<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 31 Jul 2026 17:21:01 +0530</lastBuildDate>
        <atom:link href="https://kannada.asianetnews.com/rss/politics" rel="self" type="application/rss+xml"/>
        <item>
            <title><![CDATA[KPSC Scam: ಪಶು ವೈದ್ಯರ ನೇಮಕದಲ್ಲಿ 400 ಕೋಟಿ ಲಂಚ: ಬಿವೈ ವಿಜಯೇಂದ್ರ ಗಂಭೀರ ಆರೋಪ]]></title>
            <link>https://kannada.asianetnews.com/politics/rs400-crore-bribe-in-veterinary-doctor-recruitment-scam-by-vijayendra-makes-serious-allegation-rav/articleshow-3dd9wx6</link>
            <guid isPermaLink="true">https://kannada.asianetnews.com/politics/rs400-crore-bribe-in-veterinary-doctor-recruitment-scam-by-vijayendra-makes-serious-allegation-rav/articleshow-3dd9wx6</guid>
            <pubDate>Wed, 29 Jul 2026 05:52:30 +0530</pubDate>
            <description><![CDATA[&lt;p&gt;ಕೆಪಿಎಸ್&zwnj;ಸಿ(KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ಸುಮಾರು ₹400 ಕೋಟಿಗಳಷ್ಟು ಲಂಚದ ವಹಿವಾಟು ನಡೆದಿದೆ ಎಂದು ಆಪಾದಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದರಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾಲು ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kynksh062zf9qv02y93n003g,imgname-----------------------2026-07-29t054114.993-1785284314118.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.29): &lt;/strong&gt;ಕೆಪಿಎಸ್&zwnj;ಸಿ(KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ಸುಮಾರು ₹400 ಕೋಟಿಗಳಷ್ಟು ಲಂಚದ ವಹಿವಾಟು ನಡೆದಿದೆ ಎಂದು ಆಪಾದಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra), ಇದರಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾಲು ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಮಂಗಳವಾರ ನಗರದ ಫ್ರೀಡಂ ಪಾರ್ಕ್&zwnj;ನಲ್ಲಿ ಉದ್ಯೋಗಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಪಿಎಸ್ಸಿ ಮೂಲಕ ನಡೆದ ಎಲ್ಲಾ ನೇಮಕಾತಿ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕು. ಸರ್ಕಾರವನ್ನು ಎಚ್ಚರಿಸಲು ವಿದ್ಯಾರ್ಥಿಗಳು ಈ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿ, ವಿದ್ಯಾರ್ಥಿ ಹಾಗೂ ಅರ್ಹ ಅಭ್ಯರ್ಥಿಯ ಧ್ವನಿಯಾಗಿ ಭಾರತೀಯ ಜನತಾ ಪಕ್ಷದ ಎಲ್ಲಾ ಶಾಸಕರು ಮತ್ತು ನಾಯಕರು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಿದ್ದಾರೆ. ಯುವಕರಿಗೆ ನ್ಯಾಯ ದೊರೆಯುವವರೆಗೆ ಬಿಜೆಪಿ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ. ಸದನದ ಹೊರಗೆ ಮತ್ತು ಒಳಗೆ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲಿದೆ ಎಂದು ತಿಳಿಸಿದರು.&lt;/p&gt;&lt;p&gt;ಕಳೆದ ಹಲವು ವರ್ಷಗಳಿಂದ ಕೆಪಿಎಸ್&zwnj;ಸಿಯ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿವೆ. ಪರೀಕ್ಷೆಗಳಲ್ಲಿ ಹಣ ಪಡೆದು ಅನರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ವ್ಯವಸ್ಥೆ ರೂಪುಗೊಂಡಿದ್ದು, ಅರ್ಹ ಅಭ್ಯರ್ಥಿಗಳ ಭವಿಷ್ಯವನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ. ಈ ಮೂಲಕ ಸರ್ಕಾರಿ ನೇಮಕಾತಿ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವೇ ಕುಸಿಯುವಂತಾಗಿದೆ ಎಂದರು.&lt;/p&gt;&lt;p&gt;ರಾಜ್ಯದಲ್ಲಿ ಕೇಂದ್ರದ ಯುಪಿಎಸ್&zwnj;ಸಿ ಮಾದರಿಯ ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಭ್ರಷ್ಟಾಚಾರ ಮುಕ್ತ ನೇಮಕಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಪರೀಕ್ಷಾ ಪ್ರಕ್ರಿಯೆಯಿಂದ ಫಲಿತಾಂಶದವರೆಗೆ ಸಂಪೂರ್ಣ ಪಾರದರ್ಶಕತೆ ಖಚಿತಪಡಿಸುವ ಸುಧಾರಣಾ ಕ್ರಮಗಳನ್ನು ಸರ್ಕಾರ ತಕ್ಷಣ ಕೈಗೊಳ್ಳಬೇಕು ಎಂದು ವಿಜಯೇಂದ್ರ ಪ್ರತಿಪಾದಿಸಿದರು.&lt;/p&gt;&lt;h2&gt;ಲಂಚಪ್ರಿಯ ಸರ್ಕಾರ: ಛಲವಾದಿ&lt;/h2&gt;&lt;p&gt;ಇದು ಲಂಚಪ್ರಿಯ ಮತ್ತು ಭೂಮಿಪ್ರಿಯ ರಾಜ್ಯ ಸರ್ಕಾರ. ಮೊದಲು ವಿದ್ಯೆಯ ಮಾರಾಟ ಆಗುತ್ತಿತ್ತು. ಈಗ ಅದರ ಜೊತೆ ಹುದ್ದೆಗಳ ಮಾರಾಟ ಆಗುತ್ತಿದೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಪಾದಿಸಿದ್ದಾರೆ.&lt;/p&gt;&lt;p&gt;ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಪಿಎಸ್&zwnj;ಸಿ ಉದ್ಯೋಗಾಕಾಂಕ್ಷಿಗಳ ಹೋರಾಟದಲ್ಲಿ ಬಿಜೆಪಿ ಸದಾ ಪಾಲ್ಗೊಂಡಿದೆ. ಇನ್ನು ಮುಂದೆಯೂ ಹೋರಾಟಕ್ಕೆ ಬೆಂಬಲ ನೀಡಲಿದ್ದೇವೆ. ಆರ್.ಅಶೋಕ್ ಮತ್ತು ನಾನು ಕೆಪಿಎಸ್&zwnj;ಸಿ ಲಂಚಾವತಾರದ ಸಂಬಂಧ ಪ್ರಮುಖ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ತಕ್ಷಣ ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ಒತ್ತಾಯಿಸಿದ್ದೇವೆ ಎಂದರು.&lt;/p&gt;&lt;p&gt;ಸದಾ ಉದ್ಯೋಗಾಂಕ್ಷಿಗಳ ಜೊತೆ ನಾವಿದ್ದೇವೆ. ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತು ಹಾಕಬೇಕಿದೆ. ಲೋಕಸೇವಾ ಆಯೋಗದಲ್ಲಿ ಸೇವೆ ಎಂಬುದೇ ಇಲ್ಲ ಎಂದು ಆರೋಪಿಸಿದರು.&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/rs400-crore-bribe-in-veterinary-doctor-recruitment-scam-by-vijayendra-makes-serious-allegation-rav/articleshow-3dd9wx6"/>
        </item>
        <item>
            <title><![CDATA[ಸಿಎಂ ವಿಜಯ್‌ರನ್ನ ಕರೆಸಿ ಪ್ರತಿಭಟನೆ ಮಾಡಿದ್ರೆ ನನಗೆ ಸಮಾಧಾನ ಕಾಣುತ್ತಿಲ್ಲ - ಡಿ.ಕೆ. ಶಿವಕುಮಾರ್]]></title>
            <link>https://kannada.asianetnews.com/politics/i-will-not-find-peace-even-if-cm-vijay-is-called-and-a-protest-is-held-dk-shivakumar-gkn/articleshow-59k2l3p</link>
            <guid isPermaLink="true">https://kannada.asianetnews.com/politics/i-will-not-find-peace-even-if-cm-vijay-is-called-and-a-protest-is-held-dk-shivakumar-gkn/articleshow-59k2l3p</guid>
            <pubDate>Fri, 31 Jul 2026 15:06:53 +0530</pubDate>
            <description><![CDATA[ಕಾವೇರಿ ಜಲ ವಿವಾದ ಮತ್ತು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಬೆಂಗಳೂರು ಭೇಟಿಯನ್ನು ಮುಂದೂಡಲಾಗಿದೆ. ಅತಿಥಿಗಳಿಗೆ ಗೌರವ ನೀಡುವುದು ನಮ್ಮ ಕರ್ತವ್ಯ, ಸೌಹಾರ್ದಯುತ ವಾತಾವರಣ ನಿರ್ಮಾಣವಾದ ನಂತರ ಸಭೆ ನಡೆಸೋಣ ಎಂದು ಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvrgnyhv8cd63aqp5r8xcrt,imgname-calling-cm-and-protesting-wont-bring-me-peace-dk-shivakumar-1785490593745.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕಾವೇರಿ ಜಲ ವಿವಾದ ಮತ್ತು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಆಗಸ್ಟ್&zwnj; 3 ರಂದು ನಿಗದಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಬೆಂಗಳೂರು ಭೇಟಿಯನ್ನು ಮುಂದೂಡಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಕನ್ನಡಪರ ಹೋರಾಟಗಾರರು ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಈ ಭೇಟಿಯನ್ನು ಮುಂದೂಡಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಉದ್ವಿಗ್ನ ವಾತಾವರಣದಲ್ಲಿ ಅವರನ್ನು ನಮ್ಮ ರಾಜ್ಯಕ್ಕೆ ಕರೆಸಿ, ಇಲ್ಲಿ ಪ್ರತಿಭಟನೆಗಳು ನಡೆದರೆ ನನಗೆ ಸಮಾಧಾನ ಕಾಣುತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಅತಿಥಿಗಳನ್ನು ಗೌರವಿಸುವುದು ಕರ್ತವ್ಯ&lt;/strong&gt;&lt;/h2&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ಅವರು ಬೆಂಗಳೂರಿಗೆ ಬರುವ ಕುರಿತು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಸದ್ಯ ಕಾವೇರಿ ನೀರು ಬಿಡುವ ವಿಚಾರವಾಗಿ ಕೆಲವು ಕನ್ನಡಪರ ಸಂಘಟನೆಗಳು ಹಾಗೂ ಬಿಜೆಪಿ ಸ್ನೇಹಿತರು ಹೋರಾಟ ನಡೆಸುತ್ತಿದ್ದಾರೆ. ಹೋರಾಟ ಮಾಡಬೇಡಿ ಎಂದು ನಾನು ಯಾರಿಗೂ ಹೇಳುವುದಿಲ್ಲ. ಆದರೆ, ವಿಜಯ್ ಅವರು ನಮ್ಮ ರಾಜ್ಯಕ್ಕೆ ಬರುತ್ತಿರುವ ಅತಿಥಿ. ನಾವು ಶಾಂತಿಪ್ರಿಯರು. ಬೇರೆ ರಾಜ್ಯದ ಅತಿಥಿಗಳು ಬಂದಾಗ ಇಲ್ಲಿ ಯಾವುದೇ ಗಲಾಟೆ ಆಗಬಾರದು. ಹೀಗಾಗಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗುವವರೆಗೆ ಸಭೆಯನ್ನು ಮುಂದೂಡುವಂತೆ ಅವರಿಗೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಸದ್ಯದ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ&lt;/strong&gt;&lt;/h2&gt;&lt;p&gt;ರಾಜ್ಯದ ಜಲಾಶಯಗಳ ಪರಿಸ್ಥಿತಿಯನ್ನು ವಿವರಿಸಿದ ಸಿಎಂ, ಇಂತಹ ಕಠಿಣ ಸಂದರ್ಭದಲ್ಲಿ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡಲು ನಮಗೆ ಸಾಧ್ಯವೇ ಇಲ್ಲ. ನಾವು ನಮ್ಮ ರಾಜ್ಯದ ಹಿತಾಸಕ್ತಿಗೆ ಏನು ಬೇಕೋ ಅದನ್ನು ಮಾಡಿಕೊಳ್ಳುತ್ತೇವೆ. 100 ವರ್ಷಗಳ ಇತಿಹಾಸದಲ್ಲೇ ಜುಲೈ ತಿಂಗಳಲ್ಲಿ ಅತ್ಯಂತ ಕಡಿಮೆ ಅಂದರೆ ಕೇವಲ 0.6 ಟಿಎಂಸಿ ನೀರನ್ನು ಮಾತ್ರ ನಾವು ಹರಿಸಿದ್ದೇವೆ. ಪ್ರಸ್ತುತ ನಮ್ಮ ಯಾವುದೇ ಡ್ಯಾಂಗಳಿಂದಲೂ ನೀರು ಬಿಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೇಕೆದಾಟು ನಮಗಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ&lt;/strong&gt;&lt;/h2&gt;&lt;p&gt;ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಅವರು ಕೆಲವು ಕ್ಲಾರಿಫಿಕೇಶನ್&zwnj;ಗಳನ್ನು ಕೇಳಿದ್ದಾರೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಾವು ಮಾಡಿಕೊಳ್ಳುತ್ತೇವೆ. ವಾಸ್ತವವಾಗಿ ಮೇಕೆದಾಟು ಯೋಜನೆ ನಮಗಿಂತ ಹೆಚ್ಚಾಗಿ ತಮಿಳುನಾಡಿಗೇ ಹೆಚ್ಚು ಅನುಕೂಲಕರವಾಗಿದೆ. ಉತ್ತಮ ಮತ್ತು ಸೌಹಾರ್ದಯುತ ವಾತಾವರಣದಲ್ಲಿ ಉಭಯ ರಾಜ್ಯಗಳ ಹಿತಕ್ಕಾಗಿ ಸಭೆ ನಡೆಸೋಣ ಎಂದು ನಾನು ವಿಜಯ್ ಅವರಿಗೆ ತಿಳಿಸುತ್ತೇನೆ ಎಂದಿದ್ದಾರೆ. ಆಗಸ್ಟ್ 13 ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್&zwnj;ಗೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ದಯವಿಟ್ಟು ಇಂತಹ ಬಂದ್ ತೀರ್ಮಾನಗಳನ್ನು ಕೈಗೊಳ್ಳಬಾರದು ಎಂದು ಸರ್ಕಾರದ ಪರವಾಗಿ ವಿನಂತಿಸುತ್ತೇನೆ. ನಮ್ಮ ಸರ್ಕಾರ ಸದಾ ರೈತರ ಹಿತಕ್ಕಾಗಿಯೇ ಕೆಲಸ ಮಾಡಿಕೊಂಡು ಬಂದಿದೆ. ನಾವು ಸದಾ ನಿಮ್ಮ ಪರವಾಗಿಯೇ ಇದ್ದೇವೆ. ನಿಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ನಾವೇನೂ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ವಿಷಯದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆಯನ್ನು ಕರೆದಿದ್ದೇನೆ. ವಿರೋಧ ಪಕ್ಷದ ನಾಯಕರು ಸಭೆಗೆ ಬಂದು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಲಿ. ಅವರ ಸಲಹೆಗಳನ್ನು ಪಡೆದುಕೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಕಾವೇರಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದಾದರೆ ಅದು ಅವರಿಗೂ ಹಿತ, ನಮಗೂ ಹಿತ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/i-will-not-find-peace-even-if-cm-vijay-is-called-and-a-protest-is-held-dk-shivakumar-gkn/articleshow-59k2l3p"/>
        </item>
        <item>
            <title><![CDATA[ಸಚಿವ ಸಂಪುಟ ವಿಸ್ತರಣೆ: 3 ದಿನ ಕಾದರೂ ಸಿಗದ ರಾಹುಲ್‌: ರಾಜ್ಯ ಕಾಂಗ್ರೆಸ್ಸಲ್ಲಿ ಅಸಮಾಧಾನ]]></title>
            <link>https://kannada.asianetnews.com/politics/karnataka-cabinet-expansion-delay-rahul-gandhi-unavailable-even-after-a-three-day-wait-rav/articleshow-7ggzrph</link>
            <guid isPermaLink="true">https://kannada.asianetnews.com/politics/karnataka-cabinet-expansion-delay-rahul-gandhi-unavailable-even-after-a-three-day-wait-rav/articleshow-7ggzrph</guid>
            <pubDate>Thu, 30 Jul 2026 06:34:55 +0530</pubDate>
