<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 25 Jun 2026 10:41:12 +0530</lastBuildDate>
        <atom:link href="https://kannada.asianetnews.com/rss/news-money" rel="self" type="application/rss+xml"/>
        <item>
            <title><![CDATA[ಎಂಥ ಕಾಲ ಬಂತಪ್ಪಾ..! ಶಾಪಿಂಗ್‌ ಮಾಡಿ, ಸುಸ್ತಾದೋರಿಗೆ ಬ್ಯಾಗ್ ಹಿಡ್ಕೊಳ್ಳಲು ಜನ ಸಿಗ್ತಾರೆ!]]></title>
            <link>https://kannada.asianetnews.com/gallery/life/shopping-bag-carry-men-in-delhi-price-in-startup-advantages-02ptelq</link>
            <guid isPermaLink="true">https://kannada.asianetnews.com/gallery/life/shopping-bag-carry-men-in-delhi-price-in-startup-advantages-02ptelq</guid>
            <pubDate>Sat, 23 May 2026 12:07:22 +0530</pubDate>
            <description><![CDATA[&lt;p&gt;Shopping ಮಾಡುವಾಗ ಬ್ಯಾಗ್&zwnj;ಗಳನ್ನು ಹೊತ್ತುಕೊಂಡು ಸುಸ್ತಾಗಿದೆಯೇ? 'ಕ್ಯಾರಿಮೆನ್' ಎಂಬ ಸ್ಟಾರ್ಟಪ್ ಬಂದಿದೆ. ಸಹಾಯಕರು ನಿಮ್ಮ ಬ್ಯಾಗ್&zwnj;ಗಳನ್ನು ಹೊರುವುದಲ್ಲದೆ, ಜನಜಂಗುಳಿಯಲ್ಲಿ ಆರಾಮವಾಗಿ ಓಡಾಡಲು ಸಹಾಯ ಮಾಡುತ್ತಾರೆ. ಈಗಾಗಲೇ ಈ ಸ್ಟಾರ್ಟಪ್ 50ಕ್ಕೂ ಹೆಚ್ಚು ಬುಕಿಂಗ್&zwnj;ಗಳನ್ನು ಪೂರ್ಣಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmhw38wrwfzr4khqsqp3qbja,imgname-jaipur-budget-shopping-places-1774421386136.jpg" type="image/jpeg" height="390" width="690"/>
            <content:encoded><![CDATA[&lt;p&gt;Shopping ಮಾಡುವಾಗ ಬ್ಯಾಗ್&zwnj;ಗಳನ್ನು ಹೊತ್ತುಕೊಂಡು ಸುಸ್ತಾಗಿದೆಯೇ? 'ಕ್ಯಾರಿಮೆನ್' ಎಂಬ ಸ್ಟಾರ್ಟಪ್ ಬಂದಿದೆ. ಸಹಾಯಕರು ನಿಮ್ಮ ಬ್ಯಾಗ್&zwnj;ಗಳನ್ನು ಹೊರುವುದಲ್ಲದೆ, ಜನಜಂಗುಳಿಯಲ್ಲಿ ಆರಾಮವಾಗಿ ಓಡಾಡಲು ಸಹಾಯ ಮಾಡುತ್ತಾರೆ. ಈಗಾಗಲೇ ಈ ಸ್ಟಾರ್ಟಪ್ 50ಕ್ಕೂ ಹೆಚ್ಚು ಬುಕಿಂಗ್&zwnj;ಗಳನ್ನು ಪೂರ್ಣಗೊಳಿಸಿದೆ.&lt;/p&gt;&lt;img&gt;&lt;p&gt;ದೆಹಲಿಯ ಲಾಜ್&zwnj;ಪತ್ ನಗರ, ಸರೋಜಿನಿ ನಗರದಂತಹ ಫೇಮಸ್ ಸ್ಟ್ರೀಟ್ ಮಾರ್ಕೆಟ್&zwnj;ಗಳಿಗೆ ಹೋಗಿದ್ರೆ ನಿಮಗೂ ಈ ಅನುಭವ ಆಗಿರುತ್ತೆ. ಅಲ್ಲಿ ಶಾಪಿಂಗ್ ಮಾಡೋದು ಎಷ್ಟು ಖುಷಿ ಕೊಡುತ್ತೋ, ಅಷ್ಟೇ ಸುಸ್ತು ಕೂಡ ಆಗುತ್ತೆ. ಜನಜಂಗುಳಿಯ ಮಧ್ಯೆ ನುಗ್ಗೋದು, ಬೆವರಿಳಿಸುತ್ತಾ ಬಾರ್ಗೇನ್ ಮಾಡೋದು, ಅದರ ಜೊತೆಗೆ ಭಾರವಾದ ಶಾಪಿಂಗ್ ಬ್ಯಾಗ್&zwnj;ಗಳನ್ನು ಹೊತ್ತುಕೊಂಡು ಓಡಾಡೋದು ಅಂದ್ರೆ ಸಾಕಪ್ಪಾ ಸಾಕು ಅನಿಸಿಬಿಡುತ್ತೆ. ದೆಹಲಿಯ ಬಿಸಿಲು, ಟ್ರಾಫಿಕ್, ಉದ್ದುದ್ದ ನಡಿಗೆ ಸೇರಿಕೊಂಡರೆ, ಒಂದು ಸಿಂಪಲ್ ಶಾಪಿಂಗ್ ಟ್ರಿಪ್ ದೊಡ್ಡ ಟಾಸ್ಕ್ ಆಗಿ ಬದಲಾಗುತ್ತೆ&lt;/p&gt;&lt;img&gt;&lt;p&gt;ಈಗ, ದೆಹಲಿ ಮೂಲದ 'ಕ್ಯಾರಿಮೆನ್' (CarryMen) ಎಂಬ ಸ್ಟಾರ್ಟಪ್ ಈ ಸಮಸ್ಯೆಗೆ ಒಂದು ಸರಳ ಪರಿಹಾರ ನೀಡಲು ಮುಂದಾಗಿದೆ. 'ನೀವು ಶಾಪಿಂಗ್ ಮಾಡಿ, ನಾವು ಬ್ಯಾಗ್ ಹೊರುತ್ತೇವೆ' ಎಂಬ ಇವರ ಕಾನ್ಸೆಪ್ಟ್, ಆನ್&zwnj;ಲೈನ್&zwnj;ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆಗಳು ಕೂಡ ಶುರುವಾಗಿವೆ.&lt;/p&gt;&lt;img&gt;&lt;p&gt;ಕ್ಯಾರಿಮೆನ್ ಸಂಸ್ಥಾಪಕರು ಹೇಳುವ ಪ್ರಕಾರ, ಈ ಐಡಿಯಾ ಹುಟ್ಟಿದ್ದೇ ಅವ್ರ ಸ್ವಂತ ಅನುಭವದಿಂದ. ದೆಹಲಿಯಲ್ಲೇ ಬೆಳೆದ ಅವರು, ತಮ್ಮ ಕುಟುಂಬದವರ ಜೊತೆ ಜನನಿಬಿಡ ಮಾರುಕಟ್ಟೆಗಳಿಗೆ ಹೋದಾಗ ಆಗುತ್ತಿದ್ದ ಕಷ್ಟಗಳೇ ಈ ಹೊಸ ಸೇವೆಗೆ ಪ್ರೇರಣೆಯಾಯ್ತು.&lt;/p&gt;&lt;p&gt;ಇಂಡಿಯಾ ಟುಡೇ ವರದಿಯ ಪ್ರಕಾರ, ಜನರಿಗೆ ಶಾಪಿಂಗ್ ಮಾಡುವುದು ಇಷ್ಟ, ಆದರೆ ಅದರ ಜೊತೆ ಬರುವ ದೈಹಿಕ ಶ್ರಮ ಇಷ್ಟವಾಗುವುದಿಲ್ಲ. ಭಾರವಾದ ಬ್ಯಾಗ್&zwnj;ಗಳನ್ನು ಹೊರುವುದು, ಕ್ಯೂನಲ್ಲಿ ನಿಲ್ಲುವುದು, ಕೂರಲು ಜಾಗ ಹುಡುಕುವುದು, ಜನನಿಬಿಡ ಗಲ್ಲಿಗಳಲ್ಲಿ ನಡೆಯುವುದು ಬೇಗನೆ ಸುಸ್ತು ತರಿಸುತ್ತದೆ.&lt;/p&gt;&lt;p&gt;ಈ ಸಮಸ್ಯೆಯನ್ನು ಬಗೆಹರಿಸಲು, ಕಂಪನಿಯು ತರಬೇತಿ ಪಡೆದ ಶಾಪಿಂಗ್ ಸಹಾಯಕರನ್ನು ಪರಿಚಯಿಸಿದೆ. ಇವರು ಗ್ರಾಹಕರ ಜೊತೆಯಲ್ಲೇ ಇದ್ದು, ಅವರಿಗೆ ಸಹಾಯ ಮಾಡುತ್ತಾರೆ.&lt;/p&gt;&lt;img&gt;&lt;p&gt;ಗಂಟೆಗೆ 149 ರೂಪಾಯಿ ಮತ್ತು 30 ನಿಮಿಷಕ್ಕೆ 79 ರೂಪಾಯಿ ಶುಲ್ಕದಲ್ಲಿ, ಗ್ರಾಹಕರು ಎರಡು, ಮೂರು ಅಥವಾ ನಾಲ್ಕು ಗಂಟೆಗಳ ಪ್ಯಾಕೇಜ್&zwnj;ಗೆ ಸಹಾಯಕನನ್ನು ನೇಮಿಸಿಕೊಳ್ಳಬಹುದು. ಈ ಸಹಾಯಕರು ಶಾಪಿಂಗ್ ಬ್ಯಾಗ್&zwnj;ಗಳನ್ನು ಹೊರುವುದು, ಜನಜಂಗುಳಿಯಲ್ಲಿ ದಾರಿ ಮಾಡಿಕೊಡುವುದು, ಫುಡ್ ಕ್ಯೂನಲ್ಲಿ ನಿಲ್ಲುವುದು, ಪಾರ್ಕಿಂಗ್ ಅಥವಾ ಮೆಟ್ರೋ ಸ್ಟೇಷನ್&zwnj;ಗೆ ದಾರಿ ತೋರಿಸುವುದು ಹೀಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಾರೆ.&lt;/p&gt;&lt;p&gt;ಸದ್ಯಕ್ಕೆ ಕಂಪನಿಯು ಲಾಜ್&zwnj;ಪತ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಚಾಂದಿನಿ ಚೌಕ್&zwnj;ಗೂ ವಿಸ್ತರಿಸುವ ಯೋಜನೆ ಹೊಂದಿದೆ.&lt;/p&gt;&lt;img&gt;&lt;p&gt;ಈ ಸೇವೆಯನ್ನು ಹೆಚ್ಚಾಗಿ ಬಳಸುತ್ತಿರುವವರು ಬಟ್ಟೆ, ಕರ್ಟನ್, ಬೆಡ್&zwnj;ಶೀಟ್ ಮತ್ತು ಮನೆಬಳಕೆಯ ವಸ್ತುಗಳನ್ನು ಖರೀದಿಸಲು ಬರುವ ವಯಸ್ಸಾದ ಮಹಿಳೆಯರು ಎಂದು ಸ್ಟಾರ್ಟಪ್ ಹೇಳಿದೆ.&lt;/p&gt;&lt;p&gt;ಸಂಸ್ಥಾಪಕರ ಪ್ರಕಾರ, ಹಿರಿಯ ಗ್ರಾಹಕರಿಗೆ ಐಷಾರಾಮಿ ಸೇವೆಗಿಂತ ಹೆಚ್ಚಾಗಿ ಸರಳ ಬೆಂಬಲ ಬೇಕಾಗುತ್ತದೆ. ಕೆಲವರಿಗೆ ಬ್ಯಾಗ್ ಹೊರುವವರು, ಊಟ ಆರ್ಡರ್ ಮಾಡಲು ಸಹಾಯ ಮಾಡುವವರು ಅಥವಾ ಶಾಪಿಂಗ್ ಮಧ್ಯೆ ಕೂರಲು ಆರಾಮದಾಯಕ ಜಾಗ ಹುಡುಕಿಕೊಡುವವರು ಬೇಕು.&amp;nbsp;&lt;/p&gt;&lt;img&gt;&lt;p&gt;ಪರಿಶೀಲಿಸಿದ ಶಾಪಿಂಗ್ ಸಹಾಯಕರು&lt;/p&gt;&lt;p&gt;ಹಲವಾರು ಅಂಗಡಿಗಳಲ್ಲಿ ಸಹಾಯ&lt;/p&gt;&lt;p&gt;ಸುರಕ್ಷಿತ ಮತ್ತು ಆರಾಮದಾಯಕ ಮಾರುಕಟ್ಟೆ ಶಾಪಿಂಗ್&lt;/p&gt;&lt;p&gt;ಗ್ರಾಹಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲು, ಕಂಪನಿಯು ಮಡಚಬಹುದಾದ ಪೋರ್ಟಬಲ್ ಚೇರ್&zwnj;ಗಳನ್ನು ಸಹ ಪರಿಚಯಿಸಿದೆ. ಗ್ರಾಹಕರಿಗೆ ಸುಸ್ತಾದರೆ, ಸಹಾಯಕರು ಮಾರುಕಟ್ಟೆಯ ಮಧ್ಯದಲ್ಲೇ ಚೇರ್ ಹಾಕಿ ಕೊಡುತ್ತಾರೆ, ಆಗ ಅವರು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬಹುದು.&lt;/p&gt;&lt;p&gt;ಬಿಸಿಲು ಮತ್ತು ಮಳೆಯಿಂದ ರಕ್ಷಿಸಲು ಛತ್ರಿ, ಮೊಬೈಲ್ ಚಾರ್ಜಿಂಗ್ ಸಪೋರ್ಟ್, ಪವರ್ ಬ್ಯಾಂಕ್ ಮತ್ತು ನೀರಿನ ವ್ಯವಸ್ಥೆಯನ್ನೂ ಈ ಸೇವೆ ಒಳಗೊಂಡಿದೆ.&lt;/p&gt;&lt;p&gt;ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳೊಂದಿಗೆ ಬರುವ ಪೋಷಕರು ಕೂಡ ಕ್ಯಾರಿಮೆನ್ ಸೇವೆಯನ್ನು ಬುಕ್ ಮಾಡುತ್ತಿದ್ದಾರೆ. ಹೆಚ್ಚುವರಿ ಗಂಟೆಯ ಶುಲ್ಕದ ಮೇಲೆ ಕಂಪನಿಯು ಸ್ಟ್ರಾಲರ್ (ಮಕ್ಕಳ ಗಾಡಿ) ಬಾಡಿಗೆಗೆ ನೀಡುತ್ತದೆ. ಇದರಿಂದ ಕುಟುಂಬಗಳು ಜನನಿಬಿಡ ಮಾರುಕಟ್ಟೆಗಳಲ್ಲಿ ಹೆಚ್ಚು ಆರಾಮವಾಗಿ ಓಡಾಡಬಹುದು.&lt;/p&gt;&lt;p&gt;ಸದ್ಯಕ್ಕೆ ಒಬ್ಬ ಸಹಾಯಕ 12 ಕೆ.ಜಿ ವರೆಗೆ ತೂಕವನ್ನು ಹೊರಬಲ್ಲ. ಗ್ರಾಹಕರು ಹೆಚ್ಚು ಭಾರವಾದ ವಸ್ತುಗಳನ್ನು ಹೊಂದಿದ್ದರೆ, ಹೆಚ್ಚುವರಿ ಸಹಾಯಕನನ್ನು ನೇಮಿಸಿಕೊಳ್ಳಬಹುದು.&lt;/p&gt;&lt;p&gt;&lt;strong&gt;ಆರಂಭದಲ್ಲೇ ಭರ್ಜರಿ ಬೆಳವಣಿಗೆ ಕಂಡ ಸ್ಟಾರ್ಟಪ್&lt;/strong&gt;&lt;/p&gt;&lt;p&gt;ಏಪ್ರಿಲ್&zwnj;ನಲ್ಲಿ ಅಧಿಕೃತವಾಗಿ ಪ್ರಾರಂಭವಾದ ಈ ಕಂಪನಿ, ಮೊದಲ ತಿಂಗಳಲ್ಲೇ 50ಕ್ಕೂ ಹೆಚ್ಚು ಬುಕಿಂಗ್&zwnj;ಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿಕೊಂಡಿದೆ.&lt;/p&gt;&lt;p&gt;ಕುತೂಹಲಕಾರಿ ಸಂಗತಿ ಎಂದರೆ, ಈ ಸ್ಟಾರ್ಟಪ್ ಯಾವುದೇ ಇನ್&zwnj;ಫ್ಲುಯೆನ್ಸರ್ ಮಾರ್ಕೆಟಿಂಗ್ ಕ್ಯಾಂಪೇನ್&zwnj;ಗಳನ್ನು ಮಾಡಿಲ್ಲ. ಬದಲಾಗಿ, ಬಾಯಿ ಮಾತಿನ ಪ್ರಚಾರ ಮತ್ತು ಸೋಷಿಯಲ್ ಮೀಡಿಯಾ ಚರ್ಚೆಗಳಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದೆ.&lt;/p&gt;&lt;p&gt;ಈ ಕಾನ್ಸೆಪ್ಟ್ ಆನ್&zwnj;ಲೈನ್&zwnj;ನಲ್ಲಿ ವೈರಲ್ ಆಗಲು ಕಾರಣ, ಅನೇಕರಿಗೆ ಈ ಐಡಿಯಾ ತಮಾಷೆಯಾಗಿ, ಆದರೆ ಅದೇ ಸಮಯದಲ್ಲಿ ಆಶ್ಚರ್ಯಕರವಾಗಿ ಉಪಯುಕ್ತವೆನಿಸಿದ್ದು.&lt;/p&gt;&lt;p&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ&lt;/strong&gt;&lt;/p&gt;&lt;p&gt;ಇನ್&zwnj;ಸ್ಟಾಗ್ರಾಮ್ ಮತ್ತು ಇತರ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಈ ಸೇವೆಯ ಕುರಿತಾದ ವಿಡಿಯೋಗಳು ಮತ್ತು ಪೋಸ್ಟ್&zwnj;ಗಳು ಹರಿದಾಡಲು ಪ್ರಾರಂಭಿಸಿದ ನಂತರ, ಸ್ಟಾರ್ಟಪ್&zwnj;ಗೆ ಆನ್&zwnj;ಲೈನ್&zwnj;ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.&lt;/p&gt;&lt;p&gt;ಅನೇಕ ಬಳಕೆದಾರರು ಈ ಐಡಿಯಾವನ್ನು ಹೊಗಳಿದ್ದಾರೆ ಮತ್ತು ಭಾರತದ ಜನನಿಬಿಡ ಮಾರುಕಟ್ಟೆಗಳಿಗೆ ಇದು ಉಪಯುಕ್ತ ಪರಿಹಾರ ಎಂದು ಕರೆದಿದ್ದಾರೆ.&lt;/p&gt;&lt;p&gt;ಕೆಲವರು, &quot;ತುಂಬಾ ಒಳ್ಳೆ ಕಾನ್ಸೆಪ್ಟ್,&quot; ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು, &quot;ಅಬ್ಬಾ! ಕೊನೆಗೂ ಯಾರೋ ಇದರ ಬಗ್ಗೆ ಯೋಚಿಸಿದ್ರಲ್ಲ,&quot; ಮತ್ತು &quot;ಇದೇ ತರಹ ಚಾಂದಿನಿ ಚೌಕ್&zwnj;ನಲ್ಲೂ ಬೇಕು,&quot; ಎಂದು ಬರೆದಿದ್ದಾರೆ.&lt;/p&gt;&lt;p&gt;ಹಲವರು ದೈಹಿಕ ಸಹಾಯದ ಬದಲು ಭಾವನಾತ್ಮಕ ಸಹಾಯದ ಬಗ್ಗೆ ತಮಾಷೆ ಮಾಡಿದ್ದಾರೆ. ಒಬ್ಬ ಬಳಕೆದಾರ, &quot;ನನ್ನ ಎಮೋಷನಲ್ ಬ್ಯಾಗೇಜ್ ಕೂಡಾ ಹೊತ್ತಾರಾ?&quot; ಎಂದು ಕೇಳಿದ್ದಾರೆ.&lt;/p&gt;&lt;p&gt;ಇನ್ನು ಕೆಲವರು, ಜನನಿಬಿಡ ಸ್ಥಳಗಳಲ್ಲಿ ಅಪರಿಚಿತರನ್ನು ದುಬಾರಿ ಶಾಪಿಂಗ್ ಬ್ಯಾಗ್&zwnj;ಗಳು, ಮಕ್ಕಳು ಅಥವಾ ವೈಯಕ್ತಿಕ ವಸ್ತುಗಳೊಂದಿಗೆ ನಂಬಬಹುದೇ ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;&quot;ಮದುವೆ ಲಹೆಂಗಾ ಅಥವಾ ದುಬಾರಿ ಸೀರೆಗಳನ್ನು ಕೊಂಡಾಗ, ಆ ವ್ಯಕ್ತಿ ಬ್ಯಾಗ್&zwnj; ಸಮೇತ ಓಡಿಹೋದರೆ ಏನು ಗತಿ?&quot; ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಮತ್ತೊಬ್ಬ ಬಳಕೆದಾರ, &quot;ಇದು ರಿಸ್ಕ್ ಅಲ್ವಾ? ಆ ವ್ಯಕ್ತಿ ಬ್ಯಾಗ್&zwnj;, ಹೆಂಡತಿ, ಮಕ್ಕಳ ಸಮೇತ ಮಾಯವಾದರೆ?&quot; ಎಂದು ಬರೆದಿದ್ದಾರೆ.&lt;/p&gt;&lt;p&gt;ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ಈ ಸ್ಟಾರ್ಟಪ್&zwnj; ಅನ್ನು ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಹೋಲಿಸಿದ್ದಾರೆ. ಆದಾಯಕ್ಕಾಗಿ ಜನರು ಈಗ ಯಾವುದೇ ರೀತಿಯ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಅದೇ ಸಮಯದಲ್ಲಿ, ಅನೇಕರು ಈ ಸೇವೆಯನ್ನು ರೈಲ್ವೆ ಕೂಲಿಗಳು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಈಗಾಗಲೇ ಇರುವ ಸಹಾಯಕರಿಗೆ ಹೋಲಿಸಿದ್ದಾರೆ.&lt;/p&gt;&lt;p&gt;&lt;strong&gt;ಆಧುನಿಕ ಪರಿಹಾರ, ಭಾವನಾತ್ಮಕ ನೆನಪು&lt;/strong&gt;&lt;/p&gt;&lt;p&gt;ಕ್ಯಾರಿಮೆನ್&zwnj;ನಂತಹ ಸ್ಟಾರ್ಟಪ್&zwnj;ಗಳು ಶಾಪಿಂಗ್&zwnj;ನ ದೈಹಿಕ ಶ್ರಮವನ್ನು ಕಡಿಮೆ ಮಾಡಬಹುದಾದರೂ, ಶಾಪಿಂಗ್ ನೆನಪುಗಳು ಹೆಚ್ಚಾಗಿ ನಮ್ಮೊಂದಿಗೆ ಬರುವ ಪ್ರೀತಿಪಾತ್ರರೊಂದಿಗೆ ಬೆಸೆದುಕೊಂಡಿರುತ್ತವೆ ಎಂಬುದನ್ನು ಅನೇಕರು ಆನ್&zwnj;ಲೈನ್&zwnj;ನಲ್ಲಿ ನೆನಪಿಸಿದ್ದಾರೆ.&lt;/p&gt;&lt;p&gt;ವರ್ಷಗಳಿಂದ, ತಂದೆಯಂದಿರು, ಸಹೋದರರು, ಗಂಡಂದಿರು ಮತ್ತು ಸ್ನೇಹಿತರು ಮೌನವಾಗಿ ಬ್ಯಾಗ್&zwnj;ಗಳನ್ನು ಹೊತ್ತು, ಟ್ರಯಲ್ ರೂಮ್&zwnj;ಗಳ ಹೊರಗೆ ಕಾದು, ಕೇವಲ ಒಟ್ಟಿಗೆ ಸಮಯ ಕಳೆಯಲು ಜನನಿಬಿಡ ಮಾರುಕಟ್ಟೆಗಳಲ್ಲಿ ಅಲೆದಾಡಿದ್ದಾರೆ.&lt;/p&gt;&lt;p&gt;ಒಂದು ವೇಳೆ, ನಿಮ್ಮ ಪ್ರೀತಿಪಾತ್ರರಿಗೆ ಅಂತ್ಯವಿಲ್ಲದ ಶಾಪಿಂಗ್ ಬ್ಯಾಗ್&zwnj;ಗಳನ್ನು ಹೊರುವ ಕಷ್ಟದಿಂದ ಬ್ರೇಕ್ ಕೊಡಿಸಬೇಕು ಅನ್ಸಿದ್ರೆ, 'ಕ್ಯಾರಿಮೆನ್' ಒಂದು ಒಳ್ಳೆ ಆಯ್ಕೆ ಆಗಬಹುದು. ಈ ಕ್ಯಾರಿಮೆನ್&zwnj;ಗಳು ನಿಮ್ಮ ಶಾಪಿಂಗ್ ಅನ್ನು ಹಗುರ ಮತ್ತು ಹೆಚ್ಚು ಆರಾಮದಾಯಕವಾಗಿಸಬಹುದು!&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/life/shopping-bag-carry-men-in-delhi-price-in-startup-advantages-02ptelq"/>
        </item>
        <item>
            <title><![CDATA[ಶಿವಂ ಅಸೋಸಿಯೇಟ್ಸ್ ಅಕ್ರಮ ಹಣದಲ್ಲಿ ಸನ್ನಿ ಲಿಯೋನ್‌ ಮಾತ್ರವಲ್ಲ, ಇನ್ನೂ 4 ಕನ್ನಡದ ನಟ-ನಟಿಯರಿಗೆ ಪಾಲು?!]]></title>
            <link>https://kannada.asianetnews.com/sandalwood/shivam-associates-fraud-network-widens-not-just-sunny-leone-and-names-of-other-four-kannada-stars-are-linked-to-case/articleshow-13wndv7</link>
            <guid isPermaLink="true">https://kannada.asianetnews.com/sandalwood/shivam-associates-fraud-network-widens-not-just-sunny-leone-and-names-of-other-four-kannada-stars-are-linked-to-case/articleshow-13wndv7</guid>
            <pubDate>Wed, 10 Jun 2026 13:45:47 +0530</pubDate>
            <description><![CDATA[&lt;p&gt;ಬಡವರ ರಕ್ತ ಹೀರಿ ಕಟ್ಟಿದ ಈ 2,400 ಕೋಟಿ ರೂಪಾಯಿಗಳ ಸಾಮ್ರಾಜ್ಯ ಈಗ ಬುಡಮೇಲಾಗುತ್ತಿದೆ. ಸಿಐಡಿ ಅಧಿಕಾರಿಗಳು ದಾಖಲೆಗಳ ಬೆನ್ನತ್ತಿದ್ದು, ಚಿತ್ರರಂಗದ ಗಣ್ಯರು ಈ ವಂಚನೆಯ ಜಾಲದಲ್ಲಿ ಎಷ್ಟು ಆಳಕ್ಕೆ ಸಿಲುಕಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktr9038dp56htxv68vgrbhn1,imgname-shivananda-neelannavar-sunny-leone--1--1781078691085.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳ್ಳಿತೆರೆಯ ವರ್ಣರಂಜಿತ ಲೋಕದ ಹಿಂದೆ ಕೆಲವೊಮ್ಮೆ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಕರಾಳ ರಹಸ್ಯಗಳು ಅಡಗಿರುತ್ತವೆ. ಈಗ ಸ್ಯಾಂಡಲ್&zwnj;ವುಡ್ ಮತ್ತು ಬಾಲಿವುಡ್ ಎರಡನ್ನೂ ನಡುಗಿಸುತ್ತಿರುವ ಒಂದು ಬ್ರೇಕಿಂಗ್ ನ್ಯೂಸ್ ಎಂದರೆ ಅದು ಬೆಳಗಾವಿ ಮೂಲದ 'ಶಿವಂ ಅಸೋಸಿಯೇಟ್ಸ್' (Shivam Associates) ನಡೆಸಿದ ಬರೋಬ್ಬರಿ 2,400 ಕೋಟಿ ರೂಪಾಯಿಗಳ ಬೃಹತ್ ವಂಚನೆ ಜಾಲ! ಈ ಹಗರಣದ ತನಿಖೆ ಈಗ ಸಿನಿಮಾ ಗ್ಲಾಮರ್&zwnj;ನ ಹೊಳಪನ್ನು ಮಂಕಾಗಿಸಿದೆ.&lt;/p&gt;&lt;p&gt;&lt;strong&gt;ಒಂದು ಐಟಂ ಸಾಂಗ್, ಒಂದು ಕೋಟಿ ಸಂಭಾವನೆ!&lt;/strong&gt;&lt;/p&gt;&lt;p&gt;ಈ ಕಥೆಯ ಅಸಲಿ ಟ್ವಿಸ್ಟ್ ಶುರುವಾಗುವುದು ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಎಂಟ್ರಿಯೊಂದಿಗೆ. 2023ರಲ್ಲಿ ಬಿಡುಗಡೆಯಾದ 'ಚಾಂಪಿಯನ್' ಎಂಬ ಕನ್ನಡ ಸಿನಿಮಾದಲ್ಲಿ ಸನ್ನಿ ಲಿಯೋನ್ ಒಂದು ಸ್ಪೆಷಲ್ ಐಟಂ ಸಾಂಗ್&zwnj;ಗೆ ಹೆಜ್ಜೆ ಹಾಕಿದ್ದರು. ಕೇವಲ ಒಂದು ಹಾಡಿಗೆ ಅವರಿಗೆ ನೀಡಲಾದ ಸಂಭಾವನೆ ಎಷ್ಟು ಗೊತ್ತೇ? ಬರೋಬ್ಬರಿ 1 ಕೋಟಿ ರೂಪಾಯಿ! ಆದರೆ, ಈಗ ಸಿಐಡಿ ಅಧಿಕಾರಿಗಳು ಬಿಚ್ಚಿಟ್ಟಿರುವ ಸತ್ಯವೇನೆಂದರೆ, ಈ ಹಣ ಜನಸಾಮಾನ್ಯರು ಬೆವರು ಸುರಿಸಿ ದುಡಿದು ಇಟ್ಟಿದ್ದ ಠೇವಣಿ ಹಣವಾಗಿತ್ತು. ಅಕ್ರಮ ಹಣವನ್ನು ಸಿನಿಮಾ ರಂಗದಲ್ಲಿ ವೈಟ್ ಮಾಡಿಕೊಳ್ಳಲು ಈ ದಾರಿಯನ್ನು ಬಳಸಲಾಗಿತ್ತೇ ಎಂಬ ಅನುಮಾನ ಈಗ ದಟ್ಟವಾಗಿದೆ. ಈ ವ್ಯವಹಾರದ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಸಿಐಡಿ ಈಗಾಗಲೇ ಸನ್ನಿ ಲಿಯೋನ್&zwnj;ಗೆ ನೋಟಿಸ್ ಜಾರಿ ಮಾಡಿದೆ.&lt;/p&gt;&lt;h2&gt;ಬೆಳಗಾವಿಯಿಂದ ಶುರುವಾದ ಮಾಸ್ಟರ್ ಪ್ಲಾನ್!&lt;/h2&gt;&lt;p&gt;ಶಿವಾನಂದ ನೀಲಣ್ಣನವರ್ ಎಂಬ ವ್ಯಕ್ತಿಯ ಮಾಲೀಕತ್ವದ 'ಶಿವಂ ಅಸೋಸಿಯೇಟ್ಸ್' ಎಂಬ ಸಂಸ್ಥೆ, ಜನರಿಗೆ ಆಕರ್ಷಕ ಬಡ್ಡಿ ಮತ್ತು ಲಾಭದ ಆಸೆ ತೋರಿಸಿ ಬಲೆ ಬೀಸಿತ್ತು. ಯಾವುದೇ ಸರ್ಕಾರಿ ಅನುಮತಿಯಿಲ್ಲದೆ ಅಕ್ರಮವಾಗಿ ಸುಮಾರು 40,700 ಜನರಿಂದ ಹಣ ಸಂಗ್ರಹಿಸಿತ್ತು. ಸಾಮಾನ್ಯ ಜನರು ತಮ್ಮ ಕಷ್ಟಕಾಲಕ್ಕೆ ಇರಲಿ ಎಂದು ಇಟ್ಟಿದ್ದ ಹಣವನ್ನೇ ಬಂಡವಾಳವಾಗಿಸಿಕೊಂಡ ಶಿವಾನಂದ್, ಅದನ್ನು ಮೋಜು-ಮಸ್ತಿ, ಸಿನಿಮಾ ನಿರ್ಮಾಣ ಮತ್ತು ಸೆಲೆಬ್ರಿಟಿ ಇವೆಂಟ್&zwnj;ಗಳಿಗೆ ನೀರಂತೆ ಖರ್ಚು ಮಾಡಿದ್ದ ಎನ್ನಲಾಗಿದೆ.&lt;/p&gt;&lt;h3&gt;ಸಿಐಡಿ ಬಲೆಯಲ್ಲಿ ಸ್ಯಾಂಡಲ್&zwnj;ವುಡ್ ಸ್ಟಾರ್&zwnj;ಗಳು!&lt;/h3&gt;&lt;p&gt;ಈ ಹಗರಣ ಕೇವಲ ಸನ್ನಿ ಲಿಯೋನ್&zwnj;ಗೆ ಸೀಮಿತವಾಗಿಲ್ಲ. ಕಳೆದ ವರ್ಷ ಡಿಸೆಂಬರ್&zwnj;ನಲ್ಲಿ ನಡೆದ 'ಕನ್ನಡ ಉತ್ಸವಂ' ಕಾರ್ಯಕ್ರಮ ಈಗ ತನಿಖಾ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿದೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಮತ್ತು ಪರ್ಫಾರ್ಮೆನ್ಸ್ ನೀಡಲು ಬಂದಿದ್ದ ಸ್ಯಾಂಡಲ್&zwnj;ವುಡ್&zwnj;ನ ಹಲವು ನಟನಟಿಯರಿಗೆ, ಅದರಲ್ಲೂ ಮುಖ್ಯವಾಗಿ ಇಬ್ಬರು ನಟರು- ಇಬ್ಬರು ನಟಿಯರಿಗೆ ಸಿಐಡಿ ನೋಟಿಸ್ ನೀಡಲು ಸಜ್ಜಾಗಿದೆ ಎಂಬ ಮಾಹಿತಿ ಇದೆ. ಈ ನಟನಟಿಯರಿಗೆ ಸಂಭಾವನೆಯ ರೂಪದಲ್ಲಿ ಹೋದ ಹಣ ಕೂಡ ವಂಚನೆಯಿಂದ ಬಂದಿದ್ದೇ ಎಂಬುದು ಅಧಿಕಾರಿಗಳ ಸಂಶಯ.&lt;/p&gt;&lt;p&gt;ಒಟ್ಟಿನಲ್ಲಿ, ಬಡವರ ರಕ್ತ ಹೀರಿ ಕಟ್ಟಿದ ಈ 2,400 ಕೋಟಿ ರೂಪಾಯಿಗಳ ಸಾಮ್ರಾಜ್ಯ ಈಗ ಬುಡಮೇಲಾಗುತ್ತಿದೆ. ಸಿಐಡಿ ಅಧಿಕಾರಿಗಳು ದಾಖಲೆಗಳ ಬೆನ್ನತ್ತಿದ್ದು, ಚಿತ್ರರಂಗದ ಗಣ್ಯರು ಈ ವಂಚನೆಯ ಜಾಲದಲ್ಲಿ ಎಷ್ಟು ಆಳಕ್ಕೆ ಸಿಲುಕಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ. ಗ್ಲಾಮರ್ ಲೋಕದ ಈ &quot;ರಿಯಲ್ ಫೈಟ್&quot; ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ!&lt;/p&gt;]]></content:encoded>
