<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 06 Apr 2026 07:46:25 +0530</lastBuildDate>
        <atom:link href="https://kannada.asianetnews.com/rss/other-sports" rel="self" type="application/rss+xml"/>
        <item>
            <title><![CDATA[ಆಸ್ಟ್ರೇಲಿಯನ್‌ ಓಪನ್ ಟೆನಿಸ್‌ಗೆ ಆಲ್ಕ‘ರಾಜ’; ನೋವಾಕ್ 25ನೇ ಗ್ರ್ಯಾನ್ ಸ್ಲಾಂ ಕನಸು ಮತ್ತೆ ಭಗ್ನ]]></title>
            <link>https://kannada.asianetnews.com/sports/djokovic-25th-grand-slam-dream-shattered-as-alcaraz-wins-australian-open-title/articleshow-5zk268b</link>
            <guid isPermaLink="true">https://kannada.asianetnews.com/sports/djokovic-25th-grand-slam-dream-shattered-as-alcaraz-wins-australian-open-title/articleshow-5zk268b</guid>
            <pubDate>Mon, 02 Feb 2026 07:26:06 +0530</pubDate>
            <description><![CDATA[ಆಸ್ಟ್ರೇಲಿಯನ್&zwnj; ಓಪನ್ ಫೈನಲ್&zwnj;ನಲ್ಲಿ ಕಾರ್ಲೊಸ್&zwnj; ಆಲ್ಕರಜ್, ನೋವಾಕ್ ಜೋಕೋವಿಚ್&zwnj;ರನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದಾರೆ. ಈ ಸೋಲಿನೊಂದಿಗೆ ಜೋಕೋವಿಚ್&zwnj;ರ 25ನೇ ಗ್ರ್ಯಾನ್&zwnj;ಸ್ಲಾಂ ಕನಸು ಭಗ್ನಗೊಂಡರೆ, ಆಲ್ಕರಜ್&zwnj; ಕೆರಿಯರ್&zwnj; ಗ್ರ್ಯಾನ್&zwnj;ಸ್ಲಾಂ ಪೂರ್ಣಗೊಳಿಸಿದ ಅತಿಕಿರಿಯ ಆಟಗಾರ ಎನಿಸಿಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kgcqtt7v2va74wva9d2bbnrx,imgname-2-1769954175227.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಲ್ಬರ್ನ್&zwnj;: ಸರ್ಬಿಯಾದ ದಿಗ್ಗಜ ಟೆನಿಸಿಗ ನೋವಾಕ್ ಜೋಕೋವಿಚ್&zwnj;ರ 25ನೇ ಗ್ರ್ಯಾನ್&zwnj;ಸ್ಲಾಂ ಪ್ರಶಸ್ತಿ ಗೆಲುವಿನ ಕನಸು ಮತ್ತೆ ಭಗ್ನಗೊಂಡಿದೆ. ಭಾನುವಾರ ನಡೆದ ಆಸ್ಟ್ರೇಲಿಯನ್&zwnj; ಓಪನ್ ಗ್ರ್ಯಾನ್&zwnj;ಸ್ಲಾಂ ಟೆನಿಸ್&zwnj; ಟೂರ್ನಿಯ ಫೈನಲ್&zwnj;ನಲ್ಲಿ 38 ವರ್ಷದ ಜೋಕೋವಿಚ್&zwnj;ಗೆ 22 ವರ್ಷದ ಯುವ ಸೂಪರ್&zwnj;ಸ್ಟಾರ್&zwnj; ಕಾರ್ಲೊಸ್&zwnj; ಆಲ್ಕರಜ್&zwnj; ಸೋಲುಣಿಸಿದರು. ಇದರೊಂದಿಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್&zwnj; ಚಾಂಪಿಯನ್&zwnj; ಆದ ಆಲ್ಕರಜ್&zwnj;, ಕೆರಿಯರ್&zwnj; ಗ್ರ್ಯಾನ್&zwnj;ಸ್ಲಾಂ ಕೂಡಾ ಪೂರ್ಣಗೊಳಿಸಿದರು.&lt;/p&gt;&lt;p&gt;ಪುರುಷರ ಸಿಂಗಲ್ಸ್&zwnj; ಫೈನಲ್&zwnj; ಪಂದ್ಯದ ಮೊದಲ ಸೆಟ್&zwnj;ನಲ್ಲಿ ಜೋಕೋ 6-2 ಅಂತರದಲ್ಲಿ ಗೆದ್ದರು. 2ನೇ ಸೆಟ್&zwnj;ನ ಮೊದಲ ಗೇಮ್&zwnj;ನಲ್ಲೂ ಮೇಲುಗೈ ಸಾಧಿಸಿದರಾದರೂ ಬಳಿಕ ಆಲ್ಕರಜ್&zwnj; ನೈಜ ಆಟ ಅನಾವರಣಗೊಂಡಿತು. 2ನೇ ಸೆಟ್&zwnj;ನಲ್ಲಿ ಆಲ್ಕರಜ್&zwnj; 6-2 ಅಂತರದಲ್ಲಿ ಗೆದ್ದರು. 3ನೇ ಸೆಟ್&zwnj; ಗೆಲ್ಲುವುದು ಕೂಡಾ ಆಲ್ಕರಜ್&zwnj;ಗೆ ಕಷ್ಟವೆನಿಸಲಿಲ್ಲ. ಆದರೆ ನಿರ್ಣಾಯಕ 4ನೇ ಸೆಟ್&zwnj;ನಲ್ಲಿ ಜೋಕೋ ಪ್ರತಿರೋಧ ತೋರಿದರು. ಒಂದು ಹಂತದಲ್ಲಿ ಇಬ್ಬರೂ 3-3 ಸಮಬಲಗೊಂಡಿದ್ದರೂ, ಕೊನೆಯಲ್ಲಿ ಆಲ್ಕರಜ್&zwnj; 7-5 ಅಂತರದಲ್ಲಿ ಗೆದ್ದು ಚಾಂಪಿಯನ್&zwnj; ಎನಿಸಿಕೊಂಡರು.&lt;/p&gt;&lt;h2&gt;&lt;strong&gt;ಮೊದಲ ಸೋಲು:&lt;/strong&gt;&lt;/h2&gt;&lt;p&gt;ಜೋಕೋಗೆ ಇದು ಆಸ್ಟ್ರೇಲಿಯನ್&zwnj; ಓಪನ್&zwnj; ಫೈನಲ್&zwnj;ನಲ್ಲಿ ಮೊದಲ ಸೋಲು. ಈ ಹಿಂದೆ 10 ಬಾರಿ ಫೈನಲ್&zwnj;ಗೇರಿದ್ದ ಅವರು ಎಲ್ಲಾ ಬಾರಿಯೂ ಟ್ರೋಫಿಗೆ ಮುತ್ತಿಟ್ಟಿದ್ದರು. 2024, 2025ರಲ್ಲಿ ಸೆಮೀಸ್&zwnj;ನಲ್ಲಿ ಸೋತಿದ್ದ ಅವರು, ಈ ಬಾರಿ ಫೈನಲ್&zwnj;ನಲ್ಲಿ ಎಡವಿದರು.&lt;/p&gt;&lt;h3&gt;&lt;strong&gt;25ನೇ ಕಿರೀಟಕ್ಕಾಗಿ 9 ಗ್ರ್ಯಾನ್&zwnj;ಸ್ಲಾಂ ಆಡಿದ್ರೂ ಜೋಕೋಗಿಲ್ಲ ಯಶಸ್ಸು&lt;/strong&gt;&lt;/h3&gt;&lt;p&gt;ಜೋಕೋವಿಚ್&zwnj; 2023ರ ಯುಎಸ್&zwnj; ಓಪನ್&zwnj; ಗೆಲ್ಲುವ ಮೂಲಕ ತಮ್ಮ ಗ್ರ್ಯಾನ್&zwnj;ಸ್ಲಾಂ ಗೆಲುವಿನ ಸಂಖ್ಯೆಯನ್ನು 24ಕ್ಕೆ ಹೆಚ್ಚಿಸಿದ್ದರು. ಆ ಬಳಿಕ ಎರಡೂವರೆ ವರ್ಷದಲ್ಲಿ ಅವರು 9 ಗ್ರ್ಯಾನ್&zwnj;ಸ್ಲಾಂ ಟೂರ್ನಿಗಳಲ್ಲಿ ಆಡಿದ್ದಾರೆ. ಆದರೆ ಒಮ್ಮೆಯೂ ಟ್ರೋಫಿ ಗೆಲ್ಲಲಾಗಲಿಲ್ಲ. 2024ರ ವಿಂಬಲ್ಡನ್&zwnj; ಹಾಗೂ ಈ ಬಾರಿ ಆಸ್ಟ್ರೇಲಿಯನ್&zwnj; ಓಪನ್&zwnj; ಸೇರಿ 2 ಬಾರಿ ಫೈನಲ್&zwnj; ಸೋತಿದ್ದಾರೆ. 5 ಬಾರಿ ಸೆಮಿಫೈನಲ್&zwnj;, ಒಮ್ಮೆ ಕ್ವಾರ್ಟರ್&zwnj;, ಮತ್ತೊಮ್ಮೆ 3ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ.&lt;/p&gt;&lt;h3&gt;--&lt;strong&gt;ಕೆರಿಯರ್&zwnj; ಗ್ರ್ಯಾನ್&zwnj;ಸ್ಲಾಂ ಗೆದ್ದ ಅತಿಕಿರಿಯ ಟೆನಿಸಿಗ ಆಲ್ಕರಜ್&lt;/strong&gt;&lt;/h3&gt;&lt;p&gt;ಗ್ರ್ಯಾನ್&zwnj;ಸ್ಲಾಂ ಟೂರ್ನಿಗಳು 4 ಇವೆ. ಆಸ್ಟ್ರೇಲಿಯನ್&zwnj;, ಫ್ರೆಂಚ್&zwnj;, ವಿಂಬಲ್ಡನ್&zwnj; ಹಾಗೂ ಯುಎಸ್&zwnj; ಓಪನ್&zwnj;. ಈ ಎಲ್ಲಾ ಟೂರ್ನಿಯಲ್ಲೂ ಕನಿಷ್ಠ ಒಮ್ಮೆ ಚಾಂಪಿಯನ್&zwnj; ಆದರೆ ಅದಕ್ಕೆ ಕೆರಿಯರ್&zwnj; ಗ್ರ್ಯಾನ್&zwnj;ಸ್ಲಾಂ ಎನ್ನುತ್ತಾರೆ. ಈಗಾಗಲೇ ತಲಾ 2 ಬಾರಿ ವಿಂಬಲ್ಡನ್&zwnj;, ಯುಎಸ್&zwnj;, ಪ್ರೆಂಚ್&zwnj; ಓಪನ್&zwnj; ಗೆದ್ದಿದ್ದ ಆಲ್ಕರಜ್&zwnj;, ಆಸ್ಟ್ರೇಲಿಯನ್&zwnj; ಓಪನ್&zwnj; ಕಿರೀಟ ಗೆಲ್ಲುವ ಮೂಲಕ ಕೆರಿಯರ್&zwnj; ಗ್ರ್ಯಾನ್&zwnj;ಸ್ಲಾಂ ಪೂರ್ಣಗೊಳಿಸಿದ್ದಾರೆ. ಅವರು ಈ ಸಾಧನೆ ಮಾಡಿದ ಅತಿಕಿರಿಯ ಟೆನಿಸಿಗ. ಅಲ್ಕರಜ್&zwnj;ಗೆ ಈಗ 22 ವರ್ಷ, 272 ದಿನ. 1938ರಲ್ಲಿ ಅಮೆರಿಕದ ಡಾನ್&zwnj; ಬಡ್ಜ್&zwnj; ಕೆರಿಯರ್&zwnj; ಗ್ರ್ಯಾನ್&zwnj;ಸ್ಲಾಂ ಸಾಧನೆ ಮಾಡಿದ್ದಾಗ ಅವರಿಗೆ 22 ವರ್ಷ, 363 ದಿನ ವಯಸ್ಸಾಗಿತ್ತು.&lt;/p&gt;&lt;p&gt;&lt;strong&gt;₹26.64 ಕೋಟಿ:&lt;/strong&gt; ಚಾಂಪಿಯನ್&zwnj; ಆಲ್ಕರಜ್&zwnj;ಗೆ ₹26.64 ಕೋಟಿ ನಗದು ಬಹುಮಾನ ಲಭಿಸಿತು.&lt;/p&gt;&lt;p&gt;&lt;strong&gt;₹13.80 ಕೋಟಿ: &lt;/strong&gt;ರನ್ನರ್&zwnj;-ಅಪ್&zwnj; ಜೋಕೋವಿಚ್&zwnj; ₹13.80 ಕೋಟಿ ನಗದು ಬಹುಮಾನ ಪಡೆದರು.&lt;/p&gt;&lt;p&gt;&lt;strong&gt;09 ಟೆನಿಸಿಗ: &lt;/strong&gt;ಕೆರಿಯರ್&zwnj; ಗ್ರ್ಯಾನ್&zwnj;ಸ್ಲಾಂ ಸಾಧನೆ ಮಾಡಿದ ವಿಶ್ವದ 9ನೇ ಟೆನಿಸಿಗ ಆಲ್ಕರಜ್&zwnj;.&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/djokovic-25th-grand-slam-dream-shattered-as-alcaraz-wins-australian-open-title/articleshow-5zk268b"/>
        </item>
        <item>
            <title><![CDATA[2036ರ ಒಲಿಂಪಿಕ್ಸ್ ಆಯೋಜಿಸಲು ಸಕಲ ಪ್ರಯತ್ನ: ನರೇಂದ್ರ ಮೋದಿ ಪುನರುಚ್ಚಾರ]]></title>
            <link>https://kannada.asianetnews.com/sports/india-aiming-to-host-2036-olympics-says-pm-narendra-modi-kvn/articleshow-69trvqt</link>
            <guid isPermaLink="true">https://kannada.asianetnews.com/sports/india-aiming-to-host-2036-olympics-says-pm-narendra-modi-kvn/articleshow-69trvqt</guid>
            <pubDate>Mon, 05 Jan 2026 08:28:33 +0530</pubDate>
            <description><![CDATA[&lt;p&gt;2036ರ ಒಲಿಂಪಿಕ್&zwnj; ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸಲು ಸರ್ಕಾರ ಸಕಲ ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಾರಣಸಿಯಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್&zwnj; ಚಾಂಪಿಯನ್&zwnj;ಶಿಪ್&zwnj; ಉದ್ಘಾಟಿಸಿ ಮಾತನಾಡಿದ ಅವರು, ಖೇಲೋ ಇಂಡಿಯಾದಂತಹ ಯೋಜನೆಗಳು ಪ್ರತಿಭೆಗಳನ್ನು ಪೋಷಿಸುತ್ತಿವೆ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdj097y82s0n2mj0321gy6r2,imgname-pm-modi-mann-ki-baat-last-episode-2025-youth-innovation-digital-india-vision-020-1766909583304.jpg" type="image/jpeg" height="390" width="690"/>
            <content:encoded><![CDATA[&lt;p&gt;ವಾರಣಸಿ: 2036ರ ಒಲಿಂಪಿಕ್&zwnj; ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸಲು ನಮ್ಮ ಸರ್ಕಾರ ಸಕಲ ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಜೊತೆಗೆ ದೇಶದ ಹೆಚ್ಚೆಚ್ಚು ಕ್ರೀಡಾಪಟುಗಳಿಗೆ ಅವಕಾಶ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.&lt;/p&gt;&lt;p&gt;ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಸಿ 72ನೇ ರಾಷ್ಟ್ರೀಯ ವಾಲಿಬಾಲ್&zwnj; ಚಾಂಪಿಯನ್&zwnj;ಶಿಪ್&zwnj;ಗೆ ಆತಿಥ್ಯ ವಹಿಸುತ್ತಿದ್ದು, ಭಾನುವಾರ ಕೂಟಕ್ಕೆ ಮೋದಿ ವಿಡಿಯೋ ಕಾನ್ಫರೆನ್ಸ್&zwnj; ಮೂಲಕ ಚಾಲನೆ ನೀಡಿ ಮಾತನಾಡಿದರು. &lsquo;ಯುವ ಕ್ರೀಡಾಪಟುಗಳು ಒಲಿಂಪಿಕ್&zwnj; ಕ್ರೀಡೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಲು ಸರ್ಕಾರ ಸತತ ಪರಿಶ್ರಮ ವಹಿಸುತ್ತಿದೆ. ಖೇಲೋ ಇಂಡಿಯಾದಂತಹ ಕೂಟಗಳು ಪ್ರತಿಭೆಗಳನ್ನು ಹುಡುಕಿ, ಪೋಷಿಸಲು ಗೇಮ್&zwnj; ಚೇಂಜರ್&zwnj; ಆಗಿವೆ&rsquo; ಎಂದು ಮೋದಿ ಹೇಳಿದರು.&lt;/p&gt;&lt;p&gt;&lsquo;2030ರಲ್ಲಿ ಭಾರತದಲ್ಲಿ ಕಾಮನ್&zwnj;ವೆಲ್ತ್&zwnj; ಕ್ರೀಡಾಕೂಟ ನಡೆಯಲಿದೆ. 2036ರ ಒಲಿಂಪಿಕ್ಸ್&zwnj;ಗೆ ಆತಿಥ್ಯ ಹಕ್ಕು ಪಡೆಯಲು ಭಾರತ ಸಕಲ ಪ್ರಯತ್ನ ನಡೆಸುತ್ತಿದೆ&rsquo; ಎಂದು ಮೋದಿ ತಿಳಿಸಿದರು.&lt;/p&gt;&lt;h2&gt;&lt;strong&gt;ವಾಲಿಬಾಲ್&zwnj;ಗೂ, ದೇಶದ ಅಭಿವೃದ್ಧಿಗೂ ವಿಶೇಷ ಹೋಲಿಕೆ: ಮೋದಿ ಬಣ್ಣನೆ!&lt;/strong&gt;&lt;/h2&gt;&lt;p&gt;ವಾಲಿಬಾಲ್&zwnj; ಅನ್ನು ಸಾಧಾರಣ ಕ್ರೀಡೆಯಲ್ಲ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಈ ಕ್ರೀಡೆಗೂ ಭಾರತದ ಅಭಿವೃದ್ಧಿಗೂ ವಿಶೇಷ ಹೋಲಿಕೆ ಇದೆ ಎಂದರು. &lsquo;ವಾಲಿಬಾಲ್&zwnj;ನಲ್ಲಿ ಸಂತುಲನ ಬಹಳ ಮುಖ್ಯ. ಅದು ಸಹಕಾರವನ್ನು ಆಧರಿಸಿರು ಕ್ರೀಡೆ. ಸಂಕಲ್ಪ, ಶಕ್ತಿ, ಆಟಗಾರರ ನಡುವೆ ನಾವೊಂದು ತಂಡ ಎನ್ನುವ ಮನೋಭಾವನೆ, ತಂಡವೇ ಮೊದಲು ಎನ್ನುವ ಧ್ಯೇಯ ಬಹಳ ಮುಖ್ಯ. ಅದೇ ರೀತಿ ದೇಶದ ಅಭಿವೃದ್ಧಿಯಲ್ಲೂ ಈ ಅಂಶಗಳು ಪ್ರಮುಖ ಪಾತ್ರ ವಹಿಸಲಿವೆ&rsquo; ಎಂದು ಮೋದಿ ವಿವರಿಸಿದರು.&lt;/p&gt;&lt;h3&gt;&lt;strong&gt;ರಾಷ್ಟ್ರೀಯ ಶೂಟಿಂಗ್&zwnj;: 3 ಚಿನ್ನದ ಪದಕ ಗೆದ್ದ ರಾಜ್ಯದ ಜೊನಾಥನ್&zwnj;&lt;/strong&gt;&lt;/h3&gt;&lt;p&gt;ನವದೆಹಲಿ: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್&zwnj; ಚಾಂಪಿಯನ್&zwnj;ಶಿಪ್&zwnj;ನಲ್ಲಿ ಕರ್ನಾಟಕದ ಜೊನಾಥನ್&zwnj; ಗ್ಯಾವಿನ್&zwnj; ಆ್ಯಂಥೋನಿ 10 ಮೀ. ಏರ್&zwnj; ಪಿಸ್ತೂಲ್&zwnj; ಸ್ಪರ್ಧೆಯಲ್ಲಿ ಕ್ಲೀನ್&zwnj; ಸ್ವೀಪ್&zwnj; ಸಾಧಿಸಿದ್ದಾರೆ. ಸಬ್&zwnj;-ಯೂಥ್&zwnj;, ಯೂಥ್&zwnj; ಹಾಗೂ ಜೂನಿಯರ್&zwnj; ವಿಭಾಗಗಳಲ್ಲಿ ಜೊನಾಥನ್&zwnj; ಚಿನ್ನದ ಪದಕ ಜಯಿಸಿದ್ದಾರೆ. ಯೂಥ್&zwnj; ವಿಭಾಗದ ಫೈನಲ್&zwnj;ನಲ್ಲಿ ಜೊನಾಥನ್&zwnj; 240 ಅಂಕ ಗಳಿಸಿದರೆ, ಜೂನಿಯರ್&zwnj; ವಿಭಾಗದಲ್ಲಿ 240.5 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/india-aiming-to-host-2036-olympics-says-pm-narendra-modi-kvn/articleshow-69trvqt"/>
        </item>
        <item>
            <title><![CDATA[ಖೇಲೋ ಇಂಡಿಯಾ ಕಿಕ್ ಬಾಕ್ಸಿಂಗ್: ಕನ್ನಡ ಕುವರಿ ದಾನ್ವಿ ಸುರೇಶ್ ಗೌಡಗೆ ಬೆಳ್ಳಿ ಪದಕ]]></title>
            <link>https://kannada.asianetnews.com/gallery/sports/danvi-suresh-gowda-khelo-india-kickboxing-silver-medal-bengaluru-gvd-9k5pvkf</link>
            <guid isPermaLink="true">https://kannada.asianetnews.com/gallery/sports/danvi-suresh-gowda-khelo-india-kickboxing-silver-medal-bengaluru-gvd-9k5pvkf</guid>
            <pubDate>Tue, 31 Mar 2026 22:30:24 +0530</pubDate>
            <description><![CDATA[&lt;p&gt;ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್&zwnj;ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn2cvqpxkqwzfqfcsyjrjgj8,imgname-khe--4--1774975835869.jpeg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್&zwnj;ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗಳಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು (ಮಾ.31): &lt;/strong&gt;ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್&zwnj;ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜ್ಯ ಮತ್ತು ಶಾಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.&lt;/p&gt;&lt;img&gt;&lt;p&gt;ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಸಾಧನೆ ಸುಲಭ ಅನ್ನೋದನ್ನ ದಾನ್ವಿ ಸುರೇಶ್ ಗೌಡ ಸಾಬೀತುಪಡಿಸಿದ್ದಾಳೆ. ಮಾರ್ಚ್ 26 ರಿಂದ 29 ರವರೆಗೆ ಚೆನ್ನೈನಲ್ಲಿ ಆಯೋಜಿಸಲಾಗಿದ್ದ 'ಅಸ್ಮಿತಾ ಖೇಲೋ ಇಂಡಿಯಾ ಕಿಕ್&zwnj;ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿ 2025-26'ರಲ್ಲಿ ದಾನ್ವಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ದಕ್ಷಿಣ ವಲಯವನ್ನು ಪ್ರತಿನಿಧಿಸಿದ್ದ ದಾನ್ವಿ, ರಾಷ್ಟ್ರೀಯ ವೇದಿಕೆಯಲ್ಲಿ ಅಸಾಧಾರಣ ಕೌಶಲ್ಯ ಪ್ರದರ್ಶಿಸಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದಳು. ಈ ಯಶಸ್ಸಿನ ಹಿಂದೆ ಸನ್ ಮಾರ್ಷಲ್ ಆರ್ಟ್ಸ್&zwnj;ನ ವಾಕೋ ಇಂಡಿಯಾ ತರಬೇತುದಾರರಾದ ದತ್ತು, ಸಂತೋಷ್ ಹಾಗೂ ರಾಜು ಅವರ ಕಠಿಣ ಮಾರ್ಗದರ್ಶನವಿದೆ.&lt;/p&gt;&lt;img&gt;&lt;p&gt;ಈ ಸಾಧನೆಯು ಎಸ್&zwnj;ಬಿಎಸ್ ಶಿಕ್ಷಣ ಸಂಸ್ಥೆ ಮತ್ತು ಸನ್ ಮಾರ್ಷಲ್ ಅಕಾಡೆಮಿಗೆ ಅಪಾರ ಹೆಮ್ಮೆ ತಂದಿದೆ ಟ್ರೈನರ್&zwnj;ನ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸದಿಂದ ಈ ಪದಕ ಗೆಲ್ಲಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಇದೆ. ಎಂದು ದಾನ್ವಿ ಹೇಳಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ಇದೇ ವೇಳೆ ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ವಾಕೋ ಅಂತರಾಷ್ಟ್ರೀಯ ರೆಫ್ರಿ ಶ್ರೀ ರವಿ ಅವರ ಬೆಂಬಲವನ್ನು ಸ್ಮರಿಸಲಾಗಿದ್ದು, ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಕ್ರೀಡಾ ಲೋಕದ ಈ ಉದಯೋನ್ಮುಖ ಪ್ರತಿಭೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>other-sports</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sports/danvi-suresh-gowda-khelo-india-kickboxing-silver-medal-bengaluru-gvd-9k5pvkf"/>
