<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 30 Jun 2026 10:47:26 +0530</lastBuildDate>
        <atom:link href="https://kannada.asianetnews.com/rss/news-entertainment" rel="self" type="application/rss+xml"/>
        <item>
            <title><![CDATA[Graamaayana Movie Trailer: ಮೇಘಾ ಶೆಟ್ಟಿ, ವಿನಯ್‌ ರಾಜ್‌ಕುಮಾರ್‌ 'ಗ್ರಾಮಾಯಣ'ಕ್ಕೆ‌ ದುನಿಯಾ ವಿಜಯ್ ಸಾಥ್]]></title>
            <link>https://kannada.asianetnews.com/gallery/sandalwood/duniya-vijay-and-megha-shetty-starrer-graamaayana-kannada-movie-s6kczdd</link>
            <guid isPermaLink="true">https://kannada.asianetnews.com/gallery/sandalwood/duniya-vijay-and-megha-shetty-starrer-graamaayana-kannada-movie-s6kczdd</guid>
            <pubDate>Mon, 29 Jun 2026 14:30:21 +0530</pubDate>
            <description><![CDATA[&lt;p&gt;Graamaayana Movie: ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ, ವಿನಯ್ ರಾಜಕುಮಾರ್, ಮೇಘಾ ಶೆಟ್ಟಿ ನಾಯಕ - ನಾಯಕಿಯಾಗಿ ಅಭಿನಯಿಸಿರುವ &lsquo;ಗ್ರಾಮಾಯಣ&rsquo; ಸಿನಿಮಾದ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw99425apn8mxcb8aaq8zn7a,imgname-new-project---2026-06-29t141048.367-1782722988202.jpg" type="image/jpeg" height="390" width="690"/>
            <content:encoded><![CDATA[&lt;p&gt;Graamaayana Movie: ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ, ವಿನಯ್ ರಾಜಕುಮಾರ್, ಮೇಘಾ ಶೆಟ್ಟಿ ನಾಯಕ - ನಾಯಕಿಯಾಗಿ ಅಭಿನಯಿಸಿರುವ &lsquo;ಗ್ರಾಮಾಯಣ&rsquo; ಸಿನಿಮಾದ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ದುನಿಯಾ ವಿಜಯ್ ಹಾಗೂ ನಟಿ ಅಪರ್ಣ ಅವರ ಪತಿ ನಾಗರಾಜ್ ವಸ್ತಾರೆ ಅವರಿಂದ &quot;ಗ್ರಾಮಾಯಣ&quot;ದ ಟ್ರೇಲರ್ ಅನಾವರಣವಾಯಿತು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ಯವ ರಾಜಕುಮಾರ್, ನಟ ನವೀನ್ ಶಂಕರ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ, &quot; ಗ್ರಾಮಾಯಣ&quot;ಕ್ಕೆ ಶುಭ ಕೋರಿದರು.&lt;/p&gt;&lt;p&gt;ನನಗೆ ವಿನಯ್ ರಾಜಕುಮಾರ್ ಎಂದರೆ ಬಹಳ ಇಷ್ಟ ಎಂದು&zwnj; ಟ್ರೇಲರ್ ಬಿಡುಗಡೆ ಮಾತನಾಡಿದ ನಟ ದುನಿಯಾ ವಿಜಯ್, ಟ್ರೇಲರ್ ಅದ್ಭುತವಾಗಿದೆ. ದೇವನೂರು ಚಂದ್ರು ಉತ್ತಮ ನಿರ್ದೇಶಕ.&zwnj; ನಾನು ಅವರನ್ನು ಎರಡನೇ ಸೂರಿ ಅಂತಲೇ ಕರೆಯುತ್ತೇನೆ.&zwnj; ಈ ಚಿತ್ರವನ್ನು ನಿರ್ಮಾಣ ಮಾಡಿರುವ ಲಹರಿ ಸಂಸ್ಥೆಗೆ ಹಾಗೂ&zwnj; ಇಡೀ &quot;ಗ್ರಾಮಾಯಣ&quot; ತಂಡಕ್ಕೆ ಒಳ್ಳೆಯದಾಗಲಿ ಎಂದರು.&lt;/p&gt;&lt;img&gt;&lt;p&gt;ನಿರೂಪಕಿ ಅಪರ್ಣ ಅವರು &quot;ಗ್ರಾಮಾಯಣ&quot; ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬಂದ&zwnj; ಮೇಲೆ ಅಲ್ಲಿನ ವಿಷಯಗಳನ್ನು ನನ್ನ ಬಳಿ ಹಂಚಿಕೊಳ್ಳುತ್ತಿದ್ದರು. ಇಂದು ಅವರಿಲ್ಲದೆ ಅವರ ಅಭಿನಯದ ಚಿತ್ರದ ಟ್ರೇಲರ್ ಅನಾವರಣ ಮಾಡಿದ್ದು, ಬಹಳ ಬೇಸರವಾಗಿದೆ&zwnj;. &quot;ಗ್ರಾಮಾಯಣ&quot; ಯಶಸ್ವಿಯಾಗಲಿ ಎಂದು ನಟಿ ಅಪರ್ಣ ಪತಿ ನಾಗರಾಜ್ ವಸ್ತಾರೆ ಹೇಳಿದರು.&lt;/p&gt;&lt;img&gt;&lt;p&gt;ಈ ಚಿತ್ರದ ಬಗ್ಗೆ ನಾವು ಹೇಳುವುದಕ್ಕಿಂತ ಅಭಿಮಾನಿಗಳು ಹೇಳಬೇಕು. ಜುಲೈ 3 ಚಿತ್ರ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು ನಟ ರಾಘವೇಂದ್ರ ರಾಜಕುಮಾರ್.&amp;nbsp;&lt;/p&gt;&lt;p&gt;ಅಣ್ಣನ ಚಿತ್ರ ಯಶಸ್ವಿಯಾಗಲೆಂದು ಯುವ ರಾಜಕುಮಾರ್ ಹಾರೈಸಿದರು.&amp;nbsp;&lt;/p&gt;&lt;p&gt;ನಿರ್ದೇಶಕ ಸಿಂಪಲ್ ಸುನಿ ಚಿತ್ರದ ಮೊದಲ ಪ್ರದರ್ಶನಕ್ಕೆ ಒಂದು ಆಡಿಯನ್ನೇ ಬುಕ್ ಮಾಡುವುದಾಗಿ ಹೇಳಿದರು.&amp;nbsp;&lt;/p&gt;&lt;p&gt;ನಟ ನವೀನ್ ಶಂಕರ್ ಕೂಡ &quot;ಗ್ರಾಮಾಯಣ&quot;ಕ್ಕೆ ಶುಭ ಕೋರಿದರು.&lt;/p&gt;&lt;img&gt;&lt;p&gt;&quot;ಗ್ರಾಮಾಯಣ&quot; ಟ್ರೇಲರ್ ಚೆನ್ನಾಗಿ ಬಂದಿದೆ. ಚಿತ್ರ ಇನ್ನೂ ಚೆನ್ನಾಗಿ ಬಂದಿದೆ. ಇದು ನಮ್ಮ ಲಹರಿ ಸಂಸ್ಥೆ ನಿರ್ಮಾಣದ ಒಂಭತ್ತನೇ ಚಿತ್ರ. ವಿನಯ್ ರಾಜಕುಮಾರ್ ಅವರ ಅಭಿನಯದ ಒಂಭತ್ತನೇ ಚಿತ್ರವೂ ಹೌದು. ಒಂಭತ್ತು ನಮ್ಮ ಸಂಸ್ಥೆಗೆ ಅದೃಷ್ಟದ ಸಂಖ್ಯೆ.&zwnj; ಇಂದು ಆಗಮಿಸಿದ ಎಲ್ಲ ಅತಿಥಿಗಳಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು. ನಿರ್ಮಾಪಕ ನವೀನ್ ಮನೋಹರ್ ಅವರು ಸಹ ಎಲ್ಲರಿಗೂ ಧನ್ಯವಾದ ಹೇಳಿದರು.&amp;nbsp;&lt;/p&gt;&lt;p&gt;ಲಹರಿ ಸಂಸ್ಥೆಯ ಸ್ಥಾಪಕ ಮನೋಹರ್ ನಾಯ್ಡು ಹಾಗೂ ಅವರ ಸಹೋದರ ರಮೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.&lt;/p&gt;&lt;img&gt;&lt;p&gt;ಈ ವೇದಿಕೆ ನೋಡುತ್ತಿದ್ದರೆ, ನನಗೆ ಚಿತ್ರದ ಆರಂಭದ ದಿನಗಳು ನೆನಪಾಗುತ್ತಿದೆ. ನಮ್ಮ ಚಿತ್ರ ಶುರುವಾಗಿ ಇಷ್ಟು ವರ್ಷ ಆಯಿತು ಅಂತ ಎಲ್ಲರೂ ಹೇಳುತ್ತಿದ್ದಾರೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು. ಲಹರಿ ಸಂಸ್ಥೆಯವರು ನಮ್ಮ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅವರಿಗೆ, ನಿರ್ದೇಶಕರಿಗೆ, ಇಡೀ ತಂಡಕ್ಕೆ ಹಾಗೂ ಆಗಮಿಸಿದ ಪ್ರತಿಯೊಬ್ಬ ಗಣ್ಯರಿಗೂ ಧನ್ಯವಾದ ಎಂದು ಮಾತನಾಡಿದ ನಾಯಕ ವಿನಯ್ ರಾಜಕುಮಾರ್, ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಈ ಚಿತ್ರದಲ್ಲಿ ಮಾಡಿರುವುದಾಗಿ ಹೇಳಿದರು.&lt;/p&gt;&lt;p&gt;ಚಿತ್ರದ ಬಗ್ಗೆ ನಾನು ಹೇಳುವುದೇನು ಇಲ್ಲ. ಒಂದಂತೂ ಹೇಳುತ್ತೇನೆ. ಕೊಟ್ಟ ದುಡ್ಡಿಗೆ ಮೋಸವಾಗದ ಚಿತ್ರವಿದು. ಒಂದೊಳ್ಳೆ ಚಿತ್ರ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ,&zwnj; ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದ ಎಂದು ಹೇಳಿದ ನಿರ್ದೇಶಕ ದೇವನೂರು ಚಂದ್ರು ತುಂಬಾ ಭಾವುಕರಾದರು.&lt;/p&gt;&lt;p&gt;ನಟಿ ಮೇಘ ಶೆಟ್ಟಿ ಕೂಡ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಟ ಅರುಣ್ ಸಾಗರ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಹಾಗೂ ಗೀತರಚನೆಕಾರ ಪ್ರಮೋದ್ ಮರವಂತೆ ಮುಂತಾದವರು &quot;ಗ್ರಾಮಾಯಣ&quot; ಚಿತ್ರದ ಕುರಿತು ಮಾತನಾಡಿದರು.&lt;/p&gt;&lt;p&gt;ವಿನಯ್ ರಾಜಕುಮಾರ್, ಮೇಘ ಶೆಟ್ಟಿ, ಲೂಸ್ ಮಾದ ಯೋಗೀಶ್, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/sandalwood/duniya-vijay-and-megha-shetty-starrer-graamaayana-kannada-movie-s6kczdd"/>
        </item>
        <item>
            <title><![CDATA[Rashmi Gautam: ನಾನು ಮಾತ್ರ ದಾರಿ ತಪ್ಪಿ ಬಂದೆ.. ಆ್ಯಂಕರ್ ರಶ್ಮಿ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಸೀಕ್ರೆಟ್ ರಿವೀಲ್!]]></title>
            <link>https://kannada.asianetnews.com/entertainment/anchor-rashmi-gautam-reveals-her-family-background-and-career-journey-gvd/articleshow-hrexmw9</link>
            <guid isPermaLink="true">https://kannada.asianetnews.com/entertainment/anchor-rashmi-gautam-reveals-her-family-background-and-career-journey-gvd/articleshow-hrexmw9</guid>
            <pubDate>Mon, 29 Jun 2026 23:26:43 +0530</pubDate>
            <description><![CDATA[&lt;p&gt;Anchor Rashmi Gautam ಮೊದಲ ಬಾರಿಗೆ ತಮ್ಮ ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕುಟುಂಬದವರಿಗೆ ಸಿನಿಮಾ ಕ್ಷೇತ್ರದೊಂದಿಗೆ ಯಾವುದೇ ಸಂಬಂಧವಿಲ್ಲ, ತಾನು ಮಾತ್ರ ದಾರಿ ತಪ್ಪಿ ಈ ಕ್ಷೇತ್ರಕ್ಕೆ ಬಂದೆ ಎಂದು ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwa731k0cf69p5s979wf6fbw,imgname-vhcvh-1782754412128.png" type="image/jpeg" height="390" width="690"/>
            <content:encoded><![CDATA[&lt;p&gt;ರಶ್ಮಿ ಗೌತಮ್ 'ಜಬರ್ದಸ್ತ್' ಕಾಮಿಡಿ ಶೋ ಮೂಲಕ ಹೆಚ್ಚು ಜನಪ್ರಿಯರಾದರು. ಸುಮಾರು 13 ವರ್ಷಗಳಿಂದ ಅವರು ಈ ಶೋ ನಿರೂಪಣೆ ಮಾಡುತ್ತಿದ್ದಾರೆ. ತಮ್ಮ ಕಾಮಿಡಿ ಮತ್ತು ಮನರಂಜನೆಯಿಂದ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಸುಮಾ ನಂತರ ಇಷ್ಟು ದೀರ್ಘಕಾಲ ಒಂದೇ ಶೋ ನಿರೂಪಣೆ ಮಾಡಿದ ನಿರೂಪಕಿ ಎಂಬ ದಾಖಲೆಯನ್ನು ರಶ್ಮಿ ಬರೆದಿದ್ದಾರೆ. ಸದ್ಯ ಅವರು 'ಜಬರ್ದಸ್ತ್' ಮತ್ತು 'ಶ್ರೀದೇವಿ ಡ್ರಾಮಾ ಕಂಪನಿ' ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಇದರ ಜೊತೆಗೆ 'ಆಹಾ' ಒಟಿಟಿಗಾಗಿ ಹೊಸದಾಗಿ 'ಟಾಪ್ ತೆಲುಗು ಇನ್&zwnj;ಫ್ಲುಯೆನ್ಸರ್&zwnj;' ಶೋ ಕೂಡ ಮಾಡುತ್ತಿದ್ದಾರೆ.&lt;/p&gt;&lt;p&gt;ರಶ್ಮಿ ಗೌತಮ್ ತಮ್ಮ ಕುಟುಂಬದ ಬಗ್ಗೆ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರ ತಾಯಿ ಮಮತಾ ಗೌತಮ್ ಒರಿಸ್ಸಾದವರಂತೆ, ತಂದೆ ರಾಮ್ ಗೌತಮ್ ಉತ್ತರ ಪ್ರದೇಶದವರಂತೆ. ರಶ್ಮಿ ಹುಟ್ಟಿ ಬೆಳೆದಿದ್ದು ವಿಶಾಖಪಟ್ಟಣದಲ್ಲಿ. ಅವರ ಕುಟುಂಬದವರೆಲ್ಲರೂ ಕೇಂದ್ರ ಸರ್ಕಾರಿ ನೌಕರರಾಗಿದ್ದು, ತುಂಬಾ ಕೂಲ್ ಮತ್ತು ಗೌರವಯುತ ವ್ಯಕ್ತಿಗಳೆಂದು ರಶ್ಮಿ ಹೇಳಿದ್ದಾರೆ. ತಾನು ಮಾತ್ರ ಈ ಕ್ಷೇತ್ರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ತನ್ನ ತಂದೆ-ತಾಯಿ, ಅಜ್ಜ-ಅಜ್ಜಿ, ಅಣ್ಣಂದಿರಿಗೆ ಸಿನಿಮಾ ಕ್ಷೇತ್ರದೊಂದಿಗೆ ಯಾವುದೇ ಸಂಬಂಧವಿಲ್ಲ. ತಾನು ದಾರಿ ತಪ್ಪಿ ಬಂದು ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿ ಉಳಿದುಕೊಂಡಿದ್ದೇನೆ ಎಂದಿದ್ದಾರೆ.&lt;/p&gt;&lt;p&gt;ರಶ್ಮಿ ಚಿಕ್ಕವಳಿದ್ದಾಗಲೇ ಅವರ ತಂದೆ ನಿಧನರಾಗಿದ್ದು, ತಾಯಿಯೇ ಅವರನ್ನು ಬೆಳೆಸಿದ್ದಾರೆ. ರಶ್ಮಿ ಗೌತಮ್ ಮೊದಲು 'ಯುವ' ಎಂಬ ಸೀರಿಯಲ್&zwnj;ನಲ್ಲಿ ನಟಿಸಿದ್ದಾಗಿ ಹೇಳಿದ್ದಾರೆ. ಆರಂಭದಲ್ಲಿ ಸೀರಿಯಲ್&zwnj;ಗಳನ್ನು ಮಾಡಿದ್ದರೂ, ತನಗೆ ಹೆಚ್ಚು ಗುರುತಿಸುವಿಕೆ ಸಿಗಲಿಲ್ಲ. ನಂತರ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡರು. ಮತ್ತೆ ಪ್ರಯತ್ನಗಳನ್ನು ಮುಂದುವರಿಸಿದಾಗ, ಸಿನಿಮಾ ಅವಕಾಶಗಳು ಬಂದವು. ಇದೇ ಸಮಯದಲ್ಲಿ 'ಜಬರ್ದಸ್ತ್' ಶೋ ನಿರೂಪಣೆ ಮಾಡುವ ಅವಕಾಶ ಸಿಕ್ಕಿತು ಎಂದು ರಶ್ಮಿ ಗೌತಮ್ ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ಉತ್ತಮ ಅವಕಾಶಗಳಿಗಾಗಿ ಕಾಯುತ್ತಿದ್ದೇನೆ&lt;/strong&gt;&lt;/h2&gt;&lt;p&gt;ಸಿನಿಮಾಗಳ ಬಗ್ಗೆ ಮಾತನಾಡಿದ ರಶ್ಮಿ, ಈಗ ಸರಿಯಾದ ಆಫರ್&zwnj;ಗಳು ಬರುತ್ತಿಲ್ಲ ಎಂದಿದ್ದಾರೆ. ಐಟಂ ಸಾಂಗ್ಸ್ ಮತ್ತು ಸ್ಪೆಷಲ್ ಸಾಂಗ್ಸ್ ಮಾಡಲು ಕೇಳುತ್ತಿದ್ದಾರೆ, ಅದಕ್ಕಾಗಿಯೇ ತಾನು ಒಪ್ಪಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಳ್ಳೆಯ ಪಾತ್ರಗಳು ಬಂದರೆ ನಟಿಸಲು ಸಿದ್ಧ, ಉತ್ತಮ ಅವಕಾಶಗಳಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈಗ 'ಆಹಾ'ದಲ್ಲಿ ಮಾಡಲಿರುವ ಹೊಸ ಶೋ ಇನ್&zwnj;ಫ್ಲುಯೆನ್ಸರ್&zwnj;ಗಳನ್ನು ಗುರುತಿಸುವ ಕಾರ್ಯಕ್ರಮವಾಗಿದ್ದು, ತುಂಬಾ ಮನರಂಜನೆ ನೀಡಲಿದೆ ಎಂದು ರಶ್ಮಿ ಗೌತಮ್ ತಿಳಿಸಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/anchor-rashmi-gautam-reveals-her-family-background-and-career-journey-gvd/articleshow-hrexmw9"/>
        </item>
        <item>
            <title><![CDATA[Salman Khan: 51 ವರ್ಷಗಳ ಬಳಿಕ ಮನೆ ಖಾಲಿ ಮಾಡ್ತಾರಂತೆ ಸಲ್ಮಾನ್ ಖಾನ್?: ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ!]]></title>
            <link>https://kannada.asianetnews.com/entertainment/salman-khan-new-bungalow-galaxy-apartment-shift-reports-gvd/articleshow-d5cgieu</link>
            <guid isPermaLink="true">https://kannada.asianetnews.com/entertainment/salman-khan-new-bungalow-galaxy-apartment-shift-reports-gvd/articleshow-d5cgieu</guid>
            <pubDate>Mon, 29 Jun 2026 21:14:01 +0530</pubDate>
            <description><![CDATA[&lt;p&gt;Salman Khan: ಕಳೆದ 51 ವರ್ಷಗಳಿಂದ ಗ್ಯಾಲಕ್ಸಿ ಅಪಾರ್ಟ್&zwnj;ಮೆಂಟ್&zwnj;ನಲ್ಲಿ ವಾಸಿಸುತ್ತಿರುವ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ, ಶೀಘ್ರದಲ್ಲೇ ಹೊಸ ಸಮುದ್ರಕ್ಕೆ ಮುಖ ಮಾಡಿರುವ ಬಂಗಲೆಗೆ ಶಿಫ್ಟ್ ಆಗಬಹುದು. ಈ ನಿರ್ಧಾರದ ಹಿಂದಿನ ಕಾರಣ ಏನು ಅನ್ನೋದು ವರದಿಗಳಿಂದ ತಿಳಿದುಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwa0qx26rxqs9k75aaawbrxj,imgname-gxgx-1782747755589.png" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್&zwnj;ಮೆಂಟ್ ಅಂದ್ರೆ ಎಲ್ಲರಿಗೂ ಸಲ್ಮಾನ್ ಖಾನ್ ನೆನಪಾಗ್ತಾರೆ. ಕಳೆದ ಐದು ದಶಕಗಳಿಂದ ಇದೇ ಖಾನ್ ಕುಟುಂಬದ ಪರ್ಮನೆಂಟ್ ವಿಳಾಸ. ಆದ್ರೆ, ಈಗ ಸಲ್ಮಾನ್ ಖಾನ್ ಮತ್ತು ಅವರ ಫ್ಯಾಮಿಲಿ ಈ ಐಕಾನಿಕ್ ವಿಳಾಸಕ್ಕೆ ಗುಡ್&zwnj;ಬೈ ಹೇಳಬಹುದು ಅಂತ ವರದಿಗಳು ಹೇಳ್ತಿವೆ. ಬಾಂದ್ರಾದ ಚಿಂಬೈ ಏರಿಯಾದಲ್ಲಿ ಕುಟುಂಬ ಆರು ಅಂತಸ್ತಿನ, ಸಮುದ್ರಕ್ಕೆ ಮುಖ ಮಾಡಿರುವ ಹೊಸ ಬಂಗಲೆಯೊಂದನ್ನು ಕಟ್ಟಿಸುತ್ತಿದೆ ಎನ್ನಲಾಗಿದೆ. ಈ ಪ್ರಾಜೆಕ್ಟ್&zwnj;ಗೆ ಇತ್ತೀಚೆಗೆ ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (MCZMA) ಅನುಮೋದನೆ ನೀಡಿದೆ. ಆದರೂ, ಈ ಬಗ್ಗೆ ಸಲ್ಮಾನ್ ಖಾನ್ ಅಥವಾ ಅವರ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.&lt;/p&gt;&lt;p&gt;&lt;strong&gt;51 ವರ್ಷಗಳ ನಂತರ ಬದಲಾಗಲಿದೆಯೇ ಸಲ್ಮಾನ್ ಖಾನ್ ವಿಳಾಸ?&lt;/strong&gt;&lt;/p&gt;&lt;p&gt;ವರದಿಗಳ ಪ್ರಕಾರ, 1974ರಿಂದ ಗ್ಯಾಲಕ್ಸಿ ಅಪಾರ್ಟ್&zwnj;ಮೆಂಟ್&zwnj;ನ ಮೊದಲ ಮಹಡಿ ಸಲ್ಮಾನ್ ಖಾನ್ ಅವರ ತಂದೆ ಹಾಗೂ ಖ್ಯಾತ ಲೇಖಕ ಸಲೀಂ ಖಾನ್ ಕುಟುಂಬದ ಮನೆಯಾಗಿದೆ. ಕುಟುಂಬದ ಹೆಚ್ಚಿನ ಸದಸ್ಯರು ಈಗ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರೂ, ಸಲ್ಮಾನ್ ಇವತ್ತಿಗೂ ತಮ್ಮ ತಂದೆ-ತಾಯಿ ಜೊತೆ ಇಲ್ಲೇ ವಾಸಿಸುತ್ತಿದ್ದಾರೆ. ಈಗ ಇಡೀ ಕುಟುಂಬವೇ ಹೊಸ ಬಂಗಲೆಗೆ ಶಿಫ್ಟ್ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (MCZMA) ಜೂನ್ 16 ರಂದು ಬಾಂದ್ರಾದ ಚಿಂಬೈ ಪ್ರದೇಶದಲ್ಲಿ ಹೊಸ ವಸತಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಹೇಳಲಾಗುತ್ತಿದೆ. ಈ ಜಾಗ ಗ್ಯಾಲಕ್ಸಿ ಅಪಾರ್ಟ್&zwnj;ಮೆಂಟ್&zwnj;ನಿಂದ ಸ್ವಲ್ಪ ದೂರದಲ್ಲೇ ಇದೆ. ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾ ಖಾನ್ (ಸುಶೀಲಾ ಚರಕ್) ಈ ಜಾಗವನ್ನು 2011ರಲ್ಲಿ ಖರೀದಿಸಿದ್ದರು.&lt;/p&gt;&lt;p&gt;&lt;strong&gt;ಭದ್ರತಾ ಕಾರಣಗಳಿಗಾಗಿ ಸಲ್ಮಾನ್ ಈ ನಿರ್ಧಾರ ತೆಗೆದುಕೊಂಡ್ರಾ?&lt;/strong&gt;&lt;/p&gt;&lt;p&gt;ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್&zwnj;ನಿಂದ ನಿರಂತರವಾಗಿ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚು ಸುರಕ್ಷಿತವಾದ ಮನೆ ಕಟ್ಟಲು ಕುಟುಂಬ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಗಳು ಹೇಳುತ್ತಿವೆ. 2024ರಲ್ಲಿ ಗ್ಯಾಲಕ್ಸಿ ಅಪಾರ್ಟ್&zwnj;ಮೆಂಟ್ ಹೊರಗೆ ಫೈರಿಂಗ್ ನಡೆದ ನಂತರ, ಭದ್ರತಾ ಕಾರಣಗಳಿಗಾಗಿ ಸಲ್ಮಾನ್ ಖಾನ್ ಅವರ ಫೇಮಸ್ ಬಾಲ್ಕನಿಯನ್ನು ಕೂಡ ಮುಚ್ಚಲಾಗಿತ್ತು. ಹೊಸ ಬಂಗಲೆಯಲ್ಲಿ ಆಧುನಿಕ ಭದ್ರತಾ ವ್ಯವಸ್ಥೆ ಇರಲಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಹೇಗಿರಲಿದೆ ಸಲ್ಮಾನ್ ಖಾನ್ ಅವರ ಹೊಸ ಮನೆ?&lt;/strong&gt;&lt;/p&gt;&lt;p&gt;ಮಾಹಿತಿ ಪ್ರಕಾರ, ಈ ಜಾಗದಲ್ಲಿ ಮೊದಲು ಎರಡು ಅಂತಸ್ತಿನ ಹಳೆಯ ಬಂಗಲೆ ಇತ್ತು. ಅದು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಅದನ್ನು ಕೆಡವಲಾಯಿತು. ಈಗ ಇಲ್ಲಿ ಗ್ರೌಂಡ್ ಪ್ಲಸ್ ಸ್ಟಿಲ್ಟ್ ಪ್ಲಸ್ ಆರು ಅಂತಸ್ತಿನ ವಸತಿ ಕಟ್ಟಡವನ್ನು ನಿರ್ಮಿಸಲಾಗುವುದು. ಈ ನಿರ್ಮಾಣವು ಡೆವಲಪ್&zwnj;ಮೆಂಟ್ ಕಂಟ್ರೋಲ್ ಮತ್ತು ಪ್ರೊಮೋಷನಲ್ ರೆಗ್ಯುಲೇಶನ್ 2034ರ ಅಡಿಯಲ್ಲಿ ನಡೆಯಲಿದೆ. ವರದಿಗಳ ಪ್ರಕಾರ, ಸಚ್ ಡೆವಲಪರ್ಸ್ ಈ ಪ್ರಾಜೆಕ್ಟ್ ನಿರ್ಮಾಣ ಮಾಡಲಿದ್ದಾರೆ. ಸುಮಾರು 1014.11 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಗೆ, ಬಿಎಂಸಿ ಅಕ್ಟೋಬರ್ 2025 ರಲ್ಲಿಯೇ ಪ್ರಾಥಮಿಕ ಅನುಮೋದನೆ (IOD) ನೀಡಿತ್ತು.&lt;/p&gt;&lt;h2&gt;&lt;strong&gt;ಮರಗಳಿಗೆ ಹಾನಿ ಮಾಡಲ್ಲ: ಖಾನ್ ಕುಟುಂಬದ ಭರವಸೆ&lt;/strong&gt;&lt;/h2&gt;&lt;p&gt;ಕಟ್ಟಡ ನಿರ್ಮಾಣದ ಸಮಯದಲ್ಲಿ ಯಾವುದೇ ಮರಗಳಿಗೆ ಹಾನಿ ಮಾಡುವುದಿಲ್ಲ ಎಂದು ಕುಟುಂಬ ಭರವಸೆ ನೀಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಪ್ರಾಜೆಕ್ಟ್ ಸೈಟ್ ಮತ್ತು ರಿಕ್ರಿಯೇಷನ್ ಏರಿಯಾದಲ್ಲಿ ಸ್ಥಳೀಯ ಜಾತಿಯ ಹೊಸ ಮರಗಳನ್ನು ನೆಡಲಾಗುವುದು. ಸದ್ಯಕ್ಕೆ, ಹೊಸ ಬಂಗಲೆ ಅಥವಾ ಗ್ಯಾಲಕ್ಸಿ ಅಪಾರ್ಟ್&zwnj;ಮೆಂಟ್ ತೊರೆಯುವ ಬಗ್ಗೆ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಹೀಗಾಗಿ ಈ ವರದಿಗಳನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಬೇಕಿದೆ. ಇನ್ನು ವರ್ಕ್ ಫ್ರಂಟ್ ಬಗ್ಗೆ ಹೇಳುವುದಾದರೆ, ಸಲ್ಮಾನ್ ಖಾನ್ ತಮ್ಮ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಇದಲ್ಲದೆ, ಅವರು ಸದ್ಯ ನಯನತಾರಾ ಜೊತೆ SVC 63 ಚಿತ್ರದ ಶೂಟಿಂಗ್&zwnj;ನಲ್ಲಿ ಬ್ಯುಸಿಯಾಗಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/salman-khan-new-bungalow-galaxy-apartment-shift-reports-gvd/articleshow-d5cgieu"/>
        </item>
        <item>
            <title><![CDATA[Trisha Krishnan Honey: ತ್ರಿಷಾಗೆ 'ಹನಿ' ಎಂದು ಕರೆಯೋದು ಯಾರು? ಅವರಾ or ಇವರಾ? ನಿಮ್ಮ ಊಹೆ ಸರಿನಾ, ತಪ್ಪಾ?]]></title>
            <link>https://kannada.asianetnews.com/entertainment/who-calls-trisha-krishan-as-honey-what-she-herself-revealed-in-kapil-sharma-show-to-know-here/articleshow-r8b3fnt</link>
            <guid isPermaLink="true">https://kannada.asianetnews.com/entertainment/who-calls-trisha-krishan-as-honey-what-she-herself-revealed-in-kapil-sharma-show-to-know-here/articleshow-r8b3fnt</guid>
            <pubDate>Mon, 29 Jun 2026 20:42:40 +0530</pubDate>
            <description><![CDATA[&lt;p&gt;ಒಂದು ಸಂಗತಿಯನ್ನು ತ್ರಿಷಾ ಮುಚ್ಚುಮರೆ ಇಲ್ಲದೇ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ? ಆ ಒಬ್ಬ ವ್ಯಕ್ತಿ, ತ್ರಿಷಾ ಜೀವನದ ಮಹಾನ್ ವ್ಯಕ್ತಿ ಮಾತ್ರ ಅವರನ್ನು 'ಹನಿ' ಎಂದು ಕರೆಯುತ್ತಾರೆ. ಆದರೆ ಈಗ ಬಹಳಷ್ಟು ಜನ, ಅಂದರೆ ತ್ರಿಷಾ ಸ್ನೇಹಿತರ ಬಳಗ ಅವರನ್ನು ಮತ್ತೊಂದು ಹೆಸರಿನಿಂದ ಕರೆಯುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9yzzjs15p9heybjc6mmkrt,imgname-trisha-krishnan-1782745923160.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತ್ರಿಷಾರನ್ನು ಹನಿ ಅಂತ ಕರೆಯೋದು ಯಾರು ಗೊತ್ತಾ?&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಸುಂದರಿ ನಟಿ ತ್ರಿಷಾ ಕೃಷ್ಣನ್ (Trisha Krishnan) ಅಂದರೆ ಯಾರಿಗೆ ಗೊತ್ತಿಲ್ಲ? ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸೌತ್ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ತ್ರಿಶಾ, ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಸೆನ್ಸೇಷನ್ ಸೃಷ್ಟಿಸುತ್ತಿರುವ ನಟಿ. ಇತ್ತೀಚೆಗೆ ತಮಿಳುನಾಡು ಸಿಎಂ ಆಗಿರುವ ನಟ ದಳಪತಿ ವಿಜಯ್ ಅವರ ಆಪ್ತ ಸ್ನೇಹಿತೆ ಎಂದೇ ನಟಿ ತ್ರಿಷಾ ಅವರನ್ನು ಬಿಂಬಿಸಲಾಗುತ್ತಿದೆ. ಈ ವಿಷಯವನ್ನು ತ್ರಿಷಾ ಆಗಲಿ ಅಥವಾ ವಿಜಯ್ ಆಗಲೀ ಅಧಿಕೃತ ಎಂದು ಯಾವತ್ತೂ ದೃಢೀಕರಿಸಿಲ್ಲ. ಆದರೆ, ಅವರಿಬ್ಬರ ಆಪ್ತರು ಎನಿಸುವ ಒಡನಾಟ ಹಾಗೂ ವಿಜಯ್ ಪತ್ನಿ ಸಂಗೀತಾ ಕೊಟ್ಟಿರುವ ಡಿವೋರ್ಸ್&zwnj; ಅರ್ಜಿ ವಿಜಯ್-ತ್ರಿಷಾ ಸಂಬಂಧಕ್ಕೆ ಪುಷ್ಟಿ ಕೊಡುವ ಸಂಗತಿ ಎಂದೇ ಎಲ್ಲರೂ ಭಾವಿಸಿದ್ದಾರೆ.&lt;/p&gt;&lt;h2&gt;ಗೆಸ್ ಮಾಡ್ತೀರಾ?&lt;/h2&gt;&lt;p&gt;ಅದಿರಲಿ, ನಟಿ ತ್ರಿಷಾ ಅವರಿಗೆ ಇನ್ನೊಂದು ಹೆಸರಿದೆ. ಅದು ಏನು ಗೊತ್ತಾ? ನಿಮಗೆ ಅಚ್ಚರಿ ಆಗಬಹುದು, ತ್ರಿಷಾರಿಗೆ 'ಹನಿ' ಎಂದು ಒಬ್ಬರು ಕರೆಯುತ್ತಾರೆ. ಯಾರು ಎಂದು ಕೆಲವರು ತಿಳಿದಿರಬಹುದು, ಕೆಲವರು ಗೆಸ್ ಮಾಡಬಹುದು. ಆದರೆ, ಬಹಳಷ್ಟು ತ್ರಿಷಾರನ್ನು 'Honey' ಎಂದು ಕರೆಯುವವರು 'ಅವರೇ' ಆಗಿರುತ್ತಾರೆ ಎಂದು ಅರ್ಥೈಸಬಹುದು. ಆದರೆ, ಈ ಸಂಗತಿಯನ್ನು ಸ್ವತಃ ನಟಿ ತ್ರಿಷಾ ಕೃಷ್ಣನ್ ಒಪ್ಪಿಕೊಂಡಿದ್ದಾರೆ. ಜೊತೆಗೆ, 'ಹೌದು' ಅವರು ನನ್ನನ್ನು 'ಹನಿ' ಎಂದು ಕರೆಯುತ್ತಾರೆ ಎಂದು ಕಪಲ್ ಶೋ ಶರ್ಮಾ ಶೋದಲ್ಲಿ ಎಲ್ಲರೆದುರು ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಜೊತೆಗೆ, ಇನ್ನೂ ಒಂದು ಸಂಗತಿಯನ್ನು ತ್ರಿಷಾ ಮುಚ್ಚುಮರೆ ಇಲ್ಲದೇ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ? ಆ ಒಬ್ಬ ವ್ಯಕ್ತಿ, ತ್ರಿಷಾ ಜೀವನದ ಮಹಾನ್ ವ್ಯಕ್ತಿ ಮಾತ್ರ ಅವರನ್ನು 'ಹನಿ' ಎಂದು ಕರೆಯುತ್ತಾರೆ. ಆದರೆ ಈಗ ಬಹಳಷ್ಟು ಜನ, ಅಂದರೆ ತ್ರಿಷಾ ಸ್ನೇಹಿತರ ಬಳಗ ಅವರನ್ನು ಮತ್ತೊಂದು ಹೆಸರಿನಿಮದ ಕರೆಯುತ್ತಾರೆ. ಅದು ಅಚ್ಚರಿ ಎನ್ನಿಸುವಂತಿದ್ದರೂ ನಿಜ. ಅದೇನು ಗೊತ್ತಾ?&lt;/p&gt;&lt;h3&gt;ಇದು ಅಚ್ಚರಿ, ಆದ್ರೂ ಸತ್ಯ!&lt;/h3&gt;&lt;p&gt;ಕಪಿಲ್ ಶೋದಲ್ಲಿ ಸ್ವತಃ ನಟಿ ತ್ರಿಷಾ ಹೇಳಿಕೊಂಡಂತೆ. ಅವರನ್ನು ಬಹಳಷ್ಟು ಆಪ್ತರು ಟ್ರಾಷ್ (Trash) ಎಂದು ಕರೆಯುತ್ತಾರೆ. ಆ ಶೋದಲ್ಲಿ ಎಲ್ಲರೂ ತ್ರಿಷಾ ಮಾತನ್ನು ಕೇಳಿ ನಕ್ಕಿದ್ದು, ಅಲ್ಲೇ ಇದ್ದ ನಟಿ ವಿಕ್ರಮ್ ಅವರು ತ್ರಿಷಾರನ್ನು ಕಾಲೆಳೆದಿದ್ದೂ ಆಯ್ತು. ಆದರೂ ಕೂಡ, ತ್ರಿಷಾ ಅವರು ಯಾವುದೇ ಸಂಕೋಷ ಇಲ್ಲದೇ, ಹೌದು ಇತ್ತೀಚೆಗೆ ನನ್ನ ಕ್ಲೋಸ್ ಸರ್ಕಲ್ ನನ್ನನ್ನು ಟ್ರಾಷ್ ಎಂದೇ ಕರೆಯುತ್ತಾರೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಹೌದು, ಈಗ ಮತ್ತೆ ಮೊದಲಿನ ವಿಷಯಕ್ಕೆ ಬರುವುದಾದರೆ.. ನಟಿ ತ್ರಿಷಾರನ್ನು 'ಹನಿ' ಎಂದು ಕರೆಯವುದು ಬೇರೆ ಯಾರೂ ಅಲ್ಲ, ಅವರ ಅಪ್ಪ (Father) ಅಂತ ಅವರೇ ಹೇಳಿದ್ದಾರೆ. ನನ್ನ ಅಪ್ಪ ನನ್ನನ್ನು ಹನಿ (Honey) ಎಂದೇ ಯಾವತ್ತೂ ಕರೆಯುತ್ತಿದ್ದರು ಎಂದಿದ್ದಾರೆ. ಇದು ನೀವು ಅಂದುಕೊಂಡಿದ್ದಕ್ಕಿಂತ ಭಿನ್ನವಾಗಿರಬಹುದು, ನಿಮಗೆ ಶಾಕ್ ಆಗಿರಬಹುದು. ಆದರೆ, ಇದೇ ಸತ್ಯ ಸಂಗತಿ. ತ್ರಿಷಾರನ್ನು ಹನಿ ಎಂದು ಕರೆಯುವುದು ಅವರ ಅಪ್ಪ ಮಾತ್ರ, ಬೇರೆ ಯಾರೂ ಅಲ್ಲ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/who-calls-trisha-krishan-as-honey-what-she-herself-revealed-in-kapil-sharma-show-to-know-here/articleshow-r8b3fnt"/>
        </item>
        <item>
            <title><![CDATA[Jr NTR-ತ್ರಿವಿಕ್ರಮ್ ಕಾಂಬೋದಲ್ಲಿ ಸೆನ್ಸೇಷನಲ್ ಸಿನಿಮಾ: ಮೈ ಜುಮ್ಮೆನ್ನಿಸೋ ಪೋಸ್ಟರ್‌ನಲ್ಲೇನಿದೆ?]]></title>
            <link>https://kannada.asianetnews.com/entertainment/jr-ntr-and-trivikram-announce-mythological-epic-movie-gvd/articleshow-byuck7g</link>
            <guid isPermaLink="true">https://kannada.asianetnews.com/entertainment/jr-ntr-and-trivikram-announce-mythological-epic-movie-gvd/articleshow-byuck7g</guid>
            <pubDate>Mon, 29 Jun 2026 20:30:55 +0530</pubDate>
            <description><![CDATA[&lt;p&gt;'Aravinda Sametha' ಚಿತ್ರದ ಬಳಿಕ ಜೂ.ಎನ್&zwnj;ಟಿಆರ್&zwnj; ಮತ್ತು ತ್ರಿವಿಕ್ರಮ್ ಜೋಡಿ ಮತ್ತೆ ಒಂದಾಗುತ್ತಿದೆ. ಈ ಸೆನ್ಸೇಷನಲ್ ಪ್ರಾಜೆಕ್ಟ್&zwnj;ನ ಘೋಷಣೆಯಾಗಿದ್ದು, ಬಿಡುಗಡೆಯಾದ ಪೋಸ್ಟರ್ ಸಖತ್ ಕುತೂಹಲ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9y78bn0dqe5tnbvxsz6vdk,imgname-gxgx-1782745112948.png" type="image/jpeg" height="390" width="690"/>
            <content:encoded><![CDATA[&lt;p&gt;ಟಾಲಿವುಡ್&zwnj;ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಈ ಪ್ರಾಜೆಕ್ಟ್, ಜೂ.ಎನ್&zwnj;ಟಿಆರ್&zwnj; ಮತ್ತು ತ್ರಿವಿಕ್ರಮ್ ಕಾಂಬಿನೇಷನ್&zwnj;ನ ಎರಡನೇ ಚಿತ್ರವಾಗಿದೆ. ಕಾರ್ತಿಕೇಯನ ಕಥೆಯಾಧಾರಿತ ಈ ಸಿನಿಮಾವನ್ನು ಹಾರಿಕಾ ಮತ್ತು ಹಾಸಿನಿ ಕ್ರಿಯೇಷನ್ಸ್ ನಿರ್ಮಿಸುತ್ತಿದೆ. ಎಸ್. ರಾಧಾಕೃಷ್ಣ ನಿರ್ಮಾಣದ ಈ ಚಿತ್ರವನ್ನು 'ಶಿವನ ಮಗ, ಪಾರ್ವತಿದೇವಿಯ ಹೆಮ್ಮೆ, ಶಾಶ್ವತ ಸೇನಾನಿ' ಎಂಬ ಅಡಿಬರಹದೊಂದಿಗೆ ಘೋಷಿಸಲಾಗಿದ್ದು, ಇದು ನಿರೀಕ್ಷೆಗಳನ್ನು ಹೆಚ್ಚಿಸಿದೆ.&lt;/p&gt;&lt;p&gt;ಬಿಡುಗಡೆಯಾದ ಪೋಸ್ಟರ್ ಮೈ ನವಿರೇಳಿಸುವಂತಿದೆ. ಇದರಲ್ಲಿ ಯುದ್ಧಭೂಮಿ, ಕಾರ್ತಿಕೇಯನ ಆಯುಧ ಮತ್ತು ಸಾವಿರಾರು ಸೈನಿಕರ ಮೃತದೇಹಗಳು ಕಾಣಿಸುತ್ತವೆ. ಈ ಪೋಸ್ಟರ್ ಲುಕ್ ಮೈಂಡ್&zwnj; ಬ್ಲೋಯಿಂಗ್ ಆಗಿದೆ. 'ಗೆಲುವು ಸಾಧಿಸುವ ಚಿತ್ರಗಳು ಬರುತ್ತವೆ, ಆದರೆ ಇತಿಹಾಸ ಸೃಷ್ಟಿಸುವ ಚಿತ್ರಗಳು ಅಪರೂಪ. ಅಂತಹ ಒಂದು ಅದ್ಭುತಕ್ಕೆ ಜೂ.ಎನ್&zwnj;ಟಿಆರ್&zwnj; ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಮುಂದಾಗಿದ್ದಾರೆ' ಎಂದು ಚಿತ್ರತಂಡ ಹೇಳಿದೆ. ಅಭಿಮಾನಿಗಳು ಬಹಳ ವರ್ಷಗಳಿಂದ ಕಾಯುತ್ತಿದ್ದ ಈ ಕಾಂಬಿನೇಷನ್&zwnj;ನ ಚಿತ್ರದ ಅಧಿಕೃತ ಘೋಷಣೆ ಇದಾಗಿದೆ.&lt;/p&gt;&lt;p&gt;ಹಿಂದೆ ಈ ಜೋಡಿಯ ಕಾಂಬಿನೇಷನ್&zwnj;ನಲ್ಲಿ ಬಂದ 'ಅರವಿಂದ ಸಮೇತ ವೀರ ರಾಘವ' ಚಿತ್ರವು ದೊಡ್ಡ ಯಶಸ್ಸು ಗಳಿಸಿತ್ತು. ಈಗ ಮತ್ತೊಮ್ಮೆ ಈ ನಟ-ನಿರ್ದೇಶಕ ಜೋಡಿ ಹೊಸ ದಾಖಲೆಗಳನ್ನು ಬರೆಯಲು ಸಜ್ಜಾಗಿದೆ. ಈ ಚಿತ್ರವು ದೈವಿಕ ಹಿನ್ನೆಲೆಯಲ್ಲಿ, ಅದ್ದೂರಿಯಾಗಿ ನಿರ್ಮಾಣವಾಗಲಿದೆ. ಪುರಾಣಗಳಿಂದ ಸ್ಫೂರ್ತಿ ಪಡೆದ ಕಥೆ, ಭಾವನಾತ್ಮಕ ಸನ್ನಿವೇಶಗಳು ಮತ್ತು ರೋಚಕ ಯುದ್ಧದ ದೃಶ್ಯಗಳು ಇದರಲ್ಲಿರಲಿವೆ. ಜೂ.ಎನ್&zwnj;ಟಿಆರ್&zwnj; ಅವರ ನಟನಾ ವಿಶ್ವರೂಪಕ್ಕೆ ತ್ರಿವಿಕ್ರಮ್ ಅವರ ಬರವಣಿಗೆಯ ಬಲ ಸೇರಿಕೊಂಡಿರುವುದು ನಿರೀಕ್ಷೆಗಳನ್ನು ಮುಗಿಲು ಮುಟ್ಟಿಸಿದೆ.&lt;/p&gt;&lt;h2&gt;&lt;strong&gt;ಅತಿ ದೊಡ್ಡ ಬಜೆಟ್&zwnj;&lt;/strong&gt;&lt;/h2&gt;&lt;p&gt;ಈ ಚಿತ್ರಕ್ಕೆ ಅತ್ಯುತ್ತಮ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಸಂಗೀತ ಸಂಚಲನ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ. ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಿತ್ರವನ್ನು ಬೇರೆಯೇ ಹಂತಕ್ಕೆ ಕೊಂಡೊಯ್ಯಲಿವೆ. ಹಾರಿಕಾ ಮತ್ತು ಹಾಸಿನಿ ಕ್ರಿಯೇಷನ್ಸ್&zwnj;ನ ಎಸ್. ರಾಧಾಕೃಷ್ಣ ಮತ್ತು ಜೂ.ಎನ್&zwnj;ಟಿಆರ್&zwnj; ಆರ್ಟ್ಸ್&zwnj;ನ ನಂದಮೂರಿ ಕಲ್ಯಾಣ್ ರಾಮ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅತಿ ದೊಡ್ಡ ಬಜೆಟ್&zwnj;ನಲ್ಲಿ ಈ ದೃಶ್ಯಕಾವ್ಯವನ್ನು ತೆರೆಗೆ ತರಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ. ಉಳಿದ ನಟರು ಮತ್ತು ತಾಂತ್ರಿಕ ಸಿಬ್ಬಂದಿಯ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಚಿತ್ರತಂಡ ತಿಳಿಸಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/jr-ntr-and-trivikram-announce-mythological-epic-movie-gvd/articleshow-byuck7g"/>
