<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 08 Jun 2026 06:37:11 +0530</lastBuildDate>
        <atom:link href="https://kannada.asianetnews.com/rss/raichur" rel="self" type="application/rss+xml"/>
        <item>
            <title><![CDATA[ಕರ್ನಾಟಕದಿಂದ ಸೋಲಾಪುರ ಮಾರ್ಗವಾಗಿ ಹೋಗುವ ಹಲವು ರೈಲು ಸಂಚಾರ ನಿರ್ಬಂಧ, ಜೂ. 5ರಿಂದ10ರವರೆಗೆ ಹಲವು ಟ್ರೈನ್ ರದ್ದು!]]></title>
            <link>https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</link>
            <guid isPermaLink="true">https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</guid>
            <pubDate>Fri, 05 Jun 2026 12:14:53 +0530</pubDate>
            <description><![CDATA[ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ನಡೆಯುತ್ತಿರುವ ಮೇಲ್ದರ್ಜೆ ಕಾಮಗಾರಿಯಿಂದಾಗಿ ಕೇಂದ್ರ ರೈಲ್ವೆಯು ಜೂನ್ 5 ರಿಂದ 10 ರವರೆಗೆ ಹಲವು ರೈಲುಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ಕೆಲವು ರೈಲುಗಳ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ ಹಾಗೂ ಸೋಲಾಪುರ-ಕಲಬುರಗಿ ವಿಶೇಷ ರೈಲು ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks4rgymmydvxhdywfct5zw88,imgname-indian-railways--2--1779350141588.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ಮೇಲ್ದರ್ಜೆ ಕಾಮಗಾರಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಇಂಟರ್&zwnj;ಲಾಕಿಂಗ್&zwnj;ನ್ನು ನಿಯೋಜಿಸಲು ಪೂರ್ವ-ಇಂಟರ್&zwnj;ಲಾಕಿಂಗ್ ಅಲ್ಲದ ಮತ್ತು ಇಂಟರ್&zwnj;ಲಾಕಿಂಗ್ ಅಲ್ಲದ ಕೆಲಸದಿಂದಾಗಿ ಜೂನ್ 5ರಿಂದ 10ರವರೆಗೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಹಲವು ರೈಲುಗಳ ಮೇಲೆ ಸಂಚಾರ ನಿರ್ಬಂಧ ವಿಧಿಸಿದೆ.&lt;/p&gt;&lt;h2&gt;ನಿಯಂತ್ರಣ ಯಾವ ರೈಲುಗಳ ಮೇಲೆ ?&lt;/h2&gt;&lt;p&gt;ಜೂನ್&zwnj; 5 ರಂದು ರೈಲು ಸಂಖ್ಯೆ 11311 ಸೋಲಾಪುರ-ಹಾಸನ ಎಕ್ಸ್&zwnj;ಪ್ರೆಸ್ ಹಾಗೂ ರೈಲು ಸಂಖ್ಯೆ 17308 ಬಾಗಲಕೋಟೆ- ಮೈಸೂರು ಬಸವಾ ಎಕ್ಸ್&zwnj;ಪ್ರೆಸ್ ಸಂಚಾರದ ಮೇಲೆ 45 ನಿಮಿಷಗಳ ನಿಯಂತ್ರಣವಿರಲಿದೆ. ಜೂ. 8 ರಂದು ರೈಲು ಸಂಖ್ಯೆ 18520 ಎಲ್&zwnj;ಟಿಟಿ ಮುಂಬೈ- ವಿಶಾಖಪಟ್ಟಣ ಎಕ್ಸ್&zwnj;ಪ್ರೆಸ್ಜೂ 2 ಗಂಟೆ, ರೈಲು ಸಂಖ್ಯೆ 01465 ಸೋಲಾಪುರ-ಕಲಬುರಗಿ ವಿಶೇಷ 1 ಗಂಟೆ 30 ನಿಮಿಷ, ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ 30 ನಿಮಿಷ, ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 30 ನಿಮಿಷ ನಿಯಂತ್ರಣದಲ್ಲಿರಲಿವೆ.&lt;/p&gt;&lt;p&gt;ಜೂನ್&zwnj; 9 ರಂದು ರೈಲು ಸಂಖ್ಯೆ 16382 ಕನ್ಯಾಕುಮಾರಿ-ಪುಣೆ ಎಕ್ಸ್&zwnj;ಪ್ರೆಸ್ 1 ಗಂಟೆ 15 ನಿಮಿಷ, ರೈಲು ಸಂಖ್ಯೆ 11020 ಭುವನೇಶ್ವರ- ಸಿಎಸ್&zwnj;ಎಂಟಿ ಮುಂಬೈ ಎಕ್ಸ್&zwnj;ಪ್ರೆಸ್ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.&lt;/p&gt;&lt;h2&gt;ಕೆಲವು ರೈಲು ಮಾರ್ಗ ಬದಲಾವಣೆ:&lt;/h2&gt;&lt;p&gt;ರೈಲು ಸಂಖ್ಯೆ 57662 ವಿಜಯಪುರ-ರಾಯಚೂರು ಪ್ಯಾಸೆಂಜರ್ ಜೂ. 5 ರಿಂದ 10 ರ ವರೆಗೆ ವಿಜಯಪುರ-ಹೋಟ್ಗಿ-ವಾಡಿ ಮಾರ್ಗ, ರೈಲು ಸಂಖ್ಯೆ 57661 ರಾಯಚೂರು-ವಿಜಯಪುರ ಪ್ಯಾಸೆಂಜರ್ ವಾಡಿ-ಹೋಟ್ಗಿ-ವಿಜಯಪುರ ಮೂಲಕ ಮಾರ್ಗ ಬದಲಾವಣೆ ಮಾಡಲಾಗುತ್ತದೆ.&lt;/p&gt;&lt;p&gt;ಕೆಳಗಿನ ರೈಲುಗಳನ್ನು ನಿರ್ದಿಷ್ಟಪಡಿಸಿದಂತೆ ಮರುಹೊಂದಿಸಲಾಗುತ್ತದೆ. ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ ಜೂ. 10 ರಂದು 2 ಗಂಟೆ 20 ನಿಮಿಷಗಳ ಕಾಲ ಮತ್ತು ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 2 ಗಂಟೆ 15 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ.&lt;/p&gt;&lt;p&gt;ರೈಲು ಸಂಖ್ಯೆ 01465 ಸೋಲಾಪುರ- ಕಲಬುರಗಿ ಮತ್ತು ರೈಲು ಸಂಖ್ಯೆ 01466 ಕಲಬುರಗಿ- ಸೋಲಾಪುರ ಈ ರೈಲು ಜೂ. 10 ರಂದು ರದ್ದು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep"/>
        </item>
        <item>
            <title><![CDATA[ಮಂತ್ರಾಲಯಕ್ಕೆ ಹೋಗೋ ಭಕ್ತರ ಗಮನಕ್ಕೆ, ಕರ್ನಾಟಕದ ಛತ್ರದಲ್ಲಿ ಬತ್ತಿದ ಬೋರ್‌ವೆಲ್, ನೀರಿನ ಅಭಾವಕ್ಕೆ ವಸತಿಗೃಹ ಬಂದ್!]]></title>
            <link>https://kannada.asianetnews.com/karnataka-districts/mantralaya-karnataka-choultry-shuts-50-rooms-due-to-water-crisis-gdp/articleshow-6askfth</link>
            <guid isPermaLink="true">https://kannada.asianetnews.com/karnataka-districts/mantralaya-karnataka-choultry-shuts-50-rooms-due-to-water-crisis-gdp/articleshow-6askfth</guid>
            <pubDate>Mon, 25 May 2026 13:28:17 +0530</pubDate>
            <description><![CDATA[ಮಂತ್ರಾಲಯದಲ್ಲಿ ಕರ್ನಾಟಕದ ಭಕ್ತರಿಗಾಗಿ ನಿರ್ಮಿಸಲಾದ ಕರ್ನಾಟಕ ಛತ್ರವು ತೀವ್ರ ನೀರಿನ ಅಭಾವದಿಂದಾಗಿ ಮುಚ್ಚಲ್ಪಟ್ಟಿದೆ. ಬೋರ್&zwnj;ವೆಲ್&zwnj;ಗಳ ವೈಫಲ್ಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 50 ಕೋಣೆಗಳ ವಸತಿ ಗೃಹಕ್ಕೆ ಬೀಗ ಹಾಕಲಾಗಿದ್ದು, ರಾಯರ ದರ್ಶನಕ್ಕೆ ಬರುವ ಭಕ್ತರು ವಸತಿ ಸೌಕರ್ಯವಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksf27623vvv1qd5f13b07g1s,imgname-mantralaya-karnataka-choultry-1779695851587.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು: &lt;/strong&gt;ಮಂತ್ರಾಲಯಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತರಿಗೆ ವಸತಿ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಸುಸಜ್ಜಿತ ಕರ್ನಾಟಕ ಛತ್ರವನ್ನು (ವಸತಿ ಗೃಹ) ನಿರ್ಮಿಸಲಾಗಿದೆ. ರಾಯರ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಇಲ್ಲಿ ಒಟ್ಟು 50 ಕೋಣೆಗಳ (ರೂಂ) ವ್ಯವಸ್ಥೆ ಇದೆ. ಆದರೆ, ಪ್ರಸ್ತುತ ಈ ವಸತಿ ಗೃಹದಲ್ಲಿ ತೀವ್ರ ಸ್ವರೂಪದ ನೀರಿನ ಅಭಾವ ತಲೆದೋರಿದೆ. ಛತ್ರದ ಆವರಣದಲ್ಲಿರುವ 50 ರೂಂಗಳಿಗೆ ನೀರು ಸರಬರಾಜು ಮಾಡಲು ಎರಡು ಬೋರ್&zwnj;ವೆಲ್&zwnj;ಗಳನ್ನು ಅವಲಂಬಿಸಲಾಗಿತ್ತು. ಆದರೆ, ಸಮರ್ಪಕ ನಿರ್ವಹಣೆಯಿಲ್ಲದೆ ಇದರಲ್ಲಿ ಒಂದು ಬೋರ್&zwnj;ವೆಲ್ ಸಂಪೂರ್ಣವಾಗಿ ಕೆಟ್ಟು ನಿಂತಿದೆ. ಇನ್ನುಳಿದ ಮತ್ತೊಂದು ಬೋರ್&zwnj;ವೆಲ್&zwnj;ನಲ್ಲಿ ಬೇಸಿಗೆಯ ಭೀಕರ ತಾಪ ಹಾಗೂ ಅಂತರ್ಜಲ ಕುಸಿತದಿಂದಾಗಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆ ಬೋರ್&zwnj;ವೆಲ್&zwnj;ನಿಂದ ಆಗೊಮ್ಮೆ ಈಗೊಮ್ಮೆ ಅಲ್ಪಸ್ವಲ್ಪ ನೀರು ಬರುತ್ತಿದೆಯಾದರೂ, ಅದು ಇಡೀ ವಸತಿ ಗೃಹದ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.&lt;/p&gt;&lt;h2&gt;ಅಧಿಕಾರಿಗಳ ನಿರ್ಲಕ್ಷ್ಯ - ಭಕ್ತರ ಆಕ್ರೋಶ:&lt;/h2&gt;&lt;p&gt;ಬೋರ್&zwnj;ವೆಲ್ ರಿಪೇರಿ ಹಾಗೂ ಅದಕ್ಕೆ ಮರುಪೂರಣ (ರಿಚಾರ್ಜ್) ವ್ಯವಸ್ಥೆ ಮಾಡುವಲ್ಲಿ ಸಂಬಂಧಪಟ್ಟ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯ ಮತ್ತು ಮೈಗಳ್ಳತನದಿಂದಾಗಿ ಬೋರ್&zwnj;ವೆಲ್ ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿದೆ. ಇದರ ನೇರ ಪರಿಣಾಮವನ್ನು ರಾಯರ ದರ್ಶನಕ್ಕೆ ಸಾಲು ಸಾಲಾಗಿ ಬರುತ್ತಿರುವ ಭಕ್ತರು ಎದುರಿಸುವಂತಾಗಿದೆ. ದೂರದ ಊರುಗಳಿಂದ ನೆಮ್ಮದಿಯ ದರ್ಶನಕ್ಕಾಗಿ ಬರುವ ಭಕ್ತರು, ಕರ್ನಾಟಕ ಛತ್ರದಲ್ಲಿ ಕೋಣೆಗಳು ಸಿಗದೇ ತೀವ್ರ ಪರದಾಡುವಂತಾಗಿದೆ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಭಕ್ತರು ವಸತಿ ಸೌಕರ್ಯವಿಲ್ಲದೆ ನಿರಾಶರಾಗಿ ವಾಪಸ್ ಹೋಗುತ್ತಿದ್ದಾರೆ.&lt;/p&gt;&lt;h2&gt;ವಸತಿ ಗೃಹಕ್ಕೆ ಬೀಗ!&lt;/h2&gt;&lt;p&gt;ನೀರಿನ ತೀವ್ರ ಅಭಾವವಿರುವ ಕಾರಣ 50 ಕೋಣೆಗಳಿಗೂ ಸದ್ಯ ಬೀಗ ಹಾಕಲಾಗಿದ್ದು, ಭಕ್ತರಿಗೆ ಕೋಣೆಗಳನ್ನು ನೀಡಲಾಗುತ್ತಿಲ್ಲ. ಈ ಕುರಿತು ವಸತಿ ಗೃಹದ ಸಿಬ್ಬಂದಿಯು ಪ್ರವೇಶ ದ್ವಾರದಲ್ಲಿ, ನೀರಿನ ಅಭಾವವಿರುವುದರಿಂದ ರೂಂಗಳನ್ನು ನೀಡಲಾಗುವುದಿಲ್ಲ. ದಯವಿಟ್ಟು ಭಕ್ತಾದಿಗಳು ಸಹಕರಿಸಬೇಕು ಎಂದು ಸಾರ್ವಜನಿಕ ಪ್ರಕಟಣೆಯ ನೋಟಿಸ್ ಬೋರ್ಡ್ ಹಾಕಿದ್ದಾರೆ. ಸಿಬ್ಬಂದಿಯ ಈ ಧೋರಣೆ ಮತ್ತು ವ್ಯವಸ್ಥೆಯ ವೈಫಲ್ಯಕ್ಕೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;ತಕ್ಷಣದ ಕ್ರಮಕ್ಕೆ ಭಕ್ತರ ಆಗ್ರಹ:&lt;/h2&gt;&lt;p&gt;ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಕರ್ನಾಟಕದಿಂದ ಧಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಅಧೀನದಲ್ಲಿರುವ ವಸತಿ ಗೃಹವೇ ನಿರ್ವಹಣೆಯಿಲ್ಲದೆ ಮುಚ್ಚಿರುವುದು ದುರದೃಷ್ಟಕರ. ಆದ್ದರಿಂದ, ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಕೆಟ್ಟುಹೋಗಿರುವ ಬೋರ್&zwnj;ವೆಲ್&zwnj;ಗಳನ್ನು ಸಮರೋಪಾದಿಯಲ್ಲಿ ರಿಪೇರಿ ಮಾಡಿಸಬೇಕು. ವಸತಿ ಗೃಹಕ್ಕೆ ಶಾಶ್ವತ ನೀರಿನ ಸೌಕರ್ಯ&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mantralaya-karnataka-choultry-shuts-50-rooms-due-to-water-crisis-gdp/articleshow-6askfth"/>
        </item>
        <item>
            <title><![CDATA[ಒಂದು ಕಡೆ ಸಾಲ,  ಪತ್ನಿಯೂ ದೂರ, ಸಿಂಧನೂರು ಜ್ಯುವೆಲರ್ಸ್ ಮಾಲೀಕನ ದುರಂತ ಅಂತ್ಯ, ಡೆತ್‌ನೋಟ್‌ನಲ್ಲಿ ಏನಿತ್ತು?]]></title>
            <link>https://kannada.asianetnews.com/karnataka-districts/raichur-sindhanur-gold-shop-owner-pranesh-varnekar-death-case/articleshow-czkbu77</link>
            <guid isPermaLink="true">https://kannada.asianetnews.com/karnataka-districts/raichur-sindhanur-gold-shop-owner-pranesh-varnekar-death-case/articleshow-czkbu77</guid>
            <pubDate>Tue, 12 May 2026 09:02:01 +0530</pubDate>
