<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 29 Apr 2026 18:29:10 +0530</lastBuildDate>
        <atom:link href="https://kannada.asianetnews.com/rss/private-jobs" rel="self" type="application/rss+xml"/>
        <item>
            <title><![CDATA[ಡೆಲಿವರಿ ಕೆಲಸದಲ್ಲಿ ಬಂಪರ್ ಆದಾಯ, ದಿನಕ್ಕೆ  20,000 ಗಳಿಕೆ! ಟಾಪ್ನಲ್ಲಿದ್ದಾರೆ ಹುಡುಗಿಯರು]]></title>
            <link>https://kannada.asianetnews.com/private-jobs/a-fun-job-where-delivery-partners-earn-5-6-lakh-and-women-are-leading-too/articleshow-17efolz</link>
            <guid isPermaLink="true">https://kannada.asianetnews.com/private-jobs/a-fun-job-where-delivery-partners-earn-5-6-lakh-and-women-are-leading-too/articleshow-17efolz</guid>
            <pubDate>Sat, 25 Apr 2026 13:41:14 +0530</pubDate>
            <description><![CDATA[&lt;p&gt;ಕೆಲ್ಸ ಯಾವ್ದೆ ಆಗಿರಲಿ, ಕೈತುಂಬ ಸಂಪಾದನೆ ಮಾಡೋದು ಮುಖ್ಯ. ಡೆಲಿವರಿ ಕೆಲ್ಸ ಮಾಡಿ ತಿಂಗಳಿಗೆ 5 -6 ಲಕ್ಷ ಸಂಪಾದನೆ ಮಾಡ್ತಿರೋ ಸಿಬ್ಬಂದಿ ಇದ್ದಾರೆ. ಈ ಕೆಲ್ಸದ ಬಗ್ಗೆ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq1v20qcbse3ga05jee32b3j,imgname-delivery-jobs-1777104650988.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಡೆಲಿವರಿ ಬಾಯ್ ಕೆಲ್ಸ ಅಂದ್ರೆ ಮೂಗು ಮುರಿಯೋರೇ ಹೆಚ್ಚು. ಇವ್ದು ಕೆಲ್ಸ ಇಲ್ಲ ಎನ್ನುವವರು ಇದನ್ನು ಮಾಡ್ತಾರೆ ಎನ್ನುವ ಒಂದು ಭಾವನೆ ಇದೆ. ಹಾಗೆ ಅವರು ಅತೀ ಕಡಿಮೆ ಸಂಬಳ ಪಡೀತಾರೆ ಅಂತ ಬಹುತೇಕರು ನಂಬಿದ್ದಾರೆ. ಭಾರದಲ್ಲಿ ಡೆಲಿವರಿ ಬಾಯ್ಸ್ ಸಂಬಳ 25 ರಿಂದ 30 ಸಾವಿರ ಇರುತ್ತೆ. ಇದಕ್ಕಿಂತ ಹೆಚ್ಚು ಸಂಪಾದನೆ ಮಾಡೋರಿದ್ರೂ ಅವರು ಹಗಲು &ndash; ರಾತ್ರಿ ಅಂದೆ ದುಡಿತಾರೆ. ಆದ್ರೆ ಅಮೆರಿಕಾದಲ್ಲಿ ಹಾಗಲ್ಲ. ಡೆಲಿವರಿ ಕೆಲ್ಸವನ್ನು ಯುನೈಟೆಡ್ ಸ್ಟೇಟ್ಸ್ನಂತಹ ದೇಶದಲ್ಲಿ ಮೋಜಿನ ಕೆಲಸವಾಗಿ ನೋಡಲಾಗುತ್ತೆ. ಹಾಗಾಗಿಯೇ ಹೆಣ್ಮಕ್ಕಳೂ ಈ ಕೆಲ್ಸದಲ್ಲಿ ಆಸಕ್ತಿ ತೋರಿಸ್ತಾರೆ.&lt;/p&gt;&lt;h2&gt;ಅಮೆರಿಕಾದಲ್ಲಿ ಡೆಲಿವರಿ ಕೆಲ್ಸಕ್ಕೆ ಎಷ್ಟು ಸಂಬಳ ?&lt;/h2&gt;&lt;p&gt;ಡೆಲಿವರಿ ಕೆಲಸವನ್ನು ಅಮೆರಿಕಾದಲ್ಲಿ ಹೆಚ್ಚಾಗಿ ಅರೆಕಾಲಿಕ ಕೆಲಸವೆಂದು ಪರಿಗಣಿಸಲಾಗುತ್ತದೆ. ಕೆಲವು ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರುವವರಿಗೆ, ಡೆಲಿವರಿ ಕೆಲಸವು ಅತ್ಯುತ್ತಮ ಆಯ್ಕೆಯಾಗಿದೆ. ಕಡಿಮೆ ಸಮಯದಲ್ಲೇ ಇವರು ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡ್ತಾರೆ. ಇಲ್ಲಿ ಡೆಲಿವರಿ ಬಾಯ್ಸ್ ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ. ಫುಲ್ ಟೈಮ ಡೆಲಿವರಿ ಕೆಲ್ಸ ಮಾಡುವ ಜನರೂ ಅಮೆರಿಕಾದಲ್ಲಿದ್ದಾರೆ. ಅವರು 8 ಗಂಟೆ ಕೆಲ್ಸ ಮಾಡಿದ್ರೆ ಪಾರ್ಟ್ ಟೈಂ ಕೆಲಸಗಾರರು 4 ಗಂಟೆ ಕೆಲ್ಸ ಮಾಡ್ತಾರೆ.&lt;/p&gt;&lt;p&gt;ಬಿಪಿಸಿಎಲ್ ನೇಮಕಾತಿ: ಆಯ್ಕೆಯಾದವರಿಗೆ ಭರ್ಜರಿ ಜಾಕ್&zwnj;ಪಾಟ್&zwnj; , ತಿಂಗಳಿಗೆ ₹1.40&lt;/p&gt;&lt;h3&gt;ಆನ್ಲೈನ್ ಆಪ್ ಬಳಕೆ ಹೆಚ್ಚು&lt;/h3&gt;&lt;p&gt;ಅಮೆರಿಕಾದಲ್ಲಿ ಆನ್ಲೈನ್ ಆಪ್ ಬಳಸುವವರ ಸಂಖ್ಯೆ ಹೆಚ್ಚಿದೆ. ಹಾಗೆ ಡೆಲಿವರಿ ಸಿಬ್ಬಂದಿ ಕೂಡ ಒಂದಕ್ಕಿಂತ ಹೆಚ್ಚು ಅಪ್ಲಿಕೇಷನ್ ಬಳಸ್ತಾರೆ. ಉಬರ್ ಈಟ್ಸ್ ಮತ್ತು ಡೋರ್ಡ್ಯಾಶ್ನಂತಹ ಅಪ್ಲಿಕೇಶನ್ ಗಳನ್ನು ಏಕಕಾಲದಲ್ಲಿ ಬಳಸುತ್ತಾರೆ. ಕಡಿಮೆ ದೂರದ, ಹೆಚ್ಚಿನ ಆದಾಯ ಬರುವ ಆರ್ಡರ್ ಮಾತ್ರ ಒಪ್ಪಿಕೊಂಡು, ಸಮಯ ಉಳಿಸೋ ಜೊತೆಗೆ ಹಣ ಸಂಪಾದನೆ ಮಾಡ್ತಾರೆ,&lt;/p&gt;&lt;p&gt;&lt;strong&gt;ಹೆಚ್ಚೆಚ್ಚು ಸಿಗುತ್ತೆ ಟಿಪ್&lt;/strong&gt;&lt;/p&gt;&lt;p&gt;ಯುಎಸ್ ನಗರಗಳಲ್ಲಿ, ಡೆಲಿವರಿ ಸಿಬ್ಬಂದಿ ಡೆಲಿವರಿ ಹಣಕ್ಕಿಂತ ಟಿಪ್ ನಿಂದ ಹೆಚ್ಚು ಗಳಿಸ್ತಾರೆ. ಪ್ರತಿ ಡೆಲಿವರಿಗೆ ಟಿಪ್ ಮಾಡುವ ಸಂಸ್ಕೃತಿ ಇದೆ. ಹೆಚ್ಚಿನ ನಗರಗಳಲ್ಲಿ ಟಿಪ್ ಮೂಲಕ ಡೆಲಿವರಿ ಸಿಬ್ಬಂದಿ 10 ರಿಂದ 15 ಡಾಲರ್ ಗಳಿಸ್ತಾರೆ. ದೊಡ್ಡ ನಗರದಲ್ಲಿ ಇದು 30 ಡಾಲರ್ ಗಿಂತ ಹೆಚ್ಚಿದೆ.&lt;/p&gt;&lt;p&gt;&lt;strong&gt;ಬೋನಸ್ ವ್ಯವಸ್ಥೆ&lt;/strong&gt;&lt;/p&gt;&lt;p&gt;ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಂತಹ ಅಮೆರಿಕ ನಗರಗಳಲ್ಲಿ, ಆರ್ಡರ್ಗಳ ಸಂಖ್ಯೆ ತುಂಬಾ ಹೆಚ್ಚು. ಹಾಗಾಗಿ ಡೆಲಿವರಿ ಬಾಯ್ಸ್ ಗಳಿಕೆ ಕೂಡ ಹೆಚ್ಚು. ಈ ಪ್ರದೇಶಗಳಲ್ಲಿನ ಕಂಪನಿಗಳು ಬೋನಸ್ ಸಹ ನೀಡುತ್ವೆ. ಇದು ಗಳಿಕೆಯನ್ನು ದ್ವಿಗುಣಗೊಳಿಸುತ್ತೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಅಥವಾ ಲಾಸ್ ಏಂಜಲೀಸ್ನಂತಹ ದುಬಾರಿ ನಗರಗಳಲ್ಲಿ ಡೆಲಿವರಿಗೆ ಬೇಡಿಕೆ ಮತ್ತು ಸಂಬಳ ಹೆಚ್ಚಿದೆ.&lt;/p&gt;&lt;p&gt;ಕೃಷಿ ಇಲಾಖೆಯಲ್ಲಿ ನಿಮಗಿದೋ ಸುವರ್ಣಾವಕಾಶ,&lt;/p&gt;&lt;p&gt;&lt;strong&gt;ದಿನಕ್ಕಿಷ್ಟು ಗಳಿಸ್ತಾರೆ ಡೆಲಿವರಿ ಸಿಬ್ಬಂದಿ&lt;/strong&gt;&lt;/p&gt;&lt;p&gt;ಯುಎಸ್ನಲ್ಲಿ ಡೆಲಿವರಿ ಸಿಬ್ಬಂದಿ ತಿಂಗಳಿಗೆ 5 ಲಕ್ಷ ರೂಪಾಯಿ ಗಳಿಸುವ ಅವಕಾಶ ಇದೆ. ದಿನಕ್ಕೆ ಸರಿಸುಮಾರು 20,000 ಸಾವಿರ ಗಳಿಸುವ ಅವಕಾಶ ಇದೆ. ಡೆಲಿವರಿ ಕೆಲಸಗಾರರು ಗಂಟೆಗೆ 20 ರಿಂದ 25 ಡಾಲರ್ ಗಳಿಸುತ್ತಾರೆ. ಕೆಲವರು ಕೇವಲ 4 ಗಂಟೆಗಳಲ್ಲಿ 100 ಡಾಲರ್ ಅಂದ್ರೆ 9,000ದವರೆಗೆ ಗಳಿಸುತ್ತಾರೆ. ಅದೇ ಫುಲ್ ಟೈಂ ಡೆಲಿವರಿ ಕೆಲಸಗಾರರು 200 ರಿಂದ 220 ಡಾಲರ್ ಕಡ್ಡಾಯವಾಗಿ ಗಳಿಸುತ್ತಾರೆ.&lt;/p&gt;&lt;p&gt;ಪೀಕ್ ಅವರ್ಗಳು, ಬೋನಸ್ಗಳು ಮತ್ತು ಉತ್ತಮ ಸಲಹೆಗಳನ್ನು ಹೊಂದಿರುವ ಪ್ರದೇಶಗಳಲ್ಲಿ, ಡೆಲಿವರಿ ಕೆಲಸಗಾರರು ಗಂಟೆಗೆ 30 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಗಣ ಸಂಪಾದನೆ ಮಾಡ್ತಾರೆ. ಎಲ್ಲ ಲೆಕ್ಕ ಹಾಕಿದ್ರೆ 8 ಗಂಟೆ ಡೆಲಿವರಿ ಕೆಲ್ಸ ಮಾಡುವ ವ್ಯಕ್ತಿ ತಿಂಗಳಿಗೆ 6 ಲಕ್ಷದವರೆಗೆ ಗಳಿಸಬಹುದು. ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ಸಮಯದಲ್ಲಿ ಕೆಲ್ಸ ಮಾಡುವ ಸಿಬ್ಬಂದಿ ಗಳಿಕೆ ಮತ್ತಷ್ಟು ಹೆಚ್ಚಿರುತ್ತದೆ. ಇಲ್ಲಿ ಕೆಲ್ಸ ಮಾಡೋಕೆ ಯಾವುದೇ ಒತ್ತಡ ಇಲ್ಲ. ಹಾಗಾಗಿ ಮಹಿಳೆಯರು ಆರಾಮವಾಗಿ ಕೆಲ್ಸ ಮಾಡ್ತಾರೆ. ಪಾರ್ಟ್ ಟೈಂ ಕೆಲ್ಸ ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/private-jobs/a-fun-job-where-delivery-partners-earn-5-6-lakh-and-women-are-leading-too/articleshow-17efolz"/>
        </item>
        <item>
            <title><![CDATA[Bengaluru Employee Termination: ಆಫೀಸ್‌ ನನ್ನ ಲೈಫ್ ಅನ್ಕೊಂಡೆ;‌ ಕೆಲಸದಿಂದಲೇ ತೆಗೆದ್ರು; ಬೆಂಗಳೂರು ಹುಡುಗಿ]]></title>
            <link>https://kannada.asianetnews.com/private-jobs/bengaluru-corporate-women-nidhi-job-fired-she-says-she-is-done-five-mistakes/articleshow-350gn0b</link>
            <guid isPermaLink="true">https://kannada.asianetnews.com/private-jobs/bengaluru-corporate-women-nidhi-job-fired-she-says-she-is-done-five-mistakes/articleshow-350gn0b</guid>
            <pubDate>Mon, 27 Apr 2026 12:51:36 +0530</pubDate>
            <description><![CDATA[&lt;p&gt;Bengaluru Women Nidhi Job Terminate: ಇಂದು ಸಾಕಷ್ಟು ಜನರು ಕಾರ್ಪೋರೇಟ್&zwnj; ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಂದಿನ ತಕ್ಷಣ ಲೇಆಫ್&zwnj; ಅಥವಾ ಟರ್ಮಿನೇಟ್&zwnj; ಎಂದು ಹೇಳಿ ಕೆಲಸದಿಂದ ತೆಗೆದು ಹಾಕಲಾಗುವುದು. ಹೀಗೆ ಟರ್ಮಿನೇಟ್&zwnj; ಆದ ಬೆಂಗಳೂರಿನ ಹುಡುಗಿಯೊಬ್ಬರು ಏನು ತಪ್ಪು ಮಾಡಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq6x0et37z5619y22h4arbdz,imgname-new-project---2026-04-27t124724.127-1777274469187.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ನಿಧಿ ಎನ್ನುವವರು ಕಾರ್ಪೋರೇಟ್&zwnj; ಕಂಪೆನಿಯಲ್ಲಿ ಕೆಲಸ ( A Bengaluru employee was allegedly fired ) ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್&zwnj; ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದಾರೆ. ನಾನು ಏನು ತಪ್ಪು ಮಾಡಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಯಾಕೆ ಕೆಲಸ ಹೋಗುತ್ತದೆ?&lt;/h2&gt;&lt;p&gt;ಕೆಲಸ ಚೆನ್ನಾಗಿ ಮಾಡಿಲ್ಲ ಎಂದಾಗಲೂ ಕೂಡ ಕೆಲಸ ಹೋಗೋದು ಸಹಜ ಆಗಿದೆ. ಇನ್ನೂ ಕೆಲವೊಮ್ಮೆ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಕೂಡ, ಆಫೀಸ್&zwnj;ನ ಒಣ ರಾಜಕೀಯಕ್ಕೆ ಕೆಲಸ ಹೋಗುವಂಥ ಪರಿಸ್ಥಿತಿ ಬರುತ್ತದೆ. ಇನ್ನೂ ಕೆಲವೊಮ್ಮೆ ಸಂಬಳ ಹೆಚ್ಚಿದ್ದರೂ, ಇನ್ಯಾವುದೋ ಬೇಡಿಕೆಗೆ ಒಪ್ಪಿಲ್ಲ ಎಂದಾಗ, ಮ್ಯಾನೇಜರ್&zwnj; ಹೇಳಿದಂತೆ ಕೇಳಿಲ್ಲ ಎಂದಾಗಲೂ ಕೂಡ ಕೆಲಸ ಹೋಗುವುದು.&lt;/p&gt;&lt;p&gt;ಮ್ಯಾನೇಜರ್&zwnj; ಮೊಂಡು ಹಠಕ್ಕೋ ಅಥವಾ ಅರ್ಥವಿಲ್ಲದ ಹೇಳಿಕೆಗೆ ಜೈ ಎಂದಿಲ್ಲ ಅಂದಾಗಲೂ ಕೂಡ ಕೆಲಸ ಹೋಗುವುದು. ಅಷ್ಟೇ ಯಾಕೆ? ಇನ್ಯಾವುದೋ ಉದ್ಯೋಗಿಯನ್ನು ಓಲೈಸಲು ಹೋಗಿ ಕೂಡ ಕೆಲಸ ಹೋಗುವುದು. ಆಡುಭಾಷೆಯಲ್ಲಿ ಹೇಳುವಂತೆ ಬಕೆಟ್&zwnj; ಹಿಡಿದಿಲ್ಲ ಎಂದಾಗಲೂ ಕೆಲಸ ಹೋಗುವುದು.&lt;/p&gt;&lt;p&gt;ಕಾರ್ಪೋರೇಟ್&zwnj; ಕೆಲಸದ ಮಧ್ಯೆ ನಿಧಿ ಏನೇನು ತಪ್ಪು ಮಾಡಿದೆ ಎಂದು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ&lt;/p&gt;&lt;h2&gt;ಕೆಲಸವೇ ಅಸ್ತಿತ್ವ ಎಂದುಕೊಂಡೆ&lt;/h2&gt;&lt;p&gt;ನನಗೂ ವೈಯಕ್ತಿಕ ಜೀವನ ಇದೆ ಎಂದು ಮರೆತು ಹೋದೆ, ಕೆಲಸವೇ ನನ್ನ ಅಸ್ತಿತ್ವ ಎಂದುಕೊಂಡೆ ಎಂದು ನಿಧಿ ಹೇಳಿದ್ದಾರೆ.&lt;/p&gt;&lt;h2&gt;ಆರೋಗ್ಯಕ್ಕೆ ಗಮನ ಕೊಡಲಿಲ್ಲ&lt;/h2&gt;&lt;p&gt;ನಾನು ನನಗೂ ಆರೋಗ್ಯ ಇದೆ, ಬದುಕಬೇಕು ಎನ್ನೋದು ಮರೆತೆ. ನನ್ನ ದಿನಚರಿ ಕಡೆಗೆ ಗಮನವೇ ಕೊಡಲಿಲ್ಲ. ಸರಿಯಾಗಿ ಊಟ-ತಿಂಡಿ ಕೂಡ ಮಾಡಲಿಲ್ಲ. ಪೌಷ್ಟಿಕ ಆಹಾರ ತಿನ್ನುತ್ತಿರಲಿಲ್ಲ, ವ್ಯಾಯಾಮ ಮಾಡುತ್ತಿರಲಿಲ್ಲ.&lt;/p&gt;&lt;h2&gt;ಒತ್ತಡದಲ್ಲಿ ಬದುಕುತ್ತಿದ್ದೆ&lt;/h2&gt;&lt;p&gt;ಆಫೀಸ್&zwnj;ಗೆ ಹೋಗಬೇಕು, ಕೆಲಸ ಆಗಿಲ್ಲ, ಟಾರ್ಗೆಟ್&zwnj; ರೀಚ್&zwnj; ಆಗಬೇಕು ಎಂದು ನಾನು ಒತ್ತಡದಲ್ಲಿ ಬದುಕುತ್ತಿದ್ದೆ. ಆಫೀಸ್&zwnj;ಗೆ ಹೋಗೋದು, ಮನೆಗೆ ಬರೋದು ಆಗುತ್ತಿತ್ತು. ಇದರ ಮಧ್ಯೆ ಮಾನಸಿಕವಾಗಿ ಕೂಡ ನನಗೆ ರೆಸ್ಟ್&zwnj; ಬೇಕು ಎನ್ನೋದು ಮರೆತಿದ್ದೆ ಎಂದು ಹೇಳಿದ್ದಾರೆ.&lt;/p&gt;&lt;h2&gt;ಲೈಫ್&zwnj;ಸ್ಟೈಲ್&zwnj; ಮರೆತಿದ್ದೆ&lt;/h2&gt;&lt;p&gt;ಆಫೀಸ್&zwnj; ಕೆಲಸದ ಮಧ್ಯೆ ಆಹಾರ, ವ್ಯಾಯಾಮದ ಕಡೆಗೆ ಗಮನವೇ ಕೊಡಲಿಲ್ಲ, ಇತರ ಕೌಶಲಗಳನ್ನು ಅಳವಡಿಸಿಕೊಳ್ಳಲು ಯೋಚಿಸಿರಲಿಲ್ಲ. ಅಷ್ಟೇ ಅಲ್ಲದೆ ಸ್ನೇಹಿತರನ್ನು ಭೇಟಿ ಆಗೋದು, ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿ ಆಗೋದನ್ನು ಬಿಟ್ಟಿದ್ದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/private-jobs/bengaluru-corporate-women-nidhi-job-fired-she-says-she-is-done-five-mistakes/articleshow-350gn0b"/>
        </item>
        <item>
            <title><![CDATA[Oracle ಜಾಬ್​ ಕಳ್ಕೊಂಡು ಡ್ರೈವರಾದ ಬೆಂಗಳೂರು ಟೆಕಿ ಮಾತು ಕೇಳಿ ಕೆಲ್ಸ ಬಿಡಲು ಮುಂದಾದ ಎಂಜಿನಿಯರ್ಸ್!]]></title>
            <link>https://kannada.asianetnews.com/private-jobs/oracle-layoffs-bengaluru-techie-with-14-years-experience-becomes-uber-driver-suc/articleshow-37cn5my</link>
            <guid isPermaLink="true">https://kannada.asianetnews.com/private-jobs/oracle-layoffs-bengaluru-techie-with-14-years-experience-becomes-uber-driver-suc/articleshow-37cn5my</guid>
            <pubDate>Thu, 09 Apr 2026 23:20:16 +0530</pubDate>
            <description><![CDATA[ಒರಾಕಲ್ ಕಂಪೆನಿಯಿಂದ ವಜಾಗೊಂಡ ಬೆಂಗಳೂರಿನ ಟೆಕ್ಕಿಯೊಬ್ಬರು 14 ವರ್ಷಗಳ ಸೇವೆ ನಂತರ ಕ್ಯಾಬ್ ಡ್ರೈವರ್ ಆಗಿ ಹೊಸ ಜೀವನ ಆರಂಭಿಸಿದ್ದಾರೆ. ಪೂರ್ವ ಉಳಿತಾಯ ಮತ್ತು ಸರಿಯಾದ ಹಣಕಾಸು ಯೋಜನೆಯಿಂದಾಗಿ ಅವರು ಈಗ ಒತ್ತಡವಿಲ್ಲದೆ ಸಂತೋಷದ ಜೀವನ ನಡೆಸುತ್ತಿದ್ದು, ಅವರ ಕಥೆ ಅನೇಕರಿಗೆ ಸ್ಫೂರ್ತಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knsnv1fb3s2w03g3wpfe9mx6,imgname-techie-life-1775757002219.jpg" type="image/jpeg" height="390" width="690"/>
            <content:encoded><![CDATA[&lt;p&gt;ಒರಾಕಲ್​​ ಕಂಪೆನಿ ಇದಾಗಲೇ 30 ಸಾವಿರಕ್ಕೂ ಅಧಿಕ ತನ್ನ ಉದ್ಯೋಗಿಗಳನ್ನು ವಜಾ ಮಾಡಿದೆ. ನಸುಕಿನಲ್ಲಿಯೇ ಇ-ಮೇಲ್​ ಕಳುಹಿಸುವ ಮೂಲಕ ಕೆಲಸಕ್ಕೆ ಬರಬೇಡಿ ಎಂದು ಹೇಳಿದೆ. ಇದರಿಂದ ಬಹುತೇಕ ಎಲ್ಲಾ ಎಂಜಿನಿಯರ್ಸ್​ ಮುಂದಿನ ದಾರಿ ತೋರದೇ ತಲೆಯಮೇಲೆ ಕೈಹೊತ್ತು ಕುಳಿತಿದ್ದಾರೆ. ಅಷ್ಟಕ್ಕೂ ಇದು Oracle ಕಂಪೆನಿಯ ಒಂದೇ ಮಾತಲ್ಲ. AI ಟೆಕ್ನಾಲಾಜಿ ಕ್ಷೇತ್ರಕ್ಕೆ ಕಾಲಿಟ್ಟಮೇಲೆ ಇದಾಗಲೇ ಲಕ್ಷಾಂತರ ಸಾಫ್ಟ್​ವೇರ್​ ಎಂಜಿನಿಯರ್ಸ್​ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. ಯಾವಾಗ, ಏನು ಬೇಕಾದರೂ ಆಗಬಹುದು ಎನ್ನುವ ಸ್ಥಿತಿ ಅವರದ್ದು. ಈಗ ಎಂಜಿನಿಯರಿಂಗ್​ ಡಿಗ್ರಿ ಪಡೆಯುತ್ತಿರುವ ಹಲವರು ಕೂಡ ಚಿಂತಾಕ್ರಾಂತರಾಗಿದ್ದಾರೆ. ಕೆಲವೇ ಸಾವಿರ ರೂಪಾಯಿಗಳಿಗೆ ದುಡಿಯುವ ಸ್ಥಿತಿಯೂ ಇದೀಗ ನಿರ್ಮಾಣವಾಗಿದೆ.&lt;/p&gt;&lt;h2&gt;&lt;strong&gt;ಒರಾಕಲ್​ನ ಕೆಲಸ ಕಳೆದುಕೊಂಡ ಉದ್ಯೋಗಿ&lt;/strong&gt;&lt;/h2&gt;&lt;p&gt;ಇವೆಲ್ಲವುಗಳ ನಡುವೆಯೇ ಒರಾಕಲ್​ನ ಕೆಲಸ ಕಳೆದುಕೊಂಡ ಉದ್ಯೋಗಿಯೊಬ್ಬನ ಸೋಷಿಯಲ್​ ಮೀಡಿಯಾ ಪೋಸ್ಟ್​ ನೋಡಿದ ಎಷ್ಟೋ ಮಂದಿ ತಾವೂ ಕೆಲಸ ಬಿಟ್ಟರೆ ಒಳ್ಳೆಯದು ಎಂದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, 14 ವರ್ಷ ಸೇವೆಯ ಬಳಿಕ ಕೆಲಸ ಕಳೆದುಕೊಂಡಿರುವ ಆ ಟೆಕಿ ಹಾಕಿರುವ ಪೋಸ್ಟ್​. ಒರಾಕಲ್​ನಲ್ಲಿ ಕೆಲಸ ಕಳೆದುಕೊಂಡಿರುವ ಬೆಂಗಳೂರು ಟೆಕಿ ಈಗ ಕ್ಯಾಬ್​ ಡ್ರೈವರ್​ ಆಗಿದ್ದಾರೆ. ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಈಗ ಲೈಫ್​ ಎಷ್ಟು ಸುಂದರವಾಗಿದೆ ಎಂದು ಬರೆದುಕೊಂಡಿದ್ದಾರೆ. ಯಾವುದೇ ಭಯವಿಲ್ಲ, ಒತ್ತಡವಿಲ್ಲ, ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಗೋಳೋ ಎಂದು ಅಳುವ ಪ್ರಮೇಯವೂ ಇಲ್ಲ ಎಂದಿದ್ದಾರೆ ಇವರು.&lt;/p&gt;&lt;h3&gt;&lt;strong&gt;ಸ್ನೇಹಿತನ ಬಗ್ಗೆ ಮಾತು&lt;/strong&gt;&lt;/h3&gt;&lt;p&gt;ಭುವನೇಶ್ವರ ಮೂಲದ ಈ ಸಾಫ್ಟ್​ವೇರ್​ ಎಂಜಿನಿಯರ್​, ಇವರ ಬಗ್ಗೆ ಸ್ನೇಹಿತ ಸತ್ಯಾ ನಾಯಕ್​ ಎನ್ನುವವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಾಗಲೇ ಆತ ಎರಡು ಜಂಟಿ ಖಾತೆಗಳಲ್ಲಿ ತಲಾ 15 ಲಕ್ಷ ರೂಪಾಯಿಗಳ ಅಂಚೆ ಸ್ಥಿರ ಠೇವಣಿ ಹೊಂದಿದ್ದಾನೆ. ಒಂದು ತನ್ನ ಹೆತ್ತವರ ಹೆಸರಿನಲ್ಲಿ, ಇನ್ನೊಂದು ದಂಪತಿ ಹೆಸರಲ್ಲಿ. ಇವುಗಳಿಂದ ಆತನಿಗೆ ಪ್ರತಿ ತಿಂಗಳು ಸುಮಾರು 28 ಸಾವಿರ ರೂಪಾಯಿ ಬಡ್ಡಿ ಬರುತ್ತಿದೆ ಅವನು ಕೆಲವು ಭಾರತೀಯ ಬ್ಯಾಂಕುಗಳಲ್ಲಿ ಸುಮಾರು 30 ಲಕ್ಷ ಮೌಲ್ಯದ ಸ್ಥಿರ ಠೇವಣಿಗಳನ್ನು ಹೊಂದಿದ್ದು, ಇದರಿಂದ 15 ಸಾವಿರ ರೂಪಾಯಿ ಬರುತ್ತಿದೆ.&lt;/p&gt;&lt;h3&gt;&lt;strong&gt;ಕ್ಯಾಬ್​ ಡ್ರೈವರ್​&lt;/strong&gt;&lt;/h3&gt;&lt;p&gt;ಅವನು ಈಗ ತನ್ನ ಹೆತ್ತವರೊಂದಿಗೆ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾನೆ. ಅವನಿಗೆ ಹೇಗೆ ಚಾಲನೆ ಮಾಡಬೇಕೆಂದು ತಿಳಿದಿದೆ, ಆದ್ದರಿಂದ ಅವನು ತಕ್ಷಣ ತನ್ನ ಸ್ವಂತ ಅನುಕೂಲಕ್ಕೆ ತಕ್ಕಂತೆ ಉಬರ್ ಚಾಲಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. ಅವನಿಗೆ ಅದರಿಮದ 50 ಸಾವಿರ ರೂಪಾಯಿವರೆಗೂ ಬರುತ್ತಿದೆ. ಕೆಲಸ ಮಾಡುವ ಸಮಯದಲ್ಲಿ ಒಂದಿಷ್ಟು ಕೂಡಿಟ್ಟಿರುವ ಕಾರಣ ಅವನ ಲೈಫ್ ಈಗ ಕೂಲ್​ ಕೂಲ್​ ಆಗಿದೆ ಎನ್ನುತ್ತಿದ್ದಾನೆ. ಕೆಲಸ ಬಿಟ್ಟ ಮೇಲೆ ಜೀವನ ಎಷ್ಟು ಸುಂದರ ಎಂದು ಆತನಿಗೆ ಅನ್ನಿಸತೊಡಗಿದೆ ಎಂದಿದ್ದಾರೆ ಸತ್ಯ.&lt;/p&gt;&lt;h3&gt;&lt;strong&gt;ದುಂದು ವೆಚ್ಚಕ್ಕೆ ಇಲ್ಲ ಆಸ್ಪದ&lt;/strong&gt;&lt;/h3&gt;&lt;p&gt;ಅವನಿಗೆ ಯಾವುದೇ ಮೆಟ್ರೋ ನಗರದ ಫ್ಲಾಟ್&zwnj;ಗೆ ಯಾವುದೇ ಇಎಂಐಗಳು ಮತ್ತು ಸಾಲಗಳಿಲ್ಲ. ಅದೇ ಸಮಯದಲ್ಲಿ, ಅವನು ತನ್ನ ಪೋಷಕರ ಸಹಾಯದಿಂದ ಸಣ್ಣ ವ್ಯವಹಾರವನ್ನು ಪ್ರಾರಂಭಿಸಲು ಶಾಂತವಾಗಿ ಯೋಜಿಸುತ್ತಿದ್ದಾನೆ. ತನ್ನ ದುಡಿಮೆಯನ್ನು ಆತ ಎಂದಿಗೂ ದುಂದು ವೆಚ್ಚ ಮಾಡಲಿಲ್ಲ. ಆದ್ದರಿಂದ ಇವೆಲ್ಲಾ ಸಾಧ್ಯವಾಯಿತು ಎಂದಿದ್ದಾರೆ. ಈ ಮಾತನ್ನು ಕೇಳಿದ ಹಲವರು ಕೆಲಸ ಮಾಡುವ ಸಮಯದಲ್ಲಿ ಒಂದಿಷ್ಟು ಕೂಡಿಟ್ಟರೆ ಎಷ್ಟು ಪ್ರಯೋಜನ ಎನ್ನುತ್ತಿದ್ದರೆ, ಮತ್ತೆ ಕೆಲವರು, ನಾನೂ ಸಾಕಷ್ಟು ಹಣ ಡಿಪಾಸಿಟ್​ ಮಾಡಿದ್ದೇನೆ. ಕೆಲಸ ಬಿಡುವ ಯೋಚನೆ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Suchethana D</dc:creator>
