<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 04 Aug 2026 12:18:32 +0530</lastBuildDate>
        <atom:link href="https://kannada.asianetnews.com/rss/news-money" rel="self" type="application/rss+xml"/>
        <item>
            <title><![CDATA[ಪ್ರೊಟೀನ್ ಶೇಕ್ ಕುಡಿದ್ರೆ ಬುದ್ಧಿಹೀನ ಆಗ್ತಾರೆ - ಫಿಟ್ನೆಸ್ ಪ್ರಿಯರಿಗೆ ಆಘಾತ ತಂದ ಕಂಗನಾ ಹೇಳಿಕೆ]]></title>
            <link>https://kannada.asianetnews.com/entertainment/kangana-ranaut-says-too-much-protein-makes-you-dumb-kangana-ranaut-on-protein-gkn/articleshow-5hvd4u1</link>
            <guid isPermaLink="true">https://kannada.asianetnews.com/entertainment/kangana-ranaut-says-too-much-protein-makes-you-dumb-kangana-ranaut-on-protein-gkn/articleshow-5hvd4u1</guid>
            <pubDate>Tue, 28 Jul 2026 16:05:12 +0530</pubDate>
            <description><![CDATA[&lt;p&gt;ನಟಿ ಕಂಗನಾ ರಣಾವತ್ ಅವರ ಪ್ರಕಾರ ಹೆಚ್ಚು ಪ್ರೊಟೀನ್ ಸೇವನೆಯಿಂದ ಬುದ್ಧಿಶಕ್ತಿ ಕುಂದುತ್ತದೆ. ಆದರೆ, ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಪುರಾವೆಗಳಿಲ್ಲವೆಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಪ್ರೊಟೀನ್ ಮೆದುಳಿಗೆ ಅವಶ್ಯಕ. ಕಾರ್ಬೋಹೈಡ್ರೇಟ್ ಮತ್ತು ನೀರಿನ ಕೊರತೆಯಿಂದ ತಾತ್ಕಾಲಿಕವಾಗಿ ಮೆದುಳು ಮಂದವಾಗಬಹುದೇ ಹೊರತು, ಐಕ್ಯೂ ಕಡಿಮೆಯಾಗುವುದಿಲ್ಲ. ಆದ್ದರಿಂದ ಸಮತೋಲಿತ ಆಹಾರ ಸೇವಿಸುವುದು ಮುಖ್ಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kym4320mmaet39hs7h8ypt5x,imgname-india-s-cultural-heritage-youtube-thumbnail-1785234294804.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: &lt;/strong&gt;ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆಗಳು ವಿವಾದ ಆಗೋದು ಹೊಸದೇನೂ ಅಲ್ಲ. ಆದರೆ ಈ ಬಾರಿ ಅವರು ನೇರವಾಗಿ ಫಿಟ್&zwnj;ನೆಸ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೆಚ್ಚು ಪ್ರೊಟೀನ್ ಶೇಕ್ ಕುಡಿಯುವುದರಿಂದ ಮನುಷ್ಯರು ಬುದ್ಧಿಹೀನರಾಗುತ್ತಾರೆ ಮತ್ತು ಮೆದಳಿನ ಕಾರ್ಯಕ್ಷಮತೆ ಮಂದಗತಿಯಾಗುತ್ತದೆ ಎಂದು ಕಂಗನಾ ಹೇಳಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಪ್ರೊಟೀನ್ ಡಯಟ್ ಬಗ್ಗೆ ಕಂಗನಾ ಮಾಡಿರುವ ಈ ಕಾಮೆಂಟ್&zwnj;ನಿಂದಾಗಿ ಜಿಮ್&zwnj;ಗೆ ಹೋಗುವವರು ಮತ್ತು ಫಿಟ್&zwnj;ನೆಸ್ ಪ್ರಿಯರು ಗೊಂದಲಕ್ಕೀಡಾಗಿದ್ದಾರೆ. ಹಾಗಾದರೆ ಕಂಗನಾ ಹೇಳಿದಂತೆ ಪ್ರೊಟೀನ್ ನಿಜವಾಗಿಯೂ ಮನುಷ್ಯನ ಐಕ್ಯೂ (IQ) ಕಡಿಮೆ ಮಾಡುತ್ತದೆಯೇ? ಆರೋಗ್ಯ ತಜ್ಞರು ಮತ್ತು ವೈಜ್ಞಾನಿಕ ಸಂಶೋಧನೆಗಳು ಏನು ಹೇಳುತ್ತವೆ? ಇಲ್ಲಿದೆ ಮಾಹಿತಿ.&lt;/p&gt;&lt;p&gt;ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಹೆಚ್ಚು ಪ್ರೊಟೀನ್ ಸೇವಿಸುವುದರಿಂದ ಮನುಷ್ಯನ ಬುದ್ಧಿವಂತಿಕೆ ಅಥವಾ ಐಕ್ಯೂ ಕಡಿಮೆಯಾಗುತ್ತದೆ ಅಥವಾ ಮೆದುಳು ಶಾಶ್ವತವಾಗಿ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಇದು ಕೇವಲ ಒಂದು ಅಪೋಹವಷ್ಟೇ. ಆದರೆ ತಪ್ಪಾದ ಆಹಾರ ಪದ್ಧತಿಯಿಂದಾಗಿ ತಾತ್ಕಾಲಿಕವಾಗಿ ಮೆದುಳು ಮಂದವಾದಂತೆ ಅಥವಾ ಸುಸ್ತಾದಂತೆ ಭಾಸವಾಗುವುದು ನಿಜ. ಈ ತಾತ್ಕಾಲಿಕ ಪರಿಸ್ಥಿತಿಯನ್ನು ಕಂಡು ಅನೇಕರು ಐಕ್ಯೂ ಕಡಿಮೆಯಾಗುತ್ತಿದೆ ಎಂದು ತಪ್ಪಾಗಿ ಭಾವಿಸುತ್ತಾರೆ.&lt;/p&gt;&lt;h2&gt;&lt;strong&gt;ಹೈ-ಪ್ರೊಟೀನ್ ಡಯಟ್&zwnj;ನಲ್ಲಿ 'ಬ್ರೈನ್ ಫಾಗ್' ಉಂಟಾಗುವುದು ಏಕೆ?&lt;/strong&gt;&lt;/h2&gt;&lt;p&gt;ಪ್ರೊಟೀನ್ ಸೇವಿಸುವಾಗ ಮಾಡುವ ಕೆಲವು ಸಣ್ಣ ತಪ್ಪುಗಳು ಮೆದುಳಿನ ಕಾರ್ಯಕ್ಷಮತೆ ಮಂದವಾಗಲು ಕಾರಣವಾಗುತ್ತವೆ.&lt;/p&gt;&lt;ul&gt; &lt;li&gt;&lt;strong&gt;ಕಾರ್ಬೋಹೈಡ್ರೇಟ್&zwnj;ಗಳ ಕೊರತೆ&lt;/strong&gt;: ಮೆದುಳು ವೇಗವಾಗಿ ಕೆಲಸ ಮಾಡಲು ಗ್ಲೂಕೋಸ್ ಅಗತ್ಯವಿದೆ. ಕೀಟೋ ಡಯಟ್ ಹೆಸರಿನಲ್ಲಿ ಕಾರ್ಬೋಹೈಡ್ರೇಟ್&zwnj;ಗಳನ್ನು ಸಂಪೂರ್ಣವಾಗಿ ಬಿಟ್ಟು ಕೇವಲ ಪ್ರೊಟೀನ್ ಮಾತ್ರ ಸೇವಿಸಿದರೆ, ಮೆದುಳಿಗೆ ಸರಿಯಾದ ಇಂಧನ ಸಿಗದೆ ಕಿರಿಕಿರಿ ಮತ್ತು ಮಂದಬುದ್ಧಿ ಉಂಟಾಗಬಹುದು.&lt;/li&gt; &lt;li&gt;&lt;strong&gt;ನಿರ್ಜಲೀಕರಣ (Dehydration):&lt;/strong&gt; ಪ್ರೊಟೀನ್ ಅರಗಿಸಿಕೊಳ್ಳಲು ಕಿಡ್ನಿಗಳಿಗೆ ಹೆಚ್ಚಿನ ನೀರು ಬೇಕು. ಪ್ರೊಟೀನ್ ಸೇವಿಸಿ ಸರಿಯಾಗಿ ನೀರು ಕುಡಿಯದಿದ್ದರೆ ನಿರ್ಜಲೀಕರಣ ಉಂಟಾಗುತ್ತದೆ. ಇದು ತಾತ್ಕಾಲಿಕವಾಗಿ ಏಕಾಗ್ರತೆ ಮತ್ತು ಜ್ಞಾಪಕಶಕ್ತಿಯನ್ನು ಕುಂದಿಸುತ್ತದೆ.&lt;/li&gt; &lt;li&gt;&lt;strong&gt;ಫುಡ್ ಕೋಮಾ: &lt;/strong&gt;ಒಂದೇ ಬಾರಿಗೆ ಹೆಚ್ಚಿನ ಪ್ರೊಟೀನ್ ಸೇವಿಸಿದರೆ, ಅದನ್ನು ಜೀರ್ಣಿಸಲು ದೇಹವು ಹೆಚ್ಚಿನ ಶಕ್ತಿಯನ್ನು ವ್ಯಯಿಸುತ್ತದೆ. ಇದರಿಂದ ರಕ್ತದ ಹರಿವು ಮೆದುಳಿನಿಂದ ಜೀರ್ಣಾಂಗವ್ಯೂಹದ ಕಡೆಗೆ ತಿರುಗುತ್ತದೆ. ಫಲಿತಾಂಶವಾಗಿ ತಿಂದ ನಂತರ ತೀವ್ರ ಬದ್ಧತೆ ಮತ್ತು ಅಮಲೇರಿದಂತೆ ಭಾಸವಾಗುತ್ತದೆ.&lt;/li&gt;&lt;/ul&gt;&lt;h2&gt;&lt;strong&gt;ವಿಜ್ಞಾನಿಗಳು ಏನು ಹೇಳುತ್ತಾರೆ?&lt;/strong&gt;&lt;/h2&gt;&lt;p&gt;&lt;strong&gt;ಮೆದುಳಿಗೆ ಪ್ರೊಟೀನ್ ಅಗತ್ಯ: &lt;/strong&gt;ಪ್ರೊಟೀನ್&zwnj;ನಲ್ಲಿರುವ ಅಮೈನೋ ಆಮ್ಲಗಳು ಡೋಪಮೈನ್ ಮತ್ತು ಸಿರೊಟೋನಿನ್&zwnj;ನಂತಹ ಮೆದುಳಿಗೆ ಅಗತ್ಯವಾದ ನ್ಯೂರೋ ಟ್ರಾನ್ಸ್&zwnj;ಮಿಟರ್&zwnj;ಗಳ ತಯಾರಿಕೆಗೆ ಅಡಿಪಾಯವಾಗಿವೆ. ಪ್ರೊಟೀನ್ ಕೊರತೆಯಾದರೆ ಮಾನಸಿಕ ಸ್ಥಿತಿ ಮತ್ತು ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.&lt;/p&gt;&lt;p&gt;&lt;strong&gt;ಸುರಕ್ಷಿತ ಪ್ರಮಾಣ: &lt;/strong&gt;ಒಬ್ಬ ಆರೋಗ್ಯವಂತ ವ್ಯಕ್ತಿಯು ತನ್ನ ದೇಹದ ತೂಕದ ಪ್ರತಿ ಕೆಜಿಗೆ 2.2 ಗ್ರಾಂನಿಂದ 3.0 ಗ್ರಾಂ ವರೆಗೆ ಪ್ರತಿದಿನ ಪ್ರೊಟೀನ್ ಸೇವಿಸಬಹುದು ಎಂದು ಕ್ಲಿನಿಕಲ್ ಅಧ್ಯಯನಗಳು ತಿಳಿಸಿವೆ.&lt;/p&gt;&lt;p&gt;&lt;strong&gt;ಕಿಡ್ನಿ ಆರೋಗ್ಯ&lt;/strong&gt;: ಮೊದಲೇ ಕಿಡ್ನಿ ಸಮಸ್ಯೆ ಇರುವವರಿಗೆ ಮಾತ್ರ ಅಧಿಕ ಪ್ರೊಟೀನ್ ಹಾನಿಕಾರಕ. ಸಾಮಾನ್ಯ ವ್ಯಕ್ತಿಗೆ ಇದರಿಂದ ಯಾವುದೇ ತೊಂದರೆಯಿಲ್ಲ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಮೆದುಳು ಚುರುಕಾಗಿರಲು ತಜ್ಞರ ಸಲಹೆಗಳು&lt;/strong&gt;&lt;/h2&gt;&lt;ul&gt; &lt;li&gt;ಪ್ರೊಟೀನ್ ಜೊತೆಗೆ ಓಟ್ಸ್, ಬ್ರೌನ್ ರೈಸ್&zwnj;ನಂತಹ ಉತ್ತಮ ಕಾರ್ಬೋಹೈಡ್ರೇಟ್&zwnj;ಗಳನ್ನು ಸೇವಿಸಿ&lt;/li&gt; &lt;li&gt;ಪ್ರೊಟೀನ್ ಪ್ರಮಾಣ ಹೆಚ್ಚಿಸಿದಾಗ ನೀರು ಕುಡಿಯುವುದನ್ನೂ ಹೆಚ್ಚಿಸಿ&lt;/li&gt; &lt;li&gt;ಇಡೀ ದಿನದ ಪ್ರೊಟೀನ್ ಅನ್ನು ಒಂದೇ ಬಾರಿಗೆ ಸೇವಿಸಬೇಡಿ; ಅದನ್ನು 20 ರಿಂದ 40 ಗ್ರಾಂಗಳಂತೆ ಭಾಗಗಳಾಗಿ ಸೇವಿಸಿ&lt;/li&gt;&lt;/ul&gt;&lt;p&gt;ಕಂಗನಾ ರಣಾವತ್ ಹೇಳಿದಂತೆ ಪ್ರೊಟೀನ್&zwnj;ನಿಂದ ಮೇಧಾಶಕ್ತಿ ಕುಂದುವುದಿಲ್ಲ. ಆದರೆ ಸಮತೋಲಿತ ಡಯಟ್ ಇಲ್ಲದಿದ್ದರೆ ತಾತ್ಕಾಲಿಕ ಆಲಸ್ಯ ಉಂಟಾಗಬಹುದು ಅಷ್ಟೇ. ಆದ್ದರಿಂದ ಪ್ರೊಟೀನ್ ಶೇಕ್ ಸೇವಿಸುವವರು ಅದರೊಂದಿಗೆ ಸರಿಯಾದ ಪ್ರಮಾಣದ ನೀರು ಮತ್ತು ಕಾರ್ಬೋಹೈಡ್ರೇಟ್ ಸೇವಿಸಿದರೆ ಮೆದುಳು ಮತ್ತು ದೇಹ ಎರಡೂ ಚುರುಕಾಗಿರುತ್ತವೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/entertainment/kangana-ranaut-says-too-much-protein-makes-you-dumb-kangana-ranaut-on-protein-gkn/articleshow-5hvd4u1"/>
        </item>
        <item>
            <title><![CDATA[PhonePe, GPay ಬಳಸ್ತೀರಾ? 2000 ರೂಪಾಯಿಗಿಂದ ಹೆಚ್ಚು ಕಳಿಸಿದ್ರೆ ಟ್ಯಾಕ್ಸ್ ಬೀಳುತ್ತಾ? UPI Rules]]></title>
            <link>https://kannada.asianetnews.com/gallery/money/new-phonepe-paytm-upi-rules-for-transactions-above-2000-rupees-explained-6xxa2pk</link>
            <guid isPermaLink="true">https://kannada.asianetnews.com/gallery/money/new-phonepe-paytm-upi-rules-for-transactions-above-2000-rupees-explained-6xxa2pk</guid>
            <pubDate>Sat, 18 Jul 2026 18:25:08 +0530</pubDate>
            <description><![CDATA[&lt;p&gt;UPI transaction new rules 2026: ನೀವು ಯುಪಿಐ ಮೂಲಕ ಹಣ ಪಾವತಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಲಿದೆ. ₹2,000 ಅಥವಾ ಅದಕ್ಕಿಂತ ಹೆಚ್ಚಿನ ಯುಪಿಐ ವಾಣಿಜ್ಯ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx86pe4t5vwjjqpgnna9f9ya,imgname-biometric-upi-1783760631961.jpg" type="image/jpeg" height="390" width="690"/>
            <content:encoded><![CDATA[&lt;p&gt;UPI transaction new rules 2026: ನೀವು ಯುಪಿಐ ಮೂಲಕ ಹಣ ಪಾವತಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಲಿದೆ. ₹2,000 ಅಥವಾ ಅದಕ್ಕಿಂತ ಹೆಚ್ಚಿನ ಯುಪಿಐ ವಾಣಿಜ್ಯ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.&lt;/p&gt;&lt;img&gt;ಡಿಜಿಟಲ್ ಪಾವತಿ ವ್ಯವಸ್ಥೆ ಬಂದ ನಂತರ ಜನರ ಹಲವು ಕೆಲಸಗಳು ಸುಲಭವಾಗಿವೆ. ಮೊದಲಿಗಿಂತ ಈಗ ಹೆಚ್ಚು ನಗದು ಇಟ್ಟುಕೊಳ್ಳುವ ಅಗತ್ಯವಿಲ್ಲ, ಯಾಕಂದ್ರೆ ಈಗ ಎಲ್ಲರೂ ಯುಪಿಐ ಮೂಲಕವೇ ಪಾವತಿಸುತ್ತಾರೆ. ನೀವೂ ಯುಪಿಐ ಮೂಲಕ ಹಣ ಪಾವತಿಸುತ್ತಿದ್ದರೆ, ಈ ಸುದ್ದಿ ನಿಮಗೆ ಮುಖ್ಯವಾಗಿದೆ. ಮುಂಬರುವ ದಿನಗಳಲ್ಲಿ, ಯುಪಿಐ ಮೂಲಕ ಪಾವತಿಸುವ ಜನರಿಗೆ ಒಂದು ದೊಡ್ಡ ಬದಲಾವಣೆ ಕಾಣಿಸಬಹುದು.&lt;img&gt;ಮಾಹಿತಿಗಳ ಪ್ರಕಾರ, ₹2,000 ಅಥವಾ ಅದಕ್ಕಿಂತ ಹೆಚ್ಚಿನ ಯುಪಿಐ ವಾಣಿಜ್ಯ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಮತ್ತೆ ವಿಧಿಸಲು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಈಗ ದೊಡ್ಡ ಪ್ರಶ್ನೆಯೆಂದರೆ, ಇದು ಯಾರಿಗೆ ಅನ್ವಯಿಸುತ್ತದೆ? ವಾರ್ಷಿಕ ₹1.5 ಕೋಟಿವರೆಗೆ ಆದಾಯ ಗಳಿಸುವ ವ್ಯಾಪಾರಿಗಳು ಅಥವಾ ಉದ್ಯಮಿಗಳಿಗೆ ಈ ಶುಲ್ಕದಿಂದ ವಿನಾಯಿತಿ ಸಿಗಬಹುದು. ಅಂದರೆ, ಇದರ ಪರಿಣಾಮ ದೊಡ್ಡ ಉದ್ಯಮಿಗಳ ಮೇಲೆ ಮಾತ್ರ ಬೀರಲಿದೆ. ಈ ಪ್ರಸ್ತಾವನೆಯ ಬಗ್ಗೆ ಸರ್ಕಾರ 1 ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬಹುದು.&lt;img&gt;MDR ಬಗ್ಗೆ ಹೇಳುವುದಾದರೆ, ಇದು ಡಿಜಿಟಲ್ ರೂಪದಲ್ಲಿ ಹಣವನ್ನು ಸ್ವೀಕರಿಸಲು ವ್ಯಾಪಾರಿಗಳು ಪಾವತಿ ಕಂಪನಿ ಅಥವಾ ಬ್ಯಾಂಕ್&zwnj;ಗೆ ಪಾವತಿಸುವ ಶುಲ್ಕವಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿರ್ವಹಿಸಲು ಮತ್ತು ಚಾಲನೆ ಮಾಡಲು ಆಗುವ ವೆಚ್ಚಗಳನ್ನು ಸರಿದೂಗಿಸಲು ಇದು ಸಹಾಯ ಮಾಡುತ್ತದೆ. ಲಭ್ಯವಾದ ಮಾಹಿತಿಯ ಪ್ರಕಾರ, ದೊಡ್ಡ ವ್ಯಾಪಾರಿಗಳಿಂದ ₹2,000 ಅಥವಾ ಅದಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ 0.5 ಪ್ರತಿಶತ MDR ವಿಧಿಸಬಹುದು.&lt;img&gt;ಇಂತಹ ಪರಿಸ್ಥಿತಿಯಲ್ಲಿ, ಈ ಶುಲ್ಕವನ್ನು ಗ್ರಾಹಕರ ಮೇಲೆ ವಿಧಿಸಲಾಗುತ್ತದೆಯೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲ, ಈ ಶುಲ್ಕವನ್ನು ಗ್ರಾಹಕರ ಮೇಲೆ ವಿಧಿಸುವುದಿಲ್ಲ, ಬದಲಾಗಿ ನಿಗದಿತ ನಿಯಮಗಳ ಆಧಾರದ ಮೇಲೆ ವ್ಯಾಪಾರಿಗಳ ಮೇಲೆ ವಿಧಿಸಲಾಗುತ್ತದೆ. ಸದ್ಯಕ್ಕೆ, ಸಾಮಾನ್ಯ ಗ್ರಾಹಕರು ₹2,000 ಕ್ಕಿಂತ ಹೆಚ್ಚಿನ ಸಾಮಾನ್ಯ ಯುಪಿಐ ವಹಿವಾಟುಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದರರ್ಥ, ಮೊದಲು ಹಣ ಕಳುಹಿಸಲು ಯಾವುದೇ ಶುಲ್ಕ ಇರಲಿಲ್ಲವೋ, ಈಗಲೂ ಹಣ ಕಳುಹಿಸುವುದು ಸಂಪೂರ್ಣವಾಗಿ ಉಚಿತವಾಗಿರುತ್ತದೆ.]]></content:encoded>
            <category>news-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/money/new-phonepe-paytm-upi-rules-for-transactions-above-2000-rupees-explained-6xxa2pk"/>
        </item>
        <item>
            <title><![CDATA[ಸಿಕ್ಕಿಂನಲ್ಲಿ ಭೀಕರ ದುರಂತ: ಸುರಂಗದಲ್ಲಿ ಸ್ಫೋಟ, ಭೂಕುಸಿದು 7  ಸಾವು, 18 ಮಂದಿ ನಾಪತ್ತೆ]]></title>
            <link>https://kannada.asianetnews.com/india-news/explosion-in-sikkim-tunnel-in-sikkim-7-workers-died-gkn/articleshow-7k7gy2d</link>
            <guid isPermaLink="true">https://kannada.asianetnews.com/india-news/explosion-in-sikkim-tunnel-in-sikkim-7-workers-died-gkn/articleshow-7k7gy2d</guid>
            <pubDate>Tue, 21 Jul 2026 09:27:34 +0530</pubDate>
            <description><![CDATA[ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಮೀಥೇನ್ ಅನಿಲ ಸ್ಫೋಟಗೊಂಡು ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಸ್ಫೋಟದಿಂದ ಭೂಕುಸಿತ ಉಂಟಾಗಿದ್ದು, ಇನ್ನೂ 18 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದು, ವಿಷಕಾರಿ ಅನಿಲದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky1d1m5p235dz86kp49f7mez,imgname-sikkim-tunnel-1784606150838.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗ್ಯಾಂಗ್ಟಕ್&lt;/strong&gt;: ಸಿಕ್ಕಿಂನಲ್ಲಿ ನಿರ್ಮಾಣ ಹಂತದ ಸುರಂಗವೊಂದರಲ್ಲಿ ಸಂಭವಿಸಿದ ಭೀಕರ ಮೀಥೇನ್ ಅನಿಲ ಸ್ಫೋಟ ಏಳು ಮಂದಿ ಕಾರ್ಮಿಕರನ್ನು ಬಲಿಪಡೆದಿದೆ. ಸ್ಫೋಟದ ತೀವ್ರತೆಗೆ ಸುರಂಗದ ಒಳಗೆ ಭೂಕುಸಿತ ಉಂಟಾಗಿದ್ದು, ಸುಮಾರು 18 ಕಾರ್ಮಿಕರು ಇನ್ನೂ ಒಳಗೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ರಾಷ್ಟ್ರೀಯ ಜಲವಿದ್ಯುತ್ ನಿಗಮದ (NHPC) ಟೀಸ್ಟಾ ಸ್ಟೇಜ್-VI ಜಲವಿದ್ಯುತ್ ಯೋಜನೆಯ ಸುರಂಗ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಸೋಮವಾರ ಮಧ್ಯಾಹ್ನ ಸುಮಾರು 3:40ರ ಸುಮಾರಿಗೆ ಸುರಂಗದ ಒಳಗೆ ಸಂಗ್ರಹವಾಗಿದ್ದ ಮೀಥೇನ್ ಅನಿಲವು ಸ್ಫೋಟಗೊಂಡಿದೆ. ಈ ಸ್ಫೋಟದಿಂದಾಗಿ ಸುರಂಗದ ಒಂದು ಭಾಗ ಕುಸಿದು ಬಿದ್ದಿದ್ದು, ಒಳಗೆ ಕೆಲಸ ಮಾಡುತ್ತಿದ್ದ ಸುಮಾರು 25 ಕಾರ್ಮಿಕರು ಸಿಲುಕಿಕೊಂಡಿದ್ದರು. ಇವರಲ್ಲಿ ಏಳು ಮಂದಿ ಸಾವನ್ನಪ್ಪಿರುವುದನ್ನು ಜಿಲ್ಲಾಡಳಿತ ಖಚಿತಪಡಿಸಿದೆ.&lt;/p&gt;&lt;h2&gt;&lt;strong&gt;ರಕ್ಷಣಾ ಕಾರ್ಯಾಚರಣೆಗೆ ಅನಿಲ ಅಡ್ಡಿ&lt;/strong&gt;&lt;/h2&gt;&lt;p&gt;ಘಟನೆ ನಡೆದ ತಕ್ಷಣ ಎನ್&zwnj;ಡಿಆರ್&zwnj;ಎಫ್ (NDRF), ಎಸ್&zwnj;ಡಿಆರ್&zwnj;ಎಫ್ (SDRF) ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿವೆ. ಆದರೆ, ಸುರಂಗದ ಒಳಗಿರುವ ವಿಷಕಾರಿ ಮೀಥೇನ್ ಅನಿಲ ಮತ್ತು ಕಡಿಮೆ ಇರುವ ಆಮ್ಲಜನಕದ ಮಟ್ಟವು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ. ಸುರಂಗದ ಹಾದಿ ಕಿರಿದಾಗಿರುವುದು ಮತ್ತು ದಟ್ಟವಾದ ಹೊಗೆಯಿಂದಾಗಿ ದೃಷ್ಟಿ ಮಂದವಾಗಿರುವುದು ರಕ್ಷಣಾ ಸಿಬ್ಬಂದಿಗೆ ಸಂಕಷ್ಟ ತಂದೊಡ್ಡಿದೆ.&lt;/p&gt;&lt;p&gt;ಆರಂಭದಲ್ಲಿ ರಕ್ಷಣೆಗೆ ತೆರಳಿದ್ದ ಕೆಲವು ಅಗ್ನಿಶಾಮಕ ಸಿಬ್ಬಂದಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಇದರಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಸುರಂಗದೊಳಗೆ ಅನಿಲದ ಪ್ರಮಾಣ ಹೆಚ್ಚಿರುವುದರಿಂದ, ಗ್ಯಾಸ್ ಪ್ರೊಟೆಕ್ಟಿವ್ ಮಾಸ್ಕ್ ಮತ್ತು ವಿಶೇಷ ಉಪಕರಣಗಳನ್ನು ಹೊಂದಿರುವ ಪರಿಣಿತ ತಂಡವನ್ನು ನೆರೆಯ ಪಶ್ಚಿಮ ಬಂಗಾಳದಿಂದ ತರಿಸಿಕೊಳ್ಳಲಾಗಿದೆ. ಪಾಕ್ಯಾಂಗ್ ಮತ್ತು ಸಿಲಿಗುರಿಯಿಂದ ಹೆಚ್ಚುವರಿ ಎನ್&zwnj;ಡಿಆರ್&zwnj;ಎಫ್ ಪಡೆಗಳು ಆಗಮಿಸಿದ್ದು, ಸಿಲುಕಿರುವ 18 ಕಾರ್ಮಿಕರನ್ನು ರಕ್ಷಿಸಲು ಹಗಲಿರುಳು ಪ್ರಯತ್ನ ನಡೆಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ಸ್ಫೋಟಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಪ್ರಾಥಮಿಕ ವರದಿಗಳ ಪ್ರಕಾರ ಸುರಂಗದ ಸುಮಾರು 1.5 ಕಿಲೋಮೀಟರ್ ಆಳದಲ್ಲಿ ಭೂಮಿಯ ಪದರಗಳಿಂದ ಸ್ವಾಭಾವಿಕವಾಗಿ ಮೀಥೇನ್ ಅನಿಲ ಸೋರಿಕೆಯಾಗಿ ಶೇಖರಣೆಯಾಗಿತ್ತು. ಈ ಅನಿಲವನ್ನು ಹೊರಹಾಕಲು ಪ್ರಯತ್ನಿಸಿದ ಸಮಯದಲ್ಲಿ ಅದು ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (SSDMA) ಮೇಲ್ವಿಚಾರಣೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಿಲುಕಿರುವ ಕಾರ್ಮಿಕರ ಕುಟುಂಬದವರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/explosion-in-sikkim-tunnel-in-sikkim-7-workers-died-gkn/articleshow-7k7gy2d"/>
