<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 02 Sep 2026 11:17:07 +0530</lastBuildDate>
        <atom:link href="https://kannada.asianetnews.com/rss/raichur" rel="self" type="application/rss+xml"/>
        <item>
            <title><![CDATA[ಬೇಸಿಗೆ ಆಗಿ ಬದಲಾಯ್ತು ಮಳೆಗಾಲ, ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ 3 ರಿಂದ 4 ಡಿಗ್ರಿ ಸೆ ಉಷ್ಣಾಂಶ ಏರಿಕೆ!]]></title>
            <link>https://kannada.asianetnews.com/state/karnataka-news-bangalore-weather-monsoon-turns-into-summer-temp-rises-by-4-degree-celsius-gdp/articleshow-02quw1m</link>
            <guid isPermaLink="true">https://kannada.asianetnews.com/state/karnataka-news-bangalore-weather-monsoon-turns-into-summer-temp-rises-by-4-degree-celsius-gdp/articleshow-02quw1m</guid>
            <pubDate>Tue, 14 Jul 2026 10:52:06 +0530</pubDate>
            <description><![CDATA[ನೈರುತ್ಯ ಮಾನ್ಸೂನ್ ದುರ್ಬಲಗೊಂಡಿದ್ದರಿಂದ ಕರ್ನಾಟಕದಲ್ಲಿ ಮಳೆಗಾಲದಲ್ಲಿಯೇ ಬೇಸಿಗೆಯಂತಹ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರು, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ತಾಪಮಾನ ಏರಿಕೆಯಾಗಿದ್ದು, ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಮಳೆಯ ಕೊರತೆಯಿಂದ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx5tdpvafqg5scjr5dypyfwv,imgname-summer-1-1783680654186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಜೂನ್, ಜುಲೈ ತಿಂಗಳು ಬಂತೆಂದರೆ ಸಾಮಾನ್ಯವಾಗಿ ವರುಣನ ಆರ್ಭಟ ಜೋರಾಗಿರುತ್ತದೆ. ಅಲ್ಲಲ್ಲಿ ಅವಾಂತರಗಳು ಆಗುತ್ತಿರುತ್ತವೆ. ಆದರೆ ಈ ಬಾರಿ ರಾಜ್ಯದಲ್ಲಿ ಮಳೆಗಾಲ ಚಿತ್ರಣವೇ ಉಲ್ಟಾ ಆದಂತಾಗಿದೆ. ಮಳೆಗಾಲದಲ್ಲಿ ಜನರು ಬೇಸಿಗೆಯ ಬಿಸಿಲಿನ ಬೇಗೆಯನ್ನು ಅನುಭವಿಸುವಂತಾಗಿದೆ. ನೈರುತ್ಯ ಮಾನ್ಸೂನ್ ಮಾರುತಗಳು ದುರ್ಬಲಗೊಂಡಿರುವುದರಿಂದ ರಾಜ್ಯಾದ್ಯಂತ ಮಳೆಯ ಪ್ರಮಾಣ ಗಣನೀಯವಾಗಿ ಕುಸಿತವಾಗಿದ್ದು, ತಾಪಮಾನದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಉಷ್ಣಾಂಶ ಏರಿಕೆಯಾಗಿದೆ. ಜನರು ಸೆಕೆ ವಾತಾವರಣಕ್ಕೆ ಹೈರಾಣಾಗಿದ್ದಾರೆ&lt;/p&gt;&lt;h2&gt;ಬೇಸಿಗೆಯಂತಾದ ಮಳೆಗಾಲ: ಕಂಗಾಲಾದ ಬೆಂಗಳೂರಿಗರು&lt;/h2&gt;&lt;p&gt;ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮಳೆಗಾಲದ ಈ ಸಮಯದಲ್ಲಿ ತೀವ್ರ ತಂಪಾದ ವಾತಾವರಣ ಇರುತ್ತಿತ್ತು. ವಾಡಿಕೆಯಂತೆ ಇಲ್ಲಿನ ಗರಿಷ್ಠ ಉಷ್ಣಾಂಶ 28.3 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಬೇಕಿತ್ತು. ಆದರೆ ಪ್ರಸ್ತುತ ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 32.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಅಂದರೆ, ವಾಡಿಕೆಗಿಂತ 4.1 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಉಷ್ಣಾಂಶ ಏರಿಕೆಯಾಗಿದ್ದು, ಬೆಂಗಳೂರಿಗರು ಬಿಸಿಲ ಬೇಗೆಗೆ ಬೆಂದು ಹೋಗುತ್ತಿದ್ದಾರೆ.&lt;/p&gt;&lt;p&gt;5 ವರ್ಷಗಳ ಬಳಿಕ ನಗರದಲ್ಲಿ ಜುಲೈ ತಿಂಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. 2021ರ ಜುಲೈನಲ್ಲಿ ಗರಿಷ್ಠ ತಾಪಮಾನ 32.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಪುನಃ ಪ್ರಸಕ್ತ ಜುಲೈನಲ್ಲಿ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಅಂಕಿ-ಅಂಶಗಳು ತಿಳಿಸಿವೆ. ಇನ್ನು ಎಚ್&zwnj;ಎಎಲ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸರಾಸರಿಗಿಂತ 4.4 ಡಿಗ್ರಿ ಸೆಲ್ಸಿಯಸ್ ಹೆಚ್ಚು. ಕಳೆದ 17 ದಿನಗಳಿಂದ ನಗರದಲ್ಲಿ ಮಳೆಯಾಗಿಲ್ಲ. ಮೋಡಗಳು ಇಲ್ಲದ ಕಾರಣ ಕಳೆದ 1 ವಾರದಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಜು.17ರವರೆಗೂ ನಗರದಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.&lt;/p&gt;&lt;p&gt;ರಾಜಧಾನಿ ಮಾತ್ರವಲ್ಲದೆ ಮೈಸೂರು, ಗದಗ, ಕೊಪ್ಪಳ ಹಾಗೂ ಬೆಂಗಳೂರಿನ ಹೆಚ್&zwnj;ಎಎಲ್ (HAL) ವಿಮಾನ ನಿಲ್ದಾಣ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ವ್ಯಾಪ್ತಿಯಲ್ಲೂ ತಾಪಮಾನದಲ್ಲಿ ಬರೋಬ್ಬರಿ 4 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಹೆಚ್ಚಳ ಕಂಡುಬಂದಿದೆ.&lt;/p&gt;&lt;h2&gt;ರಾಯಚೂರಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲು&lt;/h2&gt;&lt;p&gt;ಇನ್ನು ರಾಜ್ಯದಲ್ಲೇ ಅತಿ ಹೆಚ್ಚು ಬಿಸಿಲಿನ ತಾಪಕ್ಕೆ ತುತ್ತಾಗಿರುವುದು ರಾಯಚೂರು ಜಿಲ್ಲೆ. ಈ ಅವಧಿಯಲ್ಲಿ ರಾಯಚೂರಿನಲ್ಲಿ ಸಾಮಾನ್ಯವಾಗಿ 33.1 ಡಿಗ್ರಿ ಸೆಲ್ಸಿಯಸ್ ವಾಡಿಕೆ ಉಷ್ಣಾಂಶ ಇರಬೇಕಿತ್ತು. ಆದರೆ ಈಗ ಅಲ್ಲಿ ಬರೋಬ್ಬರಿ 38.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಂದರೆ ವಾಡಿಕೆಗಿಂತ 5.3 ಡಿಗ್ರಿ ಸೆಲ್ಸಿಯಸ್&zwnj;ನಷ್ಟು ತಾಪಮಾನ ಏರಿಕೆಯಾಗಿದ್ದು, ಜಿಲ್ಲೆಯ ಜನತೆ ಬಿಸಿಲ ಝಳಕ್ಕೆ ತತ್ತರಿಸಿ ಹೋಗಿದ್ದಾರೆ.&lt;/p&gt;&lt;h2&gt;ಒಣ ಹವೆ ಮುಂದುವರಿಕೆ: ಹವಾಮಾನ ಇಲಾಖೆ ಮಾಹಿತಿ&lt;/h2&gt;&lt;p&gt;ನೈರುತ್ಯ ಮಾನ್ಸೂನ್ (Southwest Monsoon) ತೀವ್ರವಾಗಿ ದುರ್ಬಲಗೊಂಡಿರುವುದೇ ಈ ಹಠಾತ್ ಹವಾಮಾನ ಬದಲಾವಣೆಗೆ ಮುಖ್ಯ ಕಾರಣ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯ ಕೊರತೆಯಿಂದಾಗಿ ಈಗಿರುವ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದ್ದು, ವಿಶೇಷವಾಗಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದಿದೆ. ಮುಂಬರುವ ದಿನಗಳಲ್ಲೂ ಮಳೆ ಚುರುಕಾಗದಿದ್ದರೆ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-news-bangalore-weather-monsoon-turns-into-summer-temp-rises-by-4-degree-celsius-gdp/articleshow-02quw1m"/>
        </item>
        <item>
            <title><![CDATA[Raichuru Shocking: ಮಕ್ಕಳಿಗೆ ಕೊಡ್ಬೇಕಿದ್ದ 50,000 ಐರನ್‌ ಮಾತ್ರೆ ಶಾಲೆಯ ಟಾಯ್ಲೆಟ್‌ನಲ್ಲಿ ಪತ್ತೆ!]]></title>
            <link>https://kannada.asianetnews.com/education/5000-iron-tablets-found-in-a-toilet-gurugunta-government-school-raichur-rav/articleshow-2eo2p5g</link>
            <guid isPermaLink="true">https://kannada.asianetnews.com/education/5000-iron-tablets-found-in-a-toilet-gurugunta-government-school-raichur-rav/articleshow-2eo2p5g</guid>
            <pubDate>Wed, 22 Jul 2026 05:27:15 +0530</pubDate>
            <description><![CDATA[&lt;p&gt;ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಸರ್ಕಾರಿ ಶಾಲೆಯಲ್ಲಿ, ಮಕ್ಕಳಿಗೆ ವಿತರಿಸಬೇಕಿದ್ದ 50,000ಕ್ಕೂ ಹೆಚ್ಚು ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದು ನಾಶಪಡಿಸಲಾಗಿದೆ. ಈ ಘಟನೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky3gxc9s7sca1nnj283gyxvk,imgname-----------------------2026-07-22t051053.199-1784677314873.jpg" type="image/jpeg" height="390" width="690"/>
            <content:encoded><![CDATA[&lt;h2&gt;ರಾಯಚೂರಿನ ಗುರುಗುಂಟಾದ ಶಾಲೇಲಿ ಘಟನೆ&lt;/h2&gt;&lt;p&gt;&lt;strong&gt;&amp;nbsp;ಲಿಂಗಸುಗೂರು(ರಾಯಚೂರು) (ಜು.22)&lt;/strong&gt;&lt;/p&gt;&lt;p&gt;ಜಿಲ್ಲೆಯಲ್ಲಿ ಇತ್ತೀಚೆಗೆ ಪೌಷ್ಟಿಕ ಹಾಲಿನ ಪುಡಿ ದನದ ಕೊಟ್ಟಿಗೆಯಲ್ಲಿ ಪತ್ತೆಯಾದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಘಟನೆ ನಾಗರಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿತರಿಸಬೇಕಾದ 50,000ಕ್ಕೂ ಅಧಿಕ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶಿಕ್ಷಣ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಲಿಂಗಸುಗೂರು ತಾಲೂಕಿನ ಗುರುಗುಂಟಾದ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸಬೇಕಾದ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದಿದ್ದಾರೆ.&lt;/p&gt;&lt;p&gt;ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಮಾಕಾಪುರ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಡಬ್ಲೂಐಎಫ್ಎಸ್ ಮಾತ್ರೆಗಳಾದ ಪಿಂಕ್ ಮತ್ತು ಬ್ಲೂ ಮಾತ್ರೆಗಳು 2015ಅ.15ರಿಂದ 2017ಸೆ.17ರವರೆಗೆ ಅವಧಿ ಹೊಂದಿದ್ದು, ಬ್ಯಾಚ್ ಸಂಖ್ಯೆ ಐಎಫ್&zwnj;ಒ 039 ಎಂಬುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ವಶಕ್ಕೆ ಪಡೆದ ಮಾತ್ರೆಗಳನ್ನು ಮುಂದಿನ ಆದೇಶದವರೆಗೂ ಗುರುಗುಂಟಾದಲ್ಲಿರುವ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರದಲ್ಲಿ ಇರಿಸಲಾಗಿದೆ. ಐರನ್ ಮಾತ್ರೆಗಳನ್ನು ಮಕ್ಕಳಿಗೆ ನೀಡದೇ ಶೌಚಾಲಯದಲ್ಲಿ ಬೇಕಾಬಿಟ್ಟಿ ಎಸೆದ ಪ್ರಕರಣ ಶಿಕ್ಷಕರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.&lt;/p&gt;&lt;p&gt;ಘಟನೆ ಸಂಬಂಧ ಮಕ್ಕಳಿಗೆ ಮಾತ್ರೆಗಳು ಏಕೆ ವಿತರಣೆ ಮಾಡಿಲ್ಲ ಎಂದು ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮುಖ್ಯ ಶಿಕ್ಷಕರಿಗೆ ಜು.13ರಂದು ನೋಟಿಸ್ ನೀಡಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/5000-iron-tablets-found-in-a-toilet-gurugunta-government-school-raichur-rav/articleshow-2eo2p5g"/>
        </item>
        <item>
            <title><![CDATA[ನಾಗೇಂದ್ರ ಅಷ್ಟೇ ಅಲ್ಲ; ಸದ್ಯದಲ್ಲೇ ಇನ್ನಷ್ಟು ಭ್ರಷ್ಟ ಸಚಿವರು ರಾಜೀನಾಮೆ? BSY ಹೇಳಿಕೆ ಸಂಚಲನ!]]></title>
            <link>https://kannada.asianetnews.com/politics/former-cm-bs-yadiyurappa-reacts-bjp-raichur-to-ballari-padayatre-rav/articleshow-3wic4ll</link>
            <guid isPermaLink="true">https://kannada.asianetnews.com/politics/former-cm-bs-yadiyurappa-reacts-bjp-raichur-to-ballari-padayatre-rav/articleshow-3wic4ll</guid>
            <pubDate>Tue, 01 Sep 2026 13:32:57 +0530</pubDate>
