<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 17 Sep 2026 16:04:39 +0530</lastBuildDate>
        <atom:link href="https://kannada.asianetnews.com/rss/private-jobs" rel="self" type="application/rss+xml"/>
        <item>
            <title><![CDATA[ಭಾರತದ 50 ಲಕ್ಷ ಸಂಬಳಕ್ಕಿಂತ ಲಂಡನ್ ನಲ್ಲಿ ಸಿಗೋ 12 ಲಕ್ಷ ಸ್ಯಾಲರಿ ಪ್ರಿಯವಾಗಿದ್ದೇಕೆ?]]></title>
            <link>https://kannada.asianetnews.com/private-jobs/left-a-50-lakh-package-in-delhi-why-accept-a-12-lakh-offer-in-london/articleshow-02koifq</link>
            <guid isPermaLink="true">https://kannada.asianetnews.com/private-jobs/left-a-50-lakh-package-in-delhi-why-accept-a-12-lakh-offer-in-london/articleshow-02koifq</guid>
            <pubDate>Mon, 31 Aug 2026 14:20:51 +0530</pubDate>
            <description><![CDATA[&lt;p&gt;50 lakh package Salary : 50 ಲಕ್ಷದ ಪ್ಯಾಕೇಜ್&zwnj; ಜಾಬ್ ಸಿಕ್ಕಿದ್ರೆ ಯಾರು ಬಿಡ್ತಾರೆ? ಈ ಮಹಿಳೆ ಆ ಕೆಲ್ಸವನ್ನು ಬಿಟ್ಟಿದ್ದಾಳೆ. 50 ಲಕ್ಷ ಕೆಲ್ಸದ ಬದಲು 12 ಲಕ್ಷದ ಕೆಲ್ಸ ಒಪ್ಕೊಂಡಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1bfz3es5djy095a9gn2yty3,imgname-jasleen-kaur-1788165983705.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರತಿಯೊಬ್ಬರು ಹೆಚ್ಚು ಸಂಬಳ ಪಡೆಯೋಕೆ ಇಷ್ಟಪಡ್ತಾರೆ. ಅದಕ್ಕಾಗಿ ಸಾಕಷ್ಟು ಪ್ರಯತ್ನ ಕೂಡ ನಡೆಸ್ತಾರೆ. ಸಂಬಳ ಹೆಚ್ಚಾಗ್ತಿದ್ದಂತೆ ಇಲ್ಲ ಹೆಚ್ಚು ಸಂಬಳ ನೀಡುವ ಹೊಸ ಜಾಬ್&zwnj; ಸಿಕ್ತಿದ್ದಂತೆ ಜನರು ಅದಕ್ಕೆ ಆಕರ್ಷಿತರಾಗ್ತಾರೆ. 50 ಲಕ್ಷ ಪ್ಯಾಕೇಜ್&zwnj; ಸಿಕ್ಕಾಗ ಅದನ್ನು ಬಿಡುವವರ ಸಂಖ್ಯೆ ಬಹಳ ಅಪರೂಪ. ಮಹಿಳೆಯೊಬ್ಬರು 50 ಲಕ್ಷ ಪ್ಯಾಕೇಜ್&zwnj; ಸಂಬಳದ ಕೆಲ್ಸ ಬಿಟ್ಟಿದ್ದಾರೆ. ಅದ್ರ ಬದಲು 12 ಲಕ್ಷದ ಸಂಬಳದ ಕೆಲ್ಸಕ್ಕೆ ಆಸಕ್ತಿ ತೋರಿದ್ದಾರೆ. ಅದಕ್ಕೆ ಕಾರಣವಿದೆ.&lt;/p&gt;&lt;h2&gt;50 ಲಕ್ಷದ ಪ್ಯಾಕೇಜ್&zwnj; ಬಿಟ್ಟ ಮಹಿಳೆ !&lt;/h2&gt;&lt;p&gt;ದೆಹಲಿಯ ಜಸ್ಲೀನ್ ಕೌರ್ 50 ಲಕ್ಷದ ಪ್ಯಾಕೇಜ್&zwnj; ಕೆಲ್ಸ ಬಿಟ್ಟಿದ್ದಾರೆ. ಅವರ ನಿರ್ಧಾರ ಎಲ್ಲರನ್ನು ಬೆರಗುಗೊಳಿಸಿದೆ. ದೆಹಲಿಯಲ್ಲಿ 50 ಲಕ್ಷದ ವಾರ್ಷಿಕ ಪ್ಯಾಕೇಜ್ನಲ್ಲಿ ಕೆಲಸ ಮಾಡುತ್ತಿದ್ದ ಜಸ್ಲೀನ್&zwnj; ಕೌರ್, ಕೆಲ್ಸ ಬಿಟ್ಟು ಲಂಡನ್&zwnj; ಗೆ ತೆರೆಳಿದ್ರು. ಲಂಡನ್&zwnj; ನಲ್ಲಿ ಅವರಿಗೆ ಸಿಗುತ್ತಿರುವ ಸಂಬಳ ಬಹಳ ಕಡಿಮೆ. ಲಂಡನ್&zwnj; ನಲ್ಲಿ ಅವರು 12 ಲಕ್ಷ ಪ್ಯಾಕೇಜ್&zwnj; ಕೆಲ್ಸ ಮಾಡ್ತಿದ್ದಾರೆ. ಲಂಡನ್ಗೆ ತೆರಳಿ ತಮ್ಮ ವೃತ್ತಿಜೀವನ ಮುಂದುವರಿಸಲು ನಿರ್ಧರಿಸಿದ್ದ ಅವರು, ಸಂಬಳ ನೋಡ್ದೆ ಹೆಜ್ಜೆ ಮುಂದಿಟ್ಟಿದ್ದರು. ಅವರ ಅನುಭವದ ಪ್ರಕಾರ, ಲಂಡನ್ನಲ್ಲಿ ಅವರಿಗೆ ಸಿಕ್ಕಿದ್ದು ಕೇವಲ ಉದ್ಯೋಗವಲ್ಲ,ಜೀವನಶೈಲಿಯಲ್ಲೂ ಹಲವು ಬದಲಾವಣೆಗಳಾಗಿವೆ.&lt;/p&gt;&lt;p&gt;ಜಸ್ಲೀನ್ ಅವರ ಪ್ರಕಾರ, ಸ್ವಚ್ಛ ಗಾಳಿ, ಸುರಕ್ಷತೆ, ನಡೆಯಲು ಉತ್ತಮ ವ್ಯವಸ್ಥೆ, ಆರೋಗ್ಯ ಮತ್ತು ವರ್ಕ್ ಲೈಫ್ ಬ್ಯಾಲೆನ್ಸ್ ಅವರಿಗೆ ಲಂಡನ್&zwnj; ಕೆಲ್ಸದಲ್ಲಿ ಸಿಕ್ಕಿದೆಯಂತೆ.&lt;/p&gt;&lt;h3&gt;ದೆಹಲಿಯಲ್ಲಿದ್ದ ಸೌಲಭ್ಯ ಲಂಡನ್&zwnj; ನಲ್ಲಿಲ್ಲ !&lt;/h3&gt;&lt;p&gt;ದೆಹಲಿಯಲ್ಲಿ ಕಾರು ಇದ್ದ ಕಾರಣ ಎಲ್ಲಿಗೆ ಬೇಕಾದರೂ ಸುಲಭವಾಗಿ ಹೋಗಬಹುದಿತ್ತು. ಮನೆಯ ಕೆಲಸಗಳಿಗೆ ಸಹಾಯಕರಿದ್ದರು. ಅಗತ್ಯ ವಸ್ತುಗಳು ಕೂಡ ಬೇಗ ಮನೆಗೆ ಬರ್ತಿದ್ದವು. ಆದರೆ ಲಂಡನ್ನಲ್ಲಿ ದಿನನಿತ್ಯದ ಹಲವು ಕೆಲಸಗಳನ್ನು ಅವರೇ ಮಾಡಬೇಕಾಗಿದೆ. ನಡೆದುಕೊಂಡು ಹೋಗುವುದು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಅವರ ಜೀವನದ ಭಾಗವಾಗಿದೆ. ಆರಂಭದಲ್ಲಿ ಇದು ಕಷ್ಟವೆನಿಸಿದರೂ, ಈಗ ಇದರಿಂದ ತಾವು ಹೆಚ್ಚು ಸಕ್ರಿಯರಾಗಿದ್ದೇವೆ ಮತ್ತು ಸ್ವತಂತ್ರರಾಗಿದ್ದೇವೆ ಎಂದು ಅವರು ಹೇಳುತ್ತಾರೆ. ಹೆಚ್ಚು ನಡೆಯುವುದು ಮತ್ತು ಉತ್ತಮ ಪರಿಸರದಲ್ಲಿ ಬದುಕುವುದು ತಮ್ಮ ಆರೋಗ್ಯಕ್ಕೂ ಒಳ್ಳೆಯ ಪರಿಣಾಮ ಬೀರಿದೆ ಎಂದಿದ್ದಾರೆ.&lt;/p&gt;&lt;p&gt;ದೆಹಲಿಯ ನೆನಪು ಬರ್ತಿದೆ. ಕುಟುಂಬದಿಂದ ದೂರವಾಗಿರುವುದು, ಮನೆಯ ಸಹಾಯ ಮತ್ತು ದೆಹಲಿಯ ಸುಲಭ ಜೀವನವನ್ನು ಮಿಸ್&zwnj; ಮಾಡಿಕೊಳ್ತೇನೆ ಎಂದು ಜಸ್ಲೀನ್&zwnj; ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಸಂಬಳಕ್ಕಿಂತ ಜೀವನ ಮುಖ್ಯ&lt;/strong&gt;&lt;/p&gt;&lt;p&gt;ಜಸ್ಲೀನ್&zwnj; ಈ ನಿರ್ಧಾರ, ಜನರ ಆಯ್ಕೆ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಕೆಲವರಿಗೆ ಕುಟುಂಬ ಹಾಗೂ ಸಂಬಳ ಮುಖ್ಯವಾದ್ರೆ ಮತ್ತೆ ಕೆಲವರಿಗೆ ಸ್ವಾತಂತ್ರ್ಯ, ಸುರಕ್ಷತೆ, ಆರಾಮದಾಯಕ ಜೀವನ ಹಾಗೂ ಆರೋಗ್ಯ ಮುಖ್ಯವಾಗುತ್ತದೆ. ಅವರು ಅದಕ್ಕಾಗಿ ಹೆಚ್ಚಿನ ಸಂಬಳವನ್ನು ನಿರ್ಲಕ್ಷ್ಯಿಸ್ತಾರೆ.&lt;/p&gt;]]></content:encoded>
            <category>private-jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/private-jobs/left-a-50-lakh-package-in-delhi-why-accept-a-12-lakh-offer-in-london/articleshow-02koifq"/>
        </item>
        <item>
            <title><![CDATA[ಐಟಿ ಕಂಪನಿಯಲ್ಲಿ ರಾತ್ರಿಪಾಳಿ ಮಾಡುವ ಮಹಿಳಾ ಟೆಕ್ಕಿಗಳ ಸುರಕ್ಷತಾ ನಿಯಮ ಹಿಂಪಡೆದ ಸರ್ಕಾರ; ನೌಕರರಿಂದ ಆಕ್ರೋಶ]]></title>
            <link>https://kannada.asianetnews.com/state/karnataka-govt-rolls-back-women-night-shift-safety-rules-kitu-protests-sat/articleshow-2h5npwl</link>
            <guid isPermaLink="true">https://kannada.asianetnews.com/state/karnataka-govt-rolls-back-women-night-shift-safety-rules-kitu-protests-sat/articleshow-2h5npwl</guid>
            <pubDate>Tue, 15 Sep 2026 11:12:32 +0530</pubDate>
            <description><![CDATA[&lt;p&gt;ಐಟಿ/ಬಿಟಿ ಸಂಸ್ಥೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಸುರಕ್ಷತೆ ಮತ್ತು ಸಾರಿಗೆ ನಿಯಮಗಳನ್ನು ಕರ್ನಾಟಕ ಸರ್ಕಾರ ಹಿಂಪಡೆದಿದೆ. ಈ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಮಹಿಳೆಯರನ್ನು ಅಸುರಕ್ಷತೆಗೆ ತಳ್ಳುತ್ತದೆ ಎಂದು ಎಚ್ಚರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2hs5ezfb0w0xr35m5fn84b3,imgname-bengaluru-it-employees-1789450697711.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.15): ರಾ&lt;/strong&gt;ಜ್ಯದ ಐಟಿ, ಬಿಟಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಉದ್ಯೋಗಿಗಳ ಸುರಕ್ಷತೆ ಮತ್ತು ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಕಡ್ಡಾಯ ನಿಯಮಗಳನ್ನು ಹಿಂಪಡೆದಿರುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ &lt;strong&gt;ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU)&lt;/strong&gt; ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಜನವಿರೋಧಿ ತಿದ್ದುಪಡಿಯನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಸಂಘಟನೆ ಆಗ್ರಹಿಸಿದೆ.&lt;/p&gt;&lt;p&gt;ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಕಾಯ್ದೆ ಮೂಲಕ ಕಾಯ್ದೆಯ ಕಲಂ 25(1)(h) ನಿಂದ 25(1)(o) ವರೆಗಿನ ಉಪ-ವಿಧಿಗಳನ್ನು ಕೈಬಿಡಲಾಗಿದೆ. ಈ ವಿಧಿಗಳು ರಾತ್ರಿ ವೇಳೆ ಕೆಲಸ ಮಾಡುವ ಮಹಿಳೆಯರ ಪ್ರಯಾಣ, ವಾಹನ ಚಾಲಕರ ಹಿನ್ನೆಲೆ ಪರಿಶೀಲನೆ, ಭದ್ರತಾ ಸಿಬ್ಬಂದಿ ಒದಗಿಸುವಿಕೆ ಸೇರಿದಂತೆ ಹಲವು ಅತ್ಯಗತ್ಯ ರಕ್ಷಣಾ ಕ್ರಮಗಳನ್ನು ಕಡ್ಡಾಯಗೊಳಿಸಿದ್ದವು. ಸರ್ಕಾರದ ಈ ಕ್ರಮದಿಂದಾಗಿ ಮಹಿಳಾ ಉದ್ಯೋಗಿಗಳನ್ನು ತೀವ್ರ ಅಸುರಕ್ಷತೆಗೆ ತಳ್ಳಿದಂತಾಗಿದೆ ಎಂದು &lsquo;ಕಿಟು&rsquo; ಎಚ್ಚರಿಸಿದೆ.&lt;/p&gt;&lt;h2&gt;&lt;strong&gt;ಸರ್ಕಾರ ಕೈಬಿಟ್ಟಿರುವ ಪ್ರಮುಖ ಸುರಕ್ಷತಾ ನಿಯಮಗಳು ಇಂತಿವೆ:&lt;/strong&gt;&lt;/h2&gt;&lt;p&gt;&lt;strong&gt;ಚಾಲಕರ ಕಡ್ಡಾಯ ಹಿನ್ನೆಲೆ ಪರಿಶೀಲನೆ:&lt;/strong&gt; ಮಹಿಳೆಯರನ್ನು ಕರೆದೊಯ್ಯುವ ಕ್ಯಾಬ್ ಚಾಲಕರ ಪೂರ್ವಾಪರ ಮತ್ತು ಪೊಲೀಸ್ ಪರಿಶೀಲನೆ ಕಡ್ಡಾಯವಾಗಿರಬೇಕಿತ್ತು.&lt;/p&gt;&lt;p&gt;&lt;strong&gt;ನಿಗದಿತ ಮಾರ್ಗಗಳು: &lt;/strong&gt;ಅಧಿಕೃತ ಪಿಕ್-ಅಪ್ ಮತ್ತು ಡ್ರಾಪ್ ಮಾರ್ಗಗಳ ನಿರ್ವಹಣೆ.&lt;/p&gt;&lt;p&gt;&lt;strong&gt;ಖಾಸಗಿತನದ ರಕ್ಷಣೆ: &lt;/strong&gt;ಮಹಿಳಾ ಉದ್ಯೋಗಿಗಳ ಮೊಬೈಲ್ ಸಂಖ್ಯೆ, ವಿಳಾಸ, ಇ-ಮೇಲ್ ಮುಂತಾದ ವಿವರಗಳು ಅನಧಿಕೃತ ವ್ಯಕ್ತಿಗಳ ಕೈಸೇರದಂತೆ ಗೌಪ್ಯತೆ ಕಾಯ್ದುಕೊಳ್ಳುವುದು.&lt;/p&gt;&lt;p&gt;&lt;strong&gt;ಮೊದಲು ಪಿಕ್/ಕೊನೆಗೆ ಡ್ರಾಪ್ ನಿರ್ಬಂಧ: &lt;/strong&gt;ರಾತ್ರಿ ವೇಳೆ ಮಹಿಳೆಯನ್ನು ಮೊದಲು ಪಿಕ್ ಮಾಡುವುದು ಅಥವಾ ಕೊನೆಯಲ್ಲಿ ಡ್ರಾಪ್ ಮಾಡುವುದನ್ನು ನಿರ್ಬಂಧಿಸಲಾಗಿತ್ತು.&lt;/p&gt;&lt;p&gt;&lt;strong&gt;ಭದ್ರತಾ ಸಿಬ್ಬಂದಿ (Security Escort):&lt;/strong&gt; ರಾತ್ರಿ ವೇಳೆ ಮಹಿಳೆಯರು ಪ್ರಯಾಣಿಸುವಾಗ ನಿರ್ದಿಷ್ಟ ಸಂದರ್ಭಗಳಲ್ಲಿ ಸೆಕ್ಯುರಿಟಿ ಗಾರ್ಡ್ ಒದಗಿಸುವುದು ಕಡ್ಡಾಯವಾಗಿತ್ತು.&lt;/p&gt;&lt;p&gt;&lt;strong&gt;ಆಕಸ್ಮಿಕ ತಪಾಸಣೆ: &lt;/strong&gt;ರಾತ್ರಿ ಪಾಳಿಯ ವಾಹನಗಳನ್ನು ಮೇಲ್ವಿಚಾರಕರು (Supervisors) ಹಠಾತ್ ತಪಾಸಣೆಗೆ ಒಳಪಡಿಸುವುದು.&lt;/p&gt;&lt;p&gt;&lt;strong&gt;ಕಂಟ್ರೋಲ್ ರೂಂ/ಟ್ರಾವೆಲ್ ಡೆಸ್ಕ್:&lt;/strong&gt; ವಾಹನಗಳ ಸಂಚಾರವನ್ನು ನೈಜ ಸಮಯದಲ್ಲಿ (Real-time) ಟ್ರ್ಯಾಕ್ ಮಾಡಲು ಕಂಟ್ರೋಲ್ ರೂಂ ವ್ಯವಸ್ಥೆ.&lt;/p&gt;&lt;p&gt;&lt;strong&gt;ತುರ್ತು ಸಹಾಯ ವ್ಯವಸ್ಥೆ:&lt;/strong&gt; ಮಹಿಳಾ ಉದ್ಯೋಗಿಗಳು ಅಪಾಯದ ಸಂದರ್ಭದಲ್ಲಿ ತಕ್ಷಣವೇ ನೆರವು ಪಡೆಯಲು ತುರ್ತು ಕರೆ/ಎಸ್&zwnj;ಒಎಸ್ (SOS) ವ್ಯವಸ್ಥೆ.&lt;/p&gt;&lt;h2&gt;&lt;strong&gt;ಉದ್ಯೋಗದಾತರ ಹೊಣೆಗಾರಿಕೆ ಕಡಿತ, ಮಹಿಳೆಯರಿಗೆ ಅಪಾಯ&lt;/strong&gt;&lt;/h2&gt;&lt;p&gt;ಕರ್ನಾಟಕದ ಐಟಿ ಮತ್ತು ಐಟಿಇಎಸ್ (IT/ITeS) ವಲಯದಲ್ಲಿ ಲಕ್ಷಾಂತರ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕ್ಷೇತ್ರದಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆಗೆ ಸುರಕ್ಷಿತ ಸಾರಿಗೆ ಮತ್ತು ಪರಿಣಾಮಕಾರಿ ಭದ್ರತಾ ವ್ಯವಸ್ಥೆಗಳು ಕನಿಷ್ಠ ಹಾಗೂ ರಾಜಿ ಮಾಡಿಕೊಳ್ಳಲಾಗದ ಷರತ್ತುಗಳಾಗಿವೆ. ಇಂತಹ ಸಂದರ್ಭದಲ್ಲಿ ಕಾನೂನುಬದ್ಧ ರಕ್ಷಣೆಯನ್ನು ಹಿಂಪಡೆಯುವುದು ಉದ್ಯೋಗದಾತ ಕಂಪನಿಗಳ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಹಿಳಾ ಉದ್ಯೋಗಿಗಳನ್ನು ಹೆಚ್ಚಿನ ಅಪಾಯಕ್ಕೆ ದೂಡುತ್ತದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.&lt;/p&gt;&lt;h2&gt;&lt;strong&gt;'ಕಿಟು' ಆಗ್ರಹವೇನು?&lt;/strong&gt;&lt;/h2&gt;&lt;p&gt;ಸರ್ಕಾರ ಯಾವುದೇ ಕಾರಣಕ್ಕೂ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು. ಸೆಕ್ಷನ್ 25(1)(h) ನಿಂದ (o) ವರೆಗಿನ ವಿಧಿಗಳನ್ನು ರದ್ದುಪಡಿಸಿರುವ ತಿದ್ದುಪಡಿಯನ್ನು ತಕ್ಷಣವೇ ವಾಪಸ್ ಪಡೆಯಬೇಕು. ಮಹಿಳೆಯರ ರಾತ್ರಿ ಪಾಳಿಯ ಸಾರಿಗೆ ಮತ್ತು ಭದ್ರತೆಗೆ ಸಂಬಂಧಿಸಿದ ಎಲ್ಲಾ ಶಾಸನಬದ್ಧ ಸುರಕ್ಷತಾ ಕ್ರಮಗಳನ್ನು ಮರುಸ್ಥಾಪಿಸಬೇಕು' ಎಂದು ಕಿಟು ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಆಗ್ರಹಿಸಿದ್ದಾರೆ.&lt;/p&gt;&lt;p&gt;ಅಲ್ಲದೆ, ಸರ್ಕಾರದ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಲು ಹಾಗೂ ಸುರಕ್ಷತಾ ನಿಯಮಗಳನ್ನು ಮರಳಿ ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಐಟಿ ಮತ್ತು ಸಂಬಂಧಿತ ವಲಯದ ಎಲ್ಲಾ ಉದ್ಯೋಗಿಗಳು ಒಗ್ಗಟ್ಟಾಗಿ ಮುಂದೆ ಬರಬೇಕೆಂದು ಸಂಘಟನೆ ಕರೆ ನೀಡಿದೆ.&lt;/p&gt;]]></content:encoded>
            <category>private-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-rolls-back-women-night-shift-safety-rules-kitu-protests-sat/articleshow-2h5npwl"/>
        </item>
        <item>
            <title><![CDATA[20 ಲಕ್ಷ ಸಂಬಳದ ಹೈಕ್​ ರಿಜೆಕ್ಟ್​ ಮಾಡಿದ ಬೆಂಗಳೂರು ಟೆಕ್ಕಿ: ಭಾರಿ ವೈರಲ್ ಆಗ್ತಿದೆ ಯುವಕನ ಸ್ಟೋರಿ]]></title>
            <link>https://kannada.asianetnews.com/private-jobs/bengaluru-techie-earning-rs-45-lakh-rejects-rs-20-lakh-salary-hike-leaves-his-father-baffled-suc/articleshow-4d7su6d</link>
            <guid isPermaLink="true">https://kannada.asianetnews.com/private-jobs/bengaluru-techie-earning-rs-45-lakh-rejects-rs-20-lakh-salary-hike-leaves-his-father-baffled-suc/articleshow-4d7su6d</guid>
            <pubDate>Tue, 01 Sep 2026 19:40:17 +0530</pubDate>
            <description><![CDATA[ಬೆಂಗಳೂರಿನ 31 ವರ್ಷದ ಸಾಫ್ಟ್&zwnj;ವೇರ್ ಡೆವಲಪರ್, ವಾರ್ಷಿಕ 45 ಲಕ್ಷ ಸಂಬಳವನ್ನು 65 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಹೆಚ್ಚಿದ ಕೆಲಸದ ಹೊರೆ ಮತ್ತು ಜವಾಬ್ದಾರಿಗಳ ಬದಲು, ಅವರು ತಮ್ಮ ಕುಟುಂಬ, ಫಿಟ್&zwnj;ನೆಸ್ ಮತ್ತು ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡಲು ನಿರ್ಧರಿಸಿದರು, ಈ ನಿರ್ಧಾರವು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1emtks3y3mzrnnr8mp7r72n,imgname-bengaluru-techie-1788271742755.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಾರ್ಯನಿರತ ಕಾರ್ಪೊರೇಟ್ ಜೀವನ ಮತ್ತು ಭಾರಿ ಸಂಬಳಕ್ಕಾಗಿ ಪೈಪೋಟಿಯ ನಡುವೆ, ಬೆಂಗಳೂರಿನ 31 ವರ್ಷದ ಸಾಫ್ಟ್&zwnj;ವೇರ್ ಡೆವಲಪರ್ ಒಬ್ಬರು ಕೆಲಸ ಮತ್ತು ಜೀವನದ ಸಮತೋಲನದ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ವಾರ್ಷಿಕ 45 ಲಕ್ಷ ರೂಪಾಯಿ ಅಂದರೆ ತಿಂಗಳಿಗೆ ಸುಮಾರು ಹತ್ತಿರ ಹತ್ತಿರ 4 ಲಕ್ಷ ರೂಪಾಯಿ ವೇತನವನ್ನು ಗಳಿಸುತ್ತಿರುವ ಟೆಕ್ ಎಂಜಿನಿಯರ್&zwnj;ಗೆ ಹೆಚ್ಚುವರಿಯಾಗಿ 20 ಲಕ್ಷ ವೇತನ ಹೆಚ್ಚು ಮಾಡುವುದಾಗಿ ಹೇಳಿದರೂ, ಅದನ್ನು ಅವರು ನಿರಾಕರಿಸಿದ್ದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;p&gt;45 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿರುವ ಅವರು, ಇದೀಗ ಈ ಆಫರ್​ ಒಪ್ಪಿಕೊಂಡಿದ್ದರೆ, 65 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದಿತ್ತು. ಎಂಜಿನಿಯರ್ ಈ ಪ್ರಸ್ತಾಪವನ್ನು ನಿರಾಕರಿಸಿದರು. ಈ ಬಗ್ಗೆ ಅವರ ಸ್ನೇಹಿತ ವೈಭವ್​ ಎನ್ನುವವರು ಶೇರ್​ ಮಾಡಿಕೊಂಡಿದ್ದು, ಇದಕ್ಕೆ ಪರ-ವಿರೋಧ ನಿಲುವು ವ್ಯಕ್ತವಾಗುತ್ತಿದೆ. ಮಗನ ಈ ನಡೆದೆ ತಂದೆಗೆ ತುಂಬಾ ಆಘಾತ ತಂದರೂ ಮಗ ಮಾತ್ರ ಇದನ್ನು ಒಪ್ಪಿಕೊಳ್ಳಲಿಲ್ಲ ಎಂದು ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ನಿರಾಕರಿಸಿದ್ದು ಏಕೆ?&lt;/strong&gt;&lt;/h2&gt;&lt;p&gt;ವ್ಯಾಪಾರ ಸಲಹಾ ಸಂಸ್ಥೆ ಯುಬಿಲಿಟಿಯ ಸಂಸ್ಥಾಪಕ ರೋಹನ್ ಧವನ್ ಈ ಕಥೆಯನ್ನು ಲಿಂಕ್ಡ್&zwnj;ಇನ್&zwnj;ನಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಅವರ 31 ವರ್ಷದ ಸ್ನೇಹಿತನ ಪ್ರಸ್ತುತ ವಾರ್ಷಿಕ ಆದಾಯ 45 ಲಕ್ಷ. ಬಡ್ತಿಯನ್ನು ಸ್ವೀಕರಿಸುವುದರಿಂದ ಅವರಿಗೆ 65 ಲಕ್ಷ ಪ್ಯಾಕೇಜ್ ಸಿಗುತ್ತಿತ್ತು ಜೊತೆಗೆ ಪ್ರಮೋಷನ್​ ಮತ್ತು ದೊಡ್ಡ ತಂಡಕ್ಕೆ ಜವಾಬ್ದಾರಿ ಸಿಗುತ್ತಿತ್ತು. ಆದರೂ ಅವರು ಇದನ್ನು ನಿರಾಕರಿಸಲು ಕಾರಣ, ಈ ಹೆಚ್ಚಿನ ಸಂಬಳವು ಕೆಲಸದ ಹೊರೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತಿತ್ತು ಎನ್ನುವ ಕಾರಣಕ್ಕೆ.