<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 12 Jun 2026 11:20:09 +0530</lastBuildDate>
        <atom:link href="https://kannada.asianetnews.com/rss/other-sports" rel="self" type="application/rss+xml"/>
        <item>
            <title><![CDATA[ಡೋಪಿಂಗ್‌ಗಿನ್ನು 5 ವರ್ಷ ಜೈಲು, ₹2 ಲಕ್ಷ ದಂಡ: ಕಾಯ್ದೆ ತಿದ್ದುಪಡಿ?]]></title>
            <link>https://kannada.asianetnews.com/sports/indian-government-plans-strict-anti-doping-law-with-jail-term-for-athletes-and-coaches-kvn/articleshow-2bp6gka</link>
            <guid isPermaLink="true">https://kannada.asianetnews.com/sports/indian-government-plans-strict-anti-doping-law-with-jail-term-for-athletes-and-coaches-kvn/articleshow-2bp6gka</guid>
            <pubDate>Fri, 22 May 2026 11:11:45 +0530</pubDate>
            <description><![CDATA[ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಡೋಪಿಂಗ್ ಪ್ರಕರಣಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಈ ಹೊಸ ತಿದ್ದುಪಡಿಯ ಪ್ರಕಾರ, ನಿಷೇಧಿತ ಮದ್ದು ಸೇವಿಸಿದ ಅಥ್ಲೀಟ್&zwnj;ಗಳು, ಪೂರೈಕೆದಾರರು ಮತ್ತು ಕೋಚ್&zwnj;ಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-09b2c8b7-5fb0-4dd7-98d9-891c90c130c3,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅಥ್ಲೀಟ್&zwnj;ಗಳ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಡೋಪಿಂಗ್&zwnj; ವಿರುದ್ಧ ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ಜೈಲು ಶಿಕ್ಷೆ, ದಂಡ ಸೇರಿದಂತೆ ನಿಯಮಗಳಲ್ಲಿ ತಿದ್ದುಪಡಿ ತರಲು ನಿರ್ಧರಿಸಿದ್ದು, ಮುಂದಿನ ಸಂಸತ್&zwnj; ಅಧಿವೇಶನದಲ್ಲಿ ಬಿಲ್&zwnj; ಮಂಡಿಸಲು ಮುಂದಾಗಿದೆ.&lt;/p&gt;&lt;p&gt;ನಿಷೇಧಿತ ಪದಾರ್ಧ ಸೇವಿಸಿದ ಅಥ್ಲೀಟ್&zwnj;ಗಳು ಮಾತ್ರವಲ್ಲದೆ ಅದನ್ನು ಪೂರೈಸುವವರು, ಕೋಚ್&zwnj;, ಸಹ ಅಥ್ಲೀಟ್&zwnj;ಗೆ 5 ವರ್ಷ ಜೈಲು ಶಿಕ್ಷೆ, 2 ಲಕ್ಷ ರು. ದಂಡ ವಿಧಿಸಲು ಮುಂದಾಗಿದೆ. ಇನ್ನು ಸರ್ಕಾರ ತರಲಿರುವ ತಿದ್ದುಪಡಿ ಬಗ್ಗೆ ಸಾರ್ವಜನಿಕ ಅಭಿಪ್ರಾಯಕ್ಕೆ ಮುಂದಾಗಿದ್ದು, ಜೂ.18ರ ತನಕ ಕಾಲವಕಾಶ ನೀಡಿದೆ. ಅದರ ಆಧಾರದಲ್ಲಿ ಮುಂದಿನ ಸಂಸತ್&zwnj; ಅಧಿವೇಶನದಲ್ಲಿ ಸರ್ಕಾರ ಬಿಲ್&zwnj; ಮಂಡಿಸಲು ನಿರ್ಧರಿಸಿದೆ.&lt;/p&gt;&lt;h2&gt;&lt;strong&gt;ಪರಿಶೀಲನೆ:&lt;/strong&gt;&lt;/h2&gt;&lt;p&gt;ಈಗಿರುವ ಕಾಯ್ದೆ ಪ್ರಕಾರ ಅಥ್ಲೀಟ್&zwnj;ಗಳ ಮೇಲೆ ಅನುಮಾನ ಬಂದರೆ ಸ್ಥಳ, ಅಲ್ಲಿನ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಬಹುದು ಎನ್ನುವ ನಿಯಮವಿದೆ. ಆದರೆ ಹೊಸ ನಿಯಮ ಪ್ರಕಾರ ಯಾವುದೇ ಅಥ್ಲೀಟ್&zwnj;ಗಳ ಸಂಶಯ ಬಂದರೆ ಅವರನ್ನು ಸಾರ್ವಜನಿಕ ಸ್ಥಳದಲ್ಲಿಯೇ ಪರಿಶೀಲನೆ ನಡೆಸುವ ಅಧಿಕಾರವನ್ನು ಸರ್ಕಾರ ನೀಡಲು ಮುಂದಾಗಿದೆ. ಇದರ ಜತೆಗೆ, ಅಗತ್ಯವಿದ್ದಲ್ಲಿ ಅವರನ್ನು 24 ಗಂಟೆ ವಶ ಪಡೆದುಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಿದೆ.&lt;/p&gt;&lt;h3&gt;&lt;strong&gt;ಇಂದಿನಿಂದ ರಾಂಚಿಯಲ್ಲಿ ಫೆಡರೇಷನ್&zwnj; ಕಪ್&zwnj; ಅಥ್ಲೆಟಿಕ್ಸ್&zwnj;&lt;/strong&gt;&lt;/h3&gt;&lt;p&gt;ರಾಂಚಿ: 29ನೇ ರಾಷ್ಟ್ರೀಯ ಫೆಡರೇಷನ್&zwnj; ಕಪ್&zwnj; ಅಥ್ಲೆಟಿಕ್ಸ್&zwnj; ಕೂಟ ಶುಕ್ರವಾರ ರಾಂಚಿಯಲ್ಲಿ ಆರಂಭಗೊಳ್ಳಲಿದೆ. 4 ದಿನಗಳ ಕಾಲ ನಡೆಯಲಿರುವ ಕೂಟದಲ್ಲಿ ಭಾರತದ ಅಗ್ರ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇದು 2026ರ ಕಾಮನ್&zwnj;ವೆಲ್ತ್&zwnj; ಗೇಮ್ಸ್&zwnj; ಹಾಗೂ ಏಷ್ಯನ್&zwnj; ಅಂಡರ್&zwnj;-23 ಚಾಂಪಿಯನ್&zwnj;ಶಿಪ್&zwnj;ನ ಆಯ್ಕೆ ಟ್ರಯಲ್ಸ್&zwnj; ಆಗಿರಲಿದೆ. ಹೀಗಾಗಿ ಅಥ್ಲೀಟ್&zwnj;ಗಳು ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಕಾಮನ್&zwnj;ವೆಲ್ತ್&zwnj; ಗೇಮ್ಸ್&zwnj;ಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಸಚಿನ್&zwnj; ಯಾದವ್&zwnj;, ಮುರಳಿ ಶ್ರೀಶಂಕರ್&zwnj;, ಅನಿಮೇಶ್&zwnj; ಕುಜೂರ್&zwnj;, ತೇಜಸ್ವಿನ್&zwnj; ಶಂಕರ್ ಸೇರಿ ಪ್ರಮುಖರು ಕಣದಲ್ಲಿದ್ದಾರೆ. ಆದರೆ ನೀರಜ್&zwnj; ಚೋಪ್ರಾ, ಅವಿನಾಶ್&zwnj; ಸಾಬ್ಳೆ ಸೇರಿ ಈ ಬಾರಿ ಕೂಟದಲ್ಲಿ ಸ್ಪರ್ಧಿಸುತ್ತಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/indian-government-plans-strict-anti-doping-law-with-jail-term-for-athletes-and-coaches-kvn/articleshow-2bp6gka"/>
        </item>
        <item>
            <title><![CDATA[ಖೇಲೋ ಇಂಡಿಯಾ ಕಿಕ್ ಬಾಕ್ಸಿಂಗ್: ಕನ್ನಡ ಕುವರಿ ದಾನ್ವಿ ಸುರೇಶ್ ಗೌಡಗೆ ಬೆಳ್ಳಿ ಪದಕ]]></title>
            <link>https://kannada.asianetnews.com/gallery/sports/danvi-suresh-gowda-khelo-india-kickboxing-silver-medal-bengaluru-gvd-9k5pvkf</link>
            <guid isPermaLink="true">https://kannada.asianetnews.com/gallery/sports/danvi-suresh-gowda-khelo-india-kickboxing-silver-medal-bengaluru-gvd-9k5pvkf</guid>
            <pubDate>Tue, 31 Mar 2026 22:30:24 +0530</pubDate>
            <description><![CDATA[&lt;p&gt;ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್&zwnj;ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn2cvqpxkqwzfqfcsyjrjgj8,imgname-khe--4--1774975835869.jpeg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್&zwnj;ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗಳಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು (ಮಾ.31): &lt;/strong&gt;ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್&zwnj;ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜ್ಯ ಮತ್ತು ಶಾಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.&lt;/p&gt;&lt;img&gt;&lt;p&gt;ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಸಾಧನೆ ಸುಲಭ ಅನ್ನೋದನ್ನ ದಾನ್ವಿ ಸುರೇಶ್ ಗೌಡ ಸಾಬೀತುಪಡಿಸಿದ್ದಾಳೆ. ಮಾರ್ಚ್ 26 ರಿಂದ 29 ರವರೆಗೆ ಚೆನ್ನೈನಲ್ಲಿ ಆಯೋಜಿಸಲಾಗಿದ್ದ 'ಅಸ್ಮಿತಾ ಖೇಲೋ ಇಂಡಿಯಾ ಕಿಕ್&zwnj;ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿ 2025-26'ರಲ್ಲಿ ದಾನ್ವಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ದಕ್ಷಿಣ ವಲಯವನ್ನು ಪ್ರತಿನಿಧಿಸಿದ್ದ ದಾನ್ವಿ, ರಾಷ್ಟ್ರೀಯ ವೇದಿಕೆಯಲ್ಲಿ ಅಸಾಧಾರಣ ಕೌಶಲ್ಯ ಪ್ರದರ್ಶಿಸಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದಳು. ಈ ಯಶಸ್ಸಿನ ಹಿಂದೆ ಸನ್ ಮಾರ್ಷಲ್ ಆರ್ಟ್ಸ್&zwnj;ನ ವಾಕೋ ಇಂಡಿಯಾ ತರಬೇತುದಾರರಾದ ದತ್ತು, ಸಂತೋಷ್ ಹಾಗೂ ರಾಜು ಅವರ ಕಠಿಣ ಮಾರ್ಗದರ್ಶನವಿದೆ.&lt;/p&gt;&lt;img&gt;&lt;p&gt;ಈ ಸಾಧನೆಯು ಎಸ್&zwnj;ಬಿಎಸ್ ಶಿಕ್ಷಣ ಸಂಸ್ಥೆ ಮತ್ತು ಸನ್ ಮಾರ್ಷಲ್ ಅಕಾಡೆಮಿಗೆ ಅಪಾರ ಹೆಮ್ಮೆ ತಂದಿದೆ ಟ್ರೈನರ್&zwnj;ನ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸದಿಂದ ಈ ಪದಕ ಗೆಲ್ಲಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಇದೆ. ಎಂದು ದಾನ್ವಿ ಹೇಳಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ಇದೇ ವೇಳೆ ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ವಾಕೋ ಅಂತರಾಷ್ಟ್ರೀಯ ರೆಫ್ರಿ ಶ್ರೀ ರವಿ ಅವರ ಬೆಂಬಲವನ್ನು ಸ್ಮರಿಸಲಾಗಿದ್ದು, ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಕ್ರೀಡಾ ಲೋಕದ ಈ ಉದಯೋನ್ಮುಖ ಪ್ರತಿಭೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>other-sports</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sports/danvi-suresh-gowda-khelo-india-kickboxing-silver-medal-bengaluru-gvd-9k5pvkf"/>
        </item>
        <item>
            <title><![CDATA[ಫ್ರೆಂಚ್ ಓಪನ್: ಅಲೆಕ್ಸಾಂಡರ್ ಜ್ವೆರೆವ್‌ ಫೈನಲ್‌ಗೆ ಲಗ್ಗೆ, ಚೊಚ್ಚಲ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣು!]]></title>
            <link>https://kannada.asianetnews.com/sports/alexander-zverev-storms-into-french-open-2026-final-moves-closer-to-maiden-grand-slam-title-kvn/articleshow-cxmtkz8</link>
            <guid isPermaLink="true">https://kannada.asianetnews.com/sports/alexander-zverev-storms-into-french-open-2026-final-moves-closer-to-maiden-grand-slam-title-kvn/articleshow-cxmtkz8</guid>
            <pubDate>Sat, 06 Jun 2026 08:14:30 +0530</pubDate>
            <description><![CDATA[ಫ್ರೆಂಚ್ ಓಪನ್ ಟೆನಿಸ್&zwnj; ಟೂರ್ನಿಯಲ್ಲಿ ಅಲೆಕ್ಸಾಂಡರ್&zwnj; ಜ್ವೆರೆವ್&zwnj; ಪುರುಷರ ಸಿಂಗಲ್ಸ್ ಫೈನಲ್&zwnj;ಗೆ ಲಗ್ಗೆ ಇಟ್ಟಿದ್ದಾರೆ. ಮಹಿಳಾ ಸಿಂಗಲ್ಸ್ ಫೈನಲ್&zwnj;ನಲ್ಲಿ ರಷ್ಯಾದ ಮಿರ್ರಾ ಆ್ಯಂಡ್ರೀವಾ ಮತ್ತು ಪೋಲೆಂಡ್&zwnj;ನ ಮಜಾ ಚ್ವಾಲಿನ್ಸ್ಕಾ ಚೊಚ್ಚಲ ಗ್ರ್ಯಾನ್&zwnj;ಸ್ಲಾಂ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01f555ra1wz9ha9y2qpxbs3t0s,imgname-zverev-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ಯಾರಿಸ್: ಚೊಚ್ಚಲ ಗ್ರ್ಯಾನ್&zwnj;ಸ್ಲಾಂ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಜರ್ಮನಿಯ ಅಲೆಕ್ಸಾಂಡರ್&zwnj; ಜ್ವೆರೆವ್&zwnj; ಫ್ರೆಂಚ್ ಓಪನ್&zwnj; ಟೆನಿಸ್&zwnj; ಟೂರ್ನಿಯಲ್ಲಿ ಫೈನಲ್&zwnj;ಗೆ ಲಗ್ಗೆ ಇಟ್ಟಿದ್ದಾರೆ. ಇದರೊಂದಿಗೆ ಸೂಪರ್&zwnj;ಸ್ಟಾರ್&zwnj;ಗಳ ಅನುಪಸ್ಥಿತಿಯಲ್ಲಿ ಟ್ರೋಫಿ ಗೆಲುವಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಶಸ್ತಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿರುವ ಜ್ವೆರೆವ್&lt;/strong&gt;&lt;/h2&gt;&lt;p&gt;ಜೋಕೋವಿಚ್&zwnj;, ಸಿನ್ನರ್&zwnj; ಸೇರಿದಂತೆ ಪ್ರಮುಖರು ಟೂರ್ನಿಯ ಆರಂಭದಲ್ಲೇ ಹೊರಬಿದ್ದ ಬಳಿಕ ಟ್ರೋಫಿ ಗೆಲುವಿನ ಫೇವರಿಟ್&zwnj; ಎನಿಸಿಕೊಂಡಿರುವ ವಿಶ್ವ ನಂ.3 ಆಟಗಾರ ಜ್ವೆರೆವ್&zwnj;, ಶುಕ್ರವಾರ ನಡೆದ ಪುರುಷರ ಸಿಂಗಲ್ಸ್&zwnj; ಸೆಮಿಫೈನಲ್&zwnj;ನಲ್ಲಿ ಚೆಕ್&zwnj; ಗಣರಾಜ್ಯದ ಯಾಕುಬ್&zwnj; ಮೆನ್ಸಿಕ್&zwnj; ವಿರುದ್ಧ 7-5, 6-2, 3-6, 6-3 ಸೆಟ್&zwnj;ಗಳಲ್ಲಿ ಗೆಲುವು ಸಾಧಿಸಿದರು.&amp;nbsp;&lt;/p&gt;&lt;p&gt;ಆರಂಭಿಕ 2 ಸೆಟ್&zwnj; ಬಳಿಕ ಮೆನ್ಸಿಕ್&zwnj; ಪ್ರತಿರೋಧ ತೋರಿದರಾದರೂ, ತಮಗಿಂತ ಹಿರಿಯ ಹಾಗೂ ಅನುಭವಿ ಆಟಗಾರನ ಮುಂದೆ ಗೆಲ್ಲಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಜ್ವೆರೆವ್&zwnj; ಫ್ರೆಂಚ್&zwnj; ಓಪನ್&zwnj;ನಲ್ಲಿ 2ನೇ ಬಾರಿ ಫೈನಲ್&zwnj; ತಲುಪಿದರೆ, 26ನೇ ಶ್ರೇಯಾಂಕಿತ ಮೆನ್ಸಿಕ್&zwnj;ರ ಚೊಚ್ಚಲ ಗ್ರ್ಯಾನ್&zwnj;ಸ್ಲಾಂ ಫೈನಲ್&zwnj; ಕನಸು ಭಗ್ನಗೊಂಡಿತು. ಅವರು ಗ್ರ್ಯಾನ್&zwnj;ಸ್ಲಾಂನಲ್ಲಿ ಮೊದಲ ಬಾರಿ ಸೆಮಿಫೈನಲ್&zwnj; ಆಡಿದರು.&lt;/p&gt;&lt;p&gt;Flavio Cobolli. Alexander Zverev.&amp;nbsp;A first Grand Slam title on the line.#RolandGarros pic.twitter.com/STkulD0OBu&lt;/p&gt;&lt;p&gt;&mdash; Roland-Garros (@rolandgarros) June 5, 2026&lt;/p&gt;&lt;p&gt;&amp;nbsp;&lt;/p&gt;&lt;p&gt;--&lt;/p&gt;&lt;h3&gt;&lt;strong&gt;ಮಹಿಳಾ ಫೈನಲ್&zwnj;ನಲ್ಲಿಂದು ಚ್ವಾಲಿನ್ಸ್ಕಾ vs ಆ್ಯಂಡ್ರೀವಾ&lt;/strong&gt;&lt;/h3&gt;&lt;p&gt;ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್&zwnj; ಫೈನಲ್&zwnj; ಹಣಾಹಣಿ ಶನಿವಾರ ನಡೆಯಲಿದ್ದು, ರಷ್ಯಾದ ಮಿರ್ರಾ ಆ್ಯಂಡ್ರೀವಾ ಹಾಗೂ ಪೋಲೆಂಡ್&zwnj;ನ ಮಜಾ ಚ್ವಾಲಿನ್ಸ್ಕಾ ಮುಖಾಮುಖಿಯಾಗಲಿದ್ದಾರೆ. ಸೆಮಿಫೈನಲ್&zwnj;ನಲ್ಲಿ ಆ್ಯಂಡ್ರೀವಾ ಅವರು ಉಕ್ರೇನ್&zwnj; ಮಾರ್ಟಾ ಕೋಸ್ಟ್ಯುಕ್&zwnj; ವಿರುದ್ಧ ಗೆದ್ದಿದ್ದರೆ, ಚ್ವಾಲಿನ್ಸ್ಕಾ ರಷ್ಯಾದ ಡಿಯಾನ ಶ್ನೈಡೆರ್&zwnj; ಅವರನ್ನು ಸೋಲಿಸಿ ಫೈನಲ್&zwnj; ತಲುಪಿದ್ದರು. ಇವರಿಬ್ಬರೂ ಚೊಚ್ಚಲ ಗ್ರ್ಯಾನ್&zwnj;ಸ್ಲಾಂ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/alexander-zverev-storms-into-french-open-2026-final-moves-closer-to-maiden-grand-slam-title-kvn/articleshow-cxmtkz8"/>
        </item>
        <item>
            <title><![CDATA[ಆಯ್ಕೆ ಟ್ರಯಲ್ಸ್‌ನಲ್ಲಿ ಭಾರೀ ಹೈಡ್ರಾಮ: ಸೆಮೀಸ್‌ನಲ್ಲಿ ಸೋತ ವಿನೇಶ್ ಫೋಗಟ್ ಏಷ್ಯನ್‌ ಗೇಮ್ಸ್‌ನಿಂದ ಔಟ್!]]></title>
            <link>https://kannada.asianetnews.com/sports/vinesh-phogat-suffers-major-setback-fails-to-qualify-for-asian-games-after-trial-defeat-kvn/articleshow-dmgy1k1</link>
            <guid isPermaLink="true">https://kannada.asianetnews.com/sports/vinesh-phogat-suffers-major-setback-fails-to-qualify-for-asian-games-after-trial-defeat-kvn/articleshow-dmgy1k1</guid>
            <pubDate>Sun, 31 May 2026 06:28:50 +0530</pubDate>
            <description><![CDATA[ಏಷ್ಯನ್&zwnj; ಗೇಮ್ಸ್ ಆಯ್ಕೆ ಟ್ರಯಲ್ಸ್&zwnj;ನಲ್ಲಿ ಕುಸ್ತಿ ಅಖಾಡಕ್ಕೆ ಮರಳಿದ ತಾರಾ ಅಥ್ಲೀಟ್&zwnj; ವಿನೇಶ್ ಫೋಗಟ್&zwnj;, 53 ಕೆ.ಜಿ. ವಿಭಾಗದ ಸೆಮಿಫೈನಲ್&zwnj;ನಲ್ಲಿ ಸೋತು ನಿರಾಸೆ ಅನುಭವಿಸಿದ್ದಾರೆ. ಕ್ವಾರ್ಟರ್&zwnj; ಫೈನಲ್ ಪಂದ್ಯದ ವೇಳೆ ರೆಫ್ರಿ ಜೊತೆಗಿನ ವಾಗ್ವಾದ ಸೇರಿದಂತೆ ಹಲವು ನಾಟಕೀಯ ಬೆಳವಣಿಗೆಗಳಿಗೆ ಈ ಟ್ರಯಲ್ಸ್ ಸಾಕ್ಷಿಯಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kssgvyg3sqveppqa2r0wwa4d,imgname-sc-vinesh-phogat-asian-games-trials-supreme-court-wfi-doping-rules-delhi-high-court-selection-policy-1780046756354.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: 2024ರ ಒಲಿಂಪಿಕ್ಸ್&zwnj; ಫೈನಲ್&zwnj;ನ ಆಘಾತಕಾರಿ ಸೋಲಿನ ಬಳಿಕ ಮತ್ತೆ ಕುಸ್ತಿ ಅಖಾಡಕ್ಕೆ ಮರಳಿದ್ದ ತಾರಾ ಅಥ್ಲೀಟ್&zwnj; ವಿನೇಶ್ ಫೋಗಟ್&zwnj; ಭಾರೀ ನಿರಾಸೆ ಅನುಭವಿಸಿದ್ದಾರೆ. ಶನಿವಾರ ಏಷ್ಯನ್&zwnj; ಗೇಮ್ಸ್&zwnj;ನ ಆಯ್ಕೆ ಟ್ರಯಲ್ಸ್&zwnj;ನ 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ಅವರು, ಸೆಮಿಫೈನಲ್&zwnj;ನಲ್ಲಿ ಸೋತು ಹೊರಬಿದ್ದಿದ್ದಾರೆ.&lt;/p&gt;&lt;p&gt;ದೆಹಲಿ ಹೈಕೋರ್ಟ್&zwnj;, ಸುಪ್ರೀಂ ಕೋರ್ಟ್&zwnj; ಆದೇಶದ ಬಳಿಕ ವಿನೇಶ್&zwnj;ಗೆ ಸ್ಪರ್ಧಿಸುವ ಅವಕಾಶ ಲಭಿಸಿತ್ತು. ಶನಿವಾರ ತಮ್ಮ 53 ಕೆ.ಜಿ. ವಿಭಾಗದಲ್ಲೇ ಸ್ಪರ್ಧೆಗಿಳಿದ ಅವರು, ಮೊದಲ ಸುತ್ತಿನಲ್ಲಿ ಜ್ಯೋತಿ ವಿರುದ್ಧ 7-1 ಅಂತರದಲ್ಲಿ ಗೆದ್ದರು. ಭಾರೀ ನಾಟಕೀಯವಾಗಿ ನಡೆದ ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ ವಿನೇಶ್&zwnj;, ನಿಶು ಕುಮಾರಿ ವಿರುದ್ಧ 7-6 ಅಂತರದಲ್ಲಿ ಜಯಗಳಿಸಿದರು. ಆದರೆ ಸೆಮಿಫೈನಲ್&zwnj;ನಲ್ಲಿ ಅವರು ಮೀನಾಕ್ಷಿ ಗೋಯತ್&zwnj; ವಿರುದ್ಧ 4-6 ಅಂತರದಲ್ಲಿ ಪರಾಭವಗೊಂಡರು. ಈ ವಿಭಾಗದ ಫೈನಲ್&zwnj;ನಲ್ಲಿ ಅಂತಿಮ್&zwnj; ಪಂಘಲ್&zwnj; ಅವರು ಮೀನಾಕ್ಷಿಯನ್ನು ಸೋಲಿಸಿ, ಏಷ್ಯನ್&zwnj; ಗೇಮ್ಸ್&zwnj;ಗೆ ಅರ್ಹತೆ ಪಡೆದುಕೊಂಡರು.&amp;nbsp;&lt;/p&gt;&lt;h2&gt;&lt;strong&gt;53 ಕೆ.ಜಿ. ಸ್ಪರ್ಧೆಗೆ ಅವಕಾಶ:&lt;/strong&gt;&lt;/h2&gt;&lt;p&gt;ವಿನೇಶ್&zwnj; 2024ರ ಒಲಿಂಪಿಕ್ಸ್&zwnj; ಸೇರಿ ಇತ್ತೀಚಿನ ಕೆಲ ಅಂ.ರಾ. ಕೂಟಗಳಲ್ಲಿ 50 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಿದ್ದರು. ಹೀಗಾಗಿ, ಅದೇ ವಿಭಾಗದಲ್ಲಿ ಉಳಿಸಲು ಡಬ್ಲ್ಯುಎಫ್&zwnj;ಐ ನಿರ್ಧರಿಸಿತ್ತು. ಆದರೆ ಶನಿವಾರ ಅವರಿಗೆ 53 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಲು ಡಬ್ಲ್ಯುಎಫ್&zwnj;ಐ ಅವಕಾಶ ನೀಡಿತು.&lt;/p&gt;&lt;h3&gt;--&lt;strong&gt;ನಾನು ಮತ್ತೆ ಬರುತ್ತೇನೆ&lt;/strong&gt;&lt;/h3&gt;&lt;p&gt;ನಾನು ವಿಫಲನಾದೆ ಎಂದು ಅನಿಸುತ್ತಿಲ್ಲ. ನಾನು ಇಡೀ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೆ. ಪ್ರತಿ ಅಂಕಗಳಿಗೂ ಹೋರಾಡಬೇಕಾಗಿತ್ತು. ನನಗೆ ಅನ್ಯಾಯವಾಗಿದೆ. ಆದರೆ ನನ್ನೊಂದಿಗೆ ಹೋರಾಡಿದ ಕ್ರೀಡಾಪಟುಗಳ ಬಗ್ಗೆ ನನಗೆ ದ್ವೇಷವಿಲ್ಲ. ನಾನು ಮತ್ತೆ ಬರುತ್ತೇನೆ.&lt;/p&gt;&lt;p&gt;- ವಿನೇಶ್&zwnj; ಫೋಗಟ್&zwnj;&lt;/p&gt;&lt;h3&gt;&lt;strong&gt;ರೆಫ್ರಿ ನಡುವೆ ವಾಗ್ವಾದ&lt;/strong&gt;&lt;/h3&gt;&lt;p&gt;ವಿನೇಶ್&zwnj; ಕ್ವಾರ್ಟರ್&zwnj; ಫೈನಲ್&zwnj; ಪಂದ್ಯದಲ್ಲಿ ಹೈಡ್ರಾಮ ಸೃಷ್ಟಿಯಾಯಿತು. ವಿನೇಶ್&zwnj; ಪಂದ್ಯದಲ್ಲಿ 0-5 ಅಂಕ ಹಿನ್ನಡೆಯಲಿದ್ದರು. ಈ ವೇಳೆ ನಿಶು ಕೆಳಗೆ ಬಿದ್ದಿದ್ದು, ಅವರನ್ನು ವಿನೇಶ್&zwnj; ಪಿನ್&zwnj; ಮಾಡಿದ್ದರೂ &lsquo;ಬೈ ಫಾಲ್&zwnj;&rsquo; ಮೂಲಕ ಗೆಲುವು ಘೋಷಿಸಿಲ್ಲ ಎಂದು ವಿನೇಶ್&zwnj; ಪತಿ ಸೋಮ್&zwnj;ವೀರ್&zwnj; ನೀರಿನ ಬಾಟಲಿಯನ್ನು ಮ್ಯಾಟ್&zwnj; ಮೇಲೆ ಎಸೆದು, ಅಖಾಡಕ್ಕೆ ನುಗ್ಗಿದ್ದಾರೆ. ಈ ವೇಳೆ ರೆಫ್ರಿ ಜೊತೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ವಿಡಿಯೋ ರಿವ್ಯೂಗೆ ವಿನೇಶ್&zwnj; ಮನವಿ ಮಾಡಿದರೂ ಅದಕ್ಕೆ ರೆಫ್ರಿಗಳು ಆರಂಭದಲ್ಲಿ ಒಪ್ಪಿ, ಬಳಿಕ ನಿರಾಕರಿಸಿದ್ದು ಕೂಡಾ ವಿವಾದಕ್ಕೆ ಕಾರಣವಾಯಿತು. ನಂತರ ಡಬ್ಲ್ಯುಎಫ್&zwnj;ಐ ಅಧ್ಯಕ್ಷ ಸಂಜಯ್ ಸಿಂಗ್ ಕೂಡ ವಿನೇಶ್&zwnj; ಮತ್ತು ಅವರ ಸಂಗಡಿಗರ ಜತೆ ಮಾತಿನ ಚಕಮಕಿ ನಡೆಸಿದ್ದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/vinesh-phogat-suffers-major-setback-fails-to-qualify-for-asian-games-after-trial-defeat-kvn/articleshow-dmgy1k1"/>
