<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 20 May 2026 21:47:44 +0530</lastBuildDate>
        <atom:link href="https://kannada.asianetnews.com/rss/news-entertainment" rel="self" type="application/rss+xml"/>
        <item>
            <title><![CDATA[ಅವನ ಫ್ರೆಂಡ್ ಹುಡುಗಿ ತರ ದುಪಟ್ಟಾ ಹಾಕೊಂಡಿದ್ದ: ಬೀಚ್ ಘಟನೆ ಬಿಚ್ಚಿಟ್ಟ ನಟಿ ರಂಜಿನಿ!]]></title>
            <link>https://kannada.asianetnews.com/entertainment/ranjini-haridas-details-what-happened-at-kozhikode-beach-film-promotion-gvd/articleshow-y21u1dh</link>
            <guid isPermaLink="true">https://kannada.asianetnews.com/entertainment/ranjini-haridas-details-what-happened-at-kozhikode-beach-film-promotion-gvd/articleshow-y21u1dh</guid>
            <pubDate>Wed, 20 May 2026 21:47:38 +0530</pubDate>
            <description><![CDATA[&lt;p&gt;ಕೋಯಿಕ್ಕೋಡ್ ಬೀಚ್&zwnj;ನಲ್ಲಿ ನಡೆದ ಸಿನಿಮಾ ಪ್ರೊಮೋಷನ್ ವೇಳೆ ಆದ ಗದ್ದಲದ ಬಗ್ಗೆ ನಟಿ ರಂಜಿನಿ ಹರಿದಾಸ್ ಈಗ ಮಾತನಾಡಿದ್ದಾರೆ. ಮಕ್ಕಳು ತಪ್ಪಿಹೋದ ಗಂಭೀರ ವಿಚಾರವನ್ನು ಕೆಲವರು ತಮಾಷೆ ಮಾಡಿದ್ದಕ್ಕೆ ತಾನು ಗರಂ ಆಗಿದ್ದಾಗಿ ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krbdfzp5tm24j7gn09rccwtt,imgname-ranjini-haridas-about-mother-1778499714757.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೋಯಿಕ್ಕೋಡ್ ಬೀಚ್&zwnj;ನಲ್ಲಿ ನಡೆದ ಸಿನಿಮಾ ಪ್ರೊಮೋಷನ್ ವೇಳೆ ಮಕ್ಕಳು ಕಾಣೆಯಾದ ಘಟನೆ ಬಗ್ಗೆ ನಟಿ ಮತ್ತು ನಿರೂಪಕಿ ರಂಜಿನಿ ಹರಿದಾಸ್ ಸ್ಪಷ್ಟನೆ ನೀಡಿದ್ದಾರೆ. 'ಅಥಿರಡಿ' ಅನ್ನೋ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿತ್ತು. ಕಾರ್ಯಕ್ರಮದ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಅನೇಕ ಮಕ್ಕಳು ತಮ್ಮ ಪೋಷಕರಿಂದ ತಪ್ಪಿಸಿಕೊಂಡಿದ್ದರು. ಈ ಮಕ್ಕಳ ಹೆಸರನ್ನು ಮೈಕ್&zwnj;ನಲ್ಲಿ ಅನೌನ್ಸ್ ಮಾಡುವಾಗ, ಕೆಲವರು ಬೇಕಂತಲೇ ಕಾಮೆಂಟ್ ಮಾಡಿ ಗಲಾಟೆ ಎಬ್ಬಿಸಿದ್ದರು. ಅವರಿಗೆ ರಂಜಿನಿ ಕೊಟ್ಟ ಉತ್ತರ ಸಖತ್ ವೈರಲ್ ಆಗಿತ್ತು. ಇದರ ಬೆನ್ನಲ್ಲೇ, ತಮ್ಮ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಅಂದು ನಡೆದಿದ್ದೇನು ಅಂತ ರಂಜಿನಿ ವಿವರಿಸಿದ್ದಾರೆ.&lt;/p&gt;&lt;p&gt;&quot;ಅಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ರು. ಸಂಜೆ 6:30ಕ್ಕೆ ಕಾರ್ಯಕ್ರಮ ಶುರುವಾಗಬೇಕಿತ್ತು. ನಾನು ಹೋಟೆಲ್&zwnj;ನಿಂದ 6 ಗಂಟೆಗೆ ಹೊರಟೆ. ಅಲ್ಲಿಂದ ಕೇವಲ 15 ನಿಮಿಷದ ದಾರಿ. ಆದರೆ, ಸಿಕ್ಕಾಪಟ್ಟೆ ಟ್ರಾಫಿಕ್ ಬ್ಲಾಕ್&zwnj;ನಲ್ಲಿ ಸಿಕ್ಕಿಹಾಕಿಕೊಂಡೆ. ನಾನು ಸ್ಟೇಜ್ ಹತ್ತುವಾಗ 7:30 ಆಗಿತ್ತು. ಹಾಗಾಗಿ, ವೇದಿಕೆ ಮೇಲೆ ಬಂದು ಮೊದಲು ಎಲ್ಲರಲ್ಲೂ ಕ್ಷಮೆ ಕೇಳಿದೆ. ಶೋ ಶುರುವಾದ ಮೇಲೆ ಗೊತ್ತಾಯ್ತು, ಸುಮಾರು 10-20 ಮಕ್ಕಳು ಕಾಣೆಯಾಗಿದ್ದಾರೆ ಅಂತ. ನನ್ನ ಹತ್ತಿರ ಒಂದು ಲಿಸ್ಟ್ ಕೂಡ ಇತ್ತು. ನಾನು ಆ ಮಕ್ಕಳ ಹೆಸರುಗಳನ್ನು ವೇದಿಕೆ ಮೇಲೆ ಅನೌನ್ಸ್ ಮಾಡ್ತಿದ್ದೆ.&quot;&lt;/p&gt;&lt;p&gt;&quot;ಈ ಮಧ್ಯೆ, ಇದ್ದಕ್ಕಿದ್ದಂತೆ ಒಬ್ಬ ಹುಡುಗ, 'ಆ ಮಗು ಇಲ್ಲೇ ಇದೆ' ಅಂತ ಕೂಗಿ ಹೇಳಿದ. ಆದರೆ ಅದು ಸುಳ್ಳು. ಅವನು ಸುಮ್ಮನೆ ಅಟೆನ್ಷನ್&zwnj;ಗೋಸ್ಕರ ಹಾಗೆ ಮಾಡಿದ್ದ. ಅವನ ಫ್ರೆಂಡ್ ಒಬ್ಬ ಹುಡುಗಿ ತರ ದುಪಟ್ಟಾ ಹಾಕಿಕೊಂಡು ನಿಂತಿದ್ದ. ಅಷ್ಟು ಗಂಭೀರವಾದ ವಿಷಯವನ್ನು ಅವರು ತಮಾಷೆಯಾಗಿ ತೆಗೆದುಕೊಂಡರು. ಅದನ್ನು ನೋಡಿ ನನಗೆ ಸಿಕ್ಕಾಪಟ್ಟೆ ಕೋಪ ಬಂತು. 'ಇದೇನ್ರೀ ಬೋರಿಂಗ್ ಕೆಲಸ' ಅಂತ ನಾನು ಕೇಳಿದೆ. ಇದೇ ರೀತಿ, ನಂತರ ಟೊವಿನೊ ಥಾಮಸ್ ಸ್ಟೇಜ್&zwnj;ನಲ್ಲಿದ್ದಾಗಲೂ ನಡೆಯಿತು. ಟೊವಿನೊಗೂ ಕೋಪ ಬಂತು. ಆದರೆ ಅವರು ನನಗಿಂತ ಶಾಂತವಾಗಿ ಪರಿಸ್ಥಿತಿ ನಿಭಾಯಿಸಿದರು. ಆದರೂ ಅವರಿಗೂ ಸಿಟ್ಟು ಬಂದಿತ್ತು&quot; ಎಂದು ರಂಜಿನಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಬೇಜವಾಬ್ದಾರಿ ಪೋಷಕರೇ ನೀವು?&lt;/strong&gt;&lt;/h2&gt;&lt;p&gt;&quot;ನನಗೆ ಅರ್ಥವಾಗದ ಇನ್ನೊಂದು ವಿಷಯ ಅಂದ್ರೆ, ಇಷ್ಟೊಂದು ಜನ ಸೇರುವ ಜಾಗದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹೇಗೆ ಕಳೆದುಕೊಳ್ಳುತ್ತಾರೆ? ಅವರೆಲ್ಲಾ ಐದು, ಆರು, ಏಳು ವರ್ಷದ ಮಕ್ಕಳು. ಅಷ್ಟೊಂದು ಬೇಜವಾಬ್ದಾರಿ ಪೋಷಕರೇ ನೀವು? ಇಷ್ಟು ಚಿಕ್ಕ ಮಕ್ಕಳನ್ನು ಇಂತಹ ಜನಜಂಗುಳಿ ಇರುವ ಜಾಗಕ್ಕೆ ಯಾಕೆ ಕರೆದುಕೊಂಡು ಬರುತ್ತೀರಿ? ಸ್ವಲ್ಪನಾದರೂ ಯೋಚಿಸಬೇಕಲ್ವಾ?&quot; ಎಂದು ರಂಜಿನಿ ತಮ್ಮ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ranjini-haridas-details-what-happened-at-kozhikode-beach-film-promotion-gvd/articleshow-y21u1dh"/>
        </item>
        <item>
            <title><![CDATA[10 ಗಂಟೆ ಹಿಂದೆ ಫೇಸ್‌ಬುಕ್‌ ಪೋಸ್ಟ್, 4 ಗಂಟೆ ಹಿಂದೆ ಆಕ್ಟಿವ್‌ ಇದ್ದ ತೀರ್ಥಹಳ್ಳಿ ಟಿಜಿ ನಂದೀಶ್‌ ಇನ್ನಿಲ್ಲ!]]></title>
            <link>https://kannada.asianetnews.com/tv-talk/kannada-writer-tg-nandish-passed-away-due-to-heart-attack/articleshow-akk4b0z</link>
            <guid isPermaLink="true">https://kannada.asianetnews.com/tv-talk/kannada-writer-tg-nandish-passed-away-due-to-heart-attack/articleshow-akk4b0z</guid>
            <pubDate>Wed, 20 May 2026 21:21:38 +0530</pubDate>
            <description><![CDATA[&lt;p&gt;T G Nandish Death: 47ನೇ ವಯಸ್ಸಿಗೆ ದಿಲೀಪ್&zwnj; ರಾಜ್&zwnj; ಅವರು ನಿಧನರಾದರು. ಈ ಸಾವನ್ನು ಅರಗಿಸಿಕೊಳ್ಳುವ ಮುನ್ನವೇ 37ನೇ ವಯಸ್ಸಿಗೆ ಸಂಭಾಷಣೆಕಾರ ಟಿಜಿ ನಂದೀಶ್&zwnj; ಅವರು ನಿಧನರಾಗಿದ್ದಾರೆ. ಮೊನ್ನೆ ಮೊನ್ನೆ ದಿಲೀಪ್&zwnj; ಸಾವಿಗೆ ಸಂತಾಪ ಸೂಚಿಸಿದ್ದ ನಂದೀಶ್&zwnj; ಈಗ ನೆನಪಾಗಿ ಉಳಿದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks3111eqnfag8fgv4btngwcs,imgname-new-project---2026-05-20t211147.334-1779291948503.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ದಿಲೀಪ್&zwnj; ರಾಜ್&zwnj; ನಿಧನಕ್ಕೆ ಸಂತಾಪ ಸೂಚಿಸಿದ್ದ ಸಂಭಾಷಣೆಕಾರ ಟಿಜಿ ನಂದೀಶ್&zwnj; ಅವರೇ ಈಗ ಹೇಳದೆ ಕೇಳದೆ ಹೋಗಿದ್ದಾರೆ. ಹೌದು, ಎಲ್ಲದರಲ್ಲೂ ತಮ್ಮದೇ ಛಾಪು ಮೂಡಿಸಿದ ದಿಲೀಪ್&zwnj; ರಾಜ್&zwnj; ಅವರು, ಹೀಗೆ ಏಕಾಏಕಿ ಮರೆಯಾದದ್ದು ಎಂದೆಂದಿಗೂ ಕಾಡಲಿದೆ&zwnj; ಎಂದು ಹೇಳಿದ್ದ ಟಿಜಿ ನಂದೀಶ್&zwnj; ಈಗ ಅವರೇ ಮರೆಯಾಗಿದ್ದಾರೆ.&lt;/p&gt;&lt;h2&gt;ಚಿಕ್ಕ ವಯಸ್ಸಿನಲ್ಲೇ ಮರೆಯಾದ ನಂದಿ!&lt;/h2&gt;&lt;p&gt;ಅಪ್ಪ ಅಮ್ಮನೇ ನನ್ನ ಶಕ್ತಿ, ಹರ್ಷಿತಾ ನನಗೆ ಸ್ಪೂರ್ತಿ, ಜೇನು ಮತ್ತು ಗಂಧ ಎನ್ನ, ಜೀವ ಮತ್ತು ಜೀವನಪ್ರೀತಿ ಎಂದು ಸೋಶಿಯಲ್&zwnj; ಮೀಡಿಯಾದಲ್ಲಿ ಬರಹ (ಬಯೋ ) ಬರೆದುಕೊಂಡಿದ್ದ ಪತ್ರಕರ್ತ, ಸಂಭಾಷಣೆಕಾರ ಟಿಜಿ ನಂದೀಶ್&zwnj; ಅವರು 37ನೇ ವಯಸ್ಸಿಗೆ ಇಂದು ( ಮೇ 20 ) ತೀರ್ಥಹಳ್ಳಿಯಲ್ಲಿ &amp;nbsp;ನಿಧನರಾಗಿದ್ದಾರೆ.&lt;/p&gt;&lt;p&gt;ಸಾಯುವ 10 ಗಂಟೆಗೂ ಮುನ್ನ ಸೋಶಿಯಲ್&zwnj; ಮೀಡಿಯಾ ಪೋಸ್ಟ್&zwnj; ಹಾಕಿ, 4 ಗಂಟೆಗಳ ಹಿಂದೆ ಆಕ್ಟಿವ್&zwnj; ಆಗಿದ್ದ ಟಿಜಿ ನಂದೀಶ್&zwnj; ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿನಿಮಾ, ಧಾರಾವಾಹಿ&zwnj; ಬರವಣಿಗೆಯಲ್ಲಿ ಸಿಕ್ಕಾಪಟ್ಟೆ ಆಕ್ಟಿವ್&zwnj; ಆಗಿದ್ದ ಟಿಜಿ ನಂದೀಶ್&zwnj; ಅವರು ನಿಧನರಾಗಿರೋದು ಎಲ್ಲರಿಗೂ ಶಾಕ್&zwnj; ಕೊಟ್ಟಿದೆ.&lt;/p&gt;&lt;p&gt;ದಿಲೀಪ್&zwnj; ರಾಜ್&zwnj; ಅವರಿಗೆ ಹೃದಯಾಘಾತ ಆಗಿರೋದು, ತೀರಿಕೊಂಡಿರೋದು ಇನ್ನೂ ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿ ಒಬ್ಬರಾದ ಮೇಲೆ ಒಬ್ಬರು ನಿಧನರಾಗುತ್ತಿದ್ದಾರೆ. ಒಟ್ಟಿನಲ್ಲಿ ಇಂದು ಕನ್ನಡ ಚಿತ್ರರಂಗ, ಸಾಮಾನ್ಯ ಜನರು ಶಾಕ್&zwnj; ಆಗಿದ್ದಾರೆ.&lt;/p&gt;&lt;p&gt;ಟಿಜಿ ನಂದೀಶ್&zwnj; ಅವರು ತೀರ್ಥಹಳ್ಳಿಯ ಮಾಲೂರಿನವರು. ಹರ್ಷಿತಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮಗಳು ಜೇನು, ಮಗ ಗಂಧ. ಮಗ ಹುಟ್ಟಿ ಮೂರು ತಿಂಗಳಾಗಿತ್ತು. ಬೆಂಗಳೂರು ಬೇಡ ಎಂದು ತೀರ್ಥಹಳ್ಳಿಯಲ್ಲಿ ಚೆಂದದ ಸುಂದರ ಮನೆ ಕಟ್ಟಿಸಿಕೊಂಡು ತಾಯಿ, ಪತ್ನಿ, ಮಕ್ಕಳ ಜೊತೆ ಜೀವನ ಮಾಡುತ್ತಿದ್ದರು. ಈಗ ಚಿರನಿದ್ದೆಗೆ ಜಾರಿದ್ದಾರೆ.&lt;/p&gt;&lt;p&gt;&lt;strong&gt;ದಿಲೀಪ್&zwnj; ರಾಜ್&zwnj; ಸಾವಿನ ಬಗ್ಗೆ ಟಿಜಿ ನಂದೀಶ್&zwnj; ಬರಹ ಹೀಗಿತ್ತು&hellip;&lt;/strong&gt;&lt;/p&gt;&lt;p&gt;ಇಂದಿನ ಬೆಳಗು ಇಂಥದ್ದೊಂದು ಕಹಿಸುದ್ದಿಯೊಂದಿಗೆ&zwnj; ಶುರುವಾಗುತ್ತೆ ಎಂಬ ಯಾವುದೇ&zwnj; ಸುಳಿವಿರಲಿಲ್ಲ.&lt;/p&gt;&lt;p&gt;ಪ್ರತಿಭೆ, ಪ್ರಯತ್ನ, ಪರಿಶ್ರಮದ ಮೂಲಕ ಯಶಸ್ಸು ಕಂಡ ದಿಲೀಪ್ ರಾಜ್ ಅವರು ಇನ್ನಿಲ್ಲ ಅನ್ನೋ ಸುದ್ದಿ ಈ ಕ್ಷಣಕ್ಕೂ ಅರಗಿಸಿಕೊಳ್ಳಲಾಗದ ಸತ್ಯ. ಸದಾ ಕಲೆಗೆ&zwnj;&zwnj; ಮಿಡಿಯುತ್ತಿದ್ದ ಆ ಕಲಾವಿದನಿಗೆ ಹೃದಯಾಘಾತವಾಯಿತು ಅನ್ನೋ ಸುದ್ದಿ ಸುಳ್ಳಾಗಬಾರದ ಅನ್ನಿಸುತ್ತಿದೆ.&lt;/p&gt;&lt;p&gt;ನಾನು ಮೊದಲು ದಿಲೀಪ್ ರಾಜ್ ಅವರನ್ನು ಇಷ್ಟಪಟ್ಟಿದ್ದು 'ಪ್ರೀತಿಗಾಗಿ' ಧಾರಾವಾಹಿಯಲ್ಲಿ... ಹಂಸಲೇಖ ನಿರ್ಮಾಣದ ಆ ಧಾರವಾಹಿಯಲ್ಲಿ ಇವರ ನಟನೆಗೆ ಮನಸೋಲದವರಿಲ್ಲ. ಆ ಬಳಿಕ 'ಮಳೆಬಿಲ್ಲು' ಸೇರಿದಂತೆ ಬಹಳಷ್ಟು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಇವರ ನಟನೆಯನ್ನು ಅಭಿಮಾನಿಯಾಗಿ ಮೆಚ್ಚಿದ್ದೆ. ಆದರೆ ಇವರೊಂದಿಗೆ ಅದ್ಯಾವ ನಂಟು ಬೆಸೆದಿತ್ತೋ ಗೊತ್ತಿಲ್ಲ.&lt;/p&gt;&lt;p&gt;ಧೃತಿ ಕ್ರಿಯೇಷನ್ಸ್ ಮೂಲಕ ನನಗೆ ಮೊದಲ ಬಾರಿಗೆ ಕಿರುತೆರೆಯ ಧಾರಾವಾಹಿಗೆ ಸಂಭಾಷಣೆಕಾರನಾಗುವ ಅವಕಾಶ ಕೊಟ್ಟ ನಿರ್ದೇಶಕರು, ನಿರ್ಮಾಪಕರು ದಿಲೀಪ್ ರಾಜ್. 'ಪಾರು' ಧಾರಾವಾಹಿಗೆ ಸಂಭಾಷಣೆ ಬರೆಸುವ ಮೂಲಕ ನನಗೊಂದು ಚೆಂದದ ಅವಕಾಶ ಕೊಟ್ಟರು. ಆ ಬಳಿಕ 'ರಾಧಾ ಕಲ್ಯಾಣ' ಧಾರಾವಾಹಿಗೂ ಕೆಲವು ಕಾಲ ಚಿತ್ರಕಥೆ ಬರೆಯುವ ಅವಕಾಶ ಕೊಟ್ಟವರು.&lt;/p&gt;&lt;p&gt;'ಪಾರು' ಧಾರಾವಾಹಿಗೆ ಸಂಭಾಷಣೆ ಮತ್ತು ಚಿತ್ರಕಥೆ ಬರೆಯುವ ಸಂದರ್ಭದಲ್ಲಿ ಅವರೊಂದಿಗೆ ಸ್ಕ್ರೀನ್ ಪ್ಲೇ ಡಿಸ್ಕಷನ್ನಿಗೆ ಕೂತ ನೆನಪುಗಳು ಇನ್ನು ಹಸಿರಾಗಿದೆ. ಕ್ರಿಯೇಟಿವಿಟಿ ಮತ್ತು ಎಕ್ಸಪರಿಮೆಂಟಲ್ ಮನೋಭಾವ ದಿಲೀಪ್ ರಾಜ್ ಅವರ ಪ್ಲಸ್ ಪಾಯಿಂಟ್. ಸದಾ ದಿ ಬೆಸ್ಟ್ ಕೊಡಬೇಕೆನ್ನುವ ಛಲಗಾರ. ಅದಕ್ಕಾಗಿ ಅವಿರತ ಶ್ರಮ ಹಾಕಿದ್ದರು. ಅವರ ಪರಿಶ್ರಮಕ್ಕೆ ತಕ್ಕ ಗೆಲುವು, ಖ್ಯಾತಿ ಎರಡು ಸಿಕ್ಕಿತ್ತು.&lt;/p&gt;&lt;p&gt;ಜೀ ವಾಹಿನಿಯ 'ಪಾರು' ಧಾರವಾಹಿ ಅವರೊಡನೆ ಕೆಲಸ ಮಾಡುವ ಅವಕಾಶ ಸೃಷ್ಟಿಸಿತ್ತು. ನೆನ್ನೆ ಸಂಜೆ ಅದೇ ಜೀ 5 ವಾಹಿನಿಯಲ್ಲಿ 'ಲವ್ ಮಾಕ್ ಟೇಲ್ - 3' ಸಿನಿಮಾದಲ್ಲಿ ಅವರ ನಟನೆ ನೋಡಿ ಮನೆಮಂದಿಯೆಲ್ಲಾ ಖುಷಿ ಪಟ್ಟಿದ್ದೆವು. ಇದೀಗ ಅದೇ ವಾಹಿನಿ ಹಾಕಿದ ಶ್ರದ್ಧಾಂಜಲಿ ಚಿತ್ರ ನೋಡಿ ಕಣ್ತುಂಬಿದೆ. ಮನಸು ಭಾರವಾಗಿದೆ.&zwnj; ಅವರ ಬದುಕಿನ ಹಾದಿ ಅರ್ಧದಲ್ಲೇ ಕೊನೆಯಾದಂತಿದೆ.&lt;/p&gt;&lt;p&gt;ದಿಲೀಪ್ ಸರ್ ಅವರ ನೆರಳಂತೆ ಇದ್ದವರು ಅವರ ಮಡದಿ ವಿದ್ಯಾ ಮೇಡಂ. ಜೋಡೆತ್ತಿನಂತೆ ಬದುಕಿನ ಪಥವನ್ನು ಒಟ್ಟೊಟ್ಟಿಗೆ ಕಟ್ಟಿಕೊಂಡವರು. ಅವರಿಬ್ಬರೊಡನೆ ಕುಳಿತು ಹರಟಿದ್ದೇವೆ, ಜೊತೆಗೆ ಊಟ ಮಾಡಿದ್ದೇವೆ. ಈಗ ದಿಲೀಪ್ ರಾಜ್ ಅವರಿಲ್ಲ ಅನ್ನೋ ಸಂಕಟ. ಭಗವಂತ ವಿದ್ಯಾ ಮೇಡಂ ಅವರಿಗೆ, ಅವರ ಮಕ್ಕಳಿಗೆ ಈ ಸಂಕಟ ದಾಟುವ ಧೈರ್ಯ ನೀಡಲಿ ಎಂಬುದಷ್ಟೇ ಪ್ರಾರ್ಥನೆ.&lt;/p&gt;&lt;p&gt;ದಿಲೀಪ್ ಸರ್ ನಿಮ್ಮ ಎನರ್ಜಿ, ಜೀವನೋತ್ಸಾಹ ಅದಮ್ಯ. ನಟನೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲೂ ತಮ್ಮದೇ ಛಾಪು ಮೂಡಿಸಿದವರು, ಹೀಗೆ ಏಕಾಏಕಿ ಮರೆಯಾದದ್ದು ಎಂದೆಂದಿಗೂ ಕಾಡಲಿದೆ&zwnj;.&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/tv-talk/kannada-writer-tg-nandish-passed-away-due-to-heart-attack/articleshow-akk4b0z"/>
        </item>
        <item>
            <title><![CDATA[Divorce-Shocking: ಡಿವೋರ್ಸ್ ಸುದ್ದಿ ಬೆನ್ನಲ್ಲೇ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೊರಟ ʻಜಯಂʼ ರವಿ; ಮುಂದೇನು..?]]></title>
            <link>https://kannada.asianetnews.com/cine-world/divorce-controversy-with-his-wife-aarti-actor-jayam-ravi-has-donned-the-ayyappa-maala-and-set-off-for-sabarimala/articleshow-frk8wkx</link>
            <guid isPermaLink="true">https://kannada.asianetnews.com/cine-world/divorce-controversy-with-his-wife-aarti-actor-jayam-ravi-has-donned-the-ayyappa-maala-and-set-off-for-sabarimala/articleshow-frk8wkx</guid>
            <pubDate>Wed, 20 May 2026 18:59:04 +0530</pubDate>
            <description><![CDATA[&lt;p&gt;ಪತ್ನಿ ಆರತಿಯೊಂದಿಗಿನ ಕಾನೂನು ಹೋರಾಟದ ನಡುವೆ ಜಯಂ ರವಿ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಮಾನಸಿಕ ಕಿರುಕುಳ ಮತ್ತು ಆರ್ಥಿಕ ನಿರ್ಬಂಧಗಳ ಆರೋಪ ಮಾಡಿರುವ ಅವರು, ಈಗ ಮನಸ್ಸಿನ ಶಾಂತಿಗಾಗಿ ಶಬರಿಮಲೆ ಯಾತ್ರೆಗೆ ಹೊರಟಿದ್ದಾರೆ. ಮುಂದೇನು ಗತಿ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2s3szqz5smn72f7gb5y695,imgname-jayam-ravi-aarti-ravi-1779283650551.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಸಾರದ ಜಂಜಾಟದಿಂದ ಅಯ್ಯಪ್ಪನ ಸನ್ನಿಧಿಗೆ 'ಜಯಂ' ರವಿ: ಕಣ್ಣೀರು ಹಾಕಿದ್ದ ನಟ ಈಗ ಕಠಿಣ ವ್ರತದಲ್ಲಿ!&lt;/strong&gt;&lt;/p&gt;&lt;p&gt;ಬೆಳ್ಳಿಪರದೆಯ ಮೇಲೆ ಶತ್ರುಗಳನ್ನು ಸದೆಬಡಿಯುವ 'ಮಾಸ್ ಹೀರೋ' ಜಯಂ ರವಿ (Jayam Ravi), ರಿಯಲ್ ಲೈಫ್&zwnj;ನಲ್ಲಿ ಮಾತ್ರ ವಿಧಿಯ ಆಟಕ್ಕೆ ಕಂಗಾಲಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪತ್ನಿ ಆರತಿ (Aarti Ravi) ಮತ್ತು ತಮ್ಮ ನಡುವಿನ ದಾಂಪತ್ಯ ಕಲಹದಿಂದಲೇ (Divorce Controversy) ಸುದ್ದಿಯಾಗುತ್ತಿದ್ದ ಈ ತಮಿಳು ನಟ, ಈಗ ಎಲ್ಲವನ್ನೂ ಮರೆತು ಆಧ್ಯಾತ್ಮದ ಹಾದಿ ಹಿಡಿದಿದ್ದಾರೆ. ಹೌದು, ಸಂಸಾರದ ಜಗಳ, ವಿಚ್ಛೇದನದ ನೋವು ಮತ್ತು ಮಕ್ಕಳನ್ನು ನೋಡಲಾಗದ ಹತಾಶೆಯ ನಡುವೆ ಜಯಂ ರವಿ ಈಗ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಶಾಂತಿಯ ಹುಡುಕಾಟದಲ್ಲಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಕಣ್ಣೀರು ಹಾಕಿದ್ದ ನಟ ಈಗ ಅಯ್ಯಪ್ಪನ ಶರಣು!&lt;/h2&gt;&lt;p&gt;ಇತ್ತೀಚೆಗಷ್ಟೇ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಜಯಂ ರವಿ ಅಕ್ಷರಶಃ ಕುಸಿದು ಹೋಗಿದ್ದರು. &quot;ನನ್ನ ಮಕ್ಕಳನ್ನು ನೋಡಲು ಬಿಡುತ್ತಿಲ್ಲ, ನನ್ನದೇ ಹಣವನ್ನು ಬಳಸಲು ನನಗೆ ಸ್ವಾತಂತ್ರ್ಯವಿಲ್ಲ,&quot; ಎಂದು ಕಣ್ಣೀರು ಹಾಕಿದ್ದ ಅವರು, ಮಾನಸಿಕ ನೆಮ್ಮದಿಗಾಗಿ ಮುಂಬೈಗೆ ವಲಸೆ ಹೋಗಿದ್ದಾಗಿ ತಿಳಿಸಿದ್ದರು. ಈಗ ಆ ಎಲ್ಲಾ ಗದ್ದಲಗಳಿಂದ ದೂರವಿರಲು ನಿರ್ಧರಿಸಿರುವ ರವಿ, ಕಪ್ಪು ವಸ್ತ್ರ ಧರಿಸಿ, ಅಯ್ಯಪ್ಪನ ಕಠಿಣ ವ್ರತ ಕೈಗೊಂಡಿದ್ದಾರೆ. ಶಬರಿಮಲೆ ಯಾತ್ರೆಗಾಗಿ ಮಾಲೆ ಧರಿಸಿರುವ ಅವರ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, &quot;ಸ್ವಾಮಿಯೇ ಶರಣಂ ಅಯ್ಯಪ್ಪ&quot; ಎನ್ನುತ್ತಾ ಈ ಸಂಕಷ್ಟದಿಂದ ಪಾರು ಮಾಡುವಂತೆ ಅಯ್ಯಪ್ಪನಲ್ಲಿ ಮೊರೆ ಇಟ್ಟಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಹಣ ಮತ್ತು ಸ್ವಾತಂತ್ರ್ಯದ ಹಗ್ಗಜಗ್ಗಾಟ!&lt;/p&gt;&lt;p&gt;ಜಯಂ ರವಿ ಅವರ ವಿಚ್ಛೇದನ ಪ್ರಕರಣ ಕೇವಲ ಮನಸ್ತಾಪಕ್ಕೆ ಸೀಮಿತವಾಗಿಲ್ಲ. ಅವರು ಮಾಡಿರುವ ಆರ್ಥಿಕ ಕಿರುಕುಳದ ಆರೋಪಗಳು ಸಂಚಲನ ಮೂಡಿಸಿವೆ. &quot;ನಮ್ಮದು ಜಂಟಿ ಬ್ಯಾಂಕ್ ಖಾತೆ ಇತ್ತು. ನಾನು ಸಣ್ಣ ಮೊತ್ತದ ಹಣವನ್ನು ಡ್ರಾ ಮಾಡಿದರೂ ಅದಕ್ಕೆ ನೂರು ಪ್ರಶ್ನೆಗಳನ್ನು ಎದುರಿಸಬೇಕಿತ್ತು,&quot; ಎಂದು ಅವರು ಅಳಲು ತೋಡಿಕೊಂಡಿದ್ದರು. ಅವರ ಈ ಹೇಳಿಕೆಗೆ ಪುರುಷರ ಹಕ್ಕುಗಳ ಪರ ಹೋರಾಟಗಾರರು ಬೆಂಬಲ ನೀಡಿದ್ದರೆ, ಮಹಿಳಾ ಸಂಘಟನೆಗಳು ಮತ್ತು ನಟಿ ಖುಷ್ಬೂ ಸುಂದರ್ ಅವರು ಪತ್ನಿ ಆರತಿ ಪರವಾಗಿ ನಿಂತಿದ್ದಾರೆ. ಇದರಿಂದಾಗಿ ಈ ಪ್ರಕರಣ ಈಗ ಸಾಮಾಜಿಕ ಜಾಲತಾಣಗಳಲ್ಲಿ 'ಪುರುಷ ವರ್ಸಸ್ ಮಹಿಳೆ' ಎಂಬ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಸಿನಿಮಾಗೂ ಬ್ರೇಕ್, ಹೊಸ ಪಯಣದತ್ತ ಗುರಿ!&lt;/h3&gt;&lt;p&gt;ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ನಟನೆಯಿಂದ ವಿರಾಮ ಪಡೆಯುವುದಾಗಿ ಘೋಷಿಸಿರುವ ರವಿ, ಕೇವಲ ನಟನಾಗಿ ಉಳಿಯದೆ ನಿರ್ದೇಶಕ ಮತ್ತು ನಿರ್ಮಾಪಕನಾಗಿಯೂ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸಿರುವ ಅವರು, 'ಆನ್ ಆರ್ಡಿನರಿ ಮ್ಯಾನ್' ಎಂಬ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ 'ಜೀನಿ' ಮತ್ತು 'ಕರಾಟೆ ಬಾಬು' ಚಿತ್ರಗಳು ಈಗಾಗಲೇ ಅವರ ಕೈಯಲ್ಲಿವೆ.&lt;/p&gt;&lt;p&gt;ಕೊನೆಯ ಮಾತು:&lt;/p&gt;&lt;p&gt;ಸಿನಿಮಾದ ಕ್ಲೈಮ್ಯಾಕ್ಸ್&zwnj;ನಲ್ಲಿ ನಾಯಕ ಗೆಲ್ಲುವುದು ಸುಲಭ, ಆದರೆ ಜೀವನದ ಕ್ಲೈಮ್ಯಾಕ್ಸ್ ಅಷ್ಟು ಸುಲಭವಲ್ಲ. ಅಯ್ಯಪ್ಪನ ದರ್ಶನ ಮಾಡಿ ಬರಲಿರುವ ಜಯಂ ರವಿ ಅವರಿಗೆ ಅವರ ಜೀವನದ ಬಿಕ್ಕಟ್ಟುಗಳು ಬೇಗನೆ ಬಗೆಹರಿಯಲಿ ಮತ್ತು ಅವರಿಗೆ ಅವರು ಬಯಸಿದ ನೆಮ್ಮದಿ ಸಿಗಲಿ ಎಂಬುದು ಅಭಿಮಾನಿಗಳ ಹಾರೈಕೆ.&lt;/p&gt;&lt;p&gt;ಸಾರಾಂಶ:&lt;/p&gt;&lt;p&gt;ಪತ್ನಿ ಆರತಿಯೊಂದಿಗಿನ ಕಾನೂನು ಹೋರಾಟದ ನಡುವೆ ಜಯಂ ರವಿ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಮಾನಸಿಕ ಕಿರುಕುಳ ಮತ್ತು ಆರ್ಥಿಕ ನಿರ್ಬಂಧಗಳ ಆರೋಪಗಳನ್ನು ಮಾಡಿರುವ ಅವರು, ಸದ್ಯಕ್ಕೆ ಚಿತ್ರರಂಗದಿಂದ ಸಣ್ಣ ವಿರಾಮ ಪಡೆದು ಮನಸ್ಸಿನ ಶಾಂತಿಗಾಗಿ ಶಬರಿಮಲೆ ಯಾತ್ರೆಗೆ ಸಜ್ಜಾಗುತ್ತಿದ್ದಾರೆ. ಇತ್ತೀಚಿನ ವಿವಾದಗಳು ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಮೇಲೆ ದೊಡ್ಡ ಪ್ರಭಾವ ಬೀರಿದ್ದು, ಅಯ್ಯಪ್ಪನ ದರ್ಶನ ಅವರಿಗೆ ಹೊಸ ಚೈತನ್ಯ ನೀಡಲಿ ಎಂಬುದು ಎಲ್ಲರ ಆಶಯ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/divorce-controversy-with-his-wife-aarti-actor-jayam-ravi-has-donned-the-ayyappa-maala-and-set-off-for-sabarimala/articleshow-frk8wkx"/>
        </item>
        <item>
            <title><![CDATA[Shocking: ಬಾಲ್ಯದ ' *** ' ಕಿರುಕುಳ, ಗ್ಲಾಮರ್ ಲೋಕದ ಕರಾಳ ಮುಖ ಬಿಚ್ಚಿಟ್ಟ ಡಾ. ಅದಿತಿ ಗೋವಿತ್ರಿಕರ್!]]></title>
            <link>https://kannada.asianetnews.com/gallery/cine-world/dr-aditi-govitrikar-opens-up-about-dark-side-of-the-glamour-world-and-the-horrific-abuse-she-faced-during-her-childhood-hdwtyg8</link>
            <guid isPermaLink="true">https://kannada.asianetnews.com/gallery/cine-world/dr-aditi-govitrikar-opens-up-about-dark-side-of-the-glamour-world-and-the-horrific-abuse-she-faced-during-her-childhood-hdwtyg8</guid>
            <pubDate>Wed, 20 May 2026 18:23:02 +0530</pubDate>
            <description><![CDATA[&lt;p&gt;ಪವನ್ ಕಲ್ಯಾಣ್ ಅಭಿನಯದ 'ತಮ್ಮುಡು' ಸಿನಿಮಾದಲ್ಲಿ 'ಲವ್ಲಿ' ಹೆಸರಿನ ಪಾತ್ರದಲ್ಲಿ ಮಿಂಚಿದ್ದ ನಟಿ ಅದಿತಿ ಗೋವಿತ್ರಿಕರ್. &quot;ವಯ್ಯಾರಿ ಭಾಮ ನೀ ಹಂಸ ನಡಕ..&quot; ಹಾಡಿನಲ್ಲಿ ತಮ್ಮ ಅದ್ಭುತ ಸೌಂದರ್ಯದಿಂದ ರಾತ್ರೋರಾತ್ರಿ ಯುವಕರ ಹೃದಯ ಕದ್ದಿದ್ದ ಈ ನಟಿ, ಬಾಲ್ಯದಲ್ಲಿ ಲೈಂ*ಗಿಕ ಕಿರುಕುಳ ಅನುಭವಿಸಿದ್ದರಂತೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2nz79fzpcehgrbx3w5v9xj,imgname-dr-aditi-govitrikar-1779280354606.jpg" type="image/jpeg" height="390" width="690"/>
