<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 09 Jul 2026 10:03:42 +0530</lastBuildDate>
        <atom:link href="https://kannada.asianetnews.com/rss/politics" rel="self" type="application/rss+xml"/>
        <item>
            <title><![CDATA['ನಾನು ಬಿಹಾರದ ಸಿಂಹ..' ಝಡ್ ಪ್ಲಸ್ ಭದ್ರತೆ ಹಿಂಪಡೆದ ಸರ್ಕಾರದ ವಿರುದ್ಧ ಲಾಲು ಗುಡುಗು]]></title>
            <link>https://kannada.asianetnews.com/india-news/i-am-a-lion-of-bihar-lalu-on-security-downgrade-patna/articleshow-0ypq3u4</link>
            <guid isPermaLink="true">https://kannada.asianetnews.com/india-news/i-am-a-lion-of-bihar-lalu-on-security-downgrade-patna/articleshow-0ypq3u4</guid>
            <pubDate>Wed, 08 Jul 2026 12:04:31 +0530</pubDate>
            <description><![CDATA[ತಮ್ಮ ಭದ್ರತೆ ಹಿಂಪಡೆದಿದ್ದಕ್ಕೆ 'ನಾನು ಬಿಹಾರದ ಸಿಂಹ' ಎಂದು ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ. ಇತ್ತ ಭೋಜ್&zwnj;ಪುರ ಎನ್&zwnj;ಕೌಂಟರ್ ವಿಚಾರವಾಗಿ ಜೆಡಿಯುನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಇದರ ನಡುವೆ ರಾಜ್ಯ ಸರ್ಕಾರ ಹೊಸ ಕಲಾ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx06d60g3gx6gqmc4rp8r3v8,imgname-----------------------2026-07-08t114850.177-1783491893264.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಿಹಾರ (ಜು.8):&lt;/strong&gt; 'ನಾನು ಬಿಹಾರದ ಸಿಂಹ. ನನ್ನನ್ನ ಯಾರೇ ಟಾರ್ಗೆಟ್ ಮಾಡಲಿ ನನಗೆ ಆತಂಕವಿಲ್ಲ' ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್&zwnj;ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಿರುಗೇಟು ನೀಡಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸರ್ಕಾರ, ಲಾಲು ಮತ್ತು ಅವರ ಪತ್ನಿ ರಾಬ್ಡಿ ದೇವಿ ಅವರಿಗೆ ನೀಡಿದ್ದ ಝಡ್ ಪ್ಲಸ್ ಭದ್ರತೆ ಹಿಂಪಡೆದು ಅದರ ಬದಲಿಗೆ ಬಿಹಾರ ವಿಶೇಷ ಸಶಸ್ತ್ರ ಪೊಲೀಸ್(BSAP) ಗಾರ್ಡ್&zwnj;ಗಳನ್ನ ನಿಯೋಜಿಸಿದೆ. ಈ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.&lt;/p&gt;&lt;h2&gt;ಭೋಜ್&zwnj;ಪುರ ಎನ್&zwnj;ಕೌಂಟರ್ ಬಗ್ಗೆ ಜೆಡಿಯು ಭಿನ್ನಾಭಿಪ್ರಾಯ&lt;/h2&gt;&lt;p&gt;ಕಳೆದ ತಿಂಗಳು ಭೋಜ್&zwnj;ಪುರ ಜಿಲ್ಲೆಯಲ್ಲಿ ಭರತ್ ಭೂಷಣ್ ತಿವಾರಿ ಎಂಬ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಜೆಡಿಯುನ ಹಿರಿಯ ನಾಯಕ ಮತ್ತು ಸಚಿವ ಅಶೋಕ್ ಚೌಧರಿ ಅವರು ಬಿಲೌತಿ ಗ್ರಾಮದಲ್ಲಿರುವ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ ಬೆನ್ನಲ್ಲೇ ಮತ್ತೊಬ್ಬ ಹಿರಿಯ ಜೆಡಿಯು ನಾಯಕ ಮತ್ತು ಸಚಿವ ಶ್ರವಣ್ ಕುಮಾರ್, ಚೌಧರಿಯವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಚೌಧರಿ ಅವರು ಸಂತ್ರಸ್ತೆಯ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿಯಾದರು ಮತ್ತು ಅವರು ಹೇಳಿದ್ದೆಲ್ಲವೂ ಈ ವಿಷಯದ ಬಗ್ಗೆ ಪಕ್ಷದ ಅಧಿಕೃತ ಹೇಳಿಕೆಯಲ್ಲ. ಈ ವಿಷಯವು ದೊಡ್ಡ ವಿವಾದಕ್ಕೆ ಕಾರಣವಾಗಿದೆ.&lt;/p&gt;&lt;h3&gt;ಕಲೆ, ಸಂಸ್ಕೃತಿ ಕೇಂದ್ರಿ ವಿವಿ ಸ್ಥಾಪನೆಗೆ ಸಿದ್ಧತೆ&lt;/h3&gt;&lt;p&gt;ಬಿಹಾರದಲ್ಲಿ ಉನ್ನತ ಶಿಕ್ಷಣದ ಸ್ವರೂಪ ವೇಗವಾಗಿ ಬದಲಾಗುತ್ತಿದೆ. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಜೊತೆಗೆ, ರಾಜ್ಯ ಸರ್ಕಾರವು ಈಗ ವಿವಿಧ ಕ್ಷೇತ್ರಗಳಿಗೆ ಮೀಸಲಾದ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸುವತ್ತ ಸಾಗುತ್ತಿದೆ. ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಕ್ರೀಡಾ ಶಿಕ್ಷಣದ ನಂತರ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಪ್ರತಿಭೆಗಳನ್ನು ಉತ್ತೇಜಿಸಲು ಸರ್ಕಾರವು ಈಗ ಪ್ರತ್ಯೇಕ ಬಿಹಾರ ಕಲಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ.&lt;/p&gt;&lt;p&gt;ಬಿಹಾರ ಕಲೆ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಅದರ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿವೆ. ವಿಶ್ವವಿದ್ಯಾಲಯವು ಕಲೆ ಮತ್ತು ಸಂಸ್ಕೃತಿಯ ಮೇಲೆ ಕೇಂದ್ರೀಕರಿಸಲಿದೆ ಎಂದು ಸರ್ಕಾರ ಹೇಳಿಕೊಂಡಿದೆ, ಅಲ್ಲಿ ಸಂಗೀತ, ನೃತ್ಯ ಮತ್ತು ಜಾನಪದ ಕಲೆಯಂತಹ ವಿಭಾಗಗಳಲ್ಲಿ ವಿಶೇಷ ಶಿಕ್ಷಣವನ್ನು ನೀಡಲಾಗುವುದು.&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/i-am-a-lion-of-bihar-lalu-on-security-downgrade-patna/articleshow-0ypq3u4"/>
        </item>
        <item>
            <title><![CDATA[ಜುಲೈ 20 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ; ಯಾವೆಲ್ಲ ವಿಚಾರಗಳು ಚರ್ಚೆ ಆಗಲಿವೆ?]]></title>
            <link>https://kannada.asianetnews.com/politics/parliament-monsoon-session-to-start-from-july-20-to-continue-till-august-13th/articleshow-3yi24c3</link>
            <guid isPermaLink="true">https://kannada.asianetnews.com/politics/parliament-monsoon-session-to-start-from-july-20-to-continue-till-august-13th/articleshow-3yi24c3</guid>
            <pubDate>Sat, 04 Jul 2026 20:20:39 +0530</pubDate>
            <description><![CDATA[ಜುಲೈ 20 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ. ಟಿಎಂಸಿ ಮತ್ತು ಶಿವಸೇನೆಯಲ್ಲಿನ ಒಡಕಿನಿಂದ ಬದಲಾದ ರಾಜಕೀಯ ಚಿತ್ರಣ, ನೀಟ್ ಅಕ್ರಮ ಹಾಗೂ ಇಂಧನ ಬೆಲೆ ಇಳಿಕೆಯಂತಹ ವಿಷಯಗಳು ಈ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ವಿಪಕ್ಷಗಳ ಪ್ರಮುಖ ಅಸ್ತ್ರಗಳಾಗುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwpsdg1heeqnd602wa67kp3k,imgname-parliament-monsoon-session-1783176282161.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಜುಲೈ 20 ರಿಂದ ಆರಂಭವಾಗಲಿರುವ ಈ ಅಧಿವೇಶನವು ಆಗಸ್ಟ್ 13 ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸರ್ಕಾರದ ಶಿಫಾರಸ್ಸಿಗೆ ಅನುಮೋದನೆ ನೀಡಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.&lt;/p&gt;&lt;h2&gt;&lt;strong&gt;ಅಧಿವೇಶನದ ಮುಖ್ಯಾಂಶಗಳು&lt;/strong&gt;&lt;/h2&gt;&lt;h3&gt;&lt;strong&gt;1. ಬದಲಾದ ರಾಜಕೀಯ ಚಿತ್ರಣ&lt;/strong&gt;&lt;/h3&gt;&lt;p&gt;ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆಯಲ್ಲಿ (UBT) ಉಂಟಾಗಿರುವ ಒಡಕಿನ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಟಿಎಂಸಿಯ 28 ಲೋಕಸಭಾ ಸದಸ್ಯರಲ್ಲಿ 20 ಮಂದಿ ಬಂಡಾಯವೆದ್ದು ಬಿಜೆಪಿಯನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಇನ್ನು, ಶಿವಸೇನೆಯ ಉದ್ಧವ್ ಠಾಕ್ರೆ ಬಣದ 9 ಸಂಸದರಲ್ಲಿ 6 ಮಂದಿ ಏಕನಾಥ್ ಶಿಂದೆ ಬಣವನ್ನು ಸೇರಿಕೊಂಡಿದ್ದಾರೆ.&lt;/p&gt;&lt;p&gt;ಇದರಿಂದಾಗಿ ಲೋಕಸಭೆಯಲ್ಲಿ ಎನ್&zwnj;ಡಿಎ (NDA) ಬಲ ಮತ್ತಷ್ಟು ಹೆಚ್ಚಾಗಿದೆ. ಬಂಡಾಯಗಾರರಿಗೆ ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡುವ ಕುರಿತು ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;2. ಮಂಡನೆಯಾಗಲಿವೆಯೇ ಪ್ರಮುಖ ಮಸೂದೆಗಳು?&lt;/strong&gt;&lt;/h3&gt;&lt;p&gt;ಕಳೆದ ಬಜೆಟ್ ಅಧಿವೇಶನದಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳದೆ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ಈ ಬಾರಿ ಸರ್ಕಾರವು ಆ ಮಸೂದೆಯನ್ನು ಮರುಮಂಡಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯಸಭೆಯಲ್ಲಿಯೂ ಇತ್ತೀಚಿನ ಚುನಾವಣೆಗಳ ನಂತರ ಎನ್&zwnj;ಡಿಎ ಸಂಖ್ಯೆ ಹೆಚ್ಚಾಗಿರುವುದು ಸರ್ಕಾರಕ್ಕೆ ವರದಾನವಾಗಲಿದೆ.&lt;/p&gt;&lt;h3&gt;&lt;strong&gt;3. ವಿರೋಧ ಪಕ್ಷಗಳ ಅಸ್ತ್ರಗಳೇನು?&lt;/strong&gt;&lt;/h3&gt;&lt;ul&gt; &lt;li&gt;ವಿರೋಧ ಪಕ್ಷಗಳು ಸರ್ಕಾರವನ್ನು ಕಟ್ಟಿಹಾಕಲು ಸಜ್ಜಾಗಿವೆ.&lt;/li&gt; &lt;li&gt;ನೀಟ್ ಪರೀಕ್ಷೆಯ ಮರುಪಂದ್ಯ ಮತ್ತು ಅಕ್ರಮಗಳ ಕುರಿತು ವಿರೋಧ ಪಕ್ಷಗಳು ಗದ್ದಲ ಎಬ್ಬಿಸುವ ಸಾಧ್ಯತೆಯಿದೆ.&lt;/li&gt; &lt;li&gt;ಟಿಎಂಸಿ ಮತ್ತು ಶಿವಸೇನೆಯಲ್ಲಿ ಉಂಟಾದ ಸೀಳಿಗೆ ಸರ್ಕಾರದ ಕೈವಾಡವಿದೆ ಎಂದು ವಿರೋಧ ಪಕ್ಷಗಳು ಆರೋಪಿಸಬಹುದು.&lt;/li&gt; &lt;li&gt;ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ಸುಗಮವಾಗಿದೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಲಿವೆ.&lt;/li&gt;&lt;/ul&gt;&lt;h3&gt;&lt;strong&gt;ಕಿರಣ್ ರಿಜಿಜು ಹೇಳಿದ್ದೇನು?&lt;/strong&gt;&lt;/h3&gt;&lt;p&gt;ದೇಶದ ಹಿತದೃಷ್ಟಿಯಿಂದ ಪ್ರಮುಖ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ಮತ್ತು ಸಂವಾದಗಳು ನಡೆಯಲಿವೆ ಎಂದು ನಾವು ಆಶಿಸುತ್ತೇವೆ ಎಂದು ಕಿರಣ್ ರಿಜಿಜು ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.&amp;nbsp;&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/parliament-monsoon-session-to-start-from-july-20-to-continue-till-august-13th/articleshow-3yi24c3"/>
        </item>
        <item>
            <title><![CDATA[LPG: ಹಾರ್ಮುಜ್ ಸಂಕಟಕ್ಕೆ ಫುಲ್‌ಸ್ಟಾಫ್‌ ಇಡಲು ಮುಂದಾದ ಭಾರತದ!  ಮೋದಿ ಸರ್ಕಾರದಿಂದ ಮಹಾಪ್ಲಾನ್‌! ಅಷ್ಟಕ್ಕೂ ಆಗಿದ್ದೇನು ಗೊತ್ತಾ?]]></title>
            <link>https://kannada.asianetnews.com/politics/india-is-preparing-to-put-a-full-staff-on-the-strait-of-hormuz-a-grand-plan-from-the-modi-government/articleshow-8xzrtqq</link>
            <guid isPermaLink="true">https://kannada.asianetnews.com/politics/india-is-preparing-to-put-a-full-staff-on-the-strait-of-hormuz-a-grand-plan-from-the-modi-government/articleshow-8xzrtqq</guid>
            <pubDate>Tue, 30 Jun 2026 17:38:19 +0530</pubDate>
            <description><![CDATA[&lt;p&gt;ಇರಾನ್&zwnj;-ಅಮೆರಿಕ ಯುದ್ಧದಂತಹ ಬಿಕ್ಕಟ್ಟುಗಳಿಂದಾಗುವ ಇಂಧನ ಕೊರತೆ ತಡೆಯಲು ಭಾರತ ಮಹಾ ಯೋಜನೆಯೊಂದನ್ನು ರೂಪಿಸಿದೆ. &amp;nbsp;ಇದಕ್ಕಾಗಿ ವಿಶೇಷ ಸಮಿತಿ ರಚಿಸಲಾಗಿದ್ದು, ಸಂಗ್ರಹಣೆಯ ಸವಾಲುಗಳನ್ನು ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw5tkem2t07tqrnh240qv1eb,imgname-iran--1--1782607100546.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ (ಜೂ.30): ಇರಾನ್&zwnj;-ಅಮೆರಿಕ ಯುದ್ಧದ ಮಾತುಕತೆಗೆಳು ಷರತ್ತು ಬದ್ಧ ಕದನವಿರಾನ ಇದ್ದರೂ, ಯುದ್ದದ ಮಾತುಗಳು ಇನ್ನು ನಿಂತಿಲ್ಲ. ಗಲ್ಫ ರಾಷ್ಟ್ರಗಳಲ್ಲಿ ಯುದ್ದ ಕಾರ್ಮುಡ ಇನ್ನು ಕವಿದು ಎದೆಯುಬ್ಬಿಸಿ ನಿಂತಂತಿದೆ. ಜನ ತೈಲ, ಅನಿಲ ಸೇರಿ ಮೂಲಭೂತ ಸೌಕರ್ಯಗಳಿಲ್ಲದೇ ನರಳಾಡುವಂತಾಗಿದೆ. ಇದಲ್ಲದೇ ಇರಾನ್&zwnj;ನ ಹಾರ್ಮುಜ್&zwnj; ಕ್ಯಾತೆ ಯುದ್ಧದ ಪ್ರಾರಂಭದಿಂದಲೇ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಎಂಥದ್ದೇ ಯುದ್ದವಾದರೂ ಭಾರತ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ತಡೆಗಟ್ಟಲು ಭಾರತ ಮಹಾ &quot;ಮಾಸ್ಟರ್ ಪ್ಲಾನ್&quot; ರೆಡಿ ಮಾಡಿದೆ. ಹಾಗಾದರೆ ಆ ಮಹಾ ಪ್ಲ್ಯಾನ್&zwnj; ಏನು ಅಂಥ ನೋಡೋಣ ಬನ್ನಿ.&lt;/p&gt;&lt;h2&gt;&lt;strong&gt;ಪೆಟ್ರೋಲಿಯಂ ಸಚಿವಾಲಯದಿಂದ ವಿಶೇಷ ಸಮಿತಿ ರಚನೆ!&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರವು ಕಚ್ಚಾ ತೈಲ, ಅಡುಗೆ ಅನಿಲ (LPG), ಮತ್ತು LNG ಗಳ ಒಂದು ತಿಂಗಳ ತುರ್ತು ದಾಸ್ತಾನು ರಚಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ, ಈ ಬೃಹತ್ ನಿಕ್ಷೇಪಗಳನ್ನು ಭೂಗತ, ಅಥವಾ ನೆಲದ ಮೇಲೆ ನಿರ್ಮಿಸಬೇಕೆ ಎಂದು ನಿರ್ಧರಿಸಲು ಪೆಟ್ರೋಲಿಯಂ ಸಚಿವಾಲಯವು ವಿಶೇಷ ಸಮಿತಿಯನ್ನು ರಚಿಸಿದೆ. ಈ ನಿರ್ಧಾರದ ಮೇಲೆಯೇ ಈ ಸಂಪೂರ್ಣ ಯೋಜನೆ ನಿಂತಿದೆ.&lt;/p&gt;&lt;h3&gt;&lt;strong&gt;ಭಾರತ ಎದುರಿಸಿದ ತೊಂದರೆ ಅಷ್ಟಿಷ್ಟಲ್ಲ!&lt;/strong&gt;&lt;/h3&gt;&lt;p&gt;ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ ನಂತರ ಭಾರತವು ಗಮನಾರ್ಹ ತೊಂದರೆ ಎದುರಿಸಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ, ಕಿವಿಯಾರೆ ಕೇಳಿಸಿಕೊಂಡಿದ್ದೇವೆ. ಜಗತ್ತಿನ ಶೇ ೨೦.ರಷ್ಟು ತೈಲ ಸಾಗಣೆ ನಡೆಯುವ ಹಾರ್ಮುಜ್ ಜಲಸಂಧಿ ಬಹುತೇಕ ಸಂಪೂರ್ಣವಾಗಿ ನಿರ್ಬಂಧಿಸಲಾಯಿತು. ಇದು ತೈಲ ಆಮದಿನ ಮೇಲೆ ಅವಲಂಬಿತವಾಗಿರುವ ಭಾರತದ ಅತಿದೊಡ್ಡ ದುರ್ಬಲತೆ ಮೊಕಾಂ ಬಯಲಿಗೆಳೆದಂತೆ ಮಾಡಿತು. ಆ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತಕ್ಕೆ ಡೀಸೆಲ್, ಎಲ್&zwnj;ಪಿಜಿ ಮತ್ತು ಅನಿಲ ಪೂರೈಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಬೇಕಾಯಿತು.&lt;/p&gt;&lt;h3&gt;&lt;strong&gt;ಭಾರತದ ಮುಂದಿರುವ ಗುರಿಗಳೇನು?&lt;/strong&gt;&lt;/h3&gt;&lt;p&gt;ಭಾರತವು ಸುಮಾರು 39 ಮಿಲಿಯನ್ ಬ್ಯಾರೆಲ್&zwnj;ಗಳಷ್ಟು ಕಚ್ಚಾ ತೈಲ ನಿಕ್ಷೇಪ ಹೊಂದಿದೆ. ಇದು ಕೇವಲ ಎಂಟು ದಿನಗಳವರೆಗೆ ಸಾಕಾಗುತ್ತದೆ. ಅಲ್ಲದೇ ಭಾರತ ಸಂಸ್ಕರಣಾಗಾರಗಳು ಮತ್ತು ಪೆಟ್ರೋಲ್ ಪಂಪ್&zwnj;ಗಳ ದಾಸ್ತಾನುಗಳನ್ನು ಸಂಯೋಜಿಸಿದರೆ, ದೇಶವು 70 ದಿನಗಳಿಗಿಂತ ಹೆಚ್ಚು ತೈಲವನ್ನು ಹೊಂದಿದೆ. ಹೊಸ ಯೋಜನೆಯಡಿಯಲ್ಲಿ, ಪೂರ್ವ ಮತ್ತು ಪಶ್ಚಿಮ ಕರಾವಳಿಗಳಲ್ಲಿ ಬೃಹತ್ ಭೂಗತ ಗುಹೆಗಳನ್ನು ನಿರ್ಮಿಸಿ ಶೇಖರಿಸಿದ್ದೇ ಆದರೆ, ಮುಂದಿನ ಐದು ವರ್ಷಗಳಲ್ಲಿ ಈ ಮೀಸಲು ದ್ವಿಗುಣಗೊಳ್ಳುತ್ತದೆ. ಕನಿಷ್ಠ 120 ಮಿಲಿಯನ್ ಬ್ಯಾರೆಲ್&zwnj;ಗಳನ್ನು ತಲುಪುವುದು ಗುರಿಯಾಗಿದೆ.&lt;/p&gt;&lt;h3&gt;&lt;strong&gt;ದೇಶದ ಮುಂದಿರುವ ಸವಾಲುಗಳೇನು?