<?xml version="1.0" encoding="UTF-8" standalone="yes"?>
<rss version="2.0" xmlns:atom="http://www.w3.org/2005/Atom" xmlns:content="http://purl.org/rss/1.0/modules/content/" xmlns:media="http://search.yahoo.com/mrss/">
    <channel>
        <title>Asianet Suvarna News</title>
        <link>https://kannada.asianetnews.com</link>
        <description>Suvarna News - No.1 News channel in Karnataka, which delivers Local and International news in Kannada language.</description>
        <image>
            <url>https://static.asianetnews.com/v1/images/asianet_suvarna_news.png</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 13 Feb 2021 07:46:00 +0530</lastBuildDate>
        <atom:link href="https://kannada.asianetnews.com/rss/nri" rel="self" type="application/rss+xml"/>
        <item>
            <title>ಆಕ್ಸ್‌ಫರ್ಡ್‌ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಕನ್ನಡತಿ ರಶ್ಮಿ ಸಾವಂತ್‌</title>
            <link>https://kannada.asianetnews.com/nri/karnataka-based-rashmi-samanth-elected-as-oxford-vv-student-union-president-snr-qog2hy</link>
            <guid>https://kannada.asianetnews.com/nri/karnataka-based-rashmi-samanth-elected-as-oxford-vv-student-union-president-snr-qog2hy</guid>
            <pubDate>Sat, 13 Feb 2021 07:21:00 +0530</pubDate>
            <description>ಉಡುಪಿ (ಫೆ.13): &amp;nbsp;ಮಣಿಪಾಲ ಮಾಹೆ ವಿವಿಯ ಎಂಐಟಿಯ ಹಳೆವಿದ್ಯಾರ್ಥಿನಿ ಎಂ.ಎಸ್‌. ರಶ್ಮಿ ಸಾಮಂತ್‌ ಅವರು ಲಂಡನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿವಿಯ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾಗಿ ಆಯ್ಕೆಯಾಗಿ ಇತಿಹಾಸವನ್ನು ಬರೆದಿದ್ದಾರೆ. ಅವರು ಆಕ್ಸ್‌ಫರ್ಡ್‌ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.  ಎಂಐಟಿಯಲ್ಲಿ 2016ರಿಂದ 2020ರವರೆಗೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿರುವ ಪ್ರಸ್ತುತ ಆಕ್ಸ್‌ಫರ್ಡ್‌ ವಿವಿಯ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್‌ ಎಂಬ ವಿಷಯದಲ್ಲಿ ಎಂಎಸ್ಸಿ ಪದವಿ ವಿದ್ಯಾರ್ಥಿಯಾಗಿದ್ದಾರೆ.  ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಿವಿಯ ಪರಿಸರದಲ್ಲಿರುವ ಕ್ರಿಸ್ಟೋಫರ್‌ ಕೊಡ್ರಿಂಗ್ಟನ್‌ ಸೇರಿದಂತೆ ಸಾಮ್ರಾಜ್ಯಶಾಹಿಯ ಎಲ್ಲ ಪ್ರತಿಮೆಗಳನ್ನು ತೆಗೆದುಹಾಕುವ, ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್‌ ಸಾಂಕ್ರಾಮಿಕದ ಸಂಪೂರ್ಣ ನಿಯಂತ್ರಣದ ಘೋಷಣೆವರೆಗೆ ವಿದ್ಯಾರ್ಥಿಗಳ ವಲಸೆ ನಿಯಮಗಳನ್ನು ಸಡಿಲಿಸುವ, ಮಾನಸಿಕ ಆರೋಗ್ಯ ಕಾರ್ಯಯೋಜನೆಗೆ ಹೆಚ್ಚಿನ ಹಣಕ್ಕಾಗಿ ಲಾಬಿ ನಡೆಸುವ ಮತ್ತು ಶೀಘ್ರವೇ ಕಾಲೇಜು ಕ್ಯಾಂಪಸ್‌ನಿಂದ ಪರಿಸರಕ್ಕೆ ಮಾರಕವಾದ ಇಂಧನಗಳನ್ನು ದೂರ ಮಾಡುವ ನಾಲ್ಕು ಭರವಸೆಗಳನ್ನು ನೀಡಿದ್ದರು.  ನಮ್ಮ ಪ್ರಾರ್ಥನೆಗೆ ಸ್ಪಂದಿಸಿದ ಮೋದಿಗೆ ಧನ್ಯವಾದ; ಡೋಮಿನಿಕ ಪ್ರಧಾನಿ ಮನದಾಳ! ..  ಚುನಾವಣೆಯಲ್ಲಿ ಒಟ್ಟು 4 ಮಂದಿ ಸ್ಪರ್ಧಿಸಿದ್ದು, ರಶ್ಮಿ ಅವರು ಒಟ್ಟು 3708 ಮತಗಳಲ್ಲಿ 1966 (ಶೇ.53) ಮತಗಳನ್ನು ಗಳಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರು ಗಳಿಸಿದ ಒಟ್ಟು ಮತಗಳು ಇತರ ಮೂರು ಮಂದಿ ಗಳಿಸಿ ಒಟ್ಟು ಮತಗಳಿಗಿಂತಲೂ ಹೆಚ್ಚಾಗಿದ್ದವು. ರಶ್ಮಿ ಅವರು ಅವರು ಮಣಿಪಾಲದ ವತ್ಸಲ ಸಾಮಂತ್‌ ಮತ್ತು ದಿನೇಶ್‌ ಸಾಮಂತ್‌ ಅವರ ಪುತ್ರಿ, ಎಂಐಟಿಯಲ್ಲಿ ವ್ಯಾಸಂಗ ಮಾಡುವಾಗ ವಿದ್ಯಾರ್ಥಿ ಸಂಘದ ತಾಂತ್ರಿಕ ಕಾರ್ಯದರ್ಶಿಯಾಗಿ, ನಾಯಕತ್ವ ಮತ್ತು ಉತ್ಸಾಹಭರಿತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರು. ಮಾಹೆಯಲ್ಲಿ ಮಣಿಪಾಲ್‌ ಹ್ಯಾಕಥಾನ್‌ ಎಂಬ ಅಂತರಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಗಳನ್ನು ಆರಂಭಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ಎಂಐಟಿಯ ಪ್ರಕಟಣೆ ತಿಳಿಸಿದೆ. </description>
            <media:content height="400" width="760" medium="image" url="https://static.asianetnews.com/images/01eycha64cyhynvqn2vkg6rras/061c89de-156a-455e-b39b-bb15a98509be--43--jpg_760x400.jpg"/>
        </item>
        <item>
            <title>ಅಮೆರಿಕಾದ ಶಾಲೆಯಲ್ಲಿ ಕನ್ನಡದ ಕಲರವ: ವಿದೇಶಿ ಭಾಷೆಯಾಗಿ ಕನ್ನಡ ಕಲಿಕೆ!</title>
            <link>https://kannada.asianetnews.com/nri/kannada-included-as-foreign-language-learning-usa-school-pod-ql7w7l</link>
            <guid>https://kannada.asianetnews.com/nri/kannada-included-as-foreign-language-learning-usa-school-pod-ql7w7l</guid>
            <pubDate>Sat, 12 Dec 2020 13:44:00 +0530</pubDate>
            <description>ವಾಷಿಂಗ್ಟನ್(ಡಿ.12):&amp;nbsp;ಕರ್ನಾಟಕದಲ್ಲಿ ಕನ್ನಡ ಬಳಕೆ ಕಡಿಮೆಯಾಗಿ ಇತರ ಭಾಷೆಗಳ ಅಧಿಪತ್ಯ ಹೆಚ್ಚಾಗುತ್ತಿದೆ ಎಂಬ ಕೂಗಿನ ನಡುವೆಯೇ&amp;nbsp;ಅಮೆರಿಕಾದ ಶಾಲೆಯಲ್ಲಿ ಮೊದಲ ಬಾರಿಗೆ ವಿದೇಶಿ ಭಾಷೆಯಾಗಿ ಕನ್ನಡ ಕಲಿಯಲು ಅವಕಾಶ ನೀಡಲಾಗಿದೆ. ಇದು ಕನ್ನಡಿಗರು ಹಾಗೂ ಕರ್ನಾಟಕದ ಮಂದಿಗೆ ಹೆಮ್ಮೆ ಪಡುವಂತಹ ವಿಚಾರವಾಗಿದೆ.  ಕನ್ನಡದಲ್ಲೂ ಇನ್ನು ಎಂಜಿನಿಯರಿಂಗ್: ಐಐಟಿ, ಎನ್‌ಐಟಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ!  ಉತ್ತರ ಅಮೆರಿಕಾ ನಾರ್ತ್ ಕೆರೋಲಿನಾ ರಾಜ್ಯದ ರಾಜಧಾನಿ ರೇಲಿಗ್ ಭಾಗದ ಪ್ರಸಿದ್ದ ಶಾಲೆ ವೇಕ್ ಕೌಂಟಿ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡವನ್ನು ವಿದೇಶೀ ಭಾಷೆಯಾಗಿ ಕಲಿಯಲು ಅವಕಾಶ ನೀಡಿದೆ.  ಅಲರ್: ಕನ್ನಡ ಪದಗಳ ಹುಡುಕಾಟಕ್ಕೊಂದು ಆನ್‌ಲೈನ್ ತಾಣ..!  ಅಮೆರಿಕಾದಲ್ಲಿ ಈ ಪ್ರೌಢಶಾಲೆಯಲ್ಲಿ ಕನ್ನಡವನ್ನು &amp;nbsp;ಕಲಿಸುವುದು ಗ್ರೇಡ್ ಪಾಯಿಂಟ್ ರಹಿತವೆಂದು ಅನುಮೋದಿಸಿದೆ.&amp;nbsp;ಶಾಲೆಯ ಈ ನಿರ್ಧಾರಕ್ಕೆ ಎಲ್ಲೆಡೆಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಮೆರಿಕದಲ್ಲಿರುವ ಕನ್ನಡಿಗರಿಗೂ ಇದು ಖುಷಿ ಕೊಟ್ಟಿದೆ. </description>
            <media:content height="400" width="760" medium="image" url="https://static.asianetnews.com/images/01esb0556es68q76bycvvm21y5/frame-new--98--jpg_760x400.jpg"/>
        </item>
        <item>
            <title>ಅಮೆರಿಕಾದಲ್ಲಿ ನಟಿ ಮೇಘನಾ ಗಾಂವ್ಕರ್ ಜಾಲಿಟ್ರಿಪ್‌!</title>
            <link>https://kannada.asianetnews.com/nri/kannada-actress-meghana-gaonkar-jolly-trip-to-america-vcs-qjtmim</link>
            <guid>https://kannada.asianetnews.com/nri/kannada-actress-meghana-gaonkar-jolly-trip-to-america-vcs-qjtmim</guid>
            <pubDate>Sun, 15 Nov 2020 10:14:00 +0530</pubDate>
            <description>ಇದಕ್ಕೂ ಹಿಂದೆ ತಮ್ಮ ಪಾರ್ಸ್‌ಪೋರ್ಟ್‌ ಫೆäಟೋ ಟ್ವೀಟ್‌ ಮಾಡಿದ್ರು. ಜೊತೆಗೆ ‘ಅಂತೂ ಇಂತೂ 2020 ರಲ್ಲಿ ಪಾಸ್‌ಪೋರ್ಟ್‌ ಮೇಲೆ ಒಂದು ಸ್ಟಾಂಪ್‌ ಬಿತ್ತು’ ಅನ್ನೋ ಕನ್ನಡದ ಒಕ್ಕಣೆ ಇತ್ತು. ಏನಿದರ ಹಿಂದಿನ ಕಥೆ ಅಂತ ಮೇಘನಾಗೆ ಫೋನ್‌ ಹಚ್ಚಿದರೆ ಅವರು ಅಮೆರಿಕಾದಲ್ಲಿ ಸೂರ್ಯೋದಯ ನೋಡ್ತಾ ಇದ್ರು! ಯಾಕೆ, ಏನು, ಎತ್ತ ಅನ್ನೋದನ್ನು ಮೇಘನಾ ಹೇಳಿದ್ದು ಹೀಗೆ..  ಕೋವಿಡ್‌ ಟೈಮ್‌ನಲ್ಲಿ ಮೇಘನಾ ಗಾಂವ್ಕರ್‌ ಅಮೆರಿಕಾದಲ್ಲಿ!&amp;nbsp;  ಡಿಸ್ಟರ್ಬೆನ್ಸ್‌ನಿಂದ ಆಚೆ ಬರಬೇಕಿತ್ತು  ಯುಎಸ್‌ಎನಲ್ಲಿ ನನ್ನ ತಂಗಿ ಮನೆ ಇದೆ. ಅವಳು ಫ್ಯಾಮಿಲಿಯನ್ನು ಬಹಳ ಮಿಸ್‌ ಮಾಡ್ತಿದ್ಲು. ಹಾಗಾಗಿ ನಾನು ಹೊರಟು ಬಂದೆ. ಜೊತೆಗೆ ನಾನೀಗ ಪಿಎಚ್‌ಡಿ ಮಾಡ್ತಿದ್ದೀನಿ. ಬಹಳ ಸ್ಟಡೀ ಮಾಡೋದಿದೆ. ಅದಕ್ಕೆ ತಕ್ಕಂಥಾ ಪ್ರಶಾಂತ ವಾತಾವರಣ ಇಲ್ಲಿದೆ. ಬೆಂಗ್ಳೂರಲ್ಲಿ ತುಂಬ ಡಿಸ್ಟರ್ಬೆನ್ಸ್‌ ಇತ್ತು. ಓದೋದು ಕಷ್ಟಆಗ್ತಿತ್ತು.                     View this post on Instagram                                   A post shared by Meghana Gaonkar (@meghanagaonkar)     ಕೋವಿಡ್‌ ಭಯದಲ್ಲಿ ಫ್ಲೈಟ್‌ ಫುಲ್‌ ಜನ  ನಾನೊಬ್ಳೇ ಬೆಂಗಳೂರಿಂದ ಅಮೆರಿಕಾಗೆ ಬಂದೆ. ಸುಮಾರು ಒಂಭತ್ತೂವರೆ ಗಂಟೆಗೂ ಹೆಚ್ಚು ಮಾಸ್ಕ್‌ ಹಾಕ್ಕೊಂಡೇ ಇದ್ದದ್ದು ಹೊಸ ಅನುಭವ. ಜೀವಮಾನದಲ್ಲಿ ಯಾವತ್ತೂ ಇಷ್ಟುಹೊತ್ತು ಮಾಸ್ಕ್‌ ಹಾಕ್ಕೊಂಡಿದ್ದಿಲ್ಲ. ಸುಮಾರು ಹೊತ್ತು ಒದ್ದಾಡಿದೆ, ಆಮೇಲೆ ಅಡ್ಜೆಸ್ಟ್‌ ಆಯ್ತು. ಮತ್ತೊಂದು ವಿಷಯ ಅಂದರೆ ಜನ ಕೋವಿಡ್‌ ಬಗ್ಗೆ ಅಂಥಾ ಭಯದಲ್ಲಿದ್ದ ಹಾಗೆ ಕಾಣಲಿಲ್ಲ. ಏರ್‌ಪೋರ್ಟ್‌ನಲ್ಲಿ ಎಂದಿನ ರಶ್‌ ಇತ್ತು. ಆದರೆ ಎಲ್ಲರೂ ಮಾಸ್ಕ್‌ ಹಾಕ್ಕೊಂಡಿದ್ರು ಅನ್ನೋದಷ್ಟೇ ವ್ಯತ್ಯಾಸ. ನಮ್ಮ ಫ್ಲೈಟ್‌ ಅಂತೂ ಫುಲ್‌ ಆಗಿತ್ತು. ಇನ್ನೊಂದು ತಿಂಗಳಮಟ್ಟಿಗಂತೂ ಅಮೆರಿಕಾದಿಂದ ಹೊರಡೋ ಯೋಚನೆ ಇಲ್ಲ. ಆಮೇಲೆ ಗೊತ್ತಿಲ್ಲ.  ಬರ್ತಿದೆ ಕರ್ವ-3; ಭಯ ಹುಟ್ಟಿಸುವ ಅವತಾರದಲ್ಲಿ ಮೇಘನಾ!&amp;nbsp; &amp;nbsp;                   View this post on Instagram                                   A post shared by Meghana Gaonkar (@meghanagaonkar)     ಶೂಟಿಂಗ್‌ ಕತೆ  ನಮ್ಮ ‘ಕರ್ವ 3’ ಟೀಂ ನವ್ರು ಒಂದು ನಿರ್ಧಾರಕ್ಕೆ ಬಂದಿದ್ದೀವಿ. ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಶುರುವಾದ ಮೇಲೆ ಅದಕ್ಕೆ ಜನರ ಪ್ರತಿಕ್ರಿಯೆ ನೋಡ್ಕೊಂಡು ಶೂಟಿಂಗ್‌ಗೆ ಹೊರಡೋದು ಅಂತ. ಏಕೆಂದರೆ ಅಷ್ಟುಖರ್ಚು ಮಾಡಿ, ಸಿನಿಮಾ ಥಿಯೇಟರ್‌ನಲ್ಲಿ ಓಡಲಿಲ್ಲ ಅಂದರೆ ಅದು ಬಹಳ ದೊಡ್ಡ ನಷ್ಟ. ಅದಕ್ಕಿಂತಲೂ ಅಷ್ಟುಕಷ್ಟಪಟ್ಟು ಮಾಡಿದ ಸಿನಿಮಾ ಜನರನ್ನು ತಲುಪಿಲ್ಲ ಅಂದರೆ ನಮ್ಮ ಪ್ರಯತ್ನಗಳೆಲ್ಲ ನೀರಲ್ಲಿ ಹೋಮ ಮಾಡಿದ ಹಾಗಾಗುತ್ತೆ. ಹೀಗಾಗಿ ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಬದ್ಧವಾಗಿದ್ದೇವೆ. </description>
            <media:content height="400" width="760" medium="image" url="https://static.asianetnews.com/images/01eq53fywy25f6np3zhtmanwdg/106454216-1373563059510834-6423241158972976267-n--82--jpg_760x400.jpg"/>
        </item>
        <item>
            <title>ನಿರ್ದೇಶಕಿ ದೀಪಾ ಮೆಹ್ತಾರ ‘ಫನ್ನಿ ಬಾಯ್‌’ ಕೆನಡಾದಿಂದ ಆಸ್ಕರ್‌ಗೆ ನಾಮನಿರ್ದೇಶನ</title>
            <link>https://kannada.asianetnews.com/nri/deepa-mehta-funny-boy-in-canada-international-film-oscar-entry-vcs-qj278m</link>
            <guid>https://kannada.asianetnews.com/nri/deepa-mehta-funny-boy-in-canada-international-film-oscar-entry-vcs-qj278m</guid>
            <pubDate>Sat, 31 Oct 2020 14:49:00 +0530</pubDate>
            <description>ಲಾಸ್‌ ಏಂಜಲೀಸ್‌: &amp;nbsp;ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ವಿಭಾಗದಲ್ಲಿ ಫನ್ನಿ ಬಾಯ್‌ ಚಿತ್ರ ಆಯ್ಕೆಗೊಂಡಿದೆ.  ಮೆಹ್ತಾ ಮೂಲತಃ ದೆಹಲಿ ಮೂಲದವರಾಗಿದ್ದು, ಟೊರೆಂಟೋದಲ್ಲಿ ನೆಲೆಸಿದ್ದಾರೆ. ಆಸ್ಕರ್‌ ಪ್ರಶಸ್ತಿಗೆ ನಾಮ ನಿರ್ದೇಶನಗೊಳ್ಳುತ್ತಿರುವ ದೀಪಾ ಮಹ್ತಾ ಅವರ 2ನೇ ಚಿತ್ರ ಇದಾಗಿದೆ. 2007ರಲ್ಲಿ ದೀಪಾ ಮೆಹ್ತಾ ನಿರ್ದೇಶನದ ವಾಟರ್‌ ಚಿತ್ರ ಆಸ್ಕರ್‌ ನಾಮನಿರ್ದೇಶನಗೊಂಡಿತ್ತು.&amp;nbsp;  ಲತಾ ಮಂಗೇಶ್ಕರ್‌ ಹಾಗೂ ಎ.ಆರ್. ರೆಹಮಾನ್‌ ಕಾಂಬೀನೆಷನ್‌ನ ಟಾಪ್‌ ಹಾಡುಗಳು!  'ಫನ್ನಿ ಬಾಯ್‌' ಕೆನಡಾ ಲೇಖಕ ಶ್ಯಾಮ್‌ ಸೆಲ್ವದುರೈ' ಅವರ ಕಾದಂಬರಿ ಆಧಾರಿತ ಚಿತ್ರವಾಗಿದೆ. ಕೋಲಂಬೋದ ಶ್ರೀಮಂತ ತಮಿಳು ಕುಟುಂಬದಲ್ಲಿ ಜನಿಸಿದ ಬಾಲಕನೊಬ್ಬನ ಕತೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ.     And the film representing Canada for Best International Feature Film at the #Oscars2021 is …@FunnyBoyTheFilm! Congrats!  Hear director @IamDeepaMehta's reaction when our Executive Director @Christa_D_ called to break the news!  ⚠️Spoiler: this might make you smile. A lot. pic.twitter.com/KWn36muJou — Telefilm Canada (@Telefilm_Canada) October 29, 2020   ಕೆನಡಾದ ಟೆಲಿಫಿಲ್ಮ್‌ ಟ್ಟಿಟರ್‌ ಖಾತೆ ದೀಪಾ ಮೆಹ್ತಾ ಅವರ‌ ಸಿನಿಮಾ ಆಯ್ಕೆ ಆಗಿರುವುದರ ಬಗ್ಗೆ ಮಾಹಿತಿ ನೀಡಿದೆ. 'ಫೆನ್ನಿ ಬಾಯ್‌ ನಮ್ಮ ದೇಶದ ಬಗ್ಗೆ ತುಂಬಾನೇ ಹೇಳುತ್ತದೆ. ಆಯ್ಕೆ ಆಗಿರುವುದಕ್ಕೆ ನಮಗೆ ಸಂತೋಷವಾಗಿದೆ' ಎಂದು. &amp;nbsp;ಫೈನಲ್ ಆಸ್ಕರ್ ನಾಮಿನೇಷನ್ ಮಾರ್ಚ್ 15ರಂದು ಮುಕ್ತಾಯವಾಗಲಿದೆ. &amp;nbsp;ಏಪ್ರಿಲ್ 25, 2021ರಲ್ಲಿ ಅಕಾಡೆಮಿ ಅವಾರ್ಡ್‌ ಪ್ರದಾನವಾಗಲಿದೆ. </description>
            <media:content height="400" width="760" medium="image" url="https://static.asianetnews.com/images/01enyy99j9291z5233d7jzt972/deepa-mehta-jpg_760x400.jpg"/>
        </item>
        <item>
            <title>ಕತಾರ್‌ ಕನ್ನಡ ಸಂಘ​ದ 50ಕ್ಕೂ ಹೆಚ್ಚು ಸದಸ್ಯರಿಂದ ರಕ್ತದಾನ!</title>
            <link>https://kannada.asianetnews.com/nri/more-than-50-members-of-quatar-kannada-sangha-donate-blood-pod-qi38oh</link>
            <guid>https://kannada.asianetnews.com/nri/more-than-50-members-of-quatar-kannada-sangha-donate-blood-pod-qi38oh</guid>
            <pubDate>Mon, 12 Oct 2020 17:44:00 +0530</pubDate>
            <description>ಬೆಂಗಳೂರು(ಅ.12):&amp;nbsp;ಒಬ್ಬರು ಮಾಡುವ ರಕ್ತದಾನದಿಂದ ಮೂರು ಜನರನ್ನು ಉಳಿಸಬಹುದು ಎಂದು ಹಮಾದ್‌ ವೈದ್ಯಕೀಯ ಕೇಂದ್ರದ ಹೆರಿಗೆ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ರಮ್ಯಾ ನುಡಿದರು.  ಕತಾರ್‌ನಲ್ಲಿ ಹಮಾದ್‌ ವೈದ್ಯಕೀಯ ಕೇಂದ್ರದಲ್ಲಿ&amp;nbsp;‘ಕರ್ನಾಟಕ ಸಂಘ ಕತಾರ್‌’ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಒಬ್ಬ ದಾನಿಯ ರಕ್ತ ಕೇವಲ ಒಬ್ಬರಿಗೆ ಸೀಮಿತವಾಗುವುದಿಲ್ಲ. ರಕ್ತವನ್ನು ಪ್ಲಾಸ್ಮಾ, ಆರ್‌ಬಿಸಿ ಮತ್ತು ಪ್ಲೇಟ್ಲೆಟ್‌ ಆಗಿ ವಿಂಗಡಿಸಿ ಅಗತ್ಯ ಸಂದರ್ಭದಲ್ಲಿ ಮೂವರಿಗೆ ಕೊಡಲಾಗುತ್ತದೆ. ಒಬ್ಬ ವ್ಯಕ್ತಿಯ ರಕ್ತದಾನದಿಂದ ಮೂರು ಜೀವಗಳನ್ನು ರಕ್ಷಿಸಬಹುದು ಎಂದು ರಕ್ತದಾನದ ಮಹತ್ವ ತಿಳಿಸಿದರು.  ಇಟಲಿಯ ಪಿಯಾ​ಸೆಂಜಾ ಮ್ಯೂಸಿಯಂನಲ್ಲಿ ಕನ್ನಡದ ಕವಿತೆ  ಕೊರೋನಾ ಹಿನ್ನೆಲೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಹಿಳೆ ಹಾಗೂ ಪುರುಷರು ಸೇರಿ ಆರೋಗ್ಯವಂತ ಒಟ್ಟು 50 ದಾನಿಗಳಿಂದ ರಕ್ತ ಸಂಗ್ರಹಿಸಲಾಯಿತು.  ಶಿಬಿರದಲ್ಲಿ ತುಳು ಕೂಟ, ಬಂಟರ ಸಂಘ, ಎಸ್‌ಕೆಎಂಡಬ್ಲ್ಯುಎ, ಕೆಎಂಸಿಎ, ಯುಕೆಬಿ ಮತ್ತು ಕತಾರ್‌ ಬಿಲ್ಲವಾಸ್‌ ಸೇರಿದಂತೆ ರಾಜ್ಯದ ವಿವಿಧ ಸಂಸ್ಥೆಗಳು, ಕರ್ನಾಟಕ ಸಂಘ ಕತಾರ್‌ ಅಧ್ಯಕ್ಷ ನಾಗೇಶ್‌ ರಾವ್‌, ಭಾರತೀಯ ಸಮುದಾಯ ಹಿತೈಷಿ ವೇದಿಕೆ ಉಪಾಧ್ಯಕ್ಷ ಮಹೇಶ್‌ ಗೌಡ, ಜಂಟಿ ಕಾರ್ಯದರ್ಶಿ ಸುಬ್ರಮಣ್ಯ ಹೆಬ್ಬಾಗಿಲು, ಭಾರತೀಯ ರಾಯಭಾರಿ ಕಾರ್ಯಾಲಯದಿಂದ ಪ್ರಥಮ ಕಾರ್ಯದರ್ಶಿ- ಸಾಮಾಜಿಕ ವಿಚಾರಗಳ ವಿಭಾಗದ ಅಧಿಕಾರಿ ಜೇವಿಯರ್‌ ಧನರಾಜ್‌ ಮತ್ತಿತರರು ಭಾಗವಹಿಸಿದ್ದರು. </description>
