<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 18 Sep 2026 20:30:00 +0530</lastBuildDate>
        <atom:link href="https://kannada.asianetnews.com/rss/news-entertainment" rel="self" type="application/rss+xml"/>
        <item>
            <title><![CDATA['ಪುರುಷರಿಗೂ ಪಿರಿಯಡ್ಸ್ ಬರಲಿ ಎಂದು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ': ಶ್ರುತಿ ಹಾಸನ್ ಬೋಲ್ಡ್ ಮಾತು]]></title>
            <link>https://kannada.asianetnews.com/entertainment/tamil-actress-shruti-haasan-opens-up-about-painful-periods-while-shooting-films-gvd/articleshow-i6ptcor</link>
            <guid isPermaLink="true">https://kannada.asianetnews.com/entertainment/tamil-actress-shruti-haasan-opens-up-about-painful-periods-while-shooting-films-gvd/articleshow-i6ptcor</guid>
            <pubDate>Fri, 18 Sep 2026 20:29:54 +0530</pubDate>
            <description><![CDATA[&lt;p&gt;ನಟಿ ಶ್ರುತಿ ಹಾಸನ್ ಸೋಹಾ ಅಲಿ ಖಾನ್ ಅವರ ಪಾಡ್&zwnj;ಕಾಸ್ಟ್&zwnj;ನಲ್ಲಿ ಪಿರಿಯಡ್ಸ್, PCOS ಹಾಗೂ ಸಿನಿಮಾ ಶೂಟಿಂಗ್ ವೇಳೆ ಎದುರಿಸಿದ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪುರುಷರಿಗೂ ಪಿರಿಯಡ್ಸ್ ಬರುವಂತಾಗಲಿ ಎಂದು ಸಾವಿರ ಬಾರಿ ಪ್ರಾರ್ಥಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tgfcnxw350214zaz86vnx5,imgname-nkbk-1789743575741.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಶ್ರುತಿ ಹಾಸನ್ ತಮ್ಮ ವೈಯಕ್ತಿಕ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಹೆಸರುವಾಸಿ. ಇದೀಗ ನಟಿ ಸೋಹಾ ಅಲಿ ಖಾನ್ ನಡೆಸಿಕೊಡುವ ಪಾಡ್&zwnj;ಕಾಸ್ಟ್&zwnj;ನಲ್ಲಿ ಭಾಗವಹಿಸಿ, ಶೂಟಿಂಗ್ ಸಮಯದಲ್ಲಿ ಎದುರಿಸುವ ಪಿರಿಯಡ್ಸ್ ನೋವು ಹಾಗೂ ಅದನ್ನು ನಿರ್ದೇಶಕರೊಂದಿಗೆ ಹಂಚಿಕೊಳ್ಳಲು ಆರಂಭಿಸಿದ ಅನುಭವದ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ, ಪುರುಷರಿಗೂ ಪಿರಿಯಡ್ಸ್ ಬರುವಂತಾಗಲಿ ಎಂದು ತಾವು ಸಾವಿರ ಬಾರಿ ಪ್ರಾರ್ಥಿಸಿದ್ದಾಗಿ ಹೇಳಿರುವುದು ಗಮನ ಸೆಳೆದಿದೆ.&lt;/p&gt;&lt;p&gt;&lt;strong&gt;'ಪುರುಷರಿಗೂ ಪಿರಿಯಡ್ಸ್ ಬರಲಿ ಎಂದು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ'&lt;/strong&gt;&lt;/p&gt;&lt;p&gt;ಸೋಹಾ ಅಲಿ ಖಾನ್ ಜೊತೆಗಿನ ಸಂಭಾಷಣೆಯಲ್ಲಿ ಹಾರ್ಮೋನ್ಸ್ ಹಾಗೂ ಪಿರಿಯಡ್ಸ್ ಕುರಿತು ಸಮಾಜದಲ್ಲಿರುವ ಹಲವು ತಪ್ಪು ಕಲ್ಪನೆಗಳ ಬಗ್ಗೆ ಶ್ರುತಿ ಹಾಸನ್ ಮಾತನಾಡಿದ್ದಾರೆ. ಇದಕ್ಕೆ ಒಂದೇ ಒಂದು ಪರಿಹಾರ ಇದೆ. ಪುರುಷರಿಗೂ ಪಿರಿಯಡ್ಸ್ ಬರಲಿ ಎಂದು ನಾನು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ. ಆಗ ನಮ್ಮ ಕೆಲಸದ ಒಪ್ಪಂದದಲ್ಲೇ 'ಪಿರಿಯಡ್ ರಜೆ' ಎಂಬುದನ್ನು ಸೇರಿಸಬಹುದು ಎಂದು ಶ್ರುತಿ ಹಾಸನ್ ಹೇಳಿದ್ದಾರೆ.&lt;/p&gt;&lt;p&gt;ಇದಕ್ಕೆ ಒಪ್ಪಿಕೊಂಡ ಸೋಹಾ ಅಲಿ ಖಾನ್, ಪುರುಷರಿಗೂ ಪಿರಿಯಡ್ಸ್ ಬಂದರೆ ಆ ತಿಂಗಳು ಯಾರಿಗೆ ಹೆಚ್ಚು ರಕ್ತಸ್ರಾವವಾಯಿತು, ಯಾರ ಟ್ಯಾಂಪೂನ್ ದೊಡ್ಡದಿದೆ ಎಂಬುದರ ಬಗ್ಗೆಯೂ ಅವರು ಪರಸ್ಪರ ಸ್ಪರ್ಧೆ ಮಾಡಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಪಿರಿಯಡ್ಸ್ ಬಗ್ಗೆ ನಿರ್ದೇಶಕರಿಗೆ ಹೇಳಲು ಆರಂಭಿಸಿದ್ದೇಕೆ?&lt;/strong&gt;&lt;/p&gt;&lt;p&gt;ಶ್ರುತಿ ಹಾಸನ್ ಅವರಿಗೆ PCOS (Polycystic Ovary Syndrome) ಸಮಸ್ಯೆ ಇರುವುದರಿಂದ ಪಿರಿಯಡ್ಸ್ ವೇಳೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ. ಆದರೆ ವೃತ್ತಿಜೀವನದ ಆರಂಭದಲ್ಲಿ ಶೂಟಿಂಗ್ ಸೆಟ್&zwnj;ನಲ್ಲಿ ಈ ವಿಚಾರವನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಶ್ರುತಿ ಹೇಳಿದ್ದಾರೆ. ಇದು ಕೇವಲ ಮುಜುಗರ ಅಥವಾ ನಿಷೇಧದ ವಿಚಾರವಾಗಿರಲಿಲ್ಲ.&lt;/p&gt;&lt;p&gt;ಕೆಲವರು ಈ ವಿಷಯದ ಬಗ್ಗೆ ಮಾತನಾಡಲು ಕೂಡ ಇಷ್ಟಪಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಇದರಿಂದಾಗಿ ಕೆಲ ದಿನಗಳಲ್ಲಿ ತಾವು ಯಾಕೆ ವಿಭಿನ್ನವಾಗಿ ಕಾಣುತ್ತಿದ್ದೇನೆ ಅಥವಾ ತಮ್ಮ ಎನರ್ಜಿ ಯಾಕೆ ಬದಲಾಗಿದೆ ಎಂಬುದನ್ನು ನಿರ್ದೇಶಕರು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.&lt;/p&gt;&lt;p&gt;&lt;strong&gt;'ನನ್ನ ಪರಿಸ್ಥಿತಿ ಗೊತ್ತಿದ್ದರೆ ಇನ್ನಷ್ಟು ಸಹಕಾರಿಯಾಗುತ್ತಿತ್ತು'&lt;/strong&gt;&lt;/p&gt;&lt;p&gt;ತಮ್ಮ ಅನುಭವವನ್ನು ವಿವರಿಸಿರುವ ಶ್ರುತಿ ಹಾಸನ್, ನಾನು ಕೆಲಸ ಮಾಡುತ್ತೇನೆ. ಆದರೆ ನಾನು ಏನನ್ನು ಎದುರಿಸುತ್ತಿದ್ದೇನೆ ಎಂಬುದು ನಿಮಗೆ ತಿಳಿದಿದ್ದರೆ, ಕೆಲಸ ಇನ್ನಷ್ಟು ಸಹಕಾರದಿಂದ ನಡೆಯುತ್ತಿತ್ತು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಒಮ್ಮೆ ತಮ್ಮ ಸಹನಟರೊಬ್ಬರು ಮೊಣಕಾಲಿನ ಶಸ್ತ್ರಚಿಕಿತ್ಸೆಯಿಂದ ನೋವು ಅನುಭವಿಸುತ್ತಿರುವುದಾಗಿ ಹೇಳಿದಾಗ, ಚಿತ್ರತಂಡ ಕೂಡ ಅವರ ಪರಿಸ್ಥಿತಿಗೆ ಅನುಗುಣವಾಗಿ ಶೂಟಿಂಗ್&zwnj;ನಲ್ಲಿ ಬದಲಾವಣೆ ಮಾಡಿಕೊಂಡಿತ್ತು ಎಂದು ಶ್ರುತಿ ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದೇನೆ ಎಂದಾಗ, 'ಸರಿ, ಹಾಗಾದರೆ ಅದಕ್ಕೆ ಅನುಗುಣವಾಗಿ ಕೆಲಸ ಮಾಡೋಣ' ಎಂದು ತಂಡ ಹೇಳಿತು. ಆಗ ನಾನು ಕೂಡ 'ನನಗೆ ಪಿರಿಯಡ್ಸ್ ಆಗುತ್ತಿದೆ' ಎಂದು ಹೇಳಿದೆ. ಹೀಗೆ ನಾನು ಮೊದಲ ಬಾರಿಗೆ ನಿರ್ದೇಶಕರಿಗೆ ಈ ವಿಷಯ ಹೇಳಲು ಆರಂಭಿಸಿದೆ ಎಂದು ಶ್ರುತಿ ಹೇಳಿದ್ದಾರೆ.&lt;/p&gt;&lt;p&gt;ಮೊದಲ ಬಾರಿಗೆ ಈ ವಿಚಾರವನ್ನು ನಿರ್ದೇಶಕರೊಬ್ಬರಿಗೆ ಹೇಳಿದಾಗ, ಅವರಿಗೂ ಮಗಳಿದ್ದು, ಆಕೆಯೂ ತೀವ್ರವಾದ ಪಿರಿಯಡ್ಸ್ ಕ್ರಾಂಪ್ಸ್ ಅನುಭವಿಸುತ್ತಾಳೆ ಎಂದು ನಿರ್ದೇಶಕರು ಹೇಳಿದ್ದಾಗಿ ಶ್ರುತಿ ತಿಳಿಸಿದ್ದಾರೆ. ಆ ಕ್ಷಣದಿಂದಲೇ ಪರಿಸ್ಥಿತಿಯನ್ನೇ ನೋಡುವ ರೀತಿಯಲ್ಲಿ ಬದಲಾವಣೆ ಆಯಿತು ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಶ್ರುತಿ ಹಾಸನ್ ಅವರ ಮುಂದಿನ ಸಿನಿಮಾಗಳು&lt;/strong&gt;&lt;/h2&gt;&lt;p&gt;ಶ್ರುತಿ ಹಾಸನ್ ಕೊನೆಯದಾಗಿ 2025ರಲ್ಲಿ ಲೋಕೇಶ್ ಕನಗರಾಜ್ ನಿರ್ದೇಶನದ 'ಕೂಲಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ರಜನಿಕಾಂತ್ ನಾಯಕತ್ವದ ಈ ಮಲ್ಟಿಸ್ಟಾರರ್ ಸಿನಿಮಾದಲ್ಲಿ ನಾಗಾರ್ಜುನ ಅಕ್ಕಿನೇನಿ, ಸೌಬಿನ್ ಶಾಹಿರ್, ಉಪೇಂದ್ರ, ಸತ್ಯರಾಜ್ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆಮಿರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಪೂಜಾ ಹೆಗ್ಡೆ ವಿಶೇಷ ಹಾಡಿನಲ್ಲಿ ಮಿಂಚಿದ್ದರು.&lt;/p&gt;&lt;p&gt;ಸಿನಿಮಾ ವಿಶ್ವಾದ್ಯಂತ ಸುಮಾರು ₹518 ಕೋಟಿ ಗಳಿಸಿದರೂ, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಶ್ರುತಿ ಹಾಸನ್ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್&zwnj;ಗಳಿವೆ. ಬುಚ್ಚಿ ಬಾಬು ಸನಾ ನಿರ್ದೇಶನದ 'ಪೆದ್ದಿ' ಸಿನಿಮಾದ 'ಹೆಲ್ಲಲ್ಲಲ್ಲೋ' ಹಾಡಿನಲ್ಲಿ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಜೊತೆ ಶ್ರುತಿ ಕಾಣಿಸಿಕೊಂಡಿದ್ದರು.&lt;/p&gt;&lt;p&gt;ಇದರ ಜೊತೆಗೆ ಮೈಸ್ಕಿನ್ ನಿರ್ದೇಶನದ ತಮಿಳು ಸಿನಿಮಾ 'ಟ್ರೈನ್' ಕೂಡ ಅವರ ಮುಂದಿನ ಚಿತ್ರಗಳ ಪಟ್ಟಿಯಲ್ಲಿದೆ. ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಪವನ್ ಸದಿನೇನಿ ನಿರ್ದೇಶನದ 'ಆಕಾಶಮಲ್ಲೋ ಒಕ ತಾರ' ಸಿನಿಮಾದಲ್ಲೂ ಶ್ರುತಿ ನಟಿಸುತ್ತಿದ್ದಾರೆ. ದುಲ್ಕರ್ ಸಲ್ಮಾನ್ ಹಾಗೂ ಸಾತ್ವಿಕಾ ವೀರವಲ್ಲಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/tamil-actress-shruti-haasan-opens-up-about-painful-periods-while-shooting-films-gvd/articleshow-i6ptcor"/>
        </item>
        <item>
            <title><![CDATA['ಕುಷ್ಠರೋಗ'ವೇ ಈಕೆಗೆ ವರವಾಯ್ತು.. ಸ್ಟಾರ್ ನಟಿಯಾಗಿ ಮೆರೆದ ಈ ಸುಂದರಿ ಕನ್ನಡದಲ್ಲೂ ನಟಿಸಿದ್ದರು!]]></title>
            <link>https://kannada.asianetnews.com/news-entertainment/dimple-kapadia-from-battling-leprosy-during-her-childhood-to-becoming-a-bollywood-star-story-revealed-here/articleshow-zxmz477</link>
            <guid isPermaLink="true">https://kannada.asianetnews.com/news-entertainment/dimple-kapadia-from-battling-leprosy-during-her-childhood-to-becoming-a-bollywood-star-story-revealed-here/articleshow-zxmz477</guid>
            <pubDate>Fri, 18 Sep 2026 20:16:16 +0530</pubDate>
