<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 20 May 2026 13:23:38 +0530</lastBuildDate>
        <atom:link href="https://kannada.asianetnews.com/rss/private-jobs" rel="self" type="application/rss+xml"/>
        <item>
            <title><![CDATA[ಡೆಲಿವರಿ ಕೆಲಸದಲ್ಲಿ ಬಂಪರ್ ಆದಾಯ, ದಿನಕ್ಕೆ  20,000 ಗಳಿಕೆ! ಟಾಪ್ನಲ್ಲಿದ್ದಾರೆ ಹುಡುಗಿಯರು]]></title>
            <link>https://kannada.asianetnews.com/private-jobs/a-fun-job-where-delivery-partners-earn-5-6-lakh-and-women-are-leading-too/articleshow-17efolz</link>
            <guid isPermaLink="true">https://kannada.asianetnews.com/private-jobs/a-fun-job-where-delivery-partners-earn-5-6-lakh-and-women-are-leading-too/articleshow-17efolz</guid>
            <pubDate>Sat, 25 Apr 2026 13:41:14 +0530</pubDate>
            <description><![CDATA[&lt;p&gt;ಕೆಲ್ಸ ಯಾವ್ದೆ ಆಗಿರಲಿ, ಕೈತುಂಬ ಸಂಪಾದನೆ ಮಾಡೋದು ಮುಖ್ಯ. ಡೆಲಿವರಿ ಕೆಲ್ಸ ಮಾಡಿ ತಿಂಗಳಿಗೆ 5 -6 ಲಕ್ಷ ಸಂಪಾದನೆ ಮಾಡ್ತಿರೋ ಸಿಬ್ಬಂದಿ ಇದ್ದಾರೆ. ಈ ಕೆಲ್ಸದ ಬಗ್ಗೆ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq1v20qcbse3ga05jee32b3j,imgname-delivery-jobs-1777104650988.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಡೆಲಿವರಿ ಬಾಯ್ ಕೆಲ್ಸ ಅಂದ್ರೆ ಮೂಗು ಮುರಿಯೋರೇ ಹೆಚ್ಚು. ಇವ್ದು ಕೆಲ್ಸ ಇಲ್ಲ ಎನ್ನುವವರು ಇದನ್ನು ಮಾಡ್ತಾರೆ ಎನ್ನುವ ಒಂದು ಭಾವನೆ ಇದೆ. ಹಾಗೆ ಅವರು ಅತೀ ಕಡಿಮೆ ಸಂಬಳ ಪಡೀತಾರೆ ಅಂತ ಬಹುತೇಕರು ನಂಬಿದ್ದಾರೆ. ಭಾರದಲ್ಲಿ ಡೆಲಿವರಿ ಬಾಯ್ಸ್ ಸಂಬಳ 25 ರಿಂದ 30 ಸಾವಿರ ಇರುತ್ತೆ. ಇದಕ್ಕಿಂತ ಹೆಚ್ಚು ಸಂಪಾದನೆ ಮಾಡೋರಿದ್ರೂ ಅವರು ಹಗಲು &ndash; ರಾತ್ರಿ ಅಂದೆ ದುಡಿತಾರೆ. ಆದ್ರೆ ಅಮೆರಿಕಾದಲ್ಲಿ ಹಾಗಲ್ಲ. ಡೆಲಿವರಿ ಕೆಲ್ಸವನ್ನು ಯುನೈಟೆಡ್ ಸ್ಟೇಟ್ಸ್ನಂತಹ ದೇಶದಲ್ಲಿ ಮೋಜಿನ ಕೆಲಸವಾಗಿ ನೋಡಲಾಗುತ್ತೆ. ಹಾಗಾಗಿಯೇ ಹೆಣ್ಮಕ್ಕಳೂ ಈ ಕೆಲ್ಸದಲ್ಲಿ ಆಸಕ್ತಿ ತೋರಿಸ್ತಾರೆ.&lt;/p&gt;&lt;h2&gt;ಅಮೆರಿಕಾದಲ್ಲಿ ಡೆಲಿವರಿ ಕೆಲ್ಸಕ್ಕೆ ಎಷ್ಟು ಸಂಬಳ ?&lt;/h2&gt;&lt;p&gt;ಡೆಲಿವರಿ ಕೆಲಸವನ್ನು ಅಮೆರಿಕಾದಲ್ಲಿ ಹೆಚ್ಚಾಗಿ ಅರೆಕಾಲಿಕ ಕೆಲಸವೆಂದು ಪರಿಗಣಿಸಲಾಗುತ್ತದೆ. ಕೆಲವು ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರುವವರಿಗೆ, ಡೆಲಿವರಿ ಕೆಲಸವು ಅತ್ಯುತ್ತಮ ಆಯ್ಕೆಯಾಗಿದೆ. ಕಡಿಮೆ ಸಮಯದಲ್ಲೇ ಇವರು ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡ್ತಾರೆ. ಇಲ್ಲಿ ಡೆಲಿವರಿ ಬಾಯ್ಸ್ ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ. ಫುಲ್ ಟೈಮ ಡೆಲಿವರಿ ಕೆಲ್ಸ ಮಾಡುವ ಜನರೂ ಅಮೆರಿಕಾದಲ್ಲಿದ್ದಾರೆ. ಅವರು 8 ಗಂಟೆ ಕೆಲ್ಸ ಮಾಡಿದ್ರೆ ಪಾರ್ಟ್ ಟೈಂ ಕೆಲಸಗಾರರು 4 ಗಂಟೆ ಕೆಲ್ಸ ಮಾಡ್ತಾರೆ.&lt;/p&gt;&lt;p&gt;ಬಿಪಿಸಿಎಲ್ ನೇಮಕಾತಿ: ಆಯ್ಕೆಯಾದವರಿಗೆ ಭರ್ಜರಿ ಜಾಕ್&zwnj;ಪಾಟ್&zwnj; , ತಿಂಗಳಿಗೆ ₹1.40&lt;/p&gt;&lt;h3&gt;ಆನ್ಲೈನ್ ಆಪ್ ಬಳಕೆ ಹೆಚ್ಚು&lt;/h3&gt;&lt;p&gt;ಅಮೆರಿಕಾದಲ್ಲಿ ಆನ್ಲೈನ್ ಆಪ್ ಬಳಸುವವರ ಸಂಖ್ಯೆ ಹೆಚ್ಚಿದೆ. ಹಾಗೆ ಡೆಲಿವರಿ ಸಿಬ್ಬಂದಿ ಕೂಡ ಒಂದಕ್ಕಿಂತ ಹೆಚ್ಚು ಅಪ್ಲಿಕೇಷನ್ ಬಳಸ್ತಾರೆ. ಉಬರ್ ಈಟ್ಸ್ ಮತ್ತು ಡೋರ್ಡ್ಯಾಶ್ನಂತಹ ಅಪ್ಲಿಕೇಶನ್ ಗಳನ್ನು ಏಕಕಾಲದಲ್ಲಿ ಬಳಸುತ್ತಾರೆ. ಕಡಿಮೆ ದೂರದ, ಹೆಚ್ಚಿನ ಆದಾಯ ಬರುವ ಆರ್ಡರ್ ಮಾತ್ರ ಒಪ್ಪಿಕೊಂಡು, ಸಮಯ ಉಳಿಸೋ ಜೊತೆಗೆ ಹಣ ಸಂಪಾದನೆ ಮಾಡ್ತಾರೆ,&lt;/p&gt;&lt;p&gt;&lt;strong&gt;ಹೆಚ್ಚೆಚ್ಚು ಸಿಗುತ್ತೆ ಟಿಪ್&lt;/strong&gt;&lt;/p&gt;&lt;p&gt;ಯುಎಸ್ ನಗರಗಳಲ್ಲಿ, ಡೆಲಿವರಿ ಸಿಬ್ಬಂದಿ ಡೆಲಿವರಿ ಹಣಕ್ಕಿಂತ ಟಿಪ್ ನಿಂದ ಹೆಚ್ಚು ಗಳಿಸ್ತಾರೆ. ಪ್ರತಿ ಡೆಲಿವರಿಗೆ ಟಿಪ್ ಮಾಡುವ ಸಂಸ್ಕೃತಿ ಇದೆ. ಹೆಚ್ಚಿನ ನಗರಗಳಲ್ಲಿ ಟಿಪ್ ಮೂಲಕ ಡೆಲಿವರಿ ಸಿಬ್ಬಂದಿ 10 ರಿಂದ 15 ಡಾಲರ್ ಗಳಿಸ್ತಾರೆ. ದೊಡ್ಡ ನಗರದಲ್ಲಿ ಇದು 30 ಡಾಲರ್ ಗಿಂತ ಹೆಚ್ಚಿದೆ.&lt;/p&gt;&lt;p&gt;&lt;strong&gt;ಬೋನಸ್ ವ್ಯವಸ್ಥೆ&lt;/strong&gt;&lt;/p&gt;&lt;p&gt;ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಂತಹ ಅಮೆರಿಕ ನಗರಗಳಲ್ಲಿ, ಆರ್ಡರ್ಗಳ ಸಂಖ್ಯೆ ತುಂಬಾ ಹೆಚ್ಚು. ಹಾಗಾಗಿ ಡೆಲಿವರಿ ಬಾಯ್ಸ್ ಗಳಿಕೆ ಕೂಡ ಹೆಚ್ಚು. ಈ ಪ್ರದೇಶಗಳಲ್ಲಿನ ಕಂಪನಿಗಳು ಬೋನಸ್ ಸಹ ನೀಡುತ್ವೆ. ಇದು ಗಳಿಕೆಯನ್ನು ದ್ವಿಗುಣಗೊಳಿಸುತ್ತೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಅಥವಾ ಲಾಸ್ ಏಂಜಲೀಸ್ನಂತಹ ದುಬಾರಿ ನಗರಗಳಲ್ಲಿ ಡೆಲಿವರಿಗೆ ಬೇಡಿಕೆ ಮತ್ತು ಸಂಬಳ ಹೆಚ್ಚಿದೆ.&lt;/p&gt;&lt;p&gt;ಕೃಷಿ ಇಲಾಖೆಯಲ್ಲಿ ನಿಮಗಿದೋ ಸುವರ್ಣಾವಕಾಶ,&lt;/p&gt;&lt;p&gt;&lt;strong&gt;ದಿನಕ್ಕಿಷ್ಟು ಗಳಿಸ್ತಾರೆ ಡೆಲಿವರಿ ಸಿಬ್ಬಂದಿ&lt;/strong&gt;&lt;/p&gt;&lt;p&gt;ಯುಎಸ್ನಲ್ಲಿ ಡೆಲಿವರಿ ಸಿಬ್ಬಂದಿ ತಿಂಗಳಿಗೆ 5 ಲಕ್ಷ ರೂಪಾಯಿ ಗಳಿಸುವ ಅವಕಾಶ ಇದೆ. ದಿನಕ್ಕೆ ಸರಿಸುಮಾರು 20,000 ಸಾವಿರ ಗಳಿಸುವ ಅವಕಾಶ ಇದೆ. ಡೆಲಿವರಿ ಕೆಲಸಗಾರರು ಗಂಟೆಗೆ 20 ರಿಂದ 25 ಡಾಲರ್ ಗಳಿಸುತ್ತಾರೆ. ಕೆಲವರು ಕೇವಲ 4 ಗಂಟೆಗಳಲ್ಲಿ 100 ಡಾಲರ್ ಅಂದ್ರೆ 9,000ದವರೆಗೆ ಗಳಿಸುತ್ತಾರೆ. ಅದೇ ಫುಲ್ ಟೈಂ ಡೆಲಿವರಿ ಕೆಲಸಗಾರರು 200 ರಿಂದ 220 ಡಾಲರ್ ಕಡ್ಡಾಯವಾಗಿ ಗಳಿಸುತ್ತಾರೆ.&lt;/p&gt;&lt;p&gt;ಪೀಕ್ ಅವರ್ಗಳು, ಬೋನಸ್ಗಳು ಮತ್ತು ಉತ್ತಮ ಸಲಹೆಗಳನ್ನು ಹೊಂದಿರುವ ಪ್ರದೇಶಗಳಲ್ಲಿ, ಡೆಲಿವರಿ ಕೆಲಸಗಾರರು ಗಂಟೆಗೆ 30 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಗಣ ಸಂಪಾದನೆ ಮಾಡ್ತಾರೆ. ಎಲ್ಲ ಲೆಕ್ಕ ಹಾಕಿದ್ರೆ 8 ಗಂಟೆ ಡೆಲಿವರಿ ಕೆಲ್ಸ ಮಾಡುವ ವ್ಯಕ್ತಿ ತಿಂಗಳಿಗೆ 6 ಲಕ್ಷದವರೆಗೆ ಗಳಿಸಬಹುದು. ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ಸಮಯದಲ್ಲಿ ಕೆಲ್ಸ ಮಾಡುವ ಸಿಬ್ಬಂದಿ ಗಳಿಕೆ ಮತ್ತಷ್ಟು ಹೆಚ್ಚಿರುತ್ತದೆ. ಇಲ್ಲಿ ಕೆಲ್ಸ ಮಾಡೋಕೆ ಯಾವುದೇ ಒತ್ತಡ ಇಲ್ಲ. ಹಾಗಾಗಿ ಮಹಿಳೆಯರು ಆರಾಮವಾಗಿ ಕೆಲ್ಸ ಮಾಡ್ತಾರೆ. ಪಾರ್ಟ್ ಟೈಂ ಕೆಲ್ಸ ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/private-jobs/a-fun-job-where-delivery-partners-earn-5-6-lakh-and-women-are-leading-too/articleshow-17efolz"/>
        </item>
        <item>
            <title><![CDATA[ಐಟಿ ದೈತ್ಯ ಕಾಗ್ನಿಜೆಂಟ್‌ನಿಂದ 15,000 ಟೆಕ್ಕಿಗಳ ಲೇಆಫ್‌ಗೆ ಸಿದ್ದತೆ, ಇದರಲ್ಲಿ ಭಾರತೀಯರೇ ಹೆಚ್ಚು!]]></title>
            <link>https://kannada.asianetnews.com/it-jobs/cognizant-layoffs-2026-project-leap-15000-jobs-cut-india-impact-san/articleshow-1akinn6</link>
            <guid isPermaLink="true">https://kannada.asianetnews.com/it-jobs/cognizant-layoffs-2026-project-leap-15000-jobs-cut-india-impact-san/articleshow-1akinn6</guid>
            <pubDate>Tue, 05 May 2026 20:21:24 +0530</pubDate>
            <description><![CDATA[&lt;p&gt;ಐಟಿ ದೈತ್ಯ ಕಾಗ್ನಿಜೆಂಟ್ ತನ್ನ 'ಪ್ರಾಜೆಕ್ಟ್ ಲೀಪ್' ಅಡಿಯಲ್ಲಿ ಜಾಗತಿಕವಾಗಿ 15,000 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ, ಇದರಲ್ಲಿ ಹೆಚ್ಚಿನ ಪಾಲು ಭಾರತೀಯರದ್ದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hts32ph0jtevq41etgnm0nwj,imgname-Cognizant-Salary-Hike-2024-1712386562592.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.5): &lt;/strong&gt;ಐಟಿ ಸೇವಾ ಕ್ಷೇತ್ರದ ಪ್ರಮುಖ ಕಂಪನಿ ಕಾಗ್ನಿಜೆಂಟ್ (Cognizant) ತನ್ನ ಉದ್ಯೋಗಿಗಳಲ್ಲಿ ಭಾರಿ ಪ್ರಮಾಣದ ಕಡಿತಕ್ಕೆ ಮುಂದಾಗುತ್ತಿದೆ. ಜಾಗತಿಕವಾಗಿ ಸುಮಾರು 12,000 ದಿಂದ 15,000 ಉದ್ಯೋಗಿಗಳ ಮೇಲೆ ಇದು ಪರಿಣಾಮ ಬೀರಲಿದ್ದು, ಕಡಿತಗೊಳ್ಳಲಿರುವ ಉದ್ಯೋಗಗಳಲ್ಲಿ ಬಹುಪಾಲು ಭಾರತದಲ್ಲಿವೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಘೋಷಿಸಲಾದ 'ಪ್ರಾಜೆಕ್ಟ್ ಲೀಪ್' ಅಡಿಯಲ್ಲಿ ಕಂಪನಿಯು ಸುಮಾರು 230 ಮಿಲಿಯನ್ ಡಾಲರ್&zwnj;ನಿಂದ 320 ಮಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಿದೆ. ಇದರಲ್ಲಿ ಸುಮಾರು 200 ರಿಂದ 270 ಮಿಲಿಯನ್ ಡಾಲರ್ ಮೊತ್ತವನ್ನು ಉದ್ಯೋಗಿಗಳ ವಜಾ ವೇಳೆ ನೀಡಲಾಗುವ ಪರಿಹಾರ (Severance Pay) ಮತ್ತು ಇತರ ಸಿಬ್ಬಂದಿ ವೆಚ್ಚಗಳಿಗಾಗಿಯೇ ಮೀಸಲಿಡಲಾಗಿದೆ.&lt;/p&gt;&lt;p&gt;ಕಾಗ್ನಿಜೆಂಟ್ ಪ್ರಸ್ತುತ ಜಾಗತಿಕವಾಗಿ 3.57 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಈ ಪೈಕಿ 2.50 ಲಕ್ಷಕ್ಕೂ ಹೆಚ್ಚು ಜನರು ಭಾರತದಲ್ಲೇ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಉದ್ಯೋಗಿಗಳ ಸಂಬಳ ಮತ್ತು ವಜಾ ವೇಳೆ ನೀಡುವ ಪರಿಹಾರದ ಆಧಾರದ ಮೇಲೆ ಈ ಸಂಖ್ಯೆಯನ್ನು ಲೆಕ್ಕಹಾಕಲಾಗಿದೆ.&lt;/p&gt;&lt;p&gt;ಭಾರತದಲ್ಲಿ ಸರಾಸರಿ ವಾರ್ಷಿಕ ವೇತನ ₹15 ಲಕ್ಷ ಎಂದು ಅಂದಾಜಿಸಿದರೆ, ಆರು ತಿಂಗಳ ಪರಿಹಾರವಾಗಿ ₹7.5 ಲಕ್ಷ ನೀಡಬೇಕಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಭಾರತವೊಂದರಲ್ಲೇ 12,000 ದಿಂದ 13,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಮೆರಿಕಾದಲ್ಲಿ ಸರಾಸರಿ ವೇತನ $100,000 ಆಗಿರುವುದರಿಂದ, ಒಬ್ಬ ಉದ್ಯೋಗಿಗೆ ಸುಮಾರು $50,000 ಪರಿಹಾರ ನೀಡಬೇಕಾಗುತ್ತದೆ. ಹೀಗಾಗಿ ಅಲ್ಲಿ ಕಡಿತಗೊಳ್ಳುವ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರಲಿದೆ.&lt;/p&gt;&lt;h2&gt;&lt;strong&gt;ಬದಲಾಗುತ್ತಿರುವ ಐಟಿ ವ್ಯವಹಾರದ ಮಾದರಿ&lt;/strong&gt;&lt;/h2&gt;&lt;p&gt;ಈ ಉದ್ಯೋಗ ಕಡಿತಕ್ಕೆ ಕೇವಲ ವೆಚ್ಚದ ಕಡಿತವೊಂದೇ ಕಾರಣವಲ್ಲ, ಬದಲಾಗಿ ಕಂಪನಿಗಳ ಕೆಲಸದ ಶೈಲಿಯಲ್ಲಿ ಉಂಟಾಗುತ್ತಿರುವ ಬದಲಾವಣೆಯೂ ಕಾರಣವಾಗಿದೆ ಗ್ರಾಹಕರು ಇನ್ನು ಮುಂದೆ ಸಾಂಪ್ರದಾಯಿಕ 'ಪಿರಮಿಡ್' ಮಾದರಿಯನ್ನು ಇಷ್ಟಪಡುತ್ತಿಲ್ಲ. ಅಂದರೆ, ಹೆಚ್ಚಿನ ಸಂಖ್ಯೆಯ ಫ್ರೆಶರ್&zwnj;ಗಳನ್ನು (Freshers) ತರಬೇತಿಗೊಳಿಸಲು ಅವರು ಹಣ ನೀಡಲು ಸಿದ್ಧರಿಲ್ಲ. ಕಾಗ್ನಿಜೆಂಟ್ ಸಿಇಒ ರವಿ ಕುಮಾರ್ ಎಸ್ ಹೇಳುವಂತೆ, ಕಂಪನಿಯು ಈಗ &quot;ಡಿಜಿಟಲ್ ಶ್ರಮ (Automation/AI) ಮತ್ತು ಮಾನವ ಶ್ರಮ&quot;ದ ಮಿಶ್ರಿತ ಮಾದರಿಗೆ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಆಟೊಮೇಷನ್ ಬಳಕೆಯಿಂದಾಗಿ ಹೆಚ್ಚಿನ ಕೆಲಸಗಳು ಮನುಷ್ಯರ ಹಸ್ತಕ್ಷೇಪವಿಲ್ಲದೆಯೇ ನಡೆಯಲಿದೆ.&lt;/p&gt;&lt;h2&gt;&lt;strong&gt;ಐಟಿ ಕ್ಷೇತ್ರದಲ್ಲಿ ಮುಂದುವರಿದ ಕಡಿತ&lt;/strong&gt;&lt;/h2&gt;&lt;p&gt;ಕೇವಲ ಕಾಗ್ನಿಜೆಂಟ್ ಮಾತ್ರವಲ್ಲದೆ, ಇಡೀ ಐಟಿ ಉದ್ಯಮದಲ್ಲಿ ಈ ಟ್ರೆಂಡ್ ಮುಂದುವರಿದಿದೆ. ಟಿಸಿಎಸ್ (TCS) ಜುಲೈ 2025 ರಲ್ಲಿ 12,500 ಉದ್ಯೋಗಿಗಳನ್ನು ವಜಾ ಮಾಡಿತ್ತು. ಅಕ್ಸೆಂಚರ್ (Accenture), ಎಚ್&zwnj;ಸಿಎಲ್&zwnj;ಟೆಕ್ (HCLTech) ಮತ್ತು ಒರಾಕಲ್ (Oracle) ಕಂಪನಿಗಳು ಕೂಡ ಉದ್ಯೋಗ ಕಡಿತವನ್ನು ನಡೆಸಿವೆ. ಇದು ಕಾಗ್ನಿಜೆಂಟ್&zwnj;ನ ಮೊದಲ ರೀಸೆಟ್ ಏನಲ್ಲ. 2023-24ರ 'ನೆಕ್ಸ್ಟ್&zwnj;ಜೆನ್' (NextGen) ಕಾರ್ಯಕ್ರಮದ ಅಡಿಯಲ್ಲಿ ಕಂಪನಿಯು ಸುಮಾರು 3,500 ಉದ್ಯೋಗಗಳನ್ನು ಕಡಿತಗೊಳಿಸಿತ್ತು ಮತ್ತು 1.1 ಕೋಟಿ ಚದರ ಅಡಿ ಕಚೇರಿ ಜಾಗವನ್ನು ಖಾಲಿ ಮಾಡಿತ್ತು. ಪ್ರಸ್ತುತ ಹೊಸ ಬದಲಾವಣೆಗಳು ಐಟಿ ವಲಯದಲ್ಲಿ ಉದ್ಯೋಗಿಗಳಿಗೆ ಸವಾಲಿನ ಕಾಲ ಎದುರಾಗಿರುವುದನ್ನು ಸೂಚಿಸುತ್ತಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/it-jobs/cognizant-layoffs-2026-project-leap-15000-jobs-cut-india-impact-san/articleshow-1akinn6"/>
        </item>
        <item>
            <title><![CDATA[Bengaluru Employee Termination: ಆಫೀಸ್‌ ನನ್ನ ಲೈಫ್ ಅನ್ಕೊಂಡೆ;‌ ಕೆಲಸದಿಂದಲೇ ತೆಗೆದ್ರು; ಬೆಂಗಳೂರು ಹುಡುಗಿ]]></title>
            <link>https://kannada.asianetnews.com/private-jobs/bengaluru-corporate-women-nidhi-job-fired-she-says-she-is-done-five-mistakes/articleshow-350gn0b</link>
            <guid isPermaLink="true">https://kannada.asianetnews.com/private-jobs/bengaluru-corporate-women-nidhi-job-fired-she-says-she-is-done-five-mistakes/articleshow-350gn0b</guid>
            <pubDate>Mon, 27 Apr 2026 12:51:36 +0530</pubDate>
            <description><![CDATA[&lt;p&gt;Bengaluru Women Nidhi Job Terminate: ಇಂದು ಸಾಕಷ್ಟು ಜನರು ಕಾರ್ಪೋರೇಟ್&zwnj; ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಂದಿನ ತಕ್ಷಣ ಲೇಆಫ್&zwnj; ಅಥವಾ ಟರ್ಮಿನೇಟ್&zwnj; ಎಂದು ಹೇಳಿ ಕೆಲಸದಿಂದ ತೆಗೆದು ಹಾಕಲಾಗುವುದು. ಹೀಗೆ ಟರ್ಮಿನೇಟ್&zwnj; ಆದ ಬೆಂಗಳೂರಿನ ಹುಡುಗಿಯೊಬ್ಬರು ಏನು ತಪ್ಪು ಮಾಡಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq6x0et37z5619y22h4arbdz,imgname-new-project---2026-04-27t124724.127-1777274469187.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ನಿಧಿ ಎನ್ನುವವರು ಕಾರ್ಪೋರೇಟ್&zwnj; ಕಂಪೆನಿಯಲ್ಲಿ ಕೆಲಸ ( A Bengaluru employee was allegedly fired ) ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್&zwnj; ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದಾರೆ. ನಾನು ಏನು ತಪ್ಪು ಮಾಡಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಯಾಕೆ ಕೆಲಸ ಹೋಗುತ್ತದೆ?&lt;/h2&gt;&lt;p&gt;ಕೆಲಸ ಚೆನ್ನಾಗಿ ಮಾಡಿಲ್ಲ ಎಂದಾಗಲೂ ಕೂಡ ಕೆಲಸ ಹೋಗೋದು ಸಹಜ ಆಗಿದೆ. ಇನ್ನೂ ಕೆಲವೊಮ್ಮೆ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಕೂಡ, ಆಫೀಸ್&zwnj;ನ ಒಣ ರಾಜಕೀಯಕ್ಕೆ ಕೆಲಸ ಹೋಗುವಂಥ ಪರಿಸ್ಥಿತಿ ಬರುತ್ತದೆ. ಇನ್ನೂ ಕೆಲವೊಮ್ಮೆ ಸಂಬಳ ಹೆಚ್ಚಿದ್ದರೂ, ಇನ್ಯಾವುದೋ ಬೇಡಿಕೆಗೆ ಒಪ್ಪಿಲ್ಲ ಎಂದಾಗ, ಮ್ಯಾನೇಜರ್&zwnj; ಹೇಳಿದಂತೆ ಕೇಳಿಲ್ಲ ಎಂದಾಗಲೂ ಕೂಡ ಕೆಲಸ ಹೋಗುವುದು.&lt;/p&gt;&lt;p&gt;ಮ್ಯಾನೇಜರ್&zwnj; ಮೊಂಡು ಹಠಕ್ಕೋ ಅಥವಾ ಅರ್ಥವಿಲ್ಲದ ಹೇಳಿಕೆಗೆ ಜೈ ಎಂದಿಲ್ಲ ಅಂದಾಗಲೂ ಕೂಡ ಕೆಲಸ ಹೋಗುವುದು. ಅಷ್ಟೇ ಯಾಕೆ? ಇನ್ಯಾವುದೋ ಉದ್ಯೋಗಿಯನ್ನು ಓಲೈಸಲು ಹೋಗಿ ಕೂಡ ಕೆಲಸ ಹೋಗುವುದು. ಆಡುಭಾಷೆಯಲ್ಲಿ ಹೇಳುವಂತೆ ಬಕೆಟ್&zwnj; ಹಿಡಿದಿಲ್ಲ ಎಂದಾಗಲೂ ಕೆಲಸ ಹೋಗುವುದು.&lt;/p&gt;&lt;p&gt;ಕಾರ್ಪೋರೇಟ್&zwnj; ಕೆಲಸದ ಮಧ್ಯೆ ನಿಧಿ ಏನೇನು ತಪ್ಪು ಮಾಡಿದೆ ಎಂದು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ&lt;/p&gt;&lt;h2&gt;ಕೆಲಸವೇ ಅಸ್ತಿತ್ವ ಎಂದುಕೊಂಡೆ&lt;/h2&gt;&lt;p&gt;ನನಗೂ ವೈಯಕ್ತಿಕ ಜೀವನ ಇದೆ ಎಂದು ಮರೆತು ಹೋದೆ, ಕೆಲಸವೇ ನನ್ನ ಅಸ್ತಿತ್ವ ಎಂದುಕೊಂಡೆ ಎಂದು ನಿಧಿ ಹೇಳಿದ್ದಾರೆ.&lt;/p&gt;&lt;h2&gt;ಆರೋಗ್ಯಕ್ಕೆ ಗಮನ ಕೊಡಲಿಲ್ಲ&lt;/h2&gt;&lt;p&gt;ನಾನು ನನಗೂ ಆರೋಗ್ಯ ಇದೆ, ಬದುಕಬೇಕು ಎನ್ನೋದು ಮರೆತೆ. ನನ್ನ ದಿನಚರಿ ಕಡೆಗೆ ಗಮನವೇ ಕೊಡಲಿಲ್ಲ. ಸರಿಯಾಗಿ ಊಟ-ತಿಂಡಿ ಕೂಡ ಮಾಡಲಿಲ್ಲ. ಪೌಷ್ಟಿಕ ಆಹಾರ ತಿನ್ನುತ್ತಿರಲಿಲ್ಲ, ವ್ಯಾಯಾಮ ಮಾಡುತ್ತಿರಲಿಲ್ಲ.&lt;/p&gt;&lt;h2&gt;ಒತ್ತಡದಲ್ಲಿ ಬದುಕುತ್ತಿದ್ದೆ&lt;/h2&gt;&lt;p&gt;ಆಫೀಸ್&zwnj;ಗೆ ಹೋಗಬೇಕು, ಕೆಲಸ ಆಗಿಲ್ಲ, ಟಾರ್ಗೆಟ್&zwnj; ರೀಚ್&zwnj; ಆಗಬೇಕು ಎಂದು ನಾನು ಒತ್ತಡದಲ್ಲಿ ಬದುಕುತ್ತಿದ್ದೆ. ಆಫೀಸ್&zwnj;ಗೆ ಹೋಗೋದು, ಮನೆಗೆ ಬರೋದು ಆಗುತ್ತಿತ್ತು. ಇದರ ಮಧ್ಯೆ ಮಾನಸಿಕವಾಗಿ ಕೂಡ ನನಗೆ ರೆಸ್ಟ್&zwnj; ಬೇಕು ಎನ್ನೋದು ಮರೆತಿದ್ದೆ ಎಂದು ಹೇಳಿದ್ದಾರೆ.&lt;/p&gt;&lt;h2&gt;ಲೈಫ್&zwnj;ಸ್ಟೈಲ್&zwnj; ಮರೆತಿದ್ದೆ&lt;/h2&gt;&lt;p&gt;ಆಫೀಸ್&zwnj; ಕೆಲಸದ ಮಧ್ಯೆ ಆಹಾರ, ವ್ಯಾಯಾಮದ ಕಡೆಗೆ ಗಮನವೇ ಕೊಡಲಿಲ್ಲ, ಇತರ ಕೌಶಲಗಳನ್ನು ಅಳವಡಿಸಿಕೊಳ್ಳಲು ಯೋಚಿಸಿರಲಿಲ್ಲ. ಅಷ್ಟೇ ಅಲ್ಲದೆ ಸ್ನೇಹಿತರನ್ನು ಭೇಟಿ ಆಗೋದು, ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿ ಆಗೋದನ್ನು ಬಿಟ್ಟಿದ್ದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/private-jobs/bengaluru-corporate-women-nidhi-job-fired-she-says-she-is-done-five-mistakes/articleshow-350gn0b"/>