        </item>
        <item>
            <title><![CDATA[Politics: ಬಿಜೆಪಿ vs ಕಾಂಗ್ರೆಸ್; ಯಾರ ಬಳಿ ಇದೆ ಅತಿ ಹೆಚ್ಚು ಹಣ? ಇಲ್ಲಿದೆ ನೋಡಿ ಅಸಲಿ ಲೆಕ್ಕಾಚಾರ!]]></title>
            <link>https://kannada.asianetnews.com/gallery/market-money/bjp-vs-congress-party-funds-who-has-more-money-2026-bmk-88il9mq</link>
            <guid isPermaLink="true">https://kannada.asianetnews.com/gallery/market-money/bjp-vs-congress-party-funds-who-has-more-money-2026-bmk-88il9mq</guid>
            <pubDate>Tue, 28 Jul 2026 16:57:53 +0530</pubDate>
            <description><![CDATA[&lt;p&gt;ಭಾರತೀಯ ರಾಷ್ಟ್ರೀಯ ಕಾಂಗ್ರೆಸ್&zwnj;ಗಿಂತ ಬಿಜೆಪಿ ಗಮನಾರ್ಹವಾಗಿ ಹೆಚ್ಚಿನ ನಗದು ಮೀಸಲು, ವಾರ್ಷಿಕ ಆದಾಯ ಮತ್ತು ಒಟ್ಟು ಆಸ್ತಿಗಳನ್ನು ಹೊಂದಿದೆ ಎಂದು ಹಣಕಾಸು ದತ್ತಾಂಶಗಳು ಕಡ್ಡಿತುಂಡರಿಸಿದಂತೆ ಹೇಳುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಎಷ್ಟು ಹಣವನ್ನು ಹೊಂದಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ha10ep5rqyh0tqje1vawtbas,imgname-asianet-news---2023-09-11t074653.463.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರಾಷ್ಟ್ರೀಯ ಕಾಂಗ್ರೆಸ್&zwnj;ಗಿಂತ ಬಿಜೆಪಿ ಗಮನಾರ್ಹವಾಗಿ ಹೆಚ್ಚಿನ ನಗದು ಮೀಸಲು, ವಾರ್ಷಿಕ ಆದಾಯ ಮತ್ತು ಒಟ್ಟು ಆಸ್ತಿಗಳನ್ನು ಹೊಂದಿದೆ ಎಂದು ಹಣಕಾಸು ದತ್ತಾಂಶಗಳು ಕಡ್ಡಿತುಂಡರಿಸಿದಂತೆ ಹೇಳುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಎಷ್ಟು ಹಣವನ್ನು ಹೊಂದಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕಪರಿಶೋಧನಾ ವರದಿ ಮತ್ತು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್&zwnj;ನ ವಿಶ್ಲೇಷಣೆಯ ಪ್ರಕಾರ, ಭಾರತೀಯ ಜನತಾ ಪಕ್ಷ ಆರ್ಥಿಕವಾಗಿ ಬಲಿಷ್ಠ ರಾಜಕೀಯ ಪಕ್ಷವಾಗಿದೆ ಎನ್ನಲಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್&zwnj;ಗಿಂತ ಬಿಜೆಪಿ ಗಮನಾರ್ಹವಾಗಿ ಹೆಚ್ಚಿನ ನಗದು ಮೀಸಲು, ವಾರ್ಷಿಕ ಆದಾಯ ಮತ್ತು ಒಟ್ಟು ಆಸ್ತಿಗಳನ್ನು ಹೊಂದಿದೆ ಎಂದು ಹಣಕಾಸು ದತ್ತಾಂಶಗಳು ಕಡ್ಡಿತುಂಡರಿಸಿದಂತೆ ಹೇಳುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಎಷ್ಟು ಹಣವನ್ನು ಹೊಂದಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ವರದಿಗಳ ಪ್ರಕಾರ, ಬಿಜೆಪಿಯ ಘೋಷಿತ ಬ್ಯಾಂಕ್ ಬ್ಯಾಲೆನ್ಸ್ ₹10,107.2 ಕೋಟಿ. ಅದೇ ಸಮಯದಲ್ಲಿ, ಕಾಂಗ್ರೆಸ್ಸಿನ ಬ್ಯಾಂಕ್ ಬ್ಯಾಲೆನ್ಸ್ ₹133.97 ಕೋಟಿ. ಇದರರ್ಥ ಬಿಜೆಪಿಯ ನಗದು ಮೀಸಲು ಕಾಂಗ್ರೆಸ್&zwnj;ಗಿಂತ ಸರಿಸುಮಾರು 75 ಪಟ್ಟು ಹೆಚ್ಚಿದೆ. ಅಷ್ಟೇ ಅಲ್ಲ ಕತೆ ಇನ್ನು ಮುಂದಿದೆ ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಲೋಕಸಭಾ ಚುನಾವಣೆ ನಡೆದ ಹಣಕಾಸು ವರ್ಷದಲ್ಲಿ ಬಿಜೆಪಿ ಒಟ್ಟು ₹6,769.14 ಕೋಟಿ ಆದಾಯ ಗಳಿಸಿದೆ. ಇದು ದೇಶದ ಆರೂ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ 85.03% ರಷ್ಟಿದ್ದು, ಹಿಂದಿನ ವರ್ಷಕ್ಕಿಂತ ಬಿಜೆಪಿಯ ಆದಾಯ 56% ಹೆಚ್ಚಾಗಿದೆ. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷವು ₹918.28 ಕೋಟಿ (11.53%) ಆದಾಯ ಘೋಷಿಸಿದ್ದು, ಇದರ ಆದಾಯದಲ್ಲಿ 25% ಇಳಿಕೆ ಕಂಡಿದೆ. ಒಟ್ಟಾರೆಯಾಗಿ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಬಹುದೂರದ ಹಿನ್ನಡೆಯಲ್ಲಿದೆ.&lt;/p&gt;&lt;img&gt;&lt;p&gt;ಬಿಜೆಪಿಯ ಹಣಕಾಸು ಹೆಚ್ಚಾಗಿ ಕಂಪನಿಗಳು ಮತ್ತು ವ್ಯಕ್ತಿಗಳಿಂದ ಸ್ವಯಂಪ್ರೇರಿತ ದೇಣಿಗೆಗಳ ಮೇಲೆ ಅವಲಂಬಿತವಾಗಿದೆ. ವರದಿಗಳ ಪ್ರಕಾರ, ₹6,124.85 ಕೋಟಿ, ಅಥವಾ ಅದರ ಒಟ್ಟು ಆದಾಯದ 90.4%, ಸ್ವಯಂಪ್ರೇರಿತ ದೇಣಿಗೆಗಳಿಂದ ಬರುತ್ತದೆ. ಉಳಿದ ₹634 ಕೋಟಿ, ಅಥವಾ ಅದರ ಆದಾಯದ 9.3%, ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿಯ ಮೂಲಕ ಗಳಿಸಲ್ಪಡುತ್ತದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕಾಂಗ್ರೆಸ್ ಪಕ್ಷವು ಕಂಪನಿಗಳು ಮತ್ತು ವ್ಯಕ್ತಿಗಳಿಂದ ದೇಣಿಗೆಗಳನ್ನು ಪಡೆಯುತ್ತದೆ, ಆದರೆ ಇವು ಅದರ ಒಟ್ಟು ಆದಾಯದ ಒಂದು ಸಣ್ಣ ಭಾಗವನ್ನು ಪ್ರತಿನಿಧಿಸುತ್ತವೆ. ಪಕ್ಷವು ₹522.13 ಕೋಟಿ ಅಥವಾ ಅದರ ಆದಾಯದ 56.8% ಸ್ವಯಂಪ್ರೇರಿತ ಕೊಡುಗೆಗಳಿಂದ ಬಂದಿದೆ ಎಂದು ವರದಿ ಮಾಡಿದೆ. ಅದರ ಗಳಿಕೆಯ ಗಮನಾರ್ಹ ಭಾಗವಾದ ₹350.12 ಕೋಟಿ ಕೂಪನ್ ಮಾರಾಟ ಮತ್ತು ಸಾರ್ವಜನಿಕ ಸಂಗ್ರಹಗಳಿಂದ ಬಂದಿದೆ.&lt;/p&gt;&lt;img&gt;&lt;p&gt;ಎರಡೂ ಪಕ್ಷಗಳ ನಡುವಿನ ಗಮನಾರ್ಹ ವ್ಯತ್ಯಾಸವೆಂದರೆ ಆರ್ಥಿಕ ಮೀಸಲುಗಳಿಂದ ಬರುವ ಆದಾಯ. ದೊಡ್ಡ ಬ್ಯಾಂಕ್ ಬ್ಯಾಲೆನ್ಸ್&zwnj;ನಿಂದಾಗಿ, ಬಿಜೆಪಿ ವರ್ಷದಲ್ಲಿ ಬ್ಯಾಂಕ್ ಬಡ್ಡಿಯಿಂದಲೇ ₹634 ಕೋಟಿ ಗಳಿಸಿತು. ಈ ಬಡ್ಡಿ ಆದಾಯವು ಕಾಂಗ್ರೆಸ್ ಸ್ವಯಂಪ್ರೇರಿತ ದೇಣಿಗೆಗಳ ಮೂಲಕ ಪಡೆದ ₹522.13 ಕೋಟಿಗಿಂತ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಪಕ್ಷದ ಕಚೇರಿಗಳು ಮತ್ತು ಸಿಬ್ಬಂದಿ ವೇತನಗಳು ಸೇರಿದಂತೆ ಆಡಳಿತಾತ್ಮಕ ವೆಚ್ಚಗಳಿಗಾಗಿ ಬಿಜೆಪಿ ₹323.05 ಕೋಟಿ ಖರ್ಚು ಮಾಡಿದೆ. ಕಾಂಗ್ರೆಸ್ ಅದೇ ವರ್ಗದ ಅಡಿಯಲ್ಲಿ ₹159.68 ಕೋಟಿ ಖರ್ಚು ಮಾಡಿದೆ ಎಂದು ವರದಿ ಮಾಡಿದೆ. ಪಕ್ಷಗಳ ಘೋಷಿತ ಆಸ್ತಿಗಳಲ್ಲಿ ಕಚೇರಿ ಕಟ್ಟಡಗಳು, ಭೂಮಿ, ಸ್ಥಿರ ಠೇವಣಿಗಳು, ಹೂಡಿಕೆಗಳು ಮತ್ತು ಇತರ ಹಣಕಾಸು ಹಿಡುವಳಿಗಳು ಸೇರಿವೆ. ಬಿಜೆಪಿ ಒಟ್ಟು ಆಸ್ತಿ ₹12,171.17 ಕೋಟಿ ಮತ್ತು ಸಾಲ ₹15.43 ಲಕ್ಷ ಮಾತ್ರ ಎಂದು ಘೋಷಿಸಿಕೊಂಡಿದೆ. ಇದು ಅದರ ಆಸ್ತಿ ಮೂಲಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆ ಸಾಲವನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಕಾಂಗ್ರೆಸ್ ಸುಮಾರು ₹1,351 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದೆ. ಇದರಲ್ಲಿ ಪಕ್ಷದ ಆಸ್ತಿಗಳು, ಹೂಡಿಕೆ, ಇತರ ಹಣಕಾಸು ಆಸ್ತಿಗಳು ಸೇರಿವೆ. ನಗದು ಮೀಸಲು, ವಾರ್ಷಿಕ ಆದಾಯ, ಪ್ರಚಾರ ವೆಚ್ಚಗಳು ಮತ್ತು ಒಟ್ಟು ಆಸ್ತಿಗಳ ವಿಷಯದಲ್ಲಿ ಬಿಜೆಪಿ ಪ್ರಸ್ತುತ ಕಾಂಗ್ರೆಸ್&zwnj;ಗಿಂತ ಗಮನಾರ್ಹವಾಗಿ ದೊಡ್ಡ ಆರ್ಥಿಕ ನೆಲೆ ಹೊಂದಿದೆ ಎಂದು ಆಡಿಟ್ ವರದಿಗಳು ಹೇಳುತ್ತವೆ. ವರದಿಗಳು ವಿಭಿನ್ನ ಆದಾಯ ಉತ್ಪಾದನೆ ಮಾದರಿ ಸಹ ಸೂಚಿಸುತ್ತವೆ. ಬಿಜೆಪಿ ಪ್ರಾಥಮಿಕವಾಗಿ ಸ್ವಯಂಪ್ರೇರಿತ ದೇಣಿಗೆ ಮತ್ತು ಹೂಡಿಕೆ ಆದಾಯ ಅವಲಂಬಿಸಿದೆ, ಆದರೆ ಕಾಂಗ್ರೆಸ್ ದೇಣಿಗೆಗಳ ಮೇಲೆ ಹಾಗೂ ಸಾರ್ವಜನಿಕ ಸಂಗ್ರಹಣೆಗಳು ಮತ್ತು ಕೂಪನ್ ಮಾರಾಟಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/market-money/bjp-vs-congress-party-funds-who-has-more-money-2026-bmk-88il9mq"/>
        </item>
        <item>
            <title><![CDATA[Fast Tag: ವಾಹನ ಸವಾರರಿಗೆ ಗುಡ್ ನ್ಯೂಸ್; ಫಾಸ್ಟ್‌ಟ್ಯಾಗ್ ಹೆಚ್ಚುವರಿ ಹಣ ಕಡಿತವಾದರೆ 100% ರಿಫಂಡ್ ಪಕ್ಕಾ!]]></title>
            <link>https://kannada.asianetnews.com/my-money-money/fastag-wrong-toll-deduction-100-percent-refund-mp-high-court-verdict-bmk/articleshow-9atd48v</link>
            <guid isPermaLink="true">https://kannada.asianetnews.com/my-money-money/fastag-wrong-toll-deduction-100-percent-refund-mp-high-court-verdict-bmk/articleshow-9atd48v</guid>
            <pubDate>Sat, 18 Jul 2026 21:15:02 +0530</pubDate>
            <description><![CDATA[&lt;p&gt;ಮಧ್ಯಪ್ರದೇಶ ಹೈಕೋರ್ಟ್&zwnj;ನ ಐತಿಹಾಸಿಕ ತೀರ್ಪಿನ ಪ್ರಕಾರ, ಫಾಸ್ಟ್&zwnj;ಟ್ಯಾಗ್&zwnj;ನಲ್ಲಿ ತಾಂತ್ರಿಕ ದೋಷದಿಂದ ಹೆಚ್ಚುವರಿ ಹಣ ಕಡಿತವಾದರೆ ವಾಹನ ಸವಾರರಿಗೆ ಶೇ. 100ರಷ್ಟು ಮರುಪಾವತಿ ಮಾಡಬೇಕು. ಅದೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hme3bafjp1ts5zd956fd2qae,imgname-Update-Your-Fast-tagKYC-1705575295474.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಧ್ಯಪ್ರದೇಶ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಟೋಲ್ ಪ್ಲಾಜಾಗಳಲ್ಲಿ ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯದಿಂದಾಗಿ ಫಾಸ್ಟ್&zwnj;ಟ್ಯಾಗ್ ಖಾತೆಯಿಂದ ಹೆಚ್ಚುವರಿ ಹಣ ಕಡಿತವಾದರೆ, ವಾಹನ ಮಾಲೀಕರಿಗೆ ಶೇ. 100 ರಷ್ಟು ಹಣವನ್ನು ಮರುಪಾವತಿ ಮಾಡಬೇಕು ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ಆದೇಶವು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿರದೆ, ಇಡೀ ದೇಶಕ್ಕೆ ಮಾದರಿಯಾಗುವಂತಹ ಮುನ್ಸೂಚನೆಯನ್ನು ನೀಡಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ದೇಶದಲ್ಲಿ ಫಾಸ್ಟ್&zwnj;ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ವಾಹನ ಸವಾರರ ಪ್ರಯಾಣ ಸುಲಭವಾಗಿದೆಯಾದರೂ, ತಾಂತ್ರಿಕ ದೋಷಗಳ ಸಮಸ್ಯೆಗಳು ನಿರಂತರವಾಗಿ ಕಾಡುತ್ತಿವೆ. ಹಲವು ಸಂದರ್ಭಗಳಲ್ಲಿ ವಾಹನಗಳು ಟೋಲ್ ದಾಟದಿದ್ದರೂ ಹಣ ಕಡಿತವಾಗುವುದು, ನಿಗದಿತ ಶುಲ್ಕಕ್ಕಿಂತ ದುಪ್ಪಟ್ಟು ಹಣ ಕಟ್ ಆಗುವುದು ಅಥವಾ ಒಂದೇ ಟೋಲ್&zwnj;ನಲ್ಲಿ ಎರಡು ಬಾರಿ ಹಣ ಕಡಿತವಾಗುವಂತಹ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದವು. ಇಂತಹದೇ ಒಂದು ಗಂಭೀರ ಪ್ರಕರಣದ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್, ಟೋಲ್ ಕಂಪನಿಗಳು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮೊಂಡುತನಕ್ಕೆ ಬ್ರೇಕ್ ಹಾಕಿದೆ.&lt;/p&gt;&lt;h3&gt;&lt;strong&gt;ಹೈಕೋರ್ಟ್ ತೀರ್ಪಿನಲ್ಲಿ ಏನಿದೆ?&lt;/strong&gt;&lt;/h3&gt;&lt;p&gt;ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು, &quot;ಫಾಸ್ಟ್&zwnj;ಟ್ಯಾಗ್ ವ್ಯವಸ್ಥೆಯು ಸಾರ್ವಜನಿಕರ ಅನುಕೂಲಕ್ಕಾಗಿ ಇರುವುದೇ ಹೊರತು ಅವರನ್ನು ಸುಲಿಗೆ ಮಾಡುವುದಕ್ಕಲ್ಲ. ತಾಂತ್ರಿಕ ದೋಷ ಅಥವಾ ಟೋಲ್ ಸಿಬ್ಬಂದಿಯ ತಪ್ಪಿನಿಂದಾಗಿ ವಾಹನ ಸವಾರರಿಂದ ಹೆಚ್ಚುವರಿ ಹಣ ಕಡಿತವಾದರೆ, ಅದಕ್ಕೆ ಗ್ರಾಹಕರು ಜವಾಬ್ದಾರರಲ್ಲ. ಅಂತಹ ಸಂದರ್ಭಗಳಲ್ಲಿ ಕಡಿತವಾದ ಹೆಚ್ಚುವರಿ ಮೊತ್ತವನ್ನು ಸಂಪೂರ್ಣವಾಗಿ (100% Refund) ಗ್ರಾಹಕರ ಖಾತೆಗೆ ಮರುಪಾವತಿಸಬೇಕು&quot; ಎಂದು ಆದೇಶಿಸಿದೆ.&lt;/p&gt;&lt;h3&gt;&lt;strong&gt;ಕಚೇರಿಗೆ ಅಲೆಯುವ ಅಗತ್ಯವಿಲ್ಲ!&lt;/strong&gt;&lt;/h3&gt;&lt;p&gt;ಇದರೊಂದಿಗೆ, ಹೆಚ್ಚುವರಿ ಹಣ ಕಡಿತವಾದಾಗ ಅದನ್ನು ವಾಪಸ್ ಪಡೆಯಲು ಗ್ರಾಹಕರು ಕಚೇರಿಗಳಿಂದ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಬ್ಯಾಂಕ್&zwnj;ಗಳು ಮತ್ತು ಟೋಲ್ ಆಪರೇಟರ್&zwnj;ಗಳು ಈ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಬೇಕು ಮತ್ತು ತನಿಖೆಯ ನಂತರ ತಪ್ಪು ಸಾಬೀತಾದರೆ ತಕ್ಷಣವೇ ಹಣವನ್ನು ರೀಫಂಡ್ ಮಾಡಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.&lt;/p&gt;&lt;h3&gt;&lt;strong&gt;ದೇಶದಾದ್ಯಂತ ವಾಹನ ಸವಾರರಿಗೆ ಸಿಕ್ಕ ದೊಡ್ಡ ಜಯ!&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಟೋಲ್&zwnj;ನಲ್ಲಿ ₹50 ಅಥವಾ ₹100 ಹೆಚ್ಚಿಗೆ ಕಟ್ ಆದಾಗ, ಸಾಮಾನ್ಯ ಜನರು ಕಾನೂನು ಹೋರಾಟ ಮಾಡಲು ಹೋಗುವುದಿಲ್ಲ ಅಥವಾ ಬ್ಯಾಂಕ್&zwnj;ಗಳಿಗೆ ದೂರು ನೀಡಿ ಸುಸ್ತಾಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಕೆಲವು ಟೋಲ್ ಆಪರೇಟರ್&zwnj;ಗಳಿಗೆ ಈ ತೀರ್ಪು ಚಾಟಿ ಬೀಸಿದಂತಾಗಿದೆ. ಮಧ್ಯಪ್ರದೇಶ ಹೈಕೋರ್ಟ್&zwnj;ನ ಈ ತೀರ್ಪನ್ನು ಆಧರಿಸಿ, ಇನ್ನುಮುಂದೆ ದೇಶದ ಯಾವುದೇ ಮೂಲೆಯಲ್ಲಾದರೂ ಫಾಸ್ಟ್&zwnj;ಟ್ಯಾಗ್&zwnj;ನಲ್ಲಿ ತಪ್ಪಾಗಿ ಹಣ ಕಡಿತವಾದರೆ ಗ್ರಾಹಕರು ತಮ್ಮ ಹಕ್ಕನ್ನು ಚಲಾಯಿಸಿ ಸಂಪೂರ್ಣ ಮರುಪಾವತಿ ಕೋರಬಹುದಾಗಿದೆ.&lt;/p&gt;&lt;h3&gt;&lt;strong&gt;ಹಣ ವಾಪಸ್ ಪಡೆಯಲು ಗ್ರಾಹಕರು ಏನು ಮಾಡಬೇಕು?&lt;/strong&gt;&lt;/h3&gt;&lt;p&gt;ಒಂದೊಮ್ಮೆ ನಿಮ್ಮ ಫಾಸ್ಟ್&zwnj;ಟ್ಯಾಗ್&zwnj;ನಿಂದಲೂ ಹೆಚ್ಚಿನ ಹಣ ಕಡಿತವಾದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:&lt;/p&gt;&lt;p&gt;&lt;strong&gt;ದೂರು ದಾಖಲಿಸಿ; &lt;/strong&gt;ಹಣ ಕಡಿತವಾದ ತಕ್ಷಣವೇ ನಿಮ್ಮ ಫಾಸ್ಟ್&zwnj;ಟ್ಯಾಗ್ ಒದಗಿಸಿದ ಬ್ಯಾಂಕ್ ಅಥವಾ ಎನ್&zwnj;ಎಚ್&zwnj;ಎಐ (NHAI) ಸಹಾಯವಾಣಿ ಸಂಖ್ಯೆ 1033 ಗೆ ಕರೆ ಮಾಡಿ ದೂರು ನೀಡಬೇಕು.&lt;/p&gt;&lt;p&gt;&lt;strong&gt;ಆಧಾರಗಳನ್ನು ಒದಗಿಸಿ; &lt;/strong&gt;ಟೋಲ್ ಪ್ಲಾಜಾ ದಾಟಿದ ಸಮಯದ ಮೆಸೇಜ್ ಮತ್ತು ನಿಮ್ಮ ವಾಹನದ ವಿವರಗಳನ್ನು ಕ್ಲೈಮ್ ಮಾಡುವಾಗ ಸಲ್ಲಿಸಬೇಕಾಗುತ್ತದೆ.&lt;/p&gt;&lt;p&gt;&lt;strong&gt;100% ರಿಫಂಡ್ ಪಕ್ಕಾ;&lt;/strong&gt; ಹೊಸ ನಿಯಮದ ಪ್ರಕಾರ, ತಾಂತ್ರಿಕ ತಪಾಸಣೆಯ ನಂತರ ನಿಮ್ಮ ದೂರು ನಿಜವೆಂದು ಕಂಡುಬಂದರೆ, ಕಡಿತಗೊಂಡ ಸಂಪೂರ್ಣ ಮೊತ್ತವು ನಿಮ್ಮ ಫಾಸ್ಟ್&zwnj;ಟ್ಯಾಗ್ ವಾಲೆಟ್&zwnj;ಗೆ ಮರಳಿ ಜಮೆಯಾಗುತ್ತದೆ.&lt;/p&gt;&lt;p&gt;&lt;strong&gt;ಹಣ ಉಳಿಸಿಕೊಳ್ಳಲು ಸಾಧ್ಯವಿಲ್ಲ; &lt;/strong&gt;ಮಧ್ಯಪ್ರದೇಶ ಹೈಕೋರ್ಟ್&zwnj;ನ ಈ ನಿರ್ಧಾರವು ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ನೆರವಾಗಲಿದ್ದು, ಗ್ರಾಹಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಮೈಲಿಗಲ್ಲಾಗಿದೆ. ಇನ್ನುಮುಂದೆ ಟೋಲ್ ಕಂಪನಿಗಳು ತಾಂತ್ರಿಕ ದೋಷಗಳ ನೆಪ ಹೇಳಿ ಸಾರ್ವಜನಿಕರ ಹಣವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/my-money-money/fastag-wrong-toll-deduction-100-percent-refund-mp-high-court-verdict-bmk/articleshow-9atd48v"/>
        </item>
        <item>
            <title><![CDATA[Lpg: ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ತಕ್ಷಣವೇ ಮನೆ ಬಾಗಿಲಿಗೆ! ಹೊಸ ನಿಯಮ ಕೇಳಿದ್ರೆ ಗ್ರಾಹಕರು ಫುಲ್ ಖುಷ್!]]></title>
            <link>https://kannada.asianetnews.com/news-money/lpg-cylinder-instant-doorstep-delivery-new-rule-2026-bmk/articleshow-e6ns4a5</link>
            <guid isPermaLink="true">https://kannada.asianetnews.com/news-money/lpg-cylinder-instant-doorstep-delivery-new-rule-2026-bmk/articleshow-e6ns4a5</guid>
