<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 26 Aug 2026 23:07:48 +0530</lastBuildDate>
        <atom:link href="https://kannada.asianetnews.com/rss/news-money" rel="self" type="application/rss+xml"/>
        <item>
            <title><![CDATA[ಮನೆಯ ಬಜೆಟ್ ಮಾತ್ರವಲ್ಲ, ಹೂಡಿಕೆಯಲ್ಲೂ ಮಹಿಳೆಯರೇ ಬಾಸ್! mutual funds ವಿಚಾರದಲ್ಲಿ ಹೊಸ ದಾಖಲೆ]]></title>
            <link>https://kannada.asianetnews.com/money/india-mutual-fund-revolution-women-lead-the-shift-to-long-term-equity-investing-gkn/articleshow-05t58pm</link>
            <guid isPermaLink="true">https://kannada.asianetnews.com/money/india-mutual-fund-revolution-women-lead-the-shift-to-long-term-equity-investing-gkn/articleshow-05t58pm</guid>
            <pubDate>Wed, 26 Aug 2026 07:07:04 +0530</pubDate>
            <description><![CDATA[&lt;p&gt;ಭಾರತೀಯ ಮ್ಯೂಚುಯಲ್ ಫಂಡ್ ಹೂಡಿಕೆದಾರರು ಈಗ ದೀರ್ಘಾವಧಿಯ ಹೂಡಿಕೆಗೆ ಒಲವು ತೋರುತ್ತಿದ್ದು, ಮಹಿಳೆಯರು ಷೇರು ಮಾರುಕಟ್ಟೆ ಆಧಾರಿತ ಫಂಡ್&zwnj;ಗಳಲ್ಲಿ ಹೆಚ್ಚಿನ ಹಣ ತೊಡಗಿಸುತ್ತಿದ್ದಾರೆ. ತೆರಿಗೆ ನಿಯಮಗಳ ಬದಲಾವಣೆಯಿಂದ ಜನರು ಡೆಬ್ಟ್ ಫಂಡ್&zwnj;ಗಳಿಂದ ದೂರ ಸರಿಯುತ್ತಿದ್ದರೂ, ಮಾರುಕಟ್ಟೆಯ ಏರಿಳಿತ ಎದುರಿಸಲು ಸಮತೋಲಿತ ಹೂಡಿಕೆ ಅಗತ್ಯವೆಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0wmbwwh48zavn5m0ffdr3cs,imgname-mutual-funds-1787667280784.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆದಾರರ ಧೋರಣೆ ಕಳೆದ ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಹಿಂದೆಲ್ಲಾ ಅಲ್ಪಾವಧಿಗೆ ಹೂಡಿಕೆ ಮಾಡಿ ಲಾಭ ಗಳಿಸಿ ಹೊರಬರುತ್ತಿದ್ದ ಹೂಡಿಕೆದಾರರು, ಈಗ ದೀರ್ಘಕಾಲದವರೆಗೆ ಹೂಡಿಕೆ ಮಾಡಲು ಇಷ್ಟಪಡುತ್ತಿದ್ದಾರೆ. ಇದರ ಜೊತೆಗೆ ಮಹಿಳೆಯರು ಮತ್ತು ಹಳ್ಳಿಗಾಡಿನ ಹೂಡಿಕೆದಾರರು ಕೂಡ ಈಕ್ವಿಟಿ (ಷೇರು ಮಾರುಕಟ್ಟೆ ಸಂಬಂಧಿತ ಫಂಡ್&zwnj;ಗಳು) ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು 'AMFI-Crisil' ವರದಿ ತಿಳಿಸಿದೆ.&lt;/p&gt;&lt;h2&gt;&lt;strong&gt;ಈ ಬದಲಾವಣೆಯ ಪ್ರಮುಖ ಅಂಶಗಳು ಇಲ್ಲಿವೆ&lt;/strong&gt;&lt;/h2&gt;&lt;h3&gt;&lt;strong&gt;1. ಹೂಡಿಕೆದಾರರಲ್ಲಿ ಹೆಚ್ಚಿದ ತಾಳ್ಮೆ&lt;/strong&gt;&lt;/h3&gt;&lt;p&gt;ಹಿಂದೆ ಹೂಡಿಕೆ ಮಾಡಿದ ಒಂದು ವರ್ಷದೊಳಗೆ ಹಣ ಹಿಂಪಡೆಯುವವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಹೂಡಿಕೆದಾರರು ಕನಿಷ್ಠ 5 ವರ್ಷಗಳ ಕಾಲ ಹಣವನ್ನು ಹೂಡಿಕೆಯಲ್ಲೇ ಇರಿಸುತ್ತಿದ್ದಾರೆ. ಅದರಲ್ಲೂ ಎಸ್&zwnj;ಐಪಿ (SIP) ಮೂಲಕ ಹೂಡಿಕೆ ಮಾಡುವವರಲ್ಲಿ ಈ ಬದಲಾವಣೆ ಎದ್ದು ಕಾಣುತ್ತಿದೆ. 2021ರಲ್ಲಿ ಕೇವಲ 7.7% ರಷ್ಟಿದ್ದ ದೀರ್ಘಾವಧಿ ಹೂಡಿಕೆದಾರರ ಪ್ರಮಾಣ 2026ರ ವೇಳೆಗೆ 19.2% ಕ್ಕೆ ಏರಿಕೆಯಾಗಿದೆ.&lt;/p&gt;&lt;h2&gt;&lt;strong&gt;2. ಮಹಿಳಾ ಹೂಡಿಕೆದಾರರ ಹೊಸ ಟ್ರೆಂಡ್&lt;/strong&gt;&lt;/h2&gt;&lt;p&gt;ಮಹಿಳೆಯರು ಈಗ ಕೇವಲ ಸೇವಿಂಗ್ಸ್ ಅಕೌಂಟ್ ಅಥವಾ ಚಿನ್ನದ ಮೇಲೆ ಅವಲಂಬಿತವಾಗಿಲ್ಲ. ಮ್ಯೂಚುಯಲ್ ಫಂಡ್&zwnj;ನಲ್ಲಿ ಮಹಿಳೆಯರ ಹೂಡಿಕೆ 5.84 ಲಕ್ಷ ಕೋಟಿ ರೂ.ನಿಂದ 15.88 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಆಶ್ಚರ್ಯದ ಸಂಗತಿಯೆಂದರೆ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿಯರು ತಮ್ಮ ಹೂಡಿಕೆಯ ಶೇ. 88ರಷ್ಟು ಭಾಗವನ್ನು ರಿಸ್ಕ್ ಇರುವ ಆದರೆ ಹೆಚ್ಚಿನ ಲಾಭ ನೀಡುವ ಈಕ್ವಿಟಿ ಫಂಡ್&zwnj;ಗಳಲ್ಲೇ ತೊಡಗಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;3. ಸಲಹೆಗಾರರಿದ್ದವರಿಗೆ ಹೆಚ್ಚಿನ ಲಾಭ&lt;/strong&gt;&lt;/h2&gt;&lt;p&gt;ನೀವೇ ನೇರವಾಗಿ ಹೂಡಿಕೆ ಮಾಡುವ (Direct Plan) ಹೂಡಿಕೆದಾರರಿಗಿಂತ, ಒಬ್ಬ ಪರಿಣಿತ ಸಲಹೆಗಾರರ ಮೂಲಕ ಹೂಡಿಕೆ ಮಾಡುವವರು (Regular Plan) ಹೆಚ್ಚು ಕಾಲ ಹೂಡಿಕೆಯಲ್ಲಿ ಮುಂದುವರಿಯುತ್ತಿದ್ದಾರೆ. ಮಾರುಕಟ್ಟೆ ಕುಸಿದಾಗ ಜನರು ಭಯಬಿದ್ದು ಹಣ ಹಿಂಪಡೆಯದಂತೆ ಸಲಹೆಗಾರರು ಧೈರ್ಯ ತುಂಬುವುದು ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು.&lt;/p&gt;&lt;h2&gt;&lt;strong&gt;4. ಡೆಬ್ಟ್ (ಸಾಲದ ನಿಧಿ) ಕಡೆಗೆ ಒಲವು ಕಡಿಮೆ&lt;/strong&gt;&lt;/h2&gt;&lt;p&gt;ಈ ಹಿಂದೆ ಜನರು ಸುರಕ್ಷಿತ ಹೂಡಿಕೆ ಎಂದು 'ಡೆಬ್ಟ್ ಫಂಡ್'ಗಳಲ್ಲಿ ಹಣ ಹಾಕುತ್ತಿದ್ದರು. ಆದರೆ ಇತ್ತೀಚಿನ ತೆರಿಗೆ ನಿಯಮಗಳ ಬದಲಾವಣೆ ಮತ್ತು ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ಲಾಭದಿಂದಾಗಿ ಜನರು ಈಗ ಡೆಬ್ಟ್ ಫಂಡ್&zwnj;ಗಳಿಂದ ಈಕ್ವಿಟಿ ಫಂಡ್&zwnj;ಗಳ ಕಡೆಗೆ ಮುಖ ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹೂಡಿಕೆದಾರರಿಗೆ ತಜ್ಞರ ಕಿವಿಮಾತು&lt;/strong&gt;&lt;/h2&gt;&lt;ul&gt; &lt;li&gt;ಷೇರು ಮಾರುಕಟ್ಟೆಯಲ್ಲಿ ಲಾಭ ಇದೆ ಎಂದು ಎಲ್ಲವನ್ನೂ ಅಲ್ಲೇ ಹೂಡಿಕೆ ಮಾಡಬೇಡಿ&lt;/li&gt; &lt;li&gt;ನಿಮ್ಮ ಹೂಡಿಕೆಯ ಅವಧಿ 3 ರಿಂದ 5 ವರ್ಷಕ್ಕಿಂತ ಕಡಿಮೆ ಇದ್ದರೆ ರಿಸ್ಕ್ ಬೇಡ&lt;/li&gt; &lt;li&gt;ತುರ್ತು ಪರಿಸ್ಥಿತಿಗೆ ಬೇಕಾಗುವ ಹಣವನ್ನು ಯಾವಾಗಲೂ ಸುರಕ್ಷಿತವಾದ ಡೆಬ್ಟ್ ಫಂಡ್&zwnj;ಗಳಲ್ಲಿ ಅಥವಾ ಬ್ಯಾಂಕ್&zwnj;ನಲ್ಲಿ ಇಡಿ&lt;/li&gt; &lt;li&gt;ಮಾರುಕಟ್ಟೆ ಯಾವಾಗಲೂ ನಿಮ್ಮ ಲೆಕ್ಕಾಚಾರದಂತೆ ನಡೆಯುವುದಿಲ್ಲ, ಅದು ಕುಸಿದಾಗಲೂ ಹಣದ ಅವಶ್ಯಕತೆ ಬಂದರೆ ನಿಮಗೆ ತೊಂದರೆಯಾಗಬಹುದು.&lt;/li&gt;&lt;/ul&gt;&lt;p&gt;ಒಟ್ಟಾರೆಯಾಗಿ ಹೇಳುವುದಾದರೆ ಭಾರತೀಯ ಹೂಡಿಕೆದಾರರು ಈಗ ಹೆಚ್ಚು ಪ್ರೌಢಿಮೆ ಮೆರೆಯುತ್ತಿದ್ದಾರೆ. ದೀರ್ಘಕಾಲದ ಹೂಡಿಕೆ ಮಾಡುವುದು ಒಳ್ಳೆಯದು, ಆದರೆ ನಿಮ್ಮ ಹೂಡಿಕೆಯು ನಿಮ್ಮ ಗುರಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ತಕ್ಕಂತೆ ಇರಲಿ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/india-mutual-fund-revolution-women-lead-the-shift-to-long-term-equity-investing-gkn/articleshow-05t58pm"/>
        </item>
        <item>
            <title><![CDATA[ನೀವು ಮಾಡೋ ತಪ್ಪು ಇದೇ! ಮಳೆಯಲ್ಲಿ ಒದ್ದೆಯಾದ ನೋಟುಗಳನ್ನ ಮತ್ತೆ ಗರಿಗರಿ ಮಾಡೋದು ಹೇಗೆ?]]></title>
            <link>https://kannada.asianetnews.com/viral/simple-tips-to-dry-and-restore-wet-currency-notes-during-rainy-season-gkn/articleshow-2gsv93k</link>
            <guid isPermaLink="true">https://kannada.asianetnews.com/viral/simple-tips-to-dry-and-restore-wet-currency-notes-during-rainy-season-gkn/articleshow-2gsv93k</guid>
            <pubDate>Tue, 11 Aug 2026 06:09:58 +0530</pubDate>
            <description><![CDATA[&lt;p&gt;ಮಳೆಗಾಲದಲ್ಲಿ ಎಷ್ಟೇ ಜಾಗರೂಕರಾಗಿದ್ದರೂ ಸಹ ಜೇಬಿನಲ್ಲಿದ್ದ ಅಥವಾ ಬ್ಯಾಗ್&zwnj;ನಲ್ಲಿರುವ ಹಣ ನೆನೆದು ಹೋಗುವುದು ಸಹಜ. ಇಂಥ ಸಮಯದಲ್ಲಿ ನೋಟುಗಳು ಹಾಳಾಗುತ್ತವೆ ಎಂದು ಅನೇಕರು ಗಾಬರಿಯಾಗುತ್ತಾರೆ. ಕೆಲವು ಸುಲಭ ಮನೆಮದ್ದುಗಳನ್ನು ಬಳಸುವ ಮೂಲಕ ತೇವವಾದ ನೋಟುಗಳನ್ನು ಸುರಕ್ಷಿತವಾಗಿ ಒಣಗಿಸಬುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzp0ngj4rrdswyzbwcycd1rc,imgname-indian-currency-1786371555908.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಳೆಗಾಲದಲ್ಲಿ ಎಷ್ಟೇ ಜಾಗರೂಕರಾಗಿದ್ದರೂ ಸಹ ಜೇಬಿನಲ್ಲಿದ್ದ ಅಥವಾ ಬ್ಯಾಗ್&zwnj;ನಲ್ಲಿರುವ ಹಣ ನೆನೆದು ಹೋಗುವುದು ಸಹಜ. ಇಂಥ ಸಮಯದಲ್ಲಿ ನೋಟುಗಳು ಹಾಳಾಗುತ್ತವೆ ಎಂದು ಅನೇಕರು ಗಾಬರಿಯಾಗುತ್ತಾರೆ. ಕೆಲವು ಸುಲಭ ಮನೆಮದ್ದುಗಳನ್ನು ಬಳಸುವ ಮೂಲಕ ತೇವವಾದ ನೋಟುಗಳನ್ನು ಸುರಕ್ಷಿತವಾಗಿ ಒಣಗಿಸುವುದು ಮಾತ್ರವಲ್ಲದೆ, ಅವುಗಳನ್ನು ಮತ್ತೆ ಹೊಸ ನೋಟುಗಳಂತೆ ಕರಕರ ಎನ್ನುವಂತೆ ಮಾಡಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ..&lt;/p&gt;&lt;h2&gt;&lt;strong&gt;ಸೀಲಿಂಗ್ ಫ್ಯಾನ್ ಅಡಿಯಲ್ಲಿ ಒಣಗಿಸಿ&lt;/strong&gt;&lt;/h2&gt;&lt;p&gt;ನೋಟುಗಳು ತೇವವಾದ ತಕ್ಷಣ ಅವುಗಳನ್ನು ಮಡಚಲು ಅಥವಾ ಬಿಡಿಸಲು ಪ್ರಯತ್ನಿಸದೆ, ಗಾಳಿ ಚೆನ್ನಾಗಿ ಆಡುವ ಜಾಗದಲ್ಲಿ ಇಡಿ. ಮನೆಯ ಸೀಲಿಂಗ್ ಫ್ಯಾನ್ ವೇಗವಾಗಿ ಹಾಕಿ, ನೋಟುಗಳನ್ನು ಒಂದೊಂದಾಗಿ ಬೇರ್ಪಡಿಸಿ ಕೆಳಗೆ ಹರಡಿ. ಫ್ಯಾನ್ ಗಾಳಿಗೆ ನೋಟಿನಲ್ಲಿರುವ ತೇವಾಂಶ ಬೇಗನೆ ಆರಿಹೋಗುತ್ತದೆ.&lt;/p&gt;&lt;h2&gt;&lt;strong&gt;ಬಲವಂತವಾಗಿ ಬೇರ್ಪಡಿಸಬೇಡಿ&lt;/strong&gt;&lt;/h2&gt;&lt;p&gt;ನೋಟುಗಳು ಅತಿಯಾಗಿ ನೆನೆದಾಗ ಅವು ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಳ್ಳುತ್ತವೆ. ಅಂತಹ ಸಮಯದಲ್ಲಿ ಅವುಗಳನ್ನು ಬಲವಂತವಾಗಿ ಎಳೆದು ಬೇರ್ಪಡಿಸಲು ಹೋದರೆ ನೋಟು ಹರಿದುಹೋಗುವ ಅಪಾಯವಿರುತ್ತದೆ. ಹಾಗಾಗಿ ಅವುಗಳನ್ನು ಹಾಗೆಯೇ ಫ್ಯಾನ್ ಗಾಳಿಗೆ ಬಿಡಿ. ತೇವಾಂಶ ಕಡಿಮೆಯಾದಂತೆ ಅವು ತಾವಾಗಿಯೇ ಸುಲಭವಾಗಿ ಬೇರ್ಪಡುತ್ತವೆ.&lt;/p&gt;&lt;h2&gt;&lt;strong&gt;ದೋಸೆ ಹಂಚಿನ (Tava) ಬಳಕೆ&lt;/strong&gt;&lt;/h2&gt;&lt;p&gt;ನೋಟುಗಳನ್ನು ಬೇಗನೆ ಒಣಗಿಸಲು ಮನೆಯಲ್ಲಿರುವ ದೋಸೆ ಹಂಚು ಅಥವಾ ಪೆನಂ ಬಳಸಬಹುದು. ಸ್ಟೌವ್ ಹಚ್ಚಿ ಹಂಚನ್ನು ಸ್ವಲ್ಪ ಬಿಸಿ ಮಾಡಿ. ಹಂಚು ಸಾಧಾರಣ ಬಿಸಿಯಾದ ನಂತರ ಸ್ಟೌವ್ ಆಫ್ ಮಾಡಿ. ನಂತರ ಆ ಬಿಸಿಯಾದ ಹಂಚಿನ ಮೇಲೆ ತೇವವಾದ ನೋಟನ್ನು ಇಡಿ. ಒಂದು ಬದಿ ಒಣಗಿದ ನಂತರ ಮತ್ತೊಂದು ಬದಿಗೆ ತಿರುಗಿಸಿ. ನೆನಪಿಡಿ, ಹಂಚು ಅತಿಯಾಗಿ ಬಿಸಿಯಾಗಿರಬಾರದು, ಇಲ್ಲದಿದ್ದರೆ ನೋಟು ಸುಟ್ಟು ಹೋಗಬಹುದು.&lt;/p&gt;&lt;h2&gt;&lt;strong&gt;ಇಸ್ತ್ರಿ ಪೆಟ್ಟಿಗೆಯಿಂದ ಹೊಸದರಂತೆ ಮಾಡಿ&lt;/strong&gt;&lt;/h2&gt;&lt;p&gt;ನೋಟುಗಳು ನೆನೆದು ಸುಕ್ಕಾಗಿದ್ದರೆ ಅಥವಾ ಮುರುಟಿಕೊಂಡಿದ್ದರೆ ಅದನ್ನು ಸರಿಪಡಿಸಲು ಇಸ್ತ್ರಿ ಪೆಟ್ಟಿಗೆ (Iron Box) ಅತ್ಯುತ್ತಮ. ಮೊದಲು ಒಂದು ಕಾಟನ್ ಬಟ್ಟೆಯನ್ನು ಹರಡಿ, ಅದರ ಮೇಲೆ ತೇವವಾದ ನೋಟುಗಳನ್ನು ಇಡಿ. ಇಸ್ತ್ರಿ ಪೆಟ್ಟಿಗೆಯನ್ನು 'ಕಡಿಮೆ ತಾಪಮಾನ'ದಲ್ಲಿ (Low Heat) ಇಟ್ಟು ನೋಟುಗಳ ಮೇಲೆ ಲಘುವಾಗಿ ಒತ್ತಿರಿ. ಹೀಗೆ ಮಾಡುವುದರಿಂದ ನೋಟುಗಳು ಬೇಗ ಒಣಗುವುದು ಮಾತ್ರವಲ್ಲದೆ, ಬ್ಯಾಂಕಿನಿಂದ ತಂದ ಹೊಸ ನೋಟುಗಳಂತೆ ಕರಕರ ಎನ್ನುತ್ತವೆ. ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಮಳೆಯಲ್ಲಿ ನೆನೆದ ಹಣವನ್ನು ಯಾವುದೇ ಹಾನಿಯಿಲ್ಲದೆ ಮತ್ತೆ ಮೊದಲಿನ ಸ್ಥಿತಿಗೆ ತರಬಹುದು.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/simple-tips-to-dry-and-restore-wet-currency-notes-during-rainy-season-gkn/articleshow-2gsv93k"/>
        </item>
        <item>
            <title><![CDATA[ಉಬರ್‌ಗೆ 9,226 ಕೋಟಿ ರೂಪಾಯಿ ದಂಡ; ಕಾರಣವೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್]]></title>
            <link>https://kannada.asianetnews.com/business/european-regulatory-uber-fined-rs-9226-crore-what-is-the-reason-sns/articleshow-30t1qga</link>
            <guid isPermaLink="true">https://kannada.asianetnews.com/business/european-regulatory-uber-fined-rs-9226-crore-what-is-the-reason-sns/articleshow-30t1qga</guid>
            <pubDate>Mon, 24 Aug 2026 17:51:36 +0530</pubDate>
            <description><![CDATA[ಯುರೋಪ್&zwnj;ನಲ್ಲಿ ಕ್ಯಾಬ್ ಕಂಪನಿ ಉಬರ್&zwnj;ಗೆ 9,226 ಕೋಟಿ ರೂ. ದಂಡ ವಿಧಿಸಲಾಗಿದೆ. ಚಾಲಕರ ಖಾತೆಗಳನ್ನು ಯಾವುದೇ ಮಾನವ ಪರಿಶೀಲನೆ ಇಲ್ಲದೆ ಸ್ವಯಂಚಾಲಿತವಾಗಿ ಅಮಾನತುಗೊಳಿಸಿದ್ದಕ್ಕಾಗಿ ನೆದರ್&zwnj;ಲ್ಯಾಂಡ್ಸ್ ಡೇಟಾ ಪ್ರೊಟೆಕ್ಷನ್ ವಾಚ್&zwnj;ಡಾಗ್ ಈ ಕ್ರಮ ಕೈಗೊಂಡಿದೆ. ಇದು ಚಾಲಕರ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky7b8bbyneq1j4njzyrq0phq,imgname-gemini-generated-image-ixcqvrixcqvrixcq-1784805600638.png" type="image/jpeg" height="390" width="690"/>
            <content:encoded><![CDATA[&lt;p&gt;ಕ್ಯಾಬ್ ಬುಕ್ಕಿಂಗ್ ಕಂಪನಿ ಉಬರ್&zwnj;ಗೆ ಯುರೋಪ್&zwnj;ನಲ್ಲಿ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ನೆದರ್&zwnj;ಲ್ಯಾಂಡ್ಸ್ ಡೇಟಾ ಪ್ರೊಟೆಕ್ಷನ್ ವಾಚ್&zwnj;ಡಾಗ್, ಉಬರ್ ಕಂಪನಿಯ ಮೇಲೆ 825 ಮಿಲಿಯನ್ ಯುರೋಗಳು ಅಂದರೆ ಭಾರತದಲ್ಲಿ ರೂಪಾಯಿಯಲ್ಲಿ 9,226 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.&lt;/p&gt;&lt;h2&gt;ಯುರೋಪ್&zwnj;ನಲ್ಲಿ ಉಬರ್&zwnj;ಗೆ ಆಘಾತ&lt;/h2&gt;&lt;p&gt;ಯಾವುದೇ ಮುನ್ಸೂಚನೆ ನೀಡದೆ, ಯಾವುದೇ ಪರಿಶೀಲನೆ ನಡೆಸದೆ ಏಕಾಏಕಿ ಚಾಲಕರ ಖಾತೆಗಳನ್ನು ಅಮಾನತು ಮಾಡುವುದು ಹಾಗೂ ಸ್ವಯಂ ಚಾಲಿತ ವ್ಯವಸ್ಥೆಯ ಮೂಲಕ ಖಾತೆಗಳನ್ನು ಅಮಾನತುಗೊಳಿಸುವ ಕಾರಣದಿಂದ ಭಾರೀ ದಂಡ ವಿಧಿಸಲಾಗಿದೆ.&lt;/p&gt;&lt;p&gt;ಉಬರ್ ಕ್ರಮವನ್ನು ಚಾಲಕರ ಹಕ್ಕುಗಳ ಗಂಭೀರ ಉಲ್ಲಂಘಟನೆ ಎಂದು ಕರೆಯಲಾಗಿದ್ದು, ಯಾವುದೇ ಮಾನವ ಪರಿಶೀಲನೆ ನಡೆಸದೆ ಕಂಪ್ಯೂಟರ್ ವ್ಯವಸ್ಥೆ ಮೂಲಕ ನಿಷ್ಕ್ರೀಯ ಗೊಳಿಸಲಾಗಿದೆ. ಡಬ್ ಡೇಟಾ ಪ್ರೊಟೆಕ್ಷನ್ ಅಥಾರಿಟಿಯ ಅನ್ವಯ, ಹಲವು ಸಂದರ್ಭದಲ್ಲಿ ಉಬರ್ ಸಂಸ್ಥೆ ಚಾಲಕರ ಖಾತೆಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ಕ್ಲೋಸ್ ಮಾಡಿರುವುದು ಗಂಭೀರ ಉಲ್ಲಂಘಟನೆ ಎಂದು ಹೇಳಿದೆ.&lt;/p&gt;&lt;h2&gt;ನಿಗೂಢ ಖಾತೆ ಅಮಾನತಿನ ಸತ್ಯ&lt;/h2&gt;&lt;p&gt;ಚಾಲಕರ ಜೀವನ ತೀವ್ರವಾಗಿ ಪರಿಣಾಮ ಬೀರುವ ಸಂದರ್ಭದಲ್ಲಿ, ಕೇವಲ ಕಂಪ್ಯೂಟರ್ ಅಲ್ಗಾರಿದಮ್ ಗಳನ್ನು ಮಾತ್ರ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಿಂದ ಹಲವರಿಗೆ ಅನ್ಯಾಯವಾಗಿದೆ. ಚಾಲಕರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕಿದೆ ಎಂದು ಹೇಳಿದೆ.&lt;/p&gt;&lt;p&gt;2018 ಮತ್ತು 2022ರ ನಡುವೆ ಯುರೋಪ್&zwnj;ನಲ್ಲಿ ನಡೆದ ಘಟನೆಗಳನ್ನು ಒಳಗೊಂಡಿದ್ದು, ಫ್ರಾನ್ಸ್ ನಲ್ಲಿ ನೀಡಿದ ಒಂದು ದೂರಿನಿಂದ ಆರಂಭವಾದ ತನಿಖೆಯನ್ನು ಡಚ್ ಡೇಟಾ ಸಂರಕ್ಷಣ ನಿಯಂತ್ರಕ ಕೈಗೊಂಡಿತ್ತು. ಉಬರ್&zwnj;ನ ಯುರೋಪಿಯನ್&zwnj; ಪ್ರಧಾನ ನೆದರ್&zwnj;ಲ್ಯಾಂಡ್ಸ್&zwnj;ನಲ್ಲಿದ್ದು, ಚಾಲಕರ ಚಟುವಟಿಕೆಗಳನ್ನು ಗುರುತಿಸಲು ಉಬರ್ ತಂದಿದ್ದ ವ್ಯವಸ್ಥೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.&lt;/p&gt;&lt;p&gt;ಕೇವಲ ಗ್ರಾಹಕರ ಕಡಿಮೆ ರೇಟಿಂಗ್ ಆಧಾರದ ಮೇಲೆ ಕೆಲವು ಚಾಲಕರ ಖಾತೆಗಳನ್ನು ಸ್ವಯಃಚಾಲಿತವಾಗಿ ನಿಷ್ಕ್ರಿಯಗೊಳಿಸುವ ವ್ಯವಸ್ಥೆ ಹೊಂದಿತ್ತು. ಆದರೆ ಉಬರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದಂಡ ವಿಧಿಸಿದ ಕ್ರಮ ಅಸಮಾನ ಮತ್ತು ತೀವ್ರ ಕ್ರಮ ಎಂದು ಹೇಳಿದೆ. ಚಾಲಕರ ಹಕ್ಕುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಚಾಲಕರಿಗೆ ಅಮಾನತು ಪ್ರಶ್ನಿಸುವ ಆಯ್ಕೆಯನ್ನು ನೀಡುವ ಆಯ್ಕೆ ಹೊಂದಿದ್ದಾರೆ ಎಂದು ಹೇಳಿದೆ.&lt;/p&gt;&lt;p&gt;ಯುರೋಪ್&zwnj;ನಲ್ಲಿ ಉಬರ್ ಮಾತ್ರವಲ್ಲದೇ, ಈ ಹಿಂದೆ ಗ್ರಾಹಕರ ಡೇಟಾ ಗೌಪ್ಯತೆ ಮತ್ತು ಡಿಜಿಟಲ್ ನಿಯಮಗಳ ಉಲ್ಲಂಘಟನೆ ಅಡಿ ಮೆಟಾ, ಗೂಗಲ್, ಆಪಲ್ ಮತ್ತು ಅಮೆಜಾನ್ ನಂತರ ಕಂಪನಿಗಳಿಗೆ ಭಾರೀ ದಂಡಗಳನ್ನು ವಿಧಿಸಲಾಗಿದೆ. ಸದ್ಯ ಈ ಸಾಲಿಗೆ ಉಬರ್ ಕೂಡ ಸೇರ್ಪಡೆಯಾಗಿದೆ. ಎಐ ತಂತ್ರಜ್ಞಾನ ತೆಗೆದುಕೊಳ್ಳುವ ಕ್ರಮದಿಂದ ಉದ್ಯೋಗಿ ಅಥವಾ ಗ್ರಾಹಕನ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದರೆ, ಅದರ ಮೇಲ್ವಿಚಾರಣೆಯನ್ನು ಕೇವಲ ಯಾಂತ್ರೀಕೃತ ವ್ಯವಸ್ಥೆಯಿಂದ ಮಾಡದೆ ಮನುಷ್ಯನ ನೇತೃತ್ವದಲ್ಲಿ ನಡೆಯಬೇಕು ಎಂದು ಯುರೋಪಿಯನ್ ರೆಗ್ಯುಲೆಟರಿ ಹೇಳುತ್ತದೆ.&lt;/p&gt;]]></content:encoded>
