<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 22 Aug 2026 07:16:14 +0530</lastBuildDate>
        <atom:link href="https://kannada.asianetnews.com/rss/politics" rel="self" type="application/rss+xml"/>
        <item>
            <title><![CDATA['ನನ್ನ ಏಕೈಕ ಕೆಲಸ ಬಡವರಿಗೆ ಸಹಾಯ ಮಾಡೋದು..' ವಿಧಾನಸಭೆ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಮಂಕಾಳ ವೈದ್ಯ ಭಾವುಕ ಭಾಷಣ!]]></title>
            <link>https://kannada.asianetnews.com/politics/mankal-vaidya-unanimously-elected-karnataka-assembly-deputy-speaker-san/articleshow-0cczwp7</link>
            <guid isPermaLink="true">https://kannada.asianetnews.com/politics/mankal-vaidya-unanimously-elected-karnataka-assembly-deputy-speaker-san/articleshow-0cczwp7</guid>
            <pubDate>Tue, 18 Aug 2026 20:49:27 +0530</pubDate>
            <description><![CDATA[ಭಟ್ಕಳ ಶಾಸಕ ಮಂಕಾಳ ಸುಬ್ಬಾ ವೈದ್ಯ ಅವರು ರಾಜ್ಯ ವಿಧಾನಸಭೆಯ ನೂತನ ಉಪಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸದನದಲ್ಲಿ ಮಾತನಾಡಿದ ಅವರು, ಹೋಟೆಲ್ ಕೆಲಸದಿಂದ ರಾಜಕೀಯ ಪ್ರವೇಶಿಸಿ, ಪಕ್ಷೇತರನಾಗಿ ಗೆದ್ದು ಬಂದ ತಮ್ಮ ಕಷ್ಟದ ರಾಜಕೀಯ ಹಾದಿಯನ್ನು ಭಾವುಕರಾಗಿ ವಿವರಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0aq497m0v8f90hf8ymxg7ez,imgname-mankal-vaidya-1787066197236.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (.18): &lt;/strong&gt;ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಭಟ್ಕಳ ಶಾಸಕ, ಮಾಜಿ ಸಚಿವ ಮಂಕಾಳ ಸುಬ್ಬಾ ವೈದ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಕಾಳ ವೈದ್ಯ ಪರವಾಗಿ ಸಿಎಂ ಡಿ ಕೆ ಶಿವಕುಮಾರ್&zwnj; ಮಂಡಿಸಿದ ಪ್ರಸ್ತಾಪಕ್ಕೆ ಇಡೀ ಸದನ ಧ್ವನಿಮತದ ಮೂಲಕ ಒಪ್ಪಿಗೆ ನೀಡಿತು. ಸಭಾಧ್ಯಕ್ಷ ಜಿ ಎಸ್ ಪಾಟೀಲ್ ಅಧಿಕೃತವಾಗಿ ಮಂಕಾಳ ಸುಬ್ಬಾ ವೈದ್ಯ ಅವರು ಅವಿರೋಧವಾಗಿ ಉಪಸಭಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಘೋಷಿಸಿದರು. ನೂತನ ಉಪಸಭಾಧ್ಯಕ್ಷ ವೈದ್ಯ ಕುರಿತು ಸಿಎಂ ಡಿಕೆಶಿ, ಉಪಮುಖ್ಯಮಂತ್ರಿ ಡಾ.ಜಿ&zwnj; ಪರಮೇಶ್ವರ್ ಅಭಿನಂದನೆ ಸಲ್ಲಿಸಿದರು.&lt;/p&gt;&lt;p&gt;ಸದನದಲ್ಲಿ ಬಿಜೆಪಿ ಶಾಸಕರಾದ ದಿನಕರ್ ಶೆಟ್ಟಿ, ಹರೀಶ್ ಪೂಂಜಾ, ಯಶಪಾಲ ಸುವರ್ಣ, ಆರ್ ವಿ ದೇಶಪಾಂಡೆ, ಎಚ್ ಡಿ ತಮ್ಮಯ್ಯ, ಅರವಿಂದ ಬೆಲ್ಲದ್ ಅವರು ವೈದ್ಯ ಅವರ ರಾಜಕೀಯ ಹಾದಿಯ ಕುರಿತು ಸದನಕ್ಕೆ ವಿವರಿಸಿದರು. ನಂತರ ಮಾತನಾಡಿದ ನೂತನ ಉಪಸಭಾಧ್ಯಕ್ಷ ಮಂಕಾಳ ವೈದ್ಯ, ಹೊಸ ಜವಾಬ್ದಾರಿ ನೀಡಿದಕ್ಕೆ ಕೃತಜ್ಞತೆ ಸಲ್ಲಿದರು. 'ನಾನು ಹುಟ್ಟಿದಾಗ ನಮ್ಮ ಮನೆಯಲ್ಲಿ ಕರೆಂಟ್ ಕೂಡ ಇರಲಿಲ್ಲ..ನಾನು ಬೆಂಗಳೂರಿಗೆ ಬಂದು ಅನೇಕ ಕೆಲಸ ಮಾಡಿದ್ದೇನೆ. ಹೋಟೆಲ್ ನಲ್ಲಿ ಕೆಲಸ ಮಾಡಿದ್ದೇನೆ, ನಂತರ ಊರಿಗೆ ಹೋಗಿ ಜಿಲ್ಲಾ ಪಂಚಾಯತಿ ಚುನಾವಣೆ ಮೂಲಕ ರಾಜಕೀಯ ಪ್ರವೇಶ ಮಾಡಿದೆ' ಎಂದರು.&lt;/p&gt;&lt;p&gt;ನಾನು ಜಿಲ್ಲಾ ಪಂಚಾಯತ್ ಚುನಾವಣೆಗೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದೆ.ಆಗ ಎಲ್ಲರೂ ನಾಮಪತ್ರ ವಾಪಸ್ ತಗೊಳಿ ಅಂತ ಒತ್ತಡ ಹಾಕಿದ್ದರು.ನಾನು ಇಡಗುಂಜಿ ಗಣೇಶನನ್ನ ನಂಬಿದವನು. ಅವನನ್ನು ನಂಬಿ ಕೆಲಸ ಮಾಡುವವನು. ಅಲ್ಲಿ ಭೇಟಿ ಕೊಟ್ಟು ನಾಮಿನೇಷನ್ ಹಾಕಿದೆ. 180 ವೋಟಿನಿಂದ ನಾನು ಗೆದ್ದಿದ್ದೆ. ಸೋತೆ ಅಂತ ಹಲವರು ಹೇಳಿದರು. ನಾನು ಮನೆಗೆ ಹೊರಟಿದ್ದೆ, ಆಗ ನನಗೆ 180 ವೋಟಿನಿಂದ ಗೆದ್ದಿದ್ದು ಹೇಳಿದರು.ಮತ್ತೆ ಹೋಗಿ ಪ್ರಮಾಣ ಪತ್ರ ತಗೊಂಡೆ ಎಂದರು.&lt;/p&gt;&lt;h2&gt;&lt;strong&gt;ಬಡವರಿಗೆ ಸಹಾಯ ಮಾಡೋದೇ ನನ್ನ ಕೆಲಸ&lt;/strong&gt;&lt;/h2&gt;&lt;p&gt;ಆರ್.ವಿ ದೇಶಪಾಂಡೆ ಅವರು ಪಕ್ಷಕ್ಕೆ ಸೇರಿಸಿಕೊಂಡರು.ನನ್ನ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಮಾಡಿದ್ದರು. ಬಡವರಿಗೆ ಸಹಾಯ ಮಾಡುವುದು ನನ್ನ ಕೆಲಸ. ಶಾಲೆ ಕಟ್ಟಿದ್ದೇನೆ, ಬಡವರಿಗೆ ಸಹಾಯ ಮಾಡಿದ್ದೇನೆ.ನನಗೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡದ ಹಾಗೆ ಮೀಸಲಾತಿ ಬಂತು. ಇದ್ದ ಒಂದು ಜಿಲ್ಲಾಪಂಚಾಯತ್ ಜಾಲಿ ಜಿ.ಪಂ ಕ್ಷೇತ್ರದಲ್ಲಿ ಟಿಕೆಟ್ ಕೇಳಿದ್ರೂ ಕೊಡಲಿಲ್ಲ. ಅದಕ್ಕೆ ಎರಡನೆಯ ಬಾರಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದೆ. ಬಿಜೆಪಿ ಕಾಂಗ್ರೆಸ್ ಸೋಲಿಸಿ ಮತ್ತೇ ಸದಸ್ಯ ಆದೆ.ದೇಶಪಾಂಡೆ ಅವರಲ್ಲಿ ಟಿಕೆಟ್ ಕೇಳಿಕೊಂಡೆ. ಜಾಲಿ ಕ್ಷೇತ್ರ ಜನರಲ್ ಇದೆ ಆಗಲ್ಲ ಅಂದ್ರು. ಆದರೂ ಪಕ್ಷೇತರನಾಗಿ 1800 ಮತಗಳಿಂದ ಮತ್ತೆ ಜಿಲ್ಲಾ ಪಂಚಾಯತಿ ಗೆದ್ದೆ ಎಂದು ಹೇಳಿದರು.&lt;/p&gt;&lt;p&gt;2013ರಲ್ಲಿ ವಿಧಾನಸಭೆ ಚುನಾವಣೆಯಲ್ಲೂ ಟಿಕೆಟ್ ಕೊಡಲಿಲ್ಲ. ಆಗ ಟಿಕೆಟ್ ಕೇಳಿದೆ ಸಿಗಲಿಲ್ಲ. ಆಗಲೂ ಬೇರೆ ಪಕ್ಷಕ್ಕೆ ಹೋಗದೆ ಪಕ್ಷೇತರ ಆಗಿ ನಿಂತೆ ಗೆದ್ದೆ. 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಂತು 5000 ಮತಗಳ ಅಂತರದಿಂದ ಸೋತೆ. ಆಗ ಡಿ ಕೆ ಶಿವಕುಮಾರ್ ಅವರು, ನೀನು ಕ್ಷೇತ್ರದಲ್ಲಿ ಕೆಲಸ ಮಾಡು, ಬಿ ಫಾರಂ ಚಿಂತೆ ಬೇಡ ಅಂತ ಹೇಳಿ ಧೈರ್ಯ ಹೇಳಿದ್ರು. 2023ರಲ್ಲಿ ಬಿ ಫಾರಂ ಮನೆಗೆ ಕಳುಹಿಸಿದ್ದರು. ಬೇರೆ ರೀತಿಯ ಸಹಾಯ ಸಹ ಮಾಡಿದ್ದರು. ಚುನಾವಣೆಯಲ್ಲಿ 30 ಸಾವಿರ ಅಂತರದಿಂದ ಗೆದ್ದೆ, ಮೂರು ವರ್ಷ ಮಂತ್ರಿ ಆಗಿದ್ದೆ.ಆದರೆ ನನ್ನ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗಿಲ್ಲ. ಅದಕ್ಕೆ&zwnj;ಬೇರೆ ಬೇರೆ ಕಾರಣ ಇದೆ. ಅದನ್ನು ಸದನದಲ್ಲಿ ಹೇಳಲಾರೆ ಅಂತ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದರು.&lt;/p&gt;&lt;p&gt;ಮೊನ್ನೆ ಕೂಡ ಸಚಿವರಾಗಿದ್ದೀಯಾ ಅಂತ ಕರೆ ಮಾಡಿದ್ರು. ಬಳಿಕ ಏನೋ ವ್ಯತ್ಯಾಸ ಆಯ್ತು ಅಂದ್ರು. ನನ್ನ ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ ಕೈಗೊಂಡರು. ನಾನು ಏನೂ ಮಾತನಾಡಲಿಲ್ಲ ಎಂದು ವೈದ್ಯ ಹೇಳಿದರು.&lt;/p&gt;&lt;p&gt;ಏನೂ ಆಸೆ ಇಲ್ಲದ ನನಗೆ, ನನ್ನ ಕ್ಷೇತ್ರದ ಜನ ನನ್ನನ್ನ ಇಲ್ಲಿಗೆ ತಂದು ನಿಲ್ಲಿಸಿದ್ದಾರೆ.ಈಗ ಉಪಾಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ.ಈ ಸ್ಥಾನದಲ್ಲಿ ಕುಳಿತು ರಾಜ್ಯದ ಜನರಿಗೆ ಸಹಾಯ ಆಗುವ ಕೆಲಸ ಮಾಡ್ತೇನೆ. ನನ್ನ ಬಗ್ಗೆ ಬಹಳ ಶಾಸಕರು ಹತ್ತಿರದಿಂದ ತಿಳಿದುಕೊಂಡು ಮಾತನಾಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸ್ತೇನೆ. ಪ್ರಜಾಪ್ರಭುತ್ವದ ಮೌಲ್ಯ ಕಾಪಾಡುವುದು ನನ್ನ ಕರ್ತವ್ಯ. ನಿಮ್ಮೆಲ್ಲರ ಸಹಕಾರದಿಂದ ಈ ಜವಾಬ್ದಾರಿ ನಿರ್ವಹಿಸುತ್ತೇನೆ ಅಂತ ಭಾವುಕರಾಗಿ ಸದನದಲ್ಲಿ ಮಂಕಾಳ ವೈದ್ಯ ಹೇಳಿದರು.&lt;/p&gt;]]></content:encoded>
            <category>politics</category>
            <dc:creator>Santosh Naik</dc:creator>
            <atom:link href="https://kannada.asianetnews.com/politics/mankal-vaidya-unanimously-elected-karnataka-assembly-deputy-speaker-san/articleshow-0cczwp7"/>
        </item>
        <item>
            <title><![CDATA[Kharge: ಭಾಷಣ ಮಾಡಿದ ವೇದಿಕೆ  ಶುದ್ಧೀಕರಣ ವಿವಾದ:  ಸ್ವಪಕ್ಷದಿಂದಲೇ ಬೆಂಬಲ ಸಿಗಲಿಲ್ಲ: ಖರ್ಗೆ ಬೇಸರ]]></title>
            <link>https://kannada.asianetnews.com/india-news/stage-purification-row-controversy-kharge-disappointed-by-lack-of-support-from-his-own-party-rav/articleshow-0y4tgnf</link>
            <guid isPermaLink="true">https://kannada.asianetnews.com/india-news/stage-purification-row-controversy-kharge-disappointed-by-lack-of-support-from-his-own-party-rav/articleshow-0y4tgnf</guid>
            <pubDate>Fri, 21 Aug 2026 07:49:24 +0530</pubDate>
            <description><![CDATA[&lt;p&gt;ಉತ್ತರಾಖಂಡದಲ್ಲಿ ತಾವು ಸಭೆ ನಡೆಸಿದ ಸ್ಥಳವನ್ನು 'ಶುದ್ಧೀಕರಣ' ಮಾಡಿದ ಘಟನೆಗೆ ಸಂಬಂಧಿಸಿದಂತೆ ಸ್ವಪಕ್ಷದವರಿಂದಲೇ ನಿರೀಕ್ಷಿತ ಬೆಂಬಲ ಸಿಗದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್&zwnj; ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0h1j3b9xqrwt82ewnvtppzw,imgname-----------------------2026-08-21t074204.950-1787278462313.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.21):&lt;/strong&gt; ಉತ್ತರಾಖಂಡದಲ್ಲಿ ತಾವು ಸಾರ್ವಜನಿಕ ಸಭೆ ನಡೆಸಿದ ಜಾಗವನ್ನು ಬಲಪಂಥೀಯ ಸಂಘಟನೆಯೊಂದು &lsquo;ಶುದ್ಧೀಕರಣ&rsquo; ಮಾಡಿದ ಘಟನೆಗೆ ಸಂಬಂಧಿಸಿದಂತೆ ಸ್ವಪಕ್ಷದವರಿಂದಲೇ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC Chief Mallikarjun kharge) ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಬುಧವಾರ ನಡೆದ ಕಾಂಗ್ರೆಸ್&zwnj; ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಖರ್ಗೆ, ಶುದ್ಧೀಕರಣ ಹೋಮ ಮಾಡಿದ ಬಿಜೆಪಿ ಮತ್ತು ಆರ್&zwnj;ಎಸ್&zwnj;ಎಸ್&zwnj; ನಡೆಯನ್ನು ಉತ್ತರಾಖಂಡದ ಕಾಂಗ್ರೆಸ್&zwnj; ಘಟಕ ಗಟ್ಟಿಧ್ವನಿಯಲ್ಲಿ ಖಂಡಿಸಿದ್ದನ್ನು ಶ್ಲಾಘಿಸಿದರು.&lt;/p&gt;&lt;h2&gt;ಚೆನ್ನಾಗಿ ಬರೆಯುವವರು ಮತ್ತು ಚೆನ್ನಾಗಿ ಕಾಣುವವರು ಈ ಘಟನೆಯ ಬಗ್ಗೆ ಮಾತೇ ಆಡಲಿಲ್ಲ&rsquo;&lt;/h2&gt;&lt;p&gt;ಆದರೆ ಇದೇ ವೇಳೆ, &lsquo;ಚೆನ್ನಾಗಿ ಬರೆಯುವವರು ಮತ್ತು ಚೆನ್ನಾಗಿ ಕಾಣುವವರು ಈ ಘಟನೆಯ ಬಗ್ಗೆ ಮಾತೇ ಆಡಲಿಲ್ಲ&rsquo; ಎಂದು ಲಘು ಶೈಲಿಯಲ್ಲಿ ಹೇಳಿದರು. ಈ ಮೂಲಕ ತಮ್ಮ ಪಕ್ಷದಲ್ಲೇ ಪತ್ರಿಕೆಗಳಲ್ಲಿ ಲೇಖನ ಬರೆಯುವ ಹಾಗೂ &lsquo;ಚೆನ್ನಾಗಿ ಕಾಣುವ&rsquo; ಕೆಲವು ನಾಯಕರ ಬಗ್ಗೆ ಅವರು ಚಾಟಿ ಬೀಸಿದರು ಎಂದು ಮೂಲಗಳು ಹೇಳಿವೆ.&lt;/p&gt;&lt;p&gt;ಜತೆಗೆ, ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಕ್ರಮಣಕಾರಿ ನಿಲುವು ತಳೆಯಬೇಕು ಹಾಗೂ ಜಾತಿ ಆಧರಿತ ತಾರತಮ್ಯದ ವಿರುದ್ಧ ಹೋರಾಡಬೇಕು ಎಂದು ಆಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಖರ್ಗೆ ಅವರು ಉತ್ತರಾಖಂಡದ ರಾಮ್&zwnj;ಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದ 2 ದಿನಗಳ ಬಳಿಕ ಅಲ್ಲಿ ಶುದ್ಧೀಕರಣ ಹೋಮ ಮಾಡಲಾಗಿತ್ತು. ಇದು ಬಿಜೆಪಿಗರ ಕೆಲಸ ಎಂಬ ಕಾಂಗ್ರೆಸ್&zwnj;ನ ಆರೋಪವನ್ನು ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿರಸ್ಕರಿಸಿದ್ದರು. ಜತೆಗೆ ಘಟನೆಯನ್ನು ಖಂಡಿಸಿದ್ದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/stage-purification-row-controversy-kharge-disappointed-by-lack-of-support-from-his-own-party-rav/articleshow-0y4tgnf"/>
        </item>
        <item>
            <title><![CDATA[ಆಂಧ್ರದಲ್ಲಿ ಅಣ್ಣ-ತಮ್ಮನ ಜುಗಲ್‌ಬಂದಿ.. ನಾಯ್ಡು ಸರ್ಕಾರದಲ್ಲಿ ಪವನ್ ಕಲ್ಯಾಣ್‌ಗೆ ಆನೆಬಲ..!]]></title>
            <link>https://kannada.asianetnews.com/india-news/andhra-pradesh-dcm-pawan-kalyan-brother-naga-babu-get-to-cabinet-rank-post-in-chandrababu-naidu-govt-gkn/articleshow-177dql7</link>
            <guid isPermaLink="true">https://kannada.asianetnews.com/india-news/andhra-pradesh-dcm-pawan-kalyan-brother-naga-babu-get-to-cabinet-rank-post-in-chandrababu-naidu-govt-gkn/articleshow-177dql7</guid>
            <pubDate>Tue, 18 Aug 2026 15:57:57 +0530</pubDate>
            <description><![CDATA[&lt;p&gt;ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ನಾಯ್ಡು ಸರ್ಕಾರದಲ್ಲಿ ತಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸಹೋದರನಿಗೆ ಸಂಪುಟ ದರ್ಜೆಯ ಸ್ಥಾನಮಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತ ಸ್ಟೋರ ಇಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0a6kgwtkk6fj6mmwt5fmxk9,imgname-pawan-kalyan-brother-naga-babu-1787048870810.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಮರಾವತಿ: &lt;/strong&gt;ಆಂಧ್ರಪ್ರದೇಶ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಹಿರಿಯ ಸಹೋದರ ಮತ್ತು ಜನಸೇನಾ ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗಬಾಬು ಕೊನಿಡೇಲ ಅವರಿಗೆ ರಾಜ್ಯ ಸರ್ಕಾರವು ಅತ್ಯಂತ ಪ್ರಮುಖ ಜವಾಬ್ದಾರಿ ನೀಡಿದೆ. ನಾಗಬಾಬು ಅವರನ್ನು 'ಎಪಿ-ಗ್ರೀನ್' (AP-GREEN) ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಸಂಪುಟ ದರ್ಜೆಯ (Cabinet Rank) ಸ್ಥಾನಮಾನವನ್ನು ನೀಡಲಾಗಿದೆ.&lt;/p&gt;&lt;h2&gt;&lt;strong&gt;ಏನಿದು AP-GREEN?&lt;/strong&gt;&lt;/h2&gt;&lt;p&gt;ಪರಿಸರ ಮತ್ತು ಅರಣ್ಯ ಇಲಾಖೆಯ ಅಡಿಯಲ್ಲಿ ಬರುವ ಆಂಧ್ರಪ್ರದೇಶ ಸೊಸೈಟಿ ಫಾರ್ ಗ್ರೀನಿಂಗ್ ಅಂಡ್ ರಿಫಾರೆಸ್ಟೇಶನ್ ಫಾರ್ ಇಕಲಾಜಿಕಲ್ ಎನ್ರಿಚ್&zwnj;ಮೆಂಟ್ (AP-GREEN) ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ನಾಗಬಾಬು ಕಾರ್ಯನಿರ್ವಹಿಸಲಿದ್ದಾರೆ. ಆಗಸ್ಟ್ 17 ರಂದು ಈ ಕುರಿತು ಅಧಿಕೃತ ಸರ್ಕಾರಿ ಆದೇಶ ಹೊರಬಿದ್ದಿದೆ. 2047ರ ವೇಳೆಗೆ ಆಂಧ್ರಪ್ರದೇಶದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾ 50 ರಷ್ಟು ಭಾಗವನ್ನು ಅರಣ್ಯ ಮತ್ತು ಹಸಿರು ಹೊದಿಕೆಯಿಂದ ವಿಸ್ತರಿಸುವ ಬೃಹತ್ ಗುರಿಯನ್ನು ಈ ಸಮಿತಿಗೆ ನೀಡಲಾಗಿದೆ. ಈ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ನಾಗಬಾಬು ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ.&lt;/p&gt;&lt;p&gt;ವಿಶೇಷವೆಂದರೆ ಪವನ್ ಕಲ್ಯಾಣ್ ಅವರು ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆಯ ಸಚಿವರಾಗಿದ್ದಾರೆ. ಅವರು AP-GREEN ನ ಒಟ್ಟಾರೆ ಅಧ್ಯಕ್ಷರಾಗಿದ್ದರೆ, ನಾಗಬಾಬು ಅವರು ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ (ಉಪಾಧ್ಯಕ್ಷರ ಸ್ಥಾನಮಾನದಲ್ಲಿ) ಕೆಲಸ ಮಾಡಲಿದ್ದಾರೆ. ಅಸ್ತಿತ್ವದಲ್ಲಿರುವ ಸಾಮಾಜಿಕ ಅರಣ್ಯ ವಿಭಾಗವು ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮಿತಿಯನ್ನು ಹೊಂದಿರುವ ಕಾರಣ ಸರ್ಕಾರವು 'AP-GREEN' ಎಂಬ ಪ್ರತ್ಯೇಕ ಸಂಸ್ಥೆಯನ್ನು ರಚಿಸಿದೆ.&lt;/p&gt;&lt;h2&gt;&lt;strong&gt;ಜಿಲ್ಲಾ ಮಟ್ಟದಲ್ಲೂ ಹಸಿರು ಕ್ರಾಂತಿ&lt;/strong&gt;&lt;/h2&gt;&lt;p&gt;ರಾಜ್ಯ ಹಸಿರು ಮಿಷನ್ ಅನುಷ್ಠಾನಕ್ಕಾಗಿ AP-GREEN ಅಡಿಯಲ್ಲಿ ಜಿಲ್ಲಾ ಹಸಿರು ಅಭಿವೃದ್ಧಿ ಏಜೆನ್ಸಿಗಳನ್ನು (DGDA) ಸಹ ರಚಿಸಲಾಗಿದೆ. ಸದ್ಯ ಇರುವ 11 ಸಾಮಾಜಿಕ ಅರಣ್ಯ ವಿಭಾಗಗಳನ್ನು ಡಿಜಿಡಿಎಗಳಾಗಿ ಪರಿವರ್ತಿಸಲಾಗುತ್ತಿದ್ದು, ಉಳಿದ ಜಿಲ್ಲೆಗಳಲ್ಲಿ 14 ಹೊಸ ವಿಭಾಗಗಳನ್ನು ಸ್ಥಾಪಿಸಲಾಗುತ್ತಿದೆ. ನಾಗಬಾಬು ನೇತೃತ್ವದ ಈ ಸಮಿತಿಯಲ್ಲಿ ಅರಣ್ಯ ಪಡೆಯ ಮುಖ್ಯಸ್ಥರು, ಕೃಷಿ, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆಗಳ ಆಯುಕ್ತರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸದಸ್ಯರಾಗಿ ಇರಲಿದ್ದಾರೆ.&lt;/p&gt;&lt;p&gt;ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ (MLC) ನಾಗಬಾಬು ಅವರಿಗೆ ಹೊಸ ಜವಾಬ್ದಾರಿ ಸಿಕ್ಕಿರುವುದು ಜನಸೇನಾ ಕಾರ್ಯಕರ್ತರಲ್ಲಿ ಸಂತಸ ತಂದಿದೆ. ಪವನ್ ಕಲ್ಯಾಣ್ ಮತ್ತು ನಾಗಬಾಬು ಜೋಡಿಯು ಆಂಧ್ರವನ್ನು ಹಸಿರುಮಯವಾಗಿಸಲು ಯಾವ ರೀತಿ ಹೆಜ್ಜೆ ಇಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/andhra-pradesh-dcm-pawan-kalyan-brother-naga-babu-get-to-cabinet-rank-post-in-chandrababu-naidu-govt-gkn/articleshow-177dql7"/>
