<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 28 Mar 2026 16:55:56 +0530</lastBuildDate>
        <atom:link href="https://kannada.asianetnews.com/rss/news-money" rel="self" type="application/rss+xml"/>
        <item>
            <title><![CDATA[Home Loan: 50 ಲಕ್ಷದ ಗೃಹಸಾಲ ಬೇಗ ತೀರಿಸಿ, 30 ಲಕ್ಷ ಉಳಿಸುವುದು ಹೇಗೆ? ಇಲ್ಲಿದೆ ಸೂಪರ್ ಐಡಿಯಾ!]]></title>
            <link>https://kannada.asianetnews.com/gallery/business/smart-ways-to-repay-your-home-loan-early-using-mutual-funds-0cmvxoz</link>
            <guid isPermaLink="true">https://kannada.asianetnews.com/gallery/business/smart-ways-to-repay-your-home-loan-early-using-mutual-funds-0cmvxoz</guid>
            <pubDate>Tue, 10 Mar 2026 17:58:00 +0530</pubDate>
            <description><![CDATA[&lt;p&gt;How to pay off home loan early with mutual funds ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆದರೆ ಹೋಮ್ ಲೋನ್ ಭಾರವಿಲ್ಲದೆ, ಕಡಿಮೆ ಸಮಯದಲ್ಲಿ ಸಾಲ ತೀರಿಸುವುದು ಹೇಗೆ? ಮ್ಯೂಚುವಲ್ ಫಂಡ್ ಬಳಸಿ ಲಕ್ಷಾಂತರ ರೂಪಾಯಿ ಬಡ್ಡಿ ಉಳಿಸುವ ಉಪಾಯ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgcqzc41d612vk1ygk9ygvtr,imgname-home-loan-1769954324609.jpg" type="image/jpeg" height="390" width="690"/>
            <content:encoded><![CDATA[&lt;p&gt;How to pay off home loan early with mutual funds ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆದರೆ ಹೋಮ್ ಲೋನ್ ಭಾರವಿಲ್ಲದೆ, ಕಡಿಮೆ ಸಮಯದಲ್ಲಿ ಸಾಲ ತೀರಿಸುವುದು ಹೇಗೆ? ಮ್ಯೂಚುವಲ್ ಫಂಡ್ ಬಳಸಿ ಲಕ್ಷಾಂತರ ರೂಪಾಯಿ ಬಡ್ಡಿ ಉಳಿಸುವ ಉಪಾಯ ಇಲ್ಲಿದೆ.&lt;/p&gt;&lt;img&gt;ಸ್ವಂತ ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಹೆಚ್ಚಿನವರು 15ರಿಂದ 20 ವರ್ಷಗಳ ಕಾಲ ಇಎಂಐ ಕಟ್ಟುತ್ತಾರೆ. ಆದರೆ, ಸರಿಯಾದ ಆರ್ಥಿಕ ಯೋಜನೆ ರೂಪಿಸಿದರೆ, ಹೋಮ್ ಲೋನ್&zwnj; ಬೇಗ ತೀರಿಸಿ ಹೆಚ್ಚುವರಿ ಲಾಭವನ್ನೂ ಗಳಿಸಬಹುದು ಎನ್ನುತ್ತಾರೆ ತಜ್ಞರು.&lt;img&gt;ಸಾಲ ತೆಗೆದುಕೊಳ್ಳುವ ಮುನ್ನ ನಿಮ್ಮ ಉದ್ಯೋಗ ಭದ್ರತೆ ಬಗ್ಗೆ ಯೋಚಿಸುವುದು ಮುಖ್ಯ. ಯಾವುದೇ ಕ್ಷಣದಲ್ಲಿ ಉದ್ಯೋಗ ಹೋಗುವ ಸಾಧ್ಯತೆ ಇರುವುದರಿಂದ, ತುರ್ತು ನಿಧಿ ಅಥವಾ ಮ್ಯೂಚುವಲ್ ಫಂಡ್ ಪೋರ್ಟ್&zwnj;ಫೋಲಿಯೋ ಸಿದ್ಧಪಡಿಸಿಕೊಳ್ಳುವುದು ಉತ್ತಮ. ಉದಾಹರಣೆಗೆ, 70 ಲಕ್ಷದ ಮನೆಗೆ 1 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್ ಇದ್ದರೆ, ಉದ್ಯೋಗ ಹೋದರೂ ಚಿಂತೆ ಇರಲ್ಲ.&lt;img&gt;ಕಡಿಮೆ ಬಡ್ಡಿ ಎಂದು ಹಲವರು 15 ವರ್ಷಗಳ ಸಾಲ ಪಡೆಯುತ್ತಾರೆ. ಆದರೆ, 20-25 ವರ್ಷಗಳ ದೀರ್ಘಾವಧಿ ಸಾಲ ಪಡೆಯುವುದು ಉತ್ತಮ. ಯಾಕೆಂದರೆ, ಹೋಮ್ ಲೋನ್ ಬಡ್ಡಿ ದರ 8.5% ರಿಂದ 9% ಇದ್ದು, ಇದು ಬೇರೆಲ್ಲಾ ಸಾಲಗಳಿಗಿಂತ ಕಡಿಮೆ. ಕಡಿಮೆ ಮತ್ತು ಹೆಚ್ಚಿನ ಅವಧಿಯ ಇಎಂಐ ನಡುವಿನ ವ್ಯತ್ಯಾಸದ ಹಣವನ್ನು ಮ್ಯೂಚುವಲ್ ಫಂಡ್&zwnj;ನಲ್ಲಿ ಹೂಡಿಕೆ ಮಾಡಬೇಕು.&lt;img&gt;ಉದಾಹರಣೆಗೆ, 50 ಲಕ್ಷ ರೂ. ಸಾಲಕ್ಕೆ 15 ವರ್ಷದ ಇಎಂಐ (₹49,000) ಮತ್ತು 20 ವರ್ಷದ ಇಎಂಐ (₹43,000) ನಡುವೆ ₹5,800 ವ್ಯತ್ಯಾಸವಿದೆ. ಈ ಹಣವನ್ನು 12% ರಿಟರ್ನ್ಸ್ ನೀಡುವ ನಿಫ್ಟಿ ಇಂಡೆಕ್ಸ್ ಫಂಡ್&zwnj;ನಲ್ಲಿ 15 ವರ್ಷ ಹೂಡಿದರೆ, ನಿಮಗೆ ಸುಮಾರು 32 ಲಕ್ಷ ರೂ. ಸಿಗುತ್ತದೆ. ಆಗ ಉಳಿದ ಸಾಲ ತೀರಿಸಿದರೂ ನಿಮ್ಮ ಬಳಿ 11 ಲಕ್ಷ ರೂ. ಉಳಿಯುತ್ತದೆ.&lt;img&gt;ಕೈಯಲ್ಲಿ ಹೆಚ್ಚುವರಿ ಹಣವಿದ್ದಾಗ ಸಾಲವನ್ನು ಮುಂಚಿತವಾಗಿ ತೀರಿಸುವ ಬದಲು, ಅದನ್ನು ಮ್ಯೂಚುವಲ್ ಫಂಡ್&zwnj;ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಆದಾಯ ಬರುತ್ತದೆ. ನಿವೃತ್ತಿಗಾಗಿ ಇಟ್ಟ ಹಣವನ್ನು ಭಾವನಾತ್ಮಕವಾಗಿ ಮನೆ ಖರೀದಿಸಲು ಬಳಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.]]></content:encoded>
            <category>news-money</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/smart-ways-to-repay-your-home-loan-early-using-mutual-funds-0cmvxoz"/>
        </item>
        <item>
            <title><![CDATA[8th Pay Commission: ವೇತನ ಹೆಚ್ಚಳಕ್ಕಾಗಿ ಕಾಯುತ್ತಿರುವ ಉದ್ಯೋಗಿಗಳಿಗೆ ಶುಭ ಸುದ್ದಿ]]></title>
            <link>https://kannada.asianetnews.com/gallery/india-news/8th-cpc-website-live-salary-hike-hope-rises-for-govt-employees-pensioners-4ehlvzf</link>
            <guid isPermaLink="true">https://kannada.asianetnews.com/gallery/india-news/8th-cpc-website-live-salary-hike-hope-rises-for-govt-employees-pensioners-4ehlvzf</guid>
            <pubDate>Sun, 08 Feb 2026 13:47:10 +0530</pubDate>
            <description><![CDATA[&lt;p&gt;&lt;strong&gt;8th Pay Commission: &lt;/strong&gt;MyGov ಪೋರ್ಟಲ್&zwnj;ನ ಬೆಂಬಲದೊಂದಿಗೆ ಪಾರದರ್ಶಕ ಡಿಜಿಟಲ್ ಪ್ರಕ್ರಿಯೆಯ ಮೂಲಕ, ಆಯೋಗವು ವೇತನ ರಚನೆಯಲ್ಲಿನ ಬದಲಾವಣೆಗಳ ಕುರಿತು ಸಾಮಾನ್ಯ ನೌಕರರಿಂದ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kekr4j4a7a292ek75g9b8yyz,imgname-8th-pay-commission-da-hike-1768041891978.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;8th Pay Commission: &lt;/strong&gt;MyGov ಪೋರ್ಟಲ್&zwnj;ನ ಬೆಂಬಲದೊಂದಿಗೆ ಪಾರದರ್ಶಕ ಡಿಜಿಟಲ್ ಪ್ರಕ್ರಿಯೆಯ ಮೂಲಕ, ಆಯೋಗವು ವೇತನ ರಚನೆಯಲ್ಲಿನ ಬದಲಾವಣೆಗಳ ಕುರಿತು ಸಾಮಾನ್ಯ ನೌಕರರಿಂದ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದೆ.&amp;nbsp;&lt;/p&gt;&lt;img&gt;&lt;p&gt;ದೇಶಾದ್ಯಂತ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ದೀರ್ಘ ಕಾಯುವಿಕೆ ಕೊನೆಗೊಳ್ಳಲಿದೆ. 8 ನೇ ಕೇಂದ್ರ ವೇತನ ಆಯೋಗದ ಅಧಿಕೃತ ವೆಬ್&zwnj;ಸೈಟ್ ಅನ್ನು ಪ್ರಾರಂಭಿಸುವ ಮೂಲಕ ಸರ್ಕಾರವು ವೇತನ ರಚನೆಯಲ್ಲಿ ಬದಲಾವಣೆಗಳು ಮತ್ತು ಹೆಚ್ಚಳದ ಕಡೆಗೆ ಒಂದು ದೊಡ್ಡ ಹೆಜ್ಜೆಯನ್ನು ಇಟ್ಟಿದೆ.&amp;nbsp;&lt;/p&gt;&lt;img&gt;&lt;p&gt;ವೆಬ್&zwnj;ಸೈಟ್ ಅನ್ನು ಪ್ರಾರಂಭಿಸುವುದರ ಜೊತೆಗೆ, ಆಯೋಗವು ನೌಕರರು ಮತ್ತು ಪಾಲುದಾರರನ್ನು ತಮ್ಮ ವೇತನ ರಚನೆಯಲ್ಲಿ ಯಾವ ಬದಲಾವಣೆಗಳನ್ನು ನೋಡಲು ಬಯಸುತ್ತಾರೆ ಎಂದು ನೇರವಾಗಿ ಕೇಳುವ ಮೂಲಕ ಪಾರದರ್ಶಕತೆಯನ್ನು ಪ್ರದರ್ಶಿಸಿದೆ.&lt;/p&gt;&lt;img&gt;&lt;p&gt;ವೇತನ ಆಯೋಗವು ತನ್ನ ಕೆಲಸದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ನಿರ್ಧರಿಸಿದೆ. ಸಚಿವಾಲಯಗಳು, ಇಲಾಖೆಗಳು, ಉದ್ಯೋಗ ಸಂಸ್ಥೆಗಳು ಹಾಗೂ ಸಾಮಾನ್ಯ ಉದ್ಯೋಗಿಗಳು ಮತ್ತು ಪಿಂಚಣಿದಾರರಿಂದ ಆಲೋಚನೆಗಳು, ಅಭಿಪ್ರಾಯಗಳು ಮತ್ತು ಇನ್&zwnj;ಪುಟ್&zwnj;ಗಳನ್ನು ಆಹ್ವಾನಿಸುತ್ತಿರುವುದಾಗಿ ಆಯೋಗವು ಹೇಳಿಕೆಯನ್ನು ಸ್ಪಷ್ಟಪಡಿಸಿದೆ.&lt;/p&gt;&lt;img&gt;&lt;p&gt;ಇದನ್ನು ಸಾಧಿಸಲು, ಆಯೋಗವು MyGov ಪೋರ್ಟಲ್&zwnj;ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದರೊಂದಿಗೆ, ಸಾಮಾನ್ಯ ಉದ್ಯೋಗಿಗಳು ಈಗ ಆಯೋಗಕ್ಕೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು.&lt;/p&gt;&lt;img&gt;&lt;p&gt;ವೇತನ ನಿರ್ಣಯ ಪ್ರಕ್ರಿಯೆಯಿಂದ ನೇರವಾಗಿ ಪರಿಣಾಮ ಬೀರುವವರ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಆಯೋಗವು ನಂಬುತ್ತದೆ. ನೀವು ಸೇವೆ ಸಲ್ಲಿಸುತ್ತಿರುವ ಉದ್ಯೋಗಿಯಾಗಿರಲಿ, ನಿವೃತ್ತ ಪಿಂಚಣಿದಾರರಾಗಿರಲಿ ಅಥವಾ ಯೂನಿಯನ್ ಸದಸ್ಯರಾಗಿರಲಿ, ನೀವು ಅಧಿಕೃತ ವೆಬ್&zwnj;ಸೈಟ್ (https://8cpc.gov.in/) ಮೂಲಕ ಅಥವಾ ನೇರವಾಗಿ MyGov ಪೋರ್ಟಲ್&zwnj;ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ನೋಂದಾಯಿಸಬಹುದು.&lt;/p&gt;&lt;img&gt;&lt;p&gt;8ನೇ ವೇತನ ಆಯೋಗವು ಸಲಹೆಗಳನ್ನು ಕೋರಲು MyGov ಪೋರ್ಟಲ್&zwnj;ನಲ್ಲಿ 18 ಪ್ರಶ್ನೆಗಳ ಆನ್&zwnj;ಲೈನ್ ಪ್ರಶ್ನಾವಳಿಯನ್ನು ಪೋಸ್ಟ್ ಮಾಡಿದೆ. ಈ ಪ್ರಶ್ನೆಗಳು ವೇತನ ರಚನೆ, ತುಟ್ಟಿ ಭತ್ಯೆ, ಬಡ್ತಿ ವ್ಯವಸ್ಥೆ, ಕೆಲಸದ ಹೊರೆ, ಪಿಂಚಣಿ ವ್ಯವಸ್ಥೆಗಳು ಮತ್ತು ಭವಿಷ್ಯದ ಅಗತ್ಯಗಳಂತಹ ವಿಷಯಗಳ ಕುರಿತು ಅಭಿಪ್ರಾಯಗಳನ್ನು ಪಡೆಯುತ್ತಿವೆ. ಪ್ರತಿಕ್ರಿಯಿಸಿದವರ ಗುರುತನ್ನು ಗೌಪ್ಯವಾಗಿಡಲಾಗುವುದು ಮತ್ತು ಎಲ್ಲಾ ಸಲಹೆಗಳನ್ನು ಸಾಮೂಹಿಕವಾಗಿ ವಿಶ್ಲೇಷಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.&lt;/p&gt;&lt;img&gt;&lt;p&gt;ಸಲಹೆಗಳನ್ನು ಸಲ್ಲಿಸಲು ಮಾರ್ಚ್ 16, 2026 ಕೊನೆಯ ದಿನಾಂಕ ಎಂದು ಆಯೋಗ ತಿಳಿಸಿದೆ. ಎಲ್ಲಾ ಇನ್&zwnj;ಪುಟ್&zwnj;ಗಳನ್ನು MyGov ಪೋರ್ಟಲ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಇಮೇಲ್, ಕಾಗದ ಅಥವಾ ಯಾವುದೇ ಇತರ ವಿಧಾನಗಳ ಮೂಲಕ ಸಲ್ಲಿಸಲಾದ ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ. ಇದು ಸಂಪೂರ್ಣ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಪಾರದರ್ಶಕಗೊಳಿಸುವ ಪ್ರಯತ್ನವಾಗಿದೆ.&lt;/p&gt;&lt;img&gt;&lt;p&gt;7ನೇ ವೇತನ ಆಯೋಗದ ಅವಧಿ ಡಿಸೆಂಬರ್ 31, 2025 ರಂದು ಕೊನೆಗೊಳ್ಳುತ್ತದೆ. ನಂತರ 8ನೇ ವೇತನ ಆಯೋಗವು ಮುಂದಿನ ವರ್ಷಗಳವರೆಗೆ ಕೇಂದ್ರ ಸರ್ಕಾರಕ್ಕೆ ಹೊಸ ಶಿಫಾರಸುಗಳನ್ನು ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಇದರಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ, ಡಿಎ ಬದಲಾವಣೆಗಳು, ಪಿಂಚಣಿಗಳು ಮತ್ತು ಇತರ ಪ್ರಯೋಜನಗಳ ಕುರಿತು ಸಲಹೆಗಳು ಸೇರಿವೆ. ಇದು ಲಕ್ಷಾಂತರ ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಆರ್ಥಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.&lt;/p&gt;&lt;img&gt;&lt;p&gt;ಈ ಬಾರಿ, ವೇತನ ಆಯೋಗವು ಕೇವಲ ದತ್ತಾಂಶ ಮತ್ತು ವರದಿಗಳ ಮೇಲೆ ಅವಲಂಬಿತವಾಗಲು ಬಯಸುವುದಿಲ್ಲ. ಅದರ ಶಿಫಾರಸುಗಳಿಂದ ನೇರವಾಗಿ ಪರಿಣಾಮ ಬೀರುವವರ ಮಾತುಗಳನ್ನು ಕೇಳುವುದು ಆಯೋಗದ ಗುರಿಯಾಗಿದೆ. ಆದ್ದರಿಂದ, ನೌಕರರಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡಲಾಗಿದೆ. ಇದು ಸಂಬಳ, ಭತ್ಯೆಗಳು ಮತ್ತು ಪಿಂಚಣಿಗಳ ಬಗ್ಗೆ ಹೆಚ್ಚು ಸಮತೋಲಿತ ನಿರ್ಧಾರಗಳಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.&lt;/p&gt;]]></content:encoded>
            <category>news-money</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/india-news/8th-cpc-website-live-salary-hike-hope-rises-for-govt-employees-pensioners-4ehlvzf"/>
        </item>
        <item>
            <title><![CDATA[ಬ್ಯಾಂಕ್ ಕೆಲಸ ಇದೆಯಾ? ಹಾಗಾದ್ರೆ ತಕ್ಷಣ ಈ ಸ್ಟೋರಿ ಓದಿ! ಮಾರ್ಚ್- 2026ರಲ್ಲಿ ಬ್ಯಾಂಕ್‌ಗಳಿಗೆ ಭರ್ಜರಿ ರಜೆ ಇದೆ, ಹುಶಾರು!]]></title>
            <link>https://kannada.asianetnews.com/business/massive-bank-holidays-in-march-2026-to-plan-perfectly-for-your-banking-and-money-business/articleshow-87mcm2n</link>
            <guid isPermaLink="true">https://kannada.asianetnews.com/business/massive-bank-holidays-in-march-2026-to-plan-perfectly-for-your-banking-and-money-business/articleshow-87mcm2n</guid>
            <pubDate>Thu, 05 Mar 2026 12:36:15 +0530</pubDate>