        </item>
        <item>
            <title><![CDATA[ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಬಾತ್‌ರೂಮ್‌ನಲ್ಲೇ ಹಾಕಿ ಕೋಚ್ ಅತ್ಯಾ*ಚಾರ; ಆರೋಪಿ ಜೈಲಿಗಟ್ಟಿದ ಪೊಲೀಸರು]]></title>
            <link>https://kannada.asianetnews.com/sports/haryana-shock-junior-hockey-coach-arrested-under-pocso-case-kvn/articleshow-aomp7wp</link>
            <guid isPermaLink="true">https://kannada.asianetnews.com/sports/haryana-shock-junior-hockey-coach-arrested-under-pocso-case-kvn/articleshow-aomp7wp</guid>
            <pubDate>Mon, 12 Jan 2026 12:34:02 +0530</pubDate>
            <description><![CDATA[&lt;p&gt;ಹರ್ಯಾಣದ ರೇವಾರಿಯಲ್ಲಿ, ಜೂನಿಯರ್ ಹಾಕಿ ಮಹಿಳಾ ತಂಡದ ಕೋಚ್ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ನಾಲ್ಕು ತಿಂಗಳ ಹಿಂದೆ ನಡೆದ ಈ ಕೃತ್ಯದಿಂದ ಬಾಲಕಿ ಗರ್ಭಿಣಿಯಾಗಿ, ನಂತರ ಗರ್ಭಪಾತವಾಗಿತ್ತು. ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k851g3xzw4ece1qvzp6aqqsz,imgname-mumbai-pocso-case-father-lifetime-jail-nasik-homicide-news-1761105940415.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಂಡೀಗಢ: ಹರ್ಯಾಣದ ರೇವಾರಿ ಜಿಲ್ಲೆಯಲ್ಲಿ ಅಪ್ತಾಪ್ತ ಬಾಲಕಿಯ ಮೇಲೆ ಅತ್ಯಾ*ಚಾರ ನಡೆಸಿ, ಗರ್ಭಿಣಿಯನ್ನಾಗಿ ಮಾಡಿದ ಆರೋಪದಡಿ ಜೂನಿಯರ್ ಹಾಕಿ ಮಹಿಳಾ ತಂಡದ ಕೋಚ್&zwnj;ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಹರ್ಯಾಣದ ರೇವಾರಿ ಜಿಲ್ಲೆಯಲ್ಲಿ ನಡೆದ ಪ್ರಕರಣ&lt;/strong&gt;&lt;/h2&gt;&lt;p&gt;ರೇವಾರಿ ಜಿಲ್ಲೆಯ ಹಳ್ಳಿಯೊಂದರ 12 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ಖೋಲ್ ಪೊಲೀಸ್ ಠಾಣೆಯಲ್ಲಿ ಅತ್ಯಾ*ಚಾರ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಹಾಕಿ ಆಡುತ್ತಿದ್ದ ಈ ವಿದ್ಯಾರ್ಥಿನಿಗೆ ಈ ಕೋಚ್ ಕಳೆದ ಮೂರು ವರ್ಷಗಳಿಂದ ಪರಿಚಯವಾಗಿದ್ದರು ಎಂದು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾಳೆ. ಆ ಬಾಲಕಿ ತರಬೇತಿ ಪಡೆಯುತ್ತಿದ್ದ ಸ್ಟೇಡಿಯಂನ ಬಾತ್&zwnj;ರೂಮ್&zwnj;ನಲ್ಲಿ ಕೋಚ್ ಕಳೆದ ನಾಲ್ಕು ತಿಂಗಳ ಹಿಂದೆ ಅತ್ಯಾ*ಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ.&lt;/p&gt;&lt;p&gt;ಇದಾದ ಬಳಿಕ ಆ ಅಪ್ರಾಪ್ತ ಯುವತಿ ಗರ್ಭಿಣಿಯಾಗಿದ್ದಾಳೆ. ಇದರಿಂದ ಆಕೆಯ ಆರೋಗ್ಯ ಹದಗೆಟ್ಟಿದ್ದು, ಜನವರಿ 05ರಂದು ಆಕೆಗೆ ಗರ್ಭಪಾತವಾಗಿದೆ. ಇದಾದ ನಂತರ ಆಕೆಯನ್ನು ಅವರು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರು ಎಂದು ಸಂತ್ರಸ್ಥೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದಾದ ಬಳಿಕ ಪೊಲೀಸರು ಹಾಕಿ ಕೋಚ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h3&gt;&lt;strong&gt;ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು&lt;/strong&gt;&lt;/h3&gt;&lt;p&gt;&quot;ಆರೋಪಿಯನ್ನು ಬಂಧಿಸಿದ್ದೇವೆ. ನಗರ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ನಾವು ಆತನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ&quot; ಎಂದು ರೇವಾರಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/sports/haryana-shock-junior-hockey-coach-arrested-under-pocso-case-kvn/articleshow-aomp7wp"/>
        </item>
        <item>
            <title><![CDATA[ಖೇಲೋ ಇಂಡಿಯಾ ಬೀಚ್‌ ಗೇಮ್ಸ್: ಮತ್ತೆ ಚಿನ್ನ ಗೆದ್ದ ಧ್ರುಪದ್; ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಕರ್ನಾಟಕ]]></title>
            <link>https://kannada.asianetnews.com/sports/khelo-india-beach-games-2026-dhrupad-ramakrishna-retains-gold-kvn/articleshow-c8boxo6</link>
            <guid isPermaLink="true">https://kannada.asianetnews.com/sports/khelo-india-beach-games-2026-dhrupad-ramakrishna-retains-gold-kvn/articleshow-c8boxo6</guid>
            <pubDate>Sun, 11 Jan 2026 10:24:59 +0530</pubDate>
            <description><![CDATA[ದಿಯುನಲ್ಲಿ ನಡೆದ ಖೇಲೋ ಇಂಡಿಯಾ ಬೀಚ್&zwnj; ಗೇಮ್ಸ್&zwnj;ನಲ್ಲಿ ಕರ್ನಾಟಕದ ಈಜುಪಟುಗಳು ಅದ್ಭುತ ಪ್ರದರ್ಶನ ನೀಡಿ, ರಾಜ್ಯ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬಸವನಗುಡಿ ಈಜು ಕೇಂದ್ರದ ದ್ರುಪದ್ ರಾಮಕೃಷ್ಣ 5 ಕಿ.ಮೀ. ಸ್ಪರ್ಧೆಯಲ್ಲಿ ತಮ್ಮ ಚಿನ್ನದ ಪದಕವನ್ನು ಯಶಸ್ವಿಯಾಗಿ ಉಳಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kenp9yendwf78x88q7qjprqr,imgname-khelo-india-beach-games-1768107080149.jpg" type="image/jpeg" height="390" width="690"/>
            <content:encoded><![CDATA[&lt;p&gt;ದಿಯು: ಕೇಂದ್ರಾಡಳಿತ ಪ್ರದೇಶವಾಗಿರುವ ದಿಯುನಲ್ಲಿ ನಡೆದ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಬೀಚ್&zwnj; ಗೇಮ್ಸ್&zwnj; ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟುಗಳು ಅದ್ಭುತ ಪ್ರದರ್ಶನ ತೋರುವುದರೊಂದಿಗೆ ರಾಜ್ಯ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಬಸವನಗುಡಿ ಈಜು ಕೇಂದ್ರದ ಈಜುಪಟು ಧ್ರುಪದ್ ರಾಮಕೃಷ್ಣ ಮತ್ತೊಮ್ಮೆ ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಲ್ಯೂ ಫ್ಲಾಗ್&zwnj; ಮಾನ್ಯತೆ ಪಡೆದಿರುವ ದಿಯುವಿನ ಘೋಘ್ಲಾ ಕಡಲ ಕಿನಾರೆಯಲ್ಲಿ ಖೇಲೋ ಇಂಡಿಯಾ ಬೀಚ್ ಗೇಮ್ಸ್&zwnj; ಕಳೆದ ಮಂಗಳವಾರದಿಂದ ಆರಂಭವಾಗಿದೆ.&lt;/p&gt;&lt;h2&gt;&lt;strong&gt;ಚಿನ್ನ ಉಳಿಸಿಕೊಂಡ ದ್ರುಪದ್&zwnj;:&lt;/strong&gt;&lt;/h2&gt;&lt;p&gt;ಬಸವನಗುಡಿ ಈಜು ಕೇಂದ್ರದ ದ್ರುಪದ್ ಅವರು 5 ಕಿ.ಮೀ. ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಉಳಿಸಿಕೊಂಡರು. ಕಳೆದ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದ ಅವರು ಈ ಬಾರಿಯೂ 1 ಗಂಟೆ 21:33 ನಿಮಿಷಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು.ಸ್ಪರ್ಧೆಯ ಆರಂಭದಿಂದ ಕೊನೆಯ ಹಂತದವರೆಗೂ ಉತ್ತರ ಪ್ರದೇಶದ ಅನುರಾಗ್ ಸಿಂಗ್ (1ಗಂ.21:38ನಿ) ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಮುಕ್ತಾಯಕ್ಕೆ 150 ಮೀಟರ್ ದೂರ ಇರುವಂತೆ ವೇಗ ಪಡೆದುಕೊಂಡ ದ್ರುಪದ್ ಕೇವಲ ಐದು ಸೆಕೆಂಡ್&zwnj;ಗಳ ಅಂತರದಲ್ಲಿ ವಿಜಯಶಾಲಿಯಾದರು.&lt;/p&gt;&lt;p&gt;ಸಿಂಗಪುರದಲ್ಲಿ ನಡೆದ ವಿಶ್ವ ಚಾಂಪಿಯನ್&zwnj;ಷಿಪ್&zwnj;ನಲ್ಲಿ ಭಾಗವಹಿಸಿದ್ದ 15 ವರ್ಷದ ದ್ರುಪದ್ ಕಳೆದ ಒಂದು ದಶಕದಿಂದ ಈಜು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬನಶಂಕರಿ ನ್ಯಾಷನಲ್ ಪಬ್ಲಿಕ್ ಸ್ಕೂಲ್&zwnj;ನಲ್ಲಿ 10ನೇ ತರಗತಿ ಓದುತ್ತಿರುವ ಅವರು ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ. ಆಶ್ರಾ ಮತ್ತು ಪ್ರಶಂನ್ಸ್ ಅವರೂ ಬಸವನಗುಡಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;10 ಕಿಲೋಮೀಟರ್ ಓಪನ್ ವಾಟರ್ ಸ್ವಿಮ್ಮಿಂಗ್&zwnj;ನಲ್ಲಿ ಕರ್ನಾಟಕಕ್ಕೆ 4 ಪದಕ:&lt;/strong&gt;&lt;/h3&gt;&lt;p&gt;ಇನ್ನು ಕಳೆದ ಶುಕ್ರವಾರ ನಡೆದ 10 ಕಿಲೋ ಮೀಟರ್ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಆರು ಪದಕಗಳ ಪೈಕಿ ನಾಲ್ಕು ಪದಕಗಳನ್ನು ಜಯಿಸುವಲ್ಲಿ ನಮ್ಮ ರಾಜ್ಯದ ಸ್ವಿಮ್ಮರ್&zwnj;ಗಳು ಯಶಸ್ವಿಯಾಗಿದ್ದರು. ಬೆಂಗಳೂರಿನ 20 ವರ್ಷದ ಪ್ರತಿಭಾನ್ವಿತ ಸ್ವಿಮ್ಮರ್ ಆಶ್ಮಿತಾ ಚಂದ್ರ 2 ಗಂಟೆ 46.34 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ರಾಜ್ಯಕ್ಕೆ ಮೊದಲ ಚಿನ್ನದ ಪದಕದ ಖಾತೆ ತೆರೆದಿದ್ದರು. ಇದಾದ ಬಳಿಕ ಆಶ್ರಾ ಸುಧೀರ್, ಅಕ್ಷಜ್ ಪಿ ಬೆಳ್ಳಿ ಪದಕ ಜಯಿಸಿದರೆ, ಕನಿಷ್ಕ್ ಎಸ್&zwnj;. ಎ. ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಅಶ್ಮಿತಾ ಚಂದ್ರ ಇನ್&zwnj;ಸ್ಪೈರ್ ಇನ್&zwnj;ಸ್ಟಿಟ್ಯೂಟ್&zwnj;ನಲ್ಲಿ ಮತ್ತು ಆಶ್ರಾ, ಕನಿಷ್ಕ್&zwnj; ಹಾಗೂ ಅಕ್ಷಜ್ ಬಸವನಗುಡಿ ಈಜು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;1400ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿ:&lt;/strong&gt;&lt;/h3&gt;&lt;p&gt;ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಬೀಚ್&zwnj; ಗೇಮ್ಸ್&zwnj;ನಲ್ಲಿ ಸುಮಾರು 1400ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಈ ಕ್ರೀಡಾಕೂಟದಲ್ಲಿ ಬೀಚ್ ಸಾಕರ್, ಬೀಚ್ ವಾಲಿಬಾಲ್, ಬೀಚ್ ಸೆಪಕ್ ಟಕ್ರಾ, ಬೀಚ್ ಕಬಡ್ಡಿ, ಓಪನ್ ವಾಟರ್ ಸ್ವಿಮ್ಮಿಂಗ್ ಜತೆಗೆ ಮಲ್ಲಕಂಬ ಹಾಗೂ ಹಗ್ಗಜಗ್ಗಾಟ ಪಂದ್ಯಾಟಗಳು ನಡೆದವು.&lt;/p&gt;&lt;p&gt;Karnataka clinch the Khelo India Beach Games 2026 title Karnataka emerged champions of the #KheloIndiaBeachGames2026, finishing with an impressive 11-medal haul (3 Gold, 2 Silver, 6 Bronze).Tamil Nadu secured the first runners-up spot with 8 medals (3 Gold, 2 Silver,&hellip; pic.twitter.com/SCrEKUDYqv&lt;/p&gt;&lt;p&gt;&mdash; All India Radio News (@airnewsalerts) January 10, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಕರ್ನಾಟಕ:&lt;/strong&gt;&lt;/h3&gt;&lt;p&gt;ಚೊಚ್ಚಲ ಆವೃತ್ತಿಯ ಖೇಲೋ ಇಂಡಿಯಾ ಬೀಚ್&zwnj; ಗೇಮ್ಸ್&zwnj; ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕ ಸೇರಿದಂತೆ ನಾಲ್ಕು ಪದಕ ಗೆದ್ದಿದ್ದ ಕರ್ನಾಟಕ, ಈ ಬಾರಿ ಅದ್ಭುತ ಪ್ರದರ್ಶನ ತೋರುವುದರೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ತನ್ನ ಅಭಿಯಾನ ಮುಗಿಸಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಕರ್ನಾಟಕ 3 ಚಿನ್ನ, ಎರಡು ಬೆಳ್ಳಿ ಹಾಗೂ ಆರು ಕಂಚಿನ ಪದಕ ಸಹಿತ ಒಟ್ಟು 11 ಪದಕ ಗೆಲ್ಲುವ ಮೂಲಕ ಮೊದಲ ಸ್ಥಾನ ಪಡೆಯಿತು. ಇನ್ನು ತಮಿಳುನಾಡು 8 ಹಾಗೂ ಮಣಿಪುರ 7 ಪದಕಗಳನ್ನು ಪಡೆಯುವ ಮೂಲಕ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದವು.&lt;/p&gt;]]></content:encoded>
            <category>other-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/sports/khelo-india-beach-games-2026-dhrupad-ramakrishna-retains-gold-kvn/articleshow-c8boxo6"/>
        </item>
        <item>
            <title><![CDATA[ಕೊನೆಯ ಐಪಿಎಲ್ ಎಂದು ಚಿಂತೆ ಬೇಡ, ಪಾಡಲ್ ಸ್ಪೋರ್ಟ್ಸ್ ಮೂಲಕ ಧೂಳೆಬ್ಬಿಸಲಿದ್ದಾರೆ ಧೋನಿ]]></title>
            <link>https://kannada.asianetnews.com/other-sports/ms-dhoni-announces-to-merger-with-padal-park-india-to-grow-sports/articleshow-gtvmdhz</link>
            <guid isPermaLink="true">https://kannada.asianetnews.com/other-sports/ms-dhoni-announces-to-merger-with-padal-park-india-to-grow-sports/articleshow-gtvmdhz</guid>
            <pubDate>Thu, 08 Jan 2026 19:31:17 +0530</pubDate>