            <content:encoded><![CDATA[&lt;p&gt;ಪವನ್ ಕಲ್ಯಾಣ್ ಅಭಿನಯದ 'ತಮ್ಮುಡು' ಸಿನಿಮಾದಲ್ಲಿ 'ಲವ್ಲಿ' ಹೆಸರಿನ ಪಾತ್ರದಲ್ಲಿ ಮಿಂಚಿದ್ದ ನಟಿ ಅದಿತಿ ಗೋವಿತ್ರಿಕರ್. &quot;ವಯ್ಯಾರಿ ಭಾಮ ನೀ ಹಂಸ ನಡಕ..&quot; ಹಾಡಿನಲ್ಲಿ ತಮ್ಮ ಅದ್ಭುತ ಸೌಂದರ್ಯದಿಂದ ರಾತ್ರೋರಾತ್ರಿ ಯುವಕರ ಹೃದಯ ಕದ್ದಿದ್ದ ಈ ನಟಿ, ಬಾಲ್ಯದಲ್ಲಿ ಲೈಂ*ಗಿಕ ಕಿರುಕುಳ ಅನುಭವಿಸಿದ್ದರಂತೆ.&amp;nbsp;&lt;/p&gt;&lt;img&gt;&lt;p&gt;ಗ್ಲಾಮರ್ ಲೋಕದ ಕರಾಳ ಮುಖ: ಬಾಲ್ಯದ ಭೀಕರ ಕಿರುಕುಳ ನೆನೆದು ಕಣ್ಣೀರಿಟ್ಟ 'ವಯ್ಯಾರಿ ಭಾಮ' ಅದಿತಿ ಗೋವಿತ್ರಿಕರ್!&lt;/p&gt;&lt;p&gt;ಬೆಳ್ಳಿಪರದೆಯ ಮೇಲೆ ಮಿನುಗುವ ತಾರೆಯರ ಬದುಕು ಯಾವಾಗಲೂ ಹೂವಿನ ಹಾಸಿಗೆಯಂತೆ ಇರುತ್ತದೆ ಎಂದು ನಾವು ಭಾವಿಸುತ್ತೇವೆ. ಅವರ ಸೌಂದರ್ಯ, ಗ್ಲಾಮರ್ ಮತ್ತು ಜನಪ್ರಿಯತೆಯ ಹಿಂದೆ ಬೆಚ್ಚಿಬೀಳಿಸುವ ನೋವಿನ ಕಥೆಗಳೂ ಇರುತ್ತವೆ ಎಂಬುದಕ್ಕೆ ಈಗ ನಟಿ ಅದಿತಿ ಗೋವಿತ್ರಿಕರ್ (Dr Aditi Govitrikar) ಸಾಕ್ಷಿಯಾಗಿದ್ದಾರೆ. ದಶಕಗಳ ಕಾಲ ತಮ್ಮ ನೋವನ್ನು ಎದೆಯಲ್ಲೇ ಹೂತುಹಾಕಿದ್ದ ಈ ಸುಂದರಿ, ಇತ್ತೀಚೆಗೆ ತಮ್ಮ ಬಾಲ್ಯದಲ್ಲಿ ನಡೆದ ಆ ಕರಾಳ ಘಟನೆಗಳನ್ನು ಬಿಚ್ಚಿಡುವ ಮೂಲಕ ಇಡೀ ಚಿತ್ರರಂಗವೇ ಮರುಗುವಂತೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;'ತಮ್ಮುಡು' ಸಿನಿಮಾದ ಲವ್ಲಿ ಹುಡುಗಿ!&lt;/p&gt;&lt;p&gt;ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಸಾರ್ವಕಾಲಿಕ ಹಿಟ್ ಸಿನಿಮಾ 'ತಮ್ಮುಡು' ನೆನಪಿದೆಯೇ? ಆ ಸಿನಿಮಾದಲ್ಲಿ 'ಲವ್ಲಿ' ಎಂಬ ಹೆಸರಿನ ಪಾತ್ರದಲ್ಲಿ ಮಿಂಚಿದ್ದವರು ಅದಿತಿ ಗೋವಿತ್ರಿಕರ್. ವಿಶೇಷವಾಗಿ &quot;ವಯ್ಯಾರಿ ಭಾಮ ನೀ ಹಂಸ ನಡಕ..&quot; ಹಾಡಿನಲ್ಲಿ ತಮ್ಮ ಅದ್ಭುತ ಸೌಂದರ್ಯದಿಂದ ರಾತ್ರೋರಾತ್ರಿ ಯುವಕರ ಹೃದಯ ಕದಿದ್ದ ಈ ನಟಿ, ತೆಲುಗು ಪ್ರೇಕ್ಷಕರಿಗೆ ಇಂದಿಗೂ ಆಪ್ತರು. ಆದರೆ ಆ ನಗುವಿನ ಹಿಂದೆ ಅದೆಷ್ಟು ಕಣ್ಣೀರು ಅಡಗಿತ್ತು ಎಂಬುದು ಯಾರಿಗೂ ತಿಳಿದಿರಲಿಲ್ಲ.&lt;/p&gt;&lt;img&gt;&lt;p&gt;ಏಳು ವರ್ಷದ ಬಾಲಕಿಯ ಮೇಲೆ ನಡೆದ ನರಕಯಾತನೆ!&lt;/p&gt;&lt;p&gt;ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯದ ಬಗ್ಗೆ ಮಾತನಾಡುತ್ತಾ ಅದಿತಿ ಭಾವುಕರಾದರು. &quot;ನಾನು ಕೇವಲ ಆರು ಅಥವಾ ಏಳು ವರ್ಷದವಳಿದ್ದಾಗ ನನ್ನ ಬಾಲ್ಯ ನರಕವಾಗಿತ್ತು,&quot; ಎಂದು ಹೇಳುತ್ತಾ ಕಣ್ಣೀರಿಟ್ಟರು. ಮುಂಬೈನ ಪನ್ವೇಲ್ ಪ್ರದೇಶದಲ್ಲಿ ವಾಸವಾಗಿದ್ದಾಗ, ತಮ್ಮ ತಂದೆಯ ಆತ್ಮೀಯ ಸ್ನೇಹಿತನೇ ಅದಿತಿ ಮೇಲೆ ಲೈಂಗಿಕ ಕಿರುಕುಳ ನೀಡಿದ್ದನಂತೆ. ನಂಬಿಕೆಗೆ ದ್ರೋಹ ಬಗೆದ ಆ ವ್ಯಕ್ತಿ ಆ ಪುಟ್ಟ ಬಾಲಕಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಜಜ್ಜಿದ್ದ. ಈ ಆಘಾತಕಾರಿ ಘಟನೆಯಿಂದ ಚೇತರಿಸಿಕೊಳ್ಳಲು ಅದಿತಿಗೆ ವರ್ಷಗಳೇ ಬೇಕಾಯಿತು. ಅಷ್ಟೇ ಅಲ್ಲದೆ, ಶಾಲಾ ದಿನಗಳಲ್ಲಿ ಲೋಕಲ್ ಬಸ್ ಮತ್ತು ಟ್ರೈನ್&zwnj;ಗಳಲ್ಲಿ ಪ್ರಯಾಣಿಸುವಾಗಲೂ ಅವರು ಅನೇಕ ಬಾರಿ ಕಿರುಕುಳಕ್ಕೆ ಒಳಗಾಗಿದ್ದರು. &quot;ಆ ಕಷ್ಟಗಳು ಮತ್ತು ಕಹಿ ನೆನಪುಗಳೇ ನಾನು ಹೇಗೆ ಗಟ್ಟಿಯಾಗಿ ಬದುಕಬೇಕು ಎಂದು ಕಲಿಸಿದವು,&quot; ಎಂದು ಅವರು ಧೈರ್ಯದಿಂದ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಗ್ಲಾಮರ್ ಮೀರಿಸಿದ ಪ್ರತಿಭೆ: ಇವರು ಕೇವಲ ನಟಿಯಲ್ಲ, ಡಾಕ್ಟರ್!&lt;/p&gt;&lt;p&gt;ಅದಿತಿ ಗೋವಿತ್ರಿಕರ್ ಅವರ ವಿಶೇಷತೆಯೆಂದರೆ ಅವರು ಕೇವಲ ಗ್ಲಾಮರ್ ಮಾಡೆಲ್ ಮಾತ್ರವಲ್ಲ. ನಟನೆಗೆ ಬರುವ ಮೊದಲೇ ಅವರು ವೈದ್ಯಕೀಯ ಪದವಿ ಪಡೆದ ಅಪ್ಪಟ ಡಾಕ್ಟರ್&zwnj; ಮತ್ತು ಪ್ರಸಿದ್ಧ ಮನಶ್ಶಾಸ್ತ್ರಜ್ಞೆ. 2001ರಲ್ಲಿ 'ಮಿಸೆಸ್ ವರ್ಲ್ಡ್' ಕಿರೀಟ ಮುಡಿಗೇರಿಸಿಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ ಅದಿತಿ, ಮಾಡೆಲಿಂಗ್ ಲೋಕದ ರಾಣಿಯಾಗಿದ್ದರೂ ತಮ್ಮ ವೈದ್ಯಕೀಯ ವೃತ್ತಿಯನ್ನು ಮರೆಯಲಿಲ್ಲ.&lt;/p&gt;&lt;img&gt;&lt;p&gt;ಈಗ ಎಲ್ಲಿದ್ದಾರೆ ಅದಿತಿ?&lt;/p&gt;&lt;p&gt;ಸಿನಿಮಾ ಲೋಕದ ವೈಭವದಿಂದ ದೂರ ಉಳಿದಿರುವ 49 ವರ್ಷದ ಅದಿತಿ ಗೋವಿತ್ರಿಕರ್, ಈಗ ಮುಂಬೈನಲ್ಲಿ ಪೂರ್ಣ ಪ್ರಮಾಣದ ಡಾಕ್ಟರ್ ಮತ್ತು ಮನಶ್ಶಾಸ್ತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಕೆಲವು ಏರಿಳಿತಗಳನ್ನು ಕಂಡರೂ (2007ರಲ್ಲಿ ವಿಚ್ಛೇದನ), ಸೋಲೊಪ್ಪದ ಅದಿತಿ ಈಗ ನೂರಾರು ಜನರಿಗೆ ಮಾನಸಿಕ ಸಮಾಲೋಚನೆ ನೀಡುವ ಮೂಲಕ ಅವರ ಬದುಕಿನಲ್ಲಿ ಬೆಳಕಾಗುತ್ತಿದ್ದಾರೆ.&lt;/p&gt;&lt;img&gt;&lt;p&gt;ಬಾಲ್ಯದಲ್ಲಿ ಕಿರುಕುಳ ನೀಡಿದವರ ವಿರುದ್ಧ ಧ್ವನಿ ಎತ್ತಲು ಅದೆಷ್ಟೋ ಧೈರ್ಯ ಬೇಕು. ಇಂದು ಅದಿತಿ ಆ ಧೈರ್ಯವನ್ನು ತೋರಿಸುವ ಮೂಲಕ ಸಾವಿರಾರು ಸಂತ್ರಸ್ತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಸಾರಾಂಶ:&lt;/p&gt;&lt;p&gt;ತೆಲುಗಿನ 'ಲವ್ಲಿ' ಹುಡುಗಿ ಅದಿತಿ ಗೋವಿತ್ರಿಕರ್ ಅವರ ಬದುಕು ಹೋರಾಟದ ಹಾದಿ. ಬಾಲ್ಯದ ಲೈಂಗಿಕ ಕಿರುಕುಳದ ನೋವನ್ನು ಮೆಟ್ಟಿ ನಿಂತು, ಇಂದು ಒಬ್ಬ ಯಶಸ್ವಿ ಡಾಕ್ಟರ್ ಆಗಿ ಸಮಾಜಕ್ಕೆ ಸೇವೆಯು ಸಲ್ಲಿಸುತ್ತಿರುವ ಅವರ ಪಯಣ ನಿಜಕ್ಕೂ ಶ್ಲಾಘನೀಯ. ಅವರ ಈ ಬಯಲು ಸತ್ಯ ಹಲವರಿಗೆ ಎಚ್ಚರಿಕೆಯ ಗಂಟೆಯೂ ಹೌದು.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/dr-aditi-govitrikar-opens-up-about-dark-side-of-the-glamour-world-and-the-horrific-abuse-she-faced-during-her-childhood-hdwtyg8"/>
        </item>
        <item>
            <title><![CDATA[25 ವರ್ಷದಲ್ಲಿ 3750% ಹೆಚ್ಚಾಯ್ತು ಜೂ.ಎನ್‌ಟಿಆರ್‌ ಸಂಬಳ: ಮೊದಲ ಸಂಭಾವನೆ ಎಷ್ಟಿತ್ತು ಗೊತ್ತಾ?]]></title>
            <link>https://kannada.asianetnews.com/entertainment/jr-ntr-remuneration-for-dragon-skyrockets-by-3750-percent-over-25-years-gvd/articleshow-uuwqtsx</link>
            <guid isPermaLink="true">https://kannada.asianetnews.com/entertainment/jr-ntr-remuneration-for-dragon-skyrockets-by-3750-percent-over-25-years-gvd/articleshow-uuwqtsx</guid>
            <pubDate>Wed, 20 May 2026 17:48:47 +0530</pubDate>
            <description><![CDATA[&lt;p&gt;ಜೂ.ಎನ್&zwnj;ಟಿಆರ್&zwnj; ತಮ್ಮ ಹುಟ್ಟುಹಬ್ಬದ ದಿನ ಫ್ಯಾನ್ಸ್&zwnj;ಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ 'ಡ್ರ್ಯಾಗನ್'ನ ಫಸ್ಟ್ ಲುಕ್ ರಿಲೀಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2h6fttjs115v3zevxyseze,imgname-3-1779275349849.png" type="image/jpeg" height="390" width="690"/>
            <content:encoded><![CDATA[&lt;p&gt;ಜೂ.ಎನ್&zwnj;ಟಿಆರ್&zwnj; ತಮ್ಮ ಹುಟ್ಟುಹಬ್ಬದಂದು ಬಹುನಿರೀಕ್ಷಿತ 'ಡ್ರ್ಯಾಗನ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಇಂಟರ್&zwnj;ನೆಟ್&zwnj;ನಲ್ಲಿ ಹವಾ ಎಬ್ಬಿಸಿದ್ದಾರೆ. ವರದಿಗಳ ಪ್ರಕಾರ, 500-600 ಕೋಟಿ ಬಜೆಟ್&zwnj;ನ ಈ ಚಿತ್ರಕ್ಕಾಗಿ ಜೂ.ಎನ್&zwnj;ಟಿಆರ್&zwnj; ತಮ್ಮ ವೃತ್ತಿಜೀವನದ ಅತಿ ದೊಡ್ಡ ಸಂಭಾವನೆ ಪಡೆದಿದ್ದಾರೆ. ವಿಶೇಷ ಅಂದ್ರೆ, ಇದು ಅವರ ಮೊದಲ ಸಂಬಳಕ್ಕಿಂತ ಸುಮಾರು 3000-3750% ಹೆಚ್ಚು!&lt;/p&gt;&lt;p&gt;ಜೂ.ಎನ್&zwnj;ಟಿಆರ್&zwnj; ತಮ್ಮ ಹುಟ್ಟುಹಬ್ಬದ ದಿನ ಫ್ಯಾನ್ಸ್&zwnj;ಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ 'ಡ್ರ್ಯಾಗನ್'ನ ಫಸ್ಟ್ ಲುಕ್ ರಿಲೀಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಪ್ರಶಾಂತ್ ನೀಲ್ ಡೈರೆಕ್ಷನ್&zwnj;ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ತೆಲುಗು ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಲಿದೆ. ಇದರ ಬಜೆಟ್ ಸುಮಾರು 500 ರಿಂದ 600 ಕೋಟಿ ರೂಪಾಯಿ ಅಂತ ಹೇಳಲಾಗ್ತಿದೆ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಜೂ.ಎನ್&zwnj;ಟಿಆರ್&zwnj; ಸಂಭಾವನೆ ಬಗ್ಗೆಯೇ ಚರ್ಚೆ ನಡೀತಿದೆ. ವರದಿಗಳ ಪ್ರಕಾರ, ಈ ಸಿನಿಮಾಗೆ ಅವರು ಪಡೆಯುತ್ತಿರುವ ಸಂಭಾವನೆ, ಅವರ ಮೊದಲ ಸಂಬಳಕ್ಕೆ ಹೋಲಿಸಿದರೆ ಸುಮಾರು 3000 ದಿಂದ 3750 ಪ್ರತಿಶತದಷ್ಟು ಹೆಚ್ಚು!&lt;/p&gt;&lt;p&gt;&lt;strong&gt;'ಡ್ರ್ಯಾಗನ್' ಚಿತ್ರಕ್ಕೆ ಜೂ.ಎನ್&zwnj;ಟಿಆರ್&zwnj; ಸಂಭಾವನೆ ಎಷ್ಟು?&lt;/strong&gt;&lt;/p&gt;&lt;p&gt;ಸಾಮಾನ್ಯವಾಗಿ ಜೂ.ಎನ್&zwnj;ಟಿಆರ್&zwnj; ಒಂದು ಸಿನಿಮಾಗೆ 50 ರಿಂದ 80 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ, ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರಕ್ಕಾಗಿ ಅವರು ಬರೋಬ್ಬರಿ 120 ರಿಂದ 150 ಕೋಟಿ ರೂಪಾಯಿವರೆಗೆ ಚಾರ್ಜ್ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಜೂ.ಎನ್&zwnj;ಟಿಆರ್&zwnj; ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿವೆ. ಈ ಅವಧಿಯಲ್ಲಿ ಅವರ ಸಂಬಳದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡಿದೆ. ಜೂ.ಎನ್&zwnj;ಟಿಆರ್&zwnj; 2001ರಲ್ಲಿ 'ನಿನ್ನು ಚೂಡಾಲನಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆಗ ಅವರಿಗೆ ಸಿಕ್ಕಿದ್ದು ಕೇವಲ 4 ಲಕ್ಷ ರೂಪಾಯಿ ಮಾತ್ರ. ವರದಿಗಳ ಪ್ರಕಾರ, ತಮ್ಮ ಮೊದಲ ಸಂಪಾದನೆಯನ್ನು ಅವರು ಅಮ್ಮ ಶಾಲಿನಿ ಭಾಸ್ಕರ್ ರಾವ್ ಕೈಗೆ ಕೊಟ್ಟಿದ್ದರು.&lt;/p&gt;&lt;p&gt;&lt;strong&gt;ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ ಆಗಿ ಜೂ.ಎನ್&zwnj;ಟಿಆರ್&zwnj; ಬೆಳೆದಿದ್ದು ಹೇಗೆ?&lt;/strong&gt;&lt;/p&gt;&lt;p&gt;ಕೆರಿಯರ್ ಆರಂಭದಲ್ಲಿ ಜೂ.ಎನ್&zwnj;ಟಿಆರ್&zwnj; 'ಸ್ಟೂಡೆಂಟ್ ನಂ.1' ಮತ್ತು 'ಆದಿ'ಯಂತಹ ಚಿತ್ರಗಳಿಂದ ಜನಪ್ರಿಯತೆ ಗಳಿಸಿದರು. ಎಸ್. ಎಸ್. ರಾಜಮೌಳಿ ಜೊತೆಗಿನ ಅವರ ಕಾಂಬಿನೇಷನ್ ಸತತವಾಗಿ ಹಿಟ್ ಆಗ್ತಾ ಬಂತು. 'ಯಮದೊಂಗ' ಸಿನಿಮಾ ಅವರ ವೃತ್ತಿಜೀವನಕ್ಕೆ ಒಂದು ದೊಡ್ಡ ಟರ್ನಿಂಗ್ ಪಾಯಿಂಟ್ ಆಯ್ತು. ಇದರ ನಂತರ 'ಬೃಂದಾವನಂ', 'ಟೆಂಪರ್', 'ನಾನ್ನಕು ಪ್ರೇಮತೋ', 'ಜನತಾ ಗ್ಯಾರೇಜ್' ಮತ್ತು 'ಅರವಿಂದ ಸಮೇತ ವೀರ ರಾಘವ' ದಂತಹ ಚಿತ್ರಗಳು ಅವರನ್ನು ಸೂಪರ್&zwnj;ಸ್ಟಾರ್ ಪಟ್ಟಕ್ಕೇರಿಸಿದವು.&lt;/p&gt;&lt;p&gt;&lt;strong&gt;&lsquo;RRR&rsquo; ಚಿತ್ರದಿಂದ ಜೂ.ಎನ್&zwnj;ಟಿಆರ್&zwnj;ಗೆ ಸಿಕ್ಕಿತು ಅಂತಾರಾಷ್ಟ್ರೀಯ ಮನ್ನಣೆ&lt;/strong&gt;&lt;/p&gt;&lt;p&gt;ಎಸ್. ಎಸ್. ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಜೂ.ಎನ್&zwnj;ಟಿಆರ್&zwnj; ಅವರನ್ನು ಗ್ಲೋಬಲ್ ಸ್ಟಾರ್ ಆಗಿ ಮಾಡಿತು. ಈ ಚಿತ್ರ ವಿಶ್ವಾದ್ಯಂತ ದಾಖಲೆ ಬರೆದು, ಸುಮಾರು 1230 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತು. ಅಷ್ಟೇ ಅಲ್ಲ, ಇದರ 'ನಾಟು ನಾಟು' ಹಾಡು ಆಸ್ಕರ್&zwnj;ನಲ್ಲಿ 'ಅತ್ಯುತ್ತಮ ಮೂಲ ಗೀತೆ' ಪ್ರಶಸ್ತಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿತು. ಇದೇ ಹಾಡು ಗೋಲ್ಡನ್ ಗ್ಲೋಬ್ ಮತ್ತು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಕೂಡ ಬಾಚಿಕೊಂಡಿತು. 'RRR' ನಂತರ, ಜೂ.ಎನ್&zwnj;ಟಿಆರ್&zwnj;ಗೆ ಬೇರೆ ಬೇರೆ ಭಾಷೆಗಳ ಚಿತ್ರರಂಗದಿಂದ ದೊಡ್ಡ ಆಫರ್&zwnj;ಗಳು ಬರಲಾರಂಭಿಸಿದವು. ಅಯಾನ್ ಮುಖರ್ಜಿ ನಿರ್ದೇಶನದ 'ವಾರ್ 2' ಮೂಲಕ ಅವರು ಬಾಲಿವುಡ್&zwnj;ಗೆ ಎಂಟ್ರಿ ಕೊಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು 'ಡ್ರ್ಯಾಗನ್' ಕಥೆ?&lt;/strong&gt;&lt;/h2&gt;&lt;p&gt;'ಡ್ರ್ಯಾಗನ್' ಕಥೆ 1967ರ ಕಾಲಘಟ್ಟದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ 'ಗೋಲ್ಡನ್ ಟ್ರಯಾಂಗಲ್' ಮತ್ತು ಅಫೀಮು ವ್ಯಾಪಾರದ ಜಗತ್ತನ್ನು ತೋರಿಸಲಾಗುತ್ತೆ. 'ಅಫ್ಘಾನ್ ಟ್ರೇಡಿಂಗ್ ಕಂಪನಿ' ಮತ್ತು 'ಗೋಲ್ಡನ್ ಟ್ರೇಡಿಂಗ್ ಕಂಪನಿ' ನಡುವಿನ ಸಂಘರ್ಷವೇ ಈ ಕಥೆಯ ಕೇಂದ್ರಬಿಂದು. ಮೈತ್ರಿ ಮೂವೀ ಮೇಕರ್ಸ್ ಮತ್ತು ಎನ್&zwnj;ಟಿಆರ್ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸುತ್ತಿವೆ. ಈ ಸಿನಿಮಾ ಜೂನ್ 11, 2027 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/jr-ntr-remuneration-for-dragon-skyrockets-by-3750-percent-over-25-years-gvd/articleshow-uuwqtsx"/>
        </item>
        <item>
            <title><![CDATA[ಜೂ.ಎನ್‌ಟಿಆರ್‌ ‘ಡ್ರ್ಯಾಗನ್’ ಟೀಸರ್ ನೋಡಿದ್ರಾ: ಈ 3 ಪವರ್‌ಫುಲ್ ಡೈಲಾಗ್‌ ಕೇಳಿದ್ರೆ ಮೈ ಜುಮ್ ಅನ್ನುತ್ತೆ!]]></title>
            <link>https://kannada.asianetnews.com/entertainment/jr-ntr-dragon-teaser-dialogues-create-a-storm-on-social-media-gvd/articleshow-34e6a6n</link>
            <guid isPermaLink="true">https://kannada.asianetnews.com/entertainment/jr-ntr-dragon-teaser-dialogues-create-a-storm-on-social-media-gvd/articleshow-34e6a6n</guid>
            <pubDate>Wed, 20 May 2026 17:30:54 +0530</pubDate>
            <description><![CDATA[&lt;p&gt;ಜೂ.ಎನ್&zwnj;ಟಿಆರ್&zwnj; ಅಭಿನಯದ 'ಡ್ರ್ಯಾಗನ್' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಧೂಳೆಬ್ಬಿಸುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಈ ಚಿತ್ರದ ಟೀಸರ್&zwnj;ನಲ್ಲಿ ಸುಮಾರು 12 ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks0v2gfkaz3f7t6thga9r021,imgname-dragon-glimpse-1779218596339.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೂ.ಎನ್&zwnj;ಟಿಆರ್&zwnj; ಅಭಿನಯದ 'ಡ್ರ್ಯಾಗನ್' ಚಿತ್ರದ ಟೀಸರ್ ಕೊನೆಗೂ ಬಂದಿದೆ. ಟೀಸರ್ ರಿಲೀಸ್ ಆದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಫ್ಯಾನ್ಸ್ ಪದೇ ಪದೇ ನೋಡುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದ 4.28 ನಿಮಿಷದ ಟೀಸರ್&zwnj;ನಲ್ಲಿ ಕೆಲವು ಸಖತ್ ಡೈಲಾಗ್&zwnj;ಗಳಿವೆ. ಇದೊಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಜೂನ್ 11, 2027 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.&lt;/p&gt;&lt;p&gt;ಸೌತ್ ಸೂಪರ್&zwnj;ಸ್ಟಾರ್ ಜೂ.ಎನ್&zwnj;ಟಿಆರ್&zwnj; ಅಭಿನಯದ 'ಡ್ರ್ಯಾಗನ್' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಧೂಳೆಬ್ಬಿಸುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಈ ಚಿತ್ರದ ಟೀಸರ್&zwnj;ನಲ್ಲಿ ಸುಮಾರು 12 ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ವಿಲನ್ ಪಾತ್ರದಲ್ಲಿದ್ದಾರೆ. ಕೆಲ ವಿದೇಶಿ ಕಲಾವಿದರೂ ಇದ್ದಾರೆ. ಟೀಸರ್&zwnj;ನಲ್ಲಿ ಜೂ.ಎನ್&zwnj;ಟಿಆರ್&zwnj; ಹೇಳುವ 3 ಪವರ್&zwnj;ಫುಲ್ ಡೈಲಾಗ್&zwnj;ಗಳು ಎಲ್ಲೆಡೆ ಹವಾ ಎಬ್ಬಿಸಿವೆ. ಆ ಡೈಲಾಗ್&zwnj;ಗಳು ಯಾವುವು ಅಂತ ನೋಡೋಣ ಬನ್ನಿ...&lt;/p&gt;&lt;p&gt;&lt;strong&gt;ಜೂ.ಎನ್&zwnj;ಟಿಆರ್&zwnj; 'ಡ್ರ್ಯಾಗನ್' ಚಿತ್ರದ ಡೈಲಾಗ್&zwnj;ಗಳು&lt;/strong&gt;&lt;/p&gt;&lt;p&gt;ಜೂ.ಎನ್&zwnj;ಟಿಆರ್&zwnj; ಅವರ ಬಹುನಿರೀಕ್ಷಿತ 'ಡ್ರ್ಯಾಗನ್' ಸಿನಿಮಾ ಬಹಳ ದಿನಗಳಿಂದ ಸುದ್ದಿಯಲ್ಲಿತ್ತು. ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಹೊರಬರದ ಕಾರಣ, ಅಭಿಮಾನಿಗಳಲ್ಲಿ ಒಂದು ರೀತಿಯ ಕುತೂಹಲ ಮನೆಮಾಡಿತ್ತು. ಆದರೆ, ಟೀಸರ್ ರಿಲೀಸ್ ಆದ ನಂತರ ಜನರ ಉತ್ಸಾಹ ದುಪ್ಪಟ್ಟಾಗಿದೆ. ಚಿತ್ರದ ಟೀಸರ್&zwnj;ನಲ್ಲಿ ಜೂ.ಎನ್&zwnj;ಟಿಆರ್&zwnj; ಹೇಳುವ 3 ಖಡಕ್ ಡೈಲಾಗ್&zwnj;ಗಳು ಇಲ್ಲಿವೆ...&lt;/p&gt;&lt;p&gt;1. ನನ್ನ ಮೇಲೆ ದೇವರ ದಯೆ ಒಂದಿದೆ, ಟ್ರಿಗರ್ ಒತ್ತಿದ ಮೇಲೆ ನಾನು ಪಶ್ಚಾತ್ತಾಪ ಪಡಲ್ಲ.&lt;/p&gt;&lt;p&gt;2. ನಾನು ಸಾಯಿಸಿದವರ ಮುಖ ಕನಸಲ್ಲಿ ಬರೋಲ್ಲ. ಇನ್ನೂ ಯಾರು ಬದುಕಿದ್ದಾರೋ, ಅವರ ಮುಖ ಮಾತ್ರ ಬರುತ್ತೆ.&lt;/p&gt;&lt;p&gt;3. ತಪ್ಪಿ ಕೂಡ ನನ್ನ ಕನಸಿಗೆ ಬರೋಕೆ ಹೋಗ್ಬೇಡ.&lt;/p&gt;&lt;p&gt;&lt;strong&gt;ಜೂ.ಎನ್&zwnj;ಟಿಆರ್&zwnj; 'ಡ್ರ್ಯಾಗನ್' ಚಿತ್ರದ ಬಗ್ಗೆ&lt;/strong&gt;&lt;/p&gt;&lt;p&gt;ತಮ್ಮ ಬಹುನಿರೀಕ್ಷಿತ 'ಡ್ರ್ಯಾಗನ್' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಜೂ.ಎನ್&zwnj;ಟಿಆರ್&zwnj; ಮತ್ತೆ ಲೈಮ್&zwnj;ಲೈಟ್&zwnj;ಗೆ ಬಂದಿದ್ದಾರೆ. ಅವರ ಹುಟ್ಟುಹಬ್ಬದ ದಿನದಂದು ನಿರ್ಮಾಪಕರು 'ಡ್ರ್ಯಾಗನ್' ಟೀಸರ್ ಹಂಚಿಕೊಂಡು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಜೂ.ಎನ್&zwnj;ಟಿಆರ್&zwnj; ಜೊತೆಗೆ ಅನಿಲ್ ಕಪೂರ್, ರುಕ್ಮಿಣಿ ವಸಂತ್, ಬಿಜು ಮೆನನ್, ಖುಷ್ಬೂ ಸುಂದರ್, ಗುರು ಸೋಮಸುಂದರಂ, ರಾಜೀವ್ ಕನಕಾಲ, ಅಶುತೋಷ್ ರಾಣಾ, ಅಂಶುಮಾನ್ ಪುಷ್ಕರ್, ಸಿದ್ಧಾಂತ್ ಗುಪ್ತಾ ಕೂಡ ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್&zwnj;ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, 500-600 ಕೋಟಿ ಬಜೆಟ್&zwnj;ನಲ್ಲಿ ತಯಾರಾಗುತ್ತಿದೆ. ಈ ಸಿನಿಮಾ ಜೂನ್ 11, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;&lt;h2&gt;&lt;strong&gt;ಜೂ.ಎನ್&zwnj;ಟಿಆರ್&zwnj; ಬಗ್ಗೆ&lt;/strong&gt;&lt;/h2&gt;&lt;p&gt;ಜೂ.ಎನ್&zwnj;ಟಿಆರ್&zwnj; 1991 ರಲ್ಲಿ ಬಾಲ ಕಲಾವಿದರಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಾಯಕನಾಗಿ ಅವರ ಮೊದಲ ಚಿತ್ರ 'ನಿನ್ನು ಚೂಡಾಲಾನಿ'. ಇದರ ನಂತರ ಬಂದ 'ಸ್ಟೂಡೆಂಟ್ ನಂ. 1' ಚಿತ್ರ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತು. ಅವರು ವರ್ಷಕ್ಕೆ ಒಂದು ಅಥವಾ ಎರಡು ಚಿತ್ರಗಳನ್ನು ಮಾಡಲು ಇಷ್ಟಪಡುತ್ತಾರೆ. ಆದರೆ, ಅವರ ಹಿಂದಿನ ಎರಡು ಚಿತ್ರಗಳಾದ 2024ರಲ್ಲಿ ಬಂದ 'ದೇವರ' ಮತ್ತು 2025ರಲ್ಲಿ ಬಂದ 'ವಾರ್ 2' ಬಾಕ್ಸ್ ಆಫೀಸ್&zwnj;ನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಈಗ ಅಭಿಮಾನಿಗಳು ಅವರ 'ಡ್ರ್ಯಾಗನ್' ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಕಾಯುವಿಕೆ ಬಹಳ ದೀರ್ಘವಾಗಿರಲಿದೆ, ಯಾಕಂದ್ರೆ ಸಿನಿಮಾ 2027 ರಲ್ಲಿ ರಿಲೀಸ್ ಆಗಲಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/jr-ntr-dragon-teaser-dialogues-create-a-storm-on-social-media-gvd/articleshow-34e6a6n"/>
        </item>
        <item>
            <title><![CDATA[‘ಪೆದ್ದಿ’ ಟ್ರೇಲರ್‌ನಲ್ಲಿ ರಾಮ್ ಚರಣ್-ಶಿವಣ್ಣ ಅಬ್ಬರ: ರಿಷಬ್ ಶೆಟ್ಟಿ ನೀಡಿದ ಪ್ರತಿಕ್ರಿಯೆ ವೈರಲ್!]]></title>
            <link>https://kannada.asianetnews.com/entertainment/rishab-shetty-amazed-by-ram-charans-peddi-trailer-praises-stunning-look-gvd/articleshow-nwzxgzd</link>
            <guid isPermaLink="true">https://kannada.asianetnews.com/entertainment/rishab-shetty-amazed-by-ram-charans-peddi-trailer-praises-stunning-look-gvd/articleshow-nwzxgzd</guid>
            <pubDate>Wed, 20 May 2026 17:08:36 +0530</pubDate>
            <description><![CDATA[&lt;p&gt;ನಟ ರಿಷಬ್ ಶೆಟ್ಟಿ ಅವರು ರಾಮ್ ಚರಣ್ ಅವರ 'ಪೆದ್ದಿ' ಚಿತ್ರದ ಟ್ರೇಲರ್ ಅನ್ನು 'ಅದ್ಭುತ' ಎಂದು ಬಣ್ಣಿಸಿದ್ದಾರೆ. ಜೂನ್ 4, 2026 ರಂದು ಈ ಸಿನಿಮಾ ಥಿಯೇಟರ್&zwnj;ಗಳಲ್ಲಿ ಬಿಡುಗಡೆಯಾಗಲಿದೆ. ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2jvvs4b6avp1j4y67eccmv,imgname-vhvh-1779277098788.png" type="image/jpeg" height="390" width="690"/>
            <content:encoded><![CDATA[&lt;p&gt;ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದ ಟ್ರೇಲರ್ ನೋಡಿ ನಟ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಮ್ ಚರಣ್ ಅವರ ಲುಕ್ 'ಬೆಂಕಿ'ಯಾಗಿದೆ ಎಂದಿರುವ ಅವರು, ಟ್ರೇಲರ್ 'ಅದ್ಭುತ'ವಾಗಿದೆ ಎಂದು ಹೊಗಳಿದ್ದಾರೆ. ಜೂನ್ 4, 2026ಕ್ಕೆ ತೆರೆಗೆ ಬರಲಿರುವ ಈ ಚಿತ್ರದಲ್ಲಿ ಜಾನ್ವಿ ಕಪೂರ್ ಮತ್ತು ಶಿವರಾಜ್&zwnj;ಕುಮಾರ್ ಕೂಡ ನಟಿಸಿದ್ದಾರೆ.&lt;/p&gt;&lt;p&gt;ನಟ ರಿಷಬ್ ಶೆಟ್ಟಿ ಅವರು ರಾಮ್ ಚರಣ್ ಅವರ 'ಪೆದ್ದಿ' ಚಿತ್ರದ ಟ್ರೇಲರ್ ಅನ್ನು 'ಅದ್ಭುತ' ಎಂದು ಬಣ್ಣಿಸಿದ್ದಾರೆ. ಜೂನ್ 4, 2026 ರಂದು ಈ ಸಿನಿಮಾ ಥಿಯೇಟರ್&zwnj;ಗಳಲ್ಲಿ ಬಿಡುಗಡೆಯಾಗಲಿದೆ. ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಿಷಬ್, ರಾಮ್ ಚರಣ್ ಅವರ ಲುಕ್ ಅನ್ನು ಹೊಗಳಿದ್ದಾರೆ. ಪ್ರತಿ ಫ್ರೇಮ್&zwnj;ನಲ್ಲೂ ಅವರ ಲುಕ್ 'ಬೊಂಬಾಟ್' ಮತ್ತು 'ಸಖತ್ ಬೆಂಕಿ'ಯಾಗಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಕೆಲಸವನ್ನೂ ಅವರು ಶ್ಲಾಘಿಸಿದ್ದಾರೆ.&lt;/p&gt;&lt;p&gt;'ಪೆದ್ದಿ' ಟ್ರೇಲರ್ ಅದ್ಭುತವಾಗಿ ಕಾಣುತ್ತಿದೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಲುಕ್ ಬೆರಗು ಮೂಡಿಸುವಂತಿದೆ, ಪ್ರತಿ ಫ್ರೇಮ್&zwnj;ನಲ್ಲೂ ಬೆಂಕಿಯಂತಿದ್ದಾರೆ. ಶಿವರಾಜ್&zwnj;ಕುಮಾರ್ ಅಣ್ಣನ ಸ್ಕ್ರೀನ್ ಪ್ರೆಸೆನ್ಸ್ ಚಿತ್ರಕ್ಕೆ ಒಂದು ಭವ್ಯವಾದ ಲೇಯರ್ ನೀಡಿದೆ, ಹಾಗೆಯೇ ಜಾನ್ವಿ ಕಪೂರ್ ಒಂದು ಸುಂದರ, ಹೊಸ ಹುರುಪು ನೀಡಿದ್ದಾರೆ. ಬುಚಿ ಬಾಬು ಸನಾ ಅವರದ್ದು ಅತ್ಯುತ್ತಮ ಕೆಲಸ&quot; ಎಂದು ರಿಷಬ್ ಬರೆದುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;'ಪೆದ್ದಿ' ಟ್ರೇಲರ್ ಹೇಗಿದೆ?&lt;/strong&gt;&lt;/p&gt;&lt;p&gt;ಬಿಡುಗಡೆಯಾದ ರಾಮ್ ಚರಣ್ ಅವರ ಬಹುನಿರೀಕ್ಷಿತ 'ಪೆದ್ದಿ' ಚಿತ್ರದ ಟ್ರೇಲರ್, ಅವರ ಕ್ರೀಡಾ ಕೌಶಲ್ಯದ ಝಲಕ್ ನೀಡಿದೆ. ಕುಸ್ತಿ, ಕ್ರಿಕೆಟ್ ಮತ್ತು ಸ್ಪ್ರಿಂಟಿಂಗ್&zwnj;ನಂತಹ ವಿವಿಧ ಕ್ರೀಡೆಗಳಲ್ಲಿ ಅವರ ಕ್ರಾಸ್-ಅಥ್ಲೆಟಿಸಿಸಂ ಅನ್ನು ಟ್ರೇಲರ್ ತೋರಿಸುತ್ತದೆ. ಬುಚಿ ಬಾಬು ಸನಾ ನಿರ್ದೇಶನದ ಈ ತೆಲುಗು ಚಿತ್ರದಲ್ಲಿ ಜಾನ್ವಿ ಕಪೂರ್, ಬೋಮನ್ ಇರಾನಿ ಮತ್ತು ದಿವ್ಯೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.&lt;/p&gt;&lt;p&gt;ಮೂರು ನಿಮಿಷ ಏಳು ಸೆಕೆಂಡುಗಳ ಈ ಟ್ರೇಲರ್, ರಾಮ್ ಚರಣ್ ಅವರ ಪರಿಚಯದೊಂದಿಗೆ ಶುರುವಾಗುತ್ತದೆ. ಇದರಲ್ಲಿ ನಟ ತಮ್ಮ ಬ್ಯಾಟಿಂಗ್ ಮತ್ತು ಕುಸ್ತಿ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ. ಟ್ರೇಲರ್&zwnj;ನ ಒಂದು ಹಂತದಲ್ಲಿ, ಬೋಮನ್ ಇರಾನಿ ಅವರು ರಾಮ್ ಚರಣ್ ಅವರನ್ನು 'ಭಾರತದ ಕ್ರಾಸ್ ಅಥ್ಲೀಟ್' ಎಂದು ಕರೆಯುತ್ತಾರೆ. ಈ ಚಿತ್ರವು ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು, ಕ್ರೀಡೆಯ ಮೇಲಿನ ಅತೀವ ಪ್ರೀತಿ ಮತ್ತು ಭೂಮಾಲೀಕರು ಹಾಗೂ ಇತರ ಖಳನಾಯಕರಿಂದ ಎದುರಾಗುವ ಸಂಕಷ್ಟಗಳನ್ನು ಟ್ರೇಲರ್ ತೋರಿಸುತ್ತದೆ.&lt;/p&gt;&lt;p&gt;ರಾಮ್ ಚರಣ್ ಅವರು ಬಹು-ಪ್ರತಿಭಾನ್ವಿತ ಕ್ರೀಡಾಪಟುವಾಗಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್, ಕುಸ್ತಿ ಮತ್ತು ಸ್ಪ್ರಿಂಟಿಂಗ್ ಮೂಲಕ ತಮ್ಮ ದೈಹಿಕ ಶಕ್ತಿಯಿಂದಲೇ ಜೀವನ ಸಾಗಿಸುವ ಪಾತ್ರ ಅವರದ್ದು. ವಿಡಿಯೋ ಪ್ರಕಾರ, ದಿವ್ಯೇಂದು ಅವರು ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುವ ನಿರೀಕ್ಷೆಯಿದೆ. ಚಿತ್ರದಲ್ಲಿ ರಾಮ್ ಚರಣ್ ಅವರು ನಟಿ ಜಾನ್ವಿ ಕಪೂರ್ ಜೊತೆ ರೊಮ್ಯಾನ್ಸ್ ಮಾಡುವುದನ್ನೂ ಸಹ ತೋರಿಸಲಾಗಿದೆ.&lt;/p&gt;&lt;h2&gt;&lt;strong&gt;ಚಿತ್ರತಂಡ ಮತ್ತು ನಿರ್ಮಾಣ&lt;/strong&gt;&lt;/h2&gt;&lt;p&gt;ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎ.ಆರ್. ರೆಹಮಾನ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rishab-shetty-amazed-by-ram-charans-peddi-trailer-praises-stunning-look-gvd/articleshow-nwzxgzd"/>
        </item>
        <item>
            <title><![CDATA[Divorce Case: ಜಯಂ ರವಿ ಡಿವೋರ್ಸ್‌ ಕೇಸ್‌; ಹೆಂಡತಿ ಆರತಿ ಕೇಳಿರೋ ಜೀವನಾಂಶ ಎಷ್ಟು ಕೋಟಿ ಗೊತ್ತಾ?]]></title>
            <link>https://kannada.asianetnews.com/cine-world/actor-jayam-ravi-wife-aarti-has-demanded-a-monthly-alimony-of-40-lakh-rupees-in-connection-with-the-divorce-case/articleshow-g63qzii</link>
            <guid isPermaLink="true">https://kannada.asianetnews.com/cine-world/actor-jayam-ravi-wife-aarti-has-demanded-a-monthly-alimony-of-40-lakh-rupees-in-connection-with-the-divorce-case/articleshow-g63qzii</guid>
            <pubDate>Wed, 20 May 2026 16:27:51 +0530</pubDate>
