<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 19 Jun 2026 05:26:44 +0530</lastBuildDate>
        <atom:link href="https://kannada.asianetnews.com/rss/politics" rel="self" type="application/rss+xml"/>
        <item>
            <title><![CDATA[ಆರ್‌ಎಸ್‌ಎಸ್‌ನ ಎಲ್ಲ ವ್ಯವಹಾರ ಪರಿಶೀಲನೆ ಆಗ್ಬೇಕಿದೆ: ಪ್ರಿಯಾಂಕ್ ಹೇಳಿಕೆ ಸಮರ್ಥಿಸಿದ ಯತೀಂದ್ರ]]></title>
            <link>https://kannada.asianetnews.com/politics/yathindra-siddaramaiah-defends-priyank-kharge-s-statement-that-rss-should-be-registered-rav/articleshow-43kretv</link>
            <guid isPermaLink="true">https://kannada.asianetnews.com/politics/yathindra-siddaramaiah-defends-priyank-kharge-s-statement-that-rss-should-be-registered-rav/articleshow-43kretv</guid>
            <pubDate>Wed, 17 Jun 2026 06:55:28 +0530</pubDate>
            <description><![CDATA[&lt;p&gt;ಆರ್&zwnj;ಎಸ್&zwnj;ಎಸ್&zwnj; ನೋಂದಣಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಒತ್ತಾಯವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಆರ್&zwnj;ಎಸ್&zwnj;ಎಸ್&zwnj;ಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದ್ದು, ಅದರ ವ್ಯವಹಾರಗಳ ಪರಿಶೀಲನೆಗೆ ನೋಂದಣಿ ಅಗತ್ಯ ಎಂದಿದ್ದಾರೆ. ಇದಕ್ಕೆ ಬಿಜೆಪಿ ನಾಯಕರಾದ ಏನು ಹೇಳಿದ್ರು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv9jdm3nbvjb9hg8cvg05v0j,imgname-----------------------2026-06-17t064605.701-1781658996853.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜೂ.17): &lt;/strong&gt;ಆರ್&zwnj;ಎಸ್&zwnj;ಎಸ್&zwnj;(RSS)ನ ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಹೀಗಾಗಿ, ಅದು ನೋಂದಣಿ(Registration) ಆಗಬೇಕು. ಗೃಹ ಸಚಿವ, ಪ್ರಿಯಾಂಕ್&zwnj; ಖರ್ಗೆ(Priyank kharge)ಯವರು ಆರ್&zwnj;ಎಸ್ಎಸ್ ನೋಂದಣಿಗೆ ಒತ್ತಾಯ ಮಾಡ್ತಾ ಇರೋದು ಸರಿ ಇದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಪಾದಿಸಿದರು.&lt;/p&gt;&lt;p&gt;ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಆರ್ ಎಸ್ಎಸ್ ನೋಂದಣಿಯಾಗದ ವಿಚಾರ ಕುರಿತು ಪ್ರತಿಕ್ರಿಯಿಸಿ, ದೇಶದ ಎಲ್ಲಾ ಕಡೆ ಆರ್ ಎಸ್ಎಸ್ ಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಅವರಿಗೆ ಕೋಟ್ಯಂತರ ರೂಪಾಯಿ ಹಣವೂ ಬರುತ್ತಿದೆ. ಇದರ ಲೆಕ್ಕವನ್ನು ಅವರು ಕೊಡಬೇಕು ತಾನೆ?. ಅವರ ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಹೀಗಾಗಿ, ಅದು ನೋಂದಣಿ ಆಗಬೇಕು. ಗೃಹ ಸಚಿವರು, ಆರ್ ಎಸ್ಎಸ್ ನೋಂದಣಿಗೆ ಒತ್ತಾಯ ಮಾಡ್ತಾ ಇರೋದು ಸರಿ ಇದೆ ಎಂದು ಅವರು ಸಮರ್ಥಿಸಿಕೊಂಡರು.&lt;/p&gt;&lt;p&gt;ಧರ್ಮದ ಹೆಸರಿನಲ್ಲಿ ಏನೂ ಬೇಕಾದರೂ ಮಾಡುತ್ತೇವೆ ಎಂಬುದು ನಡೆಯೋದಿಲ್ಲ. ದೇಶದ ಕಾನೂನಿಗಿಂತ ಯಾವ ಸಂಘಟನೆಯೂ ದೊಡ್ಡದಲ್ಲ. ಆರ್ ಎಸ್ಎಸ್ ಕೇವಲ ಸಾಂಸ್ಕೃತಿಕ ಸಂಘಟನೆ ಅಲ್ಲ, ಅದು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ. ಆರ್ ಎಸ್ಎಸ್ ನವರು ಹಿಂದುಗಳೇ ಅಲ್ಲ. ಅವರು ಕೇವಲ ಹಿಂದುತ್ವವಾದಿಗಳು ಅಷ್ಟೇ ಎಂದರು&lt;/p&gt;&lt;p&gt;ದೇಶದ್ರೋಹಿಗಳ ರಕ್ಷಕರಿಗೆ, ದೇಶ ವಿಭಜಕರ ಮಿತ್ರರಿಗೆ ಆರ್&zwnj;ಎಸ್&zwnj;ಎಸ್ ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ? ದೆಹಲಿ ನಕಲಿ ಗಾಂಧಿ ಹೈಕಮಾಂಡ್&zwnj;ನ ಓಲೈಸಿ ತಾನೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬ ದುರಾಸೆಯಿಂದ ಪ್ರಿಯಾಂಕ್ ಖರ್ಗೆ ಅವರು ಆರ್&zwnj;ಎಸ್&zwnj;ಎಸ್&zwnj; ಅನ್ನು ಬೆದರುಬೊಂಬೆ ಮಾಡಿಕೊಳ್ಳಲು ಹೊರಟಿದ್ದಾರೆ. ಸಮಾಜದಲ್ಲಿ ಸೈದ್ಧಾಂತಿಕ ವಿವಾದ ಸೃಷ್ಟಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಿಯಾಂಕ್ ನಡೆಸುತ್ತಿರುವ ಕುತಂತ್ರ ಕನ್ನಡಿಗರಿಗೆ ಅರ್ಥವಾಗುವಷ್ಟು ರಹಸ್ಯವಾಗಿ ಉಳಿದಿಲ್ಲ.&lt;/p&gt;&lt;p&gt;&lt;strong&gt;-ಆರ್.ಅಶೋಕ್&zwnj;, ಪ್ರತಿಪಕ್ಷದ ನಾಯಕ&amp;nbsp;&lt;/strong&gt;&lt;/p&gt;&lt;p&gt;&lt;strong&gt;ರಾಷ್ಟ್ರದ್ರೋಹಿ ಸಂಸ್ಥೆ ಕುರಿತು ಪ್ರಶ್ನೆ ಏಕಿಲ್ಲ&lt;/strong&gt;&lt;/p&gt;&lt;p&gt;ಆರ್&zwnj;ಎಸ್&zwnj;ಎಸ್ ಮದರಸಾ ರೀತಿ ಗುಪ್ತವಾಗಿ ಕಾರ್ಯ ನಿರ್ವಹಿಸಲ್ಲ. ಅಕ್ರಮ ವಿದೇಶಿ ದೇಣಿಗೆ ಪಡೆದು ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವ ಮಾಹಿತಿ ನಿಮ್ಮ ಗೃಹ ಇಲಾಖೆ ಬಳಿಯೇ ಇದೆ. ಈ ಬಗ್ಗೆ ಪತ್ರ ಬರೆದು ಆ ಸಂಸ್ಥೆಗಳಿಂದ ಯಾಕೆ ವಿವರ ಕೇಳುವುದಿಲ್ಲ?&lt;/p&gt;&lt;p&gt;-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/yathindra-siddaramaiah-defends-priyank-kharge-s-statement-that-rss-should-be-registered-rav/articleshow-43kretv"/>
        </item>
        <item>
            <title><![CDATA[RSS Registration row: ಆರ್‌ಎಸ್‌ಎಸ್‌ ನೋಂದಣಿ ಕಡ್ಡಾಯ ಅಲ್ಲ; ಕುಟುಂಬ ರಾಜಕಾರಣದ ವ್ಯಕ್ತಿಯಿಂದ ಸಂಘಕ್ಕೆ ಪ್ರಮಾಣ ಪತ್ರ ಬೇಕಿಲ್ಲ]]></title>
            <link>https://kannada.asianetnews.com/state/senior-supreme-court-lawyer-mahesh-jethmalani-column-on-the-rss-registration-controversy-rav/articleshow-4k6zfbz</link>
            <guid isPermaLink="true">https://kannada.asianetnews.com/state/senior-supreme-court-lawyer-mahesh-jethmalani-column-on-the-rss-registration-controversy-rav/articleshow-4k6zfbz</guid>
            <pubDate>Thu, 18 Jun 2026 10:13:17 +0530</pubDate>
            <description><![CDATA[&lt;p&gt;ಪ್ರಿಯಾಂಕ್&zwnj; ಖರ್ಗೆ ಅವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರಬಹುದು. ಆದರೆ ಆ ಹುದ್ದೆಯು ಅವರಿಗೆ ಕೇವಲ ಕಾನೂನು ಮಾನ್ಯ ಮಾಡಿದ ಕಾರ್ಯಕಾರಿ ಅಧಿಕಾರಗಳನ್ನಷ್ಟೇ ನೀಡುತ್ತದೆಯೇ ಹೊರತು ಯಾವುದೇ ನಾಗರಿಕ, ಸಂಘಟನೆಯನ್ನು ಕರೆಸಿ ತನ್ನ ವೈಯಕ್ತಿಕ ಇಚ್ಛೆಗನುಸಾರವಾಗಿ ಬದಲಾವಣೆಗೆ ಸೂಚಿಸುವ ಅಧಿಕಾರವನ್ನಲ್ಲ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcg5hntznqy5ef4kypyj6x0,imgname-----------------------2026-06-18t100407.302-1781757298361.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಹೇಶ್&zwnj; ಜೇಠ್ಮಲಾನಿ&lt;/strong&gt;&lt;/p&gt;&lt;p&gt;- ಸುಪ್ರೀಂಕೋರ್ಟ್&zwnj;ನ ಹಿರಿಯ ವಕೀಲ&lt;/p&gt;&lt;p&gt;ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ(Karnataka Home Minister Priyank kharge) ಅವರು ಆರೆಸ್ಸೆಸ್&zwnj; ಮುಖ್ಯಸ್ಥ ಮೋಹನ್&zwnj; ಭಾಗವತ್&zwnj;(RSS Chief Mohan bhagwat) ಅ&zwj;ವರಿಗೆ ಬರೆದ ಪತ್ರ, ಕೇವಲ ಒಂದು ಸಾಂವಿಧಾನಿಕ ವಿಚಾರಣೆ ಅಷ್ಟೇ ಆಗಿಲ್ಲ, ಬದಲಾಗಿ ಅದರ ಹಿಂದೆ ಲೆಕ್ಕಾಚಾರದ ರಾಜಕೀಯ ಪ್ರಚೋದನೆಯ ಉದ್ದೇಶವೂ ಅಡಗಿದೆ. ಆರೆಸ್ಸೆಸ್&zwnj;(RSS) ಬಗ್ಗೆ ಅವರು ಪತ್ರದಲ್ಲಿ ಮಾಡಿರುವ ಆರೋಪಗಳಿಗೆ ಕಾನೂನಿನ ಮಾನ್ಯತೆಯಾಗಲಿ, ಪ್ರಮಾಣವಾಗಲಿ ಇಲ್ಲ. ಕೇವಲ ಊಹೆಗಳ ಮೇಲೆ ಬರೆಯಲಾದ ಈ ಪತ್ರ ಕುಟುಂಬ ರಾಜಕಾರಣದ ಅಹಂಕಾರ ಪ್ರದರ್ಶನವಾಗಿದೆ.&lt;/p&gt;&lt;p&gt;ಸುಮಾರು ನೂರು ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮುಕ್ತವಾಗಿ, ಸಾರ್ವಜನಿಕರ ಕಣ್ಣೆದುರೇ ದೇಶ ಸೇವೆ ಮಾಡಿದೆ. ಸರ್ಕಾರದ ಬೆಂಬಲವಿಲ್ಲದೆ ಚಾರಿತ್ರ್ಯ ನಿರ್ಮಾಣ, ಶಿಸ್ತು ಬೆಳೆಸುವುದು, ಸಾಮಾಜಿಕ ಸಾಮರಸ್ಯ ಬಲಪಡಿಸುವಂಥ ಕಾರ್ಯ ಮಾಡಿಕೊಂಡು ಬಂದಿದೆ. ಆದರೆ ಕೆಲ ಕಾಂಗ್ರೆಸ್&zwnj; ನಾಯಕರು ಮಾತ್ರ ಇದಕ್ಕೆ ವ್ಯತಿರಿಕ್ತವಾದ ಸಂದೇಹಾಸ್ಪದ ರಾಜತಾಂತ್ರಿಕತೆ ಕಾಯ್ದುಕೊಂಡು ಬಂದಿದ್ದಾರೆ. ಅವರು ಚೀನಾದ ಕಮ್ಯುನಿಸ್ಟ್&zwnj; ಪಕ್ಷದ ಜತೆಗೆ ತಿಳಿವಳಿಕೆಯ ಜ್ಞಾಪನಾ ಪತ್ರಕ್ಕೆ ಸಹಿಹಾಕಲು ಚೀನಾಗೆ ತೆರಳುತ್ತಾರೆ. ರಾಜಕೀಯ ಟೀಕೆಗಳಿಗೆ ಹೆದರಿ ಈ ವಿಚಾರದಲ್ಲಿ ರಹಸ್ಯ ಕಾಯ್ದುಕೊಳ್ಳುತ್ತಾರೆ. ಆರೆಸ್ಸೆಸ್&zwnj; ಮತ್ತು ಕಾಂಗ್ರೆಸ್&zwnj; ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಒಬ್ಬರು ಭಾರತದ ಸೂರ್ಯನ ಪ್ರಕಾಶಮಾನವಾದ ಬೆಳಕಿನಲ್ಲಿ 100 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರೆ, ಮತ್ತೊಬ್ಬರು ವಿದೇಶಿ ನೆರಳಿನಲ್ಲಿ ಕೂತಿದ್ದಾರೆ.&lt;/p&gt;&lt;h2&gt;ಸಂಘ ರಚಿಸುವ ಅಧಿಕಾರ ಸರ್ಕಾರ ನೀಡಿದ್ದಲ್ಲ:&lt;/h2&gt;&lt;p&gt;ಸಂವಿಧಾನದ 19(1)(ಸಿ)ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ಸಂಘ, ಒಕ್ಕೂಟ ಅಥವಾ ಸಹಕಾರಿ ಸಂಸ್ಥೆಗಳನ್ನು ರಚಿಸುವ ಮೂಲಭೂತ ಹಕ್ಕು ಖಾತರಿಪಡಿಸುತ್ತದೆ. ಇದು ಸಂವಿಧಾನದತ್ತ ಸ್ವಾತಂತ್ರ್ಯವೇ ಹೊರತು ಸರ್ಕಾರ ನೀಡಿದ ಅಧಿಕಾರವಲ್ಲ. ಇನ್ನು 19(4)ನೇ ವಿಧಿಯು ಈ ಸ್ವಾತಂತ್ರ್ಯಗಳಿಗೆ ನಿರ್ದಿಷ್ಟ ಸಾಂವಿಧಾನಿಕ ಹಾಗೂ ಕಾನೂನು ಆಧಾರದ ಮೇಲೆ ಮಾತ್ರ ನ್ಯಾಯಯುತ ನಿರ್ಬಂಧಗಳನ್ನು ಹೇರಲು ಅವಕಾಶ ನೀಡುತ್ತದೆ. ಪ್ರತಿಯೊಂದು ಸ್ವಯಂಸೇವಾ ಸಂಘಟನೆಗಳು ಅಸ್ತಿತ್ವಕ್ಕೆ ಬರುವ ಅಥವಾ ಕಾರ್ಯಾಚರಣೆ ಆರಂಭಿಸುವ ಮೊದಲು ನೋಂದಣಿ ಆಗುವುದು ಕಡ್ಡಾಯ ಎಂದು ಸಂವಿಧಾನದಲ್ಲೆಲ್ಲೂ ಹೇಳಿಲ್ಲ.&lt;/p&gt;&lt;p&gt;ಆರೆಸ್ಸೆಸ್&zwnj; ಒಂದು ಸಮಾನ ಸೈದ್ಧಾಂತಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಆಲೋಚನೆಯ ನಾಗರಿಕರ ಸ್ವಯಂಸೇವಾ ಸಂಘಟನೆಯಾಗಿದೆ. ಈ ಸಂಘಟನೆಗೆ ಯಾವುದೇ ಸಚಿವನ ಅಸ್ವಿತ್ವದ ಪ್ರಮಾಣ ಪತ್ರವಾಗಲಿ, ಕುಟುಂಬ ರಾಜಕಾರಣದ ನಾಯಕನ ರಾಜಕೀಯ ಅನುಮತಿ ಪತ್ರವಾಗಲಿ ಬೇಕಿಲ್ಲ. ಕಾಂಗ್ರೆಸ್ ನಾಯಕನೊಬ್ಬ ವಿವಾದ ಸೃಷ್ಟಿಗೆ ಹೊರಟಿದ್ದಾನೆಂಬ ಮಾತ್ರಕ್ಕೆ ಈ ಸಂಘಟನೆಗೆ ಯಾವುದೇ ನೋಂದಣಿಯ ಅಗತ್ಯವೂ ಇಲ್ಲ.&lt;/p&gt;&lt;p&gt;ಆರೆಸ್ಸೆಸ್&zwnj; ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಅಥವಾ ಅದರ ಅಸ್ತಿತ್ವ ಸಾಬೀತುಪಡಿಸಬೇಕೆಂಬ ಪ್ರಿಯಾಂಕ್&zwnj; ಖರ್ಗೆ ಅವರ ಬೇಡಿಕೆಗೆ ಸಾಂವಿಧಾನಿಕ ಪಠ್ಯದಲ್ಲಾಗಲಿ, ಕಾನೂನು ಬಾಧ್ಯತೆ ಅಥವಾ ಒಪ್ಪಿತ ತತ್ವಗಳಲ್ಲಾಗಲಿ ಮಾನ್ಯತೆ ಇಲ್ಲ. ಪ್ರಿಯಾಂಕ್&zwnj; ಖರ್ಗೆ ಅವರದ್ದು ಕಾನೂನು ಮಾನ್ಯತೆಯಿಲ್ಲದ ತರ್ಕಕ್ಕೆ ನಿಲುಕದ ಬೇಡಿಕೆ.&lt;/p&gt;&lt;h3&gt;ಸಂವಿಧಾನಕ್ಕಿಂತ ಪ್ರಿಯಾಂಕ್&zwnj; ಖರ್ಗೆ ದೊಡ್ಡವರಲ್ಲ:&lt;/h3&gt;&lt;p&gt;ಕಾನೂನು ಮೂಲಕ ನಡೆಸಲ್ಪಡುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ, ಆತ ಎಷ್ಟೇ ಉನ್ನತ ಸ್ಥಾನಮಾನದಲ್ಲಿದ್ದರೂ ಸರಿ, ಕೇವಲ ತಾನು ಸಾರ್ವಜನಿಕ ಹುದ್ದೆಯಲ್ಲಿದ್ದೇನೆ ಎಂಬ ಕಾರಣಕ್ಕೆ ಯಾವುದೇ ಆದೇಶಗಳನ್ನು ನೀಡುವುದಾಗಲಿ ಮತ್ತು ಅದನ್ನು ಪಾಲನೆ ಮಾಡಬೇಕೆಂದು ಬಯಸುವುದಾಗಲಿ ಮಾಡುವಂತಿಲ್ಲ. ಪ್ರಿಯಾಂಕ್&zwnj; ಖರ್ಗೆ ಅವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರಬಹುದು. ಆದರೆ ಆ ಹುದ್ದೆಯು ಅವರಿಗೆ ಕೇವಲ ಕಾನೂನು ಮಾನ್ಯ ಮಾಡಿದ ಕಾರ್ಯಕಾರಿ ಅಧಿಕಾರಗಳನ್ನಷ್ಟೇ ನೀಡುತ್ತದೆಯೇ ಹೊರತು ಯಾವುದೇ ನಾಗರಿಕ ಅಥವಾ ಸಂಘಟನೆಯನ್ನು ಕರೆಸಿ ತನ್ನ ವೈಯಕ್ತಿಕ ಇಚ್ಛೆಗನುಸಾರವಾಗಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸುವ ಅಧಿಕಾರವನ್ನಲ್ಲ.&lt;/p&gt;&lt;p&gt;ಪ್ರಿಯಾಂಕ್&zwnj; ಖರ್ಗೆ ಅವರ ಕಾನೂನುಬದ್ಧವಲ್ಲದ ಇಂಥ ಯಾವುದೇ ಬೇಡಿಕೆಗಳಿಗೆ ಕಾನೂನಿನ ದೃಷ್ಟಿಯಲ್ಲಿ ಯಾವುದೇ ಮಾನ್ಯತೆ ಇಲ್ಲ. ಕುಟುಂಬ ರಾಜಕಾರಣದ ಮೂಲಕ ಅಧಿಕಾರ ಪಡೆದಿರುವ ವ್ಯಕ್ತಿಯು ಸಚಿವ ಸ್ಥಾನದಲ್ಲಿದ್ದಾನೆ ಎಂಬ ಮಾತ್ರಕ್ಕೆ ಆತ ಸಂವಿಧಾನಕ್ಕಿಂತ ದೊಡ್ಡವನಾಗುವುದೂ ಇಲ್ಲ.&lt;/p&gt;&lt;p&gt;ಅಧಿಕಾರವೆಂಬುದು ಶಾಶ್ವತವಲ್ಲ. ಇದನ್ನು ಮನಗಾಣಿಯೇ ಥೋಮಸ್&zwnj; ಫುಲ್ಲರ್&zwnj; ಅ&zwj;ವರು, &lsquo;ನೀವು ಎಷ್ಟೇ ಎತ್ತರದಲ್ಲಿದ್ದರೂ ಕಾನೂನು ನಿಮಗಿಂತ ಮೇಲೆಯೇ ಇರುತ್ತದೆ&rsquo; ಎಂದಿದ್ದಾರೆ. ಈ ಮಾತುಗಳನ್ನು ನಂತರ ಲಾರ್ಡ್&zwnj; ಡೆನ್ನಿಂಗ್&zwnj; ಅವರು &lsquo;ದಿ ಡ್ಯು ಪ್ರೊಸೆಸ್&zwnj; ಆಫ್&zwnj; ಲಾ&rsquo;ದಲ್ಲಿ ಶಾಶ್ವತಗೊಳಿಸಿದ್ದಾರೆ. ಈ ಮಾತು ಪ್ರಿಯಾಂಕ್&zwnj; ಖರ್ಗೆ ಅವರ ಬೇಡಿಕೆ ವಿಚಾರದಲ್ಲೂ ಅನ್ವಯ ಆಗುತ್ತದೆ.&lt;/p&gt;&lt;p&gt;&lt;strong&gt;ಕೋರ್ಟ್&zwnj; ತೀರ್ಪುಗಳ ಉದ್ದೇಶಪೂರ್ವಕ ನಿರ್ಲಕ್ಷ್ಯ:&lt;/strong&gt;&lt;/p&gt;&lt;p&gt;ಆರೆಸ್ಸೆಸ್&zwnj; ತನ್ನ ದೇಣಿಗೆಯ ಮೂಲ, ಖರ್ಚು-ವೆಚ್ಚ, ಆಸ್ತಿಗಳು ಮತ್ತು ತೆರಿಗೆಯ ಮಾಹಿತಿ ಬಹಿರಂಗಪಡಿಸಬೇಕೆನ್ನುವ ಪ್ರಿಯಾಂಕ್&zwnj; ಖರ್ಗೆ ಅವರ ಒತ್ತಾಯವು ಈಗಾಗಲೇ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತದೆ. ಇನ್ನು ಗುರುದಕ್ಷಿಣೆ ಮೇಲಿನ ತೆರಿಗೆಯ ವಿಚಾರಕ್ಕೆ ಬಂದರೆ, ಆರೆಸ್ಸೆಸ್&zwnj; ತನ್ನ ಸದಸ್ಯರಿಂದ ಸ್ವಯಂಪ್ರೇರಿತವಾಗಿ ಪಡೆಯುವ ದೇಣಿಗೆಯು ಸಾಂವಿಧಾನಿಕ ನ್ಯಾಯಾಲಯದಿಂದ ಈಗಾಗಲೇ ಪರಿಶೀಲನೆಗೂ ಒಳಪಟ್ಟಿದೆ. ಆದಾಯ ತೆರಿಗೆ ಕಮಿಷನರ್&zwnj; ಮತ್ತು ಆರೆಸ್ಸೆಸ್&zwnj; ನಡುವಿನ ಪ್ರಕರಣದಲ್ಲಿ ಪಟ್ನಾ ಹೈಕೋರ್ಟ್&zwnj; &lsquo;ಪರಸ್ಪರ ಸಹಕಾರ&rsquo;ದ ತತ್ವವನ್ನು ಎತ್ತಿಹಿಡಿದಿದ್ದು, ಗುರುದಕ್ಷಿಣೆಯು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿದೆ.&lt;/p&gt;&lt;p&gt;ಆರೆಸ್ಸೆಸ್&zwnj; ಯಾವತ್ತೂ ಕಾನೂನಿನ ವಿನಾಯ್ತಿಯನ್ನು ಕೇಳಿಯೇ ಇಲ್ಲ ಆದರೆ, ಕಾನೂನು ಹೇರದ ಬಾಧ್ಯತೆಗಳ ಒತ್ತಾಯಪೂರ್ವಕ ಹೇರಿಕೆಯನ್ನು ವಿರೋಧಿಸಿದೆ ಅಷ್ಟೆ.&lt;/p&gt;&lt;p&gt;ನೂರು ವರ್ಷಗಳ ಕಾಲ ಸಂಘವು ಮುಕ್ತವಾಗಿ ಕಾರ್ಯನಿರ್ವಹಿಸಿದೆ, ತನ್ನ ಕಾರ್ಯ ಚಟುವಟಿಕೆಗಳನ್ನು ಪ್ರಕಟಿಸುತ್ತಾ ಬಂದಿದೆ. ನಿರ್ಬಂಧಗಳು, ರಾಜಕೀಯ ವಿರೋಧ ಮತ್ತು ಮಾನ್ಯತೆ ರದ್ದು ಮಾಡುವ ಸಂಬಂಧ ಕಾಂಗ್ರೆಸ್&zwnj; ಸರ್ಕಾರಗಳು ಮಾಡಿದ ಹಲವು ಪ್ರಯತ್ನಗಳನ್ನು ಎದುರಿಸಿ ನಿಂತಿದೆ. ಇದನ್ನೆಲ್ಲ ತೆರಿಗೆದಾರರ ಹಣದಿಂದಾಗಲಿ ಹಾಗೂ ವಿದೇಶಿ ದೇಣಿಗೆಯ ನೆರವಿಲ್ಲದೆ ಸಾಧಿಸಿದೆ.&lt;/p&gt;&lt;p&gt;ಜೂನಿಯರ್&zwnj; ಖರ್ಗೆ ಅವರು ಭಾಗವತ್&zwnj; ಅವರನ್ನುದ್ದೇಶಿಸಿ ಉತ್ತರದಾಯಿತ್ವದ ಹೆಸರಿನಲ್ಲಿ ಬರೆದ ಪತ್ರವು ಕಾನೂನಿನ ತಪ್ಪುಗ್ರಹಿಕೆ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದೆ. ಈ ರೀತಿಯ ಬೇಡಿಕೆ ಪತ್ರವು ಅವರು ಹೊಂದಿರುವ ಸಾಂವಿಧಾನಿಕ ಹುದ್ದೆಗೂ ಮತ್ತು ತಾವು ರಕ್ಷಿಸುತ್ತಿದ್ದೇನೆಂದು ಹೇಳಿಕೊಳ್ಳುತ್ತಿರುವ ಪ್ರಜಾತಾಂತ್ರದ ಸಂಪ್ರದಾಯ ಎರಡಕ್ಕೂ ಸರಿಹೊಂದುವುದಿಲ್ಲ.&lt;/p&gt;&lt;p&gt;ಕುಟುಂಬ ರಾಜಕಾರಣಕ್ಕೆ ಸೇರಿದ ವ್ಯಕ್ತಿ ಎಷ್ಟೇ ಉನ್ನತ ಹುದ್ದೆಯಲ್ಲಿಯೇ ಇರಲಿ, ಅಂಥ ವ್ಯಕ್ತಿಯಿಂದ ಆರೆಸ್ಸೆಸ್&zwnj;ಗೆ ಉತ್ತಮ ನಡತೆಯ ಪ್ರಮಾಣ ಪತ್ರ ಬೇಕಿಲ್ಲ. ಕಾನೂನು ಎಲ್ಲರಿಗಿಂತಲೂ ದೊಡ್ಡದು. ಅದೇ ರೀತಿ ಜೂನಿಯರ್&zwnj; ಖರ್ಗೆ ಅವರ ಅಹಂಕಾರದ ಹಾಗೂ ಅನಗತ್ಯ ಬೇಡಿಕೆಗಳು ಕಾನೂನಿನ ಮುಂದೆ ಯಾವುದೇ ಮೌಲ್ಯ ಇಲ್ಲ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/senior-supreme-court-lawyer-mahesh-jethmalani-column-on-the-rss-registration-controversy-rav/articleshow-4k6zfbz"/>
        </item>
        <item>
            <title><![CDATA[MLC Election: ಕಾಂಗ್ರೆಸ್‌ ನಿಂದ ಬಹುದೊಡ್ಡ ಆಫರ್; ಅಡ್ಡಮತದಾನ ಮಾಡಿದ್ರಾ ಮೂವರು?]]></title>
            <link>https://kannada.asianetnews.com/gallery/politics/karnataka-mlc-election-2026-updates-has-congress-high-command-made-a-big-offer-for-cross-voting-mrq-7zy3qxe</link>