            <category>news-money</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/shivam-associates-fraud-network-widens-not-just-sunny-leone-and-names-of-other-four-kannada-stars-are-linked-to-case/articleshow-13wndv7"/>
        </item>
        <item>
            <title><![CDATA[Iran-US Talks: ಪಾಕಿಸ್ತಾನದಲ್ಲಿ ಅಣ್ವಸ್ತ್ರ ಮಾತುಕತೆ ಇಲ್ಲ, ಇದು ಬರೀ ದ್ವಿಪಕ್ಷೀಯ ಭೇಟಿಯಷ್ಟೇ ಎಂದ ಇರಾನ್!]]></title>
            <link>https://kannada.asianetnews.com/world-news/iran-and-us-offer-conflicting-narratives-on-pakistan-talks-amid-reports-of-tehran-infighting/articleshow-1u6z4dk</link>
            <guid isPermaLink="true">https://kannada.asianetnews.com/world-news/iran-and-us-offer-conflicting-narratives-on-pakistan-talks-amid-reports-of-tehran-infighting/articleshow-1u6z4dk</guid>
            <pubDate>Sat, 25 Apr 2026 10:33:05 +0530</pubDate>
            <description><![CDATA[ತಮ್ಮ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಹೋಗಿರೋದು ಅಣ್ವಸ್ತ್ರ ಮಾತುಕತೆಗೆ ಅಲ್ಲ, ಅದು ನಮ್ಮ 'ರೆಡ್ ಲೈನ್' ಅಂತ ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಇರಾನ್ ಜೊತೆ ಮುಖಾಮುಖಿ ಮಾತುಕತೆ ನಡೆಸೋಕೆ ನಮ್ಮ ಅಧಿಕಾರಿಗಳು ಪಾಕಿಸ್ತಾನಕ್ಕೆ ಹೋಗ್ತಿದ್ದಾರೆ ಅಂತ ಅಮೆರಿಕ ಹೇಳಿರೋದ್ರಿಂದ ಗೊಂದಲ ಶುರುವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-2b360d23-e52c-47a0-9e21-d03ef47ae6e7.jpg" type="image/jpeg" height="390" width="690"/>
            <content:encoded><![CDATA[&lt;h2&gt;ಇರಾನ್-ಅಮೆರಿಕ ಮಾತುಕತೆ ಬಗ್ಗೆ ಗೊಂದಲದ ಹೇಳಿಕೆಗಳು&lt;/h2&gt;&lt;p&gt;ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜೀಜಿ ಒಂದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಪಾಕಿಸ್ತಾನಕ್ಕೆ ಹೋಗಿರೋದು ಕೇವಲ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ಮಾಡೋಕೆ ಅಷ್ಟೇ ಅಂತ ಅವರು ಹೇಳಿದ್ದಾರೆ. ಅಣ್ವಸ್ತ್ರ ಮಾತುಕತೆ ಇರಾನ್&zwnj;ನ 'ರೆಡ್ ಲೈನ್ ಹಾಗಾಗಿ ಪಾಕಿಸ್ತಾನದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆಯಲ್ಲ ಅಂತ ಅಜೀಜಿ ಖಡಾಖಂಡಿತವಾಗಿ ಹೇಳಿದ್ದಾರೆ.&lt;/p&gt;&lt;p&gt;ಈ ಬಗ್ಗೆ X (ಹಿಂದಿನ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿರುವ ಅವರು, &quot;ವಿದೇಶಿ ಪತ್ರಕರ್ತರ ಜೊತೆಗಿನ ಸಭೆಯಲ್ಲಿ ನಾನು ಒಂದು ವಿಚಾರ ಸ್ಪಷ್ಟಪಡಿಸಿದ್ದೇನೆ. ನಮ್ಮ ವಿದೇಶಾಂಗ ಸಚಿವ ಅರಾಘ್ಚಿ ಅವರು ದ್ವಿಪಕ್ಷೀಯ ಸಂಬಂಧಗಳ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇರಾನ್&zwnj;ನ ಮೂಲಭೂತ 'ರೆಡ್ ಲೈನ್' ಆಗಿರುವ ಅಣ್ವಸ್ತ್ರ ಮಾತುಕತೆಗೆ ಸಂಬಂಧಿಸಿದ ಯಾವುದೇ ಜವಾಬ್ದಾರಿ ಈ ಪ್ರವಾಸದಲ್ಲಿ ಅವರಿಗಿಲ್ಲ&quot; ಎಂದು ಬರೆದುಕೊಂಡಿದ್ದಾರೆ. در جلسه با خبرنگاران خارجی اشاره کردم که آقای عراقچی، وزیر امور خارجه کشورمان برای گفتگو درباره مناسبات دوجانبه به پاکستان سفر کرده است. ایشان در این سفر هیچ&zwnj;گونه ماموریتی در حوزه گفتگوهای هسته&zwnj;ای که از خط قرمز های اساسی ایران به شمار می&zwnj;رود، ندارد. pic.twitter.com/nDfYAjn50X &mdash; ابراهیم عزیزی (@Ebrahimazizi33) April 24, 2026&lt;/p&gt;&lt;p&gt;Just met with foreign journalists in Tehran and thanked them for coming to capture a true picture of our country. In the meeting, I made it clear that FM Araghchi&rsquo;s trip to Pakistan is only for discussions on bilateral relations and he has no assignment related to nuclear talks,&hellip; pic.twitter.com/9pwNq5lr06 &mdash; ابراهیم عزیزی (@Ebrahimazizi33) April 24, 2026&lt;/p&gt;&lt;p&gt;ಆದರೆ, ಇರಾನ್&zwnj;ನ ಈ ಹೇಳಿಕೆ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ನೀಡಿದ ಹೇಳಿಕೆಗೆ ಸಂಪೂರ್ಣ ವಿರುದ್ಧವಾಗಿದೆ. ಅಮೆರಿಕದ ವಿಶೇಷ ರಾಯಭಾರಿ ವಿಟ್ಕಾಫ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಏಪ್ರಿಲ್ 25 ರಂದು ಇಸ್ಲಾಮಾಬಾದ್&zwnj;ಗೆ ಯಾಕೆ ಹೋಗ್ತಿದ್ದಾರೆ ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಲೆವಿಟ್ ಉತ್ತರಿಸಿದರು. &quot;ಇರಾನ್&zwnj;ನವರಿಗೆ ಮಾತುಕತೆ ಬೇಕಾಗಿದೆ. ಅವರು ಮುಖಾಮುಖಿ ಮಾತನಾಡಲು ಬಯಸಿದ್ದಾರೆ. ಹಾಗಾಗಿಯೇ ಅಧ್ಯಕ್ಷರು ರಾಜತಾಂತ್ರಿಕತೆಗೆ ಒಂದು ಅವಕಾಶ ನೀಡಲು ಸದಾ ಸಿದ್ಧರಿರುತ್ತಾರೆ. ಹೀಗಾಗಿ, ಸ್ಟೀವ್ (ವಿಟ್ಕಾಫ್) ಮತ್ತು ಜೇರೆಡ್ ನಾಳೆ ಪಾಕಿಸ್ತಾನಕ್ಕೆ ಹೋಗಿ ಇರಾನ್ ಹೇಳುವುದನ್ನು ಕೇಳಲಿದ್ದಾರೆ,&quot; ಎಂದು ಅವರು ತಿಳಿಸಿದರು.&lt;/p&gt;&lt;p&gt;&lsquo;ಈ ಸಭೆಯಿಂದ ಸಕಾರಾತ್ಮಕ ಬೆಳವಣಿಗೆಗಳು ಆಗುತ್ತವೆ ಮತ್ತು ಪ್ರಗತಿ ಸಾಧ್ಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಏನಾಗುತ್ತೆ ಅಂತ ಕಾದು ನೋಡೋಣ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ವಿದೇಶಾಂಗ ಕಾರ್ಯದರ್ಶಿ ಅಮೆರಿಕದಲ್ಲೇ ಇದ್ದು ಅಪ್&zwnj;ಡೇಟ್&zwnj;ಗಳಿಗಾಗಿ ಕಾಯುತ್ತಾರೆ. ಅಗತ್ಯಬಿದ್ದರೆ ಉಪಾಧ್ಯಕ್ಷರು ಕೂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಿದ್ಧರಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಇರಾನ್ ಕಡೆಯಿಂದ ಸ್ವಲ್ಪ ಪ್ರಗತಿ ಕಂಡಿದೆ. ಸದ್ಯಕ್ಕೆ, ಇರಾನ್&zwnj;ನ ವಾದವನ್ನು ಕೇಳಲು ಅಧ್ಯಕ್ಷರು ಸ್ಟೀವ್ ಮತ್ತು ಜೇರೆಡ್ ಅವರನ್ನು ಕಳುಹಿಸಲು ನಿರ್ಧರಿಸಿದ್ದಾರೆ. ಈ ವಾರ ಅವರು ಏನು ಹೇಳುತ್ತಾರೆಂದು ನೋಡೋಣ,&rsquo; ಅಂತ ಲೆವಿಟ್ ವಿವರಿಸಿದರು.&lt;/p&gt;&lt;h3&gt;ಪಾಕಿಸ್ತಾನದ ಮಧ್ಯಸ್ಥಿಕೆ ಬಗ್ಗೆ ಇರಾನ್ ಸ್ಪಷ್ಟನೆ&lt;/h3&gt;&lt;p&gt;ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ಸಭೆ ನಿಗದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಹೇರಿರುವ ಯುದ್ಧವನ್ನು ಕೊನೆಗಾಣಿಸಲು ಮತ್ತು ಈ ಭಾಗದಲ್ಲಿ ಶಾಂತಿ ಸ್ಥಾಪಿಸಲು ಪಾಕಿಸ್ತಾನ ನಡೆಸುತ್ತಿರುವ ಮಧ್ಯಸ್ಥಿಕೆ ಪ್ರಯತ್ನಗಳ ಬಗ್ಗೆ ಚರ್ಚಿಸಲು ಅರಾಘ್ಚಿ ಅವರು ಪಾಕಿಸ್ತಾನಿ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;X ನಲ್ಲಿ ಪೋಸ್ಟ್ ಮಾಡಿದ ಅವರು, &quot;ನಾವು ಅಧಿಕೃತ ಭೇಟಿಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್&zwnj;ಗೆ ಬಂದಿದ್ದೇವೆ. ನಮ್ಮ ಪ್ರದೇಶದಲ್ಲಿ ಅಮೆರಿಕ ಹೇರಿದ ಆಕ್ರಮಣಕಾರಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಮರುಸ್ಥಾಪಿಸಲು ಪಾಕಿಸ್ತಾನ ನಡೆಸುತ್ತಿರುವ ಮಧ್ಯಸ್ಥಿಕೆ ಪ್ರಯತ್ನಗಳ ಭಾಗವಾಗಿ ವಿದೇಶಾಂಗ ಸಚಿವ ಅರಾಘ್ಚಿ ಅವರು ಪಾಕಿಸ್ತಾನದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ಸಭೆ ನಿಗದಿಯಾಗಿಲ್ಲ. ಇರಾನ್&zwnj;ನ ನಿಲುವನ್ನು ಪಾಕಿಸ್ತಾನಕ್ಕೆ ತಿಳಿಸಲಾಗುವುದು,&quot; ಎಂದು ಹೇಳಿದ್ದಾರೆ.&lt;/p&gt;&lt;p&gt;We arrive in Islamabad, Pakistan, for an official visit. FM Araghchi will be meeting with Pakistani high-level officials in concert with their ongoing mediation &amp;amp; good offices for ending American imposed war of aggression and the restitution of peace in our region. No meeting&hellip; pic.twitter.com/1vP51xIoep &mdash; Esmaeil Baqaei (@IRIMFA_SPOX) April 24, 2026&lt;/p&gt;&lt;h2&gt;ಟೆಹರಾನ್&zwnj;ನಲ್ಲಿ ಆಂತರಿಕ ಭಿನ್ನಮತದ ವರದಿಗಳು&lt;/h2&gt;&lt;p&gt;ಇದೆಲ್ಲದರ ನಡುವೆ, ಟೆಹರಾನ್&zwnj;ನಲ್ಲಿ ಆಂತರಿಕವಾಗಿಯೇ ಭಿನ್ನಮತವಿದೆ ಎಂದು ಅಮೆರಿಕ ಮೂಲದ ಥಿಂಕ್ ಟ್ಯಾಂಕ್ 'ಇನ್&zwnj;ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್' (ISW) ತನ್ನ ಹೊಸ ವರದಿಯಲ್ಲಿ ಹೇಳಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಕಮಾಂಡರ್ ಬ್ರಿಗೇಡಿಯರ್ ಜನರಲ್ ಅಹ್ಮದ್ ವಹಿದಿ ಮತ್ತು ಅವರ ಆಪ್ತ ವಲಯ, ಇರಾನ್ ಸರ್ಕಾರವನ್ನು 'ಹೆಚ್ಚು ಹೊಂದಿಕೊಳ್ಳುವ ಮಾತುಕತೆಯ ನಿಲುವಿನತ್ತ' ತಳ್ಳಲು ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಮತ್ತು ಇತರ 'ವ್ಯಾವಹಾರಿಕ' ಅಧಿಕಾರಿಗಳು ನಡೆಸುತ್ತಿರುವ ಪ್ರಯತ್ನಗಳಿಗೆ 'ಅಡ್ಡಗಾಲು ಹಾಕುತ್ತಿದ್ದಾರೆ' ಎಂದು ವರದಿ ಹೇಳಿದೆ.&lt;/p&gt;&lt;p&gt;ಟೆಹರಾನ್&zwnj;ನಲ್ಲಿ ನಾಯಕತ್ವದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳ ಬೆನ್ನಲ್ಲೇ, ಇರಾನ್ ಸರ್ಕಾರ ಶುಕ್ರವಾರ ಒಗ್ಗಟ್ಟಿನ ಸಂದೇಶ ಸಾರಲು ಯತ್ನಿಸಿತ್ತು. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಸಂಸತ್ ಸ್ಪೀಕರ್ ಎಂ.ಬಿ. ಘಾಲಿಬಾಫ್ ಮತ್ತು ನ್ಯಾಯಾಂಗ ಮುಖ್ಯಸ್ಥ ಘೋಲಂ-ಹೊಸೈನ್ ಮೊಹ್ಸೆನಿ-ಎಜೆಯಿ ಒಟ್ಟಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿ, ಅಮೆರಿಕದ ಆರೋಪಗಳ ಹೊರತಾಗಿಯೂ ದೇಶ ಒಗ್ಗಟ್ಟಾಗಿದೆ ಎಂದು ಹೇಳಿಕೊಂಡಿತ್ತು. ಇಸ್ಲಾಮಾಬಾದ್&zwnj;ನಲ್ಲಿ ಪಾಕಿಸ್ತಾನಿ ಮಧ್ಯವರ್ತಿಗಳನ್ನು ಭೇಟಿಯಾಗಲು ಇರಾನ್ ಮತ್ತು ಅಮೆರಿಕ ತಮ್ಮ ನಿಯೋಗಗಳನ್ನು ಕಳುಹಿಸುತ್ತಿರುವ ಹೊತ್ತಿನಲ್ಲೇ ಈ ಆಂತರಿಕ ಬದಲಾವಣೆಗಳು ವರದಿಯಾಗಿವೆ. (ANI)&lt;/p&gt;&lt;p&gt;(ಶೀರ್ಷಿಕೆ ಹೊರತುಪಡಿಸಿ, ಈ ಸುದ್ದಿಯನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>news-money</category>
            <dc:creator>Ravi Janekal</dc:creator>
            <atom:link href="https://kannada.asianetnews.com/world-news/iran-and-us-offer-conflicting-narratives-on-pakistan-talks-amid-reports-of-tehran-infighting/articleshow-1u6z4dk"/>
        </item>
        <item>
            <title><![CDATA[ಲಕ್ಷ, ಲಕ್ಷ ಹಣ ಬೇಕಿಲ್ಲ; ವೀಸಾ ಬೇಡ, 20-60 ಸಾವಿರದಲ್ಲಿ ಮುಗಿಯುವ ಇಂಟರ್‌ನ್ಯಾಶನಲ್‌ ಟ್ರಿಪ್‌ ಸ್ಥಳಗಳಿವು!]]></title>
            <link>https://kannada.asianetnews.com/gallery/travel/top-10-budget-international-destinations-places-from-india-for-summer-under-60000-1uy6mgf</link>
            <guid isPermaLink="true">https://kannada.asianetnews.com/gallery/travel/top-10-budget-international-destinations-places-from-india-for-summer-under-60000-1uy6mgf</guid>
            <pubDate>Sat, 25 Apr 2026 16:46:41 +0530</pubDate>
            <description><![CDATA[&lt;p&gt;International trips: ಬೇಸಿಗೆಯಲ್ಲಿ ವಿದೇಶ ಪ್ರವಾಸಕ್ಕೆ ಬಜೆಟ್ ಚಿಂತೆಯೇ? ಚಿಂತೆ ಬಿಡಿ. ಭಾರತದಿಂದ ಕೇವಲ ₹60,000 ಒಳಗಿನ ಖರ್ಚಿನಲ್ಲಿ ನೀವು ಸುತ್ತಾಡಬಹುದಾದ 10 ಅದ್ಭುತ ದೇಶಗಳ ಮಾಹಿತಿ ಇಲ್ಲಿದೆ. ನೇಪಾಳ, ಶ್ರೀಲಂಕಾದಿಂದ ಹಿಡಿದು ಥೈಲ್ಯಾಂಡ್, ವಿಯೆಟ್ನಾಂವರೆಗೆ ಈ ದೇಶಗಳು ಕಡಿಮೆ ಖರ್ಚು ಸಾಕು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq1trbj2w58ev43prq3tpm49,imgname-cheapest-international-trips-from-india-logo-1777104334402.jpg" type="image/jpeg" height="390" width="690"/>