            <description><![CDATA[&lt;p&gt;ಜಯಂ ರವಿ ಮತ್ತು ಆರತಿ ನಡುವಿನ ಕದನ ಈಗ ಹಣದ ಹಾದಿ ಹಿಡಿದಿದೆ. ಮಾಸಿಕ 40 ಲಕ್ಷ ರೂಪಾಯಿಗಳ ಬೇಡಿಕೆಯು ಜಯಂ ರವಿ ಅವರ ವೃತ್ತಿಜೀವನದ ಗಳಿಕೆಗಿಂತ ಹೆಚ್ಚಿರುವಂತೆ ಕಾಣುತ್ತಿದೆ. ಈ ಕೌಟುಂಬಿಕ ಕಲಹವು ಕಾನೂನಾತ್ಮಕವಾಗಿ ಹೇಗೆ ಬಗೆಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krtvff0gg86cr6qkyabq6hbs,imgname-aarti-jayam-ravi-1779017694224.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಯಂ ರವಿ ಪತ್ನಿ ಆರತಿ ಕೇಳಿರೋ ಜೀವನಾಂಸ ಎಷ್ಟು ಕೊಟಿ ರೂ.?&lt;/strong&gt;&lt;/p&gt;&lt;p&gt;ಕಾಲಿವುಡ್&zwnj;ನ 'ಜೆಂಟಲ್&zwnj;ಮನ್' ಎಂದೇ ಖ್ಯಾತರಾಗಿರುವ ನಟ ಜಯಂ ರವಿ (Jayam Ravi) ಅವರ ವೈಯಕ್ತಿಕ ಜೀವನ ಈಗ ಬೀದಿಗೆ ಬಂದಿದೆ. ಬೆಳ್ಳಿತೆರೆಯ ಮೇಲೆ ಅಬ್ಬರಿಸುವ ಈ ನಟ, ನಿಜಜೀವನದಲ್ಲಿ ಪತ್ನಿ ಮತ್ತು ಅತ್ತೆ ಮನೆಯವರಿಂದ ಅನುಭವಿಸಿದ ನರಕಯಾತನೆಯನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದು ಅಭಿಮಾನಿಗಳ ಎದೆಯನ್ನು ಚುಚ್ಚುವಂತೆ ಮಾಡಿದೆ. ಆದರೆ, ಈ ವಿಚ್ಛೇದನ ಪ್ರಕರಣ ಈಗ ಕೇವಲ ಭಾವನಾತ್ಮಕವಾಗಿ ಉಳಿದಿಲ್ಲ, ಇದು ಭಾರೀ ದೊಡ್ಡ ಮಟ್ಟದ ಆರ್ಥಿಕ ಸಮರಕ್ಕೆ ನಾಂದಿ ಹಾಡಿದೆ. ಹೌದು, ಜಯಂ ರವಿ ಪತ್ನಿ ಆರತಿ ನ್ಯಾಯಾಲಯದಲ್ಲಿ ಕೇಳಿರುವ ಜೀವನಾಂಶದ ಮೊತ್ತ ಈಗ ಸಿನೆಮಾ ಲೋಕದಲ್ಲಿ ಅತೀ ದೊಡ್ಡ ಚರ್ಚೆಯ ವಿಷಯವಾಗಿದೆ!&lt;/p&gt;&lt;h2&gt;ವರ್ಷಕ್ಕೆ 5 ಕೋಟಿ ರೂಪಾಯಿ ಜೀವನಾಂಶ!&lt;/h2&gt;&lt;p&gt;ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ಕಾನೂನು ಹೋರಾಟದಲ್ಲಿ ಆರತಿ ಅವರು ಇಟ್ಟಿರುವ ಷರತ್ತು ಕೇಳಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಜಯಂ ರವಿ ಅವರಿಂದ ಬೇರ್ಪಡಲು ಆರತಿ ಅವರು ಮಾಸಿಕ 40 ಲಕ್ಷ ರೂಪಾಯಿ ಜೀವನಾಂಶವನ್ನು ಕೇಳಿದ್ದಾರಂತೆ! ಒಂದು ತಿಂಗಳಿಗೆ 40 ಲಕ್ಷ ಅಂದರೆ, ಒಂದು ವರ್ಷಕ್ಕೆ ಬರೊಬ್ಬರಿ 4.8 ಕೋಟಿ ರೂಪಾಯಿ ಆಗುತ್ತದೆ. ಇದು ಕೇವಲ ಜೀವನ ನಿರ್ವಹಣಾ ವೆಚ್ಚಕ್ಕಾಗಿ ಎಂಬುದು ವಿಶೇಷ.&lt;/p&gt;&lt;p&gt;ಈ ಬೇಡಿಕೆ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಜಯಂ ರವಿ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. &quot;ಜಯಂ ರವಿ ಅವರು ಒಂದು ಸಿನಿಮಾ ಮಾಡಲು ವರ್ಷಗಟ್ಟಲೆ ಸಮಯ ತಗೊಳ್ತಾರೆ. ಅವರ ಸಂಭಾವನೆಯೇ 5 ರಿಂದ 6 ಕೋಟಿ ರೂಪಾಯಿ ಇರುತ್ತದೆ. ಹೀಗಿರುವಾಗ ಇಡೀ ವರ್ಷ ದುಡಿದಿದ್ದನ್ನು ಹೆಂಡತಿಗೆ ಜೀವನಾಂಶ ರೂಪದಲ್ಲೇ ಕೊಟ್ಟರೆ, ಇವರು ತಿನ್ನುವುದಾದರೂ ಏನು?&quot; ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.&lt;/p&gt;&lt;h3&gt;ಮನೆಯಿಂದಲೇ ಹೊರಹಾಕಲ್ಪಟ್ಟ 'ಚಾಂಪಿಯನ್'!&lt;/h3&gt;&lt;p&gt;ಜಯಂ ರವಿ ಅವರು ತಮ್ಮ ನೋವನ್ನು ತೋಡಿಕೊಳ್ಳುತ್ತಾ, &quot;ನನ್ನ ಕಷ್ಟಪಟ್ಟು ಸಂಪಾದಿಸಿದ ಹಣದ ಮೇಲೆ ನನಗೆ ಅಧಿಕಾರವಿಲ್ಲದಂತೆ ಮಾಡಿದರು. ಮಕ್ಕಳನ್ನು ನೋಡಲು ಬಿಡುತ್ತಿಲ್ಲ. ಅಂತಿಮವಾಗಿ ನನ್ನ ಸ್ವಂತ ಮನೆಯಿಂದಲೇ ನನ್ನನ್ನು ಹೊರಹಾಕಿದರು. ಅನಿವಾರ್ಯವಾಗಿ ನಾನು ಚೆನ್ನೈ ಬಿಟ್ಟು ಮುಂಬೈಗೆ ಹೋಗಿ ನೆಲೆಸಬೇಕಾಯಿತು,&quot; ಎಂದು ಹೇಳಿಕೊಂಡಿದ್ದಾರೆ. ಪತ್ನಿ ಆರತಿ ಮತ್ತು ಆಕೆಯ ಕುಟುಂಬದವರು ತಮಗೆ ಮಾನಸಿಕ ಮತ್ತು ಆರ್ಥಿಕವಾಗಿ ಅತೀವ ಕಿರುಕುಳ ನೀಡಿದ್ದಾರೆ ಎಂಬುದು ರವಿ ಅವರ ಗಂಭೀರ ಆರೋಪ.&lt;/p&gt;&lt;p&gt;ಆರತಿ ಅವರ ಪ್ರತಿವಾದವೇನು?&lt;/p&gt;&lt;p&gt;ಇನ್ನೊಂದೆಡೆ ಆರತಿ ಅವರ ವಾದವೇ ಬೇರೆಯಿದೆ. &quot;ನನ್ನ ಗಮನಕ್ಕೆ ತರದೆ ಏಕಪಕ್ಷೀಯವಾಗಿ ರವಿ ವಿಚ್ಛೇದನ ಘೋಷಣೆ ಮಾಡಿದ್ದಾರೆ. ಮಾತುಕತೆಗೆ ನಾನು ಸಿದ್ಧವಿದ್ದರೂ ಅವರು ಅವಕಾಶ ನೀಡುತ್ತಿಲ್ಲ,&quot; ಎಂದು ಆರತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಸಮಯದಲ್ಲಿ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗೆ ರವಿ ಹೆಸರು ತಳುಕು ಹಾಕಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ, &quot;ನಾನು ತೀವ್ರ ಖಿನ್ನತೆಯಲ್ಲಿದ್ದಾಗ ಕೆನಿಶಾ ನನಗೆ ಮಾನಸಿಕವಾಗಿ ಸಹಾಯ ಮಾಡಿದರು ಅಷ್ಟೇ, ನಮ್ಮ ನಡುವೆ ಬೇರೇನೂ ಇಲ್ಲ,&quot; ಎಂದು ಜಯಂ ರವಿ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;ಕೊನೆಯ ಮಾತು:&lt;/p&gt;&lt;p&gt;ಒಂದು ಸುಂದರ ದಾಂಪತ್ಯ ಹೀಗೆ ವಿವಾದದ ಹಾದಿ ಹಿಡಿದಿರುವುದು ನಿಜಕ್ಕೂ ಬೇಸರದ ಸಂಗತಿ. ಜೀವನಾಂಶದ ಮೊತ್ತದ ವಿಚಾರದಲ್ಲಿ ನಡೆಯುತ್ತಿರುವ ಈ ಹಗ್ಗಜಗ್ಗಾಟ ನ್ಯಾಯಾಲಯದಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಈಗ ಎಲ್ಲರ ಕುತೂಹಲ. ಜಯಂ ರವಿ ಅಭಿಮಾನಿಗಳು ಮಾತ್ರ &quot;ಸ್ಟೇ ಸ್ಟ್ರಾಂಗ್ ರವಿ ಅಣ್ಣ&quot; ಎಂದು ಸಪೋರ್ಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕಾಲಿವುಡ್&zwnj;ನ ಈ 'ಜಯಂ' ಈಗ ವಿಚ್ಛೇದನದ ಸುಳಿಯಲ್ಲಿ ಸಿಲುಕಿದ್ದಾರೆ.&lt;/p&gt;&lt;p&gt;ಸಾರಾಂಶ: ಜಯಂ ರವಿ ಮತ್ತು ಆರತಿ ನಡುವಿನ ಕದನ ಈಗ ಹಣದ ಹಾದಿ ಹಿಡಿದಿದೆ. ಮಾಸಿಕ 40 ಲಕ್ಷ ರೂಪಾಯಿಗಳ ಬೇಡಿಕೆಯು ಜಯಂ ರವಿ ಅವರ ವೃತ್ತಿಜೀವನದ ಗಳಿಕೆಗಿಂತ ಹೆಚ್ಚಿರುವಂತೆ ಕಾಣುತ್ತಿದೆ. ಈ ಕೌಟುಂಬಿಕ ಕಲಹವು ಕಾನೂನಾತ್ಮಕವಾಗಿ ಹೇಗೆ ಬಗೆಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/actor-jayam-ravi-wife-aarti-has-demanded-a-monthly-alimony-of-40-lakh-rupees-in-connection-with-the-divorce-case/articleshow-g63qzii"/>
        </item>
        <item>
            <title><![CDATA[ಆಸ್ಪತ್ರೆ ಆವರಣದಲ್ಲೇ ಸಖತ್ 'ರಾಂಗ್' ಆದ ಸಲ್ಮಾನ್ ಖಾನ್; ನಟನ 'ದಬಾಂಗ್' ಅವತಾರ ಕಂಡು ಬೆಚ್ಚಿಬಿದ್ದ ಕ್ಯಾಮೆರಾ!]]></title>
            <link>https://kannada.asianetnews.com/cine-world/bollywood-star-salman-khan-gets-angry-towards-camera-in-front-of-a-hospital/articleshow-z8vmcna</link>
            <guid isPermaLink="true">https://kannada.asianetnews.com/cine-world/bollywood-star-salman-khan-gets-angry-towards-camera-in-front-of-a-hospital/articleshow-z8vmcna</guid>
            <pubDate>Wed, 20 May 2026 15:57:38 +0530</pubDate>
            <description><![CDATA[&lt;p&gt;ಆಸ್ಪತ್ರೆಯಂತಹ ಸೂಕ್ಷ್ಮ ಜಾಗದಲ್ಲಿ, ಯಾರೋ ನೋವಿನಲ್ಲಿದ್ದಾಗ ಹೀಗೆ ಸಿನೆಮಾ ಹೆಸರನ್ನು ಕೂಗಿದ್ದು ಸಲ್ಲು ಭಾಯ್&zwnj;ಗೆ ಅತಿಯಾದ ಕೋಪ ತರಿಸಿತು. ತಕ್ಷಣವೇ ಪಾಪರಾಜಿಗಳತ್ತ ನಡೆದು ಬಂದ ಸಲ್ಮಾನ್, &quot;ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಯಲ್ಲಿದ್ದಾಗ ಹೀಗೆ ಮಾಡಿದರೆ ನಿಮಗೆ ಹೇಗನಿಸುತ್ತದೆ?&quot; ಎಂದಿದ್ದಾರೆ ನಟ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krr8n5ddekf3kh9w0p7s5075,imgname-beingsalmankhan-1777791169-3888715946441365246-1547627005-1778930849197.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆಸ್ಪತ್ರೆ ಆವರಣದಲ್ಲಿ ಸಲ್ಮಾನ್ ಖಾನ್ 'ದಬಾಂಗ್' ಅವತಾರ! ಪಾಪರಾಜಿಗಳ ಮೇಲೆ ಕೆಂಡಾಮಂಡಲವಾದ ಸಲ್ಲು ಭಾಯ್; ಕಾರಣ ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ!&lt;/strong&gt;&lt;/p&gt;&lt;p&gt;ಸಲ್ಮಾನ್ ಖಾನ್ (Salman Khan) ಎಲ್ಲಿಯೇ ಹೋದರೂ ಅಲ್ಲಿ ಕ್ಯಾಮೆರಾ ಹಿಡಿದ ಪಾಪರಾಜಿಗಳ ದಂಡು ಇರುವುದೇ. ಆದರೆ, ಸದಾ ಶಾಂತವಾಗಿರುವ ಸಲ್ಮಾನ್ ಖಾನ್ ಮಂಗಳವಾರ ರಾತ್ರಿ ಮುಂಬೈನ ಹಿಂದೂಜಾ ಆಸ್ಪತ್ರೆಯ ಆವರಣದಲ್ಲಿ ಅಕ್ಷರಶಃ ಸ್ಫೋಟಗೊಂಡಿದ್ದಾರೆ! ತಮ್ಮ ಮೇಲೆ ಮುಗಿಬಿದ್ದ ಛಾಯಾಗ್ರಾಹಕರ ವಿರುದ್ಧ ಕಿಡಿಕಾರಿದ ಸಲ್ಮಾನ್, &quot;ನಿಮಗೆ ಹುಚ್ಚು ಹಿಡಿದಿದೆಯೇ?&quot; ಎಂದು ಘರ್ಜಿಸಿದ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.&lt;/p&gt;&lt;h2&gt;ಆಸ್ಪತ್ರೆ ಮುಂದೆ ಅಸಮಾಧಾನಗೊಂಡ ಸಲ್ಲು!&lt;/h2&gt;&lt;p&gt;ಮಂಗಳವಾರ ರಾತ್ರಿ ಸಲ್ಮಾನ್ ಖಾನ್ ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಅಥವಾ ಆಪ್ತರನ್ನು ಭೇಟಿ ಮಾಡಲು ಹಿಂದೂಜಾ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಗೆ ಪ್ರವೇಶಿಸುವಾಗ ಗಂಭೀರವಾಗಿದ್ದ ಸಲ್ಮಾನ್, ಏನನ್ನೂ ಮಾತನಾಡದೆ ಒಳಗೆ ಹೋದರು. ಆದರೆ, ಅವರು ಆಸ್ಪತ್ರೆಯಿಂದ ಹೊರಬರುವಾಗ ಕಥೆಯೇ ಬದಲಾಗಿತ್ತು. ಛಾಯಾಗ್ರಾಹಕರು ತಮ್ಮ ಚಿತ್ರಗಳಿಗಾಗಿ ಸಲ್ಮಾನ್ ಮೇಲೆ ಮುಗಿಬಿದ್ದರು. ಅಷ್ಟಕ್ಕೆ ಸುಮ್ಮನಾಗದ ಕೆಲವು ಪಾಪರಾಜಿಗಳು, ಸಲ್ಮಾನ್ ಅವರ ಮುಂಬರುವ ಚಿತ್ರ 'ಮಾತೃಭೂಮಿ' (Maatrubhumi) ಹೆಸರನ್ನು ಕೂಗುತ್ತಾ ಅವರ ಗಮನ ಸೆಳೆಯಲು ಯತ್ನಿಸಿದರು.&lt;/p&gt;&lt;p&gt;ಆಸ್ಪತ್ರೆಯಂತಹ ಸೂಕ್ಷ್ಮ ಜಾಗದಲ್ಲಿ, ಯಾರೋ ನೋವಿನಲ್ಲಿದ್ದಾಗ ಅಥವಾ ಚಿಕಿತ್ಸೆ ಪಡೆಯುತ್ತಿರುವಾಗ ಹೀಗೆ ಸಿನೆಮಾ ಹೆಸರನ್ನು ಕೂಗಿದ್ದು ಸಲ್ಲು ಭಾಯ್&zwnj;ಗೆ ಅತಿಯಾದ ಕೋಪ ತರಿಸಿತು. ತಕ್ಷಣವೇ ಪಾಪರಾಜಿಗಳತ್ತ ನಡೆದು ಬಂದ ಸಲ್ಮಾನ್, &quot;ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಯಲ್ಲಿದ್ದಾಗ ಹೀಗೆ ಮಾಡಿದರೆ ನಿಮಗೆ ಹೇಗನಿಸುತ್ತದೆ?&quot; ಎಂದು ನೇರವಾಗಿಯೇ ಪ್ರಶ್ನಿಸಿದರು. ಸಲ್ಮಾನ್ ಅವರ ಈ ಖಡಕ್ ಮಾತು ಕೇಳಿ ಅಲ್ಲಿ ನೆರೆದಿದ್ದ ಫೋಟೋಗ್ರಾಫರ್&zwnj;ಗಳು ಕ್ಷಣಕಾಲ ಸುಮ್ಮನಾದರು ಮತ್ತು ತಕ್ಷಣವೇ ಕ್ಷಮೆ ಕೇಳಿದರು.&lt;/p&gt;&lt;p&gt;&lt;img&gt;&lt;/p&gt;&lt;h3&gt;ಏನಿದು 'ಮಾತೃಭೂಮಿ' ಸಿನಿಮಾ ಕಥೆ?&lt;/h3&gt;&lt;p&gt;ಸಲ್ಮಾನ್ ಖಾನ್ ಅವರ ಈ ಹೊಸ ಚಿತ್ರ 'ಮಾತೃಭೂಮಿ' ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲು ಈ ಚಿತ್ರಕ್ಕೆ 'ಬ್ಯಾಟಲ್ ಆಫ್ ಗಾಲ್ವಾನ್' ಎಂದು ಹೆಸರಿಸಲಾಗಿತ್ತು. 2020ರಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಗಲ್ವಾನ್ ಕಣಿವೆಯ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಅಪೂರ್ವ ಲಖಿಯಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸಲ್ಮಾನ್ ಖಾನ್ ಅವರು ದಿವಂಗತ ಕರ್ನಲ್ ಬಿಕುಮಲ್ಲಾ ಸಂತೋಷ್ ಬಾಬು ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ವಿಶೇಷವೆಂದರೆ, ಕೇವಲ ಯುದ್ಧದ ದೃಶ್ಯಗಳನ್ನು ತೋರಿಸುವ ಬದಲು, ಈ ಸಿನಿಮಾದಲ್ಲಿ ಶಾಂತಿ, ಸಾಮರಸ್ಯ ಮತ್ತು ಯುದ್ಧದಿಂದ ಆಗುವ ಪ್ರಾಣಹಾನಿಯ ನೋವಿನ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆಯಂತೆ. ಸದ್ಯದ ರಾಜಕೀಯ ಮತ್ತು ರಾಜತಾಂತ್ರಿಕ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.&lt;/p&gt;&lt;p&gt;ಕೊನೆಯ ಮಾತು:&lt;/p&gt;&lt;p&gt;ಸೆಲೆಬ್ರಿಟಿಗಳಿಗೂ ಖಾಸಗಿತನ ಇರುತ್ತದೆ ಮತ್ತು ಆಸ್ಪತ್ರೆಯಂತಹ ಜಾಗಗಳಲ್ಲಿ ಸಂಯಮದಿಂದ ವರ್ತಿಸಬೇಕು ಎಂಬ ಸಂದೇಶವನ್ನು ಸಲ್ಮಾನ್ ಖಾನ್ ಈ ಮೂಲಕ ರಫ್ ಅಂಡ್ ಟಫ್ ಆಗಿ ನೀಡಿದ್ದಾರೆ. ಸದ್ಯಕ್ಕೆ 'ಮಾತೃಭೂಮಿ' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಅಧಿಕೃತವಾಗಿಲ್ಲದಿದ್ದರೂ, ಸಲ್ಮಾನ್ ಅವರ ಈ 'ರಿಯಲ್ ಲೈಫ್ ಆಕ್ಷನ್' ಮಾತ್ರ ಬಾಲಿವುಡ್ ಗಲ್ಲಿಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ!&lt;/p&gt;&lt;p&gt;ಸಾರಾಂಶ: ಆಸ್ಪತ್ರೆಯ ಮುಂದೆ ಅತಿರೇಕದ ವರ್ತನೆ ತೋರಿದ ಪಾಪರಾಜಿಗಳಿಗೆ ಸಲ್ಮಾನ್ ಖಾನ್ ತಕ್ಕ ಪಾಠ ಕಲಿಸಿದ್ದಾರೆ. ಮಾನವೀಯತೆ ಮತ್ತು ಸಮಯಪ್ರಜ್ಞೆ ಮರೆತಿದ್ದ ಛಾಯಾಗ್ರಾಹಕರಿಗೆ ಸಲ್ಲು ಭಾಯ್ ಕೇಳಿದ ಪ್ರಶ್ನೆಗೆ ಈಗ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮರಳಿ ಬರಲಿರುವ 'ಮಾತೃಭೂಮಿ'ಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/bollywood-star-salman-khan-gets-angry-towards-camera-in-front-of-a-hospital/articleshow-z8vmcna"/>
        </item>
        <item>
            <title><![CDATA[Ragado Rakky: ಅಪ್ಪು PRK ಆಡಿಯೋದಿಂದ 'ರಗಡೋ ರಕ್ಕಿ' ಹಾಡು ರಿಲೀಸ್; Gen Z 'ರಕ್ಕಿ'ಯಲ್ಲಿ ಇವೆಲ್ಲಾ ಇವೆ!]]></title>
            <link>https://kannada.asianetnews.com/sandalwood/rukky-suresh-movie-ragado-rukky-song-released-by-puneeth-rajkumar-prk-audio/articleshow-cdcplmm</link>
            <guid isPermaLink="true">https://kannada.asianetnews.com/sandalwood/rukky-suresh-movie-ragado-rukky-song-released-by-puneeth-rajkumar-prk-audio/articleshow-cdcplmm</guid>
            <pubDate>Wed, 20 May 2026 15:06:56 +0530</pubDate>
            <description><![CDATA[&lt;p&gt;ಹಚ್ಚಿಟ್ಟಿರೋ ಪಟಾಕಿ ಎಂಬ ಸಾಹಿತ್ಯದ ಮೂಲಕ ನಾಯಕನ ಭರ್ಜರಿ ಎಂಟ್ರಿಯನ್ನು ಹಾಡಿನಲ್ಲಿ ಬಿಂಬಿಸಲಾಗಿದ್ದು, ಸಿಡಿಯಲು ಸಿದ್ಧವಾಗಿರುವ ಪಟಾಕಿಯಂತೆ ರಕ್ಕಿ ಅವರ ಎನರ್ಜಿ ಈ ಹಾಡಿನಲ್ಲಿ ಕಾಣುತ್ತದೆ. ವೇಗದ ನೃತ್ಯ, ಸ್ಟೈಲಿಶ್ ದೃಶ್ಯ ವಿನ್ಯಾಸ ಮತ್ತು ಮಾಸ್ ಫೀಲಿಂಗ್&zwnj;ನಿಂದ ಈ ಹಾಡು ಪ್ರೇಕ್ಷಕರಿಗೆ ಹಬ್ಬದ ಅನುಭವ ನೀಡುವಂತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2bx7awqm4gszgkys2s50r9,imgname-puneeth-rukky-suresh-1779269803356.jpg" type="image/jpeg" height="390" width="690"/>
            <content:encoded><![CDATA[&lt;p&gt;ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ಪಿ.ಆರ್.ಕೆ ಸಂಸ್ಥೆ ಹುಟ್ಟಿಹಾಕಿದ್ದೇ ಹೊಸಬರನ್ನ ಪ್ರೋತ್ಸಾಹಿಸೋದಕ್ಕೆ. ಅಪ್ಪು ಅಗಲಿಕೆ ಬಳಿಕವೂ ಅಶ್ವಿನಿ ಪುನೀತ್ ರಾಜ್​ಕುಮಾರ್ ಪಿ.ಆರ್.ಕೆ ಮೂಲಕ ಹೊಸಬರಿಗೆ ಪ್ರೋತ್ಸಾಹ ಮುಂದುವರೆಸಿದ್ದಾರೆ. ಸದ್ಯ PRK ಆಡಿಯೋ ಮೂಲಕ ನವನಟನ &lsquo;ರಕ್ಕಿ&rsquo; (Rukky) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.&lt;/p&gt;&lt;p&gt;ಬಹು ನಿರೀಕ್ಷಿತ &quot;ರಕ್ಕಿ&quot; ಚಿತ್ರದ ರಗಡೋ ರಕ್ಕಿ ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್&zwnj;ನಲ್ಲಿ ಬಿಡುಗಡೆಯಾಗಿದೆ. ಯುವಜನತೆ ಹಾಗೂ ಸಂಗೀತ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇದು &quot;ರಕ್ಕಿ&quot; ಚಿತ್ರದ ಮೊದಲ ಗೀತೆಯಾಗಿದೆ.&lt;/p&gt;&lt;p&gt;ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ರಕ್ಕಿ ಸುರೇಶ್, ಈ ಹಾಡಿನಲ್ಲಿ ತಮ್ಮ ಎನರ್ಜಿಟಿಕ್ ಸ್ಕ್ರೀನ್ ಪ್ರೆಸೆನ್ಸ್, ಸ್ಟೈಲಿಶ್ ಲುಕ್ ಹಾಗೂ ಅದ್ಭುತ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಭರ್ಜರಿ ನೃತ್ಯ ಸಂಯೋಜನೆ ಹಾಗೂ ಕಲರ್&zwnj;ಫುಲ್ ದೃಶ್ಯಗಳೊಂದಿಗೆ ಈ ಹಾಡು ರಕ್ಕಿ ಸುರೇಶ್ ಅವರನ್ನು ಹೊಸ ತಲೆಮಾರಿನ ಮಾಸ್ ಹೀರೋ ಆಗಿ ಪರಿಚಯಿಸುತ್ತದೆ. ಇಂದಿನ Gen Z ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಹಾಡು ಟ್ರೆಂಡಿ ಬೀಟ್ಸ್, ಯೂತ್&zwnj;ಫುಲ್ ಎನರ್ಜಿ ಮತ್ತು ಸ್ಟೈಲಿಶ್ ಮೇಕಿಂಗ್&zwnj;ನಿಂದ ವಿಶೇಷ ಆಕರ್ಷಣೆಯಾಗಿದೆ.&lt;/p&gt;&lt;p&gt;ಹಚ್ಚಿಟ್ಟಿರೋ ಪಟಾಕಿ ಎಂಬ ಸಾಹಿತ್ಯದ ಮೂಲಕ ನಾಯಕನ ಭರ್ಜರಿ ಎಂಟ್ರಿಯನ್ನು ಹಾಡಿನಲ್ಲಿ ಬಿಂಬಿಸಲಾಗಿದ್ದು, ಸಿಡಿಯಲು ಸಿದ್ಧವಾಗಿರುವ ಪಟಾಕಿಯಂತೆ ರಕ್ಕಿ ಅವರ ಎನರ್ಜಿ ಈ ಹಾಡಿನಲ್ಲಿ ಕಾಣುತ್ತದೆ. ವೇಗದ ನೃತ್ಯ, ಸ್ಟೈಲಿಶ್ ದೃಶ್ಯ ವಿನ್ಯಾಸ ಮತ್ತು ಮಾಸ್ ಫೀಲಿಂಗ್&zwnj;ನಿಂದ ಈ ಹಾಡು ಥಿಯೇಟರ್ ಪ್ರೇಕ್ಷಕರಿಗೆ ಹಬ್ಬದ ಅನುಭವ ನೀಡುವಂತಿದೆ.&lt;/p&gt;&lt;p&gt;ಈ ಹಾಡಿಗೆ ಸಂಗೀತ ಮತ್ತು ಸಾಹಿತ್ಯವನ್ನು ಲೋಕಿ ತವಸ್ಯ ನೀಡಿದ್ದಾರೆ. ಯುವಜನತೆಯನ್ನು ಸೆಳೆಯುವ ರೀತಿಯ ಸಂಗೀತ ಮತ್ತು ಸಾಹಿತ್ಯ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ. ಕಂಬಿರಾಜು ಅವರ ನೃತ್ಯ ಸಂಯೋಜನೆ ಹಾಡಿಗೆ ಮತ್ತಷ್ಟು ಭರ್ಜರಿತನ ನೀಡಿದ್ದು, ಪ್ರತಿಯೊಂದು ಸ್ಟೆಪ್ ಕೂಡ ಪ್ರೇಕ್ಷಕರನ್ನು ಕುಣಿಯಿಸುವಂತಿದೆ. ಛಾಯಾಗ್ರಾಹಕ ಐ ಸಾಕ್ ಪ್ರಭಾಕರ್ ಅವರು ಕಲರ್&zwnj;ಫುಲ್ ಫ್ರೇಮ್ಸ್, ಸ್ಟೈಲಿಶ್ ಲೈಟಿಂಗ್ ಮತ್ತು ಅದ್ದೂರಿ ದೃಶ್ಯ ವಿನ್ಯಾಸದ ಮೂಲಕ ಹಾಡಿನ ವೈಭವವನ್ನು ಹೆಚ್ಚಿಸಿದ್ದಾರೆ.&lt;/p&gt;&lt;p&gt;ವೆಂಕಟ್ ಭಾರದ್ವಾಜ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ &quot;ರಕ್ಕಿ&quot; ಚಿತ್ರ, ಸದ್ಯ ಸೆನ್ಸಾರ್ ಹಂತದಲ್ಲಿದ್ದು ಶೀಘ್ರದಲ್ಲೇ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್&zwnj;ಕುಮಾರ್ ಅವರ ಆಶೀರ್ವಾದ ಮತ್ತು ಬೆಂಬಲ ದೊರೆತಿರುವುದು ಚಿತ್ರತಂಡಕ್ಕೆ ಮತ್ತಷ್ಟು ಪ್ರೇರಣೆಯಾಗಿದೆ.&lt;/p&gt;&lt;p&gt;SNR Productions ಬ್ಯಾನರ್ ಅಡಿಯಲ್ಲಿ ಸುರೇಶ್ ಸಾಲಿಗ್ರಾಮ ನಿರ್ಮಿಸಿರುವ &quot;ರಕ್ಕಿ&quot; ಚಿತ್ರವು ಸಾಹಸ , ಭಾವನೆ, ಸಂಗೀತ, ಪ್ರೇಮ ಮತ್ತು ಮಾಸ್ ಅಂಶಗಳಿಂದ ಕೂಡಿದ ಯುವಜನರ ಮನಗೆಲ್ಲುವ ಕಮರ್ಷಿಯಲ್ ಎಂಟರ್&zwnj;ಟೈನರ್ ಚಿತ್ರ ಆಗಲಿದೆ. ಈಗಾಗಲೇ ಬಿಡುಗಡೆಯಾದ &ldquo;ರಗಡೋ ರಕ್ಕಿ&rdquo; ಹಾಡು ಕನ್ನಡ ಸಿನಿ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಹುಟ್ಟಿಸಿದ್ದು, ಚಿತ್ರದ ಭರ್ಜರಿ ಬಿಡುಗಡೆಗೆ ವೇದಿಕೆ ಸಿದ್ಧಪಡಿಸಿದೆ. ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ.ಸರೇಶ್, ಸಂಪತ್ ಮೈತ್ರೇಯ, ರಮೇಶ್ ಪಂಡಿತ್, ಬಲ ರಾಜವಾಡಿ, ಜಿ ಜಿ, ಹರಿಣಿ ಶ್ರೀಕಾಂತ್ ಮುಂತಾದವರ ಭರ್ಜರಿ ತಾರಾಬಳಗ ಈ ಚಿತ್ರದಲ್ಲಿದೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/rukky-suresh-movie-ragado-rukky-song-released-by-puneeth-rajkumar-prk-audio/articleshow-cdcplmm"/>
        </item>
        <item>
            <title><![CDATA[Shocking-Shivanand Neelannavar: ಕೋಟಿ ವಂಚಕನಿಗಿತ್ತು 'ಸ್ಯಾಂಡಲ್‌ವುಡ್' ಲಿಂಕ್; 'ಡಿಂಗರ್ ಬಿಲ್ಲಿ' ಸನ್ನಿ ಲಿಯೋನ್‌ಗೆ ಕೊಟ್ಟಿದ್ದೆಷ್ಟು ಗೊತ್ತಾ?]]></title>
            <link>https://kannada.asianetnews.com/sandalwood/shivanand-neelannavar-has-link-with-sandalwood-and-he-produced-champion-movie-and-sunny-leone-song/articleshow-8yxkwwv</link>
            <guid isPermaLink="true">https://kannada.asianetnews.com/sandalwood/shivanand-neelannavar-has-link-with-sandalwood-and-he-produced-champion-movie-and-sunny-leone-song/articleshow-8yxkwwv</guid>
            <pubDate>Wed, 20 May 2026 14:35:40 +0530</pubDate>
            <description><![CDATA[&lt;p&gt;ರಾಜ್ಯವೇ ಬೆಚ್ಚಿ ಬಿದ್ದಿರೋ ಬಹುಕೋಟಿ ಮಹಾ ವಂಚಕ, ಶಿವಂ ಅಸೋಸಿಯೇಟ್ಸ್​ ಮಾಲೀಕ, ಹುಬ್ಬಳ್ಳಿಯ ಶಿವಾನಂದ್​ ನೀಲಣ್ಣನವರ್ ಕನ್ನಡ ಚಿತ್ರರಂಗದ ಜೊತೆ ನಂಟು ಹೊಂದಿದ್ದ. 4500 ಕೋಟಿ ದೋಖಾ ಕೇಸ್ ​ರೂವಾರಿ ಈ ಶಿವಾನಂದ್​ನೀಲಣ್ಣನವರ್​, ಮಾಜಿ ನೀಲಿ ತಾರೆ ಸನ್ನಿ ಲಿಯೋನ್&zwnj;ಗೆ ಕೊಟ್ಟಿದ್ದೆಷ್ಟು ಗೊತ್ತಾ? ಈ ಸ್ಟೋರಿ ನೋಡಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2a3f7p5r0prhdjz78zqfmw,imgname-sunny-leone-shivanand-neelannavar-1779267910902.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಾಜಿ ನೀಲಿ ತಾರೆಗೆ 1 ಕೋಟಿ ಕೊಟ್ಟಿದ್ದ ನೀಲಣ್ಣನವರ್..!&lt;/strong&gt;&lt;/p&gt;&lt;p&gt;ಕನ್ನಡ ಚಿತ್ರರಂಗದ ಜೊತೆ 4500 ಕೋಟಿ ವಂಚಕನ ಲಿಂಕ್..! 4500 ಕೋಟಿ ವಂಚಕನ ಬಲೆಗೆ ಬಿದ್ದಿದ್ದ ಸನ್ನಿ ಲಿಯೋನ್​..!&lt;/p&gt;&lt;p&gt;ಸ್ಯಾಂಡಲ್​ವುಡ್​​ನಲ್ಲೂ ಶಿವಾನಂದನ ಡಿಂಗರ್​ಬಿಲ್ಲಿ ಆಟ; ಕೋಟಿ ಕೊಟ್ಟು ಸಲ್ಲಿ ಲಿಯೋನ್ ಸ್ನೇಹ ಬೆಳೆಸಿದ್ದ ವಂಚಕ..!&lt;/p&gt;&lt;p&gt;ನಟಿ ಸಲ್ಲಿ ಲಿಯೋನ್​​​ ಮೇಲೆ ದುಡ್ಡು ಸುರಿದವರು ಒಬ್ರಾ ಇಬ್ರಾ..? ಈ 4500 ಕೋಟಿ ವಂಚನೆ ಪ್ರಕರಣಲ್ಲಿ ಸಿಕ್ಕಿ ಬಿದ್ನಲ್ಲಾ ಶಿವಾನಂದ ನೀಲಣ್ಣನವರ್, ಆ ವಂಚಕ ಕೂಡ ಸನ್ನಿ ಮೇಲೆ ಕೋಟಿ ಕೋಟಿ ಸುರಿದಿದ್ದಾನೆ. ಅರೆ ನಮ್ ಸನ್ನಿ ಲೀಯೋನ್​ಗೂ ಶಿವಾನಂದ ನೀಲಣ್ಣನವರ್​ಗು ಎಲ್ಲಿಂದೆಲ್ಲಿ ಸಂಬಂಧ ಅಂತೀರಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ..&lt;/p&gt;&lt;p&gt;ಕನ್ನಡ ಚಿತ್ರರಂಗದ ಜೊತೆ 4500 ಕೋಟಿ ವಂಚಕನ ಲಿಂಕ್; ಕೋಟಿ ಕೊಟ್ಟು ಸಲ್ಲಿ ಲಿಯೋನ್ ಸ್ನೇಹ ಬೆಳೆಸಿದ್ದ ವಂಚಕ!&lt;/p&gt;&lt;p&gt;ಇವತ್ತು ಇಡೀ ರಾಜ್ಯವೇ ಬೆಚ್ಚಿ ಬೀಳೋ ಮಹಾ ವಂಚನೆಯೊಂದು ಬೆಳಕಿಗೆ ಬಂದಿದೆ. ಆ ವಂಚನೆಯ ರುವಾರಿ ಶಿವಂ ಅಸೋಸಿಯೇಟ್ಸ್​ ಮಾಲೀಕ, ಹುಬ್ಬಳ್ಳಿಯ ಶಿವಾನಂದ್​ ನೀಲಣ್ಣನವರ್. ಬರೋಬ್ಬರಿ 4500 ಕೋಟಿ ದೋಖಾ ಕೇಸ್ ​ಅನ್ನ ಮೈ ಮೇಲೆ ಎಳೆದುಕೊಂಡಿರೋ ಈ ಶಿವಾನಂದ್​ನೀಲಣ್ಣನವರ್​ಆ ದುಡ್ಡಲ್ಲೊಂದಷ್ಟನ್ನ ನೀಲಿ ತಾರೆ ಮೇಲೆ ಸುರಿದಿದ್ದ.. ಈತ 35 ಸಾವಿರ ಜನರಿಗೆ ಕೋಟಿ ಕೋಟಿ ವಂಚಿಸಿದ್ದ ಅನ್ನೋದಷ್ಟೇ ಅಲ್ಲ, ಸ್ಯಾಂಡಲ್​ವುಡ್​ ಜೊತೆಗೂ ಈ ನೀಲಣ್ಣನವರ್ ಗೆ ಲಿಂಕ್​ ಇತ್ತು ಅನ್ನೋದು ಇಂಟ್ರೆಸ್ಟಿಂಗ್...&lt;/p&gt;&lt;h2&gt;4500 ಕೋಟಿ ವಂಚಕನ ಬಲೆಗೆ ಬಿದ್ದಿದ್ದ ನಟಿ ಸನ್ನಿ ಲಿಯೋನ್; ಚಾಂಪಿಯನ್ ಪಟ್ಟಕ್ಕೆ ಸನ್ನಿ ಜೊತೆ ಶಿವಾನಂದ್​ ಡಿಂಗ್ರಿಬಿಲ್ಲಿ ಆಟ!&lt;/h2&gt;&lt;p&gt;ಯೆಸ್, ಈ ಶಿವಾನಂದ್​ನೀಲಣ್ಣನವರ್​ಗೆ ಬಡ್ಡಿ ದುಡ್ಡು ಮಾಡೋದೊಂದೇ ವ್ಯಾಪಾರ ಅಲ್ಲ. ಸಿನಿಮಾ ಫ್ಯಾಷನ್ ಕೂಡ ಇತ್ತು. ಅದು ಯಾವ್ ಮಟ್ಟದ ಫ್ಯಾಷನ್ ಅಂದ್ರೆ, ಬಾಲಿವುಡ್​ನ ಹಾಟಿ ನೀಲಿ ತಾರೆ ಅಂತಲೇ ಫೇಮಸ್ ಆಗಿದ್ದ ಸನ್ನಿ ಲಿಯೋನ್​ರನ್ನ ಎಷ್ಟೇ ದುಡ್ಡು ಖರ್ಚಾದ್ರು ಪರವಾಗಿಲ್ಲ, ಕನ್ನಡದ ಸಿನಿಮಾಕ್ಕೆ ಕರೆ ತರಬೇಕು ಅನ್ನೋ ದೊಡ್ಡ ಹಟ.. ಅದು ಚಾಂಪಿಯನ್ ಅನ್ನೋ ಸಿನಿಮಾಕ್ಕಾಗಿ ಮಾಡಿದ ಶಪಥ..&lt;/p&gt;&lt;p&gt;2023ರಲ್ಲಿ ಇದೇ ಶಿವಾನಂದ್​ ನೀಲಣ್ಣನವರ್​ಕನ್ನಡದಲ್ಲಿ ಚಾಂಪಿಯನ್ ಅನ್ನೋ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ನರ್ತಿಸೋಕೆ ನೀಲಿತಾರೆ ಸನ್ನಿ ಲಿಯೋನ್​ರನ್ನ ಕರೆಸಿದ್ದ. ಸನ್ನಿನೋ ನೀಲಣ್ಣ ಕೊಟ್ಟ ಬಿಲ್ಡಪ್​ಗೆ ಮನಸೋತು 'ಡಿಗ್ರಿಬಿಲ್ಲಿ ನಾನು..' ಅಂತ ಸಖತ್ ಆಗಿ ಡಾನ್ಸ್ ಮಾಡಿದ್ಲು..&lt;/p&gt;&lt;h3&gt;ಮಾಜಿ ನೀಲಿ ತಾರೆ ಜೊತೆ ಮಾಡಿದ್ದೇನು?&lt;/h3&gt;&lt;p&gt;ಪಡ್ಡೆ ಹುಡುಗರ ಮನದರಸಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​'ಚಾಂಪಿಯನ್' ಸಿನಿಮಾದ ಸ್ಪೆಷಲ್​ಹಾಡಿಗೆ ನರ್ತಿಸೋದಕ್ಕಾಗಿ ಭಾರಿ ಡಿಮ್ಯಾಂಡ್ ಮಾಡಿದ್ರು. ಅಂದೋ ಶಿವಾನಂದ್​ಬಳಿ ಕೈ ತುಂಬ ದುಡ್ಡು ಓಡಾಡ್ತಿದ್ದ ಕಾಲ. ಹಿಂದೆ ಮುಂದೆ ಯೋಚ್ನೆ ಮಾಡದೇ ಸನ್ನಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಕೊಟ್ಟು ಜೆಸ್ಟ್ ಒಂದೇ ಒಂದು ಹಾಡಿನಲ್ಲಿ ಡಾನ್ಸ್​ ಮಾಡಿಸಿದ್ದ.&lt;/p&gt;&lt;p&gt;ಆದ್ರೆ ಸನ್ನಿ ಕುಣಿದಿದ್ದ ಆ 'ಚಾಂಪಿಯನ್' ಸಿನಿಮಾ ಏನು ದೊಡ್ಡ ಹಿಟ್ ಆಗ್ಲಿಲ್ಲ. ಸ್ಯಾಂಡಲ್​​ವುಡ್​ನಲ್ಲಿ ಚಾಂಪಿಯನ್ ಆಗೋಕೆ ಬಂದಿದ್ದ ಶಿವಾನಂದ್​ನೀಲಣ್ಣನವರ್​ಇವತ್ತು ಕೈಗೆ ಕೋಳ ತೊಡೋ ಹಾಗಾಗಿದೆ.&lt;/p&gt;&lt;p&gt;ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..&lt;/p&gt;&lt;p&gt;&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/shivanand-neelannavar-has-link-with-sandalwood-and-he-produced-champion-movie-and-sunny-leone-song/articleshow-8yxkwwv"/>
        </item>
        <item>