            <description><![CDATA[&lt;p&gt;ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಈ ನಟಿಯ ವೈಯಕ್ತಿಕ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ಬಾಲಿವುಡ್ ಸೂಪರ್&zwnj;ಸ್ಟಾರ್ ಒಬ್ಬರೊಂದಿಗೆ ವಿವಾಹವಾದ ಅವರು, ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರು. ಆದರೆ ಈಗ ಮತ್ತೆ ಸಿನಿಮಾಗೆ ಮರಳಿದ್ದಾರೆ. ಯಾರು ಈಕೆ ಗೊತ್ತಾಯ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tf5jzak8p2h66vqytvb8gd,imgname-dimple-kapadia-1789742205930.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;15ನೇ ವಯಸ್ಸಿನಲ್ಲೇ ಸ್ಟಾರ್ ಪಟ್ಟ: ಮದುವೆ ಬಳಿಕ ಸಿನಿಮಾ ನಟನೆ ಬಿಟ್ಟ ನಟಿ, ಮತ್ತೆ ಕಮ್&zwnj;ಬ್ಯಾಕ್!&lt;/strong&gt;&lt;/p&gt;&lt;p&gt;ಕೆಲವರ ಸಿನಿಮಾ ಪಯಣವೇ ಒಂದು ರೋಚಕ ಕಥೆಯಂತೆ ಇರುತ್ತದೆ. ಅದಕ್ಕೆ ಸೂಕ್ತ ಉದಾಹರಣೆ ಹಿರಿಯ ನಟಿ ಡಿಂಪಲ್ ಕಪಾಡಿಯಾ. ಕೇವಲ 15ನೇ ವಯಸ್ಸಿನಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಮೊದಲ ಸಿನಿಮಾದಲ್ಲೇ ದೇಶಾದ್ಯಂತ ಸಂಚಲನ ಮೂಡಿಸಿದ ನಟಿ ಅವರು. ಈಕೆ ಕನ್ನಡದಲ್ಲಿ ನಟ ರವಿಚಂದ್ರನ್ ನಾಯಕತ್ವದ 'ಯುಗಪುರುಷ' ಚಿತ್ರದಲ್ಲೂ ನಟಿಸಿದ್ದಾರೆ.&lt;/p&gt;&lt;p&gt;1973ರಲ್ಲಿ ರಾಜ್ ಕಪೂರ್ ನಿರ್ದೇಶನದ &lsquo;ಬಾಬಿ&rsquo; ಸಿನಿಮಾ ಬಿಡುಗಡೆಯಾಯಿತು. ಈ ಚಿತ್ರದ ಮೂಲಕ ಡಿಂಪಲ್ ಕಪಾಡಿಯಾ (Dimple Kapadia) ಮತ್ತು ರಿಷಿ ಕಪೂರ್ ಹೊಸ ತಲೆಮಾರಿನ ಜನಪ್ರಿಯ ಜೋಡಿಯಾಗಿ ಪ್ರೇಕ್ಷಕರ ಮನ ಗೆದ್ದರು. ವಿಶೇಷವೆಂದರೆ, ಡಿಂಪಲ್ ಅವರಿಗೆ ಸ್ಕ್ರೀನ್ ಟೆಸ್ಟ್ ನೀಡುವಾಗ ಕೇವಲ 14 ವರ್ಷ. ಅವರ ಸೌಂದರ್ಯ, ಸಹಜ ಅಭಿನಯ ಮತ್ತು ವ್ಯಕ್ತಿತ್ವ ರಾಜ್ ಕಪೂರ್ ಅವರ ಗಮನ ಸೆಳೆದಿದ್ದು, ಅಂತಿಮವಾಗಿ &lsquo;ಬಾಬಿ&rsquo; ನಾಯಕಿಯಾಗಿ ಆಯ್ಕೆಯಾದರು.&lt;/p&gt;&lt;p&gt;&lsquo;ಬಾಬಿ&rsquo; ಬಾಕ್ಸ್ ಆಫೀಸ್&zwnj;ನಲ್ಲಿ ಯಶಸ್ಸು ಕಾಣುತ್ತಿದ್ದಂತೆ ಡಿಂಪಲ್ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು. ಮೊದಲ ಸಿನಿಮಾದಲ್ಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಅವರು, ಬಾಲಿವುಡ್&zwnj;ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದರು.&lt;/p&gt;&lt;h2&gt;ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಡಿಂಪಲ್ ಮದುವೆ!&lt;/h2&gt;&lt;p&gt;ಆದರೆ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಡಿಂಪಲ್ ಅವರ ವೈಯಕ್ತಿಕ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ಬಾಲಿವುಡ್ ಸೂಪರ್&zwnj;ಸ್ಟಾರ್ ರಾಜೇಶ್ ಖನ್ನಾ ಅವರೊಂದಿಗೆ ವಿವಾಹವಾದ ಅವರು, ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರು. ದಂಪತಿಗೆ ಟ್ವಿಂಕಲ್ ಖನ್ನಾ ಮತ್ತು ರಿಂಕೆ ಖನ್ನಾ ಎಂಬ ಇಬ್ಬರು ಪುತ್ರಿಯರು ಜನಿಸಿದರು.&lt;/p&gt;&lt;p&gt;ಮದುವೆಯ ಬಳಿಕ ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಗಳಿಗೆ ಆದ್ಯತೆ ನೀಡಿದ ಡಿಂಪಲ್, ಸಿನಿಮಾಗಳಿಂದ ದೂರವಿದ್ದರು. ಈ ನಡುವೆ ರಾಜೇಶ್ ಖನ್ನಾ ಅವರ ವೃತ್ತಿಜೀವನದಲ್ಲೂ ಏರಿಳಿತಗಳು ಕಾಣಿಸಿಕೊಂಡವು. ಕ್ರಮೇಣ ದಾಂಪತ್ಯದಲ್ಲಿ ಬಿರುಕು ಮೂಡಿ, ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು.&lt;/p&gt;&lt;p&gt;ನಂತರ ಡಿಂಪಲ್ ಮತ್ತೆ ಬೆಳ್ಳಿತೆರೆಗೆ ಮರಳಲು ನಿರ್ಧರಿಸಿದರು. ಸುಮಾರು 25ನೇ ವಯಸ್ಸಿನಲ್ಲಿ &lsquo;ಸಾಗರ್&rsquo; ಚಿತ್ರದ ಮೂಲಕ ನಾಯಕಿಯಾಗಿ ಕಮ್&zwnj;ಬ್ಯಾಕ್ ಮಾಡಿದರು. ಮತ್ತೊಂದು ವಿಶೇಷವೆಂದರೆ, ಈ ಸಿನಿಮಾದಲ್ಲಿ ತಮ್ಮ ಮೊದಲ ಚಿತ್ರದ ನಾಯಕ ರಿಷಿ ಕಪೂರ್ ಅವರೊಂದಿಗೇ ಮತ್ತೆ ತೆರೆ ಹಂಚಿಕೊಂಡರು.&lt;/p&gt;&lt;p&gt;ಹೀಗೆ ಬಾಲನಟಿಯಾಗಿ ಅಲ್ಲ, ಕೇವಲ 15ನೇ ವಯಸ್ಸಿನಲ್ಲಿ ನಾಯಕಿಯಾಗಿ ಬಂದ ಡಿಂಪಲ್ ಕಪಾಡಿಯಾ ಅವರ ಸಿನಿಮಾ ಪಯಣ, ಖ್ಯಾತಿ, ವೈಯಕ್ತಿಕ ನಿರ್ಧಾರಗಳು ಮತ್ತು ಕಮ್&zwnj;ಬ್ಯಾಕ್&zwnj;ನಿಂದ ಕೂಡಿದ ವಿಭಿನ್ನ ಕಥೆಯಾಗಿ ಉಳಿದಿದೆ.&lt;/p&gt;&lt;h3&gt;ಆದರೆ.. ಕುಷ್ಠರೋಗವೇ ಈಕೆಗೆ ವರವಾಗಿದ್ದು ಹೇಗೆ? ಈ ರೋಚಕ ಸ್ಟೋರಿ ನೊಡಿ..&lt;/h3&gt;&lt;p&gt;ಹೌದು, ಬಾಲಿವುಡ್&zwnj;ನ ಹಿರಿಯ ನಟಿ ಡಿಂಪಲ್ ಕಪಾಡಿಯಾ ಅವರು ಬಾಲ್ಯದಲ್ಲಿ ಕುಷ್ಠರೋಗದಿಂದ (Leprosy) ಬಳಲುತ್ತಿದ್ದರು.ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ ಅವರು, ತಮಗೆ 12 ವರ್ಷ ವಯಸ್ಸಾಗಿದ್ದಾಗ ಮೊಣಕೈ ಭಾಗದಲ್ಲಿ ಕುಷ್ಠರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ತಿಳಿಸಿದ್ದಾರೆ. ಆ ಸಮಯದಲ್ಲಿ ಅವರ ಕುಟುಂಬಕ್ಕೆ ಆಪ್ತರಾಗಿದ್ದ ಪ್ರಸಿದ್ಧ ನಿರ್ದೇಶಕರೊಬ್ಬರು, ಈ ಕಾಯಿಲೆಯ ಕಾರಣದಿಂದ ಅವರನ್ನು ಶಾಲೆಯಿಂದ ಬಹಿಷ್ಕರಿಸುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆ ವಯಸ್ಸಿನಲ್ಲಿ ತಮಗೆ ಆ ಪದದ ಅರ್ಥವಾಗಲಿ ಅಥವಾ ಅದರ ಹಿಂದಿರುವ ಸಾಮಾಜಿಕ ಅಪಪ್ರಚಾರದ (Stigma) ಬಗ್ಗೆಯಾಗಲಿ ಯಾವುದೇ ಅರಿವಿರಲಿಲ್ಲ ಎಂದು ಡಿಂಪಲ್ ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಆದರೆ, ಈ ಕಾಯಿಲೆಯೇ ಅವರ ಸಿನಿಮಾ ರಂಗದ ಪ್ರವೇಶಕ್ಕೆ ಕಾರಣವಾಯಿತು ಎಂಬುದೂ ಅಷ್ಟೇ ಸತ್ಯ.. ಡಿಂಪಲ್ ಅವರ ತಂದೆ ಚುನ್ನಿಭಾಯ್ ಕಪಾಡಿಯಾ ಅವರು ಚಿತ್ರರಂಗದ ಪ್ರಮುಖರೊಂದಿಗೆ ಒಡನಾಟ ಹೊಂದಿದ್ದರು.&quot;ಒಬ್ಬ ಅತ್ಯಂತ ಸುಂದರ ಹುಡುಗಿ ಕುಷ್ಠರೋಗದಿಂದ ಬಳಲುತ್ತಿದ್ದಾಳೆ&quot; ಎಂಬ ವಿಷಯ ತಿಳಿದ ಖ್ಯಾತ ನಿರ್ದೇಶಕ ರಾಜ್ ಕಪೂರ್ ಅವರು ಡಿಂಪಲ್ ಅವರನ್ನು ಭೇಟಿಯಾಗಲು ಬಯಸಿದರು. ಈ ಭೇಟಿಯ ಬಳಿಕವೇ ರಾಜ್ ಕಪೂರ್ ಅವರು ಡಿಂಪಲ್ ಕಪಾಡಿಯಾ ಅವರನ್ನು ತಮ್ಮ ಐತಿಹಾಸಿಕ ಸೂಪರ್&zwnj;ಹಿಟ್ ಚಿತ್ರ 'ಬಾಬಿ' (1973) ಮೂಲಕ ಬಾಲಿವುಡ್&zwnj;ಗೆ ಪರಿಚಯಿಸಿದರು. ಅದೇ ಸಮಯದಲ್ಲಿ ನೀಡಿದ ಚಿಕಿತ್ಸೆಯ ನಂತರ ಅವರು ಈ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾದರು.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/dimple-kapadia-from-battling-leprosy-during-her-childhood-to-becoming-a-bollywood-star-story-revealed-here/articleshow-zxmz477"/>
        </item>
        <item>
            <title><![CDATA[Exclusive: 'ಎಲ್ಲಾ ಭಾಷೆಯನ್ನೂ ನನ್ನದೇ ಎನ್ನುತ್ತೇನೆ': ಬಹುಭಾಷಾ ಬಗ್ಗೆ ರಶ್ಮಿಕಾ ಓಪನ್ ಟಾಕ್]]></title>
            <link>https://kannada.asianetnews.com/entertainment/telugu-actress-rashmika-mandanna-opens-up-about-her-multilingual-cinema-journey-respecting-her-audiences-gvd/articleshow-r4l8kew</link>
            <guid isPermaLink="true">https://kannada.asianetnews.com/entertainment/telugu-actress-rashmika-mandanna-opens-up-about-her-multilingual-cinema-journey-respecting-her-audiences-gvd/articleshow-r4l8kew</guid>
            <pubDate>Fri, 18 Sep 2026 20:03:33 +0530</pubDate>
            <description><![CDATA[&lt;p&gt;ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಬಹುಭಾಷಾ ಸಿನಿಮಾ ಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ, ಭಾಷೆ ತಮ್ಮ ವೃತ್ತಿಜೀವನಕ್ಕೆ ಎಂದಿಗೂ ಅಡ್ಡಿಯಾಗಿಲ್ಲ ಎಂದು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2teyy6d2w4df28bgheb2a9h,imgname-jbjb-1789741988045.png" type="image/jpeg" height="390" width="690"/>
            <content:encoded><![CDATA[&lt;p&gt;ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಚಿತ್ರರಂಗದ ಬಹುಭಾಷಾ ನಟಿಯರಲ್ಲಿ ಒಬ್ಬರು. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಅವರು, ತಮ್ಮ ಈ ಬಹುಭಾಷಾ ಪಯಣ ಯಾವುದೇ ಪೂರ್ವಯೋಜನೆಯ ಫಲವಲ್ಲ, ಎಲ್ಲವೂ ಸಹಜವಾಗಿಯೇ ನಡೆದಿದ್ದು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನನ್ನ ಮಾತೃಭಾಷೆ ಕೊಡವ, ಆದರೆ...&rsquo;&lt;/strong&gt;&lt;/p&gt;&lt;p&gt;ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡಿರುವ ರಶ್ಮಿಕಾ, ತಾವು ಕೊಡವ ಸಮುದಾಯಕ್ಕೆ ಸೇರಿದವರು ಹಾಗೂ ಕೊಡವ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ತಮ್ಮ ಮಾತೃಭಾಷೆಗಾಗಿ ಪ್ರತ್ಯೇಕ ಚಿತ್ರರಂಗ ಇಲ್ಲದ ಕಾರಣ, ವೃತ್ತಿಜೀವನದಲ್ಲಿ ಭಾಷೆ ಎಂದಿಗೂ ತಮಗೆ ಅಡ್ಡಿಯಾಗಿಲ್ಲ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ನಾನು ಕೊಡವ ಸಮುದಾಯದವಳು, ಕೊಡವ ಮಾತನಾಡುತ್ತೇನೆ. ಆದರೆ ನನ್ನ ಮಾತೃಭಾಷೆಗಾಗಿ ಯಾವುದೇ ಚಿತ್ರರಂಗ ಇಲ್ಲ. ಹಾಗಾಗಿ ನನ್ನ ವೃತ್ತಿಜೀವನದಲ್ಲಿ ಭಾಷೆ ಎಂದಿಗೂ ಅಡ್ಡಿಯಾಗಿಲ್ಲ. ನಾನು ಎಲ್ಲಾ ಭಾಷೆಗಳನ್ನೂ ನನ್ನದೇ ಭಾಷೆಯಂತೆ ನೋಡುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನನ್ನ ಅಭಿಮಾನಿಗಳೇ ಮೊದಲು ಸಲಹೆ ನೀಡಿದ್ದರು&rsquo;&lt;/strong&gt;&lt;/p&gt;&lt;p&gt;ತೆಲುಗು ಹಾಗೂ ಹಿಂದಿ ಸಿನಿಮಾಗಳಿಗೆ ತಾವು ಹೇಗೆ ಎಂಟ್ರಿ ಪಡೆದುಕೊಂಡರು ಎಂಬುದನ್ನೂ ರಶ್ಮಿಕಾ ವಿವರಿಸಿದ್ದಾರೆ. ತಮ್ಮ ಅಭಿಮಾನಿಗಳೇ ಮೊದಲಿಗೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುವಂತೆ ಸಲಹೆ ನೀಡಿದ್ದರು ಎಂದು ಹೇಳಿದ್ದಾರೆ. ನನ್ನ ಅಭಿಮಾನಿಗಳನ್ನು ನಾನು ನನ್ನ ಕುಟುಂಬ ಎಂದು ಕರೆಯುತ್ತೇನೆ. ಅವರೇ ಮೊದಲು, &lsquo;ನೀವು ತೆಲುಗು ಸಿನಿಮಾ ಯಾಕೆ ಮಾಡಬಾರದು?&rsquo; ಎಂದು ಕೇಳಿದ್ದರು. ಹಿಂದಿಯ ವಿಚಾರದಲ್ಲೂ ಇದೇ ರೀತಿಯಾಯಿತು. ಹೀಗೆ ನನ್ನ ಸಿನಿಮಾ ಪಯಣ ಸಹಜವಾಗಿ ಬೆಳೆಯುತ್ತಾ ಹೋಯಿತು ಎಂದು ರಶ್ಮಿಕಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಭಾಷೆ ಗೊತ್ತಿರುವಷ್ಟು ಪ್ರೇಕ್ಷಕರಿಗೆ ಗೌರವ ನೀಡುತ್ತೇನೆ&rsquo;&lt;/strong&gt;&lt;/p&gt;&lt;p&gt;ವಿಭಿನ್ನ ಭಾಷೆಗಳಲ್ಲಿ ಮಾತನಾಡುವಾಗ ತಮ್ಮ ಉಚ್ಚಾರಣೆ ಬಗ್ಗೆ ಕೆಲವೊಮ್ಮೆ ಕೇಳಿಬರುವ ಪ್ರತಿಕ್ರಿಯೆಗಳ ಕುರಿತು ಮಾತನಾಡಿದ ರಶ್ಮಿಕಾ, ತಮಗೆ ಪ್ರಶ್ನೆ ಕೇಳುವ ಭಾಷೆಯಲ್ಲಿ ಉತ್ತರಿಸಲು ಸಾಧ್ಯವಾದರೆ ಅದೇ ಪ್ರೇಕ್ಷಕರಿಗೆ ತಾವು ನೀಡುವ ಗೌರವ ಎಂದು ಹೇಳಿದ್ದಾರೆ. ಯಾವ ಭಾಷೆಯಲ್ಲಿ ಪ್ರಶ್ನೆ ಕೇಳಲಾಗುತ್ತದೆಯೋ, ಆ ಭಾಷೆಯಲ್ಲಿ ಅದಕ್ಕೆ ಉತ್ತರಿಸಲು ನನಗೆ ಸಾಧ್ಯವಾಗುವವರೆಗೆ ಎಲ್ಲವೂ ಸರಿ. ವಿಶ್ವದ ವಿವಿಧ ಭಾಗಗಳಲ್ಲಿರುವ ನನ್ನ ಪ್ರೇಕ್ಷಕರಿಗೆ ನಾನು ನೀಡುವ ಗೌರವವೂ ಅದೇ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅನಗತ್ಯ ಮಾತುಗಳ ಬಗ್ಗೆ ಗಮನ ಕೊಡುವುದಿಲ್ಲ&rsquo;&lt;/strong&gt;&lt;/p&gt;&lt;p&gt;ತಮ್ಮ ಉಚ್ಚಾರಣೆ ಅಥವಾ ಭಾಷೆಯ ಬಗ್ಗೆ ನಡೆಯುವ ಅನಗತ್ಯ ಚರ್ಚೆಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ ಎಂದು ರಶ್ಮಿಕಾ ಸ್ಪಷ್ಟಪಡಿಸಿದ್ದಾರೆ. ನಟಿಯಾಗಿ ತಮ್ಮ ಕೆಲಸದ ಮೇಲೆ ಮಾತ್ರ ಗಮನ ಹರಿಸುವುದಾಗಿ ಹೇಳಿದ್ದಾರೆ. ನಟಿಯಾಗಿ ನನ್ನ ಕೆಲಸ ಸೆಟ್&zwnj;ನಲ್ಲಿ ಉತ್ತಮ ಕಥೆಯನ್ನು ಹೇಳುವುದು ಮತ್ತು ನನ್ನ ಕೆಲಸ ಮುಗಿಸಿ ವಾಪಸ್ ಬರುವುದು. ಪ್ರತಿಯೊಂದು ಸಿನಿಮಾದಲ್ಲೂ ನಮ್ಮಲ್ಲಿರುವ ಅತ್ಯುತ್ತಮವಾದುದನ್ನು ಒಟ್ಟುಗೂಡಿಸಿ ಏನಾದರೂ ಅದ್ಭುತವಾದದ್ದನ್ನು ಸೃಷ್ಟಿಸಬೇಕು ಎಂದು ನಾನು ನಂಬುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನನ್ನ ಕೆಲಸದ ಮೇಲೆ ಮಾತ್ರ ಗಮನ ಕೊಡುತ್ತೇನೆ&rsquo;&lt;/strong&gt;&lt;/h2&gt;&lt;p&gt;ಸಿನಿಮಾದ ಅಂತಿಮ ಫಲಿತಾಂಶ ಎನ್ನುವುದು ಸೆಟ್&zwnj;ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಶ್ರಮ ಹಾಗೂ ಶಕ್ತಿಯ ಒಟ್ಟಾರೆ ಫಲಿತಾಂಶ ಎಂದು ರಶ್ಮಿಕಾ ಅಭಿಪ್ರಾಯಪಟ್ಟಿದ್ದಾರೆ. ನಾನು ಯಾರ ಕೆಲಸದಲ್ಲೂ ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ. ನಟಿಯಾಗಿ ನನ್ನ ಅತ್ಯುತ್ತಮ ಅಭಿನಯ ನೀಡುವುದರ ಮೇಲೆ ಮಾತ್ರ ಗಮನ ಹರಿಸುತ್ತೇನೆ. ಕೊನೆಯಲ್ಲಿ ಸಿನಿಮಾದ ಫಲಿತಾಂಶ ಎನ್ನುವುದು ಎಲ್ಲರ ಶ್ರಮ ಮತ್ತು ಶಕ್ತಿ ಒಂದಾಗಿ ಮೂಡಿಬರುವ ಫಲ ಎಂದು ರಶ್ಮಿಕಾ ಹೇಳಿದ್ದಾರೆ.