<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 08 Apr 2026 15:42:39 +0530</lastBuildDate>
        <atom:link href="https://kannada.asianetnews.com/rss/private-jobs" rel="self" type="application/rss+xml"/>
        <item>
            <title><![CDATA[ಬಿಇಎಲ್‌ನಲ್ಲಿ ಎಂಜಿನಿಯರ್‌ಗಳಿಗೆ ಸುವರ್ಣಾವಕಾಶ!  ಸಿವಿಲ್, ಆರ್ಕಿಟೆಕ್ಚರ್, ತೋಟಗಾರಿಕೆ ವಿಭಾಗದಲ್ಲಿ ಕೆಲಸ ಖಾಲಿ ಇದೆ]]></title>
            <link>https://kannada.asianetnews.com/jobs/bel-recruitment-2026-apply-for-35-deputy-engineer-posts-before-april-1st-gdp/articleshow-2bprgw2</link>
            <guid isPermaLink="true">https://kannada.asianetnews.com/jobs/bel-recruitment-2026-apply-for-35-deputy-engineer-posts-before-april-1st-gdp/articleshow-2bprgw2</guid>
            <pubDate>Sat, 21 Mar 2026 16:08:17 +0530</pubDate>
            <description><![CDATA[ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) 2026ನೇ ಸಾಲಿನ ನೇಮಕಾತಿ ಅಡಿಯಲ್ಲಿ ಡೆಪ್ಯೂಟಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಿವಿಲ್, ಆರ್ಕಿಟೆಕ್ಚರ್, ಮತ್ತು ತೋಟಗಾರಿಕೆ ವಿಭಾಗಗಳಲ್ಲಿ ಒಟ್ಟು 35 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಏಪ್ರಿಲ್ 1, 2026ರೊಳಗೆ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01g9ey9h1jb2k7sgc3va5mdpx4,imgname-download--95-.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಪ್ರಮುಖ ಸಾರ್ವಜನಿಕ ವಲಯದ ರಕ್ಷಣಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯಾದ Bharat Electronics Limited (ಬಿಇಎಲ್) 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಡಿ ಡೆಪ್ಯೂಟಿ ಎಂಜಿನಿಯರ್ (E-II) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸಿವಿಲ್ ಎಂಜಿನಿಯರಿಂಗ್, ವಾಸ್ತುಶಿಲ್ಪ (ಆರ್ಕಿಟೆಕ್ಚರ್) ಹಾಗೂ ತೋಟಗಾರಿಕೆ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.&lt;/p&gt;&lt;p&gt;ಅಧಿಕೃತ ಅಧಿಸೂಚನೆ (ಸಲಹೆ ಸಂಖ್ಯೆ: 383/FTE/CS/REC/2026) ಪ್ರಕಾರ, ಬೆಂಗಳೂರಿನ ಘಟಕದಲ್ಲಿ ಒಟ್ಟು 35 ಹುದ್ದೆಗಳು ಖಾಲಿ ಇವೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು BEL ಸಂಸ್ಥೆಯ ಅಧಿಕೃತ ವೆಬ್&zwnj;ಸೈಟ್ ಮೂಲಕ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ 1, 2026 ಎಂದು ನಿಗದಿಪಡಿಸಲಾಗಿದೆ.&lt;/p&gt;&lt;h2&gt;ಹುದ್ದೆಗಳ ವಿವರಗಳು&lt;/h2&gt;&lt;p&gt;ಈ ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ವಿಭಾಗಗಳಿಗೆ ಹುದ್ದೆಗಳು ಹೀಗಿವೆ:&lt;/p&gt;&lt;p&gt;ಡೆಪ್ಯೂಟಿ ಎಂಜಿನಿಯರ್ (ಸಿವಿಲ್ ಎಂಜಿನಿಯರಿಂಗ್): 28 ಹುದ್ದೆಗಳು&lt;/p&gt;&lt;p&gt;ಡೆಪ್ಯೂಟಿ ಎಂಜಿನಿಯರ್ (ಆರ್ಕಿಟೆಕ್ಚರ್): 4 ಹುದ್ದೆಗಳು&lt;/p&gt;&lt;p&gt;ಡೆಪ್ಯೂಟಿ ಎಂಜಿನಿಯರ್ (ತೋಟಗಾರಿಕೆ): 3 ಹುದ್ದೆಗಳು&lt;/p&gt;&lt;h2&gt;ಅರ್ಹತಾ ಮಾನದಂಡಗಳು&lt;/h2&gt;&lt;p&gt;ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಗತ್ಯ ವಿದ್ಯಾರ್ಹತೆ ಹೊಂದಿರಬೇಕು.&lt;/p&gt;&lt;p&gt;ಸಿವಿಲ್ ಎಂಜಿನಿಯರಿಂಗ್: ಬಿಇ / ಬಿ.ಟೆಕ್ (Civil Engineering)&lt;/p&gt;&lt;p&gt;ವಾಸ್ತುಶಿಲ್ಪ (Architecture): ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ (B.Arch)&lt;/p&gt;&lt;p&gt;ತೋಟಗಾರಿಕೆ (Horticulture): ಎಂ.ಎಸ್ಸಿ (Horticulture)&lt;/p&gt;&lt;p&gt;ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗಳನ್ನು ಮಾನ್ಯ ಸಂಸ್ಥೆಯಿಂದ ಪಡೆದಿರಬೇಕು ಎಂಬುದು ಮುಖ್ಯ.&lt;/p&gt;&lt;h2&gt;ವಯೋಮಿತಿ&lt;/h2&gt;&lt;p&gt;ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು ಮಾರ್ಚ್ 1, 2026ರಂತೆ 28 ವರ್ಷಗಳನ್ನು ಮೀರಿರಬಾರದು. ಆದರೆ ಸರ್ಕಾರದ ನಿಯಮಾನುಸಾರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯವಾಗುತ್ತದೆ.&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;p&gt;ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಕ್ರಮಗಳನ್ನು ಅನುಸರಿಸಬೇಕು:&lt;/p&gt;&lt;p&gt;Bharat Electronics Limited (BEL) ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ.&lt;/p&gt;&lt;p&gt;ಮುಖಪುಟದಲ್ಲಿರುವ &lsquo;Careers&rsquo; ವಿಭಾಗವನ್ನು ತೆರೆಯಿರಿ.&lt;/p&gt;&lt;p&gt;&ldquo;Deputy Engineer Recruitment 2026&rdquo; ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.&lt;/p&gt;&lt;p&gt;ಹೊಸದಾಗಿ ನೋಂದಾಯಿಸಿ ಅಥವಾ ಲಾಗಿನ್ ಆಗಿ.&lt;/p&gt;&lt;p&gt;ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.&lt;/p&gt;&lt;p&gt;ಅಗತ್ಯ ದಾಖಲೆಗಳನ್ನು ಅಪ್&zwnj;ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.&lt;/p&gt;&lt;p&gt;ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ.&lt;/p&gt;&lt;p&gt;ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿ (print/download) ಅನ್ನು ಭವಿಷ್ಯದ ಉಲ್ಲೇಖಕ್ಕಾಗಿ ಉಳಿಸಿಕೊಳ್ಳಿ.&lt;/p&gt;&lt;h2&gt;ಮುಖ್ಯ ಸೂಚನೆ&lt;/h2&gt;&lt;p&gt;ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಅತ್ಯಂತ ಮುಖ್ಯ. ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/bel-recruitment-2026-apply-for-35-deputy-engineer-posts-before-april-1st-gdp/articleshow-2bprgw2"/>
        </item>
        <item>
            <title><![CDATA[2026ರಲ್ಲಿ ಪ್ರತಿ ದಿನಕ್ಕೆ 936 ಮಂದಿಯಂತೆ ಐಟಿಯಲ್ಲಿ ಲೇಆಫ್‌, ಕೆಲಸ ಕಳೆದುಕೊಂಡ 85,156 ಟೆಕ್ಕಿಗಳು]]></title>
            <link>https://kannada.asianetnews.com/gallery/private-jobs/it-layoffs-2026-tech-companies-job-cuts-amazon-oracle-tcs-kannada-news-san-2omqxlq</link>
            <guid isPermaLink="true">https://kannada.asianetnews.com/gallery/private-jobs/it-layoffs-2026-tech-companies-job-cuts-amazon-oracle-tcs-kannada-news-san-2omqxlq</guid>
            <pubDate>Thu, 02 Apr 2026 15:08:38 +0530</pubDate>
            <description><![CDATA[2026ರಲ್ಲೂ ಐಟಿ ವಲಯದಲ್ಲಿ ಉದ್ಯೋಗ ಕಡಿತದ ಅಲೆ ಮುಂದುವರಿದಿದ್ದು, ವರ್ಷದ ಆರಂಭದಲ್ಲೇ 85,156 ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ. ಒರಾಕಲ್, ಅಮೆಜಾನ್, ಇಂಟೆಲ್&zwnj;ನಂತಹ ದೈತ್ಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದು ಐಟಿ ಉದ್ಯೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn6rjqev6wt4bb7bx3ncsq7a,imgname-it-layoffs-2026--2--1775122341339.jpeg" type="image/jpeg" height="390" width="690"/>
            <content:encoded><![CDATA[2026ರಲ್ಲೂ ಐಟಿ ವಲಯದಲ್ಲಿ ಉದ್ಯೋಗ ಕಡಿತದ ಅಲೆ ಮುಂದುವರಿದಿದ್ದು, ವರ್ಷದ ಆರಂಭದಲ್ಲೇ 85,156 ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ. ಒರಾಕಲ್, ಅಮೆಜಾನ್, ಇಂಟೆಲ್&zwnj;ನಂತಹ ದೈತ್ಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದು ಐಟಿ ಉದ್ಯೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.&lt;img&gt;&lt;p&gt;ಕಳೆದ ಎರಡು ವರ್ಷಗಳಿಂದ ಐಟಿ (IT) ವಲಯದಲ್ಲಿ ಎದ್ದಿರುವ ಉದ್ಯೋಗ ಕಡಿತದ (Layoffs) ಅಲೆ 2026ರಲ್ಲೂ ಮುಂದುವರಿದಿದ್ದು, ಟೆಕ್ಕಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 2026ರ ಆರಂಭದ ಕೆಲವೇ ತಿಂಗಳುಗಳಲ್ಲಿ ಸುಮಾರು 85,156 ಮಂದಿ ಕೆಲಸ ಕಳೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;2026ರ ವರ್ಷದ ಇಲ್ಲಿಯವರೆಗೆ ಒಟ್ಟು 208 ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದು, ದಿನವೊಂದಕ್ಕೆ ಸರಾಸರಿ 936 ಟೆಕ್ಕಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಒಟ್ಟು 783 ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದವು, ಇದರಿಂದ 2,45,953 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಯಾವೆಲ್ಲಾ ಕಂಪನಿಗಳು ಎಷ್ಟು ಪ್ರಮಾಣದ ಟೆಕ್ಕಿಗಳನ್ನು ಲೇಆಫ್&zwnj; ಮಾಡಿದ್ದಾರೆ ಅನ್ನೋ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಒರಾಕಲ್&zwnj; ಕಂಪನಿ ಲೇಆಫ್&zwnj; ಲಿಸ್ಟ್&zwnj;ಗೆ ಹೊಸದಾಗಿ ಸೇರ್ಪಡೆಯಾಗಿದ್ದು, ಭಾರತದಲ್ಲಿ 12 ಸಾವಿರಕ್ಕೂ ಅಧಿಕ ಉದ್ಯೋಗಿಗಳೊಂದಿಗೆ ವಿಶ್ವದಾದ್ಯಂತ 30 ಸಾವಿರ ಟೆಕ್ಕಿಗಳನ್ನು ಏಕಾಏಕಿ ಕೆಲಸದಿಂದ ಕಿತ್ತುಹಾಕಿದೆ.&lt;/p&gt;&lt;img&gt;&lt;p&gt;ಪ್ರಖ್ಯಾತ ಚಿಪ್&zwnj; ಕಂಪನಿ ಇಂಟೆಲ್&zwnj; ಇಲ್ಲಿಯವರೆಗೆ 21 ಸಾವಿರ ಟೆಕ್ಕಿಗಳನ್ನು ವಜಾ ಮಾಡಿದೆ. 2025ರ ಜುಲೈನಲ್ಲಿ ಟೆಕ್ಕಿಗಳನ್ನು ವಜಾ ಮಾಡುವ ನಿರ್ಧಾರ ಪ್ರಕಟಿಸಿತ್ತು.&lt;/p&gt;&lt;img&gt;&lt;p&gt;ಗರಿಷ್ಠ ಉದ್ಯೋಗಿಗಳನ್ನು ವಜಾ ಮಾಡಿದ ಪಟ್ಟಿಯಲ್ಲಿ ಅಮೆಜಾನ್&zwnj; ಮುಂಚೂಣಿಯಲ್ಲಿದೆ. ಎರಡು ಬಾರಿ ಈ ಕೆಲಸವನ್ನು ಅಮೆಜಾನ್ ಮಾಡಿದೆ. 2025ರ ಅಕ್ಟೋಬರ್&zwnj;ನಲ್ಲಿ 14 ಸಾವಿರ ಉದ್ಯೋಗಳ ವಜಾ ಮಾಡಿದ್ದರೆ, 2026ರ ಜನವರಿಲ್ಲಿ 16 ಸಾವಿರ ಟೆಕ್ಕಿಗಳಿಗೆ ಗೇಟ್&zwnj;ಪಾಸ್&zwnj; ನೀಡಿತ್ತು. ಆ ಮೂಲಕ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ 30 ಸಾವಿರ ಕಡಿತ ಮಾಡಿದೆ.&lt;/p&gt;&lt;img&gt;&lt;p&gt;ಭಾರತದ ಐಟಿ ಸರ್ವೀಸ್&zwnj; ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್&zwnj; 2025ರ ಜುಲೈನಲ್ಲಿ 12 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ವಜಾ ಮಾಡಿದೆ.&lt;/p&gt;&lt;img&gt;&lt;p&gt;ಅಕ್ಸೆಂಚರ್&zwnj; ಕಂಪನಿ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ವರ್ಷದ ಸೆಪ್ಟೆಂಬರ್&zwnj;ನಲ್ಲಿ 11 ಸಾವಿರ ಉದ್ಯೋಗಿಗಳಿಗೆ ಗೇಟ್&zwnj;ಪಾಸ್&zwnj; ನೀಡಿದೆ.&lt;/p&gt;&lt;img&gt;&lt;p&gt;ಕೋಟ್ಯಧಿಪತಿ ಬಿಲ್&zwnj;ಗೇಟ್ಸ್&zwnj; ಅವರ ಮೈಕ್ರೋಸಾಫ್ಟ್&zwnj; ಕೂಡ 2025ರ ಜುಲೈನಲ್ಲಿ 9 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು.&lt;/p&gt;&lt;img&gt;&lt;p&gt;ಸೇಲ್ಸ್&zwnj; ಫೋರ್ಸ್&zwnj; ಕಂಪನಿ ಕೂಡ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರೀ ಕಡಿತ ಮಾಡಿದೆ. 2025ರ ಸೆಪ್ಟೆಂಬರ್&zwnj;ನಲ್ಲಿ 4 ಸಾವಿರ ಟೆಕ್ಕಿಗಳನ್ನು ವಜಾ ಮಾಡಿತ್ತು.&lt;/p&gt;&lt;img&gt;&lt;p&gt;ವಿಶ್ವದ ದೊಡ್ಡ ಟೆಕ್ ಕಂಪನಿಗಳೇ ಆರ್ಥಿಕ ಮುಗ್ಗಟ್ಟು ಅಥವಾ ಮರುಸಂಘಟನೆಯ ನೆಪದಲ್ಲಿ ಸಾವಿರಾರು ನೌಕರರನ್ನು ಏಕಕಾಲಕ್ಕೆ ಮನೆಗೆ ಕಳುಹಿಸುತ್ತಿರುವುದು ಐಟಿ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಒರಾಕಲ್ ಮತ್ತು ಅಮೆಜಾನ್ ಕಂಪನಿಗಳು ಉದ್ಯೋಗ ಕಡಿತದಲ್ಲಿ ಮುಂಚೂಣಿಯಲ್ಲಿವೆ.&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/private-jobs/it-layoffs-2026-tech-companies-job-cuts-amazon-oracle-tcs-kannada-news-san-2omqxlq"/>
        </item>
        <item>
            <title><![CDATA[2021ರಲ್ಲಿ 3.2 ಲಕ್ಷ ವೇತನಕ್ಕೆ TCSಗೆ ಕೆಲಸಕ್ಕೆ ಸೇರಿದ ಯುವಕನಿಗೆ ಈಗ ಗೂಗಲ್‌ನಲ್ಲಿ  80 ಲಕ್ಷದ ಉದ್ಯೋಗ]]></title>
            <link>https://kannada.asianetnews.com/jobs/software-engineer-salary-jump-techie-earns-rs-80-lakh-per-year-at-google-says-he-will-retire-by-2031/articleshow-58i4tod</link>
            <guid isPermaLink="true">https://kannada.asianetnews.com/jobs/software-engineer-salary-jump-techie-earns-rs-80-lakh-per-year-at-google-says-he-will-retire-by-2031/articleshow-58i4tod</guid>
            <pubDate>Tue, 31 Mar 2026 13:28:52 +0530</pubDate>
            <description><![CDATA[&lt;p&gt;&lt;strong&gt;Software engineer salary jump: &lt;/strong&gt;ತಮ್ಮ 23ರ ಹರೆಯದಲ್ಲಿ ಟಿಸಿಎಸ್ ಕಂಪನಿಗೆ ವಾರ್ಷಿಕ 3.2 ಲಕ್ಷ ವೇತನಕ್ಕೆ ಕೆಲಸಕ್ಕೆ ಸೇರಿದ ಬೆಂಗಳೂರಿನ ಸಾಫ್ಟ್&zwnj;ವೇರ್ ಡೆವಲಪರ್ ಹೇಗೆ 80 ಲಕ್ಷದ ಗೂಗಲ್ ಉದ್ಯೋಗ ಗಿಟ್ಟಿಸಿದೆ ಎಂಬುದನ್ನು ಹೇಳಿಕೊಂಡಿದ್ದು ಅವರ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn1dyd1nqydry81qg9kp88yb,imgname-google-techie-job-1774943417397.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸಾಫ್ಟ್&zwnj;ವೇರ್ ಡೆವಲಪರ್ ಸ್ಟೋರಿ ಭಾರಿ ವೈರಲ್&lt;/strong&gt;&lt;/h2&gt;&lt;p&gt;ಒಳ್ಳೆಯ ಸ್ಕಿಲ್ ಇದ್ದರೆ ಸಾಫ್ಟ್&zwnj;ವೇರ್ ಇಂಜಿನಿಯರ್&zwnj;ಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ವಾರ್ಷಿಕವಾಗಿ ಕೋಟಿ ಸಮೀಪಿಸುವ ವೇತನವನ್ನೂ ನೀಡಲು ಸಿದ್ಧವಿರುತ್ತವೆ. ಟೆಕ್ ದೈತ್ಯ ಗೂಗಲ್ ಕೂಡ ತನ್ನ ಉದ್ಯೋಗಿಯೊಬ್ಬರಿಗೆ ವಾರ್ಷಿಕ 80 ಲಕ್ಷದ ವೇತನ ನೀಡುತ್ತಿದ್ದು, ಈ ಕೆಲಸ ಗಿಟ್ಟಿಸಿಕೊಂಡ ಯುವಕ ತನ್ನ ಈ ಕೆರಿಯರ್ ಜರ್ನಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಹೌದು ಬೆಂಗಳೂರು ಮೂಲದ ಸಾಫ್ಟ್&zwnj;ವೇರ್ ಡೆವಲಪರ್ ಅಕ್ರಾ ಮಜುಮ್&zwnj;ದಾರ್ ಎಂಬುವವರು ಪ್ರಸ್ತುತ ಗೂಗಲ್&zwnj;ನಲ್ಲಿ ಕೆಲಸ ಮಾಡುತ್ತಿದ್ದು ನಿಷ್ಠೆಯು ವೇತನವನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿಕೊಂಡು ತಮ್ಮ ಇನ್ಸ್ಟಾಗ್ರಾಮ್&zwnj;ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ 23ರ ಹರೆಯದಲ್ಲಿ ಟಿಸಿಎಸ್ ಕಂಪನಿಗೆ ವಾರ್ಷಿಕ 3.2 ಲಕ್ಷ ವೇತನಕ್ಕೆ ಕೆಲಸಕ್ಕೆ ಸೇರಿದ ಅವರು ಎರಡು ವರ್ಷದ ನಂತರ ಕೆಲಸ ತೊರೆದು ಕುಕು ಎಫ್&zwnj;ಎಂಗೆ ಸೇರಿದರು ಅವರ ವೇತನ ವಾರ್ಷಿಕವಾಗಿ 14 ಲಕ್ಷ ಇತ್ತು. ಇದಾದ ನಂತರ ಅವರು ಗೂಗಲ್ ಕೆಲಸ ಗಿಟ್ಟಿಸಿದ್ದು, ಅಲ್ಲಿ ಅವರಿಗೆ ವಾರ್ಷಿಕ ವೇತನ 80 ಲಕ್ಷ ನಿಗದಿ ಮಾಡಲಾಗಿತ್ತು.&lt;/p&gt;&lt;h3&gt;&lt;strong&gt;ವೇತನ 3.2 ಲಕ್ಷದಿಂದ 80 ಲಕ್ಷಕ್ಕೆ ಏರಿಕೆಯಾಗಿದ್ದು ಹೇಗೆ&lt;/strong&gt;&lt;/h3&gt;&lt;p&gt;2021 ರಲ್ಲಿ ಟಿಸಿಎಸ್&zwnj;ನ ನಿಂಜಾ ಕಾರ್ಯಕ್ರಮದ ಮೂಲಕ ಸಹಾಯಕ ಸಿಸ್ಟಮ್ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಕ್ರಾ ರೂ. 3.2 ಲಕ್ಷ ವೇತನ ಗಳಿಸಿದರು. ಆಗಷ್ಟೇ ಕಾಲೇಜು ತೊರೆದಿದ್ದರಿಂದ ತಾನು ವಿಶಾಲ ದೃಷ್ಟಿಯುಳ್ಳ ಮತ್ತು ಕಲಿಯಲು ಉತ್ಸುಕನಾಗಿದ್ದವನಾಗಿದೆ ಎಂದು ಹೇಳಿಕೊಂಡಿದ್ದಾರೆ. ಬಣ್ಣಿಸಿಕೊಂಡರು. 2022 ರಲ್ಲಿ, ಅವರು TCS ನ ಡಿಜಿಟಲ್ ಪ್ರೋಗ್ರಾಂ (ವಿಂಗ್ಸ್ 1) ಅನ್ನು ಪೂರ್ಣಗೊಳಿಸಿದ ನಂತರ ಸಿಸ್ಟಮ್ ಎಂಜಿನಿಯರ್ ಆಗಿ ಬಡ್ತಿ ಪಡೆದರು. ಇದು ಅವರ ಸಂಬಳವನ್ನು ಸುಮಾರು ರೂಪಾಯಿ 7 ಲಕ್ಷಕ್ಕೆ(ವಾರ್ಷಿಕ) ಹೆಚ್ಚಿಸಿತು. ಅದೇ ಸಮಯದಲ್ಲಿ, ಅವರು ಡೇಟಾ ರಚನೆಗಳು ಮತ್ತು ಅಲ್ಗಾರಿದಮ್&zwnj;ಗಳು (DSA) ಗಾಗಿ ಗಂಭೀರವಾಗಿ ತಯಾರಿ ನಡೆಸಲು ಪ್ರಾರಂಭಿಸಿದರು, ಇದು ಉತ್ಪನ್ನ ಆಧಾರಿತ ತಾಂತ್ರಿಕ ಪಾತ್ರಗಳಿಗೆ ನಿರ್ಣಾಯಕವೆಂದು ವ್ಯಾಪಕವಾಗಿ ಪರಿಗಣಿಸಲಾದ ಕೌಶಲ್ಯವಾಗಿದೆ.&lt;/p&gt;&lt;p&gt;2023 ರ ಹೊತ್ತಿಗೆ, ಮಜುಂದರ್ ಅವರು ಪ್ರತಿದಿನ ಐದರಿಂದ ಆರು ಗಂಟೆಗಳ ಕಾಲ DSA( data structures and algorithms) ಅಭ್ಯಾಸಕ್ಕೆ ಮೀಸಲಿಡುತ್ತಿದ್ದರು ಮತ್ತು 380 ಕ್ಕೂ ಹೆಚ್ಚು ಲೀಟ್&zwnj;ಕೋಡ್ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಹೀಗಾಗಿ ಜನವರಿ 2024 ರಲ್ಲಿ, ಅವರು ಟಿಸಿಎಸ್&zwnj;ನ ಹೊರಗೆ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿದರು. ಆದರೆ ತಮ್ಮ ಮೊದಲ ಆಫರ್&zwnj;ಗಾಗಿ ಸುಮಾರು ಎಂಟು ತಿಂಗಳು ಕಾಯುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಹಲವಾರು ವಿಫಲ ಸಂದರ್ಶನಗಳ ಹೊರತಾಗಿಯೂ, ಅವರು ಅಂತಿಮವಾಗಿ ಬೆಂಗಳೂರು ಮೂಲದ ಉತ್ಪನ್ನ ಸ್ಟಾರ್ಟ್ಅಪ್ ಕುಕು ಎಫ್&zwnj;ಎಂನಲ್ಲಿ ಒಂದು ಕೆಲಸ ಗಿಟ್ಟಿಸಿದರು. ಅಲ್ಲಿ ಅವರ ವೇತನ ಸುಮಾರು ರೂ 14ರಿಂದ 15 ಎಲ್&zwnj;ಪಿಎಗೆ ಏರಿತು.