<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 09 May 2026 18:04:14 +0530</lastBuildDate>
        <atom:link href="https://kannada.asianetnews.com/rss/politics" rel="self" type="application/rss+xml"/>
        <item>
            <title><![CDATA[ರಾಜಕೀಯದ ಹುಚ್ಚು ಹಿಡಿಸಿದ್ದ ಅಪ್ಪನ ವಿರುದ್ಧವೇ ತಿರುಗಿ ನಿಂತ ವಿಜಯ್, ತಂದೆ ಪಕ್ಷ ವಿರೋಧಿಸಿ, ಟಿವಿಕೆ ಕಟ್ಟಿದ ಕಥೆ!]]></title>
            <link>https://kannada.asianetnews.com/politics/vijay-political-journey-from-opposing-father-sa-chandrasekhar-party-to-leading-tvk-gdp/articleshow-mgek29b</link>
            <guid isPermaLink="true">https://kannada.asianetnews.com/politics/vijay-political-journey-from-opposing-father-sa-chandrasekhar-party-to-leading-tvk-gdp/articleshow-mgek29b</guid>
            <pubDate>Sat, 09 May 2026 18:04:07 +0530</pubDate>
            <description><![CDATA[ನಟ ವಿಜಯ್ ರಾಜಕೀಯ ಪ್ರವೇಶದ ಕನಸು ಕಂಡಿದ್ದು ಅವರ ತಂದೆ ಎಸ್.ಎ. ಚಂದ್ರಶೇಖರ್. 2020ರಲ್ಲಿ ಮಗನಿಗಾಗಿ ಪಕ್ಷ ಸ್ಥಾಪಿಸಿದಾಗ, ವಿಜಯ್ ಅದನ್ನು ವಿರೋಧಿಸಿ, ತಮ್ಮ ಹೆಸರು ಬಳಸದಂತೆ ತಂದೆ-ತಾಯಿ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈಗ, ವಿಜಯ್ ತಮ್ಮದೇ ಟಿವಿಕೆ ಪಕ್ಷ ಸ್ಥಾಪಿಸಿ, ತಂದೆಯ ಹಳೆಯ ಕನಸನ್ನು ನನಸು ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01eay6kk4kgzmv6mpv8f4w5pdg,imgname-images--84--jpeg.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡಿನಲ್ಲಿ ದಳಪತಿಯ ಟಿವಿಕೆ ಪಾರ್ಟಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆಗಿ ಹೊರಹೊಮ್ಮಿದೆ. ಇದನ್ನ ಕಂಡು ವಿಜಯ್ ಫ್ಯಾನ್ಸ್ ವಿಜಯ್ ಸಿಎಂ ಆಗೇಬಿಟ್ರು ಅಂತ ಕುಣಿದಾಡಿದ್ರು. ಆದ್ರೆ ವಿಜಯ್ ರಾಜಕಾರಣಿ ಆಗಬೇಕು ಮೊದಲು ಕನಸು ಕಂಡವರು ದಳಪತಿಯ ಜನ್ಮದಾತ. ಆದ್ರೆ ಅಂದು ಅಪ್ಪನ ಆಸೆಯನ್ನೇ ದಿಕ್ಕರಿಸಿದ್ದ ವಿಜಯ್​​ ತಂದೆಯ ವಿರುದ್ಧವೇ ಕೇಸ್ ದಾಖಲಿಸಿದ್ರು. ಹಾಗಾದ್ರೆ ವಿಜಯ್ ಅಂದು ತಂದೆಯ ವಿರುದ್ಧವೇ ತಿರುಗಿ ಬಿದ್ದಿದ್ದೇಕೆ ನೋಡೋಣ ಬನ್ನಿ.&lt;/p&gt;&lt;h2&gt;ರಾಜಕೀಯದ ಕಾರಣಕ್ಕೆ ತಂದೆ-ತಾಯಿ ಮೇಲೆ ವಿಜಯ್ ದೂರು!&lt;/h2&gt;&lt;p&gt;ದಳಪತಿ ವಿಜಯ್, ತಮಿಳುನಾಡು ರಾಜಕಾರಣ ಹೊಸ ಫೈಯರ್​ ಬ್ರ್ಯಾಂಡ್​. ಜಯಲಲಿತಾ, ಕರುಣಾನಿಧಿಯಂತಹ ದಿಗ್ಗಜರು ಕಟ್ಟಿದ್ದ ಪಕ್ಷಗಳ ಎದುರು ತೊಡೆ ತಟ್ಟಿ ಗೆದ್ದ ಗಟ್ಟಿಗ. ಇವತ್ತು ವಿಜಯ್​​ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ರಾಜಕೀಯ ರಂಗದಲ್ಲಿ ಕಹಳೆ ಊದುತ್ತಿದ್ದಾರೆ. ಆದ್ರೆ ವಿಜಯ್​​ಗೆ ಪೊಲಿಟಿಕ್ಸ್​​ನ ಹುಚ್ಚು ಹಿಡಿಸಿದ್ದೇ ಅವರ ತಂದೆ ಅನ್ನೋದು ನಿಮ್ಗೆ ಗೊತ್ತಾ? ಅದು ಸತ್ಯವೂ ಹೌದು.&lt;/p&gt;&lt;h2&gt;2020ರಲ್ಲೇ ಮಗ ವಿಜಯ್&zwnj; ಗಾಗಿ ರಾಜಕೀಯ ಪಕ್ಷ ಕಟ್ಟಿದ್ದ ತಂದೆ!&lt;/h2&gt;&lt;p&gt;ವಿಜಯ್ ತಂದೆ ಎಸ್.​​ಎ ಚಂದ್ರಶೇಖರ್ ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಮತ್ತು ನಟ ಕೂಡ. ಹೀಗಾಗಿ ತಮ್ಮ ಮಗ ವಿಜಯ್ ಸ್ಟಾರ್ ಆಗುವಲ್ಲಿ ಎಸ್​​ಎ ಚಂದ್ರಶೇಖರ್ ಪಾಲು ದೊಡ್ಡದಿದೆ. ಆರಂಭದ ದಿನಗಳಲ್ಲಿ ವಿಜಯ್ ಅವರಿಗೆ ಸಿನಿಮಾ ನಿರ್ದೇಶನ, ನಿರ್ಮಾಣ ಮಾಡುವ ಜೊತೆಗೆ ಮಗನ ಸಿನಿಮಾಗಳ ಚಿತ್ರಕತೆ, ಶೂಟಿಂಗ್ ಎಲ್ಲಾ ಕೆಲಸ ನೋಡಿಕೊಂಡಿದ್ದು ಚಂದ್ರಶೇಖರ್. ಹಾಗೆ ಇವತ್ತು ವಿಜಯ್ ರಾಜಕೀಯ ಯಶಸ್ಸಿಗೆ ಕಾರಣವೂ ಅವರ ತಂದೆಯೇ. ಯಾಕಂದ್ರೆ ವಿಜಯ್​ರನ್ನ ರಾಜಕಾರಣಿಯಾಗಿ ನೋಡೋ ಆಸೆ ಪಟ್ಟು, 2020ರಲ್ಲೇ ಮಗ ವಿಜಯ್​​​​​ಗಾಗಿ ರಾಜಕೀಯ ಪಕ್ಷ ಕಟ್ಟಿದ್ರು ತಂದೆ ಚಂದ್ರಶೇಖರ್.&lt;/p&gt;&lt;h2&gt;&lsquo;ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ&rsquo; ಪಕ್ಷ ಸಂಘಟನೆ!&lt;/h2&gt;&lt;p&gt;ವಿಜಯ್ ಇಂದಿನ ರಾಜಕೀಯ ಯಶಸ್ಸಿಗೆ ಒಂದು ಕಾರಣ ಅವರ ಅಭಿಮಾನಿ ಸಂಘ &lsquo;ವಿಜಯ್ ಮಕ್ಕಳ್ ಇಯಕ್ಕಂ&rsquo; ಸ್ಥಾಪನೆ ಮತ್ತು ಆ ಸಂಘದಿಂದ ಆದ ಸಮಾಜಮುಖಿ ಕೆಲಸಗಳು. ಈ ಅಭಿಮಾನಿ ಸಂಘಕ್ಕೆ ಶಕ್ತಿಯಾಗಿ ನಿಂತಿದ್ದು ವಿಜಯ್​​ಅವರ ತಂದೆ ಎಸ್​​ಎ ಚಂದ್ರಶೇಖರ್.. ಕೊನೆಗೆ ವಿಜಯ್​​ ರಾಜಕೀಯಕ್ಕೆ ಬರಲಿ ಅನ್ನೋ ಅಭಿಮಾನಿಗಳ ಕೂಗು ಜೋರಾಗಿದ್ದಕ್ಕೆ 2020ರರಲ್ಲಿ ವಿಜಯ್ ತಂದೆ ಎಸ್​​ಎ ಚಂದ್ರಶೇಖರ್ &lsquo;ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ&rsquo; ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ರು. ಅದರಲ್ಲಿ ಸ್ವತಃ ತಾವು ಹಾಗೂ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಅವರು ಆಫೀಸ್ ಬೇರರ್ ಆಗಿದ್ರು.&lt;/p&gt;&lt;h2&gt;ಅಪ್ಪ-ಅಮ್ಮನ ಆಸೆ ವಿರುದ್ಧ ಬಹಿರಂಗ ಪ್ರಕಟಣೆ ಹೊರಡಿಸಿದ್ದ ವಿಜಯ್!&lt;/h2&gt;&lt;p&gt;ಯೆಸ್, ವಿಜಯ್​ ತಂದೆಗೆ ಮಗ ದೊಡ್ಡ ರಾಜಕಾರಣಿ ಆಗಿ ಬೆಳೆಯಲಿ ಅನ್ನೋ ಆಸೆ. ಆದ್ರೆ ಮಗನ ಲಕ್ಷ್ಯ ಬೇರೆಯದ್ದೇ ಆಗಿತ್ತು. ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದ ವಿಜಯ್ ನೂರಾರು ಕೋಟಿ ದುಡಿಯಬೇಕು ಅಂತ ಅದರ ಹಿಂದೆ ಬಿದ್ದಿದ್ರು. ಹೀಗಾಗಿ ತನ್ನ ಪೋಷಕರು ಕಟ್ಟಿದ್ದ &lsquo;ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ&rsquo; ಪಕ್ಷಕ್ಕೂ ನನಗೂ ಸಂಬಂಧ ಇಲ್ಲ ಅಂತ ಪ್ರಕಟಣೆ ಕೊಟ್ಟಿದ್ದ ವಿಜಯ್ ಅಂದು ತನ್ನ ತಂದೆಯ ಆಸೆಗೆ ತಣ್ಣೀರೆರಚಿದ್ರು.&lt;/p&gt;&lt;h2&gt;ಅಪ್ಪ-ಅಮ್ಮನ ವಿರುದ್ಧ ಕೋರ್ಟ್​ ಮೊರೆ ಹೋಗಿದ್ದ ದಳಪತಿ!&lt;/h2&gt;&lt;p&gt;ಅಷ್ಟೆ ಅಲ್ಲ ವಿಜಯ್ ಅಪ್ಪ ಕಟ್ಟಿರೋ ಪಕ್ಷದಿಂದ ದೂರ ಉಳಿಯಲು ಚೆನ್ನೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರು. ತಮ್ಮ ತಂದೆ ಪ್ರಾರಂಭಿಸಿರುವ ಪಕ್ಷವನ್ನು ರದ್ದು ಮಾಡಬೇಕು ಹಾಗೂ ಆ ಪಕ್ಷದಲ್ಲಿ ತಮ್ಮ ಹೆಸರು ಹಾಗೂ ಭಾವಚಿತ್ರವನ್ನು ಬಳಸಬಾರದೆಂದು ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ರು.&lt;/p&gt;&lt;p&gt;ಅಂತೆಯೇ ನ್ಯಾಯಾಲಯ ಸಹ ವಿಜಯ್ ಪರವಾಗಿಯೇ ಆದೇಶ ನೀಡಿತ್ತು. ಬಳಿಕ ಎಸ್​​ಎ ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ಅಪಿಢವಿಟ್ ಸಲ್ಲಿಸಿ, ಪಕ್ಷಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ಚಿತ್ರ, ಹೆಸರು ಬಳಸುವುದಿಲ್ಲ ಎಂದಿದ್ರು. ಕೊನೆಗೆ ಈ ಪ್ರಕರಣ ಬಗೆ ಹರಿದ ಮರು ವರ್ಷವೇ &lsquo;ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ&rsquo; ಪಕ್ಷವನ್ನು ರದ್ದಾಯ್ತು.&lt;/p&gt;&lt;h2&gt;ತಂದೆಯ ಕನಸು ನನಸು ಮಾಡಿದ ವಿಜಯ್!&lt;/h2&gt;&lt;p&gt;ವಿಜಯ್ ಮೊದಲಿನಿಂದಲೂ ಬಹಿರಂಗವಾಗಿ ಮಾತನಾಡಿದವರಲ್ಲ. ಆದ್ರೆ ಅವರ ತಂದೆ ಮಗನ ಪರವಾಗಿ ಎಲ್ಲಾ ಸಮಸ್ಯೆಗಳಿದ್ದಾಗ್ಲು ಪರಿಹಾರ ಹುಡುಕಿದವರು. ವಿಜಯ್ ರಾಜಕೀಯಕ್ಕೆ ಬರಬೇಕೆಂಬುದು ತಂದೆಯ ಆಸೆಯಾಗಿತ್ತು. ಅದರಂತೆ ಈಗ ವಿಜಯ್ ಟಿವಿಕೆ ರಾಜಕೀಯ ಪಕ್ಷ ಕಟ್ಟಿ ಭಾರಿ ಯಶಸ್ಸು ಸಾಧಿಸಿದ್ದಾರೆ. ಈಗ ವಿಜಯ್ ತಮಿಳುನಾಡು ಸಿಎಂ ಪಟ್ಟಕ್ಕೇರೋದೊಂದೇ ಭಾಕಿ ಇದೆ. ವಿಜಯ್ ಪೊಲಿಟಿಕ್ಸ್​​​​​​​ ನೋಡಿ ದಳಙತಿ ಅಭಿಮಾನಿ ಕೋಟೆ ಜೊತೆ ಮನೆ ಮಂದಿಯೆಲ್ಲಾ ಸಂಭ್ರಮಿಸುತ್ತಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/vijay-political-journey-from-opposing-father-sa-chandrasekhar-party-to-leading-tvk-gdp/articleshow-mgek29b"/>
        </item>
        <item>
            <title><![CDATA[ಪಟ್ಟಕ್ಕೇರುವ ಮುನ್ನವೇ ದಳಪತಿ ಪ್ರಾಣಕ್ಕೆ ಕುತ್ತು? ಸರ್ಕಾರಿ ಬೆಂಗಾವಲು ಭದ್ರತೆ ಬಿಟ್ಟಿದ್ದೇಕೆ ಟಿವಿಕೆ ವಿಜಯ್?]]></title>
            <link>https://kannada.asianetnews.com/politics/tamil-nadu-politics-threat-claims-emerge-against-vijay-actor-rejects-security-cover-gdp/articleshow-izq5fcf</link>
            <guid isPermaLink="true">https://kannada.asianetnews.com/politics/tamil-nadu-politics-threat-claims-emerge-against-vijay-actor-rejects-security-cover-gdp/articleshow-izq5fcf</guid>
            <pubDate>Sat, 09 May 2026 16:24:40 +0530</pubDate>
            <description><![CDATA[ನಟ ದಳಪತಿ ವಿಜಯ್ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಂತೆ ಅವರ ಪ್ರಾಣಕ್ಕೆ ಬೆದರಿಕೆ ಇದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಡಿಜಿಪಿಗೆ ಪತ್ರ ಬರೆದಿದ್ದಾರೆ. ಆದರೆ, ತಾನು ಸರಳ ರಾಜಕಾರಣಿ ಎಂದು ಹೇಳಿಕೊಂಡಿರುವ ವಿಜಯ್, ತಮಗೆ ನೀಡಲಾಗಿದ್ದ ಹೆಚ್ಚುವರಿ ಭದ್ರತೆಯನ್ನು ನಿರಾಕರಿಸಿದ್ದಾರೆ. ಈ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr573jn7g2s98qg27z9byxkz,imgname-fotojet---2026-05-09t072433.092-1778291690151.jpg" type="image/jpeg" height="390" width="690"/>
            <content:encoded><![CDATA[&lt;p&gt;ದಳಪತಿ ವಿಜಯ್​​ ತಮಿಳುನಾಡು ಪಟ್ಟಾಭಿಶೇಷಕಕ್ಕೆ ಹೊಸ ಬಟ್ಟೆ ಸಿದ್ಧಮಾಡ್ಕೊಂಡು ಕಾಯ್ತಾ ಇದ್ದಾರೆ. ಆದ್ರೆ ಅದ್ಯಾವ ಗ್ರಹಚಾರವೋ ಏನೋ..? ವಿಜಯ್​ ಕನಸು ಇನ್ನು ನನಸಾಗಿಲ್ಲ. ಅಷ್ಟರಲ್ಲಾಗಲೇ ದಳಪತಿ ದೇಹಕ್ಕೆ ಕುತ್ತು ಬಂದೊದಗಿದೆ. ಹಾಗಾದ್ರೆ ಕಾಲಿವುಡ್ ಮಾಸ್ಟರ್ ವಿಜಯ್​​ಗಿರೋ ಆ ಕಂಠಕ ಏನು?&lt;/p&gt;&lt;h2&gt;ಪಟ್ಟಾಭಿಷೇಕ ಮೊದಲೇ ದಳಪತಿ ಪ್ರಾಣಕ್ಕೆ ಬಂದಿದೆಯಾ ಆಪತ್ತು?&lt;/h2&gt;&lt;p&gt;ತಮಿಳುನಾಡು ಈಗ ರಾಜಕೀಯ ರಣರಂಗ ಆಗಿದೆ. ಇಷ್ಟು ದಿನ ಎಲೆಕ್ಷನ್ ಗೆಲ್ಲೋಕೆ ಮೇಲಾಟ ಆಡುತ್ತಿದ್ದವರೆಲ್ಲಾ ಈಗ ಅಧಿಕಾರಕ್ಕೇರಲು ಚೆಲ್ಲಾಟವಾಡುತ್ತಿದ್ದಾರೆ. ಹೊಸ ಬಿಲ್ಲು ಬಾಣ ರೆಡಿ ಮಾಡ್ಕೊಂಡು ಯಾವಾಗ ಯಾರಿಗೆ ಬಿಡೋದು ಅಂತ ಕಾಯ್ತಾ ಇದ್ದಾರೆ. ಆದ್ರೆ ಆಗಿದ್ದಾಗ್ಲಿ ನಾನೇ ಸರ್ಕಾರ ರಚನೆ ಮಾಡುತ್ತೇನೆ ಅಂತ ವಿಜಯ್​ ಮುನ್ನುಗ್ಗಿದ್ದಾರೆ. ಅಷ್ಟರಲ್ಲಾಗಲೇ ದಳಪತಿ ಫ್ಯಾನ್ಸ್ ದಂಗಾಗೋ ವಿಷ್ಯವೊಂದು ಹೊರ ಜಗತ್ತಿಗೆ ಬಿಕರಿ ಆಗಿದೆ. ಅದೇ ವಿಜಯ್ ಪ್ರಾಣಕ್ಕೆ ಆಪತ್ತಿದೆ ಅನ್ನೋ ವಿಚಾರ.&lt;/p&gt;&lt;p&gt;ಹೌದು, ನಟ ವಿಜಯ್ ಈಗ ಟಿವಿಕೆ ಪಕ್ಷದ ಜನನಾಯಕ. ಜನ ಮೆಚ್ಚಿದ ರಾಜಕಾರಣಿ ಆಗಿರೋ ವಿಜಯ್​​ ಆ್ಯಕ್ಟರ್ ಆಗಿದ್ದಾಗ ಇಷ್ಟು ತ್ರಟ್ ಇತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ರಾಜಕಾರಣಿ ಆದ್ಮೇಲೆ ವಿಜಯ್ ಪ್ರಾಣಕ್ಕೇ ಕುತ್ತು ಬರುತ್ತೆ ಅನ್ನೋ ಮಾತುಗಳು ತಮಿಳು ನಾಡಿನಾಧ್ಯಂತೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದು ಗೊತ್ತಾಗಿದ್ದು ತಮಿಳು ನಾಡು ಕಾಂಗ್ರೇಸ್​​ ಮುಖಂಡ ಡಿಜಿಪಿಗೆ ಬರೆದ ಪತ್ರದಿಂದ.&lt;/p&gt;&lt;h2&gt;ದಳಪತಿ ವಿಜಯ್​​ಗೆ ರಕ್ಷಣೆ ಕೊಡಿ. ಡಿಜಿಪಿಗೆ ಪತ್ರ ಬರೆದ ಕಾಂಗ್ರೇಸ್!&lt;/h2&gt;&lt;p&gt;ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನಕ್ಕೆ ಎಲ್ಲಾ ತಯಾರಿ ಮಾಡಿದ್ದಾರೆ. ಆದ್ರೆ 118 ಕಂಠಕ ವಿಜಯ್​​​​​​​ರನ್ನ ಕಾಡುತ್ತಿದೆ. ಆದರೆ .. ಇದೇ ಸಮಯದಲ್ಲಿ ವಿಜಯ್ ಪ್ರಾಣಕ್ಕೆ ಬೆದರಿಕೆ ಇದೆ ಅಂತ ಕಾಂಗ್ರೆಸ್ ಪಾಳಯಯಕ್ಕೆ ಕಾಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮಿಳುನಾಡಿನ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ವಿಜಯ್ ಪ್ರಾಣಕ್ಕೆ ಭಯ ಇದೆ ರಕ್ಷಣೆ ಕೊಡಿ ಎಂದು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.&lt;/p&gt;&lt;h2&gt;ನನಗೆ ಭದ್ರತೆ ಬೇಡ , ನಾನು ಸರಳ ರಾಜಕಾರಣಿ-ವಿಜಯ್&lt;/h2&gt;&lt;p&gt;ದಳಪತಿ ವಿಜಯ್​ ಪ್ರಚಾರಕ್ಕೆ ಹೋದಾಗ ಸೆಕ್ಯೂರಿಟಿ ಹೆಚ್ಚಿಸಿಕೊಂಡಿದ್ರು. ವಿಜಯ್ ಅಕ್ಕ ಪಕ್ಕ 25 ಜನ ಸೆಕ್ಯೂರಿಟಿ ಗಾರ್ಡ್​​ಗಳಿದ್ರು. ವಿಜಯ್ ಎಲೆಕ್ಷನ್ ಗೆದ್ದ ಮೇಲೆ ಶಿಷ್ಟಾಚಾರದ ಪ್ರಕಾರ ಭದ್ರತೆ ಕೊಡಲಾಗಿತ್ತು. ಆದ್ರೆ ವಿಜಯ್ ಸ್ವಯಂ ಪ್ರೇರಿತವಾಗಿ ಭದ್ರತೆ ನಿರಾಕರಿಸಿದ್ದಾರೆ. ನಾಲ್ಕು ಬೆಂಗಾವಲು ವಾಹನ ಬೇಡ ಎಂದಿದ್ದಾರಂತೆ ವಿಜಯ್. ಹೀಗಾಗಿ ಪೊಲೀಸ್​ ಇಲಾಖೆ ಸೆಕ್ಯುರಿಟಿಯನ್ನ ಹಿಂಪಡೆಯಲಾಗಿದೆ.&lt;/p&gt;&lt;p&gt;ದಳಪತಿ ವಿಜಯ್ ತಮಿಳು ಸಿನಿಮಾ ಜನರ ಆರಾಧ್ಯ ದೈವ ಆಗಿದ್ದಾರೆ. ವಿಜಯ್​​ಗೆ ಕೋಟ್ಯಾನು ಕೋಟಿ ಅಭಿಮಾನಿ ಬಳಗ ಇದೆ. ಸೆಲೆಬ್ರಿಟಿ ಆಗಿರೋ ಕಾರಣ ವಿಜಯ್​​ರನ್ನ ಅಪ್ಪಿ ಮುದ್ದಾಡೋಕೆ ಮುನ್ನುಗ್ಗೋರು ಲಕ್ಷಾಂತರ ಜನ. ಆದ್ರೆ ವಿಜಯ್​​​ ಇನ್ನು ಸರ್ಕಾರ ರಚನೆ ಮಾಡಿಲ್ಲ. ಅದಾದ ನಂತರ ಭಧ್ರತೆ ಬಗ್ಗೆ ವಿಜಯ್​​​ ಹೇಳುತ್ತಾರೆ ಅಂತ ಟಿವಿಕೆ ಹೇಳಿಕೊಂಡಿದೆ. ಒಟ್ನಲ್ಲಿ ದಳಪತಿ ವಿಜಯ್ ಸರಳ ರಾಜಕಾರಣಿ ಅಂತ ತೋರಿಸಿಕೊಳ್ಳೋ ಮಾರ್ಗ ಹಿಡಿದಂತೆ ಕಾಣುತ್ತಿದೆ.&lt;/p&gt;&lt;p&gt;&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/tamil-nadu-politics-threat-claims-emerge-against-vijay-actor-rejects-security-cover-gdp/articleshow-izq5fcf"/>
        </item>
        <item>
            <title><![CDATA[ಅಂತು ಇಂತು ನೆರವೇರಿತು ದಳಪತಿ ವಿಜಯ್​ ದೊಡ್ಡ ಆಸೆ! 118 ನಂಬರ್ ಗೇಮ್ ರಹಸ್ಯ ಭೇದಿಸಿದ್ದು ಹೇಗೆ ವಿಜಯ್?]]></title>
            <link>https://kannada.asianetnews.com/politics/actor-vijay-tvk-stuns-tamil-nadu-politics-claims-majority-with-120-mlas-gdp/articleshow-ca9dzy8</link>
            <guid isPermaLink="true">https://kannada.asianetnews.com/politics/actor-vijay-tvk-stuns-tamil-nadu-politics-claims-majority-with-120-mlas-gdp/articleshow-ca9dzy8</guid>
            <pubDate>Sat, 09 May 2026 15:25:27 +0530</pubDate>
            <description><![CDATA[ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ತಲುಪಲು ಪರದಾಡಿ, ಕೊನೆಗೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr5h418jvvp1jccagqejvbx7,imgname-vijay-tvk-oath-delay-tamil-nadu-coalition-government-vck-support-majority-crisis-governor-standoff-1778302190866.jpg" type="image/jpeg" height="390" width="690"/>
            <content:encoded><![CDATA[&lt;p&gt;ದಳಪತಿ ವಿಜಯ್​ ಇತಿಹಾಸ ಸೃಷ್ಟಿಸಿದ್ದಾರೆ. ಎರಡು ವರ್ಷ ಕಂಡ ಕನಸು ಈಗ ನೆರವೇರಿದೆ. ಜನ ನಾಯಗನ್ ವಿಜಯ್​ ತಮಿಳುನಾಡು ದಂಡ ನಾಯಕ ಆಗಿದ್ದಾರೆ. ಈ ಬಗೆಗಿನ ಒಂದು ವರದಿ ಇಲ್ಲಿದೆ ನೋಡಿ.&lt;/p&gt;&lt;h2&gt;ಅಂತು ಇಂತು ನೆರವೇರಿತು ದಳಪತಿ ವಿಜಯ್​ ದೊಡ್ಡ ಆಸೆ!&lt;/h2&gt;&lt;p&gt;ತಮಿಳುನಾಡಿಗೆ ಕೊನೆಗೂ ದಂಡನಾಯಕ ನಾಮಕರಣ ಆಗುತ್ತಿದೆ. ಬಹುಮತ ಪಡೆದ ದೊಡ್ಡ ಪಾರ್ಟಿ ಅನ್ನೋ ಹೆಗ್ಗಳಿಕೆ ಪಡೆದಿದ್ದ ನಟ ವಿಜಯ್​ರ ಟಿವಿಕೆ ಅಧಿಕಾರದ ಗದ್ಧುಗೆ ಏರೋ ಸಮಯ ಮಂದಿದೆ. ಮತ ಎಣಿಕೆ ಮುಗಿದು ನಾಲ್ಕು ದಿನ ಕಳೆದಿದ್ರು ಸರ್ಜಾರ ರಚನೆಗೆ ಒದ್ದಾಡುತ್ತಿದ್ದ ವಿಜಯ್ ಈಗ ಎದ್ದು ಬಿದ್ದು ಹಂಗು ಹಿಂಹು ಹೆಂಗೋ ಮಾಡಿ ಮ್ಯಾಜಿಕ್ ನಂಬರ್​​​ನ ತಂದು ತಮಿಳುನಾಡು ಗವರ್ನರ್​​ ಎದುರಿಟ್ಟು ಮೀಸೆ ತಿರುವಿದ್ದಾರೆ.&lt;/p&gt;&lt;h2&gt;118 ನಂಬರ್ ಗೇಮ್ ರಹಸ್ಯ ಭೇದಿಸಿದ್ದು ಹೇಗೆ ವಿಜಯ್?&lt;/h2&gt;&lt;p&gt;ಸೋಮವಾರದ ದಿನ ಪಂಚರಾಜ್ಯ ಚುನಾವಣೆಯ ಫಲಿತಾಂಶ ಬಂದಿದ್ದು, ತಮಿಳುನಾಡಿನಲ್ಲಿ ವಿಜಯ್ ನಾಯಕತ್ವದ ಟಿವಿಕೆ ದಿಗ್ವಿಜಯ ಸಾಧಿಸಿದ್ದು ಗೊತ್ತೇ ಇದೆ. ಅದ್ರಲ್ಲೂ ದಶಕಗಳ ಕಾಲ ನಿರಂತರವಾಗಿ ತಮಿಳುನಾಡನ್ನ ಆಳ್ತಾ ಬಂದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನ ಎರಡು ಮತ್ತು ಮೂರನೇ ಸ್ಥಾನಕ್ಕೆ ತಳ್ಳಿ, ಟಿವಿಕೆ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಹೊರಹೊಮ್ಮಿತ್ತು.&lt;/p&gt;&lt;p&gt;ವಿಜಯ್ , ಟಿವಿಕೆ ಪಕ್ಷವನ್ನ ಹುಟ್ಟಿಹಾಕಿದ್ದೇ ಜಸ್ಟ್ ಎರಡು ವರ್ಷಗಳ ಹಿಂದೆ. ಹೀಗೆ ಬರೀ ಎರಡು ವರ್ಷಗಳ ಹಿಂದೆ ಹುಟ್ಟಿದ ಪಕ್ಷ, ಮೊದಲ ಚುನಾವಣೆ ಎದುರಿಸಿದ ಪಕ್ಷ. ದಶಕಗಳ ಇತಿಹಾಸವುಳ್ಳ ದ್ರಾವಿಡ ಪಕ್ಷಗಳನ್ನ ಮಣಿಸಿದ್ದು ರಾಜಕೀಯ ಪಂಡಿತರನ್ನೂ ಶಾಕ್ ಆಗುವಂತೆ ಮಾಡಿತ್ತು. ಈಗ ಸಿಎಂ ಪಟ್ಟಕ್ಕೇ ಏರಿದ್ದಾರೆ ವಿಜಯ್.&lt;/p&gt;&lt;p&gt;ಟಿವಿಕೆಯ ಈ ಅಮೋಘ ವಿಜಯದ ಹಿಂದೆ ಇದ್ದಿದ್ದು ಒನ್ ಌಂಡ್ ಓನ್ಲಿ ವಿಜಯ್... ಹೌದು ದಳಪತಿ ವಿಜಯ್ ನಾಮಬಲ ಮತ್ತು ತಾರಾಬಲವೇ ಟಿವಿಕೆಯ ವಿಜಯಕ್ಕೆ ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸೇಮ್ ಸಿನಿಮಾ ಸ್ಟೈಲ್​ನಲ್ಲೇ ಡೈಲಾಗ್ ಹೊಡೆದೇ ತಮಿಳುನಾಡನ್ನ ಗೆದ್ರು ವಿಜಯ್.&lt;/p&gt;&lt;p&gt;ವಿಜಯ್ ಚುನಾವಣೆಯನ್ನೇನೋ ಫಿಲ್ಮಿ ಸ್ಟೈಲ್​ನಲ್ಲಿ ಗೆದ್ದುಬಿಟ್ರು. ಆದ್ರೆ ವಿಜಯ್ ಪಕ್ಷ ಗೆದ್ದಿದ್ದು 108 ಸ್ಥಾನಗಳಲ್ಲಿ. ಅದ್ರಲ್ಲಿ ವಿಜಯ್​ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರಿಂದ ಅವರ ಬಳಿಯ ಶಾಸಕರ ಸಂಖ್ಯೆ 107. ಆದ್ರೆ ತಮಿಳುನಾಡಿನಲ್ಲಿ ಸರ್ಕಾರ ರಚಿಸೋದಕ್ಕೆ ಬೇಕಿದ್ದ ಮ್ಯಾಜಿಕ್ 118. ಇದನ್ನ ಗಳಿಸೋಕೆ ವಿಜಯ್ ಅಕ್ಷರಶಃ ಪರದಾಡಿ ಹೋಗಿದ್ದು ಸುಳ್ಳಲ್ಲ.&lt;/p&gt;&lt;p&gt;ಮೊದಲಿಗೆ ಕಾಂಗ್ರೆಸ್ , ಡಿಎಂಕೆ ಮೈತ್ರಿಯಿಂದ ಹೊರಬಂದು ಟಿವಿಕೆ ಬೆಂಬಲಿಸೋದಾಗಿ ಘೋಷಿಸಿತು. ಕಾಂಗ್ರೆಸ್&zwnj;ನ ಐದು ಸದಸ್ಯರ ಬೆಂಬಲ ಪತ್ರ ಸಿಕ್ತಾನೆ , ವಿಜಯ್ ರಾಜ್ಯಪಾಲರನ್ನ ಭೇಟಿ ಮಾಡಿ ಸರ್ಕಾರ ರಚಿಸೋಕೆ ಅವಕಾಶ ಕೇಳಿದ್ರು. ರಾಜ್ಯಪಾಲರು ಆಹ್ವಾನ ಕೊಡ್ತಾರೆ ಗುರುವಾರವೇ ಪ್ರಮಾಣ ವಚನ ಸ್ವೀಕರಿಸಬೇಕು ಅಂತ ವಿಜಯ್ ಸಜ್ಜಾಗಿ ನಿಂತಿದ್ರು, ಆದ್ರೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ದಳಪತಿಯ ಪತ್ರವನ್ನ ರಿಜೆಕ್ಟ್ ಮಾಡಿದ್ರು. ಕೊನೆಗೆ ಹಂಗೋ ಹಿಂಗೋ ಹೆಂಗೋ ಒಂದ್ ಮಾಡಿ ವಿಜಯ್​​ ಮ್ಯಾಜಿಗ್ ನಂಬರ್ ತಂದೇ ಬಿಟ್ರು. ಕಾಂಗ್ರೇಸ್​​, ವಿಸಿಕೆ, ಎಡಪಕ್ಷಗಳು ಸೇರಿ 120 ಸಂಖ್ಯಾಬಲ ತೋರಿಸಿದ್ರು.&lt;/p&gt;&lt;p&gt;&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/actor-vijay-tvk-stuns-tamil-nadu-politics-claims-majority-with-120-mlas-gdp/articleshow-ca9dzy8"/>
        </item>
        <item>
            <title><![CDATA[ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!]]></title>
            <link>https://kannada.asianetnews.com/politics/tamil-nadu-political-buzz-vijay-cm-prospects-face-hurdle-over-majority-numbers-gdp-videoshow-oc0k9l2</link>
            <guid isPermaLink="true">https://kannada.asianetnews.com/politics/tamil-nadu-political-buzz-vijay-cm-prospects-face-hurdle-over-majority-numbers-gdp-videoshow-oc0k9l2</guid>
            <pubDate>Sat, 09 May 2026 14:31:05 +0530</pubDate>
            <description><![CDATA[ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆಯನ್ನ ಹಿಂದಿಕ್ಕಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ವಿಜಯ್ ಕನಸಿಗೆ ರಾಜ್ಯಪಾಲರು ಅಡ್ಡಿಪಡಿಸಿದ್ದು, 118 ಶಾಸಕರ ಬೆಂಬಲ ಪತ್ರವನ್ನು ಕೇಳಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xa8q8gi" medium="video" height="768" width="1024"/>
            <content:encoded><![CDATA[&lt;p&gt;ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆಯನ್ನ ಹಿಂದಿಕ್ಕಿ ವಿಜಯ್ ನಾಯಕತ್ವದ ಟಿವಿಕೆ ಪಾರ್ಟಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದಳಪತಿ ವಿಜಯ್ ಗುರುವಾರವೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸ್ತಾರೆ ಅಂತ ಹೇಳಲಾಗಿತ್ತು. ಆದ್ರೆ ವಿಜಯ್ ಸಿಎಂ ಕನಸಿಗೆ ರಾಜ್ಯಪಾಲರು ಬ್ರೇಕ್ ಹಾಕಿದ್ದಾರೆ. ಮೊದಲು 118 ಎಂ.ಎಲ್​ಎಗಳ ಬೆಂಬಲ ಪತ್ರ ತನ್ನಿ ಅಂದಿದ್ದಾರೆ. 2 ಸಾರಿ ಭೇಟಿ ಮಾಡಿದ್ರೂ ವಿಜಯ್​ನ ಸರ್ಕಾರ ರಚನೆಗೆ ಆಹ್ವಾನಿಸಿಲ್ಲ. ಹಾಗಾದ್ರೆ ದಳಪತಿ ಮುಂದಿನ ದಾರಿ ಏನು..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.&lt;/p&gt;&lt;p&gt;ದಳಪತಿ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ವಿಜಯ ಸಾಧಿಸಿ ಸಿಎಂ ಆಗುವ ಹೊಸ್ತಿಲಿನಲ್ಲಿರೋವಾಗ, ತ್ರಿಷಾ ಹೆಸರು ಕೂಡ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ದಳಪತಿ ಗೆಳತಿ ತ್ರಿಷಾ ಕೂಡ ಪಾಲಿಟಿಕ್ಸ್​ಗೆ ಬರ್ತಾರೆ ಅಂತ ಸುದ್ದಿಯಾಗ್ತಾ ಇದೆ. ತ್ರಿಷಾ ಕಳೆದ 27 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ವಯಸ್ಸು &amp;nbsp;40 ದಾಟಿದ್ರೂ ಈಗಲೂ ಬಹುಬೇಡಿಕೆಯ ನಟಿ. ಅಷ್ಟೇ ಅಲ್ಲ ತ್ರಿಷಾ ನೂರಾರು ಕೋಟಿ ಒಡತಿ ಕೂಡ.&amp;nbsp;&lt;/p&gt;&lt;p&gt;ಅಸಲಿಗೆ ದಳಪತಿ ವಿಜಯ್, ಟಿವಿಕೆ ಪಾರ್ಟಿ ಆರಂಭಿಸಿದ್ದು ಎರಡು ವರ್ಷಗಳ ಹಿಂದೆಯಾದ್ರೂ 2009ರಿಂದಲೇ ವಿಜಯ್ ತಮ್ಮ ಅಭಿಮಾನಿ ಸಂಘದ ಮೂಲಕ ರಾಜಕೀಯದಲ್ಲಿ ಪರೋಕ್ಷವಾಗಿ ತೊಡಗಿಕೊಂಡಿದ್ರು. 2011ರ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಗೆಲ್ಲೋದ್ರಲ್ಲಿ ದೊಡ್ಡ ಪಾತ್ರ ವಹಿಸಿದ್ರು. ಈಗ ದಶಕದ ಬಳಿಕ ತಾವೇ ಜಯಾ ಜಾಗಕ್ಕೆ ಬಂದು ಕೂತಿದ್ದಾರೆ. ತಮಿಳುನಾಡಿನಲ್ಲಿ ಮತ್ತೊಬ್ಬ ಚಿತ್ರನಟ ಸಿಎಂ ಸ್ಥಾನಕ್ಕೆ ಏರಲು ಸಜ್ಜಾಗಿದ್ದಾರೆ.&amp;nbsp;&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/tamil-nadu-political-buzz-vijay-cm-prospects-face-hurdle-over-majority-numbers-gdp-videoshow-oc0k9l2"/>