        </item>
        <item>
            <title><![CDATA[ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್‌, ಬಿಜೆಪಿಗೆ ಹರಿಪ್ರಸಾದ್ ಸವಾಲು!]]></title>
            <link>https://kannada.asianetnews.com/politics/kpcc-chief-bk-hariprasad-challenges-rss-bjp-if-you-dare-sing-national-anthem-at-sangh-office-rav/articleshow-6bwego8</link>
            <guid isPermaLink="true">https://kannada.asianetnews.com/politics/kpcc-chief-bk-hariprasad-challenges-rss-bjp-if-you-dare-sing-national-anthem-at-sangh-office-rav/articleshow-6bwego8</guid>
            <pubDate>Thu, 20 Aug 2026 12:34:21 +0530</pubDate>
            <description><![CDATA[ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್, ವಂದೇ ಮಾತರಂ ವಿಚಾರವಾಗಿ ರಾಜಕೀಯ ಮಾಡುವ ಆರ್&zwnj;ಎಸ್&zwnj;ಎಸ್&zwnj; ಹಾಗೂ ಬಿಜೆಪಿಗೆ ತಮ್ಮ ಶಾಖೆಗಳಲ್ಲಿ ರಾಷ್ಟ್ರಗೀತೆ ಹಾಡುವಂತೆ ಸವಾಲು ಹಾಕಿದ್ದಾರೆ. ಇವರು ದೇಶದ್ರೋಹಿಗಳು ಮತ್ತು ದಲಿತ ವಿರೋಧಿಗಳು ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0ez5ebaettcvjxkafsyq6ar,imgname-----------------------2026-08-20t122335.745-1787208841578.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.20): &lt;/strong&gt;ವಂದೇ ಮಾತರಂ ಮುಂದಿಟ್ಟುಕೊಂಡು ರಾಜಕೀಯ ಮಾಡುವ ದೇಶದ್ರೋಹಿಗಳೇ ತಾಕತ್ತಿದ್ರೆ ಆರ್&zwnj;ಎಸ್&zwnj;ಎಸ್&zwnj;(RSS) ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಆರೆಸ್ಸೆಸ್, ಬಿಜೆಪಿಗೆ ಸವಾಲು ಹಾಕಿದರು.&lt;/p&gt;&lt;p&gt;ಇಂದು ಕೆಪಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಂದೇ ಮಾತರಂ ಎರಡು ಚರಣ ಮಾತ್ರ ಹಾಡುತ್ತೇವೆ. CWC ಸರಿಯಾದ ನಿರ್ಣಯವನ್ನು ತೆಗೆದುಕೊಂಡಿದೆ. ನಾವು ಇದನ್ನ ಸ್ವಾಗತಿಸುತ್ತೇನೆ. ಬಿಜೆಪಿಯವರು ಏನೇ ಕಾನೂನು ತರಲಿ, ಇವರು ನಮ್ಮನ್ನು ಗಲ್ಲಿಗಾದರೂ ಹಾಕಲಿ, ಫಾಸಿಯಾದರೂ ಹಾಕಲಿ, ಜೈಲಿಗಾದರೂ ಹಾಕಲಿ ನಾವು ಹಾಡುವುದು ಎರಡೇ ಚರಣ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂದ ವಿದ್ಯಾರ್ಥಿಗೆ ಬೆದರಿಕೆ ಆರೋಪ, ಶಾಹೀನ್ ಶಾಲೆ ಪ್ರಾಂಶುಪಾಲ ವಿರುದ್ಧ FIR&lt;/p&gt;&lt;h2&gt;ವಂದೇ ಮಾತರಂ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ:&lt;/h2&gt;&lt;p&gt;ಬಿಜೆಪಿ, ಆರೆಸ್ಸೆಸ್ ದೇಶದ್ರೋಹಿಗಳು ವಂದೇ ಮಾತರಂ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಾನು ದೇಶದ್ರೋಹಿಗಳಿಗೆ ಸವಾಲು ಹಾಕುತ್ತೇನೆ ಆರೆಸ್ಸೆಸ್ ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ. ಸಂಘದಲ್ಲಿ ರಾಷ್ಟ್ರಗೀತೆ ಹಾಡದವರು ವಂದೇ ಮಾತರಂ ಹಾಡಲು ಹೇಳಲು ಬರ್ತಾರೆ ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;h3&gt;ಇವರೆಲ್ಲ ಕಂಗನಾ ಅಭಿಮಾನಿಗಳು&lt;/h3&gt;&lt;p&gt;ಬಿಜೆಪಿಯವರು, ಚಡ್ಡಿ ಹಾಕುವವರು ಇವರೆಲ್ಲ ಕಂಗನಾ ರಣಾವತ್ ಅಭಿಮಾನಿಗಳು. ಇವರು ಕಂಗನಾ ಹಾಡನ್ನೇ ಬೇಕಿದ್ದರೆ ಪಾರ್ಲಿಮೆಂಟ್&zwnj;ಗೆ ತಂದು ರಾಷ್ಟ್ರಗೀತೆ ಮಾಡ್ತಾರೆ. ಈ ಬಿಜೆಪಿಯವರು ರಣಹೇಡಿಗಳು ಪಾರ್ಲಿಗೆಂಟ್&zwnj;ಗೆ ಬರುವ ಧೈರ್ಯವೂ ಇಲ್ಲದ ಹೇಡಿಗಳು. ಆದರೆ ಪ್ರತಿಪಕ್ಷಗಳು ಸದನ ನಡೆಯಲು ಬಿಡುತ್ತಿಲ್ಲ ಎಂದು ಬೊಬ್ಬೆ ಹಾಕುತ್ತಾರೆ ಎಂದು ಕಟುವಾಗಿ ವಾಗ್ವಾಳಿ ನಡೆಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Vande mataram: ಗುಂಡಿಟ್ಟು ಕೊಂದ್ರೂ ಸರಿ, ವಂದೇ ಮಾತರಂ ಪೂರ್ಣ ಹಾಡಲ್ಲ: ಕೇರಳ ಸಚಿವ, ಸಂಸದ ಶಾಕಿಂಗ್ ಹೇಳಿಕೆ!&lt;/p&gt;&lt;h3&gt;ದಲಿತ ಸಮುದಾಯ ಸಹಿಸುವುದಿಲ್ಲ&lt;/h3&gt;&lt;p&gt;ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಬಳಿಕ ಆ ಜಾಗವನ್ನು ಬಿಜೆಪಿಯವರು ಸ್ವಚ್ಛ ಮಾಡ್ತಾರೆ ಎಂದರೆ ಅಲ್ಲಿ ದಲಿತರು, ಎಸ್&zwnj;ಸಿ ಸಮುದಾಯವನ್ನ ಸಹಿಸುವುದಿಲ್ಲ ಇವರು. ವಾಲ್ಮೀಕಿ ಸಮುದಾಯವನ್ನ ಕಂಡರೂ ಬಿಜೆಪಿ ಆರೆಸ್ಸೆಸ್&zwnj;ನವರಿಗೆ ಆಗುವುದಿಲ್ಲ. ಅದಕ್ಕೆ ನಾಗೇಂದ್ರ ರಾಜೀನಾಮೆಗೆ ಪ್ರತಿಭಟನೆ ಮಾಡ್ತಾರೆ, ವಾಲ್ಮೀಕಿ ಸಮುದಾಯ ಕಂಡರೆ ಬಿಜೆಪಿಗೆ ಆಗಿಬರಲ್ಲ ಎಂದು ಕಿಡಿಕಾರಿದರು.&lt;/p&gt;&lt;p&gt;ವಾಲ್ಮೀಕಿ ನಿಗಮ ಹಗರಣದಲ್ಲಿ ಆರೋಪಿಯಾಗಿರುವ ಬಿ ನಾಗೇಂದ್ರ ರಾಜೀನಾಮೆ ನೀಡುವಂತೆ ಬಿಜೆಪಿ ಕಳೆದ ಮೂರು ದಿನಗಳಿಂದ ಸದನದ ಒಳಗೂ ಹೊರಗೂ ಪ್ರತಿಭಟನೆ ನಡೆಸುತ್ತಿದೆ. ಬಿ ನಾಗೇಂದ್ರನ ರಾಜೀನಾಮೆ ಪಡೆಯುವವರೆಗೂ ಬಿಜೆಪಿ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಇತ್ತ ರಾಜ್ಯ ಸರ್ಕಾರ ಬಿ ನಾಗೇಂದ್ರ ತಪ್ಪು ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದೆ.&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/kpcc-chief-bk-hariprasad-challenges-rss-bjp-if-you-dare-sing-national-anthem-at-sangh-office-rav/articleshow-6bwego8"/>
        </item>
        <item>
            <title><![CDATA[Ballari Politics:  ಮತ್ತೆ ರಾಜ್ಯದ ಗಮನ ಸೆಳೆದ ಬಳ್ಳಾರಿ ರಾಜಕೀಯ; ಬಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಮೇಲ್ಮನೆ, ಕೆಳಮನೆಯಲ್ಲೂ ಗದ್ದಲ!]]></title>
            <link>https://kannada.asianetnews.com/politics/valmiki-corporation-scam-bjp-protest-and-demandig-b-nagendra-resignation-rav/articleshow-foqii86</link>
            <guid isPermaLink="true">https://kannada.asianetnews.com/politics/valmiki-corporation-scam-bjp-protest-and-demandig-b-nagendra-resignation-rav/articleshow-foqii86</guid>
            <pubDate>Fri, 21 Aug 2026 11:53:43 +0530</pubDate>
            <description><![CDATA[&lt;p&gt;ಬಳ್ಳಾರಿ ರಾಜಕಾರಣವು ಗಣಿ ವಿವಾದಗಳಿಂದ ಹಿಡಿದು ಸಚಿವ ನಾಗೇಂದ್ರರ ರಾಜೀನಾಮೆ ಒತ್ತಾಯದವರೆಗೆ ಸದಾ ವಿವಾದಗಳ ಕೇಂದ್ರವಾಗಿದೆ. ರೆಡ್ಡಿ ಸಹೋದರರ ಪ್ರಭಾವ, 'ಆಪರೇಷನ್ ಕಮಲ', ವಾಲ್ಮೀಕಿ ನಿಗಮದ ಹಗರಣದಂತಹ ಘಟನೆಗಳು ರಾಜ್ಯ ರಾಜಕೀಯದಲ್ಲಿ ಬಳ್ಳಾರಿಯನ್ನು ಪ್ರಮುಖ ಹಾಗೂ ವಿವಾದಾತ್ಮಕ ಶಕ್ತಿಕೇಂದ್ರವಾಗಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hf9z9sjcvb8mjrs3csfkmk,imgname-----------------------2026-08-21t114133.033-1787292876089.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಜುನಾಥ ಕೆ.ಎಂ.&lt;/strong&gt;&lt;/p&gt;&lt;p&gt;ಬಳ್ಳಾರಿ: ಒಂದಿಲ್ಲೊಂದು ವಿವಾದಗಳಿಗೆ ಸದಾ ಸುದ್ದಿಯಲ್ಲಿರುವ ಬಳ್ಳಾರಿ ರಾಜಕಾರಣ ಇದೀಗ ಸಚಿವ ನಾಗೇಂದ್ರ ಅವರ ರಾಜಿನಾಮೆಗೆ ಒತ್ತಾಯಿಸಿ ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ನಡೆಯುತ್ತಿರುವ ಹೋರಾಟದಿಂದ ಮತ್ತೊಮ್ಮೆ ಸುದ್ದಿಯಲ್ಲಿದೆ.&lt;/p&gt;&lt;p&gt;ರಾಜ್ಯ ರಾಜಕಾರಣದ ಮೇಲೆ ತನ್ನದೇ ಆದ ಪ್ರಭಾವ ಬೀರಿರುವ ಬಳ್ಳಾರಿ, ಕಳೆದ ಎರಡು ದಶಕಗಳಿಂದ ಹಲವು ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಇದೀಗ ಸಚಿವ ಬಿ. ನಾಗೇಂದ್ರ ಅವರ ರಾಜಿನಾಮೆ ಪ್ರಹಸನ ಬಳ್ಳಾರಿಯ ರಾಜಕೀಯ ರಾಜ್ಯಮಟ್ಟದ ಚರ್ಚೆಗೆ ಮುನ್ನೆಲೆಗೆ ಬಂದಿದೆ.&lt;/p&gt;&lt;h2&gt;ಅಂದು ರೆಡ್ಡಿ ಸಹೋದರರು, ಇಂದು ನಾಗೇಂದ್ರ&lt;/h2&gt;&lt;p&gt;ಒಂದು ಕಾಲದಲ್ಲಿ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಸಹೋದರರ ಅಕ್ರಮ ಗಣಿಗಾರಿಕೆ ಆರೋಪಗಳು ಬಳ್ಳಾರಿಯನ್ನು ದೇಶದ ಗಮನ ಸೆಳೆಯುವಂತೆ ಮಾಡಿದ್ದವು. 2010ರ ಅವಧಿಯಲ್ಲಿ ಈ ವಿಚಾರ ವಿಧಾನಸಭೆ ಹಾಗೂ ವಿಧಾನಪರಿಷತ್&zwnj;ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆರೋಪ-ಪ್ರತ್ಯಾರೋಪ, ಮಾತಿನ ಚಕಮಕಿ ಹಾಗೂ ಬಳ್ಳಾರಿಯ ಬಿಜೆಪಿ ಶಾಸಕರ ವರ್ತನೆ ಕುರಿತು ನಡೆದ ರಾಜಕೀಯ ವಿಶ್ಲೇಷಣೆಗಳು ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದವು. ಅದೇ ಸಂದರ್ಭದಲ್ಲಿ ಸವಾಲೊಂದನ್ನು ಸ್ವೀಕರಿಸಿದ್ದ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಜಿಲ್ಲೆಯ ರಾಜಕೀಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದ್ದರು. ಅಷ್ಟೇ ಅಲ್ಲ; ಬಳ್ಳಾರಿ ಪಾದಯಾತ್ರೆಯಿಂದಾಗಿಯೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯೂ ಆದರು. ಆಗ ರಾಜ್ಯ ರಾಜಕಾರಣದಲ್ಲಿ ಬಳ್ಳಾರಿ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿತ್ತು.&lt;/p&gt;&lt;p&gt;ಇದಕ್ಕೂ ಮುನ್ನವೇ ಬಳ್ಳಾರಿಯ ರೆಡ್ಡಿ ಸಹೋದರರ ರಾಜಕೀಯ ಪ್ರಭಾವ ರಾಜ್ಯದಲ್ಲಿ ಚರ್ಚಿತವಾಗಿತ್ತು. &lsquo;ಆಪರೇಷನ್ ಕಮಲ&rsquo;ದ ಬೆಳವಣಿಗೆಗಳೊಂದಿಗೆ ರೆಡ್ಡಿ ಸಹೋದರರ ಹೆಸರು ಮುನ್ನೆಲೆಗೆ ಬಂದಿತ್ತು. ಸರ್ಕಾರ ರಚನೆ ಹಾಗೂ ಅಧಿಕಾರದ ರಾಜಕೀಯದಲ್ಲಿ ಬಳ್ಳಾರಿಯ ಪಾತ್ರದ ಕುರಿತು ರಾಜ್ಯದಾದ್ಯಂತ ಚರ್ಚೆ ನಡೆದಿತ್ತು. ಇದರಿಂದ ಜಿಲ್ಲೆ ಕೇವಲ ಗಣಿಗಾರಿಕೆಯ ಕಾರಣಕ್ಕಷ್ಟೇ ಅಲ್ಲ, ರಾಜಕೀಯ ಶಕ್ತಿಕೇಂದ್ರವಾಗಿಯೂ ಗುರುತಿಸಿಕೊಂಡಿತು.&lt;/p&gt;&lt;h3&gt;ಬಳ್ಳಾರಿ ರಾಜಕಾರಣ ಮತ್ತೊಂದು ಮಹತ್ವದ ಪ್ರಕರಣಕ್ಕೆ ಸಾಕ್ಷಿ&lt;/h3&gt;&lt;p&gt;ಮುಂದಿನ ವರ್ಷಗಳಲ್ಲಿ ಬಳ್ಳಾರಿ ರಾಜಕಾರಣ ಮತ್ತೊಂದು ಮಹತ್ವದ ಪ್ರಕರಣಕ್ಕೆ ಸಾಕ್ಷಿಯಾಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೂರಾರು ಕೋಟಿ ರುಪಾಯಿ ಮೌಲ್ಯದ ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿತು. ಪ್ರಕರಣದ ರಾಜಕೀಯ ಪರಿಣಾಮವಾಗಿ ಅಂದಿನ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. ಪ್ರಕರಣ ರಾಜ್ಯದಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಯಿತು.&lt;/p&gt;&lt;p&gt;ಇದೀಗ ಅದೇ ಬಿ. ನಾಗೇಂದ್ರ ಅವರು ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೊಮ್ಮೆ ಅವರ ವಿರುದ್ಧ ರಾಜಕೀಯ ಸಮರಕ್ಕೆ ಮುಂದಾಗಿದೆ. ನಾಗೇಂದ್ರ ಅವರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಸದನದ ಒಳಗೂ ಹೊರಗೂ ಪ್ರತಿಭಟನೆ, ಹೋರಾಟ ನಡೆಸುತ್ತಿದೆ. ಪರಿಣಾಮವಾಗಿ ಬಳ್ಳಾರಿಯ ರಾಜಕೀಯ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಬಳ್ಳಾರಿಯ ಜನರ ಬಗ್ಗೆ ರಾಜ್ಯದ ಜನರು ನಾನಾ ಬಗೆಯಲ್ಲಿ ವಿಶ್ಲೇಷಿಸುವಂತಾಗಿದೆ.&lt;/p&gt;&lt;p&gt;ಇದರ ನಡುವೆ 2026ರ ಜನವರಿ 1ರಂದು ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಹಾಗೂ ಓರ್ವ ವ್ಯಕ್ತಿಯ ಸಾವಿನ ಪ್ರಕರಣವೂ ಜಿಲ್ಲೆಯ ರಾಜಕೀಯ ಮತ್ತು ಸಾಮಾಜಿಕ ವಾತಾವರಣದ ಕುರಿತು ರಾಜ್ಯದ ಗಮನ ಸೆಳೆಯಿತು. ಈ ಘಟನೆ ಬಳ್ಳಾರಿಯ ರಾಜಕೀಯ ವೈಖರಿ ಹಾಗೂ ಇಲ್ಲಿನ ಜನಜೀವನದ ಕುರಿತು ಹಲವು ಚರ್ಚೆಗಳಿಗೆ ಕಾರಣವಾಯಿತು.&lt;/p&gt;&lt;p&gt;ಗಣಿಗಾರಿಕೆ ವಿವಾದದಿಂದ ಆರಂಭಿಸಿ &lsquo;ಆಪರೇಷನ್ ಕಮಲ&rsquo;, ಸಚಿವರ ರಾಜಿನಾಮೆ, ಭ್ರಷ್ಟಾಚಾರ ಆರೋಪ, ರಾಜಕೀಯ ಸಂಘರ್ಷ ಹಾಗೂ ಇತ್ತೀಚಿನ ಘಟನೆಗಳ ವರೆಗೆ ಬಳ್ಳಾರಿ ಒಂದಲ್ಲ ಒಂದು ಕಾರಣಕ್ಕೆ ರಾಜ್ಯದ ರಾಜಕೀಯ ನಕ್ಷೆಯಲ್ಲಿ ತನ್ನ ಛಾಪು ಮೂಡಿಸುತ್ತಲೇ ಬಂದಿದೆ. ಅಧಿಕಾರದ ಆಟದಲ್ಲಿ ಬಳ್ಳಾರಿಯ ಪ್ರಭಾವ ಕಡಿಮೆಯಾಗಿಲ್ಲ ಎಂಬುದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿಯಾಗಿದ್ದು, ರಾಜಕೀಯ ವಿವಾದಗಳ ಜಿಲ್ಲೆ ಎಂಬ ಕುಖ್ಯಾತಿಗೂ ಬಳ್ಳಾರಿ ಒಳಗಾಗಿರುವುದು ಈ ಭಾಗದ ಜನರ ಬೇಸರಕ್ಕೂ ಕಾರಣವಾಗಿಸಿದೆ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/valmiki-corporation-scam-bjp-protest-and-demandig-b-nagendra-resignation-rav/articleshow-foqii86"/>
        </item>
        <item>
            <title><![CDATA[Mekedatu Dam: ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ, ಕರ್ನಾಟಕಕ್ಕೆ ತಮಿಳುನಾಡು ಸಚಿವರ ಖಡಕ್ ಎಚ್ಚರಿಕೆ]]></title>
            <link>https://kannada.asianetnews.com/india-news/mekedatu-dam-row-escalates-as-tn-minister-issues-stern-warning-to-karnataka/articleshow-gp1y4l4</link>
            <guid isPermaLink="true">https://kannada.asianetnews.com/india-news/mekedatu-dam-row-escalates-as-tn-minister-issues-stern-warning-to-karnataka/articleshow-gp1y4l4</guid>
            <pubDate>Wed, 19 Aug 2026 15:59:57 +0530</pubDate>