            <title><![CDATA[Kishore Mother Accident: 'ಅಮ್ಮ ಚೆನ್ನಾಗಿದ್ದಾರೆ' ಎಂದ ಕಿಶೋರ್, ನಡೆದ ಇಡೀ ಘಟನೆಗೆ ಕಾರಣ-ಕ್ಲಾರಿಟಿ ಕೊಟ್ಟಿದ್ದಾರೆ ನೋಡಿ!]]></title>
            <link>https://kannada.asianetnews.com/sandalwood/actor-kishore-mother-hospitalized-news-and-his-response-for-welwisher-voice-message/articleshow-i1k87pg</link>
            <guid isPermaLink="true">https://kannada.asianetnews.com/sandalwood/actor-kishore-mother-hospitalized-news-and-his-response-for-welwisher-voice-message/articleshow-i1k87pg</guid>
            <pubDate>Wed, 20 May 2026 12:32:45 +0530</pubDate>
            <description><![CDATA[&lt;p&gt;ನಟ ಕಿಶೋರ್ ತಾಯಿಯವರಿಗೆ ಒಂದು ಆಕಸ್ಮಿಕ ಅಪಘಾತ ಸಂಭವಿಸಿತ್ತು. ಗಾಯಗೊಂಡ ತಾಯಿಯನ್ನು ತಕ್ಷಣವೇ ಬೆಂಗಳೂರಿನ ಜೆ.ಪಿ. ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಕಿಶೋರ್&zwnj; ಫೋನ್ ರಿಸೀವ್ ಮಾಡದ ಕಾರಣ ಆತಂತ ಸೃಷ್ಟಿಯಾಗಿತ್ತು. ಆದರೆ ಈಗ ಕಿಶೋರ್ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ನೋಡಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgsq3d0j1xqbw5kpqk1npg81,imgname-kishore-03-1770389615634.jpg" type="image/jpeg" height="390" width="690"/>
            <content:encoded><![CDATA[&lt;p&gt;ತಾಯಿಗೆ ಅಪಘಾತವಾದಾಗ ನಟ ಎಲ್ಲಿದ್ರು? ಸೋಶಿಯಲ್ ಮೀಡಿಯಾದಲ್ಲಿ ದಯಾಳ್ ಪದ್ಮನಾಭನ್ ಪೋಸ್ಟ್ ಹಾಕಿದ್ದೇಕೆ?&lt;/p&gt;&lt;p&gt;ಸಿನಿಮಾದಲ್ಲಿ ಕಿಶೋರ್ ಅಂದ್ರೆ ಅಬ್ಬರಿಸುವ ನಟನೆ, ಗಂಭೀರ ಮುಖಭಾವ. ಆದರೆ ಈ &quot;ಕಟ್ಟುಮಸ್ತಾದ&quot; ನಟನ ರಿಯಲ್ ಲೈಫ್&zwnj;ನಲ್ಲಿ ಕಳೆದ ಕೆಲವು ಗಂಟೆಗಳ ಹಿಂದೆ ಒಂದು ದೊಡ್ಡ &amp;nbsp;ಘಟನೆ ನಡೆದುಹೋಗಿದೆ. ನಡೆದ ಈ ಘಟನೆ ನಟ ಕಿಶೋರ್ ಅವರ ಆತ್ಮೀಯರನ್ನು ಮತ್ತು ಅಭಿಮಾನಿಗಳನ್ನು ಬೆಚ್ಚಿಬೀಳಿಸಿತ್ತು. ಕಿಶೋರ್ ತಾಯಿಗೆ ಅಪಘಾತವಾಗಿದ್ದು ಒಂದು ಕಡೆಯಾದ್ರೆ, ಸ್ವತಃ ಕಿಶೋರ್ ಯಾರ ಕೈಗೂ ಸಿಗದೇ ಹೋದದ್ದು ಆತಂಕವನ್ನು ಇಮ್ಮಡಿಗೊಳಿಸಿತ್ತು!&lt;/p&gt;&lt;p&gt;ನಡೆದಿದ್ದೇನು? ಆತಂಕದ ಆ ಕೆಲವು ಗಂಟೆಗಳು!&lt;/p&gt;&lt;p&gt;ಸಾಮಾನ್ಯವಾಗಿ ನಟ ಕಿಶೋರ್ ಸಿನಿಮಾ ಪ್ರಪಂಚದ ಗದ್ದಲದಿಂದ ಸ್ವಲ್ಪ ದೂರವೇ ಇರುತ್ತಾರೆ. ಫೋನ್ ಕರೆಗಳಿಗೆ ಸಿಗುವುದು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದು ಅವರಿಗೆ ಸ್ವಲ್ಪ ಕಡಿಮೆ. ಇಂದು ಅವರ ತಾಯಿಯವರಿಗೆ ಒಂದು ಆಕಸ್ಮಿಕ ಅಪಘಾತ ಸಂಭವಿಸಿತ್ತು. ಗಾಯಗೊಂಡ ತಾಯಿಯನ್ನು ತಕ್ಷಣವೇ ಬೆಂಗಳೂರಿನ ಜೆ.ಪಿ. ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿ ಮತ್ತು ಹಿತೈಷಿಗಳು ಕಿಶೋರ್&zwnj;ಗೆ ಫೋನ್ ಮೇಲೆ ಫೋನ್ ಮಾಡತೊಡಗಿದರು. ಆದರೆ ಕಿಶೋರ್ ಅವರು ಕಾಲ್ ರಿಸೀವ್ ಮಾಡದೇ ಇದ್ದುದರಿಂದ ಸ್ವಲ್ಪ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.&lt;/p&gt;&lt;p&gt;ನಿರ್ದೇಶಕ ದಯಾಳ್ ಪದ್ಮನಾಭನ್ ಸೋಷಿಯಲ್ ಮೀಡಿಯಾ ಪೋಸ್ಟ್!&lt;/p&gt;&lt;p&gt;ವಿಷಯ ತಿಳಿದ ನಿರ್ದೇಶಕ ದಯಾಳ್ ಪದ್ಮನಾಭನ್ ಕೂಡ ಕಿಶೋರ್&zwnj;ಗೆ ಕರೆ ಮಾಡಲು ಪ್ರಯತ್ನಿಸಿದರು. ವಾಯ್ಸ್ ಮೆಸೇಜ್ ಕಳುಹಿಸಿದರು. ಆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಭಾವಿಸಿದ ದಯಾಳ್, ಬೇರೆ ದಾರಿಯಿಲ್ಲದೆ ಫೇಸ್&zwnj;ಬುಕ್ ಮತ್ತು ಇನ್&zwnj;ಸ್ಟಾಗ್ರಾಮ್ ಮೊರೆ ಹೋದರು. &quot;ಯಾರಿಗಾದರೂ ಕಿಶೋರ್ ಸಿಕ್ಕರೆ ತಕ್ಷಣ ಈ ವಿಷಯ ತಿಳಿಸಿ, ಅವರ ತಾಯಿ ಆಸ್ಪತ್ರೆಯಲ್ಲಿದ್ದಾರೆ&quot; ಎಂದು ಪೋಸ್ಟ್ ಹಾಕಿದರು. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿತು. ಅಭಿಮಾನಿಗಳೆಲ್ಲಾ &quot;ಕಿಶೋರ್ ಸರ್ ಎಲ್ಲಿದ್ದೀರಾ?&quot; ಎಂದು ಹುಡುಕಾಡತೊಡಗಿದರು.&lt;/p&gt;&lt;p&gt;ಹೈದರಾಬಾದ್&zwnj;ನಿಂದ ಬಂದ ಆ ಒಂದು ಮೆಸೇಜ್!&lt;/p&gt;&lt;p&gt;ಒಂದು ಕಡೆ ಆತಂಕದ ಮೋಡ ಕವಿದಿದ್ದರೆ, ಇನ್ನೊಂದು ಕಡೆ ನಟ ಕಿಶೋರ್ ಈ ಯಾವುದೂ ತಿಳಿಯದಂತೆ ಗಾಢ ನಿದ್ರೆಯಲ್ಲಿದ್ದರು! ಕಾರಣ, ನಟ ಕಿಶೋರ್ ಅವರು ಹೈದರಾಬಾದ್&zwnj;ನಲ್ಲಿ ಒಂದು ತಮಿಳು ಸಿನಿಮಾದ ಚಿತ್ರೀಕರಣದಲ್ಲಿದ್ದರು. ಇಡೀ ರಾತ್ರಿ ಶೂಟಿಂಗ್ ಮುಗಿಸಿ ಬೆಳಿಗ್ಗೆ ಸುಸ್ತಾಗಿ ಮಲಗಿದ್ದರು. ಕಾಲ್, ಮೆಸೇಕ್&zwnj; ಸದ್ದಿಗೆ ನಿದ್ದೆಯಿಂದ ಎದ್ದು ಮೊಬೈಲ್ ನೋಡಿದಾಗ ನೂರಾರು ಮಿಸ್ಡ್ ಕಾಲ್&zwnj;ಗಳು, ವೈಸ್ ಮೆಸೇಜ್&zwnj;ಗಳು.&lt;/p&gt;&lt;p&gt;ತಕ್ಷಣವೇ ಹಿತೈಷಿಯೊಬ್ಬರ ಮೆಸೇಜ್&zwnj;ಗೆ ರಿಪ್ಲೈ ಮಾಡಿದ ಕಿಶೋರ್, &quot;ಧನ್ಯವಾದಗಳು.. ಅಮ್ಮ ಈಗ ಚೆನ್ನಾಗಿದ್ದಾರೆ. ನಾನು ಹೈದರಾಬಾದ್&zwnj;ನಲ್ಲಿ ನೈಟ್ ಶೂಟಿಂಗ್ ಮುಗಿಸಿ ಮಲಗಿದ್ದೆ, ಹಾಗಾಗಿ ಫೋನ್ ನೋಡಲು ಸಾಧ್ಯವಾಗಲಿಲ್ಲ. ದಯವಿಟ್ಟು ಕ್ಷಮಿಸಿ&quot; ಎಂದು ಎಲ್ಲರಿಗೂ ಸಮಾಧಾನದ ಸುದ್ದಿ ನೀಡಿದರು.&lt;/p&gt;&lt;p&gt;ಸುಖಾಂತ್ಯ!&lt;/p&gt;&lt;p&gt;ಯಾವುದೇ ದೊಡ್ಡ ವಿಪತ್ತು ಸಂಭವಿಸುವ ಮುನ್ನವೇ ಕಿಶೋರ್ ಎಚ್ಚೆತ್ತುಕೊಂಡರು ಮತ್ತು ಅವರ ತಾಯಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ನೆಮ್ಮದಿ ತಂದಿದೆ. ಈಗ ನಟ ಕಿಶೋರ್ ಅಭಿಮಾನಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ!&lt;/p&gt;&lt;p&gt;ನಟ ಕಿಶೋರ್ ಅವರ ತಾಯಿಯ ಅಪಘಾತದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ನಿರ್ದೇಶಕ ದಯಾಳ್ ಅವರ ಸಮಯಪ್ರಜ್ಞೆ, ಹಿತೈಷಿಗಳು, ಮಾಧ್ಯಮದವರ ತಕ್ಷಣದ ಕಾರ್ಯಾಚರಣೆ ಹಾಗೂ ಪ್ರತಿಕ್ರಿಯೆಯಿಂದ ಈ ಆತಂಕ ದೂರವಾಗಿದೆ. ಸದ್ಯ ಕಿಶೋರ್ ಅವರ ತಾಯಿ ಗುಣಮುಖರಾಗುತ್ತಿದ್ದು, ನಟ ಹೈದರಾಬಾದ್&zwnj;ನಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/actor-kishore-mother-hospitalized-news-and-his-response-for-welwisher-voice-message/articleshow-i1k87pg"/>
        </item>
        <item>
            <title><![CDATA[Suriya-Trisha: ಕರುಪ್ಪು ಬಾಕ್ಸ್‌ಆಫೀಸ್‌ನಲ್ಲಿ ಸೂಪರ್ ಹಿಟ್.. ಆದರೂ ಕ್ಷಮೆ ಕೇಳಿದ್ಯಾಕೆ ಚಿತ್ರತಂಡ?]]></title>
            <link>https://kannada.asianetnews.com/cine-world/suriya-and-trisha-movie-karuppu-collects-good-in-box-office-and-positive-response-for-controversy/articleshow-60g14r5</link>
            <guid isPermaLink="true">https://kannada.asianetnews.com/cine-world/suriya-and-trisha-movie-karuppu-collects-good-in-box-office-and-positive-response-for-controversy/articleshow-60g14r5</guid>
            <pubDate>Wed, 20 May 2026 10:42:32 +0530</pubDate>
            <description><![CDATA[&lt;p&gt;ಮೇ 15 ರಂದು ವಿಶ್ವಾದ್ಯಂತ ಬಿಡುಗಡೆಯಾದ 'ಕರುಪ್ಪು', ಸೂರ್ಯ ಅವರ ವೃತ್ತಿಜೀವನಕ್ಕೆ ಹೊಸ ಚೈತನ್ಯ ನೀಡಿದೆ. ಸೂರ್ಯ ಇಲ್ಲಿ ಕರುಪ್ಪಸ್ವಾಮಿಯ ಅವತಾರದಲ್ಲಿ ನ್ಯಾಯಾಲಯದ ಅನ್ಯಾಯಗಳ ವಿರುದ್ಧ ಗುಡುಗಿದ್ದಾರೆ. ಆರ್.ಜೆ. ಬಾಲಾಜಿ ವಕೀಲನಾಗಿ ಸೂರ್ಯನಿಗೆ ಸಾಥ್ ನೀಡಿದ್ದು, ಸಿನಿಮಾ ಸೂಪರ್ ಹಿಟ್..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzkfg659axhnrxkgrwmz3y2,imgname-karuppu--4--1779177078981.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಕ್ಸ್&zwnj;ಆಫೀಸ್&zwnj;ನಲ್ಲಿ 'ಕರುಪ್ಪು' ಅಬ್ಬರ: ಸೂರ್ಯನ ಮಾಸ್&zwnj; ಎಂಟ್ರಿಗೆ ಫ್ಯಾನ್ಸ್ ಫಿದಾ!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ಇರಲಿ, ಕಾಲಿವುಡ್ ಇರಲಿ... ಸೂರ್ಯ (Suriya) ಅಖಾಡಕ್ಕೆ ಇಳಿದರೆ ಅಲ್ಲಿ ಹಬ್ಬದ ವಾತಾವರಣ ಗ್ಯಾರಂಟಿ! ಬಹುದಿನಗಳ ಕಾಯುವಿಕೆಯ ನಂತರ ಸೂರ್ಯ ನಟನೆಯ 'ಕರುಪ್ಪು' ಸಿನಿಮಾ (Karappu) ಚಿತ್ರಮಂದಿರಗಳಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಆರಂಭದಲ್ಲಿ ರಿಲೀಸ್ ದಿನಾಂಕದ ಗೊಂದಲ, ನಿರ್ದೇಶಕ ಆರ್.ಜೆ. ಬಾಲಾಜಿ ಅವರ ಭಾವುಕ ವಿಡಿಯೋ ಅಂತೆಲ್ಲಾ ಸುದ್ದಿಯಾಗಿದ್ದ ಈ ಚಿತ್ರ, ಈಗ ಬಾಕ್ಸ್&zwnj;ಆಫೀಸ್&zwnj;ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಆದರೆ, ಇಷ್ಟೆಲ್ಲಾ ಸಂಭ್ರಮದ ನಡುವೆ ಒಂದು ಸಣ್ಣ ಕಿಡಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಅದು ಇಸೈಜ್ಞಾನಿ ಇಳಯರಾಜ ಅವರಿಗೆ ಸಂಬಂಧಿಸಿದ್ದು ಎನ್ನುವುದೇ ಇಲ್ಲಿನ ಟ್ವಿಸ್ಟ್!&lt;/p&gt;&lt;p&gt;ಹೇಗಿದೆ 'ಕರುಪ್ಪು' ಹವಾ?&lt;/p&gt;&lt;p&gt;ಮೇ 15 ರಂದು ವಿಶ್ವಾದ್ಯಂತ ಬಿಡುಗಡೆಯಾದ 'ಕರುಪ್ಪು', ಸೂರ್ಯ ಅವರ ವೃತ್ತಿಜೀವನಕ್ಕೆ ಹೊಸ ಚೈತನ್ಯ ನೀಡಿದೆ. ಸೂರ್ಯ ಇಲ್ಲಿ ಕರುಪ್ಪಸ್ವಾಮಿಯ ಅವತಾರದಲ್ಲಿ ನ್ಯಾಯಾಲಯದ ಅನ್ಯಾಯಗಳ ವಿರುದ್ಧ ಗುಡುಗಿದ್ದಾರೆ. ಆರ್.ಜೆ. ಬಾಲಾಜಿ ವಕೀಲನಾಗಿ ಸೂರ್ಯನಿಗೆ ಸಾಥ್ ನೀಡಿದ್ದು, ಕ್ಲೈಮ್ಯಾಕ್ಸ್&zwnj;ನಲ್ಲಿ ಬರುವ 'ಪಡಿ ಕರುಪ್ಪು' ದೃಶ್ಯಗಳಿಗೆ ಥಿಯೇಟರ್&zwnj;ಗಳಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯೇ ಆಗುತ್ತಿದೆ. ರಜೆ ದಿನಗಳಾಗಿರುವುದರಿಂದ ಫ್ಯಾಮಿಲಿ ಆಡಿಯನ್ಸ್ ಕೂಡ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಯೋಗಿ ಬಾಬು ಕಾಮಿಡಿ, ತ್ರಿಷಾ ಅವರ ನಟನೆ ಮತ್ತು ಸಾಯಿ ಅಭಿಯಾನ್ ಸಂಗೀತ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.&lt;/p&gt;&lt;h2&gt;ಇಳಯರಾಜ ವಿವಾದ ಮತ್ತು ಸೂರ್ಯನ ಕ್ಷಮೆ!&lt;/h2&gt;&lt;p&gt;ಸಿನಿಮಾ ಸೂಪರ್ ಹಿಟ್ ಆಗಿದೆ ಎನ್ನುವಾಗಲೇ ಒಂದು ದೃಶ್ಯ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿತು. ಇತ್ತೀಚಿನ ದಿನಗಳಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಅವರು ತಮ್ಮ ಹಾಡುಗಳ ಹಕ್ಕುಸ್ವಾಮ್ಯ (Copyright) ವಿಚಾರವಾಗಿ ತುಂಬಾ ಕಟ್ಟುನಿಟ್ಟಾಗಿದ್ದಾರೆ. ಈ ನಡುವೆ 'ಕರುಪ್ಪು' ಚಿತ್ರದ ಇಂಟರ್ವಲ್ ದೃಶ್ಯವೊಂದರಲ್ಲಿ 'ಅಲೈ ಓಸೈ' ಸಿನಿಮಾದ ಹಾಡನ್ನು ಬಳಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲದೆ, ಆ ದೃಶ್ಯದಲ್ಲಿ ಇಳಯರಾಜ ಅವರನ್ನು ಉದ್ದೇಶಿಸಿ ಕೆಲವು ಅವಹೇಳನಕಾರಿ ಮಾತುಗಳಿವೆ ಎಂಬ ಆರೋಪ ಕೇಳಿಬಂತು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು.&lt;/p&gt;&lt;p&gt;ವಿಷಯ ಗಂಭೀರವಾಗುತ್ತಿದ್ದಂತೆ ಎಚ್ಚೆತ್ತ ಸೂರ್ಯ ಮತ್ತು ಚಿತ್ರತಂಡ ತಕ್ಷಣವೇ ಸ್ಪಷ್ಟನೆ ನೀಡಿದೆ. &quot;ಇಸೈಜ್ಞಾನಿ ಇಳಯರಾಜ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ನಮಗಿರಲಿಲ್ಲ. ಕಥೆಯ ಹರಿವಿನಲ್ಲಿ ಆ ದೃಶ್ಯ ಬಂದಿತ್ತೇ ಹೊರತು ಅದು ವೈಯಕ್ತಿಕ ಟೀಕೆಯಲ್ಲ,&quot; ಎಂದು ಚಿತ್ರತಂಡ ಹೇಳಿಕೆ ಬಿಡುಗಡೆ ಮಾಡಿದೆ. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ವಿವಾದಿತ ಆ ದೃಶ್ಯವನ್ನು ಸಿನಿಮಾದಿಂದಲೇ ತೆಗೆದುಹಾಕಲಾಗಿದೆ. ಸೂರ್ಯ ಅವರ ಈ ನಡೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.&lt;/p&gt;&lt;h3&gt;ಕೊನೆಯ ಮಾತು:&lt;/h3&gt;&lt;p&gt;ವಿವಾದಗಳು ಏನೇ ಇರಲಿ, 'ಕರುಪ್ಪು' ಸಿನಿಮಾ ಮಾತ್ರ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಎಬ್ಬಿಸುತ್ತಿದೆ. ತಾಂತ್ರಿಕ ತೊಂದರೆಗಳು ಮತ್ತು ಇಳಯರಾಜ ಅವರೊಂದಿಗಿನ ಈ ಸಣ್ಣ ಮನಸ್ತಾಪವನ್ನು ಮೆಟ್ಟಿ ನಿಂತು ಸಿನಿಮಾ ಗೆದ್ದಿದೆ. ಸೂರ್ಯ ಮತ್ತೆ ತನ್ನ ಹಳೆಯ ಖದರ್&zwnj;ನೊಂದಿಗೆ ಮರಳಿದ್ದಾರೆ. ನೀವು ಇನ್ನು ಈ ಸಿನಿಮಾ ನೋಡಿಲ್ಲವೆಂದರೆ, ಸೂರ್ಯನ ಆ 'ಮಾಸ್' ಅವತಾರ ನೋಡಲು ಹತ್ತಿರದ ಚಿತ್ರಮಂದಿರಕ್ಕೆ ಭೇಟಿ ನೀಡಿ!&lt;/p&gt;&lt;p&gt;ಸಾರಾಂಶ:&lt;/p&gt;&lt;p&gt;'ಕರುಪ್ಪು' ಚಿತ್ರದ ಯಶಸ್ಸು ಸೂರ್ಯನ ಪಾಲಿಗೆ ಬೂಸ್ಟರ್ ಡೋಸ್&zwnj;ನಂತಿದೆ. ವಿವಾದಗಳನ್ನು ಸಕಾರಾತ್ಮಕವಾಗಿ ಎದುರಿಸಿದ ಚಿತ್ರತಂಡ, ಇಳಯರಾಜ ಅವರ ದೃಶ್ಯವನ್ನು ಕತ್ತರಿಸುವ ಮೂಲಕ ಸಂಘರ್ಷಕ್ಕೆ ಫುಲ್&zwnj; ಸ್ಟಾಪ್ ಇಟ್ಟಿದೆ. ಸದ್ಯಕ್ಕೆ ಸೂರ್ಯನ ಈ 'ಕಪ್ಪು' ಸುನಾಮಿ ಬಾಕ್ಸ್&zwnj;ಆಫೀಸ್&zwnj;ನಲ್ಲಿ ಅನ್&zwnj;ಸ್ಟಾಪಬಲ್!&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/suriya-and-trisha-movie-karuppu-collects-good-in-box-office-and-positive-response-for-controversy/articleshow-60g14r5"/>
        </item>
        <item>
            <title><![CDATA[ತಾಯಿಗೆ ಅಪಘಾತ ಆಗಿದ್ದು ನಟ ಕಿಶೋರ್‌ಗೆ ಗೊತ್ತಿಲ್ಲ, ಫೋನ್‌ ಸ್ವೀಕರಿಸ್ತಿಲ್ಲ, ಮೆಸೇಜ್‌ ನೋಡ್ತಿಲ್ಲ: ದಯಾಳ್‌ ಪದ್ಮನಾಭನ್]]></title>
            <link>https://kannada.asianetnews.com/gallery/cine-world/actor-kishore-mother-hospitalised-due-to-accident-dayal-padmanabhan-post-zy7v4bf</link>
            <guid isPermaLink="true">https://kannada.asianetnews.com/gallery/cine-world/actor-kishore-mother-hospitalised-due-to-accident-dayal-padmanabhan-post-zy7v4bf</guid>
            <pubDate>Wed, 20 May 2026 10:36:01 +0530</pubDate>
            <description><![CDATA[&lt;p&gt;Actor Kishore: ನಟ ಕಿಶೋರ್&zwnj; ಅವರ ತಾಯಿಗೆ ಅಪಘಾತವಾಗಿದ್ದು, ಈ ಬಗ್ಗೆ ನಿರ್ದೇಶಕ ದಯಾಳ್&zwnj; ಪದ್ಮನಾಭನ್&zwnj; ಅವರು ಸೋಶಿಯಲ್&zwnj; ಮೀಡಿಯಾ ಪೋಸ್ಟ್&zwnj; ಹಂಚಿಕೊಂಡಿದ್ದಾರೆ. ನಟ ಕಿಶೋರ್&zwnj; ಅವರು ಫೋನ್&zwnj; ರಿಸೀವ್&zwnj; ಮಾಡದ ಕಾರಣ, ಈ ರೀತಿಯಾಗಿ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgsq3d0j1xqbw5kpqk1npg81,imgname-kishore-03-1770389615634.jpg" type="image/jpeg" height="390" width="690"/>
            <content:encoded><![CDATA[&lt;p&gt;Actor Kishore: ನಟ ಕಿಶೋರ್&zwnj; ಅವರ ತಾಯಿಗೆ ಅಪಘಾತವಾಗಿದ್ದು, ಈ ಬಗ್ಗೆ ನಿರ್ದೇಶಕ ದಯಾಳ್&zwnj; ಪದ್ಮನಾಭನ್&zwnj; ಅವರು ಸೋಶಿಯಲ್&zwnj; ಮೀಡಿಯಾ ಪೋಸ್ಟ್&zwnj; ಹಂಚಿಕೊಂಡಿದ್ದಾರೆ. ನಟ ಕಿಶೋರ್&zwnj; ಅವರು ಫೋನ್&zwnj; ರಿಸೀವ್&zwnj; ಮಾಡದ ಕಾರಣ, ಈ ರೀತಿಯಾಗಿ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಟ ಕಿಶೋರ್ ಅವರು ಸಾಮಾನ್ಯವಾಗಿ ಕರೆಗಳನ್ನು ಸ್ವೀಕರಿಸುವುದಿಲ್ಲ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಇಂದು ದುರದೃಷ್ಟವಶಾತ್ ಒಂದು ತುರ್ತು ಪರಿಸ್ಥಿತಿ ಎದುರಾಗಿದೆ. ಅವರ ತಾಯಿಯವರಿಗೆ ಅಪಘಾತವಾಗಿದೆ. ಅವರು ಆಸ್ಪತ್ರೆಯ ಕರೆಗಳಿಗೂ ಸಿಗದಿರುವ ಕಾರಣ, ಯಾರೋ ಒಬ್ಬರು ನನಗೆ ಈ ವಿಷಯವನ್ನು ಅವರಿಗೆ ತಲುಪಿಸಲು ವಿನಂತಿಸಿಕೊಂಡರು.&lt;/p&gt;&lt;img&gt;&lt;p&gt;ವಿಷಾದದ ಸಂಗತಿಯೆಂದರೆ, ಅವರು ನನ್ನ ಕರೆಯನ್ನು ಸಹ ಸ್ವೀಕರಿಸಿಲ್ಲ. ನಾನು ಅವರಿಗೆ ಧ್ವನಿ ಸಂದೇಶವನ್ನು (voice message) ಕಳುಹಿಸಿದ್ದೇನೆ, ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.&lt;/p&gt;&lt;img&gt;&lt;p&gt;ಯಾರಿಗಾದರೂ ಅವರನ್ನು ಸಂಪರ್ಕಿಸಲು ಸಾಧ್ಯವಾದರೆ, ದಯವಿಟ್ಟು ಈ ವಿಷಯವನ್ನು ಆದಷ್ಟು ಬೇಗ ಅವರಿಗೆ ತಿಳಿಸಿ. ಅವರ ತಾಯಿಯವರನ್ನು ಜೆ.ಪಿ. ನಗರದ ಮಣಿಪಾಲ್ ಆಸ್ಪತ್ರೆಗೆ (Manipal Hospital JP Nagar) ದಾಖಲಿಸಲಾಗಿದೆ.&lt;/p&gt;&lt;p&gt;ಸೂಚನೆ: ಕಿಶೋರ್ ಅವರ ನಿಕಟವರ್ತಿಗಳು ಯಾರಾದರೂ ಇದನ್ನು ಬೇಗನೆ ಗಮನಿಸಲಿ ಎಂದು ಆಶಿಸುತ್ತೇನೆ. ಅವರ ತಾಯಿಯವರು ಶೀಘ್ರವಾಗಿ ಗುಣಮುಖರಾಗಲಿ.&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/actor-kishore-mother-hospitalised-due-to-accident-dayal-padmanabhan-post-zy7v4bf"/>
        </item>
        <item>
            <title><![CDATA[Maryadhe Ramanna Serial: ಮದುವೆಯೇ ಬೇಡ ಎನ್ನುತ್ತಿದ್ದ ರಾಮಣ್ಣನಿಗೆ ಗಂಟುಬಿದ್ದ ಐಶ್ವರ್ಯ!]]></title>
            <link>https://kannada.asianetnews.com/gallery/tv-talk/star-suvarna-chetan-chandra-maryadhe-ramanna-kannada-serial-88woegi</link>
            <guid isPermaLink="true">https://kannada.asianetnews.com/gallery/tv-talk/star-suvarna-chetan-chandra-maryadhe-ramanna-kannada-serial-88woegi</guid>
            <pubDate>Wed, 20 May 2026 09:50:48 +0530</pubDate>
            <description><![CDATA[&lt;p&gt;Star Suvarna Maryadhe Ramanna Kannada Serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸದಾಗಿ &quot;ಮರ್ಯಾದೆ ರಾಮಣ್ಣ&quot; ಧಾರಾವಾಹಿ ಬರಲಿದೆ. ಹಾಗಿದ್ದರೆ ಈ ಧಾರಾವಾಹಿ ಕಥೆ ಏನು? ಈ ಧಾರಾವಾಹಿಯಲ್ಲಿ ಯಾರಿದ್ದಾರೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks1sgrs2zd3nmen2ztcnzwkq,imgname-new-project---2026-05-20t094120.792-1779250520866.jpg" type="image/jpeg" height="390" width="690"/>
            <content:encoded><![CDATA[&lt;p&gt;Star Suvarna Maryadhe Ramanna Kannada Serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸದಾಗಿ &quot;ಮರ್ಯಾದೆ ರಾಮಣ್ಣ&quot; ಧಾರಾವಾಹಿ ಬರಲಿದೆ. ಹಾಗಿದ್ದರೆ ಈ ಧಾರಾವಾಹಿ ಕಥೆ ಏನು? ಈ ಧಾರಾವಾಹಿಯಲ್ಲಿ ಯಾರಿದ್ದಾರೆ?&lt;/p&gt;&lt;img&gt;&lt;p&gt;ಅಖಾಡಕ್ಕೆ ಇಳಿದ್ರೆ ಯಾರಿಗೂ ಜಗ್ಗದ ಮಲ್ಲಿಗೆಪುರದ ಪೈಲ್ವಾನ ನಮ್ ಕಥಾನಾಯಕ ರಾಮಣ್ಣ. ಮಾತೃವಾಕ್ಯ ಪರಿಪಾಲಕನಾಗಿರೋ ಈತ ಆಕಾಶವೇ ತಲೆ ಮೇಲೆ ಬಿದ್ರೂ ಅಮ್ಮನ ಮಾತು ಮೀರೋದಿಲ್ಲ ಅನ್ನೋ ಹಳ್ಳಿ ಹೈದ. ತೊಡೆ ತಟ್ಟಿ ಕುಸ್ತಿ ಗೆಲ್ಲೊ ಇವನು ಅಮ್ಮ ಜಯಮ್ಮನ ಮಾತಿಗೆ ಕಟ್ಟು ಬಿದ್ದು ಬ್ರಹ್ಮಚಾರಿಯಾಗಿ ಉಳಿದಿದ್ದಾನೆ. ಜಯಮ್ಮನ ಮರ್ಯಾದೆಗೆ ಕಿಂಚಿತ್ತೂ ಕುತ್ತು ಬರದಂತೆ ಕಾಯೋ ಮುದ್ದಿನ ಮಗ ಈ ಮರ್ಯಾದೆ ರಾಮಣ್ಣ.&lt;/p&gt;&lt;p&gt;.&lt;/p&gt;&lt;img&gt;&lt;p&gt;ಇನ್ನು ಶ್ರೀಮಂತಿಕೆಯಲ್ಲಿ ಬೆಳೆದಿರೋ ಅಪ್ಸರೆಯಂಥಾ ಹುಡ್ಗಿ ನಮ್ ಕಥಾನಾಯಕಿ ಐಶ್ವರ್ಯ. ತನ್ನ ಮಾತನ್ನೇ ಎಲ್ರೂ ಕೇಳುವಂತೆ ಮಾಡೋ ಅಪ್ಪನ ಮುದ್ದಿನ ಮಗಳು. ತಾನು ಸ್ವಂತ ಕಾಲಿನ ಮೇಲೆ ನಿಂತು, ಫಾರಿನ್ನಿಗೆ ಹೋಗಿ ಸೆಟ್ಲು ಆಗೋದನ್ನೇ ಲೈಫು ಅನ್ಕೊಂಡಿರೋ ಪ್ಯಾಟೆ ಹುಡ್ಗಿ. ಈಕೆ ನೋಡೋಕೆ ಮುದ್ದು, ಆದರೆ ಸಿಡಿಮದ್ದು.&lt;/p&gt;&lt;img&gt;&lt;p&gt;ಮದ್ವೆನೇ ಆಗಲ್ಲ ಅನ್ನೋ ಬ್ರಹ್ಮಚಾರಿ ರಾಮಣ್ಣನ ಜೀವ್ನಕ್ಕೆ ಸುಂಟರಗಾಳಿ ಥರ ಇರೋ ಐಶ್ವರ್ಯ ಬಂದ್ರೆ ಮುಂದೇನಾಗುತ್ತೆ? ಅಮ್ಮನಿಗೆ ಕೊಟ್ಟಿರೋ ಮಾತನ್ನು ರಾಮಣ್ಣ ಹೇಗೆ ನಿಭಾಯಿಸ್ತಾನೆ? ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.&lt;/p&gt;&lt;img&gt;&lt;p&gt;ಇನ್ನು ಈ ಸೀರಿಯಲ್ ಅದ್ಭುತ ತಾರಾಬಳಗವನ್ನು ಹೊಂದಿದ್ದು ನಾಯಕನಾಗಿ ಚೇತನ್ ಚಂದ್ರ, ನಾಯಕಿಯಾಗಿ ಜೀವಿತಾ ವಸಿಷ್ಠ ನಟಿಸುತ್ತಿದ್ದಾರೆ. ಜೊತೆಗೆ ವೀಣಾಸುಂದರ್, ಸುಂದರ್, ವಿದ್ಯಾ ಮೂರ್ತಿ, ಶ್ರೀಕಾಂತ್ ಹೆಬ್ಳಿಕರ್, ಸೌಮ್ಯಲತ, ವಿಠ್ಠಲ್ ಕಾಮತ್, ಯದು ಗಿರೀಶ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಶುರುವಾಗ್ತಿದೆ ತಾಯಿಗಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಿರೋ ಪೈಲ್ವಾನನ ಪ್ರೀತಿಯ ಕಥೆ &quot;ಮರ್ಯಾದೆ ರಾಮಣ್ಣ&quot; ಇದೇ ಮೇ 25 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ಹಾಗೂ JioHotstar ನಲ್ಲಿ ತಪ್ಪದೇ ವೀಕ್ಷಿಸಿ.&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/star-suvarna-chetan-chandra-maryadhe-ramanna-kannada-serial-88woegi"/>
        </item>
        <item>
            <title><![CDATA[Annayya Serial: ಅತ್ತೆ ಲೀಲಾ ಮಾತು ಕೇಳಿ ಖುಷಿಯಿಂದ ಕುಣಿದಾಡಿದ ಗುಂಡಮ್ಮ! ಕಾರಣ ಇಷ್ಟೇ]]></title>
            <link>https://kannada.asianetnews.com/gallery/tv-talk/zee-kannada-annayya-serial-actress-gundamma-leela-bhanu-reels-viral-social-media-mrq-ctc0rep</link>
            <guid isPermaLink="true">https://kannada.asianetnews.com/gallery/tv-talk/zee-kannada-annayya-serial-actress-gundamma-leela-bhanu-reels-viral-social-media-mrq-ctc0rep</guid>
            <pubDate>Wed, 20 May 2026 08:18:27 +0530</pubDate>
            <description><![CDATA['ಅಣ್ಣಯ್ಯ' ಸೀರಿಯಲ್&zwnj;ನ ಗುಂಡಮ್ಮ (ಪ್ರತೀಕ್ಷಾ) ಮತ್ತು ಅತ್ತೆ ಲೀಲಾ (ಶೃತಿ) ತೆರೆಮರೆಯಲ್ಲಿ ಮಾಡಿದ ರೀಲ್ಸ್ ವೈರಲ್ ಆಗಿದೆ. ಜೊಮ್ಯಾಟೋದಲ್ಲಿ ಆರ್ಡರ್ ಮಾಡಲು ಅತ್ತೆ ಹೇಳಿದ್ದಕ್ಕೆ ಸೊಸೆ ಖುಷಿಯಿಂದ ಕುಣಿದಾಡುವ ಈ ವಿಡಿಯೋ ಜೊತೆಗೆ, ಸೀರಿಯಲ್&zwnj;ನ ಸದ್ಯದ ಕಥೆಯ ಬಗ್ಗೆಯೂ ಲೇಖನದಲ್ಲಿ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks1m5px58hvvpw15y9s6mghh,imgname-annayya--2--1779244915621.jpg" type="image/jpeg" height="390" width="690"/>