            <description><![CDATA[&lt;p&gt;ಮಾರ್ಚ್ ತಿಂಗಳ ಬ್ಯಾಂಕ್ ರಜೆಯ ಪಟ್ಟಿ ನೋಡಿಕೊಳ್ಳಿ.. ಏಪ್ರಿಲ್&zwnj;ನಲ್ಲೂ ಮುಂದುವರಿಯಲಿದೆ ರಜೆಯ ಅಬ್ಬರ!ಏಪ್ರಿಲ್ 1ರಂದು ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಕಾರಣ ಗ್ರಾಹಕರಿಗೆ ಸೇವೆಯಿರುವುದಿಲ್ಲ. ಮುಂದಿನ ತಿಂಗಳ ಪಟ್ಟಿ ನಂತರ ನೋಡಬಹುದು, ಸದ್ಯಕ್ಕೆ ಈ ತಿಂಗಳ ಹಣಕಾಸು ವ್ಯವಹಾರ ಪ್ಲಾನ್ ಮಾಡಿಕೊಳ್ಳಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjyd0dsfpzds8zx37g41np5x,imgname-bank-money--1--1772694288175.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಿಮ್ಮ ಜೇಬಿಗೆ ಸಂಬಂಧಿಸಿದ ಒಂದು ಬಿಗ್ ನ್ಯೂಸ್ ಇಲ್ಲಿದೆ!&amp;nbsp;&lt;/strong&gt;&lt;/p&gt;&lt;p&gt;ಬೆಂಗಳೂರು: ಮಾರ್ಚ್ ಬಂತೆಂದರೆ ಸಾಕು, ಎಲ್ಲೆಡೆ ಹಣಕಾಸಿನ ಲೆಕ್ಕಾಚಾರದದ್ದೇ ಸದ್ದು. ಆಫೀಸ್&zwnj;ನಲ್ಲಿ ಟೆನ್ಶನ್, ಮನೆಯಲ್ಲಿ ಖರ್ಚಿನ ಪಟ್ಟಿ - ಇದರ ನಡುವೆ ಬ್ಯಾಂಕ್ ಕೆಲಸಗಳಿಗಾಗಿ ನೀವು ಅಲೆದಾಡಲೇಬೇಕು. ಆದರೆ, 2026ರ ಮಾರ್ಚ್ ತಿಂಗಳ ಕ್ಯಾಲೆಂಡರ್ ನೋಡಿದರೆ ನೀವು ಈಗಲೇ ಪ್ಲಾನ್ ಮಾಡಿಕೊಳ್ಳುವುದು ಉತ್ತಮ. ಯಾಕಂದ್ರೆ ಈ ಬಾರಿ ಮಾರ್ಚ್&zwnj;ನಲ್ಲಿ ಬ್ಯಾಂಕ್&zwnj;ಗಳಿಗೆ ಬರೋಬ್ಬರಿ 10 ದಿನಗಳ ಕಾಲ ರಜೆ ಘೋಷಣೆಯಾಗಿದೆ!&lt;/p&gt;&lt;p&gt;ಹೌದು, ರೈತರೇ ಆಗಲಿ, ಉದ್ಯಮಿಗಳೇ ಆಗಲಿ ಅಥವಾ ಸಾಮಾನ್ಯ ಗ್ರಾಹಕರೇ ಆಗಲಿ, ನೀವು ಬ್ಯಾಂಕ್&zwnj;ಗೆ ಹೋಗುವ ಮುನ್ನ ಈ ಲಿಸ್ಟ್ ಒಮ್ಮೆ ಚೆಕ್ ಮಾಡಿಕೊಳ್ಳಿ. ಇಲ್ಲದಿದ್ದರೆ ಬ್ಯಾಂಕ್ ಬಾಗಿಲು ನೋಡಿ ವಾಪಸ್ ಬರಬೇಕಾದೀತು. ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಸೇರಿದಂತೆ ರಾಜ್ಯದ ಪ್ರಮುಖ ಬ್ಯಾಂಕ್&zwnj;ಗಳ ರಜಾ ಪಟ್ಟಿ ಈಗ ಹೊರಬಿದ್ದಿದೆ.&lt;/p&gt;&lt;h2&gt;ಮಾರ್ಚ್ 2026ರ ರಜೆಗಳ ಪಟ್ಟಿ ಇಲ್ಲಿದೆ ನೋಡಿ:&lt;/h2&gt;&lt;p&gt;ಮಾರ್ಚ್ ತಿಂಗಳು ಆರಂಭವಾಗುವುದೇ ರಜೆಯ ಸಂಭ್ರಮದೊಂದಿಗೆ!&lt;/p&gt;&lt;p&gt;ಮಾರ್ಚ್ 1: ಭಾನುವಾರ (ವಾರದ ರಜೆ)&lt;/p&gt;&lt;p&gt;ಮಾರ್ಚ್ 8: ಭಾನುವಾರ (ವಾರದ ರಜೆ)&lt;/p&gt;&lt;p&gt;ಮಾರ್ಚ್ 14: ಎರಡನೇ ಶನಿವಾರ (ಬ್ಯಾಂಕ್ ಹಾಲಿಡೇ)&lt;/p&gt;&lt;p&gt;ಮಾರ್ಚ್ 15: ಭಾನುವಾರ (ವಾರದ ರಜೆ)&lt;/p&gt;&lt;p&gt;ಮಾರ್ಚ್ 19: ಯುಗಾದಿ ಹಬ್ಬದ ಧಮಾಕಾ! (ಹೊಸ ವರ್ಷದ ಸಡಗರಕ್ಕೆ ಬ್ಯಾಂಕ್ ರಜೆ)&lt;/p&gt;&lt;p&gt;ಮಾರ್ಚ್ 21: ಈದ್ ಉಲ್ ಫಿತ್ (ಸೌಹಾರ್ದತೆಯ ಹಬ್ಬಕ್ಕೆ ರಜೆ)&lt;/p&gt;&lt;p&gt;ಮಾರ್ಚ್ 22: ಭಾನುವಾರ (ವಾರದ ರಜೆ)&lt;/p&gt;&lt;p&gt;ಮಾರ್ಚ್ 28: ನಾಲ್ಕನೇ ಶನಿವಾರ (ಬ್ಯಾಂಕ್ ಹಾಲಿಡೇ)&lt;/p&gt;&lt;p&gt;ಮಾರ್ಚ್ 29: ಭಾನುವಾರ (ವಾರದ ರಜೆ)&lt;/p&gt;&lt;p&gt;ಮಾರ್ಚ್ 31: ಮಹಾವೀರ ಜಯಂತಿ (ತಿಂಗಳ ಕೊನೆಯ ದಿನವೂ ರಜೆ!)&lt;/p&gt;&lt;p&gt;ಏಪ್ರಿಲ್&zwnj;ನಲ್ಲೂ ಮುಂದುವರಿಯಲಿದೆ ರಜೆಯ ಅಬ್ಬರ!&lt;/p&gt;&lt;p&gt;ಕೇವಲ ಮಾರ್ಚ್ ಅಷ್ಟೇ ಅಲ್ಲ, ಏಪ್ರಿಲ್ ತಿಂಗಳಲ್ಲೂ ರಜೆಗಳ ಸುರಿಮಳೆಯೇ ಇದೆ. ಏಪ್ರಿಲ್ 1ರಂದು ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಕಾರಣ ಗ್ರಾಹಕರಿಗೆ ಸೇವೆಯಿರುವುದಿಲ್ಲ. ಇನ್ನು ಏಪ್ರಿಲ್ 3ಕ್ಕೆ ಗುಡ್ ಫ್ರೈಡೇ, ಏಪ್ರಿಲ್ 14ಕ್ಕೆ ಅಂಬೇಡ್ಕರ್ ಜಯಂತಿ ಹಾಗೂ ಏಪ್ರಿಲ್ 20ಕ್ಕೆ ಬಸವ ಜಯಂತಿಯ ರಜೆಗಳೂ ಇವೆ.&lt;/p&gt;&lt;h3&gt;ಟೆನ್ಶನ್ ಬೇಡ, ಡಿಜಿಟಲ್ ಲೋಕ ನಿಮ್ಮ ಜೊತೆಗಿದೆ!&lt;/h3&gt;&lt;p&gt;ಬ್ಯಾಂಕ್ ಬಾಗಿಲು ಹಾಕಿದೆ ಅಂತ ಚಿಂತೆ ಮಾಡಬೇಡಿ. ಇದು ಡಿಜಿಟಲ್ ಜಮಾನಾ! ನಿಮ್ಮ ಮೊಬೈಲ್&zwnj;ನಲ್ಲಿರೋ ಯುಪಿಐ (UPI), ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು 24 ಗಂಟೆಯೂ ಲಭ್ಯವಿರುತ್ತವೆ. ಹಣ ವರ್ಗಾವಣೆಗೆ ಯಾವುದೇ ಅಡ್ಡಿಯಿಲ್ಲ. ಆದರೆ, ಈ ಚೆಕ್ ಕ್ಲಿಯರೆನ್ಸ್, ಡಿಡಿ (DD) ಮಾಡಿಸುವುದು ಅಥವಾ ಲೋನ್ ಕೆಲಸಗಳಿದ್ದರೆ ಮಾತ್ರ ನೀವು ರಜೆ ಇಲ್ಲದ ದಿನಗಳನ್ನೇ ನೋಡಿ ಬ್ಯಾಂಕ್&zwnj;ಗೆ ಎಂಟ್ರಿ ಕೊಡಬೇಕು.&lt;/p&gt;&lt;p&gt;ಹಾಗಾಗಿ ವೀಕ್ಷಕರೇ, ಮಾರ್ಚ್ ತಿಂಗಳ &lsquo;ಕ್ಲೋಸಿಂಗ್&rsquo; ಟೆನ್ಶನ್ ನಡುವೆ ಈ ರಜೆಗಳ ಪಟ್ಟಿಯನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಆಪ್ತರಿಗೂ ಈ ಮಾಹಿತಿ ಶೇರ್ ಮಾಡಿ, ಅವರೂ ಅಲರ್ಟ್ ಆಗಿರಲಿ!&lt;/p&gt;]]></content:encoded>
            <category>news-money</category>
            <dc:creator>Shriram Bhat</dc:creator>
            <atom:link href="https://kannada.asianetnews.com/business/massive-bank-holidays-in-march-2026-to-plan-perfectly-for-your-banking-and-money-business/articleshow-87mcm2n"/>
        </item>
        <item>
            <title><![CDATA[Gold Silver Rate Today: ಬಂಗಾರದ ಬೆಲೆಯಲ್ಲಿ ದಾಖಲೆಯ ಕುಸಿತ; ಆಕಾಶದಿಂದ ಧರೆಗೆ ಉರುಳಿತು! ಇಂದಿನ ಬೆಲೆ ಎಷ್ಟು?]]></title>
            <link>https://kannada.asianetnews.com/gallery/business/gold-and-silver-rate-today-bangalore-india-report-list-8p7svsz</link>
            <guid isPermaLink="true">https://kannada.asianetnews.com/gallery/business/gold-and-silver-rate-today-bangalore-india-report-list-8p7svsz</guid>
            <pubDate>Sat, 07 Feb 2026 09:41:45 +0530</pubDate>
            <description><![CDATA[&lt;p&gt;ಚಿನ್ನದ ದರ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ. ಮಧ್ಯಮ ವರ್ಗಕ್ಕೆ ಚಿನ್ನ ಎನ್ನೋದು ಗಗನ ಕುಸುಮ ಆಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ತನ್ನ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgest9gqh9effqfwpvn8w8p8,imgname-gold-price-today-mumbai-1770023364119.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿನ್ನದ ದರ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ. ಮಧ್ಯಮ ವರ್ಗಕ್ಕೆ ಚಿನ್ನ ಎನ್ನೋದು ಗಗನ ಕುಸುಮ ಆಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ತನ್ನ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈ ರೀತಿ ನಿರ್ಧಾರವನ್ನು ಕೈಗೊಂಡ ಬಳಿಕ ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನ, ಬೆಳ್ಳಿಯ ದರದಲ್ಲಿ ತೀವ್ರ ಏರಿಳಿತ ಆಗಿದೆ.&lt;/p&gt;&lt;p&gt;ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿತ, ದೇಶೀಯ ಮಾರುಕಟ್ಟೆಯಲ್ಲಿನ ಎಚ್ಚರಿಕೆಯ ನಡೆಯಿಂದಾಗಿ ಈ ರೀತಿ ಬೆಲೆಗಳು ಆಗಾಗ ಬದಲಾಗುತ್ತಿವೆ.&lt;/p&gt;&lt;p&gt;ಬಂಗಾರದ ಬೆಲೆ (ಪ್ರತಿ 10 ಗ್ರಾಂ)&lt;/p&gt;&lt;p&gt;24 ಕ್ಯಾರೆಟ್ ಚಿನ್ನದ ಬೆಲೆ 1,53,700 ರೂ.&lt;/p&gt;&lt;p&gt;22 ಕ್ಯಾರೆಟ್ ಚಿನ್ನದ ಬೆಲೆ 1,40,890 ರೂ&lt;/p&gt;&lt;p&gt;18 ಕ್ಯಾರೆಟ್ ಚಿನ್ನದ ದರ 1,15,270 ರೂ.&lt;/p&gt;&lt;p&gt;&lt;strong&gt;ಬೆಳ್ಳಿಯ ಬೆಲೆ&lt;/strong&gt;&lt;/p&gt;&lt;p&gt;ಬೆಳ್ಳಿ ದರವು ಪ್ರತಿ 10 ಗ್ರಾಂಗೆ 2,749 ರೂ. ಕೆಜಿಗೆ 2,74,900 ರೂ&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು, ಮೈಸೂರು, ಮಂಗಳೂರು, ಮುಂಬೈ ಮತ್ತು ಹೈದರಾಬಾದ್&lt;/strong&gt;&lt;/p&gt;&lt;p&gt;24 ಕ್ಯಾರೆಟ್: 1,53,700 ರೂ.&lt;/p&gt;&lt;p&gt;22 ಕ್ಯಾರೆಟ್: 1,40,890 ರೂ.&lt;/p&gt;&lt;p&gt;18 ಕ್ಯಾರೆಟ್: 1,15,270 ರೂ.&lt;/p&gt;&lt;p&gt;ಚೆನ್ನೈ, ಕೊಯಮತ್ತೂರು ಮತ್ತು ಸೇಲಂ:&lt;/p&gt;&lt;p&gt;24 ಕ್ಯಾರೆಟ್: 1,55,450 ರೂ.&lt;/p&gt;&lt;p&gt;22 ಕ್ಯಾರೆಟ್: 1,42,490 ರೂ.&lt;/p&gt;&lt;p&gt;18 ಕ್ಯಾರೆಟ್: 1,21,990 ರೂ.&lt;/p&gt;&lt;p&gt;&lt;strong&gt;ದೆಹಲಿ, ಜೈಪುರ ಮತ್ತು ಲಕ್ನೋ&lt;/strong&gt;&lt;/p&gt;&lt;p&gt;24 ಕ್ಯಾರೆಟ್: 1,53,850 ರೂ.&lt;/p&gt;&lt;p&gt;22 ಕ್ಯಾರೆಟ್: 1,41,040 ರೂ.&lt;/p&gt;&lt;p&gt;18 ಕ್ಯಾರೆಟ್: 1,15,420 ರೂ.&lt;/p&gt;&lt;img&gt;&lt;p&gt;&lt;strong&gt;ಅಹಮದಾಬಾದ್, ಬೆಂಗಳೂರು, ದೆಹಲಿ, ಮುಂಬೈ&lt;/strong&gt;&lt;/p&gt;&lt;p&gt;ಪ್ರತಿ ಗ್ರಾಂಗೆ: 274.90 ರೂ.&lt;/p&gt;&lt;p&gt;ಪ್ರತಿ ಕೆಜಿಗೆ: 2,74,900 ರೂ.&lt;/p&gt;&lt;p&gt;ಚೆನ್ನೈ, ಹೈದರಾಬಾದ್, ಕೇರಳ&lt;/p&gt;&lt;p&gt;ಪ್ರತಿ ಗ್ರಾಂಗೆ: 279.90 ರೂ.&lt;/p&gt;&lt;p&gt;ಪ್ರತಿ ಕೆಜಿಗೆ: 2,79,900 ರೂ.&lt;/p&gt;&lt;p&gt;ನಿನ್ನೆ ಬಂಗಾರದ ರೇಟ್&zwnj; 1 ಗ್ರಾಂಗೆ 14825 ಇದ್ದರೆ, ಇಂದು 14265 ರೂಪಾಯಿ ಇದೆ. ಆ ನಿಟ್ಟಿನಲ್ಲಿ ಇಂದು ಕುಸಿತ ಕಂಡಿದೆ.&lt;/p&gt;&lt;img&gt;&lt;p&gt;ರಾಷ್ಟ್ರೀಯ ಮಾರುಕಟ್ಟೆಯ ಪ್ರವೃತ್ತಿಗಳು, ರೂಪಾಯಿ ಮೌಲ್ಯದ ಏರಿಳಿತಗಳ ಮೇಲೆ ಭಾರತದಲ್ಲಿ ಬಂಗಾರ, ಬೆಳ್ಳಿಯ ಬೆಲೆಗಳು ಅವಲಂಬಿತವಾಗಿವೆ. RBI ಬಡ್ಡಿದರಗಳನ್ನು ಹಾಗೆಯೇ ಇಟ್ಟ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಹಣದುಬ್ಬರದ ಟ್ರೆಂಡ್&zwnj;ಗಳು, ಭೌಗೋಳಿಕ ರಾಜಕೀಯ ಘಟನೆಗಳು ಈ ಬದಲಾವಣೆಯ ಮೇಲೆ ಪ್ರಭಾವ ಬೀರುತ್ತವೆ.&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/gold-and-silver-rate-today-bangalore-india-report-list-8p7svsz"/>
        </item>
        <item>
            <title><![CDATA[70 ವರ್ಷದ ಗೂಗಲ್‌ ಮಾಜಿ ಸಿಇಒಗೆ 27 ವರ್ಷದ ಮಾಡೆಲ್‌ ಪ್ರೇಯಸಿ!]]></title>
            <link>https://kannada.asianetnews.com/gallery/relationship/former-google-ceo-eric-schmidt-dating-27-year-old-model-gloria-sophie-burkandt-san-9vp91hh</link>
            <guid isPermaLink="true">https://kannada.asianetnews.com/gallery/relationship/former-google-ceo-eric-schmidt-dating-27-year-old-model-gloria-sophie-burkandt-san-9vp91hh</guid>
            <pubDate>Wed, 11 Feb 2026 18:33:47 +0530</pubDate>
            <description><![CDATA[&lt;p&gt;Former Google CEO Eric Schmidt Dating 27-Year-Old Model Gloria-Sophie? 70 ವರ್ಷದ ಎರಿಕ್ ಸ್ಮಿತ್, ಜರ್ಮನ್ ನಾಯಕ ಮಾರ್ಕಸ್ ಸೋಡರ್ ಅವರ ಪುತ್ರಿ 27 ವರ್ಷದ ಗ್ಲೋರಿಯಾ-ಸೋಫಿ ಬರ್ಕಂಡ್ಟ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಅವರ ರಿಲೇಷನ್&zwnj;ಷಿಪ್&zwnj; ಬಗ್ಗೆ ಭಾರೀ ಊಹಾಪೋಹ ಎದ್ದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kh6brpbd56wqfwfpjq27yv9e,imgname-eric-schmidt-and-gloria-sophie-burkandt-1770813938029.jpg" type="image/jpeg" height="390" width="690"/>
            <content:encoded><![CDATA[&lt;p&gt;Former Google CEO Eric Schmidt Dating 27-Year-Old Model Gloria-Sophie? 70 ವರ್ಷದ ಎರಿಕ್ ಸ್ಮಿತ್, ಜರ್ಮನ್ ನಾಯಕ ಮಾರ್ಕಸ್ ಸೋಡರ್ ಅವರ ಪುತ್ರಿ 27 ವರ್ಷದ ಗ್ಲೋರಿಯಾ-ಸೋಫಿ ಬರ್ಕಂಡ್ಟ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಅವರ ರಿಲೇಷನ್&zwnj;ಷಿಪ್&zwnj; ಬಗ್ಗೆ ಭಾರೀ ಊಹಾಪೋಹ ಎದ್ದಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜರ್ಮನ್ ಮಾಧ್ಯಮ ಸಂಸ್ಥೆ ಬಿಲ್ಡ್ ವರದಿಯ ಪ್ರಕಾರ, ಗೂಗಲ್&zwnj;ನ ಮಾಜಿ ಸಿಇಒ ಎರಿಕ್ ಸ್ಮಿತ್ ಅವರು 27 ವರ್ಷದ ಮಾಡೆಲ್ ಮತ್ತು ಅರ್ಥಶಾಸ್ತ್ರಜ್ಞೆ, ಬವೇರಿಯನ್ ಸಚಿವ-ಅಧ್ಯಕ್ಷ ಮಾರ್ಕಸ್ ಸೋಡರ್ ಅವರ ಪುತ್ರಿ ಗ್ಲೋರಿಯಾ-ಸೋಫಿ ಬರ್ಕಂಡ್ ಅವರೊಂದಿಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕಳೆದ ತಿಂಗಳು ದಾವೋಸ್&zwnj;ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ, ಇದು 70 ವರ್ಷದ ಬಿಲಿಯನೇರ್ ಮತ್ತು ನ್ಯೂಯಾರ್ಕ್ ನಗರದಲ್ಲಿ ಪಿಎಚ್&zwnj;ಡಿ ಪದವಿ ಪಡೆಯುತ್ತಿದ್ದಾರೆಂದು ನಂಬಲಾದ ಬರ್ಕಂಡ್ ನಡುವಿನ ಸಂಭಾವ್ಯ ಸಂಬಂಧದ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು.&lt;/p&gt;&lt;img&gt;&lt;p&gt;'70 ವರ್ಷದ ಎರಿಕ್ ಸ್ಮಿತ್ ಪ್ರೀತಿಸುತ್ತಿರುವ ಮಹಿಳೆ ಯಾರು?&quot; ಎಂದು ಔಟ್ಲೆಟ್ ಬರೆದಿದ್ದು, ಸಾಂಪ್ರದಾಯಿಕ ಬವೇರಿಯನ್ ಡಿರ್ಂಡ್ಲ್&zwnj;ನಲ್ಲಿ ಬರ್ಕಂಡ್ ಅವರ ಫೋಟೋವನ್ನು ಪ್ರಕಟಿಸಿದೆ.&lt;/p&gt;&lt;img&gt;&lt;p&gt;ಆದರೆ, ಸ್ಮಿತ್&zwnj;ಗೆ ಹತ್ತಿರವಿರುವ ಮೂಲವೊಂದು ದಿ ನ್ಯೂಯಾರ್ಕ್ ಪೋಸ್ಟ್&zwnj;ಗೆ ತಿಳಿಸಿದಂತೆ, ಬರ್ಕಂಡ್ ದಾವೋಸ್&zwnj;ನಲ್ಲಿ ಅವರ ಪರಿವಾರದ ಭಾಗವಾಗಿದ್ದರೂ, &quot;ಇದು ಕೇವಲ ಸ್ನೇಹ, ಸಂಬಂಧವಲ್ಲ' ಎಂದು ಹೇಳಿದೆ.&lt;/p&gt;&lt;img&gt;&lt;p&gt;ಇದರ ನಡುವೆ, ಜರ್ಮನ್ ಮಾಧ್ಯಮವು ಬರ್ಕಂಡ್ &quot;ಸ್ನೇಹಿತೆಗಿಂತ ಹೆಚ್ಚಿನವರು&quot; ಎಂದು ಹೇಳಿಕೊಂಡಿದೆ ಮತ್ತು ಅರ್ಥಶಾಸ್ತ್ರಜ್ಞೆ, ರೂಪದರ್ಶಿ ಮತ್ತು ಲೇಖಕಿಯಾಗಿ ಅವರ ಹಿನ್ನೆಲೆಯನ್ನೂ ಪ್ರಕಟಿಸಿದೆ.&lt;/p&gt;&lt;img&gt;&lt;p&gt;ಬರ್ಕಂಡ್ ವ್ಯವಹಾರ ನಿರ್ವಹಣೆ ಮತ್ತು ಅರ್ಥಶಾಸ್ತ್ರದಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ ಮತ್ತು ವೋಗ್ ಟರ್ಕಿಯಲ್ಲಿ ಕಾಣಿಸಿಕೊಂಡಿರುವುದು ಸೇರಿದಂತೆ ಅಂತರರಾಷ್ಟ್ರೀಯ ಮಾಡೆಲಿಂಗ್&zwnj;ನಲ್ಲೂ ಛಾಪು ಮೂಡಿಸಿದ್ದಾರೆ. ಟೀನ್&zwnj; ವೋಗ್&zwnj;ನಲ್ಲಿ ಬರೆದ ಲೇಖನದಲ್ಲಿ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದರು.&lt;/p&gt;&lt;img&gt;&lt;p&gt;2011 ರಲ್ಲಿ ಗೂಗಲ್&zwnj;ನ ಸಿಇಒ ಹುದ್ದೆಯಿಂದ ಕೆಳಗಿಳಿದ ಸ್ಮಿತ್, ಜಾಗತಿಕ ವ್ಯವಹಾರ ಮತ್ತು ಸಮಾಜಸೇವೆಯಲ್ಲಿ ಪ್ರಮುಖ ವ್ಯಕ್ತಿಯಾಗಿ ಉಳಿದಿದ್ದಾರೆ. ಬ್ಲೂಮ್&zwnj;ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು $54.6 ಬಿಲಿಯನ್ ಆಗಿದೆ.&lt;/p&gt;&lt;img&gt;&lt;p&gt;ವೆಂಡಿ ಸ್ಮಿತ್ ಅವರನ್ನು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮದುವೆಯಾಗಿದ್ದರೂ, ಸ್ಮಿತ್ ಆಗಾಗ್ಗೆ ನ್ಯೂಯಾರ್ಕ್&zwnj;ನ ಉನ್ನತ ಮಟ್ಟದ ಸೋಶಿಯಲ್&zwnj; ವಲಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಅವರು ಈ ಹಿಂದೆ ಮಾಜಿ ಒಲಿಂಪಿಕ್ ಫಿಗರ್ ಸ್ಕೇಟರ್ ಅಲೆಕ್ಸಾಂಡ್ರಾ ಡ್ಯೂಸ್&zwnj;ಬರ್ಗ್ ಮತ್ತು ಹಣಕಾಸು, ಮಾಧ್ಯಮ ಮತ್ತು ಕಲೆಗಳಾದ್ಯಂತದ ಇತರ ಮಹಿಳೆಯರೊಂದಿಗೆ ಸಂಪರ್ಕ ಹೊಂದಿದ್ದಾರೆ, ಅವರಲ್ಲಿ ಹಲವರು ಟೆಕ್ ಬಿಲಿಯನೇರ್&zwnj;ಗಿಂತ ಗಮನಾರ್ಹವಾಗಿ ಕಿರಿಯರು.&lt;/p&gt;]]></content:encoded>