            <content:encoded><![CDATA[&lt;p&gt;International trips: ಬೇಸಿಗೆಯಲ್ಲಿ ವಿದೇಶ ಪ್ರವಾಸಕ್ಕೆ ಬಜೆಟ್ ಚಿಂತೆಯೇ? ಚಿಂತೆ ಬಿಡಿ. ಭಾರತದಿಂದ ಕೇವಲ ₹60,000 ಒಳಗಿನ ಖರ್ಚಿನಲ್ಲಿ ನೀವು ಸುತ್ತಾಡಬಹುದಾದ 10 ಅದ್ಭುತ ದೇಶಗಳ ಮಾಹಿತಿ ಇಲ್ಲಿದೆ. ನೇಪಾಳ, ಶ್ರೀಲಂಕಾದಿಂದ ಹಿಡಿದು ಥೈಲ್ಯಾಂಡ್, ವಿಯೆಟ್ನಾಂವರೆಗೆ ಈ ದೇಶಗಳು ಕಡಿಮೆ ಖರ್ಚು ಸಾಕು.&amp;nbsp;&lt;/p&gt;&lt;img&gt;&lt;p&gt;ವಿದೇಶ ಪ್ರವಾಸಕ್ಕೆ ಹೋಗಬೇಕೆಂಬ ಕನಸು ಇದೆಯಾ, ಆದರೆ ಬಜೆಟ್ ಬಗ್ಗೆ ಚಿಂತೆಯಾ? ಒಳ್ಳೆಯ ಸುದ್ದಿ ಏನೆಂದರೆ, ಭಾರತದಿಂದ ವಿದೇಶಕ್ಕೆ ಹೋಗಲು ನೀವು ಲಕ್ಷಗಟ್ಟಲೆ ಖರ್ಚು ಮಾಡಬೇಕಿಲ್ಲ.&amp;nbsp;&lt;/p&gt;&lt;p&gt;ಸ್ಮಾರ್ಟ್ ಪ್ಲಾನಿಂಗ್, ಮುಂಚಿತವಾಗಿ ಫ್ಲೈಟ್ ಬುಕಿಂಗ್ ಮತ್ತು ಬಜೆಟ್ ಸ್ನೇಹಿ ವಸತಿ ಆಯ್ಕೆಗಳೊಂದಿಗೆ, ₹60,000 ಒಳಗಿನ ಖರ್ಚಿನಲ್ಲಿ ಹಲವು ಸುಂದರ ದೇಶಗಳನ್ನು ಆರಾಮವಾಗಿ ಸುತ್ತಾಡಬಹುದು.&amp;nbsp;&lt;/p&gt;&lt;p&gt;ಬೀಚ್, ದ್ವೀಪಗಳಿಂದ ಹಿಡಿದು ಪರ್ವತಗಳು ಮತ್ತು ಸಾಂಸ್ಕೃತಿಕ ನಗರಗಳವರೆಗೆ, ಈ ಸ್ಥಳಗಳು ನಿಮ್ಮ ಜೇಬಿಗೆ ಕತ್ತರಿ ಹಾಕದೆ ಮರೆಯಲಾಗದ ಅನುಭವಗಳನ್ನು ನೀಡುತ್ತವೆ.&lt;/p&gt;&lt;img&gt;ಭಾರತೀಯರಿಗೆ ಅತ್ಯಂತ ಕಡಿಮೆ ಖರ್ಚಿನ ವಿದೇಶಿ ತಾಣ ನೇಪಾಳ. ಇಲ್ಲಿಗೆ ಹೋಗಲು ವೀಸಾ ಅಗತ್ಯವಿಲ್ಲ, ಹಾಗಾಗಿ ಇದು ಸಣ್ಣ ಪ್ರವಾಸಕ್ಕೆ ಹೇಳಿ ಮಾಡಿಸಿದ್ದು. ಕಠ್ಮಂಡುವಿನ ದೇವಾಲಯಗಳು, ಪೋಖರಾದ ಸರೋವರಗಳು ಮತ್ತು ಹಿಮಾಲಯದ ಅದ್ಭುತ ದೃಶ್ಯಗಳನ್ನು ನೀವು ಇಲ್ಲಿ ನೋಡಬಹುದು. ಅಂದಾಜು ಬಜೆಟ್: ₹20,000&ndash;₹35,000.&lt;img&gt;ಶ್ರೀಲಂಕಾವು ಬೀಚ್&zwnj;ಗಳು, ವನ್ಯಜೀವಿಗಳು ಮತ್ತು ಪಾರಂಪರಿಕ ತಾಣಗಳ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ. ಇಲ್ಲಿ ನೀವು ಕೊಲಂಬೊ, ಕ್ಯಾಂಡಿ, ಎಲ್ಲಾ ಮತ್ತು ಸುಂದರವಾದ ಚಹಾ ತೋಟಗಳಿಗೆ ಭೇಟಿ ನೀಡಬಹುದು. ಅಂದಾಜು ಬಜೆಟ್: ₹25,000&ndash;₹45,000.&lt;img&gt;ಥೈಲ್ಯಾಂಡ್ ಸಾಹಸ ಮತ್ತು ವಿಶ್ರಾಂತಿ ಎರಡಕ್ಕೂ ಸೂಕ್ತವಾದ ಸ್ಥಳ. ಇಲ್ಲಿ ನೀವು ಬ್ಯಾಂಕಾಕ್&zwnj;ನ ನೈಟ್&zwnj;ಲೈಫ್, ಫುಕೆಟ್&zwnj;ನ ಬೀಚ್&zwnj;ಗಳು ಮತ್ತು ಕ್ರಾಬಿ ದ್ವೀಪಗಳನ್ನು ಎಂಜಾಯ್ ಮಾಡಬಹುದು. ಅಂದಾಜು ಬಜೆಟ್: ₹40,000&ndash;₹60,000.&lt;img&gt;ವಿಯೆಟ್ನಾಂ ತನ್ನ ನೈಸರ್ಗಿಕ ಸೌಂದರ್ಯ ಮತ್ತು ಕಡಿಮೆ ಪ್ರಯಾಣದ ವೆಚ್ಚಕ್ಕೆ ಹೆಸರುವಾಸಿಯಾಗಿದೆ. ಹಾ ಲಾಂಗ್ ಬೇ ಕ್ರೂಸ್&zwnj;ಗಳು, ಹನೋಯಿ ಬೀದಿಗಳು ಮತ್ತು ಹೋಯಿ ಆನ್&zwnj;ನ ಆಕರ್ಷಣೆಗಳು ಇಲ್ಲಿ ನೋಡಲೇಬೇಕಾದ ಸ್ಥಳಗಳು. ಅಂದಾಜು ಬಜೆಟ್: ₹45,000&ndash;₹60,000.&lt;img&gt;ಮಲೇಷ್ಯಾವು ನಗರ ಜೀವನ ಮತ್ತು ದ್ವೀಪಗಳ ಮೇಲಿನ ವಿಶ್ರಾಂತಿಯ ಉತ್ತಮ ಮಿಶ್ರಣವನ್ನು ನೀಡುತ್ತದೆ. ಕೌಲಾಲಂಪುರ್, ಲಂಕಾವಿ ಮತ್ತು ಪೆನಾಂಗ್ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಅಂದಾಜು ಬಜೆಟ್: ₹40,000&ndash;₹60,000.&lt;img&gt;ಬಾಲಿ ಬೀಚ್&zwnj;ಗಳು, ದೇವಾಲಯಗಳು ಮತ್ತು ಸುಂದರವಾದ ಭತ್ತದ ಗದ್ದೆಗಳಿಗೆ ಹೆಸರುವಾಸಿಯಾಗಿದೆ. ಇದು ನವವಿವಾಹಿತರಿಗೆ ಮತ್ತು ವಿರಾಮ ಪ್ರವಾಸಿಗರಿಗೆ ಸೂಕ್ತವಾದ ಸ್ಥಳವಾಗಿದೆ. ಅಂದಾಜು ಬಜೆಟ್: ₹45,000&ndash;₹60,000.&lt;img&gt;ಬಾಕು ನಗರವು ಆಧುನಿಕ ವಾಸ್ತುಶಿಲ್ಪವನ್ನು ಹಳೆಯ ಕಾಲದ ಆಕರ್ಷಣೆಯೊಂದಿಗೆ ಸಂಯೋಜಿಸುತ್ತದೆ. ಸಮೀಪದಲ್ಲಿರುವ ಗಬಾಲಾದಂತಹ ಪರ್ವತಗಳು ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅಂದಾಜು ಬಜೆಟ್: ₹50,000&ndash;₹60,000.&lt;img&gt;ಜಾರ್ಜಿಯಾ ಭಾರತೀಯ ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಟಿಬಿಲಿಸಿ, ಕಜ್ಬೆಗಿ ಮತ್ತು ವೈನ್ ಪ್ರದೇಶಗಳು ಸುಂದರವಾದ ಅನುಭವಗಳನ್ನು ನೀಡುತ್ತವೆ. ಅಂದಾಜು ಬಜೆಟ್: ₹50,000&ndash;₹60,000.&lt;img&gt;ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಣ್ಣ ರಜೆ ಕಳೆಯಲು ಇದು ಸೂಕ್ತವಾಗಿದೆ. ಇಲ್ಲಿ ನೀವು ಸೆಂಟೋಸಾ ದ್ವೀಪ, ಮರೀನಾ ಬೇ ಸ್ಯಾಂಡ್ಸ್ ಮತ್ತು ಯೂನಿವರ್ಸಲ್ ಸ್ಟುಡಿಯೋಸ್&zwnj;ಗೆ ಭೇಟಿ ನೀಡಬಹುದು. ಅಂದಾಜು ಬಜೆಟ್: ₹45,000&ndash;₹60,000.&lt;img&gt;ಸ್ಮಾರ್ಟ್ ಪ್ಲಾನಿಂಗ್ ಮಾಡಿದರೆ, ದುಬೈ ಪ್ರವಾಸವನ್ನು ಕೂಡ ₹60 ಸಾವಿರದೊಳಗೆ ಮುಗಿಸಬಹುದು. ಇಲ್ಲಿ ನೀವು ಡಸರ್ಟ್ ಸಫಾರಿ, ಶಾಪಿಂಗ್ ಮಾಲ್&zwnj;ಗಳು ಮತ್ತು ಗಗನಚುಂಬಿ ಕಟ್ಟಡಗಳನ್ನು ಆನಂದಿಸಬಹುದು. ಅಂದಾಜು ಬಜೆಟ್: ₹45,000&ndash;₹60,000.&lt;img&gt;&bull; ಫ್ಲೈಟ್&zwnj;ಗಳನ್ನು 1-2 ತಿಂಗಳು ಮುಂಚಿತವಾಗಿ ಬುಕ್ ಮಾಡಿ. &bull; ಬಜೆಟ್ ಹೋಟೆಲ್&zwnj;ಗಳು ಅಥವಾ ಹಾಸ್ಟೆಲ್&zwnj;ಗಳನ್ನು ಆಯ್ಕೆಮಾಡಿ. &bull; ಕಡಿಮೆ ದರಗಳಿಗಾಗಿ ಆಫ್-ಸೀಸನ್&zwnj;ನಲ್ಲಿ ಪ್ರಯಾಣಿಸಿ. &bull; ವೀಸಾ-ಮುಕ್ತ ಅಥವಾ ಇ-ವೀಸಾ ದೇಶಗಳಿಗೆ ಆದ್ಯತೆ ನೀಡಿ. &bull; ಟ್ಯಾಕ್ಸಿಗಳ ಬದಲು ಸಾರ್ವಜನಿಕ ಸಾರಿಗೆಯನ್ನು ಬಳಸಿ.]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/travel/top-10-budget-international-destinations-places-from-india-for-summer-under-60000-1uy6mgf"/>
        </item>
        <item>
            <title><![CDATA[ಗರಂ ಮಸಾಲದಿಂದ ಆದ ಎಡವಟ್ಟು; 10 ಲಕ್ಷ ರೂಪಾಯಿ ಪರಿಹಾರ ಪಡೆದ ಯುವಕ; ಅಂಥದ್ದೇನಾಯ್ತು?]]></title>
            <link>https://kannada.asianetnews.com/gallery/viral/bhopal-airport-incident-a-man-got-10-lakh-rupees-compensation-for-garam-masala-3wg402g</link>
            <guid isPermaLink="true">https://kannada.asianetnews.com/gallery/viral/bhopal-airport-incident-a-man-got-10-lakh-rupees-compensation-for-garam-masala-3wg402g</guid>
            <pubDate>Fri, 22 May 2026 17:47:42 +0530</pubDate>
            <description><![CDATA[&lt;p&gt;Why Indian spices trigger airport drug alarms: ಏರ್&zwnj;ಪೋರ್ಟ್&zwnj;ನಲ್ಲಿ ಮಾಡಿದ ಎಡವಟ್ಟಿನಿಂದಾಗಿ ಉದ್ಯಮಿಯೊಬ್ಬ 57 ದಿನಗಳ ಕಾಲ ಜೈಲಿನಲ್ಲಿ ಇರುವ ಹಾಗೆ ಆಯ್ತು. ಇದಕ್ಕೆಲ್ಲ ಕಾರಣ ಗರಂ ಮಸಾಲ. ಹಾಗಿದ್ದರೆ ನಿಜಕ್ಕೂ ಏನಾಯ್ತು? ಪರಿಹಾರ ಸಿಕ್ಕಿತು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2kz9m1qqky9n7ypcdfez42z,imgname-mixcollage-14-aug-2025-03-11-pm-3096-1755164495927.jpg" type="image/jpeg" height="390" width="690"/>
            <content:encoded><![CDATA[&lt;p&gt;Why Indian spices trigger airport drug alarms: ಏರ್&zwnj;ಪೋರ್ಟ್&zwnj;ನಲ್ಲಿ ಮಾಡಿದ ಎಡವಟ್ಟಿನಿಂದಾಗಿ ಉದ್ಯಮಿಯೊಬ್ಬ 57 ದಿನಗಳ ಕಾಲ ಜೈಲಿನಲ್ಲಿ ಇರುವ ಹಾಗೆ ಆಯ್ತು. ಇದಕ್ಕೆಲ್ಲ ಕಾರಣ ಗರಂ ಮಸಾಲ. ಹಾಗಿದ್ದರೆ ನಿಜಕ್ಕೂ ಏನಾಯ್ತು? ಪರಿಹಾರ ಸಿಕ್ಕಿತು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;img&gt;&lt;p&gt;Bhopal airport garam masala case: ಉದ್ಯಮಿ ಅಜಯ್&zwnj; ಸಿಂಗ್&zwnj; ಎನ್ನುವವರು ಮೇ 7ರಂದು ಮಲೇಷಿಯಾಕ್ಕೆ ಹೋಗುವವರಿದ್ದರು. ಭೋಪಾಲ್&zwnj;ನಿಂದ ದೆಹಲಿಗೆ ಪ್ರಯಾಣ ಮಾಡುತ್ತಿದ್ದರು. ಭೋಪಾಲ್&zwnj; ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಟ್ರೇಸ್&zwnj; ಡಿಟೆಕ್ಟರ್&zwnj; ಯಂತ್ರವು ನಮ್ಮ ವಸ್ತುಗಳನ್ನು ಪರಿಶೀಲನೆ ಮಾಡುತ್ತದೆ. ಅಂತೆಯೇ ಅಜಯ್&zwnj; ಸಿಂಗ್&zwnj; ಅವರ ಬ್ಯಾಗ್&zwnj;ನಲ್ಲಿ ಆಮ್ಚೂರ್&zwnj; ಗರಂ ಮಸಾಲಾ ಬ್ರ್ಯಾಂಡ್ ಪ್ಯಾಕೇಟ್&zwnj; ಇತ್ತು. ಇದರಲ್ಲಿ ಹೆರಾಯಿನ್&zwnj;, ಎಂಡಿಇಎ ಇದೆ ಎಂದು ಯಂತ್ರ ಹೇಳಿತ್ತು. ಹೀಗಾಗಿ ಅಜಯ್&zwnj; ಸಿಂಗ್&zwnj; ಅವರನ್ನು ಬಂಧಿಸಲಾಗಿತ್ತು. ಆಮೇಲೆ ಎನ್&zwnj;ಡಿಪಿಎಸ್&zwnj; ಕಾಯ್ದೆಯಡಿ ಸೆಕ್ಷನ್&zwnj; 8/21 ಅಡಿಯಲ್ಲಿ ಎಫ್&zwnj;ಐಆರ್&zwnj; ದಾಖಲು ಮಾಡಲಾಗಿತ್ತು. ಅವರು 57 ದಿನಗಳ ಕಾಲ ಜೈಲಿನಲ್ಲಿದ್ದರು. 2010ರಲ್ಲಿ ಅವರ ಬಳಿ ಬಾಂಡ್&zwnj; ಬರೆಸಿಕೊಂಡು ಬಿಟ್ಟರು.&lt;/p&gt;&lt;img&gt;&lt;p&gt;ಅದಾದ ಬಳಿಕ ಈ ವಸ್ತುಗಳನ್ನು ಮತ್ತೆ ಪರಿಶೀಲನೆ ಮಾಡಿದಾಗ ಮಾದಕ ದ್ರವ್ಯ ಇಲ್ಲ ಎಂದು ಗೊತ್ತಾಯಿತು. ಈ ಪ್ರಕರಣ ಖುಲಾಸೆಯಾದರೂ ಕೂಡ ಅಜಯ್&zwnj; ಮಾತ್ರ ಜೈಲಿನಲ್ಲಿ ಉಳಿಯುವ ಹಾಗೆ ಆಗಿತ್ತು.&lt;/p&gt;&lt;img&gt;&lt;p&gt;ಇದಕ್ಕಾಗಿ ಅಜಯ್&zwnj; ಸಿಂಗ್&zwnj; ಅವರು ರಿಟ್&zwnj; ಅರ್ಜಿ ಸಲ್ಲಿಕೆ ಮಾಡಿದ್ದರು. ಇದಕ್ಕಾಗಿ 10 ಕೋಟಿ ರೂಪಾಯಿ ಪರಿಹಾರ ಕೊಡಿ ಎಂದರು. ಅಧಿಕಾರಿಗಳ ಬೇಜಾವಬ್ದಾರಿಯಿಂದಾಗಿ ಜೈಲಿಗೆ ಹಾಕಲಾಗಿದೆ ಎಂದು ಹೇಳಲಾಗಿತ್ತು. ಇದರಿಂದ ನನಗೆ, ನನ್ನ ಮನೆಯವರಿಗೆ ಮಾನಸಿಕ ನೋವು ಕೂಡ ಆಗಿದೆ ಎಂದು ಹೇಳಿದ್ದರು.&lt;/p&gt;&lt;img&gt;&lt;p&gt;ಅಜಯ್&zwnj; ಸಿಂಗ್&zwnj; ಅವರಿಗೆ 10 ಲಕ್ಷ ರೂಪಾಯಿ ಪರಿಹಾರ ಕೊಡಿ ಎಂದು ಕೋರ್ಟ್&zwnj; ಹೇಳಿದೆ. ಒಟ್ಟಿನಲ್ಲಿ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ಸುಪ್ರೀಂ ಕೋರ್ಟ್&zwnj; ಹೇಳಿದೆ.&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/viral/bhopal-airport-incident-a-man-got-10-lakh-rupees-compensation-for-garam-masala-3wg402g"/>
        </item>
        <item>
            <title><![CDATA[40 ಮೀಟರ್ ಮೊಬೈಲ್ ಟವರ್ ಮಾಯ! ಬಿಹಾರ ಪೊಲೀಸರಿಗೆ ತಲೆನೋವಾದ ವಿಚಿತ್ರ ಕೇಸ್]]></title>
            <link>https://kannada.asianetnews.com/india-news/how-did-thieves-steal-a-whole-mobile-tower-in-bihar-story/articleshow-6pahu22</link>
            <guid isPermaLink="true">https://kannada.asianetnews.com/india-news/how-did-thieves-steal-a-whole-mobile-tower-in-bihar-story/articleshow-6pahu22</guid>
            <pubDate>Sun, 14 Jun 2026 10:29:09 +0530</pubDate>
            <description><![CDATA[&lt;p&gt;How did thieves steal a whole mobile tower in Bihar: ಏನೇನೋ ಕಳ್ಳತನ ಆಗಿದ್ದನ್ನು ನೋಡಿರುತ್ತೀರಿ, ಎಷ್ಟೋ ಬಾರಿ ಎಟಿಎಂ ಮಶಿನ್&zwnj; ಕದಿಯಲು ಹೋಗಿ, ಪಾಸ್&zwnj;ಬುಕ್&zwnj; ಪ್ರಿಂಟರ್&zwnj; ಕದ್ದ ಉದಾಹರಣೆ ಕೂಡ ಇದೆ. ಈ ಕಳ್ಳರು ಮಾತ್ರ ಈಗ ಮೊಬೈಲ್&zwnj; ಟವರ್&zwnj; ಕದ್ದಿದ್ದಾರೆ, ಹೌದ್ರೀ, ನೀವು ನಂಬಲೇಬೇಕು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv27tdc00m9hg33fkb1ydmcn,imgname-new-project---2026-06-14t102002.691-1781413000576.jpg" type="image/jpeg" height="390" width="690"/>
            <content:encoded><![CDATA[&lt;p&gt;Before and after mobile tower theft Bihar: ಎಂಥೆಂಥದೋ ಕಳ್ಳತನದ ವರದಿಗಳನ್ನು ಕೇಳಿರುತ್ತೀರಿ. ಇದಂತೂ ನೆಕ್ಟ್ಸ್&zwnj; ಲೆವೆಲ್&zwnj; ಬಿಡಿ. ಮೊಬೈಲ್&zwnj; ಕದಿಯೋದು ನೋಡಿರಬಹುದು, ಈಗ 40 ಅಡಿ ಎತ್ತರದ ಮೊಬೈಲ್&zwnj; ಟವರ್&zwnj; ಕದ್ದಿದ್ದಾರೆ. ಈ ರೀತಿ ಕಳ್ಳತನ ಸಿನಿಮಾ, ವೆಬ್&zwnj; ಸಿರೀಸ್&zwnj;ನಲ್ಲಿಯೂ ಆಗಿರೋದಿಲ್ಲ. ಬಿಹಾರದ ಬಕ್ಸರ್ ಜಿಲ್ಲೆಯ ಡುಮ್ರಾಂವ್ ನಗರದಲ್ಲಿ ಇಡೀ ಮೊಬೈಲ್ ಟವರ್ ಇಲ್ಲವಾಗಿದೆ. ಅಕ್ಷರಶಃ ಕಳ್ಳರು ಇದನ್ನು ಮಾಯ ಮಾಡಿದ್ದಾರೆ.&lt;/p&gt;&lt;h2&gt;ಟವರ್&zwnj; ಇಲ್ಲ ಅಂತ ಹೇಗೆ ಗೊತ್ತಾಯ್ತು?&lt;/h2&gt;&lt;p&gt;ಈ ಟವರ್&zwnj; 40 ಮೀಟರ್ (ಸುಮಾರು 130 ಅಡಿ) ಎತ್ತರವಿದೆ. ಇದರಲ್ಲಿ ಡೀಸೆಲ್ ಜನರೇಟರ್, ಇತರ ಬೆಲೆಬಾಳುವ ಉಪಕರಣಗಳೂ ಕಣ್ಮರೆಯಾಗಿವೆ. 'ಜಿಟಿಎಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್' ಕಂಪನಿಯ ಅಧಿಕಾರಿಗಳು ಈ ಜಾಗವನ್ನು ಪರಿಶೀಲನೆ ಮಾಡಲು ಬಂದಾಗಲೇ ಈ ಟವರ್&zwnj; ಇಲ್ಲ ಎನ್ನೋದು ಗೊತ್ತಾಗಿದೆ. ಕೆಲವು ವರ್ಷಗಳಿಂದ ಈ ಟವರ್&zwnj; ಬಳಕೆಯಾಗಿಲ್ಲ, ಈಗ ಅಧಿಕಾರಿಗಳು ಆ ಜಾಗಕ್ಕೆ ಬಂದಿದ್ದಾರೆ. ಆಗ ಖಾಲಿ ಜಾಗ ಬಿಟ್ಟರೆ ಬೇರೆ ಏನೂ ಇರಲಿಲ್ಲ. ಆ ಕಂಪನಿಯ ಅಧಿಕಾರಿ ಬೈಜನಾಥ್ ಓಝಾ ತಕ್ಷಣವೇ ಡುಮ್ರಾಂವ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.&lt;/p&gt;&lt;h2&gt;ಜಾಗದ ಮಾಲೀಕ ಏನಂತಾರೆ?&lt;/h2&gt;&lt;p&gt;ಹರಿನಾಥ್ ಯಾದವ್ ಎನ್ನುವವರ ಜಾಗದಲ್ಲಿ ಈ ಟವರ್ ನಿರ್ಮಾಣವಾಗಿದೆ. 2022ಕ್ಕೆ ಕಂಪೆನಿ ಜೊತೆಗಿನ ಲೀಸ್&zwnj; ಒಪ್ಪಂದ ಮುಗಿದಿತ್ತು. 2017ರಿಂದ ಅವರಿಗೆ ಬಾಡಿಗೆ ಹಣ ಕೂಡ ಸಿಕ್ಕಿಲ್ಲ. ನನಗೂ ಈ ಕಳ್ಳತನಕ್ಕೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ. ಮೊಬೈಲ್ ಟವರ್&zwnj;ಗಳಿಂದ ಬ್ಯಾಟರಿ, ಕೇಬಲ್ ಕದಿಯುತ್ತಾರೆ. ಆದರೆ ಇಡೀ ಟವರ್ ಕಳ್ಳತನ ಆಗಿರೋದು ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸಿದೆ.&lt;/p&gt;&lt;h2&gt;ಇದು ಸುಲಭ ಇರಲಿಲ್ಲ!&lt;/h2&gt;&lt;p&gt;40 ಮೀಟರ್ ಎತ್ತರದ ಟವರ್&zwnj; ಬಿಚ್ಚಲು ದೊಡ್ಡ ದೊಡ್ಡ ಯಂತ್ರೋಪಕರಣ ಬೇಕು, ಟೆಕ್ನಿಕಲೀ ಗೊತ್ತಿರಬೇಕು, ಒಂದಿಷ್ಟು ಕೆಲಸಗಾರರು ಕೂಡ ಬೇಕು. ಹೀಗಾಗಿ ಒಂದು ಗ್ಯಾಂಗ್&zwnj; ಈ ರೀತಿ ಮಾಡಿರಬಹುದು ಎನ್ನಲಾಗಿದೆ. ತುಂಬ ದಿನಗಳಿಂದ ಕೆಲಸ ಮಾಡಿ ಈ ಕಳ್ಳತನ ಆಗಿದೆ ಎನ್ನಲಾಗಿದೆ. ಇಷ್ಟು ದೊಡ್ಡ ಕಳ್ಳತನ ಆಗುವಾಗ ಯಾರಿಗೂ ಹೇಗೆ ಗೊತ್ತಾಗಿಲ್ಲ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ.&lt;/p&gt;&lt;h2&gt;ಸೇತುವೆ ಕದ್ದಿದ್ದರು&lt;/h2&gt;&lt;p&gt;2022 ರಲ್ಲಿ ರೋಹ್ತಾಸ್ ಜಿಲ್ಲೆಯಲ್ಲಿ ಸಾರ್ವಜನಿಕರ ಮುಂದೆಯೇ ಸರ್ಕಾರಿ ಅಧಿಕಾರಿಗಳು ಎಂದು ಸುಳ್ಳು ಹೇಳಿಕೊಂಡು, 60 ಅಡಿ ಉದ್ದದ, 500 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಬಿಚ್ಚಿ ಕದ್ದುಕೊಂಡು ಹೋಗಿದ್ದರು. ಇದಕ್ಕೆ ಅವರು ಮೂರು ದಿನಗಳ ಕಾಲ ಗ್ಯಾಸ್ ಕಟರ್, ಜೆಸಿಬಿ ಯಂತ್ರಗಳನ್ನು ಬಳಸಿದ್ದರು.&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/india-news/how-did-thieves-steal-a-whole-mobile-tower-in-bihar-story/articleshow-6pahu22"/>
        </item>
        <item>
            <title><![CDATA[Liquor Price Hike: ಕರ್ನಾಟಕದಲ್ಲಿ ಮೇ 1 ರಿಂದ ಮದ್ಯದ ದರ ಏರಿಕೆ: ಯಾವ ಬ್ರ್ಯಾಂಡ್‌ಗೆ ಎಷ್ಟು?]]></title>
            <link>https://kannada.asianetnews.com/gallery/business/alcohol-karnataka-liquor-prices-to-increase-from-may-1-97egp11</link>
            <guid isPermaLink="true">https://kannada.asianetnews.com/gallery/business/alcohol-karnataka-liquor-prices-to-increase-from-may-1-97egp11</guid>
            <pubDate>Sun, 26 Apr 2026 17:48:48 +0530</pubDate>
            <description><![CDATA[ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ಹೊಸ ತೆರಿಗೆ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಮೇ 1 ರಿಂದ ಈ ಬದಲಾವಣೆ ಜಾರಿಗೆ ಬರಲಿದ್ದು, ಮದ್ಯದ ದರ ಶೇ. 20ರಷ್ಟು ಹೆಚ್ಚಾಗಲಿದೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇದು 5ನೇ ಬಾರಿಯ ದರ ಏರಿಕೆಯಾಗಿದ್ದು, ಮದ್ಯ ಪ್ರಿಯರಿಗೆ ಆಘಾತ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfcwezttavbd4p51deb5mch2,imgname-liquor-ban-1768885288794.jpg" type="image/jpeg" height="390" width="690"/>
            <content:encoded><![CDATA[ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ಹೊಸ ತೆರಿಗೆ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಮೇ 1 ರಿಂದ ಈ ಬದಲಾವಣೆ ಜಾರಿಗೆ ಬರಲಿದ್ದು, ಮದ್ಯದ ದರ ಶೇ. 20ರಷ್ಟು ಹೆಚ್ಚಾಗಲಿದೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇದು 5ನೇ ಬಾರಿಯ ದರ ಏರಿಕೆಯಾಗಿದ್ದು, ಮದ್ಯ ಪ್ರಿಯರಿಗೆ ಆಘಾತ ನೀಡಿದೆ.&lt;img&gt;ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಗೃಹಲಕ್ಷ್ಮಿ ಯೋಜನೆಯಡಿ 1.10 ಕೋಟಿ ಕುಟುಂಬ ಯಜಮಾನಿಯರಿಗೆ ಮಾಸಿಕ 2000 ರೂ. ನೀಡಲಾಗುತ್ತಿದೆ. ಜೊತೆಗೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಾರಿಯಲ್ಲಿವೆ. ಇದರಿಂದಾಗಿ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದ್ದು, ನೀರು ಮತ್ತು ವಿದ್ಯುತ್ ಶುಲ್ಕ ಏರಿಕೆ ನಂತರ ಇದೀಗ ಮದ್ಯದ ದರವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.&lt;img&gt;ಕಳೆದ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ ಪದ್ಧತಿಯನ್ನು ಘೋಷಿಸಿದ್ದರು. ದೇಶದಲ್ಲೇ ಮೊದಲ ಬಾರಿಗೆ, ಆಲ್ಕೋಹಾಲ್ ಅಂಶವನ್ನು ಆಧರಿಸಿ ಮದ್ಯದ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಹೇಳಲಾಗಿತ್ತು.&lt;img&gt;ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಬಕಾರಿ ಸುಂಕವನ್ನು ತಿದ್ದುಪಡಿ ಮಾಡಲು ನಿರ್ಧರಿಸಲಾಯಿತು. ಈ ಕುರಿತು ರಾಜ್ಯ ಸರ್ಕಾರವು ಮೇ 18 ರಂದು ಅಧಿಸೂಚನೆ ಹೊರಡಿಸಿದೆ. ಅದರಂತೆ, ತಿದ್ದುಪಡಿ ಮಾಡಿದ ತೆರಿಗೆಯು ಮೇ 1 ರಿಂದ ರಾಜ್ಯದಾದ್ಯಂತ ಜಾರಿಗೆ ಬರಲಿದೆ. ಇದರಿಂದ ಮದ್ಯದ ದರ ಶೇ. 20ರಷ್ಟು ಏರಿಕೆಯಾಗಲಿದೆ. ಕಡಿಮೆ ಬೆಲೆಯ ಮದ್ಯದಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿರುವುದರಿಂದ, ಅವುಗಳ ಬೆಲೆಯೇ ಹೆಚ್ಚಾಗಿ ಏರಿಕೆಯಾಗಲಿದೆ. ಇದು ಮದ್ಯ ಪ್ರಿಯರಲ್ಲಿ ಆಘಾತ ಮೂಡಿಸಿದೆ.&lt;img&gt;ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್&zwnj;ಗಳ ಬೆಲೆಯಲ್ಲಿ ಸುಮಾರು 10 ರಿಂದ 25 ರೂಪಾಯಿ ಏರಿಕೆಯಾಗುವ ನಿರೀಕ್ಷೆಯಿದೆ. ಒರಿಜಿನಲ್ ಚಾಯ್ಸ್ (Original Choice) 180 ml ಬಾಟಲಿ ಈಗ 95 ರೂ. ಇದ್ದು, ಹೊಸ ಬೆಲೆ ಸುಮಾರು 115 ರೂ. ಆಗಲಿದೆ. ಅದೇ ರೀತಿ, ಓಲ್ಡ್ ಟ್ಯಾವರ್ನ್ (Old Tavern) 180 ml ಬಾಟಲಿಯ ಈಗಿನ ಬೆಲೆ 80 ರೂ. ಇದ್ದು, ಹೊಸ ಬೆಲೆ 100 ರೂ. ಆಗಲಿದೆ. ಬಡವರಲ್ಲಿ ಜನಪ್ರಿಯವಾಗಿರುವ ರಾಜಾ ವಿಸ್ಕಿಯ (Raja Whisky) 180 ml ಬಾಟಲಿಯ ಹೊಸ ಬೆಲೆ 95 ರೂ. ಆಗಲಿದೆ, ಇದರ ಈಗಿನ ಬೆಲೆ 70 ರೂ. ಮಾತ್ರ. ಹೇವರ್ಡ್ಸ್ (Haywards) ಈಗ 100 ರೂ. ಇದ್ದು, ಹೊಸ ಬೆಲೆ 120 ರೂ. ಆಗಲಿದೆ.&lt;img&gt;ಕಳೆದ ವರ್ಷ ಮೇ ತಿಂಗಳಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿತ್ತು. ಆಗ ಭಾರತೀಯ ನಿರ್ಮಿತ ಮದ್ಯದ ಬೆಲೆ 10 ರಿಂದ 45 ರೂ.ವರೆಗೆ ಏರಿಕೆಯಾಗಿತ್ತು. ಇದೀಗ ಮತ್ತೆ ಮದ್ಯದ ದರವನ್ನು ಹೆಚ್ಚಿಸಲಾಗಿದೆ. 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಈವರೆಗೆ ನಾಲ್ಕು ಬಾರಿ ಮದ್ಯದ ದರವನ್ನು ಹೆಚ್ಚಿಸಿದ್ದು, ಇದೀಗ ಐದನೇ ಬಾರಿಗೆ ದರ ಏರಿಕೆ ಮಾಡಿರುವುದು ಮದ್ಯ ಪ್ರಿಯರಲ್ಲಿ ಆಘಾತ ಮೂಡಿಸಿದೆ.]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/alcohol-karnataka-liquor-prices-to-increase-from-may-1-97egp11"/>
