<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 10 Sep 2026 19:06:47 +0530</lastBuildDate>
        <atom:link href="https://kannada.asianetnews.com/rss/news-money" rel="self" type="application/rss+xml"/>
        <item>
            <title><![CDATA[ಮನೆಯ ಬಜೆಟ್ ಮಾತ್ರವಲ್ಲ, ಹೂಡಿಕೆಯಲ್ಲೂ ಮಹಿಳೆಯರೇ ಬಾಸ್! mutual funds ವಿಚಾರದಲ್ಲಿ ಹೊಸ ದಾಖಲೆ]]></title>
            <link>https://kannada.asianetnews.com/money/india-mutual-fund-revolution-women-lead-the-shift-to-long-term-equity-investing-gkn/articleshow-05t58pm</link>
            <guid isPermaLink="true">https://kannada.asianetnews.com/money/india-mutual-fund-revolution-women-lead-the-shift-to-long-term-equity-investing-gkn/articleshow-05t58pm</guid>
            <pubDate>Wed, 26 Aug 2026 07:07:04 +0530</pubDate>
            <description><![CDATA[&lt;p&gt;ಭಾರತೀಯ ಮ್ಯೂಚುಯಲ್ ಫಂಡ್ ಹೂಡಿಕೆದಾರರು ಈಗ ದೀರ್ಘಾವಧಿಯ ಹೂಡಿಕೆಗೆ ಒಲವು ತೋರುತ್ತಿದ್ದು, ಮಹಿಳೆಯರು ಷೇರು ಮಾರುಕಟ್ಟೆ ಆಧಾರಿತ ಫಂಡ್&zwnj;ಗಳಲ್ಲಿ ಹೆಚ್ಚಿನ ಹಣ ತೊಡಗಿಸುತ್ತಿದ್ದಾರೆ. ತೆರಿಗೆ ನಿಯಮಗಳ ಬದಲಾವಣೆಯಿಂದ ಜನರು ಡೆಬ್ಟ್ ಫಂಡ್&zwnj;ಗಳಿಂದ ದೂರ ಸರಿಯುತ್ತಿದ್ದರೂ, ಮಾರುಕಟ್ಟೆಯ ಏರಿಳಿತ ಎದುರಿಸಲು ಸಮತೋಲಿತ ಹೂಡಿಕೆ ಅಗತ್ಯವೆಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0wmbwwh48zavn5m0ffdr3cs,imgname-mutual-funds-1787667280784.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆದಾರರ ಧೋರಣೆ ಕಳೆದ ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಹಿಂದೆಲ್ಲಾ ಅಲ್ಪಾವಧಿಗೆ ಹೂಡಿಕೆ ಮಾಡಿ ಲಾಭ ಗಳಿಸಿ ಹೊರಬರುತ್ತಿದ್ದ ಹೂಡಿಕೆದಾರರು, ಈಗ ದೀರ್ಘಕಾಲದವರೆಗೆ ಹೂಡಿಕೆ ಮಾಡಲು ಇಷ್ಟಪಡುತ್ತಿದ್ದಾರೆ. ಇದರ ಜೊತೆಗೆ ಮಹಿಳೆಯರು ಮತ್ತು ಹಳ್ಳಿಗಾಡಿನ ಹೂಡಿಕೆದಾರರು ಕೂಡ ಈಕ್ವಿಟಿ (ಷೇರು ಮಾರುಕಟ್ಟೆ ಸಂಬಂಧಿತ ಫಂಡ್&zwnj;ಗಳು) ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು 'AMFI-Crisil' ವರದಿ ತಿಳಿಸಿದೆ.&lt;/p&gt;&lt;h2&gt;&lt;strong&gt;ಈ ಬದಲಾವಣೆಯ ಪ್ರಮುಖ ಅಂಶಗಳು ಇಲ್ಲಿವೆ&lt;/strong&gt;&lt;/h2&gt;&lt;h3&gt;&lt;strong&gt;1. ಹೂಡಿಕೆದಾರರಲ್ಲಿ ಹೆಚ್ಚಿದ ತಾಳ್ಮೆ&lt;/strong&gt;&lt;/h3&gt;&lt;p&gt;ಹಿಂದೆ ಹೂಡಿಕೆ ಮಾಡಿದ ಒಂದು ವರ್ಷದೊಳಗೆ ಹಣ ಹಿಂಪಡೆಯುವವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಹೂಡಿಕೆದಾರರು ಕನಿಷ್ಠ 5 ವರ್ಷಗಳ ಕಾಲ ಹಣವನ್ನು ಹೂಡಿಕೆಯಲ್ಲೇ ಇರಿಸುತ್ತಿದ್ದಾರೆ. ಅದರಲ್ಲೂ ಎಸ್&zwnj;ಐಪಿ (SIP) ಮೂಲಕ ಹೂಡಿಕೆ ಮಾಡುವವರಲ್ಲಿ ಈ ಬದಲಾವಣೆ ಎದ್ದು ಕಾಣುತ್ತಿದೆ. 2021ರಲ್ಲಿ ಕೇವಲ 7.7% ರಷ್ಟಿದ್ದ ದೀರ್ಘಾವಧಿ ಹೂಡಿಕೆದಾರರ ಪ್ರಮಾಣ 2026ರ ವೇಳೆಗೆ 19.2% ಕ್ಕೆ ಏರಿಕೆಯಾಗಿದೆ.&lt;/p&gt;&lt;h2&gt;&lt;strong&gt;2. ಮಹಿಳಾ ಹೂಡಿಕೆದಾರರ ಹೊಸ ಟ್ರೆಂಡ್&lt;/strong&gt;&lt;/h2&gt;&lt;p&gt;ಮಹಿಳೆಯರು ಈಗ ಕೇವಲ ಸೇವಿಂಗ್ಸ್ ಅಕೌಂಟ್ ಅಥವಾ ಚಿನ್ನದ ಮೇಲೆ ಅವಲಂಬಿತವಾಗಿಲ್ಲ. ಮ್ಯೂಚುಯಲ್ ಫಂಡ್&zwnj;ನಲ್ಲಿ ಮಹಿಳೆಯರ ಹೂಡಿಕೆ 5.84 ಲಕ್ಷ ಕೋಟಿ ರೂ.ನಿಂದ 15.88 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಆಶ್ಚರ್ಯದ ಸಂಗತಿಯೆಂದರೆ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿಯರು ತಮ್ಮ ಹೂಡಿಕೆಯ ಶೇ. 88ರಷ್ಟು ಭಾಗವನ್ನು ರಿಸ್ಕ್ ಇರುವ ಆದರೆ ಹೆಚ್ಚಿನ ಲಾಭ ನೀಡುವ ಈಕ್ವಿಟಿ ಫಂಡ್&zwnj;ಗಳಲ್ಲೇ ತೊಡಗಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;3. ಸಲಹೆಗಾರರಿದ್ದವರಿಗೆ ಹೆಚ್ಚಿನ ಲಾಭ&lt;/strong&gt;&lt;/h2&gt;&lt;p&gt;ನೀವೇ ನೇರವಾಗಿ ಹೂಡಿಕೆ ಮಾಡುವ (Direct Plan) ಹೂಡಿಕೆದಾರರಿಗಿಂತ, ಒಬ್ಬ ಪರಿಣಿತ ಸಲಹೆಗಾರರ ಮೂಲಕ ಹೂಡಿಕೆ ಮಾಡುವವರು (Regular Plan) ಹೆಚ್ಚು ಕಾಲ ಹೂಡಿಕೆಯಲ್ಲಿ ಮುಂದುವರಿಯುತ್ತಿದ್ದಾರೆ. ಮಾರುಕಟ್ಟೆ ಕುಸಿದಾಗ ಜನರು ಭಯಬಿದ್ದು ಹಣ ಹಿಂಪಡೆಯದಂತೆ ಸಲಹೆಗಾರರು ಧೈರ್ಯ ತುಂಬುವುದು ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು.&lt;/p&gt;&lt;h2&gt;&lt;strong&gt;4. ಡೆಬ್ಟ್ (ಸಾಲದ ನಿಧಿ) ಕಡೆಗೆ ಒಲವು ಕಡಿಮೆ&lt;/strong&gt;&lt;/h2&gt;&lt;p&gt;ಈ ಹಿಂದೆ ಜನರು ಸುರಕ್ಷಿತ ಹೂಡಿಕೆ ಎಂದು 'ಡೆಬ್ಟ್ ಫಂಡ್'ಗಳಲ್ಲಿ ಹಣ ಹಾಕುತ್ತಿದ್ದರು. ಆದರೆ ಇತ್ತೀಚಿನ ತೆರಿಗೆ ನಿಯಮಗಳ ಬದಲಾವಣೆ ಮತ್ತು ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ಲಾಭದಿಂದಾಗಿ ಜನರು ಈಗ ಡೆಬ್ಟ್ ಫಂಡ್&zwnj;ಗಳಿಂದ ಈಕ್ವಿಟಿ ಫಂಡ್&zwnj;ಗಳ ಕಡೆಗೆ ಮುಖ ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹೂಡಿಕೆದಾರರಿಗೆ ತಜ್ಞರ ಕಿವಿಮಾತು&lt;/strong&gt;&lt;/h2&gt;&lt;ul&gt; &lt;li&gt;ಷೇರು ಮಾರುಕಟ್ಟೆಯಲ್ಲಿ ಲಾಭ ಇದೆ ಎಂದು ಎಲ್ಲವನ್ನೂ ಅಲ್ಲೇ ಹೂಡಿಕೆ ಮಾಡಬೇಡಿ&lt;/li&gt; &lt;li&gt;ನಿಮ್ಮ ಹೂಡಿಕೆಯ ಅವಧಿ 3 ರಿಂದ 5 ವರ್ಷಕ್ಕಿಂತ ಕಡಿಮೆ ಇದ್ದರೆ ರಿಸ್ಕ್ ಬೇಡ&lt;/li&gt; &lt;li&gt;ತುರ್ತು ಪರಿಸ್ಥಿತಿಗೆ ಬೇಕಾಗುವ ಹಣವನ್ನು ಯಾವಾಗಲೂ ಸುರಕ್ಷಿತವಾದ ಡೆಬ್ಟ್ ಫಂಡ್&zwnj;ಗಳಲ್ಲಿ ಅಥವಾ ಬ್ಯಾಂಕ್&zwnj;ನಲ್ಲಿ ಇಡಿ&lt;/li&gt; &lt;li&gt;ಮಾರುಕಟ್ಟೆ ಯಾವಾಗಲೂ ನಿಮ್ಮ ಲೆಕ್ಕಾಚಾರದಂತೆ ನಡೆಯುವುದಿಲ್ಲ, ಅದು ಕುಸಿದಾಗಲೂ ಹಣದ ಅವಶ್ಯಕತೆ ಬಂದರೆ ನಿಮಗೆ ತೊಂದರೆಯಾಗಬಹುದು.&lt;/li&gt;&lt;/ul&gt;&lt;p&gt;ಒಟ್ಟಾರೆಯಾಗಿ ಹೇಳುವುದಾದರೆ ಭಾರತೀಯ ಹೂಡಿಕೆದಾರರು ಈಗ ಹೆಚ್ಚು ಪ್ರೌಢಿಮೆ ಮೆರೆಯುತ್ತಿದ್ದಾರೆ. ದೀರ್ಘಕಾಲದ ಹೂಡಿಕೆ ಮಾಡುವುದು ಒಳ್ಳೆಯದು, ಆದರೆ ನಿಮ್ಮ ಹೂಡಿಕೆಯು ನಿಮ್ಮ ಗುರಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ತಕ್ಕಂತೆ ಇರಲಿ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/india-mutual-fund-revolution-women-lead-the-shift-to-long-term-equity-investing-gkn/articleshow-05t58pm"/>
        </item>
        <item>
            <title><![CDATA[Balen Sha: ನೇಪಾಳ್‌ಗೆ ಮಗ್ಗಲು ಮುಳ್ಳಾಯ್ತು ಚೀನಾದ ಮೇಲಿನ ಕುರುಡು ಪ್ರೀತಿ; ಸ್ನೇಹದ ಆಸೆಯಲ್ಲಿ ಬಾಲೆನ್ ಶಾ ತಮ್ಮವರಿಗೇ ಮಾಡಿದ್ರಾ ಅನ್ಯಾಯ?]]></title>
            <link>https://kannada.asianetnews.com/india-news/nepal-rasuwa-glacier-flood-china-border-balen-shah-government-controversy/articleshow-0knzawy</link>
            <guid isPermaLink="true">https://kannada.asianetnews.com/india-news/nepal-rasuwa-glacier-flood-china-border-balen-shah-government-controversy/articleshow-0knzawy</guid>
            <pubDate>Fri, 28 Aug 2026 19:02:40 +0530</pubDate>
            <description><![CDATA[ನೇಪಾಳ-ಚೀನಾ ಗಡಿಯ ರಸುವಾಗಧಿಯಲ್ಲಿ ಸಂಭವಿಸಿದ ಹಿಮನದಿ ಪ್ರವಾಹದಿಂದ 469ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಚೀನಾ ಮುಂಚಿತವಾಗಿ ಎಚ್ಚರಿಕೆ ನೀಡದ ಕಾರಣ ಈ ದುರಂತ ಸಂಭವಿಸಿದ್ದು, ಪ್ರಧಾನಿ ಬಾಲೆನ್ ಶಾ ಸರ್ಕಾರದ ಚೀನಾ ಪರ ನೀತಿ ಮತ್ತು ವೈಫಲ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯು ನೇಪಾಳದ ವಿದೇಶಾಂಗ ನೀತಿ ಮತ್ತು ನಾಗರಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1492spkg5nw26chq27rqtvw,imgname-nepal-pm-balen-sha-1787923883731.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಠ್ಮಂಡು: ನೇಪಾಳ-ಚೀನಾ ಗಡಿಯ ರಸುವಾಗಧಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಿಮನದಿ ಪ್ರವಾಹ ದುರಂತವು ದೇಶಾದ್ಯಂತ ತೀವ್ರ ಆಕ್ರೋಶ ಮತ್ತು ಕಳವಳಕ್ಕೆ ಕಾರಣವಾಗಿದೆ. ಈ ಭೀಕರ ವಿಪತ್ತಿನಲ್ಲಿ ಸುಮಾರು 469ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ಕಾಣೆಯಾಗಿದ್ದಾರೆ. ಈ ದುರಂತದ ಬೆನ್ನಲ್ಲೇ ಚೀನಾದ ಜವಾಬ್ದಾರಿರಹಿತ ನಡವಳಿಕೆ ಹಾಗೂ ಪ್ರಧಾನಿ ಬಾಲೆನ್ ಶಾ ನೇತೃತ್ವದ ನೇಪಾಳ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ದೇಶೀಯ ಮಾಧ್ಯಮಗಳು ಮತ್ತು ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಏನಿದು ದುರಂತ?&lt;/strong&gt;&lt;/h2&gt;&lt;p&gt;ಟಿಬೆಟ್ ಗಡಿಭಾಗದಲ್ಲಿದ್ದ ಹಿಮನದಿಯೊಂದು ಇದ್ದಕ್ಕಿದ್ದಂತೆ ಒಡೆದು, ಪ್ರಚಂಡ ಪ್ರಮಾಣದ ನೀರು ಮತ್ತು ಭಗ್ನಾವಶೇಷಗಳು ಕೆಳಭಾಗದಲ್ಲಿದ್ದ ನೇಪಾಳದ ರಸುವಾಗಧಿ ಪ್ರದೇಶಕ್ಕೆ ನುಗ್ಗಿದವು. ಹಿಮನದಿ ಒಡೆದ ನೀರು ರಸುವಾಗಧಿಗೆ ತಲುಪಲು ಕೇವಲ 1.5 ಗಂಟೆಗಳ ಕಾಲಾವಕಾಶವಿತ್ತು. ಚೀನಾ ಸರ್ಕಾರವು ಸುಧಾರಿತ ಉಪಗ್ರಹ ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಹೊಂದಿದ್ದರೂ, ನೇಪಾಳಕ್ಕೆ ಯಾವುದೇ ಮುಂಚಿನ ಎಚ್ಚರಿಕೆ ನೀಡಲಿಲ್ಲ. ಚೀನಾದಿಂದ ಒಂದು ಸಣ್ಣ ಫೋನ್ ಕರೆ ಅಥವಾ ಎಚ್ಚರಿಕೆಯ ಸಂದೇಶ ಬಾರದೇ ಇದ್ದುದರಿಂದ, ತಗ್ಗು ಪ್ರದೇಶದಲ್ಲಿದ್ದ ಜಲವಿದ್ಯುತ್ ಯೋಜನೆಯ ಕಾರ್ಮಿಕರು, ಸ್ಥಳೀಯ ನಾಗರಿಕರು ಹಾಗೂ ಪೊಲೀಸರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ.&lt;/p&gt;&lt;h3&gt;&lt;strong&gt;ಚೀನಾದ 'ಕುರುಡು ಪ್ರೀತಿ' ಮತ್ತು ಪ್ರಧಾನಿ ಬಾಲೆನ್ ಶಾ ಸರ್ಕಾರದ ವೈಫಲ್ಯ!&lt;/strong&gt;&lt;/h3&gt;&lt;p&gt;ಅಧಿಕಾರಕ್ಕೆ ಬಂದು ಸುಮಾರು 5 ತಿಂಗಳು ಕಳೆಯುತ್ತಿರುವ ಪ್ರಧಾನಿ ಬಾಲೆನ್ ಶಾ, ತಮ್ಮ ರಾಷ್ಟ್ರೀಯತಾವಾದಿ ಇಮೇಜ್&zwnj;ನಿಂದ ಗಮನ ಸೆಳೆದಿದ್ದರು. ಆದರೆ ಈ ಪ್ರಕೃತಿ ವಿಕೋಪದ ವೇಳೆ ಅವರ ನೀತಿಗಳು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮೊದಲಿಗೆ ಟಿಬೆಟ್ ಗಡಿ ಹಾಗೂ ಬ್ರಹ್ಮಪುತ್ರ ನದಿಯ ಮೇಲ್ಭಾಗದಲ್ಲಿ ಚೀನಾ ನಡೆಸುತ್ತಿರುವ ವಿವೇಚನಾರಹಿತ ನಿರ್ಮಾಣ ಕಾರ್ಯಗಳು ಮತ್ತು ಅಣೆಕಟ್ಟುಗಳು ಅಪಾಯಕಾರಿ ಎಂದು ಪರಿಸರ ತಜ್ಞರು ಹಾಗೂ ಮಾಜಿ ಸಿವಿಲ್ ಎಂಜಿನಿಯರ್&zwnj;ಗಳ ಗುಂಪು ಎಚ್ಚರಿಸಿತ್ತು. ಆದರೂ ಬಾಲೆನ್ ಶಾ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಇನ್ನು ಎರಡನೇ ವಿಚಾರವೆಂದರೆ, ಸಣ್ಣಪುಟ್ಟ ವಿಷಯಗಳಿಗೂ ಭಾರತದ ವಿರುದ್ಧ ಕಠಿಣ ನಿಲುವು ತಳೆಯುವ ನೇಪಾಳದ ನಾಯಕರು, ಚೀನಾದ ಅಪಾಯಕಾರಿ ನಿರ್ಮಾಣಗಳ ವಿರುದ್ಧ ಧ್ವನಿ ಎತ್ತಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;h3&gt;&lt;strong&gt;ರಾಷ್ಟ್ರೀಯತೆಗೆ ಹೆಚ್ಚಿದ ಪ್ರಚಾರ!&lt;/strong&gt;&lt;/h3&gt;&lt;p&gt;ಶಾಲೆಗಳ ಹೆಸರುಗಳನ್ನು ನೇಪಾಳಿ ಭಾಷೆಗೆ ಬದಲಾಯಿಸುವುದು ಹಾಗೂ ರಾಷ್ಟ್ರೀಯತೆಯ ಹೆಸರಿನಲ್ಲಿ ಪ್ರಚಾರ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ನಾಗರಿಕರ ಜೀವ ರಕ್ಷಣೆಯಂತಹ ಮೂಲಭೂತ ವಿಷಯಕ್ಕೆ ಆದ್ಯತೆ ನೀಡಬೇಕಿತ್ತು ಎಂಬ ಆಕ್ರೋಶವೂ ವ್ಯಕ್ತವಾಗಿದೆ.&lt;/p&gt;&lt;h3&gt;&lt;strong&gt;ನೇಪಾಳ ಮಾಧ್ಯಮ ಮತ್ತು ತಜ್ಞರ ಆಕ್ರೋಶ!&lt;/strong&gt;&lt;/h3&gt;&lt;p&gt;ಈ ಭೀಕರ ವಿಪತ್ತಿನ ನಂತರ ನೇಪಾಳದ ಪ್ರಮುಖ ದಿನಪತ್ರಿಕೆ 'ನಯಾ ಪತ್ರಿಕಾ'ದ ಹಿರಿಯ ಪತ್ರಕರ್ತರು ಮತ್ತು ಚಿಂತಕರು ಚೀನಾದ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನೇಪಾಳವು ಚೀನಾದ ಎಲ್ಲಾ ಕಾನೂನುಬದ್ಧ ಹಾಗೂ ಕಾನೂನುಬಾಹಿರ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದ್ದರೂ, ಇಂತಹ ತುರ್ತು ಸಂದರ್ಭದಲ್ಲಿ ಚೀನಾ ಮಾಹಿತಿ ನೀಡದೆ ಕೈಕೊಟ್ಟಿರುವುದು ಏಕಪಕ್ಷೀಯ ಪ್ರೀತಿಯ ಬೆಲೆ ಎಂದು ಬಣ್ಣಿಸಲಾಗಿದೆ. ರಾಷ್ಟ್ರೀಯ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಡಾ. ಗೋವಿಂದ್ ರಾಜ್ ಪೋಖರೆಲ್ ಪ್ರಕಾರ, ಬಲವಾದ ಪ್ರವಾಹದ ಮುನ್ಸೂಚನೆ ಇಲ್ಲದ ಕಾರಣ ತಗ್ಗು ಪ್ರದೇಶದಲ್ಲಿದ್ದ ಜನರು ಕ್ಷಣಾರ್ಧದಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ ಎನ್ನುವುದು ಕೇಳಿ ಬಂದಿದೆ.&lt;/p&gt;&lt;h3&gt;&lt;strong&gt;ಚೀನಾದ ಸಮಜಾಯಿಷಿ!&lt;/strong&gt;&lt;/h3&gt;&lt;p&gt;ನೇಪಾಳದಲ್ಲಿ ಆಕ್ರೋಶ ಭುಗಿಲೇಳುತ್ತಿದ್ದಂತೆ ಕಠ್ಮಂಡುವಿನಲ್ಲಿರುವ ಚೀನಾ ರಾಯಭಾರ ಕಚೇರಿಯು ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಕಲಿ ಎಂದು ತಳ್ಳಿಹಾಕಿದೆ. ಈ ಘಟನೆಯು ನೇಪಾಳದ ಭಾಗದಲ್ಲೇ ಸಂಭವಿಸಿದ ಹಿಮನದಿ ದುರಂತವಾಗಿದ್ದು, ಇದರಲ್ಲಿ ಚೀನಾದ ನಾಗರಿಕರೂ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದೆ. ಅಲ್ಲದೆ ದೂಷಣೆ ಮಾಡುವುದಕ್ಕಿಂತ ಸಹಕಾರ ಮುಖ್ಯ ಎಂದು ಚೀನಾ ಸಲಹೆ ನೀಡಿದೆ. ಆದರೆ, ಕಳೆದ ವರ್ಷದ ಆಗಸ್ಟ್&zwnj;ನಲ್ಲೂ ಟಿಬೆಟ್&zwnj;ನ ಹಿಮನದಿ ಸರೋವರ ಒಡೆದು ರಸುವಾಗಧಿ ಮತ್ತು ಗೈರಾಂಗ್ ಸಂಪರ್ಕಿಸುವ 'ಫ್ರೆಂಡ್&zwnj;ಶಿಪ್ ಸೇತುವೆ' ನಾಶವಾಗಿತ್ತು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಚೀನಾ ಎಚ್ಚರಿಕೆ ವ್ಯವಸ್ಥೆ ರೂಪಿಸಿಲ್ಲ.&lt;/p&gt;&lt;h3&gt;&lt;strong&gt;ಆತ್ಮಾವಲೋಕನದ ಅಗತ್ಯ!&lt;/strong&gt;&lt;/h3&gt;&lt;p&gt;ರಸುವಾಗಧಿ ದುರಂತವು ನೇಪಾಳ ಸರ್ಕಾರಕ್ಕೆ ದೊಡ್ಡ ಪಾಠವಾಗಿದೆ. ಬರಿ ಸಾಮಾಜಿಕ ಮಾಧ್ಯಮದ ಹೇಳಿಕೆಗಳು ಮತ್ತು ಸಿದ್ಧಾಂತಗಳಿಂದ ದೇಶದ ಗಡಿ ಹಾಗೂ ನಾಗರಿಕರನ್ನು ರಕ್ಷಿಸಲು ಸಾಧ್ಯವಿಲ್ಲ. ಚೀನಾ ಸರ್ಕಾರವು ತನ್ನ ವಾಣಿಜ್ಯ ಮತ್ತು ರಾಜತಾಂತ್ರಿಕ ಹಿತಾಸಕ್ತಿಗಳನ್ನಷ್ಟೇ ನೋಡಿಕೊಳ್ಳುತ್ತದೆ ಎಂಬ ಸತ್ಯವನ್ನು ಅರಿತು, ಬಾಲೆನ್ ಶಾ ಸರ್ಕಾರವು ಭಾರತದಂತೆ ಚೀನಾವನ್ನೂ ಗಂಭೀರವಾಗಿ ಪ್ರಶ್ನಿಸುವ ಹಾಗೂ ದೇಶದ ಜನರ ಭದ್ರತೆಗೆ ಮೊದಲ ಆದ್ಯತೆ ನೀಡುವ ತುರ್ತು ಅಗತ್ಯವಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/india-news/nepal-rasuwa-glacier-flood-china-border-balen-shah-government-controversy/articleshow-0knzawy"/>
        </item>
        <item>
            <title><![CDATA[ಬ್ಯಾಂಕ್ ಚೆಕ್‌ಗಳಲ್ಲಿ ಮೊತ್ತ ಬರೆದ ಮೇಲೆ Only ಎಂದು ಏಕೆ ಬರೆಯುತ್ತಾರೆ; ಮಹತ್ವದ ಕಾರಣ ತಿಳಿದುಕೊಳ್ಳಿ]]></title>
            <link>https://kannada.asianetnews.com/money/why-do-we-write-only-after-the-amount-on-bank-checks-gkn/articleshow-13e302m</link>
            <guid isPermaLink="true">https://kannada.asianetnews.com/money/why-do-we-write-only-after-the-amount-on-bank-checks-gkn/articleshow-13e302m</guid>
            <pubDate>Wed, 02 Sep 2026 06:38:27 +0530</pubDate>