&lt;/p&gt;&lt;p&gt;ಇದನ್ನು ಒಪ್ಪಿಕೊಂಡಿದ್ದರೆ,, ಅವರು ವಾರಕ್ಕೆ ನಾಲ್ಕು ರಾತ್ರಿಗಳು ಯುಎಸ್ ತಂಡದೊಂದಿಗೆ ತಡರಾತ್ರಿ ಕರೆಗಳನ್ನು ಮಾಡಬೇಕಾಗಿತ್ತು. ಹೆಚ್ಚುವರಿಯಾಗಿ, ಅವರು ಕೆಲಸಕ್ಕಾಗಿ ಆಗಾಗ್ಗೆ ಪ್ರಯಾಣಿಸಬೇಕಾಗಿತ್ತು ಮತ್ತು ಅವರ ಪ್ರಸ್ತುತ ತಂಡಕ್ಕಿಂತ ಎರಡು ಪಟ್ಟು ದೊಡ್ಡ ತಂಡವನ್ನು ನಿರ್ವಹಿಸಬೇಕಾಗಿತ್ತು. ಇದು ಅವರ ವೈಯಕ್ತಿಕ ಸಮಯದ ಮೇಲೂ ಪರಿಣಾಮ ಬೀರಿತು. ಶನಿವಾರ ಮತ್ತು ಭಾನುವಾರಗಳು ಕಾಗದದ ಮೇಲೆ ರಜಾದಿನಗಳಾಗಿದ್ದವು, ಆದರೆ ಕೆಲಸದ ಬದ್ಧತೆಗಳಿಂದಾಗಿ, ಅವರು ಸಂಪೂರ್ಣವಾಗಿ ಮುಕ್ತರಾಗುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರಲಿಲ್ಲ.&lt;/p&gt;&lt;h3&gt;&lt;strong&gt;ಕುಟುಂಬ ಮತ್ತು ಫಿಟ್&zwnj;ನೆಸ್&zwnj;ಗೆ ಆದ್ಯತೆ ನೀಡುವುದು&lt;/strong&gt;&lt;/h3&gt;&lt;p&gt;ರೋಹನ್ ಧವನ್ ಪ್ರಕಾರ, ಎಂಜಿನಿಯರ್ ಮತ್ತು ಅವರ ಪತ್ನಿ ಮುಂದಿನ ವರ್ಷ ಮಗುವನ್ನು ಹೊಂದಲು ಯೋಜಿಸುತ್ತಿದ್ದಾರೆ. ಅವರು ವಾರಕ್ಕೆ ಐದು ಬೆಳಿಗ್ಗೆ ವ್ಯಾಯಾಮ ಮಾಡುತ್ತಾರೆ ಮತ್ತು ಪ್ರತಿ ಬುಧವಾರ ತಮ್ಮ ಪೋಷಕರೊಂದಿಗೆ ಊಟ ಮಾಡಲು ಸಮಯವನ್ನು ಮೀಸಲಿಡುತ್ತಾರೆ. ಆದ್ದರಿಂದ, ಅವರು ಹೆಚ್ಚಿನ ಸಂಬಳಕ್ಕಿಂತ ತಮ್ಮ ಪ್ರಸ್ತುತ ದಿನಚರಿ ಮತ್ತು ಕುಟುಂಬ ಜೀವನಕ್ಕೆ ಆದ್ಯತೆ ನೀಡಲು ನಿರ್ಧರಿಸಿದರು. ಆದ್ದರಿಂದ 20 ಲಕ್ಷವನ್ನು ಬಿಟ್ಟರು.&lt;/p&gt;&lt;h3&gt;&lt;strong&gt;ತಂದೆಗೆ ಅಚ್ಚರಿ ಮತ್ತು ಬೇಸರ&lt;/strong&gt;&lt;/h3&gt;&lt;p&gt;ಎಂಜಿನಿಯರ್ ಹೆಚ್ಚುವರಿ 20 ಲಕ್ಷ ರೂಪಾಯಿಗಳ ಪ್ರಸ್ತಾಪವನ್ನು ತಿರಸ್ಕರಿಸಿದಾಗ, ಅವರ ತಂದೆ ಕೂಡ ಆಶ್ಚರ್ಯಚಕಿತರಾದರು, ಜೊತೆಗೆ ಬೇಸರವೂ ಆಯಿತು. ಇಷ್ಟು ಗಣನೀಯ ಹೆಚ್ಚುವರಿ ಸಂಬಳ ಪಡೆಯುತ್ತಿದ್ದರೂ ಇಷ್ಟು ಗಣನೀಯ ಸಂಬಳವನ್ನು ಏಕೆ ಬಿಟ್ಟರು ಎಂದು ಅವರು ಪ್ರಶ್ನಿಸಿದರು. ಎಲ್ಲಾ ನಂತರ, ಅನೇಕ ಜನರು ಕಡಿಮೆ ಸಂಬಳ ಹೆಚ್ಚಳಕ್ಕಾಗಿ ಉದ್ಯೋಗಗಳನ್ನು ಬದಲಾಯಿಸಲು ಸಿದ್ಧರಿದ್ದಾರೆ. ಆದಾಗ್ಯೂ, ಎಂಜಿನಿಯರ್&zwnj;ಗೆ, ಈ ನಿರ್ಧಾರವು ಕೇವಲ ಹಣದ ಬಗ್ಗೆ ಅಲ್ಲ. ಹೆಚ್ಚಿನ ಗಳಿಕೆಯೊಂದಿಗೆ ಬರುವ ಹೆಚ್ಚುವರಿ ಜವಾಬ್ದಾರಿಗಳು ಅವರ ವೈಯಕ್ತಿಕ ಜೀವನ ಮತ್ತು ಅವರ ಕುಟುಂಬಕ್ಕೆ ಲಭ್ಯವಿರುವ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಒಪ್ಪಿಕೊಂಡರು.&lt;/p&gt;&lt;p&gt;ರೋಹನ್ ಧವನ್ ಅವರ ಪೋಸ್ಟ್ ಹೊರಹೊಮ್ಮಿದ ನಂತರ, ಈ ನಿರ್ಧಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಭುಗಿಲೆದ್ದಿತು. ಅನೇಕ ಬಳಕೆದಾರರು ಎಂಜಿನಿಯರ್ ನಿರ್ಧಾರವನ್ನು ಬೆಂಬಲಿಸಿದರು. ಮನೆಯಲ್ಲಿ ಚಿಕ್ಕ ಮಗು ಇದ್ದ ಕಾರಣ ಕಳೆದ ವರ್ಷ ಅವರು 80% ಸಂಬಳ ಹೆಚ್ಚಳದ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಎಂದು ಒಬ್ಬ ಬಳಕೆದಾರರು ಹೇಳಿದರು. ಜೀವನದ ವಿವಿಧ ಹಂತಗಳಲ್ಲಿ ಆದ್ಯತೆಗಳು ಬದಲಾಗುತ್ತವೆ ಎಂದು ಬಳಕೆದಾರರು ಹೇಳಿದರು. ಇನ್ನೊಬ್ಬ ಬಳಕೆದಾರರು ಇದನ್ನು ದಿಟ್ಟ ಮತ್ತು ಬುದ್ಧಿವಂತ ನಿರ್ಧಾರ ಎಂದು ಕರೆದರು, ಜೀವನದ ಪ್ರತಿಯೊಂದು ಅಂಶವನ್ನು ಬ್ಯಾಂಕ್ ಬ್ಯಾಲೆನ್ಸ್&zwnj;ನಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ ಎಂದು ಹೇಳಿದರು.&lt;/p&gt;]]></content:encoded>
            <category>private-jobs</category>
            <dc:creator>Suchethana D</dc:creator>
            <atom:link href="https://kannada.asianetnews.com/private-jobs/bengaluru-techie-earning-rs-45-lakh-rejects-rs-20-lakh-salary-hike-leaves-his-father-baffled-suc/articleshow-4d7su6d"/>
        </item>
        <item>
            <title><![CDATA[ಕಾರ್ಪೋರೇಟ್‌ ಜಗತ್ತಿಗೆ ಗುಡ್‌ಬೈ: ತುಳಸಿ ಕೃಷಿಯಿಂದ ತಿಂಗಳಿಗೆ 6 ಲಕ್ಷ ಆದಾಯ- ಎಂಬಿಎ ಪದವೀಧರನ ಸಾಧನೆ]]></title>
            <link>https://kannada.asianetnews.com/business/mba-graduate-earns-6-lakh-monthly-from-tulsi-cultivation-after-resiging-to-tata-job-suc/articleshow-4lkr97g</link>
            <guid isPermaLink="true">https://kannada.asianetnews.com/business/mba-graduate-earns-6-lakh-monthly-from-tulsi-cultivation-after-resiging-to-tata-job-suc/articleshow-4lkr97g</guid>
            <pubDate>Thu, 10 Sep 2026 19:37:37 +0530</pubDate>
            <description><![CDATA[ಎಂಬಿಎ ಪದವೀಧರರಾದ ಅಲೋಕ್ ಪಟ್ನಾಯಕ್ ಅವರು ತಮ್ಮ 16 ವರ್ಷಗಳ ಕಾರ್ಪೊರೇಟ್ ವೃತ್ತಿಜೀವನವನ್ನು ತೊರೆದು ತುಳಸಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ತುಳಸಿ ಎಣ್ಣೆ ಮತ್ತು ಅದರ ತ್ಯಾಜ್ಯದಿಂದ ತಯಾರಿಸಿದ ಮಣಿಗಳನ್ನು ನೇರವಾಗಿ ಕಂಪನಿಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಮಾರಾಟ ಮಾಡುವ ಮೂಲಕ ತಿಂಗಳಿಗೆ 6 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m25t9jqx22vszwwmy6120jxr,imgname-alok-patnayak-1789049228029.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾರ್ಪೋರೇಟ್&zwnj; ಜಗತ್ತಿನ ಡೆಡ್&zwnj;ಲೈನ್, ಟಾರ್ಗೆಟ್&zwnj;, ಹಗಲು-ರಾತ್ರಿ ಪಾಳಿಯಲ್ಲಿ ಕೆಲಸ... ಹೀಗೆ ಇದರ ಜಂಜಾಟವೇ ಬೇಡ ಎಂದು ಕೆಲವರು ಇದೀಗ ಹಳ್ಳಿಯತ್ತ ಮುಖ ಮಾಡುತ್ತಿದ್ದಾರೆ. ಕೆಲವರು ಎಐ ಕಾರಣದಿಂದ ಕೆಲಸ ಕಳೆದುಕೊಂಡು ಹಳ್ಳಿಗೆ ವಾಪಸಾಗುತ್ತಿದ್ದರೆ, ಮತ್ತೆ ಕೆಲವರು ಇದರ ಉಸಾಬರಿಯೇ ಬೇಡ ಎಂದು ತಮಗೆ ಇರುವ ಜಮೀನಿನಲ್ಲಿಯೇ ಕೃಷಿ ಮಾಡಲು ಮುಂದಾಗುತ್ತಿದ್ದಾರೆ. ಅವರಲ್ಲಿ ಹಲವರು ಭಾರಿ ಯಶಸ್ಸನ್ನೂ ಕಂಡಿದ್ದಾರೆ. ಅಂಥವರಲ್ಲಿ ಒಬ್ಬರು ಎಂಬಿಎ ಪದವೀಧರ ಅಲೋಕ್ ಪಟ್ನಾಯಕ್. ಟಾಟಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಇವರು, ಇದೀಗ ತುಳಸಿಯನ್ನು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;16 ವರ್ಷ ಉನ್ನತ ಹುದ್ದೆ&lt;/strong&gt;&lt;/h3&gt;&lt;p&gt;16 ವರ್ಷಗಳ ಕಾಲ ಕಾರ್ಪೊರೇಟ್ ಜಗತ್ತಿನಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಲೋಕ್&zwnj; ಅವರು, ಇದರ ಜೀವ ಸಾಕು ಎಂದೆನಿಸಿ ಕೃಷಿಯತ್ತ ವಾಲಿದರು. ಅಲ್ಲಿಯೇ ತುಳಸಿ ಬೆಳೆ ಬೆಳದು ಈಗ ಕನಿಷ್ಠ ಆರು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದು, ಇವರ ಜೀವನ ಇತರರಿಗೂ ಮಾದರಿಯಾಗಿದೆ. ಅಲೋಕ್ ಪಟ್ನಾಯಕ್ ಅವರು 2002ರಲ್ಲಿ ಸಂಬಲ್&zwnj;ಪುರ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪೂರೈಸಿದ್ದರು. 2003ರಲ್ಲಿ ಬಜಾಜ್ ಆಟೋ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು, 2009ರಲ್ಲಿ ಪ್ರತಿಷ್ಠಿತ ಟಾಟಾ ಆಟೋಮೋಟಿವ್ ಸೇರಿದ್ದರು. ಇಲ್ಲಿ 16 ವರ್ಷ ಸೇವೆ ಸಲ್ಲಿಸಿದರು, ಕೈತುಂಬಾ ಸಂಬಳ ಪಡೆಯುತ್ತಿದ್ದರೂ, ಅವರಿಗೆ ಕೃಷಿಯತ್ತ ವಾಲುವ ಮನಸ್ಸಾಗಿತ್ತು. ಇದರಿಂದ ಉದ್ಯೋಗ ಬಿಟ್ಟು ಹಳ್ಳಿಗೆ ಮರಳಿದರು.&lt;/p&gt;&lt;h2&gt;&lt;strong&gt;ಕೆಲಸಕ್ಕೆ ಗುಡ್&zwnj;ಬೈ&lt;/strong&gt;&lt;/h2&gt;&lt;p&gt;2018ರಲ್ಲಿ ತಮ್ಮ ಮಾರ್ಕೆಟಿಂಗ್ ಕೆಲಸಕ್ಕೆ ರಿಸೈನ್&zwnj; ಮಾಡಿ, ಕೃಷಿ ಮಾಡುವ ದೃಷ್ಟಿಯಿಂದ ಸ್ವಗ್ರಾಮಕ್ಕೆ ಮರಳಿದರು. ಎಲೆಗಳಿಗಿಂತ ತುಳಸಿ ಎಣ್ಣೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಅಲೋಕ್ ಕೇವಲ ಸಾಂಪ್ರದಾಯಿಕ ರೀತಿಯಲ್ಲಿ ತುಳಸಿ ಬೆಳೆಯುವುದನ್ನೇ ತಮ್ಮ ಗುರಿಯಾಗಿಸಿಕೊಳ್ಳಲಿಲ್ಲ. ಮಾರುಕಟ್ಟೆಯಲ್ಲಿ ಕೇವಲ ತುಳಸಿ ಎಲೆಗಳಿಗೆ ಹೆಚ್ಚಿನ ಬೆಲೆಯಿಲ್ಲ ಎಂಬುದನ್ನು ಚೆನ್ನಾಗಿ ಅರಿತಿದ್ದ ಅವರು, ಅದರ ಮೌಲ್ಯವರ್ಧನೆಗೆ ಮುಂದಾದರು. ತುಳಸಿ ಎಲೆಗಳಿಗಿಂತ ಅದರಿಂದ ತೆಗೆಯುವ ಎಣ್ಣೆಗೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಿದೆ. ದೊಡ್ಡ ದೊಡ್ಡ ಔಷಧೀಯ ವಸ್ತುಗಳ ಉತ್ಪಾದಕರು ಮತ್ತು ಸೌಂದರ್ಯವರ್ಧಕ ಕಂಪನಿಗಳು ಈ ತುಳಸಿ ಎಣ್ಣೆಯನ್ನ ಅತ್ಯಂತ ದುಬಾರಿ ಬೆಲೆ ಕೊಟ್ಟು ಖರೀದಿಸುತ್ತವೆ. ಈ ಮಾರುಕಟ್ಟೆ ತಂತ್ರವನ್ನು ಅರ್ಥಮಾಡಿಕೊಂಡ ಅಲೋಕ್, ತಮ್ಮ ಜಮೀನಿನಲ್ಲಿ ಸಾವಯವ ತುಳಸಿ ಬೆಳೆದು, ಪ್ರತ್ಯೇಕ ಘಟಕದ ಮೂಲಕ ಅದರಿಂದ ಪ್ರತಿದಿನ 7 ರಿಂದ 8 ಲೀಟರ್ ಎಣ್ಣೆಯನ್ನು ಹೊರತೆಗೆಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಸಕ್ಸಸ್&zwnj; ಸ್ಟೋರಿಯ ಕಥೆ...&lt;/strong&gt;&lt;/h3&gt;&lt;p&gt;ಅವರ ಸಕ್ಸಸ್&zwnj; ಹಿಂದಿರೋ ಸ್ಟೋರಿ ಎಂದರೆ, ಅವರು ಅದನ್ನು ಸ್ಥಳೀಯ ಕೃಷಿ ಮಂಡಿಗಳಿಗೆ ತೆಗೆದುಕೊಂಡು ಹೋಗುಲಿಲ್ಲ. ಬದಲಿಗೆ ನೇರವಾಗಿ ಬೃಹತ್ ಕೈಗಾರಿಕಾ ಕಂಪನಿಗಳಿಗೆ ಗುತ್ತಿಗೆ ಆಧಾರದ ಮೇಲೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅವರ ಉದ್ಯಮದ ವಹಿವಾಟು ದಿನಕ್ಕೆ ಸರಿಸುಮಾರು 21,000 ರೂಪಾಯಿಗಳಷ್ಟಿದ್ದು, ತಿಂಗಳಿಗೆ 6 ಲಕ್ಷ ರೂಪಾಯಿ ಗಡಿ ದಾಟುತ್ತದೆ. &rsquo;&lt;/p&gt;&lt;p&gt;ಇವರು, ಐಐಟಿ ದೆಹಲಿ ವಿನ್ಯಾಸಗೊಳಿಸಿದ ಸಣ್ಣ ಯಂತ್ರವೊಂದನ್ನ ಖರೀದಿಸಿರುವ ಅವರು, ಆ ತ್ಯಾಜ್ಯದಿಂದ ಪವಿತ್ರವಾದ ತುಳಸಿ ಮಣಿಗಳನ್ನ ತಯಾರಿಸುತ್ತಿದ್ದಾರೆ. ಈ ಮಣಿಗಳಿಗೆ ದೇವಸ್ಥಾನಗಳು, ಇಸ್ಕಾನ್ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಂದ ಭಾರಿ ಬೇಡಿಕೆಯಿದೆ. ಒಂದೇ ಬೆಳೆಯಿಂದ, ಎಣ್ಣೆಯ ಮೂಲಕ ಬೃಹತ್ ಕಂಪನಿಗಳಿಗೆ, ಮತ್ತು ಮಣಿಗಳ ಮೂಲಕ ಆಧ್ಯಾತ್ಮಿಕ ಗ್ರಾಹಕರಿಗೆ ಉತ್ಪನ್ನಗಳನ್ನ ತಲುಪಿಸುವ ಮೂಲಕ ಎರಡು ವಿಭಿನ್ನ ಆದಾಯದ ಮೂಲಗಳನ್ನ ಸೃಷ್ಟಿಸಿದ್ದಾರೆ. ತಮ್ಮ ಗ್ರಾಮದ ಸುತ್ತಮುತ್ತಲಿನ ಬುಡಕಟ್ಟು ಸಮುದಾಯದ ಜನರಿಗೆ ಅವರು ತಮ್ಮ ತೋಟದಲ್ಲಿ ಉದ್ಯೋಗ ನೀಡುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಗೆ ಆಸರೆಯಾಗಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Suchethana D</dc:creator>
            <atom:link href="https://kannada.asianetnews.com/business/mba-graduate-earns-6-lakh-monthly-from-tulsi-cultivation-after-resiging-to-tata-job-suc/articleshow-4lkr97g"/>
        </item>
        <item>
            <title><![CDATA[ಮೆಟಾದಿಂದ ಲೇ-ಆಫ್ ಆಗಿದ್ದೇ ಲಕ್ ತಂದಿತು! 3 ತಿಂಗಳಲ್ಲಿ ₹25 ಲಕ್ಷ ಹೆಚ್ಚುವರಿ ಗಳಿಸಿದ ಟೆಕ್ಕಿಯ ಕಥೆ ವೈರಲ್!]]></title>
            <link>https://kannada.asianetnews.com/jobs/meta-layoff-made-me-richer-former-employee-s-viral-post-sparks-tech-debate-gdp/articleshow-58wxxi4</link>
            <guid isPermaLink="true">https://kannada.asianetnews.com/jobs/meta-layoff-made-me-richer-former-employee-s-viral-post-sparks-tech-debate-gdp/articleshow-58wxxi4</guid>
            <pubDate>Wed, 09 Sep 2026 16:53:13 +0530</pubDate>
            <description><![CDATA[ಮೆಟಾ ಸಂಸ್ಥೆಯಿಂದ ವಜಾಗೊಂಡ ಮಾಜಿ ಉದ್ಯೋಗಿಯೊಬ್ಬರು, ಲೇ-ಆಫ್ ಅವಧಿಯಲ್ಲೇ ಹೊಸ ಉದ್ಯೋಗ ಪಡೆದು ಆರ್ಥಿಕವಾಗಿ ಲಾಭ ಗಳಿಸಿದ್ದಾರೆ. ಹೊಸ ಕಂಪನಿಯ ಸಂಬಳದ ಜೊತೆಗೆ ಮೆಟಾದಿಂದ ಪರಿಹಾರ, 3 ತಿಂಗಳ ವೇತನ ಮತ್ತು ಸ್ಟಾಕ್ ವೆಸ್ಟ್ ಪಡೆದು, ಸುಮಾರು ₹25 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಹಣ ಗಳಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ತಂತ್ರಜ್ಞಾನ ಕಂಪನಿಗಳ ಲೇ-ಆಫ್ ನೀತಿಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrks00ajv47d28yf460nhdx,imgname-meta-1785384960009.png" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಉದ್ಯೋಗ ನಷ್ಟ ಅಥವಾ 'ಲೇ-ಆಫ್' (Layoff) ಎನ್ನುವುದು ಯಾರಿಗೆ ಆದರೂ ದೊಡ್ಡ ಆರ್ಥಿಕ ಹಾಗೂ ಮಾನಸಿಕ ಆಘಾತ ತರುತ್ತದೆ. ಆದರೆ, ತಂತ್ರಜ್ಞಾನ ದೈತ್ಯ 'ಮೆಟಾ' (Meta) ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರಿಗೆ ವಜಾಗೊಳಿಸಿದ್ದೇ ಆರ್ಥಿಕವಾಗಿ ದೊಡ್ಡ ಲಾಭ ತಂದುಕೊಟ್ಟಿದೆ! ಸಂಸ್ಥೆಯಿಂದ ಹೊರಬಿದ್ದ ಮೇಲೂ ತಮಗೆ ಸಿಕ್ಕ ಜಾಣತನದ ಅವಕಾಶದಿಂದಾಗಿ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಹೆಚ್ಚುವರಿ ಹಣ ಉಳಿತಾಯವಾಗಿದೆ ಎಂದು ಅವರು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಉದ್ಯೋಗಿಗಳು ಹಾಗೂ ವೃತ್ತಿಪರರು ಅನಾಮಧೇಯವಾಗಿ ತಮ್ಮ ಕಂಪನಿಗಳ ವಿಚಾರಗಳನ್ನು ಹಂಚಿಕೊಳ್ಳುವ 'ಬ್ಲೈಂಡ್' ವೇದಿಕೆಯಲ್ಲಿ ಈ ಮಾಜಿ ಉದ್ಯೋಗಿ ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ಎರಡು ಸಂಬಳ, ಸ್ಟಾಕ್ ವೆಸ್ಟ್: ಆರ್ಥಿಕ ಪವಾಡ ನಡೆದದ್ದು ಹೇಗೆ?&lt;/h2&gt;&lt;p&gt;ತಮ್ಮ ಪೋಸ್ಟ್&zwnj;ನಲ್ಲಿ ಆ ವ್ಯಕ್ತಿ, ಲೇ-ಆಫ್ ಪರಿವರ್ತನೆಯ ಸಮಯದಲ್ಲಿ ತಮ್ಮ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡ ಜಾಣತನದ ಹಾದಿಯನ್ನು ವಿವರಿಸಿದ್ದಾರೆ. ಮೆಟಾದಲ್ಲಿ ನನ್ನ ಕೊನೆಯ ದಿನದ ಕೆಲಸ ಮುಗಿಯಲು ಇನ್ನೂ ಎರಡು ತಿಂಗಳು ಇರುವಾಗಲೇ ನನಗೆ ಮತ್ತೊಂದು ಹೊಸ ಉದ್ಯೋಗ ಸಿಕ್ಕಿತು. ನಾನು ತಕ್ಷಣವೇ ಹೊಸ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಇದರಿಂದಾಗಿ, ಒಂದೆಡೆ ಹೊಸ ಕಂಪನಿಯ ವೇತನ ಪಡೆಯುತ್ತಲೇ, ಇನ್ನೊಂದೆಡೆ ಮೆಟಾ ಸಂಸ್ಥೆಯಿಂದ ಸುಮಾರು 3 ತಿಂಗಳ ಪೂರ್ಣ ಸಂಬಳ ಮತ್ತು ಪರಿಹಾರದ ಹಣವನ್ನು ಪಡೆದುಕೊಂಡೆ. ಜೊತೆಗೆ, ಆಗಸ್ಟ್ ತಿಂಗಳ &lsquo;ಸ್ಟಾಕ್ ವೆಸ್ಟ್&rsquo; (Stock Vest) ಸಹ ನನ್ನ ಕೈಸೇರಿತು. ಈ ಅವಧಿಯಲ್ಲಿ ಬಂದ ಸುಮಾರು ಸುಮಾರು ₹25 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಹಣವನ್ನು ನಾನು ಹೂಡಿಕೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;&lt;h2&gt;ಬಿಗ್ ಟೆಕ್ ಲೇ-ಆಫ್&zwnj;ಗಳ ಕುರಿತು ಪ್ರಶ್ನೆ&lt;/h2&gt;&lt;p&gt;ಉದ್ಯೋಗ ಕಳೆದುಕೊಂಡರೂ ಅಂತಿಮವಾಗಿ ಭಾರಿ ಲಾಭ ಗಳಿಸಿದ ಅವರು, ಪ್ರಮುಖ ತಂತ್ರಜ್ಞಾನ ಕಂಪನಿಗಳ ಲೇ-ಆಫ್ ನೀತಿಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ನಾನು ಮೆಟಾ ಕಂಪನಿಯಲ್ಲೇ ಮುಂದುವರಿದಿದ್ದರೆ ನನ್ನ ಖಾತೆಯಲ್ಲಿ ಇಷ್ಟು ಹಣ ಸೇರುತ್ತಿರಲಿಲ್ಲ. ಕೆಲಸದಿಂದ ತೆಗೆದುಹಾಕಿದ ಮೇಲೆಯೇ ನನ್ನ ಹೂಡಿಕೆ ಮತ್ತು ಖಾತೆಯ ಬ್ಯಾಲೆನ್ಸ್ ಹೆಚ್ಚಾಗಿದೆ. ಇದು ವಿಪರ್ಯಾಸವಲ್ಲವೇ? ಅಥವಾ ನಿಮ್ಮ ಸಾಮರ್ಥ್ಯ ಮತ್ತು ಬುದ್ಧಿವಂತಿಕೆ ಬಳಸಿಕೊಂಡರೆ ಬಿಗ್ ಟೆಕ್ ಕಂಪನಿಗಳಿಂದ ವಜಾಗೊಳ್ಳುವುದೂ ಸಹ ಒಳ್ಳೆಯದೇ?&quot; ಎಂದು ಅವರು ಆನ್&zwnj;ಲೈನ್ ನೆಟ್ಟಿಗರನ್ನು ಕೇಳಿದ್ದಾರೆ.&lt;/p&gt;&lt;h2&gt;ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ&lt;/h2&gt;&lt;p&gt;ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ:&lt;/p&gt;&lt;p&gt;ಬದುಕುಳಿಯುವಿಕೆಯ ಪಕ್ಷಪಾತ : ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ, &quot;ನಿಮಗೆ ಸಿಕ್ಕ ಯಶಸ್ಸಿಗೆ ಸಂತೋಷ. ಆದರೆ ಪ್ರಸ್ತುತ ಉದ್ಯೋಗ ಮಾರುಕಟ್ಟೆ ಅತ್ಯಂತ ಕಠಿಣ ಹಾಗೂ ಸ್ಪರ್ಧಾತ್ಮಕವಾಗಿದೆ. ಟಾಪ್ 20% ಶೇಕಡಾ ಜನಷ್ಟೇ ಇಂತಹ ಲಾಭ ಪಡೆಯಬಲ್ಲರು, ಉಳಿದವರು ಉಳಿಯಲು ಹೆಣಗಾಡುತ್ತಿದ್ದಾರೆ. ಇದನ್ನು ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ&quot; ಎಂದಿದ್ದಾರೆ.&lt;/p&gt;&lt;p&gt;ಮತ್ತೊಬ್ಬರು ಕಾಮೆಂಟ್ ಮಾಡಿ, &quot;ಮೆಟಾ ಸಂಸ್ಥೆಯಷ್ಟು ಹೆಚ್ಚು ವೇತನ ನೀಡುವ ಇನ್ನೊಂದು ಸಾರ್ವಜನಿಕ ತಂತ್ರಜ್ಞಾನ ಕಂಪನಿಯನ್ನು ಕಂಡುಕೊಳ್ಳುವುದು ನಿಜಕ್ಕೂ ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;30,000 ಡಾಲರ್ ಹೆಚ್ಚುವರಿ ಹಣ ಸಿಕ್ಕ ತಕ್ಷಣ ಎಲ್ಲವೂ ಮುಗಿಯುವುದಿಲ್ಲ, ಜೀವನ ನಡೆಸಲು ಕೊನೆಗೂ ಉದ್ಯೋಗವೇ ಬೇಕು ಎಂದು ಇನ್ನೊಬ್ಬರು ನೆನಪಿಸಿದ್ದಾರೆ.&lt;/p&gt;&lt;p&gt;ಲೇ-ಆಫ್ ಸ್ಥಿತಿಯನ್ನು ಸಂಕ್ಷಿಪ್ತವಾಗಿ ವಿವರಿಸಿದ ಮತ್ತೊಬ್ಬ ಬಳಕೆದಾರ, &quot;ಜೀವನ ಎಂಬುದು ಒಂದು ಪೋಕರ್ ಆಟದಂತೆ&quot; ಎಂದು ಬರೆದಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/meta-layoff-made-me-richer-former-employee-s-viral-post-sparks-tech-debate-gdp/articleshow-58wxxi4"/>