&lt;/p&gt;&lt;p&gt;ಆದರೆ ಅವರಿಗೆ ದೊಡ್ಡ ಟರ್ನಿಂಗ್ ಪಾಯಿಂಟ್&zwnj; ಆಗಿದ್ದು,2025 ರಲ್ಲಿ. ಹೌದು ಅಕ್ರಾ ಮಜುಂದರ್ ಅವರು ವಾರ್ಷಿಕ 80 ಲಕ್ಷ ಪ್ಯಾಕೇಜ್&zwnj;ನೊಂದಿಗೆ ಗೂಗಲ್&zwnj;ಗೆ ಕೆಲಸಕ್ಕೆ ಸೇರಿದರು. ಇದನ್ನು ಅವರ ವೃತ್ತಿಜೀವನದ ಅತಿದೊಡ್ಡ ಬೆಳವಣಿಗೆ ಎಂದು ಕರೆದಿದ್ದಾರೆ.. ಆಫರ್ ಪಡೆದ ನಂತರವೂ ಅವರು ಗ್ರಾಫ್&zwnj;ಗಳು, ಪ್ರಯತ್ನಗಳು ಮತ್ತು ಡೈನಾಮಿಕ್ ಪ್ರೋಗ್ರಾಮಿಂಗ್&zwnj;ನಂತಹ ಮುಂದುವರಿದ ವಿಷಯಗಳನ್ನು ಒಳಗೊಂಡು ತಮ್ಮ ಲೀಟ್&zwnj;ಕೋಡ್ ಸಂಖ್ಯೆಯನ್ನು 750ಕ್ಕೆ ದಾಟಿಸಿದ್ದಾರೆ ಎಂದು ಅವರು ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಇರಾನ್ ಯುದ್ಧ: ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್&zwnj;ಗೆ 4 ಡಾಲರ್&zwnj;ಗೆ ಏರಿಕೆ&lt;/strong&gt;&lt;/p&gt;&lt;p&gt;ಪ್ರತಿಯೊಬ್ಬ ಬಿಟೆಕ್ ವಿದ್ಯಾರ್ಥಿಯಂತೆ ನನಗೂ ಕಾಲೇಜಿನಲ್ಲಿ ಗೂಗಲ್&zwnj;ನಲ್ಲಿ ಕೆಲಸ ಮಾಡುವ ಕನಸು ಇತ್ತು . ಆದರೆ ಮಾರ್ಗದರ್ಶನದ ಕೊರತೆ ಮತ್ತು ಟೈಯರ್ -3 ಕಾಲೇಜಿನ ನಿರ್ಬಂಧಗಳಿಂದಾಗಿ, ನಾನು ಟಿಸಿಎಸ್&zwnj;ನಲ್ಲಿ 3.2 ಎಲ್&zwnj;ಪಿಎಗೆ ಸೇರಿದೆ ಎಂದು ಮಜುಂದರ್ ಹೇಳಿದರು. ಇದು ಕೇವಲ ಆರಂಭ ಎಂದು ಹೇಳಿದ ಅವರು ಐದು ವರ್ಷಗಳಲ್ಲಿ ನಿವೃತ್ತಿ ಹೊಂದಿ ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವ ಆಶಯವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಇವರ ಪೋಸ್ಟ್&zwnj; ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಅವರನ್ನು ಅಭಿನಂದಿಸಿದ್ದಾರೆ. ಆದರೆ ಅವರ ಹೇಳಿಕೆಗಳಿಗೆ ಅನೇಕರು ಸಂದೇಹ ವ್ಯಕ್ತಪಡಿಸಿದ್ದಾರೆ. ಕೇವಲ 15 ಲಕ್ಷದಿಂದ 80 ಲಕ್ಷಕ್ಕೆ ಸ್ಯಾಲರಿ ಏರಿಕೆಯಾದ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ರೂ. 15 ಲಕ್ಷದಿಂದ ರೂ. 80 ಲಕ್ಷಕ್ಕೆ ವೇತನ ಹೆಚ್ಚಳ ನಿಜವಾಗಿಯೂ ಅಚ್ಚರಿ ಎನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಟಿಸಿಎಸ್&zwnj;ನಲ್ಲಿ ಹದಿನಾಲ್ಕು ವರ್ಷ ಕಳೆದಿದ್ದು, ನಿಮ್ಮ ಸಂಬಳದ ಒಂಬತ್ತನೇ ಒಂದು ಭಾಗವನ್ನು ನಾನು ಗಳಿಸುತ್ತಿದ್ದೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಷ್ಟೊಂದು ವೇತನ ಇರುವವರು ಯಾರು ಹೇಳಿಕೊಳ್ಳುವುದಿಲ್ಲ ಇದು ಸುಳ್ಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಮೆರಿಕಾ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್: ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಟ್ರಂಪ್ ಕಿಡಿ&lt;/strong&gt;&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Arka Mazumder (@push__to__prod)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>private-jobs</category>
            <dc:creator>Anusha Kb</dc:creator>
            <atom:link href="https://kannada.asianetnews.com/jobs/software-engineer-salary-jump-techie-earns-rs-80-lakh-per-year-at-google-says-he-will-retire-by-2031/articleshow-58i4tod"/>
        </item>
        <item>
            <title><![CDATA["ಇಂದೇ ನಿಮ್ಮ ಕಡೆಯ ದಿನ" ಒರಾಕಲ್‌ನಿಂದ 12 ಸಾವಿರಾರು ಉದ್ಯೋಗಿಗಳ ವಜಾ! ಬೆಂಗಳೂರು ಐಟಿ ವಲಯದಲ್ಲಿ ಆತಂಕ]]></title>
            <link>https://kannada.asianetnews.com/jobs/oracle-layoffs-12-000-jobs-cut-in-india-30000-globally-amid-it-slowdown-gdp/articleshow-5edrg28</link>
            <guid isPermaLink="true">https://kannada.asianetnews.com/jobs/oracle-layoffs-12-000-jobs-cut-in-india-30000-globally-amid-it-slowdown-gdp/articleshow-5edrg28</guid>
            <pubDate>Wed, 01 Apr 2026 16:46:24 +0530</pubDate>
            <description><![CDATA[ಒರಾಕಲ್ ಇಂಡಿಯಾದಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದು ಬೆಂಗಳೂರಿನಂತಹ ಐಟಿ ಕೇಂದ್ರಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಬೆಳವಣಿಗೆಯು ಐಟಿ ವಲಯದ ನಿಧಾನಗತಿಯನ್ನು ಸೂಚಿಸುತ್ತಿದ್ದು, ವೃತ್ತಿಪರರು ತಮ್ಮ ಆರ್ಥಿಕ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ಮಾಡಿದೆ. ಜಾಗತಿಕ ಪುನರ್&zwnj;ರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn3fvf36ywkmj1dhez70sz41,imgname-oracle-layoffs-30000-employees-india-impact-morning-email-job-cuts-ai-restructuring-global-3-1775012527206.jpg" type="image/jpeg" height="390" width="690"/>
            <content:encoded><![CDATA[&lt;p&gt;ಒರಾಕಲ್ ಕಂಪನಿಯಲ್ಲಿ ನಡೆಯುತ್ತಿರುವ ಭಾರೀ ಮಟ್ಟದ ಉದ್ಯೋಗ ಕಡಿತವು ಭಾರತದ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಆತಂಕದ ವಾತಾವರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ಐಟಿ ಹಬ್ಬಗಳಾಗಿ ಬೆಳೆದಿರುವ ನಗರಗಳಲ್ಲಿ ಇದರ ಪರಿಣಾಮ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದ್ದು, ಐಟಿ ವೃತ್ತಿಪರರು ತಮ್ಮ ಆರ್ಥಿಕ ನಿರ್ಧಾರಗಳನ್ನು, ವಿಶೇಷವಾಗಿ ದೊಡ್ಡ ಮೊತ್ತದ ಹೂಡಿಕೆಗಳನ್ನು ಮರುಪರಿಶೀಲಿಸಲು ಮುಂದಾಗಿದ್ದಾರೆ. ಇದರಿಂದ ಈಗಾಗಲೇ ಒತ್ತಡದಲ್ಲಿರುವ ವಸತಿ ಮಾರುಕಟ್ಟೆಯ ಮೇಲೂ ಹೆಚ್ಚುವರಿ ಬಾಧೆ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ವರದಿಗಳ ಪ್ರಕಾರ, ಅಮೆರಿಕ ಮೂಲದ ತಂತ್ರಜ್ಞಾನ ದೈತ್ಯ ಕಂಪನಿಯಾದ ಒರಾಕಲ್ ಇಂಡಿಯಾದಲ್ಲಿ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇದಲ್ಲದೆ, ಮುಂದಿನ ಕೆಲವೇ ವಾರಗಳಲ್ಲಿ ಮತ್ತೊಂದು ಹಂತದ ಉದ್ಯೋಗ ಕಡಿತ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ಸುಮಾರು 30,000 ಹುದ್ದೆಗಳನ್ನು ಕಡಿತಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಎರಡು ದಶಕಗಳ ಕಾಲ ನಿರಂತರವಾಗಿ ಬೆಳವಣಿಗೆಯನ್ನು ಕಂಡಿದ್ದ ಭಾರತದ ಐಟಿ ಸೇವಾ ವಲಯವು ಈಗ ನಿಧಾನಗತಿಯತ್ತ ಸಾಗುತ್ತಿರುವುದು ಈ ಬೆಳವಣಿಗೆಯ ಹಿಂದೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಒರಾಕಲ್ ಕಂಪನಿಯು ಭಾರತದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ಹೊಂದಿದ್ದು, ಮೇ 2025ರ ವೇಳೆಗೆ ಜಾಗತಿಕವಾಗಿ ಸುಮಾರು 1.62 ಲಕ್ಷ ಪೂರ್ಣಕಾಲಿಕ ಉದ್ಯೋಗಿಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಲು ಕಂಪನಿ ನಿರಾಕರಿಸಿರುವುದಾಗಿ ತಿಳಿದುಬಂದಿದೆ.&lt;/p&gt;&lt;p&gt;ಆಸ್ಟಿನ್&zwnj;ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಒರಾಕಲ್ ಕಂಪನಿಯು ಈ ಕ್ರಮವನ್ನು ಸಂಸ್ಥೆಯ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಕೈಗೊಂಡಿದೆ ಎಂದು ವರದಿಗಳು ಸೂಚಿಸುತ್ತವೆ. ಸಂಸ್ಥೆಯ ಒಳಾಂಗಣ ಬದಲಾವಣೆಗಳ ಬಗ್ಗೆ ಉದ್ಯೋಗಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗಿದ್ದು, &ldquo;ಈ ಬದಲಾವಣೆಗಳ ಪರಿಣಾಮವಾಗಿ ಕೆಲವು ಹುದ್ದೆಗಳು ಅನಗತ್ಯವಾಗುತ್ತಿವೆ&rdquo; ಎಂದು ತಿಳಿಸಲಾಗಿದೆ.&lt;/p&gt;&lt;h2&gt;ಸಾಂಸ್ಥಿಕ ಬದಲಾವಣೆ&lt;/h2&gt;&lt;p&gt;ಕಂಪನಿಯು ಈ ಕ್ರಮವನ್ನು &ldquo;ಸಾಂಸ್ಥಿಕ ಬದಲಾವಣೆ&rdquo; (Organizational Restructuring) ಎಂದು ವಿವರಿಸಿದ್ದು, ಕೆಲವು ಹುದ್ದೆಗಳು ತಕ್ಷಣದಿಂದಲೇ ರದ್ದುಗೊಂಡಿವೆ ಎಂದು ತಿಳಿಸಿದೆ. ವರದಿಗಳ ಪ್ರಕಾರ, ವಜಾಗೊಳಿಸಲಾದ ಉದ್ಯೋಗಿಗಳಿಗೆ ಮಂಗಳವಾರ ಬೆಳಿಗ್ಗೆ 6 ಗಂಟೆಗೆ (EST) ಕಳುಹಿಸಲಾದ ಇಮೇಲ್&zwnj;ನಲ್ಲಿ &ldquo;ಇಂದು ನಿಮ್ಮ ಕೊನೆಯ ಕೆಲಸದ ದಿನ&rdquo; ಎಂದು ನೇರವಾಗಿ ತಿಳಿಸಲಾಗಿದೆ. ಈ ರೀತಿಯ ಆಕಸ್ಮಿಕ ನಿರ್ಧಾರವು ಉದ್ಯೋಗಿಗಳಲ್ಲಿ ಆತಂಕ ಮತ್ತು ಅಸಮಾಧಾನವನ್ನು ಉಂಟುಮಾಡಿದೆ.&lt;/p&gt;&lt;p&gt;ಇದಕ್ಕೂ ನಡುವಲ್ಲಿ, ಮಾರ್ಸೆಲಸ್ ಇನ್ವೆಸ್ಟ್&zwnj;ಮೆಂಟ್ ಮ್ಯಾನೇಜರ್ಸ್&zwnj;ನ ಸೌರಭ್ ಮುಖರ್ಜಿ ಅವರು ಒಂದು ಪಾಡ್&zwnj;ಕ್ಯಾಸ್ಟ್&zwnj;ನಲ್ಲಿ ಮಾತನಾಡುತ್ತಾ, ಐಟಿ ಸೇವಾ ವಲಯವು ಈಗ ರಚನಾತ್ಮಕ ಮಂದಗತಿಯ (Structural Slowdown) ಹಂತಕ್ಕೆ ಪ್ರವೇಶಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ, 2005 ರಿಂದ 2020ರವರೆಗೆ ಐಟಿ ಕಂಪನಿಗಳು ವರ್ಷಕ್ಕೆ ಸರಾಸರಿ 15 ಶೇಕಡಾ ಪ್ರಮಾಣದಲ್ಲಿ ಆದಾಯ ಮತ್ತು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಬೆಳವಣಿಗೆಯ ವೇಗವು ಗಣನೀಯವಾಗಿ ಕುಸಿದು, ಸುಮಾರು 5 ರಿಂದ 6 ಶೇಕಡಾ ಮಟ್ಟಕ್ಕೆ ಇಳಿದಿದೆ.&lt;/p&gt;&lt;p&gt;ಕೋವಿಡ್ ಮಹಾಮಾರಿಯ ನಂತರ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಡುಬಂದ ಕುಂಠಿತತೆ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿ ಗುರುತಿಸಲ್ಪಟ್ಟಿವೆ. ಒಟ್ಟಾರೆ, ಒರಾಕಲ್&zwnj;ನ ಉದ್ಯೋಗ ಕಡಿತವು ಕೇವಲ ಒಂದು ಕಂಪನಿಗೆ ಸೀಮಿತವಾಗದೇ, ಭಾರತದ ಐಟಿ ವಲಯದ ಭವಿಷ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುವಂತಾಗಿದೆ.&lt;/p&gt;&lt;h2&gt;15 ದಿನಗಳ ಸಂಬಳ&lt;/h2&gt;&lt;p&gt;ವಜಾಗೊಂಡ ಉದ್ಯೋಗಿಗಳಿಗೆ ಪರಿಹಾರ ಪ್ಯಾಕೇಜ್ ನೀಡುವ ಬಗ್ಗೆ ಕೂಡ ಮಾಹಿತಿ ಲಭ್ಯವಾಗಿದೆ. ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸಿದ ಪ್ರತಿಯೊಬ್ಬ ಉದ್ಯೋಗಿಗೆ 15 ದಿನಗಳ ಸಂಬಳವನ್ನು ನೀಡಲಾಗುವುದು. ಇದರ ಜೊತೆಗೆ, ವಜಾಗೊಳಿಸುವ ದಿನಾಂಕದವರೆಗೆ ಬಾಕಿ ಇರುವ ಒಂದು ತಿಂಗಳ ವೇತನ, ಉಳಿದಿರುವ ರಜೆಗಳ ನಗದು ಮೌಲ್ಯ, ಅರ್ಹತೆಯ ಆಧಾರದ ಮೇಲೆ ಗ್ರಾಚ್ಯುಟಿ ಹಾಗೂ ಒಂದು ತಿಂಗಳ ನೋಟಿಸ್ ಅವಧಿಯ ಸಂಬಳವನ್ನು ನೀಡಲಾಗುತ್ತದೆ. ಇನ್ನಷ್ಟು ಸಹಾಯವಾಗಿ, ಎರಡು ತಿಂಗಳ ಸಂಬಳವನ್ನು ಟಾಪ್-ಅಪ್ ರೂಪದಲ್ಲಿ ನೀಡಲಾಗುತ್ತದೆ ಎಂದು ವರದಿ ಹೇಳುತ್ತದೆ. ಆದರೆ, ಸ್ವಯಂಪ್ರೇರಿತವಾಗಿ ಹಾಗೂ ಸೌಹಾರ್ದಯುತವಾಗಿ ರಾಜೀನಾಮೆ ನೀಡುವವರಿಗೆ ಮಾತ್ರ ಈ ಬೇರ್ಪಡಿಕೆ ಪ್ಯಾಕೇಜ್ ಲಭ್ಯವಾಗುತ್ತದೆ ಎಂಬ ಅಂಶವೂ ಗಮನಾರ್ಹವಾಗಿದೆ.&lt;/p&gt;&lt;p&gt;ಇದರ ನಡುವೆ, ಒರಾಕಲ್&zwnj;ನ ಮಾಜಿ ಉದ್ಯೋಗಿ ಮೇರುಗು ಶ್ರೀಧರ್ ಅವರು, ಕಂಪನಿಯಲ್ಲಿ ಜಾರಿಗೆ ತಂದಿದ್ದ 16 ಗಂಟೆಗಳ ಕೆಲಸದ ಶಿಫ್ಟ್&zwnj; ವಿರುದ್ಧ ತಾವು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ತಮ್ಮನ್ನು ವಜಾಗೊಳಿಸಲಾಯಿತು ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು ತಮ್ಮ ಸ್ನೇಹಿತರು ಮತ್ತು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಸಂಪರ್ಕಿಸಿದಾಗ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹಲವಾರು ಭಾರತೀಯ ಉದ್ಯೋಗಿಗಳು ಸ್ಥಳೀಯ ಕಾನೂನುಗಳ ಕಟ್ಟುನಿಟ್ಟಿನ ಕಾರಣದಿಂದ ಹೆಚ್ಚು ಪರಿಣಾಮಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ಒರಾಕಲ್ ಕಂಪನಿಯ ಈ ಭಾರೀ ಮಟ್ಟದ ಉದ್ಯೋಗ ಕಡಿತವು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೆ ಒಂದು ಚರ್ಚೆಯ ವಿಷಯವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಉದ್ಯೋಗ ಕಡಿತಗಳು ನಡೆಯುವ ಸಾಧ್ಯತೆಗಳ ಬಗ್ಗೆ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/oracle-layoffs-12-000-jobs-cut-in-india-30000-globally-amid-it-slowdown-gdp/articleshow-5edrg28"/>
        </item>
        <item>
            <title><![CDATA[ಬೆಂಗಳೂರಲ್ಲಿ ಐಟಿ ಜಾಬ್ ಪಡೆಯೋದು ಸುಲಭವಲ್ಲ: 15 ದಿನಗಳಲ್ಲಿ ಡೆವೆಲಪರ್ ಹುದ್ದೆಗಳಿಗೆ 34 ಸಾವಿರಕ್ಕೂ ಹೆಚ್ಚು ಅರ್ಜಿ!]]></title>
            <link>https://kannada.asianetnews.com/jobs/massive-competition-in-bengaluru-tech-market-34742-applicants-for-mern-and-react-jobs-gdp/articleshow-71q2tov</link>
            <guid isPermaLink="true">https://kannada.asianetnews.com/jobs/massive-competition-in-bengaluru-tech-market-34742-applicants-for-mern-and-react-jobs-gdp/articleshow-71q2tov</guid>
            <pubDate>Mon, 16 Mar 2026 17:48:33 +0530</pubDate>
            <description><![CDATA[&lt;p&gt;ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ತಾಂತ್ರಿಕ ಉದ್ಯೋಗ ಮಾರುಕಟ್ಟೆಯು ತೀವ್ರ ಸ್ಪರ್ಧೆಯಿಂದ ಕೂಡಿದೆ. ಇತ್ತೀಚೆಗೆ MERN ಸ್ಟಾಕ್ ಮತ್ತು React ಡೆವಲಪರ್ ಹುದ್ದೆಗಳಿಗಾಗಿ ಕೇವಲ 15 ದಿನಗಳಲ್ಲಿ 34,742 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇದು ನಗರದಲ್ಲಿ ಉದ್ಯೋಗ ಪಡೆಯುವ ಸವಾಲನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಅಂಕಿಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ .&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jj1sfp2aez9qpmg6jda9ptmb,imgname-25.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಭಾರತದ ಐಟಿ ರಾಜಧಾನಿ ಎಂದು ಹೆಸರುವಾಸಿಯಾಗಿರುವ ಬೆಂಗಳೂರು ನಗರದಲ್ಲಿ ತಾಂತ್ರಿಕ ಉದ್ಯೋಗಗಳಿಗೆ ಸ್ಪರ್ಧೆ ದಿನೇ ದಿನೇ ಹೆಚ್ಚುತ್ತಿದ್ದು, ಅಭ್ಯರ್ಥಿಗಳು ಒಂದು ಹುದ್ದೆ ಪಡೆಯುವುದು ಎಷ್ಟು ಕಷ್ಟಕರವಾಗಿದೆ ಎಂಬುದನ್ನು ಇತ್ತೀಚಿನ ಅಂಕಿಅಂಶಗಳು ಸ್ಪಷ್ಟಪಡಿಸುತ್ತಿವೆ. ವಿಶೇಷವಾಗಿ ವೆಬ್ ಡೆವಲಪ್&zwnj;ಮೆಂಟ್ ಕ್ಷೇತ್ರದಲ್ಲಿ MERN Stack ಮತ್ತು React ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿದವರಿಗಾಗಿ ಉದ್ಯೋಗಾವಕಾಶಗಳು ಹೆಚ್ಚುತ್ತಿರುವುದರಿಂದ, ಸಾವಿರಾರು ಅಭ್ಯರ್ಥಿಗಳು ಒಂದೇ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ X (Twitter) ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಈ ವಿಚಾರವನ್ನು ಮತ್ತೆ ಚರ್ಚೆಗೆ ತಂದಿದೆ. ಈ ಪೋಸ್ಟ್ ಅನ್ನು ನಾರಾಯಣಿ ಗುರುನಾಥನ್ ಎಂಬ ನೇಮಕಾತಿ ತಜ್ಞರು ಹಂಚಿಕೊಂಡಿದ್ದು, ಬೆಂಗಳೂರು ನಗರದಲ್ಲಿ ತಾಂತ್ರಿಕ ಉದ್ಯೋಗ ಮಾರುಕಟ್ಟೆ ಎಷ್ಟು ಜನದಟ್ಟಣೆಯಿಂದ ಕೂಡಿದೆ ಎಂಬುದನ್ನು ಅದು ಸ್ಪಷ್ಟಪಡಿಸುತ್ತದೆ.&lt;/p&gt;&lt;h2&gt;15 ದಿನಗಳಲ್ಲಿ 34,742 ಅರ್ಜಿದಾರರು&lt;/h2&gt;&lt;p&gt;ನಾರಾಯಣಿ ಗುರುನಾಥನ್ ತಮ್ಮ ಪೋಸ್ಟ್&zwnj;ನಲ್ಲಿ, &ldquo;ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ MERN ಅಥವಾ React ಸಂಬಂಧಿತ ಉದ್ಯೋಗಗಳಿಗೆ ಸಕ್ರಿಯವಾಗಿ ಅರ್ಜಿ ಸಲ್ಲಿಸುತ್ತಿರುವ 34,742 ಅಭ್ಯರ್ಥಿಗಳು&rdquo; ಎಂಬ ಶೀರ್ಷಿಕೆಯೊಂದಿಗೆ ಒಂದು ಸ್ಕ್ರೀನ್&zwnj;ಶಾಟ್ ಹಂಚಿಕೊಂಡಿದ್ದಾರೆ. ಈ ಅಂಕಿಅಂಶಗಳು ಕೇವಲ ಎರಡು ವಾರಗಳ ಅವಧಿಯಲ್ಲಿ ಎಷ್ಟು ದೊಡ್ಡ ಸಂಖ್ಯೆಯ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಸ್ಪರ್ಧಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತವೆ.&lt;/p&gt;&lt;p&gt;ಈ ಪೋಸ್ಟ್&zwnj;ನಲ್ಲಿ ಅವರು, &ldquo;ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ನೀವು ಎದುರಿಸಬೇಕಾಗಿರುವ ಸ್ಪರ್ಧೆಯ ಮಟ್ಟ ಇದೇ&rdquo; ಎಂದು ಬರೆದಿದ್ದಾರೆ. ಅಂದರೆ, ಒಂದೇ ತಾಂತ್ರಿಕ ಕ್ಷೇತ್ರದಲ್ಲಿ ಸಾವಿರಾರು ಅಭ್ಯರ್ಥಿಗಳು ಒಂದೇ ಸಮಯದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿರುವುದು, ಉದ್ಯೋಗ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಯ ಪರಿಸ್ಥಿತಿಯನ್ನು ಉಂಟುಮಾಡಿದೆ.&lt;/p&gt;&lt;h2&gt;ಟೆಕ್ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿ&lt;/h2&gt;&lt;p&gt;ಈ ಅಂಕಿಅಂಶಗಳು ಬೆಂಗಳೂರಿನಲ್ಲಿ ಡೆವಲಪರ್ ಹುದ್ದೆಗಳಿಗೆ ಇರುವ ಭಾರಿ ಪೈಪೋಟಿಯನ್ನು ಮತ್ತೊಮ್ಮೆ ಬೆಳಕಿಗೆ ತಂದಿವೆ. ಅನೇಕ ಕಂಪನಿಗಳು ವೆಬ್ ಡೆವಲಪ್&zwnj;ಮೆಂಟ್, ಫ್ರಂಟ್&zwnj;ಎಂಡ್ ಮತ್ತು ಫುಲ್&zwnj;ಸ್ಟಾಕ್ ಡೆವಲಪರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದರಿಂದ ಸಾವಿರಾರು ಅಭ್ಯರ್ಥಿಗಳು ಒಂದೇ ಸಮಯದಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಿಂದ ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಯಸುವ ಯುವಕರಿಗೆ ಸ್ಪರ್ಧೆ ಮತ್ತಷ್ಟು ಕಠಿಣವಾಗುತ್ತಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೆಕ್ ವೃತ್ತಿಪರರ ನಡುವೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;ಅರ್ಜಿದಾರರ ಸಂಖ್ಯೆಗೆ ನೆಟ್ಟಿಗರ ಪ್ರತಿಕ್ರಿಯೆ&lt;/h2&gt;&lt;p&gt;ಈ ಪೋಸ್ಟ್&zwnj;ಗೆ ಅನೇಕ ಬಳಕೆದಾರರು ಆಶ್ಚರ್ಯ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡು, ಉದ್ಯೋಗಕ್ಕಾಗಿ ಹಲವು ಹುದ್ದೆಗಳಿಗೆ ಒಂದೇ ಸಮಯದಲ್ಲಿ ಅರ್ಜಿ ಸಲ್ಲಿಸುವ ಪರಿಸ್ಥಿತಿ ಹೇಗೆ ಸವಾಲಿನದಾಗಿದೆ ಎಂಬುದನ್ನು ವಿವರಿಸಿದ್ದಾರೆ.