            <description><![CDATA[&lt;p&gt;ಬ್ಯಾಂಕ್ ಚೆಕ್ ಅಥವಾ ಫಾರಂಗಳಲ್ಲಿ ಮೊತ್ತವನ್ನು ಬರೆದ ನಂತರ &quot;Only&quot; ಎಂದು ಬರೆಯುವುದು ಒಂದು ಭದ್ರತಾ ಕ್ರಮವಾಗಿದ್ದು, ಇದು ಹಣದ ಮೊತ್ತವನ್ನು ಯಾರೂ ಬದಲಾಯಿಸದಂತೆ ಅಥವಾ ವಂಚನೆ ಮಾಡದಂತೆ ತಡೆಯುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1epdzqx8hyq631j99eg1cd9,imgname-bank-only-1788273426170.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ಬ್ಯಾಂಕಿಗೆ ಹೋಗಿ ಹಣ ವಿತ್&zwnj;ಡ್ರಾ ಮಾಡುವಾಗ ಅಥವಾ ಚೆಕ್ ಬರೆಯುವಾಗ ಮೊತ್ತವನ್ನು ಅಕ್ಷರಗಳಲ್ಲಿ ಬರೆದ ನಂತರ ಕೊನೆಯಲ್ಲಿ Only (ಮಾತ್ರ) ಎಂದು ಬರೆಯುವುದನ್ನು ಗಮನಿಸಿರಬಹುದು. ಉದಾಹರಣೆಗೆ ಹತ್ತು ಸಾವಿರ ರೂಪಾಯಿಗಳು ಮಾತ್ರ ಅಥವಾ Ten Thousand Rupees Only ಎಂದು ಬರೆಯುತ್ತೇವೆ. ಈ ಒಂದು ಸಣ್ಣ ಪದದ ಹಿಂದೆ ಮಹತ್ವದ ಭದ್ರತಾ ಕಾರಣವಿದೆ.&lt;/p&gt;&lt;h2&gt;&lt;strong&gt;ಮಹತ್ವದ ಕಾರಣವುಂಟು&lt;/strong&gt;&lt;/h2&gt;&lt;p&gt;ಮೊತ್ತದ ನಂತರ Only ಎಂದು ಬರೆಯುವುದರ ಮುಖ್ಯ ಉದ್ದೇಶ ವಂಚನೆಯನ್ನು ತಡೆಯುವುದು. ಒಂದು ವೇಳೆ ನೀವು ಕೇವಲ ಹತ್ತು ಸಾವಿರ ರೂಪಾಯಿಗಳು (Ten Thousand Rupees) ಎಂದು ಬರೆದು ಬಿಟ್ಟರೆ, ಯಾರಾದರೂ ಅದರ ಮುಂದೆ ಐದು ನೂರು (Five Hundred) ಎಂಬ ಪದವನ್ನು ಸೇರಿಸುವ ಸಾಧ್ಯತೆ ಇರುತ್ತದೆ. ಆಗ ಹತ್ತು ಸಾವಿರದ ಚೆಕ್, ಹತ್ತು ಸಾವಿರದ ಐದು ನೂರು ರೂಪಾಯಿ ಆಗಿ ಬದಲಾಗಬಹುದು. Only ಎಂದು ಬರೆಯುವುದರಿಂದ ಅಲ್ಲಿಗೆ ಆ ವಾಕ್ಯ ಪೂರ್ಣಗೊಂಡಿದೆ ಮತ್ತು ಅದರ ಮುಂದೆ ಬೇರೆ ಯಾವುದೇ ಪದಗಳನ್ನು ಸೇರಿಸಲು ಅವಕಾಶವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.&lt;/p&gt;&lt;p&gt;&lt;strong&gt;ಗಮನಿಸಬೇಕಾದ ಅಂಶವೆಂದರೆ..&lt;/strong&gt;ಮೊತ್ತದ ಕೊನೆಯಲ್ಲಿ Only ಎಂದು ಬರೆಯದಿದ್ದರೆ ನಿಮ್ಮ ಚೆಕ್ ಅಥವಾ ಫಾರಂ ಅಮಾನ್ಯವಾಗುತ್ತದೆ ಎಂದಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇಂತಹ ಯಾವುದೇ ಕಡ್ಡಾಯ ನಿಯಮವನ್ನು ವಿಧಿಸಿಲ್ಲ. ಆದರೆ ನಿಮ್ಮ ಹಣದ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇದು ದಶಕಗಳಿಂದ ನಡೆದುಬಂದಿರುವ ಒಂದು ಉತ್ತಮ ಆನವಾಯಿತಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿದೆ.&lt;/p&gt;&lt;p&gt;&lt;strong&gt;ಅಂಕಿ ಮತ್ತು ಅಕ್ಷರಗಳ ತಾಳೆ: &lt;/strong&gt;ನೀವು ಅಂಕಿಗಳಲ್ಲಿ ಬರೆದ ಮೊತ್ತ ಮತ್ತು ಅಕ್ಷರಗಳಲ್ಲಿ ಬರೆದ ಮೊತ್ತ ಎರಡೂ ಒಂದೇ ಆಗಿರಬೇಕು. ವ್ಯತ್ಯಾಸವಿದ್ದರೆ ಬ್ಯಾಂಕ್ ಸಿಬ್ಬಂದಿ ಚೆಕ್ ಅನ್ನು ತಿರಸ್ಕರಿಸಬಹುದು.&lt;/p&gt;&lt;p&gt;&lt;strong&gt;ಜಾಗ ಬಿಡಬೇಡಿ: &lt;/strong&gt;ಅಂಕಿಗಳಲ್ಲಿ ಮೊತ್ತ ಬರೆಯುವಾಗಲೂ ಅಷ್ಟೇ, ಕೊನೆಯಲ್ಲಿ &quot;/&quot; ಅಥವಾ &quot;-&quot; ಚಿಹ್ನೆಯನ್ನು ಹಾಕುವುದು ಸೂಕ್ತ. ಇದು ಹೆಚ್ಚಿನ ಅಂಕಿಗಳನ್ನು ಸೇರಿಸದಂತೆ ತಡೆಯುತ್ತದೆ.&lt;/p&gt;&lt;p&gt;&lt;strong&gt;ಸ್ಪಷ್ಟತೆ ಇರಲಿ:&lt;/strong&gt; ಯಾವುದೇ ಅಳಿಸುವಿಕೆ ಅಥವಾ ತಿದ್ದುಪಡಿ ಇಲ್ಲದಂತೆ ಫಾರಂಗಳನ್ನು ಭರ್ತಿ ಮಾಡುವುದು ಉತ್ತಮ.&lt;/p&gt;&lt;p&gt;ಬ್ಯಾಂಕ್ ಸಿಬ್ಬಂದಿ ಕೂಡ ಸುರಕ್ಷತೆಯ ದೃಷ್ಟಿಯಿಂದ &quot;Only&quot; ಎಂದು ಬರೆಯುವಂತೆ ಸೂಚಿಸುತ್ತಾರೆ. ನಿಮ್ಮ ಕಷ್ಟದ ಗಳಿಕೆಯ ಹಣ ಸುರಕ್ಷಿತವಾಗಿರಲಿ ಎಂಬ ಉದ್ದೇಶದಿಂದ ಈ ಸಣ್ಣ ಕೆಲಸವನ್ನು ಮಾಡುವುದು ಯಾವಾಗಲೂ ಒಳ್ಳೆಯದು. ಮುಂದಿನ ಬಾರಿ ಬ್ಯಾಂಕಿಗೆ ಹೋದಾಗ ಈ ವಿಷಯ ನೆನಪಿರಲಿ!&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/why-do-we-write-only-after-the-amount-on-bank-checks-gkn/articleshow-13e302m"/>
        </item>
        <item>
            <title><![CDATA[ಉಬರ್‌ಗೆ 9,226 ಕೋಟಿ ರೂಪಾಯಿ ದಂಡ; ಕಾರಣವೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್]]></title>
            <link>https://kannada.asianetnews.com/business/european-regulatory-uber-fined-rs-9226-crore-what-is-the-reason-sns/articleshow-30t1qga</link>
            <guid isPermaLink="true">https://kannada.asianetnews.com/business/european-regulatory-uber-fined-rs-9226-crore-what-is-the-reason-sns/articleshow-30t1qga</guid>
            <pubDate>Mon, 24 Aug 2026 17:51:36 +0530</pubDate>
            <description><![CDATA[ಯುರೋಪ್&zwnj;ನಲ್ಲಿ ಕ್ಯಾಬ್ ಕಂಪನಿ ಉಬರ್&zwnj;ಗೆ 9,226 ಕೋಟಿ ರೂ. ದಂಡ ವಿಧಿಸಲಾಗಿದೆ. ಚಾಲಕರ ಖಾತೆಗಳನ್ನು ಯಾವುದೇ ಮಾನವ ಪರಿಶೀಲನೆ ಇಲ್ಲದೆ ಸ್ವಯಂಚಾಲಿತವಾಗಿ ಅಮಾನತುಗೊಳಿಸಿದ್ದಕ್ಕಾಗಿ ನೆದರ್&zwnj;ಲ್ಯಾಂಡ್ಸ್ ಡೇಟಾ ಪ್ರೊಟೆಕ್ಷನ್ ವಾಚ್&zwnj;ಡಾಗ್ ಈ ಕ್ರಮ ಕೈಗೊಂಡಿದೆ. ಇದು ಚಾಲಕರ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky7b8bbyneq1j4njzyrq0phq,imgname-gemini-generated-image-ixcqvrixcqvrixcq-1784805600638.png" type="image/jpeg" height="390" width="690"/>
            <content:encoded><![CDATA[&lt;p&gt;ಕ್ಯಾಬ್ ಬುಕ್ಕಿಂಗ್ ಕಂಪನಿ ಉಬರ್&zwnj;ಗೆ ಯುರೋಪ್&zwnj;ನಲ್ಲಿ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ನೆದರ್&zwnj;ಲ್ಯಾಂಡ್ಸ್ ಡೇಟಾ ಪ್ರೊಟೆಕ್ಷನ್ ವಾಚ್&zwnj;ಡಾಗ್, ಉಬರ್ ಕಂಪನಿಯ ಮೇಲೆ 825 ಮಿಲಿಯನ್ ಯುರೋಗಳು ಅಂದರೆ ಭಾರತದಲ್ಲಿ ರೂಪಾಯಿಯಲ್ಲಿ 9,226 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.&lt;/p&gt;&lt;h2&gt;ಯುರೋಪ್&zwnj;ನಲ್ಲಿ ಉಬರ್&zwnj;ಗೆ ಆಘಾತ&lt;/h2&gt;&lt;p&gt;ಯಾವುದೇ ಮುನ್ಸೂಚನೆ ನೀಡದೆ, ಯಾವುದೇ ಪರಿಶೀಲನೆ ನಡೆಸದೆ ಏಕಾಏಕಿ ಚಾಲಕರ ಖಾತೆಗಳನ್ನು ಅಮಾನತು ಮಾಡುವುದು ಹಾಗೂ ಸ್ವಯಂ ಚಾಲಿತ ವ್ಯವಸ್ಥೆಯ ಮೂಲಕ ಖಾತೆಗಳನ್ನು ಅಮಾನತುಗೊಳಿಸುವ ಕಾರಣದಿಂದ ಭಾರೀ ದಂಡ ವಿಧಿಸಲಾಗಿದೆ.&lt;/p&gt;&lt;p&gt;ಉಬರ್ ಕ್ರಮವನ್ನು ಚಾಲಕರ ಹಕ್ಕುಗಳ ಗಂಭೀರ ಉಲ್ಲಂಘಟನೆ ಎಂದು ಕರೆಯಲಾಗಿದ್ದು, ಯಾವುದೇ ಮಾನವ ಪರಿಶೀಲನೆ ನಡೆಸದೆ ಕಂಪ್ಯೂಟರ್ ವ್ಯವಸ್ಥೆ ಮೂಲಕ ನಿಷ್ಕ್ರೀಯ ಗೊಳಿಸಲಾಗಿದೆ. ಡಬ್ ಡೇಟಾ ಪ್ರೊಟೆಕ್ಷನ್ ಅಥಾರಿಟಿಯ ಅನ್ವಯ, ಹಲವು ಸಂದರ್ಭದಲ್ಲಿ ಉಬರ್ ಸಂಸ್ಥೆ ಚಾಲಕರ ಖಾತೆಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ಕ್ಲೋಸ್ ಮಾಡಿರುವುದು ಗಂಭೀರ ಉಲ್ಲಂಘಟನೆ ಎಂದು ಹೇಳಿದೆ.&lt;/p&gt;&lt;h2&gt;ನಿಗೂಢ ಖಾತೆ ಅಮಾನತಿನ ಸತ್ಯ&lt;/h2&gt;&lt;p&gt;ಚಾಲಕರ ಜೀವನ ತೀವ್ರವಾಗಿ ಪರಿಣಾಮ ಬೀರುವ ಸಂದರ್ಭದಲ್ಲಿ, ಕೇವಲ ಕಂಪ್ಯೂಟರ್ ಅಲ್ಗಾರಿದಮ್ ಗಳನ್ನು ಮಾತ್ರ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಿಂದ ಹಲವರಿಗೆ ಅನ್ಯಾಯವಾಗಿದೆ. ಚಾಲಕರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕಿದೆ ಎಂದು ಹೇಳಿದೆ.&lt;/p&gt;&lt;p&gt;2018 ಮತ್ತು 2022ರ ನಡುವೆ ಯುರೋಪ್&zwnj;ನಲ್ಲಿ ನಡೆದ ಘಟನೆಗಳನ್ನು ಒಳಗೊಂಡಿದ್ದು, ಫ್ರಾನ್ಸ್ ನಲ್ಲಿ ನೀಡಿದ ಒಂದು ದೂರಿನಿಂದ ಆರಂಭವಾದ ತನಿಖೆಯನ್ನು ಡಚ್ ಡೇಟಾ ಸಂರಕ್ಷಣ ನಿಯಂತ್ರಕ ಕೈಗೊಂಡಿತ್ತು. ಉಬರ್&zwnj;ನ ಯುರೋಪಿಯನ್&zwnj; ಪ್ರಧಾನ ನೆದರ್&zwnj;ಲ್ಯಾಂಡ್ಸ್&zwnj;ನಲ್ಲಿದ್ದು, ಚಾಲಕರ ಚಟುವಟಿಕೆಗಳನ್ನು ಗುರುತಿಸಲು ಉಬರ್ ತಂದಿದ್ದ ವ್ಯವಸ್ಥೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.&lt;/p&gt;&lt;p&gt;ಕೇವಲ ಗ್ರಾಹಕರ ಕಡಿಮೆ ರೇಟಿಂಗ್ ಆಧಾರದ ಮೇಲೆ ಕೆಲವು ಚಾಲಕರ ಖಾತೆಗಳನ್ನು ಸ್ವಯಃಚಾಲಿತವಾಗಿ ನಿಷ್ಕ್ರಿಯಗೊಳಿಸುವ ವ್ಯವಸ್ಥೆ ಹೊಂದಿತ್ತು. ಆದರೆ ಉಬರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದಂಡ ವಿಧಿಸಿದ ಕ್ರಮ ಅಸಮಾನ ಮತ್ತು ತೀವ್ರ ಕ್ರಮ ಎಂದು ಹೇಳಿದೆ. ಚಾಲಕರ ಹಕ್ಕುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಚಾಲಕರಿಗೆ ಅಮಾನತು ಪ್ರಶ್ನಿಸುವ ಆಯ್ಕೆಯನ್ನು ನೀಡುವ ಆಯ್ಕೆ ಹೊಂದಿದ್ದಾರೆ ಎಂದು ಹೇಳಿದೆ.&lt;/p&gt;&lt;p&gt;ಯುರೋಪ್&zwnj;ನಲ್ಲಿ ಉಬರ್ ಮಾತ್ರವಲ್ಲದೇ, ಈ ಹಿಂದೆ ಗ್ರಾಹಕರ ಡೇಟಾ ಗೌಪ್ಯತೆ ಮತ್ತು ಡಿಜಿಟಲ್ ನಿಯಮಗಳ ಉಲ್ಲಂಘಟನೆ ಅಡಿ ಮೆಟಾ, ಗೂಗಲ್, ಆಪಲ್ ಮತ್ತು ಅಮೆಜಾನ್ ನಂತರ ಕಂಪನಿಗಳಿಗೆ ಭಾರೀ ದಂಡಗಳನ್ನು ವಿಧಿಸಲಾಗಿದೆ. ಸದ್ಯ ಈ ಸಾಲಿಗೆ ಉಬರ್ ಕೂಡ ಸೇರ್ಪಡೆಯಾಗಿದೆ. ಎಐ ತಂತ್ರಜ್ಞಾನ ತೆಗೆದುಕೊಳ್ಳುವ ಕ್ರಮದಿಂದ ಉದ್ಯೋಗಿ ಅಥವಾ ಗ್ರಾಹಕನ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದರೆ, ಅದರ ಮೇಲ್ವಿಚಾರಣೆಯನ್ನು ಕೇವಲ ಯಾಂತ್ರೀಕೃತ ವ್ಯವಸ್ಥೆಯಿಂದ ಮಾಡದೆ ಮನುಷ್ಯನ ನೇತೃತ್ವದಲ್ಲಿ ನಡೆಯಬೇಕು ಎಂದು ಯುರೋಪಿಯನ್ ರೆಗ್ಯುಲೆಟರಿ ಹೇಳುತ್ತದೆ.&lt;/p&gt;]]></content:encoded>
            <category>news-money</category>
            <dc:creator>Sumanth SN</dc:creator>
            <atom:link href="https://kannada.asianetnews.com/business/european-regulatory-uber-fined-rs-9226-crore-what-is-the-reason-sns/articleshow-30t1qga"/>
        </item>
        <item>
            <title><![CDATA[ನಿವೃತ್ತಿ ಜೀವನಕ್ಕೆ 1 ಅಥವಾ 2 ಕೋಟಿ ರೂಪಾಯಿ ಸಾಕೇ? ನಿಮ್ಮ ನಿವೃತ್ತಿ ಸುಲಭ ಪ್ಲಾನ್‌ ಹೇಗಿರಬೇಕು?]]></title>
            <link>https://kannada.asianetnews.com/money/is-1-or-2-crore-rupees-enough-for-retirement-what-should-be-your-easy-retirement-plan-gkn/articleshow-3b2svih</link>
            <guid isPermaLink="true">https://kannada.asianetnews.com/money/is-1-or-2-crore-rupees-enough-for-retirement-what-should-be-your-easy-retirement-plan-gkn/articleshow-3b2svih</guid>
            <pubDate>Fri, 28 Aug 2026 21:47:38 +0530</pubDate>
            <description><![CDATA[&lt;p&gt;ನಿವೃತ್ತಿ ಯೋಜನೆಯು ಕೇವಲ ಒಂದು ನಿರ್ದಿಷ್ಟ ಹಣದ ಮೊತ್ತವನ್ನು ಗುರಿಯಾಗಿಸುವುದಲ್ಲ, ಬದಲಿಗೆ ಹಣದುಬ್ಬರಕ್ಕೆ ಅನುಗುಣವಾಗಿ ನಿಮ್ಮ ಭವಿಷ್ಯದ ತಿಂಗಳ ಖರ್ಚುಗಳನ್ನು ಅಂದಾಜಿಸುವುದರೊಂದಿಗೆ ಆರಂಭವಾಗಬೇಕು. ಸುಸ್ಥಿರ ಹೂಡಿಕೆ, ನಿಯಮಿತ ಆದಾಯದ ಮೂಲಗಳು ಮತ್ತು ವ್ಯವಸ್ಥಿತವಾಗಿ ಹಣ ಹಿಂಪಡೆಯುವ ಸರಿಯಾದ ಯೋಜನೆಯೇ ನೆಮ್ಮದಿಯ ನಿವೃತ್ತಿ ಜೀವನಕ್ಕೆ ದಾರಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m14jjpq2sbw9113rx9nf882x,imgname-old-couple-1787933842146.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ನಿವೃತ್ತಿ (Retirement) ಜೀವನದ ಬಗ್ಗೆ ಯೋಚಿಸುವಾಗ ಪ್ರಶ್ನೆ ಏನೆಂದರೆ ನಿವೃತ್ತಿ ನಂತರ ಎಷ್ಟು ಹಣ ಬೇಕಾಗಬಹುದು?. ಒಬ್ಬರು 1 ಕೋಟಿ ರೂಪಾಯಿ ಇದ್ದರೆ ಸಾಕು ಎನ್ನಬಹುದು. ಇನ್ನು ಕೆಲವರು ಕನಿಷ್ಠ 2 ಕೋಟಿ ರೂಪಾಯಿ ಬೇಕು ಎನ್ನಬಹುದು. ವಾಸ್ತವದಲ್ಲಿ ಎಲ್ಲರಿಗೂ ಒಂದೇ ರೀತಿಯ ನಿವೃತ್ತಿ ನಿಧಿ (Retirement Corpus) ಸಾಕಾಗುವುದಿಲ್ಲ. ಸ್ವಂತ ಮನೆ ಹೊಂದಿದ್ದು, ಕಡಿಮೆ ಖರ್ಚು ಇರುವವರಿಗೆ 1 ಕೋಟಿ ರೂಪಾಯಿ ಸಾಕಾಗಬಹುದು. ಅದೇ ಸಮಯದಲ್ಲಿ ಬಾಡಿಗೆ ಮನೆಯಲ್ಲಿದ್ದು, ವೈದ್ಯಕೀಯ ವೆಚ್ಚಗಳು ಹಾಗೂ ಕುಟುಂಬದ ಜವಾಬ್ದಾರಿ ಹೊಂದಿರುವವರಿಗೆ 2 ಕೋಟಿ ರೂಪಾಯಿ ಕೂಡ ಸಾಲದೇ ಬರಬಹುದು. ಹಾಗಾಗಿ ನಿವೃತ್ತಿ ನಿಧಿಯನ್ನು ಹೇಗೆ ಯೋಜಿಸಬೇಕು? ಇದನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಇಲ್ಲಿದೆ ಕೆಲವು ಪ್ರಮುಖ ಹಂತಗಳು.&lt;/p&gt;&lt;h2&gt;ಇಂದಿನ ತಿಂಗಳ ಖರ್ಚಿನಿಂದ ಲೆಕ್ಕ ಆರಂಭಿಸಿ&lt;/h2&gt;&lt;ul&gt; &lt;li&gt;ನಿವೃತ್ತಿ ಯೋಜನೆ ದೊಡ್ಡ ಮೊತ್ತದಿಂದ ಆರಂಭಿಸುವ ಬದಲು ನಿಮ್ಮ ಇಂದಿನ ತಿಂಗಳ ಖರ್ಚು ಎಷ್ಟಿದೆ ಎಂಬುದರಿಂದ ಲೆಕ್ಕ ಶುರು ಮಾಡಿ&lt;/li&gt; &lt;li&gt;ಅತ್ಯಗತ್ಯ ಖರ್ಚುಗಳು: ದಿನಸಿ, ಕರೆಂಟ್ ಬಿಲ್, ಬಾಡಿಗೆ, ಔಷಧಗಳು&lt;/li&gt; &lt;li&gt;ಇತರ ಖರ್ಚುಗಳು: ಪ್ರವಾಸ, ಹಬ್ಬ-ಹರಿದಿನಗಳು, ಕುಟುಂಬದ ಅಗತ್ಯಗಳು&lt;/li&gt; &lt;li&gt;ಕೆಲಸದಿಂದ ನಿವೃತ್ತರಾದ ಮೇಲೂ ಬಹುತೇಕ ಖರ್ಚುಗಳು ಮುಂದುವರಿಯುತ್ತವೆ ಎಂಬುದನ್ನು ನೆನಪಿನಲ್ಲಿಡಿ&lt;/li&gt;&lt;/ul&gt;&lt;h2&gt;&lt;strong&gt;ಹಣದುಬ್ಬರ ಮರೆಯಬೇಡಿ&lt;/strong&gt;&lt;/h2&gt;&lt;p&gt;ಇಂದು ಸಿಗುವ ವಸ್ತುಗಳ ಬೆಲೆ ಮುಂದಿನ ಹತ್ತು ಅಥವಾ ಇಪ್ಪತ್ತು ವರ್ಷಗಳ ನಂತರ ಅಷ್ಟೇ ಇರುವುದಿಲ್ಲ. ಭಾರತದಲ್ಲಿ ಶೇ. 4 ರಷ್ಟು ಹಣದುಬ್ಬರ ದರವನ್ನು (Tolerance band 2% ರಿಂದ 6%) ಅಂದಾಜಿಸಲಾಗಿದೆ. ಇದರರ್ಥ ಇಂದು ತಿಂಗಳಿಗೆ ₹50,000 ಖರ್ಚು ಮಾಡುತ್ತಿರುವ ವ್ಯಕ್ತಿ, ಇನ್ನು 20 ವರ್ಷಗಳ ನಂತರ ಅದೇ ರೀತಿಯ ಜೀವನ ಶೈಲಿ ಮುಂದುವರಿಸಲು ಅದಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಬೆಲೆ ಏರಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಿವೃತ್ತಿ ನಿಧಿಯನ್ನು ಲೆಕ್ಕ ಹಾಕಬೇಕು.&lt;/p&gt;&lt;h2&gt;&lt;strong&gt;ನಿವೃತ್ತಿ ವಯಸ್ಸು ಮತ್ತು ಜೀವಿತಾವಧಿ ಮುಖ್ಯ&lt;/strong&gt;&lt;/h2&gt;&lt;p&gt;ನೀವು ಯಾವ ವಯಸ್ಸಿನಲ್ಲಿ ನಿವೃತ್ತರಾಗುತ್ತೀರಿ ಎಂಬುದು ನಿವೃತ್ತಿ ನಿಧಿಯ ಗಾತ್ರ ನಿರ್ಧರಿಸುತ್ತದೆ. ನೀವು 55ನೇ ವಯಸ್ಸಿಗೆ ನಿವೃತ್ತರಾದರೆ ಮುಂದಿನ 25-30 ವರ್ಷಗಳ ಜೀವನಕ್ಕಾಗಿ ಹೆಚ್ಚಿನ ಹಣ ಬೇಕಾಗುತ್ತದೆ. ಅದೇ 65ನೇ ವಯಸ್ಸಿಗೆ ನಿವೃತ್ತರಾದರೆ ಬೇಕಾಗುವ ಹಣದ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು. ವಯಸ್ಸಾದಂತೆ ವೈದ್ಯಕೀಯ ವೆಚ್ಚಗಳು ಹೆಚ್ಚಾಗುವುದರಿಂದ ಕೇವಲ 75 ಅಥವಾ 80 ವರ್ಷಕ್ಕೆ ಮಾತ್ರ ಯೋಜನೆ ರೂಪಿಸದೆ, ಅದಕ್ಕಿಂತ ಹೆಚ್ಚು ವರ್ಷಗಳ ಅಗತ್ಯಕ್ಕೆ ತಕ್ಕಂತೆ ಹಣ ಉಳಿಸುವುದು ಸೂಕ್ತ.&lt;/p&gt;&lt;h2&gt;&lt;strong&gt;ನಿವೃತ್ತಿಯ ನಂತರ ಆದಾಯದ ಮೂಲಗಳು&lt;/strong&gt;&lt;/h2&gt;&lt;p&gt;ನಿವೃತ್ತಿಯ ನಂತರವೂ ನಿಮಗೆ ಪೆನ್ಷನ್, ಇಪಿಎಫ್ (EPF), ಮನೆಯ ಬಾಡಿಗೆ ಅಥವಾ ಇನ್ಯಾವುದೇ ಮಾಸಿಕ ಆದಾಯ ಬರುತ್ತಿದ್ದರೆ ನಿಮ್ಮ ನಿವೃತ್ತಿ ನಿಧಿಯ ಮೇಲಿನ ಹೊರೆ ಕಡಿಮೆಯಾಗುತ್ತದೆ. ಬಾಡಿಗೆ ಮನೆಗಳು ಯಾವಾಗಲೂ ಬಾಡಿಗೆಗೆ ಇರುತ್ತವೆ ಅಥವಾ ಬ್ಯಾಂಕ್ ಬಡ್ಡಿ ದರಗಳು ಯಾವಾಗಲೂ ಒಂದೇ ಸಮನಾಗಿರುತ್ತವೆ ಎಂದು ನಂಬಲು ಸಾಧ್ಯವಿಲ್ಲ. ಆದ್ದರಿಂದ ಇವುಗಳ ಮೇಲಿನ ಅವಲಂಬನೆಯಲ್ಲಿ ಜಾಗರೂಕತೆ ಇರಲಿ.&lt;/p&gt;&lt;h2&gt;&lt;strong&gt;ಹೂಡಿಕೆಯಲ್ಲಿ ಜಾಣ್ಮೆ&lt;/strong&gt;&lt;/h2&gt;&lt;p&gt;ಕೇವಲ ಹಣ ಉಳಿಸುವುದು ಮುಖ್ಯವಲ್ಲ, ಅದನ್ನು ಎಲ್ಲಿ ಹೂಡಿಕೆ ಮಾಡುತ್ತೀರಿ ಎಂಬುದು ಮುಖ್ಯ. ಎಲ್ಲಾ ಹಣವನ್ನು ಬ್ಯಾಂಕ್ ಉಳಿತಾಯ ಖಾತೆಯಲ್ಲೇ ಇಟ್ಟರೆ, ಹಣದುಬ್ಬರದಿಂದಾಗಿ ಹಣದ ಮೌಲ್ಯ ಕುಸಿಯುತ್ತದೆ. ಹಾಗಂತ ಎಲ್ಲಾ ಹಣವನ್ನು ಶೇರು ಮಾರುಕಟ್ಟೆಯಂತಹ ರಿಸ್ಕ್ ಇರುವ ಕಡೆ ಹೂಡಿದರೆ ಮಾರುಕಟ್ಟೆ ಕುಸಿದಾಗ ನಷ್ಟ ಅನುಭವಿಸಬೇಕಾಗಬಹುದು. ಆದ್ದರಿಂದ ಸುರಕ್ಷಿತ ಯೋಜನೆಗಳು ಮತ್ತು ಉತ್ತಮ ಆದಾಯ ನೀಡುವ ಯೋಜನೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಿ.&lt;/p&gt;&lt;h2&gt;&lt;strong&gt;₹2 ಕೋಟಿ ಎಲ್ಲರಿಗೂ ಸಾಕಾಗಲ್ಲ ಯಾಕೆ?&lt;/strong&gt;&lt;/h2&gt;&lt;ul&gt; &lt;li&gt;ಇಬ್ಬರು ನಿವೃತ್ತ ವ್ಯಕ್ತಿಗಳ ಬಳಿ ತಲಾ ₹2 ಕೋಟಿ ಹಣ ಇದೆ ಎಂದುಕೊಳ್ಳಿ&lt;/li&gt; &lt;li&gt;ಮೊದಲನೆಯವರಿಗೆ ಸ್ವಂತ ಮನೆ ಇದೆ ಮತ್ತು ತಿಂಗಳ ಖರ್ಚು ₹40,000 ಮಾತ್ರ&lt;/li&gt; &lt;li&gt;ಎರಡನೆಯವರು ಬಾಡಿಗೆ ಮನೆಯಲ್ಲಿದ್ದು, ತಿಂಗಳಿಗೆ ₹1 ಲಕ್ಷ ಖರ್ಚು ಮಾಡುತ್ತಿದ್ದಾರೆ&lt;/li&gt; &lt;li&gt;ಇಲ್ಲಿ ಎರಡನೆಯವರಿಗೆ ₹2 ಕೋಟಿ ಹಣ ಬೇಗನೆ ಖಾಲಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೇವಲ ದೊಡ್ಡ ಮೊತ್ತವನ್ನು ನೋಡಿ ನಿಶ್ಚಿಂತರಾಗಬೇಡಿ.&lt;/li&gt;&lt;/ul&gt;&lt;h2&gt;&lt;strong&gt;ಹಣ ಹಿಂಪಡೆಯುವ ಸೂತ್ರ (Withdrawal Strategy)&lt;/strong&gt;&lt;/h2&gt;&lt;p&gt;ಕೇವಲ ಹಣವನ್ನು ಕೂಡಿಡುವುದು ಮುಖ್ಯವಲ್ಲ, ನಿವೃತ್ತಿಯ ನಂತರ ಆ ಹಣವನ್ನು ಹೇಗೆ ನಿಯಮಿತ ಆದಾಯವನ್ನಾಗಿ ಪರಿವರ್ತಿಸಬೇಕು ಎಂಬುದು ಮುಖ್ಯ. ಇದಕ್ಕಾಗಿ ಪಿಎಫ್&zwnj;ಆರ್&zwnj;ಡಿಎ (PFRDA) ನ್ಯಾಷನಲ್ ಪೆನ್ಷನ್ ಸಿಸ್ಟಮ್ (NPS) ಅಡಿಯಲ್ಲಿ ಹೊಸ ಹಂತ-ಹಂತದ ವಿತ್&zwnj;ಡ್ರಾ ಆಯ್ಕೆಗಳನ್ನು ಪರಿಚಯಿಸಿದೆ. ಇದು ನಿವೃತ್ತಿ ನಿಧಿಯನ್ನು ವ್ಯವಸ್ಥಿತವಾಗಿ ಬಳಸಲು ನೆರವಾಗುತ್ತದೆ.&lt;/p&gt;&lt;h2&gt;&lt;strong&gt;ನಿವೃತ್ತಿ ನಿಧಿ ಸರಳ ಲೆಕ್ಕ&lt;/strong&gt;&lt;/h2&gt;&lt;p&gt;ಬೆಲೆ ಏರಿಕೆ ಲೆಕ್ಕ ಹಿಡಿದು ನಿವೃತ್ತಿ ನಂತರ ನಿಮಗೆ ತಿಂಗಳಿಗೆ ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸಿ. ನಿಮಗೆ ಪೆನ್ಷನ್ ಅಥವಾ ಇತರ ಮೂಲಗಳಿಂದ ಬರುವ ನಿಶ್ಚಿತ ಆದಾಯ ಖರ್ಚಿನಿಂದ ಕಳೆಯಿರಿ. ಉಳಿದ ಮೊತ್ತವನ್ನು ನಿಮ್ಮ ನಿವೃತ್ತಿ ನಿಧಿಯ ಹೂಡಿಕೆಯಿಂದ ಪಡೆದುಕೊಳ್ಳಬೇಕಾಗುತ್ತದೆ. ಆ ಮೊತ್ತವನ್ನು ತಲುಪಲು ಈಗಿನಿಂದಲೇ ಸೂಕ್ತವಾಗಿ ಹೂಡಿಕೆ ಮಾಡಲು ಆರಂಭಿಸಿ. ನಿವೃತ್ತಿ ಯೋಜನೆ ಎಂಬುದು ಕೇವಲ ಒಂದು ನಿರ್ದಿಷ್ಟ ಸಂಖ್ಯೆಯನ್ನು ತಲುಪುವುದಲ್ಲ. ಇದು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಕಾಲಕಾಲಕ್ಕೆ ಬದಲಾಗುವ ನಿರಂತರ ಪ್ರಕ್ರಿಯೆಯಾಗಿದೆ. ಇಂದೇ ಯೋಜಿಸಿ, ನೆಮ್ಮದಿಯ ನಿವೃತ್ತಿ ಜೀವನ ನಿಮ್ಮದಾಗಿಸಿಕೊಳ್ಳಿ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/is-1-or-2-crore-rupees-enough-for-retirement-what-should-be-your-easy-retirement-plan-gkn/articleshow-3b2svih"/>