            <description><![CDATA[&lt;p&gt;ಬಿ ನಾಗೇಂದ್ರ ರಾಜೀನಾಮೆಯಿಂದ ಹೋರಾಟ ನಿಲ್ಲುವುದಿಲ್ಲ, ಈ ಭ್ರಷ್ಟ ಸರ್ಕಾರ ತೊಲಗುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸರ್ಕಾರದ ಹಗರಣಗಳ ವಿರುದ್ಧ 'ಬಳ್ಳಾರಿ ಚಲೋ' ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1dzrns0zm5v2ep2t5wkw5cc,imgname-bs-yediyurappa-1788249659168.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು(ಸೆ.1) &lt;/strong&gt;ಜನಾಕ್ರೋಶಕ್ಕೆ ಮಣಿದು ಬಿ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಈ ಸರ್ಕಾರ ಅಧಿಕಾರ ಬಿಟ್ಟು ತೊಲಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ರಾಯಚೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ವಿಚಾರ ಸಂಬಂಧ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಹತ್ತು ಹಲವು ಹಗರಣಗಳ ವಿರುದ್ಧ ಈ ಬಳ್ಳಾರಿ ಚಲೋ ಯಾತ್ರೆ ಶುರುವಾಗಿದೆ. ಲಿಂಗಸೂಗೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಯುತ್ತೆ ಎಂದರು.&lt;/p&gt;&lt;h2&gt;ಮುಖ್ಯಮಂತ್ರಿಗೆ ಈಗ ಜ್ಞಾನೋದಯ ಆಗಿದ್ರೆ ಸಂತೋಷ&lt;/h2&gt;&lt;p&gt;ಇಂದಿನಿಂದ ಸಿಎಂ ಡಿಕೆ ಶಿವಕುಮಾರ್ ಬರ ಅಧ್ಯಾಯನ ಕೈಗೊಂಡಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಸಿಎಂಗೆ ಇನ್ನಾದರೂ ಜ್ಞಾನೋದಯ ಆಗಿ ಮನವರಿಕೆ ಆದ್ರೆ ಸಂತೋಷದ ಸಂಗತಿ. ಮೊದಲಿಗೆ ಸಿಎಂ ಡಿಕೆಶಿ ದೆಹಲಿಗೆ ಹೋಗೋದನ್ನ ನಿಲ್ಲಿಸಿ ಅಭಿವೃದ್ಧಿ ಕಡೆ ಗಮನ ಕೊಡಲಿ ಎಂದು ಸಲಹೆ ನೀಡಿದರು.&lt;/p&gt;&lt;h3&gt;ಮುಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕಾರಕ್ಕೆ&lt;/h3&gt;&lt;p&gt;ನಾವು 2028ರ ಚುನಾವಣೆಗಾಗಿ ಈ ಹೋರಾಟ ಪ್ರಾರಂಭಿಸಿಲ್ಲ. ಈ ಸರ್ಕಾರ ದರೋಡೆ, ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟ ಸರ್ಕಾರದ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲು ಈ ಹೋರಾಟ ಮಾಡ್ತಿದ್ದೇವೆ. ಮುಂದೆ ಬಿಜೆಪಿ-ಜೆಡಿಎಸ್ ನೇತೃತ್ವದಲ್ಲಿ ಪೂರ್ಣ ಬಹಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಅನ್ನುವ ವಿಶ್ವಾಸವಿದೆ ಎಂದರು.&lt;/p&gt;&lt;p&gt;ಈ ಸರ್ಕಾರದಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರೋದು ನಾಗೇಂದ್ರ ಒಬ್ಬರೇ ಅಲ್ಲ. ಇನ್ನು ಅನೇಕ ಭ್ರಷ್ಟ ಸಚಿವರ ಬಗ್ಗೆ ಗಂಭೀರ ಆರೋಪಗಳಿವೆ. ಸರ್ಕಾರದ ವಿರುದ್ಧ ಆರೋಪಗಳಿವೆ. ಅದರ ವಿರುದ್ಧ ಹೋರಾಟ ಮಾಡಲಾಗುತ್ತೆ ಎಂದರು.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/former-cm-bs-yadiyurappa-reacts-bjp-raichur-to-ballari-padayatre-rav/articleshow-3wic4ll"/>
        </item>
        <item>
            <title><![CDATA[ಸ್ವಾತಂತ್ರ್ಯ ದಿನವೇ ರಾಯಚೂರಲ್ಲಿ ಪ್ರತಿಭಟನೆ ಬಿಸಿ! ಕ್ರೀಡಾಂಗಣಕ್ಕೆ ನುಗ್ಗಲು ಯತ್ನಿಸಿದ ಹೋರಾಟಗಾರರು ವಶಕ್ಕೆ, ಬೇಡಿಕೆಗಳೇನು?]]></title>
            <link>https://kannada.asianetnews.com/gallery/karnataka-districts/raichur-ministerial-demand-protesters-detained-ahead-of-independence-day-flag-hoisting-rav-4d8ukx4</link>
            <guid isPermaLink="true">https://kannada.asianetnews.com/gallery/karnataka-districts/raichur-ministerial-demand-protesters-detained-ahead-of-independence-day-flag-hoisting-rav-4d8ukx4</guid>
            <pubDate>Sat, 15 Aug 2026 10:36:40 +0530</pubDate>
            <description><![CDATA[&lt;p&gt;ರಾಯಚೂರು ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಆಗಮಿಸಿದ್ದ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲು ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ದಲಿತ ಪ್ರಗತಿಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಸಂಘಟನೆಗಳ ಬೇಡಿಕೆಗಳೇನು? ಇಲ್ಲಿ ಕ್ಲಿಕ್ ಮಾಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01vmxmg0qswamn0yh9awy7b,imgname-----------------------2026-08-15t101130.793-1786768946832.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಯಚೂರು ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಆಗಮಿಸಿದ್ದ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲು ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ದಲಿತ ಪ್ರಗತಿಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಸಂಘಟನೆಗಳ ಬೇಡಿಕೆಗಳೇನು? ಇಲ್ಲಿ ಕ್ಲಿಕ್ ಮಾಡಿ.&lt;/p&gt;&lt;img&gt;&lt;p&gt;ರಾಯಚೂರು ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ರಾಯಚೂರಿನವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಆಗಮಿಸಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಸಿಂಗ್ ಅವರಿಗೆ ಘೇರಾವ್ ಹಾಕಲು ಮುಂದಾದ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು, ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡದ, ಜಿಲ್ಲೆಯವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಿಸದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಧ್ವಜಾರೋಹಣ ನಡೆಯಲಿದ್ದ ಮಹಾತ್ಮಾ ಗಾಂಧಿ ಕ್ರೀಡಾಂಗಣದತ್ತ ತೆರಳಲು ಹೋರಾಟಗಾರರು ಯತ್ನಿಸಿದರು. ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದರು. ಆದರೂ ನುಗ್ಗಲು ಯತ್ನಿಸಿದಾಗ ಹಲವರು ವಶಕ್ಕೆ ಪಡೆದರು.&lt;/p&gt;&lt;img&gt;&lt;p&gt;ಸಚಿವರ ಆಗಮನಕ್ಕೂ ಮುನ್ನವೇ ಪೊಲೀಸರು ಮುಂಜಾಗ್ರತ ಕ್ರಮವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ರಾಯಚೂರು ನಗರದ ಅಂಬೇಡ್ಕರ್ ಸರ್ಕಲ್ ಬಳಿ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.&lt;/p&gt;&lt;p&gt;ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಮತ್ತು ಜಿಲ್ಲೆಯವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ. ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/raichur-ministerial-demand-protesters-detained-ahead-of-independence-day-flag-hoisting-rav-4d8ukx4"/>
        </item>
        <item>
            <title><![CDATA[Bengaluru: ಹುಸ್ಕೂರು ಗೇಟ್‌ ಮೆಟ್ರೋ ಸ್ಟೇಷನ್‌ನಲ್ಲಿ ಹಳಿಗೆ ಜಿಗಿದು ಪತ್ರಕರ್ತ ರಾಜೇಶ್‌ ಹೀರೇಮಠ್‌ ಸಾವು]]></title>
            <link>https://kannada.asianetnews.com/bengaluru-urban/journalist-rajesh-hiremath-dies-after-jumping-on-huskur-road-metro-track-san/articleshow-52wk7ic</link>
            <guid isPermaLink="true">https://kannada.asianetnews.com/bengaluru-urban/journalist-rajesh-hiremath-dies-after-jumping-on-huskur-road-metro-track-san/articleshow-52wk7ic</guid>
            <pubDate>Mon, 27 Jul 2026 20:18:31 +0530</pubDate>
            <description><![CDATA[ಬೆಂಗಳೂರಿನ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತ ರಾಜೇಶ್ ಹಿರೇಮಠ್ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಬಿಟ್ಟಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಘಟನೆಯಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kyj0edkzq7dhazetejcxz30c,imgname-namma-metro-1785163363966.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಲೆಕ್ಟ್ರಾನಿಕ್ಸ್ ಸಿಟಿ, ಬೆಂಗಳೂರು (ಜು. 27):&lt;/strong&gt; ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ಯೆಲ್ಲೋ ಲೈನ್&zwnj;ನ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತರೊಬ್ಬರು ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಭೀಕರ ಘಟನೆ ನಡೆದಿದೆ. ಉತ್ತರ ಕರ್ನಾಟಕ ಮೂಲದ ರಾಜೇಶ್ ಹಿರೇಮಠ್ (35) ಮೃತಪಟ್ಟ ವ್ಯಕ್ತಿ. ಇವರು ಖಾಸಗಿ ನ್ಯೂಸ್ ಚಾನೆಲ್ ಒಂದರಲ್ಲಿ (ನ್ಯೂಸ್ ಫಸ್ಟ್) ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ. ರಾಯಚೂರು ಮೂಲದ ರಾಜೇಶ್&zwnj; ಹೀರೇಮಠ, ನ್ಯೂಸ್ ಫಸ್ಟ್ ಪ್ರೈಮ್ ಯೂಟ್ಯೂಬ್ ಇಂಗ್ಲಿಷ್ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮುನ್ನ ಡೆಕ್ಕನ್&zwnj; ಹೆರಾಲ್ಡ್&zwnj;ನಲ್ಲೂ ಕೆಲಸ ಮಾಡಿದ್ದರು. ಕೆಲವು ಮೂಲಗಳ ಪ್ರಕಾರ ಕಳೆದು ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ. ಇತ್ತೀಚೆಗೆ ತೀರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.&lt;/p&gt;&lt;p&gt;ಇಂದು ಸಂಜೆ ಸುಮಾರು 5:50ರ ವೇಳೆಗೆ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣಕ್ಕೆ ಬಂದ 30-35 ವರ್ಷ ವಯಸ್ಸಿನ ರಾಜೇಶ್ ಹಿರೇಮಠ್, ಏಕಾಏಕಿ ಮೆಟ್ರೋ ಹಳಿಗೆ ಹಾರಿದ್ದಾರೆ. ಘಟನೆ ನಡೆದ ತಕ್ಷಣವೇ ಮೆಟ್ರೋ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ತಕ್ಷಣವೇ ರಕ್ಷಣೆಗೆ ಧಾವಿಸಿ, ಹಳಿಗೆ ಬಿದ್ದಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿ ದೊಡ್ಡ ಅನಾಹುತವನ್ನು ತಪ್ಪಿಸಲು ಯತ್ನಿಸಿದರು.&lt;/p&gt;&lt;p&gt;ಆದರೆ, ಹಳಿಗೆ ಹಾರಿದ ರಭಸಕ್ಕೆ ರಾಜೇಶ್ ಅವರಿಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದವು. ವಿಷಯ ತಿಳಿದ ತಕ್ಷಣವೇ ಹೆಬ್ಬಗೋಡಿ ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಸ್ಥಳಕಕ್ಕೆ ಆಗಮಿಸಿ, ಹಳಿಯ ಮೇಲೆ ಸಿಲುಕಿದ್ದ ವ್ಯಕ್ತಿಯನ್ನು ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದರು. ಬಳಿಕ ಅಂಬ್ಯುಲೆನ್ಸ್ ಮೂಲಕ ನಗರದ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದಾಗಲೇ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು. ಕೊನೆಗೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಭೇಟಿ, ಮಹಜರು&lt;/strong&gt;&lt;/h2&gt;&lt;p&gt;ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜಿತಾ ಹಾಗೂ ಹೆಬ್ಬಗೋಡಿ ಪೊಲೀಸರು ಹುಸ್ಕೂರು ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿರುವ ಪೊಲೀಸರು, ಆತ್ಮಹ*ಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೆಟ್ರೋ ಸಂಚಾರದಲ್ಲಿ ವ್ಯತ್ಯಯ&lt;/strong&gt;&lt;/h2&gt;&lt;p&gt;ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದ ಹಿನ್ನೆಲೆಯಲ್ಲಿ, ಆರ್.ವಿ. ರೋಡ್ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ಮಾರ್ಗದಲ್ಲಿ ಕೆಲ ಕಾಲ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದರು. ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಸ್ಥಳದಲ್ಲಿದ್ದ ಮೃತದೇಹವನ್ನು ತೆರವುಗೊಳಿಸಿದ ಬಳಿಕ ಮೆಟ್ರೋ ಸಂಚಾರವನ್ನು ಯಥಾಸ್ಥಿತಿಗೆ ತರಲಾಯಿತು.&lt;/p&gt;]]></content:encoded>
            <category>raichur</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/journalist-rajesh-hiremath-dies-after-jumping-on-huskur-road-metro-track-san/articleshow-52wk7ic"/>
        </item>
        <item>
            <title><![CDATA[ಕರ್ನಾಟಕದಲ್ಲಿ ಕಳವಳ ಮೂಡಿಸಿದ ರೈತರಿಗೆ ಬರೋ ನಿಗೂಢ ಕಿಡ್ನಿ ಕಾಯಿಲೆ, ಸೂಕ್ತ ತನಿಖೆಗೆ ಸರ್ಕಾರ ನಿರ್ದೇಶನ]]></title>
            <link>https://kannada.asianetnews.com/karnataka-districts/karnataka-ckdu-kidney-disease-farmers-investigation-parliamentary-panel-san/articleshow-5ededr2</link>
            <guid isPermaLink="true">https://kannada.asianetnews.com/karnataka-districts/karnataka-ckdu-kidney-disease-farmers-investigation-parliamentary-panel-san/articleshow-5ededr2</guid>
            <pubDate>Mon, 10 Aug 2026 16:15:01 +0530</pubDate>