            <media:content height="400" width="760" medium="image" url="https://static.asianetnews.com/images/01emebnxx3mvde7k3s6s6n576b/frame-new---2020-10-12t173743-783-jpg_760x400.jpg"/>
        </item>
        <item>
            <title>ಕನ್ನಡ ವಚನ ಸಾಹಿತ್ಯ ಕನ್ನಡದ ದೊಡ್ಡ ಶಕ್ತಿ: ಮನು ಬಳಿಗಾರ್‌</title>
            <link>https://kannada.asianetnews.com/nri/president-of-kannada-sahitya-parishad-manu-baligar-talks-over-kannada-language-qhcktu</link>
            <guid>https://kannada.asianetnews.com/nri/president-of-kannada-sahitya-parishad-manu-baligar-talks-over-kannada-language-qhcktu</guid>
            <pubDate>Mon, 28 Sep 2020 08:11:00 +0530</pubDate>
            <description>ಬೆಂಗಳೂರು(ಸೆ.28): ಕನ್ನಡ ವಚನ ಸಾಹಿತ್ಯ ಮತ್ತು ಕವನ ಕನ್ನಡದ ದೊಡ್ಡ ಶಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್‌ ಹೇಳಿದ್ದಾರೆ.  ಭಾನುವಾರ ನಡೆದ ಸಾಗರೋತ್ತರ ಕನ್ನಡಿಗರ 17ನೇ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಪ, ರನ್ನ, ಬಸವಣ್ಣ ದಾಸಾದಿ ದಾಸರು ಶತಮಾನಗಳಿಂದ ಕನ್ನಡವನ್ನು ಬೆಳೆಸುತ್ತಾ ಬಂದಿದ್ದಾರೆ. ಪ್ರಸ್ತುತ ನಮ್ಮಲ್ಲಿ ಸಂಸತ್‌ ಇದೆ. ಈ ಸಂಸತ್‌ ಪರಿಕಲ್ಪನೆ ಬಸವಣ್ಣನವರಿಂದ ಬಂದಿದೆ. ಅವರು ಸಾವಿರ ವರ್ಷ ಹಿಂದಿನವರಾದರೂ ಸಾವಿರ ವರ್ಷ ಮುಂದಿನವರೂ ಆಗಿದ್ದಾರೆ. ಅಂತಹ ಕಾಲಜ್ಞಾನ ಹೊಂದಿದ್ದ ಮಹಾನ್‌ ವ್ಯಕ್ತಿಗಳನ್ನು ಪಡೆದ ಕನ್ನಡಿಗರಾದ ನಾವೆಲ್ಲ ಹೆಮ್ಮೆ ಪಡೆಬೇಕು. ಅವರನ್ನು ಸದಾ ಸ್ಮರಿಸುತಾ ಕನ್ನಡತನವನ್ನು ಬೆಳೆಸಬೇಕು ಎಂದರು.  ಹಿಂದಿ ಹೊರತಾಗಿ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಈ ಪ್ರಶಸ್ತಿ ಪಡೆದ ಮಹಾನ್‌ ವ್ಯಕ್ತಿಗಳು ತಮ್ಮ ವೈಚಾರಿಕತೆ ಮೂಲಕ ಕನ್ನಡವನ್ನು ಪ್ರಸಾರ ಮಾಡಿದರು. ಹೀಗಾಗಿ ಕನ್ನಡ ಜಗತ್ತಿನ ಮಹತ್ವದ ಭಾಷೆಗಳಲ್ಲಿ ಸ್ಥಾನ ಪಡೆದಿದೆ. 55 ದೇಶದ ಕನ್ನಡಿಗರು ಒಗ್ಗೂಡಿ ಈ ಕಾರ್ಯಕ್ರಮ ಆಯೋಜಿಸಲು ಕನ್ನಡ ಭಾಷೆಯೇ ಕಾರಣ. ನಿಮ್ಮಲ್ಲಿ ಯಾರಾದರೂ ಗುಣಮಟ್ಟದ ಕಥೆ-ಕವನ ಬರೆದಿದ್ದರೆ, ಪರಿಷತ್ತಿನ ಆಡಳಿತ ಮಂಡಳಿ ಮುಖಾಂತರ ಪರಿಶೀಲಿಸಿ ಪ್ರಕಟಿಸುವುದಾಗಿ ಹೇಳಿದರು.  ಜನವರಿ-ಫೆಬ್ರವರಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಚಿಂತನೆ  ಸಾಗರೋತ್ತರ ಕನ್ನಡಿಗರು ಯಕೆ, ಯುಎಸ್‌ಎ, ಆಸ್ಪ್ರೇಲಿಯಾ, ಕೆನಡಾ, ದುಬೈ, ಜಕರ್ತಾ ಮತ್ತು ಇಥೋಪಿಯಾಗಳಲ್ಲಿ ಕನ್ನಡ ಭವನವನ್ನು ಸ್ಥಾಪಿಸಲು ಪ್ರಸ್ತಾಪಿಸಿರುವುದು ಉತ್ತಮ ಸಂಗತಿ. ನೀವೆಲ್ಲ ಸೇರಿ ಜಾಗವನ್ನು ದಾನವಾಗಿ ನೀಡಿದರೆ ಕನ್ನಡ ಭವನ ಸ್ಥಾಪಿಸಲು ನಾವು ಸಿದ್ಧ ಎಂದರು.  ಸಾಗರೋತ್ತರ ಕನ್ನಡಿಗರ ಸಂಘಟನೆಯ ಉಪಾಧ್ಯಕ್ಷ ಗೋಪಾಲ್‌ ಕುಲಕರ್ಣಿ (ಯುಕೆ), ಖಜಾಂಚಿ ಬಸವ ಪಾಟೀಲ್‌(ಯುಕೆ), ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ (ದುಬೈ), ಸಂಘಟನಾ ಕಾರ್ಯದರ್ಶಿ ಹೇಮೆಗೌಡ ಮಧು (ಇಟಲಿ), ಜಂಟಿ ಕಾರ್ಯದರ್ಶಿ ರವಿ ಮಹಾದೇವ (ಸೌದಿ ಆರೇಬಿಯಾ) ಸೇರಿದಂತೆ ಹಲವರು ಪಾಲ್ಗೊಂಡಿದ್ದರು. &amp;nbsp; </description>
            <media:content height="400" width="760" medium="image" url="https://static.asianetnews.com/images/01ek999za2esp8100ps2ykchjc/manu-baligar-jpg-710x400xt-jpg_760x400.jpg"/>
        </item>
        <item>
            <title>ಡ್ರಗ್ಸ್  ಜಾಲವನ್ನು ಬುಡಸಮೇತ ಕಿತ್ತು ಹಾಕಬೇಕು : ಎಚ್.ಡಿ.ಕುಮಾರಸ್ವಾಮಿ</title>
            <link>https://kannada.asianetnews.com/nri/strict-action-should-take-against-drug-mafia-says-hd-kumaraswamy-qgdia6</link>
            <guid>https://kannada.asianetnews.com/nri/strict-action-should-take-against-drug-mafia-says-hd-kumaraswamy-qgdia6</guid>
            <pubDate>Wed, 09 Sep 2020 09:40:00 +0530</pubDate>
            <description>ಬೆಂಗಳೂರು (ಸೆ.09): &amp;nbsp;ಡ್ರಗ್ಸ್‌ ಮಾಫಿಯಾ ರಾಜ್ಯದಲ್ಲಿ ಮತ್ತು ದೇಶದಲ್ಲಿ ತಲ್ಲಣ ಹುಟ್ಟುಹಾಕುತ್ತಿದ್ದು, ಅದನ್ನು ಬುಡಸಮೇತ ಕಿತ್ತು ಹಾಕಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.  ಸಾಗರೋತ್ತರ ಕನ್ನಡಿಗರ 14ನೇ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡ್ರಗ್ಸ್‌ ಮಾಫಿಯಾ ಮಟ್ಟಹಾಕಲು ಕಠಿಣ ಕಾನೂನು ಜಾರಿಗೊಳಿಸಬೇಕು. ಈ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಿದ್ದು, ಯುವ ಸಮುದಾಯವನ್ನು ಇಂತಹ ಕೃತ್ಯಗಳಿಂದ ದೂರ ಇಡಬೇಕಿದೆ. ನನ್ನ ಹತ್ತಿರ ಸಾಕಷ್ಟುಜನಪರ ಯೋಜನಗಳಿವೆ. ಅದನ್ನುನಾವು ಬೇರೆ ಪಕ್ಷದವರಿಗೆ ಹೇಳಿ ಮಾಡಿಸುವುದು ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.  ನಾವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ : ಡ್ರಗ್ಸ್ ದಂಧೆ ಬಗ್ಗೆ ಸಿಎಂ   ಯುವಕರು ನಮ್ಮ ಆಸ್ತಿ, ಅವರಿಗೆ ದುಡಿಯುವ ಶಕ್ತಿಯನ್ನು ಸರ್ಕಾರ ಕೊಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಯುವಕರ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು, ಹಣ ಗಳಿಸುವ ಅಥವಾ ಹೆಸರು ಮಾಡಲು ನಾನು ಮುಖ್ಯಮಂತ್ರಿಯಾಗಲಿಲ್ಲ. ಮಣ್ಣಿನ ಮಗನಾಗಿ ರೈತರು ಮತ್ತು ನನ್ನ ಮಣ್ಣಿಗೋಸ್ಕರ ಸಾಕಷ್ಟುಕೆಲಸ ಮಾಡಿದ್ದೇನೆ. ಜನರು ನನ್ನನ್ನು ಮರೆತಿಲ್ಲ. ನನ್ನನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಅವರ ಋುಣ ನನ್ನ ಮೇಲೆ ಸಾಕಷ್ಟಿದ್ದು, ಮುಂದೆಯೂ ಅವರ ಸೇವೆಗೆ ನಾನು ಬದ್ಧವಾಗಿದ್ದೇನೆ ಎಂದು ಹೇಳಿದರು.  ಉತ್ತರ ಕರ್ನಾಟಕ ಭಾಗದ ಐದಾರು ಲಕ್ಷ ಜನರಿಗೆ ಉದ್ಯೋಗ ಕೊಡುವ ಆಸೆ ನನ್ನದು. ಅದನ್ನು ಮುಂದಿನ ದಿನಗಳಲ್ಲಿ ಮಾಡದೆ ಬಿಡುವುದಿಲ್ಲ. ಅದು ನನ್ನ ಮಹತ್ವದ ಬಯಕೆ ಕೂಡ. ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ನಮ್ಮ ತಂದೆ ಎಚ್‌.ಡಿ.ದೇವೇಗೌಡ ಅವರ ಕಾಲದಲ್ಲಿ ಆಲಮಟ್ಟಿಅಣೆಕಟ್ಟು ನಿರ್ಮಾಣವಾಗಿತ್ತು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇವಲ ದಕ್ಷಿಣ ಕರ್ನಾಟಕಕ್ಕೆ ಮತ್ರ ಸೀಮಿತಗೊಳ್ಳದೆ ಉತ್ತರ ಕರ್ನಾಟಕ್ಕೂ ಸಾಕಷ್ಟುಮಹತ್ವದ ಯೋಜನೆಗಳನ್ನು ಜಾರಿಗೊಳಿಸಿ ಹೆಚ್ಚಿನ ಅನುದಾನ ನೀಡಿದ್ದೇನೆ. ಉತ್ತರ ಕರ್ನಾಟಕದ ಜನ ಯಾವುದೇ ಕಾರಣಕ್ಕೂ ನನ್ನನ್ನು ಬೇರೆಯವನನ್ನಾಗಿ ನೋಡಬೇಡಿ. ನಾನು ನಿಮ್ಮವನು, ನಿಮ್ಮ ಸೇವಕ ಎಂದರು.  ಹಾವು-ಮುಂಗುಸಿ ರಾಗಿಣಿ, ಸಂಜನಾ ಒಂದೇ ಕಟ್ಟಡದಲ್ಲಿ! ...   ಬೆಂಗಳೂರಿನ ಮೆಟ್ರೋಗೆ ಮೊದಲು 19 ಕಿಮೀಗೆ ಚಾಲನೆ ಕೊಟ್ಟವನು ನಾನು. ಹುಬ್ಬಳ್ಳಿಯಲ್ಲಿ ಹೈಕೋರ್ಟ್‌ ಸ್ಥಾಪನೆ ಮಾಡಿದ್ದ ಜೆಡಿಎಸ್‌ ಪಕ್ಷದ ಹೆಮ್ಮೆ. 30 ಜಿಲ್ಲೆಗಳಲ್ಲಿ ಜನಪದ ಜಾತ್ರೆ ಎನ್ನುವ ಕಾರ್ಯಕ್ರಮ ಆರಂಭಿಸಿದ್ದು ನಾನು. ಮುಂದಿನ ದಿನಗಳಲ್ಲಿ ಸಕಲರ ಸೇವೆಗೆ ನಾನು ಸಾದಾ ದುಡಿಯುತ್ತೇನೆ ಎಂದು ಹೇಳಿದರು  ಸಂವಾದ ಕಾರ್ಯಕ್ರಮದಲ್ಲಿ ಸಾಗರೋತ್ತರ ಕನ್ನಡಿಗರ ವೇದಿಕೆ ಅಧ್ಯಕ್ಷ ಚಂದ್ರಶೇಖರ ಲಿಂಗದಹಳ್ಳಿ, ಸಂಘಟನಾ ಕಾರ್ಯದರ್ಶಿ ಹೇಮೇಗೌಡ, ಖಜಾಂಚಿ ಬಸವಪಾಟೀಲ, ವಿಧಾನ ಪರಿಷತ್ತು ಸದಸ್ಯ ಬೋಜೇಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು. </description>
            <media:content height="400" width="760" medium="image" url="https://static.asianetnews.com/images/01edtsfxv897dbbd7txdn5hkpt/hdk-jpg-710x400xt-jpg_760x400.jpg"/>
        </item>
        <item>
            <title>ಕೊನೆಗೂ ಗೆದ್ದ ಧರ್ಮ: ಕಲಾವಿದನ ಸಂಕಷ್ಟಕ್ಕೆ ಅನಿವಾಸಿ ಭಾರತೀಯರ ಸ್ಪಂದನೆ..!</title>
            <link>https://kannada.asianetnews.com/nri/non-resident-indians-help-to-artist-manjunath-family-in-dharwad-qfao0o</link>
            <guid>https://kannada.asianetnews.com/nri/non-resident-indians-help-to-artist-manjunath-family-in-dharwad-qfao0o</guid>
            <pubDate>Wed, 19 Aug 2020 10:18:00 +0530</pubDate>
            <description>ಬಸವರಾಜ ಹಿರೇಮಠ  ಧಾರವಾಡ(ಆ.19): ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದ ಸಿಹಿಸುದ್ದಿ ಬೆನ್ನಲ್ಲೇ ಗಣೇಶ ಮೂರ್ತಿಯ ಖರೀ​ದಿ​ದಾ​ರ​ರಿ​ಲ್ಲದೆ ಸಂಕಷ್ಟದಲ್ಲಿದ್ದ ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಅವರಿಗೆ ಅನಿ​ವಾಸಿ ಭಾರ​ತೀ​ಯರು ನೆರ​ವಿನ ಹಸ್ತ ನೀಡಲು ಮುಂದಾ​ಗಿ​ದ್ದಾರೆ. ಮಂಜು​ನಾಥ್‌ ತಯಾರಿಸಿದ ಒಟ್ಟಾರೆ 6 ಲಕ್ಷ ರು. ಮೌಲ್ಯದ ಬೃಹತ್‌ ಗಣೇಶ ಮೂರ್ತಿಗಳನ್ನು ಖರೀದಿಸಲು ನಿರ್ಧ​ರಿ​ಸಿ​ದ್ದಾ​ರೆ.  ಗಣೇಶ ಮೂರ್ತಿ​ಗ​ಳನ್ನು ಕೊಳ್ಳು​ವ​ವ​ರಿ​ಲ್ಲದೆ ಕಂಗಾ​ಲಾ​ಗಿ ಆತ್ಮ​ಹತ್ಯೆ ಮಾಡಿ​ಕೊ​ಳ್ಳು​ವು​ದಾಗಿ ಹೇಳಿ​ಕೊಂಡಿದ್ದ ಕಲಾ​ವಿದ ಮಂಜು​ನಾಥ ಈಗ ನಿರಾ​ಳ​ರಾ​ಗಿ​ದ್ದಾ​ರೆ. ಅಮೆರಿಕ, ಆಸ್ಪ್ರೇಲಿಯಾ, ಬಹರೈನ್‌ ಮತ್ತಿ​ತರ ದೇಶಗಳಲ್ಲಿನ ಅನಿವಾಸಿ ಭಾರತೀಯರು ಮಂಜುನಾಥ ಹಿರೇಮಠ ಅವರ ಸಂಕ​ಷ್ಟಕ್ಕೆ ಸ್ಪಂದಿ​ಸಿದ್ದು, ಈಗಾಗಲೇ ಎರಡ್ಮೂರು ಬಾರಿ ಜೂಮ್‌ ಮೀಟಿಂಗ್‌ ಮಾಡಿ​ ಧೈರ್ಯ ತುಂಬಿದ್ದಾರೆ. ಗಣೇಶ ಮೂರ್ತಿ​ಗ​ಳನ್ನು ಕೊಳ್ಳುವ ಭರ​ವಸೆ ನೀಡಿ​ದ್ದಾ​ರೆ.  ಗಣಪತಿ ಹೋಗಲಿಲ್ಲಾಂದ್ರ ಇದೇ ಕೊನೆಯ ಗಣೇಶೋತ್ಸವ: ಆತ್ಮಹತ್ಯೆಗೆ ನಿರ್ಧರಿಸಿದ ಕಲಾವಿದನ ಕುಟುಂಬ  ವರ್ಚುವಲ್‌ ಗಣೇಶೋತ್ಸವ:&amp;nbsp;  ಕೊರೋನಾ ಹಿನ್ನೆ​ಲೆ​ಯಲ್ಲಿ ಈ ಬಾರಿ ವರ್ಚುವಲ್‌ ಗ್ಲೋಬಲ್‌ ಗಣೇಶೋತ್ಸವ ಆಚರಿಸಲು ಅನಿವಾಸಿ ಭಾರತೀಯರು ನಿರ್ಧ​ರಿ​ಸಿ​ದ್ದಾರೆ. ಅದ​ರಂತೆ ಗಣೇಶ ಮೂರ್ತಿಗಳನ್ನು ಮಂಜುನಾಥ ಅವರೇ 5 ದಿನಗಳ ಕಾಲ ಪೂಜೆ ಸಲ್ಲಿಸಿ ಕೊನೇ ದಿನ ವಿಸರ್ಜಿಸಲು ಯೋಜನೆ ರೂಪಿಸಲಾಗಿದೆ. ಗಣೇಶ ಮೂರ್ತಿಯ ನೇರ ದರ್ಶನ, ನಿತ್ಯದ ಪೂಜೆ ಹಾಗೂ ವಿಸರ್ಜನೆ ಎಲ್ಲವೂ ಯ್ಯೂಟ್ಯೂಬ್‌ ಚಾನಲ್‌ ಮೂಲಕ ಪ್ರಸಾ​ರಕ್ಕೆ ನಿರ್ಧಾರ ತೆಗೆ​ದು​ಕೊ​ಳ್ಳ​ಲಾ​ಗಿ​ದೆ.  ವಿಡಿಯೋ ವೈರಲ್‌:&amp;nbsp;  ಆರ್ಥಿಕ ಸಂಕ​ಷ್ಟದ ಹಿನ್ನೆಲೆಯಲ್ಲಿ ಮಂಜು​ನಾಥ್‌ ಅವರು ಕುಟುಂಬದ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ​ಬಿ​ಟ್ಟಿ​ದ್ದ​ರು. ಈ ವಿಡಿಯೋ ವೈರಲ್‌ ಆಗಿ​ದ್ದಷ್ಟೇ ಅಲ್ಲದೆ, ಆ.17ರಂದು ‘ಕನ್ನಡಪ್ರಭ’ ಸಹ ‘ಗಣೇಶ ಮೂರ್ತಿ ಕಲಾವಿದರಿಗೆ ಸಂಕಷ್ಟ-ವಿಡಿಯೋ ವೈರಲ್‌’ ಎಂಬ ವರದಿ ಮಾಡಿತ್ತು. ವೈರಲ್‌ ಆದ ವಿಡಿಯೋ ಹಾಗೂ ಕನ್ನಡ​ಪ್ರ​ಭದ ವರದಿ ಗಮನಿಸಿದ ಸಾಕಷ್ಟುಮಂದಿ ಈಗ ಕಲಾ​ವಿ​ದನ ಸಂಕ​ಷ್ಟಕ್ಕೆ ಮಿಡಿ​ಯಲು ಮುಂದಾ​ಗಿ​ದ್ದಾ​ರೆ.  ಚೌತಿ ನಿಮಿತ್ತ ಗಣೇಶ ಮಂಡಳಿಗಳ ಆರ್ಡರ್‌ ಮೇರೆಗೆ 10 ತಿಂಗಳಿಂದ ಮಂಜುನಾಥ ಅವ​ರು 50ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಲಕ್ಷಾಂತರ ರು. ವೆಚ್ಚ ಮಾಡಿ ಸಿದ್ಧಪಡಿಸಿದ್ದರು. ಆದರೆ, ಕೋವಿಡ್‌ ಕಾರಣದಿಂದ ಸಾರ್ವಜನಿಕ ಗಣೇಶೋತ್ಸವವನ್ನು ಸರ್ಕಾರ ನಿಷೇ​ಧಿ​ಸಿ​ದ್ದ​ರಿಂದ ಆರ್ಡರ್‌ ಕ್ಯಾನ್ಸಲ್‌ ಆಗಿ ಮಂಜುನಾಥ ಆರ್ಥಿಕ ಸಂಕ​ಷ್ಟಕ್ಕೆ ಸಿಲು​ಕಿ​ದ್ದ​ರು. ಇದ​ರಿಂದ ಮನ​ನೊಂದಿದ್ದ, ಗಣೇಶ ಕೈಬಿ​ಡ​ಲಿ​ಲ್ಲ- ಶ್ರಮಪಟ್ಟು ಮೂರ್ತಿಗಳನ್ನು ತಯಾರಿಸಿದ್ದು, ಕೊಳ್ಳು​ವ​ವ​ರಿ​ಲ್ಲದೆ ಮನಸ್ಸಿಗೆ ತುಂಬ ಬೇಸರವಾಗಿತ್ತು. ನನ್ನ ಬೇಸರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದೆ. ಆದರೆ ಅದು ನನ್ನೆಲ್ಲ ಸಂಕಷ್ಟಗಳನ್ನು ಪರಿಹರಿ​ಸ​ಲಿದೆ ಎಂದು ಅಂದು​ಕೊಂಡಿ​ರ​ಲಿಲ್ಲ ಎಂದು ಮಂಜುನಾಥ ಹೇಳಿ​ದ್ದಾ​ರೆ.  ರಾಜ್ಯ, ಹೊರ ರಾಜ್ಯ ಹಾಗೂ ವಿದೇಶದ​ಲ್ಲಿ​ರುವ ನಮ್ಮ​ವರು ಕರೆ ಮಾಡಿ ಆರ್ಥಿಕ ಸಹಕಾರಕ್ಕೆ ಮುಂದಾ​ಗಿ​ದ್ದಾ​ರೆ. ಆದರೆ, ಅವ​ರಿಂದ ಹಣ ಪಡೆಯಲು ಮನಸ್ಸಾಗಲಿಲ್ಲ. ಬದಲಾಗಿ ಮೂರ್ತಿಗಳನ್ನು ಖರೀದಿಸಿ ಎಂದು ಮನವಿ ಮಾಡಿಕೊಂಡೆ. ಅಮೆರಿಕದಲ್ಲಿರುವ ಶಿವು ವಿಭೂತಿ, ಶುಭಾ ಬೆನ್ನೂರ ಎಂಬವರು ಇದಕ್ಕಾಗಿಯೇ ತಮ್ಮ ಸ್ನೇಹಿತರ ಗುಂಪು ರಚಿಸಿಕೊಂಡು ಅಂದಾಜು .6 ಲಕ್ಷ ಮೊತ್ತದ 40 ದೊಡ್ಡ ಗಣೇಶ ಮೂರ್ತಿಗಳನ್ನು ಕೊಳ್ಳಲು ತೀರ್ಮಾನಿಸಿದ್ದಾರೆ. ಕೊನೆಗೂ ನನ್ನ ಪ್ರಕಾರ ಧರ್ಮ ಗೆದ್ದಿತು. ಕೈಗೆ ಕೆಲಸ ನೀಡಿದ ಗಣೇಶ ಕೊರೋನಾ ಸಂಕಷ್ಟದಲ್ಲೂ ನನ್ನ ಕೈಬಿಡಲಿಲ್ಲ ಎಂದೆ​ನಿ​ಸು​ತ್ತ​ದೆ ಎನ್ನು​ತ್ತಾರೆ ಮಂಜು​ನಾ​ಥ.  ಹೊರ ದೇಶಗಳಲ್ಲಿದ್ದರೂ ಭಾರತೀಯ ಸಂಸ್ಕೃತಿ, ಹಬ್ಬದಾಚರಣೆ ಬಿಟ್ಟಿರುವುದು ಸಾಧ್ಯ​ವಿಲ್ಲ. ನಮಗೂ ಗಣೇಶ ಹಬ್ಬ ಮಾಡುವ ಆಸೆ ಇದ್ದರೂ ಇಲ್ಲಿ ಸಾಧ್ಯವಿಲ್ಲ. ಆದ್ದರಿಂದ ಮಂಜುನಾಥ ಅವರಿಗೆ ಸಹಾಯವೂ ಆಗ​ಬೇಕು, ನಾವು ಹಬ್ಬ ಮಾಡಿದಂತೆಯೂ ಆಗ​ಬೇಕು ಎಂದು ವರ್ಚುವಲ್‌ ಗ್ಲೋಬಲ್‌ ಗಣೇಶೋತ್ಸವದ ಯೋಜನೆ ರೂಪಿಸಲಾಗಿದೆ. ಯ್ಯೂಟ್ಯೂಬ್‌ ಮೂಲಕ ಗಣೇಶ ದರ್ಶನ, ಪೂಜೆ, ವಿಸರ್ಜನೆ ಕಣ್ತುಂಬಿಕೊಳ್ಳುತ್ತೇವೆ ಎಂದು ಅನಿವಾಸಿ ಭಾರತೀಯರು ಶುಭಾ ಬೆನ್ನೂರ ಅವರು ತಿಳಿಸಿದ್ದಾರೆ.&amp;nbsp; &amp;nbsp; </description>
            <media:content height="400" width="760" medium="image" url="https://static.asianetnews.com/images/01efx9a7y818f8zc9m2mq3gw47/dharwad-jpg_760x400.jpg"/>
        </item>
        <item>
            <title>ನಾವಿಕೋತ್ಸವಕ್ಕೆ ಭರದ ಸಿದ್ಧತೆ,  ಮನೆಯಂಗಳಕ್ಕೆ ಕನ್ನಡ ಹಬ್ಬ</title>
            <link>https://kannada.asianetnews.com/nri/navika-5th-world-kannada-navikotsava-2020-on-aug-28-to-30-qf980z</link>
            <guid>https://kannada.asianetnews.com/nri/navika-5th-world-kannada-navikotsava-2020-on-aug-28-to-30-qf980z</guid>
            <pubDate>Tue, 18 Aug 2020 15:35:00 +0530</pubDate>