            <guid isPermaLink="true">https://kannada.asianetnews.com/gallery/politics/karnataka-mlc-election-2026-updates-has-congress-high-command-made-a-big-offer-for-cross-voting-mrq-7zy3qxe</guid>
            <pubDate>Thu, 18 Jun 2026 10:40:12 +0530</pubDate>
            <description><![CDATA[ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಸುಳಿವು ಸಿಕ್ಕಿದ್ದು, ಬಿಜೆಪಿಯಿಂದ ಉಚ್ಚಾಟಿತ ಶಾಸಕರಾದ ಎಸ್&zwnj;.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ ಪರ ಮತ ಚಲಾಯಿಸುವ ಸಾಧ್ಯತೆಯಿದೆ. ಇತ್ತ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರೂ ಪ್ರತ್ಯೇಕವಾಗಿ ಮತ ಚಲಾಯಿಸಿ ಕುತೂಹಲ ಮೂಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knzhdmkgbd5a6zgrtse7mevx,imgname-----------------------2026-04-12t055752.365-1775953695344.jpg" type="image/jpeg" height="390" width="690"/>
            <content:encoded><![CDATA[ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಸುಳಿವು ಸಿಕ್ಕಿದ್ದು, ಬಿಜೆಪಿಯಿಂದ ಉಚ್ಚಾಟಿತ ಶಾಸಕರಾದ ಎಸ್&zwnj;.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ ಪರ ಮತ ಚಲಾಯಿಸುವ ಸಾಧ್ಯತೆಯಿದೆ. ಇತ್ತ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರೂ ಪ್ರತ್ಯೇಕವಾಗಿ ಮತ ಚಲಾಯಿಸಿ ಕುತೂಹಲ ಮೂಡಿಸಿದ್ದಾರೆ.&lt;img&gt;&lt;p&gt;ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ 5ನೇ ಅಭ್ಯರ್ಥಿಯಾಗಿರುವ ವಿನಯ್ ಕಾರ್ತಿಕ್ ಅವರಿಗೆ ಮತದಾನ ಮಾಡಿದ್ರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೈ ಪಕ್ಷದಿಂದ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಬೆಳಗ್ಗೆ 9 ಗಂಟೆಗೆ ಮತದಾನ ಆರಂಭವಾಗಿದ್ದು, ಬಿಜೆಪಿ ಶಾಸಕರು ಬಂದು ಮತದಾನ ಮಾಡುತ್ತಿದ್ದಾರೆ. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕರಾದ ಯಲ್ಲಾಪುರ ಕ್ಷೇತ್ರದ ಶಿವರಾಂ ಹೆಬ್ಬಾರ್ ಮತ್ತು ಯಶವಂತಪುರದ ಶಾಸಕ ಎಸ್&zwnj;.ಟಿ.ಸೋಮಶೇಖರ್ ಅವರು ಟಿಕೆಟ್ ಭರವಸೆ ಹಿನ್ನೆಲೆ ಕೈ ಪರವಾಗಿ ಮತದಾನ ಮಾಡಿರುವ ಸಾಧ್ಯತೆಗಳಿವೆ.&lt;/p&gt;&lt;img&gt;&lt;p&gt;ಇನ್ನು ದಳಪತಿಗಳ ವಿರುದ್ಧ ಮುನಿಸಿಕೊಂಡಿರುವ ಚಾಮುಂಡೇಶ್ವರಿಯ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಒಂಟಿಯಾಗಿ ಬಂದು ಮತದಾನ ಮಾಡಿದ್ದಾರೆ. ಚುನಾವಣೆ ಹಿನ್ನೆಲೆ ಜೆಡಿಎಸ್ ಶಾಸಕರನ್ನು ದೇವನಹಳ್ಳಿಯ ರೆಸಾರ್ಟ್&zwnj;ನಲ್ಲಿರಿಸಲಾಗಿತ್ತು. ಎಲ್ಲಾ ಶಾಸಕರು ಒಂದೇ ಬಸ್&zwnj;ನಲ್ಲಿ ಮತದಾನ ಮಾಡಲು ಆಗಮಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ಕಾಂಗ್ರೆಸ್&zwnj;ನ ಎಲ್ಲಾ ಶಾಸಕರು ಐದು ಬಸ್&zwnj;ಗಳಲ್ಲಿ ವಿಧಾನಸೌಧಕ್ಕೆ ಬರುತ್ತಿದ್ದಾರೆ. ಇನ್ನು ಮತದಾನಕ್ಕೂ ಮುನ್ನ ಪ್ರತಿಕ್ರಿಯಿಸಿರುವ ಎಸ್&zwnj;.ಟಿ.ಸೋಮಶೇಖರ್, ಬಿಜೆಪಿ ಅವರು ಮಾತಾಡಿಸಿಲ್ಲ. ಕಾಂಗ್ರೆಸ್ ಮಾತಾಡಿಸಿದ್ದಾರೆ. ನಾವು ಆತ್ಮಸಾಕ್ಷಿ ಮತ ಹಾಕುತ್ತೇವೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಬಿಜೆಪಿ ಅಭ್ಯರ್ಥಿಗೆ ಮತ ಹಾಕೋದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಸಹ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅರ್ಭ್ಯರ್ಥಿಗೆ ಮತ ಹಾಕುತ್ತೇನೆ. ನಾನು ಬಿಜೆಪಿಯಿಂದ ಚುನಾಯಿತನಾಗಿದ್ದೇನೆ. ಹೀಗಾಗಿ ಪಕ್ಷದ ಅಭ್ಯರ್ಥಿಗೆ ಮತಹಾಕುತ್ತೇನೆ. ನನ್ನ ಹೋರಾಟ ಪಕ್ಷದ ವಿರುದ್ಧವಲ್ಲ, ಕುಟುಂಬದ ವಿರುದ್ಧ ಎಂದು ಪತ್ರದಲ್ಲಿ ಶಾಸಕ ಯತ್ನಾಳ್ ಉಲ್ಲೇಖಿಸಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/politics/karnataka-mlc-election-2026-updates-has-congress-high-command-made-a-big-offer-for-cross-voting-mrq-7zy3qxe"/>
        </item>
        <item>
            <title><![CDATA[RSS ಗೆ ಪ್ರಶ್ನೆ ಕೇಳಿದ್ದು ನಾನಲ್ಲ, ಸರ್ಕಾರ, ನನ್ನ ಪ್ರಶ್ನೆಗೆ ಉತ್ತರ ಕೊಡೋದಾದ್ರೆ ನಾನು ಆರೆಸ್ಸೆಸ್ ಕಚೇರಿಗೆ ಹೋಗಲು ಸಿದ್ಧ: ಪ್ರಿಯಾಂಕ್ ಖರ್ಗೆ]]></title>
            <link>https://kannada.asianetnews.com/india-news/i-am-ready-to-go-to-rss-office-if-my-eight-questions-are-answered-chief-mohan-bhagwat-says-minister-priyank-kharge-rav/articleshow-8tii5mv</link>
            <guid isPermaLink="true">https://kannada.asianetnews.com/india-news/i-am-ready-to-go-to-rss-office-if-my-eight-questions-are-answered-chief-mohan-bhagwat-says-minister-priyank-kharge-rav/articleshow-8tii5mv</guid>
            <pubDate>Wed, 17 Jun 2026 06:25:58 +0530</pubDate>
            <description><![CDATA[&lt;p&gt;ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್&zwnj;ಎಸ್&zwnj;ಎಸ್&zwnj; ಮುಖ್ಯಸ್ಥ ಮೋಹನ್ ಭಾಗವತ್&zwnj;ಗೆ ಪತ್ರ ಬರೆದು, ಸಂಘಟನೆಯ ನೋಂದಣಿ ಮತ್ತು ಕಾನೂನುಬದ್ಧ ಸ್ಥಾನಮಾನದ ಬಗ್ಗೆ ಪ್ರಶ್ನಿಸಿದ್ದಾರೆ. ಸಂಘಟನೆಯು ತನ್ನ ಆರ್ಥಿಕ ಪಾರದರ್ಶಕತೆಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv9gte1mntzwwje5xd3t4wc5,imgname-----------------------2026-06-17t061809.031-1781657319475.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ: (ಜೂ.17): &lt;/strong&gt;ಆರ್&zwnj;ಎಸ್&zwnj;ಎಸ್&zwnj;(RSS) ಸಂಘಟನೆಯ ನೋಂದಣಿ ಸಂಬಂಧ ದಾಖಲೆ ಕೇಳಿ ಆರ್&zwnj;ಎಸ್&zwnj;ಎಸ್&zwnj; ಮುಖ್ಯಸ್ಥ ಮೋಹನ್&zwnj; ಭಾಗವತ್&zwnj;(RSS Chief Mohan Bhagwat) ಅವರಿಗೆ ಪತ್ರ ಬರೆದಿದ್ದೇನೆ. ನಾನು ಪ್ರಿಯಾಂಕ್ ಖರ್ಗೆ(Priyank kharge)ಯಾಗಿ ಈ ಪತ್ರ ಬರೆದಿಲ್ಲ. ಸರ್ಕಾರದ ಪರವಾಗಿ ಪತ್ರ ಬರೆದಿದ್ದೇನೆ. ನಮ್ಮ ಪತ್ರಕ್ಕೆ ಅವರು ಉತ್ತರ ಕೊಡುತ್ತಾರೆ ಎಂದು ನಂಬಿದ್ದೇನೆ. ಅವರು ಪ್ರತಿಕ್ರಿಯೆ ನೀಡದಿದ್ದರೆ ಮುಂದೆ ನೋಡೋಣ ಎಂದು ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ತಿಳಿಸಿದ್ದಾರೆ.&lt;/p&gt;&lt;h2&gt;ಆರೆಸ್ಸೆಸ್&zwnj; ಆಚರಣೆಗೆ ಅಡ್ಡಿ ಮಾಡಲ್ಲ. ಆದರೆ ಏನೇ ಮಾಡಿದರೂ ಕಾನೂನಿನ ಅಡಿ ಮಾಡಿ&lt;/h2&gt;&lt;p&gt;ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅವರ ಆಚರಣೆಗೆ ನಾವು ಅಡ್ಡಿಪಡಿಸಲ್ಲ. ಆದರೆ, ಏನೇ ಮಾಡುವುದಿದ್ದರೂ ಕಾನೂನಿನಡಿ ಮಾಡಿ ಎಂದು ಕೇಳಿದ್ದೇನೆ ಅಷ್ಟೆ. ಕರ್ನಾಟಕದಲ್ಲಿ ಯಾವುದೇ ಧರ್ಮದ ಸಂಘ-ಸಂಸ್ಥೆ ಕಾನೂನಿನಡಿ ಬರಬೇಕು. ಯಾವ ಕಾನೂನಿನಡಿ ಸಂಘ ಅಸ್ತಿತ್ವದಲ್ಲಿದೆ ಎನ್ನುವುದನ್ನು ಹೇಳಬೇಕು. ನಿಮ್ಮ ಸಂಘಟನೆಯ ನೋಂದಣಿ ಎಲ್ಲಿದೆ?; ನಿಮ್ಮ ಸಂಘಟಕರು ಯಾರು?; ನಿಮ್ಮ ಸಂಸ್ಥೆಯ ಮುಖ್ಯಸ್ಥರು ಯಾರು? ಎಂದು ಪತ್ರದಲ್ಲಿ ಕೇಳಿದ್ದೇನೆ. ನಾನು ಧರ್ಮದ ಬಗ್ಗೆ ನೋಂದಣಿ ಕೇಳಿಲ್ಲ. ನಿಮ್ಮ ಸಂಸ್ಥೆಯ ನೋಂದಣಿ ಬಗ್ಗೆ ಪ್ರಶ್ನಿಸಿದ್ದೇನೆ. ಯಾವುದಕ್ಕೂ ಉಡಾಫೆ ಉತ್ತರ ಕೊಡಬೇಡಿ ಎಂದರು.&lt;/p&gt;&lt;h3&gt;ನನ್ನ ಪ್ರಶ್ನೆಗೆ ಉತ್ತರ ನೀಡೋದಾದ್ರೆ ನಾನು ಆರೆಸ್ಸೆಸ್ ಕಚೇರಿಗೆ ಹೋಗಲು ಸಿದ್ಧ&lt;/h3&gt;&lt;p&gt;ನಾನು ಕೇಳಿರುವ ಪ್ರಶ್ನೆಗಳಲ್ಲಿ ಯಾವುದು ಸರಿ ಇಲ್ಲ ಎಂಬುದನ್ನು ಹೇಳಿ. ಮೋಹನ್ ಭಾಗವತ್ ಅವರು ನನ್ನ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಅವರ ಹೇಳಿಕೆ ಹಳೆಯದು. ನಾನು ಪತ್ರ ಬರೆದಿರುವುದು 15ನೇ ತಾರೀಕಿಗೆ. ಅವರು ಹೇಳಿಕೆ ಕೊಟ್ಟಿರುವುದು 13ನೇ ತಾರೀಕಿಗೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅವರು ನನ್ನ ಪತ್ರಕ್ಕೆ ಉತ್ತರ ಕೊಡುತ್ತಾರೆ ಎಂದು ನಂಬಿದ್ದೇನೆ. ಕೊಡದಿದ್ದರೆ ಮುಂದೆ ನೋಡೋಣ. ನನ್ನ ಪ್ರಶ್ನೆಗಳಿಗೆ ಉತ್ತರ ನೀಡುವುದಾದರೆ ನಾನು ಆರ್&zwnj;ಎಸ್&zwnj;ಎಸ್&zwnj; ಕಚೇರಿಗೆ ಹೋಗಲು ಸಿದ್ಧ. ನಾನು ನಮ್ಮ&zwnj; ವಕೀಲರ ಜೊತೆಗೆ ಹೋಗ್ತಿನಿ. ಅವರು ಅವರ ವಕೀಲರ ಜೊತೆಗೆ ಬರಲಿ ಎಂದು ಹೇಳಿದರು.&lt;/p&gt;&lt;h3&gt;ಅಕೌಂಟೆಬಿಲಿಟಿ ಇರಬೇಕಾ?, ಬೇಡ್ವಾ?:&lt;/h3&gt;&lt;p&gt;ಪಾರದರ್ಶಕತೆ ಕೇಳೋದು ತಪ್ಪಾ?. ಪಾರದರ್ಶಕತೆ ಬಗ್ಗೆ ಕೇಳಿದರೆ ಧರ್ಮವನ್ನೇಕೆ ಅಡ್ಡ ತರುತ್ತೀರಿ. ದೇಣಿಗೆ ಬಗ್ಗೆ ಮಾಹಿತಿ ಕೊಡಬೇಕಲ್ವಾ?. ಅಯೋಧ್ಯೆಯ ದೇಣಿಗೆ ವಿಚಾರದಲ್ಲಿ ದೊಡ್ಡ ಗೊಂದಲ ಆಗಿದೆ. ರಾಮನೇ ಉತ್ತರ ನೀಡುವ ಸಂದರ್ಭ ಎದುರಾಗಿದೆ. ಹೀಗಿರುವಾಗ ಶ್ರೀರಾಮನ ಹೆಸರಲ್ಲಿ ಪಥ ಸಂಚಲನ ಮಾಡುವವರು ಲೆಕ್ಕ ಕೊಡಬಾರದಾ?. ತೆರಿಗೆದಾರರ ಹಣದಿಂದ ಮೋಹನ್ ಭಾಗವತ್&zwnj;ಗೆ ಭದ್ರತೆ ಕೊಡಲಾಗುತ್ತಿದೆ. ಇದರ ಅಕೌಂಟೆಬಿಲಿಟಿ ಇರಬೇಕಾ?, ಬೇಡ್ವಾ?. ನಮ್ಮ ಸಿಬ್ಬಂದಿ ನಿಮ್ಮ ಪಥಸಂಚಲನ ಕಾಯುತ್ತಾರಲ್ಲ, ಅದು ತೆರಿಗೆದಾರರ ದುಡ್ಡು. ಆಳು ಮಕ್ಕಳನ್ನು (ಬಿಜೆಪಿ) ಮಾತಾಡಲು ಬಿಡಬೇಡಿ. ನೀವು ದಾಖಲೆ ಕೊಡಿ ಅಷ್ಟೆ ಎಂದರು.&lt;/p&gt;&lt;p&gt;ಪಾಕ್ ಜೊತೆ ನಂಟಿನ ಬಗ್ಗೆ ಮಾತಾಡ್ತಿರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸ್ತಿರಿ. ಹಾಗಿದ್ದರೆ, ಸಂಘಟನೆ ಪೊಲಿಟಿಕಲ್ ಅಲ್ಲ ಅಂತೀರಾ?. ಅಮೆರಿಕದಲ್ಲಿ ಡಿಪಾರ್ಟ್ಮೆಂಟ್ ಲಾ, ಈ ಸಂಸ್ಥೆ ಸರಿ ಇಲ್ಲ ಎಂದು ವರದಿ ಕೊಟ್ಟಿದೆ. ಅದನ್ನು ಸರಿಪಡಿಸಲು ಒಂದು ಲಾ ಫಾಮ್೯ ಗೆ ಮೂರು ಕೋಟಿ ರುಪಾಯಿ ಕೊಟ್ಟಿದ್ದಾರೆ. ಎಲ್ಲಿಂದ ಬಂತು ದುಡ್ಡು ಇವರಿಗೆ ಎಂದವರು ಪ್ರಶ್ನಿಸಿದರು.&lt;/p&gt;&lt;p&gt;&lt;strong&gt;ಕಾನೂನುಬದ್ಧ ಸ್ಥಾನಮಾನ ಸ್ಪಷ್ಟಪಡಿಸಿ:&lt;/strong&gt;&lt;/p&gt;&lt;p&gt;ಸಂಘ ತನ್ನ ಅಸ್ತಿತ್ವದ ಶತಮಾನೋತ್ಸವದ (100 ವರ್ಷ) ಸಂದರ್ಭದಲ್ಲಾದರೂ ತನ್ನ ಕಾನೂನುಬದ್ಧ ಸ್ಥಾನಮಾನವನ್ನು ಸ್ಪಷ್ಟಪಡಿಸಬೇಕು. ಆರ್ಥಿಕ ಪಾರದರ್ಶಕತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಆರ್&zwnj;ಎಸ್&zwnj;ಎಸ್&zwnj;ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ವರದಿ ಪ್ರಕಾರ ಕರ್ನಾಟಕವೊಂದರಲ್ಲೇ 4,127 ದೈನಂದಿನ ಶಾಖೆಗಳು, 1,389 ವಾರಾಂತ್ಯದ ಸಭೆಗಳು, 60 ಮಾಸಿಕ ಮಂಡಳಿಗಳು ನಡೆಯುತ್ತಿವೆ. ಜೊತೆಗೆ 500ಕ್ಕೂ ಹೆಚ್ಚು ಪಥಸಂಚಲನಗಳು ಹಾಗೂ ಲಕ್ಷಾಂತರ ಜನರು ಭಾಗವಹಿಸುವ ಸಮಾಜೋತ್ಸವಗಳು ನಿರಂತರವಾಗಿ ಜರುಗುತ್ತಿವೆ. ಇಷ್ಟು ದೊಡ್ಡಮಟ್ಟದ ಸಾರ್ವಜನಿಕ ಸಜ್ಜುಗೊಳಿಸುವಿಕೆ ಹಾಗೂ ಗಣವೇಷಧಾರಿ ಪಥಸಂಚಲನಗಳನ್ನು &lsquo;ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ&rsquo; ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಅನುಮತಿಗಳ ವಿವರಗಳನ್ನು ಒದಗಿಸಬೇಕು. ಪ್ರತಿಯೊಂದು ಸಂಸ್ಥೆಯೂ ಕಾನೂನಿನ ಚೌಕಟ್ಟಿಗೆ ಬದ್ಧವಾಗಿರಬೇಕು ಎಂದರು.&lt;/p&gt;&lt;p&gt;ಸಾಮಾನ್ಯ ನಾಗರಿಕರು, ಕಾರ್ಮಿಕ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಟ್ರಸ್ಟ್&zwnj;ಗಳು ಮತ್ತು ಕಂಪನಿಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ ನೋಂದಣಿ ಮಾಡಿಕೊಂಡು, ತಮ್ಮ ಆದಾಯ-ವೆಚ್ಚಗಳ ವಿವರಗಳನ್ನು ನೀಡುತ್ತಿರುವಾಗ ಆರ್&zwnj;ಎಸ್&zwnj;ಎಸ್&zwnj;ಗೆ ಮಾತ್ರ ಇದರಿಂದ ವಿನಾಯಿತಿ ಏಕೆ ಎಂದವರು ಪ್ರಶ್ನಿಸಿದರು.&lt;/p&gt;&lt;p&gt;ಸಂಘಟನೆ ತನ್ನ 100ನೇ ವರ್ಷದಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು, ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುವುದೇ ದೇಶಕ್ಕೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಸಚಿವರು ಹೇಳಿದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/i-am-ready-to-go-to-rss-office-if-my-eight-questions-are-answered-chief-mohan-bhagwat-says-minister-priyank-kharge-rav/articleshow-8tii5mv"/>
        </item>
        <item>
            <title><![CDATA[TMC Crisis: ಟಿಎಂಸಿ ಒಳಜಗಳ ತಾರಕಕ್ಕೆ: ಪಕ್ಷದ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡುವಂತೆ ಮಾಜಿ ಖಜಾಂಚಿಯಿಂದಲೇ HDFC ಗೆ ಪತ್ರ!]]></title>
            <link>https://kannada.asianetnews.com/politics/west-bengal-tmc-internal-conflict-aroop-biswas-asks-bank-to-freeze-party-accounts/articleshow-a259shk</link>
            <guid isPermaLink="true">https://kannada.asianetnews.com/politics/west-bengal-tmc-internal-conflict-aroop-biswas-asks-bank-to-freeze-party-accounts/articleshow-a259shk</guid>
            <pubDate>Thu, 18 Jun 2026 13:41:48 +0530</pubDate>
            <description><![CDATA[&lt;p&gt;ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ತಾರಕಕ್ಕೇರಿದೆ. ಪಕ್ಷದ ಮಾಜಿ ಖಜಾಂಚಿ ಅರೂಪ್ ಬಿಸ್ವಾಸ್ ಅವರೇ ಈಗ ಪಕ್ಷದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವಂತೆ HDFC ಬ್ಯಾಂಕ್&zwnj;ಗೆ ಪತ್ರ ಬರೆದಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-f2671180-66b9-4550-be0e-103c1a8b304a.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಕ್ಷದ ಖಾತೆಗಳನ್ನು ಫ್ರೀಜ್ ಮಾಡಲು ಬ್ಯಾಂಕ್&zwnj;ಗೆ ಮಾಜಿ ಖಜಾಂಚಿ ಮನವಿ&lt;/p&gt;&lt;p&gt;ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಮಾಜಿ ಖಜಾಂಚಿ ಅರೂಪ್ ಬಿಸ್ವಾಸ್, ಪಕ್ಷದ ಬ್ಯಾಂಕ್ ಖಾತೆಗಳ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ (ಫ್ರೀಜ್) ಕೋರಿದ್ದಾರೆ. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) ಪಕ್ಷದ ಅಧಿಕಾರ ಮತ್ತು ನಿಯಂತ್ರಣದ ಬಗ್ಗೆ ಆಂತರಿಕ ಸಂಘರ್ಷ ನಡೆಯುತ್ತಿರುವುದೇ ಇದಕ್ಕೆ ಕಾರಣ ಎಂದು ಕೋಲ್ಕತ್ತಾದ HDFC ಬ್ಯಾಂಕ್ ಮ್ಯಾನೇಜರ್&zwnj;ಗೆ ಬರೆದ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಜೂನ್ 12ರಂದು ಬರೆದ ಈ ಪತ್ರದಲ್ಲಿ, ಬಿಸ್ವಾಸ್ ತಮ್ಮನ್ನು ಎಐಟಿಸಿ ಖಜಾಂಚಿ ಎಂದು ಗುರುತಿಸಿಕೊಂಡಿದ್ದಾರೆ. ಪಕ್ಷದ ಖಾತೆಗಳ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮತ್ತು ವಿವಾದ ಬಗೆಹರಿಯುವವರೆಗೂ ಯಾವುದೇ ಹಣದ ವರ್ಗಾವಣೆ ಅಥವಾ ಖಾತೆ ನಿರ್ವಹಣೆಯ ನಿಯಮಗಳಲ್ಲಿ ಬದಲಾವಣೆ ಮಾಡಲು ಅನುಮತಿ ನೀಡದಂತೆ ಅವರು ಬ್ಯಾಂಕ್&zwnj;ಗೆ ಮನವಿ ಮಾಡಿದ್ದಾರೆ.&lt;/p&gt;&lt;p&gt;&quot;ಸದ್ಯ, ಪಕ್ಷದಲ್ಲಿ ಎದುರಾಳಿ ಬಣಗಳು ತಾವೇ ನಿಜವಾದ ಪ್ರತಿನಿಧಿಗಳು ಮತ್ತು ಪದಾಧಿಕಾರಿಗಳು ಎಂದು ಹೇಳಿಕೊಳ್ಳುತ್ತಿವೆ. ಇದರಿಂದಾಗಿ, AITC ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳನ್ನು ಯಾರು ನಿರ್ವಹಿಸಬೇಕು ಎಂಬ ಬಗ್ಗೆ ಗೊಂದಲ ಉಂಟಾಗಿದೆ,&quot; ಎಂದು ಬಿಸ್ವಾಸ್ ಪತ್ರದಲ್ಲಿ ವಿವರಿಸಿದ್ದಾರೆ.&lt;/p&gt;&lt;h2&gt;ಪಕ್ಷದ ನಿಯಂತ್ರಣದ ಬಗ್ಗೆ 'ಗಂಭೀರ ವಿವಾದ'&lt;/h2&gt;&lt;p&gt;ಪಕ್ಷದ ನಿಧಿಗೆ ರಕ್ಷಣೆ ನೀಡುವಂತೆ ಕೋರಿರುವ ಅವರು, ಯಾವುದೇ ಅನಧಿಕೃತ ಹಣ ಹಿಂಪಡೆಯುವಿಕೆ, ವರ್ಗಾವಣೆ ಅಥವಾ ಇತರೆ ವಹಿವಾಟುಗಳನ್ನು ತಡೆಯಬೇಕೆಂದು ಬ್ಯಾಂಕ್ ಅನ್ನು ಒತ್ತಾಯಿಸಿದ್ದಾರೆ. ಪಕ್ಷದ ವ್ಯವಹಾರ ಮತ್ತು ಆಸ್ತಿಗಳ ಅಧಿಕಾರ, ನಿಯಂತ್ರಣ ಹಾಗೂ ನಿರ್ವಹಣೆಯ ಬಗ್ಗೆ ಗಂಭೀರ ವಿವಾದ ಹುಟ್ಟಿಕೊಂಡಿದೆ ಎಂದು ಬಿಸ್ವಾಸ್ ಹೇಳಿದ್ದಾರೆ.&lt;/p&gt;&lt;p&gt;ಗೆದ್ದಿರುವ ಅನೇಕ ಪ್ರತಿನಿಧಿಗಳು ಈಗಾಗಲೇ ಪಕ್ಷವನ್ನು ತೊರೆದಿದ್ದಾರೆ ಅಥವಾ ಈಗಿನ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಬಂಡಾಯವೆದ್ದಿದ್ದಾರೆ. ಇದರಿಂದಾಗಿ, ಪಕ್ಷದ ನಿಜವಾದ ನಾಯಕತ್ವ ಯಾರ ಕೈಯಲ್ಲಿದೆ ಎಂಬ ಬಗ್ಗೆ ಅನಿಶ್ಚಿತತೆ ಸೃಷ್ಟಿಯಾಗಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.&lt;/p&gt;&lt;h3&gt;'ಅನಧಿಕೃತ ವಹಿವಾಟು' ನಡೆಯುವ ಅಪಾಯ&lt;/h3&gt;&lt;p&gt;ಈಗಾಗಲೇ ಸಹಿ ಮಾಡಿದ ಚೆಕ್&zwnj;ಗಳು ಚಲಾವಣೆಯಲ್ಲಿರುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಸ್ವಾಸ್, &quot;ಯಾವುದೇ ಕ್ಷಣದಲ್ಲಿ ಖಾತೆಯಿಂದ ಅಕ್ರಮವಾಗಿ ಹಣ ಡ್ರಾ ಆಗುವ ನಿಜವಾದ ಮತ್ತು ತಕ್ಷಣದ ಅಪಾಯವಿದೆ,&quot; ಎಂದು ಬರೆದಿದ್ದಾರೆ. ಸಮರ್ಥ ಪ್ರಾಧಿಕಾರದಿಂದ ಈ ವಿವಾದ ಬಗೆಹರಿಯುವವರೆಗೂ ಯಾವುದೇ ವಹಿವಾಟಿಗೆ ಅವಕಾಶ ನೀಡಬಾರದು ಎಂದು ಅವರು ಕೋರಿದ್ದಾರೆ.&lt;/p&gt;&lt;p&gt;&quot;ಈ ಕೂಡಲೇ ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಹಾಗಾಗಿ, ವಿವಾದ ಬಗೆಹರಿಯುವವರೆಗೂ ಸದರಿ ಖಾತೆಯಲ್ಲಿ ಯಾವುದೇ ವಹಿವಾಟಿಗೆ ಅನುಮತಿ ನೀಡಬಾರದೆಂದು ನಾನು ವಿನಂತಿಸುತ್ತೇನೆ,&quot; ಎಂದು ಪತ್ರದಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;ಸಿಪಿಐ(ಎಂ) ನಾಯಕನ ಪ್ರತಿಕ್ರಿಯೆ&lt;/h3&gt;&lt;p&gt;ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಸಿಪಿಐ(ಎಂ) ನಾಯಕ ಮುಸ್ತಾಫಿಜುರ್ ರಹಮಾನ್ ರಾಣಾ, &quot;ಟಿಎಂಸಿಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಬೇಕು. ಯಾಕೆಂದರೆ ಆ ಖಾತೆಗಳಲ್ಲಿರುವ ಎಲ್ಲಾ ಹಣವೂ ಅಕ್ರಮವಾದದ್ದು,&quot; ಎಂದು ಆರೋಪಿಸಿದ್ದಾರೆ. (ANI)&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/west-bengal-tmc-internal-conflict-aroop-biswas-asks-bank-to-freeze-party-accounts/articleshow-a259shk"/>