        </item>
        <item>
            <title><![CDATA[Ravi Teja: 'ಇರುಮುಡಿ ಕಟ್ಟು' ಎನ್ನುತ್ತಾ ಅಯ್ಯಪ್ಪ ಭಕ್ತರಿಗೆ ವಿಶೇಷ ಸರ್ಪ್ರೈಸ್ ಕೊಟ್ಟ ರವಿತೇಜ: ಏನದು?]]></title>
            <link>https://kannada.asianetnews.com/entertainment/ravi-teja-irumudi-first-single-irumudi-kattu-song-goes-viral-gvd/articleshow-4vmihk9</link>
            <guid isPermaLink="true">https://kannada.asianetnews.com/entertainment/ravi-teja-irumudi-first-single-irumudi-kattu-song-goes-viral-gvd/articleshow-4vmihk9</guid>
            <pubDate>Mon, 29 Jun 2026 20:07:38 +0530</pubDate>
            <description><![CDATA[&lt;p&gt;Ravi Teja ಮತ್ತು ಪ್ರಿಯಾ ಭವಾನಿ ಶಂಕರ್ ಅಭಿನಯದ 'ಇರುಮುಡಿ' ಸಿನಿಮಾದ ಮೊದಲ ಹಾಡು 'ಇರುಮುಡಿ ಕಟ್ಟು' ಬಿಡುಗಡೆಯಾಗಿದೆ. ಅಯ್ಯಪ್ಪ ಸ್ವಾಮಿಯ ಭಕ್ತಿಭಾವ ಸಾರುವ ಈ ಗೀತೆಯಲ್ಲಿ ರವಿತೇಜ ದೈವಿಕ ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9wzddt526hadjjhtx7n3n8,imgname-fxfx-1782743807418.png" type="image/jpeg" height="390" width="690"/>
            <content:encoded><![CDATA[&lt;p&gt;ಮಾಸ್ ಮಹಾರಾಜ ರವಿತೇಜ ನಟನೆಯ ಬಹುನಿರೀಕ್ಷಿತ ಭಕ್ತಿಪ್ರಧಾನ ಸಿನಿಮಾ 'ಇರುಮುಡಿ'ಯ ಮೊದಲ ಹಾಡು ಬಿಡುಗಡೆಯಾಗಿದೆ. ಅಯ್ಯಪ್ಪ ಸ್ವಾಮಿಯ ಹಿನ್ನೆಲೆಯಲ್ಲಿ ತಂದೆ-ಮಗಳ ಬಾಂಧವ್ಯದ ಕಥೆ ಹೇಳುವ ಈ ಚಿತ್ರದ 'ಇರುಮುಡಿ ಕಟ್ಟು' ಎಂಬ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಾಸ್ ಮಹಾರಾಜ ರವಿತೇಜ, ಈ ಬಾರಿ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.&lt;/p&gt;&lt;p&gt;ಬ್ಲಾಕ್&zwnj;ಬಸ್ಟರ್ ನಿರ್ದೇಶಕ ಶಿವ ನಿರ್ವಾಣ ನಿರ್ದೇಶನದಲ್ಲಿ ರವಿತೇಜ ಹಾಗೂ ಪ್ರಿಯಾ ಭವಾನಿ ಶಂಕರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಇರುಮುಡಿ' ಚಿತ್ರದ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 'ಇರುಮುಡಿ ಕಟ್ಟು ಶಬರಿಮಲೆ ಎಕ್ಕು' ಎಂದು ಸಾಗುವ ಈ ಹಾಡು ಅಯ್ಯಪ್ಪ ಭಕ್ತರನ್ನು ಬಹಳವಾಗಿ ಸೆಳೆಯುತ್ತಿದೆ. ರವಿತೇಜ ಸಿನಿಮಾಗಳಲ್ಲಿ ಸಾಮಾನ್ಯವಾಗಿರುವ ಮಾಸ್ ಮತ್ತು ಎನರ್ಜಿಟಿಕ್ ಹಾಡುಗಳಿಗಿಂತ ಭಿನ್ನವಾಗಿ, ಸಂಪೂರ್ಣ ಭಕ್ತಿ ಪ್ರಧಾನವಾಗಿ ಈ ಗೀತೆಯನ್ನು ಸಂಯೋಜಿಸಲಾಗಿದೆ.&lt;/p&gt;&lt;p&gt;ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಹಾಗೂ ಸಾಹಿತ್ಯ ಈ ಹಾಡಿಗೆ ಜೀವ ತುಂಬಿದೆ. ಅಯ್ಯಪ್ಪ ಭಕ್ತರಿಗೆ ಈ ಹಾಡು ವಿಶೇಷ ಅನುಭೂತಿ ನೀಡುತ್ತಿದೆ. ಈ ಹಾಡಿನಲ್ಲಿ ರವಿತೇಜ ಅಯ್ಯಪ್ಪ ಮಾಲೆ ಧರಿಸಿ, ಕಪ್ಪು ಬಟ್ಟೆಯಲ್ಲಿ ಹಿಂದೆಂದೂ ಕಾಣದ ದೈವಿಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಕ್ರೀನ್ ಪ್ರೆಸೆನ್ಸ್ ಭಕ್ತರಲ್ಲಿ ಹೊಸ ಉತ್ಸಾಹ ತುಂಬುತ್ತಿದೆ. ಶಬರಿಮಲೆ ಯಾತ್ರೆಯ ದೃಶ್ಯಗಳು, ಸಾಂಪ್ರದಾಯಿಕ ನೃತ್ಯಗಳು ಹಾಗೂ ಪ್ರಿಯಾ ಭವಾನಿ ಶಂಕರ್ ಅವರ ಹೋಮ್ಲಿ ಲುಕ್ ಹಾಡಿನ ದೃಶ್ಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;h2&gt;&lt;strong&gt;ಗ್ಲಿಂಪ್ಸ್&zwnj;ಗೆ ಉತ್ತಮ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;ಶಿವ ನಿರ್ವಾಣ ಅವರ ಭಾವನಾತ್ಮಕ ಸ್ಪರ್ಶ ಹಾಗೂ ರವಿತೇಜ ನಟನೆ ಒಟ್ಟಿಗೆ ಸೇರಿರುವ ಈ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಈಗಾಗಲೇ ಬಿಡುಗಡೆಯಾದ ಗ್ಲಿಂಪ್ಸ್&zwnj;ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಮೊದಲ ಹಾಡು ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರವನ್ನು ಆಗಸ್ಟ್ 21 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. 'ಇರುಮುಡಿ' ಸಿನಿಮಾ ಘೋಷಣೆಯಾದಾಗಿನಿಂದಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈಗ ಶಬರಿಮಲೆ ಸೀಸನ್ ಅಲ್ಲದಿದ್ದರೂ, ಈ ಹಾಡು ಕೇಳುತ್ತಿದ್ದರೆ ಅಯ್ಯಪ್ಪ ಭಕ್ತರಿಗೆ ಈಗಲೇ ಮಾಲೆ ಧರಿಸಿದಷ್ಟು ಭಕ್ತಿಭಾವ ಮೂಡುತ್ತದೆ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ravi-teja-irumudi-first-single-irumudi-kattu-song-goes-viral-gvd/articleshow-4vmihk9"/>
        </item>
        <item>
            <title><![CDATA[Salman Khan Secret Plan: 2027ರ 'ಈದ್'ಗೆ ಸುಲ್ತಾನ್ ಸಲ್ಮಾನ್ ಸೀಕ್ರೆಟ್ ಪ್ಲಾನ್; 'ಧುರಂಧರ್' ಟೀಮ್‌ ಜೊತೆಗೆ ಸಲ್ಲೂ ಮಾಡಲಿರೋದೇನು?]]></title>
            <link>https://kannada.asianetnews.com/entertainment/after-dhurandhar-ace-action-team-reunites-for-salman-khan-and-vamshi-paidipally-for-eid-2027-film/articleshow-vv87evt</link>
            <guid isPermaLink="true">https://kannada.asianetnews.com/entertainment/after-dhurandhar-ace-action-team-reunites-for-salman-khan-and-vamshi-paidipally-for-eid-2027-film/articleshow-vv87evt</guid>
            <pubDate>Mon, 29 Jun 2026 19:36:29 +0530</pubDate>
            <description><![CDATA[&lt;p&gt;ಸಲ್ಮಾನ್ ಖಾನ್ ಮತ್ತು ಈದ್ ಹಬ್ಬಕ್ಕೆ ಯಾವತ್ತೂ ಅವಿನಾಭಾವ ಸಂಬಂಧವಿದೆ. ಈ ಹೊಸ ಸಿನಿಮಾ ಕೂಡ 2027ರ ಈದ್ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರತಂಡವು ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲು ಸಿದ್ಧತೆ ನಡೆಸುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktxcqtm0m889z9e3ay6a4ngf,imgname-fotojet--69--1781250386560.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಲ್ಮಾನ್ ಖಾನ್ ಸೀಕ್ರೆಟ್!&lt;/strong&gt;&lt;/p&gt;&lt;p&gt;ಬಾಲಿವುಡ್&zwnj;ನ 'ಟೈಗರ್' ಸಲ್ಮಾನ್ ಖಾನ್ (Salman Khan) ಅಂದ್ರೆ ಸಾಕು, ಅಭಿಮಾನಿಗಳಲ್ಲಿ ಒಂದು ರೀತಿಯ ಸಂಚಲನ ಶುರುವಾಗುತ್ತದೆ. ಸದ್ಯ ಸಲ್ಮಾನ್ ಖಾನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಅದರಲ್ಲಿ ಅತ್ಯಂತ ನಿರೀಕ್ಷಿತ ಪ್ರಾಜೆಕ್ಟ್ ಎಂದರೆ ವಂಶಿ ಪೈಡಿಪಲ್ಲಿ ನಿರ್ದೇಶನದ, ದಿಲ್ ರಾಜು ನಿರ್ಮಾಣದ ಹೊಸ ಸಿನಿಮಾ. ಸದ್ಯಕ್ಕೆ 'SVC63' ಎಂದು ತಾತ್ಕಾಲಿಕವಾಗಿ ಹೆಸರಿಸಲಾಗಿರುವ ಈ ಚಿತ್ರದ ಬಗ್ಗೆ ಈಗ ಒಂದು ಲೇಟೆಸ್ಟ್ ಮತ್ತು ಬಿಗ್ ಅಪ್&zwnj;ಡೇಟ್ ಹೊರಬಿದ್ದಿದೆ.&lt;/p&gt;&lt;p&gt;ಈ ಸಿನಿಮಾ ಮೂಲಕ ಸಲ್ಮಾನ್ ಖಾನ್ ಬೆಳ್ಳಿತೆರೆಯ ಮೇಲೆ ಹಿಂದೆಂದೂ ಕಾಣದ ರೌದ್ರಾವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಿನಿಪ್ರೇಮಿಗಳಲ್ಲಿ ಕಿಚ್ಚು ಹಚ್ಚಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸಲ್ಮಾನ್ ಖಾನ್ ಫ್ಯಾನ್ಸ್ ಖುಷಿ ಊರತುಂಬಾ ಹಬ್ಬಿದೆ.&lt;/p&gt;&lt;p&gt;ಸಲ್ಮಾನ್ ಲುಕ್ ಬದಲಿಸಲಿದ್ದಾರೆ ಪ್ರೀತಿಶೀಲ್ ಸಿಂಗ್:&lt;/p&gt;&lt;p&gt;ಈ ಸಿನಿಮಾದ ಹೈಪ್ ಹೆಚ್ಚಾಗಲು ಮುಖ್ಯ ಕಾರಣವೆಂದರೆ, ಬಾಲಿವುಡ್&zwnj;ನ ಖ್ಯಾತ ಮೇಕಪ್ ಮತ್ತು ಪ್ರಾಸ್ಥೆಟಿಕ್ ಡಿಸೈನರ್ ಪ್ರೀತಿಶೀಲ್ ಸಿಂಗ್ ಈ ತಂಡಕ್ಕೆ ಸೇರ್ಪಡೆಯಾಗಿರುವುದು. ಸಲ್ಮಾನ್ ಖಾನ್ ಅವರಿಗೆ ಒಂದು ವಿಶಿಷ್ಟ ಮತ್ತು ಪವರ್&zwnj;ಫುಲ್ ಲುಕ್ ನೀಡಲು ಅವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಪ್ರೀತಿಶೀಲ್ ಅವರ ಕೈಚಳಕದಲ್ಲಿ ಸಲ್ಮಾನ್ ಅವರ ಅವತಾರ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.&lt;/p&gt;&lt;h2&gt;ಕೊರಿಯನ್ ಆಕ್ಷನ್ ತಂಡದ ಎಂಟ್ರಿ:&lt;/h2&gt;&lt;p&gt;ಈ ಚಿತ್ರದ ಮತ್ತೊಂದು ದೊಡ್ಡ ಹೈಲೈಟ್ ಎಂದರೆ ಆಕ್ಷನ್ ಸೀಕ್ವೆನ್ಸ್&zwnj;ಗಳು. 'ಬಾಲಿವುಡ್ ಹಂಗಾಮಾ' ವರದಿಯ ಪ್ರಕಾರ, ಈ ಸಿನಿಮಾಗಾಗಿ ಜಗತ್ಪ್ರಸಿದ್ಧ ಕೊರಿಯನ್ ಆಕ್ಷನ್ ತಂಡವನ್ನು ಕರೆತರಲಾಗಿದೆ. 'ಧುರಂಧರ್' (Dhurandhar), 'ಕಿಲ್ ಅಂಡ್ ವಾರ್' (Kill and War) ನಂತಹ ಬ್ಲಾಕ್&zwnj;ಬಸ್ಟರ್ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ 'ಮಿ. ಓ' (Sea Young Oh) ನೇತೃತ್ವದ ತಂಡ ಸಲ್ಮಾನ್ ಖಾನ್&zwnj;ಗೆ ಅದ್ಧೂರಿ ಆಕ್ಷನ್ ದೃಶ್ಯಗಳನ್ನು ಡಿಸೈನ್ ಮಾಡುತ್ತಿದೆ. ಪ್ರೇಕ್ಷಕರಿಗೆ ಹೊಸ ರೀತಿಯ ಆಕ್ಷನ್ ಎಕ್ಸ್&zwnj;ಪೀರಿಯನ್ಸ್ ನೀಡಲು ಸಲ್ಮಾನ್ ಮತ್ತು ವಂಶಿ ಪೈಡಿಪಲ್ಲಿ ಈ ತಂಡದೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.&lt;/p&gt;&lt;p&gt;ವಿಶೇಷವಾಗಿ ಚಿತ್ರದ ಒಂದು ದೊಡ್ಡ ಆಕ್ಷನ್ ಸೀಕ್ವೆನ್ಸ್ ಸಲ್ಮಾನ್ ಖಾನ್ ಅವರನ್ನು ಅತ್ಯಂತ ಉಗ್ರವಾದ ಮತ್ತು ಆಕ್ರಮಣಕಾರಿ (Angry Avatar) ರೂಪದಲ್ಲಿ ಪ್ರಸ್ತುತಪಡಿಸಲಿದೆ. ಚಿತ್ರಮಂದಿರಗಳಲ್ಲಿ ಈ ದೃಶ್ಯಕ್ಕೆ ಸೀಟಿ ಮತ್ತು ಚಪ್ಪಾಳೆಗಳ ಮಳೆ ಸುರಿಯುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದು ಸಲ್ಮಾನ್ ಖಾನ್ ಅವರ 'ಗ್ರ್ಯಾಂಡ್ ಕಮ್&zwnj;ಬ್ಯಾಕ್' ಸಿನಿಮಾ ಆಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಈ ಸುದ್ದಿ ಕೇಳಿ ಸಲ್ಲೂ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.&lt;/p&gt;&lt;h3&gt;ಈದ್ 2027ಕ್ಕೆ ಬಿಡುಗಡೆ:&lt;/h3&gt;&lt;p&gt;ಸಲ್ಮಾನ್ ಖಾನ್ ಮತ್ತು ಈದ್ ಹಬ್ಬಕ್ಕೆ ಯಾವತ್ತೂ ಅವಿನಾಭಾವ ಸಂಬಂಧವಿದೆ. ಈ ಹೊಸ ಸಿನಿಮಾ ಕೂಡ 2027ರ ಈದ್ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರತಂಡವು ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲು ಸಿದ್ಧತೆ ನಡೆಸುತ್ತಿದೆ. ಯಾವಾಗ ಈ ಶುಭಸುದ್ದಿ ಬರಬಹುದು ಅಂತ ಕಾಯಲಾಗುತ್ತಿದೆ.&lt;/p&gt;&lt;p&gt;ಮತ್ತೊಂದು ಭರ್ಜರಿ ಪ್ರಾಜೆಕ್ಟ್ 'ಮಾತೃಭೂಮಿ':&lt;/p&gt;&lt;p&gt;ಸಲ್ಮಾನ್ ಖಾನ್ ಕೇವಲ ವಂಶಿ ಸಿನಿಮಾದಲ್ಲಷ್ಟೇ ಅಲ್ಲ, ಅಪೂರ್ವ ಲಖಿಯಾ ನಿರ್ದೇಶನದ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' (Maatrubhumi: May War Rest in Peace) ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಚಿತ್ರಾಂಗದ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಮುಂದಿನ ಕೆಲವು ವರ್ಷಗಳು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಹಬ್ಬದಂತಿರಲಿದ್ದು, ಬಾಕ್ಸ್ ಆಫೀಸ್&zwnj;ನಲ್ಲಿ ಹೊಸ ದಾಖಲೆಗಳು ನಿರ್ಮಾಣವಾಗುವುದು ಖಚಿತ ಎನ್ನಲಾಗುತ್ತಿದೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/after-dhurandhar-ace-action-team-reunites-for-salman-khan-and-vamshi-paidipally-for-eid-2027-film/articleshow-vv87evt"/>
        </item>
        <item>
            <title><![CDATA[Varanasi Epic War Scene: 3500 ಜನರೊಂದಿಗೆ ರಾಜಮೌಳಿ ಯುದ್ಧ! ಭಾರತೀಯ ಸಿನಿಮಾದಲ್ಲೇ ಅತಿದೊಡ್ಡ ದೃಶ್ಯ?]]></title>
            <link>https://kannada.asianetnews.com/entertainment/rajamouli-plans-epic-war-scene-with-3500-artists-for-varanasi-movie-gvd/articleshow-8ey00wk</link>
            <guid isPermaLink="true">https://kannada.asianetnews.com/entertainment/rajamouli-plans-epic-war-scene-with-3500-artists-for-varanasi-movie-gvd/articleshow-8ey00wk</guid>
            <pubDate>Mon, 29 Jun 2026 19:27:51 +0530</pubDate>
            <description><![CDATA[&lt;p&gt;Rajamouli ಅವರ ಮುಂದಿನ ಬ್ರಹ್ಮಾಂಡ ಸಿನಿಮಾ 'ವಾರಣಾಸಿ' ಬಗ್ಗೆ ದಿನಕ್ಕೊಂದು ಹೊಸ ಸುದ್ದಿ ಹೊರಬೀಳುತ್ತಿದೆ. ಇದೀಗ ಚಿತ್ರದ ಯುದ್ಧದ ದೃಶ್ಯವೊಂದಕ್ಕೆ 3500 ಸಹ ಕಲಾವಿದರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9tgbha2sxznkqcx1s1072h,imgname-chc-1782741216810.png" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಕ್ಯಾನ್ವಾಸ್ ಕಥೆ ಹೇಳುವುದರಲ್ಲಿ 'ಬಾಹುಬಲಿ' ಸಿನಿಮಾ ಒಂದು ಹೊಸ ಬೆಂಚ್&zwnj;ಮಾರ್ಕ್ ಸೃಷ್ಟಿಸಿತ್ತು. ಈ ಚಿತ್ರದ ಮೂಲಕ ರಾಜಮೌಳಿ, ತೆಲುಗು ಸಿನಿಮಾವನ್ನು ಒಂದೇ ಬಾರಿಗೆ ಪ್ಯಾನ್-ಇಂಡಿಯಾ ಮಟ್ಟಕ್ಕೆ ಪರಿಚಯಿಸಿದರು. 'ಬಾಹುಬಲಿ 2' ನಂತರ ಬಂದ 'RRR' ಚಿತ್ರದಿಂದ ರಾಜಮೌಳಿ ವಿದೇಶಗಳಲ್ಲೂ ಅಭಿಮಾನಿಗಳನ್ನು ಗಳಿಸಿದರು. ಈಗ ಅವರು ತಮ್ಮ ವೃತ್ತಿಜೀವನದಲ್ಲೇ ಅತಿದೊಡ್ಡ ಸಿನಿಮಾದ ತಯಾರಿಯಲ್ಲಿದ್ದಾರೆ.&lt;/p&gt;&lt;p&gt;ಮಹೇಶ್ ಬಾಬು ನಾಯಕರಾಗಿರುವ 'ವಾರಣಾಸಿ'ಯೇ ಆ ಚಿತ್ರ. ಈ ಸಿನಿಮಾದ ಬಗ್ಗೆ ಹೊರಬರುತ್ತಿರುವ ಪ್ರತಿಯೊಂದು ಅಪ್&zwnj;ಡೇಟ್ ಕೂಡಾ ಸಿನಿಮಾ ಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸುತ್ತಿದೆ. ಇದೀಗ ಅಂತಹದ್ದೇ ಒಂದು ಸುದ್ದಿ ಹೊರಬಿದ್ದಿದೆ. 'ಬಾಹುಬಲಿ' ಚಿತ್ರದ ಯುದ್ಧದ ದೃಶ್ಯಗಳು ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದ್ದವು. ಆದರೆ, 'ವಾರಣಾಸಿ'ಯಲ್ಲಿ ಅದಕ್ಕಿಂತ ಹಲವು ಪಟ್ಟು ದೊಡ್ಡ ಮತ್ತು ಅದ್ಭುತವಾದ ಯುದ್ಧದ ದೃಶ್ಯಗಳನ್ನು ರಾಜಮೌಳಿ ಸೃಷ್ಟಿಸಲಿದ್ದಾರೆ ಎನ್ನುವುದು ಹೊಸ ಸುದ್ದಿ.&lt;/p&gt;&lt;p&gt;ವರದಿಗಳ ಪ್ರಕಾರ, ಚಿತ್ರದ ಒಂದು ಯುದ್ಧದ ದೃಶ್ಯಕ್ಕಾಗಿ ರಾಜಮೌಳಿ ಬರೋಬ್ಬರಿ 3500 ಸಹ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದಾರಂತೆ. ಇದಕ್ಕಾಗಿ ಕಳೆದ ಕೆಲವು ವಾರಗಳಿಂದ ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಆದರೆ, ದೊಡ್ಡ ಪರದೆಯ ಮೇಲೆ ಪ್ರೇಕ್ಷಕರು ಇದಕ್ಕಿಂತಲೂ ದೊಡ್ಡ ದೃಶ್ಯವನ್ನು ನೋಡಲಿದ್ದಾರೆ. ವಿಷುಯಲ್ ಎಫೆಕ್ಟ್ಸ್ (VFX) ಸಹಾಯದಿಂದ ಈ ಸಂಖ್ಯೆಯನ್ನು 50,000 ಸೈನಿಕರಿಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಯುದ್ಧದ ದೃಶ್ಯಗಳಲ್ಲಿ ಒಂದಾಗಲಿದೆ. 'ವಾರಣಾಸಿ' ಒಂದು ಮಿಥಾಲಜಿಕಲ್ ಆಕ್ಷನ್ ಅಡ್ವೆಂಚರ್ ಸಿನಿಮಾ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಬೇರೆ ಬೇರೆ ಕಾಲಘಟ್ಟಗಳಲ್ಲಿ ನಾಯಕ ಪಯಣಿಸುವ ಕಥೆ ಇದಾಗಿದೆ. ಚಿತ್ರದಲ್ಲಿ ಮಹೇಶ್ ಬಾಬು 'ರುದ್ರ' ಎಂಬ ಪಾತ್ರದಲ್ಲಿ ನಟಿಸುತ್ತಿದ್ದರೆ, ಪ್ರಿಯಾಂಕಾ ಚೋಪ್ರಾ 'ಮಂದಾಕಿನಿ' ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಮುಖ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್&lt;/strong&gt;&lt;/h2&gt;&lt;p&gt;ಸುಮಾರು 8 ವರ್ಷಗಳ ನಂತರ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಂದು ವಿಶೇಷವಿದೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕೂಡಾ ಒಂದು ಪ್ರಮುಖ ಪಾತ್ರದಲ್ಲಿದ್ದಾರೆ. ಪೃಥ್ವಿರಾಜ್ 'ಕುಂಭ' ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದು, ಇದು ಅವರ ವೃತ್ತಿಜೀವನದಲ್ಲೇ ಸಿಕ್ಕ ಅತಿದೊಡ್ಡ ಅವಕಾಶ ಎನ್ನಬಹುದು. ಈ ಸಿನಿಮಾ 2027ರ ಏಪ್ರಿಲ್ 7 ರಂದು ಥಿಯೇಟರ್&zwnj;ಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rajamouli-plans-epic-war-scene-with-3500-artists-for-varanasi-movie-gvd/articleshow-8ey00wk"/>
        </item>
        <item>
            <title><![CDATA[Mithun Sridevi: ಗಂಡ-ಹೆಂಡತಿಯಂತೆ ಇದ್ದರು ಮಿಥುನ್-ಶ್ರೀದೇವಿ: ಇಡೀ ಇಂಡಸ್ಟ್ರಿಗೆ ಗೊತ್ತಿತ್ತು ಆ ಸತ್ಯ!]]></title>
            <link>https://kannada.asianetnews.com/entertainment/senior-journalist-claims-mithun-chakraborty-and-sridevi-lived-like-a-married-couple-gvd/articleshow-tkhxkoy</link>
            <guid isPermaLink="true">https://kannada.asianetnews.com/entertainment/senior-journalist-claims-mithun-chakraborty-and-sridevi-lived-like-a-married-couple-gvd/articleshow-tkhxkoy</guid>
            <pubDate>Mon, 29 Jun 2026 18:13:53 +0530</pubDate>
            <description><![CDATA[&lt;p&gt;Mithun Sridevi ಸಂಬಂಧದ ಬಗ್ಗೆ ಹಿರಿಯ ಸಿನಿಮಾ ಪತ್ರಕರ್ತ ಜ್ಯೋತಿ ವೆಂಕಟೇಶ್ ಹೊಸ ಮಾಹಿತಿ ಬಹಿರಂಗಪಡಿಸಿದ್ದಾರೆ. ಇಬ್ಬರೂ ಮೂರು ತಿಂಗಳು ಗಂಡ-ಹೆಂಡತಿಯಂತೆ ಒಟ್ಟಿಗೆ ವಾಸಿಸಿದ್ದರು ಎಂಬ ಹೇಳಿಕೆ ಇದೀಗ ಬಾಲಿವುಡ್&zwnj;ನಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9p7k35sqgwvzrb7tekjmsk,imgname-xchgx-1782736735333.png" type="image/jpeg" height="390" width="690"/>
            <content:encoded><![CDATA[&lt;p&gt;80ರ ದಶಕದಲ್ಲಿ ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ಸಂಬಂಧ ಬಾಲಿವುಡ್&zwnj;ನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಹಿರಿಯ ಪತ್ರಕರ್ತರೊಬ್ಬರು, ಅವರಿಬ್ಬರೂ ಮೂರು ತಿಂಗಳು ಗಂಡ-ಹೆಂಡತಿಯಂತೆ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಬಾಲಿವುಡ್&zwnj;ನ ಸಾರ್ವಕಾಲಿಕ ಚರ್ಚಿತ ಪ್ರೇಮಕಥೆಗಳಲ್ಲಿ ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ಅವರ ಸಂಬಂಧಕ್ಕೆ ಒಂದು ವಿಶೇಷ ಸ್ಥಾನವಿದೆ. ತೆರೆ ಮೇಲೆ ಮೋಡಿ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಒಂದಾಗಿದ್ದರು ಅನ್ನೋ ಮಾತುಗಳು ಆಗಿನಿಂದಲೂ ಕೇಳಿಬರುತ್ತಲೇ ಇವೆ.&lt;/p&gt;&lt;p&gt;80ರ ದಶಕದಲ್ಲಿ ಇಬ್ಬರೂ ತಮ್ಮ ಕೆರಿಯರ್&zwnj;ನ ಉತ್ತುಂಗದಲ್ಲಿದ್ದರು. ಇವರ ಸಂಬಂಧ, ರಹಸ್ಯ ಮದುವೆ, ನಂತರದ ಬೇರ್ಪಡಿಕೆ ಬಗ್ಗೆ ದಶಕಗಳಿಂದಲೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಮಿಥುನ್ ಆಗಲಿ, ಶ್ರೀದೇವಿಯಾಗಲಿ ತಮ್ಮ ಮದುವೆ ಬಗ್ಗೆ ಎಂದಿಗೂ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಇದೀಗ, ಹಿರಿಯ ಸಿನಿಮಾ ಪತ್ರಕರ್ತ ಜ್ಯೋತಿ ವೆಂಕಟೇಶ್ ಈ ಹಳೆ ಕಥೆಗೆ ಹೊಸ ಜೀವ ನೀಡಿದ್ದಾರೆ. ಅಷ್ಟಕ್ಕೂ ಜ್ಯೋತಿ ವೆಂಕಟೇಶ್ ಈ ಇಬ್ಬರ ಸಂಬಂಧದ ಬಗ್ಗೆ ಹೇಳಿದ್ದೇನು? ನೋಡೋಣ ಬನ್ನಿ...&lt;/p&gt;&lt;p&gt;&lt;strong&gt;ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ನಡುವೆ ಏನಿತ್ತು ಸಂಬಂಧ?&lt;/strong&gt;&lt;/p&gt;&lt;p&gt;ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದಿಂದಲೇ ಸದ್ದು ಮಾಡಿದ್ದರು. ಶ್ರೀದೇವಿ ಈಗ ನಮ್ಮೊಂದಿಗಿಲ್ಲದಿದ್ದರೂ, ಅವರಿಬ್ಬರ ಸಂಬಂಧದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. TOI ವರದಿ ಪ್ರಕಾರ, 'ಹಿಂದಿ ರಶ್' ಜೊತೆ ಮಾತನಾಡಿದ ಹಿರಿಯ ಸಿನಿಮಾ ಪತ್ರಕರ್ತ ಜ್ಯೋತಿ ವೆಂಕಟೇಶ್, ಈ ಇಬ್ಬರೂ ನಟರು ಸ್ವಲ್ಪ ಕಾಲ ಗಂಡ-ಹೆಂಡತಿಯಂತೆ ಜೀವನ ನಡೆಸಿದ್ದರು ಎಂದು ಹೇಳಿದ್ದಾರೆ.&lt;/p&gt;&lt;p&gt;&quot;ಅವರಿಬ್ಬರ ನಡುವೆ ಆಪ್ತ ಸಂಬಂಧವಿತ್ತಾ ಅಂತ ನೀವು ಕೇಳಿದರೆ, ಹೌದು, ಅವರು ಸುಮಾರು ಮೂರು ತಿಂಗಳ ಕಾಲ ಮದುವೆಯಾದ ಜೋಡಿಯಂತೆ ಒಟ್ಟಿಗೆ ಇದ್ದರು,&quot; ಎಂದು ಜ್ಯೋತಿ ಹೇಳಿದ್ದಾರೆ. ಒಂದು ಹೊರಾಂಗಣ ಶೂಟಿಂಗ್ ನೆನಪಿಸಿಕೊಂಡ ಜ್ಯೋತಿ, ಆ ದಿನಗಳನ್ನು ತಾವೇ ಕಣ್ಣಾರೆ ಕಂಡಿದ್ದಾಗಿ ಹೇಳುತ್ತಾರೆ. &quot;ಮಿಥುನ್ ಅವರ ಒಂದು ಔಟ್&zwnj;ಡೋರ್ ಶೂಟಿಂಗ್&zwnj;ಗೆ ನಾನೂ ಹೋಗಿದ್ದೆ. ಶ್ರೀದೇವಿ ಯಾವತ್ತೂ ಸೆಟ್&zwnj;ಗೆ ಬರುತ್ತಿರಲಿಲ್ಲ. ಅವರು ತಮ್ಮ ರೂಮಿನಲ್ಲೇ ಇರುತ್ತಿದ್ದರು. ಆದರೆ, ಅವರಿಬ್ಬರೂ ಒಟ್ಟಿಗೆ ಇದ್ದಾರೆ ಅನ್ನೋದು ಅಲ್ಲಿ ಎಲ್ಲರಿಗೂ ಗೊತ್ತಿತ್ತು,&quot; ಎಂದು ಜ್ಯೋತಿ ನೆನಪಿಸಿಕೊಂಡರು.&lt;/p&gt;&lt;p&gt;&lt;strong&gt;ಮಿಥುನ್ ಚಕ್ರವರ್ತಿ-ಶ್ರೀದೇವಿಗೆ ಸಂಬಂಧಿಸಿದ ಸ್ವಾರಸ್ಯಕರ ಘಟನೆ&lt;/strong&gt;&lt;/p&gt;&lt;p&gt;ಹಿರಿಯ ಪತ್ರಕರ್ತ ಜ್ಯೋತಿ ವೆಂಕಟೇಶ್, ಆ ಸಮಯದಲ್ಲಿ ಮಿಥುನ್ ಚಕ್ರವರ್ತಿ ಜೊತೆ ನಡೆದ ಒಂದು ತಮಾಷೆಯ ಸಂಭಾಷಣೆಯನ್ನೂ ಹಂಚಿಕೊಂಡಿದ್ದಾರೆ. &quot;ಮಿಥುನ್ ನನಗೆ ಬಹಳ ಒಳ್ಳೆಯ ಸ್ನೇಹಿತ. ನಾನೊಮ್ಮೆ ಅವರ ಕಾಲೆಳೆದಿದ್ದೆ. 'ಮಿಥುನ್ ಸರ್, ಈಗಂತೂ ನೀವು ತಮಿಳು ಕಲಿತೇ ಇರುತ್ತೀರಿ' ಅಂದೆ. ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆಂದು ಅವರಿಗೆ ತಕ್ಷಣ ಅರ್ಥವಾಯಿತು. ಅವರು, 'ದಯವಿಟ್ಟು ನನ್ನ ಜೊತೆ ತಮಿಳಿನಲ್ಲಿ ಮಾತನಾಡಬೇಡ. ಹೇಗಿದ್ದೀಯಾ ಅಂತ ಮಾತ್ರ ಕೇಳು' ಅಂದರು. ಸ್ಪಷ್ಟವಾಗಿ ಅವರ ಮಾತು ಶ್ರೀದೇವಿಯ ಕಡೆಗಿತ್ತು,&quot; ಎಂದು ಜ್ಯೋತಿ ವಿವರಿಸಿದರು. ಈ ಸಂಬಂಧ ಯಾಕೆ ಮುರಿದುಬಿತ್ತು ಎಂದು ಕೇಳಿದಾಗ, ಜ್ಯೋತಿ ಹೀಗೆ ಉತ್ತರಿಸಿದರು:&lt;/p&gt;&lt;p&gt;&quot;ಅವರಿಬ್ಬರ ನಡುವೆ ಹೊಂದಾಣಿಕೆ ಸಮಸ್ಯೆಗಳಿದ್ದವು. ಜೊತೆಗೆ, ಆ ಸಮಯದಲ್ಲಿ ಶ್ರೀದೇವಿಯವರ ಸ್ಟಾರ್&zwnj;ಡಮ್ ತುಂಬಾ ದೊಡ್ಡದಾಗಿತ್ತು. ಮಿಥುನ್ ಯಶಸ್ವಿ ನಟರಾಗಿದ್ದರೂ, ಶ್ರೀದೇವಿ ಅವರಿಗಿಂತ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದರು.&quot; &quot;ಅದಕ್ಕೂ ಮೊದಲು ಮಿಥುನ್ ಹಲವು ಸಂಬಂಧಗಳಲ್ಲಿದ್ದರು. ಹಾಗಾಗಿ, ಸಂಬಂಧಗಳ ವಿಚಾರದಲ್ಲಿ ಅವರನ್ನು ನಂಬಲು ಸಾಧ್ಯವಿಲ್ಲ ಎಂದು ಜನರು ಭಾವಿಸಿದ್ದರು,&quot; ಎಂದೂ ಅವರು ಸೇರಿಸಿದರು. ಆದರೆ, ಯೋಗಿತಾ ಬಾಲಿ ಜೊತೆಗಿನ ಮಿಥುನ್ ಮದುವೆ ಯಶಸ್ವಿಯಾಯಿತು ಎಂದು ವೆಂಕಟೇಶ್ ತಿಳಿಸಿದರು. &quot;ಮೊದಲ ಪತ್ನಿ ಹೆಲೆನಾ ಲೂಕ್&zwnj;ಗೆ ವಿಚ್ಛೇದನ ನೀಡಿ ಯೋಗಿತಾ ಬಾಲಿ ಅವರನ್ನು ಮದುವೆಯಾದಾಗ, ಈ ಮದುವೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹಲವರು ಅಂದುಕೊಂಡಿದ್ದರು. ಆದರೆ ಅವರ ಮದುವೆಗೆ ಹಲವು ವರ್ಷಗಳಾಗಿವೆ. ಅವರಿಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬ ದತ್ತು ಪುತ್ರಿ ಇದ್ದಾರೆ,&quot; ಎಂದು ಜ್ಯೋತಿ ಮಾಹಿತಿ ನೀಡಿದರು.&lt;/p&gt;&lt;h2&gt;&lt;strong&gt;ಮದುವೆ ಬಗ್ಗೆ ತುಟಿ ಬಿಚ್ಚದ ಮಿಥುನ್-ಶ್ರೀದೇವಿ&lt;/strong&gt;&lt;/h2&gt;&lt;p&gt;ಅಂದಹಾಗೆ, ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ತಮ್ಮ ಮದುವೆಯ ಬಗ್ಗೆ ಎಂದಿಗೂ ಖಚಿತಪಡಿಸಲಿಲ್ಲ. ಆದರೆ, 80ರ ದಶಕದ ಕೊನೆಯಲ್ಲಿ ಅವರ ಸಂಬಂಧದ ಬಗ್ಗೆ ವದಂತಿಗಳು ಹಬ್ಬಲು ಶುರುವಾಗಿದ್ದವು. ಬಹಳ ಕಾಲದಿಂದ ಹರಿದಾಡುತ್ತಿರುವ ವರದಿಗಳ ಪ್ರಕಾರ, 80ರ ದಶಕದ ಆರಂಭದಲ್ಲಿ 'ಜಾಗ್ ಉಟಾ ಇನ್ಸಾನ್' ಚಿತ್ರದ ಸೆಟ್&zwnj;ನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಅಲ್ಲಿಂದ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ನಿಜ ಜೀವನದ ಪ್ರೀತಿಗೆ ತಿರುಗಿತ್ತು. ಹಲವು ವರದಿಗಳು ಹೇಳುವಂತೆ, ಇಬ್ಬರೂ 1985ರಲ್ಲಿ ರಹಸ್ಯವಾಗಿ ಮದುವೆಯಾಗಿ 1988ರವರೆಗೆ ಒಟ್ಟಿಗೆ ಇದ್ದರು.&lt;/p&gt;&lt;p&gt;ಆದರೆ, ಆ ಸಮಯದಲ್ಲಿ ಮಿಥುನ್&zwnj;ಗೆ ಆಗಲೇ ಯೋಗಿತಾ ಬಾಲಿ ಜೊತೆ ಮದುವೆಯಾಗಿತ್ತು. ಈ ಸಂಬಂಧದಿಂದಾಗಿ ಮಿಥುನ್ ಮತ್ತು ಯೋಗಿತಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗುತ್ತದೆ. ಮಿಥುನ್ ತನ್ನ ಪತ್ನಿಯನ್ನು ಬಿಡುವುದಿಲ್ಲ ಎಂದು ಖಚಿತವಾದಾಗ, ಶ್ರೀದೇವಿ ಈ ಸಂಬಂಧವನ್ನು ಮುರಿದುಕೊಂಡರು ಎಂದು ಕೂಡ ಹಲವು ವರದಿಗಳು ಹೇಳುತ್ತವೆ. ನಂತರ, 1996ರಲ್ಲಿ ಶ್ರೀದೇವಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಈಗ ನಟಿಯರಾಗಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/senior-journalist-claims-mithun-chakraborty-and-sridevi-lived-like-a-married-couple-gvd/articleshow-tkhxkoy"/>
        </item>
        <item>
            <title><![CDATA[Sharmiela Mandre: 'ಇದು ನನ್ನ ಜೀವನದ ವಿಶೇಷ ಕ್ಷಣ': ನಿಶ್ಚಿತಾರ್ಥದ ಬಳಿಕ ಶರ್ಮಿಳಾ ಮಾಂಡ್ರೆ ಹೇಳಿದ್ದೇನು?]]></title>
            <link>https://kannada.asianetnews.com/entertainment/what-did-actress-sharmiela-mandre-say-after-her-engagement-gvd/articleshow-1mh0nfo</link>
            <guid isPermaLink="true">https://kannada.asianetnews.com/entertainment/what-did-actress-sharmiela-mandre-say-after-her-engagement-gvd/articleshow-1mh0nfo</guid>
            <pubDate>Mon, 29 Jun 2026 17:38:50 +0530</pubDate>