&lt;/p&gt;&lt;p&gt;ಇನ್ನು ಕನ್ನಡದಿಂದ ಆರಂಭವಾದ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಪಯಣ ಇಂದು ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದವರೆಗೂ ವಿಸ್ತರಿಸಿದೆ. ಭಾಷೆಗಿಂತ ಕಥೆ ಮತ್ತು ಪ್ರೇಕ್ಷಕರೊಂದಿಗೆ ಸಂಪರ್ಕವೇ ಮುಖ್ಯ ಎಂಬ ಅವರ ಮಾತುಗಳು ಇದೀಗ ಗಮನ ಸೆಳೆಯುತ್ತಿವೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/telugu-actress-rashmika-mandanna-opens-up-about-her-multilingual-cinema-journey-respecting-her-audiences-gvd/articleshow-r4l8kew"/>
        </item>
        <item>
            <title><![CDATA[ಸ್ವಂತ 'ಐಲ್ಯಾಂಡ್' ಹೊಂದಿರೋ ಈ ನಟಿ ಕನ್ನಡದಲ್ಲೂ ನಟಿಸಿದ್ದಾರೆ.. ಈಕೆಯ ಒಟ್ಟೂ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!]]></title>
            <link>https://kannada.asianetnews.com/gallery/news-entertainment/jacqueline-fernandez-who-acted-with-kiccha-sudeep-in-kannada-cinema-reportedly-owns-a-private-island-in-sri-lanka-mi7fck1</link>
            <guid isPermaLink="true">https://kannada.asianetnews.com/gallery/news-entertainment/jacqueline-fernandez-who-acted-with-kiccha-sudeep-in-kannada-cinema-reportedly-owns-a-private-island-in-sri-lanka-mi7fck1</guid>
            <pubDate>Fri, 18 Sep 2026 18:57:19 +0530</pubDate>
            <description><![CDATA[&lt;p&gt;ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್&zwnj;ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2taa53rmf7spn2s2h0zsv7e,imgname-jacqueline-fernandez-1789737112696.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್&zwnj;ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ.&lt;/p&gt;&lt;img&gt;&lt;p&gt;ಜಾಕ್ವೆಲಿನ್ ಫರ್ನಾಂಡಿಸ್: ಮನೆ, ಕಾರು ಅಲ್ಲ... ನಟಿಯ ಬಳಿ ಇದೆ ಒಂದು ಖಾಸಗಿ ದ್ವೀಪ!&lt;/p&gt;&lt;p&gt;ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್&zwnj;ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ ಎಂಬ ಕಾರಣಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಆಗಾಗ್ಗೆ ಸುದ್ದಿಯಾಗುತ್ತಾರೆ.&lt;/p&gt;&lt;img&gt;&lt;p&gt;ಶ್ರೀಲಂಕಾದ ಕೊಲಂಬೊದಲ್ಲಿ ಜನಿಸಿದ ಜಾಕ್ವೆಲಿನ್, ಮಾಡೆಲಿಂಗ್ ಕ್ಷೇತ್ರದಿಂದ ತಮ್ಮ ವೃತ್ತಿಜೀವನ ಆರಂಭಿಸಿ ಬಳಿಕ ಬಾಲಿವುಡ್&zwnj;ನಲ್ಲಿ ಗುರುತಿಸಿಕೊಂಡರು. 2006ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟ ಗೆದ್ದ ಅವರು, 2009ರಲ್ಲಿ &lsquo;ಅಲ್ಲಾದೀನ್&rsquo; ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು.&lt;/p&gt;&lt;img&gt;&lt;p&gt;ಆರಂಭದ ದಿನಗಳ ಬಳಿಕ &lsquo;ಮರ್ಡರ್ 2&rsquo;, &lsquo;ಹೌಸ್&zwnj;ಫುಲ್ 2&rsquo;, &lsquo;ರೇಸ್ 2&rsquo; ಮತ್ತು &lsquo;ಕಿಕ್&rsquo; ಸಿನಿಮಾಗಳ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ವಿಶೇಷವಾಗಿ ಗ್ಲಾಮರ್ ಮತ್ತು ಡ್ಯಾನ್ಸ್&zwnj; ಮೂಲಕ ಬಾಲಿವುಡ್&zwnj;ನಲ್ಲಿ ಜನಪ್ರಿಯತೆ ಪಡೆದರು. ಕನ್ನಡದಲ್ಲಿ ಸ್ಟಾರ್ ನಟ ಕಿಚ್ಚ ಸುದೀಪ್ ಎದುರು 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಟಿಸಿದ್ದಾರೆ. ಕಿಚ್ಚ-ಜಾಕ್ವೆಲಿನ್ ಜೋಡಿಯ 'ರಾ ರಾ ರುಕ್ಕಮ್ಮ..' ಹಾಡು ಸಖತ್ ಫೇಮಸ್ ಆಗಿದ್ದು, ಇಂದಿಗೂ ಆ ಹಾಡು ಜನಮೆಚ್ಚುಗೆ ಕಳೆದುಕೊಂಡಿಲ್ಲ.&lt;/p&gt;&lt;img&gt;&lt;p&gt;ಜಾಕ್ವೆಲಿನ್ ಅವರ ಆಸ್ತಿಗಳ ಪೈಕಿ ಅತ್ಯಂತ ಕುತೂಹಲ ಮೂಡಿಸುವುದು ಅವರ ಹೆಸರಿನೊಂದಿಗೆ ಕೇಳಿಬರುವ ಖಾಸಗಿ ದ್ವೀಪದ ಕಥೆ. 2012ರಲ್ಲಿ ಶ್ರೀಲಂಕಾ ಸಮೀಪ ಸುಮಾರು 5 ಎಕರೆ ವಿಸ್ತೀರ್ಣದ ದ್ವೀಪವನ್ನು ಖರೀದಿಸಿದ್ದಾರೆ ಎಂದು ಹಲವು ವರದಿಗಳು ಹೇಳುತ್ತವೆ. ಅದರ ಬೆಲೆ ಸುಮಾರು 3 ಕೋಟಿ ರೂಪಾಯಿ ಎಂದು ವರದಿಯಾಗಿತ್ತು. ಹಸಿರಿನಿಂದ ಆವೃತವಾಗಿರುವ ಈ ದ್ವೀಪವೇ ನಟಿಯ ಐಷಾರಾಮಿ ಜೀವನಶೈಲಿಯ ಮತ್ತೊಂದು ಉದಾಹರಣೆಯಾಗಿ ಚರ್ಚೆಯಾಗುತ್ತದೆ.&lt;/p&gt;&lt;img&gt;&lt;p&gt;ಕನ್ನಡ ಪ್ರೇಕ್ಷಕರಿಗೂ ಜಾಕ್ವೆಲಿನ್ ಪರಿಚಿತ ಮುಖ. ಕಿಚ್ಚ ಸುದೀಪ್ ಅಭಿನಯದ &lsquo;ವಿಕ್ರಾಂತ್ ರೋಣ&rsquo; ಸಿನಿಮಾದ &lsquo;ರಕ್ಕಮ್ಮ&rsquo; ಪಾತ್ರದ ಮೂಲಕ ಅವರು ಸ್ಯಾಂಡಲ್&zwnj;ವುಡ್&zwnj;ನಲ್ಲೂ ಗಮನ ಸೆಳೆದಿದ್ದರು.&lt;/p&gt;&lt;img&gt;&lt;p&gt;ಇಷ್ಟೇ ಅಲ್ಲ, ಮುಂಬೈನ ಪಾಲಿ ಹಿಲ್&zwnj;ನಲ್ಲಿ ಐಷಾರಾಮಿ 5 BHK ಅಪಾರ್ಟ್&zwnj;ಮೆಂಟ್, ಕೊಲಂಬೊದಲ್ಲಿ ರೆಸ್ಟೋರೆಂಟ್ ಹಾಗೂ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಹೊಂದಿದ್ದಾರೆ ಎಂಬ ವರದಿಗಳಿವೆ. ಸಿನಿಮಾಗಳ ಸಂಭಾವನೆ, ಜಾಹೀರಾತುಗಳು ಮತ್ತು ಇತರ ವಾಣಿಜ್ಯ ಚಟುವಟಿಕೆಗಳಿಂದಲೂ ಅವರು ಆದಾಯ ಗಳಿಸುತ್ತಾರೆ ಎನ್ನಲಾಗಿದೆ. ಒಂದು ವರ್ಷಕ್ಕೆ ಇವರ ಆದಾಯ 12 ಕೋಟಿಗೂ ಅಧಿಕ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಜಾಕ್ವೆಲಿನ್ ಫರ್ನಾಂಡಿಸ್ ಅವರ ಸಿನಿಮಾ ಜರ್ನಿಯಷ್ಟೇ ಅವರ ಐಷಾರಾಮಿ ಆಸ್ತಿ ಮತ್ತು ಉದ್ಯಮದ ಕುರಿತ ಸುದ್ದಿಗಳೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿವೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/news-entertainment/jacqueline-fernandez-who-acted-with-kiccha-sudeep-in-kannada-cinema-reportedly-owns-a-private-island-in-sri-lanka-mi7fck1"/>
        </item>
        <item>
            <title><![CDATA[ಅಜಿತ್ ‘ಡೇರ್ ಡೆವಿಲ್’ನಿಂದ ಮೋಹನ್‌ಲಾಲ್ ಔಟ್: ಇವರ ಜಾಗಕ್ಕೆ ಬರ್ತಿದ್ದಾರಾ ಕಿಚ್ಚ ಸುದೀಪ್?]]></title>
            <link>https://kannada.asianetnews.com/entertainment/malayalam-actor-mohanlal-out-of-ajith-kumar-dare-devil-kichcha-sudeep-reportedly-set-to-enter-gvd/articleshow-sf4k95y</link>
            <guid isPermaLink="true">https://kannada.asianetnews.com/entertainment/malayalam-actor-mohanlal-out-of-ajith-kumar-dare-devil-kichcha-sudeep-reportedly-set-to-enter-gvd/articleshow-sf4k95y</guid>
            <pubDate>Fri, 18 Sep 2026 18:39:37 +0530</pubDate>
            <description><![CDATA[&lt;p&gt;ನಟ ಅಜಿತ್ ಕುಮಾರ್ ಅಭಿನಯದ 'ಡೇರ್ ಡೆವಿಲ್' ಸಿನಿಮಾದಿಂದ ಮಲಯಾಳಂ ಸೂಪರ್ ಸ್ಟಾರ್ ಮೋಹನ್&zwnj;ಲಾಲ್ ಹೊರಬಂದಿದ್ದಾರೆ. ಆದಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರದ ಲೇಟೆಸ್ಟ್ ಅಪ್&zwnj;ಡೇಟ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t9ybe1q0q96gaczdvpgh5b,imgname-kbk-1789736725953.png" type="image/jpeg" height="390" width="690"/>
            <content:encoded><![CDATA[&lt;p&gt;'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಮುಗಿದ ಬಳಿಕ ನಟ ಅಜಿತ್ ಕುಮಾರ್ ಮತ್ತೆ ಮೋಟಾರ್ ಸ್ಪೋರ್ಟ್ಸ್ ಕಡೆ ಮುಖ ಮಾಡಿದ್ದಾರೆ. ತಮ್ಮ 'ಅಜಿತ್&zwnj;ಕುಮಾರ್ ರೇಸಿಂಗ್' ತಂಡದ ಮೂಲಕ ಲಂಡನ್&zwnj;ನಲ್ಲಿ ನಡೆಯುತ್ತಿರುವ ಕಾರ್ ರೇಸಿಂಗ್&zwnj;ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಟೂರ್ನಿ ಮುಗಿದ ಮೇಲೆ ಅವರು ಮತ್ತೆ ಸಿನಿಮಾಗಳತ್ತ ಗಮನ ಹರಿಸಲಿದ್ದಾರೆ. ಇದರ ನಡುವೆ ಅಜಿತ್&zwnj;ರ ಕಾರ್ ರೇಸಿಂಗ್ ಪಯಣದ ಬಗ್ಗೆ 'ಗ್ಲಾಡಿಯೇಟರ್ಸ್' ಅನ್ನೋ ಸಾಕ್ಷ್ಯಚಿತ್ರ ಕೂಡ ರೆಡಿಯಾಗುತ್ತಿದೆ. ಎ.ಎಲ್. ವಿಜಯ್ ನಿರ್ದೇಶನದ ಈ ಡಾಕ್ಯುಮೆಂಟರಿಗೆ ಜಿ.ವಿ. ಪ್ರಕಾಶ್ ಸಂಗೀತ ನೀಡಿದ್ದಾರೆ.&lt;/p&gt;&lt;p&gt;'ಗುಡ್ ಬ್ಯಾಡ್ ಅಗ್ಲಿ' ಬಳಿಕ ನಿರ್ದೇಶಕ ಆದಿಕ್ ರವಿಚಂದ್ರನ್ ಜೊತೆ ಅಜಿತ್ ಕೈಜೋಡಿಸಿದ್ದಾರೆ. ಅಜಿತ್&zwnj;ರ 64ನೇ ಸಿನಿಮಾಗೆ 'ಡೇರ್ ಡೆವಿಲ್' ಅಂತ ಹೆಸರಿಡಲಾಗಿದೆ. ಬ್ರೇವ್ ಹಾರ್ಟ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಶಾಲಿನಿ ಅಜಿತ್&zwnj;ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ಈ ಸಿನಿಮಾಗೆ ಮ್ಯೂಸಿಕ್ ಮಾಡ್ತಿದ್ದಾರೆ. ಇತ್ತೀಚೆಗಷ್ಟೇ 'ಡೇರ್ ಡೆವಿಲ್' ಚಿತ್ರದ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಸಖತ್ ನಿರೀಕ್ಷೆ ಹುಟ್ಟುಹಾಕಿದೆ.&lt;/p&gt;&lt;p&gt;'ಡೇರ್ ಡೆವಿಲ್' ಶೂಟಿಂಗ್ ಬಗ್ಗೆ ನಿರ್ದೇಶಕ ಆದಿಕ್ ರವಿಚಂದ್ರನ್ ದೊಡ್ಡ ಅಪ್&zwnj;ಡೇಟ್ ಕೊಟ್ಟಿದ್ದಾರೆ. ನವೆಂಬರ್ 2ರಿಂದ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಈ ಶೂಟಿಂಗ್ ಆರಂಭವೇ ನಟ ಅಜಿತ್&zwnj;ಕುಮಾರ್ ತಮಗೆ ಕೊಟ್ಟ ಹುಟ್ಟುಹಬ್ಬದ ಉಡುಗೊರೆ ಅಂತ ಆದಿಕ್ ಹೇಳಿಕೊಂಡಿದ್ದಾರೆ. ಅಜಿತ್ ಹಾಗೂ ಆದಿಕ್ ರವಿಚಂದ್ರನ್ ಕಾಂಬಿನೇಷನ್&zwnj;ನ ಈ ಚಿತ್ರದ ಶೂಟಿಂಗ್ ಶುರುವಾದ ಮೇಲೆ, ಕಥೆ ಹಾಗೂ ತಾರಾಗಣದ ಬಗ್ಗೆ ಇನ್ನಷ್ಟು ಅಪ್&zwnj;ಡೇಟ್&zwnj;ಗಳು ಹೊರಬೀಳಲಿವೆ.&lt;/p&gt;&lt;h2&gt;&lt;strong&gt;ಕನ್ನಡಿಗರಿಗೆ ಖುಷಿ&lt;/strong&gt;&lt;/h2&gt;&lt;p&gt;'ಡೇರ್ ಡೆವಿಲ್' ಸಿನಿಮಾದಲ್ಲಿ ಅಜಿತ್ ಜೊತೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್&zwnj;ಲಾಲ್ ನಟಿಸ್ತಾರೆ ಅನ್ನೋ ಮಾತಿತ್ತು. ಆದ್ರೆ ಶೂಟಿಂಗ್ ಶುರುವಾಗುವ ಮುನ್ನವೇ ಅವರು ಈ ಪ್ರಾಜೆಕ್ಟ್&zwnj;ನಿಂದ ಹೊರಬಂದಿದ್ದಾರೆ. ಈಗ ಅವರ ಜಾಗಕ್ಕೆ ಕನ್ನಡದ ನಟ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ವಿಜಯ್&zwnj;ರ 'ಪುಲಿ' ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಸುದೀಪ್, ಇದೇ ಮೊದಲ ಬಾರಿಗೆ ಅಜಿತ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿರೋದು ಕನ್ನಡಿಗರಿಗೂ ಖುಷಿ ತಂದಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/malayalam-actor-mohanlal-out-of-ajith-kumar-dare-devil-kichcha-sudeep-reportedly-set-to-enter-gvd/articleshow-sf4k95y"/>