            <description><![CDATA[&lt;p&gt;ಸಚಿವ ಸಂಪುಟ ವಿಸ್ತರಣೆ ಚರ್ಚೆಗಾಗಿ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಭೇಟಿ ಲಭ್ಯವಾಗಿಲ್ಲ. ಮೂರು ದಿನಗಳಿಂದ ಕಾಯುತ್ತಿದ್ದರೂ ಭೇಟಿಗೆ ಅವಕಾಶ ಸಿಗದ ಕಾರಣ ನಾಯಕರಲ್ಲಿ ಅಸಮಾಧಾನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyr8ffxma3c8ewprca98dsx3,imgname-----------------------2026-07-30t062810.785-1785373114292.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.30): &lt;/strong&gt;ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj;, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್&zwnj; ಅವರು ಮೂರನೇ ಬಾರಿಗೆ ದೆಹಲಿಗೆ ತೆರಳಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರೂ ಕಾಂಗ್ರೆಸ್&zwnj; ನಾಯಕ ರಾಹುಲ್&zwnj; ಗಾಂಧಿ ಅವರು ಭೇಟಿಗೆ ಅವಕಾಶ ನೀಡದಿರುವುದು ರಾಜ್ಯ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;ರಾಜ್ಯ ಕಾಂಗ್ರೆಸ್&zwnj;ನ ಅಗ್ರನಾಯಕರ ಆದಿಯಾಗಿ ಭಾಗಶಃ ಸಚಿವ ಸಂಪುಟವೇ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದೆ. ಜತೆಗೆ, ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಅವಕಾಶಕ್ಕಾಗಿ ಹಾತೊರೆಯುತ್ತಿರುವ 40-45 ಮಂದಿ ಶಾಸಕರೂ ಸಹ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ.&lt;/p&gt;&lt;p&gt;ವರಿಷ್ಠರು ಸಂಪುಟ ವಿಸ್ತರಣೆ ಕುರಿತ ಚರ್ಚೆ ಹೆಸರಿನಲ್ಲಿ ರಾಜ್ಯ ನಾಯಕರನ್ನು ಸೋಮವಾರವೇ ದೆಹಲಿಗೆ ಕರೆಸಿಕೊಂಡಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಅರ್ಧ ಗಂಟೆ ಭೇಟಿಗೂ ರಾಹುಲ್&zwnj; ಗಾಂಧಿ ಅವರು ಲಭ್ಯವಾಗಿಲ್ಲ.&lt;/p&gt;&lt;p&gt;ಡಿ.ಕೆ. ಶಿವಕುಮಾರ್&zwnj; ಅವರು ಪದಗ್ರಹಣ ಮಾಡಿ ಎರಡು ತಿಂಗಳು ಆಗುತ್ತಿದ್ದರೂ ಈವರೆಗೆ ಸಂಪುಟ ವಿಸ್ತರಣೆಯಾಗಿಲ್ಲ. ರಾಜ್ಯದಲ್ಲಿ ತೀವ್ರ ಬರ ಮತ್ತಿತರ ಸಮಸ್ಯೆಗಳಿದ್ದರೂ ಮುಖ್ಯಮಂತ್ರಿ ಆದಿಯಾಗಿ ಸಂಪುಟವನ್ನೇ ದೆಹಲಿಯಲ್ಲಿ ಕಾಯಿಸಲಾಗುತ್ತಿದೆ. ಇದು ರಾಜ್ಯದಲ್ಲಿ ಪ್ರತಿಪಕ್ಷಗಳಿಗೆ ಅಸ್ತ್ರವಾಗಿ ಬದಲಾಗಿದೆ.&lt;/p&gt;&lt;h2&gt;ಮೂರನೇ ಬಾರಿ ಭೇಟಿ:&lt;/h2&gt;&lt;p&gt;ಈ ಹಿಂದೆಯೂ ಎರಡು ಬಾರಿ ಚರ್ಚೆಗೆ ಕರೆದಿದ್ದ ರಾಹುಲ್&zwnj;ಗಾಂಧಿ ಅವರು ಯಾವುದೇ ತೀರ್ಮಾನ ಸೂಚಿಸಿರಲಿಲ್ಲ. ಕಳೆದ ವಾರ ದೆಹಲಿಗೆ ಕರೆಸಿದ್ದಾಗ ಕಾಕ್ರೋಚ್&zwnj; ಜನತಾ ಪಕ್ಷದ ಪ್ರತಿಭಟನೆ ಕಾರಣ ನೀಡಿ ಎರಡು ದಿನಗಳ ಬಳಿಕ ಬರಿಗೈಯಲ್ಲಿ ರಾಜ್ಯ ನಾಯಕರನ್ನು ವಾಪಸು ಕಳುಹಿಸಲಾಗಿತ್ತು.&lt;/p&gt;&lt;p&gt;ಇದೀಗ ಮೂರನೇ ಬಾರಿಗೆ ಕರೆಸಿಕೊಂಡಿದ್ದು, ಮೂರು ದಿನ ಕಳೆದರೂ ರಾಹುಲ್&zwnj;ಗಾಂಧಿ ಅವರು ಚರ್ಚೆಗೆ ಅವಕಾಶ ನೀಡದಿರುವುದು ರಾಜ್ಯ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;ಮುಖ್ಯಮಂತ್ರಿಗಳ ಆದಿಯಾಗಿ ಸರ್ಕಾರವೇ ದೆಹಲಿಯಲ್ಲಿದೆ. ಮೂರು ದಿನಗಳಿಂದ ದೆಹಲಿಯಲ್ಲಿ ಕೂರಿಸಿಕೊಂಡು ಸಮಯ ವ್ಯಯ ಮಾಡಲಾಗುತ್ತಿದೆ. ಈಗಾಗಲೇ ಸಂಪುಟ ವಿಸ್ತರಣೆ ಕುರಿತ ಪಟ್ಟಿ ಅಂತಿಮಗೊಂಡಿದ್ದು, ಗೊಂದಲವಿರುವ 3-4 ಹೆಸರುಗಳ ಬಗ್ಗೆ ಮಾತ್ರ ರಾಹುಲ್&zwnj; ಗಾಂಧಿ ತಮ್ಮ ತೀರ್ಮಾನ ತಿಳಿಸಬೇಕಿದೆ.&lt;/p&gt;&lt;p&gt;ಹೀಗಿದ್ದರೂ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ನಾಯಕರೊಂದಿಗೆ 30 ನಿಮಿಷಗಳ ಕಾಲ ರಾಹುಲ್&zwnj; ಸಭೆ ನಿಗದಿ ಮಾಡಲಾಗುತ್ತಿಲ್ಲ. ಈ ಬಗ್ಗೆ ರಾಹುಲ್&zwnj;ಗಾಂಧಿ ಅವರನ್ನು ಮನವೊಲಿಸಲು ಪ್ರಯತ್ನಿಸುತ್ತಿಲ್ಲ ಎಂಬ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ.&lt;/p&gt;&lt;p&gt;ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಕಾವೇರಿ ಸೇರಿದಂತೆ ಜಲ ಹಂಚಿಕೆ ವಿವಾದ ಶುರುವಾಗಿ ರೈತರು ಹೋರಾಟದ ಹಾದಿ ತುಳಿದಿದ್ದಾರೆ. ಮತ್ತೊಂದೆಡೆ ಜಲಾಶಯದ ನೀರು ನೆಚ್ಚಿಕೊಂಡು ರೈತರಿಗೆ ಬೆಳೆಗಳನ್ನು ಹಾಕದಂತೆ ನಿರ್ದೇಶಿಸಲಾಗಿದೆ. ಹೀಗಿದ್ದರೂ ಕೃಷಿ ಸಚಿವರು, ತೋಟಗಾರಿಕೆ ಸಚಿವರು ಇಲ್ಲ. ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಲಿ, ಉನ್ನತ ಶಿಕ್ಷಣ ಸಚಿವರಾಗಲಿ ಇಲ್ಲ. ಹೆಚ್ಚುವರಿ ಹೊಣೆಗಾರಿಕೆ ಹೊತ್ತಿರುವ ಸಚಿವರನ್ನು ಬಿಟ್ಟರೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲ. ಹೀಗಾಗಿ ಬರ ನಿರ್ವಹಣೆ ಬಗ್ಗೆಯೂ ಗಮನ ಹರಿಸಲು ಆಗುತ್ತಿಲ್ಲ. ಹೀಗಾಗಿ ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸುತ್ತಿದ್ದರೂ, ಕಳೆದ ಎರಡು ತಿಂಗಳಿಂದ ಸಂಪುಟ ವಿಸ್ತರಣೆ ಮಾಡದ ಬಗ್ಗೆ ಸ್ವಪಕ್ಷದಲ್ಲೇ ಅಸಮಾಧಾನ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.==&lt;/p&gt;&lt;h3&gt;ಇಂದಾದ್ರೂ ಸಮಯ ಕೊಡ್ತಾರಾ ರಾಹುಲ್?&lt;/h3&gt;&lt;p&gt;ರಾಜ್ಯ ನಾಯಕರನ್ನು ರಾಹುಲ್&zwnj; ಗಾಂಧಿ ಅವರು ಈವರೆಗೂ ಭೇಟಿ ಆಗದಿದ್ದರೂ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಗುರುವಾರ ರಾಹುಲ್&zwnj;ಗಾಂಧಿ ಅವರು ಪಟ್ಟಿ ಅಂತಿಮಗೊಳಿಸಲಿದ್ದು, ಗುರುವಾರ ಸಂಜೆ ಅಥವಾ ಶುಕ್ರವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಲಿದೆ. ಹೀಗಾಗಿಯೇ ಸಿದ್ಧತೆಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-cabinet-expansion-delay-rahul-gandhi-unavailable-even-after-a-three-day-wait-rav/articleshow-7ggzrph"/>
        </item>
        <item>
            <title><![CDATA['ಈಡಿಯಟ್​' ಮೂಲಕ ಇತಿಹಾಸ ಸೃಷ್ಟಿಸಿದ ರಾಹುಲ್​ ಗಾಂಧಿ: ಫೈರಿಂಗ್​ ಮಾಡಲು ಅಮಿತ್​ ಷಾ ಆದೇಶ ಕೊಟ್ರಂತೆ!]]></title>
            <link>https://kannada.asianetnews.com/politics/lok-sabha-uproar-over-rahul-gandhis-remarks-bjp-slams-unparliamentary-language-suc/articleshow-8ofxlzo</link>
            <guid isPermaLink="true">https://kannada.asianetnews.com/politics/lok-sabha-uproar-over-rahul-gandhis-remarks-bjp-slams-unparliamentary-language-suc/articleshow-8ofxlzo</guid>
            <pubDate>Thu, 30 Jul 2026 14:43:25 +0530</pubDate>
            <description><![CDATA[ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರು 'ಈಡಿಯಟ್' ಪದ ಬಳಸಿ ಮತ್ತು ಗೃಹ ಸಚಿವ ಅಮಿತ್ ಷಾ ವಿರುದ್ಧ ನೀಟ್ ಪರೀಕ್ಷೆ ವಿಚಾರವಾಗಿ ಸುಳ್ಳು ಆರೋಪ ಮಾಡಿ ಭಾರಿ ಕೋಲಾಹಲ ಸೃಷ್ಟಿಸಿದರು. ಇದರಿಂದಾಗಿ ಬಿಜೆಪಿ ಸಂಸದರು ಕ್ಷಮೆಗೆ ಆಗ್ರಹಿಸಿದ್ದು, ಸ್ಪೀಕರ್ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಬೇಕಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kys4hr8q330a63afzv7zf6qq,imgname-rahul-gandhi-1785402548503.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿಯಿಂದಾಗಿ ನಿನ್ನೆ ಭಾರಿ ಕೋಲಾಹಲವೇ ಸೃಷ್ಟಿಯಾಯಿತು. ಸಂಸತ್ತಿನಲ್ಲಿ ಕೆಲವೊಂದು ಪದಗಳ ಪ್ರಯೋಗ ಮಾಡಬಾರದು ಎನ್ನುವ ನಿಯಮ ಇದೆ. ಆದರೆ ಇದಾಗಲೇ ಹಲವಾರು ಬಾರಿ ಹಲವು ಸ್ಪೀಕರ್​ ಅವರಿಂದ ರಾಹುಲ್​ ಗಾಂಧಿ ಅವರು ಪಾಠ ಹೇಳಿಸಿಕೊಂಡಾಗಿದೆ. ವಿರೋಧ ಪಕ್ಷದ ನಾಯಕನಾದವರೊಬ್ಬರು ಇಷ್ಟು ಬಾರಿ ಪಾಠ ಹೇಳಿಸಿಕೊಂಡಿರುವ ಇತಿಹಾಸವೇ ಇಲ್ಲ ಎನ್ನುವ ಮಾತು ಕೂಡ ಇದಾಗಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗಿದೆ. ನಿನ್ನೆ ಅರ್ಥಾತ್​ ಜುಲೈ 29ರ ಅಧಿವೇಶನದ ಸಮಯದಲ್ಲಿಯೂ ಈಡಿಯಟ್​ ಎನ್ನುವ ಪದವನ್ನು ಪದೇ ಪದೇ ಹೇಳಿ, ಕೋಲಾಹಲ ಸೃಷ್ಟಿಸಿದರು. ಇದರಿಂದ ಸೋಷಿಯಲ್​ ಮೀಡಿಯಾದಲ್ಲಿ ಇನ್ನಿಲ್ಲದ ಟ್ರೋಲ್​ ಆಗುತ್ತಿದ್ದಾರೆ ರಾಹುಲ್​ ಗಾಂಧಿ. ಈಡಿಯಟ್​ ಪದ ಅವರಿಗೆ ಈಗ ಮುಜುಗರ ಉಂಟುಮಾಡಿದೆ.&lt;/p&gt;&lt;p&gt;ನಿನ್ನೆ ಲೋಕಸಭೆಯಲ್ಲಿ ನಡೆಯುತ್ತಿದ್ದುದು ಪ್ರಶ್ನೆ ಪತ್ರಿಕೆ ಸೋರಿಕೆಯ ಸಮಯದಲ್ಲಿ ನೀಡಬಹುದಾದ ಶಿಕ್ಷೆ ಹಾಗೂ ಇತರ ಅಂಶಗಳನ್ನು ಇರುವ ಮಸೂದೆಯ ಕುರಿತ ಚರ್ಚೆ. ಇದರ ಬಗ್ಗೆ ಒಂದೇ ಒಂದು ಶಬ್ದವನ್ನೂ ಹೇಳದ ರಾಹುಲ್​ ಗಾಂಧಿ, ತಮ್ಮ ಭಾಷಣವನ್ನು ಎಲ್ಲೆಲ್ಲೋ ಕೊಂಡೊಯ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಶುರು ಮಾಡಿಕೊಂಡರು. ಅದೂ ಸಾಲದು ಎನ್ನುವುದಕ್ಕೆ ತಾವು ಹೇಳುವುದನ್ನು ನಂಬುವ ಒಂದಷ್ಟು ವರ್ಗ ಇದೆ ಎನ್ನುವ ಕಾರಣಕ್ಕೆ, ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದಲ್ಲಿ, ಗೃಹ ಸಚಿವ ಅಮಿತ್​ ಷಾ ಫೈಯರಿಂಗ್​ಗೆ ಆದೇಶ ಹೊರಡಿಸಿದರು ಎಂದುಬಿಟ್ಟರು!&lt;/p&gt;&lt;h2&gt;&lt;strong&gt;ಸಂಸತ್ತಿನಲ್ಲಿ ಕೋಲಾಹಲ&lt;/strong&gt;&lt;/h2&gt;&lt;p&gt;ಇದರಿಂದ ಸಂಸತ್ತಿನಲ್ಲಿ ಮತ್ತಷ್ಟು ಕೋಲಾಹಲ ಉಂಟಾಯಿತು. ಬಿಜೆಪಿ ಸಂಸದರು, ಸಚಿವರು ಕೆಂಡಾಮಂಡಲ ಆದರು. ಪ್ರತಿಭಟನೆಯ ಸಮಯದಲ್ಲಿ ಫೈಯರಿಂಗ್​ ಆಗಿದ್ಯಾ ಎಂದು ಪ್ರಶ್ನಿಸಿದರು. ಅಲ್ಲಿ ನಡೆದದ್ದು ಅಶ್ರುವಾಯು ಪ್ರಯೋಗವಷ್ಟೇ. ಅಷ್ಟಕ್ಕೂ ಫೈಯರಿಂಗ್​ ಆದೇಶ ಹೊರಡಿಸುವುದು ಗೃಹ ಸಚಿವ ಅಲ್ಲ, ಅದು ಮ್ಯಾಜಿಸ್ಟ್ರೇಟ್​ ಸುಪರ್ದಿಗೆ ಬರುವಂಥದ್ದು. ಜೆನ್​ ಜೀಗಳನ್ನು ಪ್ರೇರೇಪಿಸಲು, ಕೇಂದ್ರದ ವಿರುದ್ಧ ಅವರ ದಂಗೆ ಎಬ್ಬಿಸಲು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಕೂಡಲೇ ಅವರು ಕ್ಷಮೆ ಕೋರಬೇಕು ಎಂದು ಕೇಂದ್ರ ಸಚಿವ ಕಿರಣ್​ ರಿಜಿಜು ಆಗ್ರಹಿಸಿದರು. ಬಿಜೆಪಿ ಸಚಿವರು ಕೂಡ ಇದನ್ನೇ ಆಗ್ರಹಿಸಿದರು.&lt;/p&gt;&lt;h3&gt;&lt;strong&gt;ವಾತಾವರಣ ತಿಳಿಗೊಳಿಸಿದ ಸ್ಪೀಕರ್​&lt;/strong&gt;&lt;/h3&gt;&lt;p&gt;ಕೊನೆಗೆ ಸ್ಪೀಕರ್​ ವಾತಾವರಣವನ್ನು ತಿಳಿಗೊಳಿಸಿದರು. ಆದರೆ, ಈಡಿಯಟ್​ ಶಬ್ದ ಮತ್ತು ಸುಳ್ಳು ಸುದ್ದಿಗಳ ಸೃಷ್ಟಿಯ ವಿರುದ್ಧ ರಾಹುಲ್​ ಗಾಂಧಿ ಬಗ್ಗೆ ಜಾಲತಾಣಗಳಲ್ಲಿ ದೊಡ್ಡ ಹೋರಾಟವೇ ಶುರುವಾಗಿದೆ. ಹಿಂದೆ ಪ್ರಿಯಾಂಕಾ ಗಾಂಧಿ ಕೂಡ ಇದೇ ರೀತಿ ಸುಳ್ಳು ಹೇಳಿ ಗಲಭೆ ಸೃಷ್ಟಿಸಲು ನೋಡಿದ್ದರು. ಅದೂ ಸದನದಲ್ಲಿಯೇ ಸುಳ್ಳು ಮಾಹಿತಿ ನೀಡಿದ್ದರು. ಈಗ ರಾಹುಲ್​ ಗಾಂಧಿ ಸರದಿ ಎಂದಿರುವ ಬಿಜೆಪಿ, ಇವರಿಬ್ಬರ ವಿರುದ್ಧ ಶಿಸ್ತಿನ ಕ್ರಮದ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/politics/lok-sabha-uproar-over-rahul-gandhis-remarks-bjp-slams-unparliamentary-language-suc/articleshow-8ofxlzo"/>
        </item>
        <item>
            <title><![CDATA[ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ  ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?]]></title>
            <link>https://kannada.asianetnews.com/politics/karnataka-cabinet-expansion-delayed-again-triple-deputy-cm-formula-sparks-buzz-kvn-videoshow-9i87ggx</link>
            <guid isPermaLink="true">https://kannada.asianetnews.com/politics/karnataka-cabinet-expansion-delayed-again-triple-deputy-cm-formula-sparks-buzz-kvn-videoshow-9i87ggx</guid>
            <pubDate>Thu, 30 Jul 2026 14:51:23 +0530</pubDate>
            <description><![CDATA[&lt;p&gt;ಸಂಪುಟ ಸಸ್ಪೆನ್ಸ್ ಮುಂದುವರೆದಿರುವಾಗಲೇ ತ್ರಿವಳಿ ಡಿಸಿಎಂ ಸೃಷ್ಟಿಯ ಹಿಂದಿನ ಲಾಭದ ಸೂತ್ರದ ಬಗ್ಗೆಯೂ ಜೋರು ಚರ್ಚೆ ನಡೆಯುತ್ತಿದೆ. ಹಾಗಿದ್ರೆ ಮೂರು ಉಪಮುಖ್ಯಮಂತ್ರಿ ಸ್ಥಾನಗಳಿಂದ ಕಾಂಗ್ರೆಸ್&zwnj;ಗೆ ನಿಜವಾಗಿಯೂ ಲಾಭ ಆಗುತ್ತೆ..? ಏನಿದು ಲೆಕ್ಕಾಚಾರ..?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xatcr3m" medium="video" height="768" width="1024"/>
            <content:encoded><![CDATA[&lt;p&gt;ಸಚಿವ ಸಂಪುಟ ವಿಸ್ತರಣೆಗೆ ಒಂದಾದ ಮೇಲೆ ಒಂದ್ರಂತೆ ವಿಘ್ನಗಳು ಎದುರಾಗ್ತಲೇ ಇವೆ. ಬುಧವಾರ ನೂರಕ್ಕೇ ನೂರು ಕ್ಯಾಬಿನೆಟ್ ಫೈನಲ್ ಆಗ್ಬೋದು ಎನ್ನುವ ನಿರೀಕ್ಷೆಯಲ್ಲಿದ್ರು ಸಚಿವಾಕಾಂಕ್ಷಿಗಳು. ಆದ್ರೀಗ ಅವರ ಆಸೆ, ನಿರೀಕ್ಷೆ ಇನ್ನೂ ಈಡೇರಿಲ್ಲ. ಕಡೆ ಕ್ಷಣದಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಮತ್ತೊಂದು ತಿರುವು ಸಿಕ್ಕಿದೆ. ಈ ಮಧ್ಯೆ ಕನಕಾಧಿಪತಿ ಮಂತ್ರಿಮಂಡಲ ಹೇಗಿರಬಹುದು? ಯಾವ್ಯಾವ ಲೆಕ್ಕಾಚಾರದಲ್ಲಿ ಯಾರ್ಯರಿಗೆ ಮಂತ್ರಿಭಾಗ್ಯ ದೊರಕಬಹುದು? ಆಪ್ತರ ಬೆನ್ನಿಗೆ ಕಟಿಬದ್ಧವಾಗಿ ನಿಂತಿರುವ ಸಿದ್ದರಾಮಯ್ಯ. ಫ್ರೀ ಹ್ಯಾಂಡ್ ಬಯಸ್ತಾಯಿರುವ ಡಿ.ಕೆ.ಶಿವಕುಮಾರ್. &amp;nbsp;ಪಟ್ಟು, ಬಿಗಿಪಟ್ಟುಗಳ ಮಧ್ಯೆ ಫೈನಲ್ ಪಟ್ಟಿಯ ಲೆಕ್ಕಾಚಾರಗಳೇನು.?&lt;/p&gt;&lt;p&gt;ಹೀಗೆ ಸಂಪುಟ ಸಸ್ಪೆನ್ಸ್ ಮುಂದುವರೆದಿರುವಾಗಲೇ ತ್ರಿವಳಿ ಡಿಸಿಎಂ ಸೃಷ್ಟಿಯ ಹಿಂದಿನ ಲಾಭದ ಸೂತ್ರದ ಬಗ್ಗೆಯೂ ಜೋರು ಚರ್ಚೆ ನಡೆಯುತ್ತಿದೆ. ಹಾಗಿದ್ರೆ ಮೂರು ಉಪಮುಖ್ಯಮಂತ್ರಿ ಸ್ಥಾನಗಳಿಂದ ಕಾಂಗ್ರೆಸ್&zwnj;ಗೆ ನಿಜವಾಗಿಯೂ ಲಾಭ ಆಗುತ್ತೆ..? ಏನಿದು ಲೆಕ್ಕಾಚಾರ..?&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>politics</category>
            <dc:creator>Naveen Kodase</dc:creator>
            <atom:link href="https://kannada.asianetnews.com/politics/karnataka-cabinet-expansion-delayed-again-triple-deputy-cm-formula-sparks-buzz-kvn-videoshow-9i87ggx"/>
        </item>
        <item>
            <title><![CDATA[ಸಚಿವ ಸಂಪುಟ ವಿಸ್ತರಣೆ ಸಭೆ ಮತ್ತೆ ಮುಂದೂಡಿಕೆ: ಹೈಕಮಾಂಡ್ ನಡೆಗೆ ಬೇಸತ್ತು ಊರಿನತ್ತ ಹೊರಟ ಆಕಾಂಕ್ಷಿಗಳು!]]></title>
            <link>https://kannada.asianetnews.com/politics/karnataka-cabinet-expansion-meeting-postponed-again-frustrated-mlas-return-to-home/articleshow-by08hbi</link>
            <guid isPermaLink="true">https://kannada.asianetnews.com/politics/karnataka-cabinet-expansion-meeting-postponed-again-frustrated-mlas-return-to-home/articleshow-by08hbi</guid>
            <pubDate>Wed, 29 Jul 2026 17:13:01 +0530</pubDate>