            <category>news-money</category>
            <dc:creator>Sumanth SN</dc:creator>
            <atom:link href="https://kannada.asianetnews.com/business/european-regulatory-uber-fined-rs-9226-crore-what-is-the-reason-sns/articleshow-30t1qga"/>
        </item>
        <item>
            <title><![CDATA[Success Story: ಓದು 5ನೇ ತರಗತಿಗೆ ನಿಂತಿತು, ಕನಸು ಮಾತ್ರ ನಿಲ್ಲಲಿಲ್ಲ! 4 ಚಿನ್ನದ ಬಳೆಗಳಿಂದ ₹11,000 ಕೋಟಿ ಬಿಸಿನೆಸ್ ಕಟ್ಟಿದ ಕಿರಣ್ ಕುಮಾರ್!]]></title>
            <link>https://kannada.asianetnews.com/viral/class-5-dropout-kiran-kumar-lalithaa-jewellery-rs-11000-crore-success-story-bmk/articleshow-4p68m0b</link>
            <guid isPermaLink="true">https://kannada.asianetnews.com/viral/class-5-dropout-kiran-kumar-lalithaa-jewellery-rs-11000-crore-success-story-bmk/articleshow-4p68m0b</guid>
            <pubDate>Mon, 17 Aug 2026 19:41:44 +0530</pubDate>
            <description><![CDATA[5ನೇ ತರಗತಿಗೆ ಶಿಕ್ಷಣ ನಿಲ್ಲಿಸಿದ ಕಿರಣ್ ಕುಮಾರ್, ತಾಯಿಯ ನಾಲ್ಕು ಚಿನ್ನದ ಬಳೆಗಳನ್ನು ಬಂಡವಾಳವಾಗಿಟ್ಟುಕೊಂಡು ಆಭರಣ ಉದ್ಯಮಕ್ಕೆ ಕಾಲಿಟ್ಟರು. ಇಂದು ಅವರು ಲಲಿತಾ ಜ್ಯುವೆಲ್ಲರಿ ಮಾರ್ಟ್ ಅನ್ನು ₹11,000 ಕೋಟಿ ಮೌಲ್ಯದ ಬೃಹತ್ ಸಾಮ್ರಾಜ್ಯವಾಗಿ ಬೆಳೆಸಿದ್ದು, ಕಂಪನಿಯು IPOಗೆ ಸಜ್ಜಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0810jphmhaa4m86wk6gnxdt,imgname-kiran-kumar--1786975898321.jpg" type="image/jpeg" height="390" width="690"/>
            <content:encoded><![CDATA[&lt;p&gt;ಓದು 5ನೇ ತರಗತಿಗೆ ನಿಂತರೂ, ಕನಸು ಮಾತ್ರ ನಿಲ್ಲಲಿಲ್ಲ. ತಾಯಿಯ ಬಳಿ ಇದ್ದ ಕೇವಲ ನಾಲ್ಕು ಚಿನ್ನದ ಬಳೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು, ಇಂದು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಭರಣ ಉದ್ಯಮ ಕಟ್ಟಿರುವ ಕಿರಣ್ ಕುಮಾರ್ ಅವರ ಯಶೋಗಾಥೆ ನಿಜಕ್ಕೂ ಅಚ್ಚರಿಯದ್ದು. ಲಲಿತಾ ಜ್ಯುವೆಲ್ಲರಿ ಮಾರ್ಟ್&zwnj; ಅನ್ನು ದೊಡ್ಡ ಉದ್ಯಮವಾಗಿ ಬೆಳೆಸಿದ ಅವರ ಜೀವನ ಪಯಣ ಇದೀಗ ಕಂಪನಿಯ IPO ಹಿನ್ನೆಲೆಯಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದೆ.&lt;/p&gt;&lt;h2&gt;&lt;strong&gt;ಆರ್ಥಿಕವಾಗಿ ಹಿಂದುಳಿದ ಕುಟುಂಬ!&lt;/strong&gt;&lt;/h2&gt;&lt;p&gt;ನೆಲ್ಲೂರಿನಲ್ಲಿ ಆರ್ಥಿಕವಾಗಿ ಹಿಂದುಳಿದ ದೊಡ್ಡ ಕುಟುಂಬದಲ್ಲಿ ಎಂಟನೇ ಮಗುವಾಗಿ ಕಿರಣ್ ಕುಮಾರ್ ಜನಿಸಿದರು. ಅವರ ತಂದೆ ಆಭರಣ ವ್ಯಾಪಾರಿಯೊಬ್ಬರ ಬಳಿ ಲೆಕ್ಕಪತ್ರಗಾರರಾಗಿ ಕೆಲಸ ಮಾಡುತ್ತಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದರಿಂದ ಕುಮಾರ್&zwnj; ಅವರ ಶಿಕ್ಷಣವೂ ಮುಂದುವರಿಯಲಿಲ್ಲ. ಅವರು 5ನೇ ತರಗತಿಯಲ್ಲೇ ಶಾಲೆ ತೊರೆದು, ಸುಮಾರು 12ನೇ ವಯಸ್ಸಿನಲ್ಲಿ ಆಭರಣ ವ್ಯಾಪಾರದಲ್ಲಿ ಕೆಲಸ ಮಾಡಲು ಆರಂಭಿಸಿದರು.&lt;/p&gt;&lt;h3&gt;&lt;strong&gt;ಬಾಲದಲ್ಲೇ ಕೈ ಹಿಡಿದ ಅದೃಷ್ಟ!&lt;/strong&gt;&lt;/h3&gt;&lt;p&gt;ಬಾಲ್ಯದಲ್ಲೇ ಆಭರಣ ಕ್ಷೇತ್ರದ ಬಗ್ಗೆ ಅನುಭವ ಪಡೆದ ಕುಮಾರ್&zwnj;ಗೆ ಒಂದು ಅವಕಾಶ ಕಾಣಿಸಿತು. ನೆಲ್ಲೂರಿನಲ್ಲಿ ತಯಾರಾಗುತ್ತಿದ್ದ ಆಭರಣಗಳನ್ನು ಚೆನ್ನೈ ಮತ್ತು ಹೈದರಾಬಾದ್&zwnj;ನಂತಹ ದೊಡ್ಡ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿತ್ತು. ಹೀಗಾಗಿ ಮಧ್ಯವರ್ತಿಗಳ ಬದಲು ತಾವೇ ನೇರವಾಗಿ ದೊಡ್ಡ ಮಾರುಕಟ್ಟೆಗೆ ಆಭರಣಗಳನ್ನು ತೆಗೆದುಕೊಂಡು ಹೋಗಬೇಕೆಂದು ಅವರು ನಿರ್ಧರಿಸಿದರು. ಆದರೆ ಅದಕ್ಕೆ ಬೇಕಾದ ಹಣ ಅವರ ಬಳಿ ಇರಲಿಲ್ಲ.&lt;/p&gt;&lt;h3&gt;&lt;strong&gt;ಹೆಗಲಾಗಿ ನಿಂತದ್ದು ತಾಯಿ!&lt;/strong&gt;&lt;/h3&gt;&lt;p&gt;ಆ ಸಂದರ್ಭದಲ್ಲಿ ಅವರ ತಾಯಿ ನೆರವಿಗೆ ಬಂದರು. ತಮ್ಮ ಬಳಿ ಉಳಿಸಿಕೊಂಡಿದ್ದ ನಾಲ್ಕು ಚಿನ್ನದ ಬಳೆಗಳನ್ನು ಮಗನಿಗೆ ಆರಂಭಿಕ ಬಂಡವಾಳವಾಗಿ ನೀಡಿದರು. ಸುಮಾರು 48 ಗ್ರಾಂ ತೂಕದ ಆ ಚಿನ್ನವನ್ನು ಕುಮಾರ್ ಅಕ್ಕಸಾಲಿಗನ ಬಳಿ ತೆಗೆದುಕೊಂಡು ಹೋಗಿ ಆರು ಕಿವಿಯೋಲೆಗಳನ್ನು ತಯಾರಿಸಿದರು. ಬಳಿಕ ಅವುಗಳನ್ನು ಮಾರಾಟ ಮಾಡಲು ಚೆನ್ನೈಗೆ ಪ್ರಯಾಣ ಬೆಳೆಸಿದರು.&lt;/p&gt;&lt;h3&gt;&lt;strong&gt;ಹೆಚ್ಚಿದ ಬೇಡಿಕೆ!&lt;/strong&gt;&lt;/h3&gt;&lt;p&gt;ಚೆನ್ನೈಯ ಟಿ ನಗರದಲ್ಲಿರುವ ಲಲಿತಾ ಜ್ಯುವೆಲ್ಲರಿಯಲ್ಲಿ ಅವರಿಗೆ ಮೊದಲ ದೊಡ್ಡ ಅವಕಾಶ ಸಿಕ್ಕಿತು. ಅಂಗಡಿ ಮುಚ್ಚುವ ಸಮಯದಲ್ಲಿ ತಲುಪಿದ ಕುಮಾರ್, ಮಾಲೀಕ ಎಂ.ಎಸ್. ಕಂದಸ್ವಾಮಿ ಪಿಳ್ಳೈ ಅವರನ್ನು ಭೇಟಿಯಾಗಿ ತಮ್ಮ ಆಭರಣಗಳನ್ನು ತೋರಿಸಿದರು. ಗುಣಮಟ್ಟ ಪರಿಶೀಲಿಸಿದ ನಂತರ ಪಿಳ್ಳೈ ಅವರು ಆರಂಭದಲ್ಲಿ 100 ಗ್ರಾಂ ಆಭರಣಗಳ ಆರ್ಡರ್ ನೀಡಿದರು. ಬೇಡಿಕೆ ಹೆಚ್ಚಾದಂತೆ ಆರ್ಡರ್ 200 ಗ್ರಾಂಗೆ ಏರಿತು.&lt;/p&gt;&lt;h3&gt;&lt;strong&gt;ವಿವಧ ರಾಜ್ಯಗಳಲ್ಲಿ ವಿಸ್ತರಿಸಿದ ವ್ಯಾಪಾರ!&lt;/strong&gt;&lt;/h3&gt;&lt;p&gt;ಇದರಿಂದ ಕುಮಾರ್ ಅವರ ಸಗಟು ವ್ಯಾಪಾರ ವೇಗವಾಗಿ ಬೆಳೆಯತೊಡಗಿತು. ಅವರು ನೆಲ್ಲೂರು ಮತ್ತು ಚೆನ್ನೈ ನಡುವೆ ಆಗಾಗ್ಗೆ ಪ್ರಯಾಣಿಸಿ ಆಭರಣಗಳನ್ನು ಪೂರೈಸುತ್ತಿದ್ದರು. ನಂತರ ಅವರ ವ್ಯವಹಾರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮಾತ್ರವಲ್ಲದೆ ಕೆನಡಾ, ಲಂಡನ್, ಸಿಂಗಾಪುರ್ ಮತ್ತು ದುಬೈಯಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೂ ವಿಸ್ತರಿಸಿತು.&lt;/p&gt;&lt;h3&gt;&lt;strong&gt;ಲಲಿತಾ ಜ್ಯುವಲೇರಿ!&lt;/strong&gt;&lt;/h3&gt;&lt;p&gt;1999ರ ಫೆಬ್ರವರಿ 24 ಅವರ ಜೀವನದ ಮತ್ತೊಂದು ಪ್ರಮುಖ ತಿರುವಾಯಿತು. ಕಂದಸ್ವಾಮಿ ಪಿಳ್ಳೈ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಕುಮಾರ್ ಆ ವ್ಯವಹಾರವನ್ನು ಮುಚ್ಚಲು ಬಿಡದೆ ಅದನ್ನು ವಹಿಸಿಕೊಂಡರು ಮತ್ತು ಬಾಕಿ ಸಾಲಗಳನ್ನು ತೀರಿಸಲು ಮುಂದಾದರು. ಅವರು ಲಲಿತಾ ಜ್ಯುವೆಲ್ಲರಿಯ ಸ್ಥಾಪಕರಲ್ಲ; ಅಸ್ತಿತ್ವದಲ್ಲಿದ್ದ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡು ನಂತರ ಅದನ್ನು ತಮ್ಮದೇ ಬ್ರ್ಯಾಂಡ್ ಆಗಿ ಬೆಳೆಸಿದರು. ಸಗಟು ವ್ಯಾಪಾರದಿಂದ ಚಿಲ್ಲರೆ ವ್ಯಾಪಾರಕ್ಕೆ ಬದಲಾದ ನಂತರ, ಕುಮಾರ್ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಚಿನ್ನ ನೀಡುವುದನ್ನು ಪ್ರಮುಖ ತಂತ್ರವನ್ನಾಗಿ ಮಾಡಿಕೊಂಡರು.&lt;/p&gt;&lt;p&gt;ವಿವಿಧ ರಾಜ್ಯಗಳಿಗೆ ವಿಸ್ತರಣೆ!ಹೆಚ್ಚುವರಿ ಶುಲ್ಕಗಳನ್ನು ಕಡಿಮೆ ಮಾಡುವುದು, BIS ಹಾಲ್&zwnj;ಮಾರ್ಕ್ ಚಿನ್ನಕ್ಕೆ ಒತ್ತು ನೀಡುವುದು ಮತ್ತು ಕಡಿಮೆ ಲಾಭಾಂಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುವುದು ಅವರ ವ್ಯವಹಾರ ಮಾದರಿಯಾಯಿತು.zzzzzzಇಂದು ಲಲಿತಾ ಜ್ಯುವೆಲ್ಲರಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಪುದುಚೇರಿಯಲ್ಲಿ 51 ನಗರಗಳಲ್ಲಿ 61 ಮಳಿಗೆಗಳನ್ನು ಹೊಂದಿದೆ. ಕಂಪನಿಗೆ ತಮಿಳುನಾಡಿನಲ್ಲಿ ತನ್ನದೇ ಉತ್ಪಾದನಾ ಸೌಲಭ್ಯಗಳೂ ಇವೆ. ಕಂಪನಿಯ ಹಣಕಾಸು ಬೆಳವಣಿಗೆಯೂ ಗಮನಾರ್ಹವಾಗಿದೆ. FY26ರಲ್ಲಿ ಆದಾಯ ₹25,039.80 ಕೋಟಿಗೆ ಏರಿದ್ದು, ತೆರಿಗೆ ನಂತರದ ಲಾಭ ₹1,009.82 ಕೋಟಿಗೆ ತಲುಪಿದೆ. ಇದೇ ವೇಳೆ ಕಂಪನಿಯ ಆಸ್ತಿಗಳು ₹10,945.14 ಕೋಟಿಗೆ ಏರಿವೆ. ಈಗ ಲಲಿತಾ ಜ್ಯುವೆಲ್ಲರಿ ಮಾರ್ಟ್ IPOಗೆ ಸಜ್ಜಾಗಿದ್ದು, ಪ್ರತಿ ಷೇರಿಗೆ ₹190&ndash;₹201 ಬೆಲೆ ನಿಗದಿಪಡಿಸಲಾಗಿದೆ. ಮೇಲಿನ ಬೆಲೆ ಆಧರಿಸಿದರೆ ಕಂಪನಿಯ ಮೌಲ್ಯಮಾಪನ ಸುಮಾರು ₹11,250 ಕೋಟಿ ಆಗಲಿದೆ. ಒಮ್ಮೆ ತಾಯಿಯ ನಾಲ್ಕು ಚಿನ್ನದ ಬಳೆಗಳಿಂದ ಆರಂಭವಾದ ಪ್ರಯಾಣ ಇಂದು ಸಾವಿರಾರು ಕೋಟಿ ರೂಪಾಯಿಗಳ ಉದ್ಯಮವಾಗಿ ಬೆಳೆದಿದೆ. **5ನೇ ತರಗತಿಯಲ್ಲಿ ನಿಂತ ಶಿಕ್ಷಣದ ನಡುವೆಯೂ, ಕಿರಣ್ ಕುಮಾರ್ ಅವರ ಉದ್ಯಮದ ಪಯಣ ಮಾತ್ರ ಅಲ್ಲೇ ನಿಲ್ಲಲಿಲ್ಲ.**&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/class-5-dropout-kiran-kumar-lalithaa-jewellery-rs-11000-crore-success-story-bmk/articleshow-4p68m0b"/>
        </item>
        <item>
            <title><![CDATA[Politics: ಬಿಜೆಪಿ vs ಕಾಂಗ್ರೆಸ್; ಯಾರ ಬಳಿ ಇದೆ ಅತಿ ಹೆಚ್ಚು ಹಣ? ಇಲ್ಲಿದೆ ನೋಡಿ ಅಸಲಿ ಲೆಕ್ಕಾಚಾರ!]]></title>
            <link>https://kannada.asianetnews.com/gallery/market-money/bjp-vs-congress-party-funds-who-has-more-money-2026-bmk-88il9mq</link>
            <guid isPermaLink="true">https://kannada.asianetnews.com/gallery/market-money/bjp-vs-congress-party-funds-who-has-more-money-2026-bmk-88il9mq</guid>
            <pubDate>Tue, 28 Jul 2026 16:57:53 +0530</pubDate>
            <description><![CDATA[&lt;p&gt;ಭಾರತೀಯ ರಾಷ್ಟ್ರೀಯ ಕಾಂಗ್ರೆಸ್&zwnj;ಗಿಂತ ಬಿಜೆಪಿ ಗಮನಾರ್ಹವಾಗಿ ಹೆಚ್ಚಿನ ನಗದು ಮೀಸಲು, ವಾರ್ಷಿಕ ಆದಾಯ ಮತ್ತು ಒಟ್ಟು ಆಸ್ತಿಗಳನ್ನು ಹೊಂದಿದೆ ಎಂದು ಹಣಕಾಸು ದತ್ತಾಂಶಗಳು ಕಡ್ಡಿತುಂಡರಿಸಿದಂತೆ ಹೇಳುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಎಷ್ಟು ಹಣವನ್ನು ಹೊಂದಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ha10ep5rqyh0tqje1vawtbas,imgname-asianet-news---2023-09-11t074653.463.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರಾಷ್ಟ್ರೀಯ ಕಾಂಗ್ರೆಸ್&zwnj;ಗಿಂತ ಬಿಜೆಪಿ ಗಮನಾರ್ಹವಾಗಿ ಹೆಚ್ಚಿನ ನಗದು ಮೀಸಲು, ವಾರ್ಷಿಕ ಆದಾಯ ಮತ್ತು ಒಟ್ಟು ಆಸ್ತಿಗಳನ್ನು ಹೊಂದಿದೆ ಎಂದು ಹಣಕಾಸು ದತ್ತಾಂಶಗಳು ಕಡ್ಡಿತುಂಡರಿಸಿದಂತೆ ಹೇಳುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಎಷ್ಟು ಹಣವನ್ನು ಹೊಂದಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕಪರಿಶೋಧನಾ ವರದಿ ಮತ್ತು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್&zwnj;ನ ವಿಶ್ಲೇಷಣೆಯ ಪ್ರಕಾರ, ಭಾರತೀಯ ಜನತಾ ಪಕ್ಷ ಆರ್ಥಿಕವಾಗಿ ಬಲಿಷ್ಠ ರಾಜಕೀಯ ಪಕ್ಷವಾಗಿದೆ ಎನ್ನಲಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್&zwnj;ಗಿಂತ ಬಿಜೆಪಿ ಗಮನಾರ್ಹವಾಗಿ ಹೆಚ್ಚಿನ ನಗದು ಮೀಸಲು, ವಾರ್ಷಿಕ ಆದಾಯ ಮತ್ತು ಒಟ್ಟು ಆಸ್ತಿಗಳನ್ನು ಹೊಂದಿದೆ ಎಂದು ಹಣಕಾಸು ದತ್ತಾಂಶಗಳು ಕಡ್ಡಿತುಂಡರಿಸಿದಂತೆ ಹೇಳುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಎಷ್ಟು ಹಣವನ್ನು ಹೊಂದಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ವರದಿಗಳ ಪ್ರಕಾರ, ಬಿಜೆಪಿಯ ಘೋಷಿತ ಬ್ಯಾಂಕ್ ಬ್ಯಾಲೆನ್ಸ್ ₹10,107.2 ಕೋಟಿ. ಅದೇ ಸಮಯದಲ್ಲಿ, ಕಾಂಗ್ರೆಸ್ಸಿನ ಬ್ಯಾಂಕ್ ಬ್ಯಾಲೆನ್ಸ್ ₹133.97 ಕೋಟಿ. ಇದರರ್ಥ ಬಿಜೆಪಿಯ ನಗದು ಮೀಸಲು ಕಾಂಗ್ರೆಸ್&zwnj;ಗಿಂತ ಸರಿಸುಮಾರು 75 ಪಟ್ಟು ಹೆಚ್ಚಿದೆ. ಅಷ್ಟೇ ಅಲ್ಲ ಕತೆ ಇನ್ನು ಮುಂದಿದೆ ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಲೋಕಸಭಾ ಚುನಾವಣೆ ನಡೆದ ಹಣಕಾಸು ವರ್ಷದಲ್ಲಿ ಬಿಜೆಪಿ ಒಟ್ಟು ₹6,769.14 ಕೋಟಿ ಆದಾಯ ಗಳಿಸಿದೆ. ಇದು ದೇಶದ ಆರೂ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ 85.03% ರಷ್ಟಿದ್ದು, ಹಿಂದಿನ ವರ್ಷಕ್ಕಿಂತ ಬಿಜೆಪಿಯ ಆದಾಯ 56% ಹೆಚ್ಚಾಗಿದೆ. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷವು ₹918.28 ಕೋಟಿ (11.53%) ಆದಾಯ ಘೋಷಿಸಿದ್ದು, ಇದರ ಆದಾಯದಲ್ಲಿ 25% ಇಳಿಕೆ ಕಂಡಿದೆ. ಒಟ್ಟಾರೆಯಾಗಿ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಬಹುದೂರದ ಹಿನ್ನಡೆಯಲ್ಲಿದೆ.&lt;/p&gt;&lt;img&gt;&lt;p&gt;ಬಿಜೆಪಿಯ ಹಣಕಾಸು ಹೆಚ್ಚಾಗಿ ಕಂಪನಿಗಳು ಮತ್ತು ವ್ಯಕ್ತಿಗಳಿಂದ ಸ್ವಯಂಪ್ರೇರಿತ ದೇಣಿಗೆಗಳ ಮೇಲೆ ಅವಲಂಬಿತವಾಗಿದೆ. ವರದಿಗಳ ಪ್ರಕಾರ, ₹6,124.85 ಕೋಟಿ, ಅಥವಾ ಅದರ ಒಟ್ಟು ಆದಾಯದ 90.4%, ಸ್ವಯಂಪ್ರೇರಿತ ದೇಣಿಗೆಗಳಿಂದ ಬರುತ್ತದೆ. ಉಳಿದ ₹634 ಕೋಟಿ, ಅಥವಾ ಅದರ ಆದಾಯದ 9.3%, ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿಯ ಮೂಲಕ ಗಳಿಸಲ್ಪಡುತ್ತದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕಾಂಗ್ರೆಸ್ ಪಕ್ಷವು ಕಂಪನಿಗಳು ಮತ್ತು ವ್ಯಕ್ತಿಗಳಿಂದ ದೇಣಿಗೆಗಳನ್ನು ಪಡೆಯುತ್ತದೆ, ಆದರೆ ಇವು ಅದರ ಒಟ್ಟು ಆದಾಯದ ಒಂದು ಸಣ್ಣ ಭಾಗವನ್ನು ಪ್ರತಿನಿಧಿಸುತ್ತವೆ. ಪಕ್ಷವು ₹522.13 ಕೋಟಿ ಅಥವಾ ಅದರ ಆದಾಯದ 56.8% ಸ್ವಯಂಪ್ರೇರಿತ ಕೊಡುಗೆಗಳಿಂದ ಬಂದಿದೆ ಎಂದು ವರದಿ ಮಾಡಿದೆ. ಅದರ ಗಳಿಕೆಯ ಗಮನಾರ್ಹ ಭಾಗವಾದ ₹350.12 ಕೋಟಿ ಕೂಪನ್ ಮಾರಾಟ ಮತ್ತು ಸಾರ್ವಜನಿಕ ಸಂಗ್ರಹಗಳಿಂದ ಬಂದಿದೆ.&lt;/p&gt;&lt;img&gt;&lt;p&gt;ಎರಡೂ ಪಕ್ಷಗಳ ನಡುವಿನ ಗಮನಾರ್ಹ ವ್ಯತ್ಯಾಸವೆಂದರೆ ಆರ್ಥಿಕ ಮೀಸಲುಗಳಿಂದ ಬರುವ ಆದಾಯ. ದೊಡ್ಡ ಬ್ಯಾಂಕ್ ಬ್ಯಾಲೆನ್ಸ್&zwnj;ನಿಂದಾಗಿ, ಬಿಜೆಪಿ ವರ್ಷದಲ್ಲಿ ಬ್ಯಾಂಕ್ ಬಡ್ಡಿಯಿಂದಲೇ ₹634 ಕೋಟಿ ಗಳಿಸಿತು. ಈ ಬಡ್ಡಿ ಆದಾಯವು ಕಾಂಗ್ರೆಸ್ ಸ್ವಯಂಪ್ರೇರಿತ ದೇಣಿಗೆಗಳ ಮೂಲಕ ಪಡೆದ ₹522.13 ಕೋಟಿಗಿಂತ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಪಕ್ಷದ ಕಚೇರಿಗಳು ಮತ್ತು ಸಿಬ್ಬಂದಿ ವೇತನಗಳು ಸೇರಿದಂತೆ ಆಡಳಿತಾತ್ಮಕ ವೆಚ್ಚಗಳಿಗಾಗಿ ಬಿಜೆಪಿ ₹323.05 ಕೋಟಿ ಖರ್ಚು ಮಾಡಿದೆ. ಕಾಂಗ್ರೆಸ್ ಅದೇ ವರ್ಗದ ಅಡಿಯಲ್ಲಿ ₹159.68 ಕೋಟಿ ಖರ್ಚು ಮಾಡಿದೆ ಎಂದು ವರದಿ ಮಾಡಿದೆ. ಪಕ್ಷಗಳ ಘೋಷಿತ ಆಸ್ತಿಗಳಲ್ಲಿ ಕಚೇರಿ ಕಟ್ಟಡಗಳು, ಭೂಮಿ, ಸ್ಥಿರ ಠೇವಣಿಗಳು, ಹೂಡಿಕೆಗಳು ಮತ್ತು ಇತರ ಹಣಕಾಸು ಹಿಡುವಳಿಗಳು ಸೇರಿವೆ. ಬಿಜೆಪಿ ಒಟ್ಟು ಆಸ್ತಿ ₹12,171.17 ಕೋಟಿ ಮತ್ತು ಸಾಲ ₹15.43 ಲಕ್ಷ ಮಾತ್ರ ಎಂದು ಘೋಷಿಸಿಕೊಂಡಿದೆ. ಇದು ಅದರ ಆಸ್ತಿ ಮೂಲಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆ ಸಾಲವನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಕಾಂಗ್ರೆಸ್ ಸುಮಾರು ₹1,351 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದೆ. ಇದರಲ್ಲಿ ಪಕ್ಷದ ಆಸ್ತಿಗಳು, ಹೂಡಿಕೆ, ಇತರ ಹಣಕಾಸು ಆಸ್ತಿಗಳು ಸೇರಿವೆ. ನಗದು ಮೀಸಲು, ವಾರ್ಷಿಕ ಆದಾಯ, ಪ್ರಚಾರ ವೆಚ್ಚಗಳು ಮತ್ತು ಒಟ್ಟು ಆಸ್ತಿಗಳ ವಿಷಯದಲ್ಲಿ ಬಿಜೆಪಿ ಪ್ರಸ್ತುತ ಕಾಂಗ್ರೆಸ್&zwnj;ಗಿಂತ ಗಮನಾರ್ಹವಾಗಿ ದೊಡ್ಡ ಆರ್ಥಿಕ ನೆಲೆ ಹೊಂದಿದೆ ಎಂದು ಆಡಿಟ್ ವರದಿಗಳು ಹೇಳುತ್ತವೆ. ವರದಿಗಳು ವಿಭಿನ್ನ ಆದಾಯ ಉತ್ಪಾದನೆ ಮಾದರಿ ಸಹ ಸೂಚಿಸುತ್ತವೆ. ಬಿಜೆಪಿ ಪ್ರಾಥಮಿಕವಾಗಿ ಸ್ವಯಂಪ್ರೇರಿತ ದೇಣಿಗೆ ಮತ್ತು ಹೂಡಿಕೆ ಆದಾಯ ಅವಲಂಬಿಸಿದೆ, ಆದರೆ ಕಾಂಗ್ರೆಸ್ ದೇಣಿಗೆಗಳ ಮೇಲೆ ಹಾಗೂ ಸಾರ್ವಜನಿಕ ಸಂಗ್ರಹಣೆಗಳು ಮತ್ತು ಕೂಪನ್ ಮಾರಾಟಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/market-money/bjp-vs-congress-party-funds-who-has-more-money-2026-bmk-88il9mq"/>