            <pubDate>Sun, 26 Jul 2026 22:50:55 +0530</pubDate>
            <description><![CDATA[&lt;p&gt;ಇಂಡಿಯನ್ ಆಯಿಲ್ ಕಾರ್ಪೊರೇಷನ್ 'ಇಂಡೇನ್ ಎಕ್ಸ್&zwnj;ಟ್ರಾಲೈಟ್ ನೌ' ಎಂಬ ಹೊಸ ಸೇವೆಯನ್ನು ಆರಂಭಿಸಿದ್ದು, &amp;nbsp;ಈ ಸೇವೆಗಾಗಿ ವಿಶೇಷವಾಗಿ ಹಗುರವಾದ, ಪಾರದರ್ಶಕ 10 ಕೆಜಿ ಕಾಂಪೋಸಿಟ್ ಸಿಲಿಂಡರ್&zwnj;ಗಳನ್ನು ಪರಿಚಯಿಸಲಾಗಿದೆ, ಇದು ಗ್ಯಾಸ್ ಮಟ್ಟವನ್ನು ನೋಡಲು ಅನುವು ಮಾಡಿಕೊಡುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyehvm5n0ykfsstf8ysz8gqx,imgname-chatgpt-image-jul-26--2026--11-58-51-am-1785047404724.png" type="image/jpeg" height="390" width="690"/>
            <content:encoded><![CDATA[&lt;p&gt;ಇನ್ಮುಂದೆ ಎಲ್&zwnj;ಪಿಜಿ ಸಿಲಿಂಡರ್ ಬುಕ್ ಮಾಡಿ ದಿನಗಟ್ಟಲೆ ಕಾಯುವ ಕಿರಿಕಿರಿ ಇರುವುದಿಲ್ಲ. ದೇಶದ ಪ್ರಮುಖ ಇಂಧನ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗ್ರಾಹಕರಿಗಾಗಿ ಹೊಸ ಕ್ರಾಂತಿಕಾರಿ ಸೇವೆಯನ್ನು ಪರಿಚಯಿಸಿದೆ. ಬುಕಿಂಗ್ ಮಾಡಿದ ಕೆಲವೇ ಕ್ಷಣಗಳಲ್ಲಿ, ಅಂದರೆ ಕೇವಲ 4 ಗಂಟೆಗಳ ಒಳಗೆ ಸಿಲಿಂಡರ್ ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ 'ಎಕ್ಸ್&zwnj;ಪ್ರೆಸ್ ಡೆಲಿವರಿ' ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 'ಇಂಡೇನ್ ಎಕ್ಸ್&zwnj;ಟ್ರಾಲೈಟ್ ನೌ' ಎಂಬ ಹೆಸರಿನ ಈ ಹೊಸ ಸೇವೆಯು ಸಾರ್ವಜನಿಕರಲ್ಲಿ ಭಾರಿ ಕುತೂಹಲ ಹಾಗೂ ಸಂತಸ ಮೂಡಿಸಿದೆ.&lt;/p&gt;&lt;h2&gt;&lt;strong&gt;ಏನಿದು 'ಇಂಡೇನ್ ಎಕ್ಸ್&zwnj;ಟ್ರಾಲೈಟ್ ನೌ'?&lt;/strong&gt;&lt;/h2&gt;&lt;p&gt;ಸಾಂಪ್ರದಾಯಿಕ ಉಕ್ಕಿನ ಸಿಲಿಂಡರ್&zwnj;ಗಳಿಗೆ ಹೋಲಿಸಿದರೆ, ಈ ಹೊಸ 10 ಕೆಜಿ ಸಿಲಿಂಡರ್ ಅನ್ನು ವಿಶೇಷ 'ಕಂಪೋಸಿಟ್' (ಸಂಯೋಜಿತ) ವಸ್ತುವಿನಿಂದ ತಯಾರಿಸಲಾಗಿದೆ. ಹಗುರ ಹಾಗೂ ಸುರಕ್ಷಿತ: ಇದು ತೂಕದಲ್ಲಿ ತುಂಬಾ ಹಗುರವಾಗಿದ್ದು, ತುಕ್ಕು ಹಿಡಿಯುವ ಯಾವುದೇ ಭಯವಿರುವುದಿಲ್ಲ. ಅಪಾರ್ಟ್&zwnj;ಮೆಂಟ್ ನಿವಾಸಿಗಳು, ವೃದ್ಧರು ಹಾಗೂ ಮಹಿಳೆಯರು ಇದನ್ನು ಸುಲಭವಾಗಿ ಸ್ಥಳಾಂತರಿಸಬಹುದು.&lt;/p&gt;&lt;p&gt;&lt;strong&gt;ಪಾರದರ್ಶಕ ವಿನ್ಯಾಸ:&lt;/strong&gt; ಸಿಲಿಂಡರ್&zwnj;ನ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಇದರ ಪಾರದರ್ಶಕ ಶರೀರ. ಸಿಲಿಂಡರ್&zwnj;ನಲ್ಲಿ ಇನ್ನು ಎಷ್ಟು ಗ್ಯಾಸ್ ಬಾಕಿ ಉಳಿದಿದೆ ಎಂಬುದನ್ನು ಹೊರಗಿನಿಂದಲೇ ನೋಡಬಹುದು. ಇದರಿಂದ ದಿಢೀರ್ ಗ್ಯಾಸ್ ಖಾಲಿಯಾಗುವ ಆತಂಕ ತಪ್ಪಲಿದ್ದು, ಮುಂಚಿತವಾಗಿಯೇ ಮರುಪೂರಣ ಬುಕ್ ಮಾಡಲು ಅನುಕೂಲವಾಗಲಿದೆ.&lt;/p&gt;&lt;h3&gt;&lt;strong&gt;ಕೇವಲ 4 ಗಂಟೆಯಲ್ಲಿ ಡೋರ್&zwnj;ಸ್ಟೆಪ್ ಡೆಲಿವರಿ!&lt;/strong&gt;&lt;/h3&gt;&lt;p&gt;ಗ್ರಾಹಕರು ಗ್ಯಾಸ್ ಬುಕ್ ಮಾಡಿದ ಗರಿಷ್ಠ ನಾಲ್ಕು ಗಂಟೆಗಳ ಒಳಗೆ ಸಿಲಿಂಡರ್ ಮನೆ ತಲುಪಲಿದೆ. ಅಷ್ಟೇ ಅಲ್ಲದೆ, ಗ್ರಾಹಕರು ತಮಗೆ ಅನುಕೂಲಕರವಾದ ಸಮಯವನ್ನು ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನೂ ನೀಡಲಾಗಿದೆ. ಇದರ ಜೊತೆಗೆ, ಜನಪ್ರಿಯ 5 ಕೆಜಿ 'ಚೋಟು' ಎಲ್&zwnj;ಪಿಜಿ ಸಿಲಿಂಡರ್&zwnj;ಗೂ ಈ 4 ಗಂಟೆಗಳ ಎಕ್ಸ್&zwnj;ಪ್ರೆಸ್ ಡೆಲಿವರಿ ಸೇವೆಯನ್ನು ವಿಸ್ತರಿಸಲಾಗಿದೆ. ಒಂಟಿಯಾಗಿ ವಾಸಿಸುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಬಾಡಿಗೆ ಮನೆಯಲ್ಲಿರುವವರಿಗೆ ಇದು ಅತ್ಯಂತ ಉಪಯುಕ್ತವಾಗಲಿದೆ. ಕಡಿಮೆ ದಾಖಲೆಗಳೊಂದಿಗೆ ತಕ್ಷಣವೇ ಹೊಸ ಸಂಪರ್ಕ ಪಡೆಯಲು ವ್ಯವಸ್ಥೆ ಸರಳೀಕರಿಸಲಾಗಿದೆ.&lt;/p&gt;&lt;h3&gt;&lt;strong&gt;ಜಾಗತಿಕ ಮಾರುಕಟ್ಟೆ ಮತ್ತು ಎಲ್&zwnj;ಪಿಜಿ ಬೆಲೆ ಸ್ಥಿತಿಗತಿ!&lt;/strong&gt;&lt;/h3&gt;&lt;p&gt;ಅಂತರರಾಷ್ಟ್ರೀಯ ಮಟ್ಟದಲ್ಲಿ ಪೂರೈಕೆ ವ್ಯತ್ಯಯದ ಭಯದಿಂದಾಗಿ ಜಾಗತಿಕ ಎಲ್&zwnj;ಪಿಜಿ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಸುಧಾರಿಸುತ್ತಿದ್ದು, ಜೆಎಂ ಫೈನಾನ್ಷಿಯಲ್ ವರದಿ ಪ್ರಕಾರ ಮೇ 2026ರ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಅಮೆರಿಕದ ಪ್ರೋಪೇನ್ ಬೆಲೆಗಳು ಸುಮಾರು ಶೇಕಡಾ 20 ರಷ್ಟು ಕುಸಿದಿವೆ. ಪೂರೈಕೆ ಜಾಲ ಸುಗಮಗೊಳ್ಳುತ್ತಿರುವುದು ಮಾರುಕಟ್ಟೆಗೆ ಸಕಾರಾತ್ಮಕ ವಾತಾವರಣ ನಿರ್ಮಿಸಿದೆ.&lt;/p&gt;&lt;h3&gt;&lt;strong&gt;ಯಾವೆಲ್ಲಾ ನಗರಗಳಲ್ಲಿ ಲಭ್ಯ?&lt;/strong&gt;&lt;/h3&gt;&lt;p&gt;ಆರಂಭಿಕ ಹಂತವಾಗಿ ಇಂಡಿಯನ್ ಆಯಿಲ್ ಸಂಸ್ಥೆಯು ಪುಣೆ, ಗುರುಗ್ರಾಮ್, ಇಂದೋರ್ ಮತ್ತು ಕೊಯಮತ್ತೂರು ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ.&lt;/p&gt;&lt;p&gt;&lt;strong&gt;ಆಗಸ್ಟ್ 2026ರ ಮಧ್ಯಭಾಗದ ವೇಳೆಗೆ:&lt;/strong&gt; ಇನ್ನೂ 25 ಪ್ರಮುಖ ನಗರಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ.&lt;/p&gt;&lt;p&gt;ಅಕ್ಟೋಬರ್ 2026ರ ಅಂತ್ಯದ ವೇಳೆಗೆ: ದೇಶದ ಎಲ್ಲಾ ಪ್ರಮುಖ ನಗರಗಳಿಗೂ ಈ ಸೇವೆಯನ್ನು ತಲುಪಿಸಲು ಐಒಸಿಎಲ್ ನೆಟ್&zwnj;ವರ್ಕ್ ಸಜ್ಜುಗೊಳಿಸುತ್ತಿದೆ.&lt;/p&gt;&lt;p&gt;ಈ ಕುರಿತು ಮಾತನಾಡಿದ ಇಂಡಿಯನ್ ಆಯಿಲ್ ಅಧ್ಯಕ್ಷ ಎ.ಎಸ್. ಸಾಹ್ನಿ ಹಾಗೂ ಮಾರುಕಟ್ಟೆ ನಿರ್ದೇಶಕಿ ಸೌಮಿತ್ರ ಪಿ. ಶ್ರೀವಾಸ್ತವ, ಗ್ರಾಹಕರ ಸಮಯ ಹಾಗೂ ಡಿಜಿಟಲ್ ಅಗತ್ಯಗಳಿಗೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಸೇವೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಬುಕ್ ಮಾಡುವುದು ಹೇಗೆ?&lt;/strong&gt;&lt;/h3&gt;&lt;p&gt;ಗ್ರಾಹಕರು 'ಇಂಡಿಯನ್ ಆಯಿಲ್ ಒನ್' ಆಪ್ ಅಥವಾ ಅಧಿಕೃತ ಗ್ರಾಹಕ ಪೋರ್ಟಲ್ ಮೂಲಕ ಹೊಸ ಸಂಪರ್ಕ ಹಾಗೂ ರೀಫಿಲ್ ಬುಕ್ ಮಾಡಬಹುದು. ಶೀಘ್ರದಲ್ಲೇ ವಾಟ್ಸಾಪ್ (7588888824) ಮೂಲಕವೂ ಈ ಬುಕಿಂಗ್ ಲಭ್ಯವಾಗಲಿದೆ. ಜೊತೆಗೆ ಸ್ಥಳೀಯ ಇಂಡೇನ್ ವಿತರಕರು ಹಾಗೂ ಆಯ್ದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್&zwnj;ಗಳಲ್ಲೂ ಈ ಸಿಲಿಂಡರ್ ದೊರೆಯಲಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/news-money/lpg-cylinder-instant-doorstep-delivery-new-rule-2026-bmk/articleshow-e6ns4a5"/>
        </item>
        <item>
            <title><![CDATA[ಉತ್ತರ ಪ್ರದೇಶಕ್ಕೆ 19,208 ಕೋಟಿ ಕೊಟ್ಟ ಕೇಂದ್ರ.. ಕರ್ನಾಟಕಕ್ಕೆ ಮೋದಿ ಕೊಟ್ಟಿದ್ದು ಎಷ್ಟು ಕೋಟಿ..?]]></title>
            <link>https://kannada.asianetnews.com/business/centre-to-states-additional-installment-of-109-lakh-crore-released-up-receives-karnataka-gets-rs-4504-crore-rupees-gkn/articleshow-eqsugzo</link>
            <guid isPermaLink="true">https://kannada.asianetnews.com/business/centre-to-states-additional-installment-of-109-lakh-crore-released-up-receives-karnataka-gets-rs-4504-crore-rupees-gkn/articleshow-eqsugzo</guid>
            <pubDate>Sat, 01 Aug 2026 19:35:07 +0530</pubDate>
            <description><![CDATA[ಕೇಂದ್ರ ಸರ್ಕಾರವು ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಹಬ್ಬದ ಸೀಸನ್&zwnj;ಗೂ ಮುನ್ನವೇ ತೆರಿಗೆ ಹಂಚಿಕೆಯ ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಿದೆ. ಈ ಮುಂಗಡ ಪಾವತಿಯು ಒಟ್ಟು 1,09,019 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂಪಾಯಿಗಳ ಪಾಲು ಸಿಕ್ಕಿದೆ. ಈ ಹಣವು ರಾಜ್ಯಗಳಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyysyha4k6sb8gh1c2mad121,imgname-tax-devolution-to-states-1785592759620.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಬ್ಬದ ಸೀಸನ್ ಮುನ್ನ ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಉದ್ದೇಶದಿಂದ ಆಗಸ್ಟ್ 1, 2026 ರಂದು (ಇಂದು) ತೆರಿಗೆ ಹಂಚಿಕೆಯ (Tax Devolution) ಹೆಚ್ಚುವರಿ ಕಂತಾಗಿ ಬರೋಬ್ಬರಿ 1,09,019 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.&lt;/p&gt;&lt;p&gt;ವಿಶೇಷವೆಂದರೆ ಆಗಸ್ಟ್ 10, 2026 ರಂದು ಬಿಡುಗಡೆಯಾಗಬೇಕಿದ್ದ ನಿಯಮಿತ ಮಾಸಿಕ ಕಂತಿನ ಹೊರತಾಗಿ, ಮುಂಗಡವಾಗಿ ಈ ಹೆಚ್ಚುವರಿ ಹಣವನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಈ ಬೃಹತ್ ಮೊತ್ತದಲ್ಲಿ ಕರ್ನಾಟಕದ ಪಾಲಿಗೆ 4,504 ಕೋಟಿ ರೂಪಾಯಿ ಬಿಡುಗಡೆಯಾಗಿದೆ.&lt;/p&gt;&lt;h2&gt;&lt;strong&gt;ಈ ಹೆಚ್ಚುವರಿ ಕಂತು ಬಿಡುಗಡೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಭಾರತ ಸರ್ಕಾರದ ಪ್ರಕಾರ, ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸುವ ಬದ್ಧತೆಯ ಅಡಿಯಲ್ಲಿ ಈ ಮುಂಗಡ ಕಂತನ್ನು ಬಿಡುಗಡೆ ಮಾಡಲಾಗಿದೆ. ಇದರ ಮುಖ್ಯ ಉದ್ದೇಶವೆಂದರೆ, ರಾಜ್ಯಗಳಲ್ಲಿನ ಬಂಡವಾಳ ವೆಚ್ಚ (Capital Expenditure) ಮತ್ತು ಅಭಿವೃದ್ಧಿ ಯೋಜನೆಗಳ ವೇಗವನ್ನು ಹೆಚ್ಚಿಸುವುದು. ಇದರಿಂದ ತಳಮಟ್ಟದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ವೇಗವಾಗಿ ನಡೆಯಲಿದೆ. ಜೊತೆಗೆ ಹಬ್ಬಗಳ ಸೀಸನ್ ಸಮೀಪಿಸುತ್ತಿರುವುದರಿಂದ, ರಾಜ್ಯಗಳಿಗೆ ತಮ್ಮ ಯೋಜನೆಗಳು ಮತ್ತು ಅಗತ್ಯ ವೆಚ್ಚಗಳನ್ನು ನಿರ್ವಹಿಸಲು ಈ ಹೆಚ್ಚುವರಿ ಫಂಡ್ ಬಹಳಷ್ಟು ಸಹಾಯ ಮಾಡಲಿದೆ.&lt;/p&gt;&lt;h2&gt;&lt;strong&gt;ತೆರಿಗೆ ಪಾಲು ಹಂಚಿಕೆ (Tax Sharing) ಎಂದರೇನು?&lt;/strong&gt;&lt;/h2&gt;&lt;p&gt;ಹಣಕಾಸು ಸಚಿವಾಲಯದ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರವು ಸಂಗ್ರಹಿಸುವ ಒಟ್ಟು ತೆರಿಗೆ ಆದಾಯದ ಶೇಕಡಾ 41% (41%) ರಷ್ಟು ಹಣವನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಈ ಮೊತ್ತವನ್ನು ಸಂಪೂರ್ಣ ಆರ್ಥಿಕ ವರ್ಷದಲ್ಲಿ ಒಟ್ಟು 14 ಕಂತುಗಳ ಮೂಲಕ ರಾಜ್ಯಗಳಿಗೆ ತಲುಪಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ಯಾವ ರಾಜ್ಯಕ್ಕೆ ಎಷ್ಟು ಕೋಟಿ ಸಿಕ್ಕಿದೆ?&lt;/strong&gt;&lt;/h2&gt;&lt;p&gt;ಒಟ್ಟು 1.09 ಲಕ್ಷ ಕೋಟಿ ರೂ. ಅನುದಾನದಲ್ಲಿ ಉತ್ತರ ಪ್ರದೇಶ ಅತಿ ಹೆಚ್ಚು ಪಾಲು ಪಡೆದಿದ್ದರೆ, ಕರ್ನಾಟಕ 9ನೇ ಸ್ಥಾನದಲ್ಲಿದೆ. ರಾಜ್ಯವಾರು ಹಂಚಿಕೆಯ ವಿವರ ಈ ಕೆಳಗಿನಂತಿದೆ. (ಮೊತ್ತ ಕೋಟಿ ರೂ. ಗಳಲ್ಲಿ)&lt;/p&gt;&lt;ol&gt; &lt;li&gt;ಉತ್ತರ ಪ್ರದೇಶ: 19,208&amp;nbsp;&lt;/li&gt; &lt;li&gt;ಬಿಹಾರ: 10,845&lt;/li&gt; &lt;li&gt;ಮಧ್ಯ ಪ್ರದೇಶ: 8,010&lt;/li&gt; &lt;li&gt;ಪಶ್ಚಿಮ ಬಂಗಾಳ: 7,866&lt;/li&gt; &lt;li&gt;ಮಹಾರಾಷ್ಟ್ರ: 7,022&amp;nbsp;&lt;/li&gt; &lt;li&gt;ರಾಜಸ್ಥಾನ: 6,460&lt;/li&gt; &lt;li&gt;ಒಡಿಶಾ: 4,819&lt;/li&gt; &lt;li&gt;ಆಂಧ್ರಪ್ರದೇಶ: 4,597&amp;nbsp;&lt;/li&gt; &lt;li&gt;ಕರ್ನಾಟಕ: 4,504&amp;nbsp;&lt;/li&gt; &lt;li&gt;ತಮಿಳುನಾಡು: 4,466&amp;nbsp;&lt;/li&gt; &lt;li&gt;ಗುಜರಾತ್: 4,094&amp;nbsp;&lt;/li&gt; &lt;li&gt;ಜಾರ್ಖಂಡ್: 3,660&lt;/li&gt; &lt;li&gt;ಛತ್ತೀಸ್&zwnj;ಗಢ: 3,602&lt;/li&gt; &lt;li&gt;ಅಸ್ಸಾಂ: 3,552&amp;nbsp;&lt;/li&gt; &lt;li&gt;ಕೇರಳ: 2,597&amp;nbsp;&lt;/li&gt; &lt;li&gt;ತೆಲಂಗಾಣ: 2,370&lt;/li&gt; &lt;li&gt;ಪಂಜಾಬ್: 2,176&amp;nbsp;&lt;/li&gt; &lt;li&gt;ಹರಿಯಾಣ: 1,484&lt;/li&gt; &lt;li&gt;ಅರುಣಾಚಲ ಪ್ರದೇಶ: 1,476&amp;nbsp;&lt;/li&gt; &lt;li&gt;ಉತ್ತರಾಖಂಡ: 1,244&amp;nbsp;&lt;/li&gt; &lt;li&gt;ಹಿಮಾಚಲ ಪ್ರದೇಶ: 996&lt;/li&gt; &lt;li&gt;&amp;nbsp;ತ್ರಿಪುರಾ: 699&amp;nbsp;&lt;/li&gt; &lt;li&gt;ಮೇಘಾಲಯ: 688&amp;nbsp;&lt;/li&gt; &lt;li&gt;ಮಣಿಪುರ: 682&amp;nbsp;&lt;/li&gt; &lt;li&gt;ಮಿಜೋರಾಂ: 615&amp;nbsp;&lt;/li&gt; &lt;li&gt;ನಾಗಾಲ್ಯಾಂಡ್: 524&amp;nbsp;&lt;/li&gt; &lt;li&gt;ಗೋವಾ: 398&lt;/li&gt;&lt;/ol&gt;&lt;p&gt;ಈ ಹೆಚ್ಚುವರಿ ಅನುದಾನದಿಂದ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ತಮ್ಮ ಆರ್ಥಿಕ ನಿರ್ವಹಣೆ ಮತ್ತು ಮೂಲಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆನೆಬಲ ಸಿಕ್ಕಂತಾಗಿದೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/business/centre-to-states-additional-installment-of-109-lakh-crore-released-up-receives-karnataka-gets-rs-4504-crore-rupees-gkn/articleshow-eqsugzo"/>
        </item>
        <item>
            <title><![CDATA[SBI ನಲ್ಲಿ 5 ಲಕ್ಷ ರೂ. FD ಮಾಡಿದ್ರೆ 5 ವರ್ಷಕ್ಕೆ ಸಿಗೋ ಲಾಭವೆಷ್ಟು? ಲಕ್ಷಾಂತರ ರೂ. ಬಡ್ಡಿಯ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ!]]></title>
            <link>https://kannada.asianetnews.com/money/sbi-fd-5-lakh-5-years-interest-calculator-maturity-amount-bmk/articleshow-f597ggc</link>
            <guid isPermaLink="true">https://kannada.asianetnews.com/money/sbi-fd-5-lakh-5-years-interest-calculator-maturity-amount-bmk/articleshow-f597ggc</guid>
            <pubDate>Fri, 24 Jul 2026 23:05:12 +0530</pubDate>