            <description><![CDATA[&lt;p&gt;ಕೊನೆಯ ಐಪಿಎಲ್ ಎಂದು ಚಿಂತೆ ಬೇಡ, ಪಾಡಲ್ ಸ್ಪೋರ್ಟ್ಸ್ ಮೂಲಕ ಧೂಳೆಬ್ಬಿಸಲಿದ್ದಾರೆ ಧೋನಿ, ಭಾರತದ ಕ್ರೀಡೆಯಲ್ಲಿನ ಮಹತ್ತರ ಬದಲಾವಣೆಗೆ ಕಾರಣವಾಗಲಿರುವ ಟೀಂ ಇಂಡಿಯಾ ಮಾಜಿ ನಾಯಕನ ಪಾಡೆಲ್ ಸ್ಪೋರ್ಟ್ಸ್ ಹೂಡಿಕೆ ಏನು?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01keey5g9y5z3wv2ezx559bxww,imgname-ms-dhoni-padal-sports-1767880442174.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಜ.08) : &lt;/strong&gt;ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್&zwnj;ಗೆ ನಿವೃತ್ತಿ ಹೇಳಿದ ಬಳಿಕ ಐಪಿಎಲ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇನ್ನು ಬಿಡುವಿನ ವೇಳೆ ಧೋನಿ ಕೃಷಿ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಗಂತ ಧೋನಿ ಕ್ರೀಡೆಯಿಂದ ದೂರ ಉಳಿದಿಲ್ಲ. ಎಂಎಸ್ ಧೋನಿ ಹಲವು ಕ್ರೀಡೆಗಳಿಗೆ ಪೋತ್ಸಾಹ ನೀಡುತ್ತಾ, ಹೂಡಿಕೆ ಮೂಲಕ ದೇಶಾದ್ಯಂತ ಕ್ರೀಡೆಗೆ ಪ್ರಚಾರ ನೀಡುತ್ತಿದ್ದಾರೆ. ಇದೀಗ ಪಾಡೆಲ್ ಕ್ಷೇತ್ರದಲ್ಲಿ ಧೋನಿ ತಮ್ಮ ಹೂಡಿಕೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ. &lsquo;7ಪ್ಯಾಡೆಲ್ ಎಂಎಸ್ ಧೋನಿ&rsquo; ಎಂಬ ದೇಶದ ಪ್ರಮುಖ ಪಾಡೆಲ್ ಇಕೋಸಿಸ್ಟಮ್ ಆಗಿರುವ ಪಾಡೆಲ್ ಪಾರ್ಕ್ ಇಂಡಿಯಾದೊಂದಿಗೆ ವಿಲೀನಗೊಳಿಸಿದ್ದಾರೆ.&lt;/p&gt;&lt;h2&gt;ಜಿಂದಾಲ್ JSW ಸ್ಪೋರ್ಟ್ಸ್&zwnj; ಜೊತೆ ಧೋನಿ ಪಾಲುದಾರಿಕೆ&lt;/h2&gt;&lt;p&gt;ಆಗಸ್ಟ್ 2024ರಿಂದ JSW ಸ್ಪೋರ್ಟ್ಸ್&zwnj;ನ ಸ್ಥಾಪಕ ಹಾಗೂ ದೇಶದ ಬಹು ಕ್ರೀಡಾ ವಿಭಾಗಗಳ ಅತಿದೊಡ್ಡ ಕಾರ್ಪೊರೇಟ್ ಪ್ರವರ್ತಕರಲ್ಲಿ ಒಬ್ಬರಾದ ಪಾರ್ಥ್ ಜಿಂದಾಲ್, ಪಾಡೆಲ್ ಪಾರ್ಕ್ ಇಂಡಿಯಾದ ಆರಂಭಿಕ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ವಿಲೀನಗೊಂಡ ಘಟಕದಲ್ಲಿ ಎಂಎಸ್ ಧೋನಿ ಪಾಲುದಾರರಾಗಿ ಸೇರ್ಪಡೆಯಾಗಿರುವುದು, ದೇಶದಲ್ಲಿ ಪಾಡೆಲ್&zwnj;ನ ಮುಂದಿನ ಹಂತದ ವಿಸ್ತರಣೆಗೆ ಇನ್ನಷ್ಟು ವಿಶ್ವಾಸವನ್ನು ನೀಡಲಿದೆ.&lt;/p&gt;&lt;p&gt;ಭಾರತದಲ್ಲಿ 1 ಕೋಟಿಗೂ ಹೆಚ್ಚು ಪಾಡೆಲ್ ಆಟಗಾರರಿದ್ದಾರೆ. ಟೈಯರ್-1 ನಗರಗಳು ಪಾಡೆಲ್ ಎಷ್ಟು ವೇಗವಾಗಿ ಬೆಳೆಯಬಹುದು ಎಂಬುದನ್ನು ಈಗಾಗಲೇ ತೋರಿಸಿವೆ ಎಂದು ಎಂಸ್ ಧೋನಿ ಹೇಳಿದ್ದಾರೆ.. ಮುಂದಿನ ಹಂತದಲ್ಲಿ ಈ ಕ್ರೀಡೆಯನ್ನು ಹೊಸ ಮಾರುಕಟ್ಟೆಗಳತ್ತ ಕೊಂಡೊಯ್ಯುವುದು ಹಾಗೂ ಮೆಟ್ರೋ ನಗರಗಳ ಹೊರಗೂ ವಿಸ್ತರಿಸುವುದು ನಮ್ಮ ಗುರಿಯಾಗಿದೆ. ಪಾಡೆಲ್ ಒಂದು ಸಾಮಾಜಿಕ ಕ್ರೀಡೆಯಾಗಿದ್ದು ಡಬಲ್ಸ್&zwnj;ನಲ್ಲಿ ಆಡಲಾಗುತ್ತದೆ. ಪಾಡೆಲ್ ಕೋರ್ಟ್&zwnj;ಗಳು ಲಭ್ಯವಾದಾಗ ಜನರು ಸಹಜವಾಗಿಯೇ ಈ ಕ್ರೀಡೆಯತ್ತ ಆಕರ್ಷಿತರಾಗುತ್ತಾರೆ ಎಂದು ಧೋನಿ ಹೇಳಿದ್ದಾರೆ.&lt;/p&gt;&lt;p&gt;ಈ ಪಾಲುದಾರಿಕೆ ಭಾರತದಲ್ಲಿ ಪಾಡೆಲ್ ಹೇಗೆ ಬೆಳೆಯಬೇಕು ಎಂಬುದಕ್ಕೆ ಪ್ರತಿಬಿಂಬವಾಗಿದೆ. &lsquo;7ಪ್ಯಾಡೆಲ್ ಎಂಎಸ್ ಧೋನಿ&rsquo; ಮತ್ತು ಪಾಡೆಲ್ ಪಾರ್ಕ್ ಇಂಡಿಯಾ ಒಟ್ಟಾಗಿ ಈ ಕ್ರೀಡೆಯನ್ನು ಇನ್ನಷ್ಟು ಬಲಪಡಿಸಲಿವೆ. ಎಂಎಸ್ ಧೋನಿ ಅವರ ನಾಯಕತ್ವ ಮತ್ತು ಮೌಲ್ಯಗಳು ನಮ್ಮ ಗುರಿಗಳಿಗೆ ಹೆಚ್ಚಿನ ಬಲ ನೀಡಲಿವೆ ಎಂದು ಪಾಡೆಲ್ ಪಾರ್ಕ್ ಇಂಡಿಯಾದ ಸಹ-ಸ್ಥಾಪಕ ನಿಖಿಲ್ ಸಚ್&zwnj;ದೇವ್ ಹೇಳಿದ್ದಾರೆ.&lt;/p&gt;&lt;p&gt;ನಿಖಿಲ್ ಸಚ್&zwnj;ದೇವ್, ಜಿಗರ್ ದೋಷಿ, ಪ್ರತೀಕ್ ದೋಷಿ ಮತ್ತು ರೋನಕ್ ದಫ್ತರಿ ಸ್ಥಾಪಿಸಿದ ಪಾಡೆಲ್ ಪಾರ್ಕ್ ಇಂಡಿಯಾ, ಭಾರತದ ಅತ್ಯಂತ ಸಮಗ್ರ ಪಾಡೆಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ ಸಂಸ್ಥೆ 40ಕ್ಕೂ ಹೆಚ್ಚು ಸ್ವಂತ ಹಾಗೂ ನಿರ್ವಹಿತ ಕೋರ್ಟ್&zwnj;ಗಳನ್ನು ನಡೆಸುತ್ತಿದ್ದು, ದೇಶಾದ್ಯಂತ ಒಟ್ಟು 200ಕ್ಕೂ ಹೆಚ್ಚು ಕೋರ್ಟ್&zwnj;ಗಳ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಮುಂದಿನ ಒಂದು ವರ್ಷದೊಳಗೆ 400&ndash;500 ಕೋರ್ಟ್&zwnj;ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಭಾರತಾದ್ಯಂತ ವಿಶ್ವಮಟ್ಟದ ಪಾಡೆಲ್ ಸೌಲಭ್ಯಗಳ ಪ್ರವೇಶವನ್ನು ಗಣನೀಯವಾಗಿ ಹೆಚ್ಚಿಸುವ ಉದ್ದೇಶ ಹೊಂದಿದೆ. ಅಂತರರಾಷ್ಟ್ರೀಯ ಪಾಡೆಲ್ ಫೆಡರೇಶನ್ (FIP) ಡಿಸೆಂಬರ್&zwnj;ನಲ್ಲಿ ಬಿಡುಗಡೆ ಮಾಡಿದ World Padel Report 2025 ಪ್ರಕಾರ, ಪಾಡೆಲ್ ಈಗ ವಿಶ್ವದಾದ್ಯಂತ 150 ದೇಶಗಳಲ್ಲಿ 77,300ಕ್ಕೂ ಹೆಚ್ಚು ಕೋರ್ಟ್&zwnj;ಗಳನ್ನು ಹೊಂದಿದ್ದು, ಈ ಕ್ರೀಡೆಯ ಸ್ಥಿರ ಜಾಗತಿಕ ಬೆಳವಣಿಗೆಯನ್ನು ಸ್ಪಷ್ಟಪಡಿಸುತ್ತದೆ.&lt;/p&gt;&lt;h2&gt;7ಪ್ಯಾಡೆಲ್ ಎಂಎಸ್ ಧೋನಿ&lt;/h2&gt;&lt;p&gt;2023ರಲ್ಲಿ ಸುಮಾರು 70 ಕೋರ್ಟ್&zwnj;ಗಳಿಂದ ಆರಂಭವಾದ ಪಾಡೆಲ್, 2024ರ ಮಧ್ಯಭಾಗಕ್ಕೆ ಸುಮಾರು 100 ಕೋರ್ಟ್&zwnj;ಗಳಿಗೆ ಏರಿಕೆಯಾಗಿ, ಇದೀಗ ದೇಶಾದ್ಯಂತ 300ಕ್ಕೂ ಹೆಚ್ಚು ಕೋರ್ಟ್&zwnj;ಗಳಿಗೆ ತಲುಪಿದೆ. ಇದು ಮೆಟ್ರೋ ನಗರಗಳು ಹಾಗೂ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಈ ಕ್ರೀಡೆ ಎಷ್ಟು ವೇಗವಾಗಿ ಬೇರು ಬಿಟ್ಟಿದೆ ಎಂಬುದನ್ನು ತೋರಿಸುತ್ತದೆ. ನವೆಂಬರ್ 2025ರಲ್ಲಿ ಅಂತರರಾಷ್ಟ್ರೀಯ ಪಾಡೆಲ್ ಫೆಡರೇಶನ್ (FIP) ಹಾಗೂ ಪಾಡೆಲ್ ಏಷ್ಯಾ, ಕ್ರೀಡೆಯ ಜಾಗತಿಕ ಅಭಿವೃದ್ಧಿಯಲ್ಲಿ ಐತಿಹಾಸಿಕ ಹೆಜ್ಜೆಯನ್ನು ಘೋಷಿಸಿವೆ. ಪಾಡೆಲ್&zwnj;ಗೆ ಏಷ್ಯನ್ ಒಲಿಂಪಿಕ್ ಕೌನ್ಸಿಲ್ (OCA) ಅಧಿಕೃತ ಮಾನ್ಯತೆ ನೀಡಲಾಗಿದ್ದು, ಮುಂದಿನ ಏಷ್ಯನ್ ಗೇಮ್ಸ್ ಆವೃತ್ತಿಗಳಲ್ಲಿ ಅಧಿಕೃತ ಕ್ರೀಡೆಯಾಗಿ ಸೇರಿಸಲಾಗುತ್ತದೆ. &lsquo;7ಪ್ಯಾಡೆಲ್ ಎಂಎಸ್ ಧೋನಿ&rsquo; ಮತ್ತು ಪಾಡೆಲ್ ಪಾರ್ಕ್ ಇಂಡಿಯಾ ಒಟ್ಟಾಗಿ ದೇಶಾದ್ಯಂತ ಪಾಡೆಲ್&zwnj;ನ ಬೆಳವಣಿಗೆಯನ್ನು ವೇಗಗೊಳಿಸಲು ಸಜ್ಜಾಗಿದ್ದು, ಭಾರತಾದ್ಯಂತ ಪ್ರವೇಶಿಸಬಹುದಾದ, ಸಮುದಾಯ ನೇತೃತ್ವದ ಹಾಗೂ ವೃತ್ತಿಪರವಾಗಿ ನಿರ್ವಹಿಸಲ್ಪಡುವ ಕ್ರೀಡೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/other-sports/ms-dhoni-announces-to-merger-with-padal-park-india-to-grow-sports/articleshow-gtvmdhz"/>
        </item>
        <item>
            <title><![CDATA[ಭಾರತೀಯ ವಾಲಿಬಾಲ್‌ನ ಮುಖ್ಯ ಪೋಷಕರಾಗಿ ಡಾ. ಅಚ್ಯುತ ಸಮಂತ ಆಯ್ಕೆ!]]></title>
            <link>https://kannada.asianetnews.com/sports/dr-achyuta-samanta-elected-chief-patron-of-volleyball-federation-of-india-kvn/articleshow-kgn7ols</link>
            <guid isPermaLink="true">https://kannada.asianetnews.com/sports/dr-achyuta-samanta-elected-chief-patron-of-volleyball-federation-of-india-kvn/articleshow-kgn7ols</guid>
            <pubDate>Tue, 06 Jan 2026 09:33:57 +0530</pubDate>
            <description><![CDATA[&lt;p&gt;ಕೆಐಐಟಿ ಮತ್ತು ಕೆಐಎಸ್&zwnj;ಎಸ್&zwnj;ನ ಸಂಸ್ಥಾಪಕ ಡಾ. ಅಚ್ಯುತ ಸಮಂತ ಅವರು ಭಾರತೀಯ ವಾಲಿಬಾಲ್ ಫೆಡರೇಶನ್&zwnj;ನ (ವಿಎಫ್&zwnj;ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ವಾರಣಸಿಯಲ್ಲಿ ನಡೆದ ವಿಎಫ್&zwnj;ಐನ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7nwtjrjjvdh7jcf79kw2czh,imgname-prime-voell-1760597723922.jpg" type="image/jpeg" height="390" width="690"/>
            <content:encoded><![CDATA[&lt;p&gt;ಭುವನೇಶ್ವರ: ಕೆಐಐಟಿ ಮತ್ತು ಕೆಐಎಸ್&zwnj;ಎಸ್&zwnj;ನ ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರು, ಭಾರತೀಯ ವಾಲಿಬಾಲ್ ಫೆಡರೇಶನ್&zwnj;ನ (ವಿಎಫ್&zwnj;ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.&lt;/p&gt;&lt;p&gt;ವಾರಣಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್&zwnj;ಶಿಪ್ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಅಚ್ಯುತ ಸಮಂತ ಅವರ ಆಯ್ಕೆ ನಡೆದಿದೆ. ವಾರಣಸಿಯಲ್ಲಿ ನಡೆದ ವಿಎಫ್&zwnj;ಐನ ವಾರ್ಷಿಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದ ಎಲ್ಲಾ ರಾಜ್ಯ ವಾಲಿಬಾಲ್ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.&lt;/p&gt;&lt;p&gt;ಡಾ. ಸಮಂತ ಅವರು ಸದ್ಯ ಒಡಿಶಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ವಾರಾಣಸಿಯಲ್ಲಿ ನಡೆದ ಸಭೆಗೆ ಸಮಂತ ಅವರು ಹಾಜರಾಗಿರಲಿಲ್ಲ. ಸಮಂತ ಅವರನ್ನು ವಿಎಫ್&zwnj;ಐ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ದೂರವಾಣಿ ಮೂಲಕ ಸಂಪರ್ಕಿಸಿ ಒಪ್ಪಿಗೆ ಪಡೆದರು.&lt;/p&gt;&lt;p&gt;ಕ್ರೀಡಾ ಕ್ಷೇತ್ರಕ್ಕೆ ವಿಶೇಷವಾಗಿ ವಾಲಿಬಾಲ್&zwnj;ಗೆ ಸಮಂತ ಅವರು ಬಹಳ ಕಾಲದಿಂದ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇದನ್ನು ಪರಿಗಣಿಸಿ ಫೆಡರೇಶನ್ ಅವರ ಹೆಸರನ್ನು ಆಯ್ಕೆ ಮಾಡಿತು. 4 ವರ್ಷಗಳ ಅವಧಿಗೆ ಮುಖ್ಯ ಪೋಷಕ ಹುದ್ದೆಯನ್ನು ಅಲಂಕರಿಸಲಿದ್ದಾರೆ. ತಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದಕ್ಕೆ ಡಾ.ಸಮಂತ ಅವರು ವಿಎಫ್&zwnj;ಐಗೆ ಧನ್ಯವಾದ ಹೇಳಿದ್ದಾರೆ.&lt;/p&gt;&lt;p&gt;ಕೆಐಐಟಿಯಲ್ಲಿ ಯುವ ಕೂಟ: ಕೆಐಐಟಿಯಲ್ಲಿ ರಾಷ್ಟ್ರೀಯ ಯುವ ವಾಲಿಬಾಲ್ ಚಾಂಪಿಯನ್&zwnj;ಶಿಪ್ ಅನ್ನು ಆಯೋಜಿಸಲು ಜನರಲ್ ಕೌನ್ಸಿಲ್ ಇದೇ ವೇಳೆ ಅನುಮೋದನೆ ನೀಡಿತು.&lt;/p&gt;&lt;h2&gt;&lt;strong&gt;ಡಾ. ಸಮಂತಾಗೆ ಪ್ರತಿಷ್ಠಿತ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿ&lt;/strong&gt;&lt;/h2&gt;&lt;p&gt;ಡಾ. ಸಮಂತಾ ಅವರಿಗೆ ಪ್ರತಿಷ್ಠಿತ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಮತ್ತು ಅವರನ್ನು ಎಫ್&zwnj;ಐವಿಬಿ ವಾಲಿಬಾಲ್ ಫೌಂಡೇಶನ್ ಕೌನ್ಸಿಲ್&zwnj;ನ ಸದಸ್ಯರನ್ನಾಗಿ ನೇಮಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ವಾಲಿಬಾಲ್ ಫೆಡರೇಶನ್ (ಎಫ್&zwnj;ಐವಿಬಿ) ಗೆ ವಿಎಫ್&zwnj;ಐ ಇದೇ ವೇಳೆ ಕೃತಜ್ಞತೆ ತಿಳಿಸಿತು.&lt;/p&gt;&lt;h3&gt;&lt;strong&gt;ಬದ್ಧತೆಯಿಂದ ಕೆಲಸ ಮಾಡುವೆ&lt;/strong&gt;&lt;/h3&gt;&lt;p&gt;ವಾಲಿಬಾಲ್&zwnj; ನನ್ನ ಹೃದಯಕ್ಕೆ ಹತ್ತಿರವಾಗಿದೆ. ನೀವೆಲ್ಲ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ಚಿರಋಣಿ. ತಳಮಟ್ಟದಿಂದ ವಾಲಿಬಾಲ್&zwnj; ಅನ್ನು ಹೆಚ್ಚು ಪ್ರಚುರಪಡಿಸಲು ನಾನು ಸದಾ ಪ್ರಯತ್ನಿಸಿದ್ದೇನೆ. ವಿಎಫ್&zwnj;ಐ ನೀಡುತ್ತಾ ಬಂದಿರುವ ಪ್ರೋತ್ಸಾಹವನ್ನು ಮರೆಯಲಾಗದು. ಒಡಿಶಾ ಮತ್ತು ಭಾರತದಾದ್ಯಂತ ವಾಲಿಬಾಲ್&zwnj;ನ ಪ್ರಚಾರ ಮತ್ತು ಬೆಳವಣಿಗೆಗಾಗಿ ಇನ್ನಷ್ಟು ಬದ್ಧತೆಯಿಂದ ಕೆಲಸ ಮಾಡುತ್ತೇನೆ.&lt;/p&gt;&lt;p&gt;ಡಾ. ಅಚ್ಯುತ ಸಮಂತ, ವಿಎಫ್&zwnj;ಐ ಮುಖ್ಯ ಪೋಷಕ&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/dr-achyuta-samanta-elected-chief-patron-of-volleyball-federation-of-india-kvn/articleshow-kgn7ols"/>
        </item>
        <item>
            <title><![CDATA[ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ಈ ಬಾರಿ ಜೋಕೋ vs ಆಲ್ಕರಜ್! ನೋವಾಕ್‌ ಕನಸು ಕೊನೆಗೂ ಈಡೇರುತ್ತಾ?]]></title>
            <link>https://kannada.asianetnews.com/sports/australian-open-2026-final-novak-djokovic-vs-alcaraz-in-epic-grand-slam-clash/articleshow-m5skclz</link>
            <guid isPermaLink="true">https://kannada.asianetnews.com/sports/australian-open-2026-final-novak-djokovic-vs-alcaraz-in-epic-grand-slam-clash/articleshow-m5skclz</guid>
            <pubDate>Sat, 31 Jan 2026 09:14:34 +0530</pubDate>
            <description><![CDATA[&lt;p&gt;ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್&zwnj;ಸ್ಲಾಂ ಫೈನಲ್&zwnj;ನಲ್ಲಿ ನೋವಾಕ್&zwnj; ಜೋಕೋವಿಚ್&zwnj; ಮತ್ತು ಕಾರ್ಲೊಸ್ ಆಲ್ಕರಜ್&zwnj; ಮುಖಾಮುಖಿಯಾಗಲಿದ್ದಾರೆ. ಸೆಮಿಫೈನಲ್&zwnj;ನಲ್ಲಿ ಯಾನಿಕ್ ಸಿನ್ನರ್ ವಿರುದ್ಧ ಜೋಕೋ ಮತ್ತು ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಆಲ್ಕರಜ್&zwnj; ರೋಚಕ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4b5bp1zgndz60ry276s7d67,imgname-gettyimages-2222258157-1757016348735.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಲ್ಬರ್ನ್&zwnj;: ಈ ಬಾರಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್&zwnj;ಸ್ಲಾಂ ಫೈನಲ್&zwnj; ದಿಗ್ಗಜ ಟೆನಿಸಿಗ ನೋವಾಕ್&zwnj; ಜೋಕೋವಿಚ್&zwnj; ಹಾಗೂ ಯುವ ಸೂಪರ್&zwnj;ಸ್ಟಾರ್&zwnj; ಕಾರ್ಲೊಸ್ ಆಲ್ಕರಜ್&zwnj; ನಡುವಿನ ರೋಚಕ ಪೈಪೋಟಿಗೆ ವೇದಿಕೆ ಒದಗಿಸಿಕೊಡಲಿದೆ. ಶುಕ್ರವಾರ ನಡೆದ 2 ಅತಿರೋಚಕ ಸೆಮಿಫೈನಲ್&zwnj; ಪಂದ್ಯಗಳ ಮೂಲಕ ಟೆನಿಸ್&zwnj; ಪ್ರೇಮಿಗಳ ಮನಸೂರೆಗೊಳಿಸಿದ ಇವರಿಬ್ಬರು, ಭಾನುವಾರ ಪ್ರಶಸ್ತಿಗಾಗಿ ಪರಸ್ಪರ ಕಾದಾಡಲಿದ್ದಾರೆ.&lt;/p&gt;&lt;p&gt;ಮೊದಲ ಸೆಮಿಫೈನಲ್&zwnj;ನಲ್ಲಿ ವಿಶ್ವ ನಂ.1 ಆಲ್ಕರಜ್&zwnj; ಅವರು ವಿಶ್ವ ನಂ.3 ಆಟಗಾರ, ಜರ್ಮನಿಯ ಅಲೆಕ್ಸಾಂಡರ್&zwnj; ಜ್ವೆರೆವ್&zwnj; ವಿರುದ್ಧ 6-4, 7-6(7/5), 6-7(3/7), 6-7(7/4), 7-5 ಸೆಟ್&zwnj;ಗಳಲ್ಲಿ ರೋಚಕ ಜಯಭೇರಿ ಬಾರಿಸಿದರು. ಈಗಾಗಲೇ 6 ಗ್ರ್ಯಾನ್&zwnj;ಸ್ಲಾಂ ಟ್ರೋಫಿ ಗೆದ್ದಿರುವ 22 ವರ್ಷದ ಆಲ್ಕರಜ್&zwnj;ಗೆ ಇದು ಚೊಚ್ಚಲ ಆಸ್ಟ್ರೇಲಿಯನ್&zwnj; ಓಪನ್&zwnj; ಫೈನಲ್&zwnj;.&lt;/p&gt;&lt;h2&gt;&lt;strong&gt;ಯಾನಿಕ್ ಸಿನ್ನರ್&zwnj; ಔಟ್&zwnj;:&lt;/strong&gt;&lt;/h2&gt;&lt;p&gt;ಮತ್ತೊಂದು ಸೆಮೀಸ್&zwnj;ನಲ್ಲಿ ಕಳೆದೆರಡು ಬಾರಿಯ ಚಾಂಪಿಯನ್&zwnj;, ಇಟಲಿಯ ಯಾನಿಕ್&zwnj; ಸಿನ್ನರ್&zwnj; ವಿರುದ್ಧ ಸರ್ಬಿಯಾದ 38 ವರ್ಷದ ಜೋಕೋವಿಚ್&zwnj; 3-6, 6-3, 4-6, 6-4, 6-4 ಸೆಟ್&zwnj;ಗಳಲ್ಲಿ ಗೆಲುವು ಸಾಧಿಸಿದರು. 10 ಬಾರಿ ಆಸ್ಟ್ರೇಲಿಯನ್&zwnj; ಓಪನ್&zwnj; ಗೆದ್ದಿರುವ ಜೋಕೋ 11ನೇ ಬಾರಿ ಫೈನಲ್&zwnj;ಗೇರಿದ್ದಾರೆ. ಹ್ಯಾಟ್ರಿಕ್&zwnj; ಕಪ್&zwnj; ನಿರೀಕ್ಷೆಯಲ್ಲಿದ್ದ ಸಿನ್ನರ್&zwnj; ನಿರಾಸೆ ಅನುಭವಿಸಿದರು.&lt;/p&gt;&lt;p&gt;38 year-old Novak Djokovic has become the oldest ever man to reach an Australian Open final (his 11th). He fights back to beat Jannik Sinner in 5 extraordinary sets at the Australian Open. Absolutely staggering performance and achievement.pic.twitter.com/Hg8HO0xseh&lt;/p&gt;&lt;p&gt;&mdash; James Melville  (@JamesMelville) January 30, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ನನಸಾಗುತ್ತಾ ಜೋಕೋ 25 ಗ್ರ್ಯಾನ್&zwnj;ಸ್ಲಾಂ ಕನಸು?&lt;/strong&gt;&lt;/h3&gt;&lt;p&gt;ಜೋಕೋವಿಚ್&zwnj; ಈವರೆಗೂ 24 ಗ್ರ್ಯಾನ್&zwnj;ಸ್ಲಾಂ ಪ್ರಶಸ್ತಿ ಗೆದ್ದಿದ್ದಾರೆ. 10 ಆಸ್ಟ್ರೇಲಿಯನ್&zwnj;, 3 ಫ್ರೆಂಚ್&zwnj;, 7 ವಿಂಬಲ್ಡನ್&zwnj;, 4 ಯುಎಸ್&zwnj; ಓಪನ್&zwnj; ಗೆದ್ದಿದ್ದಾರೆ. ಆದರೆ 2025ರಲ್ಲಿ ನಾಲ್ಕೂ ಗ್ರ್ಯಾನ್&zwnj;ಸ್ಲಾಂನ ಸೆಮೀಸ್&zwnj;ನಲ್ಲಿ ಸೋಲುವ ಮೂಲಕ ಪ್ರಶಸ್ತಿ ತಪ್ಪಿಸಿಕೊಂಡಿದ್ದರು. ಈ ಬಾರಿ ಫೈನಲ್&zwnj;ಗೇರಿದ್ದು, ತಮ್ಮ 25ನೇ ಗ್ರ್ಯಾನ್&zwnj;ಸ್ಲಾಂ ಕನಸು ನನಸು ಮಾಡುವ ವಿಶ್ವಾಸದಲ್ಲಿದ್ದಾರೆ.&lt;/p&gt;&lt;h3&gt;&lt;strong&gt;5:27 ಗಂಟೆ ಕಾದಾಡಿದ ಆಲ್ಕರಜ್&zwnj;-ಅಲೆಕ್ಸಾಂಡರ್&zwnj;&lt;/strong&gt;&lt;/h3&gt;&lt;p&gt;ಆಲ್ಕರಜ್&zwnj; ಹಾಗೂ ಅಲೆಕ್ಸಾಂಡರ್&zwnj; ಜ್ವೆರೆವ್&zwnj; ನಡುವಿನ ಪಂದ್ಯ ಬರೋಬ್ಬರಿ 5 ಗಂಟೆ 27 ನಿಮಿಷಗಳ ಕಾಲ ನಡೆಯಿತು. ಇದು ಆಸ್ಟ್ರೇಲಿಯನ್&zwnj; ಓಪನ್&zwnj;ನಲ್ಲೇ ದೀರ್ಘ ಅವಧಿಯ ಸೆಮಿಫೈನಲ್&zwnj;. ಪ್ರತಿ ಗೇಮ್&zwnj;ನಲ್ಲೂ ಇಬ್ಬರಿಂದ ತೀವ್ರ ಪೈಪೋಟಿ ಕಂಡುಬಂದರೂ, ಆಲ್ಕರಜ್&zwnj;ರನ್ನು ಸೋಲಿಸಲು ಜ್ವೆರೆವ್&zwnj;ಗೆ ಸಾಧ್ಯವಾಗಲಿಲ್ಲ. ಇನ್ನು, ಜೋಕೋ-ಸಿನ್ನರ್&zwnj; ಪಂದ್ಯ 4 ಗಂಟೆ 9 ನಿಮಿಷಗಳ ಕಾಲ ನಡೆಯಿತು.&lt;/p&gt;&lt;h3&gt;&lt;strong&gt;ಇಂದು ಮಹಿಳಾ ಸಿಂಗಲ್ಸ್&zwnj; ಫೈನಲ್&zwnj;&lt;/strong&gt;&lt;/h3&gt;&lt;p&gt;ಟೂರ್ನಿಯ ಮಹಿಳಾ ಸಿಂಗಲ್ಸ್&zwnj; ಫೈನಲ್&zwnj; ಶನಿವಾರ ನಡೆಯಲಿದೆ. ಬೆಲಾರಸ್&zwnj;ನ ಸಬಲೆಂಕಾ 3ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಕಜಕಸ್ತಾನದ ಎಲೆನಾ ರಬೈಕೆನಾ ಚೊಚ್ಚಲ ಬಾರಿ ಆಸ್ಟ್ರೇಲಿಯನ್&zwnj; ಓಪನ್ ಚಾಂಪಿಯನ್&zwnj; ಎನಿಸಿಕೊಳ್ಳುವ ಕಾತರದಲ್ಲಿದ್ದಾರೆ.&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/australian-open-2026-final-novak-djokovic-vs-alcaraz-in-epic-grand-slam-clash/articleshow-m5skclz"/>