        </item>
        <item>
            <title><![CDATA[RSS Registration issue: ಖಾಸಗಿ ಸಂಘ-ಸಂಸ್ಥೆಗಳ ನೋಂದಣಿ ಕಡ್ಡಾಯವಲ್ಲ! | ಡಾ।। ಅರುಣ ಶ್ಯಾಮ್ ಲೇಖನ]]></title>
            <link>https://kannada.asianetnews.com/state/rss-registration-of-private-organizations-is-not-mandatory-rav/articleshow-b0amzmz</link>
            <guid isPermaLink="true">https://kannada.asianetnews.com/state/rss-registration-of-private-organizations-is-not-mandatory-rav/articleshow-b0amzmz</guid>
            <pubDate>Thu, 18 Jun 2026 08:35:40 +0530</pubDate>
            <description><![CDATA[ಭಾರತೀಯ ಸಂವಿಧಾನವು ಸಂಘ-ಸಂಸ್ಥೆಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕನ್ನು ನೀಡಿದೆ. ಈ ಸಂಸ್ಥೆಗಳ ನೋಂದಣಿಯು ಕಡ್ಡಾಯವಲ್ಲ, ಬದಲಾಗಿ ಐಚ್ಛಿಕವಾಗಿದ್ದು, ಸರ್ಕಾರಿ ಸವಲತ್ತುಗಳು ಮತ್ತು ಕಾನೂನಾತ್ಮಕ ವ್ಯಕ್ತಿತ್ವ ಪಡೆಯಲು ಮಾತ್ರ ನೋಂದಣಿ ಅವಶ್ಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvcasv3j3ccknddrz63ek5zq,imgname-----------------------2026-06-18t083049.843-1781751671921.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡಾ।। ಅರುಣ ಶ್ಯಾಮ್.ಎಂ&lt;/strong&gt;&lt;/p&gt;&lt;p&gt;ಹಿರಿಯ ವಕೀಲರು ಮತ್ತು ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್&lt;/p&gt;&lt;p&gt;ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ಭಾರತ. ಇಲ್ಲಿ ಪ್ರಜೆಗಳೇ ಪ್ರಭುಗಳು, ಜನರಿಂದ, ಜನರಿಗೋಸ್ಕರ, ಜನರೇ ನಡೆಸುವ ಸರ್ಕಾರದ ವ್ಯವಸ್ಥೆ ರೂಪಿಸಲಾಗಿದೆ. ಇಡೀ ದೇಶದ ವ್ಯವಸ್ಥೆ ಡಾ.ಬಿ.ಆರ್&zwnj;.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂಬ ಚೌಕಟ್ಟಿನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಂವಿಧಾನದ ಆಶೋತ್ತರಕ್ಕೆ ವಿರುದ್ಧವಾಗಿ ಯಾವುದೇ ಸಂಗತಿಗಳು ನಡೆಯುವಂತಿಲ್ಲ. ದೇಶದಲ್ಲಿ ಕಾನೂನು ಕೂಡ ಈ ವ್ಯಾಪ್ತಿಯಲ್ಲಿಯೇ ಇರಬೇಕಾಗುತ್ತದೆ. ವ್ಯಾಪ್ತಿ ಮೀರಿದ ಕಾನೂನು ಕೂಡ ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದಲ್ಲಿ ಅಸಿಂಧು ಅಥವಾ ಸಂವಿಧಾನ ವಿರೋಧಿ ಎಂದೇ ಘೋಷಿಸಲ್ಪಡುವುದು.&lt;/p&gt;&lt;p&gt;ಈ ದೇಶದ ಪ್ರಜೆಗಳಿಗೆ ಸಂವಿಧಾನದತ್ತವಾಗಿ ಬಂದಂತಹ ಮೂಲಭೂತ ಹಕ್ಕುಗಳಲ್ಲಿ ಸಂಘ, ಒಕ್ಕೂಟ ಮತ್ತು ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕನ್ನು ಸಂವಿಧಾನದ ಪರಿಚ್ಛೇದ ೧೯ (೧) (ಅ) ಅಡಿಯಲ್ಲಿ ಕಲ್ಪಿಸಲಾಗಿದೆ. ಹಾಗೆಯೇ ಸಂಘ, ಒಕ್ಕೂಟ ಮತ್ತು ಸಹಕಾರಿ ಸಂಘಗಳನ್ನು ಸ್ಥಾಪಿಸುವ, ನಡೆಸುವ ಅಥವಾ ಅಂತಹ ಸ್ಥಾಪಿತವಾದ ಸಂಘ-ಸಂಸ್ಥೆ, ಒಕ್ಕೂಟಗಳ ವ್ಯವಹಾರಗಳನ್ನು ಮುಕ್ತಾಯಗೊಳಿಸುವ ಹಕ್ಕುಗಳು ತನ್ನಿಂದ ತಾನೇ ಅಸ್ತಿತ್ವದಲ್ಲಿವೆ. ಸಂವಿಧಾನ ಕೇವಲ ಈ ಹಕ್ಕನ್ನು ನೀಡಿ ಒಕ್ಕೂಟಗಳನ್ನು ಸ್ಥಾಪಿಸುವ ಅಥವಾ ನಡೆಸುವ ಹಕ್ಕನ್ನು ನೀಡಿದೆಯೇ ಹೊರತು, ಎಲ್ಲಿಯೂ ಇಂತಹ ಸಂಘ, ಸಂಸ್ಥೆ ಮತ್ತು ಒಕ್ಕೂಟಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಹಾಗಾಗಿ ನೋಂದಣಿ ಎನ್ನುವುದು ಐಚ್ಛಿಕ ವಿಷಯವಾಗಿಯೇ ಉಳಿದುಕೊಂಡಿದೆ. ನ್ಯಾಯಾಲಯಗಳು ಕೂಡ ಹಲವಾರು ಪ್ರಕರಣಗಳಲ್ಲಿ ನೋಂದಣಿ ಕಡ್ಡಾಯವಲ್ಲ ಎಂದೇ ಹೇಳಿವೆ.&lt;/p&gt;&lt;h2&gt;ಅಪೇಕ್ಷೆ ಪಟ್ಟರಷ್ಟೇ ನೋಂದಣಿ&lt;/h2&gt;&lt;p&gt;ಸಂವಿಧಾನದ ಪರಿಚ್ಛೇದ ೧೯(4)ರ ಪ್ರಕಾರ ಸಂಘ, ಒಕ್ಕೂಟ, ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಲು ಕೊಟ್ಟ ಸ್ವಾತಂತ್ರ್ಯದಲ್ಲಿ ಕೆಲವೊಂದು ಮಿತಿಗಳನ್ನು ಕಾನೂನು ಮುಖಾಂತರ ಹೇರಲು ಸರ್ಕಾರಕ್ಕೆ ಅವಕಾಶ ಕೊಟ್ಟಿದೆ. ಅವುಗಳಲ್ಲಿ ದೇಶದ ಅಖಂಡತೆ, ಸಾರ್ವಭೌಮತ್ವ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಯ ಆಧಾರದಲ್ಲಿ ಕಾನೂನು ಮುಖಾಂತರ ನಿಯಂತ್ರಿಸಲು ಅವಕಾಶವಿದೆ. ಈ ವಿಷಯಕ್ಕೆ ಬರುವ ಕಾನೂನುಗಳೆಲ್ಲಾ ಸಂವಿಧಾನದ ಚೌಕಟ್ಟು ವ್ಯಾಪ್ತಿಯನ್ನು ಮೀರುವಂತಿಲ್ಲ ಮತ್ತು ಕಾನೂನಿನ ಹೊರತಾಗಿ ಈ ಮೂಲಭೂತ ಹಕ್ಕನ್ನು ನಿಯಂತ್ರಿಸುವ ಅವಕಾಶ ಇಲ್ಲ. ಸಂವಿಧಾನದ ಅನುಚ್ಛೇದ-೭ರಲ್ಲಿ ಪಟ್ಟಿ-೧ರ ಸಂಖ್ಯೆ-೪೪ ರಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಸಂಘ-ಸಂಸ್ಥೆಗಳ ವಿಚಾರಗಳ ಕಾನೂನನ್ನು ಮಾಡುವ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಅನುಚ್ಛೇದ ೭ರ ೨ನೇ ಪಟ್ಟಿಯ ಸಂಖ್ಯೆ ೩೨ರ ಪ್ರಕಾರ ರಾಜ್ಯ ಸರ್ಕಾರಗಳು ಕೂಡ ಆ ರಾಜ್ಯಕ್ಕೆ ಸೀಮಿತವಾದ ಸಂಘ-ಸಂಸ್ಥೆಗಳ ಕಾನೂನು ಹೊಂದಲು ಅವಕಾಶವಿದೆ. ಈ ರೀತಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಗೆ ಬರುವ ಸಂಘ-ಸಂಸ್ಥೆಗಳ ವಿಚಾರವಾಗಿ ಈಗಾಗಲೇ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿವೆ. ಈ ಎಲ್ಲಾ ಕಾನೂನುಗಳಲ್ಲಿ ಕೂಡ ಪ್ರಜೆಗಳಿಗೆ ತಮ್ಮದೇ ಆದ ಸಂಘ-ಸಂಸ್ಥೆಗಳನ್ನು ತಾವು ಅಪೇಕ್ಷೆ ಪಟ್ಟರೆ ನೋಂದಣಿ ಮಾಡಿಸಿಕೊಂಡು ಅನ್ವಯವಾಗುವ ಕಾನೂನಿನ ಅಡಿಯಲ್ಲಿ ತಮ್ಮ ಎಲ್ಲಾ ವ್ಯವಹಾರ ಹಾಗೂ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬಹುದು. ಆದರೆ, ನೋಂದಣಿ ಕೇವಲ ಐಚ್ಛಿಕ ವಿಷಯ ಎನ್ನುವಂಥದ್ದು ಬಹಳ ಮುಖ್ಯವಾದ ಸಂಗತಿ.&lt;/p&gt;&lt;p&gt;ಆದರೆ, ಕಾನೂನಿನ ಅಡಿಯಲ್ಲಿ ಬರುವಂತಹ ಅಥವಾ ಸರ್ಕಾರದ ಕೆಲವೊಂದು ಅನುಕೂಲತೆ ಅಥವಾ ಸವಲತ್ತುಗಳನ್ನು ಪಡೆಯಬೇಕಾದಾಗ ನೋಂದಣಿಯ ಅವಶ್ಯಕತೆ ಬರಬಹುದು. ಹಾಗಾಗಿಯೇ ಅನೇಕ ಖಾಸಗಿ ಸಂಘ-ಸಂಸ್ಥೆಗಳು ನಮ್ಮ ದೇಶದಲ್ಲಿ ಇಂದಿಗೂ ಕೂಡ ನೋಂದಣಿ ಮಾಡಿಸಿಕೊಳ್ಳದೇ ಅಸ್ತಿತ್ವದಲ್ಲಿವೆ. ನೋಂದಣಿಯಾಗದ ಖಾಸಗಿ ಸಂಘ-ಸಂಸ್ಥೆಗಳಿಗೂ ಕೂಡ ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ಖಾಯಂ ಖಾತೆ ಸಂಖ್ಯೆ (PAN Number) ಹೊಂದಲು ಕೂಡಾ ಅವಕಾಶ ಇದೆ. ಮಾತ್ರವಲ್ಲ, ತಮ್ಮ ವರ್ಷಾವಧಿ ಲೆಕ್ಕ-ಪತ್ರ ಸಲ್ಲಿಸಲೂ ಅವಕಾಶವಿದೆ. ಆದರೆ, ಕಲಂ ೮೦ಉ, ೧೨ಂ ಅಂತಹ ಅಡಿಯಲ್ಲಿ ಬರುವಂತಹ ಮಾನ್ಯತೆ ಅಥವಾ ವಿನಾಯಿತಿ ಪಡೆಯಲು ಬೇಕಾದಲ್ಲಿ ನೋಂದಣಿ ಅವಶ್ಯಕತೆ ಬರುತ್ತದೆ. ವ್ಯಕ್ತಿಗಳ ಸಮೂಹ (Body of Individuals) ಆಗಿ ಕಾರ್ಯ ನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ ಎಂದು ದೇಶದ ನ್ಯಾಯಾಲಯಗಳು ಬೇರೆ ಬೇರೆ ಪ್ರಕರಣಗಲ್ಲಿ ಹೇಳಿವೆ.&lt;/p&gt;&lt;h3&gt;ಲೆಕ್ಕ-ಪತ್ರ, ವ್ಯವಹಾರ ಮಾಡಲು ಅವಕಾಶ&lt;/h3&gt;&lt;p&gt;ಇನ್ನೊಂದು ವಿಶೇಷ ಸಂಗತಿ ಏನೆಂದರೆ, ಆರ್&zwnj;ಎಸ್ಎಸ್ ಸಂಗ್ರಹಿಸುವ ಗುರುದಕ್ಷಿಣೆ ತೆರಿಗೆ ಮೌಲ್ಯಮಾಪನದಿಂದ ವಿನಾಯಿತಿ ಹೊಂದಿದೆ ಎಂದು ಪಟನಾ ಉಚ್ಚ ನ್ಯಾಯಾಲಯವು &lsquo;February 22, 1994 Commissioner of Income Tax, Bihar Vs. Rashtriya Swayam Sevak Sangh\B&rsquo; ಪ್ರಕರಣದಲ್ಲಿ ತೀರ್ಪು ನೀಡಿರುವುದರಿಂದ ಖಾಸಗಿ ಸಂಘ-ಸಂಸ್ಥೆಗಳಿಗೆ ಸ್ವಯಂ ಪ್ರೇರಿತವಾಗಿ ನೀಡುವಂತಹ ದಕ್ಷಿಣೆ ತೆರಿಗೆಯಿಂದ ವಿನಾಯಿತಿ ಹೊಂದಿದೆ ಎನ್ನುವುದು ಉಲ್ಲೇಖನೀಯ ಸಂಗತಿ. ಸಂಘಟನಾತ್ಮಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸಂಪರ್ಕ, ಸಂವಾದ, ಅಭ್ಯಾಸ, ವರ್ಗ, ಕಾರ್ಯಾಗಾರ, ವಿಕಾಸ ವರ್ಗ ಇತ್ಯಾದಿಗಳನ್ನು ಖಾಸಗಿ ಸಂಘ, ಸಂಸ್ಥೆ, ಒಕ್ಕೂಟ ನಡೆಸಲು ಸ್ವಾತಂತ್ರ್ಯವನ್ನು ಹೊಂದಿದೆ. ಆದರೆ, ಆಸ್ತಿ-ಪಾಸ್ತಿ ಅಥವಾ ಕೆಲವೊಂದು ಕಾನೂನಿನಡಿಯಲ್ಲಿ ವ್ಯವಹಾರ ನಡೆಸಲು ನ್ಯಾಸ ಕಾಯ್ದೆ-೧೮೮೨, ಸಂಘಗಳ ನೋಂದಣಿ ಕಾಯ್ದೆ-೧೮೬೦, ಸಹಕಾರಿ ಸಂಘಗಳ ಕಾಯ್ದೆ, ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆ ಇತ್ಯಾದಿ ಕಾನೂನಿನ ಅಡಿಯಲ್ಲಿ ನೋಂದಾಯಿಸಿದ ಸಂಸ್ಥೆಗಳ ಮುಖಾಂತರವೇ ಹೊಂದಬೇಕಾಗುತ್ತದೆ. ಈ ರೀತಿ ಆಸ್ತಿ-ಪಾಸ್ತಿ ಹೊಂದಿದ ಸಂಘ-ಸಂಸ್ಥೆಗಳು ತಮ್ಮ ಸೈದ್ಧಾಂತಿಕ ಅಥವಾ ವೈಚಾರಿಕ ವಿಷಯಗಳ ಪ್ರಚಾರ, ಪ್ರಸಾರ ಇತ್ಯಾದಿಗಳನ್ನು ನೋಂದಣಿ ಇಲ್ಲದಂತಹ ಖಾಸಗಿ ಸಂಘ, ಒಕ್ಕೂಟ, ಸಂಸ್ಥೆಯಾಗಿ ನೋಂದಾವಣಿ ರಹಿತವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಖಾಸಗಿ ಸಂಘ-ಸಂಸ್ಥೆಗಳು ತಮ್ಮ ರಾಷ್ಟ್ರಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಅಥವಾ ಶಾಖಾ ಮಟ್ಟದಲ್ಲಿ ಶಾಶ್ವತ ಖಾತೆ ಸಂಖ್ಯೆ (PAN Number) ಹೊಂದಿ ವಾರ್ಷಿಕ ಲೆಕ್ಕ-ಪತ್ರ, ವ್ಯವಹಾರ ಮಾಡಲು ಕೂಡ ಅವಕಾಶವಿದೆ.&lt;/p&gt;&lt;h3&gt;ಸರ್ಕಾರಿ ಸವಲತ್ತು ಬೇಕಿದ್ದಾಗ ನೋಂದಣಿ ಕಡ್ಡಾಯ&lt;/h3&gt;&lt;p&gt;ನೋಂದಾಯಿತ ಅಥವಾ ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳ ಬಗ್ಗೆ ಹೇಳುವುದಾದರೆ, ಒಂದು ಸಂಘ ಅಥವಾ ಸಂಸ್ಥೆ ನೋಂದಣಿ ಆದಾಗ ಅಂತಹ ಸಂಘ ಅಥವಾ ಸಂಸ್ಥೆ ಕಾನೂನಿನ ದೃಷ್ಟಿಯಲ್ಲಿ ಒಂದು ಕಾನೂನಿನ ವ್ಯಕ್ತಿತ್ವವನ್ನು (Legal Entity)) ಪಡೆಯುತ್ತದೆ. ಮಾತ್ರವಲ್ಲ, ಅದರ ಸದಸ್ಯರ ಜವಾಬ್ದಾರಿಗಳು, ನೋಂದಾವಣಿಯಾಗದ ಸಂಘ-ಸಂಸ್ಥೆಗಳ ಸದಸ್ಯರಿಗಿಂತ ಭಿನ್ನವಾಗಿರುತ್ತದೆ. ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಜವಾಬ್ದಾರಿ ಕಾನೂನಿನ ಅಡಿಯಲ್ಲಿ ಹೆಚ್ಚಾಗಿರುತ್ತದೆ. ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳು ಕೂಡ ಬ್ಯಾಂಕ್ ಖಾತೆ ಹೊಂದಲು, ಬ್ಯಾಂಕ್ ವ್ಯವಹಾರಗಳನ್ನು ನಡೆಸಲು ಮತ್ತು ದೇಣಿಗೆ ಸೇರಿದಂತೆ ಆದಾಯ, ಖರ್ಚು-ವೆಚ್ಚ ಇತ್ಯಾದಿಗಳನ್ನು ನಡೆಸಲು ಕೂಡ ಅಧಿಕಾರವನ್ನು ಹೊಂದಿವೆ. ಆದರೆ, ವಿದೇಶಿ ಮೂಲಕ ಹಣಕಾಸು ಲೇವಾದೇವಿ, ಭಾರತೀಯ ಹಣಕಾಸು ಇತ್ಯಾದಿ ಹಣಕಾಸು ವ್ಯವಹಾರಗಳನ್ನು ನಡೆಸುವ ಸಂದರ್ಭದಲ್ಲಿ &lsquo;F.C.R.A&rsquo; ಅನುಮತಿ ಪಡೆಯಲು ನೋಂದಣಿ ಅವಶ್ಯಕತೆ ಇದೆ. ನೋಂದಣಿಯಾಗದ ಸಂಘ-ಸಂಸ್ಥೆ, ಒಕ್ಕೂಟ, ವ್ಯಕ್ತಿಗಳ ಸಮೂಹ ಸಂವಿಧಾನದತ್ತವಾದ ಇತರೆ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಹಕ್ಕು ಹೊಂದಿದ್ದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಆಯುಧ ರಹಿತವಾಗಿ ಒಂದೆಡೆ ಒಗ್ಗೂಡುವ ಸ್ವಾತಂತ್ರ್ಯ, ದೇಶದಾದ್ಯಂತ ಓಡಾಡುವ ಸ್ವಾತಂತ್ರ್ಯ,ದೇಶದ ಯಾವುದೇ ಭಾಗದಲ್ಲಿ ನೆಲೆಸುವ ಮತ್ತು ವೃತ್ತಿ, ವ್ಯಾಪಾರ, ವಹಿವಾಟು ಇತ್ಯಾದಿಗಳನ್ನು ನಡೆಸುವಾಗ ಕೂಡ ಜೊತೆಯಾಗಿ ನಡೆಸಲು ಅಡ್ಡಿಯಿಲ್ಲ. ಕೇವಲ ಸರ್ಕಾರಿ ಸವಲತ್ತು, ಮಾನ್ಯತೆಗಳು ಬೇಕಾದಾಗ ನೋಂದಣಿ ಕಡ್ಡಾಯ.&lt;/p&gt;&lt;p&gt;ಸಾರ್ವಜನಿಕ ಸ್ಥಳಗಳಾದ ಆಟದ ಮೈದಾನ, ಪಾರ್ಕ್ ಇತ್ಯಾದಿಗಳು ಸಾರ್ವಜನಿಕ ಉಪಯೋಗಕ್ಕಾಗಿಯೇ ತೆರೆದಿಟ್ಟಂತಹ ಜಾಗಗಳಲ್ಲಿ ಇಂತಹ ಖಾಸಗಿ ಸಂಘ-ಸಂಸ್ಥೆಗಳು ತಮ್ಮ ಚಟುವಟಿಕೆ ನಡೆಸಲು ಕೂಡ ಅವಕಾಶ ಇದೆ. ಆದರೆ, ನಿರ್ಬಂಧಿತ ಸ್ಥಳಗಳಲ್ಲಿ ಮಾತ್ರ ಅನುಮತಿ ಪಡೆದು ಚಟುವಟಿಕೆ ನಡೆಸಬೇಕಾಗುತ್ತದೆ. ನೋಂದಣಿ ಕಡ್ಡಾಯ ಮಾಡುವಂತಹ ಕಾನೂನು ತರಲು ಸಾಧ್ಯವಿಲ್ಲ ಮತ್ತು ತಂದರೂ ನ್ಯಾಯಾಲಯಗಳಲ್ಲಿ ಅದರ ಸಿಂಧುತ್ವವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rss-registration-of-private-organizations-is-not-mandatory-rav/articleshow-b0amzmz"/>
        </item>
        <item>
            <title><![CDATA[ಆರ್‌ಎಸ್‌ಎಸ್‌ನ ಲೆಕ್ಕ ಕೇಳಿದ ಬೆನ್ನಲ್ಲೇ ಖರ್ಗೆ ಕುಟುಂಬದ ಆಸ್ತಿ ಕೆದಕಿದ ಎಂಪಿ ರೇಣುಕಾಚಾರ್ಯ!]]></title>
            <link>https://kannada.asianetnews.com/politics/rss-registration-row-mp-renukacharya-attacks-priyank-kharge-rav/articleshow-binwl9u</link>
            <guid isPermaLink="true">https://kannada.asianetnews.com/politics/rss-registration-row-mp-renukacharya-attacks-priyank-kharge-rav/articleshow-binwl9u</guid>
            <pubDate>Thu, 18 Jun 2026 07:23:58 +0530</pubDate>