            <description><![CDATA[ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಕುರಿತ ದೆಹಲಿ ಸಭೆ ಮತ್ತೆ ಮುಂದೂಡಲ್ಪಟ್ಟಿದೆ. ಹೈಕಮಾಂಡ್ ನಾಯಕರ ವಿಳಂಬ ಧೋರಣೆಯಿಂದಾಗಿ ರಾಜ್ಯ ನಾಯಕರು ಮತ್ತು ಸಚಿವ ಆಕಾಂಕ್ಷಿ ಶಾಸಕರಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ಕೆಲವರು ದೆಹಲಿಯಿಂದ ವಾಪಸಾಗುತ್ತಿದ್ದಾರೆ. ಈ ರಾಜಕೀಯ ಹೈಡ್ರಾಮಾ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyptq9z5tx0rzc53bf2mqscn,imgname-karnataka-congress-rahul-gandhi-1785325135845.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ/ಬೆಂಗಳೂರು (ಜು.29): ಕ&lt;/strong&gt;ರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್&zwnj;ರಚನೆಯ ಕಸರತ್ತು ದೆಹಲಿಯಲ್ಲಿ ತೀವ್ರ ಕುತೂಹಲ ಮತ್ತು ಹೈಡ್ರಾಮಾಗೆ ಕಾರಣವಾಗಿದೆ. ಇಂದು ರಾತ್ರಿ ಹೈಕಮಾಂಡ್ ನಾಯಕರ ಜೊತೆ ನಡೆಯಬೇಕಿದ್ದ ಪ್ರಮುಖ ಸಭೆಯು ಮತ್ತೆ ನಾಳೆಗೆ ಮುಂದೂಡಿಕೆಯಾಗಿದೆ. ಇದರಿಂದಾಗಿ ಕಳೆದೆರಡು-ಮೂರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿರುವ ರಾಜ್ಯ ನಾಯಕರು ಹಾಗೂ ಸಚಿವ ಆಕಾಂಕ್ಷಿ ಶಾಸಕರಿಗೆ ತೀವ್ರ ನಿರಾಶೆಯಾಗಿದೆ.&lt;/p&gt;&lt;h2&gt;ಸಭೆ ಮುಂದೂಡಿಕೆಗೆ ಕಾರಣವೇನು?&lt;/h2&gt;&lt;p&gt;ಹೈಕಮಾಂಡ್ ನಾಯಕರು ಇತರೆ ಪ್ರಮುಖ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ ಇಂದಿನ ಸಭೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿ ಸೇರಿದಂತೆ ತುರ್ತು ರಾಜಕೀಯ ವಿದ್ಯಮಾನಗಳಿಂದಾಗಿ ನಾಯಕರು ಲಭ್ಯವಾಗಿಲ್ಲ. ಹೀಗಾಗಿ ಸಭೆಯನ್ನು ನಾಳೆಗೆ ಮುಂದೂಡಲಾಗಿದ್ದು, ನಾಳೆ ನಡೆಯಲಿರುವ ಚರ್ಚೆಗೂ ಇನ್ನು ನಿರ್ದಿಷ್ಟ ಸಮಯ ನಿಗದಿಯಾಗಿಲ್ಲದಿರುವುದು ರಾಜ್ಯ ನಾಯಕರ ತಲೆಬಿಸಿಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಹೈಕಮಾಂಡ್ ಕರೆಗೆ ಕಾಯುತ್ತಿರುವ ರಾಜ್ಯ ನಾಯಕರು:&lt;/strong&gt;&lt;/h2&gt;&lt;p&gt;ಸಂಪುಟ ಸಚಿವರ ಅಂತಿಮ ಪಟ್ಟಿಗೆ ಸಮ್ಮತಿ ಪಡೆಯುವ ಸಲುವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಮೂರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಇಂದು ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪಟ್ಟಿ ಫೈನಲ್ ಆಗಬೇಕಿತ್ತು. ಆದರೆ 'ಖರ್ಗೆ ಹಾಗೂ ರಾಹುಲ್ ಬ್ಯುಸಿ' ಎಂಬ ನೆಪ ಹೇಳಿ ಸಮಯವನ್ನು ಮುಂದೂಡಲಾಗುತ್ತಿದ್ದು, ಮೂರು ದಿನ ಕಳೆದರೂ ಹೈಕಮಾಂಡ್&zwnj;ನಿಂದ ಯಾವುದೇ ಸ್ಪಷ್ಟ ಕರೆ ಬಂದಿಲ್ಲ. ಹೈಕಮಾಂಡ್&zwnj;ನ ಈ ವಿಳಂಬ ನಡೆಗೆ ರಾಜ್ಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಬೇಸತ್ತು ಊರಿಗೆ ಹೊರಟ ಶಾಸಕರು:&lt;/strong&gt;&lt;/h2&gt;&lt;p&gt;ಇತ್ತ ಹೈಕಮಾಂಡ್&zwnj;ನ ಕರೆಗಾಗಿ ದೆಹಲಿಯ ಹೋಟೆಲ್ ಹಾಗೂ ಕರ್ನಾಟಕ ಭವನದಲ್ಲಿ ಕಾಯ್ದು ಬೇಸತ್ತಿರುವ ಸಚಿವ ಆಕಾಂಕ್ಷಿ ಶಾಸಕರು, 'ಸಿಗುತ್ತೋ-ಇಲ್ಲವೋ (Yes or No) ಎಂಬುದನ್ನು ಸ್ಪಷ್ಟವಾಗಿ ಹೇಳಿದರೆ ನಾವು ಊರಿಗೆ ಹೋಗುತ್ತೇವೆ' ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸತತ ಮೂರು ದಿನಗಳಿಂದ ಯಾವುದೇ ಸ್ಪಷ್ಟನೆ ಸಿಗದೆ ದೆಹಲಿಯಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೇವೆ ಎಂದು ಭಾವಿಸಿದ ಕೆಲ ಶಾಸಕರು, ಈಗಾಗಲೇ ದೆಹಲಿಯಿಂದ ಸ್ವಗ್ರಾಮಗಳಿಗೆ ಮರಳಲು ಸಿದ್ಧರಾಗಿದ್ದಾರೆ. 'ಅಂತಿಮ ಪಟ್ಟಿಯಲ್ಲಿ ಹೆಸರಿದ್ದರೆ ಆಮೇಲೆ ನೋಡಿಕೊಳ್ಳೋಣ' ಎನ್ನುತ್ತಾ ಕೆಲ ಶಾಸಕರು ದೆಹಲಿಯಿಂದ ಕಾಲು ಕೀಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಸಂತೋಷ್ ಲಾಡ್&lt;/strong&gt;&lt;/h2&gt;&lt;p&gt;ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಮಿಸಿದ ಸಂತೋಷ್ ಲಾಡ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಪೂರ್ವನಿಯೋಜಿತ ಕಾರ್ಯಕ್ರಮ ಹಿನ್ನೆಲೆ ವಾಪಸಾಗಿದ್ದೇನೆ. ಇವತ್ತು ರಾತ್ರಿಯೊಳಗೆ ಸಚಿವ ಸಂಪುಟ ಪಟ್ಟಿ ಅಂತಿಮವಾಗಲಿದೆ. ನನಗೂ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸವಿದೆ. ನಾನು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದೇನೆ. ಕಳೆದ ಬಾರಿ ಸಚಿವನಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ದ ಎಂದು ಹೇಳಿದರು.&lt;/p&gt;&lt;p&gt;ಒಟ್ಟಿನಲ್ಲಿ, ಸಂಪುಟ ವಿಸ್ತರಣೆ ಕಸರತ್ತು ದೆಹಲಿ ಅಂಗಳದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಹೈಕಮಾಂಡ್&zwnj;ನ ಈ ವಿಳಂಬ ನೀತಿಯು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಶಾಸಕರ ತಾಳ್ಮೆ ಪರೀಕ್ಷಿಸುವಂತಾಗಿದೆ. ನಾಳೆಯಾದರೂ ಈ ಸಭೆ ನಡೆದು ಅಂತಿಮ ಪಟ್ಟಿಗೆ ಸಮ್ಮತಿ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>politics</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/karnataka-cabinet-expansion-meeting-postponed-again-frustrated-mlas-return-to-home/articleshow-by08hbi"/>
        </item>
        <item>
            <title><![CDATA[Harangi Reservoir: ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಕದ್ದು ನೀರು ಬಿಡುಗಡೆ? ಆರ್ ಅಶೋಕ್ ಗಂಭೀರ ಆರೋಪ]]></title>
            <link>https://kannada.asianetnews.com/politics/karnataka-govt-water-released-from-harangi-reservoir-to-tamil-nadu-lop-r-ashoka-serious-allegations/articleshow-c5sgtg6</link>
            <guid isPermaLink="true">https://kannada.asianetnews.com/politics/karnataka-govt-water-released-from-harangi-reservoir-to-tamil-nadu-lop-r-ashoka-serious-allegations/articleshow-c5sgtg6</guid>
            <pubDate>Thu, 30 Jul 2026 07:26:06 +0530</pubDate>
            <description><![CDATA[ವಿಪಕ್ಷ ನಾಯಕ ಆರ್. ಅಶೋಕ ಅವರು, ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಸರ್ಕಾರ ಕದ್ದುಮುಚ್ಚಿ ನೀರು ಬಿಡುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಎಚ್ಚರಿಸಿದ್ದು, ಬಿಜೆಪಿ ಕೆಆರ್&zwnj;ಎಸ್&zwnj; ಡ್ಯಾಂ ಬಳಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrbqj2yzbh5r884zxs25reb,imgname-----------------------2026-07-30t072456.189-1785376524382.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜು.30): &lt;/strong&gt;ಕೊಡಗಿನ ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಕಳೆದ ಒಂದು ತಿಂಗಳಿನಿಂದಲೂ ಕದ್ದು ಮುಚ್ಚಿ ನೀರು ಬಿಡುಗಡೆ ಮಾಡುತ್ತಿದ್ದು, ಬೆಂಗಳೂರಷ್ಟೇ ಅಲ್ಲ, ಮಂಡ್ಯ, ಮೈಸೂರಿಗೂ ಕುಡಿಯುವ ನೀರಿನ ಸಮಸ್ಯೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಬೆಂಗಳೂರು, ಮೈಸೂರು, ಮಂಡ್ಯ ಜನಕ್ಕೆ ಕುಡಿಯೋಕೂ ನೀರು ಇರೋಲ್ಲ&lt;/h2&gt;&lt;p&gt;ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕದ್ದು ಮುಚ್ಚಿ ತಮಿಳುನಾಡಿಗೆ ಹಾರಂಗಿ ಜಲಾಶಯದಿಂದ ನೀರು ಬಿಡುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಬೆಂಗಳೂರಷ್ಟೇ ಅಲ್ಲ, ಮಂಡ್ಯ, ಮೈಸೂರಿಗೂ ಕುಡಿಯುವ ನೀರಿಗೆ ಹಾಹಾಕಾರವಾಗಲಿದೆ ಎಂದು ಎಚ್ಚರಿಸಿದರು.&lt;/p&gt;&lt;h3&gt;ಬಿಜೆಪಿ ಹೋರಾಟಕ್ಕೆ ಸಜ್ಜು&lt;/h3&gt;&lt;p&gt;ಬೆಂಗಳೂರಿನಲ್ಲಿ 1.5 ಕೋಟಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಸರ್ಕಾರ ತಕ್ಷಣವೇ ಮೇಲ್ಮನವಿ ಸಲ್ಲಿಸಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಡೆಸಬೇಕು. ನಾವೂ ಮಂಡ್ಯದಲ್ಲಿ ಹೋರಾಟ ಶುರು ಮಾಡುತ್ತೇವೆ. ಇನ್ನೆರಡು ದಿನಗಳಲ್ಲೇ ಕೆಆರ್&zwnj;ಎಸ್ ಡ್ಯಾಂ ಬಳಿ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.&lt;/p&gt;&lt;p&gt;ನಿಮ್ಮ ವೈಫಲ್ಯದಿಂದಲೇ ಕಾವೇರಿ ನೀರು ಬಿಡುಗಡೆಗೆ ಆದೇಶವಾಗಿದ್ದು, ನಿಮ್ಮ ಲೀಗಲ್ ಟೀಂ ಏನು ಮಾಡುತ್ತಿದೆ?. ಕಾವೇರಿ ನೀರಿಗಾಗಿ ಕಾನೂನು ತಜ್ಞರ ಜೊತೆಗೆ ಸಭೆ ಮಾಡಿ, ಚರ್ಚಿಸಬೇಕಾಗಿತ್ತು ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಮುಖ್ಯಮಂತ್ರಿ &zwj;ಆದವರಿಗೆ ನಮ್ಮ ಜಲಾಶಯ ಮುಖ್ಯವೋ ಅಥವಾ ಕಾಕ್ರೋಚ್ ಪಾರ್ಟಿ ಸಭೆ ಮುಖ್ಯವೋ?. ಇಲ್ಲಿ ರೈತರು ಸಂಕಷ್ಟದಲ್ಲಿದ್ದರೆ ಮುಖ್ಯಮಂತ್ರಿಯವರು ದೆಹಲಿಯಲ್ಲಿನ ಕಾಕ್ರೋಚ್ ಪಾರ್ಟಿ ಪ್ರತಿಭಟನೆಗೆ ಹೋಗಿದ್ದರು ಎಂದು ಟೀಕಿಸಿದರು.&lt;/p&gt;&lt;h3&gt;ವಿಜಯ್&zwnj; ಬರುವುದು ಫೋಟೋಶೂಟ್&zwnj;ಗೆ:&lt;/h3&gt;&lt;p&gt;ತಮಿಳುನಾಡಿನಲ್ಲೂ ಇಂಡಿ ಒಕ್ಕೂಟದ ಸರ್ಕಾರವೇ ಇದೆ. ಯಾವ ಪುರುಷಾರ್ಥಕ್ಕೆ ತಮಿಳುನಾಡು ಮುಖ್ಯಮಂತ್ರಿಯನ್ನು ವಿಧಾನಸೌಧಕ್ಕೆ ಕರೆಸುತ್ತೀದ್ದೀರಿ. ತಮಿಳುನಾಡು ಮುಖ್ಯಮಂತ್ರಿ ಇಲ್ಲಿಗೆ ಬಂದು ಮೇಕೆದಾಟು ಯೋಜನೆಗೆ ವಿರೋಧ ಇದೆ ಎನ್ನುತ್ತಾರೆ. ಇದು ಫೋಟೋಶೂಟ್&zwnj;ಗೆ ಮಾಡುವ ಕಾರ್ಯಕ್ರಮ. ಸುಮ್ಮನೇ ₹10 ಕೋಟಿ ವ್ಯರ್ಥವಾಗುತ್ತದೆ. ಆ ಹಣವನ್ನು ತಕ್ಷಣ&zwj;ವೇ ಬರ ಪರಿಹಾರಕ್ಕೆ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-govt-water-released-from-harangi-reservoir-to-tamil-nadu-lop-r-ashoka-serious-allegations/articleshow-c5sgtg6"/>
        </item>
        <item>
            <title><![CDATA[ಮಾಸಿಕ 20 ಸಾವಿರ ಸಂಬಳ: ದಿನಕ್ಕೆ 10 ಲಕ್ಷ ಖರ್ಚು! ಜಿರಳೆಗಳಿಗೆ ಊಟ ಕೊಟ್ಟವನ ಜಾತಕ ತೆರೆದ ಮುಸ್ಲಿಂ ಮುಖಂಡ]]></title>
            <link>https://kannada.asianetnews.com/crime/a-neighbour-of-mohd-junaid-who-gave-free-food-of-cjp-protesters-has-sparked-debate-suc/articleshow-cexdlgz</link>
            <guid isPermaLink="true">https://kannada.asianetnews.com/crime/a-neighbour-of-mohd-junaid-who-gave-free-food-of-cjp-protesters-has-sparked-debate-suc/articleshow-cexdlgz</guid>
            <pubDate>Thu, 30 Jul 2026 18:33:21 +0530</pubDate>
            <description><![CDATA[ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆಗೆ 35 ದಿನಗಳ ಕಾಲ ಉಚಿತ ಊಟ ನೀಡಿದ್ದ ಮೊಹಮ್ಮದ್ ಜುನೈದ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಭಟನಾಕಾರರಿಂದ ಕಡೆಗಣನೆಗೆ ಒಳಗಾಗಿ ಕಣ್ಣೀರು ಹಾಕಿರುವ ಅವರ ವಿರುದ್ಧವೇ ಇದೀಗ ದೇಶದ್ರೋಹದ ಆರೋಪ ಕೇಳಿಬಂದಿದ್ದು, ಅವರ ಹಣದ ಮೂಲದ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyshs6zhx960dagg6ybzxyx1,imgname-junaid-1785416424433.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ನೆಪದಲ್ಲಿ ಕಾಕ್ರೋಚ್​ ಜನತಾ ಪಕ್ಷ ನಡೆಸಿರುವ ಪ್ರತಿಭಟನೆಯ ಹಿಂದಿನ ಕೈವಾಡದ ಬಗ್ಗೆ ಹಲವಾರು ಅನುಮಾನಗಳು ಸುಳಿದಾಡುತ್ತಲೇ ಇವೆ. ಪಾಕಿಸ್ತಾನಿಗಳು, ಖಲಿಸ್ತಾನಿಗಳ ಬೆಂಬಲ, ಲಕ್ಷ ಲಕ್ಷ ರೂಪಾಯಿ ಖರ್ಚು, ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆ ಬಳಿಕ ಅಷ್ಟೋ ಮಂದಿ ಸ್ಟಾರ್​ ಹೋಟೆಲ್​ನಲ್ಲಿ ಮಾಡಿದ ಪಾರ್ಟಿಗೆ ತಗುಲಿದ ಲಕ್ಷಾಂತರ ರೂಪಾಯಿಗಳ ಖರ್ಚು-ವೆಚ್ಚ... ಹೀಗೆ ಬಗೆಯುತ್ತಾ ಹೋದಂತೆ, ಇದರ ಹಿಂದಿರುವ ವ್ಯವಸ್ಥಿತ ಪಿತೂರಿಯ ಬಗ್ಗೆ ಇದಾಗಲೇ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ನಡುವೆಯೇ, ಪ್ರತಿಭಟನೆಯ ಸಮಯದಲ್ಲಿ ಸತತ 35 ದಿನ, ಪ್ರತಿಭಟನಾಕಾರರಿಗೆ ಊಟವನ್ನು ನೀಡಿದವ ಮೊಹಮ್ಮದ್​ ಜುನೈದ್ ಅವರ ಬಗ್ಗೆ ಇದೀಗ ಕೆಲವು ಮುಸ್ಲಿಂ ಸಮುದಾಯದಿಂದಲೇ ಭಾರಿ ವಿರೋಧ ವ್ಯಕ್ತವಾಗುತ್ತಿದೆ.&lt;/p&gt;&lt;p&gt;​.ದೆಹಲಿಯ ಜಂತರ್ ಮಂತರ್&zwnj;ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಿರಂತರ 35 ದಿನಗಳ ಕಾಲ ಉಚಿತ ಆಹಾರ ಮತ್ತು ನೀರು ಪೂರೈಸಿ ಸುದ್ದಿಯಲಿದ್ದಾರೆ ಗಾಜಿಯಾಬಾದ್​ನ ಮೊಹಮ್ಮದ್​. ಆದರೆ, ಇದೀಗ ಅತ್ತ ಸ್ಟಾರ್​ ಹೋಟೆಲ್​ನಲ್ಲಿ ಭರ್ಜರಿ ಪಾರ್ಟಿ ಮಾಡುತ್ತಿದ್ದರೆ, ಇತ್ತ 35 ದಿನಗಳ ಕಾಲ ಉಚಿತ ಆಹಾರ-ನೀರು ನೀಡಿದ್ದ ಮೊಹಮ್ಮದ್​ ಜುನೈದ್​ ಕಣ್ಣೀರು ಹಾಕಿದ್ದರು. ಮಾಧ್ಯಮಗಳ ಮುಂದೆ ಬಂದಿರುವ ಅವರು, ಅಂದು ನಾನು ಅವರಿಗೆ ಆಹಾರ ನೀಡಿದೆ. ಇಂದು ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್​ ದೀಪ್ಕೆ, ಪ್ರತಿಭಟನೆ ಮುಗಿದ ಬಳಿಕ ನನ್ನತ್ತ ಕಣ್ಣು ಕೂಡ ಹಾಯಿಸಿಲ್ಲ ಎಂದು ಗಳಗಳನೆ ಅತ್ತಿದ್ದರು.&lt;/p&gt;&lt;h2&gt;&lt;strong&gt;ದೇಶದ್ರೋಹಿ, ತನಿಖೆ ಆಗಲಿ&lt;/strong&gt;&lt;/h2&gt;&lt;p&gt;ಆದರೆ ಇದೇ ಮೊಹಮ್ಮದ್​ ಜುನೈದ್​ ವಿರುದ್ಧ ಮುಸ್ಲಿಂ ಮುಖಂಡರೊಬ್ಬರು ಭಾರೀ ಆರೋಪ ಮಾಡಿದ್ದಾರೆ. geowiredailyಗೆ ನೀಡಿರುವ ಸಂದರ್ಶನದಲ್ಲಿ ಅವರು, ಜುನೈದ್​ ಒಬ್ಬ ಮುಸ್ಲಿಂ ವಿರೋಧಿ, ದೇಶದ್ರೋಹಿ ಎಂದಿದ್ದಾರೆ. ಅವನಿಗೆ ತಿಂಗಳಿಗೆ 20 ಸಾವಿರ ಸಂಬಳ ಬರುತ್ತದೆ. ಆದರೆ ಅಷ್ಟೂ ಜನರಿಗೆ ಉಚಿತ ಊಟ ಕೊಟ್ಟಿದ್ದಾನೆ. ಅದರ ಖರ್ಚು ಏನಿಲ್ಲವೆಂದರೂ ದಿನಕ್ಕೆ ಹತ್ತಿಪ್ಪತ್ತು ಲಕ್ಷ ಆಗುತ್ತದೆ. ಆತನ ಬಳಿ ಅಷ್ಟು ಹಣ ಬಂದಿದ್ದು ಹೇಗೆ ಎನ್ನುವ ತನಿಖೆ ಆಗಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕಿದೆ ಎಂದಿದ್ದಾರೆ ಅವರು. ಒಂದು ವೇಳೆ ಆತನ ಬಳಿ ಇಷ್ಟೆಲ್ಲಾ ಹಣ ಇದ್ದಿದ್ದೇ ಹೌದಾದರೆ, ಆತನ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಮಾಡಬೇಕು, ಇಲ್ಲದೇ ಹೋದರೆ ಇದರ ಹಿಂದಿರುವ ಶಕ್ತಿಗಳ ಬಗ್ಗೆಯೂ ತನಿಖೆ ಆಗಬೇಕು ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಅಂದು ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಪ್ರತಿಭಟನಾಕಾರರಿಗೆ ಉಚಿತ ಆಹಾರ ಮತ್ತು ನೀರು ವಿತರಿಸುತ್ತಿದ್ದ ಸಮಯದಲ್ಲಿ, ದೆಹಲಿ ಪೊಲೀಸರು ಎಂದು ಹೇಳಿಕೊಂಡ ಕೆಲವರು ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರಿಯಿಡೀ ಅಪಹರಿಸಿ ಕಿರುಕುಳ ನೀಡಿದ್ದಾರೆ ಎಂದು ಇದೇ ಜುನೈದ್​ ಆರೋಪಿಸಿದ್ದರು. ಜುಲೈ 24ರ ರಾತ್ರಿ ಸುಮಾರು 10:50ರ ಸುಮಾರಿಗೆ ನನಗೆ ನಾಯಿ ಕಚ್ಚಿತ್ತು. ಚಿಕಿತ್ಸೆಗಾಗಿ ಆರ್&zwnj;ಎಂಎಲ್ ಆಸ್ಪತ್ರೆಗೆ ತೆರಳಿ, ರಾತ್ರಿ 12:10ರ ವೇಳೆಗೆ ವಾಪಸ್ ಆಟೋದಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ. ನಾನು 50-60 ಮೀಟರ್ ದೂರ ಹೋಗುತ್ತಿದ್ದಂತೆ ಕೆಲವು ವಾಹನಗಳು ನಮ್ಮನ್ನು ತಡೆದವು. ನಮ್ಮನ್ನು ಕೊಲ್ಲಲು ಬಂದಿದ್ದಾರೆ ಎಂದೇ ನಾವು ಭಯಪಟ್ಟಿದ್ದೆವು. ಆದರೆ ಅವರು ತಾವು ದೆಹಲಿ ಪೊಲೀಸರು ಎಂದು ಹೇಳಿಕೊಂಡರು. ನಂತರ ನಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ಎಲ್ಲಿಗೋ ಕರೆದುಕೊಂಡು ಹೋದರು. ಇಡೀ ರಾತ್ರಿ ನಮ್ಮನ್ನು ಅಲ್ಲಿಯೇ ಕೂರಿಸಿದ್ದರು ಎಂದು ಜುನೈದ್ ಅಳಲು ತೋಡಿಕೊಂಡಿದ್ದರು. ಅದರ ಬೆನ್ನಲ್ಲೇ ಇದೀಗ ತಾವು ಮಾಡಿರುವುದು ತಪ್ಪೆಂದು ಗೊತ್ತಾಗಿದೆ, ಆಹಾರ ವಿತರಿಸಿದವರೇ ಉಲ್ಟಾ ಹೊಡೆದರು ಎಂದು ಕಣ್ಣೀರು ಹಾಕಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/crime/a-neighbour-of-mohd-junaid-who-gave-free-food-of-cjp-protesters-has-sparked-debate-suc/articleshow-cexdlgz"/>