            <description><![CDATA[&lt;p&gt;ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರೈತರು ಮತ್ತು ಕಾರ್ಮಿಕರಲ್ಲಿ 'ಅಜ್ಞಾತ ಮೂಲದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ' (CKDu) ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kznm8k185q4j3p0h6entqmyr,imgname-rising-ckdu-cases-in-karnataka-farmers-1786358549544.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.10): &lt;/strong&gt;ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ 'ಅಜ್ಞಾತ ಮೂಲದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ' (CKDu - Chronic Kidney Disease of Unknown Aetiology) ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರು, ರೈತರು ಮತ್ತು ದೈಹಿಕ ಶ್ರಮ ವಹಿಸುವ ಕಾರ್ಮಿಕರಲ್ಲಿ ಈ ನಿಗೂಢ ಕಿಡ್ನಿ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಮತ್ತು ಕಟ್ಟುನಿಟ್ಟಿನ ಜಾಗೃತ ಜಾಲವನ್ನು ರೂಪಿಸುವಂತೆ ಸಂಸದೀಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.&lt;/p&gt;&lt;p&gt;ಹೆಸರೇ ಸೂಚಿಸುವಂತೆ ಈ ರೋಗಕ್ಕೆ ನಿಖರವಾದ ಕಾರಣಗಳು ಏನೆಂಬುದು ಇನ್ನೂ ತಿಳಿದುಬಂದಿಲ್ಲ. ತೀವ್ರತರವಾದ ಶಾಖದ ವಾತಾವರಣ, ಬಿಸಿಲಿಗೆ ಮೈಯೊಡ್ಡುವುದು ಹಾಗೂ ಕೀಟನಾಶಕಗಳ ಬಳಕೆ ಸೇರಿದಂತೆ ಹಲವು ಸಾಧ್ಯತೆಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಭಾರತದ ಸುಮಾರು 15 ರಾಜ್ಯಗಳಲ್ಲಿ ಈ &lsquo;ಸಿಕೆಡಿಯು&rsquo; (CKDu) ಇರುವುದು ಸಂಶೋಧನೆಯಿಂದ ತಿಳಿದುಬಂದಿದೆ.&lt;/p&gt;&lt;p&gt;&quot;ಅಜ್ಞಾತ ಕಾರಣಗಳ ಮೂತ್ರಪಿಂಡ ಕಾಯಿಲೆಯಿಂದ (CKDu) ಬಾಧಿತವಾಗಿರುವ ಆಂಧ್ರಪ್ರದೇಶ, ಒಡಿಶಾ ಮತ್ತು ಕರ್ನಾಟಕದ ನಿರ್ದಿಷ್ಟ ಪ್ರದೇಶಗಳಲ್ಲಿ ವಾಸಿಸುವ ಕೃಷಿಕರು ಹಾಗೂ ಕಾರ್ಮಿಕ ವರ್ಗದವರ ಆರೋಗ್ಯ ತಪಾಸಣೆಗೆ ತಕ್ಷಣವೇ ಹೆಚ್ಚಿನ ಆದ್ಯತೆ ನೀಡಬೇಕಿದೆ,&quot; ಎಂದು ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ಸಂಸದೀಯ ಸಚಿವಾಲಯದ ಸ್ಥಾಯಿ ಸಮಿತಿಯು ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.&lt;/p&gt;&lt;h2&gt;&lt;strong&gt;ಕರ್ನಾಟಕದಲ್ಲೂ ಸಿಕೆಡಿಯು ರೋಗದ ಕ್ಲಸ್ಟರ್&zwnj;ಗಳು&lt;/strong&gt;&lt;/h2&gt;&lt;p&gt;ಭಾರತದಲ್ಲಿ ಈ ರೋಗದ ಪ್ರಮಾಣದ ಕುರಿತು 2021 ರಲ್ಲಿ ನಡೆದ ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯು ಸಿಕೆಡಿಯು ರೋಗದ ಪ್ರಮುಖ &lsquo;ಕ್ಲಸ್ಟರ್&rsquo; (ಹೆಚ್ಚು ಪ್ರಕರಣಗಳಿರುವ ಪ್ರದೇಶ) ಆಗಿ ಹೊರಹೊಮ್ಮಿದೆ. ಅದೇ ರೀತಿ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಛತ್ತೀಸ್&zwnj;ಗಢ, ಒಡಿಶಾ, ಮಹಾರಾಷ್ಟ್ರ ಮತ್ತು ತೆಲಂಗಾಣದ ಹಲವು ಜಿಲ್ಲೆಗಳಿಂದಲೂ ಇಂತಹ ಪ್ರಕರಣಗಳು ವರದಿಯಾಗಿವೆ. ಸುಮಾರು 30 ವರ್ಷಗಳ ಹಿಂದೆ ಮಧ್ಯ ಅಮೆರಿಕದ ದೇಶಗಳಲ್ಲಿ ಕಬ್ಬು ಕತ್ತರಿಸುವ ಕಾರ್ಮಿಕರಲ್ಲಿ ಈ ರೋಗವು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ತದನಂತರ ಉತ್ತರ ಶ್ರೀಲಂಕಾದಲ್ಲೂ ಇದು ಬೆಳಕಿಗೆ ಬಂದಿತ್ತು ಎಂದು ಆರೋಗ್ಯ ತಜ್ಞರು ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಭಾರತದಲ್ಲಿ ದಶಕದ ಹಿಂದೆ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಯಾದ ಶ್ರೀಕಾಕುಲಂನ 'ಉದ್ದಾನಂ' ಎಂಬ ಪ್ರದೇಶದಲ್ಲಿ ಯಾವುದೇ ನಿಖರ ಕಾರಣವಿಲ್ಲದೆ ಸಾಲು ಸಾಲು ಕಿಡ್ನಿ ವೈಫಲ್ಯ ಪ್ರಕರಣಗಳು ವರದಿಯಾದಾಗ ಈ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 2015 ರ ವೇಳೆಗೆ ಈ ಪ್ರದೇಶದಲ್ಲಿ ಅಂದಾಜು 34,000 ಜನರು ಸಿಕೆಡಿಯುಗೆ ತುತ್ತಾಗಿದ್ದರು ಮತ್ತು ಸುಮಾರು 4,500 ಜನರು ಸಾವನ್ನಪ್ಪಿದ್ದರು.&lt;/p&gt;&lt;h2&gt;&lt;strong&gt;ಗ್ರಾಮೀಣ ಜನಸಂಖ್ಯೆಯ ಶೇ. 18-20 ರಷ್ಟು ಜನರಿಗೆ ಬಾಧೆ&lt;/strong&gt;&lt;/h2&gt;&lt;p&gt;ಶ್ರೀಕಾಕುಲಂ ಘಟನೆಯ ನಂತರ ಸಿಕೆಡಿಯು ರೋಗವು ದೇಶದ ಹಲವು ರಾಜ್ಯಗಳಿಗೆ ಹರಡಿದೆ. ನಮ್ಮ ಅಧ್ಯಯನಗಳ ಪ್ರಕಾರ, ಈ ರೋಗಪೀಡಿತ ನಿರ್ದಿಷ್ಟ ಪ್ರದೇಶಗಳ ಶೇಕಡಾ 18 ರಿಂದ 20 ರಷ್ಟು ಗ್ರಾಮೀಣ ಜನಸಂಖ್ಯೆಯು ಈ ನಿಗೂಢ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದೆ ಎಂದು &lsquo;ದಿ ಜಾರ್ಜ್ ಇನ್&zwnj;ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಇಂಡಿಯಾ&rsquo; ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕಿಡ್ನಿ ತಜ್ಞ ಡಾ. ವಿವೇಕಾನಂದ ಝಾ ಅವರು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಸಾಮಾನ್ಯವಾಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ (CKD) ಮಧುಮೇಹ (Diabetes) ಮತ್ತು ಅಧಿಕ ರಕ್ತದೊತ್ತಡ (Hypertension) ಪ್ರಮುಖ ಕಾರಣಗಳಾಗಿರುತ್ತವೆ. ಒಟ್ಟು ಕಿಡ್ನಿ ವೈಫಲ್ಯ ಪ್ರಕರಣಗಳಲ್ಲಿ ಶೇ. 31 ರಷ್ಟು ಮಧುಮೇಹದಿಂದ ಹಾಗೂ ಶೇ. 13 ರಷ್ಟು ರಕ್ತದೊತ್ತಡದಿಂದ ಸಂಭವಿಸುತ್ತವೆ. ಆದರೆ, ಯಾವುದೇ ಸ್ಪಷ್ಟ ಕಾರಣವಿಲ್ಲದ ಈ ಸಿಕೆಡಿಯು (CKDu) ಶೇ. 16 ರಷ್ಟು ಪ್ರಕರಣಗಳಿಗೆ ಕಾರಣವಾಗಿದ್ದು, ಇದು ಹೆಚ್ಚಾಗಿ ಕಡಿಮೆ ಆದಾಯ ಹೊಂದಿರುವ ಕಿರಿಯ ವಯಸ್ಸಿನ ಕೃಷಿ ಕಾರ್ಮಿಕರನ್ನೇ ಬಲಿಪಡೆಯುತ್ತಿದೆ.&lt;/p&gt;&lt;h2&gt;&lt;strong&gt;ಸಾಧ್ಯವಿರುವ ಕಾರಣಗಳೇನು?&lt;/strong&gt;&lt;/h2&gt;&lt;p&gt;ನಿರಂತರ ಬಿಸಿಲಿನ ತಾಪಮಾನಕ್ಕೆ ಒಳಗಾಗುವುದು, ದೇಹದಲ್ಲಿ ಪದೇ ಪದೇ ನೀರಿನಂಶ ಕಡಿಮೆಯಾಗುವುದು (Recurrent Dehydration), ಕೀಟನಾಶಕಗಳ ಬಳಕೆ, ಕಲುಷಿತ ಕುಡಿಯುವ ನೀರು ಹಾಗೂ ಭಾರ ಲೋಹಗಳ (Heavy Metals) ಮಾಲಿನ್ಯದ ಕುರಿತು ವೈಜ್ಞಾನಿಕ ತನಿಖೆ ನಡೆಸಬೇಕಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ವಾಯುಗುಣ ವೈಪರೀತ್ಯಕ್ಕೂ (Climate Change) ಮತ್ತು ಸಿಕೆಡಿಯು ರೋಗಕ್ಕೂ ಇರುವ ಸಂಬಂಧವನ್ನು ಪರಿಶೀಲಿಸಬೇಕಿದೆ.&lt;/p&gt;&lt;p&gt;ಡಾ. ಝಾ ಅವರು ವಿವರಿಸುವಂತೆ, ಆರಂಭದಲ್ಲಿ ಕಬ್ಬು ಕೊಯ್ಲಿನ ನಂತರ ಉಳಿಯುವ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದಾಗ ಉಂಟಾಗುವ ತೀವ್ರ ಶಾಖವೇ ಇದಕ್ಕೆ ಮೂಲ ಕಾರಣ ಎಂದು ಭಾವಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ. ಆಂಧ್ರಪ್ರದೇಶದಲ್ಲಿ ಕಲುಷಿತ ಕುಡಿಯುವ ನೀರೇ ಕಾರಣವಿರಬಹುದು ಎಂದು ಶಂಕಿಸಿ, ಸರ್ಕಾರವು ಗ್ರಾಮಗಳಿಗೆ ಆರ್&zwnj;ಒ (RO) ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಮೇಲೆಯೂ ಪ್ರಕರಣಗಳು ಕಡಿಮೆಯಾಗಲಿಲ್ಲ ಎಂದಿದೆ.&lt;/p&gt;&lt;p&gt;&quot;ಶ್ರೀಲಂಕಾದಲ್ಲಿ ಕೀಟನಾಶಕಗಳೇ ಕಾರಣವೆಂಬ ಸಿದ್ಧಾಂತ ಮುನ್ನೆಲೆಗೆ ಬಂದು, ಅಲ್ಲಿನ ಸರ್ಕಾರ ನಿರ್ದಿಷ್ಟ ಕೀಟನಾಶಕವನ್ನು ನಿಷೇಧಿಸಿತು. ಆದರೂ ರೋಗದ ಉಲ್ಬಣ ನಿಲ್ಲದಿದ್ದಾಗ ಸರ್ಕಾರ ನಿಷೇಧವನ್ನು ಹಿಂಪಡೆಯಿತು. ಒಟ್ಟಾರೆಯಾಗಿ ಹೇಳುವುದಾದರೆ, ಈ ರೋಗದ ಹುಟ್ಟಿನ ಕುರಿತು ಯಾವುದೇ ನಿರ್ದಿಷ್ಟ ವೈಜ್ಞಾನಿಕ ಆಧಾರಗಳು ಇದುವರೆಗೆ ಸಿಕ್ಕಿಲ್ಲ,&quot; ಎಂದು ಡಾ. ಝಾ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಸದೀಯ ಸಮಿತಿಯ ಪ್ರಮುಖ ಶಿಫಾರಸುಗಳು&lt;/strong&gt;&lt;/h2&gt;&lt;p&gt;ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದ ರಾಮ್ ಗೋಪಾಲ್ ಯಾದವ್ ನೇತೃತ್ವದ ಸಂಸದೀಯ ಸಮಿತಿಯು, ಸಿಕೆಡಿಯು ತಡೆಗಟ್ಟುವಿಕೆ ಮತ್ತು ಕಣ್ಗಾವಲಿಗಾಗಿ 'ರಾಷ್ಟ್ರೀಯ ಚೌಕಟ್ಟು' (National Framework) ರಚಿಸಲು ಶಿಫಾರಸು ಮಾಡಿದೆ. ಸಿಕೆಡಿಯು ಹೆಚ್ಚಾಗಿ ಕಂಡುಬರುವ 'ಹಾಟ್&zwnj;ಸ್ಪಾಟ್&zwnj;' ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ವ್ಯವಸ್ಥೆ ಮಾಡುವುದು. ತೊಂದರೆಗೊಳಗಾಗುವ ಸಾಧ್ಯತೆ ಇರುವ ಕಾರ್ಮಿಕರಿಗೆ ನಿಯಮಿತವಾಗಿ ಉದ್ಯೋಗಸಂಬಂಧಿತ ಆರೋಗ್ಯ ತಪಾಸಣೆ (Occupational Health Screening) ನಡೆಸುವುದು. ಕೆಲಸದ ಸ್ಥಳಗಳಲ್ಲಿ ಸುರಕ್ಷಿತ ಕುಡಿಯುವ ನೀರು ಮತ್ತು ಸಾಕಷ್ಟು ನಿರ್ಜಲೀಕರಣ ತಡೆ ವ್ಯವಸ್ಥೆಗಳನ್ನು ಒದಗಿಸುವುದು ಹಾಗೂ ಹೊರಾಂಗಣದಲ್ಲಿ ದೀರ್ಘಕಾಲ ಕೆಲಸ ಮಾಡುವ ಕಾರ್ಮಿಕರಿಗೆ ನಿಯಮಿತವಾಗಿ ಕುಡಿಯುವ ನೀರಿನ ವಿರಾಮಗಳು (Hydration Breaks) ಸೇರಿದಂತೆ ಶಾಖ ತಗ್ಗಿಸುವ ಕ್ರಮಗಳನ್ನು ಜಾರಿಗೆ ತರುವುದು.&lt;/p&gt;]]></content:encoded>
            <category>raichur</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-ckdu-kidney-disease-farmers-investigation-parliamentary-panel-san/articleshow-5ededr2"/>
        </item>
        <item>
            <title><![CDATA[ಯಾದಗಿರಿ ವಿಷಾನಿಲ ದುರಂತ: ಮೂವರು ಕಾರ್ಮಿಕರು ದುರ್ಮರಣ, ಇಬ್ಬರು ಸಾವು ಬದುಕಿನ ಹೋರಾಟ!]]></title>
            <link>https://kannada.asianetnews.com/gallery/karnataka-districts/three-workers-dead-after-gas-leakage-in-chemical-factory-at-kadechur-industrial-yadgir-rav-8pm3133</link>
            <guid isPermaLink="true">https://kannada.asianetnews.com/gallery/karnataka-districts/three-workers-dead-after-gas-leakage-in-chemical-factory-at-kadechur-industrial-yadgir-rav-8pm3133</guid>
            <pubDate>Wed, 05 Aug 2026 11:27:22 +0530</pubDate>
            <description><![CDATA[&lt;p&gt;ಯಾದಗಿರಿ ಕಡೇಚೂರು ಇಂಡಸ್ಟ್ರಿಯಲ್ ಫ್ಯಾಕ್ಟರಿಯೊಂದರಲ್ಲಿ ಗ್ಯಾಸ್ ವಿಷಾನಿಲ ಸೋರಿಕೆಯಿಂದಾಗಿ ಮಧ್ಯಪ್ರದೇಶ, ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಇನ್ನಿಬ್ಬರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್&zwnj;ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz87dnsdns08zvh9rbyvwv57,imgname-----------------------2026-08-05t111345.600-1785908877101.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾದಗಿರಿ ಕಡೇಚೂರು ಇಂಡಸ್ಟ್ರಿಯಲ್ ಫ್ಯಾಕ್ಟರಿಯೊಂದರಲ್ಲಿ ಗ್ಯಾಸ್ ವಿಷಾನಿಲ ಸೋರಿಕೆಯಿಂದಾಗಿ ಮಧ್ಯಪ್ರದೇಶ, ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಇನ್ನಿಬ್ಬರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್&zwnj;ತಿದ್ದಾರೆ.&lt;/p&gt;&lt;img&gt;&lt;p&gt;ಯಾದಗಿರಿೆಯ ಕಡೇಚೂರು ಇಂಡಸ್ಟ್ರಿಯಲ್ ಏರಿಯಾದ ಮಿಕಲ್ ಫ್ಯಾಕ್ಟರಿ ಒಂದರಲ್ಲಿ ಅವಘಡ ಸಂಭವಿಸಿ ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ ನಡೆದಿದ್ದು, ಇನ್ನಿಬ್ಬರು ಗಾಯಾಳುಗಳನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.&lt;/p&gt;&lt;p&gt;ಮೃತ ಕಾರ್ಮಿಕರು:&amp;nbsp;&lt;/p&gt;&lt;ul&gt; &lt;li&gt;ಸಂಜಯ್ ( 25)&lt;/li&gt; &lt;li&gt;ವಿಕ್ರಮ್ (25)&lt;/li&gt; &lt;li&gt;ಗಣೇಶ ( 23)(ರಿಮ್ಸ್ ಆಸ್ಪತ್ರೆಯಲ್ಲಿ ಸಾವು)&amp;nbsp;&lt;/li&gt;&lt;/ul&gt;&lt;p&gt;&lt;strong&gt;ಗಾಯಾಳುಗಳು&amp;nbsp;&lt;/strong&gt;&lt;/p&gt;&lt;ul&gt; &lt;li&gt;ಹೇಮಂತ್ (23)&lt;/li&gt; &lt;li&gt;ಶಿವಕುಮಾರ್( 25&lt;/li&gt;&lt;/ul&gt;&lt;img&gt;&lt;p&gt;ಮೃತ ಕಾರ್ಮಿಕರು ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಆಲಂಪಲ್ಲಿ ಗ್ರಾಮದವರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಸ್ವಸ್ಥಗೊಂಡಿರುವ ಹೇಮಂತ್ ಹಾಗೂ ಶಿವಕುಮಾರ್ ಎಂಬುವವರನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆ ಶಿಫ್ಟ್ ಮಾಡಲಾಗಿದ್ದು ತುರ್ತು ನಿಗಾದಲ್ಲಿ ಚಿಕಿತ್ಸೆ ಮುಂದುವರಿದೆ.