        </item>
        <item>
            <title><![CDATA[ಇನ್ಫೋಸಿಸ್ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಎಐ ಅಬ್ಬರದ ನಡುವೆಯೂ ಲೇ-ಆಫ್ ಇಲ್ಲ ಎಂದ ಸಲೀಲ್ ಪರೇಖ್!]]></title>
            <link>https://kannada.asianetnews.com/private-jobs/infosys-ceo-salil-parekh-no-layoffs-ai-driven-growth-hiring-plans-san/articleshow-3xip2mg</link>
            <guid isPermaLink="true">https://kannada.asianetnews.com/private-jobs/infosys-ceo-salil-parekh-no-layoffs-ai-driven-growth-hiring-plans-san/articleshow-3xip2mg</guid>
            <pubDate>Thu, 30 Apr 2026 11:37:21 +0530</pubDate>
            <description><![CDATA[&lt;p&gt;ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು ಕೃತಕ ಬುದ್ಧಿಮತ್ತೆ (AI) ಕಾರಣದಿಂದ ಯಾವುದೇ ಉದ್ಯೋಗ ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ಮರುತರಬೇತಿ ನೀಡುವುದರ ಜೊತೆಗೆ, ಈ ವರ್ಷವೂ ಸುಮಾರು 20,000 ಪದವೀಧರರನ್ನು ನೇಮಿಸಿಕೊಳ್ಳಲು ಯೋಜಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jwrkwavkshggjkdzwd50hn8c,imgname-infosys-ceo-salil-parekh-1748877847411.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.30): &lt;/strong&gt;ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಐಟಿ ಕ್ಷೇತ್ರವನ್ನು ಮರುರೂಪಿಸುತ್ತಿರುವ ಬೆನ್ನಲ್ಲೇ, ಭಾರತದ ಪ್ರಮುಖ ಐಟಿ ದೈತ್ಯ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಇನ್ಫೋಸಿಸ್ ಕಂಪನಿಯು ಯಾವುದೇ ರೀತಿಯ ಉದ್ಯೋಗ ಕಡಿತ (Layoffs) ಮಾಡುವುದಿಲ್ಲ ಎಂದು ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ಸ್ಪಷ್ಟಪಡಿಸಿದ್ದಾರೆ. ಕಂಪನಿಯು 'ಎಐ' ಅಲೆಗೆ ತಕ್ಕಂತೆ ತನ್ನ ಉದ್ಯೋಗಿಗಳಿಗೆ ಮರುತರಬೇತಿ (Reskilling) ನೀಡುವ ಮೂಲಕ ಮತ್ತು ಹೊಸ ನೇಮಕಾತಿಗಳ ಮೂಲಕ ಪ್ರಗತಿ ಸಾಧಿಸಲು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಉದ್ಯೋಗ ಕಡಿತಕ್ಕೆ ಬ್ರೇಕ್, ನೇಮಕಾತಿಗೆ ಆದ್ಯತೆ&lt;/strong&gt;&lt;/h2&gt;&lt;p&gt;ಮನಿ ಕಂಟ್ರೋಲ್&zwnj;ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಲೀಲ್ ಪರೇಖ್, &quot;ಕಳೆದ ಒಂದು ವರ್ಷದಲ್ಲಿ ನಾವು ಯಾವುದೇ ಉದ್ಯೋಗ ಕಡಿತ ಮಾಡಿಲ್ಲ ಮತ್ತು ಮುಂದೆಯೂ ಅಂತಹ ಯಾವುದೇ ಮುನ್ಸೂಚನೆಗಳಿಲ್ಲ&quot; ಎಂದು ಹೇಳಿದ್ದಾರೆ. ಇತರ ಐಟಿ ಸಂಸ್ಥೆಗಳು ಆಟೋಮೇಷನ್ ನೆಪದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಾಗ ಇನ್ಫೋಸಿಸ್ ಈ ನಿರ್ಧಾರಕ್ಕೆ ಬಂದಿರುವುದು ಗಮನಾರ್ಹ. ಬೆಂಗಳೂರು ಮೂಲದ ಈ ಕಂಪನಿಯು ಈ ವರ್ಷವೂ ಸುಮಾರು 20,000 ಪದವೀಧರರನ್ನು ಕ್ಯಾಂಪಸ್ ನೇಮಕಾತಿ ಮೂಲಕ ಕೆಲಸಕ್ಕೆ ಸೇರಿಸಿಕೊಳ್ಳಲು ಯೋಜಿಸಿದೆ. ಕಳೆದ ವರ್ಷ ಕೂಡ ಇಷ್ಟೇ ಪ್ರಮಾಣದಲ್ಲಿ ನೇಮಕಾತಿ ನಡೆದಿತ್ತು.&lt;/p&gt;&lt;h2&gt;&lt;strong&gt;'ಎಐ' ಕೆಲಸ ಕಸಿದುಕೊಳ್ಳುವುದಿಲ್ಲ, ಕೆಲಸದ ವ್ಯಾಪ್ತಿ ಹೆಚ್ಚಿಸಲಿದೆ&lt;/strong&gt;&lt;/h2&gt;&lt;p&gt;ಕೃತಕ ಬುದ್ಧಿಮತ್ತೆಯು ಕೆಲಸದ ಸ್ವರೂಪವನ್ನು ಬದಲಿಸಬಹುದು ಆದರೆ ಕೆಲಸವನ್ನು ಇಲ್ಲದಂತೆ ಮಾಡುವುದಿಲ್ಲ ಎಂಬುದು ಪರೇಖ್ ಅವರ ಬಲವಾದ ವಾದ. ಎಐ ತಂತ್ರಜ್ಞಾನವು ಕೆಲಸದ ವ್ಯಾಪ್ತಿಯನ್ನು ವಿಸ್ತರಿಸುತ್ತದೆಯೇ ಹೊರತು ಕುಗ್ಗಿಸುವುದಿಲ್ಲ. ಆರಂಭಿಕ ಹಂತದ (Entry-level) ಕೆಲಸಗಳ ಸ್ವರೂಪ ಬದಲಾಗಬಹುದು, ಆದರೆ ಪ್ರತಿಭೆಗಳಿಗೆ ಬೇಡಿಕೆ ಇದ್ದೇ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;ಇನ್ಫೋಸಿಸ್ ತನ್ನ ಇಂಜಿನಿಯರ್&zwnj;ಗಳಿಗೆ ಎಐ ಪರಿಕರಗಳೊಂದಿಗೆ ಮತ್ತು ಅವುಗಳಿಲ್ಲದೆಯೂ ಕೆಲಸ ಮಾಡುವಂತೆ ತರಬೇತಿ ನೀಡುತ್ತಿದೆ. ಇದರಿಂದ ಎಐ ಸಿದ್ಧಪಡಿಸಿದ ಕೋಡ್&zwnj;ಗಳನ್ನು ಮೌಲ್ಯಮಾಪನ ಮಾಡುವ ಸಾಮರ್ಥ್ಯವನ್ನು ಅವರು ಬೆಳೆಸಿಕೊಳ್ಳಲಿದ್ದಾರೆ.&lt;/p&gt;&lt;h2&gt;&lt;strong&gt;ಇತರ ಕಂಪನಿಗಳಲ್ಲಿ ಉದ್ಯೋಗ ಕಡಿತದ ಬಿಸಿ&lt;/strong&gt;&lt;/h2&gt;&lt;p&gt;ಇನ್ಫೋಸಿಸ್ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರೂ, ಇತರ ಐಟಿ ಕಂಪನಿಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಜುಲೈ 2025 ರಲ್ಲಿ ಟಿಸಿಎಸ್ (TCS) ಸುಮಾರು 12,500 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಎಚ್&zwnj;ಸಿಎಲ್ ಟೆಕ್ (HCLTech), ಒರಾಕಲ್ (Oracle) ಮತ್ತು ಇತ್ತೀಚೆಗೆ ಕಾಗ್ನಿಜೆಂಟ್ (Cognizant) ಕಂಪನಿಗಳು ಕೂಡ ಉದ್ಯೋಗಿಗಳನ್ನು ಮರುಹಂಚಿಕೆ ಅಥವಾ ಕಡಿತಗೊಳಿಸುವ ಪ್ರಕ್ರಿಯೆಯಲ್ಲಿವೆ.&lt;/p&gt;&lt;h2&gt;&lt;strong&gt;ಬೆಳವಣಿಗೆಯ ಇಂಜಿನ್ ಆಗಲಿರುವ 'ಎಐ'&lt;/strong&gt;&lt;/h2&gt;&lt;p&gt;ಪ್ರಸ್ತುತ ಇನ್ಫೋಸಿಸ್&zwnj;ನ ಒಟ್ಟು ಆದಾಯದಲ್ಲಿ ಶೇ. 5.5 ರಷ್ಟು ಕೊಡುಗೆ ಎಐ ತಂತ್ರಜ್ಞಾನದಿಂದ ಬರುತ್ತಿದೆ. ಇದು ಮುಂದಿನ ದಿನಗಳಲ್ಲಿ ಕಂಪನಿಯ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಯಾಗಲಿದೆ. ಈ ಬದಲಾವಣೆಯನ್ನು ವೇಗಗೊಳಿಸಲು ಇನ್ಫೋಸಿಸ್ ಕಂಪನಿಯು OpenAI ಮತ್ತು Anthropic ನಂತಹ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಅಲ್ಲದೆ ತನ್ನದೇ ಆದ 'Topaz Fabric' ನಂತಹ ಆಂತರಿಕ ಪ್ಲಾಟ್&zwnj;ಫಾರ್ಮ್&zwnj;ಗಳನ್ನು ಅಭಿವೃದ್ಧಿಪಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/private-jobs/infosys-ceo-salil-parekh-no-layoffs-ai-driven-growth-hiring-plans-san/articleshow-3xip2mg"/>
        </item>
        <item>
            <title><![CDATA[ಕೃಷಿ ಇಲಾಖೆಯಲ್ಲಿ ನಿಮಗಿದೋ ಸುವರ್ಣಾವಕಾಶ, ಕೆಇಎಯಿಂದ ಅರ್ಜಿ ಆಹ್ವಾನ!]]></title>
            <link>https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4</link>
            <guid isPermaLink="true">https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4</guid>
            <pubDate>Wed, 22 Apr 2026 18:44:05 +0530</pubDate>
            <description><![CDATA[ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕೃಷಿ ಇಲಾಖೆಯಲ್ಲಿ ಖಾಲಿ ಇರುವ 890 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಮೇ 10ರೊಳಗೆ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ ತಿಂಗಳಲ್ಲಿ ಲಿಖಿತ ಪರೀಕ್ಷೆಗಳು ನಡೆಯಲಿವೆ. ಈ ನೇಮಕಾತಿಯು ಕೃಷಿ ಪದವೀಧರರಿಗೆ ಸರ್ಕಾರಿ ವಲಯದಲ್ಲಿ ಸೇವೆ ಸಲ್ಲಿಸಲು ಉತ್ತಮ ಅವಕಾಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kktgd6bd5fgq0amyfwsjav01,imgname-agriculture-officer-salary-1773637376365.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದ ಕೃಷಿ ಕ್ಷೇತ್ರದ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಹತ್ವದ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 890 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್&zwnj;ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.&lt;/p&gt;&lt;h2&gt;ಹುದ್ದೆಗಳ ವಿವರ ಮತ್ತು ವರ್ಗೀಕರಣ&lt;/h2&gt;&lt;p&gt;ಈ ನೇಮಕಾತಿ ಪ್ರಕ್ರಿಯೆ ಮುಖ್ಯವಾಗಿ ಎರಡು ವೃಂದಗಳಲ್ಲಿ ನಡೆಯಲಿದೆ. ಒಟ್ಟು 890 ಹುದ್ದೆಗಳ ಪೈಕಿ &lsquo;ಗ್ರೂಪ್-ಬಿ&rsquo; ವೃಂದದ ಅಡಿಯಲ್ಲಿ 632 ಹುದ್ದೆಗಳು ಸೇರಿವೆ. ಇದರಲ್ಲಿ 81 ಕೃಷಿ ಅಧಿಕಾರಿ ಮತ್ತು 551 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿವೆ. ಉಳಿದಂತೆ, ಕಲ್ಯಾಣ ಕರ್ನಾಟಕ (371ಜೆ) ವೃಂದಕ್ಕೆ ಮೀಸಲಾದ 258 ಹುದ್ದೆಗಳಿಗೂ ಪ್ರತ್ಯೇಕ ನೇಮಕಾತಿ ನಡೆಯಲಿದೆ. ಕೃಷಿ ಪದವೀಧರರಿಗೆ ಸರ್ಕಾರದ ವಲಯದಲ್ಲಿ ಸೇವೆ ಸಲ್ಲಿಸಲು ಇದು ಮಹತ್ವದ ಅವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.&lt;/p&gt;&lt;h2&gt;ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು&lt;/h2&gt;&lt;p&gt;ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮೇ 10ರೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ದಿನಾಂಕವು ಕಲ್ಯಾಣ ಕರ್ನಾಟಕ ಹಾಗೂ ಇತರ ಎಲ್ಲಾ ವೃಂದದ ಅಭ್ಯರ್ಥಿಗಳಿಗೆ ಅನ್ವಯವಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ನಿಗದಿತ ಶುಲ್ಕವನ್ನು ಪಾವತಿಸಲು ಮೇ 12ರವರೆಗೆ ಅವಕಾಶ ನೀಡಲಾಗಿದೆ. ಕೊನೆಯ ಕ್ಷಣದ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಕೆಇಎ ಸಲಹೆ ನೀಡಿದೆ.&lt;/p&gt;&lt;h2&gt;ಪರೀಕ್ಷಾ ವೇಳಾಪಟ್ಟಿ&lt;/h2&gt;&lt;p&gt;ನೇಮಕಾತಿ ಪ್ರಕ್ರಿಯೆಯ ಅಂಗವಾಗಿ ಲಿಖಿತ ಪರೀಕ್ಷೆಗಳು ಜೂನ್ ತಿಂಗಳಲ್ಲಿ ನಡೆಯಲಿವೆ.&lt;/p&gt;&lt;p&gt;ಕನ್ನಡ ಭಾಷಾ ಪರೀಕ್ಷೆ: ಮೂಲ ಹಾಗೂ ಕಲ್ಯಾಣ ಕರ್ನಾಟಕ ಎರಡೂ ವೃಂದದ ಅಭ್ಯರ್ಥಿಗಳಿಗೆ ಜೂನ್ 6ರಂದು ಕಡ್ಡಾಯವಾಗಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಗ್ರೂಪ್-ಬಿ ಪರೀಕ್ಷೆ: ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಜೂನ್ 7ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ವೃಂದ: 371ಜೆ ವೃಂದಕ್ಕೆ ಸೇರಿದ 258 ಹುದ್ದೆಗಳಿಗಾಗಿ ಜೂನ್ 14ರಂದು ಪರೀಕ್ಷೆ ನಿಗದಿಯಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ&lt;/p&gt;&lt;p&gt;ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿದ್ದ ಹುದ್ದೆಗಳ ಭರ್ತಿಯಿಂದ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಾಗುವ ನಿರೀಕ್ಷೆಯಿದೆ. ರೈತರಿಗೆ ತಾಂತ್ರಿಕ ಸಲಹೆ ನೀಡುವುದು, ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ.&lt;/p&gt;&lt;p&gt;ಅರ್ಹತೆ, ಅರ್ಜಿ ವಿಧಾನ ಮತ್ತು ಇತರ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಬಹುದು. ಜೂನ್ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿರುವುದರಿಂದ ಅಭ್ಯರ್ಥಿಗಳಿಗೆ ಸಿದ್ಧತೆಗಾಗಿ ಸೀಮಿತ ಸಮಯ ಮಾತ್ರ ಇರುವುದರಿಂದ, ಕೃಷಿ ಪದವೀಧರರು ಈಗಿನಿಂದಲೇ ಯೋಜಿತವಾಗಿ ಅಭ್ಯಾಸ ಆರಂಭಿಸುವುದು ಅಗತ್ಯವಾಗಿದೆ.&lt;/p&gt;&lt;p&gt;ಒಟ್ಟಾರೆ, ಈ ನೇಮಕಾತಿ ಪ್ರಕ್ರಿಯೆ ಕೃಷಿ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವ ಜೊತೆಗೆ, ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನು ಒದಗಿಸಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4"/>
        </item>
        <item>
            <title><![CDATA['ನನ್ನ ಡಿಗ್ರಿ ಕೇವಲ ಎಂಟ್ರಿ ಟಿಕೆಟ್ ಅಷ್ಟೇ': ಜಾಬ್‌ ವೇಳೆ ಪದವಿ ಕೇವಲ ಶೇ. 3ರಷ್ಟು ಮಾತ್ರ ಬಳಕೆಯಾಗುತ್ತಿದೆ ಎಂದ NIT ಪದವೀಧರೆ!]]></title>
            <link>https://kannada.asianetnews.com/private-jobs/nit-graduate-manvi-viral-video-on-degree-utility-and-skills-in-corporate-jobs-san/articleshow-6itm2r0</link>
            <guid isPermaLink="true">https://kannada.asianetnews.com/private-jobs/nit-graduate-manvi-viral-video-on-degree-utility-and-skills-in-corporate-jobs-san/articleshow-6itm2r0</guid>
            <pubDate>Fri, 17 Apr 2026 21:10:11 +0530</pubDate>
            <description><![CDATA[&lt;p&gt;ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆ ಮಾನ್ವಿ, ತಮ್ಮ ಪದವಿಗಿಂತ ಸಂವಹನ ಕಲೆ ಮತ್ತು ಹೊಸ ಕೌಶಲಗಳೇ ಉದ್ಯೋಗದಲ್ಲಿ ಯಶಸ್ಸು ನೀಡಿದವು ಎಂದು ಹೇಳಿದ್ದಾರೆ. ಪದವಿ ಕೇವಲ ಕೆಲಸಕ್ಕೆ ಪ್ರವೇಶ ಟಿಕೆಟ್ ಮಾತ್ರ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe18x6h5asczqw124h31t4c,imgname-whatsapp-image-2026-04-17-at-9.04.00-pm-1776440079569.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.17): &lt;/strong&gt;ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆ ಮಾನ್ವಿ ಎಂಬುವವರು ಹಂಚಿಕೊಂಡ ವಿಡಿಯೋವೊಂದು ಈಗ ವೈರಲ್ ಆಗಿದೆ. ನಾಲ್ಕು ವರ್ಷಗಳ ಕಷ್ಟದ ಓದು ಉದ್ಯೋಗದ ಅವಧಿಯಲ್ಲಿ ಎಷ್ಟು ಕಡಿಮೆ ಬಳಕೆಯಾಗುತ್ತಿದೆ ಎಂಬ ಕಹಿಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಮಾನ್ವಿ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಾ, &quot;ನಾನು NIT ಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದೇನೆ. ಆದರೆ ನನ್ನ ಕೆಲಸದಲ್ಲಿ ಆ ಪದವಿಯ ಕೇವಲ ಶೇ. 3ರಷ್ಟು ಅಂಶಗಳು ಮಾತ್ರ ಬಳಕೆಯಾಗುತ್ತಿವೆ. ಡಿಗ್ರಿ ಎನ್ನುವುದು ಕೆಲಸ ಸಿಗಲು ಬೇಕಾದ ಎಂಟ್ರಿ ಟಿಕೆಟ್ ಮಾತ್ರವೇ ಹೊರತು, ಇಡೀ ಪಯಣವಲ್ಲ,&quot; ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಓದಿದ್ದಕ್ಕೂ ಮಾಡುವ ಕೆಲಸಕ್ಕೂ ಸಂಬಂಧವಿಲ್ಲ&lt;/strong&gt;&lt;/h2&gt;&lt;p&gt;ತಮ್ಮ ಸಹಪಾಠಿಗಳ ಪರಿಸ್ಥಿತಿಯ ಬಗ್ಗೆ ವಿವರಿಸಿದ ಅವರು, &quot;ನನ್ನ ಬ್ಯಾಚ್&zwnj;ನ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಾವು ಓದಿದ ವಿಷಯಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿಲ್ಲ. ಕಾಲೇಜಿನಲ್ಲಿ ನಾನು ಥರ್ಮೋಡೈನಾಮಿಕ್ಸ್, ಮೆಕ್ಯಾನಿಕ್ಸ್ ಮತ್ತು ಕೈನೆಟಿಕ್ಸ್&zwnj;ನಂತಹ ವಿಜ್ಞಾನದ ವಿಷಯಗಳನ್ನು ಓದಿದೆ. ಆದರೆ ಕೆಲಸದ ಸ್ಥಳದಲ್ಲಿ ನಾನು ಕೇವಲ ಎಕ್ಸೆಲ್ ಶೀಟ್ ನೋಡುವುದು, ಮೀಟಿಂಗ್&zwnj;ಗಳನ್ನು ಮಾಡುವುದು ಮತ್ತು ಇಂಟರ್ನೆಟ್ ಮೂಲಕ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿಯೇ ನಿರತರಾಗಿದ್ದೇನೆ,&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಶಸ್ಸಿಗೆ ಬೇಕಾದ ನಿಜವಾದ ಕೌಶಲಗಳೇನು?&lt;/strong&gt;&lt;/h2&gt;&lt;p&gt;ಕೆಲಸದಲ್ಲಿ ಬೆಳೆಯಲು ಪದವಿಗಿಂತ ಹೆಚ್ಚಾಗಿ ಸಂವಹನ ಕಲೆ (Communication) ಮತ್ತು ಕೌಶಲದ ಅಪ್&zwnj;ಗ್ರೇಡ್ (Upskilling) ಸಹಾಯ ಮಾಡಿತು ಎಂದು ಮಾನ್ವಿ ಅಭಿಪ್ರಾಯಪಟ್ಟಿದ್ದಾರೆ. &quot;ನನ್ನ ಡಿಗ್ರಿ ನನಗೆ ಕೇವಲ ಸಂದರ್ಶನದವರೆಗೆ ಹೋಗಲು ಸಹಾಯ ಮಾಡಿತು. ಅಲ್ಲಿಂದ ಮುಂದಿನ ಹಾದಿಯಲ್ಲಿ ನಾನು ಕಲಿತ ವೈಯಕ್ತಿಕ ಕೌಶಲಗಳೇ ನನ್ನನ್ನು ಕಾಪಾಡಿದವು,&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳಿಗೆ ಮಾನ್ವಿ ನೀಡಿದ ಕಿವಿಮಾತು&lt;/strong&gt;&lt;/h2&gt;&lt;p&gt;ಕಾಲೇಜಿನಲ್ಲಿ ಓದುತ್ತಿರುವಾಗಲೇ ಯಾವುದಾದರೂ ಒಂದು ಹೆಚ್ಚುವರಿ ಕೌಶಲ, ಟೂಲ್ ಅಥವಾ ಹವ್ಯಾಸವನ್ನು ಕಲಿತುಕೊಳ್ಳಿ. ಪದವಿಯ ಜೊತೆಗೆ ನಿಮಗೆ ಹಣ ಗಳಿಸಿಕೊಡುವಂತಹ ಯಾವುದಾದರೂ ಹೊಸ ವಿಷಯವನ್ನು ಕಲಿಯುವುದು ಇಂದಿನ ಕಾಲದಲ್ಲಿ ಅತಿ ಮುಖ್ಯ. ಡಿಗ್ರಿಯನ್ನು ನಿರ್ಲಕ್ಷಿಸಬೇಡಿ, ಆದರೆ ಡಿಗ್ರಿ ಒಂದೇ ಸಾಕು ಎಂದು ಕುಳಿತುಕೊಳ್ಳಬೇಡಿ ಎಂದಿದ್ದಾರೆ.&lt;/p&gt;&lt;p&gt;ಮಾನ್ವಿ ಅವರ ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಒಬ್ಬ ಯೂಸರ್&zwnj; &quot;ಇದು ನೂರಕ್ಕೆ ನೂರರಷ್ಟು ಸತ್ಯ, ನಾವೆಲ್ಲರೂ ಓದಿದ್ದಕ್ಕೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ,&quot; ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಸಿವಿಲ್ ಇಂಜಿನಿಯರ್, &quot;ನಾನು ಇಂಜಿನಿಯರಿಂಗ್ ಮುಗಿಸಿ ಈಗ ಬ್ಯಾಂಕರ್ ಆಗಿ ಕೆಲಸ ಮಾಡುತ್ತಿದ್ದೇನೆ,&quot; ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇನ್ನೊಬ್ಬ ಯೂಸರ್&zwnj;, &quot;ಡಿಗ್ರಿ ಎನ್ನುವುದು ಕೇವಲ ಒಂದು ಐಡಿ ಕಾರ್ಡ್ ಅಷ್ಟೇ,&quot; ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Manviiii (@manvi.diary)&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/private-jobs/nit-graduate-manvi-viral-video-on-degree-utility-and-skills-in-corporate-jobs-san/articleshow-6itm2r0"/>