            <atom:link href="https://kannada.asianetnews.com/private-jobs/oracle-layoffs-bengaluru-techie-with-14-years-experience-becomes-uber-driver-suc/articleshow-37cn5my"/>
        </item>
        <item>
            <title><![CDATA[ಕೃಷಿ ಇಲಾಖೆಯಲ್ಲಿ ನಿಮಗಿದೋ ಸುವರ್ಣಾವಕಾಶ, ಕೆಇಎಯಿಂದ ಅರ್ಜಿ ಆಹ್ವಾನ!]]></title>
            <link>https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4</link>
            <guid isPermaLink="true">https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4</guid>
            <pubDate>Wed, 22 Apr 2026 18:44:05 +0530</pubDate>
            <description><![CDATA[ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕೃಷಿ ಇಲಾಖೆಯಲ್ಲಿ ಖಾಲಿ ಇರುವ 890 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಮೇ 10ರೊಳಗೆ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ ತಿಂಗಳಲ್ಲಿ ಲಿಖಿತ ಪರೀಕ್ಷೆಗಳು ನಡೆಯಲಿವೆ. ಈ ನೇಮಕಾತಿಯು ಕೃಷಿ ಪದವೀಧರರಿಗೆ ಸರ್ಕಾರಿ ವಲಯದಲ್ಲಿ ಸೇವೆ ಸಲ್ಲಿಸಲು ಉತ್ತಮ ಅವಕಾಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kktgd6bd5fgq0amyfwsjav01,imgname-agriculture-officer-salary-1773637376365.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದ ಕೃಷಿ ಕ್ಷೇತ್ರದ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಹತ್ವದ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 890 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್&zwnj;ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.&lt;/p&gt;&lt;h2&gt;ಹುದ್ದೆಗಳ ವಿವರ ಮತ್ತು ವರ್ಗೀಕರಣ&lt;/h2&gt;&lt;p&gt;ಈ ನೇಮಕಾತಿ ಪ್ರಕ್ರಿಯೆ ಮುಖ್ಯವಾಗಿ ಎರಡು ವೃಂದಗಳಲ್ಲಿ ನಡೆಯಲಿದೆ. ಒಟ್ಟು 890 ಹುದ್ದೆಗಳ ಪೈಕಿ &lsquo;ಗ್ರೂಪ್-ಬಿ&rsquo; ವೃಂದದ ಅಡಿಯಲ್ಲಿ 632 ಹುದ್ದೆಗಳು ಸೇರಿವೆ. ಇದರಲ್ಲಿ 81 ಕೃಷಿ ಅಧಿಕಾರಿ ಮತ್ತು 551 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿವೆ. ಉಳಿದಂತೆ, ಕಲ್ಯಾಣ ಕರ್ನಾಟಕ (371ಜೆ) ವೃಂದಕ್ಕೆ ಮೀಸಲಾದ 258 ಹುದ್ದೆಗಳಿಗೂ ಪ್ರತ್ಯೇಕ ನೇಮಕಾತಿ ನಡೆಯಲಿದೆ. ಕೃಷಿ ಪದವೀಧರರಿಗೆ ಸರ್ಕಾರದ ವಲಯದಲ್ಲಿ ಸೇವೆ ಸಲ್ಲಿಸಲು ಇದು ಮಹತ್ವದ ಅವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.&lt;/p&gt;&lt;h2&gt;ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು&lt;/h2&gt;&lt;p&gt;ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮೇ 10ರೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ದಿನಾಂಕವು ಕಲ್ಯಾಣ ಕರ್ನಾಟಕ ಹಾಗೂ ಇತರ ಎಲ್ಲಾ ವೃಂದದ ಅಭ್ಯರ್ಥಿಗಳಿಗೆ ಅನ್ವಯವಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ನಿಗದಿತ ಶುಲ್ಕವನ್ನು ಪಾವತಿಸಲು ಮೇ 12ರವರೆಗೆ ಅವಕಾಶ ನೀಡಲಾಗಿದೆ. ಕೊನೆಯ ಕ್ಷಣದ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಕೆಇಎ ಸಲಹೆ ನೀಡಿದೆ.&lt;/p&gt;&lt;h2&gt;ಪರೀಕ್ಷಾ ವೇಳಾಪಟ್ಟಿ&lt;/h2&gt;&lt;p&gt;ನೇಮಕಾತಿ ಪ್ರಕ್ರಿಯೆಯ ಅಂಗವಾಗಿ ಲಿಖಿತ ಪರೀಕ್ಷೆಗಳು ಜೂನ್ ತಿಂಗಳಲ್ಲಿ ನಡೆಯಲಿವೆ.&lt;/p&gt;&lt;p&gt;ಕನ್ನಡ ಭಾಷಾ ಪರೀಕ್ಷೆ: ಮೂಲ ಹಾಗೂ ಕಲ್ಯಾಣ ಕರ್ನಾಟಕ ಎರಡೂ ವೃಂದದ ಅಭ್ಯರ್ಥಿಗಳಿಗೆ ಜೂನ್ 6ರಂದು ಕಡ್ಡಾಯವಾಗಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಗ್ರೂಪ್-ಬಿ ಪರೀಕ್ಷೆ: ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಜೂನ್ 7ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ವೃಂದ: 371ಜೆ ವೃಂದಕ್ಕೆ ಸೇರಿದ 258 ಹುದ್ದೆಗಳಿಗಾಗಿ ಜೂನ್ 14ರಂದು ಪರೀಕ್ಷೆ ನಿಗದಿಯಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ&lt;/p&gt;&lt;p&gt;ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿದ್ದ ಹುದ್ದೆಗಳ ಭರ್ತಿಯಿಂದ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಾಗುವ ನಿರೀಕ್ಷೆಯಿದೆ. ರೈತರಿಗೆ ತಾಂತ್ರಿಕ ಸಲಹೆ ನೀಡುವುದು, ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ.&lt;/p&gt;&lt;p&gt;ಅರ್ಹತೆ, ಅರ್ಜಿ ವಿಧಾನ ಮತ್ತು ಇತರ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಬಹುದು. ಜೂನ್ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿರುವುದರಿಂದ ಅಭ್ಯರ್ಥಿಗಳಿಗೆ ಸಿದ್ಧತೆಗಾಗಿ ಸೀಮಿತ ಸಮಯ ಮಾತ್ರ ಇರುವುದರಿಂದ, ಕೃಷಿ ಪದವೀಧರರು ಈಗಿನಿಂದಲೇ ಯೋಜಿತವಾಗಿ ಅಭ್ಯಾಸ ಆರಂಭಿಸುವುದು ಅಗತ್ಯವಾಗಿದೆ.&lt;/p&gt;&lt;p&gt;ಒಟ್ಟಾರೆ, ಈ ನೇಮಕಾತಿ ಪ್ರಕ್ರಿಯೆ ಕೃಷಿ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವ ಜೊತೆಗೆ, ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನು ಒದಗಿಸಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4"/>
        </item>
        <item>
            <title><![CDATA['ನನ್ನ ಡಿಗ್ರಿ ಕೇವಲ ಎಂಟ್ರಿ ಟಿಕೆಟ್ ಅಷ್ಟೇ': ಜಾಬ್‌ ವೇಳೆ ಪದವಿ ಕೇವಲ ಶೇ. 3ರಷ್ಟು ಮಾತ್ರ ಬಳಕೆಯಾಗುತ್ತಿದೆ ಎಂದ NIT ಪದವೀಧರೆ!]]></title>
            <link>https://kannada.asianetnews.com/private-jobs/nit-graduate-manvi-viral-video-on-degree-utility-and-skills-in-corporate-jobs-san/articleshow-6itm2r0</link>
            <guid isPermaLink="true">https://kannada.asianetnews.com/private-jobs/nit-graduate-manvi-viral-video-on-degree-utility-and-skills-in-corporate-jobs-san/articleshow-6itm2r0</guid>
            <pubDate>Fri, 17 Apr 2026 21:10:11 +0530</pubDate>
            <description><![CDATA[&lt;p&gt;ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆ ಮಾನ್ವಿ, ತಮ್ಮ ಪದವಿಗಿಂತ ಸಂವಹನ ಕಲೆ ಮತ್ತು ಹೊಸ ಕೌಶಲಗಳೇ ಉದ್ಯೋಗದಲ್ಲಿ ಯಶಸ್ಸು ನೀಡಿದವು ಎಂದು ಹೇಳಿದ್ದಾರೆ. ಪದವಿ ಕೇವಲ ಕೆಲಸಕ್ಕೆ ಪ್ರವೇಶ ಟಿಕೆಟ್ ಮಾತ್ರ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe18x6h5asczqw124h31t4c,imgname-whatsapp-image-2026-04-17-at-9.04.00-pm-1776440079569.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.17): &lt;/strong&gt;ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆ ಮಾನ್ವಿ ಎಂಬುವವರು ಹಂಚಿಕೊಂಡ ವಿಡಿಯೋವೊಂದು ಈಗ ವೈರಲ್ ಆಗಿದೆ. ನಾಲ್ಕು ವರ್ಷಗಳ ಕಷ್ಟದ ಓದು ಉದ್ಯೋಗದ ಅವಧಿಯಲ್ಲಿ ಎಷ್ಟು ಕಡಿಮೆ ಬಳಕೆಯಾಗುತ್ತಿದೆ ಎಂಬ ಕಹಿಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಮಾನ್ವಿ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಾ, &quot;ನಾನು NIT ಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದೇನೆ. ಆದರೆ ನನ್ನ ಕೆಲಸದಲ್ಲಿ ಆ ಪದವಿಯ ಕೇವಲ ಶೇ. 3ರಷ್ಟು ಅಂಶಗಳು ಮಾತ್ರ ಬಳಕೆಯಾಗುತ್ತಿವೆ. ಡಿಗ್ರಿ ಎನ್ನುವುದು ಕೆಲಸ ಸಿಗಲು ಬೇಕಾದ ಎಂಟ್ರಿ ಟಿಕೆಟ್ ಮಾತ್ರವೇ ಹೊರತು, ಇಡೀ ಪಯಣವಲ್ಲ,&quot; ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಓದಿದ್ದಕ್ಕೂ ಮಾಡುವ ಕೆಲಸಕ್ಕೂ ಸಂಬಂಧವಿಲ್ಲ&lt;/strong&gt;&lt;/h2&gt;&lt;p&gt;ತಮ್ಮ ಸಹಪಾಠಿಗಳ ಪರಿಸ್ಥಿತಿಯ ಬಗ್ಗೆ ವಿವರಿಸಿದ ಅವರು, &quot;ನನ್ನ ಬ್ಯಾಚ್&zwnj;ನ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಾವು ಓದಿದ ವಿಷಯಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿಲ್ಲ. ಕಾಲೇಜಿನಲ್ಲಿ ನಾನು ಥರ್ಮೋಡೈನಾಮಿಕ್ಸ್, ಮೆಕ್ಯಾನಿಕ್ಸ್ ಮತ್ತು ಕೈನೆಟಿಕ್ಸ್&zwnj;ನಂತಹ ವಿಜ್ಞಾನದ ವಿಷಯಗಳನ್ನು ಓದಿದೆ. ಆದರೆ ಕೆಲಸದ ಸ್ಥಳದಲ್ಲಿ ನಾನು ಕೇವಲ ಎಕ್ಸೆಲ್ ಶೀಟ್ ನೋಡುವುದು, ಮೀಟಿಂಗ್&zwnj;ಗಳನ್ನು ಮಾಡುವುದು ಮತ್ತು ಇಂಟರ್ನೆಟ್ ಮೂಲಕ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿಯೇ ನಿರತರಾಗಿದ್ದೇನೆ,&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಶಸ್ಸಿಗೆ ಬೇಕಾದ ನಿಜವಾದ ಕೌಶಲಗಳೇನು?&lt;/strong&gt;&lt;/h2&gt;&lt;p&gt;ಕೆಲಸದಲ್ಲಿ ಬೆಳೆಯಲು ಪದವಿಗಿಂತ ಹೆಚ್ಚಾಗಿ ಸಂವಹನ ಕಲೆ (Communication) ಮತ್ತು ಕೌಶಲದ ಅಪ್&zwnj;ಗ್ರೇಡ್ (Upskilling) ಸಹಾಯ ಮಾಡಿತು ಎಂದು ಮಾನ್ವಿ ಅಭಿಪ್ರಾಯಪಟ್ಟಿದ್ದಾರೆ. &quot;ನನ್ನ ಡಿಗ್ರಿ ನನಗೆ ಕೇವಲ ಸಂದರ್ಶನದವರೆಗೆ ಹೋಗಲು ಸಹಾಯ ಮಾಡಿತು. ಅಲ್ಲಿಂದ ಮುಂದಿನ ಹಾದಿಯಲ್ಲಿ ನಾನು ಕಲಿತ ವೈಯಕ್ತಿಕ ಕೌಶಲಗಳೇ ನನ್ನನ್ನು ಕಾಪಾಡಿದವು,&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳಿಗೆ ಮಾನ್ವಿ ನೀಡಿದ ಕಿವಿಮಾತು&lt;/strong&gt;&lt;/h2&gt;&lt;p&gt;ಕಾಲೇಜಿನಲ್ಲಿ ಓದುತ್ತಿರುವಾಗಲೇ ಯಾವುದಾದರೂ ಒಂದು ಹೆಚ್ಚುವರಿ ಕೌಶಲ, ಟೂಲ್ ಅಥವಾ ಹವ್ಯಾಸವನ್ನು ಕಲಿತುಕೊಳ್ಳಿ. ಪದವಿಯ ಜೊತೆಗೆ ನಿಮಗೆ ಹಣ ಗಳಿಸಿಕೊಡುವಂತಹ ಯಾವುದಾದರೂ ಹೊಸ ವಿಷಯವನ್ನು ಕಲಿಯುವುದು ಇಂದಿನ ಕಾಲದಲ್ಲಿ ಅತಿ ಮುಖ್ಯ. ಡಿಗ್ರಿಯನ್ನು ನಿರ್ಲಕ್ಷಿಸಬೇಡಿ, ಆದರೆ ಡಿಗ್ರಿ ಒಂದೇ ಸಾಕು ಎಂದು ಕುಳಿತುಕೊಳ್ಳಬೇಡಿ ಎಂದಿದ್ದಾರೆ.&lt;/p&gt;&lt;p&gt;ಮಾನ್ವಿ ಅವರ ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಒಬ್ಬ ಯೂಸರ್&zwnj; &quot;ಇದು ನೂರಕ್ಕೆ ನೂರರಷ್ಟು ಸತ್ಯ, ನಾವೆಲ್ಲರೂ ಓದಿದ್ದಕ್ಕೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ,&quot; ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಸಿವಿಲ್ ಇಂಜಿನಿಯರ್, &quot;ನಾನು ಇಂಜಿನಿಯರಿಂಗ್ ಮುಗಿಸಿ ಈಗ ಬ್ಯಾಂಕರ್ ಆಗಿ ಕೆಲಸ ಮಾಡುತ್ತಿದ್ದೇನೆ,&quot; ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇನ್ನೊಬ್ಬ ಯೂಸರ್&zwnj;, &quot;ಡಿಗ್ರಿ ಎನ್ನುವುದು ಕೇವಲ ಒಂದು ಐಡಿ ಕಾರ್ಡ್ ಅಷ್ಟೇ,&quot; ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Manviiii (@manvi.diary)&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/private-jobs/nit-graduate-manvi-viral-video-on-degree-utility-and-skills-in-corporate-jobs-san/articleshow-6itm2r0"/>
        </item>
        <item>
            <title><![CDATA[ಕೆಲಸ ಇದೆ ಎಂದು ಬೀಗಬೇಡ! ಬೃಹತ್‌ ಲಾಭವಿದ್ರೂ, ಉದ್ಯೋಗಿಗಳ ಹೊಟ್ಟೆಪಾಡು ಕಿತ್ತುಕೊಂಡ ದೈತ್ಯ ಕಂಪೆನಿ, ಬ್ಯಾಂಕ್!]]></title>
            <link>https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h</link>
            <guid isPermaLink="true">https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h</guid>
            <pubDate>Mon, 27 Apr 2026 17:00:42 +0530</pubDate>
            <description><![CDATA[&lt;p&gt;ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್&zwnj;ನಂತಹ ಟೆಕ್ ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಈಗ ಅಕ್ಸಿಸ್&zwnj; ಬ್ಯಾಂಕ್&zwnj; ಕೂಡ ಲೇಆಫ್&zwnj; ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpst958axanasrak62ap6ghk,imgname-tcs-victim-recounts-horror-office-bullying-politics-gettyimages-470766688-1776835400970.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್&zwnj;ನಂತಹ ಟೆಕ್ ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಈಗ ಅಕ್ಸಿಸ್&zwnj; ಬ್ಯಾಂಕ್&zwnj; ಕೂಡ ಲೇಆಫ್&zwnj; ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈಗಾಗಲೇ ಐಟಿ ಕಂಪೆನಿಗಳು ಸಾಕಷ್ಟು ಉದ್ಯೋಗಿಗಳ ವಜಾ ಮಾಡಿದೆ. ಒರಾಕಲ್ (Oracle) ಕಂಪನಿಯು ಜಾಗತಿಕವಾಗಿ ಅಂದಾಜು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮೆಟಾ, ಮೈಕ್ರೋಸಾಫ್ಟ್, ಡಿಸ್ನಿ, ಎಎಸ್&zwnj;ಎಮ್&zwnj;ಎಲ್ ಕಂಪನಿಗಳು ಉದ್ಯೋಗ ಕಡಿತ ಮಾಡಲಿವೆ.&lt;/p&gt;&lt;img&gt;&lt;p&gt;ಕಂಪನಿಗಳು ಕೃತಕ ಬುದ್ಧಿಮತ್ತೆಯಲ್ಲಿ ಬೃಹತ್ ಹೂಡಿಕೆ ಮಾಡುತ್ತಿವೆ. ಇದರಿಂದ ಹೆಚ್ಚು ಲಾಭ ಬರುತ್ತಿದೆ, ಆದರೆ ದಶಕಗಳಿಂದ ಕೆಲಸ ಮಾಡುತ್ತಿದ್ದವರು ಮನೆಗೆ ಹೋಗುತ್ತಿದ್ದಾರೆ. ಒರಾಕಲ್&zwnj;ನಲ್ಲಿ 33 ವರ್ಷ ಕೆಲಸ ಮಾಡಿದ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.&amp;nbsp;&lt;/p&gt;&lt;img&gt;&lt;p&gt;ಭಾರತದಲ್ಲಿ ಆಕ್ಸಿಸ್ ಬ್ಯಾಂಕ್&zwnj; ಸಹ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು, ತನ್ನ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 2026ರಲ್ಲಿ 3,100ರಷ್ಟು ಉದ್ಯೋಗಿಗಳ ಸಂಖ್ಯೆ ಕುಸಿದಿದೆ.&lt;/p&gt;&lt;img&gt;&lt;p&gt;ಈಗ ಬ್ಯಾಂಕ್&zwnj;ನಲ್ಲಿ ಸಿಬ್ಬಂದಿ ಸಂಖ್ಯೆ ಇಳಿಕೆಯಾಗಿದ್ದರೂ ಬ್ಯಾಂಕ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇದೇ ಅವಧಿಯಲ್ಲಿ ಸುಮಾರು 400 ಹೊಸ ಶಾಖೆಗಳನ್ನು ತೆರೆಯಲಾಗಿದ್ದು, ₹7,071 ಕೋಟಿಗಳಷ್ಟು ಬೃಹತ್ ಲಾಭ ಮಾಡಿದೆ&lt;/p&gt;]]></content:encoded>