            <description><![CDATA[ಎಸ್&zwnj;ಬಿಐನಲ್ಲಿ 5 ವರ್ಷಗಳ ಅವಧಿಗೆ 5 ಲಕ್ಷ ರೂಪಾಯಿ ಸ್ಥಿರ ಠೇವಣಿ ಇಟ್ಟರೆ ಸಿಗುವ ಲಾಭದ ಬಗ್ಗೆ ಈ ಲೇಖನ ವಿವರಿಸುತ್ತದೆ. ಸಾಮಾನ್ಯ ಗ್ರಾಹಕರಿಗೆ 6.05% ಮತ್ತು ಹಿರಿಯ ನಾಗರಿಕರಿಗೆ 7.05% ಬಡ್ಡಿದರದಲ್ಲಿ ಸಿಗುವ ಒಟ್ಟು ಮೆಚ್ಯೂರಿಟಿ ಮೊತ್ತದ ಸಂಪೂರ್ಣ ಲೆಕ್ಕಾಚಾರವನ್ನು ಇಲ್ಲಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxn018q5gqrbbaxrtv2s7q1y,imgname-sbi-funds-management-ipo-1784189854437.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ದಿನಗಳಲ್ಲಿ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್&zwnj;ಗಳಲ್ಲಿ ಹಣ ಹೂಡಿಕೆ ಮಾಡುವುದು ಹೆಚ್ಚು ಜನಪ್ರಿಯವಾಗಿದ್ದರೂ, ಅದರಲ್ಲಿ 'ಮಾರುಕಟ್ಟೆಯ ರಿಸ್ಕ್' (ಅಪಾಯ) ಇರುತ್ತದೆ. ಹೀಗಾಗಿ, ಯಾವುದೇ ಅಪಾಯವಿಲ್ಲದೆ ತಮ್ಮ ಕಷ್ಟಪಟ್ಟು ಗಳಿಸಿದ ಹಣ ಸುರಕ್ಷಿತವಾಗಿರಬೇಕು ಮತ್ತು ಅದರಿಂದ ನಿಗದಿತ ಆದಾಯ ಬರಬೇಕು ಎಂದು ಬಯಸುವವರಿಗೆ 'ಸ್ಥಿರ ಠೇವಣಿ' (ಫಿಕ್ಸ್ಡ್ ಡಿಪಾಸಿಟ್ - FD) ಇಂದಿಗೂ ಅತ್ಯುತ್ತಮ ಆಯ್ಕೆಯಾಗಿದೆ.&lt;/p&gt;&lt;h2&gt;&lt;strong&gt;ಹಿರಿಯರಿಗೆ ಆಸರೆ!&lt;/strong&gt;&lt;/h2&gt;&lt;p&gt;ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' (SBI), ತನ್ನ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಆಕರ್ಷಕ ಬಡ್ಡಿದರಗಳೊಂದಿಗೆ ವಿವಿಧ ಅವಧಿಯ FD ಯೋಜನೆಗಳನ್ನು ಒದಗಿಸುತ್ತಿದೆ. ವಿಶೇಷವಾಗಿ ಸಾಮಾನ್ಯ ನಾಗರಿಕರಿಗಿಂತ 'ಹಿರಿಯ ನಾಗರಿಕರಿಗೆ' (Senior Citizens) ಎಸ್&zwnj;ಬಿಐ ಹೆಚ್ಚಿನ ಬಡ್ಡಿದರ ನೀಡುತ್ತದೆ. ನೀವೇನಾದರೂ ಎಸ್&zwnj;ಬಿಐನಲ್ಲಿ 5 ವರ್ಷಗಳ ಅವಧಿಗೆ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಮುಕ್ತಾಯದ ಸಮಯದಲ್ಲಿ (Maturity) ನಿಮ್ಮ ಕೈಗೆ ಎಷ್ಟು ಹಣ ಸಿಗುತ್ತದೆ? ಬಡ್ಡಿಯ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ ನೋಡಿ.&lt;/p&gt;&lt;h3&gt;&lt;strong&gt;5 ವರ್ಷಗಳ SBI FD: ಬಡ್ಡಿದರ ಎಷ್ಟು?&lt;/strong&gt;&lt;/h3&gt;&lt;p&gt;ಎಸ್&zwnj;ಬಿಐ ನಿಗದಿತ 5 ವರ್ಷಗಳ ದೀರ್ಘಾವಧಿ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿಯನ್ನು ನೀಡುತ್ತಿದೆ:&lt;/p&gt;&lt;p&gt;ಸಾಮಾನ್ಯ ಗ್ರಾಹಕರಿಗೆ: ವಾರ್ಷಿಕ 6.05% ಬಡ್ಡಿದರ ಲಭ್ಯವಿದೆ.&lt;/p&gt;&lt;p&gt;ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ): ವಾರ್ಷಿಕ 7.05% ಬಡ್ಡಿದರ ಲಭ್ಯವಿದೆ (ಸಾಮಾನ್ಯರಿಗಿಂತ 1% ಹೆಚ್ಚುವರಿ ಬಡ್ಡಿ).&lt;/p&gt;&lt;p&gt;ಹಣವನ್ನು ದೀರ್ಘಾವಧಿಗೆ ಸುರಕ್ಷಿತವಾಗಿರಿಸಲು ಹಾಗೂ ಭವಿಷ್ಯದ ದೊಡ್ಡ ಅಗತ್ಯಗಳಿಗೆ (ಉದಾಹರಣೆಗೆ ಮಕ್ಕಳ ಶಿಕ್ಷಣ, ಮದುವೆ ಅಥವಾ ನಿವೃತ್ತಿ ಯೋಜನೆ) ಹಣ ಜೋಡಿಸಲು ಈ 5 ವರ್ಷಗಳ ಅವಧಿ ಸೂಕ್ತವಾಗಿದೆ.&lt;/p&gt;&lt;p&gt;5 ಲಕ್ಷ ರೂಪಾಯಿ ಹೂಡಿಕೆಗೆ ಸಿಗುವ ಸಂಪೂರ್ಣ ಲಾಭದ ಲೆಕ್ಕಾಚಾರ:&lt;/p&gt;&lt;p&gt;ನೀವು ಎಸ್&zwnj;ಬಿಐನಲ್ಲಿ ಇಂದೇ 5 ಲಕ್ಷ ರೂಪಾಯಿಗಳನ್ನು 5 ವರ್ಷಗಳ ಅವಧಿಗೆ ಸ್ಥಿರ ಠೇವಣಿ (FD) ಇಟ್ಟರೆ ಸಿಗುವ ಮೆಚ್ಯೂರಿಟಿ ಮೊತ್ತ ಹೀಗಿರಲಿದೆ:&lt;/p&gt;&lt;p&gt;1. ಸಾಮಾನ್ಯ ಗ್ರಾಹಕರಿಗೆ (General Customers):&lt;/p&gt;&lt;p&gt;&lt;strong&gt;ಹೂಡಿಕೆ ಮಾಡಿದ ಮೊತ್ತ&lt;/strong&gt;: ₹5,00,000&lt;/p&gt;&lt;p&gt;&lt;strong&gt;ಬಡ್ಡಿದರ:&lt;/strong&gt; 6.05% (ವಾರ್ಷಿಕ)&lt;/p&gt;&lt;p&gt;&lt;strong&gt;ಅವಧಿ: &lt;/strong&gt;5 ವರ್ಷಗಳು&lt;/p&gt;&lt;p&gt;&lt;strong&gt;ಸಿಗುವ ಒಟ್ಟು ಬಡ್ಡಿ ಆದಾಯ:&lt;/strong&gt; ಸುಮಾರು ₹1,75,088&lt;/p&gt;&lt;p&gt;&lt;strong&gt;5 ವರ್ಷಗಳ ನಂತರ ಸಿಗುವ ಒಟ್ಟು ಮೆಚ್ಯೂರಿಟಿ ಮೊತ್ತ&lt;/strong&gt;: ₹6,75,088&lt;/p&gt;&lt;p&gt;2. ಹಿರಿಯ ನಾಗರಿಕರಿಗೆ (Senior Citizens):&lt;/p&gt;&lt;p&gt;&lt;strong&gt;ಹೂಡಿಕೆ ಮಾಡಿದ ಮೊತ್ತ:&lt;/strong&gt; ₹5,00,000&lt;/p&gt;&lt;p&gt;&lt;strong&gt;ಬಡ್ಡಿದರ:&lt;/strong&gt; 7.05% (ವಾರ್ಷಿಕ)&lt;/p&gt;&lt;p&gt;&lt;strong&gt;ಅವಧಿ&lt;/strong&gt;: 5 ವರ್ಷಗಳು&lt;/p&gt;&lt;p&gt;&lt;strong&gt;ಸಿಗುವ ಒಟ್ಟು ಬಡ್ಡಿ ಆದಾಯ:&lt;/strong&gt; ಸುಮಾರು ₹2,09,129&lt;/p&gt;&lt;p&gt;&lt;strong&gt;5 ವರ್ಷಗಳ ನಂತರ ಸಿಗುವ ಒಟ್ಟು ಮೆಚ್ಯೂರಿಟಿ ಮೊತ್ತ:&lt;/strong&gt; ₹7,09,129&lt;/p&gt;&lt;h3&gt;&lt;strong&gt;ಈ ಯೋಜನೆಯ ಮುಖ್ಯ ಅನುಕೂಲಗಳು:&lt;/strong&gt;&lt;/h3&gt;&lt;p&gt;ಶೇ. 100% ಸುರಕ್ಷತೆ: ಸರ್ಕಾರಿ ರಕ್ಷಣೆ ಹೊಂದಿರುವ ಎಸ್&zwnj;ಬಿಐನಲ್ಲಿ ನಿಮ್ಮ ಹೂಡಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.&lt;/p&gt;&lt;h3&gt;&lt;strong&gt;ಆದಾಯ ತೆರಿಗೆ ವಿನಾಯಿತಿ (Tax Benefit): &lt;/strong&gt;5 ವರ್ಷಗಳ ಈ ಎಸ್&zwnj;ಬಿಐ ಎಫ್&zwnj;ಡಿಯಲ್ಲಿ ಹೂಡಿಕೆ ಮಾಡುವುದರಿಂದ 'ಆದಾಯ ತೆರಿಗೆ ಕಾಯ್ದೆ 80C' ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವನ್ನೂ ಪಡೆಯಬಹುದು.&lt;/h3&gt;&lt;p&gt;&lt;strong&gt;ಸ್ಥಿರ ಆದಾಯ: &lt;/strong&gt;ಮಾರುಕಟ್ಟೆಯಲ್ಲಿ ಎಷ್ಟೇ ಏರಿಳಿತಗಳಾದರೂ ನೀವು ಹೂಡಿಕೆ ಮಾಡಿದಾಗ ನಿಗದಿಯಾದ ಬಡ್ಡಿದರ ಬದಲಾಗುವುದಿಲ್ಲ.&lt;/p&gt;&lt;p&gt;ನೀವು ಯಾವುದೇ ಅಪಾಯವಿಲ್ಲದೆ ಲಕ್ಷಾಂತರ ರೂಪಾಯಿ ಬಡ್ಡಿ ಆದಾಯ ಗಳಿಸಲು ಬಯಸಿದರೆ, ಎಸ್&zwnj;ಬಿಐನ ಈ 5 ವರ್ಷಗಳ ಎಫ್&zwnj;ಡಿ ಯೋಜನೆ ಅತ್ಯುತ್ತಮ ಹೂಡಿಕೆಯಾಗಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/sbi-fd-5-lakh-5-years-interest-calculator-maturity-amount-bmk/articleshow-f597ggc"/>
        </item>
        <item>
            <title><![CDATA[ಕೆಲಸಕ್ಕೆ ಹೋಗುವ ಅಗತ್ಯವಿಲ್ಲ! ಪೋಸ್ಟ್ ಆಫೀಸ್‌ನ ಈ ಯೋಜನೆಯಿಂದ ನೆಯಿಂದಲೇ ತಿಂಗಳಿಗೆ ₹20,000 ಗಳಿಸಿ!]]></title>
            <link>https://kannada.asianetnews.com/news-money/post-office-senior-citizen-savings-scheme-bmk/articleshow-fnvefpe</link>
            <guid isPermaLink="true">https://kannada.asianetnews.com/news-money/post-office-senior-citizen-savings-scheme-bmk/articleshow-fnvefpe</guid>
            <pubDate>Wed, 22 Jul 2026 16:40:16 +0530</pubDate>
            <description><![CDATA[&lt;p&gt;ಅಂಚೆ ಕಚೇರಿಯು ಹಿರಿಯ ನಾಗರಿಕರ ಉಳಿತಾಯ ಯೋಜನೆ ಎಂಬ ವಿಶೇಷ ಯೋಜನೆ ನೀಡುತ್ತದೆ. ಈ ಯೋಜನೆಯು 20000 ಸಾವಿರ ರೂ.,ಗಳ ಮನೆಯಿಂದಲೇ ಗಳಿಸಿ! ಈ ಕುರಿತು ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ. ನೋಡೋಣ ಬನ್ನಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmaj8gp4vzrecvfsmyy9qrq,imgname-chatgpt-image-jun-21--2026--11-00-43-am-1782019858966.png" type="image/jpeg" height="390" width="690"/>
            <content:encoded><![CDATA[&lt;p&gt;&lt;/p&gt;&lt;p&gt;ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಮ್ಮ ಹಣದ ಸುರಕ್ಷತೆ ಮತ್ತು ಹೂಡಿಕೆಯ ಮೇಲೆ ಬರುವ ಖಚಿತ ಆದಾಯ ಅತ್ಯಂತ ಮುಖ್ಯವಾಗಿದೆ. ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಮತ್ತು ನಿವೃತ್ತಿಯ ನಂತರದ ಜೀವನವನ್ನು ನೆಮ್ಮದಿಯಿಂದ ಕಳೆಯಲು ಬಯಸುವವರಿಗೆ ಸೂಕ್ತವಾದ ಹೂಡಿಕೆ ಮಾರ್ಗಗಳನ್ನು ಆಯ್ಕೆ ಮಾಡುವುದು ದೊಡ್ಡ ಸವಾಲು.&lt;/p&gt;&lt;h2&gt;&lt;strong&gt;ಭರವಸೆಯ ಹೂಡಿಕೆ!&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ನಾವು ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡುವುದನ್ನು ಕಾಣುತ್ತೇವೆ. ಆದರೆ ಬ್ಯಾಂಕುಗಳಂತೆಯೇ ಭಾರತೀಯ ಅಂಚೆ ಕಚೇರಿಗಳು ಸಹ ಮಧ್ಯಮ ವರ್ಗದ ಜನರಲ್ಲಿ ಅತ್ಯಂತ ಜನಪ್ರಿಯ ಮತ್ತು ಭರವಸೆಯ ಹೂಡಿಕೆ ವೇದಿಕೆಯಾಗಿ ಹೊರಹೊಮ್ಮಿವೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದರ ಪ್ರಮುಖ ಅನುಕೂಲವೆಂದರೆ, ಇಲ್ಲಿ ನಿಮ್ಮ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಹಾಗೂ ಸರ್ಕಾರವೇ ನಿಗದಿಪಡಿಸಿದ ಸ್ಥಿರ ಬಡ್ಡಿದರ ದೊರೆಯುತ್ತದೆ. ಅಂಚೆ ಕಚೇರಿಯು ವಿವಿಧ ರೀತಿಯ ಸಣ್ಣ ಉಳಿತಾಯ ಯೋಜನೆಗಳನ್ನು ನಡೆಸುತ್ತಿದೆಯಾದರೂ, ಅದರಲ್ಲಿ ಅತ್ಯಂತ ಜನಪ್ರಿಯವಾದ ಒಂದು ಯೋಜನೆ ಎಂದರೆ &quot;ಹಿರಿಯ ನಾಗರಿಕರ ಉಳಿತಾಯ ಯೋಜನೆ.&lt;/p&gt;&lt;h3&gt;&lt;strong&gt;ಏನಿದು ಹಿರಿಯ ನಾಗರಿಕರ ಉಳಿತಾಯ ಯೋಜನೆ?&lt;/strong&gt;&lt;/h3&gt;&lt;p&gt;ನಿವೃತ್ತಿಯ ನಂತರವೂ ಯಾರ ಹತ್ತಿರವೂ ಕೈಚಾಚದೆ, ಪ್ರತಿ ತಿಂಗಳು ಅಥವಾ ನಿಯಮಿತವಾಗಿ ಸ್ಥಿರ ಆದಾಯವನ್ನು ಗಳಿಸಲು ಬಯಸುವ ಹಿರಿಯ ನಾಗರಿಕರಿಗಾಗಿಯೇ ಈ ಯೋಜನೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಲಾಭವನ್ನು ನೀವು ಹತ್ತಿರದ ಅಂಚೆ ಕಚೇರಿಗಳಲ್ಲಿ ಅಥವಾ ಅಧಿಕೃತ ಬ್ಯಾಂಕುಗಳ ಮೂಲಕ ಪಡೆದುಕೊಳ್ಳಬಹುದು.&lt;/p&gt;&lt;h3&gt;&lt;strong&gt;ಯಾರೆಲ್ಲಾ ಹೂಡಿಕೆ ಮಾಡಬಹುದು?&lt;/strong&gt;&lt;/h3&gt;&lt;p&gt;&lt;strong&gt;60 ವರ್ಷ ಮೇಲ್ಪಟ್ಟವರು: &lt;/strong&gt;60 ವರ್ಷ ದಾಟಿದ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಖಾತೆ ತೆರೆಯಬಹುದು.&lt;/p&gt;&lt;p&gt;&lt;strong&gt;ಸ್ವಯಂಪ್ರೇರಿತ ನಿವೃತ್ತಿ (VRS):&lt;/strong&gt; 55 ರಿಂದ 60 ವರ್ಷ ವಯಸ್ಸಿನ ಒಳಗಿದ್ದು, ಸ್ವಯಂಪ್ರೇರಿತ ನಿವೃತ್ತಿ ಯೋಜನೆ (VRS) ಪಡೆದ ನೌಕರರು ಕೂಡ ಕೆಲವು ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಿರುತ್ತಾರೆ.&lt;/p&gt;&lt;h3&gt;&lt;strong&gt;ಹೂಡಿಕೆ ಮಿತಿ ಮತ್ತು ಅವಧಿ ಎಷ್ಟು?&lt;/strong&gt;&lt;/h3&gt;&lt;p&gt;ಈ ಯೋಜನೆಯಲ್ಲಿ ಹೂಡಿಕೆದಾರರಿಗೆ ಅತ್ಯಂತ ದೊಡ್ಡ ಖುಷಿಯ ಸುದ್ದಿಯೆಂದರೆ, ಸರ್ಕಾರವು ಇದರ ಗರಿಷ್ಠ ಹೂಡಿಕೆ ಮಿತಿಯನ್ನು ಹೆಚ್ಚಿಸಿದೆ&lt;/p&gt;&lt;p&gt;&lt;strong&gt;ಗರಿಷ್ಠ ಹೂಡಿಕೆ: &lt;/strong&gt;ಹಿಂದೆ ಈ ಯೋಜನೆಯಲ್ಲಿ ಗರಿಷ್ಠ 15 ಲಕ್ಷ ರೂಪಾಯಿಗಳನ್ನು ಮಾತ್ರ ಹೂಡಿಕೆ ಮಾಡಲು ಅವಕಾಶವಿತ್ತು. ಆದರೆ ಈಗ ಈ ಮಿತಿಯನ್ನು₹30 ಲಕ್ಷಕ್ಕೆ ಹೆಚ್ಚಿಸಲಾಗಿದೆ.&lt;/p&gt;&lt;p&gt;&lt;strong&gt;ಹೂಡಿಕೆ ಅವಧಿ:&lt;/strong&gt; ಯೋಜನೆಯ ನಿಯಮಗಳ ಪ್ರಕಾರ, ನೀವು ಹೂಡಿಕೆ ಮಾಡಿದ ಮೊತ್ತವನ್ನು ಕನಿಷ್ಠ 5 ವರ್ಷಗಳವರೆಗೆ ಇಡಬೇಕಾಗುತ್ತದೆ. 5 ವರ್ಷಗಳ ನಂತರ ಬಯಸಿದರೆ, ಈ ಅವಧಿಯನ್ನು ಮತ್ತೆ 3 ವರ್ಷಗಳವರೆಗೆ ವಿಸ್ತರಿಸಿಕೊಳ್ಳುವ ಅವಕಾಶವೂ ಇದೆ.&lt;/p&gt;&lt;h3&gt;&lt;strong&gt;ಬಡ್ಡಿದರ ಮತ್ತು ತೆರಿಗೆ ವಿನಾಯಿತಿ !&lt;/strong&gt;&lt;/h3&gt;&lt;p&gt;&lt;strong&gt;ಸೂಪರ್ ಬಡ್ಡಿದರ:&lt;/strong&gt; ಅಂಚೆ ಕಚೇರಿಯ ಈ ಯೋಜನೆಯು ಪ್ರಸ್ತುತ ಜುಲೈ-ಸೆಪ್ಟೆಂಬರ್ 2026 ರ ತ್ರೈಮಾಸಿಕ ಅವಧಿಗೆ 8.2% ನಷ್ಟು ಆಕರ್ಷಕ ಬಡ್ಡಿದರವನ್ನು ನೀಡುತ್ತಿದೆ. ಈ ಬಡ್ಡಿದರವನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲೂ ಪರಿಶೀಲಿಸಿ ಘೋಷಿಸುತ್ತದೆ.&lt;/p&gt;&lt;p&gt;&lt;strong&gt;ತೆರಿಗೆ ವಿನಾಯಿತಿ: &lt;/strong&gt;ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ಉಳಿತಾಯವನ್ನೂ ಮಾಡಬಹುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C (Section 80C) ಅಡಿಯಲ್ಲಿ ವರ್ಷಕ್ಕೆ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ.&lt;/p&gt;&lt;h3&gt;&lt;strong&gt;ತಿಂಗಳಿಗೆ ₹20,000 ಆದಾಯ ಗಳಿಸುವುದು ಹೇಗೆ?&lt;/strong&gt;&lt;/h3&gt;&lt;p&gt;ನೀವು ಹಿರಿಯ ನಾಗರಿಕರಾಗಿದ್ದು, ಈ ಯೋಜನೆಯಲ್ಲಿ ಗರಿಷ್ಠ ಮಿತಿಯಾದ ₹30 ಲಕ್ಷವನ್ನು ಒಂದೇ ಕಂತಿನಲ್ಲಿ ಹೂಡಿಕೆ ಮಾಡಿದರೆ, ವರ್ಷಕ್ಕೆ 8.2% ಬಡ್ಡಿದರದಂತೆ ಬಡ್ಡಿಯ ರೂಪದಲ್ಲೇ ಭಾರಿ ಮೊತ್ತ ಸಿಗುತ್ತದೆ. ಇದನ್ನು ಮಾಸಿಕ ಲೆಕ್ಕಾಚಾರದಲ್ಲಿ ನೋಡಿದರೆ, ನೀವು ಮನೆಯಲ್ಲೇ ಕುಳಿತು ಪ್ರತಿ ತಿಂಗಳು ಅಂದಾಜು ₹20,000 ವರೆಗೆ (ತ್ರೈಮಾಸಿಕವಾಗಿ ಪಾವತಿಯಾಗುವ ಬಡ್ಡಿ) ಖಚಿತ ಆದಾಯವನ್ನು ಗಳಿಸಬಹುದು!&lt;/p&gt;&lt;p&gt;&lt;strong&gt;ಕೊನೆ ಮಾತು!&amp;nbsp;&lt;/strong&gt;ನಿಮ್ಮ ಬಳಿ ನಿವೃತ್ತಿಯ ಹಣವಿದ್ದು, ಯಾವುದೇ ರಿಸ್ಕ್ ಇಲ್ಲದೆ ಸುರಕ್ಷಿತವಾಗಿ ಹೂಡಿಕೆ ಮಾಡಿ ಪ್ರತಿ ತಿಂಗಳು ನಿಗದಿತ ಆದಾಯ ಪಡೆಯಲು ಬಯಸುತ್ತಿದ್ದರೆ, ಪೋಸ್ಟ್ ಆಫೀಸ್&zwnj;ನ ಈ 'ಹಿರಿಯ ನಾಗರಿಕರ ಯೋಜನೆ' ನಿಜಕ್ಕೂ ಒಂದು ಮಾಸ್ಟರ್&zwnj;ಪ್ಲಾನ್! ನಿವೃತ್ತ ಜೀವನವನ್ನು ಆರ್ಥಿಕವಾಗಿ ಸ್ವತಂತ್ರವಾಗಿ ಮತ್ತು ನೆಮ್ಮದಿಯಿಂದ ಕಳೆಯಲು ಇದು ಅತ್ಯುತ್ತಮ ಹೂಡಿಕೆ ಮಾರ್ಗವಾಗಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/news-money/post-office-senior-citizen-savings-scheme-bmk/articleshow-fnvefpe"/>
        </item>
        <item>
            <title><![CDATA[Hatchback: ಖರೀದಿಸಲು ಜನ ಕ್ಯೂ ನಿಲ್ಲುತ್ತಿದ್ದಾರೆ!  6 ಏರ್‌ಬ್ಯಾಗ್ ಜತೆ 33 ಕಿ.ಮೀ ಮೈಲೇಜ್ ಕೊಡೋ ಈ ಸೂಪರ್ ಕಾರಿನ ಬೆಲೆ ಕೇಳಿದ್ರೆ ಫುಲ್‌ ಖುಷ್‌ ಆಗ್ತೀರಾ!]]></title>
            <link>https://kannada.asianetnews.com/money/super-car-6-airbags-33-kmpl-mileage-price-india-2026-bmk/articleshow-g0liad8</link>
            <guid isPermaLink="true">https://kannada.asianetnews.com/money/super-car-6-airbags-33-kmpl-mileage-price-india-2026-bmk/articleshow-g0liad8</guid>
            <pubDate>Mon, 27 Jul 2026 17:53:07 +0530</pubDate>
            <description><![CDATA[&lt;p&gt;ಕಳೆದ ತಿಂಗಳು ಭಾರತದಲ್ಲಿ ಹ್ಯಾಚ್&zwnj;ಬ್ಯಾಕ್ ಕಾರುಗಳು ಭರ್ಜರಿ ಮಾರಾಟ ಕಂಡಿದ್ದು, ಮಾರುತಿ ಸುಜುಕಿ ವ್ಯಾಗನ್ ಆರ್ 16,952 ಯುನಿಟ್&zwnj; ಮಾರಾಟವಾಗಿದ್ದು, ಅಗ್ರಸ್ಥಾನದಲ್ಲಿದೆ. ಕಡಿಮೆ ಬೆಲೆ, ಅಧಿಕ ಮೈಲೇಜ್ ಮತ್ತು ಉತ್ತಮ ಸ್ಥಳಾವಕಾಶದಿಂದಾಗಿ ಇದು ಜನಪ್ರಿಯವಾಗಿದ್ದು, ಸ್ವಿಫ್ಟ್, ಬಲೆನೊ ಮತ್ತು ಆಲ್ಟೊ ಕೂಡ ಟಾಪ್-5 ಪಟ್ಟಿಯಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01c7wfnb4nyy1dm5z9py6qa7e3,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಎಸ್&zwnj;ಯುವಿ ಕಾರುಗಳ ಹವಾ ಜೋರಾಗಿದ್ದರೂ, ಬಜೆಟ್ ಬೆಲೆಯಲ್ಲಿ ಕಾರು ಕೊಳ್ಳಲು ಬಯಸುವ ಭಾರತೀಯ ಕುಟುಂಬಗಳಿಗೆ ಹ್ಯಾಚ್&zwnj;ಬ್ಯಾಕ್ (ಸಾಮಾನ್ಯ ಗಾತ್ರದ ಸಣ್ಣ ಕಾರುಗಳು) ಕಾರುಗಳೇ ಮೊದಲ ಆಯ್ಕೆಯಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಕಳೆದ ತಿಂಗಳು ಭಾರತದಲ್ಲಿ ಟಾಪ್-10 ಹ್ಯಾಚ್&zwnj;ಬ್ಯಾಕ್ ಕಾರುಗಳು ಬರೋಬ್ಬರಿ 76,264 ಯುನಿಟ್&zwnj;ಗಳಷ್ಟು ಮಾರಾಟವಾಗಿ ಹೊಸ ದಾಖಲೆ ಬರೆದಿವೆ. ಈ ಸಾಲಿನಲ್ಲಿ ಎಂದಿನಂತೆ ಮಾರುತಿ ಸುಜುಕಿ ಸಂಸ್ಥೆಯ ವ್ಯಾಗನ್ ಆರ್ ಕಾರು ಅಗ್ರಸ್ಥಾನದಲ್ಲಿದ್ದು, ಜನರ ನೆಚ್ಚಿನ ಫ್ಯಾಮಿಲಿ ಕಾರ್ ಎನಿಸಿಕೊಂಡಿದೆ. ಕಳೆದ ತಿಂಗಳೊಂದರಲ್ಲೇ 16,952 ವ್ಯಾಗನ್ ಆರ್ ಕಾರುಗಳು ಮಾರಾಟವಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದರ ಮಾರಾಟದಲ್ಲಿ ಶೇ.31ರಷ್ಟು ಏರಿಕೆ ಕಂಡುಬಂದಿದೆ.&lt;/p&gt;&lt;h2&gt;&amp;nbsp;&lt;strong&gt;ಏನಿದರ ವಿಶೇಷತೆ?&lt;/strong&gt;&lt;/h2&gt;&lt;p&gt;ಕಡಿಮೆ ಬೆಲೆ, ಹೆಚ್ಚು ಜಾಗ (ಕ್ಯಾಬಿನ್ ಸ್ಪೇಸ್) ಹಾಗೂ ಅತ್ಯುತ್ತಮ ಮೈಲೇಜ್ ನೀಡುವುದು ಈ ಕಾರಿನ ದೊಡ್ಡ ಪ್ಲಸ್ ಪಾಯಿಂಟ್. ಇದರ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ. 1 ಲೀಟರ್ ಹಾಗೂ 1.2-ಲೀಟರ್ ಪೆಟ್ರೋಲ್ ಎಂಜಿನ್&zwnj;ಗಳಲ್ಲಿ ಲಭ್ಯವಿರುವ ಈ ಕಾರು, ಪೆಟ್ರೋಲ್&zwnj;ನಲ್ಲಿ ಲೀಟರ್&zwnj;ಗೆ 23 ರಿಂದ 25 ಕಿ.ಮೀ ಮೈಲೇಜ್ ನೀಡುತ್ತದೆ. ಸಿಎನ್&zwnj;ಜಿ ರೂಪಾಂತರದಲ್ಲಂತೂ 33 ಕಿ.ಮೀಗೂ ಹೆಚ್ಚು ಮೈಲೇಜ್ ಕೊಡುವ ಮೂಲಕ ಗ್ರಾಹಕರ ಜೇಬಿಗೆ ಆಸರೆಯಾಗಿದೆ. ಅಲ್ಲದೇ 6 ಏರ್&zwnj;ಬ್ಯಾಗ್&zwnj;ಗಳು, ಎಬಿಎಸ್, ಇಬಿಡಿ, ಹಿಲ್-ಹೋಲ್ಡ್ ಕಂಟ್ರೋಲ್&zwnj;ನಂತಹ ಭದ್ರತಾ ವೈಶಿಷ್ಟ್ಯಗಳಿವೆ. ಒಳಗಡೆ 7-ಇಂಚಿನ ಟಚ್&zwnj;ಸ್ಕ್ರೀನ್ ಇನ್ಫೋಟೈನ್&zwnj;ಮೆಂಟ್ ಸಿಸ್ಟಮ್, ಆಪಲ್ ಕಾರ್&zwnj;ಪ್ಲೇ, ಕೀಲೆಸ್ ಎಂಟ್ರಿ ವ್ಯವಸ್ಥೆಯೂ ಇದೆ. ಇಷ್ಟೆಲ್ಲಾ ಫೀಚರ್ಸ್&zwnj;ಗಳಿದ್ದರೂ ಇದರ ಆರಂಭಿಕ ಬೆಲೆ ₹4,98,900 (ಎಕ್ಸ್-ಶೋರೂಮ್) ಆಗಿರುವುದು ವಿಶೇಷ.&lt;/p&gt;&lt;h3&gt;&lt;strong&gt;ಇತರ ಜನಪ್ರಿಯ ಕಾರುಗಳ!&lt;/strong&gt;&lt;/h3&gt;&lt;p&gt;ಮಾರುಕಟ್ಟೆಯಲ್ಲಿ ಕೇವಲ ವ್ಯಾಗನ್ ಆರ್ ಮಾತ್ರವಲ್ಲದೆ, ಇನ್ನು ಕೆಲವು ಕಾರುಗಳು ಬಂಪರ್ ಮಾರಾಟ ಕಾಣುತ್ತಿವೆ;&lt;/p&gt;&lt;p&gt;&lt;strong&gt;1. ಮಾರುತಿ ಸುಜುಕಿ ಸ್ವಿಫ್ಟ್; &lt;/strong&gt;ಯುವಕರ ನೆಚ್ಚಿನ ಕಾರಾಗಿರುವ ಸ್ವಿಫ್ಟ್, ತನ್ನ ಆಕರ್ಷಕ ಲುಕ್ ಮತ್ತು ಹೊಸ ಎಂಜಿನ್&zwnj;ನಿಂದಾಗಿ 15,215 ಯುನಿಟ್ ಮಾರಾಟವಾಗಿ ಎರಡನೇ ಸ್ಥಾನದಲ್ಲಿದೆ.&lt;/p&gt;&lt;p&gt;&lt;strong&gt;2. ಮಾರುತಿ ಬಲೆನೊ; &lt;/strong&gt;ಪ್ರೀಮಿಯಂ ಹ್ಯಾಚ್&zwnj;ಬ್ಯಾಕ್ ವಿಭಾಗದ ಈ ಕಾರು 12,488 ಯುನಿಟ್ ಮಾರಾಟದೊಂದಿಗೆ ಶೇ. 39 ರಷ್ಟು ಬೆಳವಣಿಗೆ ಕಂಡು ಮೂರನೇ ಸ್ಥಾನದಲ್ಲಿದೆ.&lt;/p&gt;&lt;p&gt;&lt;strong&gt;3. ಮಾರುತಿ ಆಲ್ಟೊ;&lt;/strong&gt; ದೇಶದ ಅತ್ಯಂತ ಅಗ್ಗದ ಕಾರು ಎನಿಸಿಕೊಂಡಿರುವ ಆಲ್ಟೊ, ಮೊದಲ ಬಾರಿಗೆ ಕಾರು ಕೊಳ್ಳುವವರನ್ನು ಆಕರ್ಷಿಸುತ್ತಿದ್ದು, 10,388 ಯುನಿಟ್ ಮಾರಾಟದೊಂದಿಗೆ ಬರೋಬ್ಬರಿ ಶೇ. 106 ರಷ್ಟು ಬೃಹತ್ ಜಿಗಿತ ಕಂಡಿದೆ.&lt;/p&gt;&lt;p&gt;&lt;strong&gt;4. ಟಾಟಾ ತಿಯಾಗೊ;&lt;/strong&gt; ಸುರಕ್ಷತೆಗೆ ಹೆಸರಾಗಿರುವ (4-ಸ್ಟಾರ್ NCAP ರೇಟಿಂಗ್) ತಿಯಾಗೊ 7,329 ಯುನಿಟ್ ಮಾರಾಟವಾಗಿ ಟಾಪ್-5 ನಲ್ಲಿದೆ.&lt;/p&gt;&lt;h3&gt;&lt;strong&gt;ಮಾರುಕಟ್ಟೆಯಲ್ಲಿ ಭದ್ರಸ್ಥಾನ ಹೊಂದಿದ ಬ್ರ್ಯಾಂಡ್!&lt;/strong&gt;&lt;/h3&gt;&lt;p&gt;ಇವುಗಳ ಹೊರತಾಗಿ ಹುಂಡೈ ಗ್ರ್ಯಾಂಡ್ ಐ10, ಟೊಯೋಟಾ ಗ್ಲಾಂಜಾ, ಟಾಟಾ ಆಲ್ಟ್ರೋಜ್, ಹುಂಡೈ ಐ20 ಮತ್ತು ಮಾರುತಿ ಸೆಲೆರಿಯೊ ಕಾರುಗಳು ಕೂಡ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಒಟ್ಟಿನಲ್ಲಿ, ಕಡಿಮೆ ನಿರ್ವಹಣಾ ವೆಚ್ಚ, ಸುಲಭ ಚಾಲನೆ ಮತ್ತು ನಂಬಿಕಸ್ಥ ಬ್ರ್ಯಾಂಡ್&zwnj;ಗಳು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಇಂದಿಗೂ ಭದ್ರವಾದ ಸ್ಥಾನ ಹೊಂದಿವೆ ಎಂಬುದನ್ನು ಈ ಮಾರಾಟದ ವರದಿ ತೋರಿಸುತ್ತದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/super-car-6-airbags-33-kmpl-mileage-price-india-2026-bmk/articleshow-g0liad8"/>