        </item>
        <item>
            <title><![CDATA[Success Story: ಬದುಕು ಬದಲಿಸಿದ ಒಂದು ಮೆಸೇಜ್ ಒಂದು ಮೆಸೇಜ್ ಬದಲಿಸಿತು ಬದುಕು; 17ರ ಹುಡುಗ 22ಕ್ಕೆ ಗಳಿಸಿದ್ದು 1 ಕೋಟಿ ರೂ.!]]></title>
            <link>https://kannada.asianetnews.com/viral/aditya-bansal-late-night-dm-raj-shamani-earned-one-crore-by-22-success-story-bmk/articleshow-bdtvrcd</link>
            <guid isPermaLink="true">https://kannada.asianetnews.com/viral/aditya-bansal-late-night-dm-raj-shamani-earned-one-crore-by-22-success-story-bmk/articleshow-bdtvrcd</guid>
            <pubDate>Wed, 26 Aug 2026 19:05:32 +0530</pubDate>
            <description><![CDATA[17 ವರ್ಷದ ಜೆಇಇ ಆಕಾಂಕ್ಷಿ ಆದಿತ್ಯ ಬನ್ಸಾಲ್, ಉದ್ಯಮಿ ರಾಜ್ ಶಮಾನಿಗೆ ಕಳುಹಿಸಿದ ಒಂದು ತಡರಾತ್ರಿಯ ಮೆಸೇಜ್&zwnj;ನಿಂದ ತನ್ನ ವೃತ್ತಿಜೀವನವನ್ನೇ ಬದಲಾಯಿಸಿಕೊಂಡನು. ಯಾವುದೇ ಪದವಿ ಅಥವಾ ಅನುಭವವಿಲ್ಲದಿದ್ದರೂ, ಈ ಅವಕಾಶದಿಂದಾಗಿ 45ಕ್ಕೂ ಹೆಚ್ಚು ಸಂಸ್ಥಾಪಕರೊಂದಿಗೆ ಕೆಲಸ ಮಾಡಿ, 22ನೇ ವಯಸ್ಸಿಗೆ 1 ಕೋಟಿ ರೂಪಾಯಿ ಸಂಪಾದಿಸುವಲ್ಲಿ ಯಶಸ್ವಿಯಾದನು.]]></description>
            <media:content url="https://static.asianetnews.com/images/w-1280,h-720,format-jpg,imgid-01m0z4csvsk3jc0m49vkz3dnqy,imgname-success-story-1787751196537.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾವುದೇ ಪದವಿ, ಕೆಲಸದ ಅನುಭವ ಅಥವಾ ಬ್ಯಾಂಕ್ ಖಾತೆಯೂ ಇಲ್ಲದಿದ್ದ 17 ವರ್ಷದ ಯುವಕನೊಬ್ಬ, ರಾತ್ರಿ ವೇಳೆ ಖ್ಯಾತ ಉದ್ಯಮಿ ಹಾಗೂ ಪಾಡ್&zwnj;ಕ್ಯಾಸ್ಟರ್&zwnj;ಗೆ ಕಳುಹಿಸಿದ ಒಂದೇ ಒಂದು ಇನ್&zwnj;ಸ್ಟಾಗ್ರಾಮ್/ಟ್ವಿಟರ್ ಮೆಸೇಜ್ (DM) ಆತನ ಸಂಪೂರ್ಣ ವೃತ್ತಿಜೀವನದ ದಾರಿಯನ್ನೇ ಬದಲಾಯಿಸಿದೆ. ಹದಿಹರೆಯದಲ್ಲಿ ಸಿಕ್ಕ ಆ ಸಣ್ಣ ಅವಕಾಶದಿಂದ ಆರಂಭಗೊಂಡ ಪ್ರಯಾಣವು, 45ಕ್ಕೂ ಹೆಚ್ಚು ಸಂಸ್ಥಾಪಕರ (Founders) ಜೊತೆ ಕೆಲಸ ಮಾಡಲು ಕಾರಣವಾಗಿ, 22ನೇ ವಯಸ್ಸಿಗೆ 1 ಕೋಟಿ ರೂಪಾಯಿ ಗಳಿಸುವ ಸಾಧನೆಗೆ ಹಾದಿ ಮಾಡಿಕೊಟ್ಟಿದೆ.&lt;/p&gt;&lt;h2&gt;&lt;strong&gt;ಜೆಇಇ ಆಕಾಂಕ್ಷಿಯಾಗಿದ್ದ ಆದಿತ್ಯ ಬನ್ಸಾಲ್!&lt;/strong&gt;&lt;/h2&gt;&lt;p&gt;2021 ರಲ್ಲಿ ಆದಿತ್ಯ ಬನ್ಸಾಲ್ ಎಂಬ ಯುವಕ ಜೆಇಇ (JEE) ಎಂಜಿನಿಯರಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಕೋವಿಡ್ ಕಾರಣದಿಂದ ಪರೀಕ್ಷೆಗಳು ಅಕ್ಟೋಬರ್&zwnj;ಗೆ ಮುಂದೂಡಲ್ಪಟ್ಟವು. ಕೇವಲ ಓದಿ, ಎಂಜಿನಿಯರ್ ಆಗಿ ಯಾವುದೋ ಒಂದು ಕೆಲಸಕ್ಕೆ ಸೇರುವುದಷ್ಟೇ ತನ್ನ ನಿಜವಾದ ಗುರಿಯೇ ಎಂದು ಬನ್ಸಾಲ್ ತಮ್ಮನ್ನೇ ಪ್ರಶ್ನಿಸಿಕೊಳ್ಳಲು ಪ್ರಾರಂಭಿಸಿದರು. ಈ ವೇಳೆ ಆನ್&zwnj;ಲೈನ್ ಮೂಲಕ ಹಣ ಸಂಪಾದಿಸುವ ದಾರಿಗಳನ್ನು ಹುಡುಕಲು ಆರಂಭಿಸಿದರು. ಗ್ರಾಫಿಕ್ ಡಿಸೈನಿಂಗ್, ವೆಬ್&zwnj;ಸೈಟ್ ಡೆವಲಪ್&zwnj;ಮೆಂಟ್ ಸೇರಿದಂತೆ ಹಲವು ಕೆಲಸಗಳನ್ನು ಪ್ರಯತ್ನಿಸಿದರೂ ಎಲ್ಲದರಲ್ಲೂ ವಿಫಲರಾದರು. &quot;ನಾನು ಹಣ ಗಳಿಸಲು ಏನೆಲ್ಲಾ ಪ್ರಯತ್ನಿಸಿದರೂ ಎಲ್ಲವೂ ವ್ಯರ್ಥವಾಯ್ತು&quot; ಎಂದು ಬನ್ಸಾಲ್ ನಂತರ ನೆನಪಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ರಾಜ್ ಶಮಾನಿಗೆ ಮೆಸೇಜ್ ಕಳುಹಿಸಿದ ಆ ರಾತ್ರಿ!&lt;/strong&gt;&lt;/h2&gt;&lt;p&gt;ಒಂದು ರಾತ್ರಿ, ಖ್ಯಾತ ಉದ್ಯಮಿ ಹಾಗೂ ಪಾಡ್&zwnj;ಕ್ಯಾಸ್ಟರ್ ರಾಜ್ ಶಮಾನಿ ಅವರು ಆನ್&zwnj;ಲೈನ್&zwnj; ಹಣ ಸಂಪಾದನೆಯ ಮಾರ್ಗಗಳ ಕುರಿತು ಮಾತನಾಡುತ್ತಿದ್ದ ವೀಡಿಯೊವನ್ನು ಬನ್ಸಾಲ್ ವೀಕ್ಷಿಸಿದರು. ಅದನ್ನು ಸುಮ್ಮನೆ ನೋಡಿ ಮುಂದುವರಿಯುವ ಬದಲು, ಬನ್ಸಾಲ್ ಆ ವೀಡಿಯೊದಲ್ಲಿದ್ದ ಮುಖ್ಯ ವಿಷಯಗಳನ್ನು ಗೂಗಲ್ ಡಾಕ್&zwnj;ನಲ್ಲಿ ಗಂಟೆಗಟ್ಟಲೆ ಬರೆದು ಟ್ವಿಟರ್ ಥ್ರೆಡ್ (Twitter Thread) ರೂಪಕ್ಕೆ ತಂದರು. ರಾತ್ರಿ 10:41 ಕ್ಕೆ ಅದನ್ನು ನೇರವಾಗಿ ರಾಜ್ ಶಮಾನಿ ಅವರಿಗೆ ಮೆಸೇಜ್ (DM) ಮೂಲಕ ಕಳುಹಿಸಿದರು. ಪ್ರತ್ಯುತ್ತರ ಬರುತ್ತದೆ ಎಂಬ ಯಾವುದೇ ನಿರೀಕ್ಷೆ ಅವರಿಗಿರಲಿಲ್ಲ.&lt;/p&gt;&lt;h3&gt;&lt;strong&gt;ಬೆಳಿಗ್ಗೆ 3:53 ಕ್ಕೆ ಬಂದ ಅನಿರೀಕ್ಷಿತ ಉತ್ತರ!&lt;/strong&gt;&lt;/h3&gt;&lt;p&gt;ಅಚ್ಚರಿಯೆಂದರೆ, ಅದೇ ರಾತ್ರಿ ಬೆಳಗಿನ ಜಾವ 3:53 ಕ್ಕೆ ರಾಜ್ ಶಮಾನಿ ಅವರಿಂದ ಉತ್ತರ ಬಂದಿತ್ತು. &quot;ನಾನು ಇದನ್ನು ಅಪ್&zwnj;ಲೋಡ್ ಮಾಡುತ್ತೇನೆ. ಇದು ಚೆನ್ನಾಗಿ ಕೆಲಸ ಮಾಡಿದರೆ, ನನ್ನ ಟ್ವಿಟರ್ ಥ್ರೆಡ್ ಬರೆಯಲು ನಿನ್ನನ್ನೇ ನೇಮಿಸಿಕೊಳ್ಳುತ್ತೇನೆ, ಓಕೆನಾ?&quot; ಎಂದು ಶಮಾನಿ ಮೆಸೇಜ್ ಮಾಡಿದ್ದರು.&lt;/p&gt;&lt;h3&gt;&lt;strong&gt;ಬರುತ್ತಿರಲಿಲ್ಲ ಬರವಣಿಗೆ!&lt;/strong&gt;&lt;/h3&gt;&lt;p&gt;ಶಮಾನಿ ಪೋಸ್ಟ್ ಮಾಡಿದ ಆ ಟ್ವಿಟರ್ ಥ್ರೆಡ್ ಸುಮಾರು 1,200 ಲೈಕ್&zwnj;ಗಳನ್ನು ಪಡೆಯಿತು. ಬನ್ಸಾಲ್ ಅವರಿಗೆ ಬರವಣಿಗೆಯ ಅನುಭವವಿಲ್ಲದಿದ್ದರೂ, 17 ವರ್ಷದ ಹುಡುಗನ ಮೇಲಿದ್ದ ನಂಬಿಕೆಯಿಂದ ಶಮಾನಿ ಅವರಿಗೆ ಕೆಲಸ ನೀಡಿದರು. ಬನ್ಸಾಲ್ ಶಮಾನಿ ಅವರಿಗಾಗಿ 5-6 ಟ್ವಿಟರ್ ಥ್ರೆಡ್&zwnj;ಗಳನ್ನು ಬರೆದರು. ಆ ಸಮಯದಲ್ಲಿ ಬನ್ಸಾಲ್ ಅವರಿಗೆ ಸ್ವಂತ ಬ್ಯಾಂಕ್ ಖಾತೆಯೂ ಇರದ ಕಾರಣ, ಶಮಾನಿ ಅವರಿಗೆ ಅಮೆಜಾನ್ ಗಿಫ್ಟ್ ಕಾರ್ಡ್&zwnj;ಗಳ (Amazon Gift Cards) ಮೂಲಕ ಕೂಲಿ ಹಣ ಪಾವತಿಸುತ್ತಿದ್ದರು!&lt;/p&gt;&lt;h3&gt;&lt;strong&gt;ಸಂಬಳಕ್ಕಿಂತ ಮಿಗಿಲಾದ ಅನುಭವ ಹಾಗೂ ಯಶಸ್ಸು!&lt;/strong&gt;&lt;/h3&gt;&lt;p&gt;ರಾಜ್ ಶಮಾನಿ ಅವರು ಬನ್ಸಾಲ್ ಅವರನ್ನು ಕೇವಲ ಕೆಲಸದಾಳುವಾಗಿ ನೋಡದೆ ತಮ್ಮ ಸ್ವಂತ ತಂಡದ ಭಾಗವಾಗಿ ನಡೆಸಿಕೊಂಡರು. ಆಲೋಚನೆಗಳನ್ನು ಹಂಚಿಕೊಳ್ಳುವುದು ಮತ್ತು ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವುದರ ಮೂಲಕ ಪ್ರೋತ್ಸಾಹಿಸಿದರು. ತದನಂತರ ಶಮಾನಿ ಅವರ ಕಂಪನಿಗೆ ಪೂರ್ಣಾವಧಿ ತಂಡದ ಅಗತ್ಯ ಬಂದಾಗ ಈ ಕೆಲಸ ಕೊನೆಗೊಂಡರೂ, ಶಮಾನಿ ನೀಡಿದ ಶಿಫಾರಸು ಪತ್ರ (Testimonial) ಬನ್ಸಾಲ್ ಅವರಿಗೆ ಹೊಸ ಕ್ಲೈಂಟ್&zwnj;ಗಳನ್ನು ಪಡೆಯಲು ಸಹಾಯ ಮಾಡಿತು. ಅಲ್ಲಿಂದ ಮುಂದೆ ಬನ್ಸಾಲ್ ಹಿಂತಿರುಗಿ ನೋಡಲಿಲ್ಲ. ಸುಮಾರು 45ಕ್ಕೂ ಹೆಚ್ಚು ಕಂಪನಿಗಳ ಸಂಸ್ಥಾಪಕರ ಜೊತೆ ಬರವಣಿಗೆಯ ಕೆಲಸ ಮಾಡಿ, 22ನೇ ವಯಸ್ಸಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಪಾದಿಸಿದರು.&lt;/p&gt;&lt;h3&gt;&lt;strong&gt;ಪದವಿಯೂ ಇಲ್ಲ, ಅನುಭವವೂ ಇಲ್ಲ!&lt;/strong&gt;&lt;/h3&gt;&lt;p&gt;ಸಮಾಜಿಕ ಜಾಲತಾಣಗಳಲ್ಲಿ ಈ ಕಥೆ ಹಂಚಿಕೊಂಡ ಬನ್ಸಾಲ್, &quot;ನನ್ನ ಬಳಿ ಪದವಿ ಇರಲಿಲ್ಲ, ಅನುಭವ ಇರಲಿಲ್ಲ. ಆದರೂ ರಾಜ್ ಶಮಾನಿ ನನ್ನ ಮೇಲೆ ನಂಬಿಕೆ ಇಟ್ಟರು. ಆ ತಡರಾತ್ರಿಯ ಒಂದು ಮೆಸೇಜ್ ನನ್ನ ಇಡೀ ಜೀವನವನ್ನೇ ಬದಲಾಯಿಸಿತು&quot; ಎಂದು ಧನ್ಯವಾದ ತಿಳಿಸಿದ್ದಾರೆ. ಈ ಕಥೆಗೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, &quot;ಜೀವನದಲ್ಲಿ ಸಿಗುವ ಒಂದೇ ಒಂದು ಸರಿಯಾದ ಅವಕಾಶ ವ್ಯಕ್ತಿಯ ದಿಕ್ಕನ್ನೇ ಬದಲಾಯಿಸಬಲ್ಲದು&quot; ಎಂದು ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/aditya-bansal-late-night-dm-raj-shamani-earned-one-crore-by-22-success-story-bmk/articleshow-bdtvrcd"/>
        </item>
        <item>
            <title><![CDATA[ಮುಖ್ತಾರ್ ನಖ್ವಿ ಅಲ್ಲ, ಶಶಹನವಾಜ್ ಹುಸೇನ್ ಅಲ್ಲ! ಬಿಜೆಪಿ 'ಟೀಮ್ ನವೀನ್' ಸೇರಿದ್ದ ಈ ಇಬ್ಬರು ಮುಸ್ಲಿಂ ನಾಯಕರ ಅಸಲಿ ಪವರ್‌ ಏನು?]]></title>
            <link>https://kannada.asianetnews.com/money/who-are-the-two-muslim-faces-in-bjp-team-nabin-what-are-their-roles-bmk/articleshow-c7w8knk</link>
            <guid isPermaLink="true">https://kannada.asianetnews.com/money/who-are-the-two-muslim-faces-in-bjp-team-nabin-what-are-their-roles-bmk/articleshow-c7w8knk</guid>
            <pubDate>Tue, 18 Aug 2026 08:00:42 +0530</pubDate>
            <description><![CDATA[ಬಿಜೆಪಿ ತನ್ನ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಇಬ್ಬರು ಪ್ರಮುಖ ಮುಸ್ಲಿಂ ನಾಯಕರಿಗೆ ಸ್ಥಾನ ನೀಡಿದೆ. ಅಲಿಗಢ ಮುಸ್ಲಿಂ ವಿವಿ ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ ಮತ್ತು ತಳಮಟ್ಟದ ಸಂಘಟಕ ಕುನ್ವರ್ ಬಾಸಿತ್ ಅಲಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಲಾಗಿದೆ. ಈ ನೇಮಕವು ಮುಸ್ಲಿಂ ಸಮುದಾಯ, ವಿಶೇಷವಾಗಿ ಪಸ್ಮಾಂಡ ಮುಸ್ಲಿಮರನ್ನು ತಲುಪುವ ಬಿಜೆಪಿಯ ಹೊಸ ತಂತ್ರದ ಭಾಗವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m08d7xve205mpxzenq8wqbgd,imgname-bjp-musilim-faces-1786988722030.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಅವರು ಘೋಷಿಸಿರುವ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಉತ್ತರ ಪ್ರದೇಶದ ಇಬ್ಬರು ಪ್ರಮುಖ ಮುಸ್ಲಿಂ ನಾಯಕರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಶಹನವಾಜ್ ಹುಸೇನ್ ಅಥವಾ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಬದಲು, ಶೈಕ್ಷಣಿಕ ಹಾಗೂ ಸಂಘಟನಾ ಹಿನ್ನೆಲೆಯ ಈ ಇಬ್ಬರು ಮುಖಗಳಿಗೆ ನವೀನ್ ಪಡೆಯಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಆ ಇಬ್ಬರು ನಾಯಕರು ಯಾರು ಮತ್ತು ಪಕ್ಷದಲ್ಲಿ ಅವರ ಪಾತ್ರವೇನು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಪ್ರೊಫೆಸರ್ (ಡಾ.) ತಾರಿಕ್ ಮನ್ಸೂರ್!&lt;/strong&gt;&lt;/h2&gt;&lt;p&gt;&lt;strong&gt;ಯಾರೀತ?;&lt;/strong&gt; ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ಮಾಜಿ ಉಪಕುಲಪತಿ (VC) ಹಾಗೂ ಪ್ರಸ್ತುತ ಉತ್ತರ ಪ್ರದೇಶ ವಿಧಾನ ಪರಿಷತ್ (MLC) ಸದಸ್ಯ.&lt;/p&gt;&lt;p&gt;&lt;strong&gt;ನೀಡಿರುವ ಪಾತ್ರ;&lt;/strong&gt; ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ (National Vice-President).&lt;/p&gt;&lt;p&gt;&lt;strong&gt;ಪಕ್ಷದಲ್ಲಿದ್ದ ಮುಖ್ಯ ಕಾರ್ಯ: &lt;/strong&gt;ತಾರಿಕ್ ಮನ್ಸೂರ್ ಅವರನ್ನು ಬಿಜೆಪಿಯ ಪ್ರಮುಖ ಬೌದ್ಧಿಕ ಮುಖ (Intellectual Face) ಎನ್ನಲಾಗುತ್ತದೆ. ಮುಖ್ಯವಾಗಿ ಮುಸ್ಲಿಂ ಸಮುದಾಯದಲ್ಲಿ, ಅದರಲ್ಲೂ ಹಿಂದುಳಿದ 'ಪಸ್ಮಾಂಡ ಮುಸ್ಲಿಂ' ಸಮುದಾಯದ ನಡುವೆ ಬಿಜೆಪಿಯ ತಲುಪುವಿಕೆಯನ್ನು (Outreach) ಬಲಪಡಿಸುವಲ್ಲಿ ಮನ್ಸೂರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿದ್ದ ಇವರ ಪ್ರಭಾವವನ್ನು ಬಳಸಿಕೊಂಡು ಬುದ್ಧಿಜೀವಿ ಮುಸ್ಲಿಂ ವರ್ಗವನ್ನು ಪಕ್ಷದತ್ತ ಸೆಳೆಯುವುದು ಇವರ ಜವಾಬ್ದಾರಿಯಾಗಿದೆ.&lt;/p&gt;&lt;h3&gt;&lt;strong&gt;ಕುನ್ವರ್ ಬಾಸಿತ್ ಅಲಿ!&lt;/strong&gt;&lt;/h3&gt;&lt;p&gt;&lt;strong&gt;ಯಾರೀತ?;&lt;/strong&gt; ಮೀರತ್ ಜಿಲ್ಲೆಯ ಕಾಯಸ್ತ್ ಬಡ್ಡ ಮೂಲದ ನಾಯಕ. ಪ್ರಸ್ತುತ ಉತ್ತರ ಪ್ರದೇಶ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ನೀಡಿರುವ ಪಾತ್ರ;&lt;/strong&gt; ನೂತನ ತಂಡದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಸ್ತುವಾರಿ / ಜವಾಬ್ದಾರಿ.&lt;/p&gt;&lt;p&gt;&lt;strong&gt;ಪಕ್ಷದಲ್ಲಿದ್ದ ಮುಖ್ಯ ಕಾರ್ಯ&lt;/strong&gt;; ಬಾಸಿತ್ ಅಲಿ ಅವರು ತಳಮಟ್ಟದ ಸಂಘಟನೆಗೆ ಹೆಸರಾದವರು. 'ಕ್ವಾಮಿ ಚೌಪಾಲ್', 'ಮೋದಿ ಮಿತ್ರ' ಅಭಿಯಾನಗಳು ಹಾಗೂ ಮದರಸಾ ಮತ್ತು ದರ್ಗಾಗಳಲ್ಲಿ ಯೋಗ ತರಬೇತಿಯಂತಹ ವಿನೂತನ ಕಾರ್ಯಕ್ರಮಗಳ ಮೂಲಕ ಮುಸ್ಲಿಂ ಯುವಕರು ಮತ್ತು ಮಹಿಳೆಯರನ್ನು ಬಿಜೆಪಿಯತ್ತ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಳಮಟ್ಟದಲ್ಲಿ ಅಲ್ಪಸಂಖ್ಯಾತ ಸಮುದಾಯ ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದು ಇವರ ಮುಖ್ಯ ಪಾತ್ರ.&lt;/p&gt;&lt;h3&gt;&lt;strong&gt;ಬಿಜೆಪಿ ರೂಪಿಸಿತಾ ಹೊಸ ಯೋಜನೆ!&lt;/strong&gt;&lt;/h3&gt;&lt;p&gt;ಈ ನೇಮಕದ ಹಿಂದಿನ ರಾಜಕೀಯ ತಂತ್ರವೇನು?ಮುಂದಿನ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಕೇವಲ ಭಾವನಾತ್ಮಕ ರಾಜಕೀಯ ಮಾಡುವುದಕ್ಕಿಂತ ಪ್ರೊಫೆಸರ್ ತಾರಿಕ್ ಮನ್ಸೂರ್ ಅವರಂತಹ 'ಬುದ್ಧಿಜೀವಿ ಮುಖ' ಮತ್ತು ಕುನ್ವರ್ ಬಾಸಿತ್ ಅಲಿ ಅವರಂತಹ 'ಗ್ರೌಂಡ್ ಲೆವೆಲ್ ಕನೆಕ್ಟರ್' ನಾಯಕರನ್ನು ಮುಂದೆ ತರುವ ಮೂಲಕ ಮುಸ್ಲಿಂ ಸಮುದಾಯದಲ್ಲಿ ತನ್ನ ಮತಬ್ಯಾಂಕ್ ವಿಸ್ತರಿಸಲು ಬಿಜೆಪಿ ಯೋಜನೆ ರೂಪಿಸಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/who-are-the-two-muslim-faces-in-bjp-team-nabin-what-are-their-roles-bmk/articleshow-c7w8knk"/>
        </item>
        <item>
            <title><![CDATA[8ನೇ ವೇತನ ಆಯೋಗ: 50 ಲಕ್ಷ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆ ಸಾಧ್ಯತೆ!]]></title>
            <link>https://kannada.asianetnews.com/business/8th-pay-commission-fitment-factor-basic-pay-hike-calculator-san/articleshow-ddoeuzo</link>
            <guid isPermaLink="true">https://kannada.asianetnews.com/business/8th-pay-commission-fitment-factor-basic-pay-hike-calculator-san/articleshow-ddoeuzo</guid>
            <pubDate>Mon, 24 Aug 2026 12:07:26 +0530</pubDate>