        </item>
        <item>
            <title><![CDATA[ಜಿರಳೆಗಳಿಗೆ ಶುರುವಾಯ್ತು ನಡುಕ: ಪ್ರತಿಭಟನೆ ವೇಳೆ ಮುಖ ಗುರುತಿಸೋ ಸಾಧನ ಪ್ರಶ್ನಿಸಿ 'ಸುಪ್ರೀಂ' ಮೊರೆ]]></title>
            <link>https://kannada.asianetnews.com/india-news/cpim-rajya-sabha-mp-rahim-moves-supreme-court-against-delhi-polices-biometric-surveillance-at-protests/articleshow-damktu3</link>
            <guid isPermaLink="true">https://kannada.asianetnews.com/india-news/cpim-rajya-sabha-mp-rahim-moves-supreme-court-against-delhi-polices-biometric-surveillance-at-protests/articleshow-damktu3</guid>
            <pubDate>Thu, 30 Jul 2026 20:17:05 +0530</pubDate>
            <description><![CDATA[NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಪ್ರತಿಭಟನೆಯಲ್ಲಿ, ದೆಹಲಿ ಪೊಲೀಸರು ಮುಖ ಗುರುತಿಸುವಿಕೆ ತಂತ್ರಜ್ಞಾನ ಬಳಸಿದ್ದನ್ನು ಸಿಪಿಐ(ಎಂ) ಸಂಸದರು ಸುಪ್ರೀಂ ಕೋರ್ಟ್&zwnj;ನಲ್ಲಿ ಪ್ರಶ್ನಿಸಿದ್ದಾರೆ. ಈ ಕಣ್ಗಾವಲು ಅಸಂವಿಧಾನಿಕ ಎಂದು ಘೋಷಿಸಲು ಮತ್ತು ಕಾನೂನು ಜಾರಿಯಾಗುವವರೆಗೆ ಅದನ್ನು ನಿಲ್ಲಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kysqt4j9786v4krqne9cv1zs,imgname-cjp-protest-1785422746185.jpg" type="image/jpeg" height="390" width="690"/>
            <content:encoded><![CDATA[&lt;p&gt;NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಜಂತರ್ ಮಂತರ್&zwnj;ನಲ್ಲಿ ಒಂದು ತಿಂಗಳ ಕಾಲ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸರು ಮುಖ ಗುರುತಿಸುವಿಕೆ ತಂತ್ರಜ್ಞಾನ (FRT) ಮತ್ತು ಇತರ ಬಯೋಮೆಟ್ರಿಕ್ ಕಣ್ಗಾವಲು ಸಾಧನಗಳನ್ನು ಬಳಸಿದ್ದನ್ನು ಪ್ರಶ್ನಿಸಿ CPI (M) ಸುಪ್ರೀಂಕೋರ್ಟ್​ ಮೊರೆ ಹೋಗಿದೆ. . ಈ ಮೂಲಕ ಪ್ರತಿಭಟನೆ ನೆಪದಲ್ಲಿ ನಡೆದ ಕಲ್ಲು ತೂರಾಟ, ಪೊಲೀಸರ ಮೇಲೆ ದಾಳಿ, ವಿದೇಶಿಗರ ಕೈವಾಡ, ವಿದೇಶ ಬಾವುಟ ಇಟ್ಟುಕೊಂಡವರ ಮುಖ ಚೆಹರೆ ಎಲ್ಲವೂ ಇದರಿಂದ ತಿಳಿಯಲಿದೆ. ಆದರೆ ಇವೆಲ್ಲಾ ಸರಿಯಲ್ಲ,ಇದು &quot;ಅಸಂವಿಧಾನಿಕ&quot; ಎಂದು ರಾಜ್ಯಸಭಾ ಸಂಸದ ಎಎ ರಹೀಮ್ ಸುಪ್ರೀಂ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ.&lt;/p&gt;&lt;p&gt;ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ, ಕಣ್ಗಾವಲು ಸಂವಿಧಾನಬಾಹಿರ ಎಂದು ಘೋಷಿಸಲು ಮತ್ತು ಸಂಸತ್ತು ಅಂತಹ ಅಭ್ಯಾಸಗಳಿಗೆ ನಿರ್ದಿಷ್ಟವಾಗಿ ಅಧಿಕಾರ ನೀಡುವ ಕಾನೂನನ್ನು ಜಾರಿಗೆ ತರುವವರೆಗೆ ಶಾಂತಿಯುತ ಸಾರ್ವಜನಿಕ ಸಭೆಗಳಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನ ಮತ್ತು ಇತರ ಬಯೋಮೆಟ್ರಿಕ್ ಕಣ್ಗಾವಲು ಕ್ರಮಗಳನ್ನು ನಿಯೋಜಿಸದಂತೆ ಕಾನೂನು ಜಾರಿ ಸಂಸ್ಥೆಗಳಿಗೆ ನಿರ್ದೇಶನವನ್ನು ಅವರು ಕೋರಿದ್ದಾರೆ.&lt;/p&gt;&lt;h2&gt;&lt;strong&gt;36 ದಿನಗಳ ಕಾಲ ಪ್ರತಿಭಟನೆ&lt;/strong&gt;&lt;/h2&gt;&lt;p&gt;ನೀಟ್-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ನಂತರ ಜೂನ್ 20 ರಂದು ಪ್ರಾರಂಭವಾದ ಪ್ರತಿಭಟನೆಗಳ ನಂತರ ಜಿರಳೆ ಪಕ್ಷದ ಪರವಾಗಿ ಈ ಅರ್ಜಿ ಬಂದಿದೆ. ಕೇಂದ್ರ ಸರ್ಕಾರದಿಂದ ಹೊಣೆಗಾರಿಕೆ ಮತ್ತು ಆಗಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು, ಜನರು ಮತ್ತು ರಾಜಕೀಯ ಕಾರ್ಯಕರ್ತರು ದೆಹಲಿಯ ಜಂತರ್ ಮಂತರ್&zwnj;ನಲ್ಲಿ ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆಗಳು 36 ದಿನಗಳ ಕಾಲ ನಡೆಯಿತು. ಕೇಂದ್ರ ಸರ್ಕಾರವು ಹಲವಾರು ಬೇಡಿಕೆಗಳನ್ನು ಒಪ್ಪಿಕೊಂಡ ನಂತರ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರವೇ ಇದು ಕೊನೆಗೊಂಡಿತು.&lt;/p&gt;&lt;p&gt;ಅರ್ಜಿಯ ಪ್ರಕಾರ, ಪ್ರತಿಭಟನಾ ಅವಧಿಯುದ್ದಕ್ಕೂ ದೆಹಲಿ ಪೊಲೀಸರು ಭಾಗವಹಿಸುವವರನ್ನು ವ್ಯಾಪಕವಾದ ಕ್ಯಾಮೆರಾಗಳ ಜಾಲ, ಕೃತಕ ಬುದ್ಧಿಮತ್ತೆ ಆಧರಿತ ಮುಖ ಗುರುತಿಸುವಿಕೆ ವ್ಯವಸ್ಥೆಗಳು ಮತ್ತು ಬೆರಳಚ್ಚು ಗುರುತಿನ ಸಾಧನಗಳ ಮೂಲಕ &quot;ನಿರಂತರ ಮತ್ತು ವ್ಯಾಪಕವಾದ ಬಯೋಮೆಟ್ರಿಕ್ ಕಣ್ಗಾವಲು&quot;ಗೆ ಒಳಪಡಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾಗಳು, ಡ್ರೋನ್&zwnj;ಗಳು, ದೇಹ-ಧರಿಸುವ ಕ್ಯಾಮೆರಾಗಳು, ಹ್ಯಾಂಡ್&zwnj;ಹೆಲ್ಡ್ ಸಾಧನಗಳು, ಮೊಬೈಲ್ ಕಮಾಂಡ್-ಅಂಡ್-ಕಂಟ್ರೋಲ್ ವಾಹನ ಮತ್ತು ವೈಯಕ್ತಿಕ ಮೊಬೈಲ್ ಫೋನ್&zwnj;ಗಳನ್ನು ಬಳಸಿಕೊಂಡು ಪ್ರತಿಭಟನಾಕಾರರನ್ನು ರೆಕಾರ್ಡ್ ಮಾಡಿದ್ದಾರೆ. ಇದುಸರಿಯಲ್ಲ ಎನ್ನುವುದು ಅವರ ಆರೋಪ.&lt;/p&gt;&lt;h3&gt;&lt;strong&gt;ಅಪರಾಧಗಳ ಜೋಡಿಕೆ&lt;/strong&gt;&lt;/h3&gt;&lt;p&gt;ಮುಖ ಗುರುತಿಸುವಿಕೆ ತಂತ್ರಜ್ಞಾನ ಮತ್ತು ಅಜ್ನಾಲೆನ್ಸ್ AI-ಶಕ್ತಗೊಂಡ ಸ್ಮಾರ್ಟ್ ಗ್ಲಾಸ್&zwnj;ಗಳನ್ನು ಹೊಂದಿರುವ ಕಣ್ಗಾವಲು ವಾಹನವನ್ನು ಬಳಸಿಕೊಂಡು ದೃಶ್ಯಾವಳಿಗಳನ್ನು ರಿಕಾರ್ಡ್​ ಮಾಡಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಭಿಗ್ಯಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಸಂಗ್ರಹಿಸಲಾದ ಬೆರಳಚ್ಚುಗಳನ್ನು ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆ (NAFIS) ಗೆ ಹೋಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. &quot;ಸವಾಲಿನ ಪ್ರಮುಖ ಅಂಶವೆಂದರೆ ಸಾವಿರಾರು ಶಾಂತಿಯುತ ಪ್ರತಿಭಟನಾಕಾರರ ಬಯೋಮೆಟ್ರಿಕ್ ಗುರುತಿಸುವಿಕೆಗಳ ಸ್ವಯಂಚಾಲಿತ, ಅಲ್ಗಾರಿದಮಿಕ್ ಹೊರತೆಗೆಯುವಿಕೆ ಮತ್ತು ಹೊಂದಾಣಿಕೆ ಮತ್ತು ಅಂತಹ ಡೇಟಾವನ್ನು ಶಾಶ್ವತ ರಾಷ್ಟ್ರೀಯ ಅಪರಾಧ ಡೇಟಾಬೇಸ್&zwnj;ಗಳೊಂದಿಗೆ ಪರಸ್ಪರ ಜೋಡಿಸುವ ಸಾಧ್ಯತೆ ಇದೆ ಎನ್ನುವುದು ತಮ್ಮ ಆತಂಕ ಎಂದಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/cpim-rajya-sabha-mp-rahim-moves-supreme-court-against-delhi-polices-biometric-surveillance-at-protests/articleshow-damktu3"/>
        </item>
        <item>
            <title><![CDATA[Cauvery River Water Dispute: ಕಾವೇರಿ ನೀರು ಹಂಚಿಕೆ ವಿವಾದ: 'ಫಿಲಂ ಚೇಂಬರ್‌'ನಲ್ಲಿ ಸಭೆ- ಯಾರೆಲ್ಲಾ ಮಾತನಾಡಿದ್ದಾರೆ? ತೆಗೆದುಕೊಂಡ ನಿರ್ಣಯವೇನು?]]></title>
            <link>https://kannada.asianetnews.com/sandalwood/who-were-the-speakers-at-the-film-chamber-meeting-for-cauvery-water-sharing-dispute-and-the-resolution-to-know-here/articleshow-fcvbgq0</link>
            <guid isPermaLink="true">https://kannada.asianetnews.com/sandalwood/who-were-the-speakers-at-the-film-chamber-meeting-for-cauvery-water-sharing-dispute-and-the-resolution-to-know-here/articleshow-fcvbgq0</guid>
            <pubDate>Thu, 30 Jul 2026 17:29:35 +0530</pubDate>
            <description><![CDATA[&lt;p&gt;'ತಮಿಳುನಾಡು ಸಿಎಂ ವಿಜಯ್ ಅವರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಸಿಎಂ ವಿಜಯ್ ಸಿನಿಮಾರಂಗದವರು. ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ನಾವು ಹೋಗಿ ಭೇಟಿ ಮಾಡೋ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysd7wbg3d1h5rf8wgeffw9h,imgname-film-chamber-1785411662192.jpg" type="image/jpeg" height="390" width="690"/>
            <content:encoded><![CDATA[&lt;p&gt;ಸದ್ಯ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಮಧ್ಯೆ ಕಾವೇರಿ ನದಿ ನೀರಿನ ಹಂಚಿಕೆ (Cauvery Water Dispute) ವಿಷಯವಾಗಿ 'ಕಾವೇರಿ'ದ ವಾತಾವರಣ ನಿರ್ಮಾಣವಾಗಿರೋದು ಗೊತ್ತೇ ಇದೆ. ಇದು ಕರ್ನಾಟಕದಲ್ಲಿ ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಹಲವು ಕಡೆ ಪ್ರತಿಭಟನೆ ರೂಪ ತಳೆದಿದೆ. ಸದ್ಯ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಮಧ್ಯೆ ಈ ಬಗ್ಗೆ ಮಾತುಕತೆ ನಡೆಯುವ ನಿರ್ಧಾರ ಕೂಡ ಆಗಿದೆ. ಆದರೆ, ಕಾವೇರಿ ನೀರನ್ನೇ ಅವಲಂಬಿಸಿದ ರೈತರ ಪ್ರತಿಭಟನೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದ್ದು ಈ ಕಾವು ಚಲನಚಿತ್ರ ರಂಗ ಸೇರಿದಂತೆ ಇಡೀ ಕರ್ನಾಟಕಕ್ಕೆ ವ್ಯಾಪಿಸಿದೆ.&lt;/p&gt;&lt;p&gt;&lt;strong&gt;KFCC meeting on Cauvery water row: &lt;/strong&gt;ಇಂದು, 30 ಜುಲೈ 2026ರಂದು ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ಇದೀಗ ತುರ್ತಾಗಿ ಸುದ್ದಿಗೋಷ್ಟಿ ಕರೆದಿದ್ದಾರೆ. ಅದರಲ್ಲಿ, ಕಾವೇರಿ ನೀರು ಹಂಚಿಕೆ ಬಗ್ಗೆ ಸಭೆ ಮಾಡಿರೋ ಕನ್ನಡ ಚಲನಚಿತ್ರ ರಂಗದ ವಿವಿಧ ಸಂಘಗಳು, ಅಂದರೆ ಕಲಾವಿದರ ಸಂಘ, ನಿರ್ಮಾಪಕರ ಸಂಘ, ಪ್ರದರ್ಶಕರ ಸಂಘ ಹೀಗೆ ಸಿನಿಮಾರಂಗದ ಎಲ್ಲಾ ಸಂಘಸಂಸ್ಥೆಗಳು ಬೆಂಗಳೂರಿನ ಫಿಲಂ ಚೆಂಬರ್&zwnj;ನಲ್ಲಿ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಭಾಗಿಯಾದವರಲ್ಲಿ ಯಾರ್ಯಾರು ಏನೇನು ಹೇಳಿದ್ದಾರೆ? ಇಲ್ಲಿದೆ ನೋಡಿ..&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ವಿವಾದ: ನಟ ಶೋಭರಾಜ್ ಹೇಳಿಕೆ&lt;/p&gt;&lt;p&gt;;ನಾವೆಲ್ಲಾ ಕಾವೇರಿ ನೀರು ಕುಡಿದು ಬೆಳೆದವರು. ಮಳೆ&zwnj;&zwnj; ಜಾಸ್ತಿ ಇದ್ರೆ&zwnj; ನಾವೇನು ಗೋಡೆ ಕಟ್ಟಿ ನೀರನ್ನು ಅಡ್ಡ ಹಾಕಲ್ಲ. ಈ ಭಾರಿ ಮಳೆ ಇಲ್ಲ ನಮ್ಮ ರೈತರು ಕಷ್ಟದಲ್ಲಿದ್ದಾರೆ ನೀರು ಕೇಳಬೇಡಿ. ನಮ್ಮ ರೈತರು ಕಷ್ಡದಲ್ಲಿದ್ದಾರೆ ನಮಗೆ ರೈತರು ನಮಗೆ ಮುಖ್ಯ. ಫಿಲ್ಮ್ ಚೇಂಬರ್ ಏನು ನಿರ್ಧಾರ ಮಾಡುತ್ತಾರೆ ಅದಕ್ಕೆ ನಾವು ಬದ್ಧರಾಗಿರುತ್ತೇವೆ' ಎಂದಿದ್ದಾರೆ.&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ವಿಚಾರ: ನಟ ಪ್ರಥಮ್ ಹೇಳಿಕೆ&lt;/p&gt;&lt;p&gt;'ಕಾವೇರಿ ವಿಚಾರದಲ್ಲಿ ನಾವೆಲ್ಲಾ ಕನ್ನಡಿಗರು ಒಂದೇ.. ಪ್ರಧಾನಿ ಆಗಿರಲಿ ಯಾರೇ ಆಗಿರಲಿ, ಅವರು ಕೂಡ ರೈತರು ಬೆಳೆದ ಅನ್ನ&zwnj; ತಿನ್ನೋದು.. ಕಾವೇರಿ ವಿಚಾರವಾಗಿ ತಮಿಳುನಾಡು ಸಿಎಂ ವಿಜಯ್ ಕರ್ನಾಟಕಕ್ಕೆ ಬರುತ್ತಿದ್ದಾರೆ. ವಿಜಯ್ ನಮ್ಮ ಕರ್ನಾಟಕದ ರೈತರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಸಿಎಂ ಆಗಿದ್ದೀರಾ ಸಂತೋಷ.. ಬಲವಂತವಾಗಿ ನೀರು ಪಡೆಯೋ ಸಾಹಸಕ್ಕೆ ಹೋಗಬೇಡಿ..' ಎಂದಿದ್ದಾರೆ ನಟ ಪ್ರಥಮ್&lt;/p&gt;&lt;p&gt;ಕರ್ನಾಟಕದಲ್ಲಿ ಕಾವೇರಿ ವಿವಾದ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯ ಮುಖ್ಯಾಂಶಗಳು:-&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ಬಗ್ಗೆ ಸಭೆ ಮಾಡಿರೋ ಕನ್ನಡ ಚಲನಚಿತ್ರ ರಂಗದ ವಿವಿಧ ಸಂಘಗಳು- ಫಿಲಂ ಚೇಂಬರ್, ಕಲಾವಿದರ ಸಂಘ, ನಿರ್ಮಾಪಕರ ಸಂಘ, ಪ್ರದರ್ಶಕರ ಸಂಘ ಎಲ್ಲವೂ ಈಗ ಫಿಲ್ಮ್ ಚೇಂಬರ್ ನೇತೃತ್ವದಲ್ಲಿ ಸುದ್ದಿ ಘೋಷ್ಟಿಯಲ್ಲಿ ಭಾಗಿಯಾಗಿವೆ. ಅಲ್ಲಿ ತೆಗೆದುಕೊಂಡ ನಿರ್ಧಾರದ ಮುಖ್ಯಾಂಶಗಳಿ ಇಲ್ಲಿವೆ-&lt;/p&gt;&lt;h2&gt;ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ&lt;/h2&gt;&lt;p&gt;'ಕನ್ನಡ ಚಿತ್ರರಂಗದ ನಾವೆಲ್ಲರೂ ಸಂಪೂರ್ಣವಾಗಿ ನಮ್ಮ ರೈತ ಬಾಂಧವರ ಪರವಾಗಿ ಇದ್ದೇವೆ. ಮಹದಾಯಿ, ಕಳಸಾ-ಬಂಡೂರಿ ಹೋರಾಟದಲ್ಲೂ ಚಿತ್ರರಂಗ ಇತ್ತು. ಭಾಷೆ ಬದುಕಿದ್ರೆ, ನೆಲ ಜಲ ಮನುಷ್ಯ ಇದ್ರೆ, ನಾವೆಲ್ಲಾ ಇರುತ್ತೇವೆ. ಹೀಗಾಗಿ ರೈತರ ಪರ ಯಾವತ್ತೂ ನಾವಿದ್ದೇವೆ. ಈ ವಿಷಯದಲ್ಲಿ ಚಿತ್ರರಂಗದ ಒಗ್ಗಟ್ಟು ಅದ್ಭುತವಾಗಿದೆ. ಭಾಷೆ ನೆಲ&zwnj; ಜನ ಅಂತ ಬಂದಾಗ ಯಾರೂ ಯಾರೂ ತಡೆಯೋಕೆ ಆಗಲ್ಲ, ನಾವೆಲ್ಲಾ ಒಂದಾಗಿದ್ದೇವೆ' ಎಂದಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ.&lt;/p&gt;&lt;p&gt;ಸಾರಾ ಗೋವಿಂದು:-&lt;/p&gt;&lt;p&gt;'ಕಾವೇರಿ ನೀರು ನಿಯಂತ್ರಣಾ ಮಂಡಳಿ ಅವೈಜ್ನಾನಿಕ ತೀರ್ಪನ್ನು ಕೊಟ್ಟಿದೆ. ಅದಕ್ಕೂ ಮೊದಲು ಕರ್ನಾಟಕ್ಕೆ ಬಂದು ಪರಿಸ್ಥಿತಿ ನೋಡಬೇಕು, ಇಲ್ಲಿ ಸಂಬಂಧಪಟ್ಟವರ ಮಾತನ್ನು ಆಲಿಸಬೇಕು. ಮಳೆ ಇಲ್ಲ, ಜನರಿಗೆ ಕುಡಿಯೋ ನೀರಿಗೆ ಹಾಹಾಕಾರ ಆಗಿದೆ. ನೀರು ಬಿಡೋದಕ್ಕೆ&zwnj; ಆಗಲ್ಲ ಅಂತ ಜನ ಹೇಳುತ್ತಿದ್ದಾರೆ. ಆದ್ರೆ&zwnj; ಎಲ್ಲದಕ್ಕೂ ಚಿತ್ರರಂಗ ಸ್ಪಂದಿಸಿಲ್ಲ ಅಂತಾರೆ. ಆದರೆ ರಾಜ್&zwnj;ಕುಮಾರ್ ಕಾಲದಿಂದಲೂ ನಾವು ರೈತರ, ಕರ್ನಾಟಕದ ಕಾವೇರಿ ಸಮಸ್ಯೆ ಜೊತೆ ಒಗ್ಗಟ್ಟಾಗಿ ನಿಂತಿದ್ದೇವೆ.&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ಬಗ್ಗೆ ಪರಿಶೀಲನೆ ಮಾಡಿ ತೀರ್ಪು ಕೊಡದಿದ್ರೆ ನಾವು ಹೋರಾಟಕ್ಕೆ ಇಳಿಬೇಕಾಗುತ್ತೆ. ನೆಲ, ಜನ, ಭಾಷೆ ಅಂತ ಬಂದಾಗ ನಮ್ಮ ಇಡೀ ಚಿತ್ರರಂಗ ಕರ್ನಾಟಕದ ಜೊತೆಗೆ ಇರುತ್ತೆ. ಇದರಲ್ಲಿ ಕನ್ನಡ ಚಿತ್ರರಂಗದ ಯಾರದ್ದೂ ಅಪಸ್ವರ ಇಲ್ಲ. 1991 ರಲ್ಲಿ ಇದೇ ಪರೀಸ್ಥಿತಿ ನಿರ್ಮಾಣ ಆಗಿತ್ತು. ಬಂಗಾರಪ್ಪ ಅವರು ಸುಗ್ರೀವಾಜ್ಞೆ ಹೊರಡಿಸಿದ್ರು. ಎಲ್ಲರಿಗೂ ಅನುಕೂಲ ಆಯ್ತು. ಮೇಕೆದಾಟು ಯೋಜನೆ ಸಮಸ್ಯೆ ಬಗೆ ಹರಿದಿದೆ. ಅದರ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ' ಎಂದಿದ್ದಾರೆ.&lt;/p&gt;&lt;p&gt;ರಾಕ್ ಲೈನ್ ಹೇಳಿಕೆ:-&lt;/p&gt;&lt;p&gt;'ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಅಂತ ಯಾರು ಹೇಳಿದ್ದು? ನಮ್ಮಲ್ಲಿ ಒಗ್ಗಟ್ಟಿದೆ.. ಕಾವೇರಿ ಹೋರಾಟಕ್ಕೆ ಎಲ್ಲರು ಬರುತ್ತಾರೆ, ಬರಲೇಬೇಕು..&lt;/p&gt;&lt;p&gt;ಕಲಾವಿದರಾಗಿದ್ದ ಅಂಬರೀಶ್ ಅವರು ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿಯೇ ರಾಜೀನಾಮೆ ನೀಡಿದ್ದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ತೀರ್ಮಾನ ತೆಗೆದುಕೊಂಡ್ರೆ ನಾವೆಲ್ಲಾ ಅದನ್ನ ಪಾಲಿಸುತ್ತೇವೆ.&lt;/p&gt;&lt;p&gt;ಆದ್ರೆ ಕಲಾವಿದರು ಬಂದ್ರೆ ತೀರ್ಮಾನ ಆಗುತ್ತೆ ಅಂತ ತಿಳಿದುಕೊಳ್ಳಬೇಡಿ.. ಚಿತ್ರರಂಗದ ಎಲ್ಲರೂ ಇರುತ್ತೇವೆ.. ಕನ್ನಡ ಚಿತ್ರರಂಗ ಸಂಪೂರ್ಣವಾಗಿ ನಾವು ರೈತ ಬಾಂಧವರ ಪರವಾಗಿ ಇದ್ದೇವೆ' ಎಂದಿದ್ದಾರೆ ನಿರ್ಮಾಪಕರಾದ ರಾಕ್&zwnj;ಲೈನ್ ವೆಂಕಟೇಶ್.&lt;/p&gt;&lt;p&gt;ಇನ್ನು ಮೊತ್ತೊಮ್ಮೆ ಮಾತನಾಡಿ ಹೇಳಿಕೆ ನೀಡಿರೋ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ 'ತಮಿಳುನಾಡು ಸಿಎಂ ವಿಜಯ್ ಅವರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಸಿಎಂ ವಿಜಯ್ ಸಿನಿಮಾರಂಗದವರು.&lt;/p&gt;&lt;p&gt;ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ನಾವು ಹೋಗಿ ಭೇಟಿ ಮಾಡೋ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಕರ್ನಾಟಕದಲ್ಲಿ ನಡೆಯುತ್ತಿರುವ ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಇಂದು ನಡೆದ ಫಿಲಂ ಚೇಂಬರ್ ಸಭೆಯಲ್ಲಿ ಸಿನಿರಂಗದ ಎಲ್ಲಾ ಸಂಘಗಳು ಭಾಗಿಯಾಗಿ ರೈತರ ಪರ ಹೋರಾಟಕ್ಕೆ ನಿಲ್ಲುವ ಒಮ್ಮತದ ನಿರ್ಧಾರಕ್ಕೆ ಬದ್ಧರಾಗಿರುವ ತೀರ್ಮಾನ ತೆಗೆದುಕೊಂಡಿದ್ದಾರೆ.&lt;/p&gt;]]></content:encoded>