            <category>news-money</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/relationship/former-google-ceo-eric-schmidt-dating-27-year-old-model-gloria-sophie-burkandt-san-9vp91hh"/>
        </item>
        <item>
            <title><![CDATA[ಭಾರತ-ಅಮೆರಿಕದ ವ್ಯಾಪಾರ ಒಪ್ಪಂದ ಮಾತುಕತೆ ಮುಂದಕ್ಕೆ]]></title>
            <link>https://kannada.asianetnews.com/india-news/india-us-trade-deal-talks-move-forward/articleshow-aqviy7y</link>
            <guid isPermaLink="true">https://kannada.asianetnews.com/india-news/india-us-trade-deal-talks-move-forward/articleshow-aqviy7y</guid>
            <pubDate>Mon, 23 Feb 2026 06:06:06 +0530</pubDate>
            <description><![CDATA[&lt;p&gt;ವಿದೇಶಗಳ ಮೇಲಿನ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಅವರ ತೆರಿಗೆಯನ್ನು ಅಮೆರಿಕ ಸುಪ್ರೀಂ ಕೋರ್ಟ್&zwnj; ರದ್ದುಪಡಿಸಿದ ಬೆನ್ನಲ್ಲೇ, ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಭಾರತ ಮತ್ತು ಅಮೆರಿಕ ನಡುವೆ ನಡೆಯಬೇಕಿದ್ದ ಮುಖ್ಯ ಸಂಧಾನಕಾರರ ಮಟ್ಟದ ಸಭೆಯನ್ನು ಮುಂದೂಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj2f7ezh1f0aqhmrg7wfsy1f,imgname-image-239ffb2b-e068-48d7-9e65-ac23c6029e20-1771757091825.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ವಿದೇಶಗಳ ಮೇಲಿನ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಅವರ ತೆರಿಗೆಯನ್ನು ಅಮೆರಿಕ ಸುಪ್ರೀಂ ಕೋರ್ಟ್&zwnj; ರದ್ದುಪಡಿಸಿದ ಬೆನ್ನಲ್ಲೇ, ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಭಾರತ ಮತ್ತು ಅಮೆರಿಕ ನಡುವೆ ನಡೆಯಬೇಕಿದ್ದ ಮುಖ್ಯ ಸಂಧಾನಕಾರರ ಮಟ್ಟದ ಸಭೆಯನ್ನು ಮುಂದೂಡಲಾಗಿದೆ.&lt;/p&gt;&lt;h2&gt;ಬೆಳವಣಿಗೆಗಳನ್ನು ಗಮನಿಸಿಕೊಂಡು ಈ ನಿರ್ಧಾರ&lt;/h2&gt;&lt;p&gt;ಸುಪ್ರೀಂ ಕೋರ್ಟ್&zwnj; ಹಾಗೂ ಆ ಬಳಿಕ ತೀರ್ಪಿನ ನಂತರದ ಬೆಳವಣಿಗೆಗಳನ್ನು ಗಮನಿಸಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡೂ ದೇಶಗಳು ಸಹಮತದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಮಾತುಕತೆಗೆ ಸಂಬಂಧಿಸಿ ಇಬ್ಬರಿಗೂ ಸರಿಹೊಂದುವಂಥ ಹೊಸ ದಿನಾಂಕವನ್ನು ಶೀಘ್ರವೇ ಗೊತ್ತು ಮಾಡಲಿವೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3&gt;ಅಮೆರಿಕ ಸುಪ್ರೀಂಕೋರ್ಟ್&zwnj; ಆದೇಶದಿಂದಾಗಿ ತೆರಿಗೆ ಪ್ರಮಾಣದ ಕುರಿತು ಹೊಸದಾಗಿ ಚರ್ಚೆ&lt;/h3&gt;&lt;p&gt;ಭಾರತದ ವಾಣಿಜ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ದರ್ಪನ್&zwnj; ಜೈನ್&zwnj; ನೇತೃತ್ವದ ಭಾರತೀಯ ಸಂಧಾನಕಾರರ ತಂಡ ಫೆ.23ರಿಂದ 3 ದಿನಗಳ ಕಾಲ ವ್ಯಾಪಾರ ಒಪ್ಪಂದ ಕುರಿತು ವಾಷಿಂಗ್ಟನ್&zwnj;ನಲ್ಲಿ ಮಾತುಕತೆ ನಡೆಸಬೇಕಿತ್ತು. ಈ ತಂಡವು ಪ್ರಸ್ತಾಪಿತ ಮಧ್ಯಂತರ ಒಪ್ಪಂದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಅಂತಿಮಗೊಳಿಸುವ ಕೆಲಸ ಮಾಡಬೇಕಿತ್ತು. ಆದರೆ ಇದೀಗ ಅಮೆರಿಕ ಸುಪ್ರೀಂಕೋರ್ಟ್&zwnj; ಆದೇಶದಿಂದಾಗಿ ತೆರಿಗೆ ಪ್ರಮಾಣದ ಕುರಿತು ಹೊಸದಾಗಿ ಚರ್ಚೆ, ಚೌಕಾಸಿ ನಡೆಸಬೇಕಾದ ಸಂದರ್ಭ ಎದುರಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳು ಇಂಥದ್ದೊಂದು ನಿರ್ಧಾರಕ್ಕೆ ಬಂದಿವೆ.&lt;/p&gt;&lt;p&gt;ಈ ಮೊದಲಿನ ನಿರ್ಧಾರದ ಅನ್ವಯ ಭಾರತದ ಉತ್ಪನ್ನಗಳ ಮೇಲೆ ಶೇ.18ರಷ್ಟು ತೆರಿಗೆ ಹೇರಲು ಅಮೆರಿಕ ನಿರ್ಧರಿಸಿತ್ತು. ಆದರೆ ಭಾರತ ತನ್ನ ನಿರ್ಧಾರ ಬಹಿರಂಗಪಡಿಸಿರಲಿಲ್ಲ.&lt;/p&gt;]]></content:encoded>
            <category>news-money</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/india-us-trade-deal-talks-move-forward/articleshow-aqviy7y"/>
        </item>
        <item>
            <title><![CDATA[ಇರಾನ್‌ಗೆ ಆಸರೆಯಾದ ರಷ್ಯಾದ ಗೇಮ್‌ಚೇಂಜರ್‌ ಅಸ್ತ್ರ; 18 ಲಕ್ಷದ ಡ್ರೋನ್‌ ಮೂಲಕ 818 ಕೋಟಿಯ ಯುದ್ಧವಿಮಾನ ಉಡೀಸ್‌!]]></title>
            <link>https://kannada.asianetnews.com/world-news/iran-shahed-136-drone-attack-us-bases-saudi-aramco-middle-east-war-san/articleshow-b1t0ng3</link>
            <guid isPermaLink="true">https://kannada.asianetnews.com/world-news/iran-shahed-136-drone-attack-us-bases-saudi-aramco-middle-east-war-san/articleshow-b1t0ng3</guid>
            <pubDate>Mon, 02 Mar 2026 22:35:12 +0530</pubDate>
            <description><![CDATA[&lt;p&gt;ಮಧ್ಯಪ್ರಾಚ್ಯದಲ್ಲಿ ಇರಾನ್ ತನ್ನ ಅಪಾಯಕಾರಿ 'ಷಾಹೆದ್-136' ಡ್ರೋನ್&zwnj;ಗಳನ್ನು ಬಳಸಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಕಡಿಮೆ ವೆಚ್ಚದಲ್ಲಿ ತಯಾರಾಗುವ ಈ ಡ್ರೋನ್&zwnj;ಗಳು ಭಾರಿ ಹಾನಿ ಉಂಟುಮಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjqqw5xrzf830ys1qe1pr1ea,imgname-iran-shahed-136-drone--1772470802360.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮಾ.2): &lt;/strong&gt;ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ಇರಾನ್ ತನ್ನ ಅಪಾಯಕಾರಿ ಡ್ರೋನ್ ತಂತ್ರಜ್ಞಾನದ ಮೂಲಕ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಸೌದಿ ಅರೇಬಿಯಾದಿಂದ ಕುವೈತ್&zwnj;ವರೆಗೆ ಇರಾನ್ ತನ್ನ ವಿನಾಶಕಾರಿ ದಾಳಿಯನ್ನು ವಿಸ್ತರಿಸಿದೆ. ಸೋಮವಾರ ಒಂದೇ ದಿನ ಇರಾನ್ ಸುಮಾರು 17 ದೇಶಗಳ ಮೇಲೆ ಡ್ರೋನ್ ದಾಳಿ ನಡೆಸುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದೆ. 'ವಾಲ್ ಸ್ಟ್ರೀಟ್ ಜರ್ನಲ್' ವರದಿಯ ಪ್ರಕಾರ, ಯುದ್ಧದ ಮೊದಲ ದಿನವೇ ಇರಾನ್ ಬರೋಬ್ಬರಿ 1,000 ಡ್ರೋನ್&zwnj;ಗಳನ್ನು ಉಡಾವಣೆ ಮಾಡಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ 200 ಡ್ರೋನ್&zwnj;ಗಳು ದುಬೈ ಮೇಲೆ ದಾಳಿ ನಡೆಸಿವೆ. ನಂತರದ ದಿನಗಳಲ್ಲಿ ಕುವೈತ್ ಮತ್ತು ಸೌದಿಯ ತೈಲ ಕಂಪನಿಗಳ ಮೇಲೂ ಇದೇ ಡ್ರೋನ್&zwnj; ಬಳಸಿ ದಾಳಿ ಮಾಡಿದೆ.&lt;/p&gt;&lt;h2&gt;&lt;strong&gt;ಸೌದಿ ತೈಲ ಕಂಪನಿ 'ಅರಾಮ್ಕೊ' ಟಾರ್ಗೆಟ್&zwnj;&lt;/strong&gt;&lt;/h2&gt;&lt;p&gt;ಸೌದಿ ಅರೇಬಿಯಾದ ಶ್ರೀಮಂತ ತೈಲ ಕಂಪನಿ ಅರಾಮ್ಕೊ (Aramco) ಕಾರ್ಯಾಚರಣೆ ನಡೆಸುವ ತನುರಾ ರಿಫೈನರಿಯನ್ನು ಇರಾನ್ ಗುರಿಯಾಗಿಸಿಕೊಂಡಿದೆ. ಟರ್ಕಿ ಮತ್ತು ಕತಾರ್ ದೇಶಗಳ ಮೇಲೂ ಡ್ರೋನ್ ದಾಳಿಗಳು ನಡೆಸಿರುವುದಾಗಿ ಇರಾನ್&zwnj; ಹೇಳಿದೆ. ತನುರಾ ರಿಫೈನರಿ ಮೇಲೆ ನಡೆಸಿದ ದಾಳಿಯನ್ನು ಸೌದಿ ಅರೇಬಿಯಾ ಬಹಳ ಗಂಭೀರವಾಗಿ ಪರಿಗಣಿಸಿದೆ.&lt;/p&gt;&lt;h2&gt;&lt;strong&gt;ಜಗತ್ತಿನ ಅತ್ಯಂತ ಅಪಾಯಕಾರಿ 'ಷಾಹೆದ್-136' ಡ್ರೋನ್&lt;/strong&gt;&lt;/h2&gt;&lt;p&gt;ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರವಾಗಿ ಹಾವಳಿ ಎಬ್ಬಿಸಿದ್ದ 'ಷಾಹೆದ್-136' (Shahed-136) ಡ್ರೋನ್&zwnj;ಗಳನ್ನು ಈಗ ಇರಾನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೆಲೆಗಳ ಮೇಲೆ ಪ್ರಯೋಗಿಸುತ್ತಿದೆ. ಇದು ಸತತವಾಗಿ ಹಲವು ಗಂಟೆಗಳ ಕಾಲ ಆಕಾಶದಲ್ಲಿ ಹಾರಬಲ್ಲದು. ಏಕಕಾಲದಲ್ಲಿ 2,000 ಕಿಲೋಮೀಟರ್ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಇದಕ್ಕಿದ್ದು, ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಡ್ರೋನ್&zwnj;ನಲ್ಲಿ ಸ್ಫೋಟಕಗಳನ್ನು ತುಂಬಿಸಲಾಗಿರುತ್ತದೆ. ಇದು ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆದ ತಕ್ಷಣ ಭೀಕರವಾಗಿ ಸ್ಫೋಟಗೊಳ್ಳುತ್ತದೆ.&lt;/p&gt;&lt;h2&gt;&lt;strong&gt;ಕಡಿಮೆ ವೆಚ್ಚ, ಹೆಚ್ಚಿನ ಹಾನಿ: ಇರಾನ್ ತಂತ್ರ&lt;/strong&gt;&lt;/h2&gt;&lt;p&gt;ಇರಾನ್ ಬಳಿ ಪ್ರಸ್ತುತ ಒಟ್ಟು 80,000 ಡ್ರೋನ್&zwnj;ಗಳಿದ್ದು, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹೇಳುವಂತೆ, &quot;ಅಮೆರಿಕವನ್ನು ಹೇಗೆ ಸೋಲಿಸಬೇಕೆಂದು ನಮಗೆ ತಿಳಿದಿದೆ' ಎಂದಿದ್ದಾರೆ ಇರಾನ್&zwnj;ನ ಒಂದು ಡ್ರೋನ್ ತಯಾರಿಕೆಗೆ ತಗಲುವ ವೆಚ್ಚ ಕೇವಲ 18 ರಿಂದ 20 ಲಕ್ಷ ರೂಪಾಯಿ. ಆದರೆ ಈ ಸಣ್ಣ ಡ್ರೋನ್ ಅಮೆರಿಕದ 818 ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಫೈಟರ್ ಜೆಟ್ ಅನ್ನು ಸುಲಭವಾಗಿ ಹೊಡೆದುರುಳಿಸಬಲ್ಲದು!&lt;/p&gt;&lt;h2&gt;&lt;strong&gt;ಕ್ಷಿಪಣಿಗಳ ಉಳಿತಾಯ&lt;/strong&gt;&lt;/h2&gt;&lt;p&gt;ಇರಾನ್ ಬಳಿ ಕೇವಲ 2,000 ಕ್ಷಿಪಣಿಗಳಿವೆ. ರಷ್ಯಾ ಉಕ್ರೇನ್ ಯುದ್ಧದಲ್ಲಿ ಬ್ಯುಸಿಯಾಗಿರುವುದರಿಂದ ತನಗೆ ಹೆಚ್ಚಿನ ಸಹಾಯ ಸಿಗೋದಿಲ್ಲ ಎನ್ನುವುದು ಇರಾನ್&zwnj;ಗೆ ತಿಳಿದಿದೆ. ಹಾಗಾಗಿ ಕ್ಷಿಪಣಿಗಳನ್ನು ಉಳಿಸಿ, ಕಡಿಮೆ ಖರ್ಚಿನ ಡ್ರೋನ್&zwnj;ಗಳ ಮೂಲಕ ಅಮೆರಿಕವನ್ನು ದೀರ್ಘಕಾಲದ ಯುದ್ಧದಲ್ಲಿ ಸಿಲುಕಿಸುವುದು ಇರಾನ್ ತಂತ್ರವಾಗಿದೆ. ರಷ್ಯಾದ ತಾಂತ್ರಿಕ ನೆರವಿನೊಂದಿಗೆ ಇರಾನ್ ಪ್ರತಿ ವರ್ಷ 25,000 ಡ್ರೋನ್&zwnj;ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ವರ್ಷದ ಜನವರಿ ತಿಂಗಳಲ್ಲೇ 1,000 ಷಾಹೆದ್ ಡ್ರೋನ್&zwnj;ಗಳನ್ನು ಸಿದ್ಧಪಡಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-money</category>
            <dc:creator>Santosh Naik</dc:creator>
            <atom:link href="https://kannada.asianetnews.com/world-news/iran-shahed-136-drone-attack-us-bases-saudi-aramco-middle-east-war-san/articleshow-b1t0ng3"/>
        </item>
        <item>
            <title><![CDATA[ಸುಚಿತ್ರಾಗೆ 100 ಕೋಟಿ ರೂ ಆಸ್ತಿ ಮಾಡಿಟ್ಟಿರೋ Kamalakar Bhat; ಜ್ಯೋತಿಷಿ ಇನ್ನೊಂದು ಆಡಿಯೋ ಸ್ಫೋಟ!]]></title>
            <link>https://kannada.asianetnews.com/karnataka-districts/astrologer-kamalakar-bhat-audio-part-2-lover-suchitra-100-crore-rupees/articleshow-dbzui7x</link>
            <guid isPermaLink="true">https://kannada.asianetnews.com/karnataka-districts/astrologer-kamalakar-bhat-audio-part-2-lover-suchitra-100-crore-rupees/articleshow-dbzui7x</guid>
            <pubDate>Tue, 10 Feb 2026 11:02:40 +0530</pubDate>