        </item>
        <item>
            <title><![CDATA[ಸ್ಯಾಲರಿ ಚೆನ್ನಾಗಿದ್ರೂ ಸೇವಿಂಗ್ಸ್‌ ಮಾಡೋಕೆ ಆಗ್ತಿಲ್ವಾ? ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸೋ 5 ಗೋಲ್ಡನ್ ಫೈನಾನ್ಸ್ ಟಿಪ್ಸ್]]></title>
            <link>https://kannada.asianetnews.com/business/salary-saving-tips-5-personal-finance-rules-50-30-20-budget-lifestyle-creep-san/articleshow-9b4ukrg</link>
            <guid isPermaLink="true">https://kannada.asianetnews.com/business/salary-saving-tips-5-personal-finance-rules-50-30-20-budget-lifestyle-creep-san/articleshow-9b4ukrg</guid>
            <pubDate>Thu, 11 Jun 2026 22:54:37 +0530</pubDate>
            <description><![CDATA[&lt;p&gt;ಉತ್ತಮ ಸಂಬಳವಿದ್ದರೂ ತಿಂಗಳ ಕೊನೆಯಲ್ಲಿ ಹಣ ಉಳಿಸುವುದು ಅನೇಕರಿಗೆ ಸವಾಲಾಗಿದೆ. ಈ ಲೇಖನವು ಖರ್ಚುಗಳನ್ನು ನಿಯಂತ್ರಿಸಿ, ಉಳಿತಾಯ ಮತ್ತು ಹೂಡಿಕೆ ಮಾಡಲು ಸಹಾಯ ಮಾಡುವ 5 ಸರಳ ಫೈನಾನ್ಸ್ ನಿಯಮಗಳನ್ನು ವಿವರಿಸುತ್ತದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j43kgspwgedhtxhpzdktcne1,imgname-asianet-news---2024-07-31t104537.245.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.11): &lt;/strong&gt;ಅನೇಕ ಬಾರಿ ಉತ್ತಮ ಸಂಬಳವಿದ್ದರೂ ಸಹ ತಿಂಗಳ ಕೊನೆಯಲ್ಲಿ ಕೈಯಲ್ಲಿ ಯಾವುದೇ ಹಣ ಉಳಿಯುವುದಿಲ್ಲ ಎಂಬ ದೂರನ್ನು ಉದ್ಯೋಗಸ್ಥರು ಮಾಡುವುದನ್ನು ನಾವು ಕಾಣುತ್ತೇವೆ. ನಿಮ್ಮದೂ ಇದೇ ಸಮಸ್ಯೆಯಾಗಿದ್ದರೆ, ಈಗ ನಿಮ್ಮ ಆರ್ಥಿಕ ಹವ್ಯಾಸಗಳನ್ನು ಬದಲಾಯಿಸಿಕೊಳ್ಳುವ ಸಮಯ. ಸರಿಯಾದ ಬಜೆಟಿಂಗ್ ಮತ್ತು 5 ಸರಳ ಫೈನಾನ್ಸ್ ಟಿಪ್ಸ್ ಅನುಸರಿಸುವ ಮೂಲಕ ನೀವು ಪ್ರತಿ ತಿಂಗಳು ದೊಡ್ಡ ಮೊತ್ತದ ಉಳಿತಾಯ ಮತ್ತು ಸುರಕ್ಷಿತ ಹೂಡಿಕೆಯನ್ನು ಸುಲಭವಾಗಿ ಮಾಡಬಹುದು.&lt;/p&gt;&lt;p&gt;ಆದಾಯ ಹೆಚ್ಚಿದ್ದರೂ ಉಳಿತಾಯ ಶೂನ್ಯವಾಗಿರುವುದು ಇಂದಿನ ಜೀವನಶೈಲಿಯ ಒಂದು ದೊಡ್ಡ ಸಮಸ್ಯೆ. ಭವಿಷ್ಯದ ತುರ್ತು ಪರಿಸ್ಥಿತಿಗಳು ಮತ್ತು ಆರ್ಥಿಕ ಸ್ಥಿರತೆಗಾಗಿ ಹಣದ ನಿರ್ವಹಣೆ ಮಾಡುವುದು ಅತ್ಯಗತ್ಯ. ಇಂದು ನಾವು ನಿಮಗೆ 5 ಸರಳ ಫೈನಾನ್ಸ್ ನಿಯಮಗಳ ಬಗ್ಗೆ ತಿಳಿಸಿಕೊಡಲಿದ್ದೇವೆ, ಇವುಗಳ ಸಹಾಯದಿಂದ ನೀವು ಹೆಚ್ಚುತ್ತಿರುವ ವೆಚ್ಚಗಳನ್ನು ನಿಯಂತ್ರಿಸಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಬಹುದು. ಇಂದಿನ ಕಾಲದಲ್ಲಿ ಉತ್ತಮ ಸಂಬಳವಿದ್ದರೂ ತಿಂಗಳ ಕೊನೆಯಲ್ಲಿ ಏನನ್ನೂ ಉಳಿಸಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಅವರ ಸಂಪೂರ್ಣ ಸಂಬಳವು ಪ್ರತಿ ತಿಂಗಳು ಖರ್ಚುಗಳಿಗೇ ಮುಗಿದುಹೋಗುತ್ತದೆ. ಅದೇ ಸಮಯದಲ್ಲಿ, ಸಂಬಳ ಹೆಚ್ಚಾದಂತೆ ವೆಚ್ಚಗಳೂ ಹೆಚ್ಚಾಗತೊಡಗುತ್ತವೆ, ಇದರಿಂದಾಗಿ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ.&lt;/p&gt;&lt;p&gt;ಹಣಕಾಸು ತಜ್ಞರ ಪ್ರಕಾರ, ಶ್ರೀಮಂತರಾಗುವ ಹಾದಿಯು ಕೇವಲ ಹೆಚ್ಚು ಗಳಿಸುವುದರಿಂದ ಮಾತ್ರವಲ್ಲ, ಬದಲಿಗೆ ವಿವೇಚನೆಯಿಂದ ಖರ್ಚು ಮಾಡುವುದು ಮತ್ತು ನಿಯಮಿತವಾಗಿ ಹೂಡಿಕೆ ಮಾಡುವುದರಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆದಾಯದ ಜೊತೆಗೆ ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸಲು ನೀವು ಬಯಸಿದರೆ, ಇಂದು ನಾವು ನಿಮಗೆ ಉಳಿತಾಯಕ್ಕೆ ಸಹಾಯ ಮಾಡುವ 5 ಸರಳ ನಿಯಮಗಳ ಬಗ್ಗೆ ತಿಳಿಸಲಿದ್ದೇವೆ.&lt;/p&gt;&lt;h2&gt;&lt;strong&gt;ನಿಮ್ಮ ಜೀವನಶೈಲಿಯನ್ನು ತಕ್ಷಣವೇ ಹೆಚ್ಚಿಸಲು ಆತುರಪಡಬೇಡಿ&lt;/strong&gt;&lt;/h2&gt;&lt;p&gt;ಅನೇಕ ಬಾರಿ ಸಂಬಳ ಹೆಚ್ಚಾದ ತಕ್ಷಣ ಜನರು ದುಬಾರಿ ಮನೆ, ಹೊಸ ಫೋನ್, ಒಳ್ಳೆಯ ಕಾರು ಅಥವಾ ಹೆಚ್ಚುವರಿ ಸೌಕರ್ಯಗಳನ್ನು ಖರೀದಿಸಲು ಪ್ರಾರಂಭಿಸುತ್ತಾರೆ, ಇದನ್ನು 'ಲೈಫ್&zwnj;ಸ್ಟೈಲ್ ಕ್ರೀಪ್' (Lifestyle Creep) ಎಂದು ಕರೆಯಲಾಗುತ್ತದೆ. ಸಂಬಳ ಹೆಚ್ಚಳದ ಸಂಪೂರ್ಣ ಹಣವನ್ನು ಖರ್ಚು ಮಾಡುವ ಬದಲು, ಅದರ ಒಂದು ಭಾಗವನ್ನು ಹೂಡಿಕೆ ಮಾಡಿ. ಈ ಹವ್ಯಾಸವು ದೀರ್ಘಾವಧಿಯಲ್ಲಿ ದೊಡ್ಡ ಸಂಪತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಸಂಬಳ ಹೆಚ್ಚಾದಾಗ ನಿಮ್ಮ ವೆಚ್ಚಗಳನ್ನು ಮಿತಿಗೊಳಿಸಲು ಪ್ರಯತ್ನಿಸಿ.&lt;/p&gt;&lt;h2&gt;&lt;strong&gt;ಬಾಡಿಗೆಗೆ ಶೇಕಡಾ 30 ಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ&lt;/strong&gt;&lt;/h2&gt;&lt;p&gt;ಒಂದು ವೇಳೆ ನೀವು ಬಾಡಿಗೆ ಮನೆಯಲ್ಲಿದ್ದರೆ ಅಥವಾ ಗೃಹ ಸಾಲದ (Home Loan) ಇಎಂಐ ಪಾವತಿಸುತ್ತಿದ್ದರೆ, ಅದನ್ನು ನಿಮ್ಮ ಸಂಬಳದ 30% ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಿ. ಬಾಡಿಗೆ ಅಥವಾ ಇಎಂಐ ನಿಮ್ಮ ಕೈಗೆ ಸಿಗುವ ನಿವ್ವಳ ಸಂಬಳದ (Take-home salary) ಶೇಕಡಾ 30 ಕ್ಕಿಂತ ಹೆಚ್ಚಿರಬಾರದು.&lt;/p&gt;&lt;h2&gt;&lt;strong&gt;ಹೊಸ ಕಾರು ಖರೀದಿಸಲು ಬಜೆಟ್ ಯೋಜನೆ&lt;/strong&gt;&lt;/h2&gt;&lt;p&gt;ಅನೇಕ ಬಾರಿ ಜನರಿಗೆ ಹೊಸ ಕಾರು ಖರೀದಿಸುವುದು ಆಕರ್ಷಕವಾಗಿ ಕಾಣುತ್ತದೆ, ಆದರೆ ಅದರ ಮೌಲ್ಯವು ವೇಗವಾಗಿ ಕುಸಿಯುತ್ತದೆ. ಹೆಚ್ಚಿನ ಹೊಸ ಕಾರುಗಳ ಮೌಲ್ಯವು ಮೊದಲ ವರ್ಷದಲ್ಲೇ ಶೇಕಡಾ 20 ರಿಂದ ಶೇಕಡಾ 30 ರಷ್ಟು ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಉತ್ತಮ ಸ್ಥಿತಿಯಲ್ಲಿರುವ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ (Certified Second-hand) ಕಾರನ್ನು ಖರೀದಿಸುವುದು ಹೂಡಿಕೆಯ ದೃಷ್ಟಿಯಿಂದ ಹೆಚ್ಚು ಜಾಣತನದ ಆಯ್ಕೆ. ಇದರಿಂದ ನೀವು ದೊಡ್ಡ ಮೊತ್ತದ ಹಣವನ್ನು ಉಳಿಸಬಹುದು ಮತ್ತು ಆ ಹಣವನ್ನು ಬೇರೆಡೆ ಹೂಡಿಕೆ ಮಾಡಬಹುದು.&lt;/p&gt;&lt;h2&gt;&lt;strong&gt;ಬಜೆಟ್&zwnj;ಗಾಗಿ 50-30-20 ನಿಯಮ&lt;/strong&gt;&lt;/h2&gt;&lt;p&gt;ಮಾಸಿಕ ಬಜೆಟ್ ಸಿದ್ಧಪಡಿಸಿ ಮತ್ತು ಅದನ್ನು ಕಡ್ಡಾಯವಾಗಿ ಅನುಸರಿಸಿ. ಇದಕ್ಕಾಗಿ 50-30-20 ನಿಯಮವನ್ನು ಅಳವಡಿಸಿಕೊಳ್ಳಿ. ಬಾಡಿಗೆ, ರೇಷನ್, ಬಿಲ್&zwnj;ಗಳು ಮುಂತಾದ ಅಗತ್ಯ ವೆಚ್ಚಗಳಿಗಾಗಿ ಸಂಬಳದ ಶೇಕಡಾ 50 ರಷ್ಟು ಭಾಗವನ್ನು ಮೀಸಲಿಡಿ. ಶೇಕಡಾ 30 ರಷ್ಟು ಭಾಗವನ್ನು ನಿಮ್ಮ ಸ್ವಂತ ಆಸೆ ಹಾಗೂ ಇಷ್ಟದ ವೆಚ್ಚಗಳಿಗಾಗಿ ಇಟ್ಟುಕೊಳ್ಳಿ. ಅದೇ ಸಮಯದಲ್ಲಿ, ಉಳಿದ ಶೇಕಡಾ 20 ರಷ್ಟು ಭಾಗವನ್ನು ಕಡ್ಡಾಯವಾಗಿ ಹೂಡಿಕೆ ಮಾಡಿ.&lt;/p&gt;&lt;h2&gt;&lt;strong&gt;ಸಣ್ಣಪುಟ್ಟ ವೆಚ್ಚಗಳ ಮೇಲೆ ನಿಗಾ ಇರಲಿ&lt;/strong&gt;&lt;/h2&gt;&lt;p&gt;ಅನೇಕ ಬಾರಿ ಹಣವು ದೊಡ್ಡ ಖರೀದಿಯಿಂದಲ್ಲ, ಬದಲಿಗೆ ತಿಂಗಳ ಸಣ್ಣಪುಟ್ಟ ವೆಚ್ಚಗಳಿಂದ ಪೋಲಾಗುತ್ತದೆ. ಉದಾಹರಣೆಗೆ ಒಟಿಟಿ (OTT) ಸಬ್&zwnj;ಸ್ಕ್ರಿಪ್ಷನ್&zwnj;ಗಳು, ಫುಡ್ ಡೆಲಿವರಿ ಮೆಂಬರ್&zwnj;ಶಿಪ್&zwnj;ಗಳು, ಪ್ರೀಮಿಯಂ ಆ್ಯಪ್&zwnj;ಗಳು ಅಥವಾ ಇತರ ಅನಗತ್ಯ ವೆಚ್ಚಗಳು. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ಎಲ್ಲಾ ಸಬ್&zwnj;ಸ್ಕ್ರಿಪ್ಷನ್&zwnj;ಗಳು ಮತ್ತು ನಿಯಮಿತ ವೆಚ್ಚಗಳನ್ನು ಮರುಪರಿಶೀಲಿಸಿ (Review) ಮತ್ತು ಅನಗತ್ಯ ಸೇವೆಗಳನ್ನು ತಕ್ಷಣವೇ ಬಂದ್ ಮಾಡಿ.&lt;/p&gt;&lt;p&gt;&lt;strong&gt;Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಜ್ಞಾನವನ್ನು ಆಧರಿಸಿವೆ. ನಾವು ಇದನ್ನು ದೃಢೀಕರಿಸುವುದಿಲ್ಲ. ಇವುಗಳನ್ನು ಅಳವಡಿಸಿಕೊಳ್ಳುವ ಮುನ್ನ ಆರ್ಥಿಕ ತಜ್ಞರ ಸಲಹೆಯನ್ನು ಖಂಡಿತವಾಗಿಯೂ ಪಡೆದುಕೊಳ್ಳಿ.&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-money</category>
            <dc:creator>Santosh Naik</dc:creator>
            <atom:link href="https://kannada.asianetnews.com/business/salary-saving-tips-5-personal-finance-rules-50-30-20-budget-lifestyle-creep-san/articleshow-9b4ukrg"/>
        </item>
        <item>
            <title><![CDATA[ಕೆಲಸ ಇದೆ ಎಂದು ಬೀಗಬೇಡ! ಬೃಹತ್‌ ಲಾಭವಿದ್ರೂ, ಉದ್ಯೋಗಿಗಳ ಹೊಟ್ಟೆಪಾಡು ಕಿತ್ತುಕೊಂಡ ದೈತ್ಯ ಕಂಪೆನಿ, ಬ್ಯಾಂಕ್!]]></title>
            <link>https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h</link>
            <guid isPermaLink="true">https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h</guid>
            <pubDate>Mon, 27 Apr 2026 17:00:42 +0530</pubDate>
            <description><![CDATA[&lt;p&gt;ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್&zwnj;ನಂತಹ ಟೆಕ್ ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಈಗ ಅಕ್ಸಿಸ್&zwnj; ಬ್ಯಾಂಕ್&zwnj; ಕೂಡ ಲೇಆಫ್&zwnj; ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpst958axanasrak62ap6ghk,imgname-tcs-victim-recounts-horror-office-bullying-politics-gettyimages-470766688-1776835400970.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್&zwnj;ನಂತಹ ಟೆಕ್ ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಈಗ ಅಕ್ಸಿಸ್&zwnj; ಬ್ಯಾಂಕ್&zwnj; ಕೂಡ ಲೇಆಫ್&zwnj; ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈಗಾಗಲೇ ಐಟಿ ಕಂಪೆನಿಗಳು ಸಾಕಷ್ಟು ಉದ್ಯೋಗಿಗಳ ವಜಾ ಮಾಡಿದೆ. ಒರಾಕಲ್ (Oracle) ಕಂಪನಿಯು ಜಾಗತಿಕವಾಗಿ ಅಂದಾಜು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮೆಟಾ, ಮೈಕ್ರೋಸಾಫ್ಟ್, ಡಿಸ್ನಿ, ಎಎಸ್&zwnj;ಎಮ್&zwnj;ಎಲ್ ಕಂಪನಿಗಳು ಉದ್ಯೋಗ ಕಡಿತ ಮಾಡಲಿವೆ.&lt;/p&gt;&lt;img&gt;&lt;p&gt;ಕಂಪನಿಗಳು ಕೃತಕ ಬುದ್ಧಿಮತ್ತೆಯಲ್ಲಿ ಬೃಹತ್ ಹೂಡಿಕೆ ಮಾಡುತ್ತಿವೆ. ಇದರಿಂದ ಹೆಚ್ಚು ಲಾಭ ಬರುತ್ತಿದೆ, ಆದರೆ ದಶಕಗಳಿಂದ ಕೆಲಸ ಮಾಡುತ್ತಿದ್ದವರು ಮನೆಗೆ ಹೋಗುತ್ತಿದ್ದಾರೆ. ಒರಾಕಲ್&zwnj;ನಲ್ಲಿ 33 ವರ್ಷ ಕೆಲಸ ಮಾಡಿದ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.&amp;nbsp;&lt;/p&gt;&lt;img&gt;&lt;p&gt;ಭಾರತದಲ್ಲಿ ಆಕ್ಸಿಸ್ ಬ್ಯಾಂಕ್&zwnj; ಸಹ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು, ತನ್ನ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 2026ರಲ್ಲಿ 3,100ರಷ್ಟು ಉದ್ಯೋಗಿಗಳ ಸಂಖ್ಯೆ ಕುಸಿದಿದೆ.&lt;/p&gt;&lt;img&gt;&lt;p&gt;ಈಗ ಬ್ಯಾಂಕ್&zwnj;ನಲ್ಲಿ ಸಿಬ್ಬಂದಿ ಸಂಖ್ಯೆ ಇಳಿಕೆಯಾಗಿದ್ದರೂ ಬ್ಯಾಂಕ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇದೇ ಅವಧಿಯಲ್ಲಿ ಸುಮಾರು 400 ಹೊಸ ಶಾಖೆಗಳನ್ನು ತೆರೆಯಲಾಗಿದ್ದು, ₹7,071 ಕೋಟಿಗಳಷ್ಟು ಬೃಹತ್ ಲಾಭ ಮಾಡಿದೆ&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h"/>
        </item>
        <item>
            <title><![CDATA[ಆಕ್ಟಿಂಗ್‌ನಿಂದ ಕೋಟಿ ಕೋಟಿ ದುಡಿತಿರೋ ಪಾಲಕರು, ಅತ್ತ ಮುಖ ಕೂಡ ಹಾಕದೆ, ಬೇರೆ ಜಾಬ್‌ ಮಾಡ್ತಿರೋ ಸ್ಟಾರ್‌ ಕಿಡ್ಸ್‌ ಇವ್ರು]]></title>
            <link>https://kannada.asianetnews.com/gallery/cine-world/bollywood-celebrity-children-who-chose-other-careers-than-acting-list-dbmgook</link>
            <guid isPermaLink="true">https://kannada.asianetnews.com/gallery/cine-world/bollywood-celebrity-children-who-chose-other-careers-than-acting-list-dbmgook</guid>
            <pubDate>Tue, 21 Apr 2026 13:17:11 +0530</pubDate>
            <description><![CDATA[&lt;p&gt;Bollywood Star Kids: ಬಾಲಿವುಡ್ ಒಂದು ಗ್ಲಾಮರ್ ಪ್ರಪಂಚ. ಇದರ ಆಕರ್ಷಣೆಯಿಂದ ದೂರವಿರುವುದು ಸುಲಭವಲ್ಲ. ಹೀಗಾಗಿಯೇ ಹಲವು ಸ್ಟಾರ್&zwnj;ಗಳ ಮಕ್ಕಳು ಚಿತ್ರರಂಗಕ್ಕೆ ಬಂದರು. ಆದರೆ ಕೆಲವರಿಗೆ ಈ ಗ್ಲಾಮರ್ ಇಷ್ಟವಾಗಲಿಲ್ಲ, ಅವರು ಬೇರೆ ಕ್ಷೇತ್ರವನ್ನು ಆರಿಸಿಕೊಂಡರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpqfk5jr0a13cyvnk2302dha,imgname-new-project---2026-04-21t130423.753-1776757085784.jpg" type="image/jpeg" height="390" width="690"/>
            <content:encoded><![CDATA[&lt;p&gt;Bollywood Star Kids: ಬಾಲಿವುಡ್ ಒಂದು ಗ್ಲಾಮರ್ ಪ್ರಪಂಚ. ಇದರ ಆಕರ್ಷಣೆಯಿಂದ ದೂರವಿರುವುದು ಸುಲಭವಲ್ಲ. ಹೀಗಾಗಿಯೇ ಹಲವು ಸ್ಟಾರ್&zwnj;ಗಳ ಮಕ್ಕಳು ಚಿತ್ರರಂಗಕ್ಕೆ ಬಂದರು. ಆದರೆ ಕೆಲವರಿಗೆ ಈ ಗ್ಲಾಮರ್ ಇಷ್ಟವಾಗಲಿಲ್ಲ, ಅವರು ಬೇರೆ ಕ್ಷೇತ್ರವನ್ನು ಆರಿಸಿಕೊಂಡರು.&lt;/p&gt;&lt;img&gt;&lt;p&gt;ತಮ್ಮ ಮಗ ಆರವ್&zwnj;ಗೆ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ ಎಂದು ಇತ್ತೀಚೆಗೆ ಅಕ್ಷಯ್ ಕುಮಾರ್ ಹೇಳಿದ್ದರು. ಅಷ್ಟೇ ಅಲ್ಲ, ಅವನು ತಿಂಗಳಿಗೆ ₹4500 ಸಂಬಳಕ್ಕೆ ಕೆಲಸ ಮಾಡುತ್ತಿದ್ದಾನೆ ಎಂದೂ ಬಹಿರಂಗಪಡಿಸಿದ್ದರು.&lt;/p&gt;&lt;img&gt;&lt;p&gt;ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ನಂದಾಗೆ ನಟನೆಯಲ್ಲಿ ಎಂದಿಗೂ ಆಸಕ್ತಿ ಇರಲಿಲ್ಲ. ಅವರು ವೃತ್ತಿಯಲ್ಲಿ ಲೇಖಕಿ ಮತ್ತು ಅಂಕಣಕಾರ್ತಿ. ಶ್ವೇತಾ ಟಿವಿ ಜಾಹೀರಾತುಗಳಿಗಾಗಿ ಮಾಡೆಲಿಂಗ್ ಮಾಡಿದ್ದಾರೆ. 2018ರಲ್ಲಿ, ಅವರು ತಮ್ಮ ಫ್ಯಾಷನ್ ಲೇಬಲ್ 'MxS' ಅನ್ನು ಪ್ರಾರಂಭಿಸಿದರು.&lt;/p&gt;&lt;img&gt;&lt;p&gt;ಸಂಜಯ್ ದತ್ ಅವರ ಪುತ್ರಿ ತ್ರಿಶಾಲಾ ದತ್ ಲೈಮ್&zwnj;ಲೈಟ್&zwnj;ನಿಂದ ದೂರವಿರಲು ಇಷ್ಟಪಡುತ್ತಾರೆ. ಅವರು ಶೋಬಿಜ್&zwnj;ನಿಂದ ದೂರವಿದ್ದು, ವೃತ್ತಿಯಲ್ಲಿ ಸೈಕೋಥೆರಪಿಸ್ಟ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ.&lt;/p&gt;&lt;img&gt;&lt;p&gt;ಜೂಹಿ ಚಾವ್ಲಾ ಅವರ ಪುತ್ರಿ ಜಾಹ್ನವಿ ಮೆಹ್ತಾಗೆ ಬ್ಯುಸಿನೆಸ್&zwnj;ನಲ್ಲಿ ಹೆಚ್ಚು ಆಸಕ್ತಿ. ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್&zwnj; ಪರ ಬಿಡ್ ಮಾಡುವುದನ್ನು ನೋಡಲಾಗಿದೆ. ಜಾಹ್ನವಿಗೆ ನಟನೆಯಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲ.&lt;/p&gt;&lt;img&gt;&lt;p&gt;ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್&zwnj;ಗೆ ಚಿತ್ರರಂಗದಲ್ಲಿ ಯಾವುದೇ ಆಸಕ್ತಿ ಇಲ್ಲ. ಅವರು ಕ್ರೀಡೆಯಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ವೇದಾಂತ್ ರಾಷ್ಟ್ರಮಟ್ಟದ ಈಜುಪಟುವಾಗಿದ್ದು, ಹಲವು ಪದಕಗಳನ್ನು ಗೆದ್ದಿದ್ದಾರೆ.&lt;/p&gt;&lt;img&gt;&lt;p&gt;ಬೋನಿ ಕಪೂರ್ ಅವರ ಪುತ್ರಿ ಅಂಶುಲಾಗೆ ನಟನೆಯಲ್ಲಿ ಅಷ್ಟೇನೂ ಆಸಕ್ತಿ ಇಲ್ಲ. ಅವರು ಲೈಫ್&zwnj;ಸ್ಟೈಲ್ ಇನ್&zwnj;ಫ್ಲುಯೆನ್ಸರ್ ಆಗಿದ್ದಾರೆ. ಕರಣ್ ಜೋಹರ್ ಅವರ ರಿಯಾಲಿಟಿ ಶೋ 'ದಿ ಟ್ರೇಟರ್ಸ್'ನಲ್ಲಿ ಅವರು ಕಾಣಿಸಿಕೊಂಡಿದ್ದರು.&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/bollywood-celebrity-children-who-chose-other-careers-than-acting-list-dbmgook"/>