        </item>
        <item>
            <title><![CDATA[ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ]]></title>
            <link>https://kannada.asianetnews.com/politics/what-is-former-cm-bjp-leader-bs-yediyurappa-s-contribution-to-the-development-of-uttara-kannada-district-mrq-videoshow-sy38rly</link>
            <guid isPermaLink="true">https://kannada.asianetnews.com/politics/what-is-former-cm-bjp-leader-bs-yediyurappa-s-contribution-to-the-development-of-uttara-kannada-district-mrq-videoshow-sy38rly</guid>
            <pubDate>Sat, 09 May 2026 14:10:56 +0530</pubDate>
            <description><![CDATA[&lt;p&gt;ಬಿ.ಎಸ್. ಯಡಿಯೂರಪ್ಪನವರ 50 ವರ್ಷಗಳ ಸಾರ್ವಜನಿಕ ಜೀವನದ ಹೋರಾಟದ ಹಾದಿಯನ್ನು ಈ ಲೇಖನ ವಿವರಿಸುತ್ತದೆ. ರೂಪಾಲಿ ನಾಯ್ಕ್ ಮತ್ತು ಸುನಿಲ್ ನಾಯ್ಕ್, ಯಡಿಯೂರಪ್ಪನವರೊಂದಿಗಿನ ತಮ್ಮ ಒಡನಾಟ, ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ, ಮತ್ತು ನಾಯಕತ್ವದ ಗುಣಗಳನ್ನು ನೆನಪಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xa8q6xc" medium="video" height="768" width="1024"/>
            <content:encoded><![CDATA[&lt;p&gt;ರೈತನಾಯಕನ ಕಿಚ್ಚಿನ ಹೋರಾಟಕ್ಕೆ ಅರ್ಧಶತಮಾನ - ಕೇಸರಿ ಕಲಿಗಳಿಗೆ ರಾಜಾಹುಲಿ ಒಡನಾಟವೇ ಶ್ರೀರಕ್ಷೆ - ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ - ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ &ndash; ಇದೇ ಈ ಹೊತ್ತಿನ ವಿಶೇಷ ಭಗೀರಥ ಬಿಎಸ್​​ವೈ&lt;/p&gt;]]></content:encoded>
            <category>politics</category>
            <dc:creator>Mahmad Rafik</dc:creator>
            <atom:link href="https://kannada.asianetnews.com/politics/what-is-former-cm-bjp-leader-bs-yediyurappa-s-contribution-to-the-development-of-uttara-kannada-district-mrq-videoshow-sy38rly"/>
        </item>
        <item>
            <title><![CDATA[West Bengal ಗುರು ಔಟ್​, ಶಿಷ್ಯ ಇನ್​: ಸಿಎಂ ಸ್ಥಾನ ಏರಿದ ದೀದಿ ಮಾಜಿ ಬಲಗೈ ಬಂಟ: ಗಮನ ಸೆಳೆದ 98ರ ವೃದ್ಧ]]></title>
            <link>https://kannada.asianetnews.com/politics/suvendu-adhikari-sworn-in-as-first-bjp-cm-of-west-bengal-five-other-mlas-also-take-oath-suc/articleshow-uzycsph</link>
            <guid isPermaLink="true">https://kannada.asianetnews.com/politics/suvendu-adhikari-sworn-in-as-first-bjp-cm-of-west-bengal-five-other-mlas-also-take-oath-suc/articleshow-uzycsph</guid>
            <pubDate>Sat, 09 May 2026 13:33:36 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಆಡಳಿತ ಅಂತ್ಯಗೊಂಡಿದ್ದು, ಬಿಜೆಪಿ 207 ಸ್ಥಾನಗಳೊಂದಿಗೆ ಅಧಿಕಾರಕ್ಕೇರಿದೆ. ಒಂದು ಕಾಲದಲ್ಲಿ ದೀದಿಯ ಬಲಗೈ ಬಂಟನಾಗಿದ್ದ ಸುವೇಂದು ಅಧಿಕಾರಿ, ಇದೀಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr5w659r6s88d6gf0gd1rhzm,imgname-suvendu-adhikari-sworn-in-programme-1778313794868.jpg" type="image/jpeg" height="390" width="690"/>
            <content:encoded><![CDATA[&lt;p&gt;15 ವರ್ಷಗಳ ಮಮತಾ ಬ್ಯಾನರ್ಜಿ ಹಿಡಿತದಿಂದ ಪಶ್ಚಿಮ ಬಂಗಾಳ ಮುಕ್ತವಾಗಿದೆ. 207 ಸೀಟ್&zwnj;ಗಳನ್ನು ಗೆಲ್ಲುವ ಮೂಲಕ ಬಿಜೆಪಿಯ ಗೆಲುವಿನೊಂದಿಗೆ ಕಾಂಗ್ರೆಸ್​​ ಕಾರ್ಯಕರ್ತರೂ ಸೇರಿ, ಹಿಂದೂಗಳೆಲ್ಲರೂ ಭಾರಿ ವಿಜಯೋತ್ಸವ ಆಚರಿಸಿದ್ದಾರೆ. ತಮ್ಮ ಸ್ಥಾನವನ್ನೂ ಉಳಿಸಿಕೊಳ್ಳಲಾಗದ ಮಮತಾಗೆ ಭಾರಿ ಮುಖಭಂಗವಾಗಿದೆ. ಇದರ ನಡುವೆಯೇ, ಈ ಹತಾಶೆ ಎಷ್ಟರಮಟ್ಟಿಗೆ ಹೋಗಿದೆ ಎಂದರೆ ದೀದಿ ವಿರುದ್ಧ ಗೆದ್ದ ಈಗ ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಸುವೇಂದು ಅಧಿಕಾರಿ ಅವರ ಪಿಎಯನ್ನೇ ಹ*ತ್ಯೆ ಮಾಡಲಾಗಿದೆ. ಇವೆಲ್ಲವುಗಳ ನಡುವೆಯೇ ಸುವೇಂದು ಅಧಿಕಾರಿ ಇಂದು ಅಧಿಕಾರದ ಗದ್ದುಗೆ ಏರಿದ್ದಾರೆ. ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.&lt;/p&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಒಂದು ಕಾಲದಲ್ಲಿ ದೀದಿ ಬಲಗೈ ಬಂಟ ಎಂದೇ ಫೇಮಸ್ ಆಗಿದ್ದ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಚುಕ್ಕಾಣಿ ಹಿಡಿಯುವ ಮೂಲಕ ಗುರುವಾಗಿದ್ದ ಮಮತಾ ಔಟ್&zwnj; ಆಗಿದ್ದ, ಶಿಷ್ಯ ಇನ್&zwnj; ಆಗಿದ್ದಾರೆ. ಹಿಂದೊಮ್ಮೆ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ಕಾರಣರಾಗಿದ್ದ ಸುವೇಂದು ಅವರು, ಇಂದು ಆ ಗದ್ದುಗೆ ಏರಿದ್ದಾರೆ. 2020ರ ಸುಮಾರಿಗೆ, ಪಕ್ಷದಲ್ಲಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪ್ರಭಾವ ಹೆಚ್ಚಾಗಿದ್ದರಿಂದ ಸುವೇಂದು ಅಧಿಕಾರಿ ಅಸಮಾಧಾನಗೊಂಡಿದ್ದರು. ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯ ಮತ್ತು ಪಕ್ಷದಲ್ಲಿ ತಮ್ಮ ಸ್ಥಾನಮಾನ ಕಡಿಮೆಯಾಗುತ್ತಿದೆ ಎಂಬ ಭಾವನೆಯಿಂದಾಗಿ, ಅವರು 2020ರ ಡಿಸೆಂಬರ್&zwnj;ನಲ್ಲಿ ಟಿಎಂಸಿ ತೊರೆದು ಬಿಜೆಪಿಗೆ ಸೇರಿದರು. ಬಿಜೆಪಿ ಸೇರಿದ ನಂತರ, ಅವರು 2021ರ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ, ಬಿಜೆಪಿಯ ಬಲಿಷ್ಠ ನಾಯಕರಾಗಿ ಹೊರಹೊಮ್ಮಿದರು.&lt;/p&gt;&lt;h2&gt;&lt;strong&gt;ಪ್ರಮಾಣ ವಚನ ಸ್ವೀಕಾರ&lt;/strong&gt;&lt;/h2&gt;&lt;p&gt;ಇಂದು ನಡೆದ ಕಾರ್ಯಕ್ರಮದಲ್ಲಿ, ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಅವರಿಗೆ ರಾಜ್ಯಪಾಲ ಆರ್.ಎನ್. ರವಿ ಪ್ರಮಾಣ ವಚನ ಬೋಧಿಸಿದರು, ಜೊತೆಗೆ ಸಚಿವ ಸಂಪುಟಕ್ಕೆ ಸೇರಿದ ಐದು ಶಾಸಕರಾದ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ಅಶೋಕ್ ಕೀರ್ತಾನಿಯಾ, ಕ್ಷುದಿರಾಮ್ ತುಡು ಮತ್ತು ನಿಸಿತ್ ಪ್ರಾಮಾಣಿಕ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಸಚಿವರು ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ NDA ಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.&lt;/p&gt;&lt;h3&gt;&lt;strong&gt;98 ವರ್ಷದ ವೃದ್ಧ&lt;/strong&gt;&lt;/h3&gt;&lt;p&gt;ಇಂದು ನಡೆದ ಕಾರ್ಯಕ್ರಮದಲ್ಲಿ ಗಮನ ಸೆಳೆದದ್ದು 98 ವರ್ಷದ ವೃದ್ಧ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಧಾನಿ ಮೋದಿ ಅವರು ಇವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದದ್ದು ಭಾರಿ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಇವರು ಮಖನ್ಲಾಲ್ ಸರ್ಕಾರ್. ಮಖನ್&zwnj;ಲಾಲ್ ಸರ್ಕಾರ್ ಅವರು ಪಶ್ಚಿಮ ಬಂಗಾಳದ ಬಿಜೆಪಿ ಪಕ್ಷದ 97-98 ವರ್ಷದ ಅತ್ಯಂತ ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತರು. ಮಖನ್ಲಾಲ್ ಸರ್ಕಾರ್ ಅವರು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಷ್ಟ್ರೀಯತಾವಾದಿ ಚಳವಳಿಗೆ ಸಂಬಂಧಿಸಿದ ಆರಂಭಿಕ ತಳಮಟ್ಟದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಜನಸಂಘದ ಕಾಲದಿಂದಲೂ ಬಿಜೆಪಿಗಾಗಿ ಕೆಲಸ ಮಾಡುತ್ತಿರುವ ಇವರು, ಬಂಗಾಳದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ದಶಕಗಳ ಕಾಲ ಶ್ರಮಿಸಿದವರು.ಇವರನ್ನು ಪಕ್ಷದ 'ಹಳೆ ಸಿಂಹ' ಎಂದು ಕರೆಯಲಾಗುತ್ತದೆ.&lt;/p&gt;&lt;h3&gt;&lt;strong&gt;ಎಕ್ಸ್ ಖಾತೆಯಲ್ಲಿ ಅನ್​ಫಾಲೋ?&lt;/strong&gt;&lt;/h3&gt;&lt;p&gt;ಕೋಲ್ಕತ್ತಾ ಪೊಲೀಸರ ಅಧಿಕೃತ &lsquo;ಎಕ್ಸ್&rsquo; ಖಾತೆಯಲ್ಲೊಂದು ಬದಲಾವಣೆ ನಡೆದಿದೆ. ಈ ಡಿಜಿಟಲ್ ಬದಲಾವಣೆಯನ್ನು ಹಲವರು ರಾಜಕೀಯ ಸಂದೇಶವೆಂದು ನೋಡುತ್ತಿದ್ದಾರೆ. ಮೊದಲು ಈ ಖಾತೆಯು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಕೆಲ ಪ್ರಮುಖ ಟಿಎಂಸಿ ನಾಯಕರನ್ನು ಫಾಲೋ ಮಾಡುತ್ತಿತ್ತು. ಈಗ ಆ ಖಾತೆಯಿಂದ ಅವರುಗಳನ್ನು ಅನ್&zwnj;ಫಾಲೋ ಮಾಡಲಾಗಿದೆ ಎಂದು ವರದಿಯಾಗಿದೆ.&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/politics/suvendu-adhikari-sworn-in-as-first-bjp-cm-of-west-bengal-five-other-mlas-also-take-oath-suc/articleshow-uzycsph"/>
        </item>
        <item>
            <title><![CDATA[IPL Final match shift row: ಶಾಸಕರಿಗೆ ಕೊಡೋದೇ 2 ಫ್ರೀ ಟಿಕೆಟ್‌ ಅಷ್ಟೇ : ಲಾಭಕ್ಕಾಗಿ ಐಪಿಎಲ್ ಫೈನಲ್ ಶಿಫ್ಟ್: ಪರಂ]]></title>
            <link>https://kannada.asianetnews.com/politics/mlas-given-only-2-free-tickets-ipl-final-shifted-for-profit-slams-parameshwara-rav/articleshow-41c5nkh</link>
            <guid isPermaLink="true">https://kannada.asianetnews.com/politics/mlas-given-only-2-free-tickets-ipl-final-shifted-for-profit-slams-parameshwara-rav/articleshow-41c5nkh</guid>
            <pubDate>Sat, 09 May 2026 12:10:24 +0530</pubDate>
            <description><![CDATA[&lt;p&gt;ಶಾಸಕರು ಟಿಕೆಟ್&zwnj; ಕೇಳಿದ್ದರಿಂದ ಐಪಿಎಲ್&zwnj; ಫೈನಲ್&zwnj; ಪಂದ್ಯವನ್ನು ಗುಜರಾತ್&zwnj;ಗೆ ಸ್ಥಳಾಂತರಿಸಲಾಗಿದೆ ಎಂಬ ಆರೋಪವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್&zwnj; ನಿರಾಕರಿಸಿದ್ದಾರೆ. ಹೆಚ್ಚಿನ ಲಾಭಕ್ಕಾಗಿ ಅಹಮದಾಬಾದ್&zwnj;ಗೆ ಪಂದ್ಯ ಸ್ಥಳಾಂತರಿಸಲಾಗಿದೆ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hxzeg4p7djy5gnvfgac8w94h,imgname-1.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಮೇ.9): &lt;/strong&gt;ಶಾಸಕರು ಟಿಕೆಟ್&zwnj; ಕೇಳಿದ್ದಕ್ಕಾಗಿ ಐಪಿಎಲ್&zwnj; ಫೈನಲ್&zwnj; ಪಂದ್ಯವನ್ನು ಗುಜರಾತ್&zwnj;ಗೆ ಸ್ಥಳಾಂತರಿಸಲಾಗಿದೆ ಎಂಬ ಆರೋಪ ಆಧಾರ ರಹಿತ. ಈ ಕುರಿತು ಬಿಸಿಸಿಐ ಅಥವಾ ಕರ್ನಾಟಕ ಕ್ರಿಕೆಟ್&zwnj; ಅಸೋಸಿಯೇಷನ್&zwnj; (ಕೆಎಸ್&zwnj;ಸಿಎ) ನೇರವಾಗಿ ಹೇಳಿಕೆ ನೀಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್&zwnj; ಹೇಳಿದ್ದಾರೆ.&lt;/p&gt;&lt;p&gt;ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ವಿಧಾನಸಭೆ, ವಿಧಾನ ಪರಿಷತ್&zwnj; ಎರಡೂ ಸೇರಿ 300 ಶಾಸಕರಿದ್ದಾರೆ. ಒಬ್ಬರಿಗೆ ಎರಡು ಟಿಕೆಟ್&zwnj;ಗಳನ್ನು ನೀಡಲಾಗುತ್ತಿದ್ದು ಒಟ್ಟು 600 ಟಿಕೆಟ್&zwnj; ನೀಡುವ ಕಾರಣಕ್ಕಾಗಿ ಸ್ಥಳಾಂತರ ಮಾಡುತ್ತಿದ್ದೇವೆ ಎಂದು ಹೇಳಲಿ. ಯಾರಿಗೆಲ್ಲ ಟಿಕೆಟ್&zwnj; ಕೊಟ್ಟಿದ್ದಾರೆ? ಎಷ್ಟು ಜನರಿಗೆ ಟಿಕೆಟ್&zwnj; ಕೊಟ್ಟಿದ್ದಾರೆ ಹೇಳಲಿ. ಎದುರಾಳಿ ತಂಡದ ಸಿಎಸ್&zwnj;&zwj;ಕೆಯವರೂ ಯಾರಿಗೆಲ್ಲ ಟಿಕೆಟ್&zwnj; ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.&lt;/p&gt;&lt;p&gt;ಏನು ಬೇಕಿದ್ರೂ ಟೀಕೆ ಮಾಡಲಿ:&lt;/p&gt;&lt;p&gt;ಬಿಜೆಪಿ, ಜೆಡಿಎಸ್&zwnj;&zwj;ನವರು ಏನಾದರೂ ಟೀಕೆ ಮಾಡಿಕೊಳ್ಳಲಿ. ಅವರ ಅವಧಿಯಲ್ಲಿ ಕ್ರೀಡೆಗೆ ಎಷ್ಟು ಪ್ರೋತ್ಸಾಹ ನೀಡುತ್ತಿದ್ದರು ಎಂದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದ ಗೃಹ ಸಚಿವರು, ಅಹಮದಾಬಾದ್&zwnj; ಸ್ಟೇಡಿಯಂನಲ್ಲಿ 1 ಲಕ್ಷ ಆಸನಗಳಿವೆ. ಹೆಚ್ಚಿನ ಲಾಭವಾಗುತ್ತದೆ ಎಂಬ ಕಾರಣಕ್ಕೆ ಫೈನಲ್&zwnj; ಸ್ಥಳಾಂತರ ಮಾಡಲಾಗಿದೆ. ಇದಕ್ಕೂ, ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ ಎಂದರು.&lt;/p&gt;&lt;p&gt;ಐಪಿಎಲ್&zwnj; ಪಂದ್ಯಾವಳಿಗಳು ಬೆಂಗಳೂರಿನಿಂದ ಸ್ಥಳಾಂತರವಾಗಬಾರದು ಎಂಬ ಕಾರಣಕ್ಕಾಗಿ ಸಂಕಷ್ಟದ ಸಂದರ್ಭದಲ್ಲೂ ಅನುಮತಿ ನೀಡಲಾಗಿತ್ತು. ನ್ಯಾಯಮೂರ್ತಿ ಮೈಕಲ್&zwnj; ಕುನ್ಹಾ ಅವರ ವರದಿ ಪ್ರಕಾರ ಹಲವು ಕೆಲಸಗಳನ್ನು ಕೈಗೊಳ್ಳಬೇಕಿತ್ತು. ಅವುಗಳಲ್ಲಿ ದೀರ್ಘಾವಧಿ, ಅಲ್ಪಾವಧಿ ಎಂದು ವಿಂಗಡಿಸಲಾಗಿತ್ತು. ಅಲ್ಪಾವಧಿ ಕೆಲಸಗಳನ್ನು ತ್ವರಿತವಾಗಿ ಕೈಗೊಂಡು ಐಪಿಎಲ್&zwnj; ಪಂದ್ಯಾವಳಿ ನಡೆಸಲು ಅನುವು ಮಾಡಿಕೊಡಲಾಗಿತ್ತು. ಈಗ&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/mlas-given-only-2-free-tickets-ipl-final-shifted-for-profit-slams-parameshwara-rav/articleshow-41c5nkh"/>
        </item>
        <item>
            <title><![CDATA[ಪುದುಚೇರಿ ಪ್ರವಾಸ ಹೊರಟ ಡಿಸಿಎಂ ಶನೇಶ್ವರನ ದರ್ಶನ, ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ, ಏನಂದ್ರು ಡಿಕೆಶಿ?]]></title>
            <link>https://kannada.asianetnews.com/politics/dk-shivakumar-visits-shani-temple-thirunallar-temple-in-puducherry-dismisses-rumours-on-tamil-nadu-mlas-gdp/articleshow-8ovlgbc</link>
            <guid isPermaLink="true">https://kannada.asianetnews.com/politics/dk-shivakumar-visits-shani-temple-thirunallar-temple-in-puducherry-dismisses-rumours-on-tamil-nadu-mlas-gdp/articleshow-8ovlgbc</guid>
            <pubDate>Sat, 09 May 2026 11:38:57 +0530</pubDate>
            <description><![CDATA[ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುದುಚೇರಿಯ ತಿರುನಲ್ಲಾರ್ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಧಾರ್ಮಿಕ ಪ್ರವಾಸದ ನಡುವೆಯೇ, ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್&zwnj;ಗೆ ಬಂದಿದ್ದಾರೆ ಎಂಬ ರಾಜಕೀಯ ವದಂತಿಗಳನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr5na789hf9xcb3ntwc4z5ze,imgname-dk-shivakumar--1--1778306587911.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡು&ndash;ಪುದುಚೇರಿ ಪ್ರವಾಸ ಕೈಗೊಂಡಿದ್ದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಪುದುಚೇರಿಯ ತಿರುನಲ್ಲಾರ್ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಪ್ರಸಿದ್ಧ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.&lt;/p&gt;&lt;h2&gt;ಸಂಜೆ ಸುಮಾರು 5 ಗಂಟೆಗೆ ಬೆಂಗಳೂರಿಗೆ ವಾಪಸ್&lt;/h2&gt;&lt;p&gt;ತಿರುನಲ್ಲಾರ್ ಶನೇಶ್ವರ ದೇವಸ್ಥಾನವು ಪ್ರಸಿದ್ಧಿ ಹೊಂದಿದ್ದು, ವಿಶೇಷವಾಗಿ ಶನಿವಾರದಂದು ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಇದೇ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಶನೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಬಳಿಕ, ಅವರು ತಮಿಳುನಾಡಿನ ಕರೂರ್&zwnj;ನಲ್ಲಿ ಇರುವ ಸದಾಶಿವ ಬ್ರಹ್ಮೇಂದ್ರರ ಜೀವ ಸಮಾಧಿಗೆ ಭೇಟಿ ನೀಡಲಿದ್ದಾರೆ. ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಸಂಜೆ ಸುಮಾರು 5 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.&lt;/p&gt;&lt;p&gt;ಪುದುಚೇರಿ ಪ್ರವಾಸದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆ.ನಾನು ದೇವಸ್ಥಾನ ಕ್ಕೆ ಹೋಗ್ತಿದ್ದೇನೆ. ಬಹಳ ದಿನ ಆಗಿತ್ತು ಹೋಗಿರ್ಲಿಲ್ಲ. ಬಹಳ ದಿನ ಶನೇಶ್ವರನಾ ನೋಡಿರಲಿಲ್ಲ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ, ಏನಂದ್ರು ಡಿಕೆಶಿ&lt;/h2&gt;&lt;p&gt;ಇದೇ ವೇಳೆ, ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು. ಯಾವ ಶಾಸಕರೂ ಈಗಲ್ಟನ್ ರೆಸಾರ್ಟ್&zwnj;ಗೆ ಬಂದಿಲ್ಲ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರೂ ನನಗೆ ಹೇಳಿಲ್ಲ, ಎಂದರು.&lt;/p&gt;&lt;p&gt;ಈಗಲ್ಟನ್ ರೆಸಾರ್ಟ್ ರಿಪೇರಿಗಾಗಿ ಮುಚ್ಚಲಾಗಿದೆ ಎಂದು ಕೇಳಿದ್ದೇನೆ. ಯಾರೋ ಹೇಳಿದ ಮಾತುಗಳು ಮಾತ್ರ. ಕೆಲವರು ಶಾಸಕರು ಹೈದರಾಬಾದ್&zwnj;ಗೆ ಹೋಗಿದ್ದಾರೆ ಎಂದೂ ಹೇಳುತ್ತಿದ್ದಾರೆ. ನಾನು ಟಿವಿಯಲ್ಲಿ ನೋಡಿದಷ್ಟೇ ಗೊತ್ತು ಎಂದರು. ಪಕ್ಷದ ಹೈಕಮಾಂಡ್ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಪಾರ್ಟಿ ಹೈಕಮಾಂಡ್ ಮಾತನಾಡಿದರೆ ಅದು ಬೇರೆ ವಿಚಾರ. ಆಗ ನಾನು ನನ್ನ ನಿಲುವು ಸ್ಪಷ್ಟಪಡಿಸುತ್ತೇನೆ. ಇದು ಪಕ್ಷದ ವಿಚಾರವಾಗಿದ್ದು, ಅದನ್ನು ಪಕ್ಷಕ್ಕೆ ಬಿಡುತ್ತೇನೆ ಎಂದರು.&lt;/p&gt;&lt;p&gt;ಇದೇ ವೇಳೆ, ನನಗೆ ಪ್ರಚಾರಕ್ಕೆ ಹೋಗಲು ಹೇಳಿದಾಗ ಹೋಗಿದ್ದೆ, ಮ್ಯಾನಿಫೆಸ್ಟೊ ಬಿಡುಗಡೆ ಮಾಡಲು ಹೇಳಿದಾಗ ಕೂಡ ಪಾಲ್ಗೊಂಡಿದ್ದೆ. ಆದರೆ ಈಗ ಯಾರೂ ಸಂಪರ್ಕದಲ್ಲಿಲ್ಲ. ತಮಿಳುನಾಡು ರಾಜಕೀಯ ಬೆಳವಣಿಗೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು. ಒಟ್ಟಾರೆ, ಧಾರ್ಮಿಕ ಪ್ರವಾಸದ ನಡುವೆ ರಾಜಕೀಯ ವದಂತಿಗಳಿಗೆ ಸ್ಪಷ್ಟನೆ ನೀಡಿದ ಡಿ.ಕೆ. ಶಿವಕುಮಾರ್ ಹೇಳಿಕೆಗಳು ಗಮನ ಸೆಳೆದಿವೆ.&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/dk-shivakumar-visits-shani-temple-thirunallar-temple-in-puducherry-dismisses-rumours-on-tamil-nadu-mlas-gdp/articleshow-8ovlgbc"/>
        </item>
        <item>
            <title><![CDATA[ರಾಜಕೀಯ ಪ್ರಭಾವ ಬಳಸಿ ಐಪಿಎಲ್‌ ಫೈನಲ್ ಶಿಫ್ಟ್‌: ಬಿಸಿಸಿಐ ಹೇಳಿಕೆಯೇ ಬೋಗಸ್ ಎಂದ ಡಿಕೆಶಿ!]]></title>
            <link>https://kannada.asianetnews.com/politics/ipl-final-shifted-using-political-influence-karnataka-dcm-dk-shivakumar-slams-bcci-statement-as-bogus-rav/articleshow-vh72970</link>
            <guid isPermaLink="true">https://kannada.asianetnews.com/politics/ipl-final-shifted-using-political-influence-karnataka-dcm-dk-shivakumar-slams-bcci-statement-as-bogus-rav/articleshow-vh72970</guid>
            <pubDate>Sat, 09 May 2026 10:14:06 +0530</pubDate>
            <description><![CDATA[&lt;p&gt;ಐಪಿಎಲ್&zwnj; ಫೈನಲ್&zwnj; ಪಂದ್ಯವನ್ನು ರಾಜಕೀಯ ಪ್ರಭಾವ ಬಳಸಿ ಬೆಂಗಳೂರಿನಿಂದ ಅಹಮದಾಬಾದ್&zwnj;ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬಿಸಿಸಿಐ ಸುಳ್ಳು ಹೇಳುತ್ತಿದ್ದು, ಗುಜರಾತ್&zwnj;ಗೆ ಆರ್ಥಿಕ ಲಾಭ ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5g2g9d9e3m1b7d20e1pnvx,imgname-----------------------2026-05-09t100052.692-1778301092141.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಮೇ.9): ಐಪಿಎಲ್&zwnj; ಫೈನಲ್&zwnj; ಪಂದ್ಯ ಅಹಮದಾಬಾದ್&zwnj;ಗೆ ಸ್ಥಳಾಂತರಿಸಿರುವ ವಿಚಾರದಲ್ಲಿ ಬಿಸಿಸಿಐ ಸಂಪೂರ್ಣ ಮಾಹಿತಿ ನೀಡದೆ, ಸುಳ್ಳು ಹೇಳುತ್ತಿದೆ. ರಾಜಕೀಯ ಪ್ರಭಾವ ಬಳಸಿ ಐಪಿಎಲ್&zwnj; ಫೈನಲ್&zwnj; ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್&zwnj;ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್&zwnj; ಕಿಡಿಕಾರಿದ್ದಾರೆ.&lt;/p&gt;&lt;p&gt;ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್&zwnj;, ಬಿಸಿಸಿಐ ಕಾರ್ಯದರ್ಶಿ ಬೋಗಸ್&zwnj; ಹೇಳಿಕೆ ನೀಡುತ್ತಿದ್ದು, ಸಂಪೂರ್ಣ ಮಾಹಿತಿ ನೀಡಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್&zwnj; ಪಂದ್ಯಾವಳಿ ವೀಕ್ಷಿಸಲು ಶಾಸಕರಿಗೆ ತಲಾ 2 ಟಿಕೆಟ್&zwnj; ನೀಡುತ್ತಿದ್ದರು. ಅದು ಹೆಚ್ಚಾಗುತ್ತದೆಯೇ? ನಮ್ಮ ಮೇಲೆ ಆರೋಪಿಸುತ್ತಿರುವ ಬಿಜೆಪಿ-ಜೆಡಿಎಸ್&zwnj; ನಾಯಕರು, ತಾವು ಪಡೆದಿದ್ದ ಟಿಕೆಟ್&zwnj; ವಾಪಸ್&zwnj; ಕೊಡಬೇಕಿತ್ತು. ನಮ್ಮ ಶಾಸಕರಿಗೆ ಅವರದ್ದೇ ಸ್ಥಾನ, ಗೌರವವಿದೆ ಎಂದರು.&lt;/p&gt;&lt;p&gt;ಐಪಿಎಲ್&zwnj; ಪಂದ್ಯ ಸ್ಥಳಾಂತರ ಬಿಜೆಪಿ ನಾಯಕತ್ವದಲ್ಲಿ ನಡೆಯುತ್ತಿದೆ. ಗುಜರಾತ್&zwnj;ಗೆ ದೊಡ್ಡ ಆರ್ಥಿಕ ಅನುಕೂಲ ಮಾಡಿಕೊಡಲು ಸ್ಥಳಾಂತರ ಮಾಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 30 ಸಾವಿರ ಆಸನ ಸಾಮರ್ಥ್ಯವಿದೆ. ಅಹಮದಾಬಾದ್&zwnj;ನಲ್ಲಿ 1 ಲಕ್ಷದವರೆಗೆ ಆಸನವಿದೆ. ಅದರಿಂದ ದೊಡ್ಡ ಲಾಭವಾಗುತ್ತದೆ ಎಂದು ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಅದರ ಜತೆಗೆ ರಾಜಕೀಯ ಪ್ರಭಾವವೂ ಇದಕ್ಕೆ ಕಾರಣ. ಪ್ರತಿವರ್ಷ ಇದೇ ರೀತಿ ಐಪಿಎಲ್&zwnj; ಫೈನಲ್&zwnj; ಪಂದ್ಯ ಸ್ಥಳಾಂತರಿಸಲಾಗುತ್ತಿದೆ ಎಂದರು.&lt;/p&gt;&lt;p&gt;ಅಹಮದಾಬಾದ್&zwnj; ಕ್ರೀಡಾಂಗಣ ಮಾದರಿಯಲ್ಲೇ ರಾಜ್ಯದಲ್ಲೂ ದೊಡ್ಡ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 2 ಕ್ರೀಡಾಂಗಣ ನಿರ್ಮಾಣಕ್ಕೆ ಅನುಮತಿಸಲಾಗಿದೆ. ಅದರ ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು 60 ಸಾವಿರ ಆಸನ ಸಾಮರ್ಥ್ಯಕ್ಕೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಎಸ್&zwnj;ಸಿಎ ಜತೆಗೂ ಮಾತನಾಡಲಾಗಿದ್ದು, ಅದಕ್ಕೆ ಸರ್ಕಾರ ನೆರವು ನೀಡಲಿದೆ ಎಂದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/ipl-final-shifted-using-political-influence-karnataka-dcm-dk-shivakumar-slams-bcci-statement-as-bogus-rav/articleshow-vh72970"/>
