDATA[&lt;p&gt;ಆತ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ.. ಕಾಂಗ್ರೆಸ್​​ ಕಾರ್ಯಕರ್ತ.. ಒಳ್ಳೆ ಮನುಷ್ಯ ಅನ್ನಿಸಿಕೊಂಡಿದ್ದ.. ತನ್ನ ಗ್ರಾಮದಲ್ಲಿ ಯಾವುದೆ ರಾಜಿ ಪಂಚಾಯ್ತಿ ಇದ್ರೂ ಈತನೆ ಮುಂದಾಳತ್ವ ವಹಿಸಿಕೊಂಡು ತೊಂದರೆಗಳನ್ನ ನಿವಾರಣೆ ಮಾಡ್ತಿದ್ದ.&lt;/p&gt;]]></description>
            <media:content url="https://geo.dailymotion.com/player/x1tbu.html?video=xaobo2y" medium="video" height="768" width="1024"/>
            <content:encoded><![CDATA[&lt;p&gt;ಆತ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ.. ಕಾಂಗ್ರೆಸ್​​ ಕಾರ್ಯಕರ್ತ.. ಒಳ್ಳೆ ಮನುಷ್ಯ ಅನ್ನಿಸಿಕೊಂಡಿದ್ದ.. ತನ್ನ ಗ್ರಾಮದಲ್ಲಿ ಯಾವುದೆ ರಾಜಿ ಪಂಚಾಯ್ತಿ ಇದ್ರೂ ಈತನೆ ಮುಂದಾಳತ್ವ ವಹಿಸಿಕೊಂಡು ತೊಂದರೆಗಳನ್ನ ನಿವಾರಣೆ ಮಾಡ್ತಿದ್ದ.. ಆವತ್ತೊಂದು ದಿನ ಪಕ್ಕದೂರಿನಲ್ಲಿದ್ದ ಪೆಟ್ರೋಲ್​ ಬಂಕ್​ನಲ್ಲಿ ತನ್ನದೇ ಗ್ರಾಮದ ಹುಡುಗ ಕಿರಿಕ್​ ಮಾಡಿಕೊಂಡಿದ್ದಾನೆ ಅನ್ನೋ ಮೆಸೆಜ್​ ಬರುತ್ತೆ.. ಈತ ಕೂಡಲೇ ಜಗಳ ಬಿಡಿಸೋಕೆ ಅಂತ ಹೋಗಿದ್ದಾನೆ.. ಅಷ್ಟೇ... ಜಗಳ ಬಿಡಿಸಲು ಬಂದವನು ಹೆಣವಾಗಿದ್ದ.. ಪೊಲೀಸರು ತನಿಖೆ ಶುರು ಮಾಡ್ತಾರೆ.. ಆಗಲೇ ನೋಡಿ ಗೊತ್ತಾಗೋದು ಅದು 10 ರೂಪಾಯಿಗಾಗಿ ನಡೆದಿದ್ದ ಕೊಲೆ ಅಂತ.. ಅಷ್ಟಕ್ಕೂ ಏನದು 10 ರೂಪಾಯಿಯ ಗಲಾಟೆ..? ಈತನನ್ನ ಕೊಂದವಱರು..? ಸಣ್ಣ ಕಿರಿಕ್​ ಒಬ್ಬನ ಜೀವವನ್ನೇ ತಗೆದ ಕಥೆಯೇ ಇವತ್ತಿನ ಎಫ್​​.ಐ.ಆರ್​​. ಯಾರದ್ದೋ ಜಗಳ.. ಯಾರದ್ದೋ ಕಿರಿಕ್​​.. ಆದ್ರೆ ಪಾಪಾ ಮೇಘನಾಥ ಹೆಣವಾದ.. ಇನ್ನೂ ಆ ಹುಡುಗರೂ ಕೂಡ ಈಗ ತಮ್ಮ ಜೀವನವನ್ನ ಕಂಡುಕೊಳ್ತಿದ್ರು.&lt;/p&gt;&lt;p&gt;ಮನೆಗೆ ಅವರೇ ಆಸರೆಯಾಗಿದ್ರು.. ಅವರೂ ಈಗ ಜೈಲು ಸೇರೋ ಮೂಲಕ ತಮ್ಮ ಭವಿಷ್ಯವನ್ನ ತಾವೇ ಹಾಳು ಮಾಡಿಕೊಂಡರು. ಅವರಿಬ್ಬರೂ ಮೂರು ವರ್ಷದಿಂದ ಪ್ರೀತಿಸುತ್ತಿದ್ರಂತೆ.. ಆದ್ರೆ ಆಕೆ ಇನ್ನೂ 10ನೇ ಕ್ಲಾಸ್​​ ಹುಡುಗಿ.. ಈತ ಏಸ್​​ ಗಾಡಿ ಡ್ರೈವರ್​​.. ಆಕೆ ಹಿಂದೂ ಆದರೆ ಅವನು ಮುಸ್ಲಿಂ.. ಮೂರು ವರ್ಷ ಯಾವುದೇ ಪ್ರಾಬ್ಲಂ ಇರಲಿಲ್ಲ.. ಆದ್ರೆ ಮೊನ್ನೆ ರಾತ್ರಿ ಇದ್ದಕ್ಕಿದ್ದಂತೆ ಆತ ಹುಡುಗಿಯ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ಮಾಡಿದ್ದ.. ಅಷ್ಟೇ ಅಲ್ಲ ತಾನೂ ಚಾಕು ಹಾಕಿಕೊಂಡಿದ್ದ.. ಯಾಕೆ ಹೀಗೆ ಮಾಡಿದ ಅಂತ ಪೊಲೀಸರು ವಿಚಾರಣೆ ಮಾಡಿದಾಗ ಅಲ್ಲಿ ಬಂದಿದ್ದು ಹುಡುಗಿಯ ಕಿತಾಪತಿ ಕೆಲಸ. ಎಲ್ಲವೂ ಕನ್​​​​ಫ್ಯೂಷನ್​​.. ಆದ್ರೆ ಇವತ್ತಿನ ಎರಡು ಸ್ಟೋರಿ ಕೂಡ ಬಾಳಿ ಬದುಕಬೇಕಿದ್ದ ಯುವಕರದ್ದೇ.. ಇದನ್ನೆಲ್ಲಾ ನೋಡ್ತಿದ್ರೆ ನಮ್ಮ ಯುವಜನತೆ ಎತ್ತ ಸಾಗ್ತಿದ್ದಾರೆ ಅಂತ ಭಯವಾಗುತ್ತೆ.&lt;/p&gt;]]></content:encoded>
            <category>raichur</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/ex-gp-president-murder-over-10-rupees-petrol-bunk-fight-gvd-videoshow-c7rxrxh"/>
        </item>
        <item>
            <title><![CDATA[ರಾಯಚೂರಲ್ಲಿ ದಾರುಣ ಘಟನೆ.. ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಕಂದಮ್ಮ ಬಲಿ]]></title>
            <link>https://kannada.asianetnews.com/raichur/raichuru-incident-one-and-half-year-old-baby-died-due-to-street-dogs-attack-gkn/articleshow-f7dh7mn</link>
            <guid isPermaLink="true">https://kannada.asianetnews.com/raichur/raichuru-incident-one-and-half-year-old-baby-died-due-to-street-dogs-attack-gkn/articleshow-f7dh7mn</guid>
            <pubDate>Thu, 16 Jul 2026 09:25:41 +0530</pubDate>
            <description><![CDATA[ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 18 ತಿಂಗಳ ಮಗು ಸಾವನ್ನಪ್ಪಿದೆ. ಮನೆಯಿಂದ ಹೊರಬಂದ ಮಗುವಿನ ಮೇಲೆ ಚಿಕನ್ ಅಂಗಡಿ ಬಳಿ ಜಮಾಯಿಸಿದ್ದ ನಾಯಿಗಳು ದಾಳಿ ಮಾಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxmgzh147tzd3a313ymk7bc8,imgname-raichuru-street-dog-attack-on-baby-1784174068772.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಇಂದು ಅತ್ಯಂತ ದಾರುಣ ಘಟನೆಯೊಂದು ಸಂಭವಿಸಿದೆ. ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 18 ತಿಂಗಳ ಮಗು ಪ್ರಾಣ ಕಳೆದುಕೊಂಡಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹಂಚಿನಾಳ ಕ್ಯಾಂಪ್&zwnj;ನಲ್ಲಿ ಈ ಘಟನೆ ನಡೆದಿದೆ. ಅಬ್ದುಲ್ ರಜಾಕ್ ಮತ್ತು ನದಾಫ್ ದಂಪತಿಯ ಪುತ್ರಿ ಅನಂ (18 ತಿಂಗಳು) ಮೃತಪಟ್ಟ ದುರ್ದೈವಿ. ಮಗು ಮನೆಯಲ್ಲಿ ಮಲಗಿದ್ದಾಗ ಎಚ್ಚರಗೊಂಡು ಪೋಷಕರಿಗೆ ತಿಳಿಯದಂತೆ ರಸ್ತೆಗೆ ಬಂದಿದೆ. ಈ ವೇಳೆ ಹತ್ತಿರದಲ್ಲಿದ್ದ ಚಿಕನ್ ಅಂಗಡಿಯ ಬಳಿ ಜಮಾಯಿಸಿದ್ದ ಬೀದಿ ನಾಯಿಗಳ ಹಿಂಡು ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿವೆ. ನಾಯಿಗಳು ಮಗುವನ್ನು ಮನಬಂದಂತೆ ಕಚ್ಚಿ ಎಳೆದಾಡಿವೆ. ಮಗುವಿನ ಚೀರಾಟ ಕೇಳಿ ಪೋಷಕರು ತಕ್ಷಣ ಸ್ಥಳಕ್ಕೆ ಓಡಿ ಬಂದಿದ್ದಾರೆ.&lt;/p&gt;&lt;h2&gt;&lt;strong&gt;ದಾರಿ ಮಧ್ಯೆಯೇ ಕೊನೆಯುಸಿರೆಳೆದ ಮಗು&lt;/strong&gt;&lt;/h2&gt;&lt;p&gt;ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ಸಿಂಧನೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು. ದುರಾದೃಷ್ಟವಶಾತ್, ರಿಮ್ಸ್ ಆಸ್ಪತ್ರೆಗೆ ತಲುಪುವ ಮುನ್ನವೇ ಮಗು ದಾರಿ ಮಧ್ಯೆ ಕೊನೆಯುಸಿರೆಳೆದಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಭೇಟಿ&lt;/strong&gt;&lt;/h2&gt;&lt;p&gt;ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಿಂಧನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕನ್ ಅಂಗಡಿಗಳ ಬಳಿ ಎಸೆಯಲಾಗುವ ಮಾಂಸದ ತ್ಯಾಜ್ಯದಿಂದಾಗಿ ಬೀದಿ ನಾಯಿಗಳು ಗುಂಪುಗೂಡುತ್ತಿದ್ದು, ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಸುಗೂಸಿನ ಸಾವು ಹಂಚಿನಾಳ ಕ್ಯಾಂಪ್&zwnj;ನಲ್ಲಿ ಶೋಕ ಸಾಗರ ಮುಳುಗಿಸಿದೆ.&lt;/p&gt;]]></content:encoded>