            <description><![CDATA[ಕಾವೇರಿ ನೀರು ಹಂಚಿಕೆ ವಿವಾದದ ನಡುವೆಯೇ, ತಮಿಳುನಾಡು ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆಗೆ ತನ್ನ ವಿರೋಧವನ್ನು ಸ್ಪಷ್ಟಪಡಿಸಿದೆ. ಈ ವಿವಾದಿತ ಯೋಜನೆಗೆ ಕರ್ನಾಟಕ ಒಂದೇ ಒಂದು ಕಲ್ಲು ಹಾಕಲು ಬಿಡುವುದಿಲ್ಲ ಎಂದು ತಮಿಳುನಾಡು ಸಚಿವ ಎನ್. ಆನಂದ್ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-e88c5395-1f9a-46d5-9864-3e14aa23645c.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೇಕೆದಾಟು ಅಣೆಕಟ್ಟು(Mekedatu project) ವಿರೋಧಕ್ಕೆ ತಮಿಳುನಾಡು(Tamil nadu) ಪಟ್ಟು&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ವಿವಾದ(Cauvery water dispute)ದಿಂದ ರಾಜಕೀಯ ಕಾವು ಏರುತ್ತಿರುವಾಗಲೇ, ತಮಿಳುನಾಡು ಜಲಸಂಪನ್ಮೂಲ ಸಚಿವ ಎನ್. ಆನಂದ್ ಅವರು ಮೇಕೆದಾಟು ಅಣೆಕಟ್ಟು ಯೋಜನೆಗೆ ಸರ್ಕಾರದ ವಿರೋಧವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಬುಧವಾರ ಮಾತನಾಡಿದ ಅವರು, ಈ ಯೋಜನೆಗೆ ಕರ್ನಾಟಕ ಒಂದೇ ಒಂದು ಕಲ್ಲು ಹಾಕಲು ನಾವು ಬಿಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.&lt;/p&gt;&lt;p&gt;ವಿಧಾನಸಭೆಯಲ್ಲಿ ಮಾತನಾಡಿದ ಆನಂದ್ ಕಾವೇರಿ ವಿಚಾರದಲ್ಲಿ ಆಡಳಿತಾರೂಢ ಟಿ&zwnj;ವಿ&zwnj;ಕೆ ಸರ್ಕಾರ(TVK Govt) 'ಮೃದು ಧೋರಣೆ' ಅನುಸರಿಸುತ್ತಿದೆ ಎಂದು ಆರೋಪಿಸಿದ ಡಿಎಂಕೆ ಶಾಸಕ ದುರೈ ಚಂದ್ರಶೇಖರನ್ ಅವರಿಗೆ ಉತ್ತರ ನೀಡಿದರು. 'ಮೇಕೆದಾಟು ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರಕ್ಕೆ ಒಂದೇ ಒಂದು ಕಲ್ಲು ಇಡಲು ನಾವು ಬಿಡುವುದಿಲ್ಲ' ಎಂದು ಆನಂದ್ ವಿಧಾನಸಭೆಯಲ್ಲಿ ಪುನರುಚ್ಚರಿಸಿದರು. ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರ ಮಾತುಕತೆ ಮತ್ತು ಕಾನೂನು ಹೋರಾಟ ಎರಡೂ ಮಾರ್ಗಗಳ ಮೂಲಕ ಈ ವಿಷಯವನ್ನು ಸಕ್ರಿಯವಾಗಿ ನಿಭಾಯಿಸುತ್ತಿದೆ ಎಂದು ಅವರು ತಿಳಿಸಿದರು.&lt;/p&gt;&lt;h2&gt;ದಶಕಗಳ ಹಳೆಯ ಜಲ ವಿವಾದ&lt;/h2&gt;&lt;p&gt;ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದ ದಶಕಗಳಷ್ಟು ಹಳೆಯದು. ಅದರಲ್ಲೂ ಮಳೆ ಕೊರತೆಯಾದ ವರ್ಷಗಳಲ್ಲಿ ಕಾವೇರಿ ನೀರನ್ನು ಹೇಗೆ ಹಂಚಿಕೊಳ್ಳಬೇಕು ಎನ್ನುವುದೇ ಈ ಸಂಘರ್ಷದ ಮೂಲ.&lt;/p&gt;&lt;p&gt;ಕರ್ನಾಟಕ ಪ್ರಸ್ತಾಪಿಸಿರುವ ಮೇಕೆದಾಟು ಬ್ಯಾಲೆನ್ಸಿಂಗ್ ರಿಸರ್ವಾಯರ್ ಯೋಜನೆಯಿಂದ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಈ ಯೋಜನೆಯಿಂದ ತಮಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ತಮಿಳುನಾಡು ಮೊದಲಿನಿಂದಲೂ ಇದನ್ನು ವಿರೋಧಿಸುತ್ತಲೇ ಬಂದಿದೆ. ಇದು ಎರಡೂ ರಾಜ್ಯಗಳ ನಡುವೆ ದೊಡ್ಡ ಮಟ್ಟದ ತಿಕ್ಕಾಟಕ್ಕೆ ಕಾರಣವಾಗಿದೆ.&lt;/p&gt;&lt;h3&gt;ವಿಧಾನಸಭೆಯಲ್ಲಿ ರಾಜಕೀಯ ವಾಕ್ಸಮರ&lt;/h3&gt;&lt;p&gt;ಆಗಸ್ಟ್ 7 ರಂದು ವಿಧಾನಸಭೆಯಲ್ಲಿ ಮೇಕೆದಾಟು ಅಣೆಕಟ್ಟು ವಿವಾದದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. 'ಕರ್ನಾಟಕದಂತೆ ತಮಿಳುನಾಡಿನ ಎಲ್ಲಾ ಪಕ್ಷಗಳು ಈ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು' ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.&lt;/p&gt;&lt;p&gt;ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ವಿಜಯ್, ಮೇಕೆದಾಟು ಮತ್ತು ಕಾವೇರಿ ವಿವಾದದ ಬಗ್ಗೆ ಸರ್ವಪಕ್ಷ ಸಭೆಯ ಅಗತ್ಯವಿಲ್ಲ ಎಂದು ಹೇಳಿದರು. ವಿರೋಧ ಪಕ್ಷಗಳು 'ರಾಜಕೀಯ ಮಾಡಬಾರದು' ಎಂದು ಅವರು ಒತ್ತಾಯಿಸಿದರು. 'ಕಾವೇರಿ ನೀರಿನ ಹಕ್ಕಿನ ವಿಷಯದಲ್ಲಿ ಟಿ&zwnj;ವಿ&zwnj;ಕೆ ನೇತೃತ್ವದ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ' ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿ ಭರವಸೆ ನೀಡಿದರು.&lt;/p&gt;&lt;p&gt;ಜೂನ್ 19 ರಂದು, ತಮಿಳುನಾಡು ವಿಧಾನಸಭೆಯು ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕ ಸರ್ಕಾರದ ಪ್ರಸ್ತಾಪವನ್ನು ವಿರೋಧಿಸಿ ನಿರ್ಣಯವನ್ನು ಅಂಗೀಕರಿಸಿತ್ತು. ನಂತರ, ಈ ಸಮಸ್ಯೆಯನ್ನು ಬಗೆಹರಿಸಲು ನ್ಯಾಯಮಂಡಳಿ ರಚಿಸುವಂತೆ ಒತ್ತಾಯಿಸಲು ಈ ನಿರ್ಣಯವನ್ನು ತಿದ್ದುಪಡಿ ಮಾಡಲಾಯಿತು.&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದ ವಿವರಗಳನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಇದನ್ನು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/mekedatu-dam-row-escalates-as-tn-minister-issues-stern-warning-to-karnataka/articleshow-gp1y4l4"/>
        </item>
        <item>
            <title><![CDATA[ವಾಲ್ಮೀಕಿ ಹಗರಣದ ಕಿಂಗ್‌ಪಿನ್‌ ನೆಕ್ಕುಂಟಿ ನಾಗರಾಜ್ ಡಿಕೆಶಿ ಜತೆಗಿರುವ ಫೋಟೋ ಬಿಡುಗಡೆ ಮಾಡಿದ ಸಿಟಿ ರವಿ!]]></title>
            <link>https://kannada.asianetnews.com/politics/ct-ravi-releases-a-photo-of-valmiki-corporation-scam-kingpin-nekkunti-nagaraj-with-dk-shivakumar-rav/articleshow-hxppirt</link>
            <guid isPermaLink="true">https://kannada.asianetnews.com/politics/ct-ravi-releases-a-photo-of-valmiki-corporation-scam-kingpin-nekkunti-nagaraj-with-dk-shivakumar-rav/articleshow-hxppirt</guid>
            <pubDate>Fri, 21 Aug 2026 06:23:09 +0530</pubDate>
            <description><![CDATA[&lt;p&gt;ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಹಗರಣದ ಕಿಂಗ್&zwnj;ಪಿನ್ ನೆಕ್ಕುಂಟಿ ನಾಗರಾಜ್, ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಬಿ.ನಾಗೇಂದ್ರ ಅವರೊಂದಿಗಿರುವ ಫೋಟೋವನ್ನು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಬಿಡುಗಡೆ ಮಾಡಿದ್ದು ಸಂಚಲನ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0gwtgnvxzea6z1y74e21xjj,imgname-----------------------2026-08-21t061200.317-1787273495226.jpg" type="image/jpeg" height="390" width="690"/>
            <content:encoded><![CDATA[&lt;p&gt;-&lt;strong&gt;ಬೆಂಗಳೂರು (ಆ.21): &lt;/strong&gt;ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಹಗರಣ(Valmiki corporation scam)ದ ಕಿಂಗ್&zwnj;ಪಿನ್ ನೆಕ್ಕುಂಟಿ ನಾಗರಾಜ್(Nekkunte Nagaraj) ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಅವರು ಉಪಮುಖ್ಯಮಂತ್ರಿಯಾಗಿದ್ದ ವೇಳೆ ಜತೆಗಿದ್ದ ಫೋಟೋಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ.&lt;/p&gt;&lt;h2&gt;ವಾಲ್ಮೀಕಿ ಹಗರಣದ ಕಿಂಗ್&zwnj;ಪಿನ್ ಜೊತೆ ಡಿಕೆಶಿ ಫೋಟೋ ವೈರಲ್&lt;/h2&gt;&lt;p&gt;ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ(CT Ravi) ಮತ್ತಿತರರು ನೆಕ್ಕುಂಟಿ ನಾಗರಾಜ್ ಅವರು ಡಿ.ಕೆ.ಶಿವಕುಮಾರ್, ನೂತನ ಸಚಿವ ಬಿ.ನಾಗೇಂದ್ರ(B Nagendra) ಅವರ ಜತೆಗಿರುವ ಫೋಟೋಗಳನ್ನು ಬಿಡುಗಡೆ ಮಾಡಿದರು.&lt;/p&gt;&lt;p&gt;ಬಳಿಕ ಮಾತನಾಡಿದ ರವಿ, ಇಡೀ ಹಗರಣದಲ್ಲಿ ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್ ಕಿಂಗ್&zwnj;ಪಿನ್ ಆಗಿದ್ದಾನೆ. ಈ ನೆಕ್ಕುಂಟಿ ನಾಗರಾಜ್ ಜೊತೆ ಆಗಿನ ಉಪಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಫೋಟೋಗಳಿವೆ. ಈ ಫೋಟೋಗಳು ನೆಕ್ಕುಂಟಿ ಮತ್ತು ಕಾಂಗ್ರೆಸ್&zwnj; ಮುಖಂಡರಿಗೂ ಇರುವ ಗಹನವಾದ ಸಂಬಂಧ ಸೂಚಿಸುತ್ತಿದೆ ಎಂದು ಆರೋಪಿಸಿದರು.&lt;/p&gt;&lt;p&gt;ವಾಲ್ಮೀಕಿ ನಿಗಮ ಹಗರಣದ ಹಣ ಲ್ಯಾಂಬೋರ್ಗಿನಿ ಕಾರ್ ಶೋರೂಂಗಳಿಗೆ, ಬಾರ್&zwnj;ಗಳಿಗೆ, ಚಿನ್ನ ಬೆಳ್ಳಿ ಅಂಗಡಿಗೆ ಹೋಗಿದೆ. ಭ್ರಷ್ಟಾಚಾರ ಸಹಿಸಲ್ಲ ಅಂತ ಹೇಳುವ ಮುಖ್ಯಮಂತ್ರಿಗಳು ಬಹುಕೋಟಿ ಲೂಟಿ ಮಾಡಿದವರನ್ನು ಮಂತ್ರಿ ಮಾಡಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಆಗಿದೆ ಎಂದು ಲೇವಡಿ ಮಾಡಿದರು.&lt;/p&gt;&lt;h2&gt;ಬಳ್ಳಾರಿ ಗಣಿ ಹಗರಣದಲ್ಲೂ ಆರೋಪಿ:&lt;/h2&gt;&lt;p&gt;ಬಳ್ಳಾರಿ ಗಣಿ ಹಗರಣದಲ್ಲೂ ನಾಗೇಂದ್ರ ಒಬ್ಬ ಆಪಾದಿತ. ಇದು ಪರಿಶಿಷ್ಟ ಪಂಗಡ ಸಮುದಾಯದ ಹಣ. ಇನ್ನೊಬ್ಬರನ್ನು ಯಾರನ್ನಾದರೂ ಸಚಿವರನ್ನಾಗಿ ಮಾಡಿ. ಭ್ರಷ್ಟಾಚಾರಿಯನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ನಮ್ಮ ಆಕ್ಷೇಪ. ಒಬ್ಬ ಅಮಾಯಕ, ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರನ್ನು ಸಚಿವರನ್ನಾಗಿ ಮಾಡುವ ಮೂಲಕ ಪ್ರಾಮಾಣಿಕರಿಗೆ ನೀವೇನು ಸಂದೇಶ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.&lt;/p&gt;&lt;p&gt;ನಕಲಿ ಖಾತೆಗಳಿಗೆ ಹಣ ಹೇಗೆ ವರ್ಗಾವಣೆ ಮಾಡಬೇಕು ಎಂಬುದರಲ್ಲಿ ತಜ್ಞರಾಗಿರುವ ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಂಕಿ-ಅಂಶಗಳ ಖಾತೆ ನೀಡುವ ಬದಲು ಹಣಕಾಸು ಖಾತೆ ನೀಡಬೇಕು ಎಂದು ವ್ಯಂಗ್ಯವಾಡಿದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/ct-ravi-releases-a-photo-of-valmiki-corporation-scam-kingpin-nekkunti-nagaraj-with-dk-shivakumar-rav/articleshow-hxppirt"/>
        </item>
        <item>
            <title><![CDATA[ಸಿದ್ದರಾಮಯ್ಯ ಬರಲೇ ಇಲ್ಲ, ಯತೀಂದ್ರ ತಡವಾಗಿ ಬಂದ್ರು.. CLP ಮೀಟಿಂಗ್‌ಗೆ ಘಟಾನುಘಟಿಗಳೇ ಗೈರು..!]]></title>
            <link>https://kannada.asianetnews.com/politics/ex-cm-siddaramaiah-skips-dr-yatindra-siddaramaiah-arrives-late-and-congress-senior-leaders-miss-clp-meeting-gkn/articleshow-k0divkg</link>
            <guid isPermaLink="true">https://kannada.asianetnews.com/politics/ex-cm-siddaramaiah-skips-dr-yatindra-siddaramaiah-arrives-late-and-congress-senior-leaders-miss-clp-meeting-gkn/articleshow-k0divkg</guid>
            <pubDate>Tue, 18 Aug 2026 21:22:38 +0530</pubDate>
            <description><![CDATA[&lt;p&gt;ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಮೊದಲ ಸಿಎಲ್&zwnj;ಪಿ ಸಭೆಗೆ ಸಿದ್ದರಾಮಯ್ಯ ಗೈರಾಗಿದ್ದು, ಮಂತ್ರಿಗಿರಿ ಹಂಚಿಕೆ ವಿಚಾರದಲ್ಲಿನ ಅಸಮಾಧಾನ ಇನ್ನೂ ತಣಿದಿಲ್ಲ ಎಂಬ ಸೂಚನೆ ನೀಡಿದೆ. ಈ ಕುರಿತ ಸ್ಟೋರಿ ಇಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0apxd4zs00mghw9es046edg,imgname-siddaramaiah-and-dk-shivakumar-1787065971871.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಸಕ್ತಿದಾಯಕ ಬೆಳವಣಿಗೆ ನಡೆದಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ನಡೆದ ಮೊದಲ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆಯೇ ಎಂಬ ಅನುಮಾನ ಮೂಡಿದೆ. ಅರಮನೆ ರಸ್ತೆಯ ರ್ಯಾಡಿಸನ್ ಬ್ಲೂ ಹೋಟೆಲ್&zwnj;ನಲ್ಲಿ ನಡೆದ ಈ ಮಹತ್ವದ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರಾಗುವ ಮೂಲಕ ಮತ್ತೆ ಚರ್ಚೆ ಹುಟ್ಟುಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಅಪ್ಪ ಗೈರು, ಮಗ ಲೇಟು!&lt;/strong&gt;&lt;/h2&gt;&lt;p&gt;ಸಭೆಗೆ ಸಿದ್ದರಾಮಯ್ಯ ಅವರು ದೂರ ಉಳಿದಿದ್ದರೆ, ಅವರ ಪುತ್ರ, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸಭೆಗೆ ತಡವಾಗಿ ಆಗಮಿಸಿದರು. ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯ ಆಪ್ತರಿಗೆ ಡಿಕೆಶಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕಾರಣ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೂ ಗೈರಾಗಿದ್ದ ಸಿದ್ದು, ಈಗ ಸಿಎಲ್&zwnj;ಪಿ ಸಭೆಗೂ ಬಾರದಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಸರಣಿ ಗೈರು: ಯಾರ್ಯಾರು ಬಂದಿಲ್ಲ?&lt;/strong&gt;&lt;/h2&gt;&lt;p&gt;ಕೇವಲ ಸಿದ್ದರಾಮಯ್ಯ ಮಾತ್ರವಲ್ಲದೆ ಹಲವು ಹಿರಿಯ ನಾಯಕರು ಸಭೆಯಿಂದ ದೂರ ಉಳಿದಿದ್ದಾರೆ. ಎಚ್&zwnj;.ಸಿ.ಮಹದೇವಪ್ಪ, ಎಂ. ಕೃಷ್ಣಪ್ಪ, ಪ್ರಿಯಾ ಕೃಷ್ಣ, ಶಿವಾನಂದ ಪಾಟೀಲ್ ಗೈರಾಗಿದ್ದಾರೆ. ಬಂಗಾರಪೇಟೆ ನಾರಾಯಣಸ್ವಾಮಿ ಮತ್ತು ಸಚಿವ ಎಂ.ಸಿ. ಸುಧಾಕರ್ ಕೂಡ ಸಭೆಗೆ ಹಾಜರಾಗಿಲ್ಲ. ಸಚಿವ ಜಮೀರ್ ಅಹಮದ್ ಸಭೆಗೆ ತಡವಾಗಿ ಎಂಟ್ರಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಎಂಎಲ್&zwnj;ಸಿ ಶಿವಣ್ಣ ವಿರುದ್ಧ ಗುಡುಗಿದ ಡಿಕೆಶಿ!&lt;/strong&gt;&lt;/h2&gt;&lt;p&gt;ಸಭೆಯಲ್ಲಿ ನೂತನ ಎಂಎಲ್&zwnj;ಸಿಗಳನ್ನು ಅಭಿನಂದಿಸುವ ವೇಳೆ ಹೈಡ್ರಾಮಾ ನಡೆದಿದೆ. ಎಂಎಲ್&zwnj;ಸಿ ಮಳವಳ್ಳಿ ಶಿವಣ್ಣ ಅವರು ಕನಕಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಗರಂ ಆಗಿದ್ದಾರೆ. ಏನಯ್ಯ, ನೀನು ಕನಕಪುರದ ಬಗ್ಗೆಯೇ ಪ್ರಶ್ನೆ ಹಾಕಿದ್ದೀಯಲ್ಲಾ? ಎಂದು ಏರುಧ್ವನಿಯಲ್ಲಿ ಕಿಡಿಕಾರಿದ್ದಾರೆ. ಶಿವಣ್ಣ ಸಬೂಬು ನೀಡಲು ಮುಂದಾದರೂ ಡಿಕೆಶಿ ಸುಮ್ಮನಾಗಲಿಲ್ಲ. ಇಂದು ಬೆಳಿಗ್ಗೆಯಷ್ಟೇ ಮೈಸೂರಿನವರು ಕನಕಪುರದವರ ಮೇಲೆ, ಕನಕಪುರದವರು ಬೆಂಗಳೂರಿನವರ ಮೇಲೆ ಸ್ಪರ್ಧೆ ಮಾಡಬಾರದು, ನಮ್ಮ ಸ್ಪರ್ಧೆ ಜಾಗತಿಕ ಮಟ್ಟದಲ್ಲಿರಲಿ ಎಂದು ಮಾರ್ಮಿಕವಾಗಿ ಮಾತನಾಡಿದ್ದ ಡಿಕೆಶಿ, ಸಭೆಯಲ್ಲಿ ತಮ್ಮದೇ ಕ್ಷೇತ್ರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ನಾಯಕತ್ವದಲ್ಲಿ ನಡೆದ ಮೊದಲ ಸಭೆಯಲ್ಲೇ ಸಿದ್ದರಾಮಯ್ಯ ಮತ್ತು ಅವರ ಆಪ್ತರ ಗೈರುಹಾಜರಿ, ಕಾಂಗ್ರೆಸ್&zwnj;ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನಿಸುತ್ತಿದೆ.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/ex-cm-siddaramaiah-skips-dr-yatindra-siddaramaiah-arrives-late-and-congress-senior-leaders-miss-clp-meeting-gkn/articleshow-k0divkg"/>
        </item>
        <item>
            <title><![CDATA[ಶ್ರಾವಣ ಮಾಸದಲ್ಲಿ ನಿತಿನ್ ನಬಿನ್ ಮಾಂಸಾಹಾರ ತಿಂದ್ರಾ? 'ಇದು ಸುಳ್ಳು ಸುದ್ದಿ' ಕಾಂಗ್ರೆಸ್ ಪೋಸ್ಟ್‌ಗೆ ಬಿಜೆಪಿ ಕೆಂಡಾಮಂಡಲ!]]></title>