        </item>
        <item>
            <title><![CDATA[Bikes: ಆಕ್ಟಿವಾ ಹವಾ ಮಧ್ಯೆ ಹೋಂಡಾ ಬಿಗ್ ಗೇಮ್ ಪ್ಲಾನ್! E85 ಸ್ಕೂಟರ್ ಸೇರಿ ಭಾರತಕ್ಕೆ ಲಗ್ಗೆ ಇಡಲಿವೆ 10 ನೂತನ ಬೈಕ್‌ಗಳು!]]></title>
            <link>https://kannada.asianetnews.com/news-money/honda-10-new-bikes-e85-scooter-india-launch-activa-rival-bmk/articleshow-gosp8hs</link>
            <guid isPermaLink="true">https://kannada.asianetnews.com/news-money/honda-10-new-bikes-e85-scooter-india-launch-activa-rival-bmk/articleshow-gosp8hs</guid>
            <pubDate>Fri, 24 Jul 2026 16:36:40 +0530</pubDate>
            <description><![CDATA[ಹೋಂಡಾ ಮೋಟಾರ್&zwnj;ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಭಾರತೀಯ ಮಾರುಕಟ್ಟೆಗೆ 10 ಹೊಸ ದ್ವಿಚಕ್ರ ವಾಹನಗಳನ್ನು ಪರಿಚಯಿಸಿದೆ. ಈ ಶ್ರೇಣಿಯಲ್ಲಿ E85 ಎಥನಾಲ್ ಸಾಮರ್ಥ್ಯದ ಸ್ಕೂಟರ್, ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಇತರ ಮಾಡೆಲ್&zwnj;ಗಳಿದ್ದು, 'ಮೇಕ್ ಇನ್ ಇಂಡಿಯಾ' ಉಪಕ್ರಮದಡಿ ಪರಿಸರ ಸ್ನೇಹಿ ಪರಿಹಾರಗಳನ್ನು ಒದಗಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jfp2d010r3j01yfxb3hv4df7,imgname-tamil-news--5-.png" type="image/jpeg" height="390" width="690"/>
            <content:encoded><![CDATA[&lt;p&gt;ಜಪಾನ್ ಮೂಲದ ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಹೋಂಡಾ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಭವಿಷ್ಯ ಬರೆಯಲು ಸಜ್ಜಾಗಿದೆ. ಭಾರತದಲ್ಲಿ ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ಬಹು-ತಂತ್ರಜ್ಞಾನ ವಿಧಾನವನ್ನು ಮುಂದುವರಿಸಲು ನಿರ್ಧರಿಸಿದೆ. ಹೋಂಡಾದ ಭಾರತೀಯ ವಿಭಾಗವಾದ 'ಹೋಂಡಾ ಮೋಟಾರ್&zwnj;ಸೈಕಲ್ ಮತ್ತು ಸ್ಕೂಟರ್ ಇಂಡಿಯಾ' (HMSI), ಭಾರತೀಯ ಮಾರುಕಟ್ಟೆಗೆ ಬರೋಬ್ಬರಿ 10 ನೂತನ ಮೋಟಾರ್&zwnj;ಸೈಕಲ್&zwnj;ಗಳು ಮತ್ತು ಸ್ಕೂಟರ್&zwnj;ಗಳನ್ನು ಒಳಗೊಂಡ ವಿಸ್ತೃತ ಪೋರ್ಟ್&zwnj;ಫೋಲಿಯೊವನ್ನು ಅನಾವರಣಗೊಳಿಸಿದೆ. ಹೊಸದಾಗಿ ಪರಿಚಯಿಸಲಾದ ಈ 10 ವಾಹನಗಳಲ್ಲಿ 7 ಸಂಪೂರ್ಣವಾಗಿ ಹೊಸ ಮಾದರಿಗಳಾಗಿದ್ದರೆ, ಇನ್ನುಳಿದ 3 ಚಾಲ್ತಿಯಲ್ಲಿರುವ ಮಾಡೆಲ್&zwnj;ಗಳನ್ನು ನವೀನ ಬಣ್ಣ ಹಾಗೂ ವಿನ್ಯಾಸದೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ.&lt;/p&gt;&lt;h2&gt;&lt;strong&gt;'ಪ್ರಾಯೋಗಿಕ ಸುಸ್ಥಿರತೆ' ಹೋಂಡಾದ ಮುಖ್ಯ ಗುರಿ!&lt;/strong&gt;&lt;/h2&gt;&lt;p&gt;ಈ ಹೊಸ ಬಿಡುಗಡೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ HMSI ಅಧ್ಯಕ್ಷ ಮತ್ತು ಸಿಇಒ ತ್ಸುಟ್ಸುಮು ಒಟಾನಿ, &quot;ಪರಿಸರ ಸುಸ್ಥಿರತೆ ಎಂಬುದು ಕೇವಲ ಸಿದ್ಧಾಂತ ಅಥವಾ ಕಾಗದದ ಮೇಲಿನ ಯೋಜನೆಯಾಗಿರಬಾರದು. ಅದು ಗ್ರಾಹಕರ ನೈಜ ಅಗತ್ಯಗಳನ್ನು ಪೂರೈಸುವಂತಹ ಪ್ರಾಯೋಗಿಕ ಹಾಗೂ ಕೈಗೆಟುಕುವ ಪರಿಹಾರವಾಗಬೇಕು,&quot; ಎಂದು ತಿಳಿಸಿದರು.&lt;/p&gt;&lt;h3&gt;&lt;strong&gt;ಹಲವು ಮಾರ್ಗ ಅನುಸರಿಸಿದ ಹೋಂಡಾ!&lt;/strong&gt;&lt;/h3&gt;&lt;p&gt;ಒಂದೇ ರೀತಿಯ ತಂತ್ರಜ್ಞಾನದಿಂದ ಪ್ರತಿಯೊಬ್ಬ ಗ್ರಾಹಕನ ಅಥವಾ ಪ್ರತಿಯೊಂದು ಪ್ರದೇಶದ ಅಗತ್ಯವನ್ನು ಪೂರೈಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಹೋಂಡಾ ಆಂತರಿಕ ದಹನಕಾರಿ ಎಂಜಿನ್ (ICE), ವಿದ್ಯುತ್ ಚಲನಶೀಲತೆ (Electric Mobility) ಮತ್ತು ಪರ್ಯಾಯ ಇಂಧನ (Flex-Fuel) ಸೇರಿದಂತೆ ಹಲವು ಮಾರ್ಗಗಳನ್ನು ಒಟ್ಟಿಗೆ ಅನುಸರಿಸುತ್ತಿದೆ. ಸಂಪೂರ್ಣ ಇಂಧನ ಚಕ್ರವನ್ನು ಗಮನದಲ್ಲಿಟ್ಟುಕೊಂಡು ಭಾರತವು ಇಂಗಾಲದ ತಟಸ್ಥತೆಯ (Carbon Neutrality) ಗುರಿಯತ್ತ ಸಾಗಲು ಸಮತೋಲಿತ ಕೊಡುಗೆ ನೀಡುವುದು ಹೋಂಡಾದ ಉದ್ದೇಶವಾಗಿದೆ.&lt;/p&gt;&lt;h3&gt;&lt;strong&gt;E85 ಎಥನಾಲ್ ಸ್ಕೂಟರ್ ಮತ್ತು ಹೊಸ ಸರಣಿಯ ವೈವಿಧ್ಯತೆ!&lt;/strong&gt;&lt;/h3&gt;&lt;p&gt;ಹೋಂಡಾ ಪರಿಚಯಿಸಿರುವ ಹೊಸ ವಾಹನ ಶ್ರೇಣಿಯಲ್ಲಿ ಸಾಹಸ ಸವಾರಿ (Adventure Touring), ಕ್ರೂಸರ್, ರೋಡ್&zwnj;ಸ್ಟರ್, ಲೈಫ್&zwnj;ಸ್ಟೈಲ್, ಎಲೆಕ್ಟ್ರಿಕ್ ಮತ್ತು ಫ್ಲೆಕ್ಸ್-ಫ್ಯುಯೆಲ್ ವಿಭಾಗಗಳ ವಾಹನಗಳಿವೆ. ಈ ಪೈಕಿ ಪ್ರಮುಖ ಆಕರ್ಷಣೆ ಎಂದರೆ:&lt;/p&gt;&lt;p&gt;ಹೋಂಡಾ ADV 160: E85 ಇಂಧನ (85% ಎಥನಾಲ್ ಮಿಶ್ರಿತ ಪೆಟ್ರೋಲ್) ಸಾಮರ್ಥ್ಯ ಹೊಂದಿರುವ ನಗರ ಸಾಹಸ (Urban Adventure) ಸ್ಕೂಟರ್.&lt;/p&gt;&lt;p&gt;&lt;strong&gt;ಹೋಂಡಾ QC3: &lt;/strong&gt;ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಎಲೆಕ್ಟ್ರಿಕ್ ಸ್ಕೂಟರ್.&lt;/p&gt;&lt;p&gt;&lt;strong&gt;CB 500 &amp;amp; CB350 ಸರಣಿ:&lt;/strong&gt; ಬೈಕ್ ಪ್ರಿಯರಿಗಾಗಿ ರೋಡ್&zwnj;ಸ್ಟರ್ ಮತ್ತು ಮಾಡರ್ನ್ ಕ್ಲಾಸಿಕ್ ವಿಭಾಗದ ಹೊಸ ಮಾಡೆಲ್&zwnj;ಗಳು.&lt;/p&gt;&lt;p&gt;ಈ ವಾಹನಗಳನ್ನು ಹಂತ ಹಂತವಾಗಿ ಮಾರುಕಟ್ಟೆಗೆ ತರಲಾಗುವುದು ಎಂದು ಕಂಪನಿ ತಿಳಿಸಿದೆ. ಪ್ರತಿಯೊಂದು ಮಾಡೆಲ್&zwnj;ನ ಬೆಲೆ, ಬಿಡುಗಡೆ ದಿನಾಂಕ ಮತ್ತು ಮಾರುಕಟ್ಟೆ ಲಭ್ಯತೆಯ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.&lt;/p&gt;&lt;h3&gt;&lt;strong&gt;'ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್'!&lt;/strong&gt;&lt;/h3&gt;&lt;p&gt;ಈ ಎಲ್ಲ ಹೊಸ ವಾಹನಗಳನ್ನು ಭಾರತದಲ್ಲೇ ಸ್ಥಳೀಯವಾಗಿ ತಯಾರಿಸಲಾಗುತ್ತಿರುವುದು ವಿಶೇಷ. ಸ್ಥಳೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ &quot;ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್&quot; (Make in India for the World) ಕಲ್ಪನೆಯನ್ನು ಹೋಂಡಾ ವೇಗವಾಗಿ ಕಾರ್ಯಗತಗೊಳಿಸುತ್ತಿದೆ. ಇದರಿಂದಾಗಿ ಜಾಗತಿಕ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನವು ಭಾರತೀಯ ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವುದರ ಜೊತೆಗೆ, ಜಾಗತಿಕ ರಫ್ತು ಕೇಂದ್ರವಾಗಿ ಭಾರತ ಮತ್ತಷ್ಟು ಬಲಗೊಳ್ಳಲಿದೆ. ಅತ್ಯುನ್ನತ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಸುರಕ್ಷತಾ ಮಾನದಂಡಗಳೊಂದಿಗೆ ಪೆಟ್ರೋಲ್, ಇವಿ ಮತ್ತು ಪರ್ಯಾಯ ಇಂಧನ ವಾಹನಗಳ ಮೂಲಕ ಭಾರತೀಯ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಲು ಹೋಂಡಾ ಸಜ್ಜಾಗಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/news-money/honda-10-new-bikes-e85-scooter-india-launch-activa-rival-bmk/articleshow-gosp8hs"/>
        </item>
        <item>
            <title><![CDATA[Inspiring Story: ಪಿಎಚ್‌ಡಿ, ಹಲವು ಪದವಿಗಳಿದ್ದರೂ ಕ್ಯಾಬ್ ಓಡಿಸುತ್ತಿದ್ದಾರೆ ಈ ಉಪನ್ಯಾಸಕ! ಜೀವನವೇ ಬೇಡ ಎನ್ನುವವರು ಇವರನ್ನೊಮ್ಮೆ ನೋಡಿ!]]></title>
            <link>https://kannada.asianetnews.com/viral/phd-holder-lecturer-driving-cab-inspirational-story-bmk/articleshow-hb99qmx</link>
            <guid isPermaLink="true">https://kannada.asianetnews.com/viral/phd-holder-lecturer-driving-cab-inspirational-story-bmk/articleshow-hb99qmx</guid>
            <pubDate>Sat, 18 Jul 2026 17:50:08 +0530</pubDate>
            <description><![CDATA[&lt;p&gt;ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್&zwnj;ಡಿ ಮತ್ತು ಬಹು ಪದವಿಗಳನ್ನು ಪಡೆದ ಡಾ. ಇ. ತಿರುಮಲೈ ರಾಜ, ಕಡಿಮೆ ಸಂಬಳಕ್ಕೆ ಗುತ್ತಿಗೆ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅವರು ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ. ಈ ಸ್ಟೋರಿ ನಮ್ಮ ಶಿಕ್ಷಣ ವ್ಯವಸ್ಥೆಯ ಕಠೋರ ವಾಸ್ತವ ಬಯಲು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxtjnc3d1jn1ts64411v5e7n,imgname-cab-1784377159789.jpg" type="image/jpeg" height="390" width="690"/>
            <content:encoded><![CDATA[&lt;p&gt;ಈ ಕಥೆ ಭಾವನಾತ್ಮಕ ಚಲನಚಿತ್ರ ಸ್ಕ್ರಿಪ್ಟ್&zwnj;ನಂತೆ ಕಾಣಿಸಬಹುದು, ಆದರೆ ಇದು ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಕಠಿಣ ಮತ್ತು ಆಘಾತಕಾರಿ ವಾಸ್ತವವಾಗಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್&zwnj;ಡಿ, ಬಹು ಸ್ನಾತಕೋತ್ತರ ಪದವಿಗಳು ಮತ್ತು ರಾಜ್ಯದ ಅತ್ಯಂತ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದರಲ್ಲಿ ಬೋಧನಾ ಹುದ್ದೆ ಹೊಂದಿರುವ ಯಾರಾದರೂ ಕ್ಯಾಬ್ ಓಡಿಸುವುದನ್ನು ನೀವು ಊಹಿಸಬಲ್ಲಿರಾ? ಹಾಗಾದರೆ ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ? ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;h2&gt;&lt;strong&gt;ಯಾರು ಗೊತ್ತಾ ಆ ಪ್ರೊಫೆಸರ್?&lt;/strong&gt;&lt;/h2&gt;&lt;p&gt;ಹೌದು, ಇದು ತಮಿಳುನಾಡಿನ ಡಾ. ಇ. ತಿರುಮಲೈ ರಾಜ ಕಥೆ, ಅವರ ಹೋರಾಟ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಲ್ಲದೇ ಈ ಸನ್ನಿವೇಶ ಪ್ರತಿಯೊಬ್ಬ ಸೂಕ್ಷ್ಮ ನಾಗರಿಕನನ್ನು ಯೋಚಿಸುವಂತೆ ಮಾಡುತ್ತಿದೆ. ವೈರಲ್ ಪೋಸ್ಟ್ ಜನರ ಗಮನ ಸೆಳೆಯಿತು, ಹೋರಾಟದ ಕಥೆ ಬೆಳಕಿಗೆ ಬಂದಿದೆ.&lt;/p&gt;&lt;h3&gt;&lt;strong&gt;ವೈರಲ್&zwnj; ಆದ ವಿಡಿಯೋ!&lt;/strong&gt;&lt;/h3&gt;&lt;p&gt;ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್&zwnj;ನಲ್ಲಿ ವೈರಲ್ ಆಗಿರುವ ಪೋಸ್ಟ್&zwnj;ನ್ನು ತಮಿಳುನಾಡಿನ ಶಿಕ್ಷಣ ತಜ್ಞರೊಬ್ಬರ ಹೋರಾಟಗಳನ್ನು ಬೆಳಕಿಗೆ ತಂದಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್&zwnj;ಡಿ ಪದವಿ ಪಡೆದಿರುವ ಡಾ.ಇ.ತಿರುಮಲೈ ರಾಜಾ ಈಗ ತಮ್ಮ ಕುಟುಂಬವನ್ನು ಪೋಷಿಸಲು ಕ್ಯಾಬ್ ಚಾಲಕರಾಗಿ ಕೆಲಸ ಮಾಡಬೇಕಾಗಿದೆ ಎಂದು ಪೋಸ್ಟ್ ಹೇಳಿಕೊಂಡಿದೆ. ಡಾ.ರಾಜಾ ಅವರ ಅರ್ಹತೆಗಳಿಗೆ ಅನುಗುಣವಾಗಿ ಶಾಶ್ವತ ಬೋಧನಾ ಹುದ್ದೆಯನ್ನು ಪಡೆಯಲು ಸಹಾಯ ಮಾಡುವಂತೆ ಶೈಕ್ಷಣಿಕ ಸಮುದಾಯ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಮನವಿ ಮಾಡಿದ ಎಕ್ಸ್ ಬಳಕೆದಾರ ಅನಂತ್ ರೂಪನಗುಡಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ವೈರಲ್ ಆದ ನಂತರ, ಸಾವಿರಾರು ಜನರು ಈ ವಿಷಯಕ್ಕೆ ಪ್ರತಿಕ್ರಿಯಿಸಿದರು ಮತ್ತು ಭಾರತದಲ್ಲಿ ಗುತ್ತಿಗೆ ಶಿಕ್ಷಕರ ಸ್ಥಿತಿಯನ್ನು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;&lt;strong&gt;ಏನಿದು ಪ್ರೊಫೆಸರ್&zwnj; ಸ್ಥಿತಿ?&lt;/strong&gt;&lt;/h3&gt;&lt;p&gt;ಇವರನ್ನು ನೋಡಿದರೆ, ಕನಸುಗಳ ವ್ಯಾಪಾರಿಯೋ ಅಥವಾ ಸ್ಟೇರಿಂಗ್ ವೀಲ್ ಹಿಂದೆ ಅಡಗಿರುವ 'ಮಹಾಗುರು'ವೂ? ಎನ್ನುವ ಪ್ರಶ್ನೆ ಮೂಡುತ್ತದೆ. ಡಾ. ಇ. ತಿರುಮಲೈ ರಾಜಾ ಅವರ ಶೈಕ್ಷಣಿಕ ಪುನರಾರಂಭವು ಎಷ್ಟು ಪ್ರಭಾವಶಾಲಿಯಾಗಿದೆಯೆಂದರೆ, ಯಾವುದೇ ಪ್ರಮುಖ ವಿಶ್ವವಿದ್ಯಾಲಯದ ಸಿವಿಯನ್ನು ಹೋಲಿಸಿದರೆ ಅದು ಕಳಪೆಯಾಗಿ ಕಾಣುತ್ತದೆ. ಹಾಗಿದೆ ಅವರ ಎಜುಕೇಶನಲ್&zwnj; ಬ್ಯಾಗ್ರೌಂಡ್&lt;/p&gt;&lt;h3&gt;&lt;strong&gt;ಅವರ ಶೈಕ್ಷಣಿಕ ಅರ್ಹತೆಗಳ ಪಟ್ಟಿ ಇಲ್ಲಿದೆ!&lt;/strong&gt;&lt;/h3&gt;&lt;p&gt;ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್&zwnj;ಡಿ ಮತ್ತು ಎಂ.ಫಿಲ್&lt;/p&gt;&lt;p&gt;ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಪದವಿ&lt;/p&gt;&lt;p&gt;ಮನೋವಿಜ್ಞಾನದಲ್ಲಿ ಎಂ.ಎಸ್ಸಿ.&lt;/p&gt;&lt;p&gt;ಶಿಕ್ಷಣ ಪದವಿ (ಬಿ.ಎಡ್)&lt;/p&gt;&lt;p&gt;ಶಿಕ್ಷಕರ ಶಿಕ್ಷಣದಲ್ಲಿ ಡಿಪ್ಲೊಮಾ (ಡಿಟಿಇಡಿ.)&lt;/p&gt;&lt;h3&gt;&lt;strong&gt;ನುರಿತ ಭಾಷಣಕಾರ!&lt;/strong&gt;&lt;/h3&gt;&lt;p&gt;ಅವರು ಒಬ್ಬ ನುರಿತ ಪ್ರೇರಕ ಭಾಷಣಕಾರ, ಪರೀಕ್ಷಾ ಕೋಶ ಸಂಯೋಜಕರು, ಸಂಪಾದಕರು ಮತ್ತು ಅತ್ಯುತ್ತಮ ಸಂವಹನ ಕೌಶಲ್ಯ ತರಬೇತುದಾರರು. ವಿಪರ್ಯಾಸವೆಂದರೆ, ಅವರು ಚೆನ್ನೈ ಬೀದಿಗಳಲ್ಲಿ ಕ್ಯಾಬ್ ಚಾಲನೆ ಮಾಡುವಾಗ, ಚಕ್ರದ ಹಿಂದಿರುವ ವ್ಯಕ್ತಿ ವಾಸ್ತವವಾಗಿ ಜ್ಞಾನದ ವಿಶಾಲ ಸಾಗರ ಎಂದು ಪ್ರಯಾಣಿಕರು ಎಂದಿಗೂ ಅರಿತುಕೊಳ್ಳದಿರುವುದು ವಿಪರ್ಯಾಸ.&lt;/p&gt;&lt;h3&gt;&lt;strong&gt;ನಾನು 'ಕಪ್ಪು ಹಾಸ್ಯ'ದ ಬಗ್ಗೆ ಸಂಶೋಧನೆ ಮಾಡಿದ್ದೆ!&lt;/strong&gt;&lt;/h3&gt;&lt;p&gt;ಡಾ. ರಾಜಾ ಅವರ ಡಾಕ್ಟರೇಟ್ ಸಂಶೋಧನಾ ವಿಷಯವು ಆಕರ್ಷಕವಾಗಿತ್ತು: &quot;ಇಂಡೋ-ಆಂಗ್ಲಿಯನ್ ಬರವಣಿಗೆಯಲ್ಲಿ ಕಪ್ಪು ಹಾಸ್ಯ. ಸಾಹಿತ್ಯದಲ್ಲಿ ವ್ಯಂಗ್ಯ ಮತ್ತು ಕಪ್ಪು ಹಾಸ್ಯದ ಬಗ್ಗೆ ಸಂಶೋಧನೆ ನಡೆಸಿದ ಈ ವಿದ್ವಾಂಸರು ತಮ್ಮ ಸ್ವಂತ ಜೀವನವನ್ನು ಇಷ್ಟು ಕ್ರೂರವಾಗಿ ಅಪಹಾಸ್ಯ ಮಾಡುತ್ತಾರೆಂದು ಯಾರಿಗೆ ಗೊತ್ತು? ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ, ವಿಶ್ವವಿದ್ಯಾಲಯಗಳಿಗೆ ಪ್ರಬಂಧಕಾರರಾಗಿ ಕೆಲಸ ಮಾಡಿದ್ದಾರೆ ಮತ್ತು ಯುಜಿಸಿ-ಪಟ್ಟಿಮಾಡಿದ ಜರ್ನಲ್&zwnj;ಗಳಲ್ಲಿ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಆದರೆ ಈ ಉನ್ನತ ಶೈಕ್ಷಣಿಕ ಸಾಮರ್ಥ್ಯವನ್ನು ವ್ಯವಸ್ಥೆಯು ಬಹಳ ಲಘುವಾಗಿ ಪರಿಗಣಿಸಿತ್ತು.&lt;/p&gt;&lt;p&gt;&lt;strong&gt;ಹಗಲು ರಾತ್ರಿ ದುಡಿಯಲು ಕಾರಣವೇಣು ಗೊತ್ತಾ?&lt;/strong&gt;&lt;/p&gt;&lt;p&gt;ಕೇವಲ ₹30,000 ಆರ್ಥಿಕ ಸಂಕಷ್ಟ, ಎರಡು ನಗರಗಳ ನಡುವೆ ವಿಭಜನೆಯಾದ ಕುಟುಂಬ. ಡಾ. ರಾಜಾ ಪ್ರಸ್ತುತ ಚೆನ್ನೈನ ಪ್ರಸಿದ್ಧ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗುತ್ತಿಗೆ ಉಪನ್ಯಾಸಕರಾಗಿ ಬೋಧಿಸುತ್ತಿದ್ದಾರೆ, ತಿಂಗಳಿಗೆ ಕೇವಲ ₹30,000 ಗಳಿಸುತ್ತಿದ್ದಾರೆ. ಹಿಂದೆ, ಅವರು ನಮಕ್ಕಲ್&zwnj;ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು, ಅಲ್ಲಿ ಅವರ ಸಂಬಳ ಇನ್ನೂ ಕಡಿಮೆ - ಕೇವಲ ₹20,000. ಹಣದುಬ್ಬರದ ಈ ಯುಗದಲ್ಲಿ, ಮಹಾನಗರದಲ್ಲಿ ತನ್ನನ್ನು ತಾನು ಉಳಿಸಿಕೊಳ್ಳುವುದು ಮತ್ತು ನಮಕ್ಕಲ್&zwnj;ನಲ್ಲಿರುವ ತನ್ನ ಕುಟುಂಬವನ್ನು (ಹೆಂಡತಿ ಮತ್ತು ಇಬ್ಬರು ಶಾಲಾ ವಯಸ್ಸಿನ ಮಕ್ಕಳು) ಇಷ್ಟು ಕಡಿಮೆ ಸಂಬಳದಿಂದ ಪೋಷಿಸುವುದು ಅಸಾಧ್ಯ. ಅದಕ್ಕಾಗಿಯೇ ಅವರು ಹಗಲಿನಲ್ಲಿ ಕಾಲೇಜಿನಲ್ಲಿ ಸೀಮೆಸುಣ್ಣವನ್ನು ತೆಗೆದುಕೊಳ್ಳುತ್ತಾರೆ ಮತ್ತು ಬಿಡುವಿನ ವೇಳೆಯಲ್ಲಿ ಕಾಲ್ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಾರೆ.&lt;/p&gt;&lt;h3&gt;&lt;strong&gt;ವ್ಯವಸ್ಥೆಯನ್ನೇ ಬಯಲು ಮಾಡಿದ ವೈರಲ್ ಪೋಸ್ಟ್!&lt;/strong&gt;&lt;/h3&gt;&lt;p&gt;ಡಾ. ರಾಜಾ ಅವರ ಅದೃಶ್ಯ ಹೋರಾಟವನ್ನು ಎಕ್ಸ್ ಬಳಕೆದಾರ ಅನಂತ್ ರೂಪನಗುಡಿ ಬೆಳಕಿಗೆ ತಂದಿದ್ದಾರೆ. ಅವರು ಡಾ. ರಾಜಾ ಅವರ ಕಥೆ ಮತ್ತು ಅವರ ಪ್ರಭಾವಶಾಲಿ ಸಿವಿಯನ್ನು ಹಂಚಿಕೊಂಡಿದ್ದಾರೆ, ಈ ಅರ್ಹ ಶಿಕ್ಷಕರಿಗೆ ಗೌರವಾನ್ವಿತ ಮತ್ತು ಶಾಶ್ವತ ಉದ್ಯೋಗವನ್ನು ಪಡೆಯಲು ಸಹಾಯ ಮಾಡುವಂತೆ ಶೈಕ್ಷಣಿಕ ಸಮುದಾಯವನ್ನು ಕೋರಿದ್ದಾರೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/phd-holder-lecturer-driving-cab-inspirational-story-bmk/articleshow-hb99qmx"/>