            <description><![CDATA[&lt;p&gt;ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ 'ಸಮರ್ಥ್ ಜ್ಯೂವೆಲರ್ಸ್' ಮಾಲೀಕ ಪ್ರಾಣೇಶ್ ವರ್ಣೇಕರ್ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 2.5 ಕೋಟಿಗೂ ಅಧಿಕ ಸಾಲ ಮತ್ತು ಕೌಟುಂಬಿಕ ಕಲಹದಿಂದ ಮನನೊಂದು ಈ ನಿರ್ಧಾರಕ್ಕೆ ಬಂದಿರಬಹುದೆಂದು ಶಂಕಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krd390hevzh668fwftx78xpw,imgname-----------------------2026-05-12t085135.028-1778556109358.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿಂಧನೂರು (ಮೇ.12):&lt;/strong&gt; ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಆದರ್ಶ ಕಾಲೋನಿಯಲ್ಲಿ ಆಘಾತಕಾರಿ ದೃಶ್ಯ ಸ್ಥಳೀಯರು ಬೆಚ್ಚಿಬೀಳಿಸಿದೆ. ಪಟ್ಟಣದಲ್ಲಿ ಪರಿಚಿತವಾಗಿದ್ದ ಚಿನ್ನದ ಅಂಗಡಿ ಮಾಲೀಕ ಪ್ರಾಣೇಶ್ ವರ್ಣೇಕರ್ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.&lt;/p&gt;&lt;h2&gt;ಬಾಗಿಲು ತೆರೆದೇ ಸೂ ಸೈಡ್ ಅನುಮಾನ ಹುಟ್ಟಿಸಿದೆ!&lt;/h2&gt;&lt;p&gt;ಸಾಮಾನ್ಯವಾಗಿ ಪಟ್ಟಣದಲ್ಲಿ ಮನೆಗಳ ಬಾಗಿಲು ಮುಚ್ಚಿರುತ್ತವೆ. ಅದು ರಾತ್ರಿವೇಳೆ ಬಾಗಿಲು ತೆರೆದು ಯಾರೂ ಮಲಗುವುದಿಲ್ಲ. ಆದರೆ ಪ್ರಾಣೇಶ್ ಮನೆಯ ಬಾಗಿಲು ತೆರೆದಿದ್ದೇ ಸ್ಥಳೀಯರಿಗೆ ಅನುಮಾನಕ್ಕೆ ಕಾರಣವಾಗಿದೆ. ಒಳಗೆ ಹೋಗಿ ನೋಡಿದಾಗ ಫ್ಯಾನ್&zwnj;ಗೆ ನೇ ಣು ಹಾಕಿಕೊಂಡ ಸ್ಥಿತಿಯಲ್ಲಿ ಪ್ರಾಣೇಶ್ ಅವರ ಶವ ಕಂಡುಬಂದಿದ್ದು, ಕುಟುಂಬಸ್ಥರು ಮತ್ತು ನೆರೆಹೊರೆಯವರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;h3&gt;ಸಮರ್ಥ್ ಜ್ಯೂವೆಲ್ಲರ್ಸ್ ಚಿನ್ನದ ಅಂಗಡಿ ನಡೆಸುತ್ತಿದ್ದ ಪ್ರಾಣೇಶ್&lt;/h3&gt;&lt;p&gt;38 ವರ್ಷದ ಪ್ರಾಣೇಶ್ ವರ್ಣೇಕರ್ ಸಿಂಧನೂರಿನಲ್ಲಿ &ldquo;ಸಮರ್ಥ್ ಜ್ಯೂವೆಲರ್ಸ್&rdquo; ಎಂಬ ಚಿನ್ನದ ಅಂಗಡಿ ನಡೆಸುತ್ತಿದ್ದರು. ಚಿನ್ನದ ವ್ಯವಹಾರಗಳ ಜೊತೆಗೆ ಲೇವಾದೇವಿಯನ್ನೂ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಖಾಸಗಿ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;ಆದರೆ ಕಳೆದ ಕೆಲವು ತಿಂಗಳುಗಳಿಂದ ಆರ್ಥಿಕ ಸಂಕಷ್ಟ ಅವರ ಬದುಕನ್ನು ಕಂಗೆಡಿಸಿತ್ತು ಎನ್ನಲಾಗುತ್ತಿದೆ. ಸುಮಾರು 2.5 ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದರೆಂಬ ಮಾಹಿತಿ ಹೊರಬಿದ್ದಿದೆ. ಇದೇ ಸಾಲದ ಒತ್ತಡ ಆತ್ಮ೧ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.&lt;/p&gt;&lt;p&gt;ಇದಕ್ಕಿಂತಲೂ ನೋವುಂಟು ಮಾಡಿದ ಸಂಗತಿ ಎಂದರೆ, ಇತ್ತೀಚೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ದೂರವಾಗಿದ್ದರೆಂಬ ಮಾಹಿತಿ. ಒಂದೆಡೆ ಸಾಲದ ಕಾಟ&hellip; ಮತ್ತೊಂದೆಡೆ ವೈಯಕ್ತಿಕ ಬದುಕಿನ ಸಮಸ್ಯೆಗಳು&hellip; ಇವೆಲ್ಲವೂ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತೇ ಎಂಬ ಪ್ರಶ್ನೆ ಮೂಡಿದೆ.&lt;/p&gt;&lt;p&gt;ಆತ್ಮ೧ಹತ್ಯೆಗೆ ಮುನ್ನ ಪ್ರಾಣೇಶ್ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಡೆತ್ ನೋಟ್&zwnj;ನಲ್ಲಿ ಏನಿದೆ ಎಂಬುದರ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.&lt;/p&gt;&lt;p&gt;ಘಟನೆ ತಿಳಿಯುತ್ತಿದ್ದಂತೆ ಸಿಂಧನೂರು ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/raichur-sindhanur-gold-shop-owner-pranesh-varnekar-death-case/articleshow-czkbu77"/>
        </item>
        <item>
            <title><![CDATA[ನೀರು ಕೇಳ್ತಾರೆ, ಹೂವಿನ ಆಶೀರ್ವಾದ ಮಾಡ್ತಾರೆ;  ಮಾಯವಾಗುತ್ತೆ ನಿಮ್ಮಲ್ಲಿರೋ ಚಿನ್ನ-ಹಣ!]]></title>
            <link>https://kannada.asianetnews.com/gallery/karnataka-districts/raichur-man-dressed-as-a-saint-offered-flowers-to-a-medical-shop-owner-and-stole-cash-and-a-gold-ring-sindhanur-city-mrq-g6z58p9</link>
            <guid isPermaLink="true">https://kannada.asianetnews.com/gallery/karnataka-districts/raichur-man-dressed-as-a-saint-offered-flowers-to-a-medical-shop-owner-and-stole-cash-and-a-gold-ring-sindhanur-city-mrq-g6z58p9</guid>
            <pubDate>Sat, 16 May 2026 09:04:26 +0530</pubDate>
            <description><![CDATA[&lt;p&gt;ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ, ಸಾಧು ವೇಷಧಾರಿಸಾಧು ವೇಷಧಾರಿಯೊಬ್ಬ ಮೆಡಿಕಲ್ ಶಾಪ್ ಮಾಲೀಕನಿಗೆ ಹೂವು ನೀಡಿ ಮಂಪರು ಬರಿಸಿ, ನಗದು ಹಾಗೂ ಚಿನ್ನದ ಉಂಗುರವನ್ನು ದೋಚಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqd7ey4y4ph0bbjea7g99mc,imgname-raichur-cheating--5--1778902088644.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ, ಸಾಧು ವೇಷಧಾರಿಸಾಧು ವೇಷಧಾರಿಯೊಬ್ಬ ಮೆಡಿಕಲ್ ಶಾಪ್ ಮಾಲೀಕನಿಗೆ ಹೂವು ನೀಡಿ ಮಂಪರು ಬರಿಸಿ, ನಗದು ಹಾಗೂ ಚಿನ್ನದ ಉಂಗುರವನ್ನು ದೋಚಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ರಾಯಚೂರು: ಮೆಡಿಕಲ್ ಶಾಪ್&zwnj;ನಲ್ಲಿದ್ದ ವ್ಯಕ್ತಿಗೆ ಸಾಧು ವೇಷಧಾರಿಯೋರ್ವ ಮೋಸ ಮಾಡಿ ಚಿನ್ನ ಮತ್ತು ಹಣ ದೋಚಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಶ್ರೀ ಸಾಯಿ ಮೆಡಿಕಲ್ ಶಾಪ್ ಮಾಲೀಕ ವಿಷ್ಣು ದತ್ತ ಎಂಬವರಿಗೆ ವಂಚನೆ ಮಾಡಲಾಗಿದೆ.&lt;/p&gt;&lt;img&gt;&lt;p&gt;ಸಾಧು ವೇಷಧಾರಿಯೋರ್ವ ಮೆಡಿಕಲ್ ಶಾಪ್&zwnj; ಮುಂದೆ ಇರಿಸಲಾಗಿದ್ದ ನೀರು ಕುಡಿಯಲು ಬರುತ್ತಾನೆ. ಇದನ್ನು ನೋಡಿದ ವಿಷ್ಣು ದತ್ತ ಅವರು ಕನಿಕರದಿಂದ ಸಾಧುಗೆ ಕುಡಿಯಲು ಫ್ರಿಡ್ಕ್&zwnj;ನಲ್ಲಿದ್ದ ತಣ್ಣೀರು ಕೊಡುತ್ತಾರೆ. ನೀರು ಕುಡಿದ ಬಳಿಕ ಸಾಧು, ಆಶೀರ್ವಾದ ರೂಪದಲ್ಲಿ ಎರಡು ಹೂಗಳನ್ನು ನೀಡುತ್ತಾರೆ.&lt;/p&gt;&lt;img&gt;&lt;p&gt;ಹೂವಿನ ವಾಸನೆಯಿಂದ ವಿಷ್ಣು ದತ್ತಾ ಮಂಪರು ಬಂದಂತಾಗಿದೆ. ಈ ವೇಳೆ ಸಾಧು ವೇಷಧಾರಿ ಕಳ್ಳ, ಅಂಗಡಿಯಲ್ಲಿದ್ದ 10,500 ರೂಪಾಯಿ ನಗದು, ವಿಷ್ಣು ದತ್ತ್ ಕೈಯಲ್ಲಿದ್ದ 5 ಗ್ರಾಂ ಚಿನ್ನದುಂಗರ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಸಾಧು ಹೋದ ಕೆಲ ನಿಮಿಷಗಳ ಬಳಿಕ ವಿಷ್ಣು ದತ್ತ ಎಚ್ಚರಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೈಯಲ್ಲಿದ್ದ ಗೋಲ್ಡ್ ರಿಂಗ್ ಮತ್ತು ಅಂಗಡಿಯಲ್ಲಿದ್ದ ಹಣ ಇಲ್ಲದಿರೋದನ್ನು ನೋಡಿ ಸಿಂಧನೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೆಡಿಕಲ್ ಶಾಪ್&zwnj; ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಸ್ವ ಕ್ಷೇತ್ರದಲ್ಲೇ ಎಸಿ ಕೋರ್ಟ್ ಕೇಸ್&zwnj; ಬಾಕಿಗೆ ಕೃಷ್ಣ ಬೈರೇಗೌಡ ಗರಂ, ಸಚಿವರಿಗೆ ತಲೆನೋವಾದ ಆ ಅಧಿಕಾರಿ!&lt;/strong&gt;&lt;/p&gt;&lt;img&gt;&lt;p&gt;ಸಾಧು ವೇಷಧಾರಿಯಾಗಿ ಸಿಂಧನೂರು ಪಟ್ಟಣದಲ್ಲಿ ಮೂವರು ಸುತ್ತಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸ್ಥಳೀಯವಾಗಿ ಸಾಧುಗಳ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮೋದಿ ಭೇಟಿ ಸಮಯದ ಜಿಲಿಟಿನ್ ಪತ್ತೆ ಪ್ರಕರಣ; ತನಿಖೆಯಲ್ಲಿ ಅಚ್ಚರಿ ವಿಷಯ ಬಹಿರಂಗ!&lt;/strong&gt;&lt;/p&gt;]]></content:encoded>
            <category>raichur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/raichur-man-dressed-as-a-saint-offered-flowers-to-a-medical-shop-owner-and-stole-cash-and-a-gold-ring-sindhanur-city-mrq-g6z58p9"/>
        </item>
        <item>
            <title><![CDATA[ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: ರಾಯರ ದರ್ಶನ ಸುಲಭ]]></title>
            <link>https://kannada.asianetnews.com/gallery/karnataka-districts/indian-railways-mangaluru-central-to-mantralaya-direct-special-express-train-service-for-four-weeks-mrq-gbmzhi3</link>
            <guid isPermaLink="true">https://kannada.asianetnews.com/gallery/karnataka-districts/indian-railways-mangaluru-central-to-mantralaya-direct-special-express-train-service-for-four-weeks-mrq-gbmzhi3</guid>
            <pubDate>Sat, 06 Jun 2026 06:50:53 +0530</pubDate>
            <description><![CDATA[&lt;p&gt;ಜೂನ್ ತಿಂಗಳ ಪ್ರಯಾಣಿಕರ ದಟ್ಟಣೆ ನಿವಾರಿಸಲು ಭಾರತೀಯ ರೈಲ್ವೆ ಇಲಾಖೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್&zwnj; ರೈಲುಗಳ ಸೇವೆಯನ್ನು ಘೋಷಿಸಿದೆ. ಯಲಹಂಕ, ಕೆಆರ್ ಪುರಂ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktd7em5c4wh3891yacknghy3,imgname-mangaluru-to-mantralaya--2--1780707971244.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೂನ್ ತಿಂಗಳ ಪ್ರಯಾಣಿಕರ ದಟ್ಟಣೆ ನಿವಾರಿಸಲು ಭಾರತೀಯ ರೈಲ್ವೆ ಇಲಾಖೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್&zwnj; ರೈಲುಗಳ ಸೇವೆಯನ್ನು ಘೋಷಿಸಿದೆ. ಯಲಹಂಕ, ಕೆಆರ್ ಪುರಂ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;&lt;img&gt;&lt;p&gt;ಜೂನ್ ತಿಂಗಳ ಪ್ರವಾಸ ಮತ್ತು ಉದ್ಯೋಗದ ನಿಮಿತ್ತ ರೈಲುಗಳಲ್ಲಿ ಉಂಟಾಗಿರುವ ಜನದಟ್ಟಣೆ ನಿಯಂತ್ರಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಹೆಚ್ಚುವರಿ ಸೀಟುಗಳ ಬೇಡಿಕೆ ಪೂರೈಸಲು 4 ರೌಂಡ್ ಟ್ರಿಪ್&zwnj;ಗಳ (ನಾಲ್ಕು ವಾರ ಕಾಲ) ವಿಶೇಷ ಎಕ್ಸ್&zwnj;ಪ್ರೆಸ್&zwnj; ರೈಲುಗಳ ಸೇವೆ ಪ್ರಕಟಿಸಲಾಗಿದೆ.&lt;/p&gt;&lt;img&gt;&lt;p&gt;ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 07097 ಹೈದರಾಬಾದ್-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್&zwnj;ಪ್ರೆಸ್&zwnj; ಜೂ.3 ರಿಂದ ಜೂ.24 ರವರೆಗೆ ಪ್ರತಿ ಬುಧವಾರ ಸಂಚರಿಸಲಿದೆ. ಈ ರೈಲು ಹೈದರಾಬಾದ್&zwnj;ನಿಂದ ಮುಂಜಾನೆ 4.20 ಕ್ಕೆ ಹೊರಟು, ಮರುದಿನ ಬೆಳಗ್ಗೆ 9.30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ&lt;/p&gt;&lt;img&gt;&lt;p&gt;ಪ್ರಯಾಣಿಕರ ಬಜೆಟ್ ಮತ್ತು ಆದ್ಯತೆಗಳಿಗೆ ತಕ್ಕಂತೆ ಈ ವಿಶೇಷ ರೈಲಿನಲ್ಲಿ ಒಟ್ಟು 24 ಬೋಗಿಗಳನ್ನು ಅಳವಡಿಸಲಾಗಿದೆ. 3 ಎಸಿ 2-ಟೈರ್ ಕೋಚ್&zwnj;ಗಳು, 5 ಎಸಿ 3-ಟೈರ್ ಕೋಚ್&zwnj;ಗಳು, ೧೦ ಸ್ಲೀಪರ್ ಕ್ಲಾಸ್ ಕೋಚ್&zwnj;ಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಕೋಚ್&zwnj;ಗಳು, 2 ಲಗೇಜ್ ಹಾಗೂ ಬ್ರೇಕ್ ವ್ಯಾನ್&zwnj;ಗಳು ಇರಲಿವೆ.&lt;/p&gt;&lt;img&gt;&lt;p&gt;ಈ ರೈಲು ತನ್ನ ಪ್ರಯಾಣದ ಅವಧಿಯಲ್ಲಿ ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ಸೇಡಂ, ಯಾದಗಿರಿ, ರಾಯಚೂರು, ಮಂತ್ರಾಲಯಂ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಸೇರಿದಂತೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಯೆಲಹಂಕ ಮತ್ತು ಕೃಷ್ಣರಾಜಪುರಂ (ಕೆಆರ್ ಪುರಂ), ಬಂಗಾರಪೇಟೆ ಹಾಗೂ ತಮಿಳುನಾಡು-ಕೇರಳದ ಸೇಲಂ, ಈರೋಡ್, ಪಾಲ್ಘಾಟ್, ಕೋಜಿಕೋಡ್, ಕಣ್ಣೂರು ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ನಿಲ್ಲಲಿದೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/indian-railways-mangaluru-central-to-mantralaya-direct-special-express-train-service-for-four-weeks-mrq-gbmzhi3"/>