            <category>raichur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/raichur/raichuru-incident-one-and-half-year-old-baby-died-due-to-street-dogs-attack-gkn/articleshow-f7dh7mn"/>
        </item>
        <item>
            <title><![CDATA[ರಾಯಚೂರು ಜೈಲಿನಲ್ಲಿ ಖೈದಿ ಹಠಾತ್ ಸಾವು.. ಪೊಲೀಸರ ವಿರುದ್ಧ ಭುಗಿಲೆದ್ದ ಕುಟುಂಬಸ್ಥರ ಆರೋಪ]]></title>
            <link>https://kannada.asianetnews.com/raichur/undertrial-prisoner-bheemaray-dies-in-raichur-district-jail-family-alleges-police-involvement-gkn/articleshow-fclbc3o</link>
            <guid isPermaLink="true">https://kannada.asianetnews.com/raichur/undertrial-prisoner-bheemaray-dies-in-raichur-district-jail-family-alleges-police-involvement-gkn/articleshow-fclbc3o</guid>
            <pubDate>Thu, 06 Aug 2026 09:31:44 +0530</pubDate>
            <description><![CDATA[&lt;p&gt;ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೆದರಗೋಳ ಗ್ರಾಮದ ನಿವಾಸಿ ಭೀಮರಾಯ (42) ಮೃತಪಟ್ಟ ದುರ್ದೈವಿ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzakqbr2asvnqt5d5098z5sw,imgname-raichuru-ndertrial-prisoner-death-1785988886274.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು: &lt;/strong&gt;ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೆದರಗೋಳ ಗ್ರಾಮದ ನಿವಾಸಿ ಭೀಮರಾಯ (42) ಮೃತಪಟ್ಟ ದುರ್ದೈವಿ.&lt;/p&gt;&lt;h2&gt;&lt;strong&gt;ಹೃದಯಾಘಾತದಿಂದ ಸಾವು ಎಂದ ಪೊಲೀಸರು&lt;/strong&gt;&lt;/h2&gt;&lt;p&gt;ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೀಮರಾಯ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಜೈಲು ಸೇರಿದ್ದರು. ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು. ತೀವ್ರ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿ ಮತ್ತು ಪೊಲೀಸರು ಅವರನ್ನು ತಕ್ಷಣವೇ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭೀಮರಾಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ಕುಟುಂಬಸ್ಥರ ಗಂಭೀರ ಆರೋಪ&lt;/strong&gt;&lt;/h2&gt;&lt;p&gt;ಜೈಲಿನಲ್ಲಿ ಭೀಮರಾಯ ಅವರ ಸಾವು ಸಂಭವಿಸಿರುವುದು ಈಗ ಕುಟುಂಬಸ್ಥರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ನಮ್ಮ ಮಗನ ಸಾವಿನಲ್ಲಿ ಅನುಮಾನವಿದೆ, ಇದು ಕೇವಲ ಹೃದಯಾಘಾತವಲ್ಲ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಜೈಲು ಅಧಿಕಾರಿಗಳ ಮಾಹಿತಿ ಮತ್ತು ಸಾವಿನ ಕಾರಣದ ಬಗ್ಗೆ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರವಾದ ಕಾರಣ ತಿಳಿಯಬೇಕಿದೆ. ಜೈಲಿನಲ್ಲಿ ಖೈದಿಯ ಸಾವಾಗಿರುವುದರಿಂದ ನಿಯಮದಂತೆ ನ್ಯಾಯಾಂಗ ತನಿಖೆ ನಡೆಯುವ ಸಾಧ್ಯತೆಯೂ ಇದೆ.&lt;/p&gt;]]></content:encoded>
            <category>raichur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/raichur/undertrial-prisoner-bheemaray-dies-in-raichur-district-jail-family-alleges-police-involvement-gkn/articleshow-fclbc3o"/>
        </item>
        <item>
            <title><![CDATA[ದೇಶದಲ್ಲಿ ಗಲಭೆಗೆ ಸಂಚು: ರಾಯಚೂರು ಯುವಕ ಸೆರೆ, ಕೊಲ್ಲಿ ವ್ಯಕ್ತಿ ಜೊತೆ ಇನ್‌ಸ್ಟಾಗ್ರಾಂನಲ್ಲಿ ಶಾಕಿಂಗ್ ಚರ್ಚೆ!]]></title>
            <link>https://kannada.asianetnews.com/karnataka-districts/raichur-youth-arrested-for-involving-in-anti-national-activities-and-planning-to-create-riots-rav/articleshow-goxgpex</link>
            <guid isPermaLink="true">https://kannada.asianetnews.com/karnataka-districts/raichur-youth-arrested-for-involving-in-anti-national-activities-and-planning-to-create-riots-rav/articleshow-goxgpex</guid>
            <pubDate>Mon, 10 Aug 2026 07:45:29 +0530</pubDate>
            <description><![CDATA[ರಾಯಚೂರಿನಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಮೊಹಮ್ಮದ್&zwnj; ಶಾಹಿಲ್&zwnj; ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಅರಬ್ ಮೂಲದ ವ್ಯಕ್ತಿಯೊಂದಿಗೆ ಇನ್&zwnj;ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿದ್ದು, ದೇಶದಲ್ಲಿ ಗಲಭೆ ಸೃಷ್ಟಿಸಲು ಯೋಜನೆ ರೂಪಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzmpmnvhpcgbpz2sa1paj7yc,imgname-----------------------2026-08-10t073357.332-1786327488369.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಕೊಲ್ಲಿ ದೇಶದ ವ್ಯಕ್ತಿಯ ಜತೆ ಇನ್&zwnj;ಸ್ಟಾದಲ್ಲಿ ಸಂಪರ್ಕದಲ್ಲಿದ್ದ ರಾಯಚೂರಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಶಾಹಿಲ್&zwnj;&lt;/li&gt; &lt;li&gt;ಕಳೆದ ದಿನಗಳಿಂದ ನಿಗೂಢ ವ್ಯಕ್ತಿಯ ಜತೆ ಸೇರಿಕೊಂಡು ಭಾರತದಲ್ಲಿ ಆಶಾಂತಿ ಸೃಷ್ಟಿ ಬಗ್ಗೆ ಸಮಾಲೋಚನೆ&lt;/li&gt; &lt;li&gt;ಭಾರತದಲ್ಲಿ ದುಷ್ಕೃತ್ಯ ಎಸಗಲು ಎಷ್ಟು ಬೇಕಾದರೂ ಹಣ ನೀಡುವುದಾಗಿ ಶಾಹಿಲ್&zwnj;ಗೆ ಭರವಸೆ ನೀಡಿದ್ದ ಅರಬ್ ವ್ಯಕ್ತಿ&lt;/li&gt;&lt;/ul&gt;&lt;p&gt;&lt;strong&gt;ರಾಯಚೂರು (ಆ.10): &lt;/strong&gt;ದೇಶದಲ್ಲಿ ಗಲಭೆ ಎಬ್ಬಿಸಲು ಯೋಜನೆ ರೂಪಿಸಿ, ಅರಬ್&zwnj; ಮೂಲದ ವ್ಯಕ್ತಿಯೊಂದಿಗೆ ಇನ್&zwnj;ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಂಡು ಚರ್ಚೆ ನಡೆಸಿದ ಆರೋಪದಡಿ ರಾಯಚೂರಿನ ಮೊಹಮ್ಮದ್&zwnj; ಶಾಹಿಲ್&zwnj; (24) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಶಾಹಿಲ್&zwnj;, ಅರಬ್&zwnj; ಮೂಲದ ಅಪರಿಚಿತ ವ್ಯಕ್ತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಬೆಳೆಸಿಕೊಂಡಿದ್ದ. ಅರಬ್&zwnj; ಮೂಲದ ವ್ಯಕ್ತಿಯ ಜೊತೆ &lsquo;ರಾಣಾ ಭಾಯ್&zwnj;&rsquo; ಎಂಬ ಇನ್&zwnj;ಸ್ಟಾಗ್ರಾಂ ಅಕೌಂಟ್&zwnj; ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಂಡಿದ್ದ. ಜುಲೈ 14 ರಿಂದ ಆತನ ಜೊತೆ ಇನ್&zwnj;ಸ್ಟಾಗ್ರಾಂನಲ್ಲಿ ನಿರಂತರ ಚಾಟಿಂಗ್&zwnj; ನಡೆಸಿದ್ದ.