            <description>ಬೆಂಗಳೂರು(ಆ. 18)&amp;nbsp;&amp;nbsp;ಕನ್ನಡಿಗರನ್ನು ಬೆಸೆಯುವ ನಾವಿಕ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರ ಮನೆ ಬಾಗಿಲಿಗೆ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನುತರಲು ಕೊರೋನಾ ಅಡೆತಡೆಗಳ ನಡುವೆಯೂ ಅಮೆರಿಕದ ನಾವಿಕ ತಂಡ ಸರ್ವ ರೀತಿಯಿಂದ ಸಜ್ಜಾಗಿದೆ.&amp;nbsp;  ಆಗಸ್ಟ್ 24 ರಿಂದ ವಿವಿಧ ಕಲಾಪ್ರಕಾರಗಳ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಶುರುವಾಗಲಿದ್ದು 3&amp;nbsp;ದಿನಗಳ ಕಾಲ ಕಾರ್ಯಕ್ರಮಗಳು ನಡೆಯಲಿವೆ.ಅಮೆರಿಕ ಕಾಲಮಾನದ ಪ್ರಕಾರ ಶುಕ್ರವಾರ ಸಂಜೆಯಿಂದ ಈ ಎಲ್ಲ ಕಾರ್ಯಕ್ರಮಗಳು ವರ್ಚುಯಲ್ಲಾಗಿ ನೇರಪ್ರಸಾರದಲ್ಲಿ ನಾವಿಕ ವೆಬ್‌ಸೈಟಿನಲ್ಲಿ ಲಭ್ಯವಾಗಲಿವೆ. ಭಾರತದ ಕಾಲಮಾನದ ಪ್ರಕಾರ 29 ಮತ್ತು 30ರಂದು ಇಲ್ಲಿನ ಜನತೆ ವೀಕ್ಷಿಸಬಹುದು. 5 ಗಂಟೆಗಳ ಅವಧಿಗೆ ಒಂದೊಂದು ಸೆಷನ್‌ನಂತೆ ಎಲ್ಲ ಕಾರ್ಯಕ್ರಮಗಳನ್ನು ವಿಂಗಡಿಸಲಾಗಿದೆ. ನಡುನಡುವೆ ಸೆಲೆಬ್ರಿಟಿಗಳು ನಡೆಸಿಕೊಡುವ ಕಾರ್ಯಕ್ರಮಗಳು ಪ್ರಸಾರವಾಗಲಿವೆ.  ಪ್ರತಿ ಬಾರಿ ʻನಾವಿಕ ಸಮ್ಮೇಳನʼಅಮೆರಿಕದಲ್ಲಿ ನಡೆಯುತ್ತದೆ. ಅಮೆರಿಕದ ಹೊರಗೆ ನಾವಿಕ ಸಂಘಟನೆಯಿಂದʻನಾವಿಕೋತ್ಸವʼವನ್ನುಮಹಾನಗರಗಳಲ್ಲಿ ಆಯೋಜಿಸಲಾಗುತ್ತದೆ. ಈಗಾಗಲೇ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಮಹಾನಗರಗಳಲ್ಲಿ ಪ್ರತಿವರ್ಷ ನಾವಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿವೆ. ಇದೊಂದು ಮಿನಿ ಸಮ್ಮೇಳನದ ಮಾದರಿಯಾಗಿದೆ. ಅಮೆರಿಕ ದೇಶವೂ ಸೇರಿದಂತೆ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ರಜೆಯ ಕಾಲದಲ್ಲಿ ತಾಯ್ನಾಡಿಗೆ ಮರಳಿದಾಗ ಆ ಕುಟುಂಬದ ಪ್ರತಿಭೆಯನ್ನು ಸ್ಥಳೀಯರೆದುರು ಪ್ರದರ್ಶಿಸುವ ಸಲುವಾಗಿ ನಾವಿಕೋತ್ಸವ ನಡೆಸಲಾಗುತ್ತದೆ.  ನಾವಿಕ ಸಮ್ಮೇಳನದಲ್ಲಿ ಮೋಡಿ ಮಾಡಿದ್ದ ವಿಜಯ್ ಪ್ರಕಾಶ್-ರಾಜೇಶ್ ಕೃಷ್ಣನ್  ಆದರೆ ಇದೀಗ ಕೊರೋನಾದ ಹಿನ್ನೆಲೆಯಲ್ಲಿ ನಾವಿಕೋತ್ಸವವನ್ನು ಕನ್ನಡಿಗರ ಮನೆಯಂಗಳಕ್ಕೆ ತರುವ ಪ್ರಯತ್ನ ಮಾಡಿರುವುದಾಗಿ ಅಮೆರಿಕದ ನಾವಿಕ ಅಧ್ಯಕ್ಷ ವಲ್ಲೀಶ ಶಾಸ್ತ್ರಿ ತಿಳಿಸಿದ್ದಾರೆ. ವಿಶ್ವದ ಎಲ್ಲ ಕನ್ನಡ ಸಂಘಗಳನ್ನು ಸೇರಿಸಿಕೊಂಡು ಈ ವರ್ಷ ವರ್ಚುಯಲ್‌ ಸಮ್ಮೇಳನ ನಡೆಸಲು ಯೋಜನೆ ರೂಪಿಸಿಕೊಳ್ಳಲಾಗಿತ್ತು. ಅಂತೆಯೇಈ ಯೋಜನೆಗೆ ಉತ್ಸಾಹದಿಂದ ಬೆಂಬಲ ವ್ಯಕ್ತಪಡಿಸಿ ಅಮೆರಿಕ ದೇಶದ ಎಲ್ಲ ರಾಜ್ಯಗಳಲ್ಲಿನ 37 ಕನ್ನಡ ಸಂಘಗಳು ಹಾಗೂ ಅಮೆರಿಕದ ಹೊರಗೆ ಇತರೆ ದೇಶಗಳಲ್ಲಿರುವ 17 ಕನ್ನಡ ಸಂಘಗಳು ಈ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿವೆ.  ಎಲ್ಲ ಕನ್ನಡ ಸಂಘಗಳಿಗೂ ತಲಾ 10&amp;nbsp;ನಿಮಿಷಗಳ ಕಾರ್ಯಕ್ರಮಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಒಂದೊಂದು ಸಂಘವು ತಮ್ಮಲ್ಲಿನ ಪ್ರತಿಭೆಗಳ ಮೂಲಕ 2 ನೃತ್ಯ ಪ್ರಕಾರಗಳು, 2ಹಾಡುಗಳು, 2 ನಾಟಕ ತುಣುಕುಗಳು ಪ್ರದರ್ಶನ ನೀಡಲಿವೆ. ಒಟ್ಟು 54 ಕನ್ನಡ ಸಂಘಗಳು ನೇರವಾಗಿ ಭಾಗವಹಿಸಲಿವೆ. ಇನ್ನು ಸುಮಾರು 80೦ ಸಂಘಗಳಿಗೆ ತಮ್ಮ ಸಂಘದ ಚಟುವಟಿಕೆಗಳನ್ನು ಪರಿಚಯಿಸಲು ತಲಾ 2 ನಿಮಿಷ ಕಾಲಾವಧಿಯನ್ನು ನೀಡಲಾಗಿದೆ. ಈ ಕಾಲಾವಧಿಯಲ್ಲಿ ಅವರು ತಮ್ಮ ಕನ್ನಡ ಸಂಘದ ಬಗ್ಗೆ ಮತ್ತು ಸಂಘದ ಚಟುವಟಿಕೆಗಳ ಬಗ್ಗೆ ವಿವರಿಸಲಿದ್ದಾರೆ.  ಅಮೆರಿಕದಲ್ಲಿಯೂ ಗಣೇಶೋತ್ಸವ ಭರ್ಜರಿ  ವಿಶ್ವ‌ದ ಎಲ್ಲ ಕನ್ನಡಿಗರನ್ನು ಕನೆಕ್ಟ್ ಮಾಡಲಿರುವ ವರ್ಚುವಲ್‌ ಸಮ್ಮೇಳನ : ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಆನ್‌ಲೈನ್‌ ನೇರಪ್ರಸಾರದ ಮೂಲಕ ಕನ್ನಡೋತ್ಸವ ನಡೆಸಲಾಗುತ್ತಿದ್ದು ಇದರಿಂದ ಇಡೀ ವಿಶ್ವ ಕನ್ನಡಿಗರನ್ನು ಏಕಕಾಲಕ್ಕೆ ಸಂಪರ್ಕ ಸಾಧಿಸಿಕೊಂಡು ಎಲ್ಲ ದಿಕ್ಕುಗಳಲ್ಲಿ ಹರಡಿಕೊಂಡಿರುವ ನಮ್ಮ ಕನ್ನಡಿಗರ ಪ್ರತಿಭೆಗಳನ್ನು ಪ್ರದರ್ಶಿಸುವ ವಿನೂತನ ವೇದಿಕೆ ಕಲಿಸಿದ ನಾವಿಕದ ಬಗ್ಗೆ ವಲ್ಲೀಶ ಶಾಸ್ತ್ರಿ ಸಂತಸ ವ್ಯಕ್ತ ಪಡಿಸಿದ್ದಾರೆ. ಸಿಂಗಾಪುರ, ಜರ್ಮನಿ, ಫ್ರಾನ್ಸ್‌, ರೋಮ್‌ ಸೇರಿದಂತೆ ಯುರೋಪಿನ ದೇಶಗಳು, ಯುಕೆ, ಆಸ್ಟ್ರೇಲಿಯಾ, ಕೆನಡಾ, ಮಧ್ಯ ಪ್ರಾಚ್ಯ ದೇಶಗಳು, ಆಫ್ರಿಕದ ದೇಶಗಳು ಹೀಗೆ ಎಲ್ಲೆಡೆ ನೆಲೆಸಿರುವ ನಮ್ಮ ಕನ್ನಡಿಗರು ತಾವು ಇರುವ ಕಡೆಗಳಿಂದಲೇ ತಮ್ಮ ಕಾರ್ಯಕ್ರಮಗಳನ್ನು ನಾವಿಕಗಾಗಿಯೇ ಎಕ್ಸ್‌ಕ್ಲೂಸಿವಾಗಿ ರೆಕಾರ್ಡ್‌ ಮಾಡಿ ಕಳಿಸಿದ್ದಾರೆ.  ಕಾರ್ಯಕ್ರಮದ ಹಣ ಆಶಾ ಕಾರ್ಯಕರ್ತರಿಗೆ : ಕರ್ನಾಟಕದಲ್ಲಿ ಕೋವಿಡ್‌ 19&amp;nbsp;ಸಮಸ್ಯೆಗೆ ತುತ್ತಾದವರಿಗೆ ಸ್ಪಂಧಿಸಿ ಹಗಲಿರುಳೆನ್ನದೆ ಯುದ್ಧೋಪಾದಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಈ ಬಾರಿಯ ನಾವಿಕೋತ್ಸವದಲ್ಲಿ ಸಂಗ್ರಹವಾದ ಟಿಕೆಟಿನ ಹಣವನ್ನು ನೀಡಲು ʻನಾವಿಕ ತಂಡʼ ತೀರ್ಮಾನ ಕೈಗೊಂಡಿದೆ. ಭಾರತೀಯ ಕರೆನ್ಸಿ ಪ್ರಕಾರ 10&amp;nbsp;ರಿಂದ 15&amp;nbsp;&amp;nbsp;ಲಕ್ಷ ರೂಪಾಯಿಗಳಷ್ಟು ಹಣ ಸಂಗ್ರಹವಾಗಲಿದ್ದು ಇಷ್ಟೂ ಹಣವನ್ನು ದೇಣಿಗೆ ರೂಪದಲ್ಲಿ ಅವರಿಗೆ ನೀಡಲಿದ್ದಾರೆ.  ಹೀಗಿರಲಿದೆ ವರ್ಚುಯಲ್‌ ಮನರಂಜನೆ : ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವೂ ಆನ್‌ಲೈನ್‌ದಲ್ಲಿಯೇ ನಡೆಯುವುದರಿಂದ ನೇರಪ್ರಸಾರ ವೀಕ್ಷಿಸಲು ಮತ್ತು ನಾವಿಕೋತ್ಸವದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಾವಿಕದ https://navika.org/ವೆಬ್‌ಸೈಟಿಗೆ ಭೇಟಿ ಕೊಡಲು ಕೋರಲಾಗಿದೆ. ಮೊದಲ ದಿನದಂದು ಆರಂಭದಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು. ನಂತರ ನಡುನಡುವೆ ಭಾರತದಿಂದ ಕರೆಸಲಾದ ಸೆಲೆಬ್ರಿಟಿಗಳು ಮತ್ತು ಗಣ್ಯರು ನಡೆಸಿಕೊಟ್ಟ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಖ್ಯಾತ ಗಾಯಕರಾದ ಪ್ರದೀಪ್‌-ಪ್ರವೀಣ್‌ಅವರ ಭಾವಗೀತೆಗಳು, ಸವಿತಾ ಅವರ ಹಳ್ಳಿಬ್ಯಾಂಡ್‌, ನಮ್ದುಕೇ ಟೀಮಿನ ಕಾಮಿಡಿ ನೈಟ್‌ ಇವು ಪ್ರಮುಖವಾಗಿರುತ್ತವೆ.  ಎರಡನೇ ದಿನದಂದು ಎನ್‌ಆರ್‌ಐ ಕನ್ನಡಿಗರ ʻಶ್ರೀರಾಮ ಪಟ್ಟಾಭಿಷೇಕʼ ಸಂಗೀತನಾಟಕ, ಹಿಂದೂಸ್ತಾನಿ ಸಂಗೀತ ಕಚೇರಿ, ʻಕನ್ನಡ ಕೋಗಿಲೆʼ ಮ್ಯೂಸಿಕಲ್‌ನೈಟ್‌, ಫ್ಯೂಷನ್‌ ಮ್ಯೂಸಿಕ್ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು ನಂತರ ಸಾಹಿತ್ಯ ಸಂಜೆ ಚರ್ಚಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಖ್ಯಾತ ಕವಿ&amp;nbsp;ಎಚ್‌.ಎಸ್‌.ವೆಂಕಟೇಶಮೂರ್ತಿ,&amp;nbsp;ನಿರ್ದೇಶಕ ಟಿ.ಎನ್‌. ಸೀತಾರಾಮ್‌, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಭಾನುವಾರ ನಾಲ್ಕನೇ ಸೆಷನ್‌ದಲ್ಲಿ ಜನಪ್ರಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಅವರು ತಮ್ಮ ಕ್ಷೇತ್ರದಲ್ಲಿ 25&amp;nbsp;ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರ ನೇತೃತ್ವದಲ್ಲಿ ಸಿನಿಗೀತೆಗಳ ರಸಸಂಜೆ ನಂತರ ಹರಟೆ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಎಲ್ಲವನ್ನೂವಿಶ್ವಾಧ್ಯಂತ ನೆಲೆಸಿರುವ ಕನ್ನಡಿಗರು ವೀಕ್ಷಿಸಬಹುದು.  ಈ ಕಾರ್ಯಕ್ರಮದ ಉದ್ಘಾಟನೆ, ನಿರೂಪಣೆ ಹೀಗೆ ಕೆಲವನ್ನು ಮಾತ್ರ ನೇರಪ್ರಸಾರದಲ್ಲಿ ಅಳವಡಿಸಿಕೊಂಡು ಮಿಕ್ಕೆಲ್ಲ ಚಟುವಟಿಕೆಗಳನ್ನುಮುಂಚಿತವಾಗಿಯೇ ರೆಕಾರ್ಡಿಂಗ್‌ ಮಾಡಿಕೊಂಡು ನಾವಿಕೋತ್ಸವದ ಮೂರು ದಿನಗಳ ಕಾಲ ಒಂದಾದ ನಂತರ ಒಂದರಂತೆ ನೇರಪ್ರಸಾರ ಮಾಡಲಾಗುವುದು. ಕನ್ನಡ ಸಂಘಗಳು ವಿಶ್ವದ ಎಲ್ಲ ಕಡೆಯಿಂದ ಶ್ರಮವಹಿಸಿ ಇದರಲ್ಲಿ ಭಾಗವಹಿಸುತ್ತಿವೆ. ಇವಷ್ಟೇ ಅಲ್ಲದೇ ಪ್ರತ್ಯೇಕವಾಗಿ ಅನಿವಾಸಿ ಕನ್ನಡಿಗರಿಗೆ ಮತ್ತು ಕರ್ನಾಟಕದಲ್ಲಿನ ಕನ್ನಡಿಗರಿಗೆ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ. ಕಥಾ ಸ್ಪರ್ಧೆ, ಅನಿವಾಸಿಗಳಿಗೆ ಶಾರ್ಟ್‌ಮೂವಿ ಸ್ಪರ್ಧೆ, ಬ್ಯೂಟಿ ಪ್ಯಾಜೆಂಟ್‌,ಹೊರದೇಶಗಳಲ್ಲಿ ಕನ್ನಡ ಕಲಿಯುತ್ತಿರುವ ಕನ್ನಡಕಲಿ ಮಕ್ಕಳಿಗೂ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.&amp;nbsp;  ಅಮೆರಿಕದಲ್ಲಿ ನೆಲೆಸಿರುವ ನಾವಿಕ ಸಂಘದ ಆಯೋಜಕರು ವಿಶ್ವದ ಎಲ್ಲ ಕನ್ನಡಸಂಘಗಳನ್ನು ಸಂಪರ್ಕಿಸಿ ಅವರ ಸಹಕಾರದಲ್ಲಿ ಆಯೋಜಿಸಲಾಗಿರುವ ವಿನೂತನ ಮಾದರಿಯ ಕನ್ನಡ ವರ್ಚುಯಲ್‌ಹಬ್ಬ ಇದಾಗಿದೆ.&amp;nbsp;&amp;nbsp;ಅಂತರ್ಜಾಲ ಚಾಲಿತ ನಾವಿಕೋತ್ಸವವನ್ನು ಕಡಲಾಚೆಯಿಂದ ಮನೆಯಂಗಳಕ್ಕೆ ತರುವ ಸಕಲಪ್ರ ಯತ್ನಗಳು ನಡೆದಿದ್ದು ಕನ್ನಡಿಗರು&amp;nbsp;&amp;nbsp;ಆನಂದಿಸಬೇಕು ಎಂದು&amp;nbsp;ನಾವಿಕ ಎಕ್ಸಿಕ್ಯೂಟಿವ್‌ ಕಮಿಟಿ ಪ್ರಾದೇಶಿಕ ನಿರ್ದೇಶಕ ಅನಿಲ್‌ ಭಾರದ್ವಾಜ್‌ ಮನವಿ ಮಾಡಿಕೊಂಡಿದ್ದಾರೆ.&amp;nbsp; </description>
            <media:content height="400" width="760" medium="image" url="https://static.asianetnews.com/images/01eg0g749qdscsxh81hh14nbwt/navika-aa-jpg_760x400.jpg"/>
        </item>
        <item>
            <title>ವಿದೇಶದಲ್ಲಿ ಸಂಕಷ್ಟ: ಮಂಗಳೂರಿಗೆ ಅನಿವಾಸಿ ಕನ್ನಡಿಗರ ಹೊತ್ತ 2 ವಿಮಾನ ಆಗಮನ</title>
            <link>https://kannada.asianetnews.com/nri/346-kannadigas-back-to-mangaluru-from-foriegn-qcbmpj</link>
            <guid>https://kannada.asianetnews.com/nri/346-kannadigas-back-to-mangaluru-from-foriegn-qcbmpj</guid>
            <pubDate>Mon, 22 Jun 2020 15:06:00 +0530</pubDate>
            <description>ಮಂಗಳೂರು(ಜೂ.22): ಕೊರೋನಾ ಲಾಕ್‌ಡೌನ್‌ ಕಾರಣದಿಂದ ವಿದೇಶದಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ಕರೆತರುವ ಕಾರ್ಯ ಮುಂದುವರಿದಿದ್ದು, ಭಾನುವಾರ ಮಂಗಳೂರಿಗೆ ಎರಡು ವಿಮಾನಗಳು ಆಗಮಿಸಿವೆ.  ಭಾನುವಾರ ಬೆಳಗ್ಗೆ ಶಾರ್ಜಾದಿಂದ ಏರ್‌ ಅರೇಬಿಯಾ ಹಾಗೂ ಸಂಜೆ ದಮಾಮ್‌ನಿಂದ ಇಂಡಿಗೋ ವಿಮಾನ ಮಂಗಳೂರಿಗೆ ತಲುಪಿದೆ. ಈ ವಿಮಾನಗಳಲ್ಲಿ ತಲಾ 173 ಮಂದಿ ಕರಾವಳಿ ಕನ್ನಡಿಗರು ಇದ್ದರು. ಇದಲ್ಲದೆ ಮಂಗಳೂರಿನ ಅಡ್ಡೂರಿನ ವ್ಯಕ್ತಿಯೊಬ್ಬರ ಮೃತದೇಹವನ್ನು ತರಲಾಗಿದೆ. ವಿಮಾನದಲ್ಲಿ ಹಿರಿಯ ನಾಗರಿಕರು, ಕೆಲಸ ಕಳೆದುಕೊಂಡವರು, ಪ್ರವಾಸಿ ವೀಸಾ ಅವಧಿ ಮುಕ್ತಾಯಗೊಂಡವರು, ಗರ್ಭಿಣಿಯರು ಹಾಗೂ ತುರ್ತು ಚಿಕಿತ್ಸೆ ಬೇಕಾದವರು ಆಗಮಿಸಿದ್ದು, ಇವರೆಲ್ಲರಿಗೆ ಮಂಗಳೂರಿನಲ್ಲಿ ಏಳು ದಿನಗಳ ಕ್ವಾರಂಟೈನ್‌ ವಿಧಿಸಲಾಗಿದೆ.  ದುಬೈನ ಕರ್ನಾಟಕ ಸ್ಪೋಟ್ಸ್‌ರ್‍ ಆ್ಯಂಡ್‌ ಕಲ್ಚರಲ್‌ ಕ್ಲಬ್‌ ಸಹಯೋಗದಲ್ಲಿ ಮಂಗಳೂರಿಗೆ ಆಗಮಿಸಿದ ಚಾರ್ಟರ್‌ ವಿಮಾನ ಇದಾಗಿದೆ. ಶಾರ್ಜಾ ವಿಮಾನ ನಿಲ್ದಾಣದಿಂದ ಭಾನುವಾರ ಬೆಳಗ್ಗೆ ಹೊರಟ ವಿಮಾನ 11.45ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದೆ. ದಮಾಮ್‌ನಿಂದ ಮಧ್ಯಾಹ್ನ 2.45ಕ್ಕೆ 173 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ ಸಂಜೆ 6.50ಕ್ಕೆ ಮಂಗಳೂರು ತಲುಪಿತು.  ದಕ್ಷಿಣ ಕನ್ನಡದಲ್ಲಿ ಮುಂಗಾರು ಚುರುಕು: ಗುಡುಗು ಸಹಿತ ಭಾರೀ ಮಳೆ  ಶವ ರವಾನೆಗೆ ನೆರವಾದರು  13 ದಿನಗಳ ಹಿಂದೆ ಅಬುಧಾಬಿಯಲ್ಲಿ ಅಪಘಾತದಲ್ಲಿ ಮೃತಪಟ್ಟಮಂಗಳೂರಿನ ಅಡ್ಡೂರು ನಿವಾಸಿ ಯಶವಂತ ಪೂಜಾರಿ ಎಂಬುವರ ಶವವನ್ನು ಕೂಡ ತರಲಾಗಿದೆ. ಅಲ್ಲಿ ಉದ್ಯೋಗದಲ್ಲಿದ್ದ ಯಶವಂತ ಪೂಜಾರಿ, ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಶವವನ್ನು ತಾಯ್ನಾಡಿಗೆ ಕರೆತರಲು ದಾಖಲೆ ಕೊರತೆ ಎದುರಾಗಿತ್ತು. ಅವರಲ್ಲಿ ಫೋಟೋ ಮತ್ತು ಆಧಾರ್‌ ಕಾರ್ಡ್‌ ಹೊರತುಪಡಿಸಿದರೆ, ಬೇರೇನೂ ಲಭ್ಯವಿರಲಿಲ್ಲ. ಅನಿವಾಸಿ ಕನ್ನಡಿಗರಾದ ಹಿದಾಯತ್‌ ಅಡ್ಡೂರು ಅವರು ವಾಟ್ಸಾಪ್‌ ಗ್ರೂಪ್‌ ರಚಿಸಿ, ಕನ್ನಡಿಗಾಸ್‌ ಹೆಲ್ಪ್‌ಲೈನ್‌ ತಂಡದ ಸದಸ್ಯರನ್ನು ಸೇರಿಸಿ ಮೃತದೇಹ ಕಳುಹಿಸಲು ಕಾರ್ಯಪ್ರವೃತ್ತರಾದರು. ಆದರೆ ಮೃತ ಯಶವಂತ ಪೂಜಾರಿಯ ಪಾಸ್‌ಪೋರ್ಟ್‌, ಇತರೆ ದಾಖಲೆ ಸಿಗದ ಕಾರಣ ರಾಯಭಾರ ಕಚೇರಿ ಮೂಲಕ ಶವ ಕಳುಹಿಸಲು ಬೇಕಾದ ಅಗತ್ಯ ದಾಖಲೆಗಳನ್ನು ಕ್ರೋಢೀಕರಿಸಲಾಯಿತು. ಅಲ್ಲದೆ ಕೊರೋನಾ ಟೆಸ್ಟ್‌ ಕೂಡ ಮಾಡಿಸಿದ ಬಳಿಕ ಅನಿವಾಸಿ ಕನ್ನಡಿಗರ ಖರ್ಚಿನಲ್ಲಿ ಶವವನ್ನು ಚಾರ್ಟರ್‌ ವಿಮಾನದಲ್ಲಿ ಮಂಗಳೂರಿಗೆ ಕಳುಹಿಸಲಾಯಿತು.  ಸಾಂಸ್ಥಿಕ ಕ್ವಾರಂಟೈನ್‌ಗೆ ಮತ್ತೆ ಕಿರಿಕ್‌  ಅನಿವಾಸಿ ಕನ್ನಡಿಗರನ್ನು ಕರೆತರುವುದೇ ದೊಡ್ಡ ಸಾಹಸ. ಆಗಿರುವಾಗ, ಅಲ್ಲಿ ಒಪ್ಪಿ ಇಲ್ಲಿಗೆ ಆಗಮಿಸುವವರಲ್ಲಿ ಕೆಲವರು ಸಾಂಸ್ಥಿಕ ಕ್ವಾರಂಟೈನ್‌ಗೆ ಜಿಲ್ಲಾಡಳಿತ ಜೊತೆ ಕಿರಿಕ್‌ ಮಾಡುತ್ತಿರುವ ಘಟನೆ ಮರುಕಳಿಸುತ್ತಿದೆ. ಕಳೆದ ಎರಡು ದಿನಗಳಲ್ಲಿ ವಂದೇ ಭಾರತ್‌ ಮಿಷನ್‌ ಹಾಗೂ ಚಾರ್ಟರ್‌ ವಿಮಾನಗಳಲ್ಲಿ ವಿದೇಶದಿಂದ ಆಗಮಿಸಿದ ಅನಿವಾಸಿ ಕನ್ನಡಿಗರು ಮಂಗಳೂರಿನಲ್ಲಿ ಕ್ವಾರಂಟೈನ್‌ಗೆ ಕಿರಿಕ್‌ ಮಾಡಿದ ಬಗ್ಗೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳೂರಿಗೆ ಆಗಮಿಸುವಾಗ ಕ್ವಾರಂಟೈನ್‌ಗೆ ಒಪ್ಪುವ ಈ ಮಂದಿ, ವಿಮಾನ ಇಳಿದ ಕೂಡಲೇ ನಿಲ್ದಾಣದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ನಮಗೆ ಬಾಡಿಗೆ ಮೊತ್ತ ಭರಿಸಿ ಕ್ವಾರಂಟೈನ್‌ ಮಾಡಲು ಸಾಧ್ಯವಿಲ್ಲ. ನಮ್ಮನ್ನು ಮನೆಗೇ ಕಳುಹಿಸಿ ಎಂದು ವಾದ ಮಾಡಿದ ಘಟನೆ ನಡೆದಿದೆ. ಬಳಿಕ ಪ್ರಯಾಣಿಕರ ಮನ ಒಲಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಯಿತು.  #NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್  " </description>
            <media:content height="400" width="760" medium="image" url="https://static.asianetnews.com/images/01eaz6fd66dzryr8g4e31j7twj/flight-jpg_760x400.jpg"/>
        </item>
        <item>
            <title>ಗಲ್ಫ್‌ ಕನ್ನಡಿಗರೊಂದಿಗೆ ಕಿಚ್ಚ ಸುದೀಪ್, ಕಾರ್ಯಕ್ರಮ ಟ್ಯೂನ್ ಮಾಡಿ</title>
            <link>https://kannada.asianetnews.com/nri/actor-kiccha-sudeep-live-interaction-with-gulf-kannadigas-qc15zw</link>
            <guid>https://kannada.asianetnews.com/nri/actor-kiccha-sudeep-live-interaction-with-gulf-kannadigas-qc15zw</guid>
            <pubDate>Tue, 16 Jun 2020 23:29:00 +0530</pubDate>
            <description>ಕುವೈತ್(ಜೂ. 16) &amp;nbsp;ಕಿಚ್ಚ ಸುದೀಪ್ ಗಲ್ಫ್ ಕನ್ನಡಿಗರೊಂದಿಗೆ ಮಾತನಾಡಲಿದ್ದಾರೆ. &amp;nbsp;ಜೂನ್ &amp;nbsp;19 &amp;nbsp;ಶುಕ್ರವಾರ ಸುದೀಪ್ ಸಂವಾದ ನಡೆಸಲಿದ್ದಾರೆ. &amp;nbsp;ಕಿಚ್ಚನ ಮಾತುಕತೆ ಗಲ್ಫ್ ಕನ್ನಡಿಗರ ಜತೆ ಕಾರ್ಯಕ್ರಮ ನಿಗದಿಯಾಗಿದೆ.  ಹೃದಯ ಚಕ್ರವರ್ತಿ; ಶಾಲಾ ಬಾಲಕಿ ಫೀಸ್ ಕಟ್ಟಿದ ಸುದೀಪ್&amp;nbsp;  ಶುಕ್ರವಾರ ಸಂಜೆ &amp;nbsp;5 &amp;nbsp;ಗಂಟೆಗೆ ಬಹರೇನ್, ಕತಾರ್, ಕುವೈತ್ ಕನ್ನಡಿಗರೊಂದಿಗೆ ಮಾತುಕತೆ ನಡೆಸಲಿದ್ದಾರೆ. &amp;nbsp;6 ಗಂಟೆಗೆ ಯುಎಇ, ಓಮನ್ ಕನ್ನಡಿಗರೊಂದಿಗೆ ಮಾತನಾಡಲಿದ್ದಾರೆ.  ಜಗತ್ತಿನಾದಂತ್ಯ ಕಿಚ್ಚ ಸುದೀಪ್ ದೊಡ್ಡ ಅಭಿಮಾನಿ ಬಳಗ ಹೊಂದಿದ್ದು ಈ ಮಾತುಕತೆಯನ್ನು ನಾವೆಲ್ಲ ಎದುರು ನೋಡುತ್ತಿದ್ದೇವೆ ಎಂದು ಗಲ್ಫ್ ಕನ್ನಡಿಗರು ತಿಳಿಸಿದ್ದಾರೆ.  "   </description>
            <media:content height="400" width="760" medium="image" url="https://static.asianetnews.com/images/01ea7395cwy6aw1nc32635w6qp/s-7-jpg_760x400.jpg"/>
        </item>
        <item>
            <title>10 ಲಕ್ಷ ರೂ. ನೀಡಿರುವ ನಾವಿಕಕ್ಕೆ ಸರ್ಕಾರದ ಪರವಾಗಿ ಡಿಸಿಎಂ ಅಶ್ವತ್ಥ್ ನಾರಾಯಣ ಕೃತಜ್ಞತೆ</title>
            <link>https://kannada.asianetnews.com/nri/ashwath-narayan-thanks-to-world-kannadigas-federation-for-donation-rs-10-lakh-to-cm-relief-fund-qb7g2e</link>
            <guid>https://kannada.asianetnews.com/nri/ashwath-narayan-thanks-to-world-kannadigas-federation-for-donation-rs-10-lakh-to-cm-relief-fund-qb7g2e</guid>
            <pubDate>Sun, 31 May 2020 22:19:00 +0530</pubDate>
            <description>ಬೆಂಗಳೂರು, (ಮೇ.31): ಕೋವಿಡ್-19 ಸೋಂಕು ನಿಭಾಯಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಭಾರತದಲ್ಲಿರುವ ನಿಮ್ಮವರ ಕಾಳಜಿ ರಕ್ಷಣೆ ಬಗ್ಗೆ ಆತಂಕ ಬೇಡ ನಮ್ಮ ಸರ್ಕಾರ ಇದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಅಮೆರಿಕದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.  ನಾವು ವಿಶ್ವ ಕನ್ನಡಿಗರು (ನಾವಿಕ) ಅಮೆರಿಕದ ಕನ್ನಡ ಒಕ್ಕೂಟ ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಾವಿಕದ ಬಂಧುಗಳು ನೀಡಿರುವ 10 ಲಕ್ಷ ರೂ. ದೇಣಿಗೆಗೆ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.  ದೀಪಿಕಾ ಹೇಳಿದ ದಾಂಪತ್ಯ ಜೀವನದ ಗುಟ್ಟು, ಏನಾಯ್ತು ಲಡಾಖ್ ಬಿಕ್ಕಟ್ಟು? ಮೇ.31ರ ಟಾಪ್ 10 ಸುದ್ದಿ!    ಕೋವಿಡ್ ಲಾಕ್‌ಡೌನ್‌, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕದಲ್ಲಿರುವ ನಮ್ಮವರಿಗೆ ಧೈರ್ಯ ಹೇಳಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವ ನಾವಿಕ ಬಳಗಕ್ಕೆ ಅಭಿನಂದನೆ. ವೀಡಿಯೋ ಕಾನ್ಫರೆನ್ಸ್ ಮೂಲಕ ‘ನಾವಿಕ’, ಅಮೆರಿಕ ಕನ್ನಡಿಗರ ಕೈ ಹಿಡಿಯುತ್ತಿದೆ. ಪರಿಣಿತರಿಂದ ಕೋವಿಡ್ ಮಾಹಿತಿ, ಮುನ್ನೆಚ್ಚರಿಕಾ ಸಲಹೆಗಳನ್ನು ನೀಡುತ್ತಿರುವುದು ಒಳ್ಳೆಯ ಕೆಲಸ. &amp;nbsp;ಸೋಂಕು ದೀರ್ಘಕಾಲ ನಮ್ಮೊಂದಿಗೆ ಇರುವುದರಿಂದ ಆರೋಗ್ಯ, ಆರ್ಥಿಕ ಸಮಸ್ಯೆ ಎದುರಿಸಲು ಪರಸ್ಪರ ಸಹಕಾರ ಬಹಳ ಮುಖ್ಯ. &amp;nbsp;ಇಂಥ ಸನ್ನಿವೇಶದಲ್ಲಿ ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ. ಇಲ್ಲಿರುವ ನಿಮ್ಮ ಆಪ್ತರ ರಕ್ಷಣೆ ನಮ್ಮ ಜವಾಬ್ದಾರಿಎಂದು ಹೇಳಿದರು.  ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. &amp;nbsp;ಮೂಲಸೌಕರ್ಯದ ಕೊರತೆಯನ್ನು ಹಿಮ್ಮೆಟ್ಟಿ ಇಡೀ ವಿಶ್ವದ ಗಮನ ಸೆಳೆದಿರುವ ಭಾರತ, ಇಂದು ಇತರ ರಾಷ್ಟ್ರಗಳಿಗೆ ಪ್ರೇರಣೆ ನೀಡುವಂತಾಗಿದೆ. ನಿಮ್ಮ ಜನ್ಮಭೂಮಿ ಬಗ್ಗೆ ಹೆಮ್ಮೆ ಪಡುವಂತ ಕೆಲಸ ಆಗುತ್ತಿದೆ‌‌ ಎಂದು ಹೇಳಿದರು.  ಲಾಕ್‌ಡೌನ್‌ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. &amp;nbsp;ವೈರಾಣು ಪತ್ತೆ ಪ್ರಯೋಗಾಲಯದ ಸಂಖ್ಯೆ 3 ತಿಂಗಳ ಅವಧಿಯಲ್ಲಿ 2ರಿಂದ 60ಕ್ಕೆ ಹೆಚ್ಚಿಸಲಾಗಿದೆ. ಪಿಪಿಇ ಕಿಟ್‌, ಎನ್‌ 95 ಮಾಸ್ಕ್‌, ವೆಂಟಿಲೇಟರ್‌ಗಳ ತಯಾರಿಕೆಯಲ್ಲಿ ಸ್ವಾಲಂಬನೆ ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಟೆಲಿಮೆಡಿಸನ್‌, ಟೆಲಿಕನ್ಸಲ್ಟೇಷನ್‌ ಮೂಲಕ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ. ರಿಮೋಟ್‌ ಐಸಿಯು ವ್ಯವಸ್ಥೆ ಇದೆ. ಜತೆಗೆ ಹೊಸ ಟೆಸ್ಟಿಂಗ್ ವಿಧಾನ, ಹೊಸ ಉಪಕರಣಗಳ ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ,”ಎಂದು ಮಾಹಿತಿ ನೀಡಿದರು.  ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಮುಂದೆಯೂ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲೂ ಆರೋಗ್ಯ ಸಮೀಕ್ಷೆ ನಡೆಸಿ ಆ ಮಾಹಿತಿಯನ್ನು ಡಿಜಿಟಲೈಸ್‌ ಮಾಡಲಾಗಿದೆ ಎಂದು ಹೇಳಿದರು. </description>