&lt;/strong&gt;&lt;/h3&gt;&lt;p&gt;ಈ ಪೆಟ್ರೋಲ್&zwnj;, ಡಿಸೇಲ್&zwnj; ಸಂಗ್ರಹಣೆ ವಿಚಾರದಲ್ಲಿ ಹಲವಾರು ಸವಾಲುಗಳು ಎದುರಾಗುವುದನ್ನು ನಾವು ನೋಡಬಹುದು, ಸುರಕ್ಷತಾ ಕಾರಣಗಳಿಂದಾಗಿ, ದೇಶದಲ್ಲಿ ಪ್ರಸ್ತುತ ಅಡುಗೆ ಅನಿಲ (LPG) ಮತ್ತು LNGಯ ತುರ್ತು ದಾಸ್ತಾನು ದೊಡ್ಡ ಪ್ರಮಾಣದಲ್ಲಿ ಇಲ್ಲ. LPG ಯನ್ನು ಅತಿ ಹೆಚ್ಚಿನ ಒತ್ತಡದಲ್ಲಿ ದ್ರವೀಕರಿಸಲಾಗುತ್ತದೆ ಮತ್ತು LNG ಯನ್ನು ಅತ್ಯಂತ ತಂಪಾದ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ. ಈ ಕಾರಣದಿಂದಲೇ, ಯಾವುದೇ ಸೋರಿಕೆ ಅಥವಾ ಸ್ಫೋಟಗಳನ್ನು ತಡೆಗಟ್ಟಲು ಕಠಿಣ ಸುರಕ್ಷತಾ ಕ್ರಮಗಳು ಬೇಕಾಗುತ್ತವೆ.&lt;/p&gt;&lt;h3&gt;&lt;strong&gt;ಭಾರತದ ಬಳಿ ಇರುವ ಎಲ್&zwnj;ಪಿಜಿ ಎಲ್&zwnj;ಪಿಜಿ ಸಂಗ್ರಹ ಸಾಮರ್ಥ್ಯ ಎಷ್ಟು?&lt;/strong&gt;&lt;/h3&gt;&lt;p&gt;ಬೆಂಗಳೂರಿನ ತಕ್ಷಶಿಲಾ ಇನ್ಸ್&zwnj;ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಕಾರ, ದೇಶದ ಎಲ್&zwnj;ಪಿಜಿ ಸಂಗ್ರಹ ಸಾಮರ್ಥ್ಯ ಕೇವಲ 140,000 ಟನ್&zwnj; ಮಾತ್ರ. ಈ ಸಂಗ್ರಹವು ಪೂರ್ವ ಮತ್ತು ಪಶ್ಚಿಮ ಕರಾವಳಿಯ ಬಂಡೆಗಳ ಕೆಳಗೆ ಗುಹೆಗಳಲ್ಲಿದೆ ಮತ್ತು ಎರಡು ದಿನಗಳ ಅಗತ್ಯಗಳನ್ನು ಮಾತ್ರ ಪೂರೈಸಬಲ್ಲವು ಎಂದು ಅಂದಾಜಿಸಲಾಗಿದೆ. ಶೇಖರಣಾ ತೊಂದರೆಗಳು ಮತ್ತು ಹೆಚ್ಚಿನ ವೆಚ್ಚಗಳಿಂದಾಗಿ, ಭಾರತವು ಇಲ್ಲಿಯವರೆಗೆ ನಿಯಮಿತ ಆಮದನ್ನು ಅವಲಂಬಿಸಿದೆ. ತುರ್ತು ಪರಿಸ್ಥಿತಿಗಳಿಗಾಗಿ ತಮ್ಮ ಎಲ್&zwnj;ಪಿಜಿ ದಾಸ್ತಾನುಗಳನ್ನು ಹೆಚ್ಚಿಸಲು ಸಚಿವಾಲಯವು ಈಗ ತೈಲ ಸಂಸ್ಕರಣಾಗಾರಗಳನ್ನು ಕೇಳಿದೆ.&lt;/p&gt;&lt;h3&gt;&lt;strong&gt;ಇನ್ನು ಕೆಟ್ಟದ್ದಾಗಿದೆ ಎಲ್&zwnj;ಎನ್&zwnj;ಜಿ ಪರಿಸ್ಥಿತಿ!&lt;/strong&gt;&lt;/h3&gt;&lt;p&gt;ಎಲ್&zwnj;ಎನ್&zwnj;ಜಿಗೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ, ಏಕೆಂದರೆ ಯಾವುದೇ ಮೀಸಲು ಸ್ಟಾಕ್ ಇಲ್ಲ. ಆದ್ದರಿಂದ, ಕಳೆದ ವರ್ಷ ಸರ್ಕಾರವು ಎಲ್&zwnj;ಎನ್&zwnj;ಜಿ ಟರ್ಮಿನಲ್&zwnj;ಗಳು ತಮ್ಮ ಸಾಮಾನ್ಯ ಅಗತ್ಯಗಳಿಗಿಂತ ಶೇ.10 ರಷ್ಟು ಹೆಚ್ಚು ಎಲ್&zwnj;ಎನ್&zwnj;ಜಿ ಸಂಗ್ರಹಿಸುವಂತೆ ನಿರ್ದೇಶಿಸುವ ಕರಡು ನೀತಿಯನ್ನು ಪರಿಚಯಿಸಿತು. ಅಗತ್ಯವಿದ್ದರೆ, ಸರ್ಕಾರವು ಸಂಗ್ರಹಣೆಯ ನಿಯಂತ್ರಣವನ್ನು ತೆಗೆದುಕೊಳ್ಳುತ್ತದೆ. ಪೆಟ್ರೋನೆಟ್ ಎಲ್&zwnj;ಎನ್&zwnj;ಜಿಯಂತಹ ಆಮದು ಕಂಪನಿಗಳು ಈಗಾಗಲೇ ಹೊಸ ಸಂಗ್ರಹ ಟ್ಯಾಂಕ್&zwnj;ಗಳನ್ನು ನಿರ್ಮಿಸುತ್ತಿವೆ.&lt;/p&gt;]]></content:encoded>
            <category>politics</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/politics/india-is-preparing-to-put-a-full-staff-on-the-strait-of-hormuz-a-grand-plan-from-the-modi-government/articleshow-8xzrtqq"/>
        </item>
        <item>
            <title><![CDATA[ಸರ್ಕಾರದಲ್ಲಿದ್ದ 40% ಕಮೀಷನ್‌ಗೆ ತಿಲಾಂಜಲಿ ಹಾಡಿದ ಸಿಎಂ; ಕಡಿಮೆ ದರಕ್ಕೆ ಟೆಂಡರ್ ಹಿಡಿಯುತ್ತಿರುವ ಕಾಂಟ್ರಾಕ್ಟರ್ಸ್!]]></title>
            <link>https://kannada.asianetnews.com/india-news/chief-minister-vijay-tamil-nadu-open-tender-policy-saving-crores-40-percent-commission-corruption-free/articleshow-9n10vyu</link>
            <guid isPermaLink="true">https://kannada.asianetnews.com/india-news/chief-minister-vijay-tamil-nadu-open-tender-policy-saving-crores-40-percent-commission-corruption-free/articleshow-9n10vyu</guid>
            <pubDate>Thu, 02 Jul 2026 18:46:09 +0530</pubDate>
            <description><![CDATA[&lt;p&gt;ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲಿಯೇ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗಿದ್ದು, ಮುಕ್ತ ಸ್ಪರ್ಧಾತ್ಮಕ ಟೆಂಡರ್ ಪದ್ಧತಿ ಜಾರಿಗೆ ತರಲಾಗಿದೆ. 40% ಕಮೀಷನ್&zwnj;ಗೆ ತಿಲಾಂಜಲಿ ಹಾಡಿದ್ದು, ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ಉಳಿತಾಯವಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwhfac2dakkcd7c4f6b8n4nb,imgname-tamil-nadu-assembly-1782997921869.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತ&lt;/strong&gt;ಮಿಳುನಾಡು ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ನೇತೃತ್ವದ ಟಿവിಕೆ ಸರ್ಕಾರ, ಆಡಳಿತದಲ್ಲಿ ಪಾರದರ್ಶಕತೆ ತರುವ ಮೂಲಕ ದೊಡ್ಡ ಬದಲಾವಣೆಗೆ ಮುನ್ನುಡಿ ಬರೆದಿದೆ. ತಮಿಳುನಾಡು ಸರ್ಕಾರದ ಮೇಲಿರುವ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲದ ಬಗ್ಗೆ ಜನರಿಗೆ ಬಹಿರಂಗವಾಗಿ ತಿಳಿಸುತ್ತೇವೆ, ಈ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇವೆ ಎಂದು ವಿಜಯ್ ತಮ್ಮ ಆಡಳಿತ ಆರಂಭಿಸಿದ್ದರು. ಇದೀಗ ಅವರ ಈ ಪಾರದರ್ಶಕ ನಡೆಯಿಂದ ರಾಜ್ಯದ ಖಜಾನೆಗೆ ಕೋಟಿ ಕೋಟಿ ಲಾಭವಾಗುತ್ತಿದೆ.&lt;/p&gt;&lt;p&gt;ವಿಜಯ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದು ತಿಂಗಳಲ್ಲೇ, ಲೋಕೋಪಯೋಗಿ ಇಲಾಖೆಯಂತಹ ದೊಡ್ಡ ಮೊತ್ತದ ಕಾಮಗಾರಿಗಳಲ್ಲಿ ಈ ಬದಲಾವಣೆ ಕಾಣಿಸುತ್ತಿದೆ. ಈ ಹಿಂದೆ ಇದ್ದ ಫಿಕ್ಸ್ಡ್ ಅಥವಾ ಸೀಮಿತ ಟೆಂಡರ್ ಪದ್ಧತಿಯನ್ನು ವಿಜಯ್ ಸರ್ಕಾರ ರದ್ದು ಮಾಡಿದೆ. ಬದಲಾಗಿ, ಎಲ್ಲಾ ಸಿವಿಕ್ ಗುತ್ತಿಗೆಗಳನ್ನು 'ಓಪನ್ ಕಾಂಪಿಟೇಟಿವ್ ಬಿಡ್ಡಿಂಗ್' (ಮುಕ್ತ ಸ್ಪರ್ಧಾತ್ಮಕ ಟೆಂಡರ್) ಮೂಲಕವೇ ನಡೆಸಬೇಕೆಂದು ಆದೇಶ ಹೊರಡಿಸಿದೆ. ಗುತ್ತಿಗೆಗಳ ಹಿಂದಿನ ಭ್ರಷ್ಟಾಚಾರ ಮತ್ತು ಕಮಿಷನ್ ಹಾವಳಿಗೆ ಕಡಿವಾಣ ಹಾಕುವುದೇ ಇದರ ಮುಖ್ಯ ಉದ್ದೇಶ.&lt;/p&gt;&lt;h2&gt;&lt;strong&gt;ಅರ್ಧ ಬೆಲೆಗೆ ಗುತ್ತಿಗೆ; ಖಜಾನೆಗೆ ಕೋಟಿ ಕೋಟಿ ಲಾಭ&lt;/strong&gt;&lt;/h2&gt;&lt;p&gt;ಜೂನ್ 28ರಂದು 'ದಿ ಟೈಮ್ಸ್ ಆಫ್ ಇಂಡಿಯಾ' ಪ್ರಕಟಿಸಿದ ವರದಿಯ ಪ್ರಕಾರ, ಚೆನ್ನೈ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳಿಗಾಗಿ ಗುತ್ತಿಗೆದಾರರು ಸಲ್ಲಿಸಿರುವ ಬಿಡ್ ಮೊತ್ತ, ಸರ್ಕಾರದ ಅಂದಾಜು ವೆಚ್ಚಕ್ಕಿಂತ ಶೇ. 25ರಿಂದ 30ರಷ್ಟು ಕಡಿಮೆಯಿದೆ. ಹಿಂದೆಲ್ಲಾ ಸರ್ಕಾರದ ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಮೊತ್ತಕ್ಕೆ ಗುತ್ತಿಗೆ ನೀಡಲಾಗುತ್ತಿತ್ತು ಅನ್ನೋದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.&lt;/p&gt;&lt;p&gt;ಉದಾಹರಣೆಗೆ, ಅಂಬತ್ತೂರು ವಲಯದಲ್ಲಿ 25 ಲಕ್ಷ ರೂಪಾಯಿ ಅಂದಾಜು ವೆಚ್ಚದ ರಸ್ತೆ ಕಾಮಗಾರಿಗೆ 9 ಗುತ್ತಿಗೆದಾರರು ಬಿಡ್ ಸಲ್ಲಿಸಿದ್ದರು. ಅಂತಿಮವಾಗಿ ಗುತ್ತಿಗೆ ಪಡೆದವರು, ಸರ್ಕಾರದ ಅಂದಾಜಿಗಿಂತ ಶೇ. 25.9ರಷ್ಟು ಕಡಿಮೆ ಮೊತ್ತವನ್ನು ನಮೂದಿಸಿದ್ದರು. ಅಂದರೆ, 25 ಲಕ್ಷದ ಪ್ರಾಜೆಕ್ಟ್&zwnj; ಕೇವಲ 17 ಲಕ್ಷ ರೂಪಾಯಿಗೆ ಮುಗಿಯಲಿದೆ. ಈ ಒಂದೇ ಒಂದು ಟೆಂಡರ್&zwnj;ನಿಂದ ಕಾರ್ಪೊರೇಷನ್&zwnj;ಗೆ ಬರೋಬ್ಬರಿ 9 ಲಕ್ಷ ರೂಪಾಯಿ ಉಳಿತಾಯವಾಗಿದೆ. ಅದೇ ರೀತಿ, ತೊಂಡಿಯಾರ್&zwnj;ಪೇಟ್&zwnj;ನಲ್ಲಿ 30 ಲಕ್ಷದ ಯೋಜನೆಗೆ ಶೇ. 25ರಷ್ಟು ಕಡಿಮೆ ಮೊತ್ತಕ್ಕೆ ಮತ್ತು ಶೋಲಿಂಗನಲ್ಲೂರಿನಲ್ಲಿ ಅಂದಾಜು ವೆಚ್ಚಕ್ಕಿಂತ ಶೇ. 36ರಷ್ಟು ಕಡಿಮೆ ದರಕ್ಕೆ ಗುತ್ತಿಗೆದಾರರು ಬಿಡ್ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಹಿಂದಿನ ಸರ್ಕಾರಗಳ ಭ್ರಷ್ಟಾಚಾರ ಬಯಲು&lt;/strong&gt;&lt;/h2&gt;&lt;p&gt;ಈ ಬದಲಾವಣೆಯು ಹಿಂದಿನ ಸರ್ಕಾರಗಳ ಅವಧಿಯಲ್ಲಿ ಪ್ರಾಜೆಕ್ಟ್&zwnj;ಗಳ ಬಜೆಟ್&zwnj; ಅನ್ನು ಹೇಗೆ ಹೆಚ್ಚಿಸಿ ತೋರಿಸಲಾಗುತ್ತಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಚೆನ್ನೈ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮರಾವ್ ಹೇಳಿದ್ದಾರೆ. 'ಹಿಂದೆ 25 ಲಕ್ಷದ ಟೆಂಡರ್ ಅನ್ನು ಗುತ್ತಿಗೆದಾರರು 27.5 ಲಕ್ಷಕ್ಕೆ ತೆಗೆದುಕೊಳ್ಳುತ್ತಿದ್ದರು. ಆದರೆ ಇಂದು ಅದೇ ಕೆಲಸವನ್ನು 16 ಲಕ್ಷ ರೂಪಾಯಿಗೆ ಮಾಡಲು ಸಿದ್ಧರಾಗಿದ್ದಾರೆ. ಹಾಗಾದರೆ, ಶೇ. 35-40ರಷ್ಟು ಹೆಚ್ಚುವರಿ ಹಣವನ್ನು ಅಂದಾಜು ಮಾಡಲು ಅಧಿಕಾರಿಗಳು ಹೇಗೆ ಅನುಮತಿ ನೀಡುತ್ತಿದ್ದರು ಎಂಬುದರ ಬಗ್ಗೆ ತನಿಖೆಯಾಗಬೇಕು' ಎಂದು ಅವರು ಆಗ್ರಹಿಸಿದ್ದಾರೆ.&lt;/p&gt;&lt;p&gt;ತಮಿಳುನಾಡು ಲೋಕೋಪಯೋಗಿ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಆಧವ್ ಅರ್ಜುನ್ ಕೂಡ ಹಿಂದಿನ ಸರ್ಕಾರಗಳ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. 'ಹಿಂದಿನ ಆಡಳಿತದಲ್ಲಿ ಗುತ್ತಿಗೆ ನೀಡುವಾಗ ವ್ಯವಸ್ಥಿತವಾಗಿ ನಿಯಮ ಉಲ್ಲಂಘನೆ ಮತ್ತು ಲಂಚಗುಳಿತನ ನಡೆಯುತ್ತಿತ್ತು. ಹಲವು ಗುತ್ತಿಗೆದಾರರಿಂದ ಹಣ ಪಡೆದು, ಕೊನೆಗೆ ಕೆಲಸ ನೀಡದೆ ವಂಚಿಸಲಾಗಿದೆ' ಎಂದು ಅವರು ಆರೋಪಿಸಿದರು. 'ವಿಜಯ್ ಸರ್ಕಾರದಲ್ಲಿ ಗುತ್ತಿಗೆದಾರರಿಂದ ಯಾವುದೇ ಕಮಿಷನ್ ಅಥವಾ ಲಂಚ ಪಡೆಯುವುದಿಲ್ಲ. ಹೆದ್ದಾರಿ ಗುತ್ತಿಗೆಗಳು ಸಂಪೂರ್ಣ ಪಾರದರ್ಶಕವಾಗಿರುತ್ತವೆ' ಎಂದು ಅವರು ಜೂನ್ 6ರಂದೇ ಸ್ಪಷ್ಟಪಡಿಸಿದ್ದರು.&lt;/p&gt;&lt;h2&gt;&lt;strong&gt;ಇಡೀ ದೇಶಕ್ಕೇ ಮಾದರಿ ಎಂದ ತಜ್ಞರು&lt;/strong&gt;&lt;/h2&gt;&lt;p&gt;ವಿಜಯ್ ಸರ್ಕಾರದ ಈ ಭ್ರಷ್ಟಾಚಾರ-ವಿರೋಧಿ ನಡೆಗಳು ತಮಿಳುನಾಡಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. 'ಹಿಂದೆ ಇದ್ದ '40 ಪರ್ಸೆಂಟ್ ಕಮಿಷನ್' ಸಂಸ್ಕೃತಿಯನ್ನು ವಿಜಯ್ ಅವರು ಕೊನೆಗಾಣಿಸಿದರೆ, ಅದು ಇಡೀ ಭಾರತದ ಎಲ್ಲಾ ರಾಜ್ಯಗಳಿಗೆ ಮತ್ತು ಆಡಳಿತಗಾರರಿಗೆ ಒಂದು ಹೊಸ ಮಾದರಿಯಾಗುತ್ತದೆ' ಎಂದು ಆರ್ಥಿಕ ತಜ್ಞ ವೆಂಕಟೇಶ್ವರ ರಾವ್ ಪಡಕೋಡ ಅಭಿಪ್ರಾಯಪಟ್ಟಿದ್ದಾರೆ. 'ತಮಿಳುನಾಡಿನ ಜನರು ಹಣ ಪಡೆಯದೆ ಮತ ಹಾಕಿದ್ದರ ಫಲವನ್ನು ಈಗ ಅನುಭವಿಸುತ್ತಿದ್ದಾರೆ' ಎಂದು ಅವರು 'ಎಕ್ಸ್' (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಖಾಸಗಿ ವ್ಯಕ್ತಿಗಳ ಜೇಬಿಗೆ ಹಣ ಹೋಗುವುದು ನಿಂತಿದ್ದರಿಂದಲೇ ಗುತ್ತಿಗೆದಾರರು ಈಗ ಶೇ. 25-30ರಷ್ಟು ಕಡಿಮೆ ಮೊತ್ತಕ್ಕೆ ಬಿಡ್ ಮಾಡಲು ಮುಂದೆ ಬರುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಮುತ್ತುಕೃಷ್ಣನ್ ದಂಡಪಾಣಿ ಹೇಳಿದ್ದಾರೆ. 'ಭ್ರಷ್ಟಾಚಾರ ವಿರೋಧಿ ಕ್ರಮಗಳು, ಡ್ರಗ್ಸ್ ವಿರುದ್ಧದ ಅಭಿಯಾನ ಮತ್ತು ಮಹಿಳಾ ಸುರಕ್ಷತೆಯ ಮೂಲಕ ವಿಜಯ್ ಅವರು ತಮಿಳುನಾಡು ಆಡಳಿತದಲ್ಲಿ ಒಂದು ಹೊಸ ಮಾನದಂಡವನ್ನೇ ಸ್ಥಾಪಿಸುತ್ತಿದ್ದಾರೆ' ಎಂದು ಮತ್ತೊಬ್ಬ ರಾಜಕೀಯ ವಿಶ್ಲೇಷಕ ಜಾರ್ಜ್ ಹೇಳಿದ್ದಾರೆ.&lt;/p&gt;&lt;p&gt;ಕಡಿಮೆ ಮೊತ್ತಕ್ಕೆ ಗುತ್ತಿಗೆ ನೀಡಿದರೂ, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಿಗದಿತ ಸಮಯಕ್ಕೆ ಯೋಜನೆಗಳನ್ನು ಪೂರ್ಣಗೊಳಿಸುವುದು ವಿಜಯ್ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಆದರೂ, ಆಡಳಿತದ ಮೊದಲ ತಿಂಗಳಲ್ಲೇ ಪಾರದರ್ಶಕ ಟೆಂಡರ್ ಪ್ರಕ್ರಿಯೆ ಮೂಲಕ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣವನ್ನು ಉಳಿಸಿದ್ದು ವಿಜಯ್ ಸರ್ಕಾರದ ದೊಡ್ಡ ಯಶಸ್ಸು ಎಂದೇ ವಿಶ್ಲೇಷಿಸಲಾಗುತ್ತಿದೆ.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/chief-minister-vijay-tamil-nadu-open-tender-policy-saving-crores-40-percent-commission-corruption-free/articleshow-9n10vyu"/>
        </item>
        <item>
            <title><![CDATA['ನನ್ನನ್ನ ಭಾವಿ ಸಿಎಂ ಅಂತಾ ಕರೆಯೋದೇ ನನಗೆ ಸಮಸ್ಯೆ..: ವಿಜಯೇಂದ್ರ ಹೇಳಿಕೆ ವೈರಲ್]]></title>
            <link>https://kannada.asianetnews.com/politics/future-cm-is-a-problem-bjp-state-president-by-vijayendra-s-statement-goes-viral-rav/articleshow-cuxrzuy</link>
            <guid isPermaLink="true">https://kannada.asianetnews.com/politics/future-cm-is-a-problem-bjp-state-president-by-vijayendra-s-statement-goes-viral-rav/articleshow-cuxrzuy</guid>
            <pubDate>Thu, 09 Jul 2026 06:03:47 +0530</pubDate>
            <description><![CDATA[&lt;p&gt;ಲವರು ನನ್ನನ್ನು ಭಾವಿ ಮುಖ್ಯಮಂತ್ರಿ ಅಂತ ಕರೆಯುತ್ತಿರುವುದೇ ನನಗೆ ಸಮಸ್ಯೆಯಾಗಿದೆ. ಯಾರು ಮುಂದೆ ಸಿಎಂ ಆಗ್ತಾರೆಂಬುದು ಮುಖ್ಯವಲ್ಲ, ಮುಖಂಡರು ಜನರಿಗೆ ಹತ್ತಿರವಾದಾಗ ಮಾತ್ರ ಜನರು ವಿಶ್ವಾಸವಿಟ್ಟು ಬೆಂಬಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4wp2b5v03z6v8krfh3yrqaf,imgname-gnghmn-1757604293819.png" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಮುಂದೆ ಯಾರು ಸಿಎಂ ಆಗ್ತಾರೆ ಮುಖ್ಯವಲ್ಲ&lt;/li&gt; &lt;li&gt;&amp;nbsp;ಮುಖಂಡರು ಜನರಿಗೆ ಹತ್ತಿರವಾಗುವು ಮುಖ್ಯ&lt;/li&gt;&lt;/ul&gt;&lt;p&gt;&lt;strong&gt;ಚಿತ್ರದುರ್ಗ (ಜು.9): &lt;/strong&gt;ಕೆಲವರು ನನ್ನನ್ನು ಭಾವಿ ಮುಖ್ಯಮಂತ್ರಿ ಅಂತ ಕರೆಯುತ್ತಿರುವುದೇ ನನಗೆ ಸಮಸ್ಯೆಯಾಗಿದೆ. ಯಾರು ಮುಂದೆ ಸಿಎಂ ಆಗ್ತಾರೆಂಬುದು ಮುಖ್ಯವಲ್ಲ, ಮುಖಂಡರು ಜನರಿಗೆ ಹತ್ತಿರವಾದಾಗ ಮಾತ್ರ ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ಹೇಳಿದ್ದಾರೆ.&lt;/p&gt;&lt;h2&gt;ಮುಂದೆ ಯಾರು ಸಿಎಂ ಅನ್ನೋದು ಮುಖ್ಯ ಅಲ್ಲ: ವಿಜಯೇಂದ್ರ&lt;/h2&gt;&lt;p&gt;ನಗರದಲ್ಲಿ ಬುಧವಾರ ನಡೆದ ವಿಧಾನ ಪರಿಷತ್&zwnj; ಚುನಾವಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಅವರು ತಮ್ಮ ಭಾಷಣದಲ್ಲಿ ಭಾವಿ ಸಿಎಂ ವಿಜಯೇಂದ್ರ ಎಂದು ಉಲ್ಲೇಖಿಸಿದರು. ಈ ಸಂಗತಿಯನ್ನು ಆ ಬಳಿಕ ಮಾತನಾಡಿದ ವಿಜಯೇಂದ್ರ ಅವರು ಪ್ರಸ್ತಾಪಿಸಿ, &lsquo;ಯಾರು ಮುಂದೆ ಸಿಎಂ ಆಗ್ತಾರೆಂಬುದು ಮುಖ್ಯ ಅಲ್ಲ. ಮತದಾರರಿಗೆ ನಮ್ಮ ಮೇಲೆ ವಿಶ್ವಾಸ ಮೂಡುವಂತಹ ಕೆಲಸದ ಕಡೆ ಗಮನ ಹರಿಸಬೇಕು. ಕಾರ್ಯಕರ್ತರು ಹಾಗೂ ಮುಖಂಡರು ಜನರಿಗೆ ಹತ್ತಿರ ಆಗಬೇಕು. ಆಗ ಮಾತ್ರ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸುತ್ತಾರೆ. ಪಕ್ಷ ಅಧಿಕಾರಕ್ಕೆ ಬಂದ ಮೇಲಷ್ಟೆ ಉಳಿದವು ಚರ್ಚೆಯಾಗುತ್ತವೆ&rsquo; ಎಂದು ಹೇಳಿದರು.&lt;/p&gt;&lt;h3&gt;ವಿಧಾನ ಪರಿಷತ್ ಈಗ ಹಣವಂತರ ಚಾವಡಿಯಾಗಿದೆ&lt;/h3&gt;&lt;p&gt;ಈ ಹಿಂದೆ ವಿಧಾನ ಪರಿಷತ್&zwnj;ಗೆ ಚುನಾವಣೆ ನಡೆದಾಗ ವಾಗ್ಮಿಗಳು, ಚಿಂತಕರು, ಸಮಾಜ ಸೇವಕರು ಪ್ರವೇಶ ಮಾಡುತ್ತಿದ್ದರು. ಈಗ ಅದು ಹಣವಂತರ ಚಾವಡಿಯಾಗಿದೆ. ವಿಧಾನ ಸಭೆಯಲ್ಲಿ ಶಾಸಕರು ಮಾಡಿದ ಕಾನೂನು, ನಿರ್ಣಯಗಳನ್ನು ವಿಧಾನ ಪರಿಷತ್&zwj;ಗೆ ಕಳುಹಿಸಲಾಗುತ್ತದೆ. ಅದನ್ನು ಅವರು ಸರಿಯಾಗಿ ಇದೆಯೇ ಅಥವಾ ಇಲ್ಲವೋ ಎಂದು ಪರಿಶೀಲಿಸುತ್ತಿದ್ದರು. ಇದು ರಾಜ್ಯಕ್ಕೆ ಅಗತ್ಯವೇ ಎಂದು ಚರ್ಚೆಯನ್ನು ಮಾಡುವುದರ ಮೂಲಕ ಪಾಸಾಗುತ್ತಿತ್ತು. ಆದರೆ, ಈಗ ಚರ್ಚೆಯ ಸ್ವರೂಪ ಬದಲಾಗಿದೆ. ವಿಧಾನ ಪರಿಷತ್ ಎಂದರೆ ಹಣವಂತರ ಚಾವಡಿಯಾಗಿದೆ. ಹಣ ಇದ್ದವರು ಇಲ್ಲಿಗೆ ಬಂದು ತಮ್ಮ ವ್ಯವಹಾರವನ್ನು ಉಳಿಸಿಕೊಳ್ಳಲು ಅಧಿಕಾರ ಬಳಸಿಕೊಳ್ಳುತ್ತಿದ್ದಾರೆ ಎಂದರು.&lt;/p&gt;&lt;p&gt;&lt;strong&gt;ಆಗ್ನೇಯ ಕ್ಷೇತ್ರದಲ್ಲಿ 8 ಬಾರಿ ಗೆಲುವು:&lt;/strong&gt;&lt;/p&gt;&lt;p&gt;ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜನಸಂಘ ಹಾಗೂ ಬಿಜೆಪಿ 8 ಬಾರಿ ಗೆಲುವನ್ನು ಸಾಧಿಸಿದೆ. ವಿಧಾನ ಪರಿಷತ್&zwj;ನಲ್ಲಿ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಬುದ್ಧಿವಂತರು ಇರಬೇಕಾಗಿದೆ. ಬಿಜೆಪಿ ತನ್ನ ಕಾರ್ಯಕರ್ತ ಕೆ.ಎಂ.ಸುರೇಶ್&zwj; ಅವರನ್ನು ಅಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ಚುನಾವಣೆ 5 ಜಿಲ್ಲೆಯ 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಜಯವನ್ನು ಸಾಧಿಸಿದೆ ಎಂದರು.&lt;/p&gt;&lt;p&gt;ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಚುನಾವಣೆಗೆ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ಸಹಕಾರ ಕೊರಲಾಗಿದ್ದು, ಅವರಿಂದ ಪೂರಕ ಪ್ರತಿಕ್ರಿಯೆ ಬಂದಿದೆ. ನಮ್ಮ ಪಕ್ಷದ ಕಾರ್ಯಕರ್ತರು ಮುಂದಿನ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೂ ಮುನ್ನ ಪಕ್ಷದ ನಾಯಕರ ಮೇಲೆ ವಿಶ್ವಾಸ, ನಂಬಿಕೆ ಇಡಬೇಕಿದೆ ಎಂದು ಹೇಳಿದರು.&lt;/p&gt;&lt;p&gt;ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಶಿವಯೋಗಿಸ್ವಾಮಿ ಇದ್ದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/future-cm-is-a-problem-bjp-state-president-by-vijayendra-s-statement-goes-viral-rav/articleshow-cuxrzuy"/>