        </item>
        <item>
            <title><![CDATA[ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಸುಳಿವು ನೀಡಿದ ದಿನೇಶ್ ಗುಂಡೂರಾವ್, ಹೇಳಿದ್ದೇನು?]]></title>
            <link>https://kannada.asianetnews.com/politics/minister-dinesh-gundu-rao-gives-major-hint-about-cabinet-expansion-what-did-he-say-rav/articleshow-o780g7g</link>
            <guid isPermaLink="true">https://kannada.asianetnews.com/politics/minister-dinesh-gundu-rao-gives-major-hint-about-cabinet-expansion-what-did-he-say-rav/articleshow-o780g7g</guid>
            <pubDate>Sat, 09 May 2026 09:52:59 +0530</pubDate>
            <description><![CDATA[ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವ ತೀರ್ಮಾನವಿದೆ. ಕೇರಳದಲ್ಲಿ ಸರ್ಕಾರ ರಚನೆಯಾದ ನಂತರ ವರಿಷ್ಠರು ಕರ್ನಾಟಕದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ದಿನೇಶ್&zwnj; ಗುಂಡೂರಾವ್&zwnj; ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jx1gjez9aff1ggdmjvvwzczc,imgname-----------------------2025-06-06t074851.327-1749176368105.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಮೇ.9):&lt;/strong&gt; ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂಬ ತೀರ್ಮಾನವಿದ್ದು, ಕೇರಳದಲ್ಲಿ ಸರ್ಕಾರ ರಚನೆ ಆದ ನಂತರ ನಮ್ಮ ವರಿಷ್ಠರು ಕರ್ನಾಟಕದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ದಿನೇಶ್&zwnj; ಗುಂಡೂರಾವ್&zwnj; ತಿಳಿಸಿದರು.&amp;nbsp;&lt;/p&gt;&lt;p&gt;ಸುದ್ದಿಗಾರರ ಜತೆ ಮಾತನಾಡಿ, &lsquo;ಪಕ್ಷದಲ್ಲಿ ಯಾರು ಏನೇನು ಪ್ರಯತ್ನ ಮಾಡ್ತಾ ಇದಾರೋ ನನಗೆ ಗೊತ್ತಿಲ್ಲ. ಯಾರು ಯಾವ ದಿನಾಂಕ ನಿಗದಿ ಮಾಡಲು ಸಾಧ್ಯವಿಲ್ಲ. ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಖರ್ಗೆ, ರಾಹುಲ್, ಸೋನಿಯಾ ತೀರ್ಮಾನ ತಗೆದುಕೊಳ್ಳುತ್ತಾರೆ. ಸಮಯ, ಮುಹೂರ್ತ ಎಲ್ಲಾ ಅವರ ವಿವೇಚನೆಗೆ ಬಿಟ್ಟದ್ದು&rsquo; ಎಂದರು.&lt;/p&gt;&lt;p&gt;ತಮಿಳುನಾಡಿನಲ್ಲಿ ಸಚಿವ ಸ್ಥಾನಕ್ಕೆ ಕಾಂಗ್ರೆಸ್ ಭಿಕ್ಷೆ ಬೇಡುತ್ತಿದೆ ಎಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೆಸರು ಓಡ್ತಾ ಇರ್ಬೇಕು ಅಂತಾ ಇಂತಹ ಹೇಳಿಕೆ ಕೊಡ್ತಾರೆ. ಅಂತಹ ಪ್ರಶ್ನೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ರಾಹುಲ್ ಗಾಂಧಿ ಮತ್ತು ಟಿವಿಕೆ ಪಕ್ಷದ ನಾಯಕ, ನಟ ವಿಜಯ್&zwnj;ಗೆ ಮೊದಲಿಂದನೂ ಸ್ನೇಹ-ಸಂಪರ್ಕವಿತ್ತು. ಅವರು ಎನ್&zwnj;ಎಸ್&zwnj;ಯುಐಗೆ ಬರಬೇಕು ಅಂತ 8 ವರ್ಷದ ಹಿಂದೆ ಮಾತುಕತೆ ನಡೆದಿತ್ತು ಎಂದು ತಿಳಿಸಿದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/minister-dinesh-gundu-rao-gives-major-hint-about-cabinet-expansion-what-did-he-say-rav/articleshow-o780g7g"/>
        </item>
        <item>
            <title><![CDATA[Blackmail Utsav: ಯಾವ ಪುರುಷಾರ್ಥಕ್ಕೆ ಯಡಿಯೂರಪ್ಪ ಅಭಿಮಾನೋತ್ಸವ? ಯತ್ನಾಳ್ ಟೀಕೆ]]></title>
            <link>https://kannada.asianetnews.com/state/blackmail-utsav-what-has-bsy-achieved-for-an-abhimanotsava-yatnal-questions-purpose-rav/articleshow-5ca1zvu</link>
            <guid isPermaLink="true">https://kannada.asianetnews.com/state/blackmail-utsav-what-has-bsy-achieved-for-an-abhimanotsava-yatnal-questions-purpose-rav/articleshow-5ca1zvu</guid>
            <pubDate>Sat, 09 May 2026 05:32:02 +0530</pubDate>
            <description><![CDATA[ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಅಭಿಮಾನೋತ್ಸವವನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕಾರ್ಯವೈಖರಿಯನ್ನು ಟೀಕಿಸಿದ ಅವರು, ರಾಜ್ಯ ಪ್ರವಾಸದ ನಂತರ ಹೊಸ ಪಕ್ಷ ಕಟ್ಟುವ ಬಗ್ಗೆ ಸುಳಿವು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr50ar3k6m44azsc9bfz63f1,imgname-----------------------2026-05-09t052507.998-1778284585075.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಮೇ.9):&lt;/strong&gt; ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿಮಾನೋತ್ಸವ ಯಾವ ಪುರುಷಾರ್ಥಕ್ಕೆ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವಧಿ ನವೆಂಬರ್ ವೇಳೆಗೆ ಮುಕ್ತಾಯ ಆಗಲಿರುವುದರಿಂದ ಇಂತಹ ಕಾರ್ಯಕ್ರಮ ಮಾಡಿ ರಿನಿವಲ್ ಮಾಡಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.&lt;/p&gt;&lt;p&gt;ರಾಜ್ಯದಲ್ಲಿ 25 ಸಂಸದರು ಬಿಜೆಪಿಯವರು ಇದ್ದರೂ ವಿಜಯೇಂದ್ರ ಅವಧಿಯಲ್ಲಿ 17ಕ್ಕೆ ಕುಸಿದಿದೆ. ಅವರು ಪಕ್ಷಕ್ಕಾಗಿ ಕೆಲಸ ಮಾಡುವುದಕ್ಕಿಂತ ಎಲ್ಲ ಕಡೆಯೂ ಡಿಲೀಂಗ್ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.&lt;/p&gt;&lt;p&gt;ಬಿಜೆಪಿ ಹೈಕಮಾಂಡ್&zwnj;ಗೆ ನಾವು ಲಿಂಗಾಯತ ನಾಯಕರು ಎಂದು ಬಿಂಬಿಸಲು ಹೊರಟಿದ್ದಾರೆ. ಈಗ ಪ್ರದರ್ಶನಕ್ಕೆ ಇಟ್ಟಿರುವ ಕಾರ್ ಸಹ ಬಿಜೆಪಿಯದ್ದೇ ಆಗಿದೆ. ನಿಮಗೆ ಸ್ವಂತ ಕಾರ್ ಸಹ ಇರಲಿಲ್ಲ. ಆದರೂ ಸಾವಿರಾರು ಕೋಟಿ ಆಸ್ತಿ ಮಾಡಿದ್ದು ಹೇಗೆ? ಎಂದು ಪ್ರಶ್ನೆ ಮಾಡಿದರು.&lt;/p&gt;&lt;p&gt;ಬೇರೆ ಬೇರೆ ರಾಜ್ಯದಲ್ಲಿ ಬಿಜೆಪಿ ಗೆದ್ದಾಗ ಪೇಢೆ ಹಂಚುವ ಅವರು, ಇಲ್ಲಿ ಏನು ಆಗಿದೆ ಎನ್ನುವುದನ್ನು ಹೇಳುವುದಿಲ್ಲ. ಇಲ್ಲಿ ಎಲ್ಲ ಗೊಡ್ಡಿಯೇ ಇರುವುದರಿಂದ ಮಕ್ಕಳು ಆಗು ಎಂದರೆ ಹೇಗೆ ಆಗುತ್ತವೆ ಎಂದು ಲೇವಡಿ ಮಾಡಿದರು.&lt;/p&gt;&lt;p&gt;&lt;strong&gt;ಜನಾಭಿಪ್ರಾಯ ಪಡೆದು ಹೊಸ ಪಕ್ಷ: &lt;/strong&gt;ರಾಜ್ಯಾದ್ಯಂತ ಸುತ್ತಾಟ ನಡೆಸಿ ಅಭಿಪ್ರಾಯ ಪಡೆದ ನಂತರ ಹೊಸ ಪಕ್ಷ ಕಟ್ಟುವ ತೀರ್ಮಾನ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.&lt;/p&gt;&lt;p&gt;ಪಕ್ಷ ಕಟ್ಟುವ ಕುರಿತು ಈಗಲೇ ಏನು ಹೇಳಲು ಆಗದು, ಅಭಿಪ್ರಾಯ ಪಡೆದ ಬಳಿಕವೇ ತೀರ್ಮಾನ ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.&lt;/p&gt;&lt;p&gt;ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಯಾರಾದರೂ ಸಿಎಂ ಆಗಲಿ ನಮಗೇ ಗೊತ್ತಿಲ್ಲ. ಆದರೆ, ಉತ್ತಮ ಆಡಳಿತ ಕೊಡಲಿ ಎಂದರು.&lt;/p&gt;&lt;p&gt;ಪಂಚಮಸಾಲಿ ಎರಡು ಟ್ರಸ್ಟ್&zwnj;ಗಳಲ್ಲಿ ಭ್ರಷ್ಟರೇ ಇದ್ದಾರೆ. ಅವರೆಲ್ಲ ಲಫಂಗರೂ ಇದ್ದಾರೆ. ಟ್ರಸ್ಟ್ ರಾಜಕೀಯೇತರ ಇರಬೇಕು. ರಾಜಕೀಯದಿಂದ ಕೂಡಿದ್ದರೆ ಹೀಗೆಯೇ ಆಗುವುದು ಎಂದು ಕಿಡಿಕಾರಿದರು. ಕೂಡಲಸಂಗಮ ಮತ್ತು ಹರಿಹರದ ಎರಡು ಟ್ರಸ್ಟ್ ರದ್ದಾಗಬೇಕು ಎಂದರು.&lt;/p&gt;&lt;p&gt;ಐಪಿಎಲ್ ಟಿಕೆಟ್ ಕೇಳಿದ್ದರಿಂದ ಬೆಂಗಳೂರಿಂದ ಗುಜರಾತಿಗೆ ಫೈನಲ್ ಪಂದ್ಯ ಕಿತ್ತುಕೊಂಡು ಹೋಯಿತು. ತಮ್ಮ ಭಾಗದ ಸಮಸ್ಯೆ ಕೇಳದವರು ಐಪಿಎಲ್ ಟಿಕೆಟ್ ಕೇಳುತ್ತಾರೆ. ತಮ್ಮ ಕುಟುಂಬದವರಿಗೆ ಎಸಿ ಕುರ್ಚಿ ಕೇಳುತ್ತಾರೆ ಅಂದರೆ ಏನರ್ಥ? ಎಂದು ಕಿಡಿಕಾರಿದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/blackmail-utsav-what-has-bsy-achieved-for-an-abhimanotsava-yatnal-questions-purpose-rav/articleshow-5ca1zvu"/>
        </item>
        <item>
            <title><![CDATA[ಕಾಂಗ್ರೆಸ್ಸಿಂದ ನಮ್ಮನ್ನು ದೂರ ಕೂರಿಸಿ; ಸ್ಪೀಕರ್‌ಗೆ ಡಿಎಂಕೆ ಮನವಿ, ಇಂಡಿ ಕೂಟಕ್ಕೂ ವಿದಾಯ ಸಂಭವ]]></title>
            <link>https://kannada.asianetnews.com/india-news/dmk-demands-separate-lok-sabha-seats-from-congress-india-alliance-faces-collapse-rav/articleshow-22z95de</link>
            <guid isPermaLink="true">https://kannada.asianetnews.com/india-news/dmk-demands-separate-lok-sabha-seats-from-congress-india-alliance-faces-collapse-rav/articleshow-22z95de</guid>
            <pubDate>Sat, 09 May 2026 05:19:21 +0530</pubDate>
            <description><![CDATA[&lt;p&gt;ತಮಿಳುನಾಡು ಚುನಾವಣೆಯ ನಂತರ ಕಾಂಗ್ರೆಸ್, ವಿಜಯ್ ಅವರ ಟಿವಿಕೆ ಪಕ್ಷವನ್ನು ಬೆಂಬಲಿಸಿದ್ದರಿಂದ ದಶಕಗಳ ಮಿತ್ರಪಕ್ಷವಾದ ಡಿಎಂಕೆ ತೀವ್ರ ಅಸಮಾಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆಗೆ ಡಿಎಂಕೆ ಮನವಿ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr4zf4jw02kp28hhr8fedqw1,imgname-----------------------2026-05-09t051103.684-1778283680348.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಹಲವು ದಶಕಗಳಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್&zwnj; ಜತೆ ಮೈತ್ರಿ ಹೊಂದಿದ್ದ ಡಿಎಂಕೆ&lt;/li&gt; &lt;li&gt;ಆದರೆ ತಮಿಳ್ನಾಡು ಚುನಾವಣೆ ಬಳಿಕ ವಿಜಯ್&zwnj;ರ ಟಿವಿಕೆ ಪಕ್ಷ ಬೆಂಬಲಿಸಿದ್ದ ಕಾಂಗ್ರೆಸ್&zwnj;&lt;/li&gt; &lt;li&gt;ಕಾಂಗ್ರೆಸ್&zwnj;ನ ಈ ನಡೆ ಬಗ್ಗೆ ಡಿಎಂಕೆ ಮೈತ್ರಿಕೂಟದ ಸಭೆಯಲ್ಲಿ ಸಿಎಂ ಸ್ಟಾಲಿನ್ ಆಕ್ರೋಶ&lt;/li&gt; &lt;li&gt;ಕಷ್ಟದ ಸಮಯದಲ್ಲಿ ಹಲವು ಬಾರಿ ಬೆಂಬಲಿಸಿದ್ದರೂ ಇದೀಗ ಕಾಂಗ್ರೆಸ್&zwnj; ಕೈಕೊಟ್ಟ ಆರೋಪ&lt;/li&gt; &lt;li&gt;ಹೀಗಾಗಿ ಲೋಕಸಭೇಲಿ ಪ್ರತ್ಯೇಕ ಸ್ಥಾನ ನೀಡುವಂತೆ ಸ್ಪೀಕರ್&zwnj; ಡಿಎಂಕೆ ನಾಯಕರ ಮನವಿ&lt;/li&gt; &lt;li&gt;ಶೀಘ್ರವೇ ಕಾಂಗ್ರೆಸ್&zwnj; ನೇತೃತ್ವದ ಇಂಡಿಯಾ ಕೂಟಕ್ಕೂ ಡಿಎಂಕೆ ವಿದಾಯ ಹೇಳುವ ಸಂಭವ&lt;/li&gt;&lt;/ul&gt;&lt;p&gt;&lt;strong&gt;ಚೆನ್ನೈ: &lt;/strong&gt;ಟಿವಿಕೆ ಜತೆ ಕಾಂಗ್ರೆಸ್&zwnj; ಪಕ್ಷದ ಮೈತ್ರಿ ಬಹುಕಾಲದ ಮಿತ್ರ ಡಿಎಂಕೆಯನ್ನು ಸಿಟ್ಟಿಗೆಬ್ಬಿಸಿದ್ದು ರಾಷ್ಟ್ರದಲ್ಲೇ ಮೈತ್ರಿ ಕಡಿತಕ್ಕೆ ಮುಂದಾದಂತಿದೆ. ಇದರ ಮೊದಲ ಸಂಕೇತವಾಗಿ ಗುರುವಾರ ನಡೆದ ಡಿಎಂಕೆ ಸಭೆಯಲ್ಲಿ ಕಾಂಗ್ರೆಸ್&zwnj; ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇನ್ನೊಂದು ಕಡೆ, &lsquo;ಲೋಕಸಭೆಯಲ್ಲಿ ಕಾಂಗ್ರೆಸ್&zwnj; ಜತೆ ಇನ್ನು ನಾವು ಕೂರಲ್ಲ. ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿ&rsquo; ಎಂದು ಸದನದ ಸ್ಪೀಕರ್&zwnj;ಗೆ ಡಿಎಂಕೆ ಸಂಸದೆ ಕನಿಮೋಳಿ ಪತ್ರ ಬರೆದಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್&zwnj; ಜತೆ ಡಿಎಂಕೆ ಮೈತ್ರಿ ಕಡಿದುಕೊಂಡರೆ ವಿಪಕ್ಷಗಳ ಇಂಡಿಯಾ ಕೂಟದಿಂದ ಕೂಡ ಅದು ಹೊರಬಂದಂತೆ ಎನ್ನಲಾಗುತ್ತಿದೆ.&lt;/p&gt;&lt;h2&gt;ಸ್ಟಾಲಿನ್&zwnj;ಗೆ ಬೇಸರ:&lt;/h2&gt;&lt;p&gt;ಕಾಂಗ್ರೆಸ್&zwnj; ನಡೆ ಬಗ್ಗೆ ಮಾತನಾಡಿದ ಡಿಎಂಕೆ ನಾಯಕರೊಬ್ಬರು, ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್&zwnj; ತೀವ್ರ ಬೇಸರಗೊಂಡಿದ್ದಾರೆ ಎಂದಿದ್ದಾರೆ. &lsquo;ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕಾಗಿ ಅವರನ್ನು ನೀವು (ರಾಹುಲ್&zwnj; ಗಾಂಧಿ) ದೇಶದ್ರೋಹಿ ಎಂದು ಕರೆದಿದ್ದೀರಿ. ಈಗ ಇದನ್ನು ಪರಿಗಣಿಸಿ. ಮಂಗಳವಾರ ಮಧ್ಯಾಹ್ನ ನೀವು ಎಂ.ಕೆ. ಸ್ಟಾಲಿನ್&zwnj;ಗೆ ಕರೆ ಮಾಡಿ, &lsquo;ನಾನು ನಿಮ್ಮೊಂದಿಗಿದ್ದೇನೆ&rsquo; ಎಂದು ಹೇಳಿದ್ದಿರಿ. ಮರುದಿನ ಬೆಳಿಗ್ಗೆ, ನೀವು ಮೈತ್ರಿಕೂಟದಿಂದ ಪಕ್ಷಾಂತರಗೊಂಡು ನಿಮ್ಮ ವಿರುದ್ಧ ಸಡ್ಡು ಹೊಡೆದಿದ್ದ ಪಕ್ಷಕ್ಕೆ ಹಾರಿದ್ದೀರಿ. ಇದು ಅವಕಾಶವಾದಿ ಮತ್ತು ರಾಜಕೀಯವಾಗಿ ಅನೈತಿಕ&rsquo; ಎಂದರು.&lt;/p&gt;&lt;p&gt;&lsquo;ನಾವು ನಿಮಗೆ 28 ಸೀಟು ಬಿಟ್ಟವು. 5ರಲ್ಲಿ ಗೆದ್ದಿರಿ. ನಮ್ಮಿಂದಾಗಿ ಈ ಸೀಟು ಬಂದವು ಎಂಬುದನ್ನೂ ಮರೆತಿದ್ದೀರಿ&rsquo; ಎಂದು ಕಿಡಿಕಾರಿದ್ದಾರೆ.&lt;/p&gt;&lt;h3&gt;ಬೇರೆ ಆಸನ ವ್ಯವಸ್ಥೆಗೆ ಬೇಡಿಕೆ:&lt;/h3&gt;&lt;p&gt;ಈ ನಡುವೆ, ಲೋಕಸಭೆ ಸ್ಪೀಕರ್&zwnj;ಗೆ ಪತ್ರ ಬರೆದಿರುವ ಸಂಸದೆ ಕನಿಮೋಳಿ, &lsquo;ಲೋಕಸಭೆಯಲ್ಲಿ ಡಿಎಂಕೆಗೆ ಸಂಸದರ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ವಿನಂತಿಸುತ್ತೇನೆ. ಕಾಂಗ್ರೆಸ್&zwnj; ಜತೆಗಿನ ನಮ್ಮ ಮೈತ್ರಿ ಮುರಿದುಬಿದ್ದಿರುವ ವೇಳೆ ಸದನದಲ್ಲಿ ಅವರೊಂದಿಗೆ ಕೂರುವುದು ಸರಿಯಾಗದು&rsquo; ಎಂದಿದ್ದಾರೆ. ಈತನಕ ಲೋಕಸಭೆಯಲ್ಲಿ ಕಾಂಗ್ರೆಸ್&zwnj; ಜತೆಗೇ ಡಿಎಂಕೆ ಸಂಸದರು ಕೂರುತ್ತಿದ್ದರು.&lt;/p&gt;&lt;p&gt;ಬಹುಮತ ಪಡೆದು ಸರ್ಕಾರ ರಚಿಸಲು ಟಿವಿಕೆಗೆ 10 ಸೀಟುಗಳ ಆವಶ್ಯಕತೆ ಇದೆ. ಹೀಗಾಗಿ 5 ಸೀಟು ಪಡೆದಿರುವ ಕಾಂಗ್ರೆಸ್&zwnj;, ವಿಜಯ್&zwnj;ರನ್ನು ಬೆಂಬಲಿಸಿದೆ. &lsquo;ಇದು ನಮಗೆ ಬಗೆದ ದ್ರೋಹ. ಕಾಂಗ್ರೆಸ್&zwnj;ಗೆ ಅಷ್ಟು ಸೀಟು ದಕ್ಕಿರುವುದೂ ನಮ್ಮಿಂದಲೇ&rsquo; ಎಂದು ಡಿಎಂಕೆ ಇತ್ತೀಚೆಗೆ ಹೇಳಿತ್ತು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/dmk-demands-separate-lok-sabha-seats-from-congress-india-alliance-faces-collapse-rav/articleshow-22z95de"/>
        </item>
        <item>
            <title><![CDATA[VB-G RAM G Act: ಕೇಂದ್ರದ್ದು ಸಂವಿಧಾನ ವಿರೋಧಿ ನಿರ್ಧಾರ; ಜಿ ರಾಮ್‌ ಜಿ ವಿರುದ್ಧ ಹೋರಾಟ ಮಾಡುತ್ತೇವೆ: ಸಚಿವ ಪ್ರಿಯಾಂಕ್‌]]></title>
            <link>https://kannada.asianetnews.com/state/centre-s-decision-anti-constitutional-we-will-fight-vb-g-ram-g-act-says-priyank-kharge/articleshow-ih7az3d</link>
            <guid isPermaLink="true">https://kannada.asianetnews.com/state/centre-s-decision-anti-constitutional-we-will-fight-vb-g-ram-g-act-says-priyank-kharge/articleshow-ih7az3d</guid>
            <pubDate>Sat, 09 May 2026 05:02:05 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರವು ರಾಜ್ಯದೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಕಾಯ್ದೆ ಜಾರಿಗೊಳಿಸಲು ಮುಂದಾಗಿದ್ದು, ಇದು ಸಂವಿಧಾನ ವಿರೋಧಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಅಲ್ಲದೆ, ರಾಜ್ಯಪಾಲರ ಕಚೇರಿಗಳು ಬಿಜೆಪಿ ಮತ್ತು ಆರ್&zwnj;ಎಸ್&zwnj;ಎಸ್&zwnj; ಕಚೇರಿಗಳಂತೆ ಬಳಕೆಯಾಗುತ್ತಿವೆ ಎಂದು &amp;nbsp;ಆಕ್ರೋಶ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250719174400,imgname-image-47f58b63-1479-4f2b-9079-cb3d0a039be1.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಕೇಂದ್ರದ್ದು ಸಂವಿಧಾನ ವಿರೋಧಿ ನಿರ್ಧಾರ&lt;/li&gt; &lt;li&gt;ಯೋಜನೆ ಬಗ್ಗೆ ಕೇಂದ್ರ ಮಾಹಿತಿ ನೀಡೇ ಇಲ್ಲ&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಮೇ.9):&lt;/strong&gt; ವಿಬಿ ಜಿ ರಾಮ್&zwnj; ಜಿ ಕಾಯ್ದೆ ತರುವುದಕ್ಕೂ ಮುಂಚೆ ನಮ್ಮೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿಲ್ಲ. ಸಂವಿಧಾನ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆರ್ಥಿಕ ಹೊರೆಯಾಗುವುದಾದರೆ ನಮ್ಮ ಗಮನಕ್ಕೆ ತರಬೇಕು. ಆದರೆ, ಅದನ್ನು ಮಾಡಿಲ್ಲ. ಇದು ಸಂವಿಧಾನ ವಿರೋಧಿ ನಿರ್ಧಾರವಾಗಿದ್ದು, ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್&zwnj; ಖರ್ಗೆ ಹೇಳಿದರು.&lt;/p&gt;&lt;p&gt;ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆರ್ಥಿಕ ಹೊರೆಯಾಗುವಂಥ ಯೋಜನೆ ತರುವುದಕ್ಕೂ ಮುನ್ನ ಆ ರಾಜ್ಯದ ಗಮನಕ್ಕೆ ತರಬೇಕು. ಆದರೆ, ಸಂವಿಧಾನ ವಿರೋಧಿಯಾಗಿ ವಿಬಿ ಗ್ರಾಮ್&zwnj; ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಜಾರಿಗೊಳಿಸಲು ಮುಂದಾಗಿದೆ. ಕಾಯ್ದೆ ತರುವುದಕ್ಕೂ ಮುನ್ನ ನಮ್ಮೊಂದಿಗೆ ಮಾತುಕತೆ ನಡೆಸಿಲ್ಲ. ಈ ಎಲ್ಲದರ ಕುರಿತು ನಾವು ಹೋರಾಟ ಮಾಡುತ್ತೇವೆ ಎಂದರು.&lt;/p&gt;&lt;h2&gt;ರಾಜಭವನ ಬಿಜೆಪಿ ಕಚೇರಿಗಳಾಗುತ್ತಿವೆ:&lt;/h2&gt;&lt;p&gt;ತಮಿಳುನಾಡು ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ನಡೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್&zwnj;, ಕಳೆದೊಂದು ದಶಕದಿಂದ ರಾಜ್ಯಪಾಲರ ಕಚೇರಿಗಳು ಬಿಜೆಪಿ ಮತ್ತು ಆರ್&zwnj;ಎಸ್&zwnj;ಎಸ್&zwnj; ಕಚೇರಿಯಾಗಿ ಬಳಕೆಯಾಗುತ್ತಿವೆ. ಸಂವಿಧಾನಿಕ ಹುದ್ದೆಯಲ್ಲಿದ್ದು ರಾಜಕೀಯ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರು ಅಡ್ಡಿಪಡಿಸಿದ್ದರು. ಬೇರೆ ರಾಜ್ಯಗಳಲ್ಲಿ ಈ ರೀತಿ ಸನ್ನಿವೇಶವಿದ್ದಾಗ ಸರ್ಕಾರ ರಚನೆಗೆ ಅನುಮತಿಸಲಾಗಿತ್ತು. ಬಹುಮತವನ್ನು ರಾಜ್ಯಪಾಲರ ಬಳಿ ಸಾಬೀತುಪಡಿಸುವ ಅವಶ್ಯಕತೆಯಿಲ್ಲ. ಸದನದ ಒಳಗೆ ಅದನ್ನು ಸಾಬೀತುಪಡಿಸಬೇಕು. ಅದಕ್ಕೂ ಮುಂಚೆಯೇ ಶಾಸಕರ ಬೆಂಬಲವಿರುವ ಪತ್ರ ನೀಡಿದೆ ಎನ್ನುವುದು ಸರಿಯಲ್ಲ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/centre-s-decision-anti-constitutional-we-will-fight-vb-g-ram-g-act-says-priyank-kharge/articleshow-ih7az3d"/>
        </item>
        <item>
            <title><![CDATA[BSY Abhimanotsav: ಇಂದು ಅಭಿಮಾನೋತ್ಸವ ಹಿನ್ನೆಲೆ, ನಿನ್ನೆ ಚಿತ್ರದುರ್ಗ ಪುರಪ್ರವೇಶ ಬಿಎಸ್‌ವೈಗೆ ಅದ್ಧೂರಿ ಸ್ವಾಗತ!]]></title>
            <link>https://kannada.asianetnews.com/state/chitradurga-welcomes-bs-yediyurappa-with-grand-event-for-abhimanotsava-rav/articleshow-mfr3gas</link>
            <guid isPermaLink="true">https://kannada.asianetnews.com/state/chitradurga-welcomes-bs-yediyurappa-with-grand-event-for-abhimanotsava-rav/articleshow-mfr3gas</guid>
            <pubDate>Sat, 09 May 2026 04:20:42 +0530</pubDate>