        </item>
        <item>
            <title><![CDATA[Amruthadhaare Serial: ಹೆಣ್ಣಿನ ಕಣ್ಣೀರಿನ ಶಾಪ ಬಿಡ್ಲೇ ಇಲ್ಲ, ಮತ್ತೆ ಬಂದ ದಿಯಾ; ಸರ್ವನಾಶವಾದ ಜಯದೇವ್‌]]></title>
            <link>https://kannada.asianetnews.com/gallery/tv-talk/amruthadhaare-kannada-serial-episode-update-diya-scolds-jayadev-e0ep2xg</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-episode-update-diya-scolds-jayadev-e0ep2xg</guid>
            <pubDate>Mon, 04 May 2026 16:00:27 +0530</pubDate>
            <description><![CDATA[&lt;p&gt;Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಬೇಬಿ ದಿಯಾ ವಿದೇಶಕ್ಕೆ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವಳು ಜಯದೇವ್&zwnj;ನ ಎಲ್ಲ ಆಸ್ತಿಯನ್ನು ತಗೊಂಡು ಎಸ್ಕೇಪ್&zwnj; ಆಗಿದ್ದಳು. ಈಗ ಅವಳ ಜಾಗಕ್ಕೆ ಬಂದ ಜಯದೇವ್&zwnj;ನನ್ನು ಕತ್ತು ಹಿಡಿದು ಆಚೆ ನೂಕಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqs7yq5fwkc9v6fyj49da5f9,imgname-new-project---2026-05-04t154227.609-1777889926305.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಬೇಬಿ ದಿಯಾ ವಿದೇಶಕ್ಕೆ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವಳು ಜಯದೇವ್&zwnj;ನ ಎಲ್ಲ ಆಸ್ತಿಯನ್ನು ತಗೊಂಡು ಎಸ್ಕೇಪ್&zwnj; ಆಗಿದ್ದಳು. ಈಗ ಅವಳ ಜಾಗಕ್ಕೆ ಬಂದ ಜಯದೇವ್&zwnj;ನನ್ನು ಕತ್ತು ಹಿಡಿದು ಆಚೆ ನೂಕಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹೆಣ್ಣಿನ ಕಣ್ಣೀರಿಗೆ ಕಾರಣವಾದವರು ಉಳಿದ ಚರಿತ್ರೆಯೇ ಇಲ್ಲ. ಕಟ್ಟಿಕೊಂಡ ಹೆಂಡ್ತಿ ಮಲ್ಲಿಗೆ ಮೋಸ ಮಾಡಿ ಜಯದೇವ್&zwnj;, ಇನ್ನೊಂದು ಮದುವೆ ಆದನು. ಯಾರು ಎಷ್ಟೇ ಹೇಳಿದರೂ ಕೂಡ ಅವನು ಕೇಳದೆ, ದಿಯಾಳನ್ನು ಮದುವೆ ಆದನು. ತನ್ನ ಕುತಂತ್ರದಿಂದ ಬಹುತೇಕ ಆಸ್ತಿಯನ್ನು ಜಯದೇವ್&zwnj; ಕಳೆದುಕೊಂಡಿದ್ದನು. ಒಂದಿಷ್ಟು ಆಸ್ತಿ, ಹಣ, ಬಂಗಾರ ಎಲ್ಲ ಮನೆಯಲ್ಲಿತ್ತು. ಆ ಹಣವನ್ನು ದಿಯಾ ತಗೊಂಡು ಹೋಗಿದ್ದಾಳೆ.&lt;/p&gt;&lt;img&gt;&lt;p&gt;ಅರಸನಕೋಟೆ ಅಖಿಲಾಂಡೇಶ್ವರಿ ಸಹಾಯ ಪಡೆದು ಗೌತಮ್ ದಿವಾನ್&zwnj;, ಹರಾಜಿಗೆ ಬಂದ ದಿವಾನ್&zwnj; ಮನೆ, ಕಂಪೆನಿಯೆಲ್ಲವನ್ನು ಮರಳಿ ಪಡೆದಿದ್ದಾನೆ. ಈಗ ಅವನು ಹೊಸ ಮನೆಗೆ ಕಾಲಿಡಬೇಕು. ಅದೇ ಟೈಮ್&zwnj;ನಲ್ಲಿ ಇನ್ನೊಂದು ವಿಷಯ ಗೊತ್ತಾಗಿದೆ.&lt;/p&gt;&lt;img&gt;&lt;p&gt;ಗೌತಮ್&zwnj;ಗೆ ಜನಿಸಿದ ಮಗಳಿಂದ ಅವನ ಪ್ರಾಣಕ್ಕೆ ಅಪಾಯ ಇದೆ ಎಂದು ಜ್ಯೋತಿಷಿ ಹೇಳಿದ್ದಾನೆ. ಇದರಿಂದ ಭೂಮಿಕಾ ಟೆನ್ಶನ್&zwnj; ಮಾಡಿಕೊಂಡಿದ್ದರೆ, ಗೌತಮ್&zwnj; ಮಾತ್ರ, &ldquo;ನಮ್ಮ ಮಗಳು ಇನ್ನೂ ಬದುಕಿದ್ದಾಳೆ ಎಂದು ಅರ್ಥ ಆಯಿತು&rdquo; ಎಂದು ಖುಷಿ ಹೊರಹಾಕಿದ್ದಾನೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.&lt;/p&gt;&lt;img&gt;&lt;ul&gt; &lt;li&gt;ಇದೊಂದು ಮುಗಿಯದ ಗೋಳು ಮತ್ತೆ ಬೋರ್ ಹೊಡೆಸೋಕೆ ಶುರು ಮಾಡಿದ ಡೈರೆಕ್ಟರ್&lt;/li&gt; &lt;li&gt;ಜೆಡಿ ಅಹಂ ಇಳಿದಿಲ್ಲ, ಗೌತಮ್ ಭೂಮಿಕಾಗೆ ಕಷ್ಟ ತಪ್ಪಲಿಲ್ಲ, ಅಮೃತಧಾರೆ ಟೈಟಲ್&zwnj;ಗೆ ಅರ್ಥವೇ ಇಲ್ಲ.&lt;/li&gt; &lt;li&gt;ಯಾರ ಜಾತಕದಲ್ಲೂ ಕಂಠಕ ಬರಲ್ಲ..ಕಂಟಕ ಬರುವುದು ಮನುಷ್ಯ ಜಾತಿಯ ರಾಕ್ಷಸರಿಂದ&lt;/li&gt; &lt;li&gt;ಇಟ್ಕೊಂಡ್ ಇರೋಳು ಇರೋತನಕ, ಕಟ್ಟಿಕೊಂಡು ಇರೋಳು ಕೊನೆತನಕ&lt;/li&gt; &lt;li&gt;ಜಯದೇವಗೆ ಬುದ್ದಿ ಕಲಿಸಬೇಕಿತ್ತು.ಅವನು ಸೋಲಬೇಕು.ಆಗ ಧರ್ಮ ಜಾತಿ ಸಾಧಿಸಿದಂತೆ.ಇಲ್ಲದಿದ್ದರೆ ಕೆಟ್ಟವರಿಗೆ ಒಳ್ಳೆಯದಾಗುತ್ತದೆ ಎಂಬ ದುಷ್ಟ ಸಂದೇಶ ಹೋಗಿಬಿಡುತ್ತದೆ&lt;/li&gt; &lt;li&gt;ಇದುವರೆಗೂ ಹೆಣ್ಣು ಮಗುವಿಗೆ ಒಂದು closure ಕೊಟ್ಟಿರಲಿಲ್ಲ. ಅದಕ್ಕೇ ಕಂಟಕ ಕಥೆ&lt;/li&gt; &lt;li&gt;ಕೇಡಿ ಜಯ ದೇವ ಗೆ ಸರಿಯಾಗಿ ಆಗಿದೆ ನೋಡಿ ಬೇಬಿ ಬೇಬಿ ಅಂತ ಇದಾ ಬೇಬಿ ಸರಿಯಾಗಿ ಮಾಡಿದ್ದಾಳೆ&lt;/li&gt;&lt;/ul&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-episode-update-diya-scolds-jayadev-e0ep2xg"/>
        </item>
        <item>
            <title><![CDATA[IPL 2026 Winner Money: ಐಪಿಎಲ್‌ನಲ್ಲಿ ಟ್ರೋಫಿ ಪಡೆದವ್ರಿಗೆ, ಉಳಿದವ್ರಿಗೆ ಸಿಗಲಿದೆ ಭರ್ಜರಿ ಹಣ! ಎಷ್ಟು?]]></title>
            <link>https://kannada.asianetnews.com/gallery/cricket-sports/ipl-2026-rcb-vs-gujarat-titans-trophy-winner-prize-money-in-rupees-es5ps1w</link>
            <guid isPermaLink="true">https://kannada.asianetnews.com/gallery/cricket-sports/ipl-2026-rcb-vs-gujarat-titans-trophy-winner-prize-money-in-rupees-es5ps1w</guid>
            <pubDate>Sun, 31 May 2026 21:26:56 +0530</pubDate>
            <description><![CDATA[&lt;p&gt;IPL 2026 Winner: ಅಹಮದಾಬಾದ್&zwnj;ನಲ್ಲಿ ಗುಜರಾತ್&zwnj; ಟೈಟನ್ಸ್&zwnj;, ಆರ್&zwnj;ಸಿಬಿ ನಡುವೆ ಮ್ಯಾಚ್&zwnj; ನಡೆಯಲಿದೆ. ಗೆದ್ದವರಿಗೆ ಏನು ಸಿಗಲಿದೆ? ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರೈಜ್&zwnj; ಮನಿ ಕೂಡ ಹೆಚ್ಚಾಗಿದೆ. ಈ ಬಾರಿ ಟ್ರೋಫಿ ಗೆದ್ದವರಿಗೆ, ರನ್ನರ್&zwnj; ಅಪ್, ಉಳಿದವರಿಗೆ ಎಷ್ಟು ಪ್ರೈಜ್&zwnj; ಸಿಗುತ್ತೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyxq0hdb3msmyg19tpaxp5w,imgname-red-and-black-retro-landscape-youtube-thumbnail-background--5--1780227998253.jpg" type="image/jpeg" height="390" width="690"/>
            <content:encoded><![CDATA[&lt;p&gt;IPL 2026 Winner: ಅಹಮದಾಬಾದ್&zwnj;ನಲ್ಲಿ ಗುಜರಾತ್&zwnj; ಟೈಟನ್ಸ್&zwnj;, ಆರ್&zwnj;ಸಿಬಿ ನಡುವೆ ಮ್ಯಾಚ್&zwnj; ನಡೆಯಲಿದೆ. ಗೆದ್ದವರಿಗೆ ಏನು ಸಿಗಲಿದೆ? ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರೈಜ್&zwnj; ಮನಿ ಕೂಡ ಹೆಚ್ಚಾಗಿದೆ. ಈ ಬಾರಿ ಟ್ರೋಫಿ ಗೆದ್ದವರಿಗೆ, ರನ್ನರ್&zwnj; ಅಪ್, ಉಳಿದವರಿಗೆ ಎಷ್ಟು ಪ್ರೈಜ್&zwnj; ಸಿಗುತ್ತೆ?&lt;/p&gt;&lt;img&gt;&lt;p&gt;ಕಳೆದ ವರ್ಷ ಆರ್&zwnj;ಸಿಬಿ ತಂಡವು ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು. 2022ರ ಬಳಿಕ ಗುಜರಾತ್ ಟೈಟಾನ್ಸ್ ಟ್ರೋಫಿ ಗೆದ್ದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ನೆಟ್ ರನ್ ರೇಟ್ ಹೊಂದಿತ್ತು, ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು.&lt;/p&gt;&lt;img&gt;&lt;p&gt;2008 ರಲ್ಲಿ IPL ಶುರು ಆದಾಗ, ವಿಜೇತರಿಗೆ 4.8 ಕೋಟಿ ರೂಪಾಯಿ ಸಿಗುತ್ತಿತ್ತು. 2014-15ರಲ್ಲಿ 15 ಕೋಟಿ ರೂಪಾಯಿ ಸಿಕ್ಕಿತು. ಈಗ 20 ಕೋಟಿ ರೂಪಾಯಿ ಆಗಿದೆ.&lt;/p&gt;&lt;p&gt;ಬಿಸಿಸಿಐ (BCCI) ಐಪಿಎಲ್ 2026ರಲ್ಲಿ ಒಟ್ಟು ₹46.5 ಕೋಟಿಗಿಂತಲೂ ಹೆಚ್ಚಿನ ಹಣವನ್ನು ನೀಡಲಿದೆಯಂತೆ.&lt;/p&gt;&lt;img&gt;&lt;p&gt;ಐಪಿಎಲ್ 2026 ಟ್ರೋಫಿ ಗೆಲ್ಲುವ ತಂಡಕ್ಕೆ 20 ಕೋಟಿ ರೂಪಾಯಿ ನೀಡಲಾಗುವುದು&lt;/p&gt;&lt;p&gt;ರನ್ನರ್ಸ್-ಅಪ್ (ದ್ವಿತೀಯ ಸ್ಥಾನ) ಪಡೆದವರಿಗೆ 13 ಕೋಟಿ ರೂಪಾಯಿ ಸಿಗುವುದು&lt;/p&gt;&lt;p&gt;ಕ್ವಾಲಿಫೈಯರ್ 2 ರಲ್ಲಿ ಸೋಲುವ ತಂಡಕ್ಕೆ (ಮೂರನೇ ಸ್ಥಾನ) ಕೋಟಿ ರೂಪಾಯಿ ಸಿಗುತ್ತದೆ&lt;/p&gt;&lt;p&gt;ಎಲಿಮಿನೇಟರ್&zwnj;ನಲ್ಲಿ ಹೊರಬೀಳುವ ತಂಡ (ನಾಲ್ಕನೇ ಸ್ಥಾನ 6.5 ಕೋಟಿ ರೂಪಾಯಿ ಸಿಗುವುದು&lt;/p&gt;&lt;img&gt;&lt;p&gt;5 ರಿಂದ 10 ನೇ ಸ್ಥಾನ ಪಡೆಯುವ ತಂಡಕ್ಕೆ ಯಾವುದೇ ಹಣ ಸಿಗೋದಿಲ. ಆದರೆ ಅವರು Broadcasting deals, Sponsorship, ಟಿಕೆಟ್ ಮಾರಾಟದ ಮೂಲಕ ಒಂದಿಷ್ಟು ಹಣ ಪಡೆಯುತ್ತಾರೆ.&lt;/p&gt;&lt;img&gt;&lt;p&gt;ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಗೆದ್ದವರಿಗೆ ತಲಾ ₹10 ಲಕ್ಷ ಸಿಗುತ್ತದೆ,&lt;/p&gt;&lt;p&gt;ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ (MVP) ಅವರಿಗೆ ₹10 ಲಕ್ಷ ರೂಪಾಯಿ ಸಿಗುತ್ತದೆ&lt;/p&gt;&lt;p&gt;ಉದಯೋನ್ಮುಖ ಆಟಗಾರ ಎಂಬ ಪಟ್ಟ ಪಡೆದವರಿಗೆ ₹20 ಲಕ್ಷ ರೂಪಾಯಿ ಸಿಗುತ್ತದೆ&lt;/p&gt;&lt;p&gt;ರಾಜಸ್ಥಾನ್ ರಾಯಲ್ಸ್ ಟೀಂ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರೆ, ಗುಜರಾತ್ ಟೈಟಾನ್ಸ್ ಟೀಂನ ವೇಗಿ ಕಗಿಸೊ ರಬಾಡ 28 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ.&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/ipl-2026-rcb-vs-gujarat-titans-trophy-winner-prize-money-in-rupees-es5ps1w"/>
        </item>
        <item>
            <title><![CDATA[Amazon Now: ಮಂಗಳೂರು, ಮೈಸೂರಿಗೆ ಕಾಲಿಟ್ಟ ದೈತ್ಯ ಗಾತ್ರದ ಅಮೆಜಾನ್‌ ಕಂಪೆನಿ; 2800 ಕೋಟಿ ರೂ ಹೂಡಿಕೆ]]></title>
            <link>https://kannada.asianetnews.com/business/amazon-to-expand-amazon-now-to-100-cities-mangaluru-mysore-invests-2800-crore-rupees/articleshow-nvgkxgb</link>
            <guid isPermaLink="true">https://kannada.asianetnews.com/business/amazon-to-expand-amazon-now-to-100-cities-mangaluru-mysore-invests-2800-crore-rupees/articleshow-nvgkxgb</guid>
            <pubDate>Mon, 27 Apr 2026 16:17:37 +0530</pubDate>
            <description><![CDATA[&lt;p&gt;Amazon Now 2800 Crore Rupees Investment: ಅಮೆಜಾನ್&zwnj; ಕಂಪೆನಿಯು ಮಂಗಳೂರು, ಮೈಸೂರಿನತ್ತ ಕಾಲಿಟ್ಟಿದೆ. ಹೌದು, ಈ ಕಂಪೆನಿಯು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ರೆಡಿಯಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq78gqmw134jj2ad41rnaz9m,imgname-new-project---2026-04-27t160012.973-1777286536860.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತದ 'ಕ್ವಿಕ್ ಕಾಮರ್ಸ್' (ವೇಗದ ವಿತರಣೆ) ಮಾರುಕಟ್ಟೆಯಲ್ಲಿ ದಿನ ದಿನಕ್ಕೂ ಪೈಪೋಟಿ ಜೋರಾಗಿದ್ದು, ಈ ವಲಯದಲ್ಲಿ ಪಾರುಪತ್ಯ ಸಾಧಿಸಲು ಇ-ಕಾಮರ್ಸ್ ದೈತ್ಯ 'ಅಮೆಜಾನ್' ಹೆಜ್ಜೆಯಿಟ್ಟಿದೆ. ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸುವ ತನ್ನ ಮಹತ್ವಾಕಾಂಕ್ಷೆಯ 'ಅಮೆಜಾನ್ ನೌ' ಸೇವೆಯನ್ನು ಈಗಾಗಲೇ ಆರಂಭಿಸಿರುವ ಕಂಪನಿ ಇದೀಗ ಈ ಸೇವೆಯನ್ನು ದೇಶದ 100 ನಗರಗಳಿಗೆ ವಿಸ್ತರಿಸುವುದಾಗಿ ಹೇಳಿದೆ.&lt;/p&gt;&lt;h2&gt;2,800 ಕೋಟಿ ರೂ. ಹೂಡಿಕೆ&lt;/h2&gt;&lt;p&gt;ತನ್ನ ಕಾರ್ಯಾಚರಣಾ ಜಾಲವನ್ನು ಬಲಪಡಿಸಲು ಅಮೆಜಾನ್ ಬರೋಬ್ಬರಿ 2,800 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ಬೃಹತ್ ಮೊತ್ತವನ್ನು ಕೇವಲ ವ್ಯಾಪಾರ ವಿಸ್ತರಣೆಗೆ ಮಾತ್ರವಲ್ಲದೆ, ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮಕ್ಕೂ ವಿನಿಯೋಗಿಸಲು ಅಮೆಜಾನ್ ನಿರ್ಧರಿಸಿದೆ. ಈ ಮೂಲಕ ಭಾರತದ ಅತ್ಯಂತ ಸುರಕ್ಷಿತ, ವೇಗದ ಮತ್ತು ವಿಶ್ವಾಸಾರ್ಹ ಕಾರ್ಯಾಚರಣಾ ಜಾಲವಾಗಿ ಹೊರಹೊಮ್ಮುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ.&lt;/p&gt;&lt;h2&gt;ಮಂಗಳೂರು, ಮೈಸೂರಿನತ್ತ ಅಮೆಜಾನ್ ಚಿತ್ತ!&amp;nbsp;&lt;/h2&gt;&lt;p&gt;ಈಗಾಗಲೇ ರಾಜಧಾನಿ ಬೆಂಗಳೂರು, ಮುಂಬೈ ಮತ್ತು ದೆಹಲಿ-ಎನ್&zwnj;ಸಿಆರ್&zwnj;ನಂತಹ ಮಹಾನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 'ಅಮೆಜಾನ್ ನೌ', ಇದೀಗ ಕರ್ನಾಟಕದ ಪ್ರಮುಖ ವಾಣಿಜ್ಯ ನಗರ ಮಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿಗೂ ಲಗ್ಗೆ ಇಡುತ್ತಿದೆ.&lt;/p&gt;&lt;p&gt;ಈ ವಿಸ್ತರಣೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಅಮೆಜಾನ್ ದೇಶಾದ್ಯಂತ 1,000ಕ್ಕೂ ಹೆಚ್ಚು ವಿಶೇಷ 'ಮೈಕ್ರೋ-ಫುಲ್&zwnj;ಫಿಲ್&zwnj;ಮೆಂಟ್ ಕೇಂದ್ರ'ಗಳನ್ನು (ಎಂಎಫ್&zwnj;ಸಿ) ಸ್ಥಾಪಿಸುತ್ತಿದೆ. ಕರ್ನಾಟಕದ ನಗರಗಳಲ್ಲದೆ ಪುಣೆ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಜೈಪುರ, ಲಕ್ನೋ, ಕಾನ್ಪುರ, ಚಂಡೀಗಢ, ಅಹಮದಾಬಾದ್, ಮೀರತ್, ಪಾಣಿಪತ್, ಕೊಚ್ಚಿ, ಅಮೃತಸರ ಮತ್ತು ವೈಜಾಗ್ ಸೇರಿದಂತೆ ಒಟ್ಟು 100 ಎರಡನೇ ಹಾಗೂ ಮೂರನೇ ಸ್ಥರದ ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುತ್ತಿದೆ.&lt;/p&gt;&lt;h2&gt;ಮನೆ ಬಾಗಿಲಿಗೆ ಬರಲಿದೆ ತಾಜಾ ಹಣ್ಣು-ತರಕಾರಿ&lt;/h2&gt;&lt;p&gt;'ಅಮೆಜಾನ್ ನೌ' ಸೇವೆಯ ಅಡಿಯಲ್ಲಿ ಗ್ರಾಹಕರಿಗೆ ದಿನಸಿ (ಹಣ್ಣು, ತರಕಾರಿ, ಫ್ರೋಜನ್ ಫುಡ್), ವೈಯಕ್ತಿಕ ಆರೈಕೆ ಉತ್ಪನ್ನಗಳು, ಫ್ಯಾಷನ್ ಮತ್ತು ಸೌಂದರ್ಯವರ್ಧಕಗಳು, ಸಣ್ಣ ಗೃಹೋಪಯೋಗಿ ವಸ್ತುಗಳು, ಮಕ್ಕಳ ಉತ್ಪನ್ನಗಳು, ಸಾಕುಪ್ರಾಣಿಗಳ ಆಹಾರ ಮತ್ತು ಆರೋಗ್ಯ ಸಪ್ಲಿಮೆಂಟ್&zwnj;ಗಳು ಕೆಲವೇ ನಿಮಿಷಗಳಲ್ಲಿ ಡೆಲಿವರಿಯಾಗಲಿವೆ.&lt;/p&gt;&lt;p&gt;ಈ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಮಾತ್ರವಲ್ಲ 16,000ಕ್ಕೂ ಹೆಚ್ಚು ರೈತರಿಗೂ ಲಾಭವಾಗಲಿದ್ದು, ಅಮೆಜಾನ್&zwnj;ನ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ಲಾಭವನ್ನು ಇವರು ಪಡೆಯಲಿದ್ದಾರೆ. ಇವರು ಬೆಳೆದ ತಾಜಾ ಕೃಷಿ ಉತ್ಪನ್ನಗಳು ಮಾರಾಟಗಾರರ ಮೂಲಕ ನೇರವಾಗಿ ಮತ್ತು ಅತಿ ವೇಗವಾಗಿ ಗ್ರಾಹಕರ ಕೈಸೇರಲಿವೆ.&lt;/p&gt;&lt;p&gt;ಅಮೆಜಾನ್ ಇದಕ್ಕಾಗಿ ಬೃಹತ್&zwnj; ಜಾಲವನ್ನು ನಿರ್ಮಿಸಿದ್ದು ಸಾವಿರಾರು ದಿನಬಳಕೆ ವಸ್ತುಗಳು ನಿಮಿಷಗಳಲ್ಲಿ ಡೆಲಿವರಿಯಾಗಲಿದ್ದರೆ, 10 ಲಕ್ಷಕ್ಕೂ ಹೆಚ್ಚು ವಸ್ತುಗಳು ಬುಕ್ ಮಾಡಿದ ಅದೇ ದಿನ ಹಾಗೂ 40 ಲಕ್ಷಕ್ಕೂ ಹೆಚ್ಚು ವಸ್ತುಗಳು ಮರುದಿನ ಗ್ರಾಹಕರ ಕೈ ಸೇರಲಿವೆ.&lt;/p&gt;&lt;h2&gt;ಪ್ರೈಮ್ ಸದಸ್ಯರ ಶಾಪಿಂಗ್ ಮೂರು ಪಟ್ಟು ಏರಿಕೆ!&lt;/h2&gt;&lt;p&gt;&quot;ಗ್ರಾಹಕರು 'ಅಮೆಜಾನ್ ನೌ' ಸೇವೆಯ ವೇಗ, ಮೌಲ್ಯ ಮತ್ತು ರೈತರಿಂದ ನೇರವಾಗಿ ಪಡೆಯುವ ತಾಜಾ ಉತ್ಪನ್ನಗಳ ಗುಣಮಟ್ಟವನ್ನು ಮೆಚ್ಚಿಕೊಂಡಿದ್ದಾರೆ,&rdquo; ಎಂದಿರುವ ಅಮೆಜಾನ್ ಇಂಡಿಯಾದ 'ಎವರಿಡೇ ಎಸೆನ್ಶಿಯಲ್ಸ್&zwnj;ʼ ವಿಭಾಗದ ಉಪಾಧ್ಯಕ್ಷ ಹರ್ಷ ಗೋಯಲ್, &ldquo;ಈ ಯಶಸ್ಸಿನ ಹಿನ್ನೆಲೆಯಲ್ಲಿ 1,000ಕ್ಕೂ ಹೆಚ್ಚು ಮೈಕ್ರೋ-ಫುಲ್&zwnj;ಫಿಲ್&zwnj;ಮೆಂಟ್ ಕೇಂದ್ರಗಳ ಜಾಲದೊಂದಿಗೆ 100 ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುತ್ತಿದ್ದೇವೆ,&rdquo; ಎಂದು ತಿಳಿಸಿದ್ದಾರೆ.&lt;/p&gt;&lt;p&gt;'ಅಮೆಜಾನ್ ನೌ' ಬಳಸಲು ಆರಂಭಿಸಿದಾಗಿನಿಂದ ಪ್ರೈಮ್ ಸದಸ್ಯರ ಶಾಪಿಂಗ್ ಪ್ರಮಾಣ ಬರೋಬ್ಬರಿ ಮೂರು ಪಟ್ಟು ಹೆಚ್ಚಾಗಿದೆ. ಈ ವಿಸ್ತರಣೆ ಬಳಿಕವೂ ಪ್ರೈಮ್ ಸದಸ್ಯರು 'ಅನಿಯಮಿತ ಉಚಿತ ಡೆಲಿವರಿ' ಸೌಲಭ್ಯವನ್ನು ಪಡೆಯಲಿದ್ದಾರೆ.&lt;/p&gt;&lt;p&gt;ನಿಮ್ಮ ಪಿನ್&zwnj;ಕೋಡ್&zwnj;ನಲ್ಲಿ ಸೇವೆ ಲಭ್ಯವಿದೆಯೇ? ಚೆಕ್ ಮಾಡುವುದು ಹೇಗೆ?&lt;/p&gt;&lt;p&gt;ತಾವಿರುವ ಪ್ರದೇಶದ ಪಿನ್&zwnj;ಕೋಡ್&zwnj;ನಲ್ಲಿ 'ಅಮೆಜಾನ್ ನೌ' ಕ್ವಿಕ್ ಡೆಲಿವರಿ ಸೇವೆ ಲಭ್ಯವಿದೆಯೇ ಎಂಬುದನ್ನು ಪರೀಕ್ಷಿಸಲು, ಗ್ರಾಹಕರು ಅಮೆಜಾನ್ ಆ್ಯಪ್ ತೆರೆದು ಮುಖಪುಟದ ಮೇಲ್ಭಾಗದ ಬ್ಯಾನರ್&zwnj;ನಲ್ಲಿರುವ ಸಿಡಿಲಿನ ಅಥವಾ Lightning ಆಕಾರದ 'Now' ಐಕಾನ್ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬಹುದು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/business/amazon-to-expand-amazon-now-to-100-cities-mangaluru-mysore-invests-2800-crore-rupees/articleshow-nvgkxgb"/>