        </item>
        <item>
            <title><![CDATA[ದೋಸೆ ಮಾರಿ ತಿಂಗಳಿಗೆ 12 ಲಕ್ಷ ಗಳಿಸುತ್ತಿದ್ದ ಮಾಲೀಕನ ಕಣ್ಣೀರ ಕತೆ.. ಯಾಕೆ ಹೀಗೆ ಆಯ್ತು..?]]></title>
            <link>https://kannada.asianetnews.com/gallery/business/from-12-lakhs-a-month-to-tears-the-fall-of-a-famous-dosa-king-gkn-lmrekpg</link>
            <guid isPermaLink="true">https://kannada.asianetnews.com/gallery/business/from-12-lakhs-a-month-to-tears-the-fall-of-a-famous-dosa-king-gkn-lmrekpg</guid>
            <pubDate>Mon, 20 Jul 2026 12:01:12 +0530</pubDate>
            <description><![CDATA[&lt;p&gt;ಹೋಟೆಲ್ ಉದ್ಯಮ ಅಂದ ಕೂಡಲೇ ನೆನಪಿಗೆ ಬರುವುದು ಭರ್ಜರಿ ಲಾಭ. ಆದರೆ ಯಾವುದೇ ವ್ಯವಹಾರದಲ್ಲಿ ಏರಿಳಿತಗಳು ಸಹಜ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಥಾಣೆಯ ಈ ದೋಸೆ ರೆಸ್ಟೋರೆಂಟ್ ಮಾಲೀಕ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz3839hxfmtenday00y30vc,imgname-benne-rush-business--3--1784528768305.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೋಟೆಲ್ ಉದ್ಯಮ ಅಂದ ಕೂಡಲೇ ನೆನಪಿಗೆ ಬರುವುದು ಭರ್ಜರಿ ಲಾಭ. ಆದರೆ ಯಾವುದೇ ವ್ಯವಹಾರದಲ್ಲಿ ಏರಿಳಿತಗಳು ಸಹಜ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಥಾಣೆಯ ಈ ದೋಸೆ ರೆಸ್ಟೋರೆಂಟ್ ಮಾಲೀಕ.&lt;/p&gt;&lt;img&gt;&lt;p&gt;ಹೋಟೆಲ್ ಉದ್ಯಮ ಅಂದ ಕೂಡಲೇ ನೆನಪಿಗೆ ಬರುವುದು ಭರ್ಜರಿ ಲಾಭ. ಆದರೆ ಯಾವುದೇ ವ್ಯವಹಾರದಲ್ಲಿ ಏರಿಳಿತಗಳು ಸಹಜ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಥಾಣೆಯ ಈ ದೋಸೆ ರೆಸ್ಟೋರೆಂಟ್ ಮಾಲೀಕ. ಒಂದು ಕಾಲದಲ್ಲಿ ತಿಂಗಳಿಗೆ 12 ರಿಂದ 13 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದ ಇವರ ಹೋಟೆಲ್ ಆದಾಯ ಎಲ್ಲಿಗೆ ಬಂದು ನಿಂತಿದೆ ಗೊತ್ತಾ? ಆತ ಹಂಚಿಕೊಂಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..&lt;/p&gt;&lt;img&gt;&lt;p&gt;ರೆಸ್ಟೋರೆಂಟ್ ಮಾಲೀಕ ತನ್ನ ವ್ಯವಹಾರದ ಆರ್ಥಿಕ ಪರಿಸ್ಥಿತಿಯನ್ನ ವಿವರಿಸಿದ್ದು ಹೀಗೆ.. ಆರಂಭದಲ್ಲಿ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದ್ದಾಗ ತಿಂಗಳಿಗೆ 12 ರಿಂದ 13 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಕಾಲಕ್ರಮೇಣ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಜೊತೆಗೆ ನಿರ್ವಹಣಾ ವೆಚ್ಚಗಳು ಏರಿಕೆಯಾಗಿವೆ ಎಂದು ತಿಳಿಸಿದ್ದಾರೆ. ಮಾಲೀಕನ ಪ್ರಕಾರ ಪ್ರತಿ ತಿಂಗಳು ಹೋಟೆಲ್&zwnj;ಗಾಗಿ ಮಾಡಬೇಕಾದ ಅನಿವಾರ್ಯ ಖರ್ಚುಗಳನ್ನ ನೋಡೋದಾದ್ರೆ, ಬಾಡಿಗೆ 1 ಲಕ್ಷ ರೂಪಾಯಿ. ಸಿಬ್ಬಂದಿ ಸಂಬಳ ಅಂದಾಜು 1.5 ಲಕ್ಷ ರೂಪಾಯಿ. ವಿದ್ಯುತ್ ಬಿಲ್, ಕಚ್ಚಾ ಪದಾರ್ಥಗಳು (ದಿನಸಿ) ಮತ್ತು ಇತರ ನಿರ್ವಹಣಾ ವೆಚ್ಚಗಳು ಸೇರಿ ಸುಮಾರು 4 ಲಕ್ಷ ರೂಪಾಯಿ ತಗಲುತ್ತದೆ. ಎಲ್ಲಾ ಖರ್ಚುಗಳನ್ನು ಕಳೆದರೆ ಮಾಲೀಕನ ಕೈಗೆ ಉಳಿಯೋದು ಪ್ರತಿ ತಿಂಗಳು ಸುಮಾರು 1 ಲಕ್ಷ ರೂಪಾಯಿ ಮಾತ್ರ!&lt;/p&gt;&lt;img&gt;&lt;p&gt;ವ್ಯಾಪಾರ ಕುಸಿತಕ್ಕೆ ಋತುಮಾನದ ಬದಲಾವಣೆಗಳೂ ಕಾರಣ ಎಂದಿದ್ದಾರೆ. ಬೇಸಿಗೆ ಕಾಲದಲ್ಲಿ ದೋಸೆ ಹೋಟೆಲ್&zwnj;ಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಚಳಿಗಾಲದಲ್ಲಿ ವ್ಯಾಪಾರ ತುಸು ಸುಧಾರಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ತಿಂಗಳಿಗೆ 80 ಸಾವಿರ ರೂಪಾಯಿ ಸಂಬಳ ಬರುವ ಕೆಲಸವನ್ನು ಅತ್ಯಂತ ಗೌರವಯುತವಾಗಿ ನೋಡುತ್ತಾರೆ. ತಿಂಗಳಿಗೆ 12 ಲಕ್ಷ ರೂಪಾಯಿ ವಹಿವಾಟು ನಡೆಸುವ ದೋಸೆ ಹೋಟೆಲ್ ಮಾಲೀಕನಿಗೆ ಅಂತಹ ಗೌರವ ಸಿಗುವುದಿಲ್ಲ. ಯಶಸ್ಸಿನ ಬಗ್ಗೆ ಜನರ ವ್ಯಾಖ್ಯಾನವೇ ವಿಚಿತ್ರವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ ಉದ್ಯಮಿಯಾಗಿರುವುದೇ ತಮಗೆ ಇಷ್ಟ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ವಿಡಿಯೋ ನೋಡಿದ ನೆಟ್ಟಿಗರು ಯುವಕನ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿದ್ದಾರೆ. ನೀವು ಕೇವಲ ಲಾಭದ ಬಗ್ಗೆ ಯೋಚಿಸುತ್ತಿಲ್ಲ, ಬದಲಿಗೆ ಹಲವು ಜನರಿಗೆ ಕೆಲಸ ನೀಡಿದ್ದೀರಿ, ಅದು ನಿಜವಾದ ಯಶಸ್ಸು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವ್ಯಾಪಾರದಲ್ಲಿ ಇಂತಹ ಏರಿಳಿತಗಳು ಸಾಮಾನ್ಯ, ನಿಮ್ಮ ಪ್ರಯತ್ನ ಮುಂದುವರಿಸಿ ಎಂದು ಹಲವರು ಬೆಂಬಲ ಸೂಚಿಸಿದ್ದಾರೆ. ಸ್ವಂತ ಉದ್ಯಮ ಮಾಡುವುದು ಸುಲಭದ ಮಾತಲ್ಲ ಎಂಬುದಕ್ಕೆ ಈ ದೋಸೆ ಹೋಟೆಲ್ ಮಾಲೀಕನ ಕಥೆಯೇ ಸಾಕ್ಷಿ. 12 ಲಕ್ಷದಿಂದ 1 ಲಕ್ಷಕ್ಕೆ ಲಾಭ ಇಳಿದರೂ ಎದೆಗುಂದದೆ ಸಾಗುತ್ತಿರುವ ಇವರ ಹಾದಿ ಅನೇಕರಿಗೆ ಸ್ಫೂರ್ತಿಯಾಗಿದೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/business/from-12-lakhs-a-month-to-tears-the-fall-of-a-famous-dosa-king-gkn-lmrekpg"/>
        </item>
        <item>
            <title><![CDATA[ಜನರಿಗೆ ಮತ್ತೆ ಬೆಲೆ ಏರಿಕೆ ಬರೆ..! ಆಗಸ್ಟ್‌ನಿಂದ ಇವುಗಳ ಭಾರೀ ಹೆಚ್ಚಳ.. ಲಿಸ್ಟ್‌ ನೋಡಿ ಗಾಬರಿ ಆಗಬೇಡಿ!]]></title>
            <link>https://kannada.asianetnews.com/news/price-hike-hits-people-again-major-increase-from-august-like-tv-car-televisions-moters-mobile-gkn/articleshow-mos730k</link>
            <guid isPermaLink="true">https://kannada.asianetnews.com/news/price-hike-hits-people-again-major-increase-from-august-like-tv-car-televisions-moters-mobile-gkn/articleshow-mos730k</guid>
            <pubDate>Fri, 31 Jul 2026 08:58:59 +0530</pubDate>
            <description><![CDATA[&lt;p&gt;ಸಾಮಾನ್ಯ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಆಗಸ್ಟ್ ತಿಂಗಳಿನಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದ್ದು, ಹಲವು ದಿನಬಳಕೆ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿವೆ. ಹೇರ್ ಆಯಿಲ್, ಟೀ ಪುಡಿ, ಬಟ್ಟೆಗಳು ಹಾಗೂ ಎಲೆಕ್ಟ್ರಾನಿಕ್ ಸರಕುಗಳ ಬೆಲೆಗಳು ಶೀಘ್ರದಲ್ಲೇ ಗಗನಕ್ಕೇರಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyv3f3rjbxehmqrc6qg511wj,imgname-price-hike-1785468522258.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಾಮಾನ್ಯ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಆಗಸ್ಟ್ ತಿಂಗಳಿನಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದ್ದು, ಹಲವು ದಿನಬಳಕೆ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿವೆ. ಹೇರ್ ಆಯಿಲ್, ಟೀ ಪುಡಿ, ಬಟ್ಟೆಗಳು ಹಾಗೂ ಎಲೆಕ್ಟ್ರಾನಿಕ್ ಸರಕುಗಳ ಬೆಲೆಗಳು ಶೀಘ್ರದಲ್ಲೇ ಗಗನಕ್ಕೇರಲಿವೆ.&lt;/p&gt;&lt;p&gt;ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅಮೆರಿಕ-ಇರಾನ್ ನಡುವಿನ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯು ಜಾಗತಿಕ ಪೂರೈಕೆ ಸರಪಳಿಯನ್ನು (Supply Chain) ಸಂಪೂರ್ಣವಾಗಿ ಹದಗೆಡಿಸಿದೆ. ಇದರಿಂದಾಗಿ ಸರಕು ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದು, ಕಚ್ಚಾ ವಸ್ತುಗಳು, ಕಚ್ಚಾ ತೈಲ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿವೆ. ಜಾಗತಿಕ ರಾಜಕೀಯ ಅನಿಶ್ಚಿತತೆಯು ಹಣದುಬ್ಬರದ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;p&gt;ಇದರ ನೇರ ಪರಿಣಾಮ ಭಾರತದ ಮೇಲೂ ಬೀರುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ತೀವ್ರ ಏರಿಳಿತ ಕಂಡುಬರುತ್ತಿರುವುದರಿಂದ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗಿ ಬಂದಿದೆ. ಈ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಹಲವು ಪ್ರಮುಖ ಕಂಪನಿಗಳು ಆಗಸ್ಟ್&zwnj;ನಿಂದ ಬೆಲೆ ಏರಿಕೆಗೆ ಮುಂದಾಗಿವೆ.&lt;/p&gt;&lt;h2&gt;&lt;strong&gt;ಯಾವ ವಸ್ತುಗಳ ಬೆಲೆ ಎಷ್ಟು ಹೆಚ್ಚಾಗಬಹುದು?&lt;/strong&gt;&lt;/h2&gt;&lt;ul&gt; &lt;li&gt;ಆಗಸ್ಟ್ ತಿಂಗಳಿನಿಂದ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಸ್ಮಾರ್ಟ್&zwnj;ಫೋನ್&zwnj;ಗಳು, ಬಟ್ಟೆಗಳು ಮತ್ತು ಕಾರುಗಳ ಬೆಲೆಗಳು ಹೆಚ್ಚಾಗಲಿವೆ&lt;/li&gt; &lt;li&gt;ಪ್ಯಾಕ್ ಮಾಡಿದ ಟೀ ಪುಡಿ: ಶೇ. 6 ರಿಂದ ಶೇ. 8 ರಷ್ಟು ಹೆಚ್ಚಳ&lt;/li&gt; &lt;li&gt;&amp;nbsp;ಹೇರ್ ಆಯಿಲ್ (ಕೂದಲ ಎಣ್ಣೆ): ಶೇ. 6 ರಿಂದ ಶೇ. 8 ರಷ್ಟು ಹೆಚ್ಚಳ&amp;nbsp;&lt;/li&gt; &lt;li&gt;ಟಿವಿ (Televisions): ಶೇ. 4 ರಿಂದ ಶೇ. 6 ರಷ್ಟು ಹೆಚ್ಚಳ&lt;/li&gt; &lt;li&gt;&amp;nbsp;ರೆಫ್ರಿಜರೇಟರ್ (ಫ್ರಿಡ್ಜ್): ಶೇ. 4 ರಿಂದ ಶೇ. 6 ರಷ್ಟು ಹೆಚ್ಚಳ&amp;nbsp;&lt;/li&gt; &lt;li&gt;ವಾಷಿಂಗ್ ಮೆಷಿನ್: ಶೇ. 10 ರವರೆಗೆ ಹೆಚ್ಚಳ&amp;nbsp;&lt;/li&gt; &lt;li&gt;ಬ್ರಾಂಡೆಡ್ ಬಟ್ಟೆಗಳು: ಶೇ. 8 ರವರೆಗೆ ಹೆಚ್ಚಳ&lt;/li&gt; &lt;li&gt;ಸ್ಮಾರ್ಟ್&zwnj;ಫೋನ್ ಮತ್ತು ಲ್ಯಾಪ್&zwnj;ಟಾಪ್: ಮೆಮೊರಿ ಚಿಪ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಬಿಡಿಭಾಗಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ಇವುಗಳ ದರವೂ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ.&lt;/li&gt;&lt;/ul&gt;&lt;h2&gt;&lt;strong&gt;ಕಾರುಗಳ ಬೆಲೆಯೂ ದುಬಾರಿ!&lt;/strong&gt;&lt;/h2&gt;&lt;p&gt;ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ವೆಚ್ಚದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ಆಗಸ್ಟ್&zwnj;ನಿಂದ ಕಾರುಗಳ ಬೆಲೆ ಹೆಚ್ಚಿಸಲು ನಿರ್ಧರಿಸಿವೆ. ಮಾರುತಿ ಸುಜುಕಿ ತನ್ನ ಆಯ್ದ ಮಾಡೆಲ್&zwnj;ಗಳ ಬೆಲೆಯನ್ನು 30,000 ರೂ.ವರೆಗೆ ಹೆಚ್ಚಿಸುವ ಸಾಧ್ಯತೆಯಿದೆ. ಹೋಂಡಾ ಕಾರ್ಸ್ ಇಂಡಿಯಾ ಆಗಸ್ಟ್ 1 ರಿಂದಲೇ ಹೊಸ ಬೆಲೆಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಮರ್ಸಿಡಿಸ್-ಬೆಂಜ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್-ಬೆಂಜ್ ಕೂಡ ಆಗಸ್ಟ್&zwnj;ನಿಂದ ದರ ಹೆಚ್ಚಿಸಲು ಯೋಜಿಸುತ್ತಿದೆ. ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಇವುಗಳು ಈಗಾಗಲೇ ಪ್ರಸಕ್ತ ತಿಂಗಳ ಆರಂಭದಲ್ಲೇ ಕೆಲವು ಮಾಡೆಲ್&zwnj;ಗಳ ಬೆಲೆಯನ್ನು ಹೆಚ್ಚಿಸಿವೆ. ಮುಂಬರುವ ಹಬ್ಬದ ಸೀಸನ್&zwnj;ನಲ್ಲಿ ಬಟ್ಟೆಗಳು, ಸ್ಮಾರ್ಟ್&zwnj;ಫೋನ್&zwnj;ಗಳು ಅಥವಾ ಕಾರುಗಳನ್ನು ಖರೀದಿಸಲು ಯೋಜಿಸುತ್ತಿರುವ ಗ್ರಾಹಕರಿಗೆ ಈ ಬೆಲೆ ಏರಿಕೆ ದೊಡ್ಡ ಹೊರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/news/price-hike-hits-people-again-major-increase-from-august-like-tv-car-televisions-moters-mobile-gkn/articleshow-mos730k"/>
        </item>
        <item>
            <title><![CDATA[30ನೇ ವಯಸ್ಸಿನಲ್ಲಿ ಒಂದು ಕೋಟಿ ರೂಪಾಯಿ ಗಳಿಕೆ ಸಾಧ್ಯವೇ? ಗುಟ್ಟು ಬಿಚ್ಚಿಟ್ಟ ಮಾರ್ಗ!]]></title>
            <link>https://kannada.asianetnews.com/business/earning-a-crore-rupees-by-the-age-of-30-is-possible-with-disciplined-investment-multiple-income-sources-savings-mrq/articleshow-ptskoru</link>
            <guid isPermaLink="true">https://kannada.asianetnews.com/business/earning-a-crore-rupees-by-the-age-of-30-is-possible-with-disciplined-investment-multiple-income-sources-savings-mrq/articleshow-ptskoru</guid>
            <pubDate>Tue, 28 Jul 2026 08:06:39 +0530</pubDate>
            <description><![CDATA[30ನೇ ವಯಸ್ಸಿನೊಳಗೆ ಕೋಟಿ ರೂಪಾಯಿ ಗಳಿಸುವುದು ಶಿಸ್ತುಬದ್ಧ ಹೂಡಿಕೆ, ಬಹು ಆದಾಯ ಮೂಲಗಳು ಮತ್ತು ಹೆಚ್ಚಿನ ಉಳಿತಾಯದಿಂದ ಸಾಧ್ಯ. ಎಸ್&zwnj;ಐಪಿ, ಇಎಸ್&zwnj;ಓಪಿಗಳಂತಹ ಸಾಧನಗಳನ್ನು ಬಳಸಿ, ಅನಗತ್ಯ ಸಾಲಗಳಿಂದ ದೂರವಿದ್ದರೆ, ಸಂಯುಕ್ತ ಬಡ್ಡಿಯ ಶಕ್ತಿಯಿಂದ ಈ ಗುರಿಯನ್ನು ತಲುಪಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kyk98ny3xvfjch9hb37grt1s,imgname-money-saving-tips-1785206167491.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;How to Earn Rs 1 crore by 30:&lt;/strong&gt; 30ನೇ ವಯಸ್ಸಿನ ಒಳಗೆ ಕೋಟಿ ರೂಪಾಯಿ ಗಳಿಸೋದು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ತಪ್ಪೇನಿಲ್ಲ. ಆದರೆ ಸರಿಯಾದ ಶಿಸ್ತು, ಸಮಯ ಮತ್ತು ಸಂಯುಕ್ತ ಬಡ್ಡಿಯ ಶಕ್ತಿಯನ್ನು ಸೂಕ್ತವಾಗಿ ಬಳಸಿಕೊಂಡರೆ ಇದು ಅಂಥಾ ಅಸಾಧ್ಯವಾದ ಕೆಲಸವೇನಲ್ಲ.&lt;/p&gt;&lt;p&gt;ಒಮ್ಮೆ ಊಹಿಸಿ, ನೀವು 22ನೇ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿ ಪ್ರತಿ ತಿಂಗಳು ₹15,000 ಅನ್ನು ಈಕ್ವಿಟಿ ಮ್ಯೂಚುವಲ್ ಫಂಡ್&zwnj;ಗಳಲ್ಲಿ ಎಸ್&zwnj;ಐಪಿ ಮೂಲಕ ಹೂಡಿಕೆ ಮಾಡುತ್ತೀರಿ. ವಾರ್ಷಿಕ ಸರಾಸರಿ ಶೇ.12 ಆದಾಯ ಸಿಕ್ಕರೆ (ಭಾರತೀಯ ಷೇರು ಮಾರುಕಟ್ಟೆಯ ದೀರ್ಘಾವಧಿ ಸರಾಸರಿಗೆ ಹತ್ತಿರವಾದ ಅಂಕಿ) 8 ವರ್ಷಗಳಲ್ಲಿ (30ನೇ ವಯಸ್ಸಿಗೆ) ಒಟ್ಟು ಹೂಡಿಕೆ ₹14.4 ಲಕ್ಷ, ಆದರೆ ಸಂಯುಕ್ತ ಬಡ್ಡಿಯ ಪ್ರಭಾವದಿಂದ ಮೌಲ್ಯ ಸುಮಾರು ₹21-22 ಲಕ್ಷ ತಲುಪುತ್ತದೆ.&lt;/p&gt;&lt;p&gt;ಇದರಿಂದ ಮಾತ್ರವೇ ಒಂದು ಕೋಟಿ ತಲುಪಲು ಆಗುವುದಿಲ್ಲ ನಿಜ. ಕೇವಲ ಎಸ್&zwnj;ಐಪಿ ಒಂದೇ ದಾರಿಯಲ್ಲ. ಕೋಟಿ ತಲುಪಲು ಬೇಕಿರುವುದು ಆದಾಯ ಹೆಚ್ಚಳ, ಬಹು ಆದಾಯ ಮೂಲಗಳು ಮತ್ತು ಅತ್ಯಂತ ಲೆಕ್ಕಾಚಾರದ ಉಳಿತಾಯದ ಸಂಯೋಜನೆ.&lt;/p&gt;&lt;h2&gt;&lt;strong&gt;ಒಂದು ಕೋಟಿ ರೂಪಾಯಿ ಹೇಗೆ ಮಾಡಬಹುದು?&lt;/strong&gt;&lt;/h2&gt;&lt;p&gt;&lt;strong&gt;1. ಆದಾಯದ ಶೇ.40-50 ಉಳಿತಾಯ ಮಾಡುವ ಗುರಿ&lt;/strong&gt;&lt;/p&gt;&lt;p&gt;ಸಾಂಪ್ರದಾಯಿಕವಾದ ಶೇ.20 ಉಳಿತಾಯ ನಿಯಮದಿಂದ 30ನೇ ವಯಸ್ಸಿನೊಳಗೆ ಕೋಟಿ ತಲುಪಲು ಆಗದು. ತಂತ್ರಜ್ಞಾನ, ಫೈನಾನ್ಸ್, ಸೇಲ್ಸ್&zwnj;ನಂತಹ ಕ್ಷೇತ್ರಗಳಲ್ಲಿ ಸಂಬಳ ಬೆಳವಣಿಗೆ ವೇಗವಾಗಿರುವುದರಿಂದ, ಪ್ರತಿ ಸಂಬಳ ಏರಿಕೆಯ ಜೊತೆಗೆ ಜೀವನಶೈಲಿ ಖರ್ಚು ಹೆಚ್ಚಿಸದೆ ಉಳಿತಾಯದ ಪ್ರಮಾಣವನ್ನೂ ಹೆಚ್ಚಿಸುವುದು.