        </item>
        <item>
            <title><![CDATA[ಆಸೀಸ್‌ನಲ್ಲಿ ಪಾತ್ರೆ ತೊಳೆದ ಪಾಕ್‌ ಪ್ಲೇಯರ್ಸ್‌: ಹಾಕಿ, ಕ್ರಿಕೆಟ್‌ ಫೆಡರೇಷನ್‌ಗೂ ಆಸಿಮ್‌ ಮುನೀರ್‌ ಉಸ್ತುವಾರಿ?]]></title>
            <link>https://kannada.asianetnews.com/gallery/other-sports/pakistan-hockey-federation-crisis-players-wash-dishes-captain-banned-san-m8xclg9</link>
            <guid isPermaLink="true">https://kannada.asianetnews.com/gallery/other-sports/pakistan-hockey-federation-crisis-players-wash-dishes-captain-banned-san-m8xclg9</guid>
            <pubDate>Fri, 20 Feb 2026 16:19:29 +0530</pubDate>
            <description><![CDATA[&lt;p&gt;Pakistan Hockey Crisis: PHF President Resigns, Captain Banned ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವಮಾನಕ್ಕೊಳಗಾದ ಪಾಕಿಸ್ತಾನ ಹಾಕಿ ತಂಡದ ವಿವಾದ ತಾರಕಕ್ಕೇರಿದೆ. ಫೆಡರೇಶನ್ ಅಧ್ಯಕ್ಷರು ರಾಜೀನಾಮೆ ನೀಡಿದ್ದು, ತನಿಖೆ ನಡೆಸುವಂತೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಮನವಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khwe7fw391myr0dnb304d4tk,imgname-pakistan-hockey-team-australia-tour-humiliation-shakeel-abbas-butt-phf-hotel-booking-controversy-fih-pro-league-4-1771554717571.png" type="image/jpeg" height="390" width="690"/>
            <content:encoded><![CDATA[&lt;p&gt;Pakistan Hockey Crisis: PHF President Resigns, Captain Banned ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವಮಾನಕ್ಕೊಳಗಾದ ಪಾಕಿಸ್ತಾನ ಹಾಕಿ ತಂಡದ ವಿವಾದ ತಾರಕಕ್ಕೇರಿದೆ. ಫೆಡರೇಶನ್ ಅಧ್ಯಕ್ಷರು ರಾಜೀನಾಮೆ ನೀಡಿದ್ದು, ತನಿಖೆ ನಡೆಸುವಂತೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಸೇನಾ ಮುಖ್ಯಸ್ಥರು ನಾಗರಿಕ ಜೀವನದಿಂದ ದೂರವಿರಬೇಕು ಎಂದು ಪ್ರತಿಪಾದಿಸುವ ಪಾಕಿಸ್ತಾನವು, ಈಗ ತನ್ನ ಉನ್ನತ ಜನರಲ್ ಅನ್ನು ಕೇವಲ ಮಿಲಿಟರಿ ಕಮಾಂಡರ್&zwnj;ಗಿಂತಲೂ ಭಿನ್ನವಾದ ವ್ಯಕ್ತಿತ್ವವನ್ನಾಗಿ ವೇಗವಾಗಿ ರೂಪಿಸುತ್ತಿದೆ. ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿರುವ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಈಗ ಅನಧಿಕೃತವಾಗಿ ಪಾಕಿಸ್ತಾನದ ಅತ್ಯಂತ ಶಕ್ತಿಶಾಲಿ ಕ್ರೀಡಾ ಆಡಳಿತಗಾರನ ಪಟ್ಟ ಅಲಂಕರಿಸಿದಂತೆ ಕಾಣುತ್ತಿದ್ದಾರೆ. ಕ್ರಿಕೆಟ್ ಮಂಡಳಿಯ ವಿವಾದಗಳಿಂದ ಹಿಡಿದು ಹಾಕಿ ತಂಡದ ಬಿಕ್ಕಟ್ಟುಗಳವರೆಗೆ, ಪಾಕಿಸ್ತಾನದ ಕ್ರೀಡಾ ಲೋಕದ ಗೊಂದಲಗಳ ಮೇಲೆ ಮುನೀರ್ ಅವರ ನೆರಳು ದೊಡ್ಡದಾಗಿ ಆವರಿಸಿದೆ.&lt;/p&gt;&lt;img&gt;&lt;p&gt;ಪಾಕಿಸ್ತಾನ ಹಾಕಿ ತಂಡದ ಆಟಗಾರರು ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದ ವೇಳೆ ಬೀದಿ ಪಾಲಾದ ಘಟನೆಗೆ ಸಂಬಂಧಿಸಿದಂತೆ ಭಾರಿ ವಿವಾದ ಉಂಟಾಗಿದ್ದು, ಗುರುವಾರ ಪಾಕಿಸ್ತಾನ ಹಾಕಿ ಫೆಡರೇಶನ್ (PHF) ಅಧ್ಯಕ್ಷ ತಾರಿಕ್ ಬುಗ್ಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ರಾಜೀನಾಮೆ ನೀಡುವ ಮೊದಲೇ ಅವರು ಫೆಡರೇಶನ್ ಅನ್ನು ಟೀಕಿಸಿದ ಕಾರಣಕ್ಕಾಗಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್ ಅವರ ಮೇಲೆ ಎರಡು ವರ್ಷಗಳ ನಿಷೇಧ ಹೇರಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಸಲ್ಲಿಸಿರುವುದನ್ನು ಬುಗ್ಗಿ ಖಚಿತಪಡಿಸಿದ್ದಾರೆ. &quot;ನಾನು ಪ್ರಧಾನ ಮಂತ್ರಿಯವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ. ಆದರೆ, ಎಫ್&zwnj;ಐಎಚ್ ಪ್ರೊ ಲೀಗ್ ಹಾಕಿ ವೇಳೆ ಆಸ್ಟ್ರೇಲಿಯಾದಲ್ಲಿ ನಡೆದ ಘಟನೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ನಾನು ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಲ್ಲಿ ವಿನಂತಿಸುತ್ತೇನೆ&quot; ಎಂದು ಅವರು ತಿಳಿಸಿದ್ದಾರೆ. ಇದರಲ್ಲಿ ಆಸಿಮ್&zwnj; ಮುನೀರ್&zwnj;ಗೆ ಇವರು ಪತ್ರ ಬರೆದಿರುವುದೇ ಅಚ್ಚರಿಯಾಗಿ ಕಂಡಿದೆ.&lt;/p&gt;&lt;img&gt;&lt;p&gt;ಇದೇ ವೇಳೆ ಬುಧವಾರ ಫೆಡರೇಶನ್ ವಿರುದ್ಧ ಕಿಡಿಕಾರಿದ್ದ ನಾಯಕ ಅಮ್ಮದ್ ಬಟ್, ಪ್ರವಾಸದ ವೇಳೆ ಆಟಗಾರರು ಅನುಭವಿಸಿದ ಅವಮಾನದ ಸಂಗತಿಗಳನ್ನು ಬಯಲು ಮಾಡಿದ್ದಾರೆ. ಮೈದಾನಕ್ಕಿಳಿದು ಪಂದ್ಯ ಆಡುವ ಮೊದಲು ಆಟಗಾರರು ಕಿಚನ್&zwnj; ಕ್ಲೀನ್&zwnj; ಮಾಡಬೇಕಿತ್ತು ಮತ್ತು ಪಾತ್ರೆಗಳನ್ನು ತೊಳೆಯಬೇಕಿತ್ತು ಎಂಬ ಆಘಾತಕಾರಿ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಆಸ್ಟ್ರೇಲಿಯಾ ಪ್ರವಾಸದ ವೇಳೆ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಮತ್ತು ಜರ್ಮನಿ ವಿರುದ್ಧದ ಎಲ್ಲಾ ಪ್ರೊ ಲೀಗ್ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆದ ಕಾರಣ ಆಟಗಾರರು ಸುಸ್ತಾಗಿದ್ದರು. ಪಾಕಿಸ್ತಾನ ಕ್ರೀಡಾ ಮಂಡಳಿಯಿಂದ (PSB) ಅಗತ್ಯ ಹಣ ಬಿಡುಗಡೆಯಾಗಿದ್ದರೂ, ಫೆಡರೇಶನ್ ಮುಂಗಡ ಹಣ ಪಾವತಿಸಲು ವಿಫಲವಾದ ಕಾರಣ ಹೋಟೆಲ್&zwnj;ಗಳು ಆಟಗಾರರಿಗೆ ಪ್ರವೇಶ ನೀಡಲು ನಿರಾಕರಿಸಿದ್ದವು.&lt;/p&gt;&lt;img&gt;&lt;p&gt;ಪಾಕಿಸ್ತಾನಕ್ಕೆ ಮರಳಿದ ನಂತರ, ನಾಯಕ ಬಟ್ ಮತ್ತು ಕನಿಷ್ಠ ಒಂಬತ್ತು ಇತರ ಆಟಗಾರರು ತಂಡದ ಮ್ಯಾನೇಜ್&zwnj;ಮೆಂಟ್ ಮತ್ತು ಹಾಲಿ ಪಿಎಚ್&zwnj;ಎಫ್ ನಾಯಕತ್ವವನ್ನು ಕಿತ್ತೊಗೆಯುವಂತೆ ಒತ್ತಾಯಿಸಿದ್ದಾರೆ. ಕಳೆದ ಒಂದು ವರ್ಷದಿಂದ ಬಹುತೇಕ ಆಟಗಾರರಿಗೆ ಪಿಎಸ್&zwnj;ಬಿ ಮತ್ತು ಫೆಡರೇಶನ್&zwnj;ನಿಂದ ದಿನಭತ್ಯೆ (Daily Allowance) ಸಿಕ್ಕಿಲ್ಲ ಎಂಬ ವಿಷಯವನ್ನೂ ಬಟ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಈ ಎಲ್ಲಾ ವಿವಾದಗಳಿಗೆ ಪ್ರವಾಸದ ವ್ಯವಸ್ಥೆ ಮಾಡಿದ್ದ ಪಿಎಸ್&zwnj;ಬಿ (PSB) ಕಾರಣ ಎಂದು ಬುಗ್ಗಿ ದೂರಿದ್ದಾರೆ. ಹೋಟೆಲ್ ವಸತಿ ವೆಚ್ಚಕ್ಕಾಗಿ ಪಿಎಸ್&zwnj;ಬಿ ಸುಮಾರು ಒಂದು ಮಿಲಿಯನ್ ರೂಪಾಯಿಗಳ ಚೆಕ್ ಅನ್ನು ಫೆಡರೇಶನ್&zwnj;ಗೆ ಕಳುಹಿಸಿತ್ತು ಎಂದು ವರದಿಯಾಗಿದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಬುಗ್ಗಿ ಸ್ಪಷ್ಟ ಉತ್ತರ ನೀಡಿಲ್ಲ.&lt;/p&gt;&lt;img&gt;&lt;p&gt;ಮತ್ತೊಂದೆಡೆ, ತಂಡದ ಮುಖ್ಯ ತರಬೇತುದಾರ ತಾಹಿರ್ ಜಮಾನ್ ಕೂಡ ರಾಜೀನಾಮೆ ನೀಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆಟಗಾರರಲ್ಲಿ ಶಿಸ್ತಿನ ಕೊರತೆಯಿದೆ ಎಂದು ಆರೋಪಿಸಿರುವ ಅವರು, ನಾಯಕ ಅಮ್ಮದ್ ಬಟ್ ಇತರರ ವಿರುದ್ಧ ಕೆಟ್ಟ ಭಾಷೆ ಬಳಸಿದ್ದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎಂದು ದೂರಿದ್ದಾರೆ.&lt;/p&gt;]]></content:encoded>
            <category>other-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/other-sports/pakistan-hockey-federation-crisis-players-wash-dishes-captain-banned-san-m8xclg9"/>
        </item>
        <item>
            <title><![CDATA[ಬೆಂಗಳೂರಿನ ಐಟಿಎಫ್‌ ಮಹಿಳಾ ಟೆನಿಸ್ ಪಂದ್ಯದ ವೇಳೆ ಜೇನುಹುಳಗಳ ದಾಳಿ!]]></title>
            <link>https://kannada.asianetnews.com/gallery/other-sports/itf-womens-open-tennis-bengaluru-bee-attack-cubbon-park-stadium-san-mgvcco2</link>
            <guid isPermaLink="true">https://kannada.asianetnews.com/gallery/other-sports/itf-womens-open-tennis-bengaluru-bee-attack-cubbon-park-stadium-san-mgvcco2</guid>
            <pubDate>Thu, 19 Feb 2026 19:33:52 +0530</pubDate>
            <description><![CDATA[&lt;p&gt;Bee Attack Disrupts ITF Women's Open Tennis in Bengaluru ಬೆಂಗಳೂರಿನ ಕಬ್ಬನ್ ಪಾರ್ಕ್&zwnj;ನಲ್ಲಿ ನಡೆಯುತ್ತಿದ್ದ ಐಟಿಎಫ್ ಮಹಿಳಾ ಓಪನ್ ಟೆನ್ನಿಸ್ ಪಂದ್ಯದ ವೇಳೆ ಜೇನು ಹುಳುಗಳ ಹಿಂಡು ದಾಳಿ ಮಾಡಿದೆ. ಈ ಘಟನೆಯಿಂದ ಆಟಗಾರರು ಮತ್ತು ಪ್ರೇಕ್ಷಕರು ಆತಂಕಕ್ಕೊಳಗಾದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khv36h8dcf94taynd6x4kcdy,imgname-bengaluru-tennis--2--1771509597453.png" type="image/jpeg" height="390" width="690"/>
            <content:encoded><![CDATA[&lt;p&gt;Bee Attack Disrupts ITF Women's Open Tennis in Bengaluru ಬೆಂಗಳೂರಿನ ಕಬ್ಬನ್ ಪಾರ್ಕ್&zwnj;ನಲ್ಲಿ ನಡೆಯುತ್ತಿದ್ದ ಐಟಿಎಫ್ ಮಹಿಳಾ ಓಪನ್ ಟೆನ್ನಿಸ್ ಪಂದ್ಯದ ವೇಳೆ ಜೇನು ಹುಳುಗಳ ಹಿಂಡು ದಾಳಿ ಮಾಡಿದೆ. ಈ ಘಟನೆಯಿಂದ ಆಟಗಾರರು ಮತ್ತು ಪ್ರೇಕ್ಷಕರು ಆತಂಕಕ್ಕೊಳಗಾದರು.&lt;/p&gt;&lt;img&gt;&lt;p&gt;ಬೆಂಗಳೂರಿನ ಕಬ್ಬನ್ ಪಾರ್ಕ್&zwnj;ನಲ್ಲಿ ನಡೆಯುತ್ತಿದ್ದ ಐಟಿಎಫ್ (ITF) ಮಹಿಳಾ ಓಪನ್ ಟೆನ್ನಿಸ್ ಪಂದ್ಯಾವಳಿಯ ವೇಳೆ ಜೇನು ಹುಳುಗಳ ಹಿಂಡು ದಿಢೀರ್ ದಾಳಿ ಮಾಡಿದ್ದು, ಕ್ರೀಡಾಂಗಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;img&gt;&lt;p&gt;ಗುರುವಾರ ನಡೆದ 2026ರ ಐಟಿಎಫ್ ಟೂರ್ನಿಯ ಮಹತ್ವದ ಪಂದ್ಯವೊಂದರ ನಡುವೆ ಈ ಘಟನೆ ಸಂಭವಿಸಿದೆ. ಮೈದಾನದ ಆವರಣದಲ್ಲಿದ್ದ ಜೇನುಗೂಡಿನಿಂದ ಸಾವಿರಾರು ಜೇನು ನೊಣಗಳು ಒಮ್ಮೆಗೆ ಹೊರಬಂದು ಆಟಗಾರರು ಮತ್ತು ಪ್ರೇಕ್ಷಕರ ಮೇಲೆ ದಾಳಿ ನಡೆಸಿದವು.&lt;/p&gt;&lt;img&gt;&lt;p&gt;ಇದರಿಂದ ಗಾಬರಿಗೊಂಡ ಆಟಗಾರರು ರಾಕೆಟ್ ಬದಿಗಿಟ್ಟು ಮೈದಾನದ ಮಧ್ಯದಲ್ಲೇ ಮಲಗಿದರೆ, ಪ್ರೇಕ್ಷಕರು ಸ್ಟೇಡಿಯಂನಿಂದ ಹೊರಗೆ ಎದ್ದು ಬಿದ್ದು ಓಡಿದರು.&lt;/p&gt;&lt;img&gt;&lt;p&gt;ಘಟನೆಯಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಭದ್ರತಾ ಸಿಬ್ಬಂದಿ ಮತ್ತು ಮೈದಾನದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ಕರೆತಂದರು.&lt;/p&gt;&lt;img&gt;&lt;p&gt;ಕಬ್ಬನ್ ಪಾರ್ಕ್&zwnj;ನ ಹಸಿರು ಪರಿಸರದಲ್ಲಿ ಜೇನುಗೂಡುಗಳು ಸಹಜವಾಗಿದ್ದರೂ, ಪಂದ್ಯದ ವೇಳೆ ಈ ರೀತಿ ದಾಳಿ ನಡೆದಿರುವುದು ಆತಂಕ ಮೂಡಿಸಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಪರಿಸ್ಥಿತಿ ತಿಳಿಯಾದ ಬಳಿಕ ಪಂದ್ಯಾವಳಿಯನ್ನು ಮುಂದುವರಿಸಲು ಆಯೋಜಕರು ತೀರ್ಮಾನಿಸಿದ್ದಾರೆ.&lt;/p&gt;]]></content:encoded>
            <category>other-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/other-sports/itf-womens-open-tennis-bengaluru-bee-attack-cubbon-park-stadium-san-mgvcco2"/>
        </item>
        <item>
            <title><![CDATA[JSW ಇಂಡಿಯನ್ ಓಪನ್ ಸ್ಕ್ವಾಷ್ ಸಂಭ್ರಮ; ಮುಂಬೈನಲ್ಲಿ ನಾಳೆಯಿಂದ ಹೈ-ವೋಲ್ಟೇಜ್ ಪಂದ್ಯ!]]></title>
            <link>https://kannada.asianetnews.com/other-sports/jsw-indian-open-squash-2026-mumbai-anahat-singh-ramit-tandon-details-san/articleshow-negbmce</link>
            <guid isPermaLink="true">https://kannada.asianetnews.com/other-sports/jsw-indian-open-squash-2026-mumbai-anahat-singh-ramit-tandon-details-san/articleshow-negbmce</guid>
            <pubDate>Tue, 17 Mar 2026 19:40:27 +0530</pubDate>
