<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 11 Sep 2026 06:59:17 +0530</lastBuildDate>
        <atom:link href="https://kannada.asianetnews.com/rss/politics" rel="self" type="application/rss+xml"/>
        <item>
            <title><![CDATA[ಕಾಂಗ್ರೆಸ್‌ನಲ್ಲಿ ' ಸರ್ಕಾರಿ ಬಂಗಲೆ' ವಾರ್: ಮಹದೇವಪ್ಪ ಮನೆಯಲ್ಲಿದ್ದಾಗಲೇ ಪೇಂಟಿಂಗ್ ಆರಂಭಿಸಿದ ಭೈರತಿ ಸುರೇಶ್!]]></title>
            <link>https://kannada.asianetnews.com/gallery/state/karnataka-congress-bungalow-war-byrathi-suresh-vs-hc-mahadevappa-crescent-road-bengaluru-sat-01e0clx</link>
            <guid isPermaLink="true">https://kannada.asianetnews.com/gallery/state/karnataka-congress-bungalow-war-byrathi-suresh-vs-hc-mahadevappa-crescent-road-bengaluru-sat-01e0clx</guid>
            <pubDate>Mon, 07 Sep 2026 12:30:18 +0530</pubDate>
            <description><![CDATA[ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಗಾಗಿ ಕಾಂಗ್ರೆಸ್ ನಾಯಕರಾದ ಎಚ್.ಸಿ. ಮಹದೇವಪ್ಪ ಮತ್ತು ಭೈರತಿ ಸುರೇಶ್ ನಡುವೆ ವಿವಾದ ಭುಗಿಲೆದ್ದಿದೆ. ಮಹದೇವಪ್ಪನವರು ನಿವಾಸ ಖಾಲಿ ಮಾಡುವ ಮುನ್ನವೇ, ಸುರೇಶ್ ಅವರು ನವೀಕರಣ ಕಾರ್ಯ ಆರಂಭಿಸಿ, ಶೆಡ್ ಕೆಡವಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1xaa55qeshqpne9r12q9j57,imgname-byrathi-basavaraj-vs-hc-mahadevappa-1788764034231.jpg" type="image/jpeg" height="390" width="690"/>
            <content:encoded><![CDATA[ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಗಾಗಿ ಕಾಂಗ್ರೆಸ್ ನಾಯಕರಾದ ಎಚ್.ಸಿ. ಮಹದೇವಪ್ಪ ಮತ್ತು ಭೈರತಿ ಸುರೇಶ್ ನಡುವೆ ವಿವಾದ ಭುಗಿಲೆದ್ದಿದೆ. ಮಹದೇವಪ್ಪನವರು ನಿವಾಸ ಖಾಲಿ ಮಾಡುವ ಮುನ್ನವೇ, ಸುರೇಶ್ ಅವರು ನವೀಕರಣ ಕಾರ್ಯ ಆರಂಭಿಸಿ, ಶೆಡ್ ಕೆಡವಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.&lt;img&gt;&lt;p&gt;&lt;strong&gt;ಬೆಂಗಳೂರು (ಸೆ.07): ಆ&lt;/strong&gt;ಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ನಡುವೆ ಇದೀಗ 'ಸರ್ಕಾರಿ ಬಂಗಲೆ' ಕಿತ್ತಾಟ ತಾರಕಕ್ಕೇರಿದೆ. ರಾಜಧಾನಿಯ ಪ್ರತಿಷ್ಠಿತ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸವನ್ನು ಮಾಜಿ ಸಚಿವ, ಹಿರಿಯ ಮುಖಂಡ ಡಾ. ಎಚ್&zwnj;.ಸಿ. ಮಹದೇವಪ್ಪ ಅವರು ಖಾಲಿ ಮಾಡುವ ಮುನ್ನವೇ, ಹಾಲಿ ಸಚಿವ ಭೈರತಿ ಸುರೇಶ್ ಆ ಮನೆಯ ನವೀಕರಣ ಕಾರ್ಯ ಆರಂಭಿಸಿರುವುದು ತೀವ್ರ ವಿವಾದ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಮಹದೇವಪ್ಪ ಅವರು ಇನ್ನೂ ಮನೆಯಲ್ಲೇ ವಾಸ್ತವ್ಯ ಹೂಡಿರುವಾಗಲೇ ಮನೆಗೆ ಪೇಂಟಿಂಗ್ ಮಾಡಿಸುವುದು ಹಾಗೂ ಸಾರ್ವಜನಿಕರ ಭೇಟಿಗಾಗಿ ನಿರ್ಮಿಸಲಾಗಿದ್ದ ಶೆಡ್ ಅನ್ನು ಒಡೆಸಿ ಹಾಕಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಭಾರೀ ಮುಜುಗರ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ಸದ್ಯ ಡಾ. ಎಚ್.ಸಿ. ಮಹದೇವಪ್ಪ ವಾಸವಿರುವ ಕ್ರೆಸೆಂಟ್ ರಸ್ತೆಯ ಸರ್ಕಾರಿ ನಿವಾಸವು ಹಾಲಿ ಸಚಿವ ಭೈರತಿ ಸುರೇಶ್ ಅವರಿಗೆ ಹಂಚಿಕೆಯಾಗಿದೆ (Allot). ನಿಯಮಾವಳಿಗಳ ಪ್ರಕಾರ ಯಾವುದೇ ಸಚಿವರು ಅಥವಾ ಶಾಸಕರು ಸರ್ಕಾರಿ ನಿವಾಸವನ್ನು ತೆರವುಗೊಳಿಸಲು ಕನಿಷ್ಠ 6 ತಿಂಗಳ ಕಾಲಾವಕಾಶವಿರುತ್ತದೆ. ಆದರೆ, ಮಹದೇವಪ್ಪ ಅವರು ಮನೆ ಹುಡುಕಿ ಖಾಲಿ ಮಾಡುವ ಮುನ್ನವೇ ಭೈರತಿ ಸುರೇಶ್ ಅತಿಯಾದ ಆತುರ ತೋರಿದ್ದಾರೆ ಎನ್ನಲಾಗಿದೆ. ಖುದ್ದು ಭೈರತಿ ಸುರೇಶ್ ಅವರೇ ಸ್ಥಳಕ್ಕೆ ಭೇಟಿ ನೀಡಿ, ಮಹದೇವಪ್ಪ ಅವರು ಸಾರ್ವಜನಿಕರನ್ನು ಭೇಟಿ ಮಾಡುತ್ತಿದ್ದ ಮೀಟಿಂಗ್ ಹಾಲ್/ಶೆಡ್ ಅನ್ನು ನೆಲಸಮ ಮಾಡಿಸಿದ್ದಾರೆ.&lt;/p&gt;&lt;p&gt;ಮಹದೇವಪ್ಪ ಅವರು ಮನೆಯ ಒಳಗಿರುವಾಗಲೇ ಹೊರಗಡೆ ಪೇಂಟಿಂಗ್ ಹಾಗೂ ನವೀಕರಣ ಕಾಮಗಾರಿ ಶುರುಮಾಡಿಸಲಾಗಿದೆ. ಅಷ್ಟೇ ಅಲ್ಲದೆ, ಮಹದೇವಪ್ಪ ಅವರ ಮನೆಯ ಸಿಬ್ಬಂದಿಗೆ ಭೈರತಿ ಸುರೇಶ್ ಆವಾಜ್ ಹಾಕಿದ್ದು, ಕೇವಲ 2 ದಿನಗಳಲ್ಲಿ ಮನೆ ಖಾಲಿ ಮಾಡುವಂತೆ ತಾಕೀತು ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.&lt;/p&gt;&lt;img&gt;&lt;p&gt;ಭೈರತಿ ಸುರೇಶ್ ಅವರ ಈ ಅಸಹನೆ ಮತ್ತು ವರ್ತನೆಗೆ ಅತ್ಯಂತ ಸಂಯಮ ಹಾಗೂ ಮಾರ್ಮಿಕ ವ್ಯಂಗ್ಯದ ಮೂಲಕವೇ ಡಾ. ಎಚ್.ಸಿ. ಮಹದೇವಪ್ಪ ಪ್ರತ್ಯುತ್ತರ ನೀಡಿದ್ದಾರೆ. 'ಮನೆ ಭೈರತಿ ಸುರೇಶ್&zwnj;ಗೆ ಅಲಾಟ್ ಆಗಿದೆ. ಖಾಲಿ ಮಾಡಿ ಎಂದಿದ್ದಾರೆ, ಖಾಲಿ ಮಾಡಬೇಕಲ್ಲವೇ? ಪಾಪ... ಅವರಿಗೆ ಬಹಳ ಕಷ್ಟ ಇರಬಹುದು, ಬಹಳ ಬೇಗ ಇಲ್ಲಿಗೆ ಬರಬೇಕೆಂಬ ಆತುರ ಇರಬಹುದು. ಇಲ್ಲಿ ಹಿರಿಯ-ಕಿರಿಯ ನಾಯಕ ಎಂಬ ಪ್ರಶ್ನೆಯೇ ಬರಲ್ಲ. ಅವರು ಮಿನಿಸ್ಟರ್ ಇದ್ದಾರೆ, ಅವರ ಕೆಲಸ ಕಾರ್ಯಗಳಿಗೆ ಅಡ್ಡಿ ಆಗಬಾರದು. ನಾನು ಬಾಡಿಗೆ ಮನೆ ಹುಡುಕುತ್ತಿದ್ದೇನೆ, ಸಿಕ್ಕ ತಕ್ಷಣ ಖಾಲಿ ಮಾಡಿಕೊಡುತ್ತೇನೆ. ಪಾಪ ಅವರು ಕೇಳ್ತಿದ್ದಾರೆ, ಅವರಿಗೆ ತೊಂದರೆ ಆಗಬಾರದು ಎಂದು ಬಿಡುತ್ತಿದ್ದೇನೆ. ನಾನು ಸರ್ಕಾರಿ ಕೆಲಸದಲ್ಲಿದ್ದೆ, ಮನೆ ಕೊಟ್ಟಿದ್ದರು. ಈಗ ನಾನಿಲ್ಲ, ಬೇಗ ಬಿಡ್ತೇನೆ. ಇದರಲ್ಲಿ ನಾನು ಯಾರ ತಪ್ಪನ್ನೂ ಹುಡುಕಲ್ಲ' ಎಂದು ಕುಟುಕಿದ್ದಾರೆ.&lt;/p&gt;&lt;p&gt;ಪಕ್ಷದ ಹಿರಿಯ ನಾಯಕನೊಬ್ಬ ಇನ್ನೂ ಮನೆಯಲ್ಲೇ ಇರುವಾಗ ಈ ರೀತಿ ದರ್ಪ ಪ್ರದರ್ಶಿಸಿ, ಮನೆಗೆ ಬಣ್ಣ ಬಳಿಯಲು ಮುಂದಾಗಿರುವ ಕಿರಿಯ ಸಚಿವ ಭೈರತಿ ಸುರೇಶ್ ಅವರ ನಡೆಗೆ ಸ್ವಪಕ್ಷೀಯರೇ ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-congress-bungalow-war-byrathi-suresh-vs-hc-mahadevappa-crescent-road-bengaluru-sat-01e0clx"/>
        </item>
        <item>
            <title><![CDATA[ತುಮಕೂರು: ಈ ಸರ್ಕಾರದಲ್ಲಿ ಅನುದಾನ ತರಲು ಮುಖ್ಯಮಂತ್ರಿಗೇ ಲಂಚ ಕೊಡಬೇಕು! ಶಾಸಕನ ಹೇಳಿಕೆ ಸಂಚಲನ]]></title>
            <link>https://kannada.asianetnews.com/politics/turuvekere-mla-mt-krishnappa-serious-allegation-13-per-cents-bribe-against-govt-rav/articleshow-50gby5q</link>
            <guid isPermaLink="true">https://kannada.asianetnews.com/politics/turuvekere-mla-mt-krishnappa-serious-allegation-13-per-cents-bribe-against-govt-rav/articleshow-50gby5q</guid>
            <pubDate>Thu, 10 Sep 2026 07:49:56 +0530</pubDate>
            <description><![CDATA[&lt;p&gt;ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಸರ್ಕಾರದ ಅನುದಾನ ಪಡೆಯಲು 13% ಲಂಚ ನೀಡಬೇಕೆಂದು ಗಂಭೀರ ಆರೋಪ ಮಾಡಿದ್ದಾರೆ. ತಾಲೂಕಿನ ಕಾಮಗಾರಿಗಳ ವಿಳಂಬ ಮತ್ತು ಇತರ ಸಮಸ್ಯೆಗಳಿಗೆ ತಮಗೂ ಸಂಬಂಧವಿಲ್ಲ ಎಂದಿರುವ ಅವರು, ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವಂತೆ ಕಾಂಗ್ರೆಸ್ ನಾಯಕರಿಗೆ ಸವಾಲು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m24he4ta80wspy5hztwx3s1j,imgname-karnataka-politics--2--1789006385994.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುರುವೇಕೆರೆ (ಸೆ.10): &lt;/strong&gt;ಈ ಸರ್ಕಾರದಲ್ಲಿ ಅನುದಾನ ತರಬೇಕೆಂದರೆ ಮುಲಾಜಿಲ್ಲದೇ 13 ಪರ್ಸೆಂಟ್ ಲಂಚ ಕೊಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಗುತ್ತಿಗೆದಾರರು ಮುಖ್ಯಮಂತ್ರಗೆ ಎಷ್ಟು ಪಾಲು ಕೊಡಬೇಕು?&lt;/h2&gt;&lt;p&gt;ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇಲ್ಲಿಯ ಕಾಂಗ್ರೆಸ್ಸಿಗರು ಕಾಂಗ್ರೆಸ್ ಸರ್ಕಾರದ ವಿರುದ್ಧವೇ ದನಿ ಎತ್ತಿರುವುದು ಸ್ವಾಗತಾರ್ಹ. ಕೆಆರ್&zwnj;ಐಡಿಎಲ್ ಕಾಮಗಾರಿಯನ್ನು ತಾಲೂಕಿನಲ್ಲಿ ಮಾಡಲು ಗುತ್ತಿಗೆದಾರರು ಮುಖ್ಯಮಂತ್ರಿಗೆ ಎಷ್ಟು ಪಾಲು ಕೊಡಬೇಕು ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತಿದೆಯಾ?. ಅಷ್ಟೊಂದು ಲಂಚ ಕೊಟ್ಟು ಗುತ್ತಿಗೆದಾರ ಕೆಲಸ ಮಾಡು ಎಂದರೆ ಹೇಗೆ ಸಾಧ್ಯ?. ಕೆಆರ್&zwnj;ಐಡಿಎಲ್&zwnj;ನ ಕೆಲಸಗಳನ್ನು ಭೂ ಸೇನಾ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ವಹಿಸಿದೆ. ಅದಕ್ಕೂ ನನಗೂ ಸಂಬಂಧವಿಲ್ಲ. ತಾಕತ್ತಿದ್ದರೆ ಆ ಎಲ್ಲಾ ಕಾಮಗಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿ. ಮುಖ್ಯಮಂತ್ರಿಗಳಿಗೇ ದೂರು ಸಲ್ಲಿಸಲಿ. ಅದು ಬಿಟ್ಟು ನನ್ನನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.&lt;/p&gt;&lt;p&gt;ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತ ಕುಮಾರ್ ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಅವರು ಆನೇಕೆರೆಯಲ್ಲಿ ಗೋಮಾಳವನ್ನು ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆಂಬ ಮಾಹಿತಿ ಇದೆ. ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಬಗ್ಗೆ ಮಾತನಾಡುವುದು ಸರಿಯಲ್ಲ.&lt;/p&gt;&lt;h3&gt;ಈ ಗೊಡ್ಡು ಸರ್ಕಾರದಲ್ಲಿ ಹಣ ಎಲ್ಲಿದೆ?&lt;/h3&gt;&lt;p&gt;ಜಿಪಂ ಮತ್ತು ತಾಪಂನಲ್ಲಿ ಯಾವ ಅನುದಾನ ಬಿಡುಗಡೆ ಆಗಿದೆ ಎಂಬುದನ್ನು ವಸಂತಕುಮಾರ್ ಬಹಿರಂಗಪಡಿಸಬೇಕು. ಈ ಗೊಡ್ಡು ಸರ್ಕಾರದಲ್ಲಿ ಹಣ ಎಲ್ಲಿದೆ? ಎಂದರು. ಪಟ್ಟಣದಲ್ಲಿರುವ ವಾಣಿಜ್ಯ ಸಂಕೀರ್ಣ ಪ್ರಾರಂಭವಾಗದೇ ಇರುವುದಕ್ಕೆ ನಾನು ಕಾರಣವಲ್ಲ. ಪಂಚಾಯಿತಿ ಆಡಳಿತಾಧಿಕಾರಿಗಳಾಗಿರುವ ತಹಸೀಲ್ದಾರ್ ಮತ್ತು ಸಿಇಒ ಅವರೇ ಹೊಣೆ. ಈಗಾಗಲೇ ಬಾಡಿಗೆ ಕರಾರು ಪಡೆದಿರುವವರು ತಮ್ಮ ಅಂಗಡಿ ಓಪನ್ ಮಾಡಲಿ. ತಾನೇ ತಾನಾಗಿ ಬೀದಿಬದಿ ವ್ಯಾಪಾರಿಗಳು ಅಲ್ಲಿಂದ ತಮ್ಮ ಅಂಗಡಿ ತೆರವು ಮಾಡುತ್ತಾರೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸಮಜಾಯಿಶಿ ನೀಡಿದರು.&lt;/p&gt;&lt;h3&gt;ರಾಜಕೀಯ ದ್ವೇಷಕ್ಕೆ ನನ್ನನ್ನು ದೂರುವುದು ಸರಿಯಲ್ಲ&lt;/h3&gt;&lt;p&gt;ಒಳಚರಂಡಿ ವ್ಯವಸ್ಥೆ ಜಾರಿ ಮಾಡಿರುವುದು ಸರ್ಕಾರ. ಟೆಂಡರ್&zwnj;ನಲ್ಲಿ ಕೂಗಿಕೊಂಡಿರುವವರ ಜವಾಬ್ದಾರಿ ಅದು. ಹೊಟ್ಟೆಕಿಚ್ಚಿಗೆ, ರಾಜಕೀಯ ದ್ವೇಷಕ್ಕೆ ನನ್ನನ್ನು ದೂರುವುದು ಸರಿಯಲ್ಲ. ಗ್ರಾಮ ದೇವತೆ ಉಡುಸಲಮ್ಮ ದೇವಾಲಯದ ಹಿಂಭಾಗ ಕೆರೆ ಒತ್ತುವರಿ ಆಗಿದ್ದರೆ ಕಾಂಗ್ರೆಸ್ಸಿಗರು ಭೂಮಾಪನ ಇಲಾಖೆಗೆ ದೂರು ಸಲ್ಲಿಸಿ ಅಳತೆ ಮಾಡಿಸಲಿ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಸುಖಾಸುಮ್ಮನೆ ನಮ್ಮನ್ನು ಗುರಿ ಮಾಡಿ ಮಾತನಾಡುವುದು ಸರಿಯಲ್ಲ. ವಿನಾ ಕಾರಣ ತಮ್ಮ ವಿರುದ್ಧ ದೂರಿದರೆ ನಾನು ಸುಮ್ಮನೆ ಕೂರುವುದಿಲ್ಲ. ನಾನೂ ಸಹ ಮುಂದೆ ಏನು ಮಾಡುತ್ತೇನೆ ಎಂಬುದನ್ನು ಕಾದು ನೋಡಲಿ ಎಂದು ಎಚ್ಚರಿಸಿದರು.&lt;/p&gt;&lt;p&gt;ತಾಲೂಕಿನಲ್ಲಿ ಕಾಂಗ್ರೆಸ್ ಸರ್ಕಾರ ಹಾಕಿರುವ ಅಧಿಕಾರಿಗಳಿರುವುದು. ನಾನ್ಯಾರನ್ನೂ ಲೆಟರ್ ಕೊಟ್ಟು ಹಾಕಿಸಿಕೊಂಡಿಲ್ಲ. ಅವರು ಲಂಚ ಪಡೆಯುತ್ತಿದ್ದರೆ, ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಹಿಡಿಸಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಾಂಗ್ರೆಸ್ ನಾಯಕರಿಗೆ ಸವಾಲೆಸೆದರು. ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ರಂಜಿತ್, ಮುಖಂಡರಾದ ವಿಜಯೇಂದ್ರ, ಪರಮೇಶ್ ಉಪಸ್ಥಿತರಿದ್ದರು.&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/turuvekere-mla-mt-krishnappa-serious-allegation-13-per-cents-bribe-against-govt-rav/articleshow-50gby5q"/>
        </item>
        <item>
            <title><![CDATA[ಡಿಕೆಶಿ 100 ದಿನದ ಸರ್ಕಾರ ಸರಿದಾರಿಯಲ್ಲಿದೆ, ಬರ ನಿರ್ವಹಣೆಗೆ ಕೇಂದ್ರದ ಹಣ ಕಾಯಬೇಡಿ: ಮಾಜಿ ಸಿಎಂ ಸಿದ್ದರಾಮಯ್ಯ]]></title>
            <link>https://kannada.asianetnews.com/state/siddaramaiah-lauds-cm-dk-shivakumar-govt-100-days-drought-relief-karnataka-sat/articleshow-7a3edw1</link>
            <guid isPermaLink="true">https://kannada.asianetnews.com/state/siddaramaiah-lauds-cm-dk-shivakumar-govt-100-days-drought-relief-karnataka-sat/articleshow-7a3edw1</guid>
            <pubDate>Fri, 11 Sep 2026 06:07:12 +0530</pubDate>
            <description><![CDATA[ಡಿ.ಕೆ.ಶಿವಕುಮಾರ್&zwnj; ನೇತೃತ್ವದ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರವು ಸರಿದಾರಿಯಲ್ಲಿದೆ ಎಂದು ಶ್ಲಾಘಿಸಿದರು. ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಿ, ಪ್ರಣಾಳಿಕೆಯ ಉಳಿದ ಭರವಸೆಗಳನ್ನು ಈಡೇರಿಸುವಂತೆ ಮತ್ತು ಬರ ನಿರ್ವಹಣೆಗೆ ಕೇಂದ್ರವನ್ನು ಅವಲಂಬಿಸದಂತೆ ಸಲಹೆ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m26y7g3kw7361y4tcyb96fkn,imgname-dk-shivakumar-siddaramaiah--1--1789086908529.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.11): &lt;/strong&gt;ಡಿ.ಕೆ.ಶಿವಕುಮಾರ್&zwnj; ಅವರ ನೇತೃತ್ವದ ಸರ್ಕಾರ ಸರಿದಾರಿಯಲ್ಲಿ ನಡೆಯುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಮುಂದುವರಿಕೆ ಜೊತೆಗೆ ನಾನು ರೂಪಿಸಿದ ಹೊಸ ಯೋಜನೆಗಳನ್ನೂ ಅನುಷ್ಠಾನಗೊಳಿಸಲಿ. ಉಳಿದ ಅಧಿಕಾರಾವಧಿಯಲ್ಲಿ ಪ್ರಣಾಳಿಕೆಯಲ್ಲಿ ಜನರಿಗೆ ಪಕ್ಷ ನೀಡಿದ್ದ ಇತರೆ ಎಲ್ಲಾ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.&lt;/p&gt;&lt;p&gt;ವಿಧಾನಸೌಧದ ಬ್ಯಾಂಕ್ವೆಟ್ ಹಾಲ್&zwnj;ನಲ್ಲಿ ಗುರುವಾರ ಆಯೋಜಿಸಿದ್ದ &lsquo;ದೃಢ ಕರ್ನಾಟಕದ ಸಂಕಲ್ಪ-100 ದಿನಗಳ ಯಶಸ್ವಿ ಪೂರೈಕೆ&rsquo; ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್&zwnj; ನೇತೃತ್ವದ ಸರ್ಕಾರ ಅನೇಕ ಹೊಸ ಚಿಂತನೆಗಳು ಹಾಗೂ ಹೊಸ ಕಾರ್ಯಕ್ರಮಗಳನ್ನು ಜನರಿಗೆ ನೀಡುವ ಕೆಲಸ ಮಾಡುತ್ತಿದೆ. ಈ ಸರ್ಕಾರ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎಂದು ನನಗೆ ಅನಿಸುತ್ತಿದೆ. ಸರ್ಕಾರ 100 ದಿನಗಳನ್ನು ಪೂರೈಸಿರುವ ಕಾರ್ಯಕ್ರಮ ಸಂಭ್ರಮಾಚರಣೆಯಲ್ಲ. ಈ ನೂರು ದಿನಗಳಲ್ಲಿ ನಾವು ಸರಿ ದಾರಿಯಲ್ಲಿ ನಡೆಯುತ್ತಿದ್ದೇವೋ, ಇಲ್ಲವೋ ಎಂಬುದನ್ನು ಜನರ ಮುಂದಿಡುವ ಒಂದು ಜವಾಬ್ದಾರಿ. ಆ ಜವಾಬ್ದಾರಿಯನ್ನು ಸರ್ಕಾರ ಮಾಡುತ್ತಿದೆ ಎಂದರು.