            <category>politics</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/who-were-the-speakers-at-the-film-chamber-meeting-for-cauvery-water-sharing-dispute-and-the-resolution-to-know-here/articleshow-fcvbgq0"/>
        </item>
        <item>
            <title><![CDATA[Cabinet Expansion: ರಾಯಚೂರು ಸಚಿವ ಸ್ಥಾನಕ್ಕಾಗಿ ಬೋಸರಾಜು-ಹಂಪನಗೌಡ ಬಾದರ್ಲಿ ನಡುವೆ ತೀವ್ರ ಪೈಪೋಟಿ]]></title>
            <link>https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm</link>
            <guid isPermaLink="true">https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm</guid>
            <pubDate>Thu, 30 Jul 2026 08:37:12 +0530</pubDate>
            <description><![CDATA[ಹೊಸ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆದಿದೆ. ಮಾಜಿ ಸಚಿವ ಎನ್&zwnj;.ಎಸ್&zwnj;.ಭೋಸರಾಜು ಮತ್ತು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನಡುವೆ ಸಚಿವ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿದ್ದು, ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrfn460qm689x8n7s9v488b,imgname-chatgpt-image-jul-30--2026--08-33-32-am-1785380638912.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮಕೃಷ್ಣ ದಾಸರಿ&lt;/strong&gt;&lt;/p&gt;&lt;p&gt;&lt;strong&gt;ರಾಯಚೂರು (ಜು.30):&lt;/strong&gt; ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;(CM Dk Shivakuma) ಅವರ ನೇತೃತ್ವದಲ್ಲಿ ರಚನೆಗೊಂಡ ಮೊದಲ ಸಚಿವ ಸಂಪುಟದಲ್ಲಿ ಅವಕಾಶ ಕಳೆದುಕೊಂಡಿದ್ದ ಜಿಲ್ಲೆಗೆ ಎರಡನೇ ಹಂತದಲ್ಲಿಯಾದರೂ ಸ್ಥಾನವನ್ನು ಪಡೆಯಬೇಕು ಎನ್ನುವ ಪಟ್ಟು ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಬಂದಿದ್ದು, ಅದಕ್ಕಾಗಿ ಎಲ್ಲಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ.&lt;/p&gt;&lt;p&gt;ಸಚಿವ ಸಂಪುಟದ ವಿಸ್ತರಣೆ ಕಾರ್ಯ ಕೊನೆಯ ಘಟ್ಟ ತಲುಪಿದ್ದರಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕರು - ಎಂಎಲ್ಸಿಗಳು, ಮುಖಂಡರು ಹೈಕಮಾಂಡ್&zwnj; ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಜಿಲ್ಲೆಯ ಮಾಜಿ ಸಚಿವ ಹಾಗೂ ಎಂಎಲ್ಸಿ ಎನ್&zwnj;.ಎಸ್&zwnj;.ಭೋಸರಾಜು(NS Boseraju) ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ(Hampanagowda badarli) ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿ ಸಾಗಿದ್ದು, ಕೊನೆಗಳಿಗೆಯಲ್ಲಿ ಹೈಕಮಾಂಡ್&zwnj; ಯಾರಿಕೆ ಮಣಿಯಾಗಲಿದೆ ಎನ್ನುವ ಕುತೂಹಲವು ಮೂಡಿದೆ.&lt;/p&gt;&lt;p&gt;ಹಿಂದಿನ ಸಿಎಂ ಸಿದ್ದರಾಮಯ್ಯ ಸಮಯದಲ್ಲಿ ಶಾಸಕರಿಲ್ಲದಿದ್ದರೂ ಭೋಸರಾಜು ಅವರಿಗೆ ಕರೆದು ಸಚಿವ ಸ್ಥಾನದಲ್ಲಿ ಅವಕಾಶ ನೀಡಲಾಗಿತ್ತು ಅದನ್ನು ಮುಂದುವರೆಸಿಕೊಳ್ಳುವ ನಿಟ್ಟಿನಲ್ಲಿ ಭೋಸರಾಜು ಮತ್ತು ಅವರ ಮಗ ರವಿ ಭೋಸರಾಜು ಭಗೀರಥ ಪ್ರಯತ್ನ ನಡೆಸಿದ್ದು, ಸಚಿವ ಸ್ಥಾನ ನೀಡುವುದು ಇಲ್ಲವೇ ವಿಧಾನ ಪರಿಷತ್&zwnj; ಸಭಾಪತಿಯ ಸ್ಥಾನವನ್ನು ಕೊಡುವುದರ ಕುರಿತು ಹೈಕಮಾಂಡ್ ಹಂತಿಮ ತೀರ್ಮಾನಕ್ಕೆ ಬರಬೇಕಾಗಿದೆ.&lt;/p&gt;&lt;p&gt;ಇನ್ನು ಸಿಂಧನೂರಿನಿಂದ ಐದು ಸಲ ಗೆದ್ದು ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಅವರು ಸಚಿವ ಸ್ಥಾನದ ರೇಸ್&zwnj;ನಲ್ಲಿ ಮುಂಚೂಣಿಯಲ್ಲಿದ್ದು, ಸಮುದಾಯ ಹಾಗೂ ಅನುಭವದ ಆಧಾರದ ಮೇಲೆ ಮತ್ತು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಮಾತಿನಂತೆ ಈ ಬಾರಿ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಗಳು ಹೆಚ್ಚಾಗಿವೆ.&lt;/p&gt;&lt;h2&gt;ಬೋಸರಾಜು-ಬಾದರ್ಲಿ ಹೈಕಮಾಂಡ್ ಆಯ್ಕೆ ಯಾರು?&lt;/h2&gt;&lt;p&gt;ಸಚಿವ ಸಂಪುಟದ ವಿಸ್ತರಣೆಯಲ್ಲಿ ಹೈಕಮಾಂಡ್&zwnj; ಸಾಕಷ್ಟು ಎಚ್ಚರಿಕೆಗಳನ್ನು ವಹಿಸಿದ್ದು, ಹಲವಾರು ಮಾನದಂಡಗಳ ಅವಲೋಕನೆಯನ್ನು ಮಾಡಿ ಸಚಿವ ಸ್ಥಾನದಲ್ಲಿ ಅವಕಾಶ ನೀಡಲು ಮುಂದಾಗಿದೆ. ಜಿಲ್ಲಾ ಮತ್ತು ಪ್ರಾದೇಶಿಕ ಪ್ರಾತಿನಿಧ್ಯತೆ, ಸಮುದಾಯದವಾರು ಆದ್ಯತೆ, ಹೊಸ ಹಾಗೂ ಹಳೆ ಮುಖಗಳ ಅನುಪಾತ, ಭವಿಷ್ಯದ ಎಲೆಕ್ಷನ್&zwnj;ಗಳ ಲೆಕ್ಕಾಚಾರ, ನಾಯಕರೊಂದಿಗೆ ಹೊಂದಿರುವ ಪ್ರಭಾವ, ಬಾಂಧವ್ಯಗಳು ಸೇರಿ ಮತ್ತಿತರ ಮಾನದಂಡಗಳನ್ನು ಅವಲೋಕಿಸಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎನ್ನುವ ಅಂಶಗಳ ನಡುವೆ ಭೋಸರಾಜು ಹಾಗೂ ಬಾದರ್ಲಿ ಪರಿಗಣಿಸಿರುವ ಪಕ್ಷವು ಕೊನೆಯ ಕ್ಷಣದಲ್ಲಿ ಯಾವ ತೀರ್ಮಾನಕ್ಕೆ ಬರಲಿದೆ ಎನ್ನುವುದು ಸಸ್ಪೆನ್ಸಾಗಿ ಉಳಿದುಬಿಟ್ಟಿದೆ.&lt;/p&gt;&lt;h3&gt;ಇಲ್ಲಿಯೂ ಬಣಗಳ ಸಂಘರ್ಷ:&lt;/h3&gt;&lt;p&gt;ಭಿನ್ನಾಭಿಪ್ರಾಯ, ಬಣ ಸಂಘರ್ಷ ಹಾಗೂ ಗುಂಪುಗಾರಿಕೆಯಿಂದ ತುಂಬಿ ತುಳುಕುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಭೋಸರಾಜು ಹಾಗೂ ಎ.ವಸಂತಕುಮಾರ ಅವರ ನಡುವೆ ನಡೆಯುತ್ತಲೇ ಇರುವ ಸಂಘರ್ಷವು ದೆಹಲಿಯಲ್ಲಿ ಸಹ ಮುಂದುವರೆದಿದ್ದು, ಸಚಿವ ಸಂಪುಟದ ವಿಸ್ತರಣೆಯಲ್ಲಿಯೂ ಬಣಗಳ ನಡುವೆ ಪೈಪೋಟಿ, ಅವರಿಗೆ ಸಚಿವ ಸ್ಥಾನ ಕೊಟ್ಟರು ಬೇರೆ ಬೇರೆ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ವಹಿಸಿ, ಮುಂದಿನ ಚುನಾವಣೆ ಯಲ್ಲಿ ಟಿಕೆಟ್, ಜಿಲ್ಲೆಯ ಮೇಲೆ ನಮ್ಮ ಹಿಡಿದವಿರಲಿ ಎನ್ನುವ ಅಂಶಗಳ ನಡುವೆ ಹೈಕಮಾಂಡ್&zwnj; ಮುಂದೆ ಗುಂಪು ಸಂಘರ್ಷವೂ ಸಾಗಿದ್ದು, ಎಲ್ಲವನ್ನೂ ಪರಿಶೀಲಿಸಿ ಯಾರಿಗೆ ಯಾವ ಸ್ಥಾನ ದೊರೆಯಲಿದೆಯೇ ಕೆಲಕಾಲ ಕಾದುನೋಡಬೇಕಾಗಿದೆ.&lt;/p&gt;&lt;p&gt;ಸಂಪುಟದಲ್ಲಿ ಜಿಲ್ಲೆಯ ಯಾವುದೇ ಶಾಸಕ, ಎಂಎಲ್ಸಿಗಳನ್ನು ಸೇರಿಸಿಕೊಂಡರೂ ಪರವಾಗಿಲ್ಲ ಆದರೆ ಉಸ್ತುವಾರಿ ಜವಾಬ್ದಾರಿಯನ್ನು ಸಹ ಅವರಿಗೆ ವಹಿಸಬೇಕು ಇಲ್ಲದಿದ್ದರೆ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗುತ್ತದೆ ಎನ್ನುವುದು ಜನಸಾಮಾನ್ಯರ ಒತ್ತಾಸೆಯಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm"/>
        </item>
        <item>
            <title><![CDATA[ಪ್ರಪೋಸಲ್ಸ್‌ ಬರ್ತಿದ್ರೂ ಜಿರಳೆ ದೀಪ್ಕೆ ಇನ್ನೂ ಮದ್ವೆಯಾಕಾಗಿಲ್ಲ? ಶಾಕಿಂಗ್‌ ಸತ್ಯ ರಿವೀಲ್‌ ಮಾಡಿದ ಅಮ್ಮ]]></title>
            <link>https://kannada.asianetnews.com/relationship/why-is-cjps-abhijeet-dipke-turning-down-marriage-proposals-his-mother-reveals-suc/articleshow-hgz561m</link>
            <guid isPermaLink="true">https://kannada.asianetnews.com/relationship/why-is-cjps-abhijeet-dipke-turning-down-marriage-proposals-his-mother-reveals-suc/articleshow-hgz561m</guid>
            <pubDate>Wed, 29 Jul 2026 19:45:58 +0530</pubDate>
            <description><![CDATA[&lt;p&gt;'ಕಾಕ್ರೋಚ್&zwnj; ಜನತಾ ಪಕ್ಷ'ದಿಂದ ಫೇಮಸ್ ಆದ ಅಭಿಜೀತ್&zwnj; ದೀಪ್ಕೆಗೆ ಸಾಕಷ್ಟು ಮದುವೆ ಪ್ರಪೋಸಲ್&zwnj;ಗಳು ಬರುತ್ತಿವೆ. ಆದರೂ 30 ವರ್ಷವಾದ ದೀಪ್ಕೆ ಯಾಕೆ ಮದುವೆಯಾಗುತ್ತಿಲ್ಲ ಎಂಬ ರಹಸ್ಯವನ್ನು ಅವರ ತಾಯಿ ಅನಿತಾ ದೀಪ್ಕೆ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq3p0wm6ytq5jnrssjtvdv2,imgname-abhijeet-deepke-1785334530964.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಕ್ರೋಚ್&zwnj; ಜನತಾ ಪಕ್ಷ (CJP) ಆರಂಭಿಸಿ ಅಲ್ಪ ಸಮಯದಲ್ಲಿಯೇ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿಯೂ ಫೇಮಸ್&zwnj; ಆಗಿ ರಾತ್ರೋರಾತ್ರಿ ಹೀರೋ ಫೇಮಸ್&zwnj; ಆದವರು ಅಭಿಜೀತ್&zwnj; ದೀಪ್ಕೆ. ಮೊದಲ ಪ್ರತಿಭಟನೆಯಲ್ಲಿಯೇ ಕೇಂದ್ರ ಸಚಿವರ ರಾಜೀನಾಮ ಪಡೆದು ಒಂದಷ್ಟು ಮಂದಿಗೆ ಹೀರೋ ಆಗಿ ಮೆರೆದಿದ್ದಾರೆ. ಇದೀಗ ಅವರಿಗೆ ಮ್ಯಾರೇಜ್&zwnj; ಪ್ರಪೋಸಲ್ಸ್&zwnj; ಕೂಡ ಸಾಕಷ್ಟು ಬರುತ್ತಿದೆಯಂತೆ.&lt;/p&gt;&lt;p&gt;ಅಂದಹಾಗೆ ಅಭಿಜೀತ್&zwnj; ಅವರಿಗೆ ಈಗ 30 ವರ್ಷ ವಯಸ್ಸು. ಕಳೆದ ಎರಡು ವರ್ಷಗಳಿಂದ ಅಭಿಜೀತ್&zwnj; ಅವರಿಗೆ ಪ್ರಪೋಸಲ್ಸ್&zwnj; ಬರುತ್ತಲೇ ಇವೆಯಂತೆ. ಆದರೆ ಮದುವೆಗೆ ತಮ್ಮ ಮಗ ಒಪ್ತಿಲ್ಲ ಎಂದಿದ್ದಾರೆ ಅವರ ಅಮ್ಮ ಅನಿತಾ ದೀಪ್ಕೆ . ನನಗೂ ಮಗನ ಮದುವೆ ನೋಡುವ ಆಸೆ, ಆದರೆ ಅವನು ಮಾತ್ರ ಮದುವೆಗೆ ಒಪ್ತಿಲ್ಲ ಎಂದಿದ್ದಾರೆ ಅವರು. ಇದೀಗ ಅದರ ಕಾರಣವನ್ನೂ ಬಹಿರಂಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮಗ ಯಾಕೆ ಮದ್ವೆ ಆಗ್ತಿಲ್ಲ ಎಂದು ಅಮ್ಮನ ಕಾರಣ&lt;/strong&gt;&lt;/h2&gt;&lt;p&gt;&quot;ಕಳೆದ ಎರಡು ವರ್ಷಗಳಿಂದ ನಮಗೆ ಮದುವೆಗೆ ಪ್ರಸ್ತಾವನೆಗಳು ಬರುತ್ತಿವೆ. ನಾವು ಹೆಚ್ಚು ಆಸಕ್ತಿ ಹೊಂದಿದ್ದೇವೆ. ಆದರೆ ಅಭಿಜೀತ್&zwnj;, ಆರ್ಥಿಕವಾಗಿ ಸ್ಥಿರವಾದ ನಂತರವೇ ಮದುವೆಯಾಗುವುದಾಗಿ ನಿರಂತರವಾಗಿ ಹೇಳುತ್ತಿದ್ದಾನೆ ಎಂದಿದ್ದಾರೆ ಅಮ್ಮ. &quot;ಅವನು 'ನನ್ನ ಅಧ್ಯಯನ ಮುಗಿದ ನಂತರ ನನಗೆ ಏನಾದರೂ ಸಂಪಾದಿಸಲು ಬಿಡಿ. ಇಲ್ಲದಿದ್ದರೆ, ನಾನು ಹೇಗೆ ಮದುವೆಯಾಗುತ್ತೇನೆ?' ಎಂದು ನಮಗೆ ಹೇಳಿದನು, ನಮ್ಮಲ್ಲಿ ಸಾಕಷ್ಟು ಹಣವಿದೆ ಎಂದು ನಾನು ಅವನಿಗೆ ಹೇಳಿದೆ, ಆದರೆ ಅವನು ತನಗಾಗಿ ಸಂಪಾದಿಸಲು ಬಯಸುತ್ತೇನೆ ಎಂದು ಹೇಳಿದನು. ಅವನು ತುಂಬಾ ಪ್ರಾಮಾಣಿಕರಾಗಿದ್ದು, ಆತ ತಮ್ಮ ಮದುವೆಗೆ ಬಟ್ಟೆಗಳನ್ನು ಹೊರತುಪಡಿಸಿ ಬೇರೆ ಏನನ್ನೂ ತೆಗೆದುಕೊಳ್ಳುವುದಿಲ್ಲ&quot; ಎಂದರು.&lt;/p&gt;&lt;h3&gt;&lt;strong&gt;ಇಲ್ಲೂ ಬಿಡ್ತಿಲ್ಲ ಟ್ರೋಲಿಗರು!&lt;/strong&gt;&lt;/h3&gt;&lt;p&gt;&quot;ನಾವು ಸದ್ಯ ಯಾವುದೇ ಹುಡುಗಿಯನ್ನು ನೋಡಿಲ್ಲ. ಅವನು ಈ ಬಗ್ಗೆ ನಮಗೆ ಏನನ್ನೂ ಹೇಳಿಲ್ಲ. ಅವನ ಒಪ್ಪಿಗೆ ಪಡೆದೇ ಹುಡುಗಿ ನೋಡುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೂ ಸಿಕ್ಕಾಪಟ್ಟೆ ನೆಗೆಟಿವ್&zwnj; ಕಮೆಂಟ್ಸ್&zwnj; ಬರುತ್ತಿವೆ. ಪ್ರತಿಭಟನೆಯ ನಂತರ ಆರ್ಥಿಕವಾಗಿ ತುಂಬಾ ಸ್ವತಂತ್ರವಾಗಿದ್ದು, ಪ್ರತಿಭಟನೆ ಮುಂದುವರೆಯಲು ಇನ್ನೂ ಹೆಚ್ಚು ಹಣ ಹರಿದು ಬರುತ್ತದೆ. ಆಮೇಲಾದ್ರೂ ಮಗನ ಇಚ್ಛೆಯಂತೆ ಮದುವೆ ಮಾಡಿ ಅಂತಿದ್ದಾರೆ ಕೆಲವು ನೆಟ್ಟಿಗರು. ಮತ್ತೆ ಕೆಲವರು ಅಮೆರಿಕದಲ್ಲಿ ಬಿಳಿ ಹೆಂಡ್ತಿಯನ್ನು ನೋಡಿಕೊಂಡಿರಬೇಕು ಬಿಡಿ ಎನ್ನುತ್ತಿದ್ದರೆ, ಪಾಕಿಸ್ತಾನಿ, ಖಲಿಸ್ತಾನಿಗಳ ಬೆಂಬಲ ಇರುವಾಗ ಒಳ್ಳೆಯ ಹುಡುಗಿ ಸಿಗ್ತಾಳೆ, ಆರ್ಥಿಕವಾಗಿಯೂ ಸಿಕ್ಕಾಪಟ್ಟೆ ಸ್ವತಂತ್ರ ಆದ್ಮೇಲೆ ಮದುವೆ ಮಾಡಿ ಅಂತಿದ್ದಾರೆ!&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/why-is-cjps-abhijeet-dipke-turning-down-marriage-proposals-his-mother-reveals-suc/articleshow-hgz561m"/>
        </item>
        <item>
            <title><![CDATA[ಭದ್ರತಾ ಸಲಹೆಗಾರ ಅಜಿತ್ ದೋವಲ್ ದಿಢೀರ್​ ಸಂಸತ್ತಿಗೆ ಎಂಟ್ರಿ: ವಿಪಕ್ಷಗಳು ತಲ್ಲಣ- ಏನಿದರ ವಿಶೇಷತೆ]]></title>
            <link>https://kannada.asianetnews.com/politics/national-security-advisor-ajit-dovals-sudden-entry-into-parliament-what-is-the-reason-behind-it-suc/articleshow-il3ieow</link>
            <guid isPermaLink="true">https://kannada.asianetnews.com/politics/national-security-advisor-ajit-dovals-sudden-entry-into-parliament-what-is-the-reason-behind-it-suc/articleshow-il3ieow</guid>
            <pubDate>Wed, 29 Jul 2026 22:28:09 +0530</pubDate>