        </item>
        <item>
            <title><![CDATA[4 ಲಕ್ಷದಿಂದ 64 ಲಕ್ಷಕ್ಕೆ ಜಂಪ್, ಸರ್ಕಾರಿ ಕಾಲೇಜಿನಲ್ಲಿ ಓದಿದ ಹುಡುಗನ ಸ್ಫೂರ್ತಿದಾಯಕ ಸಾಹಸ]]></title>
            <link>https://kannada.asianetnews.com/jobs/beating-tier-3-odds-engineer-lands-rs-64-lpa-amazon-role-with-smart-networking-and-coding-skills-gkn/articleshow-5rfxqe9</link>
            <guid isPermaLink="true">https://kannada.asianetnews.com/jobs/beating-tier-3-odds-engineer-lands-rs-64-lpa-amazon-role-with-smart-networking-and-coding-skills-gkn/articleshow-5rfxqe9</guid>
            <pubDate>Thu, 10 Sep 2026 19:06:42 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ಟೈರ್-3 ಎಂಜಿನಿಯರಿಂಗ್ ಕಾಲೇಜು ಎಂದ ಕೂಡಲೇ ಕ್ಯಾಂಪಸ್ ಸೆಲೆಕ್ಷನ್&zwnj;ನಲ್ಲಿ 3 ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕರೆ ಹೆಚ್ಚು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಪ್ರತಿಭೆ ಜೊತೆಗೆ ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವಿದ್ದರೆ ಕಾಲೇಜು ಅಥವಾ ಕ್ಯಾಂಪಸ್ ಮಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾರತೀಯ ಯುವ ಎಂಜಿನಿಯರ್ ಒಬ್ಬರು ಸಾಬೀತುಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25rbjcm299vhkc4rjpr17x4,imgname-job-1789047196051.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಟೈರ್-3 ಎಂಜಿನಿಯರಿಂಗ್ ಕಾಲೇಜು ಎಂದ ಕೂಡಲೇ ಕ್ಯಾಂಪಸ್ ಸೆಲೆಕ್ಷನ್&zwnj;ನಲ್ಲಿ 3 ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕರೆ ಹೆಚ್ಚು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಪ್ರತಿಭೆ ಜೊತೆಗೆ ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವಿದ್ದರೆ ಕಾಲೇಜು ಅಥವಾ ಕ್ಯಾಂಪಸ್ ಮಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾರತೀಯ ಯುವ ಎಂಜಿನಿಯರ್ ಒಬ್ಬರು ಸಾಬೀತುಪಡಿಸಿದ್ದಾರೆ.&lt;/p&gt;&lt;p&gt;ಕೇವಲ 4 ಲಕ್ಷ ರೂಪಾಯಿ ಸರಾಸರಿ ಪ್ಯಾಕೇಜ್ ನೀಡುತ್ತಿದ್ದ ಸಾಮಾನ್ಯ ಸರ್ಕಾರಿ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಯೊಬ್ಬ, ಇಂದು ಜಾಗತಿಕ ಟೆಕ್ ದೈತ್ಯ ಅಮೆಜಾನ್ (Amazon) ಸಂಸ್ಥೆಯಲ್ಲಿ ಬರೋಬ್ಬರಿ 64 ಲಕ್ಷ ರೂಪಾಯಿ ವಾರ್ಷಿಕ ವೇತನದೊಂದಿಗೆ 'ಸಾಫ್ಟ್&zwnj;ವೇರ್ ಡೆವಲಪ್&zwnj;ಮೆಂಟ್ ಎಂಜಿನಿಯರ್ 2' ಹುದ್ದೆ ಗಿಟ್ಟಿಸಿಕೊಂಡು ಹುಬ್ಬೇರಿಸಿದ್ದಾರೆ!&lt;/p&gt;&lt;p&gt;ವಿಕಾಸ್ ಅಲ್ವಿಸ್ (Vikas Alwys) ಎಂಬುವವರು 'X' (ಟ್ವಿಟರ್) ಜಾಲತಾಣದಲ್ಲಿ ಹಂಚಿಕೊಂಡಿರುವ ಯಶೋಗಾಥೆಯ ಪ್ರಕಾರ, ಈ ಯುವಕ ತೆಲಂಗಾಣದ ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದ (JNTU ಜಗಿತ್ಯಾಲ) ಟೈರ್-3 ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಟೆಕ್ ಮುಗಿಸಿದ್ದರು. ಈ ಕಾಲೇಜಿನಲ್ಲಿ ಸರಾಸರಿ ವೇತನ ಪ್ಯಾಕೇಜ್ ಸುಮಾರು 4 ಲಕ್ಷ ರೂ. ಇತ್ತು. ಹೆಚ್ಚಿನ ವಿದ್ಯಾರ್ಥಿಗಳು ಟಿಸಿಎಸ್, ಕಾಗ್ನಿಜೆಂಟ್, ಕ್ಯಾಪ್&zwnj;ಜೆಮಿನಿ, ಅಕ್ಸೆಂಚರ್&zwnj;ನಂತಹ ಸಾಫ್ಟ್&zwnj;ವೇರ್ ಸರ್ವಿಸ್ ಕಂಪನಿಗಳಿಗೆ ಮಾತ್ರ ಆಯ್ಕೆಯಾಗುತ್ತಿದ್ದರು. ಜೊತೆಗೆ ಕಾಲೇಜಿನಲ್ಲಿ ಕಾಂಪಿಟಿಟಿವ್ ಪ್ರೋಗ್ರಾಮಿಂಗ್ ಅಥವಾ ಹೈ-ಲೆವೆಲ್ ಟೆಕ್ ಇಂಟರ್ವ್ಯೂಗಳಿಗೆ ತರಬೇತಿ ನೀಡುವ ಪೂರಕ ವಾತಾವರಣವೂ ಇರಲಿಲ್ಲ.&lt;/p&gt;&lt;h2&gt;&lt;strong&gt;ಸ್ನೇಹಿತರ ನೆಟ್&zwnj;ವರ್ಕ್&lt;/strong&gt;&lt;/h2&gt;&lt;p&gt;ಕಾಲೇಜಿನ ಮಿತಿಗಳನ್ನೇ ನೆಪ ಮಾಡಿಕೊಳ್ಳದ ಎಂಜಿನಿಯರ್ ತಮಗೆ ತಾವೇ ಒಂದು ಹೊಸ ದಾರಿ ಕಂಡುಕೊಂಡರು. ಐಐಟಿ (IIT) ಮತ್ತು ಎನ್&zwnj;ಐಟಿ (NIT) ಕಾಲೇಜುಗಳಲ್ಲಿ ಓದುತ್ತಿದ್ದ ಸ್ನೇಹಿತರೊಂದಿಗೆ ನಿರಂತರ ಸಂಪರ್ಕ ಸಾಧಿಸಿದರು. ಅವರ ಮೂಲಕ ಕಾಂಪಿಟಿಟಿವ್ ಪ್ರೋಗ್ರಾಮಿಂಗ್, ಕೋಡಿಂಗ್ ಚರ್ಚೆಗಳು ಮತ್ತು ಇತ್ತೀಚಿನ ಟೆಕ್ ಟ್ರೆಂಡ್&zwnj;ಗಳ ಬಗ್ಗೆ ಮಾಹಿತಿ ಪಡೆದರು. ಕಾಲೇಜು ಪಠ್ಯಕ್ಕೆ ಸೀಮಿತವಾಗದೆ ಆನ್&zwnj;ಲೈನ್ ಕೋಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಹೆಚ್ಚಿಸಿಕೊಂಡರು.&lt;/p&gt;&lt;h2&gt;&lt;strong&gt;ಇನ್ಫೋಸಿಸ್&zwnj;ನಿಂದ ಅಮೆಜಾನ್&zwnj;ವರೆಗೆ&lt;/strong&gt;&lt;/h2&gt;&lt;p&gt;ಕಠಿಣ ಪರಿಶ್ರಮದ ಫಲವಾಗಿ ಕಾಲೇಜಿನ ಸರಾಸರಿಗಿಂತ ಮೂರು ಪಟ್ಟು ಹೆಚ್ಚು ಅಂದರೆ ವಾರ್ಷಿಕ 11 ಲಕ್ಷ ರೂ. ಪ್ಯಾಕೇಜ್&zwnj;ನೊಂದಿಗೆ ಇನ್ಫೋಸಿಸ್&zwnj;ನಲ್ಲಿ 'ಸ್ಪೆಷಲಿಸ್ಟ್ ಪ್ರೋಗ್ರಾಮರ್' ಆಗಿ ಮೊದಲ ಉದ್ಯೋಗ ಪಡೆದರು. ಇನ್ಫೋಸಿಸ್&zwnj;ಗೆ ಸೇರಿಕೊಂಡ ನಂತರವೂ ಕಲಿಕೆಯನ್ನು ನಿಲ್ಲಿಸದ ಅವರು, ಕೇವಲ 3 ವರ್ಷಗಳ ವೃತ್ತಿಜೀವನದಲ್ಲಿ ನೇರವಾಗಿ ಅಮೆಜಾನ್ ಸಂಸ್ಥೆಯ 'SDE 2' ಹುದ್ದೆಗೆ ಆಯ್ಕೆಯಾಗುವ ಮೂಲಕ ವಾರ್ಷಿಕ 64 ಲಕ್ಷ ರೂ. ವೇತನ ಪಡೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.&lt;/p&gt;&lt;p&gt;ನೀವು ಓದುವ ಕಾಲೇಜು ನಿಮ್ಮ ವೃತ್ತಿಜೀವನದ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಟೈರ್-3 ಕಾಲೇಜಿನಲ್ಲಿದ್ದರೂ, ಸ್ವಯಂ ಕಲಿಕೆ, ಉನ್ನತ ಕನಸು ಕಾಣುವ ಗೆಳೆಯರ ನೆಟ್&zwnj;ವರ್ಕ್ ಮತ್ತು ನೈಜ ತಾಂತ್ರಿಕ ಕೌಶಲಗಳು ನಿಮ್ಮಲ್ಲಿದ್ದರೆ ಗೂಗಲ್, ಅಮೆಜಾನ್&zwnj;ನಂತಹ ಜಾಗತಿಕ ದೈತ್ಯ ಸಂಸ್ಥೆಗಳ ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ ಎಂಬುದಕ್ಕೆ ಈ ಯುವಕನ ಪಯಣವೇ ಸಾಕ್ಷಿ!&lt;/p&gt;&lt;p&gt;There is a friend of mine who completed his https://t.co/BC6fLkcQNf CS from JNTU Jagityal, a tier-3 Govt college. To be honest, the college's average package is 4 LPA and most students get placed in TCS, Cognizant, Capgemini, and Accenture.But he is SDE 2 at Amazon earning&hellip;&lt;/p&gt;&lt;p&gt;&mdash; Vikas Alwys (@VikasAlwys) September 9, 2026&lt;/p&gt;&lt;p&gt;&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/jobs/beating-tier-3-odds-engineer-lands-rs-64-lpa-amazon-role-with-smart-networking-and-coding-skills-gkn/articleshow-5rfxqe9"/>
        </item>
        <item>
            <title><![CDATA[PF ಅಕೌಂಟ್ ಇರುವವರಿಗೆ ಕೇಂದ್ರದ ಗುಡ್‌ನ್ಯೂಸ್; ಈ ಸಿಂಪಲ್ ಕೆಲಸ ಮಾಡಿ, ಖಾತೆಗೆ ಬೀಳುತ್ತೆ 15 ಸಾವಿರ ರೂ.]]></title>
            <link>https://kannada.asianetnews.com/business/good-news-for-pf-account-holders-pradhan-mantri-viksit-bharat-rozgar-yojana-must-complete-uan-activation-sns/articleshow-6n8cdph</link>
            <guid isPermaLink="true">https://kannada.asianetnews.com/business/good-news-for-pf-account-holders-pradhan-mantri-viksit-bharat-rozgar-yojana-must-complete-uan-activation-sns/articleshow-6n8cdph</guid>
            <pubDate>Wed, 09 Sep 2026 13:22:05 +0530</pubDate>
            <description><![CDATA[ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಇಪಿಎಫ್&zwnj;ಓ ಮಹತ್ವದ ಎಚ್ಚರಿಕೆ ನೀಡಿದೆ. ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ ₹15,000 ಲಾಭ ಪಡೆಯಲು, ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಸಂಬಂಧಿಸಿದ ಡಿಬಿಟಿ ಸೌಲಭ್ಯ ಮತ್ತು ಎನ್&zwnj;ಪಿಸಿಐ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ ಆರ್ಥಿಕ ನೆರವು ಕೈತಪ್ಪಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyc7rfmrq9fjgna1c4376zzt,imgname-epfo-interest-credited-check-pf-balance-missed-call-sms-withdrawal-rules-upi-atm-umang-epfo-portal-2025-26-1784969707160.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಪಿಎಫ್&zwnj;ಓ ಬಿಗ್ ಅಲರ್ಟ್ ನೀಡಿದೆ. ಹೊಸದಾಗಿ ಕೆಲಸಕ್ಕೆ ಸೇರುವವರು ತಪ್ಪದೇ ಮಾಡಬೇಕಾದವರು ಈ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ. ಇಲ್ಲ ಎಂದರೆ ಖಾತೆ ಬೀಳಲಿರುವ 15 ಸಾವಿರ ರೂಪಾಯಿ ಮಿಸ್ ಆಗಲಿದೆ ಎಂದು ತಿಳಿಸಿದೆ. ಬ್ಯಾಂಕ್ ಖಾತೆಗೆ ಡಿಬಿಟಿ ಸೌಲಭ್ಯ ತಪ್ಪದೇ ಇರಬೇಕು, ಎನ್&zwnj;ಪಿಸಿಐ ಮ್ಯಾಪಿಂಹ್ ಪೂರ್ತಿಗೊಳಿಸಬೇಕು ಎಂದು ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಇಪಿಎಫ್&zwnj;ಓ ಎಚ್ಚರಿಕೆ: ಈ ತಪ್ಪಿನಿಂದ ₹15,000 ನಷ್ಟ!&lt;/h2&gt;&lt;p&gt;ಹೊಸದಾಗಿ ಕೆಸಲಕ್ಕೆ ಸೇರುವವರಿಗೆ ಲಾಭಗಳಿಸಲು, ಉದ್ಯೋಗ ಕೊಡುವ ಕಂಪನಿಗಳಿಗೆ ಪ್ರೋತ್ಸಹ ನೀಡಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಮೂಲಕ ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ 15 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಿದೆ. ಒಮ್ಮೆ ಮಾತ್ರ ಈ ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಆದರೆ ಎರಡು ಹಂತಗಳಲ್ಲಿ ಈ ಹಣ ಫಲಾನುಭವಿಯ ಖಾತೆಗೆ ಜಮಾ ಮಾಡಲಿದೆ. ಇನ್ನು, ಕೆಲಸ ನೀಡುವ ಕಂಪನಿಗೂ ಓರ್ವ ಉದ್ಯೋಗಿಗೆ ಮೂರು ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ.&lt;/p&gt;&lt;p&gt;ದೇಶದಲ್ಲಿ ಉದ್ಯೋಗ ಸೃಷ್ಟಿ, ಕಂಪನಿಗಳು ಉದ್ಯೋಗ ನೀಡುವುದನ್ನು ಹೆಚ್ಚಿಸಲು ಈ ಯೋಜನೆಯನ್ನು ಜಾರಿ ಮಾಡುತ್ತಿದೆ. ಈ ಯೋಜನೆ ಮೂಲಕ ಲಕ್ಷಾಂತರ ಮಂದಿಗೆ ಉದ್ಯೋಗಗಳು ಲಾಭ ಪಡೆದುಕೊಳ್ಳಲಿದ್ದಾರೆ. ಆದರೆ ಈ ಯೋಜನೆಯ ಕುರಿತು ಈಪಿಎಫ್&zwnj;ಓ ಬಿಗ್ ಅಪ್&zwnj;ಡೇಟ್ ನೀಡಿ, ಉದ್ಯೋಗಿಗಳಿಗೆ ಅಲರ್ಟ್ ನೀಡಿದೆ.&lt;/p&gt;&lt;h2&gt;ಈ ಕೆಲಸ ಮಾಡಿದರೆ ಮಾತ್ರ ಖಾತೆ ಹಣ ಬರುತ್ತದೆ!&lt;/h2&gt;&lt;p&gt;ಹೊಸದಾಗಿ ಕೆಲಸಕ್ಕೆ ಸೇರುವವರು ಈ ಯೋಜನೆಗೆ ಲಾಭ ಪಡೆದುಕೊಳ್ಳಲು ಪಿಎಫ್ ಖಾತೆ ಹೊಂದಿರಬೇಕು. ಪಿಎಫ್ (PF) ಯೋಜನೆಯ ವ್ಯಾಪ್ತಿಗೆ ಬರುವ ಕಂಪನಿಗೆ ಸೇರಿದರೆ ಮಾತ್ರ ನೀವು ಹಣವನ್ನು ಪಡೆಯುತ್ತೀರಿ. ನಿಮಗೆ ಪಿಎಫ್ ಖಾತೆ ಇದ್ದರೆ ಮಾತ್ರ ಸಾಕಾಗುವುದಿಲ್ಲ. ನಿಮಗೆ ಯಎಎನ್ ನಂಬರ್ ಕೂಡ ಆಕ್ಟೀವ್ ಮಾಡಿಕೊಳ್ಳಬೇಕು ಎಂದು ಈಪಿಎಫ್&zwnj;ಓ ಅಲರ್ಟ್ ನೀಡಿದೆ. ಫೇಸ್ ಅಥೆಂಟಿಕೇಷನ್ ಪ್ರಕ್ರಿಯೆ ಮೂಲಕ ಈ ಪ್ರೋಸೆಸ್ ಪೂರ್ತಿ ಮಾಡಬೇಕು. ಇಷ್ಟೇ ಅಲ್ಲದೆ, ಈಪಿಎಫ್&zwnj;ಓ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಸೌಕರ್ಯ ಕೂಡ ಇರ್ಬೇಕು ಅಂತ ಚೆಕ್ ಮಾಡಿಕೊಳ್ಳಬೇಕು. ಡಿಬಿಟಿ ಸೌಕರ್ಯ ಇಲ್ಲ ಎಂದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಅಪ್&zwnj;ಡೇಟ್ ಮಾಡಿಕೊಳ್ಳಿ. ಉದ್ಯೋಗಿಗಳು ಈ ಪ್ರಕ್ರಿಯೆ ಪೂರ್ಣಗೊಳಿಸಿದರೆ 15 ಸಾವಿರ ರೂಪಾಯಿ ಖಾತೆ ಜಮೆ ಆಗಲಿದೆ. ಇಲ್ಲ ಎಂದರೆ ಸಮಸ್ಯೆಗಳು ಎದುರಾಗುತ್ತದೆ. ಈ ವಿಚಾರವನ್ನ ಈಪಿಎಫ್ಓ ತನ್ನ ಎಕ್ಸ್ ಫ್ಲಾಟ್&zwnj;ಫಾರ್ಮ್&zwnj;ನಲ್ಲಿ ತಿಳಿಸಿದೆ.&lt;/p&gt;&lt;h2&gt;ಮೊದಲ ವರ್ಷವೇ ಖಾತೆಗೆ ಬರುತ್ತೆ ಹಣ!&lt;/h2&gt;&lt;p&gt;ಬ್ಯಾಂಕ್ ಖಾತೆಗೆ ಎನ್&zwnj;ಪಿಸಿಐ ಮ್ಯಾಪಿಂಗ್ ಪೂರ್ಣಗೊಳಿಸಬೇಕು. ಪ್ರಧಾನಮಂತ್ರಿ ವಿಕಸಿತ್ ಭಾರತ್ ಯೋಜನೆಯನ್ನು ಆಗಸ್ಟ್ 15, 2025ರಂದು ಪ್ರಧಾನಿ ಮೋದಿ ಪ್ರಾರಂಭಿಸಿದ್ದರು. ಕೆಲಸಕ್ಕೆ ಸೇರಿದ ಮೊದಲ ವರ್ಷವೇ ಈ ಯೋಜನೆಯ ಲಾಭ ಸಿಗಲಿದೆ. ಒಂದು ಲಕ್ಷ ರೂಪಾಯಿ ಒಳಗೆ ಸಂಬಳ ಇರುವ ಈ ಸೌಲಭ್ಯ ಸಿಗುತ್ತದೆ. ಈ ಯೋಜನೆಗೆ ನೀವು ಯಾವುದೇ ವಿಶೇಷ ಅರ್ಜಿ ಸಲ್ಲಿಕೆ ಮಾಡುವ ಅಗತ್ಯವಿಲ್ಲ. ಪಿಎಫ್ ಅಕೌಂಟ್ ಇದ್ದರೆ ಸತತವಾಗಿ ಆರು ತಿಂಗಳ ಕಾಲ ನಿಮ್ಮ ಖಾತೆಗೆ ಪಿಎಫ್ ಹಣ ಜಮೆಯಾದರೆ, ಎರಡು ಹಂತಗಳಲ್ಲಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ. ಮೊದಲ ಹಂತದಲ್ಲಿ 8 ಸಾವಿರ ರೂಪಾಯಿ, ಎರಡನೇ ಹಂತದಲ್ಲಿ 7 ಸಾವಿರ ರೂಪಾಯಿ ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ.&lt;/p&gt;&lt;p&gt;Pradhan Mantri Viksit Bharat Rozgar YojanaEmployees must complete UAN Activation and Authentication through Face Authentication and ensure that their bank account is DBT-enabled to receive the incentive.#PradhanMantriViksitBharatRozgarYojana #EPFO #EPFOWithYou #HumHainNa pic.twitter.com/54rOLdmdiU&lt;/p&gt;&lt;p&gt;&mdash; EPFO (@officialepfo) September 8, 2026&lt;/p&gt;&lt;p&gt;&lt;/p&gt;]]></content:encoded>
            <category>news-money</category>
            <dc:creator>Sumanth SN</dc:creator>
            <atom:link href="https://kannada.asianetnews.com/business/good-news-for-pf-account-holders-pradhan-mantri-viksit-bharat-rozgar-yojana-must-complete-uan-activation-sns/articleshow-6n8cdph"/>
        </item>
        <item>
            <title><![CDATA[Credit Card ಇರೋರು ಸಾಲದಿಂದ ಹೊರ ಬರೋದು ಯಾಕೆ ಕಷ್ಟಕರ? ಈ 7 ಟ್ರಿಕ್ಸ್ ಫಾಲೋ ಮಾಡಿ]]></title>
            <link>https://kannada.asianetnews.com/gallery/money/how-to-escape-credit-card-debt-trap-7-simple-strategies-for-quick-and-easy-repayment-gkn-at0btxy</link>