&lt;/p&gt;&lt;p&gt;ಆತನ ಅಕೌಂಟ್&zwnj;ಗೆ ಲೈಕ್&zwnj;, ಕಮೆಂಟ್&zwnj;, ಶೇರ್&zwnj; ಮಾಡುತ್ತ ಆತನ ಅಕೌಂಟ್&zwnj;ನ ಲಿಂಕ್&zwnj; ಪಡೆದುಕೊಂಡಿದ್ದ ಶಾಹುಲ್&zwnj;, ಆತನ ಪೋಸ್ಟ್&zwnj;ಗಳಿಂದ ಪ್ರಭಾವಿತನಾಗಿ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕುರಿತು ಸಲಹೆಗಳನ್ನು ಪಡೆದಿದ್ದ. ಈ ಬಗ್ಗೆ ಅರಬ್&zwnj; ವ್ಯಕ್ತಿಯೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದ.&lt;/p&gt;&lt;p&gt;ಚಾಟಿಂಗ್&zwnj; ವೇಳೆ, ದೇಶದಲ್ಲಿ ಗಲಭೆ ಎಬ್ಬಿಸಲು ಎಷ್ಟು ಬೇಕಾದರೂ ಹಣ ಕೊಡುವುದಾಗಿ ಅರಬ್&zwnj; ವ್ಯಕ್ತಿ ಈತನಿಗೆ ಭರವಸೆ ನೀಡಿದ್ದ. ಅಲ್ಲದೆ, ಶಾಹಿಲ್&zwnj; ಗಾಗಿ ಪಿಸ್ತೂಲ್&zwnj; ವೊಂದನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಶಾಹಿಲ್&zwnj; ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/raichur-youth-arrested-for-involving-in-anti-national-activities-and-planning-to-create-riots-rav/articleshow-goxgpex"/>
        </item>
        <item>
            <title><![CDATA[Cabinet Expansion: ರಾಯಚೂರು ಸಚಿವ ಸ್ಥಾನಕ್ಕಾಗಿ ಬೋಸರಾಜು-ಹಂಪನಗೌಡ ಬಾದರ್ಲಿ ನಡುವೆ ತೀವ್ರ ಪೈಪೋಟಿ]]></title>
            <link>https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm</link>
            <guid isPermaLink="true">https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm</guid>
            <pubDate>Thu, 30 Jul 2026 08:37:12 +0530</pubDate>
            <description><![CDATA[ಹೊಸ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆದಿದೆ. ಮಾಜಿ ಸಚಿವ ಎನ್&zwnj;.ಎಸ್&zwnj;.ಭೋಸರಾಜು ಮತ್ತು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನಡುವೆ ಸಚಿವ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿದ್ದು, ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrfn460qm689x8n7s9v488b,imgname-chatgpt-image-jul-30--2026--08-33-32-am-1785380638912.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮಕೃಷ್ಣ ದಾಸರಿ&lt;/strong&gt;&lt;/p&gt;&lt;p&gt;&lt;strong&gt;ರಾಯಚೂರು (ಜು.30):&lt;/strong&gt; ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;(CM Dk Shivakuma) ಅವರ ನೇತೃತ್ವದಲ್ಲಿ ರಚನೆಗೊಂಡ ಮೊದಲ ಸಚಿವ ಸಂಪುಟದಲ್ಲಿ ಅವಕಾಶ ಕಳೆದುಕೊಂಡಿದ್ದ ಜಿಲ್ಲೆಗೆ ಎರಡನೇ ಹಂತದಲ್ಲಿಯಾದರೂ ಸ್ಥಾನವನ್ನು ಪಡೆಯಬೇಕು ಎನ್ನುವ ಪಟ್ಟು ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಬಂದಿದ್ದು, ಅದಕ್ಕಾಗಿ ಎಲ್ಲಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ.&lt;/p&gt;&lt;p&gt;ಸಚಿವ ಸಂಪುಟದ ವಿಸ್ತರಣೆ ಕಾರ್ಯ ಕೊನೆಯ ಘಟ್ಟ ತಲುಪಿದ್ದರಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕರು - ಎಂಎಲ್ಸಿಗಳು, ಮುಖಂಡರು ಹೈಕಮಾಂಡ್&zwnj; ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಜಿಲ್ಲೆಯ ಮಾಜಿ ಸಚಿವ ಹಾಗೂ ಎಂಎಲ್ಸಿ ಎನ್&zwnj;.ಎಸ್&zwnj;.ಭೋಸರಾಜು(NS Boseraju) ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ(Hampanagowda badarli) ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿ ಸಾಗಿದ್ದು, ಕೊನೆಗಳಿಗೆಯಲ್ಲಿ ಹೈಕಮಾಂಡ್&zwnj; ಯಾರಿಕೆ ಮಣಿಯಾಗಲಿದೆ ಎನ್ನುವ ಕುತೂಹಲವು ಮೂಡಿದೆ.&lt;/p&gt;&lt;p&gt;ಹಿಂದಿನ ಸಿಎಂ ಸಿದ್ದರಾಮಯ್ಯ ಸಮಯದಲ್ಲಿ ಶಾಸಕರಿಲ್ಲದಿದ್ದರೂ ಭೋಸರಾಜು ಅವರಿಗೆ ಕರೆದು ಸಚಿವ ಸ್ಥಾನದಲ್ಲಿ ಅವಕಾಶ ನೀಡಲಾಗಿತ್ತು ಅದನ್ನು ಮುಂದುವರೆಸಿಕೊಳ್ಳುವ ನಿಟ್ಟಿನಲ್ಲಿ ಭೋಸರಾಜು ಮತ್ತು ಅವರ ಮಗ ರವಿ ಭೋಸರಾಜು ಭಗೀರಥ ಪ್ರಯತ್ನ ನಡೆಸಿದ್ದು, ಸಚಿವ ಸ್ಥಾನ ನೀಡುವುದು ಇಲ್ಲವೇ ವಿಧಾನ ಪರಿಷತ್&zwnj; ಸಭಾಪತಿಯ ಸ್ಥಾನವನ್ನು ಕೊಡುವುದರ ಕುರಿತು ಹೈಕಮಾಂಡ್ ಹಂತಿಮ ತೀರ್ಮಾನಕ್ಕೆ ಬರಬೇಕಾಗಿದೆ.&lt;/p&gt;&lt;p&gt;ಇನ್ನು ಸಿಂಧನೂರಿನಿಂದ ಐದು ಸಲ ಗೆದ್ದು ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಅವರು ಸಚಿವ ಸ್ಥಾನದ ರೇಸ್&zwnj;ನಲ್ಲಿ ಮುಂಚೂಣಿಯಲ್ಲಿದ್ದು, ಸಮುದಾಯ ಹಾಗೂ ಅನುಭವದ ಆಧಾರದ ಮೇಲೆ ಮತ್ತು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಮಾತಿನಂತೆ ಈ ಬಾರಿ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಗಳು ಹೆಚ್ಚಾಗಿವೆ.&lt;/p&gt;&lt;h2&gt;ಬೋಸರಾಜು-ಬಾದರ್ಲಿ ಹೈಕಮಾಂಡ್ ಆಯ್ಕೆ ಯಾರು?&lt;/h2&gt;&lt;p&gt;ಸಚಿವ ಸಂಪುಟದ ವಿಸ್ತರಣೆಯಲ್ಲಿ ಹೈಕಮಾಂಡ್&zwnj; ಸಾಕಷ್ಟು ಎಚ್ಚರಿಕೆಗಳನ್ನು ವಹಿಸಿದ್ದು, ಹಲವಾರು ಮಾನದಂಡಗಳ ಅವಲೋಕನೆಯನ್ನು ಮಾಡಿ ಸಚಿವ ಸ್ಥಾನದಲ್ಲಿ ಅವಕಾಶ ನೀಡಲು ಮುಂದಾಗಿದೆ. ಜಿಲ್ಲಾ ಮತ್ತು ಪ್ರಾದೇಶಿಕ ಪ್ರಾತಿನಿಧ್ಯತೆ, ಸಮುದಾಯದವಾರು ಆದ್ಯತೆ, ಹೊಸ ಹಾಗೂ ಹಳೆ ಮುಖಗಳ ಅನುಪಾತ, ಭವಿಷ್ಯದ ಎಲೆಕ್ಷನ್&zwnj;ಗಳ ಲೆಕ್ಕಾಚಾರ, ನಾಯಕರೊಂದಿಗೆ ಹೊಂದಿರುವ ಪ್ರಭಾವ, ಬಾಂಧವ್ಯಗಳು ಸೇರಿ ಮತ್ತಿತರ ಮಾನದಂಡಗಳನ್ನು ಅವಲೋಕಿಸಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎನ್ನುವ ಅಂಶಗಳ ನಡುವೆ ಭೋಸರಾಜು ಹಾಗೂ ಬಾದರ್ಲಿ ಪರಿಗಣಿಸಿರುವ ಪಕ್ಷವು ಕೊನೆಯ ಕ್ಷಣದಲ್ಲಿ ಯಾವ ತೀರ್ಮಾನಕ್ಕೆ ಬರಲಿದೆ ಎನ್ನುವುದು ಸಸ್ಪೆನ್ಸಾಗಿ ಉಳಿದುಬಿಟ್ಟಿದೆ.&lt;/p&gt;&lt;h3&gt;ಇಲ್ಲಿಯೂ ಬಣಗಳ ಸಂಘರ್ಷ:&lt;/h3&gt;&lt;p&gt;ಭಿನ್ನಾಭಿಪ್ರಾಯ, ಬಣ ಸಂಘರ್ಷ ಹಾಗೂ ಗುಂಪುಗಾರಿಕೆಯಿಂದ ತುಂಬಿ ತುಳುಕುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಭೋಸರಾಜು ಹಾಗೂ ಎ.ವಸಂತಕುಮಾರ ಅವರ ನಡುವೆ ನಡೆಯುತ್ತಲೇ ಇರುವ ಸಂಘರ್ಷವು ದೆಹಲಿಯಲ್ಲಿ ಸಹ ಮುಂದುವರೆದಿದ್ದು, ಸಚಿವ ಸಂಪುಟದ ವಿಸ್ತರಣೆಯಲ್ಲಿಯೂ ಬಣಗಳ ನಡುವೆ ಪೈಪೋಟಿ, ಅವರಿಗೆ ಸಚಿವ ಸ್ಥಾನ ಕೊಟ್ಟರು ಬೇರೆ ಬೇರೆ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ವಹಿಸಿ, ಮುಂದಿನ ಚುನಾವಣೆ ಯಲ್ಲಿ ಟಿಕೆಟ್, ಜಿಲ್ಲೆಯ ಮೇಲೆ ನಮ್ಮ ಹಿಡಿದವಿರಲಿ ಎನ್ನುವ ಅಂಶಗಳ ನಡುವೆ ಹೈಕಮಾಂಡ್&zwnj; ಮುಂದೆ ಗುಂಪು ಸಂಘರ್ಷವೂ ಸಾಗಿದ್ದು, ಎಲ್ಲವನ್ನೂ ಪರಿಶೀಲಿಸಿ ಯಾರಿಗೆ ಯಾವ ಸ್ಥಾನ ದೊರೆಯಲಿದೆಯೇ ಕೆಲಕಾಲ ಕಾದುನೋಡಬೇಕಾಗಿದೆ.&lt;/p&gt;&lt;p&gt;ಸಂಪುಟದಲ್ಲಿ ಜಿಲ್ಲೆಯ ಯಾವುದೇ ಶಾಸಕ, ಎಂಎಲ್ಸಿಗಳನ್ನು ಸೇರಿಸಿಕೊಂಡರೂ ಪರವಾಗಿಲ್ಲ ಆದರೆ ಉಸ್ತುವಾರಿ ಜವಾಬ್ದಾರಿಯನ್ನು ಸಹ ಅವರಿಗೆ ವಹಿಸಬೇಕು ಇಲ್ಲದಿದ್ದರೆ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗುತ್ತದೆ ಎನ್ನುವುದು ಜನಸಾಮಾನ್ಯರ ಒತ್ತಾಸೆಯಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm"/>