        </item>
        <item>
            <title><![CDATA[ರಾಯಚೂರು: ಲಿಂಗಸುಗೂರು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳಿಂದಲೇ ತಡರಾತ್ರಿಯವರೆಗೆ ಗುಂಡು-ತುಂಡು ಪಾರ್ಟಿ, ಭಾರೀ ಆಕ್ರೋಶ]]></title>
            <link>https://kannada.asianetnews.com/karnataka-districts/late-night-party-at-pwd-office-in-raichur-sparks-outrage-gdp/articleshow-gqtme3a</link>
            <guid isPermaLink="true">https://kannada.asianetnews.com/karnataka-districts/late-night-party-at-pwd-office-in-raichur-sparks-outrage-gdp/articleshow-gqtme3a</guid>
            <pubDate>Sun, 10 May 2026 12:48:02 +0530</pubDate>
            <description><![CDATA[ರಾಯಚೂರು ಜಿಲ್ಲೆಯ ಲಿಂಗಸುಗೂರು ಪಿಡಬ್ಲ್ಯುಡಿ ಕಚೇರಿಯಲ್ಲಿ, ಎಇಇ ಹನುಮಪ್ಪ ಅದವಾನಿ ನೇತೃತ್ವದಲ್ಲಿ ತಡರಾತ್ರಿ ಪಾರ್ಟಿ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8bwm541vw8pfagmb2318ss,imgname-raichur-pwd-office-party-1778397368484.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ (ಪಿಡಬ್ಲ್ಯುಡಿ) ಕಚೇರಿಯಲ್ಲಿ ನಡೆದ ರಾತ್ರಿ ಪಾರ್ಟಿ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ಕಚೇರಿಯಲ್ಲೇ ತಡರಾತ್ರಿ ವರೆಗೆ ಪಾರ್ಟಿ ನಡೆಸಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಲಿಂಗಸುಗೂರಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಈ ಪಾರ್ಟಿ ನಡೆದಿದ್ದು, ಎಇಇ ಹನುಮಪ್ಪ ಅದವಾನಿ ನೇತೃತ್ವದಲ್ಲಿ ಈ ಪಾರ್ಟಿ ನಡೆದಿದೆ ಎನ್ನಲಾಗಿದೆ. ಕಚೇರಿಯಲ್ಲೇ ಪರಿಚಯಸ್ಥರು ಹಾಗೂ ಕೆಲವು ಸಿಬ್ಬಂದಿಯನ್ನು ಸೇರಿಸಿಕೊಂಡು ಈ ಪಾರ್ಟಿ ಮಾಡಲಾಗಿದೆಯಂತೆ. ಯಾವ ಉದ್ದೇಶದಿಂದ ಈ ಪಾರ್ಟಿ ನಡೆದಿದೆ ಎಂಬ ಬಗ್ಗೆ ಮಾಹೊತೊ ತಿಳಿದುಬಂದಿಲ್ಲ.&lt;/p&gt;&lt;h2&gt;ನಿಯಮಗಳನ್ನು ಗಾಳಿಗೆ ತೂರಿದ ಅಧಿಕಾರಿಗಳು&lt;/h2&gt;&lt;p&gt;ಸರ್ಕಾರಿ ಕಚೇರಿಗಳಲ್ಲಿ ಕಚೇರಿ ಸಮಯ ಮುಗಿದ ನಂತರ ಇಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲದಿದ್ದರೂ, ಇಲಾಖೆಯ ನಿಯಮಗಳನ್ನು ಲೆಕ್ಕಿಸದೆ ತಡರಾತ್ರಿ ವರೆಗೆ ಪಾರ್ಟಿ ನಡೆದಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾರ್ವಜನಿಕ ಸೇವೆಗೆ ಮೀಸಲಾಗಿರುವ ಕಚೇರಿಯನ್ನು ಖಾಸಗಿ ಉದ್ದೇಶಗಳಿಗೆ ಬಳಸಿಕೊಂಡಿರುವುದನ್ನು ಜನರು ತೀವ್ರವಾಗಿ ಖಂಡಿಸಿದ್ದಾರೆ.&lt;/p&gt;&lt;h2&gt;ವೈರಲ್ ವಿಡಿಯೋದಿಂದ ಬಯಲಾದ ಪಾರ್ಟಿ ಕಥೆ&lt;/h2&gt;&lt;p&gt;ಈ ಪಾರ್ಟಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಇದು ಬೆಳಕಿಗೆ ಬಂದಿದೆ. ಈ ಘಟನೆ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸರ್ಕಾರಿ ಕಚೇರಿಗಳ ಗೌರವ ಕಾಪಾಡುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳೇ ಇಂತಹ ನಡೆ ತೋರಿರುವುದು ಆತಂಕಕಾರಿ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಇದು ರಾಯಚೂರು ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯ ಪ್ರಶ್ನಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/late-night-party-at-pwd-office-in-raichur-sparks-outrage-gdp/articleshow-gqtme3a"/>
        </item>
        <item>
            <title><![CDATA[Raichur: ಕಾಯಿಪಲ್ಲೆ ಖರೀದಿ ನೆಪದಲ್ಲಿ ಬಂಡಾರ ಎರಚಿ ಹಣವನ್ನು ದೋಚಿದ ಸಾಧುವೇಷದ ಕದೀಮರು]]></title>
            <link>https://kannada.asianetnews.com/gallery/karnataka-districts/gang-of-thieves-robbed-a-money-under-the-pretext-of-buying-vegetables-maski-raichur-mrq-gtloc6p</link>
            <guid isPermaLink="true">https://kannada.asianetnews.com/gallery/karnataka-districts/gang-of-thieves-robbed-a-money-under-the-pretext-of-buying-vegetables-maski-raichur-mrq-gtloc6p</guid>
            <pubDate>Mon, 08 Jun 2026 06:37:08 +0530</pubDate>
            <description><![CDATA[&lt;p&gt;ಮಸ್ಕಿ ಪಟ್ಟಣದಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಬಂದ ಐವರ ಗ್ಯಾಂಗ್, ಅಂಗಡಿ ಮಾಲೀಕನ ಮೇಲೆ ಕುಂಕುಮ ಮತ್ತು ಬಂಡಾರ ಎರಚಿ ಮತ್ತು ಬರುವಂತೆ ಮಾಡಿದೆ. ನಂತರ ಗಲ್ಲಾಪೆಟ್ಟಿಗೆಯಲ್ಲಿದ್ದ 1 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktjbyggbc27w8w97aj9wxr45,imgname-maski--1--1780880458251.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಸ್ಕಿ ಪಟ್ಟಣದಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಬಂದ ಐವರ ಗ್ಯಾಂಗ್, ಅಂಗಡಿ ಮಾಲೀಕನ ಮೇಲೆ ಕುಂಕುಮ ಮತ್ತು ಬಂಡಾರ ಎರಚಿ ಮತ್ತು ಬರುವಂತೆ ಮಾಡಿದೆ. ನಂತರ ಗಲ್ಲಾಪೆಟ್ಟಿಗೆಯಲ್ಲಿದ್ದ 1 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದೆ.&amp;nbsp;&lt;/p&gt;&lt;img&gt;&lt;p&gt;ಕಾಯಿಪಲ್ಲೆ (ತರಕಾರಿ) ಖರೀದಿ ನೆಪದಲ್ಲಿ ತರಕಾರಿ ಅಂಗಡಿಗೆ ಬಂದು ಕುಂಕುಮ, ಬಂಡಾರ ಎರಚಿ ಮತ್ತು ಬರುವಂತೆ ಮಾಡಿ 1 ಲಕ್ಷ ರು. ಹಣ ದೋಚಿದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆದಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;img&gt;&lt;p&gt;ಭಾನುವಾರ ಸಂತೆ ಹಿನ್ನೆಲೆಯಲ್ಲಿ ಸ್ಥಳೀಯ ಲಕ್ಷ್ಮೀ ವೆಂಕಟೇಶ್ವರ ಹೆಸರಿನ ತರಕಾರಿ ಮಳಿಗೆ ಆಗಮಿಸಿದ ಐದು ಜನರ ಗ್ಯಾಂಗ್ ಮಳಿಗೆ ಮಾಲೀಕ ಮೌನೇಶ್ ಜೊತೆಗೆ ವ್ಯಾಪಾರದ ಮಾತುಗಳನ್ನಾಡಿ ವಿವಿಧ ಕಾಯಿಪಲ್ಲೆಗಳನ್ನು ಪ್ಯಾಕ್ ಮಾಡಿಸಿದ್ದು, ಬ್ಯಾಗ್ ತೆಗೆದುಕೊಳ್ಳುವ ನೆಪದಲ್ಲಿ ಒಂದು ರೂಪಾಯಿ ನಾಣ್ಯವನ್ನು ಕೆಳಗಡೆ ಬಿಸಾಕಿದ್ದಾರೆ.&lt;/p&gt;&lt;img&gt;&lt;p&gt;ಈ ವೇಳೆ ಮೌನೇಶ್ ಕಾಯಿನ್ ತೆಗೆಯಲು ಕೆಳಗಡೆ ಬಗ್ಗಿ ಎದ್ದಾಗ ಗಮನ ಬೇರೆಡೆಗೆ ಸೆಳೆಯುವಂತೆ ಮಾಡಿ ಕುಂಕುಮ, ಬಂಡಾರವನ್ನು ಎಸೆದು ಮಾತು ಬಾರದಂತೆ ಮಾಡಿ ಸುಮ್ಮನೆ ಕುಳಿತಾಗ ಗಲ್ಲಾಪೆಟ್ಟಿಗೆಯಲ್ಲಿದ್ದ 1 ಲಕ್ಷ ರು. ನಗದನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಘಟನೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಸಿಂಧನೂರು ನಗರದಲ್ಲಿ ಸಹ ಸಾಧುವೇಷದಲ್ಲಿ ಆಗಮಿಸಿದ ಕೆಲವರು ಔಷಧಿ ಅಂಗಡಿಯಲ್ಲಿ ಕುಡಿಯುವ ನೀರಿನ ಕೇಳೋ ನೆಪದಲ್ಲಿ ಮಾಲೀಕರಿಗೆ ಹೂವು ಕೊಟ್ಟು ಮತ್ತು ಬರುವಂತೆ ಮಾಡಿ ವಂಚಿಸಿದ್ದ ಘಟನೆ ಮಾಸುವ ಮುನ್ನವೇ ಅಂತದ್ದೇ ಕೃತ್ಯ ಮಸ್ಕಿಯಲ್ಲಿ ನಡೆದಿರುವುದು ಆ ಭಾಗದ ವ್ಯಾಪಾರಿಗಳು, ಜನರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನೀರು ಕೇಳ್ತಾರೆ, ಹೂವಿನ ಆಶೀರ್ವಾದ ಮಾಡ್ತಾರೆ; ಮಾಯವಾಗುತ್ತೆ ನಿಮ್ಮಲ್ಲಿರೋ ಚಿನ್ನ-ಹಣ!&lt;/strong&gt;&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/gang-of-thieves-robbed-a-money-under-the-pretext-of-buying-vegetables-maski-raichur-mrq-gtloc6p"/>
        </item>
        <item>
            <title><![CDATA[ಮಂಗಳೂರು-ಹೈದರಾಬಾದ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು, 24ಕೋಚ್‌,4 ಟ್ರಿಪ್,3 ರಾಜ್ಯ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ]]></title>
            <link>https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx</link>
            <guid isPermaLink="true">https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx</guid>
            <pubDate>Tue, 02 Jun 2026 15:53:57 +0530</pubDate>
            <description><![CDATA[&lt;p&gt;ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆ ಘೋಷಿಸಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ಸುತ್ತಿನ ಸಂಚಾರ ನಡೆಸಲಿರುವ ಈ ರೈಲು, ತೆಲಂಗಾಣ, ಕರ್ನಾಟಕ, ಮತ್ತು ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0gwrjmwtt8zae7c8ssgk4mn,imgname-thane-railway-station-1752913693340.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆ ಘೋಷಿಸಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ಸುತ್ತಿನ ಸಂಚಾರ ನಡೆಸಲಿರುವ ಈ ರೈಲು, ತೆಲಂಗಾಣ, ಕರ್ನಾಟಕ, ಮತ್ತು ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;&lt;img&gt;&lt;p&gt;ಮಂಗಳೂರು: ಬೇಸಿಗೆಯ ನಂತರದ ದಿನಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ. ಈ ವಿಶೇಷ ರೈಲು ಪ್ರಸಕ್ತ ಜೂನ್ ತಿಂಗಳಿನಲ್ಲಿ ಒಟ್ಟು ನಾಲ್ಕು ಸುತ್ತಿನ (4 Trips) ಸಂಚಾರವನ್ನು ನಡೆಸಲಿದ್ದು, ತೆಲಂಗಾಣ, ಕರ್ನಾಟಕದ ಒಳನಾಡು ಹಾಗೂ ಕೇರಳದ ಕರಾವಳಿ ಭಾಗದ ಪ್ರಯಾಣಿಕರಿಗೆ ತಡೆರಹಿತ ಕನೆಕ್ಟಿವಿಟಿ ಕಲ್ಪಿಸಲಿದೆ.&lt;/p&gt;&lt;img&gt;&lt;p&gt;ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಈ ವಿಶೇಷ ರೈಲಿನ ಸಂಪೂರ್ಣ ವೇಳಾಪಟ್ಟಿ ಹಾಗೂ ಕೋಚ್&zwnj;ಗಳ ವಿವರ ಈ ಕೆಳಗಿನಂತಿದೆ:&lt;/p&gt;&lt;h3&gt;ರೈಲು ಸಂಚಾರದ ದಿನ ಹಾಗೂ ವೇಳಾಪಟ್ಟಿ&lt;/h3&gt;&lt;p&gt;1. ಹೈದರಾಬಾದ್&zwnj;ನಿಂದ ಮಂಗಳೂರಿಗೆ (ರೈಲು ಸಂಖ್ಯೆ: 07097)&lt;/p&gt;&lt;p&gt;ಸಂಚಾರದ ಅವಧಿ: ಜೂನ್ 3 ರಿಂದ ಜೂನ್ 24 ರವರೆಗೆ ಪ್ರತಿ ಬುಧವಾರ ಈ ರೈಲು ಚಲಿಸಲಿದೆ.&lt;/p&gt;&lt;p&gt;ಸಮಯ: ಹೈದರಾಬಾದ್ ನಿಲ್ದಾಣದಿಂದ ಬುಧವಾರ ಮುಂಜಾನೆ 4:20 ಕ್ಕೆ ಹೊರಡುವ ಈ ರೈಲು, ಮರುದಿನ (ಗುರುವಾರ) ಮುಂಜಾನೆ 9:30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.