        </item>
        <item>
            <title><![CDATA[H-1B ಬಳಿಕ H-4 ವೀಸಾಕ್ಕೆ ಕೈಹಾಕಿದ ಟ್ರಂಪ್​! ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಲಕ್ಷ ಲಕ್ಷ ಭಾರತೀಯರು]]></title>
            <link>https://kannada.asianetnews.com/world-news/donald-trump-plans-to-strip-h1b-spouses-of-their-jobs-h4-visa-in-trouble-indians-to-be-hit-hardest-suc/articleshow-5b419g9</link>
            <guid isPermaLink="true">https://kannada.asianetnews.com/world-news/donald-trump-plans-to-strip-h1b-spouses-of-their-jobs-h4-visa-in-trouble-indians-to-be-hit-hardest-suc/articleshow-5b419g9</guid>
            <pubDate>Tue, 01 Sep 2026 20:28:26 +0530</pubDate>
            <description><![CDATA[&lt;p&gt;ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಸಂಗಾತಿಗಳಿಗೆ ನೀಡಲಾಗುವ H-4 ವೀಸಾದಡಿ ಕೆಲಸದ ಅಧಿಕಾರವನ್ನು ರದ್ದುಗೊಳಿಸಲು ಟ್ರಂಪ್ ಆಡಳಿತವು ಹೊಸ ಪ್ರಸ್ತಾವನೆಯನ್ನು ಪರಿಗಣಿಸುತ್ತಿದೆ. ಈ ನಿಯಮ ಜಾರಿಗೆ ಬಂದರೆ, ಒಬಾಮಾ ಕಾಲದ ನೀತಿಯು ಬದಲಾಗಲಿದ್ದು, ಇದು ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರ, ವಿಶೇಷವಾಗಿ ಮಹಿಳೆಯರ ಮೇಲೆ ಗಂಭೀರ ಪರಿಣಾಮ ಬೀರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1eqmh6nq11e9ph9hw9tqrm5,imgname-h4-visa-1788274689237.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್:&lt;/strong&gt; ಭಾರತದಲ್ಲಿಯೇ ಹುಟ್ಟಿ, ಇಲ್ಲಿಯೇ ಕಲಿತು, ಇಲ್ಲಿಯೇ ಹಲವಾರು ರೀತಿಯ ಉದ್ಯೋಗಕಕ್ಕೆ ಅವಕಾಶ ಇದ್ದರೂ, ವಿದೇಶದ ಕನಸು ಕಾಣುವವರು ಹಲವರು. ತಮಗೆ ಇಷ್ಟವಿಲ್ಲದಿದ್ದರೂ ಎಷ್ಟೋ ಮಕ್ಕಳು, ಅಪ್ಪ-ಅಮ್ಮನ ಆಸೆ ಪೂರೈಸುವುದಕ್ಕಾಗಿಯಾದರೂ, ಅವರ ಪ್ರೆಸ್ಟೀಜ್​ಗಾದರೂ ವಿದೇಶಕ್ಕೆ ಅದರಲ್ಲಿಯೂ ಅಮೆರಿಕಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಕಂಡವರು. ಇನ್ನು ಕೆಲವರಿಗೆ ಕಂಪೆನಿಯಿಂದ ಹೋಗುವ ಅವಕಾಶ ಸಿಕ್ಕರೆ, ಮತ್ತೆ ಕೆಲವರು ಸ್ಕಾಲರ್​ಷಿಪ್​ ಪಡೆದು ಹೋದವರು ಇದ್ದಾರೆ. ಹೀಗೆ ಹೀಗೆ ಭಾರತದ ಬಿಟ್ಟು ಫಾರಿನ್​ ಆಸೆಗೆ ಕಟ್ಟುಬಿದ್ದು ಜೀವನ ಕಟ್ಟಿಕೊಳ್ಳುತ್ತಿರುವ ಲಕ್ಷಾಂತರ ಮಂದಿ ಅಮೆರಿಕದಲ್ಲಿದ್ದಾರೆ. ಇದಾಗಲೇ ಇವರಿಗೆ H-1B ವೀಸಾದಿಂದ ಹೊಡೆತ ಬಿದ್ದಿದೆ. ಆದರೆ ಇದೀಗ H4 ವೀಸಾವೂ ಹೋಗುವ ಸಾಧ್ಯತೆ ಇದೆ!&lt;/p&gt;&lt;p&gt;ಏಕೆಂದರೆ, ಅಮೆರಿಕ ಮತ್ತೊಂದು ಶಾಕ್​ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, H-1B ವೀಸಾ ಹೊಂದಿರುವವರಿಗೆ ಮತ್ತೊಂದು ದೊಡ್ಡ ಹೊಡೆತ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಇದು H-1B ವೀಸಾ ಹೊಂದಿರುವವರ ಸಂಗಾತಿಗಳ ಕೆಲಸದ ಅಧಿಕಾರವನ್ನು ರದ್ದುಗೊಳಿಸಬಹುದು. ಅಮೆರಿಕದಲ್ಲಿ ಸಾವಿರಾರು H-4 ವೀಸಾ ಹೊಂದಿರುವವರ ಕೆಲಸದ ಪರವಾನಗಿಗಳನ್ನು ರದ್ದುಗೊಳಿಸಬಹುದಾದ ಹೊಸ ಪ್ರಸ್ತಾವನೆಯನ್ನು ಪರಿಚಯಿಸಲು ಟ್ರಂಪ್ ಆಡಳಿತ ಸಿದ್ಧತೆ ನಡೆಸುತ್ತಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ, ಒಂದು ದಶಕಕ್ಕೂ ಹೆಚ್ಚು ಕಾಲ ಅರ್ಥಾತ್​ ಬರಾಕ್​ ಒಬಾಮಾ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಾರಿಯಲ್ಲಿರುವ ನೀತಿಯನ್ನು ಈ ಪ್ರಸ್ತಾವನೆ ಬದಲಾಯಿಸುತ್ತದೆ. ಸುಲಭದಲ್ಲಿ ಹೇಳಬೇಕು ಎಂದರೆ, ಎಚ್​-4 ವೀಸಾ ಎನ್ನುವುದು, ಅಮೆರಿಕದಲ್ಲಿ H-1B ಮುಂತಾದ ಉದ್ಯೋಗ ವೀಸಾ ಹೊಂದಿರುವವರ ಸಂಗಾತಿಗಳು ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವಿವಾಹಿತ ಮಕ್ಕಳಿಗಾಗಿ ನೀಡಲಾಗುವ ಅವಲಂಬಿತ ವೀಸಾವಾಗಿದೆ. ಅದನ್ನೀಗ ರದ್ದು ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.&lt;/p&gt;&lt;h2&gt;&lt;strong&gt;ಭಾರತೀಯರ ಮೇಲೆ ಹೆಚ್ಚು ಪರಿಣಾಮ&lt;/strong&gt;&lt;/h2&gt;&lt;p&gt;ಟ್ರಂಪ್ ಆಡಳಿತದ ಹೊಸ ಪ್ರಸ್ತಾವನೆಯು H-4 ವೀಸಾ ಹೊಂದಿರುವವರು ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ಅನುಮತಿಸುವ ನಿಯಮವನ್ನು ಬದಲಾಯಿಸುತ್ತದೆ. ಇದು ಭಾರತೀಯ ವೃತ್ತಿಪರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ, ಏಕೆಂದರೆ ಭಾರತೀಯರು H-4 ಪರವಾನಗಿ ಹೊಂದಿರುವವರಲ್ಲಿ ಹೆಚ್ಚಿನವರು. 2014 ಮತ್ತು 2017 ರ ನಡುವಿನ H-4 ಉದ್ಯೋಗ ಅಧಿಕಾರ ದಾಖಲೆ ಅರ್ಜಿಗಳ ದತ್ತಾಂಶವು ಅನುಮೋದನೆ ಪಡೆದವರಲ್ಲಿ 93 ಪ್ರತಿಶತ ಭಾರತೀಯ ನಾಗರಿಕರು ಮತ್ತು 94 ಪ್ರತಿಶತ ಮಹಿಳೆಯರು ಎಂದು ತೋರಿಸುತ್ತದೆ.&lt;/p&gt;&lt;h2&gt;&lt;strong&gt;ಟ್ರಂಪ್ ಆಡಳಿತದ ಹೊಸ ಪ್ರಸ್ತಾವನೆ ಏನು?&lt;/strong&gt;&lt;/h2&gt;&lt;p&gt;'ಮಾಹಿತಿ ಮತ್ತು ನಿಯಂತ್ರಣ ವ್ಯವಹಾರಗಳ ಕಚೇರಿ' ಅಡಿಯಲ್ಲಿ ಪಟ್ಟಿ ಮಾಡಲಾದ ಈ ಯೋಜನೆಯನ್ನು, ಉದ್ಯೋಗ ಅನುಮೋದನೆಗೆ ಅರ್ಹರಾಗಿರುವ ನಾಗರಿಕರಲ್ಲದ ವರ್ಗದಿಂದ H-4 ಅವಲಂಬಿತ ಸಂಗಾತಿಗಳನ್ನು ತೆಗೆದುಹಾಕುವುದು ಎಂದು ಹೆಸರಿಸಲಾಗಿದೆ. ಈ ಪ್ರಸ್ತಾವನೆಯು ಗೃಹ ಭದ್ರತಾ ಇಲಾಖೆಯ ದೀರ್ಘಕಾಲೀನ ನಿಯಂತ್ರಕ ಕಾರ್ಯಸೂಚಿಯ ಭಾಗವಾಗಿದೆ. ಇದನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಕೆಲವು H-4 ಅವಲಂಬಿತ ಸಂಗಾತಿಗಳಿಗೆ ಕೆಲಸದ ಅಧಿಕಾರದಲ್ಲಿನ ಬದಲಾವಣೆಗಳನ್ನು ರದ್ದುಗೊಳಿಸುತ್ತದೆ ಮತ್ತು DHS ನ ಹಿಂದಿನ ನೀತಿಯನ್ನು ಮರುಸ್ಥಾಪಿಸುತ್ತದೆ ಎಂದು ಪ್ರಸ್ತಾವನೆಯ ಭಾಷೆ ಸೂಚಿಸುತ್ತದೆ. ಹಿಂದಿನ ನೀತಿಯು H-4 ಅವಲಂಬಿತ ಸಂಗಾತಿಗಳು ಕೆಲಸದ ಅಧಿಕಾರಕ್ಕಾಗಿ ಅರ್ಜಿ ಸಲ್ಲಿಸಲು ಅನುಮತಿಸಲಿಲ್ಲ.&lt;/p&gt;&lt;h3&gt;&lt;strong&gt;H-4 ಕೆಲಸದ ಪರವಾನಗಿಗಳು ತಕ್ಷಣವೇ ಕೊನೆಗೊಳ್ಳುತ್ತವೆಯೇ?&lt;/strong&gt;&lt;/h3&gt;&lt;p&gt;ಈ ಪ್ರಸ್ತಾವನೆಯು H-4 ಕೆಲಸದ ಅಧಿಕಾರವು ತಕ್ಷಣವೇ ಕೊನೆಗೊಳ್ಳುತ್ತದೆ ಎಂದು ಅರ್ಥವಲ್ಲ. DHS ಫೆಡರಲ್ ರಿಜಿಸ್ಟರ್&zwnj;ನಲ್ಲಿ ಪ್ರಸ್ತಾವಿತ ನಿಯಮ ರಚನೆಯ ಔಪಚಾರಿಕ ಸೂಚನೆಯನ್ನು ಪ್ರಕಟಿಸಬೇಕು, ಸಾರ್ವಜನಿಕರಿಗೆ ಕಮೆಂಟ್ ಮಾಡಲು ಅವಕಾಶವನ್ನು ಒದಗಿಸಬೇಕು ಮತ್ತು ನಂತರ ಅಂತಿಮ ನಿಯಮವನ್ನು ನೀಡಬೇಕು. ಟ್ರಂಪ್ ಆಡಳಿತದ ಮೊದಲ ಅವಧಿಯಲ್ಲಿ H-4 ಕೆಲಸದ ಅಧಿಕಾರವನ್ನು ತೆಗೆದುಹಾಕುವ ಪ್ರಯತ್ನವನ್ನು ಸಹ ಮಾಡಲಾಯಿತು. ಆದಾಗ್ಯೂ, ಆ ಯೋಜನೆ ಎಂದಿಗೂ ಅಂತಿಮ ಹಂತವನ್ನು ತಲುಪಲಿಲ್ಲ ಮತ್ತು 2021 ರಲ್ಲಿ ಹಿಂತೆಗೆದುಕೊಳ್ಳಲಾಯಿತು.&lt;/p&gt;]]></content:encoded>
            <category>private-jobs</category>
            <dc:creator>Suchethana D</dc:creator>
            <atom:link href="https://kannada.asianetnews.com/world-news/donald-trump-plans-to-strip-h1b-spouses-of-their-jobs-h4-visa-in-trouble-indians-to-be-hit-hardest-suc/articleshow-5b419g9"/>
        </item>
        <item>
            <title><![CDATA["ನನಗೂ ಇಂಥದ್ದೇ ಕಷ್ಟ ಬರಲಿ ದೇವ್ರೇ!"  ₹92 ಲಕ್ಷ ಆಫರ್‌ನಿಂದ ಗೊಂದಲಕ್ಕೀಡಾದ ಬೆಂಗಳೂರು ಟೆಕ್ಕಿಯ ಕಥೆ!]]></title>
            <link>https://kannada.asianetnews.com/viral/bengaluru-tech-manager-dilemma-between-rs-75l-comfort-zone-and-rs-92l-offer-sparks-debate-on-reddit-gdp/articleshow-7vpwhiv</link>
            <guid isPermaLink="true">https://kannada.asianetnews.com/viral/bengaluru-tech-manager-dilemma-between-rs-75l-comfort-zone-and-rs-92l-offer-sparks-debate-on-reddit-gdp/articleshow-7vpwhiv</guid>
            <pubDate>Sat, 22 Aug 2026 13:04:24 +0530</pubDate>
            <description><![CDATA[ಬೆಂಗಳೂರಿನ 40 ವರ್ಷದ ಟೆಕ್ ಮ್ಯಾನೇಜರ್ ಒಬ್ಬರು 15 ವರ್ಷಗಳಿಂದ ದುಡಿಯುತ್ತಿರುವ ಕಂಪನಿಯಲ್ಲಿನ ₹75 ಲಕ್ಷ ಸಂಬಳದ ನೆಮ್ಮದಿಯ ಕೆಲಸ ಮತ್ತು ಮತ್ತೊಂದು ಕಂಪನಿಯಿಂದ ಬಂದಿರುವ ₹92 ಲಕ್ಷದ ಬೃಹತ್ ಆಫರ್ ನಡುವೆ ಗೊಂದಲಕ್ಕೀಡಾಗಿದ್ದಾರೆ. ಈ ವೃತ್ತಿಪರ ಸಂದಿಗ್ಧತೆಯ ಬಗ್ಗೆ ಸಲಹೆ ಕೋರಿ ಅವರು ರೆಡ್ಡಿಟ್ ಮೊರೆ ಹೋಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jp7jacrvss5jbvy3kv9f4m0g,imgname-hr-manager.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ನೀವು ಒಂದು ಕಂಪನಿಯಲ್ಲಿ 15 ವರ್ಷಗಳ ಕಾಲ ದುಡಿದು, ಉತ್ತಮ ಸಂಬಳ ಮತ್ತು ನೆಮ್ಮದಿಯ ವಾತಾವರಣದಲ್ಲಿದ್ದೀರಿ ಎಂದುಕೊಳ್ಳಿ. ಅದೇ ಸಮಯದಲ್ಲಿ ನಿಮಗೆ ಮತ್ತೊಂದು ಪ್ರತಿಷ್ಠಿತ ಟೆಕ್ ಕಂಪನಿಯಿಂದ ಬರೋಬ್ಬರಿ 92 ಲಕ್ಷ ರೂಪಾಯಿಗಳ ಬೃಹತ್ ಆಫರ್ ಬಂದರೆ, ನೀವು ಏನು ಮಾಡುತ್ತೀರಿ? ಇದೇ ಪ್ರಶ್ನೆ ಈಗ ಬೆಂಗಳೂರಿನ 40 ವರ್ಷದ ಟೆಕ್ ಮ್ಯಾನೇಜರ್ ಒಬ್ಬರನ್ನು ಗೊಂದಲಕ್ಕೆ ದೂಡಿದೆ. ನೆಮ್ಮದಿಯ ಕೆಲಸದ ವಾತಾವರಣದಲ್ಲಿ ಉಳಿಯಬೇಕೆ ಅಥವಾ ಬೃಹತ್ ವೇತನದೊಂದಿಗೆ ಹೊಸ ಅವಕಾಶವನ್ನು ಅಪ್ಪಿಕೊಳ್ಳಬೇಕೆ ಎಂಬ ಗೊಂದಲದಲ್ಲಿರುವ ಈ ಮ್ಯಾನೇಜರ್, ವೃತ್ತಿ ಸಲಹೆಗಾಗಿ ಈಗ &lsquo;ರೆಡ್ಡಿಟ್&rsquo; (Reddit) ಮೊರೆ ಹೋಗಿದ್ದಾರೆ.&lt;/p&gt;&lt;h2&gt;ಏನಿದು ಘಟನೆ?&lt;/h2&gt;&lt;p&gt;ರೆಡ್ಡಿಟ್&zwnj;ನಲ್ಲಿ ತಮ್ಮ ಗೊಂದಲವನ್ನು ತೋಡಿಕೊಂಡಿರುವ ಆ ವ್ಯಕ್ತಿ, &ldquo;ನನಗೆ ಈಗ 40 ವರ್ಷ. ಪ್ರಸ್ತುತ ಬೆಂಗಳೂರಿನ ಕಂಪನಿಯೊಂದರಲ್ಲಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಲೀಡ್ ಮತ್ತು ಆರ್ಕಿಟೆಕ್ಟ್ ಹುದ್ದೆಗಳ ಮೂಲಕ ಬೆಳೆದು, ಕಳೆದ 3.5 ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದೀಗ ನನಗೆ ಮತ್ತೊಂದು ಬೃಹತ್ ಜಾಗತಿಕ ತಂತ್ರಜ್ಞಾನ ಕಂಪನಿಯಿಂದ ಬಂಪರ್ ಆಫರ್ ಬಂದಿದೆ&rdquo; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ಪ್ರಸ್ತುತ ಕಂಪನಿಯ ಸ್ಥಿತಿ:&lt;/h2&gt;&lt;p&gt;ನನ್ನ ಈಗಿನ ಕಂಪನಿಯಲ್ಲಿ ₹75 ಲಕ್ಷದ ಸಿಟಿಸಿ (CTC) ಇದ್ದು, ಇದರಲ್ಲಿ ₹65.25 ಲಕ್ಷ ಫಿಕ್ಸ್ಡ್ ಸ್ಯಾಲರಿ ಇದೆ. ಕಳೆದ 15 ವರ್ಷಗಳಿಂದ ದುಡಿದಿರುವ ಕಾರಣ ಕಂಪನಿಯಲ್ಲಿ ಅಪಾರ ವಿಶ್ವಾಸ ಇದೆ. ನೆಮ್ಮದಿಯ ವಾತಾವರಣ, ಸುಲಭವಾದ ಕೆಲಸ, ಜೊತೆಗೆ ಕಚೇರಿ ನನ್ನ ಮನೆಗೆ ಹತ್ತಿರವಿದ್ದು ಪ್ರಯಾಣದ ಕಿರಿಕಿರಿಯೂ ಇಲ್ಲ. ಮುಂದೆ ಹಿರಿಯ ನಾಯಕತ್ವದ ಹುದ್ದೆಗೇರುವ ಸಣ್ಣ ಅವಕಾಶವೂ ಇದೆ.&lt;/p&gt;&lt;h2&gt;ಹೊಸ ಆಫರ್ ಏನಿದೆ?&lt;/h2&gt;&lt;p&gt;ಮತ್ತೊಂದು ಜಾಗತಿಕ ಟೆಕ್ ಕಂಪನಿಯಿಂದ ₹92 ಲಕ್ಷ ಸಿಟಿಸಿ (₹80 ಲಕ್ಷ ಫಿಕ್ಸ್ಡ್) ಆಫರ್ ಬಂದಿದೆ. ಇದು ಲೈನ್ ಮ್ಯಾನೇಜರ್ (Line Manager) ಹುದ್ದೆಯಾಗಿದ್ದು, ಗಣನೀಯ ಪ್ರಮಾಣದ ವೇತನ ಹೆಚ್ಚಳವಾಗಿದೆ. ನನ್ನ ಪ್ರಸ್ತುತ ಕಂಪನಿಯ ಹೊರತಾಗಿ ಹೊಸ ಜವಾಬ್ದಾರಿಗಳು ಮತ್ತು ಮ್ಯಾನೇಜ್&zwnj;ಮೆಂಟ್ ಕೌಶಲ್ಯವನ್ನು ಬೆಳೆಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.&lt;/p&gt;&lt;h2&gt;ರೆಡ್ಡಿಟ್ ಬಳಕೆದಾರರ ಪ್ರತಿಕ್ರಿಯೆಗಳೇನು?&lt;/h2&gt;&lt;p&gt;ಈ ಪೋಸ್ಟ್ ನೋಡಿದ ನೆಟ್ಟಿಗರು ನಾನಾ ರೀತಿಯ ಸಲಹೆಗಳನ್ನು ನೀಡಿದ್ದಾರೆ. ಒಬ್ಬರು, &ldquo;40ರ ವಯಸ್ಸಿನಲ್ಲಿ ನೀವು ಕೇವಲ ವೇತನವನ್ನಷ್ಟೇ ನೋಡದೆ, ನಿಮ್ಮ ವೃತ್ತಿಜೀವನದ ಗುರಿಗಳು ಮತ್ತು ವೈಯಕ್ತಿಕ ಆದ್ಯತೆಗಳನ್ನು ಗಮನಿಸಬೇಕು. ಲೈನ್ ಮ್ಯಾನೇಜರ್ ಆಗಿ ಹೋದರೆ ಭವಿಷ್ಯದಲ್ಲಿ ನಿರ್ದೇಶಕರ ಮಟ್ಟಕ್ಕೆ ಏರಬೇಕಾಗುತ್ತದೆ. ಹಾಗಾಗಿ ಕೇವಲ ಹಣಕ್ಕಾಗಿ ಮಾತ್ರ ಈ ನಿರ್ಧಾರ ತೆಗೆದುಕೊಳ್ಳಬೇಡಿ&rdquo; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಮತ್ತೊಬ್ಬರು ಕಟುವಾಗಿ ಪ್ರತಿಕ್ರಿಯಿಸಿ, &ldquo;ನೀವು ಈಗಾಗಲೇ ನಿಮ್ಮ ಕಂಪನಿಗೆ ಬೇರೆ ಆಫರ್ ಬಗ್ಗೆ ತಿಳಿಸಿರುತ್ತೀರಿ. ಅಂದರೆ ನೀವು ಕೆಲಸ ಬಿಡುವ ಯೋಚನೆಯಲ್ಲಿದ್ದೀರಿ ಎಂಬುದು ಅವರಿಗೆ ತಿಳಿದಿರುತ್ತದೆ. ಮುಂದೆ ಅವಕಾಶ ಸಿಕ್ಕಾಗ ಅವರು ನಿಮ್ಮನ್ನೇ ಮೊದಲು ಕೈಬಿಡಬಹುದು. ಆದ್ದರಿಂದ ಹೊಸ ಕಂಪನಿಗೆ ಸೇರುವುದೇ ಉತ್ತಮ&rdquo; ಎಂದಿದ್ದಾರೆ.&lt;/p&gt;&lt;p&gt;ಮೂರನೆಯವರು ತಮಾಷೆ ಮಾಡುತ್ತಾ, &ldquo;ದೇವರೇ! ನನಗೂ ಜೀವನದಲ್ಲಿ ಇಂತಹದ್ದೇ ಕಷ್ಟಗಳು ಬರಲಿ&rdquo; ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ನಾಲ್ಕನೆಯವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ, &ldquo;ನೀವು ಈಗಿರುವ ಕಂಪನಿಯಲ್ಲೇ ಉಳಿಯಬೇಕು. 15 ವರ್ಷಗಳಿಂದ ಬೆಳೆಸಿಕೊಂಡಿರುವ ವಿಶ್ವಾಸಾರ್ಹತೆ, 20% ವೇತನ ಹೆಚ್ಚಳಕ್ಕಿಂತ ದೊಡ್ಡದು&rdquo; ಎಂದು ಸಲಹೆ ನೀಡಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/viral/bengaluru-tech-manager-dilemma-between-rs-75l-comfort-zone-and-rs-92l-offer-sparks-debate-on-reddit-gdp/articleshow-7vpwhiv"/>
        </item>
        <item>
            <title><![CDATA[ಬೆಂಗಳೂರಿನ BEL ನಲ್ಲಿ ಉದ್ಯೋಗ ಅವಕಾಶ: ಸೆಪ್ಟೆಂಬರ್ 10ರಂದು ನೇರ ಸಂದರ್ಶನ, ಹುದ್ದೆಗೆ ಯಾರು ಅರ್ಹರು?]]></title>
            <link>https://kannada.asianetnews.com/jobs/bel-recruitment-2026-management-industrial-trainee-walk-in-interview-in-bengaluru-gdp/articleshow-95txrcd</link>
            <guid isPermaLink="true">https://kannada.asianetnews.com/jobs/bel-recruitment-2026-management-industrial-trainee-walk-in-interview-in-bengaluru-gdp/articleshow-95txrcd</guid>
            <pubDate>Mon, 31 Aug 2026 09:09:57 +0530</pubDate>
            <description><![CDATA[ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಬೆಂಗಳೂರು ಘಟಕದಲ್ಲಿ 'ಮ್ಯಾನೇಜ್&zwnj;ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ' ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನವನ್ನು ಆಯೋಜಿಸಿದೆ. CA ಇಂಟರ್ ಅಥವಾ CMA ಇಂಟರ್ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 10, 2026 ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01ewswfd5056f4jq1c9e6ckk69,imgname-bel-jpeg.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಬೆಂಗಳೂರು ಘಟಕದಲ್ಲಿ ಖಾಲಿ ಇರುವ &lsquo;ಮ್ಯಾನೇಜ್&zwnj;ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ&rsquo; ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 10, 2026 ರಂದು ನಡೆಯುವ ನೇರ ಸಂದರ್ಶನದಲ್ಲಿ (Walk-in Interview) ಭಾಗವಹಿಸಬಹುದು.&lt;/p&gt;&lt;h2&gt;ಉದ್ಯೋಗದ ವಿವರಗಳು&lt;/h2&gt;&lt;p&gt;ಸಂಸ್ಥೆಯ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)&lt;/p&gt;&lt;p&gt;ಹುದ್ದೆಯ ಹೆಸರು: ಮ್ಯಾನೇಜ್&zwnj;ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ&lt;/p&gt;&lt;p&gt;ಖಾಲಿ ಹುದ್ದೆಗಳ ಸಂಖ್ಯೆ: ವಿವಿಧ (ಅಧಿಸೂಚನೆ ಪ್ರಕಾರ)&lt;/p&gt;&lt;p&gt;ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ&lt;/p&gt;&lt;p&gt;ಮಾಸಿಕ ವೇತನ: ₹25,000 - ₹30,000 (ಪ್ರತಿ ತಿಂಗಳು)&lt;/p&gt;&lt;h2&gt;ಅರ್ಹತಾ ಮಾನದಂಡಗಳು&lt;/h2&gt;&lt;p&gt;ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ CA Inter ಅಥವಾ CMA Inter ಪೂರ್ಣಗೊಳಿಸಿರಬೇಕು.&lt;/p&gt;&lt;p&gt;ವಯೋಮಿತಿ: 01 ಸೆಪ್ಟೆಂಬರ್ 2026 ರಂತೆ ಅಭ್ಯರ್ಥಿಯ ಗರಿಷ್ಠ ವಯಸ್ಸು 25 ವರ್ಷ ಮೀರಿರಬಾರದು.&lt;/p&gt;&lt;p&gt;ವಯೋಮಿತಿ ಸಡಿಲಿಕೆ:&lt;/p&gt;&lt;p&gt;OBC ಅಭ್ಯರ್ಥಿಗಳಿಗೆ: 3 ವರ್ಷಗಳು&lt;/p&gt;&lt;p&gt;SC / ST ಅಭ್ಯರ್ಥಿಗಳಿಗೆ: 5 ವರ್ಷಗಳು&lt;/p&gt;&lt;p&gt;PwBD ಅಭ್ಯರ್ಥಿಗಳಿಗೆ: 10 ವರ್ಷಗಳು&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;p&gt;ಅರ್ಹ ಅಭ್ಯರ್ಥಿಗಳು ಪ್ರತ್ಯೇಕವಾಗಿ ಆನ್&zwnj;ಲೈನ್ ಅಥವಾ ಆಫ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಅಗತ್ಯ ಮೂಲ ದಾಖಲೆಗಳು ಹಾಗೂ ಸ್ವಯಂ ದೃಢೀಕರಿಸಿದ ನಕಲು ಪ್ರತಿಗಳೊಂದಿಗೆ (Self-attested copies) ಕೆಳಗಿನ ವಿಳಾಸದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು:&lt;/p&gt;&lt;h2&gt;ಸಂದರ್ಶನದ ವಿಳಾಸ:&lt;/h2&gt;&lt;p&gt;ಸೆಂಟರ್ ಫಾರ್ ಲರ್ನಿಂಗ್ ಅಂಡ್ ಡೆವಲಪ್&zwnj;ಮೆಂಟ್,&lt;/p&gt;&lt;p&gt;ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್,&lt;/p&gt;&lt;p&gt;ಜಾಲಹಳ್ಳಿ, ಬೆಂಗಳೂರು - 560013.&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅಧಿಸೂಚನೆ ಪ್ರಕಟವಾದ ದಿನಾಂಕ: 28 ಆಗಸ್ಟ್ 2026&lt;/p&gt;&lt;p&gt;ನೇರ ಸಂದರ್ಶನ ನಡೆಯುವ ದಿನಾಂಕ: 10 ಸೆಪ್ಟೆಂಬರ್ 2026&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/bel-recruitment-2026-management-industrial-trainee-walk-in-interview-in-bengaluru-gdp/articleshow-95txrcd"/>