&lt;/p&gt;&lt;p&gt;&lt;strong&gt;2. ಸಂಬಳದ ಜೊತೆಗೆ ಎರಡನೇ ಆದಾಯ ಮೂಲ&lt;/strong&gt;&lt;/p&gt;&lt;p&gt;ಫ್ರೀಲಾನ್ಸಿಂಗ್, ಕನ್ಸಲ್ಟಿಂಗ್, ಸ್ಕಿಲ್ ಆಧಾರಿತ ಪಾರ್ಟ್-ಟೈಂ ಕೆಲಸ ಇವು ಹೆಚ್ಚುವರಿ ₹10,000-30,000 ತಿಂಗಳಿಗೆ ತಂದುಕೊಡಬಲ್ಲವು. ಈ ಮೊತ್ತವನ್ನು ನೇರವಾಗಿ ಹೂಡಿಕೆಗೆ ತಿರುಗಿಸಬಹುದು.&lt;/p&gt;&lt;p&gt;&lt;strong&gt;3. ಈಕ್ವಿಟಿ + ಸ್ಟಾಕ್ ಆಪ್ಷನ್ಸ್ (ಇಎಸ್&zwnj;ಓಪಿ) ಬಳಕೆ&lt;/strong&gt;&lt;/p&gt;&lt;p&gt;ಸ್ಟಾರ್ಟ್&zwnj;ಅಪ್ ಅಥವಾ ಬೆಳವಣಿಗೆ ಹಂತದ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಇಎಸ್&zwnj;ಓಪಿ ಒಂದು ಪ್ರಮುಖ ಸಂಪತ್ತು ಸೃಷ್ಟಿ ಸಾಧನ. ಕಂಪನಿ ಬೆಳೆದಂತೆ ಈ ಷೇರುಗಳ ಮೌಲ್ಯವೂ ಬೆಳೆಯುತ್ತದೆ.&lt;/p&gt;&lt;p&gt;&lt;strong&gt;4. ಅನಗತ್ಯ ಸಾಲದಿಂದ ದೂರವಿರುವುದು&lt;/strong&gt;&lt;/p&gt;&lt;p&gt;ಕಾರ್ ಲೋನ್, ಕ್ರೆಡಿಟ್ ಕಾರ್ಡ್ ಸಾಲ, ಅನಗತ್ಯ ವೈಯಕ್ತಿಕ ಸಾಲಗಳು ಸಂಪತ್ತು ಸೃಷ್ಟಿಗೆ ದೊಡ್ಡ ಅಡ್ಡಿ. ಈ ಸಾಲಗಳ ಬಡ್ಡಿ ದರ ಸಾಮಾನ್ಯವಾಗಿ ಹೂಡಿಕೆಯಿಂದ ಸಿಗುವ ಆದಾಯಕ್ಕಿಂತ ಹೆಚ್ಚಿರುತ್ತದೆ.&lt;/p&gt;&lt;p&gt;&lt;strong&gt;ಮಾರ್ಗದರ್ಶನ&lt;/strong&gt;&lt;/p&gt;&lt;p&gt;ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು 22ನೇ ವಯಸ್ಸಿನಲ್ಲಿ ₹6 ಲಕ್ಷ ವಾರ್ಷಿಕ ಸಂಬಳದಿಂದ ಆರಂಭಿಸಿ, ಪ್ರತಿ 2 ವರ್ಷಕ್ಕೊಮ್ಮೆ ಕಂಪನಿ ಬದಲಿಸಿ 25-30% ವೇತನ ಏರಿಕೆ ಪಡೆದು, 30ನೇ ವಯಸ್ಸಿಗೆ ₹20-25 ಲಕ್ಷ ಸಂಬಳ ತಲುಪಬಹುದು. ಈ ಅವಧಿಯಲ್ಲಿ ಶಿಸ್ತಿನ ಹೂಡಿಕೆ, ಇಎಸ್&zwnj;ಓಪಿ ಲಾಭ ಮತ್ತು ಫ್ರೀಲಾನ್ಸ್ ಆದಾಯ ಸೇರಿ ಒಟ್ಟು ಸಂಪತ್ತು ಕೋಟಿ ದಾಟುವುದು ಅಸಾಧ್ಯವೇನಲ್ಲ.&lt;/p&gt;&lt;p&gt;ಈ ಗುರಿ ಸಾಧನೆಗೆ ಬೇಗ ಕೆಲಸ ಆರಂಭಿಸಿದಷ್ಟೂ ಸಂಯುಕ್ತ ಬಡ್ಡಿ ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ಈ ರೀತಿ ಕೆಲಸ ಮಾಡಿದರೆ 35 ಅಥವಾ 40ರ ವಯಸ್ಸಿಗಾದರೂ ಈ ಗುರಿ ತಲುಪಬಹುದು.&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ಇದು ಮಾಹಿತಿ ಮಾತ್ರ, ವೈಯಕ್ತಿಕ ಆರ್ಥಿಕ ಸಲಹೆಯಲ್ಲ. ನಿಮ್ಮ ಬದುಕಿಗೆ ತಕ್ಕಂತೆ ಸೂಕ್ತ ನಿರ್ಧಾರಗಳಿಗಾಗಿ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸಿ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Financial Planning: 20 ಸಾವಿರ ಸಂಬಳದಲ್ಲೂ ಶ್ರೀಮಂತರಾಗಬಹುದೇ? ಕಷ್ಟವೇನಲ್ಲ, ಈ ಟ್ರಿಕ್ಸ್ ಬಳಸಿದ್ರೆ ಸಾಕು!&lt;/strong&gt;&lt;/p&gt;]]></content:encoded>
            <category>news-money</category>
            <dc:creator>Kannadaprabha News</dc:creator>
            <atom:link href="https://kannada.asianetnews.com/business/earning-a-crore-rupees-by-the-age-of-30-is-possible-with-disciplined-investment-multiple-income-sources-savings-mrq/articleshow-ptskoru"/>
        </item>
        <item>
            <title><![CDATA[ಬೆಕ್ಕಿನ ಜೊತೆ ಆಟವಾಡ್ತಿದ್ದ ಬಾಲಕ ICU ಪಾಲು.. ಪೋಷಕರೇ ನಿಮ್ಮ ಮಗು ಜೋಪಾನ]]></title>
            <link>https://kannada.asianetnews.com/india-news/8-year-old-boy-in-icu-after-being-scratched-by-cat-in-kolkata-gkn/articleshow-vhh8302</link>
            <guid isPermaLink="true">https://kannada.asianetnews.com/india-news/8-year-old-boy-in-icu-after-being-scratched-by-cat-in-kolkata-gkn/articleshow-vhh8302</guid>
            <pubDate>Tue, 04 Aug 2026 12:18:24 +0530</pubDate>
            <description><![CDATA[&lt;p&gt;ಇಂದಿನ ದಿನಗಳಲ್ಲಿ ಮನೆಯಲ್ಲಿ ನಾಯಿ, ಬೆಕ್ಕು ಸೇರಿದಂತೆ ಸಾಕುಪ್ರಾಣಿಗಳನ್ನು ಸಾಕುವುದು ಟ್ರೆಂಡ್ ಆಗಿದೆ. ಆದರೆ.. ಒಂದು ಪುಟ್ಟ ನಿರ್ಲಕ್ಷ್ಯವು ಪ್ರಾಣಕ್ಕೇ ಕಂಟಕವಾಗಬಹುದು ಎಂಬುದಕ್ಕೆ ಕೋಲ್ಕತ್ತಾದಲ್ಲಿ ನಡೆದ ಘಟನೆಯೇ ಸಾಕ್ಷಿ. ಬೆಕ್ಕು ಗೀರಿದ್ದರಿಂದ ಎಂಟು ವರ್ಷದ ಬಾಲಕನೊಬ್ಬ ಐಸಿಯು (ICU) ಸೇರಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz5reapesqq4a7q55xp8hgy6,imgname-boy-play-with-cat-1785826061006.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತ್ತಾ: &lt;/strong&gt;ಮಕ್ಕಳಿಗೆ ಸಾಕುಪ್ರಾಣಿಗಳ ಜೊತೆ ಆಟವಾಡುವುದು ಮನಸ್ಸಿಗೆ ಖುಷಿ ನೀಡುತ್ತದೆ ನಿಜ. ಆದರೆ, ಆಟದ ವೇಳೆ ಅವು ಗೀರುವುದು ಅಥವಾ ಕಚ್ಚುವುದನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ದಕ್ಷಿಣ ಕೋಲ್ಕತ್ತಾದ ಎಂಟು ವರ್ಷದ ಬಾಲಕನ ವಿಷಯದಲ್ಲಿ ಇದೇ ನಿರ್ಲಕ್ಷ್ಯ ಪ್ರಾಣಾಪಾಯ ತಂದೊಡ್ಡಿತ್ತು. ಬೆಕ್ಕು ಗೀರಿದ್ದರಿಂದ ಉಂಟಾದ ಸೋಂಕು ಆತನ ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರಿದೆ.&lt;/p&gt;&lt;h2&gt;&lt;strong&gt;ಮೂರ್ಛೆ ರೋಗದಿಂದ ವೆಂಟಿಲೇಟರ್&zwnj;ವರೆಗೆ..&lt;/strong&gt;&lt;/h2&gt;&lt;p&gt;ಜುಲೈ 10 ರಂದು ಬಾಲಕನಿಗೆ ಹಠಾತ್ತನೆ ತೀವ್ರವಾದ ಮೂರ್ಛೆ (Fits) ಕಾಣಿಸಿಕೊಂಡಿದೆ. ಗಾಬರಿಗೊಂಡ ಪೋಷಕರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನಿಗೆ ಪ್ರಜ್ಞೆ ಬರದೇ ಸತತವಾಗಿ ಫಿಟ್ಸ್ ಬರುತ್ತಿದ್ದರಿಂದ ವೈದ್ಯರು ಇದನ್ನು 'ಸ್ಟೇಟಸ್ ಎಪಿಲೆಪ್ಟಿಕಸ್' ಎಂದು ಕರೆದರು. ಔಷಧಿ ನೀಡಿದರೂ ಪರಿಸ್ಥಿತಿ ಹತೋಟಿಗೆ ಬಾರದಿದ್ದಾಗ ಆತನನ್ನು ಪೀಡಿಯಾಟ್ರಿಕ್ ಐಸಿಯುಗೆ ಸ್ಥಳಾಂತರಿಸಿ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟ ನೀಡಲಾಯಿತು.&lt;/p&gt;&lt;h2&gt;&lt;strong&gt;ವೈದ್ಯರಿಗೆ ಸವಾಲಾಗಿದ್ದ ರೋಗ ಪತ್ತೆ&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಮೆದುಳು ಮತ್ತು ಬೆನ್ನುಹುರಿಯ ಪರೀಕ್ಷೆ ನಡೆಸಿದರೂ ಕಾಯಿಲೆಗೆ ಸರಿಯಾದ ಕಾರಣ ತಿಳಿಯಲಿಲ್ಲ. ವೈದ್ಯರು ಇದನ್ನು 'ನಾರ್ಸ್' (NORSE - New-Onset Refractory Status Epilepticus) ಎಂಬ ಅಪರೂಪದ ನರಗಳ ಕಾಯಿಲೆ ಎಂದು ಶಂಕಿಸಿದ್ದರು. ಆದರೆ ಬಾಲಕನಿಗೆ ಜ್ವರ ಇರುವುದನ್ನು ಗಮನಿಸಿದ ವೈದ್ಯರು ಪೋಷಕರನ್ನು ಆಳವಾಗಿ ವಿಚಾರಿಸಿದಾಗ ಅಸಲಿ ವಿಷಯ ಬಯಲಾಗಿದೆ.&lt;/p&gt;&lt;p&gt;ಬಾಲಕ ಪ್ರತಿದಿನ ತನ್ನ ಮುದ್ದಿನ ಬೆಕ್ಕಿನೊಂದಿಗೆ ಮಲಗುತ್ತಿದ್ದ. ಮೂರ್ಛೆ ಬರುವ 10 ದಿನಗಳ ಮೊದಲು ಆತನ ಚರ್ಮದ ಮೇಲೆ ಕೆಂಪು ಗುರುತು ಹಾಗೂ ಊತ ಕಾಣಿಸಿಕೊಂಡಿತ್ತು. ತಕ್ಷಣವೇ ಆಂಟಿಬಾಡಿ ಪರೀಕ್ಷೆ ನಡೆಸಿದಾಗ ಅದು 'ಬಾರ್ಟೋನೆಲ್ಲಾ' (Bartonella) ಎಂಬ ಬ್ಯಾಕ್ಟೀರಿಯಾದಿಂದ ಬರುವ 'ಕ್ಯಾಟ್ ಸ್ಕ್ರ್ಯಾಚ್ ಡಿಸೀಸ್' (Cat Scratch Disease) ಎಂದು ದೃಢಪಟ್ಟಿದೆ.&lt;/p&gt;&lt;h2&gt;&lt;strong&gt;ಚೇತರಿಸಿಕೊಂಡ ಬಾಲಕ&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಈ ಸೋಂಕು ಸಣ್ಣ ಜ್ವರದೊಂದಿಗೆ ಮುಗಿಯುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ ಇದು ಮೆದುಳು ಮತ್ತು ನರಮಂಡಲದ ಮೇಲೆ ದಾಳಿ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸೂಕ್ತ ಆಂಟಿಬಯೋಟಿಕ್ ಚಿಕಿತ್ಸೆ ನೀಡಿದ ನಂತರ ಬಾಲಕ ಚೇತರಿಸಿಕೊಂಡಿದ್ದು 10 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ. ಬೆಕ್ಕು ಅಥವಾ ನಾಯಿ ಗೀರಿದರೆ ಅಥವಾ ಕಚ್ಚಿದರೆ ಆ ಜಾಗವನ್ನು ತಕ್ಷಣವೇ ಸೋಪು ಮತ್ತು ಹರಿಯುವ ನೀರಿನಿಂದ ಚೆನ್ನಾಗಿ ತೊಳೆಯಿರಿ. ಸಾಕುಪ್ರಾಣಿಗಳೊಂದಿಗೆ ಆಟವಾಡಿದ ನಂತರ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ಸ್ವಚ್ಛಗೊಳಿಸಿಕೊಳ್ಳಿ. ಸಾಕುಪ್ರಾಣಿಗಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿ ಮತ್ತು ಅವುಗಳ ಮೈಮೇಲೆ ಉಣ್ಣೆ/ಪರೋಪಜೀವಿಗಳು ಇರದಂತೆ ನೋಡಿಕೊಳ್ಳಿ. ಮಕ್ಕಳು ಪ್ರಾಣಿಗಳ ಜೊತೆ ಆಡುವಾಗ ಪೋಷಕರ ನಿಗಾ ಇರಲಿ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/8-year-old-boy-in-icu-after-being-scratched-by-cat-in-kolkata-gkn/articleshow-vhh8302"/>
        </item>
        <item>
            <title><![CDATA[RBI: 500 ರೂಪಾಯಿ ನೋಟು ಅಸಲಿಯೋ ಅಥವಾ ನಕಲಿಯೋ?  ಇಲ್ಲಿದೆ ಆರ್‌ಬಿಐ ನೀಡಿದ ಪ್ರಮುಖ ಮಾಹಿತಿ!]]></title>
            <link>https://kannada.asianetnews.com/news-money/rbi-fake-500-rupee-note-identification-guide-bmk/articleshow-wlzgpo5</link>
            <guid isPermaLink="true">https://kannada.asianetnews.com/news-money/rbi-fake-500-rupee-note-identification-guide-bmk/articleshow-wlzgpo5</guid>
            <pubDate>Sat, 18 Jul 2026 16:39:05 +0530</pubDate>
            <description><![CDATA[&lt;p&gt;ಮಾರುಕಟ್ಟೆಯಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದ್ದು, ನಿಮ್ಮ ಕೈಯಲ್ಲಿರುವ 500 ರೂಪಾಯಿ ನೋಟು ಅಸಲಿಯೋ ಅಥವಾ ನಕಲಿಯೋ ಎಂಬ ಆತಂಕ ನಿಮಗಿದೆಯೇ? ಭಾರತೀಯ ರಿಸರ್ವ್ ಬ್ಯಾಂಕ್ ಅಸಲಿ ನೋಟುಗಳನ್ನು ಗುರುತಿಸಲು ಕೆಲವು ಪ್ರಮುಖ ರಹಸ್ಯ ಫೀಚರ್ಸ್&zwnj;ಗಳನ್ನು ನೀಡಿದೆ. ಈ ಕುರಿತು ಸಂಪೂರ್ಣ ವಿವರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvzpy3fr1x66dvj6mzk2ht5s,imgname-500-notes-bundle--3--1782401928696.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ದೈನಂದಿನ ವಹಿವಾಟಿನಲ್ಲಿ ₹500 ನೋಟು ಹೆಚ್ಚು ವ್ಯಾಪಕವಾಗಿ ಬಳಸಲ್ಪಡುತ್ತದೆ. ಈ ಕಾರಣದಿಂದಾಗಿ, ನಕಲಿ ನೋಟುಗಳು ಈ ಮೌಲ್ಯದ ನಕಲಿ ನೋಟುಗಳು ಮಾರುಕಟ್ಟೆಗೆ ದಾವಿಸಲು ಹವಣಿಸುತ್ತಿವೆ. ಗ್ರಾಹಕರು ಎಂದಾದರೂ ₹500 ನೋಟನ್ನು ಕಂಡರೆ, ಅದನ್ನು ಸ್ವೀಕರಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮರೆಯದಿರಿ. ನಿಜವಾದ ₹500 ನೋಟುಗಳನ್ನು ಗುರುತಿಸಲು RBI ಹಲವಾರು ಭದ್ರತಾ ವೈಶಿಷ್ಟ್ಯಗಳನ್ನು ಒದಗಿಸಿದೆ, ಇದನ್ನು ಯಂತ್ರವಿಲ್ಲದೆ ಪರಿಶೀಲಿಸಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಮೊದಲು ಮಾಡಬೇಕಾದದ್ದು ಏನು?&lt;/strong&gt;&lt;/h2&gt;&lt;p&gt;ಪ್ರಸ್ತುತ ₹500 ನೋಟು ಮಹಾತ್ಮ ಗಾಂಧಿ (ಹೊಸ ಸರಣಿ) ಯಲ್ಲಿದೆ. ನೋಟಿನ ಪ್ರಾಥಮಿಕ ಬಣ್ಣ ಸ್ಟೋನ್ ಗ್ರೇ. ಹಿಂಭಾಗದಲ್ಲಿ ಕೆಂಪು ಕೋಟೆ ಮತ್ತು ಭಾರತದ ಸ್ವಚ್ಛ ಭಾರತ ಅಭಿಯಾನದ ಲೋಗೋ ಇದೆ.&lt;/p&gt;&lt;h3&gt;&lt;strong&gt;1. ಮಹಾತ್ಮಾ ಗಾಂಧಿಯವರ ಚಿತ್ರವನ್ನು ನೋಡಿ.&lt;/strong&gt;&lt;/h3&gt;&lt;p&gt;ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿಯವರ ಸ್ಪಷ್ಟ ಚಿತ್ರವಿದೆ. ಚಿತ್ರವು ಅಸ್ಪಷ್ಟವಾಗಿದ್ದರೆ, ವಿರೂಪಗೊಂಡಿದ್ದರೆ ಅಥವಾ ಮುದ್ರಣ ಕಳಪೆಯಾಗಿದ್ದರೆ, ನೋಟನ್ನು ಎಚ್ಚರಿಕೆಯಿಂದ ಪರೀಕ್ಷಿಸಿ.&lt;/p&gt;&lt;h3&gt;&lt;strong&gt;2. ವಾಟರ್&zwnj;ಮಾರ್ಕ್ ಪರಿಶೀಲಿಸಿ&lt;/strong&gt;&lt;/h3&gt;&lt;p&gt;ನೋಟನ್ನು ಮಂದ ಬೆಳಕಿನವರೆಗೆ ಹಿಡಿದುಕೊಳ್ಳಿ. ನೋಟಿನ ಒಳಭಾಗದಲ್ಲಿ ಮಹಾತ್ಮ ಗಾಂಧಿಯವರ ವಾಟರ್&zwnj;ಮಾರ್ಕ್ ಮತ್ತು ಎಲೆಕ್ಟ್ರೋಟೈಪ್ ಸಂಖ್ಯೆ 500 ಅನ್ನು ನೀವು ನೋಡಲು ಸಾಧ್ಯವಾಗುತ್ತದೆ. ಇವು ಸ್ಪಷ್ಟವಾಗಿ ಗೋಚರಿಸದಿದ್ದರೆ, ಆ ನೋಟು ನಕಲಿಯಾಗಿರುವ ಸಾಧ್ಯತೆ ಇದೆ.&lt;/p&gt;&lt;p&gt;&lt;strong&gt;3. ಸೆಕ್ಯುರಿಟಿ ಥ್ರೆಡ್ ಪರಿಶೀಲಿಸಿ!&lt;/strong&gt;&lt;/p&gt;&lt;p&gt;ನೋಟಿನ ಮಧ್ಯಭಾಗದಲ್ಲಿ ಹೊಳೆಯುವ ಸೆಕ್ಯುರಿಟಿ ಥ್ರೆಡ್ ಹಾದು ಹೋಗುತ್ತದೆ, ಅದರಲ್ಲಿ ಭಾರತ, ಆರ್&zwnj;ಬಿಐ ಮತ್ತು 500 ಎಂದು ನಮೂದಾಗಿರುತ್ತದೆ. ನೋಟನ್ನು ಸ್ವಲ್ಪ ಓರೆಯಾಗಿಸಿದಾಗ, ಥ್ರೇಡ್ ಕಲರ್ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.&lt;/p&gt;&lt;h3&gt;&lt;strong&gt;4. ಕಲರ್ ಶಿಫ್ಟ್ ಇಂಕ್!&lt;/strong&gt;&lt;/h3&gt;&lt;p&gt;ನೋಟಿನ ಮುಂಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ಇರುವ 500 ಸಂಖ್ಯೆಯು ಸಹ ಭದ್ರತಾ ವೈಶಿಷ್ಟ್ಯವಾಗಿದೆ. ವಿವಿಧ ಕೋನಗಳಿಂದ ನೋಡಿದಾಗ ನೋಟಿನ ಬಣ್ಣ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.&lt;/p&gt;&lt;h3&gt;&lt;strong&gt;5. ಮುದ್ರಣ ಪತ್ತೆ ಹಚ್ಚಿ!&lt;/strong&gt;&lt;/h3&gt;&lt;p&gt;ಮಹಾತ್ಮ ಗಾಂಧಿಯವರ ಚಿತ್ರ, ಅಶೋಕ ಸ್ತಂಭ, ಆರ್&zwnj;ಬಿಐ ಲಾಂಛನ, ಖಾತರಿ ಷರತ್ತು ಮತ್ತು ಗುರುತಿನ ಗುರುತು ಎಲ್ಲವೂ ಮೇಲೆ ಇರುತ್ತದೆ. ಅವುಗಳನ್ನು ಬೆರಳ ತುದಿಯಿಂದಲೂ ನೋಡಬಹುದಾಗಿದೆ. ಈ ವೈಶಿಷ್ಟ್ಯವು ಅಂಗವಿಕಲರಿಗೆ ವಿಶೇಷವಾಗಿ ಸೂಕ್ತವಾಗಿದೆ.&lt;/p&gt;&lt;h3&gt;&lt;strong&gt;6. ಪಾರದರ್ಶಕ ನೋಂದಣಿ&lt;/strong&gt;&lt;/h3&gt;&lt;p&gt;ನೋಟಿನ ಮುಂಭಾಗ ಮತ್ತು ಹಿಂಭಾಗದಲ್ಲಿ 500 ರ ಅರ್ಧ ಮುದ್ರಣವಿದೆ. ಬೆಳಕಿಗೆ ಹಿಡಿದಾಗ, ಎರಡೂ ಭಾಗಗಳು ಸೇರಿ ಪೂರ್ಣ 500 ಅನ್ನು ರೂಪಿಸುತ್ತವೆ.&lt;/p&gt;&lt;h3&gt;&lt;strong&gt;ನಕಲಿ ನೋಟು ಸಿಕ್ಕರೆ ಏನು ಮಾಡಬೇಕು?&lt;/strong&gt;&lt;/h3&gt;&lt;p&gt;ಯಾರಿಗೂ ನೋಟು ಕೊಡಬೇಡಿ. ಅದರೊಂದಿಗೆ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಅಗತ್ಯವಿದ್ದರೆ ಪೊಲೀಸರಿಗೆ ತಿಳಿಸಿ. ಬ್ಯಾಂಕ್ ನೋಟನ್ನು ಪರಿಶೀಲಿಸಿ ಆರ್&zwnj;ಬಿಐ ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುತ್ತದೆ. ₹500 ನೋಟಿಗೆ ಸಂಬಂಧಿಸಿದ ಪ್ರಮುಖ ಅಂಕಿಅಂಶಗಳು ಎಂದರೆ, ಪ್ರಸ್ತುತ ಚಲಾವಣೆಯಲ್ಲಿರುವ ₹500 ನೋಟು ಮಹಾತ್ಮ ಗಾಂಧಿ (ಹೊಸ) ಸರಣಿಯ ಭಾಗವಾಗಿದೆ. ₹500 ನೋಟಿನ ಗಾತ್ರ 66 ಮಿಮೀ &times; 150 ಮಿಮೀ ಇರುತ್ತದೆ. ಅದರಂತೆ ನೋಟಿನ ಮುಖ್ಯ ಬಣ್ಣ ಸ್ಟೋನ್ ಗ್ರೇಯಾಗಿರುತ್ತದೆ. ಅದನ್ನು ಗಮನಿಸುವುದು ಪ್ರಮುಖವಾಗಿದೆ.&lt;/p&gt;&lt;p&gt;&lt;strong&gt;ನೋಟಿನ ಹಿಂಭಾಗ ನೋಡಬೇಕಾದದ್ದು ಏನು?&lt;/strong&gt;&lt;/p&gt;&lt;p&gt;ನೋಟಿನ ಹಿಂಭಾಗದಲ್ಲಿ ಕೆಂಪು ಕೋಟೆಯ ಚಿತ್ರ ಮತ್ತು ಸ್ವಚ್ಛ ಭಾರತದ ಲೋಗೋ ಮುದ್ರಿಸಲಾಗಿದೆ. ಆರ್&zwnj;ಬಿಐ ಪ್ರಕಾರ, ₹500 ನೋಟಿನಲ್ಲಿ ವಾಟರ್&zwnj;ಮಾರ್ಕ್, ಭದ್ರತಾ ದಾರ, ಬಣ್ಣ ಬದಲಾಯಿಸುವ ಶಾಯಿ, ಸೂಕ್ಷ್ಮ ಅಕ್ಷರಗಳು, ಪಾರದರ್ಶಕ ರಿಜಿಸ್ಟರ್ ಮತ್ತು ಉಬ್ಬಿಸಿದ ಮುದ್ರಣ ಸೇರಿದಂತೆ ಹಲವಾರು ಭದ್ರತಾ ವೈಶಿಷ್ಟ್ಯಗಳಿವೆ.&lt;/p&gt;&lt;p&gt;(ವಿಷಯ ಮೂಲ; ಆರ್&zwnj;ಬಿಐ, ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಆರ್&zwnj;ಬಿಐ ಕ್ಲೀನ್ ನೋಟ್ ಪಾಲಿಸಿ, ಪಿಐಬಿ)&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/news-money/rbi-fake-500-rupee-note-identification-guide-bmk/articleshow-wlzgpo5"/>
        </item>
        <item>
            <title><![CDATA[ಮದುವೆ ನಿಕ್ಕಿ ಆಗಿತ್ತು.. ಅನ್ಯಾಯವಾಗಿ ಪ್ರಾಣ ಕಳೆದುಕೊಂಡ ಕಾಸರಗೋಡು ಯುವಕ!]]></title>
            <link>https://kannada.asianetnews.com/india-news/kerals-kasaragod-sailor-akhil-joyan-killed-in-russian-attack-gkn/articleshow-xbt23yc</link>
            <guid isPermaLink="true">https://kannada.asianetnews.com/india-news/kerals-kasaragod-sailor-akhil-joyan-killed-in-russian-attack-gkn/articleshow-xbt23yc</guid>
            <pubDate>Tue, 21 Jul 2026 09:56:05 +0530</pubDate>