&lt;/p&gt;&lt;img&gt;&lt;p&gt;ದುರಂತದಲ್ಲಿ ತೀವ್ರ ಅಸ್ವಸ್ಥಗೊಂಡಿರುವ ಗಾಯಾಳು ಹೇಮಂತ್ ಶಿವಕುಮಾರ್ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಇಂಥ ಪರಿಸ್ಥಿತಿಯಲ್ಲೂ ಕುಟುಂಬದ ಜವಾಬ್ದಾರಿ ನೆನೆದು' ನಮ್ಮನ್ನು ಬದುಕಿಸಿ' ಎಂದು ವೈದ್ಯರಿಗೆ ಕೈಮುಗಿಯುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇಬ್ಬರ ನರಳಾಟ ನೋಡಿ ವೈದ್ಯ, ಸಿಬ್ಬಂದಿಯೂ ಪ್ರತಿಕ್ರಿಯೆ ನೀಡದಂತಾಗಿದೆ.&lt;/p&gt;&lt;img&gt;&lt;p&gt;ಒಂದು ಕಡೆ ಗಾಯಾಳುಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದರೆ, ರಿಮ್ಸ್ ಆಸ್ಪತ್ರೆಯ ಹೊರಗಡೆ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಮೃತ ಗಣೇಶನ ತಾಯಿ ತೀವ್ರ ಆಘಾತಕ್ಕೊಳಾಗಿದ್ದಾರೆ.&lt;/p&gt;&lt;p&gt;&lt;strong&gt;ಶಿಫ್ಟ್ ಮುಗಿಸಿ ಮನೆಗೆ ಬಂದಿದ್ರೆ ಉಳಿತಿದ್ದ ಮಗ..&lt;/strong&gt;&lt;/p&gt;&lt;p&gt;ನನ್ನ ಮಗ ನಿನ್ನೆ ಸಂಜೆ 6 ಗಂಟೆಗೇ ಶಿಫ್ಟ್ ಮುಗಿಸಿ ಬರಬೇಕಿತ್ತು. ತನ್ನ ಕೆಲಸ ಮುಗಿಸಿ ಬಂದಿದ್ರೆ ಮಗ ಬದುಕುಳಿತಿದ್ದ ಅಂತಾ ಮೃತ ಗಣೇಶನ ತಾಯಿ ಪದ್ಮ ಕಣ್ಣೀರು. ಸಹೋದ್ಯೋಗಿ ರಜೆ ಹಾಕಿದ್ದನೋ ಏನೋ ಅವನ ಶಿಫ್ಟ್ ಮಾಡಲು ನೈಟ್ ಶಿಫ್ಟ್ ಮಾಡಲು ಫ್ಯಾಕ್ಟರಿಯಲ್ಲೇ ಉಳಿದುಬಿಟ್ಟ. ನಿನ್ನೆ ಫೋನ್ ಮಾಡಿ, ಬೇರೊಬ್ಬನ ಶಿಫ್ಟ್ ಇದೆ ಅಮ್ಮಾ ಕಂಟಿನ್ಯೂ ಮಾಡಿ ಬರ್ತಿನಿ ಅಂತಾ ಹೇಳಿದ್ದ ಮಗ ಬಾರದ ಲೋಕಕ್ಕೆ ಹೋಗಿಬಿಟ್ಟ ಎಂದು ಕಣ್ಣೀರು ಹಾಕುತ್ತಿರುವ ತಾಯಿ. ತಂದೆ ಇಲ್ಲದ ಕುಟುಂಬಕ್ಕೆ ತಾನೇ ಹೆಗಲಾಗಿ ನಿಂತಿದ್ದ ಮಗ ಗಣೇಶ ಈಗ ದುರಂತದಲ್ಲಿ ಮೃತನಾಗಿರುವುದು ತಾಯಿಯನ್ನ ಒಂಟಿಯಾಗಿಸಿದ್ದಾನೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/three-workers-dead-after-gas-leakage-in-chemical-factory-at-kadechur-industrial-yadgir-rav-8pm3133"/>
        </item>
        <item>
            <title><![CDATA[ರಾಯಚೂರಲ್ಲಿ ದಾರುಣ ಘಟನೆ.. ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಕಂದಮ್ಮ ಬಲಿ]]></title>
            <link>https://kannada.asianetnews.com/raichur/raichuru-incident-one-and-half-year-old-baby-died-due-to-street-dogs-attack-gkn/articleshow-f7dh7mn</link>
            <guid isPermaLink="true">https://kannada.asianetnews.com/raichur/raichuru-incident-one-and-half-year-old-baby-died-due-to-street-dogs-attack-gkn/articleshow-f7dh7mn</guid>
            <pubDate>Thu, 16 Jul 2026 09:25:41 +0530</pubDate>
            <description><![CDATA[ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 18 ತಿಂಗಳ ಮಗು ಸಾವನ್ನಪ್ಪಿದೆ. ಮನೆಯಿಂದ ಹೊರಬಂದ ಮಗುವಿನ ಮೇಲೆ ಚಿಕನ್ ಅಂಗಡಿ ಬಳಿ ಜಮಾಯಿಸಿದ್ದ ನಾಯಿಗಳು ದಾಳಿ ಮಾಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxmgzh147tzd3a313ymk7bc8,imgname-raichuru-street-dog-attack-on-baby-1784174068772.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಇಂದು ಅತ್ಯಂತ ದಾರುಣ ಘಟನೆಯೊಂದು ಸಂಭವಿಸಿದೆ. ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 18 ತಿಂಗಳ ಮಗು ಪ್ರಾಣ ಕಳೆದುಕೊಂಡಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹಂಚಿನಾಳ ಕ್ಯಾಂಪ್&zwnj;ನಲ್ಲಿ ಈ ಘಟನೆ ನಡೆದಿದೆ. ಅಬ್ದುಲ್ ರಜಾಕ್ ಮತ್ತು ನದಾಫ್ ದಂಪತಿಯ ಪುತ್ರಿ ಅನಂ (18 ತಿಂಗಳು) ಮೃತಪಟ್ಟ ದುರ್ದೈವಿ. ಮಗು ಮನೆಯಲ್ಲಿ ಮಲಗಿದ್ದಾಗ ಎಚ್ಚರಗೊಂಡು ಪೋಷಕರಿಗೆ ತಿಳಿಯದಂತೆ ರಸ್ತೆಗೆ ಬಂದಿದೆ. ಈ ವೇಳೆ ಹತ್ತಿರದಲ್ಲಿದ್ದ ಚಿಕನ್ ಅಂಗಡಿಯ ಬಳಿ ಜಮಾಯಿಸಿದ್ದ ಬೀದಿ ನಾಯಿಗಳ ಹಿಂಡು ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿವೆ. ನಾಯಿಗಳು ಮಗುವನ್ನು ಮನಬಂದಂತೆ ಕಚ್ಚಿ ಎಳೆದಾಡಿವೆ. ಮಗುವಿನ ಚೀರಾಟ ಕೇಳಿ ಪೋಷಕರು ತಕ್ಷಣ ಸ್ಥಳಕ್ಕೆ ಓಡಿ ಬಂದಿದ್ದಾರೆ.&lt;/p&gt;&lt;h2&gt;&lt;strong&gt;ದಾರಿ ಮಧ್ಯೆಯೇ ಕೊನೆಯುಸಿರೆಳೆದ ಮಗು&lt;/strong&gt;&lt;/h2&gt;&lt;p&gt;ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ಸಿಂಧನೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು. ದುರಾದೃಷ್ಟವಶಾತ್, ರಿಮ್ಸ್ ಆಸ್ಪತ್ರೆಗೆ ತಲುಪುವ ಮುನ್ನವೇ ಮಗು ದಾರಿ ಮಧ್ಯೆ ಕೊನೆಯುಸಿರೆಳೆದಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಭೇಟಿ&lt;/strong&gt;&lt;/h2&gt;&lt;p&gt;ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಿಂಧನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕನ್ ಅಂಗಡಿಗಳ ಬಳಿ ಎಸೆಯಲಾಗುವ ಮಾಂಸದ ತ್ಯಾಜ್ಯದಿಂದಾಗಿ ಬೀದಿ ನಾಯಿಗಳು ಗುಂಪುಗೂಡುತ್ತಿದ್ದು, ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಸುಗೂಸಿನ ಸಾವು ಹಂಚಿನಾಳ ಕ್ಯಾಂಪ್&zwnj;ನಲ್ಲಿ ಶೋಕ ಸಾಗರ ಮುಳುಗಿಸಿದೆ.&lt;/p&gt;]]></content:encoded>
            <category>raichur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/raichur/raichuru-incident-one-and-half-year-old-baby-died-due-to-street-dogs-attack-gkn/articleshow-f7dh7mn"/>
        </item>
        <item>
            <title><![CDATA[ರಾಯಚೂರು ಜೈಲಿನಲ್ಲಿ ಖೈದಿ ಹಠಾತ್ ಸಾವು.. ಪೊಲೀಸರ ವಿರುದ್ಧ ಭುಗಿಲೆದ್ದ ಕುಟುಂಬಸ್ಥರ ಆರೋಪ]]></title>
            <link>https://kannada.asianetnews.com/raichur/undertrial-prisoner-bheemaray-dies-in-raichur-district-jail-family-alleges-police-involvement-gkn/articleshow-fclbc3o</link>
            <guid isPermaLink="true">https://kannada.asianetnews.com/raichur/undertrial-prisoner-bheemaray-dies-in-raichur-district-jail-family-alleges-police-involvement-gkn/articleshow-fclbc3o</guid>
            <pubDate>Thu, 06 Aug 2026 09:31:44 +0530</pubDate>
            <description><![CDATA[&lt;p&gt;ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೆದರಗೋಳ ಗ್ರಾಮದ ನಿವಾಸಿ ಭೀಮರಾಯ (42) ಮೃತಪಟ್ಟ ದುರ್ದೈವಿ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzakqbr2asvnqt5d5098z5sw,imgname-raichuru-ndertrial-prisoner-death-1785988886274.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು: &lt;/strong&gt;ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೆದರಗೋಳ ಗ್ರಾಮದ ನಿವಾಸಿ ಭೀಮರಾಯ (42) ಮೃತಪಟ್ಟ ದುರ್ದೈವಿ.&lt;/p&gt;&lt;h2&gt;&lt;strong&gt;ಹೃದಯಾಘಾತದಿಂದ ಸಾವು ಎಂದ ಪೊಲೀಸರು&lt;/strong&gt;&lt;/h2&gt;&lt;p&gt;ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೀಮರಾಯ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಜೈಲು ಸೇರಿದ್ದರು. ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು. ತೀವ್ರ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿ ಮತ್ತು ಪೊಲೀಸರು ಅವರನ್ನು ತಕ್ಷಣವೇ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭೀಮರಾಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ಕುಟುಂಬಸ್ಥರ ಗಂಭೀರ ಆರೋಪ&lt;/strong&gt;&lt;/h2&gt;&lt;p&gt;ಜೈಲಿನಲ್ಲಿ ಭೀಮರಾಯ ಅವರ ಸಾವು ಸಂಭವಿಸಿರುವುದು ಈಗ ಕುಟುಂಬಸ್ಥರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ನಮ್ಮ ಮಗನ ಸಾವಿನಲ್ಲಿ ಅನುಮಾನವಿದೆ, ಇದು ಕೇವಲ ಹೃದಯಾಘಾತವಲ್ಲ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಜೈಲು ಅಧಿಕಾರಿಗಳ ಮಾಹಿತಿ ಮತ್ತು ಸಾವಿನ ಕಾರಣದ ಬಗ್ಗೆ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರವಾದ ಕಾರಣ ತಿಳಿಯಬೇಕಿದೆ. ಜೈಲಿನಲ್ಲಿ ಖೈದಿಯ ಸಾವಾಗಿರುವುದರಿಂದ ನಿಯಮದಂತೆ ನ್ಯಾಯಾಂಗ ತನಿಖೆ ನಡೆಯುವ ಸಾಧ್ಯತೆಯೂ ಇದೆ.&lt;/p&gt;]]></content:encoded>
            <category>raichur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/raichur/undertrial-prisoner-bheemaray-dies-in-raichur-district-jail-family-alleges-police-involvement-gkn/articleshow-fclbc3o"/>
        </item>
        <item>
            <title><![CDATA[ದೇಶದಲ್ಲಿ ಗಲಭೆಗೆ ಸಂಚು: ರಾಯಚೂರು ಯುವಕ ಸೆರೆ, ಕೊಲ್ಲಿ ವ್ಯಕ್ತಿ ಜೊತೆ ಇನ್‌ಸ್ಟಾಗ್ರಾಂನಲ್ಲಿ ಶಾಕಿಂಗ್ ಚರ್ಚೆ!]]></title>
            <link>https://kannada.asianetnews.com/karnataka-districts/raichur-youth-arrested-for-involving-in-anti-national-activities-and-planning-to-create-riots-rav/articleshow-goxgpex</link>
            <guid isPermaLink="true">https://kannada.asianetnews.com/karnataka-districts/raichur-youth-arrested-for-involving-in-anti-national-activities-and-planning-to-create-riots-rav/articleshow-goxgpex</guid>
            <pubDate>Mon, 10 Aug 2026 07:45:29 +0530</pubDate>
            <description><![CDATA[ರಾಯಚೂರಿನಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಮೊಹಮ್ಮದ್&zwnj; ಶಾಹಿಲ್&zwnj; ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಅರಬ್ ಮೂಲದ ವ್ಯಕ್ತಿಯೊಂದಿಗೆ ಇನ್&zwnj;ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿದ್ದು, ದೇಶದಲ್ಲಿ ಗಲಭೆ ಸೃಷ್ಟಿಸಲು ಯೋಜನೆ ರೂಪಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzmpmnvhpcgbpz2sa1paj7yc,imgname-----------------------2026-08-10t073357.332-1786327488369.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಕೊಲ್ಲಿ ದೇಶದ ವ್ಯಕ್ತಿಯ ಜತೆ ಇನ್&zwnj;ಸ್ಟಾದಲ್ಲಿ ಸಂಪರ್ಕದಲ್ಲಿದ್ದ ರಾಯಚೂರಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಶಾಹಿಲ್&zwnj;&lt;/li&gt; &lt;li&gt;ಕಳೆದ ದಿನಗಳಿಂದ ನಿಗೂಢ ವ್ಯಕ್ತಿಯ ಜತೆ ಸೇರಿಕೊಂಡು ಭಾರತದಲ್ಲಿ ಆಶಾಂತಿ ಸೃಷ್ಟಿ ಬಗ್ಗೆ ಸಮಾಲೋಚನೆ&lt;/li&gt; &lt;li&gt;ಭಾರತದಲ್ಲಿ ದುಷ್ಕೃತ್ಯ ಎಸಗಲು ಎಷ್ಟು ಬೇಕಾದರೂ ಹಣ ನೀಡುವುದಾಗಿ ಶಾಹಿಲ್&zwnj;ಗೆ ಭರವಸೆ ನೀಡಿದ್ದ ಅರಬ್ ವ್ಯಕ್ತಿ&lt;/li&gt;&lt;/ul&gt;&lt;p&gt;&lt;strong&gt;ರಾಯಚೂರು (ಆ.10): &lt;/strong&gt;ದೇಶದಲ್ಲಿ ಗಲಭೆ ಎಬ್ಬಿಸಲು ಯೋಜನೆ ರೂಪಿಸಿ, ಅರಬ್&zwnj; ಮೂಲದ ವ್ಯಕ್ತಿಯೊಂದಿಗೆ ಇನ್&zwnj;ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಂಡು ಚರ್ಚೆ ನಡೆಸಿದ ಆರೋಪದಡಿ ರಾಯಚೂರಿನ ಮೊಹಮ್ಮದ್&zwnj; ಶಾಹಿಲ್&zwnj; (24) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಶಾಹಿಲ್&zwnj;, ಅರಬ್&zwnj; ಮೂಲದ ಅಪರಿಚಿತ ವ್ಯಕ್ತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಬೆಳೆಸಿಕೊಂಡಿದ್ದ. ಅರಬ್&zwnj; ಮೂಲದ ವ್ಯಕ್ತಿಯ ಜೊತೆ &lsquo;ರಾಣಾ ಭಾಯ್&zwnj;&rsquo; ಎಂಬ ಇನ್&zwnj;ಸ್ಟಾಗ್ರಾಂ ಅಕೌಂಟ್&zwnj; ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಂಡಿದ್ದ. ಜುಲೈ 14 ರಿಂದ ಆತನ ಜೊತೆ ಇನ್&zwnj;ಸ್ಟಾಗ್ರಾಂನಲ್ಲಿ ನಿರಂತರ ಚಾಟಿಂಗ್&zwnj; ನಡೆಸಿದ್ದ.&lt;/p&gt;&lt;p&gt;ಆತನ ಅಕೌಂಟ್&zwnj;ಗೆ ಲೈಕ್&zwnj;, ಕಮೆಂಟ್&zwnj;, ಶೇರ್&zwnj; ಮಾಡುತ್ತ ಆತನ ಅಕೌಂಟ್&zwnj;ನ ಲಿಂಕ್&zwnj; ಪಡೆದುಕೊಂಡಿದ್ದ ಶಾಹುಲ್&zwnj;, ಆತನ ಪೋಸ್ಟ್&zwnj;ಗಳಿಂದ ಪ್ರಭಾವಿತನಾಗಿ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕುರಿತು ಸಲಹೆಗಳನ್ನು ಪಡೆದಿದ್ದ. ಈ ಬಗ್ಗೆ ಅರಬ್&zwnj; ವ್ಯಕ್ತಿಯೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದ.&lt;/p&gt;&lt;p&gt;ಚಾಟಿಂಗ್&zwnj; ವೇಳೆ, ದೇಶದಲ್ಲಿ ಗಲಭೆ ಎಬ್ಬಿಸಲು ಎಷ್ಟು ಬೇಕಾದರೂ ಹಣ ಕೊಡುವುದಾಗಿ ಅರಬ್&zwnj; ವ್ಯಕ್ತಿ ಈತನಿಗೆ ಭರವಸೆ ನೀಡಿದ್ದ. ಅಲ್ಲದೆ, ಶಾಹಿಲ್&zwnj; ಗಾಗಿ ಪಿಸ್ತೂಲ್&zwnj; ವೊಂದನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಶಾಹಿಲ್&zwnj; ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/raichur-youth-arrested-for-involving-in-anti-national-activities-and-planning-to-create-riots-rav/articleshow-goxgpex"/>