        </item>
        <item>
            <title><![CDATA[French Open 2026: ವಿಶ್ವದ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಆಘಾತಕಾರಿ ಸೋಲು]]></title>
            <link>https://kannada.asianetnews.com/sports/french-open-2026-shock-world-no1-aryna-sabalenka-crashes-out-after-stunning-quarterfinal-defeat/articleshow-eg0628w</link>
            <guid isPermaLink="true">https://kannada.asianetnews.com/sports/french-open-2026-shock-world-no1-aryna-sabalenka-crashes-out-after-stunning-quarterfinal-defeat/articleshow-eg0628w</guid>
            <pubDate>Thu, 04 Jun 2026 07:33:25 +0530</pubDate>
            <description><![CDATA[ಫ್ರೆಂಚ್ ಓಪನ್ ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ ವಿಶ್ವದ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಆಘಾತಕಾರಿ ಸೋಲು ಕಂಡಿದ್ದಾರೆ. ಗೆಲುವಿನ ಸನಿಹದಲ್ಲಿದ್ದ ಸಬಲೆಂಕಾ, ರಷ್ಯಾದ ಡಿಯಾನ ಶ್ನೈಡೆರ್&zwnj; ವಿರುದ್ಧ 3-6, 7-5, 6-0 ಸೆಟ್&zwnj;ಗಳಿಂದ ಪರಾಭವಗೊಂಡು ಟೂರ್ನಿಯಿಂದ ಹೊರಬಿದ್ದರು. ಈ ಮೂಲಕ ಶ್ನೈಡೆರ್&zwnj; ಮೊದಲ ಬಾರಿಗೆ ಗ್ರ್ಯಾನ್&zwnj;ಸ್ಲಾಂ ಸೆಮಿಫೈನಲ್&zwnj; ಪ್ರವೇಶಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt3necs2f2pw90820t4sjr6p,imgname-gettyimages-2278624655-1780387099426.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ಯಾರಿಸ್: ಫ್ರೆಂಚ್ ಓಪನ್&zwnj; ಗ್ರ್ಯಾನ್&zwnj;ಸ್ಲಾಂ ಟೆನಿಸ್&zwnj; ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಗ್ರ್ಯಾನ್&zwnj;ಸ್ಲಾಂ ಚಾಂಪಿಯನ್&zwnj;ಗಳಾದ ನೊವಾಕ್&zwnj; ಜೋಕೋವಿಚ್, ಯಾನಿಕ್&zwnj; ಸಿನ್ನರ್&zwnj;, ಇಗಾ ಸ್ವಿಯಾಟೆಕ್&zwnj;, ಕೊಕೊ ಗಾಫ್&zwnj; ಬಳಿಕ ವಿಶ್ವ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಕೂಡಾ ಆಘಾತಕಾರಿ ಸೋಲನುಭವಿಸಿದ್ದಾರೆ.&lt;/p&gt;&lt;p&gt;4 ಬಾರಿ ಗ್ರ್ಯಾನ್&zwnj;ಸ್ಲಾಂ ವಿಜೇತ, ಬೆಲಾರಸ್&zwnj;ನ ಸಬಲೆಂಕಾ ಬುಧವಾರ ಮಹಿಳಾ ಸಿಂಗಲ್ಸ್&zwnj; ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ ರಷ್ಯಾದ ಆಟಗಾರ್ತಿ, 25ನೇ ಶ್ರೇಯಾಂಕಿತೆ ಡಿಯಾನ ಶ್ನೈಡೆರ್&zwnj; ವಿರುದ್ಧ 3-6, 7-5, 6-0 ಸೆಟ್&zwnj;ಗಳಲ್ಲಿ ಪರಾಭವಗೊಂಡರು. ಇದರೊಂದಿಗೆ ಡಿಯಾನ ಮೊದಲ ಬಾರಿ ಗ್ರ್ಯಾನ್&zwnj;ಸ್ಲಾಂ ಟೂರ್ನಿಯಲ್ಲಿ ಸೆಮಿಫೈನಲ್&zwnj; ಪ್ರವೇಶಿಸಿದ ಸಾಧನೆ ಮಾಡಿದರು.&lt;/p&gt;&lt;h2&gt;&lt;strong&gt;ಶ್ರೇಷ್ಠ ಕಮ್&zwnj;ಬ್ಯಾಕ್&zwnj;:&lt;/strong&gt;&lt;/h2&gt;&lt;p&gt;ಪಂದ್ಯದ ಬಹುತೇಕ ಸಮಯ ಸಬಲೆಂಕಾ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು ಮತ್ತು ಗೆಲ್ಲುವ ಫೇವರಿಟ್&zwnj; ಎನಿಸಿಕೊಂಡಿದ್ದರು. ಮೊದಲ ಸೆಟ್&zwnj;ನಲ್ಲಿ 6-3 ಅಂತರದಲ್ಲಿ ಗೆಲುವು ಸಾಧಿಸಿದ್ದ ಕಳೆದ ಬಾರಿ ರನ್ನರ್&zwnj;-ಅಪ್&zwnj; ಸಬಲೆಂಕಾ, 2ನೇ ಸೆಟ್&zwnj;ನಲ್ಲಿ 4-1ರಲ್ಲಿ ಮುನ್ನಡೆಯಲ್ಲಿದ್ದರು. ಬಳಿಕ ಮುನ್ನಡೆಯನ್ನು 5-3ಕ್ಕೆ ಏರಿಸಿ, ಗೆಲುವಿನ ಸನಿಹ ತಲುಪಿದ್ದರು. ಆದರೆ ಸಬಲೆಂಕಾ ಇದ್ದಕ್ಕಿದ್ದಂತೆ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡರು. ಶ್ನೈಡೆರ್&zwnj; ಆಟದ ಮುಂದೆ ಉತ್ತರವಿಲ್ಲದಂತೆ ಆಡಿದ ಸಬೆಲೆಂಕಾ, 2ನೇ ಸೆಟ್&zwnj;ಅನ್ನು 5-7ರಲ್ಲಿ ಕಳೆದುಕೊಂಡರು. 3ನೇ ಸೆಟ್&zwnj;ನಲ್ಲಂತೂ ಸಬಲೆಂಕಾ ವಿರುದ್ಧ ಶ್ನೈಡೆರ್&zwnj; ಸಂಪೂರ್ಣ ಅಧಿಪತ್ಯ ಸಾಧಿಸಿದರು. ಈ ಸೆಟ್&zwnj;ನಲ್ಲಿ ಸಂಪೂರ್ಣ ತಾಳ್ಮೆ ಕಳೆದುಕೊಂಡು ರೇಗಾಡುತ್ತಿದ್ದ ಸಬಲೆಂಕಾ, ಒಂದೂ ಗೇಮ್&zwnj; ಗೆಲ್ಲದೆ 0-6 ಅಂತರದಲ್ಲಿ ಸೋತು ಹೊರಬಿದ್ದರು.&lt;/p&gt;&lt;h3&gt;&lt;strong&gt;ಚಾವ್ಲಿನ್ಸ್ಕ ಸೆಮಿಗೆ:&lt;/strong&gt;&lt;/h3&gt;&lt;p&gt;ಮತ್ತೊಂದು ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ ರಷ್ಯಾದ 22ನೇ ಶ್ರೇಯಾಂಕಿತೆ ಅನ್ನಾ ಕಲಿನ್ಸ್&zwnj;ಕಯಾ ವಿರುದ್ಧ 7-6 3), 6-3 ಸೆಟ್&zwnj;ಗಳಲ್ಲಿ ಗೆದ್ದು ಪೋಲೆಂಡ್&zwnj;ನ ಮಜಾ ಚಾವ್ಲಿನ್ಸ್ಕ ಸೆಮಿಫೈನಲ್&zwnj; ತಲುಪಿದರು. ಸೆಮೀಸ್&zwnj;ನಲ್ಲಿ ಶ್ನೈಡೆರ್&zwnj;ಗೆ ಚಾವ್ಲಿನ್ಸ್ಕ ಸವಾಲು ಎದುರಾಗಲಿದೆ.&lt;/p&gt;&lt;p&gt;ಇನ್ನು, ಪುರುಷರ ಸಿಂಗಲ್ಸ್&zwnj;ನಲ್ಲಿ ಬ್ರೆಜಿಲ್&zwnj;ನ ಫೊನ್ಸೆಕಾ ವಿರುದ್ಧ ಗೆದ್ದು ಚೆಕ್&zwnj; ಗಣರಾಜ್ಯದ ಜಾಕುಬ್&zwnj; ಮೆನ್ಸಿಕ್&zwnj; ಸೆಮಿಫೈನಲ್&zwnj; ಪ್ರವೇಶಿಸಿದರು.&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/french-open-2026-shock-world-no1-aryna-sabalenka-crashes-out-after-stunning-quarterfinal-defeat/articleshow-eg0628w"/>
        </item>
        <item>
            <title><![CDATA[ಮೆರಿಟಸ್ ಕಪ್ ಕಾರ್ಟಿಂಗ್‌: ಬೆಂಗಳೂರಿನ ಜಿದಾನ್ ಅನೀಸ್‌ಗೆ ರನ್ನರ್-ಅಪ್, ಮುಂಬೈನ ಆರವ್‌ಗೆ ಚಾಂಪಿಯನ್ ಪಟ್ಟ]]></title>
            <link>https://kannada.asianetnews.com/sports/meritus-cup-karting-aarav-sureka-champion-zidaan-anees-runner-up-coastt-circuit-san/articleshow-engwto0</link>
            <guid isPermaLink="true">https://kannada.asianetnews.com/sports/meritus-cup-karting-aarav-sureka-champion-zidaan-anees-runner-up-coastt-circuit-san/articleshow-engwto0</guid>
            <pubDate>Wed, 10 Jun 2026 21:14:58 +0530</pubDate>
            <description><![CDATA[ಹತ್ತು ವರ್ಷದ ಮುಂಬೈ ಬಾಲಕ ಆರವ್ ಸುರೇಕಾ, ಕೊಯಮತ್ತೂರಿನಲ್ಲಿ ನಡೆದ ಮೆಕೊ ಮೆರಿಟಸ್ ಕಪ್&zwnj;ನ 'ಮೈಕ್ರೋ ಮ್ಯಾಕ್ಸ್' ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತೀವ್ರ ಪೈಪೋಟಿ ಮತ್ತು ಇಂಜಿನ್ ಸಮಸ್ಯೆಯ ನಡುವೆಯೂ, ಅವರು 78 ಅಂಕಗಳೊಂದಿಗೆ ಪ್ರಶಸ್ತಿಯನ್ನು ಗೆದ್ದುಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kts35ct4ys3adjdjv0238fa6,imgname-whatsapp-image-2026-06-10-at-5.06.40-pm-1781106127684.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಯಮತ್ತೂರು (ಜೂ.10):&lt;/strong&gt; ಹತ್ತು ವರ್ಷದ ಆರವ್ ಸುರೇಕಾ (ರಾಯೋ ರೇಸಿಂಗ್) ರಾಷ್ಟ್ರೀಯ ರೇಸಿಂಗ್ ವೇದಿಕೆಯಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದು, ಕೊಯಮತ್ತೂರಿನ ಕೋಸ್ಟ್&zwnj; (CoASTT) ಕಾರ್ಟಿಂಗ್ ಸರ್ಕ್ಯೂಟ್&zwnj;ನಲ್ಲಿ ಮೆಕೊ ಮೆರಿಟಸ್ ಕಪ್&zwnj;ನ 'ಮೈಕ್ರೋ ಮ್ಯಾಕ್ಸ್' ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.&lt;/p&gt;&lt;p&gt;ಮುಂಬೈ ಬಾಲಕ ಕೇವಲ 2 ಅಂಕಗಳ ಅಲ್ಪ ಮುನ್ನಡೆಯೊಂದಿಗೆ ಅಂತಿಮ ದಿನಕ್ಕೆ ಪ್ರವೇಶಿಸಿದ್ದರು. ಅಂತಿಮವಾಗಿ ಅವರು ಎರಡನೇ ಮತ್ತು ಐದನೇ ಸ್ಥಾನಗಳನ್ನು ಪಡೆದು, ಒಟ್ಟು 78 ಅಂಕಗಳೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬೆಂಗಳೂರಿನ ಜಿದಾನ್ ಅನೀಸ್ (ಪೆರೆಗ್ರಿನ್ ರೇಸಿಂಗ್; 72 ಅಂಕಗಳು) ಮತ್ತು ಕೊಲ್ಹಾಪುರದ ಆಯಾನ್ಶ್ ಪಾಟೀಲ್ (ಎಮ್&zwnj;ಸ್ಪೋರ್ಟ್; 72 ಅಂಕಗಳು) ಅವರನ್ನು ಹಿಂದಿಕ್ಕಿ ಆರವ್ ಈ ಸಾಧನೆ ಮಾಡಿದರು.&lt;/p&gt;&lt;p&gt;ಇದಕ್ಕೂ ಮುನ್ನ ನಡೆದ ಸುತ್ತುಗಳಲ್ಲಿ ಅವರು ಒಮ್ಮೆ ಪ್ರಥಮ ಹಾಗೂ ಒಮ್ಮೆ ದ್ವಿತೀಯ ಸ್ಥಾನ ಗಳಿಸುವ ಮೂಲಕ ಸ್ಪಷ್ಟ ವಿಜೇತರಾಗಿ ಹೊರಹೊಮ್ಮಿದ್ದರು. ಈ ವಯೋಮಿತಿಯಲ್ಲಿ ದೇಶದ ಅತ್ಯುತ್ತಮ ರೇಸರ್&zwnj;ಗಳ ವಿರುದ್ಧ ಸ್ಪರ್ಧಿಸಿದ್ದ ಆರವ್, ತಮ್ಮ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಅದ್ಭುತ ಧೈರ್ಯವನ್ನು ಪ್ರದರ್ಶಿಸಿದರು.&lt;/p&gt;&lt;h2&gt;&lt;strong&gt;ಪೈಪೋಟಿ ನೀಡಿದ ಬೆಂಗಳೂರಿನ ಜಿದಾನ್&zwnj; ಅನೀಸ್&zwnj;&lt;/strong&gt;&lt;/h2&gt;&lt;p&gt;ದಿನದ ಆರಂಭವು ಆರವ್ ಅವರಿಗೆ ಉತ್ತಮವಾಗಿತ್ತು. ಅವರು ಬೆಂಗಳೂರಿನ ಜಿದಾನ್ ಅನೀಸ್ ಅವರಿಗಿಂತ ಕೇವಲ 0.019 ಸೆಕೆಂಡ್&zwnj;ಗಳಷ್ಟು ಹಿನ್ನಡೆ ಅನುಭವಿಸಿ ಎರಡನೇ ಸ್ಥಾನದಲ್ಲಿ ಅರ್ಹತೆ ಪಡೆದರು. ಆದರೆ, ಕೋಸ್ಟ್&zwnj; ಸರ್ಕ್ಯೂಟ್&zwnj;ನ ಮೊದಲ ಕಾರ್ನರ್ ಇದ್ದ ರೀತಿಯಿಂದಾಗಿ ಇದು ಅವರಿಗೆ ತಂತ್ರದ ದೃಷ್ಟಿಯಿಂದ ಕಠಿಣವಾದ ಸ್ಥಾನವಾಗಿತ್ತು.&lt;/p&gt;&lt;p&gt;ನಿರೀಕ್ಷೆಯಂತೆ, ಮೊದಲ ರೇಸ್&zwnj;ನ ಆರಂಭದಲ್ಲೇ ಆರವ್ ಮೂರನೇ ಸ್ಥಾನಕ್ಕೆ ಕುಸಿದರು, ಚೆನ್ನೈನ ಯಶ್ವಿನ್ ಕಿಶೋರ್ (ಪೆರೆಗ್ರಿನ್ ರೇಸಿಂಗ್) ಅವರ ಹಿಂದೆ ಉಳಿದರು. ಆದರೂ ಧೃತಿಗೆಡದ ಜಮ್ನಾಬಾಯಿ ನರ್ಸಿ ಶಾಲೆಯ ಈ ವಿದ್ಯಾರ್ಥಿ, ಉತ್ತಮ ಪ್ರಯತ್ನ ನಡೆಸಿ ಶೀಘ್ರದಲ್ಲೇ ತಮ್ಮ ಎರಡನೇ ಸ್ಥಾನವನ್ನು ಮರಳಿ ಪಡೆದು ಕೊನೆಯವರೆಗೂ ಅದನ್ನು ಕಾಯ್ದುಕೊಂಡರು. ಈ ರೇಸ್&zwnj;ನಲ್ಲಿ ಜಿದಾನ್ ಅನೀಸ್ ಪ್ರಥಮ ಸ್ಥಾನ ಹಾಗೂ ಕೊಲ್ಹಾಪುರದ ಆಯಾನ್ಶ್ ಪಾಟೀಲ್ ತೃತೀಯ ಸ್ಥಾನ ಪಡೆದರು.&lt;/p&gt;&lt;p&gt;ಎರಡನೇ ರೇಸ್&zwnj;ನಲ್ಲಿ ಆರವ್ ನಾಲ್ಕನೇ ಸ್ಥಾನದಿಂದ ಸ್ಪರ್ಧೆ ಆರಂಭಿಸಿದರು. ದುರದೃಷ್ಟವಶಾತ್, ಫಾರ್ಮೇಷನ್ ಲ್ಯಾಪ್&zwnj;ನಿಂದಲೇ lಅವರು ಇಂಜಿನ್ ಸಮಸ್ಯೆಯನ್ನು ಎದುರಿಸಬೇಕಾಯಿತು. ಆದಾಗ್ಯೂ, ಅತ್ಯುತ್ತಮ ಆರಂಭವನ್ನು ಪಡೆದ ಅವರು ಎರಡನೇ ಸ್ಥಾನಕ್ಕೆ ಏರಿದರು. ಇಂಜಿನ್ ಸಮಸ್ಯೆಯಿಂದಾಗಿ ವೇಗ ಕಡಿಮೆಯಾಗಿದ್ದರೂ, ಅವರು ಉಳಿದ ಮೂವರು ಸ್ಪರ್ಧಿಗಳೊಂದಿಗೆ ತೀವ್ರ ಪೈಪೋಟಿ ನಡೆಸಿದರು.&lt;/p&gt;&lt;p&gt;ಕಾರ್ಟ್&zwnj;ನ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ, ಆರವ್ ಕಷ್ಟಪಟ್ಟು ಐದನೇ ಸ್ಥಾನವನ್ನು ಮಾತ್ರ ಉಳಿಸಿಕೊಳ್ಳಲು ಶಕ್ತರಾದರು. ಜಿದಾನ್ ಅನೀಸ್ ಪ್ರಥಮ ಸ್ಥಾನ ಪಡೆದರೆ, ಕಿಶೋರ್ ಮತ್ತು ಹೈದರಾಬಾದ್&zwnj;ನ ಶ್ರಿಯಾನ್ ರಾವ್ ಟಿ. ನಂತರದ ಸ್ಥಾನಗಳನ್ನು ಪಡೆದರು. ಈ ಸುತ್ತಿನಲ್ಲಿ ಆರವ್ ಪಡೆದ ಎರಡನೇ ಮತ್ತು ಐದನೇ ಸ್ಥಾನಗಳು ಅವರು ಜಿದಾನ್ ಅನೀಸ್ ಮತ್ತು ಕಿಶೋರ್ ಅವರ ನಂತರದ ಸ್ಥಾನ ಪಡೆದು, ಈ ಸುತ್ತಿನಲ್ಲಿ ಒಟ್ಟಾರೆಯಾಗಿ ಮೂರನೇ ಸ್ಥಾನ ಪಡೆಯಲು ನೆರವಾದವು.&lt;/p&gt;&lt;p&gt;ರಾಯೋ ರೇಸಿಂಗ್ ತಂಡದ ಮತ್ತೊಬ್ಬ ಸ್ಪರ್ಧಿ ಕಿಯಾನ್ ಶಾ ಅವರಿಗೆ ಈ ವಾರಾಂತ್ಯವು ಮಿಶ್ರಫಲ ನೀಡಿತು. ಮೊದಲ ರೇಸ್&zwnj;ನಲ್ಲಿ ಅಪಘಾತಕ್ಕೀಡಾಗಿ ತೀರಾ ಹಿಂದೆ ಬಿದ್ದ ಅವರು, ನಂತರ ಉತ್ತಮವಾಗಿ ಚೇತರಿಸಿಕೊಂಡು 11ನೇ ಸ್ಥಾನದಲ್ಲಿ ಮುಗಿಸಿದರು. ಇನ್ನು ಎರಡನೇ ರೇಸ್&zwnj;ನಲ್ಲಿ ಅದ್ಭುತ ಆರಂಭ ಪಡೆದ ಅವರು ಅತ್ಯುತ್ತಮವಾಗಿ ರೇಸ್ ಮುಗಿಸಿ ಎರಡನೇ ಸ್ಥಾನ ಪಡೆದರು. ಈ ಮೂಲಕ ಕಿಯಾನ್, ಬೆಂಗಳೂರಿನ ಅಕ್ಷತ್ ಮಿಶ್ರಾ ಅವರ ನಂತರ ಎರಡನೇ ಸ್ಥಾನ ಪಡೆದು ಮತ್ತೊಂದು ಪೋಡಿಯಂ ಸ್ಥಾನವನ್ನು ತಮ್ಮದಾಗಿಸಿಕೊಂಡರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/sports/meritus-cup-karting-aarav-sureka-champion-zidaan-anees-runner-up-coastt-circuit-san/articleshow-engwto0"/>
        </item>
        <item>
            <title><![CDATA[ಮನು ಭಾಕರ್ ವರ್ಸಸ್ ವೈಭವ್ ಸೂರ್ಯವಂಶಿ: ಯುವ ಕ್ರಿಕೆಟರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಒಲಿಂಪಿಕ್ ವಿಜೇತೆ ಹೇಳಿದ್ದೇನು?]]></title>
            <link>https://kannada.asianetnews.com/sports/manu-bhakar-vs-vaibhav-suryavanshi-what-manu-say-when-asked-about-vaibhav/articleshow-ibyk2xn</link>
            <guid isPermaLink="true">https://kannada.asianetnews.com/sports/manu-bhakar-vs-vaibhav-suryavanshi-what-manu-say-when-asked-about-vaibhav/articleshow-ibyk2xn</guid>
            <pubDate>Tue, 28 Apr 2026 08:58:59 +0530</pubDate>