            <description><![CDATA[&lt;p&gt;8ನೇ ಕೇಂದ್ರ ವೇತನ ಆಯೋಗದ ಜಾರಿಯ ನಿರೀಕ್ಷೆಯಲ್ಲಿರುವ ಕೋಟ್ಯಂತರ ನೌಕರರು ಮತ್ತು ಪಿಂಚಣಿದಾರರ ವೇತನ ಏರಿಕೆಯು 'ಫಿಟ್&zwnj;ಮೆಂಟ್ ಫ್ಯಾಕ್ಟರ್' ಮೇಲೆ ಅವಲಂಬಿತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypzvgrnq868764sstqb8syr,imgname-8th-pay-commission-1785330516756.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.24): &lt;/strong&gt;8ನೇ ಕೇಂದ್ರ ವೇತನ ಆಯೋಗದ (8th Pay Commission) ಶಿಫಾರಸುಗಳ ಜಾರಿಗಾಗಿ ದೇಶದ ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಕಾತರದಿಂದ ಕಾಯುತ್ತಿದ್ದಾರೆ. ಆಯೋಗದ ಶಿಫಾರಸುಗಳು ಅನುಷ್ಠಾನಗೊಂಡ ನಂತರ ನೌಕರರ ವೇತನದಲ್ಲಾಗುವ ಒಟ್ಟು ಏರಿಕೆಯು 'ಫಿಟ್&zwnj;ಮೆಂಟ್ ಫ್ಯಾಕ್ಟರ್' (Fitment Factor) ಅನ್ನು ಸಂಪೂರ್ಣವಾಗಿ ಆಧರಿಸಿರಲಿದೆ. ವೇತನ ಆಯೋಗವು ಪ್ರಸ್ತಾಪಿಸುವ ಈ ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ನಿಂದಾಗಿ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಸೇರಿದಂತೆ ಒಟ್ಟು 1 ಕೋಟಿಗೂ ಅಧಿಕ ಮಂದಿಗೆ ನೇರ ಲಾಭ ಸಿಗುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;ಏನಿದು ಫಿಟ್&zwnj;ಮೆಂಟ್ ಫ್ಯಾಕ್ಟರ್?&lt;/strong&gt;&lt;/h2&gt;&lt;p&gt;ಫಿಟ್&zwnj;ಮೆಂಟ್ ಫ್ಯಾಕ್ಟರ್ ಎಂಬುದು ನೌಕರನ ಹಳೆಯ ಮೂಲ ವೇತನವನ್ನು (Basic Pay) ಹೊಸ ಮೂಲ ವೇತನಕ್ಕೆ ಪರಿವರ್ತಿಸಲು ವೇತನ ಆಯೋಗವು ಬಳಸುವ ಒಂದು ಲೆಕ್ಕಾಚಾರ.&lt;/p&gt;&lt;h2&gt;&lt;strong&gt;ಲೆಕ್ಕಾಚಾರದ ಸೂತ್ರ&lt;/strong&gt;&lt;/h2&gt;&lt;p&gt;&lt;strong&gt;ಹಳೆಯ ಮೂಲ ವೇತನ &times; ಫಿಟ್&zwnj;ಮೆಂಟ್ ಫ್ಯಾಕ್ಟರ್ = ಹೊಸ ಮೂಲ ವೇತನ&lt;/strong&gt;&lt;/p&gt;&lt;p&gt;ಉದಾಹರಣೆಗೆ, 7 ನೇ ವೇತನ ಆಯೋಗದಲ್ಲಿ 2.57 ಫಿಟ್&zwnj;ಮೆಂಟ್ ಫ್ಯಾಕ್ಟರ್ ಅನ್ವಯಿಸಿ ಕನಿಷ್ಠ ಮೂಲ ವೇತನವನ್ನು 7,000 ರೂ. ನಿಂದ 18,000 ರೂ. ಗೆ ಹೆಚ್ಚಿಸಲಾಗಿತ್ತು (7,000 &times; 2.57 = 18,000 ರೂ.).&lt;/p&gt;&lt;h2&gt;&lt;strong&gt;ಆಯೋಗದ ಪ್ರಸ್ತುತ ಸ್ಥಿತಿ ಮತ್ತು ಚರ್ಚೆ&lt;/strong&gt;&lt;/h2&gt;&lt;p&gt;8 ನೇ ವೇತನ ಆಯೋಗದ ಜಾರಿಯ ಕುರಿತು ಪ್ರಸ್ತುತ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ಆಯೋಗವು ದೇಶದ ವಿವಿಧ ನೌಕರರ ಸಂಘಟನೆಗಳು, ಕೇಂದ್ರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಮತ್ತು ಇತರ ಭಾಗಿದಾರರೊಂದಿಗೆ ಚರ್ಚಿಸಿ ವೇತನ ರಚನೆ, ಫಿಟ್&zwnj;ಮೆಂಟ್ ಫ್ಯಾಕ್ಟರ್, ಪೇ ಮ್ಯಾಟ್ರಿಕ್ಸ್, ಭತ್ಯೆಗಳು ಮತ್ತು ಇತರ ಸೌಲಭ್ಯಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಪರಿಶೀಲನೆ ನಡೆಸುತ್ತಿದೆ.&lt;/p&gt;&lt;h2&gt;&lt;strong&gt;ವಿವಿಧ ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗಳ ಆಧಾರದ ಮೇಲೆ ಅಂದಾಜು ವೇತನ (ಲೆವೆಲ್ 1 ರಿಂದ 18):&lt;/strong&gt;&lt;/h2&gt;&lt;p&gt;ವಿವಿಧ ವೇತನ ಶ್ರೇಣಿಯ (Levels) ಆಧಾರದಲ್ಲಿ ನೌಕರರ ಮೂಲ ವೇತನವು ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗೆ ಅನುಗುಣವಾಗಿ ಹೇಗೆ ಹೆಚ್ಚಾಗಬಹುದು ಎಂಬ ಅಂದಾಜು ಪಟ್ಟಿ ಇಲ್ಲಿದೆ:&lt;/p&gt;&lt;h2&gt;&lt;strong&gt;ಲೆವೆಲ್ 1 (7 ನೇ ವೇತನ ಆಯೋಗದ ಮೂಲ ವೇತನ: ₹18,000)&lt;/strong&gt;&lt;/h2&gt;&lt;ul&gt; &lt;li&gt;1.83 ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗೆ: ₹32,940&lt;/li&gt; &lt;li&gt;2.0 ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗೆ: ₹36,000&lt;/li&gt; &lt;li&gt;2.57 ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗೆ: ₹46,260&lt;/li&gt; &lt;li&gt;3.83 ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗೆ: ₹68,940&lt;/li&gt;&lt;/ul&gt;&lt;h2&gt;&lt;strong&gt;ಲೆವೆಲ್ 2 (ಮೂಲ ವೇತನ: ₹19,900)&lt;/strong&gt;&lt;/h2&gt;&lt;p&gt;1.83 ಗೆ: ₹36,417 | 2.0 ಗೆ: ₹39,800 | 2.57 ಗೆ: ₹51,143 | 3.83 ಗೆ: ₹76,217&lt;/p&gt;&lt;h2&gt;&lt;strong&gt;ಲೆವೆಲ್ 3 (ಮೂಲ ವೇತನ: ₹21,700)&lt;/strong&gt;&lt;/h2&gt;&lt;p&gt;1.83 ಗೆ: ₹39,711 | 2.0 ಗೆ: ₹43,400 | 2.57 ಗೆ: ₹55,769 | 3.83 ಗೆ: ₹83,111&lt;/p&gt;&lt;h2&gt;&lt;strong&gt;ಲೆವೆಲ್ 4 (ಮೂಲ ವೇತನ: ₹25,500)&lt;/strong&gt;&lt;/h2&gt;&lt;p&gt;1.83 ಗೆ: ₹46,665 | 2.0 ಗೆ: ₹51,000 | 2.57 ಗೆ: ₹65,535 | 3.83 ಗೆ: ₹97,665&lt;/p&gt;&lt;h2&gt;&lt;strong&gt;ಲೆವೆಲ್ 5 (ಮೂಲ ವೇತನ: ₹29,200)&lt;/strong&gt;&lt;/h2&gt;&lt;p&gt;1.83 ಗೆ: ₹53,436 | 2.0 ಗೆ: ₹58,400 | 2.57 ಗೆ: ₹75,044 | 3.83 ಗೆ: ₹1,11,836&lt;/p&gt;&lt;h2&gt;&lt;strong&gt;ಲೆವೆಲ್ 6 (ಮೂಲ ವೇತನ: ₹35,400)&lt;/strong&gt;&lt;/h2&gt;&lt;p&gt;1.83 ಗೆ: ₹64,782 | 2.0 ಗೆ: ₹70,800 | 2.57 ಗೆ: ₹90,978 | 3.83 ಗೆ: ₹1,35,582&lt;/p&gt;&lt;h2&gt;&lt;strong&gt;ಲೆವೆಲ್ 7 (ಮೂಲ ವೇತನ: ₹44,900)&lt;/strong&gt;&lt;/h2&gt;&lt;p&gt;1.83 ಗೆ: ₹82,167 | 2.0 ಗೆ: ₹89,800 | 2.57 ಗೆ: ₹1,15,393 | 3.83 ಗೆ: ₹1,71,967&lt;/p&gt;&lt;h2&gt;&lt;strong&gt;ಲೆವೆಲ್ 10 (ಮೂಲ ವೇತನ: ₹56,100)&lt;/strong&gt;&lt;/h2&gt;&lt;p&gt;1.83 ಗೆ: ₹1,02,663 | 2.0 ಗೆ: ₹1,12,200 | 2.57 ಗೆ: ₹1,44,177 | 3.83 ಗೆ: ₹2,14,863&lt;/p&gt;&lt;h2&gt;&lt;strong&gt;ಲೆವೆಲ್ 13 (ಮೂಲ ವೇತನ: ₹1,23,100)&lt;/strong&gt;&lt;/h2&gt;&lt;p&gt;1.83 ಗೆ: ₹2,25,273 | 2.0 ಗೆ: ₹2,46,200 | 2.57 ಗೆ: ₹3,16,367 | 3.83 ಗೆ: ₹4,71,473&lt;/p&gt;&lt;h2&gt;&lt;strong&gt;ಲೆವೆಲ್ 18 (ಮೂಲ ವೇತನ: ₹2,50,000)&lt;/strong&gt;&lt;/h2&gt;&lt;p&gt;1.83 ಗೆ: ₹4,57,500 | 2.0 ಗೆ: ₹5,00,000 | 2.57 ಗೆ: ₹6,42,500 | 3.83 ಗೆ: ₹9,57,500&lt;/p&gt;&lt;h2&gt;&lt;strong&gt;ಎಷ್ಟಿರಬಹುದು ಫಿಟ್&zwnj;ಮೆಂಟ್ ಫ್ಯಾಕ್ಟರ್?&lt;/strong&gt;&lt;/h2&gt;&lt;p&gt;ವಿವಿಧ ನೌಕರರ ಸಂಘಟನೆಗಳು ಹಾಗೂ ನಿವೃತ್ತ ನೌಕರರ ಒಕ್ಕೂಟಗಳು ಗರಿಷ್ಠ ಫಿಟ್&zwnj;ಮೆಂಟ್ ಫ್ಯಾಕ್ಟರ್ ಜಾರಿಗೆ ತರಬೇಕೆಂದು ಒತ್ತಾಯಿಸಿವೆ. 'ಕ್ಲಿಯರ್&zwnj;ಟ್ಯಾಕ್ಸ್' (ClearTax) ವರದಿಯ ಪ್ರಕಾರ, ನೌಕರರ ಪ್ರತಿನಿಧಿಗಳು ಗರಿಷ್ಠ ಅಂದರೆ 3.83 ಫಿಟ್&zwnj;ಮೆಂಟ್ ಫ್ಯಾಕ್ಟರ್ ಜಾರಿಗೊಳಿಸುವಂತೆ ಪ್ರಸ್ತಾಪಿಸಿದ್ದಾರೆ. ಆದರೆ, ಆರ್ಥಿಕ ತಜ್ಞರ ಕನಿಷ್ಠ ಅಂದಾಜಿನ ಪ್ರಕಾರ ಫಿಟ್&zwnj;ಮೆಂಟ್ ಫ್ಯಾಕ್ಟರ್ 1.83 ರಿಂದ 2.0 ಇರಲಿದ್ದು, ಮಾರುಕಟ್ಟೆ ಶ್ರೇಣಿಯ ಸರಾಸರಿ ಅಂದಾಜಿನ ಪ್ರಕಾರ 2.0 ರಿಂದ 2.57 ರಷ್ಟಿರಬಹುದು ಎನ್ನಲಾಗಿದೆ. 8 ನೇ ವೇತನ ಆಯೋಗದಲ್ಲಿ ಫಿಟ್&zwnj;ಮೆಂಟ್ ಫ್ಯಾಕ್ಟರ್ ಇನ್ಮನೂ ಅಂತಿಮಗೊಂಡಿಲ್ಲ. ಆಯೋಗದ ಶಿಫಾರಸುಗಳನ್ನು ಸಲ್ಲಿಸಿದ ನಂತರ, ಕೇಂದ್ರ ಸರ್ಕಾರದ ಅಂತಿಮ ಒಪ್ಪಿಗೆಯ ಬಳಿಕವಷ್ಟೇ ನೂತನ ವೇತನ ಶ್ರೇಣಿ ಜಾರಿಗೆ ಬರಲಿದೆ.&lt;/p&gt;]]></content:encoded>
            <category>news-money</category>
            <dc:creator>Santosh Naik</dc:creator>
            <atom:link href="https://kannada.asianetnews.com/business/8th-pay-commission-fitment-factor-basic-pay-hike-calculator-san/articleshow-ddoeuzo"/>
        </item>
        <item>
            <title><![CDATA[ಉತ್ತರ ಪ್ರದೇಶಕ್ಕೆ 19,208 ಕೋಟಿ ಕೊಟ್ಟ ಕೇಂದ್ರ.. ಕರ್ನಾಟಕಕ್ಕೆ ಮೋದಿ ಕೊಟ್ಟಿದ್ದು ಎಷ್ಟು ಕೋಟಿ..?]]></title>
            <link>https://kannada.asianetnews.com/business/centre-to-states-additional-installment-of-109-lakh-crore-released-up-receives-karnataka-gets-rs-4504-crore-rupees-gkn/articleshow-eqsugzo</link>
            <guid isPermaLink="true">https://kannada.asianetnews.com/business/centre-to-states-additional-installment-of-109-lakh-crore-released-up-receives-karnataka-gets-rs-4504-crore-rupees-gkn/articleshow-eqsugzo</guid>
            <pubDate>Sat, 01 Aug 2026 19:35:07 +0530</pubDate>
            <description><![CDATA[ಕೇಂದ್ರ ಸರ್ಕಾರವು ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಹಬ್ಬದ ಸೀಸನ್&zwnj;ಗೂ ಮುನ್ನವೇ ತೆರಿಗೆ ಹಂಚಿಕೆಯ ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಿದೆ. ಈ ಮುಂಗಡ ಪಾವತಿಯು ಒಟ್ಟು 1,09,019 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂಪಾಯಿಗಳ ಪಾಲು ಸಿಕ್ಕಿದೆ. ಈ ಹಣವು ರಾಜ್ಯಗಳಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyysyha4k6sb8gh1c2mad121,imgname-tax-devolution-to-states-1785592759620.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಬ್ಬದ ಸೀಸನ್ ಮುನ್ನ ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಉದ್ದೇಶದಿಂದ ಆಗಸ್ಟ್ 1, 2026 ರಂದು (ಇಂದು) ತೆರಿಗೆ ಹಂಚಿಕೆಯ (Tax Devolution) ಹೆಚ್ಚುವರಿ ಕಂತಾಗಿ ಬರೋಬ್ಬರಿ 1,09,019 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.&lt;/p&gt;&lt;p&gt;ವಿಶೇಷವೆಂದರೆ ಆಗಸ್ಟ್ 10, 2026 ರಂದು ಬಿಡುಗಡೆಯಾಗಬೇಕಿದ್ದ ನಿಯಮಿತ ಮಾಸಿಕ ಕಂತಿನ ಹೊರತಾಗಿ, ಮುಂಗಡವಾಗಿ ಈ ಹೆಚ್ಚುವರಿ ಹಣವನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಈ ಬೃಹತ್ ಮೊತ್ತದಲ್ಲಿ ಕರ್ನಾಟಕದ ಪಾಲಿಗೆ 4,504 ಕೋಟಿ ರೂಪಾಯಿ ಬಿಡುಗಡೆಯಾಗಿದೆ.&lt;/p&gt;&lt;h2&gt;&lt;strong&gt;ಈ ಹೆಚ್ಚುವರಿ ಕಂತು ಬಿಡುಗಡೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಭಾರತ ಸರ್ಕಾರದ ಪ್ರಕಾರ, ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸುವ ಬದ್ಧತೆಯ ಅಡಿಯಲ್ಲಿ ಈ ಮುಂಗಡ ಕಂತನ್ನು ಬಿಡುಗಡೆ ಮಾಡಲಾಗಿದೆ. ಇದರ ಮುಖ್ಯ ಉದ್ದೇಶವೆಂದರೆ, ರಾಜ್ಯಗಳಲ್ಲಿನ ಬಂಡವಾಳ ವೆಚ್ಚ (Capital Expenditure) ಮತ್ತು ಅಭಿವೃದ್ಧಿ ಯೋಜನೆಗಳ ವೇಗವನ್ನು ಹೆಚ್ಚಿಸುವುದು. ಇದರಿಂದ ತಳಮಟ್ಟದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ವೇಗವಾಗಿ ನಡೆಯಲಿದೆ. ಜೊತೆಗೆ ಹಬ್ಬಗಳ ಸೀಸನ್ ಸಮೀಪಿಸುತ್ತಿರುವುದರಿಂದ, ರಾಜ್ಯಗಳಿಗೆ ತಮ್ಮ ಯೋಜನೆಗಳು ಮತ್ತು ಅಗತ್ಯ ವೆಚ್ಚಗಳನ್ನು ನಿರ್ವಹಿಸಲು ಈ ಹೆಚ್ಚುವರಿ ಫಂಡ್ ಬಹಳಷ್ಟು ಸಹಾಯ ಮಾಡಲಿದೆ.&lt;/p&gt;&lt;h2&gt;&lt;strong&gt;ತೆರಿಗೆ ಪಾಲು ಹಂಚಿಕೆ (Tax Sharing) ಎಂದರೇನು?&lt;/strong&gt;&lt;/h2&gt;&lt;p&gt;ಹಣಕಾಸು ಸಚಿವಾಲಯದ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರವು ಸಂಗ್ರಹಿಸುವ ಒಟ್ಟು ತೆರಿಗೆ ಆದಾಯದ ಶೇಕಡಾ 41% (41%) ರಷ್ಟು ಹಣವನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಈ ಮೊತ್ತವನ್ನು ಸಂಪೂರ್ಣ ಆರ್ಥಿಕ ವರ್ಷದಲ್ಲಿ ಒಟ್ಟು 14 ಕಂತುಗಳ ಮೂಲಕ ರಾಜ್ಯಗಳಿಗೆ ತಲುಪಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ಯಾವ ರಾಜ್ಯಕ್ಕೆ ಎಷ್ಟು ಕೋಟಿ ಸಿಕ್ಕಿದೆ?&lt;/strong&gt;&lt;/h2&gt;&lt;p&gt;ಒಟ್ಟು 1.09 ಲಕ್ಷ ಕೋಟಿ ರೂ. ಅನುದಾನದಲ್ಲಿ ಉತ್ತರ ಪ್ರದೇಶ ಅತಿ ಹೆಚ್ಚು ಪಾಲು ಪಡೆದಿದ್ದರೆ, ಕರ್ನಾಟಕ 9ನೇ ಸ್ಥಾನದಲ್ಲಿದೆ. ರಾಜ್ಯವಾರು ಹಂಚಿಕೆಯ ವಿವರ ಈ ಕೆಳಗಿನಂತಿದೆ. (ಮೊತ್ತ ಕೋಟಿ ರೂ. ಗಳಲ್ಲಿ)&lt;/p&gt;&lt;ol&gt; &lt;li&gt;ಉತ್ತರ ಪ್ರದೇಶ: 19,208&amp;nbsp;&lt;/li&gt; &lt;li&gt;ಬಿಹಾರ: 10,845&lt;/li&gt; &lt;li&gt;ಮಧ್ಯ ಪ್ರದೇಶ: 8,010&lt;/li&gt; &lt;li&gt;ಪಶ್ಚಿಮ ಬಂಗಾಳ: 7,866&lt;/li&gt; &lt;li&gt;ಮಹಾರಾಷ್ಟ್ರ: 7,022&amp;nbsp;&lt;/li&gt; &lt;li&gt;ರಾಜಸ್ಥಾನ: 6,460&lt;/li&gt; &lt;li&gt;ಒಡಿಶಾ: 4,819&lt;/li&gt; &lt;li&gt;ಆಂಧ್ರಪ್ರದೇಶ: 4,597&amp;nbsp;&lt;/li&gt; &lt;li&gt;ಕರ್ನಾಟಕ: 4,504&amp;nbsp;&lt;/li&gt; &lt;li&gt;ತಮಿಳುನಾಡು: 4,466&amp;nbsp;&lt;/li&gt; &lt;li&gt;ಗುಜರಾತ್: 4,094&amp;nbsp;&lt;/li&gt; &lt;li&gt;ಜಾರ್ಖಂಡ್: 3,660&lt;/li&gt; &lt;li&gt;ಛತ್ತೀಸ್&zwnj;ಗಢ: 3,602&lt;/li&gt; &lt;li&gt;ಅಸ್ಸಾಂ: 3,552&amp;nbsp;&lt;/li&gt; &lt;li&gt;ಕೇರಳ: 2,597&amp;nbsp;&lt;/li&gt; &lt;li&gt;ತೆಲಂಗಾಣ: 2,370&lt;/li&gt; &lt;li&gt;ಪಂಜಾಬ್: 2,176&amp;nbsp;&lt;/li&gt; &lt;li&gt;ಹರಿಯಾಣ: 1,484&lt;/li&gt; &lt;li&gt;ಅರುಣಾಚಲ ಪ್ರದೇಶ: 1,476&amp;nbsp;&lt;/li&gt; &lt;li&gt;ಉತ್ತರಾಖಂಡ: 1,244&amp;nbsp;&lt;/li&gt; &lt;li&gt;ಹಿಮಾಚಲ ಪ್ರದೇಶ: 996&lt;/li&gt; &lt;li&gt;&amp;nbsp;ತ್ರಿಪುರಾ: 699&amp;nbsp;&lt;/li&gt; &lt;li&gt;ಮೇಘಾಲಯ: 688&amp;nbsp;&lt;/li&gt; &lt;li&gt;ಮಣಿಪುರ: 682&amp;nbsp;&lt;/li&gt; &lt;li&gt;ಮಿಜೋರಾಂ: 615&amp;nbsp;&lt;/li&gt; &lt;li&gt;ನಾಗಾಲ್ಯಾಂಡ್: 524&amp;nbsp;&lt;/li&gt; &lt;li&gt;ಗೋವಾ: 398&lt;/li&gt;&lt;/ol&gt;&lt;p&gt;ಈ ಹೆಚ್ಚುವರಿ ಅನುದಾನದಿಂದ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ತಮ್ಮ ಆರ್ಥಿಕ ನಿರ್ವಹಣೆ ಮತ್ತು ಮೂಲಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆನೆಬಲ ಸಿಕ್ಕಂತಾಗಿದೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/business/centre-to-states-additional-installment-of-109-lakh-crore-released-up-receives-karnataka-gets-rs-4504-crore-rupees-gkn/articleshow-eqsugzo"/>
        </item>
        <item>
            <title><![CDATA[Post office Scheme: ಇಂಡಿಯನ್‌ ಪೋಸ್ಟ್‌ನಿಂದ ಗುಡ್‌ ನ್ಯೂಸ್; ಉಳಿತಾಯ ಖಾತೆದಾರರಿಗೆ ಸಿಗಲಿದೆ ಈ ಹೆಚ್ಚುವರಿ ಸೌಲಭ್ಯ!]]></title>
            <link>https://kannada.asianetnews.com/news-money/india-post-rpli-new-rules-savings-account-eligibility-postal-life-insurance-benefits-bmk/articleshow-hp7hcg8</link>
            <guid isPermaLink="true">https://kannada.asianetnews.com/news-money/india-post-rpli-new-rules-savings-account-eligibility-postal-life-insurance-benefits-bmk/articleshow-hp7hcg8</guid>
            <pubDate>Sat, 15 Aug 2026 20:56:04 +0530</pubDate>