&lt;/p&gt;&lt;p&gt;ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ, &ldquo;ಈ ಅರ್ಜಿಗಳಲ್ಲಿ ಬಹಳಷ್ಟು ನಕಲಿ ಅಥವಾ ಸಂಬಂಧವಿಲ್ಲದ ಅರ್ಜಿಗಳು ಇರಬಹುದು. ನಮ್ಮ ಸಂಸ್ಥೆಯಲ್ಲಿ ಒಂದು ಹುದ್ದೆಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದೇವೆ. ಆದರೆ ನಾಲ್ಕು ತಿಂಗಳಾದರೂ ಸೂಕ್ತ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗಿಲ್ಲ. ಈಗಾಗಲೇ 500ಕ್ಕೂ ಹೆಚ್ಚು ರೆಸ್ಯೂಮ್&zwnj;ಗಳು ಬಂದಿದ್ದರೂ, ಅವುಗಳಲ್ಲಿ ಅರ್ಧದಷ್ಟು ಮಾತ್ರ ನಮ್ಮ ಉದ್ಯೋಗ ವಿವರಣೆಗೆ ಹೊಂದಿಕೆಯಾಗುತ್ತವೆ. ಸಂದರ್ಶನದ ವೇಳೆ ಹಲವರಿಗೆ ಅಗತ್ಯವಾದ ಮೂಲಭೂತ ಜ್ಞಾನವೂ ಇಲ್ಲ&rdquo; ಎಂದು ಹೇಳಿದ್ದಾರೆ.&lt;/p&gt;&lt;p&gt;ಮತ್ತೊಬ್ಬ ಬಳಕೆದಾರರು ಹಾಸ್ಯಾತ್ಮಕವಾಗಿ, ನಾನು ಎಂಜಿನಿಯರಿಂಗ್ ಬದಲು ವೈದ್ಯಕೀಯ ಕ್ಷೇತ್ರಕ್ಕೆ ಪ್ರಯತ್ನಿಸಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಮುಂದಿನ ಆರು ತಿಂಗಳಲ್ಲಿ ಇಂತಹ ತಾಂತ್ರಿಕ ಕೌಶಲ್ಯಗಳೊಂದಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವುದು ಇನ್ನಷ್ಟು ಕಷ್ಟಕರವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;ಲಿಂಕ್ಡ್&zwnj;ಇನ್ ಉದ್ಯೋಗ ಮಾರುಕಟ್ಟೆಯಲ್ಲಿಯೂ ಇದೇ ಸ್ಥಿತಿ&lt;/h2&gt;&lt;p&gt;ಕೆಲವರು LinkedIn ನಲ್ಲಿ ಕಾಣುವ ಅಂಕಿಅಂಶಗಳನ್ನು ಉಲ್ಲೇಖಿಸಿ, ಒಂದು ಉದ್ಯೋಗ ಪ್ರಕಟಣೆ ಹೊರಬಂದ ಕೆಲವೇ ದಿನಗಳಲ್ಲಿ 500 ರಿಂದ 1000 ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದನ್ನು ಗಮನಿಸಿದ್ದೇವೆ ಎಂದು ತಿಳಿಸಿದ್ದಾರೆ. ಒಬ್ಬ ಬಳಕೆದಾರರು ವಾವ್! ಇದು ನಿಜಕ್ಕೂ ತೀವ್ರ ಸ್ಪರ್ಧೆ. ಲಿಂಕ್ಡ್&zwnj;ಇನ್&zwnj;ನಲ್ಲಿ ನಾನು ನೋಡುವ ಸಂಖ್ಯೆಗಳನ್ನೂ ಇದು ದೃಢೀಕರಿಸುತ್ತದೆ. ಒಂದು ಅಥವಾ ಎರಡು ದಿನಗಳ ಹಳೆಯ ಉದ್ಯೋಗ ಪ್ರಕಟಣೆಗಳಿಗೆ ಈಗಾಗಲೇ ನೂರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಅವುಗಳಲ್ಲಿ ಎಷ್ಟು ಅರ್ಜಿಗಳು ನಿಜವಾಗಿಯೂ ಅರ್ಹತೆ ಹೊಂದಿವೆ ಎಂಬುದು ತಿಳಿಯುವುದು ಕಷ್ಟ. ಇದರಿಂದ ನಿಜವಾಗಿಯೂ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಪಡೆಯುವುದು ಮತ್ತಷ್ಟು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಬೆಂಗಳೂರಿನಲ್ಲಿ ತಾಂತ್ರಿಕ ಉದ್ಯೋಗಗಳಿಗೆ ಇರುವ ಭಾರಿ ಸ್ಪರ್ಧೆ ಯುವಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ವೆಬ್ ಡೆವಲಪ್&zwnj;ಮೆಂಟ್ ಮತ್ತು ಫುಲ್&zwnj;ಸ್ಟಾಕ್ ತಂತ್ರಜ್ಞಾನಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಒಂದೇ ಸಮಯದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿರುವುದರಿಂದ, ಸೂಕ್ತ ಕೌಶಲ್ಯ ಮತ್ತು ಅನುಭವ ಹೊಂದಿರುವವರು ಮಾತ್ರ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;34,742 candidates who are actively applying for MERN or React Jobs in Bengaluru, in the last 15 days.That is the competition you have when applying for a job. pic.twitter.com/r0R4CF6Ng6&lt;/p&gt;&lt;p&gt;&mdash; Narayani Gurunathan (@Narayani07) March 15, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/massive-competition-in-bengaluru-tech-market-34742-applicants-for-mern-and-react-jobs-gdp/articleshow-71q2tov"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಟೆಕ್ಕಿಯ ಕನಸಿನ ಉದ್ಯೋಗ, 1.5 ಲಕ್ಷ ರೂ ಸಂಬಳ, ಉಳಿತಾಯ ಮಾತ್ರ 15 ಸಾವಿರ, ಮಿಕ್ಕಿದೆಲ್ಲ ಇತರ ಖರ್ಚು!]]></title>
            <link>https://kannada.asianetnews.com/jobs/rs-1-5-lakh-salary-but-only-15k-savings-bengaluru-techie-surprised-by-hidden-reality-behind-his-disappearing-income-gdp/articleshow-7paht0n</link>
            <guid isPermaLink="true">https://kannada.asianetnews.com/jobs/rs-1-5-lakh-salary-but-only-15k-savings-bengaluru-techie-surprised-by-hidden-reality-behind-his-disappearing-income-gdp/articleshow-7paht0n</guid>
            <pubDate>Sun, 15 Mar 2026 21:21:04 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ತಿಂಗಳಿಗೆ ₹1.5 ಲಕ್ಷ ಸಂಬಳ ಪಡೆಯುವ ಯುವ ಸಾಫ್ಟ್&zwnj;ವೇರ್ ಡೆವಲಪರ್, ನಗರದ ದುಬಾರಿ ಜೀವನ ವೆಚ್ಚದಿಂದಾಗಿ ನಿರೀಕ್ಷಿತ ಉಳಿತಾಯ ಮಾಡಲು ವಿಫಲರಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಪೋಸ್ಟ್, ಹೆಚ್ಚಿನ ಸಂಬಳದ ಹೊರತಾಗಿಯೂ ಬಾಡಿಗೆ, ಆಹಾರ, ಮತ್ತು ಪ್ರಯಾಣದಂತಹ ಖರ್ಚುಗಳು ಹೇಗೆ ಆದಾಯವನ್ನು ಕಬಳಿಸುತ್ತವೆ ಎಂಬುದನ್ನು ವಿವರಿಸುತ್ತದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j3pd1vbh6e63bm2dvn355hzv,imgname-job-tension-1721960033649.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಅನೇಕ ಯುವ ವೃತ್ತಿಪರರಿಗೆ ಪ್ರಮುಖ ತಂತ್ರಜ್ಞಾನ ಕೇಂದ್ರದಲ್ಲಿ ಹೆಚ್ಚಿನ ಸಂಬಳದ ಉದ್ಯೋಗ ಪಡೆಯುವುದು ಜೀವನದಲ್ಲಿ ದೊಡ್ಡ ಸಾಧನೆ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ದೇಶದ ಐಟಿ ರಾಜಧಾನಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರು ಪ್ರತಿ ವರ್ಷ ಸಾವಿರಾರು ಪದವೀಧರರನ್ನು ಉತ್ತಮ ಉದ್ಯೋಗಾವಕಾಶಗಳು ಮತ್ತು ಆಕರ್ಷಕ ಸಂಬಳದ ಭರವಸೆಗಳೊಂದಿಗೆ ತನ್ನತ್ತ ಸೆಳೆಯುತ್ತದೆ. ಆದರೆ ಹೊಸದಾಗಿ ನಗರಕ್ಕೆ ಬರುವ ಹಲವಾರು ಯುವಕರಿಗೆ, ಹೆಚ್ಚಿನ ಸಂಬಳದ ಆಕರ್ಷಣೆ ನಿಧಾನವಾಗಿ ನಗರ ಜೀವನದ ನೈಜ ವೆಚ್ಚಗಳ ಮುಂದೆ ವಿಭಿನ್ನ ಅನುಭವವನ್ನು ನೀಡುತ್ತದೆ.&lt;/p&gt;&lt;p&gt;ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ X ನಲ್ಲಿ ವೈರಲ್ ಆಗಿರುವ ಒಂದು ಪೋಸ್ಟ್ ಈ ವಿಚಾರವನ್ನು ಮತ್ತೆ ಚರ್ಚೆಗೆ ತಂದಿದೆ. ಕಾಗದದ ಮೇಲೆ ಆಕರ್ಷಕವಾಗಿ ಕಾಣುವ ಸಂಬಳವು, ಜೀವನ ವೆಚ್ಚ ಹೆಚ್ಚು ಇರುವ ನಗರದಲ್ಲಿ ಎಷ್ಟು ಮಟ್ಟಿಗೆ ಉಳಿತಾಯವಾಗುತ್ತದೆ ಎಂಬುದನ್ನು ಈ ಪೋಸ್ಟ್ ಸ್ಪಷ್ಟಪಡಿಸಿದೆ. ಈ ಪೋಸ್ಟ್ ಅನ್ನು @AlfinCodes ಎಂಬ ಹ್ಯಾಂಡಲ್ ಹೊಂದಿರುವ ಬಳಕೆದಾರರು ಹಂಚಿಕೊಂಡಿದ್ದು, ಉದ್ಯೋಗಕ್ಕಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡ ತಮ್ಮ ಸೋದರಸಂಬಂಧಿಯ ಅನುಭವವನ್ನು ಅವರು ವಿವರಿಸಿದ್ದಾರೆ.&lt;/p&gt;&lt;h2&gt;ದೂರದಿಂದ ದೊಡ್ಡ ಯಶಸ್ಸಿನಂತೆ ಕಂಡ ಸಂಬಳ&lt;/h2&gt;&lt;p&gt;ಪೋಸ್ಟ್&zwnj;ನಲ್ಲಿ ನೀಡಿರುವ ವಿವರಗಳ ಪ್ರಕಾರ, ಬಳಕೆದಾರರ ಸೋದರಸಂಬಂಧಿ ಇತ್ತೀಚೆಗೆ ಕಂಪ್ಯೂಟರ್ ಸೈನ್ಸ್ ಪದವಿ ಪೂರ್ಣಗೊಳಿಸಿ ಸಾಫ್ಟ್&zwnj;ವೇರ್ ಡೆವಲಪರ್ ಆಗಿ ತಮ್ಮ ಮೊದಲ ಉದ್ಯೋಗವನ್ನು ಪಡೆದಿದ್ದರು. ಈ ಕೆಲಸಕ್ಕೆ ತಿಂಗಳಿಗೆ ಸುಮಾರು ₹1.5 ಲಕ್ಷ ಸಂಬಳವಿದ್ದು, ಮನೆಮಂದಿ ಮತ್ತು ಸ್ನೇಹಿತರ ದೃಷ್ಟಿಯಲ್ಲಿ ಇದು ಬಹಳ ದೊಡ್ಡ ಸಾಧನೆಯಂತೆ ಕಾಣಿಸಿತು. ನನ್ನ ಸೋದರಸಂಬಂಧಿ ₹1.5 ಲಕ್ಷ ತಿಂಗಳ ಸಂಬಳದ ತಾಂತ್ರಿಕ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದರು ಎಂದು ಪೋಸ್ಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ತಮ್ಮ ಊರಿಗೆ ಹಿಂದಿರುಗಿದಾಗ ಅಲ್ಲಿ ಇರುವ ಜನರು ಅವರು ಈಗಾಗಲೇ ಜೀವನದಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದಾರೆ ಎಂದು ಭಾವಿಸಿದ್ದರು. ದೊಡ್ಡ ಕಂಪನಿಯಲ್ಲಿ ಕೆಲಸ, ದೊಡ್ಡ ನಗರದಲ್ಲಿ ವಾಸ ಮತ್ತು ದೊಡ್ಡ ಸಂಬಳ&mdash;ಇವೆಲ್ಲವೂ ಯಶಸ್ಸಿನ ಸಂಕೇತಗಳಂತೆ ಕಾಣುತ್ತಿತ್ತು. ಆದರೆ ಕೆಲವು ತಿಂಗಳುಗಳ ನಂತರ ಬೆಂಗಳೂರಿನ ಜೀವನದ ನೈಜತೆ ನಿಧಾನವಾಗಿ ಅವರ ಮುಂದೆ ಸ್ಪಷ್ಟವಾಗಲು ಆರಂಭಿಸಿತು.&lt;/p&gt;&lt;h2&gt;ವೇಗವಾಗಿ ಹೆಚ್ಚಾಗುವ ಜೀವನ ವೆಚ್ಚ&lt;/h2&gt;&lt;p&gt;ಪೋಸ್ಟ್ ಪ್ರಕಾರ, ದಿನನಿತ್ಯದ ವೆಚ್ಚಗಳು ಆದಾಯವನ್ನು ಎಷ್ಟು ಬೇಗ ಕಬಳಿಸುತ್ತವೆ ಎಂಬುದನ್ನು ಆ ಯುವ ಡೆವಲಪರ್ ಗಮನಿಸಲು ಆರಂಭಿಸಿದರು. ಬಾಡಿಗೆ ಮಾತ್ರವೇ ಅವರ ಸಂಬಳದ ದೊಡ್ಡ ಭಾಗವನ್ನು ತೆಗೆದುಕೊಂಡಿತು. ಕೆಲಸದ ಸ್ಥಳದ ಸಮೀಪದಲ್ಲಿರುವ ಒಂದು ಸಣ್ಣ ಅಪಾರ್ಟ್ಮೆಂಟ್&zwnj;ಗೆ ತಿಂಗಳಿಗೆ ಸುಮಾರು ₹36,000 ಬಾಡಿಗೆ ಕಟ್ಟಬೇಕಾಗುತ್ತಿತ್ತು.&lt;/p&gt;&lt;p&gt;ಇದರ ಜೊತೆಗೆ ಆಹಾರ ಮತ್ತು ದಿನಸಿ ವೆಚ್ಚಗಳು ಪ್ರತಿ ತಿಂಗಳು ಸುಮಾರು ₹13,000 ರಿಂದ ₹15,000ರವರೆಗೆ ಹೋಗುತ್ತಿತ್ತು. ನಗರದಲ್ಲಿ ಭಾರೀ ಸಂಚಾರ ಇರುವುದರಿಂದ ದೈನಂದಿನ ಪ್ರಯಾಣಕ್ಕಾಗಿ ಕ್ಯಾಬ್ ಹಾಗೂ ಆಟೋ ಸೇವೆಗಳನ್ನು ಬಳಸಬೇಕಾಗಿ ಬಂದಿದ್ದು, ಅದಕ್ಕೆ ತಿಂಗಳಿಗೆ ಸುಮಾರು ₹6,000 ರಿಂದ ₹8,000ರವರೆಗೆ ಖರ್ಚಾಗುತ್ತಿತ್ತು.&lt;/p&gt;&lt;h2&gt;ಜೀವನಶೈಲಿ ವೆಚ್ಚಗಳೂ ಹೆಚ್ಚಳ&lt;/h2&gt;&lt;p&gt;ಇದರ ಜೊತೆಗೆ ದೊಡ್ಡ ನಗರಗಳಲ್ಲಿ ಸಾಮಾನ್ಯವಾಗಿರುವ ಜೀವನಶೈಲಿ ವೆಚ್ಚಗಳೂ ಸೇರಿಕೊಂಡವು. ಆಹಾರ ಡೆಲಿವರಿ, ಕಾಫಿ ಅಂಗಡಿಗಳು ಹಾಗೂ ವಾರಾಂತ್ಯದ ಹೊರಹೋಗುವಿಕೆಗಳಿಗೆ ತಿಂಗಳಿಗೆ ಸುಮಾರು ₹10,000 ರಿಂದ ₹12,000ರವರೆಗೆ ವೆಚ್ಚವಾಗುತ್ತಿತ್ತು ಎಂದು ಪೋಸ್ಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಕಾಣದ ಖರ್ಚುಗಳ ಪರಿಣಾಮ&lt;/h2&gt;&lt;p&gt;ಸ್ಪಷ್ಟವಾಗಿ ಕಾಣುವ ವೆಚ್ಚಗಳ ಹೊರತಾಗಿ, ತಿಂಗಳ ಕೊನೆಯಲ್ಲಿ ಉಳಿಯುವ ಹಣವನ್ನು ಕಡಿಮೆ ಮಾಡುವ ಅನೇಕ ಸಣ್ಣ ಆದರೆ ಅನಿವಾರ್ಯ ಖರ್ಚುಗಳೂ ಇವೆ ಎಂದು ಪೋಸ್ಟ್&zwnj;ನಲ್ಲಿ ಹೇಳಲಾಗಿದೆ. ಚಂದಾದಾರಿಕೆ ಸೇವೆಗಳು, ವೈದ್ಯಕೀಯ ವೆಚ್ಚಗಳು, ಅನಿರೀಕ್ಷಿತ ಬಿಲ್&zwnj;ಗಳು ಹಾಗೂ ಮನೆಯವರಿಗೆ ಹಣ ಕಳುಹಿಸುವಂತಹ ಖರ್ಚುಗಳು ನಿಧಾನವಾಗಿ ಹಣವನ್ನು ಕಡಿಮೆ ಮಾಡುತ್ತವೆ.&lt;/p&gt;&lt;p&gt;ಈ ಎಲ್ಲಾ ವೆಚ್ಚಗಳನ್ನು ಲೆಕ್ಕ ಹಾಕಿದ ಬಳಿಕ ತಿಂಗಳಿಗೆ ₹1 ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆದರೂ ಉಳಿಯುವ ಉಳಿತಾಯವು ನಿರೀಕ್ಷಿಸಿದಷ್ಟು ಹೆಚ್ಚು ಇರಲಿಲ್ಲ. &ldquo;ತಿಂಗಳ ಕೊನೆಯಲ್ಲಿ ಉಳಿಯುವ ಉಳಿತಾಯ ಕೇವಲ ₹15,000 ರಿಂದ ₹20,000ರವರೆಗೆ ಮಾತ್ರ ಇತ್ತು,&rdquo; ಎಂದು ಪೋಸ್ಟ್&zwnj;ನಲ್ಲಿ ವಿವರಿಸಲಾಗಿದೆ.&lt;/p&gt;&lt;p&gt;ಪೋಸ್ಟ್&zwnj;ನ ಪ್ರಕಾರ, ಇದೇ ಸಮಯದಲ್ಲಿ ದೊಡ್ಡ ನಗರಗಳಲ್ಲಿ ಹೊಸದಾಗಿ ಜೀವನ ಆರಂಭಿಸುವವರು ಎದುರಿಸುವ ವಾಸ್ತವವನ್ನು ಆ ಡೆವಲಪರ್ ಅರಿತುಕೊಂಡರು. &ldquo;ನಿಮ್ಮ ಊರಲ್ಲಿ ₹1 ಲಕ್ಷಕ್ಕಿಂತ ಹೆಚ್ಚು ಸಂಬಳ ದೊಡ್ಡದಾಗಿ ಕಾಣಬಹುದು. ಆದರೆ ಬೆಂಗಳೂರಿನಂತಹ ನಗರದಲ್ಲಿ ಅದು ಕೇವಲ ಆರಂಭ ಮಾತ್ರ,&rdquo; ಎಂದು ಪೋಸ್ಟ್&zwnj;ನಲ್ಲಿ ಹೇಳಲಾಗಿದೆ. ಬಳಕೆದಾರರು ತಮ್ಮ ಅನುಭವವನ್ನು ಒಂದು ಸರಳ ಸಾಲಿನಲ್ಲಿ ಸಂಕ್ಷಿಪ್ತಗೊಳಿಸಿದ್ದಾರೆ: &ldquo;ದೊಡ್ಡ ಸಂಬಳ. ಸಣ್ಣ ಉಳಿತಾಯ. ಬೆಂಗಳೂರು ಜೀವನಕ್ಕೆ ಸುಸ್ವಾಗತ.&rdquo;&lt;/p&gt;&lt;h2&gt;ನೆಟಿಜನ್&zwnj;ಗಳಿಂದ ವಿಭಿನ್ನ ಅಭಿಪ್ರಾಯಗಳು&lt;/h2&gt;&lt;p&gt;ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಬೇಗನೆ ಗಮನ ಸೆಳೆದಿದ್ದು, ಹಲವಾರು ಬಳಕೆದಾರರು ತಮ್ಮದೇ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ವಿಭಿನ್ನ ಉದಾಹರಣೆಯನ್ನು ನೀಡುತ್ತಾ, &ldquo;ನನ್ನ ಸ್ನೇಹಿತ ತಿಂಗಳಿಗೆ ₹50,000 ಮಾತ್ರ ಸಂಪಾದಿಸುತ್ತಾನೆ. ₹15,000 ಬಾಡಿಗೆ, ₹10,000 ದಿನಸಿ, ₹5,000 ಪೆಟ್ರೋಲ್ ಮತ್ತು ₹5,000 ಇತರ ವೆಚ್ಚಗಳಿದ್ದರೂ ಅವನು ತಿಂಗಳಿಗೆ ₹15,000ಕ್ಕಿಂತ ಹೆಚ್ಚು ಉಳಿಸುತ್ತಾನೆ. ಅವನ ಕುಟುಂಬದಲ್ಲಿ ಐದು ಜನರಿದ್ದು ಅವನೇ ಒಬ್ಬನೇ ಸಂಪಾದಿಸುತ್ತಾನೆ,&rdquo; ಎಂದು ಹೇಳಿದ್ದಾರೆ.&lt;/p&gt;&lt;p&gt;ಇದಕ್ಕೆ ಪ್ರತಿಕ್ರಿಯಿಸಿದ ಮೂಲ ಪೋಸ್ಟರ್, &ldquo;24 ವರ್ಷದ ವಯಸ್ಸಿನಲ್ಲಿ ಐದು ಜನರ ಕುಟುಂಬವನ್ನು ಪೋಷಿಸುವುದು ಸುಲಭವಲ್ಲ. ಅವನನ್ನು ನಿಜವಾಗಿಯೂ ಗೌರವಿಸಬೇಕು,&rdquo; ಎಂದು ಹೇಳಿದ್ದಾರೆ.&lt;/p&gt;&lt;p&gt;ಕೆಲವರು ಸಂಬಳಕ್ಕಿಂತ ಹೆಚ್ಚು ಖರ್ಚು ಮಾಡುವ ಅಭ್ಯಾಸವೇ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಬಳಕೆದಾರರು, &ldquo;ನಾನು ಆರು ಅಂಕಿಯ ಸಂಬಳ ಪಡೆಯುತ್ತಿದ್ದರೂ ತಿಂಗಳಿಗೆ ₹10,000ಕ್ಕಿಂತ ಹೆಚ್ಚು ಖರ್ಚು ಮಾಡುವುದಿಲ್ಲ. ನೀವು ಹೇಗೆ ಬದುಕಲು ಆಯ್ಕೆಮಾಡುತ್ತೀರಿ ಎಂಬುದೇ ಮುಖ್ಯ,&rdquo; ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪೋಸ್ಟ್&zwnj;ನ ಲೇಖಕರು, &ldquo;ನಿಖರವಾಗಿ. ಸಂಬಳಕ್ಕಿಂತ ಖರ್ಚು ಮಾಡುವ ಅಭ್ಯಾಸಗಳೇ ಮುಖ್ಯ,&rdquo; ಎಂದು ಹೇಳಿದ್ದಾರೆ.&lt;/p&gt;&lt;h2&gt;ಸ್ಥಳ ಆಯ್ಕೆಯೂ ಖರ್ಚಿನ ಮೇಲೆ ಪರಿಣಾಮ&lt;/h2&gt;&lt;p&gt;ನಗರದಲ್ಲಿ ವಾಸಿಸಲು ಆಯ್ಕೆಮಾಡುವ ಪ್ರದೇಶವೂ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಳಕೆದಾರರು, &ldquo;ಕೆಲವರಿಗೆ ಕಡಿಮೆ ಬಾಡಿಗೆಯಿಗಿಂತ ಸಮಯ ಹೆಚ್ಚು ಮುಖ್ಯವಾಗಿರುತ್ತದೆ. ಕೆಲಸದ ಸ್ಥಳದ ಸಮೀಪ ವಾಸಿಸುವುದರಿಂದ ಪ್ರಯಾಣ ಸಮಯ ಉಳಿಯುತ್ತದೆ,&rdquo; ಎಂದು ಹೇಳಿದ್ದಾರೆ.&lt;/p&gt;&lt;p&gt;ಈ ಚರ್ಚೆ ಮತ್ತೆ ಒಂದು ಬಾರಿ ದೊಡ್ಡ ನಗರಗಳಲ್ಲಿ ಜೀವನ ನಡೆಸುವ ವೆಚ್ಚ, ಸಂಬಳ ಮತ್ತು ಉಳಿತಾಯದ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಿರುವ ಯುವಕರಿಗೆ ಹಣಕಾಸು ಯೋಜನೆ ಮತ್ತು ಖರ್ಚಿನ ನಿಯಂತ್ರಣ ಎಷ್ಟು ಮುಖ್ಯವೆಂಬುದನ್ನು ಈ ಘಟನೆ ಸ್ಪಷ್ಟಪಡಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;My cousin moved to Bangalore for a ₹1.5L/month tech job.Six months later, he realised something no one tells freshers.Computer Science graduateFirst software developer jobMoved to Bengaluru for better opportunitiesSalary: ₹1.5L per monthBack home, everyone thought he&hellip;&lt;/p&gt;&lt;p&gt;&mdash; Alfin (@AlfinCodes) March 13, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/rs-1-5-lakh-salary-but-only-15k-savings-bengaluru-techie-surprised-by-hidden-reality-behind-his-disappearing-income-gdp/articleshow-7paht0n"/>
        </item>
        <item>
            <title><![CDATA[ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಉನ್ನತ ಹುದ್ದೆಗೆ ಅರ್ಜಿ ಆಹ್ವಾನ, 2 ಲಕ್ಷಕ್ಕೂ ಅಧಿಕ ವೇತನ!]]></title>
            <link>https://kannada.asianetnews.com/jobs/new-mangalore-port-authority-recruitment-2026-apply-for-senior-deputy-traffic-manager-posts-gdp/articleshow-cnxrggk</link>
            <guid isPermaLink="true">https://kannada.asianetnews.com/jobs/new-mangalore-port-authority-recruitment-2026-apply-for-senior-deputy-traffic-manager-posts-gdp/articleshow-cnxrggk</guid>
            <pubDate>Thu, 02 Apr 2026 14:40:25 +0530</pubDate>
            <description><![CDATA[ನವ ಮಂಗಳೂರು ಬಂದರು ಪ್ರಾಧಿಕಾರವು (NMPA) ಸೀನಿಯರ್ ಡೆಪ್ಯೂಟಿ ಟ್ರಾಫಿಕ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಿಸಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಈ ಉನ್ನತ ವೇತನದ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ನೇಮಕ ಮಾಡಿಕೊಂಡು ಮಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn6q3tp4ghnb41be8qr8nmxj,imgname-nmpt-1775120804548.jpg" type="image/jpeg" height="390" width="690"/>