            <description><![CDATA[&lt;p&gt;ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರಿಗೆ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಬಗ್ಗೆ ಕೇಳಿದ ಪ್ರಶ್ನೆಯು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಅನೇಕರು ಪ್ರಶ್ನೆ ಕೇಳಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq91pdddjk6dfzdbxgvd9x0q,imgname-manu-bhakar-and-vaibhav-suryavamshi-1777346491821.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವೈಭವ್ ಸೂರ್ಯವಂಶಿ ಸಾಧನೆ ಬಗ್ಗೆ ಮನು ಭಾಕರ್ ಬಳಿ ಪ್ರಶ್ನೆ:&lt;/strong&gt;&lt;/h2&gt;&lt;p&gt;ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರ ಬಳಿ ಈಗಿನ ಕ್ರಿಕೆಟ್ ಸೆನ್ಸೇಷನ್ ಆಗಿರುವ ವೈಭವ್ ಸೂರ್ಯವಂಶಿ ಅವರ ಬಗ್ಗೆ ಕೇಳಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ದೆಹಲಿಯಲ್ಲಿ ನಡೆದ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (NRAI)ದ 75 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರನ್ನು ಯುವ ಕ್ರಿಕೆಟರ್ ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಅವರ ಸಾಧನೆ ಬಗ್ಗೆ ಏನನಿಸುತ್ತಿವೆ ಎಂದು ಕೇಳಲಾಗಿತ್ತು. ಇವರಿಬ್ಬರು ಭಾರತದ ಯುವ ಕ್ರೀಡಾಪಟುಗಳು ಸೂರ್ಯವಂಶಿ ಕ್ರಿಕೆಟರ್ ಆಗಿದ್ದರೆ ಮನು ಭಾಕರ್ ಶೂಟರ್&zwnj; ಆಗಿದ್ದಾರೆ. ಆದರೆ ಇದು ಶೂಟರ್ ಮನು ಭಾಕರ್ ಅವರ ಸ್ವಂತ ಸಾಧನೆಯನ್ನು ಕಡೆಗಣಿಸಲಾಗಿದೆ ಎಂಬ ಆರೋಪಕ್ಕೆ ಕಾರಣವಾಯಿತು. ಆದರೆ ಮನು ಭಾಕರ್ ಮಾತ್ರ ವೈಭವ್ ಸೂರ್ಯವಂಶಿ ಬಗ್ಗೆ ಕೇಳಿದ ಪ್ರಶ್ನೆಗೆ ಬಹಳ ಪ್ರಬುದ್ಧವಾಗಿ ಉತ್ತರಿಸಿದ್ದಾರೆ. ಸಾಧನೆಗೆ ವಯಸ್ಸಿಗಿಂತ ಒಳ್ಳೆಯ ಮಾರ್ಗದರ್ಶನ ಮುಖ್ಯ ಎಂದು ಅವರು ಉತ್ತರಿಸಿದರು.&lt;/p&gt;&lt;p&gt;&lt;strong&gt;ಪ್ರಬುದ್ಧ ಉತ್ತರ ನೀಡಿದ ಒಲಿಂಪಿಕ್ ವಿಜೇತೆ ಮನು ಭಾಕರ್&lt;/strong&gt;&lt;/p&gt;&lt;p&gt;ಅವರ ಮಾರ್ಗದರ್ಶಕರು ಒಳ್ಳೆಯವರಾಗಿದ್ದರೆ, ಅವನ ಸುತ್ತಲಿನ ಸಹವಾಸ ಒಳ್ಳೆಯದಾಗಿದ್ದರೆ ಮತ್ತು ಅವನ ಸುತ್ತಲಿನ ಜನರು ಒಳ್ಳೆಯವರಾಗಿದ್ದರೆ, ವಯಸ್ಸು ಕೇವಲ ಒಂದು ಸಂಖ್ಯೆ. ಮತ್ತು ಪ್ರತಿಭೆಗೆ ವಯಸ್ಸಿನ ಹಂಗಿಲ್ಲ ಎಂದು ಅವರು ಹೇಳಿದರು . 60 ವರ್ಷ ವಯಸ್ಸಿನಲ್ಲಿಯೂ ಒಳ್ಳೆಯ ವಿಷಯಗಳು ನಡೆಯುತ್ತವೆ. ಹಾಗೆಯೇ ಆರನೇ ವರ್ಷದಲ್ಲಿಯೂ ಒಳ್ಳೆಯದು ನಡೆಯುತ್ತವೆ. ಆದ್ದರಿಂದ ಅವನ ಸುತ್ತಲಿನ ಜನರು ಹೇಗಿರುತ್ತಾರೆ. ಯಾವ ರೀತಿ ಅವನಿಗೆ ಉತ್ತಮ ಮಾರ್ಗದರ್ಶನ ಸಿಗುತ್ತದೆ ಎಂದಾದರೆ ಅವನು ಮುಂದಿನ ದೊಡ್ಡ ತಾರೆಯಾಗುತ್ತಾನೆ ಎಂದು ಖಚಿತ ಎಂದು 24 ವರ್ಷದ ಮನು ಭಾಕರ್&zwnj; ವಿವರಿಸಿದ್ದಾರೆ. ಯುವ ಕ್ರೀಡಾಪಟುಗಳು ಗಣ್ಯ ಕ್ರೀಡಾಪಟುಗಳಾಗಿ ಬದಲಾಗಲು ಅವರಿಗೆ ಸಿಗುವ ಬೆಂಬಲ ಕಾರಣ ಎಂದು ಮನು ಹೇಳಿದರು.&lt;/p&gt;&lt;p&gt;&lt;strong&gt;ನೆಟ್ಟಿಗರಿಂದ ಅಸಮಾಧಾನ:&lt;/strong&gt;&lt;/p&gt;&lt;p&gt;ಆದರೆ ಮನು ಭಾಕರ್ ಅವರಿಗೆ ಈ ರೀತಿ ಪ್ರಶ್ನೆ ಕೇಳಿದ್ದಕ್ಕೆ ಅನೇಕರು ಇಂಟರ್&zwnj;ನೆಟ್&zwnj;ನಲ್ಲಿ ಆಕ್ಷೇಪವೆತ್ತಿದ್ದಾರೆ. ಇದು ಸ್ವತಃ ಮನು ಭಾಕರ್ ಅವರ ಸಾಧನೆಯನ್ನು ಕಡೆಗಣಿಸಿದಂತಿದೆ ಎಂದು ಹಲವರು ವಾದಿಸಿದರು.&lt;/p&gt;&lt;p&gt;ಜನರೇ, ಅವರು ಒಲಿಂಪಿಕ್ ಪದಕ ವಿಜೇತೆ. ವೈಭವ್ ಸೂರ್ಯವಂಶಿ ಬಗ್ಗೆ ಅವರ ಅಭಿಪ್ರಾಯವೇನು ಎಂದು ಕೇಳುವುದು ಅವರ ಸಾಧನೆಗಳು ಮತ್ತು ಅವರ ಕ್ರೀಡೆಗೆ ಮಾಡಿದ ಅನ್ಯಾಯವಾಗಿದೆ. ಕ್ರಿಕೆಟ್ ದೇಶದ ಪ್ರಮುಖ ಆಟ, ನಿಮ್ಮ ಕ್ರೀಡಾ ಸಂಪಾದಕರು ಸೂರ್ಯವಂಶಿ ಬಗ್ಗೆ ಸುದ್ದಿ ಮಾಡಲು ಬೇರೆ ಸೆಲೆಬ್ರಿಟಿ ಬಾಯಲ್ಲಿ ಅದನ್ನು ಉಲ್ಲೇಖಿಸುವ ಅಗತ್ಯವಿಲ್ಲ. ಬೇಕಿದ್ದರೆ, ಮುಂದಿನ ಬಾರಿ ವೈಭವ್ ಸೂರ್ಯವಂಶಿ ಅವರ ಬಳಿ ಮನು ಭಾಕರ್ ಬಗ್ಗೆ ಕೇಳಿ ಮತ್ತು ಅದು ಹೇಗೆ ಕಾಣುತ್ತದೆ ಎಂಬುದನ್ನು ನೋಡಿ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಅನೇಕ ಸೋಶೀಯಲ್ ಮೀಡಿಯಾ ಬಳಕೆದಾರರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಅಲ್ಲದ ಕ್ರೀಡೆಗಳ ಕ್ರೀಡಾಪಟುಗಳನ್ನು ಹೆಚ್ಚಾಗಿ ಕ್ರಿಕೆಟ್ ಕೇಂದ್ರಿತ ನಿರೂಪಣೆಗಳಿಗೆ ಹೇಗೆ ಎಳೆಯಲಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಯಾವಾತ್ತಾದರೂ ಶೂಟರ್&zwnj;ಗಳ ಬಗ್ಗೆ ಕ್ರಿಕೆಟರ್&zwnj;ಗಳ ಬಳಿ ಕೇಳಲಾಗಿದೆಯೇ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ನಿಜವಾಗಿ ನೀವು ಮನು ಭಾಕರ್ ಬಗ್ಗೆ ವೈಭವ್ ಬಳಿ ಕೇಳಬೇಕಿತ್ತು. ಆದರೆ ನೀವು ಆತನ ಬಗ್ಗೆ ಆಕೆಯ ಬಳಿ ಕೇಳಿದ್ದೀರಿ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಮಹಿಳಾ ಅಧಿಕಾರಿಗೆ ಹೂತು ಹಾಕುವುದಾಗಿ ಬೆದರಿಕೆ ಹಾಕಿದ ಸಚಿವನ ಸೋದರ: ಬಂಧನವಾದ ಕೆಲ ಗಂಟೆಗಳಲ್ಲೇ ಸಿಕ್ತು ಜಾಮೀನು&lt;/strong&gt;&lt;/p&gt;&lt;p&gt;ಇತ್ತ ವೈಭವ್ ಸೂರ್ಯವಂಶಿ ಅವರು ಐಪಿಎಲ್&zwnj;ನಲ್ಲಿ ಹಲವು ಮೈಲಿಗಲ್ಲುಗಳನ್ನು ಸೃಷ್ಟಿಸಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಟಿ20 ಕ್ರಿಕೆಟ್&zwnj;ನಲ್ಲಿ 20 ರನ್&zwnj; ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ. ಜೊತೆಗೆ ಐಪಿಎಲ್&zwnj;ನಲ್ಲಿ ಹಲವು ಶತಕಗಳನ್ನು ಬಾರಿಸಿದ್ದು, ಅಂಡರ್ 19 ಕ್ರಿಕೆಟ್&zwnj;ನಲ್ಲೂ ಒಳ್ಳೆಯ ಸ್ಕೋರ್ ಹೊಂದಿದ್ದಾರೆ. ಹಾಗೆಯೇ ಮನು ಭಾಕರ್ ಅವರ ಬಗ್ಗೆ ಹೇಳುವುದಾದರೆ ಇವರು ಒಲಿಂಪಿಕ್ ಗೇಮ್&zwnj;ನಲ್ಲಿ 2 ಪದಕಗಳನ್ನು ಹೊಂದಿದ್ದಾರೆ. ವಿಶ್ವ ಚಾಂಪಿಯನ್&zwnj;ಶಿಪ್ ಮತ್ತು ವಿಶ್ವಕಪ್&zwnj;ಗಳಲ್ಲಿ 23 ಪದಕಗಳು, ಹಾಗೆಯೇ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್&zwnj;ಶಿಪ್&zwnj;ಗಳಲ್ಲಿ 12 ಪದಕಗಳನ್ನು ಹೊಂದಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆರೋಗ್ಯ ನಿರ್ಲಕ್ಷಿಸಿ ನಿರಂತರ ಕೆಲಸ: ಹಾಸನದಲ್ಲಿ ಸಾಫ್ಟ್&zwnj;ವೇರ್ ಇಂಜಿನಿಯರ್ ಹಠಾತ್ ಸಾವು&lt;/strong&gt;&lt;/p&gt;]]></content:encoded>
            <category>other-sports</category>
            <dc:creator>Anusha Kb</dc:creator>
            <atom:link href="https://kannada.asianetnews.com/sports/manu-bhakar-vs-vaibhav-suryavanshi-what-manu-say-when-asked-about-vaibhav/articleshow-ibyk2xn"/>
        </item>
        <item>
            <title><![CDATA[French Open 2026: ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆದ್ದ ಜರ್ಮನಿ ಟೆನಿಸಿಗ ಅಲೆಕ್ಸಾಂಡರ್ ಜ್ವೆರೆವ್]]></title>
            <link>https://kannada.asianetnews.com/sports/alexander-zverev-wins-first-grand-slam-title-with-french-open-triumph-kvn/articleshow-ivkw448</link>
            <guid isPermaLink="true">https://kannada.asianetnews.com/sports/alexander-zverev-wins-first-grand-slam-title-with-french-open-triumph-kvn/articleshow-ivkw448</guid>
            <pubDate>Mon, 08 Jun 2026 08:13:48 +0530</pubDate>
            <description><![CDATA[ಜರ್ಮನಿಯ ಅಲೆಕ್ಸಾಂಡರ್&zwnj; ಜ್ವೆರೆವ್&zwnj; ಫ್ರೆಂಚ್&zwnj; ಓಪನ್ ಫೈನಲ್&zwnj;ನಲ್ಲಿ ಇಟಲಿಯ ಫ್ಲಾವಿಯೊ ಕೊಬೊಲಿ ಅವರನ್ನು ಮಣಿಸಿ ತಮ್ಮ ಚೊಚ್ಚಲ ಗ್ರ್ಯಾನ್&zwnj;ಸ್ಲಾಂ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ರೋಚಕ ಐದು ಸೆಟ್&zwnj;ಗಳ ಪಂದ್ಯದಲ್ಲಿ ಜಯಗಳಿಸಿದ ಜ್ವೆರೆವ್, ನಾಲ್ಕನೇ ಫೈನಲ್ ಪ್ರಯತ್ನದಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kthvm55y52brn7vs0ekbcnz3,imgname-gettyimages-2280358635-1780863341758.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ಯಾರಿಸ್&zwnj;: ಜರ್ಮನಿಯ ಯುವ ಟೆನಿಸಿಗ, ವಿಶ್ವ ನಂ.3 ಅಲೆಕ್ಸಾಂಡರ್&zwnj; ಜ್ವೆರೆವ್&zwnj; ಚೊಚ್ಚಲ ಗ್ರ್ಯಾನ್&zwnj;ಸ್ಲಾಂ ಕಿರೀಟ ಗೆದ್ದಿದ್ದಾರೆ. ಅವರು ಫ್ರೆಂಚ್&zwnj; ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಇಟಲಿಯ ಫ್ಲಾವಿಯೊ ಕೊಬೊಲಿ ವಿರುದ್ಧ ರೋಚಕ ಗೆಲುವು ಸಾಧಿಸಿ, ತಮ್ಮ ಗ್ರ್ಯಾನ್&zwnj;ಸ್ಲಾಂ ಕನಸನ್ನು ನನಸು ಮಾಡಿಕೊಂಡರು.&lt;/p&gt;&lt;p&gt;4 ಗಂಟೆಗೂ ಹೆಚ್ಚು ಕಾಲ ನಡೆದ ಪುರುಷರ ಸಿಂಗಲ್ಸ್&zwnj; ಪ್ರಶಸ್ತಿ ಕಾದಾಟದಲ್ಲಿ ಜ್ವೆರೆವ್&zwnj; 6-1, 4-6, 6-4, 6-7(5-7), 6-1 ಸೆಟ್&zwnj;ಗಳಲ್ಲಿ ಜಯಭೇರಿ ಬಾರಿಸಿದರು. ಮೊದಲ ಸೆಟ್&zwnj;ಅನ್ನು ಸುಲಭದಲ್ಲಿ ಕಳೆದುಕೊಂಡ 10ನೇ ಶ್ರೇಯಾಂಕಿತ ಕೊಬೊಲಿ, ಬಳಿಕ ತೀವ್ರ ಪೈಪೋಟಿ ನೀಡಿ 4 ಸೆಟ್ ಅಂತ್ಯಕ್ಕೆ 2-2 ಸಮಬಲ ಸಾಧಿಸಿದರು. ಆದರೆ ಕೊನೆ ಸೆಟ್&zwnj;ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದ ಜ್ವೆರೆವ್&zwnj;, ಚಾಂಪಿಯನ್&zwnj; ಆಗಿ ಹೊರಹೊಮ್ಮಿದರು. ಇದರೊಂದಿಗೆ ಕೊಬೊಲಿಯ ಚೊಚ್ಚಲ ಗ್ರ್ಯಾನ್&zwnj;ಸ್ಲಾಂ ಕನಸು ಭಗ್ನಗೊಂಡಿತು.&lt;/p&gt;&lt;h2&gt;&lt;strong&gt;2.5 ವರ್ಷದಲ್ಲಿ ಸಿನ್ನರ್&zwnj;, ಆಲ್ಕರಜ್&zwnj; &amp;nbsp;ಬಿಟ್ಟು ಗ್ರ್ಯಾನ್&zwnj;ಸ್ಲಾಂ ಗೆದ್ದ ಮೊದಲಿಗ&lt;/strong&gt;&lt;/h2&gt;&lt;p&gt;2024ರಿಂದ ಅಂದರೆ ಕಳೆದ ಎರಡೂವರೆ ವರ್ಷಗಳಲ್ಲೇ ಆಲ್ಕರಜ್&zwnj; ಹಾಗೂ ಸಿನ್ನರ್&zwnj; ಹೊರತಾಗಿ ಗ್ರ್ಯಾನ್&zwnj;ಸ್ಲಾಂ ಗೆದ್ದ ಮೊದಲಿಗ ಎಂಬ ಖ್ಯಾತಿಗೆ ಜ್ವೆರೆವ್&zwnj; ಪಾತ್ರರಾಗಿದ್ದಾರೆ. ಸಿನ್ನರ್&zwnj; 2024ರಲ್ಲಿ ಆಸ್ಟ್ರೇಲಿಯನ್&zwnj; ಓಪನ್&zwnj;, ಯುಎಸ್&zwnj; ಓಪನ್&zwnj;, 2025ರಲ್ಲಿ ಆಸ್ಟ್ರೇಲಿಯನ್&zwnj;, ವಿಂಬಲ್ಡನ್&zwnj; ಗೆದ್ದಿದ್ದರೆ, ಆಲ್ಕರಜ್&zwnj; 2024ರಲ್ಲಿ ಫ್ರೆಂಚ್&zwnj; ಓಪನ್&zwnj;, ವಿಂಬಲ್ಡನ್&zwnj;, 2025ರಲ್ಲಿ ಫ್ರೆಂಚ್&zwnj;, ಯುಎಸ್&zwnj;, 2026ರಲ್ಲಿ ಆಸ್ಟ್ರೇಲಿಯನ್&zwnj; ಓಪನ್&zwnj; ಗೆದ್ದಿದ್ದಾರೆ.&lt;/p&gt;&lt;p&gt;&lt;strong&gt;04 ಫೈನಲ್&zwnj;&lt;/strong&gt;&lt;/p&gt;&lt;p&gt;ಜ್ವೆರೆವ್&zwnj; 4 ಬಾರಿ ಗ್ರ್ಯಾನ್&zwnj;ಸ್ಲಾಂ ಫೈನಲ್&zwnj; ಆಡಿದ್ದು, ಇದೇ ಮೊದಲ ಬಾರಿ ಜಯಗಳಿಸಿದ್ದಾರೆ. 2020ರ ಯುಎಸ್&zwnj;, 2024ರ ಫ್ರೆಂಚ್&zwnj;, 2025ರ ಆಸ್ಟ್ರೇಲಿಯನ್&zwnj; ಓಪನ್&zwnj; ಫೈನಲ್&zwnj; ಸೋತಿದ್ದರು.&lt;/p&gt;&lt;p&gt;&lt;strong&gt;₹31.06 ಕೋಟಿ: &lt;/strong&gt;ಚಾಂಪಿಯನ್&zwnj; ಜ್ವೆರೆವ್&zwnj;ಗೆ ₹31.06 ಕೋಟಿ ನಗದು ಬಹುಮಾನ ಲಭಿಸಿತು.&lt;/p&gt;&lt;p&gt;&lt;strong&gt;₹15.53 ಕೋಟಿ:&lt;/strong&gt; ರನ್ನರ್&zwnj;-ಅಪ್&zwnj; ಕೊಬೊಲಿಗೆ ₹15.53 ಕೋಟಿ ನಗದು ಬಹುಮಾನ ಲಭಿಸಿತು.&lt;/p&gt;&lt;h3&gt;&lt;strong&gt;ವಾರೆವ್ಹಾ ಆ್ಯಂಡ್ರೀವಾ&lt;/strong&gt;&lt;/h3&gt;&lt;p&gt;ಪ್ಯಾರಿಸ್: ಫ್ರೆಂಚ್&zwnj; ಓಪನ್&zwnj; ಗ್ರ್ಯಾನ್&zwnj;ಸ್ಲಾಂ ಟೆನಿಸ್&zwnj; ಟೂರ್ನಿಯಲ್ಲಿ ರಷ್ಯಾದ 19 ವರ್ಷದ ಮಿರ್ರಾ ಆ್ಯಂಡ್ರೀವಾ ಚಾಂಪಿಯನ್&zwnj; ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್&zwnj; ಫೈನಲ್&zwnj;ನಲ್ಲಿ 8ನೇ ಶ್ರೇಯಾಂಕಿತೆ ಆ್ಯಂಡ್ರೀವಾ, ಪೋಲೆಂಡ್&zwnj;ನ ಶ್ರೇಯಾಂಕ ರಹಿತ ಮಜಾ ಚ್ವಾಲಿನ್ಸ್ಕಾ ವಿರುದ್ಧ 6-3, 6-2 ನೇರ ಸೆಟ್&zwnj;ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಚೊಚ್ಚಲ ಗ್ರ್ಯಾನ್&zwnj;ಸ್ಲಾಂ ಕಿರೀಟ ತಮ್ಮದಾಗಿಸಿಕೊಂಡರು.&lt;/p&gt;&lt;p&gt;ಆ್ಯಂಡ್ರೀವಾ ಈ ಹಿಂದೆ 2024ರಲ್ಲಿ ಫ್ರೆಂಚ್&zwnj; ಓಪನ್&zwnj; ಸೆಮಿಫೈನಲ್&zwnj; ತಲುಪಿದ್ದರು. ಕಳೆದ ಬಾರಿ ಕ್ವಾರ್ಟರ್&zwnj;ನಲ್ಲಿ ಎಡವಿದ್ದ ಅವರು ಈ ಬಾರಿ ತಮ್ಮ ಕನಸು ನನಸಾಗಿಸಿಕೊಂಡರು. ಫೈನಲ್&zwnj;ನಲ್ಲಿ ಅವರಿಗೆ ದೊಡ್ಡ ಸವಾಲು ಕೂಡಾ ಎದುರಾಗಲಿಲ್ಲ. ಇನ್ನು, ಚ್ವಾಲಿನ್ಸ್ಕಾ ಕೂಡಾ ಇದೇ ಮೊದಲ ಬಾರಿ ಗ್ರ್ಯಾನ್&zwnj;ಸ್ಲಾಂ ಫೈನಲ್&zwnj; ಆಡಿದರು. ಆದರೆ ಚೊಚ್ಚಲ ಫೈನಲ್&zwnj;ಅನ್ನು ಸ್ಮರಣೀಯಗೊಳಿಸಲು 24 ವರ್ಷದ ಆಟಗಾರ್ತಿಗೆ ಸಾಧ್ಯವಾಗಲಿಲ್ಲ.&lt;/p&gt;&lt;p&gt;&lt;strong&gt;₹31.06 ಕೋಟಿ: &lt;/strong&gt;ಚಾಂಪಿಯನ್&zwnj; ಮಿರ್ರಾ ಆ್ಯಂಡ್ರೀವಾಗೆ ₹31.06 ಕೋಟಿ ನಗದು ಬಹುಮಾನ ಲಭಿಸಿತು.&lt;/p&gt;&lt;p&gt;&lt;strong&gt;₹15.53 ಕೋಟಿ: &lt;/strong&gt;ರನ್ನರ್&zwnj;-ಅಪ್&zwnj; ಮಜಾ ಚ್ವಾಲಿನ್ಸ್ಕಾಗೆ ₹15.53 ಕೋಟಿ ನಗದು ಬಹುಮಾನ ಲಭಿಸಿತು.&lt;/p&gt;&lt;h3&gt;&lt;strong&gt;ಹೋಟೆಲ್&zwnj; ಬಿಲ್&zwnj; ಕೊಡಲು ಪರದಾಡಿದ್ದ ಚ್ವಾಲಿನ್ಸ್ಕಾಗೆ ಸಿಕ್ತು 15 ಕೋಟಿ ನಗದು!&lt;/strong&gt;&lt;/h3&gt;&lt;p&gt;ಫ್ರೆಂಚ್ ಓಪನ್ ಆಡಲೆಂದು ಪ್ಯಾರಿಸ್&zwnj;ಗೆ ಆಗಮಿಸಿದ್ದ ಚ್ವಾಲಿನ್ಸ್ಕ ಅರ್ಹತಾ ಸುತ್ತಿನಲ್ಲಿ ಆಡಿ ಗೆದ್ದು ಮುಖ್ಯ ಸುತ್ತು ಪ್ರವೇಶಿಸಿದ್ದರು. ಟೂರ್ನಿಗೂ ಮುನ್ನ ಅವರಿಗೆ ಪ್ರಾಯೋಜಕರೂ ಇರಲಿಲ್ಲ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಅವರಿಗೆ ತಾವು ತಂಗುವ ಹೋಟೆಲ್​ ಕೋಣೆಯ ಬಿಲ್ ಪಾವತಿಸಲೂ ಹಣವಿರಲಿಲ್ಲ. ಆಗ ಅವರಿಗೆ ನೆರವಾಗಿದ್ದ ಪೋಲೆಂಡ್&zwnj;ನ ಪಾನೀಯ ಕಂಪೆನಿ ಓಶೀ. ವಿಶ್ವ ನಂ.1 ಇಗಾ ಸ್ವಿಯಾಟೆಕ್&zwnj;ಗೆ ಪ್ರಾಯೋಜಕತ್ವ ವಹಿಸಿರುವ ಈ ಸಂಸ್ಥೆ, ಚ್ವಾಲಿನ್ಸ್ಕಾಗೂ ನೆರವಾಗಿದೆ. ಇದನ್ನು ಅವರು ಟೂರ್ನಿ ವೇಳೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಈಗ ಅವರಿಗೆ ಬಹುಮಾನ ಮೊತ್ತವಾಗಿ ₹15.56 ಕೋಟಿ ಲಭಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/alexander-zverev-wins-first-grand-slam-title-with-french-open-triumph-kvn/articleshow-ivkw448"/>
        </item>
        <item>
            <title><![CDATA[ಆಸೀಸ್‌ನಲ್ಲಿ ಪಾತ್ರೆ ತೊಳೆದ ಪಾಕ್‌ ಪ್ಲೇಯರ್ಸ್‌: ಹಾಕಿ, ಕ್ರಿಕೆಟ್‌ ಫೆಡರೇಷನ್‌ಗೂ ಆಸಿಮ್‌ ಮುನೀರ್‌ ಉಸ್ತುವಾರಿ?]]></title>
            <link>https://kannada.asianetnews.com/gallery/other-sports/pakistan-hockey-federation-crisis-players-wash-dishes-captain-banned-san-m8xclg9</link>
            <guid isPermaLink="true">https://kannada.asianetnews.com/gallery/other-sports/pakistan-hockey-federation-crisis-players-wash-dishes-captain-banned-san-m8xclg9</guid>
            <pubDate>Fri, 20 Feb 2026 16:19:29 +0530</pubDate>
            <description><![CDATA[&lt;p&gt;Pakistan Hockey Crisis: PHF President Resigns, Captain Banned ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವಮಾನಕ್ಕೊಳಗಾದ ಪಾಕಿಸ್ತಾನ ಹಾಕಿ ತಂಡದ ವಿವಾದ ತಾರಕಕ್ಕೇರಿದೆ. ಫೆಡರೇಶನ್ ಅಧ್ಯಕ್ಷರು ರಾಜೀನಾಮೆ ನೀಡಿದ್ದು, ತನಿಖೆ ನಡೆಸುವಂತೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಮನವಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khwe7fw391myr0dnb304d4tk,imgname-pakistan-hockey-team-australia-tour-humiliation-shakeel-abbas-butt-phf-hotel-booking-controversy-fih-pro-league-4-1771554717571.png" type="image/jpeg" height="390" width="690"/>
            <content:encoded><![CDATA[&lt;p&gt;Pakistan Hockey Crisis: PHF President Resigns, Captain Banned ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವಮಾನಕ್ಕೊಳಗಾದ ಪಾಕಿಸ್ತಾನ ಹಾಕಿ ತಂಡದ ವಿವಾದ ತಾರಕಕ್ಕೇರಿದೆ. ಫೆಡರೇಶನ್ ಅಧ್ಯಕ್ಷರು ರಾಜೀನಾಮೆ ನೀಡಿದ್ದು, ತನಿಖೆ ನಡೆಸುವಂತೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಸೇನಾ ಮುಖ್ಯಸ್ಥರು ನಾಗರಿಕ ಜೀವನದಿಂದ ದೂರವಿರಬೇಕು ಎಂದು ಪ್ರತಿಪಾದಿಸುವ ಪಾಕಿಸ್ತಾನವು, ಈಗ ತನ್ನ ಉನ್ನತ ಜನರಲ್ ಅನ್ನು ಕೇವಲ ಮಿಲಿಟರಿ ಕಮಾಂಡರ್&zwnj;ಗಿಂತಲೂ ಭಿನ್ನವಾದ ವ್ಯಕ್ತಿತ್ವವನ್ನಾಗಿ ವೇಗವಾಗಿ ರೂಪಿಸುತ್ತಿದೆ. ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿರುವ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಈಗ ಅನಧಿಕೃತವಾಗಿ ಪಾಕಿಸ್ತಾನದ ಅತ್ಯಂತ ಶಕ್ತಿಶಾಲಿ ಕ್ರೀಡಾ ಆಡಳಿತಗಾರನ ಪಟ್ಟ ಅಲಂಕರಿಸಿದಂತೆ ಕಾಣುತ್ತಿದ್ದಾರೆ. ಕ್ರಿಕೆಟ್ ಮಂಡಳಿಯ ವಿವಾದಗಳಿಂದ ಹಿಡಿದು ಹಾಕಿ ತಂಡದ ಬಿಕ್ಕಟ್ಟುಗಳವರೆಗೆ, ಪಾಕಿಸ್ತಾನದ ಕ್ರೀಡಾ ಲೋಕದ ಗೊಂದಲಗಳ ಮೇಲೆ ಮುನೀರ್ ಅವರ ನೆರಳು ದೊಡ್ಡದಾಗಿ ಆವರಿಸಿದೆ.&lt;/p&gt;&lt;img&gt;&lt;p&gt;ಪಾಕಿಸ್ತಾನ ಹಾಕಿ ತಂಡದ ಆಟಗಾರರು ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದ ವೇಳೆ ಬೀದಿ ಪಾಲಾದ ಘಟನೆಗೆ ಸಂಬಂಧಿಸಿದಂತೆ ಭಾರಿ ವಿವಾದ ಉಂಟಾಗಿದ್ದು, ಗುರುವಾರ ಪಾಕಿಸ್ತಾನ ಹಾಕಿ ಫೆಡರೇಶನ್ (PHF) ಅಧ್ಯಕ್ಷ ತಾರಿಕ್ ಬುಗ್ಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ರಾಜೀನಾಮೆ ನೀಡುವ ಮೊದಲೇ ಅವರು ಫೆಡರೇಶನ್ ಅನ್ನು ಟೀಕಿಸಿದ ಕಾರಣಕ್ಕಾಗಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್ ಅವರ ಮೇಲೆ ಎರಡು ವರ್ಷಗಳ ನಿಷೇಧ ಹೇರಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಸಲ್ಲಿಸಿರುವುದನ್ನು ಬುಗ್ಗಿ ಖಚಿತಪಡಿಸಿದ್ದಾರೆ. &quot;ನಾನು ಪ್ರಧಾನ ಮಂತ್ರಿಯವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ. ಆದರೆ, ಎಫ್&zwnj;ಐಎಚ್ ಪ್ರೊ ಲೀಗ್ ಹಾಕಿ ವೇಳೆ ಆಸ್ಟ್ರೇಲಿಯಾದಲ್ಲಿ ನಡೆದ ಘಟನೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ನಾನು ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಲ್ಲಿ ವಿನಂತಿಸುತ್ತೇನೆ&quot; ಎಂದು ಅವರು ತಿಳಿಸಿದ್ದಾರೆ. ಇದರಲ್ಲಿ ಆಸಿಮ್&zwnj; ಮುನೀರ್&zwnj;ಗೆ ಇವರು ಪತ್ರ ಬರೆದಿರುವುದೇ ಅಚ್ಚರಿಯಾಗಿ ಕಂಡಿದೆ.&lt;/p&gt;&lt;img&gt;&lt;p&gt;ಇದೇ ವೇಳೆ ಬುಧವಾರ ಫೆಡರೇಶನ್ ವಿರುದ್ಧ ಕಿಡಿಕಾರಿದ್ದ ನಾಯಕ ಅಮ್ಮದ್ ಬಟ್, ಪ್ರವಾಸದ ವೇಳೆ ಆಟಗಾರರು ಅನುಭವಿಸಿದ ಅವಮಾನದ ಸಂಗತಿಗಳನ್ನು ಬಯಲು ಮಾಡಿದ್ದಾರೆ. ಮೈದಾನಕ್ಕಿಳಿದು ಪಂದ್ಯ ಆಡುವ ಮೊದಲು ಆಟಗಾರರು ಕಿಚನ್&zwnj; ಕ್ಲೀನ್&zwnj; ಮಾಡಬೇಕಿತ್ತು ಮತ್ತು ಪಾತ್ರೆಗಳನ್ನು ತೊಳೆಯಬೇಕಿತ್ತು ಎಂಬ ಆಘಾತಕಾರಿ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಆಸ್ಟ್ರೇಲಿಯಾ ಪ್ರವಾಸದ ವೇಳೆ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಮತ್ತು ಜರ್ಮನಿ ವಿರುದ್ಧದ ಎಲ್ಲಾ ಪ್ರೊ ಲೀಗ್ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆದ ಕಾರಣ ಆಟಗಾರರು ಸುಸ್ತಾಗಿದ್ದರು. ಪಾಕಿಸ್ತಾನ ಕ್ರೀಡಾ ಮಂಡಳಿಯಿಂದ (PSB) ಅಗತ್ಯ ಹಣ ಬಿಡುಗಡೆಯಾಗಿದ್ದರೂ, ಫೆಡರೇಶನ್ ಮುಂಗಡ ಹಣ ಪಾವತಿಸಲು ವಿಫಲವಾದ ಕಾರಣ ಹೋಟೆಲ್&zwnj;ಗಳು ಆಟಗಾರರಿಗೆ ಪ್ರವೇಶ ನೀಡಲು ನಿರಾಕರಿಸಿದ್ದವು.&lt;/p&gt;&lt;img&gt;&lt;p&gt;ಪಾಕಿಸ್ತಾನಕ್ಕೆ ಮರಳಿದ ನಂತರ, ನಾಯಕ ಬಟ್ ಮತ್ತು ಕನಿಷ್ಠ ಒಂಬತ್ತು ಇತರ ಆಟಗಾರರು ತಂಡದ ಮ್ಯಾನೇಜ್&zwnj;ಮೆಂಟ್ ಮತ್ತು ಹಾಲಿ ಪಿಎಚ್&zwnj;ಎಫ್ ನಾಯಕತ್ವವನ್ನು ಕಿತ್ತೊಗೆಯುವಂತೆ ಒತ್ತಾಯಿಸಿದ್ದಾರೆ. ಕಳೆದ ಒಂದು ವರ್ಷದಿಂದ ಬಹುತೇಕ ಆಟಗಾರರಿಗೆ ಪಿಎಸ್&zwnj;ಬಿ ಮತ್ತು ಫೆಡರೇಶನ್&zwnj;ನಿಂದ ದಿನಭತ್ಯೆ (Daily Allowance) ಸಿಕ್ಕಿಲ್ಲ ಎಂಬ ವಿಷಯವನ್ನೂ ಬಟ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಈ ಎಲ್ಲಾ ವಿವಾದಗಳಿಗೆ ಪ್ರವಾಸದ ವ್ಯವಸ್ಥೆ ಮಾಡಿದ್ದ ಪಿಎಸ್&zwnj;ಬಿ (PSB) ಕಾರಣ ಎಂದು ಬುಗ್ಗಿ ದೂರಿದ್ದಾರೆ. ಹೋಟೆಲ್ ವಸತಿ ವೆಚ್ಚಕ್ಕಾಗಿ ಪಿಎಸ್&zwnj;ಬಿ ಸುಮಾರು ಒಂದು ಮಿಲಿಯನ್ ರೂಪಾಯಿಗಳ ಚೆಕ್ ಅನ್ನು ಫೆಡರೇಶನ್&zwnj;ಗೆ ಕಳುಹಿಸಿತ್ತು ಎಂದು ವರದಿಯಾಗಿದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಬುಗ್ಗಿ ಸ್ಪಷ್ಟ ಉತ್ತರ ನೀಡಿಲ್ಲ.&lt;/p&gt;&lt;img&gt;&lt;p&gt;ಮತ್ತೊಂದೆಡೆ, ತಂಡದ ಮುಖ್ಯ ತರಬೇತುದಾರ ತಾಹಿರ್ ಜಮಾನ್ ಕೂಡ ರಾಜೀನಾಮೆ ನೀಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆಟಗಾರರಲ್ಲಿ ಶಿಸ್ತಿನ ಕೊರತೆಯಿದೆ ಎಂದು ಆರೋಪಿಸಿರುವ ಅವರು, ನಾಯಕ ಅಮ್ಮದ್ ಬಟ್ ಇತರರ ವಿರುದ್ಧ ಕೆಟ್ಟ ಭಾಷೆ ಬಳಸಿದ್ದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎಂದು ದೂರಿದ್ದಾರೆ.&lt;/p&gt;]]></content:encoded>