            <description><![CDATA[ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಅಂಚೆ ಜೀವ ವಿಮೆ (RPLI) ಯೋಜನೆಯ ಅರ್ಹತಾ ನಿಯಮಗಳನ್ನು ಬದಲಾಯಿಸಿದೆ. ಈ ಹೊಸ ನಿಯಮದ ಪ್ರಕಾರ, ಯಾವುದೇ ಪರಿಶಿಷ್ಟ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವವರು ಸಹ ಈ ವಿಮಾ ಯೋಜನೆಯನ್ನು ಪಡೆಯಬಹುದು. ಈ ಬದಲಾವಣೆಯು ಹೆಚ್ಚು ಜನರಿಗೆ ಕೈಗೆಟುಕುವ ದರದಲ್ಲಿ ಜೀವ ವಿಮಾ ರಕ್ಷಣೆ ಒದಗಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyd4d01n6byrz07yxwhypbbv,imgname-post-office-1784999739445.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಅಂಚೆ ಜೀವ ವಿಮೆ (RPLI) ಯೋಜನೆಯ ಅರ್ಹತಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈ ಹೊಸ ನಿಯಮದಿಂದ ಹೆಚ್ಚಿನ ಜನರು ಅಂಚೆ ಇಲಾಖೆಯ ಜೀವ ವಿಮಾ ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ಸಿಗಲಿದೆ. ಈ ಬದಲಾವಣೆಯ ಪ್ರಮುಖ ಉದ್ದೇಶ ಹೆಚ್ಚು ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಜೀವ ವಿಮಾ ರಕ್ಷಣೆಯನ್ನು ಒದಗಿಸುವುದಾಗಿದೆ.&lt;/p&gt;&lt;h2&gt;&lt;strong&gt;ಆರ್&zwnj;ಪಿಎಲ್&zwnj;ಐ ಪಡೆಯಲು ಹೊಸ ಅರ್ಹತೆ ಏನು?&lt;/strong&gt;&lt;/h2&gt;&lt;p&gt;ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಶಾಶ್ವತವಾಗಿ ವಾಸಿಸುವವರಿಗೆ ಮಾತ್ರ ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆ ಮುಖ್ಯವಾಗಿ ಲಭ್ಯವಿತ್ತು. ಆದರೆ ಇದೀಗ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವುದು ಮಾತ್ರ ಅರ್ಹತೆಯ ಮಾನದಂಡವಾಗಿರುವುದಿಲ್ಲ. ಇಂಡಿಯಾ ಪೋಸ್ಟ್&zwnj;ನ ಪಿಒಎಸ್&zwnj;ಬಿ ಅಥವಾ ಯಾವುದೇ ಪರಿಶಿಷ್ಟ ಬ್ಯಾಂಕ್&zwnj;ನಲ್ಲಿ ಸಕ್ರಿಯ ಉಳಿತಾಯ ಖಾತೆ ಹೊಂದಿರುವವರೂ ಆರ್&zwnj;ಪಿಎಲ್&zwnj;ಐ ಯೋಜನೆಗೆ ಅರ್ಹರಾಗಬಹುದು. ಅಂದರೆ, ನಿಮ್ಮ ಬಳಿ ಯಾವುದೇ ಪರಿಶಿಷ್ಟ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ Savings Account ಇದ್ದರೆ, RPLIಗೆ ಅರ್ಹತೆ ಪಡೆಯುವ ಅವಕಾಶವಿದೆ. ಅಂಚೆ ಇಲಾಖೆ ಈ ಬದಲಾವಣೆಯನ್ನು ತಕ್ಷಣದಿಂದ ಜಾರಿಗೆ ತಂದಿರುವುದಾಗಿ ತಿಳಿಸಿದೆ.&lt;/p&gt;&lt;h3&gt;&lt;strong&gt;ದಾಖಲೆ ನೀಡುವ ವಿಧಾನದಲ್ಲೂ ಸರಳತೆ!&lt;/strong&gt;&lt;/h3&gt;&lt;p&gt;ಆರ್&zwnj;ಪಿಎಲ್&zwnj;ಐ ಪಡೆಯುವ ಸಂದರ್ಭದಲ್ಲಿ ಬ್ಯಾಂಕ್ ಖಾತೆಯ ಪುರಾವೆ ಅಗತ್ಯವಿದ್ದರೆ, ಅದಕ್ಕಾಗಿ ಎಲ್ಲ ಸಂದರ್ಭಗಳಲ್ಲೂ ಪ್ರತ್ಯೇಕವಾಗಿ ಭೌತಿಕ ಬ್ಯಾಂಕ್ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ. ಲಭ್ಯವಿರುವ ಡಿಜಿಟಲ್ ದಾಖಲೆಗಳನ್ನು ಬಳಸುವ ಅವಕಾಶವಿದೆ. ಉದಾಹರಣೆಗೆ, ಪಾಸ್&zwnj;ಬುಕ್&zwnj;ನ ಮಾಹಿತಿ, ಮೊಬೈಲ್ ಬ್ಯಾಂಕಿಂಗ್&zwnj;ನ ಸ್ಕ್ರೀನ್&zwnj;ಶಾಟ್, ಇಮೇಲ್ ಮೂಲಕ ಬಂದ ಬ್ಯಾಂಕ್ ಸ್ಟೇಟ್&zwnj;ಮೆಂಟ್ ಅಥವಾ ATM ಮಿನಿ ಸ್ಟೇಟ್&zwnj;ಮೆಂಟ್ ಮುಂತಾದ ಡಿಜಿಟಲ್ ಪುರಾವೆಗಳನ್ನು ಸ್ವೀಕರಿಸಬಹುದಾಗಿದೆ. ಇದರಿಂದ ಅರ್ಜಿ ಪ್ರಕ್ರಿಯೆ ಮತ್ತಷ್ಟು ಸರಳವಾಗುವ ನಿರೀಕ್ಷೆಯಿದೆ.&lt;/p&gt;&lt;h3&gt;&lt;strong&gt;ಆರ್&zwnj;ಪಿಎಲ್&zwnj;ಐ ಎಂದರೇನು?&lt;/strong&gt;&lt;/h3&gt;&lt;p&gt;ಗ್ರಾಮೀಣ ಅಂಚೆ ಜೀವ ವಿಮೆ ಅಥವಾ ಆರ್&zwnj;ಪಿಎಲ್&zwnj;ಐ ಭಾರತ ಸರ್ಕಾರದ ಅಂಚೆ ಇಲಾಖೆಯ ಜೀವ ವಿಮಾ ಯೋಜನೆಯಾಗಿದೆ. ಇದನ್ನು 1995ರ ಮಾರ್ಚ್ 24ರಂದು ಪ್ರಾರಂಭಿಸಲಾಯಿತು. ಗ್ರಾಮೀಣ ಪ್ರದೇಶದ ಜನರು, ರೈತರು ಮತ್ತು ಮಹಿಳೆಯರಿಗೆ ಕಡಿಮೆ ವೆಚ್ಚದಲ್ಲಿ ಜೀವ ವಿಮಾ ರಕ್ಷಣೆ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಈ ಯೋಜನೆಯಡಿ ವಿವಿಧ ರೀತಿಯ ಪಾಲಿಸಿ ಆಯ್ಕೆಗಳ ಮೂಲಕ ಜೀವ ವಿಮಾ ರಕ್ಷಣೆ ಪಡೆಯಬಹುದು. ನೀಡಿರುವ ಮಾಹಿತಿಯ ಪ್ರಕಾರ, ₹10,000ರಿಂದ ₹10 ಲಕ್ಷದವರೆಗೆ ವಿಮಾ ಮೊತ್ತದ ಆಯ್ಕೆಗಳು ಲಭ್ಯವಿವೆ.&lt;/p&gt;&lt;h3&gt;&lt;strong&gt;ಪಾಲಿಸಿಯ ಇನ್ನಿತರ ಸೌಲಭ್ಯಗಳು&lt;/strong&gt;&lt;/h3&gt;&lt;p&gt;RPLI ಪಾಲಿಸಿಯಲ್ಲಿ ಕೆಲವು ನಿಯಮಗಳ ಅಡಿಯಲ್ಲಿ ಸಾಲ ಪಡೆಯುವ ಅವಕಾಶವೂ ಇದೆ. ಸಾಮಾನ್ಯವಾಗಿ ಪಾಲಿಸಿ ಆರಂಭವಾದ ನಂತರ ನಿರ್ದಿಷ್ಟ ಅವಧಿ ಪೂರ್ಣಗೊಂಡರೆ ಸಾಲದ ಸೌಲಭ್ಯ ಲಭ್ಯವಾಗಬಹುದು. ನೀಡಿರುವ ಮಾಹಿತಿಯ ಪ್ರಕಾರ, 4 ವರ್ಷಗಳ ನಂತರ ಸಾಲ ಪಡೆಯುವ ಅವಕಾಶ ಇದೆ. ಅದೇ ರೀತಿ, ಕೆಲವು ಸಂದರ್ಭಗಳಲ್ಲಿ 3 ವರ್ಷಗಳ ನಂತರ ಪಾಲಿಸಿಯನ್ನು ಸರೆಂಡರ್ ಅಥವಾ ಮುಕ್ತಾಯಗೊಳಿಸುವ ಅವಕಾಶ ಇರಬಹುದು. ಆದರೆ ಪಾಲಿಸಿಯನ್ನು ಸರೆಂಡರ್ ಮಾಡುವ ಮೊದಲು ಅದರ ನಿಯಮಗಳು ಮತ್ತು ಆರ್ಥಿಕ ಪರಿಣಾಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ವಿಶೇಷವಾಗಿ, 5 ವರ್ಷಗಳು ಪೂರ್ಣಗೊಳ್ಳುವ ಮೊದಲು ಪಾಲಿಸಿಯನ್ನು ಸರೆಂಡರ್ ಮಾಡಿದರೆ ಬೋನಸ್ ಸಿಗುವುದಿಲ್ಲ ಎಂಬ ನಿಯಮವನ್ನು ಗಮನದಲ್ಲಿಟ್ಟುಕೊಳ್ಳಬೇಕು.&lt;/p&gt;&lt;h3&gt;&lt;strong&gt;ಯಾರಿಗೆ ಇದು ಉಪಯುಕ್ತ?&lt;/strong&gt;&lt;/h3&gt;&lt;p&gt;ಹೊಸ ಅರ್ಹತಾ ನಿಯಮದಿಂದ RPLI ಯೋಜನೆಯ ವ್ಯಾಪ್ತಿ ಹೆಚ್ಚಾಗುವ ಸಾಧ್ಯತೆಯಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವುದು ಮಾತ್ರವಲ್ಲದೆ, ಪರಿಶಿಷ್ಟ ಬ್ಯಾಂಕ್ ಅಥವಾ POSBನಲ್ಲಿ ಸಕ್ರಿಯ ಉಳಿತಾಯ ಖಾತೆ ಹೊಂದಿರುವವರಿಗೂ ಈ ಯೋಜನೆಯ ಅವಕಾಶ ದೊರೆಯಬಹುದು. ಆದರೆ ವಿಮೆ ಪಡೆಯುವ ಮೊದಲು ಪ್ರೀಮಿಯಂ, ವಿಮಾ ಮೊತ್ತ, ಪಾಲಿಸಿ ಅವಧಿ, ಬೋನಸ್, ಸಾಲದ ನಿಯಮಗಳು ಮತ್ತು ಸರೆಂಡರ್ ಷರತ್ತುಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಅಗತ್ಯ. ಒಟ್ಟಿನಲ್ಲಿ, India Postನ RPLI ಅರ್ಹತಾ ನಿಯಮದಲ್ಲಿನ ಈ ಬದಲಾವಣೆ ಜೀವ ವಿಮೆ ಪಡೆಯಲು ಬಯಸುವವರಿಗೆ ಮಹತ್ವದ ಬೆಳವಣಿಗೆಯಾಗಿದೆ. ನಿಮ್ಮ ಬಳಿ ಸಕ್ರಿಯ Savings Account ಇದ್ದರೆ, RPLIಗೆ ನೀವು ಅರ್ಹರೇ ಎಂಬುದನ್ನು ಅಂಚೆ ಕಚೇರಿ ಅಥವಾ ಅಧಿಕೃತ ಮಾಹಿತಿಯ ಮೂಲಕ ಪರಿಶೀಲಿಸಬಹುದು.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/news-money/india-post-rpli-new-rules-savings-account-eligibility-postal-life-insurance-benefits-bmk/articleshow-hp7hcg8"/>
        </item>
        <item>
            <title><![CDATA[wow! 5 ವರ್ಷದಲ್ಲಿ 1 ಲಕ್ಷಕ್ಕೆ 11.5 ಲಕ್ಷ ರೂಪಾಯಿ ಸಿಕ್ತು.. ಹಣ ಮಾಡೋದನ್ನ ಹೀಗೆ ಕಲೀಬೇಕು!]]></title>
            <link>https://kannada.asianetnews.com/money/multibagger-stock-ice-make-refrigeration-share-price-performance-1-lakh-turns-into-11-5-lakh-in-5-years-gkn/articleshow-lol102d</link>
            <guid isPermaLink="true">https://kannada.asianetnews.com/money/multibagger-stock-ice-make-refrigeration-share-price-performance-1-lakh-turns-into-11-5-lakh-in-5-years-gkn/articleshow-lol102d</guid>
            <pubDate>Mon, 10 Aug 2026 20:10:07 +0530</pubDate>
            <description><![CDATA[&lt;p&gt;ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್&zwnj;ಗಳನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದರೆ ಒಮ್ಮೆ ಸರಿಯಾದ ಸ್ಟಾಕ್ ಸಿಕ್ಕರೆ ಹೂಡಿಕೆದಾರರು ಕೋಟ್ಯಧಿಪತಿಗಳಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwkx2hk6bs74fney377mdqbs,imgname-indian-currency-pti--1--1783079454310.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್&zwnj;ಗಳನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದರೆ ಒಮ್ಮೆ ಸರಿಯಾದ ಸ್ಟಾಕ್ ಸಿಕ್ಕರೆ ಹೂಡಿಕೆದಾರರು ಕೋಟ್ಯಧಿಪತಿಗಳಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಐಸ್ ಮೇಕ್ ರೆಫ್ರಿಜರೇಷನ್ (ICE Make Refrigeration) ಕಂಪನಿಯ ಶೇರುಗಳು. ಕಳೆದ ಐದು ವರ್ಷಗಳಲ್ಲಿ ಈ ಕಂಪನಿಯ ಶೇರು ಬೆಲೆ ಎಷ್ಟು ವೇಗವಾಗಿ ಬೆಳೆದಿದೆ ಎಂದರೆ ಹೂಡಿಕೆದಾರರ ಹಣ ಹಲವು ಪಟ್ಟು ಹೆಚ್ಚಾಗಿದೆ.&lt;/p&gt;&lt;h2&gt;&lt;strong&gt;1 ಲಕ್ಷ ರೂಪಾಯಿ ಇಂದು 11.5 ಲಕ್ಷ!&lt;/strong&gt;&lt;/h2&gt;&lt;p&gt;ಒಬ್ಬ ಹೂಡಿಕೆದಾರ 5 ವರ್ಷಗಳ ಹಿಂದೆ ಈ ಕಂಪನಿಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಶೇರುಗಳನ್ನು ಮಾರಾಟ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದರೆ ಇಂದು ಆ ಹೂಡಿಕೆಯ ಮೌಲ್ಯ ಸುಮಾರು 11.54 ಲಕ್ಷ ರೂಪಾಯಿ ಆಗುತ್ತಿತ್ತು. ಕೇವಲ 5 ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಲಾಭವನ್ನು ಈ ಸ್ಟಾಕ್ ನೀಡಿದೆ. ಐದು ವರ್ಷಗಳ ಹಿಂದೆ ಕೇವಲ 71 ರೂಪಾಯಿಯಿದ್ದ ಈ ಷೇರು ಇಂದು 820 ರೂಪಾಯಿಗೆ ತಲುಪಿದೆ. ಇತ್ತೀಚೆಗೆ ಈ ಷೇರು 1,088 ರೂಪಾಯಿಯ ದಾಖಲೆಯ ಮಟ್ಟವನ್ನೂ ತಲುಪಿತ್ತು.&lt;/p&gt;&lt;p&gt;2022ರ ಫೆಬ್ರವರಿಯಿಂದ ಏಪ್ರಿಲ್ 2025ರವರೆಗೆ ಈ ಸ್ಟಾಕ್ ಭರ್ಜರಿ ಏರಿಕೆ ಕಂಡಿದ್ದು, ಸುಮಾರು 1240 ಶೇಕಡಾ ಲಾಭ ನೀಡಿದೆ. ಮಾರ್ಚ್ 2020ರಲ್ಲಿ ಈ ಷೇರು ಕೇವಲ 25.65 ರೂಪಾಯಿಗೆ ಕುಸಿದಿತ್ತು. ಅಲ್ಲಿಂದ ಲೆಕ್ಕ ಹಾಕಿದರೆ ಈವರೆಗೂ ಬರೋಬ್ಬರಿ 3096 ಶೇಕಡಾ ಏರಿಕೆ ಕಂಡಿದೆ.&lt;/p&gt;&lt;h2&gt;&lt;strong&gt;ಕಂಪನಿಯ ವ್ಯವಹಾರವೇನು?&lt;/strong&gt;&lt;/h2&gt;&lt;p&gt;'ಐಸ್ ಮೇಕ್ ರೆಫ್ರಿಜರೇಷನ್' ಕಂಪನಿಯು ವಿವಿಧ ಕೈಗಾರಿಕೆಗಳಿಗೆ ಬೇಕಾದ ಕೂಲಿಂಗ್ ಪರಿಹಾರಗಳನ್ನು (Cooling Solutions) ಒದಗಿಸುತ್ತದೆ. ಅಂದರೆ ರೆಫ್ರಿಜರೇಷನ್ ಉತ್ಪನ್ನಗಳು ಮತ್ತು ಉಪಕರಣಗಳ ತಯಾರಿಕೆ ಹಾಗೂ ಸರಬರಾಜು ಮಾಡುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ (Market Cap) ಪ್ರಸ್ತುತ 1,200 ಕೋಟಿ ರೂಪಾಯಿಗಳಷ್ಟಿದೆ. ಇತ್ತೀಚಿನ ತಿಂಗಳಲ್ಲಿ ಈ ಸ್ಟಾಕ್ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದರೂ, ದೀರ್ಘಾವಧಿಯಲ್ಲಿ ಇದು ಅತ್ಯುತ್ತಮ ಲಾಭ ನೀಡಿದ ಷೇರುಗಳ ಪಟ್ಟಿಯಲ್ಲಿದೆ. ಚಿಲ್ಲರೆ ಹೂಡಿಕೆದಾರರು (Retail Investors) ಈ ಕಂಪನಿಯಲ್ಲಿ ಸುಮಾರು 24 ಪ್ರತಿಶತದಷ್ಟು ಪಾಲನ್ನು ಹೊಂದಿದ್ದಾರೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/multibagger-stock-ice-make-refrigeration-share-price-performance-1-lakh-turns-into-11-5-lakh-in-5-years-gkn/articleshow-lol102d"/>
        </item>
        <item>
            <title><![CDATA[ಜನರಿಗೆ ಮತ್ತೆ ಬೆಲೆ ಏರಿಕೆ ಬರೆ..! ಆಗಸ್ಟ್‌ನಿಂದ ಇವುಗಳ ಭಾರೀ ಹೆಚ್ಚಳ.. ಲಿಸ್ಟ್‌ ನೋಡಿ ಗಾಬರಿ ಆಗಬೇಡಿ!]]></title>
            <link>https://kannada.asianetnews.com/news/price-hike-hits-people-again-major-increase-from-august-like-tv-car-televisions-moters-mobile-gkn/articleshow-mos730k</link>
            <guid isPermaLink="true">https://kannada.asianetnews.com/news/price-hike-hits-people-again-major-increase-from-august-like-tv-car-televisions-moters-mobile-gkn/articleshow-mos730k</guid>
            <pubDate>Fri, 31 Jul 2026 08:58:59 +0530</pubDate>
            <description><![CDATA[&lt;p&gt;ಸಾಮಾನ್ಯ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಆಗಸ್ಟ್ ತಿಂಗಳಿನಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದ್ದು, ಹಲವು ದಿನಬಳಕೆ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿವೆ. ಹೇರ್ ಆಯಿಲ್, ಟೀ ಪುಡಿ, ಬಟ್ಟೆಗಳು ಹಾಗೂ ಎಲೆಕ್ಟ್ರಾನಿಕ್ ಸರಕುಗಳ ಬೆಲೆಗಳು ಶೀಘ್ರದಲ್ಲೇ ಗಗನಕ್ಕೇರಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyv3f3rjbxehmqrc6qg511wj,imgname-price-hike-1785468522258.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಾಮಾನ್ಯ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಆಗಸ್ಟ್ ತಿಂಗಳಿನಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದ್ದು, ಹಲವು ದಿನಬಳಕೆ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿವೆ. ಹೇರ್ ಆಯಿಲ್, ಟೀ ಪುಡಿ, ಬಟ್ಟೆಗಳು ಹಾಗೂ ಎಲೆಕ್ಟ್ರಾನಿಕ್ ಸರಕುಗಳ ಬೆಲೆಗಳು ಶೀಘ್ರದಲ್ಲೇ ಗಗನಕ್ಕೇರಲಿವೆ.&lt;/p&gt;&lt;p&gt;ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅಮೆರಿಕ-ಇರಾನ್ ನಡುವಿನ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯು ಜಾಗತಿಕ ಪೂರೈಕೆ ಸರಪಳಿಯನ್ನು (Supply Chain) ಸಂಪೂರ್ಣವಾಗಿ ಹದಗೆಡಿಸಿದೆ. ಇದರಿಂದಾಗಿ ಸರಕು ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದು, ಕಚ್ಚಾ ವಸ್ತುಗಳು, ಕಚ್ಚಾ ತೈಲ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿವೆ. ಜಾಗತಿಕ ರಾಜಕೀಯ ಅನಿಶ್ಚಿತತೆಯು ಹಣದುಬ್ಬರದ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;p&gt;ಇದರ ನೇರ ಪರಿಣಾಮ ಭಾರತದ ಮೇಲೂ ಬೀರುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ತೀವ್ರ ಏರಿಳಿತ ಕಂಡುಬರುತ್ತಿರುವುದರಿಂದ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗಿ ಬಂದಿದೆ. ಈ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಹಲವು ಪ್ರಮುಖ ಕಂಪನಿಗಳು ಆಗಸ್ಟ್&zwnj;ನಿಂದ ಬೆಲೆ ಏರಿಕೆಗೆ ಮುಂದಾಗಿವೆ.&lt;/p&gt;&lt;h2&gt;&lt;strong&gt;ಯಾವ ವಸ್ತುಗಳ ಬೆಲೆ ಎಷ್ಟು ಹೆಚ್ಚಾಗಬಹುದು?&lt;/strong&gt;&lt;/h2&gt;&lt;ul&gt; &lt;li&gt;ಆಗಸ್ಟ್ ತಿಂಗಳಿನಿಂದ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಸ್ಮಾರ್ಟ್&zwnj;ಫೋನ್&zwnj;ಗಳು, ಬಟ್ಟೆಗಳು ಮತ್ತು ಕಾರುಗಳ ಬೆಲೆಗಳು ಹೆಚ್ಚಾಗಲಿವೆ&lt;/li&gt; &lt;li&gt;ಪ್ಯಾಕ್ ಮಾಡಿದ ಟೀ ಪುಡಿ: ಶೇ. 6 ರಿಂದ ಶೇ. 8 ರಷ್ಟು ಹೆಚ್ಚಳ&lt;/li&gt; &lt;li&gt;&amp;nbsp;ಹೇರ್ ಆಯಿಲ್ (ಕೂದಲ ಎಣ್ಣೆ): ಶೇ. 6 ರಿಂದ ಶೇ. 8 ರಷ್ಟು ಹೆಚ್ಚಳ&amp;nbsp;&lt;/li&gt; &lt;li&gt;ಟಿವಿ (Televisions): ಶೇ. 4 ರಿಂದ ಶೇ. 6 ರಷ್ಟು ಹೆಚ್ಚಳ&lt;/li&gt; &lt;li&gt;&amp;nbsp;ರೆಫ್ರಿಜರೇಟರ್ (ಫ್ರಿಡ್ಜ್): ಶೇ. 4 ರಿಂದ ಶೇ. 6 ರಷ್ಟು ಹೆಚ್ಚಳ&amp;nbsp;&lt;/li&gt; &lt;li&gt;ವಾಷಿಂಗ್ ಮೆಷಿನ್: ಶೇ. 10 ರವರೆಗೆ ಹೆಚ್ಚಳ&amp;nbsp;&lt;/li&gt; &lt;li&gt;ಬ್ರಾಂಡೆಡ್ ಬಟ್ಟೆಗಳು: ಶೇ. 8 ರವರೆಗೆ ಹೆಚ್ಚಳ&lt;/li&gt; &lt;li&gt;ಸ್ಮಾರ್ಟ್&zwnj;ಫೋನ್ ಮತ್ತು ಲ್ಯಾಪ್&zwnj;ಟಾಪ್: ಮೆಮೊರಿ ಚಿಪ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಬಿಡಿಭಾಗಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ಇವುಗಳ ದರವೂ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ.&lt;/li&gt;&lt;/ul&gt;&lt;h2&gt;&lt;strong&gt;ಕಾರುಗಳ ಬೆಲೆಯೂ ದುಬಾರಿ!&lt;/strong&gt;&lt;/h2&gt;&lt;p&gt;ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ವೆಚ್ಚದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ಆಗಸ್ಟ್&zwnj;ನಿಂದ ಕಾರುಗಳ ಬೆಲೆ ಹೆಚ್ಚಿಸಲು ನಿರ್ಧರಿಸಿವೆ. ಮಾರುತಿ ಸುಜುಕಿ ತನ್ನ ಆಯ್ದ ಮಾಡೆಲ್&zwnj;ಗಳ ಬೆಲೆಯನ್ನು 30,000 ರೂ.ವರೆಗೆ ಹೆಚ್ಚಿಸುವ ಸಾಧ್ಯತೆಯಿದೆ. ಹೋಂಡಾ ಕಾರ್ಸ್ ಇಂಡಿಯಾ ಆಗಸ್ಟ್ 1 ರಿಂದಲೇ ಹೊಸ ಬೆಲೆಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಮರ್ಸಿಡಿಸ್-ಬೆಂಜ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್-ಬೆಂಜ್ ಕೂಡ ಆಗಸ್ಟ್&zwnj;ನಿಂದ ದರ ಹೆಚ್ಚಿಸಲು ಯೋಜಿಸುತ್ತಿದೆ. ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಇವುಗಳು ಈಗಾಗಲೇ ಪ್ರಸಕ್ತ ತಿಂಗಳ ಆರಂಭದಲ್ಲೇ ಕೆಲವು ಮಾಡೆಲ್&zwnj;ಗಳ ಬೆಲೆಯನ್ನು ಹೆಚ್ಚಿಸಿವೆ. ಮುಂಬರುವ ಹಬ್ಬದ ಸೀಸನ್&zwnj;ನಲ್ಲಿ ಬಟ್ಟೆಗಳು, ಸ್ಮಾರ್ಟ್&zwnj;ಫೋನ್&zwnj;ಗಳು ಅಥವಾ ಕಾರುಗಳನ್ನು ಖರೀದಿಸಲು ಯೋಜಿಸುತ್ತಿರುವ ಗ್ರಾಹಕರಿಗೆ ಈ ಬೆಲೆ ಏರಿಕೆ ದೊಡ್ಡ ಹೊರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/news/price-hike-hits-people-again-major-increase-from-august-like-tv-car-televisions-moters-mobile-gkn/articleshow-mos730k"/>
        </item>
        <item>
            <title><![CDATA[ಮತ್ತೊಂದು ಅತೀ ದೊಡ್ಡ ಹಗರಣ - ನಕಲಿ ದಾಖಲೆ ಸೃಷ್ಟಿಸಿ ವಿದೇಶಕ್ಕೆ 2,395 ರೂಪಾಯಿ ಟ್ರಾನ್ಸ್‌ಫರ್]]></title>
            <link>https://kannada.asianetnews.com/money/chartered-accountant-transfers-rs-2395-abroad-by-creating-fake-documents-gkn/articleshow-mq7b0rz</link>