        </item>
        <item>
            <title><![CDATA[‘ಪಾಕ್‌ ಜತೆ ರಹಸ್ಯ ಸಭೆ ನಡೆಸಲು ನಿಮಗೆ ಅಧಿಕಾರ ಕೊಟ್ಟವರ್‍ಯಾರು? ಬಿಜೆಪಿಯ ರಾಮ್‌ ಮಾಧವ್‌ಗೆ ಹರಿಪ್ರಸಾದ್‌ ಪ್ರಶ್ನೆ]]></title>
            <link>https://kannada.asianetnews.com/politics/bk-hariprasad-alleges-rss-leader-ram-madhav-held-secrete-meeting-former-pakistan-isi-officer-rav/articleshow-drz0k3w</link>
            <guid isPermaLink="true">https://kannada.asianetnews.com/politics/bk-hariprasad-alleges-rss-leader-ram-madhav-held-secrete-meeting-former-pakistan-isi-officer-rav/articleshow-drz0k3w</guid>
            <pubDate>Thu, 02 Jul 2026 10:28:18 +0530</pubDate>
            <description><![CDATA[&lt;p&gt;ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಬಿಜೆಪಿ ಮುಖಂಡ ರಾಮ್ ಮಾಧವ್ ಅವರು ಪಾಕಿಸ್ತಾನದ ಐಎಸ್&zwnj;ಐ ಅಧಿಕಾರಿಗಳೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಯಾವುದೇ ಸಂವಿಧಾನಿ ಹುದ್ದೆಯಲ್ಲಿರದಿದ್ದರೂ ವಿದೇಶದಲ್ಲಿ ರಹಸ್ಯ ಸಭೆ ನಡೆಸಲು ಅಧಿಕಾರ ಕೊಟ್ಟವರ್ಯಾರು ಎಂದು ಕಿಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwgk0kn3n34vrkmh5ctwe502,imgname----------------------90--1782968241827.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಜು.2): ಜಿಬಿಎ(Greater Bengaluru) ಚುನಾವಣೆಯ ಬಿಜೆಪಿ(BJP) ಚುನಾವಣಾ ಉಸ್ತುವಾರಿ ಆಗಿ ನೇಮಕವಾಗಿರುವ ರಾಮ್&zwnj; ಮಾಧವ್&zwnj;(Ram Madhav) ಅವರು ನನ್ನ ಪ್ರಶ್ನೆಗಳಿಗೆ ಉತ್ತರಿಸಬೇಕು. ಪಾಕಿಸ್ತಾನದವರ ಜತೆ ರಹಸ್ಯ ಸಭೆ ನಡೆಸಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್&zwnj;(KPCC President BK Hariprasad) ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಕೆಪಿಸಿಸಿ ಕಚೇರಿಯ ಭಾರತ್&zwnj; ಜೋಡೋ ಭವನ(Bharat Jodo bhavan)ದಲ್ಲಿ ನಡೆದ ಪ್ರಚಾರ ಸಮಿತಿ ವಿಚಾರ ಸಂಕಿರಣದಲ್ಲಿ ಮಾತನಾಡಿ, ರಾಮ್&zwnj; ಮಾಧವ್&zwnj; ಅವರು ಶಾಸಕರೂ ಅಲ್ಲ, ಸಂಸದರೂ ಅಲ್ಲ, ವಿದೇಶಾಂಗ ಸಚಿವರೂ ಅಲ್ಲ. ಆರ್&zwnj;ಎಸ್ಎಸ್(RSS) ಪ್ರಚಾರಕರಾಗಿ ವಿದೇಶದಲ್ಲಿ ಸಭೆ ಮಾಡಲು ಅಧಿಕಾರ ಕೊಟ್ಟಿದ್ದು ಯಾರು? ಯಾವ ಅಧಿಕಾರ ಇಟ್ಟುಕೊಂಡು ಆರ್&zwnj;ಎಸ್&zwnj;ಎಸ್&zwnj; ಅವರು ವಿದೇಶಾಂಗ ತೀರ್ಮಾನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.&lt;/p&gt;&lt;p&gt;ರಾಮ್&zwnj; ಮಾಧವ್&zwnj; ಅವರು ಕೊಲಂಬೊ, ಲಂಡನ್&zwnj;ನಲ್ಲಿ 4 ಸಭೆಗಳನ್ನು ಮಾಡಿದ್ದು, ಪಾಕಿಸ್ತಾನದ ಐಎಸ್ಐನ ಮಾಜಿ ಮೇಜರ್ ಜನರಲ್ ಜೊತೆಗೆ ಗುಪ್ತ ಸಭೆ ಮಾಡಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;ಇತ್ತೀಚೆಗೆ ಅವರ ಗುರುಗಳಾದ ಮೋಹನ್ ಭಾಗವತ್(Mohan Bhagwat) ಅವರು ಪಾಕಿಸ್ತಾನದೊಂದಿಗೆ ಮಾತುಕತೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;h2&gt;ಪಾಕ್&zwnj; ಜತೆಗೆ ಸಭೆ ಮಾಹಿತಿ ನೀಡಿಲ್ಲ:&lt;/h2&gt;&lt;p&gt;ಪಾಕಿಸ್ತಾನದವರೊಂದಿಗಿನ ಗುಪ್ತ ಸಭೆ ಬಗ್ಗೆ ದೇಶದ ಜನರಿಗೆ ಯಾಕೆ ಮಾಹಿತಿ ನೀಡಿಲ್ಲ? ಆಪರೇಷನ್ ಸಿಂಧೂರ್&zwnj;(Operation Sindoor)ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಹೆಸರುಗಳನ್ನು ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ? ಇಂತಹ ಪ್ರಶ್ನೆಗಳನ್ನು ನಾವು ಕೇಳಬೇಕು ಎಂದು ಹರಿಪ್ರಸಾದ್&zwnj; ಕರೆ ನೀಡಿದರು.&lt;/p&gt;&lt;p&gt;ಆಪರೇಷನ್ ಸಿಂಧೂರ್&zwnj;ನಲ್ಲಿ ನಮ್ಮ ಯಾವುದೇ ಯೋಧರು ಸತ್ತಿಲ್ಲ ಎಂದು ಹೇಳಿದ್ದರು. ಆದರೆ ಮೊನ್ನೆ ರಾಜನಾಥ್ ಸಿಂಗ್ ಅವರು 6 ಸೈನಿಕರು ಸತ್ತಿದ್ದಾರೆ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇವರು ಎಷ್ಟು ಸುಳ್ಳು ಹೇಳುತ್ತಾರೆ ಎಂಬುದು ಇದರಲ್ಲೇ ಅರ್ಥವಾಗುತ್ತದೆ. ದೇಶಕ್ಕೆ ಪ್ರಾಣಕೊಟ್ಟವರ ಹೆಸರು ಹೇಳಲು ಇವರಿಗೆ ಸಾಧ್ಯವಾಗುವುದಿಲ್ಲ.&lt;/p&gt;&lt;p&gt;ಆಪರೇಷನ್ ಸಿಂಧೂರ್ ಆಗಿ 2 ತಿಂಗಳಾಗಿದ್ದು, ಆಗಲೇ ರಾಮ್ ಮಾಧವ್ ಅವರು ಲಂಡನ್ ನಲ್ಲಿ ಸಭೆ ಮಾಡಿದ್ದಾರೆ. ನಮ್ಮ ಸರ್ಕಾರ ಕೇಂದ್ರದಲ್ಲಿದ್ದಾಗ ಭಯೋತ್ಪಾದನೆ ನಿಗ್ರಹವಾಗುವವರೆಗೂ ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.&lt;/p&gt;&lt;p&gt;ಬಿಜೆಪಿಯವರು ಚುನಾವಣೆ ಬಂದಾಗ, ಪಾಕಿಸ್ತಾನ, ಚಿಕನ್, ಮಟನ್, ಹಲಾಲ್, ಹಿಜಾಬ್, ಮಂಗಳಸೂತ್ರದ ಬಗ್ಗೆ ಮಾತನಾಡುತ್ತಾರೆ. ಬಳಿಕ ಪಾಕಿಸ್ತಾನದ ಜತೆ ಗೌಪ್ಯ ಮಾತುಕತೆ ನಡೆಸುತ್ತಾರೆ ಎಂದು ಹರಿಪ್ರಸಾದ್ ಕಿಡಿಕಾರಿದರು.&lt;/p&gt;&lt;ul&gt; &lt;li&gt;- ರಾಮ್&zwnj; ಮಾಧವ್&zwnj; ಅವರು ಜನಪ್ರತಿನಿಧಿಯೇ ಅಲ್ಲ&lt;/li&gt; &lt;li&gt;- ಆದರೂ ಆರೆಸ್ಸೆಸ್&zwnj; ಪ್ರಚಾರಕರಾಗಿ ವಿದೇಶದಲ್ಲಿ ಸಭೆ&lt;/li&gt; &lt;li&gt;- ಯಾವ ಅಧಿಕಾರದಲ್ಲಿ ಸಭೆ ಮಾಡಿದ್ದಾರೆ?: ಆಕ್ರೋಶ&lt;/li&gt;&lt;/ul&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bk-hariprasad-alleges-rss-leader-ram-madhav-held-secrete-meeting-former-pakistan-isi-officer-rav/articleshow-drz0k3w"/>
        </item>
        <item>
            <title><![CDATA[Bidadi Township row: ಬಿಡದಿ ಟೌನ್‌ಶಿಪ್‌ಗೂ ಎಚ್‌ಡಿಕೆಗೂ ಸಂಬಂಧ ಇಲ್ಲ, ಚರ್ಚೆ ಬೇಕಿಲ್ಲ - ಸಿಎಂ ಡಿಕೆಶಿ]]></title>
            <link>https://kannada.asianetnews.com/state/no-connection-between-hdk-and-bidadi-township-no-need-for-discussion-cm-dk-shivakumar-rav/articleshow-e9gl7xy</link>
            <guid isPermaLink="true">https://kannada.asianetnews.com/state/no-connection-between-hdk-and-bidadi-township-no-need-for-discussion-cm-dk-shivakumar-rav/articleshow-e9gl7xy</guid>
            <pubDate>Thu, 02 Jul 2026 07:22:23 +0530</pubDate>
            <description><![CDATA[&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಗೂ ಹೆಚ್&zwnj;ಡಿ ಕುಮಾರಸ್ವಾಮಿಗೂ ಯಾವುದೇ ಸಂಬಂಧ ಇಲ್ಲ. ಅವರು ಕ್ಷೇತ್ರ ಬಿಟ್ಟಿದ್ದಾರೆ ಅವರೊಂದಿಗೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾನು ಕರೆದಾಗ ಅವರು ಬರಲಿಲ್ಲ. ಈಗ ಅವರು ಕರೆದಾಗ ನಾನು ಹೋಗುವುದು ಸರೀನಾ ಎಂದು ಸಿಎಂ ಟಾಂಗ್..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9814cqpg4a7q5hx5fy8qwt,imgname-karnataka-pan-masala-ban-dk-shivakumar-1782721843607.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜು.2):&lt;/strong&gt; ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿ(HD Kumaraswamy) ಕ್ಷೇತ್ರ ಬಿಟ್ಟಿದ್ದಾಯಿತು. ಅವರಿಗೂ ಆ ಕ್ಷೇತ್ರಕ್ಕೂ ಸಂಬಂಧ ಇಲ್ಲ. ಆದರೂ ಬಿಡದಿ ಟೌನ್&zwnj;ಶಿಪ್ ಯೋಜನೆ(Bidadi township project) ಸಂಬಂಧ ಮಾಧ್ಯಮಗಳ (ಟಿವಿ) ಎದುರು ಚರ್ಚೆಗೆ ಕರೆದಾಗಲು ಬರಲಿಲ್ಲ. ವಿಧಾನಸೌಧಕ್ಕೆ ಆಹ್ವಾನಿಸಿದರೂ ಅವರಿಗೆ ಬರಲು ಆಗಲಿಲ್ಲ. ಇನ್ನು ಅವರೊಂದಿಗೆ ಚರ್ಚೆ ಅವಶ್ಯಕತೆ ಇಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್(DK Shivakumar) ತಿರುಗೇಟು ನೀಡಿದರು.&amp;nbsp;&lt;/p&gt;&lt;h2&gt;ಬಿಡದಿ ಟೌನ್&zwnj;ಶಿಪ್&zwnj;ಗೂ ಕುಮಾರಸ್ವಾಮಿಗೂ ಸಂಬಂಧ ಇಲ್ಲ:&lt;/h2&gt;&lt;p&gt;ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್, ಬಿಡದಿ ಟೌನ್&zwnj;ಶಿಪ್&zwnj;ಗೂ ಕುಮಾರಸ್ವಾಮಿಗೂ ಸಂಬಂಧ ಇಲ್ಲ. ಕುಮಾರಸ್ವಾಮಿ ಅವರು ಆ ಕ್ಷೇತ್ರ ಬಿಟ್ಟಿದ್ದಾಯಿತು. ಅವರಿಗೂ ಕ್ಷೇತ್ರಕ್ಕೂ ಸಂಬಂಧ ಇಲ್ಲ. ಅವರೇ ಸಿಎಂ ಆಗಿದ್ದಾಗ ಡಿ ನೋಟಿಫೈ ಮಾಡಬಹುದಾಗಿತ್ತು. ಏಕೆ ಮಾಡಲಿಲ್ಲ. ಈಗ ಏನೇನೊ ಹುಡುಕುತ್ತಿದ್ದಾರೆ, ಹುಡುಕಲಿ ಎಂದರು. ನಾನು ಕರೆದಾಗ ಅವರು ಬರಲಿಲ್ಲ, ಅವರು ಕರೆದರೆ ನಾನು ಅಲ್ಲಿಗೆ (ಬೈರಮಂಗಲ ವೃತ್ತ) ಬರಬೇಕಂತೆ. ನಾನು ಅಲ್ಲಿಗೆ ಬರುವುದು ಸರಿನಾ. ಅವರೊಂದಿಗೆ ಚರ್ಚೆ ಅವಶ್ಯಕತೆ ಇಲ್ಲ ಎಂದರು.&lt;/p&gt;&lt;h3&gt;ಬಿಡದಿ ಕೈಗಾರಿಕಾ ಪ್ರದೇಶ ಯಾರ ಕಾಲದಲ್ಲಿ ಆಯ್ತು?&lt;/h3&gt;&lt;p&gt;ಬಿಡದಿ ಕೈಗಾರಿಕಾ ಪ್ರದೇಶ ಯಾರ ಕಾಲದಲ್ಲಿ ಆಯಿತು. ಬಿಡದಿ ಟೌನ್ ಶಿಪ್ ಘೋಷಣೆ ಮಾಡಿದವರು ಯಾರು. ಇದೆಲ್ಲ ಅವರೇ ಮಾಡಿದ್ದು. ಅವಕಾಶ ಇದ್ದಾಗ ಡಿ ನೋಟಿಫೈ ಏಕೆ ಮಾಡಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು. ದೇವನಹಳ್ಳಿಯಲ್ಲಿ ಏರ್ ಪೋರ್ಟ್ ಬಂದಿದ್ದರಿಂದ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ , ಹೊಸಕೋಟೆ ಅಭಿವೃದ್ಧಿಗೆ ಅನುಕೂಲವಾಯಿತು. ಅದೇ ರೀತಿ ಟೌನ್&zwnj;ಶಿಪ್ ಆಗುವುದರಿಂದ ರಾಮನಗರ, ಮಾಗಡಿ, ಚನ್ನಪಟ್ಟಣ ಹಾಗೂ ಕನಕಪುರ ತಾಲೂಕುಗಳ ಅಭಿವೃದ್ಧಿಗೆ ಒಳ್ಳೆಯದಾಗುತ್ತದೆ ಎಂದರು. ಟೌನ್&zwnj;ಶಿಪ್ ನಿರ್ಮಾಣವಾಗುವ ಭಾಗದಲ್ಲಿ ಯಾವ ಊರಿನವರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ, ಹಳ್ಳಿಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.&lt;/p&gt;&lt;p&gt;ನಾನು ಕರೆದಾಗ ಅವ್ರು ಬರ್ಲಿಲ್ಲ, ಅವ್ರು ಕರೆದಾಗ ನಾನು ಹೋಗೋದು ಸರೀನಾ: ಸಿಎಂ ಟಾಂಗ್&zwnj;&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/no-connection-between-hdk-and-bidadi-township-no-need-for-discussion-cm-dk-shivakumar-rav/articleshow-e9gl7xy"/>
        </item>
        <item>
            <title><![CDATA[ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?]]></title>
            <link>https://kannada.asianetnews.com/politics/operation-gruha-lakshmi-gruha-jyoti-cm-dk-shivakumar-double-operation-on-guarantee-schemes-gdp-videoshow-euoqt40</link>
            <guid isPermaLink="true">https://kannada.asianetnews.com/politics/operation-gruha-lakshmi-gruha-jyoti-cm-dk-shivakumar-double-operation-on-guarantee-schemes-gdp-videoshow-euoqt40</guid>
            <pubDate>Thu, 02 Jul 2026 17:12:09 +0530</pubDate>
            <description><![CDATA[ಡಿ.ಕೆ.ಶಿವಕುಮಾರ್ ಅವರು ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಎಂಬ ಎರಡು ಗ್ಯಾರಂಟಿ ಯೋಜನೆಗಳಿಗೆ ಪರಿಷ್ಕರಣೆ ಆರಂಭಿಸಿದ್ದಾರೆ. ಈ 'ಡಬಲ್ ಆಪರೇಷನ್' ಮೂಲಕ ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಕಾರ್ಯ ಶುರುವಾಗಿದ್ದು, ಇದು ಸರ್ಕಾರದ ಹೊಸ ರಣತಂತ್ರವಾಗಿದೆ.]]></description>
            <media:content url="https://geo.dailymotion.com/player/x1tbu.html?video=xakf74q" medium="video" height="768" width="1024"/>
            <content:encoded><![CDATA[&lt;p&gt;ಕಾಸು.. ಕರೆಂಟು.. ಲಕ್ಷ್ಮೀ.. ಜ್ಯೋತಿ.. ಡಬಲ್ ಆಪರೇಷನ್..! ಜರಡಿ ಬ್ರಹ್ಮಾಸ್ತ್ರ.. ಎರಡು ಟಾರ್ಗೆಟ್.. ರಣಬೇಟೆಗಾರ ಡಿಕೆ..! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​ ಏನಿದು ಮಾಸ್ಟರ್​ ಸ್ಟ್ರೋಕ್.? ಎಸ್​ಐಆರ್​ಗೆ ಕೌಂಟರ್​ ಕನಕಾಧಿಪತಿಯ ಗ್ಯಾರಂಟಿ ಗುನ್ನ..!&lt;/p&gt;&lt;p&gt;ಡಬಲ್ ಸರ್ಜರಿ ಮೂಲಕ ಕನಕಾಧಿಪತಿ ಡಿ.ಕೆ.ಶಿವಕುಮಾರ್ ಹೊಸ ಆಟ ಶುರು ಮಾಡಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆಯೋ ಭರ್ಜರಿ ಪ್ಲಾನ್ ಮಾಡಿದ್ದಾರೆ. ಹಾಗಿದ್ರೆ ಕನಕಾಧಿಪತಿಯ ಆ ಪ್ಲಾನ್ ಏನು..? &amp;nbsp;ಗೃಹಲಕ್ಷ್ಮೀ ಹಾಗೂ ಗ್ಯಾರಂಟಿ ಪರಿಷ್ಕರಣೆ ಮೂಲಕ ಅವರು ಹೆಣೆದಿರುವ ರಣತಂತ್ರವೇನು.? &amp;nbsp;ಡಬಲ್ ಆಪರೇಷನ್ ಮೂಲಕ ಎಸ್​ಐಆರ್​ಗೆ ಕೌಂಟರ್​ ಕೊಡಲಾಗ್ತಿದೆ ಎನ್ನುವ ಚರ್ಚೆ ಶುರುವಾಗಿರೋದು ಯಾಕೆ.?&lt;/p&gt;&lt;p&gt;ಗೃಹಲಕ್ಷ್ಮೀ &amp;nbsp;ಯೋಜನೆಯಲ್ಲಿಯೂ ಪರಿಷ್ಕರಣೆ ನಡೆಯುತ್ತಿದೆ. ಅನರ್ಹರನ್ನ ಹಡುಕಿ ಅವರನ್ನ ಯೋಜನೆಯಿಂದ ಹೊರಗಿಡುವ ಕಾರ್ಯ ಶುರುವಾಗಿದೆ. ಹಾಗಿದ್ರೆ ಗೃಹಲಕ್ಷ್ಮಿಗೆ ಆಪರೇಷನ್ ಅಗತ್ಯವಾಗಿದ್ದು ಯಾಕೆ..? ಪುಕ್ಸಟ್ಟೆ ಹಣ ಸಿಗುತ್ತೆ ಅಂತ್ಹೇಳಿ ಅಲ್ಲಿ ಹೇಗೆಲ್ಲಾ ನಡೆದಿತ್ತು ಕಳ್ಳಾಟ..? &amp;nbsp;&lt;/p&gt;&lt;p&gt;ಮೊದಲು ಗೃಹಲಕ್ಷ್ಮೀ.. ಈಗ ಗೃಹಜ್ಯೋತಿ.. ಎರಡು ಗ್ಯಾರಂಟಿಗಳಿಗೆ ಆಪರೇಷನ್ ಶುರು ಮಾಡಿದೆ ರಾಜ್ಯ ಸರ್ಕಾರ. ಹೀಗೆ ಪರಿಷ್ಕರಣೆ ಆರಂಭವಾಗ್ತಾ ಇದ್ಹಾಗೆ ನಾನಾ ರೀತಿಯ ಗೊಂದಲಗಳು ಸಹ ಜನರನ್ನ ಕಾಡ್ತಿದ್ದು, ಸರ್ಕಾರ ಡೋಂಟ್ ವರಿ.. ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲಲ್ಲ ಅಂತಿದೆ.&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/operation-gruha-lakshmi-gruha-jyoti-cm-dk-shivakumar-double-operation-on-guarantee-schemes-gdp-videoshow-euoqt40"/>