&lt;/p&gt;&lt;p&gt;2. ಮಂಗಳೂರಿನಿಂದ ಹೈದರಾಬಾದ್&zwnj;ಗೆ (ರೈಲು ಸಂಖ್ಯೆ: 07098) - ಹಿಂತಿರುಗುವ ಪ್ರಯಾಣ&lt;/p&gt;&lt;p&gt;ಸಂಚಾರದ ಅವಧಿ: ಜೂನ್ 4 ರಿಂದ ಜೂನ್ 25 ರವರೆಗೆ ಪ್ರತಿ ಗುರುವಾರ ಈ ರೈಲು ಸಂಚರಿಸಲಿದೆ.&lt;/p&gt;&lt;p&gt;ಸಮಯ: ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಗುರುವಾರ ರಾತ್ರಿ 8:00 ಗಂಟೆಗೆ ಹೊರಡುವ ರೈಲು, ಶನಿವಾರ ಮುಂಜಾನೆ 4:00 ಗಂಟೆಗೆ ಹೈದರಾಬಾದ್ ತಲುಪಲಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲಿಗೆ ಒಟ್ಟು 24 ಬೋಗಿಗಳನ್ನು (Coaches) ಅಳವಡಿಸಲಾಗಿದೆ. ಇದು ವಿಭಿನ್ನ ಆರ್ಥಿಕ ಪರಿಸ್ಥಿತಿ ಹಾಗೂ ಆದ್ಯತೆಗಳನ್ನು ಹೊಂದಿರುವ ಎಲ್ಲಾ ವರ್ಗದ ಪ್ರಯಾಣಿಕರಿಗೂ ಆಸನ ಸೌಲಭ್ಯವನ್ನು ಖಚಿತಪಡಿಸಲಿದೆ. ಬೋಗಿಗಳ ಸಂಯೋಜನೆ ಈ ಕೆಳಗಿನಂತಿದೆ:&lt;/p&gt;&lt;p&gt;ಎಸಿ 2-ಟೈರ್ ಕೋಚ್&zwnj;ಗಳು: 03&lt;/p&gt;&lt;p&gt;ಎಸಿ 3-ಟೈರ್ ಕೋಚ್&zwnj;ಗಳು: 05&lt;/p&gt;&lt;p&gt;ಸ್ಲೀಪರ್ ಕ್ಲಾಸ್ ಕೋಚ್&zwnj;ಗಳು: 10&lt;/p&gt;&lt;p&gt;ಸಾಮಾನ್ಯ ದ್ವಿತೀಯ ದರ್ಜೆ (General) ಕೋಚ್&zwnj;ಗಳು: 04&lt;/p&gt;&lt;p&gt;ಲಗೇಜ್-ಕಮ್-ಬ್ರೇಕ್ ವ್ಯಾನ್&zwnj;ಗಳು: 02&lt;/p&gt;&lt;img&gt;&lt;p&gt;ಈ ವಿಶೇಷ ರೈಲು ತನ್ನ ಸುದೀರ್ಘ ಪ್ರಯಾಣದ ಅವಧಿಯಲ್ಲಿ ಮೂರೂ ರಾಜ್ಯಗಳ ಪ್ರಮುಖ ವಾಣಿಜ್ಯ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ನಿಲುಗಡೆ ಪಡೆಯಲಿದೆ.&lt;/p&gt;&lt;p&gt;&lt;strong&gt;ತೆಲಂಗಾಣ ಮತ್ತು ಆಂಧ್ರ ಭಾಗ: &lt;/strong&gt;ಬೇಗಂಪೇಟ್, ಲಿಂಗಂಪಲ್ಲಿ, ವಿಕ್ರಾಬಾದ್, ರಾಯಚೂರು, ಮಂತ್ರಾಲಯ ರಸ್ತೆ (ಶ್ರೀ ರಾಘವೇಂದ್ರ ಸ್ವಾಮಿ ಮಠದ ಭಕ್ತರಿಗೆ ಅನುಕೂಲ), ಗುಂತಕಲ್, ಅನಂತಪುರ, ಧರ್ಮಾವರಂ ಮತ್ತು ಹಿಂದೂಪುರ.&lt;/p&gt;&lt;p&gt;&lt;strong&gt;ಕರ್ನಾಟಕದ ಒಳನಾಡು (ಬೆಂಗಳೂರು ಭಾಗ): &lt;/strong&gt;ಸೇಡಂ, ಸೂಳೇಹಳ್ಳಿ ಪಶ್ಚಿಮ, ಯಾದಗಿರಿ, ಕೃಷ್ಣ, ಯಲಹಂಕ, ಕೃಷ್ಣರಾಜಪುರಂ (KR ಪುರಂ) ಮತ್ತು ಬಂಗಾರಪೇಟೆ.&lt;/p&gt;&lt;p&gt;&lt;strong&gt;ತಮಿಳುನಾಡು ಮತ್ತು ಕೇರಳ ಭಾಗ: &lt;/strong&gt;ಕುಪ್ಪಂ, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪುರ್, ಪಾಲಕ್ಕಾಡ್ ಜಂಕ್ಷನ್, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನೂರು, ಕಾಞಂಗಾಡ್ ಮತ್ತು ಕಾಸರಗೋಡು.&lt;/p&gt;&lt;img&gt;&lt;p&gt;ಪ್ರಸ್ತುತ ಜೂನ್ ತಿಂಗಳಿನಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಳ್ಳುತ್ತಿರುವುದರಿಂದ ಹಾಗೂ ಉದ್ಯೋಗ ನಿಮಿತ್ತ ಮತ್ತು ಪ್ರವಾಸೋದ್ಯಮಕ್ಕಾಗಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸಾಮಾನ್ಯ ರೈಲುಗಳಲ್ಲಿ ಭಾರಿ ವೇಟಿಂಗ್ ಲಿಸ್ಟ್ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಪರಿಚಯಿಸಿರುವ ಈ ವಿಶೇಷ ಸೇವೆಯು ನಿಯಮಿತ ರೈಲುಗಳ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.&lt;/p&gt;&lt;img&gt;&lt;p&gt;ಕೆಲಸದ ನಿಮಿತ್ತ ಐಟಿ ಹಬ್&zwnj;ಗಳಾದ ಹೈದರಾಬಾದ್-ಬೆಂಗಳೂರಿಗೆ ಸಂಚರಿಸುವವರಿಗೆ, ಪ್ರವಾಸಿಗರಿಗೆ ಹಾಗೂ ಕರಾವಳಿ ಮತ್ತು ಮಂತ್ರಾಲಯ ಕ್ಷೇತ್ರಗಳಿಗೆ ಕೌಟುಂಬಿಕ ಭೇಟಿ ನೀಡುವ ಧಾರ್ಮಿಕ ಪ್ರಯಾಣಿಕರಿಗೆ ಈ ರೈಲು ಅತ್ಯಂತ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣದ ಅನುಭವವನ್ನು ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx"/>
        </item>
        <item>
            <title><![CDATA[ಮಂತ್ರಾಲಯದಲ್ಲಿ ಭೀಕರ ದುರಂತ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐವರು ನೀರು ಪಾಲು]]></title>
            <link>https://kannada.asianetnews.com/crime/mantralayam-tungabhadra-river-drowning-tragedy-five-dead-gvd/articleshow-kddeq4u</link>
            <guid isPermaLink="true">https://kannada.asianetnews.com/crime/mantralayam-tungabhadra-river-drowning-tragedy-five-dead-gvd/articleshow-kddeq4u</guid>
            <pubDate>Mon, 01 Jun 2026 21:22:32 +0530</pubDate>
            <description><![CDATA[&lt;p&gt;ಪಕ್ಕದ ಆಂಧ್ರಪ್ರದೇಶದ ರಾಜ್ಯದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ವಡ್ಲ ಸತೀಶ್..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1y5eq6fjadjn05kq1176wb,imgname-vj-1780329134822.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜೂ.01): &lt;/strong&gt;ಪಕ್ಕದ ಆಂಧ್ರಪ್ರದೇಶದ ರಾಜ್ಯದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ವಡ್ಲ ಸತೀಶ್ (35) ಇವರ ಪುತ್ರ ಯುವನ್ ಚಂದ್ರ(5) ಮಂತ್ರಾಲಯ ನಿವಾಸಿ ರಾಘವೇಂದ್ರ (28), ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ನಿವಾಸಿ ವಡ್ಲ ಧನು (23) ಹಾಗೂ ಅನಂತಪುರದ ನಿವಾಸಿ ಸಂಧ್ಯಾ (22) ನೀರುಪಾಲಾದವರು ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಆಗಮಿಸಿದ್ದ ಇವರುಗಳು, ಶನಿವಾರ ಸಂಜೆ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಬಾಲಕ ಯುವನ್ ಚಂದ್ರ ನೀರಲ್ಲಿ ಮುಳುಗಲು ಪ್ರಾರಂಭಿಸಿದ್ದಾನೆ. ಈತನ ರಕ್ಷಣೆಗಾಗಿ ಉಳಿದ ಐವರು ನದಿಯ ಆಳಕ್ಕಿಳಿದಿದ್ದು ನಾಲ್ವರೂ ಕೊಚ್ಚಿಕೊಂಡು ಹೋಗಿದ್ದಾರೆ. ಇವರಲ್ಲಿ ಯುವತಿ ಅಪರ್ಣಾ ಅದೋನಿ ಎಂಬವರು ಪಾರಾಗಿ ತಡ ಸೇರಿ ಸ್ಥಳೀಯರು ಹಾಗೂ ಕುಟುಂಬದವರಿಗೆ ಘಟನೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ದುರಂತದ ವಿಷಯ ತಿಳಿದ ಮಂತ್ರಾಲಯ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪರಿಣತ ಈಜುಗಾರರು ಕಂಟ್ರಿ ಬೋಟ್&zwnj;ಗಳನ್ನು ಬಳಸಿ ಶನಿವಾರ ರಾತ್ರಿ 8:30ರವರೆಗೆ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಧನು ಎಂಬ ಯುವಕನ ಮೃತದೇಹ ಸಿಕ್ಕಿದ್ದು, ಭಾನುವಾರ ಬೆಳಗ್ಗೆ ಯುವನ್ ಚಂದ್ರ ಹಾಗೂ ಆತನ ತಂದೆ ವಡ್ಲ ಸತೀಶ್ ಮೃತದೇಹಗಳು ಪತ್ತೆಯಾಗಿವೆ.&lt;/p&gt;&lt;h2&gt;&lt;strong&gt;ಕುಟುಂಬಸ್ಥರಿಗೆ ಹಸ್ತಾಂತರ&lt;/strong&gt;&lt;/h2&gt;&lt;p&gt;ಮೃತದೇಹಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು, ಸ್ಥಳೀಯ ಮೀನುಗಾರರೊಂದಿಗೆ ಉಳಿದ ಇಬ್ಬರಿಗೆ ಶೋಧಾಕಾರ್ಯವನ್ನು ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಆಂಧ್ರಪ್ರದೇಶ ಸಚವರಾದ ನಿಮ್ಮಲಾ ರಾಮನಾಯ್ಡು ಮತ್ತು ಟಿ.ಜಿ.ಭರತ್ ಹಾಗೂ ಎಮ್ಮಿಗನೂರು ಡಿವೈಎಸ್ಪಿ ಭಾರ್ಗವಿ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸತ್ಯನಾರಾಯಣ ಪೂಜೆ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣವಿದ್ದ ಮನೆ ಮಾಡಿದ್ದ ಮನೆಯಲ್ಲಿ ದುರ್ಘಟನೆಯಿಂದ ಸೂತಕದ ಛಾಯೆ ಆವರಿಸಿದೆ.&lt;/p&gt;]]></content:encoded>
            <category>raichur</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/mantralayam-tungabhadra-river-drowning-tragedy-five-dead-gvd/articleshow-kddeq4u"/>
        </item>
        <item>
            <title><![CDATA[ರಾಯಚೂರು:ದಿನಾಲು ಕುಡಿದು ತಾಯಿ ಜತೆಗೆ ಜಗಳವಾಡ್ತಿದ್ದ ಅಣ್ಣನ ಕೊಂದ ತಮ್ಮಆತ್ಮ*ಹತ್ಯೆ ಎಂದು ನಂಬಿಸಲು ಹೆಣ ನೇತು ಹಾಕಿದ!]]></title>
            <link>https://kannada.asianetnews.com/karnataka-districts/karnataka-crime-raichur-murder-case-man-kills-his-brother-stages-drama-arrested-gdp/articleshow-lrk06o0</link>
            <guid isPermaLink="true">https://kannada.asianetnews.com/karnataka-districts/karnataka-crime-raichur-murder-case-man-kills-his-brother-stages-drama-arrested-gdp/articleshow-lrk06o0</guid>
            <pubDate>Sun, 17 May 2026 13:37:52 +0530</pubDate>
            <description><![CDATA[ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ, ನಿತ್ಯ ಕುಡಿದು ತಾಯಿಯೊಂದಿಗೆ ಜಗಳವಾಡುತ್ತಿದ್ದ ಅಣ್ಣನ ವರ್ತನೆಯಿಂದ ಬೇಸತ್ತ ತಮ್ಮ, ಆತನನ್ನು ಕೊಲೆ ಮಾಡಿದ್ದಾನೆ. ಈ ಹತ್ಯೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ನಾಟಕವಾಡಿದ್ದು, ತಂದೆಯ ದೂರಿನ ಮೇರೆಗೆ ನಡೆದ ಪೊಲೀಸ್ ತನಿಖೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krtf887j0v8q47aq9az4wacf,imgname-raichur-murder-case-1779004874993.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು :&lt;/strong&gt; ಕುಟುಂಬ ಕಲಹದ ಹಿನ್ನೆಲೆ ಅಣ್ಣನನ್ನೇ ಹತ್ಯೆ ಮಾಡಿ ಆತ್ಮ*ಹತ್ಯೆ ಎಂದು ಬಿಂಬಿಸಲು ಹೋಗಿ ತಮ್ಮ ಸಿಕ್ಕಿಬಿದ್ದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ನಡೆದಿದೆ. ಕುಡಿದು ಬಂದು ತಾಯಿ ಜೊತೆಗೆ ಅಣ್ಣ ದಿನಾಲು ಜಗಳವಾಡುತ್ತಿದ್ದ ಇದರಿಂದ ತಮ್ಮ ಅಣ್ಣನ ವರ್ತನೆಗೆ ಬೇಸತ್ತು ಹೋಗಿದ್ದ. ಕೊಲೆ ಮಾಡುವ ದಿನ ಕೂಡ ಅಣ್ಣ ಮನೆಯಲ್ಲಿ ಗಲಾಟೆ ಮಾಡಿದ್ದ ಇದರಿಂದ ಬೇಸತ್ತ ತಮ್ಮ, ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.&lt;/p&gt;&lt;p&gt;ಪಟ್ಟಣದ ಮಹಾಂತ ಮಠದ ಬಳಿಯ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಸವರಾಜ್ (32) ಎಂದು ಗುರುತಿಸಲಾಗಿದ್ದು, ಆರೋಪಿ ತಮ್ಮನನ್ನು ಶ್ರೀಧರ್ (27) ಎಂದು ಗುರುತಿಸಲಾಗಿದೆ&lt;/p&gt;&lt;h2&gt;ಕೊಲೆ ಬಳಿಕ ಆತ್ಮ*ಹತ್ಯೆ ನಾಟಕ&lt;/h2&gt;&lt;p&gt;ಅಣ್ಣನನ್ನು ಕೊಲೆ ಮಾಡಿದ ಬಳಿಕ, ಘಟನೆ ಆತ್ಮ*ಹತ್ಯೆಯಂತೆ ತೋರಿಸಲು ಶ್ರೀಧರ್ ಕುತಂತ್ರ ರೂಪಿಸಿದ್ದಾನೆ. ಸೀರೆಯನ್ನು ಬಳಸಿಕೊಂಡು ಫ್ಯಾನ್&zwnj;ಗೆ ಅಣ್ಣನ ಹೆಣವನ್ನು ನೇತು ಹಾಕಿ ಅಣ್ಣನೇ ನೇಣು ಹಾಕಿಕೊಂಡಿದ್ದಾನೆ ಎಂಬಂತೆ ಮನೆಯವರಿಗೆ ನಂಬಿಸಲು ಯತ್ನಿಸಿದ್ದಾನೆ. ಇದರ ಜೊತೆಗೆ, ಬಳಿಕ ಕೋಣೆ ಬಾಗಿಲಿ&zwnj;ನ ಚೀಲಕ ಮುರಿದಂತೆ ಮಾಡಿ. ಅಣ್ಣ ಶವವನ್ನ ಕೆಳಗೆ ಇಳಿಸಿದ ತಮ್ಮ ತದನಂತರ ಅಣ್ಣ ಬಸವರಾಜ್ ಜೀವ ಇರಬಹುದು ಎಂದು ತಾಯಿಗೆ ನಂಬಿಸಿ ಖಾಸಗಿ ವಾಹನದಲ್ಲಿ ಶವ ತೆಗೆದುಕೊಂಡು ತಾಲೂಕು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ&lt;/p&gt;&lt;h2&gt;ತಂದೆಯಿಂದ ದೂರು, ಪೊಲೀಸರ ತನಿಖೆ&lt;/h2&gt;&lt;p&gt;ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲನೆ ನಡೆಸಿದಾಗ, ಬಸವರಾಜ್ ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದ ಘಟನೆಗೆ ಹೊಸ ತಿರುವು ಸಿಕ್ಕಿದ್ದು, ಅನುಮಾನಗಳು ಗಟ್ಟಿಯಾದವು. ಇತ್ತ ಬಸವರಾಜ್ ಸಾವಿನ ಕುರಿತು ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಮೃತನ ತಂದೆ ವಾಸುದೇವ್ ದೂರು ನೀಡಿದ್ದಾರೆ. ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣದ ಗಂಭೀರತೆಯನ್ನು ಗಮನಿಸಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರೊಂದಿಗೆ ಲಿಂಗಸೂಗೂರು ಡಿವೈಎಸ್&zwnj;ಪಿ ದತ್ತಾತ್ರೇಯ ಕಾರ್ನಡ್ ಹಾಗೂ ಪಿಐ ಹೊಸಕೇರಪ್ಪ ಕೂಡ ಹಾಜರಿದ್ದರು.&lt;/p&gt;&lt;h2&gt;ಆರೋಪಿ ವಶಕ್ಕೆ&lt;/h2&gt;&lt;p&gt;ಪೊಲೀಸರ ತೀವ್ರ ವಿಚಾರಣೆಯಲ್ಲಿ ಈ ಘಟನೆ ಹತ್ಯೆ ಎಂಬುದು ಬಹಿರಂಗಗೊಂಡಿದ್ದು, ಆರೋಪಿ ಶ್ರೀಧರ್&zwnj;ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಸಾಮಾನ್ಯ ಕುಟುಂಬ ಕಲಹವೇ ಭೀಕರ ಕೊಲೆಗೆ ಕಾರಣವಾಗಿದ್ದು, ಬಳಿಕ ಅದನ್ನು ಆತ್ಮ*ಹತ್ಯೆಯಂತೆ ತೋರಿಸಲು ನಡೆಸಿದ ನಾಟಕ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. .&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-crime-raichur-murder-case-man-kills-his-brother-stages-drama-arrested-gdp/articleshow-lrk06o0"/>