            <category>other-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/other-sports/pakistan-hockey-federation-crisis-players-wash-dishes-captain-banned-san-m8xclg9"/>
        </item>
        <item>
            <title><![CDATA[JSW ಇಂಡಿಯನ್ ಓಪನ್ ಸ್ಕ್ವಾಷ್ ಸಂಭ್ರಮ; ಮುಂಬೈನಲ್ಲಿ ನಾಳೆಯಿಂದ ಹೈ-ವೋಲ್ಟೇಜ್ ಪಂದ್ಯ!]]></title>
            <link>https://kannada.asianetnews.com/other-sports/jsw-indian-open-squash-2026-mumbai-anahat-singh-ramit-tandon-details-san/articleshow-negbmce</link>
            <guid isPermaLink="true">https://kannada.asianetnews.com/other-sports/jsw-indian-open-squash-2026-mumbai-anahat-singh-ramit-tandon-details-san/articleshow-negbmce</guid>
            <pubDate>Tue, 17 Mar 2026 19:40:27 +0530</pubDate>
            <description><![CDATA[&lt;p&gt;ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಎರಡನೇ ಆವೃತ್ತಿಯ JSW ಇಂಡಿಯನ್ ಓಪನ್ ಸ್ಕ್ವಾಷ್ ಪಂದ್ಯಾವಳಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಅನಾಹತ್ ಸಿಂಗ್, ರಮಿತ್ ಟಂಡನ್, ಜೋಷ್ನಾ ಚಿನಪ್ಪ ಸೇರಿದಂತೆ ಭಾರತದ ಪ್ರಮುಖ ಆಟಗಾರರು ಮತ್ತು ಅಂತರಾಷ್ಟ್ರೀಯ ಸ್ಪರ್ಧಿಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kky1q79dw1wf9841zbsk0zz8,imgname-whatsapp-image-2026-03-17-at-4.05.22-pm-1773756194093.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮಾ.17): &lt;/strong&gt;ಮುಂಬೈನ ಐತಿಹಾಸಿಕ ಸಿಸಿಐ (CCI) ಬ್ರಬೋರ್ನ್ ಸ್ಟೇಡಿಯಂನಲ್ಲಿ ನಾಳೆಯಿಂದ ಎರಡನೇ ಆವೃತ್ತಿಯ JSW ಇಂಡಿಯನ್ ಓಪನ್ ಆರಂಭವಾಗಲಿದ್ದು, ಐದು ದಿನಗಳ ಕಾಲ ಉನ್ನತ ಮಟ್ಟದ ಸ್ಕ್ವಾಷ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ಭಾರತದ ಪ್ರಮುಖ ಆಟಗಾರರು ಮತ್ತು ಅಂತರಾಷ್ಟ್ರೀಯ ಸ್ಪರ್ಧಿಗಳನ್ನೊಳಗೊಂಡ ಈ ಪಂದ್ಯಾವಳಿಯಲ್ಲಿ, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಒಟ್ಟು 30 ಪಂದ್ಯಗಳು ನಡೆಯಲಿವೆ. ಆಟಗಾರರು ಪಿಎಸ್&zwnj;ಎ (PSA) ಶ್ರೇಯಾಂಕದ ಅಂಕಗಳು ಮತ್ತು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.&lt;/p&gt;&lt;p&gt;ಈ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕದ ಮತ್ತು ಹಾಲಿ ಚಾಂಪಿಯನ್ ಅನಾಹತ್ ಸಿಂಗ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರೊಂದಿಗೆ ಭಾರತದ ಪ್ರಮುಖ ಆಟಗಾರರಾದ ರಮಿತ್ ಟಂಡನ್, ವೀರ್ ಚೋತ್ರಾನಿ, ಅಭಯ್ ಸಿಂಗ್ ಮತ್ತು ಹಿರಿಯ ಆಟಗಾರ್ತಿ ಜೋಷ್ನಾ ಚಿನಪ್ಪ ಅವರು ತಾಯ್ನಾಡಿನ ಪ್ರೇಕ್ಷಕರ ಮುಂದೆ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.&lt;/p&gt;&lt;p&gt;ಅಂತರಾಷ್ಟ್ರೀಯ ಮಟ್ಟದ ಪ್ರಬಲ ಆಟಗಾರರಾದ ಯಾಹ್ಯಾ ಎಲ್ನಾವಾಸ್ನಿ, ನದೀನ್ ಎಲ್ಹಮ್ಮಮ್ ಮತ್ತು ಎನೋರಾ ವಿಲ್ಲಾರ್ಡ್ ಕೂಡ ಪಾಲ್ಗೊಳ್ಳುತ್ತಿದ್ದು, ವಾರದ ಉದ್ದಕ್ಕೂ ರೋಚಕ ಪಂದ್ಯಗಳು ನಡೆಯಲಿವೆ.&lt;/p&gt;&lt;p&gt;ಪಂದ್ಯಾವಳಿಯ ಬಗ್ಗೆ ಮಾತನಾಡಿದ ರಮಿತ್ ಟಂಡನ್, &quot;ಭಾರತದ ಸಂಸ್ಕೃತಿ ಮತ್ತು ಆತಿಥ್ಯದ ಕಾರಣದಿಂದಾಗಿ ಆಟಗಾರರು ಇಲ್ಲಿಗೆ ಬರಲು ಇಷ್ಟಪಡುತ್ತಾರೆ. ಕಳೆದ ವರ್ಷದ ಈ ಪಂದ್ಯಾವಳಿಯು ವರ್ಷದ ಅತ್ಯುತ್ತಮ ಈವೆಂಟ್&zwnj;ಗಳಲ್ಲಿ ಒಂದಾಗಿತ್ತು ಎಂದು ಅನೇಕ ಆಟಗಾರರು ನನಗೆ ತಿಳಿಸಿದ್ದರು ಎಂದರು.&lt;/p&gt;&lt;p&gt;ಡಿಫೆಂಡಿಂಗ್ ಚಾಂಪಿಯನ್ ಅನಾಹತ್ ಸಿಂಗ್ ಮಾತನಾಡಿ &quot;ಈ ಪಂದ್ಯಾವಳಿಗಾಗಿ ನಾನು ಕಠಿಣ ತರಬೇತಿ ನಡೆಸಿದ್ದೇನೆ. ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ಪಂದ್ಯವನ್ನೂ ಅದೇ ಮಾನಸಿಕತೆಯೊಂದಿಗೆ ಎದುರಿಸುವುದು ನನ್ನ ಗುರಿ. ಮುಂದಿನ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಕ್ವಾಷ್ ಸೇರ್ಪಡೆಯಾಗುತ್ತಿರುವುದರಿಂದ, ಅಂತಹ ದೊಡ್ಡ ಗುರಿಯತ್ತ ಸಾಗಲು ಇಂತಹ ಪಂದ್ಯಾವಳಿಗಳು ಪ್ರಮುಖ ಹಂತಗಳಾಗಿವೆ&quot; ಎಂದರು.&lt;/p&gt;&lt;p&gt;2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್&zwnj;ನಲ್ಲಿ ಸ್ಕ್ವಾಷ್ ಪದಾರ್ಪಣೆ ಮಾಡುತ್ತಿರುವುದರಿಂದ, ಭಾರತದಲ್ಲಿ ಕ್ರೀಡೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಈ ಟೂರ್ನಿ ಸಹಕಾರಿಯಾಗಿದೆ. ಮಾರ್ಚ್ 18 ಮೊದಲ ಸುತ್ತಿನ ಪಂದ್ಯಗಳು (ಮಧ್ಯಾಹ್ನ 12:00 ರಿಂದ), ಮಾರ್ಚ್ 19, ಎರಡನೇ ಸುತ್ತು, ಮಾರ್ಚ್ 20 ಕ್ವಾರ್ಟರ್ ಫೈನಲ್ಸ್, ಮಾರ್ಚ್ 21 ಸೆಮಿಫೈನಲ್ಸ್ ಮತ್ತು ಮಾರ್ಚ್ 22 ರಂದು ಫೈನಲ್ಸ್ ನಡೆಯಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/other-sports/jsw-indian-open-squash-2026-mumbai-anahat-singh-ramit-tandon-details-san/articleshow-negbmce"/>
        </item>
        <item>
            <title><![CDATA[ಇರಾನ್ ಸಂಘರ್ಷ: ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪಿವಿ ಸಿಂಧು, ಸಮೀಪದಲ್ಲೇ ಸ್ಫೋಟ ಬ್ಯಾಡ್ಮಿಂಟನ್ ತಾರೆ ಆತಂಕ!]]></title>
            <link>https://kannada.asianetnews.com/world-news/pv-sindhu-stuck-in-dubai-airport-says-situation-getting-more-frightening-by-the-hour/articleshow-o4gqssd</link>
            <guid isPermaLink="true">https://kannada.asianetnews.com/world-news/pv-sindhu-stuck-in-dubai-airport-says-situation-getting-more-frightening-by-the-hour/articleshow-o4gqssd</guid>
            <pubDate>Sun, 01 Mar 2026 13:26:32 +0530</pubDate>
            <description><![CDATA[&lt;p&gt;ಇರಾನ್-ಇಸ್ರೇಲ್ ಸಂಘರ್ಷದ ಕಾರಣ, ಆಲ್ ಇಂಗ್ಲೆಂಡ್ ಓಪನ್ ಟೂರ್ನಿಗೆ ತೆರಳುತ್ತಿದ್ದ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಬಳಿ ಸ್ಪೋಟದ ಸದ್ದು ಕೇಳಿದ್ದು, &amp;nbsp;ಸದ್ಯ ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಸುರಕ್ಷಿತ ಸ್ಥಳದಲ್ಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjm5jkq6twm4pgnq5997gq4e,imgname-pv-sindhu-1772350951142.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದುಬೈ: &lt;/strong&gt;ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಕ್ಷಿಪಣಿ ದಾಳಿಗಳ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಸ್ಟಾರ್ ಶಟ್ಲರ್ ಹಾಗೂ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಪಿ.ವಿ. ಸಿಂಧು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.&lt;/p&gt;&lt;p&gt;ಮಂಗಳವಾರ ಆರಂಭಗೊಳ್ಳಲಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಗಾಗಿ ಸಿಂಧು ಇಂಗ್ಲೆಂಡ್&zwnj;ನ ಬರ್ಮಿಂಗ್ಹ್ಯಾಮ್&zwnj;ಗೆ ಪ್ರಯಾಣಿಸುತ್ತಿದ್ದರು. ಈ ಪ್ರಯಾಣದಲ್ಲಿ ದುಬೈ ಅವರ ಸಂಪರ್ಕ ಕೇಂದ್ರವಾಗಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ಏಕಾಏಕಿ ಉಲ್ಬಣಗೊಂಡ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಜನನಿಬಿಡ ಪ್ರಯಾಣ ಕೇಂದ್ರಗಳಲ್ಲಿ ಒಂದಾಗಿರುವ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.&lt;/p&gt;&lt;h2&gt;ವಿಮಾನ ನಿಲ್ದಾಣದ ಬಳಿ ಸ್ಪೋಟ&lt;/h2&gt;&lt;p&gt;ಸಿಂಧು ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ದುಬೈನಲ್ಲಿ ಎದುರಿಸುತ್ತಿರುವ ಸ್ಥಿತಿಗತಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. &ldquo;ವಿಮಾನ ನಿಲ್ದಾಣದ ಸಮೀಪ ಸ್ಪೋಟ ಸಂಭವಿಸುತ್ತಿರುವ ಶಬ್ದಗಳು ಕೇಳಿಸುತ್ತಿವೆ. ಕಳೆದ ಒಂದು ಗಂಟೆಯಿಂದ ಇಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಸದ್ಯ ನಮಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಮತ್ತು ಹೈ ಕಮಿಷನರ್ ಅವರು ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ನಮಗೆ ಸಂಪೂರ್ಣ ಸುರಕ್ಷತೆ ಒದಗಿಸಲಾಗುತ್ತಿದೆ,&rdquo; ಎಂದು ಅವರು ಧನ್ಯವಾದ ಅರ್ಪಿಸಿದ್ದಾರೆ.&lt;/p&gt;&lt;h2&gt;ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಡಿಯೋ ಹಂಚಿಕೆ&lt;/h2&gt;&lt;p&gt;ನಾವು ಎದುರಿಸುತ್ತಿರುವ ಸಂಕಷ್ಟ ಇನ್ನೂ ಮುಂದುವರಿದೇ ಇದೆ. ಗಂಟೆಗಂಟೆಗೂ ಪರಿಸ್ಥಿತಿ ಹೆಚ್ಚು ಭಯಾನಕವಾಗುತ್ತಿದೆ. ಕೆಲ ಗಂಟೆಗಳ ಹಿಂದೆ, ನಾವು ವಿಮಾನ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಸ್ಥಳದ ಸಮೀಪವೇ ಭಾರೀ ಸ್ಪೋಟ ಸಂಭವಿಸಿತು. ಹೊಗೆ ಮತ್ತು ಅವಶೇಷಗಳಿಗೆ ಅತ್ಯಂತ ಹತ್ತಿರದಲ್ಲಿದ್ದ ನನ್ನ ಕೋಚ್ ತಕ್ಷಣವೇ ಆ ಪ್ರದೇಶದಿಂದ ಹೊರಗೆ ಓಡಬೇಕಾಯಿತು. ಅದು ನಮ್ಮೆಲ್ಲರಿಗೂ ಅತ್ಯಂತ ಉದ್ವಿಗ್ನ ಮತ್ತು ಭಯಾನಕ ಕ್ಷಣವಾಗಿತ್ತು.&lt;/p&gt;&lt;p&gt;ಈಗ ನಾವು ಎಲ್ಲರೂ ಸುರಕ್ಷಿತರಾಗಿದ್ದೇವೆ. ನಾವೆಲ್ಲರೂ ಈಗ ಸುರಕ್ಷಿತರಾಗಿದ್ದೇವೆ ಮತ್ತು ಹೆಚ್ಚು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ, ದುಬೈ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ದುಬೈ ಅಧಿಕಾರಿಗಳ ಅವಿಶ್ರಾಂತ ಪ್ರಯತ್ನಗಳಿಗೆ ಧನ್ಯವಾದಗಳು. ನಮ್ಮ ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ನಿರಂತರ ಸಹಕಾರ ನೀಡುತ್ತಿರುವ ದುಬೈನಲ್ಲಿನ ಭಾರತೀಯ ಹೈ ಕಮಿಷನ್&zwnj;ಗೆ ವಿಶೇಷವಾಗಿ ಹೃತ್ಪೂರ್ವಕ ಧನ್ಯವಾದಗಳು. ಪರಿಸ್ಥಿತಿ ಶಾಂತಗೊಳ್ಳಲಿದೆ ಎಂಬ ಆಶಾವಾದದೊಂದಿಗೆ ಕಾಯುತ್ತಿದ್ದೇವೆ.&lt;/p&gt;&lt;p&gt;ವಿಮಾನ ನಿಲ್ದಾಣದಲ್ಲಿ ಸುತ್ತಮುತ್ತ ನಡೆಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದಿರುವ ಸಿಂಧು, ಇನ್&zwnj;ಸ್ಟಾಗ್ರಾಮ್&zwnj;ನಲ್ಲೂ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮುಂದಿನ ಸೂಚನೆ ದೊರೆಯುವವರೆಗೆ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸಂದೇಶದೊಂದಿಗೆ ವಿಡಿಯೋವನ್ನು ಶೇರ್ ಮಾಡಿರುವ ಅವರು, ಅಲ್ಲಿನ ಉದ್ವಿಗ್ನ ವಾತಾವರಣವನ್ನು ಸ್ಪಷ್ಟವಾಗಿ ತೋರಿಸಿದ್ದಾರೆ.&lt;/p&gt;&lt;p&gt;ಸಿಂಧು ಮಾತ್ರವಲ್ಲದೆ, ವಿವಿಧ ದೇಶಗಳಿಗೆ ತೆರಳಬೇಕಿದ್ದ ಸಾವಿರಾರು ಪ್ರಯಾಣಿಕರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಪರಿಣಾಮ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ, ಜಾಗತಿಕ ವಿಮಾನ ಸಂಚಾರ ತೀವ್ರವಾಗಿ ವ್ಯತ್ಯಯಗೊಂಡಿದೆ.&lt;/p&gt;&lt;p&gt;ಈ ಘಟನೆ, ಯುದ್ಧ ಮತ್ತು ರಾಜಕೀಯ ಸಂಘರ್ಷಗಳು ಕೇವಲ ಗಡಿಗಳಲ್ಲೇ ಸೀಮಿತವಾಗದೆ, ಕ್ರೀಡೆ, ಪ್ರವಾಸೋದ್ಯಮ ಮತ್ತು ಸಾಮಾನ್ಯ ನಾಗರಿಕರ ಬದುಕಿನ ಮೇಲೂ ಎಷ್ಟು ದೊಡ್ಡ ಪರಿಣಾಮ ಬೀರುತ್ತವೆ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;The ordeal continues to unfold, and the situation is becoming more frightening by the hour.A few hours ago, there was an explosion close to where we were holed up at the airport. My coach had to quickly run out of the area as he was closest to the smoke and debris. It was an&hellip; https://t.co/ZdNtuALk0P&lt;/p&gt;&lt;p&gt;&mdash; Pvsindhu (@Pvsindhu1) March 1, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Gowthami K</dc:creator>
            <atom:link href="https://kannada.asianetnews.com/world-news/pv-sindhu-stuck-in-dubai-airport-says-situation-getting-more-frightening-by-the-hour/articleshow-o4gqssd"/>
        </item>
        <item>
            <title><![CDATA[ಕಳಿಂಗ ಐಐಟಿಯಲ್ಲಿ ನಾಳೆಯಿಂದ ವಾಲಿಬಾಲ್ ವರ್ಲ್ಡ್‌ ಬೀಚ್ ಪ್ರೊ ಟೂರ್ನಿ!]]></title>
            <link>https://kannada.asianetnews.com/sports/kiit-university-to-host-fivb-volleyball-world-beach-pro-tour-2026-in-bhubaneswar-kvn/articleshow-paw1zqd</link>
            <guid isPermaLink="true">https://kannada.asianetnews.com/sports/kiit-university-to-host-fivb-volleyball-world-beach-pro-tour-2026-in-bhubaneswar-kvn/articleshow-paw1zqd</guid>
            <pubDate>Tue, 03 Mar 2026 11:46:18 +0530</pubDate>
            <description><![CDATA[&lt;p&gt;ಕೆಐಐಟಿ ವಿಶ್ವವಿದ್ಯಾಲಯದಲ್ಲಿ ವಾಲಿಬಾಲ್ ವರ್ಲ್ಡ್ ಬೀಚ್ ಪ್ರೊ ಟೂರ್ನಿ ಮಾರ್ಚ್ 4ರಿಂದ 8 ರವರೆಗೆ ನಡೆಯಲಿದೆ. ಇದರೊಂದಿಗೆ ಟೂರ್ನಿಗೆ ಆತಿಥ್ಯ ವಹಿಸಿದ ಭಾರತದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಕೆಐಐಟಿ ಪಾತ್ರವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jkfansv1e2j9dhkwnyxj61gm,imgname-volleyball-1738902529889.jpg" type="image/jpeg" height="390" width="690"/>