        </item>
        <item>
            <title><![CDATA[ನಿಮ್ಮ ಹೆಂಡ್ತಿಯನ್ನು ತೋರಿಸಿ: ಮಾಜಿ ಸಿಎಂ ಪತ್ನಿಯ ಟ್ಯಾಟೂ ಎದೆ ಮೇಲೆ ಹಾಕಿ ಯುವಕನ ಹೈಡ್ರಾಮಾ]]></title>
            <link>https://kannada.asianetnews.com/politics/dimple-yadav-fans-get-her-photo-tattooed-stop-akhilesh-yadav-in-azamgarh-suc/articleshow-gg0xzz1</link>
            <guid isPermaLink="true">https://kannada.asianetnews.com/politics/dimple-yadav-fans-get-her-photo-tattooed-stop-akhilesh-yadav-in-azamgarh-suc/articleshow-gg0xzz1</guid>
            <pubDate>Tue, 30 Jun 2026 17:43:07 +0530</pubDate>
            <description><![CDATA[ಉತ್ತರ ಪ್ರದೇಶದಲ್ಲಿ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರ ಅಭಿಮಾನಿಯೊಬ್ಬರು ತಮ್ಮ ಎದೆಯ ಮೇಲೆ ಅವರ ಫೋಟೋವನ್ನು ಹಚ್ಚೆ ಹಾಕಿಸಿಕೊಂಡು, ಅವರನ್ನು ಭೇಟಿಯಾಗಲು ಅಖಿಲೇಶ್ ಯಾದವ್ ಅವರ ಬೆಂಗಾವಲು ವಾಹನಕ್ಕೆ ಅಡ್ಡಹಾಕಿದ್ದಾರೆ. ಈ ಘಟನೆಯು ರಾಜಕಾರಣಿಗಳ ಮೇಲಿನ ಅಭಿಮಾನವು ಹೇಗೆ ಅತಿರೇಕಕ್ಕೆ ಹೋಗಬಹುದು ಎಂಬುದನ್ನು ತೋರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwc745rvh7fmnbtn20cqz3xv,imgname-dimple-yadav-1782821558043.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾ ತಾರೆಯರು ಮತ್ತು ರಾಜಕಾರಣಿಗಳಿಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಇರುತ್ತಾರೆ. ಇವರನ್ನೇ ದೇವರು ಎಂದು ನಂಬಿ ಅತಿರೇಕದಿಂದ ವರ್ತಿಸುವ ಅಭಿಮಾನಿಗಳೂ ಇದ್ದಾರೆ. ಇವರನ್ನು ಒಂದೇ ಒಂದು ಸಲ ನೋಡುವುದಕ್ಕಾಗಿ ಜೀವವನ್ನೂ ಪಣಕ್ಕಿಡುವವರೂ ಇದ್ದಾರೆ. ತಮ್ಮನ್ನೇ ನಂಬಿರುವ ಕುಟುಂಬಸ್ಥರಿಗಿಂತಲೂ ಹೆಚ್ಚಾಗಿ ಯಾವುದೋ ಒಬ್ಬ ಸೆಲೆಬ್ರಿಟಿಯ ಹುಚ್ಚಿನಲ್ಲಿ ಹುಚ್ಚಾಟ ಮಾಡುವವರಿಗೂ ಕಡಿಮೆ ಏನಿಲ್ಲ. ಅಭಿಮಾನ ಅಭಿಮಾನವಾಗಿದ್ದರೆ ಚೆನ್ನ. ಆದರೆ ಅದು ಅತಿರೇಕಕ್ಕೆ ಎಷ್ಟೋ ಬಾರಿ ಹೋಗಿ ಜೀವವನ್ನೂ ಕಳೆದುಕೊಂಡವರಿದ್ದಾರೆ. ಯಾರಿಗಾಗಿ ಅವರು ಜೀವ ಕಳೆದುಕೊಂಡರೋ, ಅವರಿಗೂ ಈ ವಿಷ್ಯವೂ ಗೊತ್ತಿರಲ್ಲ, ಗೊತ್ತಿದ್ದರೂ ಕೆಲವೊಮ್ಮೆ ಒಂದಿಷ್ಟು ಪರಿಹಾರ ಘೋಷಿಸಿ, ಮತ್ತೆ ಕೆಲವೊಮ್ಮೆ ಸಾಂತ್ವನದ ಮಾತುಗಳನ್ನಾಡಿ ಸುಮ್ಮನಾಗುತ್ತಾರೆ. ಆದರ ಆ ಜೀವವನ್ನು ಕಳೆದುಕೊಂಡವರ ಕುಟುಂಬಸ್ಥರ ಗೋಳು ಕೇಳಲು ಸಾಧ್ಯವಿಲ್ಲ. ಆದರೂ ಈ ಅವಿವೇಕತನದ ಅತಿರೇಕ ಮಾತ್ರ ಅಭಿಮಾನದ ಹೆಸರಿನಲ್ಲಿ ಬಿಡುವುದಿಲ್ಲ.&lt;/p&gt;&lt;p&gt;ಇದೀಗ ಅಂಥದ್ದೇ ಒಂದು ಹುಚ್ಚಾಟ, ಉತ್ತರ ಪ್ರದೇಶದಲ್ಲಿ ನಡೆದಿದೆ. ಮುಂದಿನ ವರ್ಷ ಅರ್ಥಾತ್​ 20207ರ ಮಾರ್ಚ್​ ವೇಳೆಗೆ ವಿಧಾನಸಭಾ ಚುನಾವಣೆ ಇದೆ. ಅದರ ಹೊಸ್ತಿಲಿನಲ್ಲಿಯೇ ರಾಜಕಾರಣಿಗಳ ಅಭಿಮಾನಿಗಳು ಅತಿರೇಕದ ವರ್ತನೆ ಇದಾಗಲೇ ಆರಂಭವಾಗಿದೆ. ಏತನ್ಮಧ್ಯೆ, ಮೈನ್&zwnj;ಪುರಿಯ ಸಮಾಜವಾದಿ ಪಕ್ಷದ ಸಂಸದೆ ಮತ್ತು ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ಕಟ್ಟಾ ಅಭಿಮಾನಿಯೊಬ್ಬರ ಹುಚ್ಚಾಟ ಎಲ್ಲರನ್ನೂ ಸುಸ್ತು ಮಾಡಿರುವ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ನಾನು ನಿಮ್ಮ ಪತ್ನಿ ಅಭಿಮಾನಿ&lt;/strong&gt;&lt;/h2&gt;&lt;p&gt;ತಾನು ಡಿಂಪಲ್​ ಯಾದವ್​ ಅವರ ಅಭಿಮಾನಿ ಎಂದು ಹೇಳಿಕೊಂಡಿರುವ ಯುವಕನೊಬ್ಬ, ಡಿಂಪಲ್​ ಅವರ ಫೋಟೋವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಅವರನ್ನು ನೋಡಲು ಶತಪ್ರಯತ್ನ ಪಟ್ಟು ಸೋತಿದ್ದಾನೆ. ಬಳಿಕ ಅಖಿಲೇಶ್​ ಅವರ ಹೋಗುತ್ತಿದ್ದ ಬೆಂಗಾವಲು ವಾಹನಕ್ಕೇ ಅಡ್ಡ ಹಾಕಿದ್ದಾನೆ. ಅಖಿಲೇಶ್ ಯಾದವ್ ಇತ್ತೀಚೆಗೆ ಅಜಮ್&zwnj;ಗಢಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಯುವಕನೊಬ್ಬ ಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆಯನ್ನು ತಡೆದು, &quot;ಸಹೋದರ, ನೀವು ನನಗೆ ಡಿಂಪಲ್ ಬಾಬಿಯನ್ನು ಪರಿಚಯಿಸುವುದಾಗಿ ಭರವಸೆ ನೀಡಿದ್ದೀರಿ&quot; ಎಂದು ಹೇಳಿದ್ದಾನೆ. ಅವನ ಮನವೊಲಿಸುವಷ್ಟರಲ್ಲಿ ಎಲ್ಲರಿಗೂ ಸುಸ್ತಾಗಿ ಹೋಗಿದೆ.&lt;/p&gt;&lt;h3&gt;&lt;strong&gt;ವಿಡಿಯೋ ವೈರಲ್​&lt;/strong&gt;&lt;/h3&gt;&lt;p&gt;ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಖಿಲೇಶ್ ಯಾದವ್ ಅವರ ಅಜಮ್&zwnj;ಗಢ ಭೇಟಿಯ ವೈರಲ್ ವೀಡಿಯೊವು ಅವರನ್ನು ಅಭಿಮಾನಿಗಳು ಸುತ್ತುವರೆದಿರುವುದನ್ನು ತೋರಿಸುತ್ತದೆ. ಅವರು ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ, ಶರ್ಟ್ ಬಟನ್&zwnj;ಗಳಲ್ಲಿ ಒಂದನ್ನು ತೆರೆದಿದ್ದಾರೆ. ಅವರು ಅಖಿಲೇಶ್ ಯಾದವ್ ಅವರನ್ನು ಡಿಂಪಲ್ ಯಾದವ್ ಅವರಿಗೆ ಪರಿಚಯಿಸುವಂತೆ ಪದೇ ಪದೇ ಕೇಳುತ್ತಿದ್ದಾರೆ.&lt;/p&gt;&lt;p&gt;ಆದಾಗ್ಯೂ, ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಮೈನ್&zwnj;ಪುರಿಯ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರಿಗೆ ಉತ್ತರ ಪ್ರದೇಶ ರಾಜಕೀಯದಲ್ಲಿ ಲಕ್ಷಾಂತರ ಬೆಂಬಲಿಗರಿದ್ದಾರೆ. ಇಂತಹ ಚಿತ್ರಗಳು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಕಾಣಿಸಿಕೊಂಡಿವೆ. ಉತ್ತರ ಪ್ರದೇಶದ ಔರೈಯಾದಲ್ಲಿ, ಅಖಿಲೇಶ್ ಯಾದವ್ ಮತ್ತು ಡಿಂಪಲ್ ಯಾದವ್ ಅವರನ್ನು ದೇವರಂತೆ ಪೂಜಿಸುವ ಪತಿ-ಪತ್ನಿ ದಂಪತಿಗಳಿದ್ದಾರೆ. ವಾಸ್ತವವಾಗಿ, ಔರೈಯಾದಲ್ಲಿರುವ ಸಮಾಜವಾದಿ ಪಕ್ಷದ ಕಾರ್ಯಕರ್ತೆ ರಾಂಪಾಲ್ ಯಾದವ್ ಮತ್ತು ಅವರ ಪತ್ನಿ ಪ್ರೀತಿ ಯಾದವ್ ಅವರ ತೋಳುಗಳ ಮೇಲೆ ಡಿಂಪಲ್ ಯಾದವ್ ಅವರ ಹಚ್ಚೆಗಳಿವೆ. ಆದರೆ ರಾಂಪಾಲ್ ತಮ್ಮ ಎದೆಯ ಮೇಲೆ ಅಖಿಲೇಶ್ ಯಾದವ್ ಅವರ ಹಚ್ಚೆ ಹಾಕಿಸಿಕೊಂಡಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/politics/dimple-yadav-fans-get-her-photo-tattooed-stop-akhilesh-yadav-in-azamgarh-suc/articleshow-gg0xzz1"/>
        </item>
        <item>
            <title><![CDATA[2028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು  ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!]]></title>
            <link>https://kannada.asianetnews.com/politics/22-months-to-karnataka-elections-inside-the-siddaramaiah-and-dk-shivakumar-2028-plan-gdp-videoshow-hgb7ggi</link>
            <guid isPermaLink="true">https://kannada.asianetnews.com/politics/22-months-to-karnataka-elections-inside-the-siddaramaiah-and-dk-shivakumar-2028-plan-gdp-videoshow-hgb7ggi</guid>
            <pubDate>Wed, 08 Jul 2026 15:25:28 +0530</pubDate>
            <description><![CDATA[2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅಧಿಕಾರ ಉಳಿಸಿಕೊಳ್ಳಲು ಹೈಕಮಾಂಡ್, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಿದ್ದು, ಇಬ್ಬರೂ ತಮ್ಮ ರಣತಂತ್ರಗಳೊಂದಿಗೆ ಅಖಾಡಕ್ಕಿಳಿದಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xamr40a" medium="video" height="768" width="1024"/>
            <content:encoded><![CDATA[&lt;p&gt;ಈಗಿನ್ನೂ 2026.. ಮುಂದಿನ ವಿಧಾನಸಭೆ ಚುನಾವಣೆ ಇರೋದು 2028ಕ್ಕೆ.. ಎಕ್ಸ್ಯಾಟ್ ಆಗಿ ಹೇಳ್ಬೇಕು ಅಂದ್ರೆ ಮುಂದಿನ ಮಹಾಯುದ್ಧಕ್ಕೆ ಇನ್ನೂ 22 ತಿಂಗಳು ಬಾಕಿಯಿದೆ. ಆದ್ರೆ ಈ ಕದನ ಗೆಲ್ಲೋಕೆ ಜೋಡೆತ್ತುಗಳ ತಯಾರಿ ಜೋರಾಗಿದೆ. 2023ರ ಚುನಾವಣೆಯಲ್ಲಿ ಚರಿತ್ರೆ ಬರೆದಿದ್ದ ಅದೇ ಜೋಡೆತ್ತು ಸೈಲೆಂಟ್ ಆಗಿ ಅಖಾಡಕ್ಕೆ ನುಗ್ಗಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಡಿ.ಕೆ.ಶಿವಕುಮಾರ್.. ಇಬ್ಬರಿಗೂ ನಿರ್ದಿಷ್ಟ ಗುರಿಯನ್ನ ಫಿಕ್ಸ್ ಮಾಡಿದೆ ಹೈಕಮಾಂಡ್. ಹಾಗಿದ್ರೆ 2028ರ ಕರ್ನಾಟಕ ಕುರುಕ್ಷೇತ್ರಕ್ಕೆ ಹೇಗಿದೆ ಕಾಂಗ್ರೆಸ್ ತಯಾರಿ..? ಅಧಿಕಾರ ಉಳಿಸಿಕೊಳ್ಳೋಕೆ ಕೈ ಪಡೆಯ ಪ್ಲಾನ್ ಏನು..?&lt;/p&gt;&lt;p&gt;ಸಿಎಂ ಸಿಂಹಾಸನವನಕ್ಕೆ ಅಧಿಪತಿಯಾಗಿದ್ದಾರೆ ಕನಕಾಧಿಪತಿ. ಆದ್ರೆ ಇಲ್ಲಿಗೆ ಎಲ್ಲವೂ ಮುಗಿದಿಲ್ಲ. ಅವರ ಗುರಿ ದೊಡ್ಡದಿದೆ. ಅವರ ನೆಕ್ಸ್ಟ್ ಟಾರ್ಗೆಟ್ ಕೂಡ ಫಿಕ್ಸ್ ಆಗಿದೆ. ಮುಂದೆಯೂ ಪಕ್ಷವನ್ನ ಅಧಿಕಾರಕ್ಕೆ ತಂದು ಆಡಳಿತ ನಡೆಸೋ ಶಪಥವನ್ನ ಈಗಾಗಲೇ ಮಾಡಿಯಾಗಿದೆ ಡಿ.ಕೆ.ಶಿವಕುಮಾರ್. ಹಾಗಿದ್ರೆ, ಆ ಶಪಥ ನಿಜಕ್ಕೂ ಈಡೇರುತ್ತಾ..? ಅದನ್ನ ಈಡೇರಿಸಿಕೊಳ್ಳೋಕೆ ಅವರು ಹೆಣೆದಿರುವ ರಣವ್ಯೂಹಗಳೇನು?&lt;/p&gt;&lt;p&gt;ಕರ್ನಾಟಕದಲ್ಲಿ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಹೈಕಮಾಂಡ್​ಗೆ ಬಹಳ ಮುಖ್ಯ. ಇದಕ್ಕೆ ಒಂದಿಷ್ಟು ಕಾರಣಗಳು ಸಹ ಇವೆ. ಶತಾಯಗತಾಯ 2028ರಲ್ಲಿಯೂ ಕರ್ನಾಟಕವನ್ನ ಗೆಲ್ಬೇಕು ಅನ್ನೋದು ಕಾಂಗ್ರೆಸ್ ಹೈಕಮಾಂಡ್​ನ ಉದ್ದೇಶ. ಇಲ್ಲಿ ಗೆಲುವು ಅನ್ನೋದು ಕೇವಲ ಅಧಿಕಾರಕ್ಕಾಗಿಯಲ್ಲ. ಮುಂದಿನ ಅವಧಿಗೂ ಅಧಿಕಾರ ತಮ್ಮ ಬಳಿಯೇ ಇರ್ಬೇಕು ಅಂದ್ರೆ 2023ರ ಇತಿಹಾಸ ಮತ್ತೆ ಮರುಕಳಿಸಬೇಕು.. ಆ ಹಿಸ್ಟರಿ ರಿಪೀಟ್ ಆಗ್ಬೇಕು ಅಂದ್ರೆ, ಅಲ್ಲಿ ಜೋಡೆತ್ತು ಮೋಡಿ ಮಾಡ್ಬೇಕು. ಹೀಗಾಗಿಯೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಈಗಾಗಲೇ ನಿರ್ದಿಷ್ಟ ಜವಾಬ್ದಾರಿಯನ್ನ &amp;nbsp;ಹೈಕಮಾಂಡ್ ವಹಿಸಿದೆ. ಒಬ್ಬರು ಅಹಿಂದ ಕೋಟೆಯನ್ನ ರಕ್ಷಿಸೋಕೆ ಅಖಾಡಕ್ಕಿಳಿದ್ರೆ, ಮತ್ತೊಬ್ಬರು ಶತ್ರಪಾಳಯವನ್ನ ಕಬ್ಜಾ ಮಾಡೋಕೆ ಮುನ್ನುಗ್ಗಲಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/22-months-to-karnataka-elections-inside-the-siddaramaiah-and-dk-shivakumar-2028-plan-gdp-videoshow-hgb7ggi"/>
        </item>
        <item>
            <title><![CDATA[ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪಗೆ ಬಿಡದ ಕಾನೂನು ಸಂಕಷ್ಟ; ಆಗಿದ್ದೇನು ಗೊತ್ತಾ?]]></title>
            <link>https://kannada.asianetnews.com/state/former-deputy-chief-minister-ks-eshwarappa-is-in-legal-trouble-do-you-know-what-happened/articleshow-i2dihpw</link>
            <guid isPermaLink="true">https://kannada.asianetnews.com/state/former-deputy-chief-minister-ks-eshwarappa-is-in-legal-trouble-do-you-know-what-happened/articleshow-i2dihpw</guid>
            <pubDate>Fri, 03 Jul 2026 15:31:02 +0530</pubDate>
            <description><![CDATA[&lt;p&gt;ಬಿಜೆಪಿ ಹಿರಿಯ ನಾಯಕ ಕೆ.ಎಸ್&zwnj;.ಈಶ್ವರಪ್ಪ ಅವರು ಎದುರಿಸುತ್ತಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. 2012ರಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ಅನ್ವಯ, ಈಶ್ವರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್&zwnj;ಐಆರ್ ದಾಖಲಿಸಿದ್ದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kms072ysmz8zjcb80ms8j7ye,imgname-ks-eshwarappa--1774660586457.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಜೆಪಿ ಹಿರಿಯ ನಾಯಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್&zwnj;.ಈಶ್ವರಪ್ಪ ಅವರಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಅವರ ಮೇಲಿನ ಪ್ರಕರಣವೊಂದನ್ನು ರದ್ದು ಪಡಿಸಲು ಕೋರಿದ್ದ ಅರ್ಜಿಯನ್ನು ಹೈ ಕೋರ್ಟ್ ವಜಾಗೊಳಿಸಿದೆ. ಈ ನಿಟ್ಟಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಮೇಲಿದ್ದ ಆ ಪ್ರಕರಣವಾದರೂ ಯಾವುದು? ಈಶ್ವರಪ್ಪ ವಿರುದ್ಧ ಕೇಸ್&zwnj; ದಾಖಲಿಸಿದ ವ್ಯಕ್ತಿ ಯಾರು? ಹೀಗೆ ಪ್ರಕರಣದ ಪ್ರತಿ ಮಾಹಿತಿಯನ್ನು ಎಳೆ-ಎಳೆಯಾಗಿ ಇಲ್ಲಿ ಬಿಚ್ಚಿಡಲಾಗಿದೆ.&lt;/p&gt;&lt;h2&gt;&lt;strong&gt;ಅಷ್ಟಕ್ಕೂ ಅದು ಯಾವ ಪ್ರಕರಣ?&lt;/strong&gt;&lt;/h2&gt;&lt;p&gt;ಹೌದು ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಕೆ.ಎಸ್&zwnj;.ಈಶ್ವರಪ್ಪ ಅವರು ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೆ.ಎಸ್.ಈಶ್ವರಪ್ಪ ಕೇಸ್&zwnj; ರದ್ದು ಕೋರಿ ನೀಡಿದ ಅರ್ಜಿಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈ ಕೋರ್ಟ್ ಪೀಠ ವಜಾಗೊಳಿಸಿದೆ. ಆದ್ದರಿಂದ ಈಗ ಅವರು ಹೆಚ್ಚಿನ ಕಾನೂನು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ವಕೀಲರ ಮನವಿ ಏನು?&lt;/strong&gt;&lt;/h2&gt;&lt;p&gt;ಕೆ.ಎಸ್&zwnj; ಈಶ್ವರಪ್ಪ ಪರ ಹಿರಿಯ ವಕೀಲ ಅಶೋಕ್&zwnj; ಹಾರನಹಳ್ಳಿ ಅವರು, ಲೋಕಾಯುಕ್ತ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಎಸ್&zwnj; ಪಿಪಿ ವೆಂಕಟೇಶ್&zwnj; ಅರಬಟ್ಟಿ ತನಿಖೆಗೆ ಸಹಕರಿಸಿದರೆ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಕೋರ್ಟ್&zwnj;ಗೆ ತಿಳಿಸಿದ್ದಾರೆ. ಕೇಸ್&zwnj; ಹಿನ್ನೆಲೆ ನೋಡಿದರೆ, ಕೆ.ಎಸ್. ಈಶ್ವರಪ್ಪ ವಿರುದ್ಧ ವಕೀಲ ಬಿ. ವಿನೋದ್ ಖಾಸಗಿ ದೂರು ದಾಖಲಿಸಿದ್ದಾರೆ. ಈಶ್ವರಪ್ಪ ಅವರು ಸಚಿವರಾಗಿದ್ದ ಅವಧಿಯಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ತಮ್ಮ ಹಾಗೂ ತಮ್ಮ ಕುಟುಂಬದವರ (ಮಗ ಕಾಂತೇಶ್ ಮತ್ತು ಸೊಸೆ ಶಾಲಿನಿ) ಹೆಸರಿನಲ್ಲಿ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ವಕೀಲ ಬಿ. ವಿನೋದ್ ಅವರು 2012ರಲ್ಲೇ ಶಿವಮೊಗ್ಗದ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.&lt;/p&gt;&lt;h2&gt;&lt;strong&gt;ಸುದೀರ್ಘ ಕಾನೂನು ಹೋರಾಟ!&lt;/strong&gt;&lt;/h2&gt;&lt;h2&gt;ಆರಂಭದಲ್ಲಿ ತಾಂತ್ರಿಕ ಕಾರಣಗಳಿಂದಾಗಿ (ಪ್ರಾಸಿಕ್ಯೂಷನ್ ಅನುಮತಿ ಇಲ್ಲದ ಕಾರಣ) ಈ ದೂರನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಕೀಲ ಬಿ. ವಿನೋದ್ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ತದನಂತರ ಹೈಕೋರ್ಟ್ ಸೂಚನೆ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣದ ಮರುಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿತು.&lt;/h2&gt;&lt;h2&gt;&lt;strong&gt;ಎಫ್&zwnj;ಐಆರ್ ದಾಖಲು!&lt;/strong&gt;&lt;/h2&gt;&lt;p&gt;ಈ ಖಾಸಗಿ ದೂರಿನ ಆಧಾರದ ಮೇಲೆಯೇ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನಿರ್ದೇಶನದಂತೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಕುಟುಂಬದವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್&zwnj;ಐಆರ್ (FIR) ದಾಖಲಾಯಿತು.ಮಾನನಷ್ಟ ಮೊಕದ್ದಮೆ: ಇದೇ ವಕೀಲ ಬಿ. ವಿನೋದ್ ಅವರ ವಿರುದ್ಧ ಕೆ.ಎಸ್. ಈಶ್ವರಪ್ಪ ಅವರು &quot;ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದಾರೆ&quot; ಎಂದು ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿ ವಿನೋದ್ ಅವರು ಈಶ್ವರಪ್ಪ ವಿರುದ್ಧ ಮತ್ತೊಂದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (IPC 499, 500) ಕೂಡ ದಾಖಲಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>politics</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/former-deputy-chief-minister-ks-eshwarappa-is-in-legal-trouble-do-you-know-what-happened/articleshow-i2dihpw"/>