            <description><![CDATA[&lt;p&gt;ಉಕ್ರೇನ್-ರಷ್ಯಾ ಯುದ್ಧದ ನಡುವೆ, ಒಡೆಸಾ ಬಳಿ ರಷ್ಯಾ ನಡೆಸಿದ ಹಡಗು ದಾಳಿಯಲ್ಲಿ ಕಾಸರಗೋಡಿನ ಯುವ ನಾವಿಕ ಅಖಿಲ್ ಜೋಯನ್ ಮೃತಪಟ್ಟಿದ್ದಾರೆ. ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಅಖಿಲ್, ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky1eqhf1gd31t0v93aafch3h,imgname-akhil-joyan-1784607917537.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾಸರಗೋಡು: &lt;/strong&gt;ಉಕ್ರೇನ್ ಮತ್ತು ರಷ್ಯಾ ನಡುವಿನ ಭೀಕರ ಯುದ್ಧವು ಮತ್ತೊಬ್ಬ ಭಾರತೀಯನ ಬಲಿಯನ್ನು ಪಡೆದಿದೆ. ಉಕ್ರೇನ್&zwnj;ನ ಒಡೆಸಾ ನಗರದ ಸಮೀಪವಿರುವ ಎಂವಿ ಗೋಲ್ಡನ್ ಲಿಯೋ (MV Golden Leo) ಎಂಬ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕೇರಳದ ಯುವ ನಾವಿಕ ಅಖಿಲ್ ಜೋಯನ್ ಸೇರಿದಂತೆ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಕಣ್ಣೀರಲ್ಲಿ ಮುಳುಗಿದ ಸಂಬಂಧಿಗಳು&lt;/strong&gt;&lt;/h2&gt;&lt;p&gt;ಮೃತ ಅಖಿಲ್ ಜೋಯನ್ (26) ಕೇರಳದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ನಿವಾಸಿ. ಕೇವಲ ಮೂರು ತಿಂಗಳ ಹಿಂದೆಯಷ್ಟೇ ಅಖಿಲ್ ಅವರ ನಿಶ್ಚಿತಾರ್ಥ ಅಲೆಪ್ಪಿಯ ಯುವತಿಯೊಂದಿಗೆ ಅದ್ಧೂರಿಯಾಗಿ ನಡೆದಿತ್ತು. ಇನ್ನು ಎರಡು ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು. ಮದುವೆಗಾಗಿ ಸಿದ್ಧತೆಗಳು ನಡೆಯುತ್ತಿದ್ದವು, ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ಅವರು ರಜೆ ಮುಗಿಸಿ ಮತ್ತೆ ಕೆಲಸಕ್ಕೆ ತೆರಳಿದ್ದರು.&lt;/p&gt;&lt;p&gt;ಅಖಿಲ್ ಅವರ ತಂದೆ ಜೋಯನ್ ಎಲೆಕ್ಟ್ರಿಕಲ್ ಶಾಪ್&zwnj;ನಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸ್ಯಾಲಿ ಇನ್ಶೂರೆನ್ಸ್ ಏಜೆಂಟ್ ಆಗಿದ್ದಾರೆ. ಈ ಸಾಮಾನ್ಯ ಕುಟುಂಬಕ್ಕೆ ಅಖಿಲ್ ಏಕೈಕ ಮಗನಾಗಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಅವರು 19ನೇ ವಯಸ್ಸಿನಲ್ಲೇ ಮರ್ಚೆಂಟ್ ನೇವಿಗೆ ಸೇರಿದ್ದರು. ಇತ್ತೀಚೆಗಷ್ಟೇ ಒಂದು ಹೊಸ ಮನೆಯನ್ನು ಕೂಡ ಕಟ್ಟಿಸಿದ್ದರು. ಶೀಘ್ರದಲ್ಲೇ ಈ ಕೆಲಸ ಬಿಟ್ಟು ಬೇರೆ ಉತ್ತಮ ಕೆಲಸಕ್ಕೆ ಸೇರುವ ಕನಸು ಅವರದ್ದಾಗಿತ್ತು.&lt;/p&gt;&lt;h2&gt;&lt;strong&gt;ಸ್ಥಳೀಯವಾಗಿ ಜನಪ್ರಿಯರಾಗಿದ್ದರು&lt;/strong&gt;&lt;/h2&gt;&lt;p&gt;ಅಖಿಲ್ ಕೇವಲ ನಾವಿಕನಾಗಿ ಮಾತ್ರವಲ್ಲದೆ, ಸ್ಥಳೀಯವಾಗಿ ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದರು. ಅವರು ಕೇರಳದ ಜನಪ್ರಿಯ ಕ್ರೀಡೆಯಾದ ಹಗ್ಗಜಗ್ಗಾಟ (Tug-of-war) ಪಂದ್ಯದ ಉತ್ತಮ ಆಟಗಾರರಾಗಿದ್ದರು. ಶಿಸ್ತುಬದ್ಧ ಜೀವನ ನಡೆಸುತ್ತಿದ್ದ ಅಖಿಲ್ ಅಕಾಲಿಕ ಮರಣವು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.&lt;/p&gt;&lt;p&gt;ವಿದೇಶಿ ಮಾಧ್ಯಮಗಳ ವರದಿಯ ಪ್ರಕಾರ, ಪಶ್ಚಿಮ ಆಫ್ರಿಕಾದ ಗಿನಿಯಾ-ಬಿಸ್ಸೌ ಧ್ವಜ ಹೊತ್ತ ಈ ಹಡಗು ಉಕ್ರೇನ್&zwnj;ನಿಂದ ಕಾರ್ನ್ (Corn) ಹೊತ್ತು ಒಡೆಸಾ ಬಂದರಿನಿಂದ ಹೊರಬರುತ್ತಿದ್ದಾಗ ರಷ್ಯಾದ ಪಡೆಗಳು ದಾಳಿ ನಡೆಸಿವೆ. ಈ ದಾಳಿಯಲ್ಲಿ ಒಟ್ಟು 10 ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ನಾಲ್ವರು ಭಾರತೀಯರು ಹಾಗೂ ಐವರು ಸಿರಿಯಾದ ನಾವಿಕರಾಗಿದ್ದಾರೆ. 8 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.&lt;/p&gt;&lt;p&gt;ಸೋಮವಾರ ಸಂಜೆ ಹಡಗು ಕಂಪನಿಯಿಂದ ಇಮೇಲ್ ಬಂದಾಗ ಕುಟುಂಬಕ್ಕೆ ಅಖಿಲ್ ಸಾವಿನ ಸುದ್ದಿ ತಿಳಿದಿದೆ. ಕೇರಳ ಮುಖ್ಯಮಂತ್ರಿ ಕಚೇರಿಯು ಈಗಾಗಲೇ ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆ (NORKA)ಗೆ ಸೂಚನೆ ನೀಡಿದ್ದು, ರಷ್ಯಾ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕ ಸಾಧಿಸಿ ಮೃತದೇಹವನ್ನು ತಾಯ್ನಾಡಿಗೆ ತರಲು ವ್ಯವಸ್ಥೆ ಮಾಡುತ್ತಿದೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/kerals-kasaragod-sailor-akhil-joyan-killed-in-russian-attack-gkn/articleshow-xbt23yc"/>
        </item>
        <item>
            <title><![CDATA[ಗಮನಿಸಿ! ಆಗಸ್ಟ್ 1 ರಿಂದ ಎಲ್‌ಪಿಜಿಯಿಂದ ಆಧಾರ್‌ವರೆಗೆ ಹಲವು ನಿಯಮಗಳ ಬದಲಾವಣೆ; ಪ್ರತಿಯೊಬ್ಬರೂ ತಿಳಿಯಬೇಕಾದ ಸುದ್ದಿ!]]></title>
            <link>https://kannada.asianetnews.com/market-money/new-rules-august-1-2026-lpg-aadhaar-changes-india-bmk/articleshow-ygxrfcy</link>
            <guid isPermaLink="true">https://kannada.asianetnews.com/market-money/new-rules-august-1-2026-lpg-aadhaar-changes-india-bmk/articleshow-ygxrfcy</guid>
            <pubDate>Tue, 28 Jul 2026 19:13:51 +0530</pubDate>
            <description><![CDATA[&lt;p&gt;ಆಗಸ್ಟ್ 1 ರಿಂದ ದೇಶಾದ್ಯಂತ ಹಲವು ಪ್ರಮುಖ ನಿಯಮಗಳು ಬದಲಾಗಲಿವೆ. ಎಲ್&zwnj;ಪಿಜಿ ಸಿಲಿಂಡರ್ ಬೆಲೆ, ಆದಾಯ ತೆರಿಗೆ ರಿಟರ್ನ್ ಗಡುವು, ತತ್ಕಾಲ್ ರೈಲು ಟಿಕೆಟ್ ಬುಕಿಂಗ್, ಮತ್ತು ಆಧಾರ್ ಆಧಾರಿತ CKYC 2.0 ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಜಾರಿಗೆ ಬರಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymfeyjvs22nwheaxxwq7ax2,imgname-adhar-and-lpg-1785246218842.jpg" type="image/jpeg" height="390" width="690"/>
            <content:encoded><![CDATA[&lt;p&gt;ಜುಲೈ ತಿಂಗಳು ಮುಕ್ತಾಯಗೊಳ್ಳುತ್ತಿದ್ದಂತೆ, ಆಗಸ್ಟ್ 1 ರಿಂದ ದೇಶಾದ್ಯಂತ ಹಲವು ಪ್ರಮುಖ ಆರ್ಥಿಕ ಹಾಗೂ ಸೇವಾ ನಿಯಮಗಳು ಬದಲಾಗಲಿವೆ. ಬ್ಯಾಂಕಿಂಗ್ ವಹಿವಾಟುಗಳು, ಆದಾಯ ತೆರಿಗೆ, ರೈಲು ಟಿಕೆಟ್ ಬುಕಿಂಗ್, ಎಲ್&zwnj;ಪಿಜಿ ಸಿಲಿಂಡರ್ ಬೆಲೆಗಳು, ಕ್ರೆಡಿಟ್ ಕಾರ್ಡ್&zwnj;ಗಳು ಮತ್ತು ಆಧಾರ್ ಆಧಾರಿತ ಸೇವೆಗಳಲ್ಲಿ ಈ ಹೊಸ ಬದಲಾವಣೆಗಳು ಜಾರಿಗೆ ಬರಲಿವೆ. ಹೊಸ ನಿಯಮಗಳ ಅರಿವಿಲ್ಲದಿದ್ದರೆ ಸಾರ್ವಜನಿಕರು ಹೆಚ್ಚುವರಿ ಶುಲ್ಕ ಅಥವಾ ದಂಡ ತೆರಬೇಕಾಗಬಹುದು. ಆಗಸ್ಟ್ 1 ರಿಂದ ಜಾರಿಗೆ ಬರಲಿರುವ ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ:&lt;/p&gt;&lt;h2&gt;&lt;strong&gt;ತತ್ಕಾಲ್ ರೈಲು ಟಿಕೆಟ್ ಬುಕಿಂಗ್&zwnj;ಗೆ ಹೊಸ ಟೋಕನ್ ವ್ಯವಸ್ಥೆ!&lt;/strong&gt;&lt;/h2&gt;&lt;p&gt;ಭಾರತೀಯ ರೈಲ್ವೆಯ ತತ್ಕಾಲ್ ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ ತರಲಾಗುತ್ತಿದೆ. ಮುಖ್ಯವಾಗಿ ಪಶ್ಚಿಮ ಮಧ್ಯ ರೈಲ್ವೆ ವಲಯದ ಬುಕಿಂಗ್ ಕೇಂದ್ರಗಳಲ್ಲಿ ಹೊಸ 'ಟೋಕನ್ ವ್ಯವಸ್ಥೆ' ಪರಿಚಯಿಸಲಾಗುತ್ತಿದ್ದು, ಟೋಕನ್ ನೀಡುವ ಸಮಯವನ್ನು ಬದಲಾಯಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಟೋಕನ್&zwnj;ಗಾಗಿ ಒಮ್ಮೆ ಮತ್ತು ಟಿಕೆಟ್&zwnj;ಗಾಗಿ ಇನ್ನೊಮ್ಮೆ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಬುಕಿಂಗ್ ಕೇಂದ್ರಗಳಲ್ಲಿ ದಟ್ಟಣೆ ನಿಯಂತ್ರಿಸಿ, ಪ್ರಕ್ರಿಯೆಯನ್ನು ವೇಗಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.&lt;/p&gt;&lt;h3&gt;&lt;strong&gt;ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಗಡುವು!&lt;/strong&gt;&lt;/h3&gt;&lt;p&gt;ಸಾಮಾನ್ಯ ತೆರಿಗೆದಾರರಿಗೆ (ITR-1 ಮತ್ತು ITR-2) 2026-27ನೇ ಹಣಕಾಸು ವರ್ಷದ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಗಡುವಿನ ನಂತರ ರಿಟರ್ನ್ ಸಲ್ಲಿಸಿದರೆ ದಂಡ ಪಾವತಿಸಬೇಕಾಗುತ್ತದೆ. ಆದರೆ, ಆಡಿಟ್ ಅಗತ್ಯವಿಲ್ಲದ ವ್ಯವಹಾರಗಳಿಗೆ (ITR-3 ಮತ್ತು ITR-4) ರಿಟರ್ನ್ಸ್ ಸಲ್ಲಿಸಲು ಆಗಸ್ಟ್ 31 ರವರೆಗೆ ಕಾಲಾವಕಾಶವಿದ್ದರೆ, ಆಡಿಟ್ ಅಗತ್ಯವಿರುವ ಉದ್ಯಮಿಗಳಿಗೆ ಅಕ್ಟೋಬರ್ 31 ರವರೆಗೆ ಸಮಯವಿರುತ್ತದೆ.&lt;/p&gt;&lt;h3&gt;&lt;strong&gt;ಎಲ್&zwnj;ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ!&lt;/strong&gt;&lt;/h3&gt;&lt;p&gt;ಪ್ರತಿ ತಿಂಗಳ ಮೊದಲ ದಿನದಂತೆ ಆಗಸ್ಟ್ 1 ರಂದೂ ಸಹ ತೈಲ ಮಾರುಕಟ್ಟೆ ಕಂಪನಿಗಳು ದೇಶೀಯ ಮತ್ತು ವಾಣಿಜ್ಯ ಬಳಕೆಯ ಎಲ್&zwnj;ಪಿಜಿ ಸಿಲಿಂಡರ್&zwnj;ಗಳ ಹೊಸ ಬೆಲೆಗಳನ್ನು ಘೋಷಿಸಲಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಮತ್ತು ಮಧ್ಯಪ್ರಾಚ್ಯದ ಉದ್ವಿಗ್ನತೆಗಳ ಆಧಾರದ ಮೇಲೆ ಬೆಲೆ ಪರಿಷ್ಕರಣೆಯಾಗಲಿದ್ದು, ಇದು ಸಾರ್ವಜನಿಕರ ಮನೆ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.&lt;/p&gt;&lt;h3&gt;&lt;strong&gt;ಆಧಾರ್ ಮತ್ತು 'CKYC 2.0' ವ್ಯವಸ್ಥೆ ಜಾರಿ!&lt;/strong&gt;&lt;/h3&gt;&lt;p&gt;ಆಗಸ್ಟ್&zwnj;ನಿಂದ ಬ್ಯಾಂಕುಗಳು, ವಿಮಾ ಕಂಪನಿಗಳು ಹಾಗೂ ಆಸ್ತಿ ನಿರ್ವಹಣಾ ಸಂಸ್ಥೆಗಳು ಜಂಟಿಯಾಗಿ 'ಕೇಂದ್ರ ಗ್ರಾಹಕ KYC' (CKYC) 2.0 ವ್ಯವಸ್ಥೆಯನ್ನು ಜಾರಿಗೆ ತರುತ್ತಿವೆ. ಈ ಡಿಜಿಟಲ್ ವ್ಯವಸ್ಥೆಯಿಂದಾಗಿ ಗ್ರಾಹಕರು ಹೊಸ ಖಾತೆ ತೆರೆಯುವಾಗ ಅಥವಾ ಕೆವೈಸಿ ನವೀಕರಿಸುವಾಗ ಪದೇ ಪದೇ ಒಂದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಗ್ರಾಹಕರ ಒಪ್ಪಿಗೆಯೊಂದಿಗೆ ಸಂಸ್ಥೆಗಳು ನೇರವಾಗಿ ಕೇಂದ್ರ ನೋಂದಣಿಯಿಂದ ಮಾಹಿತಿ ಪಡೆಯಬಹುದಾಗಿದ್ದು, ಇದು ವಂಚನೆಗಳನ್ನು ತಡೆಯಲು ನೆರವಾಗಲಿದೆ.&lt;/p&gt;&lt;h3&gt;&lt;strong&gt;ಕ್ರೆಡಿಟ್ ಕಾರ್ಡ್ ಮತ್ತು ಎಫ್&zwnj;ಡಿ (FD) ಬಡ್ಡಿದರಗಳ ಬದಲಾವಣೆ!&lt;/strong&gt;&lt;/h3&gt;&lt;p&gt;ಹಲವು ಪ್ರಮುಖ ಬ್ಯಾಂಕುಗಳು ತಮ್ಮ ಕ್ರೆಡಿಟ್ ಕಾರ್ಡ್&zwnj;ಗಳ ರಿವಾರ್ಡ್ ಪಾಯಿಂಟ್ಸ್, ವಾರ್ಷಿಕ ಹಾಗೂ ಸೇವಾ ಶುಲ್ಕಗಳ ನಿಯಮಗಳನ್ನು ಬದಲಾಯಿಸುತ್ತಿವೆ. ಇದರೊಂದಿಗೆ, ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಸಭೆಯ ನಿರ್ಧಾರಕ್ಕೆ ಅನುಗುಣವಾಗಿ ಬ್ಯಾಂಕುಗಳ ಸ್ಥಿರ ಠೇವಣಿ (FD) ಬಡ್ಡಿದರಗಳು ಮತ್ತು ಸಾಲಗಳ ಇಎಮ್&zwnj;ಐ (EMI) ದರಗಳಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/market-money/new-rules-august-1-2026-lpg-aadhaar-changes-india-bmk/articleshow-ygxrfcy"/>
        </item>
        <item>
            <title><![CDATA[Bank of Baroda ಗ್ರಾಹಕರಿಗೆ ಬಿಗ್ ಶಾಕ್.. ಟೆನ್ಷನ್ ಬೇಡ, ಈಗಲೇ ನೀವು ಈ ಕೆಲಸ ಮಾಡಲೇಬೇಕು!]]></title>
            <link>https://kannada.asianetnews.com/bank-jobs/alleged-bank-of-baroda-data-leak-1tb-of-data-reportedly-exposed-online-gkn/articleshow-ylxzqnu</link>
            <guid isPermaLink="true">https://kannada.asianetnews.com/bank-jobs/alleged-bank-of-baroda-data-leak-1tb-of-data-reportedly-exposed-online-gkn/articleshow-ylxzqnu</guid>
            <pubDate>Mon, 27 Jul 2026 12:06:21 +0530</pubDate>
            <description><![CDATA[ಬ್ಯಾಂಕ್ ಆಫ್ ಬರೋಡಾ ಬೃಹತ್ ಸೈಬರ್ ದಾಳಿಗೆ ತುತ್ತಾಗಿದ್ದು, ಹ್ಯಾಕರ್&zwnj;ಗಳು ಸುಮಾರು 1TB ಗ್ರಾಹಕರ ಸಂವೇದನಾಶೀಲ ಡೇಟಾವನ್ನು ಕದ್ದಿದ್ದಾರೆ. ಈ ಡೇಟಾವನ್ನು ಡಾರ್ಕ್ ವೆಬ್&zwnj;ನಲ್ಲಿ ಉಚಿತವಾಗಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಗ್ರಾಹಕರ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳು ಸೇರಿವೆ. ಈ ಘಟನೆಯು ಬ್ಯಾಂಕಿಂಗ್ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyh4k60pnnjvpebcjydj0y4t,imgname-bank-of-baroda-1785134159894.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್&zwnj;ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bank of Baroda) ಬೃಹತ್ ಸೈಬರ್ ದಾಳಿಗೆ ತುತ್ತಾಗಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಹ್ಯಾಕರ್ ಒಬ್ಬರು ಬ್ಯಾಂಕ್&zwnj;ನ ಸರ್ವರ್&zwnj;ಗಳನ್ನು ಭೇದಿಸಿ, ಸುಮಾರು 1 ಟಿಬಿ (1TB) ಗೂ ಅಧಿಕ ಸಂವೇದನಾಶೀಲ ಡೇಟಾವನ್ನು ಕದ್ದು ಡಾರ್ಕ್ ವೆಬ್&zwnj;ನಲ್ಲಿ ಉಚಿತವಾಗಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಸೋರಿಕೆಯಾದ ಡೇಟಾದಲ್ಲಿ ಏನೇನಿದೆ?&lt;/strong&gt;&lt;/h2&gt;&lt;p&gt;ವರದಿಗಳ ಪ್ರಕಾರ, ಸೋರಿಕೆಯಾದ ಡೇಟಾವು ಗ್ರಾಹಕರ ಅತ್ಯಂತ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಒಳಗೊಂಡಿದೆ.&lt;/p&gt;&lt;ul&gt; &lt;li&gt;ಗ್ರಾಹಕರ ಹೆಸರು ಮತ್ತು ಆಧಾರ್ ಸಂಖ್ಯೆಗಳು.&lt;/li&gt; &lt;li&gt;ಉಳಿತಾಯ ಮತ್ತು ಚಾಲ್ತಿ ಖಾತೆಗಳ (Savings &amp;amp; Current Accounts) ವಿವರಗಳು.&lt;/li&gt; &lt;li&gt;ಸಾಲದ ದಾಖಲೆಗಳು (Loan Appraisal Documents).&lt;/li&gt; &lt;li&gt;ನೆಟ್ ಬ್ಯಾಂಕಿಂಗ್ ಬಳಕೆದಾರರ ಮಾಹಿತಿ.&lt;/li&gt; &lt;li&gt;ಎನ್&zwnj;ಆರ್&zwnj;ಐ (NRI) ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್ ದಾಖಲೆಗಳು.&lt;/li&gt; &lt;li&gt;ಬ್ಯಾಂಕ್&zwnj;ನ ಆಂತರಿಕ ಆಡಿಟ್ ವರದಿಗಳು ಮತ್ತು ಇಮೇಲ್ ಸಂವಹನಗಳು.&lt;/li&gt;&lt;/ul&gt;&lt;h2&gt;&lt;strong&gt;ಬಯಲಾಗಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಕ್ಯಾಶ್&zwnj;ಲೆಸ್&zwnj;ಕನ್ಸ್ಯೂಮರ್' (CashlessConsumer) ಸಂಸ್ಥೆಯ ಸಂಸ್ಥಾಪಕ ಮತ್ತು ಸಾಫ್ಟ್&zwnj;ವೇರ್ ಎಂಜಿನಿಯರ್ ಶ್ರೀಕಾಂತ್ ಲಕ್ಷ್ಮಣನ್ ಅವರು ಈ ಬಗ್ಗೆ ಮೊದಲು ಮಾಹಿತಿ ನೀಡಿದ್ದಾರೆ. ಹ್ಯಾಕರ್ ಹಂಚಿಕೊಂಡಿದ್ದ ಕೆಲವು ಸ್ಯಾಂಪಲ್ ದಾಖಲೆಗಳನ್ನು ಪರಿಶೀಲಿಸಿದ ಶ್ರೀಕಾಂತ್, ಇವು ಬ್ಯಾಂಕ್ ಆಫ್ ಬರೋಡಾದ ಆಂತರಿಕ ದಾಖಲೆಗಳೇ ಆಗಿವೆ ಎಂದು ತಿಳಿಸಿದ್ದಾರೆ. ಇದು ಒಂದು ದೊಡ್ಡ ಸೈಬರ್ ವಿಪತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಜುಲೈ 25 ರಂದು 'ransomware.live' ಎಂಬ ಸೈಟ್&zwnj;ನಲ್ಲಿ ಈ ಹ್ಯಾಕಿಂಗ್ ಮೊದಲು ಪತ್ತೆಯಾಗಿದೆ.&lt;/p&gt;&lt;h2&gt;&lt;strong&gt;ಈ ಕೃತ್ಯದ ಹಿಂದೆ ಯಾರು?&lt;/strong&gt;&lt;/h2&gt;&lt;p&gt;'TripleX' ಎಂಬ ಹೊಸ ಹ್ಯಾಕಿಂಗ್ ಗುಂಪು ಈ ದಾಳಿಯ ಹಿಂದೆ ಇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದೇ ತಂಡವು ಕಳೆದ ಮೇ ತಿಂಗಳಲ್ಲಿ ಇಂಡೋನೇಷ್ಯಾದ ಪ್ರಮುಖ ಬ್ಯಾಂಕ್ ಒಂದನ್ನು ಹ್ಯಾಕ್ ಮಾಡಿ 2 ಟಿಬಿ ಡೇಟಾವನ್ನು ಕದ್ದಿತ್ತು. ಈಗ ಭಾರತದ ಬ್ಯಾಂಕ್ ಆಫ್ ಬರೋಡಾವನ್ನು ಗುರಿಯಾಗಿಸಿಕೊಂಡು, ಕದ್ದ ಡೇಟಾವನ್ನು ಯಾವುದೇ ಹಣದ ಬೇಡಿಕೆಯಿಲ್ಲದೆ ಡಾರ್ಕ್ ವೆಬ್&zwnj;ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಬ್ಯಾಂಕ್ ಮತ್ತು ಆರ್&zwnj;ಬಿಐ ಪ್ರತಿಕ್ರಿಯೆ ಏನು?&lt;/strong&gt;&lt;/h2&gt;&lt;p&gt;ಈ ಗಂಭೀರ ಆರೋಪಗಳ ಬಗ್ಗೆ ಬ್ಯಾಂಕ್ ಆಫ್ ಬರೋಡಾ ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಅತ್ತ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಥವಾ ಸೈಬರ್ ಭದ್ರತಾ ಏಜೆನ್ಸಿ CERT-In ಕೂಡ ಈ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ನೀಡಿಲ್ಲ. ನಿಮ್ಮ ಡೇಟಾ ಸೋರಿಕೆಯಾಗಿರುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಈ ಕೆಳಗಿನ ಕೆಲಸಗಳನ್ನು ಮಾಡುವುದು ಉತ್ತಮ. ತಕ್ಷಣವೇ ನಿಮ್ಮ ಬ್ಯಾಂಕಿಂಗ್ ಪಾಸ್&zwnj;ವರ್ಡ್&zwnj;ಗಳನ್ನು ಬದಲಾಯಿಸಿ. ನಿಮ್ಮ ಮೊಬೈಲ್&zwnj;ಗೆ ಬರುವ ಯಾವುದೇ ಅಪರಿಚಿತ ಓಟಿಪಿ (OTP) ಅಥವಾ ಲಿಂಕ್&zwnj;ಗಳನ್ನು ಕ್ಲಿಕ್ ಮಾಡಬೇಡಿ. ಬ್ಯಾಂಕ್ ಹೆಸರಿನಲ್ಲಿ ಬರುವ ಸಂಶಯಾಸ್ಪದ ಕರೆಗಳ ಬಗ್ಗೆ ಎಚ್ಚರವಿರಲಿ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bank-jobs/alleged-bank-of-baroda-data-leak-1tb-of-data-reportedly-exposed-online-gkn/articleshow-ylxzqnu"/>
        </item>
    </channel>
</rss>