            <media:content height="400" width="760" medium="image" url="https://static.asianetnews.com/images/01e9nt41qsd7pea86bpanzc4jk/101406026-3302330769788656-3573747183540764672-o-jpg_760x400.jpg"/>
        </item>
        <item>
            <title>ಕೊರೋನಾ ಕಾಟ: UAEನಲ್ಲಿರುವ ಕನ್ನಡಿಗರಿಗೆ ಸುವರ್ಣ ನ್ಯೂಸ್‌ ನೆರವು</title>
            <link>https://kannada.asianetnews.com/nri/president-of-the-nri-forum-praveen-shetty-says-thanks-to-suvarna-news-qa00ms</link>
            <guid>https://kannada.asianetnews.com/nri/president-of-the-nri-forum-praveen-shetty-says-thanks-to-suvarna-news-qa00ms</guid>
            <pubDate>Fri, 08 May 2020 11:29:00 +0530</pubDate>
            <description>ಬೆಂಗಳೂರು(ಮೇ.08): ಸಂಯುಕ್ತ ಅರಬ್‌ ರಾಷ್ಟ್ರಗಳಲ್ಲಿರುವ (ಯುಎಇ) ಕನ್ನಡಿಗರನ್ನು ಕರೆತರಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುವುದು ನಮ್ಮ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಇದಕ್ಕೆ ಕಾರಣರಾದ ಜನಪ್ರತಿನಿಧಿಗಳು ಹಾಗೂ ಸುವರ್ಣ ನ್ಯೂಸ್‌ ವಾಹಿನಿಗೂ ಧ್ಯನವಾದ ಎಂದು ಕರ್ನಾಟಕ ಎನ್‌ಆರ್‌ಐ ಫೋರಂ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ತಿಳಿಸಿದ್ದಾರೆ.  ಯುಎಇನಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ನಮ್ಮ ಮನವಿಗೆ ಸ್ಪಂದಿಸಿದರು. ಅಲ್ಲದೇ ಈ ಬಗ್ಗೆ ಸುವರ್ಣ ನ್ಯೂಸ್‌ ನಿರಂತರ ವರದಿ ಪ್ರಸಾರ ಮಾಡಿ ಸರ್ಕಾರಕ್ಕೆ ಒತ್ತಾಯಿಸಿತ್ತು. ಒತ್ತಾಯಕ್ಕೆ ಮಣಿದ ಸರ್ಕಾರ ಕನ್ನಡಿಗರನ್ನು ಕರೆತರಲು ಸಿದ್ಧತೆ ಮಾಡಿರುವುದಾಗಿ ತಿಳಿಸಿದೆ.&amp;nbsp;  ಯುಎಇ ಕನ್ನಡಿಗರಿಗೆ ಮರಳಲು ಸಹಾಯಹಸ್ತ!  ಮೇ 12ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಕನ್ನಡಿಗರು ಆಗಮಿಸಲಿದ್ದಾರೆ ಎಂದು ಪ್ರವೀಣ್‌ ಶೆಟ್ಟಿ ವಿಡಿಯೋ ಸಂದೇಶದ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. </description>
            <media:content height="400" width="760" medium="image" url="https://static.asianetnews.com/images/01e7sda6csnwbm4h9yz5jg3btg/sn-airlift-jpg_760x400.jpg"/>
        </item>
        <item>
            <title>ದುಬೈನಲ್ಲಿ ಸಿಲುಕಿದ ಕನ್ನಡಿರಿಗೆ ತವರಿಗೆ  ಮರಳಲು ಸರ್ಕಾರದ ನೆರವು, ನೋಂದಣಿ ಮಾಡಿ!</title>
            <link>https://kannada.asianetnews.com/video/nri/karnataka-govt-ready-to-nri-forum-in-dubai-q9ntc9</link>
            <guid>https://kannada.asianetnews.com/video/nri/karnataka-govt-ready-to-nri-forum-in-dubai-q9ntc9</guid>
            <pubDate>Fri, 01 May 2020 21:20:00 +0530</pubDate>
            <description>ಬೆಂಗಳೂರು(ಮೇ.01): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ತವರಿಗೆ ಮರಳು ಕರ್ನಾಟಕ ಸರ್ಕಾರ ನೆರವಿನ ಹಸ್ತ ಚಾಚಿದೆ. NRI ಫೋರಂಗಳ ನೇತೃತ್ವದಲ್ಲಿ ಕನ್ನಡಿರಿಗೆ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ನಿರುದ್ಯೋಗಿಗಳು, ವಯಸ್ಸಾದವರು, ಆರೋಗ್ಯ ಸಮಸ್ಯೆ ಇದ್ದವರಿಗೆ ಪ್ರಮುಖ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.&amp;nbsp; </description>
            <media:content height="400" width="760" medium="image" url="https://static.asianetnews.com/images/01e5sj3xv8k6q17yn9hjx4rekk/dubai-airport-jpg_760x400.jpg"/>
        </item>
        <item>
            <title>ಔಷಧ, ಆಹಾರ.. ಕತಾರ್ ಭಾರತೀಯರ ನೆರವಿಗೆ ನಾವಿದ್ದೇವೆ 24 ಗಂಟೆ</title>
            <link>https://kannada.asianetnews.com/nri/covid-19-crisis-embassy-of-india-qatar-providing-unconditional-support-to-community-q9ncna</link>
            <guid>https://kannada.asianetnews.com/nri/covid-19-crisis-embassy-of-india-qatar-providing-unconditional-support-to-community-q9ncna</guid>
            <pubDate>Fri, 01 May 2020 15:19:00 +0530</pubDate>
            <description>ಕತಾರ್(ಮೇ 1) &amp;nbsp;ಕೊರೋನಾ ವೈರಸ್ ಪ್ರಪಂಚದ ಯಾವ ರಾಷ್ಟ್ರವನ್ನು ಬಿಟ್ಟಿಲ್ಲ. ಕತಾರ್ ಸಹ ಕೊರೋನಾದಿಂದ ಬಳಲುತ್ತಿದ್ದು ಭಾರತೀಯ ಮೂಲದವರಿಗೆ ಭಾರತೀಯ ರಾಯಭಾರ ಕಚೇರಿ ನೆರವು ನೀಡುತ್ತಲೇ ಬಂದಿದೆ.  ಐಸಿಬಿಎಫ್, ಐಸಿಸಿ, &amp;nbsp;ಮತ್ತು ಇಂಡಿಯನ್ ಡಾಕ್ಟರ್ಸ್ ಕ್ಲಬ್ ಒಂದಾಗಿ ಸೇರಿ ಕೆಲಸ ಮಾಡುತ್ತಿವೆ. 7 ಸಾವವಿರಕ್ಕೂ ಅಧೀಕ ಮಂದಿಗೆ ನೆರವು ನೀಡಲಾಗಿದೆ. ಅಗತ್ಯ ಔಷಧ, ಆಹಾರ ಮತ್ತು ಅತ್ಯವಶ್ಯಕ ವಸ್ತು ನೀಡುವ ಕೆಲಸ ಮಾಡಿಕೊಂಡು ಬಂದಿದ್ದು ಮನೆಯಲ್ಲೇ ಇರಿ ಎಂಬ ಮನವಿ ಮಾಡಿಕೊಳ್ಳುತ್ತಿದೆ.  NRIಗಳೊಂದಿಗೆ ಮಾತನಾಡಿದ ಸಿಎಂ ಹೇಳಿದ್ದು ಒಂದೇ ಮಾತು  ವಾಟ್ರಾಪ್ ಗ್ರೂಪ್, &amp;nbsp;ಇಂಡಿಯನ್ ಡಾಕ್ಟರ್ಸ್ ಕ್ಲಬ್ ನ್ನು &amp;nbsp;ಡಾ. ಮೋಹನ್ ಥಾಮಸ್ &amp;nbsp;ಮುನ್ನಡೆಸುತ್ತಿದ್ದು ವಿಶೇಷ ಕಾಳಜಿ ವಹಿಸಿಕೊಂಡಿದ್ದಾರೆ. &amp;nbsp;ಭಾರತೀಯ ಮೂಲದವರು ಎಂಬ ದಾಖಲೆ ಇದ್ದರೆ ಸಾಕು ನೆರವಿಗೆ ನಿಲ್ಲಲಾಗುತ್ತಿದೆ. ನೂರಾರು ಜನರಿಗೆ ಔಷಧ ಮನೆ ಬಾಗಿಲಿಗೆ ತಲುಪಿಸಲಾಗಿದೆ.  ಭಾರತೀಯರರ ಹಿತ ಕಾಪಾಡುವ ಕೆಲಸ ಮಾಡಿಕೊಂಡು ಬಂದಿದ್ದು ಮೆಡಿಕಲ್ ಬಿಲ್ ನೀಡಲು ಸಾಧ್ಯವಿಲ್ಲದವರಿಗೂ ಈ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ನೆರವಾಗುತ್ತಿದೆ. ವಾಟ್ಸಪ್ ಗ್ರೂಪ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು ನೆರವು ಪಡೆದುಕೊಂಡವರು ಅನಂತ ಧನ್ಯವಾದ ಸಲ್ಲಿಸಿದ್ದಾರೆ.  ಅನಿವಾಸಿ ಭಾರತೀಯ &amp;nbsp;ಸಂಘಟನೆಗಳು ಮತ್ತು ಭಾರತೀಯ ರಾಯಭಾರ ಕಚೇರಿ ನಿರಂತರವಾಗಿ ಹಿತ ಕಾಪಾಡುವ ಕೆಲಸ &amp;nbsp;ಮಾಡಿಕೊಂಡು ಬಂದಿದೆ. &amp;nbsp;ಕತಾರ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರು ಸಂಕಷ್ಟದಲ್ಲಿದ್ದೆ ದಿನದ 24 ಗಂಟೆ 0097455667569, 0097455647502 ಮತ್ತು 0097433484669 ದೂರವಾಣಿಗೆ ಸಂಪರ್ಕಿಸಬಹುದು.     </description>
            <media:content height="400" width="760" medium="image" url="https://static.asianetnews.com/images/01e77s9gt5511qpwx4ec20xjqj/embassy-of-india-jpg_760x400.jpg"/>
        </item>
        <item>
            <title>ನಿರ್ಗತಿಕರ ಅನ್ನ​ದಾ​ಸೋ​ಹಕ್ಕೆ ಸಹಾ​ಯ​ಹ​ಸ್ತ: ವಾಟ್ಸಾಪ್‌ ಮೆಸೆಜ್‌ಗೆ ಅಮೆರಿಕದಿಂದ ಸ್ಪಂದನೆ</title>
            <link>https://kannada.asianetnews.com/nri/nri-narendranath-help-to-needy-people-during-lockdown-in-hassan-q9fy0x</link>
            <guid>https://kannada.asianetnews.com/nri/nri-narendranath-help-to-needy-people-during-lockdown-in-hassan-q9fy0x</guid>
            <pubDate>Mon, 27 Apr 2020 15:20:00 +0530</pubDate>
            <description>ಹಾಸನ(ಏ.27): ವಾಟ್ಸಾಪ್‌ ಮೂಲಕ ಮಾಡಿದ ಸಂದೇಶಕ್ಕೆ ದೂರದ ಅಮೆರಿಕ ದೇಶದಿಂದ ತಕ್ಷಣದ 5 ಸಾವಿರ ರು. ನೀಡಿರುವ ಮಾನವೀಯ ಸ್ಪಂದನೆ ಸಿಕ್ಕಿದೆ. ವಾರ್ತಾ ಇಲಾಖೆ ಹಾಗೂ ರೆಡ್‌ ಕ್ರಾಸ್‌ ಸಂಸ್ಥೆ ಸಹಯೋಗದಲ್ಲಿ ನೋಂದಣಿಗೊಂಡಿರುವ ಕೊರೋನಾ ವಾರಿಯರ್ಸ್‌ ಸ್ವಯಂ ಸೇವಕರು ಅಸಹಾಯಕರಿಗೆ ಹಾಸನ ನಗರದ ಸರ್ಕಾರಿ ಆಸ್ಪತ್ರೆಯ ಎದುರು ಊಟದ ವ್ಯವಸ್ಥೆಯನ್ನು ಪ್ರತಿದಿನ ಮಾಡುತ್ತಾ ಬಂದಿದ್ದಾರೆ.  ಇದನ್ನು ಗಮನಿಸಿದ ಹಾಸನದ ರಾಘವೇಂದ್ರ ಸ್ವಾಮಿ ಮಠದ ಪಕ್ಕದ ಪ್ರತಿಭಾ ಪ್ಯೂಯಲ್ಸ್‌ ಪೆಟ್ರೋಲ್‌ ಬಂಕ್‌ ಮಾಲೀಕ ರಾಮಚಂದ್ರ ಅವರು ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಊಟದ ವ್ಯವಸ್ಥೆಯ ಪೋಟೋಗಳನ್ನು ತಮ್ಮ ಸ್ನೇಹಿತರಿಗೆ ವಾಟ್ಸಾಪ್‌ ಮೂಲಕ ರವಾನಿಸಿದರು. ದೂರದ ಅಮೆರಿಕ ದೇಶದ ಅವರ ಸ್ನೇಹಿತರಾದ ನರೇಂದ್ರನಾಥ್‌ ತಕ್ಷಣ ಈ ಸಂದೇಶಕ್ಕೆ ಸ್ಪಂದಿಸಿ 5 ಸಾವಿರ ಹಣ ಕಳುಹಿಸಿ ನಿರ್ಗತಿಕರಿಗೆ ಒಂದು ದಿನದ ದಾಸೋಹಕ್ಕೆ ಸಹಾಯ ಹಸ್ತ ನೀಡಿದ್ದಾರೆ.  ಗ್ರೀನ್‌ ಝೋನ್‌ನಲ್ಲಿ ಲಾಕ್‌ಡೌನ್‌ ಸಡಿಲ, ವಾಹನ ಸಂಚಾರ ಹೆಚ್ಚಳ  ಅಲ್ಲದೇ, ಸೇವಾ ಮನೋ ಭಾವನೆ ಹೊಂದಿರುವ ಡಾ.ಅರವಿಂದ್‌, ಆರ್‌.ಕೆ. ಚಂದ್ರಶೇಖರ ಮತ್ತು ಶ್ಯಾಮ್‌ ರಾಮ ದ್ಯಾನಿ ಅವರು ಹದಿನೈದು ಸಾವಿರ ರು. ನಿರ್ಗತಿಕರ ಅನ್ನ ದಾಸೋಹಕ್ಕೆ ದಾನ ನೀಡಿದ್ದಾರೆ. ಹಾಸನ್‌ ಫ್ರೆಂಡ್ಸ್‌ ಕಾರ್ನರ್‌ ಸ್ವಯಂ ಸೇವಾ ಸಂಘದ ಈ ಸದಸ್ಯರ ಕಾರ್ಯ ಸಾರ್ವಜನಿಕರ ಗಮನ ಸೆಳೆದಿದೆ.  ಇಂತಹ ಸಂಘಟನೆಯ ಗಮನ ಸೆಳೆಯುವಲ್ಲಿ ಹಾಸನ ಕೊರೋನಾ ಸೈನಿಕರ ಶ್ರಮ ಸಾರ್ಥಕ ಎನಿಸುತ್ತದೆ. ಇಂದಿನ ಊಟದ ವ್ಯವಸ್ಥೆಯಲ್ಲಿ ಒಂಬತ್ತು ಕೊರೋನಾ ಸೈನಿಕರು ಸಹಕಾರ ನೀಡಿದ್ದಲ್ಲದೇ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಶ್ರಮಿಸಿದರು. ಊಟದ ವ್ಯವಸ್ಥೆಗೆ ಸರದಿ ಸಾಲಿನಲ್ಲಿ ನಿಲ್ಲುವ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಬಿಳಿ ಗೆರೆ ಹಾಕಲಾಯಿತು. &amp;nbsp; </description>
            <media:content height="400" width="760" medium="image" url="https://static.asianetnews.com/images/01e6xgp0qnbaanjhtgfr7pc7j7/whatsapp-users-can-check-fake-news-in-search-message-feature-jpg-710x400xt-jpg_760x400.jpg"/>
        </item>
        <item>
            <title>NRIಗಳೊಂದಿಗೆ ಮಾತನಾಡಿದ ಸಿಎಂ BSY ಹೇಳಿದ್ದು ಒಂದೇ ಮಾತು</title>
            <link>https://kannada.asianetnews.com/gallery/nri/coronavirus-covid-19-cm-bs-yediyurappa-video-conference-with-nris-q9eo9r</link>
            <guid>https://kannada.asianetnews.com/gallery/nri/coronavirus-covid-19-cm-bs-yediyurappa-video-conference-with-nris-q9eo9r</guid>
            <pubDate>Sun, 26 Apr 2020 22:52:00 +0530</pubDate>
            <description>ಬೆಂಗಳೂರು(ಏ. 26) &amp;nbsp; ಇಂಗ್ಲೆಂಡ್ ನಲ್ಲಿರುವ ಕನ್ನಡಿಗರ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಸಂವಾದ ನಡೆಸಿದ್ದಾರೆ. &amp;nbsp; ಈ ಸಂದರ್ಭದಲ್ಲಿ ಲಾರ್ಡ್ ಚಾನ್ಸಲೆರ್ ಮತ್ತು ಸೆಕ್ರೆಟರಿ, ಪಾರ್ ಜಸ್ಟೀಸ್ , ಮೆಂಬರ್ ಆಫ್ ಪಾರ್ಲಿಮೆಂಟ್ &amp;nbsp;ರಾಬರ್ಟ್‌ ಬಕ್ಲಂಡ್, ಜೊತೆಯೂ ಮಾತು ಕತೆ ನಡೆಸಿದ್ದಾರೆ. &amp;nbsp;ನಾರ್ಥ್ ಸ್ವೀಡನ್ ಕೌನ್ಸಿಲರ್ ರವಿ ವೆಂಕಟೇಶ್, &amp;nbsp; ವೆಸ್ಟ್ ಸ್ವಿಂಡನ ಕೌನ್ಸಿಲರ್ ಸುರೇಶ್ ಗತ್ತಾಪುರ ಕೂಡ ಸಂವಾದದಲ್ಲಿ ಭಾಗಿಯಾಗಿದ್ದರು. &amp;nbsp;ಯುಕೆ ಕನ್ನಡ ಬಳಗದ ಸದಸ್ಯರು ಸಂವಾದದಲ್ಲಿ ಸ್ಥಿತಿಗತಿ ತಿಳಿಸಿದರು.&amp;nbsp;   ಕೊರೋನಾ ಪರಿಸ್ಥಿತಿಬಗ್ಗೆ ಅನಿವಾಸಿ ಕನ್ನಡಿಗರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ.  ರವಿ ವೆಂಕಟೇಶ್ ವೇಸ್ಟ್ ಸ್ವೀಡನ್ ಕೌನ್ಸಿಲರ್  ಯುಕೆ ಕನ್ನಡ ಬಳಗದ ಸದಸ್ಯರು ಸಂವಾದದಲ್ಲಿ ಭಾಗಿ  ಪ್ರತಿ ನಿತ್ಯ &amp;nbsp;ಹೆಚ್ಚಾಗುತ್ತಿರುವ ಸೋಂಕು ಮತ್ತು ಸಾವಿನ ಬಗ್ಗೆ ಮಾಹಿತಿ ಪಡೆದ ಬಿಎಸ್ ವೈ  ಅಲ್ಲಿ ಕನ್ನಡಿಗರಿಗೆ ಏನೆಲ್ಲಾ ತೊಂದರೆ ಆಗ್ತಿದೆ. ವಿದ್ಯಾರ್ಥಿಗಳು ಹೇಗಿದ್ದಾರೆ ಎಂದು ಕೇಳಿದ ಬಿಎಸ್‌ವೈ  ಆದಷ್ಟು ಬೇಗ ಅಲ್ಲಿರುವ ಕನ್ನಡಿಗರನ್ನು &amp;nbsp;ಭಾರತಕ್ಕೆ ಕರೆಸಿಕೊಳ್ಳುವ ಭರವಸೆ  coronavirus covid 19 cm-bs-yediyurappa- video-conference with NRIs   NRIಗಳೊಂದಿಗೆ ಮಾತನಾಡಿದ ಸಿಎಂ BSY ಹೇಳಿದ್ದು ಒಂದೇ ಮಾತು   &amp;nbsp;ಇಂಗ್ಲೆಂಡ್ ನಲ್ಲಿರುವ ಕನ್ನಡಿಗರ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಸಂವಾದ ನಡೆಸಿದ್ದಾರೆ. &amp;nbsp; ಈ ಸಂದರ್ಭದಲ್ಲಿ ಲಾರ್ಡ್ ಚಾನ್ಸಲೆರ್ ಮತ್ತು ಸೆಕ್ರೆಟರಿ, ಪಾರ್ ಜಸ್ಟೀಸ್ , ಮೆಂಬರ್ ಆಫ್ ಪಾರ್ಲಿಮೆಂಟ್ &amp;nbsp;ರಾಬರ್ಟ್‌ ಬಕ್ಲಂಡ್, ಜೊತೆಯೂ ಮಾತು ಕತೆ ನಡೆಸಿದ್ದಾರೆ. &amp;nbsp;ನಾರ್ಥ್ ಸ್ವೀಡನ್ ಕೌನ್ಸಿಲರ್ ರವಿ ವೆಂಕಟೇಶ್, &amp;nbsp; ವೆಸ್ಟ್ ಸ್ವಿಂಡನ ಕೌನ್ಸಿಲರ್ ಸುರೇಶ್ ಗತ್ತಾಪುರ ಕೂಡ ಸಂವಾದದಲ್ಲಿ ಭಾಗಿಯಾಗಿದ್ದರು. &amp;nbsp;ಯುಕೆ ಕನ್ನಡ ಬಳಗದ ಸದಸ್ಯರು ಸಂವಾದದಲ್ಲಿ ಸ್ಥಿತಿಗತಿ ತಿಳಿಸಿದರು.&amp;nbsp; </description>
            <media:content height="400" width="760" medium="image" url="https://static.asianetnews.com/images/01e6vqv22dwrtbc83xgxf4a8nm/bsy1-jpg_760x400.jpg"/>
        </item>
        <item>
            <title>ಬೆಚ್ಚಿಬಿದ್ದ ಭಾರತ; 3000ಕ್ಕೂ ಅಧಿಕ NRIಗಳಿಗೆ ಕೊರೋನಾ ಸೋಂಕು</title>
            <link>https://kannada.asianetnews.com/video/nri/3000-over-nris-tested-positive-for-covid-19-q8xv00</link>
            <guid>https://kannada.asianetnews.com/video/nri/3000-over-nris-tested-positive-for-covid-19-q8xv00</guid>
            <pubDate>Fri, 17 Apr 2020 20:58:00 +0530</pubDate>
            <description>ಬೆಂಗಳೂರು(ಏ. 17) ಇದು ಎಲ್ಲದಕ್ಕಿಂತ &amp;nbsp;ದೊಡ್ಡ ಆತಂಕಾರಿ ಸುದ್ದಿ. ಕುವೈತ್ , ಸಿಂಗಾಪುರ, ಇರಾನ್, ಇರಾಕ್ ನಲ್ಲಿ ಇರುವ ಭಾರತೀಯರಿಗೆ ಕೊರೋನಾ ಸೋಂಕು ತಗುಲಿದೆ.  ಅಧಿಕಾರಿಗಳ ಸಭೆ ತೆಗೆದುಕೊಂಡ 12 ಕಠಿಣ ತೀರ್ಮಾನಗಳು  ಭಾರತೀಯ ಮೂಲದವರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಬೇಕು ಎಂಬ ಚಿಂತನೆಗೂ ಬ್ರೇಕ್ ಬಿದ್ದಿದೆ. ಭಾರತೀಯ ಮೂಲದ 3 ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ತಾಗಿದೆ. </description>
            <media:content height="400" width="760" medium="image" url="https://static.asianetnews.com/images/01e63v6pcr3prz036jtr6kbgq3/in-coronaviruspatient-jpg_760x400.jpg"/>
        </item>
        <item>
            <title>ಸ್ವಿಡನ್ ಭಾವ, ಅಮೆರಿಕಾ ಅತ್ತಿಗೆ, ನ್ಯೂಜಿಲೆಂಡ್ ಅತ್ತೆಯ ಕೊರೋನಾ ಕಥೆ- ವ್ಯಥೆಗಳಿವು!</title>
            <link>https://kannada.asianetnews.com/nri/nris-share-a-covid-19-lockdown-experiences-in-their-places-q8nt08</link>
            <guid>https://kannada.asianetnews.com/nri/nris-share-a-covid-19-lockdown-experiences-in-their-places-q8nt08</guid>