        </item>
        <item>
            <title><![CDATA[Cabinet Expansion: ರಾಯಚೂರು ಸಚಿವ ಸ್ಥಾನಕ್ಕಾಗಿ ಬೋಸರಾಜು-ಹಂಪನಗೌಡ ಬಾದರ್ಲಿ ನಡುವೆ ತೀವ್ರ ಪೈಪೋಟಿ]]></title>
            <link>https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm</link>
            <guid isPermaLink="true">https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm</guid>
            <pubDate>Thu, 30 Jul 2026 08:37:12 +0530</pubDate>
            <description><![CDATA[ಹೊಸ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆದಿದೆ. ಮಾಜಿ ಸಚಿವ ಎನ್&zwnj;.ಎಸ್&zwnj;.ಭೋಸರಾಜು ಮತ್ತು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನಡುವೆ ಸಚಿವ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿದ್ದು, ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrfn460qm689x8n7s9v488b,imgname-chatgpt-image-jul-30--2026--08-33-32-am-1785380638912.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮಕೃಷ್ಣ ದಾಸರಿ&lt;/strong&gt;&lt;/p&gt;&lt;p&gt;&lt;strong&gt;ರಾಯಚೂರು (ಜು.30):&lt;/strong&gt; ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;(CM Dk Shivakuma) ಅವರ ನೇತೃತ್ವದಲ್ಲಿ ರಚನೆಗೊಂಡ ಮೊದಲ ಸಚಿವ ಸಂಪುಟದಲ್ಲಿ ಅವಕಾಶ ಕಳೆದುಕೊಂಡಿದ್ದ ಜಿಲ್ಲೆಗೆ ಎರಡನೇ ಹಂತದಲ್ಲಿಯಾದರೂ ಸ್ಥಾನವನ್ನು ಪಡೆಯಬೇಕು ಎನ್ನುವ ಪಟ್ಟು ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಬಂದಿದ್ದು, ಅದಕ್ಕಾಗಿ ಎಲ್ಲಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ.&lt;/p&gt;&lt;p&gt;ಸಚಿವ ಸಂಪುಟದ ವಿಸ್ತರಣೆ ಕಾರ್ಯ ಕೊನೆಯ ಘಟ್ಟ ತಲುಪಿದ್ದರಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕರು - ಎಂಎಲ್ಸಿಗಳು, ಮುಖಂಡರು ಹೈಕಮಾಂಡ್&zwnj; ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಜಿಲ್ಲೆಯ ಮಾಜಿ ಸಚಿವ ಹಾಗೂ ಎಂಎಲ್ಸಿ ಎನ್&zwnj;.ಎಸ್&zwnj;.ಭೋಸರಾಜು(NS Boseraju) ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ(Hampanagowda badarli) ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿ ಸಾಗಿದ್ದು, ಕೊನೆಗಳಿಗೆಯಲ್ಲಿ ಹೈಕಮಾಂಡ್&zwnj; ಯಾರಿಕೆ ಮಣಿಯಾಗಲಿದೆ ಎನ್ನುವ ಕುತೂಹಲವು ಮೂಡಿದೆ.&lt;/p&gt;&lt;p&gt;ಹಿಂದಿನ ಸಿಎಂ ಸಿದ್ದರಾಮಯ್ಯ ಸಮಯದಲ್ಲಿ ಶಾಸಕರಿಲ್ಲದಿದ್ದರೂ ಭೋಸರಾಜು ಅವರಿಗೆ ಕರೆದು ಸಚಿವ ಸ್ಥಾನದಲ್ಲಿ ಅವಕಾಶ ನೀಡಲಾಗಿತ್ತು ಅದನ್ನು ಮುಂದುವರೆಸಿಕೊಳ್ಳುವ ನಿಟ್ಟಿನಲ್ಲಿ ಭೋಸರಾಜು ಮತ್ತು ಅವರ ಮಗ ರವಿ ಭೋಸರಾಜು ಭಗೀರಥ ಪ್ರಯತ್ನ ನಡೆಸಿದ್ದು, ಸಚಿವ ಸ್ಥಾನ ನೀಡುವುದು ಇಲ್ಲವೇ ವಿಧಾನ ಪರಿಷತ್&zwnj; ಸಭಾಪತಿಯ ಸ್ಥಾನವನ್ನು ಕೊಡುವುದರ ಕುರಿತು ಹೈಕಮಾಂಡ್ ಹಂತಿಮ ತೀರ್ಮಾನಕ್ಕೆ ಬರಬೇಕಾಗಿದೆ.&lt;/p&gt;&lt;p&gt;ಇನ್ನು ಸಿಂಧನೂರಿನಿಂದ ಐದು ಸಲ ಗೆದ್ದು ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಅವರು ಸಚಿವ ಸ್ಥಾನದ ರೇಸ್&zwnj;ನಲ್ಲಿ ಮುಂಚೂಣಿಯಲ್ಲಿದ್ದು, ಸಮುದಾಯ ಹಾಗೂ ಅನುಭವದ ಆಧಾರದ ಮೇಲೆ ಮತ್ತು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಮಾತಿನಂತೆ ಈ ಬಾರಿ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಗಳು ಹೆಚ್ಚಾಗಿವೆ.&lt;/p&gt;&lt;h2&gt;ಬೋಸರಾಜು-ಬಾದರ್ಲಿ ಹೈಕಮಾಂಡ್ ಆಯ್ಕೆ ಯಾರು?&lt;/h2&gt;&lt;p&gt;ಸಚಿವ ಸಂಪುಟದ ವಿಸ್ತರಣೆಯಲ್ಲಿ ಹೈಕಮಾಂಡ್&zwnj; ಸಾಕಷ್ಟು ಎಚ್ಚರಿಕೆಗಳನ್ನು ವಹಿಸಿದ್ದು, ಹಲವಾರು ಮಾನದಂಡಗಳ ಅವಲೋಕನೆಯನ್ನು ಮಾಡಿ ಸಚಿವ ಸ್ಥಾನದಲ್ಲಿ ಅವಕಾಶ ನೀಡಲು ಮುಂದಾಗಿದೆ. ಜಿಲ್ಲಾ ಮತ್ತು ಪ್ರಾದೇಶಿಕ ಪ್ರಾತಿನಿಧ್ಯತೆ, ಸಮುದಾಯದವಾರು ಆದ್ಯತೆ, ಹೊಸ ಹಾಗೂ ಹಳೆ ಮುಖಗಳ ಅನುಪಾತ, ಭವಿಷ್ಯದ ಎಲೆಕ್ಷನ್&zwnj;ಗಳ ಲೆಕ್ಕಾಚಾರ, ನಾಯಕರೊಂದಿಗೆ ಹೊಂದಿರುವ ಪ್ರಭಾವ, ಬಾಂಧವ್ಯಗಳು ಸೇರಿ ಮತ್ತಿತರ ಮಾನದಂಡಗಳನ್ನು ಅವಲೋಕಿಸಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎನ್ನುವ ಅಂಶಗಳ ನಡುವೆ ಭೋಸರಾಜು ಹಾಗೂ ಬಾದರ್ಲಿ ಪರಿಗಣಿಸಿರುವ ಪಕ್ಷವು ಕೊನೆಯ ಕ್ಷಣದಲ್ಲಿ ಯಾವ ತೀರ್ಮಾನಕ್ಕೆ ಬರಲಿದೆ ಎನ್ನುವುದು ಸಸ್ಪೆನ್ಸಾಗಿ ಉಳಿದುಬಿಟ್ಟಿದೆ.&lt;/p&gt;&lt;h3&gt;ಇಲ್ಲಿಯೂ ಬಣಗಳ ಸಂಘರ್ಷ:&lt;/h3&gt;&lt;p&gt;ಭಿನ್ನಾಭಿಪ್ರಾಯ, ಬಣ ಸಂಘರ್ಷ ಹಾಗೂ ಗುಂಪುಗಾರಿಕೆಯಿಂದ ತುಂಬಿ ತುಳುಕುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಭೋಸರಾಜು ಹಾಗೂ ಎ.ವಸಂತಕುಮಾರ ಅವರ ನಡುವೆ ನಡೆಯುತ್ತಲೇ ಇರುವ ಸಂಘರ್ಷವು ದೆಹಲಿಯಲ್ಲಿ ಸಹ ಮುಂದುವರೆದಿದ್ದು, ಸಚಿವ ಸಂಪುಟದ ವಿಸ್ತರಣೆಯಲ್ಲಿಯೂ ಬಣಗಳ ನಡುವೆ ಪೈಪೋಟಿ, ಅವರಿಗೆ ಸಚಿವ ಸ್ಥಾನ ಕೊಟ್ಟರು ಬೇರೆ ಬೇರೆ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ವಹಿಸಿ, ಮುಂದಿನ ಚುನಾವಣೆ ಯಲ್ಲಿ ಟಿಕೆಟ್, ಜಿಲ್ಲೆಯ ಮೇಲೆ ನಮ್ಮ ಹಿಡಿದವಿರಲಿ ಎನ್ನುವ ಅಂಶಗಳ ನಡುವೆ ಹೈಕಮಾಂಡ್&zwnj; ಮುಂದೆ ಗುಂಪು ಸಂಘರ್ಷವೂ ಸಾಗಿದ್ದು, ಎಲ್ಲವನ್ನೂ ಪರಿಶೀಲಿಸಿ ಯಾರಿಗೆ ಯಾವ ಸ್ಥಾನ ದೊರೆಯಲಿದೆಯೇ ಕೆಲಕಾಲ ಕಾದುನೋಡಬೇಕಾಗಿದೆ.&lt;/p&gt;&lt;p&gt;ಸಂಪುಟದಲ್ಲಿ ಜಿಲ್ಲೆಯ ಯಾವುದೇ ಶಾಸಕ, ಎಂಎಲ್ಸಿಗಳನ್ನು ಸೇರಿಸಿಕೊಂಡರೂ ಪರವಾಗಿಲ್ಲ ಆದರೆ ಉಸ್ತುವಾರಿ ಜವಾಬ್ದಾರಿಯನ್ನು ಸಹ ಅವರಿಗೆ ವಹಿಸಬೇಕು ಇಲ್ಲದಿದ್ದರೆ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗುತ್ತದೆ ಎನ್ನುವುದು ಜನಸಾಮಾನ್ಯರ ಒತ್ತಾಸೆಯಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm"/>
        </item>
        <item>
            <title><![CDATA[65 ತೆರಿಗೆ ಸಂಗ್ರಾಹಕರು, ಗುಮಾಸ್ತರು, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ]]></title>
            <link>https://kannada.asianetnews.com/state-government-jobs/raichur-zp-recruitment-2026-apply-65-tax-collector-data-entry-operator-posts-san/articleshow-gyga9z4</link>
            <guid isPermaLink="true">https://kannada.asianetnews.com/state-government-jobs/raichur-zp-recruitment-2026-apply-65-tax-collector-data-entry-operator-posts-san/articleshow-gyga9z4</guid>
            <pubDate>Fri, 28 Aug 2026 06:05:24 +0530</pubDate>
            <description><![CDATA[ರಾಯಚೂರು ಜಿಲ್ಲಾ ಪಂಚಾಯತ್, ತೆರಿಗೆ ಸಂಗ್ರಾಹಕ ಮತ್ತು ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ಒಟ್ಟು 65 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಪಾಸಾದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kt8gjwdffymv3aszhdtnmqfy,imgname-exam-1780549775791.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಆ.28): &lt;/strong&gt;ಜಿಲ್ಲಾ ಪಂಚಾಯತ್ ಅಧಿಕೃತ ಅಧಿಸೂಚನೆ ಮೂಲಕ ತೆರಿಗೆ ಸಂಗ್ರಾಹಕ, ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;&lt;strong&gt;ಹುದ್ದೆಗಳ ಸಂಪೂರ್ಣ ವಿವರ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಸಂಸ್ಥೆಯ ಹೆಸರು :&lt;/strong&gt; ಜಿಲ್ಲಾ ಪಂಚಾಯತ್ ರಾಯಚೂರು&lt;/li&gt; &lt;li&gt;&lt;strong&gt;ಹುದ್ದೆಗಳ ಸಂಖ್ಯೆ: &lt;/strong&gt;65&lt;/li&gt; &lt;li&gt;&lt;strong&gt;ಉದ್ಯೋಗ ಸ್ಥಳ: &lt;/strong&gt;ರಾಯಚೂರು - ಕರ್ನಾಟಕ&lt;/li&gt; &lt;li&gt;&lt;strong&gt;ಪೋಸ್ಟ್ ಹೆಸರು: &lt;/strong&gt;ತೆರಿಗೆ ಸಂಗ್ರಾಹಕ, ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್&lt;/li&gt;&lt;/ul&gt;&lt;h2&gt;&lt;strong&gt;ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ತೆರಿಗೆ ಸಂಗ್ರಹಕಾರ:&lt;/strong&gt; 31 ಹುದ್ದೆಗಳು&lt;/li&gt; &lt;li&gt;&lt;strong&gt;ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್: &lt;/strong&gt;34 ಹುದ್ದೆಗಳು&lt;/li&gt;&lt;/ul&gt;&lt;h2&gt;&lt;strong&gt;ಶೈಕ್ಷಣಿಕ ಅರ್ಹತೆ&lt;/strong&gt;&lt;/h2&gt;&lt;p&gt;ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ /12 ನೇ ತರಗತಿ (ಮೂರು ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್&zwnj;ನೊಂದಿಗೆ) ಪೂರ್ಣಗೊಳಿಸಿರಬೇಕು.&lt;/p&gt;&lt;h2&gt;&lt;strong&gt;ವಯೋಮಿತಿ&lt;/strong&gt;&lt;/h2&gt;&lt;p&gt;ಅಭ್ಯರ್ಥಿಯು 03-09-2026ಕ್ಕೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳನ್ನು ಹೊಂದಿರಬೇಕು.&lt;/p&gt;&lt;h3&gt;&lt;strong&gt;ವಯೋಮಿತಿ ಸಡಿಲಿಕೆ&lt;/strong&gt;&lt;/h3&gt;&lt;ul&gt; &lt;li&gt;&lt;strong&gt;ವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: &lt;/strong&gt;3 ವರ್ಷ&lt;/li&gt; &lt;li&gt;&lt;strong&gt;ಎಸ್&zwnj;ಸಿ/ಎಸ್&zwnj;ಟಿ, ವಿಭಾಗ 1 ಅಭ್ಯರ್ಥಿಗಳು: &lt;/strong&gt;5 ವರ್ಷ&lt;/li&gt;&lt;/ul&gt;&lt;h2&gt;&lt;strong&gt;ಅರ್ಜಿ ಶುಲ್ಕ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಸಾಮಾನ್ಯ ಅಭ್ಯರ್ಥಿಗಳಿಗೆ: &lt;/strong&gt;500 ರು.&lt;/li&gt; &lt;li&gt;&lt;strong&gt;2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: &lt;/strong&gt;300 ರು.&lt;/li&gt; &lt;li&gt;&lt;strong&gt;ಎಸ್&zwnj;ಸಿ/ಎಸ್&zwnj;ಟಿ, P1, ಮಾಜಿ ಸೈನಿಕರ ಅಭ್ಯರ್ಥಿಗಳಿಗೆ: &lt;/strong&gt;200 ರು.&lt;/li&gt; &lt;li&gt;&lt;strong&gt;ವಿಶೇಷವಾಗಿ ಅಭ್ಯರ್ಥಿಗಳಿಗೆ:&lt;/strong&gt; 100 ರು.&lt;/li&gt; &lt;li&gt;ಪಾವತಿ ವಿಧಾನ: ಆನ್&zwnj;ಲೈನ್&lt;/li&gt;&lt;/ul&gt;&lt;p&gt;&lt;strong&gt;ಆಯ್ಕೆ ಪ್ರಕ್ರಿಯೆ: &lt;/strong&gt;ಮೆರಿಟ್ ಪಟ್ಟಿ (ಸಂಬಂಧಿತ ಅರ್ಹತೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ), ಸಂದರ್ಶನ&lt;/p&gt;&lt;h2&gt;&lt;strong&gt;ಅರ್ಜಿ ಸಲ್ಲಿಸುವುದು ಹೇಗೆ?&lt;/strong&gt;&lt;/h2&gt;&lt;ul&gt; &lt;li&gt;-ಮೊದಲನೆಯದಾಗಿ ಜಿಲ್ಲಾ ಪಂಚಾಯತ್ ರಾಯಚೂರು ನೇಮಕಾತಿ ಅಧಿಸೂಚನೆ 2026 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.&lt;/li&gt; &lt;li&gt;ಆನ್&zwnj;ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.&lt;/li&gt; &lt;li&gt;ಜಿಲ್ಲಾ ಪಂಚಾಯತ್ ರಾಯಚೂರು ತೆರಿಗೆ ಸಂಗ್ರಹಕಾರ, ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಿ. - ಜಿಲ್ಲಾ ಪಂಚಾಯತ್ ರಾಯಚೂರು ಆನ್&zwnj;ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್&zwnj;ಲೋಡ್ ಮಾಡಿ.&lt;/li&gt; &lt;li&gt;ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.&lt;/li&gt;&lt;/ul&gt;&lt;h2&gt;&lt;strong&gt;ಪ್ರಮುಖ ದಿನಾಂಕಗಳು&lt;/strong&gt;&lt;/h2&gt;&lt;ul&gt; &lt;li&gt;ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಆಗಸ್ಟ್&zwnj; 20-08-2026&lt;/li&gt; &lt;li&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್-03-2026&lt;/li&gt;&lt;/ul&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state-government-jobs/raichur-zp-recruitment-2026-apply-65-tax-collector-data-entry-operator-posts-san/articleshow-gyga9z4"/>