        </item>
        <item>
            <title><![CDATA['ಹೆಣ್ಣುಮಕ್ಕಳ ಮೇಲಿನ ಒತ್ತಡ ದುಪ್ಪಟ್ಟು': 16ನೇ ವಯಸ್ಸಿನ ಆ ಅನುಭವ ಬಿಚ್ಚಿಟ್ಟ ನಟಿ ಶೋಭಿತಾ]]></title>
            <link>https://kannada.asianetnews.com/entertainment/telugu-actress-sobhita-dhulipala-opens-up-about-childhood-society-and-moving-to-mumbai-gvd/articleshow-r6fkoel</link>
            <guid isPermaLink="true">https://kannada.asianetnews.com/entertainment/telugu-actress-sobhita-dhulipala-opens-up-about-childhood-society-and-moving-to-mumbai-gvd/articleshow-r6fkoel</guid>
            <pubDate>Fri, 18 Sep 2026 17:38:44 +0530</pubDate>
            <description><![CDATA[&lt;p&gt;ನಟಿ ಶೋಭಿತಾ ಧೂಳಿಪಾಳ ತಮ್ಮ ಬಾಲ್ಯದ ಅನುಭವದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಹೊಸ ಕನಸು ಕಾಣುವವರನ್ನು ನಿರುತ್ಸಾಹಗೊಳಿಸುವ ವಾತಾವರಣ ಮತ್ತು ಹೆಣ್ಣುಮಕ್ಕಳ ಮೇಲಿನ ಸಾಮಾಜಿಕ ಒತ್ತಡದ ಬಗ್ಗೆ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t6mep1fh81w1vffdbr04mz,imgname-nln-1789733255873.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಶೋಭಿತಾ ಧೂಳಿಪಾಳ ಇದೀಗ ತಮ್ಮ ವೈಯಕ್ತಿಕ ಜೀವನದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತೆಲುಗು ಸಮಾಜದಲ್ಲಿ ಒಬ್ಬರ ಬೆಳವಣಿಗೆಗೆ ಮತ್ತೊಬ್ಬರು ಪ್ರೋತ್ಸಾಹ ನೀಡುವ ಬದಲು, ಹೊಸ ಪ್ರಯತ್ನಗಳಲ್ಲಿ ತಪ್ಪು ಹುಡುಕುವ ಮನಸ್ಥಿತಿ ಹೆಚ್ಚಾಗಿದೆ ಎಂಬ ಚರ್ಚೆ ನಡೆಯುತ್ತಿದ್ದು, ಈ ವಿಚಾರಕ್ಕೆ ಶೋಭಿತಾ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ತಮ್ಮ ಬಾಲ್ಯದ ಅನುಭವಗಳನ್ನೂ ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ತೆಲುಗು ಸಮಾಜದ ಬಗ್ಗೆ ವೈರಲ್ ಚರ್ಚೆ&lt;/strong&gt;&lt;/p&gt;&lt;p&gt;ಇತ್ತೀಚೆಗೆ ಅಹಲ್ಯ ಎಂಬ ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ತೆಲುಗು ಸಮಾಜದ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ತೆಲುಗಿನವರು ತಮ್ಮವರನ್ನು ಪ್ರೋತ್ಸಾಹಿಸುವುದಕ್ಕಿಂತ, ಅವರು ಹೊಸದಾಗಿ ಏನಾದರೂ ಮಾಡಲು ಮುಂದಾದಾಗ ಅದರಲ್ಲಿರುವ ತಪ್ಪುಗಳನ್ನು ಹುಡುಕುವುದೇ ಹೆಚ್ಚು ಎಂದು ಅವರು ಅಭಿಪ್ರಾಯಪಟ್ಟಿದ್ದರು.&lt;/p&gt;&lt;p&gt;ಹೊಸ ಉದ್ಯಮ ಆರಂಭಿಸಿದರೂ, ಹೊಸ ಕ್ಷೇತ್ರಕ್ಕೆ ಕಾಲಿಟ್ಟರೂ &lsquo;ಇದರಲ್ಲೇನು ದೊಡ್ಡ ವಿಷಯ?&rsquo; ಎಂದು ಪ್ರಶ್ನಿಸುವ ಮನಸ್ಥಿತಿ ಕೆಲವರಲ್ಲಿದೆ ಎಂದು ಅಹಲ್ಯ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೋಗೆ ಶೋಭಿತಾ ಧೂಳಿಪಾಳ ಪ್ರತಿಕ್ರಿಯಿಸಿದ್ದು, ಅಹಲ್ಯ ಹೇಳಿದ ವಿಚಾರಗಳಿಗೆ ತಾವು ಶೇ.100ರಷ್ಟು ಒಪ್ಪುತ್ತೇನೆ ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನೂ ಬಹಿರಂಗಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;16ನೇ ವಯಸ್ಸಿನಲ್ಲೇ ಬ್ಯಾಗ್ ಪ್ಯಾಕ್ ಮಾಡಿಕೊಂಡು ಮುಂಬೈಗೆ ಹೋಗಿದ್ದೆ&rsquo;&lt;/strong&gt;&lt;/p&gt;&lt;p&gt;ಶೋಭಿತಾ ಧೂಳಿಪಾಳ ಮಾತನಾಡುತ್ತಾ, ತಮ್ಮ ಊರಿನ ವಾತಾವರಣವು ಹೊಸ ಕನಸು ಕಾಣುವವರನ್ನು, ಅದರಲ್ಲೂ ಬೇರೆ ಕ್ಷೇತ್ರಗಳಿಂದ ಬರುವವರನ್ನು ಸಾಕಷ್ಟು ನಿರುತ್ಸಾಹಗೊಳಿಸುತ್ತಿತ್ತು ಎಂದು ಹೇಳಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ತೀರ್ಪು ನೀಡುವ ಮನಸ್ಥಿತಿ ಹೆಚ್ಚಾಗಿತ್ತು. ಅದರಲ್ಲೂ ಹೆಣ್ಣುಮಕ್ಕಳ ಮೇಲೆ ಈ ರೀತಿಯ ಸಾಮಾಜಿಕ ಒತ್ತಡ ಇನ್ನಷ್ಟು ಹೆಚ್ಚಿರುತ್ತದೆ ಎಂದು ಶೋಭಿತಾ ಹೇಳಿದ್ದಾರೆ.&lt;/p&gt;&lt;p&gt;ಯಾವುದೇ ಗ್ಯಾರಂಟಿ ಇಲ್ಲದಿದ್ದರೂ 16ನೇ ವಯಸ್ಸಿನಲ್ಲೇ ನನ್ನ ಬ್ಯಾಗ್ ಪ್ಯಾಕ್ ಮಾಡಿಕೊಂಡು ಮುಂಬೈಗೆ ಹೊರಟೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಾವು ಎದುರಿಸಿದ ಪರಿಸ್ಥಿತಿಗಳೇ ಚಿಕ್ಕ ವಯಸ್ಸಿನಲ್ಲೇ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿತು ಎಂದು ಶೋಭಿತಾ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಈಗ ಪರಿಸ್ಥಿತಿ ಬದಲಾಗಿದೆ ಎಂದು ಆಶಿಸುತ್ತೇನೆ&rsquo;&lt;/strong&gt;&lt;/p&gt;&lt;p&gt;ಇಂದಿನ ಪರಿಸ್ಥಿತಿಗಳು ಬದಲಾಗಿವೆ ಎಂದು ತಾವು ಆಶಿಸುವುದಾಗಿ ಶೋಭಿತಾ ಹೇಳಿದ್ದಾರೆ. ತಮ್ಮ ತೆಲುಗು ಸಮಾಜವು ಇನ್ನಷ್ಟು ಮುಕ್ತವಾಗಿ ಯೋಚಿಸಿ, ಹೊಸ ಕನಸು ಕಾಣುವವರ ಬೆನ್ನಿಗೆ ನಿಲ್ಲಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.ತೆಲುಗು ಸಮಾಜವು ತನ್ನ ರೆಕ್ಕೆಗಳನ್ನು ಇನ್ನಷ್ಟು ಚಾಚಿಕೊಂಡು, ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು ಎಂಬುದು ತಮ್ಮ ಬಯಕೆ ಎಂದು ಶೋಭಿತಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ತೆನಾಲಿಯಲ್ಲಿ ಜನನ, ವಿಶಾಖಪಟ್ಟಣದಲ್ಲಿ ಬಾಲ್ಯ&lt;/strong&gt;&lt;/p&gt;&lt;p&gt;ಶೋಭಿತಾ ಧೂಳಿಪಾಳ ಆಂಧ್ರಪ್ರದೇಶದ ತೆನಾಲಿಯಲ್ಲಿ ಜನಿಸಿದ್ದು, ವಿಶಾಖಪಟ್ಟಣದಲ್ಲಿ ಬೆಳೆದಿದ್ದಾರೆ. ವಿದ್ಯಾಭ್ಯಾಸದ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವರು, 2013ರಲ್ಲಿ ನಡೆದ ಮಿಸ್ ಅರ್ಥ್ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಸ್ಪರ್ಧಿಸಿದ್ದರು. ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶೋಭಿತಾ, ಅನುರಾಗ್ ಕಶ್ಯಪ್ ನಿರ್ದೇಶನದ &lsquo;ರಮನ್ ರಾಘವ್ 2.0&rsquo; ಚಿತ್ರದ ಮೂಲಕ ಬಾಲಿವುಡ್&zwnj;ಗೆ ನಾಯಕಿಯಾಗಿ ಪರಿಚಿತರಾದರು.&lt;/p&gt;&lt;p&gt;&lt;strong&gt;&lsquo;ಗುಢಾಚಾರಿ&rsquo; ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರ&lt;/strong&gt;&lt;/p&gt;&lt;p&gt;ಆ ಬಳಿಕ &lsquo;ಗುಢಾಚಾರಿ&rsquo; ಸಿನಿಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಸಿನಿಮಾಗಳ ಜೊತೆಗೆ ವೆಬ್ ಸೀರಿಸ್&zwnj;ಗಳಲ್ಲೂ ತಮ್ಮದೇ ಛಾಪು ಮೂಡಿಸಿರುವ ಶೋಭಿತಾ, &lsquo;ಮೇಡ್ ಇನ್ ಹೆವನ್&rsquo; ಮತ್ತು &lsquo;ದಿ ನೈಟ್ ಮ್ಯಾನೇಜರ್&rsquo; ಮುಂತಾದ ವೆಬ್ ಸೀರಿಸ್&zwnj;ಗಳಿಂದಲೂ ಜನಪ್ರಿಯತೆ ಗಳಿಸಿದ್ದಾರೆ. ಮಣಿರತ್ನಂ ನಿರ್ದೇಶನದ &lsquo;ಪೊನ್ನಿಯಿನ್ ಸೆಲ್ವನ್&rsquo; ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.&lt;/p&gt;&lt;h2&gt;&lt;strong&gt;ನಾಗ ಚೈತನ್ಯ ಜೊತೆ ವೈವಾಹಿಕ ಜೀವನ&lt;/strong&gt;&lt;/h2&gt;&lt;p&gt;ಇನ್ನು 2024ರ ಡಿಸೆಂಬರ್&zwnj;ನಲ್ಲಿ ನಟ ನಾಗ ಚೈತನ್ಯ ಅವರನ್ನು ಶೋಭಿತಾ ಧೂಳಿಪಾಳ ವಿವಾಹವಾದರು. ಸದ್ಯ ಸಿನಿಮಾಗಳು ಹಾಗೂ ವೆಬ್ ಪ್ರಾಜೆಕ್ಟ್&zwnj;ಗಳಲ್ಲಿ ಬ್ಯುಸಿಯಾಗಿರುವ ಶೋಭಿತಾ, ಇದೀಗ ತಮ್ಮ 16ನೇ ವಯಸ್ಸಿನ ಅನುಭವದ ಕುರಿತು ನೀಡಿರುವ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/telugu-actress-sobhita-dhulipala-opens-up-about-childhood-society-and-moving-to-mumbai-gvd/articleshow-r6fkoel"/>
        </item>
        <item>
            <title><![CDATA[ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ಸಿನಿಮಾದಲ್ಲಿ ನಟಿಸಿದ್ದು ಇವರೇನಾ? ಈಗಿನ ಲುಕ್ ನೋಡಿ ಫ್ಯಾನ್ಸ್ ಶಾಕ್!]]></title>
            <link>https://kannada.asianetnews.com/entertainment/telugu-actor-vijay-deverakonda-arjun-reddy-co-star-aditi-myakal-latest-photos-go-viral-gvd/articleshow-q6r4mrg</link>
            <guid isPermaLink="true">https://kannada.asianetnews.com/entertainment/telugu-actor-vijay-deverakonda-arjun-reddy-co-star-aditi-myakal-latest-photos-go-viral-gvd/articleshow-q6r4mrg</guid>
            <pubDate>Fri, 18 Sep 2026 16:50:59 +0530</pubDate>