            <description><![CDATA[&lt;p&gt;Sharmiela Mandre ತಮಿಳು ನಿರ್ಮಾಪಕ ಸುಧನ್ ಸುಂದರಂ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆಪ್ತರ ಸಮ್ಮುಖದಲ್ಲಿ ನಡೆದ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9mez0ppesyccwxrhge3r0b,imgname-hhc-1782734879766.png" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಭಾರತದ ಜನಪ್ರಿಯ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಹೊಸ ಜೀವನದತ್ತ ಮೊದಲ ಹೆಜ್ಜೆಯಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಡೆದ ಸರಳ ಆದರೆ ಅರ್ಥಪೂರ್ಣ ಸಮಾರಂಭದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.&lt;/p&gt;&lt;p&gt;ಈ ವಿಶೇಷ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಜೋಡಿಗೆ ಅಭಿಮಾನಿಗಳು ಮತ್ತು ಸಿನಿತಾರೆಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಬಿಳಿ ಹೂವುಗಳ ಸುಂದರ ಅಲಂಕಾರ ಮತ್ತು ಅತ್ಯಾಧುನಿಕ ವಿನ್ಯಾಸದಿಂದ ಕಂಗೊಳಿಸಿದ್ದ ನಿಶ್ಚಿತಾರ್ಥದ ವೇದಿಕೆ ಎಲ್ಲರ ಗಮನ ಸೆಳೆಯಿತು. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶರ್ಮಿಳಾ ಮತ್ತು ಸುಧನ್ ಅವರ ಹೊಸ ಜೀವನದ ಆರಂಭ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.&lt;/p&gt;&lt;p&gt;&quot;ಇದು ನಮ್ಮ ಜೀವನದ ಅತ್ಯಂತ ವಿಶೇಷ ಕ್ಷಣ. ನಮ್ಮ ಮೇಲೆ ಪ್ರೀತಿ, ಆಶೀರ್ವಾದ ಮತ್ತು ಶುಭಾಶಯಗಳ ಸುರಿಮಳೆಗರೆದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಜೀವನದ ಈ ಹೊಸ ಪಯಣವನ್ನು ಕಾತರದಿಂದ ಎದುರು ನೋಡುತ್ತಿದ್ದೇವೆ&quot; ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಧನ್ ಸುಂದರಂ, &quot;ಈ ಸಂತಸದ ಕ್ಷಣದಲ್ಲಿ ನಮ್ಮೊಂದಿಗಿದ್ದ ಕುಟುಂಬಸ್ಥರು, ಸ್ನೇಹಿತರು ಮತ್ತು ಹಿತೈಷಿಗಳ ಪ್ರೀತಿ, ಬೆಂಬಲ ಹಾಗೂ ಆಶೀರ್ವಾದಕ್ಕೆ ನಾವು ಸದಾ ಚಿರಋಣಿಗಳಾಗಿರುತ್ತೇವೆ&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಶುಭಾಶಯಗಳ ಸುರಿಮಳೆ&lt;/strong&gt;&lt;/h2&gt;&lt;p&gt;ಇಬ್ಬರೂ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದು, ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ. 2007ರಲ್ಲಿ ಬಿಡುಗಡೆಯಾದ 'ಸಜನಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶರ್ಮಿಳಾ ಮಾಂಡ್ರೆ, 'ಕೃಷ್ಣ', 'ನವಗ್ರಹ', 'ಸ್ವಯಂವರ', 'ಆಕೆ', 'ಗಾಳಿಪಟ 2', 'ಪೌಡರ್' ಹಾಗೂ 'ಡೆವಿಲ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ನಟನೆಯ ಜೊತೆಗೆ 'Sharmiela Mandre Productions' ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಅವರು, ಕಂಟೆಂಟ್&zwnj; ಆಧಾರಿತ ಸಿನಿಮಾಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿದ್ದಾರೆ.&lt;/p&gt;&lt;p&gt;ಇನ್ನೊಂದೆಡೆ, 'Passion Studios' ಸಂಸ್ಥಾಪಕರಾದ ಸುಧನ್ ಸುಂದರಂ, ತಮಿಳು ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರು. 'ಕಪ್ಪಲ್', 'ನಿಬುಣನ್', 'ಸೀತಕಾತಿ', 'ಅನಬೆಲ್ ಸೇತುಪತಿ', ರಾಷ್ಟ್ರ ಪ್ರಶಸ್ತಿ ವಿಜೇತ 'ಪಾರ್ಕಿಂಗ್' ಹಾಗೂ ವಿಜಯ್ ಸೇತುಪತಿ ಅಭಿನಯದ 'ಮಹಾರಾಜ' ಸೇರಿದಂತೆ ಹಲವು ಯಶಸ್ವಿ ಹಾಗೂ ವಿಭಿನ್ನ ಕಥಾಹಂದರದ ಚಿತ್ರಗಳನ್ನು ನಿರ್ಮಿಸಿ ಚಿತ್ರರಂಗದಲ್ಲಿ ವಿಶಿಷ್ಟ ಹೆಜ್ಜೆ ಗುರುತು ಮೂಡಿಸಿದ್ದಾರೆ. ಹೊಸ ಜೀವನದ ಪಯಣ ಆರಂಭಿಸಿರುವ ಈ ಜೋಡಿಗೆ ಅಭಿಮಾನಿಗಳು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/what-did-actress-sharmiela-mandre-say-after-her-engagement-gvd/articleshow-1mh0nfo"/>
        </item>
        <item>
            <title><![CDATA[Actor Suriya Hombale Films movie: ತಮಿಳು ನಟ ಸೂರ್ಯ- ಹೊಂಬಾಳೆ ಫಿಲ್ಮ್ಸ್ ಸಿನಿಮಾ!‌ ನಾಯಕಿ ಯಾರು?]]></title>
            <link>https://kannada.asianetnews.com/sandalwood/tamil-actor-suriya-tj-gnanavel-hombale-films-movie/articleshow-2963k1i</link>
            <guid isPermaLink="true">https://kannada.asianetnews.com/sandalwood/tamil-actor-suriya-tj-gnanavel-hombale-films-movie/articleshow-2963k1i</guid>
            <pubDate>Mon, 29 Jun 2026 16:54:31 +0530</pubDate>
            <description><![CDATA[&lt;p&gt;Tamil Actor Suriya And TJ Gnanavel Movie: ತಮಿಳು ನಟ ಸೂರ್ಯ ಹಾಗೂ ಹೊಂಬಾಳೆ ಫಿಲ್ಮ್ಸ್&zwnj; ಸೇರಿ ಹೊಸ ಸಿನಿಮಾ ಮಾಡಲಿದೆ. ಇದಕ್ಕೆ ನಿರ್ದೇಶಕರು ಯಾರು? ನಾಯಕಿ ಯಾರು ಎಂದು ಕೂಡ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9bcdj3fnkkemv4mxdczr7v,imgname-fotojet--56--1782725359171.jpg" type="image/jpeg" height="390" width="690"/>
            <content:encoded><![CDATA[&lt;p&gt;Tamil Actor Suriya And TJ Gnanavel Movie: ತಮಿಳು ನಟ ಸೂರ್ಯ ಜೊತೆಗೆ ಹೊಂಬಾಳೆ ಫಿಲ್ಮ್ಸ್&zwnj; ಬ್ಯಾನರ್&zwnj; ಸಿನಿಮಾ ಮಾಡುತ್ತಿದೆ. ಈ ಬಗ್ಗೆ ವಿಜಯ್&zwnj; ಕಿರಗಂದೂರು ಅವರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಪ್ರೊಡಕ್ಷನ್&zwnj; ಹೌಸ್&zwnj; ಮಾಹಿತಿ ಹಂಚಿಕೊಂಡಿದೆ.&lt;/p&gt;&lt;h2&gt;ಬ್ಯಾಕ್&zwnj; ಟು ಬ್ಯಾಕ್&zwnj; ಸಿನಿಮಾಗಳು&lt;/h2&gt;&lt;p&gt;ಈಗಾಗಲೇ ಕೆಜಿಎಫ್&zwnj;, ಕಾಂತಾರ ಸಿನಿಮಾದಂತಹ ಸೂಪಟ್&zwnj; ಹಿಟ್&zwnj; ಸಕ್ಸಸ್&zwnj; ಕೊಟ್ಟಿರುವ ಹೊಂಬಾಳೆ ಫಿಲ್ಮ್ಸ್&zwnj; ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕನ್ನಡದ ಹೊರತಾಗಿ ಬೇರೆ ಭಾಷೆಯ ಸ್ಟಾರ್&zwnj; ನಟರ ಜೊತೆ ಕೂಡ ಈ ಸಂಸ್ಥೆ ಕೆಲಸ ಮಾಡುತ್ತಿದೆ.&lt;/p&gt;&lt;h2&gt;ಹೊಂಬಾಳೆ ಫಿಲ್ಮ್ಸ್&zwnj; ಏನು ಹೇಳಿದೆ?&lt;/h2&gt;&lt;p&gt;ಫ್ರೇಮ್ ಬೈ ಫ್ರೇಮ್. ಸಿನಿಮಾ ಬೈ ಸಿನಿಮಾ. ಫೈಟ್ ಬೈ ಫೈಟ್. ಸತ್ಯವನ್ನು ಬಿಂಬಿಸಿದ ಪಾತ್ರಗಳು. ನೈಜ ಬದುಕಿನ ಭಾರವನ್ನು ಹೊತ್ತ ಪಾತ್ರಗಳು. ಪ್ರತಿಯೊಂದು ಬಾರಿಯೂ, ಆರಾಮದಾಯಕ ಹಾದಿಗಿಂತ ಧೈರ್ಯದ ಹಾದಿಯನ್ನೇ ಆಯ್ಕೆ ಮಾಡಿಕೊಂಡ ವೃತ್ತಿಜೀವನ. ಬೆಳ್ಳಿತೆರೆಯ ಮೇಲೆ ಮೂರು ದಶಕಗಳ ಸತ್ಯದ ಪಯಣ.&lt;/p&gt;&lt;p&gt;ಅದರಾಚೆಗೆ ಕೋಟ್ಯಂತರ ಹೃದಯಗಳನ್ನು ಗೆದ್ದ ಹಿರಿಮೆ. ಈ ತಲೆಮಾರಿನ ಅತ್ಯಂತ ನಿರ್ಭೀತ ನಟ, ತನ್ನ ಅತ್ಯಂತ ಭವ್ಯವಾದ ವೇದಿಕೆಯನ್ನು ಪ್ರವೇಶಿಸುವ ಕ್ಷಣವಿದು.&lt;/p&gt;&lt;p&gt;ಹೊಂಬಾಳೆ ಫಿಲ್ಮ್ಸ್ ಹೆಮ್ಮೆಯಿಂದ ಸ್ವಾಗತಿಸುತ್ತದೆ.&lt;/p&gt;&lt;h2&gt;ಈ ಸಿನಿಮಾದಲ್ಲಿ ಯಾರಿದ್ದಾರೆ?&lt;/h2&gt;&lt;p&gt;ಈ ಸಿನಿಮಾದಲ್ಲಿ ಜೈಭೀಮ್&zwnj; ಸಿನಿಮಾ ನಿರ್ದೇಶಕ TJ gnanavel ನಿರ್ದೇಶನ ಮಾಡಲಿದ್ದಾರೆ. ಒಟ್ಟಿನಲ್ಲಿ &lsquo;ಜೈ ಭೀಮ್&zwnj;ʼ ಕಾಂಬಿನೇಶನ್&zwnj; ಮತ್ತೆ ಒಂದಾಗಲಿದೆ. ಎಸ್&zwnj; ಆರ್&zwnj; ಕದೀರ್&zwnj; ಅವರು ಸಿನಿಮಾಟೋಗ್ರಫಿ ಮಾಡಲಿದ್ದು, ಕಯಾದು ಲೋಹರ್&zwnj; ಅವರು ನಾಯಕಿ. ಸಾಯಿ ಅಭಯಂಕರ್ ಸಂಗೀತ ಸಂಯೋಜಿಸಲಿದ್ದಾರೆ. ಫಿಲೋಮಿನ್ ರಾಜ್ ಸಂಕಲನಕಾರರಾಗಿ ಕೆಲಸ ಮಾಡಲಿದ್ದಾರೆ.&lt;/p&gt;&lt;h2&gt;ನಟ ಸೂರ್ಯ ಸಿನಿಮಾಗಳು&lt;/h2&gt;&lt;p&gt;ನಟ ಸೂರ್ಯ ಅವರು ಸ್ಟಾರ್&zwnj; ಇಮೇಜ್&zwnj; ಬದಿಗಿಟ್ಟು, ಬೇರೆ ಬೇರೆ ಕಂಟೆಂಟ್&zwnj;ಗಳು, ಪಾತ್ರಗಳಲ್ಲಿ ಇಳಿದು ತಮ್ಮ ನಟನೆ ಸಾಮರ್ಥ್ಯವನ್ನು ಹೊರಹಾಕುತ್ತಿದ್ದಾರೆ.&lt;/p&gt;&lt;p&gt;ತಿಂಗಳುಗಳ ಹಿಂದೆ ರಿಲೀಸ್&zwnj; ಆದ ನಟ ಸೂರ್ಯ ಅವರ &lsquo;ಕರುಪ್ಪು&rsquo; ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ದೇವರು, ವಕೀಲ ಪಾತ್ರದಲ್ಲಿ ನಟಿಸಿದ್ದರು, ಇದರಲ್ಲಿ ಎರಡು ಶೇಡ್&zwnj; ಇತ್ತು. ಈ ಸಿನಿಮಾದಲ್ಲಿ ಸೂರ್ಯ ಅವರು ಸಖತ್&zwnj; ಆಗಿ ನಟಿಸಿದ್ದರು, ಡ್ಯಾನ್ಸ್&zwnj; ಕೂಡ ಮಾಡಿದ್ದರು.&lt;/p&gt;&lt;p&gt;ಅಂದಹಾಗೆ &lsquo;ವಿಶ್ವನಾಥ &amp;amp; ಸನ್ಸ್&rsquo;&zwnj; ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಮಮಿತಾ ಬೈಜು ನಾಯಕಿಯಾಗಿದ್ದು, ರಾಧಿಕಾ ಶರತ್&zwnj;ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.&lt;/p&gt;&lt;p&gt;ಇದಾದ ನಂತರ 'ಆವೇಶಂ' ಖ್ಯಾತಿಯ ಜಿತು ಮಾಧವನ್ ನಿರ್ದೇಶನದ ಚಿತ್ರದಲ್ಲಿ ನಜ್ರಿಯಾ ಮತ್ತು ನಸ್ಲೆನ್ ಜೊತೆ ನಟಿಸಲಿದ್ದಾರೆ. ಈ ಚಿತ್ರಕ್ಕೆ ಸುಶಿನ್ ಶ್ಯಾಮ್ ಸಂಗೀತ ನೀಡಲಿದ್ದಾರೆ.&lt;/p&gt;&lt;p&gt;ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಕಾಂತಾರ: ಚಾಪ್ಟರ್ 1', ಪ್ರಶಾಂತ್ ನೀಲ್ ಮತ್ತು ರಕ್ಷಿತ್ ಶೆಟ್ಟಿ ನಿರ್ದೇಶನದ ಚಿತ್ರಗಳು ಸೇರಿದಂತೆ ಹಲವು ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ. ಈ ಪಟ್ಟಿಗೆ ಈಗ ಸೂರ್ಯ ಅವರ ಚಿತ್ರವೂ ಸೇರಿದೆ. ಈ ಹಿಂದೆ ಸೂರ್ಯ-ಜ್ಞಾನವೇಲ್ ಕಾಂಬಿನೇಷನ್&zwnj;ನಲ್ಲಿ ಬಂದ 'ಜೈ ಭೀಮ್' ಚಿತ್ರವು ಓಟಿಟಿಯಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಗಳಿಸಿತ್ತು. ಹೀಗಾಗಿ ಈ ಹೊಸ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/sandalwood/tamil-actor-suriya-tj-gnanavel-hombale-films-movie/articleshow-2963k1i"/>
        </item>
        <item>
            <title><![CDATA[Priya Sudeep Viral: ಅದ್ಭುತ ಕಥೆ ನಿಮ್ಮಲ್ಲಿ ಇದೆಯೇ? ಕಿಚ್ಚ ಸುದೀಪ್‌ ಪತ್ನಿ ಪ್ರಿಯಾ ಸಂಸ್ಥೆಯಲ್ಲಿ ಚಾನ್ಸ್ ಇದೆ ನೋಡಿ!]]></title>
            <link>https://kannada.asianetnews.com/sandalwood/if-you-have-a-brilliant-story-then-you-could-have-work-at-kiccha-sudeep-wife-priya-sudeep-supriyanvi-picture-studio/articleshow-9dzropl</link>
            <guid isPermaLink="true">https://kannada.asianetnews.com/sandalwood/if-you-have-a-brilliant-story-then-you-could-have-work-at-kiccha-sudeep-wife-priya-sudeep-supriyanvi-picture-studio/articleshow-9dzropl</guid>
            <pubDate>Mon, 29 Jun 2026 16:50:52 +0530</pubDate>
            <description><![CDATA[&lt;p&gt;ಗಾಂಧಿನಗರದ ಗಲ್ಲಿಗಳಲ್ಲಿ ಅಲೆಯುವ ಬದಲು, ನಿಮ್ಮ ಪ್ರತಿಭೆಯನ್ನು ನೇರವಾಗಿ ಸಾಬೀತುಪಡಿಸಲು ಇದೊಂದು ಸುವರ್ಣಾವಕಾಶ. ನಿಮ್ಮ ಲೇಖನಿ ಬೆಳ್ಳಿತೆರೆಯ ಮೇಲೆ ಮಿನುಗುವ ಕಾಲ ಹತ್ತಿರ ಬಂದಿದೆ. ನಿಮ್ಮಲ್ಲಿ ಗಟ್ಟಿಯಾದ ಕಥೆ ಇದ್ದರೆ ತಡಮಾಡಬೇಡಿ, ಕೂಡಲೇ ಈ ನಂಬರ್&zwnj;ಗೆ ಕರೆ ಮಾಡಿ, ಚಾನ್ಸ್ ನಿಮ್ಮದಾಗಿಸಿಕೊಳ್ಳಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g92644r76mnxadtgswkhh5c9,imgname-t71.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸಂಸ್ಥೆಯಲ್ಲಿ ಕೆಲಸ ಮಾಡುವ ಸುವರ್ಣಾವಕಾಶ!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಲ್ಲಿ ಈಗ ಕಂಟೆಂಟ್ ಮಾತ್ರವೇ ಕಿಂಗ್ ಎನ್ನುವಂತಾಗಿದೆ. ಹಳೆಯ ಮಾದರಿಯ ಸಿನಿಮಾಗಳಿಗಿಂತ ಹೊಸತನದಿಂದ ಕೂಡಿದ, ಗಟ್ಟಿಯಾದ ಕಥೆಯುಳ್ಳ ಚಿತ್ರಗಳಿಗೆ ಪ್ರೇಕ್ಷಕರು ಜೈ ಎನ್ನುತ್ತಿದ್ದಾರೆ. ಬಣ್ಣದ ಲೋಕದಲ್ಲಿ ನಮಗೂ ಒಂದು ಸ್ಥಾನ ಸಿಗಬೇಕು, ನಾವು ಬರೆದ ಕಥೆ ಬೆಳ್ಳಿತೆರೆಯ ಮೇಲೆ ಬರಬೇಕು ಎಂದು ಸಾವಿರಾರು ಯುವ ಪ್ರತಿಭೆಗಳು ದಿನಾಲು ಕನಸು ಕಾಣುತ್ತಿರುತ್ತಾರೆ. ಆದರೆ ಸರಿಯಾದ ವೇದಿಕೆ ಸಿಗದೆ ಅನೇಕರ ಪ್ರತಿಭೆ ನಾಲ್ಕು ಗೋಡೆಗಳ ಮಧ್ಯೆ ಅಡಗಿ ಹೋಗುತ್ತದೆ. ಇಂತಹ ಕನಸುಗಾರರಿಗೆ ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರ ಪತ್ನಿ ಪ್ರಿಯಾ ಸುದೀಪ್ (Priya Sudeep) ಅವರು ಒಂದು ಬಂಪರ್ ಆಫರ್ ನೀಡಿದ್ದಾರೆ!&lt;/p&gt;&lt;p&gt;ಹೌದು, ಪ್ರಿಯಾ ಸುದೀಪ್ ಅವರು ತಮ್ಮ ಒಡೆತನದ 'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ' (Supriyanvi Picture Studio) ಮೂಲಕ ಹೊಸ ಪ್ರತಿಭೆಗಳು ಮತ್ತು ಕಥೆಗಾರರಿಗೆ ಸ್ಯಾಂಡಲ್&zwnj;ವುಡ್&zwnj;ನಲ್ಲಿ ಮುಕ್ತ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ. ಈ ಸುದ್ದಿ ಈಗ ಗಾಂಧಿನಗರದ ಯುವ ಲೇಖಕರಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಮಾಹಿತಿ ಮುಂದೆ ಇದೆ ನೋಡಿ..&lt;/p&gt;&lt;h2&gt;ಏನಿದು ವಿಶೇಷ ಆಫರ್?&lt;/h2&gt;&lt;p&gt;ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಇಂದಿನ ಟ್ರೆಂಡ್&zwnj;ಗೆ ತಕ್ಕಂತೆ ಇರುವ ಹೊಸ ಕಥೆಗಳು ಮತ್ತು ವಿಭಿನ್ನ ಸ್ಕ್ರಿಪ್ಟ್&zwnj;ಗಳ ಹುಡುಕಾಟದಲ್ಲಿದೆ. ಕೇವಲ ಕಥೆಗಳನ್ನಷ್ಟೇ ಅಲ್ಲ, ಹೊಸ ಆಲೋಚನೆಗಳನ್ನು ಹೊಂದಿರುವ ಯುವ ಸ್ಕ್ರಿಪ್ಟ್ ರೈಟರ್&zwnj;ಗಳನ್ನು ಈ ಸಂಸ್ಥೆ ಆಹ್ವಾನಿಸಿದೆ. ಉತ್ತಮ ವಿಷಯಾಧಾರಿತ (Content-driven) ಕಥೆಗಳು, ಇಂದಿನ ತಲೆಮಾರಿಗೆ ಇಷ್ಟವಾಗುವಂತಹ ವಿಭಿನ್ನ ಕಥಾನಕಗಳು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಎಮೋಷನಲ್ ಡ್ರಾಮಾ ಹಾಗೂ ದೃಶ್ಯವೈಭವದ ಕಥೆಗಳಿಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.&lt;/p&gt;&lt;p&gt;ಯುವ ಪ್ರತಿಭೆಗಳಿಗೆ ವೇದಿಕೆ:&lt;/p&gt;&lt;p&gt;ಸಿನಿಮಾ ರಂಗದಲ್ಲಿ ಗಾಡ್&zwnj;ಫಾದರ್ ಇಲ್ಲದವರಿಗೆ ಈ ಸಂಸ್ಥೆ ಒಂದು ದೊಡ್ಡ ಆಸರೆಯಾಗಲಿದೆ. ನಿಮ್ಮಲ್ಲಿರುವ ಕಲ್ಪನೆಗಳು ಅದ್ಭುತವಾಗಿದ್ದರೆ, ಅದನ್ನು ತೆರೆಯ ಮೇಲೆ ತರಲು ಸುಪ್ರಿಯಾನ್ವಿ ಸ್ಟುಡಿಯೋ ಸಾಥ್ ನೀಡಲಿದೆ. ಈ ಹಿಂದೆ ಈ ಸಂಸ್ಥೆಯು 'ಮ್ಯಾಂಗೋ ಪಚ್ಚಾ' ಎಂಬ ಕಿರುಚಿತ್ರವನ್ನು ಯಶಸ್ವಿಯಾಗಿ ನಿರ್ಮಿಸಿತ್ತು ಮತ್ತು 'ಮಾರ್ಕ್' ಎಂಬ ಚಿತ್ರವನ್ನು ವಿತರಣೆ ಮಾಡಿ ಸಿನಿರಂಗದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದೆ. ಈಗ ಮತ್ತೆ ಹೊಸ ಸಾಹಸಕ್ಕೆ ಕೈಹಾಕಿದ್ದು, ಸ್ಯಾಂಡಲ್&zwnj;ವುಡ್&zwnj;ಗೆ ಹೊಸ ರಕ್ತವನ್ನು ತರುವ ಪ್ರಯತ್ನ ಮಾಡುತ್ತಿದೆ.&lt;/p&gt;&lt;h3&gt;ಸಂಪರ್ಕಿಸುವುದು ಹೇಗೆ?&lt;/h3&gt;&lt;p&gt;ಬರವಣಿಗೆಯಲ್ಲಿ ಆಸಕ್ತಿ ಇರುವವರು, ಹೊಸ ಲೇಖಕರು ಹಾಗೂ ತಮ್ಮದೇ ಆದ ವಿಶಿಷ್ಟ ಕಥೆಯನ್ನು ಹೊಂದಿರುವ ಸ್ಕ್ರಿಪ್ಟ್ ರೈಟರ್&zwnj;ಗಳು ನೇರವಾಗಿ ಸ್ಟುಡಿಯೋವನ್ನು ಸಂಪರ್ಕಿಸಬಹುದು. ನಿಮ್ಮ ಅದ್ಭುತ ಕಥೆಗಳನ್ನು ಸುಪ್ರಿಯಾನ್ವಿ ಸ್ಟುಡಿಯೋಗೆ ಸಲ್ಲಿಸಲು ನೀವು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಬಳಸಬಹುದು:&lt;/p&gt;&lt;p&gt;&lt;strong&gt;ಮೊಬೈಲ್ ಸಂಖ್ಯೆ: 6363307434&lt;/strong&gt;&lt;/p&gt;&lt;p&gt;ಗಾಂಧಿನಗರದ ಗಲ್ಲಿಗಳಲ್ಲಿ ಅಲೆಯುವ ಬದಲು, ನಿಮ್ಮ ಪ್ರತಿಭೆಯನ್ನು ನೇರವಾಗಿ ಸಾಬೀತುಪಡಿಸಲು ಇದೊಂದು ಸುವರ್ಣಾವಕಾಶ. ನಿಮ್ಮ ಲೇಖನಿ ಬೆಳ್ಳಿತೆರೆಯ ಮೇಲೆ ಮಿನುಗುವ ಕಾಲ ಹತ್ತಿರ ಬಂದಿದೆ. ನಿಮ್ಮಲ್ಲಿ ಗಟ್ಟಿಯಾದ ಕಥೆ ಇದ್ದರೆ ತಡಮಾಡಬೇಡಿ, ಕೂಡಲೇ ಈ ನಂಬರ್&zwnj;ಗೆ ಕರೆ ಮಾಡಿ ಅಥವಾ ನಿಮ್ಮ ಸ್ಕ್ರಿಪ್ಟ್ ವಿವರಗಳನ್ನು ಕಳುಹಿಸಿ. ಯಾರು ಕಂಡರು? ಮುಂದಿನ ದೊಡ್ಡ ಹಿಟ್ ಚಿತ್ರಕ್ಕೆ ನಿಮ್ಮ ಕಥೆಯೇ ಆಧಾರವಾಗಬಹುದು!&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/if-you-have-a-brilliant-story-then-you-could-have-work-at-kiccha-sudeep-wife-priya-sudeep-supriyanvi-picture-studio/articleshow-9dzropl"/>
        </item>
        <item>
            <title><![CDATA[Saif Ali Khan Shocking Statement: ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ: 'ಅಪ್ಪಾ, ನೀವು ಸಾಯುತ್ತೀರಾ?' ಎಂದಿದ್ದ ಮಗ, ಈಗ ಶಾಕಿಂಗ್ ಹೇಳಿಕೆ ಕೊಟ್ಟ ನಟ!]]></title>
            <link>https://kannada.asianetnews.com/entertainment/saif-ali-khan-who-escaped-death-in-a-horrific-knife-attack-back-then-has-now-made-a-shocking-statement/articleshow-3ir8kf3</link>
            <guid isPermaLink="true">https://kannada.asianetnews.com/entertainment/saif-ali-khan-who-escaped-death-in-a-horrific-knife-attack-back-then-has-now-made-a-shocking-statement/articleshow-3ir8kf3</guid>
            <pubDate>Mon, 29 Jun 2026 16:14:11 +0530</pubDate>
            <description><![CDATA[&lt;p&gt;ಹಲವು ದಿನಗಳ ಚಿಕಿತ್ಸೆಯ ನಂತರ ಸೈಫ್ ಚೇತರಿಸಿಕೊಂಡರು. ಆದರೆ ಆ ದಾಳಿಕೋರನನ್ನು ಏನು ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ ಸೈಫ್ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. &quot;ಆತ ನನ್ನನ್ನು ಕೊಲ್ಲಲು ಬಂದಿದ್ದನ್ನು ನೆನಪಿಸಿಕೊಂಡಾಗ ಕ್ಷಮಿಸಲು ಸಾಧ್ಯವೇ ಇರಲಿಲ್ಲ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9fn61x7tv7n9hsmq02tb7x,imgname-saif-ali-khan-1782729840701.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಾವಿನ ದವಡೆಯಿಂದ ಪಾರಾಗಿದ್ದ ಸೈಫ್ ಅಲಿ ಖಾನ್; ಅಂದು ನಡೆದಿದ್ದ ಭೀಕರ ಚಾಕು ದಾಳಿಯ ಬಗ್ಗೆ ಕರಾಳ ಸತ್ಯಗಳಿವು!&lt;/strong&gt;&lt;/p&gt;&lt;p&gt;ಬಾಲಿವುಡ್&zwnj;ನ 'ಪಟೌಡಿ ನವಾಬ' ಸೈಫ್ ಅಲಿ ಖಾನ್ (Saif Ali Khan) ಅಂದರೇನೇ ಅದೊಂದು 'ರಾಯಲ್ ಫ್ಯಾಮಿಲಿ ದೊರೆ. ಅವರ ಸಿನಿಮಾಗಳು ಎಷ್ಟು ಸದ್ದು ಮಾಡುತ್ತವೆಯೋ, ಅವರ ವೈಯಕ್ತಿಕ ಜೀವನದ ಕಥೆಗಳು ಅಷ್ಟೇ ಕುತೂಹಲಕಾರಿಯಾಗಿರುತ್ತವೆ. ಆದರೆ ಇತ್ತೀಚೆಗೆ ಸೈಫ್ ಹಂಚಿಕೊಂಡ ಒಂದು ಕರಾಳ ಘಟನೆ ಇಡೀ ಸಿನಿರಂಗವನ್ನೇ ನಡುಗಿಸಿದೆ. ಬೆಳ್ಳಿತೆರೆಯ ಮೇಲೆ ವಿಲನ್ ಮೆಟ್ಟಿನಿಲ್ಲುವ ಸೈಫ್, ನಿಜ ಜೀವನದಲ್ಲಿ ಒಮ್ಮೆ ಸಾವಿನ ದವಡೆಯಿಂದ ಅದೃಷ್ಟ ಎಂಬಂತೆ ಪಾರಾಗಿದ್ದರಂತೆ! ತಮ್ಮ ಮೇಲೆ ನಡೆದ ಭೀಕರ ಚಾಕು ದಾಳಿಯ ಬಗ್ಗೆ ಸೈಫ್ ಬಿಚ್ಚಿಟ್ಟಿರುವ ಸಂಗತಿಗಳು ಈಗ ವೈರಲ್ ಆಗುತ್ತಿವೆ.&lt;/p&gt;&lt;p&gt;ಮಧ್ಯರಾತ್ರಿ ನಡೆದಿದ್ದ ಆ ಭಯಾನಕ ಘಟನೆ:&lt;/p&gt;&lt;p&gt;ಬಾಲಿವುಡ್ ನಟ ಸೈಫ್ ಅಲಿ ಖಾನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕಳೆದ ವರ್ಷ ಜನವರಿಯಲ್ಲಿ ನಡೆದ ಆ ಕರಾಳ ರಾತ್ರಿಯ ಬಗ್ಗೆ ನೆನಪಿಸಿಕೊಂಡು ಹೇಳಿಕೊಂಡಿದ್ದಾರೆ. ಅಂದು ಸೈಫ್ ಮನೆಯಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಬಾತ್&zwnj;ರೂಮ್ ಕಿಟಕಿ ಮೂಲಕ ಮನೆಯೊಳಗೆ ನುಗ್ಗಿದ್ದ. ಆತ ನೇರವಾಗಿ ಸೈಫ್ ಅವರ ಪುಟ್ಟ ಮಗ ಜೆಹ್ ಮಲಗಿದ್ದ ಕೋಣೆಗೆ ತೆರಳಿದ್ದ. ಇದನ್ನು ಕಂಡ ನ್ಯಾನಿ ತಕ್ಷಣ ಸೈಫ್&zwnj;ಗೆ ಎಚ್ಚರಿಕೆ ನೀಡಿದ್ದರು. ಮಗನಿಗೆ ಅಪಾಯವಿದೆ ಎಂದು ತಿಳಿಯುತ್ತಿದ್ದಂತೆಯೇ ಸೈಫ್ ಅತ್ತ ಓಡಿ ಹೋಗಿದ್ದರು.&lt;/p&gt;&lt;h2&gt;ರಕ್ತಸಿಕ್ತ ಹೋರಾಟ ಮತ್ತು ಮಗನ ಆಕ್ರಂದನ:&lt;/h2&gt;&lt;p&gt;ಕೋಣೆಯೊಳಗೆ ಸೈಫ್ ಮತ್ತು ಆ ಅಪರಿಚಿತನ ನಡುವೆ ಭೀಕರ ಹೋರಾಟ ನಡೆಯಿತು. &quot;ನಾನು ಲೈಟ್ ಹಾಕದೆ ಆತನನ್ನು ತಡೆಯಲು ಹೋದದ್ದು ದೊಡ್ಡ ತಪ್ಪಾಯಿತು. ಆತ ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ಚಾಕುವಿನಿಂದ ಸತತವಾಗಿ ಇರಿದಿದ್ದ,&quot; ಎಂದು ಸೈಫ್ ಆ ನೋವಿನ ಕ್ಷಣವನ್ನು ವಿವರಿಸಿದ್ದಾರೆ. ಈ ಸಂಘರ್ಷದ ನಡುವೆ ಪುಟ್ಟ ಮಗ ಜೆಹ್&zwnj;ಗೂ ಚಿಕ್ಕಪುಟ್ಟ ಗಾಯಗಳಾದವು. 'ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ನನಗೆ ನಾನು ಬದುಕುಳಿಯುವ ಬಗ್ಗೆ ಯಾವುದೇ ಭರವಸೆ ಇರಲಿಲ್ಲ' ಎಂದಿದ್ದಾರೆ.&lt;/p&gt;&lt;p&gt;ಆಗ ಪುಟ್ಟ ಮಗ ಜೆಹ್ ತನ್ನ ತಂದೆಯ ಬಳಿ ಬಂದು, &quot;ಅಪ್ಪಾ, ನೀವು ಸಾಯುತ್ತೀರಾ?&quot; ಎಂದು ಅಳುತ್ತಾ ಕೇಳಿದ ಪ್ರಶ್ನೆ ಸೈಫ್ ಅವರ ಎದೆಯನ್ನು ಸೀಳಿದಂತಿತ್ತು. ತನ್ನ ಮಗನಿಗಾಗಿ ಬದುಕಲೇಬೇಕು ಎಂಬ ಛಲ ಸೈಫ್ ಅವರಲ್ಲಿ ಮೂಡಿದ್ದೇ ಆಗ! ಆಸ್ಪತ್ರೆಗೆ ಹೋಗುವಾಗ ಸೈಫ್ ಧರಿಸಿದ್ದ ಪೈಜಾಮ ಸಂಪೂರ್ಣವಾಗಿ ರಕ್ತದಿಂದ ನೆನೆದುಹೋಗಿತ್ತು.&lt;/p&gt;&lt;h3&gt;ದಾಳಿಕೋರನನ್ನು ಕ್ಷಮಿಸಿದ ದೊಡ್ಡ ಗುಣ:&lt;/h3&gt;&lt;p&gt;ಹಲವು ದಿನಗಳ ಚಿಕಿತ್ಸೆಯ ನಂತರ ಸೈಫ್ ಚೇತರಿಸಿಕೊಂಡರು. ಆದರೆ ಆ ದಾಳಿಕೋರನನ್ನು ಏನು ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ ಸೈಫ್ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. &quot;ಆತ ನನ್ನನ್ನು ಕೊಲ್ಲಲು ಬಂದಿದ್ದನ್ನು ನೆನಪಿಸಿಕೊಂಡಾಗ ಕ್ಷಮಿಸಲು ಸಾಧ್ಯವೇ ಇರಲಿಲ್ಲ. ಆದರೆ ನನ್ನ ಕುಟುಂಬದೊಂದಿಗೆ ಚರ್ಚಿಸಿದ ನಂತರ, ದ್ವೇಷಕ್ಕಿಂತ ಕ್ಷಮೆ ದೊಡ್ಡದು ಎಂದು ಭಾವಿಸಿ ಆತನನ್ನು ಬಿಟ್ಟುಬಿಡಲು ನಿರ್ಧರಿಸಿದೆವು,&quot; ಎಂದು ಸೈಫ್ ಹೇಳಿದ್ದಾರೆ.&lt;/p&gt;&lt;p&gt;ಸಿನಿಮಾಗಳಲ್ಲಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುವ ಸೈಫ್ ಅಲಿ ಖಾನ್, ನಿಜ ಜೀವನದಲ್ಲೂ ಅಪ್ರತಿಮ ಧೈರ್ಯ ಮತ್ತು ಉದಾತ್ತ ಗುಣವನ್ನು ಹೊಂದಿದ್ದಾರೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಸದ್ಯ ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಬೆಚ್ಚಿಬಿದ್ದಿದ್ದು, &quot;ನಮ್ಮ ನವಾಬ ನಿಜಕ್ಕೂ ರಿಯಲ್ ಲೈಫ್ ಹೀರೋ&quot; ಎಂದು ಕೊಂಡಾಡುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/saif-ali-khan-who-escaped-death-in-a-horrific-knife-attack-back-then-has-now-made-a-shocking-statement/articleshow-3ir8kf3"/>
        </item>
        <item>
            <title><![CDATA[ಶೂಟಿಂಗ್‌ ಟೈಮ್‌ನಲ್ಲಿ ನಟನ ತುಟಿ ಕಚ್ಚಿ ಗಾಯಗೊಳಿಸಿದ ಕಂಗನಾ, ಸೆನ್ಸೇಷನಲ್‌ ಆರೋಪಕ್ಕೆ ನಟಿ ತಿರುಗೇಟು]]></title>
            <link>https://kannada.asianetnews.com/cine-world/vir-das-kangana-ranaut-kissing-scene-injury-rumour-revolver-rani-clarification-san/articleshow-4fa730v</link>
            <guid isPermaLink="true">https://kannada.asianetnews.com/cine-world/vir-das-kangana-ranaut-kissing-scene-injury-rumour-revolver-rani-clarification-san/articleshow-4fa730v</guid>
            <pubDate>Mon, 29 Jun 2026 14:41:39 +0530</pubDate>
            <description><![CDATA['ರಿವಾಲ್ವರ್ ರಾಣಿ' ಚಿತ್ರದ ಕಿಸ್ಸಿಂಗ್ ದೃಶ್ಯದ ಕುರಿತು ಹಬ್ಬಿದ್ದ ವದಂತಿಗೆ ನಟ ವೀರ್ ದಾಸ್ ತೆರೆ ಎಳೆದಿದ್ದಾರೆ. ಕಂಗನಾ ರಣಾವತ್ ವೃತ್ತಿಪರ ನಟಿ ಎಂದು ಸ್ಪಷ್ಟನೆ ನೀಡಿದ್ದು, ಈ ಮೂಲಕ ಹಳೆಯ ವಿವಾದವೊಂದಕ್ಕೆ ಅಂತ್ಯ ಹಾಡಿದ್ದಾರೆ. ಈ ಬೆಂಬಲಕ್ಕೆ ಕಂಗನಾ ಕೂಡ ಧನ್ಯವಾದ ಅರ್ಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw9a5b8t5wcwneygzc59p9m3,imgname-kangana-kiss-to-vir-das-1782724078874.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜೂ.29): &lt;/strong&gt;ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಮತ್ತು ನಟ ವೀರ್ ದಾಸ್ (Vir Das) ಅಭಿನಯದ 2014 ರ &lsquo;ರಿವಾಲ್ವರ್ ರಾಣಿ&rsquo; (Revolver Rani) ಚಿತ್ರದ ಸನ್ನಿವೇಶವೊಂದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕಿಸ್ಸಿಂಗ್ ಸೀನ್ ಒಂದರಲ್ಲಿ ಕಂಗನಾ ರಣಾವತ್ ಅವರು ವೀರ್ ದಾಸ್ ಅವರ ತುಟಿಗೆ ಗಾಯವಾಗುವಂತೆ ಕಚ್ಚಿದ್ದರು ಎಂಬ ಹಳೆಯ ವದಂತಿ ಮತ್ತೆ ವೈರಲ್ ಆಗಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ವೀರ್ ದಾಸ್, ಈ ಸುದ್ದಿಯನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ವೀರ್ ದಾಸ್ ಅವರ ಈ ಸ್ಪಷ್ಟನೆಗೆ ಕಂಗನಾ ರಣಾವತ್ ಕೂಡ ಧನ್ಯವಾದ ಅರ್ಪಿಸಿದ್ದಾರೆ.&lt;/p&gt;&lt;p&gt;ಸೋಶಿಯಲ್&zwnj; ಮೀಡಿಯಾ 'X' ನಲ್ಲಿ ಅಭಿಮಾನಿಯೊಬ್ಬರು ಪತ್ರಕರ್ತರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ, &quot;ವೀರ್ ದಾಸ್ ಯಾವಾಗಲೂ ಎಲ್ಲದಕ್ಕೂ ಧ್ವನಿ ಎತ್ತುತ್ತಾರೆ. ಆದರೆ ಈ ಪತ್ರಕರ್ತರ ಹೇಳಿಕೆಗೆ ಯಾಕೆ ಸುಮ್ಮನಿದ್ದಾರೆ? ಆಕೆ ಹೇಳುತ್ತಿರುವುದು ನಿಜವೇ?&quot; ಎಂದು ಪ್ರಶ್ನಿಸಿದ್ದರು.&lt;/p&gt;&lt;p&gt;ಇದಕ್ಕೆ ಉತ್ತರಿಸಿದ ವೀರ್ ದಾಸ್, &quot;ಸ್ಪಷ್ಟವಾಗಿ ಹೇಳಬೇಕೆಂದರೆ, ಈ ಕಥೆ ಸಂಪೂರ್ಣ ಕಾಲ್ಪನಿಕ (Pure Fiction). ಕಂಗನಾ ಸೆಟ್&zwnj;ನಲ್ಲಿ ಅತ್ಯಂತ ವೃತ್ತಿಪರ ನಟಿಯಾಗಿದ್ದರು (Complete Professional) ಮತ್ತು ಅವರು ಅದ್ಭುತ ಕಲಾವಿದೆ ಎಂಬುದನ್ನು ನಾನು ಇಂದಿಗೂ ಒಪ್ಪಿಕೊಳ್ಳುತ್ತೇನೆ. ಅವರ ವಿರುದ್ಧ ಈ ರೀತಿಯ ಅಪಪ್ರಚಾರ ಮಾಡುವುದು ತಪ್ಪು. ಹೌದು, ಕೆಲವು ವರ್ಷಗಳ ನಂತರ ನನ್ನ ಕಾಮಿಡಿಗೆ ಅವರು ನನ್ನನ್ನು ಭಯೋತ್ಪಾದಕ ಎಂದು ಕರೆದಿದ್ದು ನಿಜ, ಆದರೆ ಶೂಟಿಂಗ್ ಸೆಟ್&zwnj;ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ&quot; ಎಂದು ಕಂಗನಾ ಪರ ನಿಂತಿದ್ದಾರೆ.&lt;/p&gt;&lt;h2&gt;&lt;strong&gt;ಪತ್ರಕರ್ತರ ಆರೋಪವೇನಾಗಿತ್ತು?&lt;/strong&gt;&lt;/h2&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಯ ಪ್ರಕಾರ, 'ರಿವಾಲ್ವರ್ ರಾಣಿ' ಚಿತ್ರದ ಕಿಸ್ಸಿಂಗ್ ಸೀನ್ ಚಿತ್ರೀಕರಣ ಮುಗಿದು ನಿರ್ದೇಶಕರು 'ಕಟ್' ಎಂದರೂ ಕಂಗನಾ ವೀರ್ ದಾಸ್ ಅವರನ್ನು ಮುತ್ತಿಡುವುದನ್ನು ನಿಲ್ಲಿಸಿರಲಿಲ್ಲ. ಈ ವೇಳೆ ವೀರ್ ದಾಸ್ ಅವರ ತುಟಿಗಳಿಂದ ರಕ್ತ ಬರುವಂತೆ ಗಾಯವಾಗಿತ್ತು ಎಂದು ಪತ್ರಕರ್ತರೊಬ್ಬರು ಹೇಳಿಕೆ ನೀಡಿದ್ದರು. ಇದೇ ರೀತಿಯ ಪೋಸ್ಟ್&zwnj;ಗಳು 2023 ರಲ್ಲೂ ವೈರಲ್ ಆಗಿದ್ದವು. ಆಗ ಕಂಗನಾ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ತಮಾಷೆ ಮಾಡುತ್ತಾ, &quot;ಹೃತಿಕ್ ರೋಷನ್ ಆದ ಮೇಲೆ, ಈಗ ನಾನು ಬಡ ವೀರ್ ದಾಸ್ ಅವರ ಮಾನಭಂಗ ಮಾಡಿದ್ದೇನಾ? ಇದೆಲ್ಲಾ ಯಾವಾಗ ನಡೀತು?&quot; ಎಂದು ನಗುವ ಎಮೋಜಿಗಳೊಂದಿಗೆ ಬರೆದುಕೊಂಡಿದ್ದರು.&lt;/p&gt;&lt;h2&gt;&lt;strong&gt;ಕಂಗನಾ ವೀರ್ ದಾಸ್ ಅವರನ್ನು &lsquo;ಭಯೋತ್ಪಾದಕ&rsquo; ಎಂದಿದ್ದೇಕೆ?&lt;/strong&gt;&lt;/h2&gt;&lt;p&gt;ಹಲವು ವರ್ಷಗಳ ಹಿಂದೆ ವೀರ್ ದಾಸ್ ಅವರ &quot;ಐ ಕಮ್ ಫ್ರಮ್ ಟೂ ಇಂಡಿಯಾಸ್&quot; (I come from two Indias) ಎಂಬ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಅವರು, &quot;ಭಾರತದಲ್ಲಿ ಪುರುಷರು ಹಗಲಿನಲ್ಲಿ ಮಹಿಳೆಯರನ್ನು ದೇವತೆಯಂತೆ ಪೂಜಿಸುತ್ತಾರೆ ಮತ್ತು ರಾತ್ರಿಯಲ್ಲಿ ಗ್ಯಾಂಗ್ ರೇಪ್ ಮಾಡುತ್ತಾರೆ&quot; ಎಂದು ಹೇಳಿದ್ದರು.&lt;/p&gt;&lt;p&gt;ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಂಗನಾ, &quot;ಎಲ್ಲಾ ಭಾರತೀಯ ಪುರುಷರನ್ನು ಅತ್ಯಾಚಾರಿಗಳು ಎಂದು ಬಿಂಬಿಸುವುದು ಜಾಗತಿಕ ಮಟ್ಟದಲ್ಲಿ ಭಾರತೀಯರ ಮೇಲಿನ ಜನಾಂಗೀಯ ನಿಂದನೆಗೆ ಕಾರಣವಾಗುತ್ತದೆ. ಇಡೀ ಜನಾಂಗವನ್ನು ಗುರಿಯಾಗಿಸಿಕೊಂಡು ಮಾಡುವ ಇಂತಹ ಸೃಜನಶೀಲ ಕೆಲಸಗಳು 'ಮೃದು ಭಯೋತ್ಪಾದನೆ' (Soft Terrorism) ಇದ್ದಂತೆ. ಇಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು&quot; ಎಂದು ವೀರ್ ದಾಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.&lt;/p&gt;&lt;h2&gt;&lt;strong&gt;&lsquo;ರಿವಾಲ್ವರ್ ರಾಣಿ&rsquo; ಚಿತ್ರದ ಬಗ್ಗೆ&lt;/strong&gt;&lt;/h2&gt;&lt;p&gt;2014 ರಲ್ಲಿ ಕಂಗನಾ ಅವರ ಸೂಪರ್ ಹಿಟ್ ಚಿತ್ರ 'ಕ್ವೀನ್' ಬಿಡುಗಡೆಯಾದ ಬೆನ್ನಲ್ಲೇ 'ರಿವಾಲ್ವರ್ ರಾಣಿ' ಸಿನಿಮಾ ತೆರೆಕಂಡಿತ್ತು. 'ಕ್ವೀನ್' ಚಿತ್ರದಲ್ಲಿ ಮುಗ್ಧ ಹುಡುಗಿಯಾಗಿ ನಟಿಸಿದ್ದ ಕಂಗನಾ, ಈ ಚಿತ್ರದಲ್ಲಿ ಭ್ರಷ್ಟ ರಾಜಕಾರಣಿ ಅಲ್ಕಾ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವೀರ್ ದಾಸ್ ಆಕೆಯ ಬಾಯ್&zwnj;ಫ್ರೆಂಡ್ ಪಾತ್ರ ಮಾಡಿದ್ದರು. ಚಂಬಲ್ ಕಣಿವೆಯ ಹಿನ್ನೆಲೆಯಲ್ಲಿ ಮೂಡಿಬಂದಿದ್ದ ಈ ಚಿತ್ರವನ್ನು ನಿರ್ದೇಶಕ ಸಾಯಿ ಕಬೀರ್ ನಿರ್ದೇಶಿಸಿದ್ದರು. ಪ್ರಸ್ತುತ ವೀರ್ ದಾಸ್ ಬೆಂಬಲಕ್ಕೆ ನಿಂತಿದ್ದಕ್ಕೆ ಕಂಗನಾ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/cine-world/vir-das-kangana-ranaut-kissing-scene-injury-rumour-revolver-rani-clarification-san/articleshow-4fa730v"/>