&lt;/p&gt;&lt;p&gt;ಕಾಂಗ್ರೆಸ್&zwnj; ಪಕ್ಷ ಮಾತ್ರ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಬಜೆಟ್&zwnj; ರೂಪಿಸುತ್ತದೆ. ಉಳಿದ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಬಳಿಕ ಪ್ರಣಾಳಿಕೆಯನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಪ್ರಣಾಳಿಕೆ ಭರವಸೆ ಈಡೇರಿಸಲು ಐದು ವರ್ಷಗಳ ಅವಕಾಶವಿರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್&zwnj; ಅಧಿಕಾರಕ್ಕೆ ಬಂದ ಬಳಿಕ ನಾನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್&zwnj; ಉಪಮುಖ್ಯಮಂತ್ರಿಯಾಗಿ ಪಂಚ ಗ್ಯಾರಂಟಿ ಯೋಜನೆಗಳು ಸೇರಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಹಲವು ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೆವು. ಮೂರು ವರ್ಷಗಳ ಬಳಿಕ ಈಗ ಡಿ.ಕೆ.ಶಿವಕುಮಾರ್&zwnj; ಅವರು ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಿದ್ದಾರೆ. ಗ್ಯಾರಂಟಿಗಳನ್ನು ಮುಂದುವರೆಸಿದ್ದಾರೆ. ಜೊತೆಗೆ ಭೂ ಗ್ಯಾರಂಟಿ, ಸಿಎಂ ನೇಗಿಲ ಯೋಗಿ ಸೇರಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ಅವುಗಳ ಜೊತೆಗೆ ಉಳಿದ ಅಧಿಕಾರಾವಧಿಯಲ್ಲಿ ಪ್ರಣಾಳಿಕೆಯ ಬಾಕಿ ಇರುವ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದರು.&lt;/p&gt;&lt;h2&gt;&lt;strong&gt;ಪ್ರತಿಪಕ್ಷಗಳ ಟೀಕೆಗೆ ಬೆಲೆ ಬೇಡ:&lt;/strong&gt;&lt;/h2&gt;&lt;p&gt;ನಾವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಅವುಗಳ ಜಾರಿ ಸಾಧ್ಯವಿಲ್ಲ. ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ, ಅಭಿವೃದ್ದಿಗೆ ಹಣ ಇರುವುದಿಲ್ಲ ಎಂದು ಪ್ರಧಾನಮಂತ್ರಿ ಆದಿಯಾಗಿ ಟೀಕಿಸುತ್ತಿದ್ದ ಬಿಜೆಪಿಯವರು ನಂತರ ನಮ್ಮ ಯೋಜನೆಗಳನ್ನೇ ಬೇರೆ ರಾಜ್ಯಗಳಲ್ಲಿ ನಕಲು ಮಾಡಿದರು. ಮೂರು ವರ್ಷಗಳಿಗೂ ಹೆಚ್ಚು ಕಾಲ ಯಶಸ್ವಿಯಾಗಿ ನಾನು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಈಗ ಡಿ.ಕೆ.ಶಿವಕುಮಾರ್&zwnj; ಅವರೂ ಅವನ್ನು ಮುಂದುವರೆಸಿದ್ದಾರೆ. ಪ್ರತೀ ವರ್ಷ 52 ಸಾವಿರ ಕೋಟಿ ರು. ವೆಚ್ಚವಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಯಾವುದೂ ಕುಂಠಿತವಾಗಿಲ್ಲ. ಹಾಗಾಗಿ ಪ್ರತಿಪಕ್ಷಗಳ ಟೀಕೆಗಳಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ. ಎಷ್ಟೇ ಟೀಕೆಗಳು ಬಂದರೂ, ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಯಾಕೆಂದರೆ ಗ್ಯಾರಂಟಿ ಯೋಜನೆಗಳು ಅಸಮಾನತೆಯನ್ನು ತೊಲಗಿಸುವಂತಹ ಕಾರ್ಯಕ್ರಮಗಳಾಗಿವೆ ಎಂದರು.&lt;/p&gt;&lt;h2&gt;&lt;strong&gt;ಬರ ನಿರ್ವಹಣೆಗೆ ಕೇಂದ್ರದ ಹಣ ಕಾಯಬೇಡಿ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಈ ಬಾರಿ ಬರ ಆವರಿಸಿದೆ. ಈಗಾಗಲೇ 101 ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ ಹಲವು ತಾಲೂಕುಗಳ ಅಧ್ಯಯನ ನಡೆಸುತ್ತಿದ್ದೀರಿ. ಬರ ಪರಿಹಾರ, ನಿರ್ವಹಣೆಗೆ ಕೇಂದ್ರದ ನೆರವನ್ನೇ ಸಂಪೂರ್ಣ ನಂಬಿ ಕೂರಬೇಡಿ. ಅವರು ಸೂಕ್ತ ಪರಿಹಾರ ಕೊಡುವ ಭರವಸೆ ಇಲ್ಲ. ರಾಜ್ಯ ಸರ್ಕಾರದಿಂದಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಿ ಎಂದು ಇದೇ ವೇಳೆ ಸಿದ್ದರಾಮಯ್ಯ ಸಲಹೆ ನೀಡಿದರು.&lt;/p&gt;&lt;p&gt;ಕೇಂದ್ರ ಸರ್ಕಾರ ನಿಮ್ಮ ನೆರವಿಗೆ ಧಾವಿಸುತ್ತದೆ ಎಂಬ ನಂಬಿಕೆ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬೇಡಿ. ಕೇಂದ್ರದ ನೆರವಿಗಾಗಿ ಕಾಯುತ್ತಾ ಕುಳಿತುಕೊಳ್ಳಬೇಡಿ. ನೀವು ಈಗಾಗಲೇ ಯಾವ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೀರೋ, ಇನ್ನೂ ಯಾವುದಾದರೂ ತಾಲೂಕುಗಳನ್ನು ಘೋಷಣೆ ಮಾಡಬೇಕಿದ್ದರೆ ಅದನ್ನೂ ಮಾಡಿ. ಸೆಪ್ಟೆಂಬರ್&zwnj; ತಿಂಗಳು ಮುಗಿದ ನಂತರ ಮಳೆ ಬರುವ ಸಾಧ್ಯತೆ ಕಡಿಮೆ. ನಮ್ಮ ಕೆರೆ-ಕಟ್ಟೆಗಳು ತುಂಬುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಈಗಾಗಲೇ ನೀವು ರೂಪಿಸಿರುವ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತನ್ನಿ. ಹಳೆಯ ಕಾರ್ಯಕ್ರಮಗಳನ್ನೂ ಸಮರ್ಪಕವಾಗಿ ಜಾರಿಗೆ ತನ್ನಿ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿ ಎನ್ನುವ ಕಿವಿಮಾತು ಹೇಳಿದರು.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/siddaramaiah-lauds-cm-dk-shivakumar-govt-100-days-drought-relief-karnataka-sat/articleshow-7a3edw1"/>
        </item>
        <item>
            <title><![CDATA[ಡಿಕೆಶಿ ಸರ್ಕಾರದ ವಿರುದ್ಧ ಜನಾರ್ದನ್ ರೆಡ್ಡಿ ಪತ್ನಿ ತೀವ್ರ ವಾಗ್ದಾಳಿ - ಕಾರಣ ಏನು ಗೊತ್ತಾ?]]></title>
            <link>https://kannada.asianetnews.com/politics/bjp-ballari-chalo-gali-janardhan-reddy-wife-aruna-lakshmi-slams-congress-govt-gkn/articleshow-9n6o9m6</link>
            <guid isPermaLink="true">https://kannada.asianetnews.com/politics/bjp-ballari-chalo-gali-janardhan-reddy-wife-aruna-lakshmi-slams-congress-govt-gkn/articleshow-9n6o9m6</guid>
            <pubDate>Sun, 06 Sep 2026 21:45:00 +0530</pubDate>
            <description><![CDATA[&lt;p&gt;ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಯ 6ನೇ ದಿನದಂದು ಲಕ್ಷ್ಮಿ ಅರುಣಾ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಉಚಿತ ಬಸ್ ಯೋಜನೆ ಮಹಿಳೆಯರಿಗೆ 'ಸಾವಿನ ಭಾಗ್ಯ'ವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vqzabyztgyajf3wntc8r02,imgname-gali-janardhana-reddy-wife-1788711250302.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ/ಕಂಪ್ಲಿ:&lt;/strong&gt; ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಹಗರಣಗಳ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ 'ಬಳ್ಳಾರಿ ಚಲೋ' ಪಾದಯಾತ್ರೆ ಇಂದು 6ನೇ ದಿನಕ್ಕೆ ಕಾಲಿಟ್ಟಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಕ್ಷರಶಃ ಗುಡುಗಿದ್ದಾರೆ.&lt;/p&gt;&lt;p&gt;ಸಭೆಯನ್ನುದ್ದೇಶಿಸಿ ಮಾತನಾಡಿದ ಲಕ್ಷ್ಮಿ ಅರುಣಾ, ರಾಜ್ಯದಲ್ಲಿರುವ ಡಿಕೆಶಿ ಸರ್ಕಾರ ಕೇವಲ ಭ್ರಷ್ಟ ಸರ್ಕಾರವಲ್ಲ, ಇದು ಮಹಿಳಾ ವಿರೋಧಿ ಮತ್ತು ರೈತ ವಿರೋಧಿ ಸರ್ಕಾರ. ಹೆಣ್ಮಕ್ಕಳಿಗೆ ಉಚಿತ ಬಸ್ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತೀರಿ, ಆದರೆ ಅದರ ಜೊತೆಗೆ ನೀವು ಸಾವಿನ ಭಾಗ್ಯವನ್ನೂ ನೀಡಿದ್ದೀರಿ. ಕೊಪ್ಪಳದಲ್ಲಿ ಬಸ್ ಹತ್ತುವಾಗ ಕಾಲು ಜಾರಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಬಸ್&zwnj;ಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ನ್ಯಾಯವೂ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಸಂಪುಟದಲ್ಲಿ ಮಹಿಳೆಯರಿಗಿಲ್ಲ ಸ್ಥಾನ&lt;/strong&gt;&lt;/h2&gt;&lt;p&gt;ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಈ ಸರ್ಕಾರದಲ್ಲಿ ಮಹಿಳೆಯರಿಗೆ ಒಬ್ಬೇ ಒಬ್ಬ ಸಚಿವ ಸ್ಥಾನವನ್ನೂ ನೀಡಿಲ್ಲ. ವಾಲ್ಮೀಕಿ ಹಗರಣದಲ್ಲಿ ನೊಂದ ಕುಟುಂಬಗಳಿಗೆ ನ್ಯಾಯ ಸಿಕ್ಕಿಲ್ಲ, ಪರಿಹಾರವೂ ನೀಡಿಲ್ಲ. ಬಿಜೆಪಿಯ ಈ ಪಾದಯಾತ್ರೆ ನೋಡಿ ಕಾಂಗ್ರೆಸ್ ನಾಯಕರಿಗೆ ಹೊಟ್ಟೆಕಿಚ್ಚು ಶುರುವಾಗಿದೆ. ಅದಕ್ಕಾಗಿಯೇ ಅವರು ಪಶ್ಚಾತ್ತಾಪ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.&lt;/p&gt;&lt;p&gt;ಕಂಪ್ಲಿ ಪಟ್ಟಣದಲ್ಲಿ ಡಬಲ್ ರಸ್ತೆ ನಿರ್ಮಾಣವಾಗಿದ್ದು ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ. ಬಳ್ಳಾರಿ ಭಾಗಕ್ಕೆ ಅಭಿವೃದ್ಧಿಯ ರುಚಿ ತೋರಿಸಿದ್ದು ಜನಾರ್ದನ ರೆಡ್ಡಿ ಅವರು. 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಅದಕ್ಕಾಗಿ ನೀವೆಲ್ಲರೂ ಆಶೀರ್ವಾದ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.&lt;/p&gt;&lt;p&gt;ಬಹಿರಂಗ ಸಭೆಗೂ ಮುನ್ನ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿ, ಎ. ನಾರಾಯಣಸ್ವಾಮಿ ಅವರಿಗೆ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಹಾರ ಹಾಕುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದು, ಇಡೀ ಕಂಪ್ಲಿ ಪಟ್ಟಣ ಕೇಸರಿಮಯವಾಗಿತ್ತು.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/bjp-ballari-chalo-gali-janardhan-reddy-wife-aruna-lakshmi-slams-congress-govt-gkn/articleshow-9n6o9m6"/>
        </item>
        <item>
            <title><![CDATA[Uttar Pradesh: ಅತಿ ಹೆಚ್ಚು ಬಾರಿ ಸಿಎಂ ಆದ ದಾಖಲೆ ಯಾರ ಹೆಸರಲ್ಲಿದೆ? ಮಾಯಾವತಿ, ಮುಲಾಯಂ, ಯೋಗಿ ಸ್ಥಾನ ಎಲ್ಲಿದೆ?]]></title>
            <link>https://kannada.asianetnews.com/india-news/uttar-pradesh-cm-record-yogi-adityanath-mayawati-mulayam-singh-yadav-narayan-dutt-tiwari-most-time-cm-bmk/articleshow-ds56hi0</link>
            <guid isPermaLink="true">https://kannada.asianetnews.com/india-news/uttar-pradesh-cm-record-yogi-adityanath-mayawati-mulayam-singh-yadav-narayan-dutt-tiwari-most-time-cm-bmk/articleshow-ds56hi0</guid>
            <pubDate>Wed, 09 Sep 2026 16:52:42 +0530</pubDate>
            <description><![CDATA[&lt;p&gt;ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾದ ದಾಖಲೆಯು ಯಾರ ಹೆಸರಲ್ಲಿದೆ. ಮುಲಾಯಂ ಸಿಂಗ್ ಯಾದವ್ ಮತ್ತು ಎನ್.ಡಿ. ತಿವಾರಿ ಎಷ್ಟು ಬಾರಿ ಸಿಎಂ ಆಗಿದ್ದಾರೆ. ಆದರೆ, ಸತತವಾಗಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹಾಲಿ ಸಿಎಂ ಯೋಗಿ ಯಾವ ಸ್ಥಾನದಲ್ಲಿದ್ದಾರೆ. ಇಲ್ಲಿದೆ ಕಂಪ್ಲೀಟ್&zwnj; ಸ್ಟೋರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m22ycxfnfn0agmgxnm763f48,imgname-up-cm-yogi-1788952868341.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಪ್ರದೇಶ ಭಾರತದ ಅತ್ಯಂತ ದೊಡ್ಡ ಮತ್ತು ರಾಜಕೀಯವಾಗಿ ಅತ್ಯಂತ ಪ್ರಮುಖ ರಾಜ್ಯ. ದೇಶದ ರಾಜಕೀಯ ದಿಕ್ಸೂಚಿಯನ್ನು ನಿರ್ಧರಿಸುವ ಯುಪಿ ರಾಜಕೀಯದಲ್ಲಿ, ಮುಖ್ಯಮಂತ್ರಿ ಸ್ಥಾನವನ್ನು ಅತ್ಯುನ್ನತ ಅಧಿಕಾರ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ದಶಕಗಳ ಇತಿಹಾಸವಿರುವ ಯುಪಿ ಸಿಎಂ ಕುರ್ಚಿಯಲ್ಲಿ ಅನೇಕ ದಿಗ್ಗಜ ನಾಯಕರು ಕುಳಿತು ಆಡಳಿತ ನಡೆಸಿದ್ದಾರೆ. ಕೆಲವರು ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡರೆ, ಇನ್ನು ಕೆಲವರು ದಾಖಲೆ ಮಟ್ಟದಲ್ಲಿ ಹಲವು ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಾಗಾದರೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾದ ದಾಖಲೆ ಯಾರ ಹೆಸರಲ್ಲಿದೆ? ಮಾಯಾವತಿ, ಮುಲಾಯಂ ಸಿಂಗ್ ಮತ್ತು ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಈ ರೇಸ್&zwnj;ನಲ್ಲಿ ಎಲ್ಲಿದ್ದಾರೆ ಎಂಬುದರ ಸಮಗ್ರ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;4 ಬಾರಿ ಸಿಎಂ ಆಗಿ ನಂ.೧ ಪಟ್ಟ ಹಂಚಿಕೊಂಡ ದಿಗ್ಗಜರು!&lt;/strong&gt;&lt;/h2&gt;&lt;p&gt;ಉತ್ತರ ಪ್ರದೇಶದ ರಾಜಕೀಯ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 'ನಾಲ್ಕು ಬಾರಿ' ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ದಾಖಲೆ ಇಬ್ಬರು ನಾಯಕರ ಹೆಸರಲ್ಲಿದೆ ಕಾಂಗ್ರೆಸ್&zwnj;ನ ಚಂದ್ರಭಾನು ಗುಪ್ತಾ ಮತ್ತು ಬಿಎಸ್&zwnj;ಪಿಯ ಮಾಯಾವತಿ.&lt;/p&gt;&lt;p&gt;&lt;strong&gt;ಚಂದ್ರಭಾನು ಗುಪ್ತಾ; &lt;/strong&gt;ಕಾಂಗ್ರೆಸ್&zwnj;ನ ಪ್ರಭಾವಿ ನಾಯಕರಾಗಿದ್ದ ಇವರು ಮೊದಲು ಡಿಸೆಂಬರ್ ೧೯೬೦ ರಲ್ಲಿ ಸಿಎಂ ಆದರು. ಆ ನಂತರ 1962, 1967 ಹಾಗೂ 1969ರಲ್ಲಿ ಒಟ್ಟು ನಾಲ್ಕು ಪ್ರತ್ಯೇಕ ಅವಧಿಗಳಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.&lt;/p&gt;&lt;p&gt;&lt;strong&gt;ಮಾಯಾವತಿ; &lt;/strong&gt;ಬಿಎಸ್&zwnj;ಪಿ ಅಧಿನಾಯಕಿ ಮಾಯಾವತಿ ಅವರು 1995ರಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದು, ಯುಪಿಯ ಮೊದಲ ದಲಿತ ಮಹಿಳಾ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತದನಂತರ 1997, 2002 ಮತ್ತು 2007ರಲ್ಲಿ ನಾಲ್ಕನೇ ಬಾರಿಗೆ ಸಿಎಂ ಆದರು. ವಿಶೇಷವೆಂದರೆ 2007ರಿಂದ 2012ರವರೆಗೆ ಇವರು ಸ್ಪಷ್ಟ ಬಹುಮತದೊಂದಿಗೆ ತಮ್ಮ 5 ವರ್ಷಗಳ ಪೂರ್ಣ ಅವಧಿಯನ್ನು ಪೂರೈಸಿದ್ದರು.&lt;/p&gt;&lt;h3&gt;&lt;strong&gt;3 ಬಾರಿ ಮುಖ್ಯಮಂತ್ರಿಯಾದ ನಾಯಕರು!&lt;/strong&gt;&lt;/h3&gt;&lt;p&gt;ನಾಲ್ಕು ಬಾರಿ ಅಧಿಕಾರ ನಡೆಸಿದ ನಾಯಕರ ನಂತರದ ಸ್ಥಾನದಲ್ಲಿ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಹಾಗೂ ಹಿರಿಯ ಕಾಂಗ್ರೆಸ್ಸಿಗ ಎನ್.ಡಿ. ತಿವಾರಿ ಇದ್ದಾರೆ.&lt;/p&gt;&lt;p&gt;&lt;strong&gt;ಮುಲಾಯಂ ಸಿಂಗ್ ಯಾದವ್;&lt;/strong&gt; ಯುಪಿ ರಾಜಕೀಯದ ಚಾಣಕ್ಯ ಎಂದೇ ಬಿರುದು ಪಡೆದಿದ್ದ ಮುಲಾಯಂ ಅವರು 1989ರಲ್ಲಿ ಮೊದಲ ಬಾರಿಗೆ ಸಿಎಂ ಆದರು. ನಂತರ 1993 ಹಾಗೂ 2003 ರಲ್ಲಿ ಮೂರನೇ ಬಾರಿಗೆ ಯುಪಿ ಅಧಿಕಾರ ಹಿಡಿದರು.&lt;/p&gt;&lt;p&gt;&lt;strong&gt;ನಾರಾಯಣ್ ದತ್ ತಿವಾರಿ (ಎನ್.ಡಿ. ತಿವಾರಿ);&lt;/strong&gt; ಇವರು 1976, ಮತ್ತು 1988ರಲ್ಲಿ ಮೂರು ಬಾರಿ ಯುಪಿ ಸಿಎಂ ಆಗಿ ಸೇವೆ ಸಲ್ಲಿಸಿದರು. ಇವರಲ್ಲಿದ್ದ ಮತ್ತೊಂದು ಅಪರೂಪದ ದಾಖಲೆಯೆಂದರೆ, ಇವರು ಉತ್ತರ ಪ್ರದೇಶ ಮತ್ತು ಉತ್ತರಾಖಂಡ&mdash;ಎರಡೂ ರಾಜ್ಯಗಳ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಏಕೈಕ ನಾಯಕರಾಗಿದ್ದಾರೆ.&lt;/p&gt;&lt;h3&gt;&lt;strong&gt;ಯೋಗಿ ಆದಿತ್ಯನಾಥ್ ಎಲ್ಲಿದ್ದಾರೆ? ಸಾಟಿಯಿಲ್ಲದ ಹೊಸ ದಾಖಲೆ!&lt;/strong&gt;&lt;/h3&gt;&lt;p&gt;ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾರ್ಚ್ 19, 2017ರಂದು ಮೊದಲ ಬಾರಿಗೆ ಯುಪಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ನಂತರ 2022ರ ಚುನಾವಣೆಯಲ್ಲೂ ಬಿಜೆಪಿ ಬೃಹತ್ ಬಹುಮತದೊಂದಿಗೆ ಗೆದ್ದಾಗ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.&lt;/p&gt;&lt;h3&gt;&lt;strong&gt;ಯೋಗಿ ಹೆಸರಲ್ಲಿ ಅಭೂತಪೂರ್ವ ದಾಖಲೆ!&lt;/strong&gt;&lt;/h3&gt;&lt;p&gt;ಸಂಖ್ಯೆಯ ಲೆಕ್ಕಾಚಾರದಲ್ಲಿ ಯೋಗಿ ಆದಿತ್ಯನಾಥ್ (೨ ಬಾರಿ) ಅವರು ಚಂದ್ರಭಾನು, ಮಾಯಾವತಿ, ಮುಲಾಯಂ ಹಾಗೂ ಎನ್.ಡಿ. ತಿವಾರಿ ಅವರಿಗಿಂತ ಹಿಂದುಳಿದಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್ ಅವರ ಹೆಸರಲ್ಲಿ ಮತ್ತೊಂದು ಬೃಹತ್ ದಾಖಲೆಯಿದೆ. ಉತ್ತರ ಪ್ರದೇಶದ ರಾಜಕೀಯ ಇತಿಹಾಸದಲ್ಲೇ ಸತತವಾಗಿ ಅತಿ ಹೆಚ್ಚು ಕಾಲ (ದೀರ್ಘಾವಧಿ) ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ನಾಯಕ&quot; ಎಂಬ ಅಭೂತಪೂರ್ವ ದಾಖಲೆ ಯೋಗಿ ಅವರ ಹೆಸರಲ್ಲಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಬಾರಿ (೪ ಬಾರಿ) ಮುಖ್ಯಮಂತ್ರಿಯಾದ ಜಂಟಿ ದಾಖಲೆ ಚಂದ್ರಭಾನು ಗುಪ್ತಾ ಹಾಗೂ ಮಾಯಾವತಿ ಅವರ ಹೆಸರಲ್ಲಿದ್ದರೆ, ಸತತವಾಗಿ ಸುದೀರ್ಘ ಕಾಲ ಆಡಳಿತ ನಡೆಸಿದ ಹೆಗ್ಗಳಿಕೆ ಯೋಗಿ ಆದಿತ್ಯನಾಥ್ ಅವರದಾಗಿದೆ.&lt;/p&gt;]]></content:encoded>