            <category>private-jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h"/>
        </item>
        <item>
            <title><![CDATA[ಕಾಗ್ನಿಜೆಂಟ್‌ ಟೆಕ್ನೋವರ್ಸ್: ಎಐ ಭವಿಷ್ಯ ರೂಪಿಸುವ ಸ್ಪರ್ಧೆ, 400ಕ್ಕೂ ಹೆಚ್ಚು ಕಾಲೇಜುಗಳ 20000 ವಿದ್ಯಾರ್ಥಿಗಳು ಭಾಗಿ]]></title>
            <link>https://kannada.asianetnews.com/education/cognizant-launches-technovverse-hackathon-2026-to-drive-ai-innovation-among-student-gdp/articleshow-bpdr3uq</link>
            <guid isPermaLink="true">https://kannada.asianetnews.com/education/cognizant-launches-technovverse-hackathon-2026-to-drive-ai-innovation-among-student-gdp/articleshow-bpdr3uq</guid>
            <pubDate>Wed, 15 Apr 2026 11:42:25 +0530</pubDate>
            <description><![CDATA[ಪ್ರಮುಖ ಐಟಿ ಸಂಸ್ಥೆ 'ಕಾಗ್ನಿಜೆಂಟ್&zwnj;' ತನ್ನ 'ಟೆಕ್ನೋವರ್ಸ್ ಹ್ಯಾಕಥಾನ್ 2026'ಕ್ಕೆ ಚಾಲನೆ ನೀಡಿದೆ. ನೈಜ ಜಗತ್ತಿನ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲು ಭಾರತದಾದ್ಯಂತದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೊಂದು ರಾಷ್ಟ್ರೀಯ ವೇದಿಕೆಯಾಗಿದೆ. ಈ ಸ್ಪರ್ಧೆಯು ಶೇ. 50ರಷ್ಟು ಮಹಿಳಾ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kabb5d09prsq0q91tg21r8bw,imgname-cognizant-prohance-1763464885255.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು : &lt;/strong&gt;ನೈಜ ಜಗತ್ತಿನ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು, ಪ್ರಮುಖ ಐಟಿ ಸಂಸ್ಥೆ 'ಕಾಗ್ನಿಜೆಂಟ್&zwnj;' ತನ್ನ ಪ್ರತಿಷ್ಠಿತ 'ಟೆಕ್ನೋವರ್ಸ್ ಹ್ಯಾಕಥಾನ್ 2026'ಗೆ ಚಾಲನೆ ನೀಡಿದೆ.&lt;/p&gt;&lt;p&gt;ಈ ಹಿಂದೆ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗಿದ್ದ ಈ ಸ್ಪರ್ಧೆಯು, ತನ್ನ ಮೂರನೇ ಆವೃತ್ತಿಯಲ್ಲಿ ರಾಷ್ಟ್ರೀಯ ಮಟ್ಟಕ್ಕೇರಿದೆ. ಭಾರತದಾದ್ಯಂತ 400ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿಂದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 20,000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಹ್ಯಾಕಥಾನ್&zwnj;ನಲ್ಲಿ ಪಾಲ್ಗೊಂಡು ತಮ್ಮ ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ.&lt;/p&gt;&lt;h2&gt;ನೈಜ ಜಗತ್ತಿನ ಸಮಸ್ಯೆಗಳಿಗೆ ಎಐ ಪರಿಹಾರ&lt;/h2&gt;&lt;p&gt;ಈ ಹ್ಯಾಕಥಾನ್ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಜ್ಞಾನವನ್ನು ನೈಜ ಜಗತ್ತಿನ ಅನ್ವಯಿಕಗಳಿಗೆ ಅಪ್ಲಿಕೇಷನ್&zwnj;ಗಳಿಗೆ ಬಳಸುವ ಅಪೂರ್ವ ಅವಕಾಶವನ್ನು ನೀಡುತ್ತದೆ. ಸ್ಪರ್ಧಿಗಳು ಕಾಗ್ನಿಜೆಂಟ್&zwnj;&zwnj;ನ ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸಿ, ಉದ್ಯಮಗಳು ಹೊಸತನವನ್ನು ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುದನ್ನು ಕಲಿಯಲಿದ್ದಾರೆ.&lt;/p&gt;&lt;p&gt;ಬ್ಯಾಂಕಿಂಗ್, ವಿಮೆ, ಆರೋಗ್ಯ, ಜೀವ ವಿಜ್ಞಾನ, ಚಿಲ್ಲರೆ ವ್ಯಾಪಾರ (ರೀಟೇಲ್), ಉತ್ಪಾದನೆ, ಸಂವಹನ, ಮಾಧ್ಯಮ ಮತ್ತು ತಂತ್ರಜ್ಞಾನ ಹಾಗೂ ಇಂಧನ ಕ್ಷೇತ್ರಗಳ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ ಬಳಸಿ ಪರಿಹಾರ ರೂಪಿಸುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ.&lt;/p&gt;&lt;p&gt;ಕಾಗ್ನಿಜೆಂಟ್&zwnj; ಇಂಡಿಯಾದ ಗ್ಲೋಬಲ್ ಆಪರೇಷನ್ಸ್ ಅಧ್ಯಕ್ಷ ಹಾಗೂ ಸಿಎಂಡಿ ರಾಜೇಶ್ ವಾರಿಯರ್ ಈ ಕುರಿತು ಮಾತನಾಡಿ, &quot;ಐಟಿ ಉದ್ಯಮವು ಪ್ರಸ್ತುತ ಮಹತ್ವದ ಘಟ್ಟದಲ್ಲಿದೆ. ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಭವಿಷ್ಯದ ತಂತ್ರಜ್ಞಾನದ ಬದಲಾವಣೆಗಳನ್ನು ಮುನ್ನಡೆಸುವ ಮುಂದಿನ ಪೀಳಿಗೆಯ ಪ್ರತಿಭೆಗಳನ್ನು ರೂಪಿಸಲು ಕಾಗ್ನಿಜೆಂಟ್&zwnj; ಬದ್ಧವಾಗಿದೆ. ವಿದ್ಯಾರ್ಥಿಗಳು ನೈಜ ಉದ್ಯಮದ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದ ತಂತ್ರಜ್ಞಾನ ನಾಯಕರಾಗಿ ಬೆಳೆಯಲು ಟೆಕ್ನೋವರ್ಸ್ ಹ್ಯಾಕಥಾನ್ 2026 ಅತ್ಯುತ್ತಮ ವೇದಿಕೆಯಾಗಿದೆ&quot; ಎಂದು ತಿಳಿಸಿದರು.&lt;/p&gt;&lt;p&gt;ತನ್ನ ಸೇರ್ಪಡೆ ಮತ್ತು ವೈವಿಧ್ಯತಾ ನೀತಿಯ ಭಾಗವಾಗಿ, ಕಾಗ್ನಿಜೆಂಟ್&zwnj; ಈ ಹ್ಯಾಕಥಾನ್&zwnj;ನಲ್ಲಿ ಶೇ. 50ರಷ್ಟು ಮಹಿಳಾ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಿದೆ. ಪ್ರತಿ ಕಾಲೇಜಿನಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸಬಹುದು. ಆದರೆ, ನಾಲ್ಕು ಸದಸ್ಯರ ಪ್ರತಿಯೊಂದು ತಂಡದಲ್ಲಿ ಕನಿಷ್ಠ ಇಬ್ಬರು ಮಹಿಳಾ ವಿದ್ಯಾರ್ಥಿಗಳು ಇರುವುದು ಕಡ್ಡಾಯವಾಗಿದೆ.&lt;/p&gt;&lt;h2&gt;ಮೇ ತಿಂಗಳಿನಲ್ಲಿ ಫಿನಾಲೆ&lt;/h2&gt;&lt;p&gt;ಈ ಬೃಹತ್ ಹ್ಯಾಕಥಾನ್ ಪ್ರಕ್ರಿಯೆಗಳು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಪುಣೆಯಲ್ಲಿರುವ ಕಾಗ್ನಿಜೆಂಟ್&zwnj; ಕ್ಯಾಂಪಸ್&zwnj;ನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಅಗ್ರ ಮೂರು ತಂಡಗಳನ್ನು ವಿಜೇತರೆಂದು ಘೋಷಿಸಿ ಸನ್ಮಾನಿಸಲಾಗುತ್ತದೆ.&lt;/p&gt;&lt;h2&gt;2030ರೊಳಗೆ 20 ಲಕ್ಷ ಜನರಿಗೆ ಕೌಶಲ್ಯ ತರಬೇತಿ&lt;/h2&gt;&lt;p&gt;ಜನರೇಟಿವ್ ಎಐ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಜನರಿಗೆ ಕೌಶಲ್ಯ ಒದಗಿಸುವ ಉದ್ದೇಶದಿಂದ ಕಾಗ್ನಿಜೆಂಟ್&zwnj; 2023 ರಲ್ಲಿ 'ಸಿನಾಪ್ಸ್' ಎಂಬ ಉಪಕ್ರಮವನ್ನು ಆರಂಭಿಸಿತ್ತು. ವಿಶ್ವಾದ್ಯಂತ 10 ಲಕ್ಷ ಜನರಿಗೆ ತರಬೇತಿ ನೀಡುವ ಗುರಿಯನ್ನು 2026ರ ಗುಡುವಿಗೂ ಮುನ್ನವೇ ಸಾಧಿಸಿರುವ ಸಂಸ್ಥೆ, ಇದೀಗ 2030ರ ಅಂತ್ಯದ ವೇಳೆಗೆ ಒಟ್ಟು 20 ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡುವ ಹೊಸ ಗುರಿಯನ್ನು ಹಾಕಿಕೊಂಡಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/education/cognizant-launches-technovverse-hackathon-2026-to-drive-ai-innovation-among-student-gdp/articleshow-bpdr3uq"/>
        </item>
        <item>
            <title><![CDATA[ಕೆಲಸ ಹೋದ್ರೂ ಕೆಡದ ನೆಮ್ಮದಿ: ಬೆಂಗಳೂರಿನ ಒರಾಕಲ್ ಟೆಕ್ಕಿಯ 'ಓಲ್ಡ್ ಸ್ಕೂಲ್' ಸೇವಿಂಗ್ಸ್ ಪ್ಲ್ಯಾನ್ ಈಗ ವೈರಲ್!]]></title>
            <link>https://kannada.asianetnews.com/business/oracle-techie-layoff-savings-plan-viral-financial-planning-tips-kannada-san/articleshow-edvpr5x</link>
            <guid isPermaLink="true">https://kannada.asianetnews.com/business/oracle-techie-layoff-savings-plan-viral-financial-planning-tips-kannada-san/articleshow-edvpr5x</guid>
            <pubDate>Mon, 06 Apr 2026 16:29:22 +0530</pubDate>
            <description><![CDATA[&lt;p&gt;ಬೆಂಗಳೂರಿನ ಒರಾಕಲ್ ಕಂಪನಿಯಿಂದ ಲೇ-ಆಫ್ ಆದ 14 ವರ್ಷಗಳ ಅನುಭವಿ ಉದ್ಯೋಗಿಯೊಬ್ಬರು, ಆತಂಕಪಡದೆ ತಮ್ಮ ಊರಿಗೆ ಮರಳಿದ್ದಾರೆ. ತಮ್ಮ ಉತ್ತಮ ಆರ್ಥಿಕ ಯೋಜನೆಯಿಂದಾಗಿ, ಅಂಚೆ ಕಚೇರಿ ಮತ್ತು ಬ್ಯಾಂಕ್ ಎಫ್&zwnj;ಡಿಗಳಿಂದ ತಿಂಗಳಿಗೆ ₹43,000 ನಿಷ್ಕ್ರಿಯ ಆದಾಯ ಗಳಿಸುತ್ತಿದ್ದು, ಸಾಲಮುಕ್ತರಾಗಿ ಹೊಸ ಜೀವನ ಆರಂಭಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn3fvf377pqxhyqp9vbf159s,imgname-oracle-layoffs-30000-employees-india-impact-morning-email-job-cuts-ai-restructuring-global-4-1775012527207.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭುವನೇಶ್ವರ (ಏ.6):&lt;/strong&gt; ಐಟಿ ಕ್ಷೇತ್ರದಲ್ಲಿ ಕೆಲಸ ಕಳೆದುಕೊಳ್ಳುವುದು ಎಂದರೆ ಬೆಟ್ಟವೇ ಕುಸಿದು ಬಿದ್ದಂತಾಗುವ ಇಂದಿನ ಕಾಲದಲ್ಲಿ, ಬೆಂಗಳೂರಿನಲ್ಲಿದ್ದ ಒರಾಕಲ್ ಉದ್ಯೋಗಿಯೊಬ್ಬರು ಕೆಲಸ ಹೋದ ತಕ್ಷಣವೇ ತೋರಿದ ಸಂಯಮ ಮತ್ತು ಅವರ ಆರ್ಥಿಕ ಯೋಜನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. 14 ವರ್ಷಗಳ ಅನುಭವವಿದ್ದರೂ ಲೇ-ಆಫ್&zwnj;ಗೆ ಬಲಿಯಾದ ಈ ವ್ಯಕ್ತಿ, ಯಾವುದೇ ಆತಂಕವಿಲ್ಲದೆ ತಮ್ಮ ತವರು ಮನೆ ಒಡಿಶಾದ ಭುವನೇಶ್ವರಕ್ಕೆ ಮರಳಿದ್ದಾರೆ. ಇವರ ಈ ಸ್ಫೂರ್ತಿದಾಯಕ ಕಥೆಯನ್ನು ಅವರ ಗೆಳೆಯ ನಾಯಕ್ ಸತ್ಯ ಎಂಬುವವರು 'X' (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಸತ್ಯ ಅವರ ಪ್ರಕಾರ, &quot;ಯಾವುದೇ ಪ್ಯಾನಿಕ್ ಇಲ್ಲ, ಒತ್ತಡವಿಲ್ಲ. ಅವರು ನೇರವಾಗಿ ತಮ್ಮ ಅವರ ಊರು ಭುವನೇಶ್ವರಕ್ಕೆ ಮರಳಿದರು.&quot; ಇಂತಹ ಶಾಂತ ನಿರ್ಧಾರಕ್ಕೆ ಕಾರಣವಾಗಿದ್ದು ವರ್ಷಗಳಿಂದ ಅವರು ಮಾಡುತ್ತಾ ಬಂದಿದ್ದ ಸಾಂಪ್ರದಾಯಿಕ ಉಳಿತಾಯ ಕ್ರಮ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಹೇಗಿತ್ತು ವ್ಯಕ್ತಿಯ ಹೂಡಿಕೆ?&lt;/strong&gt;&lt;/h2&gt;&lt;p&gt;ಅಂಚೆ ಕಚೇರಿಯಲ್ಲಿ ಅನೇಕ ಪೋಸ್ಟಲ್ ಫಿಕ್ಸೆಡ್ ಡೆಪಾಸಿಟ್ (FD) ಗಳಲ್ಲಿ ಹೂಡಿಕೆ ಮಾಡಿದ್ದರು. ಪೋಷಕರೊಂದಿಗೆ ಜಂಟಿ ಖಾತೆಯಲ್ಲಿ 15 ಲಕ್ಷ ರೂ. ಮತ್ತು ಪತ್ನಿಯೊಂದಿಗೆ 15 ಲಕ್ಷ ರೂ.ಗಳ ಎರಡು ಜಂಟಿ ಖಾತೆಗಳನ್ನು ಹೊಂದಿದ್ದರು. ಇದರ ಜೊತೆಗೆ ಮಗುವಿನ ಹೆಸರಿನಲ್ಲಿಯೂ ಠೇವಣಿ ಇರಿಸಿದ್ದರು. ಈ ಎಲ್ಲಾ ಅಂಚೆ ಉಳಿತಾಯಗಳಿಂದ ಅವರಿಗೆ ಮಾಸಿಕ ಸುಮಾರು 28,000 ರೂಪಾಯಿ ಬಡ್ಡಿ ಬರುತ್ತಿದೆ. ಭಾರತೀಯ ಬ್ಯಾಂಕ್&zwnj;ಗಳಲ್ಲಿ ಸುಮಾರು 30 ಲಕ್ಷ ರೂ.ಗಳ ಫಿಕ್ಸೆಡ್ ಡೆಪಾಸಿಟ್ ಹೊಂದಿದ್ದು, ಅದರಿಂದ ತಿಂಗಳಿಗೆ 15,000 ರೂಪಾಯಿ ಆದಾಯ ಬರುತ್ತಿದೆ.&lt;/p&gt;&lt;p&gt;ಅಂದರೆ, ಕೆಲಸವಿಲ್ಲದಿದ್ದರೂ ಪ್ರತಿ ತಿಂಗಳು ಸುಮಾರು 43,000 ರೂಪಾಯಿ ನಿರಂತರ 'ಪ್ಯಾಸಿವ್ ಇನ್ಕಮ್' (Passive Income) ಬರುವಂತೆ ಅವರು ಮೊದಲೇ ಯೋಜನೆ ರೂಪಿಸಿದ್ದರು.&lt;/p&gt;&lt;h2&gt;&lt;strong&gt;ಈಗಿನ ಜೀವನ ಶೈಲಿ&lt;/strong&gt;&lt;/h2&gt;&lt;p&gt;ಭುವನೇಶ್ವರಕ್ಕೆ ಮರಳಿದ ಅವರು ಈಗ ತಮ್ಮ ಪೋಷಕರ ಜೊತೆ ವಾಸಿಸುತ್ತಿದ್ದಾರೆ. ಯಾವುದೇ ಇಎಂಐ (EMI) ಅಥವಾ ಸಾಲದ ಹೊರೆ ಇಲ್ಲದ ಕಾರಣ, ಅವರು ಈಗ ತಮ್ಮ ಬಿಡುವಿನ ವೇಳೆಯಲ್ಲಿ 'ಉಬರ್' (Uber) ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕುಟುಂಬದ ಬೆಂಬಲದೊಂದಿಗೆ ಸಣ್ಣ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆಯೂ ಅವರು ಈಗ ಯೋಚಿಸುತ್ತಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಬರೆದಿರುವ ಸತ್ಯ ಅವರು, &quot;ಇದು ಸಂಪೂರ್ಣ 'ಓಲ್ಡ್ ಸ್ಕೂಲ್' ಸ್ಟೈಲ್. ಅವರು ಯಾವುದೇ ಹೊಸ ಟ್ರೆಂಡ್&zwnj;ಗಳ ಹಿಂದೆ ಬೀಳದೆ ಸಾಂಪ್ರದಾಯಿಕ ಉಳಿತಾಯವನ್ನು ನಂಬಿದ್ದರು. ಹಾಗಾಗಿ ನೀವು ಮುಂಚಿತವಾಗಿಯೇ ಯೋಜನೆ ರೂಪಿಸಿ, ಆಗ ಸಂಕಷ್ಟದ ಸಮಯದಲ್ಲಿ ನೀವು ಎಂದಿಗೂ ತಡಕಾಡಬೇಕಾಗಿಲ್ಲ,&quot; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;One of my close friends was fired from Oracle Bangalore.No panic, no stress, and no crying on social media.&amp;nbsp;He straight away came back to his hometown Bhubaneswar&amp;nbsp;He had postal fixed deposits in two joint accounts ₹15 lakh each. One with his parents, and the other in his&hellip;&lt;/p&gt;&lt;p&gt;&mdash; Nayak Satya (@NayakSatya_SG) April 5, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/business/oracle-techie-layoff-savings-plan-viral-financial-planning-tips-kannada-san/articleshow-edvpr5x"/>
        </item>
        <item>
            <title><![CDATA[Cognizant Q1 revenue rises: ಲೇ-ಆಫ್‌ಗಳ ಮಧ್ಯೆ ಕಾಗ್ನಿಜೆಂಟ್‌ನ ಹೊಸ ಅಧ್ಯಾಯ! ಒಂದೇ ವರ್ಷದಲ್ಲಿ 21,000 ನೇಮಕಾತಿ]]></title>
            <link>https://kannada.asianetnews.com/gallery/business/cognizant-q1-results-big-boost-for-it-sector-company-adds-21000-jobs-in-a-year-revenue-sees-strong-growth-gdp-gco15v8</link>
            <guid isPermaLink="true">https://kannada.asianetnews.com/gallery/business/cognizant-q1-results-big-boost-for-it-sector-company-adds-21000-jobs-in-a-year-revenue-sees-strong-growth-gdp-gco15v8</guid>
            <pubDate>Wed, 29 Apr 2026 18:29:03 +0530</pubDate>