            <content:encoded><![CDATA[&lt;p&gt;ಭುವನೇಶ್ವರ: ಕೆಐಐಟಿ ವಿಶ್ವವಿದ್ಯಾಲಯದಲ್ಲಿ ಪುರುಷ ಮತ್ತು ಮಹಿಳೆಯರ ಎಫ್&zwnj;ಐವಿಬಿ ವಾಲಿಬಾಲ್ ವರ್ಲ್ಡ್ ಬೀಚ್ ಪ್ರೊ ಟೂರ್ನಿ ಮಾರ್ಚ್ 4ರಿಂದ 8 ರವರೆಗೆ ನಡೆಯಲಿದ್ದು, ಇದರ ಆತಿಥ್ಯವನ್ನು ಇಲ್ಲಿನ ಕಳಿಂಗ ಇನ್&zwnj;ಸ್ಟಿಟ್ಯೂಟ್&zwnj; ಆಫ್&zwnj; ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ) ವಿಶ್ವವಿದ್ಯಾಲಯ ವಹಿಸಲಿದೆ.&lt;/p&gt;&lt;p&gt;ಇದರೊಂದಿಗೆ ಟೂರ್ನಿಗೆ ಆತಿಥ್ಯ ವಹಿಸಿದ ಭಾರತದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಕೆಐಐಟಿ ಪಾತ್ರವಾಗಲಿದೆ. ಇಂತಹ ಪ್ರತಿಷ್ಠಿತ ಟೂರ್ನಿಯನ್ನು ಭಾರತದ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. ಒಡಿಶಾದ ಭುವನೇಶ್ವರ ನಗರವು ಚೊಚ್ಚಲ ಬೀಚ್ ವಾಲಿಬಾಲ್&zwnj;ಗೆ ಈ ಮೂಲಕ ಸಾಕ್ಷಿಯಾಗಲಿದೆ. 52 ದೇಶಗಳ 82 ತಂಡಗಳು ಸ್ಪರ್ಧಿಸುತ್ತಿದ್ದು, ಒಲಿಂಪಿಕ್ ಚಿನ್ನದ ಪದಕ ವಿಜೇತರು ಸೇರಿ 306 ಆಟಗಾರರು ಭಾಗಿಯಾಗುತ್ತಿರುವುದು ವಿಶೇಷ.&lt;/p&gt;&lt;h2&gt;&lt;strong&gt;ಎಲ್ಲಾ ರೀತಿಯ ಸಿದ್ಧತೆ:&lt;/strong&gt;&lt;/h2&gt;&lt;p&gt;ಐದು ದಿನಗಳ ಪಂದ್ಯಾವಳಿಯನ್ನು ಕೆಐಐಟಿಯ ಕ್ಯಾಂಪಸ್&zwnj;ನಲ್ಲಿರುವ ದ್ಯುತಿ ಚಂದ್ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತಿದೆ. ಇದನ್ನು ಅಂತಾರಾಷ್ಟ್ರೀಯ ಮಟ್ಟದ ಬೀಚ್ ವಾಲಿಬಾಲ್ ಕ್ರೀಡಾಂಗಣವಾಗಿ ಪರಿವರ್ತಿಸಲಾಗಿದೆ. ಪಂದ್ಯಾವಳಿಯನ್ನು ಸುಗಮವಾಗಿ ನಡೆಸಲು ಸಾಕಷ್ಟು ವ್ಯವಸ್ಥೆಯನ್ನು ಮಾಡಲಾಗಿದೆ. ಕ್ರೀಡಾಪಟುಗಳ ಸುರಕ್ಷತೆ, ವಸತಿ ವ್ಯವಸ್ಥೆ, ತರಬೇತಿ ಸೇರಿದಂತೆ ಆತಿಥ್ಯಕ್ಕೆ ಸಂಬಂಧಿಸಿದ ಎಲ್ಲಾ ಉಪಕ್ರಮಗಳನ್ನು ಸಿದ್ಧಗೊಳಿಸಲಾಗಿದೆ. ಕೆಐಐಟಿ ಮತ್ತು ಕೆಐಎಸ್&zwnj;ಎಸ್ ಸಂಸ್ಥಾಪಕರಾದ ಡಾ.ಅಚ್ಯುತ ಸಮಂತ ಅವರು ಈ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ಖುದ್ದಾಗಿ ನೋಡಿಕೊಳ್ಳುತ್ತಿದ್ದಾರೆ. ಟೂರ್ನಮೆಂಟ್&zwnj; ಯಶಸ್ವಿಯಾಗಿ ನಡೆಯಲು ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ.&lt;/p&gt;&lt;p&gt;&lsquo;ನಾವು ಇಂತಹ ಕ್ರೀಡಾಕೂಟ ಆಯೋಜಿಸಿದ್ದಾಗಲೆಲ್ಲ ಪ್ರತಿಯೊಂದು ವ್ಯವಸ್ಥೆಯನ್ನು ಎಚ್ಚರಿಕೆ ಮತ್ತು ಜಾಗ್ರತೆಯಿಂದ ನೋಡಿಕೊಂಡಿದ್ದೇವೆ. ಇದು ನನ್ನ ವೈಯಕ್ತಿಕ ಜವಾಬ್ದಾರಿ. ಎಲ್ಲಾ ಕೆಲಸಗಳನ್ನು ನಮ್ಮ ತಂಡಗಳು ಶಿಸ್ತಿನಿಂದ ಮಾಡುತ್ತಿವೆ. ಒಡಿಶಾ ಮತ್ತು ದೇಶವೇ ಹೆಮ್ಮೆಪಡುವಂತಹ ಚಾಂಪಿಯನ್&zwnj;ಶಿಪ್ ಅನ್ನು ನಾವು ನಡೆಸುತ್ತೇವೆ ಎಂಬ ವಿಶ್ವಾಸ ನನಗಿದೆ&quot; ಎಂದು ಡಾ. ಅಚ್ಯುತ ಸಮಂತ ಅವರು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಒಡಿಶಾದ ಪ್ರಾಮುಖ್ಯತೆ ತಿಳಿಸಲಿದೆ:&lt;/strong&gt;&lt;/h3&gt;&lt;p&gt;82 ಅಂತರರಾಷ್ಟ್ರೀಯ ತಂಡಗಳ 164 ಎಲೈಟ್&zwnj; ಕ್ರೀಡಾಪಟುಗಳು ಈ ಟೂರ್ನಮೆಂಟ್&zwnj; ನಲ್ಲಿ ಭಾಗವಹಿಸುತ್ತಿದ್ದಾರೆ. ಆಟಗಾರರಲ್ಲದೆ, ಅಂತಾರಾಷ್ಟ್ರೀಯ ರೆಫರಿಗಳು ಮತ್ತು ಹಿರಿಯ ಎಫ್&zwnj;ಐವಿಬಿ ಅಧಿಕಾರಿಗಳು ಆಗಮಿಸಲಿದ್ದಾರೆ. ಇವರೆಲ್ಲ ಟೂರ್ನಮೆಂಟ್&zwnj;ಗೆ ಜಾಗತಿಕ ಸ್ಥಾನಮಾನವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ವಾಲಿಬಾಲ್ ವರ್ಲ್ಡ್ (Volleyball World) ಟಿವಿ ಮೂಲಕ ಪಂದ್ಯಗಳನ್ನು ವಿಶ್ವಾದ್ಯಂತ ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡಬಹುದು. ಈ ಕ್ರೀಡಾಕೂಟದ ಮೂಲಕ ಅಂತರರಾಷ್ಟ್ರೀಯ ಕ್ರೀಡಾ ನಕಾಶೆಯಲ್ಲಿ ಒಡಿಶಾದ ಪ್ರಾಮುಖ್ಯತೆ ತಿಳಿಯಲಿದೆ ಎಂದು ಭಾವಿಸಲಾಗಿದೆ.&lt;/p&gt;&lt;h3&gt;&lt;strong&gt;ಹಲವು ಹಂತಗಳಲ್ಲಿ ಟೂರ್ನಿ:&lt;/strong&gt;&lt;/h3&gt;&lt;p&gt;ಟೂರ್ನಿ ಹಲವು ಹಂತಗಳಲ್ಲಿ ನಡೆಯಲಿದೆ. ಅರ್ಹತಾ ಪಂದ್ಯಾವಳಿಯೊಂದಿಗೆ ಪ್ರಾರಂಭವಾಗಿ, ನಂತರ ಪೂಲ್ ಆಟವನ್ನು ಒಳಗೊಂಡ ಮುಖ್ಯ ಡ್ರಾ ಇರುತ್ತದೆ. ಅಗ್ರ ತಂಡಗಳು 16ರ ಸುತ್ತು, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್&zwnj;ಗೆ ಪ್ರವೇಶೀಸಲಿವೆ. ಮಾರ್ಚ್ 8 ರಂದು ಕಂಚಿನ ಪದಕ ಪಂದ್ಯಗಳು, ಫೈನಲ್&zwnj; ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.&lt;/p&gt;&lt;h3&gt;&lt;strong&gt;ಶೀಘ್ರವೇ ಒಲಿಂಪಿಕ್ಸ್&zwnj;ನಲ್ಲಿ ಅವಕಾಶ: ಡಾ. ಸಮಂತ&lt;/strong&gt;&lt;/h3&gt;&lt;p&gt;ನಾವು ಕ್ರೀಡೆ ಮತ್ತು ಕ್ರೀಡಾಪಟುಗಳ ಪೋಷಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ವಾಲಿಬಾಲ್ ಗ್ರಾಮೀಣ ಕ್ರೀಡೆ ಮತ್ತು ಒಲಿಂಪಿಕ್ ವಿಭಾಗ ಎರಡೂ ಆಗಿದೆ. ಕಳೆದ ಎಂಟು ವರ್ಷಗಳಿಂದ, ನಾವು ಅದರ ಅಭಿವೃದ್ಧಿಗೆ ಸದಾ ಒಂದಿಲ್ಲೊಂದು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅಂತರರಾಷ್ಟ್ರೀಯ ಮಾನ್ಯತೆ ಜೊತೆಗೆ ತಳಮಟ್ಟದ ಭಾಗವಹಿಸುವಿಕೆಯನ್ನೂ ಪ್ರೋತ್ಸಾಹಿಸುತ್ತಿದ್ದೇವೆ. ಭಾರತೀಯ ಬೀಚ್ ವಾಲಿಬಾಲ್ ತಂಡಕ್ಕೆ ಶೀಘ್ರದಲ್ಲೇ ಒಲಿಂಪಿಕ್ಸ್&zwnj;ನಲ್ಲಿ ಅವಕಾಶ ಸಿಗಲಿದೆ. ಇದು ವಿಶ್ವದಲ್ಲಿ ನಮ್ಮ ಒಡಿಶಾದ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಮತ್ತು ಒಡಿಶಾದಲ್ಲಿ ಪ್ರವಾಸೋದ್ಯಮದ ಗಮನಾರ್ಹ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಕೆಐಐಟಿ, ಕೆಐಎಂಎಸ್, ಕೆಐಎಸ್ಎಸ್ ಸಂಸ್ಥಾಪಕರು ಹಾಗೂ ಮಾಜಿ ಸಂಸದರು ಡಾ.ಅಚ್ಯುತ ಸಮಂತ ಅವರು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಕೆಐಐಟಿ, ಕೆಐಎಸ್&zwnj;ಎಸ್&zwnj; ಭೇಟಿ ವೇಳೆ ಘೋಷಣೆ&lt;/strong&gt;&lt;/h3&gt;&lt;p&gt;ಕಳೆದ ಡಿಸೆಂಬರ್&zwnj;ನಲ್ಲಿ ವಾಲಿಬಾಲ್ ಗ್ರ್ಯಾಂಡ್ ಪ್ರಿಕ್ಸ್&zwnj;ಗಾಗಿ ಕೆಐಐಟಿ ಮತ್ತು ಕೆಐಎಸ್&zwnj;ಎಸ್&zwnj;ಗೆ ಅಂತಾರಾಷ್ಟ್ರೀಯ ವಾಲಿಬಾಲ್&zwnj; ಫೆಡರೇಷನ್&zwnj;(ಎಫ್&zwnj;ಐವಿಬಿ) ಅಧ್ಯಕ್ಷರಾದ ಫ್ಯಾಬಿಯೊ ಅಜೆವೆಡೊ ಅವರು ಭೇಟಿ ನೀಡಿದ್ದರು. ಈ ವೇಳೆ ಅವರು, ಬೀಚ್ ವಾಲಿಬಾಲ್ ನಡೆಸುವ ಬಗ್ಗೆ ಘೋಷಣೆ ಮಾಡಿದ್ದರು. ಕೆಐಐಟಿಯಲ್ಲಿ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯ ಮತ್ತು ಒಡಿಶಾದ ಅನುಕೂಲಕರ ಕ್ರೀಡಾ ವಾತಾವರಣದಿಂದ ಅಜೆವೆಡೊ ಅವರು ಪ್ರಭಾವಿತರಾಗಿದ್ದರು. ಕೆಐಐಟಿ ಮತ್ತು ಕೆಐಎಸ್&zwnj;ಎಸ್ ಸಹಯೋಗದೊಂದಿಗೆ ಎಫ್&zwnj;ಐವಿಬಿ ಬೀಚ್ ವಾಲಿಬಾಲ್&zwnj;ಅನ್ನು 2027 ಹಾಗೂ 2028ರಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/kiit-university-to-host-fivb-volleyball-world-beach-pro-tour-2026-in-bhubaneswar-kvn/articleshow-paw1zqd"/>
        </item>
        <item>
            <title><![CDATA[FIFA World Cup 2026: ಕಾಲ್ಚೆಂಡಿನ ಕಾಳಗದಲ್ಲಿ ಈ ಸಲ 48 ಸೈನ್ಯಗಳು! ಯಾವ ತಂಡ ಬಲಿಷ್ಠ?]]></title>
            <link>https://kannada.asianetnews.com/football-sports/fifa-world-cup-2026-group-analysis-brazil-usa-mexico-lead-exciting-race-in-groups-a-to-d-kvn/articleshow-pey4fyh</link>
            <guid isPermaLink="true">https://kannada.asianetnews.com/football-sports/fifa-world-cup-2026-group-analysis-brazil-usa-mexico-lead-exciting-race-in-groups-a-to-d-kvn/articleshow-pey4fyh</guid>
            <pubDate>Sat, 06 Jun 2026 10:16:23 +0530</pubDate>
            <description><![CDATA[23ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್&zwnj;ನಲ್ಲಿ 48 ತಂಡಗಳು 12 ಗುಂಪುಗಳಲ್ಲಿ ಸೆಣಸಾಡಲಿವೆ. ಈ ಲೇಖನವು ಮೊದಲ ನಾಲ್ಕು ಗುಂಪುಗಳಾದ 'ಎ', 'ಬಿ', 'ಸಿ' ಮತ್ತು 'ಡಿ' ಯಲ್ಲಿರುವ ತಂಡಗಳ ಸಂಕ್ಷಿಪ್ತ ಪರಿಚಯ, ಅವುಗಳ ಬಲಾಬಲ ಮತ್ತು ಪ್ರಮುಖ ಆಟಗಾರರ ಬಗ್ಗೆ ಮಾಹಿತಿ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktbwdtkwf5qshdrv12hsv1bn,imgname-rodrygo-1780662856316.png" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಸ್ಪಂದನ್ ಕಣಿಯಾರ್, ಕನ್ನಡಪ್ರಭ ವಿಶೇಷ&lt;/li&gt;&lt;/ul&gt;&lt;p&gt;23ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್&zwnj;ಗೆ ದಿನಗಣನೆ ಆರಂಭಗೊಂಡಿದ್ದು, ಈ ಬಾರಿ ದಾಖಲೆಯ 48 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ತಲಾ 4 ತಂಡಗಳಂತೆ ಬರೋಬ್ಬರಿ 12 ಗುಂಪುಗಳನ್ನು ರಚಿಸಲಾಗಿದೆ. ಟೂರ್ನಿಯಲ್ಲಿ ಆಡಲಿರುವ ತಂಡಗಳು ಯಾವುವು? ಯಾವ ತಂಡ ಯಾವ ಗುಂಪಿನಲ್ಲಿದೆ? ಯಾವ ಗುಂಪಿನಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಬಹುದು? ಹೀಗೆ ತಂಡಗಳ ಸಂಕ್ಷಿಪ್ತ ಪರಿಚಯವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸೋದರ ಸಂಸ್ಥೆ 'ಕನ್ನಡಪ್ರಭ' ಓದುಗರ ಮುಂದಿಡುತ್ತಿದೆ. ದಿನಕ್ಕೆ 4 ಗುಂಪುಗಳಂತೆ 3 ದಿನ ತಂಡಗಳ ಪರಿಚಯ ಮಾಡಿಕೊಡಲಾಗುತ್ತದೆ. ಮೊದಲ 4 ಗುಂಪುಗಳ ಪರಿಚಯ ಇಂದು, ಉಳಿದ 8 ತಂಡಗಳ ಪರಿಚಯ ನಾಳೆ, ನಾಡಿದ್ದು ನೀಡಲಾಗುತ್ತದೆ.&lt;/p&gt;&lt;h2&gt;&lt;strong&gt;ಗುಂಪು &lsquo;ಎ&rsquo;&lt;/strong&gt;&lt;/h2&gt;&lt;p&gt;--&lt;strong&gt;1. ಮೆಕ್ಸಿಕೋ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 15&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಆತಿಥೇಯ ರಾಷ್ಟ್ರ&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 1970, 1986ರಲ್ಲಿ ಕ್ವಾರ್ಟರ್&zwnj; ಫೈನಲ್&zwnj;&lt;/p&gt;&lt;p&gt;ಆತಿಥೇಯ ರಾಷ್ಟ್ರಗಳಲ್ಲಿ ಒಂದಾದ ಮೆಕ್ಸಿಕೋ, ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ. ತವರಿನಲ್ಲಿ ಆರಂಭಿಕ ಪಂದ್ಯಗಳನ್ನು ಆಡಲಿರುವ ಕಾರಣ, ದೊಡ್ಡ ಲಾಭ ಸಿಗಲಿದೆ. ಎಡ್ಸನ್&zwnj; ಆಲ್ವರೆಜ್&zwnj;, ದಿಗ್ಗಜ ಗೋಲ್&zwnj;ಕೀಪರ್&zwnj; ಗ್ಯುಲೆರ್ಮೊ ಓಚಾ ತಂಡದ ಆಧಾರಸ್ತಂಭ. ಫಾರ್ವರ್ಡ್&zwnj; ಆಟಗಾರ ಸ್ಯಾಂಟಿಯಾಗೋ ಜಿಮೆನೆಜ್&zwnj; ಅಸ್ಥಿರ ಆಟ ತಂಡಕ್ಕೆ ತಲೆನೋವಾಗಬಹುದು.&lt;/p&gt;&lt;p&gt;&lt;strong&gt;2. ದಕ್ಷಿಣ ಕೊರಿಯಾ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 25&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಎಎಫ್&zwnj;ಸಿ ಗ್ರೂಪ್&zwnj; ಬಿ ವಿಜೇತರು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 2002ರಲ್ಲಿ 4ನೇ ಸ್ಥಾನ&lt;/p&gt;&lt;p&gt;ಏಷ್ಯನ್&zwnj; ಅರ್ಹತಾ ಸುತ್ತಿನಲ್ಲಿ ಆಕರ್ಷಕ ಆಟವಾಡಿ ಸತತ 11ನೇ ಬಾರಿಗೆ ವಿಶ್ವಕಪ್&zwnj;ಗೆ ಅರ್ಹತೆ ಪಡೆದ ದ.ಕೊರಿಯಾ, ತಾಂತ್ರಿಕವಾಗಿ ಬಹಳ ಸದೃಢವಾಗಿರುವ ತಂಡ. ತಂಡದ ಪ್ರಮುಖ ಆಕರ್ಷಣೆ ಸನ್&zwnj; ಹ್ಯುಯೆಂಗ್&zwnj;-ಮಿನ್&zwnj; ಏಕಾಂಗಿಯಾಗಿ ತಂಡ ಗೆಲ್ಲಿಸುವ ಸಾರ್ಮಥ್ಯವಿರುವ ಆಟಗಾರ. ಆದರೆ ಕೆಲವರ ಮೇಲೆ ಹೆಚ್ಚು ಅವಲಂಬನೆ ತಂಡಕ್ಕೆ ಮುಳುವಾಗಬಹುದು.&lt;/p&gt;&lt;p&gt;&lt;strong&gt;3. ದಕ್ಷಿಣ ಆಫ್ರಿಕಾ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 60&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಸಿಎಎಫ್&zwnj; ಸಿ ಗುಂಪಿನ ವಿಜೇತರು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 3 ಬಾರಿ ಗುಂಪು ಹಂತ&lt;/p&gt;&lt;p&gt;2010ರಲ್ಲಿ ಟೂರ್ನಿಗೆ ಆತಿಥ್ಯ ವಹಿಸಿದ್ದ ದ.ಆಫ್ರಿಕಾ, ಆ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್&zwnj;ಗೆ ಕಾಲಿಟ್ಟಿದೆ. ಪ್ರಚಂಡ ಮಿಡ್&zwnj;ಫೀಲ್ಡರ್&zwnj; ಟೆಬೊಹೊ ಮೊಕೊಯೆನಾ ತಂಡದ ಸ್ಟಾರ್&zwnj; ಆಟಗಾರ. ಹೆಚ್ಚು ಒತ್ತಡವಲ್ಲಿದ ಕಾರಣ ನಿರ್ಭೀತ ಆಟವಾಡಬಹುದು. ಆದರೆ ತಂಡದಲ್ಲಿ ಅನುಭವಿಗಳ ಕೊರತೆ ಇದೆ.&lt;/p&gt;&lt;p&gt;&lt;strong&gt;4. ಚೆಕ್&zwnj; ಗಣರಾಜ್ಯ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 41&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಯುಇಎಫ್&zwnj;ಎ ಪ್ಲೇ-ಆಫ್ಸ್&zwnj; ವಿಜೇತರು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 2006ರಲ್ಲಿ ಗುಂಪು ಹಂತ&lt;/p&gt;&lt;p&gt;2006ರ ಬಳಿಕ ಮೊದಲ ಬಾರಿಗೆ ಅರ್ಹತೆ ಪಡೆದಿರುವ ಚೆಕ್&zwnj; ಗಣರಾಜ್ಯ, ಸೆಟ್&zwnj;-ಪೀಸ್&zwnj; ಆಟಕ್ಕೆ ಹೆಸರುವಾಸಿ. ತಂಡದಲ್ಲಿರುವ ಅಕಾಶದೆತ್ತರದ ಥಾಮಸ್&zwnj; ಸೊಚೆಕ್&zwnj;, ಪ್ಯಾಟ್ರಿಕ್&zwnj; ಶಿಚಿಕ್&zwnj; ಅತ್ಯಂತ ಅಪಾಯಕಾರಿ ಆಟಗಾರರು. ಆದರೆ ಅಂ.ರಾ. ಅನುಭವದ ಕೊರತೆ, ಮೆಕ್ಸಿಕೋದ ಅತಿಯಾದ ಬಿಸಿಲು ತಂಡಕ್ಕೆ ಸಮಸ್ಯೆ ತಂದೊಡ್ಡಬಹುದು.&lt;/p&gt;&lt;h3&gt;&lt;strong&gt;ಗುಂಪು &lsquo;ಬಿ&rsquo;&lt;/strong&gt;&lt;/h3&gt;&lt;p&gt;&lt;strong&gt;1. ಕೆನಡಾ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 30&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಆತಿಥೇಯ ರಾಷ್ಟ್ರ&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 2 ಬಾರಿ ಗುಂಪು ಹಂತ&lt;/p&gt;&lt;p&gt;ತವರಿನ ಲಾಭದೊಂದಿಗೆ ವಿಶ್ವಕಪ್&zwnj;ನಲ್ಲಿ ಅಬ್ಬರಿಸಲು ಕಾಯುತ್ತಿರುವ ಕೆನಡಾಕ್ಕೆ ಟಜೊನ್&zwnj; ಬುಕಾನನ್&zwnj;, ಜೊನಾಥನ್&zwnj; ಡೇವಿಡ್&zwnj;ರಂಥ ಆಟಗಾರರ ಬಲವಿದೆ. ಆದರೆ ತಂಡದ ರಕ್ಷಣಾ ಪಡೆ (ಡಿಫೆನ್ಸ್&zwnj;) ದುರ್ಬಲವಾಗಿದ್ದು, ಬಲಿಷ್ಠ ತಂಡಗಳ ಎದುರು ಕುಸಿಯಬಹುದು. ನಾಯಕ ಅಲ್ಫಾನ್ಸೋ ಡೇವಿಸ್&zwnj;ಗೆ ಗಾಯದ ಭೀತಿ ಇದ್ದು, ತಂಡದ ಮೇಲೆ ಪರಿಣಾಮ ಬೀರಬಹುದು.&lt;/p&gt;&lt;p&gt;&lt;strong&gt;2. ಸ್ವಿಜರ್&zwnj;ಲೆಂಡ್&zwnj;&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 19&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಯುಇಎಫ್&zwnj;ಎ ಅರ್ಹತಾ ಸುತ್ತು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 1934, 38, 54ರಲ್ಲಿ ಕ್ವಾರ್ಟರ್&zwnj;ಫೈನಲ್&zwnj;&lt;/p&gt;&lt;p&gt;ಗುಂಪಿನಲ್ಲಿರುವ ಬಲಿಷ್ಠ ತಂಡ. ಯುಇಎಫ್&zwnj;ಎ &lsquo;ಬಿ&rsquo; ಗುಂಪಿನ ವಿಜೇತರಾಗಿ ವಿಶ್ವಕಪ್&zwnj;ಗೆ ಪ್ರವೇಶ. ನಾಯಕ ಹಾಗೂ ತಂಡದ ತಾರಾ ಮಿಡ್&zwnj;ಫೀಲ್ಡರ್&zwnj; ಗ್ರಾನಿಟ್&zwnj; ಝ್ಸಾಕಾ ಪರಿಸ್ಥಿತಿಗೆ ತಕ್ಕಂತೆ ಆಟ ಬದಲಿಸುವ ಚಾಕಚಕ್ಯತೆ ಇರುವ ಆಟಗಾರ. ಗುಂಪು ಹಂತದಿಂದ ಮುಂದೆ ಸಾಗಲು ಸಮಸ್ಯೆ ಆಗದು, ನಾಕೌಟ್&zwnj;ಗಳಲ್ಲಿ ತಂಡಕ್ಕೆ ಅನುಭವಿಗಳ ಕೊರತೆ ಎದುರಾಗಬಹುದು.&lt;/p&gt;&lt;p&gt;&lt;strong&gt;3. ಬೋಸ್ನಿಯಾ-ಹರ್ಜೆಗೋವಿನಾ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 65&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಯುಇಎಫ್&zwnj;ಎ ಅರ್ಹತಾ ಸುತ್ತು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 2014ರಲ್ಲಿ ಗುಂಪು ಹಂತ&lt;/p&gt;&lt;p&gt;ಕೇವಲ 2 ಬಾರಿಗೆ ವಿಶ್ವಕಪ್&zwnj;ಗೆ ಕಾಲಿಟ್ಟಿರುವ ತಂಡ. ಯುಇಎಫ್&zwnj;ಎ ಅರ್ಹತಾ ಸುತ್ತಿನಲ್ಲಿ ಇಟಲಿಗೆ ಆಘಾತ ನೀಡಿ ಫುಟ್ಬಾಲ್&zwnj; ಜಗತ್ತನ್ನು ಬೆರಗಾಗಿಸಿತ್ತು. ಗುಂಪಿನ ವೈಲ್ಡ್&zwnj;ಕಾರ್ಡ್&zwnj; ಎಂದೇ ಕರೆಸಿಕೊಳ್ಳುತ್ತಿರುವ ಬೋಸ್ನಿಯಾಕ್ಕೆ 40ರ ದಿಗ್ಗಜ ಸ್ಟ್ರೈಕರ್&zwnj; ಎಡಿನ್&zwnj; ಝೆಕೊ ಬಲವಿದೆ. ಆದರೆ ತಂಡದಲ್ಲಿ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡಿದ ಅನುಭವಿಗಳ ಕೊರತೆ ಇದೆ.&lt;/p&gt;&lt;p&gt;&lt;strong&gt;4. ಕತಾರ್&zwnj;&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 55&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಎಎಫ್&zwnj;ಸಿ ಅರ್ಹತಾ ಸುತ್ತಿನ ವಿಜೇತರು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 2022ರಲ್ಲಿ ಗುಂಪು ಹಂತ&lt;/p&gt;&lt;p&gt;ಎಎಫ್&zwnj;ಸಿ ಏಷ್ಯನ್&zwnj; ಕಪ್&zwnj;ನಲ್ಲಿ ಸತತ 2 ಬಾರಿ ಚಾಂಪಿಯನ್&zwnj;. ಏಷ್ಯಾದ ಪವರ್&zwnj;ಹೌಸ್&zwnj;. ಕಳೆದ ವಿಶ್ವಕಪ್&zwnj;ನಲ್ಲಿ ಗಮನಾರ್ಹ ಪ್ರದರ್ಶನ ನೀಡಿತ್ತು. ಅಕ್ರಮ್&zwnj; ಅಫಿಫ್&zwnj;-ಅಲ್ಮೊಯೆಜ್&zwnj; ಅಲಿ ಜೊತೆಯಾಟ ಯಾವುದೇ ರಕ್ಷಣಾ ಪಡೆಯನ್ನೂ ಛಿದ್ರಗೊಳಿಸುವ ತಾಕತ್ತು ಹೊಂದಿದೆ. ಎತ್ತರದ ಡಿಫೆಂಡರ್&zwnj;ಗಳು ಇಲ್ಲದಿರುವುದರಿಂದ ಸಮಸ್ಯೆಯಾಗಬಹುದು.&lt;/p&gt;&lt;h3&gt;&lt;strong&gt;ಗುಂಪು &lsquo;ಸಿ&rsquo;&lt;/strong&gt;&lt;/h3&gt;&lt;p&gt;----&lt;/p&gt;&lt;p&gt;&lt;strong&gt;1. ಬ್ರೆಜಿಲ್&zwnj;&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 6&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ದ. ಅಮೆರಿಕ ಅರ್ಹತಾ ಸುತ್ತು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 1958, 62, 70, 94, 2002ರಲ್ಲಿ ಚಾಂಪಿಯನ್&zwnj;&lt;/p&gt;&lt;p&gt;ದಕ್ಷಿಣ ಅಮೆರಿಕದ ಅರ್ಹತಾ ಸುತ್ತಿನಲ್ಲಿ ನಂಬಲಸಾಧ್ಯ ಎನ್ನುವಂತೆ 5ನೇ ಸ್ಥಾನಕ್ಕೆ ಕುಸಿದರೂ ಬ್ರೆಜಿಲ್&zwnj; ಮೇಲಿನ ನಿರೀಕ್ಷೆ ಕಡಿಮೆ ಆಗಿಲ್ಲ. ವಿನಿಶಿಯಸ್&zwnj; ಜೂ., ರಫೀನ್ಯಾರಂಥ ವಿಶ್ವಶ್ರೇಷ್ಠರು ತಂಡದಲ್ಲಿದ್ದಾರೆ. ನೇಯ್ಮರ್&zwnj; ವಾಪಸಾಗಿರುವುದು ತಂಡದ ಬಲ ಹೆಚ್ಚಿಸಿದೆ. ಆದರೂ ತಂಡ ಇತ್ತೀಚಿನ ಪ್ರದರ್ಶನ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;2. ಮೊರಾಕ್ಕೊ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 8&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಸಿಎಎಫ್&zwnj; ಅರ್ಹತಾ ಸುತ್ತಿನ ವಿಜೇತರು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 2022ರಲ್ಲಿ 4ನೇ ಸ್ಥಾನ&lt;/p&gt;&lt;p&gt;2022ರಲ್ಲಿ 4ನೇ ಸ್ಥಾನ ಪಡೆದಿತ್ತು. ತಂಡದಲ್ಲಿ ಅನುಭವಿಗಳ ದಂಡೇ ಇದೆ. ಅಚ್ರಾಫ್&zwnj; ಹಕಿಮಿ, ನೌಸ್ಸೇರ್&zwnj; ಮಝ್ರೌಯ ವೇಗ ಎದುರಾಳಿಗಳ ನಿದ್ದೆಗೆಡಿಸಬಹುದು. ಮಿಡ್&zwnj;ಫೀಲ್ಡ್&zwnj;ನಲ್ಲಿ ಬ್ರಹಿಮ್&zwnj; ಡಯಜ್&zwnj;ರನ್ನು ನೋಡಿದಾಗ ಯಾರಿಗಾದರೂ ಗಾಬರಿ ಆಗುತ್ತೆ. ಆದರೆ ತಂಡಕ್ಕೆ ತನ್ನದೇ ಆದ ದೌರ್ಬಲ್ಯಗಳಿದ್ದು, ಎದುರಾಳಿಗಳು ಅದರ ಲಾಭವೆತ್ತಿದರೆ ಸಂಕಷ್ಟ ಖಚಿತ.