            <category>politics</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/india-news/uttar-pradesh-cm-record-yogi-adityanath-mayawati-mulayam-singh-yadav-narayan-dutt-tiwari-most-time-cm-bmk/articleshow-ds56hi0"/>
        </item>
        <item>
            <title><![CDATA[ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡ್ತೇನೆ - ಸಚಿವ ರಾಯರೆಡ್ಡಿ ಬೆದರಿಕೆ]]></title>
            <link>https://kannada.asianetnews.com/karnataka-districts/will-fire-officers-who-do-not-listen-minister-basavaraj-rayareddy-controversial-statement-gkn/articleshow-etxnats</link>
            <guid isPermaLink="true">https://kannada.asianetnews.com/karnataka-districts/will-fire-officers-who-do-not-listen-minister-basavaraj-rayareddy-controversial-statement-gkn/articleshow-etxnats</guid>
            <pubDate>Tue, 08 Sep 2026 20:21:43 +0530</pubDate>
            <description><![CDATA[&lt;p&gt;ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡುವುದಾಗಿ ಬೆದರಿಕೆ ಹಾಕಿದ ಸಚಿವ ಬಸವರಾಜ ರಾಯರೆಡ್ಡಿ, ತಹಶೀಲ್ದಾರ್ ತಮ್ಮ ಪಿಆರ್&zwnj;ಒ ಆಗಿ ಕೆಲಸ ಮಾಡಲಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲಿ ಡಿಜಿಟಲ್ ಸಿಗ್ನೇಚರ್ ಬಳಸಿ ಪತ್ರ ವಿಲೇವಾರಿ ಮಾಡುವಂತೆ ಪಿಎಗೆ ಸೂಚಿಸಿರುವ ಸಚಿವರು, ಅಧಿಕಾರಿಗಳ ವಿರುದ್ಧ ಅತಿರೇಕದ ಮಾತುಗಳನ್ನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20qyfge8dcx1t9w3vf15aj9,imgname-basavaraj-rayareddy-1788878994956.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ:&lt;/strong&gt; ಇಸ್ಲಾಂ ಧರ್ಮದ ಕುರಿತಾದ ಹೇಳಿಕೆಯಿಂದ ಇತ್ತೀಚೆಗಷ್ಟೇ ವಿವಾದಕ್ಕೆ ಸಿಲುಕಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಈಗ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕುವ ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡ್ತೇನೆ ಎಂದು ಎಚ್ಚರಿಕೆ ನೀಡುವ ಜೊತೆಗೆ, ತಹಶೀಲ್ದಾರ್ ಅವರನ್ನೇ ತಮ್ಮ ಪಿಆರ್&zwnj;ಒ (PRO) ಆಗಿ ಕೆಲಸ ಮಾಡುವಂತೆ ಸೂಚಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;&lt;strong&gt;ವೇದಿಕೆಯಲ್ಲೇ ತಹಶೀಲ್ದಾರ್&zwnj;ಗೆ ಸೂಚನೆ&lt;/strong&gt;&lt;/h2&gt;&lt;p&gt;ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ನಡೆದ ಪದವಿಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಅತಿರೇಕದ ಮಾತುಗಳನ್ನಾಡಿದ್ದಾರೆ. ವೇದಿಕೆಯಲ್ಲಿದ್ದ ಯಲಬುರ್ಗಾ ತಹಶೀಲ್ದಾರ್ ಪ್ರಕಾಶ್ ನಾಶಿ ಅವರ ಹೆಸರು ಹಿಡಿದು ಮಾತನಾಡಿದ ಸಚಿವರು, ನಾನು ಸಚಿವ ಸ್ಥಾನದ ಕಾರ್ಯಭಾರದಲ್ಲಿ ಸಂಪೂರ್ಣ ಬ್ಯುಸಿಯಾಗಿರುತ್ತೇನೆ. ಹೀಗಾಗಿ ನೀವೇ ಇನ್ನು ಮುಂದೆ ನನ್ನ ಪಿಆರ್&zwnj;ಒ ಆಗಿ ಕೆಲಸ ಮಾಡಬೇಕು ಎಂದು ಸಾರ್ವಜನಿಕವಾಗಿ ಸೂಚನೆ ನೀಡಿದರು.&lt;/p&gt;&lt;p&gt;ಅಧಿಕಾರಿಗಳ ಮೇಲಿನ ಸಚಿವರ ಸವಾರಿ ಇಲ್ಲಿಗೆ ನಿಲ್ಲಲಿಲ್ಲ. ತಮ್ಮ ಆಪ್ತ ಕಾರ್ಯದರ್ಶಿಗೆ (PA) ಸೂಚನೆ ನೀಡಿದ ಸಚಿವರು, ನನ್ನ ಡಿಜಿಟಲ್ ಸಿಗ್ನೇಚರ್ ಬಳಸಿ ನೀವೇ ಪತ್ರಗಳನ್ನು ವಿಲೇವಾರಿ ಮಾಡಿ ಎಂದು ಹೇಳಿದ್ದಾರೆ. ಸಚಿವರ ಸಹಿಯನ್ನು ಅವರ ಅನುಪಸ್ಥಿತಿಯಲ್ಲಿ ಪಿಎ ಬಳಸುವಂತೆ ಹೇಳಿರುವುದು ಕಾನೂನಾತ್ಮಕವಾಗಿಯೂ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.&lt;/p&gt;&lt;h2&gt;&lt;strong&gt;ಲೆಫ್ಟ್ ರೈಟ್ ತಗೊಂಡು ಫೈರ್ ಮಾಡ್ತೇನೆ!&lt;/strong&gt;&lt;/h2&gt;&lt;p&gt;ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿ ಎಷ್ಟು ದೊಡ್ಡದಿದೆ ಎಂದು ವಿವರಿಸಿದ ರಾಯರೆಡ್ಡಿ, ನಮ್ಮ ಇಲಾಖೆಯಲ್ಲಿ 1.52 ಕೋಟಿ ವಿದ್ಯಾರ್ಥಿಗಳು ಹಾಗೂ 96 ವಿಶ್ವವಿದ್ಯಾಲಯಗಳು ಬರುತ್ತವೆ. ಇಷ್ಟೊಂದು ದೊಡ್ಡ ಜವಾಬ್ದಾರಿ ಇರುವಾಗ ಅಧಿಕಾರಿಗಳು ನಮಗೆ ಸಹಕಾರ ನೀಡಬೇಕು. ಯಾವ ಅಧಿಕಾರಿ ಮಾತು ಕೇಳುವುದಿಲ್ಲವೋ ಹೇಳಿ, ಅಂತಹವರನ್ನು ಲೆಫ್ಟ್ ರೈಟ್ ತಗೊಂಡು ಫೈರ್ ಮಾಡ್ತೇನೆ ಎಂದು ಅಧಿಕಾರಿಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.&lt;/p&gt;&lt;p&gt;ಇದೇ ವೇಳೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ಎಂದಿನಂತೆ ಮುಂದುವರಿಯಲಿವೆ ಎಂದು ಭರವಸೆ ನೀಡಿದರು. ಅಧಿಕಾರಿಗಳನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಅಥವಾ ಬೆದರಿಕೆ ಹಾಕುವ ಧಾಟಿಯಲ್ಲಿ ಮಾತನಾಡಿದ ಸಚಿವರ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/will-fire-officers-who-do-not-listen-minister-basavaraj-rayareddy-controversial-statement-gkn/articleshow-etxnats"/>
        </item>
        <item>
            <title><![CDATA[ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕ ₹2 ಕೋಟಿ ನಗದು ಜಪ್ತಿ ಮಾಡಿ ಇ.ಡಿ; ಹಣದ ಮೂಲ ಬಿಚ್ಚಿಟ್ಟ ಸಚಿವರು!]]></title>
            <link>https://kannada.asianetnews.com/state/ed-search-satish-jarkiholi-residence-2-crore-cash-fema-karnataka-sat/articleshow-ez9gkt3</link>
            <guid isPermaLink="true">https://kannada.asianetnews.com/state/ed-search-satish-jarkiholi-residence-2-crore-cash-fema-karnataka-sat/articleshow-ez9gkt3</guid>
            <pubDate>Fri, 11 Sep 2026 05:56:32 +0530</pubDate>
            <description><![CDATA[ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶೋಧ ನಡೆಸಿದ್ದು, ಸುಮಾರು 2 ಕೋಟಿ ರೂ. ನಗದು ಪತ್ತೆಯಾಗಿದೆ. ಇದು ನಮ್ಮದೇ ಹಣ, ದಾಖಲೆ ನೀಡುತ್ತೇವೆ ಎಂದಿರುವ ಜಾರಕಿಹೊಳಿ, ಈ ದಾಳಿಯ ಹಿಂದೆ ರಾಜಕೀಯ ವಾಸನೆ ಇದೆ ಎಂದು ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m26xhweqx745b71hdcm1jswe,imgname-satish-jarkiholi-ed-raid-1789086200278.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): ಜಾ&lt;/strong&gt;ರಿ ನಿರ್ದೇಶನಾಲಯ (ಇ.ಡಿ) ಶೋಧದ ವೇಳೆ ನಮ್ಮ ಮನೆಯಲ್ಲಿ ಸುಮಾರು 2 ಕೋಟಿ ರು. ನಗದು ಸಿಕ್ಕಿದೆ. ಅದು ನಮ್ಮದೇ ಹಣ. ನೋಟಿಸ್&zwnj; ನೀಡಿದ ಬಳಿಕ ದಾಖಲೆ ಕೊಡುತ್ತೇವೆ ಎಂದು ಸಚಿವ ಸತೀಶ್&zwnj; ಜಾರಕಿಹೊಳಿ ತಿಳಿಸಿದ್ದಾರೆ.&lt;/p&gt;&lt;p&gt;ಗುರುವಾರ ರಾತ್ರಿ ಇ.ಡಿ.ದಾಳಿ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ. ಏನಾದರೂ ಅನುಮಾನಗಳಿದ್ದಲ್ಲಿ ನೋಟಿಸ್&zwnj; ಕೊಟ್ಟರೆ ಅದಕ್ಕೂ ಉತ್ತರ ಕೊಡುತ್ತೇನೆ. ಗೊತ್ತಿರುವುದಕ್ಕೆ ಉತ್ತರ ನೀಡಿದ್ದೇನೆ. ಗೊತ್ತಿಲ್ಲದ್ದಕ್ಕೆ ಗೊತ್ತಿಲ್ಲ ಎಂದಿದ್ದೇನೆ. ಇದು ದಾಳಿ ಅಲ್ಲ, ಕೇವಲ ಶೋಧ. ಅವರು ಕೆಲ ದಾಖಲೆ ತಂದಿದ್ದರು. ನಮ್ಮ ಕಡೆಯಿಂದ ಕೆಲ ದಾಖಲೆ ತೆಗೆದುಕೊಂಡು ಹೋಗಿದ್ದಾರೆ ಎಂದರು.&lt;/p&gt;&lt;p&gt;ಫೆಮಾ ಕಾಯ್ದೆಯಡಿ ನೋಟಿಸ್&zwnj; ನೀಡಿ ಕೆಲ ದಾಖಲೆ ತೋರಿಸಿ ವಿಚಾರಣೆ ಮಾಡಿದರು. ವಿದೇಶದಲ್ಲಿ ಹೂಡಿಕೆ ಮಾಡಿದ್ದೀರಾ? ಎಂದು ಕೇಳಿದರು. ಇನ್ನೂ ಹೂಡಿಕೆ ಮಾಡಿಲ್ಲ. ಹೂಡಿಕೆ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದ್ದೇನೆ. ಇನ್ನು ಕಾನೂನು ಅನುಮತಿ, ಆರ್&zwnj;ಬಿಐ ಅನುಮತಿ ಸೇರಿ ಕೆಲ ಅನುಮತಿ ಪಡೆಯಬೇಕು ಎಂದಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆ ಗೊತ್ತಿರುವ ಉತ್ತರವಷ್ಟೇ ನೀಡಿದ್ದೇನೆ. ನೋಟಿಸ್&zwnj; ಕೊಟ್ಟರೆ ಹೆಚ್ಚಿನ ಉತ್ತರ ಕೊಡುತ್ತೇನೆ ಎಂದರು.&lt;/p&gt;&lt;h2&gt;&lt;strong&gt;ದಾಳಿ ಹಿಂದೆ ರಾಜಕೀಯ ವಾಸನೆ:&lt;/strong&gt;&lt;/h2&gt;&lt;p&gt;ನೋಟಿಸ್&zwnj; ಕೊಟ್ಟಿದ್ದರೆ ಉತ್ತರ ಕೊಡಬಹುದಿತ್ತು. ದಾಳಿ ಮಾಡುವ ಅಗತ್ಯವಿರಲಿಲ್ಲ. ದೇಶದಲ್ಲಿ ಇದಕ್ಕಿಂತ ದೊಡ್ಡವರು ಇದ್ದಾರೆ. ಇದು ಚರ್ಚೆಗೆ ಆಸ್ಪದವಾಗಿದೆ. ಈ ದಾಳಿ ಹಿಂದೆ ರಾಜಕೀಯದ ವಾಸನೆ ಬರುತ್ತಿದೆ. ಸದ್ಯಕ್ಕೆ ಶೋಧ ನಡೆಸಿ ಹೋಗಿದ್ದಾರೆ. ಅವರು ಎಷ್ಟು ತೃಪ್ತರಾಗಿದ್ದರೋ ಗೊತ್ತಿಲ್ಲ. ಮುಂದೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇ.ಡಿ.ಅಧಿಕಾರಿಗಳು ಬೆಂಗಳೂರು, ಗೋಕಾಕ, ಬೆಳಗಾವಿ ಸೇರಿ ಕೆಲ ಕಡೆ ಶೋಧಿಸಿದ್ದಾರೆ. ಅವರು ನಮಗೆ ಸಹಕರಿಸಿದರು. ನಾವೂ ಅವರಿಗೆ ಸಹರಿಸಿದ್ದೇವೆ. ಮತ್ತೆ ಅವರು ನೋಟಿಸ್&zwnj; ಕೊಟ್ಟಾಗ ವಿಚಾರಣೆಗೆ ಹೋಗುತ್ತೇವೆ ಎಂದು ಸಚಿವ ಸತೀಶ್&zwnj; ಜಾರಕಿಹೊಳಿ ಹೇಳಿದರು.&lt;/p&gt;&lt;h2&gt;&lt;strong&gt;ಬಿಜೆಪಿಯಲ್ಲಿ ದೊಡ್ಡ ಮೀನುಗಳಿವೆ:&lt;/strong&gt;&lt;/h2&gt;&lt;p&gt;ಇ.ಡಿ. ಕಾಂಗ್ರೆಸ್&zwnj; ನಾಯಕರನ್ನು ಟಾರ್ಗೆಟ್&zwnj; ಮಾಡಿದೆ ಎಂದು ನಮ್ಮ ಮುಖ್ಯಮಂತ್ರಿ ಪದೇ ಪದೆ ಹೇಳುತ್ತಿದ್ದರು. ನಾವು ಕೊನೆಯ ಟಾರ್ಗೆಟ್&zwnj; ಎಂದುಕೊಂಡಿದ್ದೆ. ಆದರೆ, ಮೊದಲ ಸರದಿ ನಮಗೆ ಬಂದಿದೆ. ನಾವು ಸಣ್ಣ ತಪ್ಪು ಮಾಡಿರಬಹುದು. ನೂರಕ್ಕೆ ನೂರಷ್ಟು ಸರಿ ಯಾರೂ ಇರುವುದಿಲ್ಲ. ಆದರೆ, ನನಗಿಂತ ದೊಡ್ಡ ತಪ್ಪು ಮಾಡಿದವರು ಬಿಜೆಪಿಯಲ್ಲಿ ಸಾಕಷ್ಟು ಜನ ಇದ್ದಾರೆ. ದೊಡ್ಡ ಮೀನುಗಳನ್ನು ಬಿಟ್ಟು ಸಣ್ಣ ಮೀನುಗಳ ಮೇಲೆ ಬಿದ್ದಿದ್ದಾರೆ. ದೇಶದಲ್ಲಿ ಕಾಂಗ್ರೆಸ್&zwnj; ನಾಯಕರು, ಪ್ರಾದೇಶಿಕ ಪಕ್ಷಗಳ ನಾಯಕರ ಮೇಲೆ ಈ ಇ.ಡಿ. ಐಟಿ, ಸಿಬಿಐ ದಾಳಿಯಾಗುತ್ತಿವೆ. ಇದೇ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.&lt;/p&gt;&lt;h2&gt;&lt;strong&gt;ಇ.ಡಿ ಬಳಿ 8 ಮಂದಿಯ ಟಾರ್ಗೆಟ್&zwnj; ಲಿಸ್ಟ್&zwnj;:&lt;/strong&gt;&lt;/h2&gt;&lt;p&gt;ಇ.ಡಿ. ಈಗಷ್ಟೇ ಪ್ರಾರಂಭಿಸಿದೆ. ಇದನ್ನು ಎಲ್ಲಿಯವರೆಗೆ ಕೊಂಡೊಯ್ಯಲಿದೆ ಎಂದು ನೋಡೋಣ. ಚುನಾವಣೆ ವರೆಗೋ ಅಥವಾ ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಲಿದೆಯೋ ಕಾದು ನೋಡೋಣ. ಈಗ ತನಿಖೆ ಹೇಗೆ ಮಾಡುತ್ತಾರೆ ಎಂಬುದನ್ನೂ ನೋಡೋಣ. ನಮ್ಮ ಪಕ್ಷದ ಅಧ್ಯಕ್ಷರು ಬಂದಿದ್ದರು. ಇ.ಡಿ. ಪಟ್ಟಿಯಲ್ಲಿ 8 ಜನ ಇದ್ದಾರೆ ಎಂದು ಹೇಳುತ್ತಿದ್ದರು. ಮುಂದೆ ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಸಚಿವ ಸತೀಶ್&zwnj; ಜಾರಹೊಳಿ ಪ್ರತಿಕ್ರಿಯಿಸಿದರು.&lt;/p&gt;&lt;p&gt;ಇ.ಡಿ. ಅಧಿಕಾರಿಗಳಿಂದ ನೋ ಡ್ರಿಲ್&zwnj;, ನೋ ಗ್ರಿಲ್&zwnj;. ಆರಾಮವಾಗಿದ್ದೆ. ಇದು ಇನ್ನು ಪ್ರಾಥಮಿಕ ಹಂತ. ಇ.ಡಿ ನ್ಯಾಯಬದ್ಧವಾಗಿ ತನಿಖೆ ಮಾಡುವ ನಂಬಿಕೆ ಇದೆ. ಮುಂದೆ ವಿಚಾರಣೆ ಮಾಡಿದರೆ ಉತ್ತರ ಕೊಡುತ್ತೇನೆ&lt;/p&gt;&lt;p&gt;&lt;strong&gt;- ಸತೀಶ್&zwnj; ಜಾರಕಿಹೊಳಿ, ಲೋಕೋಪಯೋಗಿ ಸಚಿವ&lt;/strong&gt;&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/ed-search-satish-jarkiholi-residence-2-crore-cash-fema-karnataka-sat/articleshow-ez9gkt3"/>
        </item>
        <item>
            <title><![CDATA[ಕರ್ನಾಟಕ ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆ ಸೃಷ್ಟಿಕರ್ತರು ಯಾರು? ಸತ್ಯ ಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್]]></title>
            <link>https://kannada.asianetnews.com/state/dk-shivakumar-claims-credit-for-congress-guarantees-karnataka-politics-sat/articleshow-gmflrti</link>
            <guid isPermaLink="true">https://kannada.asianetnews.com/state/dk-shivakumar-claims-credit-for-congress-guarantees-karnataka-politics-sat/articleshow-gmflrti</guid>
            <pubDate>Fri, 11 Sep 2026 05:37:02 +0530</pubDate>