            <description><![CDATA[&lt;p&gt;Astrologer Kamalakar Bhat Case ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸುಚಿತ್ರಾ, ಕಮಲಾಕರ್&zwnj; ಭಟ್&zwnj; ಅವರ ಆಡಿಯೋ ಮಾತ್ರ ದೊಡ್ಡ ಸ್ಫೋಟ ಮಾಡಿದೆ. ಈಗ ಸುಚಿತ್ರಾ ಹೆಸರಿಗೆ 100 ಕೋಟಿ ರೂಪಾಯಿ ಆಸ್ತಿ ಮಾಡಿರೋ ವಿಷಯ ಕೂಡ ಬದಲಾಗಿದೆ. ನನ್ನ ಜೀವನ ಹಾಳಾದರೆ ತೊಂದರೆ ಇಲ್ಲ ಎಂದು ಕಮಲಾಕರ್&zwnj; ಭಟ್&zwnj; ಹೇಳಿದ್ದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kh30e82sf3enfnnm1b4g2pg5,imgname-new-project---2026-02-10t105610.015-1770701398105.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿದ್ದು, ಆರೋಪಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್&zwnj;ಗೆ ( Kamalakar Bhat ) ಹನಿಟ್ರ್ಯಾಪ್&zwnj; ಮಾಡಿ, ಖಾಸಗಿ ಕ್ಷಣಗಳ ವಿಡಿಯೋಗಳನ್ನು ಮಾಡಿಟ್ಟುಕೊಂಡು ಬ್ಲ್ಯಾಕ್&zwnj;ಮೇಲ್&zwnj; ಮಾಡುತ್ತಿದ್ದಳು ಎಂಬ ಸಂಗತಿ ಬಯಲಿಗೆ ಬಂದಿದೆ. ಹೀಗಿರುವಾಗ ಜ್ಯೋತಿಷಿ ಆಸ್ತಿ ಬಗ್ಗೆ ಮಾಹಿತಿ ಕೊಡುವ ಆಡಿಯೋ ಕೂಡ ವೈರಲ್&zwnj; ಆಗ್ತಿದೆ.&lt;/p&gt;&lt;h2&gt;ಸುಚಿತ್ರಾ ಆಡಿಯೋ ಕೇಳೋಕೆ ಆಗೋದಿಲ್ಲ&lt;/h2&gt;&lt;p&gt;ಈಗ ಕಮಲಾಕರ್&zwnj; ಭಟ್&zwnj; ಅವರ ಆಡಿಯೋ ವೈರಲ್&zwnj; ಆಗಿದೆ. ಈ ಹಿಂದೆ ಕಮಲಾಕರ್&zwnj; ಭಟ್&zwnj; ಜೊತೆ ಲೈ*ಗಿಕ ಸಂಪರ್ಕ ಇರುವ ಬಗ್ಗೆ ಸುಚಿತ್ರಾ ಮಾತನಾಡಿದ್ದ ಅಶ್ಲೀಲ ಆಡಿಯೋವನ್ನು ಕೇಳಿಸಿಕೊಳ್ಳುವ ಹಾಗೆ ಕೂಡ ಇಲ್ಲ ಬಿಡಿ. ಅಂದಹಾಗೆ ಕಮಲಾಕರ್&zwnj; ಭಟ್&zwnj; ಕೂಡ ಮಾತನಾಡಿದ್ದ ಆಡಿಯೋ ಭಾಗ 1ರಲ್ಲಿ, &ldquo;ನಾನು ಏನೇ ಆದರೂ ಅವಳನ್ನು ಬಿಡೋದಿಲ್ಲ, 4 ತಿಂಗಳ ಪರಿಶ್ರಮದಿಂದ ಅವಳನ್ನು ಪಡೆದುಕೊಂಡಿದ್ದೀನಿ, ಅವಳು ಚಿಟಿಕಿ ಹೊಡೆದರೆ ಜನರು ಕ್ಯೂ ನಿಲ್ಯಾರೆ&rdquo; ಎಂಬ ಮಾತಿತ್ತು.&lt;/p&gt;&lt;h2&gt;ಕೋಟಿ ಕೋಟಿ ಆಸ್ತಿ ಮಾಡಿರೋ ಕಮಲಾಕರ್&zwnj; ಭಟ್&lt;/h2&gt;&lt;p&gt;&ldquo;ನಾನು ನಾಳೆ ಸತ್ತರೂ ಪರವಾಗಿಲ್ಲ, ಇಂದು ಸತ್ತರೂ ಕೂಡ ಪರವಾಗಿಲ್ಲ. ಸುಚಿತ್ರಾ ಲೈಫ್&zwnj; ಸೆಟಲ್&zwnj; ಆಗಲಿ ಎಂದು 50-100 ಕೋಟಿ ರೂಪಾಯಿ ಆಸ್ತಿ ಮಾಡಿದ್ದೀನಿ, ಮಗಳಿಗೆ 3 ಕೋಟಿ ರೂಪಾಯಿ ಮಾಡಿದ್ದೀನಿ. ನಾನು ನಿಷ್ಕಲ್ಮಷ ಮನಸ್ಸಿನಿಂದ ಇದನ್ನೆಲ್ಲ ಮಾಡಿದೀನಿ&rdquo; ಎಂದು ಕಮಲಾಕರ್&zwnj; ಭಟ್&zwnj; ಆಡಿಯೋ ವೈರಲ್&zwnj; ಆಗ್ತಿದೆ.&lt;/p&gt;&lt;p&gt;&ldquo;ಏನೇನೋ ಮಾಡಿದ್ದಾಳೆ ಎಂದು ನೀನು ಹೇಳಿರಬಹುದು, ಸಾವಿರಾರು ಜನರು ಹೇಳಿದರೂ ಕೂಡ ನಾನು ಅವಳನ್ನು ಮರೆಯೋದಿಲ್ಲ. ಕಾನೂನು ಏನು ಹೇಳುವುದು ಎಂದು ನನಗೆ ಗೊತ್ತಿದೆ. ಅವಳ ಲೈಫ್&zwnj;, ಮಗಳ ಲೈಫ್&zwnj; ಸೆಟಲ್&zwnj; ಆಗಿದೆ. ನನ್ನ ಎಂಡ್&zwnj; ಆದರೂ ಚಿಂತೆ ಇಲ್ಲ. ಏನೇ ಮಾತನಾಡಬೇಕಿದ್ದರೂ ಕೂಡ, ನೀನು ನನ್ನ ಜೊತೆ ಮಾತನಾಡಬೇಕು, ಅದನ್ನು ಬಿಟ್ಟು ಅವಳಿಗೆ ಆ ಪದಗಳನ್ನು ಬಳಸೋದು ಏನಿದೆ? ನಾನು ಅವಳನ್ನು ಮದುವೆ ಆಗಿದ್ದೀನಿ&rdquo; ಎಂಬ ಆಡಿಯೋ ವೈರಲ್&zwnj; ಆಗ್ತಿದೆ.&lt;/p&gt;&lt;p&gt;ಈಕೆಯ ಮೊದಲ ಹೆಸರು ಸುರೇಖಾ ಎಂದಾಗಿದ್ದು, ಮದುವೆ ಬಳಿಕ ಸುಚಿತ್ರಾ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಳು. ಸುರೇಖಾ ನನ್ನ ಅಕ್ಕ, ಆಕೆಯ ಮಕ್ಕಳನ್ನು ನಾನೇ ಸಾಕುತ್ತಿದ್ದೇನೆ. ನನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ, ಬೇರೆ, ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಎಂಬ ಸಂಗತಿ ಬಯಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/karnataka-districts/astrologer-kamalakar-bhat-audio-part-2-lover-suchitra-100-crore-rupees/articleshow-dbzui7x"/>
        </item>
        <item>
            <title><![CDATA[ಲೀಲಾ..ನೀನು ನನ್ನ ಫ್ಲೇವರ್‌ ಕಣೇ.. ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್‌ ಅಸ್ತ್ರವಾಯ್ತು: ಹಣ ಮಾಡ್ತಿರೋ ಮಂಜು!]]></title>
            <link>https://kannada.asianetnews.com/gallery/tv-talk/santhu-leela-and-manjunath-video-instagram-account-promotion-eyx8vor</link>
            <guid isPermaLink="true">https://kannada.asianetnews.com/gallery/tv-talk/santhu-leela-and-manjunath-video-instagram-account-promotion-eyx8vor</guid>
            <pubDate>Sun, 08 Feb 2026 12:07:27 +0530</pubDate>
            <description><![CDATA[&lt;p&gt;Leela And Manju Video: ಮಾಧ್ಯಮಕ್ಕೆ ಬಂದು ಸಂಸಾರದ ವಿಷಯವನ್ನು ಹೇಳಿಕೊಂಡು ಅತ್ತಿದ್ದ ಲೀಲಾ, ಮಂಜು ಈಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ವಿಡಿಯೋ ಮಾಡಿ ಬಂದ್ಬಿಡು ಲೀಲಾ, ನನ್ನ ಬಂಗಾರಿ, ಚಿನ್ನಿ ಬಂದ್ಬಿಡೇ, ನೀನು ನನ್ನ ಫ್ಲೇವರ್&zwnj; ಕಣೇ ಎಂದು ಹೇಳಿದ್ದ ಮಂಜು ದುಡಿಮೆಗೆ ಹೊಸ ದಾರಿ ಕಂಡುಕೊಂಡಿದ್ದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgxz76q78pfcxfnsv8tt8gwd,imgname-new-project---2026-02-08t120157.211-1770532346599.jpg" type="image/jpeg" height="390" width="690"/>
            <content:encoded><![CDATA[&lt;p&gt;Leela And Manju Video: ಮಾಧ್ಯಮಕ್ಕೆ ಬಂದು ಸಂಸಾರದ ವಿಷಯವನ್ನು ಹೇಳಿಕೊಂಡು ಅತ್ತಿದ್ದ ಲೀಲಾ, ಮಂಜು ಈಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ವಿಡಿಯೋ ಮಾಡಿ ಬಂದ್ಬಿಡು ಲೀಲಾ, ನನ್ನ ಬಂಗಾರಿ, ಚಿನ್ನಿ ಬಂದ್ಬಿಡೇ, ನೀನು ನನ್ನ ಫ್ಲೇವರ್&zwnj; ಕಣೇ ಎಂದು ಹೇಳಿದ್ದ ಮಂಜು ದುಡಿಮೆಗೆ ಹೊಸ ದಾರಿ ಕಂಡುಕೊಂಡಿದ್ದರು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮಂಜು ಅವರು ಕ್ಯಾಬ್&zwnj; ಡ್ರೈವರ್&zwnj; ಆಗಿ ಕೆಲಸ ಮಾಡುತ್ತಿದ್ದರು. ತನ್ನ ಹೆಂಡತಿ ಬೇರೆ ವ್ಯಕ್ತಿ ಜೊತೆ ಓಡಿ ಹೋದಳು ಎಂದು ಮಂಜು ಗೋಳಿಟ್ಟಿದ್ದರು. ಇಬ್ಬರು ಮಕ್ಕಳನ್ನು ಬಿಟ್ಟು ಹೆಂಡತಿ ಓಡಿ ಹೋದಳು ಎಂದು ಮಂಜು ಕಣ್ಣೀರು ಹಾಕಿದ್ದರು.&lt;/p&gt;&lt;img&gt;&lt;p&gt;ನನಗೆ ಮಂಜು ಹಿಂಸೆ ಕೊಡ್ತಾನೆ, ನನಗೆ ಅವನು ಇಷ್ಟ ಇಲ್ಲ, ನನಗೆ ಬೇರೆ ಪ್ರೀತಿ ಸಿಕ್ಕಿದೆ, ನಾನು ಮಂಜು ಜೊತೆ ಜೀವನ ಮಾಡೋಕೆ ಆಗೋದಿಲ್ಲ ಎಂದು ಲೀಲಾ ಹೇಳಿದ್ದರು.&lt;/p&gt;&lt;img&gt;&lt;p&gt;ಆಮೇಲೆ ಒಂದಿಷ್ಟು ಚರ್ಚೆಗಳ ಬಳಿಕ ಲೀಲಾ ಅವರು ಮಕ್ಕಳಿಗೋಸ್ಕರ ಮಂಜು ಜೊತೆ ವಾಸ ಮಾಡಲು ಒಪ್ಪಿದ್ದರು. ಇದಾದ ಬಳಿಕ ಇವರು ನಾನು, ನೀನು ಇಬ್ಬರು ಒಂದೇ ಎನ್ನೋ ಥರ ವಿಡಿಯೋ ಮಾಡಿ ಸೋಶಿಯಲ್&zwnj; ಮೀಡಿಯಾದಲ್ಲಿ ಅಪ್&zwnj;ಲೋಡ್&zwnj; ಮಾಡುತ್ತಿದ್ದರು.&lt;/p&gt;&lt;img&gt;&lt;p&gt;ಇವರ ಬಗ್ಗೆ ಎಷ್ಟು ಟ್ರೋಲ್&zwnj; ಆಯ್ತೋ, ಎಷ್ಟು ಜನರು ನೆಗೆಟಿವ್&zwnj; ಕಾಮೆಂಟ್&zwnj; ಮಾಡಿದರೋ ಅಷ್ಟೇ ಇವರ ಸೋಶಿಯಲ್&zwnj; ಮೀಡಿಯಾ ವೀಕ್ಷಣೆ, ಫಾಲೋವರ್ಸ್&zwnj; ಕೂಡ ಹೆಚ್ಚುತ್ತ ಹೋಯಿತು. ಇದನ್ನೇ ಅವರು ಬಳಸಿಕೊಂಡರು.&lt;/p&gt;&lt;img&gt;&lt;p&gt;ಅಂದಹಾಗೆ ಇವರಿಬ್ಬರ ಸೋಶಿಯಲ್&zwnj; ಮೀಡಿಯಾ ಅಕೌಂಟ್&zwnj;ಗೆ ಸಾವಿರಾರು ಜನರು ಫಾಲೋವರ್ಸ್&zwnj; ಇದ್ದಾರೆ. ಅನೇಕರು ಬ್ರ್ಯಾಂಡ್&zwnj;ಗಳ ಪ್ರಮೋಶನ್&zwnj;ಗೋಸ್ಕರ ಲೀಲಾ, ಮಂಜು ಅವರನ್ನು ಕಾಂಟ್ಯಾಕ್ಟ್&zwnj; ಮಾಡಿದ್ದಾರೆ. ಇವರಿಬ್ಬರು ಸೇರಿಕೊಂಡು ಒಂದಿಷ್ಟು ಜಾಹೀರಾತುಗಳ ಪ್ರಚಾರ ಮಾಡಿ ಹಣ ಗಳಿಸಿದ್ದಾರೆ.&lt;/p&gt;&lt;img&gt;&lt;p&gt;ಇಂದು ಸೋಶಿಯಲ್&zwnj; ಮೀಡಿಯಾದಲ್ಲಿ ಫಾಲೋವರ್ಸ್&zwnj; ಇದ್ದರೆ ಸಾಕು, ಪ್ರೊಡಕ್ಟ್&zwnj;ಗಳು ತಮ್ಮ ಪ್ರಚಾರಕ್ಕೆ ಇವರನ್ನು ಫಾಲೋ ಮಾಡುತ್ತಾರೆ. ಇದೇ ಮಾದರಿಯನ್ನು ಬಳಸಿಕೊಂಡು ಅನೇಕರು ತಿಂಗಳಿಗೆ ಒಂದು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಗಳಿಸುತ್ತಿದ್ದಾರೆ.&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/santhu-leela-and-manjunath-video-instagram-account-promotion-eyx8vor"/>
        </item>
        <item>
            <title><![CDATA[ಇದ್ದರೆ ಹೀಗಿರಬೇಕು ಎನ್ನುವಂಥ ಕುಟುಂಬ, ಒಳ್ಳೇ ಉದ್ಯೋಗ;‌ ರೈಲಿಗೆ ತಲೆ ಕೊಟ್ಟಿದ್ದೇಕೆ Kannada YouTuber ?]]></title>
            <link>https://kannada.asianetnews.com/relationship/kannada-social-media-influencer-youtuber-the-couplebuns-bharath-gowda-demise-reason/articleshow-he1rz1q</link>
            <guid isPermaLink="true">https://kannada.asianetnews.com/relationship/kannada-social-media-influencer-youtuber-the-couplebuns-bharath-gowda-demise-reason/articleshow-he1rz1q</guid>
            <pubDate>Thu, 05 Mar 2026 14:20:13 +0530</pubDate>
            <description><![CDATA[&lt;p&gt;The Couplebuns Bharath gowda: ಕನ್ನಡದ ಯುಟ್ಯೂಬರ್&zwnj; ಭರತ್&zwnj; ಗೌಡ ಅವರು ಪತ್ನಿ, ಮುದ್ದಾದ ಮಗನ ಜೊತೆ ಫೋಟೋ, ವಿಡಿಯೋಗಳನ್ನು ಶೇರ್&zwnj; ಮಾಡುತ್ತಿದ್ದರು. ಒಳ್ಳೆಯ ಉದ್ಯೋಗ, ಪತ್ನಿ, ಮಗ ಎಲ್ಲವೂ ಇತ್ತು. ಇವರ ಸಾವಿನ ಬಗ್ಗೆ ರಮ್ಯಾ ಜಗತ್&zwnj; ಮೈಸೂರು ಅವರು ಬರೆದುಕೊಂಡಿದ್ದಾರೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjyjvexsq82k0937s4vsn4gr,imgname-new-project---2026-03-05t140958.368-1772700416953.jpg" type="image/jpeg" height="390" width="690"/>
            <content:encoded><![CDATA[&lt;p&gt;ಹದಿನೈದು ದಿನಗಳ ಹಿಂದೆ ಮಂಡ್ಯ ರೈಲ್ವೆ ಸ್ಟೇಶನ್&zwnj; ಬಳಿ ಭರತ್&zwnj; ಗೌಡ ಎನ್ನುವವರು ರೈಲಿಗೆ ತಲೆ ಕೊಟ್ಟು ಹೋದರು. ಇವರು ಒಳ್ಳೆಯ ಉದ್ಯೋಗದಲ್ಲಿದ್ದರು. ಇವರ ಸಾವಿನ ಬಗ್ಗೆ ಯುಟ್ಯೂಬರ್&zwnj; ರಮ್ಯಾ ಜಗತ್&zwnj; ಮೈಸೂರು ಎನ್ನುವವರು ಫೇಸ್&zwnj;ಬುಕ್&zwnj;ನಲ್ಲಿ ತಮ್ಮ ಅಭಿಪ್ರಾಯಗಳನ್ನು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ರೈಲಿಗೆ ತಲೆಕೊಟ್ಟ ದಿನ..&lt;/h2&gt;&lt;p&gt;ಕಳೆದ ಗುರುವಾರ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದೆ.. ಬೆಂಗಳೂರಿಗೆ ಹೋಗುವಾಗಲೆಲ್ಲ ರೈಲಿನಲ್ಲೇ ಹೋಗುವುದು ಅಭ್ಯಾಸ.. ಆ ದಿನವೂ ಕೂಡ ಬೆಳಗ್ಗೆ 8.20 ಕ್ಕೆ ಮೈಸೂರಿನ ಅಶೋಕಪುರಂ ನಿಂದ ಮಾಲ್ಗುಡಿ ಎಕ್ಸ್ಪ್ರೆಸ್ ಹಿಡಿದು ಹೊರಟೆ.. ಹೋಗುವಾಗ ಸಂಪೂರ್ಣ ಸಮಯ ಕೆಲಸದ ಬಗೆಗಿನ ಯೋಜನೆಗಳೇ ಇದ್ದವು.. ಕೆಲಸ ಮುಗಿಸಿ ಮರಳಿ ಬಂದದ್ದು ಪ್ಯಾಸೆಂಜರ್ ಒಂದರಲ್ಲಿ ಜನ ಹೆಚ್ಚಿದ್ದ ಕಾರಣ ಚನ್ನಪಟ್ಟಣದವರೆಗೆ ನಿಂತೇ ಬಂದೆ.. ನಂತರ ಕೂತು ಕಿಟಕಿ ಕಡೆ ನೋಡುವಾಗ ತಲೆಯಲ್ಲಿ ಸಾಕಷ್ಟು ಆಲೋಚನೆಗಳು ಬಂದು ಹೋದವು.. ರೈಲಿಗೆ ತಲೆ ಕೊಡುವಾಗ ಭಯ ಆಗುವುದಿಲ್ಲವಾ.. ಹೆತ್ತವಳು ಕಣ್ಣ ಮುಂದೆ ಬರುವುದಿಲ್ಲವಾ.. ನಾವು ಹುಟ್ಟಿಸಿದ ಮಕ್ಕಳ ಕರ್ತವ್ಯಗಳು ನೆನಪಾಗುವುದಿಲ್ಲವಾ.. ಜೀವನವೇ ನೀನೆಂದು ಬದುಕು ಹಂಚಿಕೊಂಡ ಸಂಗಾತಿಯನು ಒಂಟಿಯಾಗಿ ಬಿಡುತ್ತಿದ್ದೇನೆ ಎನಿಸುವುದಿಲ್ಲವಾ.. ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಬಂದವು.. ರೈಲಿನ ಬಾಗಿಲಿನ ಬಂದು ನಿಂತೆ.. ಎದೆ ಕಂಪಿಸಿತು.. ಕೈ ಕಾಲುಗಳು ನಡುಗಲು ಆರಂಭಿಸಿದವು.. ಮರಳಿ ಹೋಗಿ ಸೀಟಿನಲ್ಲಿ ಕೂತುಬಿಟ್ಟೆ..&lt;/p&gt;&lt;p&gt;ಇಷ್ಟೆಲ್ಲಾ ಆಲೋಚನೆಗಳು ತಲೆಯಲ್ಲಿ ಬರಲು ಕಾರಣ ನಾನು ಬೆಂಗಳೂರಿಗೆ ಹೋಗಿದ್ದ ಗುರುವಾರಕ್ಕೆ ಸರಿಯಾಗಿ ಒಂದು ವಾರದ ಹಿಂದೆ ಮಂಡ್ಯದ ಶುಗರ್ ಟೌನ್ ಬಳಿ ಬಿಜಾಪುರಕ್ಕೆ ತೆರಳುತ್ತಿದ್ದ ಗೋಲ್ ಗುಂಬಾಜ್ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ವ್ಯಕ್ತಿ ಒಬ್ಬರು ಜೀವ ಕಳೆದುಕೊಂಡಿದ್ದರು.. ಆ ವ್ಯಕ್ತಿಯ ಹೆಸರು ಭರತ್ ರಾಜ್.. ಮಂಡ್ಯದ ಮನ್ ಮುಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ..&lt;/p&gt;&lt;p&gt;ನಾವು ಹುಟ್ಟಿ ಬೆಳೆದಿದ್ದೆಲ್ಲಾ ಹೆಚ್ ಡಿ ಕೋಟೆಯಲ್ಲೇ.. ನಮ್ಮ ಮನೆ ಇದ್ದ ರೋಡಿನ ಪಕ್ಕದ ರಸ್ತೆಯಲ್ಲಿಯೇ ಇವರ ಮನೆ.. ಅಣ್ಣನ ವಯಸ್ಸಿನವ.. ನಾವು ಅಲ್ಲಿ ಇಲ್ಲಿ ಸಮಾರಂಭಗಳಲ್ಲಿ ನೋಡಿದ್ದಷ್ಟೇ.. ಅಣ್ಣನಿಗೆ ಪರಿಚಯ ಹೆಚ್ಚು.. ಇತ್ತ ಅವರ ತಂದೆ ತಾಯಿ ನಮ್ಮ ಕುಟುಂಬಕ್ಕೆ ಸಮಾರಂಭಗಳಿಗೆ ಆಹ್ವಾನ ನೀಡುವಷ್ಟು ಪರಿಚಯಸ್ತರು.. ಒಟ್ಟಿನಲ್ಲಿ ಶಾಲಾ ದಿನಗಳಲ್ಲಿ ಇವರುಗಳನ್ನೆಲ್ಲಾ ನೋಡಿ ಬೆಳೆದಿದ್ದ ದಿನಗಳು ಎನ್ನಬಹುದು..&lt;/p&gt;&lt;p&gt;ಇವರ ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ.. ಗಂಡು ಮಗನೇ ಈ ಭರತ್ ರಾಜ್.. ಚೆನ್ನಾಗಿ ಓದಿ ಮನ್ ಮುಲ್ ನಲ್ಲಿ ಕೆಲಸಕ್ಕೂ ಸೇರಿಕೊಂಡು ಒಳ್ಳೆಯ ಜೀವನ ನಡೆಸುತ್ತಿದ್ದರು.. ಮನೆಕಡೆ ಅನುಕೂಲಸ್ಥರೇ.. ಕೆಲ ವರ್ಷಗಳ ಹಿಂದಷ್ಟೇ ಮದುವೆಯಾಗಿ ಮುದ್ದಾದ ಗಂಡು ಮಗುವೂ ಆಗಿತ್ತು.. ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯೊಟ್ಟಿಗಿನ ಫೋಟೋಗಳನ್ನು ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದದ್ದೂ ಉಂಟು.. ಇವರನ್ನು ನೋಡಿ ನಾವೂ ಹಿಂಗೆ ಇರಬೇಕು ಅಂತ ಅಂದುಕೊಂಡ ಜೋಡಿಗಳೂ ಉಂಟು.. ಅದೇ ಕಾರಣಕ್ಕೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳು ಕೂಡ ಈ ಜೋಡಿಗೆ ಇದ್ದರು..&lt;/p&gt;&lt;p&gt;ಆದರೆ ಇದ್ದಕಿದ್ದ ಹಾಗೆ ಕಳೆದ ಗುರುವಾರ ಅಂದರೆ ಹನ್ನೊಂದು ದಿನಗಳ ಹಿಂದೆ ಸಂಜೆ ಭರತ ರೈಲಿಗೆ ಈ ರೀತಿ ಮಾಡಿಕೊಂಡು ತೀರಿಕೊಂಡಿದ್ದಾನೆ ಎಂದು ಅಣ್ಣ ಬಂದು ಅಮ್ಮನ ಬಳಿ ಹೇಳಿದಾಗ ಒಂದು ರೀತಿ ಶಾಕ್ ಆಗಿತ್ತು.. ಹೇ ಸುಳ್ಳಿರಬಹುದು ಎಂದು ಸುಮ್ಮನಾದೆವು.. ಆದರೂ ಅದ್ಯಾಕೋ ಮನಸ್ಸು ತಡೆಯದೇ ನಮ್ಮ ಪತ್ರಿಕಾ ವರದಿಗಾರರೊಬ್ಬರಿಗೆ ಫೋನ್ ಮಾಡಿ ಯಾವುದಾದರೂ ಕೇಸ್ ರಿಪೋರ್ಟ್ ಆಗಿದೆಯಾ ಎಂದು ಕೇಳಿದೆ.. ಆಗ ವಿಚಾರ ಖಚಿತವಾಯಿತು..&lt;/p&gt;&lt;p&gt;ವಯಸ್ಸು 35 - 36 ಇರಬಹುದಷ್ಟೇ.. ಇಷ್ಟು ಚಿಕ್ಕ ವಯಸ್ಸಿಗೆ ಅಷ್ಟು ಸುಂದರ ಸಂಸಾರವನ್ನು ಬಿಟ್ಟು ಹೋಗುವುದು ಅಂದರೆ ನಿಜಕ್ಕೂ ನಾನಾ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.. ಸಂಬಂಧಿಕರು ಸಾವಿಗೆ ಹೋಗಿ ಬಂದಾಗ ಹಣಕಾಸಿನ ವಿಚಾರಕ್ಕೆ ಎನ್ನುವ ಕಾರಣ ತಿಳಿಯಿತು.. ನಂತರದಲ್ಲಿ ಪತ್ರಿಕೆಯಲ್ಲಿಯೇ ಆನ್ಲೈನ್ ಟ್ರೇಡಿಂಗ್ ನಲ್ಲಿ ಹಣ ಕಳೆದುಕೊಂಡದ್ದು ಎನ್ನುವುದು ವರದಿಯಾಯ್ತು.. ನಿಜಕ್ಕೂ ತೀರಾ ಬೇಸರವಾಯ್ತು.. ನಾವು ಕಂಡಂತ ಹುಡುಗನೇ.. ಸೋಷಿಯಲ್ ಮೀಡಿಯಾ ಬಳಸುವಾಗ ಪತ್ನಿ ಜೊತೆಗಿನ ಫೋಟೋ ನೋಡಿ ಅಮ್ಮನಿಗೆ ತೋರಿಸಿದ್ದೂ ಉಂಟು.. ಅಷ್ಟು ಸುಂದರ ಸಂಸಾರ ಅವರದ್ದು..&lt;/p&gt;&lt;p&gt;ಆದರೆ ಆನ್ಲೈನ್ ಹಣದ ವಿಚಾರಕ್ಕೆ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರ ಮಾಡಿದ್ದಾರೆಂದರೆ ನಿಜಕ್ಕೂ ಸಂಕಟವಾಗುತ್ತದೆ.&zwnj; ದಯವಿಟ್ಟು ಆನ್ಲೈನ್ ನಲ್ಲಿ ಆಡುವ ಆಟಗಳು ಜೀವ ಜೀವನ ಎಲ್ಲವನ್ನೂ ಕಸಿದುಕೊಂಡು ಬಿಡುತ್ತದೆ.. ದಯವಿಟ್ಟು ಅಂತಹ ಅಭ್ಯಾಸ ಇರುವವರು ನಿಮ್ಮ ಕುಟುಂಬದ ಮುಖವನ್ನೊಮ್ಮೆ ನೋಡಿ ಬಿಟ್ಟುಬಿಡಿ.. ಬೀದಿಗೆ ಬಂದ ನಂತರ ಜೀವ ಕಳೆದುಕೊಂಡರೆ ನಿಮ್ಮನ್ನೇ ನಂಬಿಕೊಂಡ ಜೀವಗಳು ತಮ್ಮ ಜೀವನಪೂರ್ತಿ ಕೊರಗುತ್ತಲೇ ಇರಬೇಕಾಗುತ್ತದೆ..&lt;/p&gt;&lt;p&gt;ಇನ್ನು ಕಾರಣ ಏನೇ ಇರಲಿ.. ಇರುವುದೊಂದು ಬದುಕು.. ಇದ್ದು ಎದುರಿಸಬೇಕೇ ಹೊರತು ಕಣ್ಮರೆಯಾಗಿ ಹೆತ್ತ ಕರುಳಿಗೆ ಕಣ್ಣೀರು ತರಿಸಬಾರದು.. ಆ ಕೊನೆಯ ಕ್ಷಣ ಇನ್ನೇನು ರೈಲು ಬರುತ್ತಿದೆ ಎನುವಾಗಲಾದರೂ ಹೆಂಡತಿ ನಿನಪಾಗಲಿಲ್ಲವೇ.. ಮಗನ ಮುಖ ಕಣ್ಣ ಮುಂದೆ ಬರಲಿಲ್ಲವೇ? ಎನ್ನುವ ಹತ್ತಾರು ಪ್ರಶ್ನೆಗಳಿವೆ.. ಆದರೆ ಉತ್ತರ ಕೊಡಲು ಭರತನಿಲ್ಲ ಅಷ್ಟೇ.. ದಯವಿಟ್ಟು ಅಂತಹ ಆನ್ಲೈನ್ ಆಟಗಳ ಅಭ್ಯಾಸ ಇರುವವರು ದಯಮಾಡಿ ಬಿಟ್ಟುಬಿಡಿ..&lt;/p&gt;&lt;p&gt;ನಿನ್ನೆ ಭರತನ ಹನ್ನೊಂದು ದಿನಗಳ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ.. ಬಂದ ನೆಂಟರಿಷ್ಟರು ಮನೆಗೆ ಮರಳುತ್ತಾರೆ&zwnj;&zwnj;.. ನಾಳೆ ಮತ್ತೊಂದು ಕಾರ್ಯಕ್ಕೋ ಸಮಾರಂಭಕ್ಕೋ ಹೋಗುತ್ತಾರೆ.. ದಿನಕಳೆದಂತೆ ಭರತನನ್ನು ಮರೆಯುತ್ತಾರೆ.. ಆದರೆ ಆತನ ಕುಟುಂಬದ ಕತೆ..&zwnj; ಆತನನ್ನು ಹೆತ್ತ ತಾಯಿಯ ಕತೆ.. ಆತನೇ ಸರ್ವಸ್ವ ಎಂದು ನಂಬಿಕೊಂಡು ಬಂದ ಹೆಣ್ಣು ಮಗಳ ಕತೆ.. ಅಪ್ಪನನ್ನು ಹೀರೋ ಆಗಿ ನೋಡುವ ವಯಸ್ಸಿನ ಆ ಕಂದನ ಕತೆ.. ತಿಳಿಯದು.. ಭಗವಂತ ಅವರನ್ನೆಲ್ಲಾ ಗಟ್ಟಿ ಮಾಡಿ ಬಿಡಲಿ ಅಷ್ಟೇ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/relationship/kannada-social-media-influencer-youtuber-the-couplebuns-bharath-gowda-demise-reason/articleshow-he1rz1q"/>