            <description><![CDATA[&lt;p&gt;ಟೆಕ್ ದೈತ್ಯ 'ಕಾಗ್ನಿಜೆಂಟ್' ಹೊಸ ನೇಮಕಾತಿಗಳನ್ನು ಮಾಡುವ ಮೂಲಕ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷಕ್ಕೆ ಹೆಚ್ಚಿಸಿದೆ. ಕಂಪನಿಯು ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸಿದ್ದು, ಎಐ ಆಧಾರಿತ ಯೋಜನೆಗಳು ಮತ್ತು ಬೃಹತ್ ಒಪ್ಪಂದಗಳ ಮೂಲಕ ಐಟಿ ವಲಯಕ್ಕೆ ಹೊಸ ಭರವಸೆ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j75r6525x2zg1g1h76w3h6zy,imgname-cognizant.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೆಕ್ ದೈತ್ಯ 'ಕಾಗ್ನಿಜೆಂಟ್' ಹೊಸ ನೇಮಕಾತಿಗಳನ್ನು ಮಾಡುವ ಮೂಲಕ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷಕ್ಕೆ ಹೆಚ್ಚಿಸಿದೆ. ಕಂಪನಿಯು ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸಿದ್ದು, ಎಐ ಆಧಾರಿತ ಯೋಜನೆಗಳು ಮತ್ತು ಬೃಹತ್ ಒಪ್ಪಂದಗಳ ಮೂಲಕ ಐಟಿ ವಲಯಕ್ಕೆ ಹೊಸ ಭರವಸೆ ಮೂಡಿಸಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಸಾಲು ಸಾಲು ಲೇ-ಆಫ್&zwnj;ಗಳಿಂದಾಗಿ ಕಂಗೆಟ್ಟಿದ್ದ ಭಾರತದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ಜಾಗತಿಕ ಟೆಕ್ ದೈತ್ಯ 'ಕಾಗ್ನಿಜೆಂಟ್' ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಕಾಗ್ನಿಜೆಂಟ್ ಮಾತ್ರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೂಲಕ ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷದ ಗಡಿ ದಾಟಿಸಿದೆ.&lt;/p&gt;&lt;img&gt;&lt;p&gt;2026ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ (ಕ್ಯೂ1) ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿರುವ ಅಮೆರಿಕಾ ಮೂಲದ ಕಾಗ್ನಿಜೆಂಟ್, ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಕ್ಯೂ1 ನಲ್ಲಿ ಕಂಪನಿಯ ಆದಾಯವು ಶೇ. 5.8 ರಷ್ಟು ಏರಿಕೆ ಕಂಡು 5.4 ಬಿಲಿಯನ್ ಡಾಲರ್ (ಸುಮಾರು 51,200 ಕೋಟಿ ರೂ.) ತಲುಪಿದೆ. ಸ್ಥಿರ ಕರೆನ್ಸಿ ಲೆಕ್ಕಾಚಾರದಲ್ಲಿ ಇದು ಶೇ. 3.9ರಷ್ಟು ಬೆಳವಣಿಗೆಯಾಗಿದೆ.&lt;/p&gt;&lt;p&gt;ಆದರೆ, ಕಂಪನಿಯ ಕಾರ್ಯಾಚರಣೆ ಮಾರ್ಜಿನ್ ಈ ತ್ರೈಮಾಸಿಕದಲ್ಲಿ ಶೇ. 15.6ರಷ್ಟಿದ್ದು, ಹೊಂದಾಣಿಕೆಯ ಆಧಾರದ ಮೇಲೆ ಸ್ಥಿರವಾಗಿದ್ದರೂ, ವಾರ್ಷಿಕ ಲೆಕ್ಕಾಚಾರದಲ್ಲಿ 110 ಮೂಲಾಂಶಗಳಷ್ಟು ಕುಸಿತ ಕಂಡಿದೆ.&lt;/p&gt;&lt;img&gt;&lt;p&gt;ಫೈನಾನ್ಶಿಯಲ್&zwnj; ಸರ್ವಿಸ್ ವಲಯ ಶೇ. 12.4ರಷ್ಟು ವೃದ್ಧಿ ಸಾಧಿಸಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ್ದರೆ, ಕಮ್ಯುನಿಕೇಶನ್ ಮತ್ತು ಮೀಡಿಯಾ ವಲಯ ಶೇ. 8.1ರಷ್ಟು ಹಾಗೂ ಪ್ರಾಡಕ್ಟ್ಸ್ ವಲಯ ಶೇ. 3.4ರಷ್ಟು ಬೆಳವಣಿಗೆ ದಾಖಲಿಸಿವೆ. ಭೌಗೋಳಿಕವಾಗಿ ನೋಡುವುದಾದರೆ, ಉತ್ತರ ಅಮೆರಿಕಾದಲ್ಲಿ ಶೇ. 5.1ರಷ್ಟು ಹಾಗೂ ಯುರೋಪ್ ಮಾರುಕಟ್ಟೆ ಶೇ. 3.5ರಷ್ಟು ಬೆಳವಣಿಗೆ ಕಂಡು ಬಂದಿದೆ.&lt;/p&gt;&lt;p&gt;ಎರಡನೇ ತ್ರೈಮಾಸಿಕದಲ್ಲಿ (ಕ್ಯೂ2) ಆದಾಯ ಶೇ. 3.8 ರಿಂದ ಶೇ. 5.3ರಷ್ಟು ವೃದ್ಧಿಯಾಗುವ ನಿರೀಕ್ಷೆಯನ್ನು ಕಾಗ್ನಿಜೆಂಟ್ ವ್ಯಕ್ತಪಡಿಸಿದ್ದು, 2026ರ ಪೂರ್ಣ ಆರ್ಥಿಕ ವರ್ಷದಲ್ಲಿ ಆದಾಯದ ಬೆಳವಣಿಗೆ ಶೇ. 4.8 ರಿಂದ ಶೇ. 7.3ರಷ್ಟಿರಲಿದೆ (ಸ್ಥಿರ ಕರೆನ್ಸಿಯಲ್ಲಿ ಶೇ. 4 ರಿಂದ ಶೇ. 6.5) ಎಂದು ಅಂದಾಜಿಸಿದೆ.&lt;/p&gt;&lt;img&gt;&lt;p&gt;ಟಿ&zwnj;ಸಿ&zwnj;ಎಸ್, ಇನ್ಫೋಸಿಸ್, ವಿಪ್ರೋದಂತಹ ಭಾರತೀಯ ಐಟಿ ದೈತ್ಯ ಕಂಪನಿಗಳು ಉದ್ಯೋಗ ನೇಮಕಾತಿಯನ್ನು ತಗ್ಗಿಸುತ್ತಿರುವ ಹೊತ್ತಿನಲ್ಲೇ, ಕಾಗ್ನಿಜೆಂಟ್ ಹೊಸ ನೇಮಕಾತಿಯಲ್ಲಿ ಮುಂಚೂಣಿಯಲ್ಲಿದೆ. ಕ್ಯೂ1 ಅಂತ್ಯದ ವೇಳೆಗೆ ಅಂದರೆ ಮಾರ್ಚ್ 31, 2026ರ ಕೊನೆಗೆ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ ಬರೋಬ್ಬರಿ 3,57,600ಕ್ಕೆ ತಲುಪಿದೆ. ಕಳೆದ ಒಂದೇ ತ್ರೈಮಾಸಿಕದಲ್ಲಿ 6,000 ಹೊಸ ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕೆ (2025ರ ಕ್ಯೂ1) ಹೋಲಿಸಿದರೆ ಉದ್ಯೋಗಿಗಳ ಸಂಖ್ಯೆಯಲ್ಲಿ 21,300ರಷ್ಟು ಭಾರಿ ಏರಿಕೆ ಕಂಡಿದೆ. ಕಾಗ್ನಿಜೆಂಟ್&zwnj;ನ ಹೆಚ್ಚಿನ ಉದ್ಯೋಗಿಗಳು ಭಾರತದಲ್ಲೇ ಇರುವುದರಿಂದ, ಇದು ದೇಶದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ರಿಲೀಫ್ ನೀಡಿದೆ. ಇನ್ನು ಕಂಪನಿ ಬಿಟ್ಟು ಹೋಗುವ ಉದ್ಯೋಗಿಗಳ ಪ್ರಮಾಣ (ಅಟ್ರಿಷನ್&zwnj; ದರ) ಶೇ. 12.3ರಷ್ಟಿದ್ದು ಸ್ಥಿರವಾಗಿದೆ.&lt;/p&gt;&lt;img&gt;&lt;p&gt;ಕ್ಯೂ1 ನಲ್ಲಿ ಕಾಗ್ನಿಜೆಂಟ್&zwnj;ನ ಬುಕಿಂಗ್&zwnj;ಗಳಲ್ಲಿ ಶೇ. 21ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಕಳೆದ 12 ತಿಂಗಳ ಒಟ್ಟು ಬುಕಿಂಗ್ ಮೌಲ್ಯ 29.6 ಬಿಲಿಯನ್ ಡಾಲರ್ ತಲುಪಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು 7 ಬೃಹತ್ ಡೀಲ್&zwnj;ಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಒಂದು 500 ಮಿಲಿಯನ್ ಡಾಲರ್&zwnj;ಗೂ ಅಧಿಕ ಮೌಲ್ಯದ ಮೆಗಾ ಡೀಲ್ ಕೂಡ ಸೇರಿದೆ.&lt;/p&gt;&lt;p&gt;&quot;ನಮ್ಮ ಎಐ ಆಧಾರಿತ ಕಾರ್ಯತಂತ್ರವು ಉತ್ತಮ ಫಲಿತಾಂಶ ನೀಡುತ್ತಿದೆ. ಪ್ರಸ್ತುತ 5,000ಕ್ಕೂ ಹೆಚ್ಚು ಎಐ ಪ್ರಾಜೆಕ್ಟ್&zwnj;ಗಳು ನಡೆಯುತ್ತಿದ್ದು, ಶೇ. 40ರಷ್ಟು ಕೋಡಿಂಗ್ ಕೆಲಸಗಳನ್ನು ಎಐ ನೆರವಿನಿಂದಲೇ ಮಾಡಲಾಗುತ್ತಿದೆ&quot; ಎಂದೂ ಕಂಪನಿಯ ಸಿಇಒ ರವಿ ಕುಮಾರ್ ಎಸ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ತನ್ನ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೆಂಟರ್ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕಾಗ್ನಿಜೆಂಟ್, ಐಟಿ ಸೇವಾ ಪೂರೈಕೆದಾರ ಕಂಪನಿಯಾದ 'ಆಸ್ಟ್ರೇಯಾ'ವನ್ನು ಸುಮಾರು 600 ಮಿಲಿಯನ್ ಡಾಲರ್ (5,700 ಕೋಟಿ ರೂ.) ಮೌಲ್ಯದಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಪ್ರಕ್ರಿಯೆ 2026ರ ಎರಡನೇ ತ್ರೈಮಾಸಿಕದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಎಐ ತಂತ್ರಜ್ಞಾನದಿಂದ ಉದ್ಯೋಗ ಕಡಿತದ ಭೀತಿ ಎದುರಾಗಿರುವ ಈ ಸಮಯದಲ್ಲಿ, ಕಾಗ್ನಿಜೆಂಟ್&zwnj;ನ ಈ ಪಾಸಿಟಿವ್ ಬೆಳವಣಿಗೆ ಭಾರತೀಯ ಐಟಿ ಕ್ಷೇತ್ರಕ್ಕೆ ಹೊಸ ಆಶಾಕಿರಣವಾಗಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/cognizant-q1-results-big-boost-for-it-sector-company-adds-21000-jobs-in-a-year-revenue-sees-strong-growth-gdp-gco15v8"/>
        </item>
        <item>
            <title><![CDATA[ಸಾಫ್ಟ್‌ವೇರ್ ವಿನ್ಯಾಸ, ಅಭಿವೃದ್ಧಿ ಕಾರ್ಯ ಓಪನ್ಎಐ ಜೊತೆ ಕೈ ಜೋಡಿಸಿದ ಕಾಗ್ನಿಜೆಂಟ್, ಎಐ ಜಗತ್ತಿನ ಹೊಸ ಅಧ್ಯಾಯ ಆರಂಭ]]></title>
            <link>https://kannada.asianetnews.com/business/cognizant-partners-with-openai-to-deploy-codex-for-enterprise-ai-and-software-engineering/articleshow-i3o7m6a</link>
            <guid isPermaLink="true">https://kannada.asianetnews.com/business/cognizant-partners-with-openai-to-deploy-codex-for-enterprise-ai-and-software-engineering/articleshow-i3o7m6a</guid>
            <pubDate>Wed, 22 Apr 2026 11:53:55 +0530</pubDate>
            <description><![CDATA[ಪ್ರಖ್ಯಾತ ಐಟಿ ಸಂಸ್ಥೆ ಕಾಗ್ನಿಜೆಂಟ್, ಎಂಟರ್&zwnj;ಪ್ರೈಸ್ ಗ್ರಾಹಕರಿಗೆ ಎಐ ಲಾಭ ಒದಗಿಸಲು ಓಪನ್ಎಐ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ಓಪನ್ಎಐನ 'ಕೋಡೆಕ್ಸ್' ತಂತ್ರಜ್ಞಾನವನ್ನು ತನ್ನ ಸಾಫ್ಟ್&zwnj;ವೇರ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಳವಡಿಸಿಕೊಳ್ಳಲಿದೆ. ಇದು ಮಾನವ ಮತ್ತು ಎಐ ಸಾಮರ್ಥ್ಯಗಳನ್ನು ಒಗ್ಗೂಡಿಸಿ, ಸಾಫ್ಟ್&zwnj;ವೇರ್ ವಿತರಣೆಯನ್ನು ವೇಗಗೊಳಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kabb5d09prsq0q91tg21r8bw,imgname-cognizant-prohance-1763464885255.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪ್ರಖ್ಯಾತ ಐಟಿ ಸೇವಾ ಸಂಸ್ಥೆ ಕಾಗ್ನಿಜೆಂಟ್ ಜಾಗತಿಕ ಮಟ್ಟದಲ್ಲಿ ಎಂಟರ್&zwnj;ಪ್ರೈಸ್ ಗ್ರಾಹಕರಿಗೆ ಎಐ ತಂತ್ರಜ್ಞಾನದ ಗರಿಷ್ಠ ಲಾಭವನ್ನು ಒದಗಿಸುವ ಉದ್ದೇಶದಿಂದ ಓಪನ್ಎಐ ಜೊತೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ ಓಪನ್ಎಐನ 'ಕೋಡೆಕ್ಸ್' ತಂತ್ರಜ್ಞಾನವನ್ನು ಕಾಗ್ನಿಜೆಂಟ್ ತನ್ನ ಸಾಫ್ಟ್&zwnj;ವೇರ್ ಇಂಜಿನಿಯರಿಂಗ್ ವಿಭಾಗದಾದ್ಯಂತ ಅಳವಡಿಸಿಕೊಳ್ಳಲಿದೆ.&lt;/p&gt;&lt;p&gt;ಸಂಕೀರ್ಣವಾದ ಎಂಟರ್&zwnj;ಪ್ರೈಸ್ ಪರಿಸರದಲ್ಲಿ ಕೋಡೆಕ್ಸ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ನಿಯೋಜಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಗುರುತಿಸಿ ಓಪನ್ಎಐ ಸಂಸ್ಥೆಯು ಕಾಗ್ನಿಜೆಂಟ್ ಅನ್ನು ತನ್ನ 'ಆಯ್ದ ಪಾಲುದಾರರ' ಪಟ್ಟಿಗೆ ಸೇರಿಸಿದೆ. ಎಐ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಕಾಗ್ನಿಜೆಂಟ್ ಹೊಂದಿರುವ ಸುದೀರ್ಘ ಅನುಭವವೇ ಈ ಆಯ್ಕೆಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;ʼಇದು ಮಾನವ ಮತ್ತು ಎಐ ಒಟ್ಟಾಗಿ ಕಾರ್ಯನಿರ್ವಹಿಸುವ ಕಾಲʼ&lt;/h2&gt;&lt;p&gt;ಪಾಲುದಾರಿಕೆ ಕುರಿತು ಮಾತನಾಡಿದ ಕಾಗ್ನಿಜೆಂಟ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ರಾಜೇಶ್ ವಾರಿಯರ್, &quot;ಮುಂದಿನ ದಶಕದ ಅತ್ಯುತ್ತಮ ಇಂಜಿನಿಯರಿಂಗ್ ಸಂಸ್ಥೆಗಳು, ಎಷ್ಟು ಜನ ಇಂಜಿನಿಯರ್&zwnj;ಗಳನ್ನು ಹೊಂದಿವೆ ಎಂಬುದರ ಮೇಲೆ ನಿರ್ಧಾರವಾಗುವುದಿಲ್ಲ. ಬದಲಾಗಿ, ಮಾನವನ ಆಲೋಚನಾ ಶಕ್ತಿ ಮತ್ತು ಎಐ ಸಾಮರ್ಥ್ಯಗಳು ಎಷ್ಟು ಪರಿಣಾಮಕಾರಿಯಾಗಿ ಒಟ್ಟಾಗಿ ಕೆಲಸ ಮಾಡುತ್ತವೆ ಎಂಬುದರ ಮೇಲೆ ನಿರ್ಧಾರವಾಗುತ್ತವೆ. ನಾವು ಕೋಡೆಕ್ಸ್ ಅನ್ನು ನಮ್ಮ ಇಂಜಿನಿಯರ್&zwnj;ಗಳ ದೈನಂದಿನ ಕಾರ್ಯಗಳಲ್ಲಿ ಪಾಲುದಾರನನ್ನಾಗಿ ಮಾಡುತ್ತಿದ್ದೇವೆ. ಇದು ಕೋಡ್ ರಚನೆ, ಟೆಸ್ಟಿಂಗ್, ರಿಫ್ಯಾಕ್ಟರಿಂಗ್ ಮತ್ತು ಡಾಕ್ಯುಮೆಂಟೇಶನ್&zwnj;ನಂತಹ ಕೆಲಸಗಳನ್ನು ನಿಭಾಯಿಸಲಿದೆ. ಓಪನ್ಎಐ ಅತ್ಯಾಧುನಿಕ ಬುದ್ಧಿಮತ್ತೆಯನ್ನು ತಂದರೆ, ಕಾಗ್ನಿಜೆಂಟ್ ಉದ್ಯಮದ ಅನುಭವ ಹಾಗೂ ಸುರಕ್ಷತಾ ಕ್ರಮಗಳನ್ನು ಒದಗಿಸುತ್ತದೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಸಕ್ರಿಯ ಬಳಕೆ&lt;/h2&gt;&lt;p&gt;ಕಾಗ್ನಿಜೆಂಟ್ ಇಂಜಿನಿಯರ್&zwnj;ಗಳು ಈಗಾಗಲೇ ಗ್ರಾಹಕರ ಯೋಜನೆಗಳಲ್ಲಿ ಕೋಡೆಕ್ಸ್ ಅನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಎಐ ಮತ್ತು ಮಷಿನ್ ಲರ್ನಿಂಗ್ ಮಾಡೆಲ್ ಅಭಿವೃದ್ಧಿ, ಕೋಡ್ ರಿಫ್ಯಾಕ್ಟರಿಂಗ್ ಮತ್ತು ದಶಕಗಳಷ್ಟು ಹಳೆಯದಾದ ಸಿಸ್ಟಮ್&zwnj;ಗಳ ನವೀಕರಣ ಕಾರ್ಯಗಳಲ್ಲಿ ಇದನ್ನು ಬಳಸಲಾಗುತ್ತಿದೆ.&lt;/p&gt;&lt;p&gt;ಇದರಿಂದ ಸಾಫ್ಟ್&zwnj;ವೇರ್ ವಿತರಣೆಯ ಸಮಯ ಗಣನೀಯವಾಗಿ ಕಡಿಮೆಯಾಗುತ್ತಿದೆ, ಕೋಡ್&zwnj;ನ ಗುಣಮಟ್ಟ ಹೆಚ್ಚಾಗುತ್ತಿದೆ ಹಾಗೂ ದೊಡ್ಡ ಮಟ್ಟದ ಯೋಜನೆಗಳ ವೆಚ್ಚ ಮತ್ತು ಅಪಾಯಗಳು ತಗ್ಗುತ್ತಿವೆ ಎಂದು ಸಂಸ್ಥೆ ತಿಳಿಸಿದೆ.&lt;/p&gt;&lt;p&gt;ಓಪನ್ಎಐನ ಮುಖ್ಯ ಆದಾಯ ಅಧಿಕಾರಿ (ಸಿಆರ್&zwnj;ಒ) ಡೆನಿಸ್ ಡ್ರೆಸ್ಸರ್ ಈ ಬಗ್ಗೆ ಪ್ರತಿಕ್ರಿಯಿಸಿ, &quot;ಕೋಡೆಕ್ಸ್ ತಂತ್ರಜ್ಞಾನವು ಸಾಫ್ಟ್&zwnj;ವೇರ್ ಅಭಿವೃದ್ಧಿ ಮತ್ತು ವ್ಯವಹಾರ ಪ್ರಕ್ರಿಯೆಗಳನ್ನು ನಿರ್ವಹಿಸಲು ಪ್ರಬಲ ಸಾಧನವಾಗಿ ಹೊರಹೊಮ್ಮುತ್ತಿದೆ. ಕಾಗ್ನಿಜೆಂಟ್&zwnj;ನಂತಹ ಪ್ರಮುಖ ಪಾಲುದಾರರೊಂದಿಗೆ ಸೇರಿ, ಸಂಸ್ಥೆಗಳಿಗೆ ಹಳೆಯ ಕೋಡ್&zwnj;ಗಳ ನವೀಕರಣ, ದೋಷ ಪತ್ತೆ, ಅಪ್ಲಿಕೇಶನ್ ಅಭಿವೃದ್ಧಿ ಮತ್ತು ಕೋಡ್ ವಿಮರ್ಶೆ ಪ್ರಕ್ರಿಯೆಗಳಲ್ಲಿ ಕೋಡೆಕ್ಸ್ ನಿಯೋಜಿಸಲು ನಾವು ನೆರವಾಗಲಿದ್ದೇವೆ,&quot; ಎಂದರು.&lt;/p&gt;&lt;p&gt;ಈ ಪಾಲುದಾರಿಕೆಯು ಕಾಗ್ನಿಜೆಂಟ್&zwnj;ನ 'ಎಐ ಬಿಲ್ಡರ್' ಕಾರ್ಯತಂತ್ರಕ್ಕೆ ಮತ್ತಷ್ಟು ಬಲ ತುಂಬಲಿದೆ. ಕೇವಲ ಎಐ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದಷ್ಟೇ ಅಲ್ಲದೆ, ಅದನ್ನು ವಾಸ್ತವಿಕ ವ್ಯವಹಾರಗಳಿಗೆ ಅನ್ವಯಿಸಿ ಉತ್ತಮ ಫಲಿತಾಂಶ ತರುವುದು ಕಾಗ್ನಿಜೆಂಟ್&zwnj;ನ ಉದ್ದೇಶವಾಗಿದೆ. ಒಟ್ಟಾರೆಯಾಗಿ, ಈ ಎರಡು ದೈತ್ಯ ಸಂಸ್ಥೆಗಳು ಮುಂದಿನ ದಿನಗಳಲ್ಲಿ ವಿವಿಧ ವಲಯದ ಕೈಗಾರಿಕೆಗಳಿಗೆ ಅತ್ಯಾಧುನಿಕ, ಸುರಕ್ಷಿತ ಹಾಗೂ ವೇಗದ ಸಾಫ್ಟ್&zwnj;ವೇರ್ ಸೇವೆಗಳನ್ನು ನೀಡಲು ಮುನ್ನುಡಿ ಬರೆದಿವೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/business/cognizant-partners-with-openai-to-deploy-codex-for-enterprise-ai-and-software-engineering/articleshow-i3o7m6a"/>
        </item>
        <item>
            <title><![CDATA[Baba Vanga Predictions: ಇಂದು ಜನರ ಜೀವನ ನುಂಗುತ್ತಿರೋ ಕಂಪೆನಿಗಳು; ಅಂದೇ ಭವಿಷ್ಯ ನುಡಿದಿದ್ದ ಬಾಬಾ ವಂಗಾ]]></title>
            <link>https://kannada.asianetnews.com/gallery/astrology/baba-vanga-predictions-2026-on-ai-job-layoffs-financial-situation-k55mb9r</link>
            <guid isPermaLink="true">https://kannada.asianetnews.com/gallery/astrology/baba-vanga-predictions-2026-on-ai-job-layoffs-financial-situation-k55mb9r</guid>
            <pubDate>Fri, 10 Apr 2026 19:38:56 +0530</pubDate>
            <description><![CDATA[&lt;p&gt;ಖ್ಯಾತ ಭವಿಷ್ಯಗಾರ್ತಿ ಬಾಬಾ ವಂಗಾ ಅವರು 2026ರಲ್ಲಿ ಚಿನ್ನದ ಬೆಲೆ, ಹಣದ ಮೌಲ್ಯ,ಆರ್ಥಿಕತೆಯಲ್ಲಿ ದೊಡ್ಡ ಹಿನ್ನಡೆಯಾಗಲಿದೆ ಎಂದು ಹೇಳಿದ್ದರು. ಈ ಕುರಿತಾದ ವಿವರ ಇಲ್ಲಿದೆ. ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿದ್ದರೂ, ಇವೆಲ್ಲವೂ ಕೇವಲ ಮಾರ್ಗದರ್ಶನಗಳೇ ಹೊರತು, ಖಚಿತವಾದ ನಿರ್ಧಾರಗಳಲ್ಲ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kc9h622cp5haprrcmt4xnjxk,imgname-baba-vanga-prediction-1765551573068.jpg" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ಭವಿಷ್ಯಗಾರ್ತಿ ಬಾಬಾ ವಂಗಾ ಅವರು 2026ರಲ್ಲಿ ಚಿನ್ನದ ಬೆಲೆ, ಹಣದ ಮೌಲ್ಯ,ಆರ್ಥಿಕತೆಯಲ್ಲಿ ದೊಡ್ಡ ಹಿನ್ನಡೆಯಾಗಲಿದೆ ಎಂದು ಹೇಳಿದ್ದರು. ಈ ಕುರಿತಾದ ವಿವರ ಇಲ್ಲಿದೆ. ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿದ್ದರೂ, ಇವೆಲ್ಲವೂ ಕೇವಲ ಮಾರ್ಗದರ್ಶನಗಳೇ ಹೊರತು, ಖಚಿತವಾದ ನಿರ್ಧಾರಗಳಲ್ಲ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬಲ್ಗೇರಿಯಾ ದೇಶದ ಅಂಧ ಭವಿಷ್ಯಗಾರ್ತಿ ಬಾಬಾ ವಂಗಾ, ಜಗತ್ತಿನಲ್ಲಿ ಮುಂದೆ ನಡೆಯುವ ಘಟನೆಗಳನ್ನು ಮೊದಲೇ ಊಹಿಸಿ ಹೇಳುವುದರಲ್ಲಿ ಹೆಸರುವಾಸಿ. ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. 2026ರಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಆಗುವ ಬದಲಾವಣೆಗಳು, ಚಿನ್ನದ ಬೆಲೆ ಮತ್ತು ಜಗತ್ತು ಎದುರಿಸಲಿರುವ ಬಿಕ್ಕಟ್ಟುಗಳ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ಬಾಬಾ ವಂಗಾ ಅವರ ಭವಿಷ್ಯದ ಪ್ರಕಾರ, 2026ರಲ್ಲಿ ಜಗತ್ತು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದೆ. ಈಗ ಚಲಾವಣೆಯಲ್ಲಿರುವ ಕಾಗದದ ಹಣ ಮತ್ತು ಡಿಜಿಟಲ್ ವಹಿವಾಟುಗಳಲ್ಲಿ ದೊಡ್ಡ ಗೊಂದಲ ಉಂಟಾಗಲಿದೆ. ಬ್ಯಾಂಕಿಂಗ್ ವ್ಯವಸ್ಥೆಗಳ ದೌರ್ಬಲ್ಯದಿಂದಾಗಿ ಜನರು ಹಣದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ಜಾಗತಿಕ ಸಾಲದ ಹೊರೆ ಹೆಚ್ಚಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.&lt;/p&gt;&lt;img&gt;&lt;p&gt;ಆರ್ಥಿಕತೆ ಕುಸಿದಾಗ, ಹೂಡಿಕೆದಾರರು ಲೋಹಗಳತ್ತ ಮುಖ ಮಾಡುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಅವರು ಲೋಹಗಳನ್ನು ಸುರಕ್ಷಿತ ಹೂಡಿಕೆಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಚಿನ್ನ, ಬೆಳ್ಳಿ ಮತ್ತು ತಾಮ್ರದ ಬೆಲೆಗಳು ಹಿಂದೆಂದೂ ಕಾಣದ ಮಟ್ಟಕ್ಕೆ ಏರುತ್ತವೆ. ಬೆಳ್ಳಿ ಮತ್ತು ತಾಮ್ರ ಕೂಡ ಚಿನ್ನದಷ್ಟೇ ಪ್ರಾಮುಖ್ಯತೆ ಪಡೆಯುತ್ತವೆ. ತಾಮ್ರದ ಬೇಡಿಕೆ ಹೆಚ್ಚಾಗುವುದರಿಂದ, ಅದನ್ನು 'ಹೊಸ ಚಿನ್ನ' ಎಂದು ಕರೆಯುವಷ್ಟು ಮೌಲ್ಯ ಬರುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ವಿಶ್ವದ ರಾಷ್ಟ್ರಗಳ ನಡುವಿನ ಯುದ್ಧದ ಉದ್ವಿಗ್ನತೆ ಮತ್ತು ಅಧಿಕಾರಕ್ಕಾಗಿ ನಡೆಯುವ ಪೈಪೋಟಿಗಳು ಜಾಗತಿಕ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುತ್ತವೆ. 2026ರಲ್ಲಿ ಹವಾಮಾನ ಬದಲಾವಣೆ, ಭೂಕಂಪಗಳು, ನೈಸರ್ಗಿಕ ವಿಕೋಪಗಳು ಜಾಗತಿಕ ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿ, ವಸ್ತುಗಳ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸುತ್ತವೆ.&amp;nbsp;&lt;/p&gt;&lt;p&gt;ಕೃತಕ ಬುದ್ಧಿಮತ್ತೆ (AI) ಕಾರಣದಿಂದಾಗಿ ಉದ್ಯೋಗ ನಷ್ಟದ ಅಪಾಯವಿದೆ ಮತ್ತು ಆರ್ಥಿಕ ವ್ಯವಸ್ಥೆಗಳು ತೀವ್ರ ಬದಲಾವಣೆಗಳಿಗೆ ಒಳಗಾಗುತ್ತವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.&lt;/p&gt;&lt;img&gt;&lt;p&gt;ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗುತ್ತಿರುವ ಹಿನ್ನೆಲೆಯಲ್ಲಿ, 2026ರ ಆರಂಭದಿಂದಲೇ ಚಿನ್ನದ ಬೆಲೆ ನಿರಂತರವಾಗಿ ಏರುತ್ತಿರುವುದು ಅವರ ಭವಿಷ್ಯವನ್ನು ನಿಜ ಮಾಡುವಂತಿದೆ.&amp;nbsp;&lt;/p&gt;&lt;p&gt;ಷೇರು ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ಕೇಂದ್ರ ಬ್ಯಾಂಕ್&zwnj;ಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಸಂಗ್ರಹಿಸಲು ಪ್ರಾರಂಭಿಸಿರುವುದು ಕೂಡ ಲೋಹಗಳ ಮೇಲಿನ ಹೂಡಿಕೆಯನ್ನು ಹೆಚ್ಚಿಸಿದೆ.&lt;/p&gt;&lt;img&gt;&lt;p&gt;2026ನೇ ಇಸವಿ ಆರ್ಥಿಕವಾಗಿ ಒಂದು ದೊಡ್ಡ ತಿರುವು ನೀಡಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.&lt;/p&gt;&lt;p&gt;Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಮಾಹಿತಿಯು ಜ್ಯೋತಿಷ್ಯದ ಅಭಿಪ್ರಾಯಗಳು, ಧಾರ್ಮಿಕ ಗ್ರಂಥಗಳು ಮತ್ತು ಪಂಚಾಂಗವನ್ನು ಆಧರಿಸಿದೆ. ಏಷ್ಯಾನೆಟ್ ನ್ಯೂಸ್ ಕನ್ನಡ ಇದನ್ನು ಪರಿಶೀಲಿಸಿಲ್ಲ. ಮಾಹಿತಿಯನ್ನು ಒದಗಿಸುವುದು ಮಾತ್ರ ನಮ್ಮ ಉದ್ದೇಶ. ಇದರ ನಿಖರತೆ, ವಿಶ್ವಾಸಾರ್ಹತೆ ಮತ್ತು ಪರಿಣಾಮಗಳಿಗೆ ಏಷ್ಯಾನೆಟ್ ನ್ಯೂಸ್ ಕನ್ನಡ ಯಾವುದೇ ರೀತಿಯಲ್ಲಿ ಜವಾಬ್ದಾರನಾಗಿರುವುದಿಲ್ಲ&lt;/p&gt;]]></content:encoded>