            <description><![CDATA[&lt;p&gt;ರಾಜ್ಯದ ಐದು ಗ್ಯಾರಂಟಿಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅನ್ನಭಾಗ್ಯ ಯೋಜನೆ ಮಾತ್ರ ಸಿದ್ದರಾಮಯ್ಯನವರದ್ದು, ಉಳಿದ 4 ಗ್ಯಾರಂಟಿಗಳ ಸೃಷ್ಟಿಸಿದ್ದು ಯಾರು? ಎಂದು ಕೇಳುತ್ತಲೇ ಸಿಎಂ ಡಿ.ಕೆ. ಶಿವಕುಮಾರ್ ಸತ್ಯವನ್ನು ಬಾಯಿಬಿಟ್ಟರು. ತಾವು ಸಿಎಂ ಆದಾಗಿನಿಂದ ದಿನಕ್ಕೆ ಕನಿಷ್ಠ 6 ಗಂಟೆಯೂ ನಿದ್ದೆ ಮಾಡುತ್ತಿಲ್ಲ ಎಂದು ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m26wa34rqap9ew3vnj3ney3r,imgname-dk-shivakumar--3--1789084896408.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): ರಾ&lt;/strong&gt;ಜ್ಯದ 'ಪಂಚ ಗ್ಯಾರಂಟಿಗಳಲ್ಲಿ 10 ಕೆ.ಜಿ. ಅಕ್ಕಿ ನೀಡುವ 'ಅನ್ನಭಾಗ್ಯ' ಯೋಜನೆ ಮಾತ್ರ ಸಿದ್ದರಾಮಯ್ಯ ಅವರದ್ದು, ಉಳಿದೆಲ್ಲಾ ನಾಲ್ಕು ಯೋಜನೆಗಳೂ ನನ್ನ ಕಲ್ಪನೆಯಲ್ಲಿ ಮೂಡಿಬಂದವು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.&lt;/p&gt;&lt;p&gt;ನಗರದಲ್ಲಿ ಇತ್ತೀಚೆಗೆ ಪತ್ರಿಕಾ ಸಂಪಾದಕರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ &lsquo;ಪಂಚ ಗ್ಯಾರಂಟಿ&rsquo; ಯೋಜನೆಗಳ ಕುರಿತು ಮಾತನಾಡಿದ ಅವರು, ಪಕ್ಷದ ಸಂಘಟನೆ ಹಾಗೂ ಗ್ಯಾರಂಟಿ ಯೋಜನೆಗಳ ಹಿಂದಿನ ಶ್ರಮವನ್ನು ಹಂಚಿಕೊಂಡರು.&lt;/p&gt;&lt;p&gt;'ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿಯೇ ಈ ಪಂಚ ಗ್ಯಾರಂಟಿ ಯೋಜನೆಗಳ ನೀಲನಕ್ಷೆ ಸಿದ್ಧವಾಯಿತು. ಅದರಲ್ಲಿ 10 ಕೆ.ಜಿ. ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಅವರ ಆಲೋಚನೆಯಾಗಿತ್ತು. ಆದರೆ ಉಳಿದ ಗ್ಯಾರಂಟಿಗಳನ್ನು ನಾನೇ ಸಿದ್ಧಪಡಿಸಿದ್ದು, ಅವುಗಳ ಕಲ್ಪನೆಯೂ ನನ್ನದೇ ಆಗಿತ್ತು. ಕೇವಲ ಗ್ಯಾರಂಟಿ ಮಾತ್ರವಲ್ಲದೆ ಭಾರತ್&zwnj; ಜೋಡೋ ಯಾತ್ರೆಯ ಯಶಸ್ವಿ ಸಂಘಟನೆ, ಜನಸೇವೆ ಇಲಾಖೆ, ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ನೀರಾವರಿ ಯೋಜನೆಗಳಿಗೆ ವೇಗ ನೀಡಿದ್ದು ಹೀಗೆ ನನ್ನ ಯೋಜನೆಗಳ ಪಟ್ಟಿ ನೀಡುತ್ತಾ ಹೋದರೆ ಇಡೀ ರಾತ್ರಿಯೇ ಬೇಕಾಗುತ್ತದೆ' ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.&lt;/p&gt;&lt;h2&gt;&lt;strong&gt;ಕೇಂದ್ರದಿಂದ ಅನುದಾನ ತಾರತಮ್ಯ: ಡಿ.ಕೆ.ಶಿ ಅಸಮಾಧಾನ&lt;/strong&gt;&lt;/h2&gt;&lt;p&gt;ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಮಾತುಗಳಲ್ಲಿ ಅತ್ಯುತ್ತಮವಾಗಿ ಮಾತನಾಡುತ್ತಾರೆ. ಆದರೆ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವ ವಿಚಾರ ಬಂದಾಗ ಯಾವುದೇ ಸಹಕಾರ ನೀಡುತ್ತಿಲ್ಲ' ಎಂದು ದೂರಿದರು.&lt;/p&gt;&lt;p&gt;'ಬೆಂಗಳೂರಿನಲ್ಲಿ 44 ಕಿ.ಮೀ. ಉದ್ದದ ಡಬಲ್&zwnj; ಡೆಕ್ಕರ್ ರಸ್ತೆ ಯೋಜನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ 13.8 ಕಿ.ಮೀ.ಗೆ ಮಾತ್ರ ಒಪ್ಪಿಗೆ ನೀಡಿದೆ. ಮೆಟ್ರೋ ವಿಸ್ತರಣೆ ಮತ್ತು ನೀರಾವರಿ ಯೋಜನೆಗಳಲ್ಲೂ ರಾಜ್ಯಕ್ಕೆ ನಿರಂತರ ತಾರತಮ್ಯ ಎಸಗಲಾಗುತ್ತಿದೆ. ಬಜೆಟ್&zwnj;ನಲ್ಲಿ ಘೋಷಿಸಿದ ಅನುದಾನವನ್ನು ನೀಡಲೂ ಮೀನಮೇಷ ಎಣಿಸುತ್ತಿದ್ದು, ಚುನಾವಣೆಗಳು ಸಮೀಪಿಸುತ್ತಿರುವುದರಿಂದ ರಾಜಕೀಯ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.&lt;/p&gt;&lt;p&gt;ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, 'ಬಿ.ಎಸ್&zwnj;. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯ ಕ್ರಮಗಳಿಂದಾಗಿ ನೀರಾವರಿ ಇಲಾಖೆಯೊಂದರಲ್ಲೇ ಬರೋಬ್ಬರಿ ₹1.25 ಲಕ್ಷ ಕೋಟಿ ಮೊತ್ತದ ಬಿಲ್&zwnj;ಗಳು ಬಾಕಿ ಉಳಿದಿವೆ. ಈ ಎಲ್ಲಾ ಆರ್ಥಿಕ ಹೊರೆಗಳನ್ನು ನಾವೀಗ ನಿಭಾಯಿಸಿಕೊಂಡು ಮುನ್ನಡೆಯಬೇಕಿದೆ' ಎಂದರು.&lt;/p&gt;&lt;h2&gt;&lt;strong&gt;ನಾನು ಸತತ 6 ಗಂಟೆ ನಿದ್ದೆಯನ್ನೂ ಮಾಡಿಲ್ಲ'&lt;/strong&gt;&lt;/h2&gt;&lt;p&gt;'ಅಧಿಕಾರಕ್ಕೆ ಬಂದು 100 ದಿನಗಳಿಗೂ ಅಧಿಕ ಕಾಲ ಕಳೆದಿದೆ. ಈ ಅವಧಿಯಲ್ಲಿ ನಾನು ಸತತವಾಗಿ 6 ಗಂಟೆಗಳ ಕಾಲ ನಿದ್ದೆ ಮಾಡಿಲ್ಲ. ಅಧಿಕಾರದ ಅವಧಿಯಲ್ಲಿ ರಾಜ್ಯದ ಜನತೆಗೆ ಯಾವುದಾದರೂ ಶಾಶ್ವತ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂಬ ಉದ್ದೇಶದಿಂದ ಹಗಲಿರುಳು ಶ್ರಮಿಸುತ್ತಿದ್ದೇನೆ. ನನಗೆ ಯಾವುದೇ ವೈಯಕ್ತಿಕ ಹವ್ಯಾಸಗಳಿಲ್ಲ, ಕುಟುಂಬದ ಚಿಂತೆಯೂ ಇಲ್ಲ. ರಾಜ್ಯದ ಅಭಿವೃದ್ಧಿಯೇ ನನ್ನ ಏಕೈಕ ಗುರಿ' ಎಂದು ಡಿ.ಕೆ. ಶಿವಕುಮಾರ್ ಭಾವುಕರಾಗಿ ನುಡಿದರು.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/dk-shivakumar-claims-credit-for-congress-guarantees-karnataka-politics-sat/articleshow-gmflrti"/>
        </item>
        <item>
            <title><![CDATA[ವಾಲ್ಮೀಕ ನಿಗಮ ಹಗರಣ ಬಳಿಕ ಈಗ ನಾಗೇಂದ್ರಗೆ ಮತ್ತೆ 2 ಉರುಳು ಸಂಕಷ್ಟ! ವಾರದೊಳಗೆ ವಿಚಾರಣೆಗೆ ಬರುವಂತೆ ಇ.ಡಿ. ಸೂಚನೆ]]></title>
            <link>https://kannada.asianetnews.com/politics/ed-issues-notice-to-b-nagendra-for-two-more-cases-following-the-valmiki-scam-rav/articleshow-mmfnprg</link>
            <guid isPermaLink="true">https://kannada.asianetnews.com/politics/ed-issues-notice-to-b-nagendra-for-two-more-cases-following-the-valmiki-scam-rav/articleshow-mmfnprg</guid>
            <pubDate>Wed, 09 Sep 2026 07:08:04 +0530</pubDate>
            <description><![CDATA[&lt;p&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತೊಂದು ನೋಟಿಸ್ ನೀಡಿದೆ. ಸಿಬಿಐ ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖವಾಗಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಕೆಜಿಟಿಟಿಐ ವಂಚನೆ ಪ್ರಕರಣಗಳ ಸಂಬಂಧ ವಿಚಾರಣೆಗೆ ಹಾಜರಾಗಲು ಸೂಚನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m15df3hpthpc3zfty0rmyx0g,imgname-b-nagendra-resignation-1787962035766.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.9): &lt;/strong&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಮತ್ತೊಂದು ಶಾಕ್&zwnj; ನೀಡಿದ್ದಾರೆ.&lt;/p&gt;&lt;p&gt;ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿರುವ ಜಾರ್ಜ್&zwnj;ಶೀಟ್&zwnj;ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಜರ್ಮನ್&zwnj; ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ನಡೆದ ವಂಚನೆ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ಎರಡೂ ವಂಚನೆ ಪ್ರಕರಣಗಳಲ್ಲಿಯೂ ಅಂದು ಸಚಿವರಾಗಿದ್ದ ನಾಗೇಂದ್ರ ಅವರು ಭಾಗಿಯಾಗಿರುವ ಕುರಿತು ಚಾರ್ಜ್&zwnj;ಶೀಟ್&zwnj;ನಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಚಾರವಾಗಿ ಸೂಕ್ತ ದಾಖಲೆಗಳೊಂದಿಗೆ ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಅಧಿಕಾರಿಗಳು ನಾಗೇಂದ್ರ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಈ ಎರಡು ವಂಚನೆ ಪ್ರಕರಣಗಳ ಸಂಬಂಧ ಹೈಕೋರ್ಟ್&zwnj; ಸೂಚನೆ ಮೇರೆಗೆ ತನಿಖೆ ನಡೆಸಿ ಸಿಬಿಐ ಪ್ರತ್ಯೇಕ ದೋಷಾರೋಪಪಟ್ಟಿ ಸಲ್ಲಿಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಜೊತೆಗೆ ಈ ಎರಡೂ ಪ್ರಕರಣಗಳ ಉರುಳು ನಾಗೇಂದ್ರಗೆ ಸುತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವಾಲ್ಮೀಕಿ ನಿಗಮದ ಹಗರಣ ಸಂಬಂಧ ಸೋಮವಾರವಷ್ಟೇ ಇ.ಡಿ. ಅಧಿಕಾರಿಗಳು ನಾಗೇಂದ್ರ ಅವರನ್ನು ಐದು ತಾಸು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಈ ಎರಡು ವಂಚನೆ ಪ್ರಕರಣಗಳ ಕುರಿತು ಸಿಬಿಐ ಸಲ್ಲಿಸಿರುವ ಚಾರ್ಜ್&zwnj;ಶೀಟ್&zwnj; ಬಗ್ಗೆ ಪ್ರಸ್ತಾಪಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;ನಾಗೇಂದ್ರಗೆ ಟೆಂಡರ್&zwnj;ನಲ್ಲಿ 1.20 ಕೋಟಿ ರು.:&lt;/h2&gt;&lt;p&gt;ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ 13.95 ಕೋಟಿ ರು. ವೆಚ್ಚದಲ್ಲಿ ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್&zwnj;ಗಳು ಮತ್ತು ರೊಟ್ಟಿ ತಯಾರಿಸುವ ಯಂತ್ರಗಳನ್ನು ಪೂರೈಸಲು ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಅನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನೆಕ್ಕುಂಟಿ ನಾಗರಾಜು ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಕೆ.ಶ್ರೀನಿವಾಸ ರೆಡ್ಡಿ ಮಾಲೀಕತ್ವದ ಬೆಂಗಳೂರಿನ ಎಸ್&zwnj;ಕೆಆರ್ ಇನ್ಫ್ರಾಸ್ಟ್ರಕ್ಚರ್&zwnj;ಗೆ ನೀಡಲಾಗಿತ್ತು.&lt;/p&gt;&lt;p&gt;ಈ ವೇಳೆ ಈ ನೆಕ್ಕುಂಟಿ ನಾಗರಾಜ್ ಮುಖಾಂತರ ಸಚಿವ ನಾಗೇಂದ್ರ ಅವರು ತಮ್ಮ ಸಹೋದರಿ, ಭಾವ, ಬಳ್ಳಾರಿ ಫಾರ್ಮ್&zwnj;ಹೌಸ್&zwnj; ಮಾಲೀಕರ ಖಾತೆಗಳಿಗೆ 1.20 ಕೋಟಿ ರು. ವರ್ಗಾಯಿಸಿಕೊಂಡಿದ್ದಾರೆ. ಸ್ವತಃ ನೆಕ್ಕುಂಟಿ ನಾಗರಾಜ್ ಈ ಎಸ್&zwnj;ಕೆಆರ್&zwnj; ಇನ್&zwnj;ಫ್ರಾಸ್ಟ್ರಕ್ಚರ್ ಕಂಪನಿ ಮತ್ತು ಅದರ ಸೋದರ ಕಂಪನಿಗಳಿಂದ 5.72 ಕೋಟಿ ರು. ಪಡೆದುಕೊಂಡಿದ್ದಾರೆ ಎಂದು ಸಿಬಿಐ ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಿದೆ.&lt;/p&gt;&lt;h3&gt;ನಾಗೇಂದ್ರ ಸೂಚನೆ ಮೇರೆಗೆ ಕೆಜಿಟಿಟಿಐಗೆ ಕೆಲಸ:&lt;/h3&gt;&lt;p&gt;ಎಸ್ಸಿ-ಎಸ್ಟಿ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮವು ಸಚಿವ ನಾಗೇಂದ್ರ ಸೂಚನೆ ಮೇರೆಗೆ 4.90 ಕೋಟಿ ರು. ಮೌಲ್ಯದ ಕೌಶಲ್ಯ ಅಭಿವೃದ್ಧಿ ತರಬೇತಿ ಕೆಲಸವನ್ನು ಬೆಂಗಳೂರಿನ ಕರ್ನಾಟಕ ಜರ್ಮನ್&zwnj; ತಾಂತ್ರಿಕ ತರಬೇತಿ ಸಂಸ್ಥೆಗೆ (ಕೆಜಿಟಿಟಿಐ) ನೀಡಿತ್ತು. ಈ ಕೆಜಿಟಿಟಿಐ ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆ ಸದ್ಗುರು ಶಿಕ್ಷಣ ಟ್ರಸ್ಟ್ ಮತ್ತು ಸದ್ಗುರು ಸೆಲ್ಯೂಷನ್ಸ್&zwnj;ಗೆ ಉಪ ಗುತ್ತಿಗೆ ನೀಡಿತ್ತು. ಇದರಿಂದ ನಾಗರಾಜ್ ಕುಟುಂಬಕ್ಕೆ 64 ಲಕ್ಷ ರು. ಮತ್ತು ಎಸ್ಟಿ ಕಲ್ಯಾಣ ಸಚಿವಾಲಯದ ಅಧಿಕಾರಿ ಎನ್.ಪ್ರಕಾಶ್&zwnj;ಗೆ 15.50 ಲಕ್ಷ ರು. ಲಂಚ ಸಂದಾಯವಾಗಿರುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/ed-issues-notice-to-b-nagendra-for-two-more-cases-following-the-valmiki-scam-rav/articleshow-mmfnprg"/>
        </item>
        <item>
            <title><![CDATA[ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಚುನಾವಣೆ: ಡಿಕೆಶಿ ಮೇಲುಗೈ, ರಾಜಣ್ಣ ಸೇರಿ ಸಿದ್ದರಾಮಯ್ಯ ಬಣ ತಲ್ಲಣ!]]></title>
            <link>https://kannada.asianetnews.com/state/karnataka-apex-bank-election-dk-shivakumar-relative-s-ravi-elected-president-sat/articleshow-oi8q8mt</link>
            <guid isPermaLink="true">https://kannada.asianetnews.com/state/karnataka-apex-bank-election-dk-shivakumar-relative-s-ravi-elected-president-sat/articleshow-oi8q8mt</guid>
            <pubDate>Fri, 11 Sep 2026 06:59:11 +0530</pubDate>
            <description><![CDATA[ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್&zwnj;ನ ಅಧ್ಯಕ್ಷ ಸ್ಥಾನಕ್ಕಾಗಿ ಎಸ್. ರವಿ ಮತ್ತು ಕೆ.ಎನ್. ರಾಜಣ್ಣ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬಣಗಳ ನಡುವಿನ ಈ ರಾಜಕೀಯದಲ್ಲಿ, ಅಂತಿಮವಾಗಿ ಡಿಕೆಶಿ ಸಂಬಂಧಿ ಎಸ್. ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2718xjf2nps85hqxj3p1da7,imgname-karnataka-apex-bank-ravi-president-1789090100815.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): ಕ&lt;/strong&gt;ರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್&zwnj;ನ (ಅಪೆಕ್ಸ್) ಅಧ್ಯಕ್ಷ ಗಾದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಹಾಗೂ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ಎಸ್. ರವಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಬಯ್ಯಾಪುರ ಅವರು ಅವಿರೋಧ ಆಯ್ಕೆಯಾಗಿದ್ದಾರೆ.&lt;/p&gt;&lt;p&gt;ಆ ಮೂಲಕ ಅಪೆಕ್ಸ್&zwnj; ಬ್ಯಾಂಕ್&zwnj; ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಬಣ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್&zwnj; ಬಣ ಮೇಲುಗೈ ಸಾಧಿಸಿದಂತಾಗಿದೆ. ಅಪೆಕ್ಸ್&zwnj; ಬ್ಯಾಂಕ್&zwnj; ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿ ಪರ, ಡಿ.ಕೆ.ಶಿವಕುಮಾರ್&zwnj; ಹಾಗೂ ಕೆ.ಎನ್&zwnj;.ರಾಜಣ್ಣ ಪರ ಮತ್ತೊಂದು ಸಿದ್ದರಾಮಯ್ಯ ಬಣ ತೀವ್ರ ಲಾಬಿ ನಡೆಸಿತ್ತು.&lt;/p&gt;&lt;p&gt;ಅಧ್ಯಕ್ಷ ಸ್ಥಾನವನ್ನು ತಲಾ ಎರಡೂವರೆ ವರ್ಷದ ಅವಧಿಗೆ ಹಂಚಿಕೊಳ್ಳಲು ಮೊದಲೇ ನಿರ್ಧಾರವಾಗಿತ್ತು. ಆದರೆ, ಕೆ.ಎನ್&zwnj;.ರಾಜಣ್ಣ ಅವರು ಮೊದಲ ಅವಧಿಯಲ್ಲೇ ಅಧ್ಯಕ್ಷ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಅಂತಿಮವಾಗಿ ಡಿ.ಕೆ.ಶಿವಕುಮಾರ್&zwnj; ಅವರು ಹೈಕಮಾಂಡ್&zwnj; ಜತೆ ಲಾಬಿ ನಡೆಸಿ ತಮ್ಮ ಸಂಬಂಧಿಗೆ ಮೊದಲ ಅವಧಿಯಲ್ಲೇ ಅಧ್ಯಕ್ಷ ಪಟ್ಟ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ರಾಜಣ್ಣಗೆ ಸಚಿವ ಸ್ಥಾನವೈ ಇಲ್ಲ, ಅಧ್ಯಕ್ಷ ಗಾದಿಯೂ ಸಿಗಲಿಲ್ಲ&lt;/strong&gt;&lt;/h2&gt;&lt;p&gt;ಇದರಿಂದ ಅಸಮಾಧಾನಗೊಂಡಿರುವ ಕೆ.ಎನ್&zwnj;.ರಾಜಣ್ಣ ಅವರು ಚುನಾವಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ. ಅಪೆಕ್ಸ್&zwnj; ಬ್ಯಾಂಕ್&zwnj;ಗೆ 4 ತಿಂಗಳ ಮೊದಲೇ ಚುನಾವಣೆ ನಡೆಯಬೇಕಿತ್ತು. ಆದರೆ ಆಕಾಂಕ್ಷಿಗಳ ಮಧ್ಯೆ ಪ್ರಬಲ ಸ್ಪರ್ಧೆ ಇದ್ದ ಕಾರಣ ಚುನಾವಣೆ ಮುಂದೂಡಿಕೆಯಾಗಿತ್ತು. ಸೆ.10 ರಂದು ಗುರುವಾರ ಚುನಾವಣೆ ಅಂತಿಮವಾದ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅಧ್ಯಕ್ಷತೆಯಲ್ಲಿ ಅಪೆಕ್ಸ್ ಬ್ಯಾಂಕ್&zwnj;ನ 19 ನಿರ್ದೇಶಕರೊಂದಿಗೆ ಸಭೆ ನಡೆಯಿತು. ಬಳಿಕ ರವಿ ಅವರನ್ನು ಆಯ್ಕೆ ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.&lt;/p&gt;&lt;p&gt;ಚುನಾವಣೆ ಬಳಿಕ ಪ್ರತಿಕ್ರಿಯಿಸಿದ ಸಹಕಾರ ಸಚಿವ ಲಕ್ಷ್ಮಣ್ ಸವದಿ, ಮೊದಲ ಎರಡೂವರೆ ವರ್ಷಗಳ ಅವಧಿಗೆ ಪರಿಷತ್&zwnj; ರವಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಾಮಪತ್ರ ಸಲ್ಲಿಕೆ ಬಳಿಕ ಇಬ್ಬರ ಆಯ್ಕೆ ಅಂತಿಮಗೊಂಡಿದ್ದು, ಮುಂದಿನ ಎರಡೂವರೆ ವರ್ಷಗಳ ಅಧಿಕಾರಾವಧಿ ಕುರಿತು ಆ ನಂತರವೇ ತೀರ್ಮಾನಿಸಲಾಗುವುದು ಎಂದರು.&lt;/p&gt;&lt;p&gt;ಗೆಲುವಿನ ಬಗ್ಗೆ ಮಾತನಾಡಿದ ಎಸ್&zwnj;.ರವಿ, ಅಪೆಕ್ಸ್&zwnj; ಬ್ಯಾಂಕ್&zwnj; ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಹಕಾರ ಕ್ಷೇತ್ರದ ಹಿರಿಯರಾದ ಕೆ.ಎನ್&zwnj;.ರಾಜಣ್ಣ ಅವರ ಸಲಹೆಯೊಂದಿಗೆ ಮುಂದುವರೆಯುತ್ತೇನೆ ಎಂದು ಹೇಳಿದರು.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-apex-bank-election-dk-shivakumar-relative-s-ravi-elected-president-sat/articleshow-oi8q8mt"/>
        </item>
        <item>
            <title><![CDATA[ಡಿಕೆಶಿ ಸರ್ಕಾರಕ್ಕೆ ನಾಳೆ 100 ದಿನದ ಸಂಭ್ರಮ: ಈ ಹೊಸ ಯೋಜನೆಗಳ ಭರ್ಜರಿ ಘೋಷಣೆ?]]></title>
            <link>https://kannada.asianetnews.com/politics/dk-shivakumar-government-completes-100-days-big-announcements-expected-rav/articleshow-prxqdss</link>
            <guid isPermaLink="true">https://kannada.asianetnews.com/politics/dk-shivakumar-government-completes-100-days-big-announcements-expected-rav/articleshow-prxqdss</guid>