        </item>
        <item>
            <title><![CDATA[ಮಂಗಳೂರಿನಲ್ಲಿ ಕಟ್ಟಿದ 3 ಕೋಟಿ ಮನೆ ತಿಂಗಳಲ್ಲೇ ನಾಶ; ಮತ್ತೆ ಲಕ್ಷುರಿ ಮನೆ ಕಟ್ಟಿದ Madhyama Kutumba; ಖರ್ಚು?]]></title>
            <link>https://kannada.asianetnews.com/tv-talk/madhyama-kutumba-youtube-channel-priya-monica-new-home/articleshow-s6lopmz</link>
            <guid isPermaLink="true">https://kannada.asianetnews.com/tv-talk/madhyama-kutumba-youtube-channel-priya-monica-new-home/articleshow-s6lopmz</guid>
            <pubDate>Tue, 17 Feb 2026 16:29:41 +0530</pubDate>
            <description><![CDATA[&lt;p&gt;ಮೂರು ಕೋಟಿ ರೂಪಾಯಿ ಖರ್ಚು ಮಾಡಿ ಮಂಗಳೂರು ಮೂಲದ ಕುಟುಂಬವೊಂದು ಮನೆ ಕಟ್ಟಿತ್ತು. ಆದರೆ ಮನೆ ಕಟ್ಟಿದ ತಿಂಗಳಿಗೆ ಇಂಟಿರಿಯರ್&zwnj; ಎಲ್ಲವೂ ಫಂಗಸ್&zwnj; ಆಗಿ, ಹಾಳಾಗಿತ್ತು. ಈಗ ಮತ್ತೆ ಹೊಸದಾಗಿ ಇಂಟಿರಿಯರ್&zwnj; ಡಿಸೈನ್&zwnj; ಮಾಡಿ ಮನೆ ಕಟ್ಟಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khnkt7j1bjw2gpg6bw415jv5,imgname-new-project--54--1771325693505.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು ಮೂಲದ ಕನ್ನಡದ ಯುಟ್ಯೂಬರ್ ಪ್ರಿಯಾ ಮೋನಿಕಾ ಅವರು ಮನೆ ಕಟ್ಟಿಸಿ ತಿಂಗಳಿಗೆ ಮನೆ ಹಾಳಾಗಿತ್ತು. ಹೌದು, ಇಂಟಿರಿಯರ್&zwnj; ಡಿಸೈನ್&zwnj; ಪೂರ್ತಿ ಫಂಗಸ್&zwnj; ಆಗಿತ್ತು. ಇಂಟಿರಿಯರ್&zwnj; ಮಾಡಿಸಿಕೊಟ್ಟವರು ಮೋಸ ಮಾಡಿದ್ದಾರೆ ಎಂದು ಪ್ರಿಯಾ ಆರೋಪ ಮಾಡಿದ್ದರು ಎಂದು ಪ್ರಿಯಾ ಮೋನಿಕಾ ಹೇಳಿದ್ದಾರೆ.&lt;/p&gt;&lt;h2&gt;ಹೊಸದಾಗಿ ಡಿಸೈನ್&zwnj; ಮಾಡಿಸಿದ್ದರು&lt;/h2&gt;&lt;p&gt;ಮಂಗಳೂರು ಮೂಲದ ಕನ್ನಡ ಯುಟ್ಯೂಬರ್&zwnj; ಪ್ರಿಯಾ ಅವರು ಒಂದು ವರ್ಷದ ಹಿಂದೆ ಮನೆ ಕಟ್ಟಿಸಿದ್ದಾರೆ. ಅಂದು ಕೂಡ ಅವರು ಗೃಹ ಪ್ರವೇಶ ಮಾಡಿದ್ದರು. ಈಗ ಮತ್ತೆ ಹೊಸದಾಗಿ ಇಂಟಿರಿಯರ್&zwnj; ಡಿಸೈನ್&zwnj; ಮಾಡಿಸಿದ್ದಾರೆ. ಇದಕ್ಕೂ ಕೂಡ ಖರ್ಚಾಗಿದೆ. ಒಂದಿಷ್ಟು ಲೋನ್&zwnj; ಮಾಡಿ, ಬಂಗಾರವನ್ನು ಅಡವಿಟ್ಟು ಮೂರು ಕೋಟಿ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿದ್ದರು. ಆದರೆ ಇಂಟಿರಿಯರ್&zwnj; ಡಿಸೈನ್&zwnj; ಪೂರ್ತಿ ಹಾಳಾಗಿದ್ದಕ್ಕೆ ಹೊಸ ಮನೆ ಮಾಡಿದ್ದರು ಎಂದು ಪ್ರಿಯಾ ಮೋನಿಕಾ ಹೇಳಿದ್ದಾರೆ.&lt;/p&gt;&lt;h2&gt;ಸಾಲ ಮಾಡಿದ್ದೇವೆ&lt;/h2&gt;&lt;p&gt;ನಮಗೆ ಯಾರೂ ಆಸ್ತಿ ಮಾಡಿಟ್ಟಿಲ್ಲ, ನಮಗೆ ದುಡ್ಡಿದೆ ಎಂದು ಕೆಲವರು ಹೇಳಿದ್ದರು. ಮೊದಲು ಮನೆ ಕಟ್ಟುವಾಗ ದುಡ್ಡಿತ್ತು, ಮನೆಗೆಂದು ದುಡ್ಡು ಇಟ್ಟಿದ್ದೆವು. ಈಗ ಆ ರೀತಿ ಇಲ್ಲ. ಮತ್ತೆ ಅಷ್ಟೇ ಖರ್ಚು ಮಾಡಿ ಮನೆ ಕಟ್ಟಿದ್ದೇವೆ. ಈಗ ಮತ್ತೆ ಸಾಲ ಮಾಡಿದ್ದೇವೆ, ಕೆಲವರು ಸಹಾಯವನ್ನು ಮಾಡಿದ್ದಾರೆ. ಈ ಕಷ್ಟ ನಮಗೆ ಮಾತ್ರ ಗೊತ್ತಿದೆ. ಮತ್ತೆ ಮನೆ ಕಟ್ಟಲೇಬೇಕಿತ್ತು ಎಂದು ಪ್ರಿಯಾ ಮೋನಿಕಾ ಅವರು ಹೇಳಿದ್ದಾರೆ.&lt;/p&gt;&lt;h2&gt;ಎಲ್ಲ ಹಣವನ್ನು ಆ ಹೆಂಗಸಿನ ಎದೆಗೆ ಹಾಕಿದ್ವಿ&lt;/h2&gt;&lt;p&gt;ಪ್ರಿಯಾ ಮೋನಿಕಾ ಅವರು ಮಧ್ಯಮ ಕುಟುಂಬ ಎಂಬ ಯುಟ್ಯೂಬ್&zwnj; ಚಾನೆಲ್&zwnj; ನಡೆಸುತ್ತಿದ್ದಾರೆ. ಆ ಮನೆಯನ್ನು ಹಾಗೆ ಬಿಟ್ಟರೆ, ಇನ್ನೊಂದಿಷ್ಟು ಹಾಳಾಗುತ್ತದೆ, ಎಲ್ಲ ಹಣವನ್ನು ಇಂಟಿರಿಯರ್&zwnj; ಡಿಸೈನ್&zwnj; ಮಾಡಿದ ಆ ಹೆಂಗಸಿನ ಎದೆಗೆ ಹಾಕಿದ್ದಕ್ಕೆ ಬೇಸರ ಆಗಿದೆ. ಇಂದು ಕೂಡ ಮನೆ ಕಟ್ಟಿದ ಕೆಲವರ ಬಿಲ್&zwnj;ನ್ನು ಇನ್ನು ಕ್ಲಿಯರ್&zwnj; ಮಾಡಿಲ್ಲ ಎಂದು ಪ್ರಿಯಾ ಮೋನಿಕಾ ಹೇಳಿದ್ದಾರೆ.&lt;/p&gt;&lt;h2&gt;ಇನ್ನೊಂದು ಸಮಸ್ಯೆ ಬಂತು!&lt;/h2&gt;&lt;p&gt;ಹಳೆ ಮನೆಯ ಇಂಟಿರಿಯರ್&zwnj; ಡಿಸೈನ್&zwnj; ಎಲ್ಲವನ್ನು ಡೆಮೊಲಿಶ್&zwnj; ಮಾಡಿ, ಮತ್ತೆ ಕಟ್ಟೋದು ಹೆಚ್ಚು ಖರ್ಚಾಗುವುದು. ಒಂದು ಕಡೆಯಿಂದ ಮನೆಯನ್ನು ಸರಿ ಮಾಡೋಕೆ ಹೋದರೆ, ಇನ್ನೊಂದು ಕಡೆ ಸಮಸ್ಯೆ ಬರುತ್ತಿತ್ತು. ಎಲೆಕ್ಟ್ರಿಕ್&zwnj; ಸಮಸ್ಯೆ, ಪ್ಲಂಬಿಂಗ್&zwnj; ಸಮಸ್ಯೆ ಎಂದು ತುಂಬ ಸಮಸ್ಯೆ ಇತ್ತು. ನಾನು ಹಾಗೂ ನನ್ನ ಗಂಡ ಇದ್ದರೆ ಓಕೆ, ಆದರೆ ಅಪ್ಪ-ಅಮ್ಮ, ಮಕ್ಕಳು ಕೂಡ ಇರುತ್ತಾರೆ. ಹೀಗಾಗಿ ನಮ್ಮ ಮನೆಯಲ್ಲಿ ವ್ಯವಸ್ಥೆ ಬೇಕು ಎಂದು ಪ್ರಿಯಾ ಮೋನಿಕಾ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/tv-talk/madhyama-kutumba-youtube-channel-priya-monica-new-home/articleshow-s6lopmz"/>
        </item>
        <item>
            <title><![CDATA[DMart ಆನ್‌ಲೈನ್‌ ಅಪ್ಲಿಕೇಶನ್‌ ಅಥವಾ DMart ಸ್ಟೋರ್‌? ಹೆಚ್ಚಿನ ಆಫರ್‌ ಸಿಗೋದು ಎಲ್ಲಿ?]]></title>
            <link>https://kannada.asianetnews.com/business/dmart-ready-online-app-vs-offline-store-offers-karnataka-shopping-tips-san/articleshow-s8gq2k2</link>
            <guid isPermaLink="true">https://kannada.asianetnews.com/business/dmart-ready-online-app-vs-offline-store-offers-karnataka-shopping-tips-san/articleshow-s8gq2k2</guid>
            <pubDate>Wed, 11 Feb 2026 21:05:48 +0530</pubDate>
            <description><![CDATA[&lt;p&gt;DMart Store vs DMart Ready App: Where to Find Better Offers? ನೀವು ಡಿಮಾರ್ಟ್ ಸ್ಟೋರ್&zwnj; ಅಥವಾ ಡಿಮಾರ್ಟ್ ರೆಡಿ ಅಪ್ಲಿಕೇಶನ್ ಮೂಲಕ ಶಾಪಿಂಗ್ ಮಾಡಬೇಕೇ? ಶೇಕಡಾ 99 ರಷ್ಟು ಜನರಿಗೆ ಆನ್&zwnj;ಲೈನ್ ಶಾಪಿಂಗ್&zwnj;ನ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kh6nc0cv8dpndy2zx5bqm8ne,imgname-dmart-1770824008091.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;DMart Offers: &lt;/strong&gt;ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದ ಅನೇಕ ನಗರಗಳಲ್ಲಿ, ಡಿಮಾರ್ಟ್ ಎಂಬ ಹೆಸರು ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಶಾಪಿಂಗ್&zwnj;ಗೆ ಸಮಾನಾರ್ಥಕವಾಗಿದೆ. ದಿನಸಿ ವಸ್ತುಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳು, ಬಟ್ಟೆ, ಎಲೆಕ್ಟ್ರಾನಿಕ್ಸ್ ವರೆಗೆ, ಡಿಮಾರ್ಟ್ ಯಾವಾಗಲೂ ಗ್ರಾಹಕರ ಮೊದಲ ಆಯ್ಕೆಯಾಗಿದೆ. ಆದರೆ ಈಗ ಡಿಮಾರ್ಟ್ ತನ್ನ ಆನ್&zwnj;ಲೈನ್ ಸೇವೆ ಡಿಮಾರ್ಟ್ ರೆಡಿಯನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಪ್ರಾರಂಭಿಸಿದೆ. ಆದ್ದರಿಂದ, ಆಫ್&zwnj;ಲೈನ್ ಡಿಮಾರ್ಟ್ ಅಂಗಡಿಗಳಿಂದ ಅಥವಾ ಡಿಮಾರ್ಟ್ ರೆಡಿ ಅಪ್ಲಿಕೇಶನ್/ವೆಬ್&zwnj;ಸೈಟ್&zwnj;ನಿಂದ ಶಾಪಿಂಗ್ ಮಾಡುವುದು ಪ್ರಯೋಜನಕಾರಿಯೇ ಎಂಬ ಪ್ರಶ್ನೆ ಗ್ರಾಹಕರ ಮುಂದೆ ಉದ್ಭವಿಸುತ್ತದೆ.&lt;/p&gt;&lt;p&gt;ಡಿಮಾರ್ಟ್&zwnj;ನ ಆಫ್&zwnj;ಲೈನ್ ಸ್ಟೋರ್&zwnj;ಗಳಲ್ಲಿ ಶಾಪಿಂಗ್ ಮಾಡುವಾಗ ಅನೇಕ ಗ್ರಾಹಕರು ಇನ್ನೂ ಹೆಚ್ಚು ಆತ್ಮವಿಶ್ವಾಸವನ್ನು ಅನುಭವಿಸುತ್ತಾರೆ. ಏಕೆಂದರೆ ಇಲ್ಲಿ ನೀವು ವಸ್ತುಗಳನ್ನು ಮುಖಾಮುಖಿಯಾಗಿ ಪರಿಶೀಲಿಸಬಹುದು, ಪ್ಯಾಕೇಜಿಂಗ್, ಎಕ್ಸ್&zwnj;ಪೈಯರಿ ಡೇಟ್&zwnj; ಮತ್ತು ಗುಣಮಟ್ಟವನ್ನು ನೀವೇ ನೋಡಬಹುದು. ಈ ಅಂಗಡಿಯು ತಿಂಗಳಿಗೆ ದೊಡ್ಡ ಪ್ರಮಾಣದಲ್ಲಿ ಖರೀದಿಸುವವರಿಗೆ ವಿಶೇಷವಾಗಿ ಅನುಕೂಲಕರವಾಗಿದೆ. ಏಕೆಂದರೆ ನೀವು ಎಲ್ಲಾ ಸರಕುಗಳನ್ನು ಒಂದೇ ಬಾರಿಗೆ ಖರೀದಿಸಬಹುದು ಮತ್ತು ತಕ್ಷಣ ಮನೆಗೆ ತೆಗೆದುಕೊಂಡು ಹೋಗಬಹುದು.&lt;/p&gt;&lt;p&gt;ಡಿಮಾರ್ಟ್ ಕೆಲವು ನಗರಗಳಲ್ಲಿ ರೂ. 2000 ಕ್ಕಿಂತ ಹೆಚ್ಚು ಬಿಲ್ ಮಾಡಿದರೆ ಉಚಿತ ಹೋಮ್ ಡೆಲಿವರಿ ನೀಡುತ್ತದೆ. ಇದಲ್ಲದೆ, ನಿಯಮಿತ ಗ್ರಾಹಕರು 'ಬೈ ಮೋರ್ ಸೇವ್ ಮೋರ್' ಸ್ಕ್ರ್ಯಾಚ್ ಕಾರ್ಡ್&zwnj;ಗಳು, ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಸ್ಟೋರ್&zwnj;ಗಳಲ್ಲಿಯೇ ಪಡೆಯುತ್ತಾರೆ, ಇದು ಒಟ್ಟಾರೆ ಬಿಲ್&zwnj;ನಲ್ಲಿ ಉತ್ತಮ ಉಳಿತಾಯಕ್ಕೆ ಕಾರಣವಾಗುತ್ತದೆ.&lt;/p&gt;&lt;h2&gt;&lt;strong&gt;ಡಿಮಾರ್ಟ್&zwnj; ರೆಡಿ ಆನ್&zwnj;ಲೈನ್&zwnj;ನ ಪ್ರಯೋಜನಗಳು&lt;/strong&gt;&lt;/h2&gt;&lt;p&gt;ಸಮಯದ ಕೊರತೆಯಿಂದಾಗಿ ಸ್ಟೋರ್&zwnj;ಗೆ ಭೇಟಿ ನೀಡಲು ಸಾಧ್ಯವಾಗದ ಗ್ರಾಹಕರಿಗೆ ಡಿಮಾರ್ಟ್ ರೆಡಿ ಅಪ್ಲಿಕೇಶನ್ ಮತ್ತು ವೆಬ್&zwnj;ಸೈಟ್ ಉತ್ತಮ ಆಯ್ಕೆಯಾಗಿದೆ. ಇಲ್ಲಿ, ದಿನಸಿ, ತರಕಾರಿಗಳು, ಗೃಹೋಪಯೋಗಿ ವಸ್ತುಗಳು, ಬಟ್ಟೆ ಮತ್ತು ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯಿಂದಲೇ ಆರ್ಡರ್ ಮಾಡಬಹುದು. ಡಿಮಾರ್ಟ್ ರೆಡಿ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ 'ಫ್ಲ್ಯಾಶ್ ಸೇಲ್' ಅನ್ನು ಹೊಂದಿದ್ದು, ಇದರಲ್ಲಿ ಆಯ್ದ ವಸ್ತುಗಳ ಮೇಲೆ ಶೇಕಡಾ 30 ರಿಂದ 50 ರವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ. ಮೊದಲ ಬಾರಿಗೆ ಗ್ರಾಹಕರು ರೂ 499 ಕ್ಕಿಂತ ಹೆಚ್ಚಿನ ಖರೀದಿಗಳಿಗೆ ರೂ 150 ರಿಯಾಯಿತಿ ಮತ್ತು 1 ತಿಂಗಳ ಉಚಿತ ಡೆಲಿವರಿ ಪಡೆಯುತ್ತಾರೆ.&lt;/p&gt;&lt;p&gt;ಇದಲ್ಲದೆ, ಪಿಕ್-ಅಪ್ ಪಾಯಿಂಟ್ ಆಯ್ಕೆಯೂ ಲಭ್ಯವಿದೆ. ಇದರಲ್ಲಿ, ನೀವು ಆನ್&zwnj;ಲೈನ್&zwnj;ನಲ್ಲಿ ಆರ್ಡರ್ ಮಾಡಿ ಹತ್ತಿರದ ಡಿಮಾರ್ಟ್&zwnj;ನಿಂದ ಸರಕುಗಳನ್ನು ನೀವೇ ತೆಗೆದುಕೊಂಡರೆ, ನಿಮಗೆ ಹೆಚ್ಚುವರಿಯಾಗಿ ಶೇಕಡಾ 3 ರಿಂದ 5 ರಷ್ಟು ರಿಯಾಯಿತಿ ಸಿಗುತ್ತದೆ. ನಿಯಮಿತ ಗ್ರಾಹಕರಿಗೆ ಸಬ್&zwnj;ಸ್ಕ್ರಿಪ್ಶನ್&zwnj; ಯೋಜನೆಯೂ ಇದೆ. ತಿಂಗಳಿಗೆ ಸುಮಾರು 99 ರೂ. ಪಾವತಿಸುವ ಮೂಲಕ, ನೀವು ಹಾಲು, ತರಕಾರಿಗಳಂತಹ ದೈನಂದಿನ ವಸ್ತುಗಳ ಮೇಲೆ ಶೇಕಡಾ 10 ರಿಂದ 20 ರಷ್ಟು ಉಳಿಸಬಹುದು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-money</category>
            <dc:creator>Santosh Naik</dc:creator>
            <atom:link href="https://kannada.asianetnews.com/business/dmart-ready-online-app-vs-offline-store-offers-karnataka-shopping-tips-san/articleshow-s8gq2k2"/>
        </item>
        <item>
            <title><![CDATA[Hajj Note : ಈ 100 ರೂಪಾಯಿ ನೋಟಿನ ಬೆಲೆ 56 ಲಕ್ಷ ! ನಿಮ್ಮನೆಯಲ್ಲೂ ಇದ್ಯಾ ಚೆಕ್ ಮಾಡಿ]]></title>
            <link>https://kannada.asianetnews.com/news-money/00-rupee-hajj-note-note-sold-for-56-lakhs-know-why/articleshow-thlfge8</link>
            <guid isPermaLink="true">https://kannada.asianetnews.com/news-money/00-rupee-hajj-note-note-sold-for-56-lakhs-know-why/articleshow-thlfge8</guid>
            <pubDate>Fri, 06 Feb 2026 17:22:49 +0530</pubDate>