            <guid isPermaLink="true">https://kannada.asianetnews.com/money/chartered-accountant-transfers-rs-2395-abroad-by-creating-fake-documents-gkn/articleshow-mq7b0rz</guid>
            <pubDate>Tue, 25 Aug 2026 16:49:09 +0530</pubDate>
            <description><![CDATA[&lt;p&gt;ಜೈಪುರದ ಸಿಎ ಒಬ್ಬರು 3,168 ನಕಲಿ 15CB ಪ್ರಮಾಣಪತ್ರಗಳನ್ನು ಬಳಸಿ 2,395 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿದ ಆರೋಪದ ಮೇಲೆ ಎಫ್&zwnj;ಐಆರ್ ಎದುರಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿ, ಯಾವುದೇ ವಹಿವಾಟು ನಡೆಸದ 40ಕ್ಕೂ ಹೆಚ್ಚು ಶಂಕಾಸ್ಪದ ಕಂಪನಿಗಳ ಮೂಲಕ ಈ ಹಣ ರವಾನೆಯಾಗಿರುವುದು ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzq7t0c77mrx05gy4tycwvb7,imgname-wet-currency-1786412597639.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ರಾಜಸ್ಥಾನದ ಜೈಪುರದಲ್ಲಿ ಭಾರೀ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಚಾರ್ಟರ್ಡ್ ಅಕೌಂಟೆಂಟ್ (CA) ಒಬ್ಬರು ನಕಲಿ ದಾಖಲೆಗಳನ್ನು ಬಳಸಿಕೊಂಡು ಸುಮಾರು 2,395 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿರುವ ಆರೋಪದ ಮೇಲೆ ಎಫ್&zwnj;ಐಆರ್ (FIR) ದಾಖಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಜೈಪುರದ ಪತ್ರಕರ್ತ ಕಾಲೋನಿ ನಿವಾಸಿ, ಸಿಎ ಅಭಿಷೇಕ್ ಜೈನ್ ಎಂಬುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ದೂರು ನೀಡಿದೆ. ಆರೋಪದ ಪ್ರಕಾರ ಅಭಿಷೇಕ್ ಜೈನ್ 2021 ರಿಂದ 2024 ರ ನಡುವೆ ಸುಮಾರು 3,168 ನಕಲಿ 'ಫಾರ್ಮ್ 15CB' ಸರ್ಟಿಫಿಕೇಟ್&zwnj;ಗಳನ್ನು ಜಾರಿ ಮಾಡಿದ್ದಾರೆ. ಈ ಪ್ರಮಾಣಪತ್ರಗಳ ಆಧಾರದ ಮೇಲೆ ಬರೋಬ್ಬರಿ 2,395 ಕೋಟಿ ರೂಪಾಯಿಗಳನ್ನು ಭಾರತದಿಂದ ವಿದೇಶಕ್ಕೆ ರವಾನಿಸಲಾಗಿದೆ. ಕಳೆದ ಆಗಸ್ಟ್ 18 ರಂದು ಆದಾಯ ತೆರಿಗೆ ಇಲಾಖೆಯ ತನಿಖಾ ದಳವು ಸಿಎ ಅಭಿಷೇಕ್ ಜೈನ್ ಅವರ ಕಚೇರಿಯ ಮೇಲೆ ಸರ್ವೆ ನಡೆಸಿತ್ತು. ಈ ವೇಳೆ ಅಲ್ಲಿ ದೊರೆತ ದಾಖಲೆಗಳನ್ನು ಪರಿಶೀಲಿಸಿದಾಗ ಯಾವುದೇ ಸರಿಯಾದ ದಾಖಲೆಗಳಿಲ್ಲದೆ ಸಾವಿರಾರು ವಿದೇಶಿ ವಿನಿಮಯ ಪ್ರಮಾಣಪತ್ರಗಳನ್ನು ನೀಡಿರುವುದು ಪತ್ತೆಯಾಗಿದೆ.&lt;/p&gt;&lt;p&gt;ಐಟಿ ಇಲಾಖೆಯ ತನಿಖೆಯಲ್ಲಿ ಕೆಲವು ಆಘಾತಕಾರಿ ವಿಷಯಗಳು ಬಯಲಾಗಿವೆ.ಸುಮಾರು 40ಕ್ಕೂ ಹೆಚ್ಚು ನಕಲಿ ಅಥವಾ ಶಂಕಾಸ್ಪದ ಕಂಪನಿಗಳ (Shell Companies) ಹೆಸರಿನಲ್ಲಿ ಹಣವನ್ನು ವಿದೇಶಕ್ಕೆ ಕಳುಹಿಸಲಾಗಿದೆ. ಈ ಹಣ ವರ್ಗಾವಣೆ ಮಾಡಿದ ಹಲವು ಕಂಪನಿಗಳ ಆದಾಯವು ತುಂಬಾ ಕಡಿಮೆ ಇದೆ ಅಥವಾ ಅವರು ಎಂದಿಗೂ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿಲ್ಲ. ಯಾವುದೇ ವ್ಯವಹಾರ ನಡೆಸದ ಹೆಸರಿಗಷ್ಟೇ ಇರುವ ಟ್ರಸ್ಟ್&zwnj;ಗಳು ಮತ್ತು ಫರ್ಮ್&zwnj;ಗಳನ್ನು ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಫಾರ್ಮ್ 15CB ಎಂದರೇನು?&lt;/strong&gt;&lt;/h2&gt;&lt;p&gt;ಭಾರತದಿಂದ ವಿದೇಶಕ್ಕೆ ಹಣವನ್ನು ಕಳುಹಿಸುವಾಗ ಆ ಹಣಕ್ಕೆ ಸಂಬಂಧಪಟ್ಟ ತೆರಿಗೆಯನ್ನು (TDS) ಸರಿಯಾಗಿ ಪಾವತಿಸಲಾಗಿದೆ ಎಂದು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ದೃಢೀಕರಿಸಬೇಕಾಗುತ್ತದೆ. ಇದನ್ನೇ ಫಾರ್ಮ್ 15CB ಎನ್ನಲಾಗುತ್ತದೆ. ಅಭಿಷೇಕ್ ಜೈನ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಹಣದ ಮೂಲವನ್ನು ಪರಿಶೀಲಿಸದೆ ಸರ್ಟಿಫಿಕೇಟ್ ನೀಡಿದ್ದಾರೆ ಎಂಬುದು ಗಂಭೀರ ಆರೋಪವಾಗಿದೆ.&lt;/p&gt;&lt;p&gt;ಜೈಪುರದ ಪತ್ರಕರ್ತ ಕಾಲೋನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ಖಾತೆಗಳು, ವಿದೇಶಿ ವಹಿವಾಟಿನ ದಾಖಲೆಗಳು ಮತ್ತು ಈ ಹಗರಣದ ಹಿಂದೆ ಇರುವ ಇತರ ಮಧ್ಯವರ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದು ಕೇವಲ ಒಬ್ಬ ಸಿಎ ಮಾಡಿದ ಕೆಲಸವೇ ಅಥವಾ ಇದರ ಹಿಂದೆ ದೊಡ್ಡ ವ್ಯವಸ್ಥಿತ ಜಾಲವಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/chartered-accountant-transfers-rs-2395-abroad-by-creating-fake-documents-gkn/articleshow-mq7b0rz"/>
        </item>
        <item>
            <title><![CDATA[ಸುಕೇಶ್ ಚಂದ್ರಶೇಖರ್ ಬಳಿ ಎಷ್ಟು ಹಣ ಇದೆ? ಜೈಲಿನ ಗೋಡೆಗಳ ಮಧ್ಯೆ ಇದ್ದರೂ ಕೋಟಿ ಕೋಟಿ ಸಂಪಾದನೆ..]]></title>
            <link>https://kannada.asianetnews.com/india-news/sukesh-chandrashekhar-net-worth-how-much-money-does-the-conman-have-and-is-he-still-earning-from-jail-gkn/articleshow-o2m983u</link>
            <guid isPermaLink="true">https://kannada.asianetnews.com/india-news/sukesh-chandrashekhar-net-worth-how-much-money-does-the-conman-have-and-is-he-still-earning-from-jail-gkn/articleshow-o2m983u</guid>
            <pubDate>Wed, 26 Aug 2026 23:07:42 +0530</pubDate>
            <description><![CDATA[&lt;p&gt;ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿಯಾಗಿದ್ದು, ತಿಹಾರ್ ಜೈಲಿನ ಒಳಗಿದ್ದೂ ತನ್ನ ವಂಚನೆಯ ಜಾಲವನ್ನು ನಡೆಸುತ್ತಿದ್ದ ಎನ್ನಲಾಗಿದೆ. ಜಾರಿ ನಿರ್ದೇಶನಾಲಯವು ಆತನ ಐಷಾರಾಮಿ ಆಸ್ತಿಗಳನ್ನು ಜಪ್ತಿ ಮಾಡಿದ್ದರೂ, ಆತ ದೊಡ್ಡ ಮೊತ್ತದ ಹಣಕಾಸಿನ ಹೂಡಿಕೆಯ ಆಫರ್&zwnj;ಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gtxff6rq4m3a1qvsr04fdnqd,imgname-Jacq1-1678174034710.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಮನಿ ಲಾಂಡರಿಂಗ್ ಮತ್ತು ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹೆಸರು ಆಗಾಗ ಸುದ್ದಿಯಲ್ಲಿರುತ್ತೆ. ಜೈಲಿನಲ್ಲಿದ್ದರೂ ಈತ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಮತ್ತು ದೊಡ್ಡ ದೊಡ್ಡ ಆರ್ಥಿಕ ಆಫರ್&zwnj;ಗಳನ್ನು ನೀಡುತ್ತಿದ್ದಾನೆ ಎಂಬ ಸುದ್ದಿ ಎಲ್ಲರ ಬೆರಗುಗೊಳಿಸಿದೆ. ಹಾಗಾದರೆ ಸುಕೇಶ್ ಚಂದ್ರಶೇಖರ್ ಆಸ್ತಿ ಎಷ್ಟಿದೆ? ತನಿಖಾ ಸಂಸ್ಥೆಗಳ ವರದಿಯಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ವಿವರ..&lt;/p&gt;&lt;h2&gt;&lt;strong&gt;ಒಟ್ಟು ಆಸ್ತಿ ಎಷ್ಟು?&lt;/strong&gt;&lt;/h2&gt;&lt;p&gt;ಸುಕೇಶ್ ಚಂದ್ರಶೇಖರ್ ಬಳಿ ಇರುವ ಒಟ್ಟು ಆಸ್ತಿಯ ಬಗ್ಗೆ ಯಾವುದೇ ನಿಖರ ಅಧಿಕೃತ ಅಂಕಿ-ಅಂಶಗಳಿಲ್ಲ. ಆದರೆ ಜಾರಿ ನಿರ್ದೇಶನಾಲಯ (ED) ನೀಡಿರುವ ವರದಿಗಳ ಪ್ರಕಾರ..ಈತ ದೇಶ-ವಿದೇಶಗಳ ಶ್ರೀಮಂತರಿಗೆ ಬರೋಬ್ಬರಿ 200 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ವಂಚಿಸಿದ್ದಾನೆ. ವರದಿಗಳ ಪ್ರಕಾರ, ಸುಕೇಶ್&zwnj;ನ ಒಟ್ಟು ಆಸ್ತಿ ಮೌಲ್ಯ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಜಾರಿ ನಿರ್ದೇಶನಾಲಯವು ಈಗಾಗಲೇ ಆತನಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳು, ಬೆಂಗಳೂರು ಮತ್ತು ಚೆನ್ನೈನಲ್ಲಿರುವ ಬಂಗಲೆಗಳು ಹಾಗೂ ಸಮುದ್ರದ ಕಡೆಗೆ ಮುಖ ಮಾಡಿರುವ ವಿಲ್ಲಾಗಳನ್ನು ಜಪ್ತಿ ಮಾಡಿದೆ.&lt;/p&gt;&lt;p&gt;ತಿಹಾರ್ ಜೈಲಿನಲ್ಲಿದ್ದರೂ ಸುಕೇಶ್ ತನ್ನ ವಂಚನೆಯ ಜಾಲವನ್ನು ಹೇಗೆ ನಡೆಸುತ್ತಿದ್ದ ಎಂಬುದು ಆಶ್ಚರ್ಯದ ಸಂಗತಿ. ಜೈಲಿನ ಕೆಲವು ಭ್ರಷ್ಟ ಅಧಿಕಾರಿಗಳ ಸಹಾಯದಿಂದ ಆತ ಮೊಬೈಲ್ ಫೋನ್ ಮತ್ತು ಇತರ ಸೌಲಭ್ಯಗಳನ್ನು ಬಳಸುತ್ತಿದ್ದ ಎನ್ನಲಾಗಿದೆ. ತಾಂತ್ರಿಕ ವಿಧಾನಗಳನ್ನು ಬಳಸಿ ತನ್ನ ಮೊಬೈಲ್ ಸಂಖ್ಯೆ ಮತ್ತು ಗುರುತನ್ನು ಮರೆಮಾಚುತ್ತಿದ್ದ ಈತ, ಹೊರಗಿರುವ ಜನರನ್ನು ಸಂಪರ್ಕಿಸುತ್ತಿದ್ದ. ತಾನು ದೊಡ್ಡ ಉದ್ಯಮಿ, ಸರ್ಕಾರಿ ಅಧಿಕಾರಿ ಅಥವಾ ಪ್ರಭಾವಿ ವ್ಯಕ್ತಿ ಎಂದು ನಂಬಿಸಿ ಜನರಿಂದ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದ್ದ.&lt;/p&gt;&lt;h2&gt;&lt;strong&gt;ಪ್ರಮುಖ ವಂಚನೆ ಪ್ರಕರಣಗಳು&lt;/strong&gt;&lt;/h2&gt;&lt;p&gt;ಸುಕೇಶ್ ಮೇಲಿರುವ ಅತ್ಯಂತ ದೊಡ್ಡ ಆರೋಪವೆಂದರೆ ರಾನ್&zwnj;ಬಾಕ್ಸಿ (Ranbaxy) ಮಾಜಿ ಪ್ರವರ್ತಕರ ಪತ್ನಿಯರಿಂದ ಸುಮಾರು 200 ಕೋಟಿ ರೂಪಾಯಿ ಪೀಕಿದ್ದು. ಈ ಹಣವನ್ನು ಆತ ಮನಿ ಲಾಂಡರಿಂಗ್ ಮೂಲಕ ವರ್ಗಾವಣೆ ಮಾಡಿದ್ದ ಎಂಬ ಆರೋಪವಿದೆ. ಸುಕೇಶ್ ಚಂದ್ರಶೇಖರ್ ತನ್ನ ವಿಲಕ್ಷಣ ಆಫರ್&zwnj;ಗಳಿಂದಲೇ ಸುದ್ದಿಯಾಗುತ್ತಿರುತ್ತಾನೆ. ಇತ್ತೀಚೆಗೆ ಈತ ಎಲೋನ್ ಮಸ್ಕ್ ಅವರ ಕಂಪನಿ ಮತ್ತು ಓಪನ್ ಎಐ (OpenAI) ಸಿಇಒ ಸ್ಯಾಮ್ ಆಲ್ಟ್&zwnj;ಮನ್ ಅವರಿಗೆ ಭಾರಿ ಹೂಡಿಕೆ ಮಾಡುವ ಆಫರ್ ನೀಡಿ ಎಲ್ಲರ ಗಮನ ಸೆಳೆದಿದ್ದನು. ಅಷ್ಟೇ ಅಲ್ಲದೆ, ತನ್ನ ವಿರುದ್ಧ ದೂರು ನೀಡಿದ ವ್ಯಕ್ತಿಗೆ 200 ಕೋಟಿ ಬದಲಿಗೆ 217 ಕೋಟಿ ರೂಪಾಯಿ ಹಿಂದಿರುಗಿಸುವ ಆಫರ್ ಕೂಡ ನೀಡಿದ್ದನು! ಇದನ್ನು ಅಪರಾಧ ಎಂದು ಪರಿಗಣಿಸಬಾರದು ಎಂಬ ಷರತ್ತನ್ನೂ ವಿಧಿಸಿದ್ದನು.&lt;/p&gt;&lt;p&gt;ಸುಕೇಶ್ ಚಂದ್ರಶೇಖರ್ ಮೊದಲ ಬಾರಿಗೆ 2017ರಲ್ಲಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಯತ್ನಿಸಿದ ಪ್ರಕರಣದಲ್ಲಿ ಬಂಧಿತನಾಗಿದ್ದ. ಬಂಧನದ ಸಮಯದಲ್ಲಿ ಆತನ ಬಳಿ 1.3 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಆತ ಒಂದಲ್ಲ ಒಂದು ವಂಚನೆ ಪ್ರಕರಣದಲ್ಲಿ ಸುದ್ದಿಯಲ್ಲಿದ್ದಾನೆ. ಜೈಲಿನ ಗೋಡೆಗಳ ಮಧ್ಯೆ ಇದ್ದರೂ ಈತನ ಆರ್ಥಿಕ ಸಾಮರ್ಥ್ಯ ಮತ್ತು ಸಂಪರ್ಕಗಳು ಇಂದಿಗೂ ತನಿಖಾ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/sukesh-chandrashekhar-net-worth-how-much-money-does-the-conman-have-and-is-he-still-earning-from-jail-gkn/articleshow-o2m983u"/>
        </item>
        <item>
            <title><![CDATA[Axis credit card ಬಳಕೆದಾರರಿಗೆ ಶಾಕ್.. ಆಗಸ್ಟ್ 28 ರಿಂದ ಹೊಸ ರೂಲ್ಸ್‌, ಜೇಬಿಗೆ ಕತ್ತರಿ ಗ್ಯಾರಂಟಿ..!]]></title>
            <link>https://kannada.asianetnews.com/gallery/money/axis-credit-card-new-rules-from-august-28th-gkn-pk01r7d</link>
            <guid isPermaLink="true">https://kannada.asianetnews.com/gallery/money/axis-credit-card-new-rules-from-august-28th-gkn-pk01r7d</guid>
            <pubDate>Sat, 22 Aug 2026 14:28:13 +0530</pubDate>
            <description><![CDATA[&lt;p&gt;ಆಕ್ಸಿಸ್ ಬ್ಯಾಂಕ್ (Axis Bank) ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್&zwnj;ಗಳ ನಿಯಮಗಳು ಮತ್ತು ಶುಲ್ಕಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಹೊಸ ನಿಯಮಗಳು ಆಗಸ್ಟ್ 28, 2026 ರಿಂದ ಜಾರಿಗೆ ಬರಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mag5jx6s9tbd80b8tdq4gz,imgname-axis-bank-1787388499549.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಕ್ಸಿಸ್ ಬ್ಯಾಂಕ್ (Axis Bank) ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್&zwnj;ಗಳ ನಿಯಮಗಳು ಮತ್ತು ಶುಲ್ಕಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಹೊಸ ನಿಯಮಗಳು ಆಗಸ್ಟ್ 28, 2026 ರಿಂದ ಜಾರಿಗೆ ಬರಲಿವೆ.&lt;/p&gt;&lt;img&gt;&lt;p&gt;ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಶಾಕಿಂಗ್&zwnj; ಸುದ್ದಿಯೊಂದು ಕಾದಿದೆ. ಆಕ್ಸಿಸ್ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬಿಗಿಗೊಳಿಸಿದ್ದು, ಹೊಸ ಶುಲ್ಕಗಳನ್ನು ಜಾರಿಗೆ ತರುತ್ತಿದೆ. ಆಗಸ್ಟ್ 28 ರಿಂದ ಜಾರಿಗೆ ಬರುವ ಈ ಹೊಸ ಬದಲಾವಣೆಗಳು ಗ್ರಾಹಕರ ಜೇಬಿಗೆ ಕೊಂಚ ಹೊರೆಯಾಗಲಿವೆ.&lt;/p&gt;&lt;img&gt;&lt;p&gt;ಒಂದು ವೇಳೆ ನೀವು ನಿಗದಿತ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಮರೆತರೆ ವಿಧಿಸಲಾಗುವ ವಿಳಂಬ ಶುಲ್ಕವನ್ನು ಬ್ಯಾಂಕ್ ಪರಿಷ್ಕರಿಸಿದೆ. ಅದರಲ್ಲೂ ವಿಶೇಷವಾಗಿ 50,000 ರೂ.ಗಿಂತ ಹೆಚ್ಚು ಬಾಕಿ ಉಳಿಸಿಕೊಂಡರೆ ಭಾರಿ ದಂಡ ತೆರಬೇಕಾಗುತ್ತದೆ. ವಿವಿಧ ಬಾಕಿ ಮೊತ್ತಗಳಿಗೆ ಅನ್ವಯವಾಗುವ ಹೊಸ ಶುಲ್ಕಗಳ ಪಟ್ಟಿ ಇಲ್ಲಿದೆ.&lt;/p&gt;&lt;ul&gt; &lt;li&gt;500 ರೂ. ವರೆಗೆ: ಯಾವುದೇ ವಿಳಂಬ ಶುಲ್ಕ ಇರುವುದಿಲ್ಲ&lt;/li&gt; &lt;li&gt;501 ರೂ. ನಿಂದ 5,000 ರೂ. ವರೆಗೆ: 500 ರೂ. ಶುಲ್ಕ&lt;/li&gt; &lt;li&gt;5,001 ರೂ. ನಿಂದ 10,000 ರೂ. ವರೆಗೆ: 750 ರೂ. ಶುಲ್ಕ&lt;/li&gt; &lt;li&gt;10,001 ರೂ. ನಿಂದ 50,000 ರೂ. ವರೆಗೆ: 1,200 ರೂ. ಶುಲ್ಕ&lt;/li&gt; &lt;li&gt;50,000 ರೂ. ಗಿಂತ ಹೆಚ್ಚಿನ ಬಾಕಿ ಮೊತ್ತಕ್ಕೆ: 1,300 ರೂ. ವಿಳಂಬ ಶುಲ್ಕ&lt;/li&gt;&lt;/ul&gt;&lt;img&gt;&lt;p&gt;ಒಂದು ವೇಳೆ ನೀವು ಬಿಲ್&zwnj;ನ ಪೂರ್ಣ ಮೊತ್ತವನ್ನು ಪಾವತಿಸದೆ ಭಾಗಶಃ ಮೊತ್ತವನ್ನು ಪಾವತಿಸಿದರೆ, ನಿಮ್ಮ ಹಣವನ್ನು ಯಾವ ರೀತಿ ಹೊಂದಾಣಿಕೆ ಮಾಡಲಾಗುತ್ತದೆ ಎಂಬುದಕ್ಕೆ ಬ್ಯಾಂಕ್ ಹೊಸ ಕ್ರಮವನ್ನು ಅನುಸರಿಸಲಿದೆ. ನಿಮ್ಮ ಪಾವತಿಯನ್ನು ಮೊದಲು ಅನ್ವಯವಾಗುವ ತೆರಿಗೆಗಳು ಮತ್ತು ವಿವಿಧ ಶುಲ್ಕಗಳಿಗೆ (Fees &amp;amp; Charges) ಹೊಂದಿಸಲಾಗುತ್ತದೆ. ಅದರ ನಂತರ ಇಎಂಐ (EMI) ಗಳಿಗೆ, ಆ ಬಳಿಕ ಬಡ್ಡಿ ಶುಲ್ಕಗಳಿಗೆ, ನಂತರ ಸಾಮಾನ್ಯ ಖರೀದಿಗಳಿಗೆ ಮತ್ತು ಕೊನೆಯದಾಗಿ ಕ್ಯಾಶ್ ಅಡ್ವಾನ್ಸ್ (ನಗದು ಡ್ರಾ) ಗಳಿಗೆ ಹೊಂದಾಣಿಕೆ ಮಾಡಲಾಗುತ್ತದೆ.&lt;/p&gt;&lt;img&gt;&lt;p&gt;ಅಂತರರಾಷ್ಟ್ರೀಯ ವಹಿವಾಟುಗಳಿಗೆ ಅಥವಾ ವಿದೇಶಿ ವೆಬ್&zwnj;ಸೈಟ್&zwnj;ಗಳಲ್ಲಿ ಭಾರತೀಯ ರೂಪಾಯಿಗಳ ಮೂಲಕ ಪಾವತಿ ಮಾಡುವಾಗ ವಿಧಿಸಲಾಗುವ ಡೈನಾಮಿಕ್ ಕರೆನ್ಸಿ ಕನ್ವರ್ಶನ್ (DCC) ಮಾರ್ಕಪ್ ಶುಲ್ಕವನ್ನು ಶೇಕಡಾ 1.5 ರಿಂದ ಶೇಕಡಾ 3.5 ಕ್ಕೆ ಗಣನೀಯವಾಗಿ ಹೆಚ್ಚಿಸಲಾಗಿದೆ. (ಆದರೆ ಮ್ಯಾಗ್ನಸ್ ಕಾರ್ಡ್&zwnj;ಗಳಿಗೆ ಇದು ಶೇ. 2 ರಷ್ಟಿರುತ್ತದೆ). ಇದು ವಿದೇಶ ಪ್ರವಾಸ ಮಾಡುವವರಿಗೆ ಅಥವಾ ವಿದೇಶಿ ಪಾವತಿಗಳನ್ನು ಭಾರತೀಯ ಕರೆನ್ಸಿಯಲ್ಲಿ ಮಾಡುವವರಿಗೆ ವೆಚ್ಚವನ್ನು ಹೆಚ್ಚಿಸಲಿದೆ.&lt;/p&gt;&lt;img&gt;&lt;p&gt;ದೇಶೀಯ (ಡೊಮೆಸ್ಟಿಕ್) ಏರ್&zwnj;ಪೋರ್ಟ್ ಲೌಂಜ್&zwnj;ಗಳಲ್ಲಿ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್&zwnj;ನ &lsquo;ಪ್ರಯಾರಿಟಿ ಪಾಸ್&rsquo; (Priority Pass) ಇನ್ನು ಮುಂದೆ ಮಾನ್ಯವಾಗುವುದಿಲ್ಲ. ದೇಶೀಯ ಲೌಂಜ್ ಪ್ರವೇಶಿಸಲು ಗ್ರಾಹಕರು ತಮ್ಮ ಭೌತಿಕ ಕಾರ್ಡ್ (Physical Card) ಮತ್ತು ಬೋರ್ಡಿಂಗ್ ಪಾಸ್ ಅನ್ನು ಒದಗಿಸಬೇಕಾಗುತ್ತದೆ. ಇಮಿಗ್ರೇಷನ್ ಪ್ರಕ್ರಿಯೆಯ ನಂತರದ ಭಾರತೀಯ ಅಂತರರಾಷ್ಟ್ರೀಯ ಟರ್ಮಿನಲ್&zwnj;ಗಳಲ್ಲಿರುವ ಏರ್&zwnj;ಪೋರ್ಟ್ ಲೌಂಜ್&zwnj;ಗಳನ್ನು ಅಂತರರಾಷ್ಟ್ರೀಯ ಲೌಂಜ್&zwnj;ಗಳೆಂದೇ ಪರಿಗಣಿಸಲಾಗುತ್ತದೆ. ಅಲ್ಲಿಗೆ ಪ್ರಯಾರಿಟಿ ಪಾಸ್ ಬಳಸಿ ಪ್ರವೇಶ ಪಡೆಯಬಹುದು.&lt;/p&gt;&lt;img&gt;&lt;p&gt;ಗಿಫ್ಟ್ ಕಾರ್ಡ್ ಖರೀದಿಗಳಿಗೆ ಇನ್ಮುಂದೆ ಯಾವುದೇ ರೀತಿಯ ರಿವಾರ್ಡ್ ಪಾಯಿಂಟ್&zwnj;ಗಳು ಅಥವಾ ಕ್ಯಾಶ್&zwnj;ಬ್ಯಾಕ್ ಲಭ್ಯವಿರುವುದಿಲ್ಲ. ಇವುಗಳನ್ನು &lsquo;ವ್ಯಾಲೆಟ್&rsquo; ಖರ್ಚುಗಳ ವಿಭಾಗದಿಂದ ಬದಲಾಯಿಸಿ, 'ಗಿಫ್ಟ್ ಕಾರ್ಡ್ಸ್' ಎಂಬ ಪ್ರತ್ಯೇಕ ವಿಭಾಗದಲ್ಲಿ ವರ್ಗೀಕರಿಸಲಾಗುತ್ತದೆ. ಟೋಲ್ ಪಾವತಿಗಳು, ರಸ್ತೆ ಶುಲ್ಕಗಳು ಮತ್ತು ಬ್ರಿಡ್ಜ್ ಫೀಸ್ ಪಾವತಿಗಳ ಮೇಲೂ ಇನ್ನು ಮುಂದೆ ಯಾವುದೇ ರಿವಾರ್ಡ್ ಪಾಯಿಂಟ್&zwnj;ಗಳನ್ನು ನೀಡಲಾಗುವುದಿಲ್ಲ.&lt;/p&gt;&lt;p&gt;ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಈ ಹೊಸ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮಾಸಿಕ ಬಿಲ್&zwnj;ಗಳನ್ನು ನಿಗದಿತ ಸಮಯದೊಳಗೆ ಪಾವತಿಸುವುದು ಸೂಕ್ತ. ವಿಳಂಬ ಪಾವತಿ ಮತ್ತು ಅಂತರರಾಷ್ಟ್ರೀಯ ವಹಿವಾಟುಗಳ ಮೇಲಿನ ಶುಲ್ಕ ಹೆಚ್ಚಳದಿಂದ ತಪ್ಪಿಸಿಕೊಳ್ಳಲು ಈಗಿನಿಂದಲೇ ಎಚ್ಚರಿಕೆ ವಹಿಸಿ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/money/axis-credit-card-new-rules-from-august-28th-gkn-pk01r7d"/>