        </item>
        <item>
            <title><![CDATA[ಕೇವಲ ಆಧಾರ್ ಸಂಖ್ಯೆ ಬಳಸಿ ನಿಮ್ಮ ಬ್ಯಾಂಕ್ ಹಣ ಲಪಟಾಯಿಸಲು ಸಾಧ್ಯವೇ? ಈ ಬಗ್ಗೆ UIDAI ನೀಡಿದ ಮಹತ್ವದ ಮಾಹಿತಿ ಇಲ್ಲಿದೆ!]]></title>
            <link>https://kannada.asianetnews.com/news-money/can-money-be-stolen-from-your-bank-account-with-just-an-aadhaar-number-and-here-is-the-key-information-from-uidai/articleshow-ogeuavu</link>
            <guid isPermaLink="true">https://kannada.asianetnews.com/news-money/can-money-be-stolen-from-your-bank-account-with-just-an-aadhaar-number-and-here-is-the-key-information-from-uidai/articleshow-ogeuavu</guid>
            <pubDate>Sat, 13 Jun 2026 22:26:26 +0530</pubDate>
            <description><![CDATA[&lt;p&gt;ಫಿನ್&zwnj;ಟೆಕ್ ಮತ್ತು ಬ್ಯಾಂಕಿಂಗ್ ವಲಯದ ಮೂಲಸೌಕರ್ಯವು ಆಧಾರ್&zwnj;ನೊಂದಿಗೆ ಗಟ್ಟಿಯಾಗಿ ಬೆಸೆದುಕೊಂಡಿದೆ. ಕೇವಲ ಆಧಾರ್ ಸಂಖ್ಯೆ ಸೋರಿಕೆಯಾದ ಮಾತ್ರಕ್ಕೆ ಆರ್ಥಿಕ ಹಾನಿ ಸಂಭವಿಸಬಹುದೇ? ಈ ಬಗ್ಗೆ ಯುಐಡಿಎಐ ನೀಡಿದ ಸ್ಪಷ್ಟನೆ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv0yezab1z62zy5eb7669dqs,imgname-aadhaar-card-1781369634122.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೇವಲ ಆಧಾರ್ ಸಂಖ್ಯೆಯಿಂದ ಹಣ ದೋಚಲು ಸಾಧ್ಯವೇ? ಯುಐಡಿಎಐ ನೀಡಿರುವ ಮಹತ್ವದ ಸ್ಪಷ್ಟನೆಯ ವಿಶ್ಲೇಷಣೆ&lt;/strong&gt;&lt;/p&gt;&lt;p&gt;ನವದೆಹಲಿ/ಬೆಂಗಳೂರು: ಭಾರತದ ಡಿಜಿಟಲ್ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಆಧಾರ್ ಕಾರ್ಡ್ (Aadhaar Card) ಅತ್ಯಂತ ಪ್ರಮುಖ 'ಕೆವೈಸಿ' (KYC) ದಾಖಲೆಯಾಗಿ ಹೊರಹೊಮ್ಮಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳ ಹಿನ್ನೆಲೆಯಲ್ಲಿ, &quot;ಬಹಿರಂಗವಾಗಿ ಸಿಗುವ ಆಧಾರ್ ಸಂಖ್ಯೆಯನ್ನು ಬಳಸಿ ಬ್ಯಾಂಕ್ ಖಾತೆಗಳಿಂದ ಹಣ ಕದಿಯಲು (Aadhaar Card Fraud) ಸಾಧ್ಯವೇ?&quot; ಎಂಬ ಗಂಭೀರ ಆತಂಕ ಹೂಡಿಕೆದಾರರು ಮತ್ತು ಸಾಮಾನ್ಯ ಗ್ರಾಹಕರಲ್ಲಿ ಮನೆಮಾಡಿದೆ. ಈ ಕುರಿತು ಮಾರುಕಟ್ಟೆಯಲ್ಲಿ ಹಬ್ಬಿರುವ ಆತಂಕಗಳನ್ನು ದೂರಗೊಳಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಅಧಿಕೃತ ಸ್ಪಷ್ಟನೆಯನ್ನು ನೀಡಿದೆ.&lt;/p&gt;&lt;p&gt;ಡೇಟಾ ಸುರಕ್ಷತೆ ಮತ್ತು ವಹಿವಾಟಿನ ರಕ್ಷಣೆ:&lt;/p&gt;&lt;p&gt;ಯುಐಡಿಎಐ ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಕೇವಲ 12 ಅಂಕಿಗಳ ಆಧಾರ್ ಸಂಖ್ಯೆಯು ಬ್ಯಾಂಕ್ ವಹಿವಾಟನ್ನು ಪೂರ್ಣಗೊಳಿಸಲು ಸಾಕಾಗುವುದಿಲ್ಲ. ಕಾರ್ಪೊರೇಟ್ ಹಣಕಾಸು ನಿಯಮಗಳಂತೆ, ಯಾವುದೇ ಆರ್ಥಿಕ ವರ್ಗಾವಣೆಗೆ ಕನಿಷ್ಠ ಎರಡು ಹಂತದ ದೃಢೀಕರಣ (Two-factor authentication) ಅಗತ್ಯವಿರುತ್ತದೆ. ನಿಮ್ಮ ಆಧಾರ್ ಸಂಖ್ಯೆ ಸಾರ್ವಜನಿಕವಾಗಿ ಲಭ್ಯವಿದ್ದರೂ ಅಥವಾ ವಂಚಕರ ಕೈ ಸೇರಿದರೂ, ಅದನ್ನು ಬಳಸಿ ಬ್ಯಾಂಕ್ ಖಾತೆಗೆ ಕನ್ನ ಹಾಕಲು ಸಾಧ್ಯವಿಲ್ಲ. ಏಕೆಂದರೆ, ವಹಿವಾಟು ನಡೆಸಲು ಆಧಾರ್ ಸಂಖ್ಯೆಯ ಜೊತೆಗೆ ಈ ಕೆಳಗಿನ ಯಾವುದಾದರೂ ಒಂದು ಅಂಶ ಕಡ್ಡಾಯವಾಗಿರುತ್ತದೆ:&lt;/p&gt;&lt;h2&gt;ಬ್ಯಾಂಕ್ ನಮೂನೆಯಲ್ಲಿರುವ ಸಹಿ.&lt;/h2&gt;&lt;p&gt;ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್&zwnj;ನ ಭೌತಿಕ ಲಭ್ಯತೆ.&lt;/p&gt;&lt;p&gt;ವೈಯಕ್ತಿಕ ಪಿನ್ (PIN) ಅಥವಾ ರಹಸ್ಯ ಪಾಸ್&zwnj;ವರ್ಡ್.&lt;/p&gt;&lt;p&gt;ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP).&lt;/p&gt;&lt;p&gt;AePS ವ್ಯವಸ್ಥೆಯ ಭದ್ರತಾ ಚೌಕಟ್ಟು:&lt;/p&gt;&lt;p&gt;ಬ್ಯಾಂಕಿಂಗ್ ಉದ್ಯಮದಲ್ಲಿ ಪ್ರಮುಖವಾಗಿ ಬಳಕೆಯಾಗುವ 'ಆಧಾರ್ ಆಧಾರಿತ ಪಾವತಿ ವ್ಯವಸ್ಥೆ' (AePS - Aadhaar enabled Payment System) ಬಗ್ಗೆಯೂ ಯುಐಡಿಎಐ ಬೆಳಕು ಚೆಲ್ಲಿದೆ. ಈ ವ್ಯವಸ್ಥೆಯ ಮೂಲಕ ಹಣ ಹಿಂಪಡೆಯಬೇಕಾದರೂ ಸಹ 'ಬಯೋಮೆಟ್ರಿಕ್ ದೃಢೀಕರಣ' ಅನಿವಾರ್ಯ. ಗ್ರಾಹಕನ ಬೆರಳಚ್ಚು (Fingerprint) ಅಥವಾ ಕಣ್ಣಿನ ರೆಟಿನಾ ಸ್ಕ್ಯಾನ್ ಇಲ್ಲದೆ ಯಾವುದೇ ಹಣಕಾಸು ಸಂಸ್ಥೆಯು ವಹಿವಾಟನ್ನು ಅನುಮೋದಿಸುವುದಿಲ್ಲ. ಹೀಗಾಗಿ, ತಾಂತ್ರಿಕವಾಗಿ ವಂಚಕರಿಗೆ ಕೇವಲ ಸಂಖ್ಯೆಯನ್ನು ಬಳಸಿ ಹಣ ಪಡೆಯುವುದು ಅಸಾಧ್ಯ ಎಂದು ಪ್ರಾಧಿಕಾರ ವಿಶ್ಲೇಷಿಸಿದೆ.&lt;/p&gt;&lt;p&gt;ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ:&lt;/p&gt;&lt;p&gt;ಸೈಬರ್ ಭದ್ರತಾ ತಜ್ಞರ ಪ್ರಕಾರ, ಆಧಾರ್ ಸಂಖ್ಯೆ ಸೋರಿಕೆಯಾಗುವುದಕ್ಕಿಂತಲೂ, 'ಸೋಷಿಯಲ್ ಇಂಜಿನಿಯರಿಂಗ್' (ಗ್ರಾಹಕರನ್ನು ನಂಬಿಸಿ ಮಾಹಿತಿ ಪಡೆಯುವುದು) ಮೂಲಕ ನಡೆಯುವ ವಂಚನೆಗಳೇ ಹೆಚ್ಚು. ಯುಐಡಿಎಐ ವರದಿಯ ಪ್ರಕಾರ, ಇಲ್ಲಿಯವರೆಗೆ ನಡೆದಿರುವ ಹೆಚ್ಚಿನ ವಂಚನೆ ಪ್ರಕರಣಗಳು ನಕಲಿ ದಾಖಲೆ ಸೃಷ್ಟಿಸುವಿಕೆಗೆ ಸೀಮಿತವಾಗಿವೆ ಹೊರತು, ಆಧಾರ್ ಡೇಟಾಬೇಸ್&zwnj;ನಿಂದ ನೇರವಾಗಿ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಪ್ರಕರಣಗಳಿಲ್ಲ.&lt;/p&gt;&lt;h3&gt;ಗ್ರಾಹಕರಿಗೆ ಮತ್ತು ಉದ್ದಿಮೆದಾರರಿಗೆ ಸಲಹೆ:&lt;/h3&gt;&lt;p&gt;ತನ್ನ ಪ್ರಕಟಣೆಯಲ್ಲಿ ಯುಐಡಿಎಐ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸೂಚಿಸಿದೆ:&lt;/p&gt;&lt;p&gt;ಬಯೋಮೆಟ್ರಿಕ್ ಲಾಕ್: ನಿಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಯುಐಡಿಎಐ ಪೋರ್ಟಲ್ ಅಥವಾ ಎಂ-ಆಧಾರ್ ಆ್ಯಪ್ ಮೂಲಕ ಲಾಕ್ ಮಾಡಿಕೊಳ್ಳಬಹುದು.&lt;/p&gt;&lt;p&gt;ಒಟಿಪಿ ಗೌಪ್ಯತೆ: ಯಾವುದೇ ಸಂದರ್ಭದಲ್ಲಿ ಫೋನ್ ಅಥವಾ ಸಂದೇಶದ ಮೂಲಕ ಬರುವ ಒಟಿಪಿ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು.&lt;/p&gt;&lt;p&gt;ಮಾಸ್ಕ್ಡ್ ಆಧಾರ್: ಸಾರ್ವಜನಿಕವಾಗಿ ಗುರುತಿನ ಚೀಟಿ ನೀಡುವಾಗ ಕೊನೆಯ 4 ಅಂಕಿಗಳು ಮಾತ್ರ ಕಾಣಿಸುವ 'ಮಾಸ್ಕ್ಡ್ ಆಧಾರ್' (Masked Aadhaar) ಬಳಸುವುದು ಸುರಕ್ಷಿತ.&lt;/p&gt;&lt;p&gt;ತೀರ್ಮಾನ:&lt;/p&gt;&lt;p&gt;ಫಿನ್&zwnj;ಟೆಕ್ ಮತ್ತು ಬ್ಯಾಂಕಿಂಗ್ ವಲಯದ ಮೂಲಸೌಕರ್ಯವು ಆಧಾರ್&zwnj;ನೊಂದಿಗೆ ಗಟ್ಟಿಯಾಗಿ ಬೆಸೆದುಕೊಂಡಿದೆ. ಕೇವಲ ಆಧಾರ್ ಸಂಖ್ಯೆ ಸೋರಿಕೆಯಾದ ಮಾತ್ರಕ್ಕೆ ಆರ್ಥಿಕ ಹಾನಿ ಸಂಭವಿಸುವುದಿಲ್ಲ ಎಂಬ ಯುಐಡಿಎಐ ಸ್ಪಷ್ಟನೆಯು ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದು ಮತ್ತು ಡಿಜಿಟಲ್ ಜಾಗೃತಿ ಹೊಂದುವುದೇ ಹಣಕಾಸಿನ ಸುರಕ್ಷತೆಗೆ ಅಂತಿಮ ಮದ್ದಾಗಿದೆ.&lt;/p&gt;]]></content:encoded>
            <category>news-money</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-money/can-money-be-stolen-from-your-bank-account-with-just-an-aadhaar-number-and-here-is-the-key-information-from-uidai/articleshow-ogeuavu"/>
        </item>
        <item>
            <title><![CDATA[Blinkit vs Supermarket: ಬ್ಲಿಂಕಿಟ್‌, ಸೂಪರ್‌ಮಾರ್ಕೆಟ್‌ ಮಧ್ಯೆ ಕಡಿಮೆ ಬೆಲೆಗೆ ದಿನಸಿ ವಸ್ತು ಸಿಗೋದೆಲ್ಲಿ?]]></title>
            <link>https://kannada.asianetnews.com/gallery/india-news/blinkit-delivery-app-vs-supermarket-which-is-better-in-price-difference-s3gvnpo</link>
            <guid isPermaLink="true">https://kannada.asianetnews.com/gallery/india-news/blinkit-delivery-app-vs-supermarket-which-is-better-in-price-difference-s3gvnpo</guid>
            <pubDate>Mon, 01 Jun 2026 17:35:05 +0530</pubDate>
            <description><![CDATA[&lt;p&gt;Blinkit, ಸೂಪರ್&zwnj;ಮಾರ್ಕೆಟ್&zwnj;ಗಳ ನಡುವಿನ ದಿನಸಿ ವೆಚ್ಚವನ್ನು ಹೋಲಿಸಿದ ಪೋಸ್ಟ್ ವೈರಲ್ ಆಗಿದೆ. 1 ತಿಂಗಳ ಖರ್ಚಿನಲ್ಲಿ ಒಟ್ಟಾರೆ ಬೆಲೆ ವ್ಯತ್ಯಾಸವು ನಿರೀಕ್ಷೆಗಿಂತ ಕಡಿಮೆ ಇತ್ತು. ಬ್ಲಿಂಕಿಟ್&zwnj;ನಲ್ಲಿ ಕೆಲವು ವಸ್ತುಗಳು ದುಬಾರಿ, ಇನ್ನು ಕೆಲವು ವಸ್ತುಗಳ ಬೆಲೆ ಒಂದೇ ರೀತಿ, ರಿಯಾಯಿತಿಯಲ್ಲಿ ಲಭ್ಯವಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1gtrr53sqbtsfxeeqd9cd0,imgname-new-project---2026-06-01t172406.379-1780315153157.jpg" type="image/jpeg" height="390" width="690"/>
            <content:encoded><![CDATA[&lt;p&gt;Blinkit, ಸೂಪರ್&zwnj;ಮಾರ್ಕೆಟ್&zwnj;ಗಳ ನಡುವಿನ ದಿನಸಿ ವೆಚ್ಚವನ್ನು ಹೋಲಿಸಿದ ಪೋಸ್ಟ್ ವೈರಲ್ ಆಗಿದೆ. 1 ತಿಂಗಳ ಖರ್ಚಿನಲ್ಲಿ ಒಟ್ಟಾರೆ ಬೆಲೆ ವ್ಯತ್ಯಾಸವು ನಿರೀಕ್ಷೆಗಿಂತ ಕಡಿಮೆ ಇತ್ತು. ಬ್ಲಿಂಕಿಟ್&zwnj;ನಲ್ಲಿ ಕೆಲವು ವಸ್ತುಗಳು ದುಬಾರಿ, ಇನ್ನು ಕೆಲವು ವಸ್ತುಗಳ ಬೆಲೆ ಒಂದೇ ರೀತಿ, ರಿಯಾಯಿತಿಯಲ್ಲಿ ಲಭ್ಯವಿತ್ತು.&lt;/p&gt;&lt;img&gt;&lt;p&gt;ಕ್ವಿಕ್-ಕಾಮರ್ಸ್ ಪ್ಲಾಟ್&zwnj;ಫಾರ್ಮ್ ಬ್ಲಿಂಕಿಟ್, ಸ್ಥಳೀಯ ಸೂಪರ್&zwnj;ಮಾರ್ಕೆಟ್&zwnj;ಗಳಲ್ಲಿನ ದಿನಸಿ ಖರ್ಚಿನ ಬಗ್ಗೆ ದಂಪತಿಯೊಬ್ಬರು ಮಾಡಿದ ವಿವರವಾದ ಹೋಲಿಕೆಯ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೇಗದ ಡೆಲಿವರಿ ಕೊಡುವ ಆ್ಯಪ್&zwnj;ಗಳು ಹೆಚ್ಚು ದುಬಾರಿಯೇ ಎಂಬ ಚರ್ಚೆಯನ್ನು ಇದು ಮತ್ತೆ ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ಈ ದಂಪತಿ ಒಂದು ತಿಂಗಳಲ್ಲಿ ಬ್ಲಿಂಕಿಟ್ ಮೂಲಕ ಸುಮಾರು ₹20,000 ಮೌಲ್ಯದ ದಿನಸಿ ವಸ್ತುಗಳನ್ನು ಖರೀದಿಸಿದ್ದರು. ಈ ಪ್ರಯೋಗವು, ಅನುಕೂಲ, ಮನೆ ಬಜೆಟ್ ನಡುವೆ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತಿರುವ ಗ್ರಾಹಕರಿಂದ ವ್ಯಾಪಕ ಗಮನ ಸೆಳೆದಿದೆ. ತಮ್ಮ ತಿಂಗಳ ದಿನಸಿ ಬಜೆಟ್&zwnj;ನ ದೊಡ್ಡ ಪಾಲು ಕ್ವಿಕ್-ಡೆಲಿವರಿ ಪ್ಲಾಟ್&zwnj;ಫಾರ್ಮ್&zwnj;ಗೆ ಹೋಗುತ್ತಿರುವುದನ್ನು ಗಮನಿಸಿದ ನಂತರ, ಈ ದಂಪತಿ ತಮ್ಮ ಖರ್ಚಿನ ಬಗ್ಗೆ ವಿಶ್ಲೇಷಿಸಲು ನಿರ್ಧರಿಸಿದರು. ಈ ಅನುಕೂಲಕ್ಕಾಗಿ ತಾವು ಹೆಚ್ಚು ಹಣ ಪಾವತಿಸುತ್ತಿದ್ದೇವೆಯೇ ಎಂದು ತಿಳಿಯಲು, ಅವರು ಬ್ಲಿಂಕಿಟ್&zwnj;ನಲ್ಲಿ ಖರೀದಿಸಿದ ವಸ್ತುಗಳ ಬೆಲೆಗಳನ್ನು ಹತ್ತಿರದ ಸೂಪರ್&zwnj;ಮಾರ್ಕೆಟ್&zwnj;ಗಳಲ್ಲಿ ಲಭ್ಯವಿರುವ ಬೆಲೆಗಳೊಂದಿಗೆ ಹೋಲಿಕೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಸಂಶೋಧನೆಯನ್ನು ಆನ್&zwnj;ಲೈನ್&zwnj;ನಲ್ಲಿ ಹಂಚಿಕೊಂಡ ಅವರು, ತಾವು ಅಂದುಕೊಂಡಿದ್ದಕ್ಕಿಂತ ಈ ಎರಡು ಶಾಪಿಂಗ್ ವಿಧಾನಗಳ ನಡುವಿನ ಒಟ್ಟಾರೆ ವ್ಯತ್ಯಾಸವು ತುಂಬಾ ಕಡಿಮೆ ಎಂದು ಬಹಿರಂಗಪಡಿಸಿದ್ದಾರೆ. ಬ್ಲಿಂಕಿಟ್&zwnj;ನಲ್ಲಿ ಕೆಲವು ಉತ್ಪನ್ನಗಳು ಹೆಚ್ಚು ದುಬಾರಿಯಾಗಿದ್ದರೂ, ಇತರ ವಸ್ತುಗಳ ಬೆಲೆಗಳು ಒಂದೇ ರೀತಿ ಇದ್ದವು ಅಥವಾ ಪ್ರೊಮೋಷನ್&zwnj; ಮತ್ತು ಆಫರ್&zwnj;ಗಳ ಮೂಲಕ ರಿಯಾಯಿತಿಯಲ್ಲಿ ಸಿಕ್ಕಿದ್ದವು. ಕ್ವಿಕ್-ಕಾಮರ್ಸ್&zwnj;ನಲ್ಲಿ ಮಾಡುವ ಎಲ್ಲ ಖರೀದಿಗಳು ಹೆಚ್ಚು ದುಬಾರಿ ಎಂಬ ಸಾಮಾನ್ಯ ನಂಬಿಕೆಗೆ ಈ ಹೋಲಿಕೆಯು ಸವಾಲು ಹಾಕಿದೆ.&lt;/p&gt;&lt;img&gt;&lt;p&gt;ವೈರಲ್ ಪೋಸ್ಟ್ ಪ್ರಕಾರ, ಅನುಕೂಲವೇ ಅವರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ತ್ವರಿತ ಡೆಲಿವರಿ ಸೇವೆಗಳು ಸಮಯವನ್ನು ಉಳಿಸುತ್ತವೆ, ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡುತ್ತವೆ, ಪದೇ ಪದೇ ಸೂಪರ್&zwnj;ಮಾರ್ಕೆಟ್&zwnj;ಗೆ ಹೋಗುವುದನ್ನು ತಪ್ಪಿಸುತ್ತವೆ ಎಂದು ದಂಪತಿ ಹೇಳಿದ್ದಾರೆ. ಆದರೆ, ಬಳಕೆದಾರರು ಜಾಗರೂಕರಾಗಿರದಿದ್ದರೆ, ಸಣ್ಣ ಸಣ್ಣ ಆರ್ಡರ್&zwnj;ಗಳು ಮತ್ತು ಇಂಪಲ್ಸ್ ಖರೀದಿಗಳು ತಿಂಗಳ ಖರ್ಚನ್ನು ಹೆಚ್ಚಿಸಬಹುದು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಪೋಸ್ಟ್&zwnj;ಗೆ ಆನ್&zwnj;ಲೈನ್&zwnj;ನಲ್ಲಿ ಸಾವಿರಾರು ಪ್ರತಿಕ್ರಿಯೆಗಳು ಬಂದಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರು ಕ್ವಿಕ್-ಕಾಮರ್ಸ್ ಪ್ಲಾಟ್&zwnj;ಫಾರ್ಮ್&zwnj;ಗಳೊಂದಿಗೆ ತಮ್ಮದೇ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು, ವಿಶೇಷವಾಗಿ ನಗರಗಳಲ್ಲಿನ ಉದ್ಯೋಗಿಗಳಿಗೆ, ಈ ಸಣ್ಣ ಬೆಲೆ ವ್ಯತ್ಯಾಸವು ಅನುಕೂಲಕ್ಕೆ ತಕ್ಕ ಬೆಲೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು, ದೊಡ್ಡ ಪ್ರಮಾಣದ ಖರೀದಿ ಮತ್ತು ಯೋಜಿತ ಮಾಸಿಕ ಶಾಪಿಂಗ್&zwnj;ಗೆ ಸಾಂಪ್ರದಾಯಿಕ ಸೂಪರ್&zwnj;ಮಾರ್ಕೆಟ್&zwnj;ಗಳೇ ಹೆಚ್ಚು ಆರ್ಥಿಕ ಎಂದು ವಾದಿಸಿದ್ದಾರೆ.&lt;/p&gt;&lt;img&gt;&lt;p&gt;ಶಾಪಿಂಗ್ ವೆಚ್ಚಗಳನ್ನು ಹೋಲಿಸುವಾಗ ಇಂಧನ, ಸಾರಿಗೆ, ಪಾರ್ಕಿಂಗ್ ಶುಲ್ಕ ಮತ್ತು ವೈಯಕ್ತಿಕ ಸಮಯದ ಮೌಲ್ಯದಂತಹ ಅಂಶಗಳನ್ನು ಸಹ ಪರಿಗಣಿಸಬೇಕು ಎಂದು ಹಲವಾರು ಮಂದಿ ಕಮೆಂಟ್&zwnj;ಗಳಲ್ಲಿ ಹೇಳಿದ್ದಾರೆ. ಈ ಚರ್ಚೆಯು ಭಾರತೀಯ ನಗರಗಳಲ್ಲಿ ಬದಲಾಗುತ್ತಿರುವ ಗ್ರಾಹಕರ ನಡವಳಿಕೆ ಮತ್ತು ತ್ವರಿತ-ಡೆಲಿವರಿ ಸೇವೆಗಳ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ದೊಡ್ಡ ಸಂಭಾಷಣೆಯಾಗಿ ಬದಲಾಗಿದೆ.&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/blinkit-delivery-app-vs-supermarket-which-is-better-in-price-difference-s3gvnpo"/>
        </item>
        <item>
            <title><![CDATA[ಪತ್ನಿಯನ್ನ ಕೊಂದು ಕಾಂಕ್ರೀಟ್‌ ಹಾಕಿ ಸಮಾಧಿ ಮಾಡಿದ ಪತಿ! ಮಗನ ಕೈಗೆ ಸಿಕ್ಕ ಚೀಟಿಯಿಂದ ಬಯಲಾಯ್ತು ಪ್ರಕರಣ!]]></title>
            <link>https://kannada.asianetnews.com/india-news/surat-man-kills-dietitian-wife-buries-her-in-concrete-in-gujarath-rav/articleshow-ss6t37i</link>
            <guid isPermaLink="true">https://kannada.asianetnews.com/india-news/surat-man-kills-dietitian-wife-buries-her-in-concrete-in-gujarath-rav/articleshow-ss6t37i</guid>
            <pubDate>Tue, 28 Apr 2026 04:59:39 +0530</pubDate>