            <description><![CDATA[ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನೀಟ್ ಪತ್ರಿಕೆ ಸೋರಿಕೆ ಚರ್ಚೆಯ ವೇಳೆ ಸಂಸತ್ತಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಗಂಭೀರ ಭದ್ರತಾ ವಿಷಯಗಳಿದ್ದಾಗ ಮಾತ್ರ ಕಾಣಿಸಿಕೊಳ್ಳುವ ದೋವಲ್ ಅವರ ಈ ಭೇಟಿಯು, ನೀಟ್ ಪ್ರತಿಭಟನೆಗಳ ಹಿಂದೆ ವಿದೇಶಿ ಕೈವಾಡದಂತಹ ರಾಷ್ಟ್ರೀಯ ಭದ್ರತೆಯ ಆಯಾಮವಿರಬಹುದೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyqcv9mkcqm34fpca94eqsq9,imgname-ajit-doval-1785344140946.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂಸತ್ತಿನ ಉಭಯ ಸದನಗಳಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಈ ಸಮಯದಲ್ಲಿ ಸಂಸದರು, ಸಚಿವರು ಎಲ್ಲರೂ ಬರುವುದು ಸಹಜವೇ. ಅಗತ್ಯ ಬಿದ್ದರೆ ಪ್ರಧಾನಿಯೂ ಬರಬೇಕು. ಆದರೆ, ಇದಾವುದೇ ನಿಯಮ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಅನ್ವಯ ಆಗುವುದಿಲ್ಲ. ಎಲ್ಲಿ, ಯಾವಾಗ ಬೇಕಾದರೂ ಸ್ವಯಂ ಪ್ರೇರಿತವಾಗಿ ಹೋಗುವ ಹಕ್ಕು ಇರುವುದು ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ. ಅದೇ ರೀತಿ, ಭಾರತದ ಜೇಮ್ಸ್​ಬಾಂಡ್​ ಎಂದೇ ಫೇಮಸ್​ ಆಗಿರೋ, ಪಾಕಿಸ್ತಾನದಲ್ಲಿ ಹತ್ತಾರು ವರ್ಷ ಇದ್ದು, ಪಾಕಿಗಳಿಗೇ ಚಳ್ಳೆಹಣ್ಣು ತಿನ್ನಿಸಿ, ಭಾರತದ ಭದ್ರತೆ ಕಾಪಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಇಂದು ಸಂಸತ್​ ಪ್ರವೇಶಿಸಿದ್ದು, ವಿರೋಧ ಪಕ್ಷಗಳಲ್ಲಿ ತಲ್ಲಣ ಹುಟ್ಟಿಸಿದ ಘಟನೆ ನಡೆದಿದೆ.&lt;/p&gt;&lt;p&gt;ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ಅಜಿತ್​ ದೋವಲ್​ ಅವರು ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿ ಮಾಡಿದೆ. ಏಕೆಂದರೆ, ರಾಷ್ಟ್ರೀಯ ಭದ್ರತಾ ಸಲಹೆಗಾರರು ಸಾಮಾನ್ಯವಾಗಿ ಸಂಸತ್ತಿನ ಒಳಗೆ ಕಾಣಿಸಿಕೊಳ್ಳುವುದಿಲ್ಲ. ದೇಶದ ಆಂತರಿಕ ಅಥವಾ ಬಾಹ್ಯ ಭದ್ರತೆಗೆ, ದೇಶಕ್ಕೆ ಅಪಾಯ ಇದೆ ಎನ್ನುವ ಸೂಚನೆಗಳು ಇದ್ದ ಸಂದರ್ಭಗಳಲ್ಲಿ, ಇಂಥ ಅತಿ ಗಂಭೀರ ವಿಚಾರಗಳಿದ್ದಾಗ ಮಾತ್ರ ಅವರು ಕಾಣಿಸಿಕೊಳ್ಳುತ್ತಾರೆ, ಅದು ಕೂಡ ಸಂಸತ್ತಿನಲ್ಲಿ ಅಲ್ಲ, ಬದಲಿಗೆ ಪ್ರಧಾನಿಗಳ ಕಚೇರಿ ಅಥವಾ ಗೃಹ ಸಚಿವಾಲಯದಲ್ಲಿ ಈ ಮಾತುಕತೆ ನಡೆಯುತ್ತದೆ. ಆದರೆ ನೀಟ್​ ಪ್ರತಿಭಟನೆಯ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಇವರು ಸಂಸತ್ತಿಗೆ ಎಂಟ್ರಿ ಕೊಟ್ಟಿರುವುದು ವಿವಿಧ ಊಹಾಪೋಹಗಳಿಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ತಜ್ಞರಿಂದ ವಿಶ್ಲೇಷಣೆ&lt;/strong&gt;&lt;/h2&gt;&lt;p&gt;ಮೊದಲೇ ಹೇಳಿದಂತೆ ದೇಶದ ಭದ್ರತೆಯಂಥ ವಿಚಾರದ ಸಮಯದಲ್ಲಿ ಇವರು ಕಾಣಿಸಿಕೊಳ್ಳುವುದಾದರೆ, ನೀಟ್​ ಪ್ರತಿಭಟನೆಯ ಕುರಿತಾದ ಚರ್ಚೆಯ ಸಮಯದಲ್ಲಿ ಕಾಣಿಸಿಕೊಂಡಿರುವ ಹಿಂದೆ ಇರುವ ಔಚಿತ್ಯದ ಬಗ್ಗೆ ಸಾಕಷ್ಟು ಬಗೆಯಲ್ಲಿ ತಜ್ಞರಿಂದ ವಿಶ್ಲೇಷಣೆಗಳ ಸುರಿಮಳೆಯಾಗುತ್ತಿದೆ. ದೋವಲ್ ಸಂಸತ್ತಿಗೆ ಬಂದ ತಕ್ಷಣ, ವಿವಿಧ ಊಹಾಪೋಹಗಳು ಹುಟ್ಟಿಕೊಂಡವು. ಅವರು ಪ್ರಮುಖ ಭದ್ರತಾ ವಿಷಯದ ಕುರಿತು ಸಚಿವರಿಗೆ ಮಾಹಿತಿ ನೀಡಲು ಬಂದಿದ್ದಾರೆಯೇ ಅಥವಾ ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಯಲಿದೆಯೇ ಎಂಬ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಆದರೆ ಇದರ ಗುಟ್ಟು ರಟ್ಟಾಗಲು ಸಾಧ್ಯವೇ ಇಲ್ಲ.&lt;/p&gt;&lt;h3&gt;&lt;strong&gt;ಏಕಿಷ್ಟು ಪ್ರಾಮುಖ್ಯತೆ?&lt;/strong&gt;&lt;/h3&gt;&lt;p&gt;ಇದು ಏಕಿಷ್ಟು ಚರ್ಚೆಯಾಗುತ್ತಿದೆ ಎನ್ನುವುದಕ್ಕೆ ಕಾರಣವೂ ಇದೆ. ಏಕೆಂದರೆ, ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅದರ ಬಳಿಕ ನಡೆದ ಪ್ರತಿಭಟನೆಗಳ ಹಿಂದಿರುವ ವ್ಯವಸ್ಥಿತ ಪಿತೂರಿ, ಪ್ರತಿಭಟನೆಯ ಹೆಸರಿನಲ್ಲಿ ನಡೆದಿರುವ ವಿದೇಶಿಗಳ ಕೈವಾಡ, ಪಾಕಿಸ್ತಾನಿಗಳು, ಖಲಿಸ್ತಾನಿಗಳ ಬೆಂಬಲ, ಪ್ರತಿಭಟನೆ ಸಮಯದಲ್ಲಿ ಕಂಡು ಬಂದ ವಿವಿಧ ದೇಶಗಳ ಬಾವುಟ, ಪ್ರತಿಭಟನೆಗೆ ಬೆಂಬಲ ಸೂಚಿಸಿ, ಭಾರತದ ವಿರುದ್ಧ ಷಡ್ಯಂತ್ರ ರಚಿಸಿ ಸುಳ್ಳುಸುದ್ದಿ ಹರಡಿದ್ದ 150ಕ್ಕೂ ಅಧಿಕ ಪಾಕಿಸ್ತಾನ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ಗಳು... ಇವೆಲ್ಲವುಗಳ ಬಗ್ಗೆ ದೊಡ್ಡ ಮಟ್ಟದ ತನಿಖೆಯಾಗುತ್ತಿರುವುದಾಗಿ ವರದಿಯಾಗಿದೆ. ಇದು ದೇಶ ಭದ್ರತೆಯ ವಿಷಯವಾಗಿರುವ ಹಿನ್ನೆಲೆಯಲ್ಲಿ, ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಆ ನಂತರದ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಅಜಿತ್​ ದೋವಲ್​ ಅವರ ಅಪರೂಪದ ದರ್ಶನ ನಾನಾ ಚರ್ಚೆಗಳಿಗೆ ಕಾರಣವಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>politics</category>
            <dc:creator>Suchethana D</dc:creator>
            <atom:link href="https://kannada.asianetnews.com/politics/national-security-advisor-ajit-dovals-sudden-entry-into-parliament-what-is-the-reason-behind-it-suc/articleshow-il3ieow"/>
        </item>
        <item>
            <title><![CDATA[BJP leaders Instagram activity:  ಮೋದಿ ಕರೆ ಬೆನ್ನಲ್ಲೇ ಬಿಜೆಪಿ ನಾಯಕರು ಇನ್‌ಸ್ಟಾದಲ್ಲಿ ಫುಲ್ ಆ್ಯಕ್ಟಿವ್‌!]]></title>
            <link>https://kannada.asianetnews.com/politics/bjp-leaders-step-up-instagram-activity-after-pm-modi-s-call-for-digital-outreach-rav/articleshow-inwtfbu</link>
            <guid isPermaLink="true">https://kannada.asianetnews.com/politics/bjp-leaders-step-up-instagram-activity-after-pm-modi-s-call-for-digital-outreach-rav/articleshow-inwtfbu</guid>
            <pubDate>Wed, 29 Jul 2026 06:31:19 +0530</pubDate>
            <description><![CDATA[&lt;p&gt;ಇನ್&zwnj;ಸ್ಟಾಗ್ರಾಂನಲ್ಲಿ ಹೆಚ್ಚೆಚ್ಚು ರೀಲ್ಸ್&zwnj; ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಹೋದ್ಯೋಗಿಗಳಿಗೆ ಕರೆ ನೀಡಿದ ಬೆನ್ನಲ್ಲೇ, ಬಿಜೆಪಿ ನಾಯಕರು ಇನ್&zwnj;ಸ್ಟಾಗ್ರಾಂ ಬಳಕೆಯನ್ನು ತೀವ್ರಗೊಳಿಸಿದ್ದಾರೆ. ಇದನ್ನು ಪ್ರಮುಖ ರಾಜಕೀಯ ಸಂದೇಶ ಪ್ರಸಾರದ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kynntfbgrjy4m6zdprfhvxja,imgname-----------------------2026-07-29t062341.711-1785286442352.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಯುವಕರ ತಲುಪಲು ರೀಲ್ಸ್&zwnj; ಮಾಡಿ ಎಂದಿದ್ದ ಪ್ರಧಾನಿ&amp;nbsp;&lt;/li&gt; &lt;li&gt;ಈ ಬೆನ್ನಲ್ಲೇ ಸಚಿವರಿಂದ ಇನ್&zwnj;ಸ್ಟಾಗ್ರಾಂ ಬಳಕೆ ತೀವ್ರ&lt;/li&gt;&lt;/ul&gt;&lt;p&gt;&lt;strong&gt;ಪಿಟಿಐ ನವದೆಹಲಿ (ಜು.29)&lt;/strong&gt;&lt;/p&gt;&lt;p&gt;ಇನ್&zwnj;ಸ್ಟಾಗ್ರಾಂ(Instagram)ನಲ್ಲಿ ಹೆಚ್ಚೆಚ್ಚು ರೀಲ್ಸ್&zwnj; ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ(Prime minister Narendra Modi) ತಮ್ಮ ಸಹೋದ್ಯೋಗಿಗಳಿಗೆ ಕರೆ ನೀಡಿದ ಬೆನ್ನಲ್ಲೇ, ಬಿಜೆಪಿ ನಾಯಕರು ಇನ್&zwnj;ಸ್ಟಾಗ್ರಾಂ ಬಳಕೆಯನ್ನು ತೀವ್ರಗೊಳಿಸಿದ್ದಾರೆ. ಹಲವು ಕೇಂದ್ರ ಸಚಿವರು ಮತ್ತು ಪಕ್ಷದ ನಾಯಕರು ಇದನ್ನು ಪ್ರಮುಖ ರಾಜಕೀಯ ಸಂದೇಶ ಪ್ರಸಾರದ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ.&lt;/p&gt;&lt;h2&gt;ಮೋದಿ ಕರೆ ಬೆನ್ನಲ್ಲೇ ಸಚಿವರಿಂದ ಇನ್&zwnj;ಸ್ಟಾಗ್ರಾಂ ಬಳಕೆ ತೀವ್ರ&lt;/h2&gt;&lt;p&gt;ನೂತನ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ, ನೀಟ್&zwnj; ಪ್ರಕರಣಕ್ಕೆ ಸರ್ಕಾರದ ಪ್ರತಿಕ್ರಿಯೆಯನ್ನು ಇನ್&zwnj;ಸ್ಟಾದಲ್ಲಿ ವಿವರಿಸಿದ್ದಾರೆ. ಕೇಂದ್ರ ಸಚಿವ ಜೆ.ಪಿ. ನಡ್ಡಾ ಸಿಜೆಪಿ ಜತೆಗಿನ ಸಭೆಗಳ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸಚಿವರಾದ ಜಿತೇಂದ್ರ ಸಿಂಗ್, ಕಿರಣ್&zwnj; ರಿಜಿಜು, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಅನ್ನಪೂರ್ಣಾ ದೇವಿ, ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಲ್ವಿಯಾ ಸಹ ಇನ್&zwnj;ಸ್ಟಾದಲ್ಲಿ ಅಧಿಕ ಪೋಸ್ಟ್&zwnj;ಗಳನ್ನು ಅಪ್ಲೋಡ್&zwnj; ಮಾಡುತ್ತಿದ್ದಾರೆ.&lt;/p&gt;&lt;h3&gt;ಮೇ ತಿಂಗಳಲ್ಲಿ ಆರಂಭವಾದ ಸಿಜೆಪಿ ಈಗ ಇನ್&zwnj;ಸ್ಟಾಗ್ರಾಂನಲ್ಲಿ 2.6 ಕೋಟಿ ಫಾಲೋವರ್ಸ್!&lt;/h3&gt;&lt;p&gt;ಮೇ ತಿಂಗಳಲ್ಲಿ ಆರಂಭವಾದ ಸಿಜೆಪಿ ಈಗ ಇನ್&zwnj;ಸ್ಟಾಗ್ರಾಂನಲ್ಲಿ 2.6 ಕೋಟಿ ಫಾಲೋವರ್&zwnj;ಗಳನ್ನು ಹೊಂದಿದೆ. ಪರೀಕ್ಷಾ ಸುಧಾರಣೆ ಬಗ್ಗೆ ಇತ್ತೀಚೆಗೆ ಮೋದಿ ಇನ್&zwnj;ಸ್ಟಾದಲ್ಲಿ ಸೆಲ್ಫಿ ವಿಡಿಯೋ ಹಂಚಿಕೊಂಡ ಬಳಿಕ ಅವರ ಫಾಲೋವರ್&zwnj;ಗಳ ಸಂಖ್ಯೆ ಸುಮಾರು 10 ಲಕ್ಷ ಏರಿಕೆಯಾಗಿ, 10.5 ಕೋಟಿಗೆ ತಲುಪಿದೆ. ಬಿಜೆಪಿಯ ಅಧಿಕೃತ ಖಾತೆಗೆ 95 ಫಾಲೋವರ್&zwnj;ಗಳಿದ್ದಾರೆ. ಹೀಗೆ ಯುವಕರ ನಡುವೆ ಇನ್&zwnj;ಸ್ಟಾ ಹೆಚ್ಚು ಪ್ರಭಾವಶಾಲಿ ಮಾಧ್ಯಮವಾಗಿರುವುದರಿಂದ ಅದರ ಬಳಕೆಯನ್ನು ಹೆಚ್ಚಿಸುವಂತೆ ಮೋದಿ ಸಲಹೆ ನೀಡಿದ್ದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bjp-leaders-step-up-instagram-activity-after-pm-modi-s-call-for-digital-outreach-rav/articleshow-inwtfbu"/>
        </item>
        <item>
            <title><![CDATA[ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಕ್ಲೀನ್‌ಚಿಟ್: ಹಾಗಾದ್ರೆ ತಪ್ಪಿತಸ್ಥರು ಯಾರು? 11 ಜನರ ಸಾವಿಗೆ ಕಾರಣ ಯಾರು?: ಸಾರಾ ಮಹೇಶ್ ಕಿಡಿ]]></title>
            <link>https://kannada.asianetnews.com/politics/former-minister-sa-ra-mahesh-reacts-on-chinnaswamy-stampede-case-at-mysuru-rav/articleshow-pvfituq</link>
            <guid isPermaLink="true">https://kannada.asianetnews.com/politics/former-minister-sa-ra-mahesh-reacts-on-chinnaswamy-stampede-case-at-mysuru-rav/articleshow-pvfituq</guid>
            <pubDate>Wed, 29 Jul 2026 12:12:09 +0530</pubDate>
            <description><![CDATA[&lt;p&gt;ಕಾಲ್ತುಳಿತ ಪ್ರಕರಣದಲ್ಲಿ ಕ್ಲೀನ್&zwnj;ಚಿಟ್ ನೀಡಿರುವುದನ್ನು ಪ್ರಶ್ನಿಸಿರುವ ಸಾರಾ ಮಹೇಶ್, ಈ ದುರಂತಕ್ಕೆ ಯಾರು ಹೊಣೆ ಎಂದು ಸರ್ಕಾರಕ್ಕೆ ತರಾಟೆ.. ಅಲ್ಲದೆ, ಚಾಮುಂಡಿ ಬೆಟ್ಟದಲ್ಲಿ ವಿಐಪಿ ದರ್ಶನದ ಹಾವಳಿ ಹೆಚ್ಚಾಗಿದ್ದು, ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಮನವಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyp9dhemaf0tshzbqvkv7yzh,imgname-----------------------2026-07-29t120607.182-1785306990035.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜು.29)&lt;/strong&gt;: ನಾನು ಅವತ್ತೇ ಹೇಳಿದ್ದೆ ದಯಾನಂದ್ ದಕ್ಷ ಅಧಿಕಾರಿ, ಅವರನ್ನು ಅಮಾನತು ಮಾಡಿದ್ದು ತಪ್ಪು ಎಂದು. ಐಪಿಎಲ್ ಕಾಲ್ತುಳಿತ ಪ್ರಕರಣದಲ್ಲಿ ಕ್ಲಿನ್&zwnj;ಚಿಟ್ ಕೊಟ್ಟುಕೊಂಡಿರಿ ಹಾಗಾದರೆ ತಪ್ಪು ಮಾಡಿದವರು ಯಾರು? ಈ ದುರಂತಕ್ಕೆ ಕಾರಣ ಯಾರು? ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದು.&lt;/p&gt;&lt;h2&gt;ಪ್ರಕರಣ ಕ್ಲೋಸ್ ಮಾಡಲು ಕಮಿಟಿ ಎಂಬ ಕಣ್ಣೊರೆಸುವ ತಂತ್ರ&lt;/h2&gt;&lt;p&gt;ಮೈಸೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ದುರಂತದ ಹೊಣೆ ಆ ಹಿರಿಯ ಅಧಿಕಾರಿ ಮೇಲೆ ಹೊರಿಸಿ ಅಮಾನತು ಮಾಡಿದ್ರಿ, ತನ್ನದಲ್ಲದ ತಪ್ಪಿಗೆ ಆ ಅಧಿಕಾರಿಗೆ ಆದ ನೋವನ್ನು ಯಾರು ಭರಿಸುತ್ತೀರಿ? ಪ್ರಕರಣದಲ್ಲಿ ಕ್ಲೀಚ್ ಚೀಟ್ ಕೊಟ್ಟುಕೊಂಡರೆ ಹನ್ನೊಂದು ಅಮಾಯಕ ಜನರ ಸಾವಿಗೆ ಕಾರಣ ಯಾರು? ಸರ್ಕಾರ ಸಿದ್ಧತೆ ಮಾಡಿಕೊಳ್ಳದೆ ತರಾತುರಿಯಲ್ಲಿ ಕಾರ್ಯಕ್ರಮ ಮಾಡಿದ್ದು ತಪ್ಪಲ್ಲವೇ? ಕ್ಲೀನ್&zwnj;ಚಿಟ್ ಕೊಟ್ಟರೆ ಸತ್ತ ಹನ್ನೊಂದು ಜನರ ಕುಟುಂಬಕ್ಕೆ ಆಧಾರ ಯಾರು? ಎಂದು ಪ್ರಶ್ನಿಸಿದರು.&lt;/p&gt;&lt;p&gt;ಕಾಲ್ತುಳಿತ ಪ್ರಕರಣ ಒಂದು ಅಲ್ಲ, ರಾಜ್ಯದಲ್ಲಿ ಇಂಥ ದುರಂತಗಳು ನಡೆದಾಗ, ರಾಜಕಾರಣಿಗಳಾಗಿರಲಿ, ಅಧಿಕಾರಿಯಾಗಿರಲಿ ತಪ್ಪು ಮಾಡಿದಾಗ ಸರ್ಕಾರ ತಕ್ಷಣ ಒಂದು ಕಮಿಟಿ ಮಾಡುತ್ತದೆ. ಜನರು ಆ ಘಟನೆ ಮರೆತ ಮೇಲೆ ಇಡೀ ಪ್ರಕರಣ ಕ್ಲೋಸ್ ಮಾಡೋದು ಈ ಸರ್ಕಾರದ ಚಾಳಿ ಆಗಿದೆ. ಈ ಹಿಂದೆ ಮುಡಾ ಹಗರಣ ಆಯ್ತು, ಮುಖ್ಯಮಂತ್ರಿಗಳೇ ಸೈಟ್ ವಾಪಸ್ ಕೊಟ್ಟ ಮೇಲೆ ಅವರಿಗಿಂತ ಮೇಲೆ ಯಾರಿದ್ದಾರೆ. ಅದಕ್ಕೊಂದು ಕಮಿಟಿ ಮಾಡಿದ್ರು. ತಪ್ಪು ಮಾಡಿದ್ದಕ್ಕೆ ತಾನೆ ಸೈಟ್ ವಾಪಸ್ ಕೊಟ್ಟಿದ್ದು? ಆ ಪ್ರಕರಣ ಈಗ ಏನಾಗಿದೆ ಅಂತಾ ಎಲ್ಲರಿಗೆ ಗೊತ್ತಿರೋ ವಿಚಾರ. ಅದೇ ರೀತಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣವೂ ತಪ್ಪಿಸ್ಥರನ್ನು ಬಚಾವ್ ಮಾಡಲೆಂದೇ ಕಮಿಟಿ ಮಾಡಿ ಈಗ ಕ್ಲೀನ್ ಚಿಟ್ ಕೊಡಲಾಗಿದೆ.&lt;/p&gt;&lt;h3&gt;ಚಾಮುಂಡಿ ತಾಯಿ ವಿಐಪಿಗಳಿಗೆ ಒಳ್ಳೇದು ಮಾಡಿದ್ದು ಸಾಕು:&lt;/h3&gt;&lt;p&gt;ಇನ್ನು ಚಾಮುಂಡಿ ಆಷಾಡ ಶುಕ್ರವಾರ ವಿಐಪಿ ಹೆಚ್ಚಾದ ವಿಚಾರವಾಗಿ ಮಾತನಾಡಿದ ಸಾರಾ ಮಹೇಶ್, ನಾನು ವೈಯಕ್ತಿಕವಾಗಿ ಮನವಿ ಮಾಡುತ್ತೇನೆ. ಆ ಚಾಮುಂಡಿ ತಾಯಿ ನಮಗೆ ಎಲ್ಲನೂ ಕೊಟ್ಟಿದ್ದಾಳೆ. ಜನರ ಮತ್ತು ತಾಯಿ ಆಶೀರ್ವಾದದಿಂದ ನಾವು ಎಂಎಲ್&zwnj;ಎ ಆಗಿದ್ದೆವು. ಇನ್ನು ಚಾಮುಂಡಿ ತಾಯಿ ವಿಐಪಿಗಳಿಗೆ ಒಳ್ಳೆಯದು ಮಾಡಿದ್ದು ಸಾಕು, ಜನಸಾಮಾನ್ಯರಿಗೆ ದೇವರು ಒಳ್ಳೆಯದು ಮಾಡಲಿ. ಸ್ವಲ್ಪ ಜನ ಸಾಮಾನ್ಯರು ದೇವರ ದರ್ಶನ ಮಾಡಲು ಅವಕಾಶ ಮಾಡಿಕೊಡಲಿ ಎಂದು ಮನವಿ ಮಾಡಿದರು.&lt;/p&gt;&lt;h3&gt;ಹಾಸನಾಂಬೆ ಘಟನೆ ನೆನೆದ ಸಾರಾ ಮಹೇಶ:&lt;/h3&gt;&lt;p&gt;ಕಳೆದ ಏಳೆಂಟು ವರ್ಷಗಳಿಂದ ಆಷಾಡ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಹೋಗುವುದೇ ಬಿಟ್ಟಿದ್ದೇನೆ. ನಾನು ಮಂತ್ರಿಯಾಗಿದ್ದಾಗ ಹಾಸನಾಂಬೆೆ ಹೋಗಿದ್ದೆ. ಆಗ ಅಲ್ಲಿ ಯುವತಿಯೊಬ್ಬಳು ನನ್ನನ್ನು ಪ್ರಶ್ನಿಸಿದಳು, ವಿಐಪಿಗಳಿಂದ ಜನಸಾಮಾನ್ಯರ ದರ್ಶನಕ್ಕೆ ಎಷ್ಟು ತೊಂದರೆಯಾಗುತ್ತದೆ ಎಂದು ಅರಿತುಕೊಂಡೆ ಅಂದಿನಿಂದ ನಾನು ಹಾಸನಾಂಬೆಗೆ ಹೋಗಲೇ ಇಲ್ಲ. ಇಲ್ಲಿಂದಲೇ ಕೈಮುಗಿಯುತ್ತೇನೆ. ವಿಐಪಿ ಜೊತೆ ನೂರಾರು ಜನರು ಬರ್ತಾರೆ. ಇದರಿಂದ ಜನಸಾಮಾನ್ಯರು ದರ್ಶನ ಮಾಡಲು ಆಗುವುದಿಲ್ಲ ಎಂದರು.&lt;/p&gt;&lt;p&gt;ಮೈಸೂರಿನವರೇ ಮಂತ್ರಿ, ಮುಖ್ಯಮಂತ್ರಿ, ಉಸ್ತುವಾರಿ ಮಂತ್ರಿಯೂ ಮೈಸೂರಿನವರೇ. ಚಾಮುಂಡಿ ಬೆಟ್ಟದಲ್ಲಿಯೂ ಅಕ್ರಮ. ಚಾಮುಂಡೇಶ್ವರಿ ಬಟ್ಟೆ, ಬ್ಯಾಗ್&zwnj;ನಲ್ಲಿಯೂ ಅಕ್ರಮ, ಮುಡಾದಲ್ಲೂ ಅಕ್ರಮ. ಮೈಸೂರಲ್ಲೇ ಈ ರೀತಿ ಆದ್ರೆ ಇನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಏನೆಲ್ಲ ಅಕ್ರಮ ನಡೆಯುತ್ತಿರಬಹುದು ಟೀಕಿಸಿದರು.&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/former-minister-sa-ra-mahesh-reacts-on-chinnaswamy-stampede-case-at-mysuru-rav/articleshow-pvfituq"/>