            <pubDate>Sun, 12 Apr 2020 10:39:00 +0530</pubDate>
            <description>- ರವಿಶಂಕರ್‌ ಭಟ್‌  ಮೊದಲೇ ನಿರ್ಬಂಧಿಸಿದ್ದರೆ ನ್ಯೂಜಿಲೆಂಡಲ್ಲಿ ಒಂದೂ ಕೇಸು ಇರುತ್ತಿರಲಿಲ್ಲ  - ಡಾ.ಪ್ರೀತಮ್‌ ಕೋಡಿಮೂಲೆ  ದಂತಮೂಳೆ ತಜ್ಞ ಆಕ್ಲೆಂಡ್‌, ನ್ಯೂಜಿಲೆಂಡ್‌  ದಕ್ಷಿಣ ಕನ್ನಡದ ನಾನು ಇರುವುದು ಆಕ್ಲೆಂಡ್‌ನಲ್ಲಿ. ಭಾರತದ ಆಗ್ನೇಯ ದಿಕ್ಕಿಗೆ ದಕ್ಷಿಣ ಧ್ರುವಕ್ಕೆ ಸಮೀಪ ಇರುವ ನ್ಯೂಜಿಲೆಂಡ್‌ ಎಂಬ ದ್ವೀಪರಾಷ್ಟ್ರದ ಉತ್ತರ ಭಾಗದ ನಗರವಿದು. ಓದು ಮುಗಿಸಿ ಔದ್ಯೋಗಿಕ ಉನ್ನತಿಗಾಗಿ ನಾನಿಲ್ಲಿಗೆ ಬಂದು 3 ವರ್ಷಗಳಾದವು. ಇನ್ನೂ ಪೂರ್ಣಪ್ರಮಾಣದ ಉದ್ಯೋಗ ದೊರೆತಿಲ್ಲ. ಅಷ್ಟರಲ್ಲಿ ಮಹಾಮಾರಿ ಕೊರೋನಾ ಇಡೀ ವಿಶ್ವವನ್ನೇ ಆಪೋಶನ ತೆಗೆದುಕೊಳ್ಳುತ್ತಿದೆ.  ಆದರೆ, ಸಾಂಕ್ರಾಮಿಕ ರೋಗ ಅಮೆರಿಕ ಹಾಗೂ ಯುರೋಪ್‌ ರಾಷ್ಟ್ರಗಳಷ್ಟುಇಲ್ಲಿ ತೀವ್ರವಾಗಿಲ್ಲ. ಈವರೆಗೆ ಸೋಂಕಿತರ ಪ್ರಮಾಣ 1000ದ ಆಜುಬಾಜಿನಲ್ಲಿದೆ. ನಾಲ್ವರು ಮೃತಪಟ್ಟಿದ್ದಾರೆ. ಹೆಚ್ಚೂಕಮ್ಮಿ 400 ಮಂದಿ ಚೇತರಿಸಿಕೊಂಡಿದ್ದಾರೆ. ಮಾಚ್‌ರ್‍ 3ನೇ ವಾರದಿಂದ ಲಾಕ್‌ಡೌನ್‌ ಘೋಷಿಸಿರುವ ನ್ಯೂಜಿಲೆಂಡ್‌ ಸರ್ಕಾರ, ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ಉತ್ತಮ ಯಶಸ್ಸನ್ನೇ ಕಂಡಿದೆ. ಗ್ರಾಫ್‌ ಮಟ್ಟಸವಾಗುತ್ತಿದೆ. ಹಾಗೆಂದು ಸಂಪೂರ್ಣವಾಗಿ ನಿಗ್ರಹಿಸಲಾಗಿದೆ ಎಂದು ಈಗಲೇ ಹೇಳಲಾಗದು.  ಆಸ್ಟ್ರೇಲಿಯಾದಿಂದ ತವರಿಗೆ ವಾಪಸ್ ಆದ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ ದಿಗ್ಬಂಧನ!  ಆದರೆ, ಸೂಪರ್‌ ಮಾರ್ಕೆಟ್‌, ಫಾರ್ಮಸಿಗಳಂತಹ ಅನಿವಾರ್ಯ ಸೇವೆ ಹೊರತುಪಡಿಸಿ ಎಲ್ಲವನ್ನೂ ಕಟ್ಟುನಿಟ್ಟಾಗಿ ಬಂದ್‌ ಮಾಡಲಾಗಿದೆ. ಜನರು ವಾಕಿಂಗ್‌ಗಷ್ಟೇ ಹೊರಬರಬಹುದು. ಹಾಗೆ ಬರುವವರು ದೈಹಿಕ ಅಂತರ ಕಾಪಾಡುವುದು ಕಡ್ಡಾಯ. ಸಂತಸದ ಸಂಗತಿ ಎಂದರೆ ಜನರು ಸರ್ಕಾರದ ಸೂಚನೆಯನ್ನು ಬಹುತೇಕ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.  ಎಲ್ಲಕ್ಕಿಂತ ಮುಖ್ಯವಾಗಿ ನ್ಯೂಜಿಲೆಂಡ್‌ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಿದೆ. ಆಹಾರ, ಔಷಧ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಜೊತೆಗೆ ಹಣಕಾಸಿನ ನೆರವನ್ನೂ ನೀಡುತ್ತಿದೆ. ಪೂರ್ಣಪ್ರಮಾಣದ ಉದ್ಯೋಗ ಹೊಂದಿರುವವರಿಗೆ ಶೇ.80ರಷ್ಟುವೇತನ, ಅರೆಕಾಲಿಕ ಉದ್ಯೋಗಿಗಳಿಗೆ ಶೇ.60ರಷ್ಟುವೇತನ ದೊರೆಯುವ ಯೋಜನೆಯೊಂದನ್ನು ಜಾರಿಗೊಳಿಸಿದೆ. ಆದರೆ, ಇದು ಲಾಕ್‌ಡೌನ್‌ ಅವಧಿಯವರೆಗೆ ಮಾತ್ರ. ಅದರ ನಂತರ ಏನು ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ. ಒಂದಂತೂ ಖಚಿತ, ಇಲ್ಲಿ ತಕ್ಷಣಕ್ಕೆ ಹಿಂದಿನಷ್ಟುಸುಲಭವಾಗಿ ಕೆಲಸ ಸಿಗುವುದಿಲ್ಲ. ಚೇತರಿಸಿಕೊಳ್ಳಲು ಇನ್ನೆರಡು ವರ್ಷವಾದರೂ ಬೇಕಾದೀತು.  ತಡೆಯಬಹುದಿತ್ತು ಕೊರೋನಾ ವೈರಸ್‌ ಚೀನಾದಲ್ಲಿ ಘಾತಕವೆಸಗುತ್ತಿರುವುದು ಫೆಬ್ರವರಿ ತಿಂಗಳಲ್ಲೇ ಅರಿವಿಗೆ ಬಂದರೂ, ಬಹುತೇಕ ರಾಷ್ಟ್ರಗಳಂತೆ ನ್ಯೂಜಿಲೆಂಡ್‌ ಕೂಡ ಮುನ್ನೆಚ್ಚರಿಕೆ ವಹಿಸುವುದರಲ್ಲಿ ತುಸು ವಿಳಂಬ ಮಾಡಿತು ಎಂಬುದೇ ನನ್ನ ಅನಿಸಿಕೆ. ಪ್ರವಾಸೋದ್ಯಮವನ್ನೇ ಪ್ರಮುಖವಾಗಿ ನೆಚ್ಚಿಕೊಂಡಿರುವ ಈ ದೇಶ, ಕೊರೋನಾ ಹಬ್ಬಲು ಶುರುವಾದಾಗಲೇ ಅಂತಾರಾಷ್ಟ್ರೀಯ ಆಗಮನ-ನಿರ್ಗಮನಗಳನ್ನು ನಿಲ್ಲಿಸಬೇಕಿತ್ತು. ಆದರೆ, ಹಾಗಾಗಲಿಲ್ಲ. ಇರಾನ್‌, ಚೀನಾ, ಇಟಲಿಯಂತಹ ಸೋಂಕು ತೀವ್ರಗೊಂಡಿದ್ದ ದೇಶಗಳಿಂದ ಪ್ರವಾಸಿಗರನ್ನು ನ್ಯೂಜಿಲೆಂಡ್‌ ಬರಗೊಟ್ಟಿತು. ವಲಸೆ ಸಿಬ್ಬಂದಿಯೂ ಅವರ ಬಗ್ಗೆ ಸಡಿಲ ನೀತಿ ಹೊಂದಿದ್ದರು. ಹಾಗೆ ಬಂದ ಅವರೆಲ್ಲ ದಿಗ್ಬಂಧನ ನಿಯಮಗಳನ್ನು ಉಲ್ಲಂಘಿಸಿದರು. ಇತರರಿಗೆ ಸೋಂಕು ಹಬ್ಬಿಸಿದರು. ಒಂದೆರಡು ವಾರ ಮೊದಲೇ ನಿರ್ಬಂಧಗಳನ್ನು ಹೇರಿದ್ದರೆ ನ್ಯೂಜಿಲೆಂಡ್‌ನಲ್ಲಿ ಒಂದೂ ಕೊರೋನಾ ಪ್ರಕರಣ ಇರುತ್ತಿರಲಿಲ್ಲ ಎಂಬುದು ನನ್ನ ದೃಢ ನಂಬಿಕೆ.  *  10 ಸಾವಿರ ಸೋಂಕಿತರಿದ್ದರೂ ಸ್ವೀಡನ್‌ ಲಾಕ್‌ಡೌನ್‌ ಆಗಿಲ್ಲ  ಪ್ರದೀಪ ಪಂಜಿಗದ್ದೆ  ಕ್ಯಾನ್ಸರ್‌ ಕೋಶ ವಿಜ್ಞಾನಿ ಸ್ಟಾಕ್‌ಹೋಮ್‌, ಸ್ವೀಡನ್‌  ಸುಮಾರು 10 ಸಾವಿರ ಜನರಿಗೆ ಸೋಂಕು ತಗುಲಿದೆ. 850ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಾಗಂತ ಸ್ವೀಡನ್‌ ಸರ್ಕಾರ ಇತರೆ ದೇಶಗಳಂತೆ ಲಾಕ್‌ಡೌನ್‌ ಮಾಡಿಲ್ಲ.  50 ಜನಕ್ಕಿಂತ ಹೆಚ್ಚು ಗುಂಪುಗೂಡಬಾರದು ಎಂಬುದೊಂದು ಬಿಟ್ಟರೆ ಬೇರಾವ ಕಠಿಣ ನಿರ್ಬಂಧವನ್ನೂ ಹೇರಿಲ್ಲ. ಜನರಿಗೆ ಒಂದಷ್ಟುಸಲಹೆ, ಶಿಫಾರಸು ಮಾಡಿದೆ. ಸಾರ್ವಜನಿಕರು ಅದನ್ನು ಪಾಲಿಸುತ್ತಿದ್ದಾರೆ. ಹಾಗಂತ ಎಲ್ಲರೂ ಮಾಸ್ಕ್‌ ಧರಿಸಿಕೊಂಡು ಓಡಾಡುತ್ತಿಲ್ಲ. ಏಷ್ಯನ್ನರು ಅತಿಹೆಚ್ಚು ಜಾಗರೂಕರಾಗಿದ್ದಾರೆ. ಅವರು ಮುಖಗವಸು ಧರಿಸದೆ ಹೊರಬೀಳುತ್ತಿಲ್ಲ. ಕೆಫೆ-ಬಾರು, ಶಾಲೆ, ಜಿಮ್ಮು-ಸ್ವಿಮ್ಮಿಂಗ್‌ ಪೂಲ್‌, ಮಾಲ್‌, ಸೂಪರ್‌ ಮಾರ್ಕೆಟ್‌ ತೆರೆದೇ ಇವೆ. ವಿಶೇಷವಾಗಿ ಸ್ಕೀಯಿಂಗ್‌ ರೆಸಾರ್ಟ್‌ ಎಂದಿನಂತಿವೆ.  ಸರ್ಕಾರ ಈ ನಿಲುವು ತಾಳಲು ವಿಶೇಷ ಕಾರಣಗಳಿವೆ. ಉತ್ತರ ಯುರೋಪ್‌ ದೇಶ ಸ್ವೀಡನ್‌ನಲ್ಲಿ ಸಾಕಷ್ಟುವೃದ್ಧಾಶ್ರಮಗಳಿವೆ. ವೃದ್ಧರಿಗೆ ಕೊರೋನಾ ಬೇಗನೆ ಹರಡಿಬಿಡುತ್ತದೆ ಎಂಬುದನ್ನು ಸ್ವೀಡನ್‌ ಮನಗಂಡಿದೆ. ಹಾಗಾಗಿ, ದೇಶದಲ್ಲಿ ಶೇ.20ರಷ್ಟಿರುವ ವೃದ್ಧರಿಗೆ ಸೋಂಕು ಹಬ್ಬದಂತೆ ಎಚ್ಚರಿಕೆ ವಹಿಸುತ್ತಿದೆ. ವೃದ್ಧಾಶ್ರಮಕ್ಕೆ ಜನರ ಭೇಟಿ ನಿಷೇಧಿಸಿದೆ. ಉಳಿದ ಶೇ.80 ಜನರಿಗೆ ಸೋಂಕು ತಗುಲಿದರೂ, ಅವರಿಗೆ ಸಾಮೂಹಿಕ ನಿರೋಧಕ ಶಕ್ತಿ ಅಭಿವೃದ್ಧಿಯಾಗುತ್ತದೆ ಎಂಬುದು ಸ್ವೀಡನ್‌ ಸರ್ಕಾರದ ನಂಬಿಕೆ. ಆದರೆ, ಇದು ಅತ್ಯುತ್ತಮ ಮಾರ್ಗ ಎನ್ನಲಾಗದು.  ನಾನಿಲ್ಲಿಗೆ ಬಂದು 10 ವರ್ಷಗಳಾದವು. ಸ್ಟಾಕ್‌ಹೋಮ್‌ ಹೊರವಲಯದಲ್ಲಿರುವ ಕ್ಯಾರೋಲಿನ್ಸಾ$್ಕ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಾನು ಹಿರಿಯ ವಿಜ್ಞಾನಿ ಹಾಗೂ ಪ್ರಯೋಗಾಲಯದ ಉಪಮುಖ್ಯಸ್ಥ. ಚೀನಾದಲ್ಲಿ ಕೊರೋನಾ ಹಬ್ಬಿರುವ ವಿಚಾರ ನನ್ನ ಗಮನಕ್ಕೆ ಜನವರಿಯಲ್ಲೇ ಬಂದಿತ್ತು. ಅದನ್ನು ಅವರಲ್ಲೇ ಹತ್ತಿಕ್ಕಬಹುದು ಅಂದುಕೊಂಡಿದ್ದೆ. ಆದರೆ ಅವರು ವಿಫಲರಾದರು. ವೈರಸ್‌ ನಾನಿರುವಲ್ಲಿಗೂ ಬಂತು.  ಅನಿವಾರ್ಯವಾಗಿ ನಾವು ನಮ್ಮ ತಂಡವನ್ನು ಇಬ್ಭಾಗ ಮಾಡಿದ್ದೇವೆ. ಒಂದು ತಂಡ ಕಚೇರಿಯಲ್ಲಿ ಕೆಲಸ ನಿರ್ವಹಿಸಿದರೆ, ಮತ್ತೊಂದು ತಂಡ ಮನೆಯಿಂದ ಕೆಲಸ ಮಾಡುತ್ತಿದೆ. ಹೀಗಾಗಿ, ನನಗೀಗ ಸಾಕಷ್ಟುಸಮಯಾವಕಾಶ ಆಗುತ್ತಿದ್ದು, ಅದನ್ನು ನನ್ನ ಹವ್ಯಾಸಗಳಿಗೆ ಬಳಸಿಕೊಳ್ಳುತ್ತೇನೆ. ಯೋಗ, ಪ್ರಾಣಾಯಾಮ ಅಭ್ಯಸಿಸುತ್ತೇನೆ. ಪಾಠ ಮಾಡುತ್ತೇನೆ. ಅದಕ್ಕೆಂದೇ ವೆಬ್‌ಸೈಟ್‌ ಕೂಡ ಇದೆ. ಅದನ್ನು ಪರಿಷ್ಕರಿಸುತ್ತಿದ್ದೇನೆ. ನನಗೆ ಪ್ರಕೃತಿಯ ಜತೆಗೆ ಬೆರೆಯುವ ಅಭ್ಯಾಸವಿದೆ. ನಾನು ಮತ್ತು ನನ್ನ ಗೆಳೆಯ ಡ್ರೋನ್‌ ಬಳಸಿ ನಿಸರ್ಗದ ಸುಂದರ ದೃಶ್ಯಗಳನ್ನು ಸೆರೆಹಿಡಿದಿದ್ದೇವೆ. ಬಿಡುವಿನಲ್ಲಿ ಅವುಗಳನ್ನು ಸಂಕಲಿಸುತ್ತಾ ಕಾಲ ಕಳೆಯುತ್ತಿದ್ದೇವೆ. ನಾನು ಸ್ಟಾಕ್‌ಹೋಮ್‌ ನಗರಕ್ಕೆ ಹೋಗದೆ 3 ವಾರಗಳಾದವು. ನನಗೆ ತಿಳಿದಂತೆ ಅಲ್ಲಿನ ಆಸ್ಪತ್ರೆಗಳೆಲ್ಲ ತುಂಬಿ ಹೋಗಿವೆ. ತಾತ್ಕಾಲಿಕ ಶುಶ್ರೂಷಾ ಕೇಂದ್ರಗಳನ್ನು ತೆರೆಯಲಾಗಿದೆಯಂತೆ. ನನ್ನ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸ್ಥಿತಿ ಅಷ್ಟೇನೂ ಗಂಭೀರವಾಗಿಲ್ಲ. ಆದರೆ, ಟೀವಿಯಲ್ಲಿ ಬರುವ ಸುದ್ದಿ ನೋಡಿದರೆ ಭಯವಾಗುವಂತಿದೆ.  ನನ್ನ ಅಂದಾಜಿನ ಪ್ರಕಾರ ಇವೆಲ್ಲವೂ ನಿಯಂತ್ರಣಕ್ಕೆ ಬರಲು 2-3 ತಿಂಗಳು ಬೇಕಾದೀತು. ಕೊರೋನಾ ಬಿಕ್ಕಟ್ಟಿನಿಂದ ದೇಶ ಚೇತರಿಸಿಕೊಳ್ಳಲು 1 ವರ್ಷವೇ ಆದೀತು.  *  ಭಾರತದ ಮೂರು ಪಟ್ಟು ಕೇಸು ನಮ್ಮ ರಾಜ್ಯದಲ್ಲಿದೆ  ಅಂಜಲಿ ಶರ್ಮಾ  ಮಾಹಿತಿ ತಂತ್ರಜ್ಞಾನ ತಜ್ಞೆ ಆನ್‌ ಆರ್ಬರ್‌, ಅಮೆರಿಕ ಸಂಯುಕ್ತ ಸಂಸ್ಥಾನ  ದಿನಾ ಓಡುತ್ತಲೇ ಇದ್ದ ನಾವು ನಾಲ್ವರನ್ನೂ ಮನೆಯಲ್ಲಿ ಕಟ್ಟಿಹಾಕಿದಂತಾಗಿದೆ ಅಂದರೆ ತಮಾಷೆ ಅನ್ನಿಸೀತು. ಆದರಿದು ಕಟು ವಾಸ್ತವ. ಕರ್ನಾಟಕ ಕರಾವಳಿ ಮೂಲದ ನಾವು ಅಮೆರಿಕ ಸಂಯುಕ್ತ ಸಂಸ್ಥಾನದ ಉತ್ತರ ಭಾಗದ ರಾಜ್ಯವಾದ ಮಿಷಿಗನ್‌ನಲ್ಲಿ ನೆಲೆಸಿ 2 ದಶಕ ಕಳೆದವು. ನಾನು, ನನ್ನ ಪತಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ. ನಮಗಿಬ್ಬರು ಹೆಣ್ಮಕ್ಕಳು. ಅವರು ಓದು, ತರಬೇತಿಗಳಲ್ಲಿ ವ್ಯಸ್ತರಾಗಿದ್ದಾರೆ. ನನಗಂತೂ 35 ಮೈಲಿ ದೂರದ ಡೆಟ್ರಾಯಿಟ್‌ ನಗರಕ್ಕೆ ನಿತ್ಯ ಕಾರು ಡ್ರೈವ್‌ ಮಾಡುತ್ತ ಹೋಗಿ ಬರಲು ತಲಾ 40 ನಿಮಿಷ ತಗಲುತ್ತಿತ್ತು. ಈ ಕೊರೋನಾ ನಮ್ಮೆಲ್ಲರ ವೇಗದ ಜೀವನಕ್ಕೆ ಬ್ರೇಕ್‌ ಹಾಕಿದೆ.  ಹಾಗೆ ಹಿಂತಿರುಗಿ ನೋಡುವುದಾದರೆ, ಕೊರೋನಾ ಮಹಾಮಾರಿಯ ಬಗ್ಗೆ ಡಿಸೆಂಬರ್‌ನಲ್ಲೇ ಕೇಳಿದ್ದೆ. ಆದರೆ, ಅದು ಅಮೆರಿಕಕ್ಕೆ ಕಾಲಿಟ್ಟೀತು ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ವಾಷಿಂಗ್ಟನ್‌ ರಾಜ್ಯದ ಸಿಯಾಟಲ್‌ ನಗರದಲ್ಲಿ ಮೊದಲ ಪ್ರಕರಣ ಪತ್ತೆಯಾದಾಗಲೇ ನಮ್ಮ ಹಡಗಿಗೂ ತೂತು ಬಿದ್ದಿದೆ ಎಂಬ ಅರಿವಾದದ್ದು. ಮಾಚ್‌ರ್‍  ಮಧ್ಯಭಾಗದಲ್ಲಿ ನಮಗೆ ವರ್ಕ್ ಫ್ರಂ ಹೋಮ್‌ ಜಾರಿಯಾಯಿತು. ತಡವಾಗಿ ಎಚ್ಚೆತ್ತ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಬಿಗಿ ನಿರ್ಬಂಧ ಹೇರಲು ಆರಂಭಿಸಿದೆ. 33 ಕೋಟಿ ಜನರಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ. ನಾವಿರುವ ಮಿಷಿಗನ್‌ ರಾಜ್ಯವೊಂದರಲ್ಲೇ 23,000ಕ್ಕೂ ಮಿಗಿಲಾದ ಪ್ರಕರಣಗಳು ಬೆಳಕಿಗೆ ಬಂದಿವೆ. 130 ಕೋಟಿ ಜನರಿರುವ ಭಾರತದಲ್ಲಿ ಪತ್ತೆಯಾದುದರ 3 ಪಟ್ಟು ಪ್ರಕರಣಗಳು ನಾವಿರುವ ರಾಜ್ಯವೊಂದರಲ್ಲೇ ಬೆಳಕಿಗೆ ಬಂದಿವೆಯೆಂದರೆ ಇಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ.  ನಾವೀಗ ಮನೆಯೊಳಗೆ ಸೇರಿಕೊಂಡು 3 ವಾರಗಳೇ ಕಳೆದವು. ನಿತ್ಯವೂ ನಾವು ನಾಲ್ವರೂ ಕೂತು ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸುತ್ತೇವೆ. ಈ ಮೂಲಕ ಒತ್ತಡ ನೀಗುವ ಪ್ರಯತ್ನ ಮಾಡುತ್ತೇವೆ. ಮಕ್ಕಳು ಆನ್‌ಲೈನ್‌ ಮೂಲಕ ತರಗತಿಗಳನ್ನು ಪಡೆಯಲಾರಂಭಿಸಿದ್ದಾರೆ. ಕಷ್ಟವಾದರೂ ನಾವಿಬ್ಬರೂ ಮನೆಯಿಂದಲೇ ಕೆಲಸ ರೂಢಿಸಿಕೊಳ್ಳುತ್ತಿದ್ದೇವೆ. ಡ್ರೈವಿಂಗ್‌ ಮಾಡುವ ಚಿಂತೆ ಇಲ್ಲ. ಕುಟುಂಬಕ್ಕೆ ಹೆಚ್ಚು ಸಮಯ ಕೊಡುತ್ತಿದ್ದೇವೆ. ಹವ್ಯಾಸಗಳಿಗೆ ಮರುಜೀವ ದೊರೆತಿದೆ. ಆದರೆ, ಮನೆಗೆ ಬೇಕಾದ ಅತ್ಯಗತ್ಯ ವಸ್ತುಗಳನ್ನು ತರುವುದೇ ದೊಡ್ಡ ಸವಾಲು. ಅದಕ್ಕಿಂತ ಮಿಗಿಲಾಗಿ, ಕೋವಿಡ್‌-19 ಹೊರತಾದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ವೈದ್ಯರು ವೀಕ್ಷಿಸಿ ಔಷಧ ಸೂಚಿಸುತ್ತಾರೆ. ಇದು ಸ್ವಲ್ಪ ಆತಂಕದ ವಿಚಾರವೇ. ಅನಿವಾರ್ಯತೆ ನಮ್ಮನ್ನು ಕಟ್ಟಿಹಾಕಿದೆ. ಭವಿಷ್ಯ ಸಲೀಸಾಗಿ ಇರುವುದಿಲ್ಲ ಎಂಬುದಂತೂ ನಿಶ್ಚಿತ. ಈಗಾಗಲೇ ಹಲವು ಕಂಪನಿಗಳು ಮುಚ್ಚುವ ಆತಂಕದಲ್ಲಿವೆ. ಇನ್ನು ಕೆಲವು ಕಂಪನಿಗಳು ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುತ್ತಿವೆ. ಜನರಲ್ಲಿ ಆರೋಗ್ಯ ಸಮಸ್ಯೆಗಳು, ಖಿನ್ನತೆ ಕಾಣಿಸಿಕೊಳ್ಳತೊಡಗಿದೆ. ಇದರಿಂದ ಹೊರಬರಲು ಅದೆಷ್ಟುಕಾಲ ಬೇಕಾದೀತೋ..  *  ಪರಾವಲಂಬನೆಯೇ ಸ್ವಿಜರ್ಲೆಂಡ್‌ಗೆ ಮುಳುವಾಯಿತು  ಡಾ.ವಿಕ್ರಮ ರಾಜಾ,  ವೈದ್ಯಕೀಯ ಸಲಹೆಗಾರ, ಬಾಸೆಲ್‌, ಸ್ವಿಜರ್ಲೆಂಡ್‌  ನಾನು ಬೆಂಗಳೂರಿನವನು. ವೈದ್ಯನಾದರೂ, ವೈದ್ಯಕೀಯ ಸಲಹೆ ವೃತ್ತಿ ಆಯ್ದುಕೊಂಡು 1 ವರ್ಷ ಹಿಂದಷ್ಟೇ ಭೂಲೋಕ ಸ್ವರ್ಗ ಸ್ವಿಜರ್ಲೆಂಡ್‌ಗೆ ಪತ್ನಿ ಕಾವೇರಿ ಸಹಿತನಾಗಿ ಬಂದು ನೆಲೆಸಿದ್ದೇನೆ. ಆಕೆಯೂ ವೈದ್ಯೆ. ಕರ್ನಾಟಕದ ಐದನೇ ಒಂದು ಭಾಗದಷ್ಟಿರುವ ದೇಶ ಸ್ವಿಜರ್ಲೆಂಡ್‌. ಉತ್ತರಕ್ಕೆ ಜರ್ಮನಿ, ಪಶ್ಚಿಮಕ್ಕೆ ಫ್ರಾನ್ಸ್‌, ದಕ್ಷಿಣಕ್ಕೆ ಇಟಲಿಯೊಂದಿಗೆ ಗಡಿ ಹಂಚಿಕೊಂಡಿರುವ ದೇಶವಿದು. ಆದರೆ, ಔದ್ಯಮಿಕ, ಹಣಕಾಸು ಕ್ಷೇತ್ರಗಳಲ್ಲಿ ಜಾಗತಿಕ ಹಾಟ್‌ಸ್ಪಾಟ್‌. ಆದರೀಗ ಕೊರೋನಾ ಹಾಟ್‌ಸ್ಪಾಟ್‌ ದೇಶಗಳ ನಡುವೆ ಸಿಲುಕಿ ನಲುಗುತ್ತಿದೆ. ಅಂದಾಜು 24,500 ಸೋಂಕಿತರಿದ್ದಾರೆ. 1000 ಮಂದಿ ಅಸುನೀಗಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಸ್ವಿಜರ್ಲೆಂಡ್‌ನ ಭೌಗೋಳಿಕ ಸ್ಥಿತಿಗತಿ.  ಕಾರ್ಮಿಕ ವರ್ಗ ಸೇರಿದಂತೆ ಹೆಚ್ಚಿನೆಲ್ಲವಕ್ಕೂ ನೆರೆದೇಶಗಳನ್ನೇ ನೆಚ್ಚಿಕೊಂಡಿದೆ ಸ್ವಿಜರ್ಲೆಂಡ್‌. ಫ್ರಾನ್ಸ್‌, ಇಟಲಿ, ಜರ್ಮನಿಗಳಿಂದ ನಿತ್ಯ ಲಕ್ಷಾಂತರ ಜನರು ಗಡಿ ದಾಟಿ ಬಂದು ಹೋಗುತ್ತಾರೆ. ಅಂತೆಯೇ, ಯುರೋಪ್‌ನಲ್ಲಿ ಮೊದಲು ಅತಿ ಹೆಚ್ಚು ಸೋಂಕು, ಸಾವುಗಳನ್ನು ಕಂಡ ಇಟಲಿಯ ಉತ್ತರ ಭಾಗದಲ್ಲಿ ಕೊರೋನಾ ಬಾಧೆ ತೀವ್ರವಾಗಿದ್ದ ಕಾಲದಲ್ಲಿ ಇಟಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಿತ್ತು. ಆದರೆ, ಸ್ವಿಜರ್ಲೆಂಡ್‌ ಮಾತ್ರ ಇಟಲಿಯಿಂದ ಜನರು ಬಂದು ಹೋಗಲು ಅವಕಾಶ ನೀಡಿತ್ತು. ಫ್ರಾನ್ಸ್‌ನಿಂದಲೂ ಜನರ ಓಡಾಟ ಮುಂದುವರಿದಿತ್ತು. ಸೋಂಕು ಹೆಚ್ಚುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿತು. ಇದು ‘ಅಸಾಧಾರಣ ಪರಿಸ್ಥಿತಿ’ ಎಂದು ಘೋಷಿಸಿತು. ದಿನಸಿ, ತೈಲ, ಔಷಧ ಮತ್ತಿತರೆ ತುರ್ತು ಅಗತ್ಯಗಳನ್ನು ಹೊರತುಪಡಿಸಿ ಎಲ್ಲವನ್ನೂ ಬಂದ್‌ ಮಾಡಿತು. ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಆದೇಶಿಸಿತು. ಸರ್ಕಾರ ಹೇಳಿದ ಮೇಲೆ ಕೇಳಬೇಕೆ? ಹೆಚ್ಚಿನೆಲ್ಲ ಜನ  ನಿಯಮ ಪಾಲನೆ ಮಾಡುತ್ತಿದ್ದಾರೆ. ದೈಹಿಕ ಅಂತರ ಕಾಪಾಡುತ್ತಿದ್ದಾರೆ. ಪ್ರತಿ ಅಂಗಡಿಯ ದ್ವಾರದಲ್ಲೂ ಸ್ಯಾನಿಟೈಸರ್‌ ಇದೆ. ಜನಜಂಗುಳಿ ಆಗದಂತೆ ವ್ಯವಸ್ಥೆ ರೂಪಿಸಲಾಗಿದೆ. ಕೊರೋನಾ ಬಾಧಿತರ ನೆರವಿಗಾಗಿ ಸೇನಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಇದರ ಪರಿಣಾಮವೋ, ಸ್ವಿಜರ್ಲೆಂಡ್‌ನ ವೈದ್ಯಕೀಯ ಸೌಲಭ್ಯ ಚೆನ್ನಾಗಿರುವ ಕಾರಣವೋ, ಸೋಂಕು ಹಾಗೂ ಸಾವಿನ ಏರುಗತಿ ತಕ್ಕಮಟ್ಟಿಗೆ ತಹಬದಿಗೆ ಬರುತ್ತಿದೆ.  ಇತ್ತ ವೃತ್ತಿಪರನಾಗಿ ನನಗೆ ಅನೇಕ ಅಡಚಣೆಗಳು ಉಂಟಾಗಿವೆ. ನಮ್ಮ ಸಂಸ್ಥೆಯ ಅನೇಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ನಾನು ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್‌, ದುಬೈ, ರಷ್ಯಾಗಳಿಗೆ ಹೋಗಬೇಕಿತ್ತು. ಆದರೆ, ಮಾಚ್‌ರ್‍ ಅಂತ್ಯದಿಂದ ವರ್ಕ್ ಫ್ರಂ ಹೋಮ್‌ ಮಾಡುತ್ತಿದ್ದೇನೆ. ಅದಕ್ಕಾಗಿ ತಂತ್ರಜ್ಞಾನಕ್ಕೆ ಧನ್ಯವಾದ ಹೇಳಬೇಕು.  ವೈಯಕ್ತಿಕವಾಗಿ ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ತರಕಾರಿಯನ್ನು ಉಪ್ಪು ನೀರು, ಅರಿಶಿನದಲ್ಲಿ ತೊಳೆದು, ಒಣಗಿಸಿ ಉಪಯೋಗಿಸುತ್ತಿದ್ದೇವೆ. ಹೊರಗಿನಿಂದ ತಂದ ವಸ್ತುಗಳನ್ನು ರೋಗನಾಶಕ ಬಳಸಿದ ಮೇಲೆಯೇ ಮನೆಯೊಳಕ್ಕೆ ತರುತ್ತಿದ್ದೇವೆ. ಈ ಸಂಕಷ್ಟಆದಷ್ಟುಬೇಗನೆ ಪರಿಹಾರವಾಗಬಹುದು ಎಂಬ ನಿರೀಕ್ಷೆಯಲ್ಲಿ ದಿನ  ದೂಡುತ್ತಿದ್ದೇವೆ. ಆಶಾವಾದ ಇಲ್ಲದೆ ಬದುಕೆಲ್ಲಿದೆ, ಅಲ್ಲವೆ?  ---  ಕೆನಡಾದಲ್ಲಿ ಕೊರೋನಾ ಜತೆಗೆ ಕಳ್ಳರ ಕಾಟ!  ಡಾ. ಸಹನಾ ಗೋಪಾಲ್‌  ವೈದ್ಯಕೀಯ ವಿದ್ಯಾರ್ಥಿ ಟೊರೊಂಟೋ, ಕೆನಡಾ  ಇಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಎಲ್ಲರೂ ಕಟ್ಟುನಿಟ್ಟಾಗಿ ಮನೆಯಲ್ಲೇ ಇರುವಂತೆ ಮಾಡಲಾಗಿದೆ. ಸೋಂಕು ತಡೆಯಲು ಕೆನಡಾ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಆದರೇನು ಮಾಡುವುದು? ಈಗಾಗಲೇ ತಡವಾಗಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಬಾಧಿತವಾಗಿರುವ ನ್ಯೂಯಾರ್ಕ್ ರಾಜ್ಯದ ಜತೆಗೆ ಗಡಿ ಹಂಚಿಕೊಂಡಿರುವ ಕೆನಡಾದ ಆಂಟಾರಿಯೋ ಪ್ರಾಂತ್ಯದ ನಡುವಣ ಓಡಾಟ ನಿರ್ಬಂಧಿಸಲು ವಿಳಂಬಿಸಿದ್ದಕ್ಕೆ ಬೆಲೆ ತೆತ್ತಾಗಿದೆ. ಜತೆಗೆ, ಕೆನಡಾದಲ್ಲಿ ಹೆಚ್ಚಿನ ಸಂಖ್ಯೆಯ ಚೀನಿಯರೂ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ತತ್ಪರಿಣಾಮ, ಸುಮಾರು 22 ಸಾವಿರ ಕೆನಡಿಯನ್ನರಿಗೆ ಸೋಂಕು ತಗುಲಿದೆ. ಅಂದಾಜು 57ಸ0ರಷ್ಟುಜನರು ಅಸುನೀಗಿದ್ದಾರೆ.  ವಿಸ್ತೀರ್ಣದಲ್ಲಿ ರಷ್ಯಾ ನಂತರ ವಿಶ್ವದಲ್ಲೇ 2ನೇ ಅತಿದೊಡ್ಡ ದೇಶ ಕೆನಡಾ. ಗಾತ್ರದಲ್ಲಿ ಭಾರತದ 3 ಪಟ್ಟು ಇದೆ. ಆದರೆ, ಜನಸಂಖ್ಯೆ ಕೇವಲ 4 ಕೋಟಿ. ವಾಸಯೋಗ್ಯ ಪ್ರದೇಶ ಕಡಿಮೆ ಇರುವುದು ಮತ್ತು ತಾಪಮಾನ ಏರಿಳಿತ ಇದಕ್ಕೆ ಪ್ರಮುಖ ಕಾರಣ. ಇಂತಹ ಪ್ರದೇಶದಲ್ಲೇ ಇಷ್ಟೊಂದು ಮಂದಿಗೆ ಸೋಂಕು ತಗುಲಿದೆ ಎಂದರೆ ಕೊರೋನಾ ಅದೆಷ್ಟುಮಾರಕ ಎಂಬುದನ್ನೊಮ್ಮೆ ಊಹಿಸಿಕೊಳ್ಳಿ.  ವೆಡ್ಡಿಂಗ್ ಆ್ಯನಿವರ್ಸರಿಗೆ ದುಬಾರಿ ಗಿಫ್ಟ್; ಉಡುಗೊರೆ ಪಡೆದು ದಾಖಲೆ ಬರೆದ ಪತ್ನಿ!  ಅಂದ ಹಾಗೆ, ನಾನು ಮೂಲತಃ ಬೆಂಗಳೂರಿನವಳು. ದಂತವೈದ್ಯ ವ್ಯಾಸಂಗ ಮಾಡಿ ಹೆಚ್ಚಿನ ಓದಿಗಾಗಿ ನನ್ನ ಪತಿ ಕಾರ್ತಿಕ್‌ ಜತೆ 2 ವರ್ಷ ಹಿಂದೆ ಕೆನಡಾಕ್ಕೆ ವಲಸೆ ಬಂದಿದ್ದೇನೆ. ಟೊರೊಂಟೋದಲ್ಲಿದ್ದೇವೆ. ಅವರು ಐಟಿ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಆಗಿದ್ದಾರೆ. ಕೊರೋನಾ ದೆಸೆಯಿಂದಾಗಿ ಅವರು ಮಾಚ್‌ರ್‍ 2ನೇ ವಾರದಿಂದಲೇ ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ನನಗೆ ಏಪ್ರಿಲ್‌ನಲ್ಲಿ ಪರೀಕ್ಷೆ ಇತ್ತು. ಆದರೆ, ಅದು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಒಮ್ಮೆ ದಿನಸಿ, ತರಕಾರಿಗಾಗಿ ಹೊರ ಹೋಗಿದ್ದು ಬಿಟ್ಟರೆ ಕಳೆದ 20-25 ದಿನಗಳಿಂದ ಮನೆಯಲ್ಲೇ ಇದ್ದೇವೆ. ಏತನ್ಮಧ್ಯೆ, ಸರ್ಕಾರದ ಸೂಚನೆ ಪ್ರಕಾರ ಅಗತ್ಯ ವಸ್ತುಗಳನ್ನು ಮನೆಮನೆಗೇ ತಲುಪಿಸುವ ವ್ಯವಸ್ಥೆ ಜಾರಿಯಾಗಿದೆ. ಆದರೆ, ಈ ಪರಿಸ್ಥಿತಿಯ ದುರ್ಲಾಭ ಪಡೆಯುವವರೂ ಹೆಚ್ಚಿದ್ದಾರೆ. ಸ್ಟೋರುಗಳಲ್ಲಿ ಆನ್‌ಲೈನ್‌ ಮೂಲಕ ಅಗತ್ಯ ವಸ್ತುಗಳ ಪಟ್ಟಿನೀಡಿ, ಹಣವನ್ನೂ ಪಾವತಿ ಮಾಡಿ ಮನೆಗೇ ತರಿಸಿಕೊಳ್ಳುವ ವ್ಯವಸ್ಥೆ ಇದೆ. ಆದರೆ, ಮನೆಗೆ ತಲುಪಿಸುವ ಅನೇಕರು ವಸ್ತುಗಳನ್ನು ಬೇರೆಯವರಿಗೆ ಮಾರಿಕೊಂಡು ಹಣ ಗಳಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ದೂರೋಣ ಎಂದರೆ, ಕೊರೋನಾ ಬಿಕ್ಕಟ್ಟಿನಿಂದಾಗಿ ಅದೂ ಸಾಧ್ಯವಾಗುತ್ತಿಲ್ಲ!  ಇದೆಲ್ಲದರ ನಡುವೆ ಒಂದು ಗುಣಾತ್ಮಕ ಸಂಗತಿ ಎಂದರೆ, ನಾವೆಲ್ಲ ಪರ್ಯಾಯ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಆನ್‌ಲೈನ್‌ ಮೂಲಕ ಹೆಚ್ಚಿನೆಲ್ಲಾ ಕೆಲಸಗಳನ್ನು ಮಾಡಲು ಕಲಿತಿದ್ದೇವೆ, ಕಲಿಯುತ್ತಲೇ ಇದ್ದೇವೆ. ಆದರೂ, ಸಾಮಾನ್ಯ ಜೀವನ ಅನಿರ್ದಿಷ್ಟಾವಧಿಗೆ ಅತಂತ್ರಗೊಂಡು ಆತಂಕದಿಂದ ದಿನ ದೂಡುತ್ತಿದ್ದೇವೆ.  ಹಿಂದಿನ ಸಾರ್ಸ್‌ ಹೆಮ್ಮಾರಿಯಿಂದ ಸರ್ಕಾರಗಳು ಪಾಠ ಕಲಿತಿದ್ದರೆ, ಇಷ್ಟಾಗುತ್ತಿರಲಿಲ್ಲ. ಈಗ ಅನುಭವಿಸದೆ ವಿಧಿಯಿಲ್ಲ. </description>