            <description><![CDATA[&lt;p&gt;ಟಾಲಿವುಡ್&zwnj;ನ &lsquo;ಅರ್ಜುನ್ ರೆಡ್ಡಿ&rsquo; ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ಸ್ನೇಹಿತೆಯ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ನಟಿ ಅದಿತಿ ಮ್ಯಾಕಲ್ ಇದೀಗ ತಮ್ಮ ಸ್ಟೈಲಿಶ್ ಲುಕ್&zwnj;ನಿಂದ ಮತ್ತೆ ಸುದ್ದಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t3yke344rqe779c962gq58,imgname-bbjbj-1789730442691.png" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾಗಳಲ್ಲಿ ಕೆಲವರು ನಾಯಕಿಯರಾಗಿ ಅಲ್ಲದೆ, ಸಹಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ತಮ್ಮ ಸೌಂದರ್ಯ ಮತ್ತು ಅಭಿನಯದಿಂದ ಗಮನ ಸೆಳೆಯುವ ಇಂತಹ ನಟಿಯರು ಕೆಲವೊಮ್ಮೆ ನಾಯಕಿಯರಿಗಿಂತಲೂ ಹೆಚ್ಚು ನೆನಪಿನಲ್ಲಿ ಉಳಿದುಬಿಡುತ್ತಾರೆ. ಅಂತಹ ನಟಿಯರಲ್ಲಿ ಅದಿತಿ ಮ್ಯಾಕಲ್ ಕೂಡ ಒಬ್ಬರು.&lt;/p&gt;&lt;p&gt;ಅದಿತಿ ಮ್ಯಾಕಲ್ ಎಂದಾಕ್ಷಣ ಹಲವರು ಮೊದಲು ನೆನಪಿಸಿಕೊಳ್ಳುವುದು ವಿಜಯ್ ದೇವರಕೊಂಡ ಅಭಿನಯದ ಸೂಪರ್&zwnj;ಹಿಟ್ ಸಿನಿಮಾ &lsquo;ಅರ್ಜುನ್ ರೆಡ್ಡಿ&rsquo;ಯನ್ನು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಅವರಿಗೆ ಸ್ಟಾರ್ ಹೀರೋ ಆಗಿ ದೊಡ್ಡ ಮಟ್ಟದ ಜನಪ್ರಿಯತೆ ದೊರೆತರೆ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡ ದೇಶಾದ್ಯಂತ ಗಮನ ಸೆಳೆದರು.&lt;/p&gt;&lt;p&gt;&lsquo;ಅರ್ಜುನ್ ರೆಡ್ಡಿ&rsquo; ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ಸ್ನೇಹಿತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅದಿತಿ ಮ್ಯಾಕಲ್ ಕೂಡ ತಮ್ಮ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಚಿತ್ರದಲ್ಲಿ ಅವರು ಕಾಣಿಸಿಕೊಂಡ ರೀತಿ ಹಾಗೂ ಪಾತ್ರ ನಿರ್ವಹಣೆ ಮೆಚ್ಚುಗೆ ಪಡೆದಿದ್ದು, ಈ ಮೂಲಕ ನಟಿಗೆ ಉತ್ತಮ ಗುರುತಿನೂ ಸಿಕ್ಕಿತ್ತು.&lt;/p&gt;&lt;p&gt;&lt;strong&gt;ಬಾಲ್ಯದಿಂದಲೇ ಕಲೆಯತ್ತ ಆಸಕ್ತಿ&lt;/strong&gt;&lt;/p&gt;&lt;p&gt;ಅದಿತಿ ಮ್ಯಾಕಲ್ ಅವರಿಗೆ ಚಿಕ್ಕಂದಿನಿಂದಲೇ ಕಲೆಗಳ ಬಗ್ಗೆ ಆಸಕ್ತಿ ಇತ್ತಂತೆ. ಬಾಲ್ಯದಲ್ಲೇ ಕೂಚಿಪುಡಿ ಕಲಿತು ಹಲವು ಪ್ರದರ್ಶನಗಳನ್ನು ನೀಡಿದ್ದರು ಎನ್ನಲಾಗಿದೆ. ಇದರ ಜೊತೆಗೆ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಕೂಡ ಪೂರ್ಣಗೊಳಿಸಿದ್ದಾರೆ. ಫ್ಯಾಷನ್ ಕ್ಷೇತ್ರದ ಮೇಲಿನ ಆಸಕ್ತಿಯಿಂದ ಹಲವು ಫ್ಯಾಷನ್ ಶೋಗಳಲ್ಲೂ ಭಾಗವಹಿಸಿದ್ದರು. ಕಲೆಗಳ ಮೇಲಿನ ಪ್ರೀತಿ ಹಾಗೂ ಸಿನಿಮಾದ ಮೇಲಿನ ಆಸಕ್ತಿ ಅವರನ್ನು ನಟನೆಯತ್ತ ಸೆಳೆಯಿತು. ಆರಂಭದಲ್ಲಿ ಯೂಟ್ಯೂಬ್ ವೆಬ್&zwnj;ಸಿರೀಸ್&zwnj;ಗಳು ಮತ್ತು ಶಾರ್ಟ್ ಫಿಲ್ಮ್&zwnj;ಗಳಲ್ಲಿ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪರಿಚಯಿಸಿಕೊಂಡರು.&lt;/p&gt;&lt;p&gt;&lt;strong&gt;ಹಲವು ಸಿನಿಮಾಗಳಲ್ಲಿ ಅಭಿನಯ&lt;/strong&gt;&lt;/p&gt;&lt;p&gt;ಅದಿತಿ ಮ್ಯಾಕಲ್ &lsquo;ಪಾಪ ಪಿ ಸುಶೀಲ&rsquo;, &lsquo;ಮುದ್ದಪಪ್ಪು ಅವಕಾಯಿ&rsquo;, &lsquo;ಪಾಷ್ ಪೊರೀಸ್&rsquo; ಸೇರಿದಂತೆ ಹಲವು ಪ್ರಾಜೆಕ್ಟ್&zwnj;ಗಳಲ್ಲಿ ನಟಿಸಿದ್ದಾರೆ. ಬಳಿಕ ಸಿನಿಮಾಗಳಲ್ಲೂ ಅವಕಾಶ ಪಡೆದುಕೊಂಡರು. &lsquo;ಅರ್ಜುನ್ ರೆಡ್ಡಿ&rsquo; ಜೊತೆಗೆ &lsquo;ಅಮಿ ತೂಮಿ&rsquo;, &lsquo;ರಾಧ&rsquo;, &lsquo;ಮಿಠಾಯಿ&rsquo;, &lsquo;ದಿಬ್ಬಕು ಠಾ.. ದೋಂಗಲ ಮುಠಾ&rsquo;, &lsquo;ನೇನು ಲೇನಿ ನಾ ಪ್ರೇಮಕಥ&rsquo; ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅದಿತಿ ಮ್ಯಾಕಲ್, ಹೆಚ್ಚಾಗಿ ಸಹಾಯಕ ಪಾತ್ರಗಳ ಮೂಲಕವೇ ಪ್ರೇಕ್ಷಕರಲ್ಲಿ ಉತ್ತಮ ಗುರುತನ್ನು ಸಂಪಾದಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಸಖತ್ ಗ್ಲಾಮರಸ್ ಅವತಾರ&lt;/strong&gt;&lt;/h2&gt;&lt;p&gt;ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಚಿತ್ರರಂಗದಲ್ಲಿ ತನ್ನದೇ ಆದ ಗುರುತು ಮೂಡಿಸಿಕೊಳ್ಳಲು ಅದಿತಿ ಪ್ರಯತ್ನಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈ ನಟಿ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ತಮ್ಮ ಸ್ಟೈಲಿಶ್ ಹಾಗೂ ಗ್ಲಾಮರಸ್ ಲುಕ್&zwnj;ನಿಂದ ಗಮನ ಸೆಳೆಯುತ್ತಿದ್ದಾರೆ. ಅವರು ಹಂಚಿಕೊಳ್ಳುವ ಫೋಟೋಗಳು ಹಾಗೂ ಫ್ಯಾಷನ್ ಸ್ಟೈಲಿಂಗ್&zwnj;ಗೆ ಸಂಬಂಧಿಸಿದ ಪೋಸ್ಟ್&zwnj;ಗಳು ಆಗಾಗ್ಗೆ ನೆಟ್ಟಿಗರ ಗಮನ ಸೆಳೆಯುತ್ತವೆ. ಇತ್ತೀಚಿನ ಫೋಟೋಗಳಲ್ಲಿ ಅದಿತಿ ಮತ್ತಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಅವರ ಲುಕ್ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;'ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ನಟಿಸಿದ್ದು ಇವರೇನಾ?' ಎಂದು ಕೆಲವರು ಆಶ್ಚರ್ಯ ಪಡುತ್ತಿದ್ದರೆ, ಮತ್ತಷ್ಟು ಅಭಿಮಾನಿಗಳು ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಸದ್ಯ ಸಹಾಯಕ ಪಾತ್ರಗಳಲ್ಲಿ ನಟಿಸುತ್ತಾ ತಮ್ಮ ಸಿನಿ ಪಯಣವನ್ನು ಮುಂದುವರಿಸುತ್ತಿರುವ ಅದಿತಿ ಮ್ಯಾಕಲ್ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ ಹಾಗೂ ಉತ್ತಮ ಅವಕಾಶಗಳು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/telugu-actor-vijay-deverakonda-arjun-reddy-co-star-aditi-myakal-latest-photos-go-viral-gvd/articleshow-q6r4mrg"/>
        </item>
        <item>
            <title><![CDATA[ಕೈಯಲ್ಲಿ ಉದ್ದನೆಯ ಆಯುಧ, ರಗಡ್ ಲುಕ್: ಹುಟ್ಟುಹಬ್ಬದಂದು ತಲೆಕೆಳಗಾಗಿ ನೇತಾಡಿದ ಉಪೇಂದ್ರ!]]></title>
            <link>https://kannada.asianetnews.com/entertainment/sandalwood-actor-upendra-turns-rugged-in-zombie-reddy-2-nxt-lvl-first-look-on-his-birthday-gvd/articleshow-qm6dowx</link>
            <guid isPermaLink="true">https://kannada.asianetnews.com/entertainment/sandalwood-actor-upendra-turns-rugged-in-zombie-reddy-2-nxt-lvl-first-look-on-his-birthday-gvd/articleshow-qm6dowx</guid>
            <pubDate>Fri, 18 Sep 2026 15:58:50 +0530</pubDate>
            <description><![CDATA[&lt;p&gt;ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ &lsquo;ಜಾಂಬಿ ರೆಡ್ಡಿ 2 NXT LVL&rsquo; ಸಿನಿಮಾದ ಅವರ ಫಸ್ಟ್ ಲುಕ್ ರಿಲೀಸ್ ಆಗಿದೆ. ಪೋಸ್ಟರ್&zwnj;ನಲ್ಲಿ ಉಪೇಂದ್ರ ತಲೆಕೆಳಗಾಗಿ ನೇತಾಡುತ್ತಾ, ಕೈಯಲ್ಲಿ ಉದ್ದನೆಯ ಆಯುಧ ಹಿಡಿದು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t0z15chrrrz4jk7vgp2kgj,imgname-bjbj-1789727311020.png" type="image/jpeg" height="390" width="690"/>
            <content:encoded><![CDATA[&lt;p&gt;'ಜಾಂಬಿ ರೆಡ್ಡಿ 2 NXT LVL' ಸಿನಿಮಾದಿಂದ ರಿಯಲ್ ಸ್ಟಾರ್ ಉಪೇಂದ್ರ ಅವರ ಫಸ್ಟ್ ಲುಕ್ ಅನ್ನು ಅವರ ಹುಟ್ಟುಹಬ್ಬದಂದು ರಿಲೀಸ್ ಮಾಡಲಾಗಿದೆ. ಪೋಸ್ಟರ್&zwnj;ನಲ್ಲಿ ಉಪ್ಪಿ ತಲೆಕೆಳಗಾಗಿ ನೇತಾಡುತ್ತಾ ರಗಡ್ ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ತೇಜ ಸಜ್ಜಾ ನಾಯಕನಾಗಿರುವ ಈ ಚಿತ್ರದ ಮೂಲಕ ಶನಾಯಾ ಕಪೂರ್ ಟಾಲಿವುಡ್&zwnj;ಗೆ ಎಂಟ್ರಿ ಕೊಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಉಪೇಂದ್ರ ಫಸ್ಟ್ ಲುಕ್ ರಿಲೀಸ್&lt;/strong&gt;&lt;/p&gt;&lt;p&gt;ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಮುಂಬರುವ ತೆಲುಗು ಸಿನಿಮಾ 'ಜಾಂಬಿ ರೆಡ್ಡಿ 2 NXT LVL' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಜಾಂಬಿ ಕಾಮಿಡಿ-ಆಕ್ಷನ್ ಫ್ರಾಂಚೈಸಿಯ ಎರಡನೇ ಭಾಗದಲ್ಲಿ ಉಪ್ಪಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;p&gt;ಫಸ್ಟ್ ಲುಕ್ ಪೋಸ್ಟರ್&zwnj;ನಲ್ಲಿ ಉಪೇಂದ್ರ ಮರದ ಕೊಂಬೆಗೆ ತಲೆಕೆಳಗಾಗಿ ನೇತಾಡುತ್ತಾ, ಕೈಯಲ್ಲಿ ಉದ್ದನೆಯ ಆಯುಧ ಹಿಡಿದುಕೊಂಡಿದ್ದಾರೆ. ಉದ್ದನೆಯ ಕೂದಲು, ರಗಡ್ ಲುಕ್ ಹಾಗೂ ತೀಕ್ಷ್ಣವಾದ ನೋಟದಿಂದ ಅವರು ಗಮನ ಸೆಳೆಯುತ್ತಿದ್ದಾರೆ. ಹಿನ್ನೆಲೆಯಲ್ಲಿ ಕಾಡು, ಉರಿಯುತ್ತಿರುವ ಪಂಜುಗಳು ಮತ್ತು ಜನರ ಗುಂಪು ಕಾಣಿಸುತ್ತಿದೆ. ಪಾತ್ರದ ವಿಭಿನ್ನ ಲುಕ್&zwnj;ಗೆ ತಕ್ಕಂತೆ ಪೋಸ್ಟರ್&zwnj;ನಲ್ಲಿ &quot;READY TO TURN THE WORLD UPSIDE DOWN&quot; (ಜಗತ್ತನ್ನೇ ತಲೆಕೆಳಗಾಗಿಸಲು ರೆಡಿ) ಎಂಬ ಟ್ಯಾಗ್&zwnj;ಲೈನ್ ಕೂಡ ಇದೆ.&lt;/p&gt;&lt;h2&gt;&lt;strong&gt;ತಾರಾಗಣ ಮತ್ತು ನಿರ್ಮಾಣದ ಡೀಟೇಲ್ಸ್&lt;/strong&gt;&lt;/h2&gt;&lt;p&gt;'ಜಾಂಬಿ ರೆಡ್ಡಿ 2 NXT LVL' ಸಿನಿಮಾದಲ್ಲಿ ತೇಜ ಸಜ್ಜಾ ನಾಯಕನಾಗಿ ನಟಿಸುತ್ತಿದ್ದಾರೆ. 'ಮಿರಾಯ್' ಬಳಿಕ ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಇದು ಅವರ ಎರಡನೇ ಸಿನಿಮಾ. ಬಾಲಿವುಡ್ ನಟಿ ಶನಾಯಾ ಕಪೂರ್ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.&lt;/p&gt;&lt;p&gt;ಈ ವರ್ಷದ ಆರಂಭದಲ್ಲಿ ತೇಜ ಸಜ್ಜಾ ಅವರ 31ನೇ ಹುಟ್ಟುಹಬ್ಬದಂದು ಈ ತೆಲುಗು ಜಾಂಬಿ ಕಾಮಿಡಿ ಸೀಕ್ವೆಲ್ ಅನ್ನು ಅನೌನ್ಸ್ ಮಾಡಲಾಗಿತ್ತು. ಸುಪರ್ಣ್ ಎಸ್. ವರ್ಮಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಭಾಗವನ್ನು ನಿರ್ಮಿಸಿದ್ದ ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದೆ. ಸಾವಿರಾರು ಜಾಂಬಿಗಳ ನಡುವೆ ತೇಜ ಸಜ್ಜಾ ಒಂಟಿಯಾಗಿ ನಿಂತಿರುವ ಸೀಕ್ವೆಲ್&zwnj;ನ ಗ್ಲಿಂಪ್ಸ್ ವಿಡಿಯೋವನ್ನು ಚಿತ್ರತಂಡ ಈ ಹಿಂದೆ ರಿಲೀಸ್ ಮಾಡಿತ್ತು.&lt;/p&gt;&lt;p&gt;ಇದೊಂದು ಜಾಂಬಿ ಆಕ್ಷನ್-ಕಾಮಿಡಿ ಸಿನಿಮಾವಾಗಿದ್ದು, ಕನ್ನಡದ ಸ್ಟಾರ್ ನಟ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಶನಾಯಾ ಕಪೂರ್&zwnj;ಗೆ ಇದು ದಕ್ಷಿಣ ಭಾರತದ ಮೊದಲ ಸಿನಿಮಾ. ಒರಿಜಿನಲ್ 'ಜಾಂಬಿ ರೆಡ್ಡಿ' ಚಿತ್ರವನ್ನು ನಿರ್ದೇಶಿಸಿದ್ದ ಪ್ರಶಾಂತ್ ವರ್ಮಾ ಕೂಡ ಈ ಸೀಕ್ವೆಲ್&zwnj;ನಲ್ಲಿ ಕೆಲಸ ಮಾಡುತ್ತಿದ್ದಾರೆ.&lt;/p&gt;&lt;p&gt;ಹುಸೇನ್ ದಲಾಲ್, ಪ್ರಶಾಂತ್ ವರ್ಮಾ ಮತ್ತು ಸುಪರ್ಣ್ ಎಸ್. ವರ್ಮಾ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಗೌರ ಹರಿ ಸಂಗೀತ ನಿರ್ದೇಶನವಿದ್ದು, ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು 'ಜಾಂಬಿ ರೆಡ್ಡಿ 2 NXT LVL' ಸಿನಿಮಾ ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ನೇಪಾಳಿ ಮತ್ತು ಜಾಪನೀಸ್ ಸೇರಿದಂತೆ ಒಟ್ಟು ಏಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಆದರೆ, ರಿಲೀಸ್ ಡೇಟ್ ಅನ್ನು ಚಿತ್ರತಂಡ ಇನ್ನೂ ಅನೌನ್ಸ್ ಮಾಡಿಲ್ಲ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sandalwood-actor-upendra-turns-rugged-in-zombie-reddy-2-nxt-lvl-first-look-on-his-birthday-gvd/articleshow-qm6dowx"/>