            <description><![CDATA[ಸೂರತ್&zwnj;ನಲ್ಲಿ, ಪತ್ನಿಯ ಅನೈತಿಕ ಸಂಬಂಧವನ್ನು ಶಂಕಿಸಿದ ಪತಿಯೊಬ್ಬ ಆಕೆಯನ್ನು ಕೊಂದು, ಶವವನ್ನು ಮರದ ಪೆಟ್ಟಿಗೆಯಲ್ಲಿಟ್ಟು ಕಾಂಕ್ರೀಟ್&zwnj;ನಿಂದ ಮುಚ್ಚಿದ್ದಾನೆ. ನಾಪತ್ತೆ ಪ್ರಕರಣವೆಂದು ಭಾವಿಸಿದ್ದ ಪೊಲೀಸರಿಗೆ, ಆರೋಪಿ ಪತಿಯೇ ಬರೆದಿಟ್ಟ ಪತ್ರ ಮಗನ ಕೈಗೆ ಸಿಕ್ಕಿದ್ದರಿಂದ ಈ ಘೋರ ಕೃತ್ಯ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq8m86w01tfr8f3vxrv6mxm7,imgname--------------------------------17--1777332394880.jpg" type="image/jpeg" height="390" width="690"/>
            <content:encoded><![CDATA[&lt;h2&gt;- ಮಗನಿಗೆ ಸಿಕ್ಕ ಚೀಟಿಯಿಂದ ಕೃತ್ಯ ಬಯಲಿಗೆ&lt;/h2&gt;&lt;p&gt;&lt;strong&gt;ಸೂರತ್&zwnj;:&lt;/strong&gt; ಗುಜರಾತ್&zwnj;ನ ಸೂರತ್&zwnj;ನಲ್ಲಿ ವ್ಯಕ್ತಿಯೊಬ್ಬ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿ ಆಕೆಯನ್ನು ಕೊಂದು ಮರದ ಪೆಟ್ಟಿಯೊಳಗೆ ತುಂಬಿ ಕಾಂಕ್ರೀಟ್&zwnj; ಹಾಕಿ ಮುಚ್ಚಿಟ್ಟ ಆಘಾತಕಾರಿ ಘಟನೆ ನಡೆದಿದೆ. ಆದರೆ ಮಗನಿಗೆ ಸಿಕ್ಕ ಪತ್ರದಿಂದ ಪಾಪಿಯ ಕೃತ್ಯ ಬಯಲಿಗೆ ಬಂದಿದೆ.&lt;/p&gt;&lt;p&gt;ಆಹಾರ ತಜ್ಞೆ ಶಿಲ್ಪಾ ನಾಪತ್ತೆಯಾಗಿದ್ದಾರೆ ಎಂದು ಆಕೆಯ ಪತಿ ವಿಶಾಲ್&zwnj; ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಪೊಲೀಸರು ಇದೊಂದು ಸಾಮಾನ್ಯ ನಾಪತ್ತೆ ಪ್ರಕರಣ ಎಂದೇ ಭಾವಿಸಿದ್ದರು.&lt;/p&gt;&lt;p&gt;ಆಗಿದ್ದೇನು?: ದೂರು ನೀಡಿದ ಎರಡು ದಿನಗಳ ಬಳಿಕ ವಿಶಾಲ್&zwnj; ಕೂಡಾ ನಾಪತ್ತೆಯಾಗಿದ್ದ. ಇದೇ ಮನೆಯಲ್ಲಿ ಪುತ್ರನಿಗೆ ವಿಶಾಲ್&zwnj; ಬರೆದಿಟ್ಟ ಪತ್ರವೊಂದು ಸಿಕ್ಕಿತ್ತು. ಅದರಲ್ಲಿ ಆತ ಹತ್ಯೆ ಬಗ್ಗೆ ತಪ್ಪೊಪ್ಪಿಕೊಂಡಿದ್ದ. ಅದರಲ್ಲಿ ಸಿಕ್ಕ ಮಾಹಿತಿ ಅನ್ವಯ ಸಮೀಪದ ಪಾಳು ಬಿದ್ದ ಮನೆ ಹುಡುಕಿದಾಗ ಅಲ್ಲಿ ಮರದ ಶವದ ಮೇಲೆ ಕಾಂಕ್ರೀಟ್ ಹಾಕಿ ಮುಚ್ಚಿದ್ದ ಮರದ ಪೆಟ್ಟಿಗೆ ಸಿಕ್ಕಿದೆ. ಬಳಿಕ ಹುಡುಕಾಟ ನಡೆಸಿದ ವೇಳೆ ವಿಶಾಲ್&zwnj; ಕೂಡಾ ಸಿಕ್ಕಿಬಿದ್ದಿದ್ದಾನೆ.&lt;/p&gt;]]></content:encoded>
            <category>news-money</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/surat-man-kills-dietitian-wife-buries-her-in-concrete-in-gujarath-rav/articleshow-ss6t37i"/>
        </item>
        <item>
            <title><![CDATA[Loan App: ನಿಮಿಷದಲ್ಲೇ ಸಾಲ, ಆಮೇಲೆ ಜೀವಕ್ಕೇ ಕುತ್ತು! ಈ ಫೇಕ್ ಆ್ಯಪ್‌ಗಳಿಂದ ಹುಷಾರ್!]]></title>
            <link>https://kannada.asianetnews.com/money/fake-loan-app-scams-the-hidden-dangers-of-instant-cash-and-how-to-stay-safe/articleshow-u1vktgs</link>
            <guid isPermaLink="true">https://kannada.asianetnews.com/money/fake-loan-app-scams-the-hidden-dangers-of-instant-cash-and-how-to-stay-safe/articleshow-u1vktgs</guid>
            <pubDate>Wed, 22 Apr 2026 13:38:14 +0530</pubDate>
            <description><![CDATA[ದೇಶದಲ್ಲಿ ನಕಲಿ ಲೋನ್ ಆ್ಯಪ್&zwnj;ಗಳ ಹಾವಳಿ ಹೆಚ್ಚಾಗಿದೆ. ನಿಮಿಷಗಳಲ್ಲೇ ಸಾಲ ನೀಡುವುದಾಗಿ ಹೇಳಿ ಜನರನ್ನು ಬಲೆಗೆ ಬೀಳಿಸಿ, ನಂತರ ವಿಪರೀತ ಬಡ್ಡಿ, ಬ್ಲ್ಯಾಕ್&zwnj;ಮೇಲ್ ಮೂಲಕ ಕಿರುಕುಳ ನೀಡುತ್ತವೆ. ಇವುಗಳ ಕಾರ್ಯವೈಖರಿ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.]]></description>
            <media:content url="https://static.asianetnews.com/images/w-1280,h-720,format-jpg,imgid-01hs5yarzym55kpkrg67gt895w,imgname-new-project--25-.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದಲ್ಲಿ ನಕಲಿ ಲೋನ್ ಆ್ಯಪ್&zwnj;ಗಳ ಹಾವಳಿ ಮಿತಿಮೀರಿದೆ. ಆಧಾರ್ ಕಾರ್ಡ್ ಮತ್ತು ಕೆಲವು ದಾಖಲೆ ಕೊಟ್ಟರೆ ಸಾಕು, ನಿಮಿಷಗಳಲ್ಲೇ ಲಕ್ಷಾಂತರ ರೂಪಾಯಿ ನಿಮ್ಮ ಅಕೌಂಟ್&zwnj;ಗೆ ಬರುತ್ತೆ ಅಂತ ಹೇಳಿ ಮೋಸ ಮಾಡೋ ಸೈಬರ್ ಗ್ಯಾಂಗ್&zwnj;ಗಳ ಆಕ್ಟಿವ್ ಆಗಿವೆ. ಸಾಲ ಪಡೆಯುವ ಮುನ್ನ ಈ ಬಗ್ಗೆ ಎಚ್ಚರವಾಗಿರಬೇಕಾದ ಸಮಯ ಬಂದಿದೆ. ಇಂತಹ ಜೀವಕ್ಕೆ ಕುತ್ತು ತರುವ ಆ್ಯಪ್&zwnj;ಗಳ ಬಗ್ಗೆ ಕೇರಳ ಪೊಲೀಸರು ಕೂಡ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.&lt;/p&gt;&lt;h2&gt;ಜೀವ ತೆಗೆಯೋ ಲೋನ್ ಆ್ಯಪ್&zwnj;ಗಳು&lt;/h2&gt;&lt;p&gt;ಲೋನ್ ಆ್ಯಪ್&zwnj;ಗಳ ಬಲೆಗೆ ಬಿದ್ದವರ ಕಥೆಗಳು ನಮ್ಮ ಸುತ್ತಮುತ್ತ ಸಾಕಷ್ಟಿವೆ. ಸಾಲದ ಸುಳಿಯಲ್ಲಿ ಸಿಲುಕಿ, ಅವಮಾನ ತಾಳಲಾರದೆ ಜೀವನವನ್ನೇ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ 'ಕೆಲವೇ ದಾಖಲೆಗಳು, ನಿಮಿಷಗಳಲ್ಲಿ ಹಣ ನಿಮ್ಮ ಖಾತೆಗೆ' ಎಂಬಂತಹ ಆಕರ್ಷಕ ಜಾಹೀರಾತುಗಳ ಮೂಲಕ ಈ ವಂಚಕರು ಜನರನ್ನು ಸೆಳೆಯುತ್ತಾರೆ. ಆದರೆ, ಈ ಆ್ಯಪ್&zwnj;ಗಳಿಂದ ಸಾಲ ಪಡೆಯುವ ಜನರಿಗೆ ತಾವು ಒಂದು ದೊಡ್ಡ ಅಪಾಯದ ಬಲೆಗೆ ಕಾಲಿಡುತ್ತಿದ್ದೇವೆ ಎಂಬ ಅರಿವಿರುವುದಿಲ್ಲ. ತಕ್ಷಣಕ್ಕೆ ಸಾಲ ಸಿಗುತ್ತದೆಂಬ ಆಸೆಗೆ ಎಡವಿಬಿಳುವವರ ಸಂಖ್ಯೆ ಹೆಚ್ಚಿದೆ.&lt;/p&gt;&lt;p&gt;ಈ ಫೇಕ್ ಲೋನ್ ಆ್ಯಪ್&zwnj;ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಗಳನ್ನೇ ಪಾಲಿಸುವುದಿಲ್ಲ. ಸಾಲ ಪಡೆದವರಿಂದ ಸುಲಿಗೆ ಮಾಡುವ ರೀತಿಯಲ್ಲಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತವೆ.&lt;/p&gt;&lt;p&gt;ನಮ್ಮಲ್ಲಿ ಮೀಟರ್ ಬಡ್ಡಿ ದಂಧೆ ಮಾಡುವವರ ಹಾಗೇ ಈ ಲೋನ್ ಆ್ಯಪ್ ಗ್ಯಾಂಗ್&zwnj;ಗಳು ಕೆಲಸ ಮಾಡುತ್ತವೆ. ಈ ಆರ್ಥಿಕ ವಂಚಕರ ತಂಡಗಳು ಹೆಚ್ಚಾಗಿ ಕೇರಳದ ಹೊರಗೆ, ಕೆಲವೊಮ್ಮೆ ವಿದೇಶಗಳಲ್ಲಿಯೂ ಕೂತು ಕಾರ್ಯಾಚರಣೆ ನಡೆಸುತ್ತವೆ. ಹಣ ಕೊಡುವಾಗ ಸೌಮ್ಯವಾಗಿ ಮಾತನಾಡುವ ಇವರು, ಸಾಲ ಮರುಪಾವತಿ ಸ್ವಲ್ಪ ತಡವಾದರೆ ತಮ್ಮ ನಿಜ ಬಣ್ಣ ತೋರಿಸುತ್ತಾರೆ. ಬೆದರಿಕೆ, ಬ್ಲ್ಯಾಕ್&zwnj;ಮೇಲ್ ಶುರುವಾಗುತ್ತದೆ. ನಿಮ್ಮ ಫೋಟೋಗಳನ್ನು ಮಾರ್ಫ್ ಮಾಡಿ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಇಲ್ಲದಿದ್ದರೆ, ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್&zwnj;ನಲ್ಲಿರುವವರಿಗೆ ಮತ್ತು ಸಂಬಂಧಿಕರಿಗೆ ಕಳುಹಿಸಿ ಮಾನಹರಣ ಮಾಡುತ್ತಾರೆ. ಇದು ಈ ಲೋನ್ ಆ್ಯಪ್ ಗ್ಯಾಂಗ್&zwnj;ಗಳ ಸಾಮಾನ್ಯ ಬೆದರಿಕೆ ತಂತ್ರ.&lt;/p&gt;&lt;p&gt;ನೀವು ಪಡೆದ ಸಾಲ ಸಣ್ಣ ಮೊತ್ತದ್ದಾಗಿದ್ದರೂ, ಅದರ ಮೇಲೆ ವಿಪರೀತ ಬಡ್ಡಿ ಮತ್ತು ದಂಡ ಸೇರಿ ದೊಡ್ಡ ಮೊತ್ತವಾಗಿ ಬೆಳೆದು ನಿಲ್ಲುತ್ತದೆ. ಪಕ್ಕದ ಕೇರಳದಲ್ಲಿ ಈ ರೀತಿ ಪ್ರಾಣ ಕಳೆದುಕೊಂಡವರು ಅದೆಷ್ಟೋ ಮಂದಿ. ಅದರಲ್ಲೂ ಹೆಚ್ಚಾಗಿ ಯುವಕರೇ ಈ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಹದಿಹರೆಯದವರ ಸಂಖ್ಯೆಯೂ ಕಡಿಮೆ ಇಲ್ಲ.&lt;/p&gt;&lt;p&gt;ನೀವು ಲೋನ್ ಆ್ಯಪ್&zwnj;ಗಳನ್ನು ಇನ್&zwnj;ಸ್ಟಾಲ್ ಮಾಡುವಾಗಲೇ ನಿಮ್ಮಿಂದ ಕೆಲವು ಪರ್ಮಿಷನ್&zwnj;ಗಳನ್ನು ಕೇಳುತ್ತವೆ. ಕಾಂಟ್ಯಾಕ್ಟ್&zwnj;ಗಳು, ಗ್ಯಾಲರಿ, ಲೊಕೇಶನ್&zwnj;ಗೆ ಆ್ಯಕ್ಸೆಸ್ ಕೊಡಿ ಎಂದು ಕೇಳುತ್ತವೆ. ನಿಮ್ಮ ಫೋನ್&zwnj;ನಲ್ಲಿರುವ ಮಾಹಿತಿ ಕದಿಯಲೆಂದೇ ಈ ರೀತಿ ಮಾಡುತ್ತವೆ ಎಂಬುದನ್ನು ಮರೆಯಬೇಡಿ. ಲೋನ್ ಆ್ಯಪ್ ವಂಚನೆಯಿಂದ ಸುರಕ್ಷಿತವಾಗಿರಲು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಪಾಲಿಸಿ.&lt;/p&gt;&lt;h3&gt;1. ಆ್ಯಪ್&zwnj;ನ ಅಸಲಿಯತ್ತು ಚೆಕ್ ಮಾಡಿ&lt;/h3&gt;&lt;p&gt;ಸಾಲ ನೀಡುವ ಆ್ಯಪ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾನ್ಯತೆ ಪಡೆದ ಬ್ಯಾಂಕ್ ಅಥವಾ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪನಿ (NBFC) ಜೊತೆ ಸಂಬಂಧ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಆ್ಯಪ್&zwnj;ಗೆ ಅಧಿಕೃತ ವೆಬ್&zwnj;ಸೈಟ್ ಮತ್ತು ಕಚೇರಿ ವಿಳಾಸ ಇದೆಯೇ ಎಂದು ಪರಿಶೀಲಿಸಿ.&lt;/p&gt;&lt;h3&gt;2. ಪರ್ಮಿಷನ್ ಕೊಡುವಾಗ ಹುಷಾರಾಗಿರಿ&lt;/h3&gt;&lt;p&gt;ಆ್ಯಪ್ ಇನ್&zwnj;ಸ್ಟಾಲ್ ಮಾಡುವಾಗ ನಿಮ್ಮ ಕಾಂಟ್ಯಾಕ್ಟ್, ಗ್ಯಾಲರಿ (ಫೋಟೋಗಳು), ಮತ್ತು ಲೊಕೇಶನ್&zwnj;ಗೆ ಆ್ಯಕ್ಸೆಸ್ ಕೇಳಿದರೆ ಎಚ್ಚರದಿಂದಿರಿ. ಸಾಮಾನ್ಯವಾಗಿ ಒಂದು ಲೋನ್ ಆ್ಯಪ್&zwnj;ಗೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್&zwnj;ನ ಅವಶ್ಯಕತೆ ಇರುವುದಿಲ್ಲ. ನಿಮ್ಮ ಫೋಟೋ ಮತ್ತು ಕಾಂಟ್ಯಾಕ್ಟ್&zwnj;ಗಳನ್ನೇ ಬಳಸಿಕೊಂಡು ಇವರು ನಂತರ ಬ್ಲ್ಯಾಕ್&zwnj;ಮೇಲ್ ಮಾಡುತ್ತಾರೆ.&lt;/p&gt;&lt;h3&gt;3. ಸಾಲದ ನಿಯಮಗಳನ್ನು ಸರಿಯಾಗಿ ಓದಿ&lt;/h3&gt;&lt;p&gt;ಅತಿಯಾದ ಬಡ್ಡಿ ದರ, ಕಡಿಮೆ ಮರುಪಾವತಿ ಅವಧಿ (ಉದಾಹರಣೆಗೆ 7 ದಿನ) ಇವೆಲ್ಲವೂ ನಕಲಿ ಆ್ಯಪ್&zwnj;ಗಳ ಲಕ್ಷಣ. ಸಾಲ ನೀಡುವ ಮುನ್ನ 'ಪ್ರೊಸೆಸಿಂಗ್ ಫೀ' ಹೆಸರಿನಲ್ಲಿ ಹಣ ಕೇಳಿದರೆ, ಅದು 100% ಮೋಸದ ಜಾಲವಾಗಿರುತ್ತದೆ.&lt;/p&gt;&lt;h3&gt;4. ಪ್ಲೇ ಸ್ಟೋರ್ ರಿವ್ಯೂಗಳನ್ನು ಮಾತ್ರ ನಂಬಬೇಡಿ&lt;/h3&gt;&lt;p&gt;ಗೂಗಲ್ ಪ್ಲೇ ಸ್ಟೋರ್&zwnj;ನಲ್ಲಿರುವ ರೇಟಿಂಗ್ ಮತ್ತು ರಿವ್ಯೂಗಳನ್ನು ನಕಲಿಯಾಗಿ ಸೃಷ್ಟಿಸಲು ಸಾಧ್ಯವಿದೆ. ಹಾಗಾಗಿ, 'ಒನ್ ಸ್ಟಾರ್' (1-star) ರಿವ್ಯೂಗಳನ್ನು ತಪ್ಪದೇ ಓದಿ. ಅಲ್ಲಿ ಜನರು ತಾವು ಎದುರಿಸಿದ ವಂಚನೆಗಳ ಬಗ್ಗೆ ಬರೆದಿರುತ್ತಾರೆ.&lt;/p&gt;&lt;h3&gt;5. ಅಪರಿಚಿತ ಲಿಂಕ್&zwnj;ಗಳನ್ನು ಕ್ಲಿಕ್ ಮಾಡಬೇಡಿ&lt;/h3&gt;&lt;p&gt;ಎಸ್&zwnj;ಎಂಎಸ್ (SMS) ಅಥವಾ ವಾಟ್ಸ್&zwnj;ಆ್ಯಪ್ (WhatsApp) ಮೂಲಕ ಬರುವ ಅಪರಿಚಿತ ಲಿಂಕ್&zwnj;ಗಳನ್ನು ಕ್ಲಿಕ್ ಮಾಡಿ ಆ್ಯಪ್&zwnj;ಗಳನ್ನು ಡೌನ್&zwnj;ಲೋಡ್ ಮಾಡಬೇಡಿ. ಯಾವಾಗಲೂ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್&zwnj;ನಿಂದಲೇ ಡೌನ್&zwnj;ಲೋಡ್ ಮಾಡಿ.&lt;/p&gt;]]></content:encoded>
            <category>news-money</category>
            <dc:creator>Ravi Janekal</dc:creator>
            <atom:link href="https://kannada.asianetnews.com/money/fake-loan-app-scams-the-hidden-dangers-of-instant-cash-and-how-to-stay-safe/articleshow-u1vktgs"/>
        </item>
        <item>
            <title><![CDATA[ಚಿನ್ನ ಖರೀದಿಸುವವರಿಗೆ ಶುಭ ಶುಕ್ರವಾರ; ಅಮೆರಿಕ-ಇರಾನ್ ಡೀಲ್ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ಬರೋಬ್ಬರಿ 3650 ರುಪಾಯಿ ಕುಸಿತ!]]></title>
            <link>https://kannada.asianetnews.com/gallery/business/gold-prices-crash-after-us-iran-peace-deal-gold-falls-3650-rupees-silver-drops-10000-on-june-19-kvn-ufntver</link>
            <guid isPermaLink="true">https://kannada.asianetnews.com/gallery/business/gold-prices-crash-after-us-iran-peace-deal-gold-falls-3650-rupees-silver-drops-10000-on-june-19-kvn-ufntver</guid>
            <pubDate>Fri, 19 Jun 2026 11:10:47 +0530</pubDate>
            <description><![CDATA[&lt;p&gt;ಕಳೆದ ಕೆಲವು ದಿನಗಳಿಂದ ಆಕಾಶದತ್ತ ಮುಖ ಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಕುಸಿತ ಕಂಡಿದೆ. ಅಮೆರಿಕ-ಇರಾನ್ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮಹಾಪತನ ಕಂಡಿದೆ. ಜೂನ್ 19ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಎಷ್ಟು ಕುಸಿತ ಕಂಡಿದೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmm4jkq3gw693raa33ksz2bk,imgname-india-gold-price-today-26-march-2026-24k-22k-rate-delhi-mumbai-patna-gold-price-rise-oil-inflation-impact-1-1774497386211.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಕೆಲವು ದಿನಗಳಿಂದ ಆಕಾಶದತ್ತ ಮುಖ ಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಕುಸಿತ ಕಂಡಿದೆ. ಅಮೆರಿಕ-ಇರಾನ್ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮಹಾಪತನ ಕಂಡಿದೆ. ಜೂನ್ 19ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಎಷ್ಟು ಕುಸಿತ ಕಂಡಿದೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಳೆದ ಮೂರೂವರೆ ತಿಂಗಳಿನಿಂದ ಮಧ್ಯಪ್ರಾಚ್ಯ ಯುದ್ದದಿಂದಾಗಿ ಪ್ರತಿ ದಿನ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯವಾಗಿದ್ದವು. ಅದರಲ್ಲೂ ಮದುವೆ ಹಬ್ಬ, ಹರಿದಿನಗಳ ಸಂದರ್ಭದಲ್ಲೇ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದರಿಂದ ಸಾಮಾನ್ಯ ವರ್ಗದ ಜನ ಚಿನ್ನ ಖರೀದಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.&lt;/p&gt;&lt;img&gt;&lt;p&gt;ಇದೀಗ ಇರಾನ್ ಹಾಗೂ ಅಮೆರಿಕ ನಡುವಿನ ಯುದ್ದ ಉಭಯ ದೇಶಗಳ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ, ಭಾರತದ ಷೇರು ಮಾರುಕಟ್ಟೆ ಹಾಗೂ ರುಪಾಯಿ ಮೌಲ್ಯದಲ್ಲಿ ಕೊಂಚ ಏರಿಕೆ ಕಂಡಿದೆ. ಇನ್ನು ಇದರ ನಡುವೆ ಇಂದು ಚಿನ್ನದ ಬೆಲೆಯಲ್ಲಿ ಮಹಾ ಕುಸಿತ ಕಂಡಿದ್ದು, ಆಭರಣ ಪ್ರಿಯರ ಪಾಲಿಗೆ ಇಂದು ಶುಭ ಶುಕ್ರವಾರವಾಗಿ ಪರಿಣಮಿಸಿದೆ.&lt;/p&gt;&lt;img&gt;&lt;p&gt;ಹೌದು, 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಇಂದು ಒಂದೇ ದಿನ ಬರೋಬ್ಬರಿ 3650 ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಇಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,586 ರುಪಾಯಿಗಳಾಗಿವೆ. ಇದು ಬಂಗಾರದ ಮೇಲೆ ಹೂಡಿಕೆ ಮಾಡುವವರಿಗೆ ಶುಭ ಸುದ್ದಿಯಾಗಿದೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ ಆಭರಣ ಚಿನ್ನವಾಗಿರುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಸಹ ಗಣನೀಯ ಕುಸಿತವಾಗಿದೆ. ಇದೀಗ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಸುಮಾರು 3,350 ರುಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 13,370 ರುಪಾಯಿಗಳಾಗಿವೆ.&lt;/p&gt;&lt;img&gt;&lt;p&gt;ಇಂದು ಚಿನ್ನದ ಬೆಲೆಯಲ್ಲಿ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರುಪಾಯಿ ಇಳಿಕೆಯಾಗಿದೆ. ಜೂನ್ 19ರಂದು ಒಂದು ಕೆಜಿ ಬೆಳ್ಳಿ ಬೆಲೆ 2,50,000 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಒಂದು ಕಡೆ ಷೇರು ಮಾರುಕಟ್ಟೆಯಲ್ಲಿ ಏರಿಕೆ, ಯುದ್ದದ ಕಾವು ತಣ್ಣಗಾದ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿರುವುದು ಚಿನ್ನ ಖರೀದಿಸುವವರ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರ ಮುಖದಲ್ಲಿ ಮಂದಹಾಸ ಮೂಡಿಸಿರುವುದಂತೂ ಸುಳ್ಳಲ್ಲ.&lt;/p&gt;]]></content:encoded>
            <category>news-money</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/gold-prices-crash-after-us-iran-peace-deal-gold-falls-3650-rupees-silver-drops-10000-on-june-19-kvn-ufntver"/>
        </item>
        <item>
            <title><![CDATA[Wrong UPI Transaction Refund: ತಪ್ಪಾಗಿ ಹೆಚ್ಚು ಫೋನ್‌ಪೇ ಮಾಡಿದ್ರೆ ಹೇಗೆ ಹಣ ವಾಪಾಸ್‌ ಪಡೆಯೋದು?]]></title>
            <link>https://kannada.asianetnews.com/gallery/india-news/what-to-do-if-we-send-money-to-wrong-account-in-google-pay-upi-how-to-get-back-money-x5fp8z1</link>
            <guid isPermaLink="true">https://kannada.asianetnews.com/gallery/india-news/what-to-do-if-we-send-money-to-wrong-account-in-google-pay-upi-how-to-get-back-money-x5fp8z1</guid>