            <description><![CDATA[ಆರೆಸ್ಸೆಸ್ ಟೀಕಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಭದ್ರಾ ಡ್ಯಾಂ ಬಳಿ ಜಿಲೆಟಿನ್ ಬಳಸಿ ಏಕಶಿಲೆ ಸ್ಫೋಟಿಸುತ್ತಿರುವುದು ಡ್ಯಾಂನ ಸುರಕ್ಷತೆಗೆ ಅಪಾಯ ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvc6rz8xhezxqw0zjmj0c9qf,imgname-----------------------2026-06-18t071616.959-1781747449117.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರೆಸ್ಸೆಸ್&zwnj; ಟೀಕಿಸುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ&lt;/p&gt;&lt;p&gt;ಆರೆಸ್ಸೆಸ್&zwnj;ಗೆ ನೂರಾರು ವರ್ಷಗಳ ಇತಿಹಾಸವಿದೆ.&lt;/p&gt;&lt;p&gt;&lt;strong&gt;ದಾವಣಗೆರೆ (ಜೂ.18): &lt;/strong&gt;ಆರೆಸ್ಸೆಸ್ ನೋಂದಣಿ(RSS Registration) ಮಾಡಿಸುವಂತೆ ಮೋಹನ ಭಾಗವತ್&zwnj;(Mohan Bhagwath) ಅವರಿಗೆ ಪತ್ರ ಬರೆದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank kharge)ಗೆ ಅಧಿಕಾರದ ಮದ ಹೆಚ್ಚಾದಂತೆ ಕಾಣುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ(MP Renukacharya) ಹರಿಹಾಯ್ದಿದ್ದಾರೆ.&lt;/p&gt;&lt;p&gt;ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President Mallikarjun kharge)ಯವರ ಮಗ ಎಂಬುದನ್ನು ಬಿಟ್ಟರೆ ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಐಡೆಂಟಿಟಿ ಸಹ ಇಲ್ಲ. ಇಂತಹ ವ್ಯಕ್ತಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಆರೆಸ್ಸೆಸ್(RSS) ಬಗ್ಗೆ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಂಘವನ್ನು ನೋಂದಣಿ ಮಾಡಿಸುವಂತೆ ಪತ್ರ ಬರೆಯಲು ಪ್ರಿಯಾಂಕ್ ಖರ್ಗೆ ಯಾರು? ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲೇ ಆರೆಸ್ಸೆಸ್ ಅಸ್ತಿತ್ವಕ್ಕೆ ಬಂದಿದೆ. ಈ ವಿಚಾರವನ್ನು ಪ್ರಿಯಾಂಕ ಖರ್ಗೆ ಅರಿಯಲಿ ಎಂದರು.&lt;/p&gt;&lt;p&gt;ಆರ್&zwnj;ಡಿಪಿಆರ್&zwnj;, ಐಟಿ ಬಿಟಿ ಸಚಿವರಾಗಿ ಹಿಂದೆ ಇದೇ ಪ್ರಿಯಾಂಕ್ ಖರ್ಗೆ ಮಾಡಿದ ಸಾಧನೆ ಏನು? ರಾಜ್ಯದಲ್ಲಿ ಮಟ್ಕಾ, ಇಸ್ಪೀಟ್&zwnj; ಜೂಜಾಟ ಕೇಂದ್ರಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಇನ್ನೂ ಅನೇಕ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಐಜಿಪಿ, ಎಸ್ಪಿ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಮೊದಲು ಅಂತಹವುಗಳಿಗೆ ಪ್ರಿಯಾಂಕ್ ಖರ್ಗೆ ಕಡಿವಾಣ ಹಾಕಲಿ ಎಂದರು.&lt;/p&gt;&lt;h2&gt;ಆರೆಸ್ಸೆಸ್ ಟೀಕಿಸೋದು ಮೊದಲು ನಿಲ್ಲಿಸಿ:&lt;/h2&gt;&lt;p&gt;ಪ್ರಿಯಾಂಕ್ ಖರ್ಗೆ ನಿಮ್ಮ ಹಾಗೂ ನಿಮ್ಮ ತಂದೆಯ ಆಸ್ತಿ ಹಿಂದೆ ಎಷ್ಟು ಇತ್ತು? ಈಗ ಎಷ್ಟಾಗಿದೆ ಎಂಬುದನ್ನು, ಆಸ್ತಿಯ ಮೂಲ ಏನೆಂಬುದನ್ನು ಮೊದಲು ಬಹಿರಂಗಪಡಿಸಿ. ಪಿಎಫ್ಐ, ಎಸ್&zwnj;ಡಿಪಿಐ ಸಂಘಟನೆಗಳು ನೋಂದಣಿ ಆಗಿದೆಯಾ? ಮೊದಲು ದೇಶದ್ರೋಹಿ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಿ. ದೇಶಭಕ್ತ ಸಂಘಟನೆ ಆರೆಸ್ಸೆಸ್ ಬಗ್ಗೆ ಟೀಕಿಸುವುದನ್ನು ಮೊದಲು ನಿಲ್ಲಿಸಿ ಎಂದು ತಾಕೀತು ಮಾಡಿದರು.&lt;/p&gt;&lt;h3&gt;ಏನು ಕ್ರಮ ಕೈಗೊಂಡಿದ್ದೀರಿ?:&lt;/h3&gt;&lt;p&gt;ಅನಗತ್ಯವಾಗಿ ಹಿಂದುಗಳನ್ನು, ಸಂಘ ಪರಿವಾರವನ್ನು ಕೆಣಕಬೇಡಿ. ಇದೇ ರೀತಿ ನೀವು ಆಟವಾಡುತ್ತಿದ್ದರೆ ಮುಂಬರುವ 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನೆಲಕಚ್ಚುತ್ತದೆ. ವಿಧಾನಸೌಧದ 3ನೇ ಮಹಡಿಯಲ್ಲಿ ಪಾಕ್ ಪರ ಜೈಕಾರ ಹಾಕಿದ್ದ ನಿಮ್ಮ ಪಕ್ಷದ ಮುಖಂಡನ ವಿರುದ್ಧ ಎಫ್ಎಸ್&zwnj;ಎಲ್&zwnj; ವರದಿ ಬಂದಿದೆ. ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಸಂಘವನ್ನು ಕೆಣಕಿದರೆ ಸರ್ವನಾಶವಾಗುತ್ತೀರಿ ಎಂದ ರೇಣುಕಾಚಾರ್ಯ, ಸಂಘವನ್ನು ಟೀಕಿಸಿದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತನಗೆ ಸಿಎಂ ಮಾಡುತ್ತಾರೆಂದು ಪ್ರಿಯಾಂಕ್ ಖರ್ಗೆ ಅವರು ಅಂದುಕೊಂಡಿರಬಹುದು ಎಂದು ಕುಟುಕಿದರು.&lt;/p&gt;&lt;h3&gt;&amp;nbsp;ಭದ್ರಾ ಡ್ಯಾಂ ಬಳಿ ಜಿಲೆಟಿನ್ ಬಳಸಿ ಏಕಶಿಲೆ ಸ್ಫೋಟ: ಆರೋಪ&lt;/h3&gt;&lt;p&gt;ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಡ್ಯಾಂ ಬಲ ನಾಲೆಯಿಂದ ಕೇವಲ 800 ಮೀಟರ್ ದೂರದಲ್ಲಿ ಏಕಶಿಲೆಯನ್ನು ಜಿಲೆಟಿನ್&zwnj; ಕಡ್ಡಿಗಳನ್ನು ಇಟ್ಟು ಸ್ಫೋಟಿಸಿದ್ದು, ಇನ್ನೂ ನಾಲ್ಕೈದು ಸಲ ಸ್ಫೋಟಿಸುವ ಮಾಹಿತಿ ಇದೆ. ಇದು ಡ್ಯಾಂಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.18ರ ಮಧ್ಯಾಹ್ನ 2 ಗಂಟೆಗೆ ಜಿಲ್ಲೆಯ ರೈತರ ಒಕ್ಕೂಟದ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ರೈತ ಮುಖಂಡರು, ಅಚ್ಚುಕಟ್ಟು ರೈತರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಲಿದ್ದೇವೆ ಎಂದರು.&lt;/p&gt;&lt;p&gt;ಜಿಲೆಟಿನ್ ಇಟ್ಟು ಏಕಶಿಲೆ ಸ್ಫೋಟಿಸಿದರೆ ಭದ್ರಾ ಡ್ಯಾಂಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಜಾಕ್ ವೆಲ್ ನಿರ್ಮಿಸಲು ಏಕಶಿಲೆ ಸ್ಫೋಟಿಸುವ ಕೆಲಸವಾಗುತ್ತಿದೆ. ಜಾಕ್&zwnj;ವೆಲ್&zwnj; ಹೆಸರಲ್ಲಿ ಭದ್ರಾ ಡ್ಯಾಂ ಭದ್ರಗೊಳಿಸುವ ಕೆಲಸ ಆಗಬಾರದು. ಕುಡಿಯುವ ನೀರು ಪೂರೈಸಲು ನಮ್ಮ ವಿರೋಧವಿಲ್ಲ. ಆದರೆ, ಅಚ್ಚುಕಟ್ಟು ರೈತರು, ಭದ್ರಾ ಡ್ಯಾಂಗೆ ಸಂಕಷ್ಟ ತಂದೊಡ್ಡುವುದಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಚಪಡಿಸಿದರು.&lt;/p&gt;&lt;p&gt;ಭದ್ರಾ ಡ್ಯಾಂ ನೀರನ್ನೇ ನೆಚ್ಚಿಕೊಂಡು ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದಲೂ ಜಿಲೆಟಿನ್ ಬಳಸಿ, ಏಕಶಿಲೆ ಸ್ಫೋಟಿಸುತ್ತಿದ್ದಾರೆ. ಜೂ.18ರಂದು ಸ್ಥಳ ಪರಿಶೀಲಿಸಿದ ನಂತರ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ, ಭದ್ರಾ ಡ್ಯಾಂ ಅಭದ್ರಗೊಳಿಸದಂತೆ ಒತ್ತಾಯಿಸಲಿದ್ದೇವೆ. ಒಂದುವೇಳೆ ಭದ್ರಾ ಡ್ಯಾಂಗೆ ಅಪಾಯವಾದರೆ ಲಕ್ಷಾಂತರ ಹೆಕ್ಟೇರ್&zwnj; ಭೂಮಿಯನ್ನು, ಭದ್ರಾ ಡ್ಯಾಂ ನೀರನ್ನೇ ಅವಲಂಭಿಸಿದ ರೈತರ ಪಾಡೇನು ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.&lt;/p&gt;&lt;p&gt;ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಬಿಜೆಪಿ ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳ್, ಎನ್.ಎಚ್.ಹಾಲೇಶ ನಾಯ್ಕ, ಜಯರುದ್ರಪ್ಪ ಇತರರು ಇದ್ದರು.&lt;/p&gt;&lt;p&gt;ಕಾಂಗ್ರೆಸ್ಸಿಗೆ ಹೊನ್ನಾಳಿ, ದಾವಣಗೆರೆಯಷ್ಟೇ ಅಲ್ಲ, ಇಡೀ ರಾಜ್ಯದಲ್ಲೇ ನರ ನಾಡಿ ಇಲ್ಲದಂತಾಗಿದೆ. ಅಭಿವೃದ್ಧಿ ಕಾಮಗಾರಿ ಮರೀಚಿಕೆಯಾಗಿವೆ. ಬಿಡದಿ ರೈತ ಭೂಮಿಯನ್ನು ಕಬಳಿಸಲು ಹೊರಟಿರುವುದು ಸರಿಯಲ್ಲ. ಈ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮಾತನಾಡುತ್ತಾರೆ. ನಿಮ್ಮ ಟೌನ್ ಶಿಪ್ ಯೋಜನೆ, ಕೈಗಾರಿಕಾ ಕಾರಿಡಾರನ್ನು ಬಂಜರು ಭೂಮಿಯಲ್ಲಿ ಮಾಡಿ. ಸಮೃದ್ಧವಾಗಿರುವ ಬಿಡದಿ ಕೃಷಿ ಭೂಮಿಯಲ್ಲಲ್ಲ.&lt;/p&gt;&lt;p&gt;&lt;strong&gt;- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.&lt;/strong&gt;&lt;/p&gt;&lt;p&gt;-&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/rss-registration-row-mp-renukacharya-attacks-priyank-kharge-rav/articleshow-binwl9u"/>
        </item>
        <item>
            <title><![CDATA[MLC Election Drama: ಅಡ್ಡ ಮತ ಭೀತಿಯಲ್ಲಿ ಎಂಎಲ್ಸಿ ಚುನಾವಣೆ! 7ನೇ ಸ್ಥಾನ ಗೆಲ್ಲೋರ್‍ಯಾರು?]]></title>
            <link>https://kannada.asianetnews.com/politics/karnataka-mlc-elections-amid-fear-of-cross-voting-who-will-win-the-7th-seat-rav/articleshow-cgc86bi</link>
            <guid isPermaLink="true">https://kannada.asianetnews.com/politics/karnataka-mlc-elections-amid-fear-of-cross-voting-who-will-win-the-7th-seat-rav/articleshow-cgc86bi</guid>
            <pubDate>Thu, 18 Jun 2026 05:16:55 +0530</pubDate>
            <description><![CDATA[ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಡ್ಡಮತದಾನದ ಭೀತಿ ಹೆಚ್ಚಾಗಿದೆ. ಸಂಖ್ಯಾಬಲದ ಕೊರತೆಯ ನಡುವೆಯೂ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್&zwnj;ನ 5ನೇ ಅಭ್ಯರ್ಥಿ ಮತ್ತು ಜೆಡಿಎಸ್ ನಡುವಿನ ಪೈಪೋಟಿಯಿಂದ 7ನೇ ಸ್ಥಾನದ ಕುತೂಹಲ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvbzjksxkhyb2q9sz07a1pd5,imgname-----------------------2026-06-18t051434.846-1781739900733.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.18): &lt;/strong&gt;ರಾಜಕೀಯ ಪಕ್ಷಗಳ ಅಡ್ಡಮತದಾನದ ಭೀತಿ ನಡುವೆ ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದ್ದು, ಏಳನೇ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಅಂತಿಮ ಘಟ್ಟಕ್ಕೆ ತಲುಪಿದೆ.&lt;/p&gt;&lt;p&gt;ವಿಧಾನಸಭೆಯಲ್ಲಿ ಸಂಖ್ಯಾಬಲದ ಕೊರತೆ ಇದ್ದರೂ ಪ್ರತಿಪಕ್ಷ ಜೆಡಿಎಸ್&zwnj; ತನ್ನ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸಡ್ಡು ಹೊಡೆದಿದೆ. ಕಾಂಗ್ರೆಸ್ ತನ್ನ ಐದನೇ ಅಭ್ಯರ್ಥಿ ಗೆಲ್ಲಿಸಲು ಬೇಕಾದ ಎಲ್ಲ ರಣತಂತ್ರಗಳನ್ನೂ ಹೆಣೆದಿದೆ. ಗುರುವಾರ ಸಂಜೆ ಹೊತ್ತಿಗೆ ಎಲ್ಲವೂ ತಿಳಿಯಾಗಲಿದೆ.&lt;/p&gt;&lt;p&gt;ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿಧಾನಸೌಧದ ಒಂದನೇ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಲಿದೆ. ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ಜರುಗಲಿದೆ. ವಿಧಾನಸಭೆಯ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರು ಬುಧವಾರ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದರು. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;p&gt;ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ಈ ಚುನಾವಣೆಯಲ್ಲಿ ಕಾಂಗ್ರೆಸ್&zwnj; ಐವರು, ಬಿಜೆಪಿ ಇಬ್ಬರು ಮತ್ತು ಜೆಡಿಎಸ್&zwnj; ಓರ್ವ ಸೇರಿ ಒಟ್ಟು ಎಂಟು ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇಲ್ಲಿ ಒಂದು ಸ್ಥಾನ ಗೆಲ್ಲಲು 28 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳ ಶಾಸಕರ ಸಂಖ್ಯಾಬಲ ನೋಡಿದಾಗ, ಕಾಂಗ್ರೆಸ್&zwnj; 135, ಬಿಜೆಪಿ 62 ಮತ್ತು ಜೆಡಿಎಸ್&zwnj; 18 ಶಾಸಕರ ಸಂಖ್ಯಾಬಲ ಹೊಂದಿವೆ.&lt;/p&gt;&lt;p&gt;ಈ ಶಾಸಕ ಸಂಖ್ಯಾಬಲದ ಆಧಾರದ ಮೇಲೆ 7 ಸ್ಥಾನಗಳ ಪೈಕಿ ಕಾಂಗ್ರೆಸ್&zwnj; 4 ಮತ್ತು ಬಿಜೆಪಿ 2 ಸ್ಥಾನ ಗೆಲ್ಲುವುದು ಖಚಿತ. ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳುವಷ್ಟು ಶಾಸಕರ ಸಂಖ್ಯಾಬಲ ಇಲ್ಲದ ಜೆಡಿಎಸ್&zwnj;, ಕಾಂಗ್ರೆಸ್&zwnj;ನ 5ನೇ ಅಭ್ಯರ್ಥಿಗೆ ಪೈಪೋಟಿ ನೀಡಲು ತನ್ನ ಅಭ್ಯರ್ಥಿ ಕಣಕ್ಕಿಳಿಸಿದೆ. ಹೀಗಾಗಿ ಈ ಚುನಾವಣೆ ರೋಚಕತೆ ಹುಟ್ಟು ಹಾಕಿದೆ. ಅಡ್ಡಮತದಾನದ ಭೀತಿಯಲ್ಲಿ ಕಾಂಗ್ರೆಸ್&zwnj; ಮತ್ತು ಜೆಡಿಎಸ್&zwnj; ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್&zwnj;ನಲ್ಲಿ ಇರಿಸಿಕೊಂಡು ಗೆಲುವಿಗೆ ಕೊನೆಯ ಹಂತದ ತಂತ್ರಗಾರಿಕೆಯಲ್ಲಿ ನಿರತವಾಗಿವೆ.&lt;/p&gt;&lt;h2&gt;ಗೆಲುವಿನ ಲೆಕ್ಕಾಚಾರ ಹೇಗೆ?:&lt;/h2&gt;&lt;p&gt;ಒಂದು ಸ್ಥಾನ ಗೆಲ್ಲಲು 28 ಮತ ಬೇಕು. ವಿಧಾನಸಭೆಯಲ್ಲಿ 135 ಶಾಸಕರ ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್&zwnj; 4 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. 5ನೇ ಅಭ್ಯರ್ಥಿ ಗೆಲುವಿಗೆ ಉಳಿಕೆ 23 ಮತಗಳ ಜೊತೆಗೆ ಮೂವರು ಪಕ್ಷೇತರರು ಮತ್ತು ಇಬ್ಬರು ಬಿಜೆಪಿ ಉಚ್ಚಾಟಿತ ಶಾಸಕರ ಮತ ಪಡೆದು ಗೆಲ್ಲಲು ತಂತ್ರಗಾರಿಕೆ ರೂಪಿಸಿದೆ. ಇನ್ನು 62 ಶಾಸಕರ ಸಂಖ್ಯಾಬಲದ ಬಿಜೆಪಿ ತ್ರಾಸವಿಲ್ಲದೆ 2 ಸ್ಥಾನ ಗೆಲ್ಲಲಿದೆ. ಕೇವಲ 18 ಶಾಸಕರನ್ನು ಹೊಂದಿರುವ ಜೆಡಿಎಸ್&zwnj;, ಬಿಜೆಪಿಯ ಉಳಿಕೆ ಮತ 6, ಪಕ್ಷೇತರ ಶಾಸಕ ಗಾಲಿ ಜನಾರ್ದನ ರೆಡ್ಡಿ, ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್&zwnj; ಸೇರಿ 26 ಮತದ ಜೊತೆಗೆ ಕಾಂಗ್ರೆಸ್&zwnj;ನ ಇಬ್ಬರು ಅತೃಪ್ತ ಶಾಸಕರನ್ನು ಸೆಳೆದು ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಪೈಪೋಟಿಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಉಳಿಯುತ್ತಾಳೆ ಎಂಬುದು ಗುರುವಾರ ಸಂಜೆ 5 ಗಂಟೆ ಬಳಿಕ ಗೊತ್ತಾಗಲಿದೆ.&lt;/p&gt;&lt;p&gt;&lt;strong&gt;ಗೆಲುವಿನ ಲೆಕ್ಕಾಚಾರ&lt;/strong&gt;&lt;/p&gt;&lt;ul&gt; &lt;li&gt;ಒಟ್ಟು 7 ಸ್ಥಾನಗಳಿಗೆ ಚುನಾವಣೆ. ಒಂದು ಸ್ಥಾನ ಗೆಲ್ಲಲು ತಲಾ 28 ಶಾಸಕರ ಮತಗಳು ಬೇಕು&lt;/li&gt; &lt;li&gt;ಕಾಂಗ್ರೆಸ್&zwnj; ಬಳಿ 135 ಶಾಸಕರಿದ್ದಾರೆ. ನಿರಾಯಾಸವಾಗಿ 4 ಸ್ಥಾನಗಳನ್ನು ಆ ಪಕ್ಷ ಗೆಲ್ಲಬಹುದು&lt;/li&gt; &lt;li&gt;ಹೆಚ್ಚುವರಿ 23 ಮತ, 3 ಪಕ್ಷೇತರರು, 2 ಬಿಜೆಪಿ ಉಚ್ಚಾಟಿತರ ಬಲದಿಂದ 5ನೇ ಸ್ಥಾನ ಗೆಲ್ಲಲು ಯತ್ನ&lt;/li&gt; &lt;li&gt;ಪ್ರತಿಪಕ್ಷ ಬಿಜೆಪಿ ಬಳಿ 62 ಶಾಸಕರಿದ್ದು, ಯಾವುದೇ ತ್ರಾಸವಿಲ್ಲದೆ 2 ಸ್ಥಾನಗಳನ್ನು ಪಡೆಯಲಿದೆ&lt;/li&gt; &lt;li&gt;18 ಶಾಸಕರನ್ನು ಹೊಂದಿರುವ ಜೆಡಿಎಸ್&zwnj; ಬಳಿ 1 ಸ್ಥಾನ ಗೆಲ್ಲುವುದಕ್ಕೂ ಅಗತ್ಯ ಬಲ ಇಲ್ಲ&lt;/li&gt; &lt;li&gt;ಆದರೆ ಬಿಜೆಪಿ ಬಳಿ ಉಳಿಯುವ 6 ಮತ, ಯತ್ನಾಳ್&zwnj;, ರೆಡ್ಡಿ ಮತ ಸೇರಿದರೂ 26 ಮತ ಆಗುತ್ತೆ&lt;/li&gt; &lt;li&gt;ಕಾಂಗ್ರೆಸ್ಸಿನ ಇಬ್ಬರು ಅತೃಪ್ತರನ್ನು ಸೆಳೆದು ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಯತ್ನದಲ್ಲಿದೆ&lt;/li&gt;&lt;/ul&gt;&lt;h3&gt;ಕಣದಲ್ಲಿರುವವರು&lt;/h3&gt;&lt;p&gt;ಕಾಂಗ್ರೆಸ್&zwnj;ನಿಂದ ಬಿ.ಕೆ.ಹರಿಪ್ರಸಾದ್&zwnj;, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್, ಬಿ.ಎಸ್&zwnj;.ಶಿವಣ್ಣ, ವಿನಯ್&zwnj; ಕಾರ್ತಿಕ್ ಪ್ರಕಾಶ್&zwnj;. ಬಿಜೆಪಿಯಿಂದ ಕೌಟಿಲ್ಯ ರಘು ಮತ್ತು ಲಿಂಗರಾಜ್&zwnj; ಪಾಟೀಲ್&zwnj;. ಜೆಡಿಎಸ್&zwnj;ನಿಂದ ಗೋವಿಂದರಾಜು&lt;/p&gt;&lt;h3&gt;ದಳ ಶಾಸಕರೂ ಈಗ ರೆಸಾರ್ಟ್&zwnj;ಗೆ&lt;/h3&gt;&lt;p&gt;ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ಹಿನ್ನೆಲೆಯಲ್ಲಿ ಅಡ್ಡಮತದಾನದ ಭೀತಿಯಲ್ಲಿ ಜೆಡಿಎಸ್&zwnj; ಪಕ್ಷವು ತನ್ನ ಶಾಸಕರನ್ನು ದೇವನಹಳ್ಳಿ ಸಮೀಪದ ರೆಸಾರ್ಟ್&zwnj;ಗೆ ಸ್ಥಳಾಂತರಿಸಿದೆ.&lt;/p&gt;&lt;p&gt;&lt;strong&gt;ರೆಸಾರ್ಟಲ್ಲಿ ಕಾಂಗ್ರೆಸ್&zwnj; ಅಣಕು ಮತದಾನ&lt;/strong&gt;&lt;/p&gt;&lt;p&gt;ಬೆಂಗಳೂರು: ವಿಧಾನ ಪರಿಷತ್&zwnj;ನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಡದಿಯ ಖಾಸಗಿ ರೆಸಾರ್ಟ್&zwnj;ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್&zwnj;ನ ಶಾಸಕರಿಗೆ ಬುಧವಾರ ಅಣಕು ಮತದಾನದ ಮೂಲಕ ತರಬೇತಿ ನೀಡಲಾಯಿತು. ಬಿಜೆಪಿಯ ಉಚ್ಚಾಟಿತ ಶಾಸಕರಾದ ಎಸ್&zwnj;.ಟಿ. ಸೋಮಶೇಖರ್&zwnj;, ಶಿವರಾಂ ಹೆಬ್ಬಾರ್&zwnj; ಕೂಡ ಭಾಗವಹಿಸಿದ್ದರು.&lt;/p&gt;&lt;p&gt;&lt;strong&gt;ಅನಾಮಿಕ ಕರೆ ಸ್ವೀಕರಿಸಬೇಡಿ&lt;/strong&gt;&lt;/p&gt;&lt;p&gt;ಜೆಡಿಎಸ್&zwnj; ಅಭ್ಯರ್ಥಿಯು ಹೆಂಡತಿ, ಮಗ, ಕಾರು ಡ್ರೈವರ್&zwnj; ದೂರವಾಣಿ ಸಂಖ್ಯೆ ಮೂಲಕ ಕಾಂಗ್ರೆಸ್&zwnj; ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಮತಚಲಾವಣೆ ಆಗುವವರೆಗೆ ಅನಾಮಿಕ ಕರೆಗಳನ್ನು ಸ್ವೀಕರಿಸಬೇಡಿ.&lt;/p&gt;&lt;p&gt;ಡಿ.ಕೆ. ಶಿವಕುಮಾರ್&zwnj;, ಸಿಎಂ&lt;/p&gt;&lt;p&gt;&lt;strong&gt;ನಮ್ಮದು ಸಣ್ಣ ಪಕ್ಷ, ಗೆಲ್ಲಲು ಆಗುತ್ತಾ?&lt;/strong&gt;&lt;/p&gt;&lt;p&gt;ನಾವೇನು ಆಪರೇಷನ್&zwnj; ಮಾಡೋದು? ನಮ್ಮದು ಸಣ್ಣ ಪಕ್ಷ. ಮ್ಯಾನ್&zwnj; ಪವರ್&zwnj;, ಮಸಲ್&zwnj; ಪವರ್&zwnj;, ಮನಿ ಪವರ್&zwnj; ಇರುವವರ ಎದುರು ನಾವು ಫೈಟ್&zwnj; ಮಾಡಲು ಆಗುತ್ತಾ?&lt;/p&gt;&lt;p&gt;ಎಚ್&zwnj;.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ&lt;/p&gt;&lt;p&gt;&lt;strong&gt;ಪಕ್ಷ ಸದಸ್ಯ ಬಲ&lt;/strong&gt;&lt;/p&gt;&lt;ul&gt; &lt;li&gt;ಕಾಂಗ್ರೆಸ್&zwnj; 135&lt;/li&gt; &lt;li&gt;ಬಿಜೆಪಿ 62&lt;/li&gt; &lt;li&gt;ಬಿಜೆಪಿಯಿಂದ ಉಚ್ಚಾಟಿತರು 3&lt;/li&gt; &lt;li&gt;ಜೆಡಿಎಸ್&zwnj; 18&lt;/li&gt; &lt;li&gt;ಕೆಆರ್&zwnj;ಪಿಪಿ 1&lt;/li&gt; &lt;li&gt;ಎಸ್&zwnj;ಕೆಪಿ 1&lt;/li&gt; &lt;li&gt;ಸ್ವತಂತ್ರ 2&lt;/li&gt; &lt;li&gt;ಖಾಲಿ 2&lt;/li&gt; &lt;li&gt;ಒಟ್ಟು 224&lt;/li&gt;&lt;/ul&gt;&lt;p&gt;--&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-mlc-elections-amid-fear-of-cross-voting-who-will-win-the-7th-seat-rav/articleshow-cgc86bi"/>
        </item>
        <item>
            <title><![CDATA[Karnataka Congress: ಎಸ್‌ಐಆರ್ ಜನಜಾಗೃತಿಗಾಗಿ ರಾಜ್ಯದ 5 ಕಡೆ ಕಾಂಗ್ರೆಸ್ ಬೃಹತ್ ಸಮಾವೇಶ! ಯಾವಾಗ, ಎಲ್ಲೆಲ್ಲಿ ಕಾರ್ಯಕ್ರಮ?]]></title>
            <link>https://kannada.asianetnews.com/politics/karnataka-congress-conventions-in-5-parts-of-state-raise-awareness-about-sir-rav/articleshow-d177k7o</link>
            <guid isPermaLink="true">https://kannada.asianetnews.com/politics/karnataka-congress-conventions-in-5-parts-of-state-raise-awareness-about-sir-rav/articleshow-d177k7o</guid>
            <pubDate>Wed, 17 Jun 2026 07:53:27 +0530</pubDate>