        </item>
        <item>
            <title><![CDATA[2021ರಲ್ಲಿ ಜೂಮ್ ಕಾಲ್‌ನಲ್ಲಿ 900 ಉದ್ಯೋಗಿಗಳ ಕಿತ್ತೆಸೆದ ಸಿಇಒ ವಿಶಾಲ್‌ಗೆ ಬಿಗ್ ಶಾಕ್, ಏನಾಯಿತು ಈಗ?]]></title>
            <link>https://kannada.asianetnews.com/viral/vishal-garg-who-fired-900-employees-on-zoom-call-faces-major-setback-years-later/articleshow-dtvqb6i</link>
            <guid isPermaLink="true">https://kannada.asianetnews.com/viral/vishal-garg-who-fired-900-employees-on-zoom-call-faces-major-setback-years-later/articleshow-dtvqb6i</guid>
            <pubDate>Sat, 15 Aug 2026 14:53:42 +0530</pubDate>
            <description><![CDATA[&lt;p&gt;2021 ಕೋವಿಡ್ ಸಂಕಷ್ಟದ ನಡುವೆ ಜೂಮ್ ಕಾಲ್ ಮೂಲಕ 900 ಉದ್ಯೋಗಿಗಳನ್ನು ಕಿತ್ತಸೆದಿದ್ದರು. ಕನಿಷ್ಠ ಗೌರವ ನೀಡಿದೆ ಉದ್ಯೋಗ ಕಡಿತ ಮಾಡಿದ್ದರು. ಭಾರಿ ಸುದ್ದಿಯಾಗಿದ್ದ ಇದೇ ಸಿಇಒ ವಿಶಾಲ್ ಗರ್ಗ್&zwnj;ಗೆ ಇದೀಗ ಬಿಗ್ ಶಾಕ್ ಎದುರಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0gx6ahvxda7fawgrz0nf3hb,imgname-gettyimages-1463428166-1752914143803.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.15) &lt;/strong&gt;ಐಟಿ ಕ್ಷೇತ್ರದ ಹಲವು ಕಂಪನಿಗಳು ಹಂತ ಹಂತವಾಗಿ ಈಗದಲೂ ಉದ್ಯೋಗ ಕಡಿತ ಮಾಡುತ್ತಲೇ ಇದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೇರಿದಂತೆ ಹಲವು ಕಾರಣಗಳಿಂದ ಉದ್ಯೋಗ ಕಡಿತ ನಡೆಯುತ್ತಿದೆ. 2021ರಲ್ಲಿ ಕೋವಿಡ್ ಮಹಾಮಾರಿಯಿಂದ ಆಗಷ್ಟೇ ಚೇತರಿಕೆ ಬೆಳಕೊಂದು ಕಂಡಿತ್ತು. ಅದಾಗಲೇ ಹಲವು ಕಂಪನಿಗಳು ಅನಿವಾರ್ಯವಾಗಿ ಮುಚ್ಚಿ ಹೋಗಿತ್ತು.ಇದರ ನಡುವೆ ವರ್ಕ್ ಫ್ರಮ್ ಹೋಮ್&zwnj;ನಲ್ಲಿದ್ದ ಬೆಟರ್ ಹೋಮ್ ಆ್ಯಂಡ್ ಫಿನಾನ್ಸ್ ಕಂಪನಿಯ ಸಿಇಒ ವಿಶಾಲ್ ಗರ್ಗ್ ಜೂಮ್ ಕಾಲ್ ಮೂಲಕ ಬರೋಬ್ಬರಿ 900 ಉದ್ಯೋಗಿಗಳನ್ನು ಕೆತ್ತೆಸೆದಿದ್ದರು. ಈ ಮೂಲಕ 5 ವರ್ಷಗಳ ಹಿಂದೆ ವಿಶಾಲ್ ಗರ್ಗ್ ಭಾರಿ ಸುದ್ದಿಯಾಗಿದ್ದರು. ಇದೀಗ ಇದೇ ವಿಶಾಲ್ ಗರ್ಗ್&zwnj;ನ್ನು ಸಿಇಒ ಸ್ಥಾನದಿಂದ ಅದೇ ಕಂಪನಿ ವಜಾಗೊಳಿಸಿದೆ.&lt;/p&gt;&lt;h2&gt;ನೀವು ಜೂಮ್ ಕಾಲ್&zwnj;ನಲ್ಲಿದ್ದರೆ, ನಿಮ್ಮ ಕೊನೆಯ ವರ್ಕಿಂಗ್ ಡೇ&lt;/h2&gt;&lt;p&gt;ಕೋವಿಡ್ ನಿರ್ಬಂಧಗಳ ಕಾರಣ ವರ್ಕ್&zwnj; ಫ್ರಮ್ ಹೋಮ್ ಸಿಬ್ಬಂದಿಗಳಿಗೆ ಪ್ರತಿ ದಿನ, ವಾರದ ವಿಡಿಯೋ ಕಾಲ್ ಮೀಟಿಂಗ್ ಸಾಮಾನ್ಯವಾಗಿತ್ತು. ಹೀಗೆ ಕಂಪನಿಯ ಉದ್ಯೋಗಿಗಳ ಪೈಕಿ 900 ಮಂದಿಗೆ ದಿಢೀರ್ ಜೂಮ್ ಕಾಲ್&zwnj;ನಲ್ಲಿ ಹಾಜಗಾರುವಂತೆ ವಿಶಾಲ್ ಗರ್ಗ್ ಇಮೇಲ್ ಮಾಡಿದ್ದಾರೆ. ಎಲ್ಲರೂ ವಿಡಿಯೋ ಕಾಲ್&zwnj;ನಲ್ಲಿ ಜಾಯಿನ್ ಆಗುತ್ತಿದ್ದಂತೆ ಯಾರೆಲ್ಲಾ ಈ ವಿಡಿಯೋ ಕಾಲ್&zwnj;ನಲ್ಲಿದ್ದೀರಾ ನಿಮ್ಮ ದುರಾದೃಷ್ಟ. ಕಾರಣ ನಿಮ್ಮ ಉದ್ಯೋಗವನ್ನು ತಕ್ಷಣಕ್ಕೆ ಜಾರಿಬರುವಂತೆ ವಜಾ ಮಾಡಲಾಗಿದೆ ಎಂದು ಜೂಮ್ ಕಾಲ್ ಮೂಲಕ ಹೇಳಿದ್ದರು. ಕೇವಲ 2 ನಿಮಿಷದಲ್ಲಿ 900 ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಇದೀಗ 5 ವರ್ಷ ಉರುಳಿದೆ. ಪರಿಣಾಮ ಇದೇ ವಿಶಾಲ್ ಗರ್ಗ್ ಅದೇ ಕಂಪನಿಯ ಸಿಇಒ ಸ್ಥಾನದಿಂದ ವಜಾಗೊಂಡಿದ್ದಾರೆ.&lt;/p&gt;&lt;h2&gt;ಆಡಳಿತ ಮಂಡಳಿಯ ಸರ್ವಾನುಮತದ ಕ್ರಮ&lt;/h2&gt;&lt;p&gt;ವಿಶಾಲ್ ಗರ್ಗ್ ವಿರುದ್ದ ಆಡಳಿತ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ವಿಶಾಲ್ ಗರ್ಗ್ ವಜಾ ಮಾಡಲು ಎಲ್ಲಾ ಸದಸ್ಯರು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದ್ದಾರೆ. ಬೆಟರ್ ಹೋಮ್ ಆ್ಯಂಡ್ ಫಿನಾನ್ಸ್ ಹೊಲ್ಡಿಂಗ್ ಕಂಪನಿಯ ಬೋರ್ಡ್ ಸದಸ್ಯರು ವಿಶಾಲ್ ಗರ್ಗ್ ಟರ್ಮಿನೇಶನ್ (ವಜಾ ಪತ್ರ) ಪತ್ರವನ್ನು ಬಿಡುಗಡೆ ಮಾಡಿದೆ.&lt;/p&gt;&lt;h2&gt;ವಿಶಾಲ್ ಗರ್ಗ್ ವಜಾಗೆ ಕಾರಣವೇನು?&lt;/h2&gt;&lt;p&gt;ವಿಶಾಲ್ ಗರ್ಗ್ ಕೋಪದ ಸ್ವಭಾವ, ವಿಶ್ವಾಸಾರ್ಹತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿದೆ. 2022ರ ಬಳಿಕ ಕಂಪನಿ 12,500 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಷೇರುಗಳ ಮೌಲ್ಯ ಶೇಕಡಾ 90ರಷ್ಟು ಕುಸಿದಿದೆ. ವಿಶಾಲ್ ಗರ್ಗ್ ತೆಗೆದುಕೊಂಡ ಕೆಲ ತಪ್ಪು ನಿರ್ಧಾರಗಳು, ಕೋಪದಿಂದ ಮಾಡಿದ ಎಡವಟ್ಟುಗಳು ಕಂಪನಿಗೆ ತೀವ್ರ ನಷ್ಟನ್ನುಂಟು ಮಾಡಿದೆ ಎಂದು ಕಂಪನಿಯ ಬೋರ್ಡ್ ಸದಸ್ಯರು ಹಲವು ಕಾರಣ ನೀಡಿದೆ. ಇದೇ ವೇಳೆ ಕಂಪನಿಗಳ ಷೇರು ಮಾರುಕಟ್ಟೆಯ ಕಾನೂನು ಉಲ್ಲಂಘನೆ, ಅಗತ್ಯ ದಾಖಲೆಗಳಿಗೆ ಸಹಿ ಮಾಡದೇ ಅನಗತ್ಯ ವಿಳಂಬ ಸೇರಿದಂತೆ ಕೆಲ ಪ್ರಮುಖ ಕಾರಣಗಳನ್ನು ನೀಡಿ ವಿಶಾಲ್ ಗರ್ಗ್&zwnj;ರನ್ನು ವಜಾ ಮಾಡಲಾಗಿದೆ.&lt;/p&gt;&lt;p&gt;ಆಗಸ್ಟ್ 3 ರಂದು ಒಪ್ಪಂದ ಮೇರೆಗೆ ಸಿಇಒ ಸ್ಥಾನದಿಂದ ನಿರ್ಗಮಿಸುವಂತೆ ಬೋರ್ಡ್ ಸೂಚಿಸಿತ್ತು. ಆದರೆ ಆಗಸ್ಟ್ 13ರಂದು ಕಂಪನಿ ವಿರುದ್ದವೇ ವಿಶಾಲ್ ಗರ್ಗ್ ಕಾನೂನು ಹೋರಾಟ ಆರಂಭಿಸಿದ್ದಾರೆ. ಇದೀಗ ವಕೀಲರ ನೇಮಿಸಿಕೊಂಡಿರುವ ವಿಶಾಲ್ ಗರ್ಗ್ ಕಂಪನಿ ವಿರುದ್ದ ಕಾನೂನು ಹೋರಾಟ ಆರಂಭಿಸಿದ್ದಾರೆ. ಇಷ್ಟೇ ಅಲ್ಲ ತನ್ನ ಸಿಇಒ ಸ್ಥಾನ ಸಿಗುವವರೆಗೂ ಹೋರಾಟ ಮಾಡುವುದಾಗಿ ಹೇಳಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/vishal-garg-who-fired-900-employees-on-zoom-call-faces-major-setback-years-later/articleshow-dtvqb6i"/>
        </item>
        <item>
            <title><![CDATA[ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ ನಿಂದ ಉದ್ಯೋಗದ ಕರೆ: 39 ಹುದ್ದೆಗಳಿಗೆ ಭರ್ಜರಿ ನೇಮಕಾತಿ]]></title>
            <link>https://kannada.asianetnews.com/jobs/indian-rare-earths-limited-recruitment-39-vacancies-for-iti-diploma-and-be-btech-gdp/articleshow-dzazxpx</link>
            <guid isPermaLink="true">https://kannada.asianetnews.com/jobs/indian-rare-earths-limited-recruitment-39-vacancies-for-iti-diploma-and-be-btech-gdp/articleshow-dzazxpx</guid>
            <pubDate>Sat, 15 Aug 2026 17:40:27 +0530</pubDate>
            <description><![CDATA[&lt;p&gt;ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ (IREL) ತನ್ನ ತಮಿಳುನಾಡಿನ ಕನ್ಯಾಕುಮಾರಿ ಘಟಕದಲ್ಲಿ 39 ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ITI, ಡಿಪ್ಲೊಮಾ, ಮತ್ತು B.E/B.Tech ಪದವೀಧರರು ಈ ಹುದ್ದೆಗಳಿಗೆ ಆಫ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯು ಟ್ರೇಡ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಆಯ್ಕೆಯು ಟ್ರೇಡ್ ಟೆಸ್ಟ್ ಮತ್ತು ನೇರ ಸಂದರ್ಶನದ ಮೂಲಕ ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzd6pxmzpfebv3svhwx3npvq,imgname-job-interview-1786075903647.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ (IREL) ತನ್ನ ತಮಿಳುನಾಡಿನ ಕನ್ಯಾಕುಮಾರಿ ಘಟಕದಲ್ಲಿ ಖಾಲಿ ಇರುವ 39 ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಮುಗಿಸಿ ಉದ್ಯೋಗಾವಕಾಶದ ನಿರೀಕ್ಷೆಯಲ್ಲಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.&lt;/p&gt;&lt;h2&gt;ನೇಮಕಾತಿಯ ಪ್ರಮುಖ ವಿವರಗಳು&lt;/h2&gt;&lt;p&gt;ಸಂಸ್ಥೆಯ ಹೆಸರು: ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ (IREL)&lt;/p&gt;&lt;p&gt;ಹುದ್ದೆಯ ಹೆಸರು: ಅಪ್ರೆಂಟಿಸ್ ಟ್ರೈನಿ&lt;/p&gt;&lt;p&gt;ಒಟ್ಟು ಹುದ್ದೆಗಳ ಸಂಖ್ಯೆ: 39&lt;/p&gt;&lt;p&gt;ಉದ್ಯೋಗ ಸ್ಥಳ: ಮಣವಾಳಕುರಿಚಿ, ಕನ್ಯಾಕುಮಾರಿ (ತಮಿಳುನಾಡು)&lt;/p&gt;&lt;h2&gt;ಹುದ್ದೆಗಳ ವರ್ಗೀಕರಣ&lt;/h2&gt;&lt;p&gt;ಟ್ರೇಡ್ ಅಪ್ರೆಂಟಿಸ್: 31 ಹುದ್ದೆಗಳು&lt;/p&gt;&lt;p&gt;ಪದವೀಧರ (ಗ್ರಾಜುಯೇಟ್) ಅಪ್ರೆಂಟಿಸ್: 04 ಹುದ್ದೆಗಳು&lt;/p&gt;&lt;p&gt;ತಂತ್ರಜ್ಞ (ಟೆಕ್ನಿಷಿಯನ್) ಅಪ್ರೆಂಟಿಸ್: 04 ಹುದ್ದೆಗಳು&lt;/p&gt;&lt;h2&gt;ಅರ್ಹತಾ ಮಾನದಂಡಗಳು&lt;/h2&gt;&lt;p&gt;ಶೈಕ್ಷಣಿಕ ಅರ್ಹತೆ:&lt;/p&gt;&lt;p&gt;ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಭಾಗದಲ್ಲಿ ITI, ಡಿಪ್ಲೊಮಾ ಅಥವಾ B.E/B.Tech ಪದವಿ ಪೂರ್ಣಗೊಳಿಸಿರಬೇಕು.&lt;/p&gt;&lt;p&gt;ವಯೋಮಿತಿ:&lt;/p&gt;&lt;p&gt;05-09-2026ರ ವೇಳೆಗೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಹಾಗೂ ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.&lt;/p&gt;&lt;h2&gt;ವಯೋಮಿತಿ ಸಡಿಲಿಕೆ:&lt;/h2&gt;&lt;p&gt;OBC ಅಭ್ಯರ್ಥಿಗಳಿಗೆ: 3 ವರ್ಷಗಳು&lt;/p&gt;&lt;p&gt;SC / ST ಅಭ್ಯರ್ಥಿಗಳಿಗೆ: 5 ವರ್ಷಗಳು&lt;/p&gt;&lt;p&gt;PwBD (ವಿಕಲಚೇತನ) ಅಭ್ಯರ್ಥಿಗಳಿಗೆ: 10 ವರ್ಷಗಳು&lt;/p&gt;&lt;p&gt;ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆ&lt;/p&gt;&lt;p&gt;ಅರ್ಜಿ ಶುಲ್ಕ: ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಉಚಿತ (ಯಾವುದೇ ಅರ್ಜಿ ಶುಲ್ಕವಿಲ್ಲ).&lt;/p&gt;&lt;p&gt;ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಟ್ರೇಡ್ ಟೆಸ್ಟ್ (ವೃತ್ತಿ ಕೌಶಲ್ಯ ಪರೀಕ್ಷೆ) ಹಾಗೂ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;p&gt;ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಆಫ್&zwnj;ಲೈನ್ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.&lt;/p&gt;&lt;p&gt;ಅರ್ಜಿ ಕಳುಹಿಸಬೇಕಾದ ವಿಳಾಸ:&lt;/p&gt;&lt;p&gt;ದಿ ಚೀಫ್ ಮ್ಯಾನೇಜರ್ &ndash; HRM (Legal &amp;amp; ER),&lt;/p&gt;&lt;p&gt;IREL (India) Limited,&lt;/p&gt;&lt;p&gt;ಮಣವಾಳಕುರಿಚಿ, ಕನ್ಯಾಕುಮಾರಿ ಜಿಲ್ಲೆ,&lt;/p&gt;&lt;p&gt;ತಮಿಳುನಾಡು - 629252.&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: 03 ಆಗಸ್ಟ್ 2026&lt;/p&gt;&lt;p&gt;ಅರ್ಜಿ ತಲುಪಲು ಕೊನೆಯ ದಿನಾಂಕ: 31 ಆಗಸ್ಟ್ 2026&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/indian-rare-earths-limited-recruitment-39-vacancies-for-iti-diploma-and-be-btech-gdp/articleshow-dzazxpx"/>
        </item>
        <item>
            <title><![CDATA[ಇಲ್ನೋಡಿ ಕಂಪನಿಗಳ ಹೊಸ ತಂತ್ರ: ನೋ ಹೈಕ್, ನೋ ಪ್ರಮೋಷನ್ ಉದ್ಯೋಗಿ ರಾಜೀನಾಮೆಗೆ ಬದಲಿ ಯಾರೂ ಇಲ್ವಾ? ಧ್ವನಿ ಎತ್ತಿದ ಮಹಿಳೆ]]></title>
            <link>https://kannada.asianetnews.com/women/seo-title-corporate-workload-trend-woman-s-instagram-video-sparks-debate-on-extra-work-without-pay-gdp/articleshow-g6adeqw</link>
            <guid isPermaLink="true">https://kannada.asianetnews.com/women/seo-title-corporate-workload-trend-woman-s-instagram-video-sparks-debate-on-extra-work-without-pay-gdp/articleshow-g6adeqw</guid>
            <pubDate>Tue, 01 Sep 2026 18:45:39 +0530</pubDate>
            <description><![CDATA[ಉದ್ಯೋಗಿಗಳು ರಾಜೀನಾಮೆ ನೀಡಿದಾಗ, ಅವರ ಜಾಗಕ್ಕೆ ಹೊಸಬರನ್ನು ನೇಮಿಸದೆ ಉಳಿದ ಸಿಬ್ಬಂದಿಗೆ ಹೆಚ್ಚುವರಿ ಕೆಲಸದ ಹೊರೆ ಹಾಕುವ ಕಾರ್ಪೊರೇಟ್ ಸಂಸ್ಕೃತಿಯನ್ನು ಮಹಿಳೆಯೊಬ್ಬರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಪ್ರಶ್ನಿಸಿದ್ದಾರೆ. ಯಾವುದೇ ಹೆಚ್ಚುವರಿ ಸಂಬಳ ಅಥವಾ ಮನ್ನಣೆ ಇಲ್ಲದೆ ಹೆಚ್ಚಿನ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯ ಕುರಿತ ಈ ವೀಡಿಯೊ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ಗಳಿಸಿ ಚರ್ಚೆಗೆ ಗ್ರಾಸವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1ehn972sdvam4q351qfxh62,imgname-corporate-culture-1788268422370.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜೀನಾಮೆ ನೀಡುವ ಉದ್ಯೋಗಿಗಳ ಜಾಗಕ್ಕೆ ಹೊಸಬರನ್ನು ನೇಮಿಸಿಕೊಳ್ಳದೆ, ಅದೇ ಸಂಬಳಕ್ಕೆ ಉಳಿದ ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ನೀಡುವ ಪ್ರಸ್ತುತ ಕಾರ್ಪೊರೇಟ್ ಸಂಸ್ಕೃತಿಯ ಕುರಿತು ಮಹಿಳೆಯೊಬ್ಬರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಸೃಷ್ಟಿ ಶಾರದಾ ಎಂಬ ಮಹಿಳೆ, ಕಂಪನಿಗಳು ರಾಜೀನಾಮೆ ನೀಡಿದವರ ಬದಲಿಗೆ ಹೊಸಬರನ್ನು ನೇಮಿಸಿಕೊಳ್ಳುವ ಬದಲು, ನಿರ್ಗಮಿಸುವ ಉದ್ಯೋಗಿಗಳ ಜವಾಬ್ದಾರಿಗಳನ್ನು ಅಸ್ತಿತ್ವದಲ್ಲಿರುವ ಸಿಬ್ಬಂದಿಯ ನಡುವೆ ಹಂಚುತ್ತಿರುವ ಪ್ರವೃತ್ತಿಯನ್ನು ಪ್ರಶ್ನಿಸಿದ್ದಾರೆ. ಉದ್ಯೋಗಿಗಳು ಹೆಚ್ಚುವರಿ ಕೆಲಸವನ್ನು ನಿರ್ವಹಿಸುವಂತೆ ನಿರೀಕ್ಷಿಸಿದರೂ, ಅವರಿಗೆ ಪ್ರತಿಯಾಗಿ ಯಾವುದೇ ಹೆಚ್ಚುವರಿ ಆರ್ಥಿಕ ಸೌಲಭ್ಯವಾಗಲಿ ಅಥವಾ ಮನ್ನಣೆಯಾಗಲಿ ಸಿಗುತ್ತಿಲ್ಲ ಎಂದು ಅವರು ವಾದಿಸಿದ್ದಾರೆ.&lt;/p&gt;&lt;h2&gt;ಸಂಬಳ ಹೆಚ್ಚಳವಿಲ್ಲ, ಮೆಚ್ಚುಗೆಯೂ ಇಲ್ಲ, ಬಡ್ತಿಯೂ ಇಲ್ಲ&lt;/h2&gt;&lt;p&gt;ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ ಸೃಷ್ಟಿ ಶಾರದಾ, ಕಚೇರಿಯಲ್ಲಿ ಯಾರಾದರೂ ರಾಜೀನಾಮೆ ನೀಡಿದರೆ, ಕಂಪನಿಯು ಅವರ ಜಾಗಕ್ಕೆ ಹೊಸಬರನ್ನು ನೇಮಿಸಿಕೊಳ್ಳದಿರುವುದು ಎಂತಹ ವಿಚಿತ್ರ ಪ್ರವೃತ್ತಿ? ಬದಲಾಗಿ, ನಿರ್ಗಮಿಸಿದ ವ್ಯಕ್ತಿಯ ಕೆಲಸದ ಹೊರೆಯನ್ನು ಅಲ್ಲಿಯೇ ಇರುವ ಉದ್ಯೋಗಿಗಳಿಗೆ ಹಂಚಲಾಗುತ್ತದೆ. ಅವರಿಗೆ ಪ್ರತಿಯಾಗಿ ಯಾವುದೇ ಹೆಚ್ಚುವರಿ ಬೆಂಬಲ ಸಿಗುವುದಿಲ್ಲ. ಸಂಬಳ ಹೆಚ್ಚಳವಿಲ್ಲ, ಮೆಚ್ಚುಗೆಯಿಲ್ಲ, ಬಡ್ತಿಯೂ ಇಲ್ಲ, ಏನೂ ಇಲ್ಲ. ಅದೇ ಸಂಬಳಕ್ಕೆ ಹೆಚ್ಚಿನ ಕೆಲಸ ಮಾಡಿ ಕಂಪನಿಗೆ ಲಾಭ ತಂದುಕೊಡಬೇಕೆಂದು ನಿರೀಕ್ಷಿಸಲಾಗುತ್ತದೆ. ಇದು ನಿಜಕ್ಕೂ ಅದ್ಭುತ! ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.&lt;/p&gt;&lt;p&gt;ಈ ವೀಡಿಯೊದಲ್ಲಿ ಕಾರ್ಪೊರೇಟ್ ರಾಜೀನಾಮೆಗಳು ಎಂದು ಶೀರ್ಷಿಕೆ ನೀಡಲಾಗಿದ್ದು, ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡದಿರುವಾಗ ಉಳಿದ ಉದ್ಯೋಗಿಗಳು ಅನುಭವಿಸುವ ಕಷ್ಟಗಳನ್ನು ಇದು ಸ್ಪಷ್ಟವಾಗಿ ಬಿಂಬಿಸಿದೆ.&lt;/p&gt;&lt;h2&gt;ನೆಟ್ಟಿಗರಿಂದ ವ್ಯಾಪಕ ಬೆಂಬಲ&lt;/h2&gt;&lt;p&gt;ಸೃಷ್ಟಿ ಶಾರದಾ ಅವರ ಈ ಪೋಸ್ಟ್&zwnj;ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಸಾವಿರಾರು ಉದ್ಯೋಗಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ&lt;/p&gt;&lt;p&gt;ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ: &quot;ಇದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು&quot; ಎಂದು ಬರೆದಿದ್ದಾರೆ.&lt;/p&gt;&lt;p&gt;ಮತ್ತೊಬ್ಬರು ಕಾಮೆಂಟ್ ಮಾಡಿ: &quot;ಒಂದೇ ವೀಡಿಯೊದಲ್ಲಿ ಇಡೀ ಕಾರ್ಪೊರೇಟ್ ಜೀವನದ ನೈಜತೆಯನ್ನು ಹಿಡಿದಿಡಲಾಗಿದೆ&quot; ಎಂದಿದ್ದಾರೆ.&lt;/p&gt;&lt;p&gt;ಇನ್ನೊಬ್ಬ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿ: &quot;ಹೆಚ್ಚು ಕೆಲಸ, ಆದರೆ ಅದೇ ಹಳೆಯ ಸಂಬಳ! ಕಂಪನಿಗಳು ಉದ್ಯೋಗಿಗಳನ್ನು ಮನುಷ್ಯರಂತೆ ಗೌರವಿಸಬೇಕು ಮತ್ತು ಅವರಿಗೆ ಸೂಕ್ತ ಪರಿಹಾರ ನೀಡಬೇಕು&quot; ಎಂದು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಆನ್&zwnj;ಲೈನ್ ಶಾಪಿಂಗ್ ಅನುಕೂಲಗಳ ಹಿಂದೆ ದುಡಿಯುವ ಶ್ರಮಿಕರಂತೆಯೇ, ಕಾರ್ಪೊರೇಟ್ ಕಚೇರಿಗಳಲ್ಲಿ ತೆರೆಮರೆಯಲ್ಲಿ ಹೆಚ್ಚುವರಿ ಕೆಲಸದ ಹೊರೆ ಹೊರಿಸುವ ಉದ್ಯೋಗಿಗಳ ಮಾನಸಿಕ ಒತ್ತಡ ಹಾಗೂ ಶ್ರಮವನ್ನು ಈ ವೀಡಿಯೊ ಮತ್ತೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತಂದಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/women/seo-title-corporate-workload-trend-woman-s-instagram-video-sparks-debate-on-extra-work-without-pay-gdp/articleshow-g6adeqw"/>