        </item>
        <item>
            <title><![CDATA[ಮುಖ್ಯಮಂತ್ರಿ ವಿಜಯ್​- ನಟಿ ತ್ರಿಶಾ ವಿರುದ್ಧ ಹೇಳಿಕೆ:  ಶಾಸಕ ಅರೆಸ್ಟ್​- ಅಂಥದ್ದೇನು ಹೇಳಿದ್ರು ನೋಡಿ]]></title>
            <link>https://kannada.asianetnews.com/politics/dmk-mla-anitha-radhakrishnan-arrested-over-remarks-against-cm-vijay-and-trisha-suc/articleshow-oedt2cp</link>
            <guid isPermaLink="true">https://kannada.asianetnews.com/politics/dmk-mla-anitha-radhakrishnan-arrested-over-remarks-against-cm-vijay-and-trisha-suc/articleshow-oedt2cp</guid>
            <pubDate>Sat, 04 Jul 2026 19:51:40 +0530</pubDate>
            <description><![CDATA[ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಮತ್ತು ನಟಿ ತ್ರಿಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಡಿಎಂಕೆ ಶಾಸಕ ಅನಿತ ರಾಧಾಕೃಷ್ಣನ್ ಅವರನ್ನು ಬಂಧಿಸಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಟಿವಿಕೆ ಸರ್ಕಾರದ ರಾಜಕೀಯ ಪ್ರೇರಿತ ನಡೆ ಎಂದು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwpr194s75z47528xv370xrx,imgname-vijay-and-trisha-1783174833305.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ದಳಪತಿ ವಿಜಯ್ ಮತ್ತು ಅವರ ಸ್ನೇಹಿತೆ, ನಟಿ ತ್ರಿಶಾ ಕೃಷ್ಣನ್​ (Joseph Vijay and Trisha Krishnan) ವಿರುದ್ಧ ಅವಹೇಳನಕಾರಿ ಮತ್ತು ಅಸಭ್ಯ ಹೇಳಿಕೆ ನೀಡಿದ ಡಿಎಂಕೆ ಶಾಸಕ ಅನಿತ ರಾಧಾಕೃಷ್ಣನ್ ಅವರನ್ನು ಅರೆಸ್ಟ್​ ಮಾಡಲಾಗಿದೆ. ತಮ್ಮ ಮೇಲೆ ದೂರು ದಾಖಲಾಗುತ್ತಿದ್ದಂತೆಯೇ ನಿರೀಕ್ಷಣಾ ಜಾಮೀನು ಕೋರಿ ಅವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್​ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅರೆಸ್ಟ್​ ಮಾಡಲಾಗಿದೆ. ತಿರುಚೆಂಡೂರು ಶಾಸಕರಾಗಿರುವ ಅನಿತ ರಾಧಾಕೃಷ್ಣನ್ ಅವರನ್ನು ಮೊದಲು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುವ ಮೊದಲು ವೈದ್ಯಕೀಯ ಪರೀಕ್ಷೆ ನಡೆಸಿದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆಯೇ ಅಥವಾ ಸ್ಥಳೀಯ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.&lt;/p&gt;&lt;h2&gt;&lt;strong&gt;ಏನಿದು ವಿವಾದ?&lt;/strong&gt;&lt;/h2&gt;&lt;p&gt;ಜೂನ್ 20 ರಂದು ಅನಿತ ರಾಧಾಕೃಷ್ಣನ್ ಅವರು ಮುಖ್ಯಮಂತ್ರಿ ವಿಜಯ್​ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾದ ವಿವಾದಾತ್ಮಕ ಭಾಷಣ ಇದಾಗಿದೆ. ಈ ಹೇಳಿಕೆಗಳಲ್ಲಿ ನಟಿ ತ್ರಿಶಾ ವಿಜಯ್ ಹಂಚಿಕೊಂಡ ಹುಟ್ಟುಹಬ್ಬದ ಫೋಟೋದ ಉಲ್ಲೇಖವೂ ಸೇರಿದೆ. ನಟಿ ತ್ರಿಶಾ ಅವರ ಹುಟ್ಟುಹಬ್ಬದಂದು ಸಿಎಂ ಜೋಸೆಫ್​ ವಿಜಯ್​ ಅವರು ವಿಧಾನಸಭೆಯಲ್ಲಿ ಇದ್ದರು. ಇದನ್ನು ಅಣಕಿಸಿದ್ದ, ಅನಿತ ರಾಧಾಕೃಷ್ಣನ್​, 'ನಾನು ನಟಿಯೊಂದಿಗೆ ಮನೆಯಲ್ಲಿ ಎಷ್ಟು ಸಂತೋಷವಾಗಿದ್ದೆ, ಈಗ ನಾನು ಇಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದು ವಿಜಯ್​ ಅವರು ಅಂದುಕೊಳ್ಳುತ್ತಿರುವಂತೆ ಕಾಣುತ್ತಿದೆ' ಎಂದಿದ್ದರು. ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮತ್ತು ದ್ವೇಷ ಅಥವಾ ಕೆಟ್ಟ ಇಚ್ಛೆಯನ್ನು ಉತ್ತೇಜಿಸುವ ಉದ್ದೇಶದಿಂದ ಹೇಳಿಕೆಗಳನ್ನು ಒಳಗೊಂಡಂತೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ರಾಧಾಕೃಷ್ಣನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೂನ್ 23 ರಂದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 352 ಮತ್ತು 353 ರ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಸೆಕ್ಷನ್&zwnj;ಗಳು ಉದ್ದೇಶಪೂರ್ವಕ ಅವಮಾನ ಮತ್ತು ದ್ವೇಷವನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿವೆ.&lt;/p&gt;&lt;p&gt;ಪೊಲೀಸ್ ಮೂಲಗಳ ಪ್ರಕಾರ, ಎರಡು ಸಮನ್ಸ್&zwnj;ಗಳನ್ನು ಸ್ವೀಕರಿಸಿದ್ದರೂ ಅನಿತ ರಾಧಾಕೃಷ್ಣನ್ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಲಿಲ್ಲ. ನಂತರ ಅವರು ನಿರೀಕ್ಷಣಾ ಜಾಮೀನಿಗಾಗಿ ಮದ್ರಾಸ್ ಹೈಕೋರ್ಟ್&zwnj;ಗೆ ಮೊರೆ ಹೋದರು, ಆದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು, ಇದು ಅವರ ಬಂಧನಕ್ಕೆ ದಾರಿ ಮಾಡಿಕೊಟ್ಟಿತು. ಆಡಳಿತಾರೂಢ ಟಿವಿಕೆ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷದ ನಾಯಕನ ವಿರುದ್ಧ ಇದು ಮೊದಲ ಪ್ರಮುಖ ರಾಜಕೀಯ ಕ್ರಮವಾಗಿದೆ. ಇದು ಸರ್ಕಾರ ಮತ್ತು ವಿರೋಧ ಪಕ್ಷದ ಡಿಎಂಕೆ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.&lt;/p&gt;&lt;h3&gt;&lt;strong&gt;ಸಿನಿಮಾ ಶೈಲಿಯ ಪೊಲೀಸ್ ರಾಜ್: ಸ್ಟಾಲಿನ್&lt;/strong&gt;&lt;/h3&gt;&lt;p&gt;ಡಿಎಂಕೆ ಬಂಧನವನ್ನು ಸರ್ಕಾರದ &quot;ಅತಿಯಾದ ಕ್ರಮ&quot; ಎಂದು ಕರೆದಿದೆ. ರಾಜ್ಯ ಎದುರಿಸುತ್ತಿರುವ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಇದು ಎಂದು ಪಕ್ಷ ಆರೋಪಿಸಿದೆ. ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳು ಮತ್ತು ವಿರೋಧ ಪಕ್ಷಗಳ ಶಾಸಕರನ್ನು ಸೆಳೆಯಲು ಟಿವಿಕೆ ಕುದುರೆ ವ್ಯಾಪಾರ ಮಾಡುತ್ತಿರುವ ಆರೋಪಗಳು ಈ ವಿಷಯಗಳಲ್ಲಿ ಸೇರಿವೆ. ಟಿವಿಕೆ ಈ ಆರೋಪಗಳನ್ನು ನಿರಾಕರಿಸಿದೆ.&lt;/p&gt;&lt;p&gt;ಡಿಎಂಕೆ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬಂಧನವನ್ನು ಬಲವಾಗಿ ಟೀಕಿಸಿದ್ದಾರೆ. ಶಾಸಕರಿಗೆ ಇನ್ನೂ ಕಾನೂನು ಮಾರ್ಗವಿದ್ದರೂ ಸರ್ಕಾರ ಆತುರದಿಂದ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 'ಎಕ್ಸ್' ಕುರಿತು ಹೇಳಿಕೆಯಲ್ಲಿ, ಮುಖ್ಯಮಂತ್ರಿ ವಿಜಯ್ &quot;ಸಿನಿಮಾ ಶೈಲಿಯ ಪೊಲೀಸ್ ರಾಜ್&quot; ನಡೆಸುತ್ತಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ಶ್ರೀವೈಕುಂಠಂನ ಟಿವಿಕೆ ಶಾಸಕಿಯ ವಿರುದ್ಧ ಸಾಮೂಹಿಕ ಅತ್ಯಾ*ಚಾರ ಸಂತ್ರಸ್ತೆ ನೀಡಿದ ದೂರಿನ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಕಾರಣವೇನು ಎಂದು ಅವರು ಪ್ರಶ್ನಿಸಿದರು. ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಮತ್ತು ವಿರೋಧ ಪಕ್ಷಗಳ ಶಾಸಕರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವತ್ತ ಗಮನಹರಿಸಿದೆ ಎಂದು ಅವರು ಆರೋಪಿಸಿದರು. ಕೇವಲ ಮಾನನಷ್ಟಕ್ಕಾಗಿ ಬಂಧನಗಳನ್ನು ಮಾಡಲು ಸಾಧ್ಯವಾದರೆ, &quot;ಇಂದಿನ ಅನೇಕ ಸಚಿವರು&quot; ಸಹ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.&lt;/p&gt;&lt;h3&gt;&lt;strong&gt;ಕನಿಮೋಳಿ ಕರುಣಾನಿಧಿ ಏನು ಹೇಳಿದರು?&lt;/strong&gt;&lt;/h3&gt;&lt;p&gt;ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಕೂಡ ಬಂಧನವನ್ನು ಖಂಡಿಸಿದರು. ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸುವಾಗ ವಿರೋಧ ಪಕ್ಷದ ಶಾಸಕಿಯನ್ನು &quot;ಸರ್ವಾಧಿಕಾರಿ ರೀತಿಯಲ್ಲಿ&quot; ಬಂಧಿಸಲಾಗಿದೆ ಎಂದು ಅವರು ಆರೋಪಿಸಿದರು. ಡಿಎಂಕೆ ಇಂತಹ ದಮನಕಾರಿ ತಂತ್ರಗಳಿಗೆ ಎಂದಿಗೂ ಮಣಿಯುವುದಿಲ್ಲ ಎಂದು ಅವರು ಪ್ರತಿಪಾದಿಸಿದರು. ವಿರೋಧ ಪಕ್ಷದ ಟೀಕೆಗೆ ಟಿವಿಕೆ ಸರ್ಕಾರ ಇನ್ನೂ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/politics/dmk-mla-anitha-radhakrishnan-arrested-over-remarks-against-cm-vijay-and-trisha-suc/articleshow-oedt2cp"/>
        </item>
        <item>
            <title><![CDATA[ಡಿಕೆಶಿ ಸಿಎಂ ಆಗಿ ಒಂದು ತಿಂಗಳು ಕಳೆದಿಲ್ಲ, ರಾಜ್ಯದ ಎಲ್ಲ ಡ್ಯಾಂಗಳು ಖಾಲಿ: ಆರ್ ಅಶೋಕ್ ವಾಗ್ದಾಳಿ, ರೈತರಿಗೆ 50 ಸಾವಿರ ಪರಿಹಾರಕ್ಕೆ ಆಗ್ರಹ]]></title>
            <link>https://kannada.asianetnews.com/politics/karnataka-all-dams-empty-r-ashok-slams-cm-dk-shivakumar-at-krs-mandya-rav/articleshow-p3rm138</link>
            <guid isPermaLink="true">https://kannada.asianetnews.com/politics/karnataka-all-dams-empty-r-ashok-slams-cm-dk-shivakumar-at-krs-mandya-rav/articleshow-p3rm138</guid>
            <pubDate>Sat, 04 Jul 2026 14:11:04 +0530</pubDate>
            <description><![CDATA[ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಡಿಕೆ ಶಿವಕುಮಾರ್ ಸರ್ಕಾರದ ಅವಧಿಯಲ್ಲಿ ಡ್ಯಾಂಗಳು ಖಾಲಿಯಾಗಿರುವುದನ್ನು ಟೀಕಿಸಿದ್ದಾರೆ. ಕರ್ನಾಟಕದ ರೈತರಿಗೆ ಬೆಳೆ ಬೆಳೆಯದಂತೆ ಹೇಳುವ ಸರ್ಕಾರ, ತಮಿಳುನಾಡಿಗೆ ಇದೇ ಮಾತನ್ನು ಹೇಳಲು ಸವಾಲು ಹಾಕಿದ್ದು, ಬೆಳೆ ಬೆಳೆಯದ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-ani20250719161749,imgname-image-3aa984ee-c8bf-4e84-b547-cdbac43fbdac.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.4):&lt;/strong&gt; ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಒಂದು ತಿಂಗಳಲ್ಲೇ ರಾಜ್ಯದ ಎಲ್ಲ ಡ್ಯಾಂಗಳು ಖಾಲಿ ಖಾಲಿಯಾಗಿವೆ ಎಂದು ವಿರೋಧ ಪಕ್ಷದ ನಾಯಕ ಆರ್&zwnj; ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಇಂದು ಮಂಡ್ಯದ ಕೆಆರ್&zwnj;ಎಸ್&zwnj; ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಈ ಸಂದರ್ಭದಲ್ಲಿದ್ದ ಡ್ಯಾಂನ ನೀರಿನ ಮಟ್ಟದ ಕಾಲು ಭಾಗವೂ ಈ ವರ್ಷ ಇಲ್ಲ. ಈಗ ಕೇವಲ 6 ಟಿಎಂಸಿ ಮಾತ್ರ ನೀರು ಉಳಿದಿದೆ. ಆದರೆ ಪ್ರತಿ ತಿಂಗಳು ಕುಡಿಯುವ ನೀರಿಗೆ 3 ಟಿಎಂಸಿ ಬೇಕು. ಅದು ಅಲ್ಲದೆ ರೈತರು ಸುಮಾರು ಒಂದು ಲಕ್ಷ ಹೆಕ್ಟರ್&zwnj;ನಲ್ಲಿ ಬೆಳೆ ಬೆಳೆದಿದ್ದಾರೆ. ಡ್ಯಾಂ ಖಾಲಿ ಆಗಿವೆ ಬೆಳೆ ಬೆಳೆಯಬೇಡಿ ಅಂತೆಲ್ಲ ಸಿಎಂ ಹೇಳಿದ್ದಾರೆ. ಆದರೆ ನೀವು ಗಮನಿಸಿರಬೇಕು, ಮಧ್ಯಪ್ರಾಚ್ಯ ಯುದ್ಧ ನಡೆಯುವುದು ಚಿನ್ನದ ಬೆಲೆ ಭಾರೀ ಏರಿಕೆ ಆಗಿತ್ತು ಆಗ ಪ್ರಧಾನಿ ಮೋದಿಯವರು ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿದಾಗ, ಪ್ರಧಾನಿ ಹೇಳಿಕೆ ಖಂಡಿಸಿ ಇವರೇ(ಕಾಂಗ್ರೆಸ್) ಬಾಯಿಬಡಿದುಕೊಂಡರು ಈಗ ಬೆಳೆ ಬೆಳೆಯಬೇಡಿ ಎನ್ನುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.&lt;/p&gt;&lt;h2&gt;ಬೆಳೆ ಬೆಳೆಯಬೇಡಿ ಅಂತಾ ತಮಿಳುನಾಡಿಗೆ ಹೇಳಿ&lt;/h2&gt;&lt;p&gt;ತಮಿಳನಾಡಲ್ಲೂ ಇದೇ ಕಾಂಗ್ರೆಸ್ ಹೊಂದಾಣಿಗೆ ಮಾಡಿಕೊಂಡಿರುವ ಪಕ್ಷ ಇದೆ. ಆದರೆ ಅಲ್ಲಿನ ಕಾಂಗ್ರೆಸ್ ನಾಯಕರೇ ಕರ್ನಾಟಕ ಸರ್ಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ. ಸಿಎಂ ಡಿಕೆಶಿ ಅವ್ರೇ ನಮ್ಮ ರೈತರಿಗೆ ಬೆಳೆ ಬೆಳೆಯಬೇಡಿ ಅಂತಾ ಹೇಳ್ತಿರಿ, ಇದೇ ರೀತಿ ತಮಿಳುನಾಡಿಗೆ ಹೇಳಿ ನೋಡೋಣ. ಕಳೆದ ಬಾರಿ ಸ್ಟಾಲಿನ್ ಇದ್ರು. ಈ ಬಾರಿ ಟಿವಿಕೆ ಜೊತೆ ಕಾಂಗ್ರೆಸ್ ಪಾರ್ಟನರ್ ಆಗಿದೆಯಲ್ಲ. ನಮ್ಮ ರಾಜ್ಯದಲ್ಲಿ ಮಳೆಯಿಲ್ಲ, ಡ್ಯಾಂಗಳು ಖಾಲಿಯಾಗಿವೆ. ಇಲ್ಲಿನ ಜನರಿಗೆ ಕುಡಿಯೋಕೂ ನೀರಿಲ್ಲ. ಬೆಳೆ ಬೆಳೆಯಬೇಡಿ ಅಂತಾ ಹೇಳಿ ನೋಡೋಣ ಎಂದು ಸವಾಲು ಹಾಕಿದರು.&lt;/p&gt;&lt;p&gt;ಸರ್ಕಾರ ಇಂಥ ಸಂದರ್ಭದಲ್ಲಿ ರೈತರು, ಸರ್ವಪಕ್ಷದ ಸಭೆ ಕರೆಯಬೇಕಿತ್ತು. ಆದರೆ ಸರ್ಕಾರ ಕಸದ ಟೆಂಡರ್, ಟನಲ್ ರೋಡ್ ಟೆಂಡರ್ ಕರೆಯೋದ್ರಲ್ಲಿ ಆಸಕ್ತಿ ತೋರಿಸುತ್ತಿದೆ. ಮಳೆ ಅಭಾವದ ಸಂಧರ್ಭದಲ್ಲಿ ಆಗಬೇಕಾದ ಕ್ರಮ ಕುರಿತು ಚರ್ಚಿಸಲು ಈ ಸರ್ಕಾರಕ್ಕೆ ಮನಸಿಲ್ಲ, ಕಾಳಜಿನೇ ಇಲ್ಲ. ರೈತರ ಸಮಸ್ಯೆ ಕೇಳಲು ಕೃಷಿ ಸಚಿವರಿಲ್ಲ, ಸಂಪುಟ ರಚನೆಯಂತೂ ಪೂರ್ಣಗೊಂಡಿಲ್ಲ. ಪೇಮೆಂಟ್ ಕ್ಯಾಬಿನೆಟ್&zwnj;ಗೆ ಕಾಯ್ತಿದ್ದಾರ? ದೆಹಲಿಯವರಿಗೆ ದುಡ್ಡು ಕೊಟ್ಟು ಕ್ಯಾಬಿನೆಟ್ ಸ್ಥಾನ ಪಡೆಯಬೇಕು, ಅದರಲ್ಲಿ ಅನುಮಾನವೇ ಇಲ್ಲ. ಡಿಕೆ ಶಿವಕುಮಾರ್ ಸರ್ಕಾರ ದೆಹಲಿ ಕಾಂಗ್ರೆಸ್ ಹೈಕಮಾಂಡ್&zwnj;ನ ಎಟಿಎಂ ಅಗಿದೆ ಎಂದು ಆರೋಪಿಸಿದರು.&lt;/p&gt;&lt;p&gt;ರಾಜ್ಯದಲ್ಲಿ ಕುಡಿಯೋಕೂ ನೀರಿಲ್ಲದೆ ಹಾಹಾಕಾರ ಶುರುವಾಗಿದೆ. ಬೆಳೆ ಬೆಳೆಯಬೇಡಿ ಅಂತೀರಲ್ಲ ಬೆಳೆ ಬೆಳೆಯದೆ ಹೊಟ್ಟೆಗೇನು ಕಡ್ಲೇಕಾಯಿ ತಿನ್ನಬೇಕಾ? ಆಯ್ತಪ್ಪ ಬೆಳೆ ಬೆಳೆಯೋದು ಬೇಡ ಅಂದ್ರೆ ರೈತರಿಗೆ ಪರಿಹಾರ ಆದ್ರೂ ನೀಡಬೇಕಿತ್ತಲ್ಲ? ಮಳೆ ಕೈಕೊಟ್ಟಿದ್ದರಿಂದ ಪರ್ಯಾಯ ಯೋಜನೆಯಾದ್ರೂ ಈ ಸರ್ಕಾರ ಮಾಡಬೇಕಿತ್ತಲ್ವಾ? ಮಳೆ ಕೊರತೆ ಆಗಿದೆ ಹೆದರಬೇಡಿ, ನಿಮ್ಮ ಜೊತೆಗೆ ನಾವಿದ್ದೇವೆ ಅಂತ ಸರ್ಕಾರ ರೈತರ ಜೊತೆ ನಿಲ್ಲಬೇಕಿತ್ತಲ್ಲ? ಅವರಿಗಾಗುವ ನಷ್ಟ ತುಂಬಿಕೊಡ್ತೀವಿ ಎಂಬ ಧೈರ್ಯ ಹೇಳಬೇಕಿತ್ತಲ್ಲ? ಹೂಂ ಇದ್ಯಾವುದು ಹೇಳದೆ ಬೆಳೆ ಬೆಳೆಯಬೇಡಿ ಅಂದ್ರೆ ಕೃಷಿಯನ್ನೇ ಅವಲಂಬಿಸಿರೋ ರೈತರು ಹೇಗೆ ಬದುಕಬೇಕು? ಎಂದು ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;h3&gt;ಬೆಳೆ ಬೆಳೆಯದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ಕೊಡಿ:&lt;/h3&gt;&lt;p&gt;ಬೆಳೆ ಬೆಳೆಯದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ಕೊಡುವಂತೆ ಆಗ್ರಹಿಸಿದ ಆರ್ ಅಶೋಕ್, ಸದ್ಯ ಕೆಆರ್&zwnj;ಎಸ್ ಡ್ಯಾಂ&zwnj;ಗೆ 900ಕ್ಯೂಸೆಕ್ ಒಳಹರಿವು ಇದೆ. ಒಳಹರಿವಿಗಿಂತ ಹೆಚ್ಚು ಹೊರ ಹರಿವು ಇದೆ. ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡುವ ಪ್ಲಾನ್ ಮಾಡ್ಕೊಂಡಿದ್ದಾರಾ, ಗೊತ್ತಿಲ್ಲ? ನಿಜಕ್ಕೂ ಈ ಸರ್ಕಾರ ಜೀವಂತ ಇದ್ರೆ ಮೊದಲು ರೈತರಿಗೆ ಪರಿಹಾರ ಕೊಡುವ ಘೋಷಣೆ ಮಾಡಲಿ. ಇಲ್ಲದಿದ್ರೆ ನಮ್ಮ ಸರ್ಕಾರ ಪಾಪಾರ್ ಆಗಿದೆ ಅಂತಾದ್ರೂ ಹೇಳಿಬಿಡಲಿ. ಅದುಬಿಟ್ಟು&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/karnataka-all-dams-empty-r-ashok-slams-cm-dk-shivakumar-at-krs-mandya-rav/articleshow-p3rm138"/>