            <guid isPermaLink="true">https://kannada.asianetnews.com/gallery/money/how-to-escape-credit-card-debt-trap-7-simple-strategies-for-quick-and-easy-repayment-gkn-at0btxy</guid>
            <pubDate>Mon, 31 Aug 2026 08:58:43 +0530</pubDate>
            <description><![CDATA[&lt;p&gt;ಕ್ರೆಡಿಟ್ ಕಾರ್ಡ್ ಬಿಲ್&zwnj;ನಲ್ಲಿ ಕೇವಲ ಕನಿಷ್ಠ ಮೊತ್ತ ಪಾವತಿಸುವುದರಿಂದ ಜನರು ಸಾಲದ ಸುಳಿಗೆ ಸಿಲುಕುತ್ತಾರೆ. ಸಾಲವನ್ನು ಇಎಂಐ ಆಗಿ ಬದಲಿಸುವುದು ಮತ್ತು ಖರ್ಚಿನ ಮೇಲೆ ನಿಯಂತ್ರಣ ಹೇರುವ 7 ಸರಳ ಮಾರ್ಗಗಳ ಮೂಲಕ ನೀವು ಬೇಗನೆ ಸಾಲದಿಂದ ಮುಕ್ತರಾಗಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m19v4msdn3d7wtx24vx2dfmm,imgname-credit-card-1788110590765.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರೆಡಿಟ್ ಕಾರ್ಡ್ ಬಿಲ್&zwnj;ನಲ್ಲಿ ಕೇವಲ ಕನಿಷ್ಠ ಮೊತ್ತ ಪಾವತಿಸುವುದರಿಂದ ಜನರು ಸಾಲದ ಸುಳಿಗೆ ಸಿಲುಕುತ್ತಾರೆ. ಸಾಲವನ್ನು ಇಎಂಐ ಆಗಿ ಬದಲಿಸುವುದು ಮತ್ತು ಖರ್ಚಿನ ಮೇಲೆ ನಿಯಂತ್ರಣ ಹೇರುವ 7 ಸರಳ ಮಾರ್ಗಗಳ ಮೂಲಕ ನೀವು ಬೇಗನೆ ಸಾಲದಿಂದ ಮುಕ್ತರಾಗಬಹುದು.&lt;/p&gt;&lt;img&gt;&lt;p&gt;ಬೆಂಗಳೂರು: ಇಂದಿನ ಕಾಲದಲ್ಲಿ ಕ್ರೆಡಿಟ್ ಕಾರ್ಡ್ ಇಲ್ಲದವರೇ ಇಲ್ಲ. ತುರ್ತು ಸಂದರ್ಭದಲ್ಲಿ ಇದು ನಮಗೆ ಸಹಾಯ ಮಾಡಿದರೂ ಸರಿಯಾಗಿ ಬಳಸದಿದ್ದರೆ ನಮ್ಮನ್ನು ದೊಡ್ಡ ಸಾಲದ ಬಲೆಗೆ ತಳ್ಳಿಬಿಡುತ್ತದೆ. ಅನೇಕರು ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗ ಕೇವಲ 'ಕನಿಷ್ಠ ಮೊತ್ತ' (Minimum Amount) ಪಾವತಿಸುತ್ತಾರೆ. ಇದೇ ನೀವು ಮಾಡುವ ಅತಿದೊಡ್ಡ ತಪ್ಪು! ಇದರಿಂದ ಸಾಲದ ಬಡ್ಡಿ ಬೆಟ್ಟದಂತೆ ಬೆಳೆಯುತ್ತಾ ಹೋಗುತ್ತದೆ. ಈ ಸಾಲದ ಸುಳಿಯಿಂದ ನೀವು ಹೇಗೆ ಹೊರಬರಬಹುದು? ಇಲ್ಲಿದೆ ನೋಡಿ 7 ಸರಳ ಉಪಾಯಗಳು.&lt;/p&gt;&lt;img&gt;&lt;p&gt;ಬಿಲ್ ಬಂದಾಗ ಬ್ಯಾಂಕ್ ಸೂಚಿಸುವ 'ಕನಿಷ್ಠ ಮೊತ್ತ' (Minimum Due) ಮಾತ್ರ ಕಟ್ಟಬೇಡಿ. ನಿಮ್ಮಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಹಣವನ್ನು ಪಾವತಿಸಿ. ಇದರಿಂದ ಒಟ್ಟು ಸಾಲದ ಮೊತ್ತ ಕಡಿಮೆಯಾಗುತ್ತದೆ ಮತ್ತು ಬಡ್ಡಿಯ ಹೊರೆ ಇಳಿಯುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ಕಾರ್ಡ್&zwnj;ನಲ್ಲಿ ದೊಡ್ಡ ಮೊತ್ತದ ಸಾಲವಿದ್ದರೆ, ಅದನ್ನು ಇಎಂಐ ಆಗಿ ಬದಲಿಸಲು ಬ್ಯಾಂಕ್&zwnj;ಗೆ ಮನವಿ ಮಾಡಿ. ಕ್ರೆಡಿಟ್ ಕಾರ್ಡ್ ಬಡ್ಡಿ ದರ ಶೇ. 40ರವರೆಗೂ ಇರುತ್ತದೆ, ಆದರೆ ಇಎಂಐ ಮಾಡಿದರೆ ಬಡ್ಡಿ ದರ ಕಡಿಮೆಯಾಗುತ್ತದೆ. ಅಥವಾ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಪಡೆದು ಕ್ರೆಡಿಟ್ ಕಾರ್ಡ್ ಸಾಲವನ್ನು ಒಂದೇ ಬಾರಿಗೆ ತೀರಿಸಿ.&lt;/p&gt;&lt;img&gt;&lt;p&gt;ಬಿಲ್ ಪಾವತಿಸುವ ದಿನಾಂಕವನ್ನು ಮರೆತರೆ ಬ್ಯಾಂಕ್ ಭಾರಿ ದಂಡ (Penalty) ವಿಧಿಸುತ್ತದೆ. ಇದನ್ನು ತಪ್ಪಿಸಲು ನಿಮ್ಮ ಬ್ಯಾಂಕ್ ಖಾತೆಯಿಂದ ಆಟೋಮ್ಯಾಟಿಕ್ ಆಗಿ ಹಣ ಕಟ್ ಆಗುವಂತೆ ಸೆಟ್ ಮಾಡಿ. ಇದರಿಂದ ಲೇಟ್ ಫೀಸ್ ಉಳಿಯುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ಬಳಿಕ ಒಂದಕ್ಕಿಂತ ಹೆಚ್ಚು ಕಾರ್ಡ್&zwnj;ಗಳಿದ್ದರೆ, ಮೊದಲು ಅತೀ ಕಡಿಮೆ ಸಾಲ ಇರುವ ಕಾರ್ಡ್&zwnj;ನ ಹಣವನ್ನು ಪೂರ್ತಿಯಾಗಿ ಕಟ್ಟಿ ಮುಗಿಸಿ. ಒಂದು ಸಾಲ ತೀರಿದಾಗ ನಿಮಗೆ ಆತ್ಮವಿಶ್ವಾಸ ಬರುತ್ತದೆ, ನಂತರ ದೊಡ್ಡ ಸಾಲದ ಕಡೆ ಗಮನ ಹರಿಸಿ.&lt;/p&gt;&lt;img&gt;&lt;p&gt;ಯಾವ ಕ್ರೆಡಿಟ್ ಕಾರ್ಡ್&zwnj;ನಲ್ಲಿ ಅತೀ ಹೆಚ್ಚು ಬಡ್ಡಿ ದರ ಇದೆಯೋ, ಆ ಕಾರ್ಡ್&zwnj;ನ ಸಾಲವನ್ನು ಮೊದಲು ತೀರಿಸಲು ಪ್ರಯತ್ನಿಸಿ. ಇದರಿಂದ ನೀವು ಪ್ರತಿ ತಿಂಗಳು ಬ್ಯಾಂಕ್&zwnj;ಗೆ ಕಟ್ಟುವ ಹೆಚ್ಚಿನ ಬಡ್ಡಿ ಹಣ ಉಳಿತಾಯವಾಗುತ್ತದೆ.&lt;/p&gt;&lt;img&gt;&lt;p&gt;ನಮ್ಮ ಕೈಯಲ್ಲಿ ಕಾರ್ಡ್ ಇದೆ ಎಂದ ಮಾತ್ರಕ್ಕೆ ಅನಗತ್ಯವಾಗಿ ಶಾಪಿಂಗ್ ಮಾಡಬೇಡಿ. ಒಂದು ಬಜೆಟ್ ಹಾಕಿಕೊಳ್ಳಿ. ನಿಮ್ಮ ತಿಂಗಳ ಆದಾಯಕ್ಕೆ ತಕ್ಕಂತೆ ಮಾತ್ರ ಖರ್ಚು ಮಾಡಿ.&lt;/p&gt;&lt;img&gt;&lt;p&gt;ಸಾಲದ ಸುಳಿಯಿಂದ ಹೊರಬರುವವರೆಗೂ ಕ್ರೆಡಿಟ್ ಕಾರ್ಡ್ ಬಳಸುವುದನ್ನು ನಿಲ್ಲಿಸಿ. ಬದಲಾಗಿ ನಗದು ಅಥವಾ ಯುಪಿಐ (UPI) ಬಳಸಿ. ಕೈಯಿಂದ ಹಣ ಎಣಿಸಿ ಕೊಡುವಾಗ ನಮಗೆ ಖರ್ಚಿನ ಅರಿವಾಗುತ್ತದೆ, ಇದರಿಂದ ಹಣ ಉಳಿತಾಯವಾಗುತ್ತದೆ.&lt;/p&gt;&lt;p&gt;ನೆನಪಿಡಿ ಕ್ರೆಡಿಟ್ ಕಾರ್ಡ್ ಎನ್ನುವುದು ನಮಗೆ ಸಿಕ್ಕ ಉಚಿತ ಹಣವಲ್ಲ, ಅದು ನಾವು ಮರಳಿಸಬೇಕಾದ ಸಾಲ. ಈ ಮೇಲಿನ 7 ಹಂತಗಳನ್ನು ಅನುಸರಿಸಿದರೆ ನೀವು ಖಂಡಿತವಾಗಿಯೂ ಸಾಲದ ಬಲೆಯಿಂದ ಹೊರಬಂದು ನೆಮ್ಮದಿಯ ಜೀವನ ನಡೆಸಬಹುದು.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/money/how-to-escape-credit-card-debt-trap-7-simple-strategies-for-quick-and-easy-repayment-gkn-at0btxy"/>
        </item>
        <item>
            <title><![CDATA[Success Story: ಬದುಕು ಬದಲಿಸಿದ ಒಂದು ಮೆಸೇಜ್ ಒಂದು ಮೆಸೇಜ್ ಬದಲಿಸಿತು ಬದುಕು; 17ರ ಹುಡುಗ 22ಕ್ಕೆ ಗಳಿಸಿದ್ದು 1 ಕೋಟಿ ರೂ.!]]></title>
            <link>https://kannada.asianetnews.com/viral/aditya-bansal-late-night-dm-raj-shamani-earned-one-crore-by-22-success-story-bmk/articleshow-bdtvrcd</link>
            <guid isPermaLink="true">https://kannada.asianetnews.com/viral/aditya-bansal-late-night-dm-raj-shamani-earned-one-crore-by-22-success-story-bmk/articleshow-bdtvrcd</guid>
            <pubDate>Wed, 26 Aug 2026 19:05:32 +0530</pubDate>
            <description><![CDATA[17 ವರ್ಷದ ಜೆಇಇ ಆಕಾಂಕ್ಷಿ ಆದಿತ್ಯ ಬನ್ಸಾಲ್, ಉದ್ಯಮಿ ರಾಜ್ ಶಮಾನಿಗೆ ಕಳುಹಿಸಿದ ಒಂದು ತಡರಾತ್ರಿಯ ಮೆಸೇಜ್&zwnj;ನಿಂದ ತನ್ನ ವೃತ್ತಿಜೀವನವನ್ನೇ ಬದಲಾಯಿಸಿಕೊಂಡನು. ಯಾವುದೇ ಪದವಿ ಅಥವಾ ಅನುಭವವಿಲ್ಲದಿದ್ದರೂ, ಈ ಅವಕಾಶದಿಂದಾಗಿ 45ಕ್ಕೂ ಹೆಚ್ಚು ಸಂಸ್ಥಾಪಕರೊಂದಿಗೆ ಕೆಲಸ ಮಾಡಿ, 22ನೇ ವಯಸ್ಸಿಗೆ 1 ಕೋಟಿ ರೂಪಾಯಿ ಸಂಪಾದಿಸುವಲ್ಲಿ ಯಶಸ್ವಿಯಾದನು.]]></description>
            <media:content url="https://static.asianetnews.com/images/w-1280,h-720,format-jpg,imgid-01m0z4csvsk3jc0m49vkz3dnqy,imgname-success-story-1787751196537.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾವುದೇ ಪದವಿ, ಕೆಲಸದ ಅನುಭವ ಅಥವಾ ಬ್ಯಾಂಕ್ ಖಾತೆಯೂ ಇಲ್ಲದಿದ್ದ 17 ವರ್ಷದ ಯುವಕನೊಬ್ಬ, ರಾತ್ರಿ ವೇಳೆ ಖ್ಯಾತ ಉದ್ಯಮಿ ಹಾಗೂ ಪಾಡ್&zwnj;ಕ್ಯಾಸ್ಟರ್&zwnj;ಗೆ ಕಳುಹಿಸಿದ ಒಂದೇ ಒಂದು ಇನ್&zwnj;ಸ್ಟಾಗ್ರಾಮ್/ಟ್ವಿಟರ್ ಮೆಸೇಜ್ (DM) ಆತನ ಸಂಪೂರ್ಣ ವೃತ್ತಿಜೀವನದ ದಾರಿಯನ್ನೇ ಬದಲಾಯಿಸಿದೆ. ಹದಿಹರೆಯದಲ್ಲಿ ಸಿಕ್ಕ ಆ ಸಣ್ಣ ಅವಕಾಶದಿಂದ ಆರಂಭಗೊಂಡ ಪ್ರಯಾಣವು, 45ಕ್ಕೂ ಹೆಚ್ಚು ಸಂಸ್ಥಾಪಕರ (Founders) ಜೊತೆ ಕೆಲಸ ಮಾಡಲು ಕಾರಣವಾಗಿ, 22ನೇ ವಯಸ್ಸಿಗೆ 1 ಕೋಟಿ ರೂಪಾಯಿ ಗಳಿಸುವ ಸಾಧನೆಗೆ ಹಾದಿ ಮಾಡಿಕೊಟ್ಟಿದೆ.&lt;/p&gt;&lt;h2&gt;&lt;strong&gt;ಜೆಇಇ ಆಕಾಂಕ್ಷಿಯಾಗಿದ್ದ ಆದಿತ್ಯ ಬನ್ಸಾಲ್!&lt;/strong&gt;&lt;/h2&gt;&lt;p&gt;2021 ರಲ್ಲಿ ಆದಿತ್ಯ ಬನ್ಸಾಲ್ ಎಂಬ ಯುವಕ ಜೆಇಇ (JEE) ಎಂಜಿನಿಯರಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಕೋವಿಡ್ ಕಾರಣದಿಂದ ಪರೀಕ್ಷೆಗಳು ಅಕ್ಟೋಬರ್&zwnj;ಗೆ ಮುಂದೂಡಲ್ಪಟ್ಟವು. ಕೇವಲ ಓದಿ, ಎಂಜಿನಿಯರ್ ಆಗಿ ಯಾವುದೋ ಒಂದು ಕೆಲಸಕ್ಕೆ ಸೇರುವುದಷ್ಟೇ ತನ್ನ ನಿಜವಾದ ಗುರಿಯೇ ಎಂದು ಬನ್ಸಾಲ್ ತಮ್ಮನ್ನೇ ಪ್ರಶ್ನಿಸಿಕೊಳ್ಳಲು ಪ್ರಾರಂಭಿಸಿದರು. ಈ ವೇಳೆ ಆನ್&zwnj;ಲೈನ್ ಮೂಲಕ ಹಣ ಸಂಪಾದಿಸುವ ದಾರಿಗಳನ್ನು ಹುಡುಕಲು ಆರಂಭಿಸಿದರು. ಗ್ರಾಫಿಕ್ ಡಿಸೈನಿಂಗ್, ವೆಬ್&zwnj;ಸೈಟ್ ಡೆವಲಪ್&zwnj;ಮೆಂಟ್ ಸೇರಿದಂತೆ ಹಲವು ಕೆಲಸಗಳನ್ನು ಪ್ರಯತ್ನಿಸಿದರೂ ಎಲ್ಲದರಲ್ಲೂ ವಿಫಲರಾದರು. &quot;ನಾನು ಹಣ ಗಳಿಸಲು ಏನೆಲ್ಲಾ ಪ್ರಯತ್ನಿಸಿದರೂ ಎಲ್ಲವೂ ವ್ಯರ್ಥವಾಯ್ತು&quot; ಎಂದು ಬನ್ಸಾಲ್ ನಂತರ ನೆನಪಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ರಾಜ್ ಶಮಾನಿಗೆ ಮೆಸೇಜ್ ಕಳುಹಿಸಿದ ಆ ರಾತ್ರಿ!&lt;/strong&gt;&lt;/h2&gt;&lt;p&gt;ಒಂದು ರಾತ್ರಿ, ಖ್ಯಾತ ಉದ್ಯಮಿ ಹಾಗೂ ಪಾಡ್&zwnj;ಕ್ಯಾಸ್ಟರ್ ರಾಜ್ ಶಮಾನಿ ಅವರು ಆನ್&zwnj;ಲೈನ್&zwnj; ಹಣ ಸಂಪಾದನೆಯ ಮಾರ್ಗಗಳ ಕುರಿತು ಮಾತನಾಡುತ್ತಿದ್ದ ವೀಡಿಯೊವನ್ನು ಬನ್ಸಾಲ್ ವೀಕ್ಷಿಸಿದರು. ಅದನ್ನು ಸುಮ್ಮನೆ ನೋಡಿ ಮುಂದುವರಿಯುವ ಬದಲು, ಬನ್ಸಾಲ್ ಆ ವೀಡಿಯೊದಲ್ಲಿದ್ದ ಮುಖ್ಯ ವಿಷಯಗಳನ್ನು ಗೂಗಲ್ ಡಾಕ್&zwnj;ನಲ್ಲಿ ಗಂಟೆಗಟ್ಟಲೆ ಬರೆದು ಟ್ವಿಟರ್ ಥ್ರೆಡ್ (Twitter Thread) ರೂಪಕ್ಕೆ ತಂದರು. ರಾತ್ರಿ 10:41 ಕ್ಕೆ ಅದನ್ನು ನೇರವಾಗಿ ರಾಜ್ ಶಮಾನಿ ಅವರಿಗೆ ಮೆಸೇಜ್ (DM) ಮೂಲಕ ಕಳುಹಿಸಿದರು. ಪ್ರತ್ಯುತ್ತರ ಬರುತ್ತದೆ ಎಂಬ ಯಾವುದೇ ನಿರೀಕ್ಷೆ ಅವರಿಗಿರಲಿಲ್ಲ.&lt;/p&gt;&lt;h3&gt;&lt;strong&gt;ಬೆಳಿಗ್ಗೆ 3:53 ಕ್ಕೆ ಬಂದ ಅನಿರೀಕ್ಷಿತ ಉತ್ತರ!&lt;/strong&gt;&lt;/h3&gt;&lt;p&gt;ಅಚ್ಚರಿಯೆಂದರೆ, ಅದೇ ರಾತ್ರಿ ಬೆಳಗಿನ ಜಾವ 3:53 ಕ್ಕೆ ರಾಜ್ ಶಮಾನಿ ಅವರಿಂದ ಉತ್ತರ ಬಂದಿತ್ತು. &quot;ನಾನು ಇದನ್ನು ಅಪ್&zwnj;ಲೋಡ್ ಮಾಡುತ್ತೇನೆ. ಇದು ಚೆನ್ನಾಗಿ ಕೆಲಸ ಮಾಡಿದರೆ, ನನ್ನ ಟ್ವಿಟರ್ ಥ್ರೆಡ್ ಬರೆಯಲು ನಿನ್ನನ್ನೇ ನೇಮಿಸಿಕೊಳ್ಳುತ್ತೇನೆ, ಓಕೆನಾ?&quot; ಎಂದು ಶಮಾನಿ ಮೆಸೇಜ್ ಮಾಡಿದ್ದರು.&lt;/p&gt;&lt;h3&gt;&lt;strong&gt;ಬರುತ್ತಿರಲಿಲ್ಲ ಬರವಣಿಗೆ!&lt;/strong&gt;&lt;/h3&gt;&lt;p&gt;ಶಮಾನಿ ಪೋಸ್ಟ್ ಮಾಡಿದ ಆ ಟ್ವಿಟರ್ ಥ್ರೆಡ್ ಸುಮಾರು 1,200 ಲೈಕ್&zwnj;ಗಳನ್ನು ಪಡೆಯಿತು. ಬನ್ಸಾಲ್ ಅವರಿಗೆ ಬರವಣಿಗೆಯ ಅನುಭವವಿಲ್ಲದಿದ್ದರೂ, 17 ವರ್ಷದ ಹುಡುಗನ ಮೇಲಿದ್ದ ನಂಬಿಕೆಯಿಂದ ಶಮಾನಿ ಅವರಿಗೆ ಕೆಲಸ ನೀಡಿದರು. ಬನ್ಸಾಲ್ ಶಮಾನಿ ಅವರಿಗಾಗಿ 5-6 ಟ್ವಿಟರ್ ಥ್ರೆಡ್&zwnj;ಗಳನ್ನು ಬರೆದರು. ಆ ಸಮಯದಲ್ಲಿ ಬನ್ಸಾಲ್ ಅವರಿಗೆ ಸ್ವಂತ ಬ್ಯಾಂಕ್ ಖಾತೆಯೂ ಇರದ ಕಾರಣ, ಶಮಾನಿ ಅವರಿಗೆ ಅಮೆಜಾನ್ ಗಿಫ್ಟ್ ಕಾರ್ಡ್&zwnj;ಗಳ (Amazon Gift Cards) ಮೂಲಕ ಕೂಲಿ ಹಣ ಪಾವತಿಸುತ್ತಿದ್ದರು!&lt;/p&gt;&lt;h3&gt;&lt;strong&gt;ಸಂಬಳಕ್ಕಿಂತ ಮಿಗಿಲಾದ ಅನುಭವ ಹಾಗೂ ಯಶಸ್ಸು!&lt;/strong&gt;&lt;/h3&gt;&lt;p&gt;ರಾಜ್ ಶಮಾನಿ ಅವರು ಬನ್ಸಾಲ್ ಅವರನ್ನು ಕೇವಲ ಕೆಲಸದಾಳುವಾಗಿ ನೋಡದೆ ತಮ್ಮ ಸ್ವಂತ ತಂಡದ ಭಾಗವಾಗಿ ನಡೆಸಿಕೊಂಡರು. ಆಲೋಚನೆಗಳನ್ನು ಹಂಚಿಕೊಳ್ಳುವುದು ಮತ್ತು ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವುದರ ಮೂಲಕ ಪ್ರೋತ್ಸಾಹಿಸಿದರು. ತದನಂತರ ಶಮಾನಿ ಅವರ ಕಂಪನಿಗೆ ಪೂರ್ಣಾವಧಿ ತಂಡದ ಅಗತ್ಯ ಬಂದಾಗ ಈ ಕೆಲಸ ಕೊನೆಗೊಂಡರೂ, ಶಮಾನಿ ನೀಡಿದ ಶಿಫಾರಸು ಪತ್ರ (Testimonial) ಬನ್ಸಾಲ್ ಅವರಿಗೆ ಹೊಸ ಕ್ಲೈಂಟ್&zwnj;ಗಳನ್ನು ಪಡೆಯಲು ಸಹಾಯ ಮಾಡಿತು. ಅಲ್ಲಿಂದ ಮುಂದೆ ಬನ್ಸಾಲ್ ಹಿಂತಿರುಗಿ ನೋಡಲಿಲ್ಲ. ಸುಮಾರು 45ಕ್ಕೂ ಹೆಚ್ಚು ಕಂಪನಿಗಳ ಸಂಸ್ಥಾಪಕರ ಜೊತೆ ಬರವಣಿಗೆಯ ಕೆಲಸ ಮಾಡಿ, 22ನೇ ವಯಸ್ಸಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಪಾದಿಸಿದರು.&lt;/p&gt;&lt;h3&gt;&lt;strong&gt;ಪದವಿಯೂ ಇಲ್ಲ, ಅನುಭವವೂ ಇಲ್ಲ!&lt;/strong&gt;&lt;/h3&gt;&lt;p&gt;ಸಮಾಜಿಕ ಜಾಲತಾಣಗಳಲ್ಲಿ ಈ ಕಥೆ ಹಂಚಿಕೊಂಡ ಬನ್ಸಾಲ್, &quot;ನನ್ನ ಬಳಿ ಪದವಿ ಇರಲಿಲ್ಲ, ಅನುಭವ ಇರಲಿಲ್ಲ. ಆದರೂ ರಾಜ್ ಶಮಾನಿ ನನ್ನ ಮೇಲೆ ನಂಬಿಕೆ ಇಟ್ಟರು. ಆ ತಡರಾತ್ರಿಯ ಒಂದು ಮೆಸೇಜ್ ನನ್ನ ಇಡೀ ಜೀವನವನ್ನೇ ಬದಲಾಯಿಸಿತು&quot; ಎಂದು ಧನ್ಯವಾದ ತಿಳಿಸಿದ್ದಾರೆ. ಈ ಕಥೆಗೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, &quot;ಜೀವನದಲ್ಲಿ ಸಿಗುವ ಒಂದೇ ಒಂದು ಸರಿಯಾದ ಅವಕಾಶ ವ್ಯಕ್ತಿಯ ದಿಕ್ಕನ್ನೇ ಬದಲಾಯಿಸಬಲ್ಲದು&quot; ಎಂದು ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/aditya-bansal-late-night-dm-raj-shamani-earned-one-crore-by-22-success-story-bmk/articleshow-bdtvrcd"/>
        </item>
        <item>
            <title><![CDATA[Raksha Bandhan : ಮುದ್ದು ತಂಗಿಗೆ, ಪ್ರೀತಿಯ ಅಕ್ಕನಿಗೆ SIP ಉಡುಗೊರೆ ನೀಡಬಹುದು - ರೂಲ್ಸ್ ಹೀಗಿದೆ..]]></title>
            <link>https://kannada.asianetnews.com/money/for-raksha-bandhan-you-can-gift-an-sip-to-your-beloved-sister-here-are-the-rules-gkn/articleshow-kty0h5k</link>
            <guid isPermaLink="true">https://kannada.asianetnews.com/money/for-raksha-bandhan-you-can-gift-an-sip-to-your-beloved-sister-here-are-the-rules-gkn/articleshow-kty0h5k</guid>
            <pubDate>Fri, 28 Aug 2026 07:03:21 +0530</pubDate>
            <description><![CDATA[&lt;p&gt;ಹಣಕ್ಕಿಂತ ಹೆಚ್ಚಾಗಿ ಆರ್ಥಿಕ ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ನೀಡುವುದು ನಿಜವಾದ ಪ್ರೀತಿ. ಈ ರಕ್ಷಾಬಂಧನದಂದು ನಿಮ್ಮ ಸೋದರಿಯ ಹೆಸರಿನಲ್ಲಿ ಒಂದು ಎಸ್&zwnj;ಐಪಿ ಆರಂಭಿಸಿ ಅವರ ಕನಸುಗಳಿಗೆ ನೀರೆರೆಯಿರಿ. ಈ ಕುರಿತ ಮಾಹಿತಿ ಇಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1242h7p6t5pza3pgc80ynrt,imgname-raksha-bandhan-1787851523318.jpg" type="image/jpeg" height="390" width="690"/>