        </item>
        <item>
            <title><![CDATA['ಅಂತ್ಯವಾಯ್ತು' ಎಂದವನ ಬದುಕೇ ಅಂತ್ಯ!  ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಸಾವು]]></title>
            <link>https://kannada.asianetnews.com/karnataka-districts/devadurga-three-students-died-after-the-roof-of-a-building-collapsed-in-raichur-mrq/articleshow-in0g2ec</link>
            <guid isPermaLink="true">https://kannada.asianetnews.com/karnataka-districts/devadurga-three-students-died-after-the-roof-of-a-building-collapsed-in-raichur-mrq/articleshow-in0g2ec</guid>
            <pubDate>Mon, 29 Jun 2026 08:45:32 +0530</pubDate>
            <description><![CDATA[ರಾಯಚೂರಿನಲ್ಲಿ ಕಟ್ಟಡವೊಂದರ ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಒಬ್ಬರಾದ ನಾಗರಾಜ್, 'ಅಂತ್ಯವಾಯ್ತು' ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದು ವಿಪರ್ಯಾಸವಾಗಿದೆ. ಈ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw8nvs8yjk74gcaczkknp5qr,imgname-raichur-death-1782702794014.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು: &lt;/strong&gt;ಇಲ್ಲಿನ ಬಸ್&zwnj;ನಿಲ್ದಾಣ ಹತ್ತಿರದ ವಿಆರ್&zwnj;ಎಲ್ ಕಚೇರಿ ಬಳಿ ಕಟ್ಟಡವೊಂದರ ಚಾವಣಿ ಕುಸಿದು ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಅರ್ಜುನ್ ಎಂಬಾತ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ,&lt;/p&gt;&lt;p&gt;ನಾಗರಾಜ್ ಕ್ಯಾದಿಗ್ಗೇರಾ (21), ರವಿ ಕುಮಾರ ಸಮುದ್ರ (22) ಸ್ಥಳದಲ್ಲಿಯೇ ಮೃತಪಟ್ಟವರು. ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿಗಳಾದ ಅರ್ಜುನ ಕೋತಿಗುಡ್ಡ, ಪ್ರಭು ಮಾತ್ಪಳ್ಳಿ ಹಾಗೂ ಉಮೇಶ ಎಚ್.ಎನ್.ತಾಂಡಾರನ್ನು ಹೆಚ್ಚಿನ ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇವರಲ್ಲಿ ಅರ್ಜುನ್ ಸಾವನ್ನಪ್ಪಿದ್ದಾನೆ.&amp;nbsp;&lt;/p&gt;&lt;h2&gt;&lt;strong&gt;&lsquo;ಅಂತ್ಯವಾಯ್ತು&rsquo; ಎಂಬ ಕಿರುಚಿತ್ರ&lt;/strong&gt;&lt;/h2&gt;&lt;p&gt;ನಾಗರಾಜ ಕ್ಯಾದಿಗ್ಗೇರಾ ಎಂಬ ವಿದ್ಯಾರ್ಥಿ &lsquo;ಅಂತ್ಯವಾಯ್ತು&rsquo; ಎಂಬ ಕಿರುಚಿತ್ರ ತಯಾರಿಸಿದ್ದು, ಅದೇ ಕಟ್ಟಡದ ಮೇಲ್ಭಾಗದಲ್ಲಿರುವ ಶ್ರೀ ಗುರು ಫೊಟೋ ಸ್ಟುಡಿಯೋದಲ್ಲಿ ಕೆಲಸದ ನಿಮಿತ್ಯ ವಿದ್ಯಾರ್ಥಿಗಳು ತೆರಳಿದ್ದರು. ಭಾನುವಾರ ಸ್ಟುಡಿಯೋ ಬಂದ್ ಮಾಡಿದ್ದರಿಂದ ಅವರನ್ನು ಮೊಬೈಲ್&zwnj;ನಲ್ಲಿ ಸಂಪರ್ಕಿಸಲು ಪ್ರಯತ್ನಿಸುತ್ತಿರುವಾಗ ಈ ಘಟನೆ ಜರುಗಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಎಲ್&zwnj; ನಿನೋ ಎಫೆಕ್ಟ್, ತುಂಗಭದ್ರಾ ಜಲಾಶಯಕ್ಕೆ ಎಂಟು ದಿನಗಳಿಂದ ಶೂನ್ಯ ನೀರಿನ ಒಳಹರಿವು&lt;/strong&gt;&lt;/p&gt;&lt;p&gt;ಶಾಸಕಿ ಕರೆಮ್ಮ ಜಿ.ನಾಯಕ ಭೇಟಿ ನೀಡಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಜೀವ ನದಿ ನೇತ್ರಾವತಿ ಒಡಲಿಗೆ ನೇರವಾಗಿ ವಸತಿ ಸಮುಚ್ಚಯಗಳಿಂದ ಶೌಚಾಲಯದ ತ್ಯಾಜ್ಯ ನೀರು!&lt;/strong&gt;&lt;/p&gt;&lt;p&gt;&lt;/p&gt;]]></content:encoded>
            <category>raichur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/devadurga-three-students-died-after-the-roof-of-a-building-collapsed-in-raichur-mrq/articleshow-in0g2ec"/>
        </item>
        <item>
            <title><![CDATA[ರಾಯಚೂರಿನಲ್ಲಿ ರೈಲ್ವೇ ಟ್ರಾಕ್ ಕಾಮಗಾರಿ ಗುಂಡಿಗೆ ಬಿದ್ದು ಬಾಲಕ ಸಾವು, ಪೋಷಕರ ನರಳಾಟ]]></title>
            <link>https://kannada.asianetnews.com/karnataka-districts/boy-dies-after-falling-into-railway-track-construction-pit-in-raichur-parents-devastated/articleshow-isbko5o</link>
            <guid isPermaLink="true">https://kannada.asianetnews.com/karnataka-districts/boy-dies-after-falling-into-railway-track-construction-pit-in-raichur-parents-devastated/articleshow-isbko5o</guid>
            <pubDate>Sun, 26 Jul 2026 20:00:37 +0530</pubDate>