            <description><![CDATA[&lt;p&gt;ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯಿಂದ (SIR) ತಮ್ಮ ಮತಬ್ಯಾಂಕ್&zwnj;ಗೆ ಸೇರಿದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರ ಹೆಸರುಗಳು ಕೈಬಿಡುವ ಆತಂಕ. ಕಾಂಗ್ರೆಸ್(Congress) ಇದೆ. ಇದನ್ನು ತಡೆಯಲು, ರಾಜ್ಯಾದ್ಯಂತ ಜೂ.23 ರಿಂದ ಜೂ.30 ರವರೆಗೆ ಐದು ಬೃಹತ್ ಜಾಗೃತಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzhdmkgbd5a6zgrtse7mevx,imgname-----------------------2026-04-12t055752.365-1775953695344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.17): &lt;/strong&gt;ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಬಗ್ಗೆ ಕಾಂಗ್ರೆಸ್&zwnj; ಶಾಸಕಾಂಗ ಪಕ್ಷ(Congress Legislature Party)ದಲ್ಲಿ ತೀವ್ರ ಆತಂಕ ವ್ಯಕ್ತವಾಗಿದ್ದು, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಸೇರಿ ಕಾಂಗ್ರೆಸ್&zwnj;ನ ಮತ ಬ್ಯಾಂಕ್&zwnj; ಮತಹಕ್ಕಿನಿಂದ ದೂರವಾಗದಂತೆ ಎಚ್ಚರವಹಿಸಲು ತೀರ್ಮಾನಿಸಲಾಗಿದೆ.&lt;/p&gt;&lt;p&gt;ಇದಕ್ಕಾಗಿ ರಾಜ್ಯಾದ್ಯಂತ ಮತದಾರರಿಗೆ ಜಾಗೃತಿ ಮೂಡಿಸಲು ಜೂ.23 ರಿಂದ ಜೂ.30 ರವರೆಗೆ ಐದು ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಬಿಎಲ್&zwnj;ಎಗಳ ಮೂಲಕ ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಿಂದ ಅರ್ಹರು ಹೊರಗುಳಿಯದಂತೆ ಎಚ್ಚರವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಬಿಡದಿಯ ವಂಡರ್&zwnj; ಲಾ ರೆಸಾರ್ಟ್&zwnj;ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್&zwnj; ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್&zwnj; ಉಸ್ತುವಾರಿ ರಣದೀಪ್&zwnj; ಸಿಂಗ್&zwnj; ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ಎಸ್&zwnj;ಐಆರ್&zwnj; ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದರು.&lt;/p&gt;&lt;p&gt;ಕಾಂಗ್ರೆಸ್&zwnj; ಮೈಮರೆತರೆ ಎಸ್&zwnj;ಐಆರ್&zwnj;ನಿಂದ ತುಂಬಾ ಅಪಾಯವಿದೆ. ಕಾಂಗ್ರೆಸ್&zwnj;ಗೆ ಮತ ಬ್ಯಾಂಕ್&zwnj; ಆಗಿರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ. ಹೀಗಾಗಿ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಬಿಎಲ್&zwnj;ಎಗಳ ಮೂಲಕ ಎಸ್&zwnj;ಐಆರ್&zwnj; ಬಗ್ಗೆ ಎಚ್ಚರವಹಿಸಬೇಕು. ಬ್ಲಾಕ್&zwnj; ಮಟ್ಟಕ್ಕೆ ಹೋಗಿ ಕೆಲಸ ಮಾಡಬೇಕು. ಯಾವ ಮತದಾರರ ಹೆಸರನ್ನೂ ಪಟ್ಟಿಯಿಂದ ತೆಗೆಯುತ್ತಿದ್ದರೂ ಅದನ್ನು ಉಳಿಸಲು ಅಗತ್ಯವಿರುವ ದಾಖಲೆ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.&lt;/p&gt;&lt;h2&gt;ರಾಜ್ಯದ 5 ಕಡೆ ಜನಜಾಗೃತಿ ಸಮಾವೇಶ:&lt;/h2&gt;&lt;p&gt;ಮತದಾರರ ಕಡೆಗೆ ನಡೆಯಲು ಕಾಂಗ್ರೆಸ್&zwnj; ತೀರ್ಮಾನಿಸಿದ್ದು, ಬೃಹತ್ ಜಾಗೃತಿ ಅಭಿಯಾನ ನಡೆಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಿದೆ. ನಾಲ್ಕೂ ಕಂದಾಯ ವಿಭಾಗ ಸೇರಿ ಐದು ಕಡೆ ಬೃಹತ್&zwnj; ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಜೂ.23 ರಂದು ಮಂಗಳೂರು ನಗರ, ಜೂ.25 ಹುಬ್ಬಳ್ಳಿ ನಗರ, ಜೂ.27 ರಂದು ಮೈಸೂರು, ಜೂ.29 ರಂದು ಕಲಬುರಗಿ ಹಾಗೂ ಜೂ.30 ರಂದು ಬೆಂಗಳೂರು ನಗರದಲ್ಲಿ ಬೃಹತ್&zwnj; ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3&gt;ಚುನಾವಣೆಗೆ ಸಜ್ಜಾಗಿ-ಶಾಸಕರಿಗೆ ಸಿಎಂ ಸೂಚನೆ:&lt;/h3&gt;&lt;p&gt;ಶಾಸಕರು ಜಿಪಂ, ತಾಪಂ, ಗ್ರಾಪಂ, ಜಿಬಿಎ ಚುನಾವಣೆ ಸಜ್ಜಾಗುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಸೂಚನೆ ನೀಡಿದ್ದಾರೆ. ಮುಂದಿನ ದಿನಗಳು ಸವಾಲಿನ ದಿನಗಳಾಗಿದ್ದು, ಪಂಚಾಯಿತಿ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ವಿಧಾನಸಭೆ ಚುನಾವಣೆವರೆಗೆ ಎಚ್ಚರವಹಿಸಿ ಕೆಲಸ ಮಾಡಬೇಕು ಎಂದು ತಿಳಿಸಿರುವುದಾಗಿ ಹೇಳಲಾಗಿದೆ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-congress-conventions-in-5-parts-of-state-raise-awareness-about-sir-rav/articleshow-d177k7o"/>
        </item>
        <item>
            <title><![CDATA[MLC Election: ಬಿಜೆಪಿಗೆ JDS ಗೆಲ್ಲೋದು ಇಷ್ಟವಿಲ್ಲ: ಅಚ್ಚರಿ ಹೇಳಿಕೆ ನೀಡಿದ STS, ಹೆಬ್ಬಾರ್]]></title>
            <link>https://kannada.asianetnews.com/politics/expelled-bjp-mlas-shivaram-hebbar-and-st-somashekar-have-said-they-will-vote-according-to-their-conscience-mrq/articleshow-fi7o55t</link>
            <guid isPermaLink="true">https://kannada.asianetnews.com/politics/expelled-bjp-mlas-shivaram-hebbar-and-st-somashekar-have-said-they-will-vote-according-to-their-conscience-mrq/articleshow-fi7o55t</guid>
            <pubDate>Thu, 18 Jun 2026 11:12:32 +0530</pubDate>
            <description><![CDATA[ವಿಧಾನಪರಿಷತ್ ಚುನಾವಣೆಯಲ್ಲಿ, ಬಿಜೆಪಿ ಉಚ್ಚಾಟಿತ ಶಾಸಕರಾದ ಶಿವರಾಂ ಹೆಬ್ಬಾರ್ ಮತ್ತು ಎಸ್&zwnj;ಟಿ ಸೋಮಶೇಖರ್ ಅವರು ತಮ್ಮ 'ಆತ್ಮಸಾಕ್ಷಿ'ಗೆ ಮತ ಹಾಕುವುದಾಗಿ ಹೇಳಿದ್ದಾರೆ. ಬಿಜೆಪಿಯು ತಮ್ಮನ್ನು ಸಂಪರ್ಕಿಸದ ಕಾರಣ ಅಸಮಾಧಾನಗೊಂಡಿದ್ದು, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರೂ ಇದೇ ರೀತಿಯ ಹೇಳಿಕೆ ನೀಡಿರುವುದು ಚುನಾವಣಾ ಕಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvckra0zede62ge6e0v7s05w,imgname-st-somashekhar-shivaram-hebbar-1781761058847.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ವಿಧಾನಪರಿಷತ್ ಚುನಾವಣೆಯ ಮತದಾನಕ್ಕೂ ಮುನ್ನ ಬಿಜೆಪಿ ಉಚ್ಚಾಟಿತ ಶಾಸಕರಾದ ಶಿವರಾಂ ಹೆಬ್ಬಾರ್ ಮತ್ತು ಎಸ್&zwnj;ಟಿ ಸೋಮಶೇಖರ್ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್, ಬಿಜೆಪಿ ಸೌಜನ್ಯಕ್ಕೂ ನಮಗೆ ಮತ ಕೇಳಿಲ್ಲ&lt;/p&gt;&lt;p&gt;ಬಿಜೆಪಿ ಇಷ್ಟು ವರ್ಷಗಳ ಬಳಿಕವೂ ಬುದ್ದಿ ಕಲಿತಿಲ್ಲ. ಹೀಗಾಗಿ ನಮಗೆ ಸ್ವಾಭಿಮಾನ ಇದೆಯಲ್ಲ. ಬಿಜೆಪಿಗೆ ಜೆಡಿಎಸ್ ಗೆಲ್ಲೋದು ಬೇಕಿಲ್ಲ. ಜೆಡಿಎಸ್-ಬಿಜೆಪಿ ಮುಂದೇನಾಗುತ್ತೆ ಎಂದು ಕಾದು ನೋಡಿ ಎಂದು ಭವಿಷ್ಯ ನುಡಿದರು.&lt;/p&gt;&lt;h2&gt;&lt;strong&gt;ಆತ್ಮಸಾಕ್ಷಿಗೆ ಮತ&lt;/strong&gt;&lt;/h2&gt;&lt;p&gt;ಕನಿಷ್ಠ ಪಕ್ಷ ಒಂದು ಮಾತಾದರೂ ಬಿಜೆಪಿ ಕೇಳಬೇಕಿತ್ತಲ್ಲ. ಅವರು ಕೇಳದೆ ನಾವು ಏನು ಮಾಡಬೇಕು. ಮತದಾನ ಗೌಪ್ಯವಾಗಿದ್ದು, ನಮ್ಮ ಆತ್ಮಸಾಕ್ಷಿಗೆ ಮತ ಹಾಕುತ್ತೇನೆ ಎಂದು ಶಿವರಾಂ ಹೆಬ್ಬಾರ್ ಹೇಳಿದರು. ಇನ್ನು ಯಶವಂತಪುರ ಶಾಸಕ ಎಸ್&zwnj;.ಟಿ.ಸೋಮಶೇಖರ್ ಮಾತನಾಡಿ, ನಮಗೆ ಡಿಕೆ ಶಿವಕುಮಾರ್ ಅವರು ಕರೆ ಮಾಡಿದ್ದರು. ಬಿಡದಿಗೆ ನಾನು ಮತ್ತು ಶಿವರಾಂ ಹೆಬ್ಬಾರ್ ಹೋಗಿದ್ದೀವಿ. ಬಿಜೆಪಿಯವರು ನಮಗೆ ಮತ ಕೇಳಿಲ್ಲ. ನಮಗೆ ಸ್ವಾಭಿಮಾನವಿದ್ದು, ಆತ್ಮಸಾಕ್ಷಿಗೆ ಮತ ಹಾಕುತ್ತೇವೆ ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಪಕ್ಷದಿಂದ ಉಚ್ಚಾಟನೆ ಆಗ್ತಾರಾ ಜಿ.ಟಿ.ದೇವೇಗೌಡ?&lt;/strong&gt;&lt;/h3&gt;&lt;p&gt;ಪರಿಷತ್ ಚುನಾವಣೆ ಹಿನ್ನೆಲೆ ಏಕಾಂಗಿಯಾಗಿ ಬಂದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಮತದಾನ ಮಾಡಿ ತೆರಳಿದ್ದಾರೆ. ಪಕ್ಷ ಮತ್ತು ಜೆಡಿಎಸ್ ನಾಯಕರಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡರು, ಉಚ್ಚಾಟನೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮತದಾನದ ಬಳಿಕ ಆತ್ಮಸಾಕ್ಷಿಯಾಗಿ ವೋಟ್ ಮಾಡಿರೋದಾಗಿ ಜಿ.ಟಿ.ದೇವೇಗೌಡರ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;p&gt;ರೆಸಾರ್ಟ್&zwnj;ನಿಂದ ಐದು ಬಸ್&zwnj;ಗಳಲ್ಲಿ ಬಂದ ಕಾಂಗ್ರೆಸ್ ಶಾಸಕರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು, ಬಿಜೆಪಿ ಶಾಸಕರಲ್ಲಿ ಎರಡನೇ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದವು. ಬಿಜೆಪಿಯಿಂದ ಉಚ್ಚಾಟಿತ ಮತ್ತೋರ್ವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಮಲದ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಯತ್ನಾಳ್ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು&lt;/strong&gt;&lt;/h3&gt;&lt;p&gt;ಕಾಂಗ್ರೆಸ್&zwnj;ನಿಂದ ಬಿ.ಕೆ.ಹರಿಪ್ರಸಾದ್&zwnj;, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್, ಬಿ.ಎಸ್&zwnj;.ಶಿವಣ್ಣ, ವಿನಯ್&zwnj; ಕಾರ್ತಿಕ್ ಪ್ರಕಾಶ್&zwnj;. ಬಿಜೆಪಿಯಿಂದ ಕೌಟಿಲ್ಯ ರಘು ಮತ್ತು ಲಿಂಗರಾಜ್&zwnj; ಪಾಟೀಲ್&zwnj;. ಜೆಡಿಎಸ್&zwnj;ನಿಂದ ಗೋವಿಂದರಾಜು&lt;/p&gt;]]></content:encoded>
            <category>politics</category>
            <dc:creator>Mahmad Rafik</dc:creator>
            <atom:link href="https://kannada.asianetnews.com/politics/expelled-bjp-mlas-shivaram-hebbar-and-st-somashekar-have-said-they-will-vote-according-to-their-conscience-mrq/articleshow-fi7o55t"/>
        </item>
        <item>
            <title><![CDATA[CM ಡಿಕೆಶಿ ಸರ್ಕಾರದ ಮೊದಲ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಸಲು ಸಿದ್ಧತೆ? ರಾಜಧಾನಿಯಾಚೆ ಆಡಳಿತ]]></title>
            <link>https://kannada.asianetnews.com/karnataka-districts/cm-dk-shivakumar-restructured-cabinet-to-hold-its-first-meeting-in-mangaluru-gdp/articleshow-hxqls1y</link>
            <guid isPermaLink="true">https://kannada.asianetnews.com/karnataka-districts/cm-dk-shivakumar-restructured-cabinet-to-hold-its-first-meeting-in-mangaluru-gdp/articleshow-hxqls1y</guid>
            <pubDate>Tue, 16 Jun 2026 18:48:17 +0530</pubDate>
            <description><![CDATA[ಡಿ.ಕೆ.ಶಿವಕುಮಾರ್&zwnj; ನೇತೃತ್ವದ ಸರ್ಕಾರವು ತನ್ನ ಮೊದಲ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ. ಜುಲೈ ತಿಂಗಳಲ್ಲಿ ಪಡೀಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಭೆ ನಡೆಯುವ ಸಾಧ್ಯತೆಗಳಿದ್ದು, ರಾಜಧಾನಿಯಾಚೆ ಆಡಳಿತ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktjh83xb800me90ta1b1f57e,imgname-cm-dk-shivakumar-1780886015915.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಸರ್ಕಾರ ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆಗೊಂಡ ಬಳಿಕ ಅದರ ಮೊದಲ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ.&lt;/p&gt;&lt;h2&gt;ಜುಲೈ ತಿಂಗಳಲ್ಲಿ ಸಚಿವ ಸಂಪುಟ ಸಭೆ ಬಹುತೇಕ ಖಚಿತ&lt;/h2&gt;&lt;p&gt;ರಾಜ್ಯದ ರಾಜಧಾನಿಯಿಂದ ಹೊರಗೆ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಮೊದಲ ಬಾರಿಗೆ ಜುಲೈ ತಿಂಗಳಲ್ಲಿ ಸಚಿವ ಸಂಪುಟ ಸಭೆ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ವಿಧಾನಸೌಧ ಸಚಿವಾಲಯದ ಅಧಿಕಾರಿಗಳು ಸಿದ್ಧತೆಗೆ ಸೂಚನೆ ನೀಡಿದ್ದಾರೆ. ಮಂಗಳೂರಿನಲ್ಲಿ ಪಡೀಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ವಿಧಾನ ಪರಿಷತ್&zwnj; ಚುನಾವಣೆ ಮುಕ್ತಾಯ ಬಳಿಕ ಜೂನ್&zwnj; ಕೊನೆ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಪೂರ್ಣ ಪ್ರಮಾಣದ ಸಚಿವ ಸಂಪುಟದ ಮೊದಲ ಸಭೆಯನ್ನು ಕಡಲ ತೀರದ ಮಂಗಳೂರಿನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ.&lt;/p&gt;&lt;h2&gt;ಯು.ಟಿ.ಖಾದರ್&zwnj; ಸಚಿವರಾದ ಬಳಿಕ ಮತ್ತೆ ಈ ಪ್ರಸ್ತಾಪ&lt;/h2&gt;&lt;p&gt;ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲೇ ಸಚಿವ ಸಂಪುಟ ಸಭೆ ಬೆಂಗಳೂರು ಮತ್ತು ಬೆಳಗಾವಿ ಹೊರತುಪಡಿಸಿ ಜಿಲ್ಲಾ ಕೇಂದ್ರದಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆದಿತ್ತು. ಆಗಲೇ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂಬ ಮಾತು ಕೇಳಿಬಂದಿತ್ತು. ಈಗ ಯು.ಟಿ.ಖಾದರ್&zwnj; ಸಚಿವರಾದ ಬಳಿಕ ಮತ್ತೆ ಈ ಪ್ರಸ್ತಾಪ ಬೇಗನೆ ಈಡೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/cm-dk-shivakumar-restructured-cabinet-to-hold-its-first-meeting-in-mangaluru-gdp/articleshow-hxqls1y"/>
        </item>
        <item>
            <title><![CDATA[Karnataka mlc election : 5 ಕಾಂಗ್ರೆಸ್ - 2 ಬಿಜೆಪಿ ಗೆಲುವು, ಸಿಎಂ ಆದ ಮೊದಲ ಟಾಸ್ಕ್‌ನಲ್ಲೇ ಡಿಕೆಶಿ ಸಕ್ಸಸ್!]]></title>
            <link>https://kannada.asianetnews.com/state/karnataka-mlc-election-2026-results-congress-wins-5-seats-bjp-jds-cross-voting-shocker/articleshow-igndz5b</link>
            <guid isPermaLink="true">https://kannada.asianetnews.com/state/karnataka-mlc-election-2026-results-congress-wins-5-seats-bjp-jds-cross-voting-shocker/articleshow-igndz5b</guid>
            <pubDate>Thu, 18 Jun 2026 19:23:42 +0530</pubDate>
            <description><![CDATA[&lt;p&gt;ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ 5 ಮತ್ತು ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್&zwnj;ನಿಂದ ಒಟ್ಟು 11 ಶಾಸಕರು ಅಡ್ಡ ಮತದಾನ ಮಾಡಿದ್ದು, ಸಿಎಂ ಡಿ.ಕೆ. ಶಿವಕುಮಾರ್ ರಾಜಕೀಯ ತಂತ್ರಗಾರಿಕೆಯ ಯಶಸ್ಸು ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdfx60wqg38q0df7ktj9rkm,imgname-karnataka-mlc-election-result-1781790578716.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್&zwnj;ನ ಐವರು ಹಾಗೂ ಬಿಜೆಪಿಯ ಇಬ್ಬರು ಗೆಲುವು ಸಾಧಿಸಿದ್ದಾರೆ. ಇನ್ನು ಜೆಡಿಎಸ್&zwnj;ನಿಂದ ನಿಲ್ಲಿಸಲಾಗಿದ್ದ ಅಭ್ಯರ್ಥಿ ಗೋವಿಂದರಾಜು ಅವರಿಗೆ ಸೋಲುಂಟಾಗಿದೆ. ಇದರ ಜೊತೆಗೆ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್&zwnj;ನಿಂದ ಒಟ್ಟು 11 ಸದಸ್ಯರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;&lt;strong&gt;ಕಾಂಗ್ರೆಸ್&zwnj;ನ ಅಭ್ಯರ್ಥಿಗಳ ಪಾರುಪತ್ಯ:&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾರಥ್ಯದಲ್ಲಿ ಕಾಂಗ್ರೆಸ್ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿತ್ತು.&lt;/p&gt;&lt;p&gt;&lt;strong&gt;ಫಲಿತಾಂಶದ ಅಂಕಿ-ಅಂಶಗಳು ಹೀಗಿವೆ:&lt;/strong&gt;&lt;/p&gt;&lt;ul&gt; &lt;li&gt;ಬಿ.ಕೆ. ಹರಿಪ್ರಸಾದ್: 30 ಮತಗಳು&lt;/li&gt; &lt;li&gt;ತಿಪ್ಪಣ್ಣ ಕಮಕನೂರು: 30 ಮತಗಳು&lt;/li&gt; &lt;li&gt;ಶಿವಣ್ಣ ಬಿ.ಎಸ್.: 30 ಮತಗಳು&lt;/li&gt; &lt;li&gt;ಪಿ.ವಿ. ಮೋಹನ್: 29 ಮತಗಳು&lt;/li&gt; &lt;li&gt;ವಿನಯ್ ಕಾರ್ತಿಕ್: 32 ಮತಗಳು&lt;/li&gt;&lt;/ul&gt;&lt;p&gt;ಉಳಿದಂತೆ ಬಿಜೆಪಿಯಿಂದ ರಘು ಕೌಟಿಲ್ಯ 29 ಹಾಗೂ ಲಿಂಗರಾಜ ಪಾಟೀಲ 27 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಉಳಿದಂತೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಗೋವಿಂದರಾಜು ಅವರು ಕೇವಲ 14 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಇನ್ನು ಜೆಡಿಎಸ್&zwnj;ನಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲುವುದಕ್ಕೆ ಬೇಕಿದ್ದ ಶಾಸಕರ ಬಲವೂ ಇರಲಿಲ್ಲ. ಆದರೂ ಪಕ್ಷದ ಶಾಸಕರನ್ನು ಒಗ್ಗಟ್ಟಿನಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಅಭ್ಯರ್ಥಿಯನ್ನು ಹಾಕಲಾಗುತ್ತಿದೆ ಎಂದು ಸ್ವತಃ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದರು.&lt;/p&gt;&lt;h2&gt;&lt;strong&gt;ಮೈತ್ರಿ ಪಕ್ಷದಿಂದ 11 ಅಡ್ಡ ಮತದಾನ&lt;/strong&gt;&lt;/h2&gt;&lt;p&gt;ಇನ್ನು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇದೀಗ ಲಭ್ಯವಾಗಿರುವ ಮಾಹಿತಿಯಂತೆ ಒಟ್ಟು 11 ಮತಗಳು ಅಡ್ಡಮತದಾನವಾಗಿವೆ ಎಂದು ತಿಳಿದುಬಂದಿದೆ. ಈ ಎಲ್ಲ ಅಡ್ಡಮತಗಳು ಕೂಡ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳದ್ದಾಗಿವೆ. ಅಂದರೆ ಬಿಜೆಪಿಯ 7 ಹಾಗೂ ಜೆಡಿಎಸ್&zwnj;ನ 4 ಶಾಸಕರು ತಮ್ಮ ಪಕ್ಷ ತೋರಿಸಿದ ಅಭ್ಯರ್ಥಿಯನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತವನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಒಬ್ಬ ಶಾಸಕರ ಮತ ಅಸಿಂಧುವಾಗಿದೆ. ಇನ್ನೂ ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.&lt;/p&gt;&lt;h2&gt;&lt;strong&gt;ಟಾಸ್ಕ್&zwnj;ನಲ್ಲಿ ವಿನ್ ಆದ ಡಿಕೆಶಿ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಮೊದಲ ಬಾರಿಗೆ ಹೈಕಮಾಂಡ್ ಕೊಟ್ಟ ಟಾಸ್ಕ್&zwnj;ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿದ್ದಾರೆ. ಕಾಂಗ್ರೆಸ್ ಮತಗಳಷ್ಟೇ ಅಲ್ಲದೆ ಬಿಜೆಪಿ ಮತ್ತು ಜೆಡಿಎಸ್&zwnj;ನಿಂದ 11 ಮತಗಳನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮಗೆ ಸಿಎಂ ಆದ ಬಳಿಕ ಬಂದ ಮೊದಲ ಟಾಸ್ಕ್&zwnj; ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಟ್ರಬಲ್ ಶೂಟರ್ ಮತ್ತು ರಾಜಕೀಯ ಚಾಣಾಕ್ಷತನದ ಸಾಮರ್ಥ್ಯವನ್ನು ಹೈಕಮಾಂಡ್ ಮುಂದೆ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-mlc-election-2026-results-congress-wins-5-seats-bjp-jds-cross-voting-shocker/articleshow-igndz5b"/>