            <content:encoded><![CDATA[&lt;p&gt;ಉನ್ನತ ಮಟ್ಟದ ಸರ್ಕಾರಿ ಹುದ್ದೆಯಲ್ಲಿ ಉದ್ಯೋಗ ಪಡೆಯುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ನವ ಮಂಗಳೂರು ಬಂದರು ಪ್ರಾಧಿಕಾರ (New Mangalore Port Authority - NMPA) ಇದೀಗ ಸೀನಿಯರ್ ಡೆಪ್ಯೂಟಿ ಟ್ರಾಫಿಕ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;ಹುದ್ದೆಯ ಪ್ರಮುಖ ಮಾಹಿತಿ&lt;/h2&gt;&lt;p&gt;ಸಂಸ್ಥೆಯ ಹೆಸರು: ನವ ಮಂಗಳೂರು ಬಂದರು ಪ್ರಾಧಿಕಾರ (NMPA)&lt;/p&gt;&lt;p&gt;ಹುದ್ದೆಯ ಹೆಸರು: ಸೀನಿಯರ್ ಡೆಪ್ಯೂಟಿ ಟ್ರಾಫಿಕ್ ಮ್ಯಾನೇಜರ್&lt;/p&gt;&lt;p&gt;ಒಟ್ಟು ಹುದ್ದೆಗಳು: ವಿವಿಧ&lt;/p&gt;&lt;p&gt;ಉದ್ಯೋಗ ಸ್ಥಳ: ಮಂಗಳೂರು, ಕರ್ನಾಟಕ&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ&lt;/h2&gt;&lt;p&gt;ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ (Degree) ಪೂರ್ಣಗೊಳಿಸಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.&lt;/p&gt;&lt;h2&gt;ವೇತನ ವಿವರ&lt;/h2&gt;&lt;p&gt;ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹80,000 ರಿಂದ ₹2,20,000 ವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ. ಇದು ಕೇಂದ್ರ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿರುತ್ತದೆ.&lt;/p&gt;&lt;h2&gt;ವಯೋಮಿತಿ&lt;/h2&gt;&lt;p&gt;ಅಭ್ಯರ್ಥಿಗಳ ಗರಿಷ್ಠ ವಯಸ್ಸು ಏಪ್ರಿಲ್ 20, 2026ರಂತೆ 42 ವರ್ಷಗಳು ಆಗಿರಬೇಕು. ವಯೋಮಿತಿಯಲ್ಲಿ ಸರ್ಕಾರದ ನಿಯಮಾನುಸಾರ ಸಡಿಲಿಕೆ ಇರಬಹುದು.&lt;/p&gt;&lt;h2&gt;ಅರ್ಜಿ ಶುಲ್ಕ&lt;/h2&gt;&lt;p&gt;ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ, ಇದು ಅಭ್ಯರ್ಥಿಗಳಿಗೆ ಹೆಚ್ಚುವರಿ ಪ್ರಯೋಜನವಾಗಿದೆ.&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ&lt;/h2&gt;&lt;p&gt;ಅಭ್ಯರ್ಥಿಗಳನ್ನು ಸಂದರ್ಶನ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳನ್ನು ಶಾರ್ಟ್&zwnj;ಲಿಸ್ಟ್ ಮಾಡಿ ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ.&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;h3&gt;ಅಧಿಕೃತ ವೆಬ್&zwnj;ಸೈಟ್ ಭೇಟಿ:&lt;/h3&gt;&lt;p&gt;ಮೊದಲು ನವ ಮಂಗಳೂರು ಬಂದರು ಪ್ರಾಧಿಕಾರದ ಅಧಿಕೃತ ವೆಬ್&zwnj;ಸೈಟ್ https://newmangaloreport.gov.in/ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.&lt;/p&gt;&lt;h3&gt;ಆನ್&zwnj;ಲೈನ್ ಅರ್ಜಿ ಸಲ್ಲಿಕೆ:&lt;/h3&gt;&lt;p&gt;ಅರ್ಜಿಯನ್ನು ಆನ್&zwnj;ಲೈನ್ ಮೂಲಕ ಭರ್ತಿ ಮಾಡಿ ಏಪ್ರಿಲ್ 19, 2026ರೊಳಗೆ ಸಲ್ಲಿಸಬೇಕು.&lt;/p&gt;&lt;h3&gt;ಇಮೇಲ್ ಮೂಲಕ ಸಲ್ಲಿಕೆ:&lt;/h3&gt;&lt;p&gt;ಭರ್ತಿ ಮಾಡಿದ ಅರ್ಜಿಯ ಸಾಫ್ಟ್ ಕಾಪಿಯನ್ನು secretary@nmpt.gov.in&lt;/p&gt;&lt;p&gt;ಗೆ ಇಮೇಲ್ ಮೂಲಕ ಕಳುಹಿಸಬೇಕು.&lt;/p&gt;&lt;h3&gt;ಹಾರ್ಡ್ ಕಾಪಿ ಕಳುಹಿಕೆ:&lt;/h3&gt;&lt;p&gt;ಅರ್ಜಿಯ ಮುದ್ರಿತ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:&lt;/p&gt;&lt;h2&gt;ವಿಳಾಸ:&lt;/h2&gt;&lt;p&gt;ಕಾರ್ಯದರ್ಶಿ,&lt;/p&gt;&lt;p&gt;ನವ ಮಂಗಳೂರು ಬಂದರು ಪ್ರಾಧಿಕಾರ,&lt;/p&gt;&lt;p&gt;ಸಾಮಾನ್ಯ ಆಡಳಿತ ಇಲಾಖೆ, ಆಡಳಿತ ಕಟ್ಟಡ,&lt;/p&gt;&lt;p&gt;ಪಣಂಬೂರು, ಮಂಗಳೂರು &ndash; 575010&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಮಾರ್ಚ್ 20, 2026&lt;/p&gt;&lt;p&gt;ಆನ್&zwnj;ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 19, 2026&lt;/p&gt;&lt;p&gt;ಹಾರ್ಡ್ ಕಾಪಿ ತಲುಪುವ ಕೊನೆಯ ದಿನಾಂಕ: ಮೇ 4, 2026&lt;/p&gt;&lt;p&gt;ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಉತ್ತಮ ವೇತನದೊಂದಿಗೆ ಪ್ರತಿಷ್ಠಿತ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಇದು ಅಪರೂಪದ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/new-mangalore-port-authority-recruitment-2026-apply-for-senior-deputy-traffic-manager-posts-gdp/articleshow-cnxrggk"/>
        </item>
        <item>
            <title><![CDATA[ಕೆಲಸ ಹೋದ್ರೂ ಕೆಡದ ನೆಮ್ಮದಿ: ಬೆಂಗಳೂರಿನ ಒರಾಕಲ್ ಟೆಕ್ಕಿಯ 'ಓಲ್ಡ್ ಸ್ಕೂಲ್' ಸೇವಿಂಗ್ಸ್ ಪ್ಲ್ಯಾನ್ ಈಗ ವೈರಲ್!]]></title>
            <link>https://kannada.asianetnews.com/business/oracle-techie-layoff-savings-plan-viral-financial-planning-tips-kannada-san/articleshow-edvpr5x</link>
            <guid isPermaLink="true">https://kannada.asianetnews.com/business/oracle-techie-layoff-savings-plan-viral-financial-planning-tips-kannada-san/articleshow-edvpr5x</guid>
            <pubDate>Mon, 06 Apr 2026 16:29:22 +0530</pubDate>
            <description><![CDATA[&lt;p&gt;ಬೆಂಗಳೂರಿನ ಒರಾಕಲ್ ಕಂಪನಿಯಿಂದ ಲೇ-ಆಫ್ ಆದ 14 ವರ್ಷಗಳ ಅನುಭವಿ ಉದ್ಯೋಗಿಯೊಬ್ಬರು, ಆತಂಕಪಡದೆ ತಮ್ಮ ಊರಿಗೆ ಮರಳಿದ್ದಾರೆ. ತಮ್ಮ ಉತ್ತಮ ಆರ್ಥಿಕ ಯೋಜನೆಯಿಂದಾಗಿ, ಅಂಚೆ ಕಚೇರಿ ಮತ್ತು ಬ್ಯಾಂಕ್ ಎಫ್&zwnj;ಡಿಗಳಿಂದ ತಿಂಗಳಿಗೆ ₹43,000 ನಿಷ್ಕ್ರಿಯ ಆದಾಯ ಗಳಿಸುತ್ತಿದ್ದು, ಸಾಲಮುಕ್ತರಾಗಿ ಹೊಸ ಜೀವನ ಆರಂಭಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn3fvf377pqxhyqp9vbf159s,imgname-oracle-layoffs-30000-employees-india-impact-morning-email-job-cuts-ai-restructuring-global-4-1775012527207.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭುವನೇಶ್ವರ (ಏ.6):&lt;/strong&gt; ಐಟಿ ಕ್ಷೇತ್ರದಲ್ಲಿ ಕೆಲಸ ಕಳೆದುಕೊಳ್ಳುವುದು ಎಂದರೆ ಬೆಟ್ಟವೇ ಕುಸಿದು ಬಿದ್ದಂತಾಗುವ ಇಂದಿನ ಕಾಲದಲ್ಲಿ, ಬೆಂಗಳೂರಿನಲ್ಲಿದ್ದ ಒರಾಕಲ್ ಉದ್ಯೋಗಿಯೊಬ್ಬರು ಕೆಲಸ ಹೋದ ತಕ್ಷಣವೇ ತೋರಿದ ಸಂಯಮ ಮತ್ತು ಅವರ ಆರ್ಥಿಕ ಯೋಜನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. 14 ವರ್ಷಗಳ ಅನುಭವವಿದ್ದರೂ ಲೇ-ಆಫ್&zwnj;ಗೆ ಬಲಿಯಾದ ಈ ವ್ಯಕ್ತಿ, ಯಾವುದೇ ಆತಂಕವಿಲ್ಲದೆ ತಮ್ಮ ತವರು ಮನೆ ಒಡಿಶಾದ ಭುವನೇಶ್ವರಕ್ಕೆ ಮರಳಿದ್ದಾರೆ. ಇವರ ಈ ಸ್ಫೂರ್ತಿದಾಯಕ ಕಥೆಯನ್ನು ಅವರ ಗೆಳೆಯ ನಾಯಕ್ ಸತ್ಯ ಎಂಬುವವರು 'X' (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಸತ್ಯ ಅವರ ಪ್ರಕಾರ, &quot;ಯಾವುದೇ ಪ್ಯಾನಿಕ್ ಇಲ್ಲ, ಒತ್ತಡವಿಲ್ಲ. ಅವರು ನೇರವಾಗಿ ತಮ್ಮ ಅವರ ಊರು ಭುವನೇಶ್ವರಕ್ಕೆ ಮರಳಿದರು.&quot; ಇಂತಹ ಶಾಂತ ನಿರ್ಧಾರಕ್ಕೆ ಕಾರಣವಾಗಿದ್ದು ವರ್ಷಗಳಿಂದ ಅವರು ಮಾಡುತ್ತಾ ಬಂದಿದ್ದ ಸಾಂಪ್ರದಾಯಿಕ ಉಳಿತಾಯ ಕ್ರಮ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಹೇಗಿತ್ತು ವ್ಯಕ್ತಿಯ ಹೂಡಿಕೆ?&lt;/strong&gt;&lt;/h2&gt;&lt;p&gt;ಅಂಚೆ ಕಚೇರಿಯಲ್ಲಿ ಅನೇಕ ಪೋಸ್ಟಲ್ ಫಿಕ್ಸೆಡ್ ಡೆಪಾಸಿಟ್ (FD) ಗಳಲ್ಲಿ ಹೂಡಿಕೆ ಮಾಡಿದ್ದರು. ಪೋಷಕರೊಂದಿಗೆ ಜಂಟಿ ಖಾತೆಯಲ್ಲಿ 15 ಲಕ್ಷ ರೂ. ಮತ್ತು ಪತ್ನಿಯೊಂದಿಗೆ 15 ಲಕ್ಷ ರೂ.ಗಳ ಎರಡು ಜಂಟಿ ಖಾತೆಗಳನ್ನು ಹೊಂದಿದ್ದರು. ಇದರ ಜೊತೆಗೆ ಮಗುವಿನ ಹೆಸರಿನಲ್ಲಿಯೂ ಠೇವಣಿ ಇರಿಸಿದ್ದರು. ಈ ಎಲ್ಲಾ ಅಂಚೆ ಉಳಿತಾಯಗಳಿಂದ ಅವರಿಗೆ ಮಾಸಿಕ ಸುಮಾರು 28,000 ರೂಪಾಯಿ ಬಡ್ಡಿ ಬರುತ್ತಿದೆ. ಭಾರತೀಯ ಬ್ಯಾಂಕ್&zwnj;ಗಳಲ್ಲಿ ಸುಮಾರು 30 ಲಕ್ಷ ರೂ.ಗಳ ಫಿಕ್ಸೆಡ್ ಡೆಪಾಸಿಟ್ ಹೊಂದಿದ್ದು, ಅದರಿಂದ ತಿಂಗಳಿಗೆ 15,000 ರೂಪಾಯಿ ಆದಾಯ ಬರುತ್ತಿದೆ.&lt;/p&gt;&lt;p&gt;ಅಂದರೆ, ಕೆಲಸವಿಲ್ಲದಿದ್ದರೂ ಪ್ರತಿ ತಿಂಗಳು ಸುಮಾರು 43,000 ರೂಪಾಯಿ ನಿರಂತರ 'ಪ್ಯಾಸಿವ್ ಇನ್ಕಮ್' (Passive Income) ಬರುವಂತೆ ಅವರು ಮೊದಲೇ ಯೋಜನೆ ರೂಪಿಸಿದ್ದರು.&lt;/p&gt;&lt;h2&gt;&lt;strong&gt;ಈಗಿನ ಜೀವನ ಶೈಲಿ&lt;/strong&gt;&lt;/h2&gt;&lt;p&gt;ಭುವನೇಶ್ವರಕ್ಕೆ ಮರಳಿದ ಅವರು ಈಗ ತಮ್ಮ ಪೋಷಕರ ಜೊತೆ ವಾಸಿಸುತ್ತಿದ್ದಾರೆ. ಯಾವುದೇ ಇಎಂಐ (EMI) ಅಥವಾ ಸಾಲದ ಹೊರೆ ಇಲ್ಲದ ಕಾರಣ, ಅವರು ಈಗ ತಮ್ಮ ಬಿಡುವಿನ ವೇಳೆಯಲ್ಲಿ 'ಉಬರ್' (Uber) ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕುಟುಂಬದ ಬೆಂಬಲದೊಂದಿಗೆ ಸಣ್ಣ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆಯೂ ಅವರು ಈಗ ಯೋಚಿಸುತ್ತಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಬರೆದಿರುವ ಸತ್ಯ ಅವರು, &quot;ಇದು ಸಂಪೂರ್ಣ 'ಓಲ್ಡ್ ಸ್ಕೂಲ್' ಸ್ಟೈಲ್. ಅವರು ಯಾವುದೇ ಹೊಸ ಟ್ರೆಂಡ್&zwnj;ಗಳ ಹಿಂದೆ ಬೀಳದೆ ಸಾಂಪ್ರದಾಯಿಕ ಉಳಿತಾಯವನ್ನು ನಂಬಿದ್ದರು. ಹಾಗಾಗಿ ನೀವು ಮುಂಚಿತವಾಗಿಯೇ ಯೋಜನೆ ರೂಪಿಸಿ, ಆಗ ಸಂಕಷ್ಟದ ಸಮಯದಲ್ಲಿ ನೀವು ಎಂದಿಗೂ ತಡಕಾಡಬೇಕಾಗಿಲ್ಲ,&quot; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;One of my close friends was fired from Oracle Bangalore.No panic, no stress, and no crying on social media.&amp;nbsp;He straight away came back to his hometown Bhubaneswar&amp;nbsp;He had postal fixed deposits in two joint accounts ₹15 lakh each. One with his parents, and the other in his&hellip;&lt;/p&gt;&lt;p&gt;&mdash; Nayak Satya (@NayakSatya_SG) April 5, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/business/oracle-techie-layoff-savings-plan-viral-financial-planning-tips-kannada-san/articleshow-edvpr5x"/>
        </item>
        <item>
            <title><![CDATA[ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ತರಬೇತಿಯಾದ ಮಂಗಳೂರಿನ 15200 ಅಭ್ಯರ್ಥಿಗಳಲ್ಲಿ ಕೇವಲ 8.45%ಗೆ ಮಾತ್ರ ಜಾಬ್!]]></title>
            <link>https://kannada.asianetnews.com/education/pradhan-mantri-kaushal-vikas-yojana-under-scrutiny-only-1284-candidates-of-trainees-in-dakshina-kannada-get-jobs-gdp/articleshow-eg54t25</link>
            <guid isPermaLink="true">https://kannada.asianetnews.com/education/pradhan-mantri-kaushal-vikas-yojana-under-scrutiny-only-1284-candidates-of-trainees-in-dakshina-kannada-get-jobs-gdp/articleshow-eg54t25</guid>
            <pubDate>Tue, 17 Mar 2026 21:11:52 +0530</pubDate>
            <description><![CDATA[&lt;p&gt;ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ (PMKVY) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರ, ತರಬೇತಿ ಪಡೆದ ಸಾವಿರಾರು ಯುವಕರಲ್ಲಿ ಕೇವಲ 8% ಕ್ಕಿಂತ ಕಡಿಮೆ ಮಂದಿ ಉದ್ಯೋಗ ಪಡೆದಿದ್ದು, ಇದು ಯೋಜನೆಯ ಪರಿಣಾಮಕಾರಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kknf3cvkbx5yr0ga41gx1nhd,imgname-meta-layoffs-16000-jobs-ai-cost-mark-zuckerberg-tech-industry-job-cuts-2026-meta-ai-investment-workforce-reduction-00-20-1773468234611.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ (PMKVY)ಯ ಪರಿಣಾಮಕಾರಿತ್ವದ ಬಗ್ಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗಂಭೀರ ಪ್ರಶ್ನೆಗಳು ಎದ್ದಿವೆ. ಕೇಂದ್ರ ಸರ್ಕಾರದ ಅಧಿಕೃತ ಅಂಕಿಅಂಶಗಳು ಯೋಜನೆಯಡಿ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಅತಿ ಕಡಿಮೆ ಮಂದಿ ಮಾತ್ರ ಉದ್ಯೋಗ ಪಡೆದಿರುವುದನ್ನು ಬಹಿರಂಗಪಡಿಸಿವೆ.&lt;/p&gt;&lt;h2&gt;ದಕ್ಷಿಣ ಕನ್ನಡದಲ್ಲಿ 15,200 ಮಂದಿಗೆ ತರಬೇತಿ &ndash; ಕೇವಲ 8.45% ಮಂದಿಗೆ ಉದ್ಯೋಗ&lt;/h2&gt;&lt;p&gt;ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ, 2025ರ ತನಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ PMKVY ಅಡಿಯಲ್ಲಿ ಒಟ್ಟು 15,200 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಆದರೆ ಇವರಲ್ಲಿ ಕೇವಲ 1,284 ಮಂದಿ, ಅಂದರೆ 8.45% ಅಭ್ಯರ್ಥಿಗಳು ಮಾತ್ರ ಉದ್ಯೋಗ ಪಡೆಯಲು ಯಶಸ್ವಿಯಾಗಿದ್ದಾರೆ. ಈ ಅಂಕಿಅಂಶ ಯೋಜನೆಯ ಪರಿಣಾಮಕಾರಿತ್ವದ ಮೇಲೆ ಅನುಮಾನ ಹುಟ್ಟಿಸುವಂತಾಗಿದೆ.&lt;/p&gt;&lt;h2&gt;ಉಡುಪಿ ಜಿಲ್ಲೆಯಲ್ಲಿ ಸಹ ಸಮಾನ ಪರಿಸ್ಥಿತಿ&lt;/h2&gt;&lt;p&gt;ಉಡುಪಿ ಜಿಲ್ಲೆಯಲ್ಲಿಯೂ ಪರಿಸ್ಥಿತಿ ಹೆಚ್ಚು ಭಿನ್ನವಾಗಿಲ್ಲ. 2025 ಡಿಸೆಂಬರ್ 31ರವರೆಗೆ ಈ ಯೋಜನೆಯಡಿ 8,491 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಇವರಲ್ಲಿ ಕೇವಲ 733 ಮಂದಿ (8.63%) ಮಾತ್ರ ಉದ್ಯೋಗ ಪಡೆದಿದ್ದಾರೆ. ಇದರಿಂದ ಎರಡು ಜಿಲ್ಲೆಗಳಲ್ಲಿಯೂ ತರಬೇತಿ ಮತ್ತು ಉದ್ಯೋಗದ ನಡುವೆ ಸ್ಪಷ್ಟ ಅಂತರವಿರುವುದು ಗೋಚರಿಸುತ್ತದೆ.&lt;/p&gt;&lt;h2&gt;2015ರಲ್ಲಿ ಆರಂಭವಾದ ಯೋಜನೆ &ndash; ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲ&lt;/h2&gt;&lt;p&gt;2015ರಲ್ಲಿ ಪ್ರಾರಂಭವಾದ PMKVY ಯೋಜನೆಯ ಮುಖ್ಯ ಉದ್ದೇಶ ಯುವಕರಿಗೆ ಉದ್ಯೋಗೋನ್ಮುಖ ಕೌಶಲ್ಯಗಳನ್ನು ಕಲಿಸಿ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಾಗಿದೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಂಕಿಅಂಶಗಳು ಈ ಗುರಿ ಸಾಧನೆಯಲ್ಲಿ ಇನ್ನೂ ಸಾಕಷ್ಟು ಕೊರತೆಗಳಿರುವುದನ್ನು ಸೂಚಿಸುತ್ತವೆ.&lt;/p&gt;&lt;h2&gt;ಕಡಿಮೆ ಉದ್ಯೋಗ ಪ್ರಮಾಣ ಆತಂಕಕ್ಕೆ ಕಾರಣ&lt;/h2&gt;&lt;p&gt;ಈ ಅಂಕಿಅಂಶಗಳು ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ನಡುವೆ ಇರುವ ಅಂತರವನ್ನು ಸ್ಪಷ್ಟಪಡಿಸುತ್ತವೆ. ಸಾವಿರಾರು ಯುವಕರು ತರಬೇತಿ ಪಡೆದರೂ, ಅತಿ ಕಡಿಮೆ ಮಂದಿ ಮಾತ್ರ ಉದ್ಯೋಗ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ.&lt;/p&gt;&lt;h2&gt;ತರಬೇತಿ ಮತ್ತು ಉದ್ಯೋಗ ಮಾರುಕಟ್ಟೆ ನಡುವಿನ ಅಸಮತೋಲನ&lt;/h2&gt;&lt;p&gt;ತಜ್ಞರ ಪ್ರಕಾರ, ತರಬೇತಿ ನೀಡಲಾಗುವ ಕೌಶಲ್ಯಗಳು ಮತ್ತು ಉದ್ಯೋಗ ಮಾರುಕಟ್ಟೆಯ ಬೇಡಿಕೆಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಹಲವಾರು ಅಭ್ಯರ್ಥಿಗಳು ಉದ್ಯೋಗಾವಕಾಶಗಳು ಕಡಿಮೆ ಇರುವ ಕ್ಷೇತ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜೊತೆಗೆ, ಕೈಗಾರಿಕೆಗಳೊಂದಿಗೆ ಸಮರ್ಪಕ ಸಂಪರ್ಕದ ಕೊರತೆಯೂ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.&lt;/p&gt;&lt;h2&gt;ಕೈಗಾರಿಕೆ-ತರಬೇತಿ ಕೇಂದ್ರಗಳ ನಡುವೆ ಸಂಪರ್ಕ ಬಲಪಡಿಸಬೇಕು&lt;/h2&gt;&lt;p&gt;ತರಬೇತಿ ಕೇಂದ್ರಗಳು ಮತ್ತು ಉದ್ಯೋಗದಾತರ ನಡುವೆ ಸಮನ್ವಯದ ಕೊರತೆ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಕೈಗಾರಿಕೆಗಳೊಂದಿಗೆ ಬಲವಾದ ಸಂಪರ್ಕ ಇಲ್ಲದಿರುವುದರಿಂದ, ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶಗಳು ದೊರೆಯುವುದಿಲ್ಲ. ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮ ಮತ್ತು ತರಬೇತಿ ವಿಧಾನಗಳನ್ನು ಪರಿಷ್ಕರಿಸುವ ಅಗತ್ಯವಿದೆ.&lt;/p&gt;&lt;h2&gt;ಯೋಜನೆ ಮರುಪರಿಶೀಲನೆಗೆ ಒತ್ತಾಯ&lt;/h2&gt;&lt;p&gt;ಈ ಹಿನ್ನೆಲೆದಲ್ಲಿ PMKVY ಯೋಜನೆಯ ಅನುಷ್ಠಾನವನ್ನು ಸಮಗ್ರವಾಗಿ ಮರುಪರಿಶೀಲಿಸಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಉತ್ತಮ ಮೇಲ್ವಿಚಾರಣೆ, ನವೀಕರಿಸಿದ ಪಠ್ಯಕ್ರಮ, ಹಾಗೂ ಜವಾಬ್ದಾರಿತ್ವದ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಮಾತ್ರ ಫಲಿತಾಂಶಗಳನ್ನು ಸುಧಾರಿಸಲು ಸಾಧ್ಯ ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ.&lt;/p&gt;&lt;h2&gt;ಯುವಕರ ಭವಿಷ್ಯಕ್ಕೆ ಸವಾಲು&lt;/h2&gt;&lt;p&gt;ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿ ಸಾವಿರಾರು ಯುವಕರು ಈ ಯೋಜನೆಗೆ ಸೇರುತ್ತಿದ್ದಾರೆ. ಆದರೆ, ಕಡಿಮೆ ಉದ್ಯೋಗ ಪ್ರಮಾಣವು ಅವರ ಭವಿಷ್ಯದ ಮೇಲೆ ಪ್ರಶ್ನಾರ್ಹ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳದಿದ್ದರೆ, ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆಗಳ ಮೇಲಿನ ನಂಬಿಕೆ ಕುಗ್ಗುವ ಸಾಧ್ಯತೆ ಇದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/education/pradhan-mantri-kaushal-vikas-yojana-under-scrutiny-only-1284-candidates-of-trainees-in-dakshina-kannada-get-jobs-gdp/articleshow-eg54t25"/>
        </item>
        <item>
            <title><![CDATA[ನೋಕಿಯಾದಿಂದ 14,000 ಉದ್ಯೋಗಿಗಳ ವಜಾ: ಭಾರತದ ಟೀಮ್‌ಗೂ ತಟ್ಟಲಿದೆ ಲೇ-ಆಫ್ ಬಿಸಿ]]></title>
            <link>https://kannada.asianetnews.com/private-jobs/nokia-layoffs-14000-employees-india-teams-impact-leadership-change-san/articleshow-eg6awhz</link>
            <guid isPermaLink="true">https://kannada.asianetnews.com/private-jobs/nokia-layoffs-14000-employees-india-teams-impact-leadership-change-san/articleshow-eg6awhz</guid>
            <pubDate>Fri, 27 Mar 2026 19:54:13 +0530</pubDate>