&lt;/p&gt;&lt;p&gt;&lt;strong&gt;3. ಸ್ಕಾಟ್ಲೆಂಡ್&zwnj;&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 43&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಯುಇಎಫ್&zwnj;ಎ ಅರ್ಹತಾ ಸುತ್ತು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 8 ಬಾರಿ ಗುಂಪು ಹಂತ&lt;/p&gt;&lt;p&gt;28 ವರ್ಷಗಳ ಬಳಿಕ ವಿಶ್ವಕಪ್&zwnj;ಗೆ ಕಾಲಿಟ್ಟಿರುವ ಸ್ಕಾಟ್ಲೆಂಡ್&zwnj;, ತಾಂತ್ರಿಕ ಶಿಸ್ತು ಹಾಗೂ ಕೂಡುಭಾವದೊಂದಿಗೆ ಟೂರ್ನಿಗೆ ಕಾಲಿಡಲಿದೆ. ಮೊದಲ ಸಲ ಗುಂಪು ಹಂತದಿಂದ ಮುಂದೆ ಹೋಗಲು ತಂಡ ಕಾತರಿಸುತ್ತಿದೆ. ನಾಯಕ ರಾಬರ್ಟ್&zwnj;ಸನ್&zwnj;, ಮೆಕ್&zwnj;ಗಿನ್&zwnj;, ಮ್ಯಾಕ್&zwnj;ಟಾಮಿನಾಯ್&zwnj; ತಂಡ ಬಲ. ಆದರೆ ಬಲಿಷ್ಠ ರಕ್ಷಣಾ ಪಡೆಗಳೆದುರು ತಂಡ ಮಂಕಾಗಬಹುದು.&lt;/p&gt;&lt;p&gt;&lt;strong&gt;4. ಹೈಟಿ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 83&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ದ.ಅಮೆರಿಕ ಅರ್ಹತಾ ಸುತ್ತು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 1 ಬಾರಿ ಗುಂಪು ಹಂತ&lt;/p&gt;&lt;p&gt;52 ವರ್ಷಗಳ ಬಳಿಕ ವಿಶ್ವಕಪ್&zwnj;ಗೆ ವಾಪಸಾಗಿರುವ ಹೈಟಿ, ಟೂರ್ನಿಯ ಅಂಡರ್&zwnj;ಡಾಗ್ಸ್&zwnj; ಎನಿಸಿದೆ. ತಂಡಕ್ಕೆ ಕಳೆದುಕೊಳ್ಳಲು ಏನೂ ಇಲ್ಲ. ಹೀಗಾಗಿ ಯಾವುದೇ ಭೀತಿಯಿಲ್ಲದೆ ಆಡಬಹುದು ಎನ್ನುವುದೇ ದೊಡ್ಡ ಅಡ್ವಾಂಟೇಜ್&zwnj;. ತಂಡ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಆದರೆ ವಿಶ್ವ ವೇದಿಕೆಯಲ್ಲಿ ತಂಡ ಎಷ್ಟರ ಮಟ್ಟಿಗೆ ಮಿಂಚಬಹುದು ಎನ್ನುವ ಬಗ್ಗೆ ಅನುಮಾನಗಳಿವೆ.&lt;/p&gt;&lt;h3&gt;&lt;strong&gt;ಗುಂಪು &lsquo;ಡಿ&rsquo;&lt;/strong&gt;&lt;/h3&gt;&lt;p&gt;--&lt;strong&gt;1. ಅಮೆರಿಕ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 16&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಆತಿಥೇಯ ರಾಷ್ಟ್ರ&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 1930ರಲ್ಲಿ 3ನೇ ಸ್ಥಾನ&lt;/p&gt;&lt;p&gt;ಆತಿಥೇಯ ರಾಷ್ಟ್ರವಾಗಿ ಟೂರ್ನಿಯಲ್ಲಿ ಆಡುವಾಗ ಒತ್ತಡ ಸಹಜ. ಆದರೆ ತಂಡದಲ್ಲಿ ಯುರೋಪ್&zwnj;ನ ಪ್ರತಿಷ್ಠಿತ ಕ್ಲಬ್&zwnj;ಗಳಲ್ಲಿ ಆಡುವ ಕ್ರಿಸ್ಟಿಯನ್&zwnj; ಪುಲಿಸಿಚ್&zwnj;, ಫೋಲಾರಿನ್&zwnj; ಬಲೊಗನ್&zwnj;, ವೆಸ್ಟನ್&zwnj; ಮೆಕೆನ್ನಿಯಂಥ ಆಟಗಾರರಿದ್ದಾರೆ. ಆದರೆ ಅಸ್ಥಿರ ಪ್ರದರ್ಶನ, ಸಂಯೋಜನೆಯಲ್ಲಿ ಪದೇಪದೇ ಬದಲು ಮಾಡುವ ಪ್ರಯೋಗ ಅಮೆರಿಕಕ್ಕೆ ಮುಳುವಾಗಿ ಪರಿಣಮಿಸಬಹುದು.&lt;/p&gt;&lt;p&gt;&lt;strong&gt;2. ಪರಗ್ವೆ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 40&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ದ.ಅಮೆರಿಕ ಅರ್ಹತಾ ಸುತ್ತು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 2010ರಲ್ಲಿ ಕ್ವಾರ್ಟರ್&zwnj; ಫೈನಲ್&zwnj;&lt;/p&gt;&lt;p&gt;16 ವರ್ಷಗಳ ಬಳಿಕ ಮೊದಲ ಬಾರಿಗೆ ವಿಶ್ವಕಪ್&zwnj;ಗೆ ಪ್ರವೇಶ. ಉತ್ಕೃಷ್ಟ ರಕ್ಷಣಾ ಪಡೆಯನ್ನು ಭೇದಿಸುವುದು ಎದುರಾಳಿಗಳಿಗೆ ಸವಾಲಿನ ಕೆಲಸ. ಆದರೆ ತಂಡದ ಇತಿಹಾಸ ನೋಡಿದಾಗ, ಚೆಂಡಿನ ಮೇಲೆ ಹಿಡಿತ ಸಾಧಿಸಲು ಕಷ್ಟಪಡುತ್ತದೆ. ಮೊದಲು ಗೋಲು ಬಿಟ್ಟುಕೊಟ್ಟ ಪಂದ್ಯಗಳಲ್ಲಿ ತಂಡ ಒತ್ತಡಕ್ಕೆ ಸಿಲುಕಿ ಪಂದ್ಯ ಕೈಚೆಲ್ಲಿದ ಉದಾಹರಣೆಗಳೇ ಹೆಚ್ಚು.&lt;/p&gt;&lt;p&gt;&lt;strong&gt;3. ಆಸ್ಟ್ರೇಲಿಯಾ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 27&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಎಎಫ್&zwnj;ಸಿ ಅರ್ಹತಾ ಸುತ್ತು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 2 ಬಾರಿ ಪ್ರಿ ಕ್ವಾರ್ಟರ್&zwnj;&lt;/p&gt;&lt;p&gt;&lsquo;ಸಾಕರೂಸ್&zwnj;&rsquo; ಎಂದು ಕರೆಸಿಕೊಳ್ಳುವ ಆಸ್ಟ್ರೇಲಿಯಾ ತಂಡ ಈ ಸಲವೂ ತನಗಿಂತ ಬಲಿಷ್ಠ ತಂಡಗಳನ್ನು ಹಣಿಯುವ ಉತ್ಸಾಹದಲ್ಲೇ ವಿಶ್ವಕಪ್&zwnj;ಗೆ ಕಾಲಿಟ್ಟಿದೆ. ಆಟಗಾರರ ದೈಹಿಕ ಸಾಮರ್ಥ್ಯ, ಮಾನಸಿಕ ಸದೃಢತೆಯೇ ತಂಡ ಅತಿದೊಡ್ಡ ಬಲ. ಆದರೆ ತಂಡದಲ್ಲಿ &lsquo;ಜಾದೂ&rsquo; ಮಾಡಬಲ್ಲ, ಗೇಮ್&zwnj; ಚೇಂಜರ್&zwnj; ಎಂದು ಕರೆಸಿಕೊಳ್ಳುವ ಆಟಗಾರರಿಲ್ಲ.&lt;/p&gt;&lt;p&gt;&lt;strong&gt;4. ಟರ್ಕಿ&lt;/strong&gt;&lt;/p&gt;&lt;p&gt;ಫಿಫಾ ವಿಶ್ವ ರ್&zwj;ಯಾಂಕಿಂಗ್&zwnj;: 22&lt;/p&gt;&lt;p&gt;ಅರ್ಹತೆ ಪಡೆದಿದ್ದು ಹೇಗೆ?: ಯುಇಎಫ್&zwnj;ಎ ಅರ್ಹತಾ ಸುತ್ತು&lt;/p&gt;&lt;p&gt;ಹಿಂದಿನ ಶ್ರೇಷ್ಠ ಪ್ರದರ್ಶನ: 2002ರಲ್ಲಿ 3ನೇ ಸ್ಥಾನ&lt;/p&gt;&lt;p&gt;ಹೊಸ ಪೀಳಿಗೆಯ ಆಟಗಾರರಿಂದ ತುಂಬಿ ತುಳುಕುತ್ತಿರುವ ತಂಡ, ಉತ್ಸಾಹದ ಅಲೆಯಲ್ಲಿ ತೇಲುತ್ತಿದೆ. ಯುವ ಪಡೆಯಾದರೂ, ಜಾಗತಿಕ ಮಟ್ಟದಲ್ಲಿ ಅನುಭವ ಗಳಿಸಿದೆ. ತ್ರಿಕೋನ ಆಕಾರದಲ್ಲಿ ಚೆಂಡನ್ನು ಅತಿವೇಗವಾಗಿ ಪಾಸ್&zwnj; ಮಾಡುವ ಕೌಶಲ್ಯವಿದೆ. ಆದರೆ ಅಟ್ಯಾಕಿಂಗ್&zwnj; ಆಟಕ್ಕೆ ತಕ್ಕ ಡಿಫೆನ್ಸ್&zwnj; ಇಲ್ಲ. ಇದು ತಂಡದ ಪ್ರಮುಖ ದೌರ್ಬಲ್ಯ.&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/football-sports/fifa-world-cup-2026-group-analysis-brazil-usa-mexico-lead-exciting-race-in-groups-a-to-d-kvn/articleshow-pey4fyh"/>
        </item>
        <item>
            <title><![CDATA[2 ಕೈ, 2 ಕಾಲು ಇಲ್ಲದಾಕೆ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌; ಬಿಲ್ಲು ಬಾಗಿಸಿ ಜಗತ್ತು ಗೆದ್ದ ಪಾಯಲ್]]></title>
            <link>https://kannada.asianetnews.com/sports/payal-nag-won-the-gold-medal-at-the-bangkok-archery-para-series-2026-mrq/articleshow-ri0cpar</link>
            <guid isPermaLink="true">https://kannada.asianetnews.com/sports/payal-nag-won-the-gold-medal-at-the-bangkok-archery-para-series-2026-mrq/articleshow-ri0cpar</guid>
            <pubDate>Mon, 06 Apr 2026 07:46:21 +0530</pubDate>
            <description><![CDATA[ವಿದ್ಯುತ್ ಅಪಘಾತದಲ್ಲಿ ಕೈಕಾಲು ಕಳೆದುಕೊಂಡು ಅನಾಥಾಶ್ರಮ ಸೇರಿದ್ದ ಒಡಿಶಾದ ಪಾಯಲ್ ನಾಗ್, ಇದೀಗ ಪ್ಯಾರಾ ಆರ್ಚರಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಕೋಚ್ ಕುಲ್ದೀಪ್ ವೆದ್ವಾನ್ ಅವರ ಮಾರ್ಗದರ್ಶನದಲ್ಲಿ, ವಿಶ್ವ ಚಾಂಪಿಯನ್ ಶೀತಲ್ ದೇವಿಯವರನ್ನೇ ಸೋಲಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kng93xmp8g5pf6g0prjtpnsx,imgname-payal-nag-1775441671830.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬ್ಯಾಂಕಾಕ್&zwnj;:&lt;/strong&gt; ಈಕೆಯ ಕಥೆ ನಿಮಗೆ ಸ್ಫೂರ್ತಿ ತುಂಬದಿದ್ದರೆ, ಬಹುಶಃ ಬೇರ್ಯಾವುದೂ ಸ್ಫೂರ್ತಿ ನೀಡದೆ ಇರಬಹುದು. ಸಾಧಿಸುವ ಛಲವಿದ್ದರೆ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಭಾರತದ ಪ್ಯಾರಾ ಆರ್ಚರಿ ಪಟು, ಎರಡು ಕೈಗಳಲ್ಲಿಲ್ಲದ ಶೀತಲ್&zwnj; ದೇವಿ ತೋರಿಸಿಕೊಟ್ಟಿದ್ದರು. ಈಗ ಎರಡು ಕೈ, ಎರಡು ಕಾಲುಗಳಿಲ್ಲದ ಪಾಯಲ್&zwnj; ನಾಗ್&zwnj;, ಶೀತಲ್&zwnj;ರನ್ನೇ ಸೋಲಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.&lt;/p&gt;&lt;p&gt;ಜಮ್ಮು-ಕಾಶ್ಮೀರದ 19 ವರ್ಷದ, ಎರಡೂ ಕೈಗಳಿಲ್ಲದ ಶೀತಲ್&zwnj; ದೇವಿ ಪ್ಯಾರಾಲಿಂಪಿಕ್ಸ್&zwnj;, ವಿಶ್ವ ಚಾಂಪಿಯನ್&zwnj;ಶಿಪ್&zwnj;, ಏಷ್ಯನ್&zwnj; ಪ್ಯಾರಾ ಗೇಮ್ಸ್&zwnj;ನ ಆರ್ಚರಿ ಸ್ಪರ್ಧೆಯಲ್ಲಿ ಪದಕ ಸಾಧನೆ ಮಾಡಿರುವ ವಿಶೇಷ ಪ್ರತಿಭೆ. ಈಗ ಭಾರತದಲ್ಲಿ ಮತ್ತೊಂದು ಅತಿ ವಿಶೇಷ ಪ್ರತಿಭೆ ಅನಾವರಣಗೊಂಡಿದೆ.&lt;/p&gt;&lt;p&gt;ಬ್ಯಾಂಕಾಕ್&zwnj;ನಲ್ಲಿ ನಡೆದ ಚೊಚ್ಚಲ ಅವೃತ್ತಿಯ ವಿಶ್ವ ಪ್ಯಾರಾ ಆರ್ಚರಿ ಸೀರಿಸ್&zwnj;ನ ಮಹಿಳೆಯರ ಕಾಂಪೌಂಡ್&zwnj; ವೈಯಕ್ತಿಕ ವಿಭಾಗದಲ್ಲಿ ಶೀತಲ್&zwnj; ವಿರುದ್ಧ ಪಾಯಲ್&zwnj; 139-136 ಅಂಕಗಳಿಂದ ಗೆದ್ದಿದ್ದಾರೆ. ಅರ್ಹತಾ ಸುತ್ತಿನಲ್ಲಿ ಶೀತಲ್&zwnj;ಗಿಂತ 20 ಅಂಕ ಕಡಿಮೆ (678-698) ಅಂಕ ಗಳಿಸಿದ್ದ ಪಾಯಲ್&zwnj;, ಫೈನಲ್&zwnj;ನಲ್ಲಿ ಅಮೋಘ ಪ್ರದರ್ಶನ ನೀಡಿ ಗೆದ್ದಿದ್ದಾರೆ. ಇದೇ ಟೂರ್ನಿಯಲ್ಲಿ ಶೀತಲ್&zwnj;-ಪಾಯಲ್&zwnj; ಜೊತೆಗೂಡಿ ಮಹಿಳಾ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಅಂದಹಾಗೆ, 18ರ ಪಾಯಲ್&zwnj;ಗೆ ಇದು ಶೀತಲ್&zwnj; ವಿರುದ್ಧ 2ನೇ ಗೆಲುವು. 2025ರ ರಾಷ್ಟ್ರೀಯ ಟೂರ್ನಿಯಲ್ಲಿ ಶೀತಲ್&zwnj;ರನ್ನು ಪಾಯಲ್&zwnj; ಸೋಲಿಸಿದ್ದರು.&lt;/p&gt;&lt;h2&gt;&lt;strong&gt;ವಿದ್ಯುತ್&zwnj; ಅವಘಡದಲ್ಲಿ ಕೈಕಾಲು ಕಳೆದುಕೊಂಡಿದ್ದ ಪಾಯಲ್&zwnj; ನಾಗ್&zwnj;&lt;/strong&gt;&lt;/h2&gt;&lt;p&gt;ಒಡಿಶಾದ ಪಾಯಲ್&zwnj; ಹುಟ್ಟುವಾಗ ಸಾಮಾನ್ಯ ಮಕ್ಕಳಂತೆಯೇ ಹುಟ್ಟಿದ್ದರು. ಅವರ ತಂದೆ ದಿನಗೂಲಿ ಗಾರೆ ಕೆಲಸದವರು. ಪಾಯಲ್&zwnj;ಗೆ 8 ವರ್ಷವಿದ್ದಾಗ ಕಾಮಗಾರಿ ನಡೆಯುತ್ತಿದ್ದ ಮನೆಯೊಂದರ ಟೆರೇಸ್&zwnj;ನ ನಿಂತಿದ್ದ ನೀರಿನಲ್ಲಿ ಆಡುತ್ತಿದ್ದಾಗ ವಿದ್ಯುತ್&zwnj; ಅವಘಡಕ್ಕೆ ತುತ್ತಾಗಿದ್ದರು. ಜೀವಕ್ಕೆ ಅಪಾಯವಿದ್ದ ಕಾರಣ ವೈದ್ಯರು ಪಾಯಲ್&zwnj;ರ 2 ಕೈ, 2 ಕಾಲುಗಳನ್ನು ಕತ್ತರಿಸಿ ತೆಗೆದಿದ್ದರು. ಇದಾದ ಬಳಿಕ ಪಾಯಲ್&zwnj;ರನ್ನು ಪೋಷಕರಾದ ಬಿಜಯ್&zwnj; ಮತ್ತು ಜನತಾ ಅನಾಥಾಶ್ರಮಕ್ಕೆ ಸೇರಿಸಿದ್ದರು.&lt;/p&gt;&lt;h3&gt;&lt;strong&gt;ಆಕೆಗೆ ವಿಷ ಕೊಟ್ಟುಬಿಡಿ ಎಂದಿದ್ದ ಸಂಬಂಧಿಕರು!&lt;/strong&gt;&lt;/h3&gt;&lt;p&gt;ತನ್ನೆರಡೂ ಕೈಕಾಲುಗಳನ್ನು ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದ ಪಾಯಲ್&zwnj; ಬಗ್ಗೆ ನೆರೆಹೊರೆಯವರು, ಕುಟುಂಬಸ್ಥರು ಚುಚ್ಚು ಮಾತುಗಳನ್ನಾಡಿದ್ದೇ ಹೆಚ್ಚು. &lsquo;ಅವಳಿಗೆ ನಡೆದಾಡಲು, ತಿನ್ನಲು ಸಾಧ್ಯವಿಲ್ಲ. ಇದಕ್ಕಿಂತ ಅವಳಿಗೆ ವಿಷ ಕೊಡುವುದೇ ಉತ್ತಮ&rsquo; ಎಂದು ಕುಟುಂಬಸ್ಥರು ಪಾಯಲ್&zwnj; ಪೋಷಕರಿಗೆ ಹೇಳಿದ್ದರಂತೆ.&lt;/p&gt;&lt;h3&gt;&lt;strong&gt;ಪಾಯಲ್&zwnj;ರ ಜೀವನ ಬದಲಿಸಿದ ಪೇಂಟಿಂಗ್&zwnj;!&lt;/strong&gt;&lt;/h3&gt;&lt;p&gt;ಅನಾಥಾಶ್ರಮದಲ್ಲಿ ಪಾಯಲ್&zwnj;ಗೆ ಬಾಯಲ್ಲಿ ಪೇಟಿಂಗ್&zwnj; ಮಾಡುವುದನ್ನು ಕಲಿಸಲಾಗಿತ್ತು. ಕಾರ್ಯಕ್ರಮವೊಂದರಲ್ಲಿ ಪಾಯಲ್&zwnj; ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರ ಭಾವಚಿತ್ರವನ್ನು ಬಿಡಿಸಿಕೊಟ್ಟಿದ್ದರು. ಆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್&zwnj; ಆಗಿತ್ತು. ಆ ವಿಡಿಯೋ ಖ್ಯಾತ ಆರ್ಚರಿ ಕೋಚ್&zwnj; ಕುಲ್ದೀಪ್&zwnj; ವೆದ್ವಾನ್&zwnj;ರ ಕಣ್ಣಿಗೆ ಬಿದ್ದಿತ್ತು. ಅಲ್ಲಿಂದ ಆಕೆಯ ಜೀವನ ಬದಲಾಯಿತು.&lt;/p&gt;&lt;p&gt;&amp;nbsp;&lt;/p&gt;&lt;p&gt; Payal Nag Wins Gold At BangkokDefeats world champion Sheetal Devi in finalFirst senior international tournament brings historic gold for IndiaIndia&rsquo;s para archery continues to shine on the global stage Payal Nag won the gold medal at the Bangkok Archery Para Series&hellip; pic.twitter.com/xmvBZ4fGb1&lt;/p&gt;&lt;p&gt;&mdash; Genzdigest (@genzdigest) April 4, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ವಿಶೇಷ ವಿನ್ಯಾಸದ ಕೃತಕ ಕಾಲು, ಬಿಲ್ಲು&lt;/strong&gt;&lt;/h3&gt;&lt;p&gt;ಪಾಯಲ್&zwnj;ರನ್ನು ತಮ್ಮ ಅಕಾಡೆಮಿ ಕರೆತಂದ ಕೋಚ್&zwnj; ಕುಲ್ದೀಪ್&zwnj;, ಅವರಿಗಾಗಿ ವಿಶೇಷ ವಿನ್ಯಾಸದ ಕೃತಕ ಕಾಲುಗಳನ್ನು ಮಾಡಿಸಿ ಅಭ್ಯಾಸ ಆರಂಭಿಸಿದ್ದರು. ಪಾಯಲ್&zwnj;ಗಾಗಿ ವಿಶೇಷ ವಿನ್ಯಾಸದ ಬಿಲ್ಲು (ಬೋ) ಸಹ ಮಾಡಿಸಲಾಯಿತು. ಕೃತಕ ಕಾಲಿನ ಸಹಾಯದಿಂದ ಬಾಣ ಬಿಡುವುದನ್ನು ಆರಂಭಿಸಲು ಪಾಯಲ್&zwnj;ಗೆ 3 ತಿಂಗಳು ಬೇಕಾಯಿತು. ಆಕೆಯ ಬಿಲ್ಲಿಗೆ ಬಾಣಗಳನ್ನು ಬೇರೆಯವರು ಹೂಡುತ್ತಾರೆ. ಕೃತಕ ಕಾಲು, ಭುಜದ ಸಹಾಯದಿಂದ ಪಾಯಲ್&zwnj; ಬಾಣವನ್ನು ಗುರಿಯತ್ತ ಕಳಿಸುತ್ತಾರೆ.&lt;/p&gt;&lt;h3&gt;&lt;strong&gt;ಶೀತಲ್&zwnj;-ಪಾಯಲ್&zwnj;ಗೆ ಬೆಳಕಾದ ಕೋಚ್&zwnj;!&lt;/strong&gt;&lt;/h3&gt;&lt;p&gt;ಪ್ಯಾರಾ ಅಥ್ಲೀಟ್&zwnj;ಗಳ ಸಾಮರ್ಥ್ಯ ಗುರುತಿಸಿ ಅವರನ್ನು ಜಾಗತಿಕ ಮಟ್ಟಕ್ಕೆ ಸಜ್ಜುಗೊಳಿಸುವ ಖ್ಯಾತಿ ಕುಲ್ದೀಪ್&zwnj; ವೆದ್ವಾನ್&zwnj;ರದ್ದು. ಈ ಹಿಂದೆ ಶೀತಲ್&zwnj; ದೇವಿಗೆ ತರಬೇತಿ ನಿಡಿ 2025ರಲ್ಲಿ ಆಕೆ ವಿಶ್ವ, ಪ್ಯಾರಾಲಿಂಪಿಕ್ಸ್&zwnj; ಚಾಂಪಿಯನ್&zwnj; ಆಗಿಸಲು ಶ್ರಮಿಸಿದ್ದರು ಬಳಿಕ ಶೀತಲ್&zwnj;ರಂತೆ ಪಾಯಲ್&zwnj;ರನ್ನೂ ಚಾಂಪಿಯನ್&zwnj; ಮಾಡುತ್ತೇನೆ ಎಂಬ ಪ್ರತಿಜ್ಞೆಗೈದು ಇದೀಗ ಆಕೆಯನ್ನೂ ವಿಶ್ವಚಾಂಪಿಯನ್&zwnj; ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Payal Nag  pic.twitter.com/3hoFL7ED23&lt;/p&gt;&lt;p&gt;&mdash; Lokesh Bag (@lokeshbag67) December 19, 2025&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/payal-nag-won-the-gold-medal-at-the-bangkok-archery-para-series-2026-mrq/articleshow-ri0cpar"/>
        </item>
        <item>
            <title><![CDATA[ಮನು ಭಾಕರ್ ಕೋಚ್, ಭಾರತದ ದಿಗ್ಗಜ ಶೂಟರ್ ಜಸ್ಪಲ್ ರಾಣಾ ನಿಧನ!]]></title>
            <link>https://kannada.asianetnews.com/sports/jaspal-rana-passes-away-indian-shooting-legend-and-manu-bhaker-coach-dies-at-49-kvn/articleshow-sezzzgi</link>
            <guid isPermaLink="true">https://kannada.asianetnews.com/sports/jaspal-rana-passes-away-indian-shooting-legend-and-manu-bhaker-coach-dies-at-49-kvn/articleshow-sezzzgi</guid>
            <pubDate>Fri, 12 Jun 2026 11:20:04 +0530</pubDate>
            <description><![CDATA[ಭಾರತದ ಖ್ಯಾತ ಶೂಟಿಂಗ್ ಕೋಚ್ ಮತ್ತು ಮನು ಭಾಕರ್ ಅವರ ಗುರು ಜಸ್ಪಾಲ್ ರಾಣಾ (49) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮ್ಯೂನಿಚ್&zwnj;ನಿಂದ ಹಿಂದಿರುಗುವಾಗ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಅವರ ಮಾರ್ಗದರ್ಶನದಲ್ಲಿ ಭಾರತದ ಯುವ ಶೂಟರ್&zwnj;ಗಳು ಹಲವು ಪದಕಗಳನ್ನು ಗೆದ್ದಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01ktx5ggh2pns6k5sxmd8edr1k,imgname-00jaspal-rana-death-at-49-indian-shooting-legend-commonwealth-games-medalist-coach-manu-bhaker-mentor-1781242806818.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಭಾರತದ ದಿಗ್ಗಜ ಶೂಟರ್ ಹಾಗೂ ಪ್ರಖ್ಯಾತ ಶೂಟರ್ ಮನು ಭಾಕರ್ ಕೋಚ್ ಆಗಿದ್ದ ಜಸ್ಪಾಲ್ ರಾಣಾ(49) ಇಂದು ಕೊನೆಯುಸಿರೆಳೆದಿದ್ದಾರೆ. ಇದೀಗ ಜಸ್ಪಾಲ್ ರಾಣಾ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;p&gt;ಭಾರತದ ಪಿಸ್ತೂಲ್ ಶೂಟರ್&zwnj;ಗಳಿಗೆ ಉನ್ನತ ಕಾರ್ಯಕ್ಷಮತೆಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದ ರಾಣಾ, ಮ್ಯೂನಿಚ್&zwnj;ನಲ್ಲಿ ನಡೆದ ಐಎಸ್&zwnj;ಎಸ್&zwnj;ಎಫ್ ವಿಶ್ವಕಪ್&zwnj;ನಿಂದ ಭಾರತಕ್ಕೆ ಮರಳುವಾಗ ಅಸ್ವಸ್ಥತೆಯನ್ನು ಅನುಭವಿಸಿದ್ದರು ಎಂದು ವರದಿಯಾಗಿದೆ. ನವದೆಹಲಿಗೆ ಬಂದಿಳಿಯುತ್ತಿದ್ದಂತೆಯೇ ಸಾಕೇತ್&zwnj;ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಜಸ್ಪಾಲ್ ಅವರನ್ನು ದಾಖಲಿಸಲಾಗಿತ್ತು. ಅಲ್ಲಿ ಜಸ್ಪಾಲ್&zwnj; ಚಿಕಿತ್ಸೆಗೆ ಒಳಗಾಗಿದ್ದರು.&lt;/p&gt;&lt;p&gt;ಚಿಕಿತ್ಸೆಯ ವೇಳೆ ವೈದ್ಯರು ಜಸ್ಪಾಲ್&zwnj; ರಾಣಾ ಅವರಿಗೆ ಲಘು ಹೃದಯಾಘಾತವಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಹೀಗಾಗಿ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಲು ವೈದ್ಯರು ತೀರ್ಮಾನಿಸಿದ್ದರು. ಮೊದಲ ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ದಿಢೀರ್ ಆಗಿ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;h2&gt;&lt;strong&gt;ಮನು ಭಾಕರ್ ಗುರು ಜಸ್ಪಾಲ್ ರಾಣಾ:&lt;/strong&gt;&lt;/h2&gt;&lt;p&gt;ಇತ್ತೀಚಿಗಿನ ವರ್ಷಗಳಲ್ಲಿ ಮನು ಭಾಕರ್&zwnj; ಕೋಚ್ ಆಗಿ ಜಸ್ಪಾಲ್ ರಾಣಾ ಹೆಚ್ಚು ಗಮನ ಸೆಳೆದಿದ್ದರು. ಜಸ್ಪಾಲ್ ರಾಣಾ ಮಾರ್ಗದರ್ಶನದಲ್ಲಿ ಮನು ಭಾಕರ್ 10 ಮೀಟರ್ ಏರ್&zwnj; ಪಿಸ್ತೂಲ್ ಹಾಗೂ 10 ಮೀಟರ್ ಮಿಶ್ರ ಪಿಸ್ತೂಲ ಸ್ಪರ್ಧೆಗಳಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಇದರೊಂದಿಗೆ ಸ್ವಾತಂತ್ರ್ಯ ಭಾರತದ ಬಳಿಕ ಒಂದೇ ಒಲಿಂಪಿಕ್ಸ್&zwnj;ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ಮನು ಭಾಕರ್ ಪಾತ್ರರಾಗಿದ್ದರು.