            <pubDate>Wed, 09 Sep 2026 06:40:19 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ 100 ದಿನಗಳನ್ನು ಪೂರೈಸುತ್ತಿದ್ದು, ಈ ಸಂಭ್ರಮದ ಅಂಗವಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ರೈತರು, ಯುವಜನರನ್ನು ಗಮನದಲ್ಲಿಟ್ಟುಕೊಂಡು ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೊಸ ಯೋಜನೆ ಘೋಷಣೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m21v49n3f76090p4gdyh3htd,imgname-dk-shivakumar-government-completes-100-days-1788915885731.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಜೂ.3ಕ್ಕೆ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸಿದ್ದ ಡಿಕೆಶಿ&lt;/li&gt; &lt;li&gt;ಈಗ 100 ದಿನದ ಸಂಭ್ರಮದ ಹಿನ್ನೆಲೆಯಲ್ಲಿ ಸಿಹಿಸುದ್ದಿಗೆ ಸಜ್ಜು&lt;/li&gt; &lt;li&gt;ಕೃಷಿ, ಶಿಕ್ಷಣ, ಆರೋಗ್ಯ ಸೇರಿ ಆದ್ಯತಾ ಕ್ಷೇತ್ರಕ್ಕೆ ಕೊಡುಗೆ?&lt;/li&gt; &lt;li&gt;ಗ್ಯಾರಂಟಿ ಯೋಜನೆಯ ಆಯ್ದ ಫಲಾನುಭವಿಗಳ ಜೊತೆ ಚರ್ಚೆ&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಸೆ.9): &lt;/strong&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಸೆಪ್ಟೆಂಬರ್&zwnj; 10ರ ಗುರುವಾರ ಯಶಸ್ವಿ ಶತದಿನಗಳನ್ನು ಪೂರೈಸುತ್ತಿದೆ. ಈ ಸೆಂಚುರಿ ಸಂಭ್ರಮದ ದಿನದಂದು ರೈತರು, ಯುವಜನರು ಸೇರಿದಂತೆ ವಿವಿಧ ವರ್ಗದವರಿಗೆ ಕೆಲವು ಭರ್ಜರಿ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ.&lt;/p&gt;&lt;p&gt;ಈ ಹೊಸ ಘೋಷಣೆಗಳೇನು ಎನ್ನುವುದನ್ನು ಸರ್ಕಾರದ ಶತದಿನಗಳ ಸಂಭ್ರಮದ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅವರು ಪ್ರಕಟಿಸಲಿದ್ದಾರೆ.&lt;/p&gt;&lt;h2&gt;100 ದಿನದ ಸಂಭ್ರಮದ ಹಿನ್ನೆಲೆಯಲ್ಲಿ ಸಿಹಿಸುದ್ದಿಗೆ ಸಜ್ಜು&lt;/h2&gt;&lt;p&gt;ಸರ್ಕಾರಕ್ಕೆ 100 ದಿನಗಳು ತುಂಬುವ ದಿನವನ್ನು ವಿಶೇಷವಾಗಿ ಆಚರಿಸಲು ಸರ್ಕಾರದ ಮಟ್ಟದಲ್ಲಿ ಭರದ ಸಿದ್ಧತೆ ಆರಂಭವಾಗಿದೆ. ವಿಧಾನಸೌಧದ ಬ್ಯಾಕ್ವೆಂಟ್&zwnj; ಹಾಲ್&zwnj;ನಲ್ಲಿ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ವೇಳೆ, ಸುಮಾರು 80 ಜನ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ಸಂವಾದ ನಡೆಸಲಿದ್ದಾರೆ.&lt;/p&gt;&lt;p&gt;ಇದೇ ವೇಳೆ, ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಕೆಲವು ಆದ್ಯತೆಯ ಕ್ಷೇತ್ರಗಳಿಗೆ ನಾಲ್ಕೈದು ಭರ್ಜರಿ ಹೊಸ ಘೋಷಣೆ ಮಾಡುವ ನಿರೀಕ್ಷೆ ಇದೆ. ಈ ಬಾರಿ ಮುಂಗಾರು ಅಭಾವದಿಂದ ರಾಜ್ಯದ 101 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ 40ರಿಂದ 50 ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸಲು ಅಧ್ಯಯನ ನಡೆಸಿದೆ. ವಿವಿಧ ಜಿಲ್ಲೆಗಳಲ್ಲಿ ಸ್ವತಃ ಬರ ಅಧ್ಯಯನ ನಡೆಸಿ ಬಂದಿರುವ ಮುಖ್ಯಮಂತ್ರಿ ಅವರು, ಬರದಿಂದ ಆತಂಕಗೊಂಡಿರುವ ಅನ್ನದಾತನ ಅಭ್ಯುದಯಕ್ಕೆ ಭರವಸೆ ತುಂಬುವ ಕೊಡುಗೆ ನೀಡಲು ಮುಂದಾಗಿದ್ದಾರೆ.&lt;/p&gt;&lt;p&gt;ತಮ್ಮದೇ ಫ್ಲಾಗ್&zwnj;ಶಿಪ್&zwnj; ಕಾರ್ಯಕ್ರಮ:&lt;/p&gt;&lt;p&gt;ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್&zwnj; ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮುಂದುವರೆಸುತ್ತಿದೆ. ಕೊಟ್ಟ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದ ಸರ್ಕಾರ ಎನ್ನುವುದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫ್ಲಾಗ್&zwnj;ಶಿಪ್&zwnj; ಆಗಿತ್ತು. ಅವರ ನಂತರ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್&zwnj; ಅವರು &lsquo;ಮನೆ ಬಾಗಿಲಿಗೆ ನಮ್ಮ ಸರ್ಕಾರ&rsquo; ಫ್ಲಾಗ್&zwnj;ಶಿಪ್&zwnj;ನಲ್ಲಿ ಯೋಜನೆಗಳನ್ನು ಘೋಷಿಸಲು ಸಜ್ಜಾಗಿದ್ದಾರೆ. ಬಿಡದಿ ಟೌನ್&zwnj;ಶಿಪ್&zwnj; ವಿವಾದದ ಹಿನ್ನೆಲೆಯಲ್ಲಿ ತಮ್ಮ ಬಗ್ಗೆ ಮೂಡಿರುವ ಅಭಿಪ್ರಾಯ ತಪ್ಪು. ಇದೂ ಕೂಡ ಮಣ್ಣಿನ ಮಗನ ಸರಕಾರ ಎಂದು ಮನದಟ್ಟು ಮಾಡಿಕೊಡಲು ಬಯಸಿದ್ದಾರೆ. ಆಡಳಿತದಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ಹೆಜ್ಜೆ ಗುರುತು ದಾಖಲಿಸಲು ಹೊಸ ಕಾರ್ಯಕ್ರಮಗಳನ್ನು ನೀಡುವ ಉತ್ಸಾಹದಲ್ಲಿ ಸಿಎಂ ಅವರಿದ್ದಾರೆ. ಇಡೀ ರಾಜ್ಯವನ್ನು ಬರಗಾಲ ಆವರಿಸಿರುವ ಸದ್ಯದ ಸಂದರ್ಭದಲ್ಲಿ ರೈತ ಸಮುದಾಯಕ್ಕೆ ನೆಮ್ಮದಿ ನೀಡುವ ಚಿಂತನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;h3&gt;------ಸರ್ಕಾರ ಹೊಸ ಹಾದಿಗೆ ಇನ್ನಷ್ಟು ಹೊಸ ಯೋಜನೆ&lt;/h3&gt;&lt;p&gt;ಇದೇ ಸೆ.10ರಂದು ನನ್ನ ಸರ್ಕಾರ 100 ದಿನಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂಬುದರ ಬಗ್ಗೆ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದೇನೆ. ಇವುಗಳ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಘೋಷಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ.&lt;/p&gt;&lt;p&gt;-ಡಿ.ಕೆ.ಶಿವಕುಮಾರ್&zwnj;, ಮುಖ್ಯಮಂತ್ರಿ&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/dk-shivakumar-government-completes-100-days-big-announcements-expected-rav/articleshow-prxqdss"/>
        </item>
        <item>
            <title><![CDATA[BJP Padayatra: ಜನಬೆಂಬಲ ಕಂಡು ಕಂಪ್ಲೀಲಿ ಕರೆಂಟ್‌ ಕಟ್‌, ಬಳ್ಳಾರಿ ಸಮಾವೇಶಕ್ಕೆ ಅಡ್ಡಿ; ಸರ್ಕಾರಕ್ಕೆ ವಿಜಯೇಂದ್ರ ಹಾಕಿದ ಸವಾಲೇನು?]]></title>
            <link>https://kannada.asianetnews.com/politics/bjp-state-president-slams-congress-government-over-power-cut-in-kample-during-bjp-padayatre-rav/articleshow-qlcgi5b</link>
            <guid isPermaLink="true">https://kannada.asianetnews.com/politics/bjp-state-president-slams-congress-government-over-power-cut-in-kample-during-bjp-padayatre-rav/articleshow-qlcgi5b</guid>
            <pubDate>Wed, 09 Sep 2026 06:19:18 +0530</pubDate>
            <description><![CDATA[&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ 'ಬಳ್ಳಾರಿ ಚಲೋ' ಪಾದಯಾತ್ರೆಗೆ ದೊರೆತ ಜನಬೆಂಬಲದಿಂದ ಹತಾಶಗೊಂಡಿರುವ ಕಾಂಗ್ರೆಸ್ ಸರ್ಕಾರವು ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಮತ್ತು ಬೆಲೆ ಏರಿಕೆ ವಿರುದ್ಧ ಕಿಡಿಕಾರಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m21spq1hfa8enhw40d4kye1w,imgname-by-vijayendra-1788914392113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬಳ್ಳಾರಿ (ಸೆ.9) &lt;/strong&gt;ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ನಮ್ಮ ಹೋರಾಟಕ್ಕೆ ಸಾಕಷ್ಟು ಜನಬೆಂಬಲ ಸಿಕ್ಕಿದೆ. ಇದರಿಂದ ಹತಾಶೆಗೊಂಡು ಬಿಜೆಪಿಯ ಪಾದಯಾತ್ರೆಯನ್ನು ಹತ್ತಿಕ್ಕಲು ಕಾಂಗ್ರೆಸ್&zwnj; ಸರ್ಕಾರ ಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಅಲ್ಲದೆ, ಈ ಸರ್ಕಾರ ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದೆ. ಜನರು ದಂಗೆ ಏಳುವ ಮುನ್ನ ವಿಧಾನಸಭೆ ವಿಸರ್ಜಿಸಿ, ಜನತಾ ನ್ಯಾಯಾಲಯಕ್ಕೆ ಬನ್ನಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರಿಗೆ ಆಹ್ವಾನ ನೀಡಿದ್ದಾರೆ.&lt;/p&gt;&lt;h2&gt;ಬಿಜೆಪಿಗೆ ಸಿಕ್ಕಿರೋ ಜನಬೆಂಬಲ ಕಂಡು ಕರೆಂಟ್ ಕಟ್ ಮಾಡಿದೆ&lt;/h2&gt;&lt;p&gt;ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ.ವಾಪಸ್&zwnj;ಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ &lsquo;ಬಳ್ಳಾರಿ ಚಲೋ&rsquo; ಪಾದಯಾತ್ರೆ ಮಂಗಳವಾರ 8ನೇ ದಿನಕ್ಕೆ ಕಾಲಿಟ್ಟಿತು. ಬಳ್ಳಾರಿ ಜಿಲ್ಲೆಯ ಹಳೆದರೋಜಿಯಿಂದ ಕುಡುತಿನಿವರೆಗೆ 17 ಕಿಮೀ.ದೂರ ಕ್ರಮಿಸಿತು. ಕುಡತಿನಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯ ಕಾಂಗ್ರೆಸ್&zwnj; ಸರ್ಕಾರದ ವಿರುದ್ಧ ಕಿಡಿ ಕಾರಿದರು. ರಾಜ್ಯದ ವಿವಿಧ ಮೂಲೆಯಿಂದ ಬಂದು ಜನರು ನಮ್ಮ ಪಾದಯಾತ್ರೆಯನ್ನು ಬೆಂಬಲಿಸಿದ್ದಾರೆ. ನಮ್ಮ ಪಾದಯಾತ್ರೆಗೆ ಸಿಕ್ಕ ಜನಬೆಂಬಲ ನೋಡಿ ಹತಾಶೆಗೊಂಡಿರುವ ಸರ್ಕಾರ, ಬಿಜೆಪಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿದೆ. ಕಂಪ್ಲಿಗೆ ಪಾದಯಾತ್ರೆ ಬಂದಾಗ ಕರೆಂಟ್ ಕಟ್&zwnj; ಮಾಡಿದ್ರು. ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಸಮಾವೇಶ ಮಾಡಲು ಅವಕಾಶ ನೀಡದಂತೆ ಜಿಲ್ಲಾಧಿಕಾರಿ ಮೇಲೆ ಒತ್ತಡ ಹಾಕಿದ್ರು. ಅನುಮತಿ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶ ಮಾಡ್ತೇವೆ ಎಂದಾಗ ಅನುಮತಿ ಕೊಟ್ಟರು ಎಂದು ಆರೋಪಿಸಿದರು.&lt;/p&gt;&lt;h3&gt;ಕರ್ನಾಟಕ ಉಡ್ತಾ ಪಂಚಾಬ್ ಆಗ್ತಿದೆ&lt;/h3&gt;&lt;p&gt;ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಹಾಕಿದ್ದಾರೆ. ಗೃಹಲಕ್ಷಿ ಹಣ ನೀಡ್ತಿಲ್ಲ. ಹಳ್ಳಿ,ಹಳ್ಳಿಯಲ್ಲಿ ಹೆಂಡ ಸಿಗ್ತಿದೆ. ಇಸ್ಪೀಟು ದಂಧೆ ಎಲ್ಲೆಡೆ ಪ್ರಾರಂಭವಾಗಿದೆ. ಎಲ್ಲೆಡೆ ಡ್ರಗ್&zwnj; ಮಾಫಿಯಾ ಜೋರಾಗಿದ್ದು, ಕರ್ನಾಟಕ ಉಡ್ತಾ ಪಂಚಾಬ್ ಆಗ್ತಿದೆ. ವಾಲ್ಮೀಕಿ ಹಣ ಲೂಟಿ ಹೊಡೆದ್ರು. ಲೂಟಿ ಹೊಡೆದ ನಾಗೇಂದ್ರ ಅವರನ್ನು ಮಂತ್ರಿ ಮಾಡಿದ್ರು. ಬಳಿಕ, ಹೋರಾಟಕ್ಕೆ ಮಣಿದು ರಾಜೀನಾಮೆ ಪಡೆದ್ರು ಎಂದು ದೂರಿದರು.&lt;/p&gt;&lt;p&gt;&lsquo;ನಿವೀಗ ನೂರು ದಿನದ ಸಂಭ್ರಮಾಚರಣೆ ಮಾಡಲು ಹೊರಟಿದ್ದೀರಿ, ಯಾವ ಪುರುಷಾರ್ಥಕ್ಕೆ ನಿಮ್ಮ ಸಂಭ್ರಮಾಚರಣೆ&rsquo; ಎಂದು ಡಿಕೆಶಿಯನ್ನು ಪ್ರಶ್ನಿಸಿದ ವಿಜಯೇಂದ್ರ, &lsquo;ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದೀರಿ. ಕಾಲ ಮಿಂಚಿದೆ. ಜನರು ದಂಗೆ ಏಳುವ ಮುನ್ನ ವಿಧಾನಸಭೆಯನ್ನು ವಿಸರ್ಜಿಸಿ, ಜನತಾ ನ್ಯಾಯಾಲಯಕ್ಕೆ ಬನ್ನಿ&rsquo; ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;ಗೆ ಆಹ್ವಾನ ನೀಡಿದರು.&lt;/p&gt;&lt;h3&gt;ಇಂದು ಕುಡುತಿನಿಯಿಂದ ರಾಮೇಶ್ವರನಗರಕ್ಕೆ ಯಾತ್ರೆ:&lt;/h3&gt;&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಿಂದ ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಆರಂಭಗೊಂಡ ಬಳ್ಳಾರಿ ಚಲೋ ಪಾದಯಾತ್ರೆ ಅಂತಿಮ ಹಂತಕ್ಕೆ ತಲುಪಿದ್ದು, ಬುಧವಾರ ಕುಡುತಿನಿಯಿಂದ ಬಳ್ಳಾರಿಯ ರಾಮೇಶ್ವರನಗರಕ್ಕೆ ಆಗಮಿಸಲಿದೆ. ಸೆ.10ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶದ ಮೂಲಕ ಪಾದಯಾತ್ರೆಯನ್ನು ಪೂರ್ಣಗೊಳಿಸಲಾಗುತ್ತದೆ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bjp-state-president-slams-congress-government-over-power-cut-in-kample-during-bjp-padayatre-rav/articleshow-qlcgi5b"/>
        </item>
        <item>
            <title><![CDATA[ಸಹನೆ, ಛಲ, ಹೋರಾಟದಿಂದ ಕನಸಿನ ಪಟ್ಟಕ್ಕೇರಿದ ನಾಯಕ ಡಿ.ಕೆ. ಶಿವಕುಮಾರ್ ಸರ್ಕಾರಕ್ಕಿಂದು 100 ದಿನ; ಸಿಎಂ ಹಾದಿ ಭಿನ್ನ!]]></title>
            <link>https://kannada.asianetnews.com/state/karnataka-chief-minister-dk-shivakumar-govt-100-days-celebration-vidhana-soudha-sat/articleshow-rrpb7tr</link>
            <guid isPermaLink="true">https://kannada.asianetnews.com/state/karnataka-chief-minister-dk-shivakumar-govt-100-days-celebration-vidhana-soudha-sat/articleshow-rrpb7tr</guid>
            <pubDate>Thu, 10 Sep 2026 05:40:22 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ 100 ದಿನಗಳ ಆಡಳಿತದಲ್ಲಿ, ಅವರು ಸಹಕಾರ ತತ್ವ, ಯುವಜನತೆಗೆ ಆದ್ಯತೆ ಮತ್ತು ತಂತ್ರಜ್ಞಾನದ ಮೇಲೆ ಗಮನಹರಿಸಿದ್ದಾರೆ. ಪ್ರಜಾಸೇವೆ, ಉದ್ಯೋಗ ಸೃಷ್ಟಿ, ಮತ್ತು ಬ್ರ್ಯಾಂಡ್ ಬೆಂಗಳೂರಿನಂತಹ ಯೋಜನೆಗಳ ಮೂಲಕ ತಮ್ಮ ಆಡಳಿತದ ದಿಕ್ಕನ್ನು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24a2cdfjmevksxfaj42wszz,imgname-dk-shivakumar-siddaramaih-1788998660524.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.10): &lt;/strong&gt;ಸಹನೆ, ಛಲ ಹಾಗೂ ಹೋರಾಟದ ಮೂಲಕ ತಮ್ಮ ಕನಸಿನ ಹುದ್ದೆಗೇರಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಕೇವಲ 100 ದಿನಗಳಲ್ಲೇ ತಮ್ಮ ಪರಿಶ್ರಮದ ಉದ್ದೇಶ ಹಾಗೂ ಗುರಿಯೇನಾಗಿತ್ತು ಎಂಬುದನ್ನು ಸಾಬೀತುಪಡಿಸುವೆಡೆಗೆ ದಾಪುಗಾಲು ಹಾಕಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್&zwnj; ಪಕ್ಷವನ್ನು ಕಟ್ಟಿಹಾಕಲು ಪ್ರತಿಪಕ್ಷ ಬಳಸುವ ಹಿಂದು ಮಂತ್ರಕ್ಕೆ ಮೃದು ಹಿಂದುತ್ವದ ತಿರುಮಂತ್ರ, ಅಹಿಂದ ವರ್ಗವನ್ನು ಜತೆಗೆ ಒಯ್ಯುವ ಜೊತೆಗೆ ಮೇಲ್ವರ್ಗವನ್ನು ಸಂತೃಪ್ತಿಗೊಳಿಸುವ ಪ್ರಯತ್ನ, ಜೆನ್&zwnj;-ಝೀಗೆ ಅತಿ ಹೆಚ್ಚಿನ ಆದ್ಯತೆ ಹಾಗೂ ಕೇಂದ್ರ ಹಾಗೂ ನೆರೆಯ ರಾಜ್ಯ ಸರ್ಕಾರಗಳ ಜತೆಗೆ ಸಂಘರ್ಷಕ್ಕಿಂತ ಸಹಕಾರ ತಮ್ಮ ಆಡಳಿತದ ಮೂಲ ತತ್ವ ಎಂಬುದನ್ನು ನಿರೂಪಿಸುವ ಪ್ರಯತ್ನ ನಡೆಸಿದ್ದಾರೆ.&lt;/p&gt;&lt;p&gt;ಇನ್ನು ತಾವು ಆಡಳಿತದಲ್ಲೂ ಹಿಂದೆ ಬಿದ್ದಿಲ್ಲ ಎಂಬುದನ್ನು ನಿರೂಪಿಸಲು ಪ್ರತಿಯೊಂದು ವಿಚಾರದಲ್ಲೂ ವೇಗ ಹಾಗೂ ದೃಢ ನಿರ್ಧಾರಗಳ ಮೂಲಕ ಭರವಸೆ ಮೂಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಘರ್ಷದ ಬದಲು ಸಹಕಾರ ತತ್ವ:&lt;/strong&gt;&lt;/h2&gt;&lt;p&gt;ಕೇಂದ್ರದ ಜತೆ ಸಂಘರ್ಷದ ಬದಲಿಗೆ ಸಹಕಾರ ತತ್ವದಡಿ ಮುಂದುವರೆದಿರುವ ಅವರು, ಮುಖ್ಯಮಂತ್ರಿ ಆದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಲ್ಲ ಕೇಂದ್ರ ಸಚಿವರನ್ನೂ ಭೇಟಿ ಮಾಡಿ ರಾಜ್ಯದ ಪರ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆ ಮುಂದಿಟ್ಟರು.&lt;/p&gt;&lt;p&gt;ಬೆಂಗಳೂರಿನ ಸುರಂಗ ರಸ್ತೆ (ಟನಲ್ ರೋಡ್) ಜಾಲ, ಮೆಟ್ರೋ ಹಂತ 3 ಮತ್ತು 3ಎ, ಉಪನಗರ ರೈಲ್ವೆ ವಿಸ್ತರಣೆ, ಮೇಕೆದಾಟು ಯೋಜನೆಗಳ ಅನುಮೋದನೆಗಾಗಿ ಕೇಂದ್ರದ ನೆರವು ಕೋರಿದ್ದು, 30,000 ಕೋಟಿ ರು.ಗೂ ಅಧಿಕ ಅನುದಾನ ತರಲು ಯತ್ನ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ನೆರೆ ರಾಜ್ಯಗಳೊಂದಿಗೆ ಸ್ನೇಹ:&lt;/strong&gt;&lt;/h2&gt;&lt;p&gt;ನೆರೆ ರಾಜ್ಯಗಳೊಂದಿಗೂ ಸ್ನೇಹ ಸಂಬಂಧದೊಂದಿಗೆ ಮುಂದಡಿ ಇಟ್ಟಿರುವ ಅವರು ದಕ್ಷಿಣ ರಾಜ್ಯಗಳು ಮೊದಲು ಎಂಬ ಕರೆ ನೀಡಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿವಾದದಂತಹ ಸೂಕ್ಷ್ಮ ವಿಚಾರದಲ್ಲೂ &lsquo;ನೀರು ನಮ್ಮನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು&rsquo; ಎಂದು ಹೇಳುತ್ತಾ ತಮಿಳುನಾಡು ಮುಖ್ಯಮಂತ್ರಿಗೆ ಚರ್ಚೆಗೆ ಆಹ್ವಾನ ನೀಡಿದ್ದರು.&lt;/p&gt;&lt;p&gt;ತುಂಗಭದ್ರಾ ಜಲಾಶಯದ 33 ಗೇಟುಗಳ ಲೋಕಾರ್ಪಣೆಗೆ ಆಂಧ್ರ, ತೆಲಂಗಾಣ ಮುಖ್ಯಮಂತ್ರಿಗಳನ್ನು ಒಂದೆಡೆ ಸೇರಿಸಿ ಒಗ್ಗಟ್ಟು ಪ್ರದರ್ಶಿಸಿದರು. ಇದೇ ವೇಳೆ ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಗೆ ಪ್ರಸ್ತಾಪಿಸಿ ಪ್ರಾಥಮಿಕ ಅಂಗೀಕಾರ ಪಡೆದರು.