            <link>https://kannada.asianetnews.com/politics/provide-proof-or-apologise-bjp-to-opposition-over-nitin-nabin-non-veg-meal-claim-rav/articleshow-la8ptsu</link>
            <guid isPermaLink="true">https://kannada.asianetnews.com/politics/provide-proof-or-apologise-bjp-to-opposition-over-nitin-nabin-non-veg-meal-claim-rav/articleshow-la8ptsu</guid>
            <pubDate>Thu, 20 Aug 2026 21:26:04 +0530</pubDate>
            <description><![CDATA[&lt;p&gt;ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿದ್ದಾರೆಂದು ಛತ್ತೀಸ್&zwnj;ಗಢ ಕಾಂಗ್ರೆಸ್ ಸುಳ್ಳು ಪೋಸ್ಟ್ ಮಾಡಿದೆ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಕಿಡಿಕಾರಿದ್ದಾರೆ. ಇದು ಸೋಲಿನ ಹತಾಶೆಯಿಂದ ಮಾಡುತ್ತಿರುವ ಅಪಪ್ರಚಾರ ಎಂದು ಬಿಜೆಪಿ ಕಿಡಿಕಾರಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fxvmv90evjezpxe21dcmyw,imgname-----------------------2026-08-20t211310.306-1787241026408.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್(Nitin nabin) ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದಾಗ ಪಕ್ಷದ ನಾಯಕರೊಂದಿಗೆ ಊಟ ಮಾಡಿದ್ದರು. ಆದರೆ ಈ ಬಗ್ಗೆ ಛತ್ತೀಸ್&zwnj;ಗಢ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ತಪ್ಪು ಮಾಹಿತಿ ಹಂಚಿಕೊಂಡಿದ್ದು 'ಶ್ರಾವಣ ಮಾಸದಲ್ಲಿ ಬಿಜೆಪಿ ಅಧ್ಯಕ್ಷರು ಮಾಂಸಾಹಾರ ಸೇವಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿರುವುದು ಇದೀಗ ಕಾಂಗ್ರೆಸ್ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಸತತ ಸೋಲು ಹತಾಶೆಯಿಂದ ಕಾಂಗ್ರೆಸ್ ಕೀಳು ರಾಜಕೀಯ:&lt;/h2&gt;&lt;p&gt;ಬಿಜೆಪಿ ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ಅವರು ಗುರುವಾರ ಛತ್ತೀಸ್&zwnj;ಗಢ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಜನರ ಬೆಂಬಲ ಗಳಿಸಲು ಸತತವಾಗಿ ಸೋಲುತ್ತಿರುವ ಕಾಂಗ್ರೆಸ್ ಪಕ್ಷ, ಈಗ ಸೋಲಿನ ಹತಾಶೆಯಿಂದ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸುಳ್ಳು, ಬೆದರಿಕೆ, ಸಂಪೂರ್ಣ ಕಟ್ಟುಕಥೆಗಳನ್ನು ಪೋಸ್ಟ್ ಮಾಡುತ್ತಿದೆ. ನಬಿನ್ ಅವರ ಭೇಟಿಗೆ ಸಂಬಂಧಿಸಿದ ಈ ಪೋಸ್ಟ್ ಆಧಾರರಹಿತ, ಸುಳ್ಳು, ಖಂಡನೀಯ, ಜನರನ್ನು ದಾರಿ ತಪ್ಪಿಸುವಂತದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;ಕಾಂಗ್ರೆಸ್&zwnj;ನಿಂದ ರಾಷ್ಟ್ರಧ್ವಜಕ್ಕೆ ಅವಮಾನದ ಆರೋಪ&lt;/h3&gt;&lt;p&gt;ಅಷ್ಟೇ ಅಲ್ಲ, ಆಗಸ್ಟ್ 15ರ ಆಸುಪಾಸಿನಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಭಾರತದ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ 'ಅಸಂಬದ್ಧ ಮತ್ತು ದುರುದ್ದೇಶಪೂರಿತ ಪ್ರಚಾರ'ದಲ್ಲಿ ತೊಡಗಿದ್ದರು. ಬಿಜೆಪಿ ಕಾರ್ಯಕ್ರಮವೊಂದರ ವಿಡಿಯೋವನ್ನು ಸ್ವಾತಂತ್ರ್ಯ ದಿನಾಚರಣೆಯದ್ದು ಎಂದು ಕಾಂಗ್ರೆಸ್&zwnj;ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳು ತಪ್ಪಾಗಿ ಬಿಂಬಿಸಿದ್ದವು. ಅಷ್ಟೇ ಅಲ್ಲದೆ, ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸಿದ್ದವು. ಕಾಂಗ್ರೆಸ್&zwnj;ನ ಈ ನಡವಳಿಕೆಯು ಅತ್ಯಂತ ಅಪಾಯಕಾರಿ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಕಾಂಗ್ರೆಸ್ ಪೋಸ್ಟ್ ಗೆ ಬಿಜೆಪಿಯ ತಿರುಗೇಟು&lt;/p&gt;&lt;p&gt;&quot;ನಮ್ಮ ರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ಇಂದು ಅವರು ಮಾಡಿರುವುದು ಸಂಪೂರ್ಣವಾಗಿ ಖಂಡನೀಯ. ಅವರು ಹರಡಲು ಯತ್ನಿಸಿದ ಸುಳ್ಳು ಮತ್ತು ದಾರಿತಪ್ಪಿಸುವ ಪ್ರಚಾರವನ್ನು ಭಾರತೀಯ ಜನತಾ ಪಕ್ಷ ಬಲವಾಗಿ ಖಂಡಿಸುತ್ತದೆ&quot; ಎಂದು ಬಿಜೆಪಿ ನಾಯಕರು ಮತ್ತೊಮ್ಮೆ ಸ್ಪಷ್ಟಪಡಿಸಿದರು.&lt;/p&gt;&lt;p&gt;ನಿತಿನ್ ನಬಿನ್ ಅವರ ಆಂಧ್ರಪ್ರದೇಶ ಭೇಟಿಯ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದ ಛತ್ತೀಸ್&zwnj;ಗಢ ಕಾಂಗ್ರೆಸ್, &quot;ತುಟಿಯಲ್ಲಿ ಸನಾತನ, ಮಾತುಗಳಲ್ಲಿ ಸಂಸ್ಕೃತಿ... ಉಳಿದಂತೆ ಬಿಜೆಪಿಯ ನಡತೆ ಬಯಲಾಗಿದೆ&quot; ಎಂದು ಎಕ್ಸ್&zwnj;ನಲ್ಲಿ ಪೋಸ್ಟ್ ಮಾಡಿತ್ತು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ, ನಬಿನ್ ಅವರು ವಿಶಾಖಪಟ್ಟಣದಲ್ಲಿ ಸಸ್ಯಾಹಾರಿ ದಕ್ಷಿಣ ಭಾರತದ ಊಟವನ್ನು ಸೇವಿಸಿದ್ದರು ಎಂದು ಹೇಳಿದೆ. &quot;ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ನಿತಿನ್ ಗಡ್ಕರಿ ಅವರು ಶುದ್ಧ ಸಸ್ಯಾಹಾರಿ ದಕ್ಷಿಣ ಭಾರತದ ಊಟವನ್ನು ಸೇವಿಸಿದ್ದಾರೆ... ಆದರೆ INDI ಮೈತ್ರಿಕೂಟವು ಇದು ಮಾಂಸಾಹಾರ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ&quot; ಎಂದು ಆಂಧ್ರಪ್ರದೇಶ ಬಿಜೆಪಿ ಎಕ್ಸ್&zwnj;ನಲ್ಲಿ ಪೋಸ್ಟ್ ಮಾಡಿದೆ.&lt;/p&gt;&lt;p&gt;ನಿತಿನ್ ನಬಿನ್ ಆಂಧ್ರಪ್ರದೇಶ ಭೇಟಿ ನೀಡಿದಾಗ ನಡೆದಿದ್ದೇನು?&lt;/p&gt;&lt;p&gt;ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಮಂಗಳವಾರ ರಾಜ್ಯಕ್ಕೆ ಭೇಟಿ ನೀಡಿದ್ದರು. ವಿಶಾಖಪಟ್ಟಣದಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿಗಳೊಂದಿಗೆ ಸಭೆ ನಡೆಸಿದ್ದರು. ಆಂಧ್ರಪ್ರದೇಶದಲ್ಲಿ ಸಂಘಟನೆಯನ್ನು ಬಲಪಡಿಸುವುದು, ಪರಿಣಾಮಕಾರಿ ಸಮನ್ವಯ ಮತ್ತು ಸಾರ್ವಜನಿಕ ಸಂಪರ್ಕವನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದವು.&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಈ ಲೇಖನವನ್ನು ಸಂಪಾದಿಸಿಲ್ಲ ಮತ್ತು ಇದನ್ನು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/provide-proof-or-apologise-bjp-to-opposition-over-nitin-nabin-non-veg-meal-claim-rav/articleshow-la8ptsu"/>
        </item>
        <item>
            <title><![CDATA[Yettinahole project: ಎತ್ತಿನಹೊಳೆ ಕಾಮಗಾರಿ ಗುಣಮಟ್ಟಕ್ಕೆ ಕಾಂಗ್ರೆಸ್ಸಿಗರಿಂದಲೇ ತೀವ್ರ ಅಪಸ್ವರ!]]></title>
            <link>https://kannada.asianetnews.com/state/congress-senior-leader-ivan-d-souza-takes-government-to-task-over-delay-in-yettinahole-project-rav/articleshow-lrha28t</link>
            <guid isPermaLink="true">https://kannada.asianetnews.com/state/congress-senior-leader-ivan-d-souza-takes-government-to-task-over-delay-in-yettinahole-project-rav/articleshow-lrha28t</guid>
            <pubDate>Thu, 20 Aug 2026 06:38:14 +0530</pubDate>
            <description><![CDATA[&lt;p&gt;ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಗುರಿಯ ಎತ್ತಿನಹೊಳೆ ಯೋಜನೆಯು ವಿಪರೀತ ವಿಳಂಬ ಮತ್ತು ಭಾರೀ ವೆಚ್ಚ ಏರಿಕೆಯಿಂದ ನಲುಗುತ್ತಿದೆ. 2012ರಲ್ಲಿ 8,323 ಕೋಟಿ ರು. ಅಂದಾಜಿಸಲಾಗಿದ್ದ ಯೋಜನಾ ವೆಚ್ಚವು ಇದೀಗ 30,000 ಕೋಟಿ ರು. ದಾಟಿದ್ದು, 14 ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯು ಇನ್ನೂ ಅಪೂರ್ಣ.!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0eb14ep8432d0b37x8kwxgn,imgname-----------------------2026-08-20t063018.961-1787187728854.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಧಾನಪರಿಷತ್ತು&lt;/strong&gt;: ಕೋಲಾರ, ಚಿಕ್ಕಬಳ್ಳಾಪುರ ಸೇರಿ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯಲ್ಲಿ ಸರ್ಕಾರದಿಂದ ಮಾಡಲಾದ ವೆಚ್ಚಕ್ಕೆ ತಕ್ಕ ಹಾಗೆ ಕಾಮಗಾರಿಗಳು ನಡೆದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರೇ ಆರೋಪಿಸಿದ್ದಾರೆ.&lt;/p&gt;&lt;h2&gt;ವೆಚ್ಚಕ್ಕೆ ತಕ್ಕಂತೆ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿಲ್ಲ&lt;/h2&gt;&lt;p&gt;ನಿಯಮ 72ರ ಅಡಿ ಎತ್ತಿನಹೊಳೆ ಯೋಜನೆ ಕುರಿತು ಸರ್ಕಾರದ ಗಮನ ಸೆಳೆದ ಕಾಂಗ್ರೆಸ್&zwnj;ನ ಐವಾನ್&zwnj; ಡಿಸೋಜಾ, 2012ರಲ್ಲಿ ಯೋಜನೆಗೆ 8,323 ಕೋಟಿ ರು. ಯೋಜನಾ ವೆಚ್ಚ ಅಂದಾಜಿಸಲಾಗಿತ್ತು. ಇದೀಗ ಆ ಮೊತ್ತ 30000 ಕೋಟಿ ರು. ದಾಟಿದೆ. ಕಳೆದ 14 ವರ್ಷಗಳಿಂದ ಯೋಜನೆ ಪೂರ್ಣಗೊಳಿಸದೇ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಇದು ಸರ್ಕಾರದ ನಿರ್ಲಕ್ಷ್ಯವಲ್ಲವೇ ಎಂದು ಪ್ರಶ್ನಿಸಿದರು. ಭೂಸ್ವಾಧೀನ ಸೇರಿ ಮತ್ತಿತರ ಸಮಸ್ಯೆಗಳು ಇನ್ನೂ ಮುಂದುವರಿದಿದೆ. ಈ ವರ್ಷದ ನವೆಂಬರ್&zwnj;ನಲ್ಲಿ ಯೋಜನೆ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಅದು ಮತ್ತಷ್ಟು ವಿಳಂಬವಾಗಲಿದೆ ಎಂದು ಆಕ್ಷೇಪಿಸಿದರು.&lt;/p&gt;&lt;p&gt;ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ನೀರು ಸಂಗ್ರಹಿಸಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಬರಪೀಡಿತ ತಾಲೂಕು, ನಗರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.&lt;/p&gt;&lt;h3&gt;20 ಪ್ಯಾಕೇಜ್&zwnj; ಮಾತ್ರ ಪೂರ್ಣಗೊಂಡಿದೆ. ಉಳಿದವು?&lt;/h3&gt;&lt;p&gt;ಅಲ್ಲದೆ 54 ಪ್ಯಾಕೇಜ್&zwnj;ಗಳಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ 20 ಪ್ಯಾಕೇಜ್&zwnj; ಮಾತ್ರ ಪೂರ್ಣಗೊಂಡಿದೆ. ಉಳಿದವು ಇನ್ನೂ ಪ್ರಗತಿಯಲ್ಲಿವೆ. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಸಾಮರ್ಥ್ಯ ಇಲ್ಲದಿದ್ದರೂ ಕಾಮಗಾರಿ ಅನುಷ್ಠಾನಕ್ಕೆ ನೀಡಲಾಗಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ 15,297 ಕೋಟಿ ರು. ವೆಚ್ಚ ಮಾಡಿದ್ದರೂ ಯೋಜನೆ ಉದ್ದೇಶ ಈಡೇರಲಿಲ್ಲ. ಇದೀಗ ನೀಡಿರುವ ಗಡುವಿನಲ್ಲೂ ಕಾಮಗಾರಿ ಪೂರ್ಣವಾಗುವುದಿಲ್ಲ.ಈಗಾಗಲೇ ಅಳವಡಿಸಲಾಗಿರುವ ಪೈಪ್&zwnj;ಲೈನ್&zwnj;ಗಳು ಒಡೆದು ನೀರು ಪೋಲಾಗುತ್ತಿದೆ ಎಂದರು.&lt;/p&gt;&lt;p&gt;ಅದಕ್ಕೆ ಉತ್ತರಿಸಿದ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ, ಏತ ಕಾಮಗಾರಿಗಳು ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳನ್ನು 7 ಪ್ಯಾಕೇಜ್&zwnj;ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದೆ. ಜತೆಗೆ 2024ರ ಸೆ.6ರಿಂದ 32.50 ಕಿ.ಮೀ.ವರೆಗೆ ನೀರು ಹರಿಸಲಾಗಿದೆ. ಉಳಿದಂತೆ 252.61 ಕಿ.ಮೀ. ಉದ್ದದ ಗುರುತ್ವ ಮುಖ್ಯ ಕಾಲುವೆ ನಿರ್ಮಾಣ, ಸಮತೋಲನಾ ಜಲಾಶಯ ನಿರ್ಮಾಣ, ಫೀಡರ್&zwnj; ಪೈಪ್&zwnj;ಲೈನ್&zwnj; ಕಾಲುವೆ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದೆ. ಅದರಲ್ಲಿ 8.87 ಕಿ.ಮೀ. ಕಾಲುವೆ ಅರಣ್ಯ ಪ್ರದೇಶದಲ್ಲಿ ನಿರ್ಮಿಸಬೇಕಿದ್ದು, ಅದಕ್ಕೆ ಅರಣ್ಯ ತೀರುವಳಿ ಸಿಕ್ಕಿಲ್ಲ. ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಎಲ್ಲ ಅನುಮತಿ ಪಡೆದು ಈ ವರ್ಷದ ನವೆಂಬರ್&zwnj;ಗೆ ತುಮಕೂರಿಗೆ ಹಾಗೂ 2027ರ ಅಂತ್ಯಕ್ಕೆ ಯೋಜನೆ ಸಂಪೂರ್ಣ ಮುಕ್ತಾಯವಾಗಲಿದೆ ಎಂದು ವಿವರಿಸಿದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/congress-senior-leader-ivan-d-souza-takes-government-to-task-over-delay-in-yettinahole-project-rav/articleshow-lrha28t"/>
        </item>
        <item>
            <title><![CDATA[ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿಲ್ಲ ಅಂತಾ  ರಾಮಾಯಣದ ಮೇಲೆ ನಾಗೇಂದ್ರ  ಪ್ರಮಾಣ ಮಾಡಲಿ: ಶ್ರೀರಾಮುಲು]]></title>
            <link>https://kannada.asianetnews.com/politics/valmiki-corporation-scam-if-nagendra-didnt-corruption-let-swear-on-ramayan-says-sriramulu-rav/articleshow-m0vl2fb</link>
            <guid isPermaLink="true">https://kannada.asianetnews.com/politics/valmiki-corporation-scam-if-nagendra-didnt-corruption-let-swear-on-ramayan-says-sriramulu-rav/articleshow-m0vl2fb</guid>
            <pubDate>Sat, 22 Aug 2026 07:16:10 +0530</pubDate>
            <description><![CDATA[&lt;p&gt;ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ, ಸಚಿವ ಬಿ.ನಾಗೇಂದ್ರ ಅವರು ರಾಮಾಯಣ ಕೃತಿಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸವಾಲು ಹಾಕಿದ್ದಾರೆ. ನಾಗೇಂದ್ರ ರಾಜೀನಾಮೆ ನೀಡುವವರೆಗೂ ತಮ್ಮ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0khxfsg1mr3a0v1gxpem0vs,imgname-----------------------2026-08-22t070824.567-1787362721584.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.22):&lt;/strong&gt; ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿಲ್ಲ ಎಂಬುದಾಗಿ ಸಚಿವ ಬಿ.ನಾಗೇಂದ್ರ ಅವರು ವಾಲ್ಮೀಕಿ ರಚಿಸಿದ ರಾಮಾಯಣ ಕೃತಿಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಶ್ರೀರಾಮುಲು ಸವಾಲು ಎಸೆದಿದ್ದಾರೆ.&lt;/p&gt;&lt;p&gt;ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾಗೇಂದ್ರ ಯಾವ ಮಟ್ಟಿಗೂ ಹೋಗಬಲ್ಲರು. ರಾಮಾಯಣದ ಮೇಲೂ, ಮಹರ್ಷಿ ವಾಲ್ಮೀಕಿ ಮೇಲೂ ಆಣೆ ಇಡೋದಕ್ಕೂ ಅವರು ಸೈ. ನಾಗೇಂದ್ರ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಯಾವ ರೀತಿ ನಾವು ಹೋರಾಟ ಮಾಡಬೇಕು ಎಂಬ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ ಎಂದು ತಿಳಿಸಿದರು.&lt;/p&gt;&lt;p&gt;ಮಾನ ಮರ್ಯಾದೆ ಯಾವುದೂ ಇಲ್ಲದ ಕಾಂಗ್ರೆಸ್ ಪಕ್ಷ ನದಿ ಉಗಮವಾಗಿ ಹರಿಯುವಂತೆ ಭ್ರಷ್ಟಾಚಾರವನ್ನು ನಿರಂತರವಾಗಿ ನಡೆಸುತ್ತಲೇ ಬಂದಿದೆ. ನೆಹರು ಕುಟುಂಬದ ರಾಹುಲ್ ಗಾಂಧಿವರೆಗೆ ಭ್ರಷ್ಟಾಚಾರ ನಡೆಸುತ್ತಲೇ ಇದೆ ಎಂದು ಆಪಾದಿಸಿದರು.&lt;/p&gt;&lt;p&gt;ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ, ಜವಾಹರ ಲಾಲ್ ನೆಹರು ಅವರು ಪ್ರಧಾನಿಯಾದಾಗಿನಿಂದಲೂ ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತಲೇ ಬಂದಿದೆ.