&lt;/p&gt;&lt;p&gt;Jaspal Rana, shooter and coach of Double Olympics medalist Manu Bhaker, passed away at Max Saket Hospital this morning: Max Hospital(file pic) pic.twitter.com/BDMbKXh8CK&lt;/p&gt;&lt;p&gt;&mdash; ANI (@ANI) June 12, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಭಾಕರ್ ಅವರಲ್ಲದೆ, ರಾಣಾ ಯುವ ಶೂಟರ್&zwnj;ಗಳಾದ ಸೌರಭ್ ಚೌಧರಿ, ಅನೀಶ್ ಭನ್ವಾಲಾ ಮತ್ತು ಚಿಂಕಿ ಯಾದವ್ ಸೇರಿದಂತೆ ಹಲವಾರು ಪ್ರಮುಖ ಪಿಸ್ತೂಲ್ ಶೂಟರ್&zwnj;ಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಜೂನಿಯರ್ ಕಾರ್ಯಕ್ರಮದಲ್ಲಿ ಅವರ ಅವಧಿಯು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತದ ಯುವ ಶೂಟರ್&zwnj;ಗಳು ಹಲವು ಪದಕಗಳನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಭಾರತದ ದಿಗ್ಗಜ ಶೂಟರ್ ಜಸ್ಪಾಲ್ ರಾಣಾ&lt;/strong&gt;&lt;/h3&gt;&lt;p&gt;ಭಾರತದ ದಿಗ್ಗಜ ಶೂಟಿಂಗ್ ಕೋಚ್ ಆಗುವ ಮುನ್ನ ಜಸ್ಪಾಲ್ ರಾಣಾ, ಭಾರತ ಕಂಡ ಅತ್ಯುತ್ತಮ ಪಿಸ್ತೂಲ್ ಶೂಟರ್&zwnj;ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಜೂನ್ 28, 1976 ರಂದು ಉತ್ತರಾಖಂಡದಲ್ಲಿ ಜನಿಸಿದ ರಾಣಾ, 1994 ರಲ್ಲಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುವಲ್ಲಿ ಯಶಸ್ವಿಯಾದರು. ಮಿಲನ್&zwnj;ನಲ್ಲಿ ನಡೆದ ವಿಶ್ವ ಶೂಟಿಂಗ್ ಚಾಂಪಿಯನ್&zwnj;ಶಿಪ್&zwnj;ನಲ್ಲಿ, ಅವರು ವಿಶ್ವ ದಾಖಲೆಯ ಅಂಕದೊಂದಿಗೆ ಜೂನಿಯರ್ ವಿಭಾಗದಲ್ಲಿ ಚಿನ್ನ ಗೆದ್ದರು. ಅದೇ ವರ್ಷ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 25 ಮೀಟರ್ ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾದರು. ಒಂದು ದಶಕಗಳ ಕಾಲ ಭಾರತದ ದಿಗ್ಗಜ ಶೂಟರ್ ಆಗಿ ರಾಣಾ ಗುರುತಿಸಿಕೊಂಡರು.&lt;/p&gt;&lt;p&gt;ರಾಣಾ ಏಷ್ಯನ್ ಕ್ರೀಡಾಕೂಟ, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಚಾಂಪಿಯನ್&zwnj;ಶಿಪ್&zwnj;ಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಅತ್ಯಂತ ಯಶಸ್ವಿ ಶೂಟರ್&zwnj;ಗಳಲ್ಲಿ ಒಬ್ಬರಾದರು. ಒಂಬತ್ತು ಚಿನ್ನದ ಪದಕಗಳು ಸೇರಿದಂತೆ 15 ಪದಕಗಳನ್ನು ಗಳಿಸಿರುವ ಅವರು ಭಾರತದ ಅತ್ಯಂತ ಯಶಸ್ವಿ ಕಾಮನ್&zwnj;ವೆಲ್ತ್ ಕ್ರೀಡಾಕೂಟದ ಶೂಟರ್ ಆಗಿ ಉಳಿದಿದ್ದಾರೆ. 2006 ರ ದೋಹಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಅವರ ಅತ್ಯಂತ ಸ್ಮರಣೀಯ ಪ್ರದರ್ಶನ ಮೂಡಿ ಬಂದಿತ್ತು. ಅಲ್ಲಿ ಅವರು ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ 25 ಮೀಟರ್ ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾದರು. ಇನ್ನು ರಾಣಾ ತಮ್ಮ 18ನೇ ವಯಸ್ಸಿಗೆ ಅರ್ಜುನ ಪ್ರಶಸ್ತಿಗೆ ಭಾಜನರಾದರು. ಇದಾದ ಮೂರು ವರ್ಷಗಳ ಬಳಿಕ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದರು.&lt;/p&gt;]]></content:encoded>
            <category>other-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/sports/jaspal-rana-passes-away-indian-shooting-legend-and-manu-bhaker-coach-dies-at-49-kvn/articleshow-sezzzgi"/>
        </item>
        <item>
            <title><![CDATA[ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌; ಕನ್ನಡಿಗ ಆಯುಶ್ ಶೆಟ್ಟಿಗೆ ಐತಿಹಾಸಿಕ ಬೆಳ್ಳಿ!]]></title>
            <link>https://kannada.asianetnews.com/sports/ayush-shetty-wins-historic-silver-at-badminton-asia-championships-kvn/articleshow-spu5u7z</link>
            <guid isPermaLink="true">https://kannada.asianetnews.com/sports/ayush-shetty-wins-historic-silver-at-badminton-asia-championships-kvn/articleshow-spu5u7z</guid>
            <pubDate>Mon, 13 Apr 2026 09:21:36 +0530</pubDate>
            <description><![CDATA[ಚೀನಾದ ನಿಂಗ್ಬೊದಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್&zwnj;ಶಿಪ್&zwnj;ನಲ್ಲಿ ಕಾರ್ಕಳದ ಆಯುಷ್ ಶೆಟ್ಟಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್&zwnj;ನಲ್ಲಿ ಚೀನಾದ ಶಿ ಯು ಕಿ ವಿರುದ್ಧ ಸೋತರೂ, ಈ ಕೂಟದಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಶಟ್ಲರ್&zwnj; ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp2fbc7q1mg4ecqe0x9cx26v,imgname-ayush-shetty-1776052187383.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿಂಗ್ಬೊ(ಚೀನಾ): ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್&zwnj;ಶಿಪ್&zwnj;ನಲ್ಲಿ ಉಡುಪಿಯ ಕಾರ್ಕಳ ತಾಲೂಕಿನ ಸಾಣೂರು ಮೂಲದ ಆಯುಷ್ ಶೆಟ್ಟಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್&zwnj;ನಲ್ಲಿ ಅವರು ಚೀನಾದ ಶಿ ಯು ಕಿ ವಿರುದ್ಧ ಸೋತು ರನ್ನರ್&zwnj;-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.&lt;/p&gt;&lt;h2&gt;&lt;strong&gt;ಐತಿಹಾಸಿಕ ಸಾಧನೆ ಮಾಡಿದ ಕನ್ನಡಿಗ&lt;/strong&gt;&lt;/h2&gt;&lt;p&gt;ಟೂರ್ನಿಯಲ್ಲಿ ವಿಶ್ವ ನಂ.1, ವಿಶ್ವ ನಂ.4, ವಿಶ್ವ ನಂ.7 ಶಟ್ಲರ್&zwnj;ಗಳ ವಿರುದ್ಧ ಗೆದ್ದರೂ ಭಾನುವಾರ ನಡೆದ ಫೈನಲ್&zwnj;ನಲ್ಲಿ 20 ವರ್ಷದ ಆಯುಶ್&zwnj; ವಿಶ್ವ ನಂ.2 ಆಟಗಾರ ಯು ಕಿ ವಿರುದ್ಧ 8-21, 10-21 ನೇರ ಗೇಮ್&zwnj;ಗಳಲ್ಲಿ ಪರಾಭವಗೊಂಡರು. ಸೋಲಿನ ಹೊರತಾಗಿಯೂ ಆಯುಶ್&zwnj; ತಮ್ಮ ವೃತ್ತಿ ಬದುಕಿನ ಪ್ರಮುಖ ಮೈಲುಗಲ್ಲು ಸಾಧಿಸಿದ್ದಾರೆ. ಬ್ಯಾಡ್ಮಿಂಟನ್&zwnj; ಏಷ್ಯಾ ಕೂಟದಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಶಟ್ಲರ್&zwnj; ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1965ರಲ್ಲಿ ದಿನೇಶ್&zwnj; ಖನ್ನಾ ಅವರು ಚಿನ್ನ ಗೆದ್ದಿದ್ದರು. ಆ ಬಳಿಕ ಕೂಟದಲ್ಲಿ ಫೈನಲ್&zwnj;ಗೇರಿದ ಮೊದಲ ಭಾರತೀಯ ಆಯುಶ್&zwnj;.&lt;/p&gt;&lt;p&gt;Congratulations to Ayush Shetty for winning a Silver medal at the Badminton Asia Championships. He becomes the first Indian finalist in Men&rsquo;s Singles in 61 years. A spectacular debut that has made the entire nation proud!Picture Credit - Badminton Asia Championships pic.twitter.com/TvQly54nln&lt;/p&gt;&lt;p&gt;&mdash; Dr Mansukh Mandaviya (@mansukhmandviya) April 12, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಶುಕ್ರವಾರ ಪುರುಷರ ಸಿಂಗಲ್ಸ್&zwnj; ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ ವಿಶ್ವ ನಂ.25 ಆಟಗಾರ, 20 ವರ್ಷದ ಆಯುಶ್&zwnj; ಅವರು ವಿಶ್ವದ ನಂ.4 ಆಟಗಾರ, ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟೀ ಅವರನ್ನು 23-21, 21-17 ಅಂಕಗಳ ಅಂತರದಲ್ಲಿ ಸೋಲಿಸಿ ಅಂತಿಮ 4ರ ಘಟ್ಟ ಪ್ರವೇಶಿಸಿದ್ದರು.&lt;/p&gt;&lt;h3&gt;&lt;strong&gt;ಕೂಟದಲ್ಲಿ ಭಾರತಕ್ಕೆ ಸಿಕ್ಕ 19ನೇ ಪದಕ&lt;/strong&gt;&lt;/h3&gt;&lt;p&gt;1962ರಿಂದ ನಡೆಯುತ್ತಿರುವ ಈ ಕೂಟದಲ್ಲಿ ಭಾರತ 19ನೇ ಪದಕ ಗೆದ್ದಿದೆ. 1965ರಲ್ಲಿ ಸಿಂಗಲ್ಸ್&zwnj;ನಲ್ಲಿ ದಿನೇಶ್&zwnj; ಖನ್ನಾ, 2023ರಲ್ಲಿ ಪುರುಷ ಡಬಲ್ಸ್&zwnj;ನಲ್ಲಿ ಸಾತ್ವಿಕ್&zwnj;-ಚಿರಾಗ್&zwnj; ಚಿನ್ನ ಗೆದ್ದಿದ್ದಾರೆ. ಉಳಿದಂತೆ 1 ಬೆಳ್ಳಿ(ಆಯುಶ್), 16 ಕಂಚಿನ ಪದಕಗಳು ಲಭಿಸಿವೆ.&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/ayush-shetty-wins-historic-silver-at-badminton-asia-championships-kvn/articleshow-spu5u7z"/>
        </item>
        <item>
            <title><![CDATA[ಸಾಮರ್ಥ್ಯ ಇರೋರಿಗೆ ಸಿಗುತ್ತಿಲ್ಲ ಅವಕಾಶ, ಕರ್ನಾಟಕ ಕ್ರೀಡಾ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ! ಸಿಡೆದಿದ್ದ ಅಥ್ಲೀಟ್ಸ್‌]]></title>
            <link>https://kannada.asianetnews.com/other-sports/karnataka-mission-olympics-scheme-row-athletes-allege-bias-and-lack-of-transparency-in-selection-gdp/articleshow-xe4w6ex</link>
            <guid isPermaLink="true">https://kannada.asianetnews.com/other-sports/karnataka-mission-olympics-scheme-row-athletes-allege-bias-and-lack-of-transparency-in-selection-gdp/articleshow-xe4w6ex</guid>
            <pubDate>Wed, 25 Mar 2026 13:18:15 +0530</pubDate>
            <description><![CDATA[ಕರ್ನಾಟಕದ 'ಮಿಷನ್ ಒಲಿಂಪಿಕ್ಸ್' ಯೋಜನೆಯಲ್ಲಿ ಅರ್ಹ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಮತ್ತು ರಾಜಕೀಯ ಪ್ರಭಾವವಿದೆ ಎಂದು ಆರೋಪಿಸಿರುವ ಅವರು, ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಸೇರಿದಂತೆ ಹಲವರು ತನಿಖೆಗೆ ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kh7tcyr030t64ap8rvgy88hg,imgname-up-sports-budget-2026-1770862836480.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಕ್ರೀಡಾ ಇಲಾಖೆಯ ವಿರುದ್ಧ ಕ್ರೀಡಾಪಟುಗಳ ಅಸಮಾಧಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮಿಷನ್ ಒಲಿಂಪಿಕ್ಸ್ ಯೋಜನೆಯಡಿ ಅರ್ಹ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಮತ್ತು ರಾಜಕೀಯ ಪ್ರಭಾವವಿದೆ ಎಂಬ ಗಂಭೀರ ಆರೋಪಗಳು ಹೊರಹೊಮ್ಮಿವೆ.&lt;/p&gt;&lt;p&gt;ರಾಜ್ಯವನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಪದಕಗಳನ್ನು ಜಯಿಸಿದ ಕ್ರೀಡಾಪಟುಗಳೇ ಈ ಯೋಜನೆಯಿಂದ ಹೊರಗುಳಿದಿದ್ದಾರೆ ಎನ್ನುವುದು ಪ್ರಮುಖ ಆಕ್ಷೇಪವಾಗಿದೆ. ಒಲಿಂಪಿಕ್ಸ್&zwnj;ಗೆ ತಯಾರಿ ನಡೆಸುವ ಸಾಮರ್ಥ್ಯ ಹೊಂದಿರುವ ಕ್ರೀಡಾಪಟುಗಳಿಗೆ ಸರ್ಕಾರ ವರ್ಷಕ್ಕೆ ₹10 ಲಕ್ಷ ಆರ್ಥಿಕ ನೆರವು ನೀಡುವ ಮಿಷನ್ ಒಲಿಂಪಿಕ್ಸ್ ಯೋಜನೆ ಜಾರಿಯಲ್ಲಿದ್ದು, ನಾಲ್ಕು ವರ್ಷಗಳ ಕಾಲ ಈ ನೆರವು ನೀಡಲಾಗುತ್ತದೆ. ಆದರೆ ಈ ಸೌಲಭ್ಯ ಅರ್ಹರಿಗೆ ಸಿಗುತ್ತಿಲ್ಲ ಎಂಬುದು ಕ್ರೀಡಾಪಟುಗಳ ಆರೋಪ.&lt;/p&gt;&lt;h2&gt;&ldquo;ಅರ್ಹರಿಗೆ ಅವಕಾಶ ಇಲ್ಲ&rdquo; ಕ್ರೀಡಾಪಟು ಅಸಮಾಧಾನ&lt;/h2&gt;&lt;p&gt;ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ಗೆ ಮಾತನಾಡಿದ ಕ್ರೀಡಾಪಟು ಸ್ನೇಹಾ, &ldquo;ನಾವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹಾಗೂ ಭಾರತವನ್ನು ಪ್ರತಿನಿಧಿಸಿ ಪದಕಗಳನ್ನು ಜಯಿಸಿದ್ದೇವೆ. ಆದರೂ ನಮ್ಮನ್ನು ಮಿಷನ್ ಒಲಿಂಪಿಕ್ಸ್ ಯೋಜನೆಯಲ್ಲಿ ಪರಿಗಣಿಸಲಾಗಿಲ್ಲ. ಯಾವುದೇ ಗಮನಾರ್ಹ ಸಾಧನೆ ಮಾಡದ ಕೆಲ ಕ್ರೀಡಾಪಟುಗಳನ್ನು ರಾಜಕೀಯ ಪ್ರಭಾವದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಕೂಡ ಆಕ್ರೋಶ&lt;/h2&gt;&lt;p&gt;ಟಾರ್ಗೆಟ್ ಒಲಿಂಪಿಕ್ ಸ್ಕೀಮ್ ಹಂಚಿಕೆ ಕುರಿತು ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ ತಯಾರಿಗೆ ವರ್ಷಕ್ಕೆ ₹10 ಲಕ್ಷ ನೀಡಲಾಗುತ್ತಿದೆ. ನಾವು ಕೂಡ ಅರ್ಜಿ ಸಲ್ಲಿಸಿದ್ದೇವೆ. ಆದರೆ ಕೇವಲ ಕೆಲವರಿಗೆ ಮಾತ್ರ ಹಣ ಜಮೆಯಾಗಿದೆ. ವಯಸ್ಸಿನ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 2024ರಲ್ಲಿಯೂ ಈ ಯೋಜನೆಯಡಿ ನನಗೆ ಯಾವುದೇ ನೆರವು ಸಿಗಲಿಲ್ಲ. ಆದರೆ ಹಣ ಪಡೆದ ಕೆಲವರು ಒಲಿಂಪಿಕ್ಸ್&zwnj;ಗೆ ಆಯ್ಕೆಯಾಗಲಿಲ್ಲ. ಈ ಬಾರಿಯೂ ಹಲವಾರು ಅರ್ಹ ಕ್ರೀಡಾಪಟುಗಳು ಹೊರಗುಳಿದಿದ್ದಾರೆ,&rdquo; ಎಂದು ಆರೋಪಿಸಿದ್ದಾರೆ.&lt;/p&gt;&lt;h2&gt;&ldquo;ಪ್ರದರ್ಶನವೇ ಮಾನದಂಡವಾಗಲಿ&rdquo;&lt;/h2&gt;&lt;p&gt;ಪೂವಮ್ಮ ಅವರು ಕೇಂದ್ರ ಸರ್ಕಾರದ ಟಾಪ್ (TOPS) ಯೋಜನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿ, &ldquo;ಅಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರ್ಯಾಂಕಿಂಗ್ ಹಾಗೂ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇದೇ ಮಾದರಿಯನ್ನು ಇಲ್ಲಿ ಕೂಡ ಅನುಸರಿಸಬೇಕು. ವಯಸ್ಸು ಮುಖ್ಯವಲ್ಲ, ಪ್ರದರ್ಶನವೇ ಮುಖ್ಯ ಮಾನದಂಡವಾಗಬೇಕು,&rdquo; ಎಂದು ಹೇಳಿದ್ದಾರೆ.&lt;/p&gt;&lt;h2&gt;ತನಿಖೆಗೆ ಒತ್ತಾಯ&lt;/h2&gt;&lt;p&gt;ಕ್ರೀಡಾಪಟುಗಳು ಮುಖ್ಯಮಂತ್ರಿಗಳಿಗೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. 2024ರ ಒಲಿಂಪಿಕ್ಸ್ ತಯಾರಿ ಸಹಾಯಧನ ವಿತರಣೆ ಕುರಿತು ಸ್ಪಷ್ಟತೆ ಇಲ್ಲದಿರುವುದು ಹಾಗೂ ಹಣ ಪಡೆದವರ ಪಟ್ಟಿಯನ್ನು ಬಹಿರಂಗಪಡಿಸದಿರುವುದೂ ಅನುಮಾನಗಳಿಗೆ ಕಾರಣವಾಗಿದೆ.&lt;/p&gt;&lt;p&gt;ಇದಲ್ಲದೆ, 2028ರ ಒಲಿಂಪಿಕ್ಸ್ ತಯಾರಿ ಸಹಾಯಧನ ಸೇರಿದಂತೆ ಹಳೆಯ ಅನುದಾನಗಳ ವಿತರಣೆಯಲ್ಲೂ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರಭಾವ ಬಳಸಿ ಅನೇಕ ಕ್ರೀಡಾಪಟುಗಳ ಹೆಸರನ್ನು ಸೇರಿಸಲಾಗಿದೆ ಎಂಬುದು ಕ್ರೀಡಾಪಟುಗಳ ಮತ್ತೊಂದು ಗಂಭೀರ ಆರೋಪವಾಗಿದೆ.&lt;/p&gt;&lt;p&gt;ಒಟ್ಟಾರೆ, ಮಿಷನ್ ಒಲಿಂಪಿಕ್ಸ್ ಯೋಜನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ, ರಾಜಕೀಯ ಪ್ರಭಾವ ಮತ್ತು ಅರ್ಹ ಕ್ರೀಡಾಪಟುಗಳ ಕಡೆಗಣನೆ ಎಂಬ ಆರೋಪಗಳು ಕರ್ನಾಟಕ ಕ್ರೀಡಾ ಇಲಾಖೆಗೆ ಸವಾಲಾಗಿ ಪರಿಣಮಿಸಿವೆ. ತಕ್ಷಣವೇ ನ್ಯಾಯಸಮ್ಮತ ಹಾಗೂ ಪಾರದರ್ಶಕ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ತರುವಂತೆ ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>other-sports</category>
            <dc:creator>Gowthami K</dc:creator>
            <atom:link href="https://kannada.asianetnews.com/other-sports/karnataka-mission-olympics-scheme-row-athletes-allege-bias-and-lack-of-transparency-in-selection-gdp/articleshow-xe4w6ex"/>
        </item>
        <item>
            <title><![CDATA[ಮೇ.26ರಿಂದ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌, 350 ಅಥ್ಲೀಟ್ ಭಾಗಿ]]></title>
            <link>https://kannada.asianetnews.com/other-sports/bengaluru-set-to-host-international-para-athletics-event-from-may-26th/articleshow-y5qplx4</link>
            <guid isPermaLink="true">https://kannada.asianetnews.com/other-sports/bengaluru-set-to-host-international-para-athletics-event-from-may-26th/articleshow-y5qplx4</guid>
            <pubDate>Sun, 24 May 2026 21:58:08 +0530</pubDate>