            <description><![CDATA[ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಂಗವಾಗಿ ಚಿತ್ರದುರ್ಗದಲ್ಲಿ 'ಅಭಿಮಾನೋತ್ಸವ' ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಬಿಎಸ್&zwnj;ವೈ ಅವರಿಗೆ ಕೋಟೆನಾಡಿನ ಜನತೆ 'ಮಿನಿ ದಸರಾ' ಮಾದರಿಯಲ್ಲಿ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಅದ್ಧೂರಿ ಸ್ವಾಗತ ಕೋರಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr4w78je3t4c64zjmtmnwdxy,imgname-----------------------2026-05-09t041410.250-1778280276558.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಮೇ.9)&lt;/strong&gt;: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ ಐವತ್ತು ವರ್ಷ ಸಂದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿರುವ &lsquo;ಬಿಎಸ್&zwnj;ವೈ ಅಭಿಮಾನೋತ್ಸವ&rsquo;ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಅವರು ಶುಕ್ರವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ಕೋಟೆ ನಾಡಿನ ಜನ ಅದ್ಧೂರಿಯಾಗಿ ಸ್ವಾಗತ ಕೋರಿದರು. &lsquo;ಮಿನಿ ದಸರಾ&rsquo; ಮಾದರಿಯಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.&lt;/p&gt;&lt;h2&gt;ಬಿಎಸ್&zwnj;ವೈ ಅದ್ಧೂರಿ ಪುರಪ್ರವೇಶ&lt;/h2&gt;&lt;p&gt;ಸಂಜೆ ನಾಲ್ಕು ಗಂಟೆಗೆ ಯಡಿಯೂರಪ್ಪ ಚಿತ್ರದುರ್ಗ ಪುರಪ್ರವೇಶ ಮಾಡಬೇಕಿತ್ತು. ಆದರೆ ಬಿಎಸ್&zwnj;ವೈ ಆಗಮನ ಆದಾಗ ಸೂರ್ಯ ನಿಧಾನವಾಗಿ ಮೋಡದಿಂದ ಮರೆಯಾಗುತ್ತಿದ್ದ. ಇದೇ ಗೋಧೂಳಿ ಸಮಯದಲ್ಲಿ ನೇರವಾಗಿ ಪುಷ್ಪಾಲಂಕೃತ ವಾಹನ ಏರಿದ ಯಡಿಯೂರಪ್ಪ ಅವರು ನೆರೆದಿದ್ದ ಅಭಿಮಾನಿ ಸಮೂಹದತ್ತ ಕೈ ಬೀಸಿದರು. ರಾಜಕೀಯ ನಾಯಕರು ಹಾಗೂ ರೈತರು ಗಾಳಿಯಲ್ಲಿ ಹಸಿರು ಶಾಲು ಬೀಸಿ ಯಡಿಯೂರಪ್ಪ ಅವರ ರೈತ ಪರ ಹೋರಾಟದ ನೆನಪು ಮಾಡಿದರು. ಸಾವಿರಕ್ಕೂ ಹೆಚ್ಚು ಮಂದಿ ಕೈಯಲ್ಲಿ ನೇಗಿಲು ಎತ್ತಿ ಹಿಡಿದು ಮೆರವಣಿಗೆಗೆ ಒಕ್ಕಲುತನದ ಸ್ಪರ್ಶ ನೀಡಿದರು. ಕ್ರೇನ್ ಸಹಾಯದಿಂದ ಬಿಎಸ್&zwnj;ವೈ ಅವರ ಮೇಲೆ ಹೂ ಮಳೆಗರೆಯಲಾಯಿತು.&lt;/p&gt;&lt;p&gt;ಯಡಿಯೂರಪ್ಪ ಅವರು ಪುಷ್ಪಾಲಂಕೃತ ಸಾರೋಟ್&zwnj;ನಲ್ಲಿ ಸಾಗಬೇಕಾಗಿತ್ತು. ಆದರೆ ಅವರ ಜೊತೆಗೆ ಬಹಳಷ್ಟು ನಾಯಕರು ಸಾಗುವುದು ಕಷ್ಟವೆಂಬ ಕಾರಣಕ್ಕೆ ವಾಹನವೊಂದಕ್ಕೆ ಪುಷ್ಪಾಲಂಕಾರ ಮಾಡಿ ಅದರಲ್ಲಿ ಬಿಎಸ್&zwnj;ವೈ ಅವರ ಮೆರಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರೆ ಮತ್ತೊಂದಿಷ್ಟು ಮಂದಿ ಕೈಲಿ ಒನಕೆ ಹಿಡಿದು ಹೆಜ್ಜೆ ಹಾಕಿದರು. ಈ ಮೂಲಕ ಬಿಎಸ್&zwnj;ವೈ ಪುರಪ್ರವೇಶಕ್ಕೆ ಸಂಭ್ರಮದ ಕಳೆ ತಂದರು. ಇದರೊಂದಿಗೆ ತನ್ನ ಐದು ದಶಕಗಳ ರಾಜಕೀಯ ಬದುಕಿನಲ್ಲಿ ಬಡವರ, ರೈತರ, ಮಹಿಳೆಯರ ಪರ ಹೋರಾಡಿದ ಕುರುಹುಗಳು ಸಾಂಕೇತಿಕವಾಗಿ ಪುರಪ್ರವೇಶದ ಸಂದರ್ಭದಲ್ಲಿ ಅನಾವರಣಗೊಂಡವು.&lt;/p&gt;&lt;p&gt;ಬುಡಕಟ್ಟು ಸಾಂಸ್ಕೃತಿಕ ಪರಂಪರೆ ಸಾರುವ ಚಿತ್ರದುರ್ಗ ಜಿಲ್ಲೆಯ ಕಾಡುಗೊಲ್ಲ-ಮ್ಯಾಸಬೇಡ ಸಮುದಾಯಗಳ ಸಾಂಸ್ಕೃತಿಕ ಆಚರಣೆಯನ್ನು ಮೇಳೈಸುವ ಕೋಲಾಟ ಸೇರಿದಂತೆ ಹಲವು ಕಲಾ ತಂಡಗಳ ಜತೆಗೆ ಕಂಸಾಳೆ, ಉರಿಮೆ, ತಮಟೆ, ಗೊರವರ ಕುಣಿತ, ನಂದಿಕೋಲು, ವೀರಗಾಸೆ, ವಿವಿಧ ಜಾನಪದ ನೃತ್ಯಗಳು ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ತಂಪನೆಯ ಸಮಯದಲ್ಲಿ ನಗುಮೊಗದೊಂದಿಗೆ ಮದುಮಗನಂತೆ ಕಂಗೊಳಿಸುತ್ತಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ತೆರೆದ ವಾಹನದಲ್ಲಿ ಎಲ್ಲರತ್ತ ಕೈಬೀಸಿ ನಗುಮುಖದಲ್ಲಿ ಸಾಗುತ್ತಿದ್ದರು.&lt;/p&gt;&lt;p&gt;ಪ್ರವಾಸಿ ಮಂದಿರದ ಬಳಿ ಅಭಿಮಾನಿಗಳು ಬೃಹದಾಕಾರದ ಸೇಬು ಹಾರ ಹಾಕಿದರೆ, ಅಂಬೇಡ್ಕರ್ ಪ್ರತಿಮೆ ಬಳಿ ಮಾದಿಗ ಸಮುದಾಯದ ಮುಖಂಡರು ತಮ್ಮ ಸಾಂಸ್ಕೃತಿಕ ಪರಿಕರವಾದ ಹಲಗೆಯನ್ನೇ ಪೋಣಿಸಿ ಹಾರ ಮಾಡಿ ಯಡಿಯೂರಪ್ಪ ಅವರಿಗೆ ಹಾಕಿದ್ದು ವಿಶೇಷವಾಗಿ ಕಂಡಿತು.&lt;/p&gt;&lt;p&gt;ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಂಸದ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಶ್ರೀರಾಮುಲು, ರೇಣುಕಾಚಾರ್ಯ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಸಿ.ಟಿ.ರವಿ, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್ ಸೇರಿ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.&lt;/p&gt;&lt;p&gt;ಆರು ಗಂಟೆಗೆ ಆರಂಭವಾದ ಮೆರವಣಿಗೆ ಮದಕರಿನಾಯಕ ಪ್ರತಿಮೆ ಬಳಿ ಬಂದಾಗ ವೇಳೆ ಎಂಟು ಗಂಟೆಯಾಗಿತ್ತು. ಸರಿ ಸುಮಾರು ಎರಡು ತಾಸು ಮೆರವಣಿಗೆ ನಡೆಯಿತು. ನಂತರ ಯಡಿಯೂರಪ್ಪ ಅವರು ವೀರಶೈವ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.&lt;/p&gt;&lt;p&gt;ನಾನು, ಅನಂತ್&zwnj; ರಾಜ್ಯ ಸುತ್ತಿದ್ದಕ್ಕೆ ಅಧಿಕಾರ&lt;/p&gt;&lt;p&gt;ಅಭಿಮಾನೋತ್ಸವಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆಯಿದೆ. ಬಹಳ ಪ್ರೀತಿ, ವಿಶ್ವಾಸದಿಂದ ಎಲ್ಲರೂ ಸೇರಿ, ಕಾರ್ಯಕ್ರಮ ಮಾಡುತ್ತಿದ್ದಾರೆ. ಸೈಕಲ್&zwnj;ನಲ್ಲಿ ನಾನು, ಅನಂತಕುಮಾರ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆವು. ಇದೆಲ್ಲದರ ಕಾರಣದಿಂದ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 2028ರ ಚುನಾವಣೆಗೆ ಅಭಿನಂದನೋತ್ಸವ ರಣಕಹಳೆಯಾಗುತ್ತದೆಯಾ ಎಂಬುದನ್ನು ಕಾದು ನೋಡೋಣ.&lt;/p&gt;&lt;p&gt;&lt;strong&gt;-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ&lt;/strong&gt;&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/chitradurga-welcomes-bs-yediyurappa-with-grand-event-for-abhimanotsava-rav/articleshow-mfr3gas"/>
        </item>
        <item>
            <title><![CDATA[Breaking: ದಳಪತಿ ವಿಜಯ್‌ಗೆ ಕೊನೆಗೂ ಸಿಕ್ತು ರಾಜ್ಯಪಾಲರ ಗ್ರೀನ್‌ಸಿಗ್ನಲ್‌, ನಾಳೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ]]></title>
            <link>https://kannada.asianetnews.com/gallery/india-news/thalapathy-vijay-tvk-governor-approval-oath-taking-tomorrow-san-lphaxpk</link>
            <guid isPermaLink="true">https://kannada.asianetnews.com/gallery/india-news/thalapathy-vijay-tvk-governor-approval-oath-taking-tomorrow-san-lphaxpk</guid>
            <pubDate>Fri, 08 May 2026 19:44:20 +0530</pubDate>
            <description><![CDATA[&lt;p&gt;ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ, ನಟ ವಿಜಯ್ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ಈ ಐತಿಹಾಸಿಕ ಬೆಳವಣಿಗೆಯೊಂದಿಗೆ, ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಂತಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3ytdz6f4479aarnjnr5kj1,imgname-thalapathy-vijay--1--1778249447396.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ, ನಟ ವಿಜಯ್ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ಈ ಐತಿಹಾಸಿಕ ಬೆಳವಣಿಗೆಯೊಂದಿಗೆ, ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಂತಾಗಿದೆ.&lt;/p&gt;&lt;img&gt;&lt;p&gt;ತಮಿಳುನಾಡು ರಾಜಕೀಯದಲ್ಲಿ ಸೃಷ್ಟಿಯಾಗಿದ್ದ ಸುದೀರ್ಘ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ ಮತ್ತು ಸೂಪರ್ ಸ್ಟಾರ್ ವಿಜಯ್ ಅವರು ರಾಜ್ಯದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅಧಿಕೃತವಾಗಿ ಸಮ್ಮತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ವಿಜಯ್ ಅವರು ನಾಳೆ (ಶನಿವಾರ) ಬೆಳಿಗ್ಗೆ 11 ಗಂಟೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾದ ವಿಜಯ್, ತಮ್ಮ ಮೈತ್ರಿಕೂಟಕ್ಕೆ ಇರುವ 118 ಶಾಸಕರ ಬೆಂಬಲದ ಪತ್ರವನ್ನು ಹಸ್ತಾಂತರಿಸಿದ್ದರು. ಸಂಖ್ಯಾಬಲದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ರಾಜ್ಯಪಾಲರು, ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.&lt;/p&gt;&lt;img&gt;&lt;p&gt;ಈ ಐತಿಹಾಸಿಕ ಕ್ಷಣದೊಂದಿಗೆ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಏಕಸ್ವಾಮ್ಯ ಅಂತ್ಯಗೊಂಡು, ಹೊಸ ಮೈತ್ರಿ ಸರ್ಕಾರದ ಆಡಳಿತ ಆರಂಭವಾಗಲಿದೆ. ನಾಳೆಯ ಸಮಾರಂಭದಲ್ಲಿ ವಿಜಯ್ ಅವರೊಂದಿಗೆ ಮಿತ್ರಪಕ್ಷಗಳಾದ ಕಾಂಗ್ರೆಸ್, ವಿಸಿಕೆ ಮತ್ತು ಎಡಪಕ್ಷಗಳ ಕೆಲವು ನಾಯಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಚೆನ್ನೈನಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಲಕ್ಷಾಂತರ ಅಭಿಮಾನಿಗಳು ತಮ್ಮ 'ದಳಪತಿ' ಮುಖ್ಯಮಂತ್ರಿ ಆಗುವುದನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ. ಇದರ ನಡುವೆ ಟಿವಿಕೆ ಸದಸ್ಯರು ರಾಜ್ಯಪಾಲರು ಸರ್ಕಾರ ರಚಿಸಲು ಅನುಮತಿ ನೀಡದ ಕಾರಣಕ್ಕೆ ಸುಪ್ರೀಂ ಕೋರ್ಟ್&zwnj; ಕದ ತಟ್ಟಿದ್ದರು. &lsquo;ಪಕ್ಷವು 118 ಸಹಿಗಳನ್ನು ಸ್ವೀಕರಿಸಿದ್ದು, ನಾಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ&rsquo; ಎಂದು ಹಿರಿಯ ಟಿವಿಕೆ ನಾಯಕ ಕೆ. ಸೆಂಗೋಟ್ಟಯನ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ವಿಜಯ್&zwnj; ಜೋಸೆಫ್&zwnj; ಅವರ ಟಿವಿಕೆ ಪಕ್ಷಕ್ಕೆ ಮೊದಲಿಗರಾಗಿ ಬೆಂಬಲ ನೀಡಿದ್ದ ಕಾಂಗ್ರೆಸ್&zwnj; ಪಕ್ಷದಿಂದ ವಿರೋಧ ಪಕ್ಷದ ನಾಯಕ ರಾಹುಲ್&zwnj; ಗಾಂಧಿ ಹಾಗೂ ಕಾಂಗ್ರೆಸ್&zwnj; ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.&lt;/p&gt;]]></content:encoded>
            <category>politics</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/thalapathy-vijay-tvk-governor-approval-oath-taking-tomorrow-san-lphaxpk"/>
        </item>
        <item>
            <title><![CDATA[Tamilu Nadu Breaking: ವಿಜಯ್​ ಮ್ಯಾಜಿಕ್​ ನಂಬರ್​ ದಾಟಿದ್ರೂ, 'ಸುಪ್ರೀಂ' ಮೆಟ್ಟಿಲೇರಿದ ಟಿವಿಕೆ- ಮುಂದೇನು?]]></title>
            <link>https://kannada.asianetnews.com/politics/tvk-functionary-moves-sc-seeking-direction-to-tn-governor-to-swear-in-vijay-as-cm-suc/articleshow-hywgwl1</link>
            <guid isPermaLink="true">https://kannada.asianetnews.com/politics/tvk-functionary-moves-sc-seeking-direction-to-tn-governor-to-swear-in-vijay-as-cm-suc/articleshow-hywgwl1</guid>
            <pubDate>Fri, 08 May 2026 19:27:52 +0530</pubDate>
            <description><![CDATA[ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಮಿತ್ರಪಕ್ಷಗಳ ಬೆಂಬಲದೊಂದಿಗೆ ಬಹುಮತ ಪಡೆದಿದೆ. ಆದಾಗ್ಯೂ, ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸದ ಕಾರಣ, ವಿಜಯ್ ಅವರನ್ನು ಆಹ್ವಾನಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್&zwnj;ನಲ್ಲಿ ಅರ್ಜಿ ಸಲ್ಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3y120zxrmaf6mb4vznazj8,imgname-thalapathy-vijay-1778248615967.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳನಾಡು ರಾಜಕೀಯದಲ್ಲಿ ಮತ್ತೆ ಕೋಲಾಹಲ ಎಬ್ಬಿದೆ. ಇತ್ತ ಭಾವಿ ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಅವರು, ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮ್ಯಾಜಿಕ್​ ನಂಬರ್​ ಅವರಿಗೆ ಸಿಕ್ಕಿದೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ 118 ಸ್ಥಾನಗಳಲ್ಲಿ ಜಯಗಳಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ, ಕಾಂಗ್ರೆಸ್&zwnj; (5), ವಿಸಿಕೆ (2), ಸಿಪಿಐ (2) ಮತ್ತು ಸಿಪಿಎಂ (2) ಪಕ್ಷಗಳು ಬೆಂಬಲ ಘೋಷಿಸಿವೆ. ಹೀಗಾಗಿ ವಿಧಾನಸಭೆಯಲ್ಲಿ ವಿಜಯ್&zwnj; ಸಂಖ್ಯಾಬಲ 119 ಆಗಿದೆ. ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯ್&zwnj;, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದು, ಟಿವಿಕೆ ಮೈತ್ರಿಕೂಟದ ಸಂಖ್ಯಾಬಲ 118 ಆಗಲಿದೆ. ಇದು ಸರಳ ಬಹುಮತದ ಸಂಖ್ಯಾಬಲವಾಗಿದೆ.&lt;/p&gt;&lt;p&gt;ಆದರೆ, ಕುತೂಹಲ ಎನ್ನುವಂತೆ ಅದೇ ಇನ್ನೊಂದೆಡೆ, ಟಿವಿಕೆ ನಾಯಕ ಸಿ ಜೋಸೆಫ್ ವಿಜಯ್ ಅವರನ್ನು ರಾಜ್ಯದಲ್ಲಿ ಸರ್ಕಾರ ರಚಿಸಲು ಆಹ್ವಾನಿಸುವಂತೆ ನಿರ್ದೇಶಿಸಬೇಕೆಂದು ಸುಪ್ರೀಂ ಕೋರ್ಟ್&zwnj;ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಟಿವಿಕೆಯ ಸಕ್ರಿಯ ಸದಸ್ಯೆ ಎಂದು ಕರೆದುಕೊಳ್ಳುವ ವಕೀಲೆ ಕೆ. ಎಳಿಲರಸಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸದನಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಅರ್ಜಿಯಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 59 ಸ್ಥಾನಗಳನ್ನು ಗೆದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) 47 ಸ್ಥಾನ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದಿದೆ. ಪಿಎಂಕೆ, ಐಯುಎಂಎಲ್, ಸಿಪಿಐ, ವಿಸಿಕೆ, ಸಿಪಿಐ(ಎಂ), ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ಸೇರಿದಂತೆ ಇತರ ಪಕ್ಷಗಳು ಉಳಿದ ಸ್ಥಾನಗಳನ್ನು ಗೆದ್ದವು. 234 ಸದಸ್ಯರ ವಿಧಾನಸಭೆಯಲ್ಲಿ 108 ಸ್ಥಾನಗಳೊಂದಿಗೆ ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರ ಹೊರತಾಗಿಯೂ ಶಾಸಕರ ಕೊರತೆಯಿಂದ ಸರ್ಕಾರ ರಚಿಸಲು ಆಗುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;&lt;strong&gt;ರಾಜ್ಯಪಾಲರಿಂದ ನಕಾರ&lt;/strong&gt;&lt;/h3&gt;&lt;p&gt;ಪಕ್ಷದ ಮುಖ್ಯಸ್ಥ ವಿಜಯ್ ಮೇ 7 ರಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಆದರೆ, ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ಮೊದಲು ತಮಗೆ ಬಹುಮತದ ಬೆಂಬಲವಿದೆ (118 ಶಾಸಕರ ಬೆಂಬಲ) ಎಂದು ಸಾಬೀತುಪಡಿಸುವಂತೆ ಕೇಳಿಕೊಂಡರು. ಇದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದ.&lt;/p&gt;&lt;h3&gt;&lt;strong&gt;ಅರ್ಜಿಯಲ್ಲಿ ಏನಿದೆ?&lt;/strong&gt;&lt;/h3&gt;&lt;p&gt;ಯಾವುದೇ ಚುನಾವಣಾ ಪೂರ್ವ ಮೈತ್ರಿಕೂಟವು ಬಹುಮತವನ್ನು ಗಳಿಸದ ಕಾರಣ, ರಾಜ್ಯಪಾಲರು ಏಕೈಕ ಅತಿದೊಡ್ಡ ಪಕ್ಷವಾಗಿರುವ ಟಿವಿಕೆಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಮತ್ತು ನಂತರ ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಸದನವು ಬಹುಮತದ ಹಕ್ಕನ್ನು ಪರೀಕ್ಷಿಸಲು ಏಕೈಕ ಕಾನೂನುಬದ್ಧ ಸ್ಥಳವಾಗಿದೆ. ರಾಜ್ಯಪಾಲರಿಗೆ ನೀಡಲಾದ ಯಾವುದೇ ಪತ್ರ, ಅಫಿಡವಿಟ್ ಅಥವಾ ಬೆಂಬಲ ದಾಖಲೆಯು ವಿಧಾನಸಭೆಯಲ್ಲಿ ಮತವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಅರ್ಜಿಯಲ್ಲಿ ಎಸ್.ಆರ್. ಬೊಮ್ಮಾಯಿ v/s ಭಾರತ ಒಕ್ಕೂಟ, ಜಗದಾಂಬಿಕಾ ಪಾಲ್ v/s ಭಾರತ ಒಕ್ಕೂಟ, ಚಂದ್ರಕಾಂತ್ ಕವ್ಲೇಕರ್ v/s ಭಾರತ ಒಕ್ಕೂಟ, ಜಿ. ಪರಮೇಶ್ವರ v/s ಭಾರತ ಒಕ್ಕೂಟ ಮತ್ತು ಶಿವರಾಜ್ ಸಿಂಗ್ ಚೌಹಾಣ್ v/s ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಆಧರಿಸಿ ಇಲ್ಲಿಯೂ ಅದೇ ರೀತಿ ಮಾಡುವಂತೆ ಕೋರಲಾಗಿದೆ.&lt;/p&gt;&lt;h3&gt;&lt;strong&gt;ಪ್ರಜಾಪ್ರಭುತ್ವದ ಆದೇಶದ ಮೇಲೆ ಪರಿಣಾಮ&lt;/strong&gt;&lt;/h3&gt;&lt;p&gt;ಸರ್ಕಾರ ರಚಿಸಲು ಪಕ್ಷವನ್ನು ಆಹ್ವಾನಿಸುವುದು ಮಾತ್ರ ರಾಜ್ಯಪಾಲರ ಪಾತ್ರ, ಅಂತಹ ಆಹ್ವಾನವನ್ನು ನೀಡುವ ಮೊದಲು ಬಹುಮತದ ಪೂರ್ಣ ಪುರಾವೆಯನ್ನು ಕೋರಬಾರದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆಹ್ವಾನ ನೀಡುವ ಮೊದಲು 118 ಶಾಸಕರಿಂದ ಪತ್ರಗಳನ್ನು ಸಲ್ಲಿಸುವಂತೆ ಒತ್ತಾಯಿಸುವುದು ಸಾಂವಿಧಾನಿಕ ಅನುಕ್ರಮವನ್ನು ತಲೆಕೆಳಗು ಮಾಡುತ್ತದೆ&quot; ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸರ್ಕಾರ ರಚಿಸಲು ರಾಜ್ಯಪಾಲರು ಬೇರೆ ಯಾವುದೇ ವ್ಯಕ್ತಿಯನ್ನು ಆಹ್ವಾನಿಸದಂತೆ ತಡೆಯಲು ಮಧ್ಯಂತರ ಅರ್ಜಿಯನ್ನು ಸಹ ಸಲ್ಲಿಸಲಾಗಿದೆ. ವಿಜಯ್ ಹೊರತುಪಡಿಸಿ ಬೇರೆಯವರಿಗೆ ಆಹ್ವಾನ ನೀಡುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿರುತ್ತದೆ ಮತ್ತು ತಮಿಳುನಾಡಿನ ಜನರ ಪ್ರಜಾಪ್ರಭುತ್ವದ ಆದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/politics/tvk-functionary-moves-sc-seeking-direction-to-tn-governor-to-swear-in-vijay-as-cm-suc/articleshow-hywgwl1"/>
        </item>
        <item>
            <title><![CDATA[ವಿಜಯ್ ಜೊತೆಗಿನ ಕಾಂಗ್ರೆಸ್ ಮೈತ್ರಿ 'ಅನೈತಿಕ', ಗಾಂಧಿ ತತ್ವಕ್ಕೆ ಮಾಡಿದ ಅವಮಾನ;  ಕೈ ನಾಯಕ ಮಣಿಶಂಕರ್ ಅಯ್ಯರ್ ಕಿಡಿ!]]></title>
            <link>https://kannada.asianetnews.com/india-news/immorality-of-joining-vijay-mani-shankar-aiyar-targets-congress-over-tvk-tie-up/articleshow-rr0kfns</link>
            <guid isPermaLink="true">https://kannada.asianetnews.com/india-news/immorality-of-joining-vijay-mani-shankar-aiyar-targets-congress-over-tvk-tie-up/articleshow-rr0kfns</guid>
            <pubDate>Fri, 08 May 2026 18:52:57 +0530</pubDate>
            <description><![CDATA[&lt;p&gt;ದಶಕಗಳ ಕಾಲದ ಮಿತ್ರಪಕ್ಷ ಡಿಎಂಕೆ (DMK) ಕೈಬಿಟ್ಟು, ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ನಿರ್ಧಾರವನ್ನು 'ಅನೈತಿಕ' ಮತ್ತು 'ರಾಜಕೀಯ ಅವಕಾಶವಾದಿತನ' ಕಾಂಗ್ರೆಸ್&zwnj;ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಟೀಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3w2cpq17y15z1anv9wr7x0,imgname-mani-shankar-aiyar-1778246562519.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ 08): ತ&lt;/strong&gt;ಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ದಶಕಗಳ ಕಾಲದ ಮಿತ್ರಪಕ್ಷ ಡಿಎಂಕೆ (DMK) ಕೈಬಿಟ್ಟು, ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ನಿರ್ಧಾರಕ್ಕೆ ಈಗ ಪಕ್ಷದ ಒಳಗಡೆಯೇ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್&zwnj;ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ತಮ್ಮದೇ ಪಕ್ಷದ ಈ ನಡೆಯನ್ನು 'ಅನೈತಿಕ' ಮತ್ತು 'ರಾಜಕೀಯ ಅವಕಾಶವಾದಿತನ' ಎಂದು ಕಟುವಾಗಿ ಟೀಕಿಸಿದ್ದಾರೆ.&lt;/p&gt;&lt;h3&gt;&lt;strong&gt;ಗಾಂಧೀಜಿಯ ತತ್ವಗಳಿಗೆ ವಿರುದ್ಧವಾದ ನಡೆ:&lt;/strong&gt;&lt;/h3&gt;&lt;p&gt;ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಮಣಿಶಂಕರ್ ಅಯ್ಯರ್, 'ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದು ಅತ್ಯಂತ ಘೋರವಾದ ನಡೆ. ಇದು ಕೀಳುಮಟ್ಟದ ರಾಜಕೀಯ ಅವಕಾಶವಾದಿತನವನ್ನು ಪ್ರದರ್ಶಿಸುತ್ತದೆ. 1925ರಲ್ಲಿ ಮಹಾತ್ಮ ಗಾಂಧೀಜಿಯವರು 'ಸ್ವರಾಜ್ಯ ಎಂಬುದು ನೈತಿಕತೆಯ ಆಧಾರದ ಮೇಲೆ ರಚಿತವಾದ ಸರ್ಕಾರವಾಗಿರಬೇಕು' ಎಂದು ಹೇಳಿದ್ದರು. ಆದರೆ, ಇಂದು ಕಾಂಗ್ರೆಸ್ ಹಡಗು ಬದಲಿಸುವ ಮೂಲಕ ಗಾಂಧೀಜಿಯವರ ಆ ಆಶಯವನ್ನೇ ಗಾಳಿಗೆ ತೂರಿದೆ' ಎಂದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h3&gt;&lt;strong&gt;ಡಿಎಂಕೆಗೆ ಮಾಡಿದ ದ್ರೋಹವೇ?&lt;/strong&gt;&lt;/h3&gt;&lt;p&gt;ಕಳೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ತಮಿಳುನಾಡಿನಲ್ಲಿ ಡಿಎಂಕೆಯ ಕಿರಿಯ ಪಾಲುದಾರನಾಗಿ ಗುರುತಿಸಿಕೊಂಡಿತ್ತು. 'ಕಾಂಗ್ರೆಸ್ ಇಂದು ಗೆದ್ದಿರುವ ಐದು ಸ್ಥಾನಗಳು ಅದರ ಸ್ವಂತ ಶಕ್ತಿಯಿಂದ ಬಂದಿದ್ದಲ್ಲ, ಬದಲಿಗೆ ಡಿಎಂಕೆಯೊಂದಿಗಿನ ದಶಕಗಳ ಕಾಲದ ಮೈತ್ರಿಯ ಬಲದಿಂದ ಬಂದಿದ್ದು. ಇಂತಹ ಪರಿಸ್ಥಿತಿಯಲ್ಲಿ ವಿಜಯ್ ಜೊತೆ ಕೈಜೋಡಿಸಿರುವುದು ಡಿಎಂಕೆಗೆ ಮಾಡಿದ ದ್ರೋಹ. ಇನ್ನು ಮುಂದೆ ನಮ್ಮನ್ನು ಯಾರು ತಾನೇ ನಂಬುತ್ತಾರೆ?' ಎಂದು ಅಯ್ಯರ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್&zwnj;ನ ಈ ನಡೆಯನ್ನು ಡಿಎಂಕೆ ಈಗಾಗಲೇ 'ಬೆನ್ನಿಗೆ ಇರಿದ ಕೆಲಸ' ಎಂದು ಕರೆದಿದೆ.&lt;/p&gt;&lt;h2&gt;&lt;strong&gt;ಬಿಜೆಪಿಗೆ ಹಿತ್ತಲ ಬಾಗಿಲ ಪ್ರವೇಶದ ಭೀತಿ:&lt;/strong&gt;&lt;/h2&gt;&lt;p&gt;ಮಣಿಶಂಕರ್ ಅಯ್ಯರ್ ಅವರ ಮತ್ತೊಂದು ಪ್ರಮುಖ ಆತಂಕವೆಂದರೆ ಅದು ಬಿಜೆಪಿಯ ಪ್ರವೇಶ. 'ದ್ರಾವಿಡ ನೆಲದ ರಾಜಕೀಯ ಸಂಸ್ಕೃತಿಯಲ್ಲಿ ಕಾಂಗ್ರೆಸ್&zwnj;ನ ಈ ಎಡವಟ್ಟು ಬಿಜೆಪಿಗೆ ಹಿತ್ತಲ ಬಾಗಿಲಿನಿಂದ ಪ್ರವೇಶ ನೀಡುವಂತೆ ಮಾಡಬಹುದು. ಇದು ರಾಜಕೀಯ ಫುಟ್&zwnj;ಬಾಲ್ ಇತಿಹಾಸದಲ್ಲಿ ನಮ್ಮ ವಿರುದ್ಧವೇ ನಾವೇ ಹೊಡೆದುಕೊಂಡ 'ಸೆಲ್ಫ್ ಗೋಲ್' ಆಗಲಿದೆ' ಎಂದು ಅವರು ಎಚ್ಚರಿಸಿದ್ದಾರೆ. ಅಸ್ಥಿರ ಸರ್ಕಾರ ಅಥವಾ ಮೈತ್ರಿಕೂಟದ ಗೊಂದಲವು ಬಿಜೆಪಿಯಂತಹ ಪಕ್ಷಗಳಿಗೆ ಲಾಭವಾಗಬಹುದು ಎಂಬುದು ಅವರ ವಾದ.&lt;/p&gt;&lt;h3&gt;&lt;strong&gt;ಸಂಖ್ಯಾಬಲದ ಲೆಕ್ಕಾಚಾರ:&lt;/strong&gt;&lt;/h3&gt;&lt;p&gt;ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ವಿಜಯ್ ಅವರ ಟಿವಿಕೆ ಒಂಟಿಯಾಗಿ 108 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್&zwnj;ನ 5 ಶಾಸಕರು ಬೆಂಬಲ ನೀಡಿದರೂ ಸಂಖ್ಯೆ 113ಕ್ಕೆ ಏರುತ್ತದೆ, ಇದು ಮ್ಯಾಜಿಕ್ ನಂಬರ್&zwnj;ಗಿಂತ ಐದು ಸ್ಥಾನ ಕಡಿಮೆ. ಆದರೆ, ಮೂಲಗಳ ಪ್ರಕಾರ ವಿಸಿಪಿ (2), ಸಿಪಿಐ (2) ಮತ್ತು ಸಿಪಿಎಂ (4) ಪಕ್ಷಗಳು ವಿಜಯ್&zwnj;ಗೆ ಬೆಂಬಲ ನೀಡಲು ಮುಂದಾಗಿವೆ. ಈ ಮೂಲಕ ವಿಜಯ್ ಸರ್ಕಾರ ರಚಿಸಲು ಸಿದ್ಧರಾಗಿದ್ದರೂ, ಮಣಿಶಂಕರ್ ಅಯ್ಯರ್ ಅವರಂತಹ ಹಿರಿಯ ನಾಯಕರು ಕಾಂಗ್ರೆಸ್&zwnj;ನ 'ನೈತಿಕತೆ'ಯ ಬಗ್ಗೆ ಪ್ರಶ್ನೆ ಎತ್ತುತ್ತಿರುವುದು ಪಕ್ಷಕ್ಕೆ ಇರಿಸುಮುರಿಸು ಉಂಟುಮಾಡಿದೆ.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/immorality-of-joining-vijay-mani-shankar-aiyar-targets-congress-over-tvk-tie-up/articleshow-rr0kfns"/>
        </item>
        <item>
            <title><![CDATA[ಕಾಂಗ್ರೆಸ್ ಮೈತ್ರಿ ಅಂತ್ಯಗೊಳಿಸಿದ ಡಿಎಂಕೆ, ಸಂಸತ್ತಿನಲ್ಲಿ ಪ್ರತ್ಯೇಕ ಆಸನಕ್ಕೆ ಸಂಸದೆ ಕನ್ನಿಮೋಳಿ ಪತ್ರ]]></title>