            <content:encoded><![CDATA['ಅಣ್ಣಯ್ಯ' ಸೀರಿಯಲ್&zwnj;ನ ಗುಂಡಮ್ಮ (ಪ್ರತೀಕ್ಷಾ) ಮತ್ತು ಅತ್ತೆ ಲೀಲಾ (ಶೃತಿ) ತೆರೆಮರೆಯಲ್ಲಿ ಮಾಡಿದ ರೀಲ್ಸ್ ವೈರಲ್ ಆಗಿದೆ. ಜೊಮ್ಯಾಟೋದಲ್ಲಿ ಆರ್ಡರ್ ಮಾಡಲು ಅತ್ತೆ ಹೇಳಿದ್ದಕ್ಕೆ ಸೊಸೆ ಖುಷಿಯಿಂದ ಕುಣಿದಾಡುವ ಈ ವಿಡಿಯೋ ಜೊತೆಗೆ, ಸೀರಿಯಲ್&zwnj;ನ ಸದ್ಯದ ಕಥೆಯ ಬಗ್ಗೆಯೂ ಲೇಖನದಲ್ಲಿ ವಿವರಿಸಲಾಗಿದೆ.&lt;img&gt;&lt;p&gt;ಅಣ್ಣಯ್ಯ ಸೀರಿಯಲ್&zwnj;ನ ಗುಂಡಮ್ಮ ಉರ್ಫ್ ರಶ್ಮಿ, ಅತ್ತೆ ಲೀಲಾ ಮಾತುಗಳನ್ನು ಕೇಳಿ ಖುಷಿಯಿಂದ ಕುಣಿದಾಡಿದ್ದಾಳೆ. ಸದ್ಯ ಈ ವಿಡಿಯೋವನ್ನು ಇನ್&zwnj;ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋಗೆ ವೀಕ್ಷಕರು ತಮಾಷೆಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಅಣ್ಣಯ್ಯ ಸೀರಿಯಲ್&zwnj;ನಲ್ಲಿ ಅತ್ತೆ ಲೀಲಾಗೆ ಸೊಸೆಯನ್ನು ಕಂಡ್ರೆ ಆಗಲ್ಲ. ಮಗ ಸೀನನಿಗೆ ರಶ್ಮಿ ಸರಿಯಾದ ಜೋಡಿ ಅಲ್ಲ ಅನ್ನೋದು ಲೀಲಾ ಅಭಿಪ್ರಾಯ. ಹಾಗಾಗಿ ಲೀಲಾ ಸೊಸೆಗೆ ಕಿರುಕುಳ ನೀಡುತ್ತಿರುತ್ತಾಳೆ. ಆದ್ರೆ ನಿಜಜೀವನದಲ್ಲಿ ಲೀಲಾ (ಶೃತಿ) ಮತ್ತು ಗುಂಡಮ್ಮ (ಪ್ರತೀಕ್ಷಾ) ಪಾತ್ರಧಾರಿಗಳು ಸಿಕ್ಕಾಪಟ್ಟೆ ಕ್ಲೋಸ್. ಶೂಟಿಂಗ್ ಬಿಡುವಿನ ಸಮಯದಲ್ಲಿಯೇ ಜೊತೆಯಾಗಿ ರೀಲ್ಸ್ ಮಾಡುತ್ತಿರುತ್ತಾರೆ.&lt;/p&gt;&lt;img&gt;&lt;p&gt;ಶ್ರುತಿ, ಪ್ರತೀಕ್ಷಾ ಮತ್ತು ದೃಷ್ಟಿ (ಬಾನು) ಮೂವರು ಜೊತೆಯಾಗಿ ಟ್ರೆಂಡಿಂಗ್ ಕ್ಲಿಪ್&zwnj; Zomato ಬಾತ್&zwnj; ರೀಲ್ಸ್&zwnj; ಮಾಡಿದ್ದಾರೆ. ಈ ರೀಲ್ಸ್&zwnj;ನಲ್ಲಿ ದೃಷ್ಟಿಗೆ ಶ್ರುತಿ ಜಡೆ ಹಾಕುತ್ತಿರುತ್ತಾರೆ. ಹಿಂದಿನಿಂದ ಬರುವ ಪ್ರತೀಕ್ಷಾ, ಅತ್ತೆ ಅಡುಗೆ ಏನು ಮಾಡಲಿ ಎಂದು ಕೇಳುತ್ತಾರೆ. ಇದಕ್ಕೆ ಶ್ರುತಿ ಅವರು, ಅದೇನೋ ಜೊಮೆಟೋ, ಟೊಮೆಟೋನಾ ಅಂತ ಹೇಳ್ತಾ ಇರ್ತಿ ಅಲ್ಲವಾ? ಅದರಲ್ಲಿ ಬುಕ್ ಮಾಡಮ್ಮ ತಿನ್ನೋಣ ಅಂತಾರೆ. ಈ ಮಾತು ಕೇಳುತ್ತಿದ್ದಂತೆ ಪ್ರತೀಕ್ಷಾ ಖುಷಿಯಿಂದ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ.&lt;/p&gt;&lt;img&gt;&lt;p&gt;ಸದ್ಯ ಅಣ್ಣಯ್ಯ ಸೀರಿಯಲ್&zwnj;ನಲ್ಲಿ ರಶ್ಮಿ-ಸೀನ ಸಂಸಾರ ಉಳಿಸಲು ಅತ್ತೆ ಮತ್ತು ನಾದಿನಿಯರ ಜೊತೆ ಪಾರು ಅಖಾಡಕ್ಕೆ ಇಳಿದಿದ್ದಾಳೆ. ಪಿಂಕಿ ಮನೆ ಮುಂದೆ ಹೋಗಿ ಆಕೆಯ ಕಪಾಳಕ್ಕೆ ಏಟು ನೀಡಿದ್ದು, ಸೀನನಿಂದ ದೂರವಿರುವಂತೆ ಪಾರು ಎಚ್ಚರಿಕೆ ನೀಡಿದ್ದಾಳೆ. ಆದ್ರೆ ಪಾರು ಎಚ್ಚರಿಕೆಗೆ ಪಿಂಕಿ ಸೊಪ್ಪು ಹಾಕದೇ ತಿರುಗೇಟು ನೀಡಿದ್ದಾಳೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಮ್ಮಂಗೆ ಸುಳ್ಳು ಹೇಳಿ ಬೆಂಗಳೂರು ಎಂಟ್ರಿ: ಕದ್ದುಮುಚ್ಚಿ ಸೀರಿಯಲ್​ನಲ್ಲಿ ನಟನೆ- ಅಣ್ಣಯ್ಯ'ರಾಣಿ' ರೋಚಕ ಸ್ಟೋರಿ&lt;/strong&gt;&lt;/p&gt;&lt;img&gt;&lt;p&gt;ಮತ್ತೊಂದೆಡೆ ಶಿವು ಅಂಗಡಿ ಮುಂದೆಯೇ ಹೋಗಿ ಜಿಮ್ ಸೀನ ಸಿಗರೇಟ್ ಸೇದಿದ್ದಾನೆ. ಇದರಿಂದ ಕೋಪಗೊಂಡ ಬಾಮೈದ ಸೀನನ ಮುಖಕ್ಕೆ ಶಿವು ನೀರು ಎರಚಿದ್ದಾನೆ. ಇತ್ತ ತನ್ನ ಆಸ್ತಿಗಾಗಿಯೇ ಪಿಂಕಿ ಮಗನನ್ನು ಪ್ರೀತಿ ಮಾಡುತ್ತಿರುವ ವಿಷಯ ತಿಳಿದ ಮಾದಪ್ಪ, ತನ್ನೆಲ್ಲಾ ಆಸ್ತಿಯನ್ನು ಸೊಸೆ ರಶ್ಮಿ ಹೆಸರಿಗೆ ವರ್ಗಾಯಿಸುವ ಕೆಲಸ ಮಾಡಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪಾತ್ರಗಳಿಗೆ ಜೀವ ತುಂಬಿ ನಟಿಸುವ ಅದ್ಭುತ ನಟ ನಾಗೇಂದ್ರ ಶಾ&hellip; ಇವರ ಮಗಳು ಕೂಡ ನಟಿ&lt;/strong&gt;&lt;/p&gt;]]></content:encoded>
            <category>news-entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-annayya-serial-actress-gundamma-leela-bhanu-reels-viral-social-media-mrq-ctc0rep"/>
        </item>
        <item>
            <title><![CDATA[‘ಪೆದ್ದಿ’ಗಾಗಿ ಭರ್ಜರಿ ಟ್ರಾನ್ಸ್‌ಫಾರ್ಮೇಷನ್: ಸಲ್ಮಾನ್, ಅಮೀರ್‌ ಬಗ್ಗೆ ಯಾಕ್ ಹೀಗಂದ್ರು ರಾಮ್ ಚರಣ್!]]></title>
            <link>https://kannada.asianetnews.com/entertainment/ram-charan-reveals-intense-transformation-for-sports-drama-peddi-gvd/articleshow-yydp3s1</link>
            <guid isPermaLink="true">https://kannada.asianetnews.com/entertainment/ram-charan-reveals-intense-transformation-for-sports-drama-peddi-gvd/articleshow-yydp3s1</guid>
            <pubDate>Tue, 19 May 2026 21:55:51 +0530</pubDate>
            <description><![CDATA[&lt;p&gt;ರಾಮ್ ಚರಣ್ 'ಪೆದ್ದಿ' ಚಿತ್ರದಲ್ಲಿ ಕ್ರಾಸ್&zwnj;ಓವರ್ ಅಥ್ಲೀಟ್ ಪಾತ್ರಕ್ಕಾಗಿ ಭರ್ಜರಿ ಬದಲಾವಣೆ ಮಾಡಿಕೊಂಡಿದ್ದಾರೆ. ಟ್ರೇಲರ್ ಲಾಂಚ್ ವೇಳೆ, 'ಸುಲ್ತಾನ್' ಮತ್ತು 'ದಂಗಲ್' ಚಿತ್ರಗಳಿಗಾಗಿ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್&zwnj;ಗೆ ಧನ್ಯವಾದ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks0ftavjmp0ezyba6rt0q9eb,imgname-vjj-1779206794098.png" type="image/jpeg" height="390" width="690"/>
            <content:encoded><![CDATA[&lt;p&gt;ರಾಮ್ ಚರಣ್ ಅವರ 'ಪೆದ್ದಿ' ಸಿನಿಮಾದ ಟ್ರೇಲರ್ ಸೋಮವಾರ ರಿಲೀಸ್ ಆಗಿದೆ. ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ಈ ಸ್ಪೋರ್ಟ್ಸ್ ಡ್ರಾಮಾ ಚಿತ್ರಕ್ಕಾಗಿ ರಾಮ್ ಚರಣ್ ತಮ್ಮ ಲುಕ್ ಅನ್ನೇ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರಾಮ್ ಚರಣ್ 'ಪೆದ್ದಿ' ಅನ್ನೋ ಕ್ರಾಸ್&zwnj;ಓವರ್ ಅಥ್ಲೀಟ್ ಪಾತ್ರವನ್ನು ಮಾಡ್ತಿದ್ದಾರೆ. ವಿಶೇಷ ಅಂದ್ರೆ, ಈ ಪಾತ್ರ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಬೇರೆ ಬೇರೆ ಕ್ರೀಡೆಗಳಲ್ಲಿ ಭಾಗವಹಿಸುತ್ತೆ. ಪ್ರತಿ ಕ್ರೀಡೆಗೂ ತಕ್ಕಂತೆ ತಮ್ಮ ದೇಹ, ನೋಟ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಮೇಲೆ ಅವರು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡಬೇಕಾಯ್ತು. ಯಾಕಂದ್ರೆ ಪಾತ್ರ ರಿಯಲ್ ಆಗಿ ಕಾಣಿಸಬೇಕಿತ್ತು.&lt;/p&gt;&lt;p&gt;&lt;strong&gt;ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್&zwnj;ಗೆ ವಿಶೇಷ ಕ್ರೆಡಿಟ್&lt;/strong&gt;&lt;/p&gt;&lt;p&gt;ಮುಂಬೈನಲ್ಲಿ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ, ರಾಮ್ ಚರಣ್ ಅವರ ಈ ಬದಲಾವಣೆ ಬಗ್ಗೆ ಪ್ರಶ್ನೆ ಕೇಳಲಾಯಿತು. ಆಗ ಅವರು ಮೊದಲು ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರಿಗೆ ಧನ್ಯವಾದ ಹೇಳಿದ್ರು. &ldquo;ಮೊದಲನೆಯದಾಗಿ ಸಲ್ಮಾನ್ ಸರ್ ಮತ್ತು ಅಮೀರ್ ಸರ್&zwnj;ಗೆ ಥ್ಯಾಂಕ್ಸ್. ಯಾಕಂದ್ರೆ 'ಸುಲ್ತಾನ್' ಮತ್ತು 'ದಂಗಲ್' ರೀತಿಯ ಸಿನಿಮಾಗಳ ಮೂಲಕ ಅವರು ನಮಗೆ ಇಂತಹ ಚಿತ್ರಗಳ ದಾರಿ ತೋರಿಸಿದ್ದಾರೆ. ಇದರಿಂದ ನಮಗೆ ತುಂಬಾನೇ ಆತ್ಮವಿಶ್ವಾಸ ಬಂತು&rdquo; ಅಂತ ರಾಮ್ ಚರಣ್ ಹೇಳಿದ್ರು. ಈ ಚಿತ್ರಗಳ ಯಶಸ್ಸು, ಸ್ಪೋರ್ಟ್ಸ್ ಡ್ರಾಮಾದಂತಹ ಕಥೆಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ ಅನ್ನೋ ಭರವಸೆ ಕೊಡ್ತು ಅಂತಾನೂ ಅವರು ಹೇಳಿದ್ರು.&lt;/p&gt;&lt;p&gt;&lt;strong&gt;ತುಂಬಾ ಸವಾಲಿನದಾಗಿತ್ತು ಸಿನಿಮಾ ಶೂಟಿಂಗ್&lt;/strong&gt;&lt;/p&gt;&lt;p&gt;'ಪೆದ್ದಿ' ಶೂಟಿಂಗ್ ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಮತ್ತು ಭಾವನಾತ್ಮಕವಾಗಿಯೂ ತುಂಬಾನೇ ಸವಾಲಿನದ್ದಾಗಿತ್ತು ಅಂತ ರಾಮ್ ಚರಣ್ ವಿವರಿಸಿದ್ರು. ಕಥೆ ಕೇಳಿದಾಗಲೇ ಈ ಪಾತ್ರ ಮಾಡೋದು ಸುಲಭವಲ್ಲ ಅಂತ ನನಗೆ ಗೊತ್ತಾಗಿತ್ತು. &ldquo;ಲುಕ್ ಬದಲಾಯಿಸೋದು ಕಥೆಯ ಪ್ರಮುಖ ಭಾಗವಾಗಿತ್ತು. ಬುಚ್ಚಿ ಬಾಬು ನಮ್ಮ ಮನೆಗೆ ಬಂದು ಇಡೀ ಸ್ಕ್ರಿಪ್ಟ್ ಹೇಳಿದ್ದು ನನಗೆ ನೆನಪಿದೆ. ಸುಮಾರು 2 ಗಂಟೆ 40 ನಿಮಿಷ ನಾನು ಸುಮ್ಮನೆ ಕಥೆ ಕೇಳ್ತಿದ್ದೆ. ಆವಾಗಲೇ ನನಗೆ ಗೊತ್ತಾಯ್ತು, ಈ ಸಿನಿಮಾ ದೈಹಿಕವಾಗಿ ತುಂಬಾ ಸುಸ್ತು ಮಾಡಲಿದೆ, ಆದರೆ ಈ ಕಥೆ ಮತ್ತು ಪಾತ್ರಕ್ಕಾಗಿ ಇದೆಲ್ಲಾ ಅಗತ್ಯವಾಗಿತ್ತು&rdquo; ಅಂತ ರಾಮ್ ಚರಣ್ ನೆನಪಿಸಿಕೊಂಡ್ರು.&lt;/p&gt;&lt;p&gt;&lt;strong&gt;ಗುರುತಿನ ಹುಡುಕಾಟದಲ್ಲಿ 'ಪೆದ್ದಿ'&lt;/strong&gt;&lt;/p&gt;&lt;p&gt;ರಾಮ್ ಚರಣ್ ಸಿನಿಮಾ ಕಥೆಯ ಬಗ್ಗೆಯೂ ವಿವರವಾಗಿ ಮಾತನಾಡಿದ್ರು. ಇದು ಕೇವಲ ಕ್ರೀಡೆಗಳ ಮೇಲಿನ ಸಿನಿಮಾ ಅಲ್ಲ, ಬದಲಿಗೆ ಒಬ್ಬ ವ್ಯಕ್ತಿ ತನ್ನ ಗುರುತನ್ನು ಹುಡುಕುವ ಕಥೆ ಅಂತ ಅವರು ಹೇಳಿದ್ರು. &ldquo;ಇದು ತನ್ನದೇ ಆದ ಗುರುತನ್ನು ಹುಡುಕುತ್ತಿರುವ ವ್ಯಕ್ತಿಯ ಕಥೆ. ನಾವೆಲ್ಲರೂ ಜೀವನದಲ್ಲಿ ಮುಂದೆ ಸಾಗಲು ಮತ್ತು ಪ್ರತಿದಿನ ಬದುಕಲು ಯಾವುದಾದರೊಂದು ಗುರುತಿನ ಅಗತ್ಯವಿದೆ. ಪೆದ್ದಿ ಕೂಡ ತನ್ನ ಗುರುತನ್ನು ಹುಡುಕುತ್ತಿದ್ದಾನೆ&rdquo; ಅಂತ ಅವರು ವಿವರಿಸಿದ್ರು. ಚಿತ್ರದಲ್ಲಿ ನನ್ನ ಪಾತ್ರ ಮೊದಲು ಗುರುತಿನ ಬಿಕ್ಕಟ್ಟನ್ನು ಎದುರಿಸುತ್ತೆ, ಆಮೇಲೆ ತನ್ನನ್ನು ತಾನು ಸಾಬೀತುಪಡಿಸಲು ಪ್ರಯತ್ನಿಸುತ್ತೆ. &ldquo;ಕೊನೆಗೆ, ಕ್ರಾಸ್&zwnj;ಓವರ್ ಅಥ್ಲೀಟ್ ಆಗಲು ಅವನಿಗೆ ಯಾವುದು ಪ್ರೇರಣೆ ನೀಡಿತು ಅನ್ನೋದೇ ಇಡೀ ಕಥೆಯ ಜರ್ನಿ. ಈ ಕಥೆ ತುಂಬಾ ಸಹಜವಾಗಿ ಕಾಣುತ್ತೆ, ಆದರೆ ಅದೇ ಸಮಯದಲ್ಲಿ ಸಂಪೂರ್ಣವಾಗಿ ಕಮರ್ಷಿಯಲ್ ಆಗಿದೆ&rdquo; ಅಂತಾನೂ ರಾಮ್ ಚರಣ್ ಸೇರಿಸಿದ್ರು.&lt;/p&gt;&lt;p&gt;&lt;strong&gt;ಕ್ರಿಕೆಟ್, ಕುಸ್ತಿ, ಓಟದಲ್ಲಿ ರಾಮ್ ಚರಣ್&lt;/strong&gt;&lt;/p&gt;&lt;p&gt;ಸಿನಿಮಾದಲ್ಲಿ ರಾಮ್ ಚರಣ್ ಕ್ರಿಕೆಟ್ ಆಡೋದು, ಕುಸ್ತಿ ಮಾಡೋದು ಮತ್ತು ಓಡೋದನ್ನು ನೋಡಬಹುದು. ಇದಕ್ಕಾಗಿ ಅವರು ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ. 'ಪೆದ್ದಿ' ಚಿತ್ರವನ್ನು ಬುಚ್ಚಿ ಬಾಬು ಸನಾ ಅವರೇ ಬರೆದು ನಿರ್ದೇಶಿಸಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಸತೀಶ್ ಕಿಲಾರು ನಿರ್ಮಾಣ ಮಾಡಿದ್ದಾರೆ. ಇಶಾನ್ ಸಕ್ಸೇನಾ ಸಹ-ನಿರ್ಮಾಪಕರಾಗಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿವೆ.&lt;/p&gt;&lt;h2&gt;&lt;strong&gt;ಸಿನಿಮಾದಲ್ಲಿ ದೊಡ್ಡ ತಾರಾಬಳಗ&lt;/strong&gt;&lt;/h2&gt;&lt;p&gt;'ಪೆದ್ದಿ' ಚಿತ್ರದಲ್ಲಿ ರಾಮ್ ಚರಣ್ ತೇಜ ಜೊತೆಗೆ ಜಾಹ್ನವಿ ಕಪೂರ್, ಶಿವರಾಜ್&zwnj;ಕುಮಾರ್, ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಜೂನ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ram-charan-reveals-intense-transformation-for-sports-drama-peddi-gvd/articleshow-yydp3s1"/>
        </item>
        <item>
            <title><![CDATA[ಯಶ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಈ ದಿನದಂದು ತೆರೆ ಮೇಲೆ 'ಟಾಕ್ಸಿಕ್' ಸಿನಿಮಾ ಬರೋದು ಫಿಕ್ಸ್?]]></title>
            <link>https://kannada.asianetnews.com/entertainment/yash-starrer-toxic-eyes-independence-day-2026-release-creating-major-box-office-clash-gvd/articleshow-smspank</link>
            <guid isPermaLink="true">https://kannada.asianetnews.com/entertainment/yash-starrer-toxic-eyes-independence-day-2026-release-creating-major-box-office-clash-gvd/articleshow-smspank</guid>
            <pubDate>Tue, 19 May 2026 21:22:44 +0530</pubDate>
            <description><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ರಿಲೀಸ್ ಡೇಟ್ ಬಗ್ಗೆ ಹೊಸ ಅಪ್&zwnj;ಡೇಟ್ ಒಂದು ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ನಿರ್ದೇಶಕಿ ಗೀತು ಮೋಹನ್&zwnj;ದಾಸ್ ಅವರ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಈ ಹಿಂದೆ ಹಲವು ಬಾರಿ ಮುಂದೂಡಲಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp90f29qkdhmf891jp9qzgjd,imgname-yash-on-toxic-1776271460663.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ರಿಲೀಸ್&zwnj;ಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ಆದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡಕ್ಕೆ ಸರಿಯಾದ ದಿನಾಂಕ ಸಿಗುತ್ತಿಲ್ಲ. ಮೊದಲು ಈ ಸಿನಿಮಾವನ್ನು ಮಾರ್ಚ್ 19 ರಂದು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ, ರಣವೀರ್ ಸಿಂಗ್ ಅವರ 'ಧುರಂಧರ್ 2' ಚಿತ್ರದಿಂದಾಗಿ ಅದನ್ನು ಮುಂದೂಡಲಾಯಿತು. ನಂತರ ಜೂನ್ 4 ರಂದು ರಿಲೀಸ್ ಮಾಡುವ ಯೋಚನೆ ಇತ್ತು, ಆದರೆ ಆ ದಿನಾಂಕವನ್ನೂ ಪೋಸ್ಟ್&zwnj;ಪೋನ್ ಮಾಡಬೇಕಾಯಿತು. ಇದೀಗ ಮಾಧ್ಯಮ ವರದಿಗಳ ಪ್ರಕಾರ, ನಿರ್ಮಾಪಕರಿಗೆ ಹೊಸ ಬಿಡುಗಡೆ ದಿನಾಂಕ ಸಿಕ್ಕಿದ್ದು, ಬಹುಶಃ ಅದೇ ದಿನಾಂಕದಂದು ಸಿನಿಮಾ ರಿಲೀಸ್ ಆಗಬಹುದು. ಪೂರ್ತಿ ವಿವರ ಇಲ್ಲಿದೆ...&lt;/p&gt;&lt;p&gt;&lt;strong&gt;ಸಿನಿಮಾ ಯಾವಾಗ ರಿಲೀಸ್?&lt;/strong&gt;&lt;/p&gt;&lt;p&gt;ಸದ್ಯ ಲಭ್ಯವಿರುವ ವರದಿಗಳ ಪ್ರಕಾರ, ಯಶ್ ಅವರ 'ಟಾಕ್ಸಿಕ್' ಸಿನಿಮಾ ಬಗ್ಗೆ ಒಂದು ದೊಡ್ಡ ಅಪ್&zwnj;ಡೇಟ್ ಹೊರಬಿದ್ದಿದೆ. ಫಿಲ್ಮ್&zwnj;ಫೇರ್ ವರದಿಯ ಪ್ರಕಾರ, ಯಶ್ ಅವರ 'ಟಾಕ್ಸಿಕ್' ಸಿನಿಮಾ 2026ರ ಸ್ವಾತಂತ್ರ್ಯ ದಿನಾಚರಣೆಯಂದು, ಅಂದರೆ ಆಗಸ್ಟ್ 15 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ನಿರ್ಮಾಪಕರು ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಬಹಳ ದಿನಗಳಿಂದ ಯೋಚಿಸುತ್ತಿದ್ದರು. ಒಂದು ವೇಳೆ ಈ ಸಿನಿಮಾ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದರೆ, ಬಾಕ್ಸಾಫೀಸ್&zwnj;ನಲ್ಲಿ ಇಮ್ರಾನ್ ಹಶ್ಮಿ ಅವರ 'ಆವಾರಾಪನ್ 2' ಮತ್ತು ಸನ್ನಿ ಡಿಯೋಲ್ ಅವರ 'ಬಟವಾರಾ 1947' ಚಿತ್ರಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ. 'ಆವಾರಾಪನ್ 2' ಇಮ್ರಾನ್ ಅವರ ಯಶಸ್ವಿ ಚಿತ್ರ 'ಆವಾರಾಪನ್'ನ ಸೀಕ್ವೆಲ್ ಆಗಿದೆ. ಇನ್ನು 'ಬಟವಾರಾ 1947' ಚಿತ್ರವನ್ನು ಅಮೀರ್ ಖಾನ್ ನಿರ್ಮಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;'ಟಾಕ್ಸಿಕ್' ಸಿನಿಮಾ ಬಗ್ಗೆ ಒಂದಿಷ್ಟು&lt;/strong&gt;&lt;/p&gt;&lt;p&gt;ಗೀತು ಮೋಹನ್&zwnj;ದಾಸ್ ನಿರ್ದೇಶನದ 'ಟಾಕ್ಸಿಕ್' ಒಂದು ಪಿರಿಯಡ್ ಗ್ಯಾಂಗ್&zwnj;ಸ್ಟರ್ ಸಿನಿಮಾ. ಈ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಅವರೊಂದಿಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಕೂಡ ನಟಿಸುತ್ತಿದ್ದಾರೆ. ವೆಂಕಟ್ ಕೆ ನಾರಾಯಣ ಮತ್ತು ಯಶ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್&zwnj;ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾದ ಬಜೆಟ್ 700-800 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದ್ದು, ಇದು ಭಾರತದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.&lt;/p&gt;&lt;h2&gt;&lt;strong&gt;'ಟಾಕ್ಸಿಕ್' ಹೀರೋ ಯಶ್ ಬಗ್ಗೆ&lt;/strong&gt;&lt;/h2&gt;&lt;p&gt;ಸೂಪರ್&zwnj;ಸ್ಟಾರ್ ಯಶ್ ಅವರ ನಿಜವಾದ ಹೆಸರು ನವೀನ್ ಕುಮಾರ್. ಅವರು 2000ನೇ ಇಸವಿಯಲ್ಲಿ ಹಲವು ಟೆಲಿವಿಷನ್ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2007ರಲ್ಲಿ 'ಜಂಬದ ಹುಡುಗಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. 2008ರಲ್ಲಿ ಬಂದ ರೊಮ್ಯಾಂಟಿಕ್ ಡ್ರಾಮಾ 'ಮೊಗ್ಗಿನ ಮನಸು' ಚಿತ್ರ ಯಶ್ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟ ಫಿಲ್ಮ್&zwnj;ಫೇರ್ ಪ್ರಶಸ್ತಿಯನ್ನು ಪಡೆದರು.&lt;/p&gt;&lt;p&gt;ನಾಯಕನಾಗಿ ಅವರ ಮೊದಲ ಚಿತ್ರ 'ರಾಕಿ' (2008) ಬಾಕ್ಸಾಫೀಸ್&zwnj;ನಲ್ಲಿ ವಿಫಲವಾಯಿತು. ನಂತರ ಯಶ್ ಅವರು 'ಗೂಗ್ಲಿ' (2013), 'ರಾಜಾ ಹುಲಿ' (2013), 'ಗಜಕೇಸರಿ' (2014), 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' (2014), 'ಮಾಸ್ಟರ್&zwnj;ಪೀಸ್' (2015) ಮತ್ತು 'ಸಂತು ಸ್ಟ್ರೈಟ್ ಫಾರ್ವರ್ಡ್' (2016) ನಂತಹ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದರು. 2018ರಲ್ಲಿ ಬಂದ 'ಕೆಜಿಎಫ್ ಚಾಪ್ಟರ್ 1' ಅವರನ್ನು ಸೂಪರ್&zwnj;ಸ್ಟಾರ್ ಆಗಿ ಮಾಡಿತು. ಆ ಚಿತ್ರ ಬ್ಲಾಕ್&zwnj;ಬಸ್ಟರ್ ಆಯಿತು. ನಂತರ ಅದರ ಸೀಕ್ವೆಲ್ 'ಕೆಜಿಎಫ್ ಚಾಪ್ಟರ್ 2' ಬಾಕ್ಸಾಫೀಸ್ ಅನ್ನು ಅಕ್ಷರಶಃ ಅಲುಗಾಡಿಸಿತು. 2022ರ ನಂತರ ಯಶ್ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/yash-starrer-toxic-eyes-independence-day-2026-release-creating-major-box-office-clash-gvd/articleshow-smspank"/>
        </item>
        <item>
            <title><![CDATA[ಏನಾಯಿತೆಂದು ಅಮ್ಮ ಕೇಳುತ್ತಿದ್ದಾರೆ: ನಟ ಸಲ್ಮಾನ್ ಖಾನ್ ಪೋಸ್ಟ್‌ಗೆ ಆತಂಕಗೊಂಡ ಫ್ಯಾನ್ಸ್!]]></title>
            <link>https://kannada.asianetnews.com/entertainment/salman-khan-asks-fans-to-chill-after-viral-lonely-post-sparks-concern-gvd/articleshow-f3pqk6s</link>
            <guid isPermaLink="true">https://kannada.asianetnews.com/entertainment/salman-khan-asks-fans-to-chill-after-viral-lonely-post-sparks-concern-gvd/articleshow-f3pqk6s</guid>
            <pubDate>Tue, 19 May 2026 19:52:04 +0530</pubDate>
            <description><![CDATA[&lt;p&gt;ತಮ್ಮ ಇತ್ತೀಚಿನ &quot;ಒಂಟಿ ಮತ್ತು ಏಕಾಂಗಿ&quot; ಪೋಸ್ಟ್&zwnj;ನಿಂದ ಆನ್&zwnj;ಲೈನ್&zwnj;ನಲ್ಲಿ ಶುರುವಾಗಿದ್ದ ಚರ್ಚೆಗಳಿಗೆ ನಟ ಸಲ್ಮಾನ್ ಖಾನ್ ತೆರೆ ಎಳೆದಿದ್ದಾರೆ. ಭಾನುವಾರ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqrk641r2ry1s88rdmq2r3h8,imgname-salman-khan-friend-sushil-kumar-passed-away-1777868148792.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮ್ಮ 'ಒಂಟಿ ಮತ್ತು ಏಕಾಂಗಿ' ಪೋಸ್ಟ್ ವೈರಲ್ ಆದ ನಂತರ ನಟ ಸಲ್ಮಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಇದು ನನ್ನ ವೈಯಕ್ತಿಕ ಜೀವನದ ಬಗ್ಗೆ ಅಲ್ಲ, ಅಭಿಮಾನಿಗಳಿಗೆ 'ಚಿಲ್' ಮಾಡಲು ಹೇಳಿದ್ದಾರೆ. ನನಗೆ ಪ್ರೀತಿಯ ಕುಟುಂಬ ಮತ್ತು ನಿಮ್ಮಂತಹ ಅಭಿಮಾನಿಗಳಿರುವಾಗ ನಾನು ಒಂಟಿಯಾಗಿರಲು ಸಾಧ್ಯವಿಲ್ಲ, ಕೆಲವೊಮ್ಮೆ 'ಮೀ ಟೈಮ್' ಬೇಕಾಗುತ್ತದೆ ಅಷ್ಟೇ ಎಂದು ಹೇಳಿದ್ದಾರೆ.&lt;/p&gt;&lt;p&gt;ತಮ್ಮ ಇತ್ತೀಚಿನ &quot;ಒಂಟಿ ಮತ್ತು ಏಕಾಂಗಿ&quot; ಪೋಸ್ಟ್&zwnj;ನಿಂದ ಆನ್&zwnj;ಲೈನ್&zwnj;ನಲ್ಲಿ ಶುರುವಾಗಿದ್ದ ಚರ್ಚೆಗಳಿಗೆ ನಟ ಸಲ್ಮಾನ್ ಖಾನ್ ತೆರೆ ಎಳೆದಿದ್ದಾರೆ. ಭಾನುವಾರ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಅಭಿಮಾನಿಗಳಿಗೆ &quot;ಚಿಲ್&quot; ಮಾಡುವಂತೆ ಹೇಳಿದ್ದು, ಆ ಪೋಸ್ಟ್ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಏನಿದು 'ಒಂಟಿ ಮತ್ತು ಏಕಾಂಗಿ' ಪೋಸ್ಟ್?&lt;/strong&gt;&lt;/p&gt;&lt;p&gt;ಕೆಲ ದಿನಗಳ ಹಿಂದೆ ಸಲ್ಮಾನ್, ಸೋಫಾದ ಮೇಲೆ ಶರ್ಟ್&zwnj;ಲೆಸ್ ಆಗಿ ವಿಶ್ರಾಂತಿ ಪಡೆಯುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅದರ ಜೊತೆ, &quot;ನಾನು, ನನ್ನಷ್ಟಕ್ಕೆ ನಾನು... ನಿಮ್ಮಷ್ಟಕ್ಕೆ ನೀವಿರಲು ಎರಡು ದಾರಿಗಳಿವೆ, ಒಂದು ಒಂಟಿಯಾಗಿರುವುದು, ಇನ್ನೊಂದು ಏಕಾಂಗಿಯಾಗಿರುವುದು. ಒಂಟಿಯಾಗಿರುವುದು ನಮ್ಮ ಆಯ್ಕೆ, ಆದರೆ ಯಾರೂ ನಮ್ಮ ಜೊತೆ ಇರಲು ಬಯಸದಿದ್ದಾಗ ಏಕಾಂಗಿತನ ಕಾಡುತ್ತದೆ... ಇದರ ಮುಂದಿನದ್ದನ್ನು ನೀವೇ ಯೋಚಿಸಿ&quot; ಎಂದು ಬರೆದಿದ್ದರು. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿ, ಸಲ್ಮಾನ್ ಖಾನ್ ಒಂಟಿತನದಿಂದ ಬಳಲುತ್ತಿದ್ದಾರೆಯೇ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು.&lt;/p&gt;&lt;p&gt;&lt;strong&gt;ನಾನು ಹೇಗೆ ಒಂಟಿಯಾಗಿರಲು ಸಾಧ್ಯ?&lt;/strong&gt;&lt;/p&gt;&lt;p&gt;ಆದರೆ, ನಂತರ ಮತ್ತೊಂದು ಸಂದೇಶ ಹಂಚಿಕೊಂಡ ಸಲ್ಮಾನ್, ಯಾರೂ ಚಿಂತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ತಮ್ಮ ಪೋಸ್ಟ್ ಕುರಿತ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಅವರು, &quot;ಅರೇ ಯಾರ್, ನಾನು ನನ್ನ ಬಗ್ಗೆ ಮಾತಾಡ್ತಿರಲಿಲ್ಲ. ಇಷ್ಟು ದೊಡ್ಡ ಅದ್ಭುತ ಕುಟುಂಬ, ಸ್ನೇಹಿತರಿರುವಾಗ ನಾನು ಹೇಗೆ ಒಂಟಿಯಾಗಿರಲು ಸಾಧ್ಯ? ನಿಮ್ಮಂತಹ ಅಭಿಮಾನಿಗಳ ಹಾರೈಕೆ, ದುವಾಗಳಿರುವಾಗ ನಾನು ಹೇಗೆ ಏಕಾಂಗಿಯಾಗಲು ಸಾಧ್ಯ? ಹಾಗೇನಾದರೂ ಆದರೆ ನಾನು ದೊಡ್ಡ ನಮಕ್ ಹರಾಮ್ ಆಗ್ತೀನಿ&quot; ಎಂದು ಬರೆದಿದ್ದಾರೆ. ಕೆಲವೊಮ್ಮೆ ಜನರ ಜೊತೆ ಇದ್ದು ಸಾಕಾಗಿ, ಸ್ವಲ್ಪ ಸಮಯ ತನಗಾಗಿ ಬೇಕೆನಿಸುತ್ತದೆ ಎಂದು ಸಲ್ಮಾನ್ ತಮಾಷೆಯಾಗಿ ಹೇಳಿದ್ದಾರೆ. &quot;ಕೆಲವೊಮ್ಮೆ ಜನರ ಜೊತೆ ಇದ್ದು ಸಾಕಾಗಿಬಿಡುತ್ತದೆ, ಅದಕ್ಕೆ ಸ್ವಲ್ಪ 'ಮೀ ಟೈಮ್' ಅಷ್ಟೇ... ಈ ಸಲ ಒಂದು ಫೋಟೋ ಹಾಕಿದ್ದಕ್ಕೆ ಬ್ರೇಕಿಂಗ್ ನ್ಯೂಸ್ ಮಾಡಿಬಿಟ್ರಿ. ಅಮ್ಮ ಕೂಡ 'ಏನಾಯ್ತು ಮಗನೇ?' ಅಂತ ಕೇಳ್ತಿದ್ದಾರೆ. ಚಿಲ್ ಮಾಡಿ ಯಾರ್,&quot; ಎಂದು ಅವರು ಸೇರಿಸಿದ್ದಾರೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Salman Khan (@beingsalmankhan)&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಸಿನಿಮಾ ವಿಚಾರ&lt;/strong&gt;&lt;/h2&gt;&lt;p&gt;ಸಿನಿಮಾ ವಿಚಾರಕ್ಕೆ ಬಂದರೆ, ಸಲ್ಮಾನ್ ಖಾನ್ ಮುಂದೆ 'ಮಾತೃಭೂಮಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರೊಂದಿಗೆ ಚಿತ್ರಾಂಗದಾ ಸಿಂಗ್ ನಟಿಸಲಿದ್ದಾರೆ. ಈ ಹಿಂದೆ 'ಬ್ಯಾಟಲ್ ಆಫ್ ಗಲ್ವಾನ್' ಎಂದು ಹೆಸರಿಡಲಾಗಿದ್ದ ಈ ಸಿನಿಮಾ, 2020ರಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷವನ್ನು ಆಧರಿಸಿದೆ. ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅಪೂರ್ವ ಲಖಿಯಾ ಆಕ್ಷನ್ ಕಟ್ ಹೇಳಿದ್ದು, 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/salman-khan-asks-fans-to-chill-after-viral-lonely-post-sparks-concern-gvd/articleshow-f3pqk6s"/>
        </item>
        <item>
            <title><![CDATA[ಡ್ಯಾನ್ಸ್ ಸ್ಟೆಪ್ ಮರೆತ್ರಾ 'ಮೆಗಾ ಪವರ್ ಸ್ಟಾರ್'? ವೈರಲ್ ವಿಡಿಯೋ ಬಗ್ಗೆ ಫ್ಯಾನ್ಸ್ ವಾರ್!]]></title>
            <link>https://kannada.asianetnews.com/entertainment/ram-charan-forgets-dance-step-at-peddi-trailer-launch-viral-video-sparks-fan-debate-gvd/articleshow-ol19yg6</link>
            <guid isPermaLink="true">https://kannada.asianetnews.com/entertainment/ram-charan-forgets-dance-step-at-peddi-trailer-launch-viral-video-sparks-fan-debate-gvd/articleshow-ol19yg6</guid>
            <pubDate>Tue, 19 May 2026 19:32:38 +0530</pubDate>
            <description><![CDATA[&lt;p&gt;ಮೇ 18ರಂದು ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ 'ಪೆದ್ದಿ' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks08q0pwkc456maq25994drh,imgname-nkk-1779199345372.png" type="image/jpeg" height="390" width="690"/>