            <pubDate>Wed, 24 Jun 2026 16:56:35 +0530</pubDate>
            <description><![CDATA[&lt;p&gt;What if I accidentally transfer money to wrong UPI ID: ಫೋನ್ ಪೇ, ಗೂಗಲ್ ಪೇ ನಂತಹ ಯುಪಿಐ ಆ್ಯಪ್&zwnj;ಗಳ ಮೂಲಕ ಹಣ ಕಳುಹಿಸುವಾಗ ತುಂಬಾ ಜಾಗರೂಕರಾಗಿರಬೇಕು. ಸಣ್ಣ ತಪ್ಪಾದರೂ ನಮ್ಮ ಹಣ ಬೇರೆಯವರ ಖಾತೆಗೆ ಹೋಗಿಬಿಡುತ್ತದೆ. ಹೀಗೆ ಗೊತ್ತಿಲ್ಲದ ನಂಬರ್&zwnj;ಗೆ ಹಣ ಕಳುಹಿಸಿದರೆ ಏನು ಮಾಡಬೇಕು ಗೊತ್ತಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hr66cz0d2a03vg9aezj8snn4,imgname-googlepay-phonepay.jpg" type="image/jpeg" height="390" width="690"/>
            <content:encoded><![CDATA[&lt;p&gt;What if I accidentally transfer money to wrong UPI ID: ಫೋನ್ ಪೇ, ಗೂಗಲ್ ಪೇ ನಂತಹ ಯುಪಿಐ ಆ್ಯಪ್&zwnj;ಗಳ ಮೂಲಕ ಹಣ ಕಳುಹಿಸುವಾಗ ತುಂಬಾ ಜಾಗರೂಕರಾಗಿರಬೇಕು. ಸಣ್ಣ ತಪ್ಪಾದರೂ ನಮ್ಮ ಹಣ ಬೇರೆಯವರ ಖಾತೆಗೆ ಹೋಗಿಬಿಡುತ್ತದೆ. ಹೀಗೆ ಗೊತ್ತಿಲ್ಲದ ನಂಬರ್&zwnj;ಗೆ ಹಣ ಕಳುಹಿಸಿದರೆ ಏನು ಮಾಡಬೇಕು ಗೊತ್ತಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭಾರತ ಈಗ ಸಂಪೂರ್ಣ ಡಿಜಿಟಲ್ ಆಗಿದೆ. ಪ್ರತಿಯೊಂದು ಕೆಲಸವೂ ತಂತ್ರಜ್ಞಾನದ ಸಹಾಯದಿಂದಲೇ ನಡೆಯುತ್ತಿದೆ. ಅದರಲ್ಲೂ ಆರ್ಥಿಕ ವಹಿವಾಟುಗಳಂತೂ ಹಿಂದೆಂದಿಗಿಂತಲೂ ಸುಲಭವಾಗಿವೆ. ಬ್ಯಾಂಕ್&zwnj;ಗಳ ಸುತ್ತ ಅಲೆಯುವ ಬದಲು, ಕೈಯಲ್ಲಿರುವ ಸ್ಮಾರ್ಟ್&zwnj;ಫೋನೇ ಡಿಜಿಟಲ್ ಬ್ಯಾಂಕ್ ಆಗಿದೆ.&amp;nbsp;&lt;/p&gt;&lt;p&gt;ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಭೀಮ್, ಅಮೆಜಾನ್ ಪೇ ನಂತಹ ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್&zwnj;ಫೇಸ್) ಆ್ಯಪ್&zwnj;ಗಳ ಮೂಲಕ ಒಂದೇ ಕ್ಲಿಕ್&zwnj;ನಲ್ಲಿ ಹಣಕಾಸಿನ ವಹಿವಾಟುಗಳು ನಡೆಯುತ್ತಿವೆ.&amp;nbsp;&lt;/p&gt;&lt;p&gt;ಈ ಯುಪಿಐ ಆ್ಯಪ್&zwnj;ಗಳ ಮೂಲಕ ಪಾವತಿ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಸಣ್ಣ ತಪ್ಪಾದರೂ ಹಣ ಕಳೆದುಕೊಳ್ಳುವ ಅಪಾಯವಿರುತ್ತದೆ. ತಪ್ಪು ಫೋನ್ ನಂಬರ್ ಹಾಕಿದರೆ, ಹಣವು ಗೊತ್ತಿಲ್ಲದ ವ್ಯಕ್ತಿಗಳ ಖಾತೆಗೆ ಹೋಗುತ್ತದೆ.&amp;nbsp;&lt;/p&gt;&lt;p&gt;ಕೆಲವೊಮ್ಮೆ ನಾವು ಅಚಾನಕ್ಕಾಗಿ ಹೆಚ್ಚು ಹಣವನ್ನು ಕಳುಹಿಸಿಬಿಡುತ್ತೇವೆ. ಇಂತಹ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದೆ ಅನೇಕರು ಆತಂಕಕ್ಕೆ ಒಳಗಾಗುತ್ತಾರೆ. ಹಾಗಾದರೆ ಈ ಸಮಯದಲ್ಲಿ ಏನು ಮಾಡಬೇಕು? ಕಳುಹಿಸಿದ ಹಣವನ್ನು ಹಿಂಪಡೆಯಬಹುದೇ?&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಈ ಕೆಳಗಿನ ಕಾರಣಗಳಿಂದ ಯುಪಿಐನಲ್ಲಿ ತಪ್ಪು ವಹಿವಾಟುಗಳು ನಡೆಯುತ್ತವೆ.&amp;nbsp;&lt;/p&gt;&lt;p&gt;ತಪ್ಪು ಯುಪಿಐ ಐಡಿ ನಮೂದಿಸುವುದು ಅಥವಾ ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ಟೈಪ್ ಮಾಡುವುದು.&amp;nbsp;&lt;/p&gt;&lt;p&gt;ಆತುರದಲ್ಲಿ ಒಂದು ಸೊನ್ನೆ ಹೆಚ್ಚಿಗೆ ಟೈಪ್ ಮಾಡಿದರೂ ಹೆಚ್ಚು ಹಣ ಹೋಗುತ್ತದೆ. ಉದಾಹರಣೆಗೆ, ಫೋನ್ ಪೇನಲ್ಲಿ ಒಬ್ಬರಿಗೆ ರೂ.1,000 ಕಳುಹಿಸಬೇಕೆಂದುಕೊಂಡರೆ, ಒಂದು ಸೊನ್ನೆ ಹೆಚ್ಚಾಗಿ ಟೈಪ್ ಮಾಡಿದರೆ ರೂ.10,000 ಕಟ್ ಆಗುತ್ತದೆ.&amp;nbsp;&lt;/p&gt;&lt;p&gt;ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಹಣ ಸ್ವೀಕರಿಸುವವರ ಹೆಸರನ್ನು ಪರಿಶೀಲಿಸದೆ ಕಳುಹಿಸುವುದು.&lt;/p&gt;&lt;img&gt;&lt;p&gt;ವಹಿವಾಟಿನ ವಿವರಗಳನ್ನು ಸೇವ್ ಮಾಡಿಕೊಳ್ಳಿ ಮೊದಲಿಗೆ, ಟ್ರಾನ್ಸಾಕ್ಷನ್ ಐಡಿ, ಯುಟಿಆರ್ ಸಂಖ್ಯೆ, ದಿನಾಂಕ, ಸಮಯ, ಮತ್ತು ಮೊತ್ತದಂತಹ ವಿವರಗಳ ಸ್ಕ್ರೀನ್&zwnj;ಶಾಟ್ ತೆಗೆದುಕೊಳ್ಳಿ.&amp;nbsp;&lt;/p&gt;&lt;p&gt;ಹಣ ಪಡೆದ ವ್ಯಕ್ತಿಯನ್ನು ಸಂಪರ್ಕಿಸಿ ತಪ್ಪಾಗಿ ಹಣ ಹೋದ ವ್ಯಕ್ತಿಯ ವಿವರಗಳು ನಿಮಗೆ ತಿಳಿದಿದ್ದರೆ, ನೇರವಾಗಿ ಅವರನ್ನು ಸಂಪರ್ಕಿಸಿ ಹಣವನ್ನು ವಾಪಸ್ ಕಳುಹಿಸಲು ಕೇಳಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇದೇ ಅತ್ಯಂತ ವೇಗದ ಪರಿಹಾರ.&amp;nbsp;&lt;/p&gt;&lt;p&gt;ಬ್ಯಾಂಕ್ ಅಥವಾ ಯುಪಿಐ ಆ್ಯಪ್&zwnj;ನಲ್ಲಿ ದೂರು ನೀಡಿ Google Pay, PhonePe, Paytm, BHIM ನಂತಹ ಆ್ಯಪ್&zwnj;ಗಳಲ್ಲಿ 'Transaction History'ಗೆ ಹೋಗಿ, ಸಂಬಂಧಪಟ್ಟ ವಹಿವಾಟನ್ನು ಆಯ್ಕೆ ಮಾಡಿ. ಅಲ್ಲಿ 'Report Issue' ಅಥವಾ 'Raise Complaint' ಆಯ್ಕೆಯನ್ನು ಆರಿಸಿ, ತಪ್ಪು ವಹಿವಾಟಿನ ಬಗ್ಗೆ ವಿವರಗಳನ್ನು ದಾಖಲಿಸಿ.&lt;/p&gt;&lt;img&gt;&lt;p&gt;ನೀವು ತಪ್ಪು ವ್ಯಕ್ತಿಗಳಿಗೆ ಹಣ ಕಳುಹಿಸಿದರೆ ಅಥವಾ ಕಳುಹಿಸಬೇಕಾಗಿದ್ದಕ್ಕಿಂತ ಹೆಚ್ಚು ಹಣ ಕಳುಹಿಸಿದರೆ ಏನು ಮಾಡಬೇಕು? ಯುಪಿಐ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆ NPCI (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ನಿಯಮಗಳು ಏನು ಹೇಳುತ್ತವೆ?&amp;nbsp;&lt;/p&gt;&lt;p&gt;&amp;nbsp;ಬ್ಯಾಂಕ್&zwnj;ನಲ್ಲಿ ಅಧಿಕೃತವಾಗಿ ದೂರು ನೀಡಬಹುದು.&amp;nbsp;&lt;/p&gt;&lt;p&gt;NPCI ಗ್ರೀವೆನ್ಸ್ ಪೋರ್ಟಲ್ ಮೂಲಕ ದೂರು ದಾಖಲಿಸಬಹುದು. NPCI ಡಿಸ್ಪ್ಯೂಟ್ ರಿಡ್ರೆಸಲ್ ಮೆಕ್ಯಾನಿಸಂ ಮೂಲಕ 1800-120-1740 ಟೋಲ್-ಫ್ರೀ ಸಂಖ್ಯೆಗೂ ದೂರು ನೀಡಬಹುದು.&amp;nbsp;&lt;/p&gt;&lt;p&gt;ವಹಿವಾಟಿನ ಪುರಾವೆಗಳನ್ನು ಸಲ್ಲಿಸಬೇಕು.&amp;nbsp;&lt;/p&gt;&lt;p&gt;ತನಿಖೆಯ ನಂತರ ಹಣ ತಪ್ಪಾಗಿ ಹೋಗಿದೆ ಎಂದು ಸಾಬೀತಾದರೆ, ಅದನ್ನು ಮರುಪಡೆಯುವ ಪ್ರಕ್ರಿಯೆ ಆರಂಭವಾಗುತ್ತದೆ.&amp;nbsp;&lt;/p&gt;&lt;p&gt;NPCI ನಿಯಮಗಳ ಪ್ರಕಾರ, ತಿಂಗಳಲ್ಲಿ 10 ಬಾರಿ ಮಾತ್ರ ತಪ್ಪಾಗಿ ಕಳುಹಿಸಿದ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸಬಹುದು. ಅದೇ ಒಬ್ಬ ವ್ಯಕ್ತಿಗೆ 5ಕ್ಕಿಂತ ಹೆಚ್ಚು ಬಾರಿ ತಪ್ಪಾಗಿ ಕಳುಹಿಸಿದರೆ ಹಣ ವಾಪಸ್ ಬರುವುದಿಲ್ಲ. RBI ಅಂಬುಡ್ಸ್&zwnj;ಮನ್&zwnj;ರನ್ನು ಸಂಪರ್ಕಿಸಬಹುದೇ? ಬ್ಯಾಂಕ್ ಅಥವಾ ಯುಪಿಐ ಸೇವಾ ಪೂರೈಕೆದಾರರಿಗೆ ದೂರು ನೀಡಿದರೂ ಪರಿಹಾರ ಸಿಗದಿದ್ದರೆ, RBI ಇಂಟಿಗ್ರೇಟೆಡ್ ಅಂಬುಡ್ಸ್&zwnj;ಮನ್ ಸ್ಕೀಮ್ ಅಡಿಯಲ್ಲಿ ದೂರು ನೀಡಬಹುದು. ಇದಕ್ಕಾಗಿ ಮೊದಲು ಬ್ಯಾಂಕ್&zwnj;ನಲ್ಲಿ ದೂರು ನೀಡಿರಬೇಕು. 30 ದಿನಗಳಲ್ಲಿ ಪರಿಹಾರ ಸಿಗದಿದ್ದರೆ ಮಾತ್ರ RBI ಅನ್ನು ಸಂಪರ್ಕಿಸಬೇಕು.&lt;/p&gt;&lt;p&gt;&lt;strong&gt;ಹಣ ವಾಪಸ್ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?&lt;/strong&gt;&amp;nbsp;&lt;/p&gt;&lt;p&gt;ದೂರು ಮತ್ತು ತನಿಖೆಯನ್ನು ಆಧರಿಸಿ ಕೆಲವು ದಿನಗಳಲ್ಲಿ ಪರಿಹಾರ ಸಿಗಬಹುದು. ಕೆಲವು ಸಂಕೀರ್ಣ ಪ್ರಕರಣಗಳಲ್ಲಿ ಕೆಲವು ವಾರಗಳು పట్టಬಹುದು. ವಹಿವಾಟಿನ ವಿವರಗಳನ್ನು ಸರಿಯಾಗಿ ನೀಡಿದರೆ, ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ.&lt;/p&gt;&lt;img&gt;&lt;p&gt;ಕೆಲವು ಸಂದರ್ಭಗಳಲ್ಲಿ ಯುಪಿಐ ಮೂಲಕ ಮಾಡಿದ ತಪ್ಪನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ, ಅಂದರೆ ಹಣ ವಾಪಸ್ ಬರುವುದು ಕಷ್ಟ.&amp;nbsp;&lt;/p&gt;&lt;p&gt;ನೀವು ಸರಿಯಾದ ವ್ಯಕ್ತಿಗೆ ಹಣ ಕಳುಹಿಸಿ, ನಂತರ ಬೇಕೆಂದೇ ವಾಪಸ್ ಕೇಳಿದರೆ, ಹಣ ಪಡೆದ ವ್ಯಕ್ತಿ ಆ ಹಣವನ್ನು ಖರ್ಚು ಮಾಡಿದ್ದರೆ, ತಪ್ಪು ಮಾಹಿತಿಯೊಂದಿಗೆ ದೂರು ನೀಡಿದರೆ, ವಹಿವಾಟಿಗೆ ಸರಿಯಾದ ಪುರಾವೆ ಇಲ್ಲದಿದ್ದರೆ, ಯುಪಿಐ ಪಾವತಿ ಸಮಯದಲ್ಲಿ ತಪ್ಪುಗಳು ಆಗದಂತೆ ತಡೆಯಲು ಏನು ಮಾಡಬೇಕು? &amp;nbsp;&lt;/p&gt;&lt;p&gt;ಹಣ ಕಳುಹಿಸುವ ಮೊದಲು ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಎರಡು ಬಾರಿ ಪರಿಶೀಲಿಸಿ.&amp;nbsp;&lt;/p&gt;&lt;p&gt;ದೊಡ್ಡ ಮೊತ್ತದ ಹಣ ಕಳುಹಿಸುವ ಮೊದಲು ರೂ.1 ಕಳುಹಿಸಿ ಖಚಿತಪಡಿಸಿಕೊಳ್ಳಿ. &amp;nbsp;&lt;/p&gt;&lt;p&gt;ಕ್ಯೂಆರ್ ಕೋಡ್ ಅನ್ನು ಎಚ್ಚರಿಕೆಯಿಂದ ಸ್ಕ್ಯಾನ್ ಮಾಡಿ.&lt;/p&gt;&lt;p&gt;ಆತುರದಲ್ಲಿ ವಹಿವಾಟು ನಡೆಸದೆ, ಮೊತ್ತವನ್ನು ಮತ್ತೊಮ್ಮೆ ಪರಿಶೀಲಿಸಿ. &amp;nbsp;&lt;/p&gt;&lt;p&gt;ಯುಪಿಐ ಪಿನ್ ನಮೂದಿಸುವ ಮೊದಲು ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/what-to-do-if-we-send-money-to-wrong-account-in-google-pay-upi-how-to-get-back-money-x5fp8z1"/>
        </item>
        <item>
            <title><![CDATA[ಪಿಎಫ್ ಹಣಕ್ಕಾಗಿ ಇನ್ನು ಎಚ್‌ಆರ್ ಹಿಂದೆ ಅಲೆಯಬೇಕಿಲ್ಲ: ಆಧಾರ್ ಇದ್ದರೆ ಸಾಕು, ಹಳೆಯ ಖಾತೆಯ ಹಣ ನಿಮ್ಮ ಜೇಬಿಗೆ!]]></title>
            <link>https://kannada.asianetnews.com/business/epfo-e-praapti-portal-reclaim-old-inactive-provident-fund-money-online-san/articleshow-xt7b1bl</link>
            <guid isPermaLink="true">https://kannada.asianetnews.com/business/epfo-e-praapti-portal-reclaim-old-inactive-provident-fund-money-online-san/articleshow-xt7b1bl</guid>
            <pubDate>Thu, 30 Apr 2026 13:28:31 +0530</pubDate>
            <description><![CDATA[ಹಲವು ಕಂಪನಿಗಳಲ್ಲಿ ಕೆಲಸ ಬದಲಿಸಿದವರಿಗೆ ತಮ್ಮ ಹಳೆಯ, ನಿಷ್ಕ್ರಿಯ ಪಿಎಫ್ ಖಾತೆಗಳನ್ನು ಪತ್ತೆಹಚ್ಚಲು EPFO 'ಇ-ಪ್ರಾಪ್ತಿ' ಎಂಬ ಹೊಸ ಪೋರ್ಟಲ್ ಅನ್ನು ಪರಿಚಯಿಸಿದೆ. ಈ ಆಧಾರ್ ಆಧಾರಿತ ವ್ಯವಸ್ಥೆಯು ಯುಎಎನ್ ಇಲ್ಲದಿದ್ದರೂ ಸಹ, ಹಳೆಯ ಖಾತೆಗಳಿಂದ ಹಣವನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kag7aka8tb0mnzmdh23tsbtg,imgname-epfo-1763628633416.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.30): &lt;/strong&gt;ನೀವು ಹಲವಾರು ಕಂಪನಿಗಳಲ್ಲಿ ಕೆಲಸ ಬದಲಿಸಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಹಳೆಯ ಭವಿಷ್ಯ ನಿಧಿ (PF) ಖಾತೆಯಲ್ಲಿ ಹಣ ಹಾಗೆಯೇ ಉಳಿದಿರುವ ಸಾಧ್ಯತೆ ಹೆಚ್ಚಿದೆ. ಈವರೆಗೆ ಹಳೆಯ, ನಿಷ್ಕ್ರಿಯ ಖಾತೆಗಳಿಂದ ಹಣ ಪಡೆಯುವುದು ಅಥವಾ ಅವುಗಳನ್ನು ಪತ್ತೆಹಚ್ಚುವುದು ತೀರಾ ಸಂಕೀರ್ಣವಾಗಿತ್ತು. ಆದರೆ ಈಗ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಈ ಸಮಸ್ಯೆಗೆ ಮುಕ್ತಿ ನೀಡಲು ಸಜ್ಜಾಗಿದೆ. ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರು 'ಇ-ಪ್ರಾಪ್ತಿ' (E-PRAAPTI) ಎಂಬ ಹೊಸ ಪೋರ್ಟಲ್ ಅನ್ನು ಘೋಷಿಸಿದ್ದಾರೆ. ಇದು ಹಳೆಯ ಅಥವಾ ನಿಷ್ಕ್ರಿಯವಾಗಿರುವ ಪಿಎಫ್ ಖಾತೆಗಳನ್ನು ಪತ್ತೆಹಚ್ಚಲು ಮತ್ತು ಸಕ್ರಿಯಗೊಳಿಸಲು ಉದ್ಯೋಗಿಗಳಿಗೆ ನೆರವಾಗಲಿದೆ.&lt;/p&gt;&lt;h2&gt;&lt;strong&gt;ಇದು ನಿಮಗೆ ಏಕೆ ಮುಖ್ಯ?&lt;/strong&gt;&lt;/h2&gt;&lt;p&gt;ಭಾರತದ ಸಂಬಳ ಪಡೆಯುವ ವರ್ಗಕ್ಕೆ ಪಿಎಫ್ ಅತಿ ದೊಡ್ಡ ದೀರ್ಘಾವಧಿಯ ಉಳಿತಾಯವಾಗಿದೆ. ಆದರೆ ವರ್ಷಗಳು ಉರುಳಿದಂತೆ, ಕೆಲಸ ಬದಲಾದಾಗ ಹಳೆಯ ಖಾತೆಗಳ ಲಿಂಕ್ ತಪ್ಪುತ್ತದೆ.ಕೆಲವು ಕಂಪನಿಗಳು ಮುಚ್ಚಿಹೋಗುತ್ತವೆ. ಹಳೆಯ ಪಿಎಫ್ ಐಡಿಗಳು ಮರೆತುಹೋಗುತ್ತವೆ. ಯುಎಎನ್ (UAN) ಸಂಖ್ಯೆಗೆ ಹಳೆಯ ಖಾತೆಗಳು ಜೋಡಣೆಯಾಗಿರುವುದಿಲ್ಲ. ಇದರ ಪರಿಣಾಮವಾಗಿ, ನಿಮ್ಮ ಕಷ್ಟದ ದುಡಿಮೆಯ ಸಾವಿರಾರು ಅಥವಾ ಲಕ್ಷಾಂತರ ರೂಪಾಯಿ ಹಣ ಪಿಎಫ್ ಖಾತೆಯಲ್ಲಿ ಸುಮ್ಮನೆ ಬಿದ್ದಿರುತ್ತದೆ. ಇದನ್ನು ಸುಲಭವಾಗಿ ಹಿಂಪಡೆಯುವುದೇ ಈ ಪೋರ್ಟಲ್&zwnj;ನ ಮುಖ್ಯ ಉದ್ದೇಶ.&lt;/p&gt;&lt;h2&gt;&lt;strong&gt;ಏನಿದು ಇ-ಪ್ರಾಪ್ತಿ? ಇದರಿಂದ ಆಗುವ ಲಾಭಗಳೇನು?&lt;/strong&gt;&lt;/h2&gt;&lt;p&gt;E-PRAAPTI (Employee Provident Fund Aadhaar-Based Access Portal for Tracking Inoperative Accounts) ಎಂಬುದು ಆಧಾರ್ ಆಧಾರಿತ ಡಿಜಿಟಲ್ ವ್ಯವಸ್ಥೆಯಾಗಿದೆ.&lt;/p&gt;&lt;h2&gt;&lt;strong&gt;ಈ ಪೋರ್ಟಲ್ ಮೂಲಕ ನೀವು ಏನೇನು ಮಾಡಬಹುದು?&lt;/strong&gt;&lt;/h2&gt;&lt;ul&gt; &lt;li&gt;ಹಳೆಯ ಅಥವಾ ನಿಷ್ಕ್ರಿಯ ಪಿಎಫ್ ಖಾತೆಗಳನ್ನು ಪತ್ತೆಹಚ್ಚಬಹುದು.&lt;/li&gt; &lt;li&gt;ಯುಎಎನ್ (UAN) ಸಂಖ್ಯೆ ಇಲ್ಲದಿದ್ದರೂ ಹಳೆಯ ಖಾತೆಗಳನ್ನು ಪ್ರವೇಶಿಸಬಹುದು.&lt;/li&gt; &lt;li&gt;ದಾಖಲೆಗಳಿಗಾಗಿ ಅಲೆಯುವ ಬದಲು ಆಧಾರ್ ಆಧಾರಿತ ದೃಢೀಕರಣ ಬಳಸಬಹುದು.&lt;/li&gt; &lt;li&gt;ನಿಮ್ಮ ಯುಎಎನ್ ಸಂಖ್ಯೆಯನ್ನು ಹಳೆಯ ಖಾತೆಗೆ ಲಿಂಕ್ ಮಾಡಬಹುದು ಮತ್ತು ಸಕ್ರಿಯಗೊಳಿಸಬಹುದು.&lt;/li&gt; &lt;li&gt;ನಿಮ್ಮ ಪ್ರೊಫೈಲ್ ಅನ್ನು ಸುಲಭವಾಗಿ ಅಪ್&zwnj;ಡೇಟ್ ಮಾಡಬಹುದು.&lt;/li&gt;&lt;/ul&gt;&lt;h2&gt;&lt;strong&gt;ವೇಗವಾಗಿ ಬದಲಾಗುತ್ತಿದೆ ಇಪಿಎಫ್&zwnj;ಒ&lt;/strong&gt;&lt;/h2&gt;&lt;p&gt;ಪಿಎಫ್ ಹಣ ವಿಲೇವಾರಿ ಪ್ರಕ್ರಿಯೆಯು ಈಗ ಹಿಂದೆಂದಿಗಿಂತಲೂ ವೇಗವಾಗಿದೆ. ಅಂಕಿಅಂಶಗಳ ಪ್ರಕಾರ:&lt;/p&gt;&lt;ul&gt; &lt;li&gt;2025-26ರ ಆರ್ಥಿಕ ವರ್ಷದಲ್ಲಿ 8.31 ಕೋಟಿ ಕ್ಲೈಮ್&zwnj;ಗಳ ಇತ್ಯರ್ಥ (ಹಿಂದಿನ ವರ್ಷ 6.01 ಕೋಟಿ ಇತ್ತು).&lt;/li&gt; &lt;li&gt;ಶೇ. 71.11 ರಷ್ಟು ಮುಂಗಡ ಹಣದ ಅರ್ಜಿಗಳು ಕೇವಲ 3 ದಿನಗಳಲ್ಲಿ ಪೂರ್ಣಗೊಂಡಿವೆ.&lt;/li&gt; &lt;li&gt;ಶೇ. 98.7 ರಷ್ಟು ಅರ್ಜಿಗಳು 20 ದಿನಗಳ ಒಳಗೆ ಇತ್ಯರ್ಥವಾಗಿವೆ.&lt;/li&gt; &lt;li&gt;ಏಪ್ರಿಲ್ 2026 ಒಂದೇ ತಿಂಗಳಲ್ಲಿ 61.03 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಇದರಲ್ಲಿ ಶೇ. 74 ರಷ್ಟು ಅರ್ಜಿಗಳು ತಂತಾನೇ (Automatic) ಪ್ರಕ್ರಿಯೆಗೊಂಡಿವೆ.&lt;/li&gt;&lt;/ul&gt;&lt;h2&gt;&lt;strong&gt;ಕಡಿಮೆ ಕಾಗದದ ಕೆಲಸ - ಹೆಚ್ಚಿನ ನಿಯಂತ್ರಣ:&lt;/strong&gt;&lt;/h2&gt;&lt;p&gt;ಈಗ ಪಿಎಫ್ ಕೆಲಸಗಳಿಗಾಗಿ ಕಂಪನಿಯ ಎಚ್&zwnj;ಆರ್ (HR) ಅಥವಾ ಕಾಗದದ ದಾಖಲೆಗಳ ಮೇಲೆ ಅವಲಂಬಿತವಾಗುವುದು ತಪ್ಪುತ್ತಿದೆ:&lt;/p&gt;&lt;ul&gt; &lt;li&gt;6.68 ಕೋಟಿ ಸದಸ್ಯರು ಚೆಕ್ ಪ್ರತಿ ಅಪ್&zwnj;ಲೋಡ್ ಮಾಡದೆಯೇ ಹಣ ಪಡೆದಿದ್ದಾರೆ.&lt;/li&gt; &lt;li&gt;1.59 ಕೋಟಿ ಸದಸ್ಯರು ಉದ್ಯೋಗದಾತರ ಅನುಮೋದನೆ ಇಲ್ಲದೆಯೇ ಬ್ಯಾಂಕ್ ಖಾತೆ ಲಿಂಕ್ ಮಾಡಿದ್ದಾರೆ.&lt;/li&gt; &lt;li&gt;29.34 ಲಕ್ಷ ಬಳಕೆದಾರರು ತಮ್ಮ ವೈಯಕ್ತಿಕ ವಿವರಗಳನ್ನು ತಾವೇ ಸರಿಪಡಿಸಿಕೊಂಡಿದ್ದಾರೆ.&lt;/li&gt;&lt;/ul&gt;&lt;h2&gt;&lt;strong&gt;ಪೋರ್ಟಲ್ ಲಾಂಚ್ ಆಗುವ ಮುನ್ನ ಈ ತಯಾರಿ ಮಾಡಿಕೊಳ್ಳಿ&lt;/strong&gt;&lt;/h2&gt;&lt;ul&gt; &lt;li&gt;ನಿಮ್ಮ ಎಲ್ಲಾ ಹಳೆಯ ಕೆಲಸಗಳ ವಿವರಗಳು ಪ್ರಸ್ತುತ ಯುಎಎನ್ ಸಂಖ್ಯೆಗೆ ಲಿಂಕ್ ಆಗಿವೆಯೇ ಎಂದು ಪರಿಶೀಲಿಸಿ.&lt;/li&gt; &lt;li&gt;ನಿಮ್ಮ ಆಧಾರ್ ಮತ್ತು ಬ್ಯಾಂಕ್ ವಿವರಗಳು ಸರಿಯಾಗಿ ಅಪ್&zwnj;ಡೇಟ್ ಆಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.&lt;/li&gt; &lt;li&gt;ಹಳೆಯ ಕಂಪನಿಗಳ ಪಿಎಫ್ ಐಡಿ ಅಥವಾ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳಿ.&lt;/li&gt;&lt;/ul&gt;&lt;p&gt;&amp;nbsp;&lt;/p&gt;]]></content:encoded>
            <category>news-money</category>
            <dc:creator>Santosh Naik</dc:creator>
            <atom:link href="https://kannada.asianetnews.com/business/epfo-e-praapti-portal-reclaim-old-inactive-provident-fund-money-online-san/articleshow-xt7b1bl"/>
        </item>
    </channel>
</rss>