            <link>https://kannada.asianetnews.com/politics/political-rift-deepens-as-dmk-seeks-separate-seating-from-congress-in-parliament/articleshow-ftpols5</link>
            <guid isPermaLink="true">https://kannada.asianetnews.com/politics/political-rift-deepens-as-dmk-seeks-separate-seating-from-congress-in-parliament/articleshow-ftpols5</guid>
            <pubDate>Fri, 08 May 2026 16:07:34 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ನಟ ವಿಜಯ್ ಜೊಸೆಫ್ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ಇದೀಗ ಕಂಗೆಟ್ಟಿದೆ. ಇದು ದೇಶ ರಾಜಕಾರಣದ ಮೇಲೂ ಪರಿಣಾಮ ಬೀರಿದೆ. ಡಿಎಂಕೆ ಇದೀಗ ಕಾಂಗ್ರೆಸ್ ಜೊತೆಗಿನ ಮೈತ್ರಿ ಅಂತ್ಯಗೊಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3jkb31e1g9pgvyf4324tkt,imgname-dmk-congress-1778236632158.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.08) &lt;/strong&gt;ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್&zwnj;ಗೆ ಕೇರಳದ ಗೆಲುವು ಆಕ್ಸಿಜನ್ ನೀಡಿತ್ತು. ಆದರೆ ದಕ್ಷಿಣ ಭಾರತದಲ್ಲಿ ಪಾರುಪತ್ಯ ಸಾಧಿಸಲು ಕುತಂತ್ರ ಬುದ್ಧಿ ತೋರಿದ ಕಾಂಗ್ರೆಸ್&zwnj;ಗೆ ಸಂಕಷ್ಟಗಳು ಎದುರಾಗಿದೆ. ತಮಿಳುನಾಡು ರಾಜಕೀಯದಲ್ಲಿ ಕಡ್ಡಿ ಅಲ್ಲಾಡಿಸಿದ ಕಾಂಗ್ರೆಸ್&zwnj;ಗೆ ದೇಶದ ರಾಜಕಾರಣದಲ್ಲಿ ತೀವ್ರ ಪೆಟ್ಟು ಬಿದ್ದಿದೆ. ತಮಿಳುನಾಡಿನಲ್ಲಿ ವಿಜಯ್ ಜೊತೆ ಸೇರಿ ಸರ್ಕಾರದ ಭಾಗವಾಗಲು ಬಯಸಿದ ಕಾಂಗ್ರೆಸ್&zwnj;ಗೆ ಡಿಎಂಕೆ ಶಾಕ್ ಕೊಟ್ಟಿದೆ. ಕಾಂಗ್ರೆಸ್ ಜೊತೆಗಿನ ಮೈತ್ರಿ ಅಂತ್ಯಗೊಂಡಿದೆ ಎಂದು ಡಿಎಂಕೆ ಸಂಸದೆ ಕನ್ನಿಮೋಳಿ ಕರುಣಾನಿಧಿ ಹೇಳಿದ್ದಾರೆ. ಇಷ್ಟೇ ಅಲ್ಲ ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಜೊತೆಗೆ ನಮಗೆ ಆಸನ ಬೇಡ, ಪ್ರತ್ಯೇಕ ಆಸನ ನೀಡುವಂತೆ ಪತ್ರ ಬರೆದಿದ್ದಾರೆ.&lt;/p&gt;&lt;p&gt;ತಮಿಳುನಾಡಿನಲ್ಲಿ 4 ಸ್ಥಾನ ಗೆದ್ದ ಕಾಂಗ್ರೆಸ್ ಡಿಎಂಕೆ ಹಾಗೂ ಇಂಡಿಯಾ ಒಕ್ಕೂಟದ ಮೈತ್ರಿಯ ಆಶಯಗಳನ್ನು ಮುರಿದು ನೇರವಾಗಿ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಿತ್ತು. ಇದು ಡಿಎಂಕೆ ಪಾರ್ಟಿಯನ್ನು ಕೆರಳಿಸಿದೆ. ಕಾಂಗ್ರೆಸ್ ಪಕ್ಷ ಡಿಎಂಕೆ ಜೊತೆ ನಿಶ್ಚಿತಾರ್ಥ ಮಾಡಿ ಟಿವಿಕೆ ಜೊತೆ ಮದುವೆಯಾಗಲು ಬಯಸುತ್ತಿದೆ ಎಂದು ನಾಯಕರು ತೀವ್ರವಾಗಿ ಟೀಕಿಸಿದ್ದರು. ಇದರ ಬೆನ್ನಲ್ಲೇ ಸಂಸದೆ ಕನ್ನಿಮೋಳಿ ಕರುಣಾನಿಧಿ ಲೋಕಸಭಾ ಸ್ವೀಕರ್ ಓಂ ಬಿರ್ಲಾಗೆ ಪತ್ರ ಬರೆದು ವಿಶೇಷ ಮನವಿ ಮಾಡಿದ್ದಾರೆ&lt;/p&gt;&lt;h2&gt;ಪತ್ರದಲ್ಲಿ ಏನಿದೆ?&lt;/h2&gt;&lt;p&gt;ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಕನ್ನಿಮೋಳಿ ಪತ್ರ ಬರೆದಿದ್ದಾರೆ. ಈ ಪತ್ರದ ಆರಂಭದಲ್ಲೇ ಕನ್ನಿಮೋಳಿ ಆಸನ ವ್ಯವಸ್ಥೆ ಬದಲಾವಣೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣಗಳನ್ನು ತಿಳಿಸಿದ್ದಾರೆ. ಡಿಎಂಕೆ ಪಕ್ಷದ ಸಂಸತ್ ಸದಸ್ಯರ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ. ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗಿನ ಮೈತ್ರಿ ಅಂತ್ಯಗೊಳಿಸಲಾಗಿದೆ. ಮೈತ್ರಿ ಅಂತ್ಯಗೊಂಡಿರುವ ಕಾರಣ ಡಿಎಂಕೆ ಸಂಸದರು ಕಾಂಗ್ರೆಸ್ ಸಂಸದರ ಜೊತೆಗೆ ಕುಳಿತುಕೊಳ್ಳುವುದು ಸೂಕ್ತವಲ್ಲ. ಹೀಗಾಗಿ ಡಿಎಂಕೆ ಸದಸ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕೆಂದು ಕನ್ನಿಮೋಳಿ ಮನವಿ ಮಾಡಿದ್ದಾರೆ.&lt;/p&gt;&lt;h2&gt;ಇಕ್ಕಟ್ಟಿನಲ್ಲಿ ಕಾಂಗ್ರೆಸ್&lt;/h2&gt;&lt;p&gt;ಕೇರಳದಲ್ಲಿ ಅಧಿಕಾರ ಹಿಡಿಯುವ ಖುಷಿಯಲ್ಲಿರುವ ಕಾಂಗ್ರೆಸ್ ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗಲು ರಣತಂತ್ರ ಮಾಡಿತ್ತು. ಆದರೆ ಈ ರಣತಂತ್ರ ದೇಶದ ರಾಜಕೀಯದಲ್ಲಿ ಕಾಂಗ್ರೆಸ್&zwnj;ಗೆ ಭಾರಿ ಹೊಡೆತ ನೀಡಿದಂತಿದೆ. ಕಾಂಗ್ರೆಸ್ ನಡೆಯಿಂದ ಇಂಡಿಯಾ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>politics</category>
            <dc:creator>Chethan Kumar</dc:creator>
            <atom:link href="https://kannada.asianetnews.com/politics/political-rift-deepens-as-dmk-seeks-separate-seating-from-congress-in-parliament/articleshow-ftpols5"/>
        </item>
        <item>
            <title><![CDATA[ವಿಜಯ್‌ ಸಿಎಂ ಕನಸಿಗೆ ಅಡ್ಡಗಾಲಾಯ್ತಾ ಕಾಂಗ್ರೆಸ್? ಮೈತ್ರಿಯೊಂದಿಗೆ ಸರ್ಕಾರ ರಚನೆಗೆ ಹೋಗಿದ್ದೇ ಪ್ರಮಾದವಾಯ್ತಾ?]]></title>
            <link>https://kannada.asianetnews.com/gallery/india-news/tamil-nadu-election-vijay-tvk-government-formation-failure-reasons-sat-avmw4xv</link>
            <guid isPermaLink="true">https://kannada.asianetnews.com/gallery/india-news/tamil-nadu-election-vijay-tvk-government-formation-failure-reasons-sat-avmw4xv</guid>
            <pubDate>Fri, 08 May 2026 15:51:52 +0530</pubDate>
            <description><![CDATA[&lt;p&gt;ತಮಿಳುನಾಡು ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆದ್ದರೂ, ದಳಪತಿ ವಿಜಯ್ ಅವರ TVK ಪಕ್ಷಕ್ಕೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ರಾಜ್ಯಪಾಲರ ಬಳಿ ಮೈತ್ರಿ ಸರ್ಕಾರದ ಪ್ರಸ್ತಾಪ ಮುಂದಿಟ್ಟಿದ್ದೇ ಸಿಎಂ ಕನಸಿಗೆ ಮುಳುವಾಯಿತು. ಈ ಎಡವಟ್ಟಿನಿಂದಾಗಿ ಬಹುಮತದ ಹತ್ತಿರ ಬಂದಿದ್ದ ವಿಜಯ್ ಅವಕಾಶ ಕಳೆದುಕೊಂಡರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyf463zqq70mkqcnsbg73kh,imgname-gemini-generated-image-5ossjs5ossjs5oss--1--1778065217663.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆದ್ದರೂ, ದಳಪತಿ ವಿಜಯ್ ಅವರ TVK ಪಕ್ಷಕ್ಕೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ರಾಜ್ಯಪಾಲರ ಬಳಿ ಮೈತ್ರಿ ಸರ್ಕಾರದ ಪ್ರಸ್ತಾಪ ಮುಂದಿಟ್ಟಿದ್ದೇ ಸಿಎಂ ಕನಸಿಗೆ ಮುಳುವಾಯಿತು. ಈ ಎಡವಟ್ಟಿನಿಂದಾಗಿ ಬಹುಮತದ ಹತ್ತಿರ ಬಂದಿದ್ದ ವಿಜಯ್ ಅವಕಾಶ ಕಳೆದುಕೊಂಡರು.&lt;/p&gt;&lt;img&gt;&lt;p&gt;ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ. ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚಿಸುವಲ್ಲಿ ವಿಫಲವಾಗಿದೆ. ರಾಜಕೀಯ ಅನುಭವದ ಕೊರತೆ ಮತ್ತು ಸಲಹೆಗಾರರ ಎಡವಟ್ಟು ವಿಜಯ್ ಅವರ ಸಿಎಂ ಕನಸಿಗೆ ತಣ್ಣೀರು ಎರಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ತಮಿಳುನಾಡಿನ 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಿದೆ. ವಿಜಯ್ ಅವರ TVK ಪಕ್ಷ 108 ಸ್ಥಾನಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡಿತ್ತು. ವಿಜಯ್ ಸ್ವತಃ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ನಿಯಮದಂತೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಿದೆ. ಆಗ ಪಕ್ಷದ ಬಲ 107ಕ್ಕೆ ಇಳಿಯುತ್ತದೆ. ಈ ನಡುವೆ 5 ಸ್ಥಾನ ಗೆದ್ದಿದ್ದ ಕಾಂಗ್ರೆಸ್, ವಿಜಯ್ ಅವರಿಗೆ ಬೆಂಬಲ ಘೋಷಿಸಿತ್ತು. ಇದರಿಂದ ಮೈತ್ರಿಕೂಟದ ಬಲ 112ಕ್ಕೆ ಏರಿತು. ಆದರೂ ಬಹುಮತಕ್ಕೆ 6 ಸ್ಥಾನಗಳ ಕೊರತೆಯಿತ್ತು.&lt;/p&gt;&lt;img&gt;&lt;p&gt;ರಾಜಕೀಯ ತಜ್ಞರ ಪ್ರಕಾರ, ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ಅತಿದೊಡ್ಡ ಪಕ್ಷದ ನಾಯಕನಿಗೆ ಸರ್ಕಾರ ರಚಿಸಲು ಮೊದಲ ಅವಕಾಶ ನೀಡಲಾಗುತ್ತದೆ. ವಿಜಯ್ ಅವರು ಕೇವಲ ತಮ್ಮ ಪಕ್ಷದ (TVK) 108 ಶಾಸಕರ ಬೆಂಬಲ ಪತ್ರವನ್ನು ಹಿಡಿದು ರಾಜ್ಯಪಾಲರನ್ನು ಭೇಟಿಯಾಗಬೇಕಿತ್ತು. ಆಗ ರಾಜ್ಯಪಾಲರು ಅತಿದೊಡ್ಡ ಪಕ್ಷದ ನಾಯಕ ಎಂಬ ನೆಲೆಯಲ್ಲಿ ವಿಜಯ್ ಅವರಿಗೆ ಪ್ರಮಾಣವಚನ ಬೋಧಿಸಿ, ಸದನದಲ್ಲಿ ಬಹುಮತ ಸಾಬೀತುಪಡಿಸಲು ಕಾಲಾವಕಾಶ ನೀಡುತ್ತಿದ್ದರು.&lt;/p&gt;&lt;img&gt;&lt;p&gt;ಆದರೆ, ವಿಜಯ್ ಅವರು ತಮ್ಮ ಪತ್ರದಲ್ಲಿ ಕಾಂಗ್ರೆಸ್ ಶಾಸಕರ ಸಹಿಯನ್ನೂ ಸೇರಿಸಿ 'ಮೈತ್ರಿ' ಸರ್ಕಾರ ರಚನೆಯ ಪ್ರಸ್ತಾಪ ಮುಂದಿಟ್ಟರು. ಒಮ್ಮೆ ಮೈತ್ರಿ ಸರ್ಕಾರದ ಪ್ರಸ್ತಾಪ ಹೋದರೆ, ರಾಜ್ಯಪಾಲರು ಅಲ್ಲಿ ಸಂಖ್ಯಾಬಲವನ್ನು (Magic Number 118) ಕಟ್ಟುನಿಟ್ಟಾಗಿ ಪರಿಶೀಲಿಸುತ್ತಾರೆ. ವಿಜಯ್ ಅವರ ಮೈತ್ರಿಕೂಟದ ಬಳಿ ಕೇವಲ 112 ಶಾಸಕರಿದ್ದ ಕಾರಣ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಈ ಮನವಿಯನ್ನು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸಿದರು.&lt;/p&gt;&lt;img&gt;&lt;p&gt;ಎರಡನೇ ಬಾರಿ ರಾಜ್ಯಪಾಲರನ್ನು ಭೇಟಿಯಾದಾಗಲೂ ಬಹುಮತಕ್ಕೆ ಬೇಕಾದ 118 ಶಾಸಕರ ಬೆಂಬಲದ ದಾಖಲೆ ಒದಗಿಸಲು ವಿಜಯ್&zwnj;ಗೆ ಸಾಧ್ಯವಾಗಲಿಲ್ಲ. ಒಂದು ವೇಳೆ ಅವರು ಅತಿದೊಡ್ಡ ಪಕ್ಷದ ನಾಯಕನಾಗಿ ಹಕ್ಕು ಮಂಡಿಸಿದ್ದರೆ, ನೇರವಾಗಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದರು. ಉತ್ತಮ ರಾಜಕೀಯ ಸಲಹೆಗಾರರ ಕೊರತೆಯಿಂದಾಗಿ ವಿಜಯ್ ಅವರು ಸಿಎಂ ಪಟ್ಟದ ಹತ್ತಿರಕ್ಕೆ ಬಂದು ಅವಕಾಶ ಕೈಚೆಲ್ಲುವಂತಾಗಿದೆ. ಸದ್ಯ ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/india-news/tamil-nadu-election-vijay-tvk-government-formation-failure-reasons-sat-avmw4xv"/>
        </item>
        <item>
            <title><![CDATA[ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ ಇಲ್ಲಿ ಪೇಡೆ ಹಂಚುತ್ತಾರೆ, ನಮ್ಮ ರಾಜ್ಯದಲ್ಲಿ ಏನು ಮಾಡಿದ್ದೀರಿ? ಯತ್ನಾಳ್!]]></title>
            <link>https://kannada.asianetnews.com/state/basanagouda-patil-yatnal-slams-on-vijayendra-yediyurappa-koppal-bjp-internal-rift-sat/articleshow-n035u1y</link>
            <guid isPermaLink="true">https://kannada.asianetnews.com/state/basanagouda-patil-yatnal-slams-on-vijayendra-yediyurappa-koppal-bjp-internal-rift-sat/articleshow-n035u1y</guid>
            <pubDate>Fri, 08 May 2026 14:54:24 +0530</pubDate>
            <description><![CDATA[&lt;p&gt;'ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಎಂದು ಪ್ರಶ್ನಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj4nkrdvr7qnva2vvbe0j7w9,imgname-br-patil-yatnal--2--1771830895035.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಮೇ 08): 'ಬೇ&lt;/strong&gt;ರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಮಕ್ಕಳಾಗಲು ಸಾಧ್ಯವೇ?' ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದರು.&lt;/p&gt;&lt;p&gt;ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಪಕ್ಷದ ನಾಯಕರ ವಿರುದ್ಧವೇ ಮತ್ತೊಮ್ಮೆ ಗುಡುಗಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 'ಈ ತಂದೆ-ಮಕ್ಕಳು ಇರುವವರೆಗೂ ನಾನು ಬಿಜೆಪಿ ಕಚೇರಿ ಮೆಟ್ಟಿಲು ಹತ್ತಲ್ಲ' ಎಂದು ಗುಡುಗಿದ್ದಾರೆ.&lt;/p&gt;&lt;h3&gt;&lt;strong&gt;ಇಲ್ಲಿ ಎಲ್ಲವೂ ಗೊಡ್ಡು, ಎಲ್ಲಿಂದ ಮಕ್ಕಳಾಗುತ್ತವೆ?&lt;/strong&gt;&lt;/h3&gt;&lt;p&gt;ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದ ಯತ್ನಾಳ್, 'ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಮಕ್ಕಳಾಗಲು ಸಾಧ್ಯವೇ?' ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಸೋತಿದೆ. 25 ಸಂಸದರಿದ್ದ ಸ್ಥಾನ ಈಗ 17ಕ್ಕೆ ಇಳಿದಿದೆ. ಇದೆಲ್ಲವೂ ಅವರ 'ಡೀಲಿಂಗ್' ರಾಜಕಾರಣದ ಫಲ ಎಂದು ಆರೋಪಿಸಿದರು.&lt;/p&gt;&lt;h3&gt;&lt;strong&gt;ಯಡಿಯೂರಪ್ಪ ಅಭಿಮಾನೋತ್ಸವದ ಹಿಂದಿದೆ 'ರಿನಿವಲ್' ತಂತ್ರ!&lt;/strong&gt;&lt;/h3&gt;&lt;p&gt;ಶೀಘ್ರದಲ್ಲೇ ನಡೆಯಲಿರುವ ಯಡಿಯೂರಪ್ಪ ಅಭಿಮಾನೋತ್ಸವದ ಬಗ್ಗೆ ಕಿಡಿಕಾರಿದ ಅವರು, 'ಯಾವ ಪುರುಷಾರ್ಥಕ್ಕೆ ಈ ಉತ್ಸವ ಮಾಡುತ್ತಿದ್ದಾರೆ? ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರಿಗಾ ಈ ಸಂಭ್ರಮ? ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ನವೆಂಬರ್&zwnj;ಗೆ ಮುಕ್ತಾಯವಾಗಲಿದೆ. ಆ ಸ್ಥಾನವನ್ನು ಉಳಿಸಿಕೊಳ್ಳಲು (ರಿನಿವಲ್) ಹೈಕಮಾಂಡ್ ಮುಂದೆ ತಾವು ದೊಡ್ಡ ಲಿಂಗಾಯತ ನಾಯಕರು ಎಂದು ಬಿಂಬಿಸಿಕೊಳ್ಳಲು ಈ ನಾಟಕವಾಡುತ್ತಿದ್ದಾರೆ' ಎಂದು ಲೇವಡಿ ಮಾಡಿದರು.&lt;/p&gt;&lt;h3&gt;&lt;strong&gt;ಸಾವಿರಾರು ಕೋಟಿ ಗಳಿಸಿದ್ದೀರಿ, ಸಮಾಜಕ್ಕೆ ನಿಮ್ಮ ಕೊಡುಗೆ ಏನು?&lt;/strong&gt;&lt;/h3&gt;&lt;p&gt;ಯಡಿಯೂರಪ್ಪ ಕುಟುಂಬದ ಆಸ್ತಿಪಾಸ್ತಿ ಬಗ್ಗೆ ವಾಗ್ದಾಳಿ ನಡೆಸಿದ ಅವರು, 'ಒಂದು ಕಾಲದಲ್ಲಿ ನಿಮ್ಮ ಮನೆಯಲ್ಲಿ ಒಂದು ಕಾರ್ ಇರಲಿಲ್ಲ. ಈಗ ಪ್ರದರ್ಶನಕ್ಕಿಟ್ಟಿರುವ ಹಳೆಯ ಅಂಬಾಸಿಡರ್ ಕಾರ್ ಕೂಡ ಬಿಜೆಪಿಯದ್ದು. ಸಾವಿರಾರು ಕೋಟಿ ರೂಪಾಯಿ ಗಳಿಸಿದ್ದೀರಿ, ಆದರೆ ಸಮಾಜಕ್ಕೆ ನಿಮ್ಮ ವೈಯಕ್ತಿಕ ಕೊಡುಗೆ ಏನು?' ಎಂದು ಪ್ರಶ್ನಿಸಿದರು. ಕೇವಲ ಅಧಿಕಾರ ಹಿಡಿದು ಹಣ ಮಾಡುವುದೇ ಇವರ ಗುರಿ ಎಂದು ಕಿಡಿಕಾರಿದರು.&lt;/p&gt;&lt;h2&gt;&lt;strong&gt;ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ!&lt;/strong&gt;&lt;/h2&gt;&lt;p&gt;ಇದೇ ವೇಳೆ ಕಾಂಗ್ರೆಸ್ ನಾಯಕರ ಬಗ್ಗೆಯೂ ಮಾತನಾಡಿದ ಯತ್ನಾಳ್, 'ಡಿ.ಕೆ. ಶಿವಕುಮಾರ್ ಅವರಂತಹ ಅಯೋಗ್ಯ ಮತ್ತು ರಾಕ್ಷಸ ರಾಜಕಾರಣಿ ಯಾರೂ ಇಲ್ಲ. ಅವರಿಗಿಂತ ಸಿದ್ದರಾಮಯ್ಯ ಎಷ್ಟೋ ಉತ್ತಮ' ಎಂದರು. ಅಲ್ಲದೆ, ಹಿಂದುತ್ವದ ವಿಚಾರಧಾರೆ ಇರುವವರು ಪಕ್ಷದ ನೇತೃತ್ವ ವಹಿಸಿಕೊಂಡರೆ ಮಾತ್ರ ನಾನು ಸಕ್ರಿಯವಾಗಿ ಭಾಗವಹಿಸುತ್ತೇನೆ. ಅಲ್ಲಿಯವರೆಗೆ ಈ ಭ್ರಷ್ಟ ತಂದೆ-ಮಕ್ಕಳ ಜೊತೆ ಗುರುತಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/basanagouda-patil-yatnal-slams-on-vijayendra-yediyurappa-koppal-bjp-internal-rift-sat/articleshow-n035u1y"/>
        </item>
        <item>
            <title><![CDATA[ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶ ನೋಡಿ ಬೆಚ್ಚಿ ಬಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಆತಂಕವೇನು?]]></title>
            <link>https://kannada.asianetnews.com/politics/karnataka-congress-on-alert-after-west-bengal-results-holds-talks-on-sir-voter-list-revision-gdp/articleshow-s063vgx</link>
            <guid isPermaLink="true">https://kannada.asianetnews.com/politics/karnataka-congress-on-alert-after-west-bengal-results-holds-talks-on-sir-voter-list-revision-gdp/articleshow-s063vgx</guid>
            <pubDate>Fri, 08 May 2026 14:35:06 +0530</pubDate>
            <description><![CDATA[ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ, ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮತದಾರರ ಪಟ್ಟಿ ಪರಿಷ್ಕರಣೆಯ ಎಸ್&zwnj;ಐಆರ್ ಪ್ರಕ್ರಿಯೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸುತ್ತಿದ್ದು, ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸಂಭವನೀಯ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqr2b2ead5jwaeyc7sccnt2g,imgname-----------------------2026-05-04t045055.019-1777850485194.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಅದರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡಿದೆ. ವಿಶೇಷವಾಗಿ ಮತದಾರರ ಪಟ್ಟಿ ಪರಿಷ್ಕರಣೆಯೊಂದಿಗಿನ ಎಸ್&zwnj;ಐಆರ್ (Special Intensive Revision) ಪ್ರಕ್ರಿಯೆ ಕುರಿತು ಆತಂಕ ವ್ಯಕ್ತವಾಗಿದೆ. ಈ ವಿಷಯದ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ.&lt;/p&gt;&lt;h2&gt;ವಿವಿಧ ಸಂಘಟನೆಗಳು ಹಾಗೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಭೆ&lt;/h2&gt;&lt;p&gt;ರಾಜ್ಯದಲ್ಲಿ ನಡೆಯಲಿರುವ ಎಸ್&zwnj;ಐಆರ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಪ್ರಮುಖ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಹಲವು ಸಂಘಟನೆಗಳ ಮುಖಂಡರು ಭಾಗವಹಿಸಿ, ಈ ಪ್ರಕ್ರಿಯೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ತಮ್ಮ ಆತಂಕಗಳನ್ನು ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಉಂಟಾಗಬಹುದಾದ ತೊಂದರೆಗಳು, ಕೆಲವು ಸಮುದಾಯಗಳಿಗೆ ಆಗಬಹುದಾದ ಅನ್ಯಾಯ, ಹಾಗೂ ಪ್ರಕ್ರಿಯೆಯ ಪಾರದರ್ಶಕತೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಬೇಕೆಂಬ ವಿಚಾರವನ್ನೂ ಪರಿಗಣಿಸಲಾಗುತ್ತಿದೆ.&lt;/p&gt;&lt;p&gt;ಎಸ್ಐಆರ್ ವಿರೋಧಿಸುತ್ತಿರುವ ಸಂಘಟನೆಗಳೆಂದರೆ ಎದ್ದೇಳು ಕರ್ನಾಟಕ ಸಂಘಟನೆ, ಡಿಎಸ್ಎಸ್, ಎಂಎಂಎಂ, ಕ್ರಿಶ್ಚಿಯನ್ ಸಮುದಾಯದ ನಾಯಕರು, ರಾಜ್ಯ ರೈತ ಸಂಘ, ಆಪ್, ಸಿಪಿಎಂ, ಕರ್ನಾಟಕ ಜನಶಕ್ತಿ, ಸಿಪಿಎಂ, WPI,SDPI ಸೇರಿದಂತೆ ಸಣ್ಣಪುಟ್ಟ ಸಂಘಟನೆಗಳ ನಾಯಕರು.&lt;/p&gt;&lt;h2&gt;ಎಸ್&zwnj;ಐಆರ್ ಪ್ರಕ್ರಿಯೆ ಸೂಕ್ಷ್ಮವಾಗಿ ಗಮನಿಸಲು ನಿರ್ಧಾರ&lt;/h2&gt;&lt;p&gt;ಎಸ್&zwnj;ಐಆರ್ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಲು ಸರ್ಕಾರ ನಿರ್ಧರಿಸಿದ್ದು, ಯಾವುದೇ ಆಕ್ಷೇಪಾರ್ಹ ಅಥವಾ ಅನ್ಯಾಯಕರ ನಡೆ ಕಂಡುಬಂದರೆ ಅದನ್ನು ತೀವ್ರವಾಗಿ ವಿರೋಧಿಸುವ ಬಗ್ಗೆ ನಿರ್ಧಾರ ಮಾಡಿದೆ. ಇದೇ ವೇಳೆ, ಇಂತಹ ಸಂದರ್ಭಗಳನ್ನು ಎದುರಿಸಲು ಕಾನೂನುಬದ್ಧ ಹಾಗೂ ರಾಜಕೀಯ ಮಾರ್ಗಗಳನ್ನು ಅನ್ವೇಷಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.&lt;/p&gt;&lt;p&gt;ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್&zwnj;ಐಆರ್ ಪ್ರಕ್ರಿಯೆಯ ನಂತರದ ಚುನಾವಣಾ ಫಲಿತಾಂಶ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿಸಿದೆ. ಅಲ್ಲಿ ಮತದಾರರ ಪಟ್ಟಿಯಿಂದ ಲಕ್ಷಾಂತರ ಅಕ್ರಮ ವಲಸಿಗರನ್ನು ಕೈಬಿಟ್ಟ ನಂತರ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ ಎಂಬ ರಾಜಕೀಯ ವಿಶ್ಲೇಷಣೆ ಹಿನ್ನೆಲೆಯಲ್ಲಿ, ಇದೇ ರೀತಿಯ ಪರಿಸ್ಥಿತಿ ರಾಜ್ಯದಲ್ಲೂ ಉಂಟಾಗಬಹುದೆಂಬ ಭಯ ಕಾಂಗ್ರೆಸ್ ವಲಯದಲ್ಲಿ ಮೂಡಿದೆ.&lt;/p&gt;&lt;p&gt;ಆದ್ದರಿಂದ, ಎಸ್&zwnj;ಐಆರ್ ಪ್ರಕ್ರಿಯೆಯನ್ನು ವಿರೋಧಿಸುವ ಅಥವಾ ಅದರ ವಿರುದ್ಧ ಕಾನೂನುಬದ್ಧವಾಗಿ ಹೋರಾಟ ನಡೆಸುವ ಉದ್ದೇಶದಿಂದ ವಿವಿಧ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿರುವ ಕಾಂಗ್ರೆಸ್ ನಾಯಕರು, ಮುಂದಿನ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರ ರೂಪಿಸುತ್ತಿದೆ&lt;/p&gt;&lt;p&gt;ಒಟ್ಟಿನಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಎಸ್&zwnj;ಐಆರ್ ಪ್ರಕ್ರಿಯೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸರ್ಕಾರ ಮತ್ತು ರಾಜಕೀಯ ಪಕ್ಷಗಳ ನಡುವಿನ ತಂತ್ರಯುದ್ಧಕ್ಕೆ ವೇದಿಕೆ ಸಿದ್ಧವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/karnataka-congress-on-alert-after-west-bengal-results-holds-talks-on-sir-voter-list-revision-gdp/articleshow-s063vgx"/>
        </item>
        <item>
            <title><![CDATA[ಸಿಎಂ ಸ್ಥಾನ ಬಿಡಲ್ಲ ಎಂದಿರುವ ದೀದಿ ಭಾರಿ ಸ್ಕೆಚ್​? ಅಖಿಲೇಶ್​ ಯಾದವ್​ ಜೊತೆ ಸಿಕ್ರೇಟ್​ ಮೀಟಿಂಗ್​ನಲ್ಲಿ ನಡೆದದ್ದೇನು]]></title>
            <link>https://kannada.asianetnews.com/politics/didi-you-have-not-lost-akhilesh-yadav-meets-mamata-gives-emotional-support-suc/articleshow-5mgydbh</link>
            <guid isPermaLink="true">https://kannada.asianetnews.com/politics/didi-you-have-not-lost-akhilesh-yadav-meets-mamata-gives-emotional-support-suc/articleshow-5mgydbh</guid>
            <pubDate>Fri, 08 May 2026 13:48:29 +0530</pubDate>