        </item>
        <item>
            <title><![CDATA[ರಾಯಚೂರಿನಲ್ಲಿ ರೈಲ್ವೇ ಟ್ರಾಕ್ ಕಾಮಗಾರಿ ಗುಂಡಿಗೆ ಬಿದ್ದು ಬಾಲಕ ಸಾವು, ಪೋಷಕರ ನರಳಾಟ]]></title>
            <link>https://kannada.asianetnews.com/karnataka-districts/boy-dies-after-falling-into-railway-track-construction-pit-in-raichur-parents-devastated/articleshow-isbko5o</link>
            <guid isPermaLink="true">https://kannada.asianetnews.com/karnataka-districts/boy-dies-after-falling-into-railway-track-construction-pit-in-raichur-parents-devastated/articleshow-isbko5o</guid>
            <pubDate>Sun, 26 Jul 2026 20:00:37 +0530</pubDate>
            <description><![CDATA[&lt;p&gt;ರಾಯಚೂರಿನಲ್ಲಿ ರೈಲ್ವೇ ಟ್ರಾಕ್ ಕಾಮಗಾರಿಗಾಗಿ ಗುಂಡಿ ಅಗೆಯಲಾಗಿತ್ತು. ಹಾಗೇ ಬಿಟ್ಟು ನಿರ್ಲಕ್ಷ್ಯ ಮಾಡಿದ ಪರಿಮಾಮ 8 ವರ್ಷದ ಬಾಲಕ ಈ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಗನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyfcsvg1w91b1cx5sa33n9g6,imgname-child-falls-into-railway-work-pit-and-dies-1785075658239.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜು.26) &lt;/strong&gt;ಪೋಷಕರ ಜೊತೆ ಜಮೀನಿಗೆ ತೆರಳಿದ 8 ವರ್ಷದ ಬಾಲಕ ಬಳಿಕ ಪಕ್ಕದಲ್ಲೇ ಆಟವಾಡಿದ್ದಾನೆ. ಮಳೆ ನೀರಿನಲ್ಲಿ ಆಟವಾಡುತ್ತಿದ್ದ ಬಾಲಕ ರೈಲ್ವೇ ಟ್ರಾಕ್&zwnj; ಕಾಮಗಾರಿಗಾಗಿ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ರಾಯಚೂರಿನ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಡೆದಿದೆ. ಮಣ್ಣಿಗಾಗಿ ಗುಂಡಿ ಅಗೆಯಲಾಗಿತ್ತು. ಬಳಿಕ ಹಾಗೇ ನಿರ್ಲಕ್ಷ್ಯ ತೋರಿದ ಕಾರಣ ಈ ಗುಂಡಿಯಲ್ಲಿ ಮಳೆ ನೀರು ನಿಂತುಕೊಂಡಿತ್ತು.ಅಮಾಯಕ ಬಾಲಕ ಇದೇ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಮಗನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.&lt;/p&gt;&lt;h2&gt;ಕಾಮಗಾರಿಗಾಗಿ ಅಗೆದಿದ್ದ ಗುಂಡಿಯಲ್ಲಿ ಶವವಾಗಿ ಪತ್ತೆ&lt;/h2&gt;&lt;p&gt;8 ವರ್ಷದ ಬಾಲಕ ಯಶವಂತ್ ಪೋಷಕರ ಜೊತೆ ಜಮೀನಿಗೆ ತೆರಳಿದ್ದ. ಪೋಷಕರು ಜಮೀನು ಕೆಲಸದಲ್ಲಿ ತೊಡಗಿಸಿಕೊಂಡರೆ ಇತ್ತ ಬಾಲಕ ಪಕ್ಕದಲ್ಲೇ ಆಟವಾಡುತ್ತಿದ್ದ. ಕೆಲ ಹೊತ್ತಲ್ಲೇ ಬಾಲಕನ ನಾಪತ್ತೆಯಾಗಿದ್ದಾನೆ. ಜಮೀನು ಸುತ್ತ ಮುತ್ತ ಹುಡುಕಿದರೂ ಪತ್ತೆಯಾಗಲಿಲ್ಲ. ಕೊನೆಗೆ ರೈಲ್ವೇ ಕಾಮಗಾರಿಗಾಗಿ ಅಗೆದಿದ್ದ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.&lt;/p&gt;&lt;p&gt;ಗಿಣಿಗೇರಾ ಮೆಹಬೂಬನಗರ ರೈಲ್ವೇ ಟ್ರ್ಯಾಕ್ ಕಾಮಗಾರಿ ನಡೆಯುತ್ತಿದೆ. ರೈಲ್ವೇ ಟ್ರಾಕ್&zwnj;ಗೆ ಮಣ್ಣು ಹೊಂದಿಸಲು ಗುಂಡಿ ತೆಗೆಯಲಾಗಿದೆ. ಬಳಿಕ ಈ ಗುಂಡಿಯನ್ನು ಮಚ್ಚುವ ತಡೆ ಗೋಡೆ ನಿರ್ಮಿಸುವ ಯಾವುದೇ ಕೆಲಸವನ್ನು ಮಾಡಿಲ್ಲ. ಮಳೆ ಕಾರಣದಿಂದ ಈ ಗುಂಡಿಯಲ್ಲಿ ನೀರು ತುಂಬಿಕೊಂಡಿದೆ. ಕೆರೆಯಂತಾದ ಗುಂಡಿ, ಕೆಸರು ನೀರಿನ ಆಳ ಗೊತ್ತಿಲ್ಲದ ಬಾಲಕ ಇದೇ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ.&lt;/p&gt;&lt;h2&gt;ಗುತ್ತಿಗೆದಾರನ ನಿರ್ಲಕ್ಷ್ಯ ಆರೋಪ&lt;/h2&gt;&lt;p&gt;ಗುತ್ತಿಗೆದಾರ ಮಣ್ಣು ತೆಗೆದು ಗುಂಡಿಯನ್ನು ನಿರ್ಲಕ್ಷಿಸಿದ್ದಾನೆ. ಇದರ ಪರಿಣಾಮ ಬಾಲಕನ ಜೀವ ಹೋಗಿದೆ.ಗುತ್ತಿಗೆದಾರನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ನಿರ್ಲಕ್ಷ್ಯ ತೋರಿ ತಮ್ಮ ಮಗನ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ಕಣ್ಣೀರಿಟ್ಟಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;&lt;p&gt;&lt;/p&gt;]]></content:encoded>
            <category>raichur</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/boy-dies-after-falling-into-railway-track-construction-pit-in-raichur-parents-devastated/articleshow-isbko5o"/>
        </item>
        <item>
            <title><![CDATA[ರಾಯಚೂರು: ಪಂಪ್‌ಸೆಟ್ ಆನ್ ಮಾಡಲು ಹೋಗಿದ್ದ ಯುವಕ ಕರೆಂಟ್ ಶಾಕ್ ಹೊಡೆದು ದಾರುಣ ಸಾವು!]]></title>
            <link>https://kannada.asianetnews.com/karnataka-districts/raichu-young-man-dies-tragically-after-electric-shock-while-switch-on-pumpset/articleshow-iu65f5n</link>
            <guid isPermaLink="true">https://kannada.asianetnews.com/karnataka-districts/raichu-young-man-dies-tragically-after-electric-shock-while-switch-on-pumpset/articleshow-iu65f5n</guid>
            <pubDate>Thu, 30 Jul 2026 12:34:57 +0530</pubDate>
            <description><![CDATA[&lt;p&gt;ಬೋರ್&zwnj;ವೆಲ್ ಪಂಪ್&zwnj;ಸೆಟ್ ಆನ್&zwnj; ಮಾಡಲು ಜಮೀನಿಗೆ ಹೋಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyrxdzps0r7d213ae98hfmhy,imgname-----------------------2026-07-30t123424.731-1785395085017.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜು.30):&lt;/strong&gt; ಬೋರ್&zwnj;ವೆಲ್ ಪಂಪ್&zwnj;ಸೆಟ್ ಆನ್&zwnj; ಮಾಡಲು ಜಮೀನಿಗೆ ಹೋಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಮೃತ ಯುವಕನನ್ನು ಶಿವಕುಮಾರ್(18) ಎಂದು ಗುರುತಿಸಲಾಗಿದೆ. ಎಂದಿನಂತೆ ಇಂದು ಕೂಡ ಬೆಳಗ್ಗೆಯೇ ಪಂಪ್&zwnj;ಸೆಟ್ ಆನ್&zwnj; ಮಾಡಿಬರಲು ಹೊಲಕ್ಕೆ ತೆರಳಿದ್ದ ಮೃತ ಶಿವಕುಮಾರ್. ಪಂಪ್ ಸೆಟ್ ಆನ್&zwnj; ಮಾಡುವ ವೇಳೆ ತಂತಿ ತಗುಲಿ ವಿದ್ಯುತ್ ಪ್ರವಹಿಸಿದೆ, ಕರೆಂಟ್&zwnj; ಶಾಕ್&zwnj;ನಿಂದ ಸ್ಥಳದಲ್ಲೇ ಕುಸಿದುಬಿದ್ದಿರುವ ಯುವಕ ಕೆಲ ಕ್ಷಣಗಳ ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.&lt;/p&gt;&lt;h2&gt;ಪೊಲೀಸರು ಭೇಟಿ&lt;/h2&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Electric Shock First Aid: ಕರೆಂಟ್ ಶಾಕ್ ಹೊಡೆದಾಗ ತಕ್ಷಣ ಹೀಗೆ ಮಾಡಿ ಜೀವ ಉಳಿಯುತ್ತೆ!&lt;/p&gt;&lt;h3&gt;ಮುಗಿಲು ಮುಟ್ಟಿದ ಕುಟುಂಬಸ್ಥರ ಅಕ್ರಂದನ&lt;/h3&gt;&lt;p&gt;ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿತು. ಎದೆ ಎತ್ತರ ಬೆಳೆದುನಿಂತಿದ್ದ ಮಗ. ಚಿಕ್ಕವಯಸ್ಸಿಗೆ ಮನೆಯ ನೊಗ ಹೊತ್ತು ಹೆತ್ತವರಿಗೆ ಆಸರೆಯಂತಿದ್ದ ಮಗನ ಅಕಾಲಿಕ ಸಾವು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/raichu-young-man-dies-tragically-after-electric-shock-while-switch-on-pumpset/articleshow-iu65f5n"/>
        </item>
        <item>
            <title><![CDATA[ರಾಯಚೂರು: ಬುಲೆಟ್ ಮೇಲೆ ಹೊರಟಿದ್ದವನ ಮೇಲೆ ದುಷ್ಕರ್ಮಿಗಳಿಂದ ಭೀಕರ ಅಟ್ಯಾಕ್! ನಡುರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ!]]></title>
            <link>https://kannada.asianetnews.com/karnataka-districts/raichur-youth-bhumananda-murdered-by-miscreants-incident-happened-in-devadurga/articleshow-m8rrecw</link>
            <guid isPermaLink="true">https://kannada.asianetnews.com/karnataka-districts/raichur-youth-bhumananda-murdered-by-miscreants-incident-happened-in-devadurga/articleshow-m8rrecw</guid>
            <pubDate>Wed, 05 Aug 2026 07:11:18 +0530</pubDate>
            <description><![CDATA[&lt;p&gt;ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ, ಬುಲೆಟ್&zwnj; ಬೈಕ್&zwnj;ನಲ್ಲಿ ಹೊರಟಿದ್ದ ಭೂಮಾನಂದ ಎಂಬ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಗಬ್ಬೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz7s2pc23v5gvrhvx9r1gp1n,imgname-----------------------2026-08-05t070708.770-1785893837185.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಆ.5): &lt;/strong&gt;ಬುಲೆಟ್&zwnj; ಬೈಕ್&zwnj;ನಲ್ಲಿ ಹೊರಟಿದ್ದ ಯುವಕನನ್ನ ನಡುರಸ್ತೆಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಇರಿದು ಬರ್ಬರವಾಗಿ ಕೊಂದು ಪರಾರಿಯಾದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ ನಡೆದಿದೆ. ಘಟನೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;h2&gt;ನಡುರಸ್ತೆಯಲ್ಲೇ ದುಷ್ಕರ್ಮಿಗಳಿಂದ ಅಟ್ಯಾಕ್&lt;/h2&gt;&lt;p&gt;ಭೂಮಾನಂದ(32), ಕೊಲೆಯಾದ ದುರ್ದೈವಿ. ಯುವಕ ಭೂಮಾನಂದ ಹದ್ದಿನಾಳ ಗ್ರಾಮದ ನಿವಾಸಿಯಾಗಿದ್ದಾನೆ. ನಿನ್ನೆ ಸಂಜೆ ಬುಲೆಟ್ ಬೈಕ್ ಹತ್ತಿ ಹೊರಗೆ ಹೋಗಿದ್ದ ಯುವಕ. ಈ ವೇಳೆ ಮಾರಕಾಸ್ತ್ರಗಳನ್ನ ಹಿಡಿದು ಹೊಂಚು ಹಾಕಿ ಕೂತಿದ್ದ ದುಷ್ಕರ್ಮಿಗಳು ಸುಂಕೇಶ್ವರಹಾಳ ಗ್ರಾಮದ ಬಳಿ ನಡುರಸ್ತೆಯಲ್ಲೇ ಅಟ್ಯಾಕ್ ಮಾಡಿದ್ದಾರೆ. ಏಕಾಏಕಿ ನಡೆದ ದಾಳಿಯಿಂದ ತಪ್ಪಿಸಿಕೊಳ್ಳಲಾಗದ ಯುವಕ. ಮಾರಕಾಸ್ತ್ರಗಳಿಂದ ಬಲವಾದ ಏಟುಗಳಿಂದ ಯುವಕ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.&lt;/p&gt;&lt;h3&gt;ಭೂಮಾನಂದ ಕೊಲೆಗೆ ಕಾರಣವೇನು?&lt;/h3&gt;&lt;p&gt;ಹಣಕಾಸಿನ ವಿಷಯದಿಂದಲೇ ಕೊಲೆ ನಡೀತಾ? ರಾಜಕೀಯ ದ್ವೇಷವಾ? ಆಸ್ತಿ ವಿವಾದವಾ? ಅಥವಾ ಬೇರೆ ಏನಾದರೂ ಗಲಾಟೆ ನಡೆದಿತ್ತೇ? ಸದ್ಯ ಭೂಮಾನಂದ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಗಬ್ಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹ*ತ್ಯೆ ನಡೆದ ಸ್ಥಳದಲ್ಲಿನ ಸಿಸಿಟಿವಿಗಳನ್ನ ಪರಿಶೀಲಿಸಿ ದುಷ್ಕರ್ಮಿಗಳನ್ನ ಪತ್ತೆ ಹಚ್ಚಲು ಮುಂದಾಗಿರುವ ಪೊಲೀಸರು. ಈ ಪ್ರಕರಣವನ್ನ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/raichur-youth-bhumananda-murdered-by-miscreants-incident-happened-in-devadurga/articleshow-m8rrecw"/>