        </item>
        <item>
            <title><![CDATA[OTT Releases This Week: ಒಟಿಟಿಗೆ ಬಂದ ಪ್ರಪಂಚವನ್ನೇ ಬೆಚ್ಚಿಬೀಳಿಸಿದ ಹಾರರ್ ಲವ್ ಸ್ಟೋರಿ! ಎಲ್ಲಿ ನೋಡಬಹುದು?]]></title>
            <link>https://kannada.asianetnews.com/gallery/cine-world/new-ott-movie-web-series-releases-this-week-super-sabbu-obsession-eq0omxh</link>
            <guid isPermaLink="true">https://kannada.asianetnews.com/gallery/cine-world/new-ott-movie-web-series-releases-this-week-super-sabbu-obsession-eq0omxh</guid>
            <pubDate>Mon, 29 Jun 2026 12:24:14 +0530</pubDate>
            <description><![CDATA[&lt;p&gt;New Movies on OTT: ಈ ವಾರ ಓಟಿಟಿ ಪ್ರಿಯರಿಗೆ ಭರಪೂರ ಮನರಂಜನೆ ಕಾದಿದೆ. ಸಂದೀಪ್ ಕಿಶನ್ ಕಾಮಿಡಿ ವೆಬ್ ಸೀರೀಸ್ 'ಸೂಪರ್ ಸುಬ್ಬು' ನಿಂದ ಹಿಡಿದು, ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ 'ಅಬ್ಸೆಶನ್' ಹಾರರ್ ಸಿನಿಮಾ ತನಕ, ಹಲವು ಹೊಸ ಸಿನಿಮಾಗಳು, ಸೀರೀಸ್&zwnj;ಗಳು ಸ್ಟ್ರೀಮಿಂಗ್&zwnj;ಗೆ ಸಿದ್ಧವಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw8m2vfpt9dcvy0zxahdzgzv,imgname-ott-movies-1782700928502.jpg" type="image/jpeg" height="390" width="690"/>
            <content:encoded><![CDATA[&lt;p&gt;New Movies on OTT: ಈ ವಾರ ಓಟಿಟಿ ಪ್ರಿಯರಿಗೆ ಭರಪೂರ ಮನರಂಜನೆ ಕಾದಿದೆ. ಸಂದೀಪ್ ಕಿಶನ್ ಕಾಮಿಡಿ ವೆಬ್ ಸೀರೀಸ್ 'ಸೂಪರ್ ಸುಬ್ಬು' ನಿಂದ ಹಿಡಿದು, ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ 'ಅಬ್ಸೆಶನ್' ಹಾರರ್ ಸಿನಿಮಾ ತನಕ, ಹಲವು ಹೊಸ ಸಿನಿಮಾಗಳು, ಸೀರೀಸ್&zwnj;ಗಳು ಸ್ಟ್ರೀಮಿಂಗ್&zwnj;ಗೆ ಸಿದ್ಧವಾಗಿವೆ.&lt;/p&gt;&lt;img&gt;&lt;p&gt;ಓಟಿಟಿ ಪ್ರಿಯರಿಗೆ ಈ ವಾರವೂ ಮನರಂಜನೆಗೆ ಯಾವುದೇ ಕೊರತೆ ಇಲ್ಲ. ಹಾರರ್ ಥ್ರಿಲ್ಲರ್&zwnj;ಗಳಿಂದ ಹಿಡಿದು ಡಿಟೆಕ್ಟಿವ್ ಡ್ರಾಮಾ, ಕಾಮಿಡಿ ಶೋ, ಸೈನ್ಸ್ ಫಿಕ್ಷನ್ ಸೀರೀಸ್&zwnj; ಮತ್ತು ತೆಲುಗು ವೆಬ್ ಸೀರೀಸ್&zwnj;ಗಳವರೆಗೆ, ವಿಭಿನ್ನ ಜಾನರ್&zwnj;ಗಳ ಹೊಸ ಕಂಟೆಂಟ್&zwnj;ಗಳು ಸ್ಟ್ರೀಮಿಂಗ್&zwnj;ಗೆ ಸಿದ್ಧವಾಗಿವೆ. ಅದರಲ್ಲೂ 'ಸೂಪರ್ ಸುಬ್ಬು' ಮತ್ತು 'ಅಬ್ಸೆಶನ್' ಬಗ್ಗೆ ಹೆಚ್ಚು ನಿರೀಕ್ಷೆಗಳಿವೆ. ಈ ವಾರ ಯಾವ ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ಯಾವ ಸಿನಿಮಾ ಅಥವಾ ವೆಬ್ ಸೀರೀಸ್ ರಿಲೀಸ್ ಆಗಲಿದೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಪ್ರೀತಮ್ ಅಂಡ್ ಪೆಡ್ರೊ&lt;/strong&gt;&lt;/p&gt;&lt;p&gt;ಅರ್ಷದ್ ವಾರ್ಸಿ ಮತ್ತು ವೀರ್ ಹಿರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಸೀರೀಸ್ ಇದು. ಹಳೆಯ ಶೈಲಿಯಲ್ಲಿ ಕೇಸ್ ಬಗೆಹರಿಸುವ ಅನುಭವಿ ಪೊಲೀಸ್ ಮತ್ತು ಟೆಕ್ನಾಲಜಿ ಮೇಲೆ ಅವಲಂಬಿತವಾಗಿರುವ ಯುವ ಪೊಲೀಸ್ ಅಧಿಕಾರಿಯೊಬ್ಬರು ಒಟ್ಟಾಗಿ ಅಪರಾಧಗಳನ್ನು ಹೇಗೆ ಭೇದಿಸುತ್ತಾರೆ ಎನ್ನುವುದೇ ಈ ಸೀರೀಸ್&zwnj;ನ ಕಥೆ.&lt;/p&gt;&lt;p&gt;&lt;strong&gt;ಎಲ್ಲಿ ನೋಡಬಹುದು:&lt;/strong&gt; JioHotstar&lt;/p&gt;&lt;p&gt;ಬಿಡುಗಡೆ ದಿನಾಂಕ: ಜುಲೈ 3&lt;/p&gt;&lt;p&gt;&lt;strong&gt;ಮಾಲಿವುಡ್ ಟೈಮ್ಸ್&lt;/strong&gt;&lt;/p&gt;&lt;p&gt;'ಪ್ರೇಮಲು' ಖ್ಯಾತಿಯ ನಸ್ಲೆನ್ ಗಫೂರ್ ನಾಯಕರಾಗಿ ನಟಿಸಿರುವ 'ಮಾಲಿವುಡ್ ಟೈಮ್ಸ್' ಚಿತ್ರವನ್ನು ಅಭಿನವ್ ಸುಂದರ್ ನಾಯಕ್ ನಿರ್ದೇಶಿಸಿದ್ದಾರೆ. ಮಲಯಾಳಂ ಚಿತ್ರರಂಗವನ್ನು ಉಳಿಸಲು ದೊಡ್ಡ ಹಾರರ್ ನಿರ್ದೇಶಕನಾಗಬೇಕೆಂದು ಕನಸು ಕಾಣುವ ಯುವಕನ ಕಥೆಯನ್ನು ಈ ಚಿತ್ರ ತೋರಿಸುತ್ತದೆ. ಥಿಯೇಟರ್&zwnj;ಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದ ಈ ಸಿನಿಮಾ ಈಗ OTTಗೆ ಬರುತ್ತಿದೆ.&lt;/p&gt;&lt;p&gt;ಎಲ್ಲಿ ನೋಡಬಹುದು: JioHotstar&lt;/p&gt;&lt;p&gt;ಬಿಡುಗಡೆ ದಿನಾಂಕ: ಜುಲೈ 3&lt;/p&gt;&lt;p&gt;&lt;strong&gt;ತವ್ವೈ&lt;/strong&gt;&lt;/p&gt;&lt;p&gt;'ತವ್ವೈ' ಒಂದು ಹಿಂದಿ ಹಾರರ್ ಚಿತ್ರ. ಪಿತೃ ದೋಷ, ದೈವ ವಿಮೋಚನೆ, ಲಕ್ಷ್ಮಿ-ಅಲಕ್ಷ್ಮಿ ನಡುವಿನ ಪೌರಾಣಿಕ ಹೋರಾಟದಂತಹ ಅಂಶಗಳ ಸುತ್ತ ಕಥೆ ಹೆಣೆಯಲಾಗಿದೆ. ಅರ್ಪಿತ್ ರಂಕಾ ಮತ್ತು ಮನೋಜ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.&lt;/p&gt;&lt;p&gt;ಎಲ್ಲಿ ನೋಡಬಹುದು: JioHotstar&lt;/p&gt;&lt;p&gt;ಬಿಡುಗಡೆ ದಿನಾಂಕ: ಜೂನ್ 29&lt;/p&gt;&lt;p&gt;&lt;strong&gt;ಜುಹಿ ಮುಯಿ&lt;/strong&gt;&lt;/p&gt;&lt;p&gt;'ಬಿಗ್ ಬಾಸ್ 18' ಖ್ಯಾತಿಯ ಇಶಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಜುಹಿ ಮುಯಿ' ಒಂದು ಡೈಲಿ ಸೋಪ್. ಆಟಿಸಂನಿಂದ ಬಳಲುತ್ತಿರುವ ಪ್ರತಿಭಾವಂತೆ, ತನ್ನ ಸಹೋದರನ ಸಹಾಯದಿಂದ ವಕೀಲಳಾಗಿ, ಅಪರಾಧಿಗಳನ್ನು ಕಾನೂನಿನ ಮುಂದೆ ತರುವ ಕಥಾಹಂದರವನ್ನು ಇದು ಹೊಂದಿದೆ.&lt;/p&gt;&lt;p&gt;ಎಲ್ಲಿ ನೋಡಬಹುದು: JioHotstar&lt;/p&gt;&lt;p&gt;ಬಿಡುಗಡೆ ದಿನಾಂಕ: ಜೂನ್ 29&lt;/p&gt;&lt;img&gt;&lt;p&gt;&lt;strong&gt;ಸೂಪರ್ ಸುಬ್ಬು&lt;/strong&gt;&lt;/p&gt;&lt;p&gt;ತೆಲುಗು ವೆಬ್ ಸೀರೀಸ್ 'ಸೂಪರ್ ಸುಬ್ಬು'ನಲ್ಲಿ ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಪ್ರದಾಯವಾದಿ ಹಳ್ಳಿಯಲ್ಲಿ ಕೆಲಸ ಮಾಡುವ ಲೈಂಗಿಕ ಶಿಕ್ಷಣ ಅಧಿಕಾರಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಪಾತ್ರದಲ್ಲಿ ಮಿಥಿಲಾ ಪಾಲ್ಕರ್ ನಟಿಸಿದ್ದಾರೆ. ಇವರಿಬ್ಬರ ಜೀವನ ಹೇಗೆ ಒಂದಾಗುತ್ತದೆ ಎನ್ನುವುದೇ ಕಥೆ.&lt;/p&gt;&lt;p&gt;ಎಲ್ಲಿ ನೋಡಬಹುದು: Netflix&lt;/p&gt;&lt;p&gt;ಬಿಡುಗಡೆ ದಿನಾಂಕ: ಜುಲೈ 2&lt;/p&gt;&lt;p&gt;&lt;strong&gt;ಸರ್ವೈವಲ್ ಆಫ್ ದಿ ಥಿಕೆಸ್ಟ್ &ndash; ಸೀಸನ್ 3&lt;/strong&gt;&lt;/p&gt;&lt;p&gt;ಈ ಕಾಮಿಡಿ ಸೀರೀಸ್ ತನ್ನ ಮೂರನೇ ಮತ್ತು ಅಂತಿಮ ಸೀಸನ್&zwnj;ನೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಪಾತ್ರಗಳು ಮನರಂಜನಾತ್ಮಕ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಿ, ನಗದು ಬಹುಮಾನಕ್ಕಾಗಿ ಸ್ಪರ್ಧಿಸುವ ಕಥೆ ಮುಂದುವರಿಯುತ್ತದೆ.&lt;/p&gt;&lt;p&gt;ಎಲ್ಲಿ ನೋಡಬಹುದು: Netflix&lt;/p&gt;&lt;p&gt;ಬಿಡುಗಡೆ ದಿನಾಂಕ: ಜುಲೈ 2&lt;/p&gt;&lt;p&gt;&lt;strong&gt;ಹ್ಯೂಮನ್ ವೇಪರ್&lt;/strong&gt;&lt;/p&gt;&lt;p&gt;ಇದು ಜಪಾನ್&zwnj;ನ ಆಕ್ಷನ್ ಥ್ರಿಲ್ಲರ್ ಸೀರೀಸ್ 'ಹ್ಯೂಮನ್ ವೇಪರ್'. ತನ್ನ ದೇಹವನ್ನು ಅನಿಲವಾಗಿ ಪರಿವರ್ತಿಸಿಕೊಂಡು ಯಾವುದೇ ಅಡೆತಡೆಗಳನ್ನು ದಾಟಬಲ್ಲ ರಹಸ್ಯಮಯ ವ್ಯಕ್ತಿಯೊಬ್ಬ, ಸರಣಿ ಕೊಲೆಗಳನ್ನು ಮಾಡುತ್ತಾ ಪೊಲೀಸರಿಗೆ ಸವಾಲು ಹಾಕುವುದೇ ಕಥೆಯ ಪ್ರಮುಖ ಅಂಶ.&lt;/p&gt;&lt;p&gt;ಎಲ್ಲಿ ನೋಡಬಹುದು: Netflix&lt;/p&gt;&lt;p&gt;ಬಿಡುಗಡೆ ದಿನಾಂಕ: ಜುಲೈ 2&lt;/p&gt;&lt;p&gt;&lt;strong&gt;ಎನೋಲಾ ಹೋಮ್ಸ್ 3&lt;/strong&gt;&lt;/p&gt;&lt;p&gt;ಮಿಲ್ಲಿ ಬಾಬಿ ಬ್ರೌನ್ ಮತ್ತೊಮ್ಮೆ ಎನೋಲಾ ಹೋಮ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಮಾಲ್ಟಾ ಹಿನ್ನೆಲೆಯಲ್ಲಿ ಹೊಸ ಕೇಸ್ ಒಂದನ್ನು ಭೇದಿಸುವಾಗ, ಆಕೆಯ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ.&lt;/p&gt;&lt;p&gt;ಎಲ್ಲಿ ನೋಡಬಹುದು: Netflix&lt;/p&gt;&lt;p&gt;ಬಿಡುಗಡೆ ದಿನಾಂಕ: ಜುಲೈ 1&lt;/p&gt;&lt;img&gt;&lt;p&gt;&lt;strong&gt;ಸೈಲೋ &ndash; ಸೀಸನ್ 3&lt;/strong&gt;&lt;/p&gt;&lt;p&gt;ಹ್ಯೂ ಹೋವೆ ಅವರ ಡಿಸ್ಟೋಪಿಯನ್ ಕಾದಂಬರಿಗಳನ್ನು ಆಧರಿಸಿದ 'ಸೈಲೋ' ಮೂರನೇ ಸೀಸನ್&zwnj;ನೊಂದಿಗೆ ಮರಳುತ್ತಿದೆ. ಭೂಗತ ಸೈಲೋಗಳಲ್ಲಿ ವಾಸಿಸುವ ಮಾನವ ಸಮಾಜದ ಹಿಂದಿನ ರಹಸ್ಯಗಳನ್ನು ಬಯಲಿಗೆಳೆಯುವ ಕಥೆಯನ್ನು ಈ ಸೈನ್ಸ್ ಫಿಕ್ಷನ್ ಸೀರೀಸ್ ಮುಂದುವರಿಸುತ್ತದೆ. ರೆಬೆಕ್ಕಾ ಫರ್ಗುಸನ್ ಮತ್ತೊಮ್ಮೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.&lt;/p&gt;&lt;p&gt;ಎಲ್ಲಿ ನೋಡಬಹುದು: Apple TV+&lt;/p&gt;&lt;p&gt;ಬಿಡುಗಡೆ ದಿನಾಂಕ: ಜುಲೈ 3&lt;/p&gt;&lt;img&gt;&lt;p&gt;&lt;strong&gt;ಎಲ್&lt;/strong&gt;&lt;/p&gt;&lt;p&gt;'ಲೀಗಲಿ ಬ್ಲಾಂಡ್' ಚಿತ್ರದ ಪ್ರೀಕ್ವೆಲ್ ಆಗಿ 'ಎಲ್' ಟೆಲಿವಿಷನ್ ಸೀರೀಸ್ ನಿರ್ಮಾಣವಾಗಿದೆ. ಮೂಲ ಚಿತ್ರದ ಘಟನೆಗಳಿಗೂ ಮುನ್ನ, ಹೈಸ್ಕೂಲ್&zwnj;ನಲ್ಲಿ ಎಲ್ ವುಡ್ಸ್ ಅವರ ಜೀವನವನ್ನು ಈ ಕಮಿಂಗ್-ಆಫ್-ಏಜ್ ಡ್ರಾಮಾ ತೋರಿಸುತ್ತದೆ.&lt;/p&gt;&lt;p&gt;ಎಲ್ಲಿ ನೋಡಬಹುದು: Prime Video&lt;/p&gt;&lt;p&gt;ಬಿಡುಗಡೆ ದಿನಾಂಕ: ಜುಲೈ 1&lt;/p&gt;&lt;p&gt;&lt;strong&gt;ಅಬ್ಸೆಶನ್&lt;/strong&gt;&lt;/p&gt;&lt;p&gt;ಕೆರ್ರಿ ಬಾರ್ಕರ್ ನಿರ್ದೇಶನದ ಸೂಪರ್&zwnj;ಹಿಟ್ ಹಾರರ್ ಥ್ರಿಲ್ಲರ್ 'ಅಬ್ಸೆಶನ್', ಥಿಯೇಟರ್&zwnj;ಗಳಲ್ಲಿ ಯಶಸ್ವಿ ಪ್ರದರ್ಶನದ ನಂತರ ಈಗ ಭಾರತದಲ್ಲಿ OTTಗೆ ಬರುತ್ತಿದೆ. ಆದರೆ, ಆರಂಭದಲ್ಲಿ ಇದು ರೆಂಟಲ್ ಮಾದರಿಯಲ್ಲಿ ಮಾತ್ರ ಲಭ್ಯವಿರುತ್ತದೆ. ಇದನ್ನು ವೀಕ್ಷಿಸಲು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಕಡಿಮೆ ಬಜೆಟ್&zwnj;ನಲ್ಲಿ ನಿರ್ಮಾಣವಾದ ಈ ಹಾರರ್ ಲವ್ ಸ್ಟೋರಿ ಚಿತ್ರ ಜಗತ್ತನ್ನೇ ಬೆಚ್ಚಿಬೀಳಿಸಿತ್ತು ಎನ್ನಬಹುದು. ತನ್ನ ಪ್ರಿಯಕರನಿಗೆ ನಾಯಕಿ ಚುಕ್ಕಿ ತೋರಿಸುವ ಹಾರರ್ ದೃಶ್ಯಗಳು ಮೈ ಜುಮ್ಮೆನಿಸುವಂತಿವೆ. ನಿರ್ದೇಶಕರು ಚಿತ್ರವನ್ನು ಕಟ್ಟಿಕೊಟ್ಟ ರೀತಿಗೆ ಜಾಗತಿಕ ಪ್ರೇಕ್ಷಕರು ಫಿದಾ ಆಗಿದ್ದಾರೆ.&lt;/p&gt;&lt;p&gt;ಎಲ್ಲಿ ನೋಡಬಹುದು: Prime Video&lt;/p&gt;&lt;p&gt;ಬಿಡುಗಡೆ ದಿನಾಂಕ: ಜೂನ್ 29&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/new-ott-movie-web-series-releases-this-week-super-sabbu-obsession-eq0omxh"/>
        </item>
        <item>
            <title><![CDATA[Suriya Viral News: ತಮಿಳುನಾಡು ರಾಜಕೀಯಕ್ಕೆ ನಟ ಸೂರ್ಯ.. ಅಗರಂ ಫೌಂಡೇಶನ್‌ ಸಭೆಯಲ್ಲಿ ಸಿಕ್ಕೇ ಬಿಡ್ತು ಸಾಕ್ಷಿ!]]></title>
            <link>https://kannada.asianetnews.com/entertainment/following-thalapathy-vijay-actor-suriya-might-also-enter-politics-and-speculations-gained-at-agaram-foundation-event/articleshow-82eu52d</link>
            <guid isPermaLink="true">https://kannada.asianetnews.com/entertainment/following-thalapathy-vijay-actor-suriya-might-also-enter-politics-and-speculations-gained-at-agaram-foundation-event/articleshow-82eu52d</guid>
            <pubDate>Mon, 29 Jun 2026 14:13:37 +0530</pubDate>
            <description><![CDATA[&lt;p&gt;ಸೂರ್ಯ ಕೂಡ ಅವರ ಜೊತೆಗೂಡುತ್ತಾರಾ ಅಥವಾ ಸ್ವತಂತ್ರವಾಗಿ ಹೊಸ ಹಾದಿ ತುಳಿಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಒಂದು ವೇಳೆ ಸೂರ್ಯ ರಾಜಕೀಯಕ್ಕೆ ಬರುವುದು ಅಧಿಕೃತವಾದರೆ, ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ಸ್ಟಾರ್&zwnj;ಗಳ ನಡುವೆಯೇ ದೊಡ್ಡ ಪೈಪೋಟಿ ಏರ್ಪಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw98rcstc87spav66dbaa6yt,imgname-suriya-vijay-1782722605881.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಳಪತಿ ವಿಜಯ್ ಬಳಿಕ ತಮಿಳುನಾಡು ರಾಜಕೀಯ ಅಖಾಡಕ್ಕೆ 'ಸಿಂಗಂ' ಸೂರ್ಯ ಎಂಟ್ರಿ ಪಕ್ಕಾನಾ? ಇಲ್ಲಿದೆ ಇಂಟ್ರೆಸ್ಟಿಂಗ್ ಅಪ್&zwnj;ಡೇಟ್!&lt;/strong&gt;&lt;/p&gt;&lt;p&gt;ತಮಿಳುನಾಡು ರಾಜಕೀಯ ಎಂದರೆ ಅಲ್ಲಿ ಹೈ-ವೋಲ್ಟೇಜ್ ಡ್ರಾಮಾ ಇರಲೇಬೇಕು. ಬೆಳ್ಳಿತೆರೆಯ ಮೇಲೆ ಅಬ್ಬರಿಸುವ ನಾಯಕರು ಶಾಸನಸಭೆಯ ಮೆಟ್ಟಿಲೇರುವುದು ಅಲ್ಲಿನ ದಶಕಗಳ ಇತಿಹಾಸ. ಇತ್ತೀಚೆಗಷ್ಟೇ 'ದಳಪತಿ' ವಿಜಯ್ (Thalapathy Vijay) ತಮ್ಮ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಮೂಲಕ ರಾಜಕೀಯಕ್ಕೆ ಅದ್ಧೂರಿ ಎಂಟ್ರಿ ಕೊಟ್ಟು ಇಡೀ ದೇಶದ ಗಮನ ಸೆಳೆದಿದ್ದರು. ಈಗ ವಿಜಯ್ ಹಾದಿಯಲ್ಲೇ ಕಾಲಿವುಡ್&zwnj;ನ ಮತ್ತೊಬ್ಬ ದೈತ್ಯ ನಟ, 'ಸಿಂಗಂ' ಖ್ಯಾತಿಯ ಸೂರ್ಯ (Suriya) ಕೂಡ ರಾಜಕೀಯಕ್ಕೆ ಧುಮುಕಲಿದ್ದಾರಾ? ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.&lt;/p&gt;&lt;h2&gt;ವಿಜಯ್ ಅಬ್ಬರದ ಬೆನ್ನಲ್ಲೇ ಸೂರ್ಯ ಸಂಚಲನ:&lt;/h2&gt;&lt;p&gt;ದಳಪತಿ ವಿಜಯ್ ರಾಜಕೀಯಕ್ಕೆ ಬಂದ ಮೇಲೆ ತಮಿಳುನಾಡಿನ ರಾಜಕೀಯ ಚಿತ್ರಣವೇ ಬದಲಾಗಿದೆ. ಎಂಜಿಆರ್ ನಂತರ ಚಿತ್ರರಂಗದಿಂದ ಬಂದು ಇಷ್ಟು ದೊಡ್ಡ ಮಟ್ಟದ ಜನಬೆಂಬಲ ಗಳಿಸಿದ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗುತ್ತಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಸೂರ್ಯ ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನನ್ನು 'ಜನನಾಯಕ'ನನ್ನಾಗಿ ನೋಡಲು ಹಂಬಲಿಸುತ್ತಿದ್ದಾರೆ. ಸೂರ್ಯ ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ 'ಅಗರಂ ಫೌಂಡೇಶನ್' ಮೂಲಕ ಮಾಡುತ್ತಿರುವ ಸಮಾಜಸೇವೆಯಿಂದಾಗಿ ತಮಿಳುನಾಡಿನ ಪ್ರತಿ ಮನೆಯಲ್ಲೂ ಒಬ್ಬ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.&lt;/p&gt;&lt;p&gt;ಅಭಿಮಾನಿ ಸಂಘದ ಸಭೆಯಲ್ಲಿ ಸ್ಫೋಟಕ ಹೇಳಿಕೆ!&lt;/p&gt;&lt;p&gt;ಸೂರ್ಯ ರಾಜಕೀಯಕ್ಕೆ ಬರುವುದು ಕೇವಲ ಗಾಳಿ ಸುದ್ದಿಯಲ್ಲ ಎಂಬಂತೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. 'ಅಖಿಲ ಭಾರತ ಸೂರ್ಯ ಚೀಫ್ ಚಾರಿಟೇಬಲ್ ಟ್ರಸ್ಟ್'ನ ಜಿಲ್ಲಾ ಕಾರ್ಯಕಾರಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಟ್ರಸ್ಟ್&zwnj;ನ ಪ್ರಮುಖ ಪದಾಧಿಕಾರಿಯೊಬ್ಬರು ಮಾತನಾಡುತ್ತಾ, &quot;ಕಾಲ ನಿರ್ಧರಿಸಿದೆ, ದೇವರು ನಿರ್ಧರಿಸಿದ್ದಾನೆ. ಸೂರ್ಯ ಅವರು ಜನರ ನಾಯಕನಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನೀವು ಅವರಿಗಾಗಿ ಕೆಲಸ ಮಾಡಲು ಸಿದ್ಧರಿದ್ದೀರಾ?&quot; ಎಂದು ಅಭಿಮಾನಿಗಳನ್ನು ಕೇಳಿದಾಗ ಇಡೀ ಸಭಾಂಗಣ ಹರ್ಷೋದ್ಗಾರದಿಂದ ನಡುಗಿಹೋಯಿತು. &quot;ನೀವು ಸಿದ್ಧರಿದ್ದರೆ, ಸೂರ್ಯ ಶೀಘ್ರದಲ್ಲೇ ದೊಡ್ಡ ಮಟ್ಟದ ಅಧಿಕಾರ ಹಿಡಿಯುವುದು ಖಚಿತ&quot; ಎಂಬ ಅವರ ಮಾತುಗಳು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.&lt;/p&gt;&lt;p&gt;ನಾಯಕತ್ವಕ್ಕೆ ಬೇಕಾದ ಎಲ್ಲಾ ಅರ್ಹತೆ ಸೂರ್ಯನಿಗಿದೆ:&lt;/p&gt;&lt;p&gt;ನಟ ಸೂರ್ಯ ತಮ್ಮ ತಂದೆ ಶಿವಕುಮಾರ್ ಅವರ ಶಿಸ್ತನ್ನು ಮೈಗೂಡಿಸಿಕೊಂಡವರು. ಸಿನಿಮಾಗಳಲ್ಲಿ ಸಮಾಜಮುಖಿ ಸಂದೇಶ ನೀಡುವ ಅವರು, ನಿಜ ಜೀವನದಲ್ಲೂ ಅಗರಂ ಫೌಂಡೇಶನ್ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಅವರ ಈ ಶೈಕ್ಷಣಿಕ ಕ್ರಾಂತಿ ತಮಿಳುನಾಡಿನ ಜನರಲ್ಲಿ ಅವರ ಬಗ್ಗೆ ಅಪಾರ ಗೌರವ ಮೂಡಿಸಿದೆ. ಕೇವಲ ಮಾತುಗಳಿಗಿಂತ ಕೆಲಸದಲ್ಲಿ ನಂಬಿಕೆ ಇಟ್ಟಿರುವ ಸೂರ್ಯ, ರಾಜಕೀಯಕ್ಕೆ ಬಂದರೆ ಅದು ದೊಡ್ಡ ಬದಲಾವಣೆಗೆ ನಾಂದಿಯಾಗಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.&lt;/p&gt;&lt;p&gt;ಮುಂದಿನ ಚುನಾವಣೆಯೇ ಗುರಿ?&lt;/p&gt;&lt;p&gt;ವಿಜಯ್ ಈಗಾಗಲೇ ಅಖಾಡಕ್ಕೆ ಇಳಿದು ಸಿಎಂ ಪಟ್ಟ ಪಡೆದಿದ್ದಾರೆ. ಈಗ ಸೂರ್ಯ ಕೂಡ ಅವರ ಜೊತೆಗೂಡುತ್ತಾರಾ ಅಥವಾ ಸ್ವತಂತ್ರವಾಗಿ ಹೊಸ ಹಾದಿ ತುಳಿಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಒಂದು ವೇಳೆ ಸೂರ್ಯ ರಾಜಕೀಯಕ್ಕೆ ಬರುವುದು ಅಧಿಕೃತವಾದರೆ, ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ಸ್ಟಾರ್&zwnj;ಗಳ ನಡುವೆಯೇ ದೊಡ್ಡ ಪೈಪೋಟಿ ಏರ್ಪಡಲಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಕಾಲಿವುಡ್&zwnj;ನ ಇಬ್ಬರು ಸ್ಟಾರ್ ನಟರು ರಾಜಕೀಯಕ್ಕೆ ಬರುತ್ತಿರುವುದು ಅಭಿಮಾನಿಗಳಿಗೆ ಹಬ್ಬದಂತಾಗಿದೆ. ಸೂರ್ಯ ಈ ಬಗ್ಗೆ ಅಧಿಕೃತವಾಗಿ ಏನು ಹೇಳುತ್ತಾರೆ ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆ! ಸಿನಿಕೋಟಿಗಳ ಈ ಕುತೂಹಲಕ್ಕೆ ಸೂರ್ಯ ಶೀಘ್ರದಲ್ಲೇ ಉತ್ತರ ನೀಡಲಿದ್ದಾರಾ? ಅಥವಾ, ಈ ಸುದ್ದಿ ಹೀಗೆ ಬಂದು ಹಾಗೆ ಹಾರಿ ಹೋಗುತ್ತಾ? ಕಾದು ನೋಡೋಣ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/following-thalapathy-vijay-actor-suriya-might-also-enter-politics-and-speculations-gained-at-agaram-foundation-event/articleshow-82eu52d"/>
        </item>
        <item>
            <title><![CDATA[Vijay Joseph Trisha Krishnan Viral News: ತ್ರಿಶಾ ಡಿಸಿಎಂ ಆಗ್ತಾರಾ? ಮಾಜಿ ಸಚಿವರ ಸೆನ್ಸೇಷನಲ್ ಹೇಳಿಕೆ ಭಾರೀ ವೈರಲ್; ನಟಿ ಫ್ಯಾನ್ಸ್‌ಗೆ ಸಖತ್ ಖುಷಿ!]]></title>
            <link>https://kannada.asianetnews.com/entertainment/former-aiadmk-minister-udhayakumar-sensational-statement-about-vijay-and-trisha-is-currently-going-viral/articleshow-exprp2q</link>
            <guid isPermaLink="true">https://kannada.asianetnews.com/entertainment/former-aiadmk-minister-udhayakumar-sensational-statement-about-vijay-and-trisha-is-currently-going-viral/articleshow-exprp2q</guid>
            <pubDate>Mon, 29 Jun 2026 13:11:54 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯದ ಮಿಕ್ಸ್ ಇತ್ತೀಚಿನ ದಿನಗಳಲ್ಲಿ ಹೊಸ ಹಂತಕ್ಕೆ ತಲುಪಿದೆ. ಮಾಜಿ ಸಚಿವರ ಈ 'ತ್ರಿಶಾ ಡಿಸಿಎಂ' ಹೇಳಿಕೆಗೆ ವಿಜಯ್ ಅವರ ಪಕ್ಷ ಯಾವ ರೀತಿ ತಿರುಗೇಟು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ತ್ರಿಶಾ ನಿಜವಾಗಿಯೂ ರಾಜಕೀಯಕ್ಕೆ ಬಂದರೆ, ಅದೊಂದು ದೊಡ್ಡ ತಿರುವು ಆಗುವುದರಲ್ಲಿ ಸಂಶಯವಿಲ್ಲ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsxx9wnsgq9kwscgsnsf0a8,imgname-actor-trisha-unfollows-vijay-1782207915925.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಟಿ ತ್ರಿಶಾ ಈಗ ಉಪಮುಖ್ಯಮಂತ್ರಿ? ಸಂಚಲನ ಮೂಡಿಸಿದ ಮಾಜಿ ಸಚಿವರ ಶಾಕಿಂಗ್ ಹೇಳಿಕೆ!&lt;/strong&gt;&lt;/p&gt;&lt;p&gt;ತಮಿಳುನಾಡು ಅಂದ್ರೇನೇ ಅಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧ. ಎಂಜಿಆರ್, ಜಯಲಲಿತಾ ಕಾಲದಿಂದಲೂ ನಟ-ನಟಿಯರು ರಾಜ್ಯವನ್ನಾಳುತ್ತಾ ಬಂದಿದ್ದಾರೆ. ಈಗ ಈ ಸಾಲಿಗೆ ದಕ್ಷಿಣ ಭಾರತದ ಕನಸಿನ ಕನ್ಯೆ ತ್ರಿಶಾ ಕೃಷ್ಣನ್ (Trisha Krishnan) ಅವರ ಹೆಸರು ಸೇರ್ಪಡೆಯಾಗುತ್ತಿದೆಯೇ? ಹೌದು, ತಮಿಳುನಾಡು ರಾಜಕೀಯದಲ್ಲಿ ಈಗ 'DCM ತ್ರಿಶಾ' ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ! ಇದು ನಿಜವೋ ಅಥವಾ ಕೇವಲ ರಾಜಕೀಯ ಗಿಮಿಕ್ಕೋ? ಈ ಸ್ಟೋರಿ ನೋಡಿ..&lt;/p&gt;&lt;p&gt;ಬೆಳ್ಳಿತೆರೆಯಿಂದ ಸಚಿವಾಲಯಕ್ಕೆ ತ್ರಿಶಾ ಎಂಟ್ರಿ?&lt;/p&gt;&lt;p&gt;ಕಳೆದ ಎರಡು ದಶಕಗಳಿಂದ ತಮಿಳು ಚಿತ್ರರಂಗವನ್ನು ಆಳುತ್ತಿರುವ ತ್ರಿಶಾ (Trisha Krishnan), ಇಂದಿಗೂ ಟಾಪ್ ಹೀರೋಯಿನ್. ಇತ್ತೀಚೆಗೆ 'ದಳಪತಿ' ವಿಜಯ್ (Thalapathy Vijay) ಜೊತೆ 'ಲಿಯೋ' ಚಿತ್ರದಲ್ಲಿ ಮಿಂಚಿದ್ದ ತ್ರಿಶಾ ಹೆಸರು ಈಗ ದಿಢೀರನೆ ರಾಜಕೀಯ ಅಖಾಡದಲ್ಲಿ ಕೇಳಿಬರುತ್ತಿದೆ. ಅದಕ್ಕೆ ಕಾರಣವಾಗಿದ್ದು ಎಐಎಡಿಎಂಕೆ (AIADMK) ಮಾಜಿ ಸಚಿವ ಉದಯಕುಮಾರ್ ಅವರು ನೀಡಿದ ಒಂದು ಸೆನ್ಸೇಷನಲ್ ಹೇಳಿಕೆ. &quot;ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾಳೆ ನಟಿ ತ್ರಿಶಾ ತಮಿಳುನಾಡಿನ ಉಪಮುಖ್ಯಮಂತ್ರಿಯಾದರೂ ಆಶ್ಚರ್ಯವಿಲ್ಲ&quot; ಎಂದು ಅವರು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ. ಅವರ ಈ ಹೇಳಿಕೆ ಸಖತ್ ವೈರಲ್ ಆಗಿದೆ. ಜೊತೆಗೆ, ತ್ರಿಷಾ ಫ್ಯಾನ್ಸ್ ಸಖತ್ ಖುಷಿಗೆ ಕಾರಣವಾಗಿದೆ.&lt;/p&gt;&lt;h2&gt;ವಿಜಯ್ ನಿರ್ಧಾರಕ್ಕೆ ವಿರೋಧ ಪಕ್ಷಗಳ ಕೆಂಗಣ್ಣು:&lt;/h2&gt;&lt;p&gt;ತಮಿಳು ಸೂಪರ್ ಸ್ಟಾರ್ ವಿಜಯ್ ಅವರು ತಮ್ಮದೇ ಆದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವನ್ನು ಸ್ಥಾಪಿಸಿ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದಾರೆ. ಇತ್ತೀಚೆಗೆ ವಿಜಯ್ ಅವರು ಕರ್ನಾಟಕದ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಕೆವಿಎನ್ (KVN) ಪ್ರೊಡಕ್ಷನ್ಸ್ ಮುಖ್ಯಸ್ಥ ವೆಂಕಟ ನಾರಾಯಣ ಅವರನ್ನು ದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಿಸುವಂತೆ ಶಿಫಾರಸು ಮಾಡಿದ್ದರು ಎನ್ನಲಾದ ಸುದ್ದಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವಿಜಯ್ ಅಭಿನಯದ ಕೊನೆಯ ಚಿತ್ರವನ್ನು ನಿರ್ಮಿಸುತ್ತಿರುವ ಕಾರಣಕ್ಕಾಗಿ ನೆರೆಯ ರಾಜ್ಯದ ವ್ಯಕ್ತಿಗೆ ಇಂತಹ ದೊಡ್ಡ ಹುದ್ದೆ ನೀಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಈ ಸಂಗತಿ ತಮಿಳುನಾಡು ರಾಜಕಾರಣದಲ್ಲಿ, ಅದರಲ್ಲೂ ವಿರೋಧಪಕ್ಷಗಳ ಪಡಸಾಲೆಯಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸುತ್ತಿದೆ.&lt;/p&gt;&lt;p&gt;ವಿಡಂಬನೆಯೋ ಅಥವಾ ಭವಿಷ್ಯದ ಮುನ್ಸೂಚನೆಯೋ?&lt;/p&gt;&lt;p&gt;ಇದೇ ವಿಚಾರವನ್ನು ಇಟ್ಟುಕೊಂಡು ವಿಜಯ್ ಅವರನ್ನು ಕಾಲೆಳೆದಿರುವ ಮಾಜಿ ಸಚಿವ ಉದಯಕುಮಾರ್, &quot;ವಿಜಯ್ ಅವರಿಗೆ ಕೇವಲ ಸಿನಿಮಾ ಗೆಳೆತನ ಮತ್ತು ಸಂಪರ್ಕಗಳೇ ಮುಖ್ಯವಾಗಿದೆ. 8 ಕೋಟಿ ಜನರಿರುವ ತಮಿಳುನಾಡಿನಲ್ಲಿ ಅವರಿಗೆ ಒಬ್ಬ ತಮಿಳಿಗ ಸಿಗಲಿಲ್ಲವೇ? ಸಿನಿಮಾ ಮಂದಿಗೆ ಹೀಗೆಯೇ ಪ್ರಮುಖ ಹುದ್ದೆಗಳನ್ನು ಹಂಚುತ್ತಾ ಹೋದರೆ, ಮುಂದಿನ ದಿನಗಳಲ್ಲಿ ನಟಿ ತ್ರಿಶಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಪಕ್ಕದಲ್ಲಿ ಕೂರಿಸಿಕೊಂಡರೂ ಆಶ್ಚರ್ಯವಿಲ್ಲ&quot; ಎಂದು ಕುಟುಕಿದ್ದಾರೆ. ಈ ಮಾತು ಇಡೀ ದೇಶದ ತುಂಬಾ ಪ್ರಚಾರ ಪಡೆಯುತ್ತಿದೆ.&lt;/p&gt;&lt;h3&gt;ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ&lt;/h3&gt;&lt;p&gt;ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ವಿಜಯ್ ಮತ್ತು ತ್ರಿಶಾ ಜೋಡಿ ಬೆಳ್ಳಿತೆರೆಯ ಮೇಲೆ ಎಷ್ಟು ಫೇಮಸ್ಸೋ, ಈಗ ರಾಜಕೀಯವಾಗಿಯೂ ಅಷ್ಟೇ ಸದ್ದು ಮಾಡುತ್ತಿದೆ. ಅಭಿಮಾನಿಗಳಂತೂ &quot;ಜಯಲಲಿತಾ ಅವರಂತೆ ತ್ರಿಶಾ ಕೂಡ ರಾಜಕೀಯಕ್ಕೆ ಬಂದರೆ ಅಡ್ಡಿಯಿಲ್ಲ&quot; ಎಂದು ಕಾಮೆಂಟ್ ಮಾಡುತ್ತಿದ್ದರೆ, ರಾಜಕೀಯ ವಿಶ್ಲೇಷಕರು ಇದೊಂದು ಕೇವಲ ಟೀಕೆ ಅಷ್ಟೇ ಎನ್ನುತ್ತಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯದ ಮಿಕ್ಸ್ ಇತ್ತೀಚಿನ ದಿನಗಳಲ್ಲಿ ಹೊಸ ಹಂತಕ್ಕೆ ತಲುಪಿದೆ. ಮಾಜಿ ಸಚಿವರ ಈ 'ತ್ರಿಶಾ ಡಿಸಿಎಂ' ಹೇಳಿಕೆಗೆ ವಿಜಯ್ ಅವರ ಪಕ್ಷ ಯಾವ ರೀತಿ ತಿರುಗೇಟು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ತ್ರಿಶಾ ನಿಜವಾಗಿಯೂ ರಾಜಕೀಯಕ್ಕೆ ಬಂದರೆ, ದಕ್ಷಿಣ ಭಾರತದ ರಾಜಕೀಯ ಇತಿಹಾಸದಲ್ಲೇ ಅದೊಂದು ದೊಡ್ಡ ತಿರುವು ಆಗುವುದರಲ್ಲಿ ಸಂಶಯವಿಲ್ಲ! ಆದರೆ, ಸದ್ಯಕ್ಕೆ ಈ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ, ಕಾದು ನೋಡಬೇಕಷ್ಟೇ!&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/former-aiadmk-minister-udhayakumar-sensational-statement-about-vijay-and-trisha-is-currently-going-viral/articleshow-exprp2q"/>
        </item>
        <item>
            <title><![CDATA[Actress Krishi Thapanda: ತನ್ನ ಮನೆಯೊಳಗಡೆ ಪ್ರಾಣಬಿಟ್ಟ ಗೆಳೆಯ; ಫಸ್ಟ್‌ ರಿಯಾಕ್ಷನ್ ಕೊಟ್ಟ ಕೃಷಿ ತಾಪಂಡ]]></title>
            <link>https://kannada.asianetnews.com/sandalwood/kannada-actress-krishi-thapanda-reaction-on-friend-vaishak-demise/articleshow-xz97srd</link>
            <guid isPermaLink="true">https://kannada.asianetnews.com/sandalwood/kannada-actress-krishi-thapanda-reaction-on-friend-vaishak-demise/articleshow-xz97srd</guid>
            <pubDate>Mon, 29 Jun 2026 09:03:26 +0530</pubDate>