        </item>
        <item>
            <title><![CDATA[Jp Morgan: ಬದಲಾದ ಕಾಲ; ವಿವಾಹಿತ ಪುರುಷನ ಬೆನ್ನುಬಿದ್ದರಾ ಲೇಡಿ ಬಾಸ್? ಗಂಡಸರಿಗೂ ಸೇಫ್‌ ಇಲ್ಲದ ಟೈಮ್‌ ಬಂತಾ?]]></title>
            <link>https://kannada.asianetnews.com/world-news/jp-morgan-executive-lorna-hajdini-physical-abuse-on-indian-employees-case-filed/articleshow-6te20y7</link>
            <guid isPermaLink="true">https://kannada.asianetnews.com/world-news/jp-morgan-executive-lorna-hajdini-physical-abuse-on-indian-employees-case-filed/articleshow-6te20y7</guid>
            <pubDate>Fri, 01 May 2026 08:54:22 +0530</pubDate>
            <description><![CDATA[&lt;p&gt;Jp Morgan Chase: ಪ್ರತಿಷ್ಠಿತ ಜೆಪಿ ಮೋರ್ಗನ್&zwnj; ಕಂಪೆನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಲೋರ್ನಾ ಹಜ್ದಿನಿ (Lorna Hajdini) ಅವರ ವಿರುದ್ಧ ಲೈಂ*ಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಲೋರ್ನಾ ಜೊತೆಗೆ ನಡೆಸಿದ ಮೆಸೇಜ್&zwnj; ಸ್ಕ್ರೀನ್&zwnj;ಶಾಟ್&zwnj; ಕೂಡ ವೈರಲ್&zwnj; ಆಗ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqgrrj3t9n6280ak60rs8s4k,imgname-new-project---2026-05-01t083741.645-1777605560442.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೆಪಿ ಮೋರ್ಗನ್ ಚೇಸ್ (JPMorgan Chase) ಸಂಸ್ಥೆಯ ಎಕ್ಸಿಕ್ಯೂಟಿವ್&zwnj; ಒಬ್ಬರು ತನ್ನ ಕೆಳಗಡೆ ಕೆಲಸ ಮಾಡುವ ಮ್ಯಾರೀಡ್&zwnj; ಇಂಡಿಯನ್&zwnj; ಉದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಮೊಕದ್ದಮೆ ಹೂಡಲಾಗಿದೆ.&lt;/p&gt;&lt;h2&gt;ಇಂಡಿಯನ್&zwnj; ಮ್ಯಾರೀಡ್&zwnj; ಪುರುಷನ ಮೇಲೆ ದೌರ್ಜನ್ಯ&lt;/h2&gt;&lt;p&gt;ಜೆಪಿ ಮೋರ್ಗನ್ ಸಂಸ್ಥೆಯ ಸೀನಿಯರ್&zwnj; ಮ್ಯಾನೇಜಿಂಗ್&zwnj; ಡೈರೆಕ್ಟರ್&zwnj; ಲೋರ್ನಾ ಹಜ್ದಿನಿ (Lorna Hajdini) ಮೇಲೆ ಆರೋಪ ಮಾಡಲಾಗಿದೆ. ಈ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ದೂರು ನೀಡಿದ್ದಾರೆ. ಲೋರ್ನಾ ಹಜ್ದಿನಿ ಅವರು ತನಗೆ ಮಾದಕ ದ್ರವ್ಯ ನೀಡಿ ಲೈಂ*ಗಿಕವಾಗಿ ಕಿರುಕುಳ ನೀಡಿದ್ದಾರೆ, ಜನಾಂಗೀಯವಾಗಿ ಅವಮಾನಿಸಿದ್ದಾರೆ ಎಂದು ದೂರು ನೀಡಿದ್ದಾರೆ.&lt;/p&gt;&lt;h2&gt;ಸಂತ್ರಸ್ತರು ಏನು ಹೇಳಿದ್ರು?&lt;/h2&gt;&lt;p&gt;ಸಂತ್ರಸ್ತ ಉದ್ಯೋಗಿ ಅವರು, ಲೋರ್ನಾ ತಮ್ಮ ಅಧಿಕಾರವನ್ನು ದುರುಪಯೋಗ ಮಾಡ್ಕೊಂಡು ನನಗೆ ಕಿರುಕುಳ ಕೊಡುತ್ತಿದ್ದರು. ಕೆಲಸದ ನೆಪ ಹೇಳಿಕೊಂಡು, ನನಗೆ ಖಾಸಗಿಯಾಗಿ ಭೇಟಿಯಾಗಿ ಎಂದು ಒತ್ತಾಯ ಮಾಡುತ್ತಿದ್ದರು, ಹಲವಾರು ಬಾರಿ ಲೈಂ*ಗಿಕ ದೌರ್ಜನ್ಯ ಎಸಗಿದ್ದಾರೆ. ಮಾನಸಿಕವಾಗಿ ಕೂಡ ನನಗೆ ಕಿರುಕುಳ ಕೊಟ್ಟಿದ್ದಾರೆ&rdquo; ಹೇಳಿದ್ದಾರೆ.&lt;/p&gt;&lt;p&gt;ಈ ಆರೋಪಕ್ಕೆ ಸಂಸ್ಥೆಯು ಪ್ರತಿಕ್ರಿಯೆ ನೀಡಿದ್ದು, &quot;ದೂರಿನ ಬಗ್ಗೆ ಆಂತರಿಕ ತನಿಖೆ ಮಾಡಿದ್ದೇವೆ, ದೂರಿನಲ್ಲಿರುವ ವಿಷಯದ ಬಗ್ಗೆ ಯಾವುದೇ ಆಧಾರವಿಲ್ಲ. ನಮ್ಮ ಸಂಸ್ಥೆಯು ಕೆಲಸಕ್ಕೆ ಬದ್ಧವಾಗಿದೆ&quot; ಎಂದು ಹೇಳಿದೆ.&lt;/p&gt;&lt;h2&gt;ಕೋರ್ಟ್&zwnj;ನಲ್ಲಿ ಏನಾಗಲಿದೆ?&lt;/h2&gt;&lt;p&gt;ಕಾರ್ಪೋರೇಟ್&zwnj; ಕಂಪೆನಿಯಲ್ಲಿ ಪುರುಷ ಉದ್ಯೋಗಿ ಮೇಲೆ ಮಹಿಳಾ ಉದ್ಯೋಗಿಯೇ ಲೈಂ*ಗಿಕವಾಗಿ ಹಿಂಸೆ ಕೊಟ್ಟಿದ್ದಾರೆ ಎನ್ನೋದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಇನ್ನೊಂದು ಕಡೆ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.&lt;/p&gt;&lt;p&gt;ಈ ವಿವಾದದ ಬೆನ್ನಲೇ 'ಮರ್ರೆ ಹಿಲ್ ಗೈ' (Murray Hill Guy) ಎಂಬ ಹೆಸರಿನ ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು, ಲೋರ್ನಾಗೆ ಲಿಂಕ್ಡ್&zwnj;ಇನ್&zwnj;ನಲ್ಲಿ ಅನೇಕ ವರ್ಷಗಳಿಂದ ಕಾಂಟ್ಯಾಕ್ಟ್&zwnj; ಅಲ್ಲಿದ್ದೇನೆ, ಕೆಲಸ ಬೇಕು ಎಂದು ಮೆಸೇಜ್&zwnj; ಮಾಡಿದಾಗ ಅವರು ರೆಸ್ಯೂಮ್&zwnj; ಕಳಿಸಿ ಎಂದು ಹೇಳಿದ್ದರು.&lt;/p&gt;&lt;p&gt;ಈ ಸಂದರ್ಭದಲ್ಲಿ, 'ಮರ್ರೆ ಹಿಲ್ ಗೈ' (Murray Hill Guy) ಎಂಬ ಹೆಸರಿನ ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು, ತಾನು ಹಲವು ವರ್ಷಗಳಿಂದ ಲೋರ್ನಾ ಅವರೊಂದಿಗೆ ಲಿಂಕ್ಡ್&zwnj;ಇನ್&zwnj;ನಲ್ಲಿ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಕುತೂಹಲಕ್ಕಾಗಿ ಅವರು ಲೋರ್ನಾ ಅವರಿಗೆ ಒಂದು ಸಂದೇಶ ಕಳುಹಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/world-news/jp-morgan-executive-lorna-hajdini-physical-abuse-on-indian-employees-case-filed/articleshow-6te20y7"/>
        </item>
        <item>
            <title><![CDATA[ಬೆಳಗ್ಗೆ ವರ್ಕ್ ಫ್ರಮ್ ಘೋಷಿಸಿ ಸಂಜೆ ವೇಳೆ 8000 ಮಂದಿ ಕೆಲಸದಿಂದ ಕಿತ್ತುಹಾಕಿದ ಫೇಸ್‌ಬುಕ್]]></title>
            <link>https://kannada.asianetnews.com/gallery/private-jobs/facebook-faces-backlash-after-declaring-wfh-and-cutting-8000-jobs-same-day-8ap8qx5</link>
            <guid isPermaLink="true">https://kannada.asianetnews.com/gallery/private-jobs/facebook-faces-backlash-after-declaring-wfh-and-cutting-8000-jobs-same-day-8ap8qx5</guid>
            <pubDate>Wed, 20 May 2026 13:23:34 +0530</pubDate>
            <description><![CDATA[&lt;p&gt;ಬೆಳಗ್ಗೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಖುಷಿ ಕೊಟ್ಟ ಮೆಟಾ ಫೇಸ್&zwnj;ಬುಕ್, ಸಂಜೆ ವೇಳೆ ನೀವು ಮನೆಯಲ್ಲಿ ಆರಾಮಾಗಿರಿ, ಇನ್ನು ಕೆಲಸಕ್ಕೆ ಬರುವ ಅಗತ್ಯವಿಲ್ಲ ಎಂದು 8000 ಮಂದಿ ಉದ್ಯೋಗ ಕಡಿತ ಮಾಡಿದ ನಡೆ ಭಾರಿ ವಿರೋಧಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks25px932qsrch1gjxv0qr62,imgname-facebook-layoff-1779263304995.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗ್ಗೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಖುಷಿ ಕೊಟ್ಟ ಮೆಟಾ ಫೇಸ್&zwnj;ಬುಕ್, ಸಂಜೆ ವೇಳೆ ನೀವು ಮನೆಯಲ್ಲಿ ಆರಾಮಾಗಿರಿ, ಇನ್ನು ಕೆಲಸಕ್ಕೆ ಬರುವ ಅಗತ್ಯವಿಲ್ಲ ಎಂದು 8000 ಮಂದಿ ಉದ್ಯೋಗ ಕಡಿತ ಮಾಡಿದ ನಡೆ ಭಾರಿ ವಿರೋಧಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಮಾರ್ಕ್ ಜುಕರ್&zwnj;ಬರ್ಗ್ ಮಾಲೀಕತ್ವದ ಫೇಸ್&zwnj;ಬುಕ್ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಳಗ್ಗೆ ಕಂಪನಿ ಉದ್ಯೋಗಿಗಳಿಗೆ ನಿಮಗೆಲ್ಲರಿಗೂ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ. ಬೆಳಗ್ಗೆ ಎದ್ನೋ ಬಿದ್ನೋ ಅಂತಾ ಆಫೀಸ್&zwnj;ಗೆ ಬರಬೇಕಿಲ್ಲ. ನಿಮ್ಮ ಸಮಯಕ್ಕೆ ಸರಿಯಾಗಿ ಮನೆಯಿಂದಲೇ ಲಾಗಿನ್ ಆಗಿ. ಮನೆಯಲ್ಲೇ ಕೆಲಸ ಮಾಡಿ ಎಂದು ಘೋಷಿಸಿತ್ತು. ಇದೇ ಖುಷಿಯಲ್ಲಿ ಕೆಲವೇ ಗಂಟೆ ಕಳೆದ ಉದ್ಯೋಗಿಳಿಗೆ ಬಿಗ್ ಶಾಕ್ ಕೊಟ್ಟಿದೆ.&lt;/p&gt;&lt;img&gt;&lt;p&gt;ವರ್ಕ್ ಫ್ರಮ್ ಹೋಮ್ ಆದೇಶ ನೀಡಿದ ಫೇಸ್&zwnj;ಬುಕ್ ಸಂಜೆ ವೇಳೆಗೆ ನೀವು ಮನೆಯಲ್ಲೇ ಆರಾಮಾಗಿರಿ, ನೀವಿನ್ನು ಕೆಲಸಕ್ಕೆ ಬರಬೇಕಿಲ್ಲ ಎಂದು ಬರೋಬ್ಬರಿ 8000 ಮಂದಿಯನ್ನು ಉದ್ಯೋಗದಿಂದ ಕಿತ್ತು ಹಾಕಿದೆ. ಎಐ ಜಾರಿ, ನಿರ್ವಹಣೆ ವೆಚ್ಚ ಕಡಿತ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಫೇಸ್&zwnj;ಬುಕ್ ಒಂದೇ ಬಾರಿಗೆ 8000 ಉದ್ಯೋಗ ಕಡಿತ ಮಾಡುತ್ತಿದೆ.&lt;/p&gt;&lt;img&gt;&lt;p&gt;ಬೆಳಗ್ಗೆ ಮನೆಯಿಂದ ಕೆಲಸ ಮಾಡಿ ಎಂದು ಆದೇಶ ನೀಡಿದ ಮೆಟಾ ಫೇಸ್&zwnj;ಬುಕ್ ಸಂಜೆ ವೇಳೆಗೆ ಉದ್ಯೋಗ ಕಡಿತ ನಿರ್ಧಾರಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಉದ್ಯೋಗ ಕಡಿತ ಮಾಡುವಾಗ ಕನಿಷ್ಠ ಕಾರ್ಪೋರೇಟ್ ನಿಯಮ ಪಾಲಿಸಿ ಎಂದು ಹಲವರು ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಸಿಂಗಾಪುರ, ಯುಎಸ್, ಬ್ರಿಟನ್ ಸೇರಿದಂತೆ ಹಲವೆಡೆ ಉದ್ಯೋಗ ಕಡಿತ ಮಾಡಲಾಗಿದೆ. ಮೆಟಾ ಕಳೆದೆರಡು ವರ್ಷದಿಂದ ಉದ್ಯೋಗ ಕಡಿತ ಮಾಡುತ್ತಲೇ ಬಂದಿದೆ. ಇದೀಗ ಏಕಾಏಕಿ 8000 ಮಂದಿ ಉದ್ಯೋಗ ಕಡಿತ ಹಾಗೂ ಮಾಡಿದ ರೀತಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಫೇಸ್&zwnj;ಬುಕ್ ಉದ್ಯೋಗಿಗಳಲ್ಲಿ ಕೆಲಸದ ಭದ್ರತೆಗಳು ಕಾಡತೊಡಗಿದೆ.&lt;/p&gt;&lt;img&gt;&lt;p&gt;ಮೆಟಾಗೂ ಮೊದಲು ಹಲವು ಕಂಪನಿಗಳು ಆರ್ಥಿಕ ಹಿಂಜರಿತ ಕಾರಣ ನೀಡಿ ಉದ್ಯೋಗ ಕಡಿತ ಮಾಡುತ್ತಿದೆ. ಸಿಸ್ಕೋ ಕಳೆದ ವಾರ 4,000 ಉದ್ಯೋಗ ಕಡಿತ ಮಾಡಿದೆ. ಮೈಕ್ರೋಸಾಫ್ಟ್, ಅಮೇಜಾನ್, ಡಿಸ್ನಿ ಸೇರಿದಂತೆ ಹಲವು ಕಂಪನಿಗಳು ಉದ್ಯೋದ ಕಡಿತ ಮಾಡಿದೆ.&lt;/p&gt;]]></content:encoded>
            <category>private-jobs</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/private-jobs/facebook-faces-backlash-after-declaring-wfh-and-cutting-8000-jobs-same-day-8ap8qx5"/>
        </item>
        <item>
            <title><![CDATA[ದಕ್ಷಿಣ ಕನ್ನಡದ ಮಹಿಳೆಯರಿಗೆ ಸಿಹಿಸುದ್ದಿ, ವಿವಿಧ ತಾಲೂಕುಗಳ ಅಂಗನವಾಡಿಯಲ್ಲಿ ಖಾಲಿ ಇರೋ ಹುದ್ದೆಗಳಿಗೆ ಅರ್ಜಿ ಅಹ್ವಾನ]]></title>
            <link>https://kannada.asianetnews.com/jobs/anganwadi-worker-and-helper-recruitment-2026-in-dakshina-kannada-apply-before-may-16th-gdp/articleshow-9fzal26</link>
            <guid isPermaLink="true">https://kannada.asianetnews.com/jobs/anganwadi-worker-and-helper-recruitment-2026-in-dakshina-kannada-apply-before-may-16th-gdp/articleshow-9fzal26</guid>
            <pubDate>Fri, 01 May 2026 19:39:11 +0530</pubDate>
            <description><![CDATA[ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾದ ಈ ಉದ್ಯೋಗಾವಕಾಶಕ್ಕೆ ಅರ್ಜಿ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jw0avyxjcwjxyjpm973xmqyk,imgname-untitled-design---2025-05-24t103312.389-1748063091634.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಈ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ.&lt;/p&gt;&lt;h2&gt;ಮೇ 16ರೊಳಗೆ ಅರ್ಜಿ ಸಲ್ಲಿಸಿ&lt;/h2&gt;&lt;p&gt;ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಆಯ್ಕೆಯಾಗುವವರಿಗೆ ಮಾಸಿಕವಾಗಿ ₹5,500 ಗೌರವಧನ ನೀಡಲಾಗುತ್ತದೆ. ಅದೇ ರೀತಿ ಸಹಾಯಕಿ ಹುದ್ದೆಗೆ ಆಯ್ಕೆಯಾಗುವವರಿಗೆ ತಿಂಗಳಿಗೆ ₹3,000 ಗೌರವಧನ ನಿಗದಿಪಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಮಹಿಳಾ ಅಭ್ಯರ್ಥಿಗಳು ಮೇ 16ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.&lt;/p&gt;&lt;p&gt;ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸಂಬಂಧಿತ ಅಂಗನವಾಡಿ ಕೇಂದ್ರದ ಸರ್ವೆ ವ್ಯಾಪ್ತಿಯವರಾಗಿರಬೇಕು ಹಾಗೂ ವಯೋಮಿತಿ 18ರಿಂದ 35 ವರ್ಷಗಳೊಳಗಿರಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.&lt;/p&gt;&lt;p&gt;ಶೈಕ್ಷಣಿಕ ಅರ್ಹತೆ ಕುರಿತು ಮಾತನಾಡುವುದಾದರೆ, ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ (PUC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಈ ಅರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ಸಹಾಯಕಿ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಈ ಅರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, 7ನೇ ತರಗತಿ ತೇರ್ಗಡೆಯಾದವರನ್ನೂ ಪರಿಗಣಿಸಲಾಗುತ್ತದೆ. ಆದರೆ ಹೆಚ್ಚಿನ ವಿದ್ಯಾರ್ಹತೆಯನ್ನು ಇಲ್ಲಿ ಪರಿಗಣಿಸಲಾಗುವುದಿಲ್ಲ ಎಂಬುದು ಗಮನಾರ್ಹ.&lt;/p&gt;&lt;h2&gt;ಆಸಕ್ತರು ಈ ನಂಬರ್ &amp;nbsp;ಸಂಪರ್ಕಿಸಿ&lt;/h2&gt;&lt;p&gt;ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳನ್ನು ಸಂಪರ್ಕಿಸಬಹುದು. ಮಂಗಳೂರು ನಗರ (0824-2959809), ಮಂಗಳೂರು ಗ್ರಾಮಾಂತರ (9620636888 / 7760729919), ವಿಟ್ಲ (08255-238080), ಬೆಳ್ತಂಗಡಿ (08256-295134), ಸುಳ್ಯ (08257-298139) ಕಚೇರಿಗಳಲ್ಲಿ ಕಚೇರಿ ಅವಧಿಯಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರಿಗೆ ಇದು ಉತ್ತಮ ಉದ್ಯೋಗಾವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಇಲಾಖೆಯು ಮನವಿ ಮಾಡಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/anganwadi-worker-and-helper-recruitment-2026-in-dakshina-kannada-apply-before-may-16th-gdp/articleshow-9fzal26"/>
        </item>
        <item>
            <title><![CDATA[ಕೆಲಸ ಇದೆ ಎಂದು ಬೀಗಬೇಡ! ಬೃಹತ್‌ ಲಾಭವಿದ್ರೂ, ಉದ್ಯೋಗಿಗಳ ಹೊಟ್ಟೆಪಾಡು ಕಿತ್ತುಕೊಂಡ ದೈತ್ಯ ಕಂಪೆನಿ, ಬ್ಯಾಂಕ್!]]></title>
            <link>https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h</link>