            <description><![CDATA[&lt;p&gt;ರಾಯಚೂರಿನಲ್ಲಿ ರೈಲ್ವೇ ಟ್ರಾಕ್ ಕಾಮಗಾರಿಗಾಗಿ ಗುಂಡಿ ಅಗೆಯಲಾಗಿತ್ತು. ಹಾಗೇ ಬಿಟ್ಟು ನಿರ್ಲಕ್ಷ್ಯ ಮಾಡಿದ ಪರಿಮಾಮ 8 ವರ್ಷದ ಬಾಲಕ ಈ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಗನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyfcsvg1w91b1cx5sa33n9g6,imgname-child-falls-into-railway-work-pit-and-dies-1785075658239.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜು.26) &lt;/strong&gt;ಪೋಷಕರ ಜೊತೆ ಜಮೀನಿಗೆ ತೆರಳಿದ 8 ವರ್ಷದ ಬಾಲಕ ಬಳಿಕ ಪಕ್ಕದಲ್ಲೇ ಆಟವಾಡಿದ್ದಾನೆ. ಮಳೆ ನೀರಿನಲ್ಲಿ ಆಟವಾಡುತ್ತಿದ್ದ ಬಾಲಕ ರೈಲ್ವೇ ಟ್ರಾಕ್&zwnj; ಕಾಮಗಾರಿಗಾಗಿ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ರಾಯಚೂರಿನ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಡೆದಿದೆ. ಮಣ್ಣಿಗಾಗಿ ಗುಂಡಿ ಅಗೆಯಲಾಗಿತ್ತು. ಬಳಿಕ ಹಾಗೇ ನಿರ್ಲಕ್ಷ್ಯ ತೋರಿದ ಕಾರಣ ಈ ಗುಂಡಿಯಲ್ಲಿ ಮಳೆ ನೀರು ನಿಂತುಕೊಂಡಿತ್ತು.ಅಮಾಯಕ ಬಾಲಕ ಇದೇ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಮಗನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.&lt;/p&gt;&lt;h2&gt;ಕಾಮಗಾರಿಗಾಗಿ ಅಗೆದಿದ್ದ ಗುಂಡಿಯಲ್ಲಿ ಶವವಾಗಿ ಪತ್ತೆ&lt;/h2&gt;&lt;p&gt;8 ವರ್ಷದ ಬಾಲಕ ಯಶವಂತ್ ಪೋಷಕರ ಜೊತೆ ಜಮೀನಿಗೆ ತೆರಳಿದ್ದ. ಪೋಷಕರು ಜಮೀನು ಕೆಲಸದಲ್ಲಿ ತೊಡಗಿಸಿಕೊಂಡರೆ ಇತ್ತ ಬಾಲಕ ಪಕ್ಕದಲ್ಲೇ ಆಟವಾಡುತ್ತಿದ್ದ. ಕೆಲ ಹೊತ್ತಲ್ಲೇ ಬಾಲಕನ ನಾಪತ್ತೆಯಾಗಿದ್ದಾನೆ. ಜಮೀನು ಸುತ್ತ ಮುತ್ತ ಹುಡುಕಿದರೂ ಪತ್ತೆಯಾಗಲಿಲ್ಲ. ಕೊನೆಗೆ ರೈಲ್ವೇ ಕಾಮಗಾರಿಗಾಗಿ ಅಗೆದಿದ್ದ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.&lt;/p&gt;&lt;p&gt;ಗಿಣಿಗೇರಾ ಮೆಹಬೂಬನಗರ ರೈಲ್ವೇ ಟ್ರ್ಯಾಕ್ ಕಾಮಗಾರಿ ನಡೆಯುತ್ತಿದೆ. ರೈಲ್ವೇ ಟ್ರಾಕ್&zwnj;ಗೆ ಮಣ್ಣು ಹೊಂದಿಸಲು ಗುಂಡಿ ತೆಗೆಯಲಾಗಿದೆ. ಬಳಿಕ ಈ ಗುಂಡಿಯನ್ನು ಮಚ್ಚುವ ತಡೆ ಗೋಡೆ ನಿರ್ಮಿಸುವ ಯಾವುದೇ ಕೆಲಸವನ್ನು ಮಾಡಿಲ್ಲ. ಮಳೆ ಕಾರಣದಿಂದ ಈ ಗುಂಡಿಯಲ್ಲಿ ನೀರು ತುಂಬಿಕೊಂಡಿದೆ. ಕೆರೆಯಂತಾದ ಗುಂಡಿ, ಕೆಸರು ನೀರಿನ ಆಳ ಗೊತ್ತಿಲ್ಲದ ಬಾಲಕ ಇದೇ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ.&lt;/p&gt;&lt;h2&gt;ಗುತ್ತಿಗೆದಾರನ ನಿರ್ಲಕ್ಷ್ಯ ಆರೋಪ&lt;/h2&gt;&lt;p&gt;ಗುತ್ತಿಗೆದಾರ ಮಣ್ಣು ತೆಗೆದು ಗುಂಡಿಯನ್ನು ನಿರ್ಲಕ್ಷಿಸಿದ್ದಾನೆ. ಇದರ ಪರಿಣಾಮ ಬಾಲಕನ ಜೀವ ಹೋಗಿದೆ.ಗುತ್ತಿಗೆದಾರನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ನಿರ್ಲಕ್ಷ್ಯ ತೋರಿ ತಮ್ಮ ಮಗನ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ಕಣ್ಣೀರಿಟ್ಟಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;&lt;p&gt;&lt;/p&gt;]]></content:encoded>
            <category>raichur</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/boy-dies-after-falling-into-railway-track-construction-pit-in-raichur-parents-devastated/articleshow-isbko5o"/>
        </item>
        <item>
            <title><![CDATA[ರಾಯಚೂರು: ಪಂಪ್‌ಸೆಟ್ ಆನ್ ಮಾಡಲು ಹೋಗಿದ್ದ ಯುವಕ ಕರೆಂಟ್ ಶಾಕ್ ಹೊಡೆದು ದಾರುಣ ಸಾವು!]]></title>
            <link>https://kannada.asianetnews.com/karnataka-districts/raichu-young-man-dies-tragically-after-electric-shock-while-switch-on-pumpset/articleshow-iu65f5n</link>
            <guid isPermaLink="true">https://kannada.asianetnews.com/karnataka-districts/raichu-young-man-dies-tragically-after-electric-shock-while-switch-on-pumpset/articleshow-iu65f5n</guid>
            <pubDate>Thu, 30 Jul 2026 12:34:57 +0530</pubDate>
            <description><![CDATA[&lt;p&gt;ಬೋರ್&zwnj;ವೆಲ್ ಪಂಪ್&zwnj;ಸೆಟ್ ಆನ್&zwnj; ಮಾಡಲು ಜಮೀನಿಗೆ ಹೋಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyrxdzps0r7d213ae98hfmhy,imgname-----------------------2026-07-30t123424.731-1785395085017.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜು.30):&lt;/strong&gt; ಬೋರ್&zwnj;ವೆಲ್ ಪಂಪ್&zwnj;ಸೆಟ್ ಆನ್&zwnj; ಮಾಡಲು ಜಮೀನಿಗೆ ಹೋಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಮೃತ ಯುವಕನನ್ನು ಶಿವಕುಮಾರ್(18) ಎಂದು ಗುರುತಿಸಲಾಗಿದೆ. ಎಂದಿನಂತೆ ಇಂದು ಕೂಡ ಬೆಳಗ್ಗೆಯೇ ಪಂಪ್&zwnj;ಸೆಟ್ ಆನ್&zwnj; ಮಾಡಿಬರಲು ಹೊಲಕ್ಕೆ ತೆರಳಿದ್ದ ಮೃತ ಶಿವಕುಮಾರ್. ಪಂಪ್ ಸೆಟ್ ಆನ್&zwnj; ಮಾಡುವ ವೇಳೆ ತಂತಿ ತಗುಲಿ ವಿದ್ಯುತ್ ಪ್ರವಹಿಸಿದೆ, ಕರೆಂಟ್&zwnj; ಶಾಕ್&zwnj;ನಿಂದ ಸ್ಥಳದಲ್ಲೇ ಕುಸಿದುಬಿದ್ದಿರುವ ಯುವಕ ಕೆಲ ಕ್ಷಣಗಳ ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.&lt;/p&gt;&lt;h2&gt;ಪೊಲೀಸರು ಭೇಟಿ&lt;/h2&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Electric Shock First Aid: ಕರೆಂಟ್ ಶಾಕ್ ಹೊಡೆದಾಗ ತಕ್ಷಣ ಹೀಗೆ ಮಾಡಿ ಜೀವ ಉಳಿಯುತ್ತೆ!&lt;/p&gt;&lt;h3&gt;ಮುಗಿಲು ಮುಟ್ಟಿದ ಕುಟುಂಬಸ್ಥರ ಅಕ್ರಂದನ&lt;/h3&gt;&lt;p&gt;ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿತು. ಎದೆ ಎತ್ತರ ಬೆಳೆದುನಿಂತಿದ್ದ ಮಗ. ಚಿಕ್ಕವಯಸ್ಸಿಗೆ ಮನೆಯ ನೊಗ ಹೊತ್ತು ಹೆತ್ತವರಿಗೆ ಆಸರೆಯಂತಿದ್ದ ಮಗನ ಅಕಾಲಿಕ ಸಾವು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/raichu-young-man-dies-tragically-after-electric-shock-while-switch-on-pumpset/articleshow-iu65f5n"/>
        </item>
        <item>
            <title><![CDATA[ರಾಯಚೂರು: ಬುಲೆಟ್ ಮೇಲೆ ಹೊರಟಿದ್ದವನ ಮೇಲೆ ದುಷ್ಕರ್ಮಿಗಳಿಂದ ಭೀಕರ ಅಟ್ಯಾಕ್! ನಡುರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ!]]></title>
            <link>https://kannada.asianetnews.com/karnataka-districts/raichur-youth-bhumananda-murdered-by-miscreants-incident-happened-in-devadurga/articleshow-m8rrecw</link>
            <guid isPermaLink="true">https://kannada.asianetnews.com/karnataka-districts/raichur-youth-bhumananda-murdered-by-miscreants-incident-happened-in-devadurga/articleshow-m8rrecw</guid>
            <pubDate>Wed, 05 Aug 2026 07:11:18 +0530</pubDate>