&lt;/p&gt;&lt;h2&gt;ಭ್ರಷ್ಟಾಚಾರಕ್ಕೆ ಜಾತಿ ಇಲ್ಲ:&lt;/h2&gt;&lt;p&gt;ದಲಿತನಾದ ಕಾರಣಕ್ಕೆ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ ಎಂಬ ಮಾತನ್ನು ಸಚಿವ ನಾಗೇಂದ್ರ ಹೇಳುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಜಾತಿ ಇಲ್ಲ. ಚರಿತ್ರೆ ಹಾಗೂ ಮುಖ ಇಲ್ಲ. ನಿಗಮದ ಮೂಲಕ ಹಲವಾರು ಕಾರ್ಯಕ್ರಮ ಜಾರಿ ಮಾಡಲು ಹಣ ಬಳಸಬೇಕಿತ್ತು. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ನಿಗಮದ ಹಣ ಬಳಸುವ ಬದಲು ಅವರ ಭವಿಷ್ಯವನ್ನೇ ಬಾಡುವಂತೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ನಿಗಮದ ಹಣ ಕೊಳ್ಳೆ ಹೊಡೆದು ರಾಹುಲ್ ಗಾಂಧಿ ಅವರ ದೆಹಲಿ ಮನೆಗೆ ಕಳುಹಿಸಿದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಲಪಟಾಯಿಸಿದರು. ಇದು ಇಡೀ ಸಮಾಜ ತಲೆತಗ್ಗಿಸುವ ವಿಚಾರ. ವಾಲ್ಮೀಕಿ ಸಮುದಾಯಕ್ಕೆ ನೋವು ಮಾಡಿದ್ದಾರೆ. ಸರ್ಕಾರದ ಖಜಾನೆಯಲ್ಲಿದ್ದ ಹಣವನ್ನು ಸಾವಿರಾರು ಖಾತೆಗಳಿಗೆ ವರ್ಗಾಯಿಸಿದ್ದಾರೆ. ಐಷಾರಾಮಿ ಕಾರು ಖರೀದಿ, ಚಿನ್ನ ಖರೀದಿ ಮಾಡಿದ್ದಾರೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ್ದು ಸೇರಿದಂತೆ ಎಲ್ಲವೂ ದಾಖಲೆಯಲ್ಲಿದೆ ಎಂದು ಶ್ರೀರಾಮುಲು ವಿವರಿಸಿದರು.&lt;/p&gt;&lt;h3&gt;ಸಚಿವ ಸ್ಥಾನ ಉಳಿಸಲು ಜಾತಿ ನೆಪ:&lt;/h3&gt;&lt;p&gt;ಆತ್ಮಸಾಕ್ಷಿ ಇದ್ದಿದ್ದರೆ ನಾಗೇಂದ್ರ ಅವರು ಸಚಿವರಾಗಿ ಇರುತ್ತಿರಲಿಲ್ಲ. ಇಷ್ಟೊಂದು ಹಗರಣ ಮಾಡಿ ಹಣ ತಿಂದೂ ಸದನದಲ್ಲಿ ಸಂವಿಧಾನ ಪ್ರತಿ ಹಿಡಿದು ಓಡಾಡುತ್ತಾರೆ. ಬಾಬಾ ಸಾಹೇಬರು ಭ್ರಷ್ಟಾಚಾರಿಗಳನ್ನು ರಕ್ಷಿಸಲು ಸಂವಿಧಾನ ಮಾಡಿಲ್ಲ ಎಂದರು.&lt;/p&gt;&lt;p&gt;ದಲಿತ ಸಮುದಾಯದ ಮಕ್ಕಳ ಭವಿಷ್ಯವನ್ನು ಕಸಿಯವ ವೇಳೆ ನೆನಪಾಗಿಲ್ಲ. ನಾಗೇಂದ್ರ ಅವರಿಗೆ ಆಗ ಜಾತಿ ಕಂಡಿಲ್ಲ. ಸಚಿವ ಸ್ಥಾನ ಉಳಿಸಿಕೊಳ್ಳಲು ಅವರಿಗೆ ಜಾತಿ ನೆನಪಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಸರ್ಕಾರ ನ್ಯಾಯ ಒದಗಿಸುವುದೇ ಆದರೆ ನಾಗೇಂದ್ರ ಅವರನ್ನು ಕೈಬಿಟ್ಟು ಇದೇ ಸಮುದಾಯದ ಬೇರೆಯವರನ್ನು ಸಚಿವರನ್ನಾಗಿ ನೇಮಿಸಲಿ. ಕಳಂಕಿತ ನಾಗೇಂದ್ರ ಮಾತ್ರ ಸಚಿವರಾಗಿ ಇರಬಾರದು. ಅವರನ್ನು ಕ್ಷಮಿಸಲಾಗದು ಎಂದು ಹೇಳಿದರು.&lt;/p&gt;&lt;p&gt;ಪತ್ರಿಕಾಗೋಷ್ಠಿಯಲ್ಲ ಪಕ್ಷದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ ರಾಜುಗೌಡ, ಎಸ್&zwnj;ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಚಿವ ಶಿವನಗೌಡ ನಾಯಕ ಉಪಸ್ಥಿತರಿದ್ದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/valmiki-corporation-scam-if-nagendra-didnt-corruption-let-swear-on-ramayan-says-sriramulu-rav/articleshow-m0vl2fb"/>
        </item>
        <item>
            <title><![CDATA[ನಾಗೇಂದ್ರ ರಾಜೀನಾಮೆ ಪಡೆಯೋವರೆಗೆ ಹೋರಾಟ ನಿಲ್ಲಲ್ಲ: ಸತತ ಮೂರನೇ ದಿನವೂ ಬಿಜೆಪಿ ಪ್ರತಿಭಟನೆ, ಕಲಾಪದಲ್ಲೂ ಪ್ರತಿಪಕ್ಷ ಗದ್ದಲ]]></title>
            <link>https://kannada.asianetnews.com/politics/opposition-parties-protest-demanding-b-nagendra-s-resignation-over-the-valmiki-corporation-scam-rav/articleshow-mrqeapr</link>
            <guid isPermaLink="true">https://kannada.asianetnews.com/politics/opposition-parties-protest-demanding-b-nagendra-s-resignation-over-the-valmiki-corporation-scam-rav/articleshow-mrqeapr</guid>
            <pubDate>Thu, 20 Aug 2026 06:15:09 +0530</pubDate>
            <description><![CDATA[&lt;p&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದವು. ಆಡಳಿತ-ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ನಡುವೆ ಕಲಾಪ ಬಲಿಯಾಗಿದ್ದು, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಸಚಿವರನ್ನು ಸಮರ್ಥನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzz0q2ks20y19nh3xeyy2av2,imgname-----------------------2026-08-14t074240.913-1786673597049.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಚಿವ ನಾಗೇಂದ್ರ ದೋಷಿಯಲ್ಲ: ಪರಂ&lt;/strong&gt;&lt;/p&gt;&lt;p&gt;ಸಚಿವ ಬಿ.ನಾಗೇಂದ್ರ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಯಾವ ನ್ಯಾಯಾಲಯವೂ ದೋಷಿಯೆಂದು ತೀರ್ಪು ನೀಡಿಲ್ಲ. ಎಸ್ಐಟಿ ದೋಷಾರೋಪ ಪಟ್ಟಿಯಲ್ಲೂ ನಾಗೇಂದ್ರ ಹೆಸರಿಲ್ಲ. ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಡೆ ಸಂಸದೀಯ ವ್ಯವಸ್ಥೆಗೆ ಅವಮಾನ.&lt;/p&gt;&lt;p&gt;- ಡಾ। ಜಿ. ಪರಮೇಶ್ವರ್&zwnj;, ಉಪಮುಖ್ಯಮಂತ್ರಿ&lt;/p&gt;&lt;p&gt;&lt;strong&gt;ವಿಧಾನಸಭೆ (ಆ.20): &lt;/strong&gt;ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಆರೋಪ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬುಧವಾರವೂ ವಿಧಾನಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ ಮುಂದುವರೆದಿದ್ದು, ಗಲಾಟೆಗೆ ಅರ್ಧ ದಿನದ ಕಲಾಪ ಬಲಿಯಾಯಿತು. ಗದ್ದಲದ ನಡುವೆಯೇ ಪ್ರಶ್ನೋತ್ತರ ನಡೆಸಿ, ವಿಧೇಯಕಗಳ ಮಂಡನೆ ಮಾಡಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.&lt;/p&gt;&lt;p&gt;ಬುಧವಾರ ಮಧ್ಯಾಹ್ನ ಮಾಜಿ ಸಚಿವ ಬಿ.ಸಿ.ನಾಗೇಶ್&zwnj; ಅವರ ಕುರಿತ ಸಂತಾಪ ಸೂಚನೆ ನಿರ್ಣಯ ಅಂಗೀಕರಿಸಿದ ಬೆನ್ನಲ್ಲೇ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಶುರು ಮಾಡಿದರು. ಭ್ರಷ್ಟ ನಾಗೇಂದ್ರ ಅವರನ್ನು ವಜಾಗೊಳಿಸಬೇಕು. ಅಲ್ಲಿಯವರೆಗೆ ಸದನ ನಡೆಯಲು ಬಿಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್&zwnj; ಸ್ಪಷ್ಟಪಡಿಸಿದರು.&lt;/p&gt;&lt;p&gt;ಬಿಜೆಪಿ ಸದಸ್ಯರು, &lsquo;ದಲಿತರ ಹಣ ಎಲ್ಲಿ ಹೋಯಿತು.. ರಾಹುಲ್&zwnj;ಗಾಂಧಿ ಮನೆಗೆ ಹೋಯಿತು&rsquo; ಎಂದು ಘೋಷಣೆಗಳನ್ನು ಕೂಗಿದ್ದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಅಯೋಧ್ಯೆ ರಾಮಮಂದಿರ ಹಣ ಆರ್&zwnj;ಎಸ್&zwnj;ಎಸ್&zwnj;, ಬಿಜೆಪಿ ಕಚೇರಿಗೆ ಹೋಯಿತು ಘೋಷಣೆ ಕೂಗತೊಡಗಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸದನ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.&lt;/p&gt;&lt;p&gt;ಅರ್ಧಗಂಟೆ ಬಳಿಕ ಸೇರಿದಾಗಲೂ ಗಲಾಟೆ ಮುಂದುವರೆಯಿತು. ಗಲಾಟೆ ನಡುವೆಯೇ ಬಿ.ನಾಗೇಂದ್ರ ಅವರನ್ನು ಸಮರ್ಥಿಸಿಕೊಂಡು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್&zwnj; ಅವರು ಹೇಳಿಕೆ ನೀಡಿದರು. ಬಳಿಕ ಗದ್ದಲ ಜೋರಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಮಧ್ಯಾಹ್ನದ ಅವಧಿಗೆ ಕಲಾಪ ಮುಂದೂಡಿದರು.&lt;/p&gt;&lt;p&gt;ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಭೋಜನ ವಿರಾಮದ ಬಳಿಕ ಸದನಕ್ಕೆ ಬಂದ ಪ್ರತಿಪಕ್ಷಗಳ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿ ಹೋರಾಟ ಮುಂದುವರೆಸಿದರು.&lt;/p&gt;&lt;p&gt;ರಾಹುಲ್&zwnj;ಗಾಂಧಿ, ರಾಜ್ಯ ಸರ್ಕಾರ, ಬಿ.ನಾಗೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್&zwnj; ಸದಸ್ಯರು ರಾಮಮಂದಿರ ಹುಂಡಿ ಹಣ ಎಲ್ಲಿ ಹೋಯಿತು ಎಂದು ಘೋಷಣೆ ಕೂಗಿದ್ದರಿಂದ ಗದ್ದಲ ತೀವ್ರಗೊಂಡಿತು. ಗಲಾಟೆ, ಗದ್ದಲದ ನಡುವೆಯೇ ಪ್ರಶ್ನೋತ್ತರ, ಮೂರು ವಿಧೇಯಕಗಳ ಮಂಡನೆ ಮಾಡಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.&lt;/p&gt;&lt;h2&gt;ಸದನ ಬಾವಿಗಿಳಿದು ಧರಣಿ ನಡೆಸಿ: ಸ್ಪೀಕರ್&zwnj; ಆಹ್ವಾನ!&lt;/h2&gt;&lt;p&gt;ಈ ವೇಳೆ ಸಭಾಧ್ಯಕ್ಷ ಜಿ.ಎಸ್&zwnj;.ಪಾಟೀಲ್&zwnj;, &lsquo;ನಿಮ್ಮ ಸಮಸ್ಯೆ, ಒತ್ತಾಯಗಳನ್ನು ಸರ್ಕಾರಕ್ಕೆ ಮುಟ್ಟಿಸಲು ಅವಕಾಶ ನೀಡಬೇಕು ಎಂದು ನಿಮ್ಮ ಪ್ರತಿಭಟನೆಗೆ ಅವಕಾಶ ನೀಡಿದ್ದೇನೆ. ಆದರೆ, ನೀವು ನಿಮ್ಮ ಸ್ಥಾನಗಳಲ್ಲೇ ನಿಂತು ಕೂಗಾಡಲು ಅವಕಾಶವಿಲ್ಲ. ಸದನದ ಬಾವಿಗೆ ಬಂದು ಧರಣಿ ಮಾಡಿ&rsquo; ಎಂದು ಹೇಳಿದರು.&lt;/p&gt;&lt;p&gt;ಈ ವೇಳೆ ಬಿಜೆಪಿಯ ಸುನೀಲ್&zwnj;ಕುಮಾರ್&zwnj;, ಸದಸ್ಯರನ್ನು ಸದನದ ಬಾವಿಗೆ ಆಹ್ವಾನಿಸಿದ ಇತಿಹಾಸದ ಮೊದಲ ಸ್ಪೀಕರ್&zwnj; ನೀವು. ನಮ್ಮ ಪರ ಇದ್ದೀರಿ ಸರ್&zwnj;. ನೀವು ಏನು ಹೇಳಿದರೂ ಕೇಳುತ್ತೇವೆ ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;--&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/opposition-parties-protest-demanding-b-nagendra-s-resignation-over-the-valmiki-corporation-scam-rav/articleshow-mrqeapr"/>
        </item>
        <item>
            <title><![CDATA[ಮುಡಾ ಕೇಸ್‌ಗೆ ಟ್ವಿಸ್ಟ್! 1,100 ನಿವೇಶನಗಳ ಹಂಚಿಕೆ ರದ್ದು! ಸರ್ಕಾರಕ್ಕೆ 2000 ಕೋಟಿ ಆಸ್ತಿ ಉಳಿಸಿದ ಯತೀಂದ್ರ]]></title>
            <link>https://kannada.asianetnews.com/mysore/muda-case-1100-site-allotments-cancelled-minister-yathindra-saves-rs-2000-crore-assets-gkn/articleshow-oa5lfbg</link>
            <guid isPermaLink="true">https://kannada.asianetnews.com/mysore/muda-case-1100-site-allotments-cancelled-minister-yathindra-saves-rs-2000-crore-assets-gkn/articleshow-oa5lfbg</guid>
            <pubDate>Wed, 19 Aug 2026 19:01:53 +0530</pubDate>
            <description><![CDATA[&lt;p&gt;ಮುಡಾ 50:50 ಹಗರಣದಲ್ಲಿ ನಿಯಮ ಉಲ್ಲಂಘಿಸಿ ಹಂಚಿಕೆಯಾಗಿದ್ದ 1,100 ನಿವೇಶನಗಳನ್ನು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ರದ್ದುಪಡಿಸಿದ್ದು, ಈ ಮೂಲಕ ಸರ್ಕಾರಕ್ಕೆ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಉಳಿಸಿದ್ದಾರೆ. ಈಗಾಗಲೇ ನೋಂದಣಿಯಾಗಿರುವ ಕ್ರಯಪತ್ರಗಳನ್ನು ರದ್ದುಗೊಳಿಸಲು ಕಾನೂನು ಕ್ರಮ ಜರುಗಿಸುವಂತೆ ಹಾಗೂ ಹೊಸದಾಗಿ ಖಾತಾ ಮಾಡಿಕೊಡುವುದನ್ನು ತಕ್ಷಣವೇ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqcsyk6kx565v2kb0p66jtm,imgname-dr-yatindra-siddaramaiah--1--1784270355046.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಬಹುಕೋಟಿ ಮೌಲ್ಯದ 50:50 ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಿಯಮ ಮೀರಿ ಹಂಚಿಕೆಯಾಗಿದ್ದ ಬರೋಬ್ಬರಿ 1,100 ನಿವೇಶನಗಳನ್ನು ರದ್ದುಗೊಳಿಸುವ ಮೂಲಕ ಸಚಿವರು ಶಾಕ್ ನೀಡಿದ್ದಾರೆ.&lt;/p&gt;&lt;h2&gt;&lt;strong&gt;2 ಸಾವಿರ ಕೋಟಿ ಮೌಲ್ಯದ ಆಸ್ತಿ ರಕ್ಷಣೆ&lt;/strong&gt;&lt;/h2&gt;&lt;p&gt;50:50 ನಿಯಮದಡಿ ಅಕ್ರಮವಾಗಿ ಹಂಚಿಕೆಯಾಗಿದ್ದ ಸುಮಾರು 1,100 ನಿವೇಶನಗಳ ಹಂಚಿಕೆಯನ್ನು ಸಚಿವರು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ. ಈ ದಿಟ್ಟ ಕ್ರಮದಿಂದಾಗಿ ಪ್ರಾಧಿಕಾರಕ್ಕೆ ಸೇರಬೇಕಿದ್ದ ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಈಗ ಸರ್ಕಾರದ ವಶದಲ್ಲೇ ಉಳಿದಂತಾಗಿದೆ.&lt;/p&gt;&lt;p&gt;14-03-2023ರಂದು ಸರ್ಕಾರ ನೀಡಿದ್ದ ಸ್ಪಷ್ಟ ನಿರ್ದೇಶನಗಳನ್ನು ಉಲ್ಲಂಘಿಸಿ ಈ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಹಗರಣದ ಕುರಿತು ತನಿಖೆ ನಡೆಸಿದ್ದ ಏಕಸದಸ್ಯ ವಿಚಾರಣಾ ಆಯೋಗ ಮತ್ತು ಉನ್ನತ ಮಟ್ಟದ ತಾಂತ್ರಿಕ ಸಮಿತಿ ನೀಡಿರುವ ವರದಿಯ ಆಧಾರದ ಮೇಲೆ ಸಚಿವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.&lt;/p&gt;&lt;h2&gt;&lt;strong&gt;ನೋಂದಣಿಯಾದ ಸೈಟ್&zwnj;ಗಳ ಕಥೆಯೇನು?&lt;/strong&gt;&lt;/h2&gt;&lt;p&gt;ಕೇವಲ ಹಂಚಿಕೆ ಆದೇಶ ರದ್ದುಗೊಳಿಸುವುದು ಮಾತ್ರವಲ್ಲದೆ ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವ ನಿವೇಶನಗಳ ವಿರುದ್ಧವೂ ಸಚಿವರು ಗದಾಪ್ರಹಾರ ನಡೆಸಿದ್ದಾರೆ. ಈಗಾಗಲೇ ಕ್ರಯಪತ್ರ (Sale Deed) ಆಗಿರುವ ನಿವೇಶನಗಳನ್ನು ರದ್ದುಪಡಿಸಲು ತಕ್ಷಣವೇ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಮುಡಾ (MDA) ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲು ಮುಡಾಗೆ ತಿಳಿಸಲಾಗಿದೆ.&lt;/p&gt;&lt;p&gt;ಸರ್ಕಾರದ ಮುಂದಿನ ಸ್ಪಷ್ಟ ಮಾರ್ಗಸೂಚಿ ಬರುವವರೆಗೂ ಪ್ರಾಧಿಕಾರದಿಂದ ಯಾವುದೇ ಹೊಸ ಕ್ರಯಪತ್ರಗಳನ್ನು ನೀಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಹಗರಣದ ಆಳ-ಅಗಲವನ್ನು ಪರಿಶೀಲಿಸಿ ಅಕ್ರಮ ಎಸಗಿದವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮಾಡಲಾಗಿರುವ ಎಲ್ಲಾ ಹಂಚಿಕೆಗಳು ಅಸಿಂಧು ಎಂದು ಅವರು ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಕ್ರಮದಿಂದಾಗಿ ಮೈಸೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು ಅಕ್ರಮವಾಗಿ ನಿವೇಶನ ಪಡೆದಿದ್ದ ಪ್ರಭಾವಿಗಳಿಗೆ ಆತಂಕ ಶುರುವಾಗಿದೆ.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mysore/muda-case-1100-site-allotments-cancelled-minister-yathindra-saves-rs-2000-crore-assets-gkn/articleshow-oa5lfbg"/>
        </item>
        <item>
            <title><![CDATA[Minister B Nagendra: ವಾಲ್ಮೀಕಿ ನಿಗಮ ಹಗರಣ, ಸಚಿವ ಬಿ ನಾಗೇಂದ್ರಗೆ ಬಿಗ್ ರಿಲೀಫ್; ಹೈಕೋರ್ಟ್ ಮಹತ್ವದ ಆದೇಶ]]></title>
            <link>https://kannada.asianetnews.com/karnataka-districts/valmiki-corporation-scam-big-relief-for-minister-b-nagendra-high-court-new-order-sns/articleshow-ti006yz</link>
            <guid isPermaLink="true">https://kannada.asianetnews.com/karnataka-districts/valmiki-corporation-scam-big-relief-for-minister-b-nagendra-high-court-new-order-sns/articleshow-ti006yz</guid>
            <pubDate>Thu, 20 Aug 2026 13:45:55 +0530</pubDate>