            <content:encoded><![CDATA[&lt;p&gt;ಇವತ್ತು ರಕ್ಷಾಬಂಧನ! ಈ ಬಾರಿ ನಿಮ್ಮ ತಂಗಿ ಅಥವಾ ಅಕ್ಕನಿಗೆ ಬಟ್ಟೆ, ಸಿಹಿ ಅಥವಾ ಒಡವೆ ಕೊಡುವ ಬದಲು ಅವರ ಭವಿಷ್ಯಕ್ಕೆ ನೆರವಾಗುವ 'ಎಸ್&zwnj;ಐಪಿ' (SIP-Systematic Investment Plan) ಉಡುಗೊರೆ ನೀಡುವ ಪ್ಲಾನ್ ಮಾಡಬಹುದು. ಇದು ಅವರ ಆರ್ಥಿಕ ಭದ್ರತೆಗೆ ನೀವು ನೀಡುವ ಅತ್ಯುತ್ತಮ ಕೊಡುಗೆಯಾಗಬಲ್ಲದು. ಆದರೆ ಮ್ಯೂಚುಯಲ್ ಫಂಡ್&zwnj;ನಲ್ಲಿ ಹಣ ಹೂಡುವಾಗ ಕೆಲವು ನಿಯಮಗಳಿವೆ.&lt;/p&gt;&lt;h2&gt;&lt;strong&gt;ನೇರವಾಗಿ ಹಣ ಪಾವತಿಸಲು ಸಾಧ್ಯವಿಲ್ಲ&lt;/strong&gt;&lt;/h2&gt;&lt;p&gt;ಮ್ಯೂಚುಯಲ್ ಫಂಡ್ ನಿಯಮಗಳ ಪ್ರಕಾರ.. ಯಾರ ಹೆಸರಿನಲ್ಲಿ ಹೂಡಿಕೆ (Folio) ಇರುತ್ತದೆಯೋ, ಅವರದ್ದೇ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಬೇಕು. ಅಂದರೆ, ನೀವು ನಿಮ್ಮ ಬ್ಯಾಂಕ್ ಖಾತೆಯಿಂದ ನಿಮ್ಮ ಸೋದರಿಯ ಎಸ್&zwnj;ಐಪಿ ಖಾತೆಗೆ ನೇರವಾಗಿ ಹಣ ಪಾವತಿಸಲು ಬರುವುದಿಲ್ಲ. ಇದನ್ನು 'ಥರ್ಡ್ ಪಾರ್ಟಿ ಪೇಮೆಂಟ್' ನಿರ್ಬಂಧ ಎನ್ನಲಾಗುತ್ತದೆ.&lt;/p&gt;&lt;h2&gt;&lt;strong&gt;ಉಡುಗೊರೆ ನೀಡುವುದು ಹೇಗೆ?&lt;/strong&gt;&lt;/h2&gt;&lt;p&gt;ನಿಮ್ಮ ಸೋದರಿಗೆ ಎಸ್&zwnj;ಐಪಿ ಉಡುಗೊರೆ ನೀಡಲು ಅತ್ಯಂತ ಸುಲಭವಾದ ದಾರಿ ಇಲ್ಲಿದೆ&lt;/p&gt;&lt;ul&gt; &lt;li&gt;ಮೊದಲು ನೀವು ಉಡುಗೊರೆ ನೀಡಲು ಬಯಸುವ ಹಣವನ್ನು ನಿಮ್ಮ ಸೋದರಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿ&lt;/li&gt; &lt;li&gt;ನಂತರ ಆ ಹಣವನ್ನು ಬಳಸಿ ಅವರದ್ದೇ ಬ್ಯಾಂಕ್ ಖಾತೆಯ ಮೂಲಕ ಎಸ್&zwnj;ಐಪಿ ಆರಂಭಿಸಲು ಅವರಿಗೆ ತಿಳಿಸಿ&lt;/li&gt; &lt;li&gt;ಉದಾಹರಣೆ: ನೀವು ತಿಂಗಳಿಗೆ 5,000 ರೂ. ನೀಡಲು ಬಯಸಿದರೆ ಪ್ರತಿ ತಿಂಗಳು ಅವರ ಖಾತೆಗೆ ಅಷ್ಟು ಹಣ ಹಾಕಿ ಅಥವಾ ವರ್ಷಕ್ಕೆ ಒಮ್ಮೆಯೇ 60,000 ರೂ.ಗಳನ್ನು ಅವರ ಖಾತೆಗೆ ವರ್ಗಾಯಿಸಿ ಎಸ್&zwnj;ಐಪಿ ಆರಂಭಿಸಬಹುದು.&lt;/li&gt;&lt;/ul&gt;&lt;h2&gt;&lt;strong&gt;ಸೋದರಿ ಮೈನರ್ ಆಗಿದ್ದರೆ ನಿಯಮಗಳೇನು?&lt;/strong&gt;&lt;/h2&gt;&lt;p&gt;ಒಂದು ವೇಳೆ ನಿಮ್ಮ ಸೋದರಿ ಇನ್ನೂ ಅಪ್ರಾಪ್ತರಾಗಿದ್ದರೆ (Minor), ಅವರ ಪರವಾಗಿ ಪೋಷಕರು ಅಥವಾ ಕಾನೂನುಬದ್ಧ ರಕ್ಷಕರು ಖಾತೆ ನಿರ್ವಹಿಸುತ್ತಾರೆ. ಇಲ್ಲಿ ಒಂದು ವಿನಾಯಿತಿ ಇದೆ. ಪೋಷಕರು ಅಥವಾ ಹತ್ತಿರದ ಸಂಬಂಧಿಗಳು ಅಪ್ರಾಪ್ತರ ಖಾತೆಗೆ ಉಡುಗೊರೆಯಾಗಿ ತಿಂಗಳಿಗೆ 50,000 ರೂ.ವರೆಗೂ ನೇರವಾಗಿ ಪಾವತಿಸಲು ಅವಕಾಶವಿದೆ.&lt;/p&gt;&lt;h2&gt;&lt;strong&gt;ತೆರಿಗೆ ವಿನಾಯಿತಿ ಇದೆಯೇ?&lt;/strong&gt;&lt;/h2&gt;&lt;p&gt;ಭಾರತದ ಆದಾಯ ತೆರಿಗೆ ನಿಯಮದ ಪ್ರಕಾರ, ಅಣ್ಣ-ತಂಗಿ ಅಥವಾ ಅಕ್ಕ-ತಮ್ಮನ ನಡುವಿನ ಹಣದ ವರ್ಗಾವಣೆಗೆ ಯಾವುದೇ ತೆರಿಗೆ ಇರುವುದಿಲ್ಲ. ನೀವು ಎಷ್ಟು ಹಣ ನೀಡಿದರೂ ಅದಕ್ಕೆ ನಿಮ್ಮ ಸೋದರಿ ತೆರಿಗೆ ಕಟ್ಟಬೇಕಿಲ್ಲ. ಎಸ್&zwnj;ಐಪಿ ಹೂಡಿಕೆಯಿಂದ ಬರುವ ಲಾಭವನ್ನು (Capital Gains) ಅವರು ಹಿಂಪಡೆದಾಗ (Redeem), ಆ ಲಾಭದ ಮೇಲೆ ಅವರು ತೆರಿಗೆ ಪಾವತಿಸಬೇಕಾಗುತ್ತದೆ.&lt;/p&gt;&lt;h2&gt;&lt;strong&gt;ಗಿಫ್ಟ್ ಡೀಡ್ (Gift Deed) ಅಗತ್ಯವೇ?&lt;/strong&gt;&lt;/h2&gt;&lt;p&gt;ಚಿಕ್ಕ ಮೊತ್ತದ ಹಣ ವರ್ಗಾವಣೆಗೆ ಯಾವುದೇ ದಾಖಲೆ ಬೇಕಿಲ್ಲ. ಆದರೆ, ನೀವು ದೊಡ್ಡ ಮೊತ್ತದ ಹಣವನ್ನು ಉಡುಗೊರೆಯಾಗಿ ನೀಡುತ್ತಿದ್ದರೆ ಒಂದು 'ಗಿಫ್ಟ್ ಲೆಟರ್' ಅಥವಾ 'ಗಿಫ್ಟ್ ಡೀಡ್' ಬರೆದಿಟ್ಟುಕೊಳ್ಳುವುದು ಒಳ್ಳೆಯದು. ನಾಳೆ ಆದಾಯ ತೆರಿಗೆ ಇಲಾಖೆಯವರು ಪ್ರಶ್ನೆ ಮಾಡಿದರೆ ಇದು ಉಡುಗೊರೆ ಎಂದು ತೋರಿಸಲು ಸಹಕಾರಿಯಾಗುತ್ತದೆ. ಹಣಕ್ಕಿಂತ ಹೆಚ್ಚಾಗಿ ಆರ್ಥಿಕ ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ನೀಡುವುದು ನಿಜವಾದ ಪ್ರೀತಿ. ಈ ರಕ್ಷಾಬಂಧನದಂದು ನಿಮ್ಮ ಸೋದರಿಯ ಹೆಸರಿನಲ್ಲಿ ಒಂದು ಎಸ್&zwnj;ಐಪಿ ಆರಂಭಿಸಿ ಅವರ ಕನಸುಗಳಿಗೆ ನೀರೆರೆಯಿರಿ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/for-raksha-bandhan-you-can-gift-an-sip-to-your-beloved-sister-here-are-the-rules-gkn/articleshow-kty0h5k"/>
        </item>
        <item>
            <title><![CDATA[ಚಿನ್ನದ ದರದಲ್ಲಿ ಭಾರಿ ಏರಿಕೆ, ಬೆಳ್ಳಿ ಬೆಲೆಯಲ್ಲೂ ದಿಢೀರ್ ಜಂಪ್.. ಒಂದೇ ದಿನದಲ್ಲಿ ಉಲ್ಟಾ ಹೊಡೆದ ಮಾರುಕಟ್ಟೆ!]]></title>
            <link>https://kannada.asianetnews.com/gallery/business/gold-rate-alert-massive-price-hike-within-hours-mcwylak</link>
            <guid isPermaLink="true">https://kannada.asianetnews.com/gallery/business/gold-rate-alert-massive-price-hike-within-hours-mcwylak</guid>
            <pubDate>Thu, 03 Sep 2026 12:07:55 +0530</pubDate>
            <description><![CDATA[&lt;p&gt;Gold Rate Today: ಬಂಗಾರ ಪ್ರಿಯರಿಗೆ, ಹೂಡಿಕೆದಾರರಿಗೆ ಮಾರುಕಟ್ಟೆಯಿಂದ ಶಾಕಿಂಗ್ ಸುದ್ದಿ ಬಂದಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆ ಕಂಡು ಸಮಾಧಾನ ತಂದಿದ್ದ ಚಿನ್ನದ ದರವು, ಇಂದು ದಿಢೀರನೆ ಏರಿಕೆಯ ಹಾದಿ ಹಿಡಿದಿದೆ. ಒಂದೇ ದಿನದಲ್ಲಿ ಬೆಲೆಗಳು ಅದಲುಬದಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1jznb4k025x4pkbdrskh30a,imgname-thumbnail---2026-09-03t120126.586-1788417322131.jpg" type="image/jpeg" height="390" width="690"/>
            <content:encoded><![CDATA[&lt;p&gt;Gold Rate Today: ಬಂಗಾರ ಪ್ರಿಯರಿಗೆ, ಹೂಡಿಕೆದಾರರಿಗೆ ಮಾರುಕಟ್ಟೆಯಿಂದ ಶಾಕಿಂಗ್ ಸುದ್ದಿ ಬಂದಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆ ಕಂಡು ಸಮಾಧಾನ ತಂದಿದ್ದ ಚಿನ್ನದ ದರವು, ಇಂದು ದಿಢೀರನೆ ಏರಿಕೆಯ ಹಾದಿ ಹಿಡಿದಿದೆ. ಒಂದೇ ದಿನದಲ್ಲಿ ಬೆಲೆಗಳು ಅದಲುಬದಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಕೆಲವೇ ಗಂಟೆಗಳ ಅವಧಿಯಲ್ಲಿ ಸಾವಿರಾರು ರೂ. ಏರಿಕೆ&lt;/strong&gt;ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಹೊಸ ದಾಖಲೆ ಬರೆದಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದನ್ನು ಕಂಡು ಗ್ರಾಹಕರು ಖರೀದಿಗೆ ಆಸಕ್ತಿ ತೋರುತ್ತಿದ್ದರು. ಆದರೆ, ಇಂದು ಬೆಳಗ್ಗೆಯಿಂದಲೇ ಬೆಲೆಗಳು ಗಗನಕ್ಕೇರಿದ್ದು, ಖರೀದಿ ಮಾಡುವ ಯೋಚನೆಯಲ್ಲಿದ್ದವರಿಗೆ ದೊಡ್ಡ ಆಘಾತ ನೀಡಿದೆ. ಕೆಲವೇ ಗಂಟೆಗಳ ಅವಧಿಯಲ್ಲಿ ಬೆಲೆಗಳು ಸಾವಿರಾರು ರೂಪಾಯಿಗಳಷ್ಟು ಏರಿಕೆಯಾಗಿವೆ.&lt;/p&gt;&lt;img&gt;&lt;p&gt;&lt;strong&gt;ಇಂದಿನ ಚಿನ್ನದ ದರಗಳ ಪಟ್ಟಿ (ಸೆಪ್ಟೆಂಬರ್ 3)&lt;/strong&gt;ಇಂದು ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ತೂಕದ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಬರೋಬ್ಬರಿ ₹3,330 ರಷ್ಟು ಏರಿಕೆಯಾಗಿ ₹1,55,350 ಕ್ಕೆ ತಲುಪಿದೆ. ಅದೇ ರೀತಿ, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯು ₹3,050 ರಷ್ಟು ಹೆಚ್ಚಳ ಕಂಡು ₹1,42,400 ಕ್ಕೆ ತಲುಪಿದೆ. ಈ ದಿಢೀರ್ ಏರಿಕೆಯು ಮಾರುಕಟ್ಟೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;&lt;strong&gt;ವಿವಿಧ ನಗರಗಳಲ್ಲಿನ ಬೆಲೆ ವ್ಯತ್ಯಾಸ&lt;/strong&gt;&lt;strong&gt;ಬೆಂಗಳೂರು ಮತ್ತು ಹೈದರಾಬಾದ್: &lt;/strong&gt;ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಹೈದರಾಬಾದ್, ವಿಜಯವಾಡ ಹಾಗೂ ವಿಶಾಖಪಟ್ಟಣಂನಲ್ಲಿ ಚಿನ್ನದ ಬೆಲೆ ಏಕರೂಪವಾಗಿದ್ದು, 24 ಕ್ಯಾರೆಟ್ ಚಿನ್ನ ₹1,55,350 ಹಾಗೂ 22 ಕ್ಯಾರೆಟ್ ಚಿನ್ನ ₹1,42,400 ರಷ್ಟಿದೆ.&lt;/p&gt;&lt;p&gt;&lt;strong&gt;ದೆಹಲಿ: &lt;/strong&gt;ದೇಶದ ರಾಜಧಾನಿ ದೆಹಲಿಯಲ್ಲಿ ಬೆಲೆ ಇನ್ನು ತುಸು ಹೆಚ್ಚಾಗಿದ್ದು, 24 ಕ್ಯಾರೆಟ್ ಬೆಲೆ ₹1,55,500 ಹಾಗೂ 22 ಕ್ಯಾರೆಟ್ ಬೆಲೆ ₹1,42,550 ರಷ್ಟಿದೆ.&lt;/p&gt;&lt;p&gt;&lt;strong&gt;ಚೆನ್ನೈ: &lt;/strong&gt;ತಮಿಳುನಾಡಿನ ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನ ₹1,52,010 ಕ್ಕೆ ಮಾರಾಟವಾಗುತ್ತಿದ್ದರೆ, 22 ಕ್ಯಾರೆಟ್ ಚಿನ್ನ ₹1,39,340 ರಷ್ಟಿದೆ.&lt;/p&gt;&lt;img&gt;&lt;p&gt;&lt;strong&gt;ಬೆಳ್ಳಿ ಬೆಲೆಯಲ್ಲೂ ದಿಢೀರ್ ಜಂಪ್&lt;/strong&gt;ಚಿನ್ನದ ಬೆಲೆಯ ಜೊತೆಗೆ ಬೆಳ್ಳಿಯ ದರವೂ ಸಹ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ₹2.50 ಲಕ್ಷಕ್ಕೆ ಏರಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಒಂದೇ ದಿನ ಬೆಳ್ಳಿ ಬೆಲೆಯಲ್ಲಿ ₹5,000 ರಷ್ಟು ಏರಿಕೆ ಕಂಡಿರುವುದು ವಿಶೇಷ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ಕೆಜಿ ಬೆಳ್ಳಿ ಬೆಲೆ ₹2,49,900 ರ ಆಸುಪಾಸಿನಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಗೊಂದಲದಲ್ಲಿ ಗ್ರಾಹಕ&lt;/strong&gt;ಈ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಕೆಯಾಗುತ್ತದೆಯೇ ಅಥವಾ ಮತ್ತೆ ಇಳಿಕೆಯ ಹಾದಿ ಹಿಡಿಯುತ್ತದೆಯೇ ಎಂಬ ಗೊಂದಲದಲ್ಲಿ ಗ್ರಾಹಕರಿದ್ದಾರೆ.&lt;/p&gt;]]></content:encoded>
            <category>news-money</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/business/gold-rate-alert-massive-price-hike-within-hours-mcwylak"/>
        </item>
        <item>
            <title><![CDATA[ಮತ್ತೊಂದು ಅತೀ ದೊಡ್ಡ ಹಗರಣ - ನಕಲಿ ದಾಖಲೆ ಸೃಷ್ಟಿಸಿ ವಿದೇಶಕ್ಕೆ 2,395 ರೂಪಾಯಿ ಟ್ರಾನ್ಸ್‌ಫರ್]]></title>
            <link>https://kannada.asianetnews.com/money/chartered-accountant-transfers-rs-2395-abroad-by-creating-fake-documents-gkn/articleshow-mq7b0rz</link>
            <guid isPermaLink="true">https://kannada.asianetnews.com/money/chartered-accountant-transfers-rs-2395-abroad-by-creating-fake-documents-gkn/articleshow-mq7b0rz</guid>
            <pubDate>Tue, 25 Aug 2026 16:49:09 +0530</pubDate>
            <description><![CDATA[&lt;p&gt;ಜೈಪುರದ ಸಿಎ ಒಬ್ಬರು 3,168 ನಕಲಿ 15CB ಪ್ರಮಾಣಪತ್ರಗಳನ್ನು ಬಳಸಿ 2,395 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿದ ಆರೋಪದ ಮೇಲೆ ಎಫ್&zwnj;ಐಆರ್ ಎದುರಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿ, ಯಾವುದೇ ವಹಿವಾಟು ನಡೆಸದ 40ಕ್ಕೂ ಹೆಚ್ಚು ಶಂಕಾಸ್ಪದ ಕಂಪನಿಗಳ ಮೂಲಕ ಈ ಹಣ ರವಾನೆಯಾಗಿರುವುದು ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzq7t0c77mrx05gy4tycwvb7,imgname-wet-currency-1786412597639.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ರಾಜಸ್ಥಾನದ ಜೈಪುರದಲ್ಲಿ ಭಾರೀ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಚಾರ್ಟರ್ಡ್ ಅಕೌಂಟೆಂಟ್ (CA) ಒಬ್ಬರು ನಕಲಿ ದಾಖಲೆಗಳನ್ನು ಬಳಸಿಕೊಂಡು ಸುಮಾರು 2,395 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿರುವ ಆರೋಪದ ಮೇಲೆ ಎಫ್&zwnj;ಐಆರ್ (FIR) ದಾಖಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಜೈಪುರದ ಪತ್ರಕರ್ತ ಕಾಲೋನಿ ನಿವಾಸಿ, ಸಿಎ ಅಭಿಷೇಕ್ ಜೈನ್ ಎಂಬುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ದೂರು ನೀಡಿದೆ. ಆರೋಪದ ಪ್ರಕಾರ ಅಭಿಷೇಕ್ ಜೈನ್ 2021 ರಿಂದ 2024 ರ ನಡುವೆ ಸುಮಾರು 3,168 ನಕಲಿ 'ಫಾರ್ಮ್ 15CB' ಸರ್ಟಿಫಿಕೇಟ್&zwnj;ಗಳನ್ನು ಜಾರಿ ಮಾಡಿದ್ದಾರೆ. ಈ ಪ್ರಮಾಣಪತ್ರಗಳ ಆಧಾರದ ಮೇಲೆ ಬರೋಬ್ಬರಿ 2,395 ಕೋಟಿ ರೂಪಾಯಿಗಳನ್ನು ಭಾರತದಿಂದ ವಿದೇಶಕ್ಕೆ ರವಾನಿಸಲಾಗಿದೆ. ಕಳೆದ ಆಗಸ್ಟ್ 18 ರಂದು ಆದಾಯ ತೆರಿಗೆ ಇಲಾಖೆಯ ತನಿಖಾ ದಳವು ಸಿಎ ಅಭಿಷೇಕ್ ಜೈನ್ ಅವರ ಕಚೇರಿಯ ಮೇಲೆ ಸರ್ವೆ ನಡೆಸಿತ್ತು. ಈ ವೇಳೆ ಅಲ್ಲಿ ದೊರೆತ ದಾಖಲೆಗಳನ್ನು ಪರಿಶೀಲಿಸಿದಾಗ ಯಾವುದೇ ಸರಿಯಾದ ದಾಖಲೆಗಳಿಲ್ಲದೆ ಸಾವಿರಾರು ವಿದೇಶಿ ವಿನಿಮಯ ಪ್ರಮಾಣಪತ್ರಗಳನ್ನು ನೀಡಿರುವುದು ಪತ್ತೆಯಾಗಿದೆ.&lt;/p&gt;&lt;p&gt;ಐಟಿ ಇಲಾಖೆಯ ತನಿಖೆಯಲ್ಲಿ ಕೆಲವು ಆಘಾತಕಾರಿ ವಿಷಯಗಳು ಬಯಲಾಗಿವೆ.ಸುಮಾರು 40ಕ್ಕೂ ಹೆಚ್ಚು ನಕಲಿ ಅಥವಾ ಶಂಕಾಸ್ಪದ ಕಂಪನಿಗಳ (Shell Companies) ಹೆಸರಿನಲ್ಲಿ ಹಣವನ್ನು ವಿದೇಶಕ್ಕೆ ಕಳುಹಿಸಲಾಗಿದೆ. ಈ ಹಣ ವರ್ಗಾವಣೆ ಮಾಡಿದ ಹಲವು ಕಂಪನಿಗಳ ಆದಾಯವು ತುಂಬಾ ಕಡಿಮೆ ಇದೆ ಅಥವಾ ಅವರು ಎಂದಿಗೂ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿಲ್ಲ. ಯಾವುದೇ ವ್ಯವಹಾರ ನಡೆಸದ ಹೆಸರಿಗಷ್ಟೇ ಇರುವ ಟ್ರಸ್ಟ್&zwnj;ಗಳು ಮತ್ತು ಫರ್ಮ್&zwnj;ಗಳನ್ನು ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಫಾರ್ಮ್ 15CB ಎಂದರೇನು?&lt;/strong&gt;&lt;/h2&gt;&lt;p&gt;ಭಾರತದಿಂದ ವಿದೇಶಕ್ಕೆ ಹಣವನ್ನು ಕಳುಹಿಸುವಾಗ ಆ ಹಣಕ್ಕೆ ಸಂಬಂಧಪಟ್ಟ ತೆರಿಗೆಯನ್ನು (TDS) ಸರಿಯಾಗಿ ಪಾವತಿಸಲಾಗಿದೆ ಎಂದು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ದೃಢೀಕರಿಸಬೇಕಾಗುತ್ತದೆ. ಇದನ್ನೇ ಫಾರ್ಮ್ 15CB ಎನ್ನಲಾಗುತ್ತದೆ. ಅಭಿಷೇಕ್ ಜೈನ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಹಣದ ಮೂಲವನ್ನು ಪರಿಶೀಲಿಸದೆ ಸರ್ಟಿಫಿಕೇಟ್ ನೀಡಿದ್ದಾರೆ ಎಂಬುದು ಗಂಭೀರ ಆರೋಪವಾಗಿದೆ.&lt;/p&gt;&lt;p&gt;ಜೈಪುರದ ಪತ್ರಕರ್ತ ಕಾಲೋನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ಖಾತೆಗಳು, ವಿದೇಶಿ ವಹಿವಾಟಿನ ದಾಖಲೆಗಳು ಮತ್ತು ಈ ಹಗರಣದ ಹಿಂದೆ ಇರುವ ಇತರ ಮಧ್ಯವರ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದು ಕೇವಲ ಒಬ್ಬ ಸಿಎ ಮಾಡಿದ ಕೆಲಸವೇ ಅಥವಾ ಇದರ ಹಿಂದೆ ದೊಡ್ಡ ವ್ಯವಸ್ಥಿತ ಜಾಲವಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/chartered-accountant-transfers-rs-2395-abroad-by-creating-fake-documents-gkn/articleshow-mq7b0rz"/>
        </item>
        <item>
            <title><![CDATA[ನಿಮ್ಮ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಬಹುದೇ? ಅದಕ್ಕೆ ಇರುವ ತೆರಿಗೆ ನಿಯಮಗಳು ಏನೇನು..?]]></title>
            <link>https://kannada.asianetnews.com/special/can-you-sell-your-ancestral-property-inherited-property-what-are-the-tax-rules-for-it-gkn/articleshow-muog80u</link>
            <guid isPermaLink="true">https://kannada.asianetnews.com/special/can-you-sell-your-ancestral-property-inherited-property-what-are-the-tax-rules-for-it-gkn/articleshow-muog80u</guid>
            <pubDate>Fri, 28 Aug 2026 13:04:59 +0530</pubDate>