        </item>
        <item>
            <title><![CDATA[ಮಂತ್ರಾಲಯ ರಾಯರ ಹುಂಡಿ ಎಣಿಕೆ: ಕೇವಲ 22 ದಿನದಲ್ಲಿ ₹4.35 ಕೋಟಿ ಕಾಣಿಕೆ! ಬೆಲೆ ಏರಿಕೆ ನಡುವೆಯೇ ಭಕ್ತರು ನೀಡಿದ ಚಿನ್ನ ಬೆಳ್ಳಿ ಎಷ್ಟು?]]></title>
            <link>https://kannada.asianetnews.com/gallery/karnataka-districts/mantralayam-hundi-counting-rs-4-35-crore-collection-in-just-22-days-rav-lxflyvp</link>
            <guid isPermaLink="true">https://kannada.asianetnews.com/gallery/karnataka-districts/mantralayam-hundi-counting-rs-4-35-crore-collection-in-just-22-days-rav-lxflyvp</guid>
            <pubDate>Thu, 04 Jun 2026 08:54:04 +0530</pubDate>
            <description><![CDATA[&lt;p&gt;ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಈ ಬಾರಿ ಚಿನ್ನ ಬೆಳ್ಳಿ ಕಾಣಿಕೆ ಇಳಿಮುಖವಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt89nprsdcwj4p1f0crych21,imgname-----------------------2026-06-04t083750.389-1780542528280.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಈ ಬಾರಿ ಚಿನ್ನ ಬೆಳ್ಳಿ ಕಾಣಿಕೆ ಇಳಿಮುಖವಾಗಿದೆ.&amp;nbsp;&lt;/p&gt;&lt;img&gt;&lt;p&gt;ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಬೆಲೆ ಹೆಚ್ಚಳದ ಪರಿಣಾಮದಿಂದ ಚಿನ್ನ ಬೆಳ್ಳಿಯ ಕಾಣಿಕೆ ಮಾತ್ರ ಇಳಿಮುಖವಾಗಿದೆ.&lt;/p&gt;&lt;img&gt;&lt;p&gt;ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಿಂದ ಭಕ್ತರು ರಾಯರ ದರ್ಶನಕ್ಕೆ ಬರುತ್ತಾರೆ. ದರ್ಶನ ಪಡೆದ ಭಕ್ತರು ಕಾಣಿಕೆ ಸಲ್ಲಿಸದೆ ಹೋಗುವುದಿಲ್ಲ. ಈ ಬಾರಿ ಮೇ-ಜೂನ್ ತಿಂಗಳಲ್ಲಿ ಅಂದರೆ ಕೇವಲ 22 ದಿನಗಳಲ್ಲಿ ದಾಖಲೆಯ ಹಣ ಸಂಗ್ರವಾಗಿದೆ.&lt;/p&gt;&lt;img&gt;&lt;p&gt;ಮಂತ್ರಾಲಯದ ರಾಯರ ದರ್ಶನಕ್ಕೆ ಬರುವವರು ದರ್ಶನ ಬಳಿಕ ಹುಂಡಿಗೆ ಕೇವಲ ನಗದು ಮಾತ್ರವಲ್ಲದೆ ಕೆಲವು ಭಕ್ತರು ಚಿನ್ನ, ಬೆಳ್ಳಿ ಆಭರಣಗಳನ್ನೂ ರಾಯರಿಗೆ ಸಮರ್ಪಿಸಿದ್ದಾರೆ. ಈ ಬಾರಿ ಹುಂಡಿಯಲ್ಲಿ 46 ಗ್ರಾಂ ಚಿನ್ನ ಹಾಗೂ 750 ಗ್ರಾಂ ಬೆಳ್ಳಿ ಆಭರಣ ಸಂಗ್ರಹವಾಗಿದೆ. ಹುಂಡಿ ಎಣಿಕೆ ವೇಳೆ ಈ ಆಭರಣಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ ಎಂದು ಮಂತ್ರಾಲಯ ಮಠದ ಮೂಲಗಳು ತಿಳಿಸಿವೆ.&lt;/p&gt;&lt;img&gt;&lt;p&gt;&amp;nbsp;ಕಳೆದ ಆರು ತಿಂಗಳ ಅಂಕಿ-ಅಂಶಗಳ ಲೆಕ್ಕ ಹಾಕಿ ನೋಡಿದರೆ ಚಿನ್ನ ಮತ್ತು ಬೆಳ್ಳಿ ಕಾಣಿಕೆಗಳಲ್ಲಿ ಸ್ವಲ್ಪ ಇಳಿಮುಖವಾಗಿದೆ. ಜನವರಿಯಲ್ಲಿ 28 ಗ್ರಾಂ ಚಿನ್ನ, 1278 ಗ್ರಾಂ ಬೆಳ್ಳಿ ಸಂಗ್ರವಾಗಿತ್ತು.ಫೆಬ್ರವರಿಯಲ್ಲಿ 28 ಗ್ರಾಂ ಚಿನ್ನ ಹಾಗೂ 1000 ಗ್ರಾಂ ಬೆಳ್ಳಿ ಸಂಗ್ರಹ. ಮಾರ್ಚ್&zwnj;ನಲ್ಲಿ 14 ಗ್ರಾಂ ಚಿನ್ನ ಮತ್ತು 2163 ಗ್ರಾಂ ಬೆಳ್ಳಿ, ಏಪ್ರಿಲ್&zwnj;ನಲ್ಲಿ 47 ಗ್ರಾಂ ಚಿನ್ನ ಹಾಗೂ 592 ಗ್ರಾಂ ಬೆಳ್ಳಿ ಕಾಣಿಕೆ ನೀಡಿದ್ದ ಭಕ್ತರು. ಮೇ ತಿಂಗಳಲ್ಲಿ 15 ಗ್ರಾಂ ಚಿನ್ನ ಮತ್ತು 751 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ.&amp;nbsp;&lt;/p&gt;&lt;p&gt;ಈ ಬಾರಿ 46 ಗ್ರಾಂ ಚಿನ್ನ ಮತ್ತು 750 ಗ್ರಾಂ ಬೆಳ್ಳಿ ಕಾಣಿಕೆ ನೀಡಿರುವ ಭಕ್ತರು. ಒಟ್ಟಾರೆ ದೇಶಾದ್ಯಂತ ಚಿನ್ನ ಬೆಳ್ಳಿ ಬೆಲೆಗಳು ಗಗನಕ್ಕೇರಿರುವ ಹಿನ್ನೆಲೆ ಭಕ್ತರು ಆಭರಣ ರೂಪದಲ್ಲಿ ಹಿಂದಿನಷ್ಟು ಕಾಣಿಕೆ ನಿಡುತ್ತಿಲ್ಲ ಎಂಬು ತಿಳಿದುಬಂದಿದೆ. ಆದರೆ ನಗದು ಕಾಣಿಕೆಯಲ್ಲಿ ಮಾತ್ರ ಯಾವುದೇ ಕುಸಿತ ಕಂಡಿಲ್ಲ. ಪ್ರತಿ ಬಾರಿಯೂ ಕಾಣಿಕೆ ಸಂಗ್ರಹ ಹೆಚ್ಚುತ್ತಿದೆ ಎಂದ ಮಂತ್ರಾಲಯ ಮಠವೇ ಈ ಮಾಹಿತಿಯನ್ನು ಪ್ರಕಟಿಸಿದೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/mantralayam-hundi-counting-rs-4-35-crore-collection-in-just-22-days-rav-lxflyvp"/>
        </item>
        <item>
            <title><![CDATA[ರಾಜ್ಯದಲ್ಲಿ ಮಳೆ ಅಬ್ಬರ: ರಾಯಚೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು, ವಿಜಯನಗರದಲ್ಲಿ ಪಪ್ಪಾಯಿ ಬೆಳೆ ನಾಶ!]]></title>
            <link>https://kannada.asianetnews.com/karnataka-districts/karnataka-rain-havoc-raichur-lightning-death-vijayanagara-papaya-crop-loss-sat/articleshow-n5vhd0s</link>
            <guid isPermaLink="true">https://kannada.asianetnews.com/karnataka-districts/karnataka-rain-havoc-raichur-lightning-death-vijayanagara-papaya-crop-loss-sat/articleshow-n5vhd0s</guid>
            <pubDate>Sun, 17 May 2026 18:23:55 +0530</pubDate>
            <description><![CDATA[ರಾಜ್ಯದ ಹಲವೆಡೆ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯು ತೀವ್ರ ಹಾನಿಯನ್ನುಂಟುಮಾಡಿದೆ. ರಾಯಚೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟರೆ, ವಿಜಯನಗರ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ರೈತ ದಂಪತಿಯ ಮೂರು ಎಕರೆ ಪಪ್ಪಾಯಿ ಬೆಳೆ ಸಂಪೂರ್ಣ ನಾಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krtztbercysg2xknpx78hc1t,imgname-karnataka-rain--1--1779022245336.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು/ವಿಜಯನಗರ: ರಾ&lt;/strong&gt;ಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಮಳೆ ಅನಾಹುತಗಳಿಗೆ ಓರ್ವ ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರೆ, ವಿಜಯನಗರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ರೈತರ ವರ್ಷದ ಶ್ರಮವೆಲ್ಲಾ ಮಣ್ಣು ಪಾಲಾಗಿದೆ.&lt;/p&gt;&lt;h3&gt;&lt;strong&gt;ರಾಯಚೂರು: ಸಿಡಿಲು ಬಡಿತಕ್ಕೆ ಕರಿಯಪ್ಪ ಸಾವು&lt;/strong&gt;&lt;/h3&gt;&lt;p&gt;ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಕೋಮಲಾಪುರ್ ಗ್ರಾಮದಲ್ಲಿ ಸಿಡಿಲು ಬಡಿದು 45 ವರ್ಷದ ಕರಿಯಪ್ಪ ಗೆನ್ನಾಕಿಹಾಳ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮದ ಜಮೀನಿನಲ್ಲಿ ಟ್ರಾಕ್ಟರ್&zwnj;ಗೆ ಗೊಬ್ಬರ ತುಂಬುವ ಕೆಲಸದಲ್ಲಿ ನಿರತರಾಗಿದ್ದಾಗ ಈ ದುರಂತ ಸಂಭವಿಸಿದೆ. ಕರಿಯಪ್ಪ ಅವರೊಂದಿಗೆ ಕೆಲಸ ಮಾಡುತ್ತಿದ್ದ ಬಸವರಾಜ್ ಎಂಬುವವರಿಗೂ ಸಿಡಿಲು ಬಡಿದಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;h2&gt;&lt;strong&gt;ರೈತ ದಂಪತಿಯ ಬಾಳಲ್ಲಿ ಬಿರುಗಾಳಿ&lt;/strong&gt;&lt;/h2&gt;&lt;p&gt;ಮತ್ತೊಂದೆಡೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಮಳೆ ಹಾನಿ ತೀವ್ರವಾಗಿದೆ. ತಾಲ್ಲೂಕಿನ ಕೆಂಗಲಹಟ್ಟಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಪಪ್ಪಾಯಿ ಬೆಳೆ ಸಂಪೂರ್ಣ ನೆಲಸಮವಾಗಿದೆ. ರೈತ ದಂಪತಿಗಳಾದ ಸೀತಮ್ಮ ಮತ್ತು ಜಿ.ಎಸ್. ದೊಡ್ಡಪ್ಪ ಅವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ 200ಕ್ಕೂ ಹೆಚ್ಚು ಪಪ್ಪಾಯಿ ಗಿಡಗಳು ಧರೆಗುರುಳಿವೆ.&lt;/p&gt;&lt;p&gt;ಈ ರೈತ ದಂಪತಿ ಸುಮಾರು 6 ತಿಂಗಳ ಹಿಂದೆ 3 ಲಕ್ಷ ರೂಪಾಯಿ ಸಾಲ-ಸೋಲ ಮಾಡಿ ಪಪ್ಪಾಯಿ ಬೆಳೆ ಹಾಕಿದ್ದರು. ಇನ್ನೇನು ಮೂರು ತಿಂಗಳಲ್ಲಿ ಬೆಳೆ ಕೈಗೆ ಬರಬೇಕಿತ್ತು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಪ್ರಕೃತಿ ಮುನಿಸು ಭಾರಿ ಆಘಾತ ನೀಡಿದೆ. 'ಬೆಳೆದಿದ್ದ ಗಿಡಗಳು ಮಣ್ಣು ಪಾಲಾಗಿರುವುದನ್ನು ಕಂಡು ನಮಗೆ ದಿಕ್ಕು ತೋಚದಂತಾಗಿದೆ ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ:&lt;/strong&gt;&lt;/h3&gt;&lt;p&gt;ಸಿಡಿಲು ಬಡಿತಕ್ಕೆ ಬಲಿಯಾದ ಕರಿಯಪ್ಪ ಅವರ ಕುಟುಂಬಕ್ಕೆ ಹಾಗೂ ಬೆಳೆ ಕಳೆದುಕೊಂಡು ಕಂಗಾಲಾಗಿರುವ ವಿಜಯನಗರದ ರೈತ ದಂಪತಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮುಂಗಾರು ಪೂರ್ವ ಮಳೆ (Pre-monsoon rain) ತೀವ್ರಗೊಳ್ಳುತ್ತಿರುವುದರಿಂದ ರೈತರು ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹವಾಮಾನದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-rain-havoc-raichur-lightning-death-vijayanagara-papaya-crop-loss-sat/articleshow-n5vhd0s"/>
        </item>
        <item>
            <title><![CDATA[DK Shivakumar Raichur visit Today: ಇಂದು ರಾಯಚೂರಿಗೆ ಡಿಸಿಎಂ ಡಿಕೆಶಿ ಸೇರಿ ‘ಕೈ’ ನಾಯಕರ ದಂಡು!]]></title>
            <link>https://kannada.asianetnews.com/karnataka-districts/dcm-dk-shivakumar-and-congress-leaders-team-visit-raichur-today/articleshow-nvgxl4r</link>
            <guid isPermaLink="true">https://kannada.asianetnews.com/karnataka-districts/dcm-dk-shivakumar-and-congress-leaders-team-visit-raichur-today/articleshow-nvgxl4r</guid>
            <pubDate>Sun, 10 May 2026 07:36:21 +0530</pubDate>