            <description><![CDATA[ಶಾಸಕಿಯಾಗಿ ಸೋತರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದಾರೆ. ಬಹುಮತ ಸಾಬೀತುಪಡಿಸಲು ಸಂವಿಧಾನದಲ್ಲಿ ಅವಕಾಶವಿದ್ದರೂ, ಟಿಎಂಸಿಗೆ ಸ್ಥಾನಗಳ ಕೊರತೆಯಿದೆ. ಈ ನಡುವೆ ಅಖಿಲೇಶ್ ಯಾದವ್ ಅವರ ಭೇಟಿ, ದೀದಿಯ ಮುಂದಿನ ರಾಜಕೀಯ ನಡೆಗಳ ಬಗ್ಗೆ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3am8ksregf4ev64knjsjej,imgname-mamata-banarjee-and-akhilesh-yadav-1778228273784.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ನನ್ನನ್ನು ವಜಾಗೊಳಿಸಿದ್ರೂ ಪರವಾಗಿಲ್ಲ, ನಾನು ಸೀಟು ಬಿಟ್ಟುಕೊಡಲ್ಲ ಎಂದು ಪಟ್ಟು ಹಿಡಿದು ಕುಳಿತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಏನಾದರೂ ಮಾಡಿಯಾದರೂ, ಮುಖ್ಯಮಂತ್ರಿ ಸ್ಥಾನವನ್ನು ಮತ್ತೆ ಮರಳಿ ಪಡೆಯುವ ತವಕದಲ್ಲಿ ಇದ್ದಾರೆ. ಪಶ್ಚಿಮ ಬಂಗಾಳವನ್ನು ಸೋತಿದ್ದೂ ಅಲ್ಲದೇ, ಕೊನೆಯ ಪಕ್ಷ ಶಾಸಕಿಯಾಗಲೂ ಆಗಲಿಲ್ಲ. ಈ ಪರಿಯಲ್ಲಿ ಬಂಗಾಳದ ಜನರ ಅವರಿಗೆ ಛೀಮಾರಿ ಹಾಕಿದ್ದಾರೆ. 15 ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ, ಅ*ತ್ಯಾಚಾರ, ಅ*ತ್ಯಾಚಾರಿಗಳಿಗೆ ರಕ್ಷಣೆ ಸಹಿಸಿಕೊಂಡಿರುವ ಜನರು ಈ ಬಾರಿ ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ. ಅವರು ಸೋತಿದ್ದು ಅದೆಷ್ಟರ ಮಟ್ಟಿಗೆ ಫಲಿತಾಂಶ ಕೊಟ್ಟಿದೆ ಎಂದರೆ, ಕಾಂಗ್ರೆಸ್ಸಿನ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಇದಕ್ಕೆ ಕಾರಣ, ಕಾಂಗ್ರೆಸ್​ ಕಚೇರಿಯನ್ನು ಕೂಡ ಟಿಎಂಸಿ ವಶಕ್ಕೆ ಪಡೆದಿತ್ತು. ನಿನ್ನೆ ಕಾಂಗ್ರೆಸ್​ ಕಾರ್ಯಕರ್ತರು, ಟಿಎಂಸಿ ಆಕ್ರಮಿಸಿಕೊಂಡಿದ್ದ ಕಚೇರಿಯ ಬೀಗ ಒಡೆದು, ಸರಸ್ವತಿ ಪೂಜೆ ಸಲ್ಲಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸಿಎಂ ಆಗ್ಬೋದು&lt;/strong&gt;&lt;/h2&gt;&lt;p&gt;ಇಷ್ಟಾದರೂ ಮಮತಾ ಮುಖ್ಯಮಂತ್ರಿಯಾಗಲು ಒಂದು ಛಾನ್ಸ್​ ನಮ್ಮ ಸಂವಿಧಾನ ನೀಡಿದೆ. ಅದೇನೆಂದರೆ, ರಾಜ್ಯಪಾಲರು ಮಮತಾ ಬ್ಯಾನರ್ಜಿ ಅವರಿಗೆ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುತ್ತಾರೆ. ಒಂದು ವೇಳೆ ಮಮತಾ ಬಹುಮತ ಸಾಧಿಸುವಲ್ಲಿ ಯಶಸ್ವಿಯಾದರೆ, ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವ ಅವಕಾಶವಿದೆ. ಅವರು ಹಾಗೆ ಮಾಡಲು ಸಾಧ್ಯವಾಗದೇ ಹೋದರೆ, ಅವರನ್ನು ವಜಾಗೊಳಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ ಎನ್ನುವುದು ತಜ್ಞರ ಅಭಿಮತ. ಇನ್ನು ಸದ್ಯದ ಸ್ಥಿತಿ ನೋಡುವುದಾದರೆ, ತೃಣಮೂಲ ಕಾಂಗ್ರೆಸ್​ಗೆ 80 ಸ್ಥಾನಗಳು ಬಂದಿವೆ. ಬಹುಮತಕ್ಕೆ 68 ಸ್ಥಾನಗಳ ಕೊರತೆಯಿದೆ. ಆದ್ದರಿಂದ ಈ 68 ಸ್ಥಾನವನ್ನು ಪಡೆಯುವಲ್ಲಿ ಮಮತಾ ಯಶಸ್ವಿಯಾದರೆ ಮುಖ್ಯಮಂತ್ರಿ ಆಗಬಹುದು. ಪರಿಸ್ಥಿತಿ ಕೈಮೀರಿದರೆ, ಮುಖ್ಯಮಂತ್ರಿಯನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಇಲ್ಲವೇ ಸುಪ್ರೀಂಕೋರ್ಟ್​ಗೆ ಅವರು ಹೋಗಬಹುದು.&lt;/p&gt;&lt;h3&gt;&lt;strong&gt;ಸುದೀರ್ಘ ಮಾತುಕತೆ&lt;/strong&gt;&lt;/h3&gt;&lt;p&gt;ಇದರ ನಡುವೆಯೇ, ಪಶ್ಚಿಮ ಬಂಗಾಳದಲ್ಲಿ ಒಂದೂ ಸ್ಥಾನ ಗೆಲ್ಲದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಿನ್ನೆ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿದ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಇಲ್ಲಿ ಮುಖ್ಯಮಂತ್ರಿಯಾಗಿ ಮುಂದುವರೆಯುವ ಸಂಬಂಧ ಏನೋ ಮಾಸ್ಟರ್​ ಪ್ಲ್ಯಾನ್​ ಹಾಕಿದಂತಿದೆ ಎಂದು ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಏನು ಮಾಡಿದರೂ ಮಮತಾಗೆ ಬಹುಮತ ಬೇಕೇ ಬೇಕು. ಬಿಜೆಪಿ 207 ಸ್ಥಾನಗಳನ್ನು ಗೆದ್ದಿದ್ದರೆ, ಟಿಎಂಸಿ 80 ಸ್ಥಾನ ಗೆದ್ದಿದೆ. ಆದ್ದರಿಂದ ಬಹುಮತ ಸಾಬೀತು ಮಾಡುವುದು ಮಮತಾಗೆ ಭಾರಿ ಕಷ್ಟ ಇದ್ದರು, ಏನಾದರೂ ಮಾಡಿ ಇದನ್ನು ಸಾಧ್ಯವಾಗಿಸುವ ಕನಸಿನ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆಸಿರಬಹುದು ಎನ್ನುವ ಮಾತು ಕೇಳಿಬರುತ್ತಿದೆ.&lt;/p&gt;&lt;h3&gt;&lt;strong&gt;ಆಗಿದ್ದೇನು?&lt;/strong&gt;&lt;/h3&gt;&lt;p&gt;ಅಷ್ಟಕ್ಕೂ ಅಖಿಲೇಶ್​ ಅವರು ದೀದಿ ಅವರಿಗೆ ನಿಮ್ಮ ಜೊತೆ ನಾನಿದ್ದೇನೆ, ನೀವೇನು ಚಿಂತೆ ಮಾಡಬೇಡಿ ಎಂದಿದ್ದಾರೆ ಎನ್ನಲಾಗಿದೆ. ಈ ಭೇಟಿಯ ಬಗ್ಗೆ ಪಕ್ಷದ ಮೂಲಗಳು, ಸಭೆಯು ಸೌಹಾರ್ದಯುತ ವಾತಾವರಣಕ್ಕೆ ಸಾಕ್ಷಿಯಾಯಿತು. ಉಭಯ ನಾಯಕರು ಶುಭಾಶಯ ವಿನಿಮಯ ಮಾಡಿಕೊಂಡರು ಮತ್ತು ಸಭೆಯ ಆರಂಭದಲ್ಲಿ, ಅಖಿಲೇಶ್ ಯಾದವ್ ಮತ್ತು ಅಭಿಷೇಕ್ ಬ್ಯಾನರ್ಜಿ ಪರಸ್ಪರ ಅಪ್ಪಿಕೊಂಡರು ಎಂದು ತಿಳಿಸಿವೆ. ಟಿಎಂಸಿ ಅಧಿಕೃತ ಮೂಲಗಳು ಹೇಳುವಂತೆ ಚರ್ಚೆಯು ಸಕಾರಾತ್ಮಕವಾಗಿತ್ತು. ಅಖಿಲೇಶ್ ಯಾದವ್, ಅಭಿಷೇಕ್ ಬ್ಯಾನರ್ಜಿಗೆ &quot;ನೀವೆಲ್ಲರೂ ಎಂತಹ ಶ್ಲಾಘನೀಯ ಯುದ್ಧ ಮಾಡಿದ್ದೀರಿ&quot; ಎಂದು ಹೇಳಿದ್ದಾರೆ. &quot;ದೀದಿ, ನೀವು ಸೋತಿಲ್ಲ&quot; ಎಂದು ಅಖಿಲೇಶ್ ಯಾದವ್ ಅವರು ಮಮತಾ ಬ್ಯಾನರ್ಜಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/politics/didi-you-have-not-lost-akhilesh-yadav-meets-mamata-gives-emotional-support-suc/articleshow-5mgydbh"/>
        </item>
        <item>
            <title><![CDATA[Kerala Congress: ಕೇರಳ ಕಾಂಗ್ರೆಸ್ ಸಿಎಂ ರೇಸ್‌ನಲ್ಲಿ ಹೊಸ ಬಿರುಗಾಳಿ. ಶಾಸಕರ ಆದ್ಯತಾ ಪಟ್ಟಿ ಲೀಕ್!]]></title>
            <link>https://kannada.asianetnews.com/india-news/leaked-mla-list-puts-kc-venugopal-ahead-in-kerala-cm-race-rav/articleshow-c5qfpo6</link>
            <guid isPermaLink="true">https://kannada.asianetnews.com/india-news/leaked-mla-list-puts-kc-venugopal-ahead-in-kerala-cm-race-rav/articleshow-c5qfpo6</guid>
            <pubDate>Fri, 08 May 2026 13:50:53 +0530</pubDate>
            <description><![CDATA[&lt;p&gt;ಕೇರಳ ಕಾಂಗ್ರೆಸ್&zwnj;ನ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಚರ್ಚೆ ಜೋರಾಗಿರುವಾಗಲೇ, ಶಾಸಕರ ಆದ್ಯತಾ ಪಟ್ಟಿ ಎನ್ನಲಾದ ಫೋಟೋವೊಂದು ಲೀಕ್ ಆಗಿ ಭಾರೀ ವಿವಾದ ಸೃಷ್ಟಿಸಿದೆ. ಎಐಸಿಸಿ ವೀಕ್ಷಕರ ಬಳಿ ಇದ್ದ ಈ ಡಾಕ್ಯುಮೆಂಟ್ ಪ್ರಕಾರ, ಕೆ.ಸಿ. ವೇಣುಗೋಪಾಲ್ ಅವರಿಗೆ 46 ಶಾಸಕರ ಬೆಂಬಲವಿದೆ ಎಂದು ಅವರ ಬಣ ಹೇಳಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-d70e39c2-92fd-4185-98ab-06dabeb01e3b.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಚರ್ಚೆ ಕಾಂಗ್ರೆಸ್&zwnj;ನಲ್ಲಿ ಜೋರಾಗಿದೆ. ಈ ನಡುವೆಯೇ, ಕಾಂಗ್ರೆಸ್ ಶಾಸಕರ ಆದ್ಯತಾ ಪಟ್ಟಿ ಎನ್ನಲಾದ ಫೋಟೋವೊಂದು ಸಾರ್ವಜನಿಕವಾಗಿ ಕಾಣಿಸಿಕೊಂಡು ಹೊಸ ವಿವಾದಕ್ಕೆ ಕಾರಣವಾಗಿದೆ.&lt;/p&gt;&lt;p&gt;&lsquo;ದಿ ನ್ಯೂ ಇಂಡಿಯನ್ ಎಕ್ಸ್&zwnj;ಪ್ರೆಸ್&rsquo; ಪತ್ರಿಕೆ ಈ ಫೋಟೋವನ್ನು ಪ್ರಕಟಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ವೇಳೆ ಎಐಸಿಸಿ ವೀಕ್ಷಕ ಮುಕುಲ್ ವಾಸ್ನಿಕ್ ಅವರ ಕೈಯಲ್ಲಿದ್ದ ಡಾಕ್ಯುಮೆಂಟ್ ಇದಾಗಿದೆ ಎಂದು ವರದಿಯಾಗಿದೆ. ಈ ಪಟ್ಟಿಯು, ಸಿಎಂ ರೇಸ್&zwnj;ನಲ್ಲಿರುವ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;p&gt;ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರ ಜೊತೆ ವೀಕ್ಷಕರು ಸಮಾಲೋಚನೆ ಮುಗಿಸಿದ ನಂತರ ಈ ಫೋಟೋ ತೆಗೆಯಲಾಗಿದೆ ಎಂದು ವರದಿ ಹೇಳಿದೆ. ಈ ಪಟ್ಟಿಯಲ್ಲಿ ಸಂದೀಪ್ ವಾರಿಯರ್, ಸಜೀವ್ ಜೋಸೆಫ್, ಟಿ.ಒ. ಮೋಹನನ್, ಸನ್ನಿ ಜೋಸೆಫ್, ಉಷಾ ವಿಜಯನ್, ಐ.ಸಿ. ಬಾಲಕೃಷ್ಣನ್ ಮತ್ತು ಟಿ. ಸಿದ್ದಿಕ್ ಅವರ ಹೆಸರುಗಳು ಕಾಣಿಸುತ್ತಿವೆ.&lt;/p&gt;&lt;p&gt;ವರದಿಯ ಪ್ರಕಾರ, ಹೆಚ್ಚಿನ ಹೆಸರುಗಳ ಮುಂದೆ 'ಕೆಸಿ' ಎಂದು ಬರೆಯಲಾಗಿದ್ದು, ಇದು ಕೆ.ಸಿ. ವೇಣುಗೋಪಾಲ್ ಅವರನ್ನು ಸೂಚಿಸುತ್ತದೆ ಎನ್ನಲಾಗಿದೆ. ಐ.ಸಿ. ಬಾಲಕೃಷ್ಣನ್ ಅವರ ಹೆಸರಿನ ಮುಂದೆ 'ಕೆಸಿ' ಮತ್ತು 'ಆರ್&zwnj;ಸಿ' ಎರಡೂ ಇರುವುದು ರಾಜಕೀಯವಾಗಿ ಕುತೂಹಲ ಕೆರಳಿಸಿದೆ. ಇದು ವೇಣುಗೋಪಾಲ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಾಲ ಇಬ್ಬರಿಗೂ ಬೆಂಬಲ ಸೂಚಿಸುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.&lt;/p&gt;&lt;h2&gt;ವೇಣುಗೋಪಾಲ್ ಬಣದಿಂದ ಬಹುಮತದ ಪ್ರತಿಪಾದನೆ&lt;/h2&gt;&lt;p&gt;ಕೆ.ಸಿ. ವೇಣುಗೋಪಾಲ್ ಬಣವು, ಕಾಂಗ್ರೆಸ್&zwnj;ನ ಒಟ್ಟು 63 ಶಾಸಕರ ಪೈಕಿ ಬಹುಮಂದಿ ತಮ್ಮ ನಾಯಕನಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿಕೊಳ್ಳುತ್ತಿದೆ. ಈಗ ಲೀಕ್ ಆಗಿರುವ ಪಟ್ಟಿಯು ಈ ವಾದಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ರಾಜಕೀಯ ಪಂಡಿತರು ನೋಡುತ್ತಿದ್ದಾರೆ.&lt;/p&gt;&lt;p&gt;ವೇಣುಗೋಪಾಲ್ ಬೆಂಬಲಿಗರ ಪ್ರಕಾರ, 46 ಶಾಸಕರು ಅವರಿಗೆ ಜೈ ಎಂದಿದ್ದಾರೆ. ಮೂವರು ಶಾಸಕರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರೆ, 8 ಶಾಸಕರು ರಮೇಶ್ ಚೆನ್ನಿತ್ತಾಲ ಅವರ ಹೆಸರನ್ನು ಬೆಂಬಲಿಸಿದ್ದಾರೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರಿಗೆ ಕೇವಲ 6 ಶಾಸಕರ ಬೆಂಬಲವಿದೆ ಎಂದು ತಿಳಿದುಬಂದಿದೆ.&lt;/p&gt;&lt;h3&gt;ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ&lt;/h3&gt;&lt;p&gt;ಈ ಫೋಟೋ ವಿವಾದದ ಬಗ್ಗೆ ಎಎನ್&zwnj;ಐ ಜೊತೆ ಮಾತನಾಡಿದ ಕೆಪಿಸಿಸಿ ಮುಖ್ಯಸ್ಥ ಸನ್ನಿ ಜೋಸೆಫ್, ಈ ಡಾಕ್ಯುಮೆಂಟ್ ಬಗ್ಗೆ ಮುಕುಲ್ ವಾಸ್ನಿಕ್ ಅವರನ್ನೇ ಕೇಳಬೇಕು ಎಂದಿದ್ದಾರೆ. ತಾವು ವೀಕ್ಷಕರ ಮುಂದೆ ಯಾವುದೇ ಒಬ್ಬರ ಹೆಸರನ್ನು ಸೂಚಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಎಐಸಿಸಿ ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ಅವರು ಹೊಸ ಶಾಸಕರು ಮತ್ತು ಮಿತ್ರಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದರು. ಸಭೆಯ ನಂತರ ಮಾತನಾಡಿದ ಮಾಕೆನ್, &quot;ನಾವು ಇಂದು ನಮ್ಮ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದ್ದೇವೆ. ಸಿಎಲ್&zwnj;ಪಿ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಕಾಂಗ್ರೆಸ್ ಹೈಕಮಾಂಡ್&zwnj;ಗೆ ನೀಡುವ ಒಂದು ಸಾಲಿನ ನಿರ್ಣಯವನ್ನು ಇಡೀ ಸಿಎಲ್&zwnj;ಪಿ ಅಂಗೀಕರಿಸಿದೆ. ನಾವು ಶಾಸಕರೊಂದಿಗೆ ಒಬ್ಬೊಬ್ಬರಾಗಿ ಮಾತನಾಡಿ, ಅವರು ಹೇಳಿದ್ದನ್ನೆಲ್ಲಾ ಬರೆದುಕೊಂಡಿದ್ದೇವೆ. ಕೇವಲ ಹೆಸರುಗಳಲ್ಲ, ಹಲವರು ಬಹಳಷ್ಟು ವಿಚಾರಗಳನ್ನು ಹೇಳಿದ್ದಾರೆ. ಅದನ್ನೆಲ್ಲಾ ನಾವು ಹೈಕಮಾಂಡ್&zwnj;ಗೆ ಸಲ್ಲಿಸಿದ್ದೇವೆ&quot; ಎಂದು ತಿಳಿಸಿದರು. (ಎಎನ್&zwnj;ಐ)&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/leaked-mla-list-puts-kc-venugopal-ahead-in-kerala-cm-race-rav/articleshow-c5qfpo6"/>
        </item>
        <item>
            <title><![CDATA[ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ,  ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?]]></title>
            <link>https://kannada.asianetnews.com/state/50-years-of-yediyurappa-politics-how-the-rajahuli-became-godfather-to-karnataka-youth-videoshow-xrt5v5g</link>
            <guid isPermaLink="true">https://kannada.asianetnews.com/state/50-years-of-yediyurappa-politics-how-the-rajahuli-became-godfather-to-karnataka-youth-videoshow-xrt5v5g</guid>
            <pubDate>Fri, 08 May 2026 11:46:54 +0530</pubDate>
            <description><![CDATA[&lt;p&gt;ರಾಜಾಹುಲಿ ರಾಜಕಾರಣಕ್ಕೆ 50 ವರ್ಷ.. ಅಭಿಮಾನೋತ್ಸವ ಹರ್ಷ..! ಕೇಸರಿವೀರನ ತ್ರಿವಿಕ್ರಮ ಹೆಜ್ಜೆ.. ಬಿಜೆಪಿಗೆ ಅದೇ ರಹದಾರಿ..! ಯುವ ನಾಯಕರಿಗೆ ಬಿಎಸ್​​​ವೈ ರಾಜಕೀಯ ಬದುಕೇ ಪಾಠ..! ಶಿಕಾರಿಪುರದ ಛಲಗಾರನಿಂದ ಯುವಶಕ್ತಿ ಕಲಿತದ್ದೇನು ?&lt;/p&gt;]]></description>
            <media:content url="https://geo.dailymotion.com/player/x1tbu.html?video=xa8l4a4" medium="video" height="768" width="1024"/>
            <content:encoded><![CDATA[&lt;p&gt;ಇಡೀ ದೇಶವೇ ರಾಜ್ಯದತ್ತ ಒಮ್ಮೆ ತಿರುಗಿ ನೋಡುವಂತಹ ಉತ್ಸವವೊಂದು ಆರಂಭವಾಗ್ತಿದೆ.. ರೈತ ನಾಯಕ ಯಡಿಯೂರಪ್ಪನವ್ರ ಅಭಿಮಾನೋತ್ಸವ. ರಾಜಾಹುಲಿ ಸಾರ್ವಜನಿಕ ಬದುಕಿಗೆ ಧುಮುಕಿ 50 ವರ್ಷಗಳಾಗಿವೆ. ಈ ಹಿನ್ನಲೆಯಲ್ಲಿ ಎಲ್ಲೆಲ್ಲೂ ಬಿಎಸ್​​​ವೈ ನಡೆದು ಬಂದ ಹಾದಿಯ ಬಗ್ಗೆ ಚರ್ಚೆಯಾಗ್ತಿದೆ.. ಇದೇ ಸಂದರ್ಭದಲ್ಲಿ ಯುವ ನಾಯಕರಿಗೆ ಬಿಎಸ್​​ವೈ ಹೇಗೆ ಪ್ರೇರಣೆಯಾಗಿದ್ದಾರೆ..? ಯಡಿಯೂರಪ್ಪನವರ ಬಗ್ಗೆ ಆ ಯುವನಾಯಕರು ಏನ್ ಹೇಳ್ತಾರೆ..? ಬನ್ನಿ, ಶಿಕಾರಿವೀರ ಯಡಿಯೂರಪ್ಪನವರು ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ ಅನ್ನೋದ ನೋಡೋಣ.&amp;nbsp;&amp;nbsp;&lt;/p&gt;]]></content:encoded>
            <category>politics</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/50-years-of-yediyurappa-politics-how-the-rajahuli-became-godfather-to-karnataka-youth-videoshow-xrt5v5g"/>
        </item>
        <item>
            <title><![CDATA[ಡಿಎಂಕೆ ಜೊತೆ ನಿಶ್ಚಿತಾರ್ಥ, ಟಿವಿಕೆ ಜೊತೆಗೆ ಮದುವೆ: ಕಾಂಗ್ರೆಸ್ ತನ್ನ ಹಳೇ ಬುದ್ಧಿ ಬಿಟ್ಟಿಲ್ಲ, ಡಿಎಂಕೆ ಕಿಡಿ]]></title>
            <link>https://kannada.asianetnews.com/india-news/tamil-nadu-government-formation-dmk-party-slams-congress-party-rav/articleshow-ui03ao9</link>
            <guid isPermaLink="true">https://kannada.asianetnews.com/india-news/tamil-nadu-government-formation-dmk-party-slams-congress-party-rav/articleshow-ui03ao9</guid>
            <pubDate>Fri, 08 May 2026 10:16:28 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡದ ರಾಜ್ಯಪಾಲರ ನಡೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ. ಮತ್ತೊಂದೆಡೆ, ಮೈತ್ರಿ ಮುರಿದು ವಿಜಯ್&zwnj;ಗೆ ಬೆಂಬಲ ನೀಡಿದ ಕಾಂಗ್ರೆಸ್ ವಿರುದ್ಧ ಡಿಎಂಕೆ, 'ಬೆನ್ನಿಗೆ ಚೂರಿ ಹಾಕಿದೆ' ಎಂದು ತೀವ್ರ ಅಸಮಾಧಾನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2ya7j8yx2rfb970hdtdxwb,imgname-----------------------2026-05-08t101226.907-1778215362120.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಮೇ.8):&lt;/strong&gt; ತಮಿಳುನಾಡಿನಲ್ಲಿ ಅತಂತ್ರ ಫಲಿತಾಂಶ ಬಳಿಕ ಮೈತ್ರಿ ಕಡಿದುಕೊಂಡು ವಿಜಯ್&zwnj;ರ ಟಿವಿಕೆ ಬೆಂಬಲಿಸಿದ ಕಾಂಗ್ರೆಸ್&zwnj; ವಿರುದ್ಧ ಡಿಎಂಕೆ ಕಿಡಿಕಾರಿದೆ. &lsquo; ಕಾಂಗ್ರೆಸ್&zwnj; ಹಿಂದಿನಿಂದ ಚೂರಿ ಹಾಕಿ ದ್ರೋಹ ಮಾಡಿದೆ&rsquo; ಎಂದು ವಾಗ್ದಾಳಿ ನಡೆಸಿದೆ.&lt;/p&gt;&lt;p&gt;ನಿರ್ಗಮಿತ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಸ್ಟಾಲಿನ್&zwnj; ನೇತೃತ್ವದಲ್ಲಿ ನೂತನ ಶಾಸಕರ ಸಭೆ ನಡೆದಿದೆ. ಈ ವೇಳೆ ಒಂದು ಕಾಲದ ಮಿತ್ರ ಕಾಂಗ್ರೆಸ್ ವಿರುದ್ಧ ಡಿಎಂಕೆ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. &lsquo; ಬಿಜೆಪಿ ಹಲವು ರಾಜ್ಯಗಳಲ್ಲಿ ಮಾಡಿದಂತೆ ಕಾಂಗ್ರೆಸ್&zwnj; ನಮಗೆ ತಮಿಳುನಾಡಿನಲ್ಲಿ ಮಾಡಿದೆ. ಡಿಎಂಕೆ ಜೊತೆ ನಿಶ್ಚಿತಾರ್ಥ, ಟಿವಿಕೆ ಜೊತೆಗೆ ಮದುವೆ. &amp;nbsp;ಇದು ಕಾಂಗ್ರೆಸ್&zwnj;ನ ಅವಕಾಶವಾದಿ ರಾಜಕಾರಣ. ತನ್ನ ಹಳೆಯ ಬುದ್ಧಿಯನ್ನು ಇದು ಬಿಟ್ಟಿಲ್ಲ ಎಂದು ತೋರಿಸುತ್ತದೆ. ನಮ್ಮ ಪಕ್ಷದ ನಾಯಕನ ಬೆನ್ನಿಗೆ ಚೂರಿಯಿಂದ ಇರಿದ ಕಾಂಗ್ರೆಸ್ ದೊಡ್ಡ ದ್ರೋಹ ಮಾಡಿದೆ. ಗೆಲುವಿಗೆ ಧನ್ಯವಾದ ಹೇಳಲು ಸಹ ಖುದ್ದಾಗಿ ಬರಲಿಲ್ಲ&rsquo; ಎಂದು ಕಿಡಿಕಾರಿದರು.&lt;/p&gt;&lt;h2&gt;ವಿಜಯ್ ಸರ್ಕಾರ ರಚನೆ ರಾಜ್ಯಪಾಲರು ಅಡ್ಡಿ ಮಾಡೋದು ಸರಿಯಲ್ಲ: ಡಿಕೆಶಿ&lt;/h2&gt;&lt;p&gt;ಬೆಂಗಳೂರು (ಮೇ.8): ತಮಿಳುನಾಡಿನಲ್ಲಿ ವಿಜಯ್&zwnj; ಅವರಿಗೆ ಸರ್ಕಾರ ರಚನೆ ಮಾಡಿ ಬಹುಮತ ಸಾಬೀತುಪಡಿಸುವುದನ್ನು ತಡೆದಿರುವ ರಾಜ್ಯಪಾಲರ ನಡೆ ಸರಿಯಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್&zwnj; ತಿಳಿಸಿದರು.&lt;/p&gt;&lt;p&gt;ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ರಾಜ್ಯಪಾಲರು ವಿಜಯ್&zwnj; ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಕರ್ನಾಟಕದಲ್ಲಿ ಈ ಹಿಂದೆ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಹೆಚ್ಚು ಸ್ಥಾನ ಗಳಿಸಿದ ಪಕ್ಷಗಳಿಗೆ ಸರ್ಕಾರ ರಚಿಸಲು ಹಿಂದೆಯೂ ಹಲವೆಡೆ ಅನುಮತಿಸಲಾಗಿತ್ತು. ರಾಷ್ಟ್ರಪತಿಗಳಾದ ನಾರಾಯಣನ್&zwnj;, ಅಬ್ದುಲ್&zwnj; ಕಲಾಂ ಅವರೂ ಈ ರೀತಿ ಮಾಡಿದ್ದರು.&lt;/p&gt;&lt;p&gt;ವಾಜಪೇಯಿ ಅವರಿಗೂ ಇದೇ ರೀತಿ ಸರ್ಕಾರ ರಚಿಸಲು ಅನುಮತಿಸಿ, ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಟಿವಿಕೆಗೆ ಅವಕಾಶ ನೀಡದಿರುವುದು ತಪ್ಪು ಎಂದರು.&lt;/p&gt;&lt;p&gt;ಮೊದಲು ಬಹುಮತ ಸಾಬೀತಿಗೆ ಅವಕಾಶ ನೀಡಬೇಕು. ರಾಜ್ಯದ ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಇದು ಪ್ರಜಾಪ್ರಭುತ್ವ. ಒಂದು ಮತದಿಂದ ಬಹುಮತ ಬರಬಹುದು ಅಥವಾ ಕಳೆದುಕೊಳ್ಳಬಹುದು. ವಾಜಪೇಯಿ ಅವರಿಗೆ ಇದೇ ರೀತಿ ಆಗಲಿಲ್ಲವೇ? ಬಹುಮತ ಸಾಬೀತಾಗದಿದ್ದರೆ ಮುಂದಿನ ಆಯ್ಕೆ ನೋಡಬಹುದು ಎಂದು ತಿಳಿಸಿದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/tamil-nadu-government-formation-dmk-party-slams-congress-party-rav/articleshow-ui03ao9"/>
        </item>
        <item>
            <title><![CDATA[ಜಿಬಿಎ ಚುನಾವಣೆ ಜೂನ್ ನಲ್ಲೇ ನಡೆಸಲು ಪಟ್ಟು ಹಿಡಿದ ರಾಜ್ಯ ಚುನಾವಣಾ ಆಯೋಗ, ಇಂದು ಸರ್ಕಾರ ನಿರ್ಣಾಯಕ ಸಭೆ]]></title>
            <link>https://kannada.asianetnews.com/politics/karnataka-state-election-commission-pushes-for-june-polls-in-greater-bengaluru-authority-high-stakes-meeting-today-gdp/articleshow-vw3d3wi</link>
            <guid isPermaLink="true">https://kannada.asianetnews.com/politics/karnataka-state-election-commission-pushes-for-june-polls-in-greater-bengaluru-authority-high-stakes-meeting-today-gdp/articleshow-vw3d3wi</guid>
            <pubDate>Fri, 08 May 2026 08:54:49 +0530</pubDate>
            <description><![CDATA[ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್&zwnj;ನಲ್ಲೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಪಟ್ಟು ಹಿಡಿದಿದೆ. ಆದರೆ, ಸಿಬ್ಬಂದಿ ಕೊರತೆಯ ಕಾರಣ ನೀಡಿ ಸರ್ಕಾರ ಸೆಪ್ಟೆಂಬರ್&zwnj;ವರೆಗೆ ಕಾಲಾವಕಾಶ ಕೇಳಿದ್ದು, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk82q6byytxcv8x2jjv36378,imgname-----------------------2026-03-09t064657.095-1773019044222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ಚುನಾವಣಾ ಆಯೋಗ ಜೂನ್ ತಿಂಗಳಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವ ತನ್ನ ನಿಲುವನ್ನು ಮತ್ತೊಮ್ಮೆ ದೃಢಪಡಿಸಿದೆ. ಇದೇ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಹತ್ವದ ಹಾಗೂ ಹೈವೋಲ್ಟೇಜ್ ಸಭೆ ನಡೆಯಲಿದ್ದು, ಚುನಾವಣಾ ದಿನಾಂಕ ಘೋಷಣೆಗೆ ವೇದಿಕೆ ಸಜ್ಜಾಗಿದೆ.&lt;/p&gt;&lt;p&gt;ಇನ್ನೊಂದೆಡೆ, ಕರ್ನಾಟಕ ರಾಜ್ಯ ಸರ್ಕಾರ ಜನಗಣತಿ ಕಾರ್ಯಾಚರಣೆ ಹಿನ್ನೆಲೆ ಸಿಬ್ಬಂದಿಗಳ ಕೊರತೆಯನ್ನು ಉಲ್ಲೇಖಿಸಿ ಸೆಪ್ಟೆಂಬರ್ ವರೆಗೆ ಕಾಲಾವಕಾಶ ನೀಡುವಂತೆ ಆಯೋಗಕ್ಕೆ ಮನವಿ ಮಾಡಿತ್ತು. ಆದರೆ, ನಾವು ಜೂನ್&zwnj;ನಲ್ಲೇ ಚುನಾವಣೆಗೆ ಸಿದ್ಧ, ಸರ್ಕಾರವೇ ಸಿದ್ಧವಾಗಿಲ್ಲ ಎಂದು ಆಯೋಗವು ನ್ಯಾಯಾಲಯದ ಗಮನಕ್ಕೂ ತಂದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;ವಿಧಾನಸೌಧದಲ್ಲಿ ನಿರ್ಣಾಯಕ ಸಭೆ&lt;/h2&gt;&lt;p&gt;ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 334ರಲ್ಲಿ ಈ ಬಗ್ಗೆ ಮಹತ್ವದ ಸಭೆ ನಡೆಯಲಿದೆ. ಮೂಲತಃ ರಾಜ್ಯ ಚುನಾವಣಾ ಆಯೋಗದ ಸಭಾಂಗಣದಲ್ಲಿ ನಡೆಯಬೇಕಿದ್ದ ಈ ಸಭೆಯನ್ನು ನಂತರ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿದೆ. ಇದಕ್ಕೂ ಮೊದಲು ಎರಡು ಬಾರಿ ಸಭೆ ಮುಂದೂಡಲ್ಪಟ್ಟಿದ್ದು, ನಿನ್ನೆ ನಡೆಯಬೇಕಿದ್ದ ಸಭೆಯೂ ಮುಖ್ಯಮಂತ್ರಿ ಇತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಹಿನ್ನೆಲೆ ಮುಂದೂಡಲಾಗಿತ್ತು. ಇದೀಗ ಅದೇ ಸಭೆಯನ್ನು ಇಂದು ಮರುನಿಗದಿಪಡಿಸಲಾಗಿದೆ.&lt;/p&gt;&lt;p&gt;ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷರು, ಸದಸ್ಯರು, ರಾಜ್ಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಭಾಗವಹಿಸಲಿದ್ದಾರೆ.&lt;/p&gt;&lt;h2&gt;ಕಾನೂನು ಹಿನ್ನೆಲೆ ಮತ್ತು ಸುಪ್ರೀಂ ಕೋರ್ಟ್ ಸೂಚನೆ&lt;/h2&gt;&lt;p&gt;ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2024ರ ಕಲಂ 34(4) ಪ್ರಕಾರ, ಚುನಾವಣಾ ದಿನಾಂಕ ನಿಗದಿ ಮಾಡುವ ಮೊದಲು ರಾಜ್ಯ ಚುನಾವಣಾ ಆಯೋಗವು ಜಿಬಿಎ ಜೊತೆ ಸಮಾಲೋಚನೆ ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದೇ ವೇಳೆ, ಸುಪ್ರೀಂ ಕೋರ್ಟ್ ಜಿಬಿಎ ರಚನೆಯ ನಂತರ ಹೊಸದಾಗಿ ಸ್ಥಾಪಿತವಾಗಿರುವ ಐದು ನಗರ ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿರುವುದು ಈ ಪ್ರಕ್ರಿಯೆಗೆ ವೇಗ ನೀಡಿದೆ.&lt;/p&gt;&lt;h2&gt;ಸಭೆಯಲ್ಲಿ ಚರ್ಚೆಯಾಗುವ ಪ್ರಮುಖ ಅಂಶಗಳು&lt;/h2&gt;&lt;p&gt;ಇಂದಿನ ಸಭೆಯಲ್ಲಿ ಚುನಾವಣಾ ವೇಳಾಪಟ್ಟಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಮತದಾರರ ಪಟ್ಟಿ ಸಿದ್ಧತೆ, ವಾರ್ಡ್&zwnj;ಗಳ ಪುನರ್&zwnj;ವ್ಯವಸ್ಥೆ, ಮೀಸಲಾತಿ ಪ್ರಕ್ರಿಯೆ ಹಾಗೂ ಆಡಳಿತಾತ್ಮಕ ಸಿದ್ಧತೆಗಳ ಕುರಿತು ಸಮಗ್ರ ವಿಮರ್ಶೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆಗೆ ಹಸಿರು ನಿಶಾನೆ ಸಿಗುವ ಸಾಧ್ಯತೆ ಕೂಡ ಹೆಚ್ಚಿದೆ.&lt;/p&gt;&lt;p&gt;ಆದರೆ ಜನಗಣತಿ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ಉಲ್ಲೇಖಿಸಿ ಜಿಬಿಎ ನೀಡಿರುವ ಮನವಿಗೂ ಸಭೆಯಲ್ಲಿ ಮಹತ್ವ ಸಿಗಬಹುದು. ಈ ಅಂಶದ ಮೇಲೆ ಚರ್ಚೆ ನಡೆಸಿ ಸರ್ಕಾರದ ಬೇಡಿಕೆಯನ್ನು ಭಾಗಶಃ ಪರಿಗಣಿಸುವ ಸಾಧ್ಯತೆಯೂ ತಳ್ಳಿ ಹಾಕಲಾಗುವುದಿಲ್ಲ.&lt;/p&gt;&lt;h2&gt;ಜಿಬಿಎ ಮುಖ್ಯ ಆಯುಕ್ತರ ಪ್ರತಿಕ್ರಿಯೆ&lt;/h2&gt;&lt;p&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, &ldquo;ರಾಜ್ಯ ಚುನಾವಣಾ ಆಯೋಗ ಕರೆದಿರುವ ಸಭೆಯಲ್ಲಿ ನಾವು ಭಾಗವಹಿಸುತ್ತಿದ್ದೇವೆ. ಜನಗಣತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಈಗಾಗಲೇ ತಿಳಿಸಿದ್ದೇವೆ. ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೋ ಅದಕ್ಕೆ ಬದ್ದರಾಗಿರುತ್ತೇವೆ. ಆಯೋಗ ಸೂಚನೆ ನೀಡಿದರೆ ಚುನಾವಣೆ ನಡೆಸಲು ನಾವು ಸಿದ್ಧ&rdquo; ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಜೂನ್&zwnj;ನಲ್ಲಿ ಚುನಾವಣೆ ನಡೆಸುವ ಆಯೋಗದ ಹಠ ಹಾಗೂ ಸೆಪ್ಟೆಂಬರ್ ವರೆಗೆ ಕಾಲಾವಕಾಶ ಕೋರುವ ಸರ್ಕಾರದ ಮನವಿ ನಡುವಿನ ಸಂಘರ್ಷದ ನಡುವೆ ಇಂದಿನ ಸಭೆ ಅತ್ಯಂತ ನಿರ್ಣಾಯಕವಾಗಿದ್ದು, ರಾಜ್ಯ ರಾಜಕೀಯದ ಗಮನ ಸಂಪೂರ್ಣವಾಗಿ ಈ ಸಭೆಯತ್ತ ನೆಟ್ಟಿದೆ.&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/politics/karnataka-state-election-commission-pushes-for-june-polls-in-greater-bengaluru-authority-high-stakes-meeting-today-gdp/articleshow-vw3d3wi"/>