            <description><![CDATA[&lt;p&gt;kannada actress krishi thapanda: ನಟಿ, ಬಿಗ್&zwnj; ಬಾಸ್&zwnj; ಸ್ಪರ್ಧಿ ಕೃಷಿ ತಾಪಂಡ ಅವರ ಮನೆಯಲ್ಲಿ ಗೆಳೆಯ ವೈಶಾಖ್ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈಗ ಕೃಷಿ ತಾಪಂಡ ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಕೃಷಿ ಈಗ ಏನು ಹೇಳ್ತಿದ್ದಾರೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw8pvd5rt4tbbkm0ypnd30j6,imgname-new-project---2026-06-29t085933.048-1782703830200.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ, ಬಿಗ್&zwnj; ಬಾಸ್&zwnj; ಸ್ಪರ್ಧಿ ಕೃಷಿ ತಾಪಂಡ ಅವರ ( kannada actress krishi thapanda ) ಮನೆಯಲ್ಲಿ ವೈಶಾಖ್&zwnj; ಎನ್ನುವವರು ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈ ಹಿಂದೆ ಕೃಷಿ ಅವರು ಬೇರೆ ಹುಡುಗಗನ್ನು ಪ್ರೀತಿ ಮಾಡುತ್ತಿದ್ದು, ಕೃಷಿಗೆ ಅಕ್ರಮ ಸಂಬಂಧ ಇದೆ ಎಂದು ಅವರು ಆರೋಪ ಮಾಡಿದ್ದರು. ಆ ಬಳಿಕ ವೈಶಾಖ್&zwnj; ಜೊತೆ ಸಂಬಂಧ ಇದೆ ಎಂಬ ಆರೋಪ ಇತ್ತು. ಈಗ ಕೃಷಿ ಈ ಬಗ್ಗೆ ಸೋಶಿಯಲ್&zwnj; ಮೀಡಿಯಾ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;h2&gt;ಕೃಷಿ ತಾಪಂಡ ಏನಂದ್ರು?&amp;nbsp;&lt;/h2&gt;&lt;p&gt;ಇಂತಹದ್ದೊಂದನ್ನು ನಾನು ಬರೆಯಬೇಕಾಗಿ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದನ್ನು ಬರೆಯಲು ಅಥವಾ ಜಗತ್ತಿನ ಮುಂದೆ ಇಡಲು ನನ್ನಲ್ಲಿ ಶಕ್ತಿಯಾಗಲಿ ಅಥವಾ ಮಾನಸಿಕ ನೆಮ್ಮದಿಯಾಗಲಿ ಇಲ್ಲ. ಇಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡುವುದು ನನಗಿಷ್ಟವಿರಲಿಲ್ಲ. ಆದರೆ ನನ್ನ ಮೇಲೆ, ನನ್ನ ಸ್ನೇಹಿತರ ಮೇಲೆ ಹಾಗೂ ನಮ್ಮ ಕುಟುಂಬಗಳ ಮೇಲೆ ಬರುತ್ತಿರುವ ತೀವ್ರ ಒತ್ತಡ, ನಿರಂತರ ಊಹಾಪೋಹಗಳು ಮತ್ತು ಪದೇ ಪದೇ ಕೇಳಲಾಗುತ್ತಿರುವ ಪ್ರಶ್ನೆಗಳಿಂದಾಗಿ ನಾನು ಇದನ್ನು ಮಾಡಬೇಕಾಗಿ ಬಂದಿದೆ. ಊಹಿಸಲೂ ಸಾಧ್ಯವಾಗದ ಇಂತಹ ದೊಡ್ಡ ನಷ್ಟವನ್ನು ಎದುರಿಸುತ್ತಾ, ನಾವು ಕೇವಲ ಬದುಕಲು ಹೆಣಗಾಡುತ್ತಿರುವ ಈ ಸಮಯದಲ್ಲಿ, ನಾವು ಅದಕ್ಕೆ ವಿವರಣೆ ನೀಡಬೇಕು ಎಂದು ನಿರೀಕ್ಷಿಸಲಾಗುತ್ತಿದೆ. ಕಳೆದ ಕೆಲವು ದಿನಗಳು ನನ್ನ ಜೀವನವನ್ನು ನಾನು ಎಂದಿಗೂ ಯೋಚಿಸದ ರೀತಿಯಲ್ಲಿ ಬದಲಾಯಿಸಿವೆ.&lt;/p&gt;&lt;p&gt;ಇಷ್ಟೆಲ್ಲಾ ನಡೆದಿರುವ ನಡುವೆ, ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ಒಬ್ಬರನ್ನು ನಾನು ಕಳೆದುಕೊಂಡಿದ್ದೇನೆ&mdash;ನನ್ನ ಪರವಾಗಿ ನಿಂತು, ನನ್ನನ್ನು ರಕ್ಷಿಸಿ, ಕೇವಲ ದಯೆಯುಳ್ಳ ಹೃದಯದಿಂದ ನನ್ನನ್ನು ನೋಡಿಕೊಂಡಿದ್ದ ವ್ಯಕ್ತಿ ಅವರು. ಅವರನ್ನು ಕಳೆದುಕೊಂಡಿರುವುದು ಪದಗಳಲ್ಲಿ ವಿವರಿಸಲಾಗದ ಶೂನ್ಯತೆಯನ್ನು ಸೃಷ್ಟಿಸಿದೆ. ಈ ನಷ್ಟವನ್ನು ನಾನು ಎಂದಾದರೂ ಒಪ್ಪಿಕೊಳ್ಳಲು ಸಾಧ್ಯವೇ ಎಂದು ನನಗೆ ತಿಳಿಯುತ್ತಿಲ್ಲ.&lt;/p&gt;&lt;p&gt;ನಾನು ಬಹಳ ದಿನಗಳಿಂದ ನೋವನ್ನು ಅನುಭವಿಸುತ್ತಾ ಬಂದಿದ್ದೇನೆ, ಮತ್ತು ಈಗ ಮತ್ತೊಂದು ಊಹಿಸಲಾಗದ ನಷ್ಟಕ್ಕೆ ಕಣ್ಣೀರಿಡುವ ಪರಿಸ್ಥಿತಿ ಎದುರಾಗಿದೆ. ಈ ಹಾದಿಯಲ್ಲಿ ನನ್ನೊಳಗಿನ ಕೆಲವು ಭಾಗಗಳನ್ನೇ ನಾನು ಕಳೆದುಕೊಂಡಂತೆ ಭಾಸವಾಗುತ್ತಿದೆ.&lt;/p&gt;&lt;p&gt;ಇದನ್ನೆಲ್ಲಾ ಎದುರಿಸುವುದನ್ನು ಮತ್ತಷ್ಟು ಕಷ್ಟವಾಗಿಸಿರುವುದು ಏನೆಂದರೆ, ನನಗೆ ದುಃಖಿಸಲು ಸಮಯವಾಗಲಿ ಅಥವಾ ನಿರಾಳತೆಯಾಗಲಿ ಸಿಗುತ್ತಿಲ್ಲ. ಅದರ ಬದಲಾಗಿ, ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರು ಈ ಅಗಾಧ ನಷ್ಟವನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ, ನಿರಂತರವಾಗಿ ಊಹಾಪೋಹಗಳು, ಕಲ್ಪನೆಗಳು ಮತ್ತು ಒಬ್ಬರ ಸಾವನ್ನು ಒಂದು ಸುದ್ದಿಯನ್ನಾಗಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಮಾಧ್ಯಮಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಗೌರವಯುತವಾಗಿ ನಡೆದುಕೊಂಡಿದ್ದರೆ, ಇನ್ನು ಕೆಲವು ಮಾಧ್ಯಮಗಳು ಪ್ರತಿಕ್ರಿಯೆಗಾಗಿ ಪ್ರಚೋದಿಸುತ್ತಲೇ ಇವೆ. ಅವರ ಮೊದಲ ಪ್ರಶ್ನೆ ಹೆಚ್ಚಾಗಿ &quot;ನಿಮ್ಮ ಪ್ರತಿಕ್ರಿಯೆ ಏನು?&quot; ಎಂದಿರುತ್ತದೆಯೇ ಹೊರತು, &quot;ನೀವು ಚೆನ್ನಾಗಿದ್ದೀರಾ?&quot; ಅಥವಾ &quot;ಇದನ್ನು ಹೇಗೆ ತಡೆದುಕೊಳ್ಳುತ್ತಿದ್ದೀರಾ?&quot; ಎಂದಿರುವುದಿಲ್ಲ.&lt;/p&gt;&lt;p&gt;ನಾನು ಯಾವುದೇ ಒಬ್ಬ ವ್ಯಕ್ತಿಯನ್ನು ಅಥವಾ ಒಂದು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿಲ್ಲ, ಬದಲಿಗೆ ಸತ್ಯವನ್ನು ತಿಳಿಯದೆ ಅಥವಾ ತಾವೇನು ಮಾಡುತ್ತಿದ್ದೇವೆ ಮತ್ತು ಅದರಿಂದ ಉಳಿದವರ ಮೇಲೆ ಆಗುತ್ತಿರುವ ಪರಿಣಾಮವೇನು ಎಂಬುದನ್ನು ಅರ್ಥಮಾಡಿಕೊಳ್ಳದೆ ಉತ್ತರಗಳಿಗಾಗಿ ಹುಡುಕುತ್ತಿರುವ ಪ್ರತಿಯೊಬ್ಬರಿಗೂ ಹೇಳುತ್ತಿದ್ದೇನೆ.&lt;/p&gt;&lt;p&gt;ದುಃಖದಲ್ಲಿರುವ ಯಾವುದೇ ವ್ಯಕ್ತಿ ತನ್ನ ನೋವನ್ನು ಸಮರ್ಥಿಸಿಕೊಳ್ಳಬೇಕು ಎಂದು ಯಾರೂ ನಿರೀಕ್ಷಿಸಬಾರದು.&lt;/p&gt;&lt;p&gt;ನನಗಾಗಿ ಪ್ರಾರ್ಥಿಸುತ್ತಿರುವ, ನನ್ನ ಕ್ಷೇಮ ಸಮಾಚಾರ ವಿಚಾರಿಸುತ್ತಿರುವ, ನನ್ನ ಸ್ನೇಹಿತರ ಮೂಲಕ ನನ್ನನ್ನು ಸಂಪರ್ಕಿಸುತ್ತಿರುವ ಮತ್ತು ದಯೆ ತುಂಬಿದ ಸಂದೇಶಗಳನ್ನು ಕಳುಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸದ್ಯಕ್ಕೆ ಪ್ರತ್ಯುತ್ತರ ನೀಡುವ ಶಕ್ತಿ ನನಗಿಲ್ಲದಿರಬಹುದು, ಆದರೆ ನಿಮ್ಮ ಪ್ರೀತಿಯನ್ನು ನಾನು ಕಾಣುತ್ತಿದ್ದೇನೆ ಮತ್ತು ಅದಕ್ಕೆ ನಾನು ಆಳವಾಗಿ ಕೃತಜ್ಞನಾಗಿದ್ದೇನೆ. ನಾನು ನನ್ನ ಸ್ನೇಹಿತರ ನಡುವೆ ಇದ್ದೇನೆ, ಮತ್ತು ನನ್ನಲ್ಲಿ ಉಳಿದಿರುವ ಅಲ್ಪಸ್ವಲ್ಪ ಶಕ್ತಿಯಿಂದಲೇ ನಡೆದಿರುವ ಎಲ್ಲವನ್ನೂ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.&lt;/p&gt;&lt;p&gt;ಮಾಧ್ಯಮಗಳಿಗೆ (ಎಲ್ಲರಿಗೂ ಅಲ್ಲ) ಮತ್ತು ಊಹಾಪೋಹಗಳನ್ನು ಮುಂದುವರಿಸುತ್ತಿರುವ ಪ್ರತಿಯೊಬ್ಬರಿಗೂ, ನಾನು ಕೈಮುಗಿದು ವಿನಂತಿಸಿಕೊಳ್ಳುತ್ತಿದ್ದೇನೆ, ದಯವಿಟ್ಟು ಇದನ್ನು ನಿಲ್ಲಿಸಿ. ದಯವಿಟ್ಟು ಅವರ ಕುಟುಂಬವನ್ನು, ನನ್ನ ಕುಟುಂಬವನ್ನು ಅಥವಾ ನಮ್ಮ ಸ್ನೇಹಿತರನ್ನು ತೊಂದರೆಗೆ ಸಿಲುಕಿಸಬೇಡಿ. ದಯವಿಟ್ಟು ಒಬ್ಬರ ಸಾವನ್ನು ಮುಖ್ಯಾಂಶಗಳನ್ನಾಗಿ ಅಥವಾ ಮನರಂಜನೆಯನ್ನಾಗಿ ಮಾಡಬೇಡಿ.&lt;/p&gt;&lt;p&gt;ಅಲ್ಲಿ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬವಿದೆ. ಮಾತುಗಳಿಗೆ ಮೀರಿದ ಪ್ರೀತಿಯನ್ನು ಹೊಂದಿದ್ದ ವ್ಯಕ್ತಿಯನ್ನು ಕಳೆದುಕೊಂಡ ಸ್ನೇಹಿತರಿದ್ದಾರೆ. ಈ ದುಃಖದ ನಡುವೆ ಪ್ರತಿ ಕ್ಷಣವೂ ಬದುಕಲು ಹೋರಾಡುತ್ತಿರುವ ಜನರಿದ್ದಾರೆ.ದಯವಿಟ್ಟು ನಮಗೆ ನೆಮ್ಮದಿಯಿಂದ ದುಃಖಿಸಲು ಅಗತ್ಯವಿರುವ ಘನತೆ ಮತ್ತು ಗೌಪ್ಯತೆಯನ್ನು ನೀಡಿ.&lt;/p&gt;&lt;p&gt;ಮಾನಸಿಕ ಆರೋಗ್ಯವು ಅತ್ಯಂತ ಸೂಕ್ಷ್ಮವಾದುದು. ದುಃಖವು ಅತ್ಯಂತ ಸೂಕ್ಷ್ಮವಾದುದು. ಪ್ರತಿಯೊಂದು ಅನಗತ್ಯ ಪ್ರಶ್ನೆ, ಪ್ರತಿಯೊಂದು ಕಲ್ಪನೆಯೂ ನೋವನ್ನು ನೀಡುತ್ತದೆ. ನಾನು ಯಾವಾಗಲೂ ನಂಬಿರುವ ಒಂದು ವಿಷಯವಿದ್ದರೆ ಅದು ಇಷ್ಟೇ: ನಿಮಗೆ ಯಾರ ಮುಖದಲ್ಲೂ ಮುಗುಳ್ನಗೆ ತರಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಅವರ ಕಣ್ಣೀರಿಗೆ ನೀವೇ ಕಾರಣವಾಗಬೇಡಿ.&lt;/p&gt;&lt;p&gt;ನಿಮಗೆ ಯಾರಿಗಾದರೂ ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಅವರು ಭರವಸೆಯನ್ನು ಕಳೆದುಕೊಳ್ಳಲು ನೀವೇ ಕಾರಣವಾಗಬೇಡಿ. ಕೈಮುಗಿದು ನಾನು ಪ್ರತಿಯೊಬ್ಬರಲ್ಲೂ ವಿನಂತಿಸಿಕೊಳ್ಳುತ್ತೇನೆ, ದಯವಿಟ್ಟು ಅವರು ಶಾಂತಿಯಿಂದ ವಿಶ್ರಮಿಸಲು ಬಿಡಿ, ಮತ್ತು ಅವರ ಕುಟುಂಬ, ಸ್ನೇಹಿತರು ಹಾಗೂ ನಮ್ಮೆಲ್ಲರಿಗೂ ನೆಮ್ಮದಿಯಿಂದ ದುಃಖಿಸಲು ಬಿಡಿ.&lt;/p&gt;&lt;p&gt;ದಯವಿಟ್ಟು ದಯೆಯನ್ನು ಆರಿಸಿಕೊಳ್ಳಿ.&lt;/p&gt;&lt;p&gt;ನಾನು ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಇದನ್ನು ನಿಲ್ಲಿಸಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/sandalwood/kannada-actress-krishi-thapanda-reaction-on-friend-vaishak-demise/articleshow-xz97srd"/>
        </item>
        <item>
            <title><![CDATA[Salman Khan-Aishwarya Rai Secret: ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್ ಸೀಕ್ರೆಟ್ ಬಿಚ್ಚಿಟ್ಟ ಸಾದಿಯಾ ಸಿದ್ದಿಕಿ; ಇಲ್ಲಿರೋದು ಹೊಸ ವಿಷಯ!]]></title>
            <link>https://kannada.asianetnews.com/entertainment/sadiya-siddiqui-who-is-aishwarya-rai-shabd-says-she-always-came-fully-prepared-even-after-breakup-with-salman-khan/articleshow-xrwf81g</link>
            <guid isPermaLink="true">https://kannada.asianetnews.com/entertainment/sadiya-siddiqui-who-is-aishwarya-rai-shabd-says-she-always-came-fully-prepared-even-after-breakup-with-salman-khan/articleshow-xrwf81g</guid>
            <pubDate>Mon, 29 Jun 2026 09:17:15 +0530</pubDate>
            <description><![CDATA[&lt;p&gt;ವಿಶ್ವಸುಂದರಿ ಪಟ್ಟ ಪಡೆದಿದ್ದ ಐಶ್ವರ್ಯಾ ರೈ ಕೇವಲ ಸುಂದರಿ ಮಾತ್ರವಲ್ಲ, ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಅದೇನು ಮಾಡಿದ್ದರು ಎಂಬ ಸೀಕ್ರೆಟ್ ಇಲ್ಲಿ ರಿವೀಲ್ ಆಗಿದೆ. ಈ ಸಂಗತಿಯನ್ನು ಸಹನಟಿ ಸಾದಿಯಾ ಹೇಳಿದ್ದಾರೆ. ಮುಂದೆ 2007ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw8q5e64xvatftw072hexs4d,imgname-sadiya-siddiqui-aishwarya-rai-1782704158916.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್-ಬ್ರೇಕಪ್ ಸೀಕ್ರೆಟ್!&lt;/strong&gt;&lt;/p&gt;&lt;p&gt;ಬಾಲಿವುಡ್ ಲೋಕದಲ್ಲಿ ಪ್ರೇಮಕಥೆಗಳಿಗೆ, ಗಾಸಿಪ್&zwnj;ಗಳಿಗೆ ಯಾವತ್ತೂ ಬರ ಇಲ್ಲ. ಕೆಲವೊಮ್ಮೆ ಅದು ಸಾಕಷ್ಟು ವಿವಾದಗಳ ಲೋಕ ಕೂಡ. ಅದರಲ್ಲೂ ವಿಶ್ವಸುಂದರಿ ಐಶ್ವರ್ಯಾ ರೈ (Aishwarya Rai) ಮತ್ತು ಸುಲ್ತಾನ್ ಸಲ್ಮಾನ್ ಖಾನ್ (Salman Khan) ಅವರ ಪ್ರೇಮಕಥೆ ಹಾಗೂ ಬ್ರೇಕಪ್ ಇಂದಿಗೂ ಸಿನಿಪ್ರೆಮಿಗಳ ಮೆಚ್ಚಿನ ಚರ್ಚೆಯ ವಿಷಯ. ಈಗ ಇದೇ ವಿಚಾರವಾಗಿ ಐಶ್ವರ್ಯಾ ರೈ ಅವರ ವೃತ್ತಿಪರತೆಯನ್ನು ಕೊಂಡಾಡಿರುವ ನಟಿ ಸಾದಿಯಾ ಸಿದ್ದಿಕಿ, ಅಂದಿನ ಕಾಲದ ಹಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;ವೈಯಕ್ತಿಕ ನೋವಿನ ನಡುವೆಯೂ ಐಶ್ವರ್ಯಾ ವೃತ್ತಿಪರತೆ:&lt;/h2&gt;&lt;p&gt;2005ರಲ್ಲಿ ಬಿಡುಗಡೆಯಾದ 'ಶಬ್ದ್' (Shabd) ಸಿನಿಮಾದಲ್ಲಿ ಐಶ್ವರ್ಯಾ ರೈ ಜೊತೆ ಕೆಲಸ ಮಾಡಿದ ಅನುಭವವನ್ನು ಸಾದಿಯಾ ಸಿದ್ದಿಕಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ನೆನಪು ಮಾಡಿಕೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಆ ಕಹಿ ಘಟನೆ ಮತ್ತು ಕಠಿಣ ಬ್ರೇಕಪ್ ಬಗ್ಗೆ ನಂತರದ ದಿನಗಳಲ್ಲಿ ಐಶ್ವರ್ಯಾ ತಮ್ಮ ವೈಯಕ್ತಿಕ ನೋವನ್ನು ಎಲ್ಲಿಯೂ ತೋರ್ಪಡಿಸಲಿಲ್ಲವಂತೆ. &quot;ಅವರು ತಮ್ಮ ಭಾವನೆಗಳನ್ನು ತುಂಬಾ ಚೆನ್ನಾಗಿ ಮರೆಮಾಚುತ್ತಿದ್ದರು&quot; ಎಂದು ಸಾದಿಯಾ ಹೇಳಿದ್ದಾರೆ.&lt;/p&gt;&lt;p&gt;ಸಾದಿಯಾ ಹೇಳುವ ಪ್ರಕಾರ, ಐಶ್ವರ್ಯಾ ಎಂದಿಗೂ ಸೆಟ್&zwnj;ಗೆ ತಯಾರಿಯಿಲ್ಲದೆ ಬರುತ್ತಿರಲಿಲ್ಲ. &quot;ಅವರು ಯಾವಾಗಲೂ ಸಂಪೂರ್ಣ ಸಿದ್ಧತೆಯೊಂದಿಗೆ ಬರುತ್ತಿದ್ದರು. ಸ್ಕ್ರಿಪ್ಟ್ ಅನ್ನು ವಿವರವಾಗಿ ಓದುತ್ತಿದ್ದರು ಮತ್ತು ತಮ್ಮ ಪಾತ್ರವನ್ನು ಹೆಣೆದಿರುವ ರೀತಿ, ಅಲ್ಲಿನ ಮನೋವಿಜ್ಞಾನದ ಬಗ್ಗೆ ಚರ್ಚಿಸುತ್ತಿದ್ದರು. ಅವರ ವೃತ್ತಿಪರತೆ ಕಂಡು ನಾನು ಬೆರಗಾಗಿದ್ದೆ,&quot; ಎಂದು ಸಾದಿಯಾ ಹೇಳಿದ್ದಾರೆ.&lt;/p&gt;&lt;p&gt;ಸಲ್ಮಾನ್-ಐಶ್ವರ್ಯಾ ಸಂಬಂಧದ ಆ ಕಹಿ ದಿನಗಳು:&lt;/p&gt;&lt;p&gt;ಸಂಜಯ್ ಲೀಲಾ ಭನ್ಸಾಲಿಯವರ 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದ ಚಿತ್ರೀಕರಣದ ವೇಳೆ ಐಶ್ವರ್ಯಾ ಮತ್ತು ಸಲ್ಮಾನ್ ಪ್ರೀತಿಸತೊಡಗಿದ್ದರು. ಇಡೀ ಬಾಲಿವುಡ್ ಇವರ ಮದುವೆಯ ನಿರೀಕ್ಷೆಯಲ್ಲಿತ್ತು. ಆದರೆ 2002ರಲ್ಲಿ ಈ ಸಂಬಂಧ ಅಧಿಕೃತವಾಗಿ ಮುಕ್ತಾಯವಾಯಿತು. ಸಲ್ಮಾನ್ ಅವರ ದುವರ್ತನೆಯೇ ಈ ಬ್ರೇಕಪ್&zwnj;ಗೆ ಕಾರಣ ಎಂದು ಐಶ್ವರ್ಯಾ ಆಗ ಹೇಳಿದ್ದರು. ಇದರ ನಂತರ 2003ರಲ್ಲಿ ವಿವೇಕ್ ಒಬೆರಾಯ್ ನಡೆಸಿದ ಪತ್ರಿಕಾಗೋಷ್ಠಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇಷ್ಟೆಲ್ಲಾ ಮಾನಸಿಕ ಒತ್ತಡಗಳ ನಡುವೆಯೂ ಐಶ್ವರ್ಯಾ 'ಶಬ್ದ್' ಚಿತ್ರದ ಶೂಟಿಂಗ್&zwnj;ನಲ್ಲಿ ಭಾಗವಹಿಸಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿದ್ದರು.&lt;/p&gt;&lt;h3&gt;ಸಂಜಯ್ ದತ್ ಅವರ ವಿಭಿನ್ನ ಶೈಲಿ:&lt;/h3&gt;&lt;p&gt;ಇದೇ ಇಂಟರ್&zwnj;ವ್ಯೂದಲ್ಲಿ ಸಾದಿಯಾ ಅವರು ಸಂಜಯ್ ದತ್ ಅವರ ಬಗ್ಗೆಯೂ ಮಾತನಾಡಿದ್ದಾರೆ. &quot;ಸಂಜಯ್ ದತ್ ಅವರೊಂದಿಗೆ ನನ್ನ ಮೊದಲ ದೃಶ್ಯ ಅಡುಗೆ ಮನೆಯಲ್ಲಿತ್ತು. ನಾನು ಸಂಭಾಷಣೆಗಳನ್ನು ರಿಹರ್ಸಲ್ ಮಾಡೋಣವೇ ಎಂದು ಕೇಳಿದಾಗ, ನಿರ್ದೇಶಕಿ ಲೀನಾ ಯಾದವ್ ಬಂದು, 'ಸಂಜು ಬಾಬಾ ರಿಹರ್ಸಲ್ ಮಾಡಲು ಅಷ್ಟಾಗಿ ಇಷ್ಟಪಡುವುದಿಲ್ಲ, ನೀವು ನಿಮ್ಮ ತಯಾರಿ ಮಾಡಿಕೊಳ್ಳಿ' ಎಂದರು. ಇದು ನನಗೆ ಸ್ವಲ್ಪ ಅಚ್ಚರಿ ತಂದಿತು, ಆದರೆ ಸಂಜಯ್ ದತ್ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಅದ್ಭುತವಾಗಿ ನಟಿಸುತ್ತಿದ್ದರು. ಅದನ್ನು ನೋಡಿ ನಾನು ನಿಜವಾಗಿಯೂ ಬೆರಗಾಗಿದ್ದೆ,&quot; ಎಂದಿದ್ದಾರೆ.&lt;/p&gt;&lt;p&gt;'ಶಬ್ದ್' ಚಿತ್ರದ ಬಗ್ಗೆ:&lt;/p&gt;&lt;p&gt;ಲೀನಾ ಯಾದವ್ ನಿರ್ದೇಶನದ 'ಶಬ್ದ್' ಚಿತ್ರದಲ್ಲಿ ಸಂಜಯ್ ದತ್, ಐಶ್ವರ್ಯಾ ರೈ ಮತ್ತು ಜಾಯೆದ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವು ಒಬ್ಬ ಬರಹಗಾರನ ಕಲ್ಪನೆ ಮತ್ತು ವಾಸ್ತವದ ನಡುವಿನ ಸಂಘರ್ಷದ ಕಥೆಯಾಗಿತ್ತು. ಐಶ್ವರ್ಯಾ ಈ ಚಿತ್ರದಲ್ಲಿ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದರು. ಜೊತೆಗೆ ಅವರ ನಟನೆಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.&lt;/p&gt;&lt;p&gt;ಒಟ್ಟಾರೆಯಾಗಿ, ವಿಶ್ವಸುಂದರಿ ಪಟ್ಟ ಪಡೆದಿದ್ದ ಐಶ್ವರ್ಯಾ ರೈ ಕೇವಲ ಸುಂದರಿ ಮಾತ್ರವಲ್ಲ, ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಕೆಲಸಕ್ಕೆ ಮೊದಲ ಆದ್ಯತೆ ನೀಡುವ ಗಟ್ಟಿ ಮನಸ್ಸಿನ ಮಹಿಳೆ ಎಂಬುದನ್ನು ಸಹನಟಿ ಸಾದಿಯಾ ಮಾತುಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ಮುಂದೆ 2007ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದ ಐಶ್ವರ್ಯಾ ರೈ, ಈಗ ಆರಾಧನಾ ತಾಯಿಯಾಗಿ ಲೈಫ್ ಲೀಡ್ ಮಾಡುತ್ತಿದ್ದಾರೆ. ಸಿನಿಮಾದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ ಐಶ್ವರ್ಯಾ ರೈ. ಆದರೆ ಸಲ್ಮಾನ್ ಖಾನ್ ಇಂದಿಗೂ ಸಿಂಗಲ್ ಆಗಿಯೇ ಉಳಿದಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/sadiya-siddiqui-who-is-aishwarya-rai-shabd-says-she-always-came-fully-prepared-even-after-breakup-with-salman-khan/articleshow-xrwf81g"/>
        </item>
        <item>
            <title><![CDATA[75 ವರ್ಷದ ಸಿನಿ ನೆನಪುಗಳಿಗೆ ತೆರೆ: ಇತಿಹಾಸದ ಪುಟ ಸೇರಿದ ಅರಸೀಕೆರೆಯ ಸಾಧನ ಚಿತ್ರಮಂದಿರ]]></title>
            <link>https://kannada.asianetnews.com/karnataka-districts/hassan-district-arasikere-75-year-old-sadhana-theatre-building-demolition-mrq/articleshow-aw2adw3</link>
            <guid isPermaLink="true">https://kannada.asianetnews.com/karnataka-districts/hassan-district-arasikere-75-year-old-sadhana-theatre-building-demolition-mrq/articleshow-aw2adw3</guid>
            <pubDate>Mon, 29 Jun 2026 07:38:22 +0530</pubDate>
            <description><![CDATA[ಅರಸೀಕೆರೆಯ 75 ವರ್ಷಗಳ ಇತಿಹಾಸವಿದ್ದ, ಪಂಚಭಾಷಾ ಚಿತ್ರಗಳ ಪ್ರದರ್ಶನಕ್ಕೆ ಹೆಸರಾಗಿದ್ದ ಸಾಧನ ಚಿತ್ರಮಂದಿರ ಇದೀಗ ತೆರವುಗೊಳ್ಳುತ್ತಿದೆ. ಮಲ್ಟಿಪ್ಲೆಕ್ಸ್ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದಾಗಿ, ಒಂದು ಕಾಲದ ಜನಪ್ರಿಯ ಮನರಂಜನಾ ತಾಣವಾಗಿದ್ದ ಈ ಚಿತ್ರಮಂದಿರವು ಇದೀಗ ಇತಿಹಾಸದ ಪುಟ ಸೇರುತ್ತಿದ್ದು, ಅದರ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw8j03d8sc4mc7hx3ep98ynp,imgname-arasikere-1782698741160.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ಒಂದು ಕಾಲದಲ್ಲಿ ಅರಸೀಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಮನರಂಜನೆಯ ಪ್ರಮುಖ ತಾಣವಾಗಿದ್ದ ಸಾಧನ ಚಿತ್ರಮಂದಿರ ಇದೀಗ ನೆನಪುಗಳ ಲೋಕಕ್ಕೆ ಸೇರಿದೆ. ಸುಮಾರು ಏಳು ದಶಕಗಳ ಕಾಲ ಸಾವಿರಾರು ಸಿನಿಪ್ರಿಯರ ನಗು, ಸಂಭ್ರಮ ಮತ್ತು ಚಪ್ಪಾಳೆಗಳಿಗೆ ಸಾಕ್ಷಿಯಾಗಿದ್ದ ಈ ಚಿತ್ರಮಂದಿರದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದ್ದು, ನಗರದ ಜನರಲ್ಲಿ ಭಾವನಾತ್ಮಕ ಕ್ಷಣಗಳನ್ನು ಮೂಡಿಸಿದೆ.&lt;/p&gt;&lt;p&gt;ಸ್ವಾತಂತ್ರ್ಯಾನಂತರದ ಆರಂಭಿಕ ವರ್ಷಗಳಲ್ಲಿ ನಿರ್ಮಾಣಗೊಂಡ ಸಾಧನ ಚಿತ್ರಮಂದಿರವು ಆ ಕಾಲದ ಆಧುನಿಕ ಪ್ರೊಜೆಕ್ಟರ್&zwnj; ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡ ಸೇರಿದಂತೆ ಪಂಚಭಾಷೆಗಳ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿತ್ತು. ನಗರದ ಪ್ರಮುಖ ರಸ್ತೆಯಾದ ಬಿ. ಎಚ್. ರಸ್ತೆಯ ಪಕ್ಕದಲ್ಲಿದ್ದ ಈ ಚಿತ್ರಮಂದಿರವು ಹೊಸ ಚಿತ್ರಗಳ ಪ್ರದರ್ಶನಕ್ಕೆ ಹೆಸರಾಗಿದ್ದು, ಸಿನಿರಸಿಕರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿತ್ತು. ಅಂದಿನ ದಿನಗಳಲ್ಲಿ ರತ್ನ ಹಾಗೂ ಶ್ರೀ ವೆಂಕಟೇಶ್ವರ ಚಿತ್ರಮಂದಿರಗಳಿಗೆ ಸಮಾನ ಪೈಪೋಟಿ ನೀಡುತ್ತಿದ್ದ ಸಾಧನ ಚಿತ್ರಮಂದಿರವು ತಮಿಳು, ಹಿಂದಿ ಮತ್ತು ಕನ್ನಡ ಚಿತ್ರಗಳ ಪ್ರದರ್ಶನದಿಂದ ವಿಶಿಷ್ಟ ಸ್ಥಾನವನ್ನು ಗಳಿಸಿತ್ತು.&amp;nbsp;&lt;/p&gt;&lt;p&gt;ವಿಶೇಷವಾಗಿ ತಮಿಳು ಚಿತ್ರಗಳು ಬಿಡುಗಡೆಯಾದ ಸಂದರ್ಭಗಳಲ್ಲಿ ಹಾಸನ ರಸ್ತೆಯ ಭಾಗದ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದರೆ, ಹಿಂದಿ ಚಿತ್ರಗಳ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ಹಿಂದಿ ಭಾಷಾ ಅಭಿಮಾನಿಗಳು ಚಿತ್ರಮಂದಿರವನ್ನು ತುಂಬಿಸುತ್ತಿದ್ದರು.&lt;/p&gt;&lt;h2&gt;&lt;strong&gt;ಹಲವು ಕಲಾವಿದರು ಭೇಟಿ ನೀಡಿರುವ ಚಿತ್ರಮಂದಿರ&lt;/strong&gt;&lt;/h2&gt;&lt;p&gt;ಕನ್ನಡ ಚಿತ್ರರಂಗದ ಅನೇಕ ಯಶಸ್ವಿ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿದ್ದು, &lsquo;ಭಾಗ್ಯದ ಬಾಗಿಲು &rsquo; ಚಿತ್ರವು ಶತದಿನೋತ್ಸವ ಆಚರಿಸಿದ್ದ ನೆನಪು ಇಂದಿಗೂ ಸಿನಿಪ್ರಿಯರ ಮನಸ್ಸಿನಲ್ಲಿ ಉಳಿದಿದೆ. ಈ ಸಂದರ್ಭದಲ್ಲಿ ವರನಟ ಡಾ. ರಾಜ್&zwnj;ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಹಾಗೂ ಇತ್ತೀಚಿನ ದಿನಗಳಲ್ಲಿ ನಟ ಸುದೀಪ್ ಸೇರಿದಂತೆ ಹಲವು ಕಲಾವಿದರು ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರೆಂದು ಸ್ಥಳೀಯರು ಸ್ಮರಿಸುತ್ತಾರೆ. ಆದರೆ ಕಾಲ ಬದಲಾದಂತೆ ಮಲ್ಟಿಪ್ಲೆಕ್ಸ್ ಸಂಸ್ಕೃತಿ, ಡಿಜಿಟಲ್ ತಂತ್ರಜ್ಞಾನ, ಇಂಟರ್&zwnj;ನೆಟ್ ಹಾಗೂ ಮೊಬೈಲ್ ಆಧಾರಿತ ಮನರಂಜನಾ ವೇದಿಕೆಗಳ ಪ್ರಭಾವದಿಂದ ಏಕಪರದೆ ಚಿತ್ರಮಂದಿರಗಳ ಅಸ್ತಿತ್ವಕ್ಕೆ ಸವಾಲು ಎದುರಾಯಿತು. ಪ್ರೇಕ್ಷಕರ ಸಂಖ್ಯೆ ಕುಸಿಯುತ್ತಾ ಬಂದ ಪರಿಣಾಮ ನಿರ್ವಹಣಾ ವೆಚ್ಚ ಹಾಗೂ ವಿದ್ಯುತ್ ಬಿಲ್&zwnj;ಗಳ ಹೊರೆ ಹೆಚ್ಚಾಗಿದ್ದು, ಚಿತ್ರಮಂದಿರವನ್ನು ಮುಂದುವರಿಸುವುದು ಕಷ್ಟಕರವಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೆಪಿಎಸ್ ಬೇಡ, ನಮ್ಮೂರ ಸರ್ಕಾರಿ ಶಾಲೆ ನಮ್ಮೂರಲ್ಲೇ ಉಳಿಯಲಿ: ಗ್ರಾಮಸ್ಥರ ಪ್ರತಿಭಟನೆ&lt;/strong&gt;&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಚಿತ್ರಮಂದಿರದ ಮಾಲೀಕರು ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅದರ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಅರಸೀಕೆರೆಯ ಸಿನಿ ಸಂಸ್ಕೃತಿಯ ಒಂದು ಮಹತ್ವದ ಅಧ್ಯಾಯಕ್ಕೆ ಅಧಿಕೃತವಾಗಿ ತೆರೆ ಬಿದ್ದಂತಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶೇಖಿ ಅಣ್ಣನ ಅಂಗಡಿಗೆ ಬೀಗ; ಅಕ್ಷರಗಳ ಯುಗಕ್ಕೆ ತೆರೆ ಓದುಗರ ಮನದಲ್ಲಿ ಉಳಿದ ಅಯ್ನೋರ ನೆನಪು&lt;/strong&gt;&lt;/p&gt;]]></content:encoded>
            <category>news-entertainment</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-district-arasikere-75-year-old-sadhana-theatre-building-demolition-mrq/articleshow-aw2adw3"/>
        </item>
        <item>
            <title><![CDATA[Chiranjeevi: ಲೇಡಿ ಗೆಟಪ್‌ನಲ್ಲಿ ಮೆಗಾಸ್ಟಾರ್: ಮೀಸೆ ಇಲ್ಲದ ಗಂಡನನ್ನು ನೋಡಿ ಪತ್ನಿ ಸುರೇಖಾ ಕೊಟ್ಟ ವಾರ್ನಿಂಗ್ ಏನು?]]></title>
            <link>https://kannada.asianetnews.com/entertainment/chiranjeevi-recalls-wife-surekhas-stern-warning-for-his-lady-getup-gvd/articleshow-uulonc9</link>
            <guid isPermaLink="true">https://kannada.asianetnews.com/entertainment/chiranjeevi-recalls-wife-surekhas-stern-warning-for-his-lady-getup-gvd/articleshow-uulonc9</guid>
            <pubDate>Sun, 28 Jun 2026 23:29:12 +0530</pubDate>
            <description><![CDATA[&lt;p&gt;Megastar Chiranjeevi ತಮ್ಮ ವೃತ್ತಿಜೀವನದಲ್ಲಿ ಹಲವು ಅದ್ಭುತ ಪಾತ್ರಗಳನ್ನು ಮಾಡಿದ್ದಾರೆ. ಅದರಲ್ಲಿ ಲೇಡಿ ಗೆಟಪ್&zwnj;ಗಳೂ ಸೇರಿವೆ. ಮೊದಲ ಬಾರಿಗೆ ಮೀಸೆ ಇಲ್ಲದೆ ಹೆಣ್ಣಿನ ವೇಷದಲ್ಲಿ ಕಂಡಾಗ ಅವರ ಪತ್ನಿ ಸುರೇಖಾ ಮತ್ತು ತಾಯಿ ಅಂಜನಮ್ಮ ಏನೆಂದರು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw7k1szs95rc3gdbgapkx3zq,imgname-vjv-1782666291193.png" type="image/jpeg" height="390" width="690"/>
            <content:encoded><![CDATA[&lt;p&gt;ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದು ಸ್ವಂತವಾಗಿ ಬೆಳೆದವರು ಮೆಗಾಸ್ಟಾರ್ ಚಿರಂಜೀವಿ. 45 ವರ್ಷಗಳ ತಮ್ಮ ಸಿನಿಮಾ ಕೆರಿಯರ್&zwnj;ನಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಕೆಲವೊಮ್ಮೆ ತಮ್ಮ ಸ್ಟಾರ್ ಇಮೇಜ್ ಬದಿಗಿಟ್ಟು ಲೇಡಿ ಗೆಟಪ್&zwnj;ಗಳನ್ನು ಕೂಡ ಹಾಕಿದ್ದಾರೆ. ಮದುವೆಯಾದ ನಂತರ ಒಂದು ಸಿನಿಮಾದಲ್ಲಿ ಮೀಸೆ ತೆಗೆದು, ಫಾರಿನ್ ಗೌನ್ ಧರಿಸಿ ಹಾಡಿಗೆ ಹೆಜ್ಜೆ ಹಾಕಬೇಕಾಗಿ ಬಂದಿತ್ತು. ಆಗ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ.&lt;/p&gt;&lt;p&gt;ಚಿರಂಜೀವಿ ಎರಡು ಸಿನಿಮಾಗಳಲ್ಲಿ ಲೇಡಿ ಗೆಟಪ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ಜಂಧ್ಯಾಲ ನಿರ್ದೇಶನದ 'ಚಂಟಬ್ಬಾಯಿ' ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರಕ್ಕಾಗಿ ಗೌನು, ಟೋಪಿ ಧರಿಸಿ ಹೆಣ್ಣಿನ ವೇಷದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ನಗಿಸಿದ್ದರು. ಇದಕ್ಕೂ ಮುನ್ನ 'ಪಟ್ಟಣಂ ವಚ್ಚಿನ ಪತಿವ್ರತಲು' ಚಿತ್ರದಲ್ಲೂ ಮೋಹನ್ ಬಾಬು ಜೊತೆ ಲೇಡಿ ಗೆಟಪ್ ಹಾಕಿದ್ದರು. ಆದರೆ 'ಚಂಟಬ್ಬಾಯಿ' ಸಿನಿಮಾ ಸಮಯದಲ್ಲಿ ಮನೆಯವರಿಂದ ಬೈಗುಳ ಕೇಳಬೇಕಾಯಿತಂತೆ.&lt;/p&gt;&lt;p&gt;ಲೇಡಿ ಗೆಟಪ್ ಬಗ್ಗೆ ಚಿರಂಜೀವಿ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದರು. 'ಚಂಟಬ್ಬಾಯಿ' ಚಿತ್ರದ ಆ ಪಾತ್ರ ನನಗೆ ಸರಿಹೊಂದಲಿಲ್ಲ ಎಂದು ನನ್ನ ಕುಟುಂಬದವರು ಹೇಳಿದರು. ನನ್ನನ್ನು ಹಾಗೆ ನೋಡಲು ಅವರಿಗೆ ಇಷ್ಟವಿರಲಿಲ್ಲ. 'ಏನಿದು' ಎಂದು ಅಮ್ಮ ಅಂಜನಮ್ಮ ಬೈದರು. ಇನ್ನು ಸುರೇಖಾ, 'ಮತ್ತೆ ಮೀಸೆ ಬರುವವರೆಗೂ ನನ್ನ ಕಣ್ಣಿಗೆ ಕಾಣಿಸಿಕೊಳ್ಳಬೇಡಿ' ಎಂದು ವಾರ್ನಿಂಗ್ ಕೊಟ್ಟಳು ಎಂದು ಚಿರಂಜೀವಿ ಆ ದಿನಗಳನ್ನು ನೆನಪಿಸಿಕೊಂಡರು.&lt;/p&gt;&lt;p&gt;ಲೇಡಿ ಗೆಟಪ್&zwnj;ಗಾಗಿ ಮೀಸೆ ತೆಗೆಯಬೇಕಾಗಿ ಬಂದಾಗ, ಚಿರಂಜೀವಿ ನಿರ್ದೇಶಕ ಜಂಧ್ಯಾಲಗೆ ಒಂದು ಷರತ್ತು ಹಾಕಿದರಂತೆ. ಶೂಟಿಂಗ್&zwnj;ನಲ್ಲಿದ್ದ 70 ಸಿಬ್ಬಂದಿ ಕೂಡ ಮೀಸೆ ತೆಗೆದರೆ ಮಾತ್ರ ತಾನೂ ತೆಗೆಯುವುದಾಗಿ ಹೇಳಿದ್ದರು. ಇದಕ್ಕೆ ಎಲ್ಲರೂ ಒಪ್ಪಿದ್ದರಿಂದ ಚಿರಂಜೀವಿಗೂ ಮೀಸೆ ತೆಗೆಯುವುದು ಅನಿವಾರ್ಯವಾಯಿತು. ಅಷ್ಟೇ ಅಲ್ಲ, ನಿರ್ದೇಶಕ ಜಂಧ್ಯಾಲ ಅಲ್ಲಿನ ಹಲವರ ಬಳಿ ಲೇಡಿ ಗೆಟಪ್ ಕೂಡ ಹಾಕಿಸಿದರಂತೆ. ತಾನು ಮಾತ್ರ ಇರಿಸುಮುರಿಸು ಅನುಭವಿಸಬಾರದು ಎಂದು ನಿರ್ದೇಶಕರು ಹೀಗೆ ವಿಭಿನ್ನವಾಗಿ ಯೋಚಿಸಿದ್ದರಂತೆ.&lt;/p&gt;&lt;h2&gt;&lt;strong&gt;ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ&lt;/strong&gt;&lt;/h2&gt;&lt;p&gt;ಮೆಗಾಸ್ಟಾರ್ ಚಿರಂಜೀವಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 70ರ ವಯಸ್ಸಿನಲ್ಲೂ ಯುವ ನಟರಿಗೆ ಪೈಪೋಟಿ ನೀಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ 'ಮನ ಶಂಕರ ವರಪ್ರಸಾದಗಾರು' ಸಿನಿಮಾ ಮೂಲಕ ಸಂಕ್ರಾಂತಿಗೆ ಭರ್ಜರಿ ಹಿಟ್ ಕೊಟ್ಟ ಚಿರಂಜೀವಿ, ಸದ್ಯ ಬಾಬಿ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಮುಂದಿನ ಸಂಕ್ರಾಂತಿಗೂ ಸ್ಪರ್ಧೆಯಲ್ಲಿರಲು ಅವರು ಸಿದ್ಧರಾಗಿದ್ದಾರೆ. ಇದರ ನಡುವೆ 'ವಿಶ್ವಂಭರ' ಕೂಡ ಬಿಡುಗಡೆಯಾಗುವ ಸಾಧ್ಯತೆಗಳಿವೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/chiranjeevi-recalls-wife-surekhas-stern-warning-for-his-lady-getup-gvd/articleshow-uulonc9"/>
        </item>
        <item>
            <title><![CDATA[Nithyananda: ಹೆಂಡ್ತಿ ಬೈದ್ರೂ ಕೇಳ್ಲಿಲ್ಲ, ಚಕ್ಕಂದ ಆಡಿದ ಸ್ವಾಮೀಜಿಗೆ 1 ಲಕ್ಷ ಪಂಗನಾಮ ಹಾಕಿದ ಖ್ಯಾತ ನಿರ್ದೇಶಕ!]]></title>
            <link>https://kannada.asianetnews.com/entertainment/director-teja-recalls-cheating-controversial-godman-nithyananda-swamy-gvd/articleshow-2edd2ik</link>
            <guid isPermaLink="true">https://kannada.asianetnews.com/entertainment/director-teja-recalls-cheating-controversial-godman-nithyananda-swamy-gvd/articleshow-2edd2ik</guid>
            <pubDate>Sun, 28 Jun 2026 22:47:29 +0530</pubDate>
            <description><![CDATA[&lt;p&gt;Director Teja: ನಿತ್ಯಾನಂದ ಸ್ವಾಮಿ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಸ್ವಾಮೀಜಿಯಾಗಿ ಈತ ಅನೇಕ ಭಕ್ತರನ್ನು ಹೊಂದಿದ್ದ. ಆದರೆ, ನಿತ್ಯಾನಂದನ ಚಕ್ಕಂದಗಳು ಬಯಲಾಗುತ್ತಿದ್ದಂತೆ ಭಕ್ತರು ಇಟ್ಟಿದ್ದ ನಂಬಿಕೆ ಹುಸಿಯಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw7gspgrww12zwz0wqxkg089,imgname-vxg-1782663928344.png" type="image/jpeg" height="390" width="690"/>