        </item>
        <item>
            <title><![CDATA[Priyank kharge: ಆರೆಸ್ಸೆಸ್‌ನಿಂದ ಹೇಗೆ ಉತ್ತರ ಪಡೀಬೇಕು ಅಂತಾ ನನಗೆ ಗೊತ್ತಿದೆ: ಪ್ರಿಯಾಂಕ್ ಖರ್ಗೆ]]></title>
            <link>https://kannada.asianetnews.com/politics/karnataka-home-minister-priyank-kharge-reacts-in-delhi-rss-registration-row-rav/articleshow-q6qra55</link>
            <guid isPermaLink="true">https://kannada.asianetnews.com/politics/karnataka-home-minister-priyank-kharge-reacts-in-delhi-rss-registration-row-rav/articleshow-q6qra55</guid>
            <pubDate>Thu, 30 Jul 2026 06:16:16 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿರುವ 20 ಲಕ್ಷ ಆರ್&zwnj;ಎಸ್&zwnj;ಎಸ್&zwnj; ಸ್ವಯಂಸೇವಕರಿಗೆ ಭದ್ರತೆ ಬೇಕಿದ್ದರೆ, ಸಂಘಟನೆಯು ಮೊದಲು ನೋಂದಣಿ ಮಾಡಿಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ. ನೋಂದಣಿ ಮಾಡಿಕೊಳ್ಳದಿದ್ದರೆ ಅವರಿಂದ ಹೇಗೆ ಉತ್ತರ ಪಡೆಯಬೇಕೆಂದು ತಮಗೆ ತಿಳಿದಿದೆ ಎಂದೂ ಅವರು ಖಡಕ್ ಎಚ್ಚರಿಕೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyr7jmvj7a8hfzk714rrt3hq,imgname-chatgpt-image-jul-30--2026--06-12-34-am-1785372169074.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.30)&lt;/strong&gt;: &lsquo;ಕರ್ನಾಟಕದಲ್ಲಿ 20 ಲಕ್ಷ ಆರ್&zwnj;ಎಸ್&zwnj;ಎಸ್&zwnj; ಸ್ವಯಂಸೇವಕರು ಕೈಯಲ್ಲಿ ಲಾಠಿ ಹಿಡಿದು, ಸಮವಸ್ತ್ರ ತೊಟ್ಟು ಬೀದಿ ಬೀದಿ ಸುತ್ತುತ್ತಿದ್ದಾರೆ. ಅವರಿಗೆ ಗೃಹ ಇಲಾಖೆ ಭದ್ರತೆ ನೀಡಬೇಕೆಂದರೆ, ಮೊದಲು ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರಿಂದ ಹೇಗೆ ಉತ್ತರ ಪಡೆಯಬೇಕೆಂಬುದು ನನಗೆ ಗೊತ್ತಿದೆ&rsquo; ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ ಖರ್ಗೆ ಬುಧವಾರ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, &lsquo;ನನ್ನ ರಾಜ್ಯದಲ್ಲಿ 20 ಲಕ್ಷ ಜನ ಲಾಠಿ ಹಿಡಿದು ರಸ್ತೆ ರಸ್ತೆಯಲ್ಲಿ ತಿರುಗುತ್ತಿದ್ದಾರೆ. ಅವರಿಗೆ ಗೃಹ ಇಲಾಖೆ ಭದ್ರತೆ ನೀಡಬೇಕು ಎಂದು ನಿರೀಕ್ಷಿಸಿದರೆ, ಅವರು ಯಾರು ಎಂಬುದನ್ನು ನನಗೆ ತಿಳಿಸಬೇಕು. ಅವರು ಯಾವುದೇ ಕಾನೂನುಬಾಹಿರ ಕೃತ್ಯ ಮಾಡಿದರೂ ನೆಲದ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲು ಆರ್&zwnj;ಎಸ್&zwnj;ಎಸ್&zwnj; ನೋಂದಣಿ ಮಾಡಿಕೊಳ್ಳಬೇಕು&rsquo; ಎಂದು ಪುನರುಚ್ಚರಿಸಿದರು.&lt;/p&gt;&lt;h2&gt;ಉತ್ತರ ಪಡೆಯುವುದು ಗೊತ್ತಿದೆ:&lt;/h2&gt;&lt;p&gt;&lsquo;ಸರ್ಕಾರ ಮತ್ತು ಗೃಹ ಇಲಾಖೆ ಯಾವ ಸಂಘಟನೆಯ ಸೇವಕನೂ ಅಲ್ಲ. ಮೊದಲು ಆರ್&zwnj;ಎಸ್&zwnj;ಎಸ್&zwnj; ನೋಂದಣಿ ಮಾಡಿಕೊಳ್ಳಲಿ. ಅವರು ಯಾರು, ಏನು ಮಾಡುತ್ತಿದ್ದಾರೆ ಎಂಬುದನ್ನು ನಮಗೆ ತಿಳಿಸಲಿ. ಹೊಣೆಗಾರಿಕೆ ನೀಡಲಿ. ಆಮೇಲೆ ನಾವು ಅವರಿಗೆ ಸಹಾಯ ಮಾಡುತ್ತೇವೆ. ಅವರು ಉತ್ತರ ಕೊಡುವುದಿಲ್ಲ ಎಂದು ನನಗೆ ಗೊತ್ತಿದೆ. ಏಕೆಂದರೆ ಅವರು ಹೇಡಿಗಳು. ಅವರಿಂದ ಹೇಗೆ ಉತ್ತರ ಪಡೆಯಬೇಕೆಂಬುದು ನನಗೆ ಗೊತ್ತಿದೆ. ನಾನು ದೇಶದ ಅತ್ಯಂತ ಅಭಿವೃದ್ಧಿಶೀಲ ರಾಜ್ಯವೊಂದರ ಗೃಹ ಸಚಿವ. ಏನು ಮಾಡಬೇಕೆಂಬುದು ನನಗೆ ತಿಳಿದಿದೆ&rsquo; ಎಂದು ಎಚ್ಚರಿಸಿದರು.&lt;/p&gt;&lt;h3&gt;ಬಿಜೆಪಿಗರ ಮಕ್ಕಳು ಸಂಘದಲ್ಲೇಕಿಲ್ಲ?&lt;/h3&gt;&lt;p&gt;&lsquo;ಆರ್&zwnj;ಎಸ್&zwnj;ಎಸ್&zwnj; ಸಿದ್ಧಾಂತ ಅಷ್ಟೊಂದು ಉತ್ತಮವಾಗಿದ್ದರೆ, ಏಕೆ ಬಿಜೆಪಿಗರ ಮಕ್ಕಳು ಆರ್&zwnj;ಎಸ್&zwnj;ಎಸ್&zwnj;ನಲ್ಲಿಲ್ಲ? ಸ್ವಯಂಸೇವಕರಾಗಿಲ್ಲ? ಶಾಖೆಗೆ ಹೋಗುವುದಿಲ್ಲ? ಗೋಮೂತ್ರ ಕುಡಿಯುವುದಿಲ್ಲ? ಈ ಚಿಂತನಾ ಕ್ರಮದ ವಿರುದ್ಧವೇ ನಾವು ಹೋರಾಡುತ್ತಿರುವುದು&rsquo; ಎಂದು ವಾಗ್ದಾಳಿ ನಡೆಸಿದರು.&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-home-minister-priyank-kharge-reacts-in-delhi-rss-registration-row-rav/articleshow-q6qra55"/>
        </item>
        <item>
            <title><![CDATA[KPSC Scam: ಹಣ ಕೊಟ್ಟವರಿಗೆ ಹುದ್ದೆ ಸೇಲ್, ದಿಲ್ಲಿಗೆ ಬಂದು ನ್ಯಾಯದ ನಾಟಕ ಆಡ್ತೀರಾ? ಡಿಕೆಶಿ ವಿರುದ್ಧ ತೇಜಸ್ವಿ ಸೂರ್ಯ ಕಿಡಿ]]></title>
            <link>https://kannada.asianetnews.com/india-news/mp-tejasvi-surya-raised-the-issue-of-kpsc-irregularities-in-parliament-rav/articleshow-snwp6c8</link>
            <guid isPermaLink="true">https://kannada.asianetnews.com/india-news/mp-tejasvi-surya-raised-the-issue-of-kpsc-irregularities-in-parliament-rav/articleshow-snwp6c8</guid>
            <pubDate>Wed, 29 Jul 2026 07:01:40 +0530</pubDate>
            <description><![CDATA[&lt;p&gt;ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಚರ್ಚೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೆಪಿಎಸ್ಸಿ ಹಗರಣ ಪ್ರಸ್ತಾಪಿಸಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kynqd6g872fwv3y3s6rpt73c,imgname-----------------------2026-07-29t065107.994-1785288104456.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.29):&lt;/strong&gt; ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಚರ್ಚೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೆಪಿಎಸ್ಸಿ ಹಗರಣ ಪ್ರಸ್ತಾಪಿಸಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h2&gt;ಮುಖ್ಯಮಂತ್ರಿಗಳೇ ದೆಹಲಿಗೆ ಬಂದು ನ್ಯಾಯದ ನಾಟಕ ಆಡ್ತೀರಾ?&lt;/h2&gt;&lt;p&gt;&lsquo;ಮಾನ್ಯ ಮುಖ್ಯಮಂತ್ರಿಗಳೇ!..ದೆಹಲಿಗೆ ಬಂದು ನ್ಯಾಯದ ನಾಟಕವಾಡುವ ನಿಮಗೆ, ಕರ್ನಾಟಕದಲ್ಲಿ ಕೆಪಿಎಸ್ಸಿಯನ್ನು ಬಟಾಬಯಲಾಗಿ &lsquo;ಹರಾಜು ಮಾರುಕಟ್ಟೆ&rsquo; ಮಾಡಿರುವುದು ಅನ್ಯಾಯ ಅಂತ ಅನ್ನಿಸುವುದಿಲ್ಲವೇ ? 80 ಲಕ್ಷ ರು. ಚೆಲ್ಲಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎನ್ನುವುದಾದರೆ, ಹಗಲಿರುಳು ಕಷ್ಟಪಟ್ಟು ಓದುವ ಬಡವರ ಮತ್ತು ಶ್ರಮಜೀವಿಗಳ ಮಕ್ಕಳ ಭವಿಷ್ಯವೇನು? ಅವರ ಅರ್ಹತೆಗೆ ನಿಮ್ಮ ಸರ್ಕಾರದ ದರಪಟ್ಟಿಯಲ್ಲಿ ಬೆಲೆಯೇ ಇಲ್ಲವೇ ಶಿವಕುಮಾರ್&zwnj; ಅವರೇ?&rsquo; ಎಂದು ಪ್ರಶ್ನಿಸಿದರು.&lt;/p&gt;&lt;h3&gt;ಕೆಪಿಎಸ್ಸಿ ಅಧ್ಯಕ್ಷರ ಅಮಾನತಿನಿಂದ ಈ ಬೃಹತ್ ಅಕ್ರಮದ ಕಳಂಕ ಮುಚ್ಚಿಹೋಗುತ್ತದೆಯೇ?&lt;/h3&gt;&lt;p&gt;&lsquo;ಕೇವಲ ಕೆಪಿಎಸ್ಸಿ ಅಧ್ಯಕ್ಷರ ಅಮಾನತಿನಿಂದ ಈ ಬೃಹತ್ ಅಕ್ರಮದ ಕಳಂಕ ಮುಚ್ಚಿಹೋಗುತ್ತದೆಯೇ? ಕಾಂಗ್ರೆಸ್ ಸರ್ಕಾರದ ನಿಗದಿತ ದರಪಟ್ಟಿಯಲ್ಲಿ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಅವಕಾಶವೇ? ಲಕ್ಷಾಂತರ ನಿರುದ್ಯೋಗಿ ಯುವಕರ ಕಣ್ಣೀರು ಮತ್ತು ಅವರ ಕುಟುಂಬಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ&rsquo; ಎಂದು ಹೇಳಿದರು.&amp;nbsp;&lt;/p&gt;&lt;p&gt;ಮಾನ್ಯ ಮುಖ್ಯಮಂತ್ರಿಗಳೇ!ದೆಹಲಿಗೆ ಬಂದು ನ್ಯಾಯದ ನಾಟಕವಾಡುವ ನಿಮಗೆ, ಕರ್ನಾಟಕದಲ್ಲಿ KPSC ಯನ್ನು ಬಟಾಬಯಲಾಗಿ 'ಹರಾಜು ಮಾರುಕಟ್ಟೆ' ಮಾಡಿರುವುದು ಅನ್ಯಾಯ ಅಂತ ಅನ್ನಿಸುವುದಿಲ್ಲವೇ ?80 ಲಕ್ಷ ರೂಪಾಯಿ ಚೆಲ್ಲಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎನ್ನುವುದಾದರೆ, ಹಗಲಿರುಳು ಕಷ್ಟಪಟ್ಟು ಓದುವ ಬಡವರ ಮತ್ತು ಶ್ರಮಜೀವಿಗಳ ಮಕ್ಕಳ ಭವಿಷ್ಯವೇನು?&hellip; pic.twitter.com/o7dyEQj0yR&lt;/p&gt;&lt;p&gt;&mdash; Tejasvi Surya (@Tejasvi_Surya) July 28, 2026&lt;/p&gt;&lt;p&gt;&lt;/p&gt;]]></content:encoded>
            <category>politics</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/mp-tejasvi-surya-raised-the-issue-of-kpsc-irregularities-in-parliament-rav/articleshow-snwp6c8"/>
        </item>
        <item>
            <title><![CDATA[Minister List: ಮಂತ್ರಿಗಿರಿ 2ನೇ ಹಂತದ ಸಂಭಾವ್ಯ ಪಟ್ಟಿ ಔಟ್! ದಕ್ಷಿಣದಲ್ಲಿ ಬೆಂಗಳೂರು, ಉತ್ತರದಲ್ಲಿ ಬೆಳಗಾವಿಗೆ ಜಾಕ್‌ಪಾಟ್! ಯಾರಿಗುಂಟು, ಯಾರಿಗಿಲ್ಲ!]]></title>
            <link>https://kannada.asianetnews.com/state/karnataka-cabinet-expansion-2nd-phase-list-bengaluru-belagavi-bmk/articleshow-soq3tx2</link>
            <guid isPermaLink="true">https://kannada.asianetnews.com/state/karnataka-cabinet-expansion-2nd-phase-list-bengaluru-belagavi-bmk/articleshow-soq3tx2</guid>
            <pubDate>Thu, 30 Jul 2026 18:31:49 +0530</pubDate>
            <description><![CDATA[&lt;p&gt;ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯ ಸಂಭಾವ್ಯ ಪಟ್ಟಿಯೊಂದು ಲಭ್ಯವಾಗಿದ್ದು, ಇದರಲ್ಲಿ ಪ್ರಾದೇಶಿಕ ಸಮತೋಲನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ವಿಸ್ತರಣೆಯಲ್ಲಿ ದಕ್ಷಿಣದ ಬೆಂಗಳೂರು ಹಾಗೂ ಉತ್ತರದ ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಸಾಧ್ಯತೆಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysht91fsfabv6qxwrqdkvym,imgname-dk-and-siddu-1785416459311.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ರಾಜಕಾರಣದಲ್ಲಿ ಸದಾ ಸಂಚಲನ ಮೂಡಿಸುವ ಸಚಿವ ಸಂಪುಟ ವಿಸ್ತರಣೆಯ 2ನೇ ಹಂತದ ಸಂಭಾವ್ಯ ಪಟ್ಟಿಯ ವಿವರಗಳು ಕೆಲ ಪ್ರಮುಖ ಮೂಲಗಳಿಂದ 'ಸುವರ್ಣ ನ್ಯೂಸ್&zwnj;'ಗೆ ಲಭ್ಯವಾಗಿವೆ. ಹಲವು ದಿನಗಳಿಂದ ಕಾಯುತ್ತಿದ್ದ ಶಾಸಕರು ಹಾಗೂ ಬೆಂಬಲಿಗರಲ್ಲಿ ಈ ಪಟ್ಟಿ ತೀವ್ರ ಕುತೂಹಲ ಮೂಡಿಸಿದ್ದು, ಹೈಕಮಾಂಡ್ ಹಾಗೂ ರಾಜ್ಯ ನಾಯಕರ ನಡುವೆ ನಡೆದ ಹಲವು ಸುತ್ತಿನ ಚರ್ಚೆಯ ನಂತರ ಈ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಈ ಬಾರಿಯ ವಿಸ್ತರಣೆಯಲ್ಲಿ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ವಿಶೇಷ ಮುತುವರ್ಜಿ ವಹಿಸಲಾಗಿದ್ದು, ಮುಖ್ಯವಾಗಿ ದಕ್ಷಿಣ ಕರ್ನಾಟಕದ ಹೆಬ್ಬಾಗಿಲಾದ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ರಾಜಕೀಯ ಶಕ್ತಿಕೇಂದ್ರವಾದ ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಮತ್ತು 'ಸಿಂಹಪಾಲು' ಲಭ್ಯವಾಗಲಿದೆ ಎನ್ನುವ ಸುದ್ದಿಗಳು ಬಲವಾಗಿ ಕೇಳಿಬರುತ್ತಿವೆ.&lt;/p&gt;&lt;h2&gt;&lt;strong&gt;ಸಂಭಾವ್ಯ ಸಚಿವರ ರೇಸ್&zwnj;ನಲ್ಲಿರುವ ಪ್ರಮುಖ ನಾಯಕರು!&lt;/strong&gt;&lt;/h2&gt;&lt;p&gt;ಮೂಲಗಳ ಪ್ರಕಾರ ಸಂಪುಟ ವಿಸ್ತರಣೆಯ ರೇಸ್&zwnj;ನಲ್ಲಿರುವ ಪ್ರಮುಖ ನಾಯಕರ ಪಟ್ಟಿ ಹೀಗಿದೆ. ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ನೋಡುವುದಾದರೆ, ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ರುದ್ರಪ್ಪ ಲಮಾಣಿ, ಸಂತೋಷ್ ಲಾಡ್, ಬಸವರಾಜ ರಾಯರೆಡ್ಡಿ, ಶಿವರಾಜ್&zwnj; ತಂಗಡಗಿ, ಹೆಚ್.ಕೆ. ಪಾಟೀಲ್&zwnj;, ಅಜಯ್&zwnj; ಸಿಂಗ್ ಹಾಗೂ ಶ್ರೀನಿವಾಸ ಮಾನೆ ಇದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗ ನೋಡುವುದಾದರೆ, ಜಮೀರ್&zwnj; ಅಹ್ಮದ್, ದಿನೇಶ್&zwnj; ಗುಂಡೂರಾವ್, ಎಂ. ಕೃಷ್ಣಪ್ಪ, ಶರತ್&zwnj; ಬಚ್ಚೇಗೌಡ ಇದ್ದರೆ, ದಕ್ಷಿಣ ಹಾಗೂ ಹಳೆಯ ಮೈಸೂರು ಭಾಗದಲ್ಲಿ ಪುಟ್ಟರಂಗಶೆಟ್ಟಿ, ತನ್ವೀರ್&zwnj; ಶೇಟ್, ಚೆಲುವರಾಯಸ್ವಾಮಿ, ಟಿ.ಬಿ. ಜಯಚಂದ್ರ ಇದ್ದಾರೆ. ಇದಲ್ಲದೇ ಸಲೀಂ ಅಹ್ಮದ್, ರಘುಮೂರ್ತಿ, ಮಧು ಬಂಗಾರಪ್ಪ, ಬಿ. ನಾಗೇಂದ್ರ ಹಾಗೂ ಸುವರ್ಣಾ ತುಕಾರಂ ಅವರು ಸಚಿವ ಸ್ಥಾನದ ರೇಸ್&zwnj;ನಲ್ಲಿದ್ದಾರೆ.&lt;/p&gt;&lt;h3&gt;&lt;strong&gt;ಬೆಂಗಳೂರು &amp;amp; ಬೆಳಗಾವಿಗೆ ಜಾಕ್&zwnj;ಪಾಟ್ ಏಕೆ?&lt;/strong&gt;&lt;/h3&gt;&lt;p&gt;ರಾಜಕೀಯ ಲೆಕ್ಕಾಚಾರದ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ ಪಕ್ಷದ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಮತ್ತು ಮುಂಬರುವ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರದ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.&lt;/p&gt;&lt;p&gt;ಇನ್ನೊಂದೆಡೆ, ಉತ್ತರ ಕರ್ನಾಟಕದ ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಮತ್ತು ಆ ಭಾಗದ ಲಿಂಗಾಯತ ಹಾಗೂ ಇತರ ಸಮುದಾಯಗಳ ಮತಬ್ಯಾಂಕ್ ಕಾಯ್ದುಕೊಳ್ಳಲು ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡಲಾಗುತ್ತಿದೆ. ಲಕ್ಷ್ಮಣ ಸವದಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಂತಹ ಪ್ರಭಾವಿ ನಾಯಕರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.&lt;/p&gt;&lt;h3&gt;&lt;strong&gt;ಯಾರಿಗೆ ಒಲಿಯಲಿದೆ ಅದೃಷ್ಟ?&lt;/strong&gt;&lt;/h3&gt;&lt;p&gt;ಸಂಪುಟ ವಿಸ್ತರಣೆಯ ಈ ಪ್ರಕ್ರಿಯೆಯಲ್ಲಿ ಹಿರಿಯ ಅನುಭವ ಮತ್ತು ಯುವ ಉತ್ಸಾಹ ಎರಡನ್ನೂ ಸರಿದೂಗಿಸುವ ಸವಾಲು ಹೈಕಮಾಂಡ್ ಮುಂದಿದೆ. ಟಿ.ಬಿ. ಜಯಚಂದ್ರ, ಹೆಚ್.ಕೆ. ಪಾಟೀಲ್ ಹಾಗೂ ಬಸವರಾಜ ರಾಯರೆಡ್ಡಿಯವರಂತಹ ಹಿರಿಯ ನಾಯಕರು ತಮ್ಮ ಅನುಭವದ ಆಧಾರದ ಮೇಲೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಅದೇ ಸಮಯದಲ್ಲಿ ಶರತ್ ಬಚ್ಚೇಗೌಡ ಅವರಂತಹ ಯುವ ನಾಯಕರಿಗೂ ಅವಕಾಶ ಒಲಿಯುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ಇರಲಿದೆ ಜಾತಿ ಸಮೀಕರಣದ ಆಟ!&lt;/strong&gt;&lt;/h3&gt;&lt;p&gt;ಆದರೆ, ಕೇವಲ ಲೆಕ್ಕಾಚಾರಗಳು ಮಾತ್ರವಲ್ಲದೆ ಜಾತಿ ಸಮೀಕರಣ ಮತ್ತು ಹೈಕಮಾಂಡ್&zwnj;ನ ಅಂತಿಮ ನಿರ್ಧಾರಗಳ ಮೇಲೆಯೇ ಎಲ್ಲರ ಭವಿಷ್ಯ ನಿರ್ಧಾರವಾಗಲಿದೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಸಚಿವ ಸ್ಥಾನದ ರೇಸ್&zwnj;ನಲ್ಲಿ ಕೊನೆಗಳಿಗೆಯಲ್ಲಿ ಯಾರಿಗೆ ಮಂತ್ರಿಗಿರಿ ಒಲಿಯಲಿದೆ ಮತ್ತು ಯಾರಿಗೆ ಶಾಕ್ (ಕೋಕ್) ಕಾದಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಹೊರಬೀಳಬೇಕಿದೆ. ದೆಹಲಿ ಅಂಗಳದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಈ ಸಂಭಾವ್ಯ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದ್ದು, ರಾಜ್ಯ ರಾಜಕಾರಣದ ಈ ಬಿಗ್ ಗೇಮ್&zwnj;ನಲ್ಲಿ ಯಾರು ಗೆದ್ದು ಬರಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.&lt;/p&gt;]]></content:encoded>