        </item>
        <item>
            <title><![CDATA[ಯಾರಿಗೆ ಒಲಿಯಲಿದೆ ಕೇರಳ ಸಿಎಂ ಪಟ್ಟ? ಖರ್ಗೆ ಹೆಗಲಿಗೆ ಆಯ್ಕೆ ನಿರ್ಧಾರ]]></title>
            <link>https://kannada.asianetnews.com/india-news/who-will-be-the-kerala-cm-decision-rests-on-kharge-s-shoulders-rav/articleshow-94nd1cf</link>
            <guid isPermaLink="true">https://kannada.asianetnews.com/india-news/who-will-be-the-kerala-cm-decision-rests-on-kharge-s-shoulders-rav/articleshow-94nd1cf</guid>
            <pubDate>Fri, 08 May 2026 08:34:31 +0530</pubDate>
            <description><![CDATA[&lt;p&gt;ಕೇರಳದಲ್ಲಿ ಯುಡಿಎಫ್ ಬಹುಮತ ಗಳಿಸಿದರೂ, ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್&zwnj;ಗೆ ದೊಡ್ಡ ತಲೆನೋವಾಗಿದೆ. ಹಾಲಿ ಸಂಸದ ಕೆ.ಸಿ.ವೇಣುಗೋಪಾಲ್&zwnj; ಪರ ಬಹುತೇಕ ಶಾಸಕರು ಒಲವು ತೋರಿದ್ದು, ಇದು ಹಿರಿಯ ನಾಯಕರಾದ ವಿ.ಡಿ. ಸತೀಶನ್&zwnj; ಮತ್ತು ರಮೇಶ್&zwnj; ಚೆನ್ನಿತ್ತಲ ಅವರ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knqxaacjkktrtqw8rra40m29,imgname-----------------------2026-04-09t065154.760-1775697734034.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ&lt;/strong&gt;: ದಶಕದ ಬಳಿಕ ಕೇರಳಂನಲ್ಲಿ ಯುಡಿಎಫ್&zwnj; (ಸಂಯುಕ್ತ ಪ್ರಜಾಸತ್ತಾತ್ಮಕ ರಂಗ) ಬಹುಮತ ಪಡೆದಿದ್ದರೂ, ಆ ಕೂಟದ ನೇತೃತ್ವ ಹೊತ್ತಿರುವ ಕಾಂಗ್ರೆಸ್&zwnj;ನಲ್ಲಿ ಮುಖ್ಯಮಂತ್ರಿ ಆಯ್ಕೆ ವಿಷಯ ಕಗ್ಗಂಟಾಗಿದೆ. ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆಗಾಗಿ ಗುರುವಾರ ನಡೆದ ಸಭೆಯ ವೇಳೆ ಕಾಂಗ್ರೆಸ್&zwnj;ನ 63 ಶಾಸಕರ ಪೈಕಿ ಕನಿಷ್ಠ 46 ಮಂದಿ ವಿಧಾನಸಭೆಯ ಸದಸ್ಯರೇ ಅಲ್ಲದ ಹಾಲಿ ಸಂಸದ, ರಾಹುಲ್&zwnj; ಗಾಂಧಿ ಅವರ ಆಪ್ತ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್&zwnj; ಪರ ಬೆಂಬಲ ಘೋಷಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಈ ಬೆಳವಣಿಗೆ ಸಹಜವಾಗಿಯೇ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ, ಹಿಂದಿನ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ವಿ.ಡಿ. ಸತೀಶನ್&zwnj; ಮತ್ತು ಪಕ್ಷದ ಹಿರಿಯ ನಾಯಕ ರಮೇಶ್&zwnj; ಚೆನ್ನಿತ್ತಲ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆಯ ಹೊಣೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಲು ಸಭೆ ನಿರ್ಣಯ ಕೈಗೊಂಡಿದೆ.&lt;/p&gt;&lt;h2&gt;ವೇಣು ಪರ ಬ್ಯಾಟಿಂಗ್&zwnj;:&lt;/h2&gt;&lt;p&gt;ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್&zwnj; ನೇತೃತ್ವದಲ್ಲಿ ನಡೆದ ಸಭೆ ವೇಳೆ ಬಹುತೇಕ ಶಾಸಕರು ವೇಣುಗೋಪಾಲ್&zwnj; ಮುಖ್ಯಮಂತ್ರಿಯಾಗುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟ ಉಳಿದಿಬ್ಬರು ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.&lt;/p&gt;&lt;p&gt;ಈ ಬಾರಿ ಚುನಾವಣೆಯಲ್ಲಿ ಸಂಸದರನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಪಕ್ಷ ಮೊದಲೇ ನಿರ್ಧರಿಸಿತ್ತು. ಜೊತೆಗೆ ವೇಣುಗೋಪಾಲ್&zwnj; ಶಾಸಕ ಕೂಡ ಅಲ್ಲ. ಹೀಗಾಗಿ ಅವರ ಆಯ್ಕೆ ಸೂಕ್ತವಲ್ಲ. ಜೊತೆಗೆ ರಾಜ್ಯದ ಹಲವು ಕಡೆ ವೇಣುಗೋಪಾಲ್&zwnj; ಅವರು ಕೂಡ ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಪೋಸ್ಟರ್&zwnj;ಗಳನ್ನು ಹಾಕಲಾಗಿದೆ. ಇದು ಪಕ್ಷದಲ್ಲಿ ಆಂತರಿಕ ಸಂಘರ್ಷಕ್ಕೆ ಮುನ್ನುಡಿ ಬರೆಯುತ್ತದೆ. ಇದಕ್ಕೆ ಕೂಡಲೇ ತಡೆ ಹಾಕಬೇಕು ಎಂದು ಚೆನ್ನಿತ್ತಲ ಹಾಗೂ ಸತೀಶನ್&zwnj; ನೇರವಾಗಿ ವೀಕ್ಷಕರ ಬಳಿ ಧ್ವನಿ ಎತ್ತಿದ್ದಾರೆ ಎನ್ನಾಗಿದೆ.&lt;/p&gt;&lt;h3&gt;ವೇಣು ಏಕೆ?:&lt;/h3&gt;&lt;p&gt;ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಮೈತ್ರಿಕೂಟದ ನಡುವೆ ಹೊಂದಾಣಿಕೆ ಏರ್ಪಡಿಸುವಲ್ಲಿ ವೇಣು ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ಎಲ್&zwnj;ಡಿಎಫ್&zwnj; ಕೂಟದ ಅಭ್ಯರ್ಥಿಗಳ ಸೆಳೆದು ಕಾಂಗ್ರೆಸ್&zwnj; ಬಲ ಹೆಚ್ಚಿಸಿದ್ದು ವೇಣುಗೋಪಾಲ್&zwnj; ಪರ ಬಹುತೇಕ ಶಾಸಕರು ಒಲವು ತೋರಲು ಕಾರಣವಾಗಿದೆ. ಜೊತೆಗೆ ಹೈಕಮಾಂಡ್&zwnj; ಬೆಂಬಲವೂ ಇದೆ. ಜೊತೆಗೆ ಮೈತ್ರಿಕೂಟ ಸರ್ಕಾರ ನಡೆಸಲು ದೆಹಲಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ನಾಯಕರ ಅಗತ್ಯವಿದೆ ಎನ್ನುವ ಅಂಶವೂ ವೇಣುಗೋಪಾಲ್&zwnj; ಪರವಾಗಿದೆ.&lt;/p&gt;&lt;h3&gt;ಸತೀಶನ್&zwnj;ಗೆ ಜಾತಿ ಸಂಘ ವಿರೋಧ:&lt;/h3&gt;&lt;p&gt;ಸತೀಶನ್&zwnj; ಕಳೆದ 5 ವರ್ಷಗಳಿಂದ ವಿಪಕ್ಷ ನಾಯಕನಾಗಿ ವಿಪಕ್ಷ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶಬರಿಮಲೆ ವಿಷಯದಲ್ಲಿ ಕೇರಳದ ಪ್ರಭಾವಿ ನಾಯರ್&zwnj; ಸಮುದಾಯದ ವಿರೋಧ ಕಟ್ಟಿಕೊಂಡಿದ್ದಾರೆ. ಹೀಗಾಗಿ ಅವರ ಆಯ್ಕೆ ಬಗ್ಗೆ ಪಕ್ಷದ ಶಾಸಕರಲ್ಲೇ ವಿರೋಧವಿದೆ ಎನ್ನಲಾಗಿದೆ.&lt;/p&gt;&lt;h3&gt;ಚೆನ್ನಿತ್ತಲಗೆ ಬೆಂಬಲವಿಲ್ಲ:&lt;/h3&gt;&lt;p&gt;ಪಕ್ಷದ ಹಿರಿಯ ನಾಯಕ. 4 ಬಾರಿ ಸಂಸದರಾದ ಹಿನ್ನೆಲೆ ಹೊಂದಿದ್ದಾರೆ. ಸಂಘಟನಾ ಚತುರ ಎಂಬ ಹಿರಿಮೆ ಇದೆ. ಆದರೆ ಈಗಾಗಲೇ 69 ವರ್ಷ ತುಂಬಿರುವ ನಾಯಕನ ಆಯ್ಕೆಗೆ ಪಕ್ಷದ ಶಾಸಕರು ಒಲವು ತೋರಿಲ್ಲ ಎಂದು ಹೇಳಲಾಗಿದೆ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/who-will-be-the-kerala-cm-decision-rests-on-kharge-s-shoulders-rav/articleshow-94nd1cf"/>
        </item>
        <item>
            <title><![CDATA[Tamil Nadu government formation: ಟಿವಿಕೆ ವಿಜಯ್ ಹಾದಿಗೆ ರಾಜ್ಯಪಾಲರು ಅಡ್ಡಗಾಲು? 118 ಶಾಸಕರ ಬೆಂಬಲ ಸಾಬೀತುಪಡಿಸಲು ಸೂಚನೆ!]]></title>
            <link>https://kannada.asianetnews.com/india-news/tamil-nadu-govt-formation-governor-block-tvk-vijays-path-instruction-prove-of-118-mlas/articleshow-gb0pz0c</link>
            <guid isPermaLink="true">https://kannada.asianetnews.com/india-news/tamil-nadu-govt-formation-governor-block-tvk-vijays-path-instruction-prove-of-118-mlas/articleshow-gb0pz0c</guid>
            <pubDate>Fri, 08 May 2026 08:17:33 +0530</pubDate>
            <description><![CDATA[ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ತಡೆ ನೀಡಿದ್ದಾರೆ. ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದು, ಅಗತ್ಯ ಬೆಂಬಲಕ್ಕಾಗಿ ವಿಜಯ್ ಪಕ್ಷವು ಇದೀಗ ಇತರ ಪಕ್ಷಗಳ ಬೆಂಬಲ ಯಾಚಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr2qkftmnemmhz3csepnm7pt,imgname-----------------------2026-05-08t080837.800-1778208325460.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಮೇ.8):&lt;/strong&gt; ಇತ್ತೀಚಿನ ಇತಿಹಾಸದಲ್ಲೇ ರೋಚಕ ವಿಧಾನಸಭಾ ಚುನಾವಣಾ ಫಲಿತಾಂಶ ನೀಡಿದ ತಮಿಳುನಾಡಿನಲ್ಲಿ ಇದೀಗ ಸರ್ಕಾರ ರಚನೆಯ ಪ್ರಕ್ರಿಯೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 108 ಸ್ಥಾನ ಗೆದ್ದ ನಟ ವಿಜಯ್&zwnj; ನೇತೃತ್ವದ ಟಿವಿಕೆ ಪಕ್ಷ ಇನ್ನೇನು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ ಎನ್ನುವ ಹೊತ್ತಿನಲ್ಲೇ ಅದಕ್ಕೆ ರಾಜ್ಯಪಾಲರು ಬ್ರೇಕ್&zwnj; ಹಾಕಿದ್ದಾರೆ. ಸರ್ಕಾರ ರಚನೆಗೆ ನಿಮ್ಮ ಬಳಿ ಅಗತ್ಯ ಬಹುಮತವೇ ಇಲ್ಲ. ಇದ್ದರೆ, ಅದನ್ನು ತೋರಿಸಿ ಎಂದು ರಾಜ್ಯಪಾಲರು ವಿಜಯ್&zwnj;ಗೆ ಸೂಚಿಸಿರುವುದು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.&lt;/p&gt;&lt;p&gt;ಸರ್ಕಾರ ರಚನೆ ಸಂಬಂಧ ಬುಧವಾರ ಮೊದಲ ಸಲ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದ ನಟ ವಿಜಯ್&zwnj;, ಗುರುವಾರ ಮತ್ತೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್&zwnj; ಅರ್ಲೇಕರ್&zwnj; ಬಳಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ವಿಶ್ವಾಸಮತ ಸಾಬೀತುಪಡಿಸಲು 2 ತಿಂಗಳ ಅವಕಾಶ ನೀಡುವಂತೆಯೂ ಕೋರಿದರು ಎನ್ನಲಾಗಿದೆ.&lt;/p&gt;&lt;p&gt;ಈ ವೇಳೆ ಸರ್ಕಾರ ರಚನೆಗೆ ಅಗತ್ಯವಾದ ಶಾಸಕರ ಬೆಂಬಲ (118 ಶಾಸಕರ ಬೆಂಬಲ) ಪ್ರದರ್ಶಿಸುವಂತೆ ರಾಜ್ಯಪಾಲರು ಕೇಳಿದ್ದಾರೆ. ಅಲ್ಲದೆ ಸರ್ಕಾರ ರಚನೆ ಬಳಿಕ ನಿಮಗೆ ವ್ಯಕ್ತವಾಗಬಹುದಾದ ಬೆಂಬಲವನ್ನು ಈಗಲೇ ಪರಿಗಣಿಸಲಾಗದು. ನಿಮ್ಮನ್ನು ಬೆಂಬಲಿಸುವವರ ಪಟ್ಟಿ ನೀಡಿ. ನಾನು ನಿಯಮಗಳ ಅನುಸಾರವೇ ನಡೆದುಕೊಳ್ಳುತ್ತೇನೆ. ಬೆಂಬಲ ಪತ್ರ ತೋರಿಸಿದರೆ ನಿಮಗೇ ಮೊದಲ ಅವಕಾಶ ನೀಡುತ್ತೇನೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಅಲ್ಲದೆ, ಈ ಹಿಂದೆ ಇದೇ ರೀತಿ ಸರ್ಕಾರ ರಚನೆಗೆ ಅವಕಾಶ ನೀಡಿದ ಪ್ರಕರಣಗಳಲ್ಲಿ ನ್ಯಾಯಾಲಯಗಳು ರಾಜ್ಯಪಾಲರ ಕಾರ್ಯ ಕುರಿತು ವಿವರಣೆ ಕೇಳಿದ ಪ್ರಸಂಗಗಳನ್ನು ರಾಜ್ಯಪಾಲರು ಟಿವಿಕೆ ನಿಯೋಗದ ಮುಂದೆ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಹೀಗಾಗಿ ಇದೀಗ ವಿಜಯ್&zwnj; ಪಕ್ಷ ಸಣ್ಣಪುಟ್ಟ ಪಕ್ಷಗಳ ಬೆಂಬಲ ಯಾಚನೆಗೆ ಮುಂದಾಗಿದೆ. ಆದರೆ ಒಂದು ವೇಳೆ ಬಹುಮತಕ್ಕೆ ಅಗತ್ಯವಾದ 118 ಶಾಸಕರ ಬೆಂಬಲ ಪಡೆಯುವಲ್ಲಿ ವಿಫಲವಾದರೆ ಅತಿದೊಡ್ಡ ಪಕ್ಷವಾದ ತನಗೆ ಸರ್ಕಾರ ರಚನೆಗೆ ಅವಕಾಶ ಕೊಡಲು ರಾಜ್ಯಪಾಲರಿಗೆ ಸೂಚಿಸಬೇಕೆಂದು ಕೋರಿ ವಿಜಯ್&zwnj; ಪಕ್ಷ ಸುಪ್ರೀಂಕೋರ್ಟ್&zwnj; ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ.&lt;/p&gt;&lt;p&gt;ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್&zwnj;ನ 5 ಶಾಸಕರ ಬೆಂಬಲ ಸಿಕ್ಕರೂ ಬಹುಮತ ಸಾಬೀತುಪಡಿಸಲು(118 ಸ್ಥಾನ) ಇನ್ನೂ 5 ಸ್ಥಾನದ ಕೊರತೆ ಎದುರಿಸುತ್ತಿದೆ.&lt;/p&gt;&lt;p&gt;ಅಪರೂಪದ ಬೆಳವಣಿಗೆ&lt;/p&gt;&lt;p&gt;ಚೆನ್ನೈ: ಅಪರೂಪದ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್&zwnj; ನೇತೃತ್ವದ ಟಿವಿಕೆ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡದ ರಾಜ್ಯಪಾಲ ಆರ್&zwnj;.ವಿ.ಅರ್ಲೇಕರ್&zwnj; ಅವರ ಕ್ರಮಕ್ಕೆ ವಿಜಯ್&zwnj; ವಿರುದ್ಧ ಚುನಾವಣೆಯಲ್ಲಿ ಸೋತ ಡಿಎಂಕೆ, ಎಂಎನ್&zwnj;ಎಂ, ವಿಸಿಕೆ, ಸಿಪಿಐ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.&lt;/p&gt;&lt;p&gt;ರಾಜ್ಯಪಾಲರು ಜನಾದೇಶಕ್ಕೆ ಅಪಮಾನ ಮಾಡಿದ್ದಾರೆ. ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ.&lt;/p&gt;&lt;p&gt;ಅಣ್ಣಾಡಿಎಂಕೆಯ 28 ಶಾಸಕರಿಂದ ವಿಜಯ್ಪಕ್ಷಕ್ಕೆ ಶೀಘ್ರ ಬೆಂಬಲ?&lt;/p&gt;&lt;p&gt;ಚೆನ್ನೈ: ಎನ್&zwnj;ಡಿಎ ಮಿತ್ರಪಕ್ಷವಾದ ಅಣ್ಣಾಡಿಎಂಕೆಯ 28 ಶಾಸಕರ ಗುಂಪೊಂದು ಪುದುಚೇರಿ ರೆಸಾರ್ಟ್&zwnj;ಗೆ ತೆರಳಿದ್ದು, ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಟಿವಿಕೆ ಮುಖಂಡರು ಈ 28 ಶಾಸಕರ ಜತೆಗೆ ಸಂಪರ್ಕದಲ್ಲಿದ್ದಾರೆ. ಈ ಗುಂಪಿನ ನಾಯಕ ಸಿ.ವಿ.ಷಣ್ಮುಗಂ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಮತ್ತು ಇತರೆ ಕೆಲವರಿಗೆ ಸಚಿವ ಹುದ್ದೆಯ ಆಫರ್&zwnj; ಅನ್ನು ಟಿವಿಕೆ ನೀಡಿದೆ ಎನ್ನಲಾಗಿದೆ.ಒಂದು ವೇಳೆ ಇದು ಖಚಿತವಾದರೆ ಎಂ.ಜಿ.ರಾಮಚಂದ್ರನ್&zwnj; ಕಟ್ಟಿದ, ಮಾಜಿ ಸಿಎಂ ಜಯಲಲಿತಾ ಬೆಳೆಸಿದ ಎಐಎಡಿಎಂಕೆ ಪಕ್ಷ ಎರಡು ಹೋಳಾಗುವುದು ಖಚಿತ.&lt;/p&gt;&lt;p&gt;ಗೌರ್&zwj;ನರ್&zwnj; ಲೆಕ್ಕಾಚಾರ ಏನು?&lt;/p&gt;&lt;p&gt;1. ಸರ್ಕಾರ ರಚನೆಗೆ ಹಕ್ಕು ಮಂಡಿಸಿದವರಿಂದ ಬಹುಮತ ಕೇಳುವುದು ರಾಜ್ಯಪಾಲರ ವಿವೇಚನೆ ಒಳಪಟ್ಟಿದ್ದು&lt;/p&gt;&lt;p&gt;2. ಸರ್ಕಾರ ರಚಿಸುವಷ್ಟು ಸಂಖ್ಯೆ ಇದೆಯೇ ಎಂಬುದು ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಮನವರಿಕೆಯಾಗಬೇಕು&lt;/p&gt;&lt;p&gt;3. ಆ ಹಂತ ದಾಟಿದ ಬಳಿಕ ಸರ್ಕಾರ ರಚನೆಗೆ ಅವಕಾಶ ಪಡೆದ ಪಕ್ಷಗಳು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/tamil-nadu-govt-formation-governor-block-tvk-vijays-path-instruction-prove-of-118-mlas/articleshow-gb0pz0c"/>
        </item>
        <item>
            <title><![CDATA[BSY Abhimanotsav: ದಣಿವರಿಯದ ಅವಿಶ್ರಾಂತ ಚೇತನ ಯಡಿಯೂರಪ್ಪ - ಪ್ರಲ್ಹಾದ್ ಜೋಶಿ ಅಂಕಣ]]></title>
            <link>https://kannada.asianetnews.com/politics/bsy-abhimanotsav-50-years-of-relentless-service-bsy-celebrated-as-a-tireless-leader-in-chitradurga-rav/articleshow-7xyb706</link>
            <guid isPermaLink="true">https://kannada.asianetnews.com/politics/bsy-abhimanotsav-50-years-of-relentless-service-bsy-celebrated-as-a-tireless-leader-in-chitradurga-rav/articleshow-7xyb706</guid>
            <pubDate>Fri, 08 May 2026 07:19:20 +0530</pubDate>
            <description><![CDATA[&lt;p&gt;ಬಿ.ಎಸ್. ಯಡಿಯೂರಪ್ಪನವರು ಅಧಿಕಾರಕ್ಕಿಂತ ಹೆಚ್ಚಾಗಿ ಹೋರಾಟದ ಮೂಲಕ ಗುರುತಿಸಿಕೊಂಡ ಧೀಮಂತ ನಾಯಕ. ಶೂನ್ಯದಿಂದ ಪಕ್ಷವನ್ನು ಕಟ್ಟಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಅವರು, ತಮ್ಮ 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಜನಪರ ಯೋಜನೆಗಳ ಮೂಲಕ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2m0p6w1qm8cpvxv37fsmc1,imgname-----------------------2026-05-08t071054.374-1778204563676.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;-ಪ್ರಲ್ಹಾದ ಜೋಶಿ, ಕೇಂದ್ರ ಸಚಿವರು.&lt;/strong&gt;&lt;/p&gt;&lt;p&gt;&lsquo;ಈ ಅರ್ಥಪೂರ್ಣ ಮಾತು ಹುಟ್ಟು ಹೋರಾಟಗಾರ ಹಾಗೂ ಕರ್ನಾಟಕ ಕಂಡ ಧೀಮಂತ ನಾಯಕ ಶ್ರೀ ಯಡಿಯೂರಪ್ಪ ಅವರಿಗೆ ಪೂರ್ತಿಯಾಗಿ ಅನ್ವಯಿಸುತ್ತದೆ.&lt;/p&gt;&lt;p&gt;ರಾಜಕೀಯವೆಂದರೆ ಕೇವಲ ಅಧಿಕಾರವಲ್ಲ, ಅದು ನಿರಂತರ ಹೋರಾಟ ಮತ್ತು ಜನರೊಂದಿಗಿನ ಅವಿನಾಭಾವ ಸಂಬಂಧ ಎಂಬುದನ್ನು ಸಾಬೀತುಪಡಿಸಿದವರು ಬಿ.ಎಸ್. ಯಡಿಯೂರಪ್ಪನವರು. ಅವರು ಸಾರ್ವಜನಿಕ ಜೀವನದಲ್ಲಿ 50 ವರ್ಷಗಳನ್ನು ಪೂರೈಸುತ್ತಿರುವುದು ಕೇವಲ ಒಬ್ಬ ವ್ಯಕ್ತಿಯ ಸಾಧನೆಯಲ್ಲ, ಅದು ಒಂದು ಸುದೀರ್ಘ ಕ್ರಾಂತಿಯ ಪಯಣ.&lt;/p&gt;&lt;p&gt;ಇವರನ್ನು ರಾಜಕಾರಣಿ ಎನ್ನುವುದಕ್ಕಿಂತ ಜನಪರ ಚಿಂತನೆಗಳಿರೋ ಅಪ್ಪಟ ಹೋರಾಟಗಾರ ಎನ್ನುವುದು ಸೂಕ್ತ. ಧರಣಿ, ಸತ್ಯಾಗ್ರಹದಿಂದ ಹಿಡಿದು ಭಾರಿ ಬಹಿರಂಗ ಸಭೆಯವರೆಗೆ, ಜಿಲ್ಲಾಧಿಕಾರಿ ಕಚೇರಿಯಿಂದ ವಿಧಾನಸೌಧದವರೆಗೆ, ಮುತ್ತಿಗೆಯಿಂದ ಹಿಡಿದು ರಸ್ತೆತಡೆ, ರೈಲು ತಡೆ, ಮೆಕ್ಕೆಜೋಳದಿಂದ ಹಿಡಿದು ನಕಲಿ ಛಾಪಾ ಕಾಗದದವರೆಗೆ, ಕೆಪಿಟಿಸಿಎಲ್ ಮುತ್ತಿಗೆಯಿಂದ ಹಿಡಿದು ಬಗರ್ ಹುಕುಂ ಸಾಗುವಳಿದಾರರಿಗೆ, ಬಡರೈತನಿಗೆ ವಿಮೆ ಕೊಡಿಸುವವರೆಗೆ. ಹೀಗೆ ಸಾಲು, ಸಾಲು ಹೋರಾಟಗಳು ಇವರ ದಾಖಲೆಯಲ್ಲಿವೆ. ಇದು ಕೇವಲ ದಾಖಲೆಗಾಗಿ ನಡೆಸಿದ ಹೋರಾಟವಲ್ಲ. ಬದಲಾಗಿ ನಮ್ಮನ್ನಾಳುವ ಮಂದಿ ಎಚ್ಚರ ತಪ್ಪಿದಾಗ, ಹಾದಿ ತೊರೆದಾಗ, ಅವರನ್ನು ಸದಾ ಎಚ್ಚರಿಸುತ್ತಾ ಸರಿದಾರಿಗೆ ತಂದ ಸಾಧನೆ ಇದಾಗಿದೆ.&lt;/p&gt;&lt;p&gt;ಹಗಲು ರಾತ್ರಿ ಧರಣಿ ಪ್ರವರ್ತಕ ಯಡಿಯೂರಪ್ಪ:&lt;/p&gt;&lt;p&gt;ಹೀಗಾಗಿ ಯಡಿಯೂರಪ್ಪ ಯಾವುದೇ ಚಳುವಳಿಗೆ ಧುಮುಕಿದರೂ ಆಡಳಿತ ಪಕ್ಷ ಥರಗುಟ್ಟುತ್ತದೆ. ಈ ಕಾರಣದಿಂದಾಗಿಯೇ ಯಡಿಯೂರಪ್ಪ ಅವರ ಚಳುವಳಿಗೊಂದು ಮೌಲ್ಯ ಇರುವುದು. ಎಂಥಹ ಪ್ರತಿಕೂಲ ಪರಿಸ್ಥಿತಿಯನ್ನೂ ಅನುಕೂಲಕರವಾಗಿ ಪರಿವರ್ತಿಸಿಕೊಳ್ಳುವ ಚಾಣಕ್ಷ್ಯ ವ್ಯಕ್ತಿಯ ಮನೋಭಾವ. ಅದೇ ರೀತಿಯಲ್ಲಿ ತಮ್ಮ ಜೀವನದಲ್ಲಿ ತಲೆದೋರಿದ ಪ್ರತಿಯೊಂದು ಕಷ್ಟಕಾರ್ಪಣ್ಯಗಳನ್ನೂ ಜೀರ್ಣಿಸಿಕೊಂಡು ಅವುಗಳನ್ನು ಜೀವನದ ಏಳ್ಗೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ವಿನ ಶಿಖರಕ್ಕೆ ಏರಿದರು.&lt;/p&gt;&lt;p&gt;1975ರ ಹೊತ್ತಿಗೆ ಅದೇ ಶಿಕಾರಿಪುರ ಪುರಸಭಾ ಸದಸ್ಯರಾಗಿ, ಅಧ್ಯಕ್ಷರೂ ಆಗುತ್ತಾರೆ. ಶಿಕಾರಿಪುರದಲ್ಲಿ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತದೆ. ಯಾವುದಕ್ಕೂ ಜಗ್ಗದ-ಬಗ್ಗದ ಛಾತಿಯ ಯಡಿಯೂರಪ್ಪ ಮತ್ತಷ್ಟು ಪ್ರಖರ ಹೋರಾಟಗಾರರಾಗಿ ಹೊರಹೊಮ್ಮುತ್ತಾರೆ. 1977ರ ಎಮರ್ಜೆನ್ಸಿಯಲ್ಲಿ ಸೆರೆಮನೆ ವಾಸ. ಜನತಾರಂಗದೊಳಗೆ ವಿಲೀನವಾಗಿದ್ದ ಜನಸಂಘ 1980ರಲ್ಲಿ ಬಿಜೆಪಿಯಾಗಿ ರೂಪುಗೊಂಡ ನಂತರ 1983ರಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಹಾಗೂ ಆ ನಂತರದ ಮೂರೇ ವರ್ಷಗಳಲ್ಲಿ ರಾಜ್ಯಾಧ್ಯಕ್ಷರೂ ಆಗಿ ಬಿಡುತ್ತಾರೆ. ಹೀಗೆ ಹಿಂದಿರುಗಿ ನೋಡದ ರಾಜಕೀಯ ಪಯಣದಲ್ಲಿ ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆಗಳಲ್ಲಿ ಸದಸ್ಯರಾಗಿ, ಮೂರು ಸಲ ವಿರೋಧ ಪಕ್ಷದ ನಾಯಕರಾಗುತ್ತಾರೆ. ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗುತ್ತಾರೆ.&lt;/p&gt;&lt;p&gt;ತುರ್ತು ಪರಿಸ್ಥಿತಿ ಸಂದರ್ಭ ಜೈಲಿನಲ್ಲಿದ್ದಾಗಲೂ ಅವರು ತಮ್ಮ ಚಳುವಳಿ ಬಿಡಲಿಲ್ಲ. ಜೈಲಿನಲ್ಲಿ ಕೊಡುತ್ತಿದ್ದ ಚಪಾತಿ ಮತ್ತು ಅನ್ನದಲ್ಲಿ ಹುಳು ಕಲ್ಲುಗಳು, ಸರಿಯಾಗಿ ಬೇಯಿಸದಿರುವುದರಿಂದ ಅವರು ರೋಸಿ ಹೋಗಿದ್ದರು. ಕೈದಿಗಳು ಕಣ್ಣು ಮುಚ್ಚಿಕೊಂಡು ಅದನ್ನೇ ತಿನ್ನುತ್ತಿದ್ದರು. ಯಡಿಯೂರಪ್ಪ ಜೈಲಿಗೆ ಹೋಗಿ ಒಂದು ವಾರ ಕಳೆಯಿತು. ಅಷ್ಟೊತ್ತಿಗಾಗಲೆ ಅಲ್ಲಿನ ಅವ್ಯವಸ್ಥೆಯ ಅರಿವಾಗಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತರು. ಇದರಿಂದಾಗಿ ಜೈಲಿನ ಅವ್ಯವಸ್ಥೆ ಸರಿದಾರಿಗೆ ಬಂತು. ಈ ಘಟನೆ ಬಳಿಕ ಕೇವಲ ಶಿಕಾರಿಪುರಕ್ಕೆ ಸೀಮಿತವಾಗಿದ್ದ ಯಡಿಯೂರಪ್ಪ ರಾಜ್ಯವ್ಯಾಪಿ ಗುರುತಿಸಿಕೊಂಡರು. ಸಂಘಟನೆ, ಹೋರಾಟ, ಸಾಧನೆಗಳಲ್ಲಿಯೇ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡಿರುವ ಯಡಿಯೂರಪ್ಪ ಅವರಲ್ಲಿ ಸಾಧಿಸಬೇಕೆಂಬ ಛಲ ಇನ್ನೂ ಇದೆ. 83ರ ಇಳಿವಯಸ್ಸಿನಲ್ಲೂ 20ರ ಯುವಕನಂತೆ ಕೆಲಸ ಮಾಡುವ, ಮುಂಜಾನೆ ಬೇಗನೆ ಎದ್ದು ವಾಕಿಂಗ್ ಮಾಡಿ ಬೆಳಗ್ಗೆ 8ಕ್ಕೆ ಮುನ್ನ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವರ ಗುಣ ಇತರರಿಗೆ ಅನುಕರಣೀಯ. ತಾನೂ ಬೆಳೆದು, ತನ್ನವರನ್ನೂ ಬೆಳೆಸುವ ತನ್ಮೂಲಕ ಸಮಾಜವನ್ನು ಬಲಪಡಿಸುವ ಅವರ ಆಶಯ ಇತರರಿಗೆ ಮಾದರಿ. ಹಲವಾರು ಹೋರಾಟಗಳನ್ನು ಕಂಡಿರುವ ಧೀಮಂತ ನಾಯಕ ಯಡಿಯೂರಪ್ಪ ಶಿಸ್ತಿನ ಸಿಪಾಯಿಯಂತೆ, ದಣಿವರಿಯದ ನಾಯಕನಂತೆ ಪಕ್ಷಕ್ಕೆ ದುಡಿದಿದ್ದಾರೆ.