            <description><![CDATA[&lt;p&gt;ಅನುವಂಶಿಕವಾಗಿ ಬಂದ ಆಸ್ತಿ ಅಥವಾ ಚಿನ್ನವನ್ನು ಪಡೆದಾಗ ಯಾವುದೇ ತೆರಿಗೆ ಇರುವುದಿಲ್ಲ, ಆದರೆ ಅದನ್ನು ಲಾಭಕ್ಕೆ ಮಾರಾಟ ಮಾಡಿದಾಗ ಬಂಡವಾಳ ಗಳಿಕೆ ತೆರಿಗೆ (Capital Gains Tax) ಅನ್ವಯಿಸುತ್ತದೆ. ಈ ತೆರಿಗೆಯಿಂದ ವಿನಾಯಿತಿ ಪಡೆಯಲು, ಗಳಿಸಿದ ಲಾಭವನ್ನು ಹೊಸ ವಸತಿ ಆಸ್ತಿಯಲ್ಲಿ ಮರುಹೂಡಿಕೆ ಮಾಡಬಹುದು ಅಥವಾ 'ಕ್ಯಾಪಿಟಲ್ ಗೇನ್ಸ್ ಅಕೌಂಟ್'ನಲ್ಲಿ ತಾತ್ಕಾಲಿಕವಾಗಿ ಜಮೆ ಮಾಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m13mnn4c9qzf8h6gtebw50x9,imgname-inherited-property--1--1787902481548.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಪೋಷಕರಿಂದ ಅಥವಾ ಹಿರಿಯರಿಂದ ಉಡುಗೊರೆ ಅಥವಾ ವಂಶಪಾರಂಪರ್ಯವಾಗಿ ಫ್ಲಾಟ್, ಚಿನ್ನ ಇನ್ಯಾವುದೇ ಆಸ್ತಿಯನ್ನು ಪಡೆದಾಗ ತಕ್ಷಣವೇ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ ಮುಂದೆ ಎಂದಾದರೂ ಆ ಆಸ್ತಿಯನ್ನು ನೀವು ಲಾಭಕ್ಕೆ ಮಾರಾಟ ಮಾಡಲು ನಿರ್ಧರಿಸಿದಾಗ ತೆರಿಗೆ ಅನ್ವಯಿಸುತ್ತದೆ. ಈ ಲಾಭದ ಮೇಲಿನ ಬಂಡವಾಳ ಗಳಿಕೆ ತೆರಿಗೆಯನ್ನು (Capital Gains Tax) ಹೇಗೆ ಲೆಕ್ಕಹಾಕಲಾಗುತ್ತದೆ ಎಂಬುದರ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ITR ಫೈಲಿಂಗ್ ನಿಯಮಗಳು&lt;/strong&gt;&lt;/h2&gt;&lt;p&gt;ಎಲ್ಲಾ ರೀತಿಯ ಬಂಡವಾಳ ಗಳಿಕೆಯನ್ನು (Capital Gains) ಆದಾಯ ತೆರಿಗೆ ರಿಟರ್ನ್ಸ್&zwnj;ನ (ITR) 'Schedule CG' ಅಡಿಯಲ್ಲಿ ವರದಿ ಮಾಡಬೇಕಾಗುತ್ತದೆ. ನಿಮ್ಮ ಸಂಬಳ, ಪಿಂಚಣಿ ಹಾಗೂ ಬಂಡವಾಳ ಗಳಿಕೆಯಿಂದ ಬರುವ ಆದಾಯವು ಒಂದು ಹಣಕಾಸು ವರ್ಷದಲ್ಲಿ ₹1.25 ಲಕ್ಷಕ್ಕಿಂತ ಹೆಚ್ಚಿದ್ದರೆ ಐಟಿಆರ್-2 (ITR-2) ಅನ್ವಯಿಸುತ್ತದೆ. ಒಂದು ವೇಳೆ ನೀವು ಸ್ವಂತ ವ್ಯವಹಾರ ನಡೆಸುತ್ತಿದ್ದರೆ ಅಥವಾ ವೃತ್ತಿಪರ ಸೇವೆಗಳಿಂದ ಆದಾಯ ಹೊಂದಿದ್ದರೆ ನೀವು ಐಟಿಆರ್-3 (ITR-3) ಅನ್ನು ಸಲ್ಲಿಸಬೇಕಾಗುತ್ತದೆ.&lt;/p&gt;&lt;h2&gt;&lt;strong&gt;ಬಂಡವಾಳ ಗಳಿಕೆ ಹೇಗೆ ನಿರ್ಧಾರ?&lt;/strong&gt;&lt;/h2&gt;&lt;p&gt;ಅನುವಂಶಿಕವಾಗಿ ಪಡೆದ ಆಸ್ತಿಗೆ, ಉತ್ತರಾಧಿಕಾರಿಯು ಸಾಮಾನ್ಯವಾಗಿ ಹಿಂದಿನ ಮಾಲೀಕರ ಖರೀದಿ ವೆಚ್ಚವನ್ನು (Cost of Acquisition) ಮತ್ತು ಅದಕ್ಕೆ ಸಂಬಂಧಿಸಿದ ಸುಧಾರಣಾ ವೆಚ್ಚಗಳನ್ನು ಪರಿಗಣಿಸಬೇಕಾಗುತ್ತದೆ. ಪ್ರತಿಯೊಬ್ಬ ವಾರಸುದಾರನು ತನ್ನ ಪಾಲಿನ ಮಾರಾಟದ ಮೊತ್ತ, ಖರೀದಿ ವೆಚ್ಚ, ಸುಧಾರಣಾ ವೆಚ್ಚ ಮತ್ತು ವರ್ಗಾವಣೆ ವೆಚ್ಚಗಳ ಆಧಾರದ ಮೇಲೆ ಬಂಡವಾಳ ಗಳಿಕೆ ಲೆಕ್ಕಹಾಕುತ್ತಾನೆ. ಆಸ್ತಿಯನ್ನು ಎಷ್ಟು ಅವಧಿಗೆ ಇಟ್ಟುಕೊಳ್ಳಲಾಗಿದೆ ಎಂಬುದನ್ನು ನಿರ್ಧರಿಸಲು ಹಿಂದಿನ ಮಾಲೀಕರ ಅವಧಿಯನ್ನೂ ಸೇರಿಸಲಾಗುತ್ತದೆ. ಇದು ಗಳಿಕೆಯು ಅಲ್ಪಾವಧಿಯದ್ದೇ (STCG) ಅಥವಾ ದೀರ್ಘಾವಧಿಯದ್ದೇ (LTCG) ಎಂಬುದನ್ನು ನಿರ್ಧರಿಸುತ್ತದೆ.&lt;/p&gt;&lt;p&gt;ಉದಾಹರಣೆಗೆ: ನಿಮ್ಮ ತಂದೆಯಿಂದ ಅನುವಂಶಿಕವಾಗಿ ಬಂದ ಮನೆಯನ್ನು ನೀವು ಮಾರಾಟ ಮಾಡಿದರೆ ಬಂಡವಾಳ ಗಳಿಕೆಯನ್ನು ನಿಮ್ಮ ತಂದೆಯ ಖರೀದಿ ವೆಚ್ಚ, ಸುಧಾರಣಾ ವೆಚ್ಚ ಮತ್ತು ಅವರು ಆಸ್ತಿಯನ್ನು ಹೊಂದಿದ್ದ ಅವಧಿಯನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. ಒಂದು ವೇಳೆ ನಿಮ್ಮ ತಂದೆ 2003 ರಲ್ಲಿ ಮನೆಯನ್ನು ಖರೀದಿಸಿದ್ದರೆ ಏಪ್ರಿಲ್ 1, 2004 ರ ಆ ಫ್ಲಾಟ್&zwnj;ನ ನ್ಯಾಯೋಚಿತ ಮಾರುಕಟ್ಟೆ ಮೌಲ್ಯವನ್ನು (Fair Market Value) ನಿಮ್ಮ ಖರೀದಿ ವೆಚ್ಚವೆಂದು ಪರಿಗಣಿಸಬಹುದು.&lt;/p&gt;&lt;h2&gt;&lt;strong&gt;ಅಲ್ಪಾವಧಿ ಮತ್ತು ದೀರ್ಘಾವಧಿ ತೆರಿಗೆ ನಿಯಮಗಳು&lt;/strong&gt;&lt;/h2&gt;&lt;p&gt;ಅಲ್ಪಾವಧಿ ಬಂಡವಾಳ ಗಳಿಕೆ (STCG): ಆಸ್ತಿಯನ್ನು ಒಟ್ಟು 24 ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಹೊಂದಿದ್ದರೆ ಇದು ಅನ್ವಯಿಸುತ್ತದೆ. ಈ ಲಾಭವನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ, ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.&lt;/p&gt;&lt;p&gt;ದೀರ್ಘಾವಧಿ ಬಂಡವಾಳ ಗಳಿಕೆ (LTCG): ಆಸ್ತಿಯನ್ನು 24 ತಿಂಗಳಿಗಿಂತ ಹೆಚ್ಚು ಅವಧಿಗೆ ಹೊಂದಿದ್ದರೆ ಇದು ಅನ್ವಯಿಸುತ್ತದೆ. ಇಂಡೆಕ್ಸೇಶನ್ (Indexation) ಇಲ್ಲದೆ ಇದಕ್ಕೆ ಶೇಕಡಾ 12.5 ರಷ್ಟು ಫ್ಲಾಟ್ ತೆರಿಗೆ ದರವನ್ನು ವಿಧಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ತೆರಿಗೆ ವಿನಾಯಿತಿ ಪಡೆಯಬಹುದೇ?&lt;/strong&gt;&lt;/h2&gt;&lt;p&gt;ಹೌದು, ವಸತಿ ಆಸ್ತಿಯ ಮಾರಾಟದಿಂದ ಬರುವ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆಯಿಂದ (LTCG) ವಿನಾಯಿತಿ ಪಡೆಯಬಹುದು. ಆ ಮಾರಾಟದ ಹಣವನ್ನು ಮತ್ತೊಂದು ವಸತಿ ಆಸ್ತಿಯಲ್ಲಿ ಮರುಹೂಡಿಕೆ ಮಾಡಬೇಕಾಗುತ್ತದೆ. ಇದು ಅನುವಂಶಿಕ ಆಸ್ತಿ ಇರಲಿ ಅಥವಾ ನಿಮ್ಮ ಸ್ವಂತ ಹಣದಿಂದ ಖರೀದಿಸಿದ ಆಸ್ತಿ ಇರಲಿ, ಎಲ್ಲದಕ್ಕೂ ಅನ್ವಯಿಸುತ್ತದೆ. ಸೆಕ್ಷನ್ 54 ರ ಅಡಿಯಲ್ಲಿ ವಿನಾಯಿತಿ ಇದೆ. ಈ ವಿನಾಯಿತಿಯು ಕೇವಲ ದೀರ್ಘಾವಧಿ ಬಂಡವಾಳ ಗಳಿಕೆಗೆ ಮಾತ್ರ ಲಭ್ಯವಿದ್ದು, ಗರಿಷ್ಠ ವಿನಾಯಿತಿ ಮಿತಿ ₹10 ಕೋಟಿಗೆ ಸೀಮಿತವಾಗಿದೆ. ಒಂದು ವೇಳೆ ಬಂಡವಾಳ ಗಳಿಕೆಯು ₹2 ಕೋಟಿ ಮೀರದಿದ್ದರೆ, ತೆರಿಗೆದಾರರು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿ ಎರಡು ವಸತಿ ಮನೆಗಳಲ್ಲಿ ಹೂಡಿಕೆ ಮಾಡಿ ವಿನಾಯಿತಿ ಪಡೆಯುವ ವಿಶೇಷ ಅವಕಾಶವಿದೆ.&lt;/p&gt;&lt;h2&gt;&lt;strong&gt;ಇತರ ನಿಯಮಗಳು:&lt;/strong&gt;&lt;/h2&gt;&lt;p&gt;ಮೂಲ ಆಸ್ತಿಯನ್ನು ಮಾರಾಟ ಮಾಡುವ ಒಂದು ವರ್ಷದ ಮೊದಲು ಅಥವಾ ಮಾರಾಟ ಮಾಡಿದ ಎರಡು ವರ್ಷಗಳ ಒಳಗೆ ಹೊಸ ವಸತಿ ಆಸ್ತಿಯನ್ನು ಖರೀದಿಸಬೇಕು. ಅಥವಾ ಆಸ್ತಿ ವರ್ಗಾವಣೆ ಮಾಡಿದ ದಿನಾಂಕದಿಂದ ಮೂರು ವರ್ಷಗಳ ಒಳಗೆ ಹೊಸ ವಸತಿ ಮನೆಯನ್ನು ನಿರ್ಮಿಸಬೇಕು. ಮುಖ್ಯವಾಗಿ ಹೊಸ ವಸತಿ ಆಸ್ತಿಯು ಭಾರತದಲ್ಲಿಯೇ ಇರಬೇಕು ಎಂಬುದು ಕಡ್ಡಾಯ. ಹೊಸ ಮನೆ ಖರೀದಿಸಲು ಅಥವಾ ನಿರ್ಮಿಸಲು ಸಮಯ ಬೇಕಾದರೆ ನೀವು ಆ ಹಣವನ್ನು ತಾತ್ಕಾಲಿಕವಾಗಿ 'ಕ್ಯಾಪಿಟಲ್ ಗೇನ್ಸ್ ಅಕೌಂಟ್ ಸ್ಕೀಮ್' (CGAS) ಖಾತೆಯಲ್ಲಿ ಜಮೆ ಮಾಡಬಹುದು. ಇದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54, 54B, 54F ಅಥವಾ 54EC ಅಡಿಯಲ್ಲಿ ತೆರಿಗೆ ವಿನಾಯಿತಿಗಳನ್ನು ಕ್ಲೈಮ್ ಮಾಡಲು ನೆರವಾಗುವ ಸರ್ಕಾರಿ ಬೆಂಬಲಿತ ಯೋಜನೆಯಾಗಿದೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/special/can-you-sell-your-ancestral-property-inherited-property-what-are-the-tax-rules-for-it-gkn/articleshow-muog80u"/>
        </item>
        <item>
            <title><![CDATA[ಸುಕೇಶ್ ಚಂದ್ರಶೇಖರ್ ಬಳಿ ಎಷ್ಟು ಹಣ ಇದೆ? ಜೈಲಿನ ಗೋಡೆಗಳ ಮಧ್ಯೆ ಇದ್ದರೂ ಕೋಟಿ ಕೋಟಿ ಸಂಪಾದನೆ..]]></title>
            <link>https://kannada.asianetnews.com/india-news/sukesh-chandrashekhar-net-worth-how-much-money-does-the-conman-have-and-is-he-still-earning-from-jail-gkn/articleshow-o2m983u</link>
            <guid isPermaLink="true">https://kannada.asianetnews.com/india-news/sukesh-chandrashekhar-net-worth-how-much-money-does-the-conman-have-and-is-he-still-earning-from-jail-gkn/articleshow-o2m983u</guid>
            <pubDate>Wed, 26 Aug 2026 23:07:42 +0530</pubDate>
            <description><![CDATA[&lt;p&gt;ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿಯಾಗಿದ್ದು, ತಿಹಾರ್ ಜೈಲಿನ ಒಳಗಿದ್ದೂ ತನ್ನ ವಂಚನೆಯ ಜಾಲವನ್ನು ನಡೆಸುತ್ತಿದ್ದ ಎನ್ನಲಾಗಿದೆ. ಜಾರಿ ನಿರ್ದೇಶನಾಲಯವು ಆತನ ಐಷಾರಾಮಿ ಆಸ್ತಿಗಳನ್ನು ಜಪ್ತಿ ಮಾಡಿದ್ದರೂ, ಆತ ದೊಡ್ಡ ಮೊತ್ತದ ಹಣಕಾಸಿನ ಹೂಡಿಕೆಯ ಆಫರ್&zwnj;ಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gtxff6rq4m3a1qvsr04fdnqd,imgname-Jacq1-1678174034710.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಮನಿ ಲಾಂಡರಿಂಗ್ ಮತ್ತು ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹೆಸರು ಆಗಾಗ ಸುದ್ದಿಯಲ್ಲಿರುತ್ತೆ. ಜೈಲಿನಲ್ಲಿದ್ದರೂ ಈತ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಮತ್ತು ದೊಡ್ಡ ದೊಡ್ಡ ಆರ್ಥಿಕ ಆಫರ್&zwnj;ಗಳನ್ನು ನೀಡುತ್ತಿದ್ದಾನೆ ಎಂಬ ಸುದ್ದಿ ಎಲ್ಲರ ಬೆರಗುಗೊಳಿಸಿದೆ. ಹಾಗಾದರೆ ಸುಕೇಶ್ ಚಂದ್ರಶೇಖರ್ ಆಸ್ತಿ ಎಷ್ಟಿದೆ? ತನಿಖಾ ಸಂಸ್ಥೆಗಳ ವರದಿಯಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ವಿವರ..&lt;/p&gt;&lt;h2&gt;&lt;strong&gt;ಒಟ್ಟು ಆಸ್ತಿ ಎಷ್ಟು?&lt;/strong&gt;&lt;/h2&gt;&lt;p&gt;ಸುಕೇಶ್ ಚಂದ್ರಶೇಖರ್ ಬಳಿ ಇರುವ ಒಟ್ಟು ಆಸ್ತಿಯ ಬಗ್ಗೆ ಯಾವುದೇ ನಿಖರ ಅಧಿಕೃತ ಅಂಕಿ-ಅಂಶಗಳಿಲ್ಲ. ಆದರೆ ಜಾರಿ ನಿರ್ದೇಶನಾಲಯ (ED) ನೀಡಿರುವ ವರದಿಗಳ ಪ್ರಕಾರ..ಈತ ದೇಶ-ವಿದೇಶಗಳ ಶ್ರೀಮಂತರಿಗೆ ಬರೋಬ್ಬರಿ 200 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ವಂಚಿಸಿದ್ದಾನೆ. ವರದಿಗಳ ಪ್ರಕಾರ, ಸುಕೇಶ್&zwnj;ನ ಒಟ್ಟು ಆಸ್ತಿ ಮೌಲ್ಯ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಜಾರಿ ನಿರ್ದೇಶನಾಲಯವು ಈಗಾಗಲೇ ಆತನಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳು, ಬೆಂಗಳೂರು ಮತ್ತು ಚೆನ್ನೈನಲ್ಲಿರುವ ಬಂಗಲೆಗಳು ಹಾಗೂ ಸಮುದ್ರದ ಕಡೆಗೆ ಮುಖ ಮಾಡಿರುವ ವಿಲ್ಲಾಗಳನ್ನು ಜಪ್ತಿ ಮಾಡಿದೆ.&lt;/p&gt;&lt;p&gt;ತಿಹಾರ್ ಜೈಲಿನಲ್ಲಿದ್ದರೂ ಸುಕೇಶ್ ತನ್ನ ವಂಚನೆಯ ಜಾಲವನ್ನು ಹೇಗೆ ನಡೆಸುತ್ತಿದ್ದ ಎಂಬುದು ಆಶ್ಚರ್ಯದ ಸಂಗತಿ. ಜೈಲಿನ ಕೆಲವು ಭ್ರಷ್ಟ ಅಧಿಕಾರಿಗಳ ಸಹಾಯದಿಂದ ಆತ ಮೊಬೈಲ್ ಫೋನ್ ಮತ್ತು ಇತರ ಸೌಲಭ್ಯಗಳನ್ನು ಬಳಸುತ್ತಿದ್ದ ಎನ್ನಲಾಗಿದೆ. ತಾಂತ್ರಿಕ ವಿಧಾನಗಳನ್ನು ಬಳಸಿ ತನ್ನ ಮೊಬೈಲ್ ಸಂಖ್ಯೆ ಮತ್ತು ಗುರುತನ್ನು ಮರೆಮಾಚುತ್ತಿದ್ದ ಈತ, ಹೊರಗಿರುವ ಜನರನ್ನು ಸಂಪರ್ಕಿಸುತ್ತಿದ್ದ. ತಾನು ದೊಡ್ಡ ಉದ್ಯಮಿ, ಸರ್ಕಾರಿ ಅಧಿಕಾರಿ ಅಥವಾ ಪ್ರಭಾವಿ ವ್ಯಕ್ತಿ ಎಂದು ನಂಬಿಸಿ ಜನರಿಂದ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದ್ದ.&lt;/p&gt;&lt;h2&gt;&lt;strong&gt;ಪ್ರಮುಖ ವಂಚನೆ ಪ್ರಕರಣಗಳು&lt;/strong&gt;&lt;/h2&gt;&lt;p&gt;ಸುಕೇಶ್ ಮೇಲಿರುವ ಅತ್ಯಂತ ದೊಡ್ಡ ಆರೋಪವೆಂದರೆ ರಾನ್&zwnj;ಬಾಕ್ಸಿ (Ranbaxy) ಮಾಜಿ ಪ್ರವರ್ತಕರ ಪತ್ನಿಯರಿಂದ ಸುಮಾರು 200 ಕೋಟಿ ರೂಪಾಯಿ ಪೀಕಿದ್ದು. ಈ ಹಣವನ್ನು ಆತ ಮನಿ ಲಾಂಡರಿಂಗ್ ಮೂಲಕ ವರ್ಗಾವಣೆ ಮಾಡಿದ್ದ ಎಂಬ ಆರೋಪವಿದೆ. ಸುಕೇಶ್ ಚಂದ್ರಶೇಖರ್ ತನ್ನ ವಿಲಕ್ಷಣ ಆಫರ್&zwnj;ಗಳಿಂದಲೇ ಸುದ್ದಿಯಾಗುತ್ತಿರುತ್ತಾನೆ. ಇತ್ತೀಚೆಗೆ ಈತ ಎಲೋನ್ ಮಸ್ಕ್ ಅವರ ಕಂಪನಿ ಮತ್ತು ಓಪನ್ ಎಐ (OpenAI) ಸಿಇಒ ಸ್ಯಾಮ್ ಆಲ್ಟ್&zwnj;ಮನ್ ಅವರಿಗೆ ಭಾರಿ ಹೂಡಿಕೆ ಮಾಡುವ ಆಫರ್ ನೀಡಿ ಎಲ್ಲರ ಗಮನ ಸೆಳೆದಿದ್ದನು. ಅಷ್ಟೇ ಅಲ್ಲದೆ, ತನ್ನ ವಿರುದ್ಧ ದೂರು ನೀಡಿದ ವ್ಯಕ್ತಿಗೆ 200 ಕೋಟಿ ಬದಲಿಗೆ 217 ಕೋಟಿ ರೂಪಾಯಿ ಹಿಂದಿರುಗಿಸುವ ಆಫರ್ ಕೂಡ ನೀಡಿದ್ದನು! ಇದನ್ನು ಅಪರಾಧ ಎಂದು ಪರಿಗಣಿಸಬಾರದು ಎಂಬ ಷರತ್ತನ್ನೂ ವಿಧಿಸಿದ್ದನು.&lt;/p&gt;&lt;p&gt;ಸುಕೇಶ್ ಚಂದ್ರಶೇಖರ್ ಮೊದಲ ಬಾರಿಗೆ 2017ರಲ್ಲಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಯತ್ನಿಸಿದ ಪ್ರಕರಣದಲ್ಲಿ ಬಂಧಿತನಾಗಿದ್ದ. ಬಂಧನದ ಸಮಯದಲ್ಲಿ ಆತನ ಬಳಿ 1.3 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಆತ ಒಂದಲ್ಲ ಒಂದು ವಂಚನೆ ಪ್ರಕರಣದಲ್ಲಿ ಸುದ್ದಿಯಲ್ಲಿದ್ದಾನೆ. ಜೈಲಿನ ಗೋಡೆಗಳ ಮಧ್ಯೆ ಇದ್ದರೂ ಈತನ ಆರ್ಥಿಕ ಸಾಮರ್ಥ್ಯ ಮತ್ತು ಸಂಪರ್ಕಗಳು ಇಂದಿಗೂ ತನಿಖಾ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/sukesh-chandrashekhar-net-worth-how-much-money-does-the-conman-have-and-is-he-still-earning-from-jail-gkn/articleshow-o2m983u"/>
        </item>
        <item>
            <title><![CDATA[ಆದಾಯದಲ್ಲಿ ನಂಬರ್‌ 1 ಈ ರೈಲು ನಿಲ್ದಾಣ; ವರ್ಷಕ್ಕೆ ₹3,337 ಕೋಟಿ! ನಿಮ್ಮ ಊರಿನ ಸ್ಟೇಷನ್‌ ಯಾವ ಸ್ಥಾನದಲ್ಲಿದೆ?]]></title>
            <link>https://kannada.asianetnews.com/gallery/viral/top-railway-stations-in-india-by-revenue-howrah-chennai-secunderabad-in-top-5-kvn-pz8k8w2</link>
            <guid isPermaLink="true">https://kannada.asianetnews.com/gallery/viral/top-railway-stations-in-india-by-revenue-howrah-chennai-secunderabad-in-top-5-kvn-pz8k8w2</guid>
            <pubDate>Wed, 02 Sep 2026 16:02:37 +0530</pubDate>
            <description><![CDATA[&lt;p&gt;ಭಾರತದ ಅತಿದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಂದ್ರೆ ಅದು ರೈಲ್ವೆ. ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಓಡಾಡುತ್ತಾರೆ. ಹಾಗಿದ್ರೆ, ದೇಶದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ರೈಲ್ವೆ ನಿಲ್ದಾಣಗಳು ಯಾವುವು ಅಂತ ನಿಮಗೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0aac8dsc9srq5asxfeftwra,imgname-ksr-bengaluru-railway-station-1787052827065.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಅತಿದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಂದ್ರೆ ಅದು ರೈಲ್ವೆ. ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಓಡಾಡುತ್ತಾರೆ. ಹಾಗಿದ್ರೆ, ದೇಶದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ರೈಲ್ವೆ ನಿಲ್ದಾಣಗಳು ಯಾವುವು ಅಂತ ನಿಮಗೆ ಗೊತ್ತಾ?&lt;/p&gt;&lt;img&gt;&lt;p&gt;ಭಾರತೀಯ ರೈಲ್ವೆ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರನ್ನು ಮಾತ್ರವಲ್ಲದೆ, ಸಾವಿರಾರು ಟನ್ ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತೆ. ರೈಲ್ವೆಗೆ ಪ್ರಯಾಣಿಕರ ಸಾರಿಗೆಯೇ ಪ್ರಮುಖ ಆದಾಯದ ಮೂಲ. ದೇಶದ ಕೆಲವು ಪ್ರಮುಖ ರೈಲ್ವೆ ನಿಲ್ದಾಣಗಳು ಪ್ರಯಾಣಿಕರ ದಟ್ಟಣೆಯ ಜೊತೆಗೆ ಭಾರಿ ಆದಾಯವನ್ನೂ ಗಳಿಸುತ್ತಿವೆ. ರೈಲ್ವೆ ಸಚಿವಾಲಯದ ಡೇಟಾ ಪ್ರಕಾರ, ಅತಿ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ರೈಲ್ವೆ ನಿಲ್ದಾಣಗಳು ಯಾವುವು ಎಂದು ತಿಳಿಯೋಣ.&lt;/p&gt;&lt;img&gt;&lt;p&gt;ದೇಶದ ರಾಜಧಾನಿ ದೆಹಲಿಯಲ್ಲಿರುವ ನವದೆಹಲಿ ರೈಲ್ವೆ ನಿಲ್ದಾಣ, ಅತಿ ಹೆಚ್ಚು ಆದಾಯ ಗಳಿಸುವ ನಿಲ್ದಾಣಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಒಂದೇ ನಿಲ್ದಾಣದಿಂದ ರೈಲ್ವೆ ಇಲಾಖೆಗೆ ವಾರ್ಷಿಕವಾಗಿ 3,337 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬರುತ್ತೆ. ಪ್ರತಿ ವರ್ಷ ಸುಮಾರು 3.93 ಕೋಟಿ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಸಂಚರಿಸುತ್ತಾರೆ. ಇದು ಉತ್ತರ ಭಾರತದ ಅನೇಕ ನಗರಗಳಿಗೆ ಮತ್ತು ದೇಶದ ವಿವಿಧ ಭಾಗಗಳಿಗೆ ಹೋಗುವ ದೂರದ ರೈಲುಗಳ ಪ್ರಮುಖ ಕೇಂದ್ರವಾಗಿದೆ. ಈ ನಿಲ್ದಾಣದಲ್ಲಿ 16 ಪ್ಲಾಟ್&zwnj;ಫಾರ್ಮ್&zwnj;ಗಳಿದ್ದು, ಸದ್ಯ ನಿಲ್ದಾಣವನ್ನು ಇನ್ನಷ್ಟು ಆಧುನೀಕರಿಸುವ ಕೆಲಸ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಪಶ್ಚಿಮ ಬಂಗಾಳದ ಹೌರಾ ರೈಲ್ವೆ ನಿಲ್ದಾಣ ಆದಾಯದಲ್ಲಿ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ. ಈ ನಿಲ್ದಾಣವು ವಾರ್ಷಿಕ 1,692 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ನೋಡಿದರೆ, ಒಂದೇ ವರ್ಷದಲ್ಲಿ 6.13 ಕೋಟಿಗೂ ಹೆಚ್ಚು ಜನರು ಇಲ್ಲಿಂದ ಪ್ರಯಾಣಿಸಿದ್ದಾರೆ. ಅಂದರೆ, ಆದಾಯದಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಪ್ರಯಾಣಿಕರ ದಟ್ಟಣೆಯಲ್ಲಿ ಇದು ಟಾಪ್&zwnj;ನಲ್ಲಿದೆ. 1854ರಲ್ಲಿಯೇ ಇಲ್ಲಿ ಮೊದಲ ಪ್ರಯಾಣಿಕರ ರೈಲು ಸಂಚರಿಸಿತ್ತು. ಕೋಲ್ಕತ್ತಾ ಮಹಾನಗರಕ್ಕೆ ಇದು ಪ್ರಮುಖ ರೈಲ್ವೆ ಗೇಟ್&zwnj;ವೇ ಆಗಿದೆ.&lt;/p&gt;&lt;img&gt;&lt;p&gt;ತಮಿಳುನಾಡು ರಾಜಧಾನಿಯ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣ ಆದಾಯದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ನಿಲ್ದಾಣದಿಂದ ಸುಮಾರು 1,299 ಕೋಟಿ ರೂಪಾಯಿ ವಾರ್ಷಿಕ ಆದಾಯ ಬರುತ್ತಿದೆ. ಇದೇ ಸಮಯದಲ್ಲಿ, 3.06 ಕೋಟಿಗೂ ಹೆಚ್ಚು ಪ್ರಯಾಣಿಕರು ಇಲ್ಲಿಂದ ಸಂಚರಿಸುತ್ತಾರೆ. ದಕ್ಷಿಣ ಭಾರತದ ಅತ್ಯಂತ ಪ್ರಮುಖ ರೈಲ್ವೆ ಟರ್ಮಿನಲ್&zwnj;ಗಳಲ್ಲಿ ಚೆನ್ನೈ ಸೆಂಟ್ರಲ್ ಕೂಡ ಒಂದು. 1873ರಲ್ಲಿ ಸ್ಥಾಪನೆಯಾದ ಈ ನಿಲ್ದಾಣಕ್ಕೆ 150 ವರ್ಷಗಳ ಇತಿಹಾಸವಿದೆ.&lt;/p&gt;&lt;img&gt;&lt;p&gt;ತೆಲಂಗಾಣ ರಾಜಧಾನಿ ಹೈದರಾಬಾದ್&zwnj;ನಲ್ಲಿರುವ ಸಿಕಂದರಾಬಾದ್ ರೈಲ್ವೆ ನಿಲ್ದಾಣವು ದೇಶದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ನಿಲ್ದಾಣಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ನಿಲ್ದಾಣವು ವಾರ್ಷಿಕ 1,276 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ. ಪ್ರತಿ ವರ್ಷ 2.77 ಕೋಟಿಗೂ ಹೆಚ್ಚು ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸುತ್ತಾರೆ. ನಿಜಾಮರ ಕಾಲದಲ್ಲಿ, 1874ರ ಅಕ್ಟೋಬರ್ 9ರಂದು ಸಿಕಂದರಾಬಾದ್-ವಾಡಿ ರೈಲ್ವೆ ಮಾರ್ಗ ಮತ್ತು ನಿಲ್ದಾಣವನ್ನು ಪ್ರಾರಂಭಿಸಲಾಯಿತು. ಪ್ರಸ್ತುತ, ಸುಮಾರು 720 ಕೋಟಿ ರೂಪಾಯಿ ವೆಚ್ಚದಲ್ಲಿ ನಿಲ್ದಾಣವನ್ನು ಆಧುನಿಕ ಸಾರಿಗೆ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯುತ್ತಿದೆ.&lt;/p&gt;&lt;img&gt;&lt;p&gt;ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ನಿಲ್ದಾಣವು ವಾರ್ಷಿಕ 1,227 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹೊಂದಿದೆ. ಇಲ್ಲಿಂದ ಪ್ರತಿ ವರ್ಷ ಸುಮಾರು 1.45 ಕೋಟಿ ಪ್ರಯಾಣಿಕರು ಸಂಚರಿಸುತ್ತಾರೆ. ಪ್ರಯಾಣಿಕರ ಸಂಖ್ಯೆ ಇತರ ಟಾಪ್ ನಿಲ್ದಾಣಗಳಿಗಿಂತ ಕಡಿಮೆ ಇದ್ದರೂ, ಆದಾಯ ಮಾತ್ರ 1,200 ಕೋಟಿ ದಾಟಿರುವುದು ಈ ನಿಲ್ದಾಣದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಇನ್ನು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ (₹1,036 ಕೋಟಿ) ಆರನೇ ಸ್ಥಾನದಲ್ಲಿದ್ದರೆ, ಅಹಮದಾಬಾದ್ (₹1,010 ಕೋಟಿ) ಏಳನೇ ಸ್ಥಾನದಲ್ಲಿದೆ.&lt;/p&gt;]]></content:encoded>