        </item>
        <item>
            <title><![CDATA[Sindhanuru Shocking: ಸರ್ಕಾರಿ ವೈದ್ಯರ ವಿಳಂಬ ಪ್ರಶ್ನಿಸಿದ ಬಡಜನರನ್ನೇ ಎಳೆದೊಯ್ದ ಪೊಲೀಸರು!]]></title>
            <link>https://kannada.asianetnews.com/karnataka-districts/sindhanur-government-hospital-incident-police-dragged-away-poor-people-who-questioned-the-doctors-delay/articleshow-nfqz7sr</link>
            <guid isPermaLink="true">https://kannada.asianetnews.com/karnataka-districts/sindhanur-government-hospital-incident-police-dragged-away-poor-people-who-questioned-the-doctors-delay/articleshow-nfqz7sr</guid>
            <pubDate>Tue, 01 Sep 2026 16:49:30 +0530</pubDate>
            <description><![CDATA[ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಬಾರದಿದ್ದಕ್ಕೆ ರೋಗಿಗಳ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ನ್ಯಾಯ ಕೇಳಲು ಮುಂದಾದವರನ್ನೇ ಪೊಲೀಸರು ಎಳೆದುಕೊಂಡು ಹೋದ ಘಟನೆ ನಡೆದಿದ್ದು, ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1eaw9zfwv50m27kek8djnvd,imgname-sindhanur-government-hospital-incident-1788261312495.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು, (ಸೆ.11)&lt;/strong&gt;: ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲವೆಂದು ವೈದ್ಯರ ಬೇಜವಾಬ್ದಾರಿತನ ಪ್ರಶ್ನಿಸಿ ಗೇಟ್ ಹಾಕಲು ಮುಂದಾದ ಘಟನೆ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಬೆಳಗ್ಗೆ 11 ಆದರೂ ವೈದ್ಯರಿಲ್ಲ, ಅಡ್ಮಿಷನ್ ಚೀಟಿ ನೀಡಲು ವಿಳಂಬ ಮಾಡಲಾಗಿದೆ ಇದನ್ನ ಪ್ರಶ್ನಿಸಿದ ರೋಗಿಗಳ ಸಂಬಂಧಿಗಳನ್ನೇ ಪೊಲೀಸರು ಎಳೆದುಕೊಂಡು ಹೋದ ಘಟನೆ ನಡೆದಿದ್ದು ವಿಡಿಯೋದಲ್ಲಿ ದಾಖಲಾಗಿದೆ.&lt;/p&gt;&lt;h2&gt;11 ಗಂಟೆಯಾದರೂ ರೋಗಿಗಳಿಗೆ ಅಡ್ಮಿಷನ್ ಚೀಟಿ ಇಲ್ಲ!&lt;/h2&gt;&lt;p&gt;ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ವಳಬಳ್ಳಾರಿ ಗ್ರಾಮದ ರೈತ ಮಲ್ಲಯ್ಯ. ಈ ವೇಳೆ ಆಸ್ಪತ್ರೆಯಲ್ಲಿ ಕೆಲ ಸಿಬ್ಬಂದಿ ಹೊರತು ವೈದ್ಯರುಗಳ ಸುಳಿವೇ ಇಲ್ಲ. ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಅದಾಗಲೇ ಬಡಜನರು ಬಂದು ವೈದ್ಯರ ದಾರಿ ಕಾಯುತ್ತಿದ್ದರು. ಬೆಳಗ್ಗೆ 11 ಗಂಟೆಯಾದರೂ ಅಡ್ಮಿಷನ್ ಚೀಟಿ ನೀಡಿರಲಿಲ್ಲ ರೈತ ಮಲ್ಲಯ್ಯ ಆರೋಪಿಸಿದ್ದಾರೆ. ಆಸ್ಪತ್ರೆ ವೈದ್ಯರ ಬೇಜವಾಬ್ದಾರಿತನಕ್ಕೆ. ಆಕ್ರೋಶಗೊಂಡ ಸಾರ್ವಜನಿಕರು ಆಸ್ಪತ್ರೆಯ ಗೇಟ್ ಮುಚ್ಚುವಂತೆ ಹೇಳಿ ಪ್ರತಿಭಟನೆ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಬಂದ ಪೊಲೀಸರು ಮಾಡಿದ್ದೇನು?&lt;/strong&gt;&lt;/h2&gt;&lt;p&gt;ಆಸ್ಪತ್ರೆಯಲ್ಲಿ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಳಿಕ PSI ಸೇರಿದಂತೆ ಸುಮಾರು 15 ಮಂದಿ ಪೊಲೀಸರು ಸ್ಥಳಕ್ಕೆ ಬಂದು ನ್ಯಾಯ ಕೇಳಿದ ಬಡಕುಟುಂಬದ ಜನರನ್ನೇ ಸ್ಟೇಷನ್ ಎಳೆದುಕೊಂಡ ಹೋದ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ನ್ಯಾಯ ಕೇಳಿದ ಬಡಜನರನ್ನೇ ಎಳೆದುಕೊಂಡು ಹೋದ್ರಾ ಪೊಲೀಸರು?&lt;/p&gt;&lt;p&gt;ಮೇಲ್ನೋಟಕ್ಕೆ ಇದು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ. ರೈತ ಆರೋಪಿಸಿದಂತೆ ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಯಲ್ಲಿಲ್ಲ. ಕನಿಷ್ಟ ಪಕ್ಷ ಸಿಬ್ಬಂದಿ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಬೇಕಿತ್ತು. ಆದರೆ ಬೆಳಗ್ಗೆ ಹನ್ನೊಂದಾದರೂ ಅಡ್ಮಿಟ್ ಚೀಟಿಯ ನೀಡಿಲ್ಲ. ಹೀಗಾಗಿ ವೈದ್ಯರ ವಿಳಂಬಕ್ಕೆ ಆಕ್ರೋಶಗೊಂಡಿರುವುದು ಸಹಜ. ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನ ವಿಚಾರ ನಡೆಸಿ, ಗಲಾಟೆಗೆ ಕಾರಣವೇನು? ವೈದ್ಯರು ವಿಳಂಬ ಮಾಡಿದ್ದೇಕೆ ಅಂತಾ ವಿಚಾರಿಸಿ ಪರಿಸ್ಥಿತಿ ತಿಳಿ ಮಾಡುವ ಬದಲು ರೋಗಿಗಳನ್ನೇ ಎಳೆದೊಯ್ದಿರುವುದು ದುರಂತ ಎಂದು ಪೊಲೀಸರ ಕ್ರಮದ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ವಿಡಿಯೋ ಮಾಡಿದ್ರೆ ಎಫ್&zwnj;ಐಆರ್ ಹಾಕ್ತೇವೆ!&lt;/strong&gt;&lt;/h3&gt;&lt;p&gt;ಸರ್ಕಾರಿ ಆಸ್ಪತ್ರೆಗಳಿರುವುದು ಬಡವರಿಗಾಗಿ, ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ನಗರ ಮಾತ್ರವಲ್ಲದೆ ಸುತ್ತಲಿನ ಹಳ್ಳಿಗಳಿದ ಬಡವರು, ಕೂಲಿಕಾರ್ಮಿಕರು ಚಿಕಿತ್ಸೆ ಬರುತ್ತಾರೆ. ಹೀಗಿರುವಾಗ ಬೆಳಗ್ಗೆ ಹನ್ನೊಂದಾದರೂ ಆಸ್ಪತ್ರೆಗೆ ಬಾರದಿರುವುದು, ಚೀಟಿ ನೀಡದಿರುವುದು ಆಸ್ಪತ್ರೆಯ ಸಿಬ್ಬಂದಿ ಬೇಜವಾಬ್ದಾರಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾದರೆ ಹೊಣೆಗಾರರು ಯಾರು ಎಂಬ ಪ್ರಶ್ನೆ ಎದ್ದಿದೆ.&lt;/p&gt;&lt;p&gt;ಈ ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಹಾಗೂ ಪೊಲೀಸ್ ಕ್ರಮದ ಕುರಿತು ಅಧಿಕೃತ ಮಾಹಿತಿ ಲಭ್ಯವಾದ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ.&lt;/p&gt;&lt;p&gt;&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/sindhanur-government-hospital-incident-police-dragged-away-poor-people-who-questioned-the-doctors-delay/articleshow-nfqz7sr"/>
        </item>
        <item>
            <title><![CDATA[ರಾಯಚೂರು: ಮಾನ್ವಿ ಕೋಟೆ ಬಳಿ ಮಣ್ಣು ಅಗೆಯುವಾಗ ಪುರಾತನ ಕಾಲದ 360 ನಾಣ್ಯಗಳು ಪತ್ತೆ!]]></title>
            <link>https://kannada.asianetnews.com/gallery/karnataka-districts/ancient-coins-discovered-while-digging-the-soil-at-manvi-fort-in-raichur-district-rav-ogyboen</link>
            <guid isPermaLink="true">https://kannada.asianetnews.com/gallery/karnataka-districts/ancient-coins-discovered-while-digging-the-soil-at-manvi-fort-in-raichur-district-rav-ogyboen</guid>
            <pubDate>Sat, 22 Aug 2026 09:06:58 +0530</pubDate>
            <description><![CDATA[&lt;p&gt;ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಕೋಟೆಯ ಬಳಿ ನೆಲ ಅಗೆಯುವಾಗ ಒಂದಲ್ಲ ಎರಡಲ್ಲ ಮುನ್ನೂರಕ್ಕೂ ಹೆಚ್ಚು ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ. ಯಾವ ಕಾಲದ್ದು? ನಾಣ್ಯಗಳ ಮೇಲಿನ ಲಿಪಿ ಯಾವ ಭಾಷೆಯಲ್ಲಿದೆ ಹೆಚ್ಚಿನ ವಿವರ ತಿಳಿಯಿರಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0kqbah0brcz6eqwb50ntp90,imgname-whatsapp-image-2026-08-22-at-8.28.07-am-1787368417824.jpeg" type="image/jpeg" height="390" width="690"/>
            <content:encoded><![CDATA[&lt;p&gt;ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಕೋಟೆಯ ಬಳಿ ನೆಲ ಅಗೆಯುವಾಗ ಒಂದಲ್ಲ ಎರಡಲ್ಲ ಮುನ್ನೂರಕ್ಕೂ ಹೆಚ್ಚು ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ. ಯಾವ ಕಾಲದ್ದು? ನಾಣ್ಯಗಳ ಮೇಲಿನ ಲಿಪಿ ಯಾವ ಭಾಷೆಯಲ್ಲಿದೆ ಹೆಚ್ಚಿನ ವಿವರ ತಿಳಿಯಿರಿ&lt;/p&gt;&lt;img&gt;&lt;p&gt;ರಾಯಚೂರು ಜಿಲ್ಲೆಯ, ಮಾನ್ವಿ ತಾಲೂಕಿನ ಕಿಲ್ಲಾ ಪ್ರದೇಶದಲ್ಲಿ ಕೋಟೆಯ ಮಣ್ಣು ಅಗೆಯುವ ವೇಳೆ ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ. ಮಾನ್ವಿ ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಈ ಅಪರೂಪದ ನಾಣ್ಯಗಳು ಪತ್ತೆಯಾಗಿವೆ.&lt;/p&gt;&lt;img&gt;&lt;p&gt;ಕೋಟೆಯ ಬಳಿ ಮಣ್ಣು ಅಗೆಯುವ ವೇಳೆ ಒಂದಲ್ಲ, ಎರಡಲ್ಲ ಬರೋಬ್ಬರಿ 360 ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ನಾಣ್ಯಗಳು ಸಿಕ್ಕಿರುವ ಸುದ್ದಿ ಇದೀಗ ಇತಿಹಾಸಕಾರರು, ಸ್ಥಳೀಯರಿಗೂ ಕುತೂಹಲ ಮೂಡಿಸಿದೆ&lt;/p&gt;&lt;img&gt;&lt;p&gt;ವಿಷಯ ತಿಳಿಯುತ್ತಿದ್ದಂತೆ ಮಾನ್ವಿ ತಹಸೀಲ್ದಾರ್ ಭೀಮರಾಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪತ್ತೆಯಾದ ನಾಣ್ಯಗಳನ್ನ ಪರಿಶೀಲಿಸಿದರು. ಪತ್ತೆಯಾದ ನಾಣ್ಯಗಳು ಹೆಚ್ಚಿನ ಸಂಶೋಧನೆ ದೃಷ್ಟಿಯಿಂದ ವಶಕ್ಕೆ ತೆಗೆದುಕೊಂಡರು.&lt;/p&gt;&lt;img&gt;&lt;p&gt;ಪತ್ತೆಯಾಗಿರುವ ನಾಣ್ಯಗಳ ಮೇಲೆ ಉರ್ದು ಭಾಷೆಯ ಲಿಪಿ ಕಂಡುಬಂದಿದೆ. ಆದರೆ ಈ ನಾಣ್ಯಗಳು ಯಾವ ಕಾಲಕ್ಕೆ ಸೇರಿವೆ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ.&lt;/p&gt;&lt;img&gt;&lt;p&gt;ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಪುರಾತನ ವಸ್ತುಗಳು, ನಾಣ್ಯಗಳು ಹಾಗೂ ಶಿಲ್ಪಗಳು ಪತ್ತೆಯಾಗುತ್ತಿವೆ. ಗದಗ, ಬಳ್ಳಾರಿ ಜಿಲ್ಲೆಯ ಕೋಳೂರು ಬಳಿಕ ಇದೀಗ ರಾಯಚೂರಿನಲ್ಲೂ ಪುರಾತನ ನಾಣ್ಯಗಳು ಪತ್ತೆಯಾಗಿರುವುದು ರಾಜ್ಯದ ಇತಿಹಾಸ ಇನ್ನಷ್ಟು ವಿಸ್ತರಿಸಿದಂತಾಗಿದೆ.&lt;/p&gt;&lt;img&gt;&lt;p&gt;ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಪತ್ತೆಯಾಗಿರುವ ನಾಣ್ಯಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಾಣ್ಯಗಳ ಕಾಲಘಟ್ಟ ಹಾಗೂ ಹಿನ್ನೆಲೆ ಮುಂದಿನ ಪರಿಶೀಲನೆಯಿಂದ ತಿಳಿದುಬರಬೇಕಿದೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/ancient-coins-discovered-while-digging-the-soil-at-manvi-fort-in-raichur-district-rav-ogyboen"/>
        </item>
        <item>
            <title><![CDATA[ಸನಾತನ ಧರ್ಮಕ್ಕೆ ಸಮನಾದ ಮತ್ತೊಂದು ಧರ್ಮ ವಿಶ್ವದಲ್ಲೇ ಇಲ್ಲ: ಮಂತ್ರಾಲಯ ಶ್ರೀಗಳ ಹೇಳಿಕೆ]]></title>
            <link>https://kannada.asianetnews.com/karnataka-districts/mantralaya-math-seer-makes-significant-statement-on-ram-mandir-donation-theft-sanatana-dharma-rav/articleshow-v9ycitk</link>
            <guid isPermaLink="true">https://kannada.asianetnews.com/karnataka-districts/mantralaya-math-seer-makes-significant-statement-on-ram-mandir-donation-theft-sanatana-dharma-rav/articleshow-v9ycitk</guid>
            <pubDate>Tue, 25 Aug 2026 10:44:49 +0530</pubDate>