&lt;/p&gt;&lt;h2&gt;&lt;strong&gt;ಭಿನ್ನ ಮುಖ್ಯಮಂತ್ರಿ:&lt;/strong&gt;&lt;/h2&gt;&lt;p&gt;ಕಾಂಗ್ರೆಸ್&zwnj; ಪಕ್ಷದ ಹಿಂದಿನ ಮುಖ್ಯಮಂತ್ರಿಗಳಂತೆ ಪ್ರಬಲ ಜಾತ್ಯತೀತತೆಯ ಮೊರೆ ಹೋಗದೆ ತಮ್ಮ ಜೀವನ ಶೈಲಿ, ಧಾರ್ಮಿಕ ಆಚರಣೆಗಳ ಮೂಲಕ ಬಿಜೆಪಿಯ ಮೃದು ಹಿಂದುತ್ವಕ್ಕೆ ತಿರುಮಂತ್ರ ಹಾಕಿದ್ದಾರೆ.&lt;/p&gt;&lt;p&gt;ಶಿವಕುಮಾರ್&zwnj; ದೈವಭಕ್ತಿ, ಕಟ್ಟುನಿಟ್ಟಿನ ಆಚರಣೆಗಳನ್ನು ಆರ್.ಅಶೋಕ್&zwnj;ರಂಥ ಬಿಜೆಪಿ ನಾಯಕರೇ ಟೀಕಿಸುವಂತಾಗಿದೆ. ಆ ಮೂಲಕ ಹಿಂದುತ್ವದ ನೆರಳಲ್ಲಿ ಮತದ ಕೊಯ್ಲು ಮಾಡಿಕೊಳ್ಳುತ್ತಿದ್ದ ಬಿಜೆಪಿಗೆ ಟಕ್ಕರ್&zwnj; ನೀಡತೊಡಗಿದ್ದಾರೆ.&lt;/p&gt;&lt;p&gt;ಜತೆಗೆ ಕಾಂಗ್ರೆಸ್&zwnj;ನ ಸಾಂಪ್ರದಾಯಿಕ ಬೆಂಬಲಿಗರಾದ ದಲಿತರು, ಮುಸ್ಲಿಮರು, ಹಿಂದುಳಿದ ವರ್ಗಗಳನ್ನು ಓಲೈಸುತ್ತಲೇ ಮೇಲ್ವರ್ಗಗಳನ್ನೂ ಒಲಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಎಲ್ಲಾ ಮುಖ್ಯಮಂತ್ರಿಗಳಿಗಿಂತ ಡಿ.ಕೆ.ಶಿವಕುಮಾರ್&zwnj; ಭಿನ್ನ ನಡೆ ಅನುಸರಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೊದಲ ಸಂಪುಟದಲ್ಲೇ ಸೂಪರ್ ಸಿಕ್ಸ್:&lt;/strong&gt;&lt;/h2&gt;&lt;p&gt;ತಮ್ಮ ಮೊದಲ ಸಂಪುಟ ಸಭೆಯಲ್ಲೇ ಯುವಕರು ಹಾಗೂ ದೇಶಕ್ಕೆ ಹೊಸ ರಾಜಕೀಯ ದಿಕ್ಕು ತೋರುತ್ತಿರುವ ಜೆನ್&zwnj;-ಝೀ ವರ್ಗವನ್ನು ಆಕರ್ಷಿಸಿದ ಅವರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಬಸ್ಸಲ್ಲಿ ಉಚಿತ ಪ್ರಯಾಣ ಕಲ್ಪಿಸುವುದಾಗಿ ಘೋಷಿಸಿದರು.&lt;/p&gt;&lt;p&gt;10,000 ಭಾರತ್ ಜೋಡೋ ಯುವ ಸಂಘಟನೆ ರಚನೆ, ಉದ್ಯೋಗಕ್ಕಾಗಿ ಬೀದಿಗಿಳಿದ ಯುವಕರ ಸಿಟ್ಟು ತಣಿಸಲು 56,432 ಹುದ್ದೆ ನೇಮಕಾತಿ ಪ್ರಕಟ, ಸರ್ಕಾರದಿಂದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆಯಂಥ ಹತ್ತು ಹಲವು ಘೋಷಣೆ ಮಾಡಿದರು.&lt;/p&gt;&lt;p&gt;&lt;strong&gt;ಜನರ ಬದುಕು ಹಸನಿಗೆ ಕ್ರಮ:&lt;/strong&gt;&lt;/p&gt;&lt;p&gt;ಮೊದಲ ನೂರು ದಿನದಲ್ಲೇ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲು &lsquo;ಪ್ರಜಾಸೇವೆ&rsquo; ಇಲಾಖೆ ಕಾರ್ಯರೂಪಕ್ಕೆ ತಂದರು. ಹಲವು ತಿಂಗಳುಗಳಿಂದ ಓಸಿ-ಸಿಸಿ ಸಮಸ್ಯೆಯಿಂದ ನರಳುತ್ತಿದ್ದವರಿಗೆ ಪರಿಹಾರ ಕಲ್ಪಿಸಿದರು, ಇ-ಖಾತಾ ಸಮಸ್ಯೆ, ಭೂ-ಗ್ಯಾರಂಟಿ, ಬಡವರಿಗೆ ವಸತಿ, ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿ ಲಕ್ಷಾಂತರ ಜನಸಾಮಾನ್ಯರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಆ ಮೂಲಕ ಬದುಕು ಹಸನು ಮಾಡಲು ಯತ್ನಿಸಿದರು.&lt;/p&gt;&lt;p&gt;ಭ್ರಷ್ಟಾಚಾರ ವಿರುದ್ಧ ಶೂನ್ಯ ಸಹಿಷ್ಣುತೆ ಘೋಷಿಸಿದ ಶಿವಕುಮಾರ್&zwnj; ಅವರು, ಸರ್ಕಾರಿ ಕಚೇರಿಗಳಲ್ಲಿ ಜಿಪಿಎಸ್&zwnj; ಆಧಾರಿತ ಹಾಜರಾತಿ, ಭ್ರಷ್ಟಾಚಾರ ವಿರುದ್ಧ ದೂರು ವ್ಯವಸ್ಥೆ, ತೆರಿಗೆ ವಂಚನೆ ತಡೆ ಸೇರಿ ಹಲವು ಸುಧಾರಣಾ ಕ್ರಮಗಳಿಗೆ ನಾಂದಿ ಹಾಡಿದರು.&lt;/p&gt;&lt;p&gt;ತಂತ್ರಜ್ಞಾನ, ಜನಕಲ್ಯಾಣ, ಉದ್ಯೋಗ ಸೃಷ್ಟಿ, ಯುವ ಜನತೆಯ ಆಶೋತ್ತರ, ಮೂಲಸೌಕರ್ಯ ಅಭಿವೃದ್ಧಿ, ಧಾರ್ಮಿಕ ಹಕ್ಕುಗಳ ರಕ್ಷಣೆಗೆ ವಿಶೇಷ ಗಮನ ನೀಡಿ ಜನಸ್ನೇಹಿ, ಅಭಿವೃದ್ಧಿಶೀಲ, ಭವಿಷ್ಯಮುಖಿ ಕರ್ನಾಟಕ ನಿರ್ಮಾಣದ ವಿಶ್ವಾಸ ಮೂಡಿಸಿದರು.&lt;/p&gt;&lt;h2&gt;&lt;strong&gt;ತ್ವರಿತ ನಿರ್ಧಾರಗಳ ಪ್ರಯೋಗ ಶಾಲೆ:&lt;/strong&gt;&lt;/h2&gt;&lt;p&gt;ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ನೆರೆ ರಾಜ್ಯಗಳೊಂದಿಗೆ ಸಂಘರ್ಷಕ್ಕಿಂತ ಸಹಕಾರ ತತ್ವದಡಿ ಸಾಗುವ ಪ್ರಯತ್ನ ನಡೆಸಿದ್ದಾರೆ. ಮೊದಲ 100 ದಿನಗಳಲ್ಲೇ ನೂರಾರು ಯೋಜನೆ, ಕಾರ್ಯಕ್ರಮ, ಸುಧಾರಣೆ ಘೋಷಿಸಿದ ಅವರು, ವಿಮರ್ಶೆ, ಟೀಕೆಗಳಿಗೆ ಮಾತಿನ ಬದಲು ಕೆಲಸದ ಮೂಲಕ ಉತ್ತರ ನೀಡುವ ಯತ್ನ ನಡೆಸಿದ್ದಾರೆ. ಅದಕ್ಕಾಗಿ ತಮ್ಮ ಸರ್ಕಾರವನ್ನೇ ವೇಗ ಮತ್ತು ತ್ವರಿತ ನಿರ್ಧಾರಗಳ ಪ್ರಯೋಗ ಶಾಲೆ ಮಾಡಿಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;ರೈತರಿಗೆ ತಕ್ಷಣದ ಸ್ಪಂದನೆ:&lt;/strong&gt;&lt;/h2&gt;&lt;p&gt;ಬರದಿಂದ ತತ್ತರಿಸಿರುವ ರೈತರ ಸಮಸ್ಯೆಗಳಿಗೂ ತಕ್ಷಣ ಸ್ಪಂದಿಸುತ್ತಿರುವ ಅವರು ದೀರ್ಘಕಾಲದ ಪರಿಹಾರಕ್ಕೆ ಒತ್ತು ನೀಡಿದ್ದಾರೆ. ಈಗಾಗಲೇ 101 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿದ್ದು, ಇನ್ನೂ ಹಲವು ತಾಲೂಕುಗಳಲ್ಲಿ ಬರ ಘೋಷಣೆಗೆ ಸಿದ್ಧತೆ ನಡೆಸಿದ್ದಾರೆ.&lt;/p&gt;&lt;p&gt;ಅಲ್ಲದೆ ಬಿತ್ತನೆ ಬೀಜ ಮತ್ತು ಗೊಬ್ಬರದ ಸಕಾಲಿಕ ಪೂರೈಕೆ, ಬೆಳೆ ವಿಮೆ ಬಾಕಿ ಬಿಡುಗಡೆ, ಬರ ನಿರ್ವಹಣೆ, ನೀರಾವರಿ ಯೋಜನೆಗಳ ಮೇಲಿನ ಒತ್ತು, ಡ್ರೋನ್ ಮತ್ತು ಉಪಗ್ರಹದ ಮೂಲಕ ಬೆಳೆ ಸಮೀಕ್ಷೆ ಸೇರಿ ಹಲವು ಕ್ರಮಗಳು ಕೃಷಿಯನ್ನು ತಂತ್ರಜ್ಞಾನ ಮತ್ತು ಉತ್ಪಾದನೆ ಜತೆ ಜೋಡಿಸುವ ಪ್ರಯತ್ನ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ತಂತ್ರಜ್ಞಾನಕ್ಕೆ ಆದ್ಯತೆ, ಎಐಗೆ ಅಗ್ರಸ್ಥಾನ:&lt;/strong&gt;&lt;/h2&gt;&lt;p&gt;&lsquo;ಕೋಡಿಂಗ್ ಗುರುಕುಲ&rsquo;, ಎಐ ಹಬ್&zwnj; ಹಾಗೂ ಬೆಂಗಳೂರಿನಲ್ಲಿ ಎಐ ವಿವಿ ಸ್ಥಾಪನೆ ಘೋಷಿಸುವ ಮೂಲಕ ತಂತ್ರಜ್ಞಾನ ಹಾಗೂ ಎಐಗೆ ವಿಶೇಷ ಆದ್ಯತೆ ನೀಡಿದ್ದಾರೆ. ಬೆಂಗಳೂರನ್ನು ಡೀಪ್-ಟೆಕ್ ಹಬ್ ಹಾಗೂ ಜವಾಬ್ದಾರಿಯುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೇಂದ್ರವನ್ನಾಗಿ ಮಾಡುವುದಾಗಿ ಘೋಷಿಸಿದ್ದಾರೆ. ಜತೆಗೆ 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಶೇ.7.5ರಷ್ಟು ಮೀಸಲಾತಿ ಸೇರಿ ಶಿಕ್ಷಣಕ್ಕೂ ಒತ್ತು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ನೇಮಕಾತಿ ಸುಧಾರಣೆಗೆ ಯತ್ನ:&lt;/strong&gt;&lt;/h2&gt;&lt;p&gt;ನೇಮಕಾತಿ ಅಕ್ರಮಗಳಿಗೆ ಬ್ರೇಕ್&zwnj; ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ಅಲ್ಲದೆ ನೇಮಕಾತಿ ಸುಧಾರಣೆಗೆ ಆಗ್ರಹಿಸಿ ಹೋರಾಟ ನಿರತರಾಗಿದ್ದ ಯುವಕರಿಗೆ ಪೂರಕವಾಗಿ ಸ್ಪಂದಿಸಿದರು. ಆ ಮೂಲಕ ಕಾಂಗ್ರೆಸ್&zwnj;ನಿಂದ ದೂರ ಉಳಿದಿದ್ದ ಯುವಕರನ್ನು ಆಕರ್ಷಿಸಲು ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಜಾಸೇವೆಗೆ ಆದ್ಯತೆ:&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆದ ಬೆನ್ನಲ್ಲೇ ಪ್ರಜಾಸೇವಾ ಅಭಿಯಾನ ಶುರು ಮಾಡಿದರು. ಇದಕ್ಕಾಗಿ ಪ್ರಜಾಸೇವಾ ಇಲಾಖೆಯನ್ನೇ ಸ್ಥಾಪಿಸಿ ಸಾರ್ವಜನಿಕರ ಬಳಿ ಇಡೀ ಆಡಳಿತ ಯಂತ್ರ ಕೊಂಡೊಯ್ದರು. ಸಾರ್ವಜನಿಕರ ಅಹವಾಲು ನೇರವಾಗಿ ಆಲಿಸುವ ಜೊತೆಗೆ, ಅರ್ಜಿಗಳ ತ್ವರಿತ ವಿಲೇವಾರಿ, ಸ್ಥಳದಲ್ಲೇ ಸೇವೆ ನೀಡುವ ಭರವಸೆ ಮೂಡಿಸಿದರು.&lt;/p&gt;&lt;h2&gt;&lt;strong&gt;ಬ್ರ್ಯಾಂಡ್&zwnj; ಬೆಂಗಳೂರು ಅಭಿವೃದ್ಧಿಗೆ ಒತ್ತು:&lt;/strong&gt;&lt;/h2&gt;&lt;p&gt;ಬೆಂಗಳೂರು ಅಭಿವೃದ್ಧಿಗೂ ಈ ಅವಧಿಯಲ್ಲಿ ಹೊಸ ಆಯಾಮ ದೊರೆತಿದೆ. ರಸ್ತೆ ಗುಂಡಿ ಮುಕ್ತಗೊಳಿಸುವ ಘೋಷಣೆ, ಬೆಂಗಳೂರು ಬಿಸಿನೆಸ್ ಕಾರಿಡಾರ್, ರಿಂಗ್ ರಸ್ತೆ ಮತ್ತು ಮೊಬಿಲಿಟಿ ಗ್ರಿಡ್, ಸುರಂಗ ರಸ್ತೆ, ಕೆರೆಗಳ ಅಭಿವೃದ್ಧಿ ಹಾಗೂ ಟ್ರೀ ಪಾರ್ಕ್&zwnj;ಗಳಂಥ ಯೋಜನೆಗಳು ವೇಗವಾಗಿ ಬೆಳೆಯುತ್ತಿರುವ ನಗರದ ಭವಿಷ್ಯದ ಅಗತ್ಯ ಪೂರೈಸಲು ಗಮನಾರ್ಹ ಕೊಡುಗೆ ನೀಡತೊಡಗಿದ್ದಾರೆ.&lt;/p&gt;&lt;p&gt;ಇನ್ನು ಬೆಂಗಳೂರಿಂದ ಆಚೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕರಾವಳಿ ಭಾಗದ ಪ್ರವಾಸೋದ್ಯಮ ನೀತಿ, ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಆಕರ್ಷಣೆಗೆ ಒತ್ತು ನೀಡಿದ್ದಾರೆ.&lt;/p&gt;&lt;p&gt;--&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-chief-minister-dk-shivakumar-govt-100-days-celebration-vidhana-soudha-sat/articleshow-rrpb7tr"/>
        </item>
        <item>
            <title><![CDATA[ಸಾಕಷ್ಟು ಕೆಲಸ ಮಾಡಿದ್ರೂ ಗೆಲುವು ಕಷ್ಟ: ದೇವರ ಮೊರೆ ಹೋದ್ರಾ ಸಚಿವರು? ಶ್ರೀಹೊಳೆ ಆಂಜನೇಯಸ್ವಾಮಿಗೆ 1.25 ಪೈಸೆ ನಾಣ್ಯ ಹರಕೆ ಅರ್ಪಿಸಿದ್ದೇಕೆ?]]></title>
            <link>https://kannada.asianetnews.com/politics/minister-chaluvarayaswamy-offers-special-prayers-to-sri-hole-anjaneyaswamy-madduru-mandya-rav/articleshow-smkkgih</link>
            <guid isPermaLink="true">https://kannada.asianetnews.com/politics/minister-chaluvarayaswamy-offers-special-prayers-to-sri-hole-anjaneyaswamy-madduru-mandya-rav/articleshow-smkkgih</guid>
            <pubDate>Mon, 07 Sep 2026 08:04:29 +0530</pubDate>
            <description><![CDATA[&lt;p&gt;ನಾನು ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಜನರ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದ್ರೂ ಚುನಾವಣೆ ಗೆಲ್ಲೋಕೆ ಕಷ್ಟ ಎಂದು ಸಚಿವ ಚಲುವರಾಯಸ್ವಾಮಿ ಬೇಸರ.ಐತಿಹಾಸಿಕ ಐಹೊಳೆ ಆಂಜನೇಸ್ವಾಮಿಗೆ ವಿಶೇಶ ಪೂಜೆ ಸಲ್ಲಿಸಿ ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1wtnwvhey31rjphqs251eh6,imgname-minister-chaluvarayaswamy-visit-anjaneya-temple-1788747641712.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದ್ದೂರು (ಮಂಡ್ಯ) (ಸೆ.7)) ನಾನು ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಜನರ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ, ಇಷ್ಟೊಂದು ಕೆಲಸ ಮಾಡಿದ್ದರೂ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಕಷ್ಟು ಹೋರಾಟ ಮಾಡಬೇಕಾಗಿರುವುದು ದುರಂತ ಎಂದು ಸಚಿವ ಎನ್. ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.&lt;/p&gt;&lt;h2&gt;ಸುರೇಶ್ ಗೌಡರ ವಿರುದ್ಧ ಕಿಡಿ&lt;/h2&gt;&lt;p&gt;ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಭಾನುವಾರ ಮಾತನಾಡಿ, ನಾನು ಮಾಡಿದ ಕೆಲಸವನ್ನು ದೊಡ್ಡದಾಗಿ ಹೇಳಿಕೊಳ್ಳಲ್ಲ. ಕೆಲಸ ಮಾಡದಿರುವುದನ್ನು ಮಾಡಿದ್ದೇನೆ ಅಂತ ಹೇಳಿಲ್ಲ. ಈ ಚಲುವರಾಯಸ್ವಾಮಿಯನ್ನು ಸುಲಭವಾಗಿ ಗೆಲ್ಲಿಸಬೇಡಿ. ನನ್ನ ಕೆಲಸ ನೋಡಿ ಮತ ಹಾಕಿ. ಏನೂ ಮಾತನಾಡಕ್ಕೆ ಬರದವನು ನನ್ನ ಸರಿಸಟಿ ನಿಲ್ತಾರೆ ಎಂದು ಪರೋಕ್ಷವಾಗಿ ಸುರೇಶ್ ಗೌಡರ ವಿರುದ್ಧ ಕಿಡಿಕಾರಿದರು.&lt;/p&gt;&lt;p&gt;ಬೆಳಗ್ಗೆ ಇಲ್ಲಿಗೆ ಬಂದವನು ಸೊಂಟ, ಬೆನ್ನು ಬಿದ್ದುಹೋಗಿದೆ. ಅಷ್ಟು ಕೆಲಸ ಮಾಡಿ ಬಂದು ಇಲ್ಲಿ ನಿಂತಿದ್ದಿನಿ. ನೀವು ಮನೆಗೆ ಹೋಗಿ ಮಲಗುತ್ತೀರಾ. ನನಗೆ ಇನ್ನು ಕೆಲಸ ಇದೆ. ನಾನು ದಿನ ಬಂದು ಭಾಷಣ ಮಾಡ್ತಿನಾ? ನನ್ನ ನೋವು ಯಾರ ಹತ್ತಿರ ಹೇಳಿಕೊಳ್ಳಲಿ ಎಂದರು.&lt;/p&gt;&lt;h3&gt;ನಾನು ಯಾಕೆ ಇಲ್ಲಿಗೆ ಬರಬೇಕು, ಭಾಷಣ ಮಾಡಬೇಕು?&lt;/h3&gt;&lt;p&gt;ನೀವು ನನ್ನ ಕಷ್ಟ ಕೇಳೋರು. ಜೊತೆ ನಿಲ್ಲೋರು. ನಿಮ್ಮ ಅಕ್ಕಪಕ್ಕದ ಜನರ ಒಂದೊಂದು ವೋಟ್ ವಿಶ್ವಾಸಕ್ಕೆ ತೆಗೆದುಕೊಂಡರೆ ಚುನಾವಣೆಯಲ್ಲಿ ಗೆಲ್ಲುತ್ತೇನೆ. ನಾನು ಯಾಕೆ ಇಲ್ಲಿಗೆ ಬರಬೇಕು, ಭಾಷಣ ಮಾಡಬೇಕು? ನೀವೇ ರಾಜ್ಯ ಸುತ್ತಿ ಕೆಲಸ ಮಾಡಿ ಅಣ್ಣ ಅಂತ ಹೇಳಿದರೆ ಸಚಿವನಾಗಿ ಹಾಸನಕ್ಕೊ, ತುಮಕೂರಿಗೋ ಹೋಗಿ ಕೆಲಸ ಮಾಡುವೆ. ನಾನು ಮದುವೆಗೆ ಬಂದಿಲ್ಲ, ಹಬ್ಬಕ್ಕೆ ಬಂದಿಲ್ಲ ಅನ್ನೋದನ್ನು ಕಾರ್ಯಕರ್ತರು, ಮುಖಂಡರು ಬಿಡಬೇಕು ಎಂದು ಮನವಿ ಮಾಡಿದರು.&lt;/p&gt;&lt;h3&gt;ಶ್ರೀಹೊಳೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ&lt;/h3&gt;&lt;p&gt;ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದರ್ಶನ ಪಡೆದು ಕೈಯಲ್ಲಿ 1.25 ಪೈಸೆ ನಾಣ್ಯ ಹಿಡಿದು ಹರಕೆ ಸಮರ್ಪಿಸಿದ ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ. ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ 4ನೇ ಬಾರಿ ಸಚಿವನಾಗಿದ್ದೇನೆ. ದೇವರು ಮತ್ತು ಕ್ಷೇತ್ರದ ಜನರ ಆಶೀರ್ವಾದ ನನ್ನ ಏಳಿಗೆಗೆ ಕಾರಣ ಎಂದಿದ್ದಾರೆ&lt;/p&gt;&lt;p&gt;ನಗರದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಡೆ ಶ್ರಾವಣ ಶನಿವಾರದ ಅಂಗವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/minister-chaluvarayaswamy-offers-special-prayers-to-sri-hole-anjaneyaswamy-madduru-mandya-rav/articleshow-smkkgih"/>
        </item>
        <item>
            <title><![CDATA[ಸಿದ್ದರಾಮಯ್ಯ ಆಪ್ತ ರಾಜಣ್ಣಗೆ ಮುಖಭಂಗ; ಎಸ್.ರವಿಗೆ ಒಲಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪಟ್ಟ]]></title>
            <link>https://kannada.asianetnews.com/bengaluru-urban/setback-for-siddaramaiah-is-close-aide-kn-rajanna-s-ravi-secures-the-post-of-apex-bank-chairman-gkn/articleshow-t84mgyt</link>
            <guid isPermaLink="true">https://kannada.asianetnews.com/bengaluru-urban/setback-for-siddaramaiah-is-close-aide-kn-rajanna-s-ravi-secures-the-post-of-apex-bank-chairman-gkn/articleshow-t84mgyt</guid>
            <pubDate>Thu, 10 Sep 2026 18:12:56 +0530</pubDate>