            <content:encoded><![CDATA[&lt;p&gt;ಟಾಲಿವುಡ್ ನಿರ್ದೇಶಕ ತೇಜ, ವಿವಾದಿತ ಸ್ವಾಮಿ ನಿತ್ಯಾನಂದನ ಜೊತೆಗಿನ ತಮ್ಮ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ತಾನು ನಿತ್ಯಾನಂದನಿಗೆ 1 ಲಕ್ಷ ರೂಪಾಯಿ ಹೇಗೆ ಪಂಗನಾಮ ಹಾಕಿದೆ ಅನ್ನೋದನ್ನು ವಿವರಿಸಿದ್ದಾರೆ. ನಿತ್ಯಾನಂದ ಸ್ವಾಮಿ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಸ್ವಾಮೀಜಿಯಾಗಿ ಈತ ಅನೇಕ ಭಕ್ತರನ್ನು ಹೊಂದಿದ್ದ. ಆದರೆ, ನಿತ್ಯಾನಂದನ ಚಕ್ಕಂದಗಳು ಬಯಲಾಗುತ್ತಿದ್ದಂತೆ ಭಕ್ತರು ಇಟ್ಟಿದ್ದ ನಂಬಿಕೆ ಹುಸಿಯಾಯಿತು. ಕೊನೆಗೆ ಜನರು ಛೀ ಥೂ ಎನ್ನುವಷ್ಟರ ಮಟ್ಟಿಗೆ ಈತ ಕೆಳಗೆ ಬಿದ್ದು, ಅರೆಸ್ಟ್ ಕೂಡ ಆಗಿದ್ದ.&lt;/p&gt;&lt;p&gt;ನಟಿ ರಂಜಿತಾ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ನಿತ್ಯಾನಂದನ ವಿಡಿಯೋ ಲೀಕ್ ಆಗಿ, ಆತನ ಸಂಪೂರ್ಣ ಬಣ್ಣ ಬಯಲಾಗಿತ್ತು. ಈ ಘಟನೆ ನಂತರ, ಆಶ್ರಮದಲ್ಲಿದ್ದ ಇತರ ಮಹಿಳೆಯರೂ ನಿತ್ಯಾನಂದನ ಲೈಂಗಿಕ ಕಿರುಕುಳದ ಬಗ್ಗೆ ಬಾಯಿ ಬಿಟ್ಟರು. ಇದರಿಂದ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ, ಕೋರ್ಟ್&zwnj;ನಲ್ಲಿ ಕೇಸ್ ನಡೆಯುತ್ತಿರುವಾಗಲೇ ನಿತ್ಯಾನಂದ ದೇಶ ಬಿಟ್ಟು ಪರಾರಿಯಾದ. ಟಾಲಿವುಡ್&zwnj;ನ ಖ್ಯಾತ ನಿರ್ದೇಶಕ ತೇಜ, ನಿತ್ಯಾನಂದನ ಜೊತೆಗಿನ ಒಂದು ಸ್ವಾರಸ್ಯಕರ ಘಟನೆಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;'ನನ್ನ ಮಗನಿಗೆ ಆರೋಗ್ಯ ಸರಿ ಇರಲಿಲ್ಲ. ನಿತ್ಯಾನಂದ ಸ್ವಾಮಿ ಹೀಲಿಂಗ್ ಮಾಡ್ತಾರೆ, ಅವರು ಬಂದರೆ ನಿಮ್ಮ ಮಗನ ಆರೋಗ್ಯ ಸುಧಾರಿಸುತ್ತೆ ಅಂದರು. ಮಗನ ಆರೋಗ್ಯದ ವಿಷಯವಾದ್ದರಿಂದ ನಾನೂ ಸರಿ ಅಂದೆ. ಆದರೆ, ಸ್ವಾಮಿ ಬರಬೇಕಾದರೆ ಆಶ್ರಮಕ್ಕೆ 1 ಲಕ್ಷ ರೂ. ಡೊನೇಷನ್ ಕೊಡಬೇಕು ಅಂದರು. ಸರಿ ಅಂತ 1 ಲಕ್ಷದ ಚೆಕ್ ಕೊಟ್ಟೆ. ನಿತ್ಯಾನಂದ ಮನೆಗೆ ಬಂದ. ಮನೆಯಲ್ಲಿದ್ದ ಕೆಲಸದವರು, ನನ್ನ ಹೆಂಡತಿ ಎಲ್ಲರೂ ಆತನ ಕಾಲಿಗೆ ಬಿದ್ದರು. ಆದರೆ ನಾನು ಮಾತ್ರ ದೂರ ನಿಂತು ನೋಡುತ್ತಿದ್ದೆ' ಎಂದು ತೇಜ ವಿವರಿಸಿದ್ದಾರೆ.&lt;/p&gt;&lt;p&gt;ಸ್ವಾಮಿ ಹೋದ ಕೆಲವು ದಿನಗಳ ನಂತರ ನಾನು ಕೊಟ್ಟ ಚೆಕ್ ಬೌನ್ಸ್ ಆಯ್ತು. 'ಯಾಕ್ ಹೀಗೆ ಮಾಡ್ದೆ, ಯಾಕೆ ಚೆಕ್ ಕೊಟ್ಟೆ, ಅದು ಬೌನ್ಸ್ ಆಗಿದೆ' ಅಂತ ನನ್ನ ಹೆಂಡತಿ ಬೈದಳು. ಮತ್ತೆ ಇನ್ನೊಂದು ಚೆಕ್ ಕೊಟ್ಟೆ. ಅದೂ ಬೌನ್ಸ್ ಆಯ್ತು. 'ಮತ್ತೆ ಯಾಕ್ ಹೀಗೆ ಮಾಡ್ದೆ' ಅಂತ ಹೆಂಡತಿ ಬೈಯೋಕೆ ಶುರು ಮಾಡಿದ್ಲು. 'ಕೆಲಸದಲ್ಲಿ ಮರೆತುಬಿಟ್ಟೆ, ಹೋಗಿ ಅಕೌಂಟ್&zwnj;ಗೆ ದುಡ್ಡು ಹಾಕ್ತೀನಿ' ಅಂತ ಬ್ಯಾಂಕ್&zwnj;ಗೆ ಹೊರಟೆ. ಆಗಲೇ ನಿತ್ಯಾನಂದನ ರಾಸಲೀಲೆ ಸುದ್ದಿ ಟಿವಿಯಲ್ಲಿ ಬಂತು. ಹುಡುಗಿಯರ ಜೊತೆ ಸಿಕ್ಕಿಬಿದ್ದ, ಅರೆಸ್ಟ್ ಆದ ಅಂತ ಸುದ್ದಿ ಬರ್ತಿತ್ತು. ಅಷ್ಟೇ, ನಾನು ಅಕೌಂಟ್&zwnj;ಗೆ ಹಣ ಹಾಕುವುದನ್ನು ನಿಲ್ಲಿಸಿದೆ. ನಮ್ಮ ಹಣ ತುಂಬಾ ಸ್ಟ್ರಾಂಗ್ ಅನ್ನಿಸ್ತು' ಎಂದು ತೇಜ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ನಿತ್ಯಾನಂದನಿಗೇ ಪಂಗನಾಮ&lt;/strong&gt;&lt;/h2&gt;&lt;p&gt;ಈ ಮೂಲಕ ನಿರ್ದೇಶಕ ತೇಜ, ನಿತ್ಯಾನಂದನಿಗೇ ಪಂಗನಾಮ ಹಾಕಿದ್ದರು. ಈ ಘಟನೆಯಿಂದ ನನಗೊಂದು ವಿಷಯ ಅರ್ಥವಾಯಿತು. ಕೆಲವು ಕಷ್ಟಗಳು ಬಂದಾಗ ಪರಿಸ್ಥಿತಿ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ನಾವು ಏನು ಬೇಕಾದರೂ ಮಾಡಲು ಸಿದ್ಧರಾಗಿಬಿಡುತ್ತೇವೆ. ವಸುದೇವನೇ ಕತ್ತೆಯ ಕಾಲು ಹಿಡಿದ ಹಾಗೆ, ನಾನೂ ಕೂಡ ನಿತ್ಯಾನಂದನನ್ನು ನಂಬಿಬಿಟ್ಟೆ. ನಮಗೆ ಬರುವ ಸಮಸ್ಯೆಗಳಿಗೆ ತಕ್ಕಂತೆ ನಾವು ಧರ್ಮ ಬದಲಾಯಿಸುತ್ತೇವೆ, ದೇವರುಗಳನ್ನು ಬದಲಾಯಿಸುತ್ತೇವೆ, ಏನು ಬೇಕಾದರೂ ಮಾಡಲು ಸಿದ್ಧರಾಗುತ್ತೇವೆ' ಎಂದು ತೇಜ ಹೇಳಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/director-teja-recalls-cheating-controversial-godman-nithyananda-swamy-gvd/articleshow-2edd2ik"/>
        </item>
        <item>
            <title><![CDATA[Ullas Gowda Last Minutes: ಬಾಮಾ ಹರೀಶ್‌ ಪುತ್ರ ಉಲ್ಲಾಸ್‌ ಗೌಡ ದುರಂತ ಅಂತ್ಯದ ಕೊನೇ ಕ್ಷಣಗಳು ಹೀಗಿದ್ದವು; ಮಾಹಿತಿ ನೀಡಿದ ಆಪ್ತ ಸ್ನೇಹಿತ!]]></title>
            <link>https://kannada.asianetnews.com/sandalwood/a-close-friend-shared-this-regarding-the-final-moments-of-ullas-gowda-son-of-kannada-producer-bhama-harish/articleshow-79eld83</link>
            <guid isPermaLink="true">https://kannada.asianetnews.com/sandalwood/a-close-friend-shared-this-regarding-the-final-moments-of-ullas-gowda-son-of-kannada-producer-bhama-harish/articleshow-79eld83</guid>
            <pubDate>Sun, 28 Jun 2026 20:34:36 +0530</pubDate>
            <description><![CDATA[&lt;p&gt;ಇಂದು ಬೆಂಗಳೂರಿನ ವಿಜಯನಗರದ ಸ್ವಂತ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಯಾಂಡಲ್&zwnj;ವುಡ್&zwnj;ನ ಗಣ್ಯರು ಹಾಗೂ ಬಂಧುಮಿತ್ರರು ಕಣ್ಣೀರಿನ ವಿದಾಯ ಕೋರಿದರು. ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿಯ ಚಿತಾಗಾರದಲ್ಲಿ ಉಲ್ಲಾಸ್ ಅವರ ಅಂತ್ಯಕ್ರಿಯೆ ನೆರವೇರಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw7awm1ttpdmatjs66rpgvvc,imgname-bama-harish-son-ullas-gowda-1782657732665.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಚಾದ್ರಿಯ ಸುಂದರ ಬೆಟ್ಟದಲ್ಲಿ ನಡೆದ ಆ ಒಂದು ಘೋರ ದುರಂತ; ಉಲ್ಲಾಸ್ ಕೊನೆಯ ಕ್ಷಣದ ಕಣ್ಣೀರಿನ ಕಥೆ!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನ ಖ್ಯಾತ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ. ಮಾ. ಹರೀಶ್ (Ba Ma Harish) ಅವರ ಮನೆಯಲ್ಲಿ ಇಂದು ಮೌನ ಆವರಿಸಿದೆ. ಯಾವತ್ತೂ ಖುಷಿಖುಷಿಯಾಗಿ ಇರುತ್ತಿದ್ದ ಆ ಕುಟುಂಬ, ಈಗ ಮಗನ ಅಕಾಲಿಕ ಮರಣದ ಆಘಾತದಲ್ಲಿ ಮುಳುಗಿದೆ, ಆಕ್ರಂದನ ಮುಗಿಲು ಮುಟ್ಟಿದೆ. ಕೊಡಚಾದ್ರಿಯ ತಂಪಾದ ಪರಿಸರದಲ್ಲಿ ಹರ್ಷದಾಯಕ ಟ್ರೆಕ್ಕಿಂಗ್ ಮುಗಿಸಿ ಮರಳುತ್ತಿದ್ದ ಉಲ್ಲಾಸ್ ಗೌಡ (Ullas Gowda), ವಿಧಿಯ ಕ್ರೂರ ಆಟಕ್ಕೆ ಬಲಿಯಾದ ಆ ಕೊನೆಯ ಕ್ಷಣಗಳನ್ನು ಕೇಳಿದರೆ ಕಲ್ಲು ಮನಸ್ಸು ಕೂಡ ಕರಗುತ್ತದೆ.&lt;/p&gt;&lt;h2&gt;ಕುಸಿಯುವ ಐದು ನಿಮಿಷ ಮುಂಚೆಯೂ ಸಖತ್ ಎನರ್ಜೆಟಿಕ್!&lt;/h2&gt;&lt;p&gt;'ಟ್ರೆಕ್ಕಿಂಗ್ ಅಂದ್ರೆ ಉಲ್ಲಾಸ್&zwnj;ಗೆ ಎಲ್ಲಿಲ್ಲದ ಪ್ರಾಣ. ಎತ್ತರದ ಬೆಟ್ಟಗಳನ್ನು ಹತ್ತುವುದೆಂದರೆ, ಸ್ನೇಹಿತರ ಜೊತೆಗೆ ಸಾಹಸ, ಕ್ರೀಡೆಗಳಲ್ಲಿ ತೊಡುಗುವುದು ಉಲ್ಲಾಸ್&zwnj;ಗೆ ಒಂದು ರೀತಿಯ ಸಂಭ್ರಮ. ಶನಿವಾರ ಕೂಡ ಅಷ್ಟೇ, ತನ್ನ ಪ್ರೀತಿಯ ಗೆಳೆಯರ ಜೊತೆ ಕೊಡಚಾದ್ರಿ ಬೆಟ್ಟ ಏರಲು ಪ್ಲ್ಯಾನ್ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆಯೇ ನಡೆದಿತ್ತು. ಬೆಟ್ಟದ ತುದಿಯಲ್ಲಿ ಪ್ರಕೃತಿಯ ಸೌಂದರ್ಯ ಸವಿದು, ಫೋಟೋಗಳನ್ನು ತೆಗೆಸಿಕೊಂಡು ಹಗುರ ಮನಸ್ಸಿನಿಂದ ಕೆಳಗೆ ಇಳಿದು ಬಂದಿದ್ದರು. &quot;ಇನ್ನೇನು ಐದು ನಿಮಿಷದ ಹಿಂದಷ್ಟೇ ತುಂಬಾನೇ ಎನರ್ಜೆಟಿಕ್ ಆಗಿದ್ದ ಉಲ್ಲಾಸ್, ಸಡನ್ ಆಗಿ ಸುಸ್ತಾಗುತ್ತಿದೆ ಎಂದು ಕುಳಿತುಕೊಂಡ. ಕುಳಿತುಕೊಂಡವನೇ ಹಾಗೆಯೇ ಪ್ರಜ್ಞೆ ತಪ್ಪಿ ಬಿದ್ದ&quot; ಎಂದು ಆತನ ಜೊತೆಯಲ್ಲಿದ್ದ ಆಪ್ತ ಗೆಳೆಯ ಆ ದಾರುಣ ಕ್ಷಣಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.&lt;/p&gt;&lt;p&gt;ಕಾಡಿನ ಮಧ್ಯೆ ಗೆಳೆಯರ ಹೋರಾಟ!&lt;/p&gt;&lt;p&gt;ಉಲ್ಲಾಸ್ ಕುಸಿದು ಬಿದ್ದ ತಕ್ಷಣ ಗೆಳೆಯರಲ್ಲಿ ಆತಂಕ ಶುರುವಾಯಿತು. ಮೊದಲು ಇದು ಸಾಮಾನ್ಯ ಸುಸ್ತು ಅಥವಾ ಡಿಹೈಡ್ರೇಶನ್ ಇರಬಹುದು ಎಂದು ಭಾವಿಸಿ ಮುಖಕ್ಕೆ ನೀರು ಚಿಮುಕಿಸಿದರು. ಆದರೆ ಉಲ್ಲಾಸ್&zwnj;ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ದಟ್ಟ ಕಾಡಿನ ಮಧ್ಯೆ ಗೆಳೆಯರು &quot;ಯಾರಾದರೂ ವೈದ್ಯರಿದ್ದೀರಾ? ನಮಗೆ ಸಹಾಯ ಬೇಕಿದೆ&quot; ಎಂದು ಅಸಹಾಯಕರಾಗಿ ಕೂಗಾಡಿದರು. ಅದೃಷ್ಟವಶಾತ್ ಅಲ್ಲಿದ್ದ ಒಬ್ಬ ಸ್ಥಳೀಯ ವೈದ್ಯರು ಧಾವಿಸಿ ಬಂದು ಜೀಪ್&zwnj;ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವವರೆಗೂ ಸತತವಾಗಿ ಸಿಪಿಆರ್ (ಕೃತಕ ಉಸಿರಾಟ) ನೀಡುತ್ತಲೇ ಇದ್ದರು. ಆಸ್ಪತ್ರೆ ತಲುಪುವವರೆಗೂ ಉಲ್ಲಾಸ್&zwnj;ನ ಪಲ್ಸ್ ರೇಟ್ ಅಲ್ಪ ಸ್ವಲ್ಪ ಇತ್ತು, ಪ್ರಾಣ ಉಳಿಯಬಹುದು ಅನ್ನೋ ಸಣ್ಣ ಆಸೆ ಗೆಳೆಯರಲ್ಲಿತ್ತು. ಆದರೆ ಹೊಸನಗರದ ಆಸ್ಪತ್ರೆ ತಲುಪಿದಾಗ ವೈದ್ಯರು 'ಅವನು ಇನ್ನಿಲ್ಲ' ಎಂದಾಗ ಗೆಳೆಯರ ಲೋಕವೇ ಕುಸಿದು ಬಿದ್ದಂತಾಯಿತು.&lt;/p&gt;&lt;h3&gt;ಮದುವೆ ಮನೆಯಲ್ಲಿ ಸೂತಕದ ಛಾಯೆ!&lt;/h3&gt;&lt;p&gt;ಇವೆಲ್ಲದರ ನಡುವೆ ಅತ್ಯಂತ ನೋವಿನ ಸಂಗತಿ ಎಂದರೆ ಉಲ್ಲಾಸ್ ಬದುಕಿನಲ್ಲಿ ಹೊಸ ಅಧ್ಯಾಯವೊಂದು ಶುರುವಾಗಬೇಕಿತ್ತು. ಆಗಸ್ಟ್&zwnj;ನಲ್ಲಿ ನಿಶ್ಚಿತಾರ್ಥ ಮತ್ತು ಡಿಸೆಂಬರ್&zwnj;ನಲ್ಲಿ ಮದುವೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದವು, ಕನಸುಗಳು ಸಾವಿರವಿದ್ದವು. &quot;ಟ್ರೆಕ್ಕಿಂಗ್ ಹೋಗಬೇಡಪ್ಪ ಅಂತ ಹೇಳಿದ್ರೂ ಅವನು ಕೇಳ್ತಾ ಇರಲಿಲ್ಲ, ಅವನಿಗೆ ಬೆಟ್ಟ ಹತ್ತುವುದೆಂದರೆ ಹುಚ್ಚು ಆಸೆ&quot; ಎಂದು ಆತನ ಚಿಕ್ಕಪ್ಪ ಭಾ.ಮಾ. ಗಿರೀಶ್ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ನೋಡುಗರ ಕಣ್ಣನ್ನು ಒದ್ದೆ ಮಾಡುತ್ತಿತ್ತು.&lt;/p&gt;&lt;p&gt;ಇಂದು (28 ಜೂನ್ 2026) ಬೆಂಗಳೂರಿನ ವಿಜಯನಗರದ ಸ್ವಂತ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಯಾಂಡಲ್&zwnj;ವುಡ್&zwnj;ನ ಗಣ್ಯರು ಹಾಗೂ ಬಂಧುಮಿತ್ರರು ಕಣ್ಣೀರಿನ ವಿದಾಯ ಕೋರಿದರು. ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿಯ ಚಿತಾಗಾರದಲ್ಲಿ ಉಲ್ಲಾಸ್ ಅವರ ಅಂತ್ಯಕ್ರಿಯೆ ನೆರವೇರಿದೆ. ಒಬ್ಬ ಪ್ರತಿಭಾವಂತ ಯುವಕ, ಕ್ರೀಡಾಪ್ರೇಮಿ, ಭವಿಷ್ಯದ ನಿರ್ಮಾಪಕ ಹಾಗೂ ನಿರ್ದೇಶಕ ಹೀಗೆ ಅಕಾಲಿಕವಾಗಿ ಮರಣ ಹೊಂದಿದ್ದು ಸ್ಯಾಂಡಲ್&zwnj;ವುಡ್&zwnj;ಗೆ ತುಂಬಲಾರದ ನಷ್ಟ. ವಿಧಿಯ ಆಟವನ್ನು ಯಾರೂ ಅರಿಯರು ಎಂಬುದು ಉಲ್ಲಾಸ್ ಸಾವಿನಿಂದ ಮತ್ತೊಮ್ಮೆ ಸಾಬೀತಾಗಿದೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/a-close-friend-shared-this-regarding-the-final-moments-of-ullas-gowda-son-of-kannada-producer-bhama-harish/articleshow-79eld83"/>
        </item>
        <item>
            <title><![CDATA[K Bhagyaraj Kannada remakes list: ಕೆ. ಭಾಗ್ಯರಾಜ್ ಸಿನಿಮಾಗಳನ್ನು ರೀಮೇಕ್ ಮಾಡಿ ಗೆದ್ದಿರುವ ಕನ್ನಡದ ಹೀರೋಗಳು ಇವರೇ ನೋಡಿ; ಇದು ಆ ಚಿತ್ರಗಳ ಲಿಸ್ಟ್!‌]]></title>
            <link>https://kannada.asianetnews.com/sandalwood/kannada-actors-who-have-achieved-great-success-by-remaking-the-films-of-the-late-tamil-director-k-bhagyaraj/articleshow-3dhm6ne</link>
            <guid isPermaLink="true">https://kannada.asianetnews.com/sandalwood/kannada-actors-who-have-achieved-great-success-by-remaking-the-films-of-the-late-tamil-director-k-bhagyaraj/articleshow-3dhm6ne</guid>
            <pubDate>Sun, 28 Jun 2026 19:10:01 +0530</pubDate>
            <description><![CDATA[&lt;p&gt;ಶಿವರಾಜ್&zwnj;ಕುಮಾರ್ ನಟನೆಯ ಈ ಸಿನಿಮಾ ತಮಿಳಿನ &lsquo;ಸುಂದರಕಾಂಡಂ&rsquo; ಚಿತ್ರದ ರಿಮೇಕ್. ಇದು ಶಿಕ್ಷಕ ಮತ್ತು ವಿದ್ಯಾರ್ಥಿನಿಯ ನಡುವಿನ ಸೂಕ್ಷ್ಮ ಕಥೆಯನ್ನು ಒಳಗೊಂಡಿತ್ತು. ಇನ್ನು, &amp;nbsp;ಅನಂತ್ ನಾಗ್-ಸೌಂದರ್ಯ ನಟನೆಯ &lsquo;ತೂಗುವೆ ಕೃಷ್ಣನ&rsquo; ಚಿತ್ರವು ತಮಿಳಿನ 'ಆರಾರೋ ಆರಿರಾರೋ' ಚಿತ್ರದ ರೂಪಾಂತರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw775rmm6dar1xy4yey1rbhm,imgname-k-bhagyaraj-1782653837972.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೆ ಭಾಗ್ಯರಾಜ್ ಸ್ಕ್ರೀನ್&zwnj;ಪ್ಲೇ ಮ್ಯಾಜಿಕ್: ಕನ್ನಡದ ಈ ನಟರುಗಳ ಲೈಫ್ ಬದಲಿಸಿದ ಆ ನಿರ್ದೇಶಕನ ತಮಿಳು ಕಥೆಗಳಿವು!&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದಲ್ಲಿ &lsquo;ಸ್ಕ್ರೀನ್&zwnj;ಪ್ಲೇ ಕಿಂಗ್&rsquo; ಎಂದೇ ಖ್ಯಾತರಾದವರು ಇತ್ತೀಚೆಗೆ ನಮ್ಮನ್ನಗಲಿದ ನಿರ್ದೇಶಕ ಕೆ. ಭಾಗ್ಯರಾಜ್. ಅವರ ಸಿನಿಮಾಗಳೆಂದರೆ ಅಲ್ಲಿ ಅದ್ದೂರಿ ಆಕ್ಷನ್ ಇರುತ್ತಿರಲಿಲ್ಲ, ಬದಲಾಗಿ ಮಧ್ಯಮ ವರ್ಗದ ಜನರ ಬದುಕು, ಹಳ್ಳಿಯ ಮುಗ್ಧ ಪ್ರೇಮಕಥೆಗಳು ಮತ್ತು ಹೊಟ್ಟೆ ಹುಣ್ಣಾಗಿಸುವಂತಹ ಹಾಸ್ಯ ಇರುತ್ತಿತ್ತು. ಭಾಗ್ಯರಾಜ್ (Director K Bhagyaraj) ಅವರ ಕಥೆಗಳು ಎಷ್ಟು ಶಕ್ತಿಶಾಲಿಯಾಗಿದ್ದವೆಂದರೆ, ಅವುಗಳನ್ನು ಕನ್ನಡಕ್ಕೆ ರಿಮೇಕ್ ಮಾಡಿದ ಪ್ರತಿಯೊಬ್ಬ ನಟನೂ ಇಂದು ಸ್ಯಾಂಡಲ್&zwnj;ವುಡ್&zwnj;ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಈ ಕೆ. ಭಾಗ್ಯರಾಜ್ ಅವರು ತಮಿಳಿನ ಹಿರಿಯ ನಿರ್ದೇಶಕ ಭಾರತಿರಾಜ್ ಅವರ ಶಿಷ್ಯ ಅನ್ನೋದು ಗಮನಿಸಬೇಕಾದ ಸಂಗತಿ.&lt;/p&gt;&lt;h2&gt;ಭಾಗ್ಯರಾಜ್ ಅವರ ಕಥೆಗಳನ್ನು ನಂಬಿ ಗೆದ್ದ ಕನ್ನಡದ ಹೀರೋಗಳ ಪಟ್ಟಿ!&lt;/h2&gt;&lt;p&gt;ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಭಾಗ್ಯರಾಜ್ ಕಾಂಬಿನೇಷನ್!&lt;/p&gt;&lt;p&gt;ಕನ್ನಡಿಗರ ಹೆಮ್ಮೆಯ &lsquo;ಕ್ರೇಜಿಸ್ಟಾರ್&rsquo; ರವಿಚಂದ್ರನ್ ಅವರ ಕೆರಿಯರ್&zwnj;ನಲ್ಲಿ ಭಾಗ್ಯರಾಜ್ ಸಿನಿಮಾಗಳು ದೊಡ್ಡ ತಿರುವು ನೀಡಿವೆ. ಹಂಸಲೇಖ ಅವರ ಸಂಗೀತ ಮತ್ತು ಭಾಗ್ಯರಾಜ್ ಅವರ ಸ್ಕ್ರಿಪ್ಟ್ ಸೇರಿದರೆ ಅಲ್ಲಿ ವಿಜಯೋತ್ಸವ ಫಿಕ್ಸ್ ಆಗಿರುತ್ತಿತ್ತು.&lt;/p&gt;&lt;p&gt;&lt;strong&gt;ಹಳ್ಳಿ ಮೇಷ್ಟ್ರು&lt;/strong&gt; (1992): ತಮಿಳಿನ 'ಮುಂಧನೈ ಮುಡಿಚು' ಚಿತ್ರದ ರಿಮೇಕ್ ಆಗಿದ್ದ ಈ ಸಿನಿಮಾ ಕನ್ನಡದಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು. ರವಿಚಂದ್ರನ್ ಅವರ 'ಮೇಷ್ಟ್ರು' ಅವತಾರ ಇಂದಿಗೂ ಫೇಮಸ್ ಆಗಿಯೇ ಇದೆ.&lt;/p&gt;&lt;p&gt;&lt;strong&gt;ಅಣ್ಣಯ್ಯ &lt;/strong&gt;(1993): ಇದು 'ಎಂಗ ಚಿನ್ನ ರಾಸಾ' ಚಿತ್ರದ ರಿಮೇಕ್. ಮಧುಬಾಲಾ ಜೊತೆಗಿನ ರವಿಮಾಮ ಅವರ ಕೆಮಿಸ್ಟ್ರಿ ಮತ್ತು ಹಾಡುಗಳು ಈ ಚಿತ್ರವನ್ನು ಬ್ಲಾಕ್&zwnj;ಬಸ್ಟರ್ ಮಾಡಿದವು. ಇಂದಿಗೂ ಸಿನಿಪ್ರೇಕ್ಷಕರು ಈ ಚಿತ್ರದ ಬಗ್ಗೆ ಮಾತನ್ನಾಡುತ್ತಲೇ ಇರುತ್ತಾರೆ.&lt;/p&gt;&lt;p&gt;&lt;strong&gt;ಮನೆ ದೇವ್ರು&lt;/strong&gt;: 'ಮೌನ ಗೀತೆಗಳ್' ಆಧಾರಿತ ಈ ಚಿತ್ರ ಸಂಸಾರದ ಸುಂದರ ಕಥೆಯನ್ನು ಹೇಳಿತ್ತು.&lt;/p&gt;&lt;p&gt;ವಿಶೇಷವೆಂದರೆ, ತಮಿಳಿನ 'ಇದು ನಮ್ಮ ಆಳು' ಚಿತ್ರವನ್ನು ರವಿಚಂದ್ರನ್ ಅವರು '&lt;strong&gt;ರವಿಶಾಸ್ತ್ರಿ&lt;/strong&gt; (2006)' ಮೂಲಕ 2ನೇ ಬಾರಿ ರಿಮೇಕ್ ಮಾಡಿದ್ದರು.&lt;/p&gt;&lt;h3&gt;ನವರಸ ನಾಯಕ ಜಗ್ಗೇಶ್ ಅವರ ಕಾಮಿಡಿ ದರ್ಬಾರ್!&lt;/h3&gt;&lt;p&gt;ಕೆ ಭಾಗ್ಯರಾಜ್ ಅವರ ತುಂಟತನದ ಕಥೆಗಳಿಗೆ ಜಗ್ಗೇಶ್ ಅವರ ಬಾಡಿ ಲ್ಯಾಂಗ್ವೇಜ್ ಸರಿಯಾಗಿ ಒಪ್ಪುತ್ತಿತ್ತು.&lt;/p&gt;&lt;p&gt;&lt;strong&gt;ಅಳಿಯ ಅಲ್ಲ ಮಗಳ ಗಂಡ &lt;/strong&gt;(1997): ಜಗ್ಗೇಶ್ ಅವರ ಕೆರಿಯರ್&zwnj;ನ ಮೈಲಿಗಲ್ಲು ಈ ಸಿನಿಮಾ. ಇದು ಭಾಗ್ಯರಾಜ್ ಅವರ 'ಇದು ನಮ್ಮ ಆಳು' ಚಿತ್ರದ ರಿಮೇಕ್. ಜಗ್ಗೇಶ್ ಅವರ ಡೈಲಾಗ್ ಡೆಲಿವರಿ ಚಿತ್ರವನ್ನು ದೊಡ್ಡ ಹಿಟ್ ಆಗಿಸಿತು.&lt;/p&gt;&lt;p&gt;&lt;strong&gt;ಜಗತ್ ಕಿಲಾಡಿ&lt;/strong&gt; (1998): 'ಅವಸರ ಪೊಲೀಸ್ 100' ರಿಮೇಕ್ ಆದ ಈ ಚಿತ್ರದಲ್ಲಿ ಜಗ್ಗೇಶ್ ಅವರ ಡಬಲ್ ರೋಲ್ ಮ್ಯಾಜಿಕ್ ಮಾಡಿತ್ತು.&lt;/p&gt;&lt;p&gt;ಗುರು ಕಾಶೀನಾಥ್ ಮತ್ತು ಶಿಷ್ಯ ಉಪೇಂದ್ರ ಜೋಡಿ!&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನ ಅಪ್ರತಿಮ ಪ್ರತಿಭೆ ಕಾಶೀನಾಥ್ ಅವರು ಕೂಡ ಭಾಗ್ಯರಾಜ್ ಸಿನಿಮಾಗಳನ್ನು ಕನ್ನಡೀಕರಿಸುವಲ್ಲಿ ಯಶಸ್ವಿಯಾಗಿದ್ದರು.&lt;/p&gt;&lt;p&gt;&lt;strong&gt;ಚಪಲ ಚೆನ್ನಿಗರಾಯ&lt;/strong&gt;: ಭಾಗ್ಯರಾಜ್ ಅವರ 'ಚಿನ್ನ ವೀಡು' ಕಥೆಯನ್ನು ಕಾಶೀನಾಥ್ ಅವರು ತಮ್ಮದೇ ಸ್ಟೈಲ್&zwnj;ನಲ್ಲಿ ಹೇಳಿ ಜನರನ್ನ ನಗಿಸಿದ್ದರು.&lt;/p&gt;&lt;p&gt;&lt;strong&gt;ಲವ್ ಮಾಡಿ ನೋಡು&lt;/strong&gt;: ಇದು ಕ್ಲಾಸಿಕ್ ಹಿಟ್ 'ಅಂದ 7 ನಾಟ್ಕಳ್' ಚಿತ್ರದ ರಿಮೇಕ್. ವಿಶೇಷ ಅಂದ್ರೆ ಈ ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು!&lt;/p&gt;&lt;p&gt;ಇನ್ನುಳಿದ ಸೂಪರ್ ಸ್ಟಾರ್&zwnj;ಗಳ ಪಟ್ಟಿ ಹೀಗಿದೆ:&lt;/p&gt;&lt;p&gt;&lt;strong&gt;ಸುಂದರ ಕಾಂಡ&lt;/strong&gt;: ಹ್ಯಾಟ್ರಿಕ್ ಹೀರೋ ಶಿವರಾಜ್&zwnj;ಕುಮಾರ್ ನಟನೆಯ ಈ ಸಿನಿಮಾ ತಮಿಳಿನ ಅದೇ ಹೆಸರಿನ ಚಿತ್ರದ ರಿಮೇಕ್. ಶಿಕ್ಷಕ ಮತ್ತು ವಿದ್ಯಾರ್ಥಿನಿಯ ನಡುವಿನ ಸೂಕ್ಷ್ಮ ಕಥೆಯನ್ನು ಇದು ಒಳಗೊಂಡಿತ್ತು.&lt;/p&gt;&lt;p&gt;&lt;strong&gt;ತೂಗುವೆ ಕೃಷ್ಣನ&lt;/strong&gt;: ಅಭಿನಯ ಚತುರ ಅನಂತ್ ನಾಗ್ ಮತ್ತು ಸೌಂದರ್ಯ ಅವರ ಅದ್ಭುತ ನಟನೆಯ ಈ ಚಿತ್ರ 'ಆರಾರೋ ಆರಿರಾರೋ' ಚಿತ್ರದ ರೂಪಾಂತರ.&lt;/p&gt;&lt;p&gt;&lt;strong&gt;ಪ್ರೇಮಿ ನಂಬರ್ 1&lt;/strong&gt;: ರಮೇಶ್ ಅರವಿಂದ್ ನಟನೆಯ ಈ ಲವ್ ಸ್ಟೋರಿ 'ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್' ಚಿತ್ರದ ಆಧಾರಿತ.&lt;/p&gt;&lt;p&gt;ಹೀಗೆ ಎಸ್. ನಾರಾಯಣ್ ಅವರ '&lt;strong&gt;ವಿಶಾಲಾಕ್ಷಮ್ಮನ ಗಂಡ&lt;/strong&gt;', '&lt;strong&gt;ಬಾನಲ್ಲು ನೀನೆ ಭುವಿಯಲ್ಲು ನೀನೆ&lt;/strong&gt;' ಸಿನಿಮಾಗಳೂ ಕೂಡ ಭಾಗ್ಯರಾಜ್ ಸ್ಕ್ರೀನ್&zwnj;ಪ್ಲೇ ಇಂದ ಬಂದಂತಹವೇ. ಒಟ್ಟಾರೆಯಾಗಿ ಹೇಳುವುದಾದರೆ, ಕೆ. ಭಾಗ್ಯರಾಜ್ ಅವರು ಬರೆದ ಹಳ್ಳಿಯ ಸೊಗಡಿನ ಕಥೆಗಳು ಗಡಿ ಮೀರಿ ಬಂದು ಕನ್ನಡಿಗರ ಹೃದಯ ಗೆದ್ದಿವೆ. ಸರಳ ಕಥೆಗಳೇ ಸಿನಿಮಾದ ಅಸಲಿ ಹೀರೋ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ!&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/kannada-actors-who-have-achieved-great-success-by-remaking-the-films-of-the-late-tamil-director-k-bhagyaraj/articleshow-3dhm6ne"/>
        </item>
        <item>
            <title><![CDATA[Breakup: 'ಮಸ್ತ್ ಮಸ್ತ್ ಹುಡುಗಿ' ರವೀನಾ-ಅಕ್ಷಯ್ ಎಂಗೇಜ್‌ಮೆಂಟ್ ಆಗಿದ್ದರೂ ಮದುವೆ ಮುರಿದುಬಿದ್ದಿದ್ದು ಯಾಕೆ?]]></title>
            <link>https://kannada.asianetnews.com/entertainment/akshay-kumar-raveena-tandon-breakup-story-and-welcome-to-the-jungle-reunion-gvd/articleshow-yg7niuh</link>
            <guid isPermaLink="true">https://kannada.asianetnews.com/entertainment/akshay-kumar-raveena-tandon-breakup-story-and-welcome-to-the-jungle-reunion-gvd/articleshow-yg7niuh</guid>
            <pubDate>Sun, 28 Jun 2026 18:34:23 +0530</pubDate>
            <description><![CDATA[&lt;p&gt;Bollywood Reunion: ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಜೋಡಿ 'ವೆಲ್ಕಮ್ ಟು ದಿ ಜಂಗಲ್' ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದೆ. 90ರ ದಶಕದಲ್ಲಿ ಇವರಿಬ್ಬರು ಕೇವಲ ತೆರೆಯ ಮೇಲಿನ ಹಿಟ್ ಜೋಡಿಯಷ್ಟೇ ಆಗಿರಲಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw756d57vn2f4er4gfk0je70,imgname-ch-1782651761831.png" type="image/jpeg" height="390" width="690"/>
            <content:encoded><![CDATA[&lt;p&gt;'ವೆಲ್ಕಮ್ ಟು ದಿ ಜಂಗಲ್' ಸಿನಿಮಾ ಮೂಲಕ 90ರ ದಶಕದ ಸೂಪರ್&zwnj;ಹಿಟ್ ಜೋಡಿ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಮತ್ತೆ ಒಂದಾಗಿದ್ದಾರೆ. ಒಂದು ಕಾಲದಲ್ಲಿ ಎಂಗೇಜ್&zwnj;ಮೆಂಟ್ ಮಾಡಿಕೊಂಡಿದ್ದ ಈ ಜೋಡಿಯ ಸಂಬಂಧ ಮದುವೆವರೆಗೂ ತಲುಪಲಿಲ್ಲ. ಅಷ್ಟಕ್ಕೂ ಇವರಿಬ್ಬರ ಸಂಬಂಧ ಮುರಿದುಬಿದ್ದಿದ್ದು ಯಾಕೆ? ಈಗ ಹೇಗಿದೆ ಇವರ ನಡುವಿನ ಬಾಂಧವ್ಯ? ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಜೋಡಿ 'ವೆಲ್ಕಮ್ ಟು ದಿ ಜಂಗಲ್' ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದೆ.&lt;/p&gt;&lt;p&gt;90ರ ದಶಕದಲ್ಲಿ ಇವರಿಬ್ಬರು ಕೇವಲ ತೆರೆಯ ಮೇಲಿನ ಹಿಟ್ ಜೋಡಿಯಷ್ಟೇ ಆಗಿರಲಿಲ್ಲ, ಬದಲಿಗೆ ಇವರ ಆಫ್-ಸ್ಕ್ರೀನ್ ಲವ್ ಸ್ಟೋರಿ ಕೂಡ ಬಾಲಿವುಡ್&zwnj;ನ ಬಹುಚರ್ಚಿತ ಕಥೆಗಳಲ್ಲಿ ಒಂದಾಗಿತ್ತು. 'ಮೋಹ್ರಾ' ಚಿತ್ರದ ಶೂಟಿಂಗ್ ವೇಳೆ ಶುರುವಾದ ಇವರ ಪ್ರೇಮ, ನಿಶ್ಚಿತಾರ್ಥದವರೆಗೂ ತಲುಪಿತ್ತು. ಆದರೆ ಮದುವೆಗೂ ಮುನ್ನವೇ ಇಬ್ಬರ ದಾರಿ ಬೇರೆಯಾಯಿತು. ವರ್ಷಗಳ ನಂತರ ಈಗ ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಮುಂದೆ ಸಾಗಿದ್ದು, ಮತ್ತೆ ಒಟ್ಟಿಗೆ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದರೆ, ಅವರ ಈ ಅಪೂರ್ಣ ಪ್ರೇಮಕಥೆಯಿಂದ ಇಂದಿನವರೆಗಿನ ಸಂಪೂರ್ಣ ಪಯಣ ಹೇಗಿತ್ತು ಅಂತ ನೋಡೋಣ ಬನ್ನಿ.&lt;/p&gt;&lt;p&gt;&lt;strong&gt;'ಮೋಹ್ರಾ' ಸೆಟ್&zwnj;ನಲ್ಲಿ ಶುರುವಾಗಿತ್ತು ಅಕ್ಷಯ್-ರವೀನಾ ಲವ್ ಸ್ಟೋರಿ&lt;/strong&gt;&lt;/p&gt;&lt;p&gt;ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ನಡುವೆ ಪ್ರೀತಿ ಚಿಗುರಿದ್ದು 1994ರಲ್ಲಿ ತೆರೆಕಂಡ 'ಮೋಹ್ರಾ' ಚಿತ್ರದ ಶೂಟಿಂಗ್ ಸಮಯದಲ್ಲಿ. ಈ ಚಿತ್ರದ ಸೂಪರ್&zwnj;ಹಿಟ್ ಹಾಡು 'ಟಿಪ್ ಟಿಪ್ ಬರ್ಸಾ ಪಾನಿ' ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿಗೆ ದೊಡ್ಡ ಉದಾಹರಣೆಯಾಗಿ ನಿಂತಿತು. ಇದರ ನಂತರ ಇಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಶೀಘ್ರದಲ್ಲೇ ಇವರ ಮದುವೆಯ ಸುದ್ದಿ ಕೂಡ ಎಲ್ಲೆಡೆ ಹರಿದಾಡಲು ಶುರುವಾಗಿತ್ತು.&lt;/p&gt;&lt;p&gt;&lt;strong&gt;ಅಕ್ಷಯ್ ಜೊತೆಗಿನ ಎಂಗೇಜ್&zwnj;ಮೆಂಟ್ ಸತ್ಯವನ್ನು ರವೀನಾ ಒಪ್ಪಿಕೊಂಡಿದ್ದರು&lt;/strong&gt;&lt;/p&gt;&lt;p&gt;ತಮಗೂ ಅಕ್ಷಯ್ ಕುಮಾರ್&zwnj;ಗೂ ನಿಶ್ಚಿತಾರ್ಥವಾಗಿತ್ತು ಎಂಬುದನ್ನು ರವೀನಾ ಟಂಡನ್ ಹಲವು ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದಾರೆ. ಅವರ ಪ್ರಕಾರ, ಇದು ಕೇವಲ ಕುಟುಂಬಸ್ಥರು ಭಾಗವಹಿಸಿದ್ದ ಖಾಸಗಿ ಸಮಾರಂಭವಾಗಿತ್ತು. ಸಿನಿಮಾ ರಂಗದಿಂದ ದೂರವಾದ ನಂತರ ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದರಂತೆ. ಆದರೆ, ಈ ಸಂಬಂಧ ಮದುವೆಯ ಹಂತ ತಲುಪಲೇ ಇಲ್ಲ.&lt;/p&gt;&lt;p&gt;&lt;strong&gt;ಅಷ್ಟಕ್ಕೂ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಸಂಬಂಧ ಮುರಿದುಬಿದ್ದಿದ್ದು ಯಾಕೆ?&lt;/strong&gt;&lt;/p&gt;&lt;p&gt;90ರ ದಶಕದ ಕೊನೆಯಲ್ಲಿ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಸಂಬಂಧಕ್ಕೆ ಅಂತ್ಯ ಹಾಡಿದರು. ನಂತರದ ವರ್ಷಗಳಲ್ಲಿ ರವೀನಾ, ಹಲವು ಸಂದರ್ಶನಗಳಲ್ಲಿ ಅಕ್ಷಯ್ ಕುಮಾರ್ ಸಂಬಂಧದಲ್ಲಿದ್ದಾಗ ನಿಷ್ಠಾವಂತರಾಗಿರಲಿಲ್ಲ ಎಂದು ಆರೋಪಿಸಿದ್ದರು. ಆದರೆ, ಅಕ್ಷಯ್ ಕುಮಾರ್ ಈ ಬ್ರೇಕಪ್ ಬಗ್ಗೆ ಸಾರ್ವಜನಿಕವಾಗಿ ಎಂದಿಗೂ ವಿವರವಾಗಿ ಮಾತನಾಡಲಿಲ್ಲ. ಕಾಲಕ್ರಮೇಣ ಇಬ್ಬರೂ ತಮ್ಮ ಜೀವನದಲ್ಲಿ ಮುಂದುವರೆಯಲು ನಿರ್ಧರಿಸಿದರು.&lt;/p&gt;&lt;h2&gt;&lt;strong&gt;ಇಂದು ಅಕ್ಷಯ್ ಮತ್ತು ರವೀನಾ ನಡುವೆ ಯಾವುದೇ ಕಹಿ ಭಾವನೆ ಇಲ್ಲ&lt;/strong&gt;&lt;/h2&gt;&lt;p&gt;ಇತ್ತೀಚಿನ ಸಂದರ್ಶನಗಳಲ್ಲಿ, ತಮಗೂ ಅಕ್ಷಯ್ ಕುಮಾರ್&zwnj;ಗೂ ಈಗ ಯಾವುದೇ ರೀತಿಯ ಕಹಿ ನೆನಪುಗಳಿಲ್ಲ ಎಂದು ರವೀನಾ ಟಂಡನ್ ಸ್ಪಷ್ಟಪಡಿಸಿದ್ದಾರೆ. ಇಬ್ಬರಿಗೂ ತಮ್ಮದೇ ಆದ ಕುಟುಂಬ ಮತ್ತು ವೃತ್ತಿಜೀವನವಿದೆ, ಹಳೆಯ ವಿಷಯಗಳನ್ನು ಮರೆತು ಮುನ್ನಡೆಯುವುದೇ ಉತ್ತಮ ಎಂದು ಅವರು ಹೇಳಿದ್ದಾರೆ. ಇದೇ ಕಾರಣಕ್ಕೆ ಈಗ ಇಬ್ಬರೂ ಮತ್ತೆ ಬೆಳ್ಳಿತೆರೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ಅಕ್ಷಯ್ ಕುಮಾರ್, ಜನವರಿ 2001ರಲ್ಲಿ ನಟಿ ಮತ್ತು ಲೇಖಕಿ ಟ್ವಿಂಕಲ್ ಖನ್ನಾ ಅವರನ್ನು ಮದುವೆಯಾದರು. ಈ ದಂಪತಿಗೆ ಆರವ್ ಮತ್ತು ನಿತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರ ಜೋಡಿ ಬಾಲಿವುಡ್&zwnj;ನ ಅತ್ಯಂತ ಗಟ್ಟಿ ಜೋಡಿಗಳಲ್ಲಿ ಒಂದು. ಇತ್ತ ರವೀನಾ ಟಂಡನ್, 2004ರಲ್ಲಿ ಚಲನಚಿತ್ರ ವಿತರಕ ಅನಿಲ್ ಥಡಾನಿ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ರಾಶಾ ಥಡಾನಿ ಈಗಾಗಲೇ ಬಾಲಿವುಡ್&zwnj;ಗೆ ಪಾದಾರ್ಪಣೆ ಮಾಡಿದ್ದರೆ, ಮಗ ರಣಬೀರ್ ಥಡಾನಿ ಸದ್ಯ ಓದುತ್ತಿದ್ದಾರೆ. ಮದುವೆಗೂ ಮುನ್ನ ರವೀನಾ, ಪೂಜಾ ಮತ್ತು ಛಾಯಾ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದರು. ಇಂದು ಅವರು ತಮ್ಮ ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/akshay-kumar-raveena-tandon-breakup-story-and-welcome-to-the-jungle-reunion-gvd/articleshow-yg7niuh"/>
        </item>
        <item>
            <title><![CDATA[Varanasi: 'ಬಾಹುಬಲಿ'ಯಂತೆ ಅಲ್ಲ... 'ವಾರಣಾಸಿ' ಬಗ್ಗೆ ಕೊನೆಗೂ ದೊಡ್ಡ ರಹಸ್ಯ ಬಿಚ್ಚಿಟ್ಟ ರಾಜಮೌಳಿ!]]></title>
            <link>https://kannada.asianetnews.com/entertainment/ss-rajamouli-confirms-varanasi-is-a-standalone-film-not-a-franchise-gvd/articleshow-xdnq0lx</link>
            <guid isPermaLink="true">https://kannada.asianetnews.com/entertainment/ss-rajamouli-confirms-varanasi-is-a-standalone-film-not-a-franchise-gvd/articleshow-xdnq0lx</guid>
            <pubDate>Sun, 28 Jun 2026 17:36:47 +0530</pubDate>
            <description><![CDATA[&lt;p&gt;Rajamouli: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಸಿನಿಮಾ 'ವಾರಣಾಸಿ' ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಕಮ್&zwnj;ಬ್ಯಾಕ್ ಮಾಡುತ್ತಿದ್ದು, ಎಲ್ಲರ ಕಣ್ಣು ಈ ಚಿತ್ರದ ಮೇಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw71xd2vpe70r549mknzyh76,imgname-xcg-1782648321115.png" type="image/jpeg" height="390" width="690"/>