            <guid isPermaLink="true">https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h</guid>
            <pubDate>Mon, 27 Apr 2026 17:00:42 +0530</pubDate>
            <description><![CDATA[&lt;p&gt;ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್&zwnj;ನಂತಹ ಟೆಕ್ ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಈಗ ಅಕ್ಸಿಸ್&zwnj; ಬ್ಯಾಂಕ್&zwnj; ಕೂಡ ಲೇಆಫ್&zwnj; ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpst958axanasrak62ap6ghk,imgname-tcs-victim-recounts-horror-office-bullying-politics-gettyimages-470766688-1776835400970.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್&zwnj;ನಂತಹ ಟೆಕ್ ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಈಗ ಅಕ್ಸಿಸ್&zwnj; ಬ್ಯಾಂಕ್&zwnj; ಕೂಡ ಲೇಆಫ್&zwnj; ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈಗಾಗಲೇ ಐಟಿ ಕಂಪೆನಿಗಳು ಸಾಕಷ್ಟು ಉದ್ಯೋಗಿಗಳ ವಜಾ ಮಾಡಿದೆ. ಒರಾಕಲ್ (Oracle) ಕಂಪನಿಯು ಜಾಗತಿಕವಾಗಿ ಅಂದಾಜು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮೆಟಾ, ಮೈಕ್ರೋಸಾಫ್ಟ್, ಡಿಸ್ನಿ, ಎಎಸ್&zwnj;ಎಮ್&zwnj;ಎಲ್ ಕಂಪನಿಗಳು ಉದ್ಯೋಗ ಕಡಿತ ಮಾಡಲಿವೆ.&lt;/p&gt;&lt;img&gt;&lt;p&gt;ಕಂಪನಿಗಳು ಕೃತಕ ಬುದ್ಧಿಮತ್ತೆಯಲ್ಲಿ ಬೃಹತ್ ಹೂಡಿಕೆ ಮಾಡುತ್ತಿವೆ. ಇದರಿಂದ ಹೆಚ್ಚು ಲಾಭ ಬರುತ್ತಿದೆ, ಆದರೆ ದಶಕಗಳಿಂದ ಕೆಲಸ ಮಾಡುತ್ತಿದ್ದವರು ಮನೆಗೆ ಹೋಗುತ್ತಿದ್ದಾರೆ. ಒರಾಕಲ್&zwnj;ನಲ್ಲಿ 33 ವರ್ಷ ಕೆಲಸ ಮಾಡಿದ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.&amp;nbsp;&lt;/p&gt;&lt;img&gt;&lt;p&gt;ಭಾರತದಲ್ಲಿ ಆಕ್ಸಿಸ್ ಬ್ಯಾಂಕ್&zwnj; ಸಹ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು, ತನ್ನ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 2026ರಲ್ಲಿ 3,100ರಷ್ಟು ಉದ್ಯೋಗಿಗಳ ಸಂಖ್ಯೆ ಕುಸಿದಿದೆ.&lt;/p&gt;&lt;img&gt;&lt;p&gt;ಈಗ ಬ್ಯಾಂಕ್&zwnj;ನಲ್ಲಿ ಸಿಬ್ಬಂದಿ ಸಂಖ್ಯೆ ಇಳಿಕೆಯಾಗಿದ್ದರೂ ಬ್ಯಾಂಕ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇದೇ ಅವಧಿಯಲ್ಲಿ ಸುಮಾರು 400 ಹೊಸ ಶಾಖೆಗಳನ್ನು ತೆರೆಯಲಾಗಿದ್ದು, ₹7,071 ಕೋಟಿಗಳಷ್ಟು ಬೃಹತ್ ಲಾಭ ಮಾಡಿದೆ&lt;/p&gt;]]></content:encoded>
            <category>private-jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h"/>
        </item>
        <item>
            <title><![CDATA[ಅಮೆರಿಕದ ಕಚೇರಿಯಲ್ಲಿ ಬೆಂಗಳೂರು ಮಹಿಳೆಗೆ ಕಾದಿತ್ತು ಅಚ್ಚರಿ!ಭಾರತ ಕೆಲಸದ ಸಂಸ್ಕೃತಿ ಪ್ರಶ್ನಿಸಿದ ವಿಡಿಯೋ ಸಖತ್ ವೈರಲ್]]></title>
            <link>https://kannada.asianetnews.com/gallery/private-jobs/bengaluru-woman-questions-india-work-culture-after-us-visit-viral-video-sparks-debate-on-work-life-balance-gdp-bzixanu</link>
            <guid isPermaLink="true">https://kannada.asianetnews.com/gallery/private-jobs/bengaluru-woman-questions-india-work-culture-after-us-visit-viral-video-sparks-debate-on-work-life-balance-gdp-bzixanu</guid>
            <pubDate>Sat, 16 May 2026 19:31:06 +0530</pubDate>
            <description><![CDATA[&lt;p&gt;ಬೆಂಗಳೂರಿನ ವೃತ್ತಿಪರ ಮಹಿಳೆಯೊಬ್ಬರು ಅಮೆರಿಕ ಮತ್ತು ಭಾರತದ ಕೆಲಸದ ಸಂಸ್ಕೃತಿಯ ವ್ಯತ್ಯಾಸವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವ ಪದ್ಧತಿ ಮತ್ತು ಭಾರತದಲ್ಲಿನ ದೀರ್ಘಾವಧಿಯ ಕೆಲಸದ ನಡುವಿನ ಅಂತರವನ್ನು ಅವರು ಎತ್ತಿ ತೋರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krrg93q7at43kjgxqh4ka1n7,imgname-bengaluru-women-work-culture--1--1778938842855.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ವೃತ್ತಿಪರ ಮಹಿಳೆಯೊಬ್ಬರು ಅಮೆರಿಕ ಮತ್ತು ಭಾರತದ ಕೆಲಸದ ಸಂಸ್ಕೃತಿಯ ವ್ಯತ್ಯಾಸವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವ ಪದ್ಧತಿ ಮತ್ತು ಭಾರತದಲ್ಲಿನ ದೀರ್ಘಾವಧಿಯ ಕೆಲಸದ ನಡುವಿನ ಅಂತರವನ್ನು ಅವರು ಎತ್ತಿ ತೋರಿಸಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಕೆಲಸದ ಸಂಸ್ಕೃತಿ ಮತ್ತು ದೈನಂದಿನ ಕಚೇರಿ ದಿನಚರಿ ಮತ್ತೆ ಪ್ರಮುಖ ಚರ್ಚೆಯ ವಿಷಯವಾಗಿದೆ. ದೀರ್ಘ ಕೆಲಸದ ಅವಧಿ, ತಡರಾತ್ರಿ ಸಭೆಗಳು ಹಾಗೂ ನಿರಂತರ ಕಾರ್ಯಭಾರ ಕುರಿತು ಅನೇಕ ಉದ್ಯೋಗಿಗಳು ಮುಕ್ತವಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಕೆಲಸ-ಜೀವನ ಸಮತೋಲನದ ಕುರಿತು ಚರ್ಚೆಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲೇ, ಬೆಂಗಳೂರಿನ ಒಬ್ಬ ವೃತ್ತಿಪರ ಮಹಿಳೆ ಹಂಚಿಕೊಂಡಿರುವ ಇತ್ತೀಚಿನ ವಿಡಿಯೋ ಭಾರತ ಮತ್ತು ಅಮೆರಿಕದ ಕೆಲಸದ ಸಂಸ್ಕೃತಿಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಈ ಮಹಿಳೆ ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದ ವೇಳೆ ಕಂಡ ಅನುಭವಗಳನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೋ ಮೂಲಕ ವಿವಿಧ ದೇಶಗಳ ಕೆಲಸದ ವೇಳಾಪಟ್ಟಿಗಳು ಮತ್ತು ಕಾರ್ಯಪದ್ಧತಿಗಳ ನಡುವಿನ ವ್ಯತ್ಯಾಸ ಕುರಿತು ಹೊಸ ಚರ್ಚೆಗೆ ವೇದಿಕೆ ಸಿಕ್ಕಿದೆ.&lt;/p&gt;&lt;img&gt;&lt;p&gt;ತಮ್ಮ ವಿಡಿಯೋದಲ್ಲಿ ಅವರು ಅಮೆರಿಕದ ಕೆಲಸದ ವಾತಾವರಣ ಭಾರತದಲ್ಲಿನ ಸಂಸ್ಕೃತಿಗಿಂತ ಬಹಳ ಭಿನ್ನವಾಗಿದೆ ಎಂದು ವಿವರಿಸಿದ್ದಾರೆ. ವಿಶೇಷವಾಗಿ, ಅಲ್ಲಿನ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ ಮನೆಗೆ ತೆರಳುವ ಕ್ರಮ ಅವರನ್ನು ಆಶ್ಚರ್ಯಚಕಿತರನ್ನಾಗಿಸಿದೆ. &ldquo;ಭಾರತೀಯ ಕಾರ್ಪೊರೇಟ್ ಮನೋಭಾವನೆ ಕೆಲವೊಮ್ಮೆ ಅತಿಯಾಗಿ ಕಠಿಣವಾಗಿರುತ್ತದೆ. ನಾವು ಹೆಚ್ಚು ಸಮಯ ಕೆಲಸ ಮಾಡುವುದನ್ನೇ ಸಾಮಾನ್ಯವೆಂದು ಒಪ್ಪಿಕೊಂಡಿದ್ದೇವೆ. ಅಮೆರಿಕದಲ್ಲಿ ನಾನು ಬೆಳಿಗ್ಗೆ 9:30 ಅಥವಾ 10 ಗಂಟೆ ಸುಮಾರಿಗೆ ಕಚೇರಿಗೆ ಹೋದೆ. ಸಂಜೆ 4:30ಕ್ಕೆ ಇಡೀ ಮಹಡಿ ಖಾಲಿಯಾಗಿತ್ತು. 5 ಗಂಟೆಗೆ ನಾನು ಸಹ ಹೊರಬಂದೆ. ಅದರ ನಂತರ ನನಗೆ ನಿಜವಾದ ವಿಶ್ರಾಂತಿ ಅನುಭವವಾಯಿತು ಎಂದಿದ್ದಾರೆ.&lt;/p&gt;&lt;img&gt;&lt;p&gt;ಅವರು ಮುಂದುವರಿದು ಮಾತನಾಡಿ ಬಹಳ ದಿನಗಳ ನಂತರ ಕೆಲಸದ ನಂತರ ಸ್ವಂತ ಸಮಯ ಸಿಕ್ಕಿದ್ದು, ವಾಕಿಂಗ್ ಹೋಗಿ ಸೂರ್ಯಾಸ್ತವನ್ನು ಅನುಭವಿಸಲು ಸಾಧ್ಯವಾಯಿತು. ಈ ಅನುಭವವು ಭಾರತದಲ್ಲಿ ಕೆಲಸ ಮಾಡುವಾಗ ವೈಯಕ್ತಿಕ ಜೀವನಕ್ಕೆ ಎಷ್ಟು ಕಡಿಮೆ ಸಮಯ ಸಿಗುತ್ತದೆ ಎಂಬುದನ್ನು ನೆನಪಿಸಿತು ಎಂದಿದ್ದಾರೆ.&lt;/p&gt;&lt;img&gt;&lt;p&gt;ಭಾರತದಲ್ಲಿನ ತಮ್ಮ ಸಾಮಾನ್ಯ ಕಚೇರಿ ದಿನವನ್ನು ವಿವರಿಸುತ್ತಾ, ಅವರು ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ಕೆಲಸ ರಾತ್ರಿ 10 ಗಂಟೆಯವರೆಗೆ ಮುಂದುವರಿಯುತ್ತದೆ ಎಂದಿದ್ದಾರೆ. ನಿರಂತರ ಸಭೆಗಳು ಮತ್ತು ಕಾರ್ಯಭಾರದಿಂದ ಅಡುಗೆ ಮಾಡುವುದು ಅಥವಾ ಸ್ವಲ್ಪ ಸಮಯ ನಡೆದುಬರುವುದು ಸಹ ಕಷ್ಟಕರವಾಗುತ್ತದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;&ldquo;ಇದು ನಾನು ಮಾತ್ರವೇ ಅಥವಾ ಭಾರತದಲ್ಲಿ ಕಾರ್ಪೊರೇಟ್ ಪರಿಸರ ಹೆಚ್ಚು ಕಠಿಣವಾಗುತ್ತಿದೆಯೇ?&rdquo; ಎಂಬ ಪ್ರಶ್ನೆಯೊಂದಿಗೆ ಅವರು ವಿಡಿಯೋ ಹಂಚಿಕೊಂಡಿದ್ದು, ಅದು ಹಲವರ ಗಮನ ಸೆಳೆದಿದೆ.&lt;/p&gt;&lt;p&gt;ಅನೇಕ ಬಳಕೆದಾರರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ವೈಯಕ್ತಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದರೂ ಸಹ ಭಾರತದಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದನ್ನು ನಿಷ್ಠೆ ಮತ್ತು ಉತ್ಪಾದಕತೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇನ್ನೂ ಕೆಲವರು, ಈ ಸಂಸ್ಕೃತಿ ಹೆಚ್ಚಿದ ಒತ್ತಡ ಮತ್ತು ದೀರ್ಘ ಕೆಲಸದ ಅವಧಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದು, ಅಮೆರಿಕದಲ್ಲಿ ಫಲಿತಾಂಶ ಆಧಾರಿತ ಮತ್ತು ಸಮತೋಲನದ ಕಾರ್ಯಪದ್ಧತಿ ಕಂಡುಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಒಬ್ಬ ಬಳಕೆದಾರರು, &ldquo;ಸಮಸ್ಯೆ ಕೆಲಸದಲ್ಲಿಲ್ಲ; ಹೆಚ್ಚು ಗಂಟೆಗಳು ಎಂದರೆ ಹೆಚ್ಚು ಉತ್ಪಾದಕತೆ ಎನ್ನುವ ಮನೋಭಾವದಲ್ಲಿದೆ, ಎಂದು ಹೇಳಿದ್ದಾರೆ.&lt;/p&gt;&lt;p&gt;ಇನ್ನೊಬ್ಬರು, &ldquo;ಅಮೆರಿಕದಲ್ಲಿ ಉದ್ಯೋಗಿಗಳು ಬೇಗನೆ ಕೆಲಸ ಪ್ರಾರಂಭಿಸಿ ದಿನವಿಡೀ ಹೆಚ್ಚು ಉತ್ಪಾದಕರಾಗಿರುತ್ತಾರೆ,&rdquo; ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಎಲ್ಲರೂ ಈ ಹೋಲಿಕೆಯನ್ನು ಒಪ್ಪಿಕೊಂಡಿಲ್ಲ. ಕೆಲವರು, ಭಾರತೀಯ ಕಂಪನಿಗಳು ಅಮೆರಿಕದ ಕಂಪನಿಗಳೊಂದಿಗೆ ಕೆಲಸ ಮಾಡುವ ಕಾರಣದಿಂದ ಸಮಯ ವ್ಯತ್ಯಾಸವು ಕೆಲಸದ ಅವಧಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;h2&gt;ಒಬ್ಬ ಬಳಕೆದಾರರು ವಿವರಿಸುತ್ತಾ,&lt;/h2&gt;&lt;p&gt;ಯುಎಸ್&zwnj; ಕಂಪನಿಗಳೊಂದಿಗೆ ಸಭೆಗಳು ನಡೆಯಬೇಕಾದರೆ, ಭಾರತೀಯ ಉದ್ಯೋಗಿಗಳು ತಮ್ಮ ಕೆಲಸದ ಸಮಯವನ್ನು ವಿಸ್ತರಿಸಬೇಕಾಗುತ್ತದೆ. ಇದು ಅನಿವಾರ್ಯ ಪರಿಸ್ಥಿತಿ. ಭಾರತ ಸ್ವಾವಲಂಬಿಯಾಗುವ ದಿನ, ನಮ್ಮ ಕೆಲಸದ ಸಂಸ್ಕೃತಿ ಕೂಡ ಬದಲಾಗಬಹುದು, ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;&amp;nbsp;ಈ ವಿಡಿಯೋವು ಒಂದು ಮಹತ್ವದ ಪ್ರಶ್ನೆಯನ್ನು ಮತ್ತೊಮ್ಮೆ ಮುಂದಿಟ್ಟಿದೆ. ಭಾರತದಲ್ಲಿ ಕೆಲಸದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೇ?&lt;/p&gt;&lt;p&gt;ಇದಕ್ಕೆ ಪ್ರತಿಕ್ರಿಯಿಸಿದ ಅನೇಕರು, ಸಮಯಕ್ಕೆ ಮನೆಗೆ ತೆರಳುವುದು ಇಲ್ಲಿ ಅಪರಾಧದಂತೆ ಭಾಸವಾಗುತ್ತದೆ, ಕೆಲಸ-ಜೀವನ ಸಮತೋಲನ ಇನ್ನೂ ಐಷಾರಾಮಿ ಎಂಬಂತೆ ಕಾಣುತ್ತದೆ. ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇನ್ನೊಬ್ಬರು ಸಲಹೆ ನೀಡುತ್ತಾ, &ldquo;ತುರ್ತು ಪರಿಸ್ಥಿತಿ ಹೊರತುಪಡಿಸಿ ಸಂಜೆ 7 ಗಂಟೆಯ ನಂತರ ಸಭೆಗಳನ್ನು ನಿರ್ಬಂಧಿಸಬೇಕು ಎಂದಿದ್ದಾರೆ.&lt;/p&gt;&lt;p&gt;ಈ ಘಟನೆ, ಕೆಲಸದ ಸಂಸ್ಕೃತಿಯಲ್ಲಿ ಸಮತೋಲನದ ಅಗತ್ಯತೆಯನ್ನು ಮತ್ತೊಮ್ಮೆ ಒತ್ತಿಹೇಳುತ್ತಿದ್ದು, ಉದ್ಯೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸುವ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/private-jobs/bengaluru-woman-questions-india-work-culture-after-us-visit-viral-video-sparks-debate-on-work-life-balance-gdp-bzixanu"/>
        </item>
        <item>
            <title><![CDATA[Cognizant Q1 revenue rises: ಲೇ-ಆಫ್‌ಗಳ ಮಧ್ಯೆ ಕಾಗ್ನಿಜೆಂಟ್‌ನ ಹೊಸ ಅಧ್ಯಾಯ! ಒಂದೇ ವರ್ಷದಲ್ಲಿ 21,000 ನೇಮಕಾತಿ]]></title>
            <link>https://kannada.asianetnews.com/gallery/business/cognizant-q1-results-big-boost-for-it-sector-company-adds-21000-jobs-in-a-year-revenue-sees-strong-growth-gdp-gco15v8</link>
            <guid isPermaLink="true">https://kannada.asianetnews.com/gallery/business/cognizant-q1-results-big-boost-for-it-sector-company-adds-21000-jobs-in-a-year-revenue-sees-strong-growth-gdp-gco15v8</guid>
            <pubDate>Wed, 29 Apr 2026 18:29:03 +0530</pubDate>
            <description><![CDATA[&lt;p&gt;ಟೆಕ್ ದೈತ್ಯ 'ಕಾಗ್ನಿಜೆಂಟ್' ಹೊಸ ನೇಮಕಾತಿಗಳನ್ನು ಮಾಡುವ ಮೂಲಕ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷಕ್ಕೆ ಹೆಚ್ಚಿಸಿದೆ. ಕಂಪನಿಯು ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸಿದ್ದು, ಎಐ ಆಧಾರಿತ ಯೋಜನೆಗಳು ಮತ್ತು ಬೃಹತ್ ಒಪ್ಪಂದಗಳ ಮೂಲಕ ಐಟಿ ವಲಯಕ್ಕೆ ಹೊಸ ಭರವಸೆ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j75r6525x2zg1g1h76w3h6zy,imgname-cognizant.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೆಕ್ ದೈತ್ಯ 'ಕಾಗ್ನಿಜೆಂಟ್' ಹೊಸ ನೇಮಕಾತಿಗಳನ್ನು ಮಾಡುವ ಮೂಲಕ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷಕ್ಕೆ ಹೆಚ್ಚಿಸಿದೆ. ಕಂಪನಿಯು ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸಿದ್ದು, ಎಐ ಆಧಾರಿತ ಯೋಜನೆಗಳು ಮತ್ತು ಬೃಹತ್ ಒಪ್ಪಂದಗಳ ಮೂಲಕ ಐಟಿ ವಲಯಕ್ಕೆ ಹೊಸ ಭರವಸೆ ಮೂಡಿಸಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಸಾಲು ಸಾಲು ಲೇ-ಆಫ್&zwnj;ಗಳಿಂದಾಗಿ ಕಂಗೆಟ್ಟಿದ್ದ ಭಾರತದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ಜಾಗತಿಕ ಟೆಕ್ ದೈತ್ಯ 'ಕಾಗ್ನಿಜೆಂಟ್' ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಕಾಗ್ನಿಜೆಂಟ್ ಮಾತ್ರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೂಲಕ ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷದ ಗಡಿ ದಾಟಿಸಿದೆ.&lt;/p&gt;&lt;img&gt;&lt;p&gt;2026ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ (ಕ್ಯೂ1) ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿರುವ ಅಮೆರಿಕಾ ಮೂಲದ ಕಾಗ್ನಿಜೆಂಟ್, ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಕ್ಯೂ1 ನಲ್ಲಿ ಕಂಪನಿಯ ಆದಾಯವು ಶೇ. 5.8 ರಷ್ಟು ಏರಿಕೆ ಕಂಡು 5.4 ಬಿಲಿಯನ್ ಡಾಲರ್ (ಸುಮಾರು 51,200 ಕೋಟಿ ರೂ.) ತಲುಪಿದೆ. ಸ್ಥಿರ ಕರೆನ್ಸಿ ಲೆಕ್ಕಾಚಾರದಲ್ಲಿ ಇದು ಶೇ. 3.9ರಷ್ಟು ಬೆಳವಣಿಗೆಯಾಗಿದೆ.&lt;/p&gt;&lt;p&gt;ಆದರೆ, ಕಂಪನಿಯ ಕಾರ್ಯಾಚರಣೆ ಮಾರ್ಜಿನ್ ಈ ತ್ರೈಮಾಸಿಕದಲ್ಲಿ ಶೇ. 15.6ರಷ್ಟಿದ್ದು, ಹೊಂದಾಣಿಕೆಯ ಆಧಾರದ ಮೇಲೆ ಸ್ಥಿರವಾಗಿದ್ದರೂ, ವಾರ್ಷಿಕ ಲೆಕ್ಕಾಚಾರದಲ್ಲಿ 110 ಮೂಲಾಂಶಗಳಷ್ಟು ಕುಸಿತ ಕಂಡಿದೆ.&lt;/p&gt;&lt;img&gt;&lt;p&gt;ಫೈನಾನ್ಶಿಯಲ್&zwnj; ಸರ್ವಿಸ್ ವಲಯ ಶೇ. 12.4ರಷ್ಟು ವೃದ್ಧಿ ಸಾಧಿಸಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ್ದರೆ, ಕಮ್ಯುನಿಕೇಶನ್ ಮತ್ತು ಮೀಡಿಯಾ ವಲಯ ಶೇ. 8.1ರಷ್ಟು ಹಾಗೂ ಪ್ರಾಡಕ್ಟ್ಸ್ ವಲಯ ಶೇ. 3.4ರಷ್ಟು ಬೆಳವಣಿಗೆ ದಾಖಲಿಸಿವೆ. ಭೌಗೋಳಿಕವಾಗಿ ನೋಡುವುದಾದರೆ, ಉತ್ತರ ಅಮೆರಿಕಾದಲ್ಲಿ ಶೇ. 5.1ರಷ್ಟು ಹಾಗೂ ಯುರೋಪ್ ಮಾರುಕಟ್ಟೆ ಶೇ. 3.5ರಷ್ಟು ಬೆಳವಣಿಗೆ ಕಂಡು ಬಂದಿದೆ.&lt;/p&gt;&lt;p&gt;ಎರಡನೇ ತ್ರೈಮಾಸಿಕದಲ್ಲಿ (ಕ್ಯೂ2) ಆದಾಯ ಶೇ. 3.8 ರಿಂದ ಶೇ. 5.3ರಷ್ಟು ವೃದ್ಧಿಯಾಗುವ ನಿರೀಕ್ಷೆಯನ್ನು ಕಾಗ್ನಿಜೆಂಟ್ ವ್ಯಕ್ತಪಡಿಸಿದ್ದು, 2026ರ ಪೂರ್ಣ ಆರ್ಥಿಕ ವರ್ಷದಲ್ಲಿ ಆದಾಯದ ಬೆಳವಣಿಗೆ ಶೇ. 4.8 ರಿಂದ ಶೇ. 7.3ರಷ್ಟಿರಲಿದೆ (ಸ್ಥಿರ ಕರೆನ್ಸಿಯಲ್ಲಿ ಶೇ. 4 ರಿಂದ ಶೇ. 6.5) ಎಂದು ಅಂದಾಜಿಸಿದೆ.