        </item>
        <item>
            <title><![CDATA[UPI: ಗೂಗಲ್ ಪೇ, ಫೋನ್ ಪೇ ಯೂಸರ್ಸ್ ಗಮನಕ್ಕೆ! 2,000 ಕ್ಕಿಂತ ಹೆಚ್ಚು ಟ್ರಾನ್ಸ್‌ಫರ್ ಮಾಡಿದ್ರೆ ಬೀಳುತ್ತಾ ಎಕ್ಸ್‌ಟ್ರಾ ಚಾರ್ಜ್? ಆರ್‌ಬಿಐ ನಿಯಮ ಏನು ಹೇಳುತ್ತೆ!]]></title>
            <link>https://kannada.asianetnews.com/news-money/google-pay-phonepe-upi-charges-2000-rupees-rbi-rules-bmk/articleshow-q5zvbkp</link>
            <guid isPermaLink="true">https://kannada.asianetnews.com/news-money/google-pay-phonepe-upi-charges-2000-rupees-rbi-rules-bmk/articleshow-q5zvbkp</guid>
            <pubDate>Sun, 09 Aug 2026 22:40:51 +0530</pubDate>
            <description><![CDATA[&lt;p&gt;ಗೂಗಲ್ ಪೇ, ಫೋನ್ ಪೇ ಮೂಲಕ ₹2,000 ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂಬ ವದಂತಿ ಹರಡಿದೆ. ಆದರೆ, ಆರ್&zwnj;ಬಿಐ ನಿಯಮ ಏನು ಹೇಳುತ್ತೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzddcj569ez6erj34x3n6nsp,imgname-upi-mdr-charges-1786082904229.jpg" type="image/jpeg" height="390" width="690"/>
            <content:encoded><![CDATA[&lt;p&gt;ಡಿಜಿಟಲ್ ಯುಗದಲ್ಲಿ ಇಂದು ಪ್ರತಿಯೊಬ್ಬರೂ ಜೇಬಿನಲ್ಲಿ ನಗದು ಹಣ ಇಟ್ಟುಕೊಳ್ಳುವುದನ್ನೇ ಮರೆತುಬಿಟ್ಟಿದ್ದಾರೆ. ಸಣ್ಣ ತರಕಾರಿ ಅಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್&zwnj;ಗಳವರೆಗೆ ಎಲ್ಲರೂ ಗೂಗಲ್ ಪೇ (Google Pay), ಫೋನ್ ಪೇ (PhonePe) ನಂತಹ ಯುಪಿಐ (UPI) ಆ್ಯಪ್&zwnj;ಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಸುದ್ದಿ ಭಾರಿ ಸದ್ದು ಮಾಡುತ್ತಿದ್ದು, ನಿಯಮಿತ ಮೊತ್ತಕ್ಕಿಂತ ಹೆಚ್ಚು ಹಣ ವರ್ಗಾವಣೆ ಮಾಡಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ವದಂತಿ ಹಬ್ಬಿದೆ. ಆದರೆ, ಕೇಂದ್ರ ಹಣಕಾಸು ಸಚಿವಾಲಯ ಏನು ಹೇಳುತ್ತದೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;h2&gt;&lt;strong&gt;ಏನಿದು ಎಂಡಿಆರ್&zwnj; ಶುಲ್ಕ!&lt;/strong&gt;&lt;/h2&gt;&lt;p&gt;ವಾಸ್ತವವಾಗಿ, ಕೇಂದ್ರ ಹಣಕಾಸು ಸಚಿವಾಲಯವು ಸಂಸತ್ತಿನಲ್ಲಿ 'ಪಾವತಿ ಮತ್ತು ವಸಾಹತು ವ್ಯವಸ್ಥೆಗಳ (ತಿದ್ದುಪಡಿ) ಮಸೂದೆ, 2027' ಅನ್ನು ಪರಿಚಯಿಸಿದೆ. ಈ ಮಸೂದೆಯಲ್ಲಿ 'ವ್ಯಾಪಾರಿ ರಿಯಾಯಿತಿ ದರ' ಅಂದರೆ ಎಂಡಿಆರ್ ಅನ್ನು ಪರಿಚಯಿಸಲು ಪ್ರಸ್ತಾಪಿಸಲಾಗಿದೆ. ಈ ಯೋಜನೆಯ ಪ್ರಕಾರ, 2,000 ರೂಪಾಯಿಗಿಂತ ಹೆಚ್ಚಿನ ವ್ಯವಹಾರಿಕ ವಹಿವಾಟುಗಳಿಗೆ ಮಾತ್ರ ಎಂಡಿಆರ್ ಶುಲ್ಕ ಅನ್ವಯಿಸುವ ಸಾಧ್ಯತೆಯಿದೆ. ಆದರೆ ಈ ಹೊಸ ಪ್ರಸ್ತಾವನೆಯು ಸಾಮಾನ್ಯ ಗ್ರಾಹಕರಿಗೆ ಯಾವುದೇ ರೀತಿಯಲ್ಲೂ ಅನ್ವಯಿಸುವುದಿಲ್ಲ.&lt;/p&gt;&lt;h3&gt;&lt;strong&gt;ಸೋಶಿಯಲ್&zwnj; ಮೀಡಿಯಾ ನೋಡಿ ಆತಂಕ ಪಡುವ ಅಗತ್ಯವಿಲ್ಲ!&lt;/strong&gt;&lt;/h3&gt;&lt;p&gt;ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್&zwnj;ಗಳನ್ನು ನೋಡಿ ಕಂಗಾಲಾಗುವ ಅಗತ್ಯವಿಲ್ಲ. ನೀವು ದಿನನಿತ್ಯ ಮನೆಗೆ ಬೇಕಾದ ಹಾಲು, ತರಕಾರಿಗಳು, ದಿನಸಿ ವಸ್ತುಗಳನ್ನು ಖರೀದಿಸುವುದು ಅಥವಾ ಆಟೋ ಮತ್ತು ಟ್ಯಾಕ್ಸಿ ದರಗಳನ್ನು ಪಾವತಿಸುವಂತಹ ಸಾಮಾನ್ಯ UPI ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ಟೈಮ್ಸ್ ಆಫ್ ಇಂಡಿಯಾ ಮೂಲಗಳ ಪ್ರಕಾರ, ಈ ಶಿಫಾರಸು ಮುಖ್ಯವಾಗಿ 2,000 ರೂಪಾಯಿಗಿಂತ ಹೆಚ್ಚಿನ ವಾಣಿಜ್ಯ ವ್ಯವಹಾರಗಳನ್ನು ಮಾಡುವ ದೊಡ್ಡ ಸಂಸ್ಥೆಗಳನ್ನು ಮಾತ್ರ ಗುರಿಯಾಗಿರಿಸಿಕೊಂಡಿದೆ.&lt;/p&gt;&lt;h3&gt;&lt;strong&gt;ಎಂಡಿಆರ್ ಶುಲ್ಕ ಯಾರಿಗೆ ಅನ್ವಯ!&lt;/strong&gt;&lt;/h3&gt;&lt;p&gt;ಸರಳವಾಗಿ ಹೇಳಬೇಕೆಂದರೆ, ಇಲ್ಲಿ ಉಲ್ಲೇಖಿಸಲಾದ MDR ಶುಲ್ಕ ಎನ್ನುವುದು ವ್ಯಾಪಾರಿಗಳು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಿದ್ದಕ್ಕಾಗಿ ಬ್ಯಾಂಕುಗಳಿಗೆ ಪಾವತಿಸುವ ಶುಲ್ಕವಾಗಿದೆ. ಇದು ಸಂಪೂರ್ಣವಾಗಿ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು, ಹಣ ಪಾವತಿಸುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂದಹಾಗೆ, ಸರ್ಕಾರವು ಜನವರಿ 2020 ರಿಂದಲೇ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ UPI ಮತ್ತು RuPay ಡೆಬಿಟ್ ಕಾರ್ಡ್&zwnj;ಗಳ ಮೇಲಿದ್ದ ಎಂಡಿಆರ್ ಶುಲ್ಕ ರದ್ದುಗೊಳಿಸಿತ್ತು.&lt;/p&gt;&lt;h3&gt;&lt;strong&gt;ವಹಿವಾಟಿನ ಮಿತಿ ಏನು?&lt;/strong&gt;&lt;/h3&gt;&lt;p&gt;ಇನ್ನು ವಹಿವಾಟಿನ ಮಿತಿಯ ಬಗ್ಗೆ ನೋಡುವುದಾದರೆ, ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಒಬ್ಬ ಸಾಮಾನ್ಯ ಬಳಕೆದಾರ ದಿನಕ್ಕೆ 1 ಲಕ್ಷ ರೂಪಾಯಿಯವರೆಗೆ ಯಾವುದೇ ಅಡೆತಡೆಯಿಲ್ಲದೆ ಯುಪಿಐ ವಹಿವಾಟು ಮಾಡಬಹುದು. ಇನ್ನು ಆಸ್ಪತ್ರೆಗಳ ಬಿಲ್ ಪಾವತಿ, ಶಿಕ್ಷಣ ಸಂಸ್ಥೆಗಳ ಶುಲ್ಕ ಹಾಗೂ ಸರ್ಕಾರಿ ತೆರಿಗೆ ಪಾವತಿಗಳಂತಹ ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಮಿತಿಯು ಇನ್ನಷ್ಟು ಹೆಚ್ಚಿರುತ್ತದೆ. ಆದ್ದರಿಂದ, 2,000 ರೂಪಾಯಿಗಿಂತ ಹೆಚ್ಚು ಹಣ ವರ್ಗಾವಣೆ ಮಾಡಿದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/news-money/google-pay-phonepe-upi-charges-2000-rupees-rbi-rules-bmk/articleshow-q5zvbkp"/>
        </item>
        <item>
            <title><![CDATA[LPG: ಗ್ಯಾಸ್ ಸಬ್ಸಿಡಿ ತಕ್ಷಣವೇ ಬಂದ್: ಸರ್ಕಾರದಿಂದ ಹೊಸ ರೂಲ್ಸ್‌, ಮಾಡಬೇಕಾಗಿದ್ದಿಷ್ಟೇ!]]></title>
            <link>https://kannada.asianetnews.com/business/lpg-subsidy-stopped-new-government-rules-what-to-do-bmk/articleshow-sgf53ac</link>
            <guid isPermaLink="true">https://kannada.asianetnews.com/business/lpg-subsidy-stopped-new-government-rules-what-to-do-bmk/articleshow-sgf53ac</guid>
            <pubDate>Sat, 08 Aug 2026 15:58:30 +0530</pubDate>
            <description><![CDATA[ಎಲ್&zwnj;ಪಿಜಿ ಗ್ಯಾಸ್ ಗ್ರಾಹಕರು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇದನ್ನು ಮಾಡದಿದ್ದರೆ, ಗ್ಯಾಸ್ ಸಬ್ಸಿಡಿ ನಿಲ್ಲುವ, ಸಿಲಿಂಡರ್ ಬುಕಿಂಗ್&zwnj;ನಲ್ಲಿ ತೊಂದರೆಯಾಗುವ ಮತ್ತು ಸಂಪರ್ಕ ನಿಷ್ಕ್ರಿಯಗೊಳ್ಳುವ ಅಪಾಯವಿದೆ. ಗ್ರಾಹಕರು ಮೊಬೈಲ್ ಆ್ಯಪ್ ಮೂಲಕ ಮನೆಯಿಂದಲೇ ಸುಲಭವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kwea10qws93q5pvn93t79r8r,imgname-gas-main-1782891709180.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ಇನ್ನೂ ಎಲ್&zwnj;ಪಿಜಿ ಗ್ಯಾಸ್ ಸಂಪರ್ಕಕ್ಕಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯ. ಸಮಯಕ್ಕೆ ಸರಿಯಾಗಿ ಇ-ಕೆವೈಸಿ ಪೂರ್ಣಗೊಳಿಸದ ಗ್ಯಾಸ್ ಗ್ರಾಹಕರು ಮುಂಬರುವ ದಿನಗಳಲ್ಲಿ ಗ್ಯಾಸ್ ಸಿಲಿಂಡರ್&zwnj; ಬುಕ್ ಮಾಡುವಲ್ಲಿ ಮತ್ತು ಇತರ ಸೌಲಭ್ಯ ಪಡೆಯುವಲ್ಲಿ ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸಬ್ಸಿಡಿ ಸಿಗದ ಲಿಸ್ಟ್&zwnj;ನಲ್ಲಿ ನಿಮ್ಮ ಹೆಸರೂ ಇದೆಯಾ? ಅದನ್ನು ಹೇಗೆ ಚೆಕ್&zwnj; ಮಾಡಬೇಕು ಎನ್ನುವುದನ್ನು ಇಲ್ಲಿ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಸರ್ಕಾರದ ಮನವಿ ಏನು?&lt;/strong&gt;&lt;/h2&gt;&lt;p&gt;ಸರ್ಕಾರ ಮತ್ತು ಅನಿಲ ಕಂಪನಿಗಳು ಗ್ರಾಹಕರು ಇ-ಕೆವೈಸಿ ಪೂರ್ಣಗೊಳಿಸಲು ಗಡುವನ್ನು ಪದೇ ಪದೇ ವಿಸ್ತರಿಸಿವೆ, ಆದರೆ ಇನ್ನೂ ಅನೇಕ ಗ್ರಾಹಕರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಆದ್ದರಿಂದ, ಸುಗಮ ಅನಿಲ ಸಬ್ಸಿಡಿ ಮತ್ತು ಆನ್&zwnj;ಲೈನ್ ಬುಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಮನವಿ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ಇ-ಕೆವೈಸಿ ಕಡ್ಡಾಯ!&lt;/strong&gt;&lt;/h3&gt;&lt;p&gt;ನಿಮ್ಮ ಇ-ಕೆವೈಸಿ ಪೂರ್ಣಗೊಳ್ಳದಿದ್ದರೆ, ಸರ್ಕಾರದಿಂದ ಪಡೆದ ಗ್ಯಾಸ್ ಸಬ್ಸಿಡಿ ನಿಮ್ಮ ಖಾತೆಗೆ ಜಮಾ ಆಗುವುದನ್ನು ನಿಲ್ಲಿಸಬಹುದು. ಆನ್&zwnj;ಲೈನ್&zwnj;ನಲ್ಲಿ ರೀಫಿಲ್ ಗ್ಯಾಸ್ ಸಿಲಿಂಡರ್&zwnj;ಗಳನ್ನು ಬುಕ್ ಮಾಡುವಾಗ ಟೆಕ್ನಿಕಲ್&zwnj; ಪ್ರಾಬ್ಲಂ ಉಂಟಾಗಬಹುದು. ಕೆವೈಸಿ ಕೊರತೆಯಿಂದಾಗಿ ಗ್ಯಾಸ್ ವಿತರಕರು ಸಿಲಿಂಡರ್&zwnj;ಗಳನ್ನು ತಲುಪಿಸಲು ನಿರಾಕರಿಸಲೂಬಹುದು.&lt;/p&gt;&lt;h3&gt;&lt;strong&gt;ಕೆವೈಸಿ ಅನ್ನು ಪೂರ್ಣಗೊಳಿಸದಿದ್ದರೆ ನಿರ್ಬಧ!&lt;/strong&gt;&lt;/h3&gt;&lt;p&gt;ನೀವು ದೀರ್ಘಕಾಲದವರೆಗೆ KYC ಅನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ಗ್ಯಾಸ್ ಸಂಪರ್ಕವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ನೀವು ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಮನೆಯಿಂದಲೇ ಕೆಲವೇ ನಿಮಿಷಗಳಲ್ಲಿ ಇ-ಕೆವೈಸಿಯನ್ನು ಪೂರ್ಣಗೊಳಿಸಬಹುದು.&lt;/p&gt;&lt;h3&gt;&lt;strong&gt;ಮಾಡಬೇಕಾಗಿದ್ದೇನು?&lt;/strong&gt;&lt;/h3&gt;&lt;p&gt;ನೀವು ಗ್ಯಾಸ್ ಹೊಂದಿರುವ ಕಂಪನಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್&zwnj;ಲೋಡ್ ಮಾಡಿ (ಉದಾ. ಇಂಡೇನ್, ಭಾರತ್ ಗ್ಯಾಸ್, ಅಥವಾ HP ಗ್ಯಾಸ್). ನಿಮ್ಮ ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಮಾಡಲಾದ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ಅಪ್ಲಿಕೇಶನ್&zwnj;ಗೆ ಲಾಗಿನ್ ಮಾಡಿ. ಅಪ್ಲಿಕೇಶನ್&zwnj;ನಲ್ಲಿರುವ ಹೋಮ್&zwnj;ಗೆ ಹೋಗಿ 'ಇ-ಕೆವೈಸಿ' ಅಥವಾ 'ಆಧಾರ್ ಪರಿಶೀಲನೆ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ಕ್ಯಾಮೆರಾ ಬಳಸಿ ಮುಖ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ. ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಗ್ರಾಹಕರು ಹೆಚ್ಚಿನ ತೊಡಕುಗಳು ಮತ್ತು ಸಬ್ಸಿಡಿ ವಿಳಂಬವನ್ನು ತಪ್ಪಿಸಲು ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/business/lpg-subsidy-stopped-new-government-rules-what-to-do-bmk/articleshow-sgf53ac"/>
        </item>
        <item>
            <title><![CDATA[ಬೆಕ್ಕಿನ ಜೊತೆ ಆಟವಾಡ್ತಿದ್ದ ಬಾಲಕ ICU ಪಾಲು.. ಪೋಷಕರೇ ನಿಮ್ಮ ಮಗು ಜೋಪಾನ]]></title>
            <link>https://kannada.asianetnews.com/india-news/8-year-old-boy-in-icu-after-being-scratched-by-cat-in-kolkata-gkn/articleshow-vhh8302</link>
            <guid isPermaLink="true">https://kannada.asianetnews.com/india-news/8-year-old-boy-in-icu-after-being-scratched-by-cat-in-kolkata-gkn/articleshow-vhh8302</guid>
            <pubDate>Tue, 04 Aug 2026 12:18:24 +0530</pubDate>
            <description><![CDATA[&lt;p&gt;ಇಂದಿನ ದಿನಗಳಲ್ಲಿ ಮನೆಯಲ್ಲಿ ನಾಯಿ, ಬೆಕ್ಕು ಸೇರಿದಂತೆ ಸಾಕುಪ್ರಾಣಿಗಳನ್ನು ಸಾಕುವುದು ಟ್ರೆಂಡ್ ಆಗಿದೆ. ಆದರೆ.. ಒಂದು ಪುಟ್ಟ ನಿರ್ಲಕ್ಷ್ಯವು ಪ್ರಾಣಕ್ಕೇ ಕಂಟಕವಾಗಬಹುದು ಎಂಬುದಕ್ಕೆ ಕೋಲ್ಕತ್ತಾದಲ್ಲಿ ನಡೆದ ಘಟನೆಯೇ ಸಾಕ್ಷಿ. ಬೆಕ್ಕು ಗೀರಿದ್ದರಿಂದ ಎಂಟು ವರ್ಷದ ಬಾಲಕನೊಬ್ಬ ಐಸಿಯು (ICU) ಸೇರಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz5reapesqq4a7q55xp8hgy6,imgname-boy-play-with-cat-1785826061006.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತ್ತಾ: &lt;/strong&gt;ಮಕ್ಕಳಿಗೆ ಸಾಕುಪ್ರಾಣಿಗಳ ಜೊತೆ ಆಟವಾಡುವುದು ಮನಸ್ಸಿಗೆ ಖುಷಿ ನೀಡುತ್ತದೆ ನಿಜ. ಆದರೆ, ಆಟದ ವೇಳೆ ಅವು ಗೀರುವುದು ಅಥವಾ ಕಚ್ಚುವುದನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ದಕ್ಷಿಣ ಕೋಲ್ಕತ್ತಾದ ಎಂಟು ವರ್ಷದ ಬಾಲಕನ ವಿಷಯದಲ್ಲಿ ಇದೇ ನಿರ್ಲಕ್ಷ್ಯ ಪ್ರಾಣಾಪಾಯ ತಂದೊಡ್ಡಿತ್ತು. ಬೆಕ್ಕು ಗೀರಿದ್ದರಿಂದ ಉಂಟಾದ ಸೋಂಕು ಆತನ ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರಿದೆ.&lt;/p&gt;&lt;h2&gt;&lt;strong&gt;ಮೂರ್ಛೆ ರೋಗದಿಂದ ವೆಂಟಿಲೇಟರ್&zwnj;ವರೆಗೆ..&lt;/strong&gt;&lt;/h2&gt;&lt;p&gt;ಜುಲೈ 10 ರಂದು ಬಾಲಕನಿಗೆ ಹಠಾತ್ತನೆ ತೀವ್ರವಾದ ಮೂರ್ಛೆ (Fits) ಕಾಣಿಸಿಕೊಂಡಿದೆ. ಗಾಬರಿಗೊಂಡ ಪೋಷಕರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನಿಗೆ ಪ್ರಜ್ಞೆ ಬರದೇ ಸತತವಾಗಿ ಫಿಟ್ಸ್ ಬರುತ್ತಿದ್ದರಿಂದ ವೈದ್ಯರು ಇದನ್ನು 'ಸ್ಟೇಟಸ್ ಎಪಿಲೆಪ್ಟಿಕಸ್' ಎಂದು ಕರೆದರು. ಔಷಧಿ ನೀಡಿದರೂ ಪರಿಸ್ಥಿತಿ ಹತೋಟಿಗೆ ಬಾರದಿದ್ದಾಗ ಆತನನ್ನು ಪೀಡಿಯಾಟ್ರಿಕ್ ಐಸಿಯುಗೆ ಸ್ಥಳಾಂತರಿಸಿ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟ ನೀಡಲಾಯಿತು.&lt;/p&gt;&lt;h2&gt;&lt;strong&gt;ವೈದ್ಯರಿಗೆ ಸವಾಲಾಗಿದ್ದ ರೋಗ ಪತ್ತೆ&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಮೆದುಳು ಮತ್ತು ಬೆನ್ನುಹುರಿಯ ಪರೀಕ್ಷೆ ನಡೆಸಿದರೂ ಕಾಯಿಲೆಗೆ ಸರಿಯಾದ ಕಾರಣ ತಿಳಿಯಲಿಲ್ಲ. ವೈದ್ಯರು ಇದನ್ನು 'ನಾರ್ಸ್' (NORSE - New-Onset Refractory Status Epilepticus) ಎಂಬ ಅಪರೂಪದ ನರಗಳ ಕಾಯಿಲೆ ಎಂದು ಶಂಕಿಸಿದ್ದರು. ಆದರೆ ಬಾಲಕನಿಗೆ ಜ್ವರ ಇರುವುದನ್ನು ಗಮನಿಸಿದ ವೈದ್ಯರು ಪೋಷಕರನ್ನು ಆಳವಾಗಿ ವಿಚಾರಿಸಿದಾಗ ಅಸಲಿ ವಿಷಯ ಬಯಲಾಗಿದೆ.&lt;/p&gt;&lt;p&gt;ಬಾಲಕ ಪ್ರತಿದಿನ ತನ್ನ ಮುದ್ದಿನ ಬೆಕ್ಕಿನೊಂದಿಗೆ ಮಲಗುತ್ತಿದ್ದ. ಮೂರ್ಛೆ ಬರುವ 10 ದಿನಗಳ ಮೊದಲು ಆತನ ಚರ್ಮದ ಮೇಲೆ ಕೆಂಪು ಗುರುತು ಹಾಗೂ ಊತ ಕಾಣಿಸಿಕೊಂಡಿತ್ತು. ತಕ್ಷಣವೇ ಆಂಟಿಬಾಡಿ ಪರೀಕ್ಷೆ ನಡೆಸಿದಾಗ ಅದು 'ಬಾರ್ಟೋನೆಲ್ಲಾ' (Bartonella) ಎಂಬ ಬ್ಯಾಕ್ಟೀರಿಯಾದಿಂದ ಬರುವ 'ಕ್ಯಾಟ್ ಸ್ಕ್ರ್ಯಾಚ್ ಡಿಸೀಸ್' (Cat Scratch Disease) ಎಂದು ದೃಢಪಟ್ಟಿದೆ.&lt;/p&gt;&lt;h2&gt;&lt;strong&gt;ಚೇತರಿಸಿಕೊಂಡ ಬಾಲಕ&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಈ ಸೋಂಕು ಸಣ್ಣ ಜ್ವರದೊಂದಿಗೆ ಮುಗಿಯುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ ಇದು ಮೆದುಳು ಮತ್ತು ನರಮಂಡಲದ ಮೇಲೆ ದಾಳಿ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸೂಕ್ತ ಆಂಟಿಬಯೋಟಿಕ್ ಚಿಕಿತ್ಸೆ ನೀಡಿದ ನಂತರ ಬಾಲಕ ಚೇತರಿಸಿಕೊಂಡಿದ್ದು 10 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ. ಬೆಕ್ಕು ಅಥವಾ ನಾಯಿ ಗೀರಿದರೆ ಅಥವಾ ಕಚ್ಚಿದರೆ ಆ ಜಾಗವನ್ನು ತಕ್ಷಣವೇ ಸೋಪು ಮತ್ತು ಹರಿಯುವ ನೀರಿನಿಂದ ಚೆನ್ನಾಗಿ ತೊಳೆಯಿರಿ. ಸಾಕುಪ್ರಾಣಿಗಳೊಂದಿಗೆ ಆಟವಾಡಿದ ನಂತರ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ಸ್ವಚ್ಛಗೊಳಿಸಿಕೊಳ್ಳಿ. ಸಾಕುಪ್ರಾಣಿಗಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿ ಮತ್ತು ಅವುಗಳ ಮೈಮೇಲೆ ಉಣ್ಣೆ/ಪರೋಪಜೀವಿಗಳು ಇರದಂತೆ ನೋಡಿಕೊಳ್ಳಿ. ಮಕ್ಕಳು ಪ್ರಾಣಿಗಳ ಜೊತೆ ಆಡುವಾಗ ಪೋಷಕರ ನಿಗಾ ಇರಲಿ.&lt;/p&gt;]]></content:encoded>