            <content:encoded><![CDATA[&lt;p&gt;'ಪೆದ್ದಿ' ಸಿನಿಮಾ ಟ್ರೈಲರ್ ಲಾಂಚ್ ವೇಳೆ ರಾಮ್ ಚರಣ್ ಡ್ಯಾನ್ಸ್ ಸ್ಟೆಪ್ ಮರೆತಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ಕೆಲವರು ನಟನನ್ನು ಟ್ರೋಲ್ ಮಾಡಿದ್ರೆ, ಇನ್ನು ಕೆಲವರು ಅವರ ಪರ ನಿಂತಿದ್ದಾರೆ. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ.&lt;/p&gt;&lt;p&gt;'ಪೆದ್ದಿ' ಟ್ರೈಲರ್ ಲಾಂಚ್&zwnj;ನಲ್ಲಿ ಏನಾಯ್ತು?&lt;/p&gt;&lt;p&gt;ಮೇ 18ರಂದು ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ 'ಪೆದ್ದಿ' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಈ ಕಾರ್ಯಕ್ರಮದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಇಬ್ಬರೂ ಸ್ಟೈಲಿಶ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಆದರೆ, ವೇದಿಕೆ ಮೇಲೆ ನಡೆದ ಒಂದು ಘಟನೆ ಈಗ ಸಖತ್ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ಡ್ಯಾನ್ಸ್ ವಿಡಿಯೋ ಬಗ್ಗೆ ಪರ-ವಿರೋಧ ಚರ್ಚೆ&lt;/strong&gt;&lt;/p&gt;&lt;p&gt;ಈ ವೈರಲ್ ವಿಡಿಯೋದಲ್ಲಿ ರಾಮ್ ಚರಣ್, ತಮ್ಮ ಸಿನಿಮಾದ ಒಂದು ಡ್ಯಾನ್ಸ್ ಸ್ಟೆಪ್ ಹಾಕಲು ಪ್ರಯತ್ನಿಸಿದ್ದಾರೆ. ಆದರೆ, ಸ್ಟೆಪ್ ನೆನಪಿಸಿಕೊಳ್ಳಲು ಅವರು ಸ್ವಲ್ಪ ತಡವರಿಸಿದಂತೆ ಕಾಣುತ್ತೆ. ಒಂದೆರಡು ಬಾರಿ ಪ್ರಯತ್ನಿಸಿ, ಕೊನೆಗೆ ಸರಿಯಾಗಿ ಸ್ಟೆಪ್ ಹಾಕಿದ್ದಾರೆ. ಆದರೆ, ಅವರು ಮೊದಲ ಬಾರಿ ತಡವರಿಸಿದ್ದೇ ಸೋಷಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗಿದೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Paprika Media | Cinema | Paparazzi | (@paprikamedia_)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ&lt;/strong&gt;&lt;/p&gt;&lt;p&gt;ಈ ವಿಡಿಯೋ ವೈರಲ್ ಆಗ್ತಿದ್ದಂತೆ, 'X' ಸೋಷಿಯಲ್ ಮೀಡಿಯಾ ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ನೆಟ್ಟಿಗರು ಎರಡು ಬಣಗಳಾಗಿದ್ದಾರೆ. ಕೆಲವರು, 'ರಾಮ್ ಚರಣ್&zwnj;ಗೆ ಸ್ಟೆಪ್ ಮರೆತು ಹೋಯ್ತು' ಅಂತ ಕಾಲೆಳೆದರೆ, ಇನ್ನು ಕೆಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ. 'ಲೈವ್ ಕಾರ್ಯಕ್ರಮಗಳಲ್ಲಿ ಇದೆಲ್ಲಾ ಸಹಜ, ಇದನ್ನ ದೊಡ್ಡದು ಮಾಡೋದು ಬೇಕಾಗಿಲ್ಲ' ಅಂತಾ ಫ್ಯಾನ್ಸ್ ವಾದಿಸಿದ್ದಾರೆ. ಈ ಚರ್ಚೆ ಫ್ಯಾನ್ಸ್ ನಡುವೆ ದೊಡ್ಡ ವಾಗ್ವಾದಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಸಿನಿಮಾ ರಿಲೀಸ್ ಮತ್ತು ನಿರೀಕ್ಷೆಗಳು&lt;/strong&gt;&lt;/h2&gt;&lt;p&gt;ಈ ವೈರಲ್ ವಿಡಿಯೋ ಒಂದು ಕಡೆಯಾದ್ರೆ, 'ಪೆದ್ದಿ' ಸಿನಿಮಾ ಮೇಲಿನ ನಿರೀಕ್ಷೆ ಮಾತ್ರ ಕಮ್ಮಿಯಾಗಿಲ್ಲ. ಬುಚ್ಚಿ ಬಾಬು ಸಾನಾ ನಿರ್ದೇಶನದ ಈ ಸಿನಿಮಾ ಒಂದು ಗ್ರಾಮೀಣ ಕ್ರೀಡಾ ಡ್ರಾಮಾ ಆಗಿದೆ. ಸಿನಿಮಾ ಜೂನ್ 4 ರಂದು ಥಿಯೇಟರ್&zwnj;ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಒಂದು ಪವರ್&zwnj;ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಜಾನ್ವಿ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ram-charan-forgets-dance-step-at-peddi-trailer-launch-viral-video-sparks-fan-debate-gvd/articleshow-ol19yg6"/>
        </item>
        <item>
            <title><![CDATA['ಪೆದ್ದಿ'ಯಲ್ಲಿ ಜಾನ್ವಿ ಹೊಸ ಅವತಾರ ನೋಡಿ ಬಾಯ್‌ಫ್ರೆಂಡ್ ಹೇಳಿದ್ದು ಇದೊಂದೇ ಮಾತು: ಪೋಸ್ಟ್ ವೈರಲ್]]></title>
            <link>https://kannada.asianetnews.com/entertainment/shikhar-pahariya-cheers-for-janhvi-kapoors-peddi-calls-her-lady-don-gvd/articleshow-cst3b3r</link>
            <guid isPermaLink="true">https://kannada.asianetnews.com/entertainment/shikhar-pahariya-cheers-for-janhvi-kapoors-peddi-calls-her-lady-don-gvd/articleshow-cst3b3r</guid>
            <pubDate>Tue, 19 May 2026 19:11:48 +0530</pubDate>
            <description><![CDATA[&lt;p&gt;ನಟಿ ಜಾನ್ವಿ ಕಪೂರ್ ಅವರ ಬಾಯ್&zwnj;ಫ್ರೆಂಡ್ ಎಂದು ಹೇಳಲಾಗುವ ಶಿಖರ್ ಪಹಾಡಿಯಾ, ಜಾನ್ವಿ ನಟನೆಯ 'ಪೆದ್ದಿ' ಚಿತ್ರದ ಬಗ್ಗೆ ಸಖತ್ ಎಕ್ಸೈಟ್ ಆಗಿದ್ದಾರೆ. ಮೇ 18 ರಂದು ಮುಂಬೈನಲ್ಲಿ ಈ ಚಿತ್ರದ ಟ್ರೇಲರ್ ಲಾಂಚ್ ಆಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks07gsepfvkzxg3myb5apvgc,imgname-cvhc-1779198092758.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಜಾನ್ವಿ ಕಪೂರ್ ಅವರ ಮುಂಬರುವ 'ಪೆದ್ದಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇದನ್ನು ನೋಡಿದ ಜಾನ್ವಿ ಅವರ ಬಾಯ್&zwnj;ಫ್ರೆಂಡ್ ಎನ್ನಲಾದ ಶಿಖರ್ ಪಹಾಡಿಯಾ, ಆಕೆಯನ್ನು 'ಲೇಡಿ ಡಾನ್' ಎಂದು ಹೊಗಳಿದ್ದಾರೆ. ರಾಮ್ ಚರಣ್ ನಾಯಕರಾಗಿರುವ ಈ ಸಿನಿಮಾ ಜೂನ್ 4 ರಂದು ತೆರೆಗೆ ಬರಲಿದೆ.&lt;/p&gt;&lt;p&gt;&lt;strong&gt;'ಪೆದ್ದಿ' ಟ್ರೇಲರ್&zwnj;ಗೆ ಶಿಖರ್ ಪಹಾಡಿಯಾ, ವರುಣ್ ಧವನ್ ಫಿದಾ&lt;/strong&gt;&lt;/p&gt;&lt;p&gt;ನಟಿ ಜಾನ್ವಿ ಕಪೂರ್ ಅವರ ಬಾಯ್&zwnj;ಫ್ರೆಂಡ್ ಎಂದು ಹೇಳಲಾಗುವ ಶಿಖರ್ ಪಹಾಡಿಯಾ, ಜಾನ್ವಿ ನಟನೆಯ 'ಪೆದ್ದಿ' ಚಿತ್ರದ ಬಗ್ಗೆ ಸಖತ್ ಎಕ್ಸೈಟ್ ಆಗಿದ್ದಾರೆ. ಮೇ 18 ರಂದು ಮುಂಬೈನಲ್ಲಿ ಈ ಚಿತ್ರದ ಟ್ರೇಲರ್ ಲಾಂಚ್ ಆಗಿತ್ತು. ಇದರ ಬೆನ್ನಲ್ಲೇ ಶಿಖರ್, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಅಭಿಮಾನಿಗಳ ನಡುವೆ ಸಖತ್ ಚರ್ಚೆಯಲ್ಲಿದೆ.&lt;/p&gt;&lt;p&gt;ಶಿಖರ್ ಪಹಾಡಿಯಾ ತಮ್ಮ ಇನ್&zwnj;ಸ್ಟಾಗ್ರಾಮ್ ಸ್ಟೋರಿಯಲ್ಲಿ ಟ್ರೇಲರ್ ಶೇರ್ ಮಾಡಿಕೊಂಡು ಜಾನ್ವಿ ಅವರನ್ನು ಹೊಗಳಿದ್ದಾರೆ. &quot;ಜಾನ್ವಿ ಕಪೂರ್ ರಿಯಲ್ ಲೈಫ್&zwnj;ನಲ್ಲೂ, ರೀಲ್ ಲೈಫ್&zwnj;ನಲ್ಲೂ ನೀನೊಬ್ಬ ಲೇಡಿ ಡಾನ್. ರಾಮ್ ಚರಣ್ ಸಹೋದರ, ನಿಮ್ಮ ನಟನೆ ತುಂಬಾ ಚೆನ್ನಾಗಿದೆ, ಮಾಸ್ ಆಗಿದೆ. ಸಿನಿಮಾ ನೋಡಲು ಕಾಯುತ್ತಿದ್ದೇನೆ&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ನಟ ವರುಣ್ ಧವನ್ ಕೂಡಾ 'ಪೆದ್ದಿ' ಟ್ರೇಲರ್ ನೋಡಿ ಜಾನ್ವಿ ಕಪೂರ್ ಮತ್ತು ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. &quot;ಜಾನ್ವಿ ಕಪೂರ್, ನೀವು ಅದ್ಭುತವಾಗಿ ಕಾಣುತ್ತಿದ್ದೀರಿ. 'ಪೆದ್ದಿ' ನೋಡಲು ಕಾಯುತ್ತಿದ್ದೇನೆ. ಇಡೀ ತಂಡಕ್ಕೆ ಅಭಿನಂದನೆಗಳು. ರಾಮ್ ಚರಣ್ ಅವರದ್ದು ಬೆಂಕಿ ನಟನೆ&quot; ಎಂದು ಅವರು ಬರೆದಿದ್ದಾರೆ.&lt;/p&gt;&lt;h2&gt;&lt;strong&gt;'ಪೆದ್ದಿ' ಸಿನಿಮಾ ಹೇಗಿದೆ?&lt;/strong&gt;&lt;/h2&gt;&lt;p&gt;ಮೂರು ನಿಮಿಷ ಏಳು ಸೆಕೆಂಡ್&zwnj;ಗಳ ಈ ಟ್ರೇಲರ್, ರಾಮ್ ಚರಣ್ ಅವರ ಮಾಸ್ ಎಂಟ್ರಿಯೊಂದಿಗೆ ಶುರುವಾಗುತ್ತದೆ. ಟ್ರೇಲರ್&zwnj;ನಲ್ಲಿ ಅವರು ಬ್ಯಾಟಿಂಗ್ ಮತ್ತು ಕುಸ್ತಿ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ಒಂದು ದೃಶ್ಯದಲ್ಲಿ, ಬೊಮನ್ ಇರಾನಿ ಅವರು ರಾಮ್ ಚರಣ್ ಅವರನ್ನು 'ಭಾರತದ ಕ್ರಾಸ್ ಅಥ್ಲೀಟ್' ಎಂದು ಹೊಗಳುತ್ತಾರೆ. ಈ ಸಿನಿಮಾ ಒಂದು ಗ್ರಾಮೀಣ ಕಥೆಯಾಗಿದ್ದು, ಕ್ರೀಡೆಯ ಮೇಲಿನ ನಾಯಕನ ಪ್ರೀತಿ ಮತ್ತು ಜಮೀನ್ದಾರರು ಹಾಗೂ ಇತರ ಪ್ರಬಲ ಖಳನಾಯಕರಿಂದ ಎದುರಾಗುವ ಸಂಘರ್ಷಗಳನ್ನು ತೋರಿಸುತ್ತದೆ.&lt;/p&gt;&lt;p&gt;ರಾಮ್ ಚರಣ್ ಅವರು ಕ್ರಿಕೆಟ್, ಕುಸ್ತಿ ಮತ್ತು ಸ್ಪ್ರಿಂಟಿಂಗ್&zwnj;ನಂತಹ ಕ್ರೀಡೆಗಳಲ್ಲಿ ಪರಿಣತಿ ಹೊಂದಿರುವ ಬಹುಮುಖ ಪ್ರತಿಭೆಯುಳ್ಳ ಅಥ್ಲೀಟ್ ಪಾತ್ರವನ್ನು ನಿರ್ವಹಿಸಿದ್ದಾರೆ. ದೈಹಿಕ ಶಕ್ತಿಯಿಂದಲೇ ಅವರು ಜೀವನ ಸಾಗಿಸುತ್ತಾರೆ. ಟ್ರೇಲರ್ ಪ್ರಕಾರ, ನಟ ದಿವ್ಯೇಂದು ಈ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಸಿನಿಮಾದಲ್ಲಿ ರಾಮ್ ಚರಣ್, ನಟಿ ಜಾನ್ವಿ ಕಪೂರ್ ಜೊತೆ ರೊಮ್ಯಾನ್ಸ್ ಕೂಡ ಮಾಡಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/shikhar-pahariya-cheers-for-janhvi-kapoors-peddi-calls-her-lady-don-gvd/articleshow-cst3b3r"/>
        </item>
        <item>
            <title><![CDATA[ಇದ್ದಕ್ಕಿದ್ದಂತೆ ಚಿತ್ರರಂಗಕ್ಕೆ ಮತ್ತೊಂದು ಬಿಗ್ ಶಾಕ್: ಖ್ಯಾತ ಗಾಯಕಿ ಶವವಾಗಿ ಪತ್ತೆ!]]></title>
            <link>https://kannada.asianetnews.com/entertainment/punjabi-singer-yashinder-kaur-found-dead-after-alleged-abduction-over-marriage-proposal-gvd/articleshow-nm89nxe</link>
            <guid isPermaLink="true">https://kannada.asianetnews.com/entertainment/punjabi-singer-yashinder-kaur-found-dead-after-alleged-abduction-over-marriage-proposal-gvd/articleshow-nm89nxe</guid>
            <pubDate>Tue, 19 May 2026 18:37:19 +0530</pubDate>
            <description><![CDATA[&lt;p&gt;ಗಾಯಕಿ ಯಶಿಂದರ್ ಕೌರ್ ಅಲಿಯಾಸ್ ಇಂದರ್ ಕೌರ್ ಅವರ ಮೃತದೇಹ ಮೇ 19ರಂದು ಪಂಜಾಬ್&zwnj;ನ ನೀಲೋ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ದುರಂತ ಘಟನೆಯಿಂದ ಪಂಜಾಬಿ ಸಂಗೀತ ಲೋಕ ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks05hna2cf5978n2ardv9e9t,imgname-chnch-1779196024130.png" type="image/jpeg" height="390" width="690"/>
            <content:encoded><![CDATA[&lt;p&gt;ಪಂಜಾಬಿ ಗಾಯಕಿ ಯಶಿಂದರ್ ಕೌರ್ ಅಲಿಯಾಸ್ ಇಂದರ್ ಕೌರ್ ಅವರ ಮೃತದೇಹ ಪಂಜಾಬ್&zwnj;ನ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ. ಮೇ 13ರಂದು ನಾಪತ್ತೆಯಾಗಿದ್ದ ಅವರ ಬಗ್ಗೆ ಕುಟುಂಬ ದೂರು ನೀಡಿತ್ತು. ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಇಬ್ಬರು ಶಂಕಿತರು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;29 ವರ್ಷದ ಪಂಜಾಬಿ ಗಾಯಕಿ ಯಶಿಂದರ್ ಕೌರ್ ಅಲಿಯಾಸ್ ಇಂದರ್ ಕೌರ್ ಅವರ ಮೃತದೇಹ ಮೇ 19ರಂದು ಪಂಜಾಬ್&zwnj;ನ ನೀಲೋ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ದುರಂತ ಘಟನೆಯಿಂದ ಪಂಜಾಬಿ ಸಂಗೀತ ಲೋಕ ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ. ಮೃತದೇಹ ಸಿಕ್ಕ ತಕ್ಷಣ ಕುಟುಂಬಸ್ಥರು ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ಪೊಲೀಸರು ಮರಣೋತ್ತರ ಪರೀಕ್ಷೆ ಹಾಗೂ ಇತರ ಕಾನೂನು ಪ್ರಕ್ರಿಯೆಗಳಿಗಾಗಿ ಮೃತದೇಹವನ್ನು ಸಮ್ರಾಲಾದ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಅವರ ನಾಪತ್ತೆ ಮತ್ತು ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.&lt;/p&gt;&lt;p&gt;&lt;strong&gt;ನಾಪತ್ತೆ ಪ್ರಕರಣ ಮತ್ತು ಪೊಲೀಸ್ ದೂರು&lt;/strong&gt;&lt;/p&gt;&lt;p&gt;ಇಂದರ್ ಕೌರ್ ಅವರು ಮೇ 13ರ ಸಂಜೆ ದಿನಸಿ ತರಲೆಂದು ಮನೆಯಿಂದ ಹೊರಗೆ ಹೋಗಿದ್ದರು. ತಮ್ಮ ಫೋರ್ಡ್ ಫಿಗೋ ಕಾರಿನಲ್ಲಿ ತೆರಳಿದ್ದ ಅವರು, ಮನೆಗೆ ಹಿಂತಿರುಗದಿದ್ದಾಗ ಮತ್ತು ಫೋನ್ ಸಂಪರ್ಕಕ್ಕೆ ಸಿಗದಿದ್ದಾಗ ಕುಟುಂಬಕ್ಕೆ ಆತಂಕ ಶುರುವಾಗಿತ್ತು.&lt;/p&gt;&lt;p&gt;ಮೊದಲು ಕುಟುಂಬದವರೇ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಗದಿದ್ದಾಗ, ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಸಹೋದರ ಜೋತಿಂದರ್ ಸಿಂಗ್ ನೀಡಿದ ದೂರಿನ ಅನ್ವಯ, ಮೇ 15ರಂದು ಎಫ್&zwnj;ಐಆರ್ ದಾಖಲಾಗಿತ್ತು. ದೂರಿನಲ್ಲಿ ಸುಖ್ವಿಂದರ್ ಸಿಂಗ್ ಅಲಿಯಾಸ್ ಸುಖ ಮತ್ತು ಆತನ ಸಹಚರ ಕರಮ್&zwnj;ಜಿತ್ ಸಿಂಗ್ ಅವರನ್ನು ಶಂಕಿತರೆಂದು ಹೆಸರಿಸಲಾಗಿದೆ.&lt;/p&gt;&lt;h2&gt;&lt;strong&gt;ಆರೋಪ ಮತ್ತು ತನಿಖೆ&lt;/strong&gt;&lt;/h2&gt;&lt;p&gt;ತನಿಖೆ ವೇಳೆ, ಆರೋಪಿಗೆ ಇಂದರ್ ಕೌರ್ ಅವರ ವೈಯಕ್ತಿಕ ಪರಿಚಯವಿತ್ತು ಎಂಬುದು ತಿಳಿದುಬಂದಿದೆ. ಕುಟುಂಬದವರ ಪ್ರಕಾರ, ಸುಖ್ವಿಂದರ್ ಸಿಂಗ್ ಆಕೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದೇ ವೈಯಕ್ತಿಕ ದ್ವೇಷಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ಆಕೆಯನ್ನು ಗನ್ ಪಾಯಿಂಟ್&zwnj;ನಲ್ಲಿ ಅಪಹರಿಸಿ ನಂತರ ಕೊಲೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಪ್ರಮುಖ ಆರೋಪಿ ಈ ಘಟನೆಯ ನಂತರ ಕೆನಡಾಗೆ ಪರಾರಿಯಾಗಿರಬಹುದು ಎಂದೂ ಅವರು ಹೇಳಿದ್ದಾರೆ. ಪೊಲೀಸರು ಈ ಆರೋಪಗಳನ್ನು ಪರಿಶೀಲಿಸಲು, ಶಂಕಿತರನ್ನು ಪತ್ತೆಹಚ್ಚಲು ಮತ್ತು ಈ ಅಪರಾಧದ ಹಿಂದಿನ ಸಂಪೂರ್ಣ ಸತ್ಯವನ್ನು ಬಯಲಿಗೆಳೆಯಲು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/punjabi-singer-yashinder-kaur-found-dead-after-alleged-abduction-over-marriage-proposal-gvd/articleshow-nm89nxe"/>
        </item>
        <item>
            <title><![CDATA[ಟ್ರೋಲ್ ಮಾಡಿದವರಿಗೆ ಆರ್ಯ ಬಡಾಯಿ ಕೊಟ್ಟ ಉತ್ತರವೇನು?: ವೈರಲ್ ಆಯ್ತು ನಟಿಯ ಮಾತು!]]></title>
            <link>https://kannada.asianetnews.com/entertainment/actress-arya-badai-hits-back-at-trolls-over-her-dance-performance-amid-injury-gvd/articleshow-pf9hxxg</link>
            <guid isPermaLink="true">https://kannada.asianetnews.com/entertainment/actress-arya-badai-hits-back-at-trolls-over-her-dance-performance-amid-injury-gvd/articleshow-pf9hxxg</guid>
            <pubDate>Tue, 19 May 2026 18:07:32 +0530</pubDate>
            <description><![CDATA[&lt;p&gt;ಅಮೆರಿಕದಲ್ಲಿ ನಡೆದ ಶೋ ಒಂದರಲ್ಲಿ ಮಾಡಿದ ಡ್ಯಾನ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಲಾಗ್ತಿತ್ತು. ಇದಕ್ಕೆ ನಟಿ ಆರ್ಯ ಬಡಾಯಿ ಉತ್ತರ ಕೊಟ್ಟಿದ್ದಾರೆ. ಕಾಲಿಗೆ ಗಾಯವಾಗಿದ್ದರೂ ನಾನು ಡ್ಯಾನ್ಸ್ ಮಾಡಿದ್ದೆ ಅಂತ ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks03vamzb0h66v2reygwnhe8,imgname-knbk-1779194243743.png" type="image/jpeg" height="390" width="690"/>
            <content:encoded><![CDATA[&lt;p&gt;ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ನೆಗೆಟಿವ್ ಪ್ರಚಾರಕ್ಕೆ ನಟಿ ಆರ್ಯ ಬಡಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕದಲ್ಲಿ ನಡೆದ ಶೋ ಒಂದರಲ್ಲಿ ಆರ್ಯ ಅವರ ಡ್ಯಾನ್ಸ್ ಮತ್ತು ಸ್ಕಿಟ್ ವಿಡಿಯೋಗಳನ್ನು ಇಟ್ಟುಕೊಂಡು ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತಿದೆ. &quot;ಆರ್ಯ ಮುಂದೆ ಖಡ್ಗಮೃಗ ಕೂಡ ಸೋಲುತ್ತೆ&quot;, &quot;ಮಾತಾಡಿದ ಹಾಗೆ ಡ್ಯಾನ್ಸ್ ಮಾಡೋಕಾಗಲ್ಲ&quot;, &quot;ಶೋಗೆ ಡ್ಯಾನ್ಸ್ ಮಾಡೋಕೆ ಬೇರೆ ಯಾರೂ ಸಿಗಲಿಲ್ವಾ?&quot; ಎಂಬಂತಹ ತಲೆಬರಹಗಳೊಂದಿಗೆ ವಿಡಿಯೋಗಳು ವೈರಲ್ ಆಗಿದ್ದವು.&lt;/p&gt;&lt;p&gt;ಈ ಟ್ರೋಲ್&zwnj;ಗಳಿಗೆ ಆರ್ಯ ಈಗ ಉತ್ತರ ನೀಡಿದ್ದು, ಸದ್ಯ ಅವರ ಮಾತುಗಳು ಚರ್ಚೆಯಾಗುತ್ತಿವೆ. &quot;ಈ ಬಗ್ಗೆ ಯಾವುದೇ ರೀಲ್ ಅಥವಾ ಪೋಸ್ಟ್ ಮಾಡಲು ನನಗೆ ಇಷ್ಟವಿರಲಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ನನ್ನ ಪರ್ಫಾರ್ಮೆನ್ಸ್ ವಿಡಿಯೋ ಬಗ್ಗೆ ಹರಿದಾಡುತ್ತಿದ್ದ ಕೆಲವು ಕೆಟ್ಟ ಕಾಮೆಂಟ್&zwnj;ಗಳು ನನ್ನ ಗಮನಕ್ಕೆ ಬಂದು, ನನ್ನನ್ನು ಸಂಪೂರ್ಣವಾಗಿ ಕುಗ್ಗಿಸಿಬಿಟ್ಟವು&quot; ಎಂದು ಆರ್ಯ ಹೇಳಿದ್ದಾರೆ. ಅಂದು ತನಗೆ ಮೊಣಕಾಲಿಗೆ ಗಾಯವಾಗಿತ್ತು ಮತ್ತು ಕಾಲು ಊದಿಕೊಂಡಿತ್ತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.&lt;/p&gt;&lt;p&gt;&quot;4 ಪರ್ಫಾರ್ಮೆನ್ಸ್&zwnj;ಗಳು, 6 ಸ್ಟೇಜ್&zwnj;ಗಳು, 3 ಗಂಟೆಗಳ ಸುದೀರ್ಘ ಕಾರ್ಯಕ್ರಮ... ಇದರ ಬಗ್ಗೆ ಒಂದು ರೀಲ್ ಅಥವಾ ಪೋಸ್ಟ್ ಹಾಕುವ ಯಾವುದೇ ಆಸೆ ನನಗಿರಲಿಲ್ಲ. ಆದರೆ ನನ್ನ ಒಂದು ಪರ್ಫಾರ್ಮೆನ್ಸ್ ವಿಡಿಯೋಗೆ ಬಂದ ಕೆಟ್ಟ ಕಾಮೆಂಟ್&zwnj;ಗಳು ನನ್ನನ್ನು ತುಂಬಾ ಘಾಸಿಗೊಳಿಸಿದವು. ಅದರ ಬಗ್ಗೆ ಹೆಚ್ಚು ಮಾತಾಡಲು ನನಗಿಷ್ಟವಿಲ್ಲ, ಆದರೆ ಅದು ಕೊಟ್ಟ ನೋವು ಮಾತ್ರ ತುಂಬಾ ಆಳವಾದದ್ದು. ಹಾಗಾಗಿ ನನ್ನ ಮನಸ್ಸನ್ನು ಸಮಾಧಾನ ಮಾಡಿಕೊಳ್ಳಲು ಈ ವಿಡಿಯೋ ಮಾಡುತ್ತಿದ್ದೇನೆ. ಈಗ ನನಗೆ ನನ್ನ ಬಗ್ಗೆಯೇ ಹೆಮ್ಮೆ ಎನಿಸುತ್ತಿದೆ. ನನ್ನ ಇಡೀ ಕಲಾವಿದರ ತಂಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಜೊತೆ ಗಟ್ಟಿಯಾಗಿ ನಿಂತರು, ನನ್ನನ್ನು ನೋಡಿಕೊಂಡರು, ನನ್ನ ಆರೋಗ್ಯ ವಿಚಾರಿಸಿದರು, ನನಗೋಸ್ಕರ ಅಪರಿಚಿತರ ಜೊತೆ ಜಗಳವಾಡಿದರು. ಅವರು ನನಗಾಗಿ ಮಾಡದ ಸಹಾಯವಿಲ್ಲ&quot; ಎಂದು ಆರ್ಯ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಕಾಲು ಮಡಚಲು ಕೂಡ ಕಷ್ಟವಾಗುತ್ತಿತ್ತು&lt;/strong&gt;&lt;/h2&gt;&lt;p&gt;&quot;ನನ್ನ ಮೊಣಕಾಲಿಗೆ ಪೆಟ್ಟಾಗಿತ್ತು. ಕಾಲಿನಲ್ಲಿ ನೀರು ತುಂಬಿಕೊಂಡು ಊದಿಕೊಂಡಿರುವುದನ್ನು ನೀವು ನೋಡಬಹುದು. ನನ್ನ ಕಾಲು ಮೂಲತಃ ಹೀಗಿಲ್ಲ, ಫ್ಲೂಯಿಡ್ ತುಂಬಿಕೊಂಡಿದ್ದರಿಂದ ಊತ ಬಂದಿದೆ. ಊತದ ಜೊತೆಗೆ ವಿಪರೀತ ನೋವು ಮತ್ತು ಕಾಲು ಮಡಚಲು ಕೂಡ ಕಷ್ಟವಾಗುತ್ತಿತ್ತು. ಆದರೆ ನಾವು ಶೋ ಮುಂದುವರಿಸಲೇಬೇಕಿತ್ತು. ಈ ಪಯಣದಲ್ಲಿ ನನ್ನ ಜೊತೆಗಿದ್ದಿದ್ದು ನನ್ನ ನೀಕ್ಯಾಪ್ ಮಾತ್ರ. ನೀಕ್ಯಾಪ್ ಹಾಕುವುದು, ಐಸ್ ಪ್ಯಾಕ್ ಇಡುವುದು, ಎನರ್ಜಿಗಾಗಿ ಎರಡು ರೆಡ್ ಬುಲ್ ಕುಡಿಯುವುದು, ಅಷ್ಟೇ. ಹೀಗೆಯೇ ನಾನು ಇಡೀ ಶೋ ಮಾಡಿದ್ದು&quot; ಎಂದು ಆರ್ಯ ನೋವಿನಿಂದ ಹೇಳಿಕೊಂಡಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/actress-arya-badai-hits-back-at-trolls-over-her-dance-performance-amid-injury-gvd/articleshow-pf9hxxg"/>
        </item>
        <item>
            <title><![CDATA[ವಿದೇಶದಲ್ಲೂ ನಿಷಿದ್ಧವಾದ ಕೆಲಸವನ್ನು ಮಾಡಿದ ಬಿಗ್‌ ಬಾಸ್ Sonu Srinivas Gowda; ಜನರಿಂದ ಆಕ್ರೋಶ!]]></title>
            <link>https://kannada.asianetnews.com/gallery/tv-talk/audience-oppose-bigg-boss-kannada-ott-sonu-srinivas-gowda-cigarette-9xr1ped</link>
            <guid isPermaLink="true">https://kannada.asianetnews.com/gallery/tv-talk/audience-oppose-bigg-boss-kannada-ott-sonu-srinivas-gowda-cigarette-9xr1ped</guid>
            <pubDate>Tue, 19 May 2026 16:50:27 +0530</pubDate>
            <description><![CDATA[&lt;p&gt;Bigg Boss Sonu Srinivas Gowda: ಬಿಗ್&zwnj; ಬಾಸ್&zwnj; ಕನ್ನಡ ಒಟಿಟಿ ಖ್ಯಾತಿಯ ಸೋನು ಶ್ರೀನಿವಾಸ್&zwnj; ಗೌಡ ಅವರು ಇತ್ತೀಚೆಗೆ ಮಾಲ್ಡೀವ್ಸ್&zwnj;ಗೆ ಹೋಗಿದ್ದಾರೆ. ಇತ್ತೀಚೆಗೆ ಅವರು ಒಂದಲ್ಲ ಒಂದು ವಿದೇಶಿ ಪ್ರವಾಸಗಳನ್ನು ಮಾಡುತ್ತಿರುತ್ತಾರೆ. ಅಲ್ಲಿ ಅವರ ನಡೆಗೆ ಬೇಸರ ವ್ಯಕ್ತವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzz2k1ywmc22h5fzkarnp7x,imgname-new-project---2026-05-19t163945.670-1779189238846.jpg" type="image/jpeg" height="390" width="690"/>
            <content:encoded><![CDATA[&lt;p&gt;Bigg Boss Sonu Srinivas Gowda: ಬಿಗ್&zwnj; ಬಾಸ್&zwnj; ಕನ್ನಡ ಒಟಿಟಿ ಖ್ಯಾತಿಯ ಸೋನು ಶ್ರೀನಿವಾಸ್&zwnj; ಗೌಡ ಅವರು ಇತ್ತೀಚೆಗೆ ಮಾಲ್ಡೀವ್ಸ್&zwnj;ಗೆ ಹೋಗಿದ್ದಾರೆ. ಇತ್ತೀಚೆಗೆ ಅವರು ಒಂದಲ್ಲ ಒಂದು ವಿದೇಶಿ ಪ್ರವಾಸಗಳನ್ನು ಮಾಡುತ್ತಿರುತ್ತಾರೆ. ಅಲ್ಲಿ ಅವರ ನಡೆಗೆ ಬೇಸರ ವ್ಯಕ್ತವಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;Bigg Boss Sonu Srinivas Gowda:&zwnj; ಈಗಾಗಲೇ ಖಾಸಗಿ ವಿಡಿಯೋ ಮೂಲಕ ಸೋನು ಗೌಡ ಅವರು ದೊಡ್ಡ ವಿವಾದಕ್ಕೆ ಗುರಿಯಾಗಿದ್ದರು. ಕನ್ನಡದಲ್ಲಿ ಅತಿ ಹೆಚ್ಚು ಟ್ರೋಲ್&zwnj; ಆಗಿರುವ ಸೋನು ಗೌಡ ಈಗ ಯಾರಿಗೂ ಕ್ಯಾರೆ ಎನ್ನದೆ, ಯುಟ್ಯೂಬ್&zwnj; ಚಾನೆಲ್&zwnj; ನಡೆಸುತ್ತಿದ್ದಾರೆ. ಅಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತ, ಬೋಲ್ಡ್&zwnj; ಡ್ರೆಸ್&zwnj; ಪ್ರದರ್ಶನ ಮಾಡೋದುಂಟು.&lt;/p&gt;&lt;img&gt;&lt;p&gt;ಸೋನು ಶ್ರೀನಿವಾಸ್&zwnj; ಗೌಡ ಅವರು ಮಾಲ್ಡೀವ್ಸ್&zwnj;ಗೆ ಹೋದಾಗ ಅಲ್ಲಿ ಸಿಗರೇಟ್&zwnj; ಸೇದಿದ್ದಾರೆ. ಬಿಗ್&zwnj; ಬಾಸ್&zwnj; ಮನೆಯಲ್ಲಿದ್ದಾಗಲೂ ಕೂಡ ಅವರು ಸಿಗರೇಟ್&zwnj; ಬೇಕು ಎಂದು ಒಪನ್&zwnj; ಆಗಿ ಹೇಳಿದ್ದುಂಟು. ಈಗ ಮಾಲ್ಡೀವ್ಸ್&zwnj;ಗೆ ಹೋಗಿ ಸಿಗರೇಟ್&zwnj; ಸೇದಿದ ವಿಷಯವನ್ನು ಅವರು ಹೇಳಿದ್ದರು.&lt;/p&gt;&lt;img&gt;&lt;p&gt;ಭಾರತದಲ್ಲಿ ಒಂದು ಪ್ಯಾಕ್&zwnj;ಗೆ 400 ರೂಪಾಯಿ ಕೊಡುತ್ತಿದ್ದ ಸೋನು ಗೌಡ ಅವರು, ಮಾಲ್ಡೀವ್ಸ್&zwnj;ನಲ್ಲಿ 2400 ರೂಪಾಯಿ ಕೊಟ್ಟಿದ್ದರಂತೆ. ಇದನ್ನು ಅವರು ಹೇಳಿಕೊಂಡಿದ್ದಾರೆ. ಸ್ಟೈಲ್&zwnj;ಗೋಸ್ಕರ ನಾನು ಸಿಗರೇಟ್&zwnj; ಸೇದುವೆ ಎಂದು ಕೂಡ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಈ ಹಿಂದೆ ಸೋನು ಗೌಡ ಅವರು ಮದ್ಯ ಸೇವನೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್&zwnj; ಆಗಿತ್ತು. ಇದನ್ನು ಸೋನು ಗೌಡ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಯುಟ್ಯೂಬ್&zwnj; ಚಾನೆಲ್&zwnj;ನಲ್ಲಿ ಸೋನು ಗೌಡ ಅವರ ಸಿಗರೇಟ್&zwnj; ಸ್ಟೋರಿ ನೋಡಿದವರು, ನೆಗೆಟಿವ್&zwnj; ಆಗಿ ಮಾತನಾಡುತ್ತಿದ್ದಾರೆ. ಈ ರೀತಿ ಮಾಡೋದು ತಪ್ಪು, ಸಿಗರೇಟ್&zwnj; ಸೇದಬೇಡ, ಇದನ್ನೆಲ್ಲ ಪ್ರಚಾರ ಮಾಡಬೇಡ ಎಂದೆಲ್ಲ ಬೈಯ್ಯುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/audience-oppose-bigg-boss-kannada-ott-sonu-srinivas-gowda-cigarette-9xr1ped"/>
        </item>
        <item>
            <title><![CDATA[BTS Fan: ಕೊರಿಯನ್ ಬಾಯ್‌ಫ್ರೆಂಡ್ ಬೇಕಿತ್ತು.. ತಂಗಿ-ಅಮ್ಮನ ಬಗ್ಗೆ ಶಾಕಿಂಗ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಅಹಾನಾ]]></title>
            <link>https://kannada.asianetnews.com/entertainment/ahaana-krishna-reveals-sister-hansika-and-her-mom-want-a-korean-groom-gvd/articleshow-6xsg05s</link>
            <guid isPermaLink="true">https://kannada.asianetnews.com/entertainment/ahaana-krishna-reveals-sister-hansika-and-her-mom-want-a-korean-groom-gvd/articleshow-6xsg05s</guid>
            <pubDate>Tue, 19 May 2026 16:38:29 +0530</pubDate>
            <description><![CDATA[&lt;p&gt;ತನ್ನ ತಂಗಿ ಹಂಸಿಕಾಳಿಗೆ ಕೊರಿಯನ್ ಬಾಯ್&zwnj;ಫ್ರೆಂಡ್ ಬೇಕು ಅನ್ನೋ ಆಸೆ ಇದೆ. ಅಷ್ಟೇ ಅಲ್ಲ, ಅಮ್ಮನಿಗೂ ಕೊರಿಯನ್ ಅಳಿಯ ಬೇಕು ಅನ್ನೋ ಆಸೆ ಬಂದಿತ್ತು ಅಂತ ನಟಿ ಅಹಾನಾ ಕೃಷ್ಣ ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hs38xzvg9b9gjmwqfmrcnhtf,imgname-WhatsApp-Image-2024-03-16-at-11.26.52-AM-1710580760432.jpeg" type="image/jpeg" height="390" width="690"/>