&lt;/p&gt;&lt;img&gt;&lt;p&gt;ಟಿ&zwnj;ಸಿ&zwnj;ಎಸ್, ಇನ್ಫೋಸಿಸ್, ವಿಪ್ರೋದಂತಹ ಭಾರತೀಯ ಐಟಿ ದೈತ್ಯ ಕಂಪನಿಗಳು ಉದ್ಯೋಗ ನೇಮಕಾತಿಯನ್ನು ತಗ್ಗಿಸುತ್ತಿರುವ ಹೊತ್ತಿನಲ್ಲೇ, ಕಾಗ್ನಿಜೆಂಟ್ ಹೊಸ ನೇಮಕಾತಿಯಲ್ಲಿ ಮುಂಚೂಣಿಯಲ್ಲಿದೆ. ಕ್ಯೂ1 ಅಂತ್ಯದ ವೇಳೆಗೆ ಅಂದರೆ ಮಾರ್ಚ್ 31, 2026ರ ಕೊನೆಗೆ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ ಬರೋಬ್ಬರಿ 3,57,600ಕ್ಕೆ ತಲುಪಿದೆ. ಕಳೆದ ಒಂದೇ ತ್ರೈಮಾಸಿಕದಲ್ಲಿ 6,000 ಹೊಸ ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕೆ (2025ರ ಕ್ಯೂ1) ಹೋಲಿಸಿದರೆ ಉದ್ಯೋಗಿಗಳ ಸಂಖ್ಯೆಯಲ್ಲಿ 21,300ರಷ್ಟು ಭಾರಿ ಏರಿಕೆ ಕಂಡಿದೆ. ಕಾಗ್ನಿಜೆಂಟ್&zwnj;ನ ಹೆಚ್ಚಿನ ಉದ್ಯೋಗಿಗಳು ಭಾರತದಲ್ಲೇ ಇರುವುದರಿಂದ, ಇದು ದೇಶದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ರಿಲೀಫ್ ನೀಡಿದೆ. ಇನ್ನು ಕಂಪನಿ ಬಿಟ್ಟು ಹೋಗುವ ಉದ್ಯೋಗಿಗಳ ಪ್ರಮಾಣ (ಅಟ್ರಿಷನ್&zwnj; ದರ) ಶೇ. 12.3ರಷ್ಟಿದ್ದು ಸ್ಥಿರವಾಗಿದೆ.&lt;/p&gt;&lt;img&gt;&lt;p&gt;ಕ್ಯೂ1 ನಲ್ಲಿ ಕಾಗ್ನಿಜೆಂಟ್&zwnj;ನ ಬುಕಿಂಗ್&zwnj;ಗಳಲ್ಲಿ ಶೇ. 21ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಕಳೆದ 12 ತಿಂಗಳ ಒಟ್ಟು ಬುಕಿಂಗ್ ಮೌಲ್ಯ 29.6 ಬಿಲಿಯನ್ ಡಾಲರ್ ತಲುಪಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು 7 ಬೃಹತ್ ಡೀಲ್&zwnj;ಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಒಂದು 500 ಮಿಲಿಯನ್ ಡಾಲರ್&zwnj;ಗೂ ಅಧಿಕ ಮೌಲ್ಯದ ಮೆಗಾ ಡೀಲ್ ಕೂಡ ಸೇರಿದೆ.&lt;/p&gt;&lt;p&gt;&quot;ನಮ್ಮ ಎಐ ಆಧಾರಿತ ಕಾರ್ಯತಂತ್ರವು ಉತ್ತಮ ಫಲಿತಾಂಶ ನೀಡುತ್ತಿದೆ. ಪ್ರಸ್ತುತ 5,000ಕ್ಕೂ ಹೆಚ್ಚು ಎಐ ಪ್ರಾಜೆಕ್ಟ್&zwnj;ಗಳು ನಡೆಯುತ್ತಿದ್ದು, ಶೇ. 40ರಷ್ಟು ಕೋಡಿಂಗ್ ಕೆಲಸಗಳನ್ನು ಎಐ ನೆರವಿನಿಂದಲೇ ಮಾಡಲಾಗುತ್ತಿದೆ&quot; ಎಂದೂ ಕಂಪನಿಯ ಸಿಇಒ ರವಿ ಕುಮಾರ್ ಎಸ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ತನ್ನ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೆಂಟರ್ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕಾಗ್ನಿಜೆಂಟ್, ಐಟಿ ಸೇವಾ ಪೂರೈಕೆದಾರ ಕಂಪನಿಯಾದ 'ಆಸ್ಟ್ರೇಯಾ'ವನ್ನು ಸುಮಾರು 600 ಮಿಲಿಯನ್ ಡಾಲರ್ (5,700 ಕೋಟಿ ರೂ.) ಮೌಲ್ಯದಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಪ್ರಕ್ರಿಯೆ 2026ರ ಎರಡನೇ ತ್ರೈಮಾಸಿಕದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಎಐ ತಂತ್ರಜ್ಞಾನದಿಂದ ಉದ್ಯೋಗ ಕಡಿತದ ಭೀತಿ ಎದುರಾಗಿರುವ ಈ ಸಮಯದಲ್ಲಿ, ಕಾಗ್ನಿಜೆಂಟ್&zwnj;ನ ಈ ಪಾಸಿಟಿವ್ ಬೆಳವಣಿಗೆ ಭಾರತೀಯ ಐಟಿ ಕ್ಷೇತ್ರಕ್ಕೆ ಹೊಸ ಆಶಾಕಿರಣವಾಗಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/cognizant-q1-results-big-boost-for-it-sector-company-adds-21000-jobs-in-a-year-revenue-sees-strong-growth-gdp-gco15v8"/>
        </item>
        <item>
            <title><![CDATA[ಏರ್ ಇಂಡಿಯಾದಿಂದ 1 ಸಾವಿರ ಸಿಬ್ಬಂದಿಗಳ ವಜಾ,  ಭವಿಷ್ಯದಲ್ಲಿ ಕಷ್ಟದ ದಿನಗಳು ಬರದಂತೆ ಈ ನಿರ್ಧಾರವೆಂದ ಸಿಇಒ!]]></title>
            <link>https://kannada.asianetnews.com/gallery/business/air-india-fires-over-1000-employees-for-ethical-violations-amid-rising-financial-pressure-says-ceo-campbell-wilson-gdp-guyqmw8</link>
            <guid isPermaLink="true">https://kannada.asianetnews.com/gallery/business/air-india-fires-over-1000-employees-for-ethical-violations-amid-rising-financial-pressure-says-ceo-campbell-wilson-gdp-guyqmw8</guid>
            <pubDate>Mon, 11 May 2026 16:54:32 +0530</pubDate>
            <description><![CDATA[&lt;p&gt;ಕಳೆದ ಮೂರು ವರ್ಷಗಳಲ್ಲಿ, ಏರ್ ಇಂಡಿಯಾ ನೈತಿಕ ಉಲ್ಲಂಘನೆಗಳಿಗಾಗಿ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಿಇಒ ಕ್ಯಾಂಪ್&zwnj;ಬೆಲ್ ವಿಲ್ಸನ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ELT ಯೋಜನೆಯ ದುರುಪಯೋಗ ಮತ್ತು ಕಳ್ಳಸಾಗಣೆಯಂತಹ ಗಂಭೀರ ಕಾರಣಗಳನ್ನು ಉಲ್ಲೇಖಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqc4hq94dtm23j90h6qn0d5g,imgname-air-india-hub-spoke-varanasi-international-connectivity-udan-india-aviation-model-updates-3-1777450147108.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಮೂರು ವರ್ಷಗಳಲ್ಲಿ, ಏರ್ ಇಂಡಿಯಾ ನೈತಿಕ ಉಲ್ಲಂಘನೆಗಳಿಗಾಗಿ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಿಇಒ ಕ್ಯಾಂಪ್&zwnj;ಬೆಲ್ ವಿಲ್ಸನ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ELT ಯೋಜನೆಯ ದುರುಪಯೋಗ ಮತ್ತು ಕಳ್ಳಸಾಗಣೆಯಂತಹ ಗಂಭೀರ ಕಾರಣಗಳನ್ನು ಉಲ್ಲೇಖಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಕಳೆದ ಮೂರು ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೈತಿಕ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ವಜಾಗೊಳಿಸಿರುವುದು ಬೆಳಕಿಗೆ ಬಂದಿದೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್&zwnj;ಬೆಲ್ ವಿಲ್ಸನ್ ಈ ಮಾಹಿತಿಯನ್ನು ಸಿಬ್ಬಂದಿಯೊಂದಿಗೆ ನಡೆದ ಟೌನ್&zwnj;ಹಾಲ್ ಸಭೆಯಲ್ಲಿ ಬಹಿರಂಗಪಡಿಸಿದ್ದು, ಸಂಸ್ಥೆಯ ಒಳಗೆ ನಿಯಮ ಪಾಲನೆಗೆ ನೀಡಲಾಗುತ್ತಿರುವ ಮಹತ್ವವನ್ನು ಒತ್ತಿಹೇಳಿದ್ದಾರೆ.&lt;/p&gt;&lt;img&gt;&lt;p&gt;ಕ್ಯಾಂಪ್&zwnj;ಬೆಲ್ ವಿಲ್ಸನ್ ಅವರ ಪ್ರಕಾರ, ಪ್ರತಿವರ್ಷ ನೂರಾರು ಉದ್ಯೋಗಿಗಳನ್ನು ವಿವಿಧ ರೀತಿಯ ನಿಯಮ ಉಲ್ಲಂಘನೆಗಳ ಕಾರಣದಿಂದ ವಜಾಗೊಳಿಸಲಾಗುತ್ತಿದೆ. ಯಾರೂ ನೋಡದಿದ್ದರೂ ಸಹ ಸರಿಯಾದ ನಡವಳಿಕೆಯನ್ನು ಅನುಸರಿಸುವುದು ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯ ಎಂದು ಹೇಳಿದರು.&lt;/p&gt;&lt;p&gt;ವಿಮಾನದಿಂದ ವಸ್ತುಗಳನ್ನು ಕಳ್ಳಸಾಗಣೆ ಮಾಡುವುದು, ಶುಲ್ಕವಿಲ್ಲದೆ ಹೆಚ್ಚುವರಿ ಸಾಮಾನುಗಳನ್ನು ಸಾಗಿಸಲು ಅವಕಾಶ ನೀಡುವುದು ಹಾಗೂ ಉದ್ಯೋಗಿಗಳಿಗೆ ನೀಡಲಾಗುವ ಉದ್ಯೋಗಿಗಳ ಮನರಂಜನಾ ಪ್ರಯಾಣ ಯೋಜನೆ (Employee Leisure Travel-ELT) ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದು ಸೇರಿದಂತೆ ಹಲವು ಗಂಭೀರ ಉಲ್ಲಂಘನೆಗಳಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಠಿಣ ಶಿಸ್ತು ಕ್ರಮಗಳನ್ನು ಜಾರಿಗೆ ತರಲಾಗಿದೆ.&lt;/p&gt;&lt;img&gt;&lt;p&gt;ಮಾರ್ಚ್ ತಿಂಗಳಲ್ಲಿ ಸಂಸ್ಥೆಯು ELT (Employee Leisure Travel) ವ್ಯವಸ್ಥೆಯ ಬಳಕೆಯಲ್ಲಿ ದೊಡ್ಡ ಮಟ್ಟದ ಅಕ್ರಮಗಳನ್ನು ಪತ್ತೆಹಚ್ಚಿತ್ತು. ಮೂಲಗಳ ಪ್ರಕಾರ, 4,000 ಕ್ಕೂ ಹೆಚ್ಚು ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ದಂಡ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಈ ಕ್ರಮಗಳು ಸಂಸ್ಥೆ ಎದುರಿಸುತ್ತಿರುವ ಆರ್ಥಿಕ ಸವಾಲುಗಳ ನಡುವೆಯೇ ಜಾರಿಗೆ ಬಂದಿವೆ. ಟಾಟಾ ಗ್ರೂಪ್ ಅಧೀನದಲ್ಲಿರುವ ಏರ್ ಇಂಡಿಯಾ ಪ್ರಸ್ತುತ ಸುಮಾರು 24,000 ಉದ್ಯೋಗಿಗಳನ್ನು ಹೊಂದಿದೆ. ಆದರೆ, ಮಾರ್ಚ್ 2026ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಗ್ರೂಪ್ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸೇರಿ ₹22,000 ಕೋಟಿಗೂ ಅಧಿಕ ನಷ್ಟವನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಸಂಸ್ಥೆ ಹಲವಾರು ವೆಚ್ಚ ಉಳಿತಾಯ ಕ್ರಮಗಳನ್ನು ಜಾರಿಗೆ ತಂದಿದೆ. ವಾರ್ಷಿಕ ವೇತನ ಹೆಚ್ಚಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು, ಅಗತ್ಯವಿಲ್ಲದ ವೆಚ್ಚಗಳನ್ನು ಕಡಿತಗೊಳಿಸುವುದು ಹಾಗೂ ವಿವೇಚನೆಯ ವೆಚ್ಚ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಲೋಕಸಭೆಗೆ ನೀಡಿದ ಲಿಖಿತ ಉತ್ತರದ ಪ್ರಕಾರ, ವಿಮಾನಯಾನ ಸಂಸ್ಥೆಯ ಆರ್ಥಿಕ ಸ್ಥಿತಿ ಗಂಭೀರವಾಗಿದೆ. 2022-23ನೇ ಹಣಕಾಸು ವರ್ಷದಲ್ಲಿ ₹1,16.32 ಕೋಟಿ ಲಾಭ ದಾಖಲಿಸಿದ್ದ ಸಂಸ್ಥೆ, 2023-24ರಲ್ಲಿ ₹1,63.12 ಕೋಟಿ ನಷ್ಟ ಕಂಡಿತ್ತು. ಇದಾದ ಬಳಿಕ 2024-25ರಲ್ಲಿ ₹58,32.37 ಕೋಟಿ ಭಾರೀ ನಷ್ಟವನ್ನು ದಾಖಲಿಸಿರುವುದು ಪರಿಸ್ಥಿತಿಯ ತೀವ್ರತೆಯನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಮಧ್ಯಪ್ರಾಚ್ಯದ ಭೂರಾಜಕೀಯ ಪರಿಸ್ಥಿತಿ ಸೇರಿದಂತೆ ಜಾಗತಿಕ ಅಂಶಗಳು ವಿಮಾನಯಾನ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿವೆ. ಈ ಬಗ್ಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಕ್ಯಾಂಪ್&zwnj;ಬೆಲ್ ವಿಲ್ಸನ್, &ldquo;ಮಧ್ಯಪ್ರಾಚ್ಯದ ಪರಿಸ್ಥಿತಿ ಸುಧಾರಿಸದಿದ್ದರೆ ಈ ಹಣಕಾಸು ವರ್ಷ ಅತ್ಯಂತ ಕಷ್ಟಕರವಾಗಬಹುದು&rdquo; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಏರ್ ಇಂಡಿಯಾ ತನ್ನ ಆಂತರಿಕ ನಿಯಮ ಪಾಲನೆ, ನೈತಿಕ ಮೌಲ್ಯಗಳು ಮತ್ತು ವೆಚ್ಚ ನಿಯಂತ್ರಣದ ಮೇಲೆ ಹೆಚ್ಚು ಒತ್ತು ನೀಡುತ್ತಿರುವುದು ಸ್ಪಷ್ಟವಾಗಿದೆ. ಆರ್ಥಿಕ ಒತ್ತಡ ಮತ್ತು ಕಾರ್ಯಾಚರಣಾ ಸವಾಲುಗಳ ನಡುವೆಯೂ ಸಂಸ್ಥೆ ಶಿಸ್ತು ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು, ಮುಂದಿನ ದಿನಗಳಲ್ಲಿ ಅದರ ಪುನರುತ್ಥಾನಕ್ಕೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/air-india-fires-over-1000-employees-for-ethical-violations-amid-rising-financial-pressure-says-ceo-campbell-wilson-gdp-guyqmw8"/>
        </item>
        <item>
            <title><![CDATA[ಮೆಟಾದಿಂದ ಬೃಹತ್ ಉದ್ಯೋಗ ಕಡಿತ: AI ಹೂಡಿಕೆ, ಭವಿಷ್ಯದ ಯೋಜನೆಯ ವೆಚ್ಚ ನಿರ್ವಹಣೆಗಾಗಿ ಈ ಕ್ರಮವೆಂದ ಜುಕರ್‌ಬರ್ಗ್!]]></title>
            <link>https://kannada.asianetnews.com/jobs/meta-layoffs-2026-meta-plans-10-percent-workforce-cut-amid-rising-ai-investment-costs-gdp/articleshow-hv63edg</link>
            <guid isPermaLink="true">https://kannada.asianetnews.com/jobs/meta-layoffs-2026-meta-plans-10-percent-workforce-cut-amid-rising-ai-investment-costs-gdp/articleshow-hv63edg</guid>
            <pubDate>Fri, 01 May 2026 09:22:16 +0530</pubDate>
            <description><![CDATA[ಮೆಟಾ ಸಂಸ್ಥೆಯು ತನ್ನ ಒಟ್ಟು ಸಿಬ್ಬಂದಿಯಲ್ಲಿ ಸುಮಾರು 10% ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ. ಕೃತಕ ಬುದ್ಧಿಮತ್ತೆ (AI) ಮೇಲಿನ ಹೆಚ್ಚುತ್ತಿರುವ ಹೂಡಿಕೆಯನ್ನು ಸಮತೋಲನಗೊಳಿಸಲು ಮತ್ತು ವೆಚ್ಚ ನಿರ್ವಹಣೆಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾರ್ಕ್ ಜುಕರ್&zwnj;ಬರ್ಗ್ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpzdbhpx4dhvxsn6mxenk5gn,imgname-meta-layoffs-new-2026-1777023174364.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಟಾ ಸಂಸ್ಥೆಯು ಮುಂದಿನ ತಿಂಗಳು ತನ್ನ ಒಟ್ಟು ಸಿಬ್ಬಂದಿಯಲ್ಲಿ ಸುಮಾರು 10% ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿರುವುದಾಗಿ ವರದಿ ತಿಳಿಸಿದೆ. ಇದೇ ವೇಳೆ, ಅಗತ್ಯವಿದ್ದರೆ ಇನ್ನಷ್ಟು ಕಡಿತ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯನ್ನೂ ಕಂಪನಿ ತಳ್ಳಿಹಾಕಿಲ್ಲ. ಈ ಮಾಹಿತಿ ಸಂಸ್ಥೆಯ ಆಂತರಿಕ ಸಭೆಯಲ್ಲಿ ಹೊರಬಂದಿದ್ದು, ಮುಖ್ಯ ಜನಾಧಿಕಾರಿ ಜನೆಲ್ ಗೇಲ್ ಉದ್ಯೋಗಿಗಳಿಗೆ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಸಭೆಯಲ್ಲಿ ಮಾತನಾಡಿದ ಅವರು, ಮತ್ತಷ್ಟಯ ವಜಾಗಳು ನಡೆಯುತ್ತವೆಯೇ ಎಂಬ ಪ್ರಶ್ನೆ ಸಹಜ. ಮುಂದೆ ಯಾವುದೇ ವಜಾಗಳಿಲ್ಲ ಎಂದು ಹೇಳಲು ನಾನು ಬಯಸುತ್ತೇನೆ, ಆದರೆ ಭರವಸೆ ನೀಡಲು ಸಾಧ್ಯವಿಲ್ಲ. ವ್ಯವಹಾರ ಬಲವಾಗಿದ್ದರೂ ಆದ್ಯತೆಗಳು ಬದಲಾಗುತ್ತವೆ, ಸ್ಪರ್ಧೆ ಹೆಚ್ಚುತ್ತಿದೆ ಮತ್ತು ವೆಚ್ಚ ನಿರ್ವಹಣೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಕಂಪನಿಯು ಮುಂದುವರಿದು ತಂಡಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮರುಸಂರಚನೆ ಮಾಡಲಿದ್ದು, ಪ್ರತಿಭೆಯನ್ನು ಹೊಸ ವಿಭಾಗಗಳಿಗೆ ಮರುನಿಯೋಜಿಸಲು ಪ್ರಯತ್ನಿಸಲಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಮಾರ್ಕ್ ಜುಕರ್&zwnj;ಬರ್ಗ್ ಹೇಳಿದ್ದೇನು?&lt;/h2&gt;&lt;p&gt;ಈ ಸಂದರ್ಭದಲ್ಲಿ ಮಾರ್ಕ್ ಜುಕರ್&zwnj;ಬರ್ಗ್ (Mark Zuckerberg) ಕೂಡ ಮಾತನಾಡಿ, ಕಂಪನಿಯ ವೆಚ್ಚದಲ್ಲಿ &ldquo;ಕಂಪ್ಯೂಟ್ ಮತ್ತು ಮೂಲಸೌಕರ್ಯ&rdquo; ಹಾಗೂ &ldquo;ಮಾನವ ಸಂಪನ್ಮೂಲ&rdquo; ಪ್ರಮುಖ ಪಾತ್ರವಹಿಸುತ್ತಿವೆ ಎಂದು ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಹೂಡಿಕೆಗಳನ್ನು ಉಲ್ಲೇಖಿಸಿದ ಅವರು, ಈ ಹೂಡಿಕೆಗಳನ್ನು ಸಮತೋಲನಗೊಳಿಸಲು ಕಂಪನಿಯ ಗಾತ್ರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಕೆಲವು ವಿಭಾಗಗಳು ಇತರ ವಿಭಾಗಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ವಜಾಗೊಳಿಸುವಿಕೆಯಿಂದ ಪ್ರಭಾವಿತವಾಗಬಹುದು ಎಂದು ಜನೆಲ್ ಗೇಲ್ ಸೂಚಿಸಿದರೂ, ಯಾವ ವಿಭಾಗಗಳೆಂದು ವಿವರಣೆ ನೀಡಿಲ್ಲ. ಇದೇ ವೇಳೆ, AI ಟೋಕನ್ ಬಳಕೆ ಅಥವಾ ಸ್ವಯಂಚಾಲಿತ ಪ್ರಕ್ರಿಯೆಗಳು ನೇರವಾಗಿ ವಜಾಗಳಿಗೆ ಕಾರಣವಾಗುವುದಿಲ್ಲ ಎಂದು ಕಂಪನಿ ನಾಯಕತ್ವ ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಸುಮಾರು 8,000 ಉದ್ಯೋಗಿಗಳ ವಜಾ&lt;/h2&gt;&lt;p&gt;ಮಾಧ್ಯಮ ವರದಿಗಳ ಪ್ರಕಾರ, ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ AI ಮೇಲಿನ ಹೆಚ್ಚುತ್ತಿರುವ ವೆಚ್ಚವನ್ನು ಸಮತೋಲನಗೊಳಿಸಲು ಕಂಪನಿ ಯತ್ನಿಸುತ್ತಿದೆ. Meta Platforms ಸಂಸ್ಥೆಯು ತಂಡಗಳ ಗಾತ್ರವನ್ನು ಮರುಪರಿಶೀಲಿಸುತ್ತಿದ್ದು, ಹಿಂದೆ 50-100 ಜನರ ಅಗತ್ಯವಿದ್ದ ಕೆಲಸಗಳನ್ನು ಈಗ 10 ಜನರ ತಂಡವೇ ನಿರ್ವಹಿಸಬಹುದಾದ ಮಟ್ಟಕ್ಕೆ AI ಅಭಿವೃದ್ಧಿ ತಲುಪಿದೆ ಎಂದು ಜುಕರ್&zwnj;ಬರ್ಗ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ತಂಡದ ಗಾತ್ರವನ್ನು ಮುಂದುವರಿಸುವುದು ಪರಿಣಾಮಕಾರಿಯಾಗುವುದಿಲ್ಲ ಎಂದರು.&lt;/p&gt;&lt;p&gt;ಆದರೆ, ತಂಡದ ಗಾತ್ರ ಕಡಿತವೇ ಉದ್ಯೋಗ ಕಳೆದುಕೊಳ್ಳುವುದಕ್ಕೆ ಸಮಾನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. AI ಬಳಕೆ ಉದ್ಯೋಗಿಗಳಿಗೆ ಹೊಸ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂಬುದನ್ನೂ ಹೇಳಿದ್ದಾರೆ.&lt;/p&gt;&lt;p&gt;ಇನ್ನೊಂದೆಡೆ, ಜಾಗತಿಕ ಆರ್ಥಿಕ ಪರಿಸ್ಥಿತಿಗಳೂ ಕಂಪನಿಯ ಮೇಲೆ ಪರಿಣಾಮ ಬೀರಿವೆ. ಇರಾನ್ ವಿರುದ್ಧ ಅಮೆರಿಕ ನಡೆಸಿದ ದಾಳಿಯ ನಂತರ ತೈಲ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಅನಿವಾರ್ಯ ಖರ್ಚುಗಳಿಗೆ ಹೆಚ್ಚು ಹಣ ವ್ಯಯಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಜಾಹೀರಾತುಗಳ ಮೇಲೆ ಖರ್ಚು ಕಡಿಮೆಯಾಗಿದ್ದು, ಕಂಪನಿಯ ಜಾಹೀರಾತು ವ್ಯವಹಾರಕ್ಕೆ ಹೊಡೆತ ಬಿದ್ದಿದೆ ಎಂದು ಜುಕರ್&zwnj;ಬರ್ಗ್ ತಿಳಿಸಿದ್ದಾರೆ.&lt;/p&gt;&lt;p&gt;ಹೂಡಿಕೆ ದೃಷ್ಟಿಯಿಂದ ನೋಡಿದರೆ, ಕಂಪನಿಯ ಬಂಡವಾಳ ವೆಚ್ಚ (CapEx) ಮಾರ್ಗದರ್ಶನವನ್ನು $115 ಬಿಲಿಯನ್&ndash;$135 ಬಿಲಿಯನ್&zwnj;ನಿಂದ ಹೆಚ್ಚಿಸಿ $125 ಬಿಲಿಯನ್&ndash;$145 ಬಿಲಿಯನ್&zwnj;ಗೆ ಏರಿಸಲಾಗಿದೆ. ಅಮೆಜಾನ್ ಹಾಗೂ ಗೂಗಲ್ ಸೇರಿದಂತೆ ಪ್ರಮುಖ ಟೆಕ್ ಕಂಪನಿಗಳು ಈ ವರ್ಷ AI ಕ್ಷೇತ್ರಕ್ಕೆ ಒಟ್ಟಾರೆ ಸುಮಾರು $750 ಬಿಲಿಯನ್ ಹೂಡಿಕೆ ಮಾಡುವ ನಿರೀಕ್ಷೆಯಿದೆ. ಈ ಹೆಚ್ಚಿದ ಹೂಡಿಕೆಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದು, ಮೆಟಾ ಷೇರುಗಳಲ್ಲಿ ಸುಮಾರು 9% ಕುಸಿತ ಕಂಡುಬಂದಿದೆ.