            <description><![CDATA[&lt;p&gt;ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಎರಡನೇ ಆವೃತ್ತಿಯ JSW ಇಂಡಿಯನ್ ಓಪನ್ ಸ್ಕ್ವಾಷ್ ಪಂದ್ಯಾವಳಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಅನಾಹತ್ ಸಿಂಗ್, ರಮಿತ್ ಟಂಡನ್, ಜೋಷ್ನಾ ಚಿನಪ್ಪ ಸೇರಿದಂತೆ ಭಾರತದ ಪ್ರಮುಖ ಆಟಗಾರರು ಮತ್ತು ಅಂತರಾಷ್ಟ್ರೀಯ ಸ್ಪರ್ಧಿಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kky1q79dw1wf9841zbsk0zz8,imgname-whatsapp-image-2026-03-17-at-4.05.22-pm-1773756194093.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮಾ.17): &lt;/strong&gt;ಮುಂಬೈನ ಐತಿಹಾಸಿಕ ಸಿಸಿಐ (CCI) ಬ್ರಬೋರ್ನ್ ಸ್ಟೇಡಿಯಂನಲ್ಲಿ ನಾಳೆಯಿಂದ ಎರಡನೇ ಆವೃತ್ತಿಯ JSW ಇಂಡಿಯನ್ ಓಪನ್ ಆರಂಭವಾಗಲಿದ್ದು, ಐದು ದಿನಗಳ ಕಾಲ ಉನ್ನತ ಮಟ್ಟದ ಸ್ಕ್ವಾಷ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ಭಾರತದ ಪ್ರಮುಖ ಆಟಗಾರರು ಮತ್ತು ಅಂತರಾಷ್ಟ್ರೀಯ ಸ್ಪರ್ಧಿಗಳನ್ನೊಳಗೊಂಡ ಈ ಪಂದ್ಯಾವಳಿಯಲ್ಲಿ, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಒಟ್ಟು 30 ಪಂದ್ಯಗಳು ನಡೆಯಲಿವೆ. ಆಟಗಾರರು ಪಿಎಸ್&zwnj;ಎ (PSA) ಶ್ರೇಯಾಂಕದ ಅಂಕಗಳು ಮತ್ತು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.&lt;/p&gt;&lt;p&gt;ಈ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕದ ಮತ್ತು ಹಾಲಿ ಚಾಂಪಿಯನ್ ಅನಾಹತ್ ಸಿಂಗ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರೊಂದಿಗೆ ಭಾರತದ ಪ್ರಮುಖ ಆಟಗಾರರಾದ ರಮಿತ್ ಟಂಡನ್, ವೀರ್ ಚೋತ್ರಾನಿ, ಅಭಯ್ ಸಿಂಗ್ ಮತ್ತು ಹಿರಿಯ ಆಟಗಾರ್ತಿ ಜೋಷ್ನಾ ಚಿನಪ್ಪ ಅವರು ತಾಯ್ನಾಡಿನ ಪ್ರೇಕ್ಷಕರ ಮುಂದೆ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.&lt;/p&gt;&lt;p&gt;ಅಂತರಾಷ್ಟ್ರೀಯ ಮಟ್ಟದ ಪ್ರಬಲ ಆಟಗಾರರಾದ ಯಾಹ್ಯಾ ಎಲ್ನಾವಾಸ್ನಿ, ನದೀನ್ ಎಲ್ಹಮ್ಮಮ್ ಮತ್ತು ಎನೋರಾ ವಿಲ್ಲಾರ್ಡ್ ಕೂಡ ಪಾಲ್ಗೊಳ್ಳುತ್ತಿದ್ದು, ವಾರದ ಉದ್ದಕ್ಕೂ ರೋಚಕ ಪಂದ್ಯಗಳು ನಡೆಯಲಿವೆ.&lt;/p&gt;&lt;p&gt;ಪಂದ್ಯಾವಳಿಯ ಬಗ್ಗೆ ಮಾತನಾಡಿದ ರಮಿತ್ ಟಂಡನ್, &quot;ಭಾರತದ ಸಂಸ್ಕೃತಿ ಮತ್ತು ಆತಿಥ್ಯದ ಕಾರಣದಿಂದಾಗಿ ಆಟಗಾರರು ಇಲ್ಲಿಗೆ ಬರಲು ಇಷ್ಟಪಡುತ್ತಾರೆ. ಕಳೆದ ವರ್ಷದ ಈ ಪಂದ್ಯಾವಳಿಯು ವರ್ಷದ ಅತ್ಯುತ್ತಮ ಈವೆಂಟ್&zwnj;ಗಳಲ್ಲಿ ಒಂದಾಗಿತ್ತು ಎಂದು ಅನೇಕ ಆಟಗಾರರು ನನಗೆ ತಿಳಿಸಿದ್ದರು ಎಂದರು.&lt;/p&gt;&lt;p&gt;ಡಿಫೆಂಡಿಂಗ್ ಚಾಂಪಿಯನ್ ಅನಾಹತ್ ಸಿಂಗ್ ಮಾತನಾಡಿ &quot;ಈ ಪಂದ್ಯಾವಳಿಗಾಗಿ ನಾನು ಕಠಿಣ ತರಬೇತಿ ನಡೆಸಿದ್ದೇನೆ. ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ಪಂದ್ಯವನ್ನೂ ಅದೇ ಮಾನಸಿಕತೆಯೊಂದಿಗೆ ಎದುರಿಸುವುದು ನನ್ನ ಗುರಿ. ಮುಂದಿನ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಕ್ವಾಷ್ ಸೇರ್ಪಡೆಯಾಗುತ್ತಿರುವುದರಿಂದ, ಅಂತಹ ದೊಡ್ಡ ಗುರಿಯತ್ತ ಸಾಗಲು ಇಂತಹ ಪಂದ್ಯಾವಳಿಗಳು ಪ್ರಮುಖ ಹಂತಗಳಾಗಿವೆ&quot; ಎಂದರು.&lt;/p&gt;&lt;p&gt;2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್&zwnj;ನಲ್ಲಿ ಸ್ಕ್ವಾಷ್ ಪದಾರ್ಪಣೆ ಮಾಡುತ್ತಿರುವುದರಿಂದ, ಭಾರತದಲ್ಲಿ ಕ್ರೀಡೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಈ ಟೂರ್ನಿ ಸಹಕಾರಿಯಾಗಿದೆ. ಮಾರ್ಚ್ 18 ಮೊದಲ ಸುತ್ತಿನ ಪಂದ್ಯಗಳು (ಮಧ್ಯಾಹ್ನ 12:00 ರಿಂದ), ಮಾರ್ಚ್ 19, ಎರಡನೇ ಸುತ್ತು, ಮಾರ್ಚ್ 20 ಕ್ವಾರ್ಟರ್ ಫೈನಲ್ಸ್, ಮಾರ್ಚ್ 21 ಸೆಮಿಫೈನಲ್ಸ್ ಮತ್ತು ಮಾರ್ಚ್ 22 ರಂದು ಫೈನಲ್ಸ್ ನಡೆಯಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/other-sports/jsw-indian-open-squash-2026-mumbai-anahat-singh-ramit-tandon-details-san/articleshow-negbmce"/>
        </item>
        <item>
            <title><![CDATA[ಇಂದಿನಿಂದ ಆಸ್ಟ್ರೇಲಿಯನ್ ಓಪನ್ ಟೆನಿಸ್‌; 25ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟ ಜೋಕೋವಿಚ್]]></title>
            <link>https://kannada.asianetnews.com/sports/australian-open-begins-in-melbourne-djokovic-eyes-historic-25th-grand-slam-kvn/articleshow-nhio1pg</link>
            <guid isPermaLink="true">https://kannada.asianetnews.com/sports/australian-open-begins-in-melbourne-djokovic-eyes-historic-25th-grand-slam-kvn/articleshow-nhio1pg</guid>
            <pubDate>Sun, 18 Jan 2026 10:48:03 +0530</pubDate>
            <description><![CDATA[&lt;p&gt;ಭಾನುವಾರದಿಂದ ಆರಂಭವಾಗಲಿರುವ ವರ್ಷದ ಮೊದಲ ಗ್ರ್ಯಾನ್&zwnj;ಸ್ಲಾಂ ಟೆನಿಸ್&zwnj; ಟೂರ್ನಿ ಆಸ್ಟ್ರೇಲಿಯನ್&zwnj; ಓಪನ್&zwnj;ನಲ್ಲಿ, ನೋವಾಕ್&zwnj; ಜೋಕೋವಿಚ್&zwnj; 25ನೇ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಯುವ ತಾರೆಗಳಾದ ಕಾರ್ಲೊಸ್&zwnj; ಆಲ್ಕರಜ್&zwnj; ಮತ್ತು ಯಾನಿಕ್&zwnj; ಸಿನ್ನರ್&zwnj;ರಿಂದ ತೀವ್ರ ಪೈಪೋಟಿ ಎದುರಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kf05fc25jhf8yfqr01c6qjmp,imgname-gettyimages-2256161834-1768458530885.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಲ್ಬರ್ನ್&zwnj;: ವರ್ಷದ ಮೊದಲ ಗ್ರ್ಯಾನ್&zwnj;ಸ್ಲಾಂ ಟೆನಿಸ್&zwnj; ಟೂರ್ನಿ ಎನಿಸಿಕೊಂಡಿರುವ ಆಸ್ಟ್ರೇಲಿಯನ್&zwnj; ಓಪನ್&zwnj;ಗೆ ಭಾನುವಾರ ಚಾಲನೆ ಸಿಗಲಿದೆ. ಈ ಬಾರಿಯೂ ಹಲವು ದಿಗ್ಗಜ ಹಾಗೂ ಯುವ ಟೆನಿಸ್&zwnj; ತಾರೆಗಳು ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಭಾರೀ ರೋಚಕತೆ ನಿರೀಕ್ಷಿಸಲಾಗಿದೆ. ಪ್ರಮುಖವಾಗಿ, 25ನೇ ಗ್ರ್ಯಾನ್&zwnj;ಸ್ಲಾಂ ಗೆಲುವಿಗಾಗಿ ಕೆಲ ವರ್ಷಗಳಿಂದ ಕಾಯುತ್ತಿರುವ ಸರ್ಬಿಯಾದ ನೋವಾಕ್&zwnj; ಜೋಕೋವಿಚ್&zwnj; ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಲಿದ್ದಾರೆಯೇ ಎಂಬ ಕುತೂಹಲವಿದೆ.&lt;/p&gt;&lt;p&gt;10 ಬಾರಿ ಆಸ್ಟ್ರೇಲಿಯನ್&zwnj; ಓಪನ್&zwnj; ಸೇರಿ 24 ಗ್ರ್ಯಾನ್&zwnj;ಸ್ಲಾಂ ಗೆದ್ದಿರುವ ಜೋಕೋಗೆ 2023ರ ಬಳಿಕ ಒಂದೂ ಟ್ರೋಫಿ ಗೆಲ್ಲಲಾಗಲಿಲ್ಲ. ಅವರು ಕಳೆದ ವರ್ಷ 4 ಗ್ರ್ಯಾನ್&zwnj;ಸ್ಲಾಂ ಟೂರ್ನಿಯಲ್ಲೂ ಸೆಮಿಫೈನಲ್&zwnj; ಸೋತಿದ್ದರು. ಯುವ ಸೂಪರ್&zwnj;ಸ್ಟಾರ್&zwnj;ಗಳಾದ ಸ್ಪೇನ್&zwnj;ನ ಕಾರ್ಲೊಸ್&zwnj; ಆಲ್ಕರಜ್&zwnj; ಹಾಗೂ ಇಟಲಿಯ ಯಾನಿಕ್&zwnj; ಸಿನ್ನರ್&zwnj;ರಿಂದ ಪ್ರಬಲ ಪೈಪೋಟಿ ಎದುರಿಸುತ್ತಿರುವ 38 ವರ್ಷದ ಜೋಕೋಗೆ ಈ ಬಾರಿಯೂ ಕಪ್&zwnj; ಗೆಲುವಿನ ಹಾದಿ ಸುಲಭದ್ದೇನಲ್ಲ. ಉಳಿದಂತೆ ಮೆಡ್ವೆಡೆವ್&zwnj;, ರುಬ್ಲೆವ್&zwnj;, ಕ್ಯಾಸ್ಪೆರ್&zwnj; ರುಡ್&zwnj; ಸೇರಿ ಪ್ರಮುಖರು ಕಣದಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಮಹಿಳಾ ಸಿಂಗಲ್ಸ್&zwnj;ನಲ್ಲಿ ಘಟಾನುಘಟಿಗಳ ಸ್ಪರ್ಧೆ&lt;/strong&gt;&lt;/h2&gt;&lt;p&gt;ಇನ್ನು, ಮಹಿಳಾ ಸಿಂಗಲ್ಸ್&zwnj;ನಲ್ಲಿ ಈ ಬಾರಿಯೂ ಹಲವು ಘಟಾನುಘಟಿಗಳು ಸ್ಪರ್ಧೆಯಲ್ಲಿದ್ದಾರೆ. ಹಾಲಿ ಚಾಂಪಿಯನ್&zwnj;, ಅಮೆರಿಕದ ಮ್ಯಾಡಿಸನ್&zwnj; ಕೀಸ್&zwnj;, 2 ಬಾರಿ ಚಾಂಪಿಯನ್&zwnj; ಸಬಲೆಂಕಾ, 6 ಗ್ರ್ಯಾನ್&zwnj;ಸ್ಲಾಂಗಳ ಒಡತಿ ಇಗಾ ಸ್ವಿಯಾಟೆಕ್&zwnj;, ಅಮೆರಿಕನ್&zwnj; ತಾರೆ ಕೊಕೊ ಗಾಫ್ ಈ ಬಾರಿ ಟ್ರೋಫಿ ಗೆಲುವಿನ ರೇಸ್&zwnj;ನಲ್ಲಿ ಮುಂಚೂಣಿಯಲ್ಲಿರುವ ಟೆನಿಸಿಗರು.&lt;/p&gt;&lt;h3&gt;&lt;strong&gt;ಕನ್ನಡಿಗ ಪೂನಚ್ಚ ಏಕೈಕ ಭಾರತೀಯ&lt;/strong&gt;&lt;/h3&gt;&lt;p&gt;ಈ ಬಾರಿ ಟೂರ್ನಿಯಲ್ಲಿ ಆಡಲಿರುವ ಏಕೈಕ ಭಾರತೀಯ ಎಂದರೆ ಕರ್ನಾಟಕದ ನಿಕಿ ಪೂನಚ್ಚ. ಅವರು ವೈಲ್ಡ್&zwnj; ಕಾರ್ಡ್&zwnj; ಮೂಲಕ ಟೂರ್ನಿ ಪ್ರವೇಶಿಸಿದ್ದು, ಪುರುಷರ ಡಬಲ್ಸ್&zwnj;ನಲ್ಲಿ ಥಾಯ್ಲೆಂಡ್&zwnj;ನ ಇಸಾರೊ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ.&lt;/p&gt;&lt;p&gt;₹25.24: ಈ ಬಾರಿ ಪುರುಷ, ಮಹಿಳಾ ಸಿಂಗಲ್ಸ್&zwnj; ವಿಜೇತರಿಗೆ ₹25.24 ಕೋಟಿ ನಗದು ಬಹುಮಾನ ಸಿಗಲಿದೆ.&lt;/p&gt;]]></content:encoded>
            <category>other-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/sports/australian-open-begins-in-melbourne-djokovic-eyes-historic-25th-grand-slam-kvn/articleshow-nhio1pg"/>
        </item>
        <item>
            <title><![CDATA[ಇರಾನ್ ಸಂಘರ್ಷ: ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪಿವಿ ಸಿಂಧು, ಸಮೀಪದಲ್ಲೇ ಸ್ಫೋಟ ಬ್ಯಾಡ್ಮಿಂಟನ್ ತಾರೆ ಆತಂಕ!]]></title>
            <link>https://kannada.asianetnews.com/world-news/pv-sindhu-stuck-in-dubai-airport-says-situation-getting-more-frightening-by-the-hour/articleshow-o4gqssd</link>
            <guid isPermaLink="true">https://kannada.asianetnews.com/world-news/pv-sindhu-stuck-in-dubai-airport-says-situation-getting-more-frightening-by-the-hour/articleshow-o4gqssd</guid>
            <pubDate>Sun, 01 Mar 2026 13:26:32 +0530</pubDate>
            <description><![CDATA[&lt;p&gt;ಇರಾನ್-ಇಸ್ರೇಲ್ ಸಂಘರ್ಷದ ಕಾರಣ, ಆಲ್ ಇಂಗ್ಲೆಂಡ್ ಓಪನ್ ಟೂರ್ನಿಗೆ ತೆರಳುತ್ತಿದ್ದ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಬಳಿ ಸ್ಪೋಟದ ಸದ್ದು ಕೇಳಿದ್ದು, &amp;nbsp;ಸದ್ಯ ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಸುರಕ್ಷಿತ ಸ್ಥಳದಲ್ಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjm5jkq6twm4pgnq5997gq4e,imgname-pv-sindhu-1772350951142.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದುಬೈ: &lt;/strong&gt;ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಕ್ಷಿಪಣಿ ದಾಳಿಗಳ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಸ್ಟಾರ್ ಶಟ್ಲರ್ ಹಾಗೂ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಪಿ.ವಿ. ಸಿಂಧು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.&lt;/p&gt;&lt;p&gt;ಮಂಗಳವಾರ ಆರಂಭಗೊಳ್ಳಲಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಗಾಗಿ ಸಿಂಧು ಇಂಗ್ಲೆಂಡ್&zwnj;ನ ಬರ್ಮಿಂಗ್ಹ್ಯಾಮ್&zwnj;ಗೆ ಪ್ರಯಾಣಿಸುತ್ತಿದ್ದರು. ಈ ಪ್ರಯಾಣದಲ್ಲಿ ದುಬೈ ಅವರ ಸಂಪರ್ಕ ಕೇಂದ್ರವಾಗಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ಏಕಾಏಕಿ ಉಲ್ಬಣಗೊಂಡ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಜನನಿಬಿಡ ಪ್ರಯಾಣ ಕೇಂದ್ರಗಳಲ್ಲಿ ಒಂದಾಗಿರುವ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.&lt;/p&gt;&lt;h2&gt;ವಿಮಾನ ನಿಲ್ದಾಣದ ಬಳಿ ಸ್ಪೋಟ&lt;/h2&gt;&lt;p&gt;ಸಿಂಧು ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ದುಬೈನಲ್ಲಿ ಎದುರಿಸುತ್ತಿರುವ ಸ್ಥಿತಿಗತಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. &ldquo;ವಿಮಾನ ನಿಲ್ದಾಣದ ಸಮೀಪ ಸ್ಪೋಟ ಸಂಭವಿಸುತ್ತಿರುವ ಶಬ್ದಗಳು ಕೇಳಿಸುತ್ತಿವೆ. ಕಳೆದ ಒಂದು ಗಂಟೆಯಿಂದ ಇಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಸದ್ಯ ನಮಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಮತ್ತು ಹೈ ಕಮಿಷನರ್ ಅವರು ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ನಮಗೆ ಸಂಪೂರ್ಣ ಸುರಕ್ಷತೆ ಒದಗಿಸಲಾಗುತ್ತಿದೆ,&rdquo; ಎಂದು ಅವರು ಧನ್ಯವಾದ ಅರ್ಪಿಸಿದ್ದಾರೆ.&lt;/p&gt;&lt;h2&gt;ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಡಿಯೋ ಹಂಚಿಕೆ&lt;/h2&gt;&lt;p&gt;ನಾವು ಎದುರಿಸುತ್ತಿರುವ ಸಂಕಷ್ಟ ಇನ್ನೂ ಮುಂದುವರಿದೇ ಇದೆ. ಗಂಟೆಗಂಟೆಗೂ ಪರಿಸ್ಥಿತಿ ಹೆಚ್ಚು ಭಯಾನಕವಾಗುತ್ತಿದೆ. ಕೆಲ ಗಂಟೆಗಳ ಹಿಂದೆ, ನಾವು ವಿಮಾನ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಸ್ಥಳದ ಸಮೀಪವೇ ಭಾರೀ ಸ್ಪೋಟ ಸಂಭವಿಸಿತು. ಹೊಗೆ ಮತ್ತು ಅವಶೇಷಗಳಿಗೆ ಅತ್ಯಂತ ಹತ್ತಿರದಲ್ಲಿದ್ದ ನನ್ನ ಕೋಚ್ ತಕ್ಷಣವೇ ಆ ಪ್ರದೇಶದಿಂದ ಹೊರಗೆ ಓಡಬೇಕಾಯಿತು. ಅದು ನಮ್ಮೆಲ್ಲರಿಗೂ ಅತ್ಯಂತ ಉದ್ವಿಗ್ನ ಮತ್ತು ಭಯಾನಕ ಕ್ಷಣವಾಗಿತ್ತು.&lt;/p&gt;&lt;p&gt;ಈಗ ನಾವು ಎಲ್ಲರೂ ಸುರಕ್ಷಿತರಾಗಿದ್ದೇವೆ. ನಾವೆಲ್ಲರೂ ಈಗ ಸುರಕ್ಷಿತರಾಗಿದ್ದೇವೆ ಮತ್ತು ಹೆಚ್ಚು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ, ದುಬೈ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ದುಬೈ ಅಧಿಕಾರಿಗಳ ಅವಿಶ್ರಾಂತ ಪ್ರಯತ್ನಗಳಿಗೆ ಧನ್ಯವಾದಗಳು. ನಮ್ಮ ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ನಿರಂತರ ಸಹಕಾರ ನೀಡುತ್ತಿರುವ ದುಬೈನಲ್ಲಿನ ಭಾರತೀಯ ಹೈ ಕಮಿಷನ್&zwnj;ಗೆ ವಿಶೇಷವಾಗಿ ಹೃತ್ಪೂರ್ವಕ ಧನ್ಯವಾದಗಳು. ಪರಿಸ್ಥಿತಿ ಶಾಂತಗೊಳ್ಳಲಿದೆ ಎಂಬ ಆಶಾವಾದದೊಂದಿಗೆ ಕಾಯುತ್ತಿದ್ದೇವೆ.&lt;/p&gt;&lt;p&gt;ವಿಮಾನ ನಿಲ್ದಾಣದಲ್ಲಿ ಸುತ್ತಮುತ್ತ ನಡೆಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದಿರುವ ಸಿಂಧು, ಇನ್&zwnj;ಸ್ಟಾಗ್ರಾಮ್&zwnj;ನಲ್ಲೂ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮುಂದಿನ ಸೂಚನೆ ದೊರೆಯುವವರೆಗೆ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸಂದೇಶದೊಂದಿಗೆ ವಿಡಿಯೋವನ್ನು ಶೇರ್ ಮಾಡಿರುವ ಅವರು, ಅಲ್ಲಿನ ಉದ್ವಿಗ್ನ ವಾತಾವರಣವನ್ನು ಸ್ಪಷ್ಟವಾಗಿ ತೋರಿಸಿದ್ದಾರೆ.&lt;/p&gt;&lt;p&gt;ಸಿಂಧು ಮಾತ್ರವಲ್ಲದೆ, ವಿವಿಧ ದೇಶಗಳಿಗೆ ತೆರಳಬೇಕಿದ್ದ ಸಾವಿರಾರು ಪ್ರಯಾಣಿಕರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಪರಿಣಾಮ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ, ಜಾಗತಿಕ ವಿಮಾನ ಸಂಚಾರ ತೀವ್ರವಾಗಿ ವ್ಯತ್ಯಯಗೊಂಡಿದೆ.&lt;/p&gt;&lt;p&gt;ಈ ಘಟನೆ, ಯುದ್ಧ ಮತ್ತು ರಾಜಕೀಯ ಸಂಘರ್ಷಗಳು ಕೇವಲ ಗಡಿಗಳಲ್ಲೇ ಸೀಮಿತವಾಗದೆ, ಕ್ರೀಡೆ, ಪ್ರವಾಸೋದ್ಯಮ ಮತ್ತು ಸಾಮಾನ್ಯ ನಾಗರಿಕರ ಬದುಕಿನ ಮೇಲೂ ಎಷ್ಟು ದೊಡ್ಡ ಪರಿಣಾಮ ಬೀರುತ್ತವೆ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;The ordeal continues to unfold, and the situation is becoming more frightening by the hour.A few hours ago, there was an explosion close to where we were holed up at the airport. My coach had to quickly run out of the area as he was closest to the smoke and debris. It was an&hellip; https://t.co/ZdNtuALk0P&lt;/p&gt;&lt;p&gt;&mdash; Pvsindhu (@Pvsindhu1) March 1, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Gowthami K</dc:creator>
            <atom:link href="https://kannada.asianetnews.com/world-news/pv-sindhu-stuck-in-dubai-airport-says-situation-getting-more-frightening-by-the-hour/articleshow-o4gqssd"/>
        </item>
        <item>
            <title><![CDATA[ಕಳಿಂಗ ಐಐಟಿಯಲ್ಲಿ ನಾಳೆಯಿಂದ ವಾಲಿಬಾಲ್ ವರ್ಲ್ಡ್‌ ಬೀಚ್ ಪ್ರೊ ಟೂರ್ನಿ!]]></title>
            <link>https://kannada.asianetnews.com/sports/kiit-university-to-host-fivb-volleyball-world-beach-pro-tour-2026-in-bhubaneswar-kvn/articleshow-paw1zqd</link>
            <guid isPermaLink="true">https://kannada.asianetnews.com/sports/kiit-university-to-host-fivb-volleyball-world-beach-pro-tour-2026-in-bhubaneswar-kvn/articleshow-paw1zqd</guid>