            <category>news-money</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/viral/top-railway-stations-in-india-by-revenue-howrah-chennai-secunderabad-in-top-5-kvn-pz8k8w2"/>
        </item>
        <item>
            <title><![CDATA[90 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಕೃಷಿಗೆ ಇಳಿದ ಯುವಕ; 30000 ಹೂಡಿಕೆಯಲ್ಲಿ ಈ ಕೋಟಿಗಳ ಒಡೆಯ]]></title>
            <link>https://kannada.asianetnews.com/money/corporate-employee-quits-rs-90-lakh-salary-to-start-microgreens-farm-now-earns-1-44-crore-gkn/articleshow-s50zmxe</link>
            <guid isPermaLink="true">https://kannada.asianetnews.com/money/corporate-employee-quits-rs-90-lakh-salary-to-start-microgreens-farm-now-earns-1-44-crore-gkn/articleshow-s50zmxe</guid>
            <pubDate>Sun, 06 Sep 2026 18:52:11 +0530</pubDate>
            <description><![CDATA[&lt;p&gt;90 ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು ಕೇವಲ 30 ಸಾವಿರ ರೂ. ಹೂಡಿಕೆಯೊಂದಿಗೆ ಮೈಕ್ರೋಗ್ರೀನ್ಸ್ ಕೃಷಿ ಆರಂಭಿಸಿದ ಚಂಡೀಗಢದ ಮೋಹಿತ್ ನಿಜ್ಹವನ್, ಇಂದು ಕೋಟಿಗಳ ಒಡೆಯನಾಗಿದ್ದಾರೆ. ವಾರ್ಷಿಕ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಇವರು, ಲಾಭದಾಯಕ ಕೃಷಿ ಮಾಡುವುದು ಹೇಗೆಂದು ಇತರ ರೈತರು ಮತ್ತು ಉದ್ಯಮಿಗಳಿಗೆ ತರಬೇತಿ ನೀಡುತ್ತಾ ಸ್ಫೂರ್ತಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vdz31pc8qysvreeg6vc7gb,imgname-microgreens-business-1788700757046.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂಡೀಗಢ: &lt;/strong&gt;ಇಂದಿನ ಕಾಲದಲ್ಲಿ ವರ್ಷಕ್ಕೆ 90 ಲಕ್ಷ ರೂಪಾಯಿ ಸಂಬಳ ಬರುವ ಕಾರ್ಪೊರೇಟ್ ಕೆಲಸ ಎಂದರೆ ಅದು ಅನೇಕರ ಪಾಲಿಗೆ ಕನಸಿನ ಉದ್ಯೋಗ. ಆದರೆ ಚಂಡೀಗಢದ ಮೋಹಿತ್ ನಿಜ್ಹವನ್ ಅವರಿಗೆ ಈ ಸಂಬಳ ಕೇವಲ ಒಂದು ಆರಂಭವಾಗಿತ್ತು. ತಮ್ಮ ಸುಖದಾಯಕ ಕೆಲಸಕ್ಕೆ ರಾಜೀನಾಮೆ ನೀಡಿ, ಕೇವಲ 30 ಸಾವಿರ ರೂಪಾಯಿ ಹೂಡಿಕೆಯೊಂದಿಗೆ ಅವರು ಆರಂಭಿಸಿದ 'ಮೈಕ್ರೋಗ್ರೀನ್ಸ್' ಕೃಷಿ ಇಂದು ಕೋಟಿ ರೂಪಾಯಿಗಳ ವ್ಯವಹಾರವಾಗಿ ಬೆಳೆದಿದೆ.&lt;/p&gt;&lt;h2&gt;&lt;strong&gt;ಯಾರು ಈ ಮೋಹಿತ್ ನಿಜ್ಹವನ್?&lt;/strong&gt;&lt;/h2&gt;&lt;p&gt;ಕಂಪ್ಯೂಟರ್ ಸೈನ್ಸ್&zwnj;ನಲ್ಲಿ ಬಿ.ಟೆಕ್ ಪದವೀಧರರಾಗಿರುವ ಮೋಹಿತ್, 2020ರ ಡಿಸೆಂಬರ್&zwnj;ನಲ್ಲಿ ತಮ್ಮ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ತೊರೆದರು. ಏನಾದರೂ ಹೊಸದನ್ನು ಮಾಡಬೇಕೆಂಬ ಹಂಬಲದಿಂದ ಅವರು ಆಯ್ದುಕೊಂಡಿದ್ದು 'ಇಂಡೋರ್ ಫಾರ್ಮಿಂಗ್' ಅಥವಾ ಒಳಾಂಗಣ ಕೃಷಿ. ಅಂತಿಮವಾಗಿ ಅವರು ಮೈಕ್ರೋಗ್ರೀನ್ಸ್ (ಪೋಷಕಾಂಶ ಭರಿತ ಸಣ್ಣ ಸಸ್ಯಗಳು) ಬೆಳೆಯುವತ್ತ ಗಮನ ಹರಿಸಿದರು.&lt;/p&gt;&lt;h2&gt;&lt;strong&gt;100 ಚದರ ಅಡಿಯಿಂದ ಆರಂಭವಾದ ಪಯಣ&lt;/strong&gt;&lt;/h2&gt;&lt;p&gt;ಯಾವುದೇ ದೊಡ್ಡ ಹೂಡಿಕೆ ಮಾಡದೆ, ಮೋಹಿತ್ ತಮ್ಮ ಮನೆಯ ಎರಡನೇ ಮಹಡಿಯ 100 ಚದರ ಅಡಿ ಜಾಗದಲ್ಲಿ ಕೇವಲ 30,000 ರೂಪಾಯಿಗಳೊಂದಿಗೆ ಈ ಕೆಲಸ ಆರಂಭಿಸಿದರು. ಆರಂಭದಲ್ಲಿ ಕೇವಲ 21 ಜಾತಿಯ ಸಾವಯವ ತರಕಾರಿಗಳನ್ನು ಬೆಳೆಸಲು ಮುಂದಾದರು. ಯಾವುದೇ ಕೀಟನಾಶಕಗಳಿಲ್ಲದೆ, ನೈಸರ್ಗಿಕ ವಿಧಾನದಲ್ಲಿ ಬೆಳೆ ತೆಗೆಯುವುದು ಅವರ ಗುರಿಯಾಗಿತ್ತು. 'ಗ್ರೀನು ಮೈಕ್ರೋಗ್ರೀನ್ಸ್' (Greenu Microgreens) ಎಂಬ ಹೆಸರಿನಲ್ಲಿ ಈ ಉದ್ದಿಮೆ ಪ್ರಾರಂಭವಾಯಿತು.&lt;/p&gt;&lt;h2&gt;&lt;strong&gt;ತಿಂಗಳಿಗೆ 12 ಲಕ್ಷ ರೂಪಾಯಿ ಆದಾಯ&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಕೇವಲ 3 ರಾಕ್&zwnj;ಗಳಿಂದ ಶುರುವಾದ ಕೃಷಿ, ಇಂದು 500 ಚದರ ಅಡಿಯ ಫೆಸಿಲಿಟಿಗೆ ವಿಸ್ತರಿಸಿದೆ. ಪ್ರಸ್ತುತ ಮೋಹಿತ್ ಬಳಿ 60 ರಾಕ್&zwnj;ಗಳಿದ್ದು, ಪ್ರತಿ ತಿಂಗಳು 12,000 ಟ್ರೇಗಳಲ್ಲಿ ಮೈಕ್ರೋಗ್ರೀನ್ಸ್ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ವರದಿಗಳ ಪ್ರಕಾರ, ಅವರ ಈ ಉದ್ಯಮವು ತಿಂಗಳಿಗೆ ಸುಮಾರು 12 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದು, ವಾರ್ಷಿಕವಾಗಿ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.&lt;/p&gt;&lt;p&gt;ಕೇವಲ ತಾವೊಬ್ಬರೇ ಬೆಳೆಯುವುದಲ್ಲದೆ ಮೋಹಿತ್ ಇತರ ರೈತರಿಗೆ ಮತ್ತು ಉದ್ಯಮಿಗಳಿಗೆ ಮೈಕ್ರೋಗ್ರೀನ್ಸ್ ಕೃಷಿಯ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಕೃಷಿ ತಂತ್ರಜ್ಞಾನ ಮತ್ತು ವಾಣಿಜ್ಯ ಎರಡನ್ನೂ ಅವರು ಜನರಿಗೆ ಕಲಿಸಿಕೊಡುತ್ತಿದ್ದಾರೆ. ಅವರ ಈ ಅಸಾಧಾರಣ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/corporate-employee-quits-rs-90-lakh-salary-to-start-microgreens-farm-now-earns-1-44-crore-gkn/articleshow-s50zmxe"/>
        </item>
        <item>
            <title><![CDATA[UIDAI: ಆಧಾರ್ ಕೊಟ್ಟಿದ್ದೀರಾ? ಎಲ್ಲೆಲ್ಲಿ ಬಳಕೆಯಾಗಿದೆ ಗೊತ್ತಾ? ಈಗಲೇ ಚೆಕ್ ಮಾಡಿ!]]></title>
            <link>https://kannada.asianetnews.com/gallery/news-money/aadhaar-misuse-check-aadhaar-authentication-history-maadhaar-app-biometric-lock-uidai-1947-aadhaar-security-tips-bmk-wurm7d4</link>
            <guid isPermaLink="true">https://kannada.asianetnews.com/gallery/news-money/aadhaar-misuse-check-aadhaar-authentication-history-maadhaar-app-biometric-lock-uidai-1947-aadhaar-security-tips-bmk-wurm7d4</guid>
            <pubDate>Fri, 04 Sep 2026 20:33:22 +0530</pubDate>
            <description><![CDATA[&lt;p&gt;ಆಧಾರ್ ನಮ್ಮ ಪ್ರಮುಖ ಗುರುತಿನ ಚೀಟಿಯಾಗಿದ್ದು, ಅದರ ದುರುಪಯೋಗದ ಅಪಾಯವೂ ಹೆಚ್ಚುತ್ತಿದೆ. ನಿಮ್ಮ ಆಧಾರ್ ಅನ್ನು ಕಳೆದ 6 ತಿಂಗಳುಗಳಲ್ಲಿ ಎಲ್ಲೆಲ್ಲಿ ಬಳಸಲಾಗಿದೆ ಎಂಬುದನ್ನು ಪರಿಶೀಲಿಸುವುದು ಹೇಗೆ ಮತ್ತು ದುರ್ಬಳಕೆ ಕಂಡುಬಂದಲ್ಲಿ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸ್ಟೋರಿಯಲ್ಲಿ ವಿವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5vc9bt5cyh5bfwbwbct0g03,imgname-aadhaar-card-benefits-1758634225477.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಧಾರ್ ನಮ್ಮ ಪ್ರಮುಖ ಗುರುತಿನ ಚೀಟಿಯಾಗಿದ್ದು, ಅದರ ದುರುಪಯೋಗದ ಅಪಾಯವೂ ಹೆಚ್ಚುತ್ತಿದೆ. ನಿಮ್ಮ ಆಧಾರ್ ಅನ್ನು ಕಳೆದ 6 ತಿಂಗಳುಗಳಲ್ಲಿ ಎಲ್ಲೆಲ್ಲಿ ಬಳಸಲಾಗಿದೆ ಎಂಬುದನ್ನು ಪರಿಶೀಲಿಸುವುದು ಹೇಗೆ ಮತ್ತು ದುರ್ಬಳಕೆ ಕಂಡುಬಂದಲ್ಲಿ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸ್ಟೋರಿಯಲ್ಲಿ ವಿವರಿಸಲಾಗಿದೆ.&lt;/p&gt;&lt;img&gt;&lt;p&gt;ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ನಮ್ಮ ಪ್ರತಿಯೊಬ್ಬ ಭಾರತೀಯನ ಜೀವನದ ಅತ್ಯಂತ ಪ್ರಮುಖ ಗುರುತಿನ ಚೀಟಿಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ಹೊಸ ಸಿಮ್ ಕಾರ್ಡ್ ಪಡೆಯುವುದು, ಸರ್ಕಾರಿ ಯೋಜನೆಗಳ ಲಾಭ ಪಡೆಯುವುದು ಹಾಗೂ ಪ್ರಯಾಣದ ಸಂದರ್ಭಗಳಲ್ಲಿ ಆಧಾರ್ ಅತ್ಯಗತ್ಯ. ಆಧಾರ್ ನಮ್ಮ ದೈನಂದಿನ ಕೆಲಸಗಳನ್ನು ಸುಲಭಗೊಳಿಸಿದಷ್ಟೇ ವೇಗವಾಗಿ, ಅದರ ದುರುಪಯೋಗ ಮತ್ತು ಡೇಟಾ ಕಳ್ಳತನದ (Data Theft) ಅಪಾಯಗಳೂ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.&lt;/p&gt;&lt;img&gt;&lt;p&gt;ಅನೇಕ ಜನರು ಯಾವುದೇ ರೀತಿಯ ಮುನ್ನೆಚ್ಚರಿಕೆ ವಹಿಸದೆ ಸಿಕ್ಕ ಸಿಕ್ಕ ಫೋಟೋಕಾಪಿ (Xerox) ಅಂಗಡಿಗಳಲ್ಲಿ ತಮ್ಮ ಆಧಾರ್ ಕಾರ್ಡ್&zwnj;ಗಳ ಪ್ರತಿಗಳನ್ನು ನೀಡುತ್ತಾರೆ. ಇನ್ನು ಕೆಲವರು ಅನಧಿಕೃತ ಅಥವಾ ನಕಲಿ ಡಿಜಿಟಲ್ ವೇದಿಕೆಗಳಲ್ಲಿ ತಮ್ಮ ಬೆರಳಚ್ಚು (Biometric) ದೃಢೀಕರಣವನ್ನು ಮಾಡಿ ಹಣಕಾಸಿನ ವಂಚನೆಗೆ ಬಲಿಯಾಗುತ್ತಿದ್ದಾರೆ. ನಿಮ್ಮ ಆಧಾರ್ ಮಾಹಿತಿಯನ್ನು ನಿಮ್ಮ ಅರಿವಿಲ್ಲದೇ ಯಾರಾದರೂ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಭಯ ನಿಮಗಿದ್ದರೆ, ಅದನ್ನು ನೀವೇ ಸ್ವತಃ ಸುಲಭವಾಗಿ ಟ್ರ್ಯಾಕ್ ಮಾಡಬಹುದು.&lt;/p&gt;&lt;img&gt;&lt;p&gt;ನೀವು ಯಾವುದೇ ಸೇವೆಗಾಗಿ OTP, ಫಿಂಗರ್&zwnj;ಪ್ರಿಂಟ್ ಅಥವಾ ಐರಿಸ್ (ಕಣ್ಣಿನ ಸ್ಕ್ಯಾನ್) ಮೂಲಕ ಆಧಾರ್ ದೃಢೀಕರಣ ಮಾಡಿದಾಗಲೆಲ್ಲಾ, ಅದರ ಡಿಜಿಟಲ್ ದಾಖಲೆಯು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ವ್ಯವಸ್ಥೆಯಲ್ಲಿ ತಕ್ಷಣವೇ ನಮೂದಾಗುತ್ತದೆ. ಈ ಸೌಲಭ್ಯದ ಮೂಲಕ ಕಳೆದ 6 ತಿಂಗಳುಗಳಲ್ಲಿ ನಿಮ್ಮ ಆಧಾರ್ ಅನ್ನು ಎ ಎಲ್ಲೆಲ್ಲಿ ಮತ್ತು ಯಾವ ಸಮಯದಲ್ಲಿ ಬಳಸಲಾಗಿದೆ ಎಂಬುದರ ಸಂಪೂರ್ಣ ಪಟ್ಟಿಯನ್ನು ನೀವು ಪರಿಶೀಲಿಸಬಹುದು. ಇದರಿಂದ ನಿಮ್ಮ ಗಮನಕ್ಕೆ ಬಾರದೇ ನಿಮ್ಮ ಆಧಾರ್ ದುರುಪಯೋಗವಾಗಿದ್ದರೆ ತಕ್ಷಣವೇ ಪತ್ತೆ ಹಚ್ಚಬಹುದು.&lt;/p&gt;&lt;img&gt;&lt;p&gt;1. ಮೊದಲಿಗೆ ನಿಮ್ಮ ಮೊಬೈಲ್&zwnj;ನಲ್ಲಿ Google Play Store ಅಥವಾ Apple App Store ನಿಂದ ಅಧಿಕೃತ mAadhaar ಅಪ್ಲಿಕೇಶನ್ ಡೌನ್&zwnj;ಲೋಡ್ ಮಾಡಿ.&lt;/p&gt;&lt;p&gt;2. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಮೂಲಕ ಲಾಗಿನ್ ಪೂರ್ಣಗೊಳಿಸಿ.&lt;/p&gt;&lt;p&gt;3. ಆ್ಯಪ್&zwnj;ನ ಸುರಕ್ಷತೆಗಾಗಿ 4-ಅಂಕಿಯ ರಹಸ್ಯ ಪಿನ್ (PIN) ಒಂದನ್ನು ರಚಿಸಿ.&lt;/p&gt;&lt;p&gt;4. ಆ್ಯಪ್&zwnj;ನಲ್ಲಿ 'My Aadhaar' ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮ್ಮ ಪಿನ್ ನಮೂದಿಸಿ.&lt;/p&gt;&lt;p&gt;5. 'Security' ಟ್ಯಾಬ್ ಅಡಿಯಲ್ಲಿರುವ 'Aadhaar Authentication History' ಆಯ್ಕೆಯನ್ನು ಆಯ್ಕೆಮಾಡಿ.&lt;/p&gt;&lt;p&gt;6. ನೀವು ಪರಿಶೀಲಿಸಲು ಬಯಸುವ ನಿರ್ದಿಷ್ಟ ದಿನಾಂಕ ಅಥವಾ ಸಮಯದ ಅವಧಿಯನ್ನು ನಮೂದಿಸಿದರೆ, ನಿಮ್ಮ ಆಧಾರ್ ಬಳಕೆಯ ಸಂಪೂರ್ಣ ವಿವರ ಪರದೆಯ ಮೇಲೆ ಕಾಣಿಸುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ದೃಢೀಕರಣ ಇತಿಹಾಸದಲ್ಲಿ ನೀವು ಮಾಡದಿರುವ ಯಾವುದೇ ವಹಿವಾಟು ಅಥವಾ ಪರಿಶೀಲನೆ ಕಂಡುಬಂದರೆ, ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ!&lt;/p&gt;&lt;p&gt;1947 ಗೆ ಕರೆ ಮಾಡಿ; ತಕ್ಷಣವೇ UIDAI ನ ಉಚಿತ ಸಹಾಯವಾಣಿ ಸಂಖ್ಯೆ 1947ಕ್ಕೆ ಕರೆ ಮಾಡಿ ದೂರು ನೋಂದಾಯಿಸಿ.&lt;/p&gt;&lt;p&gt;ಬಯೋಮೆಟ್ರಿಕ್ ಲಾಕ್ ಮಾಡಿ; mAadhaar ಆ್ಯಪ್&zwnj;ನಲ್ಲಿರುವ 'Biometrics Lock' ವೈಶಿಷ್ಟ್ಯವನ್ನು ಬಳಸಿ ನಿಮ್ಮ ಫಿಂಗರ್&zwnj;ಪ್ರಿಂಟ್ ಮತ್ತು ಐರಿಸ್ ಡೇಟಾವನ್ನು ಲಾಕ್ ಮಾಡಿ. ಇದರಿಂದ ನಿಮ್ಮ ಅನುಮತಿಯಿಲ್ಲದೆ ಯಾರೂ ಬಯೋಮೆಟ್ರಿಕ್ ಬಳಸಲಾಗುವುದಿಲ್ಲ.&lt;/p&gt;&lt;p&gt;ನಿಯಮಿತ ತಪಾಸಣ; ನಿಮ್ಮ ಆಧಾರ್ ದೃಢೀಕರಣ ಇತಿಹಾಸವನ್ನು ತಿಂಗಳಿಗೆ ಒಮ್ಮೆಯಾದರೂ ಪರಿಶೀಲಿಸುವ ಅಭ್ಯಾಸ ಮಾಡಿಕೊಳ್ಳಿ.&lt;/p&gt;&lt;img&gt;&lt;p&gt;ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ಆಧಾರ್ ಪ್ರತಿ ನೀಡುವಾಗ 'Masked Aadhaar'(ಇದರಲ್ಲಿ ಮೊದಲ 8 ಅಂಕೆಗಳು ಮರೆಯಾಗಿರುತ್ತವೆ) ಬಳಸುವುದು ಅತ್ಯಂತ ಸುರಕ್ಷಿತ. ಅಗತ್ಯವಿಲ್ಲದ ಸಮಯದಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಯಾವಾಗಲೂ ಲಾಕ್ ಮಾಡಿಡಿ. ಅಗತ್ಯ ಬಿದ್ದಾಗ ಆ್ಯಪ್ ಮೂಲಕವೇ ಕೆಲವೇ ಸೆಕೆಂಡುಗಳಲ್ಲಿ ಅನ್&zwnj;ಲಾಕ್ ಮಾಡಿಕೊಳ್ಳಬಹುದು. ಜಾಗರೂಕರಾಗಿರಿ, ನಿಮ್ಮ ಡಿಜಿಟಲ್ ಗುರುತನ್ನು ಸುರಕ್ಷಿತವಾಗಿರಿಸಿಕೊಳ್ಳಿ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/news-money/aadhaar-misuse-check-aadhaar-authentication-history-maadhaar-app-biometric-lock-uidai-1947-aadhaar-security-tips-bmk-wurm7d4"/>
        </item>
        <item>
            <title><![CDATA[ಲೋನ್ ಸೆಟಲ್‌ಮೆಂಟ್‌ ಅಂದರೇನು? ಬ್ಯಾಂಕ್‌ಗಳು ದೊಡ್ಡ ಮೊತ್ತದ ಸಾಲಕ್ಕೆ ಸಣ್ಣ ಮೊತ್ತ ಪಡೆದು ಕೈತೊಳೆಯಲು ಒಪ್ಪುವುದೇಕೆ?]]></title>
            <link>https://kannada.asianetnews.com/money/loan-settlement-why-do-banks-agree-to-accept-less-money-for-big-debts-gkn/articleshow-xg4zscp</link>
            <guid isPermaLink="true">https://kannada.asianetnews.com/money/loan-settlement-why-do-banks-agree-to-accept-less-money-for-big-debts-gkn/articleshow-xg4zscp</guid>
            <pubDate>Sun, 30 Aug 2026 08:12:19 +0530</pubDate>