&lt;/p&gt;&lt;p&gt;ಸಭೆಯ ವೇಳೆ, ಉದ್ಯೋಗಿಗಳ ಕೀಸ್ಟ್ರೋಕ್ ಮತ್ತು ಮೌಸ್ ಚಲನೆಯನ್ನು ವಿಶ್ಲೇಷಿಸಿ AI ಮಾದರಿಗಳನ್ನು ಸುಧಾರಿಸುವ ಯೋಜನೆಯನ್ನೂ ಜುಕರ್&zwnj;ಬರ್ಗ್ ಉಲ್ಲೇಖಿಸಿದ್ದಾರೆ. ಈ ಡೇಟಾವನ್ನು ವೈಯಕ್ತಿಕವಾಗಿ ಯಾರೂ ವೀಕ್ಷಿಸುವುದಿಲ್ಲ, ಬದಲಾಗಿ ಸಂಗ್ರಹಿತ ರೂಪದಲ್ಲಿ AI ತರಬೇತಿಗೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;p&gt;AI ವಿಭಾಗದ ಮುಖ್ಯಸ್ಥ ಅಲೆಗ್ಸಾಂಡರ್ Wang ಕೂಡ ಸಭೆಯಲ್ಲಿ ಪಾಲ್ಗೊಂಡು, ಕಂಪನಿಯ ಹೊಸ AI ಮಾದರಿಗಳ ಸಾಧನೆಯನ್ನು ಶ್ಲಾಘಿಸಿದರು. ವಿಶೇಷವಾಗಿ &ldquo;ಸ್ಪಾರ್ಕ್&rdquo; ಮಾದರಿಯ ಬಿಡುಗಡೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;h2&gt;6,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಕೈಬಿಟ್ಟ ಮೆಟಾ&lt;/h2&gt;&lt;p&gt;ಇದರ ನಡುವೆ, ಮಾರ್ಚ್ ತಿಂಗಳಲ್ಲಿ ಬಂದ ವರದಿಗಳ ಪ್ರಕಾರ, ಕಂಪನಿ ಈ ವರ್ಷ ಒಟ್ಟು ಸಿಬ್ಬಂದಿಯಲ್ಲಿ ಸುಮಾರು 20% ರಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ. ಮೇ 20ರಿಂದ ವಜಾಗೊಳಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಸುಮಾರು 6,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆಯನ್ನೂ ಕಂಪನಿ ಕೈಬಿಡಲಿದೆ.&lt;/p&gt;&lt;p&gt;ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಸುಸಾನ್ ಲಿ ಮಾತನಾಡಿ, ಸಂಸ್ಥೆಯ ಆದರ್ಶ ಸಿಬ್ಬಂದಿ ಸಂಖ್ಯೆಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ 77,000ಕ್ಕೂ ಹೆಚ್ಚು ಉದ್ಯೋಗಿಗಳಿರುವ ಮೆಟಾದಲ್ಲಿ, ಮೂಲಸೌಕರ್ಯ ವೆಚ್ಚಗಳು ಬಹುಪಾಲು AI ಅಭಿವೃದ್ಧಿಗೆ ಮೀಸಲಾಗಿದ್ದು, 2025ರ $72.2 ಬಿಲಿಯನ್ ವೆಚ್ಚದಿಂದ ಈ ವರ್ಷ ಅದು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.&lt;/p&gt;&lt;p&gt;ಒಟ್ಟಿನಲ್ಲಿ, Meta Platforms ಸಂಸ್ಥೆ AI ಮೇಲೆ ಭಾರೀ ಹೂಡಿಕೆ ಮಾಡುತ್ತಾ ತನ್ನ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಲು ಪ್ರಯತ್ನಿಸುತ್ತಿದೆ. ಈ ಬದಲಾವಣೆಗಳ ಭಾಗವಾಗಿ ಉದ್ಯೋಗ ಕಡಿತವೂ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಂಪನಿಯ ಸಂರಚನೆಯಲ್ಲಿ ಇನ್ನಷ್ಟು ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/meta-layoffs-2026-meta-plans-10-percent-workforce-cut-amid-rising-ai-investment-costs-gdp/articleshow-hv63edg"/>
        </item>
        <item>
            <title><![CDATA[ಸಾಫ್ಟ್‌ವೇರ್ ವಿನ್ಯಾಸ, ಅಭಿವೃದ್ಧಿ ಕಾರ್ಯ ಓಪನ್ಎಐ ಜೊತೆ ಕೈ ಜೋಡಿಸಿದ ಕಾಗ್ನಿಜೆಂಟ್, ಎಐ ಜಗತ್ತಿನ ಹೊಸ ಅಧ್ಯಾಯ ಆರಂಭ]]></title>
            <link>https://kannada.asianetnews.com/business/cognizant-partners-with-openai-to-deploy-codex-for-enterprise-ai-and-software-engineering/articleshow-i3o7m6a</link>
            <guid isPermaLink="true">https://kannada.asianetnews.com/business/cognizant-partners-with-openai-to-deploy-codex-for-enterprise-ai-and-software-engineering/articleshow-i3o7m6a</guid>
            <pubDate>Wed, 22 Apr 2026 11:53:55 +0530</pubDate>
            <description><![CDATA[ಪ್ರಖ್ಯಾತ ಐಟಿ ಸಂಸ್ಥೆ ಕಾಗ್ನಿಜೆಂಟ್, ಎಂಟರ್&zwnj;ಪ್ರೈಸ್ ಗ್ರಾಹಕರಿಗೆ ಎಐ ಲಾಭ ಒದಗಿಸಲು ಓಪನ್ಎಐ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ಓಪನ್ಎಐನ 'ಕೋಡೆಕ್ಸ್' ತಂತ್ರಜ್ಞಾನವನ್ನು ತನ್ನ ಸಾಫ್ಟ್&zwnj;ವೇರ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಳವಡಿಸಿಕೊಳ್ಳಲಿದೆ. ಇದು ಮಾನವ ಮತ್ತು ಎಐ ಸಾಮರ್ಥ್ಯಗಳನ್ನು ಒಗ್ಗೂಡಿಸಿ, ಸಾಫ್ಟ್&zwnj;ವೇರ್ ವಿತರಣೆಯನ್ನು ವೇಗಗೊಳಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kabb5d09prsq0q91tg21r8bw,imgname-cognizant-prohance-1763464885255.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪ್ರಖ್ಯಾತ ಐಟಿ ಸೇವಾ ಸಂಸ್ಥೆ ಕಾಗ್ನಿಜೆಂಟ್ ಜಾಗತಿಕ ಮಟ್ಟದಲ್ಲಿ ಎಂಟರ್&zwnj;ಪ್ರೈಸ್ ಗ್ರಾಹಕರಿಗೆ ಎಐ ತಂತ್ರಜ್ಞಾನದ ಗರಿಷ್ಠ ಲಾಭವನ್ನು ಒದಗಿಸುವ ಉದ್ದೇಶದಿಂದ ಓಪನ್ಎಐ ಜೊತೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ ಓಪನ್ಎಐನ 'ಕೋಡೆಕ್ಸ್' ತಂತ್ರಜ್ಞಾನವನ್ನು ಕಾಗ್ನಿಜೆಂಟ್ ತನ್ನ ಸಾಫ್ಟ್&zwnj;ವೇರ್ ಇಂಜಿನಿಯರಿಂಗ್ ವಿಭಾಗದಾದ್ಯಂತ ಅಳವಡಿಸಿಕೊಳ್ಳಲಿದೆ.&lt;/p&gt;&lt;p&gt;ಸಂಕೀರ್ಣವಾದ ಎಂಟರ್&zwnj;ಪ್ರೈಸ್ ಪರಿಸರದಲ್ಲಿ ಕೋಡೆಕ್ಸ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ನಿಯೋಜಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಗುರುತಿಸಿ ಓಪನ್ಎಐ ಸಂಸ್ಥೆಯು ಕಾಗ್ನಿಜೆಂಟ್ ಅನ್ನು ತನ್ನ 'ಆಯ್ದ ಪಾಲುದಾರರ' ಪಟ್ಟಿಗೆ ಸೇರಿಸಿದೆ. ಎಐ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಕಾಗ್ನಿಜೆಂಟ್ ಹೊಂದಿರುವ ಸುದೀರ್ಘ ಅನುಭವವೇ ಈ ಆಯ್ಕೆಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;ʼಇದು ಮಾನವ ಮತ್ತು ಎಐ ಒಟ್ಟಾಗಿ ಕಾರ್ಯನಿರ್ವಹಿಸುವ ಕಾಲʼ&lt;/h2&gt;&lt;p&gt;ಪಾಲುದಾರಿಕೆ ಕುರಿತು ಮಾತನಾಡಿದ ಕಾಗ್ನಿಜೆಂಟ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ರಾಜೇಶ್ ವಾರಿಯರ್, &quot;ಮುಂದಿನ ದಶಕದ ಅತ್ಯುತ್ತಮ ಇಂಜಿನಿಯರಿಂಗ್ ಸಂಸ್ಥೆಗಳು, ಎಷ್ಟು ಜನ ಇಂಜಿನಿಯರ್&zwnj;ಗಳನ್ನು ಹೊಂದಿವೆ ಎಂಬುದರ ಮೇಲೆ ನಿರ್ಧಾರವಾಗುವುದಿಲ್ಲ. ಬದಲಾಗಿ, ಮಾನವನ ಆಲೋಚನಾ ಶಕ್ತಿ ಮತ್ತು ಎಐ ಸಾಮರ್ಥ್ಯಗಳು ಎಷ್ಟು ಪರಿಣಾಮಕಾರಿಯಾಗಿ ಒಟ್ಟಾಗಿ ಕೆಲಸ ಮಾಡುತ್ತವೆ ಎಂಬುದರ ಮೇಲೆ ನಿರ್ಧಾರವಾಗುತ್ತವೆ. ನಾವು ಕೋಡೆಕ್ಸ್ ಅನ್ನು ನಮ್ಮ ಇಂಜಿನಿಯರ್&zwnj;ಗಳ ದೈನಂದಿನ ಕಾರ್ಯಗಳಲ್ಲಿ ಪಾಲುದಾರನನ್ನಾಗಿ ಮಾಡುತ್ತಿದ್ದೇವೆ. ಇದು ಕೋಡ್ ರಚನೆ, ಟೆಸ್ಟಿಂಗ್, ರಿಫ್ಯಾಕ್ಟರಿಂಗ್ ಮತ್ತು ಡಾಕ್ಯುಮೆಂಟೇಶನ್&zwnj;ನಂತಹ ಕೆಲಸಗಳನ್ನು ನಿಭಾಯಿಸಲಿದೆ. ಓಪನ್ಎಐ ಅತ್ಯಾಧುನಿಕ ಬುದ್ಧಿಮತ್ತೆಯನ್ನು ತಂದರೆ, ಕಾಗ್ನಿಜೆಂಟ್ ಉದ್ಯಮದ ಅನುಭವ ಹಾಗೂ ಸುರಕ್ಷತಾ ಕ್ರಮಗಳನ್ನು ಒದಗಿಸುತ್ತದೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಸಕ್ರಿಯ ಬಳಕೆ&lt;/h2&gt;&lt;p&gt;ಕಾಗ್ನಿಜೆಂಟ್ ಇಂಜಿನಿಯರ್&zwnj;ಗಳು ಈಗಾಗಲೇ ಗ್ರಾಹಕರ ಯೋಜನೆಗಳಲ್ಲಿ ಕೋಡೆಕ್ಸ್ ಅನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಎಐ ಮತ್ತು ಮಷಿನ್ ಲರ್ನಿಂಗ್ ಮಾಡೆಲ್ ಅಭಿವೃದ್ಧಿ, ಕೋಡ್ ರಿಫ್ಯಾಕ್ಟರಿಂಗ್ ಮತ್ತು ದಶಕಗಳಷ್ಟು ಹಳೆಯದಾದ ಸಿಸ್ಟಮ್&zwnj;ಗಳ ನವೀಕರಣ ಕಾರ್ಯಗಳಲ್ಲಿ ಇದನ್ನು ಬಳಸಲಾಗುತ್ತಿದೆ.&lt;/p&gt;&lt;p&gt;ಇದರಿಂದ ಸಾಫ್ಟ್&zwnj;ವೇರ್ ವಿತರಣೆಯ ಸಮಯ ಗಣನೀಯವಾಗಿ ಕಡಿಮೆಯಾಗುತ್ತಿದೆ, ಕೋಡ್&zwnj;ನ ಗುಣಮಟ್ಟ ಹೆಚ್ಚಾಗುತ್ತಿದೆ ಹಾಗೂ ದೊಡ್ಡ ಮಟ್ಟದ ಯೋಜನೆಗಳ ವೆಚ್ಚ ಮತ್ತು ಅಪಾಯಗಳು ತಗ್ಗುತ್ತಿವೆ ಎಂದು ಸಂಸ್ಥೆ ತಿಳಿಸಿದೆ.&lt;/p&gt;&lt;p&gt;ಓಪನ್ಎಐನ ಮುಖ್ಯ ಆದಾಯ ಅಧಿಕಾರಿ (ಸಿಆರ್&zwnj;ಒ) ಡೆನಿಸ್ ಡ್ರೆಸ್ಸರ್ ಈ ಬಗ್ಗೆ ಪ್ರತಿಕ್ರಿಯಿಸಿ, &quot;ಕೋಡೆಕ್ಸ್ ತಂತ್ರಜ್ಞಾನವು ಸಾಫ್ಟ್&zwnj;ವೇರ್ ಅಭಿವೃದ್ಧಿ ಮತ್ತು ವ್ಯವಹಾರ ಪ್ರಕ್ರಿಯೆಗಳನ್ನು ನಿರ್ವಹಿಸಲು ಪ್ರಬಲ ಸಾಧನವಾಗಿ ಹೊರಹೊಮ್ಮುತ್ತಿದೆ. ಕಾಗ್ನಿಜೆಂಟ್&zwnj;ನಂತಹ ಪ್ರಮುಖ ಪಾಲುದಾರರೊಂದಿಗೆ ಸೇರಿ, ಸಂಸ್ಥೆಗಳಿಗೆ ಹಳೆಯ ಕೋಡ್&zwnj;ಗಳ ನವೀಕರಣ, ದೋಷ ಪತ್ತೆ, ಅಪ್ಲಿಕೇಶನ್ ಅಭಿವೃದ್ಧಿ ಮತ್ತು ಕೋಡ್ ವಿಮರ್ಶೆ ಪ್ರಕ್ರಿಯೆಗಳಲ್ಲಿ ಕೋಡೆಕ್ಸ್ ನಿಯೋಜಿಸಲು ನಾವು ನೆರವಾಗಲಿದ್ದೇವೆ,&quot; ಎಂದರು.&lt;/p&gt;&lt;p&gt;ಈ ಪಾಲುದಾರಿಕೆಯು ಕಾಗ್ನಿಜೆಂಟ್&zwnj;ನ 'ಎಐ ಬಿಲ್ಡರ್' ಕಾರ್ಯತಂತ್ರಕ್ಕೆ ಮತ್ತಷ್ಟು ಬಲ ತುಂಬಲಿದೆ. ಕೇವಲ ಎಐ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದಷ್ಟೇ ಅಲ್ಲದೆ, ಅದನ್ನು ವಾಸ್ತವಿಕ ವ್ಯವಹಾರಗಳಿಗೆ ಅನ್ವಯಿಸಿ ಉತ್ತಮ ಫಲಿತಾಂಶ ತರುವುದು ಕಾಗ್ನಿಜೆಂಟ್&zwnj;ನ ಉದ್ದೇಶವಾಗಿದೆ. ಒಟ್ಟಾರೆಯಾಗಿ, ಈ ಎರಡು ದೈತ್ಯ ಸಂಸ್ಥೆಗಳು ಮುಂದಿನ ದಿನಗಳಲ್ಲಿ ವಿವಿಧ ವಲಯದ ಕೈಗಾರಿಕೆಗಳಿಗೆ ಅತ್ಯಾಧುನಿಕ, ಸುರಕ್ಷಿತ ಹಾಗೂ ವೇಗದ ಸಾಫ್ಟ್&zwnj;ವೇರ್ ಸೇವೆಗಳನ್ನು ನೀಡಲು ಮುನ್ನುಡಿ ಬರೆದಿವೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/business/cognizant-partners-with-openai-to-deploy-codex-for-enterprise-ai-and-software-engineering/articleshow-i3o7m6a"/>
        </item>
        <item>
            <title><![CDATA[ಕಾರ್ಪೊರೇಟ್ ಲೋಕಕ್ಕೆ 'ಗುಡ್‌ಬೈ': 11 ವರ್ಷಗಳ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ 35 ವರ್ಷದ ಯುವಕ!]]></title>
            <link>https://kannada.asianetnews.com/private-jobs/biswajit-mohanty-retires-at-35-corporate-job-goodbye-mail-viral-instagram-video-san/articleshow-mekouok</link>
            <guid isPermaLink="true">https://kannada.asianetnews.com/private-jobs/biswajit-mohanty-retires-at-35-corporate-job-goodbye-mail-viral-instagram-video-san/articleshow-mekouok</guid>
            <pubDate>Wed, 06 May 2026 20:05:13 +0530</pubDate>
            <description><![CDATA[35 ವರ್ಷದ ಕಾರ್ಪೊರೇಟ್ ಉದ್ಯೋಗಿ ಬಿಸ್ವಜಿತ್ ಮೊಹಂತಿ, ತಮ್ಮ 11 ವರ್ಷಗಳ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಜೀವನದ ಅರ್ಥ ಮತ್ತು ವೈಯಕ್ತಿಕ ತೃಪ್ತಿಗಾಗಿ ಅಧಿಕ ಸಂಬಳದ ಕೆಲಸವನ್ನು ತೊರೆದ ಅವರ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಬೆಂಬಲಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyv4z0sq7wsvx21h6d35xz9,imgname-whatsapp-image-2026-05-06-at-7.59.02-pm-1778077826073.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.6): &lt;/strong&gt;ಇಂದು ಹತ್ತಾರು ಲಕ್ಷ ಸಂಬಳವಿದ್ದರೂ ಕಾರ್ಪೊರೇಟ್ ವಲಯದ ಒತ್ತಡಕ್ಕೆ ಸಿಲುಕಿ ಜೀವನದ ಅರ್ಥವನ್ನೇ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ 35 ವರ್ಷದ ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ಜೀವನದ ಉದ್ದೇಶ ಮತ್ತು ಆದ್ಯತೆಗಳ ಬಗ್ಗೆ ಆಳವಾಗಿ ಯೋಚಿಸಿದ ನಂತರ, ಹನ್ನೊಂದು ವರ್ಷಗಳ ಸುದೀರ್ಘ ವೃತ್ತಿಜೀವನದಿಂದ ಹೊರಬರಲು ನಿರ್ಧರಿಸಿದ್ದಾರೆ. ಬಿಸ್ವಜಿತ್ ಮೊಹಂತಿ ಎಂಬುವವರು ತಮ್ಮ ಇನ್&zwnj;ಸ್ಟಾಗ್ರಾಮ್ ವಿಡಿಯೋದ ಮೂಲಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. 35ನೇ ವಯಸ್ಸಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮ ಕೊನೆಯ ದಿನವನ್ನು ಗುರುತಿಸಿರುವ ಬಿಸ್ವಜಿತ್, ಈ ನಿರ್ಧಾರಕ್ಕೆ ಪ್ರೇರೇಪಿಸಿದ ಅಂಶಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಶಾಲಾ ಶಿಕ್ಷಣ, ಸಾಲ ಮಾಡಿ ಪಡೆದ ಉನ್ನತ ಶಿಕ್ಷಣ ಮತ್ತು 11 ವರ್ಷಗಳ ವೃತ್ತಿಪರ ಅನುಭವ. ಇವೆಲ್ಲವೂ ಕಾರ್ಪೊರೇಟ್ ಹಾದಿಯಿಂದ ಹೊರಬರುವ ನಿರ್ಧಾರಕ್ಕೆ ಮುನ್ನುಡಿಯಾದವು. ಸುಮಾರು ಮೂರು ವರ್ಷಗಳ ಹಿಂದೆಯೇ ತಾವು ನಿವೃತ್ತಿಯವರೆಗೆ ಇದೇ ಕೆಲಸದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ ಎಂಬ ಕಠಿಣ ಸತ್ಯ ಅವರಿಗೆ ಅರಿವಾಯಿತು. ಈ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಅವರು ತಮ್ಮನ್ನು ತಾವು ಎರಡು ಪ್ರಶ್ನೆಗಳನ್ನು ಕೇಳಿಕೊಂಡಿದ್ದರು:&lt;/p&gt;&lt;p&gt;ಆರ್ಥಿಕ ಭದ್ರತೆ ಈಗಾಗಲೇ ಖಚಿತವಾಗಿದ್ದರೆ, ನಾನು ಇದೇ ಕೆಲಸವನ್ನು ಮುಂದುವರಿಸುತ್ತಿದ್ದೇನೆಯೇ? ನಾನು ಮಾಡುತ್ತಿರುವ ಕೆಲಸವು ನೈಜ ಜಗತ್ತಿನಲ್ಲಿ ಏನಾದರೂ ಅರ್ಥಪೂರ್ಣ ಪ್ರಭಾವ ಬೀರಲಿದೆಯೇ? ಒಂದು ವೇಳೆ ನನ್ನ ಈ ಹುದ್ದೆ ಇಲ್ಲದಿದ್ದರೆ ಜಗತ್ತು ಅದನ್ನು ಮಿಸ್ ಮಾಡಿಕೊಳ್ಳುತ್ತದೆಯೇ? ಎನ್ನುವುದು.&lt;/p&gt;&lt;p&gt;&quot;ನನ್ನ ಫೈನಲ್ ಮೇಲ್, ಅಂದರೆ ಗುಡ್&zwnj;ಬೈ ಮೇಲ್ ನನ್ನ ಡ್ರಾಫ್ಟ್&zwnj;ನಲ್ಲಿ ಸಿದ್ಧವಾಗಿದೆ. ಮುಂದಿನ ಒಂದೆರಡು ಗಂಟೆಗಳಲ್ಲಿ ನಾನು ಅದನ್ನು ಕಳುಹಿಸಲಿದ್ದೇನೆ ಮತ್ತು ಈ ಕಾರ್ಪೊರೇಟ್ ಪ್ರಪಂಚದಿಂದ ಹೊರಬರಲಿದ್ದೇನೆ. ಸಮಯ ಮತ್ತು ಶಕ್ತಿ ಇಲ್ಲದಿದ್ದರೆ, ಬ್ಯಾಂಕ್ ಬ್ಯಾಲೆನ್ಸ್ ಕೇವಲ ಅನುಕೂಲವನ್ನು ನೀಡುತ್ತದೆಯೇ ಹೊರತು ಸಂತೋಷವನ್ನಲ್ಲ. ಅದು ರಾತ್ರಿ ನೆಮ್ಮದಿಯ ನಿದ್ರೆ ನೀಡುವುದಿಲ್ಲ ಎಂಬ ಕಹಿ ಸತ್ಯ ನನಗೆ ಅರಿವಾಯಿತು,&quot; ಎಂದು ಬಿಸ್ವಜಿತ್ ವಿಡಿಯೋದಲ್ಲಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ನೆಟ್ಟಿಗರ ಬೆಂಬಲ ಮತ್ತು ಚರ್ಚೆ&lt;/strong&gt;&lt;/h2&gt;&lt;p&gt;ಬಿಸ್ವಜಿತ್ ಅವರ ಈ ಧೈರ್ಯದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಾಂಪ್ರದಾಯಿಕ ವೃತ್ತಿಜೀವನದ ಹಾದಿಗಿಂತ ವೈಯಕ್ತಿಕ ತೃಪ್ತಿಗೆ ಆದ್ಯತೆ ನೀಡಿದ್ದಕ್ಕಾಗಿ ಹಲವರು ಅವರನ್ನು ಶ್ಲಾಘಿಸಿದ್ದಾರೆ. &quot;ಕಾರ್ಪೊರೇಟ್ ಕೆಲಸ ಒಂದು ದೊಡ್ಡ ಬಲೆ! ಕೆಲಸವು ನಿಮ್ಮನ್ನು ಎಂದಿಗೂ ಶ್ರೀಮಂತರನ್ನಾಗಿ ಮಾಡುವುದಿಲ್ಲ, ಬದಲಾಗಿ ನಿಮ್ಮ ಶ್ರಮದಿಂದ 10 ಪಟ್ಟು ಹೆಚ್ಚು ಸಂಪಾದಿಸುವವರ ಕೆಳಗೆ ನಿಮ್ಮನ್ನು ಇರಿಸುತ್ತದೆ. ಈ ಅರಿವು ಯುವ ಪೀಳಿಗೆಗೆ ಬರಬೇಕು,&quot; ಎಂದು ಒಬ್ಬ ಯೂಸರ್&zwnj; ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&quot;35ನೇ ವಯಸ್ಸಿಗೆ ಕಾರ್ಪೊರೇಟ್ ಜೀವನ ಬೇಸರ ತರಿಸುವುದು ಸಹಜ. ಸಾಲದ ಹೊರೆಯಿಲ್ಲದಿದ್ದರೆ ರೋಬೋಟ್&zwnj;ಗಳಂತೆ ಕೆಲಸ ಮಾಡುವುದು ಕಷ್ಟ. ನೆಮ್ಮದಿಯ ಜೀವನಕ್ಕೆ ನಮಗೆ ಅಷ್ಟೊಂದು ಹಣದ ಅಗತ್ಯವಿಲ್ಲ,&quot; ಎಂದು ಬೆಂಬಲಿಸಿದ್ದಾರೆ. &quot;35ನೇ ವಯಸ್ಸಿನಲ್ಲಿ ಇಂತಹ ಅರಿವು ನನಗೂ ಉಂಟಾಗಿತ್ತು. ಈಗ ನನಗೆ 39 ವರ್ಷ, ಸವಾಲುಗಳಿದ್ದರೂ ಸಾಕಷ್ಟು ಕಲಿಯುತ್ತಿದ್ದೇನೆ. ಜನರೊಂದಿಗೆ ವ್ಯವಹರಿಸುವ ಕಲೆ ಕೆಲಸಕ್ಕಿಂತ ಮುಖ್ಯ,&quot; ಎಂದು ಹಾರೈಸಿದ್ದಾರೆ.&lt;/p&gt;&lt;p&gt;ಬರ್ನ್-ಔಟ್ (Burn-out) ಸಮಸ್ಯೆಯಿಂದ ಬಳಲುತ್ತಿದ್ದರೂ 9 ರಿಂದ 5ರ ಕೆಲಸದ ಬಲೆಯಿಂದ ಹೊರಬರಲು ಸಾಧ್ಯವಾಗದ ಸಾವಿರಾರು ಜನರಿಗೆ ಬಿಸ್ವಜಿತ್ ಅವರ ಈ ನಿರ್ಧಾರ ಸ್ಫೂರ್ತಿಯಾಗಿದೆ. ಮುಂದೆ ಅನಿಶ್ಚಿತತೆ ಇದ್ದರೂ, ಕಾರ್ಪೊರೇಟ್ ವ್ಯವಸ್ಥೆಯಿಂದ ಹೊರಬಂದಿರುವುದು ಅವರಿಗೆ ಮನಸ್ಸಿನ ಶಾಂತಿಯನ್ನು ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/private-jobs/biswajit-mohanty-retires-at-35-corporate-job-goodbye-mail-viral-instagram-video-san/articleshow-mekouok"/>
        </item>
        <item>
            <title><![CDATA[ಯುವಕರ ಹೊಸ ಭವಿಷ್ಯ ಬರೆಯಲಿದೆ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿ ಜಿಟಿಟಿಸಿ ಒಪ್ಪಂದ!]]></title>
            <link>https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis</link>
            <guid isPermaLink="true">https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis</guid>
            <pubDate>Sat, 25 Apr 2026 16:57:58 +0530</pubDate>