            <pubDate>Tue, 03 Mar 2026 11:46:18 +0530</pubDate>
            <description><![CDATA[&lt;p&gt;ಕೆಐಐಟಿ ವಿಶ್ವವಿದ್ಯಾಲಯದಲ್ಲಿ ವಾಲಿಬಾಲ್ ವರ್ಲ್ಡ್ ಬೀಚ್ ಪ್ರೊ ಟೂರ್ನಿ ಮಾರ್ಚ್ 4ರಿಂದ 8 ರವರೆಗೆ ನಡೆಯಲಿದೆ. ಇದರೊಂದಿಗೆ ಟೂರ್ನಿಗೆ ಆತಿಥ್ಯ ವಹಿಸಿದ ಭಾರತದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಕೆಐಐಟಿ ಪಾತ್ರವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jkfansv1e2j9dhkwnyxj61gm,imgname-volleyball-1738902529889.jpg" type="image/jpeg" height="390" width="690"/>
            <content:encoded><![CDATA[&lt;p&gt;ಭುವನೇಶ್ವರ: ಕೆಐಐಟಿ ವಿಶ್ವವಿದ್ಯಾಲಯದಲ್ಲಿ ಪುರುಷ ಮತ್ತು ಮಹಿಳೆಯರ ಎಫ್&zwnj;ಐವಿಬಿ ವಾಲಿಬಾಲ್ ವರ್ಲ್ಡ್ ಬೀಚ್ ಪ್ರೊ ಟೂರ್ನಿ ಮಾರ್ಚ್ 4ರಿಂದ 8 ರವರೆಗೆ ನಡೆಯಲಿದ್ದು, ಇದರ ಆತಿಥ್ಯವನ್ನು ಇಲ್ಲಿನ ಕಳಿಂಗ ಇನ್&zwnj;ಸ್ಟಿಟ್ಯೂಟ್&zwnj; ಆಫ್&zwnj; ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ) ವಿಶ್ವವಿದ್ಯಾಲಯ ವಹಿಸಲಿದೆ.&lt;/p&gt;&lt;p&gt;ಇದರೊಂದಿಗೆ ಟೂರ್ನಿಗೆ ಆತಿಥ್ಯ ವಹಿಸಿದ ಭಾರತದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಕೆಐಐಟಿ ಪಾತ್ರವಾಗಲಿದೆ. ಇಂತಹ ಪ್ರತಿಷ್ಠಿತ ಟೂರ್ನಿಯನ್ನು ಭಾರತದ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. ಒಡಿಶಾದ ಭುವನೇಶ್ವರ ನಗರವು ಚೊಚ್ಚಲ ಬೀಚ್ ವಾಲಿಬಾಲ್&zwnj;ಗೆ ಈ ಮೂಲಕ ಸಾಕ್ಷಿಯಾಗಲಿದೆ. 52 ದೇಶಗಳ 82 ತಂಡಗಳು ಸ್ಪರ್ಧಿಸುತ್ತಿದ್ದು, ಒಲಿಂಪಿಕ್ ಚಿನ್ನದ ಪದಕ ವಿಜೇತರು ಸೇರಿ 306 ಆಟಗಾರರು ಭಾಗಿಯಾಗುತ್ತಿರುವುದು ವಿಶೇಷ.&lt;/p&gt;&lt;h2&gt;&lt;strong&gt;ಎಲ್ಲಾ ರೀತಿಯ ಸಿದ್ಧತೆ:&lt;/strong&gt;&lt;/h2&gt;&lt;p&gt;ಐದು ದಿನಗಳ ಪಂದ್ಯಾವಳಿಯನ್ನು ಕೆಐಐಟಿಯ ಕ್ಯಾಂಪಸ್&zwnj;ನಲ್ಲಿರುವ ದ್ಯುತಿ ಚಂದ್ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತಿದೆ. ಇದನ್ನು ಅಂತಾರಾಷ್ಟ್ರೀಯ ಮಟ್ಟದ ಬೀಚ್ ವಾಲಿಬಾಲ್ ಕ್ರೀಡಾಂಗಣವಾಗಿ ಪರಿವರ್ತಿಸಲಾಗಿದೆ. ಪಂದ್ಯಾವಳಿಯನ್ನು ಸುಗಮವಾಗಿ ನಡೆಸಲು ಸಾಕಷ್ಟು ವ್ಯವಸ್ಥೆಯನ್ನು ಮಾಡಲಾಗಿದೆ. ಕ್ರೀಡಾಪಟುಗಳ ಸುರಕ್ಷತೆ, ವಸತಿ ವ್ಯವಸ್ಥೆ, ತರಬೇತಿ ಸೇರಿದಂತೆ ಆತಿಥ್ಯಕ್ಕೆ ಸಂಬಂಧಿಸಿದ ಎಲ್ಲಾ ಉಪಕ್ರಮಗಳನ್ನು ಸಿದ್ಧಗೊಳಿಸಲಾಗಿದೆ. ಕೆಐಐಟಿ ಮತ್ತು ಕೆಐಎಸ್&zwnj;ಎಸ್ ಸಂಸ್ಥಾಪಕರಾದ ಡಾ.ಅಚ್ಯುತ ಸಮಂತ ಅವರು ಈ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ಖುದ್ದಾಗಿ ನೋಡಿಕೊಳ್ಳುತ್ತಿದ್ದಾರೆ. ಟೂರ್ನಮೆಂಟ್&zwnj; ಯಶಸ್ವಿಯಾಗಿ ನಡೆಯಲು ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ.&lt;/p&gt;&lt;p&gt;&lsquo;ನಾವು ಇಂತಹ ಕ್ರೀಡಾಕೂಟ ಆಯೋಜಿಸಿದ್ದಾಗಲೆಲ್ಲ ಪ್ರತಿಯೊಂದು ವ್ಯವಸ್ಥೆಯನ್ನು ಎಚ್ಚರಿಕೆ ಮತ್ತು ಜಾಗ್ರತೆಯಿಂದ ನೋಡಿಕೊಂಡಿದ್ದೇವೆ. ಇದು ನನ್ನ ವೈಯಕ್ತಿಕ ಜವಾಬ್ದಾರಿ. ಎಲ್ಲಾ ಕೆಲಸಗಳನ್ನು ನಮ್ಮ ತಂಡಗಳು ಶಿಸ್ತಿನಿಂದ ಮಾಡುತ್ತಿವೆ. ಒಡಿಶಾ ಮತ್ತು ದೇಶವೇ ಹೆಮ್ಮೆಪಡುವಂತಹ ಚಾಂಪಿಯನ್&zwnj;ಶಿಪ್ ಅನ್ನು ನಾವು ನಡೆಸುತ್ತೇವೆ ಎಂಬ ವಿಶ್ವಾಸ ನನಗಿದೆ&quot; ಎಂದು ಡಾ. ಅಚ್ಯುತ ಸಮಂತ ಅವರು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಒಡಿಶಾದ ಪ್ರಾಮುಖ್ಯತೆ ತಿಳಿಸಲಿದೆ:&lt;/strong&gt;&lt;/h3&gt;&lt;p&gt;82 ಅಂತರರಾಷ್ಟ್ರೀಯ ತಂಡಗಳ 164 ಎಲೈಟ್&zwnj; ಕ್ರೀಡಾಪಟುಗಳು ಈ ಟೂರ್ನಮೆಂಟ್&zwnj; ನಲ್ಲಿ ಭಾಗವಹಿಸುತ್ತಿದ್ದಾರೆ. ಆಟಗಾರರಲ್ಲದೆ, ಅಂತಾರಾಷ್ಟ್ರೀಯ ರೆಫರಿಗಳು ಮತ್ತು ಹಿರಿಯ ಎಫ್&zwnj;ಐವಿಬಿ ಅಧಿಕಾರಿಗಳು ಆಗಮಿಸಲಿದ್ದಾರೆ. ಇವರೆಲ್ಲ ಟೂರ್ನಮೆಂಟ್&zwnj;ಗೆ ಜಾಗತಿಕ ಸ್ಥಾನಮಾನವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ವಾಲಿಬಾಲ್ ವರ್ಲ್ಡ್ (Volleyball World) ಟಿವಿ ಮೂಲಕ ಪಂದ್ಯಗಳನ್ನು ವಿಶ್ವಾದ್ಯಂತ ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡಬಹುದು. ಈ ಕ್ರೀಡಾಕೂಟದ ಮೂಲಕ ಅಂತರರಾಷ್ಟ್ರೀಯ ಕ್ರೀಡಾ ನಕಾಶೆಯಲ್ಲಿ ಒಡಿಶಾದ ಪ್ರಾಮುಖ್ಯತೆ ತಿಳಿಯಲಿದೆ ಎಂದು ಭಾವಿಸಲಾಗಿದೆ.&lt;/p&gt;&lt;h3&gt;&lt;strong&gt;ಹಲವು ಹಂತಗಳಲ್ಲಿ ಟೂರ್ನಿ:&lt;/strong&gt;&lt;/h3&gt;&lt;p&gt;ಟೂರ್ನಿ ಹಲವು ಹಂತಗಳಲ್ಲಿ ನಡೆಯಲಿದೆ. ಅರ್ಹತಾ ಪಂದ್ಯಾವಳಿಯೊಂದಿಗೆ ಪ್ರಾರಂಭವಾಗಿ, ನಂತರ ಪೂಲ್ ಆಟವನ್ನು ಒಳಗೊಂಡ ಮುಖ್ಯ ಡ್ರಾ ಇರುತ್ತದೆ. ಅಗ್ರ ತಂಡಗಳು 16ರ ಸುತ್ತು, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್&zwnj;ಗೆ ಪ್ರವೇಶೀಸಲಿವೆ. ಮಾರ್ಚ್ 8 ರಂದು ಕಂಚಿನ ಪದಕ ಪಂದ್ಯಗಳು, ಫೈನಲ್&zwnj; ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.&lt;/p&gt;&lt;h3&gt;&lt;strong&gt;ಶೀಘ್ರವೇ ಒಲಿಂಪಿಕ್ಸ್&zwnj;ನಲ್ಲಿ ಅವಕಾಶ: ಡಾ. ಸಮಂತ&lt;/strong&gt;&lt;/h3&gt;&lt;p&gt;ನಾವು ಕ್ರೀಡೆ ಮತ್ತು ಕ್ರೀಡಾಪಟುಗಳ ಪೋಷಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ವಾಲಿಬಾಲ್ ಗ್ರಾಮೀಣ ಕ್ರೀಡೆ ಮತ್ತು ಒಲಿಂಪಿಕ್ ವಿಭಾಗ ಎರಡೂ ಆಗಿದೆ. ಕಳೆದ ಎಂಟು ವರ್ಷಗಳಿಂದ, ನಾವು ಅದರ ಅಭಿವೃದ್ಧಿಗೆ ಸದಾ ಒಂದಿಲ್ಲೊಂದು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅಂತರರಾಷ್ಟ್ರೀಯ ಮಾನ್ಯತೆ ಜೊತೆಗೆ ತಳಮಟ್ಟದ ಭಾಗವಹಿಸುವಿಕೆಯನ್ನೂ ಪ್ರೋತ್ಸಾಹಿಸುತ್ತಿದ್ದೇವೆ. ಭಾರತೀಯ ಬೀಚ್ ವಾಲಿಬಾಲ್ ತಂಡಕ್ಕೆ ಶೀಘ್ರದಲ್ಲೇ ಒಲಿಂಪಿಕ್ಸ್&zwnj;ನಲ್ಲಿ ಅವಕಾಶ ಸಿಗಲಿದೆ. ಇದು ವಿಶ್ವದಲ್ಲಿ ನಮ್ಮ ಒಡಿಶಾದ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಮತ್ತು ಒಡಿಶಾದಲ್ಲಿ ಪ್ರವಾಸೋದ್ಯಮದ ಗಮನಾರ್ಹ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಕೆಐಐಟಿ, ಕೆಐಎಂಎಸ್, ಕೆಐಎಸ್ಎಸ್ ಸಂಸ್ಥಾಪಕರು ಹಾಗೂ ಮಾಜಿ ಸಂಸದರು ಡಾ.ಅಚ್ಯುತ ಸಮಂತ ಅವರು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಕೆಐಐಟಿ, ಕೆಐಎಸ್&zwnj;ಎಸ್&zwnj; ಭೇಟಿ ವೇಳೆ ಘೋಷಣೆ&lt;/strong&gt;&lt;/h3&gt;&lt;p&gt;ಕಳೆದ ಡಿಸೆಂಬರ್&zwnj;ನಲ್ಲಿ ವಾಲಿಬಾಲ್ ಗ್ರ್ಯಾಂಡ್ ಪ್ರಿಕ್ಸ್&zwnj;ಗಾಗಿ ಕೆಐಐಟಿ ಮತ್ತು ಕೆಐಎಸ್&zwnj;ಎಸ್&zwnj;ಗೆ ಅಂತಾರಾಷ್ಟ್ರೀಯ ವಾಲಿಬಾಲ್&zwnj; ಫೆಡರೇಷನ್&zwnj;(ಎಫ್&zwnj;ಐವಿಬಿ) ಅಧ್ಯಕ್ಷರಾದ ಫ್ಯಾಬಿಯೊ ಅಜೆವೆಡೊ ಅವರು ಭೇಟಿ ನೀಡಿದ್ದರು. ಈ ವೇಳೆ ಅವರು, ಬೀಚ್ ವಾಲಿಬಾಲ್ ನಡೆಸುವ ಬಗ್ಗೆ ಘೋಷಣೆ ಮಾಡಿದ್ದರು. ಕೆಐಐಟಿಯಲ್ಲಿ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯ ಮತ್ತು ಒಡಿಶಾದ ಅನುಕೂಲಕರ ಕ್ರೀಡಾ ವಾತಾವರಣದಿಂದ ಅಜೆವೆಡೊ ಅವರು ಪ್ರಭಾವಿತರಾಗಿದ್ದರು. ಕೆಐಐಟಿ ಮತ್ತು ಕೆಐಎಸ್&zwnj;ಎಸ್ ಸಹಯೋಗದೊಂದಿಗೆ ಎಫ್&zwnj;ಐವಿಬಿ ಬೀಚ್ ವಾಲಿಬಾಲ್&zwnj;ಅನ್ನು 2027 ಹಾಗೂ 2028ರಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/kiit-university-to-host-fivb-volleyball-world-beach-pro-tour-2026-in-bhubaneswar-kvn/articleshow-paw1zqd"/>
        </item>
        <item>
            <title><![CDATA[ಅಕ್ರಮ ಸಂಬಂಧದ ಆರೋಪ ಎದುರಿಸುತ್ತಿರೋ ಮೇರಿ ಕೋಮ್ ಟಾಪ್ 8 ಕ್ಯೂಟ್ ಫೋಟೋಗಳಿವು!]]></title>
            <link>https://kannada.asianetnews.com/webstories/sports/legendry-boxer-mary-kom-style-icon-8-stunning-photos-kvn-rggmd4g</link>
            <guid isPermaLink="true">https://kannada.asianetnews.com/webstories/sports/legendry-boxer-mary-kom-style-icon-8-stunning-photos-kvn-rggmd4g</guid>
            <pubDate>Thu, 15 Jan 2026 18:33:15 +0530</pubDate>
            <description><![CDATA[&lt;p&gt;ಭಾರತೀಯ ಮಹಿಳಾ ಬಾಕ್ಸರ್ ಮೇರಿ ಕೋಮ್ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಪತಿಯ ಬಗ್ಗೆ ನೀಡಿದ ಹೇಳಿಕೆಯಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ, ಆದರೆ ಇಂದು ನಾವು ಅವರ 8 ಅತ್ಯಂತ ಸುಂದರವಾದ ಚಿತ್ರಗಳನ್ನು ನಿಮಗೆ ತೋರಿಸುತ್ತೇವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kezpjeq3gh6470ny6hyg7vev,imgname-mary-kom-looks-1768442903267.jpg" type="image/jpeg" height="390" width="690"/>
            <category>other-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/sports/legendry-boxer-mary-kom-style-icon-8-stunning-photos-kvn-rggmd4g"/>
        </item>
        <item>
            <title><![CDATA[2 ಕೈ, 2 ಕಾಲು ಇಲ್ಲದಾಕೆ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌; ಬಿಲ್ಲು ಬಾಗಿಸಿ ಜಗತ್ತು ಗೆದ್ದ ಪಾಯಲ್]]></title>
            <link>https://kannada.asianetnews.com/sports/payal-nag-won-the-gold-medal-at-the-bangkok-archery-para-series-2026-mrq/articleshow-ri0cpar</link>
            <guid isPermaLink="true">https://kannada.asianetnews.com/sports/payal-nag-won-the-gold-medal-at-the-bangkok-archery-para-series-2026-mrq/articleshow-ri0cpar</guid>
            <pubDate>Mon, 06 Apr 2026 07:46:21 +0530</pubDate>
            <description><![CDATA[ವಿದ್ಯುತ್ ಅಪಘಾತದಲ್ಲಿ ಕೈಕಾಲು ಕಳೆದುಕೊಂಡು ಅನಾಥಾಶ್ರಮ ಸೇರಿದ್ದ ಒಡಿಶಾದ ಪಾಯಲ್ ನಾಗ್, ಇದೀಗ ಪ್ಯಾರಾ ಆರ್ಚರಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಕೋಚ್ ಕುಲ್ದೀಪ್ ವೆದ್ವಾನ್ ಅವರ ಮಾರ್ಗದರ್ಶನದಲ್ಲಿ, ವಿಶ್ವ ಚಾಂಪಿಯನ್ ಶೀತಲ್ ದೇವಿಯವರನ್ನೇ ಸೋಲಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kng93xmp8g5pf6g0prjtpnsx,imgname-payal-nag-1775441671830.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬ್ಯಾಂಕಾಕ್&zwnj;:&lt;/strong&gt; ಈಕೆಯ ಕಥೆ ನಿಮಗೆ ಸ್ಫೂರ್ತಿ ತುಂಬದಿದ್ದರೆ, ಬಹುಶಃ ಬೇರ್ಯಾವುದೂ ಸ್ಫೂರ್ತಿ ನೀಡದೆ ಇರಬಹುದು. ಸಾಧಿಸುವ ಛಲವಿದ್ದರೆ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಭಾರತದ ಪ್ಯಾರಾ ಆರ್ಚರಿ ಪಟು, ಎರಡು ಕೈಗಳಲ್ಲಿಲ್ಲದ ಶೀತಲ್&zwnj; ದೇವಿ ತೋರಿಸಿಕೊಟ್ಟಿದ್ದರು. ಈಗ ಎರಡು ಕೈ, ಎರಡು ಕಾಲುಗಳಿಲ್ಲದ ಪಾಯಲ್&zwnj; ನಾಗ್&zwnj;, ಶೀತಲ್&zwnj;ರನ್ನೇ ಸೋಲಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.&lt;/p&gt;&lt;p&gt;ಜಮ್ಮು-ಕಾಶ್ಮೀರದ 19 ವರ್ಷದ, ಎರಡೂ ಕೈಗಳಿಲ್ಲದ ಶೀತಲ್&zwnj; ದೇವಿ ಪ್ಯಾರಾಲಿಂಪಿಕ್ಸ್&zwnj;, ವಿಶ್ವ ಚಾಂಪಿಯನ್&zwnj;ಶಿಪ್&zwnj;, ಏಷ್ಯನ್&zwnj; ಪ್ಯಾರಾ ಗೇಮ್ಸ್&zwnj;ನ ಆರ್ಚರಿ ಸ್ಪರ್ಧೆಯಲ್ಲಿ ಪದಕ ಸಾಧನೆ ಮಾಡಿರುವ ವಿಶೇಷ ಪ್ರತಿಭೆ. ಈಗ ಭಾರತದಲ್ಲಿ ಮತ್ತೊಂದು ಅತಿ ವಿಶೇಷ ಪ್ರತಿಭೆ ಅನಾವರಣಗೊಂಡಿದೆ.&lt;/p&gt;&lt;p&gt;ಬ್ಯಾಂಕಾಕ್&zwnj;ನಲ್ಲಿ ನಡೆದ ಚೊಚ್ಚಲ ಅವೃತ್ತಿಯ ವಿಶ್ವ ಪ್ಯಾರಾ ಆರ್ಚರಿ ಸೀರಿಸ್&zwnj;ನ ಮಹಿಳೆಯರ ಕಾಂಪೌಂಡ್&zwnj; ವೈಯಕ್ತಿಕ ವಿಭಾಗದಲ್ಲಿ ಶೀತಲ್&zwnj; ವಿರುದ್ಧ ಪಾಯಲ್&zwnj; 139-136 ಅಂಕಗಳಿಂದ ಗೆದ್ದಿದ್ದಾರೆ. ಅರ್ಹತಾ ಸುತ್ತಿನಲ್ಲಿ ಶೀತಲ್&zwnj;ಗಿಂತ 20 ಅಂಕ ಕಡಿಮೆ (678-698) ಅಂಕ ಗಳಿಸಿದ್ದ ಪಾಯಲ್&zwnj;, ಫೈನಲ್&zwnj;ನಲ್ಲಿ ಅಮೋಘ ಪ್ರದರ್ಶನ ನೀಡಿ ಗೆದ್ದಿದ್ದಾರೆ. ಇದೇ ಟೂರ್ನಿಯಲ್ಲಿ ಶೀತಲ್&zwnj;-ಪಾಯಲ್&zwnj; ಜೊತೆಗೂಡಿ ಮಹಿಳಾ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಅಂದಹಾಗೆ, 18ರ ಪಾಯಲ್&zwnj;ಗೆ ಇದು ಶೀತಲ್&zwnj; ವಿರುದ್ಧ 2ನೇ ಗೆಲುವು. 2025ರ ರಾಷ್ಟ್ರೀಯ ಟೂರ್ನಿಯಲ್ಲಿ ಶೀತಲ್&zwnj;ರನ್ನು ಪಾಯಲ್&zwnj; ಸೋಲಿಸಿದ್ದರು.&lt;/p&gt;&lt;h2&gt;&lt;strong&gt;ವಿದ್ಯುತ್&zwnj; ಅವಘಡದಲ್ಲಿ ಕೈಕಾಲು ಕಳೆದುಕೊಂಡಿದ್ದ ಪಾಯಲ್&zwnj; ನಾಗ್&zwnj;&lt;/strong&gt;&lt;/h2&gt;&lt;p&gt;ಒಡಿಶಾದ ಪಾಯಲ್&zwnj; ಹುಟ್ಟುವಾಗ ಸಾಮಾನ್ಯ ಮಕ್ಕಳಂತೆಯೇ ಹುಟ್ಟಿದ್ದರು. ಅವರ ತಂದೆ ದಿನಗೂಲಿ ಗಾರೆ ಕೆಲಸದವರು. ಪಾಯಲ್&zwnj;ಗೆ 8 ವರ್ಷವಿದ್ದಾಗ ಕಾಮಗಾರಿ ನಡೆಯುತ್ತಿದ್ದ ಮನೆಯೊಂದರ ಟೆರೇಸ್&zwnj;ನ ನಿಂತಿದ್ದ ನೀರಿನಲ್ಲಿ ಆಡುತ್ತಿದ್ದಾಗ ವಿದ್ಯುತ್&zwnj; ಅವಘಡಕ್ಕೆ ತುತ್ತಾಗಿದ್ದರು. ಜೀವಕ್ಕೆ ಅಪಾಯವಿದ್ದ ಕಾರಣ ವೈದ್ಯರು ಪಾಯಲ್&zwnj;ರ 2 ಕೈ, 2 ಕಾಲುಗಳನ್ನು ಕತ್ತರಿಸಿ ತೆಗೆದಿದ್ದರು. ಇದಾದ ಬಳಿಕ ಪಾಯಲ್&zwnj;ರನ್ನು ಪೋಷಕರಾದ ಬಿಜಯ್&zwnj; ಮತ್ತು ಜನತಾ ಅನಾಥಾಶ್ರಮಕ್ಕೆ ಸೇರಿಸಿದ್ದರು.&lt;/p&gt;&lt;h3&gt;&lt;strong&gt;ಆಕೆಗೆ ವಿಷ ಕೊಟ್ಟುಬಿಡಿ ಎಂದಿದ್ದ ಸಂಬಂಧಿಕರು!&lt;/strong&gt;&lt;/h3&gt;&lt;p&gt;ತನ್ನೆರಡೂ ಕೈಕಾಲುಗಳನ್ನು ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದ ಪಾಯಲ್&zwnj; ಬಗ್ಗೆ ನೆರೆಹೊರೆಯವರು, ಕುಟುಂಬಸ್ಥರು ಚುಚ್ಚು ಮಾತುಗಳನ್ನಾಡಿದ್ದೇ ಹೆಚ್ಚು. &lsquo;ಅವಳಿಗೆ ನಡೆದಾಡಲು, ತಿನ್ನಲು ಸಾಧ್ಯವಿಲ್ಲ. ಇದಕ್ಕಿಂತ ಅವಳಿಗೆ ವಿಷ ಕೊಡುವುದೇ ಉತ್ತಮ&rsquo; ಎಂದು ಕುಟುಂಬಸ್ಥರು ಪಾಯಲ್&zwnj; ಪೋಷಕರಿಗೆ ಹೇಳಿದ್ದರಂತೆ.&lt;/p&gt;&lt;h3&gt;&lt;strong&gt;ಪಾಯಲ್&zwnj;ರ ಜೀವನ ಬದಲಿಸಿದ ಪೇಂಟಿಂಗ್&zwnj;!&lt;/strong&gt;&lt;/h3&gt;&lt;p&gt;ಅನಾಥಾಶ್ರಮದಲ್ಲಿ ಪಾಯಲ್&zwnj;ಗೆ ಬಾಯಲ್ಲಿ ಪೇಟಿಂಗ್&zwnj; ಮಾಡುವುದನ್ನು ಕಲಿಸಲಾಗಿತ್ತು. ಕಾರ್ಯಕ್ರಮವೊಂದರಲ್ಲಿ ಪಾಯಲ್&zwnj; ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರ ಭಾವಚಿತ್ರವನ್ನು ಬಿಡಿಸಿಕೊಟ್ಟಿದ್ದರು. ಆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್&zwnj; ಆಗಿತ್ತು. ಆ ವಿಡಿಯೋ ಖ್ಯಾತ ಆರ್ಚರಿ ಕೋಚ್&zwnj; ಕುಲ್ದೀಪ್&zwnj; ವೆದ್ವಾನ್&zwnj;ರ ಕಣ್ಣಿಗೆ ಬಿದ್ದಿತ್ತು. ಅಲ್ಲಿಂದ ಆಕೆಯ ಜೀವನ ಬದಲಾಯಿತು.