            <media:content height="400" width="760" medium="image" url="https://static.asianetnews.com/images/01e5pcmw8da836kgekrj12srex/2-frame--1---94--jpg_760x400.jpg"/>
        </item>
        <item>
            <title>ಆಸ್ಟ್ರೇಲಿಯಾದಲ್ಲಿ ಸಿಲುಕಿದ 500 ಕನ್ನಡಿಗರು: ತವರಿಗೆ ವಾಪಸ್ ಆಗಲು ಪರದಾಟ</title>
            <link>https://kannada.asianetnews.com/video/nri/coronavirus-effect-500-kannadigas-struck-in-australia-q7amy6</link>
            <guid>https://kannada.asianetnews.com/video/nri/coronavirus-effect-500-kannadigas-struck-in-australia-q7amy6</guid>
            <pubDate>Mon, 16 Mar 2020 21:26:00 +0530</pubDate>
            <description>ಸಿಡ್ನಿ, [ಮಾ.16]: ಕೊರೊನಾ ವೈರಸ್ ಹಿನ್ನೆಲೆ ವಿಶ್ವದ ಹಲವು ದೇಶಗಳು ಸಂಪೂರ್ಣವಾಗಿ ಲಾಕ್​​ಡೌನ್​ ಆಗಿದೆ. ಈ ಹಿನ್ನೆಲೆಯಲ್ಲಿ ಬೇರೆ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ತವರಿಗೆ ವಾಪಸ್ ಆಗಲು ಅನುಮತಿ ಸಿಗುತ್ತಿಲ್ಲ.  ಕೊರೋನಾ ಕಾಟದಿಂದ ನನ್ನ ಮಗಳನ್ನ ರಕ್ಷಿಸಿ ಎಂದು ಶ್ರೀರಾಮುಲುಗೆ ಪರಿ-ಪರಿಯಾಗಿ ಬೇಡಿಕೊಂಡ ಸಚಿವ  ಮತ್ತೊಂದೆಡೆ ಆಸ್ಟ್ರೇಲಿಯಾದಲ್ಲಿ ಕನ್ನಡಿಗರು ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಭಾರತಕ್ಕೆ ಮರಳಲು ಅನುಮತಿ ಸಿಗದಿದ್ದರಿಂದ 500 ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.&amp;nbsp;  " </description>
            <media:content height="400" width="760" medium="image" url="https://static.asianetnews.com/images/01e3j0r9ca0tp91n3qbajq6ck5/111-png_760x400.jpg"/>
        </item>
        <item>
            <title>ನಮ್ಮ ಸೇಫ್ಟಿಗೆ ಯಾರು ಭಯಪಡಬೇಕಿಲ್ಲ: ಅಮೆರಿಕಾದಿಂದ ಕರುನಾಡ ಕುವರನ ಮಾತು</title>
            <link>https://kannada.asianetnews.com/video/nri/kannadigas-safe-in-america-from-coronavirus-q78j1g</link>
            <guid>https://kannada.asianetnews.com/video/nri/kannadigas-safe-in-america-from-coronavirus-q78j1g</guid>
            <pubDate>Sun, 15 Mar 2020 18:06:00 +0530</pubDate>
            <description>ವಾಷಿಂಗ್ಟನ್,[ಮಾ.15]: ವಿಶ್ವವನ್ನೇ ಕಂಗಾಲಾಗಿಸಿರುವ ಮಾರಕ ಕೊರೋನಾ ವೈರಸ್ ವಿಶ್ವದ ದೊಡ್ಡಣ್ಣ ಎಣಿಸಿಕೊಂಡಿರುವ ಅಮೆರಿಕಾ ದೇಶವನ್ನೂ ಸಹ ಕಂಗೆಡಿಸುತ್ತಿದೆ. ಈ ದೇಶದಲ್ಲಿ ಈಗಾಗಲೇ 1701ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಖಚಿತಪಟ್ಟಿದ್ದು 50 ಜನರು ಈ ಮಹಾಮಾರಿಗೆ ಜೀವತೆತ್ತಿದ್ದಾರೆ.  ಮಾಸ್ಕ್‌, ಔಷಧಕ್ಕಾಗಿ ಮೋದಿಗೆ ಇಸ್ರೇಲ್‌ ಪ್ರಧಾನಿ ಮನವಿ!  ಇದೀಗ ವಿಷ್ಯಾ ಏನಪ್ಪಾ ಅಂದ್ರೆ ಅಮೆರಿಕಾದಲ್ಲಿರುವ ಕನ್ನಡಿಗರು ಮಾಹಾಮಾರಿ ಕೊರೋನಾದಿಂದ ಸೇಫ್ ಆಗಿದ್ದಾರೆ. ಈ ಬಗ್ಗೆ ಅಲ್ಲಿಂದಲೇ ಕನ್ನಡಿಗರೊಬ್ಬರು ಮಾತನಾಡಿದ್ದು ಹೀಗೆ. &amp;nbsp; </description>
            <media:content height="400" width="760" medium="image" url="https://static.asianetnews.com/images/01e3f2zacw1v5mtzyp3eah1vx5/usa-1-jpg_760x400.jpg"/>
        </item>
        <item>
            <title>ಕತಾರ್‌ ಕರ್ನಾಟಕ ಸಂಘಕ್ಕೆ ನೂತನ ಆಡಳಿತ ಮಂಡಳಿ ಆಯ್ಕೆ!</title>
            <link>https://kannada.asianetnews.com/nri/new-administrative-board-elected-for-qatar-karnataka-sangh-q6vpat</link>
            <guid>https://kannada.asianetnews.com/nri/new-administrative-board-elected-for-qatar-karnataka-sangh-q6vpat</guid>
            <pubDate>Sun, 08 Mar 2020 19:53:00 +0530</pubDate>
            <description>ಕತಾರ್‌(ಮಾ.08): ಕನ್ನಡಿಗರ ಅಭಿವೃದ್ಧಿ, ಸಾಮಾಜಿಕ ಸೇವೆ, ಸಂಸ್ಕೃತಿಗಳ ಸಂಕೇತವಾಗಿರುವ ಅರಬ್ ದೇಶದಲ್ಲಿನ ಕತಾರ್ ಕರ್ನಾಟಕ ಸಂಘಕ್ಕೆ ನೂತನ ಆಡಳಿತ ಮಂಡಳಿ ರಚನೆ ಮಾಡಲಾಗಿದೆ. ಕಳೆದ 20 ವರ್ಷಗಳಿಂದ ಸಕ್ರಿಯವಾಗಿರುವ ಕನ್ನಡ ಸಂಘ ಕತಾರ್‌ಗೆ &amp;nbsp;ಮೈರ್ಪಾಡಿ&amp;nbsp;ನಾಗೇಶ್&amp;nbsp;ರಾವ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  ಇದನ್ನೂ ಓದಿ:&amp;nbsp;ಅಮೆರಿಕಾದಲ್ಲಿ ಕನ್ನಡ ಸೊಗಡು; ತನ್ಮಯಿ ಕೃಷ್ಣಮೂರ್ತಿ ಕಂಠದಲ್ಲಿ 'ಕಗ್ಗ' ಕಂಪು  ಪೂರ್ವ&amp;nbsp;ನಿಯೋಜಿತ&amp;nbsp;ಸಮಿತಿಯನ್ನು&amp;nbsp;ಅಧ್ಯಕ್ಷರಾಗಿದ್ದ ವೆಂಕಟರಾಯ ಹಾಗೂ &amp;nbsp;ಸಮ್ಮುಖದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಕೆ.ಎಂ ವರ್ಘೀಸ್ ಸಮ್ಮಖದಲ್ಲಿ ವಿಸರ್ಜಿಸಲಾಯಿತು. ಕತಾರ್ ಕರ್ನಾಟಕ ಸಂಘ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಒಂದು ಅಂಗಸಂಸ್ಥೆಯಾಗಿದೆ. ಕರ್ನಾಟಕ ನೆಲೆಸಿರುವ ಕರ್ನಾಟಕ ಮೂಲದವರ ವೈವಿಧ್ಯಮಯ ಸಂಘಟನೆಯಾಗಿ ಗುರುತಿಸಿಕೊಂಡಿದೆ.&amp;nbsp;  ಇದನ್ನೂ ಓದಿ:ಯುಎಸ್‌ಎ ಅರಿಜೋನದಾಗ ಉತ್ರ ಕರ್ನಾಟಕದ್ ಸುಗ್ಗಿ ಸಂಕ್ರಮಣ  ಈ ಸಂಘಟನೆ 800ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಸಾಂಸ್ಕೃತಿಕ, ಕ್ರೀಡೆ, ಸಾಮಾಜಿಕ ಕಳಕಳಿಯ ಕ್ರಾಯಕ್ರಮಗಳನ್ನು ಆಯೋಜಿಸುತ್ತಿದೆ. &amp;nbsp;ಹೊಸ ಆಡಳಿತ ಮಂಡಳಿಯಿಂದ ಮತ್ತಷ್ಟು ಚಟುವಟಿಕೆ ಆಯೋಜಿಸಲು ಸಜ್ಜಾಗಿದೆ. &amp;nbsp;&amp;nbsp;  ಕತಾರ್ ಕನ್ನಡ ಸಂಘಟದ ನೂತನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ವಿವರ ಇಲ್ಲಿದೆ. ಮೈರ್ಪಾಡಿ&amp;nbsp;ನಾಗೇಶ್&amp;nbsp;ರಾವ್, ಅಧ್ಯಕ್ಷರು&amp;nbsp; ಅನೀಲ್&amp;nbsp;ಕುಮಾರ್&amp;nbsp;ಬೋಲೂರ್, ಉಪಾಧ್ಯಕ್ಷರು&amp;nbsp; ಮುರಳಿಧರ್&amp;nbsp;ರಮನಾಥ್&amp;nbsp;ರಾವ್, ಪ್ರಧಾನ&amp;nbsp;ಕಾರ್ಯದರ್ಶಿ&amp;nbsp; ಲಕ್ಕಪ್ಪ&amp;nbsp;ಲಕ್ಕೇಗೌಡ, ಖಜಾಂಚಿ&amp;nbsp; ಅಕ್ಷಯ&amp;nbsp;ಶೆಟ್ಟಿ, ಸಾಂಸ್ಕೃತಿಕ&amp;nbsp;ಕಾರ್ಯದರ್ಶಿ&amp;nbsp; ಸಂಜಯ್&amp;nbsp;ಕುದರಿ, ಕ್ರೀಡಾ&amp;nbsp;ಕಾರ್ಯದರ್ಶಿ&amp;nbsp; ಕಿಶೋರ್.ವಿ, ಜಂಟಿ&amp;nbsp;ಕಾರ್ಯದರ್ಶಿ&amp;nbsp;ಮತ್ತು&amp;nbsp;ಕನ್ನಡ&amp;nbsp;ಸಂಬಂಧಿತ&amp;nbsp;ಸಂಚಾಲಕರು&amp;nbsp; ಕುಮಾರಸ್ವಾಮಿ.&amp;nbsp;ಸಿ.ಅರ್, ಪರಿಸರ&amp;nbsp;ಮತ್ತು&amp;nbsp;ಮಾಹಿತಿ&amp;nbsp;ತಂತ್ರಜ್ಞಾನ ಸಂಚಾಲಕರು&amp;nbsp; ಸುಶೀಲ&amp;nbsp;ಸುನೀಲ್,&amp;nbsp;&amp;nbsp;ಮಹಿಳಾ&amp;nbsp;ಸಂಚಾಲಕರು&amp;nbsp;&amp;nbsp; ರಶ್ಮಿ&amp;nbsp;ಜಯರಾಮಸ ಮಕ್ಕಳ&amp;nbsp;ಮತ್ತು&amp;nbsp;ವಿಷೇಶ&amp;nbsp;ಅವಶ್ಯಕತೆಗಳ&amp;nbsp;ಸಂಚಾಲಕರು&amp;nbsp;&amp;nbsp; ನೂರ್&amp;nbsp;ಅಹ್ಮದ್ಸ ಸದಸ್ಯತ್ವ&amp;nbsp;ಮತ್ತು&amp;nbsp;ನಿರ್ದೇಶಾಂಕ&amp;nbsp;ಸಂಚಾಲಕರು&amp;nbsp;   &amp;nbsp;ಅಧ್ಯಕ್ಷರ&amp;nbsp;ಕಿರುಪರಿಚಯ:ಶ್ರೀ&amp;nbsp;ನಾಗೇಶ&amp;nbsp;ರಾಯರು&amp;nbsp;ಕತಾರಿನಲ್ಲಿ&amp;nbsp;ಕಳೆದ&amp;nbsp;29&amp;nbsp;ವರ್ಷಗಳಿಂದ&amp;nbsp;ವಾಸಿಸುತ್ತಿದ್ದು,&amp;nbsp;ಕರ್ನಾಟಕ&amp;nbsp;ಸಂಘ&amp;nbsp;ಕತಾರಿನ&amp;nbsp;ಸಂಸ್ಥಾಪಕ&amp;nbsp;ಸದಸ್ಯರಲ್ಲೊಬ್ಬರು.&amp;nbsp;ಪುತ್ತೊರು&amp;nbsp;ಮೂಲದ&amp;nbsp;ಇವರು,&amp;nbsp;ಕತಾರಿನಲ್ಲಿ&amp;nbsp;ಔಷದೀಯ&amp;nbsp;ಉದ್ಯಮದಲ್ಲಿ&amp;nbsp;ಕಾರ್ಯನಿರ್ವಹಿಸುತ್ತಿದ್ದಾರೆ.&amp;nbsp;ಅತಿ&amp;nbsp;ಹೆಚ್ಚು&amp;nbsp;ಸದಸ್ಯರನ್ನು&amp;nbsp;ಸಂಘದಲ್ಲಿ&amp;nbsp;ಭರ್ತಿಮಾಡಿ,&amp;nbsp;ಎಲ್ಲರನ್ನು&amp;nbsp;ಕ್ರೀಡಾ,&amp;nbsp;ಸಾಂಸ್ಕೃತಿಕ&amp;nbsp;ಹಾಗೂ&amp;nbsp;ಸಮಗ್ರ&amp;nbsp;ಬೆಳವಣಿಗೆಯ&amp;nbsp;ಹಾದಿಯಲ್ಲಿ&amp;nbsp;ನಡೆಸಬೇಕೆಂಬ&amp;nbsp;ಆಕಾಂಕ್ಷೆ&amp;nbsp;ಹೊಂದಿದ್ದಾರೆ.   </description>
            <media:content height="400" width="760" medium="image" url="https://static.asianetnews.com/images/01e2x8c85ccrkhm325ynkrbt8b/whatsapp-image-2020-03-08-at-5-59-48-pm-jpeg_760x400.jpg"/>
        </item>
        <item>
            <title>ದೋಹಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಇಂಡಿಯಾ ವರ್ಸಸ್ ಇಂಗ್ಲೇಂಡ್'!</title>
            <link>https://kannada.asianetnews.com/nri/nagathihalli-chandrashekhar-visits-qatar-for-movie-premiere-q5ycqc</link>
            <guid>https://kannada.asianetnews.com/nri/nagathihalli-chandrashekhar-visits-qatar-for-movie-premiere-q5ycqc</guid>
            <pubDate>Wed, 19 Feb 2020 19:41:00 +0530</pubDate>
            <description>ದೋಹಾ(ಫೆ.19): ಪ್ರಖ್ಯಾತ ಕನ್ನಡ ಚಲನಚಿತ್ರಕಾರ, ನಟ, ನಿರ್ದೇಶಕ ಹಾಗೂ ಲೇಖಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರ ಪರಿಚಯ ಕನ್ನಡಿಗರಿಗೆ ಪ್ರತ್ಯೇಕವಾಗಿ ನೀಡಬೇಕಿಲ್ಲ. &amp;nbsp;ವಿಭಿನ್ನ ಚಲನಚಿತ್ರಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದವರು ನಾಗತ್ತಿಹಳ್ಳಿ ಚಂದ್ರಶೇಖರ್.  ನಾಗತಿಹಳ್ಳಿ ಚಂದ್ರಶೇಖರ್ 'ಕೊಟ್ರೇಶಿ ಕನಸು', 'ಅಮೆರಿಕ ಅಮೆರಿಕ' ಮತ್ತು 'ಹೂಮಾಲೆ' ಚಿತ್ರಗಳಿಗೆ ರಾಷ್ಟ್ರೀಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿರುವ ಹೆಸರುವಾಸಿ ನಿರ್ದೇಶಕರು.&amp;nbsp;  ನಾಗತಿಹಳ್ಳಿ ಚಂದ್ರಶೇಖರ್ ಕೇವಲ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿರುವ ಕನ್ನಡ ಸಿನಿ ಪ್ರಿಯರ ನೆಚ್ಚಿನ ನಿರ್ದೇಶಕರೂ ಹೌದು. ಅದರಂತೆ ಕತಾರ್’ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಚಲನಚಿತ್ರ ಬಿಡುಗಡೆಯಾಗಿದೆ.  ಇಂಡಿಯಾ v/s ಇಂಗ್ಲೆಂಡ್‌ ಪ್ರೇಕ್ಷಕರು ಗೌರವಿಸುವ ಸಿನಿಮಾ: ನಾಗತಿಹಳ್ಳಿ ಚಂದ್ರಶೇಖರ್‌  ನಾಗತಿಹಳ್ಳಿ ಚಂದ್ರಶೇಖರ್ ಅವರ ನೂತನ ಚಲನಚಿತ್ರ 'ಇಂಡಿಯಾ ವರ್ಸಸ್ ಇಂಗ್ಲೇಂಡ್' ಕತಾರ್ ರಾಜಧಾನಿಯಾದ ದೋಹಾ ನಗರದಲ್ಲಿ ಬಿಡುಗಡೆಗೊಳ್ಳಲಿದೆ. ಶುಕ್ರವಾರ(ಫೆ.21)ಚಲನಚಿತ್ರ ಬಿಡುಗಡೆಗಾಗಿ ನಾಗತಿಹಳ್ಳಿ ಚಂದ್ರಶೇಖರ್ ದೋಹಾಗೆ ಆಗಮಿಸಿದ್ದಾರೆ.  ಚಲನಚಿತ್ರ ಬಿಡುಗಡೆ ಸಮಾರಂಭದ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಹಾಗೂ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಸ್ವೀಕರಿಸಲಿದ್ದಾರೆ. </description>
            <media:content height="400" width="760" medium="image" url="https://static.asianetnews.com/images/01e1ew9tn05x5fqs2bcrq070z9/nagatihalli-png_760x400.jpg"/>
        </item>
        <item>
            <title>ಯುಎಸ್‌ಎ ಅರಿಜೋನದಾಗ ಉತ್ರ ಕರ್ನಾಟಕದ್ ಸುಗ್ಗಿ ಸಂಕ್ರಮಣ</title>
            <link>https://kannada.asianetnews.com/nri/uttara-karnataka-peple-celebrate-suggi-sankramana-in-usa-q5dghk</link>
            <guid>https://kannada.asianetnews.com/nri/uttara-karnataka-peple-celebrate-suggi-sankramana-in-usa-q5dghk</guid>
            <pubDate>Sat, 08 Feb 2020 12:52:00 +0530</pubDate>
            <description>ನಮಸ್ಕಾರ್ರೀ, ನಾವು ಅಮೆರಿಕಾದಾಗಿನ ಅರಿಜೋನಾ ರಾಜ್ಯದೊಳಗ ಫೀನಿಕ್ಸ್‌ ನಗರದಾಗಿರೋ ಕನ್ನಡ ಮಂದಿ ರೀ. ಹಂಗಂತ ಹೇಳಿದ್ರೂ ಸತಿಕ್‌ ಫೀನಿಕ್ಸೂ ಸೇರಿದಂಗ ಸುತ್ತಮುತ್ತಲ ಪಿಯೂರಿಯಾ, ನಾರ್ತ್ ಫೀನಿಕ್ಸು, ಗ್ಲೆಂಡೇಲು, ಈ ಕಡಿ ಸ್ಕಾಡ್ಸಡೇಲು ಆಕಡಿ ಚಾಂಡಲರ್ರು, ಗಿಲಬರ್ಟು, ಮೇಸ ಅತ್ತಕಡಿ ಟೆಂಪಿ, ಅವಾಟುಕಿ ಹಿಂಗ ಫೀನಿಕ್ಸಿನ ಸುತ್ತಲೂ ಎಲ್ಲ ಕಡಿ ನಮ್ಮ ಕನ್ನಡ ಮಂದಿ ಇದ್ದಾರ್ರೀ.&amp;nbsp;    ಇದನ್ನೂ ಓದಿ:&amp;nbsp;ಅಮೆರಿಕದ IA ಅಧ್ಯಕ್ಷರಾಗಿ ಸತೀಶ್: ಕರುನಾಡಿಗರಿಂದ ಗುಡ್ ವಿಶ್!  ಭಾಳ ದಿನದಿಂದ ನಮ್ಮ ಗೆಳೆಯಾರು ಸೇರಿ ಸುಗ್ಗಿ ಸಂಕ್ರಮಣ ಮಾಡಿದ್ರ ಹ್ಯಾಂಗ ಅಂತ ವಿಚಾರ ಮಾಡಕ್ಕತ್ತಿದ್ರು. ನಡಿ ಹಂಗಾರ ಈ ಸಾರಿ ಮಾಡೇ ಬಿಡೋಣು ಅಂತ ಏಕ್‌ಧಂ ಹುರ್ರ್ ಅನ್ನಂಗ ಒಂದು ಶೀಟ್‌ ಮೆಸೇಜ್‌ ಟೈಪ್ ಮಾಡಿ ಓಸೂ ವಾಟಸ್ಯಾಪ್ ಗ್ರೂಪನ್ಯಾಗ ಹಾಕೇ ಬಿಟ್ರು. “ನೋಡ್ರಿಪಾ, ನಾವು ಉತ್ರ ಕರ್ನಾಟಕ ಮಂದಿ ಸುಗ್ಗಿ ಸಂಕ್ರಮಣ ಅಂತ ಒಂದ್ ಸಹಭೋಜನ (ಪಾಟ್‌ಲಕ್) ಕಾರ್ಯಕ್ರಮ ಮಾಡಕತ್ತೀವಿ.&amp;nbsp;  ಇದನ್ನೂ ಓದಿ:ಮಗನ ನೋಡಿಕೊಂಡಿದ್ದ ಮನೆ ಕೆಲಸದವರಿಗೆ 1 ಕೋಟಿ ರು. ನೀಡಲು ಹುಡುಕುತ್ತಿರುವ ತಂದೆ  ನಿಮಗ್ಯಾರಗಾರ ನಮ್ಮ ಈ ಸಂಭ್ರಮದಾಗ ಸೇರ್ಕೋಬೇಂತ ಇಷ್ಟ ಇದ್ರ ನಾವ್ ಉತ್ರ ಕರ್ನಾಟಕದಾಗಿನ ತಿಂಡಿ ತಿನಿಸುಗಳದ್ದ ಒಂದು ಪಟ್ಟಿ ಕಳಸ್ತೇವಿ. ನೀವ್ ಅದ್ರಾಗ ಯಾವುದಾರ ಒಂದು ತಿನ್ನೋ ಐಟಮ್‌ ಮನ್ಯಾಗ ಮಾಡ್ಕೋ ಬರ್ಬೇಕಾಗ್ತದ. ಅಂದಾಂಗ ಇದಕ್ಕ ರೊಕ್ಕಪಕ್ಕ ಏನ ಇಸಕೋಣಕತ್ತಿಲ್ಲ. ನೀವು ಅಡಿಗಿ ಮಾಡ್ಕೊಂಡು ಬರ್ತೀರಲ್ಲ ಅಷ್ಟ ಸಾಕು” ಅಂತ ಇಷ್ಟ್‌ ಮೆಸೇಜ್‌ ಮಾಡಿದ್ರು ನೋಡ್ರಿ. ಮಂದಿ ಹಂಗ ನಾ ಮುಂದು ತಾ ಮುಂದು ಅಂತ ಠಣಠಣ ಹೆಸರು ಹಾಕಾಕತ್ರು ನೋಡ್ರಿ.&amp;nbsp;    ಹೇ! ತಡ್ರಿಪಾ.. ಅವ್ರೇನ್‌ ಈ ಅಮೆರಿಕದಾಗೂ ಉತ್ರ ದಕ್ಷಿಣ ಅತ್ತ ಬ್ಯಾರೇ ಬ್ಯಾರೇ ಮಾಡಾಕತ್ತಿಲ್ಲ. ವಿಚಾರ ಇರೋದು ಇಷ್ಟೇ. ಉತ್ರ ಕರ್ನಾಟಕದ ಊಟ ಜೊತೆಗೊಂದೀಟ್‌ ಆಟ, ನಾಲ್ಕು ಪದ, ಸಂಜಿ ಮುಂದ್‌ ಒಂದ್‌ ಕಪ್‌ ಚಾ ಜೊತೇಗ್‌ ಮಿರ್ಚಿ ಬಜ್ಜಿ, ಹಸಿ ಉಳ್ಳಾಗಡ್ಡಿ ಹಾಕಿ ಮಾಡಿರೋ ಖಾರಮಂಡಕ್ಕಿ. ಇಷ್ಟ್‌ ಅದ. ನಮ್‌ ಕನ್ನಡ್‌ ಮಂದಿ ಒಷ್ಟ್ರೂ ಬರ್ರೀ. ನಿಮಗೇನಾರ ನಮ್‌ ಅಡಿಗಿ ಐಟಮ್‌ ತಿಳಿವಲ್ದೋ ಅಥ್ವಾ ನಿಮ್‌ ಜೀವನ್ದಾಗ್‌ ಈ ತಿನ್ನೋ ಐಟಮ್‌ ಹೆಸರಾ ಕೇಳಿಲ್ಲೋ ಕಂಗಾಲಾಗಬೇಡ್ರಿ. ನಾವ ನಿಮಗ ಬ್ಯಾರೇ ಏನಾರ ಐಟಮ್‌ ತರಾಕ್‌ ಹೇಳ್ತೀವಿ. ಅದನ್ನ ಹಿಡಕೊಂಡ್‌ ಬರ್ರೀ ಅಂತ ಇಷ್ಟ ವಿಚಾರ ತಿಳಿಸಿದ್ರು.