            <category>politics</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/karnataka-cabinet-expansion-2nd-phase-list-bengaluru-belagavi-bmk/articleshow-soq3tx2"/>
        </item>
        <item>
            <title><![CDATA[ಪ್ರತಾಪ್ ಸಿಂಹಗೆ ಸಕಲೇಶಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಓಪನ್ ಚಾಲೆಂಜ್ ಹಾಕಿದ ಚಾಮರಾಜ ಕ್ಷೇತ್ರದ ಶಾಸಕ!]]></title>
            <link>https://kannada.asianetnews.com/karnataka-districts/political-war-in-mysuru-mla-harish-gowda-challenges-former-mp-pratap-simha-to-contest-from-sakleshpur-gdp/articleshow-v11vlup</link>
            <guid isPermaLink="true">https://kannada.asianetnews.com/karnataka-districts/political-war-in-mysuru-mla-harish-gowda-challenges-former-mp-pratap-simha-to-contest-from-sakleshpur-gdp/articleshow-v11vlup</guid>
            <pubDate>Fri, 31 Jul 2026 17:20:54 +0530</pubDate>
            <description><![CDATA[ಶಾಸಕ ಕೆ.ಹರೀಶ್ ಗೌಡ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಚಾಮುಂಡಿಬೆಟ್ಟದಲ್ಲಿ ಬಹಿರಂಗ ಸವಾಲು ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಕಲೇಶಪುರ ಅಥವಾ ಚಾಮರಾಜ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಆಹ್ವಾನಿಸಿದ್ದು, ವೈಯಕ್ತಿಕ ಟೀಕೆ ಮತ್ತು ಪದಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvzz4rwksmv35q96d38tfzs,imgname-harish-gowda-chamaraja-constituency--1--1785498407708.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ರಾಜಕೀಯ ವಲಯದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೈಸೂರಿನ ಪವಿತ್ರ ಚಾಮುಂಡಿಬೆಟ್ಟದಲ್ಲಿ ನಿಂತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹರೀಶ್ ಗೌಡ, ಪ್ರತಾಪ್ ಸಿಂಹ ಅವರಿಗೆ ನೇರವಾದ ಬಹಿರಂಗ ಸವಾಲು ಹಾಕಿದ್ದು, ಧೈರ್ಯವಿದ್ದರೆ ಮುಂದಿನ ಚುನಾವಣೆಯಲ್ಲಿ ಸಕಲೇಶಪುರ ಅಥವಾ ಚಾಮರಾಜ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ.&lt;/p&gt;&lt;h2&gt;ಸಕಲೇಶಪುರ ಕಣದಲ್ಲಿ ಮುಖಾಮುಖಿಗೆ ಆಹ್ವಾನ&lt;/h2&gt;&lt;p&gt;ಸಕಲೇಶಪುರ ಕ್ಷೇತ್ರವು ಪ್ರತಾಪ್ ಸಿಂಹ ಅವರ ಸ್ವಗ್ರಾಮವಾಗಿದೆ. ಪ್ರಸ್ತುತ ಇದು ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿಯ ಸಿಮೆಂಟ್ ಮಂಜು ಇಲ್ಲಿ ಶಾಸಕರಾಗಿದ್ದಾರೆ. ಆದರೆ ಮುಂಬರುವ ಚುನಾವಣೆಗೆ ಇದು ಸಾಮಾನ್ಯ ಕ್ಷೇತ್ರವಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಮಾತನಾಡಿರುವ ಹರೀಶ್ ಗೌಡ, &quot;ನಾನು ಮುಂದಿನ ಚುನಾವಣೆಯಲ್ಲಿ ಸಕಲೇಶಪುರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ. ನಮ್ಮ ಹೈಕಮಾಂಡ್ ನಾಯಕರಿಗೂ ಅಲ್ಲಿಂದಲೇ ಟಿಕೆಟ್ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ಪ್ರತಾಪ್ ಸಿಂಹ, ನೀನು ಕೂಡ ಅಲ್ಲೇ ಬಂದು ಸ್ಪರ್ಧೆ ಮಾಡು, ಯಾರು ಗೆಲ್ಲುತ್ತಾರೆ ಎಂಬುದು ಅಲ್ಲಿಯೇ ತೀರ್ಮಾನವಾಗಲಿ. ಒಂದು ವೇಳೆ ಅಲ್ಲಿಗೆ ಬರುವುದಿಲ್ಲ ಎಂದಾದರೆ ಚಾಮರಾಜ ಕ್ಷೇತ್ರದಲ್ಲಾದರೂ ಸ್ಪರ್ಧೆ ಮಾಡು, ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ಚಾಲೆಂಜ್ ಮಾಡಿದ್ದಾರೆ..&lt;/p&gt;&lt;h2&gt;ವೈಯಕ್ತಿಕ ಟೀಕೆಗಳಿಗೆ ತಿರುಗೇಟು&lt;/h2&gt;&lt;p&gt;ಚಾಮರಾಜ ಕ್ಷೇತ್ರದ ಮತದಾರರಿಗೆ ಹಾಗೂ ಜನತೆಗೆ ಹರೀಶ್ ಗೌಡ ಯಾರೆಂಬುದು ಸಂಪೂರ್ಣವಾಗಿ ತಿಳಿದಿದೆ. ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕು ಹೊರತು, ವೈಯಕ್ತಿಕ ವಿಚಾರಗಳನ್ನು ಕೆದಕುವುದು ಸರಿಯಲ್ಲ. ನನ್ನ ಹಿನ್ನೆಲೆಯನ್ನು ಬಿಚ್ಚಿಡುತ್ತೇನೆ ಎಂದು ಸವಾಲು ಹಾಕುತ್ತಿರುವ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಏನೋ ನನ್ನ ಹಿನ್ನೆಲೆ ಬಿಚ್ಚಿಡುತ್ತೇನೆ ಅಂತ ಹೇಳ್ತಿದ್ದೀರಲ್ಲ, ಧೈರ್ಯವಿದ್ದರೆ ಬಿಚ್ಚಿಡಿ ನೋಡೋಣ. ತಾನು ಪ್ರತಾಪ್ ಸಿಂಹ ಅವರನ್ನು 'ವಲಸಿಗ' ಎಂದು ಎಲ್ಲಿಯೂ ಹೀಯಾಳಿಸಿಲ್ಲ ಎಂದರು.&lt;/p&gt;&lt;h2&gt;ಮಹನೀಯರ ಹೆಸರು ಬಳಕೆ ಹಾಗೂ ಪದಬಳಕೆ ಬಗ್ಗೆ ಆಕ್ಷೇಪ&lt;/h2&gt;&lt;p&gt;ರಾಷ್ಟ್ರಕವಿ ಕುವೆಂಪು ಹಾಗೂ ಕನ್ನಡದ ದಿಗ್ಗಜ ಸಾಹಿತಿ ಎಸ್.ಎಲ್. ಭೈರಪ್ಪ ಅವರಂತಹ ಮಹನೀಯರ ಹೆಸರನ್ನು ಈ ರಾಜಕೀಯ ವಿವಾದಗಳಿಗೆ ಅನಗತ್ಯವಾಗಿ ಎಳೆದು ತರುವುದು ಸರಿಯಲ್ಲ ಎಂದು ಹರೀಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ತಮ್ಮ ಜೊತೆ ಇರುವವರನ್ನು ಉದ್ದೇಶಿಸಿ ಪ್ರತಾಪ್ ಸಿಂಹ 'ರೇಬಿಸ್ ಬಂದಿರುವ ನಾಯಿಗಳು' ಎಂದು ಹಗುರವಾಗಿ ಮಾತನಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, &quot;ಮಾತನಾಡುವಾಗ ಸ್ವಲ್ಪ ಗಮನಕೊಟ್ಟು ಮಾತನಾಡಿ, ನೀವೊಬ್ಬರು ಜವಾಬ್ದಾರಿಯುತ ಮಾಜಿ ಸಂಸದರು ಎಂಬುದನ್ನು ಮರೆಯಬಾರದು&quot; ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಶಾಸಕ ಹರೀಶ್ ಗೌಡ ನೀಡಿರುವ ಈ ಓಪನ್ ಚಾಲೆಂಜ್ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂಬರುವ ದಿನಗಳಲ್ಲಿ ಈ ನಾಯಕರ ಮಾತಿನ ಸಮರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.&lt;/p&gt;]]></content:encoded>
            <category>politics</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/political-war-in-mysuru-mla-harish-gowda-challenges-former-mp-pratap-simha-to-contest-from-sakleshpur-gdp/articleshow-v11vlup"/>
        </item>
        <item>
            <title><![CDATA[ಬಿಲ್ಕಿಸ್ ಬಾನು ಕೇಸ್: ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ಹೇಳಿಕೆಗೆ ಕಾಂಗ್ರೆಸ್ ಬೆಂಬಲ, ಲೋಕಸಭೆಯಲ್ಲಿ ಗದ್ದಲ]]></title>
            <link>https://kannada.asianetnews.com/politics/priyanka-gandhis-bilkis-bano-remarks-on-prahlad-joshi-spark-lok-sabha-row/articleshow-vvs05pk</link>
            <guid isPermaLink="true">https://kannada.asianetnews.com/politics/priyanka-gandhis-bilkis-bano-remarks-on-prahlad-joshi-spark-lok-sabha-row/articleshow-vvs05pk</guid>
            <pubDate>Wed, 29 Jul 2026 12:45:41 +0530</pubDate>
            <description><![CDATA[&lt;p&gt;ಬಿಲ್ಕಿಸ್ ಬಾನು ಪ್ರಕರಣದ ಬಗ್ಗೆ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ಗಾಂಧಿ ಟೀಕೆ. ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಸಮರ್ಥನೆ. ಇದು ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಪ್ರಿಯಾಂಕಾ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಕ್ಷಮೆ ಕೇಳಬೇಕು ಎಂದು ಜೋಷಿ, ರಿಜಿಜು ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypbm9y5d6axt41es2zxknh9,imgname-----------------------2026-07-29t124450.710-1785309308869.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಅವರು ಬುಧವಾರ ಪಕ್ಷದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಿಂದೆ ನೀಡಿದ್ದ ಹೇಳಿಕೆಗಳಿಂದ ಅವರು ನುಣುಚಿಕೊಳ್ಳಬಾರದು ಎಂದು ಔಜ್ಲಾ ಟೀಕಿಸಿದರು.&lt;/p&gt;&lt;h2&gt;ಬಿಲ್ಕಿಸ್ ಬಾನು ಅತ್ಯಾ೧ಚಾರಿಗಳಿಗೆ ಜೋಶಿ ಸನ್ಮಾನ?&lt;/h2&gt;&lt;p&gt;ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಔಜ್ಲಾ, ಬಿಲ್ಕಿಸ್ ಬಾನು ಅತ್ಯಾ೧ಚಾರಿಗಳಿಗೆ ಸನ್ಮಾನ ಮಾಡಿದ ಬಗ್ಗೆ ಪ್ರಹ್ಲಾದ್ ಜೋಶಿ ಒಂದು ಮಾತನ್ನೂ ಆಡಿಲ್ಲ, ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಪ್ರಹ್ಲಾದ್ ಜೋಶಿ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ನಿಜವೋ ಅಲ್ಲವೋ ಎಂಬುದನ್ನು ಮೊದಲು ಅವರೇ ಸ್ಪಷ್ಟಪಡಿಸಬೇಕು. ಈ ವಿಚಾರವನ್ನು ಸದನದಲ್ಲಿ ಎತ್ತಿದಾಗ ಅವರಿಗೆ ಮುಜುಗರವಾಗುತ್ತದೆ. ಇದರಿಂದ ನೀವು ನುಣುಚಿಕೊಳ್ಳಲು ಯತ್ನಿಸಬೇಡಿ ಬಿಲ್ಕಿಸ್ ಬಾನು ಅತ್ಯಾ೧ಚಾರಿಗಳನ್ನು ಅವರು ಸನ್ಮಾನಿಸಿದ್ದು ಎಲ್ಲರಿಗೂ ಗೊತ್ತು. ಇಂಥವರ ಕೈಗೆ ಶಿಕ್ಷಣ ಸಚಿವಾಲಯ ಕೊಟ್ಟರೆ ಇಡೀ ದೇಶಕ್ಕೆ ಯಾವ ಸಂದೇಶ ಹೋಗುತ್ತೆ? ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;ಲೋಕಸಭೆಯಲ್ಲಿ ತೀವ್ರ ಗದ್ದಲ&lt;/h3&gt;&lt;p&gt;ಇದಕ್ಕೂ ಮುನ್ನ ನೀಟ್ ಪರೀಕ್ಷಾ ಅಕ್ರಮಗಳು, ಹೊಣೆಗಾರಿಕೆ ವಿಚಾರವಾಗಿ ಸರ್ಕಾರವನ್ನು ಗುರಿಯಾಗಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಹೊಸದಾಗಿ ಕೇಂದ್ರ ಶಿಕ್ಷಣ ಸಚಿವರಾದ ಪ್ರಹ್ಲಾದ್ ಜೋಶಿ ವಿರುದ್ಧ ಬಿಲ್ಕಿಸ್ ಬಾನು ಅಪರಾಧಿಗಳ ವಿಚಾರವಾಗಿ ಟೀಕೆ ಮಾಡಲಾರಂಭಿಸಿದರು. ಪ್ರಿಯಾಂಕಾರ ಈ ಹೇಳಿಕೆಗಳು ಲೋಕಸಭೆಯಲ್ಲಿ ತೀವ್ರ ಮಾತಿನ ಚಕಮಕಿಗೆ ಕಾರಣವಾದವು.&lt;/p&gt;&lt;p&gt;&lt;strong&gt;ಪ್ರಿಯಾಂಕಾ ಆರೋಪಕ್ಕೆ ಜೋಶಿ ಕಿಡಿ&lt;/strong&gt;&lt;/p&gt;&lt;p&gt;ಪ್ರಿಯಾಂಕಾ ಅವರು ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ ಮತ್ತು ಶಿಕ್ಷಣ ಸಚಿವರ ವಿರುದ್ಧ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಕಿರಣ್ ರಿಜಿಜು ಆರೋಪಿಸಿದರು. ಪ್ರಿಯಾಂಕಾ ಜಿ ಅವರು ತಮ್ಮ ಹೇಳಿಕೆಗಳನ್ನು ವೆರಿಫಿ ಮಾಡಬೇಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯಿಂದ ಈ ಆರೋಪ. ಯಾರು ಬೇಕಾದರೂ ಏನು ಬೇಕಾದರೂ ಹೇಳಿ ತಪ್ಪಿಸಿಕೊಳ್ಳಬಹುದೇ? ಈ ಆರೋಪಗಳನ್ನು ನಾನು ಅಲ್ಲಗಳೆಯುತ್ತೇನೆ. ಅವರನ್ನು ಉಚ್ಚಾಟಿಸಬೇಕು, ಇಲ್ಲವೇ ಅವರ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಜೋಶಿ ಆಗ್ರಹಿಸಿದರು.&lt;/p&gt;&lt;p&gt;ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡುತ್ತಿದ್ದಾಗ ಅವರ ಕಡೆಯಿಂದಲೂ ಅಡ್ಡಿಪಡಿಸಲಾಯಿತು, ನಮ್ಮ ಕಡೆಯಿಂದಲೂ ಅಡ್ಡಿಪಡಿಸಲಾಯಿತು. ಆದರೆ ನಾವು ಶಾಂತವಾಗಿ ಕೇಳುತ್ತಿದ್ದೆವು. ಆದರೆ ಈಗ ನಮ್ಮ ಶಿಕ್ಷಣ ಸಚಿವರ ಬಗ್ಗೆ ಅವರು ಮಾಡಿದ ಟೀಕೆಗಳು ಸಂಸತ್ತಿನಲ್ಲಿ ಚಾರಿತ್ರ್ಯ ವಧೆ ಮಾಡಿದಂತೆ. ಇಂತಹ ಭಾಷೆಯನ್ನು ನಾವು ನಿರೀಕ್ಷಿಸುವುದಿಲ್ಲ ಎಂದು ರಿಜಿಜು ಹೇಳಿದರು.&lt;/p&gt;&lt;p&gt;&lt;strong&gt;ಮಕ್ಕಳಂತೆ ವರ್ತಿಸುತ್ತಿದ್ದಾರೆ: ಪ್ರತಿಪಕ್ಷ ನಾಯಕರ ಕಿಡಿ&lt;/strong&gt;&lt;/p&gt;&lt;p&gt;ಈ ಘಟನೆಯ ನಂತರ ಹಲವು ವಿರೋಧ ಪಕ್ಷದ ನಾಯಕರು ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ ಪ್ರತಿಕ್ರಿಯೆಯನ್ನು ಟೀಕಿಸಿದ್ದಾರೆ. ಸಿಪಿಐ ಸಂಸದ ಪಿ. ಸಂತೋಷ್ ಕುಮಾರ್ ಅವರು, ಕಿರಣ್ ರಿಜಿಜು ಮತ್ತು ಪ್ರಹ್ಲಾದ್ ಜೋಶಿ ಅವರು ಮಕ್ಕಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜಕೀಯ ವಿಚಾರಗಳನ್ನು ರಾಜಕೀಯವಾಗಿಯೇ ಎದುರಿಸಬೇಕು, ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದರೆ ಅದನ್ನು ಎದುರಿಸಬೇಕಷ್ಟೇ ಎಂದಿದ್ದಾರೆ. 'ಇದು ಸತ್ಯಾಂಶಗಳ ಆಧಾರದ ಮೇಲೆ ಮಾಡಿದ ರಾಜಕೀಯ ಹೇಳಿಕೆ. ಸಂಸತ್ತಿನಲ್ಲಿ ಮಾತನಾಡಿದವರ ವಿರುದ್ಧ ದೂರು ದಾಖಲಿಸುವುದರಲ್ಲಿ ಅರ್ಥವಿಲ್ಲ. ನೀವು ರಾಜಕೀಯವಾಗಿ ಸಮರ್ಥಿಸಿಕೊಳ್ಳಬೇಕು. ಆದರೆ ಅವರು ಮಕ್ಕಳಂತೆ ಅಳಲು ಶುರುಮಾಡಿದರು. ಒಂದು ವೇಳೆ ಅದು ಸತ್ಯಕ್ಕೆ ದೂರವಾಗಿದ್ದರೆ, ತಪ್ಪು ಮಾಹಿತಿಯಾಗಿದ್ದರೆ ಅದನ್ನು ಎದುರಿಸಲಿ' ಎಂದು ಕುಮಾರ್ ANIಗೆ ತಿಳಿಸಿದ್ದಾರೆ.&lt;/p&gt;&lt;p&gt;ಜೆಎಂಎಂ ಸಂಸದೆ ಮಹುವಾ, ಸಂಸತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ವೇದಿಕೆಯಾಗಿದೆ. ಇಂತಹ ಹೇಳಿಕೆಗಳನ್ನು ಸಂಸತ್ತಿನಲ್ಲಿ ಹೇಗೆ ಪರಿಗಣಿಸಬೇಕು ಎಂಬುದು ಸಭಾಪತಿಯ ವಿವೇಚನೆಗೆ ಬಿಟ್ಟದ್ದು ಎಂದು ಅವರು ಸೇರಿಸಿದರು. 'ಸಂಸತ್ತು ದೇಶದ ಹಿತದೃಷ್ಟಿಯಿಂದ ತಮ್ಮ ಅಭಿಪ್ರಾಯಗಳನ್ನು ಮುಂದಿಡುವ ಸ್ಥಳ. ಅದರಲ್ಲಿ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಆಡಳಿತ ಪಕ್ಷದವರು ಹೇಳುವ ಮಾತುಗಳು ವಿರೋಧ ಪಕ್ಷದವರಿಗೆ ನೋವುಂಟುಮಾಡುತ್ತವೆ ಮತ್ತು ಕೆಲವೊಮ್ಮೆ ವಿರೋಧ ಪಕ್ಷದವರ ಹೇಳಿಕೆಗಳು ಆಡಳಿತ ಪಕ್ಷದವರಿಗೆ ತಪ್ಪಾಗಿ ಕಾಣಿಸುತ್ತವೆ. ಈ ಹೇಳಿಕೆಗಳನ್ನು ನಮ್ಮ ಸಭಾಪತಿಗಳು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಅವರ ವಿವೇಚನೆಗೆ ಬಿಟ್ಟದ್ದು ಎಂದರು.&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದಂತೆ ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>politics</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/priyanka-gandhis-bilkis-bano-remarks-on-prahlad-joshi-spark-lok-sabha-row/articleshow-vvs05pk"/>
        </item>
    </channel>
</rss>