&lt;/p&gt;&lt;p&gt;&amp;nbsp;&lt;/p&gt;&lt;p&gt; Payal Nag Wins Gold At BangkokDefeats world champion Sheetal Devi in finalFirst senior international tournament brings historic gold for IndiaIndia&rsquo;s para archery continues to shine on the global stage Payal Nag won the gold medal at the Bangkok Archery Para Series&hellip; pic.twitter.com/xmvBZ4fGb1&lt;/p&gt;&lt;p&gt;&mdash; Genzdigest (@genzdigest) April 4, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ವಿಶೇಷ ವಿನ್ಯಾಸದ ಕೃತಕ ಕಾಲು, ಬಿಲ್ಲು&lt;/strong&gt;&lt;/h3&gt;&lt;p&gt;ಪಾಯಲ್&zwnj;ರನ್ನು ತಮ್ಮ ಅಕಾಡೆಮಿ ಕರೆತಂದ ಕೋಚ್&zwnj; ಕುಲ್ದೀಪ್&zwnj;, ಅವರಿಗಾಗಿ ವಿಶೇಷ ವಿನ್ಯಾಸದ ಕೃತಕ ಕಾಲುಗಳನ್ನು ಮಾಡಿಸಿ ಅಭ್ಯಾಸ ಆರಂಭಿಸಿದ್ದರು. ಪಾಯಲ್&zwnj;ಗಾಗಿ ವಿಶೇಷ ವಿನ್ಯಾಸದ ಬಿಲ್ಲು (ಬೋ) ಸಹ ಮಾಡಿಸಲಾಯಿತು. ಕೃತಕ ಕಾಲಿನ ಸಹಾಯದಿಂದ ಬಾಣ ಬಿಡುವುದನ್ನು ಆರಂಭಿಸಲು ಪಾಯಲ್&zwnj;ಗೆ 3 ತಿಂಗಳು ಬೇಕಾಯಿತು. ಆಕೆಯ ಬಿಲ್ಲಿಗೆ ಬಾಣಗಳನ್ನು ಬೇರೆಯವರು ಹೂಡುತ್ತಾರೆ. ಕೃತಕ ಕಾಲು, ಭುಜದ ಸಹಾಯದಿಂದ ಪಾಯಲ್&zwnj; ಬಾಣವನ್ನು ಗುರಿಯತ್ತ ಕಳಿಸುತ್ತಾರೆ.&lt;/p&gt;&lt;h3&gt;&lt;strong&gt;ಶೀತಲ್&zwnj;-ಪಾಯಲ್&zwnj;ಗೆ ಬೆಳಕಾದ ಕೋಚ್&zwnj;!&lt;/strong&gt;&lt;/h3&gt;&lt;p&gt;ಪ್ಯಾರಾ ಅಥ್ಲೀಟ್&zwnj;ಗಳ ಸಾಮರ್ಥ್ಯ ಗುರುತಿಸಿ ಅವರನ್ನು ಜಾಗತಿಕ ಮಟ್ಟಕ್ಕೆ ಸಜ್ಜುಗೊಳಿಸುವ ಖ್ಯಾತಿ ಕುಲ್ದೀಪ್&zwnj; ವೆದ್ವಾನ್&zwnj;ರದ್ದು. ಈ ಹಿಂದೆ ಶೀತಲ್&zwnj; ದೇವಿಗೆ ತರಬೇತಿ ನಿಡಿ 2025ರಲ್ಲಿ ಆಕೆ ವಿಶ್ವ, ಪ್ಯಾರಾಲಿಂಪಿಕ್ಸ್&zwnj; ಚಾಂಪಿಯನ್&zwnj; ಆಗಿಸಲು ಶ್ರಮಿಸಿದ್ದರು ಬಳಿಕ ಶೀತಲ್&zwnj;ರಂತೆ ಪಾಯಲ್&zwnj;ರನ್ನೂ ಚಾಂಪಿಯನ್&zwnj; ಮಾಡುತ್ತೇನೆ ಎಂಬ ಪ್ರತಿಜ್ಞೆಗೈದು ಇದೀಗ ಆಕೆಯನ್ನೂ ವಿಶ್ವಚಾಂಪಿಯನ್&zwnj; ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Payal Nag  pic.twitter.com/3hoFL7ED23&lt;/p&gt;&lt;p&gt;&mdash; Lokesh Bag (@lokeshbag67) December 19, 2025&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/payal-nag-won-the-gold-medal-at-the-bangkok-archery-para-series-2026-mrq/articleshow-ri0cpar"/>
        </item>
        <item>
            <title><![CDATA[2026: ವಿಶ್ವ ಕಿರೀಟ ಉಳಿಸಿಕೊಳ್ಳೋರು ಯಾರು? ಟೀಂ ಇಂಡಿಯಾ ಮುಂದಿದೆ ಬೆಟ್ಟದಂತ ಸವಾಲು]]></title>
            <link>https://kannada.asianetnews.com/sports/sports-in-2026-world-champions-aiming-to-defend-titles-kvn/articleshow-sk82biw</link>
            <guid isPermaLink="true">https://kannada.asianetnews.com/sports/sports-in-2026-world-champions-aiming-to-defend-titles-kvn/articleshow-sk82biw</guid>
            <pubDate>Sat, 03 Jan 2026 09:45:16 +0530</pubDate>
            <description><![CDATA[2026ರ ಕ್ರೀಡಾ ಜಗತ್ತು ಹಲವು ರೋಚಕ ಸವಾಲುಗಳಿಗೆ ಸಾಕ್ಷಿಯಾಗಲಿದೆ. ಟಿ20 ವಿಶ್ವಕಪ್&zwnj;ನಲ್ಲಿ ಭಾರತ, ಫಿಫಾ ವಿಶ್ವಕಪ್&zwnj;ನಲ್ಲಿ ಅರ್ಜೆಂಟೀನಾ ತಮ್ಮ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಿದರೆ, ಚೆಸ್&zwnj;ನಲ್ಲಿ ಗುಕೇಶ್ ಮತ್ತು ಟೆನಿಸ್&zwnj;ನಲ್ಲಿ ಜೊಕೊವಿಚ್ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kcx2h0feq16qh88jb75a37c0,imgname-team-1766207291886.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರಲ್ಲಿ ಭರ್ಜರಿ ಮನರಂಜನೆಯ ನಿರೀಕ್ಷೆಯಲ್ಲಿರುವ ಕ್ರೀಡಾಭಿಮಾನಿಗಳು, ವಿಶ್ವ ಚಾಂಪಿಯನ್&zwnj;ಶಿಪ್ ಉಳಿಸಿಕೊಳ್ಳುವ ಆಟಗಾರರು ಅಥವಾ ತಂಡಗಳು ಯಾವುವು ಎನ್ನುವ ಕುತೂಹಲದಲ್ಲೂ ಇದ್ದಾರೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯ ತಂಡ ಅಥವಾ ಕ್ರೀಡಾಪಟು ಎನಿಸಿರುವವರಿಗೆ ಈ ವರ್ಷ ವಿಶ್ವ ಕಿರೀಟ ಉಳಿಸಿಕೊಳ್ಳುವ ಅವಕಾಶವಿದೆ. ಅದರ ವಿವರ ಇಲ್ಲಿದೆ. &amp;nbsp;&lt;/p&gt;&lt;h2&gt;&lt;strong&gt;ಭಾರತ ಕ್ರಿಕೆಟ್&zwnj; ತಂಡ&lt;/strong&gt;&lt;/h2&gt;&lt;p&gt;ಕಳೆದ 3 ಐಸಿಸಿ ಟೂರ್ನಿಗಳಲ್ಲಿ ಭಾರತ, ತನ್ನೆಲ್ಲಾ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾಗಿ ಆಡಿದೆ. ತಂಡದಿಂದ ಸ್ಥಿರ ಪ್ರದರ್ಶನ ಮೂಡಿಬಂದಿದೆ ಎನ್ನುವುದಕ್ಕೆ ಈ ಮೂರರಲ್ಲಿ ಭಾರತ 2ರಲ್ಲಿ ಚಾಂಪಿಯನ್&zwnj; ಆಗಿದೆ, ಒಂದರಲ್ಲಿ ರನ್ನರ್&zwnj;-ಅಪ್&zwnj; ಆಗಿದ್ದೇ ಉದಾಹರಣೆ. ಇನ್ನೊಂದು ತಿಂಗಳ ಸಮಯದಲ್ಲಿ ಭಾರತ ತಂಡ ಮತ್ತೊಂದು ವಿಶ್ವಕಪ್&zwnj;ನಲ್ಲಿ ಆಡಲಿದೆ. ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್&zwnj;ನಲ್ಲಿ ಹಾಲಿ ಚಾಂಪಿಯನ್&zwnj; ಆಗಿ ಕಣಕ್ಕಿಳಿಯಲಿರುವ ತಂಡಕ್ಕೆ ಟ್ರೋಫಿ ಉಳಿಸಿಕೊಳ್ಳುವ ಅವಕಾಶವಿದೆ. ಟಿ20 ವಿಶ್ವಕಪ್&zwnj; ಇತಿಹಾಸದಲ್ಲೇ ಯಾವ ತಂಡಕ್ಕೂ ಸತತ 2 ಬಾರಿ ವಿಶ್ವಕಪ್&zwnj; ಗೆಲ್ಲಲು ಸಾಧ್ಯವಾಗಿಲ್ಲ. ಯಾವ ತಂಡವೂ ತನ್ನ ತವರಿನಲ್ಲಿ ವಿಶ್ವಕಪ್&zwnj; ಜಯಿಸಿಲ್ಲ. ಈ ಎರಡೂ ದಾಖಲೆ ಬರೆಯಲು ಟೀಂ ಇಂಡಿಯಾಗೆ ಅವಕಾಶವಿದೆ. ಜೊತೆಗೆ ಕಳೆದ ವಿಶ್ವಕಪ್&zwnj;ನಲ್ಲಿ ರೋಹಿತ್&zwnj; ಶರ್ಮಾ ಹಾಗೂ ವಿರಾಟ್&zwnj; ಕೊಹ್ಲಿ ಅವರ ಅನುಭವದ ಅಭಯ ತಂಡಕ್ಕಿತ್ತು. ಈ ಬಾರಿ ಅವರಿಬ್ಬರ ಅನುಪಸ್ಥಿತಿ ತಂಡ ಟ್ರೋಫಿ ಉಳಿಸಿಕೊಳ್ಳಲು ಹೋರಾಡಬೇಕಿದೆ.&lt;/p&gt;&lt;h3&gt;--&lt;strong&gt;ಲಿಯೋನೆಲ್&zwnj; ಮೆಸ್ಸಿಯ ಅರ್ಜೆಂಟೀನಾ&lt;/strong&gt;&lt;/h3&gt;&lt;p&gt;ಫುಟ್ಬಾಲ್&zwnj; ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಫಿಫಾ ಫುಟ್ಬಾಲ್&zwnj; ವಿಶ್ವಕಪ್&zwnj; ಈ ವರ್ಷ ಜೂನ್&zwnj;, ಜುಲೈನಲ್ಲಿ ನಡೆಯಲಿದ್ದು, ಲಿಯೋನೆಲ್&zwnj; ಮೆಸ್ಸಿಯ ಅರ್ಜೆಂಟೀನಾ ಹಾಲಿ ವಿಶ್ವ ಚಾಂಪಿಯನ್&zwnj; ಆಗಿ ಟೂರ್ನಿಯಲ್ಲಿ ಆಡಲಿದೆ. 2022ರಲ್ಲಿ ಅರ್ಜೆಂಟೀನಾ ಟ್ರೋಫಿ ಗೆದ್ದಾಗಲೇ ಅದು ಮೆಸ್ಸಿಯ ಕೊನೆಯ ವಿಶ್ವಕಪ್&zwnj; ಆಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಮೆಸ್ಸಿ ತಮ್ಮ ಅತ್ಯುತ್ತಮ ಫಿಟ್ನೆಸ್&zwnj; ಹಾಗೂ ಲಯದೊಂದಿಗೆ ಮತ್ತೊಂದು ವಿಶ್ವಕಪ್&zwnj;ಗೆ ಸಜ್ಜಾಗಿದ್ದಾರೆ. ವಿಶ್ವಕಪ್&zwnj; ಅರ್ಹತಾ ಟೂರ್ನಿಯಲ್ಲಿ ಅರ್ಜೆಂಟೀನಾ 18 ಪಂದ್ಯಗಳಲ್ಲಿ 12ರಲ್ಲಿ ಗೆದ್ದಿದೆ. ಜೊತೆಗೆ ವಿಶ್ವ ರ್&zwj;ಯಾಂಕಿಂಗ್&zwnj;ನಲ್ಲಿ 2ನೇ ಸ್ಥಾನ ಉಳಿಸಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಅರ್ಜೆಂಟೀನಾಗೆ ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ ಪೋರ್ಚುಗಲ್&zwnj; ಎದುರಾಗಬಹುದು. ನಿವೃತ್ತಿಗೂ ಮುನ್ನ ಒಂದು ವಿಶ್ವಕಪ್&zwnj; ಗೆಲ್ಲಲೇಬೇಕು ಎನ್ನುವ ಮಹದಾಸೆಯೊಂದಿಗೆ ತಮ್ಮ 40ನೇ ವಯಸ್ಸಲ್ಲೂ ಕ್ರೀಡೆಯಲ್ಲಿ ಸಕ್ರಿಯರಾಗಿರುವ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ 38ರ ಮೆಸ್ಸಿ ಮುಖಾಮುಖಿಯಾಗಬಹುದು. ಹಾಗೇನಾದರೂ ಆದರೆ, ಫುಟ್ಬಾಲ್&zwnj; ಪ್ರೇಮಿಗಳಿಗೆ ಅದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದಿರುವುದಿಲ್ಲ.&lt;/p&gt;&lt;p&gt;----&lt;/p&gt;&lt;h3&gt;&lt;strong&gt;ಚೆಸ್&zwnj; ವಿಶ್ವ ಚಾಂಪಿಯನ್&zwnj; ಗುಕೇಶ್&zwnj;&lt;/strong&gt;&lt;/h3&gt;&lt;h3&gt;--&lt;/h3&gt;&lt;p&gt;ಕಳೆದ ಒಂದು ವರ್ಷದಿಂದ 19 ವರ್ಷದ ಡಿ.ಗುಕೇಶ್&zwnj; ಚೆಸ್&zwnj; ವಿಶ್ವ ಚಾಂಪಿಯನ್&zwnj;ಶಿಪ್&zwnj; ಸಿಂಹಾಸನದ ಮೇಲೆ ವಿರಾಜಮಾನರಾಗಿದ್ದಾರೆ. 2024ರಲ್ಲಿ ಅವರು ಚೀನಾದ ಡಿಂಗ್&zwnj; ಲಿರೆನ್&zwnj;ರನ್ನು ಸೋಲಿಸಿ ಚೊಚ್ಚಲ ವಿಶ್ವ ಕಿರೀಟಕ್ಕೆ ಮುತ್ತಿಟ್ಟಿದ್ದರು. 2026ರಲ್ಲಿ ಗುಕೇಶ್&zwnj; ವಿಶ್ವ ಚಾಂಪಿಯನ್&zwnj; ಪಟ್ಟ ಉಳಿಸಿಕೊಳ್ಳಲು ಹೋರಾಡಲಿದ್ದಾರೆ. ಬಹುತೇಕ ನವೆಂಬರ್&zwnj;-ಡಿಸೆಂಬರ್&zwnj;ನಲ್ಲಿ ವಿಶ್ವ ಚಾಂಪಿಯನ್&zwnj;ಶಿಪ್&zwnj; ನಡೆಯಲಿದೆ. ಅದಕ್ಕೂ ಮುನ್ನ ಗುಕೇಶ್&zwnj;ಗೆ ಎದುರಾಳಿ ಯಾರು ಎನ್ನುವುದನ್ನು ನಿರ್ಧರಿಸಲು ಮಾ.28ರಿಂದ ಏ.16ರ ವರೆಗೂ ಕ್ಯಾಂಡಿಡೇಟ್ಸ್&zwnj; ಟೂರ್ನಿ ನಡೆಯಲಿದೆ.&lt;/p&gt;&lt;p&gt;ಈ ವರ್ಷ ಗುಕೇಶ್&zwnj; ಮಿಶ್ರ ಫಲ ಅನುಭವಿಸಿದ್ದರೂ, ಸಾಂಪ್ರದಾಯಿಕ ಮಾದರಿ ಚೆಸ್&zwnj;ನಲ್ಲಿ ಅತ್ಯಂತ ಕಠಿಣ ಸ್ಪರ್ಧಿ ಎನಿಸಿರುವ ಗುಕೇಶ್&zwnj;ರನ್ನು 14 ಸುತ್ತುಗಳ ವಿಶ್ವ ಚಾಂಪಿಯನ್&zwnj;ಶಿಪ್&zwnj;ನಲ್ಲಿ ಸೋಲಿಸುವುದು ಅಷ್ಟೊಂದು ಸುಲಭವೇನೂ ಆಗಿರಲ್ಲ.&lt;/p&gt;&lt;h3&gt;&lt;strong&gt;ಪೋಲ್&zwnj; ವಾಲ್ಟ್&zwnj; ದಾಖಲೆ ವೀರ ಡುಪ್ಲಾಂಟಿಸ್&zwnj;&lt;/strong&gt;&lt;/h3&gt;&lt;p&gt;ಸ್ವೀಡನ್&zwnj;ನ ಮೊಂಡೊ ಡುಪ್ಲಾಂಟಿಸ್&zwnj; ಫೆ.8, 2020ರಿಂದ ಸೆ.15, 2025ರ ನಡುವೆ ಪೋಲ್&zwnj; ವಾಲ್ಟ್&zwnj;ನಲ್ಲಿ 14 ಬಾರಿ ವಿಶ್ವ ದಾಖಲೆ ಬರೆದಿದ್ದಾರೆ. 6.17 ಮೀ.ನಿಂದ ಶುರುವಾದ ದಾಖಲೆಯನ್ನು ನಿರಂತರವಾಗಿ ಉತ್ತಮ ಪಡಿಸಿಕೊಂಡು ಸಾಗಿರುವ ಡುಪ್ಲಾಂಟಿಸ್&zwnj; ಈಗ 6.30 ಮೀ. ತಲುಪಿದ್ದಾರೆ. ಸೆ.13ರಿಂದ 25ರ ವರೆಗೂ ಜಪಾನ್&zwnj;ನ ಟೋಕಿಯೋದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್&zwnj; ಚಾಂಪಿಯನ್&zwnj;ಶಿಪ್&zwnj;ನಲ್ಲಿ ಡುಪ್ಲಾಂಟಿಸ್&zwnj; ತಮ್ಮ ವಿಶ್ವ ದಾಖಲೆ, ವಿಶ್ವ ಚಾಂಪಿಯನ್&zwnj;ಪಟ್ಟ ಎರಡೂ ಉಳಿಸಿಕೊಳ್ಳಲು ಹಾರಲಿದ್ದಾರೆ.&lt;/p&gt;&lt;h3&gt;&lt;strong&gt;25ನೇ ಗ್ರ್ಯಾನ್&zwnj;ಸ್ಲಾಂ ಹುಡುಕಾಟದಲ್ಲಿ ಜೋಕೋ&lt;/strong&gt;&lt;/h3&gt;&lt;p&gt;25ನೇ ಗ್ರ್ಯಾನ್&zwnj;ಸ್ಲಾಂ ಪ್ರಶಸ್ತಿಗಾಗಿ ನೋವಾಕ್&zwnj; ಜೋಕೋವಿಚ್&zwnj; 2026ರಲ್ಲೂ ಹುಡುಕಾಟ ಮುಂದುವರಿಸಲಿದ್ದಾರೆ. 38 ವರ್ಷದ ಜೋಕೋ ಈ ವರ್ಷ ಗೆಲ್ಲದಿದ್ದರೆ, ಬಹುಶಃ ಅವರ ಕನಸು ಕನಸಾಗಿಯೇ ಉಳಿಯಬಹುದು. ದಾಖಲೆಯ 25ನೇ ಪ್ರಶಸ್ತಿಗೆ ಜೋಕೋ, ಆಲ್ಕರಜ್&zwnj;-ಸಿನ್ನರ್&zwnj;ರ ಚಕ್ರವ್ಯೂಹವನ್ನು ಭೇದಿಸಬೇಕಿದೆ. ಕಳೆದ ವರ್ಷ ಒಂದೂ ಗ್ರ್ಯಾನ್&zwnj;ಸ್ಲಾಂ ಗೆಲ್ಲದ ಜೋಕೋವಿಚ್&zwnj; ಈ ವರ್ಷ 4ರಲ್ಲಿ ಒಂದಾದರೂ ಗೆಲ್ಲಲಿ ಎನ್ನುವುದು ಅಭಿಮಾನಿಗಳ ಒತ್ತಾಸೆ.&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/sports-in-2026-world-champions-aiming-to-defend-titles-kvn/articleshow-sk82biw"/>
        </item>
        <item>
            <title><![CDATA[ಆಸ್ಟ್ರೇಲಿಯನ್ ಓಪನ್: ನಾವು ಟೆನಿಸ್‌ ಆಟಗಾರರೇ, ಮೃಗಾಲಯದ ಪ್ರಾಣಿಗಳೇ?: ಟೆನಿಸರ್‌ ತಾರೆ ಇಗಾ ಕಿಡಿ!]]></title>
            <link>https://kannada.asianetnews.com/sports/australian-open-iga-swiatek-slams-video-of-coco-gauff-breaking-racket-kvn/articleshow-tyaod3p</link>
            <guid isPermaLink="true">https://kannada.asianetnews.com/sports/australian-open-iga-swiatek-slams-video-of-coco-gauff-breaking-racket-kvn/articleshow-tyaod3p</guid>
            <pubDate>Thu, 29 Jan 2026 10:29:56 +0530</pubDate>
            <description><![CDATA[ಆಸ್ಟ್ರೇಲಿಯನ್&zwnj; ಓಪನ್&zwnj;ನಲ್ಲಿ ಆಟಗಾರ್ತಿ ಕೊಕೊ ಗಾಫ್&zwnj;ರ ಗೌಪ್ಯತೆ ಉಲ್ಲಂಘಿಸಿದ್ದಕ್ಕೆ ಇಗಾ ಸ್ವಿಯಾಟೆಕ್&zwnj; ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ನೋವಾಕ್&zwnj; ಜೋಕೋವಿಚ್&zwnj; ಮತ್ತು ಯಾನಿಕ್&zwnj; ಸಿನ್ನರ್&zwnj; ಪುರುಷರ ಸಿಂಗಲ್ಸ್&zwnj;ನಲ್ಲಿ ಸೆಮಿಫೈನಲ್&zwnj; ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಸೆಣಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k49z2rc25w3wxmdpqf71y6k9,imgname-gettyimages-2232927579-1756976210306.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಲ್ಬರ್ನ್&zwnj;: ಆಸ್ಟ್ರೇಲಿಯನ್&zwnj; ಓಪನ್&zwnj; ಟೆನಿಸ್&zwnj; ಟೂರ್ನಿಯಲ್ಲಿ ಸೋಲಿನ ಬಳಿಕ ಅಮೆರಿಕದ ಕೊಕೊ ಗಾಫ್&zwnj; ತಮ್ಮ ರ್&zwj;ಯಾಕೆಟ್ ಪುಡಿಗಟ್ಟಿದ್ದನ್ನು ವಿಡಿಯೋ ಮಾಡಿದ್ದಕ್ಕೆ ಪೋಲೆಂಡ್&zwnj;ನ ತಾರಾ ಆಟಗಾರ್ತಿ ಇಗಾ ಸ್ವಿಯಾಟೆಕ್&zwnj; ಕಿಡಿಕಾರಿದ್ದು, &lsquo;ನಾವು ಟೆನಿಸ್&zwnj; ಆಟಗಾರರೇ ಅಥವಾ ಮೃಗಾಯದಲ್ಲಿರುವ ಪ್ರಾಣಿಗಳೇ?&rsquo; ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಗಾಫ್&zwnj; ಕ್ವಾರ್ಟರ್ ಫೈನಲ್&zwnj;ನಲ್ಲಿ ಎಲಿನಾ ಸ್ವಿಟೋಲಿನಾ ವಿರುದ್ಧ ಸೋತು ಡ್ರೆಸ್ಸಿಂಗ್&zwnj; ರೂಮ್&zwnj; ಕಡೆ ತೆರಳುತ್ತಿದ್ದಾಗ ರ್&zwj;ಯಾಕೆಟ್ ನೆಲಕ್ಕೆ ಬಡಿದು ಪುಡಿಗಟ್ಟಿದ್ದರು. ಆದರೆ ಇದು ವಿಡಿಯೋದಲ್ಲಿ ಸೆರೆಯಾಗಿತ್ತು. ಆಟಗಾರರ ಗೌಪ್ಯತೆ ಕಾಪಾಡದ್ದಕ್ಕೆ ಇಗಾ ಅಸಮಾಧಾನ ವ್ಯಕ್ತಪಡಿದ್ದು, &lsquo;ನಾವು ಟೆನಿಸ್&zwnj; ಆಟಗಾರರೇ ಅಥವಾ ಮೃಗಾಲಯದಲ್ಲಿರುವ ಪ್ರಾಣಿಗಳೇ? ಸ್ವಲ್ಪವಾದರೂ ಗೌಪ್ಯತೆ ಇದ್ದರೆ ಒಳ್ಳೆಯದು. ಯಾವಾಗಲೂ ಇತರರು ಗಮನಿಸುತ್ತಿರಬೇಕಾಗಿಲ್ಲ&rsquo; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಸೆಮಿಫೈನಲ್&zwnj;ಗೆ ಲಗ್ಗೆ ಇಟ್ಟ ಜೋಕೋವಿಚ್&zwnj;, ಸಿನ್ನರ್&zwnj;&lt;/strong&gt;&lt;/h2&gt;&lt;p&gt;ಮೆಲ್ಬರ್ನ್&zwnj;: ದಿಗ್ಗಜ ಟೆನಿಸಿಗ, 24 ಗ್ರ್ಯಾನ್&zwnj;ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್&zwnj; ಜೋಕೋವಿಚ್&zwnj; ಈ ಬಾರಿ ಆಸ್ಟ್ರೇಲಿಯನ್&zwnj; ಓಪನ್&zwnj; ಟೆನಿಸ್&zwnj; ಟೂರ್ನಿಯಲ್ಲಿ ಸೆಮಿಫೈನಲ್&zwnj; ಪ್ರವೇಶಿಸಿದ್ದಾರೆ. ಕಳೆದೆರಡು ಬಾರಿ ಚಾಂಪಿಯನ್ ಯಾನಿಕ್&zwnj; ಸಿನ್ನರ್&zwnj; ಕೂಡಾ ಅಂತಿಮ 4ರ ಘಟ್ಟ ತಲುಪಿದ್ದಾರೆ.&lt;/p&gt;&lt;p&gt;ಟೂರ್ನಿಯಲ್ಲಿ 10 ಬಾರಿ ಚಾಂಪಿಯನ್&zwnj;, ಸರ್ಬಿಯಾದ ಜೋಕೋವಿಚ್&zwnj; ಅವರು ಬುಧವಾರ ಪುರುಷರ ಸಿಂಗಲ್ಸ್&zwnj; ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ 5ನೇ ಶ್ರೇಯಾಂಕಿತ, ಇಟಲಿಯ ಲೊರೆಂಜೊ ಮುಸೆಟ್ಟಿ ವಿರುದ್ಧ ಆಡಿದರು. ಮೊದಲೆರಡು ಸೆಟ್&zwnj;ನಲ್ಲಿ ಮುಸೆಟ್ಟಿ ಗೆದ್ದರೂ, 3ನೇ ಸೆಟ್&zwnj;ನಲ್ಲಿ ಜೋಕೋ 3-1ರಲ್ಲಿ ಮುನ್ನಡೆಯಲ್ಲಿದ್ದರು. ಈ ವೇಳೆ ಮುಸೆಟ್ಟಿ ಗಾಯಗೊಂಡ ಕಾರಣ ಜೋಕೋವಿಚ್&zwnj; ಸೆಮೀಸ್&zwnj; ಪ್ರವೇಶಿಸುವ ಅವಕಾಶ ಪಡೆದುಕೊಂಡರು.&lt;/p&gt;&lt;p&gt;ಮತ್ತೊಂದು ಕ್ವಾರ್ಟರ್&zwnj;ನಲ್ಲಿ ಅಮೆರಿಕದ 8ನೇ ಶ್ರೇಯಾಂಕಿತ ಬೆನ್&zwnj; ಶೆಲ್ಟನ್&zwnj; ವಿರುದ್ಧ ವಿಶ್ವ ನಂ.2 ಸಿನ್ನರ್&zwnj; 6-3, 6-4, 6-4 ನೇರ ಸೆಟ್&zwnj;ಗಳಲ್ಲಿ ಜಯಭೇರಿ ಬಾರಿಸಿದರು.&lt;/p&gt;&lt;h3&gt;&lt;strong&gt;ಸ್ವಿಯಾಟೆಕ್&zwnj; ಔಟ್&zwnj;:&lt;/strong&gt;&lt;/h3&gt;&lt;p&gt;6 ಬಾರಿ ಗ್ರ್ಯಾನ್&zwnj;ಸ್ಲಾಂ ಗೆದ್ದಿದ್ದರೂ ಆಸ್ಟ್ರೇಲಿಯನ್&zwnj; ಓಪನ್&zwnj; ಗೆಲ್ಲಲಾಗದ ಪೋಲೆಂಡ್&zwnj; ತಾರೆ ಇಗಾ ಸ್ವಿಯಾಟೆಕ್&zwnj; ಈ ಬಾರಿಯೂ ಪ್ರಶಸ್ತಿ ತಪ್ಪಿಸಿಕೊಂಡರು. ಅವರು ಬುಧವಾರ ಮಹಿಳಾ ಸಿಂಗಲ್ಸ್&zwnj; ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ 5ನೇ ಶ್ರೇಯಾಂಕಿತ ಎಲೆನಾ ರಬೈಕೆನಾ ವಿರುದ್ಧ 5-7, 1-6 ಸೆಟ್&zwnj;ಗಳಲ್ಲಿ ಸೋತು ಹೊರಬಿದ್ದರು. ಮತ್ತೊಂದು ಕ್ವಾರ್ಟರ್&zwnj;ನಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ತಮ್ಮದೇ ದೇಶದ ಅಮಂಡಾ ಅನಿಸಿಮೋವಾ ವಿರುದ್ಧ ಗೆದ್ದು ಸೆಮಿಫೈನಲ್&zwnj; ತಲುಪಿದರು.&lt;/p&gt;&lt;h3&gt;&lt;strong&gt;ಜೋಕೋ-ಸಿನ್ನರ್&zwnj; ಸೆಮೀಸ್&zwnj; ನಾಳೆ&lt;/strong&gt;&lt;/h3&gt;&lt;p&gt;ಕಳೆದ ಒಂದೆರಡು ವರ್ಷಗಳಿಂದ ಜೋಕೋವಿಚ್&zwnj;ಗೆ ಪ್ರಮುಖ ಸವಾಲು ಒಡ್ಡುತ್ತಿರುವ ಯುವ ಸೂಪರ್&zwnj;ಸ್ಟಾರ್&zwnj; ಸಿನ್ನರ್&zwnj; ಈ ಬಾರಿಯೂ ಜೋಕೋಗೆ ಪೈಪೋಟಿ ನೀಡಲಿದ್ದಾರೆ. ಇವರಿಬ್ಬರ ನಡುವಿನ ಸೆಮಿಫೈನಲ್&zwnj; ಪಂದ್ಯ ಶುಕ್ರವಾರ ನಡೆಯಲಿದೆ. ಪಂದ್ಯದಲ್ಲಿ ಸಿನ್ನರ್&zwnj; ಗೆಲ್ಲುವ ಫೇವರಿಟ್&zwnj; ಎನಿಸಿಕೊಂಡಿದ್ದಾರೆ. ಮತ್ತೊಂದು ಸೆಮಿಫೈನಲ್&zwnj;ನಲ್ಲಿ ಆಲ್ಕರಜ್&zwnj; ಹಾಗೂ ಅಲೆಕ್ಸಾಂಡರ್&zwnj; ಜ್ವೆರೆವ್&zwnj; ಸೆಣಸಲಿದ್ದಾರೆ.&lt;/p&gt;]]></content:encoded>