            <description><![CDATA[ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.) ನಡುವೆ ಶೈಕ್ಷಣಿಕ-ಉದ್ಯೋಗ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಮೂಲಕ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ತರಬೇತಿ, ಇಂಟರ್ನ್&zwnj;ಶಿಪ್&zwnj; ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಿ, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq25qzaeg80hnf34p78cg70h,imgname-proxin-tech-partners-with-gttc-dandeli-1777115856206.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ: ಪಟ್ಟಣ ಹಾಗೂ ಬೆಂಗಳೂರಿನಲ್ಲಿ ಐಟಿ ಕೇಂದ್ರಗಳನ್ನು ಹೊಂದಿರುವ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.) ನಡುವೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳಿಗಾಗಿ ಮಹತ್ವದ ಶೈಕ್ಷಣಿಕ&ndash;ಉದ್ಯೋಗ ಒಪ್ಪಂದ ಜರುಗಿದೆ.&lt;/p&gt;&lt;p&gt;ಪ್ರಾಕ್ಸಿನ್ ಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ನಾರಾಯಣ ಠೊಸುರ ಅವರು ಜಿ.ಟಿ.ಟಿ.ಸಿ. ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ, ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು. ಈ ಒಪ್ಪಂದದ ಮೂಲಕ ವಿದ್ಯಾರ್ಥಿಗಳಿಗೆ ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ.&lt;/p&gt;&lt;h2&gt;ಕೈಗಾರಿಕಾ ಮಾರುಕಟ್ಟೆಗೆ ಹೊಂದುವ ತರಬೇತಿ&lt;/h2&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿ ನಾರಾಯಣ ಠೊಸುರ ಅವರು, &ldquo;ನಮ್ಮ ಸಂಸ್ಥೆ ವಿದ್ಯಾರ್ಥಿಗಳಲ್ಲಿನ ಅಡಗಿದ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಪ್ರಸ್ತುತ ಕೈಗಾರಿಕಾ ಮಾರುಕಟ್ಟೆಗೆ ಹೊಂದುವ ತರಬೇತಿಯನ್ನು ನೀಡಲಿದೆ. ಇಂದಿನ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ರೂಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಆಧುನಿಕ ತಾಂತ್ರಿಕ ಕೌಶಲ್ಯಗಳ ಜೊತೆಗೆ ಮಾನವೀಯ ಮೌಲ್ಯಗಳ ಬೆಳವಣಿಗೆಗೂ ನಾವು ಸಮಾನ ಆದ್ಯತೆ ನೀಡುತ್ತೇವೆ&rdquo; ಎಂದು ಹೇಳಿದರು.&lt;/p&gt;&lt;p&gt;ಅವರು ಮುಂದುವರಿದು, &ldquo;ಗ್ರಾಮೀಣ ಪ್ರದೇಶದ ಪ್ರತಿಭಾವಂತರಿಗೆ ಸೂಕ್ತ ಅವಕಾಶಗಳನ್ನು ಒದಗಿಸುವ ಜೊತೆಗೆ, ತಮ್ಮ ಕುಟುಂಬದೊಂದಿಗೆ ಇರುವ ಯುವಕರಿಗೆ ವಿಶೇಷ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಕೊರೋನಾ ಸಮಯದಲ್ಲಿ ರೂಪಿಸಿದ ನಮ್ಮ ಈ ಉದ್ಯೋಗ ನೀತಿಗೆ ರಾಷ್ಟ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರಶಂಸೆ ಲಭಿಸಿದೆ&rdquo; ಎಂದರು.&lt;/p&gt;&lt;h2&gt;ಪ್ರಾಕ್ಸಿನ್ ಟೆಕ್ ಕಂಪನಿಯಲ್ಲಿ ಇಂಟರ್ನ್&zwnj;ಶಿಪ್&zwnj; ಅವಕಾಶ&lt;/h2&gt;&lt;p&gt;ಈ ಒಪ್ಪಂದದ ಪ್ರಮುಖ ಅಂಶವಾಗಿ, ಜಿ.ಟಿ.ಟಿ.ಸಿ. ವಿದ್ಯಾರ್ಥಿಗಳಿಗೆ ಪ್ರಾಕ್ಸಿನ್ ಟೆಕ್ ಕಂಪನಿಯಲ್ಲಿ ಇಂಟರ್ನ್&zwnj;ಶಿಪ್&zwnj; ಅವಕಾಶ ಕಲ್ಪಿಸಲಾಗುತ್ತದೆ. ಇಂಟರ್ನ್&zwnj;ಶಿಪ್&zwnj; ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿಯೇ ಪೂರ್ಣಾವಧಿ ಉದ್ಯೋಗ ನೀಡುವ ವ್ಯವಸ್ಥೆಯೂ ಇದೆ. ಇದಲ್ಲದೆ, ಪ್ರಾಕ್ಸಿನ್ ಸಂಸ್ಥೆಯ ಉದ್ಯೋಗಿಗಳ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿಗೆ ಜಿ.ಟಿ.ಟಿ.ಸಿ. ಅಧ್ಯಾಪಕರ ಸಹಕಾರ ಪಡೆಯಲಾಗುತ್ತದೆ.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಜಿ.ಟಿ.ಟಿ.ಸಿ. ಸಂಸ್ಥೆಯ ಪ್ರಾಚಾರ್ಯ ದತ್ತಾತ್ರೇಯ, ಉದ್ಯೋಗಾಧಿಕಾರಿ ನಿಂಗಪ್ಪ ಸೇರಿದಂತೆ ಪ್ರಾಕ್ಸಿನ್ ಟೆಕ್ ಕಂಪನಿಯ ರಾಘವೇಂದ್ರ ಸಾಂಬ್ರೇಕರ, ನಯನಾ ಗೌಡಪ್ಪನವರ, ಮಣಿಕಂಠ ಸಾಂಬ್ರಾಣಿ, ಪ್ರಿಯಾ ಪಾಟೀಲ, ವಸುಂಧರಾ ನಾಯ್ಕ ಮತ್ತು ಕಲ್ಲಯ್ಯ ಪೂಜಾರಿ ಉಪಸ್ಥಿತರಿದ್ದರು.&lt;/p&gt;&lt;p&gt;ಒಟ್ಟಿನಲ್ಲಿ, ಈ ಒಪ್ಪಂದವು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಮಹತ್ವದ ಹೆಜ್ಜೆಯಾಗಿದ್ದು, ಕೈಗಾರಿಕೆ&ndash;ಶೈಕ್ಷಣಿಕ ಸಂಸ್ಥೆಗಳ ಸಹಕಾರದ ಉತ್ತಮ ಮಾದರಿಯಾಗಿ ಪರಿಣಮಿಸಲಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis"/>
        </item>
        <item>
            <title><![CDATA[ನವವಿವಾಹಿತೆಯ ಸೀರೆ ಎಳೆದ ಕಿರಾತಕರು: ನಾಸಿಕ್ TCSನಲ್ಲಿ ಮತಾಂಧರ ಮತ್ತೊಂದು ಕಾಮಕಾಂಡ ತೆರೆದಿಟ್ಟ ಮಹಿಳಾ ಉದ್ಯೋಗಿ]]></title>
            <link>https://kannada.asianetnews.com/private-jobs/newlyweds-saree-pulled-another-nashik-tcs-employee-reveals-the-horror-she-endured/articleshow-s0e7qay</link>
            <guid isPermaLink="true">https://kannada.asianetnews.com/private-jobs/newlyweds-saree-pulled-another-nashik-tcs-employee-reveals-the-horror-she-endured/articleshow-s0e7qay</guid>
            <pubDate>Mon, 20 Apr 2026 16:38:33 +0530</pubDate>
            <description><![CDATA[&lt;p&gt;ನಾಸಿಕ್&zwnj;ನ ಟಿಸಿಎಸ್&zwnj; ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ. ಟೀಮ್ ಲೀಡರ್ ರಾಝಾ ಮೆನನ್ ಮತ್ತು ತರಬೇತುದಾರ ಶಾರುಖ್ ಖುರೇಷಿ ಅಸಭ್ಯವಾಗಿ ವರ್ತಿಸಿದ್ದು, ಸೀರೆ ಎಳೆದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpn8pvzd9xavw5fyn778vwsb,imgname-tcs-employee-harassment-scam-1776682758125.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಕರಾಳ ಅನುಭವ ಬಿಚ್ಚಿಟ್ಟ ನಾಸಿಕ್ ಟಿಸಿಎಸ್ ಮಹಿಳಾ ಉದ್ಯೋಗಿ&lt;/strong&gt;&lt;/h2&gt;&lt;p&gt;ದೇಶವನ್ನೇ ಬೆಚ್ಚಿ ಬೀಳಿಸಿದ ಟಿಸಿಎಸ್&zwnj; ಸಂಸ್ಥೆಯಲ್ಲಿ ನಡೆದ ಕಾರ್ಪೋರೇಟ್ ಜಿಹಾದ್&zwnj;ಗೆ ಸಂಬಂಧಿಸಿದ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಈಗ ಮತ್ತೊಬ್ಬ ಮಹಿಳಾ ಉದ್ಯೋಗಿ ತಾನು ಅನುಭವಿಸಿದ ಕರಾಳ ಘಟನೆಯನ್ನು ಬಯಲು ಮಾಡಿದ್ದು, ಬೆಚ್ಚಿ ಬೀಳಿಸುವಂತಿದೆ.&lt;/p&gt;&lt;p&gt;ಈಗ ತನಗಾದ ಕೆಟ್ಟ ಘಟನೆಯನನ್ನು ಬಹಿರಂಗಪಡಿಸಿರುವ ಮಹಿಳೆ ನಾಸಿಕ್&zwnj;ನಲ್ಲಿರುವ ಟಿಸಿಎಸ್&zwnj; ಸಂಸ್ಥೆಗೆ ಅಸೋಸಿಯೆಟ್ ಆಗಿ ಉದ್ಯೋಗಕ್ಕೆ ಸೇರಿದ್ದರು. ಆಗಷ್ಟೇ ಅವರ ಮದುವೆಯೂ ಆಗಿತ್ತು. ತಮ್ಮ ಸಂಸ್ಥೆಯಲ್ಲಿ ಹಿಂದೂ ಉದ್ಯೋಗಿಗಳ ಮೇಲೆ ಮ್ಯಾನೇಜರ್ ಮಟ್ಟದ ಅಧಿಕಾರಿಗಳು ಹಾಗೂ ಹೆಚ್&zwnj; ಆರ್&zwnj;ಗಳು ನಡೆಸುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಪುರುಷ ಉದ್ಯೋಗಿಗಳ ಬಲವಂತದ ಮತಾಂತರದ ಬಗ್ಗೆ ಬಾಯ್ಬಿಟ್ಟ 8ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳ ಪೈಕಿ ಇವರು ಒಬ್ಬರಾಗಿದ್ದಾರೆ.&lt;/p&gt;&lt;p&gt;ತನ್ನ ಪತಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಿದ್ದರಿಂದ ತಾನು ನಾಸಿಕ್&zwnj;ನಲ್ಲಿ ತನ್ನ ಅತ್ತೆ ಮಾವನ ಜೊತೆ ವಾಸ ಮಾಡುತ್ತಿದ್ದೆ ನನ್ನ ಮದುವೆಯ ನಂತರ 2025ರ ಜೂನ್&zwnj;ನಿಂದ ನಾನು ಟಿಸಿಎಸ್&zwnj;ನ ನಾಸಿಕ್ ಸಂಸ್ಥೆಯಲ್ಲಿ ಅಸೋಸಿಯೇಟ್ ಆಗಿ ಕೆಲ ಮಾಡುತ್ತಿದ್ದೆ. 2025ರ ಜೂನ್ 24ರಿಂದ ನನ್ನ ಮೂರು ತಿಂಗಳ ತರಬೇತಿ ಅವಧಿ ಇಲ್ಲಿ ಆರಂಭವಾಯ್ತು. ಶಾರುಖ್ ಖುರೇಷಿ ಹಾಗೂ ಜಯೇಶ್ ಗುಂಜಲ್ ಎಂಬುವವರು ನನಗೆ ತರಬೇತಿ ನೀಡುತ್ತಿದ್ದರು ಎಂದು ಮಹಿಳೆ ವಿಚಾರಣೆಯಲ್ಲಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ನವವಿವಾಹಿತೆಗೆ ಸಹಾಯ ಬೇಕಿದ್ದರೆ ಕೇಳಿ ಎಂದಿದ್ದ ರಾಝಾ ಮೆನನ್&lt;/strong&gt;&lt;/p&gt;&lt;p&gt;ತರಬೇತಿ ವೇಳೆ ಲೋನ್ ಬ್ರಾಂಚ್&zwnj;ನ ಟೀಮ್ ಲೀಡರ್ ರಾಝಾ ಮೆನನ್ ಎಂಬಾತ ತಮ್ಮ ತರಬೇತಿ ಕೊಠಡಿಗೆ ಬರುತ್ತಿದ್ದ. ಆತನಿಗೂ ತರಬೇತಿಗೂ ಯಾವುದೇ ಸಂಬಂಧ ಇರಲಿಲ್ಲ, ಆದರೂ ಆತ ಅಲ್ಲಿಗೆ ಬಂದು ತನ್ನ ವೈಯಕ್ತಿಕ ಜೀವನದ ಬಗ್ಗೆ ಕೇಳುತ್ತಿದ್ದ. ನಿನ್ನ ಗಂಡ ನಿನ್ನಿಂದ ದೂರ ವಾಸ ಮಾಡುತ್ತಿರುವುದರಿಂದ ನಿನಗೆ ಎಲ್ಲವನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆಯೇ? ನಿನಗೆ ಭಯವಾಗುವುದಿಲ್ಲವೇ? ನಿಮಗೆ ನನ್ನ ಸಹಾಯ ಬೇಕಿದ್ದರೆ ನನಗೆ ಹೇಳಿ ನಾನು ನಿಮಗೆ ಯಾವುದೇ ಸಮಯದಲ್ಲಿ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಆತ ಹೇಳುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.&lt;/p&gt;&lt;p&gt;ಆಗ ತನಗೆ ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಆದರೂ ಆತ ನನ್ನ ವೈವಾಹಿಕ ಜೀವನದ ಬಗ್ಗೆ ಆಗಾಗ ಕಾಮೆಂಟ್ ಮಾಡುತ್ತಲೇ ಇದ್ದ. ನೀನು ಈಗಷ್ಟೇ ಮದುವೆಯಾಗಿದ್ದಿಯಾ? ಹನಿಮೂನ್&zwnj;ಗೆ ಎಲ್ಲಿಗೆ ಹೋಗುತ್ತಿದ್ದಿಯಾ? ಅಲ್ಲಿ ಏನು ಮಾಡುತ್ತೀಯಾ ಎಂದೆಲ್ಲಾ ಆತ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದ. ಈ ರಾಝಾನ ಈ ರೀತಿಯ ಅಧಿಕಪ್ರಸಂಗಿತನದ ಬಗ್ಗೆ ಟೀಮ್ ಲೀಡರ್ ಖುರೇಷಿ ಬಳಿ ಹೇಳಿದಾಗ ಆ ಟೀಮ್ ಲೀಡರ್ ಆತನ ವರ್ತನೆಯನ್ನು ನಿಯಂತ್ರಿಸುವ ಬದಲು ಆತನನ್ನೇ ಬೆಂಬಲಿಸುತ್ತಿದ್ದ.&lt;/p&gt;&lt;p&gt;ಶಾರುಖ್ ಖುರೇಷಿ ಕೂಡ ತನ್ನ ಮದುವೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ಲವ್ ಮ್ಯಾರೇಜ್&zwnj; ಅಥವಾ ಅರೆಂಜ್ ಮ್ಯಾರೇಜಾ ಎಂದು ಕೇಳುತ್ತಿದ್ದ, ಈ ಖುರೇಷಿ ಜೊತೆ ಸೇರಿ ರಾಝಾನೂ ನನಗೆ ಕಿರುಕುಳ ನೀಡುವುದಕ್ಕೆ ಶುರು ಮಾಡಿದ್ದ.&lt;/p&gt;&lt;p&gt;&lt;strong&gt;ಹೇಗೆ ಮಾಡಬೇಕೆಂದು ಕಲಿಸುತ್ತೇವೆ ಎಂದಿದ್ದ ಕಾಮುಕರು&lt;/strong&gt;&lt;/p&gt;&lt;p&gt;ನಿನಗೆ ನಿನ್ನ ಗಂಡನೊಂದಿಗೆ ಹೊಂದಿಕೆಯಾಗದಿದ್ದರೆ, ನಮಗೆ ತಿಳಿಸು ನಾವು ನಿಮಗೆ ನಿಖರವಾಗಿ ಏನು ಮಾಡಬೇಕೆಂದು ಮತ್ತು ಅದನ್ನು ಹೇಗೆ ಮಾಡಬೇಕೆಂದು ಕಲಿಸುತ್ತೇವೆ. ನಿಮಗೆ ಸಾಕಷ್ಟು ಗೆಳೆಯರು ಇದ್ದಿರಬೇಕು. ಅವರೆಲ್ಲರನ್ನೂ ಬಿಟ್ಟು ನೀವು ಹೇಗೆ ಮದುವೆಯಾದಿರಿ? ಆ ಗೆಳೆಯರು ಇನ್ನೂ ಹಿಂದಿನಂತೆಯೇ ನಿಮ್ಮನ್ನು ಬೆನ್ನಟ್ಟುತ್ತಿದ್ದರೆ ಮತ್ತು ನಿಮ್ಮ ಕುಟುಂಬ ಅಥವಾ ಪತಿಗೆ ಅದು ತಿಳಿದಿದ್ದರೆ, ಏನಾಗುತ್ತಿತ್ತು? ನೀವು ಏನು ಮಾಡುತ್ತೀರಿ? ಎಂದು ರಝಾ ತನಗೆ ಕೇಳುತ್ತಾ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.&lt;/p&gt;&lt;p&gt;ತನಗೆ ಪ್ಲೇಯರ್ ಎಂದು ಹೆಸರಿಟ್ಟಿದ್ದ ಆತ ತಾನು ಕಚೇರಿಗೆ ಪ್ರವೇಶಿಸಿದಾಗಲೆಲ್ಲಾ ಪ್ಲೇಯರ್ ಎಂದು ಕರೆಯುತ್ತಿದ್ದ. ನನ್ನ ಕೆಲಸದಲ್ಲಿ ಯಾವುದೇ ತೊಂದರೆಗಳು ಎದುರಾದರೆ ಮತ್ತು ನಾನು ಅದನ್ನು ಶಾರುಖ್&zwnj;ಗೆ ಹೇಳಿದರೆ, ಆತ ಈ ರಝಾನನ್ನು ಕರೆಸುತ್ತಿದ್ದ. ಈ ರಝಾ ಬಂದು ಏನಾಯ್ತು ಪ್ಲೇಯರ್? ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ? ನೀವು ಕಷ್ಟಪಡುತ್ತಿದ್ದರೆ, ನನಗೆ ತಿಳಿಸಿ ಎಂದು ಹೇಳುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತಿರುವಿನಲ್ಲಿ ಕಾದಿದ್ದ ಜವರಾಯ: ಕಂದಕಕ್ಕೆ ಉರುಳಿದ ಬಸ್ : 21 ಜನರ ದಾರುಣ ಸಾವು&lt;/strong&gt;&lt;/p&gt;&lt;p&gt;ನಿಮ್ಮ ಗಂಡ ಇಲ್ಲಿಗೆ ಏಕೆ ಬರುವುದಿಲ್ಲ? ನೀವು ನವವಿವಾಹಿತರು. ನಿಮ್ಮಿಂದ ದೂರ ಇರುವುದನ್ನು ಅವನು ಹೇಗೆ ಸಹಿಸಿಕೊಳ್ಳಬಲ್ಲನು? ನಾನು ಅವನ ಸ್ಥಾನದಲ್ಲಿದ್ದರೆ, ನೀವು ಇಲ್ಲದೆ ನಾನು ಎಲ್ಲಿಗೂ ಹೋಗುತ್ತಿರಲಿಲ್ಲ; ನಾನು ನಿಮ್ಮ ಪಕ್ಕದಲ್ಲಿಯೇ ಇರುತ್ತಿದ್ದೆ ಎಂದು ಹೇಳುತ್ತಾ ಆತ ತನಗೆ ಕಿರುಕುಳ ನೀಡುತ್ತಿದ್ದ, ಈ ವರ್ಷದ ಮಾರ್ಚ್&zwnj;ನಲ್ಲಿ ಗುಡಿ ಪಾಡ್ವಾ ಹಬ್ಬದ ದಿನದಂದು ಸೀರೆ ಉಟ್ಟು ಕಚೇರಿಗೆ ಬಂದಿದ್ದಾಗ ರಾಝಾ ನನ್ನ ಸೀರೆಯನ್ನು ಎಳೆದಾಡಿದ ಎಂದು ಮಹಿಳೆ ದೂರಿದ್ದಾರೆ.&lt;/p&gt;&lt;p&gt;ನಾನು ಸೀರೆ ಧರಿಸಿ ಬಂದಿದ್ದೆ. ನಾನು ಲಾಬಿಯ ಮೂಲಕ ಸಾಗಿ ಪ್ಯಾಂಟ್ರಿಯ ಮೂಲಕ ನಡೆಯುತ್ತಿದ್ದಾಗ, ಯಾರೋ ನನ್ನ ಸೀರೆಯ ಸೆರಗನ್ನು ಹಿಡಿದು ಎಳೆದ ಅನುಭವ ಆಯ್ತು. ನಾನು ತಿರುಗಿ ನೋಡಿದಾಗ, ಸೀರೆಯ ಸೆರಗು ರಾಝಾ ಕೈಯಲ್ಲಿತ್ತು. ನಾನು ತಕ್ಷಣ ನನ್ನ ಸೀರೆಯ ಸೆರಗನ್ನು ಹಿಂದಕ್ಕೆ ಎಳೆದಾಗ ಅವನು ನನ್ನನ್ನು ಅಸಭ್ಯವಾಗಿ ನೋಡಿ ಮುಗುಳ್ನಕ್ಕ ಎಂದು ಆ ಮಹಿಳಾ ಉದ್ಯೋಗಿ ಆರೋಪಿಸಿದ್ದಾರೆ.&lt;/p&gt;&lt;p&gt;ನಾಸಿಕ್&zwnj;ನಲ್ಲಿ ಟಿಸಿಎಸ್ ಕಂಪನಿಯಲ್ಲಿ ನಡೆದ ಒತ್ತಾಯಪೂರ್ವಕ ಮತಾಂತರ ಹಾಗೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 8 ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿ ಉದ್ಯೋಗದಿಂದ ಅಮಾನತಾಗಿರುವ ಉದ್ಯೋಗಿಗಳನ್ನು ದಾನಿಶ್ ಶೇಖ್, ತೌಸಿಫ್ ಅತ್ತರ್, ರಾಝಾ ಮೆಮನ್, ಶಾರುಖ್ ಖುರೇಶಿ, ಶಾಫಿ ಶೇಖ್, ಅಸೀಫ್ ಅಫ್ತಾಬ್ ಅನ್ಸಾರಿ ಹಾಗೂ ಹೆಚ್&zwnj; ಆರ್ ಮುಖ್ಯಸ್ಥೆಅಶ್ವಿನಿ ಚೈನಾನಿ ಎಂದು ಗುರುತಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪ್ರಧಾನಿ ಕಿವಿಯಲ್ಲಿ ಹೇಳಿದ ಗುಟ್ಟು ಮಾಡಿದ ಸಿಎಂ: ಮೋದಿ ಸಿದ್ದು ಬಳಿ ಹೇಳಿದ್ದೇನು?&lt;/strong&gt;&lt;/p&gt;]]></content:encoded>
            <category>private-jobs</category>
            <dc:creator>Anusha Kb</dc:creator>
            <atom:link href="https://kannada.asianetnews.com/private-jobs/newlyweds-saree-pulled-another-nashik-tcs-employee-reveals-the-horror-she-endured/articleshow-s0e7qay"/>
        </item>
        <item>
            <title><![CDATA[ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಅತ್ಯಂತ ವೇಗದ ಗಳಿಕೆಯ ಉದ್ಯೋಗ:ಲಿಂಕ್ಡ್‌ ಇನ್!]]></title>
            <link>https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od</link>
            <guid isPermaLink="true">https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od</guid>
            <pubDate>Thu, 16 Apr 2026 19:33:08 +0530</pubDate>