            <content:encoded><![CDATA[&lt;p&gt;ಎಸ್.ಎಸ್. ರಾಜಮೌಳಿ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ವಾರಣಾಸಿ' ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ನಟಿಸಲಿರುವ ಈ ಚಿತ್ರ, ಬಾಹುಬಲಿಯಂತೆ ಸರಣಿ ಸಿನಿಮಾ ಆಗಿರಲ್ಲ, ಬದಲಾಗಿ ಒಂದೇ ಭಾಗದಲ್ಲಿ ಮುಗಿಯಲಿದೆ ಎಂದು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಸಿನಿಮಾ 'ವಾರಣಾಸಿ' ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಕಮ್&zwnj;ಬ್ಯಾಕ್ ಮಾಡುತ್ತಿದ್ದು, ಎಲ್ಲರ ಕಣ್ಣು ಈ ಚಿತ್ರದ ಮೇಲಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಭಾರತದಲ್ಲೇ ತಯಾರಾಗುತ್ತಿರುವ ಅತ್ಯಂತ ದುಬಾರಿ ಚಿತ್ರಗಳಲ್ಲಿ ಇದೂ ಒಂದು ಎಂದು ಹೇಳಲಾಗುತ್ತಿದೆ. ಇದೀಗ ರಾಜಮೌಳಿ ಅವರು ಈ ಚಿತ್ರವನ್ನು ಫ್ರಾಂಚೈಸಿ ರೀತಿ ಮಾಡದೆ, ಒಂದೇ ಭಾಗದ ಸಿನಿಮಾವಾಗಿ ತೆರೆಗೆ ತರುವುದಾಗಿ ಖಚಿತಪಡಿಸಿದ್ದಾರೆ. ಅಂದರೆ, ಇಡೀ ಮಹಾಕಥೆ, ಭರ್ಜರಿ ಹಿನ್ನೆಲೆ ಸಂಗೀತ ಮತ್ತು ಅದ್ಭುತ ಸಂಭಾಷಣೆಗಳೆಲ್ಲವೂ ಒಂದೇ ಸಿನಿಮಾದಲ್ಲಿ ಪ್ಯಾಕ್ ಆಗಿರಲಿದೆ.&lt;/p&gt;&lt;p&gt;ಸದ್ಯಕ್ಕೆ ರಾಜಮೌಳಿ ಅವರು 'ವಾರಣಾಸಿ' ಶೂಟಿಂಗ್&zwnj;ನಿಂದ ಬ್ರೇಕ್ ತೆಗೆದುಕೊಂಡು ಯುರೋಪ್ ಪ್ರವಾಸದಲ್ಲಿದ್ದಾರೆ. ಫ್ರಾನ್ಸ್&zwnj;ನಲ್ಲಿ ನಡೆದ ಅನ್ನೆಸಿ ಅಂತರಾಷ್ಟ್ರೀಯ ಆನಿಮೇಷನ್ ಫಿಲ್ಮ್ ಫೆಸ್ಟಿವಲ್&zwnj;ನಲ್ಲಿ ಅವರ 'RRR' ಮತ್ತು 'ಈಗ' ಚಿತ್ರಗಳ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಜೂನ್ 27 ರಂದು ನಡೆದ ಮಾಸ್ಟರ್&zwnj;ಕ್ಲಾಸ್&zwnj;ನಲ್ಲಿ, ರಾಜಮೌಳಿ ಅವರು ಮಹೇಶ್ ಬಾಬು ಜೊತೆಗಿನ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದರು. 'ವಾರಣಾಸಿ' ಚಿತ್ರವು 'ಬಾಹುಬಲಿ'ಯಂತೆ ಸರಣಿ ಸಿನಿಮಾ ಆಗಿರದೆ, ಒಂದೇ ಭಾಗದ ಚಿತ್ರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಸಹ ಹಂಚಿಕೊಂಡರು.&lt;/p&gt;&lt;p&gt;&lt;strong&gt;'ವಾರಣಾಸಿ' ಬಗ್ಗೆ ರಾಜಮೌಳಿ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಸಂವಾದದ ವೇಳೆ ಮಾತನಾಡಿದ ಅವರು, &quot;ನೀವು ಅಂಟಾರ್ಕ್ಟಿಕಾದ ಕೊರೆಯುವ ಚಳಿ ಮತ್ತು ಮಂಜುಗಡ್ಡೆಯನ್ನು ಅನುಭವಿಸಲಿದ್ದೀರಿ. ರಾಮಾಯಣದ ದೇವರುಗಳು, ನೈಸರ್ಗಿಕ ವಿಕೋಪಗಳು ಮತ್ತು ಅದ್ಭುತ ಅಂಶಗಳನ್ನು ನೋಡಲಿದ್ದೀರಿ. ಇದೆಲ್ಲದರ ಅನುಭವ ನಿಮಗೆ ಸಿಗಲಿದೆ. ಆದರೆ ಈ ಎಲ್ಲದರ ಮಧ್ಯೆ, ತಂದೆ-ಮಗನ ಭಾವನಾತ್ಮಕ ಸಂಬಂಧವೇ ಕಥೆಯ ಜೀವಾಳ. ಇದೆಲ್ಲವೂ ಸೇರಿ 'ವಾರಣಾಸಿ' ಚಿತ್ರ ನಿಮ್ಮದಾಗಲಿದೆ,&quot; ಎಂದರು. ಈ ಪ್ರಾಜೆಕ್ಟ್ ಒಂದೇ ಭಾಗವೋ ಅಥವಾ ಸರಣಿಯೋ ಎಂದು ಕೇಳಿದಾಗ, &quot;ಒಂದೇ ಸಿನಿಮಾ. ಹೌದು, ಒಂದೇ ಸಿನಿಮಾ,&quot; ಎಂದು ಸ್ಪಷ್ಟವಾಗಿ ಉತ್ತರಿಸಿದರು.&lt;/p&gt;&lt;h2&gt;&lt;strong&gt;ಚಿತ್ರದ ಬಗ್ಗೆ&lt;/strong&gt;&lt;/h2&gt;&lt;p&gt;ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಅವರ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. 'RRR' ನ ಬ್ಲಾಕ್&zwnj;ಬಸ್ಟರ್ ಯಶಸ್ಸಿನ ನಂತರ ರಾಜಮೌಳಿ ಕೈಗೆತ್ತಿಕೊಂಡಿರುವ ಮೊದಲ ಫೀಚರ್ ಫಿಲ್ಮ್ ಇದಾಗಿದೆ. ಮಹೇಶ್ ಬಾಬು, ಪೃಥ್ವಿರಾಜ್ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿರುವ ಈ ಚಿತ್ರವು ಸೈನ್ಸ್ ಫಿಕ್ಷನ್ ಮತ್ತು ಭಾರತೀಯ ಜಾನಪದ ಕಥೆಗಳ ಪರಿಪೂರ್ಣ ಮಿಶ್ರಣವಾಗಿದೆ ಎಂದು ಹೇಳಲಾಗುತ್ತಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ss-rajamouli-confirms-varanasi-is-a-standalone-film-not-a-franchise-gvd/articleshow-xdnq0lx"/>
        </item>
        <item>
            <title><![CDATA[Govinda: 'ಹೀರೋಗಳಿಗೆ ಇದೆಲ್ಲಾ ಕಾಮನ್'..: ಗಂಡನ ಅಫೇರ್‌ಗಳ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಪತ್ನಿ ಸುನಿತಾ!]]></title>
            <link>https://kannada.asianetnews.com/entertainment/sunita-ahuja-drops-bombshells-on-govindas-alleged-affairs-on-lock-upp-gvd/articleshow-aztl1so</link>
            <guid isPermaLink="true">https://kannada.asianetnews.com/entertainment/sunita-ahuja-drops-bombshells-on-govindas-alleged-affairs-on-lock-upp-gvd/articleshow-aztl1so</guid>
            <pubDate>Sun, 28 Jun 2026 17:17:29 +0530</pubDate>
            <description><![CDATA[&lt;p&gt;Sunita Ahuja Interview: ರಿಯಾಲಿಟಿ ಶೋ 'ಲಾಕ್ ಅಪ್'ನಲ್ಲಿ ಗೋವಿಂದ ಪತ್ನಿ ಸುನಿತಾ ಅಹುಜಾ, ತಮ್ಮ ಪತಿಯ ಅಫೇರ್&zwnj;ಗಳ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw70s2364rv4dndty7x8mqyb,imgname-hfhc-1782647130214.png" type="image/jpeg" height="390" width="690"/>
            <content:encoded><![CDATA[&lt;p&gt;ಬಿಂದಾಸ್ ಮಾತುಗಳಿಗೆ ಫೇಮಸ್ ಆಗಿರೋ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ, ಜೂನ್ 27ರಂದು 'ಲಾಕ್ ಅಪ್: ಸಚ್ ಯಾ ಸಜಾ' ಶೋಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ನೇರ ನುಡಿ ಹಾಗೂ ಲವಲವಿಕೆಯ ವ್ಯಕ್ತಿತ್ವದಿಂದ ಅವರು ಈಗಾಗಲೇ ಜನರ ಮನಸ್ಸು ಗೆದ್ದಿದ್ದಾರೆ. ಶೋಗೆ ಬಂದ ಬೆನ್ನಲ್ಲೇ, ತಮ್ಮ ಪತಿ ಚಿಚಿ ಅಲಿಯಾಸ್ ಗೋವಿಂದ ಅವರ ಅಫೇರ್&zwnj;ಗಳ ಬಗ್ಗೆ ಸುನಿತಾ ಮಾತನಾಡಿದ್ದಾರೆ. ಕೆಲವರು ಇದನ್ನು ವ್ಯಂಗ್ಯ ಅಂದರೆ, ಇನ್ನು ಕೆಲವರು ಸುನಿತಾ ಹೆಚ್ಚು ಮಾತನಾಡುತ್ತಿದ್ದಾರೆ ಎಂದರು. ಅಸಲಿಗೆ ಅವರು ಹೇಳಿದ್ದೇನು ಅಂತ ನೀವೇ ನೋಡಿ.&lt;/p&gt;&lt;p&gt;&lt;strong&gt;ಗೋವಿಂದ ಅಫೇರ್&zwnj;ಗಳ ಬಗ್ಗೆ ಸುನಿತಾ ಮಾತು&lt;/strong&gt;&lt;/p&gt;&lt;p&gt;ಶೋನಲ್ಲಿ ಸುನಿತಾ ಬಗ್ಗೆ ಬಂದಿದ್ದ ಒಂದು ಹೆಡ್&zwnj;ಲೈನ್ ಓದಲಾಯ್ತು. &quot;ನನಗೆ ಗೋವಿಂದನಂತ ಗಂಡ ಬೇಡ, ಮಗ ಬೇಕು&quot; ಅನ್ನೋದು ಆ ಹೆಡ್&zwnj;ಲೈನ್ ಆಗಿತ್ತು. ಇದನ್ನು ವಿವರಿಸಿದ ಸುನಿತಾ, &quot;ಪ್ರೀತಿಯಲ್ಲಿದ್ದಾಗ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಜೀವನದಲ್ಲಿ ತುಂಬಾ ಅಫೇರ್&zwnj;ಗಳನ್ನು ಮಾಡಿಕೊಂಡಿದ್ದರು. ಅದೂ ಅಲ್ಲದೆ, ಹೀರೋ-ಹೀರೋಯಿನ್&zwnj;ಗಳ ಮಧ್ಯೆ ಇದೆಲ್ಲಾ ಇದ್ದಿದ್ದೇ. ಇಷ್ಟು ವರ್ಷ ಅವರ ಜೊತೆ ನಾನು ನಿಂತಿದ್ದೇನೆ. ನನಗೆ ಅವರ ಥರದ ಮಗ ಬೇಕು ಅಂತ ಅನಿಸುತ್ತೆ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಗೋವಿಂದ ಶೂಟ್ ಮಾಡಿಕೊಂಡಿದ್ದ ಘಟನೆ&lt;/strong&gt;&lt;/p&gt;&lt;p&gt;ಗೋವಿಂದ ಆಕಸ್ಮಿಕವಾಗಿ ಕಾಲಿಗೆ ಗುಂಡು ಹಾರಿಸಿಕೊಂಡ ಘಟನೆ ಬಗ್ಗೆಯೂ ಸುನಿತಾ ಮಾತನಾಡಿದ್ದಾರೆ. &quot;ಕೇಳಿಸಿಕೊ, ಜೀವನದಲ್ಲಿ ಯಾರಾದ್ರೂ ಬಂದಾಗ ಮಾತ್ರ ಮೊಣಕಾಲಿಗೆ ಗುಂಡು ತಾಗೋದು. ಆ ವಿಷಯದಲ್ಲಿ ನಾನು ಸುಳ್ಳು ಹೇಳಿಲ್ಲ. ನಾನೇ ಸತ್ಯ. ಆಗ ನಾನು ಬಾಂಬೆಯಲ್ಲೇ ಇರಲಿಲ್ಲ, ಆದರೂ ನಾನೇ ಹೊಡೆದೆ ಅಂತ ಎಷ್ಟೋ ಜನ ಅಂದರು. ನನ್ನ ಗುರಿ ಯಾವತ್ತೂ ತಪ್ಪಲ್ಲ&quot; ಎಂದು ಸುನಿತಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;'ಲಾಕ್ ಅಪ್ ಸೀಸನ್ 2' ಬಗ್ಗೆ&lt;/strong&gt;&lt;/h2&gt;&lt;p&gt;ಫರಾ ಖಾನ್ ಮತ್ತು ರಿತೇಶ್ ದೇಶಮುಖ್ 'ಲಾಕ್ ಅಪ್ ಸೀಸನ್ 2' ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ರಾಮ್ ಕಪೂರ್, ಧೀರಜ್ ಧೂಪರ್, ಹರ್ಷದ್ ಚೋಪ್ಡಾ, ಶಿವಾಂಗಿ ಜೋಶಿ, ಶ್ರೇಯಾ ಕಲ್ರಾ, ಯೋಗೇಶ್ ರಾವತ್, ಆಕಾಂಕ್ಷಾ ಚೌಧರಿ ಸೇರಿದಂತೆ ಹಲವು ಸ್ಪರ್ಧಿಗಳಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sunita-ahuja-drops-bombshells-on-govindas-alleged-affairs-on-lock-upp-gvd/articleshow-aztl1so"/>
        </item>
        <item>
            <title><![CDATA[Samantha: ಗರ್ಭಿಣಿಯಾಗಿದ್ದರೂ ಶೂಟಿಂಗ್ ನಿಲ್ಲಿಸಲಿಲ್ಲ ಸಮಂತಾ: ಸಿಕ್‌ನೆಸ್‌ನಲ್ಲೇ ಹೈ-ಎನರ್ಜಿ ಹಾಡಿಗೆ ಡ್ಯಾನ್ಸ್]]></title>
            <link>https://kannada.asianetnews.com/entertainment/samantha-ruth-prabhu-filmed-energetic-song-during-pregnancy-sickness-says-director-gvd/articleshow-guxeplq</link>
            <guid isPermaLink="true">https://kannada.asianetnews.com/entertainment/samantha-ruth-prabhu-filmed-energetic-song-during-pregnancy-sickness-says-director-gvd/articleshow-guxeplq</guid>
            <pubDate>Sun, 28 Jun 2026 17:02:47 +0530</pubDate>
            <description><![CDATA[&lt;p&gt;Samantha ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಈ ಚಿತ್ರದ ಗೆಲುವು ಸಮಂತಾಗೆ ಡಬಲ್ ಸಂಭ್ರಮ ತಂದುಕೊಟ್ಟಿದೆ. ಒಂದು ಕಡೆ ಸಿನಿಮಾ ಸೂಪರ್ ಹಿಟ್.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6zr49e5e0rv15n6bd4a04v,imgname-ch-1782646051117.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಸಮಂತಾ ರುತ್ ಪ್ರಭು ಅವರ ವೃತ್ತಿಪರತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಮಾ ಇಂಟಿ ಬಂಗಾರಂ' ಸಿನಿಮಾದ ಶೂಟಿಂಗ್ ವೇಳೆ ಗರ್ಭಿಣಿಯಾಗಿದ್ದ ಅವರು, ಮಾರ್ನಿಂಗ್ ಸಿಕ್&zwnj;ನೆಸ್&zwnj;ನಿಂದ ಬಳಲುತ್ತಿದ್ದರೂ ಹೈ-ಎನರ್ಜಿ ಹಾಡಿಗೆ ಹೆಜ್ಜೆ ಹಾಕಿದ್ದರಂತೆ. ಈ ಬಗ್ಗೆ ನಿರ್ದೇಶಕಿ ನಂದಿನಿ ರೆಡ್ಡಿ ಮಾತನಾಡಿದ್ದಾರೆ.&lt;/p&gt;&lt;p&gt;ಸಮಂತಾ ರುತ್ ಪ್ರಭು ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಈ ಚಿತ್ರದ ಗೆಲುವು ಸಮಂತಾಗೆ ಡಬಲ್ ಸಂಭ್ರಮ ತಂದುಕೊಟ್ಟಿದೆ. ಒಂದು ಕಡೆ ಸಿನಿಮಾ ಸೂಪರ್ ಹಿಟ್ ಆಗಿದ್ದರೆ, ಇನ್ನೊಂದು ಕಡೆ ಅವರು ಪತಿ ರಾಜ್ ನಿಡಿಮೋರು ಜೊತೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.&lt;/p&gt;&lt;p&gt;ಹೌದು, ನೀವು ಓದಿದ್ದು ನಿಜ. ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದರಲ್ಲಿ ಸಮಂತಾ ಅವರ ಬೇಬಿ ಬಂಪ್ ಕಾಣಿಸಿಕೊಂಡಿತ್ತು. ಅವರು ತಾಯಿಯಾಗಲಿದ್ದಾರೆ ಎಂದು ತಿಳಿದು ಅಭಿಮಾನಿಗಳು ಸಖತ್ ಖುಷಿಯಾಗಿದ್ದರು. ಇದೀಗ, 'ಮಾ ಇಂಟಿ ಬಂಗಾರಂ' ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ ಹೊಸ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಸಮಂತಾ ಗರ್ಭಿಣಿಯಾಗಿದ್ದಾಗ, ಮಾರ್ನಿಂಗ್ ಸಿಕ್&zwnj;ನೆಸ್&zwnj;ನಿಂದ ಬಳಲುತ್ತಿದ್ದರೂ ಸಹ, ಚಿತ್ರದ ಒಂದು ಹೈ-ಎನರ್ಜಿ ಹಾಡಿನ ಶೂಟಿಂಗ್&zwnj;ನಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಸಮಂತಾ ವೃತ್ತಿಪರತೆ ಬಗ್ಗೆ ನಂದಿನಿ ರೆಡ್ಡಿ ಮಾತು&lt;/strong&gt;&lt;/p&gt;&lt;p&gt;iDream ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ, ನಂದಿನಿ ರೆಡ್ಡಿ ಅವರು ಸಮಂತಾ ಅವರ ಕೆಲಸದ ಮೇಲಿರುವ ಶ್ರದ್ಧೆ ಮತ್ತು ವೃತ್ತಿಪರತೆಯ ಬಗ್ಗೆ ಮಾತನಾಡಿದ್ದಾರೆ. 'ತಸ್ಸಡಿಯಾ' ಹಾಡಿನ ಚಿತ್ರೀಕರಣದ ಸಮಯದಲ್ಲಿ ಸಮಂತಾ ಗರ್ಭಿಣಿ ಎಂಬುದು ತಮಗೆ ತಿಳಿಯಿತು ಎಂದು ಅವರು ಹೇಳಿದ್ದಾರೆ. &quot;ನನಗೆ ತುಂಬಾ ಖುಷಿಯಾಯಿತು. ಅದು ಶೂಟಿಂಗ್&zwnj;ನ ಬಹುತೇಕ ಕೊನೆಯ ಹಂತದಲ್ಲಿತ್ತು. ಮೊದಲು ಅವರು ಬೆಳಗ್ಗೆಯಿಂದ ಹುಷಾರಿಲ್ಲ ಎಂದು ಹೇಳಿದರು. ನಾವು ಅವರಿಗೆ ಜ್ವರ ಬಂದಿರಬೇಕು ಎಂದುಕೊಂಡೆವು,&quot; ಎಂದು ನಂದಿನಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&quot;ಆರಂಭದಲ್ಲಿ ಸಮಂತಾ ಏನೂ ಹೇಳಲಿಲ್ಲ. ಒಂದು ನಿಮಿಷದ ನಂತರ, 'ನಿಜ ಹೇಳಬೇಕೆಂದರೆ, ನಾನು ಗರ್ಭಿಣಿ ಮತ್ತು ಮಾರ್ನಿಂಗ್ ಸಿಕ್&zwnj;ನೆಸ್&zwnj;ನಿಂದ ಬಳಲುತ್ತಿದ್ದೇನೆ' ಎಂದು ಹೇಳಿದರು. ಅದು ಗರ್ಭಾವಸ್ಥೆಯ ಆರಂಭಿಕ ಹಂತವಾಗಿತ್ತು. ಆ ನಂತರ, ಉಳಿದ ಶೂಟಿಂಗ್&zwnj;ನಲ್ಲಿ ನಾವು ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಂಡೆವು. ಅದೃಷ್ಟವಶಾತ್, ಆಕ್ಷನ್ ದೃಶ್ಯಗಳ ಚಿತ್ರೀಕರಣ ಅದಾಗಲೇ ಮುಗಿದಿತ್ತು,&quot; ಎಂದು ನಂದಿನಿ ರೆಡ್ಡಿ ಹೇಳಿದರು.&lt;/p&gt;&lt;h2&gt;&lt;strong&gt;ಹೆರಿಗೆ ರಜೆ ಬಗ್ಗೆ ಸಮಂತಾ ಮಾತು&lt;/strong&gt;&lt;/h2&gt;&lt;p&gt;ತಮ್ಮ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಮಾತನಾಡಿದ ಸಮಂತಾ, ಹೆರಿಗೆ ರಜೆ ತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿದರು. 'ಮಾ ಇಂಟಿ ಬಂಗಾರಂ' ನಂತರ, ನನ್ನ ಆರೋಗ್ಯದ ಸ್ಥಿತಿಯಿಂದಾಗಿ ನಾನು ಸಣ್ಣ ವಿರಾಮ ತೆಗೆದುಕೊಳ್ಳಬೇಕಾಗುತ್ತದೆ. ನಾನು ಹೆರಿಗೆ ರಜೆ ತೆಗೆದುಕೊಳ್ಳಬೇಕಾಗುತ್ತೆ. ಆದರೆ ನನಗೆ ತುಂಬಾ ಖುಷಿಯಾಗಿದೆ, ಮತ್ತು ಆ ನಂತರ ನನ್ನ ಅಭಿಮಾನಿಗಳಿಗಾಗಿ ಮತ್ತೊಂದು ಚಿತ್ರದೊಂದಿಗೆ ಖಂಡಿತ ವಾಪಸ್ ಬರುತ್ತೇನೆ,&quot; ಎಂದು ಅವರು ಹೇಳಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/samantha-ruth-prabhu-filmed-energetic-song-during-pregnancy-sickness-says-director-gvd/articleshow-guxeplq"/>
        </item>
        <item>
            <title><![CDATA[Nivin Pauly-Alphonse Puthren: 10 ವರ್ಷದ ಬಳಿಕ  ಮತ್ತೆ ಒಂದಾದ 'ಪ್ರೇಮಂ' ಜೋಡಿ; ಆಲ್ಫೋನ್ಸ್ ಪುತ್ರೆನ್ 'ವಿಜಯಂ' ಚಿತ್ರಕ್ಕೆ ನಿವಿನ್‌ ಪೌಲಿ ಹೀರೋ!]]></title>
            <link>https://kannada.asianetnews.com/entertainment/malayalam-movie-premam-duo-alphonse-puthren-and-nivin-pauly-have-reunited-after-10-years-for-the-film-vijayam/articleshow-shbgy03</link>
            <guid isPermaLink="true">https://kannada.asianetnews.com/entertainment/malayalam-movie-premam-duo-alphonse-puthren-and-nivin-pauly-have-reunited-after-10-years-for-the-film-vijayam/articleshow-shbgy03</guid>
            <pubDate>Sun, 28 Jun 2026 16:49:52 +0530</pubDate>
            <description><![CDATA[&lt;p&gt;ಇತ್ತೀಚೆಗಷ್ಟೇ ನಿವಿನ್ ಪೌಲಿ ಅಭಿನಯದ 'ವರ್ಷಂಗಳ್ಕ್ಕು ಶೇಷಂ' ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಮಿಂಚಿತ್ತು. ಬಹಳ ಕಾಲದ ಬಳಿಕ ನಿವಿನ್ ಅವರಿಗೆ ಈ ಸಿನಿಮಾ ದೊಡ್ಡ ಗೆಲುವನ್ನು ತಂದುಕೊಟ್ಟಿತ್ತು. ಸದ್ಯ ಅದೇ ಹುಮ್ಮಸ್ಸಿನಲ್ಲಿರುವ ನಿವಿನ್, ತಮ್ಮ 50ನೇ ಸಿನಿಮಾವನ್ನು ಆಲ್ಫೋನ್ಸ್ ಪುತ್ರೇನ್ ಜೊತೆ ಮಾಡಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6z874wqp8b43rjdv526mtv,imgname-nivin-pauly-alphonse-puthren-1782645529756.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸ್ಯಾಂಡಲ್&zwnj;ವುಡ್ ಇರಲಿ, ಮಾಲಿವುಡ್ ಇರಲಿ.. ಕೆಲವು ಕಾಂಬಿನೇಷನ್&zwnj;ಗಳ ಅಂದ್ರೆ ಹೀಗೇನೆ!&lt;/strong&gt;&lt;/p&gt;&lt;p&gt;ಕನ್ನಡದಲ್ಲಿ ಯೋಗರಾಜ್ ಭಟ್- ಗಣೇಶ್ ಜೋಡಿ 'ಮುಂಗಾರು ಮಳೆ' ಮೂಲಕ ಮಾಡಿದ್ದ ಮೋಡಿಯಂತೆ ಮಲಯಾಳಂ ಚಿತ್ರರಂಗದಲ್ಲಿ ಅಂತಹದ್ದೇ ಒಂದು ಮ್ಯಾಜಿಕ್ ಮಾಡಿದ್ದ ಜೋಡಿ ಅಂದ್ರೆ ಅದು ನಟ ನಿವಿನ್ ಪೌಲಿ (Nivin Pauly) ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ (Alphonse Puthren). 'ನೇರಂ' ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಈ ಜೋಡಿ, 'ಪ್ರೇಮಂ' (Premam) ಚಿತ್ರದ ಮೂಲಕ ಇಡೀ ದಕ್ಷಿಣ ಭಾರತವನ್ನೇ ಪ್ರೀತಿಯ ಅಮಲಿನಲ್ಲಿ ತೇಲಿಸಿದ್ದ ಈ ಜೋಡಿ ಈಗ ಹತ್ತು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ಒಂದಾಗಿದೆ. ಈ ಸುದ್ದಿ ಕೇಳಿ ಮಲಯಾಳಂ ಸಿನಿರಸಿಕರು ಮಾತ್ರವಲ್ಲದೆ, ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಸಂಭ್ರಮಿಸುತ್ತಿದೆ.&lt;/p&gt;&lt;h2&gt;ಮತ್ತೆ ಒಂದಾದ 'ಬ್ಲಾಕ್&zwnj;ಬಸ್ಟರ್' ಜೋಡಿ!&lt;/h2&gt;&lt;p&gt;ಹೌದು, 'ಪ್ರೇಮಂ' ಅಂತಹ ಎವರ್&zwnj;ಗ್ರೀನ್ ಹಿಟ್ ಸಿನಿಮಾ ನೀಡಿದ ನಂತರ ಈ ಜೋಡಿ ಯಾವಾಗ ಮತ್ತೆ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿ ಹಲವರಲ್ಲಿ ಇತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಎನ್ನಬಹುದು. ಈ ಹೊಸ ಚಿತ್ರಕ್ಕೆ 'ವಿಜಯಂ' ಎಂದು ಹೆಸರಿಡಲಾಗಿದ್ದು, ಇದು ನಟ ನಿವಿನ್ ಪೌಲಿ ಅವರ ವೃತ್ತಿಜೀವನದ ಮೈಲಿಗಲ್ಲಿನ 50ನೇ ಸಿನಿಮಾ ಆಗಿರುವುದು ವಿಶೇಷ. ಹತ್ತು ವರ್ಷಗಳ ಬಳಿಕ ಇಬ್ಬರು ದಿಗ್ಗಜರು ಒಂದಾಗುತ್ತಿರುವ ಕಾರಣಕ್ಕೆ ಸಹಜವಾಗಿಯೇ ಚಿತ್ರ ಭಾರಿ ಹೈಪ್ ಕ್ರಿಯೇಟ್ ಮಾಡಿದೆ, ನಿರೀಕ್ಷೆ ಸೃಷ್ಟಿಸಿದೆ.&lt;/p&gt;&lt;p&gt;ಈ ಬಾರಿ ರೇಸಿಂಗ್ ಲೋಕದ ಕಥೆ!&lt;/p&gt;&lt;p&gt;ಆಲ್ಫೋನ್ಸ್ ಪುತ್ರೇನ್ ಅಂದ್ರೆ ನಮಗೆ ನೆನಪಾಗೋದು ಸುಂದರವಾದ ಲವ್ ಸ್ಟೋರಿಗಳು. ಆದರೆ ಈ ಬಾರಿ ಅವರು ತಮ್ಮ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. 'ವಿಜಯಂ' ಚಿತ್ರವು ರೇಸಿಂಗ್ ಪ್ರಪಂಚದ ಹಿನ್ನೆಲೆಯಲ್ಲಿ ಮೂಡಿಬರಲಿದ್ದು, ಒಂದು ರೋಚಕ ಕಥಾಹಂದರವನ್ನು ಹೊಂದಿದೆ. ಆಲ್ಫೋನ್ಸ್ ಅವರೇ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ, ಸಂಕಲನದ (Editing) ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅಂದಹಾಗೆ, ಇತ್ತೀಚೆಗಷ್ಟೇ ಕೇರಳದ ಎರ್ನಾಕುಲಂನ ಪದ್ಮಾ ಥಿಯೇಟರ್&zwnj;ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಈ ಚಿತ್ರದ ಟೈಟಲ್ ಲಾಂಚ್ ಅದ್ಧೂರಿಯಾಗಿ ನಡೆದಿದೆ.&lt;/p&gt;&lt;h3&gt;ತಾಂತ್ರಿಕ ವರ್ಗದಲ್ಲಿ ಸ್ಟಾರ್ ಬಲ!&lt;/h3&gt;&lt;p&gt;ಚಿತ್ರಕ್ಕೆ ಸಂಗೀತ ನೀಡಲು ಪ್ರತಿಭಾವಂತ ಸಂಗೀತ ನಿರ್ದೇಶಕ ಸ್ಟೀವ್ ಕೊಟ್ಟೂರ್ ಸಜ್ಜಾಗಿದ್ದಾರೆ. ಇವರು ಈ ಹಿಂದೆ ಬಾಲಿವುಡ್ ಬಾದ್&zwnj;ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ 'ಸ್ಟಾರ್&zwnj;ಡಮ್' ವೆಬ್ ಸರಣಿಯ ಸಂಗೀತ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನು ಈ ಚಿತ್ರವನ್ನು 'ಪೌಲಿ ಜೂನಿಯರ್ ಪಿಕ್ಚರ್ಸ್' ಮತ್ತು 'ಸಿನೆಹೋಲಿಕ್ಸ್' ಬ್ಯಾನರ್ ಅಡಿಯಲ್ಲಿ ಟನ್ಸನ್ ಟೋನಿ ಹಾಗೂ ಸುನಿಲ್ ರಾಮದಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.&lt;/p&gt;&lt;p&gt;ನಿವಿನ್ ಪೌಲಿ ಅವರ ಭರ್ಜರಿ ಕಮ್&zwnj;ಬ್ಯಾಕ್!&lt;/p&gt;&lt;p&gt;ಇತ್ತೀಚೆಗಷ್ಟೇ ನಿವಿನ್ ಪೌಲಿ ಅಭಿನಯದ 'ವರ್ಷಂಗಳ್ಕ್ಕು ಶೇಷಂ' (Varshangalkku Shesham) ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಧೂಳೆಬ್ಬಿಸಿತ್ತು. ಬಹಳ ಕಾಲದ ಬಳಿಕ ನಿವಿನ್ ಅವರಿಗೆ ಈ ಸಿನಿಮಾ ದೊಡ್ಡ ಗೆಲುವನ್ನು ತಂದುಕೊಟ್ಟಿತ್ತು. ಸದ್ಯ ಅದೇ ಹುಮ್ಮಸ್ಸಿನಲ್ಲಿರುವ ನಿವಿನ್, ತಮ್ಮ 50ನೇ ಸಿನಿಮಾವನ್ನು ಆಲ್ಫೋನ್ಸ್ ಅವರೊಂದಿಗೆ ಮಾಡುತ್ತಿರುವುದು ಅವರ ಕೆರಿಯರ್&zwnj;ಗೆ ಹೊಸ ಚೈತನ್ಯ ನೀಡಿರುವುದರ ಜೊತೆಗೆ ಸಿನಿಪ್ರೇಕ್ಷಕರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;p&gt;ಒಟ್ಟಾರೆಯಾಗಿ 'ವಿಜಯಂ' ಸಿನಿಮಾ ಕೇವಲ ಹೆಸರಿಗೆ ಮಾತ್ರವಲ್ಲದೆ, ಬಾಕ್ಸ್ ಆಫೀಸ್&zwnj;ನಲ್ಲೂ ದೊಡ್ಡ ವಿಜಯ ಸಾಧಿಸಲಿದೆ ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ. ಉಳಿದಂತೆ, ಚಿತ್ರದ ಮಿಕ್ಕ ತಾರಾಗಣದ ಬಗ್ಗೆ ಮಾಹಿತಿ ಪಡೆಯಲು ಸಿನಿರಸಿಕರು ಕುತೂಹಲದಿಂದ ಕಾಯುತ್ತಿದ್ದಾರೆ. ಸಿನೆಮಾ ಅಂದ್ರೆ ಬರಿ ಎಂಟರ್ಟೈನ್ಮೆಂಟ್ ಅಲ್ಲ, ಅದು ಅಭಿಮಾನಿಗಳ ಎಮೋಷನ್ ಎಂಬುದನ್ನು ಈ ಜೋಡಿ ಮತ್ತೊಮ್ಮೆ ಸಾಬೀತು ಮಾಡಲು ರೆಡಿಯಾಗಿದೆ!&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/malayalam-movie-premam-duo-alphonse-puthren-and-nivin-pauly-have-reunited-after-10-years-for-the-film-vijayam/articleshow-shbgy03"/>
        </item>
        <item>
            <title><![CDATA[Eetha: ಶ್ರದ್ಧಾ ಕಪೂರ್ ಬಯೋಪಿಕ್‌ ಸಿನಿಮಾಗೆ ಭಾರೀ ವಿರೋಧ... ಟೈಟಲ್ ಬದಲಾಗುತ್ತಾ?]]></title>
            <link>https://kannada.asianetnews.com/entertainment/shraddha-kapoors-film-eetha-faces-backlash-over-title-from-vithabais-family-gvd/articleshow-oe70xic</link>
            <guid isPermaLink="true">https://kannada.asianetnews.com/entertainment/shraddha-kapoors-film-eetha-faces-backlash-over-title-from-vithabais-family-gvd/articleshow-oe70xic</guid>
            <pubDate>Sun, 28 Jun 2026 16:43:55 +0530</pubDate>
            <description><![CDATA[&lt;p&gt;Eetha Biopic: ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಚರಿತ್ರೆ ಆಧಾರಿತ, ನಟಿ ಶ್ರದ್ಧಾ ಕಪೂರ್ ಅಭಿನಯದ 'ಈಥಾ' ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ವಿವಾದ ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6ys546r83bkdrwawmm59q8,imgname-hc-1782645036166.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಶ್ರದ್ಧಾ ಕಪೂರ್ ಅವರ ಹೊಸ ಬಯೋಪಿಕ್ 'ಈಥಾ' ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ. ಖ್ಯಾತ ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನ ಆಧಾರಿತ ಈ ಚಿತ್ರದ ಶೀರ್ಷಿಕೆಗೆ ಎನ್&zwnj;ಸಿಪಿ ಹಾಗೂ ವಿಠಾಬಾಯಿ ಕುಟುಂಬ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಲಾವಿದೆಗೆ ಗೌರವ ನೀಡುವಂತೆ ಚಿತ್ರದ ಹೆಸರನ್ನು ಬದಲಾಯಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಖ್ಯಾತ ತಮಾಷಾ ಮತ್ತು ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಚರಿತ್ರೆ ಆಧಾರಿತ, ನಟಿ ಶ್ರದ್ಧಾ ಕಪೂರ್ ಅಭಿನಯದ 'ಈಥಾ' ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ವಿವಾದ ಹುಟ್ಟುಹಾಕಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದರಲ್ಲಿ ಶ್ರದ್ಧಾ ಕಪೂರ್, ವಿಠಾಬಾಯಿ ಪಾತ್ರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಆದರೆ, ಚಿತ್ರದ 'ಈಥಾ' ಎಂಬ ಶೀರ್ಷಿಕೆಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಮತ್ತು ವಿಠಾಬಾಯಿ ಅವರ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹೆಸರು ಆ ಮಹಾನ್ ಕಲಾವಿದೆಯ ಸಾಧನೆಗೆ ನ್ಯಾಯ ಒದಗಿಸುವುದಿಲ್ಲ ಎಂಬುದು ಅವರ ವಾದ.&lt;/p&gt;&lt;p&gt;&lt;strong&gt;ಎನ್&zwnj;ಸಿಪಿ ಮತ್ತು ವಿಠಾಬಾಯಿ ಕುಟುಂಬದಿಂದ ಶೀರ್ಷಿಕೆಗೆ ಆಕ್ಷೇಪ&lt;/strong&gt;&lt;/p&gt;&lt;p&gt;ಎನ್&zwnj;ಸಿಪಿಯ ಚಲನಚಿತ್ರ ಮತ್ತು ಸಾಂಸ್ಕೃತಿಕ ವಿಭಾಗ 'ಈಥಾ' ಶೀರ್ಷಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ. ವಿಠಾಬಾಯಿ ನಾರಾಯಣಗಾಂವ್ಕರ್ ಕೇವಲ ಒಬ್ಬ ಜಾನಪದ ಕಲಾವಿದೆಯಲ್ಲ, ಅದಕ್ಕೂ ಮಿಗಿಲಾದವರು ಎಂದು ಪಕ್ಷ ಹೇಳಿದೆ. ಅವರು ಮಹಾರಾಷ್ಟ್ರದ ಅತ್ಯಂತ ಗೌರವಾನ್ವಿತ ಸಾಂಸ್ಕೃತಿಕ ಐಕಾನ್&zwnj;ಗಳಲ್ಲಿ ಒಬ್ಬರಾಗಿದ್ದು, ಚಿತ್ರದ ಶೀರ್ಷಿಕೆಯಲ್ಲಿ ಅವರ ಹೆಸರೇ ಇರಬೇಕು ಎಂದು ಪಕ್ಷದ ನಾಯಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಮಹಾರಾಷ್ಟ್ರದ ಎನ್&zwnj;ಸಿಪಿ ಚಲನಚಿತ್ರ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಬಾಬಾಸಾಹೇಬ್ ಪಾಟೀಲ್, &quot;ವಿಠಾಬಾಯಿ ಅವರನ್ನು ಅತ್ಯಂತ ಗೌರವ, ಘನತೆ ಮತ್ತು ಹಿರಿಮೆಯಿಂದ ನೆನಪಿಸಿಕೊಳ್ಳಬೇಕು&quot; ಎಂದು ಹೇಳಿದ್ದಾರೆ. ಈ ಆಕ್ಷೇಪವನ್ನು ಬೆಂಬಲಿಸಿ, ವಿಠಾಬಾಯಿ ಅವರ ಮಕ್ಕಳಾದ ಕೈಲಾಶ್ ಮತ್ತು ರಾಜೇಶ್ ಹಾಗೂ ಮೊಮ್ಮಗ ಮೋಹಿತ್ ಕೂಡ ಚಿತ್ರತಂಡಕ್ಕೆ ಮನವಿ ಮಾಡಿದ್ದಾರೆ. ತಮ್ಮ ತಾಯಿಯ ಹೆಸರನ್ನೇ ಚಿತ್ರಕ್ಕೆ ಇಡುವಂತೆ ಅವರು ಒತ್ತಾಯಿಸಿದ್ದಾರೆ. ತಮಾಷಾ ಮತ್ತು ಲಾವಣಿ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗೆ ನೇರ ಮನ್ನಣೆ ಸಿಗಬೇಕು ಎಂಬುದು ಅವರ ಆಗ್ರಹ.&lt;/p&gt;&lt;h2&gt;&lt;strong&gt;ಕಲೆಯ ಬಗ್ಗೆ ವಿಠಾಬಾಯಿ ಬದ್ಧತೆ ತೋರಿಸುವ ಟೀಸರ್&lt;/strong&gt;&lt;/h2&gt;&lt;p&gt;ಈ ವಿವಾದದ ನಡುವೆಯೂ, ಚಿತ್ರದ ಟೀಸರ್ ಭಾರಿ ಸದ್ದು ಮಾಡಿದೆ. ವಿಠಾಬಾಯಿ ಅವರ ಜೀವನದ ಅತ್ಯಂತ ನಾಟಕೀಯ ಘಟನೆಯೊಂದನ್ನು ಟೀಸರ್&zwnj;ನಲ್ಲಿ ತೋರಿಸಲಾಗಿದೆ. ತುಂಬು ಗರ್ಭಿಣಿಯಾಗಿದ್ದ ವಿಠಾಬಾಯಿ ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿರುತ್ತಾರೆ. ಪ್ರದರ್ಶನದ ಮಧ್ಯೆಯೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಅವರು ವೇದಿಕೆಯ ಹಿಂಬದಿಗೆ ಹೋಗಿ ಮಗುವಿಗೆ ಜನ್ಮ ನೀಡಿ, ಮತ್ತೆ ಬಂದು ತಮ್ಮ ಪ್ರದರ್ಶನವನ್ನು ಪೂರ್ಣಗೊಳಿಸುತ್ತಾರೆ. ಇದು ಕಲೆಯ ಬಗ್ಗೆ ಅವರಿಗಿದ್ದ ಅಚಲ ಬದ್ಧತೆಯನ್ನು ತೋರಿಸುತ್ತದೆ.&lt;/p&gt;&lt;p&gt;ಆದರೆ, ನಿಜ ಜೀವನದಲ್ಲಿ ಈ ಘಟನೆ ನಡೆದಾಗ, ವಿಠಾಬಾಯಿ ಅವರಿಗೆ ವಿಶ್ರಾಂತಿ ನೀಡಲು ಪ್ರದರ್ಶನವನ್ನು ನಿಲ್ಲಿಸಲಾಗಿತ್ತು ಎಂದು ವರದಿಯಾಗಿದೆ. ಸಿನಿಮಾದಲ್ಲಿ ಈ ಘಟನೆಯನ್ನು ಹೆಚ್ಚು ನಾಟಕೀಯವಾಗಿ ತೋರಿಸಲಾಗಿದೆ. ವಿಠಾಬಾಯಿ ಅವರು 1957 ಮತ್ತು 1990ರಲ್ಲಿ ಎರಡು ಬಾರಿ ರಾಷ್ಟ್ರಪತಿ ಪ್ರಶಸ್ತಿ ಪಡೆದಿದ್ದಾರೆ. ಮಹಾರಾಷ್ಟ್ರದ ಜಾನಪದ ಕಲೆಗಳಲ್ಲಿ ಅವರು ಇಂದಿಗೂ ಅತ್ಯಂತ ಗೌರವಾನ್ವಿತ ಹೆಸರು. ಅವರ ಅದ್ಭುತ ಜೀವನದ ವಿವಿಧ ಹಂತಗಳನ್ನು ನೈಜವಾಗಿ ಕಟ್ಟಿಕೊಡಲು ಮುಂಬೈ, ಸೋಲಾಪುರ, ಸತಾರಾ ಮತ್ತು ನಾಸಿಕ್&zwnj;ನಂತಹ ಹಲವು ಸ್ಥಳಗಳಲ್ಲಿ ಈ ಬಯೋಪಿಕ್ ಅನ್ನು ಚಿತ್ರೀಕರಿಸಲಾಗಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/shraddha-kapoors-film-eetha-faces-backlash-over-title-from-vithabais-family-gvd/articleshow-oe70xic"/>
        </item>
        <item>
            <title><![CDATA[Kriti Sanon: ನಟಿ ಕೃತಿ-ಕಬೀರ್ ಬ್ರೇಕಪ್? ಬೇರೆ ಹುಡುಗಿ ಜೊತೆಗಿನ ಫೋಟೋ ವೈರಲ್, ಅಸಲಿ ಕಥೆಯೇನು?]]></title>
            <link>https://kannada.asianetnews.com/entertainment/kriti-sanon-and-kabir-bahia-breakup-rumors-debunked-after-viral-photos-gvd/articleshow-2ep2ge6</link>
            <guid isPermaLink="true">https://kannada.asianetnews.com/entertainment/kriti-sanon-and-kabir-bahia-breakup-rumors-debunked-after-viral-photos-gvd/articleshow-2ep2ge6</guid>
            <pubDate>Sun, 28 Jun 2026 16:31:24 +0530</pubDate>