            <content:encoded><![CDATA[&lt;p&gt;ನಟ ಕೃಷ್ಣಕುಮಾರ್ ಅವರ ಕುಟುಂಬ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್. ಅವರ ನಾಲ್ವರು ಮಕ್ಕಳಾದ ಅಹಾನಾ, ದಿಯಾ, ಇಶಾನಿ ಮತ್ತು ಹಂಸಿಕಾ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಈಗ ನಟಿ ಅಹಾನಾ ಕೃಷ್ಣ ತಮ್ಮ ತಂಗಿ ಹಂಸಿಕಾ ಬಗ್ಗೆ ಒಂದು ಮಜವಾದ ಸೀಕ್ರೆಟ್ ಹೇಳಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಹಾನಾ, ತಮ್ಮ ಮನೆಯಲ್ಲಿ ತಂಗಿ ಹಂಸಿಕಾ, ಇಶಾನಿ ಮತ್ತು ತಾಯಿ ಸಿಂಧು ಕೃಷ್ಣಕುಮಾರ್ ಅವರು ಕೊರಿಯಾದ ಖ್ಯಾತ ಮ್ಯೂಸಿಕ್ ಬ್ಯಾಂಡ್ 'ಬಿಟಿಎಸ್'ನ ದೊಡ್ಡ ಅಭಿಮಾನಿಗಳು ಎಂದು ಹೇಳಿದ್ದಾರೆ. ಹಂಸಿಕಾಗೆ ಕೊರಿಯನ್ ಬಾಯ್&zwnj;ಫ್ರೆಂಡ್ ಬೇಕು ಎಂಬ ಆಸೆ ಇದೆಯಂತೆ.&lt;/p&gt;&lt;p&gt;&quot;ನಮ್ಮನೇಲಿ ಹಂಸಿಕಾ, ಇಶಾನಿ ಮತ್ತು ಅಮ್ಮ ಮೂವರೂ ಬಿಟಿಎಸ್ ಫ್ಯಾನ್ಸ್. ಅವರಿಂದಾನೇ ಅಮ್ಮ ಕೂಡ ಬಿಟಿಎಸ್ ವಿಡಿಯೋ ನೋಡೋಕೆ ಶುರು ಮಾಡಿದ್ದು. ನನಗೆ ಅವರೆಲ್ಲಾ ಒಂದೇ ತರ ಕಾಣ್ತಾರೆ. ಆದ್ರೆ ಹಂಸು, ಇಶಾನಿ ತರಾನೇ ಅಮ್ಮನಿಗೂ ಬಿಟಿಎಸ್&zwnj;ನ ಎಲ್ಲಾ ಮೆಂಬರ್ಸ್ ಬಗ್ಗೆ ಪಕ್ಕಾ ಗೊತ್ತಿದೆ. ಹಂಸುಗೆ ಮುಂಚೆ ಕೊರಿಯಾದಿಂದಾನೇ ಲೈಫ್ ಪಾರ್ಟ್&zwnj;ನರ್ ಬೇಕು ಅನ್ನೋ ಆಸೆ ಇತ್ತು,&quot; ಎಂದು ಅಹಾನಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಕೊರಿಯನ್ ಅಳಿಯ ಬೇಕು ಅನ್ನೋ ಆಸೆ&lt;/strong&gt;&lt;/h2&gt;&lt;p&gt;&quot;ಒಂದು ಹಂತದಲ್ಲಂತೂ ತನಗೆ ಬಿಟಿಎಸ್&zwnj;ನಲ್ಲೇ ಒಬ್ಬ ಕೊರಿಯನ್ ಬಾಯ್&zwnj;ಫ್ರೆಂಡ್ ಬೇಕು ಅಂತ ಅವಳು ಡಿಸೈಡ್ ಆಗಿದ್ಲು. ಅಷ್ಟೇ ಯಾಕೆ, ನಮ್ಮ ಅಮ್ಮನಿಗೂ ಒಬ್ಬ ಕೊರಿಯನ್ ಅಳಿಯ ಬೇಕು ಅನ್ನೋ ಆಸೆ ಶುರುವಾಗಿತ್ತು. ಹಂಸುಗೆ 'ಕೊರಿಯಾಗೆ ಹೋಗು' ಅಂತ ಅಮ್ಮ ಹೇಳ್ತಿದ್ರು,&quot; ಅಂತ ಅಹಾನಾ 'ಒರಿಜಿನಲ್ಸ್'ಗೆ ನೀಡಿದ ಸಂದರ್ಶನದಲ್ಲಿ ತಮಾಷೆಯಾಗಿ ಹೇಳಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಅಹಾನಾ ಕೃಷ್ಣ ನಿರ್ದೇಶನದ 'ಪೂಕ್ಕಳ್' ಎಂಬ ಮ್ಯೂಸಿಕ್ ವಿಡಿಯೋ ರಿಲೀಸ್ ಆಗಿತ್ತು. ಇದರಲ್ಲಿ ಅವರ ತಂಗಿ ಇಶಾನಿ ಕೂಡ ನಟಿಸಿದ್ದಾರೆ. ಅಷ್ಟೇ ಅಲ್ಲ, ಅಮಲ್ ನೀರದ್ ಅವರ 'ಬ್ಯಾಚುಲರ್ ಪಾರ್ಟಿ 2' ಚಿತ್ರದಲ್ಲಿ ಹಂಸಿಕಾ, ನಟ ನಸ್ಲೆನ್&zwnj;ಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ವರದಿಗಳೂ ಇವೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ahaana-krishna-reveals-sister-hansika-and-her-mom-want-a-korean-groom-gvd/articleshow-6xsg05s"/>
        </item>
        <item>
            <title><![CDATA[ಮೌನಿ ರಾಯ್‌ಗೆ ದಿಶಾ ಪಟಾನಿ ಜೊತೆ ಸಲಿಂಗ ಸಂಬಂಧವಿದ್ಯಾ? ಮಾಜಿ ಪತಿ ಸೂರಜ್ ಹೀಗಾ ಹೇಳೋದು?]]></title>
            <link>https://kannada.asianetnews.com/entertainment/suraj-nambiar-slams-rumors-of-mouni-roy-disha-patani-lesbian-relationship-post-divorce-gvd/articleshow-vtd54go</link>
            <guid isPermaLink="true">https://kannada.asianetnews.com/entertainment/suraj-nambiar-slams-rumors-of-mouni-roy-disha-patani-lesbian-relationship-post-divorce-gvd/articleshow-vtd54go</guid>
            <pubDate>Tue, 19 May 2026 16:18:17 +0530</pubDate>
            <description><![CDATA[&lt;p&gt;ನಟಿ ಮೌನಿ ರಾಯ್ ಜೊತೆಗಿನ ವಿಚ್ಛೇದನದ ನಂತರ ಹಬ್ಬಿದ್ದ ಹಲವು ವದಂತಿಗಳಿಗೆ ಅವರ ಮಾಜಿ ಪತಿ ಸೂರಜ್ ನಂಬಿಯಾರ್ ತೆರೆ ಎಳೆದಿದ್ದಾರೆ. ಮೌನಿ 100 ಕೋಟಿ ಜೀವನಾಂಶ ಕೇಳಿದ್ದಾರೆ, ನಟಿ ದಿಶಾ ಪಟಾನಿ ಜೊತೆ ಸಂಬಂಧ ಹೊಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzxk7k1v0vp5adzygsynjqc,imgname-vjvj-1779187687009.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಮೌನಿ ರಾಯ್ ಜೊತೆಗಿನ ವಿಚ್ಛೇದನದ ನಂತರ ಹಬ್ಬಿದ್ದ ಹಲವು ವದಂತಿಗಳಿಗೆ ಅವರ ಮಾಜಿ ಪತಿ ಸೂರಜ್ ನಂಬಿಯಾರ್ ತೆರೆ ಎಳೆದಿದ್ದಾರೆ. ಮೌನಿ 100 ಕೋಟಿ ಜೀವನಾಂಶ ಕೇಳಿದ್ದಾರೆ, ನಟಿ ದಿಶಾ ಪಟಾನಿ ಜೊತೆ ಸಂಬಂಧ ಹೊಂದಿದ್ದಾರೆ ಎನ್ನುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸೂರಜ್ ಸ್ಪಷ್ಟಪಡಿಸಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ನಂತರ, ನಟಿ ಮೌನಿ ರಾಯ್ ಅವರು ಬಾಲಿವುಡ್ ನಟಿ ದಿಶಾ ಪಟಾನಿ ಜೊತೆ ಸಲಿಂಗ ಸಂಬಂಧ ಹೊಂದಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.&lt;/p&gt;&lt;p&gt;ಅಷ್ಟೇ ಅಲ್ಲ, ಮೌನಿ ಜೀವನಾಂಶವಾಗಿ 100 ಕೋಟಿ ರೂಪಾಯಿ ಕೇಳಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಆದರೆ, ಈ ಎಲ್ಲಾ ಆರೋಪಗಳನ್ನು ಸೂರಜ್ ನಂಬಿಯಾರ್ ತಳ್ಳಿಹಾಕಿದ್ದಾರೆ. ಈ ಬಗ್ಗೆ ಇನ್&zwnj;ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಸೂರಜ್, ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸದೆ ಸ್ಪಷ್ಟನೆ ನೀಡಿದ್ದಾರೆ. &quot;ನಾವಿಬ್ಬರೂ ಪರಸ್ಪರ ಗೌರವದಿಂದ, ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೆ ಬೇರೆಯಾಗಿದ್ದೇವೆ. ಈಗ ಹಬ್ಬುತ್ತಿರುವ ಸುದ್ದಿಗಳೆಲ್ಲವೂ ಕಟ್ಟುಕಥೆ. ಮೌನಿ ಯಾವುದೇ ಜೀವನಾಂಶ ಕೇಳಿಲ್ಲ. ನಮ್ಮ ವಿಚ್ಛೇದನದ ಬಗ್ಗೆ ನಾವು ನೀಡಿದ್ದ ಜಂಟಿ ಹೇಳಿಕೆಯಲ್ಲೇ ಎಲ್ಲವನ್ನೂ ತಿಳಿಸಿದ್ದೇವೆ&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&quot;ನಮ್ಮ ವಿಚ್ಛೇದನದ ಬಗ್ಗೆ ಹಬ್ಬುತ್ತಿರುವ ಆಧಾರರಹಿತ ವರದಿಗಳು ದುರುದ್ದೇಶದಿಂದ ಕೂಡಿವೆ. ನಾನು ಕೆಲವು ಸತ್ಯಗಳನ್ನು ಸ್ಪಷ್ಟಪಡಿಸುತ್ತೇನೆ. ಇಲ್ಲಿ ಯಾವುದೇ ಜೀವನಾಂಶದ ಪ್ರಶ್ನೆಯೇ ಇಲ್ಲ. ಯಾವುದೇ ಜಗಳಗಳಿಲ್ಲ. ನಮ್ಮಿಬ್ಬರ ನಡುವೆ ಮೂರನೇ ವ್ಯಕ್ತಿ ಯಾರೂ ಬಂದಿಲ್ಲ. ನಾನೂ ಮತ್ತು ಮೌನಿ ಪರಸ್ಪರ ಗೌರವದಿಂದ ಬೇರೆಯಾಗಲು ನಿರ್ಧರಿಸಿದ್ದೇವೆ. ಇದೇ ಸತ್ಯ. ಉಳಿದಂತೆ ವರದಿಯಾಗುತ್ತಿರುವ ಎಲ್ಲವೂ ಕಟ್ಟುಕಥೆ. ಕೆಲವೊಮ್ಮೆ, ಇಬ್ಬರು ವ್ಯಕ್ತಿಗಳ ಘನತೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಪ್ರಯತ್ನವಿದು. ದಯವಿಟ್ಟು ನಮ್ಮನ್ನು ನೆಮ್ಮದಿಯಾಗಿರಲು ಬಿಡಿ ಎಂದು ಮಾತ್ರ ಕೇಳಿಕೊಳ್ಳುತ್ತೇನೆ. ನಮ್ಮಿಬ್ಬರ ಬಗ್ಗೆ ಅಥವಾ ಯಾವುದೇ ಮೂರನೇ ವ್ಯಕ್ತಿಯ ಬಗ್ಗೆ ಹಬ್ಬುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ವಿಷಯಕ್ಕೆ ಸಂಬಂಧವೇ ಇಲ್ಲದ ನಮ್ಮ ಮುಗ್ಧ ಸ್ನೇಹಿತರನ್ನು ಎಳೆದು ತರುವುದು ಸರಿಯಲ್ಲ&quot; ಎಂದು ಸೂರಜ್ ಹೇಳಿದ್ದಾರೆ.&lt;/p&gt;&lt;p&gt;&quot;ಈ ಕಷ್ಟದ ಸಮಯದಲ್ಲಿ ನಾನೂ ಮತ್ತು ಮೌನಿ ಇಬ್ಬರೂ ಘನತೆಯಿಂದ ನಡೆದುಕೊಂಡಿದ್ದೇವೆ. ಮಾಧ್ಯಮಗಳೂ ಅದನ್ನೇ ಪಾಲಿಸಲಿ ಎಂದು ನಾವು ನಿರೀಕ್ಷಿಸುತ್ತೇವೆ. ಮಾಧ್ಯಮಗಳು ಇಲ್ಲಸಲ್ಲದ ಕಥೆಗಳನ್ನು ಸೃಷ್ಟಿಸಲು ಪ್ರಯತ್ನಿಸಿವೆ. ಯಾವುದೇ ಪರಿಶೀಲನೆ ಇಲ್ಲದೆ ಈ ವರದಿಗಳನ್ನು ಪ್ರಕಟಿಸಲಾಗಿದೆ, ಇದು ಅನ್ಯಾಯ. ಉದ್ದೇಶಪೂರ್ವಕ ಸುಳ್ಳು ಸುದ್ದಿಗಳ ವಿರುದ್ಧ ಮೌನವಾಗಿರಲು ನಾನು ಸಿದ್ಧನಿಲ್ಲ. ಅದಕ್ಕಾಗಿಯೇ ಈ ಸ್ಪಷ್ಟನೆ ನೀಡುತ್ತಿದ್ದೇನೆ. ನಮ್ಮ ಜಂಟಿ ಹೇಳಿಕೆಯಲ್ಲಿ ಹೇಳಬೇಕಾದ ಎಲ್ಲವನ್ನೂ ಹೇಳಿದ್ದೇವೆ. ದಯವಿಟ್ಟು ಎಲ್ಲರೂ ಅದನ್ನು ಗೌರವಿಸಿ, ನಾವಿಬ್ಬರೂ ಶಾಂತಿಯುತವಾಗಿ ಮುಂದುವರೆಯಲು ಅವಕಾಶ ಮಾಡಿಕೊಡಿ. ಧನ್ಯವಾದಗಳು&quot; ಎಂದು ಸೂರಜ್ ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;2022ರಲ್ಲಿ ವಿವಾಹ&lt;/strong&gt;&lt;/h2&gt;&lt;p&gt;ದೀರ್ಘಕಾಲದ ಪ್ರೀತಿಗೆ ಮನ್ನಣೆ ನೀಡಿ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ 2022ರಲ್ಲಿ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಲಯಾಳಿ ಸಂಪ್ರದಾಯದಂತೆ ಮೊದಲು ಮದುವೆ ನಡೆದಿತ್ತು. ಈ ಸಮಾರಂಭದಲ್ಲಿ ಹಲವು ಬಾಲಿವುಡ್ ಸ್ನೇಹಿತರು ಭಾಗವಹಿಸಿದ್ದರು.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/suraj-nambiar-slams-rumors-of-mouni-roy-disha-patani-lesbian-relationship-post-divorce-gvd/articleshow-vtd54go"/>
        </item>
        <item>
            <title><![CDATA[ಮದುವೆಯಾಗಿ 5 ತಿಂಗಳಿಗೆ ಸಹ ನಟಿ ನಿಧನ; ನಾಗಿಣಿ ಧಾರಾವಾಹಿ ನಟ ದೀಕ್ಷಿತ್‌ ಶೆಟ್ಟಿ ಬಿಚ್ಚಿಟ್ಟ ಸತ್ಯ ಏನು?]]></title>
            <link>https://kannada.asianetnews.com/gallery/cine-world/actress-model-twisha-sharma-demise-actor-dheekshith-shetty-social-media-post-moawgri</link>
            <guid isPermaLink="true">https://kannada.asianetnews.com/gallery/cine-world/actress-model-twisha-sharma-demise-actor-dheekshith-shetty-social-media-post-moawgri</guid>
            <pubDate>Tue, 19 May 2026 15:36:50 +0530</pubDate>
            <description><![CDATA[&lt;p&gt;Twisha Sharma death Mystery: ಭೋಪಾಲ್ ಮಾಡೆಲ್ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ, ಆಕೆ ತಾಯಿ, ಸಹೋದರಿ, ಗೆಳತಿಯೊಂದಿಗೆ ನಡೆಸಿದ್ದ ಚಾಟ್&zwnj;ಗಳು ವೈರಲ್ ಆಗಿವೆ. ಈ ಚಾಟ್&zwnj;ಗಳಲ್ಲಿ ಟ್ವಿಶಾ ತಾನು ಅನುಭವಿಸುತ್ತಿದ್ದ ಮಾನಸಿಕ ಹಿಂಸೆ, ಉಸಿರುಗಟ್ಟಿಸುವ ವಾತಾವರಣದ ಬಗ್ಗೆ ಹೇಳಿಕೊಂಡಿದ್ದಳು.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krztrz9vy1jew0mmfwr5zmr5,imgname-new-project---2026-05-19t152811.325-1779184729402.jpg" type="image/jpeg" height="390" width="690"/>
            <content:encoded><![CDATA[&lt;p&gt;Twisha Sharma death Mystery: ಭೋಪಾಲ್ ಮಾಡೆಲ್ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ, ಆಕೆ ತಾಯಿ, ಸಹೋದರಿ, ಗೆಳತಿಯೊಂದಿಗೆ ನಡೆಸಿದ್ದ ಚಾಟ್&zwnj;ಗಳು ವೈರಲ್ ಆಗಿವೆ. ಈ ಚಾಟ್&zwnj;ಗಳಲ್ಲಿ ಟ್ವಿಶಾ ತಾನು ಅನುಭವಿಸುತ್ತಿದ್ದ ಮಾನಸಿಕ ಹಿಂಸೆ, ಉಸಿರುಗಟ್ಟಿಸುವ ವಾತಾವರಣದ ಬಗ್ಗೆ ಹೇಳಿಕೊಂಡಿದ್ದಳು.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭೋಪಾಲ್&zwnj;ನ ಮಾಡೆಲ್ ಮತ್ತು ನಟಿ ಟ್ವಿಶಾ ಶರ್ಮಾ ಅವರ ಅನುಮಾನಾಸ್ಪದ ಸಾವು ಪ್ರಕರಣ ದಿನದಿಂದ ದಿನಕ್ಕೆ ಮತ್ತಷ್ಟು ಜಟಿಲವಾಗುತ್ತಿದೆ. ಪ್ರತಿದಿನ ಹೊರಬರುತ್ತಿರುವ ಹೊಸ ಹೊಸ ವಿಚಾರಗಳು ಈ ಕೇಸನ್ನು ಇನ್ನಷ್ಟು ಸೂಕ್ಷ್ಮವಾಗಿಸಿವೆ. ಈಗ ಟ್ವಿಶಾ ತನ್ನ ತಾಯಿ, ಸಹೋದರಿ ಮತ್ತು ಗೆಳತಿಯೊಂದಿಗೆ ನಡೆಸಿದ್ದ ಪರ್ಸನಲ್ ಚಾಟ್&zwnj;ಗಳು ವೈರಲ್ ಆಗುತ್ತಿವೆ.&amp;nbsp;&lt;/p&gt;&lt;p&gt;ಈ ಚಾಟ್&zwnj;ಗಳಲ್ಲಿ ಆಕೆ ತನ್ನ ಮಾನಸಿಕ ಸ್ಥಿತಿ ಮತ್ತು ವೈವಾಹಿಕ ಜೀವನದ ಸಂಕಷ್ಟಗಳನ್ನು ಹೇಳಿಕೊಂಡಿದ್ದಳು. ಈ ಚಾಟ್&zwnj;ಗಳು ಬಹಿರಂಗವಾಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಟ್ವಿಶಾ ಕುಟುಂಬಸ್ಥರು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸುತ್ತಿದ್ದರೆ, ಪೊಲೀಸರು ಇಡೀ ಘಟನೆಯ ತನಿಖೆಯಲ್ಲಿ ತೊಡಗಿದ್ದಾರೆ.&lt;/p&gt;&lt;img&gt;&lt;p&gt;&ldquo;ನಿಮ್ಮ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ. ನೀವಿಲ್ಲ ಎನ್ನುವುದು ನಿಜಕ್ಕೂ ಶಾಕ್&zwnj; ಕೊಟ್ಟಿದೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ&rdquo; ಎಂದು ದೀಕ್ಷಿತ್&zwnj; ಶೆಟ್ಟಿ ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ ಮಾಧ್ಯಮದ ಜೊತೆ ಮಾತನಾಡಿ, ನಾನು ಟ್ವಿಶಾ ಜೊತೆ ನಾಲ್ಕು ವರ್ಷದ ಹಿಂದೆ ಮಾತನಾಡಿದ್ದೆ. ಟ್ವಿಶಾಗೆ ಮದುವೆ ಆಗಿರುವ ವಿಚಾರವೇ ಗೊತ್ತಿರಲಿಲ್ಲ ಎಂದು ಕೂಡ ಹೇಳಿದ್ದರು.&amp;nbsp;&lt;/p&gt;&lt;img&gt;&lt;p&gt;ವೈರಲ್ ಆಗಿರುವ ಚಾಟ್&zwnj;ಗಳ ಪ್ರಕಾರ, ಮೇ 7 ರಂದು ಟ್ವಿಶಾ ತನ್ನ ತಾಯಿಗೆ ಮೆಸೇಜ್ ಮಾಡಿ, ತಾನು 'ತುಂಬಾ ಕೆಟ್ಟದಾಗಿ ಸಿಕ್ಕಿಹಾಕಿಕೊಂಡಿದ್ದೇನೆ' ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಮನೆಯವರೆಲ್ಲಾ ತನ್ನನ್ನು ಡ್ರಗ್ಸ್ ತೆಗೆದುಕೊಳ್ಳುವವಳು ಎಂದು ಭಾವಿಸಿದ್ದಾರೆ ಮತ್ತು ತನ್ನ ಮಾನಸಿಕ ಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದೂ ಆಕೆ ಹೇಳಿದ್ದಾಳೆ. ತನ್ನ ಪತಿ ತನ್ನಿಂದ ಅಂತರ ಕಾಯ್ದುಕೊಂಡಿದ್ದಾನೆ, ಇದೇ ಕಾರಣಕ್ಕೆ ತನಗೆ ಉಸಿರುಗಟ್ಟಿದಂತಾಗುತ್ತಿದೆ, ಆದರೆ ಇದನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಟ್ವಿಶಾ ಚಾಟ್&zwnj;ನಲ್ಲಿ ಬರೆದಿದ್ದಳು. ಇಲ್ಲಿ ನನಗೆ ಅಳುವುದಕ್ಕೂ ಬಿಡುತ್ತಿಲ್ಲ, ನೆಮ್ಮದಿಯಾಗಿ ಬದುಕುವುದಕ್ಕೂ ಕಾರಣ ಸಿಗುತ್ತಿಲ್ಲ ಎಂದು ಆಕೆ ತನ್ನ ತಾಯಿಯ ಬಳಿ ನೋವು ತೋಡಿಕೊಂಡಿದ್ದಾಳೆ. ಈ ಮೆಸೇಜ್&zwnj;ಗಳು ಆಕೆಯ ಮೇಲಿನ ಮಾನಸಿಕ ಹಿಂಸೆಯ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.&lt;/p&gt;&lt;img&gt;&lt;p&gt;ಟ್ವಿಶಾ ತನ್ನ ಸಹೋದರಿ ಮತ್ತು ತಂದೆಯೊಂದಿಗೆ ನಡೆಸಿದ ಚಾಟ್ ಕೂಡ ಈಗ ಚರ್ಚೆಯಲ್ಲಿದೆ. &quot;ನೋಡೋಣ, ಇವನು ಎಲ್ಲಿಯವರೆಗೆ ಹೀಗೆ ಮಾಡುತ್ತಾನೆ&quot; ಎಂದು ಬರೆದಿದ್ದ ಟ್ವಿಶಾ, ತಾನು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧಳಾಗಿದ್ದೇನೆ ಎಂದು ಹೇಳಿದ್ದಳು. ಇದಕ್ಕೆ ಪ್ರತಿಯಾಗಿ, ಕುಟುಂಬದವರು ಆಕೆಗೆ ಶಾಂತವಾಗಿರಲು, ಭಯಪಡದೆ ಧೈರ್ಯದಿಂದ ಇರಲು ಸಲಹೆ ನೀಡಿದ್ದರು. ಈ ಚಾಟ್&zwnj;ಗಳಿಂದ, ಟ್ವಿಶಾಳ ಮಾನಸಿಕ ಸ್ಥಿತಿಯ ಬಗ್ಗೆ ಕುಟುಂಬಕ್ಕೆ ಮೊದಲೇ ಆತಂಕವಿತ್ತು ಎಂಬುದು ಸ್ಪಷ್ಟವಾಗುತ್ತದೆ.&lt;/p&gt;&lt;p&gt;ಮಾಹಿತಿ ಪ್ರಕಾರ, ಟ್ವಿಶಾ ಶರ್ಮಾ ಮೂಲತಃ ನೋಯ್ಡಾದವಳು. ಆಕೆ ತಮಿಳು ಸಿನಿಮಾಗಳಲ್ಲಿ ಮಾಡೆಲ್ ಮತ್ತು ನಟಿಯಾಗಿ ಕೆಲಸ ಮಾಡಿದ್ದಳು. ಡೇಟಿಂಗ್ ಆ್ಯಪ್ ಒಂದರ ಮೂಲಕ ಆಕೆಗೆ ಭೋಪಾಲ್ ನಿವಾಸಿ, ವಕೀಲ ಸಮರ್ಥ್ ಸಿಂಗ್ ಪರಿಚಯವಾಗಿತ್ತು. ಸಮರ್ಥ್ ಸಿಂಗ್, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರ ಮಗ ಎಂದು ಹೇಳಲಾಗುತ್ತಿದೆ. ಇಬ್ಬರೂ ಡಿಸೆಂಬರ್ 9, 2025 ರಂದು ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ನಂತರ ಅವರ ದಾಂಪತ್ಯದಲ್ಲಿ ಬಿರುಕು ಮೂಡಲು ಶುರುವಾಗಿತ್ತು.&lt;/p&gt;&lt;img&gt;&lt;p&gt;ಮದುವೆಯಾದ ನಂತರ ಟ್ವಿಶಾಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿತ್ತು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಕೆಲಸ ಬಿಟ್ಟ ಮೇಲೆ, &quot;ಯಾವುದಕ್ಕೂ ಪ್ರಯೋಜನವಿಲ್ಲದವಳು&quot; ಎಂದು ಅವಮಾನಿಸಲಾಗುತ್ತಿತ್ತು ಎಂದು ಕುಟುಂಬ ಹೇಳಿದೆ. ಟ್ವಿಶಾ ಹಲವು ಬಾರಿ ತವರು ಮನೆಗೆ ವಾಪಸ್ ಬರಲು ಬಯಸಿದ್ದರೂ, ಆಕೆಗೆ ಬರಲು ಬಿಡಲಿಲ್ಲ. ಇದೇ ಕಾರಣಕ್ಕೆ ಆಕೆ ನಿರಂತರವಾಗಿ ಒತ್ತಡ ಮತ್ತು ಭಾವನಾತ್ಮಕ ಸಂಕಟದಲ್ಲಿದ್ದಳು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಈ ಇಡೀ ಪ್ರಕರಣದಲ್ಲಿ, ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ವೈರಲ್ ಆಗಿರುವ ಚಾಟ್&zwnj;ಗಳು, ಸಿಸಿಟಿವಿ ದೃಶ್ಯಾವಳಿ ಮತ್ತು ಕುಟುಂಬದವರ ಆರೋಪಗಳ ಆಧಾರದ ಮೇಲೆ ಘಟನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಅಧಿಕೃತವಾಗಿ ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ. ಹೀಗಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯೂ ತನಿಖೆಯ ಭಾಗವಾಗಿದೆ.&lt;/p&gt;&lt;p&gt;ಟ್ವಿಶಾ ಶರ್ಮಾ ಪ್ರಕರಣ ಸೋಶಿಯಲ್ ಮೀಡಿಯಾದಲ್ಲೂ ದೊಡ್ಡ ಸಂಚಲನ ಸೃಷ್ಟಿಸಿದೆ. ಜನರು ನಿರಂತರವಾಗಿ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯವನ್ನು ಹೊರತರಬೇಕೆಂದು ಒತ್ತಾಯಿಸುತ್ತಿದ್ದಾರೆ. ಅನೇಕರು ಈ ಪ್ರಕರಣವನ್ನು ಮಾನಸಿಕ ಆರೋಗ್ಯ ಮತ್ತು ವೈವಾಹಿಕ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಒತ್ತಡದೊಂದಿಗೆ ತಳುಕು ಹಾಕುತ್ತಿದ್ದಾರೆ. ಸದ್ಯಕ್ಕೆ, ಎಲ್ಲರ ಕಣ್ಣುಗಳು ತನಿಖಾ ಸಂಸ್ಥೆಗಳ ಮುಂದಿನ ಕ್ರಮ ಮತ್ತು ವರದಿಯ ಮೇಲೆ ನೆಟ್ಟಿದೆ.&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/actress-model-twisha-sharma-demise-actor-dheekshith-shetty-social-media-post-moawgri"/>
        </item>
        <item>
            <title><![CDATA[ಇಡೀ ಜಗತ್ತೇ ಎದುರಾದ್ರೂ ನಾನು ನಿನ್ನ ಬಿಡೋದಿಲ್ಲ, ದೂರ ಆಗಲ್ಲ: Darshan Thoogudeepa ಪತ್ನಿ ವಿಜಯಲಕ್ಷ್ಮೀ]]></title>
            <link>https://kannada.asianetnews.com/gallery/sandalwood/actor-darshan-thoogudeepa-wife-vijayalakshmi-post-on-23rd-wedding-anniversary-rt1pzn6</link>
            <guid isPermaLink="true">https://kannada.asianetnews.com/gallery/sandalwood/actor-darshan-thoogudeepa-wife-vijayalakshmi-post-on-23rd-wedding-anniversary-rt1pzn6</guid>
            <pubDate>Tue, 19 May 2026 13:05:05 +0530</pubDate>
            <description><![CDATA[&lt;p&gt;Actor Vijayalakshmi Darshan: ವಿಜಯಲಕ್ಷ್ಮೀ ಹಾಗೂ ನಟ ದರ್ಶನ್&zwnj; ತೂಗುದೀಪ ಅವರು 2003 ಮೇ 19ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದು ವಿವಾಹ ವಾರ್ಷಿಕೋತ್ಸವದ ಖುಷಿಯಿದ್ದರೂ ಕೂಡ, ದರ್ಶನ್&zwnj; ಮಾತ್ರ ಜೈಲಿನಲ್ಲಿದ್ದಾರೆ. ಈಗ ವಿಜಯಲಕ್ಷ್ಮೀ ಅವರು ಭಾವುಕ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzj42z33f2fras7mgetz18w,imgname-new-project---2026-05-19t125210.926-1779175656419.jpg" type="image/jpeg" height="390" width="690"/>
            <content:encoded><![CDATA[&lt;p&gt;Actor Vijayalakshmi Darshan: ವಿಜಯಲಕ್ಷ್ಮೀ ಹಾಗೂ ನಟ ದರ್ಶನ್&zwnj; ತೂಗುದೀಪ ಅವರು 2003 ಮೇ 19ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದು ವಿವಾಹ ವಾರ್ಷಿಕೋತ್ಸವದ ಖುಷಿಯಿದ್ದರೂ ಕೂಡ, ದರ್ಶನ್&zwnj; ಮಾತ್ರ ಜೈಲಿನಲ್ಲಿದ್ದಾರೆ. ಈಗ ವಿಜಯಲಕ್ಷ್ಮೀ ಅವರು ಭಾವುಕ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಆರೋಪದಲ್ಲಿ ನಟ ದರ್ಶನ್&zwnj; ತೂಗುದೀಪ ಅವರು ಜೈಲು ಸೇರಿದರು. ಈ ಹಿಂದೆ ದರ್ಶನ್&zwnj;, ವಿಜಯಲಕ್ಷ್ಮೀ ಸಂಸಾರದಲ್ಲಿ ಸಮಸ್ಯೆ ಆಗಿ, ವಿವಾದ ಎದ್ದಿತ್ತು. ಆಗಲೂ ದರ್ಶನ್&zwnj; ಜೈಲು ಸೇರಿದ್ದರು. ಈಗ ಕೊ*ಲೆ ಆರೋಪದಲ್ಲಿ ಜೈಲು ಸೇರಿದಾಗ ವಿಜಯಲಕ್ಷ್ಮೀ ಮಾತ್ರ ಸದಾ ದರ್ಶನ್&zwnj; ಪರವಾಗಿದ್ದರು.&lt;/p&gt;&lt;img&gt;&lt;p&gt;ಕಳೆದ ಎರಡು ವರ್ಷಗಳಿಂದ ವಿಜಯಲಕ್ಷ್ಮೀ ಮಾತ್ರ ದರ್ಶನ್&zwnj; ಅವರನ್ನು ಹೊರಗಡೆ ಕರೆದುಕೊಂಡು ಬರಲು, ಅವರ ಸಿನಿಮಾ ಪ್ರಚಾರಕ್ಕೆ ಬೆಂಬಲ ನೀಡಿದರು. ಅಷ್ಟೇ ಅಲ್ಲದೆ ಅವಕಾಶ ಸಿಕ್ಕಾಗೆಲ್ಲ ಜೈಲಿಗೆ ಹೋಗಿ ನೋಡಿಕೊಂಡು ಬಂದಿದ್ದಾರೆ, ಆಹಾರ, ಬಟ್ಟೆ ನೀಡಿದ್ದರು.&lt;/p&gt;&lt;img&gt;&lt;p&gt;&ldquo;ಪ್ರತಿಯೊಂದು ಬಿರುಗಾಳಿಯಲ್ಲೂ ಮತ್ತು ಪ್ರತಿಯೊಂದು ಮೌನದಲ್ಲೂ ನಾನು ನಿನ್ನ ಕೈ ಹಿಡಿದು ಮುನ್ನಡೆಸುತ್ತೇನೆ. ಪರಿಸ್ಥಿತಿಗಳು ನಮ್ಮನ್ನು ದೂರ ಮಾಡಲು ಪ್ರಯತ್ನಿಸಿದರೂ, ನನ್ನ ಹೃದಯ ಯಾವಾಗಲೂ ನಿನ್ನನ್ನೇ ಆರಿಸಿಕೊಳ್ಳುತ್ತದೆ... ಮತ್ತು ಇಡೀ ಜಗತ್ತೇ ನಿನಗೆ ಎದುರಾಗಿ ನಿಂತರೂ, ನಾನು ನಿನ್ನ ಪಕ್ಕದಲ್ಲೇ ನಿಲ್ಲುತ್ತೇನೆ, ಎಲ್ಲದರ ನಡುವೆಯೂ ನಿನ್ನನ್ನೇ ಆರಿಸಿಕೊಳ್ಳುತ್ತೇನೆ&rdquo; ಎಂದು ವಿಜಯಲಕ್ಷ್ಮೀ ದರ್ಶನ್&zwnj; ಅವರು ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;2024 ರಲ್ಲಿ ದುಬೈನಲ್ಲಿ ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು. ಇವರಿಬ್ಬರು ಉಂಗುರ ಬದಲಾಯಿಸಿಕೊಂಡಿದ್ದರು, ಡ್ಯಾನ್ಸ್&zwnj; ಮಾಡಿದ್ದರು. ಈ ವಿಡಿಯೋ ವೈರಲ್&zwnj; ಆಗಿತ್ತು. ಅದಾದ ಬಳಿಕವೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್&zwnj; ಜೈಲು ಸೇರಿದರು.&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/sandalwood/actor-darshan-thoogudeepa-wife-vijayalakshmi-post-on-23rd-wedding-anniversary-rt1pzn6"/>
        </item>
        <item>
            <title><![CDATA[Amruthadhaare Serial: ಗೌತಮ್‌ಗೆ ಬೆಣ್ಣೆ ಹಚ್ಚಿದವ್ರೇ ಚಾಕು ಇರಿದ್ರು; ಯಾರನ್ನೂ ನಂಬಬಾರದಪ್ಪ..!]]></title>
            <link>https://kannada.asianetnews.com/gallery/tv-talk/amruthadhaare-kannada-serial-episode-update-jayadev-knows-about-gowtham-daughter-5hmogrw</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-episode-update-jayadev-knows-about-gowtham-daughter-5hmogrw</guid>
            <pubDate>Tue, 19 May 2026 12:22:39 +0530</pubDate>
            <description><![CDATA[&lt;p&gt;Amruthadhaare Kannada Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್&zwnj; ಮಗಳು ಸಿಗಬೇಕು ಎನ್ನುವಷ್ಟರಲ್ಲಿ ಜಯದೇವ್&zwnj; ಎಂಟ್ರಿಯಾಗಿದೆ. ದಿಯಾ ಮನೆಯಲ್ಲಿ ಮನೆ ಕೆಲಸ ಮಾಡುತ್ತಿರುವ ಅವನು ಗೌತಮ್&zwnj; ಎದುರು ಮಾತ್ರ ಸೋಲಲು ರೆಡಿ ಇಲ್ಲ. ಈಗ ಬೇರೆ ಕಥೆ ಶುರುವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzfs1j56b0gnq2xbkbkatx2,imgname-new-project---2026-05-19t120447.660-1779173197381.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Kannada Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್&zwnj; ಮಗಳು ಸಿಗಬೇಕು ಎನ್ನುವಷ್ಟರಲ್ಲಿ ಜಯದೇವ್&zwnj; ಎಂಟ್ರಿಯಾಗಿದೆ. ದಿಯಾ ಮನೆಯಲ್ಲಿ ಮನೆ ಕೆಲಸ ಮಾಡುತ್ತಿರುವ ಅವನು ಗೌತಮ್&zwnj; ಎದುರು ಮಾತ್ರ ಸೋಲಲು ರೆಡಿ ಇಲ್ಲ. ಈಗ ಬೇರೆ ಕಥೆ ಶುರುವಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಗೌತಮ್&zwnj; ಹಾಗೂ ಭೂಮಿಕಾಳ ಮಗಳನ್ನು ಜಯದೇವ್&zwnj; ಕಿಡ್ನ್ಯಾಪ್&zwnj; ಮಾಡಿ ಕಾಡಿನಲ್ಲಿ ಬಿಸಾಕಿದ್ದನು. ಈಗ ಜಯದೇವ್&zwnj;ಗೆ ಯಾವ ಆಸ್ತಿಯೂ ಇಲ್ಲ, ನೆಲೆಯೂ ಇಲ್ಲ. ಹೀಗಾಗಿ ಅವನು ದಿಯಾ ಮನೆಯಲ್ಲಿ ಜೀತದಾಳಿನ ಥರ ಬಿದ್ದಿದ್ದಾನೆ. ಅಲ್ಲಿ ಲಕ್ಷ್ಮೀಕಾಂತ್&zwnj; ಮಾವ, ಪಾರ್ಥ ಬಂದು ಹೇಳಿದರೂ ಕೂಡ ಅವನು ಮಾತ್ರ ಅಲ್ಲಿಯೇ ಇರ್ತೀನಿ ಎಂದು ಹೇಳಿದ್ದನು.&lt;/p&gt;&lt;img&gt;&lt;p&gt;ಅಖಿಲಾಂಡೇಶ್ವರಿ ಈಗ ಗೌತಮ್&zwnj;ಗೆ ಫೋನ್&zwnj; ಮಾಡಿ, ಮಗಳು ಎಲ್ಲಿದ್ದಾಳೆ ಎಂದು ಹೇಳುವ ಪ್ರಯತ್ನ ಮಾಡಿದ್ದಳು. ಆದರೆ ಆಗ ಗೌತಮ್&zwnj; ಫೋನ್&zwnj; ಬ್ಯುಸಿ ಬರುತ್ತಿತ್ತು. ಹೀಗಾಗಿ ಲಕ್ಷ್ಮೀಕಾಂತ್&zwnj; ಮಾವ ಫೋನ್&zwnj; ರಿಸೀವ್&zwnj; ಮಾಡಿ, ಅಡ್ರೆಸ್&zwnj; ಬರೆದಿಟ್ಟುಕೊಂಡಿದ್ದಾನೆ. ಇದನ್ನು ಆ ಆಫೀಸ್&zwnj;ನಲ್ಲಿರುವವರೊಬ್ಬರು ನೋಡಿ, ಜಯದೇವ್&zwnj;ಗೆ ವಿಷಯ ತಿಳಿಸಿದ್ದಾರೆ. ಜಯದೇವ್&zwnj; ಮುಂದೆ ಏನು ಮಾಡಲಿದ್ದಾನೆ ಎಂದು ಕಾದು ನೋಡಬೇಕಿದೆ.&lt;/p&gt;&lt;img&gt;&lt;p&gt;ಜಯದೇವ್&zwnj;ಗೆ ಮಾತ್ರ ಬುದ್ಧಿ ಬರೋದಿಲ್ಲ. ಗೌತಮ್&zwnj; ಮಗಳ ವಿಷಯ ಗೊತ್ತಾದಬಳಿಕ ಅವನು ಏನಾದರೊಂದು ತೊಂದರೆ ಕೊಟ್ಟೇ ಕೊಡುತ್ತಾನೆ. ಮಗಳ ಕಾಪಾಡುವಾಗ ಗೌತಮ್&zwnj; ಜೀವಕ್ಕೆ ಸಮಸ್ಯೆ ಬರಬಹುದು. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಎಲ್ಲವೂ ಚೆನ್ನಾಗಿದೆ, ಮಗಳು ಸಿಗುತ್ತಾಳೆ ಎನ್ನುವಾಗಲೇ ಈ ರೀತಿ ಆಗಿರೋದು ವೀಕ್ಷಕರಿಗೆ ಬೇಸರ ತಂದಿದೆ.&lt;/p&gt;&lt;img&gt;&lt;ul&gt; &lt;li&gt;ಅಲ್ಲ ಕಣೋ, ಜೆಡಿಗೆ ಎರಡು ಏಟು ತಿಂದ್ರೂ ಬುದ್ದಿ ಬರ್ಲಿಲ್ವ?&lt;/li&gt; &lt;li&gt;ಜೆಡಿಯನ್ನು ಜೇಡಿಮಣ್ಣಲ್ಲಿ ಹಾಕಬೇಕು&lt;/li&gt; &lt;li&gt;ಯಾಕಿಷ್ಟು ಎಳಿತಾ ಇದೀರಾ? ಮತ್ತೆ ಜೆಡಿಯಿಂದ ನಮ್ ಭೂಮಿ ಗೌತಮ್&zwnj;ಗೆ ತೊಂದರೆ ಶುರುವಾಗಿದೆ&lt;/li&gt; &lt;li&gt;ಜೆಡಿ ಮಣ್ಣಿಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಕ್ಯಾರೆಕ್ಟರ್ ಇವಂದು....&lt;/li&gt; &lt;li&gt;ಈ ಜೆಡಿಯನ್ನು ಮಣ್ಣಿಗೆ ಹಾಕಿ ಮುಚ್ಚಬೇಕು&lt;/li&gt; &lt;li&gt;ಇವ್ನು ಬುದ್ದಿ ಬಿಡಲ್ಲ, ಇವ್ನ್ ಹೆಂಡ್ತಿನೇ ಸರಿ ಇವ್ನಿಗೆ&lt;/li&gt; &lt;li&gt;ಸೀರಿಯಲ್ ಮುಗಿಸೋದೆ ಬೆಟರ್ ಈ ಜೇಡಿದು ಮತ್ತೆ ಆ ಕಿತ್ತೊಗಿರೊ ಡೈಲಾಗು ಆಟಿಟ್ಯೂಡ್ ನೋಡೋ ಕರ್ಮ ನಮಿಗ್ ಬೇಡ ರೀ ಸ್ವಾಮಿ&lt;/li&gt;&lt;/ul&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-episode-update-jayadev-knows-about-gowtham-daughter-5hmogrw"/>