            <description><![CDATA[&lt;p&gt;ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ತಯಾರಿಕಾ ಸಂಸ್ಥೆಯಾಗಿದ್ದ ನೋಕಿಯಾ, ತನ್ನ 14,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಭಾರತದಲ್ಲಿನ ವಹಿವಾಟು ಕುಸಿತ ಮತ್ತು ಸಾಂಸ್ಥಿಕ ಪುನರ್ರಚನೆಯು ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣಗಳಾಗಿವೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jfc96g5hp3d80t7ecaahfs1m,imgname-nokia-c32-5g-smart-phone.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೆಲ್ಸಿಂಕಿ/ಬೆಂಗಳೂರು (ಮಾ.27): &lt;/strong&gt;ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆಯಾಗಿದ್ದ ಫಿನ್ಲೆಂಡ್ ಮೂಲದ ನೋಕಿಯಾ (Nokia), ತನ್ನ ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಲು ಸಜ್ಜಾಗಿದೆ. ಕಂಪನಿಯು ತನ್ನ ಒಟ್ಟು ಕಾರ್ಯಪಡೆಯನ್ನು ಶೇ. 20 ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದು, ಸುಮಾರು 14,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ.&lt;/p&gt;&lt;p&gt;ಮನಿ ಕಂಟ್ರೋಲ್ ವರದಿಯ ಪ್ರಕಾರ, ನೋಕಿಯಾ ಪ್ರಸ್ತುತ ಜಾಗತಿಕವಾಗಿ 74,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಭಾರತವೊಂದರಲ್ಲೇ 17,000 ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಕಂಪನಿಯ ಪುನರ್ರಚನಾ ಯೋಜನೆಯ ಭಾಗವಾಗಿ ಭಾರತದ ವಿವಿಧ ವಿಭಾಗಗಳಲ್ಲಿ ಉದ್ಯೋಗ ಕಡಿತ ಅನಿವಾರ್ಯವಾಗಲಿದೆ ಎಂದು ಹೇಳಲಾಗಿದೆ.&lt;/p&gt;&lt;h2&gt;&lt;strong&gt;ಕುಸಿಯುತ್ತಿರುವ ಭಾರತದ ವಹಿವಾಟು&lt;/strong&gt;&lt;/h2&gt;&lt;p&gt;ನೋಕಿಯಾದ ಭಾರತದ ವ್ಯವಹಾರದಲ್ಲಿ ಗಣನೀಯ ಕುಸಿತ ಕಂಡುಬಂದಿರುವುದು ಈ ಲೇ-ಆಫ್&zwnj;ಗೆ ಪ್ರಮುಖ ಕಾರಣ ಎನ್ನಲಾಗಿದೆ. 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಮಾರಾಟವು ಶೇ. 15 ರಷ್ಟು ಕುಸಿದು 393 ಮಿಲಿಯನ್ ಯುರೋಗಳಿಗೆ (ಅಂದಾಜು 4,290 ಕೋಟಿ ರೂ.) ತಲುಪಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 463 ಮಿಲಿಯನ್ ಯುರೋಗಳಷ್ಟು (ಅಂದಾಜು 5,000 ಕೋಟಿ ರೂ.) ಮಾರಾಟ ಕಂಡಿತ್ತು.&lt;/p&gt;&lt;p&gt;ಸಾಂಸ್ಥಿಕ ಬದಲಾವಣೆಗಳ ನಡುವೆ ಭಾರತದ ಮುಖ್ಯಸ್ಥರಾಗಿದ್ದ ತರುಣ್ ಛಾಬ್ರಾ ತಮ್ಮ ಸ್ಥಾನದಿಂದ ನಿರ್ಗಮಿಸಿದ್ದಾರೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಸಮರ್ ಮಿತ್ತಲ್ ಅವರನ್ನು ಇಂಡಿಯಾ ಕಂಟ್ರಿ ಬ್ಯುಸಿನೆಸ್ ಲೀಡರ್ ಆಗಿ ಮತ್ತು ವಿಭಾ ಮೆಹ್ರಾ ಅವರನ್ನು ಇಂಡಿಯಾ ಕಂಟ್ರಿ ಮ್ಯಾನೇಜರ್ ಆಗಿ ನೇಮಿಸಲಾಗಿದೆ.&lt;/p&gt;&lt;h2&gt;&lt;strong&gt;ಉದ್ಯೋಗ ಕಡಿತಕ್ಕೆ ಕಾರಣಗಳೇನು?&lt;/strong&gt;&lt;/h2&gt;&lt;p&gt;2023 ರಲ್ಲಿ ನೋಕಿಯಾದ ಕ್ಲೌಡ್ ಮತ್ತು ನೆಟ್&zwnj;ವರ್ಕ್ ಸೇವೆಗಳನ್ನು ಮೊಬೈಲ್ ನೆಟ್&zwnj;ವರ್ಕ್&zwnj;ಗಳೊಂದಿಗೆ ವಿಲೀನಗೊಳಿಸಲಾಗಿತ್ತು. ಇದು ಹಲವು ವಿಭಾಗಗಳಲ್ಲಿ ಒಂದೇ ರೀತಿಯ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದನ್ನು ಸರಿಪಡಿಸಲು ಲೇ-ಆಫ್ ಮಾಡಲಾಗುತ್ತಿದೆ. ಈಗಾಗಲೇ ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಗೂಗಲ್ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿವೆ. ಮೆಟಾ ಕೂಡ 15,000 ಉದ್ಯೋಗಿಗಳನ್ನು ತೆಗೆದುಹಾಕುವ ವದಂತಿ ಇದೆ. ನೋಕಿಯಾದ ಪ್ರತಿಸ್ಪರ್ಧಿ ಎರಿಕ್ಸನ್ ಕೂಡ ಕಳೆದ ವರ್ಷ 5,000 ಉದ್ಯೋಗಿಗಳನ್ನು ವಜಾ ಮಾಡಿದ್ದು, ಮತ್ತಷ್ಟು ಕಡಿತಕ್ಕೆ ಯೋಜಿಸಿದೆ.&lt;/p&gt;&lt;p&gt;2018 ರಲ್ಲಿ ನೋಕಿಯಾ ಜಾಗತಿಕವಾಗಿ 1,03,000 ಉದ್ಯೋಗಿಗಳನ್ನು ಹೊಂದಿತ್ತು. ಈಗ ಈ ಸಂಖ್ಯೆ 74,100 ಕ್ಕೆ ಕುಸಿದಿದೆ. ಇದಲ್ಲದೆ, ಯುರೋಪ್&zwnj;ನ ಗ್ರೀಸ್, ಇಟಲಿ, ಜರ್ಮನಿ ಮತ್ತು ಫ್ರಾನ್ಸ್&zwnj;ನಲ್ಲಿ ಸುಮಾರು 1,400 ಉದ್ಯೋಗಗಳನ್ನು ಕಡಿತಗೊಳಿಸಲು ಕಂಪನಿ ಯೋಜಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/private-jobs/nokia-layoffs-14000-employees-india-teams-impact-leadership-change-san/articleshow-eg6awhz"/>
        </item>
        <item>
            <title><![CDATA[18 ವರ್ಷಗಳ ಸುಧೀರ್ಘ ಸಮಯದ ಬಳಿಕ ಅಡೋಬ್ ಸಿಇಒ ಹುದ್ದೆಯಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದ ಭಾರತದ ಶಾಂತನು ನಾರಾಯಣ್!]]></title>
            <link>https://kannada.asianetnews.com/business/indian-origin-executive-adobe-ceo-shantanu-narayen-announces-plan-to-step-down-after-18-years-gdp/articleshow-g9f93po</link>
            <guid isPermaLink="true">https://kannada.asianetnews.com/business/indian-origin-executive-adobe-ceo-shantanu-narayen-announces-plan-to-step-down-after-18-years-gdp/articleshow-g9f93po</guid>
            <pubDate>Fri, 13 Mar 2026 21:49:26 +0530</pubDate>
            <description><![CDATA[ಸುಮಾರು 18 ವರ್ಷಗಳ ಕಾಲ ಅಡೋಬ್ ಸಿಇಒ ಆಗಿ ಸೇವೆ ಸಲ್ಲಿಸಿದ ಭಾರತೀಯ ಮೂಲದ ಶಾಂತನು ನಾರಾಯಣ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಹೊಸ ಸಿಇಒ ನೇಮಕವಾಗುವವರೆಗೆ ಅವರು ಮುಂದುವರಿಯಲಿದ್ದು, ನಂತರ ಮಂಡಳಿಯ ಅಧ್ಯಕ್ಷರಾಗಲಿದ್ದಾರೆ. ಅವರ ನಾಯಕತ್ವದಲ್ಲಿ, ಅಡೋಬ್ ಕ್ಲೌಡ್ ಮಾದರಿಗೆ ಪರಿವರ್ತನೆಗೊಂಡು ಜಾಗತಿಕವಾಗಿ ಬೃಹತ್ ಯಶಸ್ಸು ಸಾಧಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkkzx2pmd0c75gzdhkxprn5w,imgname-adobe-ceo-shantanu-narayen-1773418744532.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕದ ಬಹುರಾಷ್ಟ್ರೀಯ ಸಾಫ್ಟ್&zwnj;ವೇರ್ ಕಂಪನಿ Adobe ನಲ್ಲಿ ಸುಮಾರು 18 ವರ್ಷಗಳ ಕಾಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಸೇವೆ ಸಲ್ಲಿಸಿರುವ ಭಾರತೀಯ ಮೂಲದ ಉದ್ಯಮಿ ಶಾಂತನು ನಾರಾಯಣ್ (Shantanu Narayen) ಅವರು ತಮ್ಮ ಹುದ್ದೆಯಿಂದ ಹಂತಹಂತವಾಗಿ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.&lt;/p&gt;&lt;p&gt;ಆದರೆ ಈ ಪರಿವರ್ತನೆ ತಕ್ಷಣವೇ ಜಾರಿಯಾಗುವುದಿಲ್ಲ. ಕಂಪನಿಯ ನಿರ್ದೇಶಕರ ಮಂಡಳಿ ಹೊಸ ಸಿಇಒ ಅವರನ್ನು ಆಯ್ಕೆ ಮಾಡಿ ನೇಮಕ ಮಾಡುವವರೆಗೆ ಶಾಂತನು ನಾರಾಯಣ್ ಸಿಇಒ ಆಗಿಯೇ ಮುಂದುವರಿಯಲಿದ್ದಾರೆ. ಬಳಿಕ ಅವರು ಕಂಪನಿಯ ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಲಾಗಿದೆ.&lt;/p&gt;&lt;h2&gt;ನೌಕರರಿಗೆ ಆಂತರಿಕ ಮೆಮೊ ಮೂಲಕ ಘೋಷಣೆ&lt;/h2&gt;&lt;p&gt;ಕಂಪನಿಯ ಉದ್ಯೋಗಿಗಳಿಗೆ ಕಳುಹಿಸಿದ ಆಂತರಿಕ ಸಂದೇಶದಲ್ಲಿ ನಾರಾಯಣ್ ತಮ್ಮ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. ಅವರು ಇದನ್ನು ತಮ್ಮ ವೃತ್ತಿಜೀವನದ ಒಂದು &ldquo;ಚಿಂತನೆಗೆ ಸಮಯ&rdquo; ಎಂದು ವರ್ಣಿಸಿದ್ದಾರೆ.&lt;/p&gt;&lt;p&gt;ಇದಲ್ಲದೆ, ಮುಂದಿನ ದಿನಗಳಲ್ಲಿ ನಡೆಯಲಿರುವ ಕಂಪನಿಯ ಆದಾಯ ಪರಿಶೀಲನಾ ಕರೆ ತಮ್ಮ ವೃತ್ತಿಜೀವನದಲ್ಲಿ ಅಡೋಬ್&zwnj;ನಲ್ಲಿ ನಡೆಸುತ್ತಿರುವ 100ನೇ ಗಳಿಕೆ ಕರೆ ಎಂದು ಅವರು ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಕಂಪನಿಯ ನಿರ್ದೇಶಕರ ಮಂಡಳಿ ಈ ಪ್ರಕ್ರಿಯೆಯನ್ನು ಮುನ್ನಡೆಸಲು ಪ್ರಮುಖ ಸ್ವತಂತ್ರ ನಿರ್ದೇಶಕ ಫ್ರಾಂಕ್ ಕಾಲ್ಡೆರೋನಿ (Frank Calderoni) ಅವರನ್ನು ನೇಮಿಸಿದೆ. ಅವರು ಆಂತರಿಕ ಹಾಗೂ ಬಾಹ್ಯ ಅಭ್ಯರ್ಥಿಗಳನ್ನು ಪರಿಶೀಲಿಸುವ ವಿಶೇಷ ಸಮಿತಿಗೆ ಅಧ್ಯಕ್ಷತೆ ವಹಿಸಲಿದ್ದಾರೆ. ನಾರಾಯಣ್ ಅವರ ಪ್ರಕಾರ, ಹೊಸ ಸಿಇಒ ಹುಡುಕುವ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಹಿಡಿಯಬಹುದು.&lt;/p&gt;&lt;h2&gt;ಅಡೋಬ್ ಪರಿವರ್ತನೆಗೆ ಕಾರಣವಾದ ನಾಯಕತ್ವ&lt;/h2&gt;&lt;p&gt;ಶಾಂತನು ನಾರಾಯಣ್ 2007ರಲ್ಲಿ ಅಡೋಬ್ ಸಿಇಒ ಆಗಿ ಅಧಿಕಾರ ಸ್ವೀಕರಿಸಿದಾಗ ಕಂಪನಿಯ ಪರಿಸ್ಥಿತಿ ಇಂದಿನಂತಿರಲಿಲ್ಲ. ಆಗ ಕಂಪನಿಯಲ್ಲಿ ಸುಮಾರು 3,000 ಉದ್ಯೋಗಿಗಳು ಮಾತ್ರ ಇದ್ದರು ಮತ್ತು ವಾರ್ಷಿಕ ಆದಾಯ 1 ಬಿಲಿಯನ್ ಡಾಲರ್&zwnj;ಗಿಂತ ಕಡಿಮೆ ಇತ್ತು.&lt;/p&gt;&lt;p&gt;ನಾರಾಯಣ್ ಅವರ ನೇತೃತ್ವದಲ್ಲಿ ಕಂಪನಿಯು ತನ್ನ ಸಾಂಪ್ರದಾಯಿಕ ಬಾಕ್ಸ್ಡ್ ಸಾಫ್ಟ್&zwnj;ವೇರ್ ಮಾದರಿಯಿಂದ ದೂರ ಸರಿದು ಚಂದಾದಾರಿಕೆ ಆಧಾರಿತ ಕ್ಲೌಡ್ ಮಾದರಿಗೆ ಪರಿವರ್ತನೆಯಾಯಿತು. ಈ ತಂತ್ರದ ಭಾಗವಾಗಿ ಕಂಪನಿಯು Adobe Creative Cloud ಸೇವೆಯನ್ನು ಪರಿಚಯಿಸಿತು. ಈ ಕ್ರಮವು ಅಡೋಬ್ ಅನ್ನು ವಿಶ್ವದ ಅತಿ ದೊಡ್ಡ SaaS (Software-as-a-Service) ಕಂಪನಿಗಳಲ್ಲಿ ಒಂದಾಗಿ ರೂಪಿಸಿತು.&lt;/p&gt;&lt;p&gt;ಇಂದು ಅಡೋಬ್&zwnj;ನಲ್ಲಿ 30,000 ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಕಂಪನಿಯ ವಾರ್ಷಿಕ ಆದಾಯ 25 ಬಿಲಿಯನ್ ಡಾಲರ್&zwnj;ಗಿಂತ ಹೆಚ್ಚು ಆಗಿದೆ. ಅವರ ನೇತೃತ್ವದ ಅವಧಿಯಲ್ಲಿ ಕಂಪನಿಯ ಷೇರು ಮೌಲ್ಯವೂ ಹಲವು ಪಟ್ಟು ಏರಿಕೆಯಾಗಿದೆ.&lt;/p&gt;&lt;h2&gt;ಕೆಲವು ಸವಾಲುಗಳೂ ಎದುರಿಸಿದ ಕಂಪನಿ&lt;/h2&gt;&lt;p&gt;ಆದರೆ ನಾರಾಯಣ್ ಅವರ ಅವಧಿಯಲ್ಲಿ ಎಲ್ಲ ನಿರ್ಧಾರಗಳೂ ಯಶಸ್ವಿಯಾಗಿಲ್ಲ. ವಿನ್ಯಾಸ ತಂತ್ರಜ್ಞಾನ ಕಂಪನಿ ಫಿಗ್ಮಾವನ್ನು ಸ್ವಾಧೀನಪಡಿಸಿಕೊಳ್ಳಲು ಅಡೋಬ್ ಸುಮಾರು 20 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಘೋಷಿಸಿತ್ತು. ಆದರೆ ನಿಯಂತ್ರಣ ಸಂಸ್ಥೆಗಳ ವಿರೋಧದ ಹಿನ್ನೆಲೆಯಲ್ಲಿ ಈ ಒಪ್ಪಂದ ವಿಫಲವಾಯಿತು. ಇದರ ಪರಿಣಾಮವಾಗಿ ಅಡೋಬ್ ಸುಮಾರು 1 ಬಿಲಿಯನ್ ಡಾಲರ್ ಬ್ರೇಕಪ್ ಶುಲ್ಕವನ್ನು ಪಾವತಿಸಬೇಕಾಯಿತು.&lt;/p&gt;&lt;p&gt;ಇದರ ಜೊತೆಗೆ, 2026ರಲ್ಲಿ ಕಂಪನಿಯ ಷೇರುಗಳು ಸುಮಾರು 23 ಶೇಕಡಾ ಕುಸಿತ ಕಂಡಿವೆ. ಉತ್ಪಾದಕ ಕೃತಕ ಬುದ್ಧಿಮತ್ತೆ (Generative AI) ತಂತ್ರಜ್ಞಾನಗಳು ಸಾಫ್ಟ್&zwnj;ವೇರ್ ಉದ್ಯಮವನ್ನು ಬದಲಾಯಿಸುವ ಸಾಧ್ಯತೆಯ ಬಗ್ಗೆ ಹೂಡಿಕೆದಾರರು ಹೊಂದಿರುವ ಆತಂಕ ಇದಕ್ಕೆ ಪ್ರಮುಖ ಕಾರಣವೆಂದು ವಿಶ್ಲೇಷಕರು ಹೇಳಿದ್ದಾರೆ.&lt;/p&gt;&lt;h2&gt;ಆದಾಯದಲ್ಲಿ ಉತ್ತಮ ಸಾಧನೆ&lt;/h2&gt;&lt;p&gt;ಈ ಎಲ್ಲಾ ಸವಾಲುಗಳ ನಡುವೆಯೂ ಅಡೋಬ್ ತನ್ನ ಇತ್ತೀಚಿನ ಹಣಕಾಸು ವರದಿಯಲ್ಲಿ ಉತ್ತಮ ಸಾಧನೆ ತೋರಿಸಿದೆ. ಕಂಪನಿಯ ಮೊದಲ ತ್ರೈಮಾಸಿಕ ಆದಾಯ 6.40 ಬಿಲಿಯನ್ ಡಾಲರ್ ತಲುಪಿದ್ದು, ಇದು ಹಿಂದಿನ ವರ್ಷದಿಗಿಂತ ಸುಮಾರು 12 ಶೇಕಡಾ ಹೆಚ್ಚಾಗಿದೆ. ವಾಲ್ ಸ್ಟ್ರೀಟ್ ಅಂದಾಜಿಸಿದ್ದ 6.28 ಬಿಲಿಯನ್ ಡಾಲರ್ಗಿಂತಲೂ ಹೆಚ್ಚಿನ ಆದಾಯವನ್ನು ಕಂಪನಿ ದಾಖಲಿಸಿದೆ.&lt;/p&gt;&lt;p&gt;ಅದೇ ಸಮಯದಲ್ಲಿ, ಹೊಂದಾಣಿಕೆಯ ಪ್ರತಿ ಷೇರು ಲಾಭ (EPS) 6.06 ಡಾಲರ್ ತಲುಪಿದ್ದು, ವಿಶ್ಲೇಷಕರು ನಿರೀಕ್ಷಿಸಿದ್ದ 5.87 ಡಾಲರ್ಗಿಂತ ಹೆಚ್ಚಾಗಿದೆ. ಕಂಪನಿಯ AI ಆಧಾರಿತ ಉತ್ಪನ್ನಗಳಿಂದ ಆಗುವ ಆದಾಯವೂ ವರ್ಷದಿಂದ ವರ್ಷಕ್ಕೆ ಮೂರು ಪಟ್ಟು ಹೆಚ್ಚಾಗಿದೆ.&lt;/p&gt;&lt;h2&gt;ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಡೋಬ್&lt;/h2&gt;&lt;p&gt;ಕಂಪನಿಯ ವಿವಿಧ ಉತ್ಪನ್ನಗಳಾದ Adobe Acrobat, Adobe Express, Adobe Firefly ಮತ್ತು ಕ್ರಿಯೇಟಿವ್ ಕ್ಲೌಡ್ ಸೇವೆಗಳನ್ನು ಸೇರಿಸಿ ಅಡೋಬ್ ಈಗ ಪ್ರತಿ ತಿಂಗಳು ಸುಮಾರು 850 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಇದು ಕಳೆದ ವರ್ಷದಿಗಿಂತ ಸುಮಾರು 17 ಶೇಕಡಾ ಹೆಚ್ಚಳವಾಗಿದೆ.&lt;/p&gt;&lt;h2&gt;ಉದ್ಯೋಗಿಗಳಿಗೆ ನಾರಾಯಣ್ ಸಂದೇಶ&lt;/h2&gt;&lt;p&gt;ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ನಾರಾಯಣ್ ತಮ್ಮ 28 ವರ್ಷಗಳ ಅಡೋಬ್ ಪಯಣವನ್ನು ನೆನಪಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಕಂಪನಿಯು 3,000 ಉದ್ಯೋಗಿಗಳಿಂದ 30,000ಕ್ಕೂ ಹೆಚ್ಚು ಉದ್ಯೋಗಿಗಳಿರುವ ಜಾಗತಿಕ ತಂತ್ರಜ್ಞಾನ ಸಂಸ್ಥೆಯಾಗಿ ಬೆಳೆಯಿತು ಎಂದು ಅವರು ಹೇಳಿದ್ದಾರೆ. ಅಡೋಬ್&zwnj;ನ ಧ್ಯೇಯವಾದ &ldquo;ಎಲ್ಲರನ್ನೂ ಸೃಜನಶೀಲತೆಯತ್ತ ಸಬಲೀಕರಿಸುವುದು&rdquo; ಎಂಬ ಗುರಿ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಇನ್ನಷ್ಟು ದೊಡ್ಡ ಅವಕಾಶಗಳನ್ನು ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;ಅಡೋಬ್&zwnj;ನ ಮುಂದಿನ ಅಧ್ಯಾಯ&lt;/h2&gt;&lt;p&gt;ನಾರಾಯಣ್ ಅವರ ಪ್ರಕಾರ, ಸೃಜನಶೀಲತೆಯ ಮುಂದಿನ ಯುಗವನ್ನು AI ತಂತ್ರಜ್ಞಾನ, ಹೊಸ ಕಾರ್ಯಪ್ರವಾಹಗಳು ಮತ್ತು ಹೊಸ ಅಭಿವ್ಯಕ್ತಿ ರೂಪಗಳು ರೂಪಿಸಲಿವೆ. ಅಡೋಬ್ ಭವಿಷ್ಯವನ್ನು ಕೇವಲ ನಿರೀಕ್ಷಿಸುವ ಕಂಪನಿಯಲ್ಲ; ಅದನ್ನು ರೂಪಿಸುವ ಮತ್ತು ಮುನ್ನಡೆಸುವ ಸಂಸ್ಥೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ಸಿಇಒ ಆಯ್ಕೆಯಾದ ನಂತರವೂ ಅಡೋಬ್&zwnj;ನ ಬೆಳವಣಿಗೆಯ ಪಯಣ ಮುಂದುವರಿಯಲಿದೆ ಎಂದು ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಂಪನಿಯ ಅತ್ಯುತ್ತಮ ದಿನಗಳು ಇನ್ನೂ ಮುಂದೆ ಇರುವುದಾಗಿ ಅವರು ಹೇಳಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/business/indian-origin-executive-adobe-ceo-shantanu-narayen-announces-plan-to-step-down-after-18-years-gdp/articleshow-g9f93po"/>
        </item>
        <item>
            <title><![CDATA[BOB ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಅಚ್ಚರಿಯ ನೇಮಕಾತಿ: 103 ಹುದ್ದೆಗಳು! ಇಂದೇ ಅರ್ಜಿ ಸಲ್ಲಿಸಿ]]></title>
            <link>https://kannada.asianetnews.com/jobs/bob-caps-recruitment-2026-apply-online-for-103-business-development-manager-posts-gdp/articleshow-h0xd5xr</link>
            <guid isPermaLink="true">https://kannada.asianetnews.com/jobs/bob-caps-recruitment-2026-apply-online-for-103-business-development-manager-posts-gdp/articleshow-h0xd5xr</guid>
            <pubDate>Thu, 26 Mar 2026 16:14:20 +0530</pubDate>
            <description><![CDATA[ಬ್ಯಾಂಕ್ ಆಫ್ ಬರೋಡಾ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ (BOB Caps) 103 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ ಮತ್ತು ತಂಡದ ನಾಯಕ ಹುದ್ದೆಗಳಿಗೆ 12ನೇ ತರಗತಿ ಪಾಸಾದವರಿಂದ ಸ್ನಾತಕೋತ್ತರ ಪದವೀಧರರವರೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01jhsyn0m8wnh4zvxfhe1aabfq,imgname-bank-of-baroda.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಒದಗಿದ್ದು, ಬ್ಯಾಂಕ್ ಆಫ್ ಬರೋಡಾ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ (BOB Caps) ತನ್ನ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್&zwnj;ಲೈನ್ ಹಾಗೂ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;ಸಂಸ್ಥೆ ಮತ್ತು ಹುದ್ದೆಗಳ ವಿವರ&lt;/h2&gt;&lt;p&gt;ಸಂಸ್ಥೆ ಹೆಸರು: BOB ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್&lt;/p&gt;&lt;p&gt;ಒಟ್ಟು ಹುದ್ದೆಗಳು: 103&lt;/p&gt;&lt;p&gt;ಉದ್ಯೋಗ ಸ್ಥಳ: ಅಖಿಲ ಭಾರತ&lt;/p&gt;&lt;p&gt;ಅಪ್ಲಿಕೇಶನ್ ಮೋಡ್: ಆನ್&zwnj;ಲೈನ್ / ಇಮೇಲ್&lt;/p&gt;&lt;h2&gt;ಹುದ್ದೆಗಳ ವಿಂಗಡಣೆ ಕೆಳಗಿನಂತಿದೆ:&lt;/h2&gt;&lt;p&gt;ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ (Business Development Manager - BDM, Off Roll) &ndash; 95 ಹುದ್ದೆಗಳು&lt;/p&gt;&lt;p&gt;ತಂಡದ ನಾಯಕ (Team Leader - TL, Off Roll) &ndash; 08 ಹುದ್ದೆಗಳು&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ ಮತ್ತು ಅನುಭವ&lt;/h2&gt;&lt;p&gt;ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು:&lt;/p&gt;&lt;p&gt;ಕನಿಷ್ಠ 12ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ&lt;/p&gt;&lt;p&gt;ಪದವಿ / ಸ್ನಾತಕೋತ್ತರ ಪದವಿ ಹೊಂದಿರಬೇಕು&lt;/p&gt;&lt;p&gt;ಇದಲ್ಲದೆ, ಬಂಡವಾಳ ಮಾರುಕಟ್ಟೆ (Capital Market) ಕ್ಷೇತ್ರದಲ್ಲಿ ಕನಿಷ್ಠ 6 ತಿಂಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆ ತೆರೆಯುವ ಹಾಗೂ ಬ್ರೋಕಿಂಗ್ ಉತ್ಪನ್ನಗಳನ್ನು ಮಾರಾಟ ಮಾಡುವ ಅನುಭವ ಇದ್ದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ.&lt;/p&gt;&lt;h2&gt;ವೇತನ ಮತ್ತು ವಯೋಮಿತಿ&lt;/h2&gt;&lt;p&gt;ಅಧಿಕೃತ ಅಧಿಸೂಚನೆಯಲ್ಲಿ ವೇತನ ಮತ್ತು ವಯೋಮಿತಿ ಕುರಿತು ಸ್ಪಷ್ಟ ಮಾಹಿತಿ ನೀಡಲಾಗಿಲ್ಲ. ಆದಾಗ್ಯೂ, ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಯ ನಿಯಮಾನುಸಾರ ವೇತನ ನೀಡಲಾಗುತ್ತದೆ.&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ&lt;/h2&gt;&lt;p&gt;ಅಭ್ಯರ್ಥಿಗಳನ್ನು ನೇರ ಸಂದರ್ಶನ (Direct Interview) ಮೂಲಕ ಆಯ್ಕೆ ಮಾಡಲಾಗುತ್ತದೆ.&lt;/p&gt;&lt;p&gt;ಆಯ್ಕೆ ವಿಧಾನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಸೂಕ್ತ.&lt;/p&gt;&lt;h2&gt;ಅರ್ಜಿ ಶುಲ್ಕ&lt;/h2&gt;&lt;p&gt;ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ, ಇದು ಅಭ್ಯರ್ಥಿಗಳಿಗೆ ಹೆಚ್ಚುವರಿ ಲಾಭವಾಗಿದೆ.&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;p&gt;ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:&lt;/p&gt;&lt;p&gt;ಅಧಿಕೃತ ವೆಬ್&zwnj;ಸೈಟ್ https://bobcaps.in ಗೆ ಭೇಟಿ ನೀಡಿ&lt;/p&gt;&lt;p&gt;ನೇಮಕಾತಿ ಅಧಿಸೂಚನೆಯನ್ನು ಡೌನ್&zwnj;ಲೋಡ್ ಮಾಡಿ ಮತ್ತು ಸಂಪೂರ್ಣವಾಗಿ ಓದಿ&lt;/p&gt;&lt;p&gt;ಅರ್ಜಿಗೆ ಸಂಬಂಧಿಸಿದ ಸೂಚನೆಗಳನ್ನು ಗಮನಿಸಿ&lt;/p&gt;&lt;p&gt;ಅಗತ್ಯ ದಾಖಲೆಗಳೊಂದಿಗೆ ಆನ್&zwnj;ಲೈನ್ ಅಥವಾ ಇಮೇಲ್ ಮೂಲಕ ಅರ್ಜಿ ಸಲ್ಲಿಸಿ&lt;/p&gt;&lt;p&gt;ಸಲ್ಲಿಸಿದ ಮಾಹಿತಿಯನ್ನು ಪರಿಶೀಲಿಸಿ&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅಧಿಸೂಚನೆ ಪ್ರಕಟವಾದ ದಿನಾಂಕ: 16 ಮಾರ್ಚ್ 2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಮಾರ್ಚ್ 2026&lt;/p&gt;&lt;p&gt;BOB ಕ್ಯಾಪಿಟಲ್ ಮಾರ್ಕೆಟ್ಸ್ ನೇಮಕಾತಿ 2026 ಮೂಲಕ ಬ್ಯಾಂಕಿಂಗ್ ಮತ್ತು ಕ್ಯಾಪಿಟಲ್ ಮಾರ್ಕೆಟ್ ಕ್ಷೇತ್ರದಲ್ಲಿ ಕೆಲಸ ಮಾಡಲು ಉತ್ತಮ ಅವಕಾಶ ಲಭ್ಯವಾಗಿದೆ. &amp;nbsp;ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಮರೆಯಬಾರದು.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/bob-caps-recruitment-2026-apply-online-for-103-business-development-manager-posts-gdp/articleshow-h0xd5xr"/>