        </item>
        <item>
            <title><![CDATA[ವಿಜಯ್-ರಶ್ಮಿಕಾ ವಿವಾಹಕ್ಕೂ ನಟಿ ನೀನಾ ಗುಪ್ತಾಗೂ ಏನ್ ಸಂಬಂಧ? ಈ ಸುದ್ದಿ ತಿಳಿದು 'ಚೀ.. ಥೂ..' ಅಂತ ಉಗಿತೀರಾ ನೋಡಿ!]]></title>
            <link>https://kannada.asianetnews.com/news-entertainment/neena-gupta-talks-about-criticism-over-the-years-regarding-her-personal-life-as-well-as-the-pregnancy-rumours/articleshow-ae3mplp</link>
            <guid isPermaLink="true">https://kannada.asianetnews.com/news-entertainment/neena-gupta-talks-about-criticism-over-the-years-regarding-her-personal-life-as-well-as-the-pregnancy-rumours/articleshow-ae3mplp</guid>
            <pubDate>Fri, 18 Sep 2026 15:36:31 +0530</pubDate>
            <description><![CDATA[&lt;p&gt;ನೀನಾ ಗುಪ್ತಾ ಅವರ ಜೀವನದಲ್ಲಿ ಇಂತಹ ಸಾರ್ವಜನಿಕ ಚರ್ಚೆಗಳು ಇದೇ ಮೊದಲೇನಲ್ಲ. ವಿವಿಯನ್ ರಿಚರ್ಡ್ಸ್ ಜೊತೆಗಿನ ಸಂಬಂಧ, ಮಸಾಬಾಳನ್ನು ಏಕಾಂಗಿ ತಾಯಿಯಾಗಿ ಬೆಳೆಸಿದ ನಿರ್ಧಾರ ಹೀಗೆ ಹಲವು ಬಾರಿ ಈ ನಟಿ ಟೀಕೆ ಎದುರಿಸಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆಗೂ ನೀನಾ ಗುಪ್ತಾಗೂ ಏನು ಸಂಬಂಧ? ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sz19e7b21yjvtbvnq9v6zf,imgname-neena-gupta-rashmika-vijay-1789725287877.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Neena Gupta personal life Gossips- ನೀನಾ ಗುಪ್ತ ವೈಯಕ್ತಿಕ ಜೀವನದ ಸುದ್ದಿ!&lt;/strong&gt;&lt;/p&gt;&lt;p&gt;ಬಾಲಿವುಡ್&zwnj;ನ ಹಿರಿಯ ಹಾಗೂ ಪ್ರತಿಭಾವಂತ ನಟಿ ನೀನಾ ಗುಪ್ತಾ (Neena Gupta) ತಮ್ಮ ವೈಯಕ್ತಿಕ ಜೀವನದ ಕುರಿತು ವರ್ಷಗಳಿಂದ ಎದುರಿಸುತ್ತಿರುವ ನಿರಂತರ ಕುತೂಹಲ ಮತ್ತು ಟೀಕೆಗಳ ಬಗ್ಗೆ ಮತ್ತೊಮ್ಮೆ ಮನಬಿಚ್ಚಿ ಮಾತನಾಡಿದ್ದಾರೆ. ಈ ವರ್ಷ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ನೀನಾ ಗುಪ್ತಾ ಕಾಣಿಸಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಗರ್ಭಧಾರಣೆಯ ವದಂತಿಗಳ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ನೀನಾ ಗುಪ್ತಾ ಅವರ ವೈಯಕ್ತಿಕ ಬದುಕು ಆರಂಭದಿಂದಲೂ ಸಾರ್ವಜನಿಕ ಚರ್ಚೆಯ ವಿಷಯವಾಗುತ್ತಲೇ ಬಂದಿದೆ. ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರೊಂದಿಗಿನ ಸಂಬಂಧ ಹಾಗೂ ವಿವಾಹವಾಗದೆ ಮಗಳು ಮಸಾಬಾ ಗುಪ್ತಾಗೆ ಜನ್ಮ ನೀಡಿದ ನಿರ್ಧಾರದ ಬಗ್ಗೆ ಅವರು ಸಾಕಷ್ಟು ಪ್ರಶ್ನೆಗಳನ್ನು ಎದುರಿಸಿದ್ದಾರೆ. ಮಸಾಬಾಳನ್ನು ಅವರು ಏಕಾಂಗಿಯಾಗಿ ಬೆಳೆಸಿದ್ದು, ಆ ಸಂದರ್ಭದಲ್ಲಿ ಸಮಾಜದಿಂದ ಬಂದ ಟೀಕೆ ಮತ್ತು ತೀರ್ಪುಗಳ ಬಗ್ಗೆಯೂ ಹಲವು ಬಾರಿ ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;p&gt;ಇಷ್ಟೇ ಅಲ್ಲದೆ, ತಮ್ಮ ಉಡುಗೆ-ತೊಡುಗೆಗಳ ವಿಚಾರದಲ್ಲಿಯೂ ನೀನಾ ಗುಪ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ವಯಸ್ಸಿಗೆ ತಕ್ಕಂತೆ ಉಡುಪು ಧರಿಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ತಮ್ಮ ಇಷ್ಟದಂತೆ ಬದುಕುವ ಹಕ್ಕು ತಮಗಿದೆ ಎಂಬ ನಿಲುವನ್ನು ಅವರು ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಸಂದರ್ಶನವೊಂದರಲ್ಲಿ ತಮ್ಮ ಜೀವನದುದ್ದಕ್ಕೂ ಎದುರಿಸಿದ ವೈಯಕ್ತಿಕ ಪ್ರಶ್ನೆಗಳನ್ನು ನೆನಪಿಸಿಕೊಂಡ ನೀನಾ ಗುಪ್ತಾ, ಮದುವೆಯ ಬಗ್ಗೆ ಜನರು ಪದೇಪದೇ ಕೇಳುತ್ತಿದ್ದುದನ್ನು ವಿವರಿಸಿದ್ದಾರೆ. &ldquo;ನಾನು ಯಾವಾಗ ಮದುವೆಯಾಗುತ್ತೇನೆ ಎಂದು ಜನರು ಕೇಳುತ್ತಿದ್ದರು. ನಾನು, &lsquo;ನಾನು ನಿಮ್ಮ ತಂದೆಯ ದುಡ್ಡಿನಲ್ಲಿ ಬದುಕುತ್ತಿಲ್ಲ, ನನ್ನ ತಂದೆಯ ದುಡ್ಡಿನಲ್ಲಿ ಬದುಕುತ್ತಿದ್ದೇನೆ, ಹಾಗಿದ್ದರೆ ನಿಮಗೆ ಸಮಸ್ಯೆ ಏನು?&rsquo; ಎಂದು ಹೇಳುತ್ತಿದ್ದೆ,&rdquo; ಎಂದು ಅವರು ಹೇಳಿದ್ದಾರೆ. ನೆರೆಹೊರೆಯವರಿಂದಲೂ ಟೀಕೆ ಎದುರಿಸಬೇಕಾಗಿತ್ತು ಎಂದು ನಟಿ ತಿಳಿಸಿದ್ದಾರೆ. ಒಮ್ಮೆ ತಮ್ಮ ವಿರುದ್ಧ ದೂರು ನೀಡಿದ್ದ ವ್ಯಕ್ತಿ ಯಾರೆಂದು ತಿಳಿದುಬಂದ ಬಳಿಕ, ಅವರೊಂದಿಗೆ ತಾನು ಮೊದಲಿನಂತೆ ಮಾತನಾಡುವುದಿಲ್ಲ ಎಂದೂ ಹೇಳಿದ್ದಾರೆ.&lt;/p&gt;&lt;h2&gt;ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ವಿವಾಹ- ಆರತಕ್ಷತೆ ಕಾರ್ಯಕ್ರಮದ ಬಳಿಕ ಈ ವದಂತಿ!&lt;/h2&gt;&lt;p&gt;ಈ ವರ್ಷದ ಆರಂಭದಲ್ಲಿ ಹೈದರಾಬಾದ್&zwnj;ನಲ್ಲಿ ನಡೆದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ನೀನಾ ಗುಪ್ತಾ ಭಾಗವಹಿಸಿದ್ದರು. ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದವು.&lt;/p&gt;&lt;p&gt;ಆ ಚಿತ್ರಗಳಲ್ಲಿ ನೀನಾ ಗುಪ್ತಾ ಅವರ ಹೊಟ್ಟೆಯ ಭಾಗದಲ್ಲಿ ಸ್ವಲ್ಪ ಉಬ್ಬಿದಂತೆ ಕಾಣಿಸಿಕೊಂಡಿದ್ದು, ಕೆಲವರು ಅದನ್ನು ಗಮನಿಸಿ ಅವರು ಗರ್ಭಿಣಿಯಾಗಿರಬಹುದು ಎಂದು ಊಹಿಸಲು ಆರಂಭಿಸಿದರು. ಯಾವುದೇ ದೃಢವಾದ ಮಾಹಿತಿಯಿಲ್ಲದೆ ಈ ರೀತಿಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದವು.&lt;/p&gt;&lt;p&gt;ಇದೀಗ ಆ ವಿಚಿತ್ರ ವದಂತಿಗೆ ಕಾರಣವೇನು ಎಂಬುದನ್ನು ಸ್ವತಃ ನೀನಾ ಗುಪ್ತಾ ವಿವರಿಸಿದ್ದಾರೆ. ಕಾರ್ಯಕ್ರಮಕ್ಕೆ ತಾವು ಧರಿಸಿದ್ದ ಸೀರೆ ದಪ್ಪ ಬಟ್ಟೆಯಿಂದ ತಯಾರಾಗಿತ್ತು ಎಂದು ಅವರು ಹೇಳಿದ್ದಾರೆ. ಸೀರೆಯ ಒಂದು ನೆರಿಗೆ ಹೊಟ್ಟೆಯ ಮೇಲೆ ಬಿದ್ದ ರೀತಿಯಿಂದಾಗಿ ಅಲ್ಲಿ ಉಬ್ಬಿದಂತೆ ಕಾಣಿಸಿತ್ತು. ಇದೇ ದೃಶ್ಯ ಜನರಲ್ಲಿ ಗರ್ಭಧಾರಣೆಯ ಕುರಿತಾದ ಊಹಾಪೋಹಕ್ಕೆ ಕಾರಣವಾಯಿತು ಎಂದು ನಟಿ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h3&gt;ನನ್ನ 60ರ ವಯಸ್ಸಿನಲ್ಲಿ ಗರ್ಭಿಣಿಯಾದೆ&lt;/h3&gt;&lt;p&gt;ಈ ವಿಚಾರದ ಬಗ್ಗೆ ಮಾತನಾಡುವಾಗ ನೀನಾ ಗುಪ್ತಾ ಹಾಸ್ಯಮಯವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಜನರು ತಮ್ಮನ್ನು 60ರ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾರೆ ಎಂದು ಹೇಳಲು ಆರಂಭಿಸಿದ್ದನ್ನು ಕೇಳಿ ತಮಗೆ ಆಶ್ಚರ್ಯವಾಯಿತು ಎಂದಿದ್ದಾರೆ. ಕೊನೆಗೆ ಯಾರಾದರೂ ಈ ಬಗ್ಗೆ ಪ್ರಶ್ನಿಸಿದಾಗ, ತಾವು ಕೂಡ ಹಾಸ್ಯವಾಗಿ &ldquo;ಹೌದು, ನಾನು ಗರ್ಭಿಣಿ&rdquo; ಎಂದು ಹೇಳಲು ಆರಂಭಿಸಿದ್ದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಅಷ್ಟೇ ಅಲ್ಲದೆ, 70ರ ಹರೆಯದ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿಯನ್ನು ತಾವು ಕೇಳಿರುವುದಾಗಿ ಹೇಳಿದ ನೀನಾ ಗುಪ್ತಾ, &ldquo;ಹಾಗಾದರೆ ನನಗೂ ಇನ್ನೂ ಅವಕಾಶವಿದೆ&rdquo; ಎಂಬರ್ಥದಲ್ಲಿ ತಮಾಷೆ ಮಾಡಿದ್ದಾರೆ. ಈ ಮಾತಿನೊಂದಿಗೆ ಅವರು ನಕ್ಕಿರುವುದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಆದರೆ ನಿರಂತರವಾಗಿ ಇದೇ ಪ್ರಶ್ನೆಗಳನ್ನು ಕೇಳುತ್ತಿದ್ದದ್ದು ತಮಗೆ ಕಿರಿಕಿರಿ ಉಂಟುಮಾಡಿತ್ತು ಎಂಬುದನ್ನೂ ನಟಿ ಸ್ಪಷ್ಟಪಡಿಸಿದ್ದಾರೆ. &ldquo;ಇದರಿಂದ ನನಗೆ ಬೇಸರವಾಗಿತ್ತು&rdquo; ಎಂದು ನೀನಾ ಗುಪ್ತಾ ಹೇಳಿದ್ದಾರೆ.&lt;/p&gt;&lt;p&gt;ನೀನಾ ಗುಪ್ತಾ ಅವರ ಜೀವನದಲ್ಲಿ ಇಂತಹ ಸಾರ್ವಜನಿಕ ಚರ್ಚೆಗಳು ಇದೇ ಮೊದಲೇನಲ್ಲ. ಸಮಾಜದ ಸಾಂಪ್ರದಾಯಿಕ ನಿರೀಕ್ಷೆಗಳಿಗೆ ಭಿನ್ನವಾಗಿ ತಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡ ಸಂದರ್ಭಗಳಲ್ಲಿ ಅವರು ಸಾರ್ವಜನಿಕ ಟೀಕೆಯನ್ನು ಎದುರಿಸಿದ್ದಾರೆ. ವಿವಿಯನ್ ರಿಚರ್ಡ್ಸ್ ಅವರೊಂದಿಗಿನ ಸಂಬಂಧ, ಮಸಾಬಾಳನ್ನು ಏಕಾಂಗಿ ತಾಯಿಯಾಗಿ ಬೆಳೆಸಿದ ನಿರ್ಧಾರ ಹಾಗೂ ತಮ್ಮ ಫ್ಯಾಷನ್ ಆಯ್ಕೆಗಳ ಕುರಿತು ಬಂದ ಟೀಕೆಗಳ ಬಗ್ಗೆ ಅವರು ಹಲವು ಬಾರಿ ಮಾತನಾಡಿದ್ದಾರೆ.&lt;/p&gt;&lt;p&gt;ತಮ್ಮ ವೈಯಕ್ತಿಕ ಜೀವನದ ಬಗ್ಗೆ ಜನರು ನಿರಂತರವಾಗಿ ಕುತೂಹಲ ತೋರಿಸುವುದನ್ನು ನೀನಾ ಗುಪ್ತಾ ಹಲವು ಸಂದರ್ಭಗಳಲ್ಲಿ ನೇರವಾಗಿ ಎದುರಿಸಿದ್ದಾರೆ. ಈ ಬಾರಿಯೂ ಗರ್ಭಧಾರಣೆಯ ವದಂತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಬದಲು ಹಾಸ್ಯದ ಮೂಲಕವೇ ಪ್ರತಿಕ್ರಿಯಿಸಿರುವುದು ಅವರ ವಿಶಿಷ್ಟ ಶೈಲಿಗೆ ಮತ್ತೊಂದು ಉದಾಹರಣೆಯಾಗಿದೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/neena-gupta-talks-about-criticism-over-the-years-regarding-her-personal-life-as-well-as-the-pregnancy-rumours/articleshow-ae3mplp"/>
        </item>
        <item>
            <title><![CDATA[ಎಂ.ಎಸ್‌. ಸುಬ್ಬುಲಕ್ಷ್ಮಿ ದೇಶದ ಮೊದಲ ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್: ಕಮಲ್ ಹಾಸನ್]]></title>
            <link>https://kannada.asianetnews.com/entertainment/tamil-actor-kamal-haasan-calls-ms-subbulakshmi-a-pan-india-superstar-and-rashmika-mandanna-gvd/articleshow-7kpuos4</link>
            <guid isPermaLink="true">https://kannada.asianetnews.com/entertainment/tamil-actor-kamal-haasan-calls-ms-subbulakshmi-a-pan-india-superstar-and-rashmika-mandanna-gvd/articleshow-7kpuos4</guid>
            <pubDate>Fri, 18 Sep 2026 15:37:09 +0530</pubDate>