            <description><![CDATA[&lt;p&gt;ಹಳೆ ನೋಟುಗಳಿಗೆ ವಿಶೇಷ ಬೇಡಿಕೆ ಇದೆ. ಆನ್ಲೈನ್ ಗಳಲ್ಲಿ ಲಕ್ಷಾಂತರ ರೂಪಾಯಿ ನೀಡಿ ಅದನ್ನು ಖರೀದಿಸಲಾಗುತ್ತದೆ. ಈಗ ಭಾರತದಲ್ಲಿ ಮುದ್ರಣವಾಗ್ತಿದ್ದ, ಗಲ್ಫ್ ದೇಶಗಳಲ್ಲಿ ಮಾನ್ಯವಾಗಿದ್ದ ನೋಟೊಂದು 56 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ನಿಮ್ಮ ಮನೆಯಲ್ಲೂ ಈ ನೋಟಿದ್ಯಾ ಚೆಕ್ ಮಾಡ್ಕೊಳ್ಳಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgscmzfv74yszhb6aqbvavqj,imgname-100-rupee-1770378657275.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಳೆಯ ನೂರು ರೂಪಾಯಿ ನೋಟೊಂದು 56 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ನಿಮಗೆ ಅಚ್ಚರಿ ಆಗ್ಬಹುದು. ಆದ್ರೆ ಇದು ಸತ್ಯ. 1950 ರ ದಶಕದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ 100 ರೂಪಾಯಿ 'ಹಜ್ ನೋಟು' ಲಂಡನ್ ಹರಾಜಿನಲ್ಲಿ 56 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಕೆಲವು ಗಲ್ಫ್ ದೇಶಗಳಲ್ಲಿ ಮಾತ್ರ ಈ ನೋಟುಗಳು ಮಾನ್ಯವಾಗಿದ್ದವು. ಈ ಅಪರೂಪದ ನೋಟಿಗೆ ಈಗ್ಲೂ ಬೆಲೆ ಜಾಸ್ತಿ.&lt;/p&gt;&lt;h2&gt;56 ಲಕ್ಷಕ್ಕೆ ಮಾರಾಟವಾದ 100ರ ನೋಟು&lt;/h2&gt;&lt;p&gt;56 ಲಕ್ಷ ರೂಪಾಯಿಗೆ ಮಾರಾಟವಾದ ನೋಟಿನ ಸಿರಿಯಲ್ ಸಂಖ್ಯೆ HA 078400. ಈ ಹಜ್ ನೋಟುಗಳನ್ನು, ಹಜ್ ಯಾತ್ರೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸುವ ಭಾರತೀಯ ತೀರ್ಥಯಾತ್ರಿಕರಿಗಾಗಿ ಆರ್ ಬಿಐ ಬಿಡುಗಡೆ ಮಾಡಿತ್ತು. ಯಾತ್ರಿಕರು ಹಜ್ ಯಾತ್ರೆಗಾಗಿ ಚಿನ್ನವನ್ನು ಖರೀದಿಸುತ್ತಿದ್ದರು. ಇದು ಭಾರತದಿಂದ ಅಕ್ರಮವಾಗಿ ಚಿನ್ನದ ರಫ್ತಿಗೆ ಕಾರಣವಾಯಿತು. ಅಕ್ರಮವಾಗಿ ಚಿನ್ನ ಖರೀದಿಸುವುದನ್ನು ತಡೆಯುವ ಉದ್ದೇಶದಿಂದ ಈ ಕರೆನ್ಸಿ ಜಾರಿಗೆ ಬಂದಿತ್ತು. ಈ ನೋಟು ಭಾರತದಲ್ಲಿ ಮಾನ್ಯವಾಗ್ತಿರಲಿಲ್ಲ. 1961 ರಲ್ಲಿ, ಕುವೈತ್ ತನ್ನದೇ ಆದ ಕರೆನ್ಸಿಯನ್ನು ಪರಿಚಯಿಸಿತು. ಇದನ್ನು ಶೀಘ್ರದಲ್ಲೇ ಇತರ ಗಲ್ಫ್ ರಾಷ್ಟ್ರಗಳು ಅಳವಡಿಸಿಕೊಂಡವು. ಇದರ ಪರಿಣಾಮವಾಗಿ, 1970 ರ ದಶಕದಲ್ಲಿ ಹಜ್ ನೋಟುಗಳ ಉತ್ಪಾದನೆ ನಿಂತುಹೋಯಿತು. ಇತ್ತೀಚಿನ ದಿನಗಳಲ್ಲಿ, ಈ ನೋಟುಗಳನ್ನು ಅಪರೂಪವೆಂದು ಪರಿಗಣಿಸಲಾಗುತ್ತದೆ. ಕರೆನ್ಸಿ ಸಂಗ್ರಹಕಾರರು, ಹೆಚ್ಚಿನ ಬೆಲೆ ನೀಡಿ ಇದನ್ನು ಖರೀದಿ ಮಾಡ್ತಿದ್ದಾರೆ.&lt;/p&gt;&lt;p&gt;Interesting Facts: ₹1 ನಾಣ್ಯ ತಯಾರಿಸಲು ₹1.11 ವೆಚ್ಚ! ನಷ್ಟ ಆದ್ರೂ ಖರ್ಚು ಮಾಡೋದ್ಯಾಕೆ ಸರ್ಕಾರ?&lt;/p&gt;&lt;h3&gt;ಹಜ್ ನೋಟುಗಳ ವಿಶೇಷತೆ ಏನು?&lt;/h3&gt;&lt;p&gt;ಹಜ್ ನೋಟ್ಗಳು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದವು. ಸೀರಿಯಲ್ ಸಂಖ್ಯೆ HA ನಿಂದ ಶುರುವಾಗ್ತಿತ್ತು. ಅದನ್ನು ಗುರುತಿಸುವುದು ಸುಲಭವಾಗಿತ್ತು. ಈ ನೋಟುಗಳು ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಬಹ್ರೇನ್, ಕುವೈತ್ ಮತ್ತು ಓಮನ್ನಂತಹ ಕೆಲವು ಗಲ್ಫ್ ದೇಶಗಳಲ್ಲಿ ಮಾತ್ರ ಮಾನ್ಯವಾಗಿದ್ದವು. ಹಜ್ ನೋಟುಗಳ ಬಣ್ಣ ಸಾಮಾನ್ಯ ಭಾರತೀಯ ನೋಟುಗಳಿಗಿಂತ ಭಿನ್ನವಾಗಿತ್ತು.&lt;/p&gt;&lt;p&gt;&lt;strong&gt;ಹಿಂದಿನ ವರ್ಷವೂ ದುಬಾರಿ ಬೆಲೆಗೆ ಮಾರಾಟವಾಗಿದ್ದ ನೋಟು&lt;/strong&gt;&lt;/p&gt;&lt;p&gt;ಈ ವರ್ಷ ಮಾತ್ರವಲ್ಲ ಮೇ 2024 ರಲ್ಲಿಯೂ ದುಬಾರಿ ಬೆಲೆಗೆ ಈ ನೋಟುಗಳು ಮಾರಾಟ ಆಗಿದ್ದವು. ಲಂಡನ್ನಲ್ಲಿ ನಡೆದ ಹರಾಜಿನಲ್ಲಿ ಎರಡು ಹಳೆಯ 10 ರೂಪಾಯಿ ನೋಟುಗಳು ಹೆಚ್ಚಿನ ಬೆಲೆಗೆ ಹರಾಜಾಗಿದ್ದವು. ಒಂದು ನೋಟು 6.90 ಲಕ್ಷ ರೂಪಾಯಿಗಳಿಗೆ ಮತ್ತು ಇನ್ನೊಂದು 5.80 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿತ್ತು.&lt;/p&gt;&lt;p&gt;ನಿಮ್ಮ ಬಳಿಯೂ 2 ಸಾವಿರ ರೂಪಾಯಿ ನೋಟಿದ್ಯಾ? ಆರ್ ಬಿಐ ಬಿಗ್ ಅಪ್ಡೇಟ್ ಇದು&lt;/p&gt;&lt;p&gt;ಆಗ ಹರಾಜಾಗಿದ್ದ ನೋಟುಗಳನ್ನು ಮೇ 25, 1918 ರಂದು ಮೊದಲನೆಯ ಮಹಾಯುದ್ಧದ ಅಂತಿಮ ವರ್ಷಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ನೋಟುಗಳು ಜುಲೈ 2, 1918 ರಂದು ಜರ್ಮನ್ ಯು-ಬೋಟ್ನಿಂದ ಟಾರ್ಪಿಡೊ ಮಾಡಲ್ಪಟ್ಟ ಬ್ರಿಟಿಷ್ ಹಡಗು ಎಸ್ಎಸ್ ಶಿರಾಲಾದಲ್ಲಿತ್ತು. ಎಸ್ಎಸ್ ಶಿರಾಲಾ ಮುಳುಗುವುದು ಒಂದು ಮಹತ್ವದ ಐತಿಹಾಸಿಕ ಘಟನೆಯಾಗಿದೆ. ಆ ಯುಗದ ನೋಟುಗಳು ವಿಶಿಷ್ಟ ಐತಿಹಾಸಿಕ ಮಹತ್ವವನ್ನು ಹೊಂದಿವೆ. ಅದಕ್ಕಾಗಿಯೇ ಅವು 21 ನೇ ಶತಮಾನದಲ್ಲಿ ಅಂತಹ ಹೆಚ್ಚಿನ ಬೆಲೆಗಳನ್ನು ಹೊಂದಿವೆ.&lt;/p&gt;]]></content:encoded>
            <category>news-money</category>
            <dc:creator>Roopa Hegde</dc:creator>
            <atom:link href="https://kannada.asianetnews.com/news-money/00-rupee-hajj-note-note-sold-for-56-lakhs-know-why/articleshow-thlfge8"/>
        </item>
        <item>
            <title><![CDATA['ನಮ್ಮ ಜೊತೆ ಇನ್ನೊಂದು ಯುದ್ಧಕ್ಕೆ ಭಾರತ ಸಿದ್ಧವಾಗಿದೆ, ಆದರೆ ಮನವಿ ಇಷ್ಟೇ..' ಎಂದ ಪಾಕ್‌ ಅಧ್ಯಕ್ಷ ಅಸಿಫ್‌ ಅಲಿ ಜರ್ದಾರಿ!]]></title>
            <link>https://kannada.asianetnews.com/world-news/pakistan-president-zardari-on-india-war-indus-water-treaty-kashmir-issue-san/articleshow-umy5bs6</link>
            <guid isPermaLink="true">https://kannada.asianetnews.com/world-news/pakistan-president-zardari-on-india-war-indus-water-treaty-kashmir-issue-san/articleshow-umy5bs6</guid>
            <pubDate>Wed, 04 Mar 2026 12:46:08 +0530</pubDate>
            <description><![CDATA[&lt;p&gt;ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು, ಭಾರತ ಮತ್ತೊಂದು ಸಂಘರ್ಷಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಯುದ್ಧದ ಹಾದಿ ಬಿಟ್ಟು ಮಾತುಕತೆಗೆ ಮರಳುವಂತೆ ನವದೆಹಲಿಗೆ ಒತ್ತಾಯಿಸಿದ ಅವರು, ಸಿಂಧೂ ನದಿ ನೀರು ಒಪ್ಪಂದ ಸ್ಥಗಿತಗೊಳಿಸಿದ್ದನ್ನು 'ಜಲ-ಭಯೋತ್ಪಾದನೆ' ಎಂದು ಕರೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjs229dmb374txv6d9wdrjch,imgname-asif-ali-zardari--1772515042740.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮಾ.4): &lt;/strong&gt;ಭಾರತ ದೇಶವು ಪಾಕಿಸ್ತಾನದ ಜೊತೆಗೆ ಮತ್ತೊಂದು ಸಂಘರ್ಷಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸೋಮವಾರ ಆರೋಪಿಸಿದ್ದಾರೆ ಮತ್ತು ನವದೆಹಲಿಯು ಯುದ್ಧ ರಂಗಭೂಮಿ ಎಂದು ಕರೆಯುವುದರಿಂದ ಹಿಂದೆ ಸರಿದು ಮಾತುಕತೆಗೆ ಮರಳಬೇಕೆಂದು ಒತ್ತಾಯಿಸಿದ್ದಾರೆ. ವಿರೋಧ ಪಕ್ಷದ ಪ್ರತಿಭಟನೆಗಳ ನಡುವೆ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಜರ್ದಾರಿ, 'ಮತ್ತೊಂದು ಯುದ್ಧಕ್ಕೆ ಸಿದ್ಧರಾಗುತ್ತಿರುವುದಾಗಿ ಭಾರತದ ನಾಯಕರು ಹೇಳುತ್ತಾರೆ. ಪ್ರಾದೇಶಿಕ ಶಾಂತಿಯ ಜೀವಮಾನದ ಪ್ರತಿಪಾದಕ ನಾನು, ನಾನು ಅದನ್ನು ಎಂದಿಗೂ ಶಿಫಾರಸು ಮಾಡೋದಿಲ್ಲ' ಎಂದು ಹೇಳಿದ್ದಾರೆ. ಇನ್ನು ಪಾಕಿಸ್ತಾನ ಯಾವಾಗಲೂ ಮಾತುಕತೆಯ ವೇದಿಕೆಗೆ ಬರಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;'ಯುದ್ಧ ರಂಗಭೂಮಿಯಿಂದ ಹಿಂದೆ ಸರಿಯಬೇಕು ಎಂದು ಭಾರತಕ್ಕೆ ನಾನು ಸಂದೇಶ ನೀಡುತ್ತೇನೆ. ಸೂತ್ರಬದ್ಧವಾದ ಸಂಧಾನಕ್ಕಾಗಿ ವೇದಿಕೆಗೆ ಬರಬೇಕು. ಇದು ಪ್ರಾದೇಶಿಕ ಭದ್ರತೆಗೆ ಇರುವ ಏಕೈಕ ದಾರಿ' ಎಂದು ಹೇಳಿದ್ದಾರೆ.&lt;/p&gt;&lt;p&gt;ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವನ್ನು ಪಾಕಿಸ್ತಾನಿ ಅಧ್ಯಕ್ಷ ಟೀಕಿಸಿದ್ದು, ಇದು ಜಲ-ಭಯೋತ್ಪಾದನೆ ಎಂದು ಕರೆದರು ಮತ್ತು ರಾಜಕೀಯ ಹತೋಟಿಗಾಗಿ ನವದೆಹಲಿ ನೀರಿನ ಹರಿವನ್ನು ಅಸ್ತ್ರಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.&lt;/p&gt;&lt;p&gt;ಜಮ್ಮು ಮತ್ತು ಕಾಶ್ಮೀರದ ಜನರಿಗೆ ಪಾಕಿಸ್ತಾನವು ರಾಜತಾಂತ್ರಿಕ ಮತ್ತು ನೈತಿಕ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಪುನರುಚ್ಚರಿಸಿದ್ದಾರೆ. ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೆ ದಕ್ಷಿಣ ಏಷ್ಯಾದಲ್ಲಿ ಶಾಶ್ವತ ಶಾಂತಿ ಸಿಗುವುದು ಅಸಾಧ್ಯವೆಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಅಫ್ಘಾನಿಸ್ತಾನಕ್ಕೆ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳ ಉಪಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡುವ ಇತ್ತೀಚಿನ ವಿಶ್ವಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಜರ್ದಾರಿ ಕೂಡ ತಮ್ಮ ಗಮನವನ್ನು ಪಶ್ಚಿಮದ ಕಡೆಗೆ ತಿರುಗಿಸಿದರು. &quot;ಈ ವಿಷಯವನ್ನು ನಿರ್ಲಕ್ಷಿಸಿದರೆ ಬೇರೆ ಯಾವುದೇ ದೇಶವು ಮತ್ತೊಂದು ದುರಂತ ದಾಳಿಗೆ ಬಲಿಯಾಗಬಹುದು ಎಂದು ಈ ವರದಿ ಎಚ್ಚರಿಸುತ್ತದೆ&quot; ಎಂದು ಅವರು ಹೇಳಿದರು.&lt;/p&gt;&lt;p&gt;ಗಡಿಯಾಚೆಗಿನ ಉಗ್ರಗಾಮಿ ಚಟುವಟಿಕೆಯಿಂದಾಗಿ ಮಿಲಿಟರಿ ಉಲ್ಬಣಗೊಳ್ಳುವುದನ್ನು ತಡೆಯಲು ಪಾಕಿಸ್ತಾನವು ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡಿದೆ ಎಂದು ಅವರು ಹೇಳಿದರು. &quot;ನಾನು ಸ್ಪಷ್ಟವಾಗಿ ಹೇಳುತ್ತೇನೆ: ಪಾಕಿಸ್ತಾನದ ಮಣ್ಣು ಪವಿತ್ರ. ನಮ್ಮ ಶಾಂತಿಯನ್ನು ಅಸ್ಥಿರಗೊಳಿಸಲು ನೆರೆಯ ಪ್ರದೇಶವನ್ನು ಬಳಸಲು ದೇಶೀಯ ಅಥವಾ ವಿದೇಶಿ ಯಾವುದೇ ಘಟಕವನ್ನು ನಾವು ಅನುಮತಿಸುವುದಿಲ್ಲ&quot; ಎಂದಿದ್ದಾರೆ.&lt;/p&gt;&lt;p&gt;ದೋಹಾ ಒಪ್ಪಂದದ ಅಡಿಯಲ್ಲಿ ಉಗ್ರಗಾಮಿ ಗುಂಪುಗಳು ಅಫ್ಘಾನ್ ನೆಲದಿಂದ ಕಾರ್ಯನಿರ್ವಹಿಸುವುದನ್ನು ತಡೆಯಲು ಮಾಡಿದ ಬದ್ಧತೆಗಳನ್ನು ಪೂರೈಸಲು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ವಿಫಲವಾಗಿದೆ ಎಂದು ಜರ್ದಾರಿ ಆರೋಪಿಸಿದರು. ಅಂತಹ ಗುಂಪುಗಳನ್ನು ಕೆಡವಲು ಮತ್ತು ಅಫ್ಘಾನಿಸ್ತಾನವು ಇತರರ ಮಹತ್ವಾಕಾಂಕ್ಷೆಗಳಿಗೆ ಯುದ್ಧಭೂಮಿಯಾಗಲು ಬಿಡಬೇಡಿ ಎಂದು ಅವರು ಕಾಬೂಲ್&zwnj;ಗೆ ಒತ್ತಾಯಿಸಿದರು.&lt;/p&gt;&lt;h2&gt;&lt;strong&gt;ಪ್ಯಾಲೆಸ್ತೇನ್&zwnj; ರಚನೆಗೆ ಪಾಕಿಸ್ತಾನ ಬೆಂಬಲ&lt;/strong&gt;&lt;/h2&gt;&lt;p&gt;ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಖಂಡಿಸಿದ್ದಾರೆ ಮತ್ತು ಇರಾನ್&zwnj;ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಯುಎಇ, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಗಳನ್ನು ಅವರು ಖಂಡಿಸಿದರು.&lt;/p&gt;&lt;p&gt;ಇದೇ ವೇಳೆ, 1967ಕ್ಕೂ ಮೊದಲಿನ ಗಡಿರೇಖೆಗಳ ಆಧಾರದ ಮೇಲೆ, ಅಲ್-ಖುದ್ಸ್ ಅಲ್ ಶರೀಫ್ ಅನ್ನು ರಾಜಧಾನಿಯನ್ನಾಗಿ ಹೊಂದಿರುವ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರದ ರಚನೆಗೆ ಪಾಕಿಸ್ತಾನದ ಬೆಂಬಲವನ್ನು ಜರ್ದಾರಿ ಪುನರುಚ್ಚರಿಸಿದರು.&lt;/p&gt;&lt;p&gt;ಸೋಮವಾರದ ಈ ಭಾಷಣವು ಅಧ್ಯಕ್ಷರಾಗಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಜರ್ದಾರಿ ಅವರು ಮಾಡಿದ ಒಂಬತ್ತನೇ ಭಾಷಣವಾಗಿದೆ. ಜೈಲಿನಲ್ಲಿರುವ ತಮ್ಮ ನಾಯಕ ಮತ್ತು ದೇಶದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ವಿರೋಧ ಪಕ್ಷದ ಸದಸ್ಯರಿಂದ ಅವರ ಭಾಷಣಕ್ಕೆ ಪದೇ ಪದೇ ಅಡ್ಡಿಯುಂಟಾಯಿತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-money</category>
            <dc:creator>Santosh Naik</dc:creator>
            <atom:link href="https://kannada.asianetnews.com/world-news/pakistan-president-zardari-on-india-war-indus-water-treaty-kashmir-issue-san/articleshow-umy5bs6"/>
        </item>
        <item>
            <title><![CDATA[UPI New Rules : Google Pay, PhonePe ಬಳಸೋರಿಗೆ ಫೆಬ್ರವರಿಯಿಂದ ಹಣ ಕಳಿಸೋಕೆ ಹೊಸ ರೂಲ್ಸ್]]></title>
            <link>https://kannada.asianetnews.com/gallery/business/upi-update-new-rules-for-google-pay-phonepe-users-from-february-2026-vf98dl7</link>
            <guid isPermaLink="true">https://kannada.asianetnews.com/gallery/business/upi-update-new-rules-for-google-pay-phonepe-users-from-february-2026-vf98dl7</guid>
            <pubDate>Sun, 08 Feb 2026 15:36:02 +0530</pubDate>
            <description><![CDATA[&lt;p&gt;UPI rule changes 2026: 2026ರ ಫೆಬ್ರವರಿಯಿಂದ ಯುಪಿಐ ಹಣ ವರ್ಗಾವಣೆ ನಿಯಮಗಳು ಬದಲಾಗಲಿವೆ. ಈ ಬದಲಾವಣೆಗಳು ಗೂಗಲ್ ಪೇ, ಫೋನ್&zwnj;ಪೇ ಸೇರಿದಂತೆ ಎಲ್ಲಾ ಆ್ಯಪ್&zwnj;ಗಳಿಗೂ ಅನ್ವಯವಾಗಲಿದೆ. ಈ ಹೊಸ ನಿಯಮಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಬಹಳ ಮುಖ್ಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hs2mfcrv79g6w8tpw9s1sah6,imgname-asianet-news--1-.jpg" type="image/jpeg" height="390" width="690"/>