        </item>
        <item>
            <title><![CDATA[Mamata Banerjee: ಮಮತಾ ಭದ್ರತೆ ಕಡಿತ, ಆರೆಸ್ಸೆಸ್ ಮುಖ್ಯಸ್ಥನಿಗೆ ಹೈ ಸೆಕ್ಯೂರಿಟಿ, ಬಿಜೆಪಿ ಸರ್ಕಾರದಿಂದ ದ್ವೇಷ ರಾಜಕಾರಣ, ಮಹುವಾ ಮೊಯಿತ್ರಾ ಕಿಡಿ]]></title>
            <link>https://kannada.asianetnews.com/politics/mahua-moitra-accuses-bjp-of-endangering-mamata-banerjee-by-reducing-security/articleshow-m9i17kz</link>
            <guid isPermaLink="true">https://kannada.asianetnews.com/politics/mahua-moitra-accuses-bjp-of-endangering-mamata-banerjee-by-reducing-security/articleshow-m9i17kz</guid>
            <pubDate>Thu, 18 Jun 2026 09:03:31 +0530</pubDate>
            <description><![CDATA[&lt;p&gt;ಮಮತಾ ಬ್ಯಾನರ್ಜಿ(Mamata Banerjee) ಅವರ ಭದ್ರತೆಯನ್ನು ಹಿಂಪಡೆದು ಬಿಜೆಪಿ ಸರ್ಕಾರ(BJP Government) ಅವರ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ(TMC leader Mahua Moitra) ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-5b44733a-78b6-49e3-97ed-e9a26b3b10d2.jpg" type="image/jpeg" height="390" width="690"/>
            <content:encoded><![CDATA[&lt;h2&gt;ಮಮತಾ ಬ್ಯಾನರ್ಜಿಗೆ ಅವಮಾನ, ಜೀವಕ್ಕೆ ಅಪಾಯ: ಟಿಎಂಸಿ ಆರೋಪ&lt;/h2&gt; &lt;p&gt;ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 'ಅವಮಾನ' ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೋಲ್ಕತ್ತಾದಲ್ಲಿರುವ ಮಮತಾ ಅವರ ನಿವಾಸದಿಂದ ದೀರ್ಘಕಾಲ ಸೇವೆ ಸಲ್ಲಿಸುತ್ತಿದ್ದ ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು (ಪಿಎಸ್&zwnj;ಒ) ಬೇರೆಡೆಗೆ ವರ್ಗಾಯಿಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಅವರು ಈ ಮಾತು ಹೇಳಿದ್ದಾರೆ.&lt;/p&gt; &lt;p&gt;ಬುಧವಾರ ಎಕ್ಸ್&zwnj;ನಲ್ಲಿ (ಹಿಂದಿನ ಟ್ವಿಟರ್) ಪೋಸ್ಟ್ ಮಾಡಿರುವ ಮೊಯಿತ್ರಾ, ಮಮತಾ ನಿವಾಸದಿಂದ ಭದ್ರತಾ ಸಿಬ್ಬಂದಿಯನ್ನು ಹಿಂಪಡೆದ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ನಡೆಯಿಂದ ಮೂರು ಬಾರಿ ಮುಖ್ಯಮಂತ್ರಿಯಾದವರ ಸುರಕ್ಷತೆಗೆ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್&zwnj;ಎಸ್&zwnj;ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ನೀಡಿರುವ ಭದ್ರತೆಯೊಂದಿಗೆ ಮಮತಾ ಅವರ ಭದ್ರತೆಯನ್ನು ಹೋಲಿಸಿ, ತಾರತಮ್ಯದ ಆರೋಪ ಮಾಡಿದ್ದಾರೆ. &quot;ಮೂರು ಬಾರಿ ಸಿಎಂ ಮತ್ತು ಏಳು ಬಾರಿ ಸಂಸದರಾಗಿರುವ ಮಮತಾ ಬ್ಯಾನರ್ಜಿ ಅವರನ್ನು ನಾಚಿಕೆಯಿಲ್ಲದ, ಸೇಡಿನ ರಾಜಕಾರಣ ಮಾಡುವ ಬಿಜೆಪಿ ಸರ್ಕಾರ ಈ ರೀತಿ ಅವಮಾನಿಸುತ್ತಿದೆ ಮತ್ತು ಅಪಾಯಕ್ಕೆ ದೂಡುತ್ತಿದೆ. ಆದರೆ, ಮೋಹನ್ ಭಾಗವತ್ ಅವರು ನಮ್ಮ ತೆರಿಗೆ ಹಣದಲ್ಲಿ ನೂರಾರು ಕಮಾಂಡೋಗಳಿರುವ XYZ+++ ಭದ್ರತೆಯನ್ನು ಆನಂದಿಸುತ್ತಿದ್ದಾರೆ&quot; ಎಂದು ಮೊಯಿತ್ರಾ ತಮ್ಮ ಪೋಸ್ಟ್&zwnj;ನಲ್ಲಿ ಬರೆದುಕೊಂಡಿದ್ದಾರೆ.&lt;/p&gt; &lt;h2&gt;ಬೀದಿ ವ್ಯಾಪಾರಿಗಳ ತೆರವು ವಿರೋಧಿಸಿ ಮಮತಾ ಪ್ರತಿಭಟನೆ&lt;/h2&gt; &lt;p&gt;ಇನ್ನೊಂದೆಡೆ, ಬುಧವಾರ ಕೋಲ್ಕತ್ತಾದ ಧರ್ಮತಲಾದಲ್ಲಿ ಬೀದಿ ಬದಿ ವ್ಯಾಪಾರಿಗಳ ಅಕ್ರಮ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಪಕ್ಷದ ಸದಸ್ಯರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.&lt;/p&gt; &lt;p&gt;ಈ ಬಗ್ಗೆ ಎಕ್ಸ್&zwnj;ನಲ್ಲಿ ಮಾಹಿತಿ ಹಂಚಿಕೊಂಡ ಟಿಎಂಸಿ, ಪಶ್ಚಿಮ ಬಂಗಾಳದಾದ್ಯಂತ ಬೀದಿ ವ್ಯಾಪಾರಿಗಳನ್ನು ಅಕ್ರಮವಾಗಿ ತೆರವುಗೊಳಿಸುತ್ತಿರುವುದನ್ನು ಪ್ರತಿಭಟನೆಯು ಮುಖ್ಯವಾಗಿ ವಿರೋಧಿಸಿದೆ ಎಂದು ತಿಳಿಸಿದೆ. ಬಂಗಾಳದ ಜನರ ಘನತೆ ಮತ್ತು ಜೀವನೋಪಾಯವನ್ನು ಅಚಲ ಸಂಕಲ್ಪದಿಂದ ರಕ್ಷಿಸಲಾಗುವುದು ಎಂದು ಪಕ್ಷ ಹೇಳಿದೆ. ಬಿಜೆಪಿಯನ್ನು 'ಕ್ರೂರಿ' ಎಂದು ಕರೆದ ಟಿಎಂಸಿ, ಅಧಿಕಾರದ ದುರಾಸೆಯಿಂದಲೇ ಆ ಪಕ್ಷವು ಪತನಗೊಳ್ಳಲಿದೆ ಎಂದು ಆರೋಪಿಸಿದೆ. &quot;ನಮ್ಮ ಗೌರವಾನ್ವಿತ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ, ಬಂಗಾಳದಾದ್ಯಂತ ಬೀದಿ ವ್ಯಾಪಾರಿಗಳ ಅಕ್ರಮ, ಅನ್ಯಾಯ ಮತ್ತು ಅಮಾನವೀಯ ತೆರವು ವಿರುದ್ಧ ಶಾಂತಿಯುತ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸಿದರು. ಬಂಗಾಳದ ಜನರೇ ನಮಗೆ ಯಾವಾಗಲೂ ಮೊದಲು&quot; ಎಂದು ಟಿಎಂಸಿ ಪೋಸ್ಟ್&zwnj;ನಲ್ಲಿ ತಿಳಿಸಿದೆ.&lt;/p&gt; &lt;h3&gt;ಜಾದವ್&zwnj;ಪುರ ತೆರವು ಕಾರ್ಯಾಚರಣೆ ಮತ್ತು ಪ್ರತಿಭಟನೆ&lt;/h3&gt; &lt;p&gt;ಇತ್ತೀಚೆಗೆ ಜೂನ್ 7 ರಂದು ಜಾದವ್&zwnj;ಪುರ ಸ್ಟೇಷನ್ ರಸ್ತೆಯಲ್ಲಿ ಇಂತಹದ್ದೇ ಒಂದು ತೆರವು ಕಾರ್ಯಾಚರಣೆ ನಡೆದಿತ್ತು. ಅಲ್ಲಿ ಹಲವು ಬುಲ್ಡೋಜರ್&zwnj;ಗಳು ತಾತ್ಕಾಲಿಕ ಅಂಗಡಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಮಳಿಗೆಗಳನ್ನು ನೆಲಸಮ ಮಾಡಿದ್ದವು. ಈ ವೇಳೆ, ಅಧಿಕಾರಿಗಳ ಸುತ್ತ ಜಮಾಯಿಸಿದ ದೊಡ್ಡ ಗುಂಪು, ಈ ಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಿತ್ತು. ಪ್ರತಿಭಟನೆ ತೀವ್ರಗೊಂಡಾಗ, ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಸೇರಿದಂತೆ ಹಲವು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದರು. (ANI)&lt;/p&gt; (ಈ ಸುದ್ದಿಯ ಶೀರ್ಷಿಕೆ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/mahua-moitra-accuses-bjp-of-endangering-mamata-banerjee-by-reducing-security/articleshow-m9i17kz"/>
        </item>
        <item>
            <title><![CDATA[Mekedatu ಯೋಜನೆಯಿಂದ ಒಂದು ಬಕೆಟ್‌ ನೀರೂ ನೀರಾವರಿಗೆ ಬಳಸಲ್ಲ: ಸಿಎಂ ಡಿಕೆಶಿ ಸ್ಪಷ್ಟನೆ]]></title>
            <link>https://kannada.asianetnews.com/politics/dk-shivakumar-says-mekedatu-project-not-for-irrigation-only-drinking-water-gvd/articleshow-nvs6cb0</link>
            <guid isPermaLink="true">https://kannada.asianetnews.com/politics/dk-shivakumar-says-mekedatu-project-not-for-irrigation-only-drinking-water-gvd/articleshow-nvs6cb0</guid>
            <pubDate>Fri, 19 Jun 2026 00:29:53 +0530</pubDate>
            <description><![CDATA[&lt;p&gt;Mekedatu ಯೋಜನೆಯಿಂದ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ಈ ಯೋಜನೆ ಅನಿವಾರ್ಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdxznvvkrber3ewje6r04aw,imgname-cj-1781805340539.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.19):&lt;/strong&gt; &lsquo;ಮೇಕೆದಾಟು ಯೋಜನೆ ದಕ್ಷಿಣ ಭಾರತದ ಹೃದಯ ಇದ್ದಂತೆ. ಈ ಯೋಜನೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಹಿತ ಅಡಗಿದೆ. ನಾವು ಯೋಜನೆಯಿಂದ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸಲ್ಲ. ಈ ಬಗ್ಗೆ ತಮಿಳುನಾಡು ಸರ್ಕಾರದ ಜತೆಗೆ ಚರ್ಚೆಗೂ ಸಿದ್ಧ&rsquo; ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡು ಪಾಲಿನ 177 ಟಿಎಂಸಿ ನೀರು ಬಿಡಲು ನಾವು ಸಿದ್ಧವಾಗಿದ್ದೇವೆ. ಮೇಕೆದಾಟು ಯೋಜನೆ ತೀರ್ಮಾನವನ್ನು ಕೇಂದ್ರ ಜಲ ಆಯೋಗ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.&lt;/p&gt;&lt;p&gt;ನಾವು ಅದರಲ್ಲಿನ ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ. ಬೆಂಗಳೂರಿಗೆ ಕುಡಿಯುವ ನೀರು ನೀಡಲು ಇದೊಂದೇ ಆಯ್ಕೆ. ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಯೋಜನೆ ಅನಿವಾರ್ಯ ಎಂದು ಹೇಳಿದರು. ನಾವು ತಮಿಳುನಾಡಿನ ರೈತರ ಹಿತವನ್ನೂ ಕಾಪಾಡಬೇಕು. ಇದು ಸಮತೋಲಿತ ಜಲಾನಯನ. ಇಲ್ಲಿ ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ. ಬೆಂಗಳೂರಿಗೆ ನಾವು ಕೃಷ್ಣಾದಿಂದ ನೀರು ತರಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನಮ್ಮ ಮುಂದಿರುವ ಏಕೈಕ ಆಯ್ಕೆ ಎಂದರು.&lt;/p&gt;&lt;p&gt;&lt;strong&gt;40 ವರ್ಷಗಳಿಂದ ರಾಜಕೀಯ ಅಜೆಂಡಾ:&lt;/strong&gt; ತಮಿಳುನಾಡಿನವರು 40 ವರ್ಷಗಳಿಂದ ರಾಜಕೀಯ ಅಜೆಂಡಾ ಇಟ್ಟುಕೊಂಡಿದ್ದಾರೆ. ಅವರ ರಾಜಕೀಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಚಾರದ ಬಗ್ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಕಳೆದ ವರ್ಷ 400ಕ್ಕೂ ಹೆಚ್ಚು ಟಿಎಂಸಿ ಹೆಚ್ಚುವರಿ ನೀರು ಸಮುದ್ರ ಸೇರಿದೆ. ಅವರು ಕೆಳಹಂತದಲ್ಲಿ ಸಾಕಷ್ಟು ಅಣೆಕಟ್ಟು ನಿರ್ಮಾಣ ಮಾಡುತ್ತಿದ್ದು, ನಾವು ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಅವರ ನೆಲದಲ್ಲಿ ಅವರು ನಿರ್ಮಿಸಿಕೊಳ್ಳುತ್ತಿದ್ದಾರೆ. ಇದೇ ವಿಚಾರ ಸುಪ್ರೀಂ ಕೋರ್ಟ್ ನಲ್ಲೂ ಚರ್ಚೆಯಾಗಿದೆ. ಈ ಯೋಜನೆಗೆ ನಾವು ಯಾವುದೇ ಆರ್ಥಿಕ ನೆರವಾಗಲಿ ಇತರೆ ವಿಚಾರವನ್ನು ಕೇಳುತ್ತಿಲ್ಲ. ಈ ಯೋಜನೆಯಿಂದ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಇಂಧನ ಕ್ಷೇತ್ರದಲ್ಲಿ ನಮಗೆ ಅನುಕೂಲ ಮಾಡಿಕೊಡಲಿದೆ ಎಂದು ಡಿ.ಕೆ. ಶಿವಕುಮಾರ್&zwnj; ಹೇಳಿದರು.&lt;/p&gt;&lt;p&gt;&lt;strong&gt;ಯಾವಾಗ ಕರೆದರೂ ಚರ್ಚೆಗೆ ಸಿದ್ಧ: &lt;/strong&gt;ತಮಿಳುನಾಡು ಜೊತೆ ಚರ್ಚೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಯಾವಾಗ ಬೇಕಾದರೂ ಅವರ ಜೊತೆ ಮಾತನಾಡಲು ಸಿದ್ಧನಿದ್ದೇನೆ. ತಮಿಳುನಾಡು, ಕರ್ನಾಟಕದವರು ಭಾರತೀಯರು. ನಾವು ಕಾವೇರಿ ನೀರು ಕುಡಿಯಬೇಕು. ತಮಿಳುನಾಡಿನಿಂದ ಇಲ್ಲಿಗೆ ಬಂದು ವೃತ್ತಿ ಮಾಡುತ್ತಿರುವ ಅನೇಕ ಜನರಿದ್ದಾರೆ. ಇಲ್ಲಿಂದ ಹೋಗಿ ಅಲ್ಲಿ ಕೆಲಸ ಮಾಡುತ್ತಿರುವವರೂ ಇದ್ದಾರೆ. ನಾವು ಅವರನ್ನು ಪ್ರತ್ಯೇಕಿಸುವುದಿಲ್ಲ. ಸಮತೋಲಿತ ಜಲಾನಯನ ನಿರ್ಮಾಣದಿಂದ ಕಷ್ಟ ಕಾಲದಲ್ಲಿ ತಮಿಳುನಾಡಿನ ಪಾಲಿನ ನೀರು ಹರಿಸಲು ನೆರವಾಗುತ್ತದೆ. ಅತಿ ಕಡಿಮೆ ವೆಚ್ಚದಲ್ಲಿ ಯೋಜನೆ ಆಗುವ ವಿಶ್ವಾಸವಿದೆ ಎಂದು ಶಿವಕುಮಾರ್&zwnj; ತಿಳಿಸಿದರು.&lt;/p&gt;&lt;h2&gt;&lt;strong&gt;ಸಂಸದರು ಒಗ್ಗಟ್ಟಾಗಿ ಹೋರಾಡುವ ವಿಶ್ವಾಸವಿದೆ&lt;/strong&gt;&lt;/h2&gt;&lt;p&gt;ತಮಿಳುನಾಡಿನವರು ಅವರು ರಾಜಕೀಯ ಉಳಿವಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ಬಂದ ಬಳಿಕ ಮತ್ತೇನಿದೆ? ಕರ್ನಾಟಕ 177 ಟಿಎಂಸಿ ನೀರು ಬಿಡಬೇಕು ಎಂದು ನೀಡಿದ ನಿರ್ದೇಶನವನ್ನು ನಾವು ಒಪ್ಪಿಕೊಳ್ಳಲಿಲ್ಲವೇ? ಅವರು ಹೋರಾಟ ಮಾಡುತ್ತಾರೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್, ಬಿಜೆಪಿ, ದಳ ಎಲ್ಲಾ ಸಂಸದರು ಒಗ್ಗಟ್ಟಾಗಿ ನಮ್ಮ ರಾಜ್ಯದ ಹಿತ ಕಾಪಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಶಿವಕುಮಾರ್&zwnj; ತಿಳಿಸಿದರು. ತಮಿಳುನಾಡಿನಲ್ಲಿ ನಿಮ್ಮ ಮೈತ್ರಿ ಇದೆ ಎಂಬ ಪ್ರಶ್ನೆಗೆ, ನಾವು ಅವರಿಗೆ ಏನು ಮನವಿ ಮಾಡಬೇಕೋ ಮನವಿ ಮಾಡುತ್ತೇವೆ. ಇಲ್ಲಿ ರಾಜಕಾರಣ ಏನಿಲ್ಲ. ಎರಡು ರಾಜ್ಯಗಳ ಜನರ ಹಿತ ಕಾಪಾಡಿಕೊಂಡು ಹೋಗೋಣ ಎಂದರು.&lt;/p&gt;]]></content:encoded>
            <category>politics</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/dk-shivakumar-says-mekedatu-project-not-for-irrigation-only-drinking-water-gvd/articleshow-nvs6cb0"/>
        </item>
        <item>
            <title><![CDATA[ಕೃಷ್ಣ ಬೈರೇಗೌಡರನ್ನು ನೋಡಿದ್ರೆ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ: ನಿಖಿಲ್ ಕುಮಾರಸ್ವಾಮಿ]]></title>
            <link>https://kannada.asianetnews.com/politics/seeing-minister-krishna-byre-gowda-reminds-me-of-the-silk-board-traffic-jam-nikhil-kumaraswamy-mrq/articleshow-qda4nf5</link>
            <guid isPermaLink="true">https://kannada.asianetnews.com/politics/seeing-minister-krishna-byre-gowda-reminds-me-of-the-silk-board-traffic-jam-nikhil-kumaraswamy-mrq/articleshow-qda4nf5</guid>
            <pubDate>Wed, 17 Jun 2026 11:33:03 +0530</pubDate>