            <description><![CDATA[&lt;p&gt;Kriti Sanon: ಇತ್ತೀಚೆಗೆ ಒಂದು ಪಾರ್ಟಿಯಲ್ಲಿ ಕಬೀರ್ ಬೇರೊಬ್ಬ ಯುವತಿ ಜೊತೆ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇವರಿಬ್ಬರ ಬ್ರೇಕಪ್ ಬಗ್ಗೆ ಚರ್ಚೆ ಶುರುಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6y21p7e25j27n48vwckpj6,imgname-vhv-1782644278983.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಕೃತಿ ಸನೋನ್ ಮತ್ತು ಉದ್ಯಮಿ ಕಬೀರ್ ಬಹಿಯಾ ಬ್ರೇಕಪ್ ಮಾಡಿಕೊಂಡ್ರಾ? ಇಂಥದ್ದೊಂದು ಸುದ್ದಿ ಹಬ್ಬಿದೆ. ಇದಕ್ಕೆ ಕಾರಣ, ಕಬೀರ್ ಬೇರೊಬ್ಬ ಯುವತಿ ಜೊತೆ ಕಾಣಿಸಿಕೊಂಡಿದ್ದು. ಆದರೆ, ಕಬೀರ್ ಆಪ್ತರು ಈ ಸುದ್ದಿಯನ್ನು ತಳ್ಳಿಹಾಕಿದ್ದು, ಆ ಯುವತಿ ಫ್ಯಾಮಿಲಿ ಫ್ರೆಂಡ್ ಅಷ್ಟೇ ಎಂದಿದ್ದಾರೆ.&lt;/p&gt;&lt;p&gt;ಬಾಲಿವುಡ್&zwnj;ನಲ್ಲಿ ಲವ್, ಬ್ರೇಕಪ್ ಕಥೆಗಳಿಗೆ ಏನೂ ಕಮ್ಮಿ ಇಲ್ಲ. ಈಗ ನಟಿ ಕೃತಿ ಸನೋನ್ ಮತ್ತು ಲಂಡನ್ ಮೂಲದ ಉದ್ಯಮಿ ಕಬೀರ್ ಬಹಿಯಾ ಅವರ ಸಂಬಂಧದ ಬಗ್ಗೆ ಹೊಸ ಗಾಸಿಪ್ ಶುರುವಾಗಿದೆ. ಕಬೀರ್ ಬಹಿಯಾ ಬೇರೊಬ್ಬ ಯುವತಿ ಜೊತೆ ಕಾಣಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಾದ ನಂತರ, ಕೃತಿ ಮತ್ತು ಕಬೀರ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ರೆಡ್ಡಿಟ್ ಸೇರಿದಂತೆ ಹಲವೆಡೆ ಹರಿದಾಡುತ್ತಿವೆ.&lt;/p&gt;&lt;p&gt;ಕೃತಿ ಮತ್ತು ಕಬೀರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಈ ಹಿಂದೆಯೂ ಹಲವು ಬಾರಿ ಸುದ್ದಿಯಾಗಿತ್ತು. ತಾನು ಚಿತ್ರರಂಗದವರಲ್ಲದ ವ್ಯಕ್ತಿಯೊಬ್ಬರ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಕೃತಿ ಒಂದು ಚಾಟ್ ಶೋನಲ್ಲಿ ಒಪ್ಪಿಕೊಂಡಿದ್ದರು. ಇಬ್ಬರೂ ಹಲವು ಕೌಟುಂಬಿಕ ಕಾರ್ಯಕ್ರಮ, ವೆಕೇಷನ್&zwnj;ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ, ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.&lt;/p&gt;&lt;p&gt;&lt;strong&gt;ವೈರಲ್ ಫೋಟೋ ಹಿಂದಿನ ಕಥೆ&lt;/strong&gt;&lt;/p&gt;&lt;p&gt;ಇತ್ತೀಚೆಗೆ ಒಂದು ಪಾರ್ಟಿಯಲ್ಲಿ ಕಬೀರ್ ಬೇರೊಬ್ಬ ಯುವತಿ ಜೊತೆ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇವರಿಬ್ಬರ ಬ್ರೇಕಪ್ ಬಗ್ಗೆ ಚರ್ಚೆ ಶುರುಮಾಡಿದರು. ಕೃತಿ ಜೊತೆಗಿನ ಸಂಬಂಧ ಮುರಿದುಬಿತ್ತೇ ಎಂದು ಹಲವರು ಪ್ರಶ್ನಿಸಿದ್ದರು.&lt;/p&gt;&lt;h2&gt;&lt;strong&gt;ವದಂತಿಗೆ ಬ್ರೇಕ್ ಹಾಕಿದ ಆಪ್ತರು&lt;/strong&gt;&lt;/h2&gt;&lt;p&gt;ಆದರೆ, ಕಬೀರ್ ಆಪ್ತ ಮೂಲಗಳು ಈ ಬ್ರೇಕಪ್ ವದಂತಿಯನ್ನು ತಳ್ಳಿಹಾಕಿವೆ. ಫೋಟೋದಲ್ಲಿರುವ ಯುವತಿ ಕಬೀರ್ ಅವರ ಫ್ಯಾಮಿಲಿ ಫ್ರೆಂಡ್, ಆಕೆಯನ್ನು ಕಬೀರ್ ತಂಗಿಯಂತೆ ಕಾಣುತ್ತಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. &quot;ಆನ್&zwnj;ಲೈನ್&zwnj;ನಲ್ಲಿ ಹರಿದಾಡುತ್ತಿರುವ ಕಬೀರ್ ಮತ್ತು ಆ ಹುಡುಗಿಯ ಫೋಟೋವನ್ನು ತಪ್ಪಾಗಿ ಅರ್ಥೈಸಲಾಗಿದೆ. ಆಕೆ ಅವರ ಫ್ಯಾಮಿಲಿ ಫ್ರೆಂಡ್, ತಂಗಿ ಇದ್ದ ಹಾಗೆ. ಜನರು ಇಷ್ಟು ಬೇಗ ತೀರ್ಮಾನಕ್ಕೆ ಬಂದು ಸುಳ್ಳು ಸುದ್ದಿ ಹಬ್ಬಿಸುವುದು ಬೇಸರದ ಸಂಗತಿ&quot; ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಈ ಎಲ್ಲಾ ವದಂತಿಗಳು ಸುಳ್ಳು ಅನ್ನೋದು ಸ್ಪಷ್ಟ. ಸದ್ಯ ಕೃತಿ ಸನೋನ್ ತಮ್ಮ 'ಕಾಕ್&zwnj;ಟೇಲ್ 2' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kriti-sanon-and-kabir-bahia-breakup-rumors-debunked-after-viral-photos-gvd/articleshow-2ep2ge6"/>
        </item>
        <item>
            <title><![CDATA[Ba Ma Harish Son Ullas Gowda Death: ವಿಜಯನಗರ ನಿವಾಸದಲ್ಲಿ ಅಂತಿಮ ದರ್ಶನ; ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ]]></title>
            <link>https://kannada.asianetnews.com/sandalwood/kannada-producer-bhama-harish-son-ullas-gowda-funeral-will-be-held-at-3-pm-today-at-the-sumanahalli-crematorium/articleshow-w3vgymp</link>
            <guid isPermaLink="true">https://kannada.asianetnews.com/sandalwood/kannada-producer-bhama-harish-son-ullas-gowda-funeral-will-be-held-at-3-pm-today-at-the-sumanahalli-crematorium/articleshow-w3vgymp</guid>
            <pubDate>Sun, 28 Jun 2026 14:02:27 +0530</pubDate>
            <description><![CDATA[&lt;p&gt;'ಈ ನೋವು ಕಳೆದುಕೊಂಡವ್ರಿಗೆ ಗೊತ್ತು. ಉಲ್ಲಾಸ್ ಒಬ್ಬ ಕನ್ನಡ ಚಿತ್ರರಂಗಕ್ಕೆ ಬೆಳಕು ಕೊಡುವ ನಿರ್ದೇಶಕನಾಗಿ ಬರಬೇಕಿತ್ತು. ಗೋವಾಗೆ ಫಿಲ್ಮ್ ಫೆಸ್ಟ್&zwnj;ಗೆ ಹೋದಾಗ ಬಾಡಿಗೆಗೆ ಬೈಕ್ ತೊಗೊಂಡು ಓಡಾಡಿಸಿದ್ದ. ಆ ನೆನಪುಗಳು ಹಚ್ಚ ಹಸಿರಾಗಿವೆ. ಉಲ್ಲಾಸ್ ನಿಂದ ಸ್ನೇಹಜೀವಿ, ಸಮಯ ಪ್ರಜ್ಞೆ, ದೊಡ್ಡವ್ರಿಗೆ ಕೊಡಬೇಕಾದ ಗೌರವ ಎಲ್ಲವೂ ಇತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw44thqhvb4cxc0n8qr83tt3,imgname-new-project---2026-06-27t142758.137-1782550710000.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಮಾ ಹರೀಶ್ ಪುತ್ರ ಉಲ್ಲಾಸ್ ಗೌಡ ಅಂತಿಮ ದರ್ಶನ, ಅಂತ್ಯಕ್ರಿಯೆ&lt;/strong&gt;&lt;/p&gt;&lt;p&gt;ನಿನ್ನೆ ಹೃದಯಾಘಾತದಿಂದ ನಿಧನರಾಗಿರುವ ಸ್ಯಾಂಡಲ್&zwnj;ವುಡ್ ನಿರ್ಮಾಪಕ ಬಾಮಾ ಹರೀಶ್ ಪುತ್ರ ಉಲ್ಲಾಸ್ ಗೌಡ (Ullas Gowda) ಅವರ ಮೃತದೇಹ ವಿಜಯನಗರ ನಿವಾಸಕ್ಕೆ ಬಂದಿದ್ದು, ಅವರ ನಿವಾಸದಲ್ಲೇ (ವಿಜಯನಗರ ನಿವಾಸ) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಜಯನಗರದಲ್ಲಿರುಬ ಭಾಮಾ ಹರೀಶ್ ನಿವಾಸದಲ್ಲಿ ಈಗ ನೀರವ ಮೌನ ಆವರಿಸಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.&lt;/p&gt;&lt;p&gt;ಉಲ್ಲಾಸ್ ಮೃತದೇಹ ಕಂಡು ಅವರ ತಾಯಿ ಆಕ್ರಂದನ ಮುಗಿಲುಮುಟ್ಟಿದೆ. ಆಂಬ್ಯುಲೆನ್ಸ್&zwnj;ನಲ್ಲಿ ಉಲ್ಲಾಸ್ ಮೃತದೇಹ ಕಂಡು ಅವರ ತಾಯಿ ಸೇರಿದಂತೆ ಮನೆಯವರೆಲ್ಲರೂ ಕಣ್ಣೀರು ಸುರಿಸುತ್ತಿದ್ದಾರೆ. ಉಲ್ಲಾಸ್ ಅವರನ್ನು ನೆನೆದು ಅವರ ತಾತ ವಿಜಯ್ ಭಾವುಕರಾಗಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ವಿಜಯ್ 'ಉಲ್ಲಾಸ್ ತುಂಬಾ ಆ್ಯಕ್ಟಿವ್ ಆಗಿದ್ದ. ಒಂದು ಅಸೋಸಿಯೇಷನ್ ಮಾಡಿಕೊಂಡಿದ್ರು. ಈ ಮೂಲಕ ಟ್ರೆಕ್ಕಿಂಗ್ ಗೆ ಹೋಗಿದ್ರು. ಹೀಗೆ ಹೋಗಿದ್ದ ವೇಳೆ ಈ ತರ ದುರ್ಘಟನೆಯಾಗಿದೆ. ಮದ್ವೆಯ ಮಾತುಕತೆಯಾಗಿತ್ತು. ಇನ್ನೂ ನಿಶ್ಚಿತಾರ್ಥ ಆಗಿರಲಿಲ್ಲ. ಅದಕ್ಕಿಂತ ಮುಂಚೆ ಶಾಸ್ತ್ರೋಕ್ತವಾಗಿ ಕೆಲ ಕಾರ್ಯಗಳನ್ನು ಮಾಡಿದ್ರು. ಆದರೆ,&lt;/p&gt;&lt;p&gt;ವಿಧಿಯ ಆಟವೇ ಬೇರೆಯಾಗಿತ್ತು' ಎಂದಿದ್ದಾರೆ.&lt;/p&gt;&lt;p&gt;ಇಂದು ಮಧ್ಯಾಹ್ನ 3 ಘಂಟಗೆ ಸುಮ್ಮನಹಳ್ಳಿ ಚಿತಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದ್ದು, ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.&lt;/p&gt;&lt;h2&gt;ಉಲ್ಲಾಸ್ ಗೌಡ ನಿಧನಕ್ಕೆ ಸುಂದರ್ ರಾಜ್- ಪ್ರವೀಳಾ ಜೋಷಾಯ್ ಕಂಬನಿ&lt;/h2&gt;&lt;p&gt;ಉಲ್ಲಾಸ್ ಗೌಡ ನಿಧನಕ್ಕೆ ಹಿರಿಯ ನಿರ್ಮಾಪಕ ಸುಂದರ್ ರಾಜ್ ಪತ್ನಿ ಪ್ರವೀಳಾ ಜೋಷಾಯ್ ಸೇರಿದಂತೆ ಹಲವರು ಸ್ಥಳಕ್ಕೆ ಬಂದು ಸಂತಾಪ ಸೂಚಿಸುತ್ತಿದ್ದಾರೆ. ಪ್ರಮೀಳಾ ಜೋಷಾಯ್ 'ಸಣ್ಣ ವಯಸ್ಸಿನಿಂದ ನೋಡ್ತಾ ಬಂದಿದ್ದೇನೆ. ದೊಡ್ಡವ್ರು, ಚಿಕ್ಕವ್ರಿಗೆ ಪ್ರೀತಿಯಿಂದ ಗೌರವ ಕೊಟ್ಟು ಮಾತಾಡ್ತಿದ್ದ. ಸಣ್ಣ ವಯಸ್ಸಿಗೆ ಹೀಗೆ ಆಗೋದು ಅಂದ್ರೆ... ದೇವ್ರು ಇತರ ಮಾಡಬಾರದು.. ಸಣ್ಣ ವಯಸ್ಸು, ಒಬ್ಬನೇ ಮಗ.. ನಟನೆ ಕಲಿತಾ ಇದ್ದ, ಕಾರ್ಯಕ್ರಮಗಳಿಗೆ ಆಹ್ವಾನ ಮಾಡ್ತಿದ್ದ. ಜೊತೆಗೆ ಮುಂದೆ ದೊಡ್ಡ ನಿರ್ಮಾಪಕ ಆಗುವ ಸಾಧ್ಯತೆಗಳಿದ್ದವು. ಈ ಸಂಕಟ ಯಾರಿಗೂ ಬರಬಾರದು' ಎಂದಿದ್ದಾರೆ.&lt;/p&gt;&lt;h3&gt;ಈ ನೋವು ಕಳೆದುಕೊಂಡವ್ರಿಗೆ ಮಾತ್ರ ಗೊತ್ತು&lt;/h3&gt;&lt;p&gt;ಹಾಗೇ, ಹಿರಿಯ ನಿರ್ಮಾಪಕ ಸುಂದರ್ ರಾಜ್ ಹೇಳಿಕೆ : 'ಈ ನೋವು ಕಳೆದುಕೊಂಡವ್ರಿಗೆ ಮಾತ್ರ ಗೊತ್ತು. ಉಲ್ಲಾಸ್ ಒಬ್ಬ ಕನ್ನಡ ಚಿತ್ರರಂಗಕ್ಕೆ ಬೆಳಕು ಕೊಡುವ ನಿರ್ದೇಶಕನಾಗಿ ಬರಬೇಕಿತ್ತು. ಗೋವಾಗೆ ಫಿಲ್ಮ್ ಫೆಸ್ಟ್&zwnj;ಗೆ ಹೋದಾಗ ಬಾಡಿಗೆಗೆ ಬೈಕ್ ತೊಗೊಂಡು ಓಡಾಡಿಸಿದ್ದ. ಆ ನೆನಪುಗಳು ಹಚ್ಚ ಹಸಿರಾಗಿವೆ. ಉಲ್ಲಾಸ್ ನಿಂದ ಸ್ನೇಹಜೀವಿ, ಸಮಯ ಪ್ರಜ್ಞೆ, ದೊಡ್ಡವ್ರಿಗೆ ಕೊಡಬೇಕಾದ ಗೌರವ ಎಲ್ಲವೂ ಇತ್ತು.&lt;/p&gt;&lt;p&gt;ಇವತ್ತು ಮನೆಯಲ್ಲಿ ಕತ್ತಲು ಆವರಿಸಿದೆ. ಯಾರಿಗೂ ನೋವು ಕೊಡದೇ ಉಲ್ಲಾಸ್ ಜೀವ ಕಳೆದುಕೊಂಡ. ಕುಟುಂಬದ ಆಕ್ರಂದನದ ನೋವು ತಡೆಯಲು ಆಗೋದಿಲ್ಲ. ನೋವು ಆರದ ಗಾಯ.. ಮಾಸದ ಗಾಯ' ಎಂದಿದ್ದಾರೆ ಸುಂದರ್&zwnj; ರಾಜ್.&lt;/p&gt;&lt;p&gt;ಕನ್ನಡದ ನಿರ್ದೇಶಕ ಜೋಗಿ ಪ್ರೇಮ್-ರಕ್ಷಿತಾ ಪ್ರೇಮ್, ಜಯಮಾಲಾ, ಸಾರಾ ಗೋವಿಂದು ಸೇರಿದಂತೆ ಸಿನಿಮಾ ರಂಗದ ಹಲವು ಗಣ್ಯರು ಉಲ್ಲಾಸ್ ಗೌಡ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/kannada-producer-bhama-harish-son-ullas-gowda-funeral-will-be-held-at-3-pm-today-at-the-sumanahalli-crematorium/articleshow-w3vgymp"/>
        </item>
        <item>
            <title><![CDATA[SN Shankar Death: ನಿನ್ನೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ 'ಉಲ್ಟಾ ಪಲ್ಟಾ' ಸಿನಿಮಾದ ನಿರ್ದೇಶಕ ಇನ್ನಿಲ್ಲ]]></title>
            <link>https://kannada.asianetnews.com/sandalwood/ulta-palta-kannada-movie-director-journalist-sn-shankar-passed-away-heart-attack/articleshow-d8p72tb</link>
            <guid isPermaLink="true">https://kannada.asianetnews.com/sandalwood/ulta-palta-kannada-movie-director-journalist-sn-shankar-passed-away-heart-attack/articleshow-d8p72tb</guid>
            <pubDate>Sun, 28 Jun 2026 11:53:43 +0530</pubDate>
            <description><![CDATA[&lt;p&gt;Director SN Shankar Death: ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ನಿರ್ದೇಶಖ ಎಸ್&zwnj; ಎನ್&zwnj; ಶಂಕರ್&zwnj; ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಸಿನಿಮಾ ಶೂಟಿಂಗ್&zwnj;ನಲ್ಲಿ ಭಾಗಿಯಾಗಿದ್ದ ಅವರು ಇಂದು ಇನ್ನಿಲ್ಲ ಎನ್ನೋದು ಅನೇಕರಿಗೆ ಶಾಕ್&zwnj; ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6ea47c6zc5y83wj3sn14w3,imgname-new-project---2026-06-28t114724.815-1782627766508.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್&zwnj; ಎನ್&zwnj; ಶಂಕರ್&zwnj; ಅವರು ( Director SN Shankar Death ) ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆಯಷ್ಟೇ ಸಿನಿಮಾ ಶೂಟಿಂಗ್&zwnj;ನಲ್ಲಿ ಭಾಗಿಯಾಗಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಮನೆಯಲ್ಲಿ ಇಂದು ಹೃದಯಾಘಾತ ಆಗಿದೆ.&lt;/p&gt;&lt;p&gt;ಎಸ್&zwnj; ಎನ್&zwnj; ಶಂಕರ್&zwnj; ಅವರು ಕೆಲ ತಿಂಗಳುಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು. ಈಗ ಅವರು ಕೂಡ ಇಹಲೋಕ ತ್ಯಜಿಸಿದ್ದಾರೆ. ಇದನ್ನು ನೋಡಿ ಅನೇಕರು ಬೇಸರ ಹೊರಹಾಕಿದ್ದು, ಸಂತಾಪ ಸೂಚಿಸಿದ್ದಾರೆ.&lt;/p&gt;&lt;p&gt;&ldquo;ಬದುಕು ಯಾವತ್ತಿಗೂ ಆಕಸ್ಮಿಕವೇ&hellip; ನಿನ್ನೆ ಸಂಜೆ ಸುಮಾರು 6 ರ ಸಮಯದಲ್ಲಿ ತುಂಬಾ ಖುಷಿ ಖುಷಿಯಿಂದಲೇ 'ರಾಮಯ್ಯ' ಅವರ ಹೊಸ ಸಿನಿಮಾಗೆ ಕ್ಯಾಮರಾ ಚಾಲನೆಕೊಟ್ಟು .. ಫೋಟೋ ತೆಗೆಯಿರಿ ಲೋಕೇಶ್ ಎಂದಾ ನಲ್ಮೆಯ ಎನ್_ಎಸ್_ಶಂಕರ್ ಅವರು ಬೆಳಗ್ಗೆ ಇಲ್ಲ ಎನ್ನುವುದು .. ಜೀರ್ಣಿಸಿಕೊಳ್ಳಲಾಗದ ಸಂಗತಿ&rdquo; ಎಂದು ಫೋಟೋಗ್ರಾಫರ್&zwnj; ತಾಯಿ ಲೋಕೇಶ್&zwnj; ಅವರು ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;p&gt;ರಮೇಶ್&zwnj; ಅರವಿಂದ್&zwnj;, ಸರಿಗಮ ವಿಜಿ ನಟನೆಯ ಉಲ್ಟಾ ಪಲ್ಟಾ ಸಿನಿಮಾವನ್ನು ಅವರು ನಿರ್ದೇಶನ ಮಾಡಿದ್ದರು.&lt;/p&gt;&lt;h2&gt;ಬೆಳಚಿಕ್ಕನಹಳ್ಳಿ ಶ್ರೀನಾಥ್&zwnj; ಪೋಸ್ಟ್&zwnj; ಹೀಗಿದೆ&lt;/h2&gt;&lt;p&gt;ʼಅಂತೂ ತಂತ್ರಜ್ಞರೇ ಸೇರಿಕೊಂಡು ಸಿನಿಮಾ ನಿರ್ಮಾಣ ಮಾಡಿ ಗೆದ್ದಿರಲ್ಲಾ ಸರ್ʼ ಎಂದೆ. ʼಸಿನಿಮಾ ಏನೋ ಗೆದ್ದಿತಾದರೂ ಅದನ್ನೆಲ್ಲಾ ನಿಭಾಯಿಸುವ ಹೊತ್ತಿಗೆ ನನ್ನ ಆರೋಗ್ಯ ಹಾಳಾಯಿತು. ನನಗೆ ಬಿ.ಪಿ, ಡಯಾಬಿಟಿಸ್ ಅಂಟಿಕೊಂಡಿತುʼ ಎಂದಿದ್ದರು ಎನ್.ಎಸ್.ಶಂಕರ್.&lt;/p&gt;&lt;p&gt;ಲಂಕೇಶ್ ಪತ್ರಿಕೆಯಲ್ಲಿ ಅವರ ಸಿನಿಮಾ ಬರಹಗಳನ್ನು ಓದಿ ಮೆಚ್ಚಿಕೊಂಡಿದ್ದ ನಾನು ಮುಂದೆ ಅವರೊಂದಿಗೆ ಎರಡು ಕಿರುಚಿತ್ರಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದೆ. ಅವರಿಗೆ ಸಿನಿಮಾ ಬಗ್ಗೆ ಅಪರೂಪದ ಒಳನೋಟಗಳಿದ್ದವು. ಕಮರ್ಷಿಯಲ್ ಸಿನಿಮಾದ ಬಗ್ಗೆ ಅತ್ಯಂತ ಗಂಭೀರ ವಿಶ್ಲೇಷಣೆ ಮಾಡುತ್ತಿದ್ದರು. ಆದರೆ, ಸಿನಿಮಾ ನಿರ್ದೇಶಕನಾಗಿ ದೊಡ್ಡ ಯಶಸ್ಸು ಕಾಣಲು ನಾನಾ ಕಾರಣಗಳಿಂದ ಅವರಿಗೆ ಸಾಧ್ಯವಾಗಲಿಲ್ಲ. ಸಾಲದು ಎಂಬಂತೆ ಅದರಿಂದ ಸಾಲಗಾರರಾಗಿ ಜೀವನ ಪರ್ಯಂತ ಕಷ್ಟ ಅನುಭವಿಸಿದರು.&lt;/p&gt;&lt;p&gt;ಉತ್ತಮ ಪತ್ರಕರ್ತರಾಗಿದ್ದ ಶಂಕರ್ ಅವರು, ಬರವಣಿಗೆಯ ಜತೆಗೆ ಪುಸ್ತಕದ ವಿನ್ಯಾಸ, ಮುಖಪುಟ ವಿನ್ಯಾಸವನ್ನೂ ಮಾಡುತ್ತಿದ್ದರು. ವ್ಯಂಗ್ಯಚಿತ್ರ ಬರೆಯುತ್ತಿದ್ದರು. ಕಾಲೇಜಿನಲ್ಲಿ ಸಂಸ್ಕೃತ ಅಧ್ಯಯನ ಮಾಡಿದ್ದ ಶಂಕರ್ ಅವರು ಕನ್ನಡದ ಉತ್ತಮ ಗದ್ಯ ಬರಹಗಾರರಾಗಿದ್ದರು. ಕಥೆ ಬರೆದರು, ಚಳವಳಿಗಳ ಬಗ್ಗೆ ಬರೆದರು. ಸಮಾಜ ವಿಮರ್ಶೆಯ ಲೇಖನಗಳನ್ನು ಬರೆದರು.&lt;/p&gt;&lt;p&gt;ತೀವ್ರ ರಾಜಕೀಯ ನಿಲುವುಗಳನ್ನು ಹೊಂದಿದ್ದರೂ ಸ್ನೇಹಜೀವಿಯಾಗಿದ್ದರು. ಅವರಿಗೆ ಅಪಾರ ಹಾಸ್ಯಪ್ರಜ್ಞೆ ಇತ್ತು. ತಮ್ಮ ಸುತ್ತಲಿನವರ ಬಗ್ಗೆ ಚಟಾಕಿ ಹಾರಿಸುತ್ತಿದ್ದ ಅವರು ತಮ್ಮನ್ನೂ ಗೇಲಿ ಮಾಡಿಕೊಳ್ಳಬಲ್ಲವರಾಗಿದ್ದರು. ಅವರ ಹೆಸರಿನೊಂದಿಗಿರುವ ಸೊಂಡೂರು ಬಗ್ಗೆ ಒಮ್ಮೆ ಕೇಳಿದರೆ, ನಮ್ಮದು ಸೊಂಡೂರಿನ ರಾಜಮನೆತನ ಎಂದು ನಮ್ಮ ಮನೆತನದವರು ಹೇಳುತ್ತಾರೆ. ಅದ್ಯಾವ ರಾಜಮನೆತನವೋ ಎಂದು ನಕ್ಕಿದ್ದರು.&lt;/p&gt;&lt;p&gt;ಅವರ ನಗುಮುಖವನ್ನು ಮರೆಯಲಾಗದು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/sandalwood/ulta-palta-kannada-movie-director-journalist-sn-shankar-passed-away-heart-attack/articleshow-d8p72tb"/>
        </item>
        <item>
            <title><![CDATA[ಮಗು ವಿಷಯ ತೆಗೆದು ಕಣ್ಣೀರು ಹಾಕಿ, ಎಲ್ಲ ಚೆನ್ನಾಗಿದೆ ಅಂತ ನಾಟಕ ಮಾಡಿ ಡಿವೋರ್ಸ್‌ ಘೋಷಿಸಿದ Bigg Boss ವಿಜೇತ!]]></title>
            <link>https://kannada.asianetnews.com/gallery/tv-talk/lock-upp-season-2-actress-akanksha-chamola-confirms-divorce-from-bigg-boss-gaurav-khanna-vu84lg2</link>
            <guid isPermaLink="true">https://kannada.asianetnews.com/gallery/tv-talk/lock-upp-season-2-actress-akanksha-chamola-confirms-divorce-from-bigg-boss-gaurav-khanna-vu84lg2</guid>
            <pubDate>Sun, 28 Jun 2026 10:30:20 +0530</pubDate>
            <description><![CDATA[&lt;p&gt;Actor Gaurav Khanna Akanksha Chamola Divorce: ಮದುವೆಯಾಗಿ 10 ವರ್ಷಗಳ ಬಳಿಕ ನಟ ಗೌರವ್&zwnj; ಖನ್ನಾ, ಆಕಾಂಕ್ಷಾ ಛಮೋಲ ಅವರು ಡಿವೋರ್ಸ್&zwnj; ಪಡೆಯಲಿದ್ದಾರೆ. ನೆಟ್&zwnj;ಫ್ಲಿಕ್ಸ್&zwnj;ನಲ್ಲಿ Lock UPP Season 2 ಶೋನಲ್ಲಿ ಆಕಾಂಕ್ಷಾ ಸ್ಪರ್ಧಿ. ಆ ವೇಳೆ ಅವರು ಡಿವೋರ್ಸ್&zwnj; ವಿಷಯ ರಿವೀಲ್&zwnj; ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw696dwzmjq03j4nbhbtg2s8,imgname-new-project---2026-06-28t101604.911-1782622402463.jpg" type="image/jpeg" height="390" width="690"/>
            <content:encoded><![CDATA[&lt;p&gt;Actor Gaurav Khanna Akanksha Chamola Divorce: ಮದುವೆಯಾಗಿ 10 ವರ್ಷಗಳ ಬಳಿಕ ನಟ ಗೌರವ್&zwnj; ಖನ್ನಾ, ಆಕಾಂಕ್ಷಾ ಛಮೋಲ ಅವರು ಡಿವೋರ್ಸ್&zwnj; ಪಡೆಯಲಿದ್ದಾರೆ. ನೆಟ್&zwnj;ಫ್ಲಿಕ್ಸ್&zwnj;ನಲ್ಲಿ Lock UPP Season 2 ಶೋನಲ್ಲಿ ಆಕಾಂಕ್ಷಾ ಸ್ಪರ್ಧಿ. ಆ ವೇಳೆ ಅವರು ಡಿವೋರ್ಸ್&zwnj; ವಿಷಯ ರಿವೀಲ್&zwnj; ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;&quot;ನಾನು, ಗೌರವ್&zwnj; ಡಿವೋರ್ಸ್&zwnj; ಪಡೆಯುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ನಾವಿಬ್ಬರೂ ದೂರ ಆಗಿ ಬೇರೆ ಬೇರೆ ಮನೆಯಲ್ಲಿ ಬದುಕುತ್ತಿದ್ದೇವೆ. ನಾವು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ದೂರ ಇದ್ದರೆ ಪರಸ್ಪರ ನಮ್ಮಿಬ್ಬರಿಗೆ ಮಹತ್ವ ಗೊತ್ತಾಗುತ್ತದೆ ಎಂದು ಕುಟುಂಬಸ್ಥರು ಅಂದುಕೊಂಡರು. ಆದರೆ ನಮ್ಮಿಬ್ಬರ ಭವಿಷ್ಯ ಬೇರೆ ಬೇರೆ ಇದ್ದು, ನಮ್ಮಿಬ್ಬರ ಜೊತೆಗೆ ಮಾತ್ರ ಇಲ್ಲ. ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಇಲ್ಲ. ಬಿಗ್&zwnj; ಬಾಸ್&zwnj; ಟೈಮ್&zwnj;ನಿಂದಲೇ ಇದೆಲ್ಲ ಶುರು ಆಗಿತ್ತು. ಎಲ್ಲೇ ಹೋದರೂ ನಮ್ಮಿಬ್ಬರಿಗೆ ಗಂಡ-ಹೆಂಡತಿ ವೈಬ್&zwnj; ಬರುತ್ತಿರಲಿಲ್ಲ&quot; ಎಂದು ಆಕಾಂಕ್ಷಾ ಛಮೋಲ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಗೌರವ್&zwnj; ಖನ್ನಾ ಅವರು ಹೀರೋ ಆಗಿದ್ದು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದನ್ನು ಆಕಾಂಕ್ಷಾ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಇತ್ತು.&lt;/p&gt;&lt;img&gt;&lt;p&gt;ಗೌರವ್&zwnj; ಖನ್ನಾ ಹೋದಲ್ಲೆಲ್ಲ ಆಕಾಂಕ್ಷಾ ಬಂದು, ಅಟೆನ್ಶನ್&zwnj; ಗಳಿಸುತ್ತಿದ್ದರು ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಕ್ಯಾಮರಾ ಕಂಡಾಗೆಲ್ಲ ನಗೋದು, ಕುಣಿಯೋದು ನೋಡಿ ಸದಾ ಎಲ್ಲರೂ ನೆಗೆಟಿವ್&zwnj; ಕಾಮೆಂಟ್ಸ್&zwnj; ಮಾಡುತ್ತಿದ್ದರು.&lt;/p&gt;&lt;img&gt;&lt;p&gt;ಆಕಾಂಕ್ಷಾ ಅವರು ಮಗು ಬೇಡ, ನನಗೆ ಮಗು ಇಷ್ಟ ಇಲ್ಲ ಎಂದು ಹೇಳಿದ್ದರು. ಆದರೆ ಗೌರವ್&zwnj;ಗೆ ಮಕ್ಕಳೆಂದರೆ ತುಂಬ ಇಷ್ಟ. ಈ ವಿಷಯ ಕೂಡ ಬಿಗ್&zwnj; ಬಾಸ್&zwnj; ಮನೆಯಲ್ಲಿ ಚರ್ಚೆ ಆಗಿತ್ತು.&lt;/p&gt;&lt;img&gt;&lt;p&gt;ಆಕಾಂಕ್ಷಾ ಅವರು ಇತ್ತೀಚೆಗೆ ಸಿಕ್ಕಾಪಟ್ಟೆ ರೊಮ್ಯಾನ್ಸ್&zwnj; ಇರುವ ಸಿರೀಸ್&zwnj;ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಗೌರವ್&zwnj; ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಗೌರವ್&zwnj; ಹೇಗೆ ಇದಕ್ಕೆಲ್ಲ ಅವಕಾಶ ಕೊಡ್ತಾರೆ ಎಂಬ ಪ್ರಶ್ನೆ ಬಂದಿತ್ತು.&lt;/p&gt;&lt;img&gt;&lt;p&gt;ಗೌರವ್&zwnj; ಖನ್ನಾ ಅವರು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಏನು ಹೇಳ್ತಾರೆ ಎಂದು ಕಾದು ನೋಡಬೇಕಿದೆ.&amp;nbsp;&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/lock-upp-season-2-actress-akanksha-chamola-confirms-divorce-from-bigg-boss-gaurav-khanna-vu84lg2"/>
        </item>
        <item>
            <title><![CDATA[Sharmila Mandre Engagement: ಹೀರೋಯಿನ್‌ ಆಗಿ 20 ವರ್ಷ; ರಿಯಲ್‌ ಲೈಫ್‌ ಹೀರೋ ಹುಡ್ಕೊಂಡ ಶರ್ಮಿಳಾ ಮಾಂಡ್ರೆ]]></title>
            <link>https://kannada.asianetnews.com/gallery/sandalwood/kannada-actress-sharmila-mandre-and-sudhan-sundaram-engagement-photos-oglg1y7</link>
            <guid isPermaLink="true">https://kannada.asianetnews.com/gallery/sandalwood/kannada-actress-sharmila-mandre-and-sudhan-sundaram-engagement-photos-oglg1y7</guid>
            <pubDate>Sun, 28 Jun 2026 09:54:03 +0530</pubDate>
            <description><![CDATA[&lt;p&gt;Kannada Actress Sharmiela Mandre: ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಎಂಗೇಜ್&zwnj; ಆಗಲಿದ್ದಾರೆ ಎನ್ನಲಾಗಿತ್ತು, ಆಮೇಲೆ ಅವರೇ ಹೌದು ಎಂದು ಹೇಳಿದ್ದರು. ಈಗ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw678x5bzd5bw9mpmgbf3809,imgname-new-project---2026-06-28t094253.095-1782620386475.jpg" type="image/jpeg" height="390" width="690"/>
            <content:encoded><![CDATA[&lt;p&gt;Kannada Actress Sharmiela Mandre: ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಎಂಗೇಜ್&zwnj; ಆಗಲಿದ್ದಾರೆ ಎನ್ನಲಾಗಿತ್ತು, ಆಮೇಲೆ ಅವರೇ ಹೌದು ಎಂದು ಹೇಳಿದ್ದರು. ಈಗ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ತಮಿಳು ಚಿತ್ರರಂಗದ ಯಶಸ್ವಿ ನಿರ್ಮಾಪಕ ಸುಧನ್ ಸುಂದರಂ ಅವರ ಜೊತೆ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಆಗಿದೆ.&lt;/p&gt;&lt;img&gt;&lt;p&gt;ವಿಜಯ್ ಸೇತುಪತಿ ನಟನೆಯ 'ಮಹಾರಾಜ' ಸಿನಿಮಾ ಸೇರಿದಂತೆ ಇವರು ಅನೇಕ ಸೂಪರ್&zwnj; ಹಿಟ್&zwnj; ಸಿನಿಮಾಗಳ ನಿರ್ಮಾಪಕರು ಎಂಬ ಹೆಸರು ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಸುಧನ್ ಸುಂದರಂ ಹಾಗೂ ಶರ್ಮಿಳಾ ಮಾಂಡ್ರೆ ತುಂಬ ಸಮಯದಿಂದ ಪರಿಚಿತರು. ಹೀಗಾಗಿ ಈಗ ಎಂಗೇಜ್&zwnj; ಆಗಿ ಬದುಕಿನ ಹೊಸ ಚಾಪ್ಟರ್&zwnj; ಆರಂಭಿಸಲು ರೆಡಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ನಿಶ್ಚಿತಾರ್ಥ ನಡೆದಿದೆ.&lt;/p&gt;&lt;img&gt;&lt;p&gt;ಶರ್ಮಿಳಾ ಮಾಂಡ್ರೆ ಅವರು 2007ರಲ್ಲಿ 'ಸಜನಿ' ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದರು. ನಟ ದರ್ಶನ್ ಅಭಿನಯದ 'ನವಗ್ರಹ' ಸಿನಿಮಾದಲ್ಲಿ ಶರ್ಮಿಳಾ ಅವರು ಕಾಣಿಸಿಕೊಂಡ 'ಕಣ್&zwnj; ಕಣ್ಣ ಸಲಿಗೆ' ಹಾಡು ಇಂದಿಗೂ ಜನರ ಬಾಯಲ್ಲಿದೆ. ದರ್ಶನ್ ಅವರ 'ಡೆವಿಲ್' ಸಿನಿಮಾದಲ್ಲಿಯೂ ಶರ್ಮಿಳಾ ಕಾಣಿಸಿಕೊಂಡಿದ್ದರು. ತಮಿಳು, ತೆಲುಗು ಚಿತ್ರರಂಗದಲ್ಲೂ ಶರ್ಮಿಳಾ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಶರ್ಮಿಳಾ ಮಾಂಡ್ರೆ ಅವರು ಮದುವೆ ಬಗ್ಗೆ ಇನ್ನೂ ಪ್ಲ್ಯಾನ್&zwnj; ಮಾಡಿಲ್ಲವಂತೆ. ಮುಂದಿನ ದಿನಗಳಲ್ಲಿ ಪ್ಲ್ಯಾನ್&zwnj; ಮಾಡೋದಾಗಿ ಹೇಳಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಶರ್ಮಿಳಾ ಮಾಂಡ್ರೆ ಅವರಿಗೆ ಈಗ 38 ವರ್ಷ ವಯಸ್ಸು.&amp;nbsp;&lt;/p&gt;&lt;img&gt;&lt;p&gt;ಸುಧನ್&zwnj; ಸುಂದರಂ ಅವರ ವಯಸ್ಸು, ಹಿನ್ನಲೆ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.&amp;nbsp;&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/sandalwood/kannada-actress-sharmila-mandre-and-sudhan-sundaram-engagement-photos-oglg1y7"/>
        </item>
        <item>
            <title><![CDATA[Samantha: ಪತಿ ರಾಜ್ ನಿಡಿಮೋರುಗೆ ಸಮಂತಾ ಮುದ್ದಾಗಿ ಏನ್ ಕರೀತಾರೆ ಗೊತ್ತಾ? ನಿಕ್‌ನೇಮ್ ಸೀಕ್ರೆಟ್ ರಿವೀಲ್!]]></title>
            <link>https://kannada.asianetnews.com/entertainment/samantha-reveals-cute-nickname-for-husband-raj-nidimoru-at-success-meet-gvd/articleshow-v0q5r6g</link>
            <guid isPermaLink="true">https://kannada.asianetnews.com/entertainment/samantha-reveals-cute-nickname-for-husband-raj-nidimoru-at-success-meet-gvd/articleshow-v0q5r6g</guid>
            <pubDate>Sat, 27 Jun 2026 23:28:05 +0530</pubDate>
            <description><![CDATA[&lt;p&gt;Samantha: ಸದ್ಯ 'ಮಾ ಇಂಟಿ ಬಂಗಾರಂ' ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ಸಮಂತಾ, ಪತಿಯೊಂದಿಗೆ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ನಡುವೆಯೇ ಅವರು ಮತ್ತೊಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw51ek1a7pjzqc1s3nc06x2v,imgname-gxg-1782580726826.png" type="image/jpeg" height="390" width="690"/>
            <content:encoded><![CDATA[&lt;p&gt;ಸದ್ಯ 'ಮಾ ಇಂಟಿ ಬಂಗಾರಂ' ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ಸಮಂತಾ, ಪತಿಯೊಂದಿಗೆ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ನಡುವೆಯೇ ಅವರು ಮತ್ತೊಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಅಂದಹಾಗೆ, ಸಮಂತಾ ತಮ್ಮ ಪತಿ ರಾಜ್ ನಿಡಿಮೋರು ಅವರನ್ನು ಮುದ್ದಾಗಿ ಏನೆಂದು ಕರೆಯುತ್ತಾರೆ ಗೊತ್ತೇ? ಸಮಂತಾ ತಮ್ಮ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದ್ದಾರೆ. 'ಮಾ ಇಂಟಿ ಬಂಗಾರಂ' ಮೂಲಕ ವೃತ್ತಿಪರ ಯಶಸ್ಸು ಮತ್ತು ವೈಯಕ್ತಿಕ ಜೀವನದಲ್ಲಿ ಅನಿರೀಕ್ಷಿತ ಸಿಹಿ ಸುದ್ದಿ, ಎರಡನ್ನೂ ಹಂಚಿಕೊಂಡು ಸಂಭ್ರಮಿಸಿದ್ದಾರೆ.&lt;/p&gt;&lt;p&gt;ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಕಂಗೆಟ್ಟಿದ್ದ ಸಮಂತಾ, ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಪ್ರೀತಿಸಿ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ 'ಮಾ ಇಂಟಿ ಬಂಗಾರಂ' ಸಕ್ಸಸ್ ಮೀಟ್&zwnj;ನಲ್ಲಿ ಸಮಂತಾ, ತಮ್ಮ ಪತಿ ಹಾಗೂ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಬಗ್ಗೆ ಆಸಕ್ತಿಕರ ವಿಚಾರ ಹಂಚಿಕೊಂಡರು. ಸಿನಿಮಾದಲ್ಲಿ ತಮ್ಮ ತೆರೆಯ ಮೇಲಿನ ಪತಿಯನ್ನು 'ಅನಿ' ಎಂದು ಕರೆಯುತ್ತಾರೆ. ಹಾಗಾದರೆ ನಿಜ ಜೀವನದಲ್ಲಿ ಪತಿ ರಾಜ್&zwnj;ಗೆ ಏನು ಕರೆಯುತ್ತಾರೆ ಎಂಬ ಪ್ರಶ್ನೆ ಎದುರಾಯಿತು.&lt;/p&gt;&lt;p&gt;ಇದಕ್ಕೆ ನಾಚಿಕೆಯಿಂದಲೇ ಉತ್ತರಿಸಿದ ಸಮಂತಾ, 'ರಾಜ್ ಅವರ ತಾಯಿ ಮತ್ತು ಸಹೋದರಿ ಮನೆಯಲ್ಲಿ ಪ್ರೀತಿಯಿಂದ 'ಬಾಬು' ಎಂದು ಕರೆಯುತ್ತಾರೆ. ಅವರಂತೆಯೇ ನಾನೂ ಕೂಡ ರಾಜ್ ಅವರನ್ನು 'ಬಾಬು' ಎಂದೇ ಕರೆಯುತ್ತೇನೆ' ಎಂದು ನಗುತ್ತಾ ಹೇಳಿದರು. ಈ ಕ್ಯೂಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮಾ ಯಶಸ್ಸಿನ ಜೊತೆಗೆ ಸಮಂತಾ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.&lt;/p&gt;&lt;p&gt;ತಾವು ಗರ್ಭಿಣಿ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಹೈದರಾಬಾದ್&zwnj;ನಲ್ಲಿ ನಡೆದ 'ಮಾ ಇಂಟಿ ಬಂಗಾರಂ' ಸಕ್ಸಸ್ ಮೀಟ್&zwnj;ನಲ್ಲಿ ಮಾತನಾಡಿದ ಅವರು, ತಮ್ಮ ಜೀವನಕ್ಕೆ ಹೊಸ ಅತಿಥಿ ಬರಲಿದ್ದಾರೆ ಎಂದು ಸಂತಸದಿಂದ ತಿಳಿಸಿದರು. ಈ ಸುದ್ದಿ ಕೇಳಿದೊಡನೆ ಅಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿ ಶುಭ ಹಾರೈಸಿದರು. ಈ ಘೋಷಣೆಯಿಂದ ಅಭಿಮಾನಿಗಳ ಸಂತಸ ಇಮ್ಮಡಿಯಾಗಿದೆ.&lt;/p&gt;&lt;h2&gt;&lt;strong&gt;ದಾಖಲೆಗಳ ಸುರಿಮಳೆ&lt;/strong&gt;&lt;/h2&gt;&lt;p&gt;ಸುಮಾರು ಮೂರು ವರ್ಷಗಳ ಗ್ಯಾಪ್ ನಂತರ ಸಮಂತಾ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾ ಜೂನ್ 19 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಬಾಕ್ಸಾಫೀಸ್&zwnj;ನಲ್ಲಿ ಈ ಚಿತ್ರ ದಾಖಲೆಗಳ ಸುರಿಮಳೆಗೈಯುತ್ತಿದೆ. ಸೆಂಟಿಮೆಂಟ್ ಮತ್ತು ಫ್ಯಾಮಿಲಿ ಡ್ರಾಮಾ ಕಥೆಯುಳ್ಳ ಈ ಚಿತ್ರದಲ್ಲಿ ಸಮಂತಾ ನಟನೆಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಿಡುಗಡೆಯಾದ ವಾರದಲ್ಲೇ ಈ ಸಿನಿಮಾ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/samantha-reveals-cute-nickname-for-husband-raj-nidimoru-at-success-meet-gvd/articleshow-v0q5r6g"/>
        </item>
    </channel>
</rss>