        </item>
        <item>
            <title><![CDATA[ನ್ಯಾಚುರಲ್ ಬ್ಯೂಟಿ ಕೀರ್ತಿ ಸುರೇಶ್‌ಗೆ 'ಸರ್ಜರಿ ಬಾಡಿ' ಎಂದು ಟೀಕೆ; ವಿಡಿಯೋ ತೋರಿಸಿ ತಿರುಗೇಟು ಕೊಟ್ಟ ನಟಿ!]]></title>
            <link>https://kannada.asianetnews.com/gallery/cine-world/keerthy-suresh-slams-surgery-rumors-reveals-10-kg-weight-loss-journey-sat-wevxmvh</link>
            <guid isPermaLink="true">https://kannada.asianetnews.com/gallery/cine-world/keerthy-suresh-slams-surgery-rumors-reveals-10-kg-weight-loss-journey-sat-wevxmvh</guid>
            <pubDate>Tue, 19 May 2026 10:22:09 +0530</pubDate>
            <description><![CDATA[&lt;p&gt;ನಟಿ ಕೀರ್ತಿ ಸುರೇಶ್ ಅವರು 9 ತಿಂಗಳ ಕಠಿಣ ಪರಿಶ್ರಮದಿಂದ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆದರೆ, ಸರ್ಜರಿ ಮಾಡಿಸಿಕೊಂಡು ಸಣ್ಣಗಾಗಿದ್ದಾರೆ ಎಂಬ ಸುಳ್ಳು ಸುದ್ದಿಯಿಂದ ಬೇಸರಗೊಂಡಿದ್ದಾರೆ. ಇದೀಗ, ಯೋಗ ಮತ್ತು ವರ್ಕೌಟ್ ಮೂಲಕವೇ ಈ ಫಿಟ್ನೆಸ್ ಸಾಧಿಸಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krz5zwmwcbmsd5c6pgz0pn9t,imgname-keerthy-suresh-fitness-video-1779162935964.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಕೀರ್ತಿ ಸುರೇಶ್ ಅವರು 9 ತಿಂಗಳ ಕಠಿಣ ಪರಿಶ್ರಮದಿಂದ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆದರೆ, ಸರ್ಜರಿ ಮಾಡಿಸಿಕೊಂಡು ಸಣ್ಣಗಾಗಿದ್ದಾರೆ ಎಂಬ ಸುಳ್ಳು ಸುದ್ದಿಯಿಂದ ಬೇಸರಗೊಂಡಿದ್ದಾರೆ. ಇದೀಗ, ಯೋಗ ಮತ್ತು ವರ್ಕೌಟ್ ಮೂಲಕವೇ ಈ ಫಿಟ್ನೆಸ್ ಸಾಧಿಸಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಅವರು, '9 ತಿಂಗಳು ಕಷ್ಟಪಟ್ಟು ವರ್ಕೌಟ್ ಮಾಡಿ 10 ಕೆಜಿ ತೂಕ ಇಳಿಸಿಕೊಂಡಿದ್ದೆ. ಆದರೆ, ಇದನ್ನ ನೋಡಿದ ಕೆಲವರು ನಾನು ಸರ್ಜರಿ ಮಾಡಿಸಿಕೊಂಡು ಸಣ್ಣ ಆದೆ ಅಂತ ಸುದ್ದಿ ಹಬ್ಬಿಸಿದರು. ಇದು ನನಗೆ ತುಂಬಾ ನೋವು ಕೊಡ್ತು' ಎಂದು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪ್ರಿಯದರ್ಶನ್ ನಿರ್ದೇಶನದ ಮೋಹನ್&zwnj;ಲಾಲ್ ನಟನೆಯ 'ಗೀತಾಂಜಲಿ' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಕೀರ್ತಿ, ಇಂದು ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಫಿಟ್ನೆಸ್ ಹಾಗೂ ಆರೋಗ್ಯದ ಬಗ್ಗೆ ಹಂಚಿಕೊಂಡ ಮಾತುಗಳು ಚರ್ಚೆಗೆ ಗ್ರಾಸವಾಗಿವೆ.&lt;/p&gt;&lt;img&gt;&lt;p&gt;'ಇವತ್ತು ನನ್ನನ್ನು ನಾನು ನೋಡಿಕೊಳ್ಳುವ ರೀತಿ ಬಗ್ಗೆ ನನಗೆ ಹೆಮ್ಮೆ ಇದೆ. ಆದರೂ ಜನ ನನ್ನ ಬಗ್ಗೆ ಮಾತಾಡೋದನ್ನ ನಿಲ್ಲಿಸಲ್ಲ. ನೀವು ದಪ್ಪಗಿದ್ದರೆ ಸಣ್ಣ ಆಗಿ ಅಂತಾರೆ, ಸಣ್ಣಗಿದ್ದರೆ ದಪ್ಪ ಆಗಿ ಅಂತಾರೆ. ಈ ಪ್ರಪಂಚ ಹೇಗೆ ಕೆಲಸ ಮಾಡುತ್ತೆ ಅಂತ ನನಗೆ ಕೆಲವೊಮ್ಮೆ ಆಶ್ಚರ್ಯ ಆಗುತ್ತೆ' ಎಂದು ಕೀರ್ತಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಯೋಗ ಮಾಡಿದ್ದರಿಂದ ತಮಗೆ ಒಳ್ಳೆ ಮನಸ್ಥಿತಿ ಮತ್ತು ಆತ್ಮವಿಶ್ವಾಸ ಬಂದಿದೆ, ಜೊತೆಗೆ ತಮ್ಮ ದೇಹವನ್ನು ಇನ್ನಷ್ಟು ಪ್ರೀತಿಸುವುದನ್ನು ಯೋಗ ಕಲಿಸಿದೆ ಎಂದು ಕೀರ್ತಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನನಗೆ ಜಿಮ್ ಮಾಡುವುದು ಕಷ್ಟವೇನಲ್ಲ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾಡಬೇಕು ಎಂಬುದು ತಮಗೆ ಗೊತ್ತಿರಲಿಲ್ಲ, ಈಗ ಅದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದೂ ಹೇಳಿದ್ದಾರೆ. ಈ ಎಲ್ಲ ವಿಚಾರಗಳನ್ನು ಹೇಳಿಕೊಳ್ಳಲು ಕೀರ್ತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ವರ್ಕೌಟ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೀರ್ತಿ ಅವರ ಈ ಪೋಸ್ಟ್&zwnj;ಗೆ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಇನ್ನು, ಜೆ.ಕೆ. ಚಂದ್ರು ನಿರ್ದೇಶನದ 'ರಿವಾಲ್ವರ್ ರೀಟಾ' ಕೀರ್ತಿ ನಟನೆಯ ಕೊನೆಯ ಸಿನಿಮಾ. ಈ ವರ್ಷ ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಅವರ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Keerthy Suresh (@keerthysureshofficial)&lt;/p&gt;]]></content:encoded>
            <category>news-entertainment</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cine-world/keerthy-suresh-slams-surgery-rumors-reveals-10-kg-weight-loss-journey-sat-wevxmvh"/>
        </item>
        <item>
            <title><![CDATA[Karna Serial: ಅಬ್ಬಬ್ಬಾ...ಕರ್ಣ, ನಿಧಿ ಮದುವೆ ಆಯ್ತು! ಕರ್ಣನ ಮೇಲೆ ಕೆರಳಿ ಕೆಂಡವಾದ ವೀಕ್ಷಕರು!]]></title>
            <link>https://kannada.asianetnews.com/gallery/tv-talk/karna-kannada-serial-episode-update-finally-karna-and-nidhi-married-zleqtv1</link>
            <guid isPermaLink="true">https://kannada.asianetnews.com/gallery/tv-talk/karna-kannada-serial-episode-update-finally-karna-and-nidhi-married-zleqtv1</guid>
            <pubDate>Tue, 19 May 2026 08:36:39 +0530</pubDate>
            <description><![CDATA[&lt;p&gt;Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ ಮದುವೆ ಆಗ್ತಾರೋ ಇಲ್ಲವೋ ಎನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಈಗ ಇವರಿಬ್ಬರು ಮದುವೆ ಆಗಿದ್ದಾರೆ. ವಾಹಿನಿಯು ಹೊಸ ಪ್ರೋಮೋ ರಿಲೀಸ್&zwnj; ಮಾಡಿದೆ. ಹಾಗಾದರೆ ಮುಂದೆ ಏನಾಗುವುದು? ಈ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krz303k06xngwj3n6mnb1kz3,imgname-new-project---2026-05-19t083012.531-1779159797344.jpg" type="image/jpeg" height="390" width="690"/>
            <content:encoded><![CDATA[&lt;p&gt;Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ ಮದುವೆ ಆಗ್ತಾರೋ ಇಲ್ಲವೋ ಎನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಈಗ ಇವರಿಬ್ಬರು ಮದುವೆ ಆಗಿದ್ದಾರೆ. ವಾಹಿನಿಯು ಹೊಸ ಪ್ರೋಮೋ ರಿಲೀಸ್&zwnj; ಮಾಡಿದೆ. ಹಾಗಾದರೆ ಮುಂದೆ ಏನಾಗುವುದು? ಈ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹೌದು, ಎಲ್ಲರಿಗೂ ಎಲ್ಲ ವಿಷಯ ಗೊತ್ತಾಗಿತ್ತು. ಈಗ ನಿಧಿ ಮನೆ ಬಿಟ್ಟು ಹೋಗಿದ್ದಳು. ಕರ್ಣ ಅವಳನ್ನು ಕರೆದುಕೊಂಡು ಬರಲು ಹೋಗಿದ್ದನು. ಈಗ ಅವಳು ಸಿಕ್ಕಿದ್ದಾಳೆ. ತನ್ನ ಪ್ರೀತಿಗೆ ಮೋಸ ಮಾಡಬೇಡಿ ಎಂದು ಅವನು, ಅವಳನ್ನು ಗೋಗರೆದಿದ್ದಾನೆ. ಆಮೇಲೆ ನಿಧಿ ಬರಲು ಒಪ್ಪಿದ್ದಾಳೆ.&lt;/p&gt;&lt;img&gt;&lt;p&gt;ಈಗ ಎಲ್ಲರ ಮುಂದೆ ನಿಧಿ, ಕರ್ಣನ ಮದುವೆ ಆಗಿದೆ. ಆದರೆ ನಿತ್ಯಾ ಗತಿ ಏನು ಎಂಬ ಪ್ರಶ್ನೆ ಶುರು ಆಗಿದೆ. ನಿತ್ಯಾಗೆ ಈಗ ತೇಜಸ್&zwnj; ಇಲ್ಲ, ಒಂದು ಮಗುವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಅವಳು ಏನು ಮಾಡುತ್ತಾಳೆ ಎಂಬ ಪ್ರಶ್ನೆ ಎದುರಾಗಿದೆ.&lt;/p&gt;&lt;img&gt;&lt;p&gt;ಇದೆಲ್ಲ ಕನಸಾ ಎಂಬ ಪ್ರಶ್ನೆ ಕಾಡುತ್ತಿದೆ. ಕರ್ಣ, ನಿಧಿ ಮದುವೆ ಆಯ್ತು ಎಂದು ಖುಷಿಯಿಂದ ಬಾಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಮುಂದೆ ಒಂದಿಷ್ಟು ಟ್ವಿಸ್ಟ್&zwnj;ಗಳು ಬರೋದಂತೂ ಸಹಜ. ಇನ್ನು ವೀಕ್ಷಕರಂತೂ ಇಲ್ಲಿ ಬೇರೆ ಟ್ವಿಸ್ಟ್&zwnj; ಇದೆ ಎಂದು ಊಹಿಸಿದ್ದಾರೆ.&lt;/p&gt;&lt;img&gt;&lt;p&gt;ಇಷ್ಟುದಿನ ಬೇರೆಯವರ ಖುಷಿಗೋಸ್ಕರ ತ್ಯಾಗ ಮಾಡ್ತಿದ್ದ ಕರ್ಣ ಸ್ವಾರ್ಥಿ ಎಂದು ಕೆಲ ವೀಕ್ಷಕರು ಸೋಶಿಯಲ್&zwnj; ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ತನ್ನ ಪ್ರೀತಿಗೋಸ್ಕರ ನಿತ್ಯಾಳನ್ನು ಈಗ ದೂರ ಮಾಡಿದ, ಅವಳ ಸತ್ಯ ಎಲ್ಲರಿಗೂ ಗೊತ್ತಾಗೋ ಹಾಗೆ ಮಾಡಿದ ಎಂದೆಲ್ಲ ಕಾಮೆಂಟ್&zwnj; ಮಾಡುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/karna-kannada-serial-episode-update-finally-karna-and-nidhi-married-zleqtv1"/>
        </item>
        <item>
            <title><![CDATA[ತ್ಯಾಗದಲ್ಲಿ ಕರ್ಣನನ್ನೂ ಮೀರಿಸಿದ ನಿಧಿ; ಅಕ್ಕ ನಿತ್ಯಾಳ ಸೆಕೆಂಡ್ ಹ್ಯಾಂಡ್ ಪ್ರೀತಿಗೆ ಕರ್ಣ ಬಲಿಯಾಗ್ತಾನಾ?]]></title>
            <link>https://kannada.asianetnews.com/gallery/tv-talk/karna-kannada-serial-nidhi-leaves-wedding-mantapa-sacrifice-for-sister-nithya-love-sat-cvxnql4</link>
            <guid isPermaLink="true">https://kannada.asianetnews.com/gallery/tv-talk/karna-kannada-serial-nidhi-leaves-wedding-mantapa-sacrifice-for-sister-nithya-love-sat-cvxnql4</guid>
            <pubDate>Mon, 18 May 2026 21:53:22 +0530</pubDate>
            <description><![CDATA[ಕರ್ಣ ಮತ್ತು ನಿಧಿ ಮದುವೆಗೆ ಸಿದ್ಧರಾಗುತ್ತಾರೆ. ಆದರೆ, ತನ್ನ ಅಕ್ಕ ನಿತ್ಯಾಗೂ ಕರ್ಣನ ಮೇಲೆ ಪ್ರೀತಿ ಇದೆ ಎಂದು ತಿಳಿದ ನಿಧಿ, ಅಕ್ಕನ ಪ್ರೀತಿಗಾಗಿ ತನ್ನ ಪ್ರೇಮವನ್ನು ತ್ಯಾಗ ಮಾಡಿ ಮದುವೆ ಮಂಟಪದಿಂದ ಎದ್ದು ಹೋಗುತ್ತಾಳೆ. ಈ ತ್ಯಾಗದಿಂದಾಗಿ ಕರ್ಣನ ಮದುವೆಯಲ್ಲಿ ಮತ್ತೊಂದು ದೊಡ್ಡ ತಿರುವು ಉಂಟಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krxx6ztcmb5bzq2n8dqts4s7,imgname-karna-serial-nidhi-escape-1779120176970.jpg" type="image/jpeg" height="390" width="690"/>
            <content:encoded><![CDATA[ಕರ್ಣ ಮತ್ತು ನಿಧಿ ಮದುವೆಗೆ ಸಿದ್ಧರಾಗುತ್ತಾರೆ. ಆದರೆ, ತನ್ನ ಅಕ್ಕ ನಿತ್ಯಾಗೂ ಕರ್ಣನ ಮೇಲೆ ಪ್ರೀತಿ ಇದೆ ಎಂದು ತಿಳಿದ ನಿಧಿ, ಅಕ್ಕನ ಪ್ರೀತಿಗಾಗಿ ತನ್ನ ಪ್ರೇಮವನ್ನು ತ್ಯಾಗ ಮಾಡಿ ಮದುವೆ ಮಂಟಪದಿಂದ ಎದ್ದು ಹೋಗುತ್ತಾಳೆ. ಈ ತ್ಯಾಗದಿಂದಾಗಿ ಕರ್ಣನ ಮದುವೆಯಲ್ಲಿ ಮತ್ತೊಂದು ದೊಡ್ಡ ತಿರುವು ಉಂಟಾಗಿದೆ.&lt;img&gt;&lt;p&gt;ಕರ್ಣ ಧಾರಾವಾಹಿಯಲ್ಲಿ ಪ್ರತಿಬಾರಿಯೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಇನ್ನೇನು ಧಾರಾವಾಹಿಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎನ್ನುವಾಗ ಅಲ್ಲಿ ವಿಲನ್ ಎಂಟ್ರಿ ಕೊಟ್ಟಿರುತ್ತಾರೆ. ಇನ್ನು ವಿಲನ್&zwnj;ಗಳ ಎಲ್ಲ ಕುತಂತ್ರವೂ ವಿಫಲವಾಗಿ ಶುಭ ಕಾರ್ಯ ನಡೆದೇ ಬಿಡ್ತು ಅನ್ನೋವಾಗ ಇದೀಗ ಧಾರಾವಾಹಿ ನಾಯಕ-ನಾಯಕಿಯೇ ಮಾಯ ಆಗಿಬಿಡುತ್ತಾರೆ. ಅಂತಹದೇ ಟ್ವಿಸ್ಟ್ ಇದೀಗ ಕರ್ಣ ಧಾರಾವಾಹಿಯಲ್ಲೂ ಮರುಕಳಿಸಿದೆ.&lt;/p&gt;&lt;img&gt;&lt;p&gt;ತ್ಯಾಗಮಯಿ ಕರ್ಣನ ಹೆಸರನ್ನ ಈ ಕರ್ಣ ಧಾರಾವಾಹಿ ನಾಯಕನಿಗೂ ಇಡಲಾಗಿದೆ. ಹೆಸರಿಗೆ ತಕ್ಕಂತೆ ಇಲ್ಲಿ ನಾಯಕನೂ ತ್ಯಾಗಮಯಿ ಆಗಿದ್ದರೂ ತನ್ನ ಪ್ರೀತಿಯನ್ನು ಮಾತ್ರ ತ್ಯಾಗ ಮಾಡುವುದಕ್ಕೆ ಸಿದ್ಧನಾಗಿರಲಿಲ್ಲ. ಹೀಗಾಗಿ, ಕರ್ಣ ತಾನು ಪ್ರೀತಿಸಿದ ಹುಡುಗಿ ನಿಧಿಯನ್ನು ಮದುವೆ ಮಾಡುವುದಕ್ಕೆ ಮಾಡದ ಕಸರತ್ತುಗಳು ಇಲ್ಲವೇ ಇಲ್ಲ ಎನ್ನಬಹುದು.&lt;/p&gt;&lt;img&gt;&lt;p&gt;ಈ ಹಿಂದೆ ನಿಧಿಯ ಅಕ್ಕ ನಿತ್ಯಾ ಪ್ರೀತಿಸಿದ ಹುಡುಗ ತೇಜಸ್ ಆಕೆಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದನು. ತಾನೇ ಮದುವೆ ಆಗುವ ಹುಡುಗಿ ಎಂದು ನಿತ್ಯಾಳನ್ನು ದೈಹಿಕವಾಗಿ ಬಳಸಿಕೊಂಡು, ಮದುವೆ ಹಿಂದಿನ ದಿನ ಕುತಂತ್ರಕ್ಕೆ ಬಲಿಯಾಗಿ ನಿತ್ಯಾಳನ್ನು ಬಿಟ್ಟು ಓಡಿ ಹೋಗಿದ್ದನು. ಆದರೆ, ನಿತ್ಯಾಳ ಮದುವೆ ನಿಂತು ಹೋಗುವುದನ್ನು ತಡೆಯಲು ಸ್ವತಃ ಕರ್ಣ ತಾನು ಪ್ರೀತಿ ಮಾಡಿದ ಹುಡುಗಿಯ ಅಕ್ಕನನ್ನು ಮದುವೆ ಮಾಡಿಕೊಳ್ಳುತ್ತಾನೆ.&lt;/p&gt;&lt;img&gt;&lt;p&gt;ಆದರೆ, ತೇಜಸ್&zwnj;ನ ಪ್ರೀತಿಯ ಫಲ ನಿತ್ಯಾಳ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ನಿತ್ಯಾ ಪ್ರಗ್ನೆಂಟ್ ಆಗಿದ್ದು, ತೇಜಸ್&zwnj;ನನ್ನು ಸೇರಲು ಹಾತೊರೆಯುತ್ತಾಳೆ. ಆಗ ನಿತ್ಯಾಳನ್ನು ಆಕೆಯ ಪ್ರೇಮಿ ತೇಜಸ್&zwnj;ನೊಂದಿಗೆ ಒಂದು ಮಾಡುವ ಕೆಲಸಕ್ಕೆ ಕರ್ಣ ಹಾಗೂ ನಿಧಿ ಕೈ ಹಾಕಿದರೂ ಅದು ಫಲ ಕೊಡಲಿಲ್ಲ. ನಿತ್ಯಾಳ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಬಿಟ್ಟು ಹೋಗುತ್ತಾನೆ.&lt;/p&gt;&lt;img&gt;&lt;p&gt;ಇತ್ತ ನಿತ್ಯಾಳ ತಂಗಿ ನಿಧಿ ಸ್ವತಃ ತನ್ನ ಮದುವೆಯಾದ ಗಂಡ ಕರ್ಣನನ್ನು ಪ್ರೀತಿ ಮಾಡುತ್ತಿರುವ ವಿಚಾರ ತಿಳಿಯುತ್ತದೆ. ಆಗ ತನ್ನ ಮಗುವಿಗೆ ಕರ್ಣ ಅಪ್ಪನಲ್ಲ, ನಾವಿಬ್ಬರೂ ಮದುವೆ ಮಾಡಿಕೊಂಡಿಲ್ಲ ಎಂಬ ಸತ್ಯವನ್ನು ಮನೆಯವರಿಗೆ ಹೇಳುತ್ತಾಳೆ. ನಂತರ ತಂಗಿಯನ್ನು ಬೇರೆಯವರಿಗೆ ಮದುವೆ ಮಾಡಿಕೊಡುವುದನ್ನ ತಡೆದು ಕರ್ಣನ ಜೊತೆ ಮದುವೆ ಮಾಡಿಸಲು ಮುಂದಾಗುತ್ತಾಳೆ.&lt;/p&gt;&lt;img&gt;&lt;p&gt;ಇದರ ನಡುವೆ ನಿಧಿಗೆ ತನ್ನ ಅಕ್ಕನ ಬಾಳು ಹೀಗಾಯಿತಲ್ಲಾ ಎಂಬ ನೋವು ಒಂದೆಡೆಯಾದರೂ, ತಾನು ಪ್ರೀತಿಸಿದವನ ಮದುವೆ ಆಗುತ್ತಿದ್ದೇನೆ ಎಂಬ ನೆಮ್ಮದಿ ಒಂದು ಕಡೆಗಿತ್ತು. ಆದರೆ, ನಿತ್ಯಾಳ ಬಗ್ಗೆ ಕರ್ಣ ಕಾಳಜಿ ವಹಿಸುವುದು ಹಾಗೂ ಮಹಿಳೆಯರ ಬಗ್ಗೆ ಅವರಿಗಿರುವ ಗೌರವ ನೋಡಿ ನಿತ್ಯಾಳಿಗೆ ಕರ್ಣನ ಮೇಲೆ ಪ್ರೀತಿ ಹುಟ್ಟುತ್ತದೆ.&lt;/p&gt;&lt;img&gt;&lt;p&gt;ಅತ್ತ ತೇಜಸ್&zwnj;ನ ಪ್ರೀತಿಯ ಕುರುಹು ಹೊಟ್ಟೆಯಲ್ಲಿ ಬೆಳೆಯುತ್ತಿರುವಾಗ ಇತ್ತ ಕರ್ಣನ ಮೇಲೆ ನಿತ್ಯಾಗೆ ಲವ್ ಆಗುತ್ತದೆ. ಇದನ್ನು ನಿತ್ಯಾ ಕೂಡ ಒಂದೆಡೆ ಹೇಳಿಕೊಂಡಿದ್ದು, ಅದನ್ನು ವಿಡಿಯೋ ಮಾಡಿಕೊಂಡಿರುವ ಕುತಂತ್ರಿಗಳು ನಿಧಿಗೆ ತೋರಿಸಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಅಕ್ಕ ನಿತ್ಯಾಳ ಸೆಕೆಂಡ್ ಹ್ಯಾಂಡ್ ಲವ್&zwnj;ಗಾಗಿ ತನ್ನ ಪ್ರೇಮಿ ಕರ್ಣನನ್ನೇ ತ್ಯಾಗ ಮಾಡಲು ಮುಂದಾಗಿದ್ದಾಳೆ.ಇಷ್ಟು ದಿನ ಕರ್ಣ ಪ್ರೀತಿ ಉಳಿಸಿಕೊಳ್ಳಲು ಮಾಡಿದ ಕಸರತ್ತನ್ನು ಲೆಕ್ಕಿಸದೇ, ನಿಧಿ ಇದೀಗ ಅಕ್ಕನಿಗಾಗಿ ತ್ಯಾಗ ಮಾಡಿ ಮದುವೆ ಮಂಟಪದಿಂದ ಎದ್ದು ಹೋಗಿದ್ದಾಳೆ. ಮದುವೆಯಲ್ಲಿ ಮತ್ತೇನು ಟ್ವಿಸ್ಟ್ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news-entertainment</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/karna-kannada-serial-nidhi-leaves-wedding-mantapa-sacrifice-for-sister-nithya-love-sat-cvxnql4"/>
        </item>
        <item>
            <title><![CDATA[ಮರಡೋನಾ ಬಂದಾಗ ಜನ ನನ್ನ ಮೈಮುಟ್ಟಿದ್ರು, ಬ್ಲೇಡ್‌ನಲ್ಲೂ ಹಲ್ಲೆ ಮಾಡಿದ್ರು: ನಟಿ ರಂಜಿನಿ ಶಾಕಿಂಗ್ ಹೇಳಿಕೆ]]></title>
            <link>https://kannada.asianetnews.com/entertainment/ranjini-haridas-recalls-being-groped-and-attacked-with-a-blade-at-public-events-gvd/articleshow-1y0tgrl</link>
            <guid isPermaLink="true">https://kannada.asianetnews.com/entertainment/ranjini-haridas-recalls-being-groped-and-attacked-with-a-blade-at-public-events-gvd/articleshow-1y0tgrl</guid>
            <pubDate>Mon, 18 May 2026 21:52:38 +0530</pubDate>
            <description><![CDATA[&lt;p&gt;ನಟಿ ಮತ್ತು ನಿರೂಪಕಿ ರಂಜಿನಿ ಹರಿದಾಸ್, ದಂತಕಥೆ ಮರಡೋನಾ ಕಾರ್ಯಕ್ರಮದ ವೇಳೆ ಜನಸಂದಣಿಯಲ್ಲಿ ಎದುರಿಸಿದ ಕಿರುಕುಳದ ಘಟನೆ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxxbtgp088s8z2axmp77g1j,imgname-hjh-1779120335382.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಮತ್ತು ನಿರೂಪಕಿ ರಂಜಿನಿ ಹರಿದಾಸ್ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಫುಟ್ಬಾಲ್ ದಂತಕಥೆ ಮರಡೋನಾ ಕೇರಳಕ್ಕೆ ಬಂದಿದ್ದಾಗ ಜನಸಂದಣಿಯಲ್ಲಿ ಒಬ್ಬ ವ್ಯಕ್ತಿ ತನ್ನ ಮೈ ಮುಟ್ಟಿದ್ದಾಗ, ತಾನು ಪಂಜರದಲ್ಲಿ ಸಿಕ್ಕಿಬಿದ್ದ ಪ್ರಾಣಿಯಂತೆ ಭಾವಿಸಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಅಂದು ಕ್ಯಾಮೆರಾಗಳಿದ್ದಿದ್ದರೆ ಸತ್ಯ ಜನರಿಗೆ ತಿಳಿಯುತ್ತಿತ್ತು ಎಂದೂ ಅವರು ಹೇಳಿದ್ದಾರೆ.&lt;/p&gt;&lt;p&gt;ದೊಡ್ಡ ಜನಸಂದಣಿ ಸೇರುವ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಹೋದಾಗ ತನಗಾಗುವ ಕಷ್ಟಗಳ ಬಗ್ಗೆ ನಟಿ ರಂಜಿನಿ ಹರಿದಾಸ್ ಮನಬಿಚ್ಚಿ ಮಾತನಾಡಿದ್ದಾರೆ. ಫುಟ್ಬಾಲ್ ದಂತಕಥೆ ಮರಡೋನಾ ಕೇರಳಕ್ಕೆ ಬಂದಿದ್ದಾಗ, ಜನಸಂದಣಿಯಲ್ಲಿ ಒಬ್ಬ ವ್ಯಕ್ತಿ ತನ್ನ ಮೈ ಮುಟ್ಟಿದ್ದ. ಆಗ ತಾನು ಅವನನ್ನು ತಳ್ಳಿಹಾಕಿದ್ದೆ. ಆ ಜನರ ಮಧ್ಯೆ ನಾನು ಪಂಜರದಲ್ಲಿ ಸಿಕ್ಕಿಹಾಕಿಕೊಂಡ ಪ್ರಾಣಿಯಂತೆ ಆಗಿಬಿಟ್ಟಿದ್ದೆ ಎಂದು ರಂಜಿನಿ ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಆನ್&zwnj;ಲೈನ್ ಮೀಡಿಯಾ, ಕ್ಯಾಮೆರಾಗಳು ಇದ್ದಿದ್ದರೆ, ನನ್ನದೇ ಸರಿ ಅಂತ ಜನರಿಗೆ ಗೊತ್ತಾಗುತ್ತಿತ್ತು ಅಂತಾನೂ ರಂಜಿನಿ ಹೇಳಿದ್ದಾರೆ. ಇತ್ತೀಚೆಗೆ ಬಾಸಿಲ್ ಜೋಸೆಫ್-ಟೊವಿನೊ ಥಾಮಸ್ ಅವರ 'ಅತಿರಡಿ' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ನಡೆದ ಗಲಾಟೆಯ ಬಗ್ಗೆ ಪ್ರಸ್ತಾಪಿಸುತ್ತಾ ರಂಜಿನಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ರಂಜಿನಿ ಹರಿದಾಸ್ ಹೇಳಿದ್ದೇನು?&lt;/strong&gt;&lt;/h2&gt;&lt;p&gt;&quot;ಹಿಂದೊಮ್ಮೆ ಮರಡೋನಾ ಬಂದಿದ್ದಾಗ, ನಾನು ಕಣ್ಣೂರಿನಲ್ಲಿ ಒಂದು ಕಾರ್ಯಕ್ರಮ ನಿರೂಪಣೆ ಮಾಡೋಕೆ ಹೋಗಿದ್ದೆ. ಮರಡೋನಾ ಕೇರಳಕ್ಕೆ ಬರ್ತಿರೋದು ಅದೇ ಮೊದಲು. ನಾನೂ, ಮರಡೋನಾನೂ ಫ್ರೆಂಡ್ಸ್ ಅಂತ ಜನ ಅಂದುಕೊಂಡಿದ್ದರು. ಆದರೆ ನಾನು ಮರಡೋನಾರನ್ನು ಮೊದಲ ಬಾರಿಗೆ ನೋಡಿದ್ದೇ ಆ ವೇದಿಕೆ ಮೇಲೆ. ಸ್ಟೇಜ್&zwnj;ನಿಂದ ಇಳಿದ ಮೇಲೆ ನಾನು ಅವರನ್ನು ನೋಡಿಯೇ ಇಲ್ಲ. ಆ ಸಮಯದಲ್ಲಿ ಅರ್ಜೆಂಟೀನಾದ ಪತ್ರಿಕೆಗಳಲ್ಲಿ ನಾನು ಅವರ ಗರ್ಲ್&zwnj;ಫ್ರೆಂಡ್ ಅಂತಲ್ಲಾ ಸುದ್ದಿ ಬಂದಿತ್ತು. ಸ್ಟೇಜ್ ಮೇಲೆ ಸಮಯ ಚೆನ್ನಾಗಿ ಕಳೆಯಿತು. ಫನ್ ಆಗಿತ್ತು. ಯಾವುದೇ ಸ್ಟಾರ್ ಇರಲಿ, ಕೊನೆಗೆ ಅವರು ಹೋಗ್ತಾರೆ, ಉಳಿಯೋದು ನಾನು ಮಾತ್ರ.&lt;/p&gt;&lt;p&gt;ಮರಡೋನಾ ಶೋ ಮುಗಿಸಿ ನಾನು ಹೊರಗೆ ಬಂದಾಗ, ಅವರ ಮೇಲಿದ್ದ ಅಭಿಮಾನವೆಲ್ಲಾ ನನ್ನ ಕಡೆ ತಿರುಗಿತು. ಆದರೆ ದುರದೃಷ್ಟವಶಾತ್, ಅಲ್ಲಿ ಸೆಕ್ಯುರಿಟಿ ವ್ಯವಸ್ಥೆ ತುಂಬಾನೇ ಕೆಟ್ಟದಾಗಿತ್ತು. ನನ್ನನ್ನು ಹೊರಗೆ ಕಳಿಸಿದರೂ, ಅಲ್ಲಿ ಗಾಡಿ ಇರಲಿಲ್ಲ. ಮರಡೋನಾರನ್ನು ಮುಟ್ಟೋಕೆ ಆಗದವರೆಲ್ಲಾ ನನ್ನನ್ನು ಮುಟ್ಟೋಕೆ ಬಂದ್ರು. ದುರದೃಷ್ಟ ಅಂದ್ರೆ ನಾನು ಹೆಣ್ಣಾಗಿಬಿಟ್ಟೆ. ಮೈ ಮುಟ್ಟಿದರೆ ರಿಯಾಕ್ಟ್ ಮಾಡುವ ಹೆಣ್ಣು ನಾನು. ಇದನ್ನ ನಾನು ಜೀವನದಲ್ಲೇ ಮರೆಯಲ್ಲ. ಸ್ಟೇಡಿಯಂನಿಂದ ಹೊರಗೆ ಬರುವಾಗ ನನ್ನ ಸುತ್ತ ಐದು ಜನ ಈವೆಂಟ್ ಮ್ಯಾನೇಜ್&zwnj;ಮೆಂಟ್&zwnj;ನವರು ಇದ್ರು. ಅವರ ಸುತ್ತ ಒಂದು 200-300 ಜನರ ಗುಂಪು ಇತ್ತು.&lt;/p&gt;&lt;p&gt;ಪಂಜರದಲ್ಲಿ ಸಿಕ್ಕಿಬಿದ್ದ ಪ್ರಾಣಿಯಂತೆ ಫೀಲ್ ಆಯ್ತು. ಹೊರಗೆ ಬರಲು ಆಗುತ್ತಿರಲಿಲ್ಲ. ಅದರ ಮಧ್ಯೆ ಒಬ್ಬ ನನ್ನ ಮೈಮೇಲೆ ಕೈ ಹಾಕೋಕೆ ಪ್ರಯತ್ನಿಸಿದ. ನಾನು ಅವನ ಕೈ ಹಿಡಿದುಕೊಂಡೆ. ಆಮೇಲೆ ರಂಜಿನಿಯಿಂದ ಒಂದು ಸಣ್ಣ ಶೋನೇ ಇತ್ತು. ಆದರೆ ಅದಕ್ಕೆ ನಾನು ಬೈಗುಳ ಕೇಳಬೇಕಾಯ್ತು. ಅಂದೂ ಅಷ್ಟೇ, ಇಂದೂ ಅಷ್ಟೇ, ಅನುಮತಿ ಇಲ್ಲದೆ ನನ್ನ ಮೈ ಮುಟ್ಟಿದರೆ ನಾನು ರಿಯಾಕ್ಟ್ ಮಾಡ್ತೀನಿ. ನಾನು ಅವನನ್ನು ಹಿಡಿದು ತಳ್ಳಿ, ಜೋರಾಗಿ ಕಿರುಚಿದೆ. ಅಲ್ಲಿದ್ದ ಪೊಲೀಸರನ್ನು 'ನೀವೇನು ಪೊಲೀಸ್? ನನ್ನನ್ನು ರಕ್ಷಿಸೋದು ನಿಮ್ಮ ಕೆಲಸ ಅಲ್ವಾ?' ಅಂತ ಕೇಳಿದೆ.&lt;/p&gt;&lt;p&gt;ಜನರನ್ನು ತಳ್ಳಿಕೊಂಡು ಅಲ್ಲಿಂದ ಓಡಿ, ಯಾವುದೋ ಒಂದು ಗಾಡಿಗೆ ಕೈ ಅಡ್ಡ ಹಾಕಿ ನಿಲ್ಲಿಸಿದೆ. ಅದು ಒಂದು ಮೀಡಿಯಾ ಗಾಡಿ. ಅದರಲ್ಲಿ ಹತ್ತಿ ನಾನು ಅಲ್ಲಿಂದ ಹೋದೆ. ಮರುದಿನ ಪೇಪರ್&zwnj;ನಲ್ಲಿ ಬಂದಿದ್ದು 'ರಂಜಿನಿ ಹರಿದಾಸ್ ಕಣ್ಣೂರಿನಲ್ಲಿ ಬೈದ್ರು' ಅಂತ. ಅಂದು ಕ್ಯಾಮೆರಾ ಫೋನ್ ಇರಲಿಲ್ಲ, ಆನ್&zwnj;ಲೈನ್ ಮೀಡಿಯಾನೂ ಇರಲಿಲ್ಲ. 'ಅತಿರಡಿ' ಫೆಸ್ಟ್&zwnj;ನ ಘಟನೆ ನಡೆದ ಮೇಲೆ ನನಗನ್ನಿಸಿತು, ಅಂದು ಕ್ಯಾಮೆರಾ ಇದ್ದಿದ್ದರೆ ಸತ್ಯ ಹೊರಗೆ ಬರುತ್ತಿತ್ತು ಅಂತ. ಅಂದು ಬೈದವರ ಮುಂದಿನ ತಲೆಮಾರು ಇಂದು ನಾನು ಮಾಡಿದ್ದು ಸರಿ ಅಂತ ಹೇಳ್ತಿದ್ದಾರೆ. ಇನ್ನೊಮ್ಮೆ ಒಂದು ಉದ್ಘಾಟನೆಗೆ ಹೋಗಿದ್ದಾಗ, ಜನರ ಮಧ್ಯೆಯಿಂದ ಒಬ್ಬ ಬ್ಲೇಡ್&zwnj;ನಿಂದ ಕಟ್ ಮಾಡಿದ.&lt;/p&gt;&lt;p&gt;ಅದು ನನ್ನ ಪಕ್ಕ ನಿಂತಿದ್ದ ಪೊಲೀಸ್ ಅಧಿಕಾರಿಯ ಕೈಗೆ ತಗುಲಿತು. ರಕ್ತ ಸುರಿಯುತ್ತಿತ್ತು. ಕಾರ್ಯಕ್ರಮಗಳಿಗೆ ಹೋದಾಗ ಕೆಲವರು ಕಚ್ಚುತ್ತಾರೆ, ಪರಚುತ್ತಾರೆ. ಯಾಕೆ ಹೀಗೆ ಮಾಡ್ತಾರೆ ಅಂತ ನನಗೆ ಗೊತ್ತಿಲ್ಲ. ಹೀಗೆಲ್ಲಾ ಆದಾಗಲೇ ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಶುರು ಮಾಡಿದ್ದು. ಆಗಲೇ 'ಅಹಂಕಾರಿ' ಅನ್ನೋ ಹೆಸರು ಬಂದಿದ್ದು. ನಮ್ಮ ಸುರಕ್ಷತೆ ನಾವೇ ನೋಡಿಕೊಳ್ಳಬೇಕು. ಅದನ್ನು ಬೇರೆಯವರ ತಲೆಗೆ ಕಟ್ಟಬಾರದು. ನಾನು ಯಾಕೆ ವಿಕ್ಟಿಮ್ ಆಗಬೇಕು? ಕೆಲವೊಮ್ಮೆ ಸುಮ್ಮನೆ ಬೈಗುಳ ಕೇಳಬೇಕಾಗುತ್ತೆ. ಹತ್ತು ಸಾವಿರ ಒಳ್ಳೆಯ ಜನರಿದ್ದರೆ, 10-15 ಕೆಟ್ಟ ಜನ ಇರುತ್ತಾರೆ. ನಾನು ಹೇಳಿದ್ದು ಒಂದೆರಡು ಘಟನೆ ಅಷ್ಟೇ. ನನ್ನ 25 ವರ್ಷಗಳ ಅನುಭವದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ಅಂದು ಈ ಕ್ಯಾಮೆರಾಗಳು ಇದ್ದಿದ್ದರೆ, ನನಗೆ ಬಂದ ಕೆಟ್ಟ ಹೆಸರು ಉಲ್ಟಾ ಆಗಿರುತ್ತಿತ್ತು ಎಂದರು.&quot;&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ranjini-haridas-recalls-being-groped-and-attacked-with-a-blade-at-public-events-gvd/articleshow-1y0tgrl"/>
        </item>
    </channel>
</rss>