        </item>
        <item>
            <title><![CDATA[Layoffs ಬಳಿಕ ಸಿಗದ ಜಾಬ್, ನೆಮ್ಮದಿಗಾಗಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿದ ಯುವಕ, ವೇತನ ಗಂಟೆಗೆ 1000 ರೂ!]]></title>
            <link>https://kannada.asianetnews.com/viral/laid-off-corporate-employee-takes-rs-1000-for-hour-dishwasher-job-for-mental-health-gdp/articleshow-hwlxgpq</link>
            <guid isPermaLink="true">https://kannada.asianetnews.com/viral/laid-off-corporate-employee-takes-rs-1000-for-hour-dishwasher-job-for-mental-health-gdp/articleshow-hwlxgpq</guid>
            <pubDate>Fri, 28 Aug 2026 16:42:06 +0530</pubDate>
            <description><![CDATA[ಕಾರ್ಪೊರೇಟ್ ಉದ್ಯೋಗ ಕಳೆದುಕೊಂಡ 29 ವರ್ಷದ ಯುವಕ, ನಿರುದ್ಯೋಗದಿಂದ ಉಂಟಾದ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಅಚ್ಚರಿಯ ಹಾದಿ ಹಿಡಿದಿದ್ದಾನೆ. ಆರ್ಥಿಕವಾಗಿ ಸದೃಢನಾಗಿದ್ದರೂ, ಕಳೆದುಹೋದ ದಿನಚರಿ ಮತ್ತು ಮಾನಸಿಕ ನೆಮ್ಮದಿಗಾಗಿ ಆತ ಗಂಟೆಗೆ ಸುಮಾರು 1,000 ರೂಪಾಯಿ ಸಂಬಳದ ಪಾತ್ರೆ ತೊಳೆಯುವ ಕೆಲಸವನ್ನು ಆರಿಸಿಕೊಂಡನು.]]></description>
            <media:content url="https://static.asianetnews.com/images/w-1280,h-720,format-jpg,imgid-01m1404e55cqbt4nkrnh8ba4jw,imgname-man-dish-wash--1--1787914500261.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಕಾರ್ಪೊರೇಟ್ ವಲಯದಲ್ಲಿ ಕೈತುಂಬ ಸಂಬಳ ಪಡೆಯುವ ಉದ್ಯೋಗಿಯೊಬ್ಬರು ಅಕಸ್ಮಾತ್ ಕೆಲಸ ಕಳೆದುಕೊಂಡರೆ ಮತ್ತೊಂದು ಕಾರ್ಪೊರೇಟ್ ಹುದ್ದೆಗಾಗಿ ಕಾಯುವುದು, ತೀವ್ರ ಹುಡುಕಾಟ ನಡೆಸುವುದು ಸಹಜ. ಆದರೆ, ಉದ್ಯೋಗಕ್ಕಾಗಿ 200 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿ, 15 ಕ್ಕೂ ಹೆಚ್ಚು ಸಂದರ್ಶನಗಳಲ್ಲಿ ಭಾಗವಹಿಸಿದರೂ ಕೆಲಸ ಸಿಗದಿದ್ದಾಗ 29 ವರ್ಷದ ಯುವಕನೊಬ್ಬ ಕಂಡುಕೊಂಡ ಹಾದಿ ಸಂಪೂರ್ಣ ಭಿನ್ನವಾಗಿದೆ. ನಾಲ್ಕು ತಿಂಗಳ ಸುದೀರ್ಘ ನಿರುದ್ಯೋಗದ ನಂತರ, ಆತ ಗಂಟೆಗೆ ಸುಮಾರು 1,000 ರೂಪಾಯಿ ವೇತನದ ಅರೆಕಾಲಿಕ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿದ್ದಾನೆ.&lt;/p&gt;&lt;p&gt;ವಿಶೇಷವೆಂದರೆ, ಆತ ಈ ನಿರ್ಧಾರವನ್ನು ಹಣಕಾಸಿನ ಮುಗ್ಗಟ್ಟಿನಿಂದಾಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ, ನಿರುದ್ಯೋಗದಿಂದ ಉಂಟಾಗಿದ್ದ ನಿರಾಸಕ್ತಿ, ಮಾನಸಿಕ ಒತ್ತಡ ಹಾಗೂ ಕಳೆದುಹೋಗಿದ್ದ ದೈನಂದಿನ ದಿನಚರಿಯನ್ನು ಮತ್ತೆ ಮರಳಿ ಪಡೆಯಲು ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ.&lt;/p&gt;&lt;h2&gt;ರೆಡ್ಡಿಟ್&zwnj;ನಲ್ಲಿ ವೈರಲ್ ಆದ ಯುವಕನ ಅನುಭವ&lt;/h2&gt;&lt;p&gt;ಕಳೆದ ಏಪ್ರಿಲ್ ತಿಂಗಳಿನಲ್ಲಿ ಕಾರ್ಪೊರೇಟ್ ಉದ್ಯೋಗದಿಂದ ವಜಾಗೊಂಡಿದ್ದ ಈ ಯುವಕ, ರೆಡ್ಡಿಟ್ ನಲ್ಲಿ &quot;ಕಾರ್ಪೊರೇಟ್&zwnj;ನಿಂದ ಗಂಟೆಗೆ $11 ಡಾಲರ್ ಪಾತ್ರೆ ತೊಳೆಯುವ ಕೆಲಸ&quot; ಎಂಬ ಶೀರ್ಷಿಕೆಯಡಿ ತಮ್ಮ ಭಾವನಾತ್ಮಕ ಅನುಭವವನ್ನು ಹಂಚಿಕೊಂಡಿದ್ದಾನೆ. ಅದರ ಸಾರಾಂಶ ಈ ಕೆಳಗಿನಂತಿದೆ.&lt;/p&gt;&lt;p&gt;&quot;ಏಪ್ರಿಲ್&zwnj;ನಲ್ಲಿ ನನ್ನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಕಂಪನಿಯು 9 ತಿಂಗಳ ಉತ್ತಮ ಪ್ಯಾಕೇಜ್ (Severance Package) ನೀಡಿದ್ದರಿಂದ ಮತ್ತು ನವೆಂಬರ್&zwnj;ವರೆಗೆ ನಿರುದ್ಯೋಗ ಭತ್ಯೆ ಸಿಗುತ್ತಿರುವುದರಿಂದ ನನಗೆ ಆರ್ಥಿಕವಾಗಿ ಯಾವುದೇ ತೊಂದರೆಯಿರಲಿಲ್ಲ. ಜೊತೆಗೆ ಕಳೆದ 5 ವರ್ಷಗಳಿಂದ ಸಣ್ಣ ಮಟ್ಟದ ಉಳಿತಾಯವೂ ಇತ್ತು. ಆದರೆ, 4 ತಿಂಗಳ ನಿರುದ್ಯೋಗವು ನನ್ನ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತು. ದಿನವಿಡೀ ಯಾವುದೇ ಕೆಲಸವಿಲ್ಲದೆ ನಿಷ್ಪ್ರಯೋಜಕ ಎಂಬ ಭಾವನೆ ನನ್ನನ್ನು ಕಾಡತೊಡಗಿತು&quot;&lt;/p&gt;&lt;p&gt;&quot;ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಕನಿಷ್ಠ ದಿನದಲ್ಲಿ ಕೆಲವು ಗಂಟೆಗಳ ಕಾಲ ಆತಂಕದಿಂದ ಹೊರಬರಲು, ಖುಷಿ ಅನುಭವಿಸಲು ಹಾಗೂ ಜೀವನಕ್ಕೆ ಒಂದು ನಿರ್ದಿಷ್ಟ ಸ್ವರೂಪ ನೀಡಲು ಈ ಕೆಲಸಕ್ಕೆ ಸೇರಿಕೊಂಡೆ. ಒಂದು ವೇಳೆ ನಾನು ಆರ್ಥಿಕವಾಗಿ ಸ್ವತಂತ್ರನಾಗಿ ಬೇಗ ನಿವೃತ್ತಿ ಹೊಂದಿದ್ದರೂ ಸಹ, ನನ್ನ ಸಮಯವನ್ನು ಏನು ಮಾಡಬೇಕೆಂದು ತಿಳಿಯದೆ ಇದೇ ರೀತಿ ಆತಂಕಕ್ಕೊಳಗಾಗುತ್ತಿದ್ದೆನೇನೋ? ಉದ್ಯೋಗದ ಮೂಲಕ ಸಮಯವನ್ನು ತುಂಬಿಕೊಳ್ಳುವ ಈ ನಿರಂತರ ಹತಾಶೆ ನನ್ನನ್ನು ಕಾಡುತ್ತಿತ್ತು&quot;ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ.&lt;/p&gt;&lt;h2&gt;ನೆಟ್ಟಿಗರ ಸಾಂತ್ವನ&lt;/h2&gt;&lt;p&gt;ಈ ರೆಡ್ಡಿಟ್ ಪೋಸ್ಟ್ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಉದ್ಯೋಗ ಕಳೆದುಕೊಂಡು ಮಾನಸಿಕ ಸವಾಲು ಎದುರಿಸುತ್ತಿರುವ ಹಲವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಯುವಕನ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.&lt;/p&gt;&lt;h2&gt;ಮನೆಯಲ್ಲಿ ಮಗುವಿನ ಆರೈಕೆ ಮಾಡಿದ ಉದ್ಯೋಗಿ:&lt;/h2&gt;&lt;p&gt;&quot;ದೀರ್ಘಕಾಲ ಕಾರ್ಪೊರೇಟ್ ವಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ತಕ್ಷಣಕ್ಕೆ ಕೆಲಸ ಕಳೆದುಕೊಂಡಾಗ ಈ ರೀತಿಯ ಸವಾಲು ಎದುರಾಗುವುದು ಸಹಜ. ನಾನು ಕೆಲಸ ಕಳೆದುಕೊಂಡಾಗ ಮನೆಯಲ್ಲಿ ಮಗುವಿನ ಆರೈಕೆಯಲ್ಲಿ ನಿರತನಾದೆ. ಇಲ್ಲದಿದ್ದರೆ ನಾನೂ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದೆ. ಕನಿಷ್ಠ ನೀವು ಒಂದು ಕೆಲಸದ ಕಡೆಗೆ ಗಮನಹರಿಸಿ ದಿನಚರಿಯನ್ನು ಕಾಯ್ದುಕೊಳ್ಳುತ್ತಿದ್ದೀರಲ್ಲ, ಅದು ಶ್ಲಾಘನೀಯ.&quot; ಎಂದು ಒಬ್ಬರು ಬರೆದುಕೊಂಡಿದ್ದಾರೆ&lt;/p&gt;&lt;h2&gt;ಕಾಯಕವೇ ಕೈಲಾಸ:&lt;/h2&gt;&lt;p&gt;&quot;ನಿಮ್ಮ ಬಳಿ 5 ವರ್ಷಗಳ ತುರ್ತು ನಿಧಿ ಇದೆಯೆಂದರೆ ಅದು ದೊಡ್ಡ ಆಸ್ತಿ. ಯಾವುದೇ ಸಣ್ಣ ಕೆಲಸದಲ್ಲೂ ಅದರದ್ದೇ ಆದ ಘನತೆ ಇರುತ್ತದೆ. ಇಂತಹ ಸಣ್ಣ ಅರೆಕಾಲಿಕ ಕೆಲಸಗಳು ಕಾರ್ಪೊರೇಟ್ ಉದ್ಯೋಗದಷ್ಟು ಒತ್ತಡವನ್ನು ತರುವುದಿಲ್ಲ.&quot; ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ನೆಮ್ಮದಿ ಅನುಭವ :&lt;/h2&gt;&lt;p&gt;&quot;ಪಾತ್ರೆ ತೊಳೆಯುವ ಕೆಲಸವು ನಿಜಕ್ಕೂ ಮಾನಸಿಕ ಶಮನ ನೀಡಬಲ್ಲದು . ನಾನು ಉಚಿತ ಅನ್ನದಾಸೋಹ ಕೇಂದ್ರಗಳಲ್ಲಿ ಸ್ವಯಂಸೇವಕನಾಗಿ ಪಾತ್ರೆ ತೊಳೆಯುವ ಕೆಲಸ ಮಾಡಿದ್ದೇನೆ. ಅದು ನಿಜಕ್ಕೂ ಅತ್ಯಂತ ಉತ್ಪಾದಕ ಮತ್ತು ಉಪಯುಕ್ತ ಕೆಲಸ ಎಂಬ ಅನುಭವ ನೀಡುತ್ತದೆ ಎಂದು ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ಹಠಾತ್ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಮಾನಸಿಕ ಸ್ಥಿತಿ ಮತ್ತು ಅವರು ಎದುರಿಸುವ 'ಅಸ್ತಿತ್ವದ ಬಿಕ್ಕಟ್ಟನ್ನು' ಎತ್ತಿ ತೋರಿಸುತ್ತದೆ. ಕೇವಲ ಹಣ ಗಳಿಕೆಯಷ್ಟೇ ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯ ಹಾಗೂ ದಿನನಿತ್ಯದ ಶಿಸ್ತಿಗೆ ಒಂದು ನಿರ್ದಿಷ್ಟ ಕಾಯಕ ಅಥವಾ ಕೆಲಸ ಎಷ್ಟು ಮುಖ್ಯ ಎಂಬುದಕ್ಕೆ ಈ ಯುವಕನ ಕಥೆ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/viral/laid-off-corporate-employee-takes-rs-1000-for-hour-dishwasher-job-for-mental-health-gdp/articleshow-hwlxgpq"/>
        </item>
        <item>
            <title><![CDATA[20 ಸಾವಿರ ಉದ್ಯೋಗಿಗಳ ಕೆಲಸ ಮಾಡಲಿದೆ ಕೆಲವೇ ಕೆಲವು AI ಏಜೆಂಟ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಗೆ WIPRO ಭಾರಿ ಸಿದ್ಧತೆ!]]></title>
            <link>https://kannada.asianetnews.com/technology/wipro-ai-initiatives-free-capacity-equivalent-to-20k-workers-san/articleshow-mihvg9g</link>
            <guid isPermaLink="true">https://kannada.asianetnews.com/technology/wipro-ai-initiatives-free-capacity-equivalent-to-20k-workers-san/articleshow-mihvg9g</guid>
            <pubDate>Fri, 11 Sep 2026 16:32:43 +0530</pubDate>
            <description><![CDATA[&lt;p&gt;ವಿಪ್ರೋ ಸಂಸ್ಥೆಯು ತನ್ನ ನೂತನ ಕೃತಕ ಬುದ್ಧಿಮತ್ತೆ (AI) ಯೋಜನೆಗಳ ಮೂಲಕ ಸುಮಾರು 20,000 ಉದ್ಯೋಗಿಗಳ ಕೆಲಸದ ಸಾಮರ್ಥ್ಯಕ್ಕೆ ಸಮನಾದ ಉತ್ಪಾದಕತೆಯನ್ನು ಸಾಧಿಸಿದೆ. ಈ ಹಿನ್ನೆಲೆಯಲ್ಲಿ, ಉಳಿತಾಯವಾದ ಮಾನವ ಸಂಪನ್ಮೂಲವನ್ನು ಬೇರೆಡೆಗೆ ನಿಯೋಜಿಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m28209y615dnk1xjagxxm9d7,imgname-sandhya-arun-wipro-1789124421574.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): &lt;/strong&gt;ಭಾರತೀಯ ಐಟಿ ರಂಗದ ದೈತ್ಯ ಸಂಸ್ಥೆಯಾದ 'ವಿಪ್ರೋ' (Wipro) ಕೈಗೆತ್ತಿಕೊಂಡಿರುವ ನೂತನ ಕೃತಕ ಬುದ್ಧಿಮತ್ತೆ (AI) ಯೋಜನೆಗಳು ಸುಮಾರು 20,000 ಉದ್ಯೋಗಿಗಳ ಒಟ್ಟು ಕೆಲಸದ ಸಾಮರ್ಥ್ಯಕ್ಕೆ (Productivity) ಸಮನಾದ ಯಶಸ್ಸನ್ನು ತಂದುಕೊಟ್ಟಿವೆ ಎಂದು ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಸಂಧ್ಯಾ ಅರುಣ್ ತಿಳಿಸಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಉಳಿತಾಯವಾಗಿರುವ ಈ ಮಾನವ ಸಂಪನ್ಮೂಲವನ್ನು ಕಂಪನಿಯ ಒಳಗಡೆಯೇ ಇತರ ಪ್ರಮುಖ ಯೋಜನೆಗಳಿಗೆ ಪುನರ್ ನಿಯೋಜಿಸಲಾಗಿದೆ (Redeployed) ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಪ್ರಸ್ತುತ ಸುಮಾರು 315 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ತಂತ್ರಜ್ಞಾನ ಹಾಗೂ ಸಾಫ್ಟ್&zwnj;ವೇರ್ ಸೇವಾ ಕ್ಷೇತ್ರವು (Software Services Industry) ಎಐ ತಂತ್ರಜ್ಞಾನದ ತೀವ್ರ ಅಳವಡಿಕೆಯಿಂದಾಗಿ ನೌಕರರ ನೇಮಕಾತಿ, ಸಾಫ್ಟ್&zwnj;ವೇರ್ ಅಭಿವೃದ್ಧಿ ಹಾಗೂ ಗ್ರಾಹಕರ ಒಪ್ಪಂದಗಳ ಸ್ವರೂಪದಲ್ಲೇ ಭಾರಿ ಬದಲಾವಣೆಗಳನ್ನು ಕಾಣುತ್ತಿದ್ದು, ಈ ಹಂತದಲ್ಲಿ ವಿಪ್ರೋದ ಈ ಬೆಳವಣಿಗೆ ಪ್ರಮುಖ ಎನಿಸಿದೆ.&lt;/p&gt;&lt;h2&gt;&lt;strong&gt;1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ಎಐ ತರಬೇತಿ&lt;/strong&gt;&lt;/h2&gt;&lt;p&gt;ಜೂನ್ ತಿಂಗಳ ವೇಳೆಗೆ ದೇಶಾದ್ಯಂತ ಸುಮಾರು 2,43,000 ಉದ್ಯೋಗಿಗಳನ್ನು ಹೊಂದಿರುವ ವಿಪ್ರೋ, ಈಗ &quot;ಮಾನವ-ಎಐ ಕಾರ್ಯಾಚರಣೆ ಮಾದರಿ&quot;ಗೆ (Human-AI Operating Model) ಸಂಪೂರ್ಣವಾಗಿ ತೆರೆದುಕೊಳ್ಳುತ್ತಿದೆ. ಇದರ ಭಾಗವಾಗಿ ಈಗಾಗಲೇ 1,00,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸುಧಾರಿತ ಎಐ ಸಂಬಂಧಿತ ತರಬೇತಿ ಮತ್ತು ಪ್ರಮಾಣಪತ್ರಗಳನ್ನು (Certifications) ನೀಡಲಾಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಸಂಧ್ಯಾ ಅರುಣ್ ಹೇಳಿದ್ದಾರೆ.&lt;/p&gt;&lt;p&gt;&quot;ಇದರರ್ಥ ಒಬ್ಬನೇ ಇಂಜಿನಿಯರ್ ಹಲವು ಎಐ ಏಜೆಂಟ್&zwnj;ಗಳನ್ನು (AI Agents) ನಿರ್ವಹಿಸಬಹುದು, ಅಥವಾ ಅವರನ್ನು ಇತರ ಯೋಜನೆಗಳಿಗೆ ನಿಯೋಜಿಸಬಹುದು ಇಲ್ಲವೇ ಹೊಸ ಪಾತ್ರಕ್ಕಾಗಿ ತರಬೇತಿ ನೀಡಬಹುದು. ಎಐ ಏಜೆಂಟ್&zwnj;ಗಳು ನೇರವಾಗಿ ಮನುಷ್ಯರನ್ನು ಕೆಲಸದಿಂದ ತೆಗೆದುಹಾಕಿ ಅವರ ಜಾಗವನ್ನು ತುಂಬುತ್ತಿದ್ದಾರೆ ಎಂದು ಭಾವಿಸಬೇಕಿಲ್ಲ&quot; ಎಂದು ಅವರು ವಿವರಿಸಿದ್ದಾರೆ. ಇತ್ತೀಚೆಗೆ ವಿಪ್ರೋ ಕಾರ್ಯಕಾರಿ ಅಧ್ಯಕ್ಷ ರಿಷದ್ ಪ್ರೇಮ್&zwnj;ಜಿ ಅವರು ವ್ಯಕ್ತಪಡಿಸಿದ್ದ ಕಳಕಳಿ ಮತ್ತು ವಿಚಾರಗಳಿಗೆ ಸಂಧ್ಯಾ ಅರುಣ್ ಅವರ ಈ ಮಾತುಗಳು ಪೂರಕವಾಗಿವೆ.&lt;/p&gt;&lt;h2&gt;&lt;strong&gt;ಐಟಿ ವಲಯದಲ್ಲಿ ಎಐ ಏಜೆಂಟ್&zwnj;ಗಳ ಹವಾ&lt;/strong&gt;&lt;/h2&gt;&lt;p&gt;ಭಾರತದ ಅತಿದೊಡ್ಡ ಸಾಫ್ಟ್&zwnj;ವೇರ್ ರಫ್ತು ಸಂಸ್ಥೆಯಾದ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' (TCS), ಮುಂಬರುವ ದಿನಗಳಲ್ಲಿ ತನ್ನ ಕಾರ್ಯಪಡೆಯಲ್ಲಿ ನೌಕರರು ಮತ್ತು ಎಐ ಏಜೆಂಟ್&zwnj;ಗಳ ಸಂಖ್ಯೆಯನ್ನು ಸಮಾನವಾಗಿ (50:50) ತರಲು ಯೋಜಿಸುತ್ತಿದ್ದು, ಈ ಕಾರಣಕ್ಕೆ ಸಾಂಪ್ರದಾಯಿಕ ನೌಕರರ ನೇಮಕಾತಿ ಪ್ರಕ್ರಿಯೆ ಮಂದಗತಿಯಲ್ಲಿರಲಿದೆ ಎಂದು ಕಳೆದ ಜೂನ್&zwnj;ನಲ್ಲೇ ಸುಳಿವು ನೀಡಿತ್ತು.&lt;/p&gt;&lt;p&gt;ಗ್ರಾಹಕರಲ್ಲಿ ಎಐ ತಂತ್ರಜ್ಞಾನದ ಬಳಕೆಯನ್ನು ವೇಗಗೊಳಿಸಲು ತಾವೇ ನೇರವಾಗಿ ಗ್ರಾಹಕರ ಆವರಣದಲ್ಲಿ ಕಾರ್ಯನಿರ್ವಹಿಸುವ (Forward-deployed engineers) ತಜ್ಞ ಇಂಜಿನಿಯರ್&zwnj;ಗಳ ತಂಡವನ್ನು ಕಟ್ಟಲು ಪ್ರಮುಖ ಕಂಪನಿಗಳು ಮುಂದಾಗಿವೆ. ಟಿಸಿಎಸ್ ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 8,900 ಹಾಗೂ ಇನ್ಫೋಸಿಸ್ (Infosys) ಸುಮಾರು 6,000 ಇಂತಹ ಇಂಜಿನಿಯರ್&zwnj;ಗಳನ್ನು ಸಿದ್ಧಪಡಿಸಲು ಪ್ಲಾನ್ ಮಾಡಿವೆ. ವಿಪ್ರೋ ಸಹ ಇಂತಹ ಇಂಜಿನಿಯರ್&zwnj;ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆಯಾದರೂ, ಯಾವುದೇ ನಿರ್ದಿಷ್ಟ ಗುರಿಯನ್ನು ಬಹಿರಂಗಪಡಿಸಿಲ್ಲ. ತಮ್ಮ ಈ ಶಕ್ತಿ ಇತರ ಪೈಪೋಟಿ ಸಂಸ್ಥೆಗಳಿಗೆ ಸಮನಾಗಿರಲಿದೆ ಎಂದು ಸಿಟಿಒ ತಿಳಿಸಿದ್ದಾರೆ.&lt;/p&gt;&lt;p&gt;ಆದರೆ, ಕೇವಲ ನಿರ್ದಿಷ್ಟ ಹುದ್ದೆಗಳ ಮೇಲಷ್ಟೇ ಗಮನ ಹರಿಸುವುದನ್ನು ತಡೆದಿರುವ ಅವರು, &quot;ಎಲ್ಲಾ ಇಂಜಿನಿಯರ್&zwnj;ಗಳು ಎಐ ವ್ಯವಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದೇ ಇಂದಿನ ಪ್ರಮುಖ ಸವಾಲಾಗಿದೆ&quot; ಎಂದಿದ್ದಾರೆ.&lt;/p&gt;&lt;p&gt;&quot;ನಮ್ಮ ಗಮನ ಉತ್ಪಾದಕತೆಯಿಂದ (Productivity) ಅಂತಿಮ ಫಲಿತಾಂಶದತ್ತ (Outcomes) ಬದಲಾಗಬೇಕಿದೆ. ಎಐ ತಂತ್ರಜ್ಞಾನವು ಗ್ರಾಹಕರ ಅನುಭವವನ್ನು ಉತ್ತಮಗೊಳಿಸುತ್ತದೆಯೇ, ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸುತ್ತದೆಯೇ ಮತ್ತು ವ್ಯಾಪಾರದ ಗುರಿಗಳನ್ನು ತಲುಪಲು ನೆರವಾಗುತ್ತದೆಯೇ ಎಂಬುದರ ಆಧಾರದ ಮೇಲೆ ಅದರ ಮೌಲ್ಯಮಾಪನ ನಡೆಯಬೇಕು&quot; ಎಂದು ಸಂಧ್ಯಾ ಅರುಣ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಆದಾಯ ಗಳಿಕೆಯಲ್ಲಿ ಹಿನ್ನಡೆ?&lt;/strong&gt;&lt;/h2&gt;&lt;p&gt;ಭಾರತದ ಪ್ರಮುಖ ನಾಲ್ಕು ಐಟಿ ಕಂಪನಿಗಳ ಪೈಕಿ ವಿಪ್ರೋ ಒಂದೇ ತನ್ನ 'ಎಐ ಆದಾಯವನ್ನು' (AI Revenue) ಪ್ರತ್ಯೇಕವಾಗಿ ಬಹಿರಂಗಪಡಿಸದಿರುವ ಕಂಪನಿಯಾಗಿದೆ.&lt;/p&gt;&lt;p&gt;ಈ ಕುರಿತು ವಿಶ್ಲೇಷಣೆ ನೀಡಿರುವ 'ನಾರ್ಡ್-ಐಕ್ಯೂ ರಿಸರ್ಚ್'ನ (Nord-IQ Research) ಪ್ರಮುಖ ವಿಶ್ಲೇಷಕ ಮನೋಜ್ ಚಂದ್ರ ಝಾ, &quot;ಪೈಪೋಟಿ ಸಂಸ್ಥೆಗಳಿಗೆ ಹೋಲಿಸಿದರೆ ವಿಪ್ರೋ ಇನ್ನು ಸಹ ಎಐ ನಿಂದ ನೇರ ಆದಾಯ ಗಳಿಸುವ (Commercialization/Monetisation) ವಿಚಾರದಲ್ಲಿ ಆರಂಭಿಕ ಹಂತದಲ್ಲೇ ಇದೆ. ಪ್ರಸ್ತುತ ಕಂಪನಿಯು ಮೂಲಸೌಕರ್ಯ ಹಾಗೂ ತರಬೇತಿಗಾಗಿ ವೆಚ್ಚ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಎಐ ಒಪ್ಪಂದಗಳು ನೇರ ಆದಾಯವಾಗಿ ಮತ್ತು ಶೇಕಡಾವಾರು ಲಾಭವಾಗಿ ಲಾಭದಾಯಕವಾಗಿ ಬದಲಾದಾಗ ಕಂಪನಿಯ ನಿಜವಾದ ಪರೀಕ್ಷೆ ಎದುರಾಗಲಿದೆ&quot; ಎಂದಿದ್ದಾರೆ.&lt;/p&gt;&lt;p&gt;ಎಐ ತರಬೇತಿ ಮತ್ತು ಮಾರುಕಟ್ಟೆ ಪಾಲುದಾರಿಕೆಯಲ್ಲಿ ವಿಪ್ರೋ ಹೂಡಿಕೆಯು ಟಿಸಿಎಸ್, ಇನ್ಫೋಸಿಸ್ ಮತ್ತು ಹೆಚ್&zwnj;ಸಿಎಲ್&zwnj;ಟೆಕ್ (HCLTech) ಕಂಪನಿಗಳಿಗೆ ಸಮನಾಗಿದೆಯಾದರೂ, ಅದನ್ನು ನೇರ ವಾಣಿಜ್ಯ ಲಾಭವಾಗಿ ಬದಲಾಯಿಸುವ ಪಕ್ವತೆಯಲ್ಲಿ ವಿಪ್ರೋ ಕೊಂಚ ಹಿಂದುಳಿದಿದೆ ಎಂದು ಝಾ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/technology/wipro-ai-initiatives-free-capacity-equivalent-to-20k-workers-san/articleshow-mihvg9g"/>