            <description><![CDATA[ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಅವರು ಲಿಂಗಸೂಗೂರು ಮಾಜಿ ಶಾಸಕರ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಸಚಿವರು ಹಾಗೂ ಶಾಸಕರ ದಂಡೇ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7szp64h320xteywrmedkp4,imgname-----------------------2026-05-10t073248.829-1778378594500.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಮೇ.10): &lt;/strong&gt;ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ರಾಯಚೂರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಇಂದು ಡಿಕೆ ಶಿವಕುಮಾರ ವಿಶೇಷ ಹೆಲಿಕಾಪ್ಟರ್&zwnj;ನಲ್ಲಿ ಆಗಮಿಸಲಿದ್ದಾರೆ.&lt;/p&gt;&lt;p&gt;ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿರುವ ಡಿ.ಕೆ. ಶಿವಕುಮಾರ್ ಅವರು, ಇಂದು ಬೆಳಿಗ್ಗೆ ಸರಿಯಾಗಿ 10:30 ಗಂಟೆಗೆ ಮುದಗಲ್ ಪಟ್ಟಣಕ್ಕೆ ಬಂದಿಳಿಯಲಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ; &lt;/strong&gt;Karnataka News Live: ಚಿಕಿತ್ಸೆ ಫಲಕಾರಿಯಾಗದೇ ನಿಧನ; ಡಿ.ಸುಧಾಕರ್ ಅವರಿಗೆ ಆಗಿದ್ದೇನು? ಇಲ್ಲಿದೆ ಮಾಹಿತಿ&lt;/p&gt;&lt;h2&gt;ಲಿಂಗಸೂಗೂರು ಮಾಜಿ ಶಾಸಕರ ಪುತ್ರಿಯ ಅದ್ದೂರಿ ಮದುವೆ&lt;/h2&gt;&lt;p&gt;ಲಿಂಗಸೂಗೂರು ಕ್ಷೇತ್ರದ ಮಾಜಿ ಶಾಸಕರ ಪುತ್ರಿಯ ಅದ್ಧೂರಿ ವಿವಾಹ ಮಹೋತ್ಸವ ಏರ್ಪಡಿಸಲಾಗಿದೆ. ಈ ಶುಭ ಸಮಾರಂಭದಲ್ಲಿ ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಲು ಡಿಸಿಎಂ ಆಗಮಿಸುತ್ತಿದ್ದಾರೆ.&lt;/p&gt;&lt;h3&gt;ಸಚಿವ-ಶಾಸಕರ ದಂಡು&lt;/h3&gt;&lt;p&gt;ಡಿಕೆ ಶಿವಕುಮಾರ್ ಅವರಿಗೆ ಸಚಿವ ಸತೀಶ್ ಜಾರಕಿಹೊಳಿ ಸಾಥ್ ನೀಡುತ್ತಿರುವುದು ವಿಶೇಷ. ಇನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಸೇರಿದಂತೆ ಹತ್ತಾರು ಶಾಸಕರು ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮುದಗಲ್&zwnj;ನಲ್ಲಿ ಈಗಿನಿಂದಲೇ ರಾಜಕೀಯ ಗಣ್ಯರ ಹವಾ ಶುರುವಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/dcm-dk-shivakumar-and-congress-leaders-team-visit-raichur-today/articleshow-nvgxl4r"/>
        </item>
        <item>
            <title><![CDATA[LPG Gas Crisis: ರಾಜ್ಯದಲ್ಲಿ ಮತ್ತೆ ಗ್ಯಾಸ್ ಟ್ರಬಲ್: ಏಜೆನ್ಸಿಗಳಿಂದಲೇ ಕಾಳಸಂತೇಲಿ ಮಾರಾಟ, ರಾಯಚೂರು, ಯಾದಗಿರಿ, ಹಾಸನ ಜನರು ಹೈರಾಣು]]></title>
            <link>https://kannada.asianetnews.com/state/lpg-gas-crisis-returns-in-karnataka-people-struggle-despite-cylinder-availability-rav/articleshow-q4v0rpl</link>
            <guid isPermaLink="true">https://kannada.asianetnews.com/state/lpg-gas-crisis-returns-in-karnataka-people-struggle-despite-cylinder-availability-rav/articleshow-q4v0rpl</guid>
            <pubDate>Sun, 24 May 2026 05:44:09 +0530</pubDate>
            <description><![CDATA[&lt;p&gt;ಮಧ್ಯೆಪ್ರಾಚ್ಯ ಯುದ್ಧದಿಂದಾಗ ಕರ್ನಾಟಕ ಯಾದಗಿರಿ, ರಾಯಚೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ಯಾಸ್ ಪೂರೈಕೆ ಸಮಸ್ಯೆ ಶೋಚನೀಯವಾಗಿದೆ. ಗ್ಯಾಸ್ ಏಜೆನ್ಸಿಗಳಿಂದ ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟದಿಂದ ಮತ್ತಷ್ಟು ಸಮಸ್ಯೆ ಬಿಗಡಾಯಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks7m3mw2ycradxcbgzcd4n15,imgname-png-gas-1779446174593.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.24): &lt;/strong&gt;ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಗೃಹ ಬಳಕೆಯ ಎಲ್&zwnj;ಪಿಜಿ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದ್ದು, ಗ್ರಾಹಕರನ್ನು ಹೈರಾಣು ಮಾಡಿದೆ. ಯಾದಗಿರಿ, ರಾಯಚೂರು, ಹಾಸನದಲ್ಲಿ ಗ್ರಾಹಕರು ಬೆಳಗ್ಗೆ 5 ಗಂಟೆಯಿಂದಲೇ ಏಜೆನ್ಸಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತರೂ ಸಿಲಿಂಡರ್&zwnj; ಪಡೆಯಲಾಗದೇ ಭಾರೀ ಸಮಸ್ಯೆ ಎದುರಿಸಿದ್ದಾರೆ.&lt;/p&gt;&lt;p&gt;ಕೆಲವು ಕಡೆ ಏಜೆನ್ಸಿಗಳಿಗೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಈ ಸಮಸ್ಯೆ ಕಂಡುಬಂದಿದ್ದರೆ ಇನ್ನು ಕೆಲವು ಕಡೆ ಗ್ಯಾಸ್&zwnj; ಏಜೆನ್ಸಿ ಮಾಲೀಕರೇ ಕಾಳಸಂತೆಯಲ್ಲಿ ಸಿಲಿಂಡರ್&zwnj; ಮಾರಿಕೊಂಡ ಕಾರಣಕ್ಕೆ ಸಮಸ್ಯೆ ಎದುರಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.&lt;/p&gt;&lt;h2&gt;ಏಜೆನ್ಸಿ ವಿರುದ್ಧ ದೂರು:&lt;/h2&gt;&lt;p&gt;ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದದಲ್ಲಿ ಭಾರತ್&zwnj; ಗ್ಯಾಸ್&zwnj; ಏಜೆನ್ಸಿ ಮುಂದೆ ದಿನಪೂರ್ತಿ ಕಾದು ಕುಳಿತರೂ ಸಿಲಿಂಡರ್&zwnj; ಸಿಗುತ್ತಿಲ್ಲ. ಅಲ್ಲದೆ ಅಂಗಡಿ ಮಾಲೀಕ ಏಜೆನ್ಸಿ ಕಚೇರಿಯನ್ನು ತೆರೆಯದೆ ಕಾಳ ಸಂತೆಯಲ್ಲಿ ಸಿಲಿಂಡರ್&zwnj; ಮಾರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಪೊಲೀಸರಿಗೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ.&lt;/p&gt;&lt;p&gt;ಗ್ರಾಮದಲ್ಲಿ 2 ತಿಂಗಳಿನಿಂದಲೂ ಸಿಲಿಂಡರ್&zwnj; ವಿತರಣೆಯಲ್ಲಿ ಏರುಪೇರಾಗಿದೆ. ಗ್ಯಾಸ್&zwnj; ಬುಕ್&zwnj; ಮಾಡಿದ ಜನರು ಕೆಲಸ ಬಿಟ್ಟು ಏಜೆನ್ಸಿ ಕಚೇರಿ ಮುಂದೆ ಸಾಲಾಗಿ ಖಾಲಿ ಸಿಲಿಂಡರ್&zwnj; ಇಟ್ಟು ಕಾದು ಸುಸ್ತಾಗಿದ್ದಾರೆ. ಶನಿವಾರ ಬೆಳಗ್ಗೆ 5 ಗಂಟೆಯಿಂದಲೇ ಕಾದಿದ್ದ ಜನರು, ಹಲವು ಗಂಟೆ ಕಾದರೂ ಗ್ಯಾಸ್&zwnj; ಅಂಗಡಿ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿ ಸ್ಥಳಕ್ಕೆ ಕರೆಸಿ ಗ್ಯಾಸ್&zwnj; ಕೊಡಿಸುವಂತೆ ಮನವಿ ಮಾಡಿದ್ದಾರೆ. ಅಡುಗೆ ಅನಿಲ ಅವನ್ನು ಬುಕ್&zwnj; ಮಾಡಿ ಗ್ರಾಹಕರಿಂದ ಒಟಿಪಿ ಪಡೆದು ಬ್ಲಾಕ್&zwnj;ನಲ್ಲಿ ಸಿಲಿಂಡರ್&zwnj;ಗಳನ್ನು ಮಾರಾಟ ಮಾಡಿದ್ದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;&lt;h3&gt;ಶಾಸಕ ಸ್ಥಳಕ್ಕೆ:&lt;/h3&gt;&lt;p&gt;ಹಾಸನ ಜಿಲ್ಲೆಯ ಆಲೂರಿನಲ್ಲಿಯೂ ಸಿಲಿಂಡರ್&zwnj; ಸಮರ್ಪಕವಾಗಿ ಪೂರೈಕೆ ಆಗಿಲ್ಲ. ವಿಜಯಲಕ್ಷ್ಮೀ ಭಾರತ್ ಗ್ಯಾಸ್ ಏಜೆನ್ಸಿ ಮುಂದೆ ಜನರು ಸಾಲಗಟ್ಟಿ ನಿಂತಿದ್ದರು. ಕಳೆದ ಕೆಲವು ದಿನಗಳಿಂದ ತಾಂತ್ರಿಕ ಲೋಪದೋಷ, ಸರಬರಾಜಿನ ವಿಳಂಬ ಹಾಗೂ ವಿತರಣಾ ವ್ಯವಸ್ಥೆಯ ಗೊಂದಲದಿಂದ ಆಲೂರು ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಪರದಾಡುತ್ತಿದ್ದಾರೆ. ಶನಿವಾರ ಮಹಿಳೆಯರು ಸೇರಿ ನೂರಾರು ಮಂದಿ ಬೆಳಗ್ಗಿನಿಂದಲೇ ಸಾಲಿನಲ್ಲಿ ನಿಂತು ಗ್ಯಾಸ್ ಸಿಲಿಂಡರ್ ಪಡೆಯಲು ಹರಸಾಹಸ ಪಡುತ್ತಿದ್ದರು. ಈ ವಿಷಯ ತಿಳಿದ ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ತಕ್ಷಣ ಆಗಮಿಸಿದರು. ಏಜೆನ್ಸಿ ಮತ್ತು ಅಧಿಕಾರಿಗಳ ವಿರುದ್ಧ ಸ್ಥಳದಲ್ಲಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ಜತೆ ಚರ್ಚಿಸಿದ ಶಾಸಕ ಮಂಜು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ತಕ್ಷಣವೇ ಹೆಚ್ಚುವರಿ ಸಿಲಿಂಡರ್ ಪೂರೈಕೆ ಮಾಡುವಂತೆ ಸೂಚಿಸಿದರು. ಶಾಸಕರ ಸೂಚನೆ ಬೆನ್ನಲ್ಲೇ ತಕ್ಷಣವೇ ಮೂರು ಲಾರಿಗಳಲ್ಲಿ ಗ್ಯಾಸ್ ಸಿಲಿಂಡರ್ ತರಿಸಲಾಯಿತು.&lt;/p&gt;&lt;h3&gt;ಗ್ಯಾಸ್&zwnj;ಗೆ ಪರದಾಟ:&lt;/h3&gt;&lt;p&gt;ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಕೊರತೆ ಭುಗಿಲೆದ್ದಿದೆ. ಗ್ರಾಹಕರು ಬೆಳಗ್ಗೆಯಿಂದಲೇ ಏಜೆನ್ಸಿ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರು ನಸುಕಿನಲ್ಲೇ ಆಗಮಿಸಿ ಸರದಿಯಲ್ಲಿ ನಿಂತು ಕಾಯುತ್ತಿದ್ದರೂ ಸಿಲಿಂಡರ್&zwnj; ಸಿಗದೆ ಪರದಾಡಿದರು.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/lpg-gas-crisis-returns-in-karnataka-people-struggle-despite-cylinder-availability-rav/articleshow-q4v0rpl"/>
        </item>
        <item>
            <title><![CDATA[ಶನಿಮಹಾತ್ಮ ಜಯಂತಿ ದಿನವೇ ಆಂಜನೇಯ ದೇಗುಲ ಕಳ್ಳತನ, ಹುಂಡಿ ಮುಟ್ಟದೆ ಬೆಳ್ಳಿ ಸಾಮಾಗ್ರಿ ಕಳವು]]></title>
            <link>https://kannada.asianetnews.com/gallery/karnataka-districts/theft-at-anjaneya-temple-on-festival-day-donation-box-left-untouched-raichur-q56cs08</link>
            <guid isPermaLink="true">https://kannada.asianetnews.com/gallery/karnataka-districts/theft-at-anjaneya-temple-on-festival-day-donation-box-left-untouched-raichur-q56cs08</guid>
            <pubDate>Sun, 17 May 2026 10:47:06 +0530</pubDate>
            <description><![CDATA[&lt;p&gt;ರಾಯಚೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳ್ಳತನ ನಡೆದಿದೆ. ಕಳ್ಳರು ಹುಂಡಿಯನ್ನು ಮುಟ್ಟಿಲ್ಲ. ಆದರೆ ದೇಗುಲದಲ್ಲಿರುವ ಬೆಳ್ಳಿ ಸೇರಿದಂತೆ ಆಭರಣ ಒಂದನ್ನು ಬಿಡದೆ ಕಳ್ಳತನ ಮಾಡಿರುವುದು ಸಿಸಿಟಿಯಲ್ಲಿ ಸೆರೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krt57f50rcakky64ge128zbs,imgname-raichur-temple-theft-1778994363552.png" type="image/jpeg" height="390" width="690"/>