            <category>news-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/8-year-old-boy-in-icu-after-being-scratched-by-cat-in-kolkata-gkn/articleshow-vhh8302"/>
        </item>
        <item>
            <title><![CDATA[ಗಮನಿಸಿ! ಆಗಸ್ಟ್ 1 ರಿಂದ ಎಲ್‌ಪಿಜಿಯಿಂದ ಆಧಾರ್‌ವರೆಗೆ ಹಲವು ನಿಯಮಗಳ ಬದಲಾವಣೆ; ಪ್ರತಿಯೊಬ್ಬರೂ ತಿಳಿಯಬೇಕಾದ ಸುದ್ದಿ!]]></title>
            <link>https://kannada.asianetnews.com/market-money/new-rules-august-1-2026-lpg-aadhaar-changes-india-bmk/articleshow-ygxrfcy</link>
            <guid isPermaLink="true">https://kannada.asianetnews.com/market-money/new-rules-august-1-2026-lpg-aadhaar-changes-india-bmk/articleshow-ygxrfcy</guid>
            <pubDate>Tue, 28 Jul 2026 19:13:51 +0530</pubDate>
            <description><![CDATA[&lt;p&gt;ಆಗಸ್ಟ್ 1 ರಿಂದ ದೇಶಾದ್ಯಂತ ಹಲವು ಪ್ರಮುಖ ನಿಯಮಗಳು ಬದಲಾಗಲಿವೆ. ಎಲ್&zwnj;ಪಿಜಿ ಸಿಲಿಂಡರ್ ಬೆಲೆ, ಆದಾಯ ತೆರಿಗೆ ರಿಟರ್ನ್ ಗಡುವು, ತತ್ಕಾಲ್ ರೈಲು ಟಿಕೆಟ್ ಬುಕಿಂಗ್, ಮತ್ತು ಆಧಾರ್ ಆಧಾರಿತ CKYC 2.0 ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಜಾರಿಗೆ ಬರಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymfeyjvs22nwheaxxwq7ax2,imgname-adhar-and-lpg-1785246218842.jpg" type="image/jpeg" height="390" width="690"/>
            <content:encoded><![CDATA[&lt;p&gt;ಜುಲೈ ತಿಂಗಳು ಮುಕ್ತಾಯಗೊಳ್ಳುತ್ತಿದ್ದಂತೆ, ಆಗಸ್ಟ್ 1 ರಿಂದ ದೇಶಾದ್ಯಂತ ಹಲವು ಪ್ರಮುಖ ಆರ್ಥಿಕ ಹಾಗೂ ಸೇವಾ ನಿಯಮಗಳು ಬದಲಾಗಲಿವೆ. ಬ್ಯಾಂಕಿಂಗ್ ವಹಿವಾಟುಗಳು, ಆದಾಯ ತೆರಿಗೆ, ರೈಲು ಟಿಕೆಟ್ ಬುಕಿಂಗ್, ಎಲ್&zwnj;ಪಿಜಿ ಸಿಲಿಂಡರ್ ಬೆಲೆಗಳು, ಕ್ರೆಡಿಟ್ ಕಾರ್ಡ್&zwnj;ಗಳು ಮತ್ತು ಆಧಾರ್ ಆಧಾರಿತ ಸೇವೆಗಳಲ್ಲಿ ಈ ಹೊಸ ಬದಲಾವಣೆಗಳು ಜಾರಿಗೆ ಬರಲಿವೆ. ಹೊಸ ನಿಯಮಗಳ ಅರಿವಿಲ್ಲದಿದ್ದರೆ ಸಾರ್ವಜನಿಕರು ಹೆಚ್ಚುವರಿ ಶುಲ್ಕ ಅಥವಾ ದಂಡ ತೆರಬೇಕಾಗಬಹುದು. ಆಗಸ್ಟ್ 1 ರಿಂದ ಜಾರಿಗೆ ಬರಲಿರುವ ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ:&lt;/p&gt;&lt;h2&gt;&lt;strong&gt;ತತ್ಕಾಲ್ ರೈಲು ಟಿಕೆಟ್ ಬುಕಿಂಗ್&zwnj;ಗೆ ಹೊಸ ಟೋಕನ್ ವ್ಯವಸ್ಥೆ!&lt;/strong&gt;&lt;/h2&gt;&lt;p&gt;ಭಾರತೀಯ ರೈಲ್ವೆಯ ತತ್ಕಾಲ್ ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ ತರಲಾಗುತ್ತಿದೆ. ಮುಖ್ಯವಾಗಿ ಪಶ್ಚಿಮ ಮಧ್ಯ ರೈಲ್ವೆ ವಲಯದ ಬುಕಿಂಗ್ ಕೇಂದ್ರಗಳಲ್ಲಿ ಹೊಸ 'ಟೋಕನ್ ವ್ಯವಸ್ಥೆ' ಪರಿಚಯಿಸಲಾಗುತ್ತಿದ್ದು, ಟೋಕನ್ ನೀಡುವ ಸಮಯವನ್ನು ಬದಲಾಯಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಟೋಕನ್&zwnj;ಗಾಗಿ ಒಮ್ಮೆ ಮತ್ತು ಟಿಕೆಟ್&zwnj;ಗಾಗಿ ಇನ್ನೊಮ್ಮೆ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಬುಕಿಂಗ್ ಕೇಂದ್ರಗಳಲ್ಲಿ ದಟ್ಟಣೆ ನಿಯಂತ್ರಿಸಿ, ಪ್ರಕ್ರಿಯೆಯನ್ನು ವೇಗಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.&lt;/p&gt;&lt;h3&gt;&lt;strong&gt;ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಗಡುವು!&lt;/strong&gt;&lt;/h3&gt;&lt;p&gt;ಸಾಮಾನ್ಯ ತೆರಿಗೆದಾರರಿಗೆ (ITR-1 ಮತ್ತು ITR-2) 2026-27ನೇ ಹಣಕಾಸು ವರ್ಷದ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಗಡುವಿನ ನಂತರ ರಿಟರ್ನ್ ಸಲ್ಲಿಸಿದರೆ ದಂಡ ಪಾವತಿಸಬೇಕಾಗುತ್ತದೆ. ಆದರೆ, ಆಡಿಟ್ ಅಗತ್ಯವಿಲ್ಲದ ವ್ಯವಹಾರಗಳಿಗೆ (ITR-3 ಮತ್ತು ITR-4) ರಿಟರ್ನ್ಸ್ ಸಲ್ಲಿಸಲು ಆಗಸ್ಟ್ 31 ರವರೆಗೆ ಕಾಲಾವಕಾಶವಿದ್ದರೆ, ಆಡಿಟ್ ಅಗತ್ಯವಿರುವ ಉದ್ಯಮಿಗಳಿಗೆ ಅಕ್ಟೋಬರ್ 31 ರವರೆಗೆ ಸಮಯವಿರುತ್ತದೆ.&lt;/p&gt;&lt;h3&gt;&lt;strong&gt;ಎಲ್&zwnj;ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ!&lt;/strong&gt;&lt;/h3&gt;&lt;p&gt;ಪ್ರತಿ ತಿಂಗಳ ಮೊದಲ ದಿನದಂತೆ ಆಗಸ್ಟ್ 1 ರಂದೂ ಸಹ ತೈಲ ಮಾರುಕಟ್ಟೆ ಕಂಪನಿಗಳು ದೇಶೀಯ ಮತ್ತು ವಾಣಿಜ್ಯ ಬಳಕೆಯ ಎಲ್&zwnj;ಪಿಜಿ ಸಿಲಿಂಡರ್&zwnj;ಗಳ ಹೊಸ ಬೆಲೆಗಳನ್ನು ಘೋಷಿಸಲಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಮತ್ತು ಮಧ್ಯಪ್ರಾಚ್ಯದ ಉದ್ವಿಗ್ನತೆಗಳ ಆಧಾರದ ಮೇಲೆ ಬೆಲೆ ಪರಿಷ್ಕರಣೆಯಾಗಲಿದ್ದು, ಇದು ಸಾರ್ವಜನಿಕರ ಮನೆ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.&lt;/p&gt;&lt;h3&gt;&lt;strong&gt;ಆಧಾರ್ ಮತ್ತು 'CKYC 2.0' ವ್ಯವಸ್ಥೆ ಜಾರಿ!&lt;/strong&gt;&lt;/h3&gt;&lt;p&gt;ಆಗಸ್ಟ್&zwnj;ನಿಂದ ಬ್ಯಾಂಕುಗಳು, ವಿಮಾ ಕಂಪನಿಗಳು ಹಾಗೂ ಆಸ್ತಿ ನಿರ್ವಹಣಾ ಸಂಸ್ಥೆಗಳು ಜಂಟಿಯಾಗಿ 'ಕೇಂದ್ರ ಗ್ರಾಹಕ KYC' (CKYC) 2.0 ವ್ಯವಸ್ಥೆಯನ್ನು ಜಾರಿಗೆ ತರುತ್ತಿವೆ. ಈ ಡಿಜಿಟಲ್ ವ್ಯವಸ್ಥೆಯಿಂದಾಗಿ ಗ್ರಾಹಕರು ಹೊಸ ಖಾತೆ ತೆರೆಯುವಾಗ ಅಥವಾ ಕೆವೈಸಿ ನವೀಕರಿಸುವಾಗ ಪದೇ ಪದೇ ಒಂದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಗ್ರಾಹಕರ ಒಪ್ಪಿಗೆಯೊಂದಿಗೆ ಸಂಸ್ಥೆಗಳು ನೇರವಾಗಿ ಕೇಂದ್ರ ನೋಂದಣಿಯಿಂದ ಮಾಹಿತಿ ಪಡೆಯಬಹುದಾಗಿದ್ದು, ಇದು ವಂಚನೆಗಳನ್ನು ತಡೆಯಲು ನೆರವಾಗಲಿದೆ.&lt;/p&gt;&lt;h3&gt;&lt;strong&gt;ಕ್ರೆಡಿಟ್ ಕಾರ್ಡ್ ಮತ್ತು ಎಫ್&zwnj;ಡಿ (FD) ಬಡ್ಡಿದರಗಳ ಬದಲಾವಣೆ!&lt;/strong&gt;&lt;/h3&gt;&lt;p&gt;ಹಲವು ಪ್ರಮುಖ ಬ್ಯಾಂಕುಗಳು ತಮ್ಮ ಕ್ರೆಡಿಟ್ ಕಾರ್ಡ್&zwnj;ಗಳ ರಿವಾರ್ಡ್ ಪಾಯಿಂಟ್ಸ್, ವಾರ್ಷಿಕ ಹಾಗೂ ಸೇವಾ ಶುಲ್ಕಗಳ ನಿಯಮಗಳನ್ನು ಬದಲಾಯಿಸುತ್ತಿವೆ. ಇದರೊಂದಿಗೆ, ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಸಭೆಯ ನಿರ್ಧಾರಕ್ಕೆ ಅನುಗುಣವಾಗಿ ಬ್ಯಾಂಕುಗಳ ಸ್ಥಿರ ಠೇವಣಿ (FD) ಬಡ್ಡಿದರಗಳು ಮತ್ತು ಸಾಲಗಳ ಇಎಮ್&zwnj;ಐ (EMI) ದರಗಳಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/market-money/new-rules-august-1-2026-lpg-aadhaar-changes-india-bmk/articleshow-ygxrfcy"/>
        </item>
        <item>
            <title><![CDATA[Onion Price: ಗ್ರಾಹಕರಿಗೆ ರಿಲೀಫ್‌, ಆದರೆ ಈರುಳ್ಳಿ ಬೆಳೆದ ರೈತನಿಗೆ ಆತಂಕ?  ಆಡಳಿತದ ಹೊಸ ಪ್ಲಾನ್‌ ಅನ್ನದಾತನಿಗೆ ತಂದಿಡ್ತಾ ಸಂಕಷ್ಟ!]]></title>
            <link>https://kannada.asianetnews.com/state/onion-price-rise-government-kanda-express-buffer-stock-onion-farmers-crisis-apmc-market-india-agriculture-news-bmk/articleshow-zmn7orp</link>
            <guid isPermaLink="true">https://kannada.asianetnews.com/state/onion-price-rise-government-kanda-express-buffer-stock-onion-farmers-crisis-apmc-market-india-agriculture-news-bmk/articleshow-zmn7orp</guid>
            <pubDate>Mon, 24 Aug 2026 17:06:23 +0530</pubDate>
            <description><![CDATA[ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ 'ಕಾಂದಾ ಎಕ್ಸ್&zwnj;ಪ್ರೆಸ್' ಮೂಲಕ ಬಫರ್ ಸ್ಟಾಕ್ ಬಿಡುಗಡೆ ಮಾಡುತ್ತಿದೆ. ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿದು, ಕಡಿಮೆ ಇಳುವರಿ ಪಡೆದ ರೈತರು ತಮ್ಮ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಈ ನಿರ್ಧಾರವು ಗ್ರಾಹಕರಿಗೆ ತಾತ್ಕಾಲಿಕ ಸಮಾಧಾನ ನೀಡಿದರೂ, ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ದೂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0sqpvkkzam2f6s74jt523mn,imgname-onion-1787570122355.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೂ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅಥವಾ ನ್ಯಾಯಕ್ಕಾಗಿ ಹೋರಾಡಲು ಕಾನೂನಿನಲ್ಲಿ ಒಂದು ಅವಕಾಶವಿರುತ್ತದೆ. ಆದರೆ, ಹಗಲಿರುಳೆನ್ನದೆ ಬೆವರು ಹರಿಸಿ ಇಡೀ ದೇಶಕ್ಕೆ ಅನ್ನ ನೀಡುವ ರೈತನಿಗೆ ಮಾತ್ರ ತನ್ನ ಬೆಳೆಗೆ ನ್ಯಾಯಯುತ ಬೆಲೆ ಕೇಳುವ ಹಕ್ಕೂ ಇಲ್ಲದಂತಾಗಿದೆ. ಇಂದು ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿಪಡಿಸಲಾಗದೆ, ಸರ್ಕಾರದ ಮುಂದೆ ಕೈ ಒಡ್ಡಿ ನಿಲ್ಲುವಂತ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಇತ್ತೀಚೆಗೆ ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸ ಯೋಜನೆಯಂತೂ, ಸಾಲ ಸೋಲ ಮಾಡಿ ಕೃಷಿ ಮಾಡಿದ ಅನ್ನದಾತನ ಹೊಟ್ಟೆಯ ಮೇಲೆ ನೇರವಾಗಿ ಹೊಡೆಯುವಂತಿದೆ. ಅಷ್ಟಕ್ಕೂ ದೇಶದ ಲಕ್ಷಾಂತರ ಈರುಳ್ಳಿ ಬೆಳೆಗಾರರನ್ನು ಕಂಗಾಲು ಮಾಡಿರುವ ಆ ಯೋಜನೆ ಯಾವುದು? ಸರ್ಕಾರದ ಈ ನಿರ್ಧಾರದಿಂದ ರೈತನ ಬದುಕು ಹೇಗೆ ಕತ್ತಲಿಗೆ ತಳ್ಳಲ್ಪಡುತ್ತಿದೆ?&lt;/p&gt;&lt;h2&gt;&lt;strong&gt;ಏನಿದು ಸರ್ಕಾರದ ಹೊಸ ಪ್ಲಾನ್?&lt;/strong&gt;&lt;/h2&gt;&lt;p&gt;ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೊಂಚ ಏರಿಕೆಯಾಗುತ್ತಿದ್ದಂತೆ, ಗ್ರಾಹಕರನ್ನು ಮತ್ತು ನಗರವಾಸಿಗಳನ್ನು ಸಮಾಧಾನಪಡಿಸಲು ಕೇಂದ್ರ ಸರ್ಕಾರವು ತಕ್ಷಣವೇ ರಂಗಕ್ಕಿಳಿದಿದೆ. ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ದರ ನಿಯಂತ್ರಿಸಲು ಸರ್ಕಾರ ತನ್ನ ಬಳಿ ಇರುವ &lsquo;ಬಫರ್ ಸ್ಟಾಕ್&rsquo; ಅಂದರೆ ತುರ್ತು ದಾಸ್ತಾನನ್ನು ಮಾರುಕಟ್ಟೆಗೆ ಮುಕ್ತವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದಕ್ಕಾಗಿಯೇ &lsquo;ಕಾಂದಾ ಎಕ್ಸ್&zwnj;ಪ್ರೆಸ್&rsquo; (Kanda Express) ಎಂಬ ವಿಶೇಷ ರೈಲುಗಳ ಮೂಲಕ ನಾಸಿಕ್&zwnj;ನಂತಹ ಪ್ರಮುಖ ಉತ್ಪಾದನಾ ಕೇಂದ್ರಗಳಿಂದ ದೆಹಲಿ, ಚೆನ್ನೈ, ಗುವಾಹಾಟಿ ಹಾಗೂ ಕೊಚ್ಚಿಯಂತಹ ನಗರಗಳಿಗೆ ಭಾರಿ ಪ್ರಮಾಣದ ಈರುಳ್ಳಿಯನ್ನು ಕಡಿಮೆ ದರದಲ್ಲಿ ಸಾಗಾಟ ಮಾಡಿ ಪೂರೈಸಲಾಗುತ್ತಿದೆ. ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ, ಅದೆನೆಂದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಹೆಚ್ಚಿಸಿ, ಕೃತಕ ಅಭಾವವನ್ನು ತಪ್ಪಿಸಿ, ಗ್ರಾಹಕರಿಗೆ ಚಿಲ್ಲರೆ ದರದಲ್ಲಿ ಈರುಳ್ಳಿ ಅಗ್ಗವಾಗಿ ಸಿಗುವಂತೆ ಮಾಡುವುದು.&lt;/p&gt;&lt;h3&gt;&lt;strong&gt;ಆದರೆ, ಈ ಯೋಜನೆಯಲ್ಲಿ ಅನ್ನದಾತ ನಲುಗುತ್ತಿರುವುದಾದರೂ ಹೇಗೆ?&lt;/strong&gt;&lt;/h3&gt;&lt;p&gt;ಬೆಲೆ ಇಳಿಕೆಯ ಈ ಸಂಭ್ರಮದ ಹಿಂದೆ ಕಣ್ಣೀರು ಹಾಕುತ್ತಿರುವುದು ಇದೇ ಈರುಳ್ಳಿಯನ್ನು ಬೆಳೆದ ರೈತ. ಕೃಷಿ ಎಂಬುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಜೂಜಾಟವಾಗಿದೆ. ಸಾಲ ಮಾಡಿ, ಬೀಜ, ಗೊಬ್ಬರ, ಕ್ರಿಮಿನಾಶಕ ತಂದು, ಅಕಾಲಿಕ ಮಳೆ ಮತ್ತು ಕ್ರಿಮಿಕೀಟಗಳ ಕಾಟವನ್ನು ಎದುರಿಸಿ ಬೆಳೆಯನ್ನು ಕೈಗೆ ತರುವುದು ಸಣ್ಣ ಮಾತಲ್ಲ. ಈ ಬಾರಿ ಮಹಾರಾಷ್ಟ್ರ ಸೇರಿದಂತೆ ಹಲವು ಭಾಗಗಳಲ್ಲಿ ಖಾರಿಫ್ ಈರುಳ್ಳಿ ಇಳುವರಿ ಶೇಕಡಾ 5 ರಿಂದ 7 ರಷ್ಟು ಕುಸಿದಿದೆ. ಅಂದರೆ, ರೈತನ ಕೈಯಲ್ಲಿ ಬೆಳೆ ಕಡಿಮೆಯಿದೆ. ಸಾಮಾನ್ಯ ಆರ್ಥಿಕ ನಿಯಮದಂತೆ, ಇಳುವರಿ ಕಡಿಮೆಯಾದಾಗ ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಬೆಲೆಯಿಂದ ರೈತ ತನ್ನ ಹಿಂದಿನ ನಷ್ಟವನ್ನು ಸರಿದೂಗಿಸಿಕೊಳ್ಳಬೇಕಿತ್ತು. ಆದರೆ, ರೈತನಿಗೆ ಆ ನಾಲ್ಕು ಕಾಸು ಲಾಭ ಸಿಗುವ ಸಮಯ ಬಂದ ತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ ಬಫರ್ ಸ್ಟಾಕ್ ಬಿಡುಗಡೆ ಮಾಡುತ್ತಿದೆ.&lt;/p&gt;&lt;h3&gt;&lt;strong&gt;ರೈತನಿಗಿಲ್ಲ ಸೂಕ್ತ ಬೆಲೆ!&lt;/strong&gt;&lt;/h3&gt;&lt;p&gt;ಸರ್ಕಾರ ಸಾಗರೋಪಾದಿಯಲ್ಲಿ ಕಡಿಮೆ ದರದ ಈರುಳ್ಳಿಯನ್ನು ಮಾರುಕಟ್ಟೆಗೆ ಸುರಿದಾಗ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಧರಾಸಾಹಿಯಾಗಿ ಕುಸಿಯುತ್ತದೆ. ಪರಿಣಾಮವಾಗಿ, ಮಾರುಕಟ್ಟೆಗೆ ತನ್ನ ಬೆಳೆಯನ್ನು ತರುವ ಸಾಮಾನ್ಯ ರೈತನಿಗೆ ಸೂಕ್ತ ಬೆಲೆ ಸಿಗುವುದಿಲ್ಲ. ದಲ್ಲಾಳಿಗಳು ಮತ್ತು ವ್ಯಾಪಾರಿಗಳು &quot;ಸರ್ಕಾರವೇ ಕಡಿಮೆ ದರಕ್ಕೆ ಈರುಳ್ಳಿ ಕೊಡುತ್ತಿದೆ&quot; ಎಂಬ ನೆಪ ಹೇಳಿ ರೈತನಿಂದ ಕನಿಷ್ಠ ದರಕ್ಕೂ ಈರುಳ್ಳಿ ಖರೀದಿಸುವುದಿಲ್ಲ.&lt;/p&gt;&lt;h3&gt;&lt;strong&gt;ಬೆಲೆ ಏರಿಕೆಯ ನಷ್ಟ ರೈತನಿಗೆ, ಲಾಭ ಯಾರಿಗೆ?&lt;/strong&gt;&lt;/h3&gt;&lt;p&gt;ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಕೂಲಿ ಆಳುಗಳ ವೆಚ್ಚ, ಸಾಗಣೆ ವೆಚ್ಚ ಎಲ್ಲವೂ ಗಗನಕ್ಕೇರಿದೆ. ಆದರೆ ರೈತ ಬೆಳೆದ ಬೆಳೆಗೆ ಬೆಲೆ ಸಿಗಬೇಕಾದ ಕ್ಷಣದಲ್ಲಿ ಸರ್ಕಾರದ ಈ ರಿಲೀಫ್ ಪ್ಲಾನ್ ಅವನ ಕುತ್ತಿಗೆಗೆ ಉರುಳಾಗುತ್ತಿದೆ ಎನ್ನಲಾಗಿದೆ. ಗ್ರಾಹಕರಿಗೆ ರಿಲೀಫ್ ನೀಡುವುದು ತಪ್ಪಲ್ಲ, ಆದರೆ ಆ ರಿಲೀಫ್&zwnj;ನ ಸಂಪೂರ್ಣ ಹೊರೆಯನ್ನು ರೈತನ ಹೆಗಲ ಮೇಲೆಯೇ ಹಾಕುವುದು ಎಷ್ಟರ ಮಟ್ಟಿಗೆ ನ್ಯಾಯ? ಅಪರಾಧಿಗೂ ಸಿಗುವ ಕನಿಷ್ಠ ನ್ಯಾಯದ ಅವಕಾಶ, ಹಗಲಿರುಳು ಕಷ್ಟಪಟ್ಟು ದೇಶದ ಹಸಿವು ನೀಗಿಸುವ ಅನ್ನದಾತನಿಗೆ ಸಿಗದಿರುವುದು ದುರಂತವೇ ಸರಿ. ಸರ್ಕಾರ ತರುತ್ತಿರುವ ಈ ಯೋಜನೆಯು ಗ್ರಾಹಕರಿಗೆ ತಾತ್ಕಾಲಿಕ ಸಮಾಧಾನ ನೀಡಬಹುದಾದರೂ, ಈರುಳ್ಳಿ ಬೆಳೆದ ರೈತನ ಮನೆಯಲ್ಲಿ ಮಾತ್ರ ಕಣ್ಣೀರ ಕೊಳವನ್ನು ಸೃಷ್ಟಿಸುತ್ತಿದೆ.&lt;/p&gt;&lt;h3&gt;&lt;strong&gt;ಪ್ರಮುಖ ನಗರಗಳಿಗೆ ಆಗಮನ!&lt;/strong&gt;&lt;/h3&gt;&lt;p&gt;ಸದ್ಯಕ್ಕೆ ನಾಸಿಕ್&zwnj;ನಿಂದ ಹೊರಟ &lsquo;ಕಾಂದಾ ಎಕ್ಸ್&zwnj;ಪ್ರೆಸ್&rsquo; ದೆಹಲಿ, ಚೆನ್ನೈ, ಕೊಚ್ಚಿ ಹಾಗೂ ಗುವಾಹಟಿಯಂತಹ ನಾಲ್ಕು ಪ್ರಮುಖ ನಗರಗಳನ್ನಷ್ಟೇ ತಲುಪುತ್ತಿದ್ದು, ಅಲ್ಲಿನ ಮಾರುಕಟ್ಟೆಗಳಲ್ಲಿ ಬೆಲೆ ಸಮತೋಲನ ತರಲು ಸರ್ಕಾರ ಯತ್ನಿಸುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಈ ಸೌಲಭ್ಯ ಕರ್ನಾಟಕಕ್ಕೂ ವಿಸ್ತರಿಸುವ ಸಾಧ್ಯತೆಯಿದೆ. ಗ್ರಾಹಕರಿಗೆ ಸಮಾಧಾನ ತರುವ ಈ ಯೋಜನೆ ರಾಜ್ಯಕ್ಕೆ ಕಾಲಿಟ್ಟರೆ, ಇಲ್ಲಿನ ಈರುಳ್ಳಿ ಬೆಳೆಗಾರರ ಮೇಲಾಗುವ ಪರಿಣಾಮವೇನು ಎಂಬುದು ಆತಂಕದ ವಿಷಯ. ಗ್ರಾಹಕರ ಹಿತ ಕಾಯುವ ನೆಪದಲ್ಲಿ ಸ್ಥಳೀಯ ಕೃಷಿಕರ ಹೊಟ್ಟೆಗೆ ಹೊಡೆಯದೆ, ಸರ್ಕಾರ ಅನ್ನದಾತನಿಗೂ ನ್ಯಾಯಯುತ ಬೆಲೆ ಖಾತ್ರಿಪಡಿಸುವ ಸಮತೋಲಿತ ನೀತಿ ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.&lt;/p&gt;]]></content:encoded>
            <category>news-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/onion-price-rise-government-kanda-express-buffer-stock-onion-farmers-crisis-apmc-market-india-agriculture-news-bmk/articleshow-zmn7orp"/>
        </item>
    </channel>
</rss>