            <content:encoded><![CDATA[&lt;p&gt;UPI rule changes 2026: 2026ರ ಫೆಬ್ರವರಿಯಿಂದ ಯುಪಿಐ ಹಣ ವರ್ಗಾವಣೆ ನಿಯಮಗಳು ಬದಲಾಗಲಿವೆ. ಈ ಬದಲಾವಣೆಗಳು ಗೂಗಲ್ ಪೇ, ಫೋನ್&zwnj;ಪೇ ಸೇರಿದಂತೆ ಎಲ್ಲಾ ಆ್ಯಪ್&zwnj;ಗಳಿಗೂ ಅನ್ವಯವಾಗಲಿದೆ. ಈ ಹೊಸ ನಿಯಮಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಬಹಳ ಮುಖ್ಯ.&lt;/p&gt;&lt;img&gt;2026ರ ಫೆಬ್ರವರಿಯಿಂದ ಯುಪಿಐ ಹಣ ವರ್ಗಾವಣೆ ವ್ಯವಸ್ಥೆಯಲ್ಲಿ ಪ್ರಮುಖ ಹೊಸ ನಿಯಮಗಳು ಜಾರಿಗೆ ಬರಲಿವೆ. ಪ್ರತಿದಿನ ಯುಪಿಐ ಬಳಸುವವರಿಗೆ ಇದು ಬಹಳ ಮುಖ್ಯವಾದ ಅಪ್&zwnj;ಡೇಟ್. ಈ ಬದಲಾವಣೆಗಳು ಗೂಗಲ್ ಪೇ (Google Pay), ಫೋನ್&zwnj;ಪೇ (PhonePe), ಪೇಟಿಎಂ (Paytm), ಮತ್ತು ಭೀಮ್ (BHIM) ಸೇರಿದಂತೆ ಎಲ್ಲಾ ಯುಪಿಐ ಆ್ಯಪ್&zwnj;ಗಳಿಗೂ ಅನ್ವಯಿಸುತ್ತವೆ. ವಹಿವಾಟುಗಳನ್ನು ವೇಗವಾಗಿ, ಸುರಕ್ಷಿತವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸುವುದೇ ಈ ಹೊಸ ನಿಯಮಗಳ ಮುಖ್ಯ ಉದ್ದೇಶ.&lt;img&gt;ಹೊಸ ನಿಯಮಗಳ ಪ್ರಕಾರ, ಇನ್ಮುಂದೆ ಯುಪಿಐ ವಹಿವಾಟುಗಳು ಗರಿಷ್ಠ 10 ಸೆಕೆಂಡುಗಳಲ್ಲಿ ಪೂರ್ಣಗೊಳ್ಳಬೇಕು. ಮೊದಲು ಈ ಸಮಯದ ಮಿತಿ 30 ಸೆಕೆಂಡುಗಳಾಗಿದ್ದರಿಂದ, ಕೆಲವೊಮ್ಮೆ ಹಣ ಕಳುಹಿಸಲು ತಡವಾಗುತ್ತಿತ್ತು. ಯುಪಿಐ ಆ್ಯಪ್ ಮತ್ತು ಬ್ಯಾಂಕ್ ನಡುವಿನ ಸಂಪರ್ಕವನ್ನು ಸುಧಾರಿಸುವ API ಕಾರ್ಯಗಳನ್ನು ಸಹ ವೇಗಗೊಳಿಸಲಾಗಿದೆ. ಇದರಿಂದಾಗಿ, ಹೆಚ್ಚು ಟ್ರಾಫಿಕ್ ಇರುವ ಸಮಯದಲ್ಲೂ ಹಣ ವರ್ಗಾವಣೆ ಸರಾಗವಾಗಿ ನಡೆಯುತ್ತದೆ.&lt;img&gt;ದೇಶದಲ್ಲಿ ಡಿಜಿಟಲ್ ವಹಿವಾಟುಗಳು ಹೆಚ್ಚಾಗುತ್ತಿರುವುದರಿಂದ, ಯುಪಿಐ ವ್ಯವಸ್ಥೆಯ ಮೇಲಿನ ಹೊರೆಯೂ ಹೆಚ್ಚಾಗಿದೆ. ಇದನ್ನು ನಿಭಾಯಿಸಲು ಈ ಹೊಸ ನಿಯಮಗಳನ್ನು ತರಲಾಗಿದೆ. ಹೆಚ್ಚು ಬಳಕೆದಾರರು ಇರುವಾಗ ಸಂಭವಿಸುವ ವಹಿವಾಟು ವೈಫಲ್ಯಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಇದರಿಂದ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಏಕಕಾಲದಲ್ಲಿ ಅನುಕೂಲವಾಗಲಿದೆ.&lt;img&gt;ಸುರಕ್ಷತಾ ವೈಶಿಷ್ಟ್ಯಗಳಿಗೂ ಹೆಚ್ಚಿನ ಗಮನ ನೀಡಲಾಗಿದೆ. ದೊಡ್ಡ ಮೊತ್ತದ ವಹಿವಾಟುಗಳಿಗೆ ಹೆಚ್ಚುವರಿ ಪರಿಶೀಲನಾ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಅಲ್ಲದೆ, ಆಟೋ-ಡೆಬಿಟ್ ಮತ್ತು ಚಂದಾದಾರಿಕೆ ಪಾವತಿಗಳನ್ನು ನಿರ್ವಹಿಸುವುದು ಸುಲಭವಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣ ಸಿಗಲಿದೆ. ದೀರ್ಘಕಾಲದವರೆಗೆ ಬಳಸದ ಯುಪಿಐ ಐಡಿಗಳನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದು.&lt;img&gt;ನಿಷ್ಕ್ರಿಯಗೊಂಡ ಐಡಿಗಳನ್ನು ಮತ್ತೆ ಬಳಸಲು, ಅವುಗಳನ್ನು ಪುನಃ ಸಕ್ರಿಯಗೊಳಿಸಬೇಕಾಗುತ್ತದೆ. ಇದರಿಂದ ವಂಚನೆಯ ಅಪಾಯ ಕಡಿಮೆಯಾಗುತ್ತದೆ. ವಿಫಲವಾದ ಅಥವಾ ಸಿಲುಕಿಕೊಂಡ ವಹಿವಾಟುಗಳಿಗೆ ತ್ವರಿತ ಪರಿಹಾರ ನೀಡುವ ವ್ಯವಸ್ಥೆಯನ್ನೂ ಸೇರಿಸಲಾಗಿದೆ. ಹಲವು ಸಂದರ್ಭಗಳಲ್ಲಿ, ಕೆಲವೇ ಗಂಟೆಗಳಲ್ಲಿ ಹಣ ವಾಪಸ್ ಬರುತ್ತದೆ. ಇದರ ಜೊತೆಗೆ, ಅನಗತ್ಯ 'ಕಲೆಕ್ಟ್ ರಿಕ್ವೆಸ್ಟ್&zwnj;'ಗಳಿಗೆ ಮಿತಿ ಹೇರುವುದರಿಂದ ಸ್ಪ್ಯಾಮ್ ನೋಟಿಫಿಕೇಶನ್&zwnj;ಗಳು ಕಡಿಮೆಯಾಗುತ್ತವೆ.]]></content:encoded>
            <category>news-money</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/business/upi-update-new-rules-for-google-pay-phonepe-users-from-february-2026-vf98dl7"/>
        </item>
        <item>
            <title><![CDATA[ಐಫೋನ್ ಪ್ರಿಯರಿಗೆ ಶಾಕ್: ಭಾರತದಲ್ಲಿ ಭಾರೀ ದುಬಾರಿಯಾಗಲಿವೆ ಹಳೆಯ ಐಫೋನ್ ಮಾಡೆಲ್‌ಗಳು! ಕಾರಣವೇನು?]]></title>
            <link>https://kannada.asianetnews.com/mobiles/older-iphone-15-16-price-hike-india-apple-retail-incentive-withdrawal-san/articleshow-vwd7gfv</link>
            <guid isPermaLink="true">https://kannada.asianetnews.com/mobiles/older-iphone-15-16-price-hike-india-apple-retail-incentive-withdrawal-san/articleshow-vwd7gfv</guid>
            <pubDate>Sat, 28 Mar 2026 16:55:49 +0530</pubDate>
            <description><![CDATA[&lt;p&gt;ಭಾರತದಲ್ಲಿ ಹಳೆಯ ಐಫೋನ್ ಮಾಡೆಲ್&zwnj;ಗಳ ಬೆಲೆ ₹5,000 ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಆಪಲ್ ಸಂಸ್ಥೆಯು ರಿಟೇಲರ್&zwnj;ಗಳಿಗೆ ನೀಡುತ್ತಿದ್ದ 'ಡಿಮ್ಯಾಂಡ್ ಜನರೇಷನ್' ಪ್ರೋತ್ಸಾಹ ಧನವನ್ನು ಹಿಂತೆಗೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k1jbs8mm43z6cqvf1ejr3f0g,imgname-iphone-15--2--1754036740756.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮಾ.28): &lt;/strong&gt;ನೀವು ಐಫೋನ್ 15 ಅಥವಾ ಐಫೋನ್ 16 ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ತಡಮಾಡಬೇಡಿ. ಏಕೆಂದರೆ ಭಾರತದಲ್ಲಿ ಹಳೆಯ ಐಫೋನ್ ಮಾಡೆಲ್&zwnj;ಗಳ ಬೆಲೆ ಸುಮಾರು ₹5,000 ರವರೆಗೆ ಏರಿಕೆಯಾಗಲಿದೆ. ಆಪಲ್ ಸಂಸ್ಥೆಯು ರಿಟೇಲ್&zwnj; ವ್ಯಾಪಾರಿಗಳಿಗೆ ನೀಡುತ್ತಿದ್ದ ಪ್ರಮುಖ ಪ್ರೋತ್ಸಾಹ ಧನವನ್ನು (Incentive Support) ಹಿಂತೆಗೆದುಕೊಳ್ಳಲು ನಿರ್ಧರಿಸಿರುವುದೇ ಇದಕ್ಕೆ ಮುಖ್ಯ ಕಾರಣ.&lt;/p&gt;&lt;p&gt;ಆಪಲ್ ಸಂಸ್ಥೆಯು ಈ ವಾರದಿಂದ ರೀಟೇಲರ್&zwnj;ಗಳಿಗೆ ಮತ್ತು ಚಾನೆಲ್ ಪಾರ್ಟ್&zwnj;ನರ್&zwnj;ಗಳಿಗೆ ನೀಡುತ್ತಿದ್ದ 'ಡಿಮ್ಯಾಂಡ್ ಜನರೇಷನ್' (DG) ಬೆಂಬಲವನ್ನು ಸ್ಥಗಿತಗೊಳಿಸುತ್ತಿದೆ. ಇದುವರೆಗೆ ಈ ಡಿಜಿ ಬೆಂಬಲದ ಮೂಲಕ ವ್ಯಾಪಾರಿಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಫೋನ್ ನೀಡಲು ಸಾಧ್ಯವಾಗುತ್ತಿತ್ತು. ಈಗ ಈ ಸಬ್ಸಿಡಿ ನಿಲ್ಲುತ್ತಿರುವುದರಿಂದ, ಐಫೋನ್ 15 ಮತ್ತು ಐಫೋನ್ 16 ಮಾಡೆಲ್&zwnj;ಗಳ ಬೆಲೆ ₹5,000 ಹೆಚ್ಚಾಗಲಿದೆ.&lt;/p&gt;&lt;p&gt;ಈಗಾಗಲೇ ಆಪಲ್ ತನ್ನ ಕ್ಯಾಶ್&zwnj;ಬ್ಯಾಕ್ ಆಫರ್&zwnj;ಗಳನ್ನು ₹6,000 ರಿಂದ ₹1,000 ಕ್ಕೆ ಇಳಿಸಿತ್ತು. ಇದರಿಂದ ಐಫೋನ್ 17 ಸರಣಿಯು ದುಬಾರಿಯಾಗಿತ್ತು. ಈಗ ಡಿಜಿ ಬೆಂಬಲದ ಹಿಂತೆಗೆತವು ಹಳೆಯ ಮಾಡೆಲ್&zwnj;ಗಳ ಮೇಲೂ ಬೆಲೆ ಏರಿಕೆಯ ಬರೆ ಎಳೆದಿದೆ.&lt;/p&gt;&lt;h2&gt;&lt;strong&gt;ಗ್ರಾಹಕರ ಮೇಲೆ ಏನು ಪರಿಣಾಮ?&lt;/strong&gt;&lt;/h2&gt;&lt;p&gt;ಮಾರುಕಟ್ಟೆಯ ಮೂಲಗಳ ಪ್ರಕಾರ, ಐಫೋನ್ ಮಾಡೆಲ್&zwnj;ಗಳ ಅಧಿಕೃತ ಎಂಆರ್&zwnj;ಪಿ (MRP) ಬದಲಾಗುವುದಿಲ್ಲ. ಆದರೆ, ಈವರೆಗೆ ಚಿಲ್ಲರೆ ವ್ಯಾಪಾರಿಗಳು ನೀಡುತ್ತಿದ್ದ ರಿಯಾಯಿತಿಗಳು ಇನ್ನು ಮುಂದೆ ಇರುವುದಿಲ್ಲ. ಅಂದರೆ, ಗ್ರಾಹಕರು ಫೋನ್ ಖರೀದಿಸುವಾಗ ಜೇಬಿನಿಂದ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. &quot;ಇಂದೇ ಈ ರಿಯಾಯಿತಿ ದರದ ಕೊನೆಯ ದಿನವಾಗುವ ಸಾಧ್ಯತೆಯಿದೆ. ಒಮ್ಮೆ ಈ ಸಪೋರ್ಟ್ ನಿಂತರೆ, ಗ್ರಾಹಕರು ಅದೇ ಫೋನ್&zwnj;ಗೆ ₹5,000 ಹೆಚ್ಚು ತೆರಬೇಕಾಗುತ್ತದೆ,&quot; ಎಂದು ರೀಟೇಲರ್&zwnj; ಒಬ್ಬರು ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಯಾವ ಮಾಡೆಲ್&zwnj;ಗಳಿಗೆ ಅನ್ವಯ?&lt;/strong&gt;&lt;/h2&gt;&lt;p&gt;ಈ ಬೆಲೆ ಏರಿಕೆಯು ಪ್ರಮುಖವಾಗಿ ಐಫೋನ್ 15 ಮತ್ತು ಐಫೋನ್ 16 ಸರಣಿಗಳಿಗೆ ಅನ್ವಯಿಸುತ್ತದೆ. ಇತ್ತೀಚಿನ ಐಫೋನ್ 17 ಸರಣಿಯ ಮೇಲೆ ಈ ಡಿಜಿ ಸಪೋರ್ಟ್ ಹಿಂತೆಗೆತದ ಪ್ರಭಾವ ಇರುವುದಿಲ್ಲ.&lt;/p&gt;&lt;p&gt;ಕೇವಲ ಆಪಲ್ ಮಾತ್ರವಲ್ಲ, ಸ್ಯಾಮ್&zwnj;ಸಂಗ್, ಒಪ್ಪೋ, ವಿವೋ, ರಿಯಲ್&zwnj;ಮಿ, ಶಿಯೋಮಿ ಮತ್ತು ಮೋಟೋರೋಲಾದಂತಹ ಆಂಡ್ರಾಯ್ಡ್ ಬ್ರ್ಯಾಂಡ್&zwnj;ಗಳು ಕೂಡ ಕಳೆದ ನವೆಂಬರ್&zwnj;ನಿಂದ ಬೆಲೆಗಳನ್ನು ಹೆಚ್ಚಿಸುತ್ತಿವೆ. ಮೆಮೊರಿ ಮತ್ತು ಸ್ಟೋರೇಜ್ ಘಟಕಗಳ ಬೆಲೆ ಗಗನಕ್ಕೇರಿರುವುದು ಈ ಏರಿಕೆಗೆ ಮೂಲ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಮುಂದಿನ ದಿನಗಳು ಹೇಗಿರಲಿವೆ?&lt;/strong&gt;&lt;/h2&gt;&lt;p&gt;ಜಾಗತಿಕ ಪೂರೈಕೆ ಕೊರತೆ ಮತ್ತು ರೂಪಾಯಿ ಮೌಲ್ಯದ ಏರಿಳಿತದಿಂದಾಗಿ 2026ರ ವರ್ಷವು ಸ್ಮಾರ್ಟ್&zwnj;ಫೋನ್ ಮಾರುಕಟ್ಟೆಗೆ ಸವಾಲಾಗಲಿದೆ. ಐಡಿಸಿ (IDC) ವರದಿಯ ಪ್ರಕಾರ, ಈ ವರ್ಷ ಸ್ಮಾರ್ಟ್&zwnj;ಫೋನ್ ಸಾಗಣೆಯಲ್ಲಿ ಶೇ. 12 ರಿಂದ 15 ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಆದರೆ ಆಂಡ್ರಾಯ್ಡ್ ಫೋನ್&zwnj;ಗಳಿಗೆ ಹೋಲಿಸಿದರೆ ಐಫೋನ್ ಮಾರುಕಟ್ಟೆ ಸ್ಥಿರವಾಗಿರಲಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-money</category>
            <dc:creator>Santosh Naik</dc:creator>
            <atom:link href="https://kannada.asianetnews.com/mobiles/older-iphone-15-16-price-hike-india-apple-retail-incentive-withdrawal-san/articleshow-vwd7gfv"/>
        </item>
        <item>
            <title><![CDATA[ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಮತ್ತೆ ಮಹಾ ಕುಸಿತ! ಇವತ್ತಿನ ಗೋಲ್ಡ್ ರೇಟ್ ಎಷ್ಟು?]]></title>
            <link>https://kannada.asianetnews.com/gallery/business/gold-prices-fall-for-fourth-straight-day-in-india-24k-gold-drops-980-rupees-per-10g-kvn-wab2kdm</link>
            <guid isPermaLink="true">https://kannada.asianetnews.com/gallery/business/gold-prices-fall-for-fourth-straight-day-in-india-24k-gold-drops-980-rupees-per-10g-kvn-wab2kdm</guid>
            <pubDate>Thu, 05 Mar 2026 10:36:49 +0530</pubDate>
            <description><![CDATA[&lt;p&gt;ಬೆಂಗಳೂರು: ಇರಾನ್-ಇಸ್ರೇಲ್ ಯುದ್ದ ಆರಂಭವಾಗುತ್ತಿದ್ದಂತೆಯೇ ರಾಕೆಟ್ ವೇಗದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಮೇಲೇರಿತ್ತು. ಆದರೆ ಇದೀಗ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದೆ. ಮಾರ್ಚ್ 05ರ ಬೆಳಗ್ಗೆ ಚಿನ್ನದ ಹಾಗೂ ಬೆಳ್ಳಿಯಲ್ಲಿ ಮತ್ತೆ ಕುಸಿತ ಕಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3jf3nfpg5xxdf7pzzancjvm,imgname-up-gold-rate-today-24-22-carat-gold-price-hartalika-teej-26-august-2025-1756187710966.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಇರಾನ್-ಇಸ್ರೇಲ್ ಯುದ್ದ ಆರಂಭವಾಗುತ್ತಿದ್ದಂತೆಯೇ ರಾಕೆಟ್ ವೇಗದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಮೇಲೇರಿತ್ತು. ಆದರೆ ಇದೀಗ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದೆ. ಮಾರ್ಚ್ 05ರ ಬೆಳಗ್ಗೆ ಚಿನ್ನದ ಹಾಗೂ ಬೆಳ್ಳಿಯಲ್ಲಿ ಮತ್ತೆ ಕುಸಿತ ಕಂಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮಧ್ಯಪ್ರಾಚ್ಯದಲ್ಲಿ ಅಘೋಷಿತ ಯುದ್ದ ಪ್ರಾರಂಭವಾಗುತ್ತಿದ್ದಂತೆಯೇ ಚಿನ್ನದ ಮಾರುಕಟ್ಟೆಯಲ್ಲಿ ದಾಖಲೆಯ ಏರಿಕೆ ಕಂಡಿತ್ತು. ಚಿನ್ನದ ಬೆಲೆಯ ಏರಿಕೆಯನ್ನು ಕಂಡ ಗ್ರಾಹಕರು ಸದ್ಯದಲ್ಲೇ 10 ಗ್ರಾಮ್&zwnj;ಗೆ ಎರಡು ಲಕ್ಷ ರುಪಾಯಿ ಗಡಿ ದಾಟಬಹುದೇನೋ ಎಂದು ಅತಂಕಕ್ಕೆ ಒಳಗಾಗಿದ್ದರು.&lt;/p&gt;&lt;img&gt;&lt;p&gt;ಯಾಕೆಂದರೆ ಮಾರ್ಚ್ 01ರಂದು 24 ಕ್ಯಾರಟ್ ಒಂದು ಗ್ರಾಮ್ ಚಿನ್ನಕ್ಕೆ ಬರೋಬ್ಬರಿ ದಾಖಲೆಯ 17,309 ರುಪಾಯಿ ತಲುಪಿತ್ತು. ಇನ್ನು ಅದೇ ದಿನ 22 ಕ್ಯಾರಟ್ ಒಂದು ಗ್ರಾಮ್ ಚಿನ್ನಕ್ಕೆ ಬರೋಬ್ಬರಿ 15,865 ರುಪಾಯಿಗಳಾಗಿತ್ತು. ಇದು ಚಿನ್ನ ಖರೀದಿಸುವವರ ನಿದ್ದೆಗೆಡಿಸುವಂತೆ ಮಾಡಿತ್ತು.&lt;/p&gt;&lt;img&gt;&lt;p&gt;ಆದರೆ ಮಾರ್ಚ್ 02ರಿಂದ ನಿರಂತರವಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಬೆಲೆ ಇಳಿಕೆ ಕಾಣುತ್ತಿರುವುದು ಚಿನ್ನ ಗ್ರಾಹಕರ ಮುಖದಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಇದೀಗ ಮಾರ್ಚ್ 05ರ ಬೆಳಗ್ಗೆಯೂ ವೇಳೆಗೆ ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಕುಸಿತ ಕಂಡಿದೆ.&lt;/p&gt;&lt;img&gt;&lt;p&gt;ಇಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 980 ರುಪಾಯಿ ಕುಸಿತ ಕಂಡಿದೆ. ಮಾರ್ಚ್ 05ರ ಬೆಳಗ್ಗೆ 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 16,353 ರುಪಾಯಿಗೆ ಬಂದು ನಿಂತಿದೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ 22 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲೂ ಭಾರೀ ಇಳಿಕೆ ಕಂಡಿದೆ. ಇಂದು ಒಂದೇ ದಿನ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಮ್&zwnj;ಗೆ 900 ರುಪಾಯಿ ಇಳಿಕೆಯಾಗಿದೆ. ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,990 ರುಪಾಯಿಗೆ ಬಂದಿಳಿದಿದೆ.&lt;/p&gt;&lt;img&gt;&lt;p&gt;ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡಿದ್ದರೂ, ಬೆಳ್ಳಿ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡಿಲ್ಲ. ಅದೇ ರೀತಿ ಬೆಲೆ ಹೆಚ್ಚಳವೂ ಆಗಿಲ್ಲ. ನಿನ್ನೆಯಂತೆ ಇಂದೂ ಒಂದು ಒಂದು ಕೆಜಿ ಬೆಳ್ಳಿಯ ಬೆಲೆ 2,85,000ನಲ್ಲಿಯೇ ಮುಂದುವರೆದಿದೆ.&lt;/p&gt;]]></content:encoded>
            <category>news-money</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/gold-prices-fall-for-fourth-straight-day-in-india-24k-gold-drops-980-rupees-per-10g-kvn-wab2kdm"/>
        </item>
        <item>
            <title><![CDATA[Home Loan:  50 ಲಕ್ಷದ ಹೋಮ್‌ ಲೋನ್‌ ಬೇಕಾದಲ್ಲಿ ನಿಮ್ಮ ಸಂಬಳ ಎಷ್ಟಿರಬೇಕು? ಎಷ್ಟಿರಲಿದೆ EMI?]]></title>
            <link>https://kannada.asianetnews.com/gallery/business/salary-and-emi-calculation-for-rs-50-lakh-home-loan-san-x5gslt6</link>