            <category>private-jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/astrology/baba-vanga-predictions-2026-on-ai-job-layoffs-financial-situation-k55mb9r"/>
        </item>
        <item>
            <title><![CDATA[ಮತ್ತೆ 11 ಸಾವಿರ ನೌಕರರ ಮನೆಗೆ ಕಳುಹಿಸಿದ Dell ಕಂಪೆನಿ: ರಾಜ್ಯವೂ ಸೇರಿ ವಿವಿಧೆಡೆ ಸಾಮೂಹಿಕ ವಜಾ]]></title>
            <link>https://kannada.asianetnews.com/private-jobs/dells-total-workforce-declined-by-about-10-percent-or-11-thousand-employees-suc/articleshow-k8hoz13</link>
            <guid isPermaLink="true">https://kannada.asianetnews.com/private-jobs/dells-total-workforce-declined-by-about-10-percent-or-11-thousand-employees-suc/articleshow-k8hoz13</guid>
            <pubDate>Sat, 11 Apr 2026 17:32:36 +0530</pubDate>
            <description><![CDATA[ಡೆಲ್ ಕಂಪನಿಯು ಈ ವರ್ಷ 11 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದ್ದು, ಒಟ್ಟು ಉದ್ಯೋಗಿಗಳ ಸಂಖ್ಯೆ 97 ಸಾವಿರಕ್ಕೆ ಇಳಿದಿದೆ. ಶಿಸ್ತುಬದ್ಧ ವೆಚ್ಚ ನಿರ್ವಹಣೆ ಮತ್ತು ಕೃತಕ ಬುದ್ಧಿಮತ್ತೆ (AI) ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವುದೇ ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣವೆಂದು ಕಂಪನಿ ತಿಳಿಸಿದೆ. ಈ ಬೆಳವಣಿಗೆಯು ಟೆಕ್ ಉದ್ಯಮದಲ್ಲಿ AI ನಿಂದಾಗಿ ಹೆಚ್ಚುತ್ತಿರುವ ಉದ್ಯೋಗ ನಷ್ಟದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j4rgc1h8z9amqkz70kzrmg4h,imgname-Dell-Job-Cut-Internal-Memo-1723104364072.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೋವಿಡ್​ನಿಂದಲೇ ಹಲವಾರು ಸಾಫ್ಟ್​ವೇರ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿರುವ ಬೆನ್ನಲ್ಲೇ ಇದೀಗ ಕೃತಕ ಬುದ್ಧಿಮತ್ತೆ (AI) ಯಿಂದಾಗಲ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಸಾಫ್ಟ್​ವೇರ್​ ಉದ್ಯೋಗಿಗಳು ಆತಂಕದ ಸ್ಥಿತಿಯಲ್ಲಿದ್ದಾರೆ. ಯಾವಾಗ, ಯಾವ ಕ್ಷಣ ಏನು ಬೇಕಾದರೂ ಆಗಬಹುದು ಎನ್ನುವ ಸ್ಥಿತಿ ಅವರದ್ದಾಗಿದೆ. Layoffs.fyi ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2026 ರಲ್ಲಿ ಇಲ್ಲಿಯವರೆಗೆ ಸುಮಾರು 66 ಟೆಕ್ ಕಂಪನಿಗಳು 39 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿವೆ. ಇದೀಗ, ಡೆಲ್​ ಕಂಪೆನಿಯ ಸರದಿ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ Dell ಕಂಪೆನಿಯು 11 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಿದೆ. ರಾಜ್ಯ ಸೇರಿದಂತೆ ವಿವಿಧೆಡೆಗಳ ಉದ್ಯೋಗಿಗಳು ಇದರಲ್ಲಿ ಸೇರಿರುವುದಾಗಿ ಕಂಪೆನಿ ಹೇಳಿದೆ.&lt;/p&gt;&lt;h2&gt;&lt;strong&gt;97 ಸಾವಿರಕ್ಕೆ ಇಳಿದ ಉದ್ಯೋಗಿಗಳ ಸಂಖ್ಯೆ&lt;/strong&gt;&lt;/h2&gt;&lt;p&gt;ಶಿಸ್ತುಬದ್ಧ ವೆಚ್ಚ ನಿರ್ವಹಣೆ ಎಂದು ಕರೆಯುವ ಭಾಗವಾಗಿ ತನ್ನ ಉದ್ಯೋಗಿಗಳನ್ನು ಸುಮಾರು 10 ಪ್ರತಿಶತದಷ್ಟು ಕಡಿಮೆ ಮಾಡಿದೆ ಕಂಪೆನಿ. ಮಾತ್ರವಲ್ಲದೇ ಕಂಪೆನಿಯು ನೇಮಕಾತಿಯನ್ನು ಕಡಿತಗೊಳಿಸಿದ್ದು, AI ಮತ್ತು ಎಂಟರ್&zwnj;ಪ್ರೈಸ್ ಮೂಲಸೌಕರ್ಯಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿದೆ. ಕಳೆದ ವರ್ಷ ಅಂದರೆ ಜನವರಿ 2025 ರಲ್ಲಿ 1 ಲಕ್ಷದ 8 ಸಾವಿರ ಉದ್ಯೋಗಿಗಳು ಇದ್ದರು. ಅದರೆ ಇದೀಗ ಉದ್ಯೋಗಿಗಳ ಸಂಖ್ಯೆ 97 ಸಾವಿರಕ್ಕೆ ಇಳಿದಿದೆ. ವಜಾಗೊಳಿಸುವಿಕೆಯ ಬಗ್ಗೆ ಡೆಲ್ ಯಾವುದೇ ಪ್ರಮುಖ ಸಾರ್ವಜನಿಕ ಘೋಷಣೆಯನ್ನು ಮಾಡದಿದ್ದರೂ, ಕಂಪೆನಿಯು 569 ಮಿಲಿಯನ್ ಡಾಲರ್​ ಅನ್ನು ಬೇರ್ಪಡಿಸುವಿಕೆಗಾಗಿ ಖರ್ಚು ಮಾಡಿದೆ ಎಂದು ಫೈಲಿಂಗ್ ಉಲ್ಲೇಖಿಸುತ್ತದೆ.&lt;/p&gt;&lt;h3&gt;&lt;strong&gt;ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಮಾರುಕಟ್ಟೆ&lt;/strong&gt;&lt;/h3&gt;&lt;p&gt;&ldquo;2026 ರ ಆರ್ಥಿಕ ವರ್ಷದಲ್ಲಿ, ನಮ್ಮ ನಡೆಯುತ್ತಿರುವ ವ್ಯವಹಾರ ಆಧುನೀಕರಣ ಉಪಕ್ರಮಗಳೊಂದಿಗೆ ಸಮನ್ವಯದಲ್ಲಿ ಶಿಸ್ತುಬದ್ಧ ವೆಚ್ಚ ನಿರ್ವಹಣೆಗೆ ನಾವು ಬದ್ಧರಾಗಿದ್ದೇವೆ ಮತ್ತು ಉದ್ಯೋಗಿ ಮರುಸಂಘಟನೆಗಳು, ಬಾಹ್ಯ ನೇಮಕಾತಿಯ ಮಿತಿ ಮತ್ತು ನಮ್ಮ ಘೋಷಿತ ಕಾರ್ಯತಂತ್ರ ಮತ್ತು ಗ್ರಾಹಕ ಆದ್ಯತೆಗಳೊಂದಿಗೆ ನಮ್ಮ ಹೂಡಿಕೆಗಳನ್ನು ಜೋಡಿಸಲು ಇತರ ಕ್ರಮಗಳು ಸೇರಿದಂತೆ ವೆಚ್ಚಗಳನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದ್ದೇವೆ&rdquo; ಎಂದು ಡೆಲ್ ತಿಳಿಸಿದೆ. ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಅಂತಹ ಕ್ರಮಗಳು ಅಗತ್ಯವೆಂದು ಕಂಪೆನಿ ಹೇಳಿದೆ.&lt;/p&gt;&lt;h3&gt;&lt;strong&gt;ಉದ್ಯೋಗಿಗಳ ಕುಸಿತದ ಇತಿಹಾಸ&lt;/strong&gt;&lt;/h3&gt;&lt;p&gt;ಉದ್ಯೋಗಿಗಳ ಕುಸಿತವು ಡೆಲ್&zwnj;ನಲ್ಲಿ ದೀರ್ಘ ಪ್ರವೃತ್ತಿಯ ಭಾಗವಾಗಿದೆ. ಕಂಪೆನಿಯ ದಾಖಲೆಗಳ ಪ್ರಕಾರ, 2023 ರ ಆರ್ಥಿಕ ವರ್ಷದಿಂದ ಅದರ ಉದ್ಯೋಗಿಗಳ ಸಂಖ್ಯೆ ಸ್ಥಿರವಾಗಿ ಕುಸಿಯುತ್ತಿದೆ. ಕಂಪೆನಿಯು 2023 ರಲ್ಲಿ ಸುಮಾರು 133,000 ಜನರನ್ನು ನೇಮಿಸಿಕೊಂಡಿದೆ, ಇದು 2024 ರಲ್ಲಿ ಸುಮಾರು 120,000 ಕ್ಕೆ ಮತ್ತು ನಂತರ 2025 ರಲ್ಲಿ ಸುಮಾರು 108,000 ಕ್ಕೆ ಇಳಿದಿದೆ. ಇತ್ತೀಚಿನ ಕಡಿತದೊಂದಿಗೆ, ಡೆಲ್&zwnj;ನ ಕಾರ್ಯಪಡೆಯು ಕಳೆದ ಮೂರು ವರ್ಷಗಳಲ್ಲಿ ಸುಮಾರು 27 ಪ್ರತಿಶತದಷ್ಟು ಕುಸಿದಿದೆ, ಅಂದರೆ ಆ ಅವಧಿಯಲ್ಲಿ 36,000 ಕ್ಕೂ ಹೆಚ್ಚು ಹುದ್ದೆಗಳನ್ನು ತೆಗೆದುಹಾಕಲಾಗಿದೆ.&lt;/p&gt;&lt;p&gt;ಕೃತಕ ಬುದ್ಧಿಮತ್ತೆಯಲ್ಲಿ ಹೆಚ್ಚುತ್ತಿರುವ ಹೂಡಿಕೆಗಳ ನಡುವೆ ಇತರ ಅನೇಕ ಟೆಕ್ ಕಂಪನಿಗಳು ವೆಚ್ಚಗಳನ್ನು ಕಡಿತಗೊಳಿಸುತ್ತಿವೆ ಮತ್ತು ಕಾರ್ಯಾಚರಣೆಗಳನ್ನು ಪುನರ್ರಚಿಸುತ್ತಿವೆ ಎಂಬ ಸಮಯದಲ್ಲಿ ಡೆಲ್&zwnj;ನಲ್ಲಿ ಉದ್ಯೋಗ ಕಡಿತದ ಬಹಿರಂಗಪಡಿಸುವಿಕೆ ಬಂದಿದೆ.&lt;/p&gt;]]></content:encoded>
            <category>private-jobs</category>
            <dc:creator>Suchethana D</dc:creator>
            <atom:link href="https://kannada.asianetnews.com/private-jobs/dells-total-workforce-declined-by-about-10-percent-or-11-thousand-employees-suc/articleshow-k8hoz13"/>
        </item>
        <item>
            <title><![CDATA[ಡಿಗ್ರಿ ಇಲ್ಲದಿದ್ದರೂ BMW ಕಂಪನಿಯಲ್ಲಿ ಕೆಲಸ! 19ರ ಯುವತಿಯ ಸಾಧನೆ ನೋಡಿ ಬೆರಗಾದ ನೆಟ್ಟಿಗರು]]></title>
            <link>https://kannada.asianetnews.com/private-jobs/19-year-old-gauri-m-lands-bmw-job-without-degree-personal-branding-viral-san/articleshow-oknl09u</link>
            <guid isPermaLink="true">https://kannada.asianetnews.com/private-jobs/19-year-old-gauri-m-lands-bmw-job-without-degree-personal-branding-viral-san/articleshow-oknl09u</guid>
            <pubDate>Wed, 08 Apr 2026 15:42:32 +0530</pubDate>
            <description><![CDATA[&lt;p&gt;19 ವರ್ಷದ ಗೌರಿ ಎಂ, ಯಾವುದೇ ಪದವಿ ಇಲ್ಲದಿದ್ದರೂ ತನ್ನ ಬಲವಾದ ಪರ್ಸನಲ್ ಬ್ರ್ಯಾಂಡಿಂಗ್ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವದಿಂದ ವಿಶ್ವಪ್ರಸಿದ್ಧ BMW ಕಂಪನಿಯಲ್ಲಿ ಮಾರ್ಕೆಟಿಂಗ್ ಉದ್ಯೋಗವನ್ನು ಪಡೆದುಕೊಂಡಿದ್ದಾಳೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knp8e0ad5dxkd70me4gtjmnq,imgname-bmw-job-for-19-year-old-girl-1775642280269.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.8):&lt;/strong&gt; ಸಾಂಪ್ರದಾಯಿಕ ಶಿಕ್ಷಣ ಅಥವಾ ಪದವಿಗಿಂತ ಕೌಶಲ ಮತ್ತು ವೈಯಕ್ತಿಕ ಬ್ರ್ಯಾಂಡಿಂಗ್ ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಗೌರಿ ಎಂ ಎಂಬ 19 ವರ್ಷದ ಯುವತಿ, ಪದವಿ ಇಲ್ಲದಿದ್ದರೂ ವಿಶ್ವದ ಪ್ರಮುಖ ಕಾರು ತಯಾರಿಕಾ ಸಂಸ್ಥೆಯಾದ BMW ನಲ್ಲಿ ಪೂರ್ಣಾವಧಿಯ 'ಪರ್ಸನಲ್ ಮಾರ್ಕೆಟಿಂಗ್' ಜಾಬ್&zwnj; ಗಿಟ್ಟಿಸಿಕೊಂಡಿದ್ದಾಳೆ. ಈ ಕುರಿತಾದ ಲಿಂಕ್ಡ್&zwnj;ಇನ್ (LinkedIn) ಪೋಸ್ಟ್ ಈಗ ವೈರಲ್ ಆಗಿದ್ದು, ಕೌಶಲ vs ಶಿಕ್ಷಣದ ನಡುವಿನ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.&lt;/p&gt;&lt;h2&gt;&lt;strong&gt;ಅನುಭವವಿಲ್ಲದಿದ್ದರೂ ಸಿಕ್ಕಿತು ಅವಕಾಶ!&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಬಿಎಂಡಬ್ಲ್ಯೂ ಅಂತಹ ಕಂಪನಿಗಳಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಪಡೆಯಲು ಕನಿಷ್ಠ 5 ವರ್ಷಗಳ ಅನುಭವದ ಅಗತ್ಯವಿರುತ್ತದೆ. ಆದರೆ, ಗೌರಿ ಎಂ ತನ್ನ ಬಲವಾದ ಡಿಜಿಟಲ್ ರೆಕಗ್ನಿಶನ್&zwnj; ಮತ್ತು ಸೋಷಿಯಲ್ ಮೀಡಿಯಾ ಪ್ರಭಾವದ ಮೂಲಕ ಈ ಅವಕಾಶವನ್ನು ಪಡೆದುಕೊಂಡಿದ್ದಾಳೆ. ಲಿಂಕ್ಡ್&zwnj;ಇನ್&zwnj;ನಲ್ಲಿ 65,000 ಕ್ಕೂ ಹೆಚ್ಚು ಮತ್ತು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ 35,000 ಕ್ಕೂ ಹೆಚ್ಚು ಫಾಲೋವರ್ಸ್&zwnj;ಗಳನ್ನು ಹೊಂದಿರುವ ಗೌರಿ, ತನ್ನದೇ ಆದ ಪ್ರೇಕ್ಷಕ ಬಳಗವನ್ನು ಕಟ್ಟಿಕೊಂಡಿರುವುದು ಈಕೆಯ ಆಯ್ಕೆಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಲಿಂಕ್ಡ್&zwnj;ಇನ್ ಪೋಸ್ಟ್&zwnj;ನಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;&quot;ಆಕೆಯ ಬಳಿ ಯಾವುದೇ ಪದವಿ ಅಥವಾ ದೀರ್ಘಕಾಲದ ಅನುಭವಕ್ಕಿಂತ ಹೆಚ್ಚಿನ ಪರ್ಸನಲ್&zwnj; ಬ್ರ್ಯಾಂಡ್&zwnj; ಇತ್ತು. ನಿಮ್ಮ ಕನಸಿನ ಕೆಲಸವನ್ನು ಪಡೆಯಲು ನಿಮ್ಮ ಲಿಂಕ್ಡ್&zwnj;ಇನ್ ಮತ್ತು ಇನ್&zwnj;ಸ್ಟಾಗ್ರಾಮ್ ಖಾತೆಗಳನ್ನು ಒಂದು ಮಿನಿ ಪ್ರಾಜೆಕ್ಟ್&zwnj;ನಂತೆ ಬಳಸಿಕೊಳ್ಳುವ ಸಮಯ ಬಂದಿದೆ,&quot; ಎಂದು ಅರುಷಿ ಎಂಬುವವರು ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಖುದ್ದು ಆಫರ್ ಲೆಟರ್ ಹಂಚಿಕೊಂಡ ಗೌರಿ&lt;/strong&gt;&lt;/h2&gt;&lt;p&gt;ತನ್ನ ಸಾಧನೆಯ ಬಗ್ಗೆ ಖುಷಿ ಹಂಚಿಕೊಂಡಿರುವ ಗೌರಿ, ಬಿಎಂಡಬ್ಲ್ಯೂನೊಂದಿಗೆ ನಡೆದ ಇಮೇಲ್ ಸಂಭಾಷಣೆಯ ಸ್ಕ್ರೀನ್&zwnj;ಶಾಟ್ ಅನ್ನು ಹಂಚಿಕೊಂಡಿದ್ದಾಳೆ. &quot;ವಿಶ್ವದ ಅತಿದೊಡ್ಡ ಕಾರು ಸಮೂಹವೊಂದರಿಂದ ನನಗೆ ಉದ್ಯೋಗದ ಆಫರ್ ಬಂದಿದೆ. ಇದು ಕೇವಲ ಸಹಯೋಗಕ್ಕಾಗಿ (Collaboration) ಅಲ್ಲ, ಬದಲಿಗೆ ಗಂಭೀರವಾದ ಮಾರ್ಕೆಟಿಂಗ್ ಜಾಬ್&zwnj;ಗಾಗಿ ಬಂದಿರುವ ಆಫರ್. ನಾನು ಕೇವಲ 19 ವರ್ಷದ ಹುಡುಗಿ, ನನ್ನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಏನಾದರೂ ಸಾಧಿಸಲು ಪ್ರಯತ್ನಿಸುತ್ತಿದ್ದೆ. ಹೇಗೋ ಅವರು ನನ್ನನ್ನು ಹುಡುಕಿಕೊಂಡು ಬಂದರು. ಆ ನಂತರ ಸ್ಪೋರ್ಟ್ಸ್ ಬ್ರ್ಯಾಂಡ್ ಸಂಸ್ಥಾಪಕರೊಬ್ಬರು ಸಂಪರ್ಕಿಸಿದರು. ಅಚ್ಚರಿಯೆಂದರೆ ನಾನು ಅರ್ಜಿ ಸಲ್ಲಿಸದಿದ್ದರೂ ಒಂದೇ ವಾರದಲ್ಲಿ ಮೂರು ಉದ್ಯೋಗದ ಆಫರ್&zwnj;ಗಳು ಬಂದವು. ನಾನು ಯಾರಿಗೂ ಇಮೇಲ್ ಮಾಡಿರಲಿಲ್ಲ ಅಥವಾ ಅವಕಾಶಕ್ಕಾಗಿ ಕೇಳಿರಲಿಲ್ಲ,&quot; ಎಂದು ಗೌರಿ ಬರೆದುಕೊಂಡಿದ್ದಾಳೆ.&lt;/p&gt;&lt;h2&gt;&lt;strong&gt;ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;ಗೌರಿಯ ಈ ಪೋಸ್ಟ್ ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. &quot;ಇದು ಅದೃಷ್ಟವಲ್ಲ, ಪರ್ಸನಲ್ ಬ್ರ್ಯಾಂಡಿಂಗ್&zwnj;ನ ಶಕ್ತಿ. ಕಳೆದ ವರ್ಷವಷ್ಟೇ ಗೌರಿ ಟಾಟಾ ಮೋಟಾರ್ಸ್ ಜೊತೆ ಕೆಲಸ ಮಾಡುತ್ತಿದ್ದಾಗ ನಾನು ಅವಳ ಕಂಟೆಂಟ್ ನೋಡಿದ್ದೆ. ಪದವಿ ಇಲ್ಲದಿದ್ದರೂ ಅವಳು ತನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ರೀತಿಗೆ ಇಂದು ಬೆಲೆ ಸಿಕ್ಕಿದೆ,&quot; ಎಂದು ಬಳಕೆದಾರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಆದರೆ, ಈ ಬಗ್ಗೆ ಕೆಲವರು ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣಗಳು ಎಲ್ಲ ಉದ್ಯಮಗಳಿಗೂ ಅನ್ವಯಿಸುವುದಿಲ್ಲ ಮತ್ತು ಪದವಿ ಶಿಕ್ಷಣದ ಪ್ರಾಮುಖ್ಯತೆಯನ್ನು ಕಡೆಗಣಿಸಬಾರದು ಎಂದು ಕೆಲವರು ಎಚ್ಚರಿಸಿದ್ದಾರೆ. ಈ ಕುರಿತು ಅಧಿಕೃತ ಪ್ರತಿಕ್ರಿಯೆಗಾಗಿ ಎನ್&zwnj;ಡಿಟಿವಿ (NDTV) ಸಂಸ್ಥೆಯು ಬಿಎಂಡಬ್ಲ್ಯೂ ಕಂಪನಿಯನ್ನು ಸಂಪರ್ಕಿಸಿದ್ದು, ಅವರಿಂದ ಉತ್ತರ ಬಂದ ನಂತರ ವರದಿಯನ್ನು ಅಪ್&zwnj;ಡೇಟ್ ಮಾಡಲಾಗುವುದು ಎಂದು ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/private-jobs/19-year-old-gauri-m-lands-bmw-job-without-degree-personal-branding-viral-san/articleshow-oknl09u"/>
        </item>
        <item>
            <title><![CDATA[ಯುವಕರ ಹೊಸ ಭವಿಷ್ಯ ಬರೆಯಲಿದೆ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿ ಜಿಟಿಟಿಸಿ ಒಪ್ಪಂದ!]]></title>
            <link>https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis</link>
            <guid isPermaLink="true">https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis</guid>
            <pubDate>Sat, 25 Apr 2026 16:57:58 +0530</pubDate>