        </item>
        <item>
            <title><![CDATA[ಅಪ್ಪನ ಸಂಪಾದನೆ 3 ಸಾವಿರ, ಮಗನ ಗಳಿಕೆ 1.5 ಕೋಟಿ - ಯುವಕರಿಗೆ ಮಾದರಿ ಶಶಾಂಕ್]]></title>
            <link>https://kannada.asianetnews.com/private-jobs/success-story-24-years-old-shashank-agrawal-earns-115-crore/articleshow-ohgbmlb</link>
            <guid isPermaLink="true">https://kannada.asianetnews.com/private-jobs/success-story-24-years-old-shashank-agrawal-earns-115-crore/articleshow-ohgbmlb</guid>
            <pubDate>Wed, 26 Aug 2026 14:43:36 +0530</pubDate>
            <description><![CDATA[&lt;p&gt;ಶಿಕ್ಷಣಕ್ಕೆ ಖರ್ಚು ಮಾಡಿದ ಹಣ ಈಗ ಹೊರೆಯಾದ್ರೂ ಮುಂದೊಂದು ದಿನ ದೊಡ್ಡ ಫಲ ನೀಡುತ್ತೆ. ಮಕ್ಕಳು, ಪಾಲಕರ ಶ್ರಮಕ್ಕೆ ಬೆಲೆ ನೀಡಿ, ಮನಸ್ಸುಕೊಟ್ಟು ವಿದ್ಯಾಭ್ಯಾಸ ಮಾಡಿದ್ರೆ ಮುಂದೊಂದು ದಿನ ಪಾಲಕರ ಜೀವನ ಸುಖಕರವಾಗಿರುತ್ತೆ. ಅದಕ್ಕೆ ಶಶಾಂಕ್&zwnj; ಅಗರ್ವಾಲ್&zwnj; ಉತ್ತಮ ನಿದರ್ಶನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ynda113htbt049nskg9rqc,imgname-shashank-agarwal-1787735484449.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಸಣ್ಣ ಅಂಗಡಿ, ತಿಂಗಳಿಗೆ ಕೇವಲ 3ರಿಂದ 4 ಸಾವಿರ ರೂಪಾಯಿ ಆದಾಯ. ಇಷ್ಟಿದ್ದರೂ ಶಶಾಂಕ್&zwnj; ಅಗರ್ವಾಲ್&zwnj; ತಂದೆ ಸೋಲೊಪ್ಪಿಕೊಳ್ಳಲಿಲ್ಲ. ಮಗನ ದೊಡ್ಡ ಕನಸನ್ನು ನನಸಾಗಿಸುವ ಪಣ ತೊಟ್ಟಿದ್ದರು. ಅದಕ್ಕೆ ಮಗ ಶಶಾಂಕ್ ಸಂಪೂರ್ಣ ಸಾಥ್&zwnj; ನೀಡಿದ್ದರು. ಅಪ್ಪನ ಶ್ರಮಕ್ಕೆ ಈಗ ಶಶಾಂಕ್ ಅವರಿಂದ ಫಲ ಸಿಕ್ಕಿದೆ. ತಂದೆ ಸಾಲ ಮಾಡಿ ಮಗನನ್ನು ಓದಿಸ್ತಿದ್ರೆ ಮಗ ಜೀವನವನ್ನು ಚಾಲೆಂಜ್&zwnj; ಆಗಿ ತೆಗೆದುಕೊಂಡು ಓದು ಮುಂದುವರೆಸಿದ್ರು. ಈಗ 1.5 ಕೋಟಿ ವಾರ್ಷಿಕ ಸಂಬಳ ಪಡೆಯುತ್ತಿದ್ದಾರೆ.&lt;/p&gt;&lt;h2&gt;ಯುವಕರಿಗೆ ಸ್ಫೂರ್ತಿ ಶಶಾಂಕ್&lt;/h2&gt;&lt;p&gt;ಇದು ರಾಜಸ್ಥಾನದ ಶಶಾಂಕ್ ಅವರ ಸ್ಪೂರ್ತಿದಾಯಕ ಯಶೋಗಾಥೆ. ಬಡ ಕುಟುಂಬದಲ್ಲಿ ಬೆಳೆದ ಶಶಾಂಕ್ ಅವರ ತಂದೆ ಸಗಟು ಅಂಗಡಿ ನಡೆಸುತ್ತಿದ್ದರು. ಆದಾಯ ಕಡಿಮೆಯಿದ್ದರೂ ಮಗನ ವಿದ್ಯಾಭ್ಯಾಸಕ್ಕೆ ಅವರು ಯಾವುದೇ ಕೊರತೆ ಮಾಡಲಿಲ್ಲ. ಅಗತ್ಯವಿದ್ದಾಗ ಸಾಲ ಮಾಡಿ ಮಗನ ಶಿಕ್ಷಣಕ್ಕೆ ಹಣ ಹೊಂದಿಸಿದರು. ಶಶಾಂಕ್ ಕೂಡ ತಂದೆಯ ಕಷ್ಟವನ್ನು ಅರ್ಥಮಾಡಿಕೊಂಡು ಓದಿನಲ್ಲಿ ಸಂಪೂರ್ಣ ಗಮನ ಹರಿಸಿದರು. 12ನೇ ತರಗತಿ ಮುಗಿಸಿದ ಬಳಿಕ ಎಂಜಿನಿಯರಿಂಗ್ ಓದುವ ಗುರಿ ಇಟ್ಟುಕೊಂಡರು.&lt;/p&gt;&lt;p&gt;ಅದಕ್ಕಾಗಿ ಕಠಿಣ ಪರಿಶ್ರಮ ಪಟ್ಟ ಅವರು 2018ರಲ್ಲಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ 330 ಅಂಕಗಳನ್ನು ಪಡೆದರು. ನಂತರ ಜೆಇಇ ಅಡ್ವಾನ್ಸ್ಡ್ನಲ್ಲೂ ಉತ್ತಮ ರ್ಯಾಂಕ್ ಪಡೆದು, ದೇಶದ ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಪ್ರವೇಶ ಪಡೆದರು. ಅಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದ ಶಶಾಂಕ್, ಓದಿನ ಜೊತೆಗೆ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನೂ ಬೆಳೆಸಿಕೊಂಡರು.&lt;/p&gt;&lt;p&gt;ಪೈಥಾನ್, ಸಿ++, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಡೇಟಾ ಸ್ಟ್ರಕ್ಚರ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಅವರ ಪ್ರತಿಭೆ ಮತ್ತು ಪರಿಶ್ರಮಕ್ಕೆ ತಕ್ಕಂತೆ ಅವಕಾಶಗಳೂ ಸಿಕ್ಕವು. ಇಂಟರ್ನ್ಶಿಪ್ ಬಳಿಕ ಕ್ವಾಂಟಿಟೇಟಿವ್ ಟ್ರೇಡಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಇದೀಗ ಝನ್ಸ್ಕಾರ್ ಕಾರ್ಪೊರೇಷನ್ನಲ್ಲಿ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಅವರ ವಾರ್ಷಿಕ ಪ್ಯಾಕೇಜ್ ಸುಮಾರು 1.5 ಕೋಟಿ ರೂಪಾಯಿ. ಅಂದರೆ ತಿಂಗಳಿಗೆ ಸರಾಸರಿ 8.75 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ ಶಶಾಂಕ್.&lt;/p&gt;&lt;p&gt;ಶಶಾಂಕ್&zwnj; ಅನೇಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಬಡಕುಟುಂಬದಲ್ಲಿ ಹುಟ್ಟೋದು ತಪ್ಪಲ್ಲ. ಸಣ್ಣಪುಟ್ಟ ಕನಸು ಕಾಣೋದು ತಪ್ಪು. ಎಲ್ಲಿ ಹುಟ್ಟಿದ್ರೂ ದೊಡ್ಡ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ಶ್ರಮಿಸೋದು ಮುಖ್ಯ. ಎಷ್ಟೆ ಕಷ್ಟ ಬಂದ್ರೂ ಗುರಿ ಕಡೆ ಗಮನವಿದ್ರೆ ಯಶಸ್ಸು ಸುಲಭ ಎಂಬುದನ್ನು ಶಶಾಂಕ್&zwnj; ತೋರಿಸಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/private-jobs/success-story-24-years-old-shashank-agrawal-earns-115-crore/articleshow-ohgbmlb"/>
        </item>
        <item>
            <title><![CDATA[1.5 ಕೋಟಿ ಜಾಬ್ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆದವಳ ತಿಂಗಳ ಗಳಿಗೆ 500 ರೂ..!]]></title>
            <link>https://kannada.asianetnews.com/private-jobs/quit-a-1-crore-job-to-become-a-content-creator-now-earns-500-a-month/articleshow-ox843rv</link>
            <guid isPermaLink="true">https://kannada.asianetnews.com/private-jobs/quit-a-1-crore-job-to-become-a-content-creator-now-earns-500-a-month/articleshow-ox843rv</guid>
            <pubDate>Tue, 15 Sep 2026 12:00:17 +0530</pubDate>
            <description><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಕಂಟೆಂಟ್&zwnj; ಕ್ರಿಯೇಷನ್&zwnj; ಟ್ರೆಂಡ್&zwnj; ಆಗಿದೆ. ಜನರು ದೊಡ್ಡ ಹುದ್ದೆ ಬಿಟ್ಟು ಕಂಟೆಂಟ್ ಕ್ರಿಯೇಟರ್&zwnj; ಆಗ್ತಿದ್ದಾರೆ. ಕೆನಡಾದ ಮಹಿಳೆಯೊಬ್ಬರು ಇದೇ ವಿಷ್ಯಕ್ಕೆ ಈಗ ಸುದ್ದಿಯಲ್ಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2hw2ff03j9dx2x268rhgcte,imgname-content-creation-1789453745632.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡಿದರೆ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸಬಹುದು ಅನ್ನೋದು ಹಲವರ ಕಲ್ಪನೆ. ಆದರೆ ವಾಸ್ತವದಲ್ಲಿ ಹಾಗೇನಿಲ್ಲ. ಕೆಲವರಿಗೆ ಕಂಟೆಂಟ್ನಿಂದ ಆರಂಭದಲ್ಲಿ ನೂರು, ಸಾವಿರ ರೂಪಾಯಿಯಷ್ಟೇ ಸಿಗಬಹುದು. ಆದರೂ ಒಂದೇ ರೀತಿಯ ಕೆಲಸ ಮಾಡಿ ಸುಸ್ತಾದ ಕೆಲವರು, ಒಳ್ಳೆಯ ಸಂಬಳದ ಉದ್ಯೋಗವನ್ನೂ ಬಿಟ್ಟು ತಮ್ಮದೇ ಆದ ದಾರಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೆನಡಾದಲ್ಲಿ ವಾಸವಾಗಿರುವ ಪ್ರೊಡಕ್ಟ್ ಡಿಸೈನರ್ ಹೇಗಿ ಜಿಯಾಂಗ್ ಅವರ ಕಥೆಯೇ ಉದಾಹರಣೆ.&lt;/p&gt;&lt;h2&gt;1.5 ಕೋಟಿ ಸಂಬಳ ಬಿಟ್ಟ ಮಹಿಳೆ!&lt;/h2&gt;&lt;p&gt;ಜಿಯಾಂಗ್ ಅವರು ವರ್ಷಕ್ಕೆ ಸುಮಾರು 1.5 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದರು. ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕೆಲಸ. ವಾರಕ್ಕೆ ಸುಮಾರು 40 ಗಂಟೆ ಕೆಲಸ ಮಾಡುತ್ತಿದ್ದ ಅವರಿಗೆ ವರ್ಕ್-ಲೈಫ್ ಬ್ಯಾಲೆನ್ಸ್ ಕಷ್ಟವಾಗಿರಲಿಲ್ಲ. ಆದರೂ ಅವರು ತಮ್ಮ ಟೆಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.&lt;/p&gt;&lt;p&gt;ಅದಕ್ಕೆ ಕಾರಣ ಕೆಲ್ಸವಲ್ಲ. ಬರ್ನ್ಔಟ್ ಕೂಡ ಆಗಿರಲಿಲ್ಲ. ಉದ್ಯೋಗದ ಜೊತೆಗೆ ಕಂಟೆಂಟ್ ಕ್ರಿಯೇಷನ್ ಶುರು ಮಾಡಿದ್ದ ಜಿಯಾಂಗ್ ಅವರಿಗೆ ಪುಸ್ತಕ ಬರೆಯುವ ಅವಕಾಶವೂ ಸಿಕ್ಕಿತ್ತು. ಕೆಲಸ, ಪುಸ್ತಕ ಬರೆಯುವುದು ಮತ್ತು ಕಂಟೆಂಟ್ ಮಾಡುವುದು ಎಲ್ಲವನ್ನೂ ಒಟ್ಟಿಗೆ ನಿಭಾಯಿಸುವುದು ಕಷ್ಟವಾಗಿತ್ತು. ಹೀಗಾಗಿ ತಮ್ಮದೇ ಕೆಲಸದತ್ತ ಸಂಪೂರ್ಣ ಗಮನ ಕೊಡಲು ಅವರು ನಿರ್ಧರಿಸಿದರು. 2026ರ ಜೂನ್ನಲ್ಲಿ ಕೆಲಸ ಬಿಟ್ಟ ಅವರು, ತಮ್ಮ ನಿರ್ಧಾರವನ್ನು ಪರೀಕ್ಷಿಸಿಕೊಳ್ಳಲು ಒಂದು ವರ್ಷ ಸಮಯ ನೀಡಿದ್ದಾರೆ. ಒಂದು ವರ್ಷದ ನಂತರ ಮತ್ತೆ ಕಾರ್ಪೊರೇಟ್ ಕೆಲಸಕ್ಕೆ ಮರಳಬೇಕೋ ಅಥವಾ ಇದೇ ದಾರಿಯಲ್ಲಿ ಮುಂದುವರಿಯಬೇಕೋ ಎಂಬುದನ್ನು ನಿರ್ಧರಿಸಲಿದ್ದಾರೆ.&lt;/p&gt;&lt;p&gt;ಉದ್ಯೋಗ ಬಿಟ್ಟ ನಂತರ ಆದಾಯದಲ್ಲಿ ಮಾತ್ರ ದೊಡ್ಡ ಬದಲಾವಣೆಯಾಗಿದೆ. ಜುಲೈನಲ್ಲಿ ಕಂಟೆಂಟ್ ಕ್ರಿಯೇಷನ್ನಿಂದ ಅವರಿಗೆ ಸಿಕ್ಕಿದ್ದು ಕೇವಲ 6 ಡಾಲರ್, ಅಂದರೆ ಸುಮಾರು 500 ರೂಪಾಯಿ. ಆದರೆ ಅದು ಅವರ ಒಟ್ಟು ಆದಾಯವಲ್ಲ. ಪುಸ್ತಕದ ಅಡ್ವಾನ್ಸ್ ಸೇರಿದಂತೆ ಬೇರೆ ಆದಾಯ ಅವರಿಗೆ ಬರ್ತಿದೆ. ಮುಂದಿನ ತಿಂಗಳುಗಳಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ನಂಬಿದ್ದಾರೆ.&lt;/p&gt;&lt;p&gt;ತಿಂಗಳಿಗೆ 500 ರೂಪಾಯಿಯನ್ನು ಸೋಶಿಯಲ್&zwnj; ಮೀಡಿಯಾದಿಂದ ಗಳಿಸಿದ್ರೂ ಜಿಯಾಂಗ್ ಅವರಿಗೆ ತಮ್ಮ ನಿರ್ಧಾರದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ.ಸಮಯ ಮತ್ತು ಕೆಲಸದ ಮೇಲೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದೆ ಎನ್ನುತ್ತಾರೆ ಅವರು. ಕಂಟೆಂಟ್ ಕ್ರಿಯೇಟರ್ ಆದ ತಕ್ಷಣ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಸಾಧ್ಯವಿಲ್ಲ. ಇದಕ್ಕೆ ನಿರಂತರ ಪ್ರಯತ್ನ ಬೇಕು.&lt;/p&gt;]]></content:encoded>
            <category>private-jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/private-jobs/quit-a-1-crore-job-to-become-a-content-creator-now-earns-500-a-month/articleshow-ox843rv"/>
        </item>
        <item>
            <title><![CDATA[ಅಪ್ಪನಿಗೆ ತಿಂಗಳಿಗೆ 3 ಸಾವಿರ ಸಂಬಳ: 24ರ ಹರೆಯದ ಮಗನಿಗೀಗ 1.5 ಕೋಟಿ ಪ್ಯಾಕೇಜ್​! ಯುವಕನ ಯಶೋಗಾಥೆ]]></title>
            <link>https://kannada.asianetnews.com/viral/father-earned-3000-a-month-he-now-earns-one-and-half-crore-at-24-iit-bombay-graduate-shashank-agarwals-suc/articleshow-q7519wt</link>
            <guid isPermaLink="true">https://kannada.asianetnews.com/viral/father-earned-3000-a-month-he-now-earns-one-and-half-crore-at-24-iit-bombay-graduate-shashank-agarwals-suc/articleshow-q7519wt</guid>
            <pubDate>Fri, 21 Aug 2026 19:50:09 +0530</pubDate>
            <description><![CDATA[ತಂದೆಯ ತಿಂಗಳ 3 ಸಾವಿರ ರೂ. ಆದಾಯದಲ್ಲಿ ಬೆಳೆದ ಶಶಾಂಕ್ ಅಗರವಾಲ್, ಕಠಿಣ ಪರಿಶ್ರಮದಿಂದ ಐಐಟಿ ಬಾಂಬೆ ಸೇರಿ, ಇಂದು ವಾರ್ಷಿಕ 1.5 ಕೋಟಿ ರೂ. ಸಂಬಳ ಗಳಿಸುತ್ತಿದ್ದಾರೆ. ಬಡತನವನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಿದ ಇವರ ಸ್ಪೂರ್ತಿದಾಯಕ ಕಥೆ ಇದು.]]></description>
            <media:content url="https://static.asianetnews.com/images/w-1280,h-720,format-jpg,imgid-01m0jb1frrtwbspavw3fsysrhh,imgname-shashank-agarwal-1787321958168.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಯಾವ ಸಮಸ್ಯೆಯೂ ಸಮಸ್ಯೆ ಎನ್ನಿಸುವುದೇ ಇಲ್ಲ. ಎಲ್ಲವೂ ಇದ್ದು, ಏನೂ ಇಲ್ಲ ಎಂದು ಗೋಳೋ ಎನ್ನುವವರ ಮಧ್ಯೆ, ಏನೂ ಇಲ್ಲದಿದ್ದರೂ ಇದ್ದುದ್ದರಲ್ಲಿಯೇ ಎಲ್ಲವನ್ನೂ ಸಾಧಿಸುವವರೂ ಇದ್ದಾರೆ. ಎರಡನೆಯ ಗುಂಪಿಗೆ ಸೇರಿರುವವರು ಶಶಾಂಕ್ ಅಗರವಾಲ್&zwnj;. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ, ಅಪ್ಪ ತಿಂಗಳಿಗೆ ಗಳಿಸುತ್ತಿದ್ದ 3 ಸಾವಿರ ರೂಪಾಯಿಗಳಿಂದಲೇ, ಕಷ್ಟವನ್ನು ನೋಡಿ ಬೆಳೆದ ಮಗನಿಂದು 24ನೇ ವಯಸ್ಸಿನಲ್ಲಿಯೇ ವರ್ಷಕ್ಕೆ ಒಂದೂವರೆ ಕೋಟಿ ರೂಪಾಯಿ ಸಂಬಳ ಗಳಿಸುತ್ತಿದ್ದಾರೆ. ಇದು ಐಐಟಿ ಬಾಂಬೆ ಪದವೀಧರ ಶಶಾಂಕ್ ಅಗರವಾಲ್&zwnj; ಅವರ ಸಾಧನೆ.&lt;/p&gt;&lt;p&gt;ಜೆಇಇಯಲ್ಲಿ 20ನೇ ರ್ಯಾಂಕ್ ಪಡೆದು ಐಐಟಿ ಬಾಂಬೆಯಲ್ಲಿ ಓದಿರುವ ಶಶಾಂಕ್&zwnj;, ಸದ್ಯ ಜಾನ್ಸ್ಕರ್ ಕಾರ್ಪೊರೇಷನ್&zwnj;ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳೂ ಮನೆಗೆ ಒಂದು ಲಕ್ಷ ರೂಪಾಯಿ ನೀಡುವ ಮೂಲಕ, ಎಲ್ಲರಿಗೂ ಮಾದರಿಯಾಗಿದ್ದಾರೆ.&lt;/p&gt;&lt;p&gt;ಅಂದಹಾಗೆ, ಶಶಾಂಕ್&zwnj; ಅವರದ್ದು ಇದಾಗಲೇ ತಿಳಿದಿರುವಂತೆ ತೀರಾ ಬಡತನದ ಕುಟುಂಬ. ಅಪ್ಪ, ಹೋಲ್&zwnj;ಸೇಲ್ ಶಾಪ್ ನಡೆಸುತ್ತಿದ್ದು, ಅಬ್ಬಬ್ಬಾ ಎಂದರೆ ಅವರಿಗೆ ಸಿಗುತ್ತಿದ್ದುದು ತಿಂಗಳಿಗೆ 3 ರಿಂದ 4 ಸಾವಿರ ರೂ. ಮಾತ್ರ. ಸಂಸಾರ ನಿಭಾಯಿಸುವುದು ಕಷ್ಟ ಎನ್ನುವ ಸ್ಥಿತಿ. ತುತ್ತು ಊಟಕ್ಕೂ ಕಷ್ಟಪಡುವ ಸ್ಥಿತಿ ಇತ್ತು. ಇದರ ಹೊರತಾಗಿಯೂ ಮಗನಿಗೆ ಅವನ ಅಭ್ಯಾಸವನ್ನು ಮುಂದುವರೆಸಲು ಮನೆಯಲ್ಲಿ ಅವಕಾಶ ಕಲ್ಪಿಸಲಾಯಿತು. ಎಷ್ಟೇ ಕಷ್ಟ ಬಂದರೂ ಮಗನ ಓದಿಗೆ ಕೊರತೆಯಾಗದಂತೆ ಸಾಲ ಮಾಡಿ ಶಿಕ್ಷಣ ಕೊಡಿಸಿದರು. ತಂದೆ-ತಾಯಿಯ ತ್ಯಾಗವನ್ನು ವ್ಯರ್ಥ ಮಾಡದ ಶಶಾಂಕ್, ಹಗಲಿರುಳು ಶ್ರಮಿಸಿ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ ಜೆಇಇ ಅಡ್ವಾನ್ಸ್&zwnj;ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 20ನೇ ರ್ಯಾಂಕ್ ಪಡೆದು ಐಐಟಿ ಬಾಂಬೆಗೆ ಪ್ರವೇಶ ಪಡೆದರು.&lt;/p&gt;&lt;h2&gt;&lt;strong&gt;ಬಿ.ಟೆಕ್ ಪೂರ್ಣ&lt;/strong&gt;&lt;/h2&gt;&lt;p&gt;ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪೂರ್ಣಗೊಳಿಸಿದರು ಅವರು. ಮನೆಯಲ್ಲಿನ ಬಡತನ ನೋಡಿ ಬೆಳೆದಿದ್ದ ಶಶಾಂಕ್ ಅವರಿಗೆ ಏನಾದರೂ ಸಾಧನೆ ಮಾಡಬೇಕು ಎನ್ನುವ ಛಲವಿತ್ತು. ಅದಕ್ಕೆ ತಕ್ಕಂತೆ ಅವರ ಪ್ರತಿಭೆಗೆ ಪ್ರತಿಷ್ಠಿತ ಕಂಪನಿಗಳಿಂದ ಅವಕಾಶಗಳು ಅರಸಿ ಬಂದವು. ಪ್ರಸ್ತುತ ಅವರು &lsquo;ಜಾನ್ಸ್ಕರ್ ಕಾರ್ಪೊರೇಷನ್&rsquo; ಕಂಪನಿಯಲ್ಲಿ ಅನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಸುಮಾರು 1.5 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಅವರ ಈ ಒಟ್ಟು ವೇತನದಲ್ಲಿ ಸುಮಾರು 55 ಲಕ್ಷ ರೂ. ಮೂಲ ವೇತನ ಹಾಗೂ 50 ಲಕ್ಷ ರೂ. ವೇರಿಯಬಲ್ ಪೇ ಮತ್ತು ಬೋನಸ್ ಸೇರಿದೆ.&lt;/p&gt;&lt;p&gt;ಶಶಾಂಕ್ ಅವರ ಮಾಸಿಕ ಒಟ್ಟು ಆದಾಯ ಸುಮಾರು 8.75 ಲಕ್ಷ. ಇದರಲ್ಲಿ ಸುಮಾರು 2.83 ಲಕ್ಷ ರೂ. ತೆರಿಗೆ ಹಾಗೂ ಇತರ ಕಡಿತಗಳ ನಂತರ, ಪ್ರತಿ ತಿಂಗಳು ಅವರ ಕೈಗೆ ಸರಿಸುಮಾರು 5.88 ಲಕ್ಷ ರೂ. ನಿವ್ವಳ ವೇತನ ಸಿಗುತ್ತದೆ. ವಿಶೇಷವೆಂದರೆ, ಇಂದು ಅನೇಕ ಉದ್ಯೋಗಿಗಳ ಒಟ್ಟು ಸಂಬಳಕ್ಕಿಂತ ಹೆಚ್ಚಾಗಿ ಶಶಾಂಕ್ ಅವರು ತಿಂಗಳಿಗೆ ಕೇವಲ ತೆರಿಗೆಯನ್ನೇ ಕಟ್ಟುತ್ತಿದ್ದಾರೆ!&lt;/p&gt;&lt;h3&gt;&lt;strong&gt;ಅಪ್ಪ-ಅಮ್ಮನಿಗಾಗಿ ಮಿಡಿತ&lt;/strong&gt;&lt;/h3&gt;&lt;p&gt;ಕೋಟಿ ಕೋಟಿ ಸಂಪಾದಿಸುತ್ತಿದ್ದರೂ ಶಶಾಂಕ್ ತಮ್ಮ ಹಳೆಯ ದಿನಗಳನ್ನು ಮತ್ತು ತಂದೆ-ತಾಯಿ ಪಟ್ಟ ಕಷ್ಟವನ್ನು ಮರೆತಿಲ್ಲ. ತಮ್ಮ ಗಳಿಕೆಯಲ್ಲಿ ಪ್ರತಿ ತಿಂಗಳು ₹1 ಲಕ್ಷ ರೂಪಾಯಿಯನ್ನು ತಂದೆ-ತಾಯಿಗೆ ಕಳುಹಿಸಿಕೊಡುತ್ತಾರೆ. ಹಣಕ್ಕಿಂತ ಹೆಚ್ಚಾಗಿ ತನ್ನ ಯಶಸ್ಸಿಗೆ ಕಾರಣರಾದ ಪೋಷಕರಿಗೆ ಅವರು ನೀಡುತ್ತಿರುವ ಗೌರವ ಮತ್ತು ಪ್ರೀತಿ ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Suchethana D</dc:creator>