            <guid isPermaLink="true">https://kannada.asianetnews.com/gallery/business/salary-and-emi-calculation-for-rs-50-lakh-home-loan-san-x5gslt6</guid>
            <pubDate>Tue, 10 Mar 2026 18:11:20 +0530</pubDate>
            <description><![CDATA[ಸ್ವಂತ ಮನೆ ಖರೀದಿಸುವ ಆಸೆ ಇರುವವರು ಗೃಹಸಾಲಕ್ಕೆ ಅರ್ಜಿ ಹಾಕುತ್ತಾರೆ. ಆದರೆ, ತಮ್ಮ ಸಂಬಳಕ್ಕೆ ಎಷ್ಟು ಸಾಲ ಸಿಗುತ್ತೆ, ತಿಂಗಳಿಗೆ ಎಷ್ಟು ಇಎಂಐ ಕಟ್ಟಬೇಕು ಅನ್ನೋ ಬಗ್ಗೆ ಹಲವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅಂತಹವರಿಗಾಗಿಯೇ ಈ ಸ್ಟೋರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kjs8b20467aeen8qats0akv6,imgname-what-should-be-your-salary-to-get-a-rs50-lakh-home-loan-how-much-emi-pay-per-month-1772521621507.jpg" type="image/jpeg" height="390" width="690"/>
            <content:encoded><![CDATA[ಸ್ವಂತ ಮನೆ ಖರೀದಿಸುವ ಆಸೆ ಇರುವವರು ಗೃಹಸಾಲಕ್ಕೆ ಅರ್ಜಿ ಹಾಕುತ್ತಾರೆ. ಆದರೆ, ತಮ್ಮ ಸಂಬಳಕ್ಕೆ ಎಷ್ಟು ಸಾಲ ಸಿಗುತ್ತೆ, ತಿಂಗಳಿಗೆ ಎಷ್ಟು ಇಎಂಐ ಕಟ್ಟಬೇಕು ಅನ್ನೋ ಬಗ್ಗೆ ಹಲವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅಂತಹವರಿಗಾಗಿಯೇ ಈ ಸ್ಟೋರಿ.&lt;img&gt;ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟುವ ಕನಸಿರುತ್ತದೆ. ಹೆಚ್ಚಿನವರು ಸ್ವಲ್ಪ ಹಣವನ್ನು ಡೌನ್ ಪೇಮೆಂಟ್ ಕಟ್ಟಿ, ಉಳಿದ ಮೊತ್ತಕ್ಕೆ ಗೃಹಸಾಲ ಪಡೆಯುತ್ತಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರವನ್ನು 1.25% ಕಡಿತಗೊಳಿಸಿದ ನಂತರ, ಗೃಹಸಾಲದ ಬಡ್ಡಿದರಗಳು ಕಡಿಮೆಯಾಗಿವೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್&zwnj;ಬಿಐ, ತನ್ನ ಗ್ರಾಹಕರಿಗೆ 7.25% ರಿಂದ ಗೃಹಸಾಲ ನೀಡುತ್ತಿದೆ. 30 ವರ್ಷಗಳ ಅವಧಿಗೆ ₹50 ಲಕ್ಷ ಸಾಲಕ್ಕೆ ನಿಮ್ಮ ಸಂಬಳ ಎಷ್ಟಿರಬೇಕು ಎಂದು ತಿಳಿಯೋಣ.&lt;img&gt;ನೀವು ಸಾಲ ಮರುಪಾವತಿ ಅವಧಿಯನ್ನು 10, 15 ಅಥವಾ 30 ವರ್ಷಗಳವರೆಗೆ ಆಯ್ಕೆ ಮಾಡಿಕೊಳ್ಳಬಹುದು. 7.25% ಬಡ್ಡಿ ದರದಲ್ಲಿ 30 ವರ್ಷಗಳ ಅವಧಿಗೆ ₹50 ಲಕ್ಷ ಗೃಹಸಾಲ ಪಡೆಯಲು, ನಿಮ್ಮ ಮಾಸಿಕ ಸಂಬಳ ₹69,000 ಇರಬೇಕು. ನಿಮ್ಮ ಸಂಬಳದ ಮೇಲೆ ಬೇರೆ ಯಾವುದೇ ಸಾಲ ಇಲ್ಲದಿದ್ದರೆ, ನಿಮಗೆ ಖಂಡಿತವಾಗಿ ₹50 ಲಕ್ಷ ಸಾಲ ಸಿಗುತ್ತದೆ. ಇದಕ್ಕಾಗಿ ನೀವು ಪ್ರತಿ ತಿಂಗಳು ₹34,500 ಇಎಂಐ ಕಟ್ಟಬೇಕಾಗುತ್ತದೆ. ಅಂದರೆ, ನಿಮ್ಮ ಸಂಬಳದ ಅರ್ಧದಷ್ಟು ಹಣ ಇಎಂಐಗೆ ಹೋಗುತ್ತದೆ.&lt;img&gt;ಯಾವುದೇ ಬ್ಯಾಂಕ್&zwnj;ನಿಂದ ಗೃಹಸಾಲ ಪಡೆಯಲು ನಿಮಗೆ ಉತ್ತಮ ಕ್ರೆಡಿಟ್ ಸ್ಕೋರ್ ಬೇಕು. ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಬ್ಯಾಂಕ್&zwnj;ಗಳು ಸುಲಭವಾಗಿ ಸಾಲ ನೀಡುತ್ತವೆ. ಸ್ಕೋರ್ ಕಡಿಮೆ ಇದ್ದರೆ ಸಾಲ ಸಿಗುವುದು ಕಷ್ಟ. ಬ್ಯಾಂಕ್&zwnj;ಗಳು ನಿಮ್ಮ ಹಳೆಯ ಸಾಲದ ವಿವರ ಮತ್ತು ನೀವು ಅದನ್ನು ಮರುಪಾವತಿ ಮಾಡಿದ ರೀತಿಯನ್ನು ಪರಿಶೀಲಿಸುತ್ತವೆ. ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ, ಕಡಿಮೆ ಬಡ್ಡಿದರದಲ್ಲಿ ಬೇಗನೆ ಸಾಲ ಸಿಗುತ್ತದೆ. ಹಾಗಾಗಿ, ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ.]]></content:encoded>
            <category>news-money</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/salary-and-emi-calculation-for-rs-50-lakh-home-loan-san-x5gslt6"/>
        </item>
        <item>
            <title><![CDATA[ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ದಿಢೀರ್ ₹2 ಸಾವಿರ ಏರಿಕೆ! ಬೆಂಗಳೂರಲ್ಲಿಂದು ಚಿನ್ನದ ರೇಟ್ ಎಷ್ಟು?]]></title>
            <link>https://kannada.asianetnews.com/gallery/business/gold-and-silver-prices-surge-again-today-gold-rate-in-bengaluru-shocks-buyers-kvn-ylurk6p</link>
            <guid isPermaLink="true">https://kannada.asianetnews.com/gallery/business/gold-and-silver-prices-surge-again-today-gold-rate-in-bengaluru-shocks-buyers-kvn-ylurk6p</guid>
            <pubDate>Mon, 09 Feb 2026 10:52:26 +0530</pubDate>
            <description><![CDATA[&lt;p&gt;ಬೆಂಗಳೂರು: ಈ ತಿಂಗಳ ಆರಂಭದಲ್ಲಿ ನಿರಂತರ ಕುಸಿತ ಕಂಡಿದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿದೆ. ಇದು 'ಚಿನ್ನ' ಎನ್ನುವ ಗ್ರಾಹಕರ ನಿದ್ದೆಗೆಡಿಸಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನ ಬೆಳ್ಳಿ ದರವೆಷ್ಟು? ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4sa30q5gyte1m30xghsxzp3,imgname-gold-1757491069669.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಈ ತಿಂಗಳ ಆರಂಭದಲ್ಲಿ ನಿರಂತರ ಕುಸಿತ ಕಂಡಿದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿದೆ. ಇದು 'ಚಿನ್ನ' ಎನ್ನುವ ಗ್ರಾಹಕರ ನಿದ್ದೆಗೆಡಿಸಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನ ಬೆಳ್ಳಿ ದರವೆಷ್ಟು? ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಫೆಬ್ರವರಿ ತಿಂಗಳ ಆರಂಭದಿಂದ ನಿರಂತವಾಗಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕುಸಿತ ಕಾಣುತ್ತಾ ಸಾಗಿತ್ತು. ಇದು ಸಾಮಾನ್ಯ ಹಾಗೂ ಮಧ್ಯಮ ವರ್ಗದವರು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ ಶನಿವಾರದಿಂದ ಮತ್ತೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ನಿರಂತರ ಏರಿಕೆ ಕಂಡು ಬಂದಿದೆ.&lt;/p&gt;&lt;img&gt;&lt;p&gt;ಕಳೆದ ಶನಿವಾರ ಅಂದರೆ ಫೆಬ್ರವರಿ 07ರಂದು 24 ಕ್ಯಾರಟ್ ಪ್ರತಿಗ್ರಾಮ್ ಚಿನ್ನದ ಬೆಲೆಯಲ್ಲಿ 289 ರುಪಾಯಿ ಹಾಗೂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿಗ್ರಾಮ್&zwnj;ಗೆ 265 ರುಪಾಯಿ ಏರಿಕೆ ಕಂಡಿತ್ತು. ಇನ್ನು ನಿನ್ನೆ ಭಾನುವಾರವಾಗಿದ್ದರಿಂದ ಅದೇ ಬೆಲೆ ಮುಂದುವರೆದಿತ್ತು.&lt;/p&gt;&lt;img&gt;&lt;p&gt;ಇದೀಗ ಸೋಮವಾರ ಮತ್ತೆ ಚಿನ್ನದ ಬೆಲೆಯಲ್ಲಿ ಕುಸಿತ ಕಾಣಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. 24 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 224 ರುಪಾಯಿ ಏರಿಕೆ ಕಂಡಿದ್ದು, ಈ ಮೂಲಕ ಗ್ರಾಮ್&zwnj;ಗೆ 15,884 ರುಪಾಯಿಗಳಾಗಿವೆ. ಇನ್ನು 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಒಂದೇ ದಿನ ಬರೋಬ್ಬರೀ 2,240 ರುಪಾಯಿ ಏರಿಕೆಯಾಗಿದೆ.&lt;/p&gt;&lt;img&gt;&lt;p&gt;ಇನ್ನು ಆಭರಣ ಚಿನ್ನವಾಗಿರುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ 205 ರುಪಾಯಿ ಏರಿಕೆ ಕಂಡಿದ್ದು, ಒಂದು ಗ್ರಾಮ್ ಚಿನ್ನಕ್ಕೆ 14,560 ರುಪಾಯಿಗಳಾಗಿವೆ. ಈ ಮೂಲಕ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನ 2050 ರುಪಾಯಿ ಏರಿಕೆಯಾಗಿದೆ.&lt;/p&gt;&lt;img&gt;&lt;p&gt;ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲೂ ಕಳೆದ ಎರಡು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದೆ. ಫೆಬ್ರವರಿ 06ರಂದು ಪ್ರತಿ ಕೆಜಿ ಬೆಳ್ಳಿಯ ಬೆಲೆ 2.75 ಸಾವಿರ ರುಪಾಯಿಗೆ ಇಳಿದಿತ್ತು. ಇದೀಗ ಮತ್ತೆ ಬೆಳ್ಳಿ ಬೆಲೆ ವೇಗವಾಗಿ ಮುನ್ನುಗ್ಗುತ್ತಿದೆ.&lt;/p&gt;&lt;img&gt;&lt;p&gt;ಶನಿವಾರ ಪ್ರತಿ ಕೆಜಿ ಬೆಳ್ಳಿ ದರದಲ್ಲಿ 10 ಸಾವಿರ ರುಪಾಯಿ ಏರಿಕೆ ಕಂಡು 2,85,000 ರುಪಾಯಿ ತಲುಪಿತ್ತು. ಇದೀಗ ಇಂದು ಕೂಡಾ ಬೆಳ್ಳಿಯ ದರದಲ್ಲಿ ಒಂದು ಕೆಜಿಗೆ 15,000 ರುಪಾಯಿ ಏರಿಕೆ ಕಂಡಿದ್ದು, ಇಂದು ಒಂದು ಕೆಜಿ ಬೆಳ್ಳಿಯ ಬೆಲೆ 3 ಲಕ್ಷ ರುಪಾಯಿಗಳಾಗಿವೆ. ಚಿನ್ನ ಬೆಳ್ಳಿ ದರದಲ್ಲಿ ಇದೇ ರೀತಿ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news-money</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/gold-and-silver-prices-surge-again-today-gold-rate-in-bengaluru-shocks-buyers-kvn-ylurk6p"/>
        </item>
        <item>
            <title><![CDATA[ಗ್ಯಾರಂಟಿಯಿಂದ ರಾಜ್ಯ ಸರ್ಕಾರಕ್ಕೆ ಹೊರೆ! ಆದ್ರೂ ರಾಜ್ಯದ ಜನಕ್ಕೆ ಶಕ್ತಿ ತುಂಬುತ್ತಿದ್ದೇವೆ: ಡಿಕೆಶಿ]]></title>
            <link>https://kannada.asianetnews.com/state/guarantee-schemes-strengthen-people-financially-despite-burden-on-government-says-dk-shivakumar-kvn/articleshow-z0pwo4b</link>
            <guid isPermaLink="true">https://kannada.asianetnews.com/state/guarantee-schemes-strengthen-people-financially-despite-burden-on-government-says-dk-shivakumar-kvn/articleshow-z0pwo4b</guid>
            <pubDate>Thu, 26 Feb 2026 06:18:03 +0530</pubDate>
            <description><![CDATA[&lt;p&gt;'ಕುಸುಮ ಸಂಜೀವಿನಿ' ಯೋಜನೆಗೆ ಚಾಲನೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾದರೂ ಜನರಿಗೆ ಆರ್ಥಿಕ ಶಕ್ತಿ ತುಂಬುತ್ತಿವೆ ಎಂದು ಸಮರ್ಥಿಸಿಕೊಂಡರು. ಈ ಯೋಜನೆಗಳು ಜನರ ಮಾನಸಿಕ ಧೈರ್ಯ ಹೆಚ್ಚಿಸುತ್ತಿದ್ದು, &amp;nbsp;ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khfee2pzd9xkawvh1ewnz2n4,imgname-dk-shivakumar-1771118725855.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾದರೂ ಆರ್ಥಿಕ ವಿಚಾರದಲ್ಲಿ ರಾಜ್ಯದ ಜನತೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.&lt;/p&gt;&lt;p&gt;ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ &lsquo;ಕುಸುಮ ಸಂಜೀವಿನಿ&rsquo; ಹೆಸರಲ್ಲಿ ಹಿಮೋಫಿಲಿಯ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಹಾಗೂ 108 ಆ್ಯಂಬುಲೆನ್ಸ್ ಸೇವೆಗಳನ್ನು ಡಿಸಿಎಂ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.&lt;/p&gt;&lt;h2&gt;&lt;strong&gt;ಐದು ಗ್ಯಾರಂಟಿ ಯೋಜನೆಯಿಂದ ಪ್ರತಿ ಕುಟುಂಬಕ್ಕೆ 5 ಸಾವಿರದಷ್ಟು ಆರ್ಥಿಕ ನೆರವು&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರ ಐದು ಗ್ಯಾರಂಟಿ ಮೂಲಕ ಕುಟುಂಬಕ್ಕೆ ₹5 ಸಾವಿರದಷ್ಟು ಹಣಕಾಸಿನ ನೆರವು, ಉಳಿತಾಯ ನೀಡುತ್ತಿದೆ. ಗೃಹಲಕ್ಷ್ಮೀ, ಉಚಿತ ಬಸ್ಸು, 200 ಯುನಿಟ್&zwnj;ವರೆಗೆ ವಿದ್ಯುತ್&zwnj;, ಯುವನಿಧಿ ಯೋಜನೆ ಜಾರಿಗೊಳಿಸಿದೆ. ಸರ್ಕಾರಕ್ಕೆ ಇದರಿಂದ ಹೊರೆ ಆಗುತ್ತಿರಬಹುದು. ಹೊರೆಯಾದರೂ ಸರ್ಕಾರ ಜನತೆಗೆ ಆರ್ಥಿಕ ಶಕ್ತಿ ಕಡಿಮೆ ಆಗಬಾರದು, ಮಾನಸಿಕ ಒತ್ತಡ ಉಂಟಾಗಬಾರದು. ಹೀಗೆ ಜನರಿಗೆ ಮಾನಸಿಕ ಧೈರ್ಯ ತುಂಬಲು, ಆರ್ಥಿಕ ಶಕ್ತಿ ತುಂಬುತ್ತಿದೆ ಎಂದರು.&lt;/p&gt;&lt;p&gt;ಜನರ ಜೇಬಲ್ಲಿ ₹10 ಹೆಚ್ಚಿದ್ದರೆ ಆತ್ಮವಿಶ್ವಾಸ ಜಾಸ್ತಿ ಮಾಡುತ್ತದೆ. ಇದನ್ನು ನಾವು ನೋಡಬೇಕಾಗುತ್ತದೆ. ಯಾರು ಇರಲಿ, ಇಲ್ಲದಿರಲಿ, ಕಾಂಗ್ರೆಸ್&zwnj; ಸರ್ಕಾರ ಎಲ್ಲ ಹಂತದಲ್ಲೂ ಜನರ ಜತೆಯಿರಲಿದೆ. ಮಾನವನ ಸೇವೆ ಮಾಡುವುದು ನಮ್ಮ ಸರ್ಕಾರದ ಬದ್ಧತೆ. ಆರೋಗ್ಯ ಕ್ಷೇತ್ರದ ಬೇಡಿಕೆಗೆ ನಮ್ಮ ಸರ್ಕಾರ ಎಂದಿಗೂ ಹಿಂದೇಟು ಹಾಕಿಲ್ಲ. ಇಂತಹ ಅಪರೂಪದ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ಆತ್ಮವಿಶ್ವಾಸ ತುಂಬಬೇಕು. ರಾಜ್ಯದ ಮಕ್ಕಳು ಡಿ.ಕೆ.ಶಿವಕುಮಾರ್&zwnj;, ದಿನೇಶ್&zwnj; ಗುಂಡೂರಾವ್&zwnj; ಆಗುವಂತೆ ಬೆಳೆಯಬೇಕು. ಯಾವುದೂ ಅಸಾಧ್ಯವಲ್ಲ. ದೇವರು ಅವಕಾಶ ನೀಡುತ್ತಾನೆ. ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಗ್ಯಾರಂಟಿ ಇದ್ದೇ ಇರುತ್ತೆ&lt;/strong&gt;&lt;/h3&gt;&lt;p&gt;ಜನರ ಕಲ್ಯಾಣಕ್ಕಾಗಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಇದರಿಂದ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ತೊಡಕಾಗಿಲ್ಲ. ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆ, ಎರಡನ್ನೂ ಸಮಾನವಾಗಿ ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ.&lt;/p&gt;&lt;p&gt;ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ ಸುಮಾರು 52 ಸಾವಿರ ಕೋಟಿ ರು.ಗೂ ಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ. ಹೀಗಾಗಿ, ಈ ಹಣ ಭಾರ ಎಂದು ಡಿಸಿಎಂ ಹೇಳಿರಬಹುದು.&lt;/p&gt;&lt;p&gt;ಸಿದ್ದರಾಮಯ್ಯ, ಮುಖ್ಯಮಂತ್ರಿ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-money</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/guarantee-schemes-strengthen-people-financially-despite-burden-on-government-says-dk-shivakumar-kvn/articleshow-z0pwo4b"/>
        </item>
    </channel>
</rss>