            <description><![CDATA[&lt;p&gt;ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಲು ವಿಳಂಬ ಮಾಡಿದ ಕೃಷ್ಣ ಬೈರೇಗೌಡರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ವಿಳಂಬವನ್ನು ಬೆಂಗಳೂರಿನ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್&zwnj;ಗೆ ಹೋಲಿಸಿರುವ ಅವರು, ಬಿಡಿಎ ಮತ್ತು ಬಿಎಂಆರ್&zwnj;ಡಿಎ ಇಲ್ಲದೆ ನಗರವನ್ನು ಅಭಿವೃದ್ಧಿಪಡಿಸುವ ಸವಾಲನ್ನು ಎತ್ತಿ ತೋರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva2m39cvzhk2qasc55ycp4b,imgname-krishna-byre-gowda-1781675986220.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಚಿವರಾಗಿ ಪ್ರಮಾಣವಚನ ತೆಗೆದುಕೊಂಡ್ರೂ ಅಧಿಕಾರ ಸ್ವೀಕಾರ ತೆಗೆದುಕೊಳ್ಳಲು ವಿಳಂಬ ಮಾಡಿರುವ ಸಚಿವ ಕೃಷ್ಣ ಬೈರೇಗೌಡರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ಬಿಡಿಎ ಮತ್ತು ಬಿಎಂಆರ್&zwnj;ಸಿಎಲ್ ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿದ್ದರಿಂದ ಅಸಮಾಧಾನಗೊಂಡಿದ್ದ ಸಚಿವ ಕೃಷ್ಣ ಬೈರೇಗೌಡ ಅವರು ಎರಡು ವಾರಗಳ ಬಳಿಕ ಇಲಾಖೆ ಜವಾಬ್ದಾರಿಯನ್ನು ಮಂಗಳವಾರ ವಹಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸಲು ವಿಳಂಬ ಮಾಡಿರೋದನ್ನು ನಿಖಿಲ್ ಕುಮಾರಸ್ವಾಮಿ ಅವರು, ಬೆಂಗಳೂರಿನ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್&zwnj;ಗೆ ಹೋಲಿಕೆ ಮಾಡಿದ್ದು, ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಕೃಷ್ಣ ಬೈರೇಗೌಡ ಅವರಿಗೆ ಅಭಿನಂದನೆಗಳು. ಆದ್ರೆ ಅಧಿಕಾರ ವಹಿಸಿಕೊಳ್ಳೋಕೆ 12 ದಿನ ಕಾಯಿಸಿದ್ದು ನೋಡಿದ್ರೆ, ನಮ್ಮ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ. ನಿಮ್ಮ ಮುಂದೆ ಒಂದು ವಿಶಿಷ್ಟ ಸವಾಲಿದೆ. ನಿಮ್ಮ ಖಾತೆಗೆ 'ನಗರಾಭಿವೃದ್ಧಿ' ಅಂತ ಹೆಸರೇನೋ ಇದೆ, ಆದ್ರೆ ಟೌನ್ ಪ್ಲಾನಿಂಗ್ ಸಂಸ್ಥೆಗಳಾದ BDA ಮತ್ತು BMRDA ಮಾತ್ರ ಮುಖ್ಯಮಂತ್ರಿಗಳ ಬಳಿಯೇ ಇವೆ. ಬ್ಲೂಪ್ರಿಂಟ್ ಇಲ್ಲದೆ ನಗರವನ್ನು ಅಭಿವೃದ್ಧಿ ಮಾಡುವುದು ನಿಜಕ್ಕೂ ದೊಡ್ಡ ಸವಾಲು ಎಂದು ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ತ್ರಿಮೂರ್ತಿಗಳ ಸಮಸ್ಯೆ&lt;/strong&gt;&lt;/h2&gt;&lt;p&gt;ನಿಮ್ಮ ಹಳೇ ಟ್ರ್ಯಾಕ್ ರೆಕಾರ್ಡ್ ನಮಗೆ ಗೊತ್ತು. ಹಿಂದೆ ಕಂದಾಯ ಇಲಾಖೆಯಲ್ಲಿ ತಂತ್ರಜ್ಞಾನ ಬಳಸಿ ನೀವು ತಂದ ವ್ಯವಸ್ಥಿತ ಸುಧಾರಣೆಗಳು ಜನರ ಮನಸ್ಸಿನಲ್ಲಿದೆ. ಎಷ್ಟೇ ಗೊಂದಲಮಯ ವ್ಯವಸ್ಥೆ ಇದ್ದರೂ ಅದನ್ನು ಸರಿಪಡಿಸುವ ಸಾಮರ್ಥ್ಯ ನಿಮಗಿದೆ. ಸದ್ಯಕ್ಕೆ ನಿಮ್ಮ ಮುಖ್ಯ ಜವಾಬ್ದಾರಿ ಬೆಂಗಳೂರಿನ 'ತ್ರಿಮೂರ್ತಿ' ಸಮಸ್ಯೆಗಳ ಮೇಲೆ ನಿಂತಿದೆ: ಕಸ (Garbage), ಒಳಚರಂಡಿ (Sewage) ಮತ್ತು ರಾಜಕಾಲುವೆ (Drainage)&lt;/p&gt;&lt;h3&gt;&lt;strong&gt;ಬದಲಾವಣೆ ನಿರೀಕ್ಷೆ&lt;/strong&gt;&lt;/h3&gt;&lt;p&gt;ಈಗಷ್ಟೇ ಮುಂಗಾರು ಶುರುವಾಗಿರೋದ್ರಿಂದ ಬೆಂಗಳೂರಿಗರಿಗೆ ಈಗ ದೊಡ್ಡ ದೊಡ್ಡ ಸ್ಕೈವಾಕ್&zwnj;ಗಳು ಬೇಡ; ಮಳೆ ನೀರು ಸರಾಗವಾಗಿ ಹರಿದು ಹೋಗುವ ಚರಂಡಿಗಳು, ಉಕ್ಕಿ ಹರಿಯದ ಒಳಚರಂಡಿ ಹಾಗೂ ಸ್ವಚ್ಛ ರಸ್ತೆಗಳು ಬೇಕು. ಈ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿದರೆ ಸಾಕು, ಬೆಂಗಳೂರಿಗರು ನೆಮ್ಮದಿಯ ಜೀವನ ನಡೆಸಬಹುದು. ಹೊಣೆಗಾರಿಕೆ ನಿಮ್ಮದು, ಬದಲಾವಣೆಯ ನಿರೀಕ್ಷೆಯಲ್ಲಿ ನಾವಿದ್ದೇವೆ ಮಿನಿಸ್ಟರ್ ಸರ್ ಎಂದು ಎಕ್ಸ್ ಖಾತೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶ್ರೀ @krishnabgowda ಅವರಿಗೆ ಅಭಿನಂದನೆಗಳು!, ಆದ್ರೆ ಅಧಿಕಾರ ವಹಿಸಿಕೊಳ್ಳೋಕೆ 12 ದಿನ ಕಾಯಿಸಿದ್ದು ನೋಡಿದ್ರೆ, ನಮ್ಮ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ!ನಿಮ್ಮ ಮುಂದೆ ಒಂದು ವಿಶಿಷ್ಟ ಸವಾಲಿದೆ. ನಿಮ್ಮ ಖಾತೆಗೆ 'ನಗರಾಭಿವೃದ್ಧಿ' ಅಂತ ಹೆಸರೇನೋ ಇದೆ, ಆದ್ರೆ ಟೌನ್&hellip; https://t.co/sbYVx3cFkw&lt;/p&gt;&lt;p&gt;&mdash; Nikhil Kumar (@Nikhil_Kumar_k) June 17, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>politics</category>
            <dc:creator>Mahmad Rafik</dc:creator>
            <atom:link href="https://kannada.asianetnews.com/politics/seeing-minister-krishna-byre-gowda-reminds-me-of-the-silk-board-traffic-jam-nikhil-kumaraswamy-mrq/articleshow-qda4nf5"/>
        </item>
        <item>
            <title><![CDATA[Interview: ಬಿಜೆಪಿ ರಾಜ್ಯಾಧ್ಯಕ್ಷ ಗೊಂದಲಕ್ಕೆ ಯಾವುದೇ ಕ್ಷಣ ವರಿಷ್ಠರಿಂದ ಪರಿಹಾರ: ರಾಧಾಮೋಹನ]]></title>
            <link>https://kannada.asianetnews.com/politics/karnataka-bjp-president-confusion-radhamohan-das-interview-with-asianet-suvarna-news-rav/articleshow-r6d42a3</link>
            <guid isPermaLink="true">https://kannada.asianetnews.com/politics/karnataka-bjp-president-confusion-radhamohan-das-interview-with-asianet-suvarna-news-rav/articleshow-r6d42a3</guid>
            <pubDate>Fri, 19 Jun 2026 05:26:39 +0530</pubDate>
            <description><![CDATA[&lt;p&gt;ರಾಜ್ಯ ಬಿಜೆಪಿಯಲ್ಲಿನ ನಾಯಕತ್ವದ ಗೊಂದಲ, ನಿರ್ಧಾರ ವಿಳಂಬ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್&zwnj;ವಾಲ್ ಮಾತನಾಡಿದ್ದಾರೆ. ರಾಜ್ಯಾಧ್ಯಕ್ಷರ ಕುರಿತು ಶೀಘ್ರದಲ್ಲೇ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ, ಪಕ್ಷದ ಆಂತರಿಕ ಕಾರ್ಯವೈಖರಿ ಸಮರ್ಥಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvejehj0xahreqyr0z8wxm65,imgname----------------------4--1781826799167.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಖಾಮುಖಿ&lt;/strong&gt;&lt;/p&gt;&lt;p&gt;&lt;strong&gt;ರಾಧಾಮೋಹನ್ ದಾಸ್ ಅಗರ್&zwnj;ವಾಲ್&lt;/strong&gt;&lt;/p&gt;&lt;p&gt;- ರಾಜ್ಯ ಬಿಜೆಪಿ ಉಸ್ತುವಾರಿ&lt;/p&gt;&lt;p&gt;&lt;strong&gt;ವಿಜಯ್ ಮಲಗಿಹಾಳ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಜೂ.19): &lt;/strong&gt;ಕಳೆದ ಲೋಕಸಭಾ ಚುನಾವಣೆ ಬಳಿಕ ಶುರುವಾದ ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ಈ ಕ್ಷಣದವರೆಗೂ ಮುಕ್ತಿ ಸಿಕ್ಕಿಲ್ಲ. ಆಗಾಗ ಅಸಮಾಧಾನ, ಭಿನ್ನಾಭಿಪ್ರಾಯ ಹೊರಬೀಳುತ್ತಲೇ ಇರುತ್ತದೆ. ಪಕ್ಷದ ರಾಜ್ಯ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಡಾ.ರಾಧಾಮೋಹನ್ ದಾಸ್ ಅಗರ್&zwnj;ವಾಲ್ ಅವರು ರಾಜ್ಯಕ್ಕೆ ಭೇಟಿ ನೀಡಿ ಪಕ್ಷದ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಏನೂ ಆಗಿಯೇ ಇಲ್ಲ ಎಂಬಂತೆ ವಾಪಸಾಗುತ್ತಾರೆ. ದೆಹಲಿಯ ವರಿಷ್ಠರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟ ನಿಲುವನ್ನೂ ಪ್ರಕಟಿಸದೆ ಮುಗುಮ್ಮಾಗಿ ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಧಾಮೋಹನ್ ದಾಸ್ ಅಗರ್&zwnj;ವಾಲ್ ಅವರು &lsquo;ಕನ್ನಡಪ್ರಭ&rsquo;ಕ್ಕೆ &lsquo;ಮುಖಾಮುಖಿ&rsquo;ಯಾಗಿದ್ದು ಹೀಗೆ...&lt;/p&gt;&lt;p&gt;*&lt;strong&gt;ಕಳೆದ ಎರಡು ವರ್ಷಗಳಿಂದ ರಾಜ್ಯಾಧ್ಯಕ್ಷ ಸ್ಥಾನ, ನಾಯಕತ್ವದ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮುಂದುವರೆದಿದೆಯಲ್ವಾ?&lt;/strong&gt;&lt;/p&gt;&lt;p&gt;ನಮ್ಮ ಕಾರ್ಯಕರ್ತರು ಕಮಲ ಚಿಹ್ನೆಯ ಕಾರ್ಯಕರ್ತರು. ಅವರು ಯಾವುದೇ ವ್ಯಕ್ತಿ ಅಥವಾ ಹುದ್ದೆಗೆ ಸಂಬಂಧಿಸಿದವರು ಅಲ್ಲ. ಕಾಂಗ್ರೆಸ್&zwnj;ನಲ್ಲಿ ಗೊಂದಲದ ಬೆಟ್ಟವೇ ನಿರ್ಮಾಣವಾಗಿದೆ. ಅದಕ್ಕೆ ಹೋಲಿಸಿದರೆ ಬಿಜೆಪಿಯಲ್ಲಿನ ಗೊಂದಲ ತೀರಾ ಸಣ್ಣ ಪ್ರಮಾಣದ್ದು.&lt;/p&gt;&lt;p&gt;*&lt;strong&gt;ಕಾಂಗ್ರೆಸ್ ಪಕ್ಷದಂತೆ ಬಿಜೆಪಿಯಲ್ಲಿ ಸಂಘಟನೆಗೆ ಸಂಬಂಧಿಸಿ ತ್ವರಿತಗತಿಯ ನಿರ್ಧಾರಗಳನ್ನು ಯಾಕೆ ತೆಗೆದುಕೊಳ್ಳುವುದಿಲ್ಲ?&lt;/strong&gt;&lt;/p&gt;&lt;p&gt;ನಿರ್ಧಾರ ತೆಗೆದುಕೊಳ್ಳುವುದೆಂದರೆ ಯಾರನ್ನಾದರೂ ಗಲ್ಲಿಗೆ ಏರಿಸಬೇಕೇ? ಕಾನೂನಿನಲ್ಲಿ ಗಲ್ಲು ಶಿಕ್ಷೆ ವಿಧಿಸುವುದು ಅಷ್ಟು ಸುಲಭವಿಲ್ಲ. ನಾನು ಹೆಸರು ಹೇಳಲು ಬಯಸುವುದಿಲ್ಲ (ಬಸನಗೌಡ ಪಾಟೀಲ ಯತ್ನಾಳ). ರಾಜ್ಯದ ಒಬ್ಬ ಮುಖಂಡನನ್ನು ಪಕ್ಷದಿಂದ ಉಚ್ಚಾಟಿಸುವ ಮೊದಲು ನಾನು ಅವರೊಂದಿಗೆ ಐದು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಸುಮಾರು 10 ಗಂಟೆಗಳ ಕಾಲ ಚರ್ಚಿಸಿದ್ದೇನೆ. ಇದರ ಮೇಲೆ ನಿಮಗೆ ಅರ್ಥವಾಗಿರಬೇಕು. ನಾವು ಯಾರ ವಿರುದ್ಧವೂ ತರಾತುರಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ನಾವು ಏಕಾಏಕಿ ಕ್ರೂರವಾಗುವುದಕ್ಕೆ ಸಾಧ್ಯವಿಲ್ಲ.&lt;/p&gt;&lt;p&gt;*&lt;strong&gt;ಕೆಲವೊಮ್ಮೆ ನಿರ್ಣಯಗಳು ವಿಳಂಬವಾಗುವುದರಿಂದ ಪಕ್ಷದ ಸಂಘಟನೆ ಅಂತರಿಕವಾಗಿ ಕುಸಿದು ಹೋಗುವುದಿಲ್ಲವೇ?&lt;/strong&gt;&lt;/p&gt;&lt;p&gt;ನಮ್ಮ ಪಕ್ಷ ಆಂತರಿಕವಾಗಿ ಗಟ್ಟಿಯಾಗಿದೆ. ನಿರ್ಣಯಗಳನ್ನು ಕೈಗೊಳ್ಳುವುದು ವಿಳಂಬವಾಗುವುದರಿಂದ ಸಂಘಟನೆ ಕುಸಿಯುವುದಿಲ್ಲ.&lt;/p&gt;&lt;p&gt;*&lt;strong&gt;ಆಪರೇಷನ್ ಯಶಸ್ವಿಯಾಯಿತು, ರೋಗಿ ನಿಧನ ಹೊಂದಿದ ಎಂಬ ಆಡು ಮಾತಿದೆ. ಬಿಜೆಪಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಇದೇ ರೀತಿ ಆಗುತ್ತಿದೆಯಲ್ವಾ?&lt;/strong&gt;&lt;/p&gt;&lt;p&gt;ಇಲ್ಲ. ಇಲ್ಲ... ನಮ್ಮ ಪಕ್ಷದಲ್ಲಿ ಆ ರೀತಿ ಆಗುವುದಿಲ್ಲ. ಆಪರೇಷನ್ ಕೂಡ ಯಶಸ್ವಿಯಾಗುತ್ತದೆ. ಮಗು ಕೂಡ ಆರೋಗ್ಯಕರಾಗಿ ಜನ್ಮ ತಾಳುತ್ತದೆ. ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುತ್ತದೆ.&lt;/p&gt;&lt;p&gt;*&lt;strong&gt;ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ಸುದೀರ್ಘವಾಗಿ ಮುಂದುವರೆದಿದೆ, ಯಾವಾಗ ಬಗೆಹರಿಯಬಹುದು?&lt;/strong&gt;&lt;/p&gt;&lt;p&gt;ಶೀಘ್ರದಲ್ಲೇ ಈ ಎಲ್ಲ ಗೊಂದಲಕ್ಕೆ ತೆರೆ ಬೀಳಲಿದೆ. ಯಾವುದೇ ಕ್ಷಣದಲ್ಲಿ ಹೈಕಮಾಂಡ್&zwnj;ನಿಂದ ನಿರ್ಣಯ ಪ್ರಕಟವಾಗುವ ಸಾಧ್ಯತೆಯಿದೆ. ಹಾಲಿ ಅಧ್ಯಕ್ಷರ ಕಾರ್ಯಕ್ಷಮತೆ ಸೇರಿ ವಿವಿಧ ಅಂಶಗಳನ್ನು ರಾಷ್ಟ್ರೀಯ ನಾಯಕತ್ವ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಯಾವುದೇ ಕ್ಷಣದಲ್ಲಾದರೂ ನೂತನ ಅಧ್ಯಕ್ಷರ ನೇಮಕ ಆಗಬಹುದು.&lt;/p&gt;&lt;p&gt;*&lt;strong&gt;ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸಲಾಗುತ್ತದೆಯೇ ಅಥವಾ ಹೊಸಬರನ್ನು ನೇಮಿಸಲಾಗುತ್ತದೆಯೇ?&lt;/strong&gt;&lt;/p&gt;&lt;p&gt;ರಾಜ್ಯಾಧ್ಯಕ್ಷರ ನೇಮಕ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯ ವಿಷಯ. ರಾಜ್ಯ ರಾಜಕೀಯ ಬೆಳವಣಿಗೆಗಳು ಮತ್ತು ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಕೇಂದ್ರ ನಾಯಕರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆ ಸಮಯ ಈಗ ಸಮೀಪಿಸಿದೆ.&lt;/p&gt;&lt;p&gt;*&lt;strong&gt;ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬದಲಾವಣೆಗಳ ಆಧಾರದ ಮೇಲೆ ಬಿಜೆಪಿಯಲ್ಲೂ ನಾಯಕತ್ವಕ್ಕೆ ಸಂಬಂಧಿಸಿದಂತೆ ಜಾತಿ ಸಮೀಕರಣ ಮಾಡುವ ಉದ್ದೇಶವಿದೆಯೇ?&lt;/strong&gt;&lt;/p&gt;&lt;p&gt;ಬಿಜೆಪಿ ಯಾವತ್ತೂ ಜಾತಿ ಆಧಾರಿತ ರಾಜಕಾರಣ ಮಾಡುವುದಿಲ್ಲ. ನಿರ್ಣಯವನ್ನೂ ಕೈಗೊಳ್ಳುವುದಿಲ್ಲ.&lt;/p&gt;&lt;p&gt;*&lt;strong&gt;ಪಕ್ಷದ ರಾಜ್ಯ ಉಸ್ತುವಾರಿಯಾಗಿ ನಿಮ್ಮ ಕಾರ್ಯನಿರ್ವಹಣೆ ತೃಪ್ತಿ ತಂದಿದೆಯೇ? ಕಾಂಗ್ರೆಸ್ ಉಸ್ತುವಾರಿ ಕಾರ್ಯವೈಖರಿಯೊಂದಿಗೆ ನಿಮ್ಮ ಹೋಲಿಕೆ ಮಾಡಲಾಗುತ್ತಿದೆಯಲ್ವಾ?&lt;/strong&gt;&lt;/p&gt;&lt;p&gt;ಕಾಂಗ್ರೆಸ್&zwnj; ಉಸ್ತುವಾರಿ ಜತೆ ನನ್ನನ್ನು ಹೋಲಿಸಬೇಡಿ. ನಮ್ಮ ಪಕ್ಷದ ಸಂಘಟನಾ ಸ್ವರೂಪಕ್ಕೂ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನಾ ಸ್ವರೂಪಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮದು ವ್ಯಕ್ತಿ ಆಧಾರಿತ ಸಂಘಟನೆ ಅಲ್ಲ. ಸಮನ್ವಯತೆಯೊಂದಿಗೆ ಸಂಘಟನೆ ಮಾಡುವುದು ಬಿಜೆಪಿಯ ವಿಶೇಷತೆ. ನಾವು ಪಕ್ಷದ ಸಂಘಟನೆಗೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಒಂದು ರಾಜ್ಯದ ಉಸ್ತುವಾರಿಯಾದ ಕೂಡಲೇ ಆ ರಾಜ್ಯ ಘಟಕದ ಮಾಲೀಕರಂತೆ ಆಡುವುದಿಲ್ಲ. ನಮ್ಮಲ್ಲಿ ಒಬ್ಬ ವ್ಯಕ್ತಿಯ ನಿರ್ಧಾರ, ನಿರ್ದೇಶನ ನಡೆಯುವುದಿಲ್ಲ. ಸಾಮೂಹಿಕ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುತ್ತೇವೆ. ಪರಿಸ್ಥಿತಿ ನಮ್ಮ ಕೈಮೀರಿ ಹೋಗುತ್ತಿದೆ ಎಂಬುದು ಮನವರಿಕೆಯಾದ ಬಳಿಕ ನಾವು ಕ್ರಮ ಕೈಗೊಳ್ಳುತ್ತೇವೆ. ಅದಕ್ಕೂ ಮೊದಲು ತಮ್ಮ ತಪ್ಪುಗಳನ್ನು ಅರಿತು ಸುಧಾರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡುತ್ತೇವೆ.&lt;/p&gt;&lt;p&gt;*&lt;strong&gt;ನೀವು ಪಕ್ಷದ ರಾಜ್ಯ ಉಸ್ತುವಾರಿಯಾಗಿ ನಿಮ್ಮ ಕೆಲಸ ತೃಪ್ತಿ ತಂದಿದೆಯೇ?&lt;/strong&gt;&lt;/p&gt;&lt;p&gt;ನಾನು ಉಸ್ತುವಾರಿಯಾಗಿ ನೇಮಕಗೊಂಡ ಬ&zwj;ಳಿಕ ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಅಣಿಗೊಳಿಸುವುದೂ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದೇನೆ. ನಾನು ಪ್ರಚಾರಪ್ರಿಯನಲ್ಲ. ನನಗೆ ಕೊಟ್ಟ ಕೆಲಸ ಮಾಡಿಕೊಂಡು ಹೋಗುತ್ತೇನೆ. ಹೀಗಾಗಿ, ಅದು ಹೆಚ್ಚು ಗೊತ್ತಾಗುವುದಿಲ್ಲ. ಕಾಂಗ್ರೆಸ್ಸಿನ ವ್ಯಾಖ್ಯಾನದಿಂದ ಬಿಜೆಪಿಯನ್ನು ನೋಡುವುದು ಬೇಡ. ಕಾಂಗ್ರೆಸ್ ಬೇರೆ, ಬಿಜೆಪಿ ಬೇರೆ.&lt;/p&gt;&lt;p&gt;*&lt;strong&gt;ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿ ರಾಜ್ಯ ರಾಜಕಾರಣವನ್ನು ಹೇಗೆ ನೋಡುತ್ತಿದ್ದೀರಿ?&lt;/strong&gt;&lt;/p&gt;&lt;p&gt;ಕರ್ನಾಟಕದ ಮತದಾರರು ಆಸೆಬುರುಕರಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳ ಆಮಿಷ ಒಡ್ಡಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ, ಮುಂದೆ ಒಂದು ವರ್ಷದಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನೇತೃತ್ವದ ಎನ್&zwnj;ಡಿಎ ಕೂಟ ಅತಿಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ರಾಜ್ಯದ ಮತದಾರರು ಆಸೆಬುರುಕರಲ್ಲ ಎಂಬುದನ್ನು ನಿರೂಪಿಸಿದರು. ಕಳೆದ ಎರಡು-ಮೂರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದಾರೆ. ಸರ್ಕಾರದ ವಿರುದ್ಧ ಜನರಲ್ಲಿ ತೀವ್ರ ಅಸಮಾಧಾನವಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಈ ಜನಾಕ್ರೋಶ ಐತಿಹಾಸಿಕವಾಗಿ ವ್ಯಕ್ತವಾಗಲಿದೆ.&lt;/p&gt;&lt;p&gt;*&lt;strong&gt;ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್&zwnj; ಅವರು ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಸಂಘಟನೆ ದುರ್ಬಲವಾಗಿರುವುದನ್ನು ಪ್ರಸ್ತಾಪಿಸಿ ಅಸಮಾಧಾನ ಹೊರಹಾಕಿದ್ದರಂತೆ?&lt;/strong&gt;&lt;/p&gt;&lt;p&gt;ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಪದಾಧಿಕಾರಿಗಳು ಹಾಗೂ ಮುಖಂಡರ ಸಂಘಟನಾತ್ಮಕ ಜವಾಬ್ದಾರಿ ಬಗ್ಗೆ ಪ್ರಸ್ತಾಪಿಸಿ ಮಾತುಗಳನ್ನು ಆಡಿದ್ದರು. ಕೋರ್ ಕಮಿಟಿ ಸದಸ್ಯರ ಪಾತ್ರ ಏನು ಎಂಬುದನ್ನು ಹೇಳಿದ್ದರು. ಅದು ಅಸಮಾಧಾನ ಅಂತ ಅಲ್ಲ.&lt;/p&gt;&lt;p&gt;*&lt;strong&gt;ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ರಾಜ್ಯ ಬಿಜೆಪಿ ಗಂಭೀರ ಸಿದ್ಧತೆಯಲ್ಲಿ ತೊಡಗಿದೆಯಲ್ಲ?&lt;/strong&gt;&lt;/p&gt;&lt;p&gt;ಹೌದು. ಇದೊಂದು ಪ್ರಮುಖವಾದ ಪ್ರಕ್ರಿಯೆ. ಇದು ಪ್ರಾಮಾಣಿಕವಾಗಿ ನಡೆಯಬೇಕು ಎಂಬುದು ಬಿಜೆಪಿಯ ಸದುದ್ದೇಶ. ಇದರಲ್ಲಿ ರಾಜಕೀಯ ಪಕ್ಷಗಳು ಸಕ್ರಿಯವಾಗಿ ಪಾಲ್ಗೊಳ್ಳದೇ ಇದ್ದಲ್ಲಿ ಸರ್ಕಾರಿ ಅಧಿಕಾರಿಗಳು ಇದನ್ನು ವಿಫಲಗೊಳಿಸುವ ಸಾಧ್ಯತೆಯಿರುತ್ತದೆ. ಕೇವಲ ಮತ ಕೇಳುವುದಷ್ಟೇ ನಮ್ಮ ಕೆಲಸವಲ್ಲ. ಮತದಾನದ ಹಕ್ಕು ಸಿಗುವುದು ಈ ದೇಶದ ಜನರ ಮೂಲಭೂತ ಅಧಿಕಾರ. ಹಿಂದೂ, ಮುಸ್ಲಿಂ ಅಥವಾ ಕ್ರೈಸ್ತ ಯಾವುದೇ ಧರ್ಮ ಇರಲಿ. ಮತದಾನದ ಮೂಲಭೂತ ಅಧಿಕಾರ ದೊರಕಬೇಕು ಎಂಬುದು ಬಿಜೆಪಿಯ ಉದ್ದೇಶ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದೇವೆ.&lt;/p&gt;&lt;p&gt;*&lt;strong&gt;ಈ ಸಮಗ್ರ ಪರಿಷ್ಕರಣೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬ ಆರೋಪವನ್ನು ಕಾಂಗ್ರೆಸ್ ಸತತವಾಗಿ ಮಾಡುತ್ತಿದೆ?&lt;/strong&gt;&lt;/p&gt;&lt;p&gt;ನೋಡಿ, ಈ ಸಮಗ್ರ ಪರಿಷ್ಕರಣೆಯ ಜವಾಬ್ದಾರಿಯನ್ನು ಕೇಂದ್ರ ಚುನಾವಣಾ ಆಯೋಗ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ವಹಿಸುತ್ತದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ರಾಜ್ಯದ ಐಎಎಸ್&zwnj; ಅಧಿಕಾರಿಯಾಗಿದ್ದು, ಅವರನ್ನು ಮುಖ್ಯಮಂತ್ರಿಗಳೇ ನೇಮಕ ಮಾಡಿರುತ್ತಾರೆ. ಇಡೀ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರೆಲ್ಲರೂ ರಾಜ್ಯ ಸರ್ಕಾರದ ಅಧಿಕಾರಿಗಳು, ನೌಕರರೇ ಆಗಿರುತ್ತಾರೆ. ಕರ್ನಾಟಕದಲ್ಲಿ ಈಗ ಇಡೀ ಆಡಳಿತ ಯಂತ್ರವೇ ಕಾಂಗ್ರೆಸ್ ಕೈಯಲ್ಲಿರುವಾಗ ಬಿಜೆಪಿ ಸಮಗ್ರ ಪರಿಷ್ಕರಣೆಯನ್ನು ದುರುಪಯೋಗ ಮಾಡಲು ಹೇಗೆ ಸಾಧ್ಯ ಎಂಬುದನ್ನು ಯೋಚಿಸಬೇಕು.