            <description><![CDATA[&lt;p&gt;ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಹುಭಾಷಾ ಬಯೋಪಿಕ್&zwnj;ಗೆ ಚೆನ್ನೈನಲ್ಲಿ ಮುಹೂರ್ತ ನೆರವೇರಿದೆ. ರಶ್ಮಿಕಾ ಮಂದಣ್ಣ ಅವರು ಎಂ.ಎಸ್. ಸುಬ್ಬುಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕಮಲ್ ಹಾಸನ್ ಈ ಪಾತ್ರದ ಸವಾಲಿನ ಕುರಿತು ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2szpd452ft88z8gvph3kbjx,imgname-jbj-1789725979781.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಈ ದೇಶ ಕಂಡ ಅಪ್ರತಿಮ ಪ್ಯಾನ್-ಇಂಡಿಯಾ ಸೂಪರ್&zwnj;ಸ್ಟಾರ್&rsquo; ಎಂದು ಹಿರಿಯ ನಟ ಕಮಲ್ ಹಾಸನ್ ಬಣ್ಣಿಸಿದ್ದಾರೆ.ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನಾಚರಣೆಯ ಅಂಗವಾಗಿ ಚೆನ್ನೈನ ಮ್ಯೂಸಿಕ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಅವರ ಬಯೋಪಿಕ್&zwnj;ನ ಮುಹೂರ್ತ ಸಮಾರಂಭದಲ್ಲಿ ಅವರು ಮಾತನಾಡಿದರು.&lt;/p&gt;&lt;p&gt;ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಕುರಿತು ಮಾತನಾಡಿ, &lsquo;ಜಾಗತಿಕ ತಾರೆ ಮೈಕಲ್ ಜಾಕ್ಸನ್ ಪಾತ್ರ ಮಾಡುವ ನಟನಿಗೆ ಎಂತಹ ಒತ್ತಡ ಇರುತ್ತದೆಯೋ, ರಶ್ಮಿಕಾಗೂ ಅಂತಹದ್ದೇ ಸವಾಲಿದೆ. ಎಂ.ಎಸ್. ಅಮ್ಮನವರ ಕಣ್ಣಿನಲ್ಲಿದ್ದ ಕಾರುಣ್ಯವನ್ನು ತೆರೆಯ ಮೇಲೆ ತಂದರೆ ಅರ್ಧ ಗೆದ್ದಂತೆ. ಇಡೀ ದೇಶದ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದ ಇಂತಹ ಐಕಾನಿಕ್ ಪಾತ್ರವನ್ನು ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ&rsquo; ಎಂದರು.&lt;/p&gt;&lt;h2&gt;&lt;strong&gt;ದೈವಿಕ ಶಕ್ತಿಯಿದೆ&lt;/strong&gt;&lt;/h2&gt;&lt;p&gt;ಅವಕಾಶದ ಬಗ್ಗೆ ಭಾವುಕರಾಗಿ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, &lsquo;ಅಮ್ಮನವರ ಧ್ವನಿಯಲ್ಲಿ ಒಂದು ದೈವಿಕ ಶಕ್ತಿಯಿದೆ, ಅದನ್ನು ಕೇಳಿದಾಗ ಸಾಕ್ಷಾತ್ ದೇವರ ಸನ್ನಿಧಿಯಲ್ಲಿ ಕುಳಿತ ಅನುಭವವಾಗುತ್ತದೆ. ನನ್ನ ಜೀವಮಾನದ ಶ್ರೇಷ್ಠ ಅಭಿನಯವನ್ನು ಈ ಪಾತ್ರಕ್ಕಾಗಿ ನೀಡುತ್ತೇನೆ&rsquo; ಎಂದು ಭರವಸೆ ನೀಡಿದರು.&lt;/p&gt;&lt;p&gt;&lsquo;ಜೆರ್ಸಿ&rsquo; ಖ್ಯಾತಿಯ ಗೌತಮ್ ತಿನ್ನನೂರಿ ಈ ಬಯೋಪಿಕ್&zwnj; ನಿರ್ದೇಶಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ. ಕನ್ನಡದ ಖ್ಯಾತ ನಿರ್ಮಾಪಕ ರಾಕ್&zwnj;ಲೈನ್ ವೆಂಕಟೇಶ್, ಅಲ್ಲು ಅರವಿಂದ್ ಮತ್ತು ಬನ್ನಿ ವಾಸು ಜಂಟಿಯಾಗಿ ಈ ಬಹುಕೋಟಿ ವೆಚ್ಚದ ಬಹುಭಾಷಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/tamil-actor-kamal-haasan-calls-ms-subbulakshmi-a-pan-india-superstar-and-rashmika-mandanna-gvd/articleshow-7kpuos4"/>
        </item>
        <item>
            <title><![CDATA[Birthday's Special: ಕನ್ನಡದ 3 ದಿಗ್ಗಜರ ಜನ್ಮದಿನ- ವಿಷ್ಣುವರ್ಧನ್-ಉಪೇಂದ್ರ-ಶ್ರುತಿ..  ಈ ತ್ರಿಮೂರ್ತಿಗಳ ಹುಟ್ಟುಹಬ್ಬದಂದು ಇವೆಲ್ಲಾ ವಿಶೇಷತೆಗಳಿವೆ ನೋಡಿ!]]></title>
            <link>https://kannada.asianetnews.com/sandalwood/dr-vishnuvardhan-actor-upendra-and-actress-shruti-birthday-celebration-on-18th-september-going-on/articleshow-wpix7ru</link>
            <guid isPermaLink="true">https://kannada.asianetnews.com/sandalwood/dr-vishnuvardhan-actor-upendra-and-actress-shruti-birthday-celebration-on-18th-september-going-on/articleshow-wpix7ru</guid>
            <pubDate>Fri, 18 Sep 2026 14:36:15 +0530</pubDate>
            <description><![CDATA[&lt;p&gt;ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ವಿಶೇಷವಾದ ವಿಡಿಯೋ ಸರಣಿಯನ್ನು ಅನಾವರಣ ಮಾಡಿದೆ. 'ನಾ ಕಂಡ ವಿಷ್ಣು' ಶೀರ್ಷಿಕೆಯಡಿಯಲ್ಲಿ ನಟ ವಿಷ್ಣುವರ್ಧನ್ ಕುಟುಂಬ, ಆಪ್ತರು ಹಾಗೂ ಅವರ ಜೊತೆಯಲ್ಲಿ ನಟಿಸಿರುವ ಕಲಾವಿದರು ಮಾತನಾಡಿರು ವಿಡಿಯೋ ಇದಾಗಿದೆ. ಇದನ್ನು ಬೆಂಗಳೂರು ಬಜ್ (Bengaluru Buzz)' ಯೂಟ್ಯೂಬ್ ಲಿಂಕ್ ಮೂಲಕ ನೋಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sveb0ttfx0b9ftvd10vj2c,imgname-vishnuvardhan-upendra-shruti-1789721521178.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದನವನದಲ್ಲಿ ಸಿನಿಸಂಭ್ರಮದ ತ್ರಿವೇಣಿ ಸಂಗಮ: ವಿಷ್ಣುದಾದಾ ಅಮೃತ ಮಹೋತ್ಸವ, ಉಪ್ಪಿ-ಶ್ರುತಿ ಬರ್ತ್&zwnj;ಡೇ ಧಮಾಕಾ! Dr Vishnuvardhan 75th Birthday- Upendra Birtgday- Shruti Birthday&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ಇತಿಹಾಸದಲ್ಲೇ ಸೆಪ್ಟೆಂಬರ್ ತಿಂಗಳು ಎಂದರೆ ಕೇವಲ ದಿನಾಂಕವಲ್ಲ, ಅದೊಂದು ಬೃಹತ್ ಸಿನಿಸಂಭ್ರಮ! ಏಕೆಂದರೆ, ಈ ದಿನ ಕನ್ನಡ ಚಿತ್ರರಂಗವನ್ನು ಆಳಿದ, ಆಳುತ್ತಿರುವ ದಿಗ್ಗಜರ ಜನ್ಮದಿನದ ತ್ರಿವೇಣಿ ಸಂಗಮ. ಸಾಹಸಸಿಂಹ ಡಾ. ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಅವರ ಹುಟ್ಟುಹಬ್ಬದ ಸಂಭ್ರಮ ಒಂದೇ ದಿನ. ಅವರೆಲ್ಲರ ಅಭಿಮಾನಿಗಳು ಗಲ್ಲಿಗಲ್ಲಿಯಿಂದ ಗಾಂಧಿನಗರದವರೆಗೆ ತಮ್ಮ ಮೆಚ್ಚಿನ ಕಲಾವಿದರ ಪ್ರೀತಿ-ಅಭಿಮಾನಗಳಿಗೆ ಹಬ್ಬದ ವಾತಾವರಣ ಸೃಷ್ಟಿಮಾಡಿದ್ದಾರೆ. ಈ ವರ್ಷ ಪ್ರತಿಯೊಬ್ಬರ ಆಚರಣೆಯಲ್ಲೂ ಸಾಕಷ್ಟು ವಿಶೇಷತೆಗಳಿವೆ! ಅದೇನು ನೋಡಿ..&lt;/p&gt;&lt;p&gt;ಈ ವಿಶೇ&zwj;ಷ ಸಂದರ್ಭದಲ್ಲಿ ಅವರ ಹುಟ್ಟೂರಾದ ಮೈಸೂರಿನಲ್ಲಿ, ನಟಿ ಹಾಗೂ ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ನಟ ಹಾಗೂ ವಿಷ್ಣು ಅಳಿಯ ಅನಿರುದ್ಧ ಸೇರಿದಂತೆ ಇಡೀ ಕುಟುಂಬ ಹಾಗೂ ಅಭಿಮಾನಿಗಳು ಇಂದು ಹತ್ತುಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.&lt;/p&gt;&lt;h2&gt;ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ&lt;/h2&gt;&lt;p&gt;ಮುಖ್ಯವಾಗಿ, ಇಂದು ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಗಳು ಇಂದು ಮೈಸೂರಿನಲ್ಲಿ ಸೇರಿದ್ದು, ಅನ್ನದಾನ, ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಮೈಸೂರನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಮಾಡಲಿದ್ದಾರೆ.&lt;/p&gt;&lt;p&gt;ಜೊತೆಗೆ, ಬೆಂಗಳೂರಿನಲ್ಲೂ ಅಭಿಮಾನಿಗಳು ನಟ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅನೇಕ ಕಡೆಗಳಲ್ಲಿ ಆಚರಿಸುತ್ತಿದ್ದಾರೆ. ಒಟ್ಟಿನಲ್ಲಿ, ಇಂದು ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ.&lt;/p&gt;&lt;h3&gt;ವಿಷ್ಣುದಾದಾ ಅಮೃತ ಮಹೋತ್ಸವ: 18 ಗಂಟೆಗಳ ಬೃಹತ್ ಮಹಾಸಂಭ್ರಮ&lt;/h3&gt;&lt;p&gt;ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ (ಅಮೃತ ಮಹೋತ್ಸವ) ಪ್ರಯುಕ್ತ ಅಭಿಮಾನಿಗಳು ಅಭೂತಪೂರ್ವ ಪ್ಲಾನ್ ಮಾಡಿಕೊಂಡಿದ್ದಾರೆ. ವಿಷ್ಣು ಸೇನಾ ಸಮಿತಿಯು ಈ ಬಾರಿಯ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಜ್ಜಾಗಿದ್ದು, ಸೆಪ್ಟೆಂಬರ್-18ರ ಬದಲಾಗಿ ಸೆಪ್ಟೆಂಬರ್-27ರಂದು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ. ಬರೋಬ್ಬರಿ 18 ಗಂಟೆಗಳ ಕಾಲ ಸುದೀರ್ಘವಾಗಿ ನಡೆಯಲಿರುವ ಈ ಮೆಗಾ ಈವೆಂಟ್&zwnj;ನಲ್ಲಿ ಬೃಹತ್ ಧ್ವಜದ ಮೆರವಣಿಗೆ ಹಾಗೂ ಸಾಂಸ್ಕೃತಿಕ ವೈಭವ ಕಣ್ಮನ ಸೆಳೆಯಲಿದೆ. ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಅಭಿಮಾನಿಗಳು ಈ ದಿನ ಜಮಾಯಿಸಿ 'ವಿಷ್ಣುದಾದಾ' ಸ್ಮರಣೆಯಲ್ಲಿ ಮುಳುಗೇಳಲಿದ್ದಾರೆ.&lt;/p&gt;&lt;p&gt;ರಿಯಲ್ ಸ್ಟಾರ್ ಉಪೇಂದ್ರಗೆ 58ನೇ ವಸಂತ: ನೆಕ್ಸ್ಟ್ ಲೆವೆಲ್ ಸರ್ಪ್ರೈಸ್&lt;/p&gt;&lt;p&gt;ಇನ್ನೊಂದೆಡೆ, 'ಬುದ್ಧಿವಂತ' ಖ್ಯಾತಿಯ ರಿಯಲ್ ಸ್ಟಾರ್ ಉಪೇಂದ್ರ ಇಂದು ತಮ್ಮ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಉಪ್ಪಿ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಸದಾ ಹೊಸತನದ ಹಬ್ಬ! ಎಂದಿನಂತೆ ತಮ್ಮ ನಿವಾಸದ ಮುಂದೆ ನೆರೆದಿರುವ ಅಭಿಮಾನಿ ಸಾಗರವನ್ನು ಭೇಟಿಯಾಗಿ, ಪ್ರೀತಿಯ ಶುಭಾಶಯ ಸ್ವೀಕರಿಸುತ್ತಿದ್ದಾರೆ. ಈ ಶುಭ ದಿನದ ಅಂಗವಾಗಿ ಬೆಳಗ್ಗೆ 11:01 ಗಂಟೆಗೆ ಉಪ್ಪಿ ಅವರ ಹೊಸ ಚಿತ್ರದ ಧಮಾಕಾ ಪೋಸ್ಟರ್ ಬಿಡುಗಡೆಯಾಗಿದೆ. ಅರವಿಂದ್ ಕೌಶಿಕ್ ನಿರ್ದೇಶನದ ಹಾಗೂ ತರುಣ್ ಶಿವಪ್ಪ ನಿರ್ಮಾಣದ ಈ 'ನೆಕ್ಸ್ಟ್ ಲೆವೆಲ್' ಸಿನಿಮಾದಲ್ಲಿ ಒಂದು ದೊಡ್ಡ ವಿಶೇಷತೆಯಿದೆ&mdash;ಇಲ್ಲಿ ರಿಯಲ್ ಸ್ಟಾರ್ ಜೊತೆ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ತೆರೆ ಹಂಚಿಕೊಳ್ಳುತ್ತಿದ್ದು, ಚಿಕ್ಕಪ್ಪ-ಮಗನ ಕಾಂಬಿನೇಶನ್ ಸಿನಿಕಲಾಸಕ್ತರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ಈ ಚಿತ್ರಕ್ಕೆ ನಾಯಕಿಯಾಗಿದ್ದು, ಸ್ಯಾಂಡಲ್&zwnj;ವುಡ್&zwnj;ನಲ್ಲಿ ಹೊಸ ಹವಾ ಸೃಷ್ಟಿಸಲು ಸಜ್ಜಾಗಿದೆ.&lt;/p&gt;&lt;p&gt;ನಟಿ ಶ್ರುತಿ 'ಮದರ್' ಸ್ಪೆಷಲ್: ಮೈಸೂರು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ&lt;/p&gt;&lt;p&gt;ಕನ್ನಡದ ಫೇಮಸ್ ಹಿರಿಯ ನಟಿ ಶ್ರುತಿ ಅವರಿಗೂ ಇಂದು ಅತ್ಯಂತ ವಿಶೇಷವಾದ ದಿನ. ಪ್ರತಿವರ್ಷದಂತೆ ಈ ಬಾರಿಯೂ ಅವರ ಮಗಳು ಗೌರಿ ತಮ್ಮ ತಾಯಿಯ ಬರ್ತ್&zwnj;ಡೇಗಾಗಿ ಸ್ಪೆಷಲ್ ಪ್ಲಾನ್ ರೂಪಿಸಿದ್ದಾರೆ. ಈ ವರ್ಷ ಶ್ರುತಿ ಅವರ ಕುಟುಂಬ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡಿದೆ. ಇನ್ನು ಶ್ರುತಿ ಅವರ ವೃತ್ತಿಜೀವನದ 175ನೇ ಚಿತ್ರ ಸೆಟ್ಟೇರಿದ್ದು, 'ಮದರ್' ಎಂಬ ಶೀರ್ಷಿಕೆಯ ಈ ಸಿನಿಮಾವನ್ನು ರಾಕೇಶ್ ಸೋಮಣ್ಣ ನಿರ್ದೇಶಿಸುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ಶುಭ ಸಂದರ್ಭದಲ್ಲೂ ಈ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿತ್ತು.&lt;/p&gt;&lt;p&gt;ಒಟ್ಟಿನಲ್ಲಿ, ಸಾಹಸ ಸಿಂಹನ ಅಮೃತ ಮಹೋತ್ಸವದ ಸ್ಮರಣೆ, ರಿಯಲ್ ಸ್ಟಾರ್&zwnj;ನ ಮಾಸ್ ಸಿನಿಮಾ ಅಪ್&zwnj;ಡೇಟ್ ಹಾಗೂ ಹಿರಿಯ ನಟಿ ಶ್ರುತಿಯ ಮೈಲಿಗಲ್ಲಿನ 'ಮದರ್' ಸಿನಿಮಾ ಆಚರಣೆ ಸೇರಿ ಚಂದನವನದಲ್ಲಿ ಹಬ್ಬದ ಕಳೆ ಕಟ್ಟಿರುವುದಂತೂ ಸತ್ಯ!&lt;/p&gt;&lt;p&gt;ಇನ್ನೂ ಒಂದು ಭಾರೀ ವಿಶೇಷತೆ ನಿಮಗಾಗಿ ಕಾದಿದೆ!&lt;/p&gt;&lt;p&gt;ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಈ ವಿಶೇ&zwj;ಷ ಸಂದರ್ಭದಲ್ಲಿ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ವಿಶೇಷವಾದ ಒಂದು ಸರಣಿಯನ್ನು ಪೋಸ್ಟ್ ಮಾಡುತ್ತಿದೆ. 'ನಾ ಕಂಡ ವಿಷ್ಣು' ಶೀರ್ಷಿಕೆಯಡಿಯಲ್ಲಿ ನಟ ವಿಷ್ಣುವರ್ಧನ್ ಕುಟುಂಬ, ಆಪ್ತರು ಹಾಗೂ ಅವರ ಜೊತೆಯಲ್ಲಿ ನಟಿಸಿರುವ ಕಲಾವಿದರ ಮಾತುಗಳನ್ನು ವಿಡಿಯೋ ರೂಪದಲ್ಲಿ ಅನಾವರಣ ಮಾಡಿದೆ. ಇದನ್ನು 'ಏಷ್ಯಾನೆಟ್ ಸುವರ್ಣ'ದ 'ಬೆಂಗಳೂರು ಬಜ್ (Bengaluru Buzz)' ಯೂಟ್ಯೂಬ್ ಲಿಂಕ್ ಮೂಲಕ ನೋಡಬಹುದು.&lt;/p&gt;&lt;p&gt;Link: ಈ ಲಿಂಕ್ ಕ್ಲಿಕ್ ಮಾಡಿ- https://www.youtube.com/results?search_query=Bengaluru+Buzz&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/dr-vishnuvardhan-actor-upendra-and-actress-shruti-birthday-celebration-on-18th-september-going-on/articleshow-wpix7ru"/>