            <description><![CDATA[ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ ಅವರಿಗೆ ಹೈಕೋರ್ಟ್&zwnj;ನಿಂದ ರಿಲೀಫ್ ಸಿಕ್ಕಿದೆ. ಜಾಮೀನು ನೀಡುವಾಗ ವಿಧಿಸಿದ್ದ, ರಾಜ್ಯ ಬಿಟ್ಟು ತೆರಳದಂತೆ ಇದ್ದ ಷರತ್ತನ್ನು ನ್ಯಾಯಾಲಯ ರದ್ದುಗೊಳಿಸಿದ್ದು, ದೇಶ ಬಿಟ್ಟು ತೆರಳದಂತೆ ಸೂಚಿಸಿದೆ. ಆದರೆ, ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳು ಸದನದಲ್ಲಿ ತಮ್ಮ ಹೋರಾಟವನ್ನು ಮುಂದುವರೆಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0cfsy2qv11ce0f8shytbwm1,imgname-nagendra-1787125626967.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನು ಉಂಟು ಮಾಡಿರುವ ವಾಲ್ಮೀಕಿ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಬಿ ನಾಗೇಂದ್ರ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಪ್ರಕರಣದಲ್ಲಿ ಈಗಾಗಲೇ ಕೋರ್ಟ್&zwnj; ಸಚಿವರಿಗೆ ಜಾಮೀನು ಮಂಜೂರು ಮಾಡಿದ್ದು, ಸದ್ಯ ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಿದ್ದ &zwj;ಷರತ್ತು ರದ್ದು ಮಾಡಿದೆ.&lt;/p&gt;&lt;h2&gt;ನಾಗೇಂದ್ರ ಪ್ರಕರಣಕ್ಕೆ ಅನಿರೀಕ್ಷಿತ ತಿರುವು&lt;/h2&gt;&lt;p&gt;ಬಿ ನಾಗೇಂದ್ರ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೇ ರಾಜ್ಯ ಬಿಟ್ಟು ತೆರಳುವಂತೆ ಇಲ್ಲ ಎಂದು ಷರತ್ತು ವಿಧಿಸಿತ್ತು. ಇದರ ಬೆನ್ನಲ್ಲೇ ಸಚಿವ ಸ್ಥಾನ ಸಿಗುತ್ತಿದ್ದಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಕೆ ಮಾಡಿ ಅನುಮತಿ ಪಡೆದುಕೊಂಡು ದೆಹಲಿ ಪ್ರವಾಸ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಸಚಿವನಾಗಿರುವ ಹಿನ್ನೆಲೆ ರಾಜ್ಯದ ಹೊರಗೂ ಪ್ರಯಾಣಿಸಬೇಕಾಗಬಹುದು ಎಂದು ಸಚಿವರ ಪರ ವಕೀಲರು ಹೈಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರಂತೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಕೋರ್ಟ್ ಅನುಮತಿಯಿಲ್ಲದೇ ರಾಜ್ಯ ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ತು ರದ್ದು ಮಾಡಿ, ಆದರೆ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಆದೇಶ ನೀಡಿದೆ. ಇನ್ನು, ಇಡಿ ಪರ ಎಎಸ್ ಜಿ ಅರವಿಂದ್ ಕಾಮತ್ ಆಕ್ಷೇಪಣೆ ಸಲ್ಲಿಸಿದ್ದರು.&lt;/p&gt;&lt;h2&gt;ನಾಗೇಂದ್ರ ಬೇಕಾ? ರಾಜ್ಯದ ದಲಿತರು ಬೇಕಾ? ಕಾಂಗ್ರೆಸ್&zwnj;ಗೆ ಅಶೋಕ್ ಪ್ರಶ್ನೆ&lt;/h2&gt;&lt;p&gt;ಬಿ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನದಲ್ಲಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ಇಂದು ಕೂಡ ಮುಂದುವರೆದಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಇವತ್ತಿನ ಅಧಿವೇಶನದಲ್ಲಿ ಕೂಡ ನಾವು ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಮಾಡ್ತೀವಿ. 187 ಕೋಟಿ ಹಣ ಬಡವರಿಗೆ ಸೇರಬೇಕಾಗಿರುವುದು. ನಾಗೇಂದ್ರ ದಲಿತರ ಹಣ ತಿಂದು ದಲಿತ ಅನ್ನುವ ಶೆಲ್ಟರ್ ತೆಗೆದುಕೊಳ್ಳಲು ಹೋಗ್ತಿದ್ದಾರೆ. ಕಾಂಗ್ರೆಸ್ ಗೆ ಇವರೊಬ್ಬರು ಬೇಕಾ? ಅಥವಾ ರಾಜ್ಯದ ಎಲ್ಲಾ ದಲಿತರು ಬೇಕಾ?&lt;/p&gt;&lt;p&gt;ನಾಗೇಂದ್ರ ರಾಜೀನಾಮೆ ಕೊಡೋವರೆಗು ನಾವು ಬಿಡಲ್ಲ. ಮತ್ತೆ ಸಿಬಿಐ ನಲ್ಲಿ ನಾಗೇಂದ್ರ ಹೆಸರು ಇಲ್ಲ ಅಂತಾರೆ ನನ್ನ ಬಳಿ ದಾಖಲೆ ಇದೆ. ನಾಗೇಂದ್ರ ಹೆಸರು ಸಿಬಿಐ ಚಾರ್ಜ್ ಶೀಟ್ ನಲ್ಲಿ ಇದೆ, ಮಿಸ್ಟರ್ ಪರಮೇಶ್ವರ್ ನೀವು ಮಾತನಾಡಬೇಕು ಇದರ ಬಗ್ಗೆ&zwnj; ಒಬ್ಬನಿಗಾಗಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡ್ತಿದ್ದೀರಿ, ದಲಿತ ಸಮುದಾಯವನ್ನ ಉಳಿಸಿ ನಾಗೇಂದ್ರ ರಾಜೀನಾಮೆ ಕೊಡಿಸಿ ಎಂದು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 89.63 ಕೋಟಿ ರೂಪಾಯಿ ಹಣವು ಅಕ್ರಮವಾಗಿ ಬೇರೆ ಬೇರೆ ಖಾಸಗಿ ಖಾತೆಗಳಿಗೆ ಜಮೆಯಾಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಅವರ ಬಳಿ ದೊರೆತಿದ್ದ ಡೆತ್&zwnj;ನೋಟ್&zwnj;ನಲ್ಲಿ ಸಚಿವರು ಮತ್ತು ಉನ್ನತಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಈ ಅಕ್ರಮ ವರ್ಗಾವಣೆ ನಡೆದಿದೆ ಎಂದು ಉಲ್ಲೇಖಿಸಿದ್ದರು. ಇರೊಂದಿಗೆ ಪ್ರಕರಣ ಸಂಚಲನಾತ್ಮಕ ತಿರುವು ಪಡೆದುಕೊಂಡಿತ್ತು. ರಾಜ್ಯ ಸರ್ಕಾರ ಎಸ್&zwnj;ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿದರೆ, ನಾಗೇಂದ್ರ ಅಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇಡಿ ಅಧಿಕಾರಿಗಳು ಕೂಡ ಪ್ರಕರಣಕ್ಕೆ ಎಂಟ್ರಿ ಕೊಟ್ಟು, ನಾಗೇಂದ್ರ ಅವರನ್ನು ಬಂಧಿಸಿ ತನಿಖೆ ನಡೆಸಿದ್ದರು. ತನಿಖೆ ಮುಕ್ತಾಯವಾದ ಬಳಿಕ ನಾಗೇಂದ್ರ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.&lt;/p&gt;]]></content:encoded>
            <category>politics</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/valmiki-corporation-scam-big-relief-for-minister-b-nagendra-high-court-new-order-sns/articleshow-ti006yz"/>
        </item>
        <item>
            <title><![CDATA[DK ಶಿವಕುಮಾರ್ ಮತ್ತು ಪ್ರಕಾಶ್ ರಾಜ್ ದಿಢೀರ್ ಭೇಟಿ.. ಭಾರೀ ಕುತೂಹಲ]]></title>
            <link>https://kannada.asianetnews.com/politics/actor-prakash-raj-met-cm-dk-shivakumar-in-bangaluru-matter-is-sir-gkn/articleshow-tnwo4m3</link>
            <guid isPermaLink="true">https://kannada.asianetnews.com/politics/actor-prakash-raj-met-cm-dk-shivakumar-in-bangaluru-matter-is-sir-gkn/articleshow-tnwo4m3</guid>
            <pubDate>Mon, 17 Aug 2026 17:31:56 +0530</pubDate>
            <description><![CDATA[&lt;p&gt;ನಟ ಪ್ರಕಾಶ್ ರಾಜ್ ನೇತೃತ್ವದ ನಾಗರಿಕ ಸಂಘಟನೆಗಳ ನಿಯೋಗ ಡಿಕೆಶಿ ಅವರನ್ನು ಭೇಟಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿತು. ಮತದಾನದ ಹಕ್ಕನ್ನು ರಕ್ಷಿಸಲು ಈ ಪ್ರಕ್ರಿಯೆಯ ಕಾಲಾವಕಾಶವನ್ನು ವಿಸ್ತರಿಸುವಂತೆ ಮತ್ತು ಲೋಪದೋಷಗಳನ್ನು ಸರಿಪಡಿಸುವಂತೆ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07sfgwfjab2cybxyfnz7w4x,imgname-prakash-raj-meet-cm-dk-shivakumar-1786967999375.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಇಂದು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ದಿಢೀರ್ ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. 'ಎದ್ದೇಳು ಕರ್ನಾಟಕ' ಸಂಘಟನೆಯ ನಿಯೋಗದೊಂದಿಗೆ ಆಗಮಿಸಿದ್ದ ಪ್ರಕಾಶ್ ರಾಜ್, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಗಂಭೀರ ಲೋಪಗಳ ಕುರಿತು ಚರ್ಚೆ ನಡೆಸಿದರು.&lt;/p&gt;&lt;h2&gt;&lt;strong&gt;ಗಮನ ಸೆಳೆದ ಪ್ರಮುಖರ ಭೇಟಿ&lt;/strong&gt;&lt;/h2&gt;&lt;p&gt;ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ.ಅಥೀಕ್ ಉಪಸ್ಥಿತರಿದ್ದರು. ಇತ್ತೀಚೆಗೆ ವೋಟರ್ ಐಡಿ ವಿವಾದ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದ ಪ್ರಕಾಶ್ ರಾಜ್ ಅವರ ಈ ಭೇಟಿ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ SIR (Special Integrated Revision) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಮಾಯವಾಗುವ ಆತಂಕ ಎದುರಾಗಿದೆ ಎಂದು ನಿಯೋಗವು ಸಿಎಂಗೆ ಮನವರಿಕೆ ಮಾಡಿಕೊಟ್ಟಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ನಿಯೋಗದ ಪ್ರಮುಖ ಆಕ್ಷೇಪಗಳು&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಲಕ್ಷಾಂತರ ಹೆಸರು ಡಿಲೀಟ್&lt;/strong&gt;: ಕರ್ನಾಟಕದ ಸುಮಾರು 1.9 ಕೋಟಿಗೂ ಹೆಚ್ಚು ಮತದಾರರ ಹೆಸರುಗಳ ಪರಿಷ್ಕರಣೆ ನಡೆಯುತ್ತಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಸಹಜವಾಗಿ ಹೆಚ್ಚಿನ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಡಲಾಗುತ್ತಿದೆ.&lt;/li&gt; &lt;li&gt;&lt;strong&gt;ಶೇ. 60ರಷ್ಟು ಡಿಲೀಷನ್ (deletion): &lt;/strong&gt;ರಾಜ್ಯದ ಸುಮಾರು 3 ಸಾವಿರಕ್ಕೂ ಹೆಚ್ಚು ಬೂತ್&zwnj;ಗಳಲ್ಲಿ ಶೇ. 60ಕ್ಕೂ ಅಧಿಕ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/li&gt; &lt;li&gt;&lt;strong&gt;ಬದುಕಿರುವವರೇ 'ಡೆಡ್'!:&lt;/strong&gt; ಅಚ್ಚರಿಯೆಂದರೆ, ಬದುಕಿರುವವರನ್ನೇ 'ಮೃತರು' (Dead) ಎಂದು ತೋರಿಸಲಾಗುತ್ತಿದೆ. ಇನ್ನು ಬಾಡಿಗೆ ಮನೆ ಬದಲಿಸಿದವರು ಅಥವಾ ಉದ್ಯೋಗಕ್ಕಾಗಿ ಬೇರೆಡೆ ಹೋದವರನ್ನು 'ಗೈರು ಹಾಜರು' (Absent) ಎಂದು ತೋರಿಸಿ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.&lt;/li&gt; &lt;li&gt;&lt;strong&gt;ತರಬೇತಿ ಇಲ್ಲದ ಬಿಎಲ್&zwnj;ಒಗಳು:&lt;/strong&gt; BLOಗಳಿಗೆ ಸರಿಯಾದ ತರಬೇತಿ ನೀಡದೆ ತರಾತುರಿಯಲ್ಲಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಒಂದು ತಿಂಗಳ ಅಲ್ಪಾವಧಿಯಲ್ಲಿ ಮನೆಮನೆಗೆ ತೆರಳಿ ನಿಖರ ಪರಿಷ್ಕರಣೆ ಮಾಡುವುದು ಅಸಾಧ್ಯ ಎಂದು ಸಂಘಟನೆ ದೂರಿದೆ.&lt;/li&gt;&lt;/ul&gt;&lt;h2&gt;&lt;strong&gt;ಸಿಎಂಗೆ ಸಲ್ಲಿಸಿದ ಪ್ರಮುಖ ಬೇಡಿಕೆಗಳು&lt;/strong&gt;&lt;/h2&gt;&lt;p&gt;&lt;strong&gt;ಸಮಯ ವಿಸ್ತರಣೆ: &lt;/strong&gt;ತರಾತುರಿಯಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ಕನಿಷ್ಠ ಮೂರು ತಿಂಗಳು ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಬೇಕು.&lt;/p&gt;&lt;p&gt;&lt;strong&gt;ಫಾರ್ಮ್ 6 ಮತ್ತು 8 ವಿತರಣೆ:&lt;/strong&gt; ಮತ್ತೊಮ್ಮೆ ಮನೆಮನೆಗೆ ತೆರಳಿ ಸ್ಥಳಾಂತರಗೊಂಡ ಮತದಾರರಿಗೆ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಅವಕಾಶ ನೀಡಬೇಕು.&lt;/p&gt;&lt;p&gt;&lt;strong&gt;ಜಾಗೃತಿ ಅಭಿಯಾನ:&lt;/strong&gt; ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಸರ್ಕಾರದಿಂದಲೇ ವ್ಯಾಪಕ ಜನಜಾಗೃತಿ ಅಭಿಯಾನ ನಡೆಸಬೇಕು.&lt;/p&gt;&lt;p&gt;ಅರ್ಹ ಮತದಾರರ ಹಕ್ಕು ಕಸಿದುಕೊಳ್ಳಲು ಕರ್ನಾಟಕ ಒಪ್ಪುವುದಿಲ್ಲ ಎಂದು ಈ ಸಂದರ್ಭದಲ್ಲಿ ನಿಯೋಗವು ಖಡಕ್ ಆಗಿ ಹೇಳಿದೆ. ಪ್ರಕಾಶ್ ರಾಜ್ ಅವರ ಈ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/actor-prakash-raj-met-cm-dk-shivakumar-in-bangaluru-matter-is-sir-gkn/articleshow-tnwo4m3"/>
        </item>
        <item>
            <title><![CDATA[ಮಂಕಾಳ್‌ ವೈದ್ಯ ಸಜ್ಜನ ವ್ಯಕ್ತಿ, ಅವರ ಮನವೊಲಿಸಲು ಕಷ್ಟವಾಯಿತು: ಸಿಎಂ ಡಿಕೆ ಶಿವಕುಮಾರ್‌ ಬಣ್ಣನೆ]]></title>
            <link>https://kannada.asianetnews.com/politics/mankal-vaidya-deputy-speaker-cm-dk-shivakumar-assembly-san/articleshow-uhwawzk</link>
            <guid isPermaLink="true">https://kannada.asianetnews.com/politics/mankal-vaidya-deputy-speaker-cm-dk-shivakumar-assembly-san/articleshow-uhwawzk</guid>
            <pubDate>Tue, 18 Aug 2026 20:32:32 +0530</pubDate>
            <description><![CDATA[&lt;p&gt;ಮೀನುಗಾರ ಕುಟುಂಬದ ಹಿನ್ನೆಲೆಯ ಮಂಕಾಳ್ ವೈದ್ಯ ಅವರು ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರನ್ನು ತಾವೇ ಮನವೊಲಿಸಿ ಈ ಜವಾಬ್ದಾರಿ ನೀಡಿದ್ದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನದಲ್ಲಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ap7bcws5jxgbenchxtkcy1,imgname-dk-shivakumar-and-mankal-vaidya-1787065249180.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.18): &lt;/strong&gt;'ಮೀನುಗಾರ ಕುಟುಂಬದಿಂದ ಬಂದು. ಈಗಲೂ ತಮ್ಮ ವೃತ್ತಿಯಲ್ಲಿ ತೊಡಗಿರುವ ಸಜ್ಜನ ವ್ಯಕ್ತಿಯಾದ ಮಂಕಾಳ್ ವೈದ್ಯ ಅವರನ್ನು ಉಪ ಸಭಾದ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದು ನೋಡಿ ಸಂತಸವಾಗಿದೆ ಎಂದು ಸಿಎಂ&zwnj; ಡಿ ಕೆ ಶಿವಕುಮಾರ್ ಅವರು ಹೇಳಿದರು. ಉಪಸಭಾಧ್ಯಕ್ಷರ ಆಯ್ಕೆಯ ನಂತರ ವಿಧಾನಸಭೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಮಾತನಾಡಿದರು.&lt;/p&gt;&lt;p&gt;ವಿರೋಧ ಪಕ್ಷದವರಿಗೆ ಉಪಸಭಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಸಂಪ್ರದಾಯವಿದೆ. ಆದರೆ ಲೋಕಸಭೆಯಲ್ಲಿ ಇನ್ನೂ ಆ ಸ್ಥಾನ ಖಾಲಿ ಬಿಡಲಾಗಿದೆ. ನಾವೂ ಇದರ ಬಗ್ಗೆಯೂ ಆಲೋಚನೆ ಮಾಡಿದೆವು.&zwnj; ಆದರೆ ಹೆಚ್ಚು ಒತ್ತಡವಿದ್ದ ಕಾರಣಕ್ಕೆ ಮಂಕಾಳ್&zwnj; ವೈದ್ಯ ಅವರಿಗೆ ಜವಾಬ್ದಾರಿ ನೀಡಲಾಯಿತು. ಅವರ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿತ್ತು. ನಾನೇ ಅವರ ಬಳಿ ಮನವಿ ಮಾಡಿ ಈ ಉಪಸಭಾಧ್ಯಕ್ಷರ ಸ್ಥಾನ ಪಡೆಯುವಂತೆ ಕೇಳಿಕೊಂಡೆ ಎಂದರು.&lt;/p&gt;&lt;p&gt;ಉಪ ಸಭಾದ್ಯಕ್ಷರ ಆಯ್ಕೆ ಸಂಬಂಧ ವಿರೋಧ ಪಕ್ಷದವರಿಗೂ ಅಭಿನಂದನೆ ತಿಳಿಸುತ್ತೇನೆ. ನಮ್ಮ ಪಕ್ಷದ ಲೆಡರ್ ಹೆಡ್ ನಲ್ಲಿ ಸಭಾಪತಿ, ಉಪಸಭಾಪತಿಗಳ ಹೆಸರನ್ನು ಸೂಚಿಸಲಾಗಿತ್ತು ಎಂದು ವಿರೋಧ ಪಕ್ಷದವರು ಅವರದೇ ಆದ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಇದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದು ತಿಳಿಸಿದರು.&lt;/p&gt;&lt;p&gt;ಇದು ಅಪರೂಪದ ಸಂದರ್ಭ. ನನಗೆ ಅತ್ಮೀಯ ಮಿತ್ರರು. ಅವರ ನಡತೆ, ಕುಟುಂಬವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಪಯಣ ಬಹಳ ವಿಶೇಷವಾಗಿದೆ. ಪಕ್ಷೇತರ ಶಾಸಕರಾಗಿ ಆಯ್ಕೆಯಾದವರು. ನಂತರ ನಮ್ಮ ಪಕ್ಷದಿಂದ ಟಿಕೆಟ್ ನೀಡಲಾಯಿತು. ಬಂದರು, ಮೀನುಗಾರಿಕೆ ಸಚಿವರಾಗಿ ಮೂರು ವರ್ಷಗಳ ಕಾಲ ಉತ್ತಮವಾಗಿ ಕೆಲಸ ಮಾಡಿದವರು ಎಂದರು.&lt;/p&gt;&lt;p&gt;ಮೀನುಗಾರರ ಕುಟುಂಬ. ಈಗಲೂ ತಮ್ಮ ವೃತ್ತಿ ಮಾಡುತ್ತಿದ್ದಾರೆ. ಅದರಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯಾಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. 2005 ರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದರು. ಅಂದರೆ ತಳಮಟ್ಟದ ರಾಜಕೀಯದಿಂದ ಮೇಲೆ ಬಂದವರು. 2013 ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾದರು. 2018 ರಲ್ಲಿ ಕಾರಣಾಂತರಗಳಿಂದ ಸೋಲಬೇಕಾಯಿತು. 2023 ರಲ್ಲಿ ಮತ್ತೆ ಗೆದ್ದು ಅತ್ಯುತ್ತಮವಾಗಿ ಕೆಲಸ ಮಾಡಿದರು.ನೀವು ಉಪ ಸಭಾಧ್ಯಕ್ಷ ಸ್ಥಾನ ದೊರೆಯಿತು ಎಂದು ಬೇಸರಿಸಿಕೊಳ್ಳಬೇಡಿ. ರುದ್ರಪ್ಪ ಲಮಾಣಿ ಅವರು ಇದೇ ಸ್ಥಾನದಲ್ಲಿ ಕುಳಿತು ಈಗ ಸಚಿವರಾಗಿದ್ದಾರೆ. ಆ ಸ್ಥಾನದಲ್ಲಿ ಕುಳಿತ ಎಸ್ ಎಂ ಕೃಷ್ಣ, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾದರು. ಅದಕ್ಕೆ ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಎಂದರು.&lt;/p&gt;&lt;h2&gt;&lt;strong&gt;ಮಂಕಾಳ್&zwnj; ವೈದ್ಯ ಮನವೊಲಿಸಲು ಕಷ್ಟವಾಯಿತು&lt;/strong&gt;&lt;/h2&gt;&lt;p&gt;ಸಿಎಂ&zwnj; ಮಾತಿನ ಮಧ್ಯೆ 'ಉಪಸಭಾಧ್ಯಕ್ಷರ ಆಯ್ಕೆ ಟೈಪಿಂಗ್ ತಪ್ಪಿನಿಂದ ಉಂಟಾಗಿದೆ' ಎಂದು ಬಿಜೆಪಿಯ ಸುನೀಲ್ ಕುಮಾರ್ ಹೇಳಿದಾಗ, 'ಆಯಿತು, ನಿಮ್ಮ&zwnj; ಮಾತನ್ನೂ ಒಪ್ಪೋಣ. ಆದರೆ ನಾವೆಲ್ಲರೂ ಸೇರಿ ಅವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿದ್ದೇವೆ. ರಾಜಕೀಯದಲ್ಲಿ ಹಗ್ಗ ಜಗ್ಗಾಟ ನಿಮ್ಮಲ್ಲಿ, ನಮ್ಮಲ್ಲಿ ಎಲ್ಲಾಕಡೆಯೂ ನಡೆಯುತ್ತದೆ. ಆದರೆ ನಮ್ಮಲ್ಲಿ ಯಾವುದೇ ಜಗ್ಗಾಟ ಉಂಟಾಗಲಿಲ್ಲ. ಈ ಸ್ಥಾನಕ್ಕೆ ಮಂಕಾಳ್ ವೈದ್ಯ ಅವರನ್ನು ಮನವೊಲಿಸಲು ನಮಗೆ ಕಷ್ಟವಾಯಿತು' ಎಂದರು.&lt;/p&gt;&lt;p&gt;ಬಿಜೆಪಿಯ ಅರವಿಂದ ಬೆಲ್ಲದ ಅವರು, 'ವೈದ್ಯ ಅವರ ಮನವೊಲಿಸಲು ನಿಮಗೆ ಸಮಯ ವ್ಯರ್ಥವಾಗಿದೆ. ಅವರು ತಯಾರಿರಲಿಲ್ಲ' ಎಂದಾಗ, ಪ್ರತಿಕ್ರಿಯಿಸಿದ ಸಿಎಂ &quot;ನಿನಗೂ ಪರಿಸ್ಥಿತಿ ಆ ಬರುತ್ತದೆ. ನಿನ್ನ ಮನವೊಲಿಸಲಿಲ್ಲವೇ? ಯಾವುದೇ ಫೈಲ್ ಗೆ ಸಹಿ ಹಾಕಬೇಡಿ ಹುಷಾರಪ್ಪ ಎಂದು ನೀವು ಹೇಳಿರಲಿಲ್ಲವೇ? ನನಗೂ ಎಲ್ಲವೂ ಗೊತ್ತಿದೆ. ನಾಳೆ ನೀವು ಪಕ್ಕದ ಚೇರಿನಿಂದ ಈ ಕಡೆ ಇರುವ ಚೇರಿಗೂ ಬರಬಹುದು. ಹಿಂದೆ, ಮುಂದೆಯೂ ಆಗಬಹುದು. &zwnj;ರಾಜಕೀಯ ಎಂಬುದು ಸಾಧ್ಯತೆಗಳ ಕಲೆ.&zwnj; ಯಾರು ಏನು ಬೇಕಾದರೂ ಆಗಬಹುದು, ಬರಬಹುದು&quot; ಎಂದರು.&lt;/p&gt;&lt;h2&gt;&lt;strong&gt;ವಿರೋಧ ಪಕ್ಷದ ಧಿಕ್ಕಾರ; ಆಳವಾದ ಗಾಯ ಮಾಡಿದೆ&lt;/strong&gt;&lt;/h2&gt;&lt;p&gt;&quot;ನನಗೆ ಅಶ್ವಥ್ ನಾರಾಯಣ್, ವಿಜಯೇಂದ್ರ ಅವರ ತಂಡದ ಮೇಲೆ ಬಹಳ ಬೇಜಾರಾಗಿದೆ. ಎರಡು ಮೂರು ದಿನ ಕುಳಿತುಕೊಂಡು ನಾನು ಹೇಳುವುದನ್ನು ಕೇಳಿ ಎಂದು ಹೇಳಿದ್ದೇನೆ. ಆದರೂ ಸದನಕ್ಕೆ ಬರುತ್ತಿದ್ದಂತೆ ಧಿಕ್ಕಾರ ಎಂದು ಕೂಗಿ ನನ್ನ ಮನಸ್ಸಿಗೆ ಆಳವಾದ ಗಾಯ ಮಾಡಿದ್ದೀರಿ. ಈ ವಿಚಾರ ನನಗೆ ನಾಟಿದೆ&quot; ಎಂದು ಬೇಸರಿಸಿದರು.&lt;/p&gt;&lt;p&gt;&quot;ನಾನು ಇರೋದನ್ನು ಹೇಳುತ್ತಿರುವೆ. ನನಗೆ ಆದ ನೋವು ನನಗೆ ಮಾತ್ರ ಗೊತ್ತು. ನಾವು ಯಾರೂ ಶಾಶ್ವತವಲ್ಲ. ಬೇರೆ ಪಕ್ಷದಿಂದ ಬಂದವರನ್ನು ಮಂತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಯವರೂ ಮಾಡಿಕೊಂಡಿದ್ದರು. ಕೇಂದ್ರ&zwnj; ಸರ್ಕಾರದಲ್ಲಿ ಎಷ್ಟು &zwnj;ಜನರನ್ನು ಮಂತ್ರಿ ಮಾಡಿಲ್ಲ? ಯಡಿಯೂರಪ್ಪ &zwnj;ಅವರು ಬೇರೆ ಪಕ್ಷವನ್ನೇ ಕಟ್ಟಿದರು. ನಂತರ ಬಿಜೆಪಿಗೆ ಬಂದು ಮತ್ತೆ ಸಿಎಂ ಆದರು.&zwnj; ಅವರು ಆಗ ಏನೇನು ಹೇಳಿದ್ದರು ಎಂದು ಎಲ್ಲಾ ದಾಖಲೆಯಾಗಿ ಉಳಿದಿದೆ. ಯಡಿಯೂರಪ್ಪ ಅವರನ್ನು ಮತ್ತೆ ಅನಿವಾರ್ಯವಾಗಿ ಪಕ್ಷಕ್ಕೆ ವಾಪಸ್ ಕರೆದುಕೊಳ್ಳಲಾಯಿತು&quot; ಎಂದರು.&lt;/p&gt;&lt;h2&gt;&lt;strong&gt;ಯೌವನ, ಹಣ, ಅಧಿಕಾರ ಒಂದೇ&zwnj; ಕಡೆ ಸೇರಬಾರದು&lt;/strong&gt;&lt;/h2&gt;&lt;p&gt;&quot;ಯೌವನ, ಹಣ, ಅಧಿಕಾರ ಈ ಮೂರು ಸಂಗತಿಗಳು ಒಂದೇ ಕಡೆ ಸೇರಬಾರದು ಎಂದು ಹಿರಿಯರು ಅಂದೇ&zwnj; ನನಗೆ ಕಿವಿಮಾತು ಹೇಳಿದ್ದರು&quot; ಎಂದು ವಿಚಾರವನ್ನು ಮೆಲುಕು ಹಾಕಿದರು. ನಾನು ವಿದ್ಯಾಭ್ಯಾಸ ಮಾಡಲು ಬೆಂಗಳೂರಿಗೆ ಬಂದರೂ ರಾಜಕೀಯ ಮಾಡಲೆಂದೇ ಇಲ್ಲಿಗೆ ಬಂದವನು. ಪಿಯು ಓದುವಾಗಲೇ ಚುನಾವಣೆಗೆ ನಿಂತಿದ್ದೆ. ನಂತರ ಡಿಗ್ರಿ ಓದುವಾಗ ಎಂಎಲ್ ಎ ಸ್ಥಾನಕ್ಕೆ ಅವಕಾಶ ಸಿಕ್ಕಿತು. ಬಂಗಾರಪ್ಪ ಅವರು ಚಿಕ್ಕ ವಯಸ್ಸಿನಲ್ಲಿಯೇ ನನ್ನ ಮಂತ್ರಿ ಮಾಡಿದರು. ಆಗ ಅನೇಕರು ಹೇಳುತ್ತಿದ್ದರು. ಈ ಸ್ಥಾನ ಶಾಶ್ವತವಲ್ಲ ಎಂದು. ನನಗೆ ಮದುವೆ ಸಹ ಆಗಿರಲಿಲ್ಲ. ನಾನು ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ದಿನವೇ ಅನಿಸಿತು. ಅಧಿಕಾರ ಶಾಶ್ವತವಲ್ಲ. ದೇವರು ಆಗಲೇ ಆರ್ಥಿಕ ಶಕ್ತಿ ನೀಡಿದ್ದ ಎಂದರು.&lt;/p&gt;&lt;p&gt;ನಮ್ಮ ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ನಾವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ. ಕರ್ನಾಟಕವನ್ನು ಬಲಿಷ್ಠ ಮಾಡಿ ಭಾರತ ಬೆಳೆಯುವಂತೆ ಮಾಡೋಣ. ವೈದ್ಯ ಅವರು ಶುದ್ಧ ಮನಸ್ಸಿನ ಮಿತ್ರ. ಸಮುದ್ರದಲ್ಲಿ ಈಜುವ ಶಕ್ತಿ ಇದೆ ಅವರಿಗೆ. ಪ್ರಕೃತಿ ನಾಡಿನಲ್ಲಿ ಬೆಳೆದ ಸ್ನೇಹಿತ.. ಅಲ್ಲಿನ ಪ್ರಕೃತಿ ಸಂಪತ್ತು ಬಳಸಿಕೊಳ್ಳಲು ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ&quot; ಎಂದರು.&lt;/p&gt;]]></content:encoded>
            <category>politics</category>
            <dc:creator>Santosh Naik</dc:creator>
            <atom:link href="https://kannada.asianetnews.com/politics/mankal-vaidya-deputy-speaker-cm-dk-shivakumar-assembly-san/articleshow-uhwawzk"/>
        </item>
        <item>
            <title><![CDATA[ನಾಗೇಂದ್ರ ತಲೆದಂಡಕ್ಕೆ ಬಿಜೆಪಿ ಬಿಗ್ ಪ್ಲಾನ್! ಬಳ್ಳಾರಿ ಪಾದಯಾತ್ರೆ ದಿನಾಂಕ, ಆರಂಭ ಸ್ಥಳದ ಬಗ್ಗೆ ಶೀಘ್ರ ಘೋಷಣೆ?]]></title>
            <link>https://kannada.asianetnews.com/politics/bjp-big-plan-nagendra-s-resignation-ballari-padayatra-date-place-announcement-soon-rav/articleshow-uidb8pg</link>
            <guid isPermaLink="true">https://kannada.asianetnews.com/politics/bjp-big-plan-nagendra-s-resignation-ballari-padayatra-date-place-announcement-soon-rav/articleshow-uidb8pg</guid>
            <pubDate>Sat, 22 Aug 2026 05:56:08 +0530</pubDate>
            <description><![CDATA[&lt;p&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ಪರಿಶಿಷ್ಟ ಪಂಗಡದ ನಾಯಕರ ನೇತೃತ್ವದಲ್ಲಿ ನಡೆಯಲಿರುವ ಈ ಪಾದಯಾತ್ರೆಯು, ನಾಗೇಂದ್ರ ಅವರ ಕ್ಷೇತ್ರವಾದ ಬಳ್ಳಾರಿಯಲ್ಲಿ ಅಂತ್ಯಗೊಳ್ಳುವಂತೆ ಪ್ಲಾನ್!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kztkdre8rjwvbqh9s3p1f1sq,imgname-----------------------2026-08-12t142816.307-1786525442504.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.22): &lt;/strong&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದು, ಬರುವ ಸೋಮವಾರ ಅಥವಾ ಮಂಗಳವಾರದ ಹೊತ್ತಿಗೆ ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆಯಿದೆ.&lt;/p&gt;&lt;p&gt;ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಪಕ್ಷದ ನಾಯಕರು ಪಾದಯಾತ್ರೆ ನಡೆಸಲು ಉತ್ಸುಕರಾಗಿದ್ದು, ಅದರ ರೂಪುರೇಷೆಗಳ ಬಗ್ಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ದಿನಾಂಕ ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಸದ್ಯ ವಿಧಾನಮಂಡಲ ಅಧಿವೇಶನದ ಒಳಗೆ ಮತ್ತು ಹೊರಗೆ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಸತತವಾಗಿ ಧರಣಿ, ಪ್ರತಿಭಟನೆ ನಡೆಸಲಾಗುತ್ತಿದೆ. ಹೀಗಾಗಿ, ತಕ್ಷಣಕ್ಕೆ ಪಾದಯಾತ್ರೆ ಘೋಷಣೆ ಮಾಡುವ ಬದಲು ಅಧಿವೇಶನ ಮುಕ್ತಾಯಗೊಳ್ಳುವ ಹಂತದಲ್ಲಿ ಘೋಷಣೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಪಕ್ಷದ ರಾಜ್ಯ ನಾಯಕರು ಹೊಂದಿದ್ದಾರೆ. ಅಧಿವೇಶನ ಈ ತಿಂಗಳ 27ರಂದು ಮುಕ್ತಾಯಗೊಳ್ಳಲಿದ್ದು, 24 ಅಥವಾ 25ರಂದು (ಸೋಮವಾರ ಅಥವಾ ಮಂಗಳವಾರ) ಅಧಿಕೃತವಾಗಿ ಘೋಷಣೆ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;ಬಿಜೆಪಿ ಪಾದಯಾತ್ರೆ ಎಲ್ಲಿಂದ ಎಲ್ಲಿಯವರೆಗೆ?&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 15 ಪರಿಶಿಷ್ಟ ಪಂಗಡ (ಎಸ್&zwnj;ಟಿ) ಮೀಸಲು ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಬಹುತೇಕ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಯಾದಗಿರಿ ಜಿಲ್ಲೆಗಳಲ್ಲೇ ಇವೆ. ಹೀಗಾಗಿ, ಪಾದಯಾತ್ರೆ ಈ ಜಿಲ್ಲೆಗಳನ್ನು ಹಾದು ಹೋಗುವಂತೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಪಾದಯಾತ್ರೆ ಯಾವುದೇ ಜಿಲ್ಲೆಯಿಂದ ಆರಂಭಗೊಂಡರೂ ಅಂತಿಮವಾಗಿ ನಾಗೇಂದ್ರ ಅವರು ಪ್ರತಿನಿಧಿಸುವ ಬಳ್ಳಾರಿಯಲ್ಲಿ ಅಂತ್ಯಗೊಳ್ಳುವಂತೆ ಮಾರ್ಗ ನಿಗದಿಪಡಿಸಲಾಗುತ್ತಿದೆ.&lt;/p&gt;&lt;h3&gt;ಪಾದಯಾತ್ರೆ ರದ್ದಾಗಿಲ್ಲ-ರಾಮುಲು:&lt;/h3&gt;&lt;p&gt;ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಾದಯಾತ್ರೆ ರದ್ದಾಗಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ನಮ್ಮ ಪಕ್ಷದ ನಾಯಕರು ಸದನದಲ್ಲಿ ಹೋರಾಟ ಮಾಡುತ್ತಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ಗೊಂದಲ ಆಗಬಾರದು ಎಂಬ ಕಾರಣಕ್ಕಾಗಿ ಹಂತ ಹಂತದ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.&lt;/p&gt;&lt;p&gt;ಪಾದಯಾತ್ರೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಚರ್ಚೆ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರೇ ಅದರ ಬಗ್ಗೆ ಮುಂದೆ ತಿಳಿಸುತ್ತಾರೆ. ಪಾದಯಾತ್ರೆ ರದ್ದಾಗಿಲ್ಲ. ಅದರ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಪಕ್ಷದ ನಾಯಕರ ಜತೆ ಚರ್ಚಿಸಿ ರಾಜ್ಯಾಧ್ಯಕ್ಷರು ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bjp-big-plan-nagendra-s-resignation-ballari-padayatra-date-place-announcement-soon-rav/articleshow-uidb8pg"/>
        </item>
        <item>
            <title><![CDATA[ಡಿಕೆಶಿಯ ಅತ್ಯಂತ ನಂಬಿಕಸ್ತ ಸಾರಥಿ ಅಂದ್ರೆ ಕೃಷ್ಣ ಬೈರೇಗೌಡ.. ಇದೀಗ ಮತ್ತೊಂದು ಪವರ್‌ಫುಲ್ ಜವಾಬ್ದಾರಿ..!]]></title>
            <link>https://kannada.asianetnews.com/politics/cm-dk-shivakumar-most-trusted-aide-krishna-byre-gowda-minister-assigned-another-powerful-portfolio-gkn/articleshow-vv14al6</link>
            <guid isPermaLink="true">https://kannada.asianetnews.com/politics/cm-dk-shivakumar-most-trusted-aide-krishna-byre-gowda-minister-assigned-another-powerful-portfolio-gkn/articleshow-vv14al6</guid>
            <pubDate>Tue, 18 Aug 2026 19:13:50 +0530</pubDate>
            <description><![CDATA[&lt;p&gt;ಸಚಿವ ಕೃಷ್ಣ ಬೈರೇಗೌಡರ ಕಾರ್ಯಕ್ಷಮತೆ ಮತ್ತು ಕ್ಲೀನ್ ಇಮೇಜ್&zwnj;ಗೆ ಮೆಚ್ಚುಗೆ ಸೂಚಿಸಿರುವ ಸಿಎಂ ಡಿಕೆಶಿ, ಅವರಿಗೆ ಸಂಸದೀಯ ವ್ಯವಹಾರಗಳ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಈಗಾಗಲೇ ಜನಮನ್ನಣೆ ಗಳಿಸಿರುವ ಬೈರೇಗೌಡರು, ಸರ್ಕಾರದ ಅತ್ಯಂತ ನಂಬಿಕಸ್ತ ಸಚಿವರಾಗಿ ಹೊರಹೊಮ್ಮಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ahrcd9bg0j8k1kq1gfsb15,imgname-krishna-byre-gowda-and-dk-shivakumar--1--1787060564393.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ರಾಜಕಾರಣದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅತ್ಯಂತ ಆಪ್ತ ಹಾಗೂ ನಂಬಿಕಸ್ತ ಸಚಿವ ಎಂದೇ ಗುರುತಿಸಿಕೊಂಡಿರುವ ಕೃಷ್ಣ ಬೈರೇಗೌಡಗೆ ಮತ್ತೊಂದು ಪ್ರಮುಖ ಜವಾಬ್ದಾರಿ ವಹಿಸಲಾಗಿದೆ. ಸಂಸದೀಯ ವ್ಯವಹಾರಗಳ (Parliamentary Affairs) ಹೆಚ್ಚುವರಿ ಖಾತೆಯನ್ನು ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಸಚಿವ ಕೃಷ್ಣ ಬೈರೇಗೌಡ ಅವರ ಕೆಲಸದ ಮೇಲೆ ಸಿಎಂ ಡಿಕೆಶಿಯವರಿಗೆ ಎಲ್ಲಿಲ್ಲದ ನಂಬಿಕೆ. ಈಗಾಗಲೇ ಬೆಂಗಳೂರು ನಗರಾಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಜವಾಬ್ದಾರಿಗಳಾದ BWSSB, BMRCL ಮತ್ತು ಜಿಬಿಎ (GBA) ಖಾತೆಗಳನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಈಗ ಅವರ ಬುದ್ಧಿವಂತಿಕೆ ಮತ್ತು ಸಂಸದೀಯ ಜ್ಞಾನವನ್ನು ಗಮನಿಸಿ ಸರ್ಕಾರ ಈ ಹೊಸ ಜವಾಬ್ದಾರಿಯನ್ನು ನೀಡಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಡಿಕೆಶಿ ನಂಬಿಕೆಗೆ ಕಾರಣಗಳೇನು?&lt;/strong&gt;&lt;/h2&gt;&lt;p&gt;ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ 'ಕ್ಲೀನ್ ಹ್ಯಾಂಡ್' ಎಂಬ ಹೆಗ್ಗಳಿಕೆ ಕೃಷ್ಣ ಬೈರೇಗೌಡರಿಗಿದೆ. ಸರ್ಕಾರದ ಮೇಲೆ ಯಾವುದೇ ಆರೋಪಗಳು ಬಂದಾಗ ಅಥವಾ ಸಂಕಷ್ಟ ಎದುರಾದಾಗ ಅದನ್ನು ಕಾನೂನಾತ್ಮಕವಾಗಿ ಮತ್ತು ತರ್ಕಬದ್ಧವಾಗಿ ಎದುರಿಸುವ ಶಕ್ತಿ ಇವರಿಗಿದೆ. ಈ ಹಿಂದೆ ಕಂದಾಯ ಸಚಿವರಾಗಿದ್ದಾಗ ಇವರು ಮಾಡಿದ ಕೆಲಸಗಳು ಇಂದಿಗೂ ಜನರ ಮನಸ್ಸಿನಲ್ಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಫುಟ್&zwnj;ಪಾತ್ ತೆರವು ಕಾರ್ಯಾಚರಣೆ ನಡೆಸಿ ಜನರಿಂದ 'ಭೇಷ್' ಎನಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಹಠ ಬಿಡದ ಡಿಕೆಶಿ, ಗೆದ್ದ ಬೈರೇಗೌಡ!&lt;/strong&gt;&lt;/h2&gt;&lt;p&gt;ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಸಚಿವ ರಾಮಲಿಂಗಾರೆಡ್ಡಿ ಪಟ್ಟು ಹಿಡಿದಿದ್ದರು. ಆದರೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೃಷ್ಣ ಬೈರೇಗೌಡರೇ ಸೂಕ್ತ ಎಂಬ ನಂಬಿಕೆಯಿಂದ ಡಿಕೆ ಶಿವಕುಮಾರ್ ಅವರು ಹಠಕ್ಕೆ ಬಿದ್ದು ಇವರಿಗೇ ಜವಾಬ್ದಾರಿ ನೀಡಿದ್ದರು. ಆರಂಭದಲ್ಲಿ ಕಂದಾಯ ಖಾತೆಯ ಮೇಲೆ ಆಸಕ್ತಿ ಹೊಂದಿದ್ದ ಬೈರೇಗೌಡರಿಗೆ, ಬೆಂಗಳೂರು ಅಭಿವೃದ್ಧಿಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು ಕೆಲಸಕ್ಕೆ ಹಚ್ಚಿದ್ದು ಇದೇ ಡಿಕೆಶಿ. ಒಟ್ಟಿನಲ್ಲಿ ಸರ್ಕಾರದ ಕೆಲಸ ಕಾರ್ಯಗಳ ಮೇಲೆ ಹಿಡಿತ ಹೊಂದಿರುವ ಮತ್ತು ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲದ ಕೃಷ್ಣ ಬೈರೇಗೌಡರು ಈಗ ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಸರ್ಕಾರದ ಬಲ ಹೆಚ್ಚಿಸಲಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/cm-dk-shivakumar-most-trusted-aide-krishna-byre-gowda-minister-assigned-another-powerful-portfolio-gkn/articleshow-vv14al6"/>
        </item>
        <item>
            <title><![CDATA[ವಾಲ್ಮೀಕಿ ಹಗರಣ; 'ನಮ್ಮ ಸಮುದಾಯ ಗಮನಿಸುತ್ತಿದೆ, ಸುಮ್ನೆ ಬಿಡಲ್ಲ', ನಾಗೇಂದ್ರ ತಿರುಗೇಟು]]></title>