&lt;/p&gt;&lt;p&gt;&lt;strong&gt;*ಈ ಪ್ರಕ್ರಿಯೆಯನ್ನು ಬಳಸಿಕೊಂಡು ಬಿಜೆಪಿಯು ತಮಗೆ ಮತ ಹಾಕದವರನ್ನು ಗುರುತಿಸಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಿಸಬಹುದು ಎಂಬ ಆತಂಕವನ್ನು ಕಾಂಗ್ರೆಸ್ ವ್ಯಕ್ತಪಡಿಸುತ್ತಿದೆಯಲ್ವಾ?&lt;/strong&gt;&lt;/p&gt;&lt;p&gt;ಇಡೀ ಪ್ರಕ್ರಿಯೆಯಲ್ಲಿ ಸರ್ಕಾರಿ ನೌಕರರೇ ಇರುವುದರಿಂದ ಹೆಸರುಗಳನ್ನು ಸೇರಿಸುವ ಅಥವಾ ಕಿತ್ತು ಹಾಕುವ ವ್ಯವಸ್ಥೆ ಕಾಂಗ್ರೆಸ್ ಕೈಯಲ್ಲಿಯೇ ಇದೆ. ಇದರಲ್ಲಿ ಬಿಜೆಪಿ ಹೇಗೆ ಪಾತ್ರ ವಹಿಸಲು ಸಾಧ್ಯ. ಕಳ್ಳನೇ ಪೊಲೀಸರನ್ನು ದೂಷಿಸಿದಂತಾಯಿತು ಇದು.&lt;/p&gt;&lt;p&gt;*&lt;strong&gt;ಮುಸ್ಲಿಂ ಸಮುದಾಯದ ಮತದಾರರನ್ನೇ ಗುರಿಯಾಗಿಸಿ ಅವರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಬಹುದು ಎಂಬ ಅನುಮಾನವೂ ವಿರೋಧಿಗಳಿಂದ ವ್ಯಕ್ತವಾಗುತ್ತಿದೆ?&lt;/strong&gt;&lt;/p&gt;&lt;p&gt;ಅದು ಹೇಗೆ ಮುಸ್ಲಿಂ ಸಮುದಾಯದ ಮತದಾರರನ್ನೇ ಗುರಿಯಾಗಿಸಿ ಮತದಾರರ ಪಟ್ಟಿಯಿಂದ ಕಿತ್ತು ಹಾಕಬಹುದು ಹೇಳಿ. ಹಾಗೆ ಮಾಡಲು ಆಗುವುದಿಲ್ಲ. ಆಯೋಗ ಕೇಳಿದ ಸೂಕ್ತ ದಾಖಲೆಗಳನ್ನು ನೀಡಿದ ಮೇಲೆ ಯಾರನ್ನೇ ಆಗಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಈಗ ಕಾಂಗ್ರೆಸ್ ಪಕ್ಷಕ್ಕೇ ಮುಸ್ಲಿಂ ಸಮುದಾಯದ ಮತಗಳು ಬೇಕಾಗಿರಲಿಕ್ಕಿಲ್ಲ. ಬಿಜೆಪಿಯ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದವರೇ ಮುಸ್ಲಿಂ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.&lt;/p&gt;&lt;p&gt;&lt;strong&gt;*ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದಲ್ಲಿನ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಈ ಅನುಮಾನ, ಆತಂಕಕ್ಕೆ ಕಾರಣವಾಗಿದೆ. ಅಲ್ಲಿ ಅಪಾರ ಸಂಖ್ಯೆಯ ಮತದಾರರನ್ನು ಕೈಬಿಟ್ಟಿರುವುದರ ಹಿಂದೆ ಬಿಜೆಪಿ ಪಾತ್ರವಿದೆ ಎಂಬ ಆರೋಪ ಕೇಳಿಬಂದಿದೆ?&lt;/strong&gt;&lt;/p&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಸಮಗ್ರ ಪರಿಷ್ಕರಣೆ ನಡೆಯುವ ವೇಳೆ ಅಲ್ಲಿ ಬಿಜೆಪಿ ಸರ್ಕಾರವೇನೂ ಇರಲಿಲ್ಲ. ಅಲ್ಲಿ ಇದ್ದದ್ದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಸರ್ಕಾರ. ಪರಿಷ್ಕರಣೆಯಲ್ಲಿ ಭಾಗಿಯಾದ ಅಧಿಕಾರಿಗಳು, ಸಿಬ್ಬಂದಿ ಆ ಸರ್ಕಾರಕ್ಕೆ ಸೇರಿದವರು. ಸುಪ್ರೀಂ ಕೋರ್ಟ್&zwnj; ಕೂಡ ನಿಗಾ ವಹಿಸಿತ್ತು. ಅಲ್ಲಿ ಬಿಜೆಪಿಯ ಪಾತ್ರವೇ ಇಲ್ಲ. ಇದು ಸುಳ್ಳು ಆರೋಪ ಅಷ್ಟೇ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-bjp-president-confusion-radhamohan-das-interview-with-asianet-suvarna-news-rav/articleshow-r6d42a3"/>
        </item>
        <item>
            <title><![CDATA[362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್]]></title>
            <link>https://kannada.asianetnews.com/politics/bjp-362-mission-triggers-high-stakes-political-contest-across-states-videoshow-vs2bh5i</link>
            <guid isPermaLink="true">https://kannada.asianetnews.com/politics/bjp-362-mission-triggers-high-stakes-political-contest-across-states-videoshow-vs2bh5i</guid>
            <pubDate>Thu, 18 Jun 2026 22:05:29 +0530</pubDate>
            <description><![CDATA[&lt;p&gt;ಟಾರ್ಗೆಟ್ ಫಿಕ್ಸ್.. ಆಟ ಶುರು ಮಾಡಿದೆ ಮೋದಿ-ಶಾ ಜೋಡಿ..! ಕೇಸರಿ ಕಲಿಗಳು ಕಣ್ಣಿಟ್ಟಿರುವ ಆ ಬ್ರಹ್ಮಾಸ್ತ್ರ ಯಾವುದು..? ರಾಷ್ಟ್ರ ರಾಜಕೀಯದಲ್ಲಿ ಮಹಾ ಕಂಪನ ಸೃಷ್ಟಿಸಿದ ಚಾಣಕ್ಯ ದಾಳ..!&lt;/p&gt;]]></description>
            <media:content url="https://geo.dailymotion.com/player/x1tbu.html?video=xagj9ly" medium="video" height="768" width="1024"/>
            <content:encoded><![CDATA[&lt;p&gt;ಟಾರ್ಗೆಟ್ 362 &amp;nbsp;ಫಿಕ್ಸ್ ಮಾಡಿಕೊಂಡಿದೆ ಬಿಜೆಪಿ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ಮೋದಿ ಹಾಗೂ ಅಮಿತ್ ಶಾ ದಾಳ ಉರುಳಿಸಿದ್ದಾರೆ. ಟಿಎಂಸಿಯಲ್ಲಿ ಕೋಲಾಹಲ, ಉದ್ಧವಾ ಠಾಕ್ರೆ ಶಿವಸೇನೆಯಲ್ಲಿ ಬಂಡಾಯ, ಅಖಿಲೇಶ್ ಯಾದವ್ ಸಮಾಜವಾದಿ ಪಾರ್ಟಿಯಲ್ಲಿ ತಳಮಳ ಶುರುವಾಗಿದೆ. 362 ಟಾರ್ಗೆಟ್ ರೀಚ್ ಆಗೋದಿಕ್ಕೆ ಬಿಜೆಪಿ ಪ್ರಯತ್ನಿಸ್ತಾ ಇರೋದ್ಯಾಕೆ..? ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಬಿಜೆಪಿಗೆ ಬೇಕಿರೋದ್ಯಾಕೆ..?&lt;/p&gt;]]></content:encoded>
            <category>politics</category>
            <dc:creator>Chethan Kumar</dc:creator>
            <atom:link href="https://kannada.asianetnews.com/politics/bjp-362-mission-triggers-high-stakes-political-contest-across-states-videoshow-vs2bh5i"/>
        </item>
        <item>
            <title><![CDATA[Karnataka Politics: ಜೂ.21ಕ್ಕೆ ಅಖಂಡ ಶ್ರೀನಿವಾಸಮೂರ್ತಿ ಎಚ್ಡಿಕೆ ಸಮ್ಮುಖದಲ್ಲಿ ಜೆಡಿಎಸ್ ದಳಕ್ಕೆ ಸೇರ್ಪಡೆ]]></title>
            <link>https://kannada.asianetnews.com/politics/former-mla-akhanda-srinivasa-murthy-joins-jds-on-21st-rav/articleshow-xkmf6x5</link>
            <guid isPermaLink="true">https://kannada.asianetnews.com/politics/former-mla-akhanda-srinivasa-murthy-joins-jds-on-21st-rav/articleshow-xkmf6x5</guid>
            <pubDate>Thu, 18 Jun 2026 06:13:01 +0530</pubDate>
            <description><![CDATA[&lt;p&gt;ಪುಲಿಕೇಶಿನಗರದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್&zwnj; ಪಕ್ಷಕ್ಕೆ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ. ಈ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ನಂತರ ಬಿಎಸ್&zwnj;ಪಿ ಸೇರಿ ಪರಾಭವಗೊಂಡಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvc253ab14bnaq42f58h9rwg,imgname-----------------------2026-06-18t055927.069-1781742603595.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.18): &lt;/strong&gt;ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ(Pulikeshinagar Assembly Constituency)ದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ(Akhanda Srinivasamurthy) ಅವರು ಜೆಡಿಎಸ್&zwnj; ಪಕ್ಷ(JDS party) ಸೇರ್ಪಡೆಗೆ ಮುಹೂರ್ತ ಫಿಕ್ಸ್&zwnj; ಆಗಿದೆ.&lt;/p&gt;&lt;h2&gt;ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆ?&lt;/h2&gt;&lt;p&gt;ಭಾನುವಾರ ನಗರದ ಟ್ಯಾನರಿ ರಸ್ತೆಯ ಪಿಳ್ಳಣ್ಣ ಗಾರ್ಡನ್&zwnj;ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿ(HD Kumaraswamy) ಅವರ ಸಮ್ಮುಖದಲ್ಲಿ ಅಖಂಡ ಶ್ರೀನಿವಾಸ್&zwnj; ಮೂರ್ತಿ ಅವರು ತಮ್ಮ ಬೆಂಬಲಗರೊಂದಿಗೆ ಜೆಡಿಎಸ್&zwnj;ಗೆ ಸೇರ್ಪಡೆಯಾಗಲಿದ್ದಾರೆ.&lt;/p&gt;&lt;h3&gt;ನೆಲಮಂಗಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿ&lt;/h3&gt;&lt;p&gt;ಕೆಲ ದಿನಗಳ ಹಿಂದೆಯಷ್ಟೇ ಎಚ್&zwnj;.ಡಿ.ಕುಮಾರಸ್ವಾಮಿ ಅವರು ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಜೆಡಿಎಸ್&zwnj; ಸೇರ್ಪಡೆಗೆ ಅಖಂಡ ಉತ್ಸುಕರಾಗಿರುವ ಬಗ್ಗೆ ತಿಳಿಸಿದ್ದರು. ಇದರ ಬೆನ್ನಲ್ಲೇ ಅಖಂಡ ಶ್ರೀನಿವಾಸಮೂರ್ತಿ ಅವರು ಜೆಡಿಎಸ್&zwnj;ಗೆ ಸೇರ್ಪಡೆಗೆ ಸಮಯ ನಿಗದಿಯಾಗಿದೆ. ಶ್ರೀನಿವಾಸಮೂರ್ತಿ ಅವರು ಪುಲಿಕೇಶಿನಗರ ಅಥವಾ ನೆಲಮಂಗಲ ವಿಧಾನಸಭಾ ಕ್ಷೇತ್ರದ ಟಿಕೆಟ್&zwnj; ಆಕಾಂಕ್ಷಿಯಾಗಿದ್ದಾರೆ.&amp;nbsp;&lt;/p&gt;&lt;h3&gt;ಜೆಡಿಎಸ್&zwnj;ಗೆ ಮರು ಸೇರ್ಪಡೆ&lt;/h3&gt;&lt;p&gt;ಜೆಡಿಎಸ್&zwnj; ವರಿಷ್ಠರ ತೀರ್ಮಾನದಂತೆ ಅಂತಿಮವಾಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಹಿಂದೆ ಅಖಂಡ ಶ್ರೀನಿವಾಸಮೂರ್ತಿ ಅವರು ಜೆಡಿಎಸ್&zwnj;ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಬಳಿಕ ಜೆಡಿಎಸ್&zwnj; ತೊರೆದು ಕಾಂಗ್ರೆಸ್&zwnj; ಸೇರಿದ್ದರು. ಕಾಂಗ್ರೆಸ್&zwnj; ಪಕ್ಷದಲ್ಲಿ ಟಿಕೆಟ್&zwnj; ಸಿಗದೆ ಬಿಎಸ್&zwnj;ಪಿ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/former-mla-akhanda-srinivasa-murthy-joins-jds-on-21st-rav/articleshow-xkmf6x5"/>
        </item>
        <item>
            <title><![CDATA[Telegram Ban: 'ಮುಂದಿನ ನಿಷೇಧ ಯಾರ ಮೇಲೆ? ವಾಟ್ಸಾಪ್ ಮೇಲಾ?' ಟೆಲಿಗ್ರಾಂ ಬ್ಯಾನ್ ಮಾಡಿದ  ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ]]></title>
            <link>https://kannada.asianetnews.com/india-news/rahul-gandhi-slams-centre-over-telegram-ban-amid-neet-paper-leak-concerns/articleshow-xstddeg</link>
            <guid isPermaLink="true">https://kannada.asianetnews.com/india-news/rahul-gandhi-slams-centre-over-telegram-ban-amid-neet-paper-leak-concerns/articleshow-xstddeg</guid>
            <pubDate>Wed, 17 Jun 2026 14:59:40 +0530</pubDate>
            <description><![CDATA[&lt;p&gt;NEET-UG ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಂ ಬ್ಯಾನ್(Telegram ban) ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಹುಲ್ ಗಾಂಧಿ(Rahul gandhi) ತೀವ್ರವಾಗಿ ಟೀಕಿಸಿದ್ದಾರೆ. 'ಪೇಪರ್ ಲೀಕ್ ಮಾಫಿಯಾ'ವನ್ನು ಹಿಡಿಯುವ ಬದಲು, ಆ್ಯಪ್ ಬಳಸುವ ವಿದ್ಯಾರ್ಥಿಗಳಿಗೆ ಇನ್ನಷ್ಟು ತೊಂದರೆ ಕೊಡ್ತಿದೆ ಎಂದು ಟೀಕೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-f07f9ac9-12ba-4ab3-be3a-9d614b3c5456.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಂಗ್ರೆಸ್ ನಾಯಕ(Congress leader) ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ (LoP) ರಾಹುಲ್ ಗಾಂಧಿ(Rahul gandhi) ಅವರು ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. NEET-UG ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಲಿಗ್ರಾಂ(Telegram) ಮೇಲೆ ನಿರ್ಬಂಧ ಹೇರಿರುವುದನ್ನು ಅವರು ಖಂಡಿಸಿದ್ದಾರೆ. 'ಪೇಪರ್ ಲೀಕ್ ಮಾಫಿಯಾ'ವನ್ನು ಮಟ್ಟಹಾಕುವ ಬದಲು ಸರ್ಕಾರ ವಿದ್ಯಾರ್ಥಿಗಳನ್ನೇ ಗುರಿಯಾಗಿಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.&lt;/p&gt;&lt;p&gt;ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮಂಗಳವಾರ ಈ ಕ್ರಮ ಕೈಗೊಂಡಿತ್ತು. NEET (UG) 2026ರ ಮರುಪರೀಕ್ಷೆ ಮತ್ತು ಅದರ ನಂತರದ ದಿನಗಳನ್ನು ಗಮನದಲ್ಲಿಟ್ಟುಕೊಂಡು, ಜೂನ್ 22, 2026ರವರೆಗೆ ಭಾರತದಲ್ಲಿ ಟೆಲಿಗ್ರಾಂ ಪ್ಲಾಟ್&zwnj;ಫಾರ್ಮ್&zwnj;ಗೆ ಪ್ರವೇಶವನ್ನು ನಿರ್ಬಂಧಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;h2&gt;'ಮಾಫಿಯಾಗಳನ್ನ ಮಟ್ಟಹಾಕಿ, ವಿದ್ಯಾರ್ಥಿಗಳಿಗಲ್ಲ'&lt;/h2&gt;&lt;p&gt;ಈ ಬಗ್ಗೆ ಎಕ್ಸ್&zwnj;ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, 'ಟೆಲಿಗ್ರಾಂ ಬ್ಯಾನ್' ಪೇಪರ್ ಲೀಕ್&zwnj;ಗಳನ್ನು ತಡೆಯಲು ಮೋದಿ ಸರ್ಕಾರದ ಹೊಸ ತಂತ್ರ. ಅಂದರೆ, ಕಳ್ಳನನ್ನು ಹಿಡಿಯುವ ಬದಲು, ಸಂತ್ರಸ್ತರ ಮನೆಗೆ ಬೀಗ ಹಾಕಿದಂತೆ ಎಂದು ವ್ಯಂಗ್ಯವಾಡಿದ್ದಾರೆ.&lt;/p&gt;&lt;p&gt;ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಟೆಲಿಗ್ರಾಂನಲ್ಲಿ ನೋಟ್ಸ್, ಟೆಸ್ಟ್ ಸೀರೀಸ್, ಚರ್ಚೆಗಳು ಮತ್ತು ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದಾರೆ. ಈ ಸೌಲಭ್ಯವನ್ನು ಕಸಿದುಕೊಳ್ಳುವುದು ಪೇಪರ್ ಲೀಕ್&zwnj;ಗೆ ಪರಿಹಾರವಾಗುತ್ತದೆಯೇ?' ಎಂದು ಅವರು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಅಷ್ಟಕ್ಕೂ ಈ ಕ್ರಮದಿಂದ ಏನೂ ಪ್ರಯೋಜನವಿಲ್ಲ. ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಗೊತ್ತು, ಪೇಪರ್ ಲೀಕ್ ಮಾಫಿಯಾಕ್ಕೂ ಇದು ತಿಳಿದಿದೆ. ಹಾಗಾದರೆ, ಮುಂದಿನ ನಿಷೇಧ ಯಾರ ಮೇಲೆ? ವಾಟ್ಸಾಪ್ ಮೇಲಾ?' ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.&lt;/p&gt;&lt;p&gt;ಪರೀಕ್ಷೆಯ ದಿನ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗುತ್ತದೆ. ಕತ್ತರಿಯಿಂದ ಅವರ ಜೇಬುಗಳನ್ನು ಕತ್ತರಿಸಲಾಗುತ್ತದೆ. ವಾಯುಪಡೆಯ ಮೂಲಕ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಲಾಗುತ್ತದೆ. ಇಂತಹ ನಾಟಕಗಳಿಗೆ ಏನೂ ಕಮ್ಮಿ ಇಲ್ಲ. ಆದರೆ ರೋಗದ ಮೂಲಕ್ಕೆ ಮಾತ್ರ ಯಾವುದೇ ಚಿಕಿತ್ಸೆ ಇಲ್ಲ. ಏಕೆಂದರೆ ಈ ಸರ್ಕಾರದ ಕಣ್ಗಾವಲಿನಲ್ಲೇ ಪೇಪರ್ ಲೀಕ್ ಮಾಫಿಯಾ ಹುಲುಸಾಗಿ ಬೆಳೆಯುತ್ತಿದೆ ಮತ್ತು ಯುವಕರ ಕಣ್ಣಲ್ಲಿ ರಕ್ತ ಬರುವಂತೆ ಮಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.&lt;/p&gt;&lt;p&gt;ಮೋದಿಜೀ, ಈ ನಾಟಕಗಳನ್ನು ಬಿಟ್ಟುಬಿಡಿ. ಮಾಫಿಯಾಳನ್ನ ಮಟ್ಠಹಾಕಿ. ವಿದ್ಯಾರ್ಥಿಗಳಿಗೆ ಮತ್ತಷ್ಟು ತೊಂದರೆ ಕೊಡೋದಲ್ಲ.'ವಿದ್ಯಾರ್ಥಿಗಳ ಧ್ವನಿ'ಯನ್ನು ಕೇಳಿ, ಇಲ್ಲದಿದ್ದರೆ ದೇಶದ ಯುವಕರಿಗೆ ತಮ್ಮ ಹಕ್ಕುಗಳನ್ನು ಹೇಗೆ ಪಡೆಯಬೇಕೆಂದು ತಿಳಿದಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.&lt;/p&gt;&lt;h3&gt;ಬ್ಯಾನ್ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಟೆಲಿಗ್ರಾಂ&lt;/h3&gt;&lt;p&gt;ಜೂನ್ 21ರಂದು ನಡೆಯಲಿರುವ NEET-UG 2026ರ ಮರುಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ವಂಚಿಸಲು ಮತ್ತು ದಾರಿ ತಪ್ಪಿಸಲು ಸಂಘಟಿತ ವಂಚನೆ ಜಾಲಗಳು ಟೆಲಿಗ್ರಾಂ ಅನ್ನು ಬಳಸುತ್ತಿವೆ ಎಂದು NTA ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಟೆಲಿಗ್ರಾಂ ಅನ್ನು ಬ್ಲಾಕ್ ಮಾಡಲು ಆದೇಶಿಸಿತ್ತು.&lt;/p&gt;&lt;p&gt;ಈ ಮಧ್ಯೆ, ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಂ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಜೂನ್ 22ರವರೆಗೆ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದನ್ನು ಕಂಪನಿ ವಿರೋಧಿಸಿದೆ. ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ರಜಾಕಾಲದ ಪೀಠದ ಮುಂದೆ ವಕೀಲ ಮಾಧವ್ ಖೋಸ್ಲಾ ಅವರು ಈ ವಿಷಯವನ್ನು ತುರ್ತು ವಿಚಾರಣೆಗೆ ಪ್ರಸ್ತಾಪಿಸಿದರು. ನಂತರದ ದಿನದಲ್ಲಿ ಅರ್ಜಿಯನ್ನು ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿಕೊಂಡಿದೆ. (ANI)&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದ ವಿವರಗಳನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/rahul-gandhi-slams-centre-over-telegram-ban-amid-neet-paper-leak-concerns/articleshow-xstddeg"/>
        </item>
    </channel>
</rss>