            <description><![CDATA[&lt;p&gt;ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ, ಬುಲೆಟ್&zwnj; ಬೈಕ್&zwnj;ನಲ್ಲಿ ಹೊರಟಿದ್ದ ಭೂಮಾನಂದ ಎಂಬ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಗಬ್ಬೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz7s2pc23v5gvrhvx9r1gp1n,imgname-----------------------2026-08-05t070708.770-1785893837185.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಆ.5): &lt;/strong&gt;ಬುಲೆಟ್&zwnj; ಬೈಕ್&zwnj;ನಲ್ಲಿ ಹೊರಟಿದ್ದ ಯುವಕನನ್ನ ನಡುರಸ್ತೆಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಇರಿದು ಬರ್ಬರವಾಗಿ ಕೊಂದು ಪರಾರಿಯಾದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ ನಡೆದಿದೆ. ಘಟನೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;h2&gt;ನಡುರಸ್ತೆಯಲ್ಲೇ ದುಷ್ಕರ್ಮಿಗಳಿಂದ ಅಟ್ಯಾಕ್&lt;/h2&gt;&lt;p&gt;ಭೂಮಾನಂದ(32), ಕೊಲೆಯಾದ ದುರ್ದೈವಿ. ಯುವಕ ಭೂಮಾನಂದ ಹದ್ದಿನಾಳ ಗ್ರಾಮದ ನಿವಾಸಿಯಾಗಿದ್ದಾನೆ. ನಿನ್ನೆ ಸಂಜೆ ಬುಲೆಟ್ ಬೈಕ್ ಹತ್ತಿ ಹೊರಗೆ ಹೋಗಿದ್ದ ಯುವಕ. ಈ ವೇಳೆ ಮಾರಕಾಸ್ತ್ರಗಳನ್ನ ಹಿಡಿದು ಹೊಂಚು ಹಾಕಿ ಕೂತಿದ್ದ ದುಷ್ಕರ್ಮಿಗಳು ಸುಂಕೇಶ್ವರಹಾಳ ಗ್ರಾಮದ ಬಳಿ ನಡುರಸ್ತೆಯಲ್ಲೇ ಅಟ್ಯಾಕ್ ಮಾಡಿದ್ದಾರೆ. ಏಕಾಏಕಿ ನಡೆದ ದಾಳಿಯಿಂದ ತಪ್ಪಿಸಿಕೊಳ್ಳಲಾಗದ ಯುವಕ. ಮಾರಕಾಸ್ತ್ರಗಳಿಂದ ಬಲವಾದ ಏಟುಗಳಿಂದ ಯುವಕ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.&lt;/p&gt;&lt;h3&gt;ಭೂಮಾನಂದ ಕೊಲೆಗೆ ಕಾರಣವೇನು?&lt;/h3&gt;&lt;p&gt;ಹಣಕಾಸಿನ ವಿಷಯದಿಂದಲೇ ಕೊಲೆ ನಡೀತಾ? ರಾಜಕೀಯ ದ್ವೇಷವಾ? ಆಸ್ತಿ ವಿವಾದವಾ? ಅಥವಾ ಬೇರೆ ಏನಾದರೂ ಗಲಾಟೆ ನಡೆದಿತ್ತೇ? ಸದ್ಯ ಭೂಮಾನಂದ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಗಬ್ಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹ*ತ್ಯೆ ನಡೆದ ಸ್ಥಳದಲ್ಲಿನ ಸಿಸಿಟಿವಿಗಳನ್ನ ಪರಿಶೀಲಿಸಿ ದುಷ್ಕರ್ಮಿಗಳನ್ನ ಪತ್ತೆ ಹಚ್ಚಲು ಮುಂದಾಗಿರುವ ಪೊಲೀಸರು. ಈ ಪ್ರಕರಣವನ್ನ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/raichur-youth-bhumananda-murdered-by-miscreants-incident-happened-in-devadurga/articleshow-m8rrecw"/>
        </item>
        <item>
            <title><![CDATA[Mantralaya: ಮಂತ್ರಾಲಯ ಮಠದ ಹುಂಡಿ ಎಣಿಕೆ: ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ! ಚಿನ್ನ ಬೆಳ್ಳಿ ಎಷ್ಟು?]]></title>
            <link>https://kannada.asianetnews.com/gallery/karnataka-districts/over-rs-3-crore-deposited-in-mantralaya-raghavendra-temple-hundi-in-21-days-rav-ofd9t35</link>
            <guid isPermaLink="true">https://kannada.asianetnews.com/gallery/karnataka-districts/over-rs-3-crore-deposited-in-mantralaya-raghavendra-temple-hundi-in-21-days-rav-ofd9t35</guid>
            <pubDate>Fri, 26 Jun 2026 12:43:48 +0530</pubDate>
            <description><![CDATA[&lt;p&gt;Mantalaya hundi collection: ರಾಯಚೂರಿನ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಜೂನ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನೀಡಿದ ಚಿನ್ನ ಬೆಳ್ಳಿಯಷ್ಟು ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw1bphbsty1pj0krdbj42mvm,imgname----------------------7--1782457255289.jpg" type="image/jpeg" height="390" width="690"/>
            <content:encoded><![CDATA[&lt;p&gt;Mantalaya hundi collection: ರಾಯಚೂರಿನ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಜೂನ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನೀಡಿದ ಚಿನ್ನ ಬೆಳ್ಳಿಯಷ್ಟು ತಿಳಿಯಿರಿ.&lt;/p&gt;&lt;img&gt;&lt;p&gt;ರಾಯಚೂರು (ಜೂ.26): ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಜೂನ್ ತಿಂಗಳ ಹುಂಡಿಯ ಎಣಿಕೆ ಕಾರ್ಯ ನಡೆಯಿತು. ಈ ಬಾರಿಯೂ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 21 ದಿನಗಳಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ರೂಪಾಯಿ ಜಮೆಯಾಗಿದೆ ಎಂದು ಮಂತ್ರಾಲಯದ ಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮಂತ್ರಾಲಯ ರಾಯರ ಭಕ್ತರು ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶ, ವಿದೇಶಗಳಿಂದ ದರ್ಶನಕ್ಕೆ ಆಗಮಿಸುತ್ತಾರೆ. ರಾಯರ ದರ್ಶನ ಪಡೆದು ನಗದು ಹಣ, ಚಿನ್ನ ಬೆಳ್ಳಿಯನ್ನೇ ಕಾಣಿಕೆಯಾಗಿ ಅರ್ಪಿಸುತ್ತಾರೆ. ಈ ಬಾರಿಯೂ 67ಗ್ರಾಂ. ಚಿನ್ನ, 511ಗ್ರಾಂ ಬೆಳ್ಳಿ ಆಭರಣಗಳನ್ನ ಭಕ್ತರು ಕಾಣಿಕೆ ಅರ್ಪಿಸಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಬಾರಿ ಮೇ ತಿಂಗಳ ಹುಂಡಿಯಲ್ಲಿ 22 ದಿನದಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಚಿನ್ನ ಬೆಳ್ಳಿ ಕಾಣಿಕೆ ಸ್ವಲ್ಪ ಇಳಿಮುಖವಾಗಿತ್ತು.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/over-rs-3-crore-deposited-in-mantralaya-raghavendra-temple-hundi-in-21-days-rav-ofd9t35"/>
        </item>
        <item>
            <title><![CDATA[ಸಿಂಧನೂರು ಕೆರೆ ನೀರಿನ ಪ್ರಮಾಣ ಕುಸಿತ: ನಗರಕ್ಕೆ ಕುಡಿಯುವ ನೀರಿಗೆ ಎದುರಾಗುತ್ತಾ ಸಂಕಷ್ಟ?]]></title>
            <link>https://kannada.asianetnews.com/karnataka-districts/the-water-level-of-the-sindhanur-city-lake-has-dropped-three-months-worth-of-savings-mrq/articleshow-oh425ud</link>
            <guid isPermaLink="true">https://kannada.asianetnews.com/karnataka-districts/the-water-level-of-the-sindhanur-city-lake-has-dropped-three-months-worth-of-savings-mrq/articleshow-oh425ud</guid>
            <pubDate>Sun, 05 Jul 2026 10:24:42 +0530</pubDate>