            <description><![CDATA[&lt;p&gt;ಕಂಠೀರವ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ನಡೆಯಲಿರುವ ಚಾಂಪಿಯನ್&zwnj;ಶಿಪ್&zwnj;ನಲ್ಲಿ ಭಾರತ ಸೇರಿ ಒಟ್ಟು 5 ರಾಷ್ಟ್ರಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇದು ಏಷ್ಯನ್&zwnj; ಪ್ಯಾರಾ ಗೇಮ್ಸ್&zwnj;ಗೆ ಆಯ್ಕೆ ಟ್ರಯಲ್ಸ್&zwnj; ಆಗಿರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksdd171ybfvm4knvp1r8q6g3,imgname-international-para-athletics-1779640081470.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.24):&lt;/strong&gt; ಭಾರತೀಯ ಪ್ಯಾರಾಲಿಂಪಿಕ್ಸ್&zwnj; ಸಮಿತಿ(ಪಿಸಿಐ) ಆಯೋಜಿಸುವ 8ನೇ ಆವೃತ್ತಿಯ ಭಾರತೀಯ ಓಪನ್&zwnj; ಪ್ಯಾರಾ ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ್&zwnj; ಚಾಂಪಿಯನ್&zwnj;ಶಿಪ್&zwnj; ಮೇ 26ರಿಂದ 28ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ನಡೆಯಲಿರುವ ಚಾಂಪಿಯನ್&zwnj;ಶಿಪ್&zwnj;ನಲ್ಲಿ ಭಾರತ ಸೇರಿ ಒಟ್ಟು 5 ರಾಷ್ಟ್ರಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.&lt;/p&gt;&lt;p&gt;ಭಾನುವಾರ ನಗರದ ಖಾಸಗಿ ಹೋಟೆಲ್&zwnj;ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಪ್ಯಾರಾಲಿಂಪಿಕ್ಸ್&zwnj; ಸಮಿತಿ ಅಧ್ಯಕ್ಷ ದೇವೆಂದ್ರ ಝಝಾರಿಯಾ ಅವರು ಚಾಂಪಿಯನ್&zwnj;ಶಿಪ್&zwnj; ಬಗ್ಗೆ ಮಾಹಿತಿ ನೀಡಿದರು. ಈ ಚಾಂಪಿಯನ್&zwnj;ಶಿಪ್&zwnj;, ಅಕ್ಟೋಬರ್&zwnj; 18ರಿಂದ 24ರ ವರೆಗೆ ಜಪಾನ್&zwnj;ನಲ್ಲಿ ನಡೆಯಲಿರುವ 5ನೇ ಆವೃತ್ತಿಯ ಏಷ್ಯನ್&zwnj; ಪ್ಯಾರಾ ಗೇಮ್ಸ್&zwnj;ಗೆ ಆಯ್ಕೆ ಟ್ರಯಲ್ಸ್&zwnj; ಆಗಿರಲಿದೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಚಾಂಪಿಯನ್&zwnj;ಶಿಪ್&zwnj;ನಲ್ಲಿ ಭಾರತದ 341 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಪ್ಯಾರಾಲಿಂಪಿಕ್ಸ್&zwnj;, ವಿಶ್ವ ಪ್ಯಾರಾ ಅಥ್ಲೆಟಿಕ್ಸ್&zwnj; ಚಾಂಪಿಯನ್&zwnj;ಶಿಪ್&zwnj;, ಏಷ್ಯನ್&zwnj; ಪ್ಯಾರಾ ಗೇಮ್ಸ್&zwnj; ಪದಕ ವಿಜೇತರು ಕೂಟದಲ್ಲಿ ಭಾಗವಹಿಸಲಿದ್ದಾರೆ. ಎರಡು ಬಾರಿ ಪ್ಯಾರಾಲಿಂಪಿಕ್ಸ್&zwnj; ಹಾಗೂ ಮೂರು ಬಾರಿ ವಿಶ್ವ ಅಥ್ಲೆಟಿಕ್ಸ್&zwnj; ಚಾಂಪಿಯನ್&zwnj;ಶಿಪ್&zwnj; ಚಿನ್ನ ವಿಜೇತ ಜಾವೆಲಿನ್&zwnj; ಪಟು ಸುಮಿತ್&zwnj; ಅಂಟಿಲ್&zwnj; ಚಾಂಪಿಯನ್&zwnj;ಶಿಪ್&zwnj;ನ ಪ್ರಮುಖ ಆಕರ್ಷಣೆ ಎನಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಕಿರ್ಗಿಸ್ತಾನ, ಫಿಲಿಪ್ಪೀನ್ಸ್&zwnj;, ಶ್ರೀಲಂಕಾ, ಥಾಯ್ಲೆಂಡ್&zwnj;ನ ಸ್ಪರ್ಧಿಗಳೂ ಭಾಗವಹಿಸಲಿದ್ದಾರೆ. ಅಫ್ಘಾನಿಸ್ತಾನದ ಕೆಲ ಸ್ಪರ್ಧಿಗಳೂ ಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.&lt;/p&gt;&lt;p&gt;ಚಾಂಪಿಯನ್&zwnj;ಶಿಪ್&zwnj;ನಲ್ಲಿ 100 ಮೀಟರ್&zwnj;, 200 ಮೀಟರ್&zwnj;, 400 ಮೀಟರ್&zwnj;, 800 ಮೀಟರ್&zwnj;, 1500 ಮೀಟರ್&zwnj;, ಹೈಜಂಪ್&zwnj;, ಲಾಂಗ್&zwnj; ಜಂಪ್&zwnj;, ಡಿಸ್ಕಸ್&zwnj; ಎಸೆತ, ಶಾಟ್&zwnj;ಪುಟ್&zwnj;, ಜಾವೆಲಿನ್&zwnj; ಥ್ರೋ, ಕ್ಲಬ್&zwnj; ಥ್ರೋ ಸೇರಿದಂತೆ ಪುರುಷ ಹಾಗೂ ಮಹಿಳೆಯರ ಒಟ್ಟು 155 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.&lt;/p&gt;&lt;p&gt;ಬಳಿಕ ಮಾತನಾಡಿದ ಸುಮಿತ್&zwnj; ಅಂಟಿಲ್&zwnj; ಅವರು ಏಷ್ಯನ್&zwnj; ಪ್ಯಾರಾ ಗೇಮ್ಸ್&zwnj;ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಹಿಂದೆಂದಿಗಿಂತ ಈ ವರ್ಷ ಹೆಚ್ಚಿನ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಏಷ್ಯನ್&zwnj; ಪ್ಯಾರಾ ಗೇಮ್ಸ್&zwnj;ನಲ್ಲಿ ಭಾರತ 108 ಪದಕಗಳನ್ನು ಗೆದ್ದಿತ್ತು. ಈ ಬಾರಿ ಭಾರತೀಯ ಕ್ರೀಡಾಪಟುಗಳು ಮತ್ತಷ್ಟು ಪದಕ ಸಾಧನೆ ಮಾಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಹೈಯರ್&zwnj; ಇಂಡಿಯಾ ಸಂಸ್ಥೆಯ ಅಧ್ಯಕ್ಷ ಎನ್&zwnj;.ಎಸ್&zwnj;.ಸತೀಶ್&zwnj;, ಭಾರತೀಯ ಪ್ಯಾರಾಲಿಂಪಿಕ್ಸ್&zwnj; ಸಮಿತಿಯ ಮುಖ್ಯಸ್ಥ ಡಾ.ಸತ್ಯನಾರಾಯಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.&lt;/p&gt;&lt;h2&gt;ಕರ್ನಾಟಕದ 15 ಪ್ಯಾರಾ ಅಥ್ಲೀಟ್&zwnj;ಗಳು ಭಾಗಿ&lt;/h2&gt;&lt;p&gt;ಚಾಂಪಿಯನ್&zwnj;ಶಿಪ್&zwnj;ನಲ್ಲಿ ಕರ್ನಾಟಕದ 15 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಮಂಜುಳಾ, ಭಾರತಿ ಭಾರತೇಶ್&zwnj;, ಗಂಗವ್ವ ನೀಲಪ್ಪ, ಹರ್ಷಿತಾ, ಶೈಲಾ ಶಿಲ್ಪಾ, ಮೇಧಾ ಜಯಂತ್, ರಾಧಾ ವೆಂಕಟೇಶ್, ರಕ್ಷಿತಾ ರಾಜು, ಸೌಮ್ಯ, ಬಸವರಾಜ ಕುರುಬ, ಸಚ್ಚಿದಾನಂದ ದೇವಾಡಿಗ, ಗುರುರಾಜು, ಶಂಕರಪ್ಪ ಶರತ್, ರಕ್ಷಿತ್ ಹೊಸನಗರ ಸೋಮಶೇಖರ, ಸಿದ್ದಾರ್ಥ್ ಮಂಜುನಾಥ್ ಸ್ಪರ್ಧಿಸಲಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>other-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/other-sports/bengaluru-set-to-host-international-para-athletics-event-from-may-26th/articleshow-y5qplx4"/>
        </item>
        <item>
            <title><![CDATA[ಏಷ್ಯಾ ಸೀರೀಸ್‌ ರೇಸಿಂಗ್‌ನಲ್ಲಿ ಭಾರತದ ಉದಯೋನ್ಮುಖ ರೇಸರ್‌ ಕಿಯಾನ್‌ ಶಾ ಪೋಡಿಯಂ ಫಿನಿಶ್‌]]></title>
            <link>https://kannada.asianetnews.com/other-sports/mumbai-teen-kiaan-shah-shines-with-double-podium-on-senior-international-debut-in-asia-series/articleshow-yqhv609</link>
            <guid isPermaLink="true">https://kannada.asianetnews.com/other-sports/mumbai-teen-kiaan-shah-shines-with-double-podium-on-senior-international-debut-in-asia-series/articleshow-yqhv609</guid>
            <pubDate>Fri, 03 Apr 2026 23:59:32 +0530</pubDate>
            <description><![CDATA[&lt;p&gt;ಏಷ್ಯಾ ಸೀರೀಸ್&zwnj; ರೇಸಿಂಗ್&zwnj;ನಲ್ಲಿ ಭಾರತದ ಉದಯೋನ್ಮುಖ ರೇಸರ್&zwnj; ಕಿಯಾನ್&zwnj; ಶಾ ಪೋಡಿಯಂ ಫಿನಿಶ್&zwnj;, ಅಂ.ರಾ.ರೇಸಿಂಗ್&zwnj;ನ ಹಿರಿಯರ ವಿಭಾಗದಲ್ಲಿ ಚೊಚ್ಚಲ ರೇಸ್&zwnj;ನಲ್ಲೇ ಮಿಂಚಿದ ರಾಯೊ ರೇಸಿಂಗ್&zwnj; ತಂಡದ ಚಾಲಕನ ಸಾಧನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kna9ptn8gccn5xsv8x32aas7,imgname-asia-series-1775240964776.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಏ.03)&lt;/strong&gt; ಭಾರತದ ಉದಯೋನ್ಮುಖ ರೇಸರ್&zwnj;, ರಾಯೊ ರೇಸಿಂಗ್&zwnj;ನ ಕಿಯಾನ್&zwnj; ಶಾ, ಅಂತಾರಾಷ್ಟ್ರೀಯ ರೇಸಿಂಗ್&zwnj;ನ ಹಿರಿಯರ ವಿಭಾಗಕ್ಕೆ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಐಎಎಂಇ ಏಷ್ಯಾ ಸೀರೀಸ್&zwnj; ಹಾಗೂ ಐಎಎಂಇ ಥಾಯ್ಲೆಂಡ್&zwnj; ಸೀರೀಸ್&zwnj;ನ ರೇಸ್&zwnj;ನಲ್ಲಿ 3ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಭಾನುವಾರ ರಾತ್ರಿ ನಡೆದ ರೇಸ್&zwnj;ನಲ್ಲಿ ಮುಂಬೈನ 15 ವರ್ಷದ ಕಿಯಾನ್&zwnj;, ಪೋಡಿಯಂ ಫಿನಿಶ್&zwnj; ಮಾಡಿದರು. ಕಳೆದ ಡಿಸೆಂಬರ್&zwnj;ನಲ್ಲಿ ಸ್ನೋಬೋರ್ಡಿಂಗ್&zwnj; ವೇಳೆ ಮೊಣಕೈ ಮುರಿದುಕೊಂಡಿದ್ದ ಕಿಯಾನ್&zwnj;ಗೆ ಈ ರೇಸ್&zwnj; ವೇಳೆಗೆ ಸಂಪೂರ್ಣವಾಗಿ ಚೇತರಿಕೆ ಕಾಣುವುದು ಸವಾಲಾಗಿ ಪರಿಣಮಿಸಿತ್ತು. 2 ತಿಂಗಳ ಕಾಲ ರೇಸಿಂಗ್&zwnj;ನಿಂದ ದೂರ ಉಳಿದಿದ್ದ ಕಿಯಾನ್&zwnj;, ಛಲ ಬಿಡದೆ ಸಮಯಕ್ಕೆ ಸರಿಯಾಗಿ ಫಿಟ್&zwnj; ಆಗಿ ರೇಸ್&zwnj;ಗೆ ಕಾಲಿಟ್ಟರು.&lt;/p&gt;&lt;h2&gt;ಕಿರಿಯರ ವಿಭಾಗದಿಂದ ಬಡ್ತಿ&lt;/h2&gt;&lt;p&gt;ಕಿರಿಯರ ವಿಭಾಗದಿಂದ ಬಡ್ತಿ ಪಡೆದ ಕಿಯಾನ್&zwnj;, ಭಾರೀ ಪೈಪೋಟಿಯಿಂದ ಕೂಡಿದ್ದ ಕಣಕ್ಕೆ ಧುಮುಕಿದರು. ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್&zwnj;, ಏಷ್ಯನ್&zwnj; ಹಾಗೂ ಯುರೋಪಿಯನ್&zwnj; ಚಾಂಪಿಯನ್&zwnj;ಗಳಿದ್ದರು. ಇವರೆಲ್ಲರ ಜೊತೆ ಸ್ಪರ್ಧಿಸಿ ಕಿಯಾನ್&zwnj; ಪೋಡಿಯಂ ಫಿನಿಶ್&zwnj; ಮಾಡಿದರು. ಹೀಟ್ಸ್&zwnj;ನಲ್ಲಿ ಗಮನ ಸೆಳೆದ ಕಿಯಾನ್&zwnj;, ಫೈನಲ್&zwnj; ರೇಸ್&zwnj;ನ ಗ್ರಿಡ್&zwnj;ನಲ್ಲಿ 14ನೇ ಸ್ಥಾನ ಪಡೆದರು. ರೇಸ್&zwnj;ನಲ್ಲಿ ತಮ್ಮ ಕೌಶಲ್ಯಗಳ ಪ್ರದರ್ಶನ ಮಾಡಿದ ಕಿಯಾನ್&zwnj;, 5ನೇ ಸ್ಥಾನ ಗಳಿಸಿದರು. ಹಾಲಿ ಏಷ್ಯನ್&zwnj; ಚಾಂಪಿಯನ್&zwnj; ಹಾಂಕಾಂಗ್&zwnj;ನ ಯು ಕಾ ಪೋಗಿಂತ ಕೇವಲ 1.6 ಸೆಕೆಂಡ್&zwnj; ಹಿಂದೆ ಉಳಿದರು. ಈ ಸ್ಪರ್ಧೆಯಲ್ಲಿ ಅಗ್ರ 5 ಸ್ಥಾನ ಪಡೆಯುವ ಚಾಲಕರನ್ನು ಪೋಡಿಯಂ ಫಿನಿಶರ್ಸ್&zwnj; ಎಂದು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ಇದೇ ರೇಸ್&zwnj; ಥಾಯ್ಲೆಂಡ್&zwnj; ಸೀರೀಸ್&zwnj; ಆಗಿಯೂ ಕರೆಯಲ್ಪಿಟ್ಟಿತು. ಅಗ್ರ-5ರಲ್ಲಿ ಇಬ್ಬರು ರೇಸರ್&zwnj;ಗಳು ಸೀರೀಸ್&zwnj;ಗೆ ಪ್ರವೇಶಿಸದ ಕಾರಣ, ಕಿಯಾನ್&zwnj;ಗೆ 3ನೇ ಸ್ಥಾನ ದೊರೆಯಿತು. ಸಿಂಗಾಪುರದ ರಾಷ್ಟ್ರೀಯ ಚಾಂಪಿಯನ್&zwnj; ದಿಲ್ಲಾನ್&zwnj; ಟಾನ್ ಹಾಗೂ 8 ಬಾರಿ ಥಾಯ್&zwnj; ಚಾಂಪಿಯನ್&zwnj; ಟೋಬಿ ಗೇಲ್&zwnj; ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಗಳಿಸಿದರು.&lt;/p&gt;&lt;p&gt;ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಕಿಯಾನ್&zwnj;, &lsquo;ಕಳೆದ 3 ತಿಂಗಳು ಬಹಳ ಕಷ್ಟಕರವಾಗಿದ್ದವು. ನನಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ನನ್ನ ಟ್ರೈನರ್&zwnj; ರೋಹನ್&zwnj;ರ ಪರಿಶ್ರಮದಿಂದಾಗಿ ನಾನು ಹಿರಿಯರ ವಿಭಾಗದಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಯಿತು&rsquo; ಎಂದಿದ್ದಾರೆ. ಕಿಯಾನ್&zwnj;ರ ಕೋಚ್&zwnj; ಹಾಗೂ ಮಾರ್ಗದರ್ಶಕ ರಾಯೊಮಂಡ್&zwnj; ಬನಾಜಿ ಮಾತನಾಡಿ, &lsquo;ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ ಚೊಚ್ಚಲ ರೇಸ್&zwnj;ನಲ್ಲೇ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ್ದಾರೆ. ಅಂಥ ಅತ್ಯುತ್ತಮ ರೇಸರ್&zwnj;ಗಳ ಜೊತೆ ಸ್ಪರ್ಧಿಸಿ, ಪೋಡಿಯಂ ಫಿನಿಶ್&zwnj; ಮಾಡಿದ್ದು ಬಹಳ ಖುಷಿ ತಂದಿದೆ&rsquo; ಎಂದಿದ್ದಾರೆ.&lt;/p&gt;&lt;p&gt;ಗಾಯದ ಕಾರಣ ಏಷ್ಯಾ ಸೀರೀಸ್&zwnj;ನ ಮೊದಲ ಸುತ್ತನ್ನು ತಪ್ಪಿಸಿಕೊಂಡಿದ್ದ ಕಿಯಾನ್&zwnj;, ಆ ನಂತರದ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡರು. ಕಿಯಾನ್&zwnj; ಮುಂಬರುವ ವಾರಗಳಲ್ಲಿ ಥಾಯ್ಲೆಂಡ್&zwnj;ನಲ್ಲೇ ನಡೆಯಲಿರುವ ಏಷ್ಯನ್&zwnj; ರೋಟಾಕ್ಸ್&zwnj; ಹಾಗೂ ಐಎಎಂಇ ಸೀರೀಸ್&zwnj;ನ ಮುಂದಿನ ಎರಡು ಸುತ್ತುಗಳಲ್ಲಿ ಪಾಲ್ಗೊಳ್ಳಲಿದ್ದಾರೆ.&lt;/p&gt;]]></content:encoded>
            <category>other-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/other-sports/mumbai-teen-kiaan-shah-shines-with-double-podium-on-senior-international-debut-in-asia-series/articleshow-yqhv609"/>
        </item>
        <item>
            <title><![CDATA[ಕೇವಲ 1.59 ತಾಸಲ್ಲಿ 42.195 ಕಿಲೋ ಮೀಟರ್ ಮ್ಯಾರಥಾನ್ ಓಡಿದ ಸಾವೆ! ಹೊಸ ವಿಶ್ವದಾಖಲೆ]]></title>
            <link>https://kannada.asianetnews.com/sports/history-made-sebastian-sawe-breaks-2-hour-barrier-at-london-marathon-kvn/articleshow-yyibc77</link>
            <guid isPermaLink="true">https://kannada.asianetnews.com/sports/history-made-sebastian-sawe-breaks-2-hour-barrier-at-london-marathon-kvn/articleshow-yyibc77</guid>
            <pubDate>Mon, 27 Apr 2026 13:02:55 +0530</pubDate>
            <description><![CDATA[ಕೀನ್ಯಾದ ಕ್ರೀಡಾಪಟು ಸಬಾಸ್ಟಿಯನ್&zwnj; ಸಾವೆ ಲಂಡನ್&zwnj; ಮ್ಯಾರಥಾನ್&zwnj;ನಲ್ಲಿ 1 ಗಂಟೆ 59 ನಿಮಿಷ, 30 ಸೆಕೆಂಡ್&zwnj;ಗಳಲ್ಲಿ ಓಟ ಪೂರ್ಣಗೊಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2 ಗಂಟೆಯೊಳಗೆ ಮ್ಯಾರಥಾನ್&zwnj; ಪೂರ್ಣಗೊಳಿಸಿದ ಮೊದಲ ಅಥ್ಲೀಟ್&zwnj; ಎನಿಸಿಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ಎಥಿಯೋಪಿಯಾದ ಟಿಗ್ಸ್ಟ್ ಅಸ್ಸೆಫಾ ಚಾಂಪಿಯನ್&zwnj; ಆಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq6xe4y51b5m6v0qn5bjp16t,imgname-sabastian-sawe-1777274917828.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಂಡನ್&zwnj;: ಕೀನ್ಯಾದ ಕ್ರೀಡಾಪಟು ಸಬಾಸ್ಟಿಯನ್&zwnj; ಸಾವೆ ಅವರು ಮ್ಯಾರಥಾನ್&zwnj;(42.195 ಕಿ.ಮೀ.) ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಲಂಡನ್&zwnj; ಮ್ಯಾರಥಾನ್&zwnj;ನಲ್ಲಿ ಅವರು 1 ಗಂಟೆ 59 ನಿಮಿಷ, 30 ಸೆಕೆಂಡ್&zwnj;ಗಳಲ್ಲಿ ರೇಸ್&zwnj; ಪೂರ್ಣಗೊಳಿಸಿದ್ದಾರೆ. ಈ ಮೂಲಕ ವಿಶ್ವದಾಖಲೆ ಬರೆಯುವುದರ ಜೊತೆಗೆ, 2 ಗಂಟೆಯೊಳಗೆ ರೇಸ್&zwnj; ಪೂರ್ತಿ ಮಾಡಿದ ವಿಶ್ವದ ಮೊದಲ ಅಥ್ಲೀಟ್&zwnj; ಎನಿಸಿಕೊಂಡರು.&lt;/p&gt;&lt;p&gt;2023ರಲ್ಲಿ ಷಿಕಾಗೊ ಮ್ಯಾರಥಾನ್&zwnj;ನಲ್ಲಿ ಕೀನ್ಯಾದ ಕೆಲ್ವಿನ್&zwnj; ಕಿಪ್ಟಮ್&zwnj; 2:00 ಗಂಟೆ, 28 ಸೆಕಂಡ್&zwnj;ಗಳಲ್ಲಿ ಕ್ರಮಿಸಿದ್ದು ಈವರೆಗೂ ವಿಶ್ವ ದಾಖಲೆಯಾಗಿತ್ತು. ಭಾನುವಾರದ ರೇಸ್&zwnj;ನಲ್ಲಿ ಆ ದಾಖಲೆಯನ್ನು ಮೂವರು ಹಿಂದಿಕ್ಕಿದರು. ಸಾವೆ ಜೊತೆ ರೇಸ್&zwnj;ನಲ್ಲಿ 2ನೇ ಸ್ಥಾನ ಪಡೆದ ಎಥಿಯೋಪಿಯಾದ ಯೊಮಿಫ್&zwnj; 1 ಗಂಟೆ 59 ನಿಮಿಷ 41 ಸೆಕೆಂಡ್&zwnj;ಗಳಲ್ಲಿ ಕ್ರಮಿಸಿ, 2 ಗಂಟೆಯೊಳಗೆ ರೇಸ್&zwnj; ಪೂರ್ಣಗೊಳಿಸಿದ 2ನೇ ಅಥ್ಲೀಟ್&zwnj; ಎನಿಸಿಕೊಂಡರು. ಉಗಾಂಡದ ಜಾಕಬ್&zwnj; ಕಿಪಿಲಿಮೊ 2 ಗಂಟೆ 00 ನಿಮಿಷ 21 ಸೆಕೆಂಡ್&zwnj;ಗಳಲ್ಲಿ ಕ್ರಮಿಸಿ 3ನೇ ಸ್ಥಾನಿಯಾದರು.&lt;/p&gt;&lt;p&gt;29 ವರ್ಷದ ಸಾವೆ ಲಂಡನ್&zwnj;ನಲ್ಲಿ ಸತತ 2ನೇ ಬಾರಿ ಮ್ಯಾರಥಾನ್&zwnj; ಗೆದ್ದರು. ಕಳೆದ ವರ್ಷ ಅವರು 2 ಗಂಟೆ, 02 ನಿಮಿಷ, 27 ಸೆಕೆಂಡ್&zwnj;ಗಳಲ್ಲಿ ಕ್ರಮಿಸಿ ಚಾಂಪಿಯನ್&zwnj; ಆಗಿದ್ದರು. ಈ ಬಾರಿ ತಮ್ಮ ದಾಖಲೆ ಉತ್ತಮಪಡಿಸಿಕೊಂಡರು.&lt;/p&gt;&lt;p&gt;HISTORY HAS BEEN MADE Sabastian Sawe becomes the first person ever to break the 2-hour barrier in official race conditions, storming to a historic 1:59:30‼️@KejelchaYomif, on his marathon debut, also breaks 2 hours with a stunning 1:59:41 and @jacobkiplimo2 clocks 2:00:28,&hellip; pic.twitter.com/YN1NsdKCDo&lt;/p&gt;&lt;p&gt;&mdash; World Athletics (@WorldAthletics) April 26, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಮಹಿಳಾ ಮ್ಯಾರಥಾನ್&zwnj;: ಅಸ್ಸೆಫಾ ಚಾಂಪಿಯನ್&zwnj;&lt;/strong&gt;&lt;/h2&gt;&lt;p&gt;ಲಂಡನ್&zwnj; ಮ್ಯಾರಥಾನ್&zwnj;ನ ಮಹಿಳಾ ರೇಸ್&zwnj;ನಲ್ಲಿ ಎಥಿಯೋಪಿಯಾದ ಟಿಗ್ಸ್ಟ್ ಅಸ್ಸೆಫಾ ತಮ್ಮದೇ ಹೆಸರಲ್ಲಿದ್ದ ದಾಖಲೆ ಉತ್ತಮಪಡಿಸಿಕೊಂಡರು. ಅವರು 2 ಗಂಟೆ 15 ನಿಮಿಷ, 41 ಸೆಕೆಂಡ್&zwnj;ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಒಲಿಂಪಿಕ್&zwnj; ಚಾಂಪಿಯನ್&zwnj;, ಕೀನ್ಯಾದ ಹೆಲೆನ್&zwnj; ಒಬಿರಿ ಹಾಗೂ ಜೋಸಿಲಿನ್&zwnj; ಕ್ರಮವಾಗಿ ಬೆಳ್ಳಿ, ಕಂಚು ತಮ್ಮದಾಗಿಸಿಕೊಂಡರು.&lt;/p&gt;&lt;h3&gt;--&lt;strong&gt;25 ಬಾರಿ ಡೋಪ್&zwnj; ಟೆಸ್ಟ್&zwnj;ಗೆ ಒಳಗಾಗಿದ್ದ ಸಬಾಸ್ಟಿಯನ್&zwnj;!&lt;/strong&gt;&lt;/h3&gt;&lt;p&gt;ಕೀನ್ಯಾದಲ್ಲಿ ಉದ್ದೀಪನ ಮದ್ದು ಸೇವನೆ ಪ್ರಮಾಣ ಹೆಚ್ಚಿದ್ದು, ಅಥ್ಲೀಟ್&zwnj;ಗಳು ಡೋಪಿಂಗ್&zwnj;ನಲ್ಲಿ ಸಿಕ್ಕಿಬೀಳುವುದು ಸಾಮಾನ್ಯ. ಆದರೆ ಸಬಾಸ್ಟಿಯನ್&zwnj; ನಿಷೇಧಿತ ಮದ್ದು ಸೇವನೆಯಿಂದ ದೂರ ಉಳಿಯುವುದಕ್ಕಾಗಿ ಕಳೆದ ವರ್ಷ ಬರ್ಲಿನ್&zwnj; ಮ್ಯಾರಥಾನ್&zwnj;ಗೂ ಮುನ್ನ 25 ಬಾರಿ ಡೋಪ್&zwnj; ಟೆಸ್ಟ್&zwnj;ಗೆ ಒಳಗಾಗಿದ್ದರು. ಪ್ರತಿ ವಾರಕ್ಕೆ 2 ಬಾರಿಯಂತೆ ತಮ್ಮ ರಕ್ತ ಹಾಗೂ ಮೂತ್ರವನ್ನು ಪರೀಕ್ಷೆಗೆ ನೀಡುತ್ತಿದ್ದರು. ಈ ಬಾರಿ ಲಂಡನ್&zwnj; ಮ್ಯಾರಥಾನ್&zwnj;ಗೂ ಮುನ್ನ ಕೂಡಾ ಅವರು ಇದೇ ರೀತಿ ಮಾಡಿ, ಡೋಪಿಂಗ್&zwnj;ನಿಂದ ದೂರ ಉಳಿದಿದ್ದಾರೆ. ಅಥ್ಲೀಟ್&zwnj;ಗಳನ್ನು ಸ್ಪರ್ಧೆಗಳ ಸಮಯದಲ್ಲಿ ಡೋಪ್&zwnj; ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಸಬಾಸ್ಟಿಯನ್&zwnj; ಸಾಮಾನ್ಯ ದಿನಗಳಲ್ಲೂ ಡೋಪ್&zwnj; ಪರೀಕ್ಷೆಗೆ ಒಳಗಾಗುತ್ತಿದ್ದರು.&lt;/p&gt;&lt;h3&gt;&lt;strong&gt;ಸಾವೆ ಕ್ರಮಿಸಿದ ದೂರ&lt;/strong&gt;&lt;/h3&gt;&lt;p&gt;&lt;strong&gt;ದೂರ ಸಮಯ&lt;/strong&gt;&lt;/p&gt;&lt;p&gt;5 ಕಿ.ಮೀ. 14:14 ನಿಮಿಷ&lt;/p&gt;&lt;p&gt;10 ಕಿ.ಮೀ. 28:35 ನಿಮಿಷ&lt;/p&gt;&lt;p&gt;15 ಕಿ.ಮೀ. 43:10 ನಿಮಿಷ&lt;/p&gt;&lt;p&gt;20 ಕಿ.ಮೀ. 57:21 ನಿಮಿಷ&lt;/p&gt;&lt;p&gt;25 ಕಿ.ಮೀ. 1:11:41 ನಿಮಿಷ&lt;/p&gt;&lt;p&gt;30 ಕಿ.ಮೀ. 1:26:03 ನಿಮಿಷ&lt;/p&gt;&lt;p&gt;35 ಕಿ.ಮೀ. 1:39:57 ನಿಮಿಷ&lt;/p&gt;&lt;p&gt;40 ಕಿ.ಮೀ. 1:53:39 ನಿಮಿಷ&lt;/p&gt;&lt;p&gt;42.2 ಕಿ.ಮೀ. 1:59:30 ನಿಮಿಷ&lt;/p&gt;]]></content:encoded>
            <category>other-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/history-made-sebastian-sawe-breaks-2-hour-barrier-at-london-marathon-kvn/articleshow-yyibc77"/>
        </item>
    </channel>
</rss>