        </item>
        <item>
            <title><![CDATA[ಮನೆಯಲ್ಲೇ ಕುಳಿತು SIR ಫಾರ್ಮ್​ ತುಂಬೋದು ಹೇಗೆ? ಮತದಾರರ ಪರಿಷ್ಕರಣೆಯ ಹಂತ ಹಂತದ ಮಾಹಿತಿ]]></title>
            <link>https://kannada.asianetnews.com/india-news/how-to-fill-voter-id-sir-enumeration-form-online-and-offline-step-by-steps-here-suc/articleshow-pshygg2</link>
            <guid isPermaLink="true">https://kannada.asianetnews.com/india-news/how-to-fill-voter-id-sir-enumeration-form-online-and-offline-step-by-steps-here-suc/articleshow-pshygg2</guid>
            <pubDate>Fri, 03 Jul 2026 12:22:59 +0530</pubDate>
            <description><![CDATA[ಕರ್ನಾಟಕದಲ್ಲಿ 24 ವರ್ಷಗಳ ನಂತರ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಆರಂಭವಾಗಿದೆ. ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ತೆಗೆದುಹಾಕುವುದನ್ನು ತಪ್ಪಿಸಲು, ಜುಲೈ 29ರೊಳಗೆ ಆನ್&zwnj;ಲೈನ್ ಅಥವಾ ಆಫ್&zwnj;ಲೈನ್ ಮೂಲಕ ಎನ್ಯುಮರೇಶನ್&zwnj; ಅರ್ಜಿಯನ್ನು ಕಡ್ಡಾಯವಾಗಿ ತುಂಬಬೇಕು.]]></description>
            <media:content url="https://static.asianetnews.com/images/w-1280,h-720,format-jpg,imgid-01kwkc0qwdgvyrypdkwkh6dces,imgname-sir-1783061569421.jpg" type="image/jpeg" height="390" width="690"/>
            <content:encoded><![CDATA[&lt;p&gt;ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಇದಾಗಲೇ ಹಲವು ರಾಜ್ಯಗಳಲ್ಲಿ ಮುಗಿದಿದ್ದು, ಕರ್ನಾಟಕದಲ್ಲಿಯೂ ಆರಂಭವಾಗಿದೆ. 24 ವರ್ಷಗಳ ಬಳಿಕ ಅಂದರೆ 2002ರ ನಂತರ ಮತ್ತೆ ಇದನ್ನು ಆರಂಭಿಸಲಾಗಿದೆ. ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ತೆಗೆಯಬಾರದು ಎಂದು ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸಲೇಬೇಕು. ಇದಾಗಲೇ ಸಿಬ್ಬಂದಿ ಮನೆಮನೆಗೆ ತೆರಳಿ ಈ ಕಾರ್ಯವನ್ನು ಜಾರಿಗೊಳಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಮತದಾರರು ಎನ್ಯುಮರೇಶನ್&zwnj; ಅರ್ಜಿ ತುಂಬಬೇಕಿದ್ದು, ಇದಕ್ಕೆ ಮೊನ್ನೆ ಜೂನ್&zwnj; 30 ರಿಂದ ಚಾಲನೆ ಸಿಕ್ಕಿದೆ. ಈ ಜುಲೈ 29ರವರೆಗೂ ಇದಕ್ಕೆ ಅವಕಾಶವಿದೆ.&lt;/p&gt;&lt;p&gt;ಒಂದು ವೇಳೆ ನೀವು ಈ ಹಂತದಲ್ಲಿ ಮಾಹಿತಿ ನೀಡದಿದ್ದರೆ ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ. ಮನೆಯಲ್ಲಿಯೇ ಕುಳಿತು ಈ ಅರ್ಜಿಯನ್ನು ತುಂಬಬಹುದಾಗಿದೆ. ಇದು ಸಾಧ್ಯವಿಲ್ಲದೇ ಹೋದರೆ ಆಫ್​ಲೈನ್​ನಲ್ಲಿಯೂ ಅವಕಾಶ ಇದದ್ದೇ. ಇವರೆಡರ ಬಗ್ಗೆ ಸಂಪೂರ್ಣ ಡಿಟೇಲ್ಸ್​ ಇಲ್ಲಿ ನೀಡಲಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;Onlineನಲ್ಲಿ SIR ಪ್ರಕ್ರಿಯೆ ಪೂರ್ಣಗೊಳಿಸೋ ಬಗೆ ಹೀಗಿದೆ:&lt;/strong&gt;&lt;/h2&gt;&lt;p&gt;- https://voters.eci.gov.in/ ಪೋರ್ಟಲ್​ ಆನ್​ ಮಾಡಿ&lt;/p&gt;&lt;p&gt;- &lsquo;Fill Enumeration Form' ಎಂಬ ಆಯ್ಕೆ ಆರಂಭದಲ್ಲಿಯೇ ಇದೆ. ಕೊನೆಯ SIRನಲ್ಲಿ ಹೆಸರು ಇದೆಯೇ ಎನ್ನುವುದನ್ನೂ ಕೂಡ ನೀವು ಇಲ್ಲಿಯೇ ನೋಡಬಹುದು.&lt;/p&gt;&lt;p&gt;- ನಿಮ್ಮ ಎಪಿಕ್ ನಂಬರ್ (ಮತದಾರರ ಗುರುತಿನ ಚೀಟಿಯ ಸಂಖ್ಯೆ) ಅಥವಾ ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಬೇಕು. ಒಂದು ವೇಳೆ&zwnj; ನಿಮ್ಮ ವೋಟರ್&zwnj; ಐಡಿಗೆ ಮೊಬೈಲ್&zwnj; ನಂಬರ್&zwnj; ಲಿಂಕ್ ಆಗಿದ್ದರೆ ನಿಮಗೆ ಮೊಬೈಲ್&zwnj; ಸಂಖ್ಯೆ ಮೂಲಕ ಲಾಗಿನ್&zwnj; ಆಗುವ ಅವಕಾಶವಿದೆ. ಮೊಬೈಲ್&zwnj; ನಂಬರ್&zwnj; ಲಿಂಕ್&zwnj; ಆಗಿಲ್ಲದಿದ್ದರೆ, ಆನ್&zwnj;ಲೈನ್&zwnj; ಮೂಲಕ ನೀವು ಎನ್ಯುಮರೇಶನ್&zwnj; ಫಾರ್ಮ್&zwnj; ಅನ್ನು ಭರ್ತಿ ಮಾಡಲು ಆಗುವುದಿಲ್ಲ.&lt;/p&gt;&lt;p&gt;- ನಿಮ್ಮ ಮೊಬೈಲ್ ನಂಬರ್ ವೋಟರ್ ಐಡಿಗೆ ಲಿಂಕ್ ಆಗಿರದಿದ್ದರೆ, 'Form 8' ಮೂಲಕ ತಕ್ಷಣವೇ ಲಿಂಕ್ ಮಾಡಬಹುದು. ಆಧಾರ್ OTP ಬಳಸಿ ಇದನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. ಚುನಾವಣಾ ಆಯೋಗವು ಇದಕ್ಕೆ ಅಲ್ಲಿಯೇ ಅವಕಾಶವನ್ನು ನೀಡಿದೆ.&lt;/p&gt;&lt;p&gt;- ಮೊಬೈಲ್&zwnj; ಲಿಂಕ್&zwnj; ಆದ ಬಳಿಕ ಆನ್&zwnj;ಲೈನ್&zwnj;ನಲ್ಲಿ ನಿಮ್ಮ ಹೆಸರು, ಭಾಗದ ಸಂಖ್ಯೆ ಮತ್ತು ಸೀರಿಯಲ್ ನಂಬರ್ ಸರಿಯಾಗಿದೆಯೇ ಎಂದು ನೋಡಿ. ಆಧಾರ್&zwnj; ಕಾರ್ಡ್&zwnj;ನಲ್ಲಿನ ಹೆಸರು ಹಾಗೂ ವೋಟರ್&zwnj; ಐಡಿಯಲ್ಲಿರುವ ಹೆಸರಿಗೂ ಮ್ಯಾಚ್&zwnj; ಆಗಬೇಕು, ಏನಾದರೂ ತಪ್ಪುಗಳಿದ್ದರೆ, ಕರೆಕ್ಷನ್&zwnj; ಮಾಡಲು ನಿಮ್ಮ ಬಿಎಲ್&zwnj;ಒ ಮೂಲಕವೇ ಎನ್ಯುಮರೇಶನ್&zwnj; ಫಾರ್ಮ್&zwnj; ಅನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ, ಎನ್ಯುಮರೇಶನ್&zwnj; ಫಾರ್ಮ್&zwnj; ಭರ್ತಿಯಾಗಲ್ಲ. ಇಲ್ಲಿಯೂ ಕೂಡ ನಿಮ್ಮ ಬಿಎಲ್&zwnj;ಒ ಹೆಸರು ಹಾಗೂ ಅವರ ಮೊಬೈಲ್&zwnj; ನಂಬರ್&zwnj; ಅನ್ನು ಚುನಾವಣಾ ಆಯೋಗ ನೀಡಿರುತ್ತದೆ.&lt;/p&gt;&lt;p&gt;- ಎಲ್ಲ ಮಾಹಿತಿ ಸರಿಯಿದೆ ಎಂದು ದೃಢೀಕರಿಸಿದ ಬಳಿಕ 2002ರ SIRನಲ್ಲಿ ನಿಮ್ಮ ಪೋಷಕರ ಹೆಸರು ಇದ್ದರೆ, ಅವರ ವಿವರಗಳನ್ನು ಇಲ್ಲಿ ನಮೂದಿಸಿ Existing Detail ಎಂದು ಮಾರ್ಕ್ ಮಾಡಿ.&lt;/p&gt;&lt;p&gt;- ಅದಾದ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ. ಆಧಾರ್&zwnj; ನಂಬರ್&zwnj; ಐಚ್ಛಿಕವಾಗಿದ್ದು, ಮೊಬೈಲ್&zwnj; ಸಂಖ್ಯೆ, ತಂದೆ, ತಾಯಿ ಹೆಸರು ಹಾಗೂ ನಿಮ್ಮ ಇತ್ತೀಚಿನ ಭಾವಚಿತ್ರವನ್ನು ಅಪ್&zwnj;ಲೋಡ್&zwnj; ಮಾಡಿ. Submit ಬಟನ್​ ಕ್ಲಿಕ್​ ಮಾಡಿ.&lt;/p&gt;&lt;p&gt;- ನೀವು ಅರ್ಜಿಯನ್ನು ಸಬ್ಮಿಟ್​ ಕೊಟ್ಟ ಬಳಿಕ ಕೊನೆಯದಾಗಿ ಆಧಾರ್ OTP ಮೂಲಕ ಈ-ಸೈನ್ ಮಾಡಿದರೆ ನಿಮ್ಮ ಅರ್ಜಿ ಯಶಸ್ವಿಯಾಗಿ ಸಬ್ಮಿಟ್ ಆಗುತ್ತದೆ. ಅಲ್ಲಿಗೆ ನಿಮ್ಮ ಎನ್ಯುಮರೇಶನ್&zwnj; ಫಾರ್ಮ್&zwnj; ಭರ್ತಿಯಾಗಿರುತ್ತದೆ.&amp;nbsp;&lt;/p&gt;&lt;h3&gt;&lt;strong&gt;ಆಫ್&zwnj;ಲೈನ್&zwnj;ನಲ್ಲಿ ಹೀಗೆ ಫಾರ್ಮ್​ ತುಂಬಬೇಕು&lt;/strong&gt;&lt;/h3&gt;&lt;p&gt;ಮತಗಟ್ಟೆ ಮಟ್ಟದ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಫಾರ್ಮ್ ನೀಡುತ್ತಾರೆ. ಅದನ್ನು ಭರ್ತಿ ಮಾಡುವ ವಿಧಾನ ತುಂಬಾ ಸುಲಭವಾಗಿದ್ದು, ಅದರಲ್ಲಿ ಈ ಎಲ್ಲಾ ಮಾಹಿತಿ ಇರುತ್ತವೆ.&lt;/p&gt;&lt;p&gt;- ನಿಮ್ಮ ಹೆಸರು, ಮತದಾರರ ಗುರುತಿನ ಚೀಟಿಯ ಸಂಖ್ಯೆ ಮತ್ತು ವಿಳಾಸ ಈಗಾಗಲೇ ಮುದ್ರಣವಾಗಿರುತ್ತದೆ. ಅದನ್ನು ಒಮ್ಮೆ ಮರುಪರಿಶೀಲಿಸಿ. ಜೊತೆಗೆ ನಿಮ್ಮ ಕ್ಷೇತ್ರದ ಹೆಸರು, ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ ಕೂಡ ಇರುತ್ತದೆ. ಅದಲ್ಲದೇ ಕ್ಯೂಆರ್&zwnj; ಕೋಡ್&zwnj; ಮತ್ತು ನಿಮ್ಮ ಹಳೇ ಭಾವಚಿತ್ರ ಕೂಡ ಅರ್ಜಿಯಲ್ಲಿ ಮುದ್ರಣವಾಗಿರುತ್ತದೆ. ನಿಮ್ಮ ಬಿಎಲ್&zwnj;ಒ ಹೆಸರು ಹಾಗೂ ಅವರ ಸಂಖ್ಯೆ ಕೂಡ ಮೊದಲೇ ಮುದ್ರಣವಾಗಿರುತ್ತದೆ.&lt;/p&gt;&lt;p&gt;- ಹಳೇ ಫೋಟೋ ಪಕ್ಕದಲ್ಲೇ ಹೊಸ ಫೋಟೋವನ್ನು ಅಂಟಿಸಲು ಜಾಗ ನೀಡಲಾಗಿದ್ದು, ಅಲ್ಲಿ ನಿಮ್ಮ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ.&lt;/p&gt;&lt;p&gt;- ಒಂದು ವೇಳೆ ನೀವು 2002ರ ಎಸ್ಐಆರ್ ಪ್ರಕ್ರಿಯೆಯಲ್ಲಿ ಇರದಿದ್ದರೆ, ನಿಮ್ಮ ಕುಟುಂಬದ ಹಿರಿಯರ (ತಂದೆ/ತಾಯಿ/ಪತಿ) ಜೊತೆ ಮ್ಯಾಪಿಂಗ್ ಮಾಡಬೇಕಾಗುತ್ತದೆ. ನೀವು 2002ರ ಎಸ್&zwnj;ಐಆರ್&zwnj; ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೆ, ನಿಮ್ಮ ವಿವರಗಳನ್ನು, ನಿಮ್ಮ ತಂದೆ/ತಾಯಿ/ಪತಿಯ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಜೊತೆಗೆ ನಿಮ್ಮ ವಿಧಾನಸಭಾ ಕ್ಷೇತ್ರ, ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆಯನ್ನು ಕೂಡ ನಮೂದಿಸಬೇಕು.&lt;/p&gt;&lt;p&gt;- ನಿಮ್ಮ ಆಧಾರ್ ನಂಬರ್ ಐಚ್ಛಿಕವಾಗಿದ್ದು, ಮೊಬೈಲ್ ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಬೇಕು. ತಂದೆ/ತಾಯಿ ಅಥವಾ ಸಂಗಾತಿಯ ಹೆಸರು ಮತ್ತು ಅವರ ವೋಟರ್ ಐಡಿ ನಂಬರ್ ದಾಖಲಿಸಬೇಕು. ಮತದಾರರ ಗುರುತಿನ ಚೀಟಿ ಸಂಖ್ಯೆ ಲಭ್ಯವಿದ್ದರೆ ನಮೂದಿಸಬಹುದು, ಇಲ್ಲದಿದ್ದರೆ ಸಮಸ್ಯೆಯಿಲ್ಲ.&lt;/p&gt;&lt;p&gt;- ನೀವು ಮನೆಯಲ್ಲಿ ಇಲ್ಲದಿದ್ದರೂ ಸಹ, ನಿಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ಯಾವುದೇ ಸದಸ್ಯರು ಸಹಿ ಮಾಡಿ ಬಿಎಲ್&zwnj;ಓಗಳಿಗೆ ನೀಡಬಹುದು. ನೀವೇ ಇರಬೇಕು ಎಂಬುದು ಇಲ್ಲ. ನೀವು ಬಿಎಲ್&zwnj;ಒಗಳಿಗೆ ಇಷ್ಟು ಮಾಹಿತಿ ನೀಡಿದರೆ ಸಾಕು. ಅಲ್ಲಿಗೆ ನಿಮ್ಮ ಕೆಲಸ ಮುಗಿಯುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/how-to-fill-voter-id-sir-enumeration-form-online-and-offline-step-by-steps-here-suc/articleshow-pshygg2"/>
        </item>
        <item>
            <title><![CDATA[ಮಡದಿ..  ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!]]></title>
            <link>https://kannada.asianetnews.com/politics/cm-dk-shivakumar-10-bold-decisions-in-his-first-30-days-gdp-videoshow-r1hy8e8</link>
            <guid isPermaLink="true">https://kannada.asianetnews.com/politics/cm-dk-shivakumar-10-bold-decisions-in-his-first-30-days-gdp-videoshow-r1hy8e8</guid>
            <pubDate>Sat, 04 Jul 2026 13:36:55 +0530</pubDate>
            <description><![CDATA[ಮೂರು ವರ್ಷಗಳ ಹೋರಾಟದ ನಂತರ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್, ಮೊದಲ 30 ದಿನಗಳಲ್ಲಿ ತಮ್ಮ ಆಡಳಿತದ ಝಲಕ್ ತೋರಿಸಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡುತ್ತಾ, ತಮ್ಮ ರಾಜಕೀಯ ಚದುರಂಗದಾಟದ ಶೈಲಿಯಲ್ಲಿಯೇ ಅವರು ತೆಗೆದುಕೊಂಡ 10 ದಿಟ್ಟ ನಿರ್ಧಾರಗಳು ಕುತೂಹಲ ಮೂಡಿಸಿವೆ.]]></description>
            <media:content url="https://geo.dailymotion.com/player/x1tbu.html?video=xalas8u" medium="video" height="768" width="1024"/>
            <content:encoded><![CDATA[&lt;p&gt;ಮೂರು ವರ್ಷ ಮೌನ ಹೋರಾಟದ ಮೂಲಕ ಸಿಎಂ ಸಿಂಹಾಸನಕ್ಕೆ ಅಧಿಪತಿಯಾಗಿದ್ದಾರೆ ಡಿ.ಕೆ.ಶಿವಕುಮಾರ್. ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ತಮ್ಮ ಆಡಳಿತ ಹೇಗಿರುತ್ತೆ ಅನ್ನೋದ್ರ ಝಲಕ್ ತೋರಿಸಿದ್ದಾರೆ ಕನಕಾಧಿಪತಿ. ಇದಕ್ಕೆ ಅವರು ತೆಗೆದುಕೊಂಡಿರೋ ಆ 10 ದಿಟ್ಟ ನಿರ್ಧಾರಗಳೇ ಸಾಕ್ಷಿ. ಆಡಳಿತದ ಜೊತೆಗೆ, ಸಿಎಂ ಗದ್ದುಗೆ ಏರಿದ ಬಳಿಕ ಡಿಕೆ ಪಾಲಿಟಿಕ್ಸ್ ಸ್ಟೈಲ್​ನಲ್ಲಿಯೂ ಒಂದಿಷ್ಟು ಬದಲಾವಣೆಗಳಾಗಿವೆ. ಹಾಗಿದ್ರೆ &amp;nbsp;ಕಳೆದ 30 ದಿನಗಳಲ್ಲಿ ಡಿಕೆ ತೆಗೆದುಕೊಂಡಿರೋ ಆ ದಶ ದಿಟ್ಟ ನಿರ್ಧಾರಗಳು ಯಾವು..? ಮುಖ್ಯಮಂತ್ರಿ ಸಿಂಹಾಸನವನ್ನ ಅಲಂಕರಿಸಿದ ಬಳಿಕ ಹೇಗೆ ಬದಲಾಗಿದೆ ಕನಕಪುರ ಬಂಡೆ ಪಾಲಿಟಿಕ್ಸ್ ಸ್ಟೈಲ್.?&lt;/p&gt;&lt;p&gt;ಮೊದಲಿನಿಂದಲೂ ಅಭಿವೃದ್ಧಿ ಯೋಜನೆಗಳ ಕಡೆಗೆ ಹೆಚ್ಚು ಒತ್ತು ಕೊಡೋ ನಾಯಕ ಡಿ.ಕೆ.ಶಿವಕುಮಾರ್. ಮುಖ್ಯಮಂತ್ರಿಯಾದ ಬಳಿಕವೂ ಅದನ್ನವರು ಮುಂದುವರೆಸಿದ್ದಾರೆ. ಕಳೆದ 30 ದಿನದಲ್ಲಿ ಅವರು ಮಾಡಿರೋ ಬೃಹತ್ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಳೆ ಇದಕ್ಕೆ ಸಾಕ್ಷಿ. ಇವುಗಳ ಜೊತೆಗೆ ತಮ್ಮ ಕನಸಿನ ಯೋಜನೆಗಳನ್ನೂ ಜಾರಿಗೊಳಿಸೋ ನಿಟ್ಟಿನಲ್ಲಿಯೂ ಡಿಕೆ ದಿಟ್ಟ ಹೆಜ್ಜೆಗಳನ್ನ ಇಡ್ತಿದ್ದಾರೆ&lt;/p&gt;&lt;p&gt;ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಪಕ್ಕಾ ಚುದುರಂಗದಾಟಗಾರ. ರಿಸ್ಕ್ ತೆಗೆದುಕೊಂಡು ದೊಡ್ಡ ಸಕ್ಸಸ್ ಪಡೆಯೋದು ಅವರ ಟ್ರೇಡ್ ಮಾರ್ಕ್​. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಆ ಹಳೇ ಸ್ಟೈಲ್ ಬದಲಾಗಿಲ್ಲ. &amp;nbsp;ಒಂದು ದಿಟ್ಟ ನಿರ್ಧಾರದ ಮೂಲಕ ಎರಡು ಗುರಿಯನ್ನ ಮುಟ್ಟಿದ್ದಾರೆ ಸಿಎಂ ಡಿ.ಕೆ.ಶಿವಕುಮಾರ್.&amp;nbsp;&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/cm-dk-shivakumar-10-bold-decisions-in-his-first-30-days-gdp-videoshow-r1hy8e8"/>
        </item>
        <item>
            <title><![CDATA[ನಾನು ಇರೋವರೆಗೂ RSS ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ -ಪ್ರಿಯಾಂಕ್ ಖರ್ಗೆ ವಾರ್ನಿಂಗ್]]></title>
            <link>https://kannada.asianetnews.com/politics/karnataka-minister-priyank-kharge-on-rss-patha-sanchalna-rss-march-past/articleshow-uxtlscg</link>
            <guid isPermaLink="true">https://kannada.asianetnews.com/politics/karnataka-minister-priyank-kharge-on-rss-patha-sanchalna-rss-march-past/articleshow-uxtlscg</guid>
            <pubDate>Mon, 06 Jul 2026 13:33:12 +0530</pubDate>