        </item>
        <item>
            <title><![CDATA[ಬೆಂಗಳೂರಿನ BEML ನಲ್ಲಿ ಉನ್ನತ ಹುದ್ದೆ: 3 ಲಕ್ಷದವರೆಗೂ ವೇತನ, ಯಾರಿಗುಂಟು? ಯಾರಿಗಿಲ್ಲ?]]></title>
            <link>https://kannada.asianetnews.com/jobs/beml-recruitment-2026-engineer-and-manager-jobs-in-bengaluru-gdp/articleshow-htpeiyk</link>
            <guid isPermaLink="true">https://kannada.asianetnews.com/jobs/beml-recruitment-2026-engineer-and-manager-jobs-in-bengaluru-gdp/articleshow-htpeiyk</guid>
            <pubDate>Tue, 24 Mar 2026 19:08:38 +0530</pubDate>
            <description><![CDATA[ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಬೆಂಗಳೂರಿನಲ್ಲಿ 13 ಎಂಜಿನಿಯರ್ ಮತ್ತು ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಪದವಿ, ಡಿಪ್ಲೊಮಾ, ಮತ್ತು ಎಂ.ಟೆಕ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ₹3,00,000 ವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01dp376m1k0ejkbs3sey6xrjyb,imgname-pjimage--8--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಸುವರ್ಣಾವಕಾಶವನ್ನು ನೀಡಿದೆ. ಸಂಸ್ಥೆಯು ಎಂಜಿನಿಯರ್ ಮತ್ತು ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;ಹುದ್ದೆಗಳ ವಿವರ&lt;/h2&gt;&lt;p&gt;ಸಂಸ್ಥೆ ಹೆಸರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML)&lt;/p&gt;&lt;p&gt;ಹುದ್ದೆಗಳು: ಎಂಜಿನಿಯರ್, ಮ್ಯಾನೇಜರ್&lt;/p&gt;&lt;p&gt;ಒಟ್ಟು ಹುದ್ದೆಗಳು: 13&lt;/p&gt;&lt;p&gt;ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ&lt;/p&gt;&lt;h2&gt;ವಿದ್ಯಾರ್ಹತೆ:&lt;/h2&gt;&lt;p&gt;ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರಬೇಕು:&lt;/p&gt;&lt;p&gt;ಪದವಿ (Degree)&lt;/p&gt;&lt;p&gt;ಡಿಪ್ಲೊಮಾ (Diploma)&lt;/p&gt;&lt;p&gt;ಎಂ.ಟೆಕ್ (M.Tech)&lt;/p&gt;&lt;h2&gt;ವೇತನ ಶ್ರೇಣಿ:&lt;/h2&gt;&lt;p&gt;ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹40,000 ರಿಂದ ₹3,00,000 ವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ:&lt;/p&gt;&lt;h2&gt;ವಯೋಮಿತಿ&lt;/h2&gt;&lt;p&gt;ಕನಿಷ್ಠ ವಯಸ್ಸು: 18 ವರ್ಷ&lt;/p&gt;&lt;p&gt;ಗರಿಷ್ಠ ವಯಸ್ಸು: 57 ವರ್ಷ&lt;/p&gt;&lt;h3&gt;ವಯೋಮಿತಿ ಸಡಿಲಿಕೆ&lt;/h3&gt;&lt;p&gt;ಒಬಿಸಿ (NCL): 3 ವರ್ಷ&lt;/p&gt;&lt;p&gt;ಎಸ್&zwnj;ಸಿ/ಎಸ್&zwnj;ಟಿ: 5 ವರ್ಷ&lt;/p&gt;&lt;p&gt;ಪಿಡಬ್ಲ್ಯೂಡಿ: 10 ವರ್ಷ&lt;/p&gt;&lt;h2&gt;ಅರ್ಜಿ ಶುಲ್ಕ&lt;/h2&gt;&lt;p&gt;ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ: ₹500&lt;/p&gt;&lt;p&gt;ಎಸ್&zwnj;ಸಿ / ಎಸ್&zwnj;ಟಿ / ಪಿಡಬ್ಲ್ಯೂಡಿ: ಶುಲ್ಕ ಇಲ್ಲ&lt;/p&gt;&lt;p&gt;ಪಾವತಿ ವಿಧಾನ: ಆನ್&zwnj;ಲೈನ್&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ&lt;/h2&gt;&lt;p&gt;ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳ ಮೂಲಕ ನಡೆಯಲಿದೆ:&lt;/p&gt;&lt;p&gt;ನೇರ ಸಂದರ್ಶನ (Interview)&lt;/p&gt;&lt;p&gt;ದಾಖಲೆಗಳ ಪರಿಶೀಲನೆ (Document Verification)&lt;/p&gt;&lt;p&gt;ವೈದ್ಯಕೀಯ ಪರೀಕ್ಷೆ (Medical Test)&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;p&gt;ಅರ್ಜಿ ಸಲ್ಲಿಸಲು ಈ ಕ್ರಮಗಳನ್ನು ಅನುಸರಿಸಿ:&lt;/p&gt;&lt;p&gt;ಮೊದಲು BEML ಅಧಿಕೃತ ವೆಬ್&zwnj;ಸೈಟ್ bemlindia.in ಗೆ ಭೇಟಿ ನೀಡಿ&lt;/p&gt;&lt;p&gt;&lsquo;Careers&rsquo; ವಿಭಾಗಕ್ಕೆ ತೆರಳಿ ಸಂಬಂಧಿತ ಅಧಿಸೂಚನೆಯನ್ನು ಡೌನ್&zwnj;ಲೋಡ್ ಮಾಡಿ ಓದಿ&lt;/p&gt;&lt;p&gt;ಅರ್ಹತೆ ದೃಢಪಡಿಸಿದ ನಂತರ &lsquo;Apply Online&rsquo; ಲಿಂಕ್ ಕ್ಲಿಕ್ ಮಾಡಿ&lt;/p&gt;&lt;p&gt;ಅಗತ್ಯ ದಾಖಲೆಗಳನ್ನು ಅಪ್&zwnj;ಲೋಡ್ ಮಾಡಿ&lt;/p&gt;&lt;p&gt;ಅರ್ಜಿ ಶುಲ್ಕ ಪಾವತಿಸಿ ಫಾರ್ಮ್ ಸಲ್ಲಿಸಿ&lt;/p&gt;&lt;p&gt;ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಪ್ರತಿಯನ್ನು ಡೌನ್&zwnj;ಲೋಡ್/ಪ್ರಿಂಟ್ ಮಾಡಿ&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅರ್ಜಿ ಆರಂಭ ದಿನಾಂಕ: ಮಾರ್ಚ್ 11, 2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 30, 2026&lt;/p&gt;&lt;h2&gt;ಅಂತಿಮ ಮಾತು&lt;/h2&gt;&lt;p&gt;BEMLನಲ್ಲಿ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶವಾಗಿದ್ದು, ವಿಶೇಷವಾಗಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದೆ. ಉತ್ತಮ ವೇತನ ಮತ್ತು ಸರ್ಕಾರಿ ಸಂಸ್ಥೆಯ ಭದ್ರತೆ ಇರುವುದರಿಂದ, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/beml-recruitment-2026-engineer-and-manager-jobs-in-bengaluru-gdp/articleshow-htpeiyk"/>
        </item>
        <item>
            <title><![CDATA[ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಆಗಲು ಗೂಗಲ್‌ನ 2 ಕೋಟಿ ವೇತನದ ಕೆಲಸ ಬಿಟ್ಟ ಬೆಂಗಳೂರು ಟೆಕ್ಕಿ]]></title>
            <link>https://kannada.asianetnews.com/private-jobs/bengaluru-based-techie-resigns-her-2-crore-salary-google-job-to-become-content-creater/articleshow-iyp74vm</link>
            <guid isPermaLink="true">https://kannada.asianetnews.com/private-jobs/bengaluru-based-techie-resigns-her-2-crore-salary-google-job-to-become-content-creater/articleshow-iyp74vm</guid>
            <pubDate>Fri, 13 Mar 2026 13:29:50 +0530</pubDate>
            <description><![CDATA[&lt;p&gt;ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಆಗುವುದಕ್ಕಾಗಿ 35 ವರ್ಷದ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಗೂಗಲ್&zwnj; ಕಂಪನಿಯಲ್ಲಿದ್ದ 2 ಕೋಟಿ ವೇತನದ ಕೆಲಸವನ್ನೇ ತೊರೆದಿದ್ದಾಗಿ ಹೇಳಿಕೊಂಡಿದ್ದು, ಇದು ಅನೇಕರನ್ನು ಅಚ್ಚರಿಗೀಡು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkk2cmf3xfey1ja8h0bw2000,imgname-bengaluru-woman-left-google-job-for-become-content-creater-1773387796960.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಆಗಲು 2 ಕೋಟಿ ವೇತನದ ಕೆಲಸ ತೊರೆದ ಮಹಿಳೆ&lt;/strong&gt;&lt;/h2&gt;&lt;p&gt;ಇದು ಸೋಶಿಯಲ್ ಮೀಡಿಯಾ ಹಾಗೂ ಕಂಟೆಂಟ್ ಕ್ರಿಯೇಟರ್&zwnj;ಗಳ ಜಮಾನವಾಗಿದ್ದು, ಅನೇಕರು ಇದನ್ನೇ ಪ್ರಮುಖ ವೃತ್ತಿಯಾಗಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದಾರೆ. ಯಾರ ಮೇಲಾಧಿಕಾರಿಗಳ ಆದೇಶಗಳಿಲ್ಲದ ಈ ಕೆಲಸದ ಮೂಲಕ ತಮಗೇ ತಾವೇ ಬಾಸ್ ಆಗ್ಬೇಕು ಅಂದುಕೊಳ್ಳುವ ಬಹುತೇಕರು ತಾವೊಬ್ಬ ಕಂಟೆಂಟ್ ಕ್ರಿಯೇಟರ್&zwnj; ಆಗಬೇಕು ಎಂದು ಬಯಸುತ್ತಿದ್ದಾರೆ. ಮನೆಯಲ್ಲೇ ಕುಳಿತಿರುವುದಕ್ಕಿಂತ ಅಥವಾ ದಿನವೂ ಮಾಡಿದ ಕೆಲಸವನ್ನೇ ಮಾಡುತ್ತಾ ಹೋದ ಕಚೇರಿಗೆ ಹೋಗುವುದಕ್ಕಿಂತ ಯಾವುದಾದರು ಒಂದು ಸದಾ ಹೊಸತನವಿರುವ ಕೆಲಸಕ್ಕೆ ಮಾಡಬೇಕು ಎಂದು ಅನೇಕರು ಆಸೆ ಪಡುತ್ತಿದ್ದು, ಈ ಕಂಟೆಂಟ್ ಕ್ರಿಯೇಟರ್ ಅಥವಾ ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಆಗುವ ಕೆಲಸ ಅನೇಕರನ್ನು ಆಕರ್ಷಿಸುತ್ತಿದೆ. ಆದರೆ ಈ ಕೆಲಸ 2 ಕೋಟಿ ವೇತನವಿರುವ ಗೂಗಲ್&zwnj;ನಂತಹ ಪ್ರತಿಷ್ಠಿತ ಕಂಪನಿಯ ಉದ್ಯೋಗವಿರುವ ಟೆಕ್ಕಿಗಳನ್ನು ಉದ್ಯೋಗ ಬಿಡುವಂತೆ ಮಾಡುತ್ತದೆ ಎಂದರೆ ಈ ಸೋಶಿಯಲ್ ಮೀಡಿಯಾ ಕ್ರೇಜ್ ಹೇಗಿದೆ ಎಂಬುದನ್ನು ನೀವೆ ಅರ್ಥ ಮಾಡಿಕೊಳ್ಳಬಹುದು.&lt;/p&gt;&lt;p&gt;ಹೌದು ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಆಗುವುದಕ್ಕಾಗಿ 35 ವರ್ಷದ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಗೂಗಲ್&zwnj; ಕಂಪನಿಯಲ್ಲಿದ್ದ 2 ಕೋಟಿ ವೇತನದ ಕೆಲಸವನ್ನೇ ತೊರೆದಿದ್ದಾಗಿ ಹೇಳಿಕೊಂಡಿದ್ದು, ಇದು ಅನೇಕರನ್ನು ಅಚ್ಚರಿಗೀಡು ಮಾಡಿದೆ. ಉದ್ಯೋಗಿಗಳಿಗೆ ಅತ್ಯುತ್ತಮ ವಿಶ್ವ ಮಟ್ಟದ ಸವಲತ್ತುಗಳನ್ನು ಒದಗಿಸುವ ಗೂಗಲ್ ಕಂಪನಿಯಲ್ಲಿ ಕೆಲಸ ಸಿಗೋದೆ ಮಹಾನ್ ಸಾಧನೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ಅಲ್ಲದೇ ಗೂಗಲ್&zwnj;ನಲ್ಲಿ ಕೆಲಸ ಪಡೆಯುವುದಕ್ಕೋಸ್ಕರ ಸಾಕಷ್ಟು ಶ್ರಮ ಪಡುತ್ತಾರೆ. ಆದರೆ ಈ ಯುವತಿ ಮಾತ್ರ ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಆಗುವುದಕ್ಕೋಸ್ಕರ ಇಂತಹ ಭಾರಿ ವೇತನದ ಕೆಲಸವನ್ನೇ ಬಿಟ್ಟಿದ್ದಾರೆ.&lt;/p&gt;&lt;h3&gt;&lt;strong&gt;10 ವರ್ಷಗಳ ಕಾಲದ ಗೂಗಲ್ ಉದ್ಯೋಗಕ್ಕೆ ಗುಡ್ ಬಾಯ್&lt;/strong&gt;&lt;/h3&gt;&lt;p&gt;ಅಂದಹಾಗೆ ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಆಗುವುದಕ್ಕೋಸ್ಕರ ಕೆಲಸ ಬಿಟ್ಟ ಯುವತಿಯ ಹೆಸರು ಶ್ರೀಗೀತಾ ಶ್ರೀನಿವಾಸ್, ಬೆಂಗಳೂರು ಮೂಲದ ಈ ಯುವತಿ ಪ್ರಧಾನ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ 2025ರ ಡಿಸೆಂಬರ್&zwnj;ನಲ್ಲಿ ಅವರು ಈ ಕೆಲಸವನ್ನು ತೊರೆಯುವ ಮೂಲಕ ಗೂಗಲ್&zwnj; ಜೊತೆಗಿನ 10 ವರ್ಷಗಳ ಬಾಂಧವ್ಯಕ್ಕೆ ಗುಡ್ ಬಾಯ್ ಹೇಳಿದ್ದಾರೆ. ಗೂಗಲ್&zwnj;ನಲ್ಲಿ ಉದ್ಯೋಗದಲ್ಲಿದ್ದ ಸಮಯದಲ್ಲಿ ಅವರು ಹೈದರಾಬಾದ್ಮ ಡಬ್ಲಿನ್ ಐರ್ಲೆಂಡ್ , ಮೊದಲಾದ ಕಡೆ ಕೆಲಸ ಮಾಡಿದ್ದು, ಅಲ್ಲಿ ಗೂಗಲ್&zwnj;ನ ಪ್ರಮುಖ ಯುರೋಪಿಯನ್ ಫ್ಯಾಷನ್ ಕ್ಲೈಂಟ್&zwnj;ಗಳಲ್ಲಿ ಒಂದನ್ನು ನಿರ್ವಹಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಝೋಮ್ಯಾಟೋ ಮೂಲಕ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿ ಕಾಲು ಸಿಕ್ತು ಎಂದ ಗ್ರಾಹಕ: ವೀಡಿಯೋ ವೈರಲ್&lt;/strong&gt;&lt;/p&gt;&lt;p&gt;ತಾವು ಗೂಗಲ್ ಕೆಲಸ ಬಿಡುವುದನ್ನು ಕುಟುಂಬ ಹಾಗೂ ಸ್ನೇಹಿತರಿಗೆ ತಿಳಿಸುವುದಕ್ಕಾಗಿ ಅವರು ಮಾಡಿದ ವಿಡಿಯೋದಲ್ಲಿ ತನಗೆ ಇನ್ನೂ ಎಲ್ಲವೂ ಅರ್ಥವಾಗಿಲ್ಲ, ಹಾಗೂ ತನ್ನ ವೇತನದ ಚೆಕ್ ಎಲ್ಲಿಂದ ಬರುತ್ತದೆ ಎಂಬುದು ನನಗೆ ತಿಳಿದಿಲ್ಲ ಎಂದು ಅವರು ಹೇಳಿಕೊಂಡಿದ್ದಾಳೆ. ಈ ವೀಡಿಯೋ ಅವರಿಗಿದ್ದ 900 ಫಾಲೋವರ್ಸ್&zwnj;ಗಳ ಸಂಖ್ಯೆಯನ್ನು 3000ಕ್ಕೆ ಏರಿಕೆ ಮಾಡಿದೆ. ಈ ನಿರ್ಧಾರ ರಾತ್ರೋರಾತ್ರಿ ಆಗಿದ್ದಲ್ಲ, ನಿರಂತರ ಚಿಂತನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಆಂಗ್ಲ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ನನಗೆ ಹಣಕಾಸಿನ ಭದ್ರತೆ ಮಾತ್ರ ಸಾಕಾಗುವುದಿಲ್ಲ, ಅದರಾಚೆಗಿನ ವಿಸ್ತಾರವಾದ ಬೆಳವಣಿಗೆ ಬಯಸುತ್ತಿರುವೆ ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಪ್ಪ ಇಲ್ಲದ ಕಂದನಿಗೆ ಅಮ್ಮನ ಆಸೆಯಂತೆ ಹೆಸರಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ&lt;/strong&gt;&lt;/p&gt;&lt;p&gt;ಕಂಟೆಂಟ್ ಕ್ರಿಯೇಷನ್ ಆಗುವುದಕ್ಕೆ ಹಠಾತ್ ನಿರ್ಧಾರ ತೆಗೆದುಕೊಂಡಿಲ್ಲ, ಸುಮಾರು ಶ್ರೀಗೀತಾ ಸುಮಾರು ಐದು ವರ್ಷಗಳಿಂದ ತನ್ನ ಕಾರ್ಪೊರೇಟ್ ಪಾತ್ರದ ಜೊತೆಗೆ ಪ್ರಯಾಣ ಮತ್ತು ಜೀವನಶೈಲಿಯ ಮೇಲೆ ಕಂಟೆಂಟ್ ರೆಡಿ ಮಾಡುತ್ತಾ ತಮಗೊಂದು ವೇದಿಕೆ ಸಿದ್ಧಪಡಿಸಿಕೊಂಡಿದ್ದರು. ನಂತರ ಐರ್ಲೆಂಡ್&zwnj;ನ ವೈಲ್ಡ್ ಅಟ್ಲಾಂಟಿಕ್ ವೇಯಲ್ಲಿ ಮಾಡಿದ ಪ್ರವಾಸವೊಂದು ತನ್ನ ಈ ಮಹತ್ವಾಕಾಂಕ್ಷೆಗೆ ಮುನ್ನುಡಿ ಬರೆಯಿತು ಎಂದು ಅವರು ಹೇಳಿಕೊಂಡಿದ್ದಾರೆ. ತನ್ನ ಈ ಯೋಚನೆ ನಾನು ಬೆಳೆದು ಬಂದ ರೀತಿಗೆ ಸಂಪೂರ್ಣ ವಿರುದ್ಧವಾಗಿತ್ತು. ಏಕೆಂದರೆ ಭಾರತೀಯ ಮನೆಗಳಲ್ಲಿ, ನೀವು ಯಾವಾಗಲೂ ಕಂಪನಿಯ CEO ಆಗಬೇಕೆಂದು ಹೇಳುತ್ತಾರೆ. ಕುಟುಂಬದ ಪಾಲಿಗೆ ಅದು ಯಶಸ್ಸು ಎಂದು ಅವರು ಹೇಳಿದ್ದಾರೆ. ಶ್ರೀಗೀತಾ ಅವರು ಈಗ ಗೂಗಲ್&zwnj;ನಿಂದ ಹೊರಬಂದ ನಂತರ ಜೀವನವನ್ನು ಪುನರ್ನಿರ್ಮಿಸುವುದು ಹೇಗೆ ಎಂಬ ವಿಚಾರದಲ್ಲಿ ವೀಡಿಯೋ ಮಾಡುತ್ತಿದ್ದಾರೆ.&lt;/p&gt;&lt;p&gt;ಅವರ ವೀಡಿಯೋ ವೈರಲ್ ಆಗಿದ್ದು, ಅನೇಕರು ಅವರಿಗೆ ಶುಭ ಹಾರೈಸಿಸುವ ಜೊತೆಗೆ ಅಚ್ಚರಿ ಆಘಾತ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Srigeeta | Travel &amp;amp; Mindset &zwj; (@badasswanderer)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>private-jobs</category>
            <dc:creator>Anusha Kb</dc:creator>
            <atom:link href="https://kannada.asianetnews.com/private-jobs/bengaluru-based-techie-resigns-her-2-crore-salary-google-job-to-become-content-creater/articleshow-iyp74vm"/>
        </item>
        <item>
            <title><![CDATA[ಡಿಗ್ರಿ ಇಲ್ಲದಿದ್ದರೂ BMW ಕಂಪನಿಯಲ್ಲಿ ಕೆಲಸ! 19ರ ಯುವತಿಯ ಸಾಧನೆ ನೋಡಿ ಬೆರಗಾದ ನೆಟ್ಟಿಗರು]]></title>
            <link>https://kannada.asianetnews.com/private-jobs/19-year-old-gauri-m-lands-bmw-job-without-degree-personal-branding-viral-san/articleshow-oknl09u</link>
            <guid isPermaLink="true">https://kannada.asianetnews.com/private-jobs/19-year-old-gauri-m-lands-bmw-job-without-degree-personal-branding-viral-san/articleshow-oknl09u</guid>
            <pubDate>Wed, 08 Apr 2026 15:42:32 +0530</pubDate>