            <content:encoded><![CDATA[&lt;p&gt;ರಾಯಚೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳ್ಳತನ ನಡೆದಿದೆ. ಕಳ್ಳರು ಹುಂಡಿಯನ್ನು ಮುಟ್ಟಿಲ್ಲ. ಆದರೆ ದೇಗುಲದಲ್ಲಿರುವ ಬೆಳ್ಳಿ ಸೇರಿದಂತೆ ಆಭರಣ ಒಂದನ್ನು ಬಿಡದೆ ಕಳ್ಳತನ ಮಾಡಿರುವುದು ಸಿಸಿಟಿಯಲ್ಲಿ ಸೆರೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಶನಿ ಮಹಾತ್ಮ ಜಯಂತಿ ದಿನವೇ ಆಂಜನೇಯ ಸ್ವಾಮಿ ದೇಗುಲ ಕಳ್ಳತನ ನಡೆದ ಘಟನೆ ರಾಯಚೂರಿನ ಸಿಂಧನೂರು ತಾ. ಒಳಬಳ್ಳಾರಿ ರಸ್ತೆಯ ಜೋಳದರಾಶಿ ಬಳಿ ನಡೆದಿದೆ. ಪ್ರಸಿದ್ಧ ಆಂಜನೇಯ ಸ್ವಾಮಿ ದೇಗುಲ ಪ್ರತಿ ದಿನ ಹಲವು ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಭಕ್ತರು ಕಾಣಿಕೆಯನ್ನೂ ನೀಡುತ್ತಾರೆ. ಇದೇ ದೇಗುಲ ಟಾರ್ಗೆಟ್ ಮಾಡಿ ಕಳ್ಳತನ ಮಾಡಲಾಗಿದೆ.&lt;/p&gt;&lt;img&gt;&lt;p&gt;ಇಬ್ಬರು ಕಳ್ಳರು ಮುಖಕ್ಕೆ ಮಾಸ್ಕ್ ಹಾಗೂ ಬಟ್ಟೆ ಕಟ್ಟಿಕೊಂಡು ಆಂಜನೇಯ ಸ್ವಾಮಿ ದೇಗುಲಕ್ಕೆ ಎಂಟ್ರಿಕೊಟ್ಟಿದ್ದಾರೆ. ದೇವಸ್ಥಾನದ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳ್ಳತನ ನಡೆಸಿದ್ದಾರೆ. ಈ ಕಳ್ಳತನ ಮಾದರಿ ಇದೀಗ ಹಲವು ಅನುಮಾನಕ್ಕೂ ಕಾರಣಾಗಿದೆ.&lt;/p&gt;&lt;img&gt;&lt;p&gt;ದೇಗುಲ ಪ್ರವೇಶಿಸಿದ ಕಳ್ಳರು ದೇವಸ್ಥಾನದ ಹುಂಡಿಯನ್ನು ಮುಟ್ಟಿಲ್ಲ. ಆದರೆ ಆಂಜನೇಯನಿಗೆ ತೊಡಿಸಿದ ಆಭರಣ ಸೇರಿದಂತೆ ಭದ್ರವಾಗಿಟ್ಟಿದ್ದ ಬೆಳ್ಳಿಯ ಆಭರಣ, ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದಾರೆ. ಇಬ್ಬರು ಖದೀಮರಿಂದ ಬೆಳ್ಳಿ ಉಡದಾರ, ಬೆಳ್ಳಿ ತಟ್ಟೆ, ಪೂಜೆಯ ತಾಮ್ರದ ತಟ್ಟೆ ಕಳವು ಮಾಡಿದ್ದಾರೆ.&lt;/p&gt;&lt;img&gt;&lt;p&gt;ದೇಗುಲದ ಎದುರೇ ಹುಂಡಿ ಇತ್ತು. ಹುಂಡಿಯಲ್ಲಿ ಹಣವೂ ಭರ್ತಿಯಾಗಿತ್ತು. ಆದರೆ ಕಳ್ಳರು ಹುಂಡಿಯನ್ನು ಮುಟ್ಟದೇ ಬರಿ ಬೆಳ್ಳಿ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆ. ಇದು ಹಲವು ಅನುಮಾನಕ್ಕೆ ಕಾರಣಾಗಿದೆ. ಕಳ್ಳತನದ ಪ್ರತಿಯೊಂದು ದೃಶ್ಯ ದೇಗುಲದ ಸಿಸಿಟಿವಿಯಲ್ಲಿ ಸೆರೆಯಾಗಿದೆ.&lt;/p&gt;&lt;img&gt;&lt;p&gt;ಮಾಹಿತಿ ತಿಳಿದು ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇಗುಲದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>raichur</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/karnataka-districts/theft-at-anjaneya-temple-on-festival-day-donation-box-left-untouched-raichur-q56cs08"/>
        </item>
        <item>
            <title><![CDATA[ರಾಯಚೂರು:ತನ್ನ ರಕ್ತವನ್ನೇ ಭಕ್ಷಿಸಿದ ತಂದೆ, ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾ*ಚಾರ, ಸ್ನೇಹಿತನನ್ನೂ ಮಲಗಿಸಿದ ಅಪ್ಪ!]]></title>
            <link>https://kannada.asianetnews.com/karnataka-districts/father-and-his-friend-abused-minor-daughter-in-raichur-lingasugur-village-gdp/articleshow-rg6yqrw</link>
            <guid isPermaLink="true">https://kannada.asianetnews.com/karnataka-districts/father-and-his-friend-abused-minor-daughter-in-raichur-lingasugur-village-gdp/articleshow-rg6yqrw</guid>
            <pubDate>Sat, 16 May 2026 15:18:00 +0530</pubDate>
            <description><![CDATA[ರಾಯಚೂರಿನ ಲಿಂಗಸೂಗೂರು ಪಟ್ಟಣದಲ್ಲಿ, ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಸ್ನೇಹಿತನೊಂದಿಗೂ ಮಗಳನ್ನು ಮಲಗಿಸಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krr2sd381ypa4jsay7vsvzj5,imgname-raichur-father-case-1778924696680.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು: &lt;/strong&gt;ಜಿಲ್ಲೆಯಲ್ಲಿ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದ್ದು, ತಂದೆಯೊಬ್ಬ ತನ್ನದೇ ರಕ್ತವಾದ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಕೇಳಿಬಂದಿದೆ. ಈ ಅಮಾನವೀಯ ಘಟನೆ ಇಲ್ಲಿನ ಲಿಂಗಸೂಗೂರು ಪಟ್ಟಣದ ಜನತಾ ಕಾಲೋನಿಯಲ್ಲಿ ನಡೆದಿದೆ.&lt;/p&gt;&lt;h2&gt;ಮಗಳ ಮೇಲೆಯೇ ತಂದೆಯು ದೌರ್ಜನ್ಯ&lt;/h2&gt;&lt;p&gt;ಸುಮಾರು ಎರಡು ವರ್ಷಗಳ ಕಾಲ ನಿರಂತರವಾಗಿ ಅಪ್ರಾಪ್ತೆ ಮಗಳ ಮೇಲೆಯೇ ತಂದೆಯು ದೌರ್ಜನ್ಯ ಎಸಗಿದ್ದ. ಈ ಕೃತ್ಯವನ್ನು ಯಾರಿಗೂ ತಿಳಿಸಬಾರದು ಎಂದು ಮಗಳಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಿದ್ದ , ಭಯ ಮತ್ತು ನೋವಿನಿಂದ ಬಾಲಕಿ ಮೌನವಾಗಿಯೇ ಎಲ್ಲವನ್ನು ಸಹಿಸಿಕೊಂಡಿದ್ದಳು. ಅಪ್ಪನ ಬೆದರಿಕೆಯಿಂದ ಬಾಲಕಿ ನೊಂದು ಹೋಗಿದ್ದಳು. ಆರೋಪಿಯು ತನ್ನ ಕೃತ್ಯವನ್ನು ಯಾರಿಗೂ ಹೇಳದಂತೆ ಮಾತ್ರವಲ್ಲ ಹೆತ್ತ ತಾಯಿಗೆ ವಿಷಯ ತಿಳಿಯಬಾರದೆಂದು ಮಗಳಿಗೆ ಧಮ್ಕಿ ಹಾಕುತ್ತಿದ್ದ, ಈ ಎಲ್ಲಾ ವಿಚಾರಗಳು ಈಗ ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ತನ್ನ ಸ್ನೇಹಿತನ ಜೊತೆಗೆ ಬಲವಂತವಾಗಿ ಮಲಗಿಸಿದ ತಂದೆ&lt;/h2&gt;&lt;p&gt;ಇನ್ನೂ ಬೆಚ್ಚಿಬೀಳಿಸುವ ಶಾಕಿಂಗ್ ಸಂಗತಿಯೆಂದರೆ, ಆರೋಪಿಯು ತನ್ನ ಸ್ನೇಹಿತನನ್ನೂ ಈ ಕೃತ್ಯದಲ್ಲಿ ಭಾಗಿಯಾಗಿಸಿದ್ದಾನೆ. ತಾನು ಅತ್ಯಾ*ಚಾರಗೈದಿದ್ದು ಮಾತ್ರವಲ್ಲ ತನ್ನ ಸ್ನೇಹಿತ ಜೊತೆಗೆ ತನ್ನ ಮಕ್ಕಳನ್ನ ಮಲಗಿಸಿದ್ದಾನೆ ಈ ಪಾಪಿತಂದೆ. ಇದರಿಂದ ರೋಸಿ ಹೋದ ಬಾಲಕಿ ಪೊಲೀಸರ ಮೊರೆ ಹೋಗಿದ್ದು, ದೂರು ಆಧರಿಸಿ ಅತ್ಯಾ*ಚಾರಗೈದ ಆರೋಪದಡಿ ಇಬ್ಬರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.&lt;/p&gt;&lt;p&gt;ಈ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಅಮರೇಶ್ (40) ಹಾಗೂ ಶೀನು (33) ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಸದ್ಯ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಬಾಲಕಿಯ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಘಟನೆ ಸಮಾಜದಲ್ಲಿ ಆತಂಕ ಮೂಡಿಸಿದ್ದು, ಮಕ್ಕಳ ರಕ್ಷಣೆ ಹಾಗೂ ಕುಟುಂಬದ ಒಳಗಿನ ಹಿಂಸಾಚಾರ ತಡೆಯುವ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>raichur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/father-and-his-friend-abused-minor-daughter-in-raichur-lingasugur-village-gdp/articleshow-rg6yqrw"/>
        </item>
        <item>
            <title><![CDATA[ವಾಹನ ಸವಾರರಿಗೆ ಬಿಗ್ ಶಾಕ್: 3 ರೂ. ದರ ಏರಿಕೆಯ ಬಳಿಕ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ₹95 ಒಳಗೆ, ರಾಯಚೂರಿನಲ್ಲಿ ₹107!]]></title>
            <link>https://kannada.asianetnews.com/state/fuel-shock-rs-3-hike-pushes-petrol-below-rs-95-in-delhi-rs-107-in-raichur-karnataka-rav/articleshow-rr5evgl</link>
            <guid isPermaLink="true">https://kannada.asianetnews.com/state/fuel-shock-rs-3-hike-pushes-petrol-below-rs-95-in-delhi-rs-107-in-raichur-karnataka-rav/articleshow-rr5evgl</guid>
            <pubDate>Fri, 15 May 2026 10:14:14 +0530</pubDate>
            <description><![CDATA[ರಾಯಚೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಒಂದೇ ದಿನದಲ್ಲಿ ₹3 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ವಾಹನ ಸವಾರರಲ್ಲಿ ತೀವ್ರ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದರ ಹೆಚ್ಚಿರುವುದಕ್ಕೆ ರಾಜ್ಯ ಸರ್ಕಾರದ ಪಾತ್ರದ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krmtjy57xaredd0ag8rms29f,imgname-delhi-cng-price-hike-hormuz-blockade-petrol-diesel-fuel-crisis-inflation-impact-india-0-1778815432871.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಮೇ.15): &lt;/strong&gt;ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ತೈಲ ಕಂಪನಿಗಳು ಮತ್ತೊಂದು ಬರೆ ಎಳೆದಿವೆ. ರಾಯಚೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಏರಿಕೆಯಾಗಿದ್ದು, ವಾಹನ ಸವಾರರು ಅಕ್ಷರಶಃ ಕಂಗಾಲಾಗಿದ್ದಾರೆ.&lt;/p&gt;&lt;h2&gt;ಒಂದೇ ದಿನದಲ್ಲಿ ₹3ಗೂ ಹೆಚ್ಚು ಏರಿಕೆ!&lt;/h2&gt;&lt;p&gt;ರಾಯಚೂರಿನಲ್ಲಿ ಇಂದಿನ ಪೆಟ್ರೋಲ್ ₹107.36, ನಿನ್ನೆ: ₹104.09 ಇತ್ತು. ಅಂದರೆ ಒಂದೇ ದಿನದಲ್ಲಿ ₹3.27 ಏರಿಕೆ!&lt;/p&gt;&lt;p&gt;ಇನ್ನು ಡೀಸೆಲ್ ಇಂದಿನ ದರ ₹95.29 ಆಗಿದೆ.ನಿನ್ನೆ: ₹92.18 ಇತ್ತು ಇಲ್ಲಿಯೂ ₹3.11 ಏರಿಕೆಯಾಗಿದೆ.&lt;/p&gt;&lt;p&gt;ಬೆಳ್ಳಂಬೆಳಗ್ಗೆ ಪೆಟ್ರೋಲ್ ಬಂಕ್&zwnj;ಗಳಿಗೆ ಬಂದ ವಾಹನ ಸವಾರರು, ರೇಟ್ ಕೇಳಿ ಆಘಾತಕ್ಕೊಳಗಾಗಿದ್ದಾರೆ. ಒಂದೇ ದಿನದಲ್ಲಿ ಇಷ್ಟು ಏರಿಕೆಯಾದರೆ ಹೇಗೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h3&gt;ದೆಹಲಿ Vs ಕರ್ನಾಟಕ: ದರದಲ್ಲಿ ಇಷ್ಟೊಂದು ವ್ಯತ್ಯಾಸವೇಕೆ?&lt;/h3&gt;&lt;p&gt;ದೇಶದ ರಾಜಧಾನಿ ದೆಹಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ತೈಲ ದರ ಗಗನಕ್ಕೇರಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹94.77 ರಷ್ಟಿದ್ದರೆ, ಬೆಂಗಳೂರು, ರಾಯಚೂರಿನಲ್ಲಿ ₹107.36 ತಲುಪಿದೆ. ಅಂದರೆ ದೆಹಲಿಗಿಂತ ರಾಜ್ಯದಲ್ಲಿಯೇ ಪೆಟ್ರೋಲ್ ಡೀಸೆಲ್ ದುಬಾರಿ ಆಯ್ತಲ್ಲ!&lt;/p&gt;&lt;h3&gt;ನಿಜಕ್ಕೂ ಬೆಲೆ ಹೆಚ್ಚಿಸಿದ್ದು ಯಾರು?&lt;/h3&gt;&lt;p&gt;ಕೇಂದ್ರ ಸರ್ಕಾರ ಬೆಲೆ ಏರಿಸುತ್ತಿದೆ ಎಂದು ಪ್ರತಿ ಬಾರಿ ದೂರುವ ರಾಜ್ಯ ಸರ್ಕಾರಕ್ಕೆ ಈಗ ಸಾರ್ವಜನಿಕರು ನೇರ ಪ್ರಶ್ನೆ ಹಾಕುತ್ತಿದ್ದಾರೆ. ಇಂಧನ ಬೆಲೆ 3 ರೂ. ಹೆಚ್ಚಿಸಿದ ಮೇಲೂ ದೆಹಲಿಯಲ್ಲಿ ಪೆಟ್ರೋಲ್ ದರ ₹95ರ ಒಳಗಿರುವಾಗ, ನಮ್ಮಲ್ಲಿ ₹107 ದಾಟುತ್ತಿರುವುದು ಹೇಗೆ? ಕೇಂದ್ರದ ಮೇಲೆ ಗೂಬೆ ಕೂರಿಸುವ ಮುನ್ನ, ರಾಜ್ಯ ಸರ್ಕಾರ ಈ 3 ರೂಪಾಯಿಗಳ ದರ ಹೆಚ್ಚಳಕ್ಕೆ ನೀಡುವ ಸಮರ್ಥನೆ ಏನು? ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದೇ ನಿಮ್ಮ ಆಡಳಿತ ವೈಖರಿಯೇ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/fuel-shock-rs-3-hike-pushes-petrol-below-rs-95-in-delhi-rs-107-in-raichur-karnataka-rav/articleshow-rr5evgl"/>
        </item>
        <item>
            <title><![CDATA[Mantralayam cylinder blast: ಮಂತ್ರಾಲಯದ ಕಾರ್ಮಿಕರ ಶೆಡ್‌ನಲ್ಲಿ ಭೀಕರ ಸ್ಫೋಟ,  ತಪ್ಪಿದ ಭಾರೀ ಅನಾಹುತ!]]></title>
            <link>https://kannada.asianetnews.com/karnataka-districts/gas-cylinder-explosion-in-workers-shed-at-mantralaya-raichur-rav/articleshow-tr9qok4</link>
            <guid isPermaLink="true">https://kannada.asianetnews.com/karnataka-districts/gas-cylinder-explosion-in-workers-shed-at-mantralaya-raichur-rav/articleshow-tr9qok4</guid>
            <pubDate>Thu, 14 May 2026 06:11:29 +0530</pubDate>