            <category>other-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/sports/australian-open-iga-swiatek-slams-video-of-coco-gauff-breaking-racket-kvn/articleshow-tyaod3p"/>
        </item>
        <item>
            <title><![CDATA[ಸಾಮರ್ಥ್ಯ ಇರೋರಿಗೆ ಸಿಗುತ್ತಿಲ್ಲ ಅವಕಾಶ, ಕರ್ನಾಟಕ ಕ್ರೀಡಾ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ! ಸಿಡೆದಿದ್ದ ಅಥ್ಲೀಟ್ಸ್‌]]></title>
            <link>https://kannada.asianetnews.com/other-sports/karnataka-mission-olympics-scheme-row-athletes-allege-bias-and-lack-of-transparency-in-selection-gdp/articleshow-xe4w6ex</link>
            <guid isPermaLink="true">https://kannada.asianetnews.com/other-sports/karnataka-mission-olympics-scheme-row-athletes-allege-bias-and-lack-of-transparency-in-selection-gdp/articleshow-xe4w6ex</guid>
            <pubDate>Wed, 25 Mar 2026 13:18:15 +0530</pubDate>
            <description><![CDATA[ಕರ್ನಾಟಕದ 'ಮಿಷನ್ ಒಲಿಂಪಿಕ್ಸ್' ಯೋಜನೆಯಲ್ಲಿ ಅರ್ಹ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಮತ್ತು ರಾಜಕೀಯ ಪ್ರಭಾವವಿದೆ ಎಂದು ಆರೋಪಿಸಿರುವ ಅವರು, ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಸೇರಿದಂತೆ ಹಲವರು ತನಿಖೆಗೆ ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kh7tcyr030t64ap8rvgy88hg,imgname-up-sports-budget-2026-1770862836480.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಕ್ರೀಡಾ ಇಲಾಖೆಯ ವಿರುದ್ಧ ಕ್ರೀಡಾಪಟುಗಳ ಅಸಮಾಧಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮಿಷನ್ ಒಲಿಂಪಿಕ್ಸ್ ಯೋಜನೆಯಡಿ ಅರ್ಹ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಮತ್ತು ರಾಜಕೀಯ ಪ್ರಭಾವವಿದೆ ಎಂಬ ಗಂಭೀರ ಆರೋಪಗಳು ಹೊರಹೊಮ್ಮಿವೆ.&lt;/p&gt;&lt;p&gt;ರಾಜ್ಯವನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಪದಕಗಳನ್ನು ಜಯಿಸಿದ ಕ್ರೀಡಾಪಟುಗಳೇ ಈ ಯೋಜನೆಯಿಂದ ಹೊರಗುಳಿದಿದ್ದಾರೆ ಎನ್ನುವುದು ಪ್ರಮುಖ ಆಕ್ಷೇಪವಾಗಿದೆ. ಒಲಿಂಪಿಕ್ಸ್&zwnj;ಗೆ ತಯಾರಿ ನಡೆಸುವ ಸಾಮರ್ಥ್ಯ ಹೊಂದಿರುವ ಕ್ರೀಡಾಪಟುಗಳಿಗೆ ಸರ್ಕಾರ ವರ್ಷಕ್ಕೆ ₹10 ಲಕ್ಷ ಆರ್ಥಿಕ ನೆರವು ನೀಡುವ ಮಿಷನ್ ಒಲಿಂಪಿಕ್ಸ್ ಯೋಜನೆ ಜಾರಿಯಲ್ಲಿದ್ದು, ನಾಲ್ಕು ವರ್ಷಗಳ ಕಾಲ ಈ ನೆರವು ನೀಡಲಾಗುತ್ತದೆ. ಆದರೆ ಈ ಸೌಲಭ್ಯ ಅರ್ಹರಿಗೆ ಸಿಗುತ್ತಿಲ್ಲ ಎಂಬುದು ಕ್ರೀಡಾಪಟುಗಳ ಆರೋಪ.&lt;/p&gt;&lt;h2&gt;&ldquo;ಅರ್ಹರಿಗೆ ಅವಕಾಶ ಇಲ್ಲ&rdquo; ಕ್ರೀಡಾಪಟು ಅಸಮಾಧಾನ&lt;/h2&gt;&lt;p&gt;ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ಗೆ ಮಾತನಾಡಿದ ಕ್ರೀಡಾಪಟು ಸ್ನೇಹಾ, &ldquo;ನಾವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹಾಗೂ ಭಾರತವನ್ನು ಪ್ರತಿನಿಧಿಸಿ ಪದಕಗಳನ್ನು ಜಯಿಸಿದ್ದೇವೆ. ಆದರೂ ನಮ್ಮನ್ನು ಮಿಷನ್ ಒಲಿಂಪಿಕ್ಸ್ ಯೋಜನೆಯಲ್ಲಿ ಪರಿಗಣಿಸಲಾಗಿಲ್ಲ. ಯಾವುದೇ ಗಮನಾರ್ಹ ಸಾಧನೆ ಮಾಡದ ಕೆಲ ಕ್ರೀಡಾಪಟುಗಳನ್ನು ರಾಜಕೀಯ ಪ್ರಭಾವದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಕೂಡ ಆಕ್ರೋಶ&lt;/h2&gt;&lt;p&gt;ಟಾರ್ಗೆಟ್ ಒಲಿಂಪಿಕ್ ಸ್ಕೀಮ್ ಹಂಚಿಕೆ ಕುರಿತು ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ ತಯಾರಿಗೆ ವರ್ಷಕ್ಕೆ ₹10 ಲಕ್ಷ ನೀಡಲಾಗುತ್ತಿದೆ. ನಾವು ಕೂಡ ಅರ್ಜಿ ಸಲ್ಲಿಸಿದ್ದೇವೆ. ಆದರೆ ಕೇವಲ ಕೆಲವರಿಗೆ ಮಾತ್ರ ಹಣ ಜಮೆಯಾಗಿದೆ. ವಯಸ್ಸಿನ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 2024ರಲ್ಲಿಯೂ ಈ ಯೋಜನೆಯಡಿ ನನಗೆ ಯಾವುದೇ ನೆರವು ಸಿಗಲಿಲ್ಲ. ಆದರೆ ಹಣ ಪಡೆದ ಕೆಲವರು ಒಲಿಂಪಿಕ್ಸ್&zwnj;ಗೆ ಆಯ್ಕೆಯಾಗಲಿಲ್ಲ. ಈ ಬಾರಿಯೂ ಹಲವಾರು ಅರ್ಹ ಕ್ರೀಡಾಪಟುಗಳು ಹೊರಗುಳಿದಿದ್ದಾರೆ,&rdquo; ಎಂದು ಆರೋಪಿಸಿದ್ದಾರೆ.&lt;/p&gt;&lt;h2&gt;&ldquo;ಪ್ರದರ್ಶನವೇ ಮಾನದಂಡವಾಗಲಿ&rdquo;&lt;/h2&gt;&lt;p&gt;ಪೂವಮ್ಮ ಅವರು ಕೇಂದ್ರ ಸರ್ಕಾರದ ಟಾಪ್ (TOPS) ಯೋಜನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿ, &ldquo;ಅಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರ್ಯಾಂಕಿಂಗ್ ಹಾಗೂ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇದೇ ಮಾದರಿಯನ್ನು ಇಲ್ಲಿ ಕೂಡ ಅನುಸರಿಸಬೇಕು. ವಯಸ್ಸು ಮುಖ್ಯವಲ್ಲ, ಪ್ರದರ್ಶನವೇ ಮುಖ್ಯ ಮಾನದಂಡವಾಗಬೇಕು,&rdquo; ಎಂದು ಹೇಳಿದ್ದಾರೆ.&lt;/p&gt;&lt;h2&gt;ತನಿಖೆಗೆ ಒತ್ತಾಯ&lt;/h2&gt;&lt;p&gt;ಕ್ರೀಡಾಪಟುಗಳು ಮುಖ್ಯಮಂತ್ರಿಗಳಿಗೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. 2024ರ ಒಲಿಂಪಿಕ್ಸ್ ತಯಾರಿ ಸಹಾಯಧನ ವಿತರಣೆ ಕುರಿತು ಸ್ಪಷ್ಟತೆ ಇಲ್ಲದಿರುವುದು ಹಾಗೂ ಹಣ ಪಡೆದವರ ಪಟ್ಟಿಯನ್ನು ಬಹಿರಂಗಪಡಿಸದಿರುವುದೂ ಅನುಮಾನಗಳಿಗೆ ಕಾರಣವಾಗಿದೆ.&lt;/p&gt;&lt;p&gt;ಇದಲ್ಲದೆ, 2028ರ ಒಲಿಂಪಿಕ್ಸ್ ತಯಾರಿ ಸಹಾಯಧನ ಸೇರಿದಂತೆ ಹಳೆಯ ಅನುದಾನಗಳ ವಿತರಣೆಯಲ್ಲೂ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರಭಾವ ಬಳಸಿ ಅನೇಕ ಕ್ರೀಡಾಪಟುಗಳ ಹೆಸರನ್ನು ಸೇರಿಸಲಾಗಿದೆ ಎಂಬುದು ಕ್ರೀಡಾಪಟುಗಳ ಮತ್ತೊಂದು ಗಂಭೀರ ಆರೋಪವಾಗಿದೆ.&lt;/p&gt;&lt;p&gt;ಒಟ್ಟಾರೆ, ಮಿಷನ್ ಒಲಿಂಪಿಕ್ಸ್ ಯೋಜನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ, ರಾಜಕೀಯ ಪ್ರಭಾವ ಮತ್ತು ಅರ್ಹ ಕ್ರೀಡಾಪಟುಗಳ ಕಡೆಗಣನೆ ಎಂಬ ಆರೋಪಗಳು ಕರ್ನಾಟಕ ಕ್ರೀಡಾ ಇಲಾಖೆಗೆ ಸವಾಲಾಗಿ ಪರಿಣಮಿಸಿವೆ. ತಕ್ಷಣವೇ ನ್ಯಾಯಸಮ್ಮತ ಹಾಗೂ ಪಾರದರ್ಶಕ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ತರುವಂತೆ ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>other-sports</category>
            <dc:creator>Gowthami K</dc:creator>
            <atom:link href="https://kannada.asianetnews.com/other-sports/karnataka-mission-olympics-scheme-row-athletes-allege-bias-and-lack-of-transparency-in-selection-gdp/articleshow-xe4w6ex"/>
        </item>
        <item>
            <title><![CDATA[ಏಷ್ಯಾ ಸೀರೀಸ್‌ ರೇಸಿಂಗ್‌ನಲ್ಲಿ ಭಾರತದ ಉದಯೋನ್ಮುಖ ರೇಸರ್‌ ಕಿಯಾನ್‌ ಶಾ ಪೋಡಿಯಂ ಫಿನಿಶ್‌]]></title>
            <link>https://kannada.asianetnews.com/other-sports/mumbai-teen-kiaan-shah-shines-with-double-podium-on-senior-international-debut-in-asia-series/articleshow-yqhv609</link>
            <guid isPermaLink="true">https://kannada.asianetnews.com/other-sports/mumbai-teen-kiaan-shah-shines-with-double-podium-on-senior-international-debut-in-asia-series/articleshow-yqhv609</guid>
            <pubDate>Fri, 03 Apr 2026 23:59:32 +0530</pubDate>
            <description><![CDATA[&lt;p&gt;ಏಷ್ಯಾ ಸೀರೀಸ್&zwnj; ರೇಸಿಂಗ್&zwnj;ನಲ್ಲಿ ಭಾರತದ ಉದಯೋನ್ಮುಖ ರೇಸರ್&zwnj; ಕಿಯಾನ್&zwnj; ಶಾ ಪೋಡಿಯಂ ಫಿನಿಶ್&zwnj;, ಅಂ.ರಾ.ರೇಸಿಂಗ್&zwnj;ನ ಹಿರಿಯರ ವಿಭಾಗದಲ್ಲಿ ಚೊಚ್ಚಲ ರೇಸ್&zwnj;ನಲ್ಲೇ ಮಿಂಚಿದ ರಾಯೊ ರೇಸಿಂಗ್&zwnj; ತಂಡದ ಚಾಲಕನ ಸಾಧನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kna9ptn8gccn5xsv8x32aas7,imgname-asia-series-1775240964776.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಏ.03)&lt;/strong&gt; ಭಾರತದ ಉದಯೋನ್ಮುಖ ರೇಸರ್&zwnj;, ರಾಯೊ ರೇಸಿಂಗ್&zwnj;ನ ಕಿಯಾನ್&zwnj; ಶಾ, ಅಂತಾರಾಷ್ಟ್ರೀಯ ರೇಸಿಂಗ್&zwnj;ನ ಹಿರಿಯರ ವಿಭಾಗಕ್ಕೆ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಐಎಎಂಇ ಏಷ್ಯಾ ಸೀರೀಸ್&zwnj; ಹಾಗೂ ಐಎಎಂಇ ಥಾಯ್ಲೆಂಡ್&zwnj; ಸೀರೀಸ್&zwnj;ನ ರೇಸ್&zwnj;ನಲ್ಲಿ 3ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಭಾನುವಾರ ರಾತ್ರಿ ನಡೆದ ರೇಸ್&zwnj;ನಲ್ಲಿ ಮುಂಬೈನ 15 ವರ್ಷದ ಕಿಯಾನ್&zwnj;, ಪೋಡಿಯಂ ಫಿನಿಶ್&zwnj; ಮಾಡಿದರು. ಕಳೆದ ಡಿಸೆಂಬರ್&zwnj;ನಲ್ಲಿ ಸ್ನೋಬೋರ್ಡಿಂಗ್&zwnj; ವೇಳೆ ಮೊಣಕೈ ಮುರಿದುಕೊಂಡಿದ್ದ ಕಿಯಾನ್&zwnj;ಗೆ ಈ ರೇಸ್&zwnj; ವೇಳೆಗೆ ಸಂಪೂರ್ಣವಾಗಿ ಚೇತರಿಕೆ ಕಾಣುವುದು ಸವಾಲಾಗಿ ಪರಿಣಮಿಸಿತ್ತು. 2 ತಿಂಗಳ ಕಾಲ ರೇಸಿಂಗ್&zwnj;ನಿಂದ ದೂರ ಉಳಿದಿದ್ದ ಕಿಯಾನ್&zwnj;, ಛಲ ಬಿಡದೆ ಸಮಯಕ್ಕೆ ಸರಿಯಾಗಿ ಫಿಟ್&zwnj; ಆಗಿ ರೇಸ್&zwnj;ಗೆ ಕಾಲಿಟ್ಟರು.&lt;/p&gt;&lt;h2&gt;ಕಿರಿಯರ ವಿಭಾಗದಿಂದ ಬಡ್ತಿ&lt;/h2&gt;&lt;p&gt;ಕಿರಿಯರ ವಿಭಾಗದಿಂದ ಬಡ್ತಿ ಪಡೆದ ಕಿಯಾನ್&zwnj;, ಭಾರೀ ಪೈಪೋಟಿಯಿಂದ ಕೂಡಿದ್ದ ಕಣಕ್ಕೆ ಧುಮುಕಿದರು. ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್&zwnj;, ಏಷ್ಯನ್&zwnj; ಹಾಗೂ ಯುರೋಪಿಯನ್&zwnj; ಚಾಂಪಿಯನ್&zwnj;ಗಳಿದ್ದರು. ಇವರೆಲ್ಲರ ಜೊತೆ ಸ್ಪರ್ಧಿಸಿ ಕಿಯಾನ್&zwnj; ಪೋಡಿಯಂ ಫಿನಿಶ್&zwnj; ಮಾಡಿದರು. ಹೀಟ್ಸ್&zwnj;ನಲ್ಲಿ ಗಮನ ಸೆಳೆದ ಕಿಯಾನ್&zwnj;, ಫೈನಲ್&zwnj; ರೇಸ್&zwnj;ನ ಗ್ರಿಡ್&zwnj;ನಲ್ಲಿ 14ನೇ ಸ್ಥಾನ ಪಡೆದರು. ರೇಸ್&zwnj;ನಲ್ಲಿ ತಮ್ಮ ಕೌಶಲ್ಯಗಳ ಪ್ರದರ್ಶನ ಮಾಡಿದ ಕಿಯಾನ್&zwnj;, 5ನೇ ಸ್ಥಾನ ಗಳಿಸಿದರು. ಹಾಲಿ ಏಷ್ಯನ್&zwnj; ಚಾಂಪಿಯನ್&zwnj; ಹಾಂಕಾಂಗ್&zwnj;ನ ಯು ಕಾ ಪೋಗಿಂತ ಕೇವಲ 1.6 ಸೆಕೆಂಡ್&zwnj; ಹಿಂದೆ ಉಳಿದರು. ಈ ಸ್ಪರ್ಧೆಯಲ್ಲಿ ಅಗ್ರ 5 ಸ್ಥಾನ ಪಡೆಯುವ ಚಾಲಕರನ್ನು ಪೋಡಿಯಂ ಫಿನಿಶರ್ಸ್&zwnj; ಎಂದು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ಇದೇ ರೇಸ್&zwnj; ಥಾಯ್ಲೆಂಡ್&zwnj; ಸೀರೀಸ್&zwnj; ಆಗಿಯೂ ಕರೆಯಲ್ಪಿಟ್ಟಿತು. ಅಗ್ರ-5ರಲ್ಲಿ ಇಬ್ಬರು ರೇಸರ್&zwnj;ಗಳು ಸೀರೀಸ್&zwnj;ಗೆ ಪ್ರವೇಶಿಸದ ಕಾರಣ, ಕಿಯಾನ್&zwnj;ಗೆ 3ನೇ ಸ್ಥಾನ ದೊರೆಯಿತು. ಸಿಂಗಾಪುರದ ರಾಷ್ಟ್ರೀಯ ಚಾಂಪಿಯನ್&zwnj; ದಿಲ್ಲಾನ್&zwnj; ಟಾನ್ ಹಾಗೂ 8 ಬಾರಿ ಥಾಯ್&zwnj; ಚಾಂಪಿಯನ್&zwnj; ಟೋಬಿ ಗೇಲ್&zwnj; ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಗಳಿಸಿದರು.&lt;/p&gt;&lt;p&gt;ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಕಿಯಾನ್&zwnj;, &lsquo;ಕಳೆದ 3 ತಿಂಗಳು ಬಹಳ ಕಷ್ಟಕರವಾಗಿದ್ದವು. ನನಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ನನ್ನ ಟ್ರೈನರ್&zwnj; ರೋಹನ್&zwnj;ರ ಪರಿಶ್ರಮದಿಂದಾಗಿ ನಾನು ಹಿರಿಯರ ವಿಭಾಗದಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಯಿತು&rsquo; ಎಂದಿದ್ದಾರೆ. ಕಿಯಾನ್&zwnj;ರ ಕೋಚ್&zwnj; ಹಾಗೂ ಮಾರ್ಗದರ್ಶಕ ರಾಯೊಮಂಡ್&zwnj; ಬನಾಜಿ ಮಾತನಾಡಿ, &lsquo;ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ ಚೊಚ್ಚಲ ರೇಸ್&zwnj;ನಲ್ಲೇ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ್ದಾರೆ. ಅಂಥ ಅತ್ಯುತ್ತಮ ರೇಸರ್&zwnj;ಗಳ ಜೊತೆ ಸ್ಪರ್ಧಿಸಿ, ಪೋಡಿಯಂ ಫಿನಿಶ್&zwnj; ಮಾಡಿದ್ದು ಬಹಳ ಖುಷಿ ತಂದಿದೆ&rsquo; ಎಂದಿದ್ದಾರೆ.&lt;/p&gt;&lt;p&gt;ಗಾಯದ ಕಾರಣ ಏಷ್ಯಾ ಸೀರೀಸ್&zwnj;ನ ಮೊದಲ ಸುತ್ತನ್ನು ತಪ್ಪಿಸಿಕೊಂಡಿದ್ದ ಕಿಯಾನ್&zwnj;, ಆ ನಂತರದ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡರು. ಕಿಯಾನ್&zwnj; ಮುಂಬರುವ ವಾರಗಳಲ್ಲಿ ಥಾಯ್ಲೆಂಡ್&zwnj;ನಲ್ಲೇ ನಡೆಯಲಿರುವ ಏಷ್ಯನ್&zwnj; ರೋಟಾಕ್ಸ್&zwnj; ಹಾಗೂ ಐಎಎಂಇ ಸೀರೀಸ್&zwnj;ನ ಮುಂದಿನ ಎರಡು ಸುತ್ತುಗಳಲ್ಲಿ ಪಾಲ್ಗೊಳ್ಳಲಿದ್ದಾರೆ.&lt;/p&gt;]]></content:encoded>
            <category>other-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/other-sports/mumbai-teen-kiaan-shah-shines-with-double-podium-on-senior-international-debut-in-asia-series/articleshow-yqhv609"/>
        </item>
    </channel>
</rss>