            <description><![CDATA[&lt;p&gt;19 ವರ್ಷದ ಗೌರಿ ಎಂ, ಯಾವುದೇ ಪದವಿ ಇಲ್ಲದಿದ್ದರೂ ತನ್ನ ಬಲವಾದ ಪರ್ಸನಲ್ ಬ್ರ್ಯಾಂಡಿಂಗ್ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವದಿಂದ ವಿಶ್ವಪ್ರಸಿದ್ಧ BMW ಕಂಪನಿಯಲ್ಲಿ ಮಾರ್ಕೆಟಿಂಗ್ ಉದ್ಯೋಗವನ್ನು ಪಡೆದುಕೊಂಡಿದ್ದಾಳೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knp8e0ad5dxkd70me4gtjmnq,imgname-bmw-job-for-19-year-old-girl-1775642280269.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.8):&lt;/strong&gt; ಸಾಂಪ್ರದಾಯಿಕ ಶಿಕ್ಷಣ ಅಥವಾ ಪದವಿಗಿಂತ ಕೌಶಲ ಮತ್ತು ವೈಯಕ್ತಿಕ ಬ್ರ್ಯಾಂಡಿಂಗ್ ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಗೌರಿ ಎಂ ಎಂಬ 19 ವರ್ಷದ ಯುವತಿ, ಪದವಿ ಇಲ್ಲದಿದ್ದರೂ ವಿಶ್ವದ ಪ್ರಮುಖ ಕಾರು ತಯಾರಿಕಾ ಸಂಸ್ಥೆಯಾದ BMW ನಲ್ಲಿ ಪೂರ್ಣಾವಧಿಯ 'ಪರ್ಸನಲ್ ಮಾರ್ಕೆಟಿಂಗ್' ಜಾಬ್&zwnj; ಗಿಟ್ಟಿಸಿಕೊಂಡಿದ್ದಾಳೆ. ಈ ಕುರಿತಾದ ಲಿಂಕ್ಡ್&zwnj;ಇನ್ (LinkedIn) ಪೋಸ್ಟ್ ಈಗ ವೈರಲ್ ಆಗಿದ್ದು, ಕೌಶಲ vs ಶಿಕ್ಷಣದ ನಡುವಿನ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.&lt;/p&gt;&lt;h2&gt;&lt;strong&gt;ಅನುಭವವಿಲ್ಲದಿದ್ದರೂ ಸಿಕ್ಕಿತು ಅವಕಾಶ!&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಬಿಎಂಡಬ್ಲ್ಯೂ ಅಂತಹ ಕಂಪನಿಗಳಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಪಡೆಯಲು ಕನಿಷ್ಠ 5 ವರ್ಷಗಳ ಅನುಭವದ ಅಗತ್ಯವಿರುತ್ತದೆ. ಆದರೆ, ಗೌರಿ ಎಂ ತನ್ನ ಬಲವಾದ ಡಿಜಿಟಲ್ ರೆಕಗ್ನಿಶನ್&zwnj; ಮತ್ತು ಸೋಷಿಯಲ್ ಮೀಡಿಯಾ ಪ್ರಭಾವದ ಮೂಲಕ ಈ ಅವಕಾಶವನ್ನು ಪಡೆದುಕೊಂಡಿದ್ದಾಳೆ. ಲಿಂಕ್ಡ್&zwnj;ಇನ್&zwnj;ನಲ್ಲಿ 65,000 ಕ್ಕೂ ಹೆಚ್ಚು ಮತ್ತು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ 35,000 ಕ್ಕೂ ಹೆಚ್ಚು ಫಾಲೋವರ್ಸ್&zwnj;ಗಳನ್ನು ಹೊಂದಿರುವ ಗೌರಿ, ತನ್ನದೇ ಆದ ಪ್ರೇಕ್ಷಕ ಬಳಗವನ್ನು ಕಟ್ಟಿಕೊಂಡಿರುವುದು ಈಕೆಯ ಆಯ್ಕೆಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಲಿಂಕ್ಡ್&zwnj;ಇನ್ ಪೋಸ್ಟ್&zwnj;ನಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;&quot;ಆಕೆಯ ಬಳಿ ಯಾವುದೇ ಪದವಿ ಅಥವಾ ದೀರ್ಘಕಾಲದ ಅನುಭವಕ್ಕಿಂತ ಹೆಚ್ಚಿನ ಪರ್ಸನಲ್&zwnj; ಬ್ರ್ಯಾಂಡ್&zwnj; ಇತ್ತು. ನಿಮ್ಮ ಕನಸಿನ ಕೆಲಸವನ್ನು ಪಡೆಯಲು ನಿಮ್ಮ ಲಿಂಕ್ಡ್&zwnj;ಇನ್ ಮತ್ತು ಇನ್&zwnj;ಸ್ಟಾಗ್ರಾಮ್ ಖಾತೆಗಳನ್ನು ಒಂದು ಮಿನಿ ಪ್ರಾಜೆಕ್ಟ್&zwnj;ನಂತೆ ಬಳಸಿಕೊಳ್ಳುವ ಸಮಯ ಬಂದಿದೆ,&quot; ಎಂದು ಅರುಷಿ ಎಂಬುವವರು ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಖುದ್ದು ಆಫರ್ ಲೆಟರ್ ಹಂಚಿಕೊಂಡ ಗೌರಿ&lt;/strong&gt;&lt;/h2&gt;&lt;p&gt;ತನ್ನ ಸಾಧನೆಯ ಬಗ್ಗೆ ಖುಷಿ ಹಂಚಿಕೊಂಡಿರುವ ಗೌರಿ, ಬಿಎಂಡಬ್ಲ್ಯೂನೊಂದಿಗೆ ನಡೆದ ಇಮೇಲ್ ಸಂಭಾಷಣೆಯ ಸ್ಕ್ರೀನ್&zwnj;ಶಾಟ್ ಅನ್ನು ಹಂಚಿಕೊಂಡಿದ್ದಾಳೆ. &quot;ವಿಶ್ವದ ಅತಿದೊಡ್ಡ ಕಾರು ಸಮೂಹವೊಂದರಿಂದ ನನಗೆ ಉದ್ಯೋಗದ ಆಫರ್ ಬಂದಿದೆ. ಇದು ಕೇವಲ ಸಹಯೋಗಕ್ಕಾಗಿ (Collaboration) ಅಲ್ಲ, ಬದಲಿಗೆ ಗಂಭೀರವಾದ ಮಾರ್ಕೆಟಿಂಗ್ ಜಾಬ್&zwnj;ಗಾಗಿ ಬಂದಿರುವ ಆಫರ್. ನಾನು ಕೇವಲ 19 ವರ್ಷದ ಹುಡುಗಿ, ನನ್ನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಏನಾದರೂ ಸಾಧಿಸಲು ಪ್ರಯತ್ನಿಸುತ್ತಿದ್ದೆ. ಹೇಗೋ ಅವರು ನನ್ನನ್ನು ಹುಡುಕಿಕೊಂಡು ಬಂದರು. ಆ ನಂತರ ಸ್ಪೋರ್ಟ್ಸ್ ಬ್ರ್ಯಾಂಡ್ ಸಂಸ್ಥಾಪಕರೊಬ್ಬರು ಸಂಪರ್ಕಿಸಿದರು. ಅಚ್ಚರಿಯೆಂದರೆ ನಾನು ಅರ್ಜಿ ಸಲ್ಲಿಸದಿದ್ದರೂ ಒಂದೇ ವಾರದಲ್ಲಿ ಮೂರು ಉದ್ಯೋಗದ ಆಫರ್&zwnj;ಗಳು ಬಂದವು. ನಾನು ಯಾರಿಗೂ ಇಮೇಲ್ ಮಾಡಿರಲಿಲ್ಲ ಅಥವಾ ಅವಕಾಶಕ್ಕಾಗಿ ಕೇಳಿರಲಿಲ್ಲ,&quot; ಎಂದು ಗೌರಿ ಬರೆದುಕೊಂಡಿದ್ದಾಳೆ.&lt;/p&gt;&lt;h2&gt;&lt;strong&gt;ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;ಗೌರಿಯ ಈ ಪೋಸ್ಟ್ ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. &quot;ಇದು ಅದೃಷ್ಟವಲ್ಲ, ಪರ್ಸನಲ್ ಬ್ರ್ಯಾಂಡಿಂಗ್&zwnj;ನ ಶಕ್ತಿ. ಕಳೆದ ವರ್ಷವಷ್ಟೇ ಗೌರಿ ಟಾಟಾ ಮೋಟಾರ್ಸ್ ಜೊತೆ ಕೆಲಸ ಮಾಡುತ್ತಿದ್ದಾಗ ನಾನು ಅವಳ ಕಂಟೆಂಟ್ ನೋಡಿದ್ದೆ. ಪದವಿ ಇಲ್ಲದಿದ್ದರೂ ಅವಳು ತನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ರೀತಿಗೆ ಇಂದು ಬೆಲೆ ಸಿಕ್ಕಿದೆ,&quot; ಎಂದು ಬಳಕೆದಾರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಆದರೆ, ಈ ಬಗ್ಗೆ ಕೆಲವರು ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣಗಳು ಎಲ್ಲ ಉದ್ಯಮಗಳಿಗೂ ಅನ್ವಯಿಸುವುದಿಲ್ಲ ಮತ್ತು ಪದವಿ ಶಿಕ್ಷಣದ ಪ್ರಾಮುಖ್ಯತೆಯನ್ನು ಕಡೆಗಣಿಸಬಾರದು ಎಂದು ಕೆಲವರು ಎಚ್ಚರಿಸಿದ್ದಾರೆ. ಈ ಕುರಿತು ಅಧಿಕೃತ ಪ್ರತಿಕ್ರಿಯೆಗಾಗಿ ಎನ್&zwnj;ಡಿಟಿವಿ (NDTV) ಸಂಸ್ಥೆಯು ಬಿಎಂಡಬ್ಲ್ಯೂ ಕಂಪನಿಯನ್ನು ಸಂಪರ್ಕಿಸಿದ್ದು, ಅವರಿಂದ ಉತ್ತರ ಬಂದ ನಂತರ ವರದಿಯನ್ನು ಅಪ್&zwnj;ಡೇಟ್ ಮಾಡಲಾಗುವುದು ಎಂದು ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/private-jobs/19-year-old-gauri-m-lands-bmw-job-without-degree-personal-branding-viral-san/articleshow-oknl09u"/>
        </item>
        <item>
            <title><![CDATA[ಬೆಂಗಳೂರಿಂದ ವಿದೇಶಕ್ಕೆ  ಶಿಫ್ಟ್: ₹1.3 ಕೋಟಿ ವೇತನ, ಟೆಕ್ಕಿ ಜೀವನದಲ್ಲಿ ದೊಡ್ಡ ಬದಲಾವಣೆ, ಭಾರತಕ್ಕೆ ಮರಳೋದು ಡೌಟ್!]]></title>
            <link>https://kannada.asianetnews.com/jobs/indian-software-engineer-moves-from-bengaluru-to-dublin-salary-jumps-to-1-3-crore-gdp/articleshow-p0mzsiq</link>
            <guid isPermaLink="true">https://kannada.asianetnews.com/jobs/indian-software-engineer-moves-from-bengaluru-to-dublin-salary-jumps-to-1-3-crore-gdp/articleshow-p0mzsiq</guid>
            <pubDate>Mon, 16 Mar 2026 19:19:56 +0530</pubDate>
            <description><![CDATA[ಬೆಂಗಳೂರಿನಿಂದ ಐರ್ಲೆಂಡ್&zwnj;ನ ಡಬ್ಲಿನ್&zwnj;ಗೆ ಸ್ಥಳಾಂತರಗೊಂಡ 27 ವರ್ಷದ ಭಾರತೀಯ ಸಾಫ್ಟ್&zwnj;ವೇರ್ ಎಂಜಿನಿಯರ್, ಅಲ್ಲಿನ ದುಬಾರಿ ಜೀವನ ವೆಚ್ಚದ ನಡುವೆಯೂ ಉತ್ತಮ ಜೀವನ ಗುಣಮಟ್ಟವನ್ನು ಕಂಡುಕೊಂಡಿದ್ದಾರೆ. ಅಮೆಜಾನ್&zwnj;ನಲ್ಲಿ ಕೆಲಸ ಮಾಡುತ್ತಿರುವ ಅವರು, ಭಾರತಕ್ಕಿಂತ ದುಪ್ಪಟ್ಟು ಸಂಬಳ ಪಡೆಯುತ್ತಿದ್ದು, ಯುರೋಪಿಯನ್ ಜೀವನಶೈಲಿಯನ್ನು ಆನಂದಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkveermddq8zq8t6w9p1jt9b,imgname-suras-nayak--1--1773668885133.jpg" type="image/jpeg" height="390" width="690"/>
            <content:encoded><![CDATA[&lt;p&gt;ಯುರೋಪಿನ ನಗರಗಳಲ್ಲಿ ಜೀವನ ವೆಚ್ಚ ಹೆಚ್ಚಾಗಿದ್ದರೂ, ಬೆಂಗಳೂರಿನಿಂದ ಐರ್ಲೆಂಡ್&zwnj;ನ ಡಬ್ಲಿನ್&zwnj;ಗೆ ಸ್ಥಳಾಂತರವಾದ ನಂತರ ತನ್ನ ಜೀವನದ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡಿದ್ದೇನೆ ಎಂದು 27 ವರ್ಷದ ಭಾರತೀಯ ಸಾಫ್ಟ್&zwnj;ವೇರ್ ಎಂಜಿನಿಯರ್ ಹೇಳಿದ್ದಾರೆ.&lt;/p&gt;&lt;p&gt;ಪ್ರಸ್ತುತ ಅಮೆಜಾನ್ ಕಂಪನಿಯಲ್ಲಿ ಸಾಫ್ಟ್&zwnj;ವೇರ್ ಡೆವಲಪ್&zwnj;ಮೆಂಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸುರಸ್ ನಾಯಕ್, ಕಂಪನಿಯೊಳಗಿನ ಆಂತರಿಕ ವರ್ಗಾವಣೆಯ ಮೂಲಕ ಮಾರ್ಚ್ 2025ರಲ್ಲಿ ಐರ್ಲೆಂಡ್&zwnj;ಗೆ ತೆರಳಿದ್ದಾರೆ. ಅವರ ಮಾಹಿತಿ ಪ್ರಕಾರ, ಅವರು ಪ್ರಸ್ತುತ ವರ್ಷಕ್ಕೆ ಸುಮಾರು 122,428 ಯುರೋಗಳು (ಸುಮಾರು ₹1.3 ಕೋಟಿ) ವೇತನ ಪಡೆಯುತ್ತಿದ್ದಾರೆ. ಇದು ಅವರು ಭಾರತದಲ್ಲಿ ಕೆಲಸ ಮಾಡುತ್ತಿದ್ದಾಗ ಪಡೆದಿದ್ದ ಸುಮಾರು ₹68 ಲಕ್ಷ ವೇತನಕ್ಕಿಂತ ಎರಡು ಪಟ್ಟು ಹೆಚ್ಚು ಎನ್ನಲಾಗಿದೆ.&lt;/p&gt;&lt;h2&gt;ವಿದೇಶದಲ್ಲಿ ವಾಸಿಸುವ ಕನಸು&lt;/h2&gt;&lt;p&gt;ಸುರಸ್ ನಾಯಕ್ ಹೇಳುವಂತೆ, ವಿದೇಶದಲ್ಲಿ ವಾಸಿಸುವುದು ತನ್ನ ಬಾಲ್ಯದ ಕನಸಾಗಿತ್ತು. ನಾನು ಚಿಕ್ಕವನಾಗಿದ್ದಾಗಲೇ ವಿದೇಶಕ್ಕೆ ಹೋಗಬೇಕು ಎಂಬ ಆಸೆ ನನ್ನ ಮನಸ್ಸಿನಲ್ಲಿ ಇತ್ತು. ಹಾಲಿವುಡ್ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದ ಕಾರಣ ಪಾಶ್ಚಿಮಾತ್ಯ ದೇಶಗಳ ಜೀವನಶೈಲಿ ನನಗೆ ತುಂಬಾ ಆಕರ್ಷಕವಾಗಿತ್ತು. ಬೇರೆ ದೇಶಕ್ಕೆ ಹೋಗಿ ಅಲ್ಲಿ ವಾಸಿಸಿ, ಅವರ ಜೀವನ ಶೈಲಿಯನ್ನು ಅನುಭವಿಸಬೇಕು ಎಂಬ ಆಸೆ ಯಾವಾಗಲೂ ಇತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಅಮೆಜಾನ್&zwnj;ನಲ್ಲಿ ಉದ್ಯೋಗದ ಆರಂಭ&lt;/h2&gt;&lt;p&gt;ನಾಯಕ್ ಅವರು ಐಐಟಿ ಅಲಹಾಬಾದ್) ನಲ್ಲಿ ತಮ್ಮ ಅಂತಿಮ ವರ್ಷದ ಅಧ್ಯಯನದ ವೇಳೆ ಆರು ತಿಂಗಳ ಇಂಟರ್ನ್&zwnj;ಶಿಪ್ ಪೂರ್ಣಗೊಳಿಸಿದ ಬಳಿಕ 2020ರಲ್ಲಿ ಅಮೆಜಾನ್&zwnj;ನಲ್ಲಿ ಪೂರ್ಣಕಾಲಿಕ ಉದ್ಯೋಗಕ್ಕೆ ಸೇರಿದರು. ನಂತರ ಅವರು ಬೆಂಗಳೂರಿನ ಅಮೆಜಾನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;ಕಂಪನಿಯಲ್ಲಿ ಕನಿಷ್ಠ ಎರಡು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ ನಿರ್ದಿಷ್ಟ ಮಟ್ಟವನ್ನು ತಲುಪಿದ ಉದ್ಯೋಗಿಗಳು ವಿದೇಶಿ ಕಚೇರಿಗಳಲ್ಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಹೊಂದಿರುತ್ತಾರೆ ಎಂಬುದನ್ನು ಅವರು ನಂತರ ತಿಳಿದುಕೊಂಡರು. ಇದರಿಂದ ಅವರು ಯುನೈಟೆಡ್ ಕಿಂಗ್&zwnj;ಡಮ್, ಜರ್ಮನಿ ಮತ್ತು ಐರ್ಲೆಂಡ್&zwnj;ನಲ್ಲಿರುವ ಅಮೆಜಾನ್ ಕಚೇರಿಗಳಲ್ಲಿ ಲಭ್ಯವಿದ್ದ ಅವಕಾಶಗಳನ್ನು ಪರಿಶೀಲಿಸಲು ಆರಂಭಿಸಿದರು. ಇದರಲ್ಲಿಯೇ ಐರ್ಲೆಂಡ್&zwnj;ನ ಡಬ್ಲಿನ್ ನಗರವು ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿರುವುದರಿಂದ ಅವರು ಅದನ್ನು ಆಯ್ಕೆ ಮಾಡಿಕೊಂಡರು.&lt;/p&gt;&lt;h2&gt;ಅವಕಾಶ ಸಿಕ್ಕ ಕ್ಷಣ&lt;/h2&gt;&lt;p&gt;&ldquo;ಈ ಅವಕಾಶ ನನಗೆ ಸಿಕ್ಕಿದೆ ಎಂದು ತಿಳಿದಾಗ ನಾನು ತುಂಬಾ ಸಂತೋಷಪಟ್ಟೆ. ತಕ್ಷಣ ನನ್ನ ಹೆತ್ತವರ ಬಳಿಗೆ ಹೋಗಿ ಈ ವಿಷಯವನ್ನು ಹೇಳಿದೆ. ಅದು ನಮ್ಮ ಕುಟುಂಬಕ್ಕೆ ತುಂಬಾ ಸಂತೋಷದ ಕ್ಷಣವಾಗಿತ್ತು. ವಿಶೇಷವಾಗಿ ನನ್ನ ತಂದೆ ಯಾವಾಗಲೂ ನನ್ನ ಕನಸುಗಳಿಗೆ ಬೆಂಬಲ ನೀಡುತ್ತಿದ್ದರು,&rdquo; ಎಂದು ನಾಯಕ್ ನೆನಪಿಸಿಕೊಳ್ಳುತ್ತಾರೆ.&lt;/p&gt;&lt;h2&gt;ವೀಸಾ ಮತ್ತು ಸ್ಥಳಾಂತರ ಸಹಾಯ&lt;/h2&gt;&lt;p&gt;ಉದ್ಯೋಗ ದೃಢಪಟ್ಟ ನಂತರ ಸುಮಾರು 6 ರಿಂದ 8 ವಾರಗಳೊಳಗೆ ಅವರಿಗೆ ಕೆಲಸದ ವೀಸಾ ದೊರಕಿತು. ಸ್ಥಳಾಂತರಕ್ಕೆ ಸಂಬಂಧಿಸಿದ ವೆಚ್ಚಗಳು, ತಾತ್ಕಾಲಿಕ ವಸತಿ ವ್ಯವಸ್ಥೆ ಹಾಗೂ ಭಾರತದಿಂದ ಅವರ ವಸ್ತುಗಳನ್ನು ಸಾಗಿಸುವ ಖರ್ಚನ್ನು ಅಮೆಜಾನ್ ಕಂಪನಿಯೇ ಭರಿಸಿತು ಎಂದು ಹೇಳಿದ್ದಾರೆ.&lt;/p&gt;&lt;h2&gt;ಯುರೋಪಿನಲ್ಲಿ ಜೀವನ ವೆಚ್ಚ&lt;/h2&gt;&lt;p&gt;ಆದರೆ ಹೆಚ್ಚಿನ ಸಂಬಳ ಇದ್ದರೂ ಡಬ್ಲಿನ್ ನಗರದಲ್ಲಿ ಜೀವನ ವೆಚ್ಚಕ್ಕೆ ಹೊಂದಿಕೊಳ್ಳುವುದು ಸುಲಭವಿರಲಿಲ್ಲ. &ldquo;ಭಾರತದಲ್ಲಿ ಇದ್ದಾಗ ನಾನು ಖರ್ಚಿನ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ, ಏಕೆಂದರೆ ಅಲ್ಲಿ ವೆಚ್ಚಗಳು ಕಡಿಮೆ ಇರುತ್ತವೆ. ಆದರೆ ಡಬ್ಲಿನ್&zwnj;ನಲ್ಲಿ ಬಾಡಿಗೆ ಮತ್ತು ದಿನಸಿ ಸಾಮಗ್ರಿಗಳ ಬೆಲೆ ಭಾರತಕ್ಕಿಂತ ಹೆಚ್ಚು ಇರುವುದರಿಂದ ಈಗ ನಾನು ನನ್ನ ಖರ್ಚುಗಳನ್ನು ಸರಿಯಾಗಿ ಯೋಜಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಪ್ರಸ್ತುತ ಅವರು 3 ಬೆಡ್&zwnj;ರೂಣ ಮನೆಯನ್ನು ಇನ್ನಿಬ್ಬರು ಅಮೆಜಾನ್ ಉದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆ ಮನೆಯ ಒಟ್ಟು ಬಾಡಿಗೆ ತಿಂಗಳಿಗೆ ಸುಮಾರು 4,000 ಯುರೋಗಳು ಆಗಿದ್ದು, ಅದರಲ್ಲಿ ನಾಯಕ್ ಅವರು ತಿಂಗಳಿಗೆ ಸುಮಾರು 1,450 ಯುರೋಗಳು ಪಾವತಿಸುತ್ತಿದ್ದಾರೆ.&lt;/p&gt;&lt;h2&gt;ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದು&lt;/h2&gt;&lt;p&gt;ಐರ್ಲೆಂಡ್&zwnj;ಗೆ ಸ್ಥಳಾಂತರವಾದ ನಂತರ ಅಲ್ಲಿನ ತಂಪಾದ ಹವಾಮಾನಕ್ಕೆ ಹೊಂದಿಕೊಳ್ಳುವುದು ಅವರಿಗೆ ಆರಂಭದಲ್ಲಿ ಸ್ವಲ್ಪ ಕಷ್ಟವಾಗಿತ್ತು. ಜೊತೆಗೆ ಹೊಸ ದೇಶದಲ್ಲಿ ಸ್ನೇಹಿತರ ವಲಯವನ್ನು ನಿರ್ಮಿಸುವುದು ಕೂಡ ಸವಾಲಿನ ಸಂಗತಿಯಾಗಿತ್ತು. ಆದರೆ ನಂತರ ಸಾಮಾಜಿಕ ಜಾಲತಾಣ ಅಪ್ಲಿಕೇಶನ್ ಮೀಟ್&zwnj; ಅಪ್ ಮೂಲಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ ನಂತರ ಪ್ರಪಂಚದ ವಿವಿಧ ಭಾಗಗಳಿಂದ ಬಂದ ಜನರೊಂದಿಗೆ ಪರಿಚಯವಾಗಲು ಸಾಧ್ಯವಾಯಿತು.&lt;/p&gt;&lt;h2&gt;ಮುಂದಿನ ಯೋಜನೆ&lt;/h2&gt;&lt;p&gt;ಇದೀಗ ಡಬ್ಲಿನ್&zwnj;ನಲ್ಲಿ ನೆಲೆಸಿರುವ ನಾಯಕ್ ಅವರು ಅಲ್ಲಿನ ಜೀವನಶೈಲಿಯನ್ನು ತುಂಬಾ ಇಷ್ಟಪಡುತ್ತಿದ್ದಾರೆ. ವಿಶೇಷವಾಗಿ ಪ್ರಕೃತಿಗೆ ಹತ್ತಿರವಾದ ಪರಿಸರ ಹಾಗೂ ಯುರೋಪಿನ ಇತರ ದೇಶಗಳಿಗೆ ಸುಲಭವಾಗಿ ಪ್ರಯಾಣ ಮಾಡುವ ಅವಕಾಶಗಳು ಅವರಿಗೆ ತುಂಬಾ ಆಕರ್ಷಕವಾಗಿವೆ. ಮುಂದಿನ 10 ರಿಂದ 15 ವರ್ಷಗಳವರೆಗೆ ಭಾರತಕ್ಕೆ ಹಿಂತಿರುಗುವ ಯಾವುದೇ ಯೋಜನೆ ಇಲ್ಲ ಎಂದು ಅವರು ತಿಳಿಸಿದ್ದಾರೆ. &ldquo;ಇಲ್ಲಿನ ಜೀವನದ ಗುಣಮಟ್ಟ ನನಗೆ ಬಹಳಷ್ಟು ಉತ್ತಮವಾಗಿದೆ. ಐರ್ಲೆಂಡ್&zwnj;ನಲ್ಲಿ ನಾನು ಅನುಭವಿಸುತ್ತಿರುವ ಜೀವನಶೈಲಿಗೆ ಈಗ ಒಗ್ಗಿಕೊಂಡಿದ್ದೇನೆ. ನಾನು ಭಾರತಕ್ಕೆ ಹಿಂತಿರುಗಿದ್ದರೆ ಈ ರೀತಿಯ ಜೀವನವನ್ನು ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ,&rdquo; ಎಂದು ನಾಯಕ್ ಹೇಳಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/indian-software-engineer-moves-from-bengaluru-to-dublin-salary-jumps-to-1-3-crore-gdp/articleshow-p0mzsiq"/>
        </item>
        <item>
            <title><![CDATA[ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ, ಲಕ್ಷಾಂತರ ಭಾರತೀಯರಿಗೆ ಭರ್ಜರಿ ವೇತನದ ಆಫರ್]]></title>
            <link>https://kannada.asianetnews.com/gallery/private-jobs/work-in-germany-massive-job-openings-and-high-salaries-for-indian-workers-p73e5f4</link>
            <guid isPermaLink="true">https://kannada.asianetnews.com/gallery/private-jobs/work-in-germany-massive-job-openings-and-high-salaries-for-indian-workers-p73e5f4</guid>
            <pubDate>Mon, 23 Mar 2026 10:39:33 +0530</pubDate>
            <description><![CDATA[&lt;p&gt;ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ, ಲಕ್ಷಾಂತರ ಭಾರತೀಯರಿಗೆ ಭರ್ಜರಿ ವೇತನದ ಆಫರ್ ನೀಡಿದೆ. ಈಗಾಗಲೇ ಭಾರತದ ಜೊತೆ ಒಪ್ಪಂದ ಮಾಡಿಕೊಂಡಿರುವ ಜರ್ಮನಿ, ಭಾರತದ ಯುವ ಹಾಗೂ ನುರಿತ ಪ್ರತಿಭೆಗಳಿಗೆ ಭರ್ಜರಿ ಸ್ವಾಗತ ನೀಡುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k33m6gpyjc29jsn6yd0ng34n,imgname-salary-negotiation-after-job-offer-1755689730782.jpg" type="image/jpeg" height="390" width="690"/>
            <content:encoded><![CDATA[&lt;p&gt;ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ, ಲಕ್ಷಾಂತರ ಭಾರತೀಯರಿಗೆ ಭರ್ಜರಿ ವೇತನದ ಆಫರ್ ನೀಡಿದೆ. ಈಗಾಗಲೇ ಭಾರತದ ಜೊತೆ ಒಪ್ಪಂದ ಮಾಡಿಕೊಂಡಿರುವ ಜರ್ಮನಿ, ಭಾರತದ ಯುವ ಹಾಗೂ ನುರಿತ ಪ್ರತಿಭೆಗಳಿಗೆ ಭರ್ಜರಿ ಸ್ವಾಗತ ನೀಡುತ್ತಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭಾರತದಲ್ಲಿ ಉದ್ಯೋಗಕ್ಕಾಗಿ ಲಕ್ಷಾಂತರ ಮಂದಿ ಪ್ರತಿ ದಿನ ಅಲೆದಾಡುತ್ತಿದ್ದಾರೆ. ಪ್ರತಿಭೆ, ಅನುಭವ ಇದ್ದರೂ ಸರಿಯಾದ ಉದ್ಯೋಗ ಸಿಗುತ್ತಿಲ್ಲ ಅನ್ನೋ ಕೂಗು ಇದೆ. ಇದೀಗ ಭಾರತೀಯರಿಗೆ ಜರ್ಮನಿ ಭರ್ಜರಿ ಆಫರ್ ನೀಡಿದೆ. ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ ಇದೆ. ಹಲವು ಹುದ್ದೆಗಳು ಖಾಲಿ ಇದೆ. ಉದ್ಯೋಗಿಗಳ ಕೊರತೆ ಎದುರಿಸುತ್ತಿರುವ ಜರ್ಮನಿ ನುರಿತ ಹಾಗೂ ಪ್ರತಿಭಾವಂತರಿಗೆ ಮಣೆ ಹಾಕಲು ಮುಂದಾಗಿದೆ.&lt;/p&gt;&lt;img&gt;&lt;p&gt;ಉದ್ಯೋಗ ಸಮಸ್ಯೆ ನೀಗಿಸಲು ಭಾರತದ ನೆರವು ಕೇಳಿದೆ. ಜರ್ಮನಿ ಇದೀಗ ಭಾರತೀಯರಿಗೆ ಉತ್ತಮ ವೇತನ ಸೇರಿದಂತೆ ಹಲುವ ಸೌಲಭ್ಯಗಳ ಉದ್ಯೋಗ ಆಫರ್ ನೀಡಿದೆ. ಭಾರತದ ಕಾರ್ಮಿಕರ ಮೇಲೆ ಜರ್ಮನಿ ಅತೀವ ನಂಬಿಕೆ ಹಾಗೂ ವಿಶ್ವಾಸ ಇಟ್ಟುಕೊಂಡಿದೆ. ಜರ್ಮನಿಯ ಆರ್ಥಿಕತೆ ಹಾಗೂ ಕೈಗಾರಿಗಳ ಕಾರ್ಮಿಕರ ಕೊರತೆ ನೀಗಿಸಲು ಭಾರತದಿಂದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.&lt;/p&gt;&lt;img&gt;&lt;p&gt;ಆರೋಗ್ಯ, ಐಟಿ, ಎಂಜಿನೀಯರಿಂಗ್, ಸಾಫ್ಟವೇರ್, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಳ ಭರ್ತಿಗೆ ಭಾರತೀಯರನ್ನು ಆಕರ್ಷಿಸಲು ಮುಂದಾಗಿದೆ. ನುರಿತ, ಪರಿಣಿತ ಹಾಗೂ ಪ್ರತಿಭಾವಂತ ಉದ್ಯೋಗಿಗಳನ್ನು ಉತ್ತಮ ಸ್ಯಾಲರಿ ನೀಡಿ ನೇಮಕ ಮಾಡಿಕೊಳ್ಳಲು ಜರ್ಮನಿ ತುದಿಗಾಲಲ್ಲಿ ನಿಂತಿದೆ.&lt;/p&gt;&lt;img&gt;&lt;p&gt;ಭಾರತ ಸರ್ಕಾರದ ಜೊತೆ ಜರ್ಮನಿ ಇದೇ ಉದ್ಯೋಗ ವಿಚಾರದಲ್ಲಿ ವಲಸೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಜರ್ಮನಿಗೆ ಕೆಲಸಕ್ಕಾಗಿ ತೆರಳುವವರಿಗೆ ಅತೀ ಸುಲಭವಾಗಿ ವೀಸಾ ಸೇರಿದಂತೆ ಇತರ ಸೌಲಭ್ಯಗಳು ಸಿಗುವಂತೆ ಮಾಡಿದೆ. ಶೈಕ್ಷಣಿಕ ಅರ್ಹತೆ, ಇತರ ದಾಖಲೆಗಳ ಕಠಿಣ ನಿಯಮವನ್ನು ಸರಳೀಕರಣ ಮಾಡಲಾಗಿದೆ. ಕನಿಷ್ಠ ವೇತನ, ಭತ್ಯೆ, ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲು ಒಪ್ಪಂದ ಮಾಡಿಕೊಂಡಿದೆ.ರ್ಮನಿಯ ಚಾನ್ಸೆಲರ್ ಓಲಾಫ್ ಶೋಲ್ಜ್, ಭಾರತ ಸರ್ಕಾರ ಜೊತೆ ಕಾರ್ಮಿಕ ವಲಸೆ ಒಪ್ಪಂದ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಜರ್ಮನಿ ಈಗಾಗಲೇ ಒಪ್ಪಂದ ಮಾಡಿಕೊಂಡು ನೇಮಕಾತಿ ಕೆಲಸ ಆರಂಭಿಸಿದೆ. ಪ್ರತಿ ವರ್ಷ ಜರ್ಮನಿ 4 ಲಕ್ಷ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಗುರಿ ಇಟ್ಟುಕೊಂಡಿದೆ. ಈ ಪೈಕಿ ಬಹುತೇಕ ಭಾರತದಿಂದಲೇ ನೇಮಕ ಮಾಡಿಕೊಳ್ಳಲು ಜರ್ಮನಿ ಆಸಕ್ತಿ ತೋರಿದೆ. ಭಾರತದ ಜೊತೆಗಿನ ಈ ಪಾಲುದಾರಿಗೆ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಜರ್ಮನಿ ಹೇಳಿದೆ.&lt;/p&gt;&lt;img&gt;&lt;p&gt;ಭಾರತದಿಂದ ಜರ್ಮನಿಗೆ ಕೆಲಸಕ್ಕಾಗಿ ತೆರಳುವ ಬಹುತೇಕರಿಗೆ ಭಾಷೆ ಹಾಗೂ ಸಂಸ್ಕೃತಿ, ಪದ್ಧತಿಗಳ ಸಮಸ್ಯೆ ಎದುರಾಗಲಿದೆ. ಇದನ್ನು ನೀಗಿಸಲು ಒಪ್ಪಂದದಲ್ಲೇ ಮಹತ್ವದ ಕೆಲಸಕ್ಕೂ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ. ಭಾರತದಲ್ಲಿ ಜರ್ಮನ್ ಭಾಷಾ ತರಬೇತಿ ಕೇಂದ್ರಗಳನ್ನು ಆರಂಭಿಸುತ್ತಿದೆ. ಇದು ಒಪ್ಪಂದದ ಭಾಗವಾಗಿ ಆರಂಭಗೊಳ್ಳುತ್ತಿದೆ.&lt;/p&gt;&lt;h2&gt;ಭಾರತದಲ್ಲಿ ಭಾಷಾ ತರಬೇತಿ ಕೇಂದ್ರ&lt;/h2&gt;]]></content:encoded>