&amp;nbsp;    ಇದನ್ನೂ ಓದಿ:&amp;nbsp;ಕತಾರ್ ಉತ್ತರ ಕರ್ನಾಟಕ ಬಳಗಕ್ಕೆ ವರ್ಷದ ಸಂಭ್ರಮ: ಅದ್ಧೂರಿ ಕಾರ್ಯಕ್ರಮ  ಸರಿ ಶನಿವಾರ ಮುಂಜಾನೆ ಎಲ್ರೂ ಸ್ಕಾಟ್ಸ್‌ಡೇಲನ್ಯಾಗಿರೋ ಶಾಪರೆಲ್‌ ಪಾರ್ಕಿನ್ಯಾಗ ಸೇರಕತ್ವಿ. ಒಬ್ಬೊಬ್ಬರ ಮಂದಿ ಬರಾಕತ್ತಿದ್ರು. ತಾವ್‌ ಮಾಡ್ಕೊಂಡ್‌ ಬಂದಿರೋ ಅಡಿಗಿ ತಂದ್‌ ಟೇಬಲ್‌ ಮ್ಯಾಲ್‌ ಜೋಡಸಾಕತ್ರು. ರೊಟ್ಟಿ, ಎಣಗಾಯ್‌ ಪಲ್ಲೆ, ಜುಣಕ, ಕಾಳಪಲ್ಲೆ, ಪುಂಡಿಪಲ್ಲೆ, ಖಾರಬ್ಯಾಳಿ, ಕಡ್ಲಿಚಟ್ನಿ, ಸೇಂಗಚೆಟ್ನಿ, ಗುರೆಳ್ಪುಡಿ, ಸೇಂಗಾದ್ಹೋಳ್ಗಿ, ಕುಂದ, ಪೇಡೆ, ಗೋಧಿ ಕುಟ್ಟಿದ್‌ ಪಾಯ್ಸ, ಚಪಾತಿ, ಹಚ್ಕೊಣಾಕ್‌ ಮಸೂರು ಭಾರಿ ಜಬರ್ದಸ್ತ್‌ ಊಟ ರೆಡಿ ಆಗಕತ್ತು. ಮತ್ತೀಕಡಿ ಒಂದ್ಮೂರ್ನಾಲ್ಕು ಥರದ್‌ ಕೋಸಂಬ್ರಿ, ಬಾಳಕ, ಉಪ್ಪಿನಕಾಯಿ ಏನಂತಿರಿ! ಬಂದಿರೋ ಮಂದಿ ಎಲ್ಲ ಭಾಳ ಖುಷಿ ಆಗಿದ್ರು ನೋಡ್ರಿ.&amp;nbsp;  ಇದನ್ನೂ ಓದಿ:&amp;nbsp;ಭಾಷಾ ಪ್ರೀತಿಗೆ ಎಲ್ಲೆ ಎಲ್ಲಿ.. ಅಮೆರಿಕಾದ ಕನ್ನಡ 'ಕಲಿ'ಗಳು  ಊಟ ಚಾಲೂ ಮಾಡಿದ್ದೇ ತಡ ರೊಟ್ಟಿ ಬಾಯಾಗ್‌ ತುರುಕ್ಕೋತನೇ ನಮ್‌ ಮಂದಿ “ತುಂಬ ಥ್ಯಾಂಕ್ಸ್‌ ರೀ, ನಮ್‌ ಕಡಿದ್‌ ಅಡಿಗಿ ಊಟ ಮಾಡ್ದ ನಾಲ್ಗಿ ಅನ್ನೋದ್‌ ತುಕ್‌ ಹಿಡದಂಗಾಗಿತ್ತು. ಸುಗ್ಗಿ ಸಂಕ್ರಮಣ ಮಾಡಿ ಛಲೋ ಕೆಲ್ಸ ಮಾಡಿದ್ರಿ” ಅಂತ ಶಭಾಷ್ಗಿರಿ ಕೊಡಕತ್ತಿದ್ರು. ಮತ್ತ ನಮ್‌ ಕಡಿ ಅಡಿಗಿ ಅಪರೂಪ ಆದವ್ರು ಇದೇನ, ಇದ ಹ್ಯಾಂಗ್‌ ಮಾಡಿದ್ರಿ, ಇದರಾಗ್‌ ಏನಾಕಿರೀ, ಭಾಳ ಛಲೋ ಟೇಸ್ಟ್‌ ಅದ” ಅಂತ ಹೇಳ್ಕೋತಾ, ಕೇಳಿ ಇನ್ನೊಮ್ಮೆ ಹಾಕಿಶ್ಕೊಂಡು ತಿಂದು ಖುಷಿ ಪಟ್ರು ನೋಡ್ರಿ. ಅಂತೂ ಹೊಟ್ಟೆ ತುಂಬ ಊಟ ಆತು. ಇನ್ನ ಒಂದಿಷ್ಟು ಆಟ ಆಡಿದ್ವಿ. ಮೂಕಾಭಿನಯ ಆಟ ಆಡಿ ಮಸ್ತ್‌ ಮಜ ಬಂತು ನೋಡ್ರಿ.&amp;nbsp;  ಇದನ್ನೂ ಓದಿ:&amp;nbsp;ನೈಜೀರಿಯಾ NRIಗಳಿಂದ ನೆರೆ ಸಂತ್ರಸ್ತರಿಗೆ ದೇಣಿಗೆ  ಇದಾದ ಮ್ಯಾಲೆ ಕನ್ನಡ ಹಾಡಿನ್‌ ಅಂತ್ಯಾಕ್ಷರಿನೂ ಆತು. ಸರಿ, ಗಂಟಿ ನಾಕಾತು ಅನ್ಕೋತ ಆಗಲೇ ಒಂದಿಷ್ಟು ಹೆಣ್ಮಕ್ಳು ಅತ್ತಕಡಿ ಉಳ್ಳಾಗಡ್ಡಿ ಮೆಣಸಿನಕಾಯಿ ಕೊತ್ತಂಬರಿ ಹೆಚ್ಚಾಕತ್‌ ಖಾರಮಂಡಕ್ಕಿ ರೆಡಿ ಮಾಡಿದ್ರು. ಇತ್ತಾಗ ಒಂದಿಷ್ಟು ಮಂದಿ ಗಂಡ್ಮಕ್ಳು ಭಾಂಡೆದಾಗ ಎಣ್ಣಿ ಕಾಯಾಕಿಟ್ಟು ಹಿಟ್‌ ಕಲಿಸಿ ಮೆಣಸಿನಕಾಯಿ ಭಜ್ಜಿ ಬಿಟ್ಕೋತ ಮತ್ತೊಂದ್ಕಡಿ ಚಾ ಮಾಡಿದ್ರು. “ಇದಕ್ಕ ನೋಡ್ರಿ ನಮ್ನಮ್‌ ಕನ್ನಡ ಮಂದಿ ಆಗಾಗ ಹಿಂಗ್ ಒಂದ್ ಕಡಿ ಸೇರ್ಕೋತಿರಬೇಕು. ಇರ್ಲಿಕ್ಕಂದ್ರೆ ಈ ನಮೂನಿ ಊಟ, ಹಿಂಗ್‌ ಹೊಸ ಮಂದಿ ಪರಿಚಯ ಎಲ್ಲಾ ಹೆಂಗ್‌ ಸಾಧ್ಯ ಆಗ್ತದ್ಹೇಳ್ರೀ” ಅಂತ ಇಂಡಿಯಾಲಿಂದ ಮಕ್ಕಳನ್ನ್‌ ನೋಡಾಕ್‌ ಬಂದಿದ್ದ ಅಪ್ಪಾವ್ವಂದ್ರು ಒಂದು ಕಡಿ ಕುಂತ್‌ ಚಾ ಕುಡ್ಕೋತ್‌ ಮಾತಾಡಕ್ಹತ್ತಿದ್ರು. ಮರ್ತೇ ಬಿಟ್ಟೆ ನೋಡ್ರಿ. ಈ ಸುಗ್ಗಿ ಸಂಕ್ರಮಣಕ್ಕ ಬರೋರೆಲ್ಲ ಮುದ್ದಾಂ ನಮ್ಮೂರ್ನ್ಯಾಗ ಹಬ್ಬಕ್ಕ ಹಾಕೋ ಬಟ್ಟಿನ ಹಾಕ್ಕೊಂಡ್‌ ಬರ್ರೀ ಅಂತ ಹೇಳಿದ್ರು ನೋಡ್ರಿ. ಗಂಡ್ಮಕ್ಳು ಜುಬ್ಬ ಪಯ್ಜಾಮದಾಗ ಬಂದ್ರೆ ಹೆಣ್ಮಕ್ಳು ಇಳಕಲ್ಸೀರೆ ಉಟಕೊಂಡು ಮ್ಯಾಲ ಕವಡಿ ಸರಾನೂ ಹಾಕ್ಕೋಂಡಿದ್ರೀ. ಒಟ್ನ್ಯಾಗ ಮಂದೆಲ್ಲ ಮಸ್ತ್‌ ಸಂತೋಷ ಪಟ್ರು.&amp;nbsp;  ಈ ಸುಗ್ಗಿ ಸಂಕ್ರಮಣದ್‌ ಐಡಿಯಾ ಮಾಡಿದ್ದು ನಮ್‌ ಗೆಳೆಯ ಪ್ರಭಾತ ಜೋಶಿ ರೀ. ಅವರ ಕೂಡ ಶಿಲ್ಪಾ ದೇಸಾಯಿ, ಪ್ರತೀಕ್ಷ ಕುಲಕರ್ಣಿ, ಮಧುಸೂದನ, ಸೀಮಾ, ಭೀಮಸೇನ, ಭಾಗ್ಯಶ್ರೀ, ರಶ್ಮಿ ಕುಲಕರ್ಣಿ, ಜಯಂತ ಮತ್ತು ಶ್ವೇತ ಇವರೆಲ್ಲ ಸೇರ್ಕೊಂಡಿದ್ರು ನೋಡ್ರಿ. ಹ್ಹ. ಅಂದ್ಹಾಂಗ ಬಂದಿದ್‌ ಮಂದೆಲ್ಲ ಮನಿಗ್ಹೋಗೋ ಮುಂದ, ಹೇ ತಡ್ರಿಪ ಒಂದ್‌ ಗ್ರೂಪ್‌ ಫೋಟೋ ಇರ್ಲಿಕ್ಕಂದ್ರೆ ಕಾರ್ಯಕ್ರಮ ಬರೋಬರ ಆಗ್ಯಾದ ಅಂತ ಬ್ಯಾರೆ ಮಂದಿಗ್‌ ತಿಳಿಸೋದಾದ್ರೂ ಹೆಂಗ ಅಂತಿಕ್ಕೊಂಡ್‌ ಒಂದ ಪಟನೂ ಹಿಡಿಸಿದ್ರ ನೋಡ್ರಿ. ಅಂತೂ ಸುಗ್ಗಿ ಸಂಕ್ರಮಣ ಸಂಪನ್ನ ಆತು. ನೀವೂ ಹಿಂಗ ಮಾಡಿ ನೋಡ್ರಿ ಮಸ್ತ್‌ ಮಜ ಬರ್ತದ.&amp;nbsp;  ಬರಹ: ಅನಿಲ್‌ ಭಾರದ್ವಾಜ್, ಫೀನಿಕ್ಸ್‌, ಯುಎಸ್‌ಎ </description>
            <media:content height="400" width="760" medium="image" url="https://static.asianetnews.com/images/01e0htfavx507s669yqzh6e0g7/phx-8-jpg_760x400.jpg"/>
        </item>
        <item>
            <title>ಅಮೆರಿಕದ IA ಅಧ್ಯಕ್ಷರಾಗಿ ಸತೀಶ್: ಕರುನಾಡಿಗರಿಂದ ಗುಡ್ ವಿಶ್!</title>
            <link>https://kannada.asianetnews.com/nri/sathish-nanjappa-elected-as-president-of-united-states-india-association-q57vrz</link>
            <guid>https://kannada.asianetnews.com/nri/sathish-nanjappa-elected-as-president-of-united-states-india-association-q57vrz</guid>
            <pubDate>Wed, 05 Feb 2020 12:37:00 +0530</pubDate>
            <description>ಸೇಂಟ್ ಲೂಯಿಸ್(ಫೆ.05): ‘ಓ ನನ್ನ ಚೇತನ, ಆಗು ನೀ ಅನಿಕೇತನ..’ ಎಂಬ ವಿಶ್ವ ಕವಿ ಕುವೆಂಪು ಅವರ ಆಶಯದಂತೆ ಕನ್ನಡಿಗ ಇಂದು ಜಗತ್ತು ಗೆದ್ದಾಗಿದೆ. ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲೂ ಕನ್ನಡದ ಕಂಪು ಹರಡುವಲ್ಲಿ ಕನ್ನಡಿಗ ನಿರತನಾಗಿದ್ದಾನೆ.  ತನ್ನ ವಿದ್ವತ್ತು, ಗಾಢ ಸಂಸ್ಕೃತಿಯನ್ನು ಬೆನ್ನಿಗೆ ಹಾಕಿಕೊಂಡೇ ವಿಶ್ವ ಪರ್ಯಟನೆಗೆ ಹೊರಟ ಕನ್ನಡಿಗ, ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಕನ್ನಡದ ಧ್ವಜ ರಾರಾಜಿಸುವಂತೆ ಮಾಡಿದ್ದಾನೆ.  ಸಪ್ತಸಾಗರಗಳನ್ನು ಜಯಿಸಿ ಬೇರೊಂದು ನೆಲಕ್ಕೆ ಕಾಲಿಟ್ಟಿರುವ ಕನ್ನಡಿಗರು, ಅಲ್ಲಿಯೂ ತಮ್ಮ ಮಣ್ಣಿನ ಗುಣವನ್ನು ಹೆಮ್ಮೆಯಿಂದ ಪಸರಿಸುತ್ತಿದ್ದಾರೆ. ಇದಕ್ಕೆ ಜ್ವಲಂತ ಉದಾಹರಣೆ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿರುವ ಕನ್ನಡಿಗರು.&amp;nbsp;  ಭಾಷಾ ಪ್ರೀತಿಗೆ ಎಲ್ಲೆ ಎಲ್ಲಿ.. ಅಮೆರಿಕಾದ ಕನ್ನಡ 'ಕಲಿ'ಗಳು  ಹೌದು, ಅಮೆರಿಕದಲ್ಲಿರುವ &amp;nbsp;ಕನ್ನಡಿಗರು ಸಾಮಾಜಿಕವಾಗಿ ಸಂಘಟಿತ ಸಮುದಾಯವಾಗಿ ಗಾಢವಾಗಿ ನೆಲೆಯೂರಿ ದಶಕಗಳೇ ಕಳೆದಿವೆ. ಸ್ವತಃ ಅಮೆರಿಕನ್ನರೂ ಗುರುತಿಸುವಂತ ಪ್ರಬಲ ಸಮುದಾಯವಾಗಿ ಕನ್ನಡಿಗರು ಹೊರಹೊಮ್ಮಿದ್ದಾರೆ.&amp;nbsp;    ಅದರಂತೆ ಇತ್ತೀಚೆಗೆ ನಡೆದ ಭಾರತೀಯ ಅಸೋಸಿಯೇಷನ್ ಚುನಾವಣೆಯಲ್ಲಿ ಕನ್ನಡಿಗರೇ ಆದ ಸತೀಶ್ ನಂಜಪ್ಪ ಆಯ್ಕೆಯಾಗಿದ್ದು, ಕನ್ನಡಿಗನ ಹೆಗಲಿಗೆ ಸಂಘಟನೆಯ ಜವಾಬ್ದಾರಿ ಲಭಿಸಿದೆ.&amp;nbsp;  ಅಮೆರಿಕದ ಸೇಂಟ್ ಲೂಯಿಸ್’ನಲ್ಲಿರುವ ಭಾರತೀಯ ಅಸೋಸಿಯೇಷನ್ ಭಾರತೀಯರ ಒಗ್ಗೂಡುವಿಕೆಗೆ ಸಾಕ್ಷಿಗಿರುವ ಸಂಘಟನೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಬೇಕಾದ ಸಕಲ ನೆರವನ್ನು ಒದಗಿಸುವ ಈ ಸಂಘಟನೆಯನ್ನು ಇದೀಗ ಕನ್ನಡಿಗ ಮುನ್ನಡೆಸಲಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ.  ಅಮೆರಿಕಾದ ಆಲ್ಬನಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ  ಭಾರತೀಯ ಅಸೋಸಿಯೇಷನ್:  1965 ರಲ್ಲಿ‌ಸ್ಥಾಪನೆಗೊಂಡ ಭಾರತೀಯ ಅಸೋಸಿಯೇಷನ್ ಸಂಘಟನೆ, ಅಮೆರಿಕ ದೇಶದಲ್ಲಿ ನೆಲೆಸಿರುವ ಭಾರತೀಯರ ಒಗ್ಗೂಡುವಿಕೆಗೆ ಸಾಕ್ಷಿಯಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಬೇಕಾದ ಸಕಲ ನೆರವುಗಳು ಹಾಗೂ ಎರಡೂ ದೇಶಗಳ ರಾಜತಾಂತ್ರಿಕ ಕಾರ್ಯಗಳಿಗೆ ಕೊಂಡಿಯಾಗಿ ಈ ಸಂಘಟನೆ ಕೆಲಸ ಮಾಡಿಕೊಂಡು ಬಂದಿದೆ.    ಇದೀಗ ಅಮೆರಿಕದಲ್ಲಿರುವ ಭಾರತೀಯ ಅಸೋಸಿಯೇಷನ್’ಗೆ ಅಧ್ಯಕ್ಷರಾಗಿ‌ ಕನ್ನಡಿಗರೇ ಆಯ್ಕೆ ಆಗಿರುವುದು ಇಡೀ ರಾಜ್ಯವೇ ಹೆಮ್ಮೆಪಡುವಂತಾಗಿದೆ. ಭಾರತೀಯ ಅಸೋಸಿಯೇಷನ್’ಗೆ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ನಂಜಪ್ಪ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದೆಗಳು... </description>
            <media:content height="400" width="760" medium="image" url="https://static.asianetnews.com/images/01e0a1dddb6geh1t5cx810mrj4/satish-jpg_760x400.jpg"/>
        </item>
        <item>
            <title>ಶ್ರೀಮನ್ನಾರಾಯಣ ಕಪಲ್ ಟಿಕೆಟ್ ಗೆಲ್ಲಲು ನೀವು ಮಾಡಬೇಕಾದ್ದಿಷ್ಟೆ!</title>
            <link>https://kannada.asianetnews.com/nri/avane-srimannarayana-asn-will-be-screen-in-gulf-countries-q40aj8</link>
            <guid>https://kannada.asianetnews.com/nri/avane-srimannarayana-asn-will-be-screen-in-gulf-countries-q40aj8</guid>
            <pubDate>Sun, 12 Jan 2020 23:41:00 +0530</pubDate>
            <description>ಬಹರೇನ್(ಜ. 12)&amp;nbsp;ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಅವನೇ ಶ್ರೀಮನ್ನಾರಾಯಣ ಚಿತ್ರ ವಿದೇಶದಲ್ಲಿಯೂ ಪ್ರದರ್ಶನಕ್ಕೆ ಸಿದ್ಧವಾಗಿದೆ.  ಯುಎಇ, ಕುವೈತ್, ಬಹರೇನ್, ಓಮನ್, ಕತಾರ್ ನಲ್ಲಿಯೂ ಪ್ರದರ್ಶನಕ್ಕೆ ದಿನಗಣನೆ ಆರಂಭವಾಗಿದ್ದು ಕಪಲ್ಟಿಕೆಟ್ ಪಡೆದುಕೊಳ್ಳಲು ಅವಕಾಶ ಇದೆ.  ಜನರೊಂದಿಗೆ ಸಿನಿಮಾ ನೋಡಿದ ಶಾನ್ವಿ  ನಿಮ್ಮ ಹೆಸರು ಮತ್ತಿ ಇಮೇಲ್ ಐಡಿಯನ್ನು+971504788956 ಕಳುಹಿಸಿದರೆ ಕಪಲ್ ಟಿಕೆಟ್ ಗೆಲ್ಲುವ ಅವಕಾಶವೂ ಇದೆ  ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಅಭಿನಯದ ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ. ನಿಧಿ ಬೇಟೆಯ ಕತೆಯುಳ್ಳ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ವಿಮರ್ಶಕರು ಸಹ ಜೈಕಾರ ಹಾಕಿದ್ದಾರೆ. </description>
            <media:content height="400" width="760" medium="image" url="https://static.asianetnews.com/images/01dydf58ha5ghrfytymha1n1gb/nara-jpg_760x400.jpg"/>
        </item>
        <item>
            <title>ಕತಾರ್ ಉತ್ತರ ಕರ್ನಾಟಕ ಬಳಗಕ್ಕೆ ವರ್ಷದ ಸಂಭ್ರಮ: ಅದ್ಧೂರಿ ಕಾರ್ಯಕ್ರಮ</title>
            <link>https://kannada.asianetnews.com/video/nri/uttara-karnataka-balaga-first-anniversary-qatar-on-december-13-q201yy</link>
            <guid>https://kannada.asianetnews.com/video/nri/uttara-karnataka-balaga-first-anniversary-qatar-on-december-13-q201yy</guid>
            <pubDate>Wed, 04 Dec 2019 23:29:00 +0530</pubDate>
            <description>ಕತಾರ್(ಡಿ. 04)&amp;nbsp; ಡಿಸೆಂಬರ್ 13 ರಂದು ಕತಾರ್&amp;nbsp;ಉತ್ತರ ಕರ್ನಾಟಕ ಬಳಗ ಒಂದು ವರ್ಷದ&amp;nbsp;ಸಂಭ್ರಮ ಹಮ್ಮಿಕೊಂಡಿದೆ.  ಕತಾರ್ ನಲ್ಲಿ ಕನ್ನಡ ಕಲರವ  ಡಿಸೆಂಬರ್ 13 ರಂದು ಡಿಪಿಎಸ್ ಇಂಟರ್ ನ್ಯಾಷನಲ್ ಸ್ಕೂಲ್ ವಕಾರ್ ದೋಹಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ, ರಿಯಲ್ ಸ್ಟಾರ್ ಉಪೇಂದ್ರ, ರಂಗಕರ್ಮಿ ಯಶವಂತ ಸರದೇಶಪಾಂಡೆ, ಗಾಯಕಿ ನಾಗಚಂದ್ರಿಕಾ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಎಲ್ಲರಿಗೂ ಆಹ್ವಾನ ನೀಡಿದ್ದಾರೆ. </description>
            <media:content height="400" width="760" medium="image" url="https://static.asianetnews.com/images/01dv90wtr18amv4gf12jnywb9n/upendra-12-jpg_760x400.jpg"/>
        </item>
        <item>
            <title>ಮೆಲ್ಬೋರ್ನ್‌ನಲ್ಲಿ ರಾಜ್ಯೋತ್ಸವ, ದಂಪತಿ ಸಮೇತ ಉಪ್ಪಿ ಡೈಲಾಗ್ ಅಬ್ಬರ</title>
            <link>https://kannada.asianetnews.com/video/nri/sandalwood-super-star-upendra-in-melbourne-kannada-sangha-mks-rajyotsava-celebration-q1uilo</link>
            <guid>https://kannada.asianetnews.com/video/nri/sandalwood-super-star-upendra-in-melbourne-kannada-sangha-mks-rajyotsava-celebration-q1uilo</guid>
            <pubDate>Sun, 01 Dec 2019 23:43:00 +0530</pubDate>
            <description>ಮೆಲ್ಬೋರ್ನ್(ಡಿ. 01) ಮೆಲ್ಬೋರ್ನ್ ಕನ್ನಡ ಸಂಘ ಹಮ್ಮಿಕೊಂಡಿದ್ದ ಕನ್ನ ಡ ರಾಜ್ಯೋತ್ಸವಕ್ಕೆ ರಿಯಲ್ ಸ್ಟಾರ್ ಉಪೇಂದ್ರ ದಂಪತಿ ಸಾಕ್ಷಿಯಾದರು.  ಕಾರ್ಯಕ್ರಮದಲ್ಲಿ ಎಲ್ಲೆಲ್ಲೂ ಉಪ್ಪಿ, ಉಪ್ಪಿ..ಉಪ್ಪಿ ಹರ್ಷ-ಉದ್ಘಾರಗಳು ಕೇಳಿಬಂದವು. ಡೈಲಾಗ್ ಮೂಲಕ ರಂಜಿಸಿದ&amp;nbsp; ಉಪೇಂದ್ರ ಹಾಡು ಹೇಳಲು ಮರೆಯಲಿಲ್ಲ. </description>
            <media:content height="400" width="760" medium="image" url="https://static.asianetnews.com/images/01dv1aevtea4182t43cvqk1tew/upendra-aa-jpg_760x400.jpg"/>
        </item>
        <item>
            <title>ಸಿಂಗಪುರದಲ್ಲಿ ಕನ್ನಡ ಸಂಘ ದೀಪೋತ್ಸವ, ಪ್ರತಿಭೆಗಳ ಅನಾವರಣ</title>
            <link>https://kannada.asianetnews.com/nri/singapore-kannada-sangha-deepotsava-2019-celebration-q1kijc</link>
            <guid>https://kannada.asianetnews.com/nri/singapore-kannada-sangha-deepotsava-2019-celebration-q1kijc</guid>
            <pubDate>Tue, 26 Nov 2019 14:05:00 +0530</pubDate>
            <description>ಸಿಂಗಪುರ(ನ. 26)&amp;nbsp; ಸಿಂಗಪುರದ GIIS ನಲ್ಲಿನ ಸಭಾಂಗಣದ ಬಣ್ಣ, ಆಕಾರ, ರೂಪವೇ ಬದಲಾಗಿ ಹೋಗಿತ್ತು, ಕಾರ್ಲೆ ಟೌನ್ ಸೆಂಟರ್ ಪ್ರಾಯೋಜಿಸಿದ ಆಕಾರ್ಯಕ್ರಮದಲ್ಲಿ ಝಗಮಗಿಸುವ ದೀಪಗಳು ಎಲ್ಲೆಡೆ ಮೆರುಗುತ್ತಿದ್ದವು, ವೇದಿಕೆಯ ಸ್ವರೂಪವೇ ಬದಲಾಗಿ ಸುಂದರವಾಗಿ ಅಲಂಕೃತಗೊಂಡು ಯಾವುದೋ ಸಂಭ್ರಮಕ್ಕೆ ಅಣಿಯಾಗುವ ಚೆಲುವೆಯ ಸೌಂದರ್ಯ ಮೈದೋರಿದಂತಿತ್ತು.  ಅದಕ್ಕೆ ಪೂರಕವೆಂಬಂತೆ ತನ್ನ ಅಸ್ತಿತ್ವವನ್ನು ಸಾರಿ ಎಲ್ಲೆಡೆ ಆವರಿಸುವ ವಿಭಿನ್ನ ಬಣ್ಣ ಬಣ್ಣದ ಉಡುಗೆ-ತೊಡುಗೆಗಳ ರಂಗಿನ ಜೊತೆಗೆ ತಾವು ಸೇರಿಕೊಂಡು ಸೆಳೆಯುವ ಆತುರದ ಬಳೆ- ಗೆಜ್ಜೆಗಳ ನಾದ, ತಾವೇನು ಕಡಿಮೆ ಎಂಬಂತೆ ಪೈಪೋಟಿಗಿಳಿದ ಸಂಗೀತದಂತಹ ಮಾನಿನಿಯರ ಮಾತುಗಳ ಸುಮಧುರ ರಾಗ, ನಿಧಾನವಾಗಿ ಗಾಳಿಯೊಂದಿಗೆ ಬೆರೆತು ತನ್ನತನವನ್ನು ಮೆಲ್ಲನೆ ಹರಡುತ್ತಿರುವ &amp;nbsp;ಧೂಮ ಸೃಷ್ಟಿಸಿ &amp;nbsp;ತೇಲುತ್ತಿರುವ ಮೇಘಗಳ ಪ್ರತಿರೂಪ, ಇವೆಲ್ಲದರ ನಡುವೆ ತೂರಿ, ಎಲ್ಲರ ಮನದಿಂಗಿತವನ್ನು ತಿಳಿಯ ಬಯಸುವ ಹಾಗೂ ಈ ಮಾಯಾಲೋಕದ ಪ್ರಸ್ತುತೆಯ ಕಾರಣವನ್ನು ಉಲ್ಲೇಖಿಸಲು ಬಂದೆನೆಂದು ತಿಳಿಯಾಗಿ, ಇಂಪಾಗಿ ಉಲಿಯುತ್ತಿದ್ದ " ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಒಂದೇ... ಎಂದು ಸಂತಸದಿಂದ ಕರೆಮಾಡಿ " ಕನ್ನಡ ಗಂಗೆಯಲಿ ಮೀಯುವ ನಾವೀಗ" ಎಂದು ಎಲ್ಲರನ್ನೂ ಈ ಅದ್ಧೂರಿಯ ಕನ್ನಡ ತೇರಿನ ಸಡಗರಕ್ಕೆ, ಜಾತ್ರೆಯ ಸಂಭ್ರಮಕ್ಕೆ ಸ್ವಾಗತಿಸಿ ಅಣಿಮಾಡಿದಂತಿತ್ತು.    ಕನ್ನಡಮ್ಮನಿಗೆ ನಮನ  ಅಲಂಕೃತಗೊಂಡು ಸಜ್ಜಾಗುತ್ತಿರುವ ಕನ್ನಡಮ್ಮನ ಭಾಷೆಯನ್ನು ಮೆರೆದು ನಿಲ್ಲಲು ಭಾಷೆಕೊಟ್ಟಂತಹ ಕಾರ್ಯಕರ್ತರು ವಿಮಾನದ ಕ್ಯಾಪ್ಟನ್‌ಗಳಂತೆ ಸೂಟು-ಬೂಟುಗಳನ್ನು ಧರಿಸಿ, ಹೆಡ್-ಪೋನುಗಳ ಸಂವಹನೆಯಲ್ಲಿ ತೊಡಗಿ, ತೇರನ್ನೆಳಿಯುವ ಶುಭ ಮಹೂರ್ತಕ್ಕೆ ಸಿದ್ಧತೆಗಳನ್ನು ನಡೆಸುತ್ತಾ, ನಮ್ಮನ್ನೆಲ್ಲಾ ಆ ಕರುನಾಡೆಂಬ ವೈಭವದ ಪುರಿಗೆ, ಜೀವನದಿಯ ಜೀವ ನಾಡಿಗೆ ಕರೆದೊಯ್ಯುವ ಧೂತರಂತೆ ಕಾಣುತ್ತಿದ್ದರು. ಪರದೆಯ ಮೇಲೆ "ದೀಪೋತ್ಸವ" ಎನ್ನುವ ಪದಗಳು ಹೊಳೆಯುತ್ತಿದ್ದರೆ, ಅಕ್ಕ-ಪಕ್ಕದಲ್ಲಿ ಅಷ್ಟೇ ಪ್ರಖರವಾಗಿ "ಕನ್ನಡ ಸಂಘ (ಸಿಂಗಪುರ)ದ ಲಾಂಚನಗಳು ಎರಡು ಬದಿಯ ಪರದೆಯ ಮೇಲೆ ಬೆಳಗಿ, ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಸಮ್ಮಿಲನದ ಸಡಗರವನ್ನು ಪ್ರತಿಬಿಂಬಿಸುತ್ತಿದ್ದಂತೆ ತೋರುತಿತ್ತು.  ದೂರದ ಅಮೆರಿಕದಲ್ಲಿ ಮೊಳಗಿದ ಕನ್ನಡ ಡಿಂಡಿಮ  ದೀಪೋತ್ಸವಕ್ಕೆ ಚಾಲನೆ ಭಾಷೆ ಸಹಜವಾಗಿ ಚಿಂತನಾಶೀಲ ಹಾಗೂ ಚಲನಾಶೀಲವಾದುದು, ಮಾನವನಿಗೆ ಮಾತ್ರ ಸಾಧಿಸಲ್ಪಡಬಹುದಾದ ಒಂದು ಸಂಕೀರ್ಣ ಸಂವಹನ ಮಾಧ್ಯಮ. ಭಾಷೆ ಎಂಬುದು ಮಾನವನ ಅನುಪಮ ಗುಣಗಳಲ್ಲಿ ಒಂದು ಎಂದೇಳಿದರೆ ಅತಿಶಯೋಕ್ತಿಯಲ್ಲ. ಭಾಷೆ ಎಂಬುದು ಮಾನವ ಸಂಸ್ಕೃತಿಯ ಪ್ರತಿಬಿಂಬ, ಭಾಷೆ ನಿರ್ದಿಷ್ಟ ನಿಯಮಗಳನ್ನು ಒಳಗೊಂಡ ಕ್ರಿಯೆಯನ್ನಷ್ಟೆ ಅಲ್ಲದೆ ಭಾಷೆ ಪ್ರಾದೇಶಿಕ ಹಾಗೂ ಸಂಸ್ಕೃತಿಗಳನ್ನು ಪ್ರತಿಬಿಂಭಿಸುವ ಕಾರ್ಯವನ್ನು ಮಾಡುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ನಮ್ಮ ಕನ್ನಡ ಕಲಿಯ ಮಕ್ಕಳು, ಈ ಬಾರಿ, ನಲಿ-ಕಲಿ ತರಗತಿಯ ಮಕ್ಕಳು, ಕನ್ನಡದಲ್ಲಿ ನಲಿದಾಡುತ್ತಾ ಕಲಿತ ಅನೇಕ ಕನ್ನಡ ಪರ ಚಟುವಟಿಕೆಗಳಲ್ಲಿ ಒಂದಾದ &amp;nbsp;ಹಾಡನ್ನೂ ಸಹ ಕಲಿತು, ದೀಪೋತ್ಸವಕ್ಕೆ ಪ್ರಾರ್ಥನ ಗೀತೆಯನ್ನಾಗಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಕವನ, ಉಪಾಸನಾ ಮೋಹನ್ ಅವರು ಸಂಗೀತ ನಿರ್ದೇಶಿಸಿ, ಡಾ.