        </item>
        <item>
            <title><![CDATA[Dr Vishnuvardhan 75th Birthday: ವಿಷ್ಣುವರ್ಧನ್ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲದ ಹಲವು ಸೀಕ್ರೆಟ್‌ಗಳು ಇಲ್ಲಿವೆ ನೋಡಿ!]]></title>
            <link>https://kannada.asianetnews.com/sandalwood/legendary-actor-dr-vishnuvardhan-75th-birthday-special-story-including-mysuru-today-programmes/articleshow-0r9feqt</link>
            <guid isPermaLink="true">https://kannada.asianetnews.com/sandalwood/legendary-actor-dr-vishnuvardhan-75th-birthday-special-story-including-mysuru-today-programmes/articleshow-0r9feqt</guid>
            <pubDate>Fri, 18 Sep 2026 11:55:56 +0530</pubDate>
            <description><![CDATA[&lt;p&gt;ಇಂದು ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಗಳು ಇಂದು ಮೈಸೂರಿನಲ್ಲಿ ಸೇರಿದ್ದು, ಅನ್ನದಾನ, ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಮೈಸೂರನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಮಾಡಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sjrk9kbfy4s6ctnhqj1neh,imgname-dr-vishnuvardhan-1789712420147.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Dr Vishnuvardhan 75th Birthday grand celebration-ಸಾಹಸಸಿಂಹ ನಟ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬದ ಆಚರಣೆ&lt;/strong&gt;&lt;/p&gt;&lt;p&gt;ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ (Dr Vishnuvardhan) ಅವರ 75ನೇ ಹುಟ್ಟುಹಬ್ಬವನ್ನು ಇಂದು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ, ನಟ ವಿಷ್ಣುವರ್ಧನ್ ಹುಟ್ಟೂರಾದ ಮೈಸೂರಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡಿಗರ ದೌಭಾಗ್ಯ ಎಂಬಂತೆ, ನಟ ವಿಷ್ಣುವರ್ಧನ್ ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ದಿವ್ಯ ಚೇತನದ ರೂಪದಲ್ಲಿ, ಅವರ ಸಿನಿಮಾದ ಮೂಲಕ ಜಗತ್ತು ಇರುವವರೆಗೂ ಬದುಕಿರಲಿದ್ದಾರೆ, ಬಹಳಷ್ಟು ಜನರ ಪಾಲಿಗೆ ಸ್ಪೂರ್ತಿಯ ಸೆಲೆಯಾಗಲಿದ್ದಾರೆ.&lt;/p&gt;&lt;h2&gt;18 ಸೆಪ್ಟೆಂಬರ್ 1950ರಂದು ಮೈಸೂರಿನಲ್ಲಿ ಜನನ&lt;/h2&gt;&lt;p&gt;ಹೌದು, ನಟ ವಿಷ್ಣುವರ್ಧನ್ ಅವರು 18 ಸೆಪ್ಟೆಂಬರ್ 1950ರಂದು ಮೈಸೂರಿನಲ್ಲಿ ಜನಿಸಿದ್ದಾರೆ. ಸಂಪತ್ ಕುಮಾರ್ ಎಂಬ ಮೂಲ ಹೆಸರಿನ ಈ ನಟ ಅದೇ ಹೆಸರಿನಲ್ಲಿ 1972ರಲ್ಲಿ ತೆರೆಗೆ ಬಂದ 'ವಂಶವೃಕ್ಷ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ, ಅದೇ ವರ್ಷ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾದ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದರು. ಬಳಿಕ ಅವರು 5 ಬಾಷೆಗಳ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡದ ಮೇರುನಟರಲ್ಲಿ ಒಬ್ಬರಾದರು. ಕರ್ನಾಟಕ ರತ್ನ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ನಟ ವಿಷ್ಣುವರ್ಧನ್ ಭಾಜನರಾಗಿದ್ದಾರೆ.&lt;/p&gt;&lt;p&gt;ವಿಷ್ಣುವರ್ಧನ್ ನಟನೆಯ ನಾಗರಹಾವು, ಮುತ್ತಿನ ಹಾರ, ಯಜಮಾನ, ಬಂಧನ, ಆಪ್ತಮಿತ್ರ ಹಾಗೂ ಆಪ್ತರಕ್ಷಕ ಸೇರಿದಂತೆ ಹಲವಾರು ಸಿನಿಮಾಗಳು ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ ಅವರನ್ನು ಕನ್ನಡದ ಜನತೆ ಎಂದೆಂದೂ ಮರೆಯಲಾಗದಂತೆ ಮಾಡಿಬಿಟ್ಟಿವೆ. ತಮ್ಮ 59ನೆಯ ವಯಸ್ಸಿನಲ್ಲಿ (30 ಡಿಸೆಂಬರ್ 2009) ಇಹಲೋಕ ಯಾತ್ರೆ ಮುಗಿಸಿರುವ ನಟ ವಿಷ್ಣುವರ್ಧನ್ ಹುಟ್ಟಿ ಇಂದಿಗೆ 75 ವರ್ಷ. ಈ ವಿಶೇ&zwj;ಷ ಸಂದರ್ಭದಲ್ಲಿ ಅವರ ಹುಟ್ಟೂರಾದ ಮೈಸೂರಿನಲ್ಲಿ, ನಟಿ ಹಾಗೂ ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ನಟ ಹಾಗೂ ವಿಷ್ಣು ಅಳಿಯ ಅನಿರುದ್ಧ ಸೇರಿದಂತೆ ಇಡೀ ಕುಟುಂಬ ಹಾಗೂ ಅಭಿಮಾನಿಗಳು ಇಂದು ಹತ್ತುಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.&lt;/p&gt;&lt;h3&gt;ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ&lt;/h3&gt;&lt;p&gt;ಮುಖ್ಯವಾಗಿ, ಇಂದು ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಗಳು ಇಂದು ಮೈಸೂರಿನಲ್ಲಿ ಸೇರಿದ್ದು, ಅನ್ನದಾನ, ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಮೈಸೂರನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಮಾಡಲಿದ್ದಾರೆ. ಜೊತೆಗೆ, ಬೆಂಗಳೂರಿನಲ್ಲೂ ಅಭಿಮಾನಿಗಳು ನಟ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅನೇಕ ಕಡೆಗಳಲ್ಲಿ ಆಚರಿಸುತ್ತಿದ್ದಾರೆ. ಒಟ್ಟಿನಲ್ಲಿ, ಇಂದು ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ.&lt;/p&gt;&lt;p&gt;ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಈ ವಿಶೇ&zwj;ಷ ಸಂದರ್ಭದಲ್ಲಿ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ವಿಶೇಷವಾದ ಒಂದು ಸರಣಿಯನ್ನು ಪೋಸ್ಟ್ ಮಾಡುತ್ತಿದೆ. 'ನಾ ಕಂಡ ವಿಷ್ಣು' ಶೀರ್ಷಿಕೆಯಡಿಯಲ್ಲಿ ನಟ ವಿಷ್ಣುವರ್ಧನ್ ಕುಟುಂಬ, ಆಪ್ತರು ಹಾಗೂ ಅವರ ಜೊತೆಯಲ್ಲಿ ನಟಿಸಿರುವ ಕಲಾವಿದರ ಮಾತುಗಳನ್ನು ವಿಡಿಯೋ ರೂಪದಲ್ಲಿ ಅನಾವರಣ ಮಾಡಿದೆ. ಇದನ್ನು 'ಏಷ್ಯಾನೆಟ್ ಸುವರ್ಣ'ದ 'ಬೆಂಗಳೂರು ಬಜ್ (Bengaluru Buzz)' ಲಿಂಕ್ ಮೂಲಕ ನೋಡಬಹುದು.&lt;/p&gt;&lt;p&gt;ಈ ಲಿಂಕ್&zwnj;ನಲ್ಲಿರುವ &lsquo;ನಾ ಕಂಡ ವಿಷ್ಣು&rsquo; ಸರಣಿ ವಿಡಿಯೋಗಳಲ್ಲಿ ನಟ ವಿಷ್ಣುವರ್ಧನ್ ಅವರ ಬಗ್ಗೆ ಹಲವರಿಗೆ ಇನ್ನೂ ಗೊತ್ತಿಲ್ಲದ ಸೀಕ್ರೆಟ್&zwnj;ಗಳನ್ನು ತಿಳಿದುಕೊಳ್ಳಬಹುದು. ಸಾಹಸ ಸಿಂಹನ ಜೊತೆ ತೆರೆ ಹಂಚಿಕೊಂಡ ಹಲವರು ನಟ ವಿಷ್ಣುವರ್ಧನ್ ಬಗೆಗಿನ ಹಲವು ವಿಶೇಷ ಸಂಗತಿಗಳನ್ನು, ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಅವೆಲ್ಲವೂ ಅದರಲ್ಲಿದೆ ನೋಡಿ..&lt;/p&gt;&lt;p&gt;Link: ಈ ಲಿಂಕ್ ಕ್ಲಿಕ್ ಮಾಡಿ- https://www.youtube.com/results?search_query=Bengaluru+Buzz&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/legendary-actor-dr-vishnuvardhan-75th-birthday-special-story-including-mysuru-today-programmes/articleshow-0r9feqt"/>
        </item>
        <item>
            <title><![CDATA[25 ವರ್ಷಗಳ ಕನಸು ನನಸಾಗುತ್ತಾ.. ಮೆಗಾಸ್ಟಾರ್ ಚಿರಂಜೀವಿಗೆ ಜೋಡಿಯಾಗ್ತಾರಾ ನಟಿ ಸ್ನೇಹಾ?]]></title>
            <link>https://kannada.asianetnews.com/entertainment/telugu-movie-kaaka-update-actress-sneha-reported-role-and-chiranjeevi-sankranti-release-gvd/articleshow-713k0wg</link>
            <guid isPermaLink="true">https://kannada.asianetnews.com/entertainment/telugu-movie-kaaka-update-actress-sneha-reported-role-and-chiranjeevi-sankranti-release-gvd/articleshow-713k0wg</guid>
            <pubDate>Thu, 17 Sep 2026 21:10:04 +0530</pubDate>
            <description><![CDATA[&lt;p&gt;ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಕಾಕಾ' ಸಿನಿಮಾದಲ್ಲಿ ಸೀನಿಯರ್ ನಟಿ ಸ್ನೇಹಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಸಂಕ್ರಾಂತಿ ರಿಲೀಸ್ ಬಗ್ಗೆಯೂ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2r0c4e21560x3x00fr97484,imgname-jjb-1789659582913.png" type="image/jpeg" height="390" width="690"/>
            <content:encoded><![CDATA[&lt;p&gt;ಮೆಗಾಸ್ಟಾರ್ ಚಿರಂಜೀವಿ ಹಾಗೂ ನಿರ್ದೇಶಕ ಬಾಬಿ ಕೊಲ್ಲಿ ಕಾಂಬಿನೇಷನ್&zwnj;ನ 'ಕಾಕಾ' ಸಿನಿಮಾ ಬಗ್ಗೆ ದಿನಕ್ಕೊಂದು ಕುತೂಹಲಕಾರಿ ಸುದ್ದಿ ಹೊರಬೀಳುತ್ತಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ಗ್ಲಿಂಪ್ಸ್ ನಿರೀಕ್ಷೆ ಹೆಚ್ಚಿಸಿದ್ದರೆ, ಇದೀಗ ಸೀನಿಯರ್ ನಟಿ ಸ್ನೇಹಾ ಈ ಚಿತ್ರತಂಡ ಸೇರಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸಿನಿಮಾದಲ್ಲಿ ಅವರು ಚಿರಂಜೀವಿ ಪತ್ನಿಯಾಗಿ ನಟಿಸಲಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆಯಾಗುತ್ತಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ.&lt;/p&gt;&lt;p&gt;ಚಿರಂಜೀವಿ ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಅನ್ನೋದು ತಮ್ಮ ಬಹುಕಾಲದ ಆಸೆ ಎಂದು ನಟಿ ಸ್ನೇಹಾ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದೀಗ 'ಕಾಕಾ' ಮೂಲಕ ಆ ಅವಕಾಶ ಒಲಿದುಬಂದಿದೆ. ಇತ್ತೀಚೆಗೆ ಸಿನಿಮಾಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿರುವ ಸ್ನೇಹಾಗೆ, ಮೆಗಾಸ್ಟಾರ್ ಜೊತೆ ನಟಿಸುವ ಚಾನ್ಸ್ ಸಿಕ್ಕಿರುವುದು ವಿಶೇಷ. ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿರುವ ಅವರ ಬಹುಕಾಲದ ಕನಸು ಈಗ ನನಸಾಗುತ್ತಿದೆ.&lt;/p&gt;&lt;p&gt;'ಕಾಕಾ' ಚಿತ್ರದಲ್ಲಿ ಚಿರಂಜೀವಿ 'ಕೆ. ಸತ್