            <description><![CDATA[&lt;p&gt;ರಾಜ್ಯ ಸಹಕಾರ ಕ್ಷೇತ್ರದ ಅತ್ಯುನ್ನತ ಸಂಸ್ಥೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ (Apex Bank) ಅಧ್ಯಕ್ಷ ಗಾದಿಯ ಜಿದ್ದಾಜಿದ್ದಿನ ಕದನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಂತ್ರ ಫಲಿಸಿದೆ. ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟು ಶತಾಯಗತಾಯ ಪ್ರಯತ್ನ ನಡೆಸಿದ್ದ ಸಿದ್ದರಾಮಯ್ಯರ ಆಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣಗೆ ತೀವ್ರ ಹಿನ್ನಡೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9yn2ayhv8s8hp1vjz096j7x,imgname-----------------------2025-11-13t183215.867-1763039062993.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ಸಹಕಾರ ಕ್ಷೇತ್ರದ ಅತ್ಯುನ್ನತ ಸಂಸ್ಥೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ (Apex Bank) ಅಧ್ಯಕ್ಷ ಗಾದಿಯ ಜಿದ್ದಾಜಿದ್ದಿನ ಕದನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಂತ್ರ ಫಲಿಸಿದೆ. ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟು ಶತಾಯಗತಾಯ ಪ್ರಯತ್ನ ನಡೆಸಿದ್ದ ಸಿದ್ದರಾಮಯ್ಯರ ಆಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣಗೆ ತೀವ್ರ ಹಿನ್ನಡೆಯಾಗಿದ್ದು, ಡಿ.ಕೆ. ಶಿವಕುಮಾರ್ ಬೆಂಬಲಿತ ಎಸ್. ರವಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪಟ್ಟ ಒಲಿದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಪಾಟೀಲ್ ಬಯ್ಯಾಪುರ ಆಯ್ಕೆಯಾಗಿದ್ದಾರೆ.&lt;/p&gt;&lt;h2&gt;&lt;strong&gt;ರಾಜಣ್ಣ ದೆಹಲಿ ಯಾತ್ರೆ ವಿಫಲ&lt;/strong&gt;&lt;/h2&gt;&lt;p&gt;ಸಚಿವ ಸ್ಥಾನದಿಂದ ವಂಚಿತರಾಗಿದ್ದ ಕೆ.ಎನ್.ರಾಜಣ್ಣಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲು ಸಿದ್ದರಾಮಯ್ಯ ಬಣ ಯತ್ನಿಸಿತ್ತು. ಇದಕ್ಕಾಗಿ ರಾಜಣ್ಣ ಖುದ್ದು ದೆಹಲಿಗೆ ತೆರಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ತೀವ್ರ ಲಾಬಿ ನಡೆಸಿದ್ದರು. ಪೂರ್ಣಾವಧಿಗೆ ಸಿಗದಿದ್ದರೂ ಕನಿಷ್ಠಪಕ್ಷ ಅಧಿಕಾರ ಹಂಚಿಕೆ ಸೂತ್ರದ (ಟರ್ಮ್ ಶೇರಿಂಗ್) ಅಡಿಯಲ್ಲಾದರೂ ಅಧ್ಯಕ್ಷ ಸ್ಥಾನ ಪಡೆಯಬೇಕೆಂದು ರಾಜಣ್ಣ ಹವಣಿಸಿದ್ದರು. ಆದರೆ ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಹೆಣೆದ ರಣತಂತ್ರದ ಮುಂದೆ ರಾಜಣ್ಣ ಅವರ ಎಲ್ಲಾ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಿವೆ. ಅಂತಿಮವಾಗಿ ಹೈಕಮಾಂಡ್ ಎಸ್.ರವಿ ಹೆಸರನ್ನಷ್ಟೇ ಅಂತಿಮಗೊಳಿಸುವ ಮೂಲಕ ರಾಜಣ್ಣಗೆ ಶಾಕ್ ನೀಡಿದೆ.&lt;/p&gt;&lt;h2&gt;&lt;strong&gt;ಅಪೆಕ್ಸ್ ಬ್ಯಾಂಕ್&zwnj;ನಲ್ಲಿ ಕಾಂಗ್ರೆಸ್ ಸಂಖ್ಯಾಬಲ ಎಷ್ಟಿದೆ?&lt;/strong&gt;&lt;/h2&gt;&lt;p&gt;ಅಪೆಕ್ಸ್ ಬ್ಯಾಂಕ್&zwnj;ನಲ್ಲಿ ಒಟ್ಟು 21 ನಿರ್ದೇಶಕರ ಸ್ಥಾನಗಳಿವೆ. ಬಾಗಲಕೋಟೆ ಜಿಲ್ಲೆಯ ಒಂದು ಸ್ಥಾನದ ಚುನಾವಣೆ ಬಾಕಿ ಉಳಿದಿದ್ದು, 20 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಸದ್ಯ ಆಯ್ಕೆಯಾಗಿರುವ ನಿರ್ದೇಶಕರ ಪೈಕಿಯಲ್ಲಿ ಕಾಂಗ್ರೆಸ್ ಬೆಂಬಲಿತರು 15 ಮಂದಿ, ಬಿಜೆಪಿ-ಜೆಡಿಎಸ್ ಬೆಂಬಲಿತರು 3 ಮಂದಿ ಇದ್ದಾರೆ. ಕಾಂಗ್ರೆಸ್&zwnj;ಗೆ ಸ್ಪಷ್ಟ ಬಹುಮತವಿದ್ದ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ಬಣಗಳ ನಡುವಿನ ಹಗ್ಗಜಗ್ಗಾಟವೇ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕವಾಗಿತ್ತು.&lt;/p&gt;&lt;h2&gt;&lt;strong&gt;ನೂತನ ಅಧ್ಯಕ್ಷ ಎಸ್.ರವಿ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಎಸ್. ರವಿ, ನನ್ನನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಪಾಟೀಲ್ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಎಲ್ಲಾ ನಿರ್ದೇಶಕರು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಯಾವುದೇ ಲೋಪದೋಷಗಳಿಲ್ಲದೆ ಸುಗಮವಾಗಿ ಚುನಾವಣೆ ನಡೆದಿದೆ. ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಪೆಕ್ಸ್ ಬ್ಯಾಂಕ್ ರೈತರಿಗೆ ದೊಡ್ಡ ಆರ್ಥಿಕ ನೆರವು ನೀಡುವ ಪ್ರಮುಖ ಸಂಸ್ಥೆ. ಎಲ್ಲರ ನಂಬಿಕೆಯನ್ನು ಉಳಿಸಿಕೊಂಡು, ಎಲ್ಲರ ಸಹಕಾರ ಪಡೆದು ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದರು.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/setback-for-siddaramaiah-is-close-aide-kn-rajanna-s-ravi-secures-the-post-of-apex-bank-chairman-gkn/articleshow-t84mgyt"/>
        </item>
        <item>
            <title><![CDATA[ಕುಮಾರಸ್ವಾಮಿಯನ್ನ ಹಾವಾಡಿಗರಿಗೆ, ಡಿಕೆಶಿಯನ್ನ ಪೈಲ್ವಾನ್‌ರಿಗೆ ಹೋಲಿಸಿದ ಕೃಷಿ ಸಚಿವ ನರೇಂದ್ರಸ್ವಾಮಿ! ಹೆಚ್‌ಡಿಕೆಗೆ ಹಾಕಿದ ಸವಾಲೇನು?]]></title>
            <link>https://kannada.asianetnews.com/politics/minister-narendraswamy-slams-union-minister-hd-kumaraswamy-in-mandya-rav/articleshow-u917yzc</link>
            <guid isPermaLink="true">https://kannada.asianetnews.com/politics/minister-narendraswamy-slams-union-minister-hd-kumaraswamy-in-mandya-rav/articleshow-u917yzc</guid>
            <pubDate>Sun, 06 Sep 2026 15:14:48 +0530</pubDate>
            <description><![CDATA[ಕೇಂದ್ರ ಸಚಿವ ಕುಮಾರಸ್ವಾಮಿ ಅವರ 'ದೇಶವೇ ಅಲ್ಲೋಲ ಕಲ್ಲೋಲ' ಹೇಳಿಕೆಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ನರೇಂದ್ರಸ್ವಾಮಿ, ಕುಮಾರಸ್ವಾಮಿಯವರನ್ನು ಹಾವಾಡಿಗರಿಗೆ ಹೋಲಿಸಿದ್ದಾರೆ. ದಾಖಲೆಗಳಿವೆ ಎಂದು ಹೆದರಿಸುವ ಬದಲು, ತಮ್ಮ ಬುಟ್ಟಿಯಲ್ಲಿರುವುದನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1v0bjtzda7vzktng7f5x7ww,imgname-karnataka-politics-1788686486367.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಸೆ.6):&lt;/strong&gt; 'ದೇಶವೇ ಅಲ್ಲೋಲ ಕಲ್ಲೋಲ ವಿಚಾರ ಹೇಳ್ತೇನೆ' ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಮಂಡ್ಯದ ಹಲಗೂರಿನಲ್ಲಿ ಕೃಷಿ ಸಚಿವ ನರೇಂದ್ರಸ್ವಾಮಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿಯವರನ್ನ ಹಾವಾಡಿಗರಿಗೆ ಹೋಲಿಸಿ ತಿರುಗೇಟು ನೀಡಿದರು.&lt;/p&gt;&lt;h2&gt;ಕುಮಾರಸ್ವಾಮಿ ಹಾವಾಡಿಗರಿದ್ದಂತೆ..&lt;/h2&gt;&lt;p&gt;ಟೀಕೆ ಮಾಡಲೆಂದೇ ಒಬ್ಬರಿಗೆ ಕೇಂದ್ರ ಸಚಿವ ಸ್ಥಾನ ಕೊಟ್ಟಿದ್ದಾರೆ. ಹಿಂದೆ ಹಾವಾಡಿಗರು ಐದಾರು ಬುಟ್ಟಿ ತರುತ್ತಿದ್ದರು. ಅದರಲ್ಲಿ ವಿಷ ಸರ್ಪಗಳಿವೆ ಅಂತಾ ಹೆದರಿಸ್ತಿದ್ರು ಆದ್ರೆ ಯಾರಿಗೂ ತೋರಿಸ್ತಿರಲಿಲ್ಲ. ಅದೇ ರೀತಿ ಕುಮಾರಸ್ವಾಮಿ ದಾಖಲೆ ಇದೆ, ಆಗ ಬಿಡುಗಡೆ ಮಾಡ್ತೀನಿ, ಈಗ ಬಿಡುಗಡೆ ಮಾಡ್ತೀನಿ ಅಂತಾ ಹೆದರಿಸ್ತಾರೆ. ಆದರೆ ಈವರೆಗೆ ಒಂದು ದಾಖಲೆ ಬಿಟ್ಟಿಲ್ಲ ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;ಸದನದಲ್ಲೂ ಅಷ್ಟೇ ಹೆಚ್&zwnj;ಡಿಕೆ, ರೇವಣ್ಣ ಇಬ್ಬರೂ ಅವರೇ ಕಾಣದಷ್ಟು ಎತ್ತರದ ಫೈಲು ಇಟ್ಟುಕೊಂಡು ಕೂರುತ್ತಿದ್ದರು. ಆದ್ರೆ ಯಾವುದಾದರೂ ದಾಖಲೆ ಇದುವರೆಗೆ ಬಿಟ್ಟಿದ್ದು ನೋಡಿಲ್ಲ. ಒಂದು ರೀತಿ ಕುಮಾರಸ್ವಾಮಿ ಹಿಟ್ ಅಂಡ್&zwnj; ರನ್. ಈಗಲೂ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡ್ಬೇಡಿ. ನಿಮ್ಮ ಬುಟ್ಟಿಯಲ್ಲೇನಿದೆ ತೋರಿಸಿ, ಈಗಲಾದ್ರೂ ದಾಖಲೆಗಳನ್ನ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.&lt;/p&gt;&lt;h3&gt;ಕುಮಾರಸ್ವಾಮಿ ವಿರುದ್ಧ ಕುಸ್ತಿ ಗೆದ್ದ ಒಬ್ಬನೇ ಪೈಲ್ವಾನ್ ಡಿಕೆಶಿ&lt;/h3&gt;&lt;p&gt;ಕುಮಾರಸ್ವಾಮಿ ವಿರುದ್ಧ ಕುಸ್ತಿ ಗೆದ್ದ ಒಬ್ಬನೇ ಒಬ್ಬ ಪೈಲ್ವಾನ್ ನಮ್ಮ ಡಿಕೆಶಿ. ದೊಡ್ಡ ದೊಡ್ಡ ಕುಸ್ತಿಪಟುಗಳನ್ನ ಹೊಡೆದುಕೊಂಡು ಬಂದ ದೊಡ್ಡ ಪೈಲ್ವಾನ್ ಡಿಕೆಶಿ. ಕುಮಾರಸ್ವಾಮಿ ಎಂಥ ಪಟ್ಟು ಹಾಕದ್ರೂ ಡಿಕೆಸಿ ಉತ್ತರ ಕೊಡ್ತಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್&zwnj; ಅವರನ್ನ ಹಾಡಿಹೊಗಳಿದರು.&lt;/p&gt;&lt;h3&gt;ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಬಗ್ಗೆ ಕೃಷಿ ಸಚಿವ ಹೇಳಿದ್ದೇನು?&lt;/h3&gt;&lt;p&gt;ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಕಾವೇರಿ ನೀರು ತಮಿಳುನಾಡಿಗೆ ಬಿಟ್ಟು ಬಿಟ್ಟಿದ್ದಾರೆ ಅಂತ ಹೋರಾಟಗಳು ನಡೆಯುತ್ತಿವೆ. ಆದರೆ CWMA, CWRC ಸುಪ್ರೀಂ ಕೋರ್ಟ್ ಮುಂದೆ ವಾಸ್ತವ ಸ್ಥಿತಿ ಇಟ್ಟಿದ್ದೇವೆ. ಒಂದು ಕಡೆ ನಮ್ಮ ರೈತರ ಹಿತವನ್ನು ಕಾಪಾಡಬೇಕಿದೆ. ಜೊತೆಗೆ ದೇಶದ ಕಾನೂನನ್ನು ಪಾಲಿಸಬೇಕಿದೆ. ಇದನ್ನ ಸರ್ಕಾರ ನಿಭಾಯಿಸುವ ಕೆಲಸ ಮಾಡ್ತಿದೆ ಎಂದರು.&lt;/p&gt;&lt;h3&gt;ಭಗವಂತ ಬಿಟ್ಟರೆ ಬೇರೆ ದಾರಿ ಇಲ್ಲ&lt;/h3&gt;&lt;p&gt;ಮಂಡ್ಯ ಜಿಲ್ಲೆ ಕೃಷಿ ಪ್ರದೇಶ. ಬೆಳೆ ಇಲ್ಲದೆ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.. ಜನಜಾನುವಾರುಗಳ ರಕ್ಷಣೆ ಮಾಡಲು ನಾವು ಸಿದ್ದರಿದ್ದೇವೆ. ಈ ಬಾರಿ ಮಳೆ ಕೊರತೆ, ಬರಗಾಲದಿಂದಾಗಿ ರಾಜ್ಯದಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ. ಇದೇ ಪರಿಸ್ಥಿತಿ ಒಂದು ತಿಂಗಳು ಮುಂದುವರಿದರೆ ಕಷ್ಟವಾಗುತ್ತೆ. ಸದ್ಯ ಭಗವಂತನ ಬಿಟ್ಟರೆ ಬೇರೆ ದಾರಿ ಇಲ್ಲ. ಅಧಿಕಾರಿಗಳ ತಂಡಗಳನ್ನು ರೈತರ ಜಮೀನಿಗೆ ಕಳುಹಿಸಿ ಪರಿಶೀಲನೆ ನಡೆಸುತ್ತಿದ್ದೇವೆ.&lt;/p&gt;&lt;h3&gt;ರೈತರು ಸಹಕರಿಸುವಂತೆ ಕೃಷಿ ಸಚಿವ ಮನವಿ&lt;/h3&gt;&lt;p&gt;ರೈತರು ಈ ವರ್ಷ ಅರೆ ಬೆಳೆ ಬೆಳೆಯುವ ಕೆಲಸ ಮಾಡಬೇಕು. ಈ ಬಾರಿ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ದಯವಿಟ್ಟು ರೈತರು ಸಹಕರಿಸಬೇಕು. ಬೆಂಗಳೂರಿನ ಕುಡಿಯುವ ನೀರಿಗೆ ಕೂಡ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/minister-narendraswamy-slams-union-minister-hd-kumaraswamy-in-mandya-rav/articleshow-u917yzc"/>
        </item>
        <item>
            <title><![CDATA[ಸಿಎಂ ಡಿ.ಕೆ. ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು; ವಿಧಾನಸೌಧಕ್ಕೆ ದೌಡಾಯಿಸಿದ ವೈದ್ಯರು]]></title>
            <link>https://kannada.asianetnews.com/bengaluru-urban/fluctuations-in-cm-d-k-shivakumar-health-doctors-rush-to-vidhana-soudha-gkn/articleshow-whsfu7z</link>
            <guid isPermaLink="true">https://kannada.asianetnews.com/bengaluru-urban/fluctuations-in-cm-d-k-shivakumar-health-doctors-rush-to-vidhana-soudha-gkn/articleshow-whsfu7z</guid>
            <pubDate>Tue, 08 Sep 2026 16:15:36 +0530</pubDate>
            <description><![CDATA[&lt;p&gt;ನಿರಂತರ ಕೆಲಸದ ಒತ್ತಡ ಮತ್ತು ಓಡಾಟದ ದಣಿವಿನಿಂದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಕ್ತದೊತ್ತಡದಲ್ಲಿ ಇಂದು ವಿಧಾನಸೌಧದಲ್ಲಿ ಏರುಪೇರು ಉಂಟಾಗಿತ್ತು. ತಕ್ಷಣವೇ ವೈದ್ಯರು ತಪಾಸಣೆ ನಡೆಸಿದ ಬಳಿಕ ಡಿ.ಕೆ.ಶಿ ಅವರ ಆರೋಗ್ಯ ಚೇತರಿಸಿಕೊಂಡಿದ್ದು, ಸದ್ಯ ಬಿಪಿ ಸಹಜ ಸ್ಥಿತಿಗೆ ಮರಳಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m209yk5jxk7fb1vg15751rd8,imgname-dk-shivakumar-health-1788864318642.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರೋಗ್ಯದಲ್ಲಿ ಇಂದು ಸಣ್ಣ ಮಟ್ಟದ ಏರುಪೇರು ಕಂಡುಬಂದಿದ್ದು, ವಿಧಾನಸೌಧದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;h2&gt;&lt;strong&gt;ವಿಧಾನಸೌಧದಲ್ಲೇ ಬಿಪಿ ಚೆಕ್&lt;/strong&gt;&lt;/h2&gt;&lt;p&gt;ಇಂದು ಮಧ್ಯಾಹ್ನ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ, ಡಿ.ಕೆ. ಶಿವಕುಮಾರ್ ಅವರಿಗೆ ಅಲ್ಪ ಸುಸ್ತು ಹಾಗೂ ರಕ್ತದೊತ್ತಡದಲ್ಲಿ (BP) ವ್ಯತ್ಯಾಸ ಕಂಡುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣವೇ ವಿಧಾನಸೌಧದ ವೈದ್ಯರಿಗೆ ಬುಲಾವ್ ನೀಡಲಾಯಿತು.&lt;/p&gt;&lt;p&gt;ಸಿಎಂ ಕಚೇರಿಗೆ ಆಗಮಿಸಿದ ವೈದ್ಯರ ತಂಡ ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ತಪಾಸಣೆ ನಡೆಸಿತು. ಪ್ರಾಥಮಿಕ ತಪಾಸಣೆಯಲ್ಲಿ ರಕ್ತದೊತ್ತಡದಲ್ಲಿ ಏರುಪೇರಾಗಿರುವುದು ಕಂಡುಬಂದಿದೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದ ನಂತರ ಈಗ ಅವರ ಬಿಪಿ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ವಿಶ್ರಾಂತಿ ಇಲ್ಲದ ಕೆಲಸ&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೂ ಡಿ.ಕೆ.ಶಿವಕುಮಾರ್ ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿನ್ನೆಯಿಂದ ರಾಜ್ಯದ ವಿವಿಧೆಡೆ ತೀವ್ರ ಓಡಾಟ ನಡೆಸಿದ್ದ ಅವರು, ಇಂದು ಬೆಳಿಗ್ಗೆಯೂ ಸತತ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ನಿರಂತರ ಓಡಾಟ ಮತ್ತು ಕೆಲಸದ ಒತ್ತಡದಿಂದಾಗಿ ದೇಹ ಬಳಲಿದ್ದು, ರಕ್ತದೊತ್ತಡದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ಸದ್ಯ ಡಿ.ಕೆ.ಶಿವಕುಮಾರ್ ಅವರು ಚೇತರಿಸಿಕೊಂಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ. ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/fluctuations-in-cm-d-k-shivakumar-health-doctors-rush-to-vidhana-soudha-gkn/articleshow-whsfu7z"/>
        </item>
        <item>
            <title><![CDATA[ತಂಗಡಗಿ-ಜನಾರ್ದನ ರೆಡ್ಡಿ ಟ್ವೀಟ್ ವಾರ್ ಮತ್ತೊಂದು ಹಂತಕ್ಕೆ! ರಾಜೀನಾಮೆಗೆ ನಾನೂ ರೆಡಿ, ರೆಡ್ಡಿ ನೇರ ಸವಾಲ್!]]></title>
            <link>https://kannada.asianetnews.com/politics/shivraj-tangadagi-vs-janardhana-reddy-twitter-war-escalates-over-old-video-rav/articleshow-xxkbd74</link>
            <guid isPermaLink="true">https://kannada.asianetnews.com/politics/shivraj-tangadagi-vs-janardhana-reddy-twitter-war-escalates-over-old-video-rav/articleshow-xxkbd74</guid>
            <pubDate>Wed, 09 Sep 2026 09:12:54 +0530</pubDate>