            <description><![CDATA[&lt;p&gt;ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ RSS ವಿರುದ್ಧ ಗುಡುಗಿದ್ದಾರೆ. ನಾನು ಸಚಿವನಾಗಿ ಇರುವ ತನಕ ರಾಜ್ಯದಲ್ಲಿ RSS ಪಥಸಂಚಲನಕ್ಕೆ ನನ್ನ ಅನುಮತಿ ಕಡ್ಡಾಯ ಎಂದು ಕಿಡಿಕಾರಿದ್ದಾರೆ. ಖರ್ಗೆ ಹೇಳಿದ್ದೇನು ಅನ್ನೋ ವಿವರ ಇಲ್ಲಿದೆ. &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv6w824y24z2h373z5qxd0hy,imgname-priyank-kharge-mohan-bhagwat-1781568637086.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ನಡುವಿನ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ. ಅವಕಾಶ ಸಿಕ್ಕಾಗಲೆಲ್ಲಾ ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸುವ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ಸಂಘಕ್ಕೆ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ನಾನು ಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್&zwnj;ಎಸ್&zwnj;ಎಸ್ ಪಥಸಂಚಲನ ನಡೆಸಲು ಅನುಮತಿ ಪಡೆಯುವುದು ಕಡ್ಡಾಯ ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಸುಮ್ಮನೆ ಬಿಡಲ್ಲ ಎಂದು ಲೇವಡಿ&lt;/strong&gt;&lt;/h2&gt;&lt;p&gt;ಕಲಬುರಗಿಯ ಐವಾನ್ ಎ ಶಾಹಿ ಪ್ರದೇಶದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ನಾನು ಈಗಾಗಲೇ ಆರ್&zwnj;ಎಸ್&zwnj;ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದೇನೆ. 100 ವರ್ಷದ ಹಳೆಯ ಸಂಘಟನೆ ಅಂತಾರಲ್ಲ, ನಿಮ್ಮ ಸಂಘಟನೆಯ ದಾಖಲೆಗಳು ಎಲ್ಲಿವೆ? ಪಥಸಂಚಲನ ನಡೆಸಲು ನೀವು ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ದಾಖಲೆಗಳು ಎಲ್ಲೋ ಇರಬಹುದು, ಹುಡುಕಿಕೊಂಡು ಬರಲಿ. ಅಲ್ಲಿಯವರೆಗೆ ಸುಮ್ಮನೆ ಬಿಡಲ್ಲ ಎಂದು ಲೇವಡಿ ಮಾಡಿದ್ದಾರೆ.&lt;/p&gt;&lt;p&gt;ಘಟನೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ಮತ್ತು ಆರ್&zwnj;ಎಸ್&zwnj;ಎಸ್ ಬೆಂಬಲಿಗರು ನನ್ನ ವೈಯಕ್ತಿಕ ವಿಚಾರಗಳನ್ನು ಕೆದಕುತ್ತಿದ್ದಾರೆ ಎಂದು ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ್ ಯಾರನ್ನ ಮದುವೆಯಾಗಿದ್ದಾನೆ? ಆತನ ಮಕ್ಕಳು ಯಾರು? ಪ್ರಿಯಾಂಕ್ ಕಪ್ಪಗಿದ್ದಾನಾ ಅಥವಾ ಬೆಳ್ಳಗಿದ್ದಾನಾ? ಎಂದು ಕೆದಕುತ್ತಿದ್ದಾರೆ. ಅವರು ಎಷ್ಟೇ ಕೆದಕಿದರೂ ನಾನು ಹೆದರುವ ವ್ಯಕ್ತಿಯಲ್ಲ. ನನ್ನ ಬಣ್ಣದ ಬಗ್ಗೆ ಮಾತನಾಡುವವರಿಗೆ ನನ್ನ ಕೆಲಸಗಳೇ ಉತ್ತರ ನೀಡುತ್ತವೆ ಎಂದು ಸವಾಲು ಹಾಕಿದ್ದಾರೆ. ಒಟ್ಟಿನಲ್ಲಿ ಪಥಸಂಚಲನದ ವಿಚಾರವಾಗಿ ಪ್ರಿಯಾಂಕ್ ಖರ್ಗೆ ತೆಗೆದುಕೊಂಡಿರುವ ಈ ಕಠಿಣ ನಿಲುವು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಹಾಗೂ ಪ್ರತಿಭಟನೆಗೆ ಕಾರಣವಾಗುವ ಸಾಧ್ಯತೆಯಿದೆ.&lt;/p&gt;&lt;p&gt;ಇದೇ ವೇಳೆ ಅಯೋಧ್ಯೆಯ ರಾಮಮಂದಿರದ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ ಸಚಿವರು, ರಾಮಮಂದಿರದ ಕಟ್ಟಡದ ಉಸ್ತುವಾರಿ ಹೊತ್ತಿದ್ದ ಗೋಪಾಲ್ ಜೀ ಅವರು 40 ಪರ್ಸೆಂಟ್ ಕಮಿಷನ್ ಪಡೆದು ತಮ್ಮ ಅಳಿಯನಿಗೆ ಕಾಂಟ್ರಾಕ್ಟ್ ನೀಡಿದ್ದಾರೆ. ಅಯೋಧ್ಯೆಯಲ್ಲೂ ಬಿಜೆಪಿ ಬಿಟ್ಟಿಲ್ಲ ಅಲ್ಲೂ ಕಮಿಷನ್ ದಂಧೆ ನಡೆದಿದೆ. ಇದೆಲ್ಲವೂ ದೊಡ್ಡ ಗೇಮ್ ಪ್ಲಾನ್ ಎಂದು ಕಿಡಿಕಾರಿದರು.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/karnataka-minister-priyank-kharge-on-rss-patha-sanchalna-rss-march-past/articleshow-uxtlscg"/>
        </item>
        <item>
            <title><![CDATA[ಕೊನೆಗೂ ಈಡೇರಲಿಲ್ಲ ನಟ ಪವನ್​ ಕಲ್ಯಾಣ್​ ಆಸೆ: ನಗು ಉಳಿಸಿ, ಹೃದಯ ಛಿದ್ರ ಮಾಡಿ ಮರೆಯಾದ  ಪುಟ್ಟ ಅಭಿಮಾನಿ]]></title>
            <link>https://kannada.asianetnews.com/relationship/pawan-kalyan-fan-who-was-battling-with-rare-genetic-disorder-passes-away-suc/articleshow-vgdp2zl</link>
            <guid isPermaLink="true">https://kannada.asianetnews.com/relationship/pawan-kalyan-fan-who-was-battling-with-rare-genetic-disorder-passes-away-suc/articleshow-vgdp2zl</guid>
            <pubDate>Wed, 08 Jul 2026 20:07:50 +0530</pubDate>
            <description><![CDATA[ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಅಭಿಮಾನಿ ನಿರಂಜನ್&zwnj;ನ ಕೊನೆಯಾಸೆಯಂತೆ ನಟ ಪವನ್ ಕಲ್ಯಾಣ್ ಆತನನ್ನು ಭೇಟಿಯಾಗಿದ್ದರು. ಆದರೆ ಭೇಟಿಯಾದ 20 ದಿನಗಳಲ್ಲೇ ಬಾಲಕ ನಿಧನನಾಗಿದ್ದು, ಜೊತೆಯಾಗಿ ಸಿನಿಮಾ ನೋಡುವ ಆಸೆ ಈಡೇರಿಲ್ಲ. ಈ ದುರಂತ ಘಟನೆಯಿಂದ ಪವನ್ ಕಲ್ಯಾಣ್ ಕಂಬನಿ ಮಿಡಿದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx12k9wtw90hzpe35n0f13q4,imgname-pawan-kalyan-1783521453978.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇವಲ 20 ದಿನಗಳ ಹಿಂದಷ್ಟೇ. ಆ 17 ವರ್ಷದ ಬಾಲಕನ ಕಣ್ಣಲ್ಲಿ ಅದೇನೋ ಸಾರ್ಥಕ ಮನೋಭಾವ. ಜೀವನದ ಸಂಪೂರ್ಣ ಆಸೆ ಈಡೇರಿದ ಅನುಭೂತಿ. ಹೌದು ಅಂದು ಆ ಬಾಲಕ ತನ್ನ ನೆಚ್ಚಿನ ಅರಾಧ್ಯದೈವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರನ್ನು ಕಣ್ತುಂಬಿಸಿದ್ದ. ನಟ ಪವನ್​ ಕಲ್ಯಾಣ್​ ಎಂದರೆ ಜೀವ ಬಿಡುತ್ತಿದ್ದ ಆ ಪುಟ್ಟ ಹೃದಯಕ್ಕೆ ಅಂದು ಆಗಿದ್ದ ಸಂತೋಷ ಅದೆಷ್ಟೋ. ಸಾಯುವ ಮೊದಲು ನಟನನ್ನು ನೋಡಬೇಕು ಎನ್ನುವುದೇ ಆತನ ಆಸೆಯಾಗಿತ್ತು. ಈ ಬಗ್ಗೆ ತಿಳಿಯುತ್ತಲೇ ಪವನ್​ ಕಲ್ಯಾಣ್ ಅವರು ಆ ಬಾಲಕನ ಮನೆಗೆ ಭೇಟಿ ನೀಡಿ ಮಾತನಾಡಿದ್ದರು. ಅಷ್ಟೇ ಅಲ್ಲದೇ, ಆ ಕುಟುಂಬಕ್ಕೆ ಅಗತ್ಯವಿರುವ ಆರ್ಥಿಕ ನೆರವು, ಚಿಕಿತ್ಸೆ ಬೇಕಾಗಿರುವ ನೆರವು ಕೂಡ ನೀಡಿದ್ದರು. ಇದೇ ಸಂದರ್ಭದಲ್ಲಿ ತನ್ನ ಪುಟಾಣಿ ಅಭಿಮಾನಿಗೆ ಮಾತುಕೊಟ್ಟಿದ್ದ ನಟ ಪವನ್ ಕಲ್ಯಾಣ್, ನಾವಿಬ್ಬರು ಸೇರಿ ತಮ್ಮ ಮುಂದಿನ ಒಜಿ-2 ಸಿನಿಮಾ ನೋಡೋಣಾ, ನಿನ್ನನ್ನು ನನ್ನ ಸ್ಪೆಷಲ್ ಗೆಸ್ಟ್ ಆಗಿ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ದರು.&lt;/p&gt;&lt;p&gt;ಆದರೆ, ಪವನ್​ ಕಲ್ಯಾಣ್ ಅವರ ಆಸೆ ಈಡೇರಿಲಿಲ್ಲ. ಆ ಪುಟ್ಟ ಬಾಲಕ ಇಂದು ಇಹಲೋಕ ತ್ಯಜಿಸಿದ್ದಾರೆ. 17ರ ಹರೆಯದ ಈತನ ಹೆಸರು ನಿರಂಜನ್​. ರಾಮು ಮತ್ತು ಮಾನಸ ದಂಪತಿ ಮನಗಾಗಿದ್ದ ನಿರಂಜನ್​ಗೆ ಕೆಲ ಸಮಯದಿಂದ &lsquo;ಡಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿ&rsquo; ಎಂಬ ಅನುವಂಶಿಕ ಕಾಯಿಲೆ ಸುತ್ತಿಕೊಂಡಿತ್ತು. ಇದರಿಂದಾಗಿ ಕ್ರಮೇಣ ಮಾಂಸಖಂಡಗಳ ಬೆಳವಣಿಗೆ ನಿಂತು ಹೋಗಿತ್ತು, ದೈಹಿಕ ಬೆಳವಣಿಗೆ ಆಗಿರಲಿಲ್ಲ. ಇದಕ್ಕೆ ಸದ್ಯ ಯಾವುದೇ ಚಿಕಿತ್ಸೆ ಇಲ್ಲ ಎನ್ನಲಾಗಿದೆ. ಆದ್ದರಿಂದ ಸಾವು-ಬದುಕಿನ ನಡುವೆ ನಿರಂಜನ್​ ಹೋರಾಡುತ್ತಿದ್ದ. ಕಿಡ್ನಿಗಳು ಕೂಡ ಹಾನಿಯಾಗಿತ್ತು. ಚಿಕಿತ್ಸೆಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ದರು. ಆದರೂ ಇದ್ದ ಹಣವೆಲ್ಲಾ ಖರ್ಚಾದರೂ ಚಿಕಿತ್ಸೆ ಸಿಗಲಿಲ್ಲ. ಆತನ ಆಸೆಯಂತೆ ಪವನ್​ ಕಲ್ಯಾಣ್​ ಅವರಿಗೆ ವಿಡಿಯೋ ತೋರಿಸಿದಾಗ, ಅವರು ಮನೆಗೆ ಭೇಟಿ ಕೊಟ್ಟಿದ್ದರು.&lt;/p&gt;&lt;h2&gt;&lt;strong&gt;ಪವನ್​ ಕಲ್ಯಾಣ್​ ಕಂಬನಿ&lt;/strong&gt;&lt;/h2&gt;&lt;p&gt;ತಮ್ಮ ಪುಟ್ಟ ಅಭಿಮಾನಿಯ ನಿಧನದಿಂದ ನಟ ಕಣ್ಣೀರಾಗಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಪವನ್ ಕಲ್ಯಾಣ್, ನಿರಂಜನ್ ಸಾವಿನ ಸುದ್ದಿ ತಮ್ಮ ಹೃದಯವನ್ನು ಆಳವಾಗಿ ಮುಟ್ಟಿದೆ ಎಂದಿದ್ದಾರೆ. ಕೆಲವು ದಿನಗಳ ಹಿಂದೆ ನಾನು ಹನುಮಕೊಂಡದಲ್ಲಿರುವ ನಿರಂಜನ್ ಅವರ ಮನೆಗೆ ಹೋದ ಆ ಕ್ಷಣಗಳು ಇನ್ನೂ ನನ್ನ ಮನಸ್ಸಿನಲ್ಲಿ ಎದ್ದು ಕಾಣುತ್ತಿವೆ. ಗಂಭೀರ ಅನಾರೋಗ್ಯದ ವಿರುದ್ಧ ಹೋರಾಡುತ್ತಿರುವಾಗ ನನಗಾಗಿ ಕಾಯುತ್ತಿದ್ದ ಆ ಪುಟ್ಟ ಹುಡುಗ, ನನ್ನನ್ನು ಆತ ನೋಡಿದಾಗ ಆತನ ಮುಖದಲ್ಲಿ ಮೂಡಿದ ಆ ನಗು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವೆಲ್ಲವೂ ಈಗ ಕೇವಲ ನೆನಪಾಗಿ ಉಳಿದುಬಿಟ್ಟಿವೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಹೃದಯದಲ್ಲಿ ಶಾಶ್ವತ&lt;/strong&gt;&lt;/h3&gt;&lt;p&gt;ಆತನ ದೇಹವು ರೋಗದ ವಿರುದ್ಧ ಹೋರಾಡುತ್ತಿದ್ದರೂ.. ಮನಸ್ಸು ಧೈರ್ಯದಿಂದ ತುಂಬಿತ್ತು. ಇಷ್ಟೆಲ್ಲಾ ನೋವನ್ನು ಅನುಭವಿಸಿದರೂ ಆತ ಜೀವನದಲ್ಲಿ ತೋರಿಸಿದ ಭರವಸೆ ಮತ್ತು ಆತ್ಮವಿಶ್ವಾಸ ಬಹಳ ಅಮೂಲ್ಯವಾದುದು. ಅಂತಹ ಧೈರ್ಯಶಾಲಿ ವ್ಯಕ್ತಿ ಇಷ್ಟು ಬೇಗ ನಮ್ಮನ್ನು ಅಗಲಿದ್ದು ತುಂಬಾ ದುಃಖಕರ. ಆ ಪುಟ್ಟ ಅಭಿಮಾನಿಯ ನಗು ಮತ್ತು ಹಂಚಿಕೊಂಡ ಪ್ರೀತಿ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಕಂಬನಿ ಮಿಡಿದಿದ್ದಾರೆ ಪವನ್​ಕಲ್ಯಾಣ್​&lt;/p&gt;&lt;p&gt;ಪವನ್ ಕಲ್ಯಾಣ್ ನಿರಂಜನ್ ಅವರನ್ನು ಭೇಟಿಯಾದಾಗ, ಅವರನ್ನು ಪ್ರೀತಿಯಿಂದ ಅಪ್ಪಿಕೊಂಡು ಪ್ರೋತ್ಸಾಹಿಸಿದರು. ಸೆಲ್ಫಿ ತೆಗೆದುಕೊಂಡರು. ತಿರುಮಲ ಶ್ರೀವಾರಿ ಪ್ರಸಾದವನ್ನು ನೀಡಿದರು. ನಿರಂಜನ್, 'ನಾನು ನಾಯಿಮರಿ ಸಾಕಲು ಬಯಸುತ್ತೇನೆ' ಎಂದು ಹೇಳಿದ್ದ. ಆಗ ಪವನ್​ ಅವರು ನಾನು ಅದನ್ನು ಖರೀದಿಸಿ ನಿನಗೆ ಕಳುಹಿಸುತ್ತೇನೆ ಎಂದು ಕೂಡ ಹೇಳಿದ್ದರು. ಆದರೆ ಈಗ ಎಲ್ಲವೂ ನೆನಪು.&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/pawan-kalyan-fan-who-was-battling-with-rare-genetic-disorder-passes-away-suc/articleshow-vgdp2zl"/>
        </item>
        <item>
            <title><![CDATA[ಬಾಂಗ್ಲಾ ವಲಸಿಗರನ್ನ ಕೂರಿಸಿಕೊಂಡು ಎಸ್‌ಐಆರ್ ಮಾಡಿದ ಕರ್ನಾಟಕ; ವಿಡಿಯೋ ಪ್ರೂಫ್ ತೋರಿಸಿದ HD Kumaraswamy!]]></title>
            <link>https://kannada.asianetnews.com/politics/sir-in-karnataka-union-minister-hd-kumaraswamy-released-video-on-alleges-illegal-bangladeshi-migrants-in-ramanagara-gdp/articleshow-ykz1g67</link>
            <guid isPermaLink="true">https://kannada.asianetnews.com/politics/sir-in-karnataka-union-minister-hd-kumaraswamy-released-video-on-alleges-illegal-bangladeshi-migrants-in-ramanagara-gdp/articleshow-ykz1g67</guid>
            <pubDate>Thu, 02 Jul 2026 15:50:53 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ನಡೆಯುತ್ತಿರುವ &amp;nbsp;SIR ಪ್ರಕ್ರಿಯೆಯಲ್ಲಿ, ರಾಮನಗರದಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರಭಾವ ಬಳಸಿ ಬಾಂಗ್ಲಾ ವಲಸಿಗರು ಸೇರಿದಂತೆ ಕಳ್ಳ ಮತದಾರರನ್ನು ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ವಿಡಿಯೋ ಸಮೇತ ದೂರಿದ್ದು, ಕೇಂದ್ರ ಚುನಾವಣಾ ಆಯೋಗ ಮತ್ತು ಗೃಹ ಸಚಿವ ಅಮಿತ್ ಶಾಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwh4y7tah20kq2w8pcazdntz,imgname-hd-kumarswamy-1782987038538.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಆರಂಭವಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯು ಇದೀಗ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಮನಗರದಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿದ್ದು, ಮುಖ್ಯಮಂತ್ರಿಗಳ ಪ್ರಭಾವ ಬಳಸಿ ಬಾಂಗ್ಲಾದೇಶದ ವಲಸಿಗರನ್ನು ಕಳ್ಳ ಮತದಾರರನ್ನಾಗಿ ಪೋಷಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (hd kumaraswamy) ಅವರು ವಿಡಿಯೋ ಬಿಡುಗಡೆ ಮಾಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಹಮ್ಮಿಕೊಂಡಿದ್ದ ದಢೀರ್ ಸುದ್ದಿಗೋಷ್ಠಿಯು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.&lt;/p&gt;&lt;p&gt;ರಾಜ್ಯದಲ್ಲಿ 'ಎಸ್​ಐಆರ್' (SIR) ಮಾಹಿತಿ ಸಂಗ್ರಹಣೆ ಪ್ರಕ್ರಿಯೆ ಚುರುಕಾಗಿ ಸಾಗುತ್ತಿದ್ದು, ಈ ಕುರಿತು ಮೊದಲಿಗೆ ಮುಖ್ಯಮಂತ್ರಿಗಳೇ ಸಾರ್ವಜನಿಕವಾಗಿ ಮಾಹಿತಿ ನೀಡಿದ್ದರು. ಸಾರ್ವಜನಿಕರು ನಿಗದಿತ ಅವಧಿಯಲ್ಲಿ ಸರಿಯಾದ ಮಾಹಿತಿ ನೀಡದಿದ್ದರೆ ಅಥವಾ ಯಾವುದೇ ಕಾರಣಕ್ಕೂ ಲಿಸ್ಟ್&zwnj;ನಿಂದ ಹೆಸರು ಹೊರಹೋದರೆ, ಭವಿಷ್ಯದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗದೆ ವಂಚಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಈ ಪ್ರಕ್ರಿಯೆಯ ಪರವಾಗಿ ಅತ್ಯಂತ ಕಟುವಾದ ಪದಗಳನ್ನು ಬಳಸಿ ಮಾತನಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಜೆಡಿಎಸ್ ನಾಯಕರು ಆಕ್ಷೇಪ ಎತ್ತಿದ್ದಾರೆ.&lt;/p&gt;&lt;h2&gt;ಛತ್ರಗಳಲ್ಲಿ ಕಳ್ಳ ಮತದಾರರನ್ನು ಕೂರಿಸಿ ಪ್ರಕ್ರಿಯೆ: ಎಚ್&zwnj;ಡಿಕೆ ಆಕ್ರೋಶ&lt;/h2&gt;&lt;p&gt;ರಾಮನಗರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಆಘಾತಕಾರಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿಗಳ ನೇರ ಪ್ರಭಾವದಿಂದಾಗಿ ಅಕ್ರಮಗಳು ಸರಾಗವಾಗಿ ಸಾಗುತ್ತಿವೆ ಎಂದು ದೂರಿದ್ದಾರೆ. ನಿಯಮಾವಳಿಗಳ ಪ್ರಕಾರ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕಾದ ಜಾಗದಲ್ಲಿ, ಸಿಎಂ ಪ್ರಭಾವ ಬಳಸಿ ಸಾವಿರಾರು ಜನರನ್ನು ಒಂದೇ ಕಡೆಯಿರುವ ದೊಡ್ಡ ಕಲ್ಯಾಣ ಮಂಟಪ ಅಥವಾ ಚೌಟರಿಗಳಲ್ಲಿ ಒಟ್ಟಿಗೆ ಕೂರಿಸಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಹೀಗೆ ಒಂದೇ ಸೂರಿನಡಿ ಕಳ್ಳ ಮತದಾರರನ್ನು ಒಟ್ಟುಗೂಡಿಸಿ ಅವರಿಗೆ ಕಾನೂನುಬಾಹಿರವಾಗಿ ಮತದಾನದ ಹಕ್ಕು ಕಲ್ಪಿಸಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.&lt;/p&gt;&lt;h2&gt;ಬಾಂಗ್ಲಾ ವಲಸಿಗರ ಪೋಷಣೆ ಮತ್ತು ಅಧಿಕಾರಿಗಳ ವೈಫಲ್ಯ&lt;/h2&gt;&lt;p&gt;ಈ ಇಡೀ ಅಕ್ರಮದ ಹಿಂದೆ ಕೇವಲ ಸ್ಥಳೀಯ ಕಳ್ಳ ಮತದಾರರಷ್ಟೇ ಅಲ್ಲದೆ, ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದಿರುವ ವಲಸಿಗರೂ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವರ ಆರೋಪವಾಗಿದೆ. ದೇಶದ ಭದ್ರತೆಗೆ ಸವಾಲಾಗಿರುವ ಬಾಂಗ್ಲಾ ವಲಸಿಗರನ್ನು ರಾಮನಗರದಲ್ಲಿ ಇಟ್ಟುಕೊಂಡು ಪೋಷಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಅವರಿಗೆ ಅಧಿಕೃತ ದಾಖಲೆಗಳನ್ನು ಸೃಷ್ಟಿಸಲು ಈ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಸಂಪೂರ್ಣವಾಗಿ ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳ ವೈಫಲ್ಯವಾಗಿದ್ದು, ಆಡಳಿತ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕಾನೂನು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h2&gt;ಕೇಂದ್ರ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಆಯೋಗಕ್ಕೆ ದೂರು&lt;/h2&gt;&lt;p&gt;ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಈ ಗಂಭೀರ ಸ್ವರೂಪದ ಅಕ್ರಮಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗವು ತಕ್ಷಣವೇ ಮಧ್ಯಪ್ರವೇಶಿಸಿ ಸೂಕ್ತ ಗಮನಹರಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುತ್ತಿರುವ ಈ ವಿದ್ಯಮಾನವನ್ನು ನಾನು ಇಲ್ಲಿಗೆ ಬಿಡುವುದಿಲ್ಲ ಎಂದು ಎಚ್ಚರಿಸಿರುವ ಅವರು, ರಾಮನಗರದ ಈ ಅಕ್ರಮದ ಸಂಪೂರ್ಣ ವಿವರ ಹಾಗೂ ಲಭ್ಯವಿರುವ ವಿಡಿಯೋ ಸಾಕ್ಷ್ಯಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತರಲಾಗುವುದು ಮತ್ತು ಈ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ದೂರು ಪತ್ರ ಬರೆಯಲಾಗುವುದು ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/sir-in-karnataka-union-minister-hd-kumaraswamy-released-video-on-alleges-illegal-bangladeshi-migrants-in-ramanagara-gdp/articleshow-ykz1g67"/>