            <description><![CDATA[ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.) ನಡುವೆ ಶೈಕ್ಷಣಿಕ-ಉದ್ಯೋಗ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಮೂಲಕ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ತರಬೇತಿ, ಇಂಟರ್ನ್&zwnj;ಶಿಪ್&zwnj; ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಿ, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq25qzaeg80hnf34p78cg70h,imgname-proxin-tech-partners-with-gttc-dandeli-1777115856206.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ: ಪಟ್ಟಣ ಹಾಗೂ ಬೆಂಗಳೂರಿನಲ್ಲಿ ಐಟಿ ಕೇಂದ್ರಗಳನ್ನು ಹೊಂದಿರುವ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.) ನಡುವೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳಿಗಾಗಿ ಮಹತ್ವದ ಶೈಕ್ಷಣಿಕ&ndash;ಉದ್ಯೋಗ ಒಪ್ಪಂದ ಜರುಗಿದೆ.&lt;/p&gt;&lt;p&gt;ಪ್ರಾಕ್ಸಿನ್ ಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ನಾರಾಯಣ ಠೊಸುರ ಅವರು ಜಿ.ಟಿ.ಟಿ.ಸಿ. ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ, ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು. ಈ ಒಪ್ಪಂದದ ಮೂಲಕ ವಿದ್ಯಾರ್ಥಿಗಳಿಗೆ ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ.&lt;/p&gt;&lt;h2&gt;ಕೈಗಾರಿಕಾ ಮಾರುಕಟ್ಟೆಗೆ ಹೊಂದುವ ತರಬೇತಿ&lt;/h2&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿ ನಾರಾಯಣ ಠೊಸುರ ಅವರು, &ldquo;ನಮ್ಮ ಸಂಸ್ಥೆ ವಿದ್ಯಾರ್ಥಿಗಳಲ್ಲಿನ ಅಡಗಿದ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಪ್ರಸ್ತುತ ಕೈಗಾರಿಕಾ ಮಾರುಕಟ್ಟೆಗೆ ಹೊಂದುವ ತರಬೇತಿಯನ್ನು ನೀಡಲಿದೆ. ಇಂದಿನ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ರೂಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಆಧುನಿಕ ತಾಂತ್ರಿಕ ಕೌಶಲ್ಯಗಳ ಜೊತೆಗೆ ಮಾನವೀಯ ಮೌಲ್ಯಗಳ ಬೆಳವಣಿಗೆಗೂ ನಾವು ಸಮಾನ ಆದ್ಯತೆ ನೀಡುತ್ತೇವೆ&rdquo; ಎಂದು ಹೇಳಿದರು.&lt;/p&gt;&lt;p&gt;ಅವರು ಮುಂದುವರಿದು, &ldquo;ಗ್ರಾಮೀಣ ಪ್ರದೇಶದ ಪ್ರತಿಭಾವಂತರಿಗೆ ಸೂಕ್ತ ಅವಕಾಶಗಳನ್ನು ಒದಗಿಸುವ ಜೊತೆಗೆ, ತಮ್ಮ ಕುಟುಂಬದೊಂದಿಗೆ ಇರುವ ಯುವಕರಿಗೆ ವಿಶೇಷ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಕೊರೋನಾ ಸಮಯದಲ್ಲಿ ರೂಪಿಸಿದ ನಮ್ಮ ಈ ಉದ್ಯೋಗ ನೀತಿಗೆ ರಾಷ್ಟ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರಶಂಸೆ ಲಭಿಸಿದೆ&rdquo; ಎಂದರು.&lt;/p&gt;&lt;h2&gt;ಪ್ರಾಕ್ಸಿನ್ ಟೆಕ್ ಕಂಪನಿಯಲ್ಲಿ ಇಂಟರ್ನ್&zwnj;ಶಿಪ್&zwnj; ಅವಕಾಶ&lt;/h2&gt;&lt;p&gt;ಈ ಒಪ್ಪಂದದ ಪ್ರಮುಖ ಅಂಶವಾಗಿ, ಜಿ.ಟಿ.ಟಿ.ಸಿ. ವಿದ್ಯಾರ್ಥಿಗಳಿಗೆ ಪ್ರಾಕ್ಸಿನ್ ಟೆಕ್ ಕಂಪನಿಯಲ್ಲಿ ಇಂಟರ್ನ್&zwnj;ಶಿಪ್&zwnj; ಅವಕಾಶ ಕಲ್ಪಿಸಲಾಗುತ್ತದೆ. ಇಂಟರ್ನ್&zwnj;ಶಿಪ್&zwnj; ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿಯೇ ಪೂರ್ಣಾವಧಿ ಉದ್ಯೋಗ ನೀಡುವ ವ್ಯವಸ್ಥೆಯೂ ಇದೆ. ಇದಲ್ಲದೆ, ಪ್ರಾಕ್ಸಿನ್ ಸಂಸ್ಥೆಯ ಉದ್ಯೋಗಿಗಳ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿಗೆ ಜಿ.ಟಿ.ಟಿ.ಸಿ. ಅಧ್ಯಾಪಕರ ಸಹಕಾರ ಪಡೆಯಲಾಗುತ್ತದೆ.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಜಿ.ಟಿ.ಟಿ.ಸಿ. ಸಂಸ್ಥೆಯ ಪ್ರಾಚಾರ್ಯ ದತ್ತಾತ್ರೇಯ, ಉದ್ಯೋಗಾಧಿಕಾರಿ ನಿಂಗಪ್ಪ ಸೇರಿದಂತೆ ಪ್ರಾಕ್ಸಿನ್ ಟೆಕ್ ಕಂಪನಿಯ ರಾಘವೇಂದ್ರ ಸಾಂಬ್ರೇಕರ, ನಯನಾ ಗೌಡಪ್ಪನವರ, ಮಣಿಕಂಠ ಸಾಂಬ್ರಾಣಿ, ಪ್ರಿಯಾ ಪಾಟೀಲ, ವಸುಂಧರಾ ನಾಯ್ಕ ಮತ್ತು ಕಲ್ಲಯ್ಯ ಪೂಜಾರಿ ಉಪಸ್ಥಿತರಿದ್ದರು.&lt;/p&gt;&lt;p&gt;ಒಟ್ಟಿನಲ್ಲಿ, ಈ ಒಪ್ಪಂದವು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಮಹತ್ವದ ಹೆಜ್ಜೆಯಾಗಿದ್ದು, ಕೈಗಾರಿಕೆ&ndash;ಶೈಕ್ಷಣಿಕ ಸಂಸ್ಥೆಗಳ ಸಹಕಾರದ ಉತ್ತಮ ಮಾದರಿಯಾಗಿ ಪರಿಣಮಿಸಲಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis"/>
        </item>
        <item>
            <title><![CDATA[ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್‌ ವಿ ನಗರದಲ್ಲಿ ತಳಮಳ]]></title>
            <link>https://kannada.asianetnews.com/gallery/private-jobs/meta-layoffs-2026-facebook-parent-to-cut-jobs-in-silicon-valley-amid-massive-ai-push-pz8bkoz</link>
            <guid isPermaLink="true">https://kannada.asianetnews.com/gallery/private-jobs/meta-layoffs-2026-facebook-parent-to-cut-jobs-in-silicon-valley-amid-massive-ai-push-pz8bkoz</guid>
            <pubDate>Mon, 06 Apr 2026 21:36:34 +0530</pubDate>
            <description><![CDATA[&lt;p&gt;ಫೇಸ್&zwnj;ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್&zwnj; ವಿ ನಗರದಲ್ಲಿ ತಳಮಳ, ಒಂದೇ ಕಚೇರಿಯಿಂದ 200 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಎಐ ಬಳಕೆ ಹಲವರ ಕೆಲಸಕ್ಕೆ ಕುತ್ತು ತಂದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3tqsxqxj08n89h4p7fgvrn0,imgname-meta-1756465264381.jpg" type="image/jpeg" height="390" width="690"/>
            <content:encoded><![CDATA[&lt;p&gt;ಫೇಸ್&zwnj;ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್&zwnj; ವಿ ನಗರದಲ್ಲಿ ತಳಮಳ, ಒಂದೇ ಕಚೇರಿಯಿಂದ 200 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಎಐ ಬಳಕೆ ಹಲವರ ಕೆಲಸಕ್ಕೆ ಕುತ್ತು ತಂದಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಫೇಸ್&zwnj;ಬುಕ್ ಮಾತೃಸಂಸ್ಥೆ ಮೆಟಾ ಇದೀಗ ಮತ್ತೆ ಉದ್ಯೋಗ ಕಡಿತ ಮಾಡಿದೆ. ಸಿಲಿಕಾನ್ ವ್ಯಾಲಿಯಲ್ಲಿರುವ ಕಚೇರಿಗಳಿಂದ 200 ಮಂದಿ ಉದ್ಯೋಗ ಕಡಿತ ಮಾಡಿದೆ. ಬರ್ಲಿಂಗ್&zwnj;ಗೇಮ್ ಕಚೇರಿ ಉದ್ಯೋಗಿಗಳಿಗೆ ಮೇ 22 ಕೊನೆಯ ದಿನ. ಸನ್ನಿವೇಲ್ ಉದ್ಯೋಗಿಗಳಿಗೆ ಮೇ 29 ಕೊನೆಯ ದಿನ. ಒರಾಕಲ್ ಕಂಪನಿ ಈಗಾಗಲೇ 12 ಸಾವಿರ ಉದ್ಯೋಗಳನ್ನು ಕಡಿತ ಮಾಡಿದ ಬೆನ್ನಲ್ಲೇ ಇದೀಗ ಮೆಟಾ ಮತ್ತೆ ಉದ್ಯೋದ ಕಡಿತ ಮಾಡಿದೆ.&lt;/p&gt;&lt;img&gt;&lt;p&gt;ಕ್ಯಾಲಿಫೋರ್ನಿಯಾದ ಎರಡು ಕಚೇರಿಗಳಾದ ಬರ್ಲಿನ್&zwnj;ಗೇಮ್ ಹಾಗೂ ಸನ್ನಿವೇಲ್ ಕಚೇರಿಗಳಲ್ಲಿ ಮೊದಲ ಹಂತದಲ್ಲಿ 200 ಮಂದಿಯ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ಈಗಾಗಲೇ ಮೆಟಾ ಸಿಇಒ ಮಾರ್ಕ್ ಜುಕರ್&zwnj;ಬರ್ಗ್ ಮೆಟಾದ ಎಲ್ಲಾ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಎಐ ಬಳಕೆ ಮಾಡಲಾಗುತ್ತಿದೆ. ಈ ಉದ್ಯೋಗ ಕಡಿತವನ್ನು ಮೆಟಾ ಕಂಪನಿ ಉದ್ಯೋಗಿಗಳಿಗೆ ಎಪ್ರಿಲ್ ತಿಂಗಳಲ್ಲಿ ಸೂಚನೆ ನೀಡಲಾಗಿತ್ತು. ಇದೀಗ ಮೇ.29ಕ್ಕೆ ಎರಡು ಹಂತದಲ್ಲಿ ಉದ್ಯೋಗಿಗಳ ವೃತ್ತಿಯ ಕೊನೆಯ ದಿನವಾಗಲಿದೆ.&lt;/p&gt;&lt;img&gt;&lt;p&gt;ಮೇಟಾ ಸೇಲ್ಸ್, ರಿಕ್ರೂಟಿಂಗ್, ರಿಲಾಯಿಟಿ ಲ್ಯಾಬ್, ಹಾರ್ಡ್&zwnj;ವೇರ್ ಟೀಂ ಸೇರಿದಂತೆ ಹಲುವು ವಿಭಾಗಗಳಿಂದ ಮೆಟಾ ಉದ್ಯೋಗ ಕಡಿತ ಮಾಡುತ್ತಿದೆ. ಮೆಟಾ ಈಗಾಲೇ ಎಐ ಬಳಕೆಗೆ ದುಬಾರಿ ಮೊತ್ತ ಹೂಡಿಕೆ ಮಾಡಿದೆ. ಹಂತ ಹಂತವಾಗಿ ಎಐ ಆವರಿಸಿಕೊಳ್ಳುತ್ತಿದ್ದಂತೆ ಉದ್ಯೋದ ಕಡಿತ ಮಾಡುತ್ತಿದೆ.&lt;/p&gt;&lt;img&gt;&lt;p&gt;ಕಳೆದ ತಿಂಗಳು ಮೆಟಾ 700 ಮಂದಿ ಉದ್ಯೋದ ಕಡಿತ ಘೋಷಿಸಿತ್ತು. 2022, 2023ರಲ್ಲೂ ಮೆಟಾ ಉದ್ಯೋಗ ಕಡಿತ ಮಾಡಿದೆ. ಮೆಟಾ ಹಂತ ಹಂತವಾಗಿ ಉದ್ಯೋಗ ಕಡಿತ ಮಾಡುತ್ತಲೇ ಬಂದಿದೆ. ಇದೀಗ ಹೊಸ ಘೋಷಣೆ ಮಾಡಿದೆ.&lt;/p&gt;&lt;img&gt;&lt;p&gt;ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಈಗಾಗಲೇ ಒರಾಕಲ್ ಉದ್ಯೋಗ ಕಡಿತ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳಲ್ಲಿ ಎಐ ಆವರಿಸಿಕೊಳ್ಳುತ್ತಿದೆ. ಜೊತೆಗೆ ಆರ್ಥಿಕ ಹಿಂಜರಿತಗಲೂ ಉದ್ಯೋದ ಕಡಿತ ಸಮಸ್ಯೆ ತೀವ್ರಗೊಳ್ಳುತ್ತಿದೆ.&lt;/p&gt;&lt;h2&gt;ಎಐ ಆತಂಕ&lt;/h2&gt;]]></content:encoded>
            <category>private-jobs</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/private-jobs/meta-layoffs-2026-facebook-parent-to-cut-jobs-in-silicon-valley-amid-massive-ai-push-pz8bkoz"/>
        </item>
        <item>
            <title><![CDATA[30 ಸಾವಿರ ಜನರ ಮಾರಣಹೋಮ ಮಾಡಿದ ಕಂಪೆನಿ; ಉಸಿರಾಡೋಕೂ ಅವಕಾಶ ಕೊಡ್ಲಿಲ್ಲ: ಕವಿರಾಜ್]]></title>
            <link>https://kannada.asianetnews.com/private-jobs/oracle-company-layoffs-2026-kannada-song-writer-kaviraj-post/articleshow-qp8ggvx</link>
            <guid isPermaLink="true">https://kannada.asianetnews.com/private-jobs/oracle-company-layoffs-2026-kannada-song-writer-kaviraj-post/articleshow-qp8ggvx</guid>
            <pubDate>Sat, 04 Apr 2026 17:43:41 +0530</pubDate>
            <description><![CDATA[&lt;p&gt;Company Layoffs:&zwnj; ಇಂದು ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಕಷ್ಟಪಟ್ಟು ಓದಿ, ಕಂಪೆನಿಯಲ್ಲಿ ಕೆಲಸ ಮಾಡೋಣ, ಸೆಟಲ್&zwnj; ಆಗೋಣ ಎಂದುಕೊಂಡರೆ ತುಂಬ ಕಷ್ಟ. ಯಾವಾಗ ಯಾರು ಲೇಆಫ್&zwnj; ಆಗುತ್ತಾರೆ ಎಂದು ಹೇಳಲಾಗದು. ಈ ಬಗ್ಗೆ ಗೀತರಚನೆಕಾರ ಕವಿರಾಜ್&zwnj; ಅವರು ವಿಶೇಷ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knc6hng8j6eq59s70tg3zxa0,imgname-layoff-by-amazon-1769753738028--1--1775304758792.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಗತ್ತಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಸೆಟಲ್ ಆಗಿದ್ದೇವೆ ಅಂದುಕೊಂಡು EMI ಮೂಲಕ ತನ್ನ ಪುಟ್ಟ ಸ್ವರ್ಗವನ್ನು ಕಟ್ಟಿಕೊಂಡಿರುತ್ತಾರೆ. ಬೆಳಿಗ್ಗೆ 6 ಗಂಟೆಗೆ ಒಂದು ಮೇಲ್ ಬರುತ್ತೆ, ಅದರಲ್ಲಿ ನಿಮ್ಮ ಸೇವೆ ನಮಗೆ ಅವಶ್ಯಕತೆಯಿಲ್ಲ. ನಿಮ್ಮನ್ನು ಈ ಕ್ಷಣದಿಂದ ಕೆಲಸದಿಂದ ತೆಗೆಯಲಾಗಿದೆ ಎಂದು ಬರೆಯಲಾಗಿರುತ್ತೆ. ಹೇಗಿರಬೇಡ ಆ ಆಘಾತ. ಅವರ ಇಡೀ ಜಗತ್ತೇ ಒಂದೇ ಕ್ಷಣಕ್ಕೆ ತಲೆಕೆಳಗಾಗಿರುತ್ತೆ.&lt;/p&gt;&lt;h2&gt;ಅಕ್ಷರಶಃ ಮೊನ್ನೆ oracle ನಡೆಸಿದ್ದು&lt;/h2&gt;&lt;p&gt;30 ಸಾವಿರ ಜನರ ಮಾರಣಹೋಮ ( oracle company layoffs 2026 ). ಇದು ಎಷ್ಟು ಬೃಹತ್ ಎಂದರೆ ಆ ಜಾಗತಿಕ ದೈತ್ಯ ಕಂಪನಿ ಇಷ್ಟು ದಿನ ತನಗಾಗಿ ದುಡಿದ ಶೇಕಡಾ 18 ರಷ್ಟು ಉದ್ಯೋಗಿಗಳನ್ನು ಉಸಿರೆತ್ತಲು ಅವಕಾಶವಿಲ್ಲದಂತೆ ಒಂದೇ ಏಟಿಗೆ ಹೊರದಬ್ಬಿದೆ. ಕಾರ್ಪೋರೇಟ್ ಜಗತ್ತಿನಷ್ಟು ನಿರ್ದಯಿ ರಾಕ್ಷಸ ಕೂಟ ಇನ್ನೊಂದು ಇರಲು ಸಾಧ್ಯವಿಲ್ಲ. ಕೆಲಸದಿಂದ ತೆಗೆಯುವ ಒಂದು ಗೌರವಯುತ ಮಾರ್ಗ ಅನುಸರಿಸುವ ನೈತಿಕತೆಯೂ ಆ ಧನದಾಹಿ ವ್ಯವಸ್ಥೆಗಿಲ್ಲ. ಇಡೀ ಪ್ರಪಂಚ ಅವರ ಹಿಡಿತದಲ್ಲೇ ಇದೆ. ರೂಲ್ಸ್ ಎಲ್ಲ ಅವರೇ ಬರೆಸುತ್ತಾರೆ. ಅವರ ಒಂದು ಕೂದಲು ಕೊಂಕಿಸಲು ಯಾರಿಗೂ ಸಾಧ್ಯವಿಲ್ಲ ಎಂಬುದು ಶತಸಿದ್ಧ. ಬೇರೆ ಹೊತ್ತಾಗಿದ್ದರೆ ಇಲ್ಲಿಲ್ಲ ಎಂದರೇ ಅಲ್ಲಿ ಕೆಲಸ ಸಿಗುತ್ತೆ ಅನ್ನಬಹುದಿತ್ತು. ಆದರೆ ಈಗೇನಿದ್ದರೂ ಕೆಲಸದಿಂದ ತೆಗೆದು ಬಿಸಾಕುವ ಕಾಲ. ಬಹುತೇಕ ಕಾರ್ಪೊರೇಟ್ ಕಂಪನಿಗಳು ಇದೇ ಹಾದಿಯಲ್ಲಿವೆ. ಕಳೆದೊಂದು ವರ್ಷದಲ್ಲಿ ಅಮೆಜಾನ್ 30 ಸಾವಿರ, ಇಂಟೆಲ್ 27 ಸಾವಿರ, ಮೈಕ್ರೋಸಾಫ್ಟ್ 15 ಸಾವಿರ, ಟಿಸಿಎಸ್ 12 ಸಾವಿರ ಉದ್ಯೋಗಳನ್ನು ಹೊರದಬ್ಬಿವೆ .&lt;/p&gt;&lt;h2&gt;Prompt ಮೂಲಕ ಎಲ್ಲ ಕೆಲಸ ಆಗ್ತಿದೆ&lt;/h2&gt;&lt;p&gt;ದೊಡ್ಡ ವಿಪರ್ಯಾಸ ಎಂದರೆ ನೌಕರರ ಗುಂಡಿಯನ್ನು ಸಂಬಳ ಕೊಟ್ಟು ಅವರ ಕೈಯಲ್ಲೇ ತೊಡಿಸಲಾಗಿರುತ್ತೆ. ಇವರ ಕೆಲಸ ಕಸಿಯುವ AI ತಂತ್ರಜ್ಞಾನಕ್ಕೆ ಇವರೇ ಮನೆ ಮಠ ಮರೆತು ಹಗಲಿರುಳು ದುಡಿದಿರುತ್ತಾರೆ. ನಿಜಕ್ಕೂ ಸಂಭ್ರಮ ಪಟ್ಟು ಬೆರಗುಗಣ್ಣಿನಿಂದ ನೋಡಬೇಕಿದ್ದ ತಾಂತ್ರಿಕ ಅಭಿವೃದ್ಧಿಗಳು ಭಯ ಹುಟ್ಟಿಸುತ್ತಿವೆ. ಅದರಲ್ಲೂ AI ಅಕ್ಷರಶಃ ನಡುಕ ಹುಟ್ಟಿಸುವ ವೇಗದಲ್ಲಿ ಎಲ್ಲವನ್ನೂ ನುಂಗುತ್ತಿದೆ. ಒಬ್ಬ ಡಿಜಿಟಲ್ ಅನಕ್ಷರಸ್ಥ ಎಂದೇ ಹೇಳಬಹುದಾದ ನಾನೇ ಎಷ್ಟೋ ತಂತ್ರಜ್ಞರಿಂದ ಮಾಡಿಸಿಕೊಳ್ಳಬೇಕಿದ್ದ ಕೆಲಸಗಳನ್ನಕೇವಲ prompt ಕೊಡುವ ಮೂಲಕ ನಾನೇ ಮಾಡಿಕೊಳ್ಳುತ್ತಿದ್ದೇನೆ.&lt;/p&gt;&lt;h2&gt;ಇನ್ನೆಷ್ಟು ಜನ ಕೆಲಸ ಕಳ್ಕೊಳ್ತಾರೆ?&lt;/h2&gt;&lt;p&gt;ಇನ್ನು ಡಿಜಿಟಲ್&zwnj; ಆಗಿ ತಿಳಿದವರು ಏನೇನು ಮಾಡುತ್ತಿರಬಹುದು. AI ಕೆಲಸ ಕಳೆಯೋದಿಲ್ಲ ಬದಲಿಗೆ ಹೊಸ ಉದ್ಯೋಗಳನ್ನು ಸೃಷ್ಟಿಸುತ್ತೆ ಎನ್ನುವ ಕಿವಿ ಮೇಲೆ ಹೂ ಇಡುವ ಹೇಳಿಕೆಗೆ ಯಾವ ಆಧಾರವೂ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಈಗಾಗಲೇ ನನ್ನ ವಲಯದಲ್ಲೇ ಕೆಲಸ ಕಳೆದುಕೊಂಡು ದಿಕ್ಕೆಟ್ಟಿರುವ ಮಿತ್ರರು ಹಲವರಿದ್ದಾರೆ ಇನ್ನೆಷ್ಟು ಜನ ಕೆಲಸ ಕಳೆದುಕೊಳ್ಳಬಹುದು ಗೊತ್ತಿಲ್ಲ.&lt;/p&gt;&lt;h2&gt;ಅಲ್ಲೆಲ್ಲೋ ನಡೆಯುತ್ತಿರುವ ಯುದ್ಧ ನಮ್ಮ ಊಟದ ತಟ್ಟೆ ತಟ್ಟಿದೆ&lt;/h2&gt;&lt;p&gt;ಅತ್ತ ದೇಶಗಳ ಅಧಿಕಾರ ಹಿಡಿದ ಅವಿವೇಕಿ ಹುಚ್ಚರ ಅಹಂನಿಂದಾಗಿ ಎಲ್ಲೋ ನಡೆಯುತ್ತಿರುವ ಯುದ್ಧ, ಇಲ್ಲಿ ನಮ್ಮ ದೈನಂದಿನ ಬದುಕನ್ನು, ನಮ್ಮ ಊಟದ ತಟ್ಟೆಯನ್ನು ತಟ್ಟಿದೆ. ಒಟ್ಟಾರೆ ಇಡೀ ಜಗತ್ತಲ್ಲೇ ಒಂದು ಅರಾಜಕತೆಯಿದೆಜಿ. ಎಲ್ಲಾ ದಿಕ್ಕಿನಲ್ಲೂ ಮಹಾ ವಿಪ್ಲವವೊಂದರೆಡೆಗೆ ದಾಪುಗಾಲು ಹಾಕುತ್ತಿರುವಂತಿದೆ. ಏನೇ ಆದರೂ ಇಂತಾ ಸುನಾಮಿಗಳೆದುರು ನಾವೆಲ್ಲರೂ ಅಸಹಾಯಕರು. ಕಾಲವೇ ಎಲ್ಲಕ್ಕೂ ಉತ್ತರ, ಪರಿಹಾರ ಕೊಡಬೇಕು. ಏನೇ ಬಂದರೂ ಕುಗ್ಗದೇ ಎದುರಿಸಲು ಮಾನಸಿಕವಾಗಿ ನಾವೆಲ್ಲರೂ ಸಿದ್ಧರಾಗಿರಬೇಕು ಅಷ್ಟೇ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>private-jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/private-jobs/oracle-company-layoffs-2026-kannada-song-writer-kaviraj-post/articleshow-qp8ggvx"/>
        </item>
        <item>
            <title><![CDATA[ನವವಿವಾಹಿತೆಯ ಸೀರೆ ಎಳೆದ ಕಿರಾತಕರು: ನಾಸಿಕ್ TCSನಲ್ಲಿ ಮತಾಂಧರ ಮತ್ತೊಂದು ಕಾಮಕಾಂಡ ತೆರೆದಿಟ್ಟ ಮಹಿಳಾ ಉದ್ಯೋಗಿ]]></title>
            <link>https://kannada.asianetnews.com/private-jobs/newlyweds-saree-pulled-another-nashik-tcs-employee-reveals-the-horror-she-endured/articleshow-s0e7qay</link>
            <guid isPermaLink="true">https://kannada.asianetnews.com/private-jobs/newlyweds-saree-pulled-another-nashik-tcs-employee-reveals-the-horror-she-endured/articleshow-s0e7qay</guid>
            <pubDate>Mon, 20 Apr 2026 16:38:33 +0530</pubDate>