            <description><![CDATA[ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ಜನಾರ್ಧನರೆಡ್ಡಿ ನಡುವಿನ ಟ್ವೀಟ್ ಸಮರ ತಾರಕಕ್ಕೇರಿದೆ. ಜನಾರ್ಧನರೆಡ್ಡಿ ತಮಗೆ ಸಹಾಯ ಮಾಡಿದ್ದರ ಬಗ್ಗೆ ಈ ಹಿಂದೆ ತಂಗಡಗಿಯವರೇ ಮಾತನಾಡಿದ್ದ ಹಳೆಯ ವಿಡಿಯೋವನ್ನು ರೆಡ್ಡಿ ಹಂಚಿಕೊಂಡಿದ್ದು, ರಾಜೀನಾಮೆ ನೀಡಿ ಚುನಾವಣೆಗೆ ಬರುವಂತೆ ನೇರ ಸವಾಲು ಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m223z8kat3ep9vbedgcs3b64,imgname-shivraj-tangadagi-vs-janardhana-reddy-1788925157994.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ಜನಾರ್ಧನರೆಡ್ಡಿ ನಡುವಿನ ಟ್ವೀಟ್ ಸಮರ ಸದ್ಯ ಮತ್ತೊಂದು ಹಂತಕ್ಕೆ ತಲುಪಿದೆ. ತಂಗಡಗಿ ನೀಡಿದ್ದ ಹೇಳಿಕೆಯ ವಿಡಿಯೋವನ್ನೇ ಜನಾರ್ಧನರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಚಿವ ತಂಗಡಗಿಗೆ ಕೊಟ್ಟಿದ್ದಾರೆ.&lt;/p&gt;&lt;h2&gt;ತಂಗಡಗಿ ವಿಡಿಯೋ ಪೋಸ್ಟ್ ಮಾಡಿದ ರೆಡ್ಡಿ!&lt;/h2&gt;&lt;p&gt;ಇತ್ತೀಚೆಗೆ ನಡೆದ ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಜನಾರ್ಧನರೆಡ್ಡಿಯನ್ನು ಹೊಗಳಿದ್ದರು ಎನ್ನಲಾದ ವಿಡಿಯೋ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದೇ ವಿಡಿಯೋವನ್ನು ಜನಾರ್ಧನರೆಡ್ಡಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, 'ನಿಮ್ಮ ಸ್ವಂತ ಬಾಯಿಯಿಂದಲೇ ಹೇಳಿದ್ದ ವಿಡಿಯೋ ಇನ್ನಮೊಮ್ಮೆ ಕೇಳು..' ಎಂದು ತಿರುಗೇಟು ನೀಡಿದ್ದಾರೆ.&lt;/p&gt;&lt;p&gt;ಈ ಹಿಂದೆ ಮಾತನಾಡಿದ್ದ ಸಚಿವ ಶಿವರಾಜ ತಂಗಡಗಿ, ಜನಾರ್ಧನರೆಡ್ಡಿ ನನಗೆ ಸಹಾಯ ಮಾಡಿದ್ದಾರೆ. ಸಹಾಯ ಮಾಡಿದ ಯಾರನ್ನೂ ನಾನು ಮರೆಯುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಇದೀಗ ಆ ಹೇಳಿಕೆ ವಿಡಿಯೋ ಮುಂದಿಟ್ಟು ತಂಗಡಿಗೆಗೆ ತಿರುಗೇಟು ನೀಡಿದ್ದಾರೆ. ಈ ವಿಡಿಯೋದಿಂದಾಗಿ ಕೊಪ್ಪಳ ರಾಜಕಾರಣದಲ್ಲಿ ಇಬ್ಬರು ನಾಯಕರ ನಡುವಿನ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪಿದೆ.&lt;/p&gt;&lt;h3&gt;&lsquo;ಲೇ ಅನ್ನೋಕೆ ನನಗೂ ಬರುತ್ತೆ...&rsquo;&lt;/h3&gt;&lt;p&gt;ಇದಕ್ಕೂ ಮುನ್ನ ಜನಾರ್ಧನರೆಡ್ಡಿ ಅವರ ಟೀಕೆಗೆ ಪ್ರತಿಕ್ರಿಯಿಸಿದ್ದ ಸಚಿವ ತಂಗಡಗಿ, ಫೇಸ್&zwnj;ಬುಕ್&zwnj;ನಲ್ಲಿ ಸುದೀರ್ಘವಾಗಿ ಪೋಸ್ಟ್ ಮಾಡಿದ್ದರು, 'ಲೇ ಅನ್ನೋಕೆ ನನಗೂ ಬರುತ್ತೆ. ಆದರೆ ನಾನು ಅನ್ನಲ್ಲ..' ಎಂಬರ್ಥದಲ್ಲಿ ತಂಗಡಗಿ ಬರೆದಿದ್ದ ಪೋಸ್ಟ್ ಕೂಡ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ತಂಗಡಗಿಯ ಪೋಸ್ಟ್&zwnj;ಗೆ ಪ್ರತಿಯಾಗಿ ಜನಾರ್ಧನರೆಡ್ಡಿ ಹಳೆಯ ವಿಡಿಯೋ ಬಿಡುಗಡೆ ಮಾಡಿ ತಿರುಗೇಟು ನೀಡಿರುವುದು ಇಬ್ಬರ ನಡುವಿನ ಟ್ವಿಟ್ ವಾರ್ ಕುತೂಹಲ ಮೂಡಿಸಿದೆ.&lt;/p&gt;&lt;h3&gt;ಹಳೆಯ ಹೊಗಳಿಕೆಯೇ ಈಗ ರೆಡ್ಡಿ ಅಸ್ತ್ರ!&lt;/h3&gt;&lt;p&gt;ತಂಗಡಗಿ ಒಮ್ಮೆ ನಾನು ಯಾರಿಂದಲೂ ಹಣ ಪಡೆದಿಲ್ಲ, ಸ್ವಂತ ಬಲದ ಮೇಲೆ ಗೆದ್ದಿದ್ದೇನೆ ಹೇಳಿದರೆ, ಇನ್ನೊಂದು ರೆಡ್ಡಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಂಗಡಗಿ ತಮ್ಮ ಹಿಂದಿನ ಹೇಳಿಕೆಯಲ್ಲಿ ಜನಾರ್ಧನರೆಡ್ಡಿ ಮಾಡಿದ ಸಹಾಯವನ್ನು ನೆನಪಿಸಿಕೊಂಡು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಇದೀಗ ಅದೇ ವಿಡಿಯೋ ಮುಂದಿಟ್ಟುಕೊಂಡು ರೆಡ್ಡಿ ಸವಾಲು ಹಾಕಿದ್ದಾರೆ.&lt;/p&gt;&lt;h3&gt;ಲೇ ತಮ್ಮ ನಿನ್ನದೇ ವಿಡಿಯೋ ನೋಡು..!&lt;/h3&gt;&lt;p&gt;ನನ್ ಯಾರಿಗೂ ತಲೆಬಾಗಿಲ್ಲ, ಯಾರತ್ರನು ಗಣಿ ಹಣ ಪಡೆದಿಲ್ಲ ಅಂದೆ ಅಲ್ವಾ? ಕಳೆದ ಜುಲೈನಲ್ಲಿ ಖಾಸಗಿ ಕಾಲೇಜಿನ ಸಮಾರಂಭದಲ್ಲಿ ಸ್ವತಃ ನಿನ್ನ ಬಾಯಿಂದಲೇ ಯಾರ ಆಶೀರ್ವಾದದಿಂದ, ಯಾರ ಹಣದಿಂದ ನೀನು ಮೊದಲ ಸಲ ಶಾಸಕನಾದೆ, ಮಂತ್ರಿಯಾದೆ ಅಂತ ಒಪ್ಕೊಂಡಿರೋ ವಿಡಿಯೋ ನೋಡು. ನೀನು ಗಣಿ ದುಡ್ಡಲ್ಲೇ ಶಾಸಕನಾಗಿದ್ದು ಹಾಗೂ ಮಂತ್ರಿಯಾಗಿದ್ದು ಅಂತ ನಾನು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದು ಅದರಲ್ಲೇನಿದೆ? ನೀನೇ ಸ್ವತಃ ಒಪ್ಪಿಕೊಂಡಿರುವೆಲ್ಲ? ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;'ಲೇ ತಮ್ಮಾ.. ಅನ್ನೋದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯ&lt;/h3&gt;&lt;p&gt;ಲೇ ತಮ್ಮ ಎನ್ನುವುದು ಉತ್ತರ ಕರ್ನಾಟಕ ಭಾಷೆಯಲ್ಲಿ ಸಾಮಾನ್ಯ ಪದವಾಗಿದೆ. ವಯಸ್ಸಿನ ಕಿರಿಯರಿಗೆ ಪ್ರೀತಿಯಿಂದ ಕರೆಯುವ ಮಾತು, ಅದು ಅವಾಚ್ಯವಾಗಲಿ, ಏಕವಚನ ಎಂದಾಗಲಿ ಅಲ್ಲ ಎಂದು ಸ್ಪಷ್ಟನೆ ನೀಡಿದ ರೆಡ್ಡಿ, ನನ್ನಿಂದ ಹಣ ಪಡೆದಿಲ್ಲವಾ? ನೀನು ಹೇಳಿರುವುದು ನೆನಪಿಲ್ಲ ಅಂದ್ರೆ, ಕಿವಿಗೆ ಹೆಡ್&zwnj;ಫೋನ್ ಹಾಕ್ಕೊಂಡು ಇನ್ನೊಂದು ಸಲ ಕ್ಲಿಯರ್ ಆಗಿ ನಿನ್ನದೇ ವಿಡಿಯೋ ಕೇಳಿಸ್ಕೋ!&lt;/p&gt;&lt;h3&gt;ತಂಗಡಗಿಗೆ ಜನಾರ್ದನ ರೆಡ್ಡಿ ಸವಾಲ್&lt;/h3&gt;&lt;p&gt;ಹೇ ತಂಗಡಗಿ, ವಿಧಾನಸೌಧಕ್ಕೆ ನಿನ್ನ ಕಾರಿನಲ್ಲೇ ಜೊತೆಯಲ್ಲೇ ಬರ್ತೀನಿ! ನೀನು ಮಂತ್ರಿ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ, ಜೊತೆಗೆ ಆ ನಾಗೇಂದ್ರ ಹಾಗೂ ಇಡೀ ಬಳ್ಳಾರಿ ಕಾಂಗ್ರೆಸ್ ಶಾಸಕರನ್ನು ಕರ್ಕೊಂಡು ಬಾ. ನಾನು ನಿನ್ನ ಮುಂದೆನೇ ಇರುತ್ತೇನೆ.ಅವರೆಲ್ಲರ ರಾಜೀನಾಮೆ ಕೊಡಿಸು, ನಿಮ್ಮ ರಾಜೀನಾಮೆಗಳು ಸ್ವೀಕಾರ ಆಗಿದ್ದ ತಕ್ಷಣ ನಾನು ಕೂಡ ರಾಜೀನಾಮೆ ಕೊಡುತ್ತೇನೆ. ಜೊತೆಗೆ ಚುನಾವಣಾ ಅಖಾಡಕ್ಕೆ ಧುಮುಕೋಣ! ಯಾರು ಜನನಾಯಕರು, ಯಾರಿಗೆ ಜನ ಠೇವಣಿ ಕಸಿದು ಮನೆಗೆ ಕಳಿಸ್ತಾರೆ ಅಂತ ನೇರವಾಗಿಯೇ ಗಂಗಾವತಿ ಹಾಗೂ ಕನಕಗಿರಿಯಲ್ಲಿ ತೀರ್ಮಾನ ಆಗಿಹೋಗಲಿ ಎಂದು ರೆಡ್ಡಿ ನೇರ ಸವಾಲ್ ಹಾಕಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/shivraj-tangadagi-vs-janardhana-reddy-twitter-war-escalates-over-old-video-rav/articleshow-xxkbd74"/>
        </item>
        <item>
            <title><![CDATA[ಮಧು ಬಂಗಾರಪ್ಪ, ರಾಘವೇಂದ್ರ ಮುಖಾಮುಖಿ - ನಂತರ ಆಗಿದ್ದೇನು ಗೊತ್ತಾ?]]></title>
            <link>https://kannada.asianetnews.com/karnataka-districts/minister-madhu-bangarappa-and-mp-raghavendra-come-face-to-face-in-shikaripura-gkn/articleshow-y70z6dk</link>
            <guid isPermaLink="true">https://kannada.asianetnews.com/karnataka-districts/minister-madhu-bangarappa-and-mp-raghavendra-come-face-to-face-in-shikaripura-gkn/articleshow-y70z6dk</guid>
            <pubDate>Tue, 08 Sep 2026 22:21:01 +0530</pubDate>
            <description><![CDATA[&lt;p&gt;ಶಿಕಾರಿಪುರದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಚಿವ ಮಧು ಬಂಗಾರಪ್ಪ ಅವರ ಬೆಂಬಲಿಗರ ನಡುವೆ ಘೋಷಣೆಗಳ ಪೈಪೋಟಿ ನಡೆಯಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮಧು ಬಂಗಾರಪ್ಪ ಪರವಾಗಿ 'ಮುಂದಿನ ಸಿಎಂ' ಘೋಷಣೆ ಕೂಗಿದ್ದು, ನಂತರ ಇಬ್ಬರೂ ನಾಯಕರು ಜಂಟಿಯಾಗಿ ಬಂದು ಕಾರ್ಯಕರ್ತರನ್ನು ಶಾಂತಗೊಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20ytt271ajbv1ank04tadp7,imgname-madhu-bangarappa-and-by-raghavendra-1788886214727.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿಕಾರಿಪುರ (ಶಿವಮೊಗ್ಗ):&lt;/strong&gt; ಮಲೆನಾಡಿನ ರಾಜಕೀಯ ಕೇಂದ್ರಬಿಂದು ಶಿಕಾರಿಪುರದಲ್ಲಿ ಇಂದು ಹೈಡ್ರಾಮಾ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಮುಖಾಮುಖಿಯಾದ ವೇದಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘೋಷಣೆಗಳ ಸಮರವೇ ನಡೆದಿದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮಧು ಬಂಗಾರಪ್ಪ ಅವರನ್ನು 'ಮುಂದಿನ ಮುಖ್ಯಮಂತ್ರಿ' ಎಂದು ಕೂಗಿದ್ದು ವಿಶೇಷವಾಗಿತ್ತು.&lt;/p&gt;&lt;h2&gt;&lt;strong&gt;ಘೋಷಣೆಗಳ ಪೈಪೋಟಿ&lt;/strong&gt;&lt;/h2&gt;&lt;p&gt;ಶಿಕಾರಿಪುರದಲ್ಲಿ ನಡೆದ 'ಪ್ರಜಾಸೇವಾ ಆಂದೋಲನ' ಸಭೆಯಲ್ಲಿ ಈ ಘಟನೆ ನಡೆದಿದೆ. ಸಭೆಗೆ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಆಗಮಿಸುತ್ತಿದ್ದಂತೆಯೇ ಎರಡೂ ಪಕ್ಷದ ಕಾರ್ಯಕರ್ತರು ಅಲರ್ಟ್ ಆದರು. ಮೊದಲು ಬಿಜೆಪಿ ಕಾರ್ಯಕರ್ತರು ಸಂಸದ ರಾಘವೇಂದ್ರ ಅವರ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಸಡ್ಡು ಹೊಡೆದ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಮಧು ಬಂಗಾರಪ್ಪ ಅವರ ಪರವಾಗಿ ಜೈಕಾರ ಹಾಕಿದರು.&lt;/p&gt;&lt;h2&gt;&lt;strong&gt;ಮುಂದಿನ ಸಿಎಂ ಘೋಷಣೆ&lt;/strong&gt;&lt;/h2&gt;&lt;p&gt;ಕೈ ಕಾರ್ಯಕರ್ತರ ಉತ್ಸಾಹ ಇಷ್ಟಕ್ಕೇ ನಿಲ್ಲಲಿಲ್ಲ. ಸಂಸದ ಬಿ.ವೈ. ರಾಘವೇಂದ್ರ ಅವರು ವೇದಿಕೆಯ ಮೇಲಿರುವಾಗಲೇ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಮಧು ಬಂಗಾರಪ್ಪ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದ್ದು ಸ್ಥಳದಲ್ಲಿದ್ದವರ ಗಮನ ಸೆಳೆಯಿತು. ಶಿಕಾರಿಪುರದಲ್ಲಿ ರಾಘವೇಂದ್ರ ಅವರ ಸಮ್ಮುಖದಲ್ಲೇ ಈ ರೀತಿ ಘೋಷಣೆಗಳು ಮೊಳಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಸಂಯಮ ಮೆರೆದ ನಾಯಕರು&lt;/strong&gt;&lt;/h2&gt;&lt;p&gt;ಕಾರ್ಯಕರ್ತರ ಘೋಷಣೆಗಳ ಅಬ್ಬರ ಜೋರಾಗುತ್ತಿದ್ದಂತೆ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ತಕ್ಷಣವೇ ಎಚ್ಚೆತ್ತುಕೊಂಡರು. ಇಬ್ಬರೂ ನಾಯಕರು ಜಂಟಿಯಾಗಿ ಬಂದು ತಮ್ಮ ತಮ್ಮ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿ, ಘೋಷಣೆ ಕೂಗದಂತೆ ಸೂಚನೆ ನೀಡಿದರು. ನಾಯಕರ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು.&lt;/p&gt;&lt;p&gt;ಒಟ್ಟಾರೆಯಾಗಿ, ಅಭಿವೃದ್ಧಿ ಕೆಲಸಗಳ ಚರ್ಚೆಗಾಗಿ ನಡೆದ ಸಭೆಯಲ್ಲಿ ಕಾರ್ಯಕರ್ತರ ಉತ್ಸಾಹವು ಘೋಷಣೆಗಳ ಸಮರವಾಗಿ ಬದಲಾಗಿದ್ದು ಕಂಡುಬಂದಿತು. ಆದರೆ, ನಾಯಕರು ತೋರಿದ ಪರಸ್ಪರ ಗೌರವ ಮತ್ತು ಸಂಯಮವು ಸಭೆ ಸುಗಮವಾಗಿ ನಡೆಯಲು ಸಹಕಾರಿಯಾಯಿತು.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/minister-madhu-bangarappa-and-mp-raghavendra-come-face-to-face-in-shikaripura-gkn/articleshow-y70z6dk"/>
        </item>
        <item>
            <title><![CDATA[ಬಳ್ಳಾರಿ ಚಲೋ ಬಿಜೆಪಿ ಯಾತ್ರೆಗೆ ತೆರೆ: ನಾಗೇಂದ್ರನ ಬಿಟ್ಟು ಕಾಂಗ್ರೆಸ್ ಬುಡಕ್ಕೆ ಕೈ ಹಾಕಿದ ಬಿ.ವೈ.ವಿಜಯೇಂದ್ರ]]></title>
            <link>https://kannada.asianetnews.com/state/bjp-ballari-chalo-padayatra-concludes-by-vijayendra-attacks-congress-govt-after-nagendra-sat/articleshow-ziv326b</link>
            <guid isPermaLink="true">https://kannada.asianetnews.com/state/bjp-ballari-chalo-padayatra-concludes-by-vijayendra-attacks-congress-govt-after-nagendra-sat/articleshow-ziv326b</guid>
            <pubDate>Fri, 11 Sep 2026 06:46:06 +0530</pubDate>
            <description><![CDATA[ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ 'ಬಳ್ಳಾರಿ ಚಲೋ' ಪಾದಯಾತ್ರೆಯು ಬೃಹತ್ ಸಮಾವೇಶದೊಂದಿಗೆ ಸಮಾರೋಪಗೊಂಡಿದೆ. ಇದು ಭ್ರಷ್ಟಾಚಾರದ ವಿರುದ್ಧದ ಯುದ್ಧದ ಆರಂಭವಾಗಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದಾಗಿ ವಿಜಯೇಂದ್ರ ಗುಡುಗಿದ್ದಾರೆ. ಅಲ್ಲದೆ, ರೈತರ ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27037tyth64jytrb9vxcv27,imgname-ballari-chalo-bjp-by-vijayendra-1789088866140.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬಳ್ಳಾರಿ&lt;/strong&gt;&lt;/p&gt;&lt;p&gt;ನಮ್ಮ ಈ ಪಾದಯಾತ್ರೆಯ ಸಮಾರೋಪ ಹೋರಾಟದ ಅಂತ್ಯವಲ್ಲ, ಭ್ರಷ್ಟಾಚಾರದ ವಿರುದ್ಧದ ನಮ್ಮ ಯುದ್ಧದ ಆರಂಭ ಎಂದು ಅಬ್ಬರಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮನೆಯಲ್ಲಿ ಕೂರುವ ಪ್ರಶ್ನೆಯೇ ಇಲ್ಲ, ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಪರ್ಯಟನೆ ಮಾಡುತ್ತೇವೆ. ಈ ದರಿದ್ರ, ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಎಂದು ಗುಡುಗಿದ್ದಾರೆ.&lt;/p&gt;&lt;p&gt;ಉರಿಬಿಸಿಲಿನ ತಾಪಕ್ಕೆ ಹೆಸರಾಗಿರುವ ಗಣಿನಾಡು ಬಳ್ಳಾರಿ ಗುರುವಾರ ಸಂಜೆ ನಡೆದ ಬೃಹತ್ ರಾಜಕೀಯ ಸಮಾವೇಶಕ್ಕೆ ಸಾಕ್ಷಿಯಾಯಿತು. ವಾಲ್ಮೀಕಿ ನಿಗಮದ 187 ಕೋಟಿ ರು. ವಾಪಸ್&zwnj;ಗೆ ಆಗ್ರಹಿಸಿ, ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಂದು ರಾಯಚೂರು ಜಿಲ್ಲೆಯಲ್ಲಿ ಆರಂಭಗೊಂಡ ಬಳ್ಳಾರಿ ಚಲೋ ಪಾದಯಾತ್ರೆ, 187 ಕಿ.ಮೀ. ಕ್ರಮಿಸಿ 3 ಜಿಲ್ಲೆಗಳನ್ನು ಹಾದು ಸೆ.9ರಂದು ಬಳ್ಳಾರಿ ತಲುಪಿತ್ತು. ಗುರುವಾರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಅದ್ಧೂರಿ ಸಮಾರೋಪದೊಂದಿಗೆ ತೆರೆ ಕಂಡಿತು.&lt;/p&gt;&lt;p&gt;ಸಮಾರಂಭದಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಆರಂಭಿಸಿರುವ ಹೋರಾಟ ಮುಂದುವರಿಯಲಿದ್ದು, ರಣರಂಗದಲ್ಲಿ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಭ್ರಷ್ಟಾಚಾರದ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ&lt;/strong&gt;&lt;/h2&gt;&lt;p&gt;ಬಳ್ಳಾರಿ ಚಲೋ ಪಾದಯಾತ್ರೆಯ ಸಮಾರೋಪ ಸಮಾವೇಶದ ಮೂಲಕ ಮೊದಲ ಹಂತದ ಹೋರಾಟ ಅಂತ್ಯಗೊಂಡಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿಯೂ ಜನರ ಪರ ಹೋರಾಟ ನಡೆಸಲಾಗುವುದು. ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸಲು ರಾಜ್ಯದ ಜನರು ತೀರ್ಮಾನಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಬಿಜೆಪಿಯ ಸಮರ ಆರಂಭವಾಗಿದ್ದು, ಇದನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ವಿಜಯೇಂದ್ರ ಹೇಳಿದರು.&lt;/p&gt;&lt;p&gt;ರಾಜ್ಯದಲ್ಲಿ ಡ್ರಗ್ಸ್&zwnj; ಮಾಫಿಯಾ ಮಿತಿ ಮೀರಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಮುಖ್ಯಮಂತ್ರಿಗಳೇ ಹೇಳಿಕೊಳ್ಳುವಂತೆ ಅವರು, ಶೇ.90ರಷ್ಟು ಬಿಜಿನೆಸ್ ಮ್ಯಾನ್, ಶೇ.10ರಷ್ಟು ಮಾತ್ರ ರಾಜಕಾರಣಿಯಾಗಿದ್ದಾರೆ. ಒಬ್ಬ ಬಿಜಿನೆಸ್ ಮ್ಯಾನ್&zwnj;ನಿಂದ ರಾಜ್ಯದ ಕಲ್ಯಾಣ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.&lt;/p&gt;&lt;p&gt;ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಿಲ್ಲ. ಇಡೀ ರಾಜ್ಯದ ಪ್ರಗತಿ ಹಿನ್ನಡೆಯತ್ತ ಮುಖ ಮಾಡಿದೆ. ಹೀಗಾಗಿ, ರಾಜ್ಯದ ಪ್ರಗತಿಯ ದೃಷ್ಟಿಯಿಂದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹200 ಕೋಟಿ ಬಿಡುಗಡೆ ಮಾಡಬೇಕು. ಎಸ್ಸಿಟಿಎಸ್ಪಿ ಹಣ ಬಳಕೆ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.&lt;/p&gt;&lt;h2&gt;&lt;strong&gt;ಸಾಲ ಮನ್ನಾ, 3 ಫೇಸ್ ನಿರಂತರ ವಿದ್ಯುತ್&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕಾಂಗ್ರೆಸ್ ಸರ್ಕಾರ ಕೂಡಲೇ ನಾಡಿನ ಎಲ್ಲ ರೈತರ ₹5 ಲಕ್ಷದವರೆಗಿನ ಸಾಲ ಮನ್ನಾ ಮಾಡಬೇಕು. ತ್ರಿಫೇಸ್ ವಿದ್ಯುತ್ ಇಲ್ಲದೆ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಬೋರ್ಡ್&zwnj;ಗಳಿಗೆ ₹2 ಸಾವಿರ ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.&lt;/p&gt;&lt;p&gt;ರೈತರ ಸಾಲ ಮನ್ನಾ ಮಾಡಿ ಎಂದರೆ ಮೋದಿ ಹತ್ತಿರ ಹೋಗೋಣ ಅಂತಾರೆ. ಆದರೆ, ಹಿಂದೆ ಯಡಿಯೂರಪ್ಪ ಇದ್ದಾಗ ರಾಜ್ಯದಿಂದಲೇ ಪರಿಹಾರ ಕೊಟ್ರು. ರೈತರ ಸಾಲ ಮನ್ನಾ ಮಾಡಿದ್ರು. ಈಗ ಮಹಾರಾಷ್ಟ್ರ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲವೇ? ಸಾಲ ಮನ್ನಾ ಮಾಡದಿದ್ದರೆ ರೈತರೇ ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದರು.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bjp-ballari-chalo-padayatra-concludes-by-vijayendra-attacks-congress-govt-after-nagendra-sat/articleshow-ziv326b"/>
        </item>
    </channel>
</rss>