            <description><![CDATA[ಸಿಂಧನೂರು ನಗರದ ಜೀವನಾಡಿಯಾದ ಕೆರೆಯ ನೀರಿನ ಮಟ್ಟ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ. ಸದ್ಯ ತುರ್ವಿಹಾಳ ಕೆರೆಯಿಂದ ನೀರು ಪೂರೈಸಲಾಗುತ್ತಿದ್ದು, ಇನ್ನೂ ಮೂರು ತಿಂಗಳಿಗಾಗುವಷ್ಟು ಸಂಗ್ರಹವಿದೆ. ನಾಗರಿಕರು ನೀರನ್ನು ಮಿತವಾಗಿ ಬಳಸುವಂತೆ ಪೌರಾಯುಕ್ತರು ಮನವಿ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr9wwax0ve15fntea9jnmb8,imgname-sindhanuru-lake-1783227117917.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ತುರ್ವಿಹಾಳ ಪಟ್ಟಣ ಸಮೀಪದಲ್ಲಿರುವ ಬೃಹತ್ ಕುಡಿಯುವ ನೀರಿನ ಕೆರೆ ಸಿಂಧನೂರು ನಗರದ ಜೀವಸೆಲೆಯಾಗಿದ್ದು, ಸದ್ಯ ಕೆರೆ ನೀರಿನ ಪ್ರಮಾಣ ಕುಸಿತಕಂಡು ನಾಗರಿಕರಿಗೆ ಆತಂಕ ತಂದೊಡ್ಡಿದೆ.&lt;/p&gt;&lt;p&gt;ಸದ್ಯ ಕುಡಿಯುವ ನೀರಿನ ಕೆರೆಯಲ್ಲಿ ಸದ್ಯ ಅಂದಾಜು ಒಂದೂವರೆಯಿಂದ ಎರಡು ಮೀಟರ್ ನೀರಿನ ಸಂಗ್ರಹವಿದೆ. ಹಾಗಾಗಿ ಪ್ರಸ್ತುತ ತುರ್ವಿಹಾಳ ಕೆರೆಯಿಂದ ನೇರವಾಗಿ ನೀರನ್ನು ನಗರದ 31 ವಾರ್ಡ್&zwnj;ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಕುಡಿಯುವ ನೀರಿನ ಉದ್ದೇಶಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿದ ವೇಳೆ ತುರ್ವಿಹಾಳ ಕೆರೆ ಹಾಗೂ ನಗರದ ಕುಡಿಯುವ ನೀರಿನ ಕೆರೆಯಲ್ಲಿ ನೀರು ಸಂಗ್ರಹಿಸಲಾಗಿತ್ತು. ಬೇಸಿಗೆಯ ಕಾರಣ ದಿಂದ ನೀರಿನ ಬೇಡಿಕೆ ಹೆಚ್ಚಿ ನಗರದ ಕುಡಿಯುವ ನೀರಿನ ಕೆರೆ ಬೇಗನೆ ಖಾಲಿಯಾಗಿದ್ದು, ತುರ್ವಿಹಾಳ ಕೆರೆಯೇ ಆಸರೆಯಾಗಿದೆ.&lt;/p&gt;&lt;h2&gt;&lt;strong&gt;ನೀರನ್ನು ಮಿತವಾಗಿ ಬಳಸಿ:&lt;/strong&gt;&lt;/h2&gt;&lt;p&gt;ಸದ್ಯ ಸಿಂಧನೂರು ಕೆರೆಯಲ್ಲಿ ನೀರು ಕಡಿಮೆ ಇರಬಹುದು, ಆದರೆ ತುರ್ವಿಹಾಳ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಲಾಗಿದೆ. ಅಂದಾಜು ಇನ್ನೂ ಮೂರು ಇಲ್ಲವೇ ಮೂರುವರೇ ತಿಂಗಳಿಗಾಗುವಷ್ಟು ನೀರಿನ ಸಂಗ್ರಹವಿದೆ. ಹಾಗಾಗಿ ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ಈಗ ಪ್ರತಿ 8 ದಿನಕ್ಕೊಮ್ಮೆ ಆಯಾ ವಾರ್ಡ್&zwnj;ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಒಂದೆರಡು ದಿನ ಹೆಚ್ಚು ಕಡಿಮೆ ಆಗಬಹುದು. ಆದರೆ ನೀರಿನ ಕೊರತೆ ಮಾತ್ರ ಇಲ್ಲ. ಆದರೆ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ನಗರಸಭೆಯ ಪೌರಾಯುಕ್ತ ಹೇಳುತ್ತಾರೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/the-water-level-of-the-sindhanur-city-lake-has-dropped-three-months-worth-of-savings-mrq/articleshow-oh425ud"/>
        </item>
        <item>
            <title><![CDATA[ಸಿಂಧನೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ 332 ವಿದ್ಯಾರ್ಥಿಗಳಿಗೆ ನಾಲ್ವರೇ ಉಪನ್ಯಾಸಕರು]]></title>
            <link>https://kannada.asianetnews.com/karnataka-districts/four-lecturers-for-332-students-at-the-government-pre-university-college-in-sindhanur-raichur-mrq/articleshow-qclw2bx</link>
            <guid isPermaLink="true">https://kannada.asianetnews.com/karnataka-districts/four-lecturers-for-332-students-at-the-government-pre-university-college-in-sindhanur-raichur-mrq/articleshow-qclw2bx</guid>
            <pubDate>Mon, 06 Jul 2026 05:59:21 +0530</pubDate>
            <description><![CDATA[ಸಿಂಧನೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೂ, ಉಪನ್ಯಾಸಕರ ತೀವ್ರ ಕೊರತೆ ಎದುರಾಗಿದೆ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ 332 ವಿದ್ಯಾರ್ಥಿಗಳಿಗೆ ಕೇವಲ ನಾಲ್ವರು ಉಪನ್ಯಾಸಕರಿದ್ದು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪಾಲಕರು ಹಾಗೂ ವಿದ್ಯಾರ್ಥಿಗಳು ಶೀಘ್ರ ಪರಿಹಾರಕ್ಕಾಗಿ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwtd10a8j6ba4494ydnn8cf1,imgname-sindhanur-college-1783297507656.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರಹ್ಲಾದ ಗುಡಿ&lt;/strong&gt;&lt;/p&gt;&lt;p&gt;&lt;strong&gt;ರಾಯಚೂರು:&lt;/strong&gt; ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರಿಲ್ಲ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಬರೋಬ್ಬರಿ 332ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕೇವಲ 4 ಜನ ಉಪನ್ಯಾಸಕರು ಪಾಠ ಬೋಧನೆಗೆ ದಿನವೂ ಹರಸಾಹಸ ಪಡುತ್ತಿದ್ದಾರೆ.&lt;/p&gt;&lt;p&gt;2025-26ನೇ ಸಾಲಿನಲ್ಲಿ ಈ ಕಾಲೇಜಿನ ವಿವಿಧ ವಿಭಾಗದ ದ್ವಿತೀಯ ಪಿಯಸಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಪಾಸಾದ ಹಿನ್ನೆಲೆಯಲ್ಲಿ, ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾವಕಾಶ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನ್ಯಾಸಕರನ್ನು ನೇಮಕ ಮಾಡದೇ ಇರುವುದರಿಂದ ಪಠ್ಯ ಹಾಗೂ ಲ್ಯಾಬ್ (ಪ್ರಯೋಗಾಲಯ) ಚಟುವಟಿಕೆಗಳನ್ನು ನಿಗದಿಯಂತೆ ಕೈಗೊಳ್ಳಲು ಉಪನ್ಯಾಸಕರಿಗೆ ಹೊರೆಯಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಬಡ ವಿದ್ಯಾರ್ಥಿಗಳಿಗೆ ಈ ಕಾಲೇಜು ಆಧಾರಸ್ತಂಭ&lt;/strong&gt;&lt;/h2&gt;&lt;p&gt;&amp;nbsp;ಖಾಸಗಿ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಿ ಅಭ್ಯಾಸ ಮಾಡಲಾಗದ ಬಡ ಮತ್ತು ಮಧ್ಯಮ ವರ್ಗದ ಬಹಳಷ್ಟು ವಿದ್ಯಾರ್ಥಿಗಳಿಗೆ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಶೈಕ್ಷಣಿಕವಾಗಿ ಆಧಾರಸ್ತಂಭವಾಗಿದೆ. ಆದರೆ ಈ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕಾಗಿದೆ.&lt;/p&gt;&lt;p&gt;ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ 208, ದ್ವಿತೀಯ ಪಿಯುಸಿ 124 ಒಟ್ಟು 332, ಕಲಾ 120 ಹಾಗೂ ವಾಣಿಜ್ಯ ವಿಭಾಗದಲ್ಲಿ 85 ವಿದ್ಯಾರ್ಥಿಗಳು ಕಲಿಯುತ್ತಾರೆ. ವಿಜ್ಞಾನ ವಿಭಾಗ ಮತ್ತು ಕಲಾ ವಿಭಾಗದಲ್ಲಿ ಉಪನ್ಯಾಸಕರ ಕೊರತೆ ಉಂಟಾಗಿದೆ.&lt;/p&gt;&lt;h3&gt;&lt;strong&gt;ವಿಜ್ಞಾನ ವಿಭಾಗದ ಉಪನ್ಯಾಸಕರ ನೇಮಕಾತಿ ಅವಶ್ಯಕ&lt;/strong&gt;&lt;/h3&gt;&lt;p&gt;&ldquo;ವಿಜ್ಞಾನ ವಿಭಾಗಕ್ಕೆ ಪ್ರಸಕ್ತ ಸಾಲಿನಲ್ಲಿ 208 ವಿದ್ಯಾರ್ಥಿಗಳು ನೋಂದಣಿ ಪಡೆದುಕೊಂಡಿದ್ದಾರೆ. 