            <atom:link href="https://kannada.asianetnews.com/viral/father-earned-3000-a-month-he-now-earns-one-and-half-crore-at-24-iit-bombay-graduate-shashank-agarwals-suc/articleshow-q7519wt"/>
        </item>
        <item>
            <title><![CDATA[ವೆಚ್ಚ ಕಡಿತಕ್ಕೆ ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್: ₹19,000 ಕೋಟಿ ಉಳಿಸಲು 4 ಸಾವಿರ ನೌಕರರ ವಜಾ!]]></title>
            <link>https://kannada.asianetnews.com/jobs/jlr-layoffs-jaguar-land-rover-to-cut-4000-jobs-to-save-rs-19000-crore-gdp/articleshow-riq4v34</link>
            <guid isPermaLink="true">https://kannada.asianetnews.com/jobs/jlr-layoffs-jaguar-land-rover-to-cut-4000-jobs-to-save-rs-19000-crore-gdp/articleshow-riq4v34</guid>
            <pubDate>Mon, 07 Sep 2026 18:05:54 +0530</pubDate>
            <description><![CDATA[ಜಾಗತಿಕ ಐಷಾರಾಮಿ ವಾಹನ ತಯಾರಕ 'ಜಾಗ್ವಾರ್ ಲ್ಯಾಂಡ್ ರೋವರ್' (JLR) ವೆಚ್ಚ ಕಡಿತದ ಭಾಗವಾಗಿ ಮುಂದಿನ ಎರಡು ವರ್ಷಗಳಲ್ಲಿ 4,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಈ ನಿರ್ಧಾರಕ್ಕೆ ಸೈಬರ್ ದಾಳಿ, ಚೀನೀ ಇವಿಗಳ ಪೈಪೋಟಿ, ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಪ್ರಮುಖ ಕಾರಣಗಳಾಗಿದ್ದು, ಈ ಕಡಿತವು ಪ್ರಮುಖವಾಗಿ ಬ್ರಿಟನ್&zwnj;ನಲ್ಲಿರುವ ಆಡಳಿತಾತ್ಮಕ ಹುದ್ದೆಗಳ ಮೇಲೆ ಪರಿಣಾಮ ಬೀರಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01c7wfndv10zbga0mq6yfjf78z,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್: &lt;/strong&gt;ಜಾಗತಿಕ ಮಟ್ಟದ ಪ್ರಸಿದ್ಧ ಐಷಾರಾಮಿ ವಾಹನ ತಯಾರಿಕಾ ಸಂಸ್ಥೆಯಾದ 'ಜಾಗ್ವಾರ್ ಲ್ಯಾಂಡ್ ರೋವರ್' , ತನ್ನ ಕಾರ್ಯಾಚರಣೆಯ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 4,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಸಂಸ್ಥೆಯ ಒಟ್ಟಾರೆ ವೆಚ್ಚದಲ್ಲಿ ಸುಮಾರು ಅಂದಾಜು ₹19,000 ಕೋಟಿಗೂ ಹೆಚ್ಚು ಹಣ ಉಳಿಸುವ ಬೃಹತ್ ಯೋಜನೆಯ ಭಾಗವಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.&lt;/p&gt;&lt;p&gt;ಈ ಉದ್ಯೋಗ ನಷ್ಟವು ಪ್ರಮುಖವಾಗಿ ಆಡಳಿತ, ನಿರ್ವಹಣೆ ಮತ್ತು ಕಚೇರಿ ಸಂಬಂಧಿತ ಹುದ್ದೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. JLR ಸಂಸ್ಥೆಯು ಬ್ರಿಟನ್ ಒಂದರಲ್ಲೇ 34,000ಕ್ಕೂ ಹೆಚ್ಚು ನೌಕರರನ್ನು ಹೊಂದಿದ್ದು, ಜಾಗತಿಕ ಕಾರ್ಯಪಡೆಯ ಪೈಕಿ ಹೆಚ್ಚಿನ ಸಂಖ್ಯೆಯ ಉದ್ಯೋಗ ಕಡಿತವು ಬ್ರಿಟನ್ ಕಾರ್ಯಾಚರಣೆಯಲ್ಲೇ ನಡೆಯಲಿದೆ. ಬ್ರಿಟನ್ ಹೊರತಾಗಿ ವಿದೇಶಗಳಲ್ಲಿ ಸಂಸ್ಥೆಯು 10,000ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ.&lt;/p&gt;&lt;h2&gt;ಉದ್ಯೋಗ ವಜಾಕ್ಕೆ ಪ್ರಮುಖ ಕಾರಣಗಳು:&lt;/h2&gt;&lt;p&gt;ಕಳೆದ ವರ್ಷ ಸಂಸ್ಥೆಯ ಮೇಲೆ ನಡೆದ ಭಾರಿ ಸೈಬರ್ ದಾಳಿಯಿಂದಾಗಿ ಕಾರು ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ನಷ್ಟದಿಂದ ಕಂಪನಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.&lt;/p&gt;&lt;p&gt;ಜಾಗತಿಕ ಮಾರುಕಟ್ಟೆಯಲ್ಲಿ ಅಗ್ಗದ ದರದ ಚೀನೀ ಎಲೆಕ್ಟ್ರಿಕ್ ವಾಹನಗಳ (EV) ಪೈಪೋಟಿ ಹೆಚ್ಚಾಗಿರುವುದರಿಂದ JLR ಕಾರುಗಳ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದೆ.&lt;/p&gt;&lt;p&gt;ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಆಮದು ಸುಂಕ, ಏರಿಕೆಯಾಗುತ್ತಿರುವ ಉತ್ಪಾದನಾ ವೆಚ್ಚ ಹಾಗೂ ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳು ಸಂಸ್ಥೆಗೆ ಭಾರಿ ನಷ್ಟ ಉಂಟುಮಾಡಿವೆ.&lt;/p&gt;&lt;h2&gt;ಕಂಪನಿಯ ಸಿಇಒ ಅಭಯ:&lt;/h2&gt;&lt;p&gt;ಈ ಕುರಿತು ಪ್ರತಿಕ್ರಿಯಿಸಿರುವ ಜಿಎಲ್&zwnj;ಆರ್ ಸಿಇಒ ಪಿ.ಬಿ. ಬಾಲಾಜಿ, ತಾಂತ್ರಿಕ ಬದಲಾವಣೆ ಹಾಗೂ ಮಾರುಕಟ್ಟೆಯ ತೀವ್ರ ಸ್ಪರ್ಧೆಯಿಂದಾಗಿ ಆಟೋಮೊಬೈಲ್ ಉದ್ಯಮವು ಅತ್ಯಂತ ಸವಾಲಿನ ಹಂತದಲ್ಲಿದೆ. ದೀರ್ಘಾವಧಿಯ ಯಶಸ್ಸಿಗಾಗಿ ನಾವು ಹೊಸ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ಕೆಲಸ ಕಳೆದುಕೊಳ್ಳುವ ಪ್ರತಿಯೊಬ್ಬ ಸಹೋದ್ಯೋಗಿಗೂ ನ್ಯಾಯ, ಕಾಳಜಿ ಮತ್ತು ಗೌರವಯುತವಾದ ಬೆಂಬಲ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಜೆಎಲ್&zwnj;ಆರ್ ಸಂಸ್ಥೆಯು ಸೋಲಿಹಲ್, ವೆಸ್ಟ್ ಮಿಡ್&zwnj;ಲ್ಯಾಂಡ್ಸ್ ಮತ್ತು ಮರ್ಸಿಸೈಡ್&zwnj;ನ ಹೇಲ್&zwnj;ವುಡ್ ಸೇರಿದಂತೆ ಯುಕೆಯ ಪ್ರಮುಖ ಕಾರ್ಖಾನೆಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಉತ್ಪಾದನಾ ವಿಭಾಗದ ಕಾರ್ಮಿಕರಿಗಿಂತ ಹೆಚ್ಚಾಗಿ, 26,000 ಸಂಬಳ ಪಡೆಯುವ ಆಡಳಿತಾತ್ಮಕ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಸ್ವಯಂಪ್ರೇರಿತ ನಿವೃತ್ತಿ ಇಲ್ಲವೇ ವಜಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.&lt;/p&gt;&lt;h2&gt;ಸರ್ಕಾರಿ ಅಭಯವಿಲ್ಲ ಎಂದ ಬ್ರಿಟನ್:&lt;/h2&gt;&lt;p&gt;ಉದ್ಯೋಗ ಕಡಿತದ ವರದಿಗಳು ಹೊರಬಿದ್ದ ಬೆನ್ನಲ್ಲೇ ಬ್ರಿಟನ್&zwnj;ನ ಉದ್ಯಮ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್, ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಗೆ ಸರ್ಕಾರದಿಂದ ಯಾವುದೇ ನೇರ ಹಣಕಾಸು ನೆರವು ನೀಡುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಮಾರುಕಟ್ಟೆ ಸ್ಪರ್ಧೆಗೆ ತಕ್ಕಂತೆ ಕಾರ್ಯಪಡೆಯನ್ನು ಮರುಸಂಘಟಿಸುವುದು ಸಂಸ್ಥೆಯ ನಿರ್ಧಾರ. ಸಂಕಷ್ಟದಲ್ಲಿರುವ ನೌಕರರಿಗೆ ಹೊಸ ಉದ್ಯೋಗ ಕಂಡುಕೊಳ್ಳಲು ಸರ್ಕಾರ ಸಹಾಯ ಮಾಡುತ್ತದೆಯೇ ಹೊರತು, ಕಂಪನಿಗೆ ನೇರ ಆರ್ಥಿಕ ನೆರವು ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ತೀವ್ರ ಆಕ್ರೋಶ ಮತ್ತು ರಾಜಕೀಯ ಚರ್ಚೆ:&lt;/h2&gt;&lt;p&gt;ಬ್ರಿಟನ್&zwnj;ನ ಪ್ರಮುಖ 'ಯುನೈಟೆಡ್ ಟ್ರೇಡ್ ಯೂನಿಯನ್' ನಾಯಕಿ ಶರಾನ್ ಗ್ರಹಾಂ, ಸರ್ಕಾರದ ಅಸಮರ್ಪಕ ZEV (ಶೂನ್ಯ ಹೊರಸೂಸುವಿಕೆ ವಾಹನ) ನಿಯಮಗಳು ಹಾಗೂ ಅತಿಯಾದ ಕೈಗಾರಿಕಾ ಇಂಧನ ವೆಚ್ಚವೇ ಬ್ರಿಟಿಷ್ ವಾಹನ ಉದ್ಯಮಕ್ಕೆ ಮುಳುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತೆಯೇ, ವ್ಯಾಪಾರ ಸಮಿತಿಯ ಅಧ್ಯಕ್ಷ ಲಿಯಾಮ್ ಬೈರ್ನ್, ಈ ನಿರ್ಧಾರವು ನೂರಾರು ಕುಟುಂಬಗಳಿಗೆ ನೀಡಿದ ಭಾರಿ ಆಘಾತವಾಗಿದ್ದು, ಕೆಲಸ ಕಳೆದುಕೊಳ್ಳುವವರಿಗೆ ಸರ್ಕಾರ ತಕ್ಷಣವೇ ಪರ್ಯಾಯ ಉದ್ಯೋಗದ ಭರವಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/jlr-layoffs-jaguar-land-rover-to-cut-4000-jobs-to-save-rs-19000-crore-gdp/articleshow-riq4v34"/>
        </item>
        <item>
            <title><![CDATA[ಜಾಗತಿಕವಾಗಿ 1 ಲಕ್ಷ ನೌಕರರನ್ನು ವಜಾಕ್ಕೆ ಆಡಿ, ಪೋರ್ಷೆ ಒಡೆಯ ವೋಕ್ಸ್‌ವ್ಯಾಗನ್ ಬೃಹತ್ ಪ್ಲಾನ್, ಕಾರಣ ಈ ದೇಶಗಳು!]]></title>
            <link>https://kannada.asianetnews.com/jobs/volkswagen-future-plan-2030-cuts-50000-jobs-and-percent-75-car-variants-globally-gdp/articleshow-vsig5qd</link>
            <guid isPermaLink="true">https://kannada.asianetnews.com/jobs/volkswagen-future-plan-2030-cuts-50000-jobs-and-percent-75-car-variants-globally-gdp/articleshow-vsig5qd</guid>
            <pubDate>Fri, 04 Sep 2026 16:10:49 +0530</pubDate>
            <description><![CDATA[ಚೀನಾದ ಇವಿ ಪೈಪೋಟಿ ಮತ್ತು ಅಮೆರಿಕದ ಸುಂಕಗಳಿಂದಾಗಿ ವೋಕ್ಸ್&zwnj;ವ್ಯಾಗನ್ 50,000 ಹೆಚ್ಚುವರಿ ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ. 'ಫ್ಯೂಚರ್ ಪ್ಲಾನ್ 2030' ಭಾಗವಾಗಿ, ಕಂಪನಿಯು ತನ್ನ ಕಾರು ಮಾದರಿಗಳನ್ನು 75% ರಷ್ಟು ಕಡಿಮೆ ಮಾಡಲು ಮತ್ತು ವೆಚ್ಚವನ್ನು ತಗ್ಗಿಸಲು ಬೃಹತ್ ಪುನರ್ರಚನೆಗೆ ಮುಂದಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw6sf6fanbr3z2b8d1kcdq6b,imgname-volkswagen-1782639466986.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೀನಾದ ವಿದ್ಯುತ್ ಚಾಲಿತ ವಾಹನ ತಯಾರಕರಿಂದ ಎದುರಾಗುತ್ತಿರುವ ತೀವ್ರ ಪೈಪೋಟಿ ಹಾಗೂ ಅಮೆರಿಕ ವಿಧಿಸಿರುವ ಆಮದು ಸುಂಕಗಳ ಭಾರಿ ಹೊಡೆತಕ್ಕೆ ಸಿಲುಕಿರುವ ಜರ್ಮನಿಯ ಪ್ರಖ್ಯಾತ ವಾಹನ ತಯಾರಿಕಾ ಸಂಸ್ಥೆ ವೋಕ್ಸ್&zwnj;ವ್ಯಾಗನ್ (Volkswagen), ತನ್ನ ವೆಚ್ಚ ತಗ್ಗಿಸಲು ಬೃಹತ್ ಬದಲಾವಣೆಗೆ ಮುಂದಾಗಿದೆ. ಇದರ ಭಾಗವಾಗಿ ಜಾಗತಿಕವಾಗಿ ಮತ್ತೆ 50,000 ಉದ್ಯೋಗಗಳನ್ನು ಕಡಿತಗೊಳಿಸಲು ಕಂಪನಿ ನಿರ್ಧರಿಸಿದೆ.&lt;/p&gt;&lt;p&gt;ಕಂಪನಿಯ ಮೇಲ್ವಿಚಾರಣಾ ಮಂಡಳಿಯು ಗುರುವಾರ 'ಫ್ಯೂಚರ್ ಪ್ಲಾನ್ 2030' ಎಂಬ ಪರಿಷ್ಕೃತ ಕಾರ್ಯತಂತ್ರಕ್ಕೆ ಸರ್ವಾನುಮತದ ಅನುಮೋದನೆ ನೀಡಿದೆ. ಈಗಾಗಲೇ ಘೋಷಿಸಲಾದ ಬದಲಾವಣೆ ಕಾರ್ಯಕ್ರಮಗಳ ಜೊತೆಗೆ ಈ ಇತ್ತೀಚಿನ ಕಡಿತವೂ ಸೇರಿದರೆ, ಈ ದಶಕದ ಅಂತ್ಯದ ವೇಳೆಗೆ (2030) ವೋಕ್ಸ್&zwnj;ವ್ಯಾಗನ್ ಗ್ರೂಪ್&zwnj;ನಾದ್ಯಂತ ಒಟ್ಟು ಉದ್ಯೋಗ ನಷ್ಟದ ಸಂಖ್ಯೆ ಬರೋಬ್ಬರಿ 1,00,000 (1 ಲಕ್ಷ) ತಲುಪುವ ಸಾಧ್ಯತೆಯಿದೆ. ವೋಕ್ಸ್&zwnj;ವ್ಯಾಗನ್ ಸಂಸ್ಥೆಯು ತನ್ನ ಮೂಲ ಬ್ರ್ಯಾಂಡ್ ಜೊತೆಗೆ ಆಡಿ (Audi), ಪೋರ್ಷೆ (Porsche) ಮತ್ತು ಲಂಬೋರ್ಘಿನಿ (Lamborghini) ನಂತಹ ದೈತ್ಯ ಕಾರು ಬ್ರ್ಯಾಂಡ್&zwnj;ಗಳ ಒಡೆತನವನ್ನೂ ಹೊಂದಿದೆ.&lt;/p&gt;&lt;h2&gt;ಜರ್ಮನಿಯಲ್ಲಿ ಕುಸಿಯುತ್ತಿರುವ ನೌಕರರ ಸಂಖ್ಯೆ&lt;/h2&gt;&lt;p&gt;ಕಂಪನಿಯು ಕಳೆದ ಕೆಲವು ವರ್ಷಗಳಿಂದಲೇ ಸಿಬ್ಬಂದಿ ಕಡಿತ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ತನ್ನ ಪ್ರಬಲ ಜರ್ಮನ್ ಕಾರ್ಮಿಕ ಒಕ್ಕೂಟಗಳ ತೀವ್ರ ವಿರೋಧವನ್ನು ಎದುರಿಸುತ್ತಿದೆ. ವೋಕ್ಸ್&zwnj;ವ್ಯಾಗನ್&zwnj;ನ ಇತ್ತೀಚಿನ ಹಣಕಾಸು ವರದಿಯ ಪ್ರಕಾರ, ಜರ್ಮನಿಯಲ್ಲಿ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 2023 ರಲ್ಲಿ 2,75,000 ಇತ್ತು. ಆದರೆ ಜೂನ್ 30, 2026 ರ ಹೊತ್ತಿಗೆ ಇದು 2,54,000 ಕ್ಕೆ ಕುಸಿದಿದೆ.&lt;/p&gt;&lt;p&gt;ಹೊಸದಾಗಿ ಕಡಿತಗೊಳಿಸಲಾಗುವ 50,000 ಹುದ್ದೆಗಳನ್ನು ಯಾವ ವಿಭಾಗ ಅಥವಾ ದೇಶಗಳಿಂದ ತೆಗೆದುಹಾಕಲಾಗುತ್ತದೆ ಎಂಬುದನ್ನು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಈ ಕಡಿತವು ನಿರ್ವಹಣಾ (Management) ಹುದ್ದೆಗಳನ್ನೂ ಒಳಗೊಂಡಿರಲಿದ್ದು, ವೋಕ್ಸ್&zwnj;ವ್ಯಾಗನ್, ಆಡಿ ಮತ್ತು ಪೋರ್ಷೆ ವಿಭಾಗಗಳಲ್ಲಿ ಈಗಾಗಲೇ ಯೋಜಿಸಲಾದ ಕಡಿತಗಳಿಗೆ ಹೆಚ್ಚುವರಿಯಾಗಿ ಬರಲಿದೆ.&lt;/p&gt;&lt;h2&gt;ಕಾರು ಮಾಡೆಲ್ ಶ್ರೇಣಿಯಲ್ಲಿ 75% ಇಳಿಕೆ&lt;/h2&gt;&lt;p&gt;ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಮತ್ತು ಲಾಭದಾಯಕತೆಯನ್ನು ಹೆಚ್ಚಿಸುವ ಭಾಗವಾಗಿ ಕಂಪನಿಯು ತನ್ನ ಉತ್ಪಾದನಾ ಮಾದರಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಘೋಷಿಸಿದೆ. 2035 ರ ವೇಳೆಗೆ ಕಾರುಗಳ ಲಭ್ಯ ಮಾದರಿಗಳು ಮತ್ತು ಅವುಗಳ ಆವೃತ್ತಿಗಳ ಸಂಖ್ಯೆಯನ್ನು ಸರಿಸುಮಾರು 75% ರಷ್ಟು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಕಡಿಮೆ ಮಾಡೆಲ್&zwnj;ಗಳ ಮೇಲೆ ಗಮನ ಹರಿಸುವುದರಿಂದ ಪ್ರತಿ ಮಾಡೆಲ್&zwnj;ನ ಉತ್ಪಾದನಾ ಪ್ರಮಾಣ ಹೆಚ್ಚಾಗಲಿದ್ದು, ನಿರ್ಮಾಣ ವೆಚ್ಚ ಗಣನೀಯವಾಗಿ ತಗ್ಗಲಿದೆ.&lt;/p&gt;&lt;p&gt;ಖರೀದಿದಾರರಿಗೆ ಸವಾಲು: ಈ ನಿರ್ಧಾರದಿಂದಾಗಿ ಗ್ರಾಹಕರಿಗೆ ಆಯ್ಕೆ ಮಾಡಲು ಕಡಿಮೆ ಮಾಡೆಲ್&zwnj;ಗಳು ಲಭ್ಯವಿರಲಿವೆ ಹಾಗೂ ಕಾರುಗಳಲ್ಲಿ ತಮಗೆ ಬೇಕಾದ ವೈಶಿಷ್ಟ್ಯಗಳನ್ನು (Custom Features) ಸೇರಿಸಿಕೊಳ್ಳುವ ಅವಕಾಶವೂ ಸೀಮಿತವಾಗಲಿದೆ.&lt;/p&gt;&lt;h2&gt;ಅನಿಶ್ಚಿತತೆಯಲ್ಲಿ ಜರ್ಮನಿಯ 4 ಪ್ರಮುಖ ಉತ್ಪಾದನಾ ಘಟಕಗಳು&lt;/h2&gt;&lt;p&gt;ವೋಕ್ಸ್&zwnj;ವ್ಯಾಗನ್&zwnj;ಗೆ ಯುರೋಪ್&zwnj;ನಲ್ಲಿರುವ ತನ್ನ ಉತ್ಪಾದನಾ ಸಾಮರ್ಥ್ಯಕ್ಕೆ ಹೋಲಿಸಿದರೆ ಪ್ರಸ್ತುತ ವಾರ್ಷಿಕ 5,00,000 ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಜರ್ಮನಿಯ ನಾಲ್ಕು ಪ್ರಮುಖ ಉತ್ಪಾದನಾ ತಾಣಗಳಾದ ಎಮ್ಡೆನ್ (Emden), ಜ್ವಿಕಾವ್ (Zwickau), ಹ್ಯಾನೋವರ್ (Hanover) ಮತ್ತು ನೆಕ್ಕರ್&zwnj;ಸಲ್ಮ್ (Neckarsulm) ಘಟಕಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದೆ.&lt;/p&gt;&lt;p&gt;2031 ಮತ್ತು 2034 ರ ನಡುವಿನ ಅವಧಿಗೆ ಈ ಸ್ಥಾವರಗಳಿಗೆ ಸೂಕ್ತ ವಾಹನ ಉತ್ಪಾದನಾ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ ಎಂದು ಕಂಪನಿ ತಿಳಿಸಿದೆ. ಆದರೆ ಇವುಗಳನ್ನು ತಕ್ಷಣವೇ ಮುಚ್ಚುವ ಬದಲು, ಪರ್ಯಾಯ ಬಳಕೆಯ ಬಗ್ಗೆ ಪರಿಶೀಲಿಸುವುದಾಗಿ ಆಡಳಿತ ಮಂಡಳಿ ಹೇಳಿದೆ. ಯುರೋಪಿಯನ್ ಕಾರ್ಖಾನೆಗಳಿಗಾಗಿ ಜೂನ್ 2027 ರ ವೇಳೆಗೆ ಹೊಸ ಉತ್ಪಾದನಾ ಕಾರ್ಯತಂತ್ರ ಹೊರಬೀಳುವ ನಿರೀಕ್ಷೆಯಿದೆ.&lt;/p&gt;&lt;h2&gt;ಸಂಕಷ್ಟಕ್ಕೆ ಮುಖ್ಯ ಕಾರಣಗಳು: ಚೀನಾ ಪೈಪೋಟಿ ಮತ್ತು ಅಮೆರಿಕದ ಸುಂಕಗಳು&lt;/h2&gt;&lt;p&gt;ಚೀನಾದಲ್ಲಿ ತೀವ್ರ ಕುಸಿತ: ಜಗತ್ತಿನ ಬೃಹತ್ ಆಟೋ ಮಾರುಕಟ್ಟೆಯಾದ ಚೀನಾದಲ್ಲಿ ಸ್ಥಳೀಯ ಇವಿ (EV) ತಯಾರಕರ ತೀವ್ರ ಪೈಪೋಟಿಯಿಂದಾಗಿ ವೋಕ್ಸ್&zwnj;ವ್ಯಾಗನ್ ಹಿನ್ನಡೆ ಅನುಭವಿಸಿದೆ. 2026 ರ ಮೊದಲಾರ್ಧದಲ್ಲಿ ಚೀನಾದಲ್ಲಿ ವೋಕ್ಸ್&zwnj;ವ್ಯಾಗನ್ ಕಾರುಗಳ ವಿತರಣೆಯು ಬರೋಬ್ಬರಿ 25.9% ರಷ್ಟು ಕುಸಿದಿದೆ.&lt;/p&gt;&lt;p&gt;ಅಮೆರಿಕದ ಸುಂಕಗಳ ಬಿಸಿ: ಅಮೆರಿಕ ಸರ್ಕಾರ ವಿಧಿಸಿರುವ ಸುಂಕಗಳಿಂದಾಗಿ ವೋಕ್ಸ್&zwnj;ವ್ಯಾಗನ್&zwnj;ನ ವಾರ್ಷಿಕ ಕಾರ್ಯಾಚರಣೆ ಲಾಭದಲ್ಲಿ ಸುಮಾರು &euro;5 ಬಿಲಿಯನ್ (ಯುರೋ) ಕಡಿತವಾಗುವ ಅಂದಾಜಿದೆ. ಅಮೆರಿಕದಲ್ಲಿ ತನ್ನ ID.4 ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಕ್ಕಾಗಿ ಕಂಪನಿಯು ಈಗಾಗಲೇ &euro;500 ಮಿಲಿಯನ್ ನಷ್ಟವನ್ನು ದಾಖಲಿಸಿದೆ.&lt;/p&gt;&lt;p&gt;ಕುಸಿದ ಲಾಭಾಂಶ: 2026 ರ ಮೊದಲಾರ್ಧದಲ್ಲಿ ವೋಕ್ಸ್&zwnj;ವ್ಯಾಗನ್ ಗಳಿಸಿದ ಕಾರ್ಯಾಚರಣಾ ಲಾಭ &euro;5.9 ಬಿಲಿಯನ್ ಆಗಿದ್ದು, ಇದು ಹಿಂದಿನ ವರ್ಷಕ್ಕಿಂತ 11.6% ಕಡಿಮೆಯಾಗಿದೆ. ಕಂಪನಿಯ ನಿವ್ವಳ ಲಾಭವು 31% ರಷ್ಟು ಕುಸಿದು &euro;3.1 ಬಿಲಿಯನ್&zwnj;ಗೆ ತಲುಪಿದೆ.&lt;/p&gt;&lt;h2&gt;2030 ರ ಬೃಹತ್ ಆರ್ಥಿಕ ಗುರಿಗಳು&lt;/h2&gt;&lt;p&gt;ಈ ಸವಾಲುಗಳ ನಡುವೆಯೂ 2030 ರ ವೇಳೆಗೆ ಬಲವಾದ ಚೇತರಿಕೆ ಕಾಣುವ ಗುರಿಯನ್ನು ವೋಕ್ಸ್&zwnj;ವ್ಯಾಗನ್ ಹೊಂದಿದ್ದು, ಈ ಕೆಳಗಿನ ಯೋಜನೆಗಳನ್ನು ರೂಪಿಸಿದೆ:&lt;/p&gt;&lt;p&gt;ವಾರ್ಷಿಕವಾಗಿ 9 ಮಿಲಿಯನ್ (90 ಲಕ್ಷ) ವಾಹನಗಳನ್ನು ಮಾರಾಟ ಮಾಡುವುದು.&lt;/p&gt;&lt;p&gt;ಕಾರ್ಯಾಚರಣೆ ಲಾಭಾಂಶವನ್ನು (Operating Margin) ಪ್ರಸ್ತುತ ಇರುವ 3.8% ರಿಂದ 9% ಕ್ಕೆ ಹೆಚ್ಚಿಸುವುದು.&lt;/p&gt;&lt;p&gt;2027 ರಿಂದ 2031 ರ ನಡುವೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ (R&amp;amp;D) ಹಾಗೂ ಬಂಡವಾಳ ವೆಚ್ಚಕ್ಕಾಗಿ &euro;135 ಬಿಲಿಯನ್ ಹೂಡಿಕೆ ಮಾಡುವುದು.&lt;/p&gt;&lt;p&gt;ಕಂಪನಿಯ ಶೇರ್ ಪೋರ್ಟ್&zwnj;ಫೋಲಿಯೋ ಮತ್ತು ವ್ಯವಹಾರಗಳನ್ನು ಮಾರಾಟ ಅಥವಾ ಮರುಜೋಡಣೆಯ ಮೂಲಕ ಮೂರನೇ ಒಂದರಷ್ಟು (1/3rd) ಕಡಿಮೆ ಮಾಡುವುದು.&lt;/p&gt;&lt;h2&gt;ಆಡಳಿತ ಮಂಡಳಿ ಮತ್ತು ಕಾರ್ಮಿಕ ಒಕ್ಕೂಟಗಳ ನಿಲುವು&lt;/h2&gt;&lt;p&gt;ಲೋವರ್ ಸ್ಯಾಕ್ಸೋನಿಯ ಸಚಿವ-ಅಧ್ಯಕ್ಷ ಹಾಗೂ ವೋಕ್ಸ್&zwnj;ವ್ಯಾಗನ್&zwnj;ನ ಎರಡನೇ ಅತಿದೊಡ್ಡ ಷೇರುದಾರರಾದ ಓಲಾಫ್ ಲೈಸ್ ಮಾತನಾಡಿ, &quot;ಜಾಗತಿಕ ಪೈಪೋಟಿಯನ್ನು ಗಮನಿಸಿದರೆ ಜರ್ಮನ್ ಆಟೋಮೊಬೈಲ್ ಉದ್ಯಮ ಎದುರಿಸುತ್ತಿರುವ ಸವಾಲುಗಳು ಬೃಹತ್ ಮಟ್ಟದ್ದಾಗಿವೆ. ನಮ್ಮ ಕೈಗಾರಿಕಾ ನೆಲೆಯನ್ನು ರಕ್ಷಿಸಲು ಶಕ್ತಿಶಾಲಿ ವ್ಯಾಪಾರ ನೀತಿಯ ಅಗತ್ಯವಿದೆ&quot; ಎಂದಿದ್ದಾರೆ.&lt;/p&gt;&lt;p&gt;ಕಂಪನಿಯ ಉದ್ಯೋಗಿ ಪ್ರತಿನಿಧಿ ಮಂಡಳಿಯ ಅಧ್ಯಕ್ಷೆ ಡೇನಿಯಲಾ ಕ್ಯಾವಲ್ಲೊ, ಸಂಸ್ಥೆಯ ಪುನರ್ರಚನೆ ಅತ್ಯಗತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ನಿರ್ವಹಣಾ ಮಂಡಳಿಯ ತಪ್ಪು ನಿರ್ಧಾರಗಳ ಸಂಪೂರ್ಣ ವೆಚ್ಚವನ್ನು ನೌಕರರಷ್ಟೇ ಭರಿಸಬಾರದು ಎಂದು ಪ್ರತಿಪಾದಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಜಾಗತಿಕ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಕ್ರಾಂತಿ ಮತ್ತು ಜಾಗತಿಕ ರಾಜಕೀಯ-ಆರ್ಥಿಕ ಸವಾಲುಗಳಿಂದಾಗಿ ವೋಕ್ಸ್&zwnj;ವ್ಯಾಗನ್ ತನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬದಲಾವಣೆಗೆ ಹೆಜ್ಜೆ ಇಟ್ಟಿದೆ.&lt;/p&gt;]]></content:encoded>