            <description><![CDATA[&lt;p&gt;ಮಂತ್ರಾಲಯದ ರಾಯರ ಮಠದ ಬಳಿ ಬಿಹಾರ ಮೂಲದ ಕಾರ್ಮಿಕರು ವಾಸವಿದ್ದ ಶೆಡ್&zwnj;ಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ. ಕಾರ್ಮಿಕರು ಕೆಲಸಕ್ಕೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಆದರೆ ಶೆಡ್&zwnj;ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krhym6p8h2ccd5mnmc7b39q0,imgname-----------------------2026-05-14t060415.014-1778719005384.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಮೇ.14):&lt;/strong&gt; ಮಂತ್ರಾಲಯದ ರಾಯರ ಮಠದಲ್ಲಿ ನಡೆಯುತ್ತಿರುವ ಕಟ್ಟಡ ಕೆಲಸದಲ್ಲಿ ಟೈಲ್ಸ್&zwnj; ಹಾಕುವುದಕ್ಕಾಗಿ ಬಿಹಾರದಿಂದ ಆಗಮಿಸಿರುವ 25ಕ್ಕೂ ಹೆಚ್ಚು ಕಾರ್ಮಿಕರು ಉಳಿದುಕೊಂಡಿದ್ದ ತಗಡಿನ ಶೆಡ್&zwnj;ಗಳಲ್ಲಿ ಬುಧವಾರ ಮಧ್ಯಾಹ್ನ ಏಕಾಏಕಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು, ಶೆಡ್&zwnj;ಗಳು ಸುಟ್ಟು ಕರಕಲಾಗಿವೆ.&amp;nbsp;&lt;/p&gt;&lt;p&gt;ಈ ವೇಳೆ, ಕಾರ್ಮಿಕರೆಲ್ಲರೂ ಕೆಲಸಕ್ಕೆ ಹೋಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಫೋಟದ ಸದ್ದು ಕೇಳಿ ಭಕ್ತರು ಭಯಭೀತರಾಗಿ ಓಡಿಹೋದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.&lt;/p&gt;&lt;p&gt;ರಾಯರ ಮಠದಲ್ಲಿ ನಡೆಯುತ್ತಿರುವ ಕಟ್ಟಡ ಕೆಲಸದಲ್ಲಿ ಟೈಲ್ಸ್&zwnj; ಹಾಕುವುದಕ್ಕಾಗಿ ಬಿಹಾರದಿಂದ 25ಕ್ಕೂ ಹೆಚ್ಚು ಕಾರ್ಮಿಕರು ಆಗಮಿಸಿದ್ದು, ಐದು ತಾತ್ಕಾಲಿಕ ಶೆಡ್&zwnj;ಗಳಲ್ಲಿ ನೆಲೆಸಿದ್ದರು. ಬುಧವಾರ ಎಲ್ಲರೂ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಒಂದು ಶೆಡ್&zwnj;ನಲ್ಲಿನ ಸಿಲಿಂಡರ್&zwnj; ಸ್ಫೋಟಗೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ. ನಂತರ, ಇತರ ಬೆಂಕಿ ಇತರ ಶೆಡ್&zwnj;ಗಳಿಗೂ ವ್ಯಾಪಿಸಿ, 5 ಕೆಜಿಯ ಮೂರು ಸಿಲಿಂಡರ್&zwnj;ಗಳು ಸ್ಫೋಟಗೊಂಡಿವೆ. ಉಳಿದಿದ್ದ ಎರಡು ಸಿಲಿಂಡರ್&zwnj;ಗಳನ್ನು ಹೊರ ತೆಗೆದು ಹೆಚ್ಚಿನ ಅಪಾಯ ಸಂಭವಿಸದಂತೆ ತಡೆಯಲಾಗಿದೆ.&lt;/p&gt;&lt;p&gt;ಘಟನಾ ಸ್ಥಳಕ್ಕೆ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಐದು ಶೆಡ್&zwnj;ಗಳಲ್ಲಿ ವಾಸವಿದ್ದ 25ಕ್ಕೂ ಹೆಚ್ಚು ಕಾರ್ಮಿಕರಿಗೆ ಪಡಿತರ ಸೇರಿ ಇತರ ವಸ್ತುಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದಾರೆ. ಮಂತ್ರಾಲಯ ಪೊಲೀಸ್&zwnj; ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>raichur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gas-cylinder-explosion-in-workers-shed-at-mantralaya-raichur-rav/articleshow-tr9qok4"/>
        </item>
        <item>
            <title><![CDATA[ಸಚಿವ ಡಿ. ಸುಧಾಕರ್ ನಿಧನ; ಡಿಸಿಎಂ ಡಿಕೆ ಶಿವಕುಮಾರ ರಾಯಚೂರು ಪ್ರವಾಸ ದಿಢೀರ್ ರದ್ದು?]]></title>
            <link>https://kannada.asianetnews.com/state/minister-d-sudhakar-passes-away-dcm-dk-shivakumar-s-raichur-visit-abruptly-cancelled/articleshow-wzazyzn</link>
            <guid isPermaLink="true">https://kannada.asianetnews.com/state/minister-d-sudhakar-passes-away-dcm-dk-shivakumar-s-raichur-visit-abruptly-cancelled/articleshow-wzazyzn</guid>
            <pubDate>Sun, 10 May 2026 08:07:00 +0530</pubDate>
            <description><![CDATA[ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಯಚೂರು ಜಿಲ್ಲಾ ಪ್ರವಾಸವು, ಅವರ ಸಂಪುಟ ಸಹೋದ್ಯೋಗಿ ಹಾಗೂ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರದ್ದಾಗಿದೆ. ತಮ್ಮ ಆಪ್ತ ಗೆಳೆಯನ ಅಗಲಿಕೆಗೆ ಡಿಕೆಶಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7vr56y011dfjq2tdzyr8ka,imgname-----------------------2026-05-10t080350.098-1778380444894.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಮೇ.10):&lt;/strong&gt; ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣಕ್ಕೆ ಇಂದು ಆಗಮಿಸಬೇಕಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿ ಬಹುತೇಕ ರದ್ದಾಗಿದೆ. ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಈ ಪ್ರವಾಸವನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;ಕೈ ಕೊಟ್ಟ ಆರೋಗ್ಯ, ಸಚಿವ ಸುಧಾಕರ್ ಇನ್ನಿಲ್ಲ:&lt;/h2&gt;&lt;p&gt;ಹಿರಿಯೂರು ಶಾಸಕರು ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಸುಧಾಕರ್ ಅವರ ಸಾವು ಕಾಂಗ್ರೆಸ್ ಪಾಳಯದಲ್ಲಿ ಆಘಾತ ಮೂಡಿಸಿದೆ.&lt;/p&gt;&lt;h3&gt;ಆಪ್ತ ಗೆಳೆಯನ ಅಗಲಿಕೆಗೆ ಡಿಕೆಶಿ ಕಂಬನಿ&lt;/h3&gt;&lt;p&gt;ತಮ್ಮ ಸಂಪುಟ ಸಹೋದ್ಯೋಗಿಯ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. 'ನಮ್ಮ ಸಂಪುಟ ಸಹೋದ್ಯೋಗಿ ಹಾಗೂ ನನ್ನ ಆಪ್ತರೂ ಆಗಿದ್ದ ಡಿ. ಸುಧಾಕರ್ ಅವರ ಸಾವು ನನಗೆ ಅತೀವ ದುಃಖವನ್ನುಂಟು ಮಾಡಿದೆ. ಉತ್ತಮ ಜನಪರ ಸೇವಕನನ್ನು ನಾವು ಕಳೆದುಕೊಂಡಿದ್ದೇವೆ' ಎಂದು ಭಾವುಕರಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ಆಪ್ತರೂ ಆಗಿದ್ದ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದಿದ್ದು ಅತೀವ ದುಃಖವನ್ನುಂಟು ಮಾಡಿದೆ.&amp;nbsp;ಹಿರಿಯೂರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಉತ್ತಮ ರೀತಿಯಲ್ಲಿ ಜನಪರ ಸೇವೆ&hellip; pic.twitter.com/XqMbuzm08f&lt;/p&gt;&lt;p&gt;&mdash; DK Shivakumar (@DKShivakumar) May 10, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;'ಶೋಕ ಸಾಗರದಲ್ಲಿ ಆಪ್ತರು&lt;/h3&gt;&lt;p&gt;'ಭಗವಂತ ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ' ಎಂದು ಡಿಕೆ ಶಿವಕುಮಾರ್ ಪ್ರಾರ್ಥಿಸಿದ್ದಾರೆ. ಸಚಿವರ ನಿಧನದ ಹಿನ್ನೆಲೆಯಲ್ಲಿ ಇಂದಿನ ರಾಯಚೂರು ಪ್ರವಾಸ ಬಹುತೇಕ ರದ್ದಾಗಿದೆ.&lt;/p&gt;]]></content:encoded>
            <category>raichur</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/minister-d-sudhakar-passes-away-dcm-dk-shivakumar-s-raichur-visit-abruptly-cancelled/articleshow-wzazyzn"/>
        </item>
        <item>
            <title><![CDATA[ರಾಜ್ಯದಲ್ಲಿ ಎಲ್ಲಾ ಕುರ್ಚಿಗಳೂ ಗಟ್ಟಿಯಾಗಿವೆ: ಪ್ರಧಾನಿ ಮಾತಿಗೆ ಡಿ.ಕೆ.ಶಿವಕುಮಾರ್ ತಿರುಗೇಟು]]></title>
            <link>https://kannada.asianetnews.com/karnataka-districts/dcm-dk-shivakumar-reaction-to-pm-modi-karnataka-cm-chair-gvd/articleshow-ykq26ae</link>
            <guid isPermaLink="true">https://kannada.asianetnews.com/karnataka-districts/dcm-dk-shivakumar-reaction-to-pm-modi-karnataka-cm-chair-gvd/articleshow-ykq26ae</guid>
            <pubDate>Mon, 11 May 2026 23:25:21 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಯಾವ ಕುರ್ಚಿಗಳೂ ಅಲ್ಲಾಡುತ್ತಿಲ್ಲ. ಎಲ್ಲ ಕುರ್ಚಿಗಳೂ ಗಟ್ಟಿಯಾಗಿವೆ. ಪ್ರಧಾನಿಯವರ ಕಣ್ಣಿಗೆ ಏನು ಕಾಣುತ್ತಿದೆಯೋ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke4e92kg74w41s7hkcx6tsvt,imgname-----------------------2026-01-04t173327.258-1767528237680.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುದಗಲ್&zwnj; (ಮೇ.11): &lt;/strong&gt;ಕರ್ನಾಟಕದಲ್ಲಿ ಯಾವ ಕುರ್ಚಿಗಳೂ ಅಲ್ಲಾಡುತ್ತಿಲ್ಲ. ಎಲ್ಲ ಕುರ್ಚಿಗಳೂ ಗಟ್ಟಿಯಾಗಿವೆ. ಪ್ರಧಾನಿಯವರ ಕಣ್ಣಿಗೆ ಏನು ಕಾಣುತ್ತಿದೆಯೋ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. ಕರ್ನಾಟಕದಲ್ಲಿ ಸಿಎಂ ಕುರ್ಚಿ ಅಲುಗಾಡುತ್ತಿದೆ. ಕೇರಳ, ಪಂಜಾಬ್&zwnj;ನಲ್ಲೂ ಇದೇ ರೀತಿ ಆಗಿದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.&lt;/p&gt;&lt;p&gt;ಇನ್ನು ಅಗಲಿದ ಸಚಿವ ಡಾ. ಸುಧಾಕರ್&zwnj; ಅವರನ್ನು ನೆನೆದ ಡಿಸಿಎಂ ಡಿ.ಕೆ.ಶಿವಕುಮಾರ್&zwnj;, ಭದ್ರಾ ಮೇಲ್ದಂಡೆ ಯೋಜನೆ ಉದ್ಘಾಟನೆಗೆ ಸಚಿವ ಸುಧಾಕರ್ ಇರಬೇಕಿತ್ತು. ಕಳೆದೊಂದು ತಿಂಗಳ ಹಿಂದೆ ಮಂಡಿ ಶಸ್ತ್ರಚಿಕಿತ್ಸೆಗೆಂದು ಆತ್ಮೀಯರಾದ ಸುಧಾಕರ್&zwnj; ಅವರು ಆಸ್ಪತ್ರೆಗೆ ಹೋಗಿದ್ದರು. ನಂತರ ಲಂಗ್ಸ್&zwnj; ಇನ್ಫೆಕ್ಷನ್&zwnj; ಆಗಿ ಸಾಕಷ್ಟು ತೊಂದರೆ ಉಂಟಾಗಿತ್ತು. ಎಲ್ಲ ರೀತಿಯ ಪ್ರಯತ್ನಗಳು ಮಾಡಿದರೂ ಸಹ ಫಲ ದೊರೆಯಲಿಲ್ಲ. ಸಹಕಾರಿ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಬಹಳ ವರ್ಷಗಳ ಕಾಲ ಅಪೆಕ್ಷ್ ಬ್ಯಾಂಕ್&zwnj;ನಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅವರು ಭದ್ರಾ ಮೇಲ್ದಂಡೆ ಯೋಜನೆಯ ನೀರಾವರಿ ಮಾಡಲು ಎಲ್ಲ ಶಾಸಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಯಶಸ್ವಿಯಾಗಿದ್ದರು.&lt;/p&gt;&lt;p&gt;ಭದ್ರಾ ಮೇಲ್ದಂಡೆ ಯೋಜನೆ ಉದ್ಘಾಟನೆಗೆ ಅವರು ನಮ್ಮೊಡನೆ ಇರಬೇಕಿತ್ತು. ಅವರ ಅನಾರೋಗ್ಯದ ಕಾರಣಕ್ಕೆ ಇದು ಸಾಧ್ಯವಾಗಲಿಲ್ಲ. ನನ್ನನ್ನು, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದಾಗಲೆಲ್ಲ ಸದಾ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಮನವಿ ಮಾಡುತ್ತಲೇ ಇದ್ದರು. ಜೈನ ಸಮುದಾಯಕ್ಕೆ ಸೇರಿದವರು. ಕಡಿಮೆ ಜನಸಂಖ್ಯೆ ಇದ್ದರು ಸಹ ಎಲ್ಲಾ ಸಮುದಾಯದ ಜನರನ್ನ ಪ್ರೀತಿಯಿಂದ ಕಾಣುತ್ತಿದ್ದರು. ಹೃದಯ ಶ್ರೀಮಂತಿಕೆ ಇದ್ದಂತಹ ಮನುಷ್ಯ. ಇವರ ಸಾವಿನಿಂದ ನಮ್ಮ ಸರ್ಕಾರಕ್ಕೆ, ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ. ನನಗೆ ವೈಯಕ್ತಿಕವಾಗಿ ಬಹಳ ಆಘಾತ ಉಂಟಾಗಿದೆ ಎಂದು ನೋವು ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ&lt;/strong&gt;&lt;/h2&gt;&lt;p&gt;ಸದನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆಯಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಕುಡಿಯುವ ನೀರು ನೀಡಲು ನಮ್ಮ ಇಲಾಖೆಯಿಂದ ಹೆಚ್ಚಿನ ಆದ್ಯತೆಯಿದೆ. ಈ ಕುರಿತು ಇಲಾಖೆ ಅಧಿಕಾರಿಗಳ ಹತ್ತಿರ ಮಾತನಾಡಿ, ಯಾವ ಯಾವ ರೀತಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಅದನ್ನು ಮಾಡಲಾಗುವುದು ಎಂದು ಡಿಕೆಶಿ ಅವರು ತಿಳಿಸಿದರು.&lt;/p&gt;]]></content:encoded>
            <category>raichur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dcm-dk-shivakumar-reaction-to-pm-modi-karnataka-cm-chair-gvd/articleshow-ykq26ae"/>
        </item>
    </channel>
</rss>