            <category>private-jobs</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/private-jobs/work-in-germany-massive-job-openings-and-high-salaries-for-indian-workers-p73e5f4"/>
        </item>
        <item>
            <title><![CDATA[ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್‌ ವಿ ನಗರದಲ್ಲಿ ತಳಮಳ]]></title>
            <link>https://kannada.asianetnews.com/gallery/private-jobs/meta-layoffs-2026-facebook-parent-to-cut-jobs-in-silicon-valley-amid-massive-ai-push-pz8bkoz</link>
            <guid isPermaLink="true">https://kannada.asianetnews.com/gallery/private-jobs/meta-layoffs-2026-facebook-parent-to-cut-jobs-in-silicon-valley-amid-massive-ai-push-pz8bkoz</guid>
            <pubDate>Mon, 06 Apr 2026 21:36:34 +0530</pubDate>
            <description><![CDATA[&lt;p&gt;ಫೇಸ್&zwnj;ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್&zwnj; ವಿ ನಗರದಲ್ಲಿ ತಳಮಳ, ಒಂದೇ ಕಚೇರಿಯಿಂದ 200 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಎಐ ಬಳಕೆ ಹಲವರ ಕೆಲಸಕ್ಕೆ ಕುತ್ತು ತಂದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3tqsxqxj08n89h4p7fgvrn0,imgname-meta-1756465264381.jpg" type="image/jpeg" height="390" width="690"/>
            <content:encoded><![CDATA[&lt;p&gt;ಫೇಸ್&zwnj;ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್&zwnj; ವಿ ನಗರದಲ್ಲಿ ತಳಮಳ, ಒಂದೇ ಕಚೇರಿಯಿಂದ 200 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಎಐ ಬಳಕೆ ಹಲವರ ಕೆಲಸಕ್ಕೆ ಕುತ್ತು ತಂದಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಫೇಸ್&zwnj;ಬುಕ್ ಮಾತೃಸಂಸ್ಥೆ ಮೆಟಾ ಇದೀಗ ಮತ್ತೆ ಉದ್ಯೋಗ ಕಡಿತ ಮಾಡಿದೆ. ಸಿಲಿಕಾನ್ ವ್ಯಾಲಿಯಲ್ಲಿರುವ ಕಚೇರಿಗಳಿಂದ 200 ಮಂದಿ ಉದ್ಯೋಗ ಕಡಿತ ಮಾಡಿದೆ. ಬರ್ಲಿಂಗ್&zwnj;ಗೇಮ್ ಕಚೇರಿ ಉದ್ಯೋಗಿಗಳಿಗೆ ಮೇ 22 ಕೊನೆಯ ದಿನ. ಸನ್ನಿವೇಲ್ ಉದ್ಯೋಗಿಗಳಿಗೆ ಮೇ 29 ಕೊನೆಯ ದಿನ. ಒರಾಕಲ್ ಕಂಪನಿ ಈಗಾಗಲೇ 12 ಸಾವಿರ ಉದ್ಯೋಗಳನ್ನು ಕಡಿತ ಮಾಡಿದ ಬೆನ್ನಲ್ಲೇ ಇದೀಗ ಮೆಟಾ ಮತ್ತೆ ಉದ್ಯೋದ ಕಡಿತ ಮಾಡಿದೆ.&lt;/p&gt;&lt;img&gt;&lt;p&gt;ಕ್ಯಾಲಿಫೋರ್ನಿಯಾದ ಎರಡು ಕಚೇರಿಗಳಾದ ಬರ್ಲಿನ್&zwnj;ಗೇಮ್ ಹಾಗೂ ಸನ್ನಿವೇಲ್ ಕಚೇರಿಗಳಲ್ಲಿ ಮೊದಲ ಹಂತದಲ್ಲಿ 200 ಮಂದಿಯ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ಈಗಾಗಲೇ ಮೆಟಾ ಸಿಇಒ ಮಾರ್ಕ್ ಜುಕರ್&zwnj;ಬರ್ಗ್ ಮೆಟಾದ ಎಲ್ಲಾ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಎಐ ಬಳಕೆ ಮಾಡಲಾಗುತ್ತಿದೆ. ಈ ಉದ್ಯೋಗ ಕಡಿತವನ್ನು ಮೆಟಾ ಕಂಪನಿ ಉದ್ಯೋಗಿಗಳಿಗೆ ಎಪ್ರಿಲ್ ತಿಂಗಳಲ್ಲಿ ಸೂಚನೆ ನೀಡಲಾಗಿತ್ತು. ಇದೀಗ ಮೇ.29ಕ್ಕೆ ಎರಡು ಹಂತದಲ್ಲಿ ಉದ್ಯೋಗಿಗಳ ವೃತ್ತಿಯ ಕೊನೆಯ ದಿನವಾಗಲಿದೆ.&lt;/p&gt;&lt;img&gt;&lt;p&gt;ಮೇಟಾ ಸೇಲ್ಸ್, ರಿಕ್ರೂಟಿಂಗ್, ರಿಲಾಯಿಟಿ ಲ್ಯಾಬ್, ಹಾರ್ಡ್&zwnj;ವೇರ್ ಟೀಂ ಸೇರಿದಂತೆ ಹಲುವು ವಿಭಾಗಗಳಿಂದ ಮೆಟಾ ಉದ್ಯೋಗ ಕಡಿತ ಮಾಡುತ್ತಿದೆ. ಮೆಟಾ ಈಗಾಲೇ ಎಐ ಬಳಕೆಗೆ ದುಬಾರಿ ಮೊತ್ತ ಹೂಡಿಕೆ ಮಾಡಿದೆ. ಹಂತ ಹಂತವಾಗಿ ಎಐ ಆವರಿಸಿಕೊಳ್ಳುತ್ತಿದ್ದಂತೆ ಉದ್ಯೋದ ಕಡಿತ ಮಾಡುತ್ತಿದೆ.&lt;/p&gt;&lt;img&gt;&lt;p&gt;ಕಳೆದ ತಿಂಗಳು ಮೆಟಾ 700 ಮಂದಿ ಉದ್ಯೋದ ಕಡಿತ ಘೋಷಿಸಿತ್ತು. 2022, 2023ರಲ್ಲೂ ಮೆಟಾ ಉದ್ಯೋಗ ಕಡಿತ ಮಾಡಿದೆ. ಮೆಟಾ ಹಂತ ಹಂತವಾಗಿ ಉದ್ಯೋಗ ಕಡಿತ ಮಾಡುತ್ತಲೇ ಬಂದಿದೆ. ಇದೀಗ ಹೊಸ ಘೋಷಣೆ ಮಾಡಿದೆ.&lt;/p&gt;&lt;img&gt;&lt;p&gt;ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಈಗಾಗಲೇ ಒರಾಕಲ್ ಉದ್ಯೋಗ ಕಡಿತ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳಲ್ಲಿ ಎಐ ಆವರಿಸಿಕೊಳ್ಳುತ್ತಿದೆ. ಜೊತೆಗೆ ಆರ್ಥಿಕ ಹಿಂಜರಿತಗಲೂ ಉದ್ಯೋದ ಕಡಿತ ಸಮಸ್ಯೆ ತೀವ್ರಗೊಳ್ಳುತ್ತಿದೆ.&lt;/p&gt;&lt;h2&gt;ಎಐ ಆತಂಕ&lt;/h2&gt;]]></content:encoded>
            <category>private-jobs</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/private-jobs/meta-layoffs-2026-facebook-parent-to-cut-jobs-in-silicon-valley-amid-massive-ai-push-pz8bkoz"/>
        </item>
        <item>
            <title><![CDATA[6 ವರ್ಷದಲ್ಲಿ 6 ಲಕ್ಷದಿಂದ 68 ಲಕ್ಷಕ್ಕೆ ಏರಿಕೆಯಾಯ್ತ ವೇತನ: ಟೆಕ್ಕಿ ಪೋಸ್ಟ್ ಭಾರಿ ವೈರಲ್]]></title>
            <link>https://kannada.asianetnews.com/jobs/salary-increased-from-6-lakhs-to-68-lakhs-in-6-years-techie-post-goes-viral/articleshow-q6spuw1</link>
            <guid isPermaLink="true">https://kannada.asianetnews.com/jobs/salary-increased-from-6-lakhs-to-68-lakhs-in-6-years-techie-post-goes-viral/articleshow-q6spuw1</guid>
            <pubDate>Mon, 30 Mar 2026 15:07:30 +0530</pubDate>
            <description><![CDATA[&lt;p&gt;ಐಐಟಿ/ಐಐಎಂ ಪದವಿ ಇಲ್ಲದೆಯೂ ಸಾಫ್ಟ್&zwnj;ವೇರ್ ಎಂಜಿನಿಯರ್ ಒಬ್ಬರು ಕೇವಲ ಆರು ವರ್ಷಗಳಲ್ಲಿ ತಮ್ಮ ವೇತನವನ್ನು 6 ಲಕ್ಷದಿಂದ 68 ಲಕ್ಷಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಒಂದು ವರ್ಷದ ವಿರಾಮದ ನಂತರವೂ, ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಉನ್ನತ ಹುದ್ದೆಗೇರಿದ ಅವರ ಯಶೋಗಾಥೆ ರೆಡ್ಡಿಟ್&zwnj;ನಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmz1cb975phsjxm410drqh3m,imgname-6-to-68-lakh-salary-increase-1774863133991.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವೇತನ 6 ಲಕ್ಷದಿಂದ 68 ಲಕ್ಷಕ್ಕೆ ಏರಿಕೆಯಾಗಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಪ್ರಸ್ತುತ ಜಾಗತಿಕ ವಾತಾವರಣ, ಬೆಳೆಯುತ್ತಿರುವ ಎಐ ತಂತ್ರಜ್ಞಾನದಿಂದಾಗಿ ಇಂದು ಸ್ಥಿರವಾದ ಉದ್ಯೋಗ ಇರೋದೇ ಒಂದು ಒಂದು ದೊಡ್ಡ ಸಾಹಸವಾಗಿದೆ. ಅನೇಕರು ಹಠಾತ್ ಉದ್ಯೋಗ ಕಡಿತದಿಂದ ಆರ್ಥಿಕ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಉದ್ಯೋಗದ ಅನಿಶ್ಚಿತತೆಯು ಉದ್ಯೋಗಿಗಳನ್ನು ಚಿಂತೆಗೀಡು ಮಾಡುತ್ತಿರುವ ಈ ಸಮಯದಲ್ಲಿ ಉದ್ಯೋಗ ಅರ್ಹತೆಯ ಜೊತೆ ಸಾಕಷ್ಟು ಸ್ಕಿಲ್&zwnj;ಗಳನ್ನು ಹೊಂದಿರುವುದು ಬಹಳ ಅಗತ್ಯವಾಗಿದೆ. ಐಐಟಿ ಐಐಎಂನಲ್ಲಿ ಓದಿದವರಿಗೆ ಮಾತ್ರ ಈ ಸಂದರ್ಭದಲ್ಲೂ ಕೆಲಸವಿರುತ್ತದೆ ಎಂಬ ನಂಬಿಕೆ ಅನೇಕರಿಗಿದೆ. ಆದರೆ ಐಐಟಿ ಐಐಎಂನಲ್ಲಿ ಯಾವುದೇ ಪದವಿ ಪಡೆಯದೆಯೂ ಕೇವಲ ಆರು ವರ್ಷದಲ್ಲಿ ತನ್ನ ವೇತನ 6 ಲಕ್ಷದಿಂದ 68 ಲಕ್ಷವಾಗಿ ಬದಲಾಗಿರುವ ಬಗ್ಗೆ ಸಾಫ್ಟ್&zwnj;ವೇರ್ ಉದ್ಯೋಗಿಯೊಬ್ಬರು ಸೋಶಿಯಲ್ ಮೀಡಿಯಾ ರೆಡಿಟ್&zwnj;ನಲ್ಲಿ ಹೇಳಿಕೊಂಡಿದ್ದು, ಅವರ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.&lt;/p&gt;&lt;p&gt;ಕೇವಲ ಆರು ವರ್ಷಗಳಲ್ಲಿ ತನ್ನ ವಾರ್ಷಿಕ ವೇತನ 6 ಲಕ್ಷ ರೂ.ಗಳಿಂದ 68 ಲಕ್ಷ ರೂ.ಗಳಿಗೆ ಹೇಗೆ ಏರಿತು ಎಂಬುದನ್ನು ವಿವರಿಸುವ ಮೂಲಕ ಸಾಫ್ಟ್&zwnj;ವೇರ್ ಎಂಜಿನಿಯರ್ ಒಬ್ಬರು ಆನ್&zwnj;ಲೈನ್&zwnj;ನಲ್ಲಿ ಗಮನ ಸೆಳೆದಿದ್ದಾರೆ.&lt;/p&gt;&lt;h3&gt;&lt;strong&gt;ಸಾಫ್ಟ್&zwnj;ವೇರ್ ಉದ್ಯೋಗಿಯ ಪೋಸ್ಟ್ ಭಾರಿ ವೈರಲ್&lt;/strong&gt;&lt;/h3&gt;&lt;p&gt;ರೆಡ್ಡಿಟ್&zwnj;ನ ಡೆವಲಪರ್ಸ್ ಇಂಡಿಯಾ ಫೋರಂನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್, ಸ್ಥಿರ ಬೆಳವಣಿಗೆ, ವೃತ್ತಿಜೀವನದ ವಿರಾಮ ಮತ್ತು ಹೆಚ್ಚು ಸ್ಪರ್ಧಾತ್ಮಕ ತಂತ್ರಜ್ಞಾನ ಉದ್ಯಮದಲ್ಲಿ ಬಲವಾದ ಪುನರಾಗಮನವನ್ನು ಎತ್ತಿ ತೋರಿಸುತ್ತದೆ. ಮಧ್ಯಮ ಹಂತದ ಎಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದ ನಂತರ ಈ ಸಾಫ್ಟ್&zwnj;ವೇರ್ ಎಂಜಿನಿಯರ್ 2019 ರಲ್ಲಿ ತಮ್ಮ ವೃತ್ತಿಪ ಜೀವನ ಪ್ರಾರಂಭಿಸಿದರು. ಸೇವಾ ಆಧಾರಿತ ಕಂಪನಿಯಲ್ಲಿ ಅವರ ಮೊದಲ ಕೆಲಸಕ್ಕೆ ವಾರ್ಷಿಕ 6 ಲಕ್ಷ ರೂ.ವೇತನವಿತ್ತು. ಅವರ ಆರಂಭದ ಉದ್ಯೋಗವು ಸಾಧಾರಣ ಉದ್ಯೋಗ ಎನಿಸಿದರೂ ಅವರು ಪ್ರಾಯೋಗಿಕ ಅನುಭವವನ್ನು ಗಳಿಸುವ ಮತ್ತು ತಮ್ಮ ತಾಂತ್ರಿಕ ಅಡಿಪಾಯವನ್ನು ಬಲಪಡಿಸುವತ್ತ ಗಮನಹರಿಸಿದರು. ಆದರೆ ಸೆಪ್ಟೆಂಬರ್ 2020 ರಲ್ಲಿ ಅವರು ಉತ್ಪನ್ನ ಆಧಾರಿತ ಸಂಸ್ಥೆಗೆ ಕೆಲಸ ಬದಲಾಯಿಸಿದಾಗ ಅವರ ಬದುಕಿನಲ್ಲಿ ಒಂದು ಪ್ರಮುಖ ತಿರುವು ಸಿಕ್ಕಿತು. ಈ ಉದ್ಯೋಗ ಅವರ ವಾರ್ಷಿಕ ಗಳಿಕೆಯನ್ನು ಗಮನಾರ್ಹವಾಗಿ 13 ಲಕ್ಷ ರೂ.ಗಳಿಗೆ ಹೆಚ್ಚಿಸಿತು. ಅಲ್ಲದೇ ಭವಿಷ್ಯದ ಬೆಳವಣಿಗೆಗೆ ವೇದಿಕೆ ಸಿದ್ಧಪಡಿಸಿತು.&lt;/p&gt;&lt;p&gt;ಅವರ ಸ್ಥಿರ ಕಾರ್ಯಕ್ಷಮತೆ ಮತ್ತು ಕೌಶಲ್ಯ ಅಭಿವೃದ್ಧಿಯು 2022ರ ಆರಂಭದಲ್ಲಿ ಫಲ ನೀಡಿದ್ದು, ಅವರು ಉನ್ನತ ಎಂಜಿನಿಯರಿಂಗ್ ಹುದ್ದೆಗೆ ಬಡ್ತಿ ಪಡೆದಾಗ ಅವರ ವಾರ್ಷಿಕ ವೇತನ 23 ಲಕ್ಷ ರೂ.ಗೆ ಏರಿಕೆಯಾಯ್ತು. ವೃತ್ತಿ ಜೀವನ ಮೇಲ್ಮುಖವಾಗಿ ಸಾಗುತ್ತಿರುವಾಗಲೇ ಅವರು ವೈಯಕ್ತಿಕ ಕೌಟುಂಬಿಕ ಕಾರಣದಿಂದಾಗಿ ಡಿಸೆಂಬರ್ 2022ರಲ್ಲಿ ಅವರು ಉದ್ಯೋಗ ತೊರೆದಿದ್ದರಿಂದ ಅವರ ಉದ್ಯೋಗಕ್ಕೆ ಬ್ರೇಕ್ ಬಿದ್ದಿತ್ತು. ಅವು ಉದ್ಯೋಗದಿಂದ ವರ್ಷದ ಕಾಲ ವಿರಾಮ ತೆಗೆದುಕೊಳ್ಳುವಂತಾಗಿತ್ತು. ಇದರಿಂದ ಮತ್ತೆ ಉದ್ಯೋಗ ಪಡೆಯುವುದು ಸವಾಲಿನ ವಿಚಾರವಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;ಬೋನಿಗೆ ಬಿದ್ದ ಹೆಣ್ಣು ಹುಲಿ ಜೊತೆ ಸೆಲ್ಫಿಗೆ ಮುಗಿಬಿದ್ದ ಗಂಡುಗಲಿಗಳು&lt;/p&gt;&lt;p&gt;ಅದರೂ ವಿಚಲಿತರಾಗದೇ ಮತ್ತೆ ಉದ್ಯೋಗ ಕ್ಷೇತ್ರಕ್ಕೆ ಕಾಲಿರಿಸುವ ಕಠಿಣ ಬಯಕೆಯೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡರು. ನಾಲ್ಕು ತಿಂಗಳುಗಳಲ್ಲಿ, ಅವರು ಡೇಟಾ ರಚನೆಗಳು, ಅಲ್ಗಾರಿದಮ್&zwnj;ಗಳು ಮತ್ತು ಸಿಸ್ಟಮ್ ವಿನ್ಯಾಸದಂತಹ ಪ್ರಮುಖ ತಾಂತ್ರಿಕ ಕ್ಷೇತ್ರಗಳನ್ನು ಪುನಃ ಪರಿಶೀಲಿಸಿದರು. ಅವರ ಶಿಸ್ತಿ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಅಂತಿಮವಾಗಿ 2024 ರ ಆರಂಭದಲ್ಲಿ ಅವರಿಗೆ ಹೊಸ ಉದ್ಯೋಗ ಸಿಕ್ತು ಬರೀ ಇಷ್ಟೇ ಅಲ್ಲ ಅವರಿಗೆ ವಾರ್ಷಿಕವಾಗಿ 48 ಲಕ್ಷ ರೂ.ಗಳ ಗಣನೀಯ ಪ್ಯಾಕೇಜ್ ಕೂಡ ಈ ಉದ್ಯೋಗದಿಂದ ಸಿಕ್ಕಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ನುಡಿದಂತೆ ನಡೆದ ಅಮಿತ್ ಷಾ: 10 ವರ್ಷದಲ್ಲಿ 10,000 ನಕ್ಸಲರು ಶರಣು: ದೇಶ ನಕ್ಸಲ್ ಮುಕ್ತ ಮಾಡುವತ್ತ ದಿಟ್ಟ ಹೆಜ್ಜೆ&lt;/p&gt;&lt;p&gt;ಮಾರ್ಚ್ 2026 ರ ಹೊತ್ತಿಗೆ, ಅವರು ವಾರ್ಷಿಕ 68 ಲಕ್ಷ ರೂ.ಗಳ ಪ್ರಭಾವಶಾಲಿ ಸಂಬಳದೊಂದಿಗೆ ಪ್ರಮುಖ ತಂತ್ರಜ್ಞಾನ ಸಂಸ್ಥೆಗೆ ಸೇರಿದರು., ಇದು ಅವರ ವೃತ್ತಿಪರ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ತಮ್ಮ ಅನುಭವವನ್ನು ಹೇಳುತ್ತಾ ತನ್ನ ಮೊದಲ ಉದ್ಯೋಗ ಬದಲಾವಣೆ ಅತ್ಯಂತ ಕಷ್ಟಕರವಾದ ಹಂತವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Anusha Kb</dc:creator>
            <atom:link href="https://kannada.asianetnews.com/jobs/salary-increased-from-6-lakhs-to-68-lakhs-in-6-years-techie-post-goes-viral/articleshow-q6spuw1"/>
        </item>
        <item>
            <title><![CDATA[30 ಸಾವಿರ ಜನರ ಮಾರಣಹೋಮ ಮಾಡಿದ ಕಂಪೆನಿ; ಉಸಿರಾಡೋಕೂ ಅವಕಾಶ ಕೊಡ್ಲಿಲ್ಲ: ಕವಿರಾಜ್]]></title>
            <link>https://kannada.asianetnews.com/private-jobs/oracle-company-layoffs-2026-kannada-song-writer-kaviraj-post/articleshow-qp8ggvx</link>
            <guid isPermaLink="true">https://kannada.asianetnews.com/private-jobs/oracle-company-layoffs-2026-kannada-song-writer-kaviraj-post/articleshow-qp8ggvx</guid>
            <pubDate>Sat, 04 Apr 2026 17:43:41 +0530</pubDate>
            <description><![CDATA[&lt;p&gt;Company Layoffs:&zwnj; ಇಂದು ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಕಷ್ಟಪಟ್ಟು ಓದಿ, ಕಂಪೆನಿಯಲ್ಲಿ ಕೆಲಸ ಮಾಡೋಣ, ಸೆಟಲ್&zwnj; ಆಗೋಣ ಎಂದುಕೊಂಡರೆ ತುಂಬ ಕಷ್ಟ. ಯಾವಾಗ ಯಾರು ಲೇಆಫ್&zwnj; ಆಗುತ್ತಾರೆ ಎಂದು ಹೇಳಲಾಗದು. ಈ ಬಗ್ಗೆ ಗೀತರಚನೆಕಾರ ಕವಿರಾಜ್&zwnj; ಅವರು ವಿಶೇಷ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knc6hng8j6eq59s70tg3zxa0,imgname-layoff-by-amazon-1769753738028--1--1775304758792.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಗತ್ತಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಸೆಟಲ್ ಆಗಿದ್ದೇವೆ ಅಂದುಕೊಂಡು EMI ಮೂಲಕ ತನ್ನ ಪುಟ್ಟ ಸ್ವರ್ಗವನ್ನು ಕಟ್ಟಿಕೊಂಡಿರುತ್ತಾರೆ. ಬೆಳಿಗ್ಗೆ 6 ಗಂಟೆಗೆ ಒಂದು ಮೇಲ್ ಬರುತ್ತೆ, ಅದರಲ್ಲಿ ನಿಮ್ಮ ಸೇವೆ ನಮಗೆ ಅವಶ್ಯಕತೆಯಿಲ್ಲ. ನಿಮ್ಮನ್ನು ಈ ಕ್ಷಣದಿಂದ ಕೆಲಸದಿಂದ ತೆಗೆಯಲಾಗಿದೆ ಎಂದು ಬರೆಯಲಾಗಿರುತ್ತೆ. ಹೇಗಿರಬೇಡ ಆ ಆಘಾತ. ಅವರ ಇಡೀ ಜಗತ್ತೇ ಒಂದೇ ಕ್ಷಣಕ್ಕೆ ತಲೆಕೆಳಗಾಗಿರುತ್ತೆ.&lt;/p&gt;&lt;h2&gt;ಅಕ್ಷರಶಃ ಮೊನ್ನೆ oracle ನಡೆಸಿದ್ದು&lt;/h2&gt;&lt;p&gt;30 ಸಾವಿರ ಜನರ ಮಾರಣಹೋಮ ( oracle company layoffs 2026 ). ಇದು ಎಷ್ಟು ಬೃಹತ್ ಎಂದರೆ ಆ ಜಾಗತಿಕ ದೈತ್ಯ ಕಂಪನಿ ಇಷ್ಟು ದಿನ ತನಗಾಗಿ ದುಡಿದ ಶೇಕಡಾ 18 ರಷ್ಟು ಉದ್ಯೋಗಿಗಳನ್ನು ಉಸಿರೆತ್ತಲು ಅವಕಾಶವಿಲ್ಲದಂತೆ ಒಂದೇ ಏಟಿಗೆ ಹೊರದಬ್ಬಿದೆ. ಕಾರ್ಪೋರೇಟ್ ಜಗತ್ತಿನಷ್ಟು ನಿರ್ದಯಿ ರಾಕ್ಷಸ ಕೂಟ ಇನ್ನೊಂದು ಇರಲು ಸಾಧ್ಯವಿಲ್ಲ. ಕೆಲಸದಿಂದ ತೆಗೆಯುವ ಒಂದು ಗೌರವಯುತ ಮಾರ್ಗ ಅನುಸರಿಸುವ ನೈತಿಕತೆಯೂ ಆ ಧನದಾಹಿ ವ್ಯವಸ್ಥೆಗಿಲ್ಲ. ಇಡೀ ಪ್ರಪಂಚ ಅವರ ಹಿಡಿತದಲ್ಲೇ ಇದೆ. ರೂಲ್ಸ್ ಎಲ್ಲ ಅವರೇ ಬರೆಸುತ್ತಾರೆ. ಅವರ ಒಂದು ಕೂದಲು ಕೊಂಕಿಸಲು ಯಾರಿಗೂ ಸಾಧ್ಯವಿಲ್ಲ ಎಂಬುದು ಶತಸಿದ್ಧ. ಬೇರೆ ಹೊತ್ತಾಗಿದ್ದರೆ ಇಲ್ಲಿಲ್ಲ ಎಂದರೇ ಅಲ್ಲಿ ಕೆಲಸ ಸಿಗುತ್ತೆ ಅನ್ನಬಹುದಿತ್ತು. ಆದರೆ ಈಗೇನಿದ್ದರೂ ಕೆಲಸದಿಂದ ತೆಗೆದು ಬಿಸಾಕುವ ಕಾಲ. ಬಹುತೇಕ ಕಾರ್ಪೊರೇಟ್ ಕಂಪನಿಗಳು ಇದೇ ಹಾದಿಯಲ್ಲಿವೆ. ಕಳೆದೊಂದು ವರ್ಷದಲ್ಲಿ ಅಮೆಜಾನ್ 30 ಸಾವಿರ, ಇಂಟೆಲ್ 27 ಸಾವಿರ, ಮೈಕ್ರೋಸಾಫ್ಟ್ 15 ಸಾವಿರ, ಟಿಸಿಎಸ್ 12 ಸಾವಿರ ಉದ್ಯೋಗಳನ್ನು ಹೊರದಬ್ಬಿವೆ .&lt;/p&gt;&lt;h2&gt;Prompt ಮೂಲಕ ಎಲ್ಲ ಕೆಲಸ ಆಗ್ತಿದೆ&lt;/h2&gt;&lt;p&gt;ದೊಡ್ಡ ವಿಪರ್ಯಾಸ ಎಂದರೆ ನೌಕರರ ಗುಂಡಿಯನ್ನು ಸಂಬಳ ಕೊಟ್ಟು ಅವರ ಕೈಯಲ್ಲೇ ತೊಡಿಸಲಾಗಿರುತ್ತೆ. ಇವರ ಕೆಲಸ ಕಸಿಯುವ AI ತಂತ್ರಜ್ಞಾನಕ್ಕೆ ಇವರೇ ಮನೆ ಮಠ ಮರೆತು ಹಗಲಿರುಳು ದುಡಿದಿರುತ್ತಾರೆ. ನಿಜಕ್ಕೂ ಸಂಭ್ರಮ ಪಟ್ಟು ಬೆರಗುಗಣ್ಣಿನಿಂದ ನೋಡಬೇಕಿದ್ದ ತಾಂತ್ರಿಕ ಅಭಿವೃದ್ಧಿಗಳು ಭಯ ಹುಟ್ಟಿಸುತ್ತಿವೆ. ಅದರಲ್ಲೂ AI ಅಕ್ಷರಶಃ ನಡುಕ ಹುಟ್ಟಿಸುವ ವೇಗದಲ್ಲಿ ಎಲ್ಲವನ್ನೂ ನುಂಗುತ್ತಿದೆ. ಒಬ್ಬ ಡಿಜಿಟಲ್ ಅನಕ್ಷರಸ್ಥ ಎಂದೇ ಹೇಳಬಹುದಾದ ನಾನೇ ಎಷ್ಟೋ ತಂತ್ರಜ್ಞರಿಂದ ಮಾಡಿಸಿಕೊಳ್ಳಬೇಕಿದ್ದ ಕೆಲಸಗಳನ್ನಕೇವಲ prompt ಕೊಡುವ ಮೂಲಕ ನಾನೇ ಮಾಡಿಕೊಳ್ಳುತ್ತಿದ್ದೇನೆ.&lt;/p&gt;&lt;h2&gt;ಇನ್ನೆಷ್ಟು ಜನ ಕೆಲಸ ಕಳ್ಕೊಳ್ತಾರೆ?&lt;/h2&gt;&lt;p&gt;ಇನ್ನು ಡಿಜಿಟಲ್&zwnj; ಆಗಿ ತಿಳಿದವರು ಏನೇನು ಮಾಡುತ್ತಿರಬಹುದು. AI ಕೆಲಸ ಕಳೆಯೋದಿಲ್ಲ ಬದಲಿಗೆ ಹೊಸ ಉದ್ಯೋಗಳನ್ನು ಸೃಷ್ಟಿಸುತ್ತೆ ಎನ್ನುವ ಕಿವಿ ಮೇಲೆ ಹೂ ಇಡುವ ಹೇಳಿಕೆಗೆ ಯಾವ ಆಧಾರವೂ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಈಗಾಗಲೇ ನನ್ನ ವಲಯದಲ್ಲೇ ಕೆಲಸ ಕಳೆದುಕೊಂಡು ದಿಕ್ಕೆಟ್ಟಿರುವ ಮಿತ್ರರು ಹಲವರಿದ್ದಾರೆ ಇನ್ನೆಷ್ಟು ಜನ ಕೆಲಸ ಕಳೆದುಕೊಳ್ಳಬಹುದು ಗೊತ್ತಿಲ್ಲ.&lt;/p&gt;&lt;h2&gt;ಅಲ್ಲೆಲ್ಲೋ ನಡೆಯುತ್ತಿರುವ ಯುದ್ಧ ನಮ್ಮ ಊಟದ ತಟ್ಟೆ ತಟ್ಟಿದೆ&lt;/h2&gt;&lt;p&gt;ಅತ್ತ ದೇಶಗಳ ಅಧಿಕಾರ ಹಿಡಿದ ಅವಿವೇಕಿ ಹುಚ್ಚರ ಅಹಂನಿಂದಾಗಿ ಎಲ್ಲೋ ನಡೆಯುತ್ತಿರುವ ಯುದ್ಧ, ಇಲ್ಲಿ ನಮ್ಮ ದೈನಂದಿನ ಬದುಕನ್ನು, ನಮ್ಮ ಊಟದ ತಟ್ಟೆಯನ್ನು ತಟ್ಟಿದೆ. ಒಟ್ಟಾರೆ ಇಡೀ ಜಗತ್ತಲ್ಲೇ ಒಂದು ಅರಾಜಕತೆಯಿದೆಜಿ. ಎಲ್ಲಾ ದಿಕ್ಕಿನಲ್ಲೂ ಮಹಾ ವಿಪ್ಲವವೊಂದರೆಡೆಗೆ ದಾಪುಗಾಲು ಹಾಕುತ್ತಿರುವಂತಿದೆ. ಏನೇ ಆದರೂ ಇಂತಾ ಸುನಾಮಿಗಳೆದುರು ನಾವೆಲ್ಲರೂ ಅಸಹಾಯಕರು. ಕಾಲವೇ ಎಲ್ಲಕ್ಕೂ ಉತ್ತರ, ಪರಿಹಾರ ಕೊಡಬೇಕು. ಏನೇ ಬಂದರೂ ಕುಗ್ಗದೇ ಎದುರಿಸಲು ಮಾನಸಿಕವಾಗಿ ನಾವೆಲ್ಲರೂ ಸಿದ್ಧರಾಗಿರಬೇಕು ಅಷ್ಟೇ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/private-jobs/oracle-company-layoffs-2026-kannada-song-writer-kaviraj-post/articleshow-qp8ggvx"/>
        </item>
    </channel>
</rss>