            <description><![CDATA[&lt;p&gt;ನಾಸಿಕ್&zwnj;ನ ಟಿಸಿಎಸ್&zwnj; ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ. ಟೀಮ್ ಲೀಡರ್ ರಾಝಾ ಮೆನನ್ ಮತ್ತು ತರಬೇತುದಾರ ಶಾರುಖ್ ಖುರೇಷಿ ಅಸಭ್ಯವಾಗಿ ವರ್ತಿಸಿದ್ದು, ಸೀರೆ ಎಳೆದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpn8pvzd9xavw5fyn778vwsb,imgname-tcs-employee-harassment-scam-1776682758125.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಕರಾಳ ಅನುಭವ ಬಿಚ್ಚಿಟ್ಟ ನಾಸಿಕ್ ಟಿಸಿಎಸ್ ಮಹಿಳಾ ಉದ್ಯೋಗಿ&lt;/strong&gt;&lt;/h2&gt;&lt;p&gt;ದೇಶವನ್ನೇ ಬೆಚ್ಚಿ ಬೀಳಿಸಿದ ಟಿಸಿಎಸ್&zwnj; ಸಂಸ್ಥೆಯಲ್ಲಿ ನಡೆದ ಕಾರ್ಪೋರೇಟ್ ಜಿಹಾದ್&zwnj;ಗೆ ಸಂಬಂಧಿಸಿದ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಈಗ ಮತ್ತೊಬ್ಬ ಮಹಿಳಾ ಉದ್ಯೋಗಿ ತಾನು ಅನುಭವಿಸಿದ ಕರಾಳ ಘಟನೆಯನ್ನು ಬಯಲು ಮಾಡಿದ್ದು, ಬೆಚ್ಚಿ ಬೀಳಿಸುವಂತಿದೆ.&lt;/p&gt;&lt;p&gt;ಈಗ ತನಗಾದ ಕೆಟ್ಟ ಘಟನೆಯನನ್ನು ಬಹಿರಂಗಪಡಿಸಿರುವ ಮಹಿಳೆ ನಾಸಿಕ್&zwnj;ನಲ್ಲಿರುವ ಟಿಸಿಎಸ್&zwnj; ಸಂಸ್ಥೆಗೆ ಅಸೋಸಿಯೆಟ್ ಆಗಿ ಉದ್ಯೋಗಕ್ಕೆ ಸೇರಿದ್ದರು. ಆಗಷ್ಟೇ ಅವರ ಮದುವೆಯೂ ಆಗಿತ್ತು. ತಮ್ಮ ಸಂಸ್ಥೆಯಲ್ಲಿ ಹಿಂದೂ ಉದ್ಯೋಗಿಗಳ ಮೇಲೆ ಮ್ಯಾನೇಜರ್ ಮಟ್ಟದ ಅಧಿಕಾರಿಗಳು ಹಾಗೂ ಹೆಚ್&zwnj; ಆರ್&zwnj;ಗಳು ನಡೆಸುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಪುರುಷ ಉದ್ಯೋಗಿಗಳ ಬಲವಂತದ ಮತಾಂತರದ ಬಗ್ಗೆ ಬಾಯ್ಬಿಟ್ಟ 8ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳ ಪೈಕಿ ಇವರು ಒಬ್ಬರಾಗಿದ್ದಾರೆ.&lt;/p&gt;&lt;p&gt;ತನ್ನ ಪತಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಿದ್ದರಿಂದ ತಾನು ನಾಸಿಕ್&zwnj;ನಲ್ಲಿ ತನ್ನ ಅತ್ತೆ ಮಾವನ ಜೊತೆ ವಾಸ ಮಾಡುತ್ತಿದ್ದೆ ನನ್ನ ಮದುವೆಯ ನಂತರ 2025ರ ಜೂನ್&zwnj;ನಿಂದ ನಾನು ಟಿಸಿಎಸ್&zwnj;ನ ನಾಸಿಕ್ ಸಂಸ್ಥೆಯಲ್ಲಿ ಅಸೋಸಿಯೇಟ್ ಆಗಿ ಕೆಲ ಮಾಡುತ್ತಿದ್ದೆ. 2025ರ ಜೂನ್ 24ರಿಂದ ನನ್ನ ಮೂರು ತಿಂಗಳ ತರಬೇತಿ ಅವಧಿ ಇಲ್ಲಿ ಆರಂಭವಾಯ್ತು. ಶಾರುಖ್ ಖುರೇಷಿ ಹಾಗೂ ಜಯೇಶ್ ಗುಂಜಲ್ ಎಂಬುವವರು ನನಗೆ ತರಬೇತಿ ನೀಡುತ್ತಿದ್ದರು ಎಂದು ಮಹಿಳೆ ವಿಚಾರಣೆಯಲ್ಲಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ನವವಿವಾಹಿತೆಗೆ ಸಹಾಯ ಬೇಕಿದ್ದರೆ ಕೇಳಿ ಎಂದಿದ್ದ ರಾಝಾ ಮೆನನ್&lt;/strong&gt;&lt;/p&gt;&lt;p&gt;ತರಬೇತಿ ವೇಳೆ ಲೋನ್ ಬ್ರಾಂಚ್&zwnj;ನ ಟೀಮ್ ಲೀಡರ್ ರಾಝಾ ಮೆನನ್ ಎಂಬಾತ ತಮ್ಮ ತರಬೇತಿ ಕೊಠಡಿಗೆ ಬರುತ್ತಿದ್ದ. ಆತನಿಗೂ ತರಬೇತಿಗೂ ಯಾವುದೇ ಸಂಬಂಧ ಇರಲಿಲ್ಲ, ಆದರೂ ಆತ ಅಲ್ಲಿಗೆ ಬಂದು ತನ್ನ ವೈಯಕ್ತಿಕ ಜೀವನದ ಬಗ್ಗೆ ಕೇಳುತ್ತಿದ್ದ. ನಿನ್ನ ಗಂಡ ನಿನ್ನಿಂದ ದೂರ ವಾಸ ಮಾಡುತ್ತಿರುವುದರಿಂದ ನಿನಗೆ ಎಲ್ಲವನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆಯೇ? ನಿನಗೆ ಭಯವಾಗುವುದಿಲ್ಲವೇ? ನಿಮಗೆ ನನ್ನ ಸಹಾಯ ಬೇಕಿದ್ದರೆ ನನಗೆ ಹೇಳಿ ನಾನು ನಿಮಗೆ ಯಾವುದೇ ಸಮಯದಲ್ಲಿ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಆತ ಹೇಳುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.&lt;/p&gt;&lt;p&gt;ಆಗ ತನಗೆ ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಆದರೂ ಆತ ನನ್ನ ವೈವಾಹಿಕ ಜೀವನದ ಬಗ್ಗೆ ಆಗಾಗ ಕಾಮೆಂಟ್ ಮಾಡುತ್ತಲೇ ಇದ್ದ. ನೀನು ಈಗಷ್ಟೇ ಮದುವೆಯಾಗಿದ್ದಿಯಾ? ಹನಿಮೂನ್&zwnj;ಗೆ ಎಲ್ಲಿಗೆ ಹೋಗುತ್ತಿದ್ದಿಯಾ? ಅಲ್ಲಿ ಏನು ಮಾಡುತ್ತೀಯಾ ಎಂದೆಲ್ಲಾ ಆತ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದ. ಈ ರಾಝಾನ ಈ ರೀತಿಯ ಅಧಿಕಪ್ರಸಂಗಿತನದ ಬಗ್ಗೆ ಟೀಮ್ ಲೀಡರ್ ಖುರೇಷಿ ಬಳಿ ಹೇಳಿದಾಗ ಆ ಟೀಮ್ ಲೀಡರ್ ಆತನ ವರ್ತನೆಯನ್ನು ನಿಯಂತ್ರಿಸುವ ಬದಲು ಆತನನ್ನೇ ಬೆಂಬಲಿಸುತ್ತಿದ್ದ.&lt;/p&gt;&lt;p&gt;ಶಾರುಖ್ ಖುರೇಷಿ ಕೂಡ ತನ್ನ ಮದುವೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ಲವ್ ಮ್ಯಾರೇಜ್&zwnj; ಅಥವಾ ಅರೆಂಜ್ ಮ್ಯಾರೇಜಾ ಎಂದು ಕೇಳುತ್ತಿದ್ದ, ಈ ಖುರೇಷಿ ಜೊತೆ ಸೇರಿ ರಾಝಾನೂ ನನಗೆ ಕಿರುಕುಳ ನೀಡುವುದಕ್ಕೆ ಶುರು ಮಾಡಿದ್ದ.&lt;/p&gt;&lt;p&gt;&lt;strong&gt;ಹೇಗೆ ಮಾಡಬೇಕೆಂದು ಕಲಿಸುತ್ತೇವೆ ಎಂದಿದ್ದ ಕಾಮುಕರು&lt;/strong&gt;&lt;/p&gt;&lt;p&gt;ನಿನಗೆ ನಿನ್ನ ಗಂಡನೊಂದಿಗೆ ಹೊಂದಿಕೆಯಾಗದಿದ್ದರೆ, ನಮಗೆ ತಿಳಿಸು ನಾವು ನಿಮಗೆ ನಿಖರವಾಗಿ ಏನು ಮಾಡಬೇಕೆಂದು ಮತ್ತು ಅದನ್ನು ಹೇಗೆ ಮಾಡಬೇಕೆಂದು ಕಲಿಸುತ್ತೇವೆ. ನಿಮಗೆ ಸಾಕಷ್ಟು ಗೆಳೆಯರು ಇದ್ದಿರಬೇಕು. ಅವರೆಲ್ಲರನ್ನೂ ಬಿಟ್ಟು ನೀವು ಹೇಗೆ ಮದುವೆಯಾದಿರಿ? ಆ ಗೆಳೆಯರು ಇನ್ನೂ ಹಿಂದಿನಂತೆಯೇ ನಿಮ್ಮನ್ನು ಬೆನ್ನಟ್ಟುತ್ತಿದ್ದರೆ ಮತ್ತು ನಿಮ್ಮ ಕುಟುಂಬ ಅಥವಾ ಪತಿಗೆ ಅದು ತಿಳಿದಿದ್ದರೆ, ಏನಾಗುತ್ತಿತ್ತು? ನೀವು ಏನು ಮಾಡುತ್ತೀರಿ? ಎಂದು ರಝಾ ತನಗೆ ಕೇಳುತ್ತಾ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.&lt;/p&gt;&lt;p&gt;ತನಗೆ ಪ್ಲೇಯರ್ ಎಂದು ಹೆಸರಿಟ್ಟಿದ್ದ ಆತ ತಾನು ಕಚೇರಿಗೆ ಪ್ರವೇಶಿಸಿದಾಗಲೆಲ್ಲಾ ಪ್ಲೇಯರ್ ಎಂದು ಕರೆಯುತ್ತಿದ್ದ. ನನ್ನ ಕೆಲಸದಲ್ಲಿ ಯಾವುದೇ ತೊಂದರೆಗಳು ಎದುರಾದರೆ ಮತ್ತು ನಾನು ಅದನ್ನು ಶಾರುಖ್&zwnj;ಗೆ ಹೇಳಿದರೆ, ಆತ ಈ ರಝಾನನ್ನು ಕರೆಸುತ್ತಿದ್ದ. ಈ ರಝಾ ಬಂದು ಏನಾಯ್ತು ಪ್ಲೇಯರ್? ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ? ನೀವು ಕಷ್ಟಪಡುತ್ತಿದ್ದರೆ, ನನಗೆ ತಿಳಿಸಿ ಎಂದು ಹೇಳುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತಿರುವಿನಲ್ಲಿ ಕಾದಿದ್ದ ಜವರಾಯ: ಕಂದಕಕ್ಕೆ ಉರುಳಿದ ಬಸ್ : 21 ಜನರ ದಾರುಣ ಸಾವು&lt;/strong&gt;&lt;/p&gt;&lt;p&gt;ನಿಮ್ಮ ಗಂಡ ಇಲ್ಲಿಗೆ ಏಕೆ ಬರುವುದಿಲ್ಲ? ನೀವು ನವವಿವಾಹಿತರು. ನಿಮ್ಮಿಂದ ದೂರ ಇರುವುದನ್ನು ಅವನು ಹೇಗೆ ಸಹಿಸಿಕೊಳ್ಳಬಲ್ಲನು? ನಾನು ಅವನ ಸ್ಥಾನದಲ್ಲಿದ್ದರೆ, ನೀವು ಇಲ್ಲದೆ ನಾನು ಎಲ್ಲಿಗೂ ಹೋಗುತ್ತಿರಲಿಲ್ಲ; ನಾನು ನಿಮ್ಮ ಪಕ್ಕದಲ್ಲಿಯೇ ಇರುತ್ತಿದ್ದೆ ಎಂದು ಹೇಳುತ್ತಾ ಆತ ತನಗೆ ಕಿರುಕುಳ ನೀಡುತ್ತಿದ್ದ, ಈ ವರ್ಷದ ಮಾರ್ಚ್&zwnj;ನಲ್ಲಿ ಗುಡಿ ಪಾಡ್ವಾ ಹಬ್ಬದ ದಿನದಂದು ಸೀರೆ ಉಟ್ಟು ಕಚೇರಿಗೆ ಬಂದಿದ್ದಾಗ ರಾಝಾ ನನ್ನ ಸೀರೆಯನ್ನು ಎಳೆದಾಡಿದ ಎಂದು ಮಹಿಳೆ ದೂರಿದ್ದಾರೆ.&lt;/p&gt;&lt;p&gt;ನಾನು ಸೀರೆ ಧರಿಸಿ ಬಂದಿದ್ದೆ. ನಾನು ಲಾಬಿಯ ಮೂಲಕ ಸಾಗಿ ಪ್ಯಾಂಟ್ರಿಯ ಮೂಲಕ ನಡೆಯುತ್ತಿದ್ದಾಗ, ಯಾರೋ ನನ್ನ ಸೀರೆಯ ಸೆರಗನ್ನು ಹಿಡಿದು ಎಳೆದ ಅನುಭವ ಆಯ್ತು. ನಾನು ತಿರುಗಿ ನೋಡಿದಾಗ, ಸೀರೆಯ ಸೆರಗು ರಾಝಾ ಕೈಯಲ್ಲಿತ್ತು. ನಾನು ತಕ್ಷಣ ನನ್ನ ಸೀರೆಯ ಸೆರಗನ್ನು ಹಿಂದಕ್ಕೆ ಎಳೆದಾಗ ಅವನು ನನ್ನನ್ನು ಅಸಭ್ಯವಾಗಿ ನೋಡಿ ಮುಗುಳ್ನಕ್ಕ ಎಂದು ಆ ಮಹಿಳಾ ಉದ್ಯೋಗಿ ಆರೋಪಿಸಿದ್ದಾರೆ.&lt;/p&gt;&lt;p&gt;ನಾಸಿಕ್&zwnj;ನಲ್ಲಿ ಟಿಸಿಎಸ್ ಕಂಪನಿಯಲ್ಲಿ ನಡೆದ ಒತ್ತಾಯಪೂರ್ವಕ ಮತಾಂತರ ಹಾಗೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 8 ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿ ಉದ್ಯೋಗದಿಂದ ಅಮಾನತಾಗಿರುವ ಉದ್ಯೋಗಿಗಳನ್ನು ದಾನಿಶ್ ಶೇಖ್, ತೌಸಿಫ್ ಅತ್ತರ್, ರಾಝಾ ಮೆಮನ್, ಶಾರುಖ್ ಖುರೇಶಿ, ಶಾಫಿ ಶೇಖ್, ಅಸೀಫ್ ಅಫ್ತಾಬ್ ಅನ್ಸಾರಿ ಹಾಗೂ ಹೆಚ್&zwnj; ಆರ್ ಮುಖ್ಯಸ್ಥೆಅಶ್ವಿನಿ ಚೈನಾನಿ ಎಂದು ಗುರುತಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪ್ರಧಾನಿ ಕಿವಿಯಲ್ಲಿ ಹೇಳಿದ ಗುಟ್ಟು ಮಾಡಿದ ಸಿಎಂ: ಮೋದಿ ಸಿದ್ದು ಬಳಿ ಹೇಳಿದ್ದೇನು?&lt;/strong&gt;&lt;/p&gt;]]></content:encoded>
            <category>private-jobs</category>
            <dc:creator>Anusha Kb</dc:creator>
            <atom:link href="https://kannada.asianetnews.com/private-jobs/newlyweds-saree-pulled-another-nashik-tcs-employee-reveals-the-horror-she-endured/articleshow-s0e7qay"/>
        </item>
        <item>
            <title><![CDATA[ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಅತ್ಯಂತ ವೇಗದ ಗಳಿಕೆಯ ಉದ್ಯೋಗ:ಲಿಂಕ್ಡ್‌ ಇನ್!]]></title>
            <link>https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od</link>
            <guid isPermaLink="true">https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od</guid>
            <pubDate>Thu, 16 Apr 2026 19:33:08 +0530</pubDate>
            <description><![CDATA[&lt;p&gt;ಲಿಂಕ್ಡ್&zwnj;ಇನ್ ತನ್ನ 'ಗ್ರಾಡ್ಸ್ ಗೈಡ್ 2026' ವರದಿಯನ್ನು ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿ ಹೊಸ ಪದವೀಧರರಿಗೆ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಈ ವರದಿಯ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ggh15q1vpmatfr0qfn7hgsgg,imgname-linkedin-is-introducing-a-new-feature-to-identify-fake-profiles.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್&zwnj; ಇನ್, ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೊಸ ಪದವೀಧರರಿಗೆ ಅವಕಾಶಗಳು ಎಲ್ಲಿವೆ ಎಂದು ತಿಳಿಯಲು ನೆರವಾಗುಲು ಮತ್ತು ಬದಲಾಗುತ್ತಿರುವ ಉದ್ಯೋಗದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ, ತನ್ನ 'ಗ್ರಾಡ್ಸ್ ಗೈಡ್ 2026' ಅನ್ನು ಬಿಡುಗಡೆ ಮಾಡಿದೆ. ಈ ವರದಿಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ಕೈಗಾರಿಕೆಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಲಿಂಕ್ಡ್&zwnj; ಇನ್ ಅಂಕಿಅಂಶಗಳ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಯುವ ಪ್ರತಿಭೆಗಳ ನಡುವೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.&lt;/p&gt;&lt;h2&gt;ಉದ್ಯಮ ಮತ್ತು ಜನಕೇಂದ್ರಿತ ವಲಯಗಳಲ್ಲಿ ಹೆಚ್ಚುತ್ತಿರುವ ಅವಕಾಶಗಳು&lt;/h2&gt;&lt;p&gt;ಯುವ ವೃತ್ತಿಪರರಿಗೆ ಕೇವಲ ತಂತ್ರಜ್ಞಾನ ಮಾತ್ರವಲ್ಲದೆ, ಉದ್ಯಮ ಅಭಿವೃದ್ಧಿ ಮತ್ತು ಜನಕೇಂದ್ರಿತ ಕೈಗಾರಿಕೆಗಳಲ್ಲೂ ಅವಕಾಶಗಳು ಲಭ್ಯವಾಗುತ್ತಿವೆ. ಶಿಕ್ಷಣ, ಸರ್ಕಾರಿ ಆಡಳಿತ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಹಾಗೂ ಎನರ್ಜಿ ಟೆಕ್ನಾಲಜಿ ಜೊತೆಗೆ 'ಯುಟಿಲಿಟಿಸ್' ಕ್ಷೇತ್ರವು ಈಗ ವೃತ್ತಿಜೀವನ ಆರಂಭಿಸುವವರಿಗೆ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಒಂದಾಗಿದೆ. ಮಾನವ ಸಂಪನ್ಮೂಲ, ಕನ್ಸಲ್ಟಿಂಗ್, ಮಾಹಿತಿ ತಂತ್ರಜ್ಞಾನ (ಐಟಿ), ಮಾರ್ಕೆಟಿಂಗ್, ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj; ಮೆಂಟ್ ಹಾಗೂ ಬಿಸಿನೆಸ್ ಡೆವಲಪ್&zwnj; ಮೆಂಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆರಂಭಿಕ ಹಂತದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ.&lt;/p&gt;&lt;p&gt;ಈ ಕುರಿತು ಲಿಂಕ್ಡ್&zwnj; ಇನ್&zwnj; ನ ಕರಿಯರ್ ಎಕ್ಸ್ ಪರ್ಟ್ ಮತ್ತು ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ಆದ ನಿರಾಜಿತಾ ಬ್ಯಾನರ್ಜಿ ಅವರು, &quot;ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಿರುವ ಯುವ ವೃತ್ತಿಪರರಿಗೆ ನನ್ನ ಅತ್ಯುತ್ತಮ ಸಲಹೆ ಎಂದರೆ, ಅಸಾಂಪ್ರದಾಯಿಕ ಹಾದಿಗಳು ಮತ್ತು ಅನಿರೀಕ್ಷಿತ ಸ್ಥಳಗಳಲ್ಲಿ ಸಿಗುವ ಉದ್ಯೋಗ ಅವಕಾಶಗಳಿಗೆ ಮುಕ್ತವಾಗಿರಿ. ಸರಿಯಾದ ಅವಕಾಶವು ನೀವು ನಿರೀಕ್ಷಿಸಿದ ಕಡೆಯೇ ಇರಬೇಕೆಂದಿಲ್ಲ. ಅದು ಬೇರೆ ಯಾವುದೋ ಉದ್ಯಮದಲ್ಲಿರಬಹುದು, ಹೊಸ ನಗರದಲ್ಲಿರಬಹುದು ಅಥವಾ ನೀವು ಇದುವರೆಗೆ ಪರಿಗಣಿಸದ ಹುದ್ದೆಯೂ ಆಗಿರಬಹುದು. ಕೌಶಲಗಳು ಒಂದು ವಲಯದಿಂದ ಇನ್ನೊಂದು ವಲಯಕ್ಕೂ ಹೊಂದಿಕೊಳ್ಳಬಲ್ಲ ಇಂದಿನ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ, ವೃತ್ತಿಪರರು ಬಹುಮುಖ ಕೌಶಲಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಆರಂಭಿಕ ವೃತ್ತಿಜೀವನವು ವಿವಿಧ ಹುದ್ದೆಗಳು ಮತ್ತು ಉದ್ಯಮಗಳ ಅನುಭವದಿಂದ ಹೆಚ್ಚು ಉತ್ತಮವಾಗಿ ರೂಪುಗೊಳ್ಳುತ್ತವೆ. ಆದರೆ ಮೊದಲ ಉದ್ಯೋಗದ ಹಾದಿಯು ಯಾವಾಗಲೂ ನೇರವಾಗಿರುವುದಿಲ್ಲ, ಹಾಗಾಗಿ ವೈವಿಧ್ಯಮಯ ಅನುಭವಗಳಿಗೆ ಮುಕ್ತವಾಗಿರುವುದು ನಿಮ್ಮ ವೃತ್ತಿಜೀವನಕ್ಕೆ ವೇಗವನ್ನು ನೀಡಲು ಮತ್ತು ನಿಮಗೆ ಸೂಕ್ತವಾದ ಉದ್ಯೋಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ&quot; ಎಂದು ಹೇಳುತ್ತಾರೆ.&lt;/p&gt;&lt;p&gt;ಲಿಂಕ್ಡ್&zwnj; ಇನ್ ಗ್ರಾಡ್ಸ್ ಗೈಡ್ 2026ರ ಪ್ರಕಾರ ಪದವೀಧರರಿಗಾಗಿ ಈ ವರ್ಷದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಕಾರ್ಯವಿಭಾಗಗಳು ಇಲ್ಲಿವೆ:&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ಉದ್ಯೋಗ ಹುದ್ದೆಗಳು:&lt;/h3&gt;&lt;p&gt;ಎಐ (Artificial Intelligence) ಸ್ಪೆಷಲಿಸ್ಟ್&lt;/p&gt;&lt;p&gt;ಜನರೇಟಿವ್ ಎಐ ಇಂಜಿನಿಯರ್&lt;/p&gt;&lt;p&gt;ಡಿಜಿಟಲ್ ಕಂಟೆಂಟ್ ಕ್ರಿಯೇಟರ್&lt;/p&gt;&lt;p&gt;ಬ್ರ್ಯಾಂಡ್ ರೆಪ್ರೆಸೆಂಟೇಟಿವ್&lt;/p&gt;&lt;p&gt;ಐಟಿ ಸ್ಪೆಷಲಿಸ್ಟ್&lt;/p&gt;&lt;p&gt;ಮೀಡಿಯಾ ಪ್ರೊಡಕ್ಷನ್ ಕ್ರೂ&lt;/p&gt;&lt;p&gt;ಬಿಡ್ ಮ್ಯಾನೇಜರ್&lt;/p&gt;&lt;p&gt;ಕೆಟಗರಿ ಮ್ಯಾನೇಜರ್&lt;/p&gt;&lt;p&gt;ಟೆಕ್ನಿಕಲ್ ಸಪೋರ್ಟ್ ಕನ್ಸಲ್ಟೆಂಟ್&lt;/p&gt;&lt;p&gt;ಸ್ಟೋರೇಜ್ ಇಂಜಿನಿಯರ್&lt;/p&gt;&lt;p&gt;&amp;nbsp;&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ವಲಯಗಳು:&lt;/h3&gt;&lt;p&gt;ಎಐ ಸ್ಪೆಷಲಿಸ್ಟ್ ಯುಟಿಲಿಟಿಸ್&lt;/p&gt;&lt;p&gt;ಶಿಕ್ಷಣ&lt;/p&gt;&lt;p&gt;ಸರ್ಕಾರಿ ಆಡಳಿತ&lt;/p&gt;&lt;p&gt;ಟ್ರಾನ್ಸ್&zwnj;ಪೋರ್ಟ್ ಮತ್ತು ಲಾಜಿಸ್ಟಿಕ್ಸ್&lt;/p&gt;&lt;p&gt;ಎನರ್ಜಿ ಟೆಕ್ನಾಲಜಿ&lt;/p&gt;&lt;p&gt;&amp;nbsp;&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ಕಾರ್ಯವಿಭಾಗಗಳು:&lt;/h3&gt;&lt;p&gt;ಮಾನವ ಸಂಪನ್ಮೂಲ (HR)&lt;/p&gt;&lt;p&gt;ಕನ್ಸಲ್ಟಿಂಗ್&lt;/p&gt;&lt;p&gt;ಮಾಹಿತಿ ತಂತ್ರಜ್ಞಾನ (IT)&lt;/p&gt;&lt;p&gt;ಮಾರ್ಕೆಟಿಂಗ್&lt;/p&gt;&lt;p&gt;ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj;ಮೆಂಟ್&lt;/p&gt;&lt;h2&gt;ಸಣ್ಣ ಸಂಸ್ಥೆಗಳು ಮತ್ತು ಮಹಾನಗರವಲ್ಲದ ನಗರಗಳಲ್ಲಿ ಹೆಚ್ಚುತ್ತಿರುವ ನೇಮಕಾತಿ&lt;/h2&gt;&lt;p&gt;ಸಣ್ಣ ಕಂಪನಿಗಳು ಉದ್ಯೋಗ ಮಾರುಕಟ್ಟೆಯ ಪ್ರಮುಖ ಪ್ರವೇಶ ದ್ವಾರಗಳಾಗಿ ಬೆಳೆಯುತ್ತಿವೆ. ಹೀಗಾಗಿ, ವೃತ್ತಿಜೀವನ ಆರಂಭಿಸುವವರು ಕೇವಲ ದೊಡ್ಡ ಕಂಪನಿಗಳ ಬಗ್ಗೆ ಮಾತ್ರ ಯೋಚಿಸದೆ ಸಣ್ಣ ಸಂಸ್ಥೆಗಳಲ್ಲಿನ ಅವಕಾಶಗಳನ್ನು ಪರಿಗಣಿಸುವುದು ಅನಿವಾರ್ಯವಾಗಿದೆ. ಪದವೀಧರರಿಗೆ 1 ರಿಂದ 10 ಉದ್ಯೋಗಿಗಳಿರುವ ಸಣ್ಣ ಸಂಸ್ಥೆಗಳಲ್ಲಿನ ನೇಮಕಾತಿಯು 2023 ಮತ್ತು 2025ರ ನಡುವೆ 64% ರಷ್ಟು ಹೆಚ್ಚಾಗಿದೆ. ಇನ್ನು ಒಟ್ಟಾರೆ ಆರಂಭಿಕ ಹಂತದ ಉದ್ಯೋಗಿಗಳನ್ನು ಪರಿಗಣಿಸಿದರೆ, ಈ ಬೆಳವಣಿಗೆಯು 168% ರಷ್ಟಿದೆ. ಉದ್ಯೋಗಾವಕಾಶಗಳು ಈಗ ಭೌಗೋಳಿಕವಾಗಿ ಎಲ್ಲಾ ಕಡೆ ವ್ಯಾಪಿಸುತ್ತಿವೆ. ವಿಜಯವಾಡ, ಭೋಪಾಲ್, ಜೈಪುರ, ಇಂದೋರ್, ಗ್ವಾಲಿಯರ್ ಮತ್ತು ವಡೋದರಾ ಅಂತಹ ನಗರಗಳು ಈಗ ಮಹಾನಗರಗಳ ಜೊತೆಗೆ ಭಾರತದ ಪ್ರಮುಖ ನೇಮಕಾತಿ ಕೇಂದ್ರಗಳಾಗಿ ಹೊರಹೊಮ್ಮುತ್ತಿದ್ದು, ಇದು ಯುವಕರಿಗೆ ಸಾಂಪ್ರದಾಯಿಕ ಉದ್ಯೋಗ ಕೇಂದ್ರಗಳ ಹೊರತಾಗಿ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದೆ.&lt;/p&gt;&lt;h2&gt;ಇಂಟರ್ನ್&zwnj; ಶಿಪ್ ಮೂಲಕ ವೃತ್ತಿಜೀವನದತ್ತ ಹೆಜ್ಜೆ&lt;/h2&gt;&lt;p&gt;2020-2022ಕ್ಕೆ ಹೋಲಿಸಿದರೆ, 2023-2025ರ ಅವಧಿಯಲ್ಲಿ ಆರಂಭಿಕ ಹಂತದ ನೇಮಕಾತಿಗಳಲ್ಲಿ ಇಂಟರ್ನ್&zwnj; ಶಿಪ್ ಪೂರ್ಣಗೊಳಿಸಿದವರ ಸಂಖ್ಯೆ ಹೆಚ್ಚಿದೆ. ಲಿಂಕ್ಡ್&zwnj; ಇನ್ ದತ್ತಾಂಶದ ಪ್ರಕಾರ, ಕಾನೂನು, ಪ್ರಾಡಕ್ಟ್ ಮ್ಯಾನೇಜ್&zwnj; ಮೆಂಟ್, ಕನ್ಸಲ್ಟಿಂಗ್, ಇಂಜಿನಿಯರಿಂಗ್ ಮತ್ತು ಬಿಸಿನೆಸ್ ಡೆವಲಪ್&zwnj; ಮೆಂಟ್ ವಿಭಾಗಗಳಲ್ಲಿ ಇದು ಗಣನೀಯವಾಗಿ ಕಂಡುಬಂದಿದೆ. ಪದವಿ ಮುಗಿದ ನಂತರ ಇಂಟರ್ನ್&zwnj; ಶಿಪ್ ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದ್ದು, ವಿಶೇಷವಾಗಿ ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj; ಮೆಂಟ್, ಇಂಜಿನಿಯರಿಂಗ್, ಐಟಿ, ಮೀಡಿಯಾ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ.&lt;/p&gt;&lt;p&gt;ನೀವು ಈಗಷ್ಟೇ ವೃತ್ತಿಜೀವನ ಆರಂಭಿಸುತ್ತಿದ್ದರೆ, ಉದ್ಯೋಗ ಮಾರುಕಟ್ಟೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಲಿಂಕ್ಡ್&zwnj; ಇನ್ ವೃತ್ತಿಜೀವನ ತಜ್ಞರಾದ ನಿರಾಜಿತಾ ಬ್ಯಾನರ್ಜಿ ಅವರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ:&lt;/p&gt;&lt;p&gt;&quot;ಅದೃಶ್ಯ&quot; ಉದ್ಯೋಗ ಮಾರುಕಟ್ಟೆಯನ್ನು ನಿರ್ಲಕ್ಷಿಸಬೇಡಿ: ನಿಮ್ಮ ಕೌಶಲಗಳು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಬಹುಮುಖಿಯಾಗಿವೆ. ಲಿಂಕ್ಡ್&zwnj; ಇನ್&zwnj; ನ ಎಐ-ಚಾಲಿತ ಉದ್ಯೋಗ ಹುಡುಕಾಟವು ನಿಮ್ಮ ಹಿನ್ನೆಲೆಗೆ ಹೊಂದಿಕೆಯಾಗುವ ಹುದ್ದೆಗಳನ್ನು ತೋರಿಸುವ ಮೂಲಕ ಇದನ್ನು ಸಾಬೀತುಪಡಿಸುತ್ತದೆ. ನೀವು ಯಾವತ್ತೂ ಪರಿಗಣಿಸದ ಉದ್ಯಮಗಳು ಅಥವಾ ಹುದ್ದೆಗಳನ್ನೂ ಇದು ನಿಮಗೆ ಸೂಚಿಸುತ್ತದೆ. ಈ ಎಐ-ಚಾಲಿತ ಉದ್ಯೋಗ ಹುಡುಕಾಟವು ಪ್ರಸ್ತುತ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್, ಪೋರ್ಚುಗೀಸ್ ಮತ್ತು ಜರ್ಮನ್ ಭಾಷೆಗಳಲ್ಲಿ ಲಭ್ಯವಿದೆ.&lt;/p&gt;&lt;p&gt;ಹೆಚ್ಚು ಫಲಿತಾಂಶ ನೀಡುವ ಕಡೆ ಗಮನಹರಿಸಿ: ಸಿಕ್ಕಸಿಕ್ಕ ಎಲ್ಲಾ ಕೆಲಸಗಳಿಗೂ ಅರ್ಜಿ ಸಲ್ಲಿಸುವ ಬದಲು, ನಿಮ್ಮ ಕೌಶಲಗಳಿಗೆ ಉತ್ತಮವಾಗಿ ಹೊಂದಿಕೆಯಾಗುವ ಉದ್ಯೋಗಗಳಿಗೆ ಆದ್ಯತೆ ನೀಡಿ. ಲಿಂಕ್ಡ್&zwnj; ಇನ್&zwnj; ನ 'ಜಾಬ್ ಮ್ಯಾಚ್' ನಂತಹ ಟೂಲ್ ಗಳು ನೀವು ಯಾವ ಉದ್ಯೋಗಕ್ಕೆ ಹೆಚ್ಚು ಸೂಕ್ತ ಎಂಬುದನ್ನು ತ್ವರಿತವಾಗಿ ಗುರುತಿಸಲು ಸಹಾಯ ಮಾಡುತ್ತವೆ. ಇದರಿಂದ ನೀವು ಹೆಚ್ಚು ಅವಕಾಶವಿರುವ ಅರ್ಜಿಗಳ ಮೇಲೆ ಹೆಚ್ಚಿನ ಸಮಯ ಕಳೆಯಬಹುದು.&lt;/p&gt;&lt;p&gt;ಕೇವಲ ಸಾಮರ್ಥ್ಯವಲ್ಲ, ಪುರಾವೆಯನ್ನು ತೋರಿಸಿ: ನಿಮಗೆ ವರ್ಷಗಳ ಅನುಭವ ಇಲ್ಲದಿದ್ದರೂ ಪರವಾಗಿಲ್ಲ. ನೀವು ಏನು ಮಾಡಬಲ್ಲಿರಿ ಎಂಬುದನ್ನು ತೋರಿಸುವುದು ಇಲ್ಲಿ ಮುಖ್ಯ. ನೀವು ಮಾಡಿದ ಪ್ರಾಜೆಕ್ಟ್&zwnj; ಗಳು, ಕೆಲಸದ ಉದಾಹರಣೆಗಳು ಮತ್ತು ನೀವು ಬೆಳೆಸಿಕೊಂಡ ಕೌಶಲಗಳನ್ನು ಹಂಚಿಕೊಳ್ಳಿ. ನೀವು ಬಳಸುವ Loveable ಅಥವಾ Replit ನಂತಹ ಎಐ ಟೂಲ್ ಗಳ ಮೂಲಕ ಕೌಶಲಗಳನ್ನು ದೃಢೀಕರಿಸುವುದರಿಂದ ಅಥವಾ ವೆರಿಫೈ ಮಾಡುವುದರಿಂದ ಉದ್ಯೋಗದಾತರು ನಿಮ್ಮ ಸಾಮರ್ಥ್ಯವನ್ನು ಬೇಗನೆ ಗುರುತಿಸಲು ಸಹಾಯ ಮಾಡುತ್ತದೆ.&lt;/p&gt;&lt;p&gt;ಸಂಘಟಿತರಾಗಿರಿ ಮತ್ತು ಉತ್ಸಾಹ ಕಳೆದುಕೊಳ್ಳಬೇಡಿ: ಅರ್ಜಿ ಸಲ್ಲಿಸಿದ ನಂತರ ಮುಂದೇನು ಎಂಬ ಗೊಂದಲ ಸಹಜ. ನಿಮ್ಮ ಅರ್ಜಿಯ ಸ್ಥಿತಿ ಮತ್ತು ಫಾಲೋ- ಅಪ್&zwnj; ಗಳನ್ನು ಟ್ರ್ಯಾಕ್ ಮಾಡಲು ಲಿಂಕ್ಡ್&zwnj; ಇನ್&zwnj; ನ 'ಜಾಬ್ ಟ್ರ್ಯಾಕರ್' ಬಳಸಿ. ಅಲ್ಲದೆ, ನಿಮ್ಮ ನೆಟ್&zwnj; ವರ್ಕ್&zwnj; ನಲ್ಲಿ ಯಾರು ನಿಮಗೆ ಸಹಾಯ ಮಾಡಬಲ್ಲರು ಎಂಬುದನ್ನು ಗುರುತಿಸಿ.&lt;/p&gt;&lt;p&gt;ಕಲಿಯಲು 'ಫಾಲೋ' ಮಾಡಿ: ನಿಮಗೆ ಪರಿಚಯವಿರುವ ಮತ್ತು ನಂಬಿಕಸ್ತ ವ್ಯಕ್ತಿಗಳೊಂದಿಗೆ ಮಾತ್ರ ಕನೆಕ್ಟ್ ಆಗಿ. ಉಳಿದವರಿಗೆ ಕೇವಲ &quot;ಫಾಲೋ&quot; ಬಟನ್ ಒತ್ತಿ. ಇದರಿಂದ ಅವರ ಪೋಸ್ಟ್&zwnj; ಗಳನ್ನು ನೋಡಲು ಮತ್ತು ಅವರ ವಿಷಯಗಳ ಬಗ್ಗೆ ಚರ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ಲಿಂಕ್ಡ್&zwnj; ಇನ್&zwnj; ನ ಹೊಸ 'ಪೀಪಲ್ ಸರ್ಚ್' ಮೂಲಕ ನಿಮಗೆ ಸ್ಫೂರ್ತಿ ನೀಡುವ ವೃತ್ತಿಪರರನ್ನು ಹುಡುಕುವುದು ಮತ್ತು ಸಂಪರ್ಕಿಸುವುದು ಈಗ ಸುಲಭವಾಗಿದೆ (ಪ್ರಸ್ತುತ ಅಮೆರಿಕದಲ್ಲಿ ಮಾತ್ರ ಲಭ್ಯ).&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od"/>
        </item>
        <item>
            <title><![CDATA[ಬಿಪಿಸಿಎಲ್ ನೇಮಕಾತಿ: ಆಯ್ಕೆಯಾದವರಿಗೆ ಭರ್ಜರಿ ಜಾಕ್‌ಪಾಟ್‌ , ತಿಂಗಳಿಗೆ ₹1.40 ಲಕ್ಷ ಸಂಬಳ!]]></title>
            <link>https://kannada.asianetnews.com/jobs/bpcl-recruitment-2026-executive-posts-open-high-salary-and-benefits-announced-gdp/articleshow-vdnltgb</link>
            <guid isPermaLink="true">https://kannada.asianetnews.com/jobs/bpcl-recruitment-2026-executive-posts-open-high-salary-and-benefits-announced-gdp/articleshow-vdnltgb</guid>
            <pubDate>Fri, 24 Apr 2026 20:00:15 +0530</pubDate>
            <description><![CDATA[ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) 250ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಅಸೋಸಿಯೇಟ್ ಎಕ್ಸಿಕ್ಯೂಟಿವ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿದ್ದು, ಆಯ್ಕೆಯಾದವರಿಗೆ ಗರಿಷ್ಠ ₹1.40 ಲಕ್ಷದವರೆಗೆ ಆಕರ್ಷಕ ವೇತನ ದೊರೆಯಲಿದೆ. ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01e1ed8te9xbdbvfxakeagpvcs,imgname-pjimage--57--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದ ಪ್ರಮುಖ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಒಂದಾದ Bharat Petroleum Corporation Limited (ಬಿಪಿಸಿಎಲ್) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶವನ್ನು ಘೋಷಿಸಿದೆ. ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ ಸಾಧಿಸಲು ಬಯಸುವ ಅಭ್ಯರ್ಥಿಗಳಿಗಾಗಿ ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 250ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ವಿಶೇಷತೆ ಎಂದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಗರಿಷ್ಠ ₹1.40 ಲಕ್ಷವರೆಗೆ ಆಕರ್ಷಕ ಮಾಸಿಕ ವೇತನ ಲಭ್ಯವಿರುವುದು.&lt;/p&gt;&lt;h2&gt;ಹುದ್ದೆಗಳ ವಿವರ ಮತ್ತು ವೇತನ&lt;/h2&gt;&lt;p&gt;ಈ ನೇಮಕಾತಿಯಲ್ಲಿ ಮುಖ್ಯವಾಗಿ &lsquo;ಅಸೋಸಿಯೇಟ್ ಎಕ್ಸಿಕ್ಯೂಟಿವ್&rsquo; ಹಾಗೂ &lsquo;ಜೂನಿಯರ್ ಎಕ್ಸಿಕ್ಯೂಟಿವ್&rsquo; ಹುದ್ದೆಗಳಿಗೆ ಆದ್ಯತೆ ನೀಡಲಾಗಿದೆ.&lt;/p&gt;&lt;p&gt;ಅಸೋಸಿಯೇಟ್ ಎಕ್ಸಿಕ್ಯೂಟಿವ್: ಈ ಹುದ್ದೆಗೆ ಆಯ್ಕೆಯಾದವರಿಗೆ ₹40,000 ರಿಂದ ಆರಂಭವಾಗಿ ಗರಿಷ್ಠ ₹1,40,000 ವರೆಗೆ ಸಂಬಳ ನೀಡಲಾಗುತ್ತದೆ. ಜೂನಿಯರ್ ಎಕ್ಸಿಕ್ಯೂಟಿವ್: ತಾಂತ್ರಿಕ ವಿಭಾಗಕ್ಕೆ ಸೇರಿದ ಈ ಹುದ್ದೆಗಳಿಗೆ ₹30,000 ರಿಂದ ₹1,20,000 ವರೆಗೆ ವೇತನ ಇರಲಿದೆ.&lt;/p&gt;&lt;p&gt;ಇದರ ಜೊತೆಗೆ ವೈದ್ಯಕೀಯ ಸೌಲಭ್ಯಗಳು, ರಜೆ ಭತ್ಯೆ ಹಾಗೂ ಇತರೆ ಸರ್ಕಾರಿ ಕಂಪನಿಗಳ ಸೌಲಭ್ಯಗಳನ್ನೂ ಅಭ್ಯರ್ಥಿಗಳು ಪಡೆಯಬಹುದು.&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ ಮತ್ತು ಅನುಭವ&lt;/h2&gt;&lt;p&gt;ಪ್ರತಿ ಹುದ್ದೆಗೆ ಬಿಪಿಸಿಎಲ್ ವಿಭಿನ್ನ ಅರ್ಹತೆಗಳನ್ನು ನಿಗದಿಪಡಿಸಿದೆ:&lt;/p&gt;&lt;p&gt;ಕ್ವಾಲಿಟಿ ಅಶ್ಯುರೆನ್ಸ್: ಕೆಮಿಸ್ಟ್ರಿಯಲ್ಲಿ ಎಂ.ಎಸ್ಸಿ ಪದವಿ ಹೊಂದಿದ್ದು, ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಇರಬೇಕು. ಜೂನಿಯರ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್): ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಸಿವಿಲ್ ಎಂಜಿನಿಯರಿಂಗ್&zwnj;ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅಕೌಂಟ್ಸ್ ಮತ್ತು ಫೈನಾನ್ಸ್: ಸಿಎ (CA) ಅಥವಾ ಸಿಎಂಎ (CMA) ಇಂಟರ್ಮೀಡಿಯೇಟ್ ಪೂರೈಸಿದ ಅಭ್ಯರ್ಥಿಗಳಿಗೆ ಅವಕಾಶವಿದೆ. ಅಧಿಕೃತ ಭಾಷಾ ಅನುಷ್ಠಾನ: ಹಿಂದಿಯಲ್ಲಿ ಎಂಎ ಪದವಿ ಪಡೆದವರಿಗೆ ಈ ವಿಭಾಗದಲ್ಲಿ ಹುದ್ದೆಗಳು ಲಭ್ಯವಿವೆ. ವಯೋಮಿತಿ ಮತ್ತು ಸಡಿಲಿಕೆ&lt;/p&gt;&lt;p&gt;ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಿರಬೇಕು. ಹುದ್ದೆಗಳ ಪ್ರಕಾರ ಗರಿಷ್ಠ ವಯೋಮಿತಿ 32 ರಿಂದ 35 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಸರ್ಕಾರದ ಮೀಸಲಾತಿ ನಿಯಮಗಳಂತೆ ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ&lt;/h2&gt;&lt;p&gt;ಅಭ್ಯರ್ಥಿಗಳ ಸಾಮರ್ಥ್ಯವನ್ನು ಅಳೆಯಲು ಬಹುಹಂತದ ಆಯ್ಕೆ ಪ್ರಕ್ರಿಯೆಯನ್ನು ರೂಪಿಸಲಾಗಿದೆ. ಮೊದಲು ಅರ್ಜಿಗಳ ಸ್ಕ್ರೀನಿಂಗ್ ನಡೆಯುತ್ತದೆ. ಬಳಿಕ ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಗುಂಪು ಚರ್ಚೆ (GD) ಮತ್ತು ವೈಯಕ್ತಿಕ ಸಂದರ್ಶನ (PI) ನಡೆಯುತ್ತದೆ. ಅಂತಿಮ ಹಂತದಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;p&gt;ಆಸಕ್ತ ಅಭ್ಯರ್ಥಿಗಳು ಬಿಪಿಸಿಎಲ್&zwnj;ನ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ &lsquo;Careers&rsquo; ವಿಭಾಗದಲ್ಲಿ ಪ್ರಸ್ತುತ ನೇಮಕಾತಿ ಲಿಂಕ್ ಅನ್ನು ತೆರೆಯಬೇಕು. ಅಗತ್ಯ ದಾಖಲೆಗಳನ್ನು ಅಪ್&zwnj;ಲೋಡ್ ಮಾಡಿ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ₹1180 ಅರ್ಜಿ ಶುಲ್ಕವಿದ್ದು, ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.&lt;/p&gt;&lt;p&gt;ಈ ನೇಮಕಾತಿ ಪ್ರಕ್ರಿಯೆ ಮೂಲಕ ಉತ್ತಮ ಸಂಬಳ ಮತ್ತು ಭದ್ರ ಭವಿಷ್ಯವನ್ನು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭ್ಯವಾಗಿದ್ದು, ಆಸಕ್ತರು ಸಮಯ ವ್ಯರ್ಥ ಮಾಡದೇ ಅರ್ಜಿ ಸಲ್ಲಿಸುವುದು ಒಳಿತು.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/bpcl-recruitment-2026-executive-posts-open-high-salary-and-benefits-announced-gdp/articleshow-vdnltgb"/>
        </item>
        <item>
            <title><![CDATA[ಕಾರ್ ಜೊತೆ ಮನೆ ಭತ್ಯೆ, ಇಲ್ಲಿಐಷಾರಾಮಿ ಜೀವನ ನಡೆಸ್ತಾಳೆ ಮನೆ ಕೆಲ್ಸದಾಕೆ]]></title>
            <link>https://kannada.asianetnews.com/gallery/private-jobs/why-are-maid-and-cleaners-living-luxury-lifestyle-in-the-us-and-europe-w28w7zr</link>
            <guid isPermaLink="true">https://kannada.asianetnews.com/gallery/private-jobs/why-are-maid-and-cleaners-living-luxury-lifestyle-in-the-us-and-europe-w28w7zr</guid>
            <pubDate>Wed, 15 Apr 2026 14:25:04 +0530</pubDate>
            <description><![CDATA[&lt;p&gt;Domestic worker : ಭಾರತ ಹಾಗೂ ವಿದೇಶಿ ಮನೆ ಕೆಲಸಗಾರರ ಮಧ್ಯೆ ವ್ಯತ್ಯಾಸವಿದೆ. ಸಂಬಳದಿಂದ ಹಿಡಿದು ಸೌಲಭ್ಯದವರೆಗೆ ಎಲ್ಲದ್ರಲ್ಲೂ ಸಾಕಷ್ಟು ವ್ಯತ್ಯಾಸ ನೋಡ್ಬಹುದು. ವಿದೇಶದಲ್ಲಿ ಮನೆ ಕೆಲಸಗಾರರಿಗೆ ಎಷ್ಟು ಹಣ ಸಿಗುತ್ತೆ? ಏನೆಲ್ಲ ಸೌಲಭ್ಯ ಸಿಗುತ್ತೆ ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp858xwjh4bfgqgwb0cecc4d,imgname-maid-1776242947986.jpg" type="image/jpeg" height="390" width="690"/>
            <content:encoded><![CDATA[&lt;p&gt;Domestic worker : ಭಾರತ ಹಾಗೂ ವಿದೇಶಿ ಮನೆ ಕೆಲಸಗಾರರ ಮಧ್ಯೆ ವ್ಯತ್ಯಾಸವಿದೆ. ಸಂಬಳದಿಂದ ಹಿಡಿದು ಸೌಲಭ್ಯದವರೆಗೆ ಎಲ್ಲದ್ರಲ್ಲೂ ಸಾಕಷ್ಟು ವ್ಯತ್ಯಾಸ ನೋಡ್ಬಹುದು. ವಿದೇಶದಲ್ಲಿ ಮನೆ ಕೆಲಸಗಾರರಿಗೆ ಎಷ್ಟು ಹಣ ಸಿಗುತ್ತೆ? ಏನೆಲ್ಲ ಸೌಲಭ್ಯ ಸಿಗುತ್ತೆ ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನೋಯ್ಡಾದಲ್ಲಿ ಮಂಗಳವಾರ ಮನೆ ಕೆಲಸದವರು ಬೀದಿಗಿಳಿದಿದ್ದರು. ಸಂಬಳ ಏರಿಕೆ ಹಾಗೂ ವಾರಕ್ಕೊಂದು ರಜೆ ಬೇಡಿಕೆಯನ್ನಿಟ್ಟು ಮೇಡ್ ಗಳು ಪ್ರತಿಭಟನೆ ನಡೆಸಿದ್ರು. ಮನೆ ಕೆಲಸ ಮಾಡುವ ಸೇವಕಿಯರ ಈ ಪ್ರತಿಭಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಜನರು ವಿದೇಶಗಳಲ್ಲಿ ಸಿಗುವಂತೆ ಮೇಡ್ ಗಳಿಗೆ ಸೂಕ್ತ ಸಂಬಳ ಹಾಗೂ ಭದ್ರತೆ ಸಿಗ್ಬೇಕಾ ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ವಿದೇಶಗಳಲ್ಲಿ ಮೇಡ್ ಗಳ ಸ್ಥಿತಿ ಭಾರತಕ್ಕಿಂತ ಸಂಪೂರ್ಣ ಭಿನ್ನವಾಗಿದೆ.&lt;/p&gt;&lt;img&gt;&lt;p&gt;ಅಮೆರಿಕ ಹಾಗೂ ಯುರೋಪ್ ನಲ್ಲಿ ಮನೆ ಕೆಲಸ ಮಾಡುವ ಕಾರ್ಮಿಕರ ಜೀವನ ವೃತ್ತಿಪರವಾಗಿದೆ. ಅಮೆರಿಕಾದಲ್ಲಿ ಮನೆ ಕೆಲಸವನ್ನು ಐಷಾರಾಮಿಯಾಗಿ ನೋಡಲಾಗುತ್ತದೆ. ಇಲ್ಲಿ ಕಾರ್ಮಿಕರ ಸಂಬಳ ಹೆಚ್ಚಿದೆ. ಹಾಗಾಗಿಯೇ ಇಲ್ಲ ಎಲ್ಲರೂ ಮೇಡ್ ಹೊಂದಲು ಸಾಧ್ಯವಿಲ್ಲ. ಒಬ್ಬ ವೃತ್ತಿಪರ ನಾನಿ ಮತ್ತು ಹೌಸ್ ಕೀಪರ್ ಸಾಮಾನ್ಯ ಸಂಬಳ 25 ಡಾಲರ್ ನಿಂದ 50 ಡಾಲರ್ ಒಳಗಿರುತ್ತದೆ. ಇದು ಪ್ರತಿ ಗಂಟೆ ಲೆಕ್ಕ. ಅಂದ್ರೆ ಮನೆ ಕೆಲದವರು ಒಂದು ಗಂಟೆಗೆ ಸಾವಿರದಿಂದ ನಾಲ್ಕು ಸಾವಿರ ಸಂಬಳ ಪಡೆಯುತ್ತಾರೆ. 2026ರ ವರದಿ ಪ್ರಕಾರ, ನ್ಯೂಯಾರ್ಕ್ ನಲ್ಲಿ ಒಬ್ಬ ಅನುಭವಿ ಮೇಡ್ ವರ್ಷಕ್ಕೆ 60 ರಿಂದ 85 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ.&lt;/p&gt;&lt;img&gt;&lt;p&gt;ಅಮೆರಿಕಾದ ಎಲ್ಲ ಪ್ರದೇಶಕ್ಕೆ ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲ. ಹಾಗಾಗಿ ಅನೇಕ ಕಡೆ ಮೇಡ್ ತಮ್ಮ ಕಾರ್ ನಲ್ಲಿ ಓಡಾಡ್ತಾರೆ. ಹಳೆಯ ಅಥವಾ ಸಾಮಾನ್ಯ ಕಾರುಗಳನ್ನು ಅವರು ಖರೀದಿ ಮಾಡ್ತಾರೆ. ಮನೆ ಮಾಲೀಕರು ಕಾರ್ ಭತ್ಯೆ ಹಾಗೂ ಗ್ಯಾಸ್ ಭತ್ಯೆ ನೀಡುವುದಿದೆ.&lt;/p&gt;&lt;img&gt;&lt;p&gt;ಯುರೋಪ್ನಲ್ಲಿ ಕಾನೂನುಗಳು ತುಂಬಾ ಕಟ್ಟುನಿಟ್ಟಾಗಿವೆ. ಅಲ್ಲಿನ ಮನೆ ಕೆಲಸ ಮಾಡುವವರನ್ನು ನೌಕರರನ್ನಾಗಿ ಅಲ್ಲ, ಕೆಲಸಗಾರರೆಂದು ಪರಿಗಣಿಸಲಾಗುತ್ತದೆ. ಬ್ರಿಟನ್ ಮತ್ತು ಫ್ರಾನ್ಸ್ನಂತಹ ದೇಶಗಳಲ್ಲಿ, ಕೆಲಸದ ಸಮಯವನ್ನು ನಿಗದಿಪಡಿಸಲಾಗಿದೆ. ಒಬ್ಬ ಸೇವಕಿ ಸಂಜೆ 5 ಗಂಟೆಯ ನಂತರ ಕೆಲಸ ಮಾಡಿದರೆ, ಅವಳಿಗೆ ಹೆಚ್ಚುವರಿ ಸಂಬಳ ನೀಡಬೇಕು.&lt;/p&gt;&lt;img&gt;&lt;p&gt;ಯುರೋಪ್ನಲ್ಲಿ, ಗೃಹ ಕಾರ್ಮಿಕರು ವಾರ್ಷಿಕವಾಗಿ 20 ರಿಂದ 30 ದಿನಗಳ ವೇತನ ರಜೆ ಮತ್ತು ಆರೋಗ್ಯ ವಿಮೆಯನ್ನು ಪಡೆಯುತ್ತಾರೆ. ಕೆಲಸ ಮುಗಿದ ನಂತ್ರ ಮನೆ ಮಾಲೀಕರು ಅವರನ್ನು ಯಾವುದೇ ಕಾರಣಕ್ಕೂ ಸಂಪರ್ಕಿಸುವಂತಿಲ್ಲ.&lt;/p&gt;&lt;img&gt;&lt;p&gt;ಭಾರತ ಹಾಗೂ ವಿದೇಶದ ಮೇಡ್ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಬರೀ ಸಂಬಳ ನೋಡಿದ್ರೆ ಸಾಲದು. ವಿದೇಶದಲ್ಲಿ ಮಕ್ಕಳು ಹಾಗೂ ವೃದ್ಧರನ್ನು ನೋಡಿಕೊಳ್ಳಲು ಮೇಡ್ ಸರ್ಟಿಫಿಕೆಟ್ ತೋರಿಸ್ಬೇಕು. ಅವರಿಗೆ ಹೆಚ್ಚಿನ ಗೌರವ ಸಿಗುತ್ತದೆ. ಮಾಲೀಕರ ಜೊತೆ ಕುಳಿತು ಅವರು ಊಟ ಮಾಡ್ಬಹುದು. ಅಮೆರಿಕಾದಲ್ಲಿ ತಿಂಗಳಿಗೆ 5 ಲಕ್ಷ ಸಂಬಳ ಪಡೆದ್ರೂ ಸಾಮಾನ್ಯ ಮನೆ ಬಾಡಿಗೆ 1 ರಿಂದ 2 ಲಕ್ಷ ಇರುತ್ತದೆ. ಹಾಗೆ ವಿಮೆ ಜವಾಬ್ದಾರಿ ಮನೆ ಕೆಲಸದಾಕೆಯದ್ದಾಗಿರುತ್ತದೆ. ಭಾರತದಲ್ಲಿ ಆಹಾರ, ಬಟ್ಟೆ, ಔಷಧಿ ಖರ್ಚಿಗೆ ಮನೆ ಮಾಲೀಕರೇ ಸಹಾಯ ಮಾಡ್ತಾರೆ.&lt;/p&gt;]]></content:encoded>
            <category>private-jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/private-jobs/why-are-maid-and-cleaners-living-luxury-lifestyle-in-the-us-and-europe-w28w7zr"/>
        </item>
    </channel>
</rss>