            <category>private-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/volkswagen-future-plan-2030-cuts-50000-jobs-and-percent-75-car-variants-globally-gdp/articleshow-vsig5qd"/>
        </item>
        <item>
            <title><![CDATA[ಮುಂದುವರೆದ ವಜಾ ಪರ್ವ: ಶೇಕಡಾ 50ರಷ್ಟು ಟೆಕ್ಕಿಗಳ ಮನೆಗೆ ಕಳಿಸ್ತಿದೆ  ಅಡಿದಾಸ್​! ಎಲ್ಲಿದು]]></title>
            <link>https://kannada.asianetnews.com/private-jobs/adidas-confirms-layoffs-at-india-tech-hub-around-50-percent-employees-affected-suc/articleshow-x441mg4</link>
            <guid isPermaLink="true">https://kannada.asianetnews.com/private-jobs/adidas-confirms-layoffs-at-india-tech-hub-around-50-percent-employees-affected-suc/articleshow-x441mg4</guid>
            <pubDate>Thu, 17 Sep 2026 15:04:54 +0530</pubDate>
            <description><![CDATA[ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಗುರುಗ್ರಾಮದ ಅಡಿದಾಸ್ ಟೆಕ್ ಹಬ್&zwnj;ನಲ್ಲಿ ಉದ್ಯೋಗ ಕಡಿತಗೊಳಿಸಲಾಗುತ್ತಿದೆ. ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳು ಸೇರಿದಂತೆ ಶೇ. 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಕಂಪೆನಿ ದೃಢಪಡಿಸಿದೆ. ಬದಲಾಗುತ್ತಿರುವ ವ್ಯಾಪಾರ ಅಗತ್ಯಗಳಿಗೆ ಅನುಗುಣವಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ps3vtbsphdz3wrxkqytfgd,imgname-adidas-layoffs-2026-1789618417483.jpg" type="image/jpeg" height="390" width="690"/>
            <content:encoded><![CDATA[&lt;p&gt;ಗುರುಗ್ರಾಮ: ಕೃತಕ ಬುದ್ಧಿಮತ್ತೆ ಸೇರಿದಂತೆ ಕೆಲವು ಕಾರಣಗಳಿಂದಾಗಿ ಇದಾಗಲೇ ಲಕ್ಷಾಂತರ ಸಾಫ್ಟ್​ವೇರ್​ ಉದ್ಯೋಗಿಗಳು ಸೇರಿದಂತೆ ವಿಭಿನ್ನ ಕ್ಷೇತ್ರಗಳ ಉದ್ಯೋಗಿಗಳು ಕೆಲಸವನ್ನು ಕಳೆದುಕೊಂಡಿದ್ದಾರೆ. ವಿದೇಶದ ಕನಸು ಹೊತ್ತು ಅಮೆರಿಕಕ್ಕೆ ಹೋಗಿರುವವರ ಪರಿಸ್ಥಿತಿಯಂತೂ ಚಿಂತಾಜನಕವಾಗಿದೆ. ಭಾರತದಲ್ಲಿಯೂ ಹಲವು ಉದ್ಯೋಗಿಗಳನ್ನು ಹಲವು ಕಂಪೆನಿಗಳು ವಜಾ ಮಾಡುತ್ತಿದ್ದು, ಇದೀಗ ಪ್ರಸಿದ್ಧ ಕಂಪೆನಿಯಾಗಿರುವ ಅಡಿದಾಸ್​ (Adidas Layoff) ಶೇಕಡಾ 50ರಷ್ಟು ಉದ್ಯೋಗಿಗಳನ್ನು ವಜಾಮಾಡಲು ಮುಂದಾಗಿರುವುದಾಗಿ ವರದಿಯಾಗಿದೆ. ಅದರಲ್ಲಿಯೂ ಉತ್ತರ ಪ್ರದೇಶದ ಗುರುಗ್ರಾಮ್&zwnj;ನಲ್ಲಿರುವ ಶಾಖೆಯಲ್ಲಿಯೇ ಈ ಪರಿಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.&lt;/p&gt;&lt;p&gt;ಕಂಪೆನಿಯು ತನ್ನ ಇಂಡಿಯಾ ಟೆಕ್ ಹಬ್&zwnj;ನಲ್ಲಿ ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳು, ಡೇಟಾ ವಿಜ್ಞಾನಿಗಳು ಮತ್ತು ಡೇಟಾ ಎಂಜಿನಿಯರ್&zwnj;ಗಳು ಸೇರಿದಂತೆ ಸುಮಾರು 50 ಪ್ರತಿಶತದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಭಾರತದಲ್ಲಿನ ತನ್ನ ತಂತ್ರಜ್ಞಾನ ವಿಭಾಗದಲ್ಲಿನ ವಜಾಗಳನ್ನು ಅಡಿಡಾಸ್ ದೃಢಪಡಿಸಿದೆ, ಆದರೆ ಪರಿಣಾಮ ಬೀರುವ ಉದ್ಯೋಗಿಗಳ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ.&lt;/p&gt;&lt;h2&gt;&lt;strong&gt;ಭಾರತದಲ್ಲಿ ಪ್ರಭಾವ ಹೆಚ್ಚು&lt;/strong&gt;&lt;/h2&gt;&lt;p&gt;ಅಡಿದಾಸ್ ಈ ಹಿಂದೆ ತನ್ನ ಇಂಡಿಯಾ ಟೆಕ್ ಹಬ್&zwnj;ನಲ್ಲಿ ಸುಮಾರು 50 ಪ್ರತಿಶತದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ ಎಂದಿತ್ತು. ಈಗ, ಇಂಡಿಯಾ ಟುಡೇ ಟೆಕ್&zwnj;ಗೆ ನವೀಕರಿಸಿದ ಹೇಳಿಕೆಯಲ್ಲಿ, ಕಂಪೆನಿಯು ಸುಮಾರು 20 ಪ್ರತಿಶತದಷ್ಟು ಉದ್ಯೋಗಿಗಳು ವಜಾಗೊಳಿಸುವಿಕೆಯಿಂದ ಪ್ರಭಾವಿತರಾಗಿದ್ದಾರೆ ಎಂದು ದೃಢಪಡಿಸಿದೆ. &quot;ಬದಲಾಗುತ್ತಿರುವ ವ್ಯಾಪಾರ ಅಗತ್ಯಗಳಿಗೆ ಅನುಗುಣವಾಗಿ ನಮ್ಮ ಕಾರ್ಯಾಚರಣಾ ಮಾದರಿಯನ್ನು ಹೊಂದಿಸುವ ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿ, ಭಾರತದಲ್ಲಿನ ನಮ್ಮ ತಂತ್ರಜ್ಞಾನ ಸಂಸ್ಥೆಯೊಳಗೆ ಹಲವಾರು ಸ್ಥಾನಗಳನ್ನು ಕಡಿಮೆ ಮಾಡುವ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಈ ಬದಲಾವಣೆಗಳು ನಮ್ಮ ಸಂಸ್ಥೆಯ ಭಾಗಗಳನ್ನು ಸರಳೀಕರಿಸಲು, ಪ್ರಮುಖ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ವ್ಯವಹಾರ ಮತ್ತು ತಂತ್ರಜ್ಞಾನ ಪರಿಸರದಲ್ಲಿ ದೀರ್ಘಕಾಲೀನ ಯಶಸ್ಸಿಗೆ ಅಡಿದಾಸ್ ಅನ್ನು ಇರಿಸಲು ಉದ್ದೇಶಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.&lt;/p&gt;&lt;h3&gt;&lt;strong&gt;ಉದ್ಯೋಗಿಗಳ ಕುರಿತು ಕಂಪೆನಿ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಅಡಿದಾಸ್&zwnj;ನಲ್ಲಿರುವ ನಮ್ಮ ಸಹೋದ್ಯೋಗಿಗಳಿಗೆ ಅವರ ಅನೇಕ ಕೊಡುಗೆಗಳಿಗಾಗಿ ನಾವು ನಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಈ ಸಮಯದಲ್ಲಿ ಪೀಡಿತ ಉದ್ಯೋಗಿಗಳಿಗೆ ಕಾಳಜಿ, ಗೌರವ ಮತ್ತು ಸೂಕ್ತ ಪರಿವರ್ತನೆಯ ಬೆಂಬಲವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಕಂಪೆನಿ ಹೇಳಿದೆ. ಭಾರತವು ಅಡಿದಾಸ್&zwnj;ಗೆ ಕಾರ್ಯತಂತ್ರದ ಪ್ರಮುಖ ಮಾರುಕಟ್ಟೆಯಾಗಿ ಉಳಿದಿದೆ ಮತ್ತು ಕಂಪೆನಿಯ ಬೆಳವಣಿಗೆ, ನಾವೀನ್ಯತೆ ಮತ್ತು ಡಿಜಿಟಲ್ ರೂಪಾಂತರದ ಮಹತ್ವಾಕಾಂಕ್ಷೆಗಳನ್ನು ಅರಿತುಕೊಳ್ಳುವಲ್ಲಿ ನಮ್ಮ ತಂತ್ರಜ್ಞಾನ ಕೇಂದ್ರವು ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂದು ಅದು ತಿಳಿಸಿದೆ.&lt;/p&gt;&lt;p&gt;ಈ ಬದಲಾವಣೆಗಳು ನಮ್ಮ ಭಾರತೀಯ ತಂತ್ರಜ್ಞಾನ ಸಂಸ್ಥೆಯ 20% ಕ್ಕಿಂತ ಕಡಿಮೆ ಪರಿಣಾಮ ಬೀರುತ್ತವೆ. ನಾವು ಕಾರ್ಯತಂತ್ರದ ಸಾಮರ್ಥ್ಯಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಸಂಸ್ಥೆಯಾದ್ಯಂತ ಹಲವಾರು ಮುಕ್ತ ಹುದ್ದೆಗಳು ಲಭ್ಯವಿದೆ. ಭವಿಷ್ಯಕ್ಕೆ ಅಗತ್ಯವಿರುವ ಕೌಶಲ್ಯ ಮತ್ತು ಪರಿಣತಿಯನ್ನು ನಾವು ಅಭಿವೃದ್ಧಿಪಡಿಸುವಾಗ ಈ ಅವಕಾಶಗಳ ಲಾಭವನ್ನು ಪಡೆಯಲು ಬಾಧಿತ ಉದ್ಯೋಗಿಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.&lt;/p&gt;]]></content:encoded>
            <category>private-jobs</category>
            <dc:creator>Suchethana D</dc:creator>
            <atom:link href="https://kannada.asianetnews.com/private-jobs/adidas-confirms-layoffs-at-india-tech-hub-around-50-percent-employees-affected-suc/articleshow-x441mg4"/>
        </item>
        <item>
            <title><![CDATA[Oracle layoffs: ಒರಾಕಲ್‌ನಲ್ಲಿ ಮತ್ತೊಮ್ಮೆ ಉದ್ಯೋಗ ಕಡಿತದ ಆತಂಕ: ಭಾರತದ ಸಾವಿರಾರು ಟೆಕ್ಕಿಗಳಿಗೆ ಕಂಟಕ!]]></title>
            <link>https://kannada.asianetnews.com/private-jobs/oracle-may-undertake-another-round-of-layoffs-impact-thousands-of-indian-employees-rav/articleshow-x804sep</link>
            <guid isPermaLink="true">https://kannada.asianetnews.com/private-jobs/oracle-may-undertake-another-round-of-layoffs-impact-thousands-of-indian-employees-rav/articleshow-x804sep</guid>
            <pubDate>Tue, 01 Sep 2026 14:45:59 +0530</pubDate>
            <description><![CDATA[ಜಾಗತಿಕ ಟೆಕ್ ದಿಗ್ಗಜ ಒರಾಕಲ್ ವೆಚ್ಚ ಕಡಿತದ ಭಾಗವಾಗಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗುವ ಸಾಧ್ಯತೆಯಿದೆ. ಈ ಲೇಆಫ್&zwnj;ನಿಂದ ಜಾಗತಿಕವಾಗಿ 7,000-10,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಭಾರತದಲ್ಲಿರುವ ಸಾವಿರಾರು ಟೆಕ್ಕಿಗಳ ಮೇಲೂ ಇದರ ಪರಿಣಾಮ ಬೀರುವ ಆತಂಕ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1e3vad48zf4qydn9qyj6nxk,imgname-oracle-layoffs-1788253940132.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಜಾಗತಿಕ ಟೆಕ್ ದಿಗ್ಗಜ Oracle ನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ನಡೆಯುವ ಸಾಧ್ಯತೆ ಇದೆ ಎಂಬ ಸುದ್ದಿ ಇದೀಗ ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಬಾರಿ ಭಾರತದಲ್ಲಿರುವ ಸಾವಿರಾರು ಉದ್ಯೋಗಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿಯಾಗಿರುವುದು ಸಾವಿರಾರು ಟೆಕ್ಕಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.&lt;/p&gt;&lt;h2&gt;Oracle ಉದ್ಯೋಗ ಕಡಿತ ಯಾಕೆ?&lt;/h2&gt;&lt;p&gt;ಮೂಲಗಳ ಪ್ರಕಾರ, ಕಂಪನಿಯು ವೆಚ್ಚ ಕಡಿತಕ್ಕೆ ಮುಂದಾಗಿದ್ದು ಹಲವು ವಿಭಾಗಗಳಲ್ಲಿ ಬಜೆಟ್&zwnj;ಗಳನ್ನು ಕಡಿಮೆ ಮಾಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ನಿರ್ದಿಷ್ಟ ವಿಭಾಗವೊಂದಕ್ಕೆ ಮಾತ್ರ ಸೀಮಿತವಾಗದೆ, ಹಲವು ವಿಭಾಗಗಳ ಉದ್ಯೋಗಿಗಳ ಮೇಲೆ ಉದ್ಯೋಗ ಕಡಿತದ ಪರಿಣಾಮ ಬೀರುವ ಸಾಧ್ಯತೆ ಇದೆ.&lt;/p&gt;&lt;h3&gt;7,000-10,000 ಉದ್ಯೋಗಿಗಳೇ ಟಾರ್ಗೆಟ್?&lt;/h3&gt;&lt;p&gt;ಕಂಪನಿ ಎಷ್ಟು ಉದ್ಯೋಗಿಗಳನ್ನ ತೆಗೆಯಲಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಆದರೆ ಉದ್ಯೋಗಿಗಳ ನಡುವೆ ಹರಿದಾಡುತ್ತಿರುವ ಆಂತರಿಕ ಅಂದಾಜು ಪ್ರಕಾರ ಜಾಗತಿಕ ಮಟ್ಟದಲ್ಲಿ ಸರಿ ಸುಮಾರು 7,000ರಿಂದ 10,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು ಎನ್ನಲಾಗಿದೆ.&lt;/p&gt;&lt;p&gt;&lt;strong&gt;Oracle ಭಾರತೀಯ ಉದ್ಯೋಗಿಗಳ ಸಂಖ್ಯೆ ಎಷ್ಟಿದೆ?&lt;/strong&gt;&lt;/p&gt;&lt;p&gt;ಒರಾಕಲ್&zwnj;ನಲ್ಲಿ ಎಷ್ಟು ಭಾರತೀಯ ಟೆಕ್ಕಿಗಳು ಉದ್ಯೋಗದಲ್ಲಿದ್ದಾರೆ ಎಂಬುದು ನಿಖರ ಮಾಹಿತಿಯಿಲ್ಲ. ಆದರೆ ಎಲ್ಲ ವಿಭಾಗಗಳ ಉದ್ಯೋಗಿಗಳ ಮೇಲೂ ಉದ್ಯೋಗ ಕಡಿತದ ಪರಿಣಾಮ ಬೀರಲಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಈಗಾಗಲೇ 21 ಸಾವಿರ ಉದ್ಯೋಗ ಕಡಿತ!&lt;/strong&gt;&lt;/p&gt;&lt;p&gt;ಕಳೆದ ಕೆಲವು ತಿಂಗಳಿಂದ Oracle ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ಮೇ 31ಕ್ಕೆ ಅಂತ್ಯಗೊಂಡ 12 ತಿಂಗಳ ಅವಧಿಯಲ್ಲಿ ಬರೋಬ್ಬರಿ 21,000 ಉದ್ಯೋಗಿಗಳನ್ನು ಕಡಿತಗೊಳಿಸಿರುವುದಾಗಿ Oracle ಅಧಿಕೃತವಾಗಿ ತಿಳಿಸಿತ್ತು. ಇದೀಗ 7000 ರಿಂದ 10000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂಬ ಬಗ್ಗೆ ವರದಿಯಾಗಿದೆ.&lt;/p&gt;&lt;p&gt;&lt;strong&gt;ಸೆಪ್ಟಂಬರ್&zwnj;ನಲ್ಲಿ ಉದ್ಯೋಗ ಕಡಿತ ನೋಟಿಸ್?&lt;/strong&gt;&lt;/p&gt;&lt;p&gt;ಈಗ ತಿಳಿದುಬಂದಿರುವ ಮಾಹಿತಿ ಪ್ರಕಾರ ಒರಾಕಲ್ ಇದೇ ತಿಂಗಳು(ಸೆಪ್ಟೆಂಬರ್) ಆರಂಭ ಅಥವಾ ಮಧ್ಯಭಾಗದಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಕೆಲ ಉದ್ಯೋಗಿಗಳಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆಯೂ ಕೂಡ ಸೆಪ್ಟೆಂಬರ್ 1 ಚರ್ಚೆಯಾಗಿತ್ತು.. ಇತ್ತೀಚಿನ ಚರ್ಚೆಗಳಲ್ಲಿ ಸೆಪ್ಟೆಂಬರ್ 15 ಕೂಡ ಮತ್ತೊಂದು ಸಾಧ್ಯತೆಯ ದಿನಾಂಕವಾಗಿ ಕೇಳಿಬಂದಿದೆ.&lt;/p&gt;&lt;p&gt;&lt;strong&gt;ಸಿನಿಯರ್ ಟೆಕ್ಕಿಗಳಿಗೆ ಆತಂಕ&lt;/strong&gt;&lt;/p&gt;&lt;p&gt;ಹಿರಿಯ ಟೆಕ್ಕಿಗಳು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಆದರಿನ್ನೂ ಕೆಲಸ ಕಳೆದುಕೊಳ್ಳುವವರ ಅಂತಿಮ ಪಟ್ಟಿ ಬಗ್ಗೆ ಮ್ಯಾನೇಜರ್&zwnj;ಗಳಿಗೂ ಸಂಪೂರ್ಣ ಮಾಹಿತಿ ಇಲ್ಲ ಎನ್ನಲಾಗಿದೆ. ಹೀಗಾಗಿ ಯಾವ ತಂಡ, ವಿಭಾಗ ಅಥವಾ ಯಾವ ಉದ್ಯೋಗಿಗಳ ಮೇಲೆ ಪರಿಣಾಮ ಬೀಳಲಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ವಿಶೇಷವಾಗಿ ಹಿರಿಯ ಹುದ್ದೆಯಲ್ಲಿರುವವರು ಹಾಗೂ ಹೆಚ್ಚಿನ ವೇತನ ಪಡೆಯುತ್ತಿರುವ ಉದ್ಯೋಗಿಗಳಲ್ಲಿ ಆತಂಕ ಹೆಚ್ಚಾಗಿದೆ ಎಂದು ಬೆಳವಣಿಗೆ ಬಗ್ಗೆ ಮಾಹಿತಿ ಹೊಂದಿರುವವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಬಜೆಟ್ ಕಡಿತವೇ ಉದ್ಯೋಗಿಗಳ ತೆಗೆಯಲು ಕಾರಣ?&lt;/strong&gt;&lt;/p&gt;&lt;p&gt;ಈ ಬಾರಿ ನಿರ್ದಿಷ್ಟ ಬಿಸಿನೆಸ್ ಯುನಿಟ್ ಅಥವಾ ವಿಭಾಗದ ಪುನರ್&zwnj;ರಚನೆಗಿಂತಲೂ ಒಟ್ಟಾರೆ ವೆಚ್ಚ ಕಡಿತದ ಗುರಿ ಪ್ರಮುಖ ಕಾರಣವಾಗಿರಬಹುದು ಎನ್ನಲಾಗಿದೆ. ಮ್ಯಾನೇಜರ್&zwnj;ಗಳು ಮತ್ತು ತಂಡಗಳಿಗೆ ವೆಚ್ಚ ಕಡಿಮೆ ಮಾಡುವಂತೆ ಸೂಚಿಸಲಾಗಿದ್ದು ಅದರ ಭಾಗವಾಗಿ ಉದ್ಯೋಗಿಗಳ ಸಂಖ್ಯೆಯನ್ನೂ ಕಡಿಮೆ ಮಾಡುವ ಸಾಧ್ಯತೆ ಇದೆ.&lt;/p&gt;&lt;p&gt;&lt;strong&gt;Oracle ಉದ್ಯೋಗ ಕಡಿತದಿಂದ ಭಾರತಕ್ಕೆ ದೊಡ್ಡ ಹೊಡೆತ?&lt;/strong&gt;&lt;/p&gt;&lt;p&gt;Oracle ಜಾಗತಿಕವಾಗಿ ಉದ್ಯೋಗಿಗಳನ್ನ ತೆಗೆಯಲು ಮುಂದಾಗಿದೆ. ಒರಾಕಲ್&zwnj;ನಲ್ಲಿ ಭಾರತದ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಎಂಜಿನಿಯರಿಂಗ್, ಕ್ಲೌಡ್, ಸಪೋರ್ಟ್ ಸೇರಿದಂತೆ ಹಲವು ಪ್ರಮುಖ ತಂತ್ರಜ್ಞಾನ ತಂಡಗಳು ಭಾರತದಲ್ಲಿವೆ. ಹೀಗಾಗಿ ಕಂಪನಿಯು ಸಾವಿರಾರು ಉದ್ಯೋಗ ಕಡಿತ ಮಾಡಿದರೆ, ಅದರ ಪರಿಣಾಮ ಭಾರತದಲ್ಲಿರುವ ಉದ್ಯೋಗಿಗಳ ಮೇಲೂ ದೊಡ್ಡ ಪ್ರಮಾಣದಲ್ಲಿ ಬೀಳುವ ಸಾಧ್ಯತೆ ಇದೆ.&lt;/p&gt;&lt;p&gt;&lt;strong&gt;AI, ಕ್ಲೌಡ್&zwnj;ನಲ್ಲಿ ಹೂಡಿಕೆ... ಮತ್ತೊಂದೆಡೆ ವೆಚ್ಚ ಕಡಿತ!&lt;/strong&gt;&lt;/p&gt;&lt;p&gt;Oracle ಒಂದೆಡೆ ಕ್ಲೌಡ್ ಮೂಲಸೌಕರ್ಯ ಎಐ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಮಾಡುತ್ತಿದೆ. ಮತ್ತೊಂದೆಡೆ ವೆಚ್ಚವನ್ನು ನಿಯಂತ್ರಿಸಿ, ಬದಲಾಗುತ್ತಿರುವ ವ್ಯವಹಾರ ಆದ್ಯತೆಗಳಿಗೆ ಅನುಗುಣವಾಗಿ ಉದ್ಯೋಗಿಗಳ ಸಂಖ್ಯೆಯನ್ನು ಹೊಂದಾಣಿಕೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಸಂಭವನೀಯ ಉದ್ಯೋಗ ಕಡಿತದ ಬಗ್ಗೆ Oracle ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಈ ಕುರಿತು ಪ್ರತಿಕ್ರಿಯೆ ಕೇಳಿದರೂ ಕಂಪನಿ ತಕ್ಷಣ ಪ್ರತಿಕ್ರಿಯಿಸಿಲ್ಲ.&lt;/p&gt;&lt;p&gt;&lt;strong&gt;ಸೆಪ್ಟೆಂಬರ್ 11ರ ಫಲಿತಾಂಶಕ್ಕೂ ಮುನ್ನವೇ ಚರ್ಚೆ&lt;/strong&gt;&lt;/p&gt;&lt;p&gt;Oracleನ ಮುಂದಿನ ತ್ರೈಮಾಸಿಕ ಹಣಕಾಸು ಫಲಿತಾಂಶಗಳು ಸೆಪ್ಟೆಂಬರ್ 11ರಂದು ಪ್ರಕಟವಾಗಲಿವೆ. ಇದಕ್ಕೂ ಮುನ್ನ ಉದ್ಯೋಗ ಕಡಿತದ ಸಾಧ್ಯತೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ಒರಾಕಲ್ ಮತ್ತೊಮ್ಮೆ ಉದ್ಯೋಗ ಕಡಿತ ಮಾಡುತ್ತದೆಯೇ? ಇದೆಲ್ಲ ಊಹಾಪೋಹವೇ? ಒಂದು ವೇಳೆ ಉದ್ಯೋಗ ಕಡಿತಕ್ಕೆ ಮುಂದಾದೆ ಭಾರತದಲ್ಲಿನ ಎಷ್ಟು ಉದ್ಯೋಗಿಗಳ ಕೆಲಸ ಕಳೆದುಕೊಳ್ಳಲಿದ್ದಾರೆ? ಅದರ ಮುಂದಿನ ಪರಿಣಾಮಗಳೇನು ಎಂಬ ಪ್ರಶ್ನೆಗಳಿಗೆ Oracleನ ಅಧಿಕೃತ ಘೋಷಣೆಯ ಬಳಿಕವಷ್ಟೇ ಸ್ಪಷ್ಟ ಉತ್ತರ ಸಿಗಲಿದೆ.&lt;/p&gt;]]></content:encoded>
            <category>private-jobs</category>
            <dc:creator>Ravi Janekal</dc:creator>
            <atom:link href="https://kannada.asianetnews.com/private-jobs/oracle-may-undertake-another-round-of-layoffs-impact-thousands-of-indian-employees-rav/articleshow-x804sep"/>
        </item>
    </channel>
</rss>