            <link>https://kannada.asianetnews.com/karnataka-districts/valmiki-corporation-scam-minister-nagendra-says-our-community-is-watching-we-won-t-let-it-slide-sns/articleshow-y22qtk0</link>
            <guid isPermaLink="true">https://kannada.asianetnews.com/karnataka-districts/valmiki-corporation-scam-minister-nagendra-says-our-community-is-watching-we-won-t-let-it-slide-sns/articleshow-y22qtk0</guid>
            <pubDate>Wed, 19 Aug 2026 13:21:14 +0530</pubDate>
            <description><![CDATA[ವಾಲ್ಮೀಕಿ ನಿಗಮ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ತಾನು ದಲಿತ ಸಮುದಾಯಕ್ಕೆ ಸೇರಿದವನಾದ್ದರಿಂದ ಮನುವಾದಿಗಳು ತನ್ನನ್ನು ಸಹಿಸುತ್ತಿಲ್ಲ ಮತ್ತು ಇದು ತನ್ನ ವಿರುದ್ಧದ ಷಡ್ಯಂತ್ರ ಎಂದು ಅವರು ಆರೋಪಿಸಿದ್ದಾರೆ. ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದು, ಸದನದಲ್ಲಿ ಚರ್ಚೆಗೆ ಅವಕಾಶ ನೀಡಿದರೆ ಉತ್ತರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0cfsy2qv11ce0f8shytbwm1,imgname-nagendra-1787125626967.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ವಾಲ್ಮೀಕಿ ನಿಗಮ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟುಹಿಡಿದು ವಿಪಕ್ಷಗಳು ಸದನದಲ್ಲಿ ಹೋರಾಟ ಮುಂದುವರಿಸಿವೆ. ಇದರ ನಡುವೆ ಸುದ್ದಿಗೋಷ್ಠಿ ಮಾಡಿರುವ ನಾಗೇಂದ್ರ ಅವರು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.&lt;/p&gt;&lt;h2&gt;ರಾಜೀನಾಮೆ ಪ್ರಶ್ನೆಯೇ ಇಲ್ಲ: ನಾಗೇಂದ್ರ ಗುಡುಗಿನ ಹಿಂದಿನ ಗುಟ್ಟೇನು?&lt;/h2&gt;&lt;p&gt;ಏಷ್ಯಾನೆಟ್ ಸುವರ್ಣ ನ್ಯೂಸ್&zwnj; ಜೊತೆ ಮಾತನಾಡಿದ ನಾಗೇಂದ್ರ, ನಾನು ಹೈಕಮಾಂಡ್​ಗೆ ಒತ್ತಡ ಹಾಕಿ ಸಚಿವಗಿರಿ ಪಡೆದಿಲ್ಲ. ಇಡೀ ಪ್ರಕರಣದ ಬಗ್ಗೆ ಚರ್ಚೆ ಮಾಡಿ ನನಗೆ ಅವಕಾಶ ಕೊಟ್ಟಿದ್ದಾರೆ. ಸಿಬಿಐನವರು ರಾಜ್ಯಪಾಲರ ಬಳಿ ತನಿಖೆಗೆ ಮನವಿ ಮಾಡಿದ್ದಾರೆ. ಏನೇ ಆದರೂ ನಾನು ತನಿಖೆ ಎದರಿಸುತ್ತೇನೆ. ನಾನು ದಲಿತ ಆ ಕಾರಣಕ್ಕಾಗಿ ದಲಿತನಿಗೆ ಅನ್ಯಾಯ ಮಾಡಬೇಡಿ. ಇಡೀ ಪ್ರಕರಣದಲ್ಲಿ ನನ್ನದೇನು ತಪ್ಪಿಲ್ಲ. ಚರ್ಚೆಗೆ ಬಂದರೆ ಸದನದಲ್ಲಿ ನಾನು ಉತ್ತರ ಕೊಡುತ್ತೇನೆ. ಶ್ರೀರಾಮುಲು ಅವರು ನನಗೆ ರಾಜಕೀಯ ಪ್ರತಿಸ್ಪರ್ಧಿ, ಅವರ ಹೇಳಿಕೆಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ದಲಿತ ಮೀಸಲು ಕ್ಷೇತ್ರದಲ್ಲಿ ಗೆದ್ದು ಬಂದವನು ಎಂದು ಟಾಂಗ್ ನೀಡಿದ್ದಾರೆ.&lt;/p&gt;&lt;h2&gt;ಸದನದಲ್ಲಿ ಪ್ರಕರಣದ ಚರ್ಚೆಗೆ ಅವಕಾಶ ನೀಡಿ&lt;/h2&gt;&lt;p&gt;ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಬಿ ನಾಗೇಂದ್ರ, ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿ ಹಲವು ವಿಚಾರ ಚರ್ಚೆ ಮಾಡಲು ಬಯಸಿದ್ದೇವು. ಆದರೆ ಅಧಿವೇಶನ ನಡೆಯಲು ಪ್ರತಿಪಕ್ಷ ಬಿಡ್ತಾ ಇಲ್ಲ. ನನ್ನ ರಾಜೀನಾಮೆಗೆ ಒತ್ತಾಯ ಮಾಡ್ತಿದ್ದಾರೆ. ಅವರು ಸದನದ ಬಾವಿಗೆ ಇಳಿದಿಲ್ಲ. ತಮ್ಮ ಸ್ಥಾನದಲ್ಲಿ ಇದ್ದು ಘೋಷಣೆ ಹಾಕ್ತಾ ಇದ್ದಾರೆ. ಅವರ ಘೋಷಣೆ ಕೇಳಿ ನನಗೆ ಬೇಸರ ಆಗಿದೆ. ಆದರೆ ನಾನು ನನ್ನ ಸಮಾಜಕ್ಕೆ ತಿಳಿಸಬೇಕಾಗಿದೆ. ಪ್ರಕರಣದ ಬಗ್ಗೆ ನಾನು ಬೆಳಕು ಚೆಲ್ಲಬೇಕಾಗಿದೆ. ಸಿಎಂ, ಸಚಿವರು ಎಲ್ಲಾ ಶಾಸಕರು ನಾವು ಚರ್ಚೆ ಗೆ ರೆಡಿ ಇದ್ದೇವೆ. ಆದರೆ ಅವರು ಚರ್ಚೆಗೆ ಬರುತ್ತಿಲ್ಲ. ಸದನದಲ್ಲಿ ಚರ್ಚೆ ಆಗದ ಕಾರಣಕ್ಕೆ ನಾನು ಮಾಧ್ಯಮಗಳ ಮುಂದೆ ವಿವರಣೆ ನೀಡಬೇಕಾಗಿದೆ ಎಂದು ಹೇಳಿದರು.&lt;/p&gt;&lt;h2&gt;ಹಣ ವಾಪಸ್ ಬಂದಿದೆ&lt;/h2&gt;&lt;p&gt;ವಾಲ್ಮೀಕಿ ನಿಗಮದಿಂದ ಹಣ ಒಂದು ಬ್ಯಾಂಕ್ ಗೆ ಹಣ ವರ್ಗಾವಣೆ ಆಗಿದೆ. 187 ಕೋಟಿ ರೂ ನಮ್ಮ ನಿಗಮದಿಂದ ನನ್ನ ಗಮನಕ್ಕೆ ಬಾರದೇ ಹಣ ವರ್ಗಾವಣೆ ಆಗಿದೆ. ನಿಗಮದ ಅಧ್ಯಕ್ಷರು ಇರುತ್ತಾರೆ. ಆದರೆ ಹಣಕಾಸು ಇಲಾಖೆಯ ಅನುಮತಿ ಪಡೆಯದೇ ಹಣ ವರ್ಗಾವಣೆ ಆಗಿದೆ. ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ತನಿಖೆ ನಡೆದಿದೆ. 187 ಕೋಟಿ ರೂ ಹಣ ಹಸ್ತಾಂತರ ಆದ ಬಗ್ಗೆ ಮಾಹಿತಿ ಬಂದ ನಂತರ, ತಕ್ಷಣ ನಾವು ನಿಗಮದಲ್ಲೇ 100 ಕೋಟಿ ರೂ ನಿಗಮದಲ್ಲೇ ಉಳಿಸುವ ತಿರ್ಮಾನ ಮಾಡಿದೇವು. ಪ್ರಕರಣದ ಬಗ್ಗೆ ಎಸ್ ಐ ಟಿ ತನಿಖೆ ಪಾರದರ್ಶಕ ಆಗಿ ನಡೆಯುವ ಸಲುವಾಗಿ ನಾನು ರಾಜೀನಾಮೆ ನೀಡಿದೆ. ಎಸ್ ಐ ಟಿ ದೇಶ ಮೆಚ್ಚುವ ರೀತಿಯಲ್ಲಿ ತನಿಖೆ ಮಾಡಿದೆ. ವರ್ಗಾವಣೆ ಗೊಂಡಿದ್ದ 87 ಕೋಟಿ ರೂ ಗಳಲ್ಲಿ 48 ಕೋಟಿ ರೂಪಾಯಿ ವಾಪಸ್ ಬಂದಿದೆ ಎಂದು ವಿವರಣೆ ನೀಡಿದರು.&lt;/p&gt;&lt;h2&gt;ನಮ್ಮ ಸಮುದಾಯ ಉತ್ತರ ಕೊಡಲಿದೆ&lt;/h2&gt;&lt;p&gt;ಪ್ರಕರಣದಲ್ಲಿ ಇಡಿ ಎಂಟ್ರಿ ಆಯ್ತು. ಇಡಿ ವಿಚಾರಣೆ ವೇಳೆ ನಡೆದ ವಿದ್ಯಮಾನಗಳ ಬಗ್ಗೆ ಈಗಾಗಲೇ ಹೇಳಿದ್ದೇನೆ. ಸರ್ಕಾರ ಇರದ ಹಾಗೆ ನೋಡಿಕೊಳ್ಳುವ ಷಡ್ಯಂತ್ರ ನಡೆಯಿತು ಅನ್ನೋದನ್ನು ಈಗಾಗಲೇ ತಿಳಿಸಿದ್ದೇನೆ. ದಲಿತ ಸಮೂದಾಯಕ್ಕೆ ಸೇರಿದ ನಾನು ಎರಡನೇ ಬಾರಿ ಮಂತ್ರಿಯಾದೆ. ಅದನ್ನು ಈ ಮನುವಾದಿಗಳು ಸಹಿಸುತ್ತಿಲ್ಲ, ಪರಿಶಿಷ್ಟ ಪಂಗಡಕ್ಕೆ ಸೇರಿದವನು, ಆದಿವಾಸಿ ಮಂತ್ರಿಯಾಗಿದ್ದಕ್ಕೆ ಸಹಿಸುತ್ತಿಲ್ಲ. ಈ ಬೆಳವಣಿಗೆ ಬಗ್ಗೆ ನಮ್ಮ ಸಮಾಜ ನೋಡ್ತಾ ಇದೆ. ಇದನ್ನು ನಮ್ಮ ಜನ ಸುಮ್ಮನೆ ಬಿಡಲ್ಲ. ಒಬ್ಬ ದಲಿತನನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಿದೆ ಅಂತ ನೋಡ್ತಾ ಇದೆ, ಮುಂದೆ ಗೊತ್ತಾಗಲಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.&lt;/p&gt;&lt;h2&gt;ಹುಟ್ಟಿನಲ್ಲಿ ದಲಿತ - ಸಾಯುವಾಗಲೂ ದಲಿತ&lt;/h2&gt;&lt;p&gt;ನಮ್ಮ ವಾಲ್ಮೀಕಿ ಸಮಾಜ ಬಿಜೆಪಿ ನಿಲುವುಗಳನ್ನು ನೋಡ್ತಾ ಇದೆ. ನಮ್ಮ ಸಿಎಂ ಡಿಕೆಶಿ ಸಹ ಯಾವುದೇ ಚರ್ಚೆ ಮಾಡಲು ಬನ್ನಿ ಅಂದಿದ್ದಾರೆ. ನಾವು ಚರ್ಚೆಗೆ ಕರೆದರೂ ಚರ್ಚೆಗೆ ಬರ್ತಿಲ್ಲ. ಒಂದು ಸುಳ್ಳುನ್ನು ಹೇಳಿ ಹೇಳಿ ಸತ್ಯ ಮಾಡಲು ಬಿಜೆಪಿ ಹೊರಟಿದೆ. ನನ್ನ ಯಾಕೆ ವಜಾ ಮಾಡಬೇಕು? ಸಂವಿಧಾನ ನನ್ನ ರಕ್ಷಣೆ ಮಾಡ್ತಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನ ನಮ್ಮ ಕಾಪಾಡಲಿದೆ. ಹೌದು ನಾನು ದಲಿತ, ಹುಟ್ಟಿನಲ್ಲಿ ದಲಿತ - ಸಾಯುವಾಗಲೂ ದಲಿತ. ಕೇಂದ್ರದ ಸಚಿವರು ಸೇರಿದಂತೆ ಬಿಜೆಪಿಯ 126 ಜನರ ಮೇಲೆ ಗಂಭೀರವಾದ ಪ್ರಕರಣ ಇದೆ. ಅವರು ಯಾಕೆ ರಾಜೀನಾಮೆ ಕೊಟ್ಟಿಲ್ಲ? ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಾನು ಈ ಪ್ರಕರಣದಲ್ಲಿ ಅಪರಾಧಿ ಆಗಿಲ್ಲ. ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ರಾಜೀನಾಮೆಗೆ ಸಿದ್ಧ. ಸದನದಲ್ಲಿ ಇದನ್ನು ಹೇಳಲು ಸಹ ಅವಕಾಶ ಕೊಡ್ತಾ ಇಲ್ಲ.&lt;/p&gt;&lt;h2&gt;ಪ್ರಕರಣ ಕೋರ್ಟ್ ನಲ್ಲಿ&zwnj; ಇದ್ದಾಗ ಯಾಕೆ ಮಾತಾಡ್ತಿರಾ?&lt;/h2&gt;&lt;p&gt;ರಾಜ್ಯಪಾಲರು ಯಾಕೆ ನನಗೆ ಪ್ರಮಾಣವಚನ ಕೊಟ್ಟರು? ರಾಜ್ಯಪಾಲರಿಗಿಂತ ಇವರು ದೊಡ್ಡವರಾ? ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷ ಇಲ್ಲ. ವಿಜಯೇಂದ್ರ ಹೇಳಿಕೆಯನ್ನು ನಾನು ಸ್ವಾಗತ ಮಾಡ್ತೇನೆ. ರಾಮ ಯಾರು? ರಾಮರಾಜ್ಯ ಎನು ಅಂತ ಇವರಿಗೆ ಗೊತ್ತಿಲ್ಲ. ನಾವು ವಾಲ್ಮೀಕಿಯ ಸಂತತಿ ಕಾಪಾಡುವ ಕೆಲಸ ಮಾಡ್ತಿದ್ದೇವೆ. ರಾಮನ ಹುಂಡಿ ಹೊಡೆದವರು ಇವರು, ಇದಕ್ಕಿಂತ ದೊಡ್ಡ ಪ್ರಕರಣ? ನಾನು ಬೇಲ್ ಮೇಲೆ ಇರುವುದು ಹೌದು, 126 ಬಿಜೆಪಿ ನಾಯಕರು ಬೇಲ್ ಮೇಲೆ ಇಲ್ವಾ? ಪ್ರಕರಣ ಕೋರ್ಟ್ ನಲ್ಲಿ&zwnj; ಇದ್ದಾಗ ಯಾಕೆ ಮಾತಾಡ್ತಿರಾ? ಇಡಿ ವಿಚಾರಣೆ ವೇಳೆ ತುಂಬಾ ತೊಂದರೆ ಕೊಟ್ಟರು. ಸಿಕ್ಕ ಸಿಕ್ಕವರ ಹೆಸರು ಹೇಳಲು ಒತ್ತಡ ಹಾಕಿದ್ದರು. ಈಗ ಸಿಬಿಐ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರಿಗೆ ಕೇಳಿದೆ, ಆದರೆ ನಾನು ಈ ಪ್ರಕರಣದಲ್ಲಿ ಬೇಲ್ ಪಡೆದಿದ್ದೇನೆ. ಈ ವಿಚಾರ ರಾಜ್ಯಪಾಲರಿಗೆ ವಿಚಾರ ಗೊತ್ತಿದೆ ಎಂದು ಸ್ಪಷ್ಟನೆ ನೀಡಿದರು.&lt;/p&gt;&lt;p&gt;&lt;/p&gt;]]></content:encoded>
            <category>politics</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/valmiki-corporation-scam-minister-nagendra-says-our-community-is-watching-we-won-t-let-it-slide-sns/articleshow-y22qtk0"/>
        </item>
        <item>
            <title><![CDATA[ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಸ್ಪೋಟಕ ರಹಸ್ಯ ಬಯಲು!]]></title>
            <link>https://kannada.asianetnews.com/state/valmiki-corporation-scam-cbi-chargesheet-against-former-minister-b-nagendra-89-crore-fraud/articleshow-zhdtsoz</link>
            <guid isPermaLink="true">https://kannada.asianetnews.com/state/valmiki-corporation-scam-cbi-chargesheet-against-former-minister-b-nagendra-89-crore-fraud/articleshow-zhdtsoz</guid>
            <pubDate>Wed, 19 Aug 2026 12:44:14 +0530</pubDate>
            <description><![CDATA[&lt;p&gt;ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ. ನಿಗಮದ ₹89.63 ಕೋಟಿ ಹಣವನ್ನು 600 ನಕಲಿ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ, ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಲಾಗಿದೆ ಎಂದು ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ನಾಗೇಂದ್ರ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅನುಮತಿಗಾಗಿ ಕಾಯಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cdxfdqmg04kjmeej0k4hs6,imgname-minister-b-nagendra-valmiki-corporation-scam-cbi-chargesheet-1787123645878.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.19): ರಾ&lt;/strong&gt;ಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ (B. Nagendra) ಅವರ ಸುತ್ತ ಕಾನೂನಿನ ಉರುಳು ಮತ್ತಷ್ಟು ಬಿಗಿಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ (CID), ಇ.ಡಿ (ED) ಹಾಗೂ ಸಿಬಿಐ (CBI) ಮೂರೂ ತನಿಖಾ ಸಂಸ್ಥೆಗಳು ತಮ್ಮ ತನಿಖೆಯನ್ನು ಪೂರ್ಣಗೊಳಿಸಿದ್ದು, ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ (Chargesheet) ಬೆಚ್ಚಿಬೀಳಿಸುವ ಅಂಶಗಳು ಬಹಿರಂಗಗೊಂಡಿವೆ.&lt;/p&gt;&lt;p&gt;ಕಳೆದ ವರ್ಷ ಇ.ಡಿ ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್&zwnj;ಶೀಟ್ ಸಲ್ಲಿಸಿ, ರಾಜ್ಯಪಾಲರಿಂದ ಪ್ರಾಸಿಕ್ಯೂಷನ್&zwnj;ಗೆ ಅನುಮತಿ ಪಡೆದಿದ್ದರು. ಇದೀಗ ಎರಡು ತಿಂಗಳ ಹಿಂದೆ ಸಿಬಿಐ ಕೂಡ ಚಾರ್ಜ್&zwnj;ಶೀಟ್ ಸಲ್ಲಿಸಿದ್ದು, ಸದ್ಯ ಬಿ. ನಾಗೇಂದ್ರ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ.&lt;/p&gt;&lt;h2&gt;&lt;strong&gt;ಸಿಬಿಐ ಚಾರ್ಜ್&zwnj;ಶೀಟ್&zwnj;ನಲ್ಲಿರುವ 13 ಪ್ರಮುಖ ಆರೋಪಿಗಳು ಯಾರು?&lt;/strong&gt;&lt;/h2&gt;&lt;p&gt;ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಸಚಿವ ಬಿ. ನಾಗೇಂದ್ರ ಅವರೊಂದಿಗೆ ಒಟ್ಟು 13 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ:&lt;/p&gt;&lt;ol&gt; &lt;li&gt;ಬಿ. ನಾಗೇಂದ್ರ (ಸಚಿವರು)&lt;/li&gt; &lt;li&gt;ನೆಕ್ಕಂಟಿ ನಾಗರಾಜ್ (ನಾಗೇಂದ್ರ ಅವರ ಆಪ್ತ)&lt;/li&gt; &lt;li&gt;ಸತ್ಯನಾರಾಯಣ ವರ್ಮಾ&lt;/li&gt; &lt;li&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಮುಖ ಅಧಿಕಾರಿಗಳು&lt;/li&gt; &lt;li&gt;ಬೆಂಗಳೂರಿನ ಎಂ.ಜಿ. ರಸ್ತೆಯ &lt;strong&gt;ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ&lt;/strong&gt; ಶಾಖೆಯ ಸಿಬ್ಬಂದಿಗಳು.&lt;/li&gt;&lt;/ol&gt;&lt;h2&gt;&lt;strong&gt;ಹಗರಣದ ಹಣ ಬಳಕೆ: ಚಾರ್ಜ್&zwnj;ಶೀಟ್&zwnj;ನಲ್ಲೇನಿದೆ ಸ್ಪೋಟಕ ಮಾಹಿತಿ?&lt;/strong&gt;&lt;/h2&gt;&lt;p&gt;&lt;strong&gt;₹89.63 ಕೋಟಿ ಅಕ್ರಮ ವರ್ಗಾವಣೆ: &lt;/strong&gt;ನಿಗಮಕ್ಕೆ ಸೇರಿದ ಬರೋಬ್ಬರಿ ₹89.63 ಕೋಟಿ ಸಾರ್ವಜನಿಕರ ಹಣವನ್ನು ನಕಲಿ ಚೆಕ್&zwnj;ಗಳು ಮತ್ತು ಆರ್&zwnj;ಟಿಜಿಎಸ್ (RTGS) ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ.&lt;/p&gt;&lt;p&gt;&lt;strong&gt;600 ಬ್ಯಾಂಕ್ ಖಾತೆಗಳ ಜಾಲ: &lt;/strong&gt;ತನಿಖಾಧಿಕಾರಿಗಳ ಕಣ್ಣು ತಪ್ಪಿಸಲು ಈ ಬೃಹತ್ ಮೊತ್ತವನ್ನು ಹೈದರಾಬಾದ್ ಮತ್ತು ಇತರ ನಗರಗಳ ಸುಮಾರು 600 ನಕಲಿ ಹಾಗೂ ಬೇನಾಮಿ ಖಾತೆಗಳಿಗೆ ಹಂಚಿಕೆ ಮಾಡಲಾಗಿತ್ತು.&lt;/p&gt;&lt;p&gt;&lt;strong&gt;ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ: &lt;/strong&gt;ಅಕ್ರಮವಾಗಿ ಲೂಟಿ ಮಾಡಿದ ಹಣದ ಬಹುಪಾಲು ಮೊತ್ತವನ್ನು ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಚುನಾವಣೆಯ ವೆಚ್ಚಕ್ಕಾಗಿ ಮತ್ತು ಮತದಾರರಿಗೆ ಹಂಚಲು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಬಿಐ ಉಲ್ಲೇಖಿಸಿದೆ.&lt;/p&gt;&lt;p&gt;&lt;strong&gt;ಕಾರು, ಬೆಳ್ಳಿ ಖರೀದಿ: &lt;/strong&gt;ಹಣವನ್ನು ನಗದಾಗಿ ಡ್ರಾ ಮಾಡಿ ಐಷಾರಾಮಿ ವಾಹನಗಳು, ಅಪಾರ ಪ್ರಮಾಣದ ಬೆಳ್ಳಿ ಆಭರಣಗಳು ಮತ್ತು ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ತನಿಖೆಯಲ್ಲಿ ಸಾಬೀತಾಗಿದೆ.&lt;/p&gt;&lt;p&gt;ಇದುವರೆಗೂ ಸಿಬಿಐ 3 ಚಾರ್ಜ್ ಶೀಟ್ ಸಲ್ಲಿಸಿದೆ. ಆದರೆ, ಇದೀಗ ಸಚಿವ ಬಿ. ನಾಗೇಂದ್ರ ವಿರುದ್ಧ ಚಾರ್ಜ್ ಫ್ರೇಮ್ ಮಾಡಲು ರಾಜ್ಯಪಾಲರ ಅನುಮತಿ ಕೋರಲಾಗಿದೆ. ಪ್ರಸ್ತುತ ನಾಗೇಂದ್ರ ಅವರು ಹಾಲಿ ಸಚಿವರಾಗಿದ್ದು, ಜನಪ್ರತಿನಿಧಿಯಾಗಿ ಸೇವೆ ಮಾಡುತ್ತಿರುವುದರಿಂದ ಸೆಕ್ಷನ್ 19ರ ಅಡಿಯಲ್ಲಿ ಗವರ್ನರ್ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ 3 ದಿನದ ಹಿಂದೆಯೇ ಗವರ್ನರ್ ಗೆ ಪತ್ರ ಬರೆದಿರುವ ಸಿಬಿಐ&lt;/p&gt;&lt;p&gt;ರಾಜ್ಯಪಾಲ ಥಾವರ್&zwnj;ಚಂದ್ ಗೆಹ್ಲೋಟ್ ಅವರು ಸಿಬಿಐ ಸಲ್ಲಿಸಿರುವ ಪ್ರಾಸಿಕ್ಯೂಷನ್ ಅನುಮತಿಗೆ ಗ್ರೀನ್ ಸಿಗ್ನಲ್ ನೀಡಿದರೆ, ಬಿ. ನಾಗೇಂದ್ರ ಅವರ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ಅಧಿಕೃತ ವಿಚಾರಣೆ ಆರಂಭವಾಗಲಿದ್ದು, ಅವರ ಸಂಕಷ್ಟ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/valmiki-corporation-scam-cbi-chargesheet-against-former-minister-b-nagendra-89-crore-fraud/articleshow-zhdtsoz"/>
        </item>
    </channel>
</rss>