            <description><![CDATA[&lt;p&gt;ಲಿಂಕ್ಡ್&zwnj;ಇನ್ ತನ್ನ 'ಗ್ರಾಡ್ಸ್ ಗೈಡ್ 2026' ವರದಿಯನ್ನು ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿ ಹೊಸ ಪದವೀಧರರಿಗೆ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಈ ವರದಿಯ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ggh15q1vpmatfr0qfn7hgsgg,imgname-linkedin-is-introducing-a-new-feature-to-identify-fake-profiles.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್&zwnj; ಇನ್, ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೊಸ ಪದವೀಧರರಿಗೆ ಅವಕಾಶಗಳು ಎಲ್ಲಿವೆ ಎಂದು ತಿಳಿಯಲು ನೆರವಾಗುಲು ಮತ್ತು ಬದಲಾಗುತ್ತಿರುವ ಉದ್ಯೋಗದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ, ತನ್ನ 'ಗ್ರಾಡ್ಸ್ ಗೈಡ್ 2026' ಅನ್ನು ಬಿಡುಗಡೆ ಮಾಡಿದೆ. ಈ ವರದಿಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ಕೈಗಾರಿಕೆಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಲಿಂಕ್ಡ್&zwnj; ಇನ್ ಅಂಕಿಅಂಶಗಳ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಯುವ ಪ್ರತಿಭೆಗಳ ನಡುವೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.&lt;/p&gt;&lt;h2&gt;ಉದ್ಯಮ ಮತ್ತು ಜನಕೇಂದ್ರಿತ ವಲಯಗಳಲ್ಲಿ ಹೆಚ್ಚುತ್ತಿರುವ ಅವಕಾಶಗಳು&lt;/h2&gt;&lt;p&gt;ಯುವ ವೃತ್ತಿಪರರಿಗೆ ಕೇವಲ ತಂತ್ರಜ್ಞಾನ ಮಾತ್ರವಲ್ಲದೆ, ಉದ್ಯಮ ಅಭಿವೃದ್ಧಿ ಮತ್ತು ಜನಕೇಂದ್ರಿತ ಕೈಗಾರಿಕೆಗಳಲ್ಲೂ ಅವಕಾಶಗಳು ಲಭ್ಯವಾಗುತ್ತಿವೆ. ಶಿಕ್ಷಣ, ಸರ್ಕಾರಿ ಆಡಳಿತ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಹಾಗೂ ಎನರ್ಜಿ ಟೆಕ್ನಾಲಜಿ ಜೊತೆಗೆ 'ಯುಟಿಲಿಟಿಸ್' ಕ್ಷೇತ್ರವು ಈಗ ವೃತ್ತಿಜೀವನ ಆರಂಭಿಸುವವರಿಗೆ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಒಂದಾಗಿದೆ. ಮಾನವ ಸಂಪನ್ಮೂಲ, ಕನ್ಸಲ್ಟಿಂಗ್, ಮಾಹಿತಿ ತಂತ್ರಜ್ಞಾನ (ಐಟಿ), ಮಾರ್ಕೆಟಿಂಗ್, ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj; ಮೆಂಟ್ ಹಾಗೂ ಬಿಸಿನೆಸ್ ಡೆವಲಪ್&zwnj; ಮೆಂಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆರಂಭಿಕ ಹಂತದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ.&lt;/p&gt;&lt;p&gt;ಈ ಕುರಿತು ಲಿಂಕ್ಡ್&zwnj; ಇನ್&zwnj; ನ ಕರಿಯರ್ ಎಕ್ಸ್ ಪರ್ಟ್ ಮತ್ತು ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ಆದ ನಿರಾಜಿತಾ ಬ್ಯಾನರ್ಜಿ ಅವರು, &quot;ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಿರುವ ಯುವ ವೃತ್ತಿಪರರಿಗೆ ನನ್ನ ಅತ್ಯುತ್ತಮ ಸಲಹೆ ಎಂದರೆ, ಅಸಾಂಪ್ರದಾಯಿಕ ಹಾದಿಗಳು ಮತ್ತು ಅನಿರೀಕ್ಷಿತ ಸ್ಥಳಗಳಲ್ಲಿ ಸಿಗುವ ಉದ್ಯೋಗ ಅವಕಾಶಗಳಿಗೆ ಮುಕ್ತವಾಗಿರಿ. ಸರಿಯಾದ ಅವಕಾಶವು ನೀವು ನಿರೀಕ್ಷಿಸಿದ ಕಡೆಯೇ ಇರಬೇಕೆಂದಿಲ್ಲ. ಅದು ಬೇರೆ ಯಾವುದೋ ಉದ್ಯಮದಲ್ಲಿರಬಹುದು, ಹೊಸ ನಗರದಲ್ಲಿರಬಹುದು ಅಥವಾ ನೀವು ಇದುವರೆಗೆ ಪರಿಗಣಿಸದ ಹುದ್ದೆಯೂ ಆಗಿರಬಹುದು. ಕೌಶಲಗಳು ಒಂದು ವಲಯದಿಂದ ಇನ್ನೊಂದು ವಲಯಕ್ಕೂ ಹೊಂದಿಕೊಳ್ಳಬಲ್ಲ ಇಂದಿನ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ, ವೃತ್ತಿಪರರು ಬಹುಮುಖ ಕೌಶಲಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಆರಂಭಿಕ ವೃತ್ತಿಜೀವನವು ವಿವಿಧ ಹುದ್ದೆಗಳು ಮತ್ತು ಉದ್ಯಮಗಳ ಅನುಭವದಿಂದ ಹೆಚ್ಚು ಉತ್ತಮವಾಗಿ ರೂಪುಗೊಳ್ಳುತ್ತವೆ. ಆದರೆ ಮೊದಲ ಉದ್ಯೋಗದ ಹಾದಿಯು ಯಾವಾಗಲೂ ನೇರವಾಗಿರುವುದಿಲ್ಲ, ಹಾಗಾಗಿ ವೈವಿಧ್ಯಮಯ ಅನುಭವಗಳಿಗೆ ಮುಕ್ತವಾಗಿರುವುದು ನಿಮ್ಮ ವೃತ್ತಿಜೀವನಕ್ಕೆ ವೇಗವನ್ನು ನೀಡಲು ಮತ್ತು ನಿಮಗೆ ಸೂಕ್ತವಾದ ಉದ್ಯೋಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ&quot; ಎಂದು ಹೇಳುತ್ತಾರೆ.&lt;/p&gt;&lt;p&gt;ಲಿಂಕ್ಡ್&zwnj; ಇನ್ ಗ್ರಾಡ್ಸ್ ಗೈಡ್ 2026ರ ಪ್ರಕಾರ ಪದವೀಧರರಿಗಾಗಿ ಈ ವರ್ಷದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಕಾರ್ಯವಿಭಾಗಗಳು ಇಲ್ಲಿವೆ:&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ಉದ್ಯೋಗ ಹುದ್ದೆಗಳು:&lt;/h3&gt;&lt;p&gt;ಎಐ (Artificial Intelligence) ಸ್ಪೆಷಲಿಸ್ಟ್&lt;/p&gt;&lt;p&gt;ಜನರೇಟಿವ್ ಎಐ ಇಂಜಿನಿಯರ್&lt;/p&gt;&lt;p&gt;ಡಿಜಿಟಲ್ ಕಂಟೆಂಟ್ ಕ್ರಿಯೇಟರ್&lt;/p&gt;&lt;p&gt;ಬ್ರ್ಯಾಂಡ್ ರೆಪ್ರೆಸೆಂಟೇಟಿವ್&lt;/p&gt;&lt;p&gt;ಐಟಿ ಸ್ಪೆಷಲಿಸ್ಟ್&lt;/p&gt;&lt;p&gt;ಮೀಡಿಯಾ ಪ್ರೊಡಕ್ಷನ್ ಕ್ರೂ&lt;/p&gt;&lt;p&gt;ಬಿಡ್ ಮ್ಯಾನೇಜರ್&lt;/p&gt;&lt;p&gt;ಕೆಟಗರಿ ಮ್ಯಾನೇಜರ್&lt;/p&gt;&lt;p&gt;ಟೆಕ್ನಿಕಲ್ ಸಪೋರ್ಟ್ ಕನ್ಸಲ್ಟೆಂಟ್&lt;/p&gt;&lt;p&gt;ಸ್ಟೋರೇಜ್ ಇಂಜಿನಿಯರ್&lt;/p&gt;&lt;p&gt;&amp;nbsp;&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ವಲಯಗಳು:&lt;/h3&gt;&lt;p&gt;ಎಐ ಸ್ಪೆಷಲಿಸ್ಟ್ ಯುಟಿಲಿಟಿಸ್&lt;/p&gt;&lt;p&gt;ಶಿಕ್ಷಣ&lt;/p&gt;&lt;p&gt;ಸರ್ಕಾರಿ ಆಡಳಿತ&lt;/p&gt;&lt;p&gt;ಟ್ರಾನ್ಸ್&zwnj;ಪೋರ್ಟ್ ಮತ್ತು ಲಾಜಿಸ್ಟಿಕ್ಸ್&lt;/p&gt;&lt;p&gt;ಎನರ್ಜಿ ಟೆಕ್ನಾಲಜಿ&lt;/p&gt;&lt;p&gt;&amp;nbsp;&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ಕಾರ್ಯವಿಭಾಗಗಳು:&lt;/h3&gt;&lt;p&gt;ಮಾನವ ಸಂಪನ್ಮೂಲ (HR)&lt;/p&gt;&lt;p&gt;ಕನ್ಸಲ್ಟಿಂಗ್&lt;/p&gt;&lt;p&gt;ಮಾಹಿತಿ ತಂತ್ರಜ್ಞಾನ (IT)&lt;/p&gt;&lt;p&gt;ಮಾರ್ಕೆಟಿಂಗ್&lt;/p&gt;&lt;p&gt;ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj;ಮೆಂಟ್&lt;/p&gt;&lt;h2&gt;ಸಣ್ಣ ಸಂಸ್ಥೆಗಳು ಮತ್ತು ಮಹಾನಗರವಲ್ಲದ ನಗರಗಳಲ್ಲಿ ಹೆಚ್ಚುತ್ತಿರುವ ನೇಮಕಾತಿ&lt;/h2&gt;&lt;p&gt;ಸಣ್ಣ ಕಂಪನಿಗಳು ಉದ್ಯೋಗ ಮಾರುಕಟ್ಟೆಯ ಪ್ರಮುಖ ಪ್ರವೇಶ ದ್ವಾರಗಳಾಗಿ ಬೆಳೆಯುತ್ತಿವೆ. ಹೀಗಾಗಿ, ವೃತ್ತಿಜೀವನ ಆರಂಭಿಸುವವರು ಕೇವಲ ದೊಡ್ಡ ಕಂಪನಿಗಳ ಬಗ್ಗೆ ಮಾತ್ರ ಯೋಚಿಸದೆ ಸಣ್ಣ ಸಂಸ್ಥೆಗಳಲ್ಲಿನ ಅವಕಾಶಗಳನ್ನು ಪರಿಗಣಿಸುವುದು ಅನಿವಾರ್ಯವಾಗಿದೆ. ಪದವೀಧರರಿಗೆ 1 ರಿಂದ 10 ಉದ್ಯೋಗಿಗಳಿರುವ ಸಣ್ಣ ಸಂಸ್ಥೆಗಳಲ್ಲಿನ ನೇಮಕಾತಿಯು 2023 ಮತ್ತು 2025ರ ನಡುವೆ 64% ರಷ್ಟು ಹೆಚ್ಚಾಗಿದೆ. ಇನ್ನು ಒಟ್ಟಾರೆ ಆರಂಭಿಕ ಹಂತದ ಉದ್ಯೋಗಿಗಳನ್ನು ಪರಿಗಣಿಸಿದರೆ, ಈ ಬೆಳವಣಿಗೆಯು 168% ರಷ್ಟಿದೆ. ಉದ್ಯೋಗಾವಕಾಶಗಳು ಈಗ ಭೌಗೋಳಿಕವಾಗಿ ಎಲ್ಲಾ ಕಡೆ ವ್ಯಾಪಿಸುತ್ತಿವೆ. ವಿಜಯವಾಡ, ಭೋಪಾಲ್, ಜೈಪುರ, ಇಂದೋರ್, ಗ್ವಾಲಿಯರ್ ಮತ್ತು ವಡೋದರಾ ಅಂತಹ ನಗರಗಳು ಈಗ ಮಹಾನಗರಗಳ ಜೊತೆಗೆ ಭಾರತದ ಪ್ರಮುಖ ನೇಮಕಾತಿ ಕೇಂದ್ರಗಳಾಗಿ ಹೊರಹೊಮ್ಮುತ್ತಿದ್ದು, ಇದು ಯುವಕರಿಗೆ ಸಾಂಪ್ರದಾಯಿಕ ಉದ್ಯೋಗ ಕೇಂದ್ರಗಳ ಹೊರತಾಗಿ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದೆ.&lt;/p&gt;&lt;h2&gt;ಇಂಟರ್ನ್&zwnj; ಶಿಪ್ ಮೂಲಕ ವೃತ್ತಿಜೀವನದತ್ತ ಹೆಜ್ಜೆ&lt;/h2&gt;&lt;p&gt;2020-2022ಕ್ಕೆ ಹೋಲಿಸಿದರೆ, 2023-2025ರ ಅವಧಿಯಲ್ಲಿ ಆರಂಭಿಕ ಹಂತದ ನೇಮಕಾತಿಗಳಲ್ಲಿ ಇಂಟರ್ನ್&zwnj; ಶಿಪ್ ಪೂರ್ಣಗೊಳಿಸಿದವರ ಸಂಖ್ಯೆ ಹೆಚ್ಚಿದೆ. ಲಿಂಕ್ಡ್&zwnj; ಇನ್ ದತ್ತಾಂಶದ ಪ್ರಕಾರ, ಕಾನೂನು, ಪ್ರಾಡಕ್ಟ್ ಮ್ಯಾನೇಜ್&zwnj; ಮೆಂಟ್, ಕನ್ಸಲ್ಟಿಂಗ್, ಇಂಜಿನಿಯರಿಂಗ್ ಮತ್ತು ಬಿಸಿನೆಸ್ ಡೆವಲಪ್&zwnj; ಮೆಂಟ್ ವಿಭಾಗಗಳಲ್ಲಿ ಇದು ಗಣನೀಯವಾಗಿ ಕಂಡುಬಂದಿದೆ. ಪದವಿ ಮುಗಿದ ನಂತರ ಇಂಟರ್ನ್&zwnj; ಶಿಪ್ ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದ್ದು, ವಿಶೇಷವಾಗಿ ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj; ಮೆಂಟ್, ಇಂಜಿನಿಯರಿಂಗ್, ಐಟಿ, ಮೀಡಿಯಾ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ.&lt;/p&gt;&lt;p&gt;ನೀವು ಈಗಷ್ಟೇ ವೃತ್ತಿಜೀವನ ಆರಂಭಿಸುತ್ತಿದ್ದರೆ, ಉದ್ಯೋಗ ಮಾರುಕಟ್ಟೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಲಿಂಕ್ಡ್&zwnj; ಇನ್ ವೃತ್ತಿಜೀವನ ತಜ್ಞರಾದ ನಿರಾಜಿತಾ ಬ್ಯಾನರ್ಜಿ ಅವರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ:&lt;/p&gt;&lt;p&gt;&quot;ಅದೃಶ್ಯ&quot; ಉದ್ಯೋಗ ಮಾರುಕಟ್ಟೆಯನ್ನು ನಿರ್ಲಕ್ಷಿಸಬೇಡಿ: ನಿಮ್ಮ ಕೌಶಲಗಳು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಬಹುಮುಖಿಯಾಗಿವೆ. ಲಿಂಕ್ಡ್&zwnj; ಇನ್&zwnj; ನ ಎಐ-ಚಾಲಿತ ಉದ್ಯೋಗ ಹುಡುಕಾಟವು ನಿಮ್ಮ ಹಿನ್ನೆಲೆಗೆ ಹೊಂದಿಕೆಯಾಗುವ ಹುದ್ದೆಗಳನ್ನು ತೋರಿಸುವ ಮೂಲಕ ಇದನ್ನು ಸಾಬೀತುಪಡಿಸುತ್ತದೆ. ನೀವು ಯಾವತ್ತೂ ಪರಿಗಣಿಸದ ಉದ್ಯಮಗಳು ಅಥವಾ ಹುದ್ದೆಗಳನ್ನೂ ಇದು ನಿಮಗೆ ಸೂಚಿಸುತ್ತದೆ. ಈ ಎಐ-ಚಾಲಿತ ಉದ್ಯೋಗ ಹುಡುಕಾಟವು ಪ್ರಸ್ತುತ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್, ಪೋರ್ಚುಗೀಸ್ ಮತ್ತು ಜರ್ಮನ್ ಭಾಷೆಗಳಲ್ಲಿ ಲಭ್ಯವಿದೆ.&lt;/p&gt;&lt;p&gt;ಹೆಚ್ಚು ಫಲಿತಾಂಶ ನೀಡುವ ಕಡೆ ಗಮನಹರಿಸಿ: ಸಿಕ್ಕಸಿಕ್ಕ ಎಲ್ಲಾ ಕೆಲಸಗಳಿಗೂ ಅರ್ಜಿ ಸಲ್ಲಿಸುವ ಬದಲು, ನಿಮ್ಮ ಕೌಶಲಗಳಿಗೆ ಉತ್ತಮವಾಗಿ ಹೊಂದಿಕೆಯಾಗುವ ಉದ್ಯೋಗಗಳಿಗೆ ಆದ್ಯತೆ ನೀಡಿ. ಲಿಂಕ್ಡ್&zwnj; ಇನ್&zwnj; ನ 'ಜಾಬ್ ಮ್ಯಾಚ್' ನಂತಹ ಟೂಲ್ ಗಳು ನೀವು ಯಾವ ಉದ್ಯೋಗಕ್ಕೆ ಹೆಚ್ಚು ಸೂಕ್ತ ಎಂಬುದನ್ನು ತ್ವರಿತವಾಗಿ ಗುರುತಿಸಲು ಸಹಾಯ ಮಾಡುತ್ತವೆ. ಇದರಿಂದ ನೀವು ಹೆಚ್ಚು ಅವಕಾಶವಿರುವ ಅರ್ಜಿಗಳ ಮೇಲೆ ಹೆಚ್ಚಿನ ಸಮಯ ಕಳೆಯಬಹುದು.&lt;/p&gt;&lt;p&gt;ಕೇವಲ ಸಾಮರ್ಥ್ಯವಲ್ಲ, ಪುರಾವೆಯನ್ನು ತೋರಿಸಿ: ನಿಮಗೆ ವರ್ಷಗಳ ಅನುಭವ ಇಲ್ಲದಿದ್ದರೂ ಪರವಾಗಿಲ್ಲ. ನೀವು ಏನು ಮಾಡಬಲ್ಲಿರಿ ಎಂಬುದನ್ನು ತೋರಿಸುವುದು ಇಲ್ಲಿ ಮುಖ್ಯ. ನೀವು ಮಾಡಿದ ಪ್ರಾಜೆಕ್ಟ್&zwnj; ಗಳು, ಕೆಲಸದ ಉದಾಹರಣೆಗಳು ಮತ್ತು ನೀವು ಬೆಳೆಸಿಕೊಂಡ ಕೌಶಲಗಳನ್ನು ಹಂಚಿಕೊಳ್ಳಿ. ನೀವು ಬಳಸುವ Loveable ಅಥವಾ Replit ನಂತಹ ಎಐ ಟೂಲ್ ಗಳ ಮೂಲಕ ಕೌಶಲಗಳನ್ನು ದೃಢೀಕರಿಸುವುದರಿಂದ ಅಥವಾ ವೆರಿಫೈ ಮಾಡುವುದರಿಂದ ಉದ್ಯೋಗದಾತರು ನಿಮ್ಮ ಸಾಮರ್ಥ್ಯವನ್ನು ಬೇಗನೆ ಗುರುತಿಸಲು ಸಹಾಯ ಮಾಡುತ್ತದೆ.&lt;/p&gt;&lt;p&gt;ಸಂಘಟಿತರಾಗಿರಿ ಮತ್ತು ಉತ್ಸಾಹ ಕಳೆದುಕೊಳ್ಳಬೇಡಿ: ಅರ್ಜಿ ಸಲ್ಲಿಸಿದ ನಂತರ ಮುಂದೇನು ಎಂಬ ಗೊಂದಲ ಸಹಜ. ನಿಮ್ಮ ಅರ್ಜಿಯ ಸ್ಥಿತಿ ಮತ್ತು ಫಾಲೋ- ಅಪ್&zwnj; ಗಳನ್ನು ಟ್ರ್ಯಾಕ್ ಮಾಡಲು ಲಿಂಕ್ಡ್&zwnj; ಇನ್&zwnj; ನ 'ಜಾಬ್ ಟ್ರ್ಯಾಕರ್' ಬಳಸಿ. ಅಲ್ಲದೆ, ನಿಮ್ಮ ನೆಟ್&zwnj; ವರ್ಕ್&zwnj; ನಲ್ಲಿ ಯಾರು ನಿಮಗೆ ಸಹಾಯ ಮಾಡಬಲ್ಲರು ಎಂಬುದನ್ನು ಗುರುತಿಸಿ.&lt;/p&gt;&lt;p&gt;ಕಲಿಯಲು 'ಫಾಲೋ' ಮಾಡಿ: ನಿಮಗೆ ಪರಿಚಯವಿರುವ ಮತ್ತು ನಂಬಿಕಸ್ತ ವ್ಯಕ್ತಿಗಳೊಂದಿಗೆ ಮಾತ್ರ ಕನೆಕ್ಟ್ ಆಗಿ. ಉಳಿದವರಿಗೆ ಕೇವಲ &quot;ಫಾಲೋ&quot; ಬಟನ್ ಒತ್ತಿ. ಇದರಿಂದ ಅವರ ಪೋಸ್ಟ್&zwnj; ಗಳನ್ನು ನೋಡಲು ಮತ್ತು ಅವರ ವಿಷಯಗಳ ಬಗ್ಗೆ ಚರ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ಲಿಂಕ್ಡ್&zwnj; ಇನ್&zwnj; ನ ಹೊಸ 'ಪೀಪಲ್ ಸರ್ಚ್' ಮೂಲಕ ನಿಮಗೆ ಸ್ಫೂರ್ತಿ ನೀಡುವ ವೃತ್ತಿಪರರನ್ನು ಹುಡುಕುವುದು ಮತ್ತು ಸಂಪರ್ಕಿಸುವುದು ಈಗ ಸುಲಭವಾಗಿದೆ (ಪ್ರಸ್ತುತ ಅಮೆರಿಕದಲ್ಲಿ ಮಾತ್ರ ಲಭ್ಯ).&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od"/>
        </item>
        <item>
            <title><![CDATA[ಬಿಪಿಸಿಎಲ್ ನೇಮಕಾತಿ: ಆಯ್ಕೆಯಾದವರಿಗೆ ಭರ್ಜರಿ ಜಾಕ್‌ಪಾಟ್‌ , ತಿಂಗಳಿಗೆ ₹1.40 ಲಕ್ಷ ಸಂಬಳ!]]></title>
            <link>https://kannada.asianetnews.com/jobs/bpcl-recruitment-2026-executive-posts-open-high-salary-and-benefits-announced-gdp/articleshow-vdnltgb</link>
            <guid isPermaLink="true">https://kannada.asianetnews.com/jobs/bpcl-recruitment-2026-executive-posts-open-high-salary-and-benefits-announced-gdp/articleshow-vdnltgb</guid>
            <pubDate>Fri, 24 Apr 2026 20:00:15 +0530</pubDate>
            <description><![CDATA[ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) 250ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಅಸೋಸಿಯೇಟ್ ಎಕ್ಸಿಕ್ಯೂಟಿವ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿದ್ದು, ಆಯ್ಕೆಯಾದವರಿಗೆ ಗರಿಷ್ಠ ₹1.40 ಲಕ್ಷದವರೆಗೆ ಆಕರ್ಷಕ ವೇತನ ದೊರೆಯಲಿದೆ. ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01e1ed8te9xbdbvfxakeagpvcs,imgname-pjimage--57--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದ ಪ್ರಮುಖ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಒಂದಾದ Bharat Petroleum Corporation Limited (ಬಿಪಿಸಿಎಲ್) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶವನ್ನು ಘೋಷಿಸಿದೆ. ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ ಸಾಧಿಸಲು ಬಯಸುವ ಅಭ್ಯರ್ಥಿಗಳಿಗಾಗಿ ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 250ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ವಿಶೇಷತೆ ಎಂದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಗರಿಷ್ಠ ₹1.40 ಲಕ್ಷವರೆಗೆ ಆಕರ್ಷಕ ಮಾಸಿಕ ವೇತನ ಲಭ್ಯವಿರುವುದು.&lt;/p&gt;&lt;h2&gt;ಹುದ್ದೆಗಳ ವಿವರ ಮತ್ತು ವೇತನ&lt;/h2&gt;&lt;p&gt;ಈ ನೇಮಕಾತಿಯಲ್ಲಿ ಮುಖ್ಯವಾಗಿ &lsquo;ಅಸೋಸಿಯೇಟ್ ಎಕ್ಸಿಕ್ಯೂಟಿವ್&rsquo; ಹಾಗೂ &lsquo;ಜೂನಿಯರ್ ಎಕ್ಸಿಕ್ಯೂಟಿವ್&rsquo; ಹುದ್ದೆಗಳಿಗೆ ಆದ್ಯತೆ ನೀಡಲಾಗಿದೆ.&lt;/p&gt;&lt;p&gt;ಅಸೋಸಿಯೇಟ್ ಎಕ್ಸಿಕ್ಯೂಟಿವ್: ಈ ಹುದ್ದೆಗೆ ಆಯ್ಕೆಯಾದವರಿಗೆ ₹40,000 ರಿಂದ ಆರಂಭವಾಗಿ ಗರಿಷ್ಠ ₹1,40,000 ವರೆಗೆ ಸಂಬಳ ನೀಡಲಾಗುತ್ತದೆ. ಜೂನಿಯರ್ ಎಕ್ಸಿಕ್ಯೂಟಿವ್: ತಾಂತ್ರಿಕ ವಿಭಾಗಕ್ಕೆ ಸೇರಿದ ಈ ಹುದ್ದೆಗಳಿಗೆ ₹30,000 ರಿಂದ ₹1,20,000 ವರೆಗೆ ವೇತನ ಇರಲಿದೆ.&lt;/p&gt;&lt;p&gt;ಇದರ ಜೊತೆಗೆ ವೈದ್ಯಕೀಯ ಸೌಲಭ್ಯಗಳು, ರಜೆ ಭತ್ಯೆ ಹಾಗೂ ಇತರೆ ಸರ್ಕಾರಿ ಕಂಪನಿಗಳ ಸೌಲಭ್ಯಗಳನ್ನೂ ಅಭ್ಯರ್ಥಿಗಳು ಪಡೆಯಬಹುದು.&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ ಮತ್ತು ಅನುಭವ&lt;/h2&gt;&lt;p&gt;ಪ್ರತಿ ಹುದ್ದೆಗೆ ಬಿಪಿಸಿಎಲ್ ವಿಭಿನ್ನ ಅರ್ಹತೆಗಳನ್ನು ನಿಗದಿಪಡಿಸಿದೆ:&lt;/p&gt;&lt;p&gt;ಕ್ವಾಲಿಟಿ ಅಶ್ಯುರೆನ್ಸ್: ಕೆಮಿಸ್ಟ್ರಿಯಲ್ಲಿ ಎಂ.ಎಸ್ಸಿ ಪದವಿ ಹೊಂದಿದ್ದು, ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಇರಬೇಕು. ಜೂನಿಯರ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್): ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಸಿವಿಲ್ ಎಂಜಿನಿಯರಿಂಗ್&zwnj;ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅಕೌಂಟ್ಸ್ ಮತ್ತು ಫೈನಾನ್ಸ್: ಸಿಎ (CA) ಅಥವಾ ಸಿಎಂಎ (CMA) ಇಂಟರ್ಮೀಡಿಯೇಟ್ ಪೂರೈಸಿದ ಅಭ್ಯರ್ಥಿಗಳಿಗೆ ಅವಕಾಶವಿದೆ. ಅಧಿಕೃತ ಭಾಷಾ ಅನುಷ್ಠಾನ: ಹಿಂದಿಯಲ್ಲಿ ಎಂಎ ಪದವಿ ಪಡೆದವರಿಗೆ ಈ ವಿಭಾಗದಲ್ಲಿ ಹುದ್ದೆಗಳು ಲಭ್ಯವಿವೆ. ವಯೋಮಿತಿ ಮತ್ತು ಸಡಿಲಿಕೆ&lt;/p&gt;&lt;p&gt;ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಿರಬೇಕು. ಹುದ್ದೆಗಳ ಪ್ರಕಾರ ಗರಿಷ್ಠ ವಯೋಮಿತಿ 32 ರಿಂದ 35 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಸರ್ಕಾರದ ಮೀಸಲಾತಿ ನಿಯಮಗಳಂತೆ ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ&lt;/h2&gt;&lt;p&gt;ಅಭ್ಯರ್ಥಿಗಳ ಸಾಮರ್ಥ್ಯವನ್ನು ಅಳೆಯಲು ಬಹುಹಂತದ ಆಯ್ಕೆ ಪ್ರಕ್ರಿಯೆಯನ್ನು ರೂಪಿಸಲಾಗಿದೆ. ಮೊದಲು ಅರ್ಜಿಗಳ ಸ್ಕ್ರೀನಿಂಗ್ ನಡೆಯುತ್ತದೆ. ಬಳಿಕ ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಗುಂಪು ಚರ್ಚೆ (GD) ಮತ್ತು ವೈಯಕ್ತಿಕ ಸಂದರ್ಶನ (PI) ನಡೆಯುತ್ತದೆ. ಅಂತಿಮ ಹಂತದಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;p&gt;ಆಸಕ್ತ ಅಭ್ಯರ್ಥಿಗಳು ಬಿಪಿಸಿಎಲ್&zwnj;ನ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ &lsquo;Careers&rsquo; ವಿಭಾಗದಲ್ಲಿ ಪ್ರಸ್ತುತ ನೇಮಕಾತಿ ಲಿಂಕ್ ಅನ್ನು ತೆರೆಯಬೇಕು. ಅಗತ್ಯ ದಾಖಲೆಗಳನ್ನು ಅಪ್&zwnj;ಲೋಡ್ ಮಾಡಿ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ₹1180 ಅರ್ಜಿ ಶುಲ್ಕವಿದ್ದು, ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.&lt;/p&gt;&lt;p&gt;ಈ ನೇಮಕಾತಿ ಪ್ರಕ್ರಿಯೆ ಮೂಲಕ ಉತ್ತಮ ಸಂಬಳ ಮತ್ತು ಭದ್ರ ಭವಿಷ್ಯವನ್ನು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭ್ಯವಾಗಿದ್ದು, ಆಸಕ್ತರು ಸಮಯ ವ್ಯರ್ಥ ಮಾಡದೇ ಅರ್ಜಿ ಸಲ್ಲಿಸುವುದು ಒಳಿತು.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/bpcl-recruitment-2026-executive-posts-open-high-salary-and-benefits-announced-gdp/articleshow-vdnltgb"/>
        </item>
    </channel>
</rss>