            <description><![CDATA[&lt;p&gt;ಲೋನ್ ಸೆಟಲ್&zwnj;ಮೆಂಟ್&zwnj; ಎಂದರೆ ಸಾಲಗಾರನ ತೀವ್ರ ಸಂಕಷ್ಟದ ಸಮಯದಲ್ಲಿ ದೀರ್ಘಕಾಲದ ಕಾನೂನು ವೆಚ್ಚ ಹಾಗೂ ಎನ್&zwnj;ಪಿಎ ನಷ್ಟವನ್ನು ತಪ್ಪಿಸಲು ಬ್ಯಾಂಕ್&zwnj;ಗಳು ಬಾಕಿ ಮೊತ್ತಕ್ಕಿಂತ ಕಡಿಮೆ ಹಣ ಪಡೆದು ಸಾಲ ಮುಚ್ಚುವುದಾಗಿದೆ. ಇದು ತಕ್ಷಣದ ಸಾಲದ ಹೊರೆಯಿಂದ ಮುಕ್ತಿ ನೀಡಿದರೂ, ಕ್ರೆಡಿಟ್ ಸ್ಕೋರ್ ತೀವ್ರವಾಗಿ ಕುಸಿಯುವಂತೆ ಮಾಡುತ್ತದೆ ಮತ್ತು ಭವಿಷ್ಯದಲ್ಲಿ ಹೊಸ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಸಿಗುವುದನ್ನು ಅತ್ಯಂತ ಕಷ್ಟಕರವಾಗಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m16w90ga22barqtqdmpe3kxt,imgname-loan-settlement-1788011119114.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ ಎಸ್ಸೆಲ್ ಗ್ರೂಪ್&zwnj; ಅಧ್ಯಕ್ಷ ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕರಣದಲ್ಲಿ ಅವರು ಕೇವಲ 6.5 ಕೋಟಿ ರೂ. ಪಾವತಿಸಬೇಕಾಗಿ ಬಂದಿದೆ. ಬ್ಯಾಂಕ್&zwnj;ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು ಹೂಡಿದ್ದ ಒಟ್ಟು ಸಾಲ ವಸೂಲಾತಿ ಕ್ಲೈಮ್ ಬರೋಬ್ಬರಿ 22,006.57 ಕೋಟಿ ರೂ. ಆಗಿತ್ತು! ಇನ್&zwnj;ಸಾಲ್ವೆನ್ಸಿ ಆಂಡ್ ಬ್ಯಾಂಕ್ರಪ್ಟ್ಸಿ ಕೋಡ್ (IBC) ಅಡಿಯಲ್ಲಿ ಸಾಲಗಾರರ ರೀಪೇಮೆಂಟ್ ಪ್ಲಾನ್&zwnj;ಗೆ ಸಿಕ್ಕಿರುವ ಈ ಒಪ್ಪಿಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಅಷ್ಟಕ್ಕೂ ಕಾನೂನುಬದ್ಧವಾಗಿ ಸಾವಿರಾರು ಕೋಟಿ ರೂ. ಬಾಕಿ ಇರುವಾಗ ಬ್ಯಾಂಕ್&zwnj;ಗಳು ಕೇವಲ ಇಷ್ಟು ಸಣ್ಣ ಮೊತ್ತ ಪಡೆದು ಸೆಟಲ್&zwnj;ಮೆಂಟ್&zwnj; ಒಪ್ಪಿಕೊಳ್ಳುವುದೇಕೆ? ಇದರ ಹಿಂದಿನ ಬ್ಯಾಂಕಿಂಗ್ ರಹಸ್ಯ ಇಲ್ಲಿದೆ.&lt;/p&gt;&lt;h2&gt;&lt;strong&gt;ಏನಿದು ಲೋನ್ ಸೆಟಲ್&zwnj;ಮೆಂಟ್&zwnj;?&lt;/strong&gt;&lt;/h2&gt;&lt;p&gt;ಸಾಲಗಾರನು ಪಡೆದ ಒಟ್ಟು ಸಾಲದ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಪಡೆದು ಸಾಲದ ಖಾತೆಯನ್ನು ಮುಚ್ಚಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಒಪ್ಪಿಕೊಳ್ಳುವ ಒಪ್ಪಂದಕ್ಕೆ 'ಲೋನ್ ಸೆಟಲ್&zwnj;ಮೆಂಟ್&zwnj;' ಎನ್ನಲಾಗುತ್ತದೆ. ಇದನ್ನು ಸಾಮಾನ್ಯವಾಗಿ 'ಒನ್-ಟೈಮ್ ಸೆಟಲ್&zwnj;ಮೆಂಟ್&zwnj;' (One-Time Settlement) ಎಂದೂ ಕರೆಯಲಾಗುತ್ತದೆ. ಸಾಲಗಾರನು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಸಂಪೂರ್ಣ ಸಾಲ ಮರುಪಾವತಿಸಲು ಸಾಧ್ಯವಾಗದಿದ್ದಾಗ ಬ್ಯಾಂಕ್ ಅಸಲು ಅಥವಾ ಬಡ್ಡಿಯ ಒಂದಿಷ್ಟು ಭಾಗವನ್ನು ಮನ್ನಾ ಮಾಡಲು ಒಪ್ಪಿಕೊಳ್ಳುತ್ತದೆ.&lt;/p&gt;&lt;h2&gt;&lt;strong&gt;ಕಡಿಮೆ ಮೊತ್ತಕ್ಕೆ ಒಪ್ಪಿಕೊಳ್ಳುವುದೇಕೆ?&lt;/strong&gt;&lt;/h2&gt;&lt;p&gt;ಮೇಲ್ನೋಟಕ್ಕೆ ಸಾಲದ ಸಣ್ಣ ಭಾಗವನ್ನು ಮಾತ್ರ ಒಪ್ಪಿಕೊಳ್ಳುವುದು ಬ್ಯಾಂಕ್&zwnj;ಗೆ ನೇರ ನಷ್ಟದಂತೆ ಕಾಣಿಸಬಹುದು. ಆದರೆ ಪ್ರಾಯೋಗಿಕವಾಗಿ ಬ್ಯಾಂಕ್&zwnj;ಗಳು ಈ ಕೆಳಗಿನ ಕಾರಣಗಳಿಗಾಗಿ ಒಪ್ಪಿಕೊಳ್ಳುತ್ತವೆ.&lt;/p&gt;&lt;ul&gt; &lt;li&gt;&lt;strong&gt;ಎನ್&zwnj;ಪಿಎ (NPA) ಅಪಾಯ&lt;/strong&gt;: ಸಾಲಗಾರನು ಸತತ 90 ದಿನಗಳ ಕಾಲ ಸಾಲದ ಕಂತನ್ನು ಪಾವತಿಸದಿದ್ದರೆ ಅಂತಹ ಸಾಲವನ್ನು ಬ್ಯಾಂಕಿಂಗ್ ನಿಯಮಗಳ ಪ್ರಕಾರ 'ನಾನ್-ಪರ್ಫಾರ್ಮಿಂಗ್ ಅಸೆಟ್' (NPA) ಅಥವಾ ವಸೂಲಾಗದ ಸಾಲ ಎಂದು ವರ್ಗೀಕರಿಸಲಾಗುತ್ತದೆ. ವರ್ಷಗಟ್ಟಲೆ ಈ ನಷ್ಟದ ಸಾಲದ ಹಿಂದೆ ಬೀಳುವ ಬದಲು ಸಿಕ್ಕಷ್ಟು ಹಣ ಪಡೆದು ಸಾಲ ಮುಚ್ಚುವುದು ಉತ್ತಮ ಎಂದು ಬ್ಯಾಂಕ್&zwnj;ಗಳು ಯೋಚಿಸುತ್ತವೆ.&lt;/li&gt; &lt;li&gt;&lt;strong&gt;ಕಾನೂನು ವೆಚ್ಚ ಮತ್ತು ಸುದೀರ್ಘ ಪ್ರಕ್ರಿಯೆ:&lt;/strong&gt; ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ವಕೀಲರ ಶುಲ್ಕ, ಕೋರ್ಟ್ ಕೇಸ್, ನೋಟಿಸ್ ಮತ್ತು ವಸೂಲಾತಿ ಏಜೆನ್ಸಿಗಳಿಗಾಗಿ ಸಾಕಷ್ಟು ಹಣ ವ್ಯಯವಾಗುತ್ತದೆ. ಇದಕ್ಕೆ ವರ್ಷಗಟ್ಟಲೆ ಸಮಯ ಬೇಕಾಗುತ್ತದೆ. ಸೆಟಲ್&zwnj;ಮೆಂಟ್&zwnj; ಮೂಲಕ ಹಣಕಾಸು ಸಂಸ್ಥೆಗಳು ತ್ವರಿತವಾಗಿ ಮತ್ತು ಖಚಿತವಾಗಿ ಒಂದಿಷ್ಟು ಹಣ ವಾಪಸ್ ಪಡೆಯಬಹುದು ಹಾಗೂ ಹೆಚ್ಚುವರಿ ಕಾನೂನು ವೆಚ್ಚಗಳನ್ನು ಉಳಿಸಬಹುದು.&lt;/li&gt; &lt;li&gt;&lt;strong&gt;ಬ್ಯಾಡ್ ಲೋನ್ ಕಡಿಮೆ ಮಾಡುವ ಒತ್ತಡ&lt;/strong&gt;: ಬ್ಯಾಂಕ್&zwnj;ಗಳು ತಮ್ಮ ಸಾಲದ ಗುಣಮಟ್ಟವನ್ನು ಉತ್ತಮವಾಗಿಟ್ಟುಕೊಳ್ಳಬೇಕಾಗುತ್ತದೆ. ವಸೂಲಾಗದ ಸಾಲಗಳ ಹೊರೆಯನ್ನು ಕಡಿಮೆ ಮಾಡಲು ಮತ್ತು ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಬ್ಯಾಂಕ್&zwnj;ಗಳಿಗೆ ಆರ್&zwnj;ಬಿಐ ಅಥವಾ ಆಡಳಿತ ಮಂಡಳಿಯಿಂದ ಒತ್ತಡವಿರುತ್ತದೆ.&lt;/li&gt; &lt;li&gt;&lt;strong&gt;ಸಾಲಗಾರನ ನೈಜ ಆರ್ಥಿಕ ಸಂಕಷ್ಟ:&lt;/strong&gt; ಉದ್ಯೋಗ ನಷ್ಟ, ವ್ಯಾಪಾರದಲ್ಲಿ ತೀವ್ರ ನಷ್ಟ ಅಥವಾ ಇತರ ಗಂಭೀರ ಆರ್ಥಿಕ ತೊಂದರೆಗಳಿಂದಾಗಿ ಸಾಲಗಾರನಿಗೆ ಪೂರ್ಣ ಹಣ ಪಾವತಿಸಲು ಸಾಧ್ಯವಾಗದೇ ಇರಬಹುದು. ಇಂತಹ ಸಂದರ್ಭದಲ್ಲಿ ಬ್ಯಾಂಕ್&zwnj;ಗಳು ಸ್ವಲ್ಪ ಹಣವನ್ನಾದರೂ ವಸೂಲಿ ಮಾಡಲು ಸೆಟಲ್&zwnj;ಮೆಂಟ್&zwnj; ಅನ್ನು ಒಂದು ಪ್ರಾಯೋಗಿಕ ಮಾರ್ಗವೆಂದು ಪರಿಗಣಿಸುತ್ತವೆ.&lt;/li&gt;&lt;/ul&gt;&lt;h2&gt;&lt;strong&gt;ಸೆಟಲ್&zwnj;ಮೆಂಟ್&zwnj; ನಂತರ ಸಾಲಗಾರನಿಗೆ ಏನಾಗುತ್ತದೆ?&lt;/strong&gt;&lt;/h2&gt;&lt;p&gt;ಲೋನ್ ಸೆಟಲ್&zwnj;ಮೆಂಟ್&zwnj; ಸಾಲಗಾರನಿಗೆ ಸಾಲದ ಹೊರೆಯಿಂದ ತಕ್ಷಣದ ಮುಕ್ತಿ ನೀಡಬಹುದಾದರೂ ಭವಿಷ್ಯದ ಸಾಲದ ಹಾದಿಯ ಮೇಲೆ ಇದು ಗಂಭೀರ ಮತ್ತು ದೀರ್ಘಕಾಲದ ನೆಗೆಟಿವ್ ಪರಿಣಾಮ ಬೀರುತ್ತದೆ.&lt;/p&gt;&lt;p&gt;&lt;strong&gt;ಕ್ರೆಡಿಟ್ ಸ್ಕೋರ್ (CIBIL Score) ಕುಸಿತ:&lt;/strong&gt; ಸೆಟಲ್&zwnj;ಮೆಂಟ್&zwnj; ಮಾಡಿಕೊಂಡ ಸಾಲಗಾರನ ಕ್ರೆಡಿಟ್ ಪ್ರೊಫೈಲ್ ತೀವ್ರವಾಗಿ ಹಾಳಾಗುತ್ತದೆ&lt;/p&gt;&lt;p&gt;&lt;strong&gt;ವರದಿಯಲ್ಲಿ 'Settled' ಸ್ಟೇಟಸ್:&lt;/strong&gt; ಕ್ರೆಡಿಟ್ ವರದಿಯಲ್ಲಿ ಸಾಲವನ್ನು 'ಪೂರ್ಣ ಪಾವತಿಸಲಾಗಿದೆ' (Closed/Paid-off) ಎಂದು ತೋರಿಸುವ ಬದಲು 'ಸೆಟಲ್ ಮಾಡಲಾಗಿದೆ' (Settled) ಎಂದು ನಮೂದಿಸಲಾಗುತ್ತದೆ. ಭವಿಷ್ಯದಲ್ಲಿ ಹೊಸ ಸಾಲ ನೀಡುವ ಬ್ಯಾಂಕ್&zwnj;ಗಳು ಇದನ್ನು ನೆಗೆಟಿವ್ ಆಗಿ ನೋಡುತ್ತವೆ.&lt;/p&gt;&lt;p&gt;&lt;strong&gt;ಹೊಸ ಸಾಲ ಪಡೆಯಲು ತೊಂದರೆ:&lt;/strong&gt; ಮನೆ, ವಾಹನ ಅಥವಾ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಬ್ಯಾಂಕ್&zwnj;ಗಳು ಇಂತಹ ಸಾಲಗಾರರನ್ನು ಹೆಚ್ಚಿನ ಅಪಾಯಕಾರಿ (High Risk) ಎಂದು ಪರಿಗಣಿಸಿ ಸಾಲ ನೀಡಲು ನಿರಾಕರಿಸುತ್ತವೆ.&lt;/p&gt;&lt;p&gt;&lt;strong&gt;ಹೆಚ್ಚಿನ ಬಡ್ಡಿ ದರ: &lt;/strong&gt;ಒಂದು ವೇಳೆ ಭವಿಷ್ಯದಲ್ಲಿ ಸಾಲ ಸಿಕ್ಕಿದರೂ, ಅವರಿಗೆ ಅತ್ಯಂತ ಕಠಿಣ ಷರತ್ತುಗಳು ಮತ್ತು ಹೆಚ್ಚಿನ ಬಡ್ಡಿ ದರವನ್ನು ವಿಧಿಸಲಾಗುತ್ತದೆ.&lt;/p&gt;&lt;p&gt;&lt;strong&gt;ಕ್ರೆಡಿಟ್ ಕಾರ್ಡ್ ನಿರ್ಬಂಧಗಳು: &lt;/strong&gt;ಹೊಸ ಕ್ರೆಡಿಟ್ ಕಾರ್ಡ್ ಪಡೆಯುವುದು ಅಥವಾ ಹಾಲಿ ಕ್ರೆಡಿಟ್ ಲಿಮಿಟ್ ಹೆಚ್ಚಿಸಿಕೊಳ್ಳುವುದು ಅತ್ಯಂತ ಕಷ್ಟವಾಗುತ್ತದೆ.&lt;/p&gt;&lt;p&gt;ಕೋ-ಬಾರೋವರ್ ಮತ್ತು ಗ್ಯಾರಂಟರ್ ಮೇಲೆ ಪ್ರಭಾವ: ಜಂಟಿ ಸಾಲಗಾರರು ಅಥವಾ ಸಾಲಕ್ಕೆ ಗ್ಯಾರಂಟಿ ನೀಡಿದವರ ಮೇಲೂ ಈ ಸೆಟಲ್&zwnj;ಮೆಂಟ್&zwnj; ನೆಗೆಟಿವ್ ಪರಿಣಾಮ ಬೀರುತ್ತದೆ. ಅವರ ಸಿಬಿಲ್ ಸ್ಕೋರ್ ಕೂಡ ಕುಸಿಯುತ್ತದೆ.&lt;/p&gt;&lt;p&gt;ಲೋನ್ ಸೆಟಲ್&zwnj;ಮೆಂಟ್&zwnj; ಕೇವಲ ತೀವ್ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಬಳಸಬೇಕಾದ ಕೊನೆಯ ಅಸ್ತ್ರವೇ ಹೊರತು ಸಾಲದಿಂದ ತಪ್ಪಿಸಿಕೊಳ್ಳುವ ಸುಲಭ ಮಾರ್ಗವಲ್ಲ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/loan-settlement-why-do-banks-agree-to-accept-less-money-for-big-debts-gkn/articleshow-xg4zscp"/>
        </item>
        <item>
            <title><![CDATA[ನಾರಾಯಣ ಮೂರ್ತಿ ಕುಟುಂಬದಿಂದ ಹೊಸ ಶೇರು ಖರೀದಿ.. 5 ವರ್ಷದಲ್ಲಿ ಭಾರೀ ಲಾಭ, ಯಾವ ಕಂಪನಿ ಗೊತ್ತಾ?]]></title>
            <link>https://kannada.asianetnews.com/money/narayan-murthy-family-office-lic-and-morgan-stanley-buy-stakes-in-foseco-india-gkn/articleshow-y9fk4m7</link>
            <guid isPermaLink="true">https://kannada.asianetnews.com/money/narayan-murthy-family-office-lic-and-morgan-stanley-buy-stakes-in-foseco-india-gkn/articleshow-y9fk4m7</guid>
            <pubDate>Sun, 30 Aug 2026 20:14:46 +0530</pubDate>
            <description><![CDATA[&lt;p&gt;ನಾರಾಯಣ ಮೂರ್ತಿ ಅವರ ಕುಟುಂಬದ ಕ್ಯಾಟಮರನ್ ವೆಂಚರ್ಸ್ ಹಾಗೂ ಎಲ್ಐಸಿಯಂತಹ ದಿಗ್ಗಜ ಸಂಸ್ಥೆಗಳು 'ಫೋಸೆಕೊ ಇಂಡಿಯಾ' ಕೆಮಿಕಲ್ ಕಂಪನಿಯ ಷೇರುಗಳನ್ನು ಖರೀದಿಸಿವೆ. ಕಳೆದ 5 ವರ್ಷಗಳಲ್ಲಿ ಶೇ. 324 ರಷ್ಟು ಮಲ್ಟಿಬ್ಯಾಗರ್ ಲಾಭ ನೀಡಿರುವ ಈ ಕಂಪನಿಯ ಪ್ರಬಲ ಆರ್ಥಿಕ ಬೆಳವಣಿಗೆಯೇ ಈ ಭಾರಿ ಹೂಡಿಕೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m19j20zx2s5b5agxjv87xrs7,imgname-narayana-murthy-1788101067773.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಷೇರು ಮಾರುಕಟ್ಟೆಯಲ್ಲಿ ದಿಗ್ಗಜ ಹೂಡಿಕೆದಾರರು ಯಾವ ಕಂಪನಿಯ ಮೇಲೆ ಹಣ ಹಾಕುತ್ತಾರೆ ಎಂಬುದು ಸದಾ ಕುತೂಹಲದ ವಿಷಯ. ಹಿರಿಯ ಉದ್ಯಮಿ ನಾರಾಯಣ ಮೂರ್ತಿ ಅವರ ಕುಟುಂಬದ ಒಡೆತನದ 'ಕ್ಯಾಟಮರನ್ ವೆಂಚರ್ಸ್' (ಭ) ಸೇರಿದಂತೆ ದೇಶಿ ಮತ್ತು ವಿದೇಶಿ ಹಣಕಾಸು ಸಂಸ್ಥೆಗಳು 'ಫೋಸೆಕೊ ಇಂಡಿಯಾ' (Foseco India) ಎಂಬ ಕೆಮಿಕಲ್ ಕಂಪನಿಯ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿಸಿವೆ.&lt;/p&gt;&lt;h2&gt;&lt;strong&gt;ಯಾರು ಎಷ್ಟು ಖರೀದಿ ಮಾಡಿದರು?&lt;/strong&gt;&lt;/h2&gt;&lt;p&gt;ಗುರುವಾರ ನಡೆದ 'ಬ್ಲಾಕ್ ಡೀಲ್' (Block Deal) ಮೂಲಕ ಈ ಖರೀದಿ ನಡೆದಿದೆ. ನಾರಾಯಣ ಮೂರ್ತಿ ಕುಟುಂಬ (Catamaran Ventures)ಸುಮಾರು 55,978 ಷೇರುಗಳನ್ನು ಖರೀದಿಸಿದೆ. ಒಂದು ಷೇರಿಗೆ ಸರಾಸರಿ ₹5,897 ಬೆಲೆ ನೀಡಲಾಗಿದೆ. ಎಲ್ಐಸಿ (LIC Mutual Fund), ಮೋರ್ಗನ್ ಸ್ಟಾನ್ಲಿ (Morgan Stanley), ಸಿಟಿ ಗ್ರೂಪ್ ಮತ್ತು ಮಿರೆ ಅಸೆಟ್&zwnj;ನಂತಹ ದೊಡ್ಡ ಸಂಸ್ಥೆಗಳೂ ಈ ಕಂಪನಿಯ ಷೇರುಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿವೆ.&lt;/p&gt;&lt;h2&gt;&lt;strong&gt;ಯಾರು ಮಾರಾಟ ಮಾಡಿದರು?&lt;/strong&gt;&lt;/h2&gt;&lt;p&gt;ಒಂದೆಡೆ ಇವರೆಲ್ಲರೂ ಷೇರು ಖರೀದಿಸುತ್ತಿದ್ದರೆ, 'ಮೋರ್ಗನ್ ಟೆರಾಸೆನ್' ಎಂಬ ಸಂಸ್ಥೆಯು ಈ ಕಂಪನಿಯಿಂದ ಸಂಪೂರ್ಣವಾಗಿ ಹೊರಬಂದಿದೆ. ಸುಮಾರು ₹678.6 ಕೋಟಿ ಮೌಲ್ಯದ ಷೇರುಗಳನ್ನು ಈ ಸಂಸ್ಥೆ ಮಾರಾಟ ಮಾಡಿದೆ.&lt;/p&gt;&lt;h2&gt;&lt;strong&gt;ಫೋಸೆಕೊ ಇಂಡಿಯಾ ಲಾಭ ಹೇಗಿದೆ?&lt;/strong&gt;&lt;/h2&gt;&lt;p&gt;ದೊಡ್ಡ ಹೂಡಿಕೆದಾರರು ಈ ಕಂಪನಿಯ ಮೇಲೆ ಯಾಕೆ ಹಣ ಹಾಕುತ್ತಿದ್ದಾರೆ ಎನ್ನುವುದಕ್ಕೆ ಅದರ ಇತ್ತೀಚಿನ ಲಾಭದ ವರದಿಯೇ ಉತ್ತರ. ಕಳೆದ ವರ್ಷ ₹42 ಕೋಟಿ ಇದ್ದ ಆದಾಯ, ಈ ಬಾರಿ ₹48 ಕೋಟಿಗೆ ಏರಿದೆ. ಕಂಪನಿಯ ನಿವ್ವಳ ಲಾಭ ಶೇ. 78ರಷ್ಟು ಹೆಚ್ಚಾಗಿದ್ದು, ₹10 ಕೋಟಿಗೆ ತಲುಪಿದೆ. ಅಂದರೆ ಕಂಪನಿಯು ಬಹಳ ವೇಗವಾಗಿ ಬೆಳೆಯುತ್ತಿದೆ. ಈ ಕೆಮಿಕಲ್ ಸ್ಟಾಕ್ ಕಳೆದ ಒಂದು ವಾರದಲ್ಲಿ ಶೇ. 18ರಷ್ಟು ಮತ್ತು ಒಂದು ತಿಂಗಳಲ್ಲಿ ಶೇ. 27ರಷ್ಟು ಏರಿಕೆ ಕಂಡಿದೆ. ಇನ್ನು ದೀರ್ಘಕಾಲದ ಹೂಡಿಕೆದಾರರ ಬಗ್ಗೆ ಹೇಳುವುದಾದರೆ, ಕಳೆದ 5 ವರ್ಷಗಳಲ್ಲಿ ಈ ಷೇರು ಶೇ. 324 ರಷ್ಟು ಲಾಭ ನೀಡಿದೆ. ಅಂದರೆ 5 ವರ್ಷದ ಹಿಂದೆ ಹೂಡಿಕೆ ಮಾಡಿದ ಹಣ ಈಗ ಮೂರು ಪಟ್ಟಿಗೂ ಅಧಿಕವಾಗಿದೆ!&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/narayan-murthy-family-office-lic-and-morgan-stanley-buy-stakes-in-foseco-india-gkn/articleshow-y9fk4m7"/>
        </item>
        <item>
            <title><![CDATA[ನಾಳೆಯಿಂದ ಬದಲಾಗಲಿವೆ ಐದು ನಿಯಮಗಳು.. ಜೇಬಿಗೆ ಕತ್ತರಿ ಗ್ಯಾರಂಟಿ.. ಇಂದೇ ಈ ಕೆಲಸ ಮುಗಿಸಿ!]]></title>
            <link>https://kannada.asianetnews.com/money/new-rules-from-september-1-important-deadline-for-itr-lpg-kyc-and-changes-in-cylinder-prices-gkn/articleshow-ywueoc8</link>
            <guid isPermaLink="true">https://kannada.asianetnews.com/money/new-rules-from-september-1-important-deadline-for-itr-lpg-kyc-and-changes-in-cylinder-prices-gkn/articleshow-ywueoc8</guid>
            <pubDate>Mon, 31 Aug 2026 07:54:26 +0530</pubDate>
            <description><![CDATA[&lt;p&gt;ಸೆಪ್ಟೆಂಬರ್ 1ರಿಂದ ಆದಾಯ ತೆರಿಗೆ ದಂಡ, ಗ್ಯಾಸ್ ಕೆವೈಸಿ ಮತ್ತು ಸಿಲಿಂಡರ್ ಬೆಲೆಗಳಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಆಗಸ್ಟ್ 31ರೊಳಗೆ ಟ್ಯಾಕ್ಸ್ ಸಲ್ಲಿಕೆ ಮತ್ತು ಆಧಾರ್ ಕೆವೈಸಿ ಮುಗಿಸಿಕೊಳ್ಳದಿದ್ದರೆ ನೀವು ದಂಡ ತೆರಬೇಕಾಗಬಹುದು ಅಥವಾ ಸೇವೆಯಲ್ಲಿ ಅಡಚಣೆ ಉಂಟಾಗಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m19qv3mw1kgd3b066992dgbb,imgname-september-1-1788107132572.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರತಿ ತಿಂಗಳ ಆರಂಭದಲ್ಲಿ ಕೆಲವು ಹೊಸ ನಿಯಮಗಳು ಜಾರಿಗೆ ಬರುತ್ತವೆ. ಹಾಗೆಯೇ ಸೆಪ್ಟೆಂಬರ್ 1ರಿಂದ ಕೂಡ ನಿಮ್ಮ ಹಣಕಾಸು ವ್ಯವಹಾರ, ಗ್ಯಾಸ್ ಸಿಲಿಂಡರ್ ಬೆಲೆ ಮತ್ತು ಬ್ಯಾಂಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ನೀವು ಹಣ ಕಳೆದುಕೊಳ್ಳಬಾರದು ಎಂದರೆ ಇಂದೇ (ಆಗಸ್ಟ್ 31) ಈ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳ್ಳೆಯದು.&lt;/p&gt;&lt;h2&gt;&lt;strong&gt;1. ಆದಾಯ ತೆರಿಗೆ ಸಲ್ಲಿಕೆಗೆ (ITR) ಕೊನೆಯ ಅವಕಾಶ&lt;/strong&gt;&lt;/h2&gt;&lt;p&gt;ನೀವು ಉದ್ಯಮಿಯಾಗಿದ್ದು, ನಿಮ್ಮ ಲೆಕ್ಕಪರಿಶೋಧನೆ (Audit) ಅಗತ್ಯವಿಲ್ಲದಿದ್ದರೆ, ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. ಒಂದು ವೇಳೆ ನೀವು ಇಂದೇ ಇದನ್ನು ಸಲ್ಲಿಸದಿದ್ದರೆ, ಸೆಪ್ಟೆಂಬರ್ 1ರಿಂದ ನೀವು ದಂಡ ತೆರಬೇಕಾಗುತ್ತದೆ. 5 ಲಕ್ಷಕ್ಕಿಂತ ಕಡಿಮೆ ಆದಾಯವಿದ್ದರೆ ₹1,000 ಮತ್ತು ಅದಕ್ಕಿಂತ ಹೆಚ್ಚಿದ್ದರೆ ₹5,000 ವರೆಗೆ ದಂಡ ಬೀಳಬಹುದು.&lt;/p&gt;&lt;h2&gt;&lt;strong&gt;2. ಗ್ಯಾಸ್ ಸಿಲಿಂಡರ್ ಕೆವೈಸಿ (e-KYC) ಮರೆಯಬೇಡಿ&lt;/strong&gt;&lt;/h2&gt;&lt;p&gt;ಗ್ಯಾಸ್ ಸಿಲಿಂಡರ್ ಗ್ರಾಹಕರು ಆಧಾರ್ ಮೂಲಕ ಬಯೋಮೆಟ್ರಿಕ್ ಕೆವೈಸಿ ಮಾಡಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ನೀವು ಇದನ್ನು ಮಾಡದಿದ್ದರೆ ಭವಿಷ್ಯದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಅಥವಾ ಸಬ್ಸಿಡಿ ಪಡೆಯಲು ತೊಂದರೆಯಾಗಬಹುದು. ಕೂಡಲೇ ನಿಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಈ ಕೆಲಸ ಮುಗಿಸಿ.&lt;/p&gt;&lt;h2&gt;&lt;strong&gt;3. ಸಿಲಿಂಡರ್ ಬೆಲೆ ಬದಲಾವಣೆ&lt;/strong&gt;&lt;/h2&gt;&lt;p&gt;ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸುತ್ತವೆ. ಸೆಪ್ಟೆಂಬರ್ 1ರಂದು ಕೂಡ ಬೆಲೆ ಏರಿಕೆಯಾಗುತ್ತದೆಯೇ ಅಥವಾ ಇಳಿಕೆಯಾಗುತ್ತದೆಯೇ ಎಂಬುದು ತಿಳಿಯಲಿದೆ. ಇದರ ಜೊತೆಗೆ ವಿಮಾನ ಇಂಧನ (ATF) ಬೆಲೆಯೂ ಬದಲಾಗಲಿದ್ದು, ಇದರಿಂದ ವಿಮಾನ ಟಿಕೆಟ್ ದರಗಳ ಮೇಲೆ ಪರಿಣಾಮ ಬೀರಬಹುದು.&lt;/p&gt;&lt;h2&gt;&lt;strong&gt;4. ಬ್ಯಾಂಕಿಂಗ್ ಮತ್ತು ಎಟಿಎಂ ಶುಲ್ಕ&lt;/strong&gt;&lt;/h2&gt;&lt;p&gt;ಸೆಪ್ಟೆಂಬರ್ 1ರಿಂದ ಕೆಲವು ಬ್ಯಾಂಕುಗಳು ತಮ್ಮ ಸರ್ವಿಸ್ ಚಾರ್ಜ್ ಅಥವಾ ಎಟಿಎಂನಿಂದ ಹಣ ತೆಗೆಯುವ ಶುಲ್ಕಗಳನ್ನು ಬದಲಿಸಬಹುದು. ಹೀಗಾಗಿ ನಿಮ್ಮ ಬ್ಯಾಂಕ್ ಯಾವುದೇ ಹೊಸ ನಿಯಮ ಜಾರಿಗೆ ತಂದಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.&lt;/p&gt;&lt;h2&gt;&lt;strong&gt;5. ಎಫ್&zwnj;ಡಿ (FD) ನಿಯಮಗಳಲ್ಲಿ ಬದಲಾವಣೆ&lt;/strong&gt;&lt;/h2&gt;&lt;p&gt;ಬ್ಯಾಂಕ್&zwnj;ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡುವವರಿಗೆ ಒಂದು ಸಣ್ಣ ಮಾಹಿತಿ. ಆರ್&zwnj;ಬಿಐ (RBI) ಹೊಸ ನಿಯಮದ ಪ್ರಕಾರ ಅಕ್ಟೋಬರ್ 1ರಿಂದ 3 ಕೋಟಿಗಿಂತ ಹೆಚ್ಚಿನ ಡೆಪಾಸಿಟ್&zwnj;ಗಳಿಗೆ ಹೊಸ ಬಡ್ಡಿ ದರ ಜಾರಿಯಾಗಲಿದೆ. ಆದರೆ ಇದು ಕೇವಲ ದೊಡ್ಡ ಹೂಡಿಕೆದಾರರಿಗೆ ಮಾತ್ರ ಅನ್ವಯ, ಸಾಮಾನ್ಯ ಜನರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/new-rules-from-september-1-important-deadline-for-itr-lpg-kyc-and-changes-in-cylinder-prices-gkn/articleshow-ywueoc8"/>
        </item>
    </channel>
</rss>