        </item>
        <item>
            <title><![CDATA[ಸಿದ್ದರಾಮಯ್ಯ ಎದುರು 'ನಂಗೆ ಚಪ್ಪಲಿ ಎಸೆದರು, ನಮ್ಮ ಕುಟುಂಬ ನಿಂದಿಸಿದರು' ಎಂದು ಕಣ್ಣೀರಿಟ್ಟ ಶಾಸಕ ಪ್ರದೀಪ್ ಈಶ್ವರ್!]]></title>
            <link>https://kannada.asianetnews.com/gallery/state/mla-pradeep-eshwar-cries-infront-of-siddaramaiah-chikkaballapur-incident-investigation-yuuqbwa</link>
            <guid isPermaLink="true">https://kannada.asianetnews.com/gallery/state/mla-pradeep-eshwar-cries-infront-of-siddaramaiah-chikkaballapur-incident-investigation-yuuqbwa</guid>
            <pubDate>Tue, 30 Jun 2026 16:28:40 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಕೆಂಪೇಗೌಡ ಜಯಂತಿ ವೇಳೆ ನಡೆದ ಹಲ್ಲೆ ಯತ್ನದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕಣ್ಣೀರಿಟ್ಟಿದ್ದಾರೆ. ಕೂಡಲೇ ಗೃಹ ಸಚಿವರಿಗೆ ಕರೆ ಮಾಡಿದ ಸಿದ್ದರಾಮಯ್ಯ ಅವರು ಸೂಕ್ತ ತನಿಖೆ ನಡೆಸಿ ಪ್ರದೀಪ್ ಈಶ್ವರ್&zwnj;ಗೆ ನ್ಯಾಯ ಕೊಡಿಸುವಂತೆ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwc1vtkfrzm17jhcn7yhbttx,imgname-pradeep-eshwar-meet-siddaramaiah-1782816041583.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಕೆಂಪೇಗೌಡ ಜಯಂತಿ ವೇಳೆ ನಡೆದ ಹಲ್ಲೆ ಯತ್ನದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕಣ್ಣೀರಿಟ್ಟಿದ್ದಾರೆ. ಕೂಡಲೇ ಗೃಹ ಸಚಿವರಿಗೆ ಕರೆ ಮಾಡಿದ ಸಿದ್ದರಾಮಯ್ಯ ಅವರು ಸೂಕ್ತ ತನಿಖೆ ನಡೆಸಿ ಪ್ರದೀಪ್ ಈಶ್ವರ್&zwnj;ಗೆ ನ್ಯಾಯ ಕೊಡಿಸುವಂತೆ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು (ಜೂ.30) : ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಇತ್ತೀಚೆಗೆ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ನಡೆದ ಅಹಿತಕರ ಘಟನೆಯನ್ನು ವಿವರಿಸಿ ಕಣ್ಣೀರು ಹಾಕಿದ್ದಾರೆ. ಎದುರಾಳಿ ಪಕ್ಷದ ಕಾರ್ಯಕರ್ತರು ತಮ್ಮ ಮೇಲೆ ನಡೆಸಿದ ಹಲ್ಲೆ ಯತ್ನ ಹಾಗೂ ವೈಯಕ್ತಿಕ ನಿಂದನೆಯ ಬಗ್ಗೆ ವಿವರಿಸುವಾಗ ಪ್ರದೀಪ್ ಈಶ್ವರ್ ಕಣ್ಣೀರುಹಾಕಿದರು.&lt;/p&gt;&lt;img&gt;&lt;p&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/p&gt;&lt;p&gt;ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಕೆಂಪೇಗೌಡ ಜಯಂತಿ ಆಚರಣೆಯ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಗಲಾಟೆ ನಡೆಸಿದ್ದರು. ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರತ್ತ ಚಪ್ಪಲಿ ಎಸೆಯಲಾಗಿತ್ತು. ಅಷ್ಟೇ ಅಲ್ಲದೆ, ಪ್ರದೀಪ್ ಈಶ್ವರ್ ಹಾಗೂ ಅವರ ಕುಟುಂಬದ ಸದಸ್ಯರನ್ನು ಅತ್ಯಂತ ಕೀಳುಮಟ್ಟದ ಭಾಷೆಯಲ್ಲಿ ನಿಂದಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದ ಶಾಸಕರು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಮನವಿ ಮಾಡಿದರು.&lt;/p&gt;&lt;img&gt;&lt;p&gt;&lt;strong&gt;ಸಿದ್ದರಾಮಯ್ಯ ಎದುರು ಕಣ್ಣೀರು:&lt;/strong&gt;&lt;/p&gt;&lt;p&gt;ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಆದ ಅವಮಾನವನ್ನು ಮುಖ್ಯಮಂತ್ರಿಗಳ ಮುಂದೆ ವಿವರಿಸುವಾಗ ಪ್ರದೀಪ್ ಈಶ್ವರ್ ಅವರ ಕಣ್ಣಾಲಿಗಳು ತುಂಬಿ ಬಂದವು. 'ಜನಪ್ರತಿನಿಧಿಯಾಗಿದ್ದರೂ ಪೊಲೀಸರ ಸಮ್ಮುಖದಲ್ಲೇ ಈ ರೀತಿ ಅವಮಾನ ಮಾಡಲಾಗಿದೆ. ಕುಟುಂಬದವರನ್ನು ಎಳೆದು ತಂದು ನಿಂದಿಸಲಾಗಿದೆ' ಎಂದು ಅಳಲು ತೋಡಿಕೊಂಡರು.&amp;nbsp;&lt;/p&gt;&lt;p&gt;ಪ್ರದೀಪ್ ಈಶ್ವರ್ ಮಾತುಗಳನ್ನು ಆಲಿಸಿದ ಸಿದ್ದರಾಮಯ್ಯ ಅವರು, ಸಾಂತ್ವನ ಹೇಳಿದರು. 'ರಾಜಕಾರಣದಲ್ಲಿ ಇಂತಹ ಸವಾಲುಗಳು ಮತ್ತು ಘಟನೆಗಳು ಎದುರಾಗುವುದು ಸಾಮಾನ್ಯ. ಇವುಗಳಿಗೆ ಧೃತಿಗೆಡಬಾರದು. ಧೈರ್ಯದಿಂದ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕು. ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಪಕ್ಷ ಮತ್ತು ಸರ್ಕಾರ ನಿಮ್ಮ ಬೆನ್ನಿಗಿದೆ' ಎಂದು ಧೈರ್ಯ ತುಂಬಿದರು.&lt;/p&gt;&lt;img&gt;&lt;p&gt;&lt;strong&gt;ಗೃಹ ಸಚಿವರಿಗೆ ಸೂಚನೆ:&lt;/strong&gt;&lt;/p&gt;&lt;p&gt;ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ ಅವರು ಕೂಡಲೇ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪೊಲೀಸರ ಸಮ್ಮುಖದಲ್ಲೇ ಆಡಳಿತ ಪಕ್ಷದ ಶಾಸಕರ ಮೇಲೆ ಈ ರೀತಿ ದಾಳಿ ನಡೆದಿರುವುದಕ್ಕೆ ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕರ್ತವ್ಯ ಲೋಪ ಎಸಗಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆದೇಶಿಸಿದರು.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವರಾದ ಮಧು ಬಂಗಾರಪ್ಪ ಅವರು ಉಪಸ್ಥಿತರಿದ್ದು, ಪ್ರದೀಪ್ ಈಶ್ವರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಒಟ್ಟಾರೆ, ಚಿಕ್ಕಬಳ್ಳಾಪುರ ಶಾಸಕರ ಮೇಲಿನ ಈ ದಾಳಿ ರಾಜ್ಯ ರಾಜಕೀಯದಲ್ಲಿ ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ವರ್ತನೆ ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಏಕವಚನ ಪ್ರಯೋಗ ಹಾಗೂ ಸಾರ್ವಜನಿಕವಾಗಿ ಮೀಸೆ ತಿರುವಿ, ತೊಡೆ ತಟ್ಟಿ ಕುಸ್ತಿಗೆ ಆಹ್ವಾನ ನೀಡಿದ ಆರೋಪದ ಮೇಲೆ ಶಾಸಕರ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ದೂರಿನಲ್ಲಿರುವ ಗಂಭೀರ ಆರೋಪಗಳು:&lt;/strong&gt;&lt;/p&gt;&lt;p&gt;ಅವಹೇಳನಕಾರಿ ಮಾತು: ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಏಕವಚನದಲ್ಲಿ ಮಾತನಾಡಿ ಅವಮಾನಿಸಿದ್ದಾರೆ.&lt;/p&gt;&lt;p&gt;&lt;strong&gt;ಪ್ರಚೋದನಕಾರಿ ವರ್ತನೆ: &lt;/strong&gt;ಸಾರ್ವಜನಿಕವಾಗಿ ಕಾಫಿ ಕುಡಿಯುತ್ತಾ ತೋಳು ಏರಿಸುವುದು, ಮೀಸೆ ತಿರುಗಿಸುವುದು ಹಾಗೂ ಶರ್ಟ್ ಗುಂಡಿ ಬಿಚ್ಚಿ ತೊಡೆ ತಟ್ಟುವ ಮೂಲಕ ಜನರನ್ನು ಕುಸ್ತಿಗೆ ಅಥವಾ ಜಗಳಕ್ಕೆ ಆಹ್ವಾನಿಸುವಂತೆ ರೌಡಿ ವರ್ತನೆ ತೋರಿದ್ದಾರೆ.&lt;/p&gt;&lt;p&gt;&lt;strong&gt;ಜಾತಿ ವಿಷಬೀಜ: &lt;/strong&gt;ತಾನೊಬ್ಬ 'ಓಬಿಸಿ ಶಾಸಕ' ಎಂದು ಪದೇ ಪದೇ ಹೇಳಿಕೊಳ್ಳುವ ಮೂಲಕ ಸಮಾಜದಲ್ಲಿ ಜಾತಿಗಳ ನಡುವೆ ವಿಷಬೀಜ ಬಿತ್ತಲು ಪ್ರಯತ್ನಿಸಿದ್ದಾರೆ.&lt;/p&gt;&lt;p&gt;&lt;strong&gt;ಮಾಧ್ಯಮಗಳ ಮುಂದೆ ದರ್ಪ:&lt;/strong&gt; ಮಾಧ್ಯಮಗಳ ಮುಂದೆ ತಮ್ಮ ತಲೆಯ ಕೂದಲು ಕಿತ್ತು 'ನನ್ನನ್ನು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ' ಎಂದು ಬದ್ಧತೆ ಇಲ್ಲದ ಮಾತುಗಳನ್ನು ಆಡಿ ಸಮಾಜದ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/mla-pradeep-eshwar-cries-infront-of-siddaramaiah-chikkaballapur-incident-investigation-yuuqbwa"/>
        </item>
        <item>
            <title><![CDATA[ಎಸ್‌ಐಆರ್ ನಿಯಮ ಉಲ್ಲಂಘಿಸಿದರೆ ಕಾನೂನು ಹೋರಾಟಕ್ಕೆ ಮುಂದಾಗುತ್ತಾ ಸರ್ಕಾರ; ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟೇ!]]></title>
            <link>https://kannada.asianetnews.com/state/government-to-take-legal-action-if-sir-rules-are-violated-priyank-kharge-just-said-that/articleshow-zqefe6n</link>
            <guid isPermaLink="true">https://kannada.asianetnews.com/state/government-to-take-legal-action-if-sir-rules-are-violated-priyank-kharge-just-said-that/articleshow-zqefe6n</guid>
            <pubDate>Fri, 03 Jul 2026 12:52:32 +0530</pubDate>
            <description><![CDATA[&lt;p&gt;ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಎಸ್&zwnj;ಐಆರ್&zwnj; ಪ್ರಕ್ರಿಯೆ ಕುರಿತು ಬಿಜೆಪಿ-ಜೆಡಿಎಸ್&zwnj; ವಿರುದ್ಧ ಕಿಡಿಕಾರಿದ್ದು, ಮತದಾನದ ಹಕ್ಕನ್ನು ಕಸಿಯಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿದ್ದಾರೆ. ಆಯೋಗವು ನಿಯಮ ಉಲ್ಲಂಘಿಸಿದರೆ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6mf3epsrp7x7r6vrwgfcpr,imgname-priyank-kharge-rss-case-1782634221014.jpg" type="image/jpeg" height="390" width="690"/>
            <content:encoded><![CDATA[&lt;p&gt;ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಜೆಡಿಎಸ್&zwnj; ಹಾಗೂ ಬಿಜೆಪಿ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಅಲ್ಲದೇ ಎಸ್&zwnj;ಐಆರ್&zwnj; ನಡೆಸುತ್ತಿರುವುದು ಚುನಾವಣೆ ಆಯೋಗವೇ ಅಥವಾ ಬಿಜೆಪಿ ಜೆಡಿಎಸ್&zwnj; ಪಕ್ಷಗಳೋ ಎಂದು ಗರಂ ಆಗಿದ್ದಾರೆ. ಅಲ್ಲದೇ ಆರಂಭದಿಂದಲೇ ಎಸ್&zwnj;ಐಆರ್&zwnj; ವಿರುದ್ಧ ಹಲವಾರು ಆಕ್ಷೇಪಗಳನ್ನು ಎತ್ತಿದ ಖರ್ಗೆ ಎಸ್&zwnj;ಐಆರ್&zwnj; ನಿಯಮ ಉಲ್ಲಂಘನೆ ಆಗಿದ್ದೆ ಆದರೆ, ಕಾನೂನು ಹೋರಾಟದ ಮುನ್ಸೂಚನೆ ತಿಳಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಗೃಹ ಸಚಿವ ಖರ್ಗೆ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಪ್ರಕ್ರಿಯೆ ನಡೆಸಿದ ವಿಚಾರವಾಗಿ ಮಾತನಾಡಿದ ಖರ್ಗೆ ಇಲ್ಲಿ ಹೆಚ್ಡಿಕೆ ವರ್ಸಸ್ ಡಿಕೆ&zwnj; ಅಂತೆಲ್ಲ ಇಲ್ಲ. ಎಲ್ಲವೂ ಕಾನೂನು ಮಾರ್ಗದಲ್ಲಿ ನಡೆಯಬೇಕು ನಡೆಯುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಈ ಹಿಂದೆ ಎಸ್&zwnj;ಐಆರ್&zwnj; ನಾವು ಕೇಳಿದ 12 ಪ್ರಶ್ನೆಗಳಿಗೆ ಇನ್ನೂ ಸಹ ಉತ್ತರ ಬಂದಿಲ್ಲ ಎಂದಿದ್ದಾರೆ. ಎಲ್ಲದಕ್ಕೂ ಕಾನೂನೆ ಮಹೋನ್ನತವಾಗಿದ್ದಾಗ ಮತದಾನದ ಹಕ್ಕು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಸಿಎಂ ಸಮರ್ಥಿಸಿಕೊಂಡ ಖರ್ಗೆ!&lt;/strong&gt;&lt;/h3&gt;&lt;p&gt;ಇಲ್ಲಿ ಎಲ್ಲವೂ ಕಾನೂನಾತ್ಮಕವಾಗಿ ಸರಾಗವಾಗಿ ನಡೆಯಬೇಕೆಂಬುದು ಎಲ್ಲರ ಆಶಯ. ಅಷ್ಟೇ ಅಲ್ಲದೇ ಎಸ್&zwnj;ಐಆರ್&zwnj; ಕಾನೂನಾತ್ಮಕವಾಗಿ ನಡೆಸಬೇಕಾದದ್ದು ಆಯೋಗದ ಕೆಲಸ ಸಿಎಂ ಕೆಲಸವಲ್ಲ.ಸಿಎಂ ಪ್ರತಿ ಭೂತ ನೋಡಲಿಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಅಲ್ಲಲ್ಲಿ ಸಮುದಾಯ ಭವನ ಮಸೀದಿ, ಮಂದೀರಗಳಲ್ಲಿ ನಡೆಸಿದರೆ ಪ್ರಕ್ರಿಯೆ ಬೇಗ ಮುಗಿಯುತ್ತದೆ ಎಂದು ಸ್ಥಳೀಯ ನಾಯಕರು ಹೇಳಿರಬಹುದು ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಎಲ್ಲವನ್ನೂ ಬಿಜೆಪಿ-ಜೆಡಿಎಸ್ ಮಾಡುತ್ತಾ?&lt;/strong&gt;&lt;/h3&gt;&lt;p&gt;ಆಯೋಗಕ್ಕೆ ಕಳುಹಿಸಿದ ಆಕ್ಷೇಪಣೆಗಳು: ಎಸ್&zwnj;ಐಆರ್ ಪ್ರಕ್ರಿಯೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಕರ್ನಾಟಕ ರಾಜ್ಯ ಸಚಿವ ಸಂಪುಟವು ಒಟ್ಟು 12 ಪ್ರಮುಖ ಆಕ್ಷೇಪಣೆಗಳನ್ನು ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕಳುಹಿಸಿತ್ತು. ಆದರೆ ಆಯೋಗವು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಏಕಪಕ್ಷೀಯವಾಗಿ ಪ್ರಕ್ರಿಯೆ ಆರಂಭಿಸಿದೆ.&lt;/p&gt;&lt;h3&gt;&lt;strong&gt;ತಂತ್ರಜ್ಞಾನದ ಬಳಕೆ!&lt;/strong&gt;&lt;/h3&gt;&lt;p&gt;ಮತದಾರರ ಪಟ್ಟಿಯಲ್ಲಿರುವ ವ್ಯತ್ಯಾಸಗಳನ್ನು ಪತ್ತೆಹಚ್ಚಲು ಆಯೋಗವು ಬಳಸುತ್ತಿರುವ ಕೃತಕ ಬುದ್ಧಿಮತ್ತೆ (AI) ಮತ್ತು ಸಾಫ್ಟ್&zwnj;ವೇರ್ ಉಪಕರಣಗಳನ್ನು ಸ್ವತಂತ್ರವಾಗಿ ಆಡಿಟ್ (ಪರೀಕ್ಷೆ) ಮಾಡಬೇಕು ಮತ್ತು ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಮತದಾನದ ಹಕ್ಕು ಕಸಿದುಕೊಳ್ಳುವ ಭೀತಿ!&lt;/strong&gt;&lt;/h3&gt;&lt;p&gt;&quot;ಕೇವಲ ಹೆಸರಿನ ಅಕ್ಷರ ದೋಷ ಅಥವಾ ಭಾಷಾಂತರದ ತಪ್ಪುಗಳಿಗಾಗಿ ಯಾರದೇ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು&quot; ಎಂದು ಹೇಳಿದ್ದಾರೆ. ಈ ಹಿಂದೆ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್&zwnj;ಐಆರ್&zwnj; ನಡೆಸಿದಾಗ ಆದ ತಪ್ಪುಗಳು ಮತ್ತು ಕೋಟ್ಯಂತರ ಮತದಾರರ ಹೆಸರು ಕೈಬಿಟ್ಟುಹೋದ ಘಟನೆಗಳು ಕರ್ನಾಟಕದಲ್ಲಿ ಮರುಕಳಿಸಬಾರದು ಎಂದು ಎಚ್ಚರಿಸಿದ್ದಾರೆ.&lt;/p&gt;&lt;h3&gt;&lt;strong&gt;ಸರ್ಕಾರಿ ಯೋಜನೆಗಳಿಂದ ವಂಚಿತರಾಗುವ ಆತಂಕ!&lt;/strong&gt;&lt;/h3&gt;&lt;p&gt;ಎಸ್&zwnj;ಐಆರ್&zwnj;ನಿಂದ ಹೊರಗುಳಿಯುವ ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಆದ್ದರಿಂದ ನಾಗರಿಕರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಕಾನೂನು ಹೋರಾಟದ ಎಚ್ಚರಿಕೆ!&lt;/strong&gt;&lt;/h3&gt;&lt;p&gt;ಚುನಾವಣಾ ಆಯೋಗವು ರಾಜ್ಯದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡದಿದ್ದರೆ, ಲಭ್ಯವಿರುವ ಎಲ್ಲಾ ಕಾನೂನು ಮತ್ತು ಸಾಂವಿಧಾನಿಕ ಆಯ್ಕೆಗಳನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>politics</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/government-to-take-legal-action-if-sir-rules-are-violated-priyank-kharge-just-said-that/articleshow-zqefe6n"/>
        </item>
    </channel>
</rss>