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನವೂ ತರಗತಿಗಳಿಗೆ ಹಾಜರಾಗುತ್ತಾರೆ. ಇಷ್ಟು ವಿದ್ಯಾರ್ಥಿಗಳಿಗೆ ಒಂದೇ ಬಾರಿಗೆ ಕ್ಲಾಸ್ ಮಾಡಲಾಗುತ್ತಿದ್ದು, ಎರಡು ಸೆಕ್ಷನ್ ಆದರೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಾಧ್ಯ. ಈಗ ಸದ್ಯ ಕೇವಲ ಇಬ್ಬರು ಖಾಯಂ ಹಾಗೂ ಇಬ್ಬರು ಅತಿಥಿಗಳು ಸೇರಿ ಒಟ್ಟು ನಾಲ್ಕು ಜನ ಉಪನ್ಯಾಸಕರಿದ್ದು, ಆದಷ್ಟು ಬೇಗ ಹೆಚ್ಚುವರಿ ಉಪನ್ಯಾಸಕರನ್ನು ನೇಮಕ ಮಾಡಬೇಕು&rdquo; ಎಂದು ವಿದ್ಯಾರ್ಥಿ ಪಾಲಕರೊಬ್ಬರು ಒತ್ತಾಯಿಸಿದ್ದಾರೆ.&lt;/p&gt;&lt;h3&gt;&lt;strong&gt;ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆ&lt;/strong&gt;&lt;/h3&gt;&lt;p&gt;&ldquo;ಕಲಾ ವಿಭಾಗಕ್ಕೆ ಒಬ್ಬರೇ ಸಮಾಜಶಾಸ್ತ್ರ &amp;nbsp;ಉಪನ್ಯಾಸಕರಿದ್ದು, ಆದರೆ ಅವರನ್ನೂ ಸಹ 3 ದಿನ ಅಂಬಾಮಠದ ಕಾಲೇಜಿಗೆ ಎರವಲು ಸೇವೆಗೆ ನಿಯೋಜಿಸಲಾಗಿದೆ. ಇದರಿಂದ ಪಠ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಸಮಸ್ಯೆಯಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 120 ವಿದ್ಯಾರ್ಥಿಗಳಿದ್ದು, ಅವರಿಗೆ ಪಾಠ ಬೋಧನೆ ಜೊತೆಗೆ ಗ್ರಾಮೀಣ ಪ್ರದೇಶದ ಇನ್ನೊಂದು ಕಾಲೇಜಿಗೆ ಬೋಧಿಸಲು ಉಪನ್ಯಾಸಕರು ಅಲೆದಾಡುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಮಸ್ಯೆಯಾಗಿದೆ. ಹಾಗಾಗಿ ಸಮಾಜಶಾಸ್ತ&ccedil; ಉಪನ್ಯಾಸಕರನ್ನು ಪ್ರಸ್ತುತ ಕಾಲೇಜಿನಲ್ಲೇ ಉಳಿಸಿ, ಅಂಬಾಮಠ ಕಾಲೇಜಿಗೆ ಬೇರೊಬ್ಬ ಅತಿಥಿ ಉಪನ್ಯಾಸಕರನ್ನು ನೇಮಿಸಿ ಸಮಸ್ಯೆ ಪರಿಹರಿಸಬೇಕೆಂದು ವಿದ್ಯಾರ್ಥಿ ಪಾಲಕರು&rdquo; ಮನವಿ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಜನಪ್ರತಿನಿಧಿಗಳು ಗಮನಹರಿಸಲಿ&lt;/strong&gt;&lt;/h3&gt;&lt;p&gt;ಕಳೆದ ಕೆಲವು ದಿನಗಳಿಂದ ಕಾಲೇಜು ತರಗತಿಗಳು ಆರಂಭವಾಗಿದ್ದು, ಆದಷ್ಟು ಶೀಘ್ರ ಸ್ಥಳೀಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನ ಸೆಳೆದು ವಿಜ್ಞಾನ ವಿಭಾಗಕ್ಕೆ ಇನ್ನೂ 4 ಜನ ಉಪನ್ಯಾಸಕರನ್ನು ನೇಮಿಸಬೇಕು ಹಾಗೂ ಕಲಾ ವಿಭಾಗದ ಸಮಾಜಶಾಸ್ತ&ccedil; ಉಪನ್ಯಾಸಕರನ್ನು ಬೇರೆ ಕಾಲೇಜಿಗೆ ಎರವಲು ಸೇವೆಗೆ ನಿಯೋಜಿಸಿರುವುದನ್ನು ರದ್ದುಪಡಿಸಬೇಕು ಹಾಗೂ ಕಾಲೇಜಿಗೆ ಅವಶ್ಯವಿರುವ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ವಿದ್ಯಾರ್ಥಿ ಪಾಲಕರಾದ ಸೋಮನಾಥ, ಬಸವರಾಜ ಹಾಗೂ ನಾಗರಾಜ ಅವರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/four-lecturers-for-332-students-at-the-government-pre-university-college-in-sindhanur-raichur-mrq/articleshow-qclw2bx"/>
        </item>
        <item>
            <title><![CDATA[ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ; ಇಂದು ಅಂತ್ಯಕ್ರಿಯೆ]]></title>
            <link>https://kannada.asianetnews.com/gallery/karnataka-districts/former-congress-mla-from-raichur-city-constituency-syed-yasin-passes-away-today-mrq-qp3a1xp</link>
            <guid isPermaLink="true">https://kannada.asianetnews.com/gallery/karnataka-districts/former-congress-mla-from-raichur-city-constituency-syed-yasin-passes-away-today-mrq-qp3a1xp</guid>
            <pubDate>Sun, 12 Jul 2026 11:27:23 +0530</pubDate>
            <description><![CDATA[&lt;p&gt;ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ (74) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯರಾಗಿದ್ದ ಯಾಸೀನ್ ಅವರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxae51vac7g49m594a3hwe7d,imgname-yaseen--3--1783835559786.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ (74) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯರಾಗಿದ್ದ ಯಾಸೀನ್ ಅವರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.&lt;/p&gt;&lt;img&gt;&lt;p&gt;ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್&zwnj;ನ ಮಾಜಿ ಶಾಸಕರಾದ ಸೈಯದ್ ಯಾಸೀನ್ ಅವರು ಇಂದು ಮುಂಜಾನೆ 8:45 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸೈಯದ್ ಯಾಸೀನ್ ಅವರಿಗೆ 74 ವರ್ಷ ವಯಸ್ಸು ಆಗಿತ್ತು.&lt;/p&gt;&lt;img&gt;&lt;p&gt;ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೈಯದ್ ಯಾಸೀನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಮಾಜಿ ಶಾಸಕರು ಪತ್ನಿ ಹಾಗೂ ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿದ್ದಾರೆ. ಇವರು ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯನಾಗಿದ್ದರು.&lt;/p&gt;&lt;img&gt;&lt;p&gt;ರಾಯಚೂರು ಜಿಲ್ಲಾ ಕಾಂಗ್ರೆಸ್&zwnj;ನ ಪ್ರಭಾವಿ ರಾಜಕಾರಣಿಯಾಗಿದ್ದ ಸೈಯದ್ ಯಾಸೀನ್ ಅವರು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಒಟ್ಟು ಆರು ಬಾರಿ ಸ್ಪರ್ಧಿಸಿದ್ದರು. ಈ ಪೈಕಿ 1999 ಮತ್ತು 2008 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.&lt;/p&gt;&lt;img&gt;&lt;p&gt;ಸೈಯದ್ ಯಾಸೀನ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮತ್ತು ಕೆಪಿಸಿಸಿಯ (KPCC) ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.&lt;/p&gt;&lt;img&gt;&lt;p&gt;ಸದ್ಯ ಸೈಯದ್ ಯಾಸೀನ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ರಾಯಚೂರಿಗೆ ರವಾನಿಸಲಾಗುತ್ತಿದ್ದು, ಇಂದು ಸಂಜೆ ರಾಯಚೂರು ನಗರದ ಕಮಲಿವಾಲೆ ಬಾಬಾ ಕಬರಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.&lt;/p&gt;]]></content:encoded>
            <category>raichur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/former-congress-mla-from-raichur-city-constituency-syed-yasin-passes-away-today-mrq-qp3a1xp"/>
        </item>
    </channel>
</rss>