            <description><![CDATA[&lt;p&gt;ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ರಾಮಮಂದಿರ ಹುಂಡಿ ಕಳ್ಳತನ, ಸನಾತನ ಹಿಂದೂ ಧರ್ಮದ ಶ್ರೇಷ್ಠತೆ, ಮತ್ತು ಧಾರ್ಮಿಕ ಸಾಮರಸ್ಯದ ಬಗ್ಗೆ ಮಾತನಾಡಿದ್ದಾರೆ. ಮಠ-ಮಾನ್ಯಗಳಲ್ಲಿ ಆರ್ಥಿಕ ಪಾರದರ್ಶಕತೆಯ ಅಗತ್ಯವನ್ನು ಒತ್ತಿಹೇಳಿದ ಅವರು, ದಲಿತ ಕೇರಿಗೆ ಭೇಟಿ ನೀಡುವುದು ತಮಗೆ ಹೊಸದಲ್ಲ ಎಂದರು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0vn83ywpe286zjb7r3ky1fr,imgname-----------------------2026-08-25t103648.459-1787634651096.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಆ.25)&lt;/strong&gt;: ಮಠ-ಮಾನ್ಯಗಳು, ಸಂಘ-ಸಂಸ್ಥೆಗಳ ಆರ್ಥಿಕ ವಿಚಾರ ಆಡಳಿತದಲ್ಲಿ ಪಾರದರ್ಶಕವಾಗಿರಬೇಕು. ಆಡಳಿತ ನಡೆಸೋರು ಇದನ್ನೆಲ್ಲ ಗಮನಿಸಬೇಕು ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.&lt;/p&gt;&lt;p&gt;ರಾಮಮಂದಿರ ಹುಂಡಿ ಕಳ್ಳತನ ಪ್ರಕರಣ ಸಂಬಂಧ ಆಂಧ್ರಪ್ರದೇಶದ ಮಂತ್ರಾಲಯ ಮಠದಲ್ಲಿ ಮೌನಮುರಿದ ಶ್ರೀಗಳು, ರಾಮ ಮಂದಿರ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರ ತನಿಖೆ ನಡೆಸ್ತಿದೆ. ಈ ವಿಚಾರವಾಗಿ ತನಿಖೆ ಮುಂದುವರಿದಿದೆ. ನ್ಯಾಯಾಲಯದ ಹಂತದಲ್ಲಿ ಈ ವಿಚಾರ ತನಿಖೆ ನಡೆಯುತ್ತಿದೆ. ಅಲ್ಲಿ ನಿಜವಾಗಿಯೂ ಹುಂಡಿ ಕಳ್ಳತನ ನಡೆದಿದ್ರೆ ಅದರ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಖಂಡಿತ ಕ್ರಮ ಕೈಗೊಳ್ಳುತ್ತೆ ಎಂದರು.&lt;/p&gt;&lt;h2&gt;ಸನಾತನ ಹಿಂದೂ ಧರ್ಮಕ್ಕೆ ಸಮನಾದ ಮತ್ತೊಂದು ಧರ್ಮ ಇಲ್ಲ:&lt;/h2&gt;&lt;p&gt;ದೇಶ ರಾಜ್ಯದಲ್ಲಿ ನಿರಂತರವಾಗಿ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಈ ವಿಶ್ವದಲ್ಲಿ ಸನಾತನ ಹಿಂದೂ ಧರ್ಮ ಪ್ರಮುಖ ಧರ್ಮವಾಗಿದೆ. ಹಿಂದೂ ಧರ್ಮಕ್ಕೆ ಸಮನಾದ ಮತ್ತೊಂಉ ಇಡೀ ವಿಶ್ವದಲ್ಲೇ ಇಲ್ಲ ಅನ್ನೋ ಮನವರಿಕೆ ಇದೆ. ಇತರೆ ಧರ್ಮದವರ ಜೊತೆ ಗಲಭೆ, ದ್ವೇಷ, ಅಸೂಯೆ ಇಟ್ಟುಕೊಳ್ಳಬಾರದು. ನಮ್ಮ ದೇಶ ಶಾಂತಿಪ್ರಿಯ ದೇಶ, ನಮ್ಮ ರಾಜ್ಯ ಕರ್ನಾಟಕ ಶಾಂತಿಯ ಹೂದೋಟವಿದ್ದಂತೆ. ಇಲ್ಲಿ ಎಲ್ಲರೂ ಅವರವರ ಧರ್ಮ ಆಚರಣೆ ಮಾಡಿಕೊಂಡು ಅಣ್ಣ ತಮ್ಮಂದಿರಂತೆ ಇರಬೇಕು, ಭಾರತಾಂಬೆಯ ಮಕ್ಕಳಾಗಿ ನೆಲೆಸಬೇಕು ಎಂದರು. ಮತೀಯ ಗಲಭೆಯಿಂದ ದೇಶದಲ್ಲಿ ಅಶಾಂತಿ ಮೂಡಿಸದೆ ಎಲ್ಲಾ ಧರ್ಮದವರು ಇದರ ಬಗ್ಗೆ ಜಾಗೃತಿ ವಹಿಸಬೇಕು ಎಂದ ಶ್ರೀಗಳು, ಹಿಂದೂ ಧರ್ಮದ ಮೇಲೆ ಎಲ್ಲೇ ದೌರ್ಜನ್ಯ ನಡೆದರೂ ನಾವು ಖಂಡಿಸುತ್ತೇವೆ ಎಂದರು.&lt;/p&gt;&lt;h3&gt;ದಲಿತರ ಕಾಲೋನಿಗೆ ಹೋಗೋದು ನಮಗೇನು ಹೊಸದಲ್ಲ:&lt;/h3&gt;&lt;p&gt;ಇನ್ನು ಪೇಜಾವರ ಶ್ರೀಗಳು ದೆಹಲಿಯ ದಲಿತ ಸಮುದಾಯ ಬಡಾವಣಗೆ ಹೋಗಿ ಪೂಜೆ ನೆರವೇರಿಸಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಮಂತ್ರಾಲಯ ಶ್ರೀಗಳು, ಯಾವುದೇ ಜನಾಂಗಕ್ಕೆ ಹೋಗೋದು, ಹೋಗದೇ ಇರೋದು ಅಲ್ಲ. ಇಲ್ಲಿ ಎಲ್ಲ ಸಮುದಾಯಗಳು ಭಕ್ತರು ಬರ್ತಾರೆ. ಹಾಗೆ ನೋಡಿದ್ರೆ ನಮ್ಮ ಮಂತ್ರಾಲಯ ಮಠವೇ ಜಾತ್ಯಾತೀತ ಭಕ್ತರನ್ನು ಹೊಂದಿದೆ. ನಾವು ಅನೇಕ ಶೋಷಿತ ಜನರ ಸ್ಥಳಕ್ಕೆ ಹೋಗಿದ್ದೇವೆ, ಅವರಿಗೆ ಸಾಂತ್ವನ ಹೇಳಿದ್ದೇವೆ, ಆತ್ಮಸ್ತೈರ್ಯ, ಆತ್ಮಧೈರ್ಯ ತುಂಬಿದ್ದೇವೆ. ಆದರೆ ಅದನ್ನ ಪ್ರತ್ಯೇಕ ಕಾರ್ಯಕ್ರಮ ಮಾಡುವಂತದ್ದೇನಿಲ್ಲ. ನಾವು ಎಲ್ಲ ಸಮುದಾಯವನ್ನ ಒಟ್ಟಿಗೆ ಕರೆದೊಯ್ಯುತ್ತಿದ್ದೇವೆ. ನಾವು ಯಾವಾಗಲೂ ಆ ಕೆಲಸ ಮಾಡುತ್ತಲೇ ಇದ್ದೇವೆ. ಹೀಗಾಗಿ ನಮಗೆ ಇದು ಹೊಸದೇನಲ್ಲ ಎಂದ ಶ್ರೀಗಳು&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/mantralaya-math-seer-makes-significant-statement-on-ram-mandir-donation-theft-sanatana-dharma-rav/articleshow-v9ycitk"/>
        </item>
        <item>
            <title><![CDATA[ನಂಬರ್ ‘ಬ್ಲಾಕ್‌’ ಮಾಡಿದ್ದಕ್ಕೆ ಟವರ್ ಏರಿ ಕುಳಿತ; ಪ್ರೇಯಸಿ ಬರ್ತಿದ್ದಂತೆ ಇಳಿದ ಭೂಪ]]></title>
            <link>https://kannada.asianetnews.com/karnataka-districts/raichur-youth-upset-because-his-girlfriend-blocked-his-mobile-number-climbed-an-airtel-tower-in-devadurga-mrq/articleshow-vb9880h</link>
            <guid isPermaLink="true">https://kannada.asianetnews.com/karnataka-districts/raichur-youth-upset-because-his-girlfriend-blocked-his-mobile-number-climbed-an-airtel-tower-in-devadurga-mrq/articleshow-vb9880h</guid>
            <pubDate>Mon, 31 Aug 2026 06:32:33 +0530</pubDate>
            <description><![CDATA[ಪ್ರೇಯಸಿ ತನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ದೇವದುರ್ಗದಲ್ಲಿ ಏರ್&zwnj;ಟೆಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಸುಮಾರು ನಾಲ್ಕು ಗಂಟೆಗಳ ಕಾಲ ಅಧಿಕಾರಿಗಳನ್ನು ಕಾಡಿದ ಆತ, ಕೊನೆಗೆ ಪ್ರೇಯಸಿಯನ್ನು ಸ್ಥಳಕ್ಕೆ ಕರೆಸಿದ ನಂತರವೇ ಕೆಳಗಿಳಿದು ಬಂದಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1anb2md3b4nm57vm4m7m4m0,imgname-devadurga-1788138064525.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ಪ್ರೇಯಿಸಿ ತನ್ನ ಮೊಬೈಲ್&zwnj; ನಂಬರ್&zwnj;ರನ್ನು ಬ್ಲಾಕ್&zwnj;ಗೆ ಹಾಕಿದ್ದಾಳೆ ಎಂದು ನೊಂದ ಪ್ರೀಯಕರ ಏರ್&zwnj;ಟೆಲ್ ಮೊಬೈಲ್ ಟವರ್ ಕುಳಿತು ಬೆದರಿಕೆ ತಂತ್ರ ಹೂಡಿದ ಘಟನೆ ಪಟ್ಟಣದಲ್ಲಿ ಶನಿವಾರ ಸಂಜೆ ಜರುಗಿದೆ.&lt;/p&gt;&lt;p&gt;ಗಂಗಾವತಿ ಮೂಲದ ರಾಜು ಎಂಬ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಪ್ರೀತಿ ಮಾಡಿದ್ದ ಹುಡುಗಿ ದೇವದುರ್ಗ ತಾಲೂಕಿನ ಗ್ರಾಮವೊಂದರ ನಿವಾಸಿ. ಇವಳು ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು. ನಾಗರಪಂಚಮಿ ಹಬ್ಬಕ್ಕೆ ಬಂದಿದ್ದ ಹುಡುಗಿ ಪ್ರೇಮಿ ಪದೇ ಪದೇ ಫೋನ್ ಮಾಡುತ್ತಿದ್ದರಿಂದ ಬೇಸತ್ತು ಮೊಬೈಲ್ ನಂಬರ್ ಬ್ಲಾಕ್&zwnj;ಗೆ ಹಾಕಿದ್ದಳು ಎಂದು ಹೇಳಲಾಗುತ್ತಿದೆ.&lt;/p&gt;&lt;h2&gt;&lt;strong&gt;ಪ್ರೇಯಸಿ ಬರುತ್ತಿದ್ದಂತೆ ಕೆಳಗೆ ಇಳಿದು ಬಂದ ರಾಜು&amp;nbsp;&lt;/strong&gt;&lt;/h2&gt;&lt;p&gt;ಟವರ್ ಏರಿ ಕುಳಿತಿದ್ದ ಯುವಕ, ಕೆಳಗೆ ತನ್ನ ಮತ್ತು ಪ್ರೇಮಿಯ ಫೋನ್ ನಂಬರ್ ಇಟ್ಟಿದ್ದ. ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಆತನನ್ನು ಕೆಳಗಿಳಿಸಲು 4 ಗಂಟೆಗಳ ಕಾಲ ಪರದಾಡಿ ಹರಸಾಹಪಟ್ಟರು.&lt;/p&gt;&lt;p&gt;ಕೊನೆಗೆ ಪ್ರೇಮಿಯನ್ನು ಕರೆಸಿದ ಬಳಿಕ ಯುವಕ ಕೆಳಗೆ ಇಳಿದು ಬಂದಿದ್ದಾನೆ. ಯುವತಿಯನ್ನು ಸ್ವಗ್ರಾಮಕ್ಕೆ ಕಳುಹಿಸಲಾಗಿದೆ. ಕೂಡಲೇ ಯುವಕನನ್ನು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮನೋರೋಗಿ ಇರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ತಹಸೀಲ್ದಾರ್&zwnj; ನಾಗಮ್ಮ ಎಂ. ಕಟ್ಟೀಮನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಜಾನಕಿಯಾಗಿ ವೆಂಕಟೇಶ್ ರೆಡ್ಡಿ ಕೈ ಹಿಡಿದ ಶಹೀನಾ: ಸಪ್ತಪದಿ ತುಳಿದ ಅಪರೂಪದ ಪ್ರೇಮಕಥೆ&lt;/strong&gt;&lt;/p&gt;&lt;p&gt;ಪಿಐ ಮಂಜುನಾಥ ಎಸ್. ನೇತೃತ್ವದ ನಡೆದ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ. ಸುದ್ದಿ ತಿಳಿಯುತ್ತಲೇ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮೆಯಾಗಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಳೆಗಾಗಿ ದೇವರನ್ನೇ ಬೈದು ಪೂಜೆ! ಕಾಟಮಯ್ಯ ದೇವಸ್ಥಾನದಲ್ಲಿ ವಿಶಿಷ್ಟ ಸಂಪ್ರದಾಯ, ಪೂಜೆ&lt;/strong&gt;&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/raichur-youth-upset-because-his-girlfriend-blocked-his-mobile-number-climbed-an-airtel-tower-in-devadurga-mrq/articleshow-vb9880h"/>
        </item>
        <item>
            <title><![CDATA[ರಾಯರ ಮಧ್ಯಾರಾಧನೆಗೆ ಮಂತ್ರಾಲಯದಲ್ಲಿ ಭಕ್ತಿಯ ಮಹಾಪೂರ: ಚಿನ್ನದ ರಥೋತ್ಸವ ಕಣ್ತುಂಬಿಕೊಂಡ ಭಕ್ತರು]]></title>
            <link>https://kannada.asianetnews.com/karnataka-districts/raichur-raghavendra-swamy-s-355th-aradhana-grand-madhyaradhane-held-at-mantralayam-gvd/articleshow-yi4f4fs</link>
            <guid isPermaLink="true">https://kannada.asianetnews.com/karnataka-districts/raichur-raghavendra-swamy-s-355th-aradhana-grand-madhyaradhane-held-at-mantralayam-gvd/articleshow-yi4f4fs</guid>
            <pubDate>Mon, 31 Aug 2026 17:52:42 +0530</pubDate>
            <description><![CDATA[&lt;p&gt;ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ರಾಯರ ಮಧ್ಯಾರಾಧನೆಯನ್ನು ವೈಭವದಿಂದ ಆಚರಿಸಲಾಯಿತು. ಮಹಾ ಪಂಚಾಮೃತಾಭಿಷೇಕ, ಚಿನ್ನದ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1bw6c19fjw2pyjj1nnxprmf,imgname-bjkb-1788178804777.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಆ.31): &lt;/strong&gt;ತುಂಗಾತೀರ ನಿವಾಸಿ,ಯತಿಕುಲ ತಿಲಕ, ಕಲಿಯುಗದ ಕಾಮದೇನು,ಕಲ್ಪವೃಕ್ಷ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 355 ನೇ ಆರಾಧಾನಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಸಪ್ತರಾತ್ರೊತ್ಸವದ ನಾಲ್ಕನೇ ದಿನ ಆಚರೀಸಲ್ಪಡುವ ರಾಯರ ಮಧ್ಯಾರಾಧನೆಯನ್ನು ಅತ್ಯಂತ ಸಂಭ್ರಮ, ಸಡಗರದಿಂದ ಭಾನುವಾರ ನೆರವೇರಿಸಲಾಯಿತು.&lt;/p&gt;&lt;p&gt;ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ಪ್ರಯುಕ್ತ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಶ್ರೀಗುರುಸಾರ್ವಭೌಮರ ಮೂಲಬೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕ, ಅಲಂಕಾರ, ಪ್ರಹ್ಲಾದ ರಾಜರ ಉತ್ಸವ ಮೂರ್ತಿಯ ಚಿನ್ನದ ರಥೋತ್ಸವ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವೋಪಿತವಾಗಿ ಶ್ರದ್ಧಾ ಭಕ್ತಿ, ಸಂಭ್ರಮ ಸಡಗರದಿಂದ ಜರುಗಿದವು.&lt;/p&gt;&lt;p&gt;ಬೆಳಗ್ಗೆ ನೈರ್ಮಾಲ್ಯ ವಿಸರ್ಜನೆ, ಶ್ರೀಉತ್ಸವ ರಾಯರ ಪಾದಪೂಜೆ ಮತ್ತು ಪಂಚಾಮೃತ, ಪಂಡಿತರಿಂದ ಪ್ರವಚನ,ಗ್ರಂಥಗಳ ಪಾರಾಯಣ ಸೇರಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.&lt;/p&gt;&lt;p&gt;&lt;strong&gt;ವಿಶೇಷ ಮಹಾಪಂಚಾಮೃತಾಭಿಷೇಕ&lt;/strong&gt;&lt;/p&gt;&lt;p&gt;ಮಧ್ಯಾರಾಧನೆ ಹಿನ್ನೆಲೆಯಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಮೂಲ ಬೃಂದಾವನದಕ್ಕೆ ಮಹಾ ಪಂಚಾಮೃತಾಭಿಷೇಕವನ್ನು ನೆರವೇರಿಸಿದರು. ಹಾಲು, ಮೊಸರು, ತುಪ್ಪ, ಜೇನು, ವಿವಿಧ ಹಣ್ಣುಗಳು, ಗೋಡಂಬಿ, ಒಣದ್ರಾಕ್ಷಿ ಸೇರಿದಂತೆ ಹಲವು ದ್ರವ್ಯಗಳಿಂದ ಮೂಲ ಬೃಂದಾವನಕ್ಕೆ ಶ್ರೀಗಳು ಅಭಿಷೇಕಗೈದು ಮಂಗಳಾರತಿಯನ್ನು ಮಾಡಿದರು. ನಂತರ ಶ್ರೀಮೂಲ ರಘುಪತಿ ವೇದವಾಸ್ಯದೇವರಿಗೆ ವಿಶೇಷ ಅಲಂಕಾರ ಪೂಜೆ, ಹಸ್ತೋದಕ ಸಂತರ್ಪಣೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದವನ್ನು ನೆರವೇರಿಸಿದರು.&lt;/p&gt;&lt;h2&gt;&lt;strong&gt;ಚಿನ್ನದ ರಥೋತ್ಸವ&lt;/strong&gt;&lt;/h2&gt;&lt;p&gt;ಈ ವೇಳೆ ಶ್ರೀಮಠದ ಒಳಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಸುವರ್ಣ ರಥದಲ್ಲಿ ರಾಯರ ಚಿನ್ನದ ಪ್ರಭಾವಳಿ,ಪಾದುಕೆ ಹಾಗೂ ಪರಿಮಳ ಗ್ರಂಥವನ್ನಿರಿಸಿ ಮಹಾಮಂಗಳಾರತಿ ಸೇವೆ ಗೈದಯುವುದರ ಮುಖಾಂತರ ಶ್ರೀಪಾದಂಗಳವರು ರಥೋತ್ಸವಕ್ಕೆ ಚಾಲನೆ ನೀಡಿದರು.&lt;/p&gt;&lt;p&gt;ಪ್ರಾಕಾರದ ಸುತ್ತು ಹೊಡೆದ ರಥೋತ್ಸವದ ಮುಂದೆ ಸೇರಿದದ್ದ ಜನಸ್ತೋಮವು ವೇದ-ಮಂತ್ರಗಳ ಘೋಷಣೆ, ಗಾಯನ,ನೃತ್ಯರೂಪಕಗಳನ್ನು ನಡೆಸಿ ಮಧ್ಯಾರಾಧನೆಯ ಸಂಭ್ರಮದಲ್ಲಿ ಮಿಂದೆದ್ದರು. ಇನ್ನು ಸಂಜೆ ಹಗಲು ದೀವಟಗೆ, ಮಾಲ್ಕಿ ಮಂಗಳಾರತಿ ಸೇವೆ, ಸ್ವಸ್ಥಿ ವಚನ ಮತ್ತು ಪ್ರಾಕಾರ ಉತ್ಸವದ ಜೊತೆಗೆ ಶ್ರೀಮಠದ ಮುಂಭಾಗದ ಯೋಗೀಂದ್ರ ಸಭಾಮಂಟಪದಲ್ಲಿ ಜರುಗಿದ ವಿವಿಧ ಸಾಂಸ್ಕೃತಿಕ-ಧಾರ್ಮಿಕ ಸಮಾರಂಭಗಳು ಭಕ್ತ ಸಮುದಾದ ಗಮನ ಸೆಳೆದವು. ಈ ಸಂದರ್ಭದಲ್ಲಿ ಶ್ರೀಮಠದ ವೇದ ಪಂಡಿತರು, ವಿದ್ವಾಂಸರು, ಅಧಿಕಾರಿ-ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು.&lt;/p&gt;]]></content:encoded>
            <category>raichur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/raichur-raghavendra-swamy-s-355th-aradhana-grand-madhyaradhane-held-at-mantralayam-gvd/articleshow-yi4f4fs"/>
        </item>
    </channel>
</rss>