&lt;/p&gt;&lt;p&gt;ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ದಾಸಶ್ರೇಷ್ಠ ಕನಕದಾಸರ ಜನ್ಮದಿನವನ್ನು ಸರ್ಕಾರಿ ಹಬ್ಬವನ್ನಾಗಿ ಆಚರಿಸಲು ಆದೇಶಿಸಿ, ಅಂದು ಸಾರ್ವಜನಿಕ ರಜೆಯನ್ನು ಘೋಷಿಸಿದರಲ್ಲದೇ, ರಾಮಾಯಣ ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಸಹ ಸರ್ಕಾರಿ ಮಟ್ಟದಲ್ಲಿ ಆಚರಿಸಲು ಮತ್ತು ಸಾರ್ವಜನಿಕ ರಜೆ ನೀಡಲು ಯಡಿಯೂರಪ್ಪ ಅವರ ಸರ್ಕಾರವೇ ಆದೇಶ ಹೊರಡಿಸಿತ್ತು. ಹಿಂದೂ ಧರ್ಮ ಮತ್ತು ಸ್ವರಾಜ್ಯದ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆಯನ್ನು ಸ್ಮರಿಸಲು ಕರ್ನಾಟಕದಲ್ಲಿ ಸರ್ಕಾರಿ ಮಟ್ಟದ ಜಯಂತಿ ಆಚರಣೆಗೆ ಯಡಿಯೂರಪ್ಪ ಅವರು ಚಾಲನೆ ನೀಡಿದ್ದರು.&lt;/p&gt;&lt;p&gt;ಶೂನ್ಯದಿಂದ ಸೃಷ್ಟಿಸಿದ ಸಾಮ್ರಾಜ್ಯ:ಯಡಿಯೂರಪ್ಪನವರು ಪಕ್ಷ ಕಟ್ಟಲು ಜಾಥಾ, ಕಾಲ್ನಡಿಗೆ, ಪಾದಯಾತ್ರೆ, ಸೈಕಲ್ ಮೇಲೆ ಊರೂರು ಸುತ್ತಿದ ದಿನಗಳನ್ನು ನಾವು ಮರೆಯಲು ಸಾಧ್ಯವಿಲ್ಲ. ಅಂದು ಅವರು ಬಿತ್ತಿದ ಸಣ್ಣ ಸಸಿ ಇಂದು ನಾಡಿನಲ್ಲಿ ಬಿಜೆಪಿಯೆಂಬ ಹೆಮ್ಮರವಾಗಿ ಬೆಳೆದು ನಿಂತಿದೆ. ಬಿಜೆಪಿಯನ್ನು ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಅಧಿಕಾರಕ್ಕೆ ತರುವ ಮೂಲಕ ಅವರು ಇತಿಹಾಸ ನಿರ್ಮಿಸಿದರು.&lt;/p&gt;&lt;p&gt;ಧೀಮಂತ ಹೋರಾಟಗಾರ:&lt;/p&gt;&lt;p&gt;ಅವರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಿಂದ ಹಿಡಿದು ಅಯೋಧ್ಯೆ ರಾಮ ಮಂದಿರ ಚಳವಳಿಯವರೆಗೆ ಅವರ ಪಾತ್ರ ದೊಡ್ಡದು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯಕರ್ತರಿಗೆ ಧೈರ್ಯ ತುಂಬುವ ಹೋರಾಟಕ್ಕಿಳಿಯುವ ಅವರ ಗುಣ ಅನನ್ಯ.&lt;/p&gt;&lt;p&gt;ಮಾರ್ಗದರ್ಶಕ ಶಕ್ತಿ:&lt;/p&gt;&lt;p&gt;&lsquo;ಶೀಘ್ರ ಕೋಪಿ ಆದರೆ ದೀರ್ಘ ದ್ವೇಷಿಯಂತೂ ಅಲ್ಲ&rsquo; ಎಂಬ ಮಾತು ಯಡಿಯೂರಪ್ಪನವರಿಗೆ ಅನ್ವಯಿಸುತ್ತದೆ. ಒಮ್ಮೊಮ್ಮೆ ಭಿನ್ನಾಭಿಪ್ರಾಯಗಳು ಮೂಡಿದರೂ, ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಮರೆತು ಒಗ್ಗೂಡಿ ಕೆಲಸ ಮಾಡುವ ಅವರ ದೊಡ್ಡಗುಣ ನಮಗೆಲ್ಲರಿಗೂ ಆದರ್ಶ. ಕರ್ನಾಟಕದ ರಾಜಕೀಯ ಭೂಪಟದಲ್ಲಿ ಬಿ.ಎಸ್.ಯಡಿಯೂರಪ್ಪ ಎಂಬ ಹೆಸರು ಒಂದು ಶಕ್ತಿ. ಶೂನ್ಯದಿಂದ ಅಧಿಕಾರದ ಶಿಖರದವರೆಗೆ ಅವರು ನಡೆದು ಬಂದ ಹಾದಿ ಅಸಾಧಾರಣವಾದುದು. ಶಿಕಾರಿಪುರದ ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಯಾನ ಆರಂಭಿಸಿ, ಇಂದು ದೇಶದ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ.&lt;/p&gt;&lt;p&gt;ಉದ್ಯಮಃ ಸಾಹಸಂ ಧೈಯರ್ಂ ಬುದ್ಧಿಃ ಶಕ್ತಿಃ ಪರಾಕ್ರಮಃ&lt;/p&gt;&lt;p&gt;ಷಡೇತೇ ಯತ್ರ ವತರ್ಂತೇ ತತ್ರ ದೇವಃ ಸಹಾಯಕೃತ್ ॥&lt;/p&gt;&lt;p&gt;(ಉದ್ಯೋಗ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ ಮತ್ತು ಪರಾಕ್ರಮ, ಈ ಆರು ಗುಣಗಳು ಯಾರಲ್ಲಿ ಇರುತ್ತವೆಯೋ ಅವರಿಗೆ ದೈವವು ಸಹಾಯ ಮಾಡುತ್ತದೆ.)&lt;/p&gt;&lt;p&gt;ಯಡಿಯೂರಪ್ಪನವರು ಹಳ್ಳಿ ಹಳ್ಳಿಗಳನ್ನು ಸುತ್ತಿ ಪಕ್ಷ ಸಂಘಟಿಸಿದ ರೀತಿ ಅವರ &lsquo;ಉದ್ಯಮ&rsquo; ಮತ್ತು &lsquo;ಸಾಹಸ&rsquo;ಕ್ಕೆ ಸಾಕ್ಷಿ. 2021ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ, ಅವರನ್ನು ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಯಾದ ಸಂಸದೀಯ ಮಂಡಳಿಗೆ (Parliamentary Board) ನೇಮಕ ಮಾಡಲಾಯಿತು. ಕರ್ನಾಟಕದಲ್ಲಿ ಬಿಜೆಪಿಯ ಅಸ್ತಿತ್ವಕ್ಕೆ ಆಧಾರವಾಗಿರುವ &lsquo;ಧ್ರುವತಾರೆ&rsquo; ಎಂದೇ ಪರಿಗಣಿಸುತ್ತಾರೆ. ಒಟ್ಟಾರೆಯಾಗಿ, ಯಡಿಯೂರಪ್ಪ ಅವರು ಕೇವಲ ಒಬ್ಬ ಪ್ರಾದೇಶಿಕ ನಾಯಕರಾಗಿ ಉಳಿಯದೆ, ಕರ್ನಾಟಕದಲ್ಲಿ ಬಿಜೆಪಿಯ ಅಸ್ತಿತ್ವಕ್ಕೆ ಅಡಿಪಾಯ ಹಾಕಿದರು. ಕರ್ನಾಟಕದಲ್ಲಿ ಬಿಜೆಪಿ ಅಸ್ಥಿತ್ವ ಬೇರೂರುವುದೇ ಎಂಬ ಪ್ರಶ್ನೆ ಇದ್ದ ಸಂದರ್ಭದಲ್ಲಿ ಹೋರಾಟ ಹಾಗೂ ರಾಜಕೀಯ ಚಾಣಕ್ಷರೇ ಆಗಿದ್ದ ಯಡಿಯೂರಪ್ಪ ಅವರ ಸಂಘಟಿತ ದುಡಿಮೆ ಇಲ್ಲದಿದ್ದರೆ ಇಂದು ಪಕ್ಷ ರಾಜ್ಯದಲ್ಲಿ ಉನ್ನತಸ್ಥಿತಿಯಲ್ಲಿ ಇರುತ್ತಿರಲಿಲ್ಲ ಎಂಬುದು ಸರ್ವವಿದಿತ.&lt;/p&gt;&lt;p&gt;ಮುಖಂಡರನ್ನು ಬೆಳೆಸಿದ ಬಿಎಸ್&zwnj;ವೈ:&lt;/p&gt;&lt;p&gt;ಕರ್ನಾಟಕದಲ್ಲಿ ಮೊದಲು ಕಾಂಗ್ರೆಸ್ ಪಾರಮ್ಯವಿದ್ದರೆ ಎಂಬತ್ತರ ದಶಕದಿಂದ ಜನತಾ ಪರಿವಾರದ ಇನ್ನಿಂಗ್ಸ್ ಪ್ರಾರಂಭವಾಗಿತ್ತು. ಇದರ ಮಧ್ಯೆ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದ ಬಿಜೆಪಿಗೆ ಕರ್ನಾಟಕದಲ್ಲಿ ನೆಲೆ ಕಲ್ಪಿಸಲು ಶ್ರಮ ವಹಿಸಿದವರು ಬಿ.ಎಸ್.ಯಡಿಯೂರಪ್ಪ. ಕರ್ನಾಟಕ ಬಿಜೆಪಿಗೆ ಅಂದಿನಿಂದ ಇಂದಿನ ವರೆಗೂ ಯಡಿಯೂರಪ್ಪ ಮಹಾರಥಿ. ಅವರ ಪರಿಶ್ರಮದ ಫಲವಾಗಿ ಹಲವು ಮುಖಂಡರು ಬೆಳೆದಿದ್ದಾರೆ. ಅವರನ್ನೆಲ್ಲ ಮುಂಬೆಳಕಿಗೆ ತಂದು ತಯಾರು ಮಾಡಿದವರು ಯಡಿಯೂರಪ್ಪ. ಹಾಗಾಗಿ ಕರ್ನಾಟಕ ಬಿಜೆಪಿ ಮತ್ತು ಬಿ.ಎಸ್.ವೈ ಎಂಬ ಹೆಸರುಗಳು ಆವಿನಾಭಾವದ ನಿದರ್ಶನ.&lt;/p&gt;&lt;p&gt;ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸಂಸದರನ್ನು ಗೆಲ್ಲಿಸಿ ದಿಲ್ಲಿಗೆ ಕಳುಹಿಸಿ ಕೊಡುವುದರಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. 2019ರ ಪಾರ್ಲಿಮೆಂಟ್ ಎಲೆಕ್ಷನ್&zwnj;ನಲ್ಲಿ ರಾಜ್ಯ ಬಿಜೆಪಿಯಿಂದ 25 ಸಂಸದರು ಆಯ್ಕೆಯಾಗಿರುವುದು ಅಭೂತಪೂರ್ವ ಸಾಧನೆ. ಬಿಜೆಪಿ ಈ ಯಶೋಗಾಥೆಯಲ್ಲಿ ಯಡಿಯೂರಪ್ಪ ಅವರ ಯೋಗದಾನ ಬಹಳ ದೊಡ್ಡದು.&lt;/p&gt;&lt;p&gt;ಸುದೀರ್ಘ ರಾಜಕೀಯ ಹೋರಾಟದಲ್ಲಿ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲೇ ಹೆಚ್ಚು ಸಮಯವಿದ್ದರು ಎಂದರೆ ತಪ್ಪಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಲೋಕಸಭೆಗೆ ಹೆಚ್ಚಿನ ಸಂಸದರನ್ನು ಕಳುಹಿಸುವ ದಿಸೆಯಲ್ಲಿ ಸಂಘಟನೆ ಕೈಗೊಂಡಿದ್ದು ಸಣ್ಣ ಸಾಧನೆಯಲ್ಲ. ಈಗಲೂ ಪಕ್ಷಕ್ಕಾಗಿ ಅವರು ಅವಿರತವಾಗಿ ದುಡಿಯುತ್ತಿದ್ದಾರೆ. ಯಡಿಯೂರಪ್ಪ ಅವರ ಈ ಕಾರ್ಯ ನಿಷ್ಠೆ ಕೆಳ ಹಂತದ ಕಾರ್ಯಕರ್ತನಿಂದ ಉನ್ನತ ಮಟ್ಟದ ನಾಯಕರವರೆಗೂ ಮಾದರಿಯಾಗಿದೆ ಎಂದು ಧಾರಾಳವಾಗಿ ಹೇಳಬಹುದು.&lt;/p&gt;&lt;p&gt;ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ ಮತ್ತು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಅವರು ಈ ಶ್ಲೋಕದ ಆಶಯವನ್ನು ಜಾರಿಗೆ ತಂದರು.&lt;/p&gt;&lt;p&gt;ಭಗವದ್ಗೀತೆಯಲ್ಲಿ ಹೇಳಿದಂತೆ...&lt;/p&gt;&lt;p&gt;ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ&lt;/p&gt;&lt;p&gt;ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ॥&lt;/p&gt;&lt;p&gt;(ಶ್ರೇಷ್ಠ ವ್ಯಕ್ತಿಯು ಏನನ್ನು ಆಚರಿಸುತ್ತಾನೋ, ಇತರರು ಅದನ್ನೇ ಅನುಸರಿಸುತ್ತಾರೆ. ಅವನು ಏನನ್ನು ಪ್ರಮಾಣವೆಂದು ಒಪ್ಪುತ್ತಾನೋ, ಲೋಕವು ಅದನ್ನೇ ಪಾಲಿಸುತ್ತದೆ.)&lt;/p&gt;&lt;p&gt;ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರುವವರು ತಮ್ಮ ನಡವಳಿಕೆಯ ಮೂಲಕ ಸಾಮಾನ್ಯ ಜನರಿಗೆ ಮಾದರಿಯಾಗುತ್ತಾರೆ. ಇಂದು ಕರ್ನಾಟಕ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ಯಡಿಯೂರಪ್ಪನವರೇ ಅತಿ ದೊಡ್ಡ ಪ್ರೇರಣೆ. ಯಡಿಯೂರಪ್ಪನವರ ಜೀವನವು &lsquo;ಸೇವೆಯೇ ಪರಮೋಚ್ಚ&rsquo; ಎಂಬ ತತ್ವಕ್ಕೆ ಸಾಕ್ಷಿಯಾಗಿದೆ. ಅವರ ಅನುಭವ ಮತ್ತು ಮಾರ್ಗದರ್ಶನ ಮುಂದಿನ ಪೀಳಿಗೆಗೂ ಪಕ್ಷಕ್ಕೆ ದಾರಿದೀಪವಾಗಿದೆ. ಈ ಐತಿಹಾಸಿಕ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನಡೆಯಲಿ ಮತ್ತು ನಾಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕನಿಗೆ ಗೌರವ ಸಲ್ಲಿಸುವ ಈ ಕ್ಷಣ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸೋಣ.&lt;/p&gt;&lt;p&gt;ಚಿತ್ರದುರ್ಗದ ಈ &lsquo;ಅಭಿಮಾನೋತ್ಸವ&rsquo; ಕೇವಲ ಒಂದು ಸಮಾವೇಶವಲ್ಲ, ಇದು ಐದು ದಶಕಗಳ ಕಾಲ ನಾಡಿಗಾಗಿ ಮಿಡಿದ ಹೃದಯಕ್ಕೆ ಜನತೆ ಸಲ್ಲಿಸುತ್ತಿರುವ ಗೌರವ ಸಮರ್ಪಣೆ. ಯಡಿಯೂರಪ್ಪನವರು ಹಾಕಿಕೊಟ್ಟ ಜನಸೇವೆಯ ಹಾದಿ ಮುಂದಿನ ತಲೆಮಾರಿನ ರಾಜಕಾರಣಿಗಳಿಗೆ ದಾರಿದೀಪ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bsy-abhimanotsav-50-years-of-relentless-service-bsy-celebrated-as-a-tireless-leader-in-chitradurga-rav/articleshow-7xyb706"/>
        </item>
        <item>
            <title><![CDATA[Abhimanotsav: ಗ್ರಾಮಗಳಿಗೆ ನೀರು ಕೊಟ್ಟ ಭಗೀರಥ ಬಿಎಸ್‌ವೈ:  ತರಳಬಾಳು ಜಗದ್ಗುರು]]></title>
            <link>https://kannada.asianetnews.com/state/bsy-bhagiratha-who-brought-water-to-our-villages-taralabalu-seer-dr-shivamurthy-shivacharya-swamiji-rav/articleshow-i30a5de</link>
            <guid isPermaLink="true">https://kannada.asianetnews.com/state/bsy-bhagiratha-who-brought-water-to-our-villages-taralabalu-seer-dr-shivamurthy-shivacharya-swamiji-rav/articleshow-i30a5de</guid>
            <pubDate>Fri, 08 May 2026 07:05:06 +0530</pubDate>
            <description><![CDATA[&lt;p&gt;ಸಿರಿಗೆರೆಯ ತರಳಬಾಳು ಜಗದ್ಗುರುಗಳು, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಠಕ್ಕೆ ಸಹಾಯ ಮಾಡಲು ಮುಂದಾದಾಗ, ಅದರ ಬದಲು ಸಿರಿಗೆರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಕೇಳಿದರು. ಯಡಿಯೂರಪ್ಪ ತಕ್ಷಣವೇ ಸೂಳೆಕೆರೆಯಿಂದ ನೀರು ಪೂರೈಸುವ ಯೋಜನೆಗೆ ಅನುಮೋದನೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jygastagxbc4xtqssbmztxdg,imgname-----------------------2025-06-24t121237.239-1750747375952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;-ಡಾ। ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,&lt;/strong&gt;&lt;/p&gt;&lt;p&gt;ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ&lt;/p&gt;&lt;p&gt;ಸುಮಾರು ಹನ್ನೆರಡು ವರ್ಷಗಳ ಹಿಂದಿನ ಘಟನೆ. ಆಗ ದೆಹಲಿಯಲ್ಲಿ ಯಾವುದೋ ಒಂದು ಕಾರ್ಯಕ್ರಮವಿತ್ತು. ಅದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಮ್ಮ ಪ್ರಯಾಣ ಸಾಗಿತ್ತು. ಮಾರ್ಗಮಧ್ಯೆ ಇದ್ದಕ್ಕಿದ್ದಂತೆ ನಮ್ಮ ಮೊಬೈಲ್&zwnj; ರಿಂಗಣಿಸಿತು. ಉತ್ತರಿಸಲು ಕೈಗೆತ್ತಿಕೊಂಡಾಗ ಕಾಣಿಸಿದ್ದು ಕರೆ ಮಾಡಿದವರು ರಾಜ್ಯದ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.&zwnj; ಯಡಿಯೂರಪ್ಪ ಅವರು. ತೀರಾ ಅನಿರೀಕ್ಷಿತವಾದ ಕರೆ. ಮುಖ್ಯಮಂತ್ರಿಗಳಾಗಿ ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಪ್ಪದೆ ನಮಗೆ ದೂರವಾಣಿ ಕರೆ ಮಾಡಿ ಆಶೀರ್ವಾದ ಬೇಡುತ್ತಾ ಬಂದಿರುವುದು ಅವರು ರೂಢಿಸಿಕೊಂಡು ಬಂದ ಧಾರ್ಮಿಕ ಶ್ರದ್ಧೆ. ಆದರೆ ಅಂದಿನ ಕರೆಯ ಉದ್ದೇಶ ಬೇರೆಯೇ ಆಗಿತ್ತು.&lt;/p&gt;&lt;p&gt;ಉಭಯ ಕುಶಲೋಪರಿಯ ನಂತರ ಅವರು &lsquo;ಬುದ್ದಿ, ನಾಳೆ ನಾನು ರಾಜ್ಯದ ಬಜೆಟ್&zwnj; ಮಂಡಿಸಲಿದ್ದೇನೆ. ತಮ್ಮ ಆಶೀರ್ವಾದ ಬೇಕು. ಮಠಕ್ಕಾಗಿ ಏನಾದರೂ ಮಾಡಬೇಕೆಂದಿದ್ದೇನೆ. ಏನು ಮಾಡಲಿ?&rsquo; ಎಂದು ಕೇಳಿದರು. ಅವರ ಧಾರ್ಮಿಕ ಶ್ರದ್ಧೆ ನಿಷ್ಕಳಂಕವಾಗಿದ್ದರೂ, ಅವರು ನಾಡಿನ ಮುಖ್ಯಮಂತ್ರಿಗಳಾಗಿ ಯಾವುದೇ ತಾರತಮ್ಯ ಮಾಡದೆ ಎಲ್ಲ ಜನಾಂಗದವರ ಧಾರ್ಮಿಕ ಸಂಸ್ಥೆಗಳಿಗೆ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. &lsquo;ನಮ್ಮ ಮಠಕ್ಕೆ ಏನು ಮಾಡಲಿ&rsquo; ಎಂದು ಕೇಳಿದ ಪ್ರಶ್ನೆ ನಮಗೆ ಸರಿ ಕಾಣಲಿಲ್ಲ. &lsquo;ಮಠಕ್ಕೆ ಕಾಣಿಕೆ ಕೊಡಲು ಮಠದ ಶಿಷ್ಯರಿದ್ದಾರೆ, ನೀವು ಸ್ವಜಾತಿಯ ಮಠಕ್ಕೆ ಸಹಾಯ ಮಾಡಿದರೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತೀರಿ&rsquo; ಎಂದು ಕಟುವಾಗಿ ಪ್ರತಿಕ್ರಿಯಿಸಿದಾಗ ಅವರು ನಿರುತ್ತರರಾದರು. &lsquo;ಹಾಗಾದರೆ ನಾನೇನು ಮಾಡಲಿ?&rsquo; ಎಂದು ವಿನಮ್ರತೆಯಿಂದ ಮರು ಸವಾಲು ಹಾಕಿ ನಮ್ಮನ್ನು &lsquo;ಭಕ್ತಿಕಂಪಿತ&rsquo;ರನ್ನಾಗಿ ಮಾಡಿದರು.&lt;/p&gt;&lt;h2&gt;ಗ್ರಾಮೀಣರಿಗೆ ನೀರು ಕೊಟ್ಟ ನಾಯಕ:&lt;/h2&gt;&lt;p&gt;ಆಗ ನಮ್ಮ ಕಣ್ಮುಂದೆ ಸುಳಿದಾಡಿದ್ದು ಬೇಸಿಗೆಯ ಕಾಲದಲ್ಲಿ ಬೆಳಗಿನ ಹೊತ್ತು ವಾಯುವಿಹಾರದಿಂದ ಹಿಂದಿರುಗುವಾಗ ಸಾಲುಸಾಲಾಗಿ ನಿಂತು ಬೀದಿ ನಲ್ಲಿಯಲ್ಲಿ ನೀರು ಹಿಡಿಯಲು ಕೈಯಲ್ಲಿ ಬಿಂದಿಗೆಗಳನ್ನು ಹಿಡಿದು ನಿಂತ ಮಹಿಳೆಯರ ದೃಶ್ಯ! ತಕ್ಷಣವೇ ನಮ್ಮ ಉತ್ತರವನ್ನೇ ನಿರೀಕ್ಷಿಸುತ್ತಿದ್ದ ಮುಖ್ಯಮಂತ್ರಿಗಳಿಗೆ &lsquo;ಸಿರಿಗೆರೆ ಮತ್ತು ಸುತ್ತಮುತ್ತಲಿನ ೫೦ - ೬೦ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ತೊಂದರೆ ಇದೆ. ಸಮೀಪದ ಚನ್ನಗಿರಿ ತಾಲೂಕಿನ ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಕೆ ಆಗುವಂತೆ ಒಂದು ಯೋಜನೆಯನ್ನು ಮಂಜೂರು ಮಾಡಿಕೊಟ್ಟರೆ ತುಂಬಾ ಪುಣ್ಯಕಾರ್ಯ ಮಾಡಿದಂತಾಗುತ್ತದೆ&rsquo; ಎಂದಾಗ ಯಡಿಯೂರಪ್ಪ ಅವರು ತಡಮಾಡದೆ &lsquo;ಹಾಗೆಯೇ ಆಗಲಿ, ತಮ್ಮ ಅಪೇಕ್ಷೆಯಂತೆ ಮಾಡುತ್ತೇನೆ&rsquo; ಎಂದು ಭರವಸೆ ಕೊಟ್ಟರು.&lt;/p&gt;&lt;h3&gt;ಮರುದಿನವೇ ಬಜೆಟ್&zwnj;ನಲ್ಲಿ ಘೋಷಣೆ.&lt;/h3&gt;&lt;p&gt;ಸಾಮಾನ್ಯವಾಗಿ ರಾಜಕೀಯ ಧುರೀಣರು ಕೊಡುವ ಪೊಳ್ಳು ಭರವಸೆ ಅದಾಗಿರಲಿಲ್ಲ. ಮಾರನೆಯ ದಿನವೇ ವಿಧಾನಸಭೆಯಲ್ಲಿ ಅವರು ಮಂಡಿಸಿದ ಬಜೆಟ್&zwnj;ನಲ್ಲಿ ಮೇಲ್ಕಂಡ ಕುಡಿಯುವ ನೀರಿನ ಯೋಜನೆಗೆ ಅವರು ₹೨೫ ಕೋಟಿ ಸೇರ್ಪಡೆ ಮಾಡಿದ್ದು ಈ ಭಾಗದ ಹಳ್ಳಿಯ ಜನರನ್ನು ನಿಬ್ಬೆರಗುಗೊಳಿಸಿತು. ಕ್ರಮೇಣ ಸಿರಿಗೆರೆ ಮತ್ತು ಸುತ್ತಮುತ್ತಲಿನ ಅನೇಕ ಹಳ್ಳಿಗಳು ಹೊಸದಾಗಿ ಸೇರ್ಪಡೆಯಾಗಿ ಯೋಜನೆಯ ಗಾತ್ರ ₹೮೦ ಕೋಟಿಗಳಿಗೆ ಹಿಗ್ಗಿತು. ಆರಂಭದಲ್ಲಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಆಗುತ್ತಿದ್ದಾಗ ಅಷ್ಟಾಗಿ ಈ ಯೋಜನೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದ್ದ ಹಳ್ಳಿಗರು ಈಗ ಅಂತರ್ಜಲ ಬತ್ತಿರುವುದರಿಂದ ಈ ಯೋಜನೆಯು ಕಾರ್ಯರೂಪಕ್ಕೆ ಬರದೇ ಹೋಗಿದ್ದರೆ ತಮ್ಮ ಗತಿ ಏನಾಗುತ್ತಿತ್ತು ಎಂದು ಉದ್ಗರಿಸುತ್ತಿದ್ದಾರೆ!&lt;/p&gt;&lt;p&gt;ಯಡಿಯೂರಪ್ಪ ಅವರು ಮತ್ತು ನಮ್ಮ ಸಂಬಂಧ ನಿನ್ನೆ ಮೊನ್ನೆಯದಲ್ಲ. ನಮ್ಮ ಮಠದ ವಾರ್ಷಿಕ ಸಮಾರಂಭವಾದ &lsquo;ಸರ್ವಜನಾಂಗದ ಶಾಂತಿಯ ತೋಟ&rsquo;ವೆಂದೇ ಜನಮಾನಸದಲ್ಲಿ ನೆಲೆಗೊಂಡಿರುವ &lsquo;ತರಳಬಾಳು ಹುಣ್ಣಿಮೆ ಮಹೋತ್ಸವ&rsquo;ವು ೩೭ ವರ್ಷಗಳ ಹಿಂದೆ (೧೯೮೫) ಶಿಕಾರಿಪುರದಲ್ಲಿ ನಡೆದಾಗ ಅವರು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಆಗಿದ್ದರು. ಅಂದಿನಿಂದಲೂ ನಮ್ಮೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿರಲಿ, ಆಡಳಿತ ಪಕ್ಷದಲ್ಲಿರಲಿ, ಮಂತ್ರಿಗಳಾಗಿರಲಿ, ಮಾಜಿ ಮಂತ್ರಿಗಳಾಗಿರಲಿ ನಮ್ಮ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ಕಾರ್ಯಗಳಲ್ಲಿ ಅನನ್ಯವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.&lt;/p&gt;&lt;h3&gt;ಸದಾ ಜನಕಲ್ಯಾಣದ ಕನಸು:&lt;/h3&gt;&lt;p&gt;ಯಡಿಯೂರಪ್ಪನವರು ಕನ್ನಡ ನಾಡು ಕಂಡ ಅಪ್ರತಿಮ ರೈತಪರ ಹೋರಾಟಗಾರರು. ಅಪಾರ ಜನಪರ ಕಾಳಜಿ ಉಳ್ಳವರು. ಜನರ ಮಧ್ಯೆ ಬೆಳೆದು ಬಂದ ಅವರು ಕರೋನಾ ಬಿಕ್ಕಟ್ಟಿನಲ್ಲಿ ಬೆಂಗಳೂರಿನ ಗೃಹಕಚೇರಿಯಲ್ಲಿ ಅಣೆಕಟ್ಟೆಯಲ್ಲಿ ಹಿಡಿದಿಟ್ಟ ಅಪಾರ ಶಕ್ತಿಯುಳ್ಳ ಜಲರಾಶಿಯಂತೆ ಬಂಧಿಯಾಗಿದ್ದರೂ ನಾಡಿನ ಜನರ ಕಲ್ಯಾಣದ ಕನಸನ್ನೇ ಸದಾ ಕಾಣುತ್ತಿದ್ದರು. ಅವರು ರಾಜ್ಯದ ಅನೇಕ ತಾಲೂಕುಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ ನಮ್ಮ ಯೋಜನೆಗಳಿಗೆ ಹಿಂದುಮುಂದು ನೋಡದೆ ಸರ್ಕಾರದ ಒಪ್ಪಿಗೆಯನ್ನು ನೀಡಿ ಉದಾರವಾಗಿ ಅನುದಾನ ನೀಡಿ ಸಹಕರಿಸಿರುವುದನ್ನು ನಾವೆಂದೂ ಮರೆಯಲಾರೆವು.&lt;/p&gt;&lt;p&gt;ಚನ್ನಗಿರಿಯ ಉಬ್ರಾಣಿ-ಅಮೃತಾಪುರ, ಹರಿಹರದ ರಾಜನಹಳ್ಳಿ, ಹೊನ್ನಾಳಿಯ ಸಾಸ್ವೆಹಳ್ಳಿ, ಬ್ಯಾಡಗಿ ತಾಲೂಕಿನ ಅಣೂರು ಮತ್ತು ಬುಡಪನಹಳ್ಳಿ, ಜಗಳೂರು ಮತ್ತು ಭರಮಸಾಗರ ಇತ್ಯಾದಿ ಯಾವುದೇ ಏತ ನೀರಾವರಿ ಯೋಜನೆ ಇರಲಿ, ಯಾವುದೇ ಸರಕಾರವಿದ್ದಾಗ ಕೋಟ್ಯಂತರ ರು.ಗಳ ಹಣ ಬಿಡುಗಡೆ ಮಾಡಿದ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.&lt;/p&gt;&lt;h3&gt;ಕೊನೆಗೂ ನಮ್ಮ ಆಶಯ ಸಾಕಾರ:&lt;/h3&gt;&lt;p&gt;ಈ ಹಿಂದೆ ಇಂತಹ ಯೋಜನೆಗಳಿಗೆ ಧಾರಾಳವಾಗಿ ಹಣ ಮಂಜೂರು ಮಾಡುತ್ತಿದ್ದ ಅವರು ಭರಮಸಾಗರ ಮತ್ತು ಜಗಳೂರು ಏತ ನೀರಾವರಿಗೆ ಒಂದೇ ಕಂತಿನಲ್ಲಿ ಅನುದಾನ ನೀಡಲು ರಾಜ್ಯದ ಆರ್ಥಿಕ ದುರ್ಭರತೆಯ ಕಾರಣದಿಂದ ಹಿಂದೇಟು ಹಾಕಿದರು. ₹೧,೨೨೦ ಕೋಟಿಗಳ ಜಗಳೂರು ಮತ್ತು ಭರಮಸಾಗರ ಬೃಹತ್&zwnj; ಏತನೀರಾವರಿ ಯೋಜನೆಗಳನ್ನು ₹೨೨೫ ಕೋಟಿಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿದ್ದು ನಮಗೆ ಅಸಂತುಷ್ಟಿಯನ್ನುಂಟು ಮಾಡಿತು. ನಂತರ ನಮ್ಮ ಒತ್ತಾಸೆಗೆ ಮಣಿದು ಒಂದೇ ವಾರದಲ್ಲಿ ಮೇಲ್ಕಂಡ ಸರಕಾರದ ಆದೇಶವನ್ನು ಹಿಂಪಡೆದು ಪೂರಾ ಹಣವನ್ನು ಒಂದೇ ಕಂತಿನಲ್ಲಿ ಮಂಜೂರು ಮಾಡಿ ಮರು ಆದೇಶ ಹೊರಡಿಸಿದರು. ಈ ಎರಡೂ ಯೋಜನೆಗಳ ಕಾಮಗಾರಿ ಕರೋನಾ ಬಿಕ್ಕಟ್ಟಿನ ನಡುವೆಯೂ ಭರದಿಂದ ಸಾಗಿ ಸುಮಾರು ೧೦೦ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಯಿತು.&lt;/p&gt;&lt;p&gt;ಸುಮಾರು ೧೦೦ ಕೆರೆಗಳಿಗೆ ದುಮ್ಮಿಕ್ಕಿ ಹರಿಯುತ್ತಿರುವ ತುಂಗಭದ್ರೆಯ ಜಲರಾಶಿಯು ಈ ಭಾಗದ ಜನರ ಆರ್ಥಿಕ ಚೈತನ್ಯವನ್ನು ಅಭಿವೃದ್ಧಿಗೊಳಿಸಿ ಅವರ ಭಾವಕೋಶದಲ್ಲಿ ಹೊಸ ಕೃಷಿ ಚಟುವಟಿಕೆಯ ಭಾಷ್ಯ ಬರೆದಿದೆ.&lt;/p&gt;&lt;p&gt;ಶತಮಾನಗಳಿಂದ ಬರಗಾಲದ ಬೇಗೆಯಿಂದ ತತ್ತರಿಸಿದ ಈ ಭಾಗದ ಗ್ರಾಮೀಣ ಜನರು &lsquo;ಇಳಿದು ಬಾ ತಾಯೆ, ಇಳಿದು ಬಾ...&rsquo; ಎಂಬ ಕವಿವಾಣಿಯನ್ನು ಈಗ ಮನೆ ಮನಗಳಲ್ಲಿ ಜಪಿಸುತ್ತಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bsy-bhagiratha-who-brought-water-to-our-villages-taralabalu-seer-dr-shivamurthy-shivacharya-swamiji-rav/articleshow-i30a5de"/>
        </item>
        <item>
            <title><![CDATA[H Vishwanath ಚುನಾವಣಾ ರಾಜಕಾರಣಕ್ಕೆ ಎಚ್‌.ವಿಶ್ವನಾಥ್ ಗುಡ್‌ ಬೈ!]]></title>
            <link>https://kannada.asianetnews.com/politics/h-vishwanath-retires-from-electoral-politics-rules-out-future-contests-for-himself-and-his-sons/articleshow-23s93kt</link>
            <guid isPermaLink="true">https://kannada.asianetnews.com/politics/h-vishwanath-retires-from-electoral-politics-rules-out-future-contests-for-himself-and-his-sons/articleshow-23s93kt</guid>
            <pubDate>Fri, 08 May 2026 06:53:16 +0530</pubDate>
            <description><![CDATA[&lt;p&gt;ವಿಧಾನ ಪರಿಷತ್&zwnj; ಸದಸ್ಯ ಎಚ್&zwnj;.ವಿಶ್ವನಾಥ್&zwnj; ಅವರು ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಕನಿಷ್ಠ ₹50 ಕೋಟಿ ಬೇಕಾಗಿದ್ದು, ಅಷ್ಟು ಹಣ ತಮ್ಮ ಬಳಿ ಇಲ್ಲದಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kky3957ykh6500xwyaht3dsk,imgname-h-vishwanath-1773757830398.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;&lsquo;ನಾನು ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತೇನೆ. ಆದರೆ, ಚುನಾವಣೆಗೆ ಮಾತ್ರ ಸ್ಪರ್ಧಿಸುವುದಿಲ್ಲ&rsquo; ಎಂದು ವಿಧಾನ ಪರಿಷತ್&zwnj; ಸದಸ್ಯ ಎಚ್&zwnj;.ವಿಶ್ವನಾಥ್&zwnj; ಘೋಷಿಸಿದ್ದಾರೆ.&amp;nbsp;&lt;/p&gt;&lt;h2&gt;ವಿಧಾನಸಭೆಗೆ ಸ್ಪರ್ಧಿಸಲು ಕನಿಷ್ಠ ₹50 ಕೋಟಿ ಬೇಕು&lt;/h2&gt;&lt;p&gt;ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಈ ಹಿಂದೆ ಚುನಾವಣೆಗಳಲ್ಲಿ ಸ್ಪರ್ಧಿಸಿದಾಗ ಜನರೇ ಖರ್ಚಿಗೆ ಹಣ ನೀಡಿ ಆಶೀರ್ವದಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಿಧಾನಸಭೆಗೆ ಸ್ಪರ್ಧಿಸಲು ಕನಿಷ್ಠ ₹50 ಕೋಟಿ ಬೇಕು. ರಿಯಲ್&zwnj; ಎಸ್ಟೇಟ್&zwnj; ವ್ಯವಹಾರದಲ್ಲಿ ತೊಡಗಿದವರು ತಮ್ಮ ಜಮೀನು, ಮನೆ ಮಾರಿ ಸ್ಪರ್ಧಿಸಬಹುದು. ಆದರೆ, ನಮ್ಮಿಂದ ಅದು ಸಾಧ್ಯವಿಲ್ಲ ಎಂದರು.&lt;/p&gt;&lt;h3&gt;ನನ್ನ ಬಳಿ ಒಂದು ಮನೆ, ಒಂದು ನಿವೇಶನ ಮಾತ್ರ ಇದೆ&lt;/h3&gt;&lt;p&gt;ನನ್ನ ಬಳಿ ಒಂದು ಮನೆ ಮತ್ತು ಒಂದು ನಿವೇಶನ ಮಾತ್ರ ಇದೆ. ಹೀಗಿರುವಾಗ ಸ್ಪರ್ಧೆ ಹೇಗೆ ಸಾಧ್ಯ?. ಅಲ್ಲದೇ, ನನ್ನ ಮಕ್ಕಳು ಕೂಡ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅವರು ತಮ್ಮ ಶಕ್ತ್ಯಾನುಸಾರ ರಾಜಕೀಯದಲ್ಲಿ ಮುಂದುವರಿಯುತ್ತಾರೆ. ನಾನು ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತೇನೆ. ಆದರೆ, ಚುನಾವಣೆಗೆ ಮಾತ್ರ ಸ್ಪರ್ಧಿಸುವುದಿಲ್ಲ ಎಂದರು.&lt;/p&gt;&lt;p&gt;- ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ನನ್ನಲ್ಲಿಲ್ಲ: ಎಂಎಲ್&zwnj;ಸಿ&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/h-vishwanath-retires-from-electoral-politics-rules-out-future-contests-for-himself-and-his-sons/articleshow-23s93kt"/>
        </item>
    </channel>
</rss>