ಭಾಗ್ಯಮೂರ್ತಿ ಅವರು ಸಿಂಗಪುರದಲ್ಲಿ ಕನ್ನಡ-ಕಲಿ ಮಕ್ಕಳಿಗೆ ಹೇಳಿ ಕೊಟ್ಟಂತಹ ಹಾಡನ್ನು ಹಾಡಲು ಎಲ್ಲರೂ ಉತ್ಸುಕತೆಯಿಂದ ವೇದಿಕೆ ಮೇಲೆ ಕಾಯುತ್ತಿದ್ದರು.      ಮೆಲ್ಲನೆ ಮಬ್ಬು ಬೆಳಕಿನ ಅಂಗಣ ಬೆಳಕಿನಲೋಕಕ್ಕೆ ತೆರೆದು ಕೊಳ್ಳುತ್ತಾ ಇದ್ದರೆ, ಸಾಂಸ್ಕೃತಿಕ ಉಡುಗೆ-ತೊಡುಗೆಗಳ ಬಣ್ಣಗಳ ಜೊತೆಯಲ್ಲಿ ಕನ್ನಡದ ಚಿಣ್ಣರ ನಗುಮೊಗಗಳು ಅನಾವರಣಗೊಳ್ಳುತ್ತಿದ್ದವು. &amp;nbsp;ಥಟ್ಟನೆ, ಅದ್ಯಾವುದೋ ಗಂಧರ್ವಲೋಕದಿಂದ ಅಶರೀರವಾಣಿ "ನಮಸ್ಕಾರ ಕನ್ನಡಿಗರೇ, ದೀಪೋತ್ಸವಕ್ಕೆ ಸ್ವಾಗತ" &amp;nbsp;ಎಂಬ ರೇಡಿಯೋ ನಿರೂಪಕಿ ಐಶ್ವರ್ಯ ಅವರ ವಾಣಿ ಮೊಳಗುತ್ತಿದ್ದಂತೆ ತೇರು ಉತ್ಸವಕ್ಕೆ ಸಿದ್ಧವಾಯಿತು. ಇನ್ನು ಕನ್ನಡಮ್ಮನ ಉತ್ಸವಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ, ಪ್ರಾರ್ಥನೆ "ಕನ್ನಡ ಎನುವುದು ಜೀವನದಿ, ಗಿರಿವನ ಸಂಪದ ಎರಡು ಬದಿ" ಎಂದು ಶುಶ್ರಾವ್ಯವಾಗಿ ಮಕ್ಕಳೆಲ್ಲರೂ ಹಾಡಿ ಮುಗಿಸಿದಾಗ, ಪ್ರೇಕ್ಷರಷ್ಟೇ ಅಲ್ಲ, ರಥದಲ್ಲಿರುವ ಕನ್ನಡಮ್ಮನೂ ಸಹ ಹೆಮ್ಮೆಯಿಂದ ಬೀಗುತ್ತಾ ಚಪ್ಪಾಳೆ ತಟ್ಟುತ್ತಿದ್ದಳು. &amp;nbsp;  ಸಿಂಗಾರ್ ಸ್ಟಾರ್ಸ್  ಮಕ್ಕಳೆಲ್ಲಾ ಸುಂದರ ತರಂಗಿಣಿಯಂತೆ ಸರಿದು ಇಳಿಯುತ್ತಿದ್ದಂತೆ, ವೇದಿಕೆ ಮತ್ತೊಂದು ಘಟ್ಟಕ್ಕೆ ಜೋಡಿಸಲು ಜ್ಯೋತ್ಸ್ನ ರಾಮಕೃಷ್ಣ ನಿರೂಪಕಿಯಾಗಿ ಬಂದು ಸ್ಥಳೀಯ ಪ್ರತಿಭೆಗಳ ಪ್ರದರ್ಶನ "ಸಿಂಗಾರ ಸ್ಟಾರ್"ಗಳನ್ನು ಮಿನುಗಲು ಅಣಿಮಾಡಿಕೊಟ್ಟರು. ಸಭಾಂಗಣದಲ್ಲಿ ಮುಂದೆ ತೀರ್ಪುಗಾರರಾದ ಗಿರೀಶ್ ಜಮದಗ್ನಿ, ಸುಮನ ಹೆಬ್ಬಾರ್ ಹಾಗೂ ರಮ್ಯಾ ಎಸ್.ವೈ ಅವರು ಕುತೂಹಲದಿಂದ ಕಂಪ್ಯೂಟರ್‌ಗಳನ್ನು ತೆಗೆದಿಟ್ಟುಕೊಂಡು ಸ್ಥಳೀಯ &amp;nbsp;ಪ್ರತಿಭೆಗಳ ಗುಣಮಟ್ಟವನ್ನು ಪರಾಮರ್ಶಿಸಲು ಸಜ್ಜಾಗಿ ಕುಳಿತ್ತಿದ್ದರು.      ಮೇಲೆ ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದ ಕನ್ನಡಮ್ಮನ ಕುತೂಹಲ ಕಣ್ಣುಗಳ ಹೊಳಪು ವೇದಿಕೆಯ ರಂಗನ್ನು ಇಮ್ಮಡಿಗೊಳಿಸಿತ್ತು. ಒಬ್ಬರಾದ ಮೇಲೆ ಒಬ್ಬರು ಬಂದು ಹಾಡು, ನೃತ್ಯ, ಹಾಸ್ಯ, ಏಕಪಾತ್ರಾಭಿನಯಗಳನ್ನು ಪ್ರದರ್ಶಿಸುತ್ತಿದ್ದರೆ ಇಡೀ ಸಭಾಂಗಣ ಬೆರಗಾಗಿ ನೋಡುತಿತ್ತು. ಇಂತಹ ಅಪ್ರತಿಮ ಪ್ರತಿಭೆಗಳ ಅನಾವರಣದ ಸೌಂದರ್ಯವನ್ನು, ಚಪ್ಪಾಳೆ, ಸಿಳ್ಳುಗಳಲ್ಲಿ ಪ್ರೋತ್ಸಾಹ ಹಾಗು ಮೆಚ್ಚುಗೆಯನ್ನು ಸೂಚಿಸುತ್ತಿದ್ದರೆ, ಆನಂದದಿಂದ ಕಿವಿಗಳನ್ನು ಮುಚ್ಚಿಕೊಂಡಿದ್ದ ಕನ್ನಡಮ್ಮನ ಕೈ ಬೆರಳನ್ನು ಈಗ ಮೂಗಿನ ಮೇಲಿಟ್ಟುಕೊಂಡು ತೀರ್ಪುಗಾರರನ್ನೇ ನೋಡುತ್ತಿದ್ದಳು, ಅದು ಹೇಗೆ ಇವರು ಇಂತಹ ಅತ್ಯುತ್ಕೃಷ್ಟ ಕಲೆಯ ಪ್ರತಿಭೆಗಳನ್ನು ಅಳೆಯುತ್ತಾರೋ ಎನ್ನುವ ಗೊಂದಲದಲ್ಲಿ. ಒಟ್ಟಿನಲ್ಲಿ ಸಂಘದ ಮೊದಲ ಪ್ರಯತ್ನದ ಪ್ರಯೋಗ "ಸಿಂಗಾರ ಸ್ಟಾರ್" ಅದ್ಭುತ ಯಶಸ್ಸನ್ನು ತಂದಿದ್ದಲ್ಲದೆ ಅದರ ಹಿಂದಿನ ಶ್ರಮಕ್ಕೆ ಸಾರ್ಥಕತೆಯನ್ನು ತಂದಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.  ಸಿಂಗಾರ ಪುರಸ್ಕಾರ  ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಸಿಂಗಾರ ಪುರಸ್ಕಾರಗಳನ್ನು ನೀಡುವುದು ವಾಡಿಕೆ, ಶೈಕ್ಷಣಿಕ, ಕ್ರೀಡೆ ಹಾಗೂ ಪಠ್ಯೇತರ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಘಕ್ಕೆ ಹೆಮ್ಮೆಯ ವಿಷಯ. ಕಾರ್ಯಕ್ರಮದ ಮುಂದಿನ ಹಂತದ ನಿರೂಪಣೆಯನ್ನು ಮಾಲಾ ಶಿವಕುಮಾರ್ ಅವರು ಸುಸೂತ್ರ, ನಿರರ್ಗಳ, ಸುಲಲಿತವಾಗಿ ಅಚ್ಚ ಕನ್ನಡದಲ್ಲಿ ನಡೆಸಿಕೊಡುತ್ತಿದ್ದರೆ ಸಭಾಂಗಣದ ತುತ್ತ ತುದಿಯಲ್ಲಿದ್ದ ಕನ್ನಡಮ್ಮ ಸಂತಸದಿಂದ ಆಲಿಸುತ್ತಾ, ಮಕ್ಕಳ ಸಾಧನೆಯನ್ನು ಬೆರಗಾಗಿ ನೋಡುತ್ತಾ ಚಪ್ಪಾಳೆ ತಟ್ಟಿದಂತಿತ್ತು.  ಲಂಡನ್: ದಿವ್ಯಾ ರಂಗೇನಹಳ್ಳಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಲೀಡರ್‌ ಶಿಪ್ ಪ್ರಶಸ್ತಿ  ಸಾಧನಗೆ ಸಂದ ಗೌರವ  ಶೈಕ್ಷಣಿಕ ಕ್ಷೇತ್ರದ ವಿವಿಧ ಹಂತಗಳಲ್ಲಿನ ಸಾಧನೆಗೆ, ಪ್ರಣವ್ ತುಮ್ಮಿನಕಟ್ಟಿ, ಮನು ಮಗಳ್, ವಿಶಾಖ್ ರಾಮಕೃಷ್ಣ, ಧೃತಿ ಭಟ್ಟ, ಅದಿತಿ ಅಗರ್‌ವಾಲ್, ಶರಣ್ಯಾ ಜಮದಗ್ನಿ, ಪ್ರದೀಪ್ ರಘುನಾಥ್, ನೇಹಲ್ ಗೌಡರ್, ಪ್ರಮಥ್ ಕೃಷ್ಣ, ಕ್ರೀಡಾ ವಿಭಾಗದಲ್ಲಿ ಅನುಷ್ಕಾ ಕಿಗ್ಗ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿನ ಸಾಧನೆಗೆ ಶ್ರೀಲೇಖಾ ಚಂದ್ರಶೇಖರ, ಪಾಂಡುರಂಗ ಬಳಗನೂರು, ಅನುಷ್ಕಾ ಕಿಗ್ಗ ಮತ್ತು ತನ್ವಿ ಕಿಗ್ಗ ಅವರಿಗೆ ಪುರಸ್ಕರಿಸಲಾಯಿತು.    ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷೆಯಾದ ರಶ್ಮಿ ಉದಯಕುಮಾರ್ ಹಾಗೂ ಮಾಜಿ ಅಧ್ಯಕ್ಷರಾದ ಪ್ರಭುದೇವ ಮತ್ತು ವಿಶಾಲಾಕ್ಷಿ ವೈದ್ಯ ಅವರು ಸಿಂಗಾರ ಪುರಸ್ಕಾರ ಹಾಗು ಎ.ನ್.ರಾವ್ ಪುರಸ್ಕಾರಗಳನ್ನೂ ನೀಡಿದರೆ, ಮತ್ತಿತರ ಪುರಸ್ಕಾರಗಳನ್ನುಆಯಾ ಪುರಸ್ಕಾರಗಳ ಪ್ರಾಯೋಜಿತರಾದ ಸಿ.ವಿ. ಜಗದೀಶ್, ಮೈತ್ರೇಯಿ ಜಗದೀಶ್, ಅನೂಪ್ ನಾಗರಾಜನ್, ಪ್ರಜ್ವಲ ಸತ್ಯಪ್ರಕಾಶ್, ನರೇಂದ್ರ ಮತ್ತು ಡಾ.ಎಂ.ಎಸ್. ಶ್ರೀಲಕ್ಷ್ಮೀ ಅವರ ಸಮ್ಮುಖದಲ್ಲಿ ನೀಡಿ ಪ್ರೋತ್ಸಾಹಿಸಲಾಯಿತು.  ಪ್ರಶಸ್ತಿ ವಿತರಣೆಗಳ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ರಶ್ಮಿ ಉದಯಕುಮಾರ್ ಅವರು ಹಬ್ಬದ ಕಳೆಯ ಅಂಗಣ, ಪ್ರೋತ್ಸಾಹದ ಪುರಸ್ಕಾರಗಳು, ಸಿಂಗನ್ನಡಿಗರೆಲ್ಲರೂ ನಾಡ ಹಬ್ಬಕ್ಕೆಂದು ಒಂದೆಡೆ ಸೇರಿದ್ದನ್ನು ಉಲ್ಲೇಖಿಸಿ ಪರಿಸರ ಕಾಳಜಿಯಲ್ಲಿ ಪಟಾಕಿಯ ಸದ್ದು ಇಲ್ಲದಿದ್ದರೂ ಇಂದಿನ ಕಾರ್ಯಕ್ರಮ ಪಟಾಕಿಗಳಿಗಿಂತಲೂ ಹೆಚ್ಚು ಬೆಳಕಿನ ಸದ್ದನ್ನು ತರುವುದರಲ್ಲಿ ಸಂದೇಹವಿಲ್ಲವೆಂದರು. ಸಂಘದ ಧ್ಯೇಯ ಹಾಗೂ ಉದ್ದೇಶದ ಬಗ್ಗೆ ಹೇಳುತ್ತಾ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ "ಸಿಂಗಾರ ಸ್ಟಾರ್" ಒಂದು ಹೊಸ ಪ್ರಯೋಗವೆಂದು ತಿಳಿಸಿದರು. ನೆರೆದ ಪ್ರೇಕ್ಷರರಲ್ಲಿ ಹೀಗೆಯೇ ದೊಡ್ಡ ಮಟ್ಟದಲ್ಲಿ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಭಾಗವಹಿಸಿ ಸಂಘದ ಬಲ ವರ್ಧನೆ ಮಾಡಬೇಕೆಂದು ಕೋರಿ ಕುವೆಂಪು ಅವರ "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ವಾಕ್ಯವನ್ನು ಪುನರುಚ್ಚರಿಸಿದರು.  ಕನ್ನಡಕ್ಕೊಬ್ಬನೇ ಕೈಲಾಸಂ  "ಕನ್ನಡಕೊಬ್ಬನೇ ಕೈಲಾಸಂ" ಎನ್ನುವುದು ನಾಣ್ಣುಡಿಯಲ್ಲ, ನಿಜಾಂಶ! "ಕನ್ನಡ ಕವಿ ತಿಲಕಂ ಗುಂಡಂ” “ಕವಿ ಮಂಡಲಾಗ್ರೇಸರ ಚಂಡ, ಪ್ರಚಂಡ ಗುಂಡೂ” ‘ಕನ್ನಡ ಪ್ರಹಸನ ಪ್ರಪಿತಾಮಹ ಕೈಲಾಸಂ” ಎಂದು ಸ್ವಯಂ ಘೋಷಿಸಿಕೊಂಡ ಕೈಲಾಸಂ ನಾಟಕಗಳ ಡೈಲಾಗುಗಳನ್ನು ಪ್ರಸ್ತುತ ಪಡಿಸುತ್ತಾ "ಕೈಲಾಸಂಸಾರ"ವನ್ನು ಸುಂದರ್ ಹಾಗೂ ವೀಣಾ ಸುಂದರ್ ಅವರು ತಮ್ಮ ಅದ್ಭುತವಾದ ರಂಗ ಪ್ರಯೋಗದ ಸಾಮಾರ್ಥ್ಯದಿಂದ ಇಡೀ ಸಭಾಂಗಣವನ್ನು ಹಿಡಿದಿಟ್ಟುಕೊಂಡು &amp;nbsp;ಟಿ.ಪಿ.ಕೈಲಾಸಂನ ದಂತಕಥೆಯಂತಹ ಜೀವನವನ್ನು ಅವರ ವಿವಿಧ ನಾಟಕಗಳ ಪ್ರಸಂಗಗಳನ್ನು ನವರಸಗಳ ಅಭಿನಯದ ಮೂಲಕ ಪ್ರೇಕ್ಷಕರನ್ನು ಒಂದು ಗಂಟೆಗೂ ಮಿಗಿಲಾಗಿ ವಿಭಿನ್ನಲೋಕಕ್ಕೆ ಕರೆದೊಯ್ದು, &amp;nbsp;ನಕ್ಕು-ನಗಿಸಿ &amp;nbsp;ಜೀವನದ ಹಲವು ಸೂಕ್ಷ್ಮಗಳನ್ನು ಕೈಲಾಸಂ ನಾಟಕಗಳ ಅದ್ಭುತವಾದ ಅಭಿನಯದ ಮೂಲಕ ತೋರಿಸಿಕೊಟ್ಟಿದ್ದು ಕನ್ನಡ ರಾಜ್ಯೋತ್ಸವದ ರಥಕ್ಕೆ ಕಲಶವಿಟ್ಟಂತಿತ್ತು.ಕನ್ನಡಮ್ಮ ನಿಜಕ್ಕೂ ಸಂತಸದಲ್ಲಿ ಮುಳುಗಿ ಭಾವುಕಳಾಗಿ ಸಭಿಕರ ಕರಾಡತನವನ್ನು ನೋಡುತ್ತಾ ಕುಳಿತಂತೆ ಭಾಸವಾಗುತಿತ್ತು.    ಹಿರಿಯ ಸಿಂಗನ್ನಡಿಗರ ಅತ್ತುತ್ಯಮ ಸಾಧನೆಯನ್ನು ಗುರುತಿಸಿ ನೀಡುವ "ಸಿಂಗಾರ ಸಾಧನಾ ಪುರಸ್ಕಾರ"ವನ್ನು ಈ ವರ್ಷ ಹೆಮ್ಮೆಯ ಸಿಂಗನ್ನಡಿಗರಾದ ಡಾ. ದಿನೇಶ್ ಕೋಕಲ್ ಅವರಿಗೆ ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷೆ ರಶ್ಮಿ ಉದಯಕುಮಾರ್ ಅವರು &amp;nbsp;ನೀಡಿ ಗೌರವಿಸಿದರು. ಇಲ್ಲಿನ ಪ್ರತಿಷ್ಠಿತ ವಿಶ್ವ ವಿದ್ಯಾಲಯ ಎನ್.ಯು.ಎಸ್ ನಲ್ಲಿ ಪಿಹೆಚ್‌ಡಿ ಮಾಡಿ, ಆರೋಗ್ಯ ಶಾಸ್ತ್ರದಲ್ಲಿನ ಪರಿಣಿತಿ ಹಾಗೂ ಆರೋಗ್ಯ ಮತ್ತು &amp;nbsp;ವೈದ್ಯಕೀಯ ಕ್ಷೇತ್ರಗಳಲ್ಲಿ ಅನೇಕ ಪ್ರಮುಖ ಹುದ್ದೆಗಳಲ್ಲಿ ಸಾಧನೆಯನ್ನು ಮಾಡಿದಂತಹ ಡಾ.ದಿನೇಶ್ ಕೋಕಲ್ ಅವರು ತಮ್ಮ ಎರಡು ಮಾತುಗಳಲ್ಲಿ ಸಾಧನೆಗಳ ಮಹಾಪೂರಗಳನ್ನು ಬದಿಗಿಟ್ಟು ತಮ್ಮ ಕನ್ನಡ ತನದ ಹೃದಯವಂತಿಕೆಯನ್ನು ಮೆರೆದೆದ್ದು ನಿಜಕ್ಕೂ ಶ್ಲಾಘನೀಯ.  ಇದೇ ಸಂದರ್ಭದಲ್ಲಿ ಸಂಘವು ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಗಳ ವಿಜೇತರಿಗೆ ತೀರ್ಪುಗಾರರಾಗಿದ್ದ ವೆಂಕಟ್ ಹಾಗೂ ಎಮ್.ಜಿ.ರಮೇಶ್ ಅವರೊಡನೆ &amp;nbsp;ಸಂಘದ ಅಧ್ಯಕ್ಷೆ ರಶ್ಮಿ ಹಾಗೂ ಕಾರ್ಯಕರ್ತೆ ಭಾಗ್ಯಾ ಅವರ ಸಮ್ಮುಖದಲ್ಲಿ ನಯನ ಭಟ್, ನಾಗೇಶ್ ಮೈಸೂರು, ಪ್ರಭು ಕುಡ್ಲಾಪುರ (ಕವನ ವಿಭಾಗ), ನಯನ ಭಟ್, ಸುಬ್ರಮಣ್ಯ ಭಟ್ (ಕತೆ ವಿಭಾಗ), &amp;nbsp;ಶ್ರೇಯಸ್.ಕೆ, ಸವ್ಯ ಶಿವಕುಮಾರ್, ಅದ್ವಿತೀಯ ಕೃಷ್ಣ, ಬೃಂದಾ ವಿಜಾಪುರ, ತನುಷಾ ಹರೀಶ್ ( ಮಕ್ಕಳ ಪ್ರಬಂಧ ಸ್ಪರ್ಧೆ) ಅವರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಇದೇ ಸಂದರ್ಭದಲ್ಲಿ ಸಿಂಗಾರ ಸ್ಟಾರ್ ಸ್ಪರ್ಧೆಗಳಲ್ಲಿ ವಿಜೇತರಾದ ಅನಘಾ ಮುತಾಲಿಕ್ ದೇಸಾಯಿ, ವೇದ ಭಟ್, ವಿಶಾಖ್ ರಾಮಕೃಷ್ಣ, ಅರುಣಾ ಗಿರೀಶ್ ಬಳಗನೂರು ಹಾಗೂ ಹರಿ ಜಗನ್ನಾಥ್ &amp;nbsp;ಅವರಿಗೆ ಎಲ್ಲ ತೀರ್ಪುಗಾರರ ಸಮ್ಮುಖದಲ್ಲಿ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.  ಡಾ. ಅನೀಶ್ ವಯಲಿನ್ ಕಾರ್ಯಕ್ರಮದ ಕೊನೆಯ ಹಂತದ ಅದ್ಧೂರಿಯ ಕಾರ್ಯಕ್ರಮ ನಡೆದಾಡುವ ವಯಲಿನಿಸ್ಟ್&amp;nbsp;ಎಂದೇ ಪ್ರಖ್ಯಾತರಾದ ಡಾ.ಅನೀಶ್ ವಿದ್ಯಾಶಂಕರ್ ಅವರ "ಭಾವಪರವಶ"ವನ್ನು ವೀಕ್ಷಿಸಲು, ಲಾಲಿಸಲು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದೇ ಬಿಟ್ಟಿತು. ವೇದಿಕೆಯು ತನ್ನ ಮೈಮೇಲೆ ರಂಗು-ರಂಗಿನ ಮೋಡಗಳನ್ನು ಆವರಿಸಿಕೊಂಡು ಸಜ್ಜಾಗಿಬಿಟ್ಟಿತು, ತೇರಿನ ಬಿರಿಸು, ಪ್ರೇಕ್ಷಕರ ಪ್ರಶಂಸೆಗಳ ನಡುವೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದರು ಡಾ.ಅನೀಶ್, &amp;nbsp;ತಮ್ಮ ವಯಲಿನ್ ನಾದದ ಗುಂಗಲ್ಲಿ, ಮೋಡಗಳ ಮೇಲೆ ತೇಲುತ್ತಾ ಸಭಾಂಗಣವನ್ನೇ ತಮ್ಮ ಮಾಂತ್ರಿಕ ವಯಲಿನ್ ಸಂಗೀತದ ಲೋಕಕ್ಕೆ ಸ್ವಾಗತಿಸಿ, ಶಾಸ್ತ್ರೀಯ ಹಾಗೂ ಪಾಶ್ಚತ್ಯ ಪ್ರಸಿದ್ದ ಹಾಡುಗಳ ಶೃತಿಗಳನ್ನು ಅಮೋಘವಾದ ಮಿಶ್ರಣದ ತುಣುಕುಗಳನ್ನು ನುಡಿಸಿ, ಪ್ರೇಕ್ಷಕರನ್ನು ರಂಜಿಸುತ್ತಿದ್ದರು.    ರಥದಲ್ಲಿ ಕುಳಿತಿದ್ದ ಕನ್ನಡಮ್ಮನಿಗೆ ಕೆಲವು ಆಂಗ್ಲ ಪದಗಳ ಆರ್ಭಟ, ಕೂಗಾಟ ಅರ್ಥವಾಗಲಿಲ್ಲ ಎನಿಸುತ್ತದೆ, ಆದರೂ ಕನ್ನಡ ಕಂದಮ್ಮಗಳ ಆನಂದಮಯ ಕ್ಷಣಗಳನ್ನು ನೋಡಿ ನಲಿಯುತ್ತ ಮೂಕ ಪ್ರೇಕ್ಷಕಳಾಗಿ ನೋಡುತ್ತಿದ್ದಳು. ಎಲ್ಲರೂ "ತಾಳಕ್ಕೆ ನಾವೆಲ್ಲಾ ಹಾಡುತಿರೆ.. ಮೇಳಕ್ಕೆ ನೀವೆಲ್ಲಾ ತೂಗುತಿರೇ" &amp;nbsp;ಎನ್ನುವಂತೆ ತಮ್ಮ ಫೋನುಗಳ ಕ್ಯಾಮರ ಕಣ್ಣುಗಳನ್ನು ತೆರೆದು ಎಲ್ಲವನ್ನೂ ಅದರೊಳಗೆ ಸೆಳೆದಿಟ್ಟುಕೊಳ್ಳುತ್ತಿದ್ದರು ಮತ್ತೆ ಮತ್ತೆ ನೋಡಿ ಸವಿಯಲು.  ಇಂತಹ ಅದ್ಭುತವಾದ ರಂಗು-ರಂಗಿನ ಸಂಜೆಯ ಕಾರ್ಯಕ್ರಮ, ಆಕರ್ಷಕವಾದಂತಹ ಲಕ್ಕಿ ಡ್ರಾ ಬಹುಮಾನಗಳನ್ನು ನೀಡಿ, &amp;nbsp;ನಡೆಸಲು &amp;nbsp;ಅನುವು ಮಾಡಿಕೊಟ್ಟಂತಹ ಪ್ರಾಯೋಜಕರಾದ ಕಾರ್ಲೆ ಟೌನ್ ಸೆಂಟರ್, ಐಸಿಐಸಿಐ ಬ್ಯಾಂಕ್, ಸಿಂಗ್‌ಎಕ್ಸ್ ಅವರ ಬೆಂಬಲ, ಪ್ರೋತ್ಸಾಹ ನಿಜಕ್ಕೂ ಪ್ರಶಂಸನೀಯ. ಕಾರ್ಯಕ್ರಮದ ಕೊನೆಯಲ್ಲಿ ಎಂದಿನಂತೆ ಊಟದ ಸಮಯದಲ್ಲಿನ ಮುಂದುವರಿದ ಮಾತು, ಹರಟೆ ನಿರಂತರ ಸಾಗಿತ್ತು.  ಸಂಘದ ಎಲ್ಲಾ ಕಾರ್ಯಕರ್ತರ ಹಾಗು ಸ್ವಯಂ-ಸೇವಕರ &amp;nbsp;ಶ್ರಮ, ಶ್ರದ್ಧೆ, ಯಾವುದೇ ತಾಂತ್ರಿಕ ದೋಷಗಳಿಲ್ಲದೆ ನಿರಂತರವಾಗಿ ೫ ಗಂಟೆಗಳ ಕಾಲ ರಂಜಿಸಿದ ಕಾರ್ಯಕ್ರಮದ ಯಶಸ್ಸು ಪರದೆಯ ಹಿಂದಿನ ಪರೋಕ್ಷ ನಿಸ್ವಾರ್ಥ ಮನಸ್ಸುಗಳ ಅಭಿಲಾಷೆಯ ಫಲ. ಒಟ್ಟಿನಲ್ಲಿ &amp;nbsp;"ದೀಪೋತ್ಸವ - 2019" &amp;nbsp;ಕನ್ನಡ ರಥದ ಮಕುಟದೊಳು ಒಂದು ಸುಂದರ ಮಣಿಯಾಗಿ ಕುಳಿತು, ದೀಪದಂತೆ ಮೆರೆದಿದ್ದಂತೂ ಸ್ಪಷ್ಟವಾಗಿ ಕಾಣುತಿತ್ತು.  ವರದಿ : ವೆಂಕಟ್ ಫೋಟೋ : ಬೈಟು ಸ್ಟುಡಿಯೊ     </description>
            <media:content height="400" width="760" medium="image" url="https://static.asianetnews.com/images/01dtkdgq94ssra90g7vqy6jtt8/singara-star-jpg_760x400.jpg"/>
        </item>
        <item>
            <title>ಅಮೆರಿಕಾದ ಆಲ್ಬನಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ</title>
            <link>https://kannada.asianetnews.com/video/nri/kannada-rajyotsava-in-albany-usa-q14loz</link>
            <guid>https://kannada.asianetnews.com/video/nri/kannada-rajyotsava-in-albany-usa-q14loz</guid>
            <pubDate>Sun, 17 Nov 2019 23:52:00 +0530</pubDate>
            <description>ಬೆಂಕಿ ಬಸಣ್ಣ ನವೆಂಬರ್&amp;nbsp; &amp;nbsp;2ರಂದು ಅಮೆರಿಕಾದ ನ್ಯೂಯಾರ್ಕ್ ರಾಜ್ಯದ &amp;nbsp;ಆಲ್ಬನಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು.&amp;nbsp; ಇಲ್ಲಿಯ ಕನ್ನಡ-ಕಲಿ ಶಾಲೆಯ ಪುಟಾಣಿ ಮಕ್ಕಳು, ಲತಾ ಮೇಡಂ ನಿರ್ದೇಶನದ &amp;nbsp;"ಕನ್ನಡ-ವೈಭವ" &amp;nbsp;ಎಂಬ ಕಾರ್ಯಕ್ರಮದಲ್ಲಿ &amp;nbsp;ನಮ್ಮ ನಾಡಿನ ಚರಿತ್ರೆಯನ್ನು ಶರಣರು, ಸಂತರು, ಕವಿಗಳು, ಮಹಾರಾಜರು, ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು, ಕ್ರಿಕೆಟ್ ಆಟಗಾರರು, ವಿಜ್ಞಾನಿಗಳು, ಮುಂತಾದವವ ರೂಪದಲ್ಲಿ &amp;nbsp;ಪ್ರಸ್ತುತ ಪಡಿಸಿದರು.  ಆಲ್ಬನಿ &amp;nbsp;ಕನ್ನಡ ಸಂಘದ ಅಧ್ಯಕ್ಷ ವಿಶ್ವಾಸ್ ಗೌಡ , ಕಾರ್ಯದರ್ಶಿ ಉಮಾ ಬೆಂಕಿ, ಖಜಾಂಚಿ ಸುನಿತಾ ವಿಜಯ್&amp;nbsp; ಕಾರ್ಯಕ್ರಮದ ಸಂಘಟನೆ ಜವಾಬ್ದಾರಿ ಹೊತ್ತುಕೊಂಡಿದ್ದರು. 40 ವರ್ಷಗಳಿಂದ ಆಲ್ಬನಿಯಲ್ಲಿ ನೆಲೆಸಿರುವ &amp;nbsp;ಜಯಾ ಮತ್ತು ಎಂ. ಆರ್. ಬಾಲಕೃಷ್ಣ ಮತ್ತು&amp;nbsp; ಮೈತಲಿ ಹಾಗೂ&amp;nbsp;ಡಾ. ದಿವಾಕರ್ &amp;nbsp;ದೀಪ ಬೆಳಗಿಸಿ ಉದ್ಘಾಟಿಸಿದರು. &amp;nbsp;ಶೀಲಾ ರಂಗರಾಜ್ ಮತ್ತು ಉಮಾ ಶ್ರೀನಿವಾಸ್ ಹಾಡಿದ ಪ್ರಾರ್ಥನೆಯೊಂದಿಗೆ &amp;nbsp;ಕಾರ್ಯಕ್ರಮ ಪ್ರಾರಂಭವಾಯಿತು. &amp;nbsp; &amp;nbsp;ಹಿನ್ನಲೆ ಗಾಯಕರಾದ ಒಹೈವೋ ರಾಜ್ಯದ &amp;nbsp;ರಾಮ ಪ್ರಸಾದ್, ನಾರ್ತ್ ಕ್ಯಾರೊಲಿನ ರಾಜ್ಯದ ರವಿ &amp;nbsp;ಗೂಟಿ ಮತ್ತು ಬೋಸ್ಟೋನ್ ನಗರದ ಅಕ್ಕಿ ಮಧು ಹೆಬ್ಬಾಳ , ಸೌಮ್ಯಶ್ರೀ , ಲಕ್ಷ್ಮಿ ರಮೇಶ್, &amp;nbsp;ರಾಮನಾಥ್ , &amp;nbsp;ರಮೇಶ್ ಯಾಲಕ್ಕಿಶೆಟ್ಟರ್ , ಅನುಷಾ ಕುಲ್ಕರ್ಣಿ, ವರವಾಣಿ ದ್ವಾರಕಿ ಮುಂತಾದವರು, &amp;nbsp; "ರಾಜ್- ವೈಭವ" ಎಂಬ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. &amp;nbsp;ಪರ ಊರುಗಳಿಂದ ಬಂದ ಕಲಾವಿದರಿಗೆ &amp;nbsp;ಉಮಾ-ಬೆಂಕಿ ಬಸಣ್ಣ ಅವರ ಮನೆಯಲ್ಲಿ ಆತಿಥ್ಯ ಮತ್ತು ವಸತಿ ಒದಗಿಸಲಾಗಿತ್ತು. &amp;nbsp; ಲತಾ ಮತ್ತು ನಂದಕಿಶೋರ್, ತಾವೇ ಹಾದಿ, &amp;nbsp;ಕುಣಿದ &amp;nbsp;ರೋಮ್ಯಾಂಟಿಕ್ -ಜಾನಪದ -ನೃತ್ಯ ‘ಮಾತಾಡ್ -ಮಾತಾಡ್ ಮಲ್ಲಿಗೆ’ &amp;nbsp;ರಸಿಕರ ಮೈ ಜುಂ ಎನ್ನಿಸಿತು.&amp;nbsp; ಪುಟಾಣಿಗಳಾದ ಜೀವಿಕ ಬೆಂಕಿ ಮತ್ತು ಸಹನಾ ರಾವ್ &amp;nbsp;ಮಾಡಿದ ಪುರಂದರ ದಾಸರ ‘ತಂಬೂರಿ ಮೀಟಿದವ’ &amp;nbsp;ನೃತ್ಯ ಎಲ್ಲರ ಮೆಚ್ಚುಗೆ ಗಳಿಸಿದವು .&amp;nbsp;ಸಿಂಚನಾ , ಚೈತಾಲಿ &amp;nbsp;ಮತ್ತು ಅಲ್ಪಾ ಗೌಡ ತಮ್ಮ ಸುಮಧುರ ಗಾಯನದಿಂದ ಮನಸೂರೆಗೊಂಡರು .&amp;nbsp;ಪ್ರಾಂತ್ಯದ 40+ ಕ್ರಿಕೆಟ್ ಟ್ರೋಫಿ ಗೆದ್ದ &amp;nbsp;ಅಲ್ಬನಿ &amp;nbsp;ಕನ್ನಡ ಸಂಘದ &amp;nbsp;ಕ್ರಿಕೆಟ್ ಆಟಗಾರರಾದ &amp;nbsp;ಕಿರಣ್, ರವಿ ಯಲಿಗಾರ, ಪ್ರವೀಣ್ ರಾವ್ ರನ್ನು ಬೆಂಕಿ ಬಸಣ್ಣ&amp;nbsp;ಸನ್ಮಾನಿಸಿದರು.&amp;nbsp;&amp;nbsp; </description>
            <media:content height="400" width="760" medium="image" url="https://static.asianetnews.com/images/01dsx9ert1c5rc4gqnzf2ewtmj/kannada-jpg-aa-jpg_760x400.jpg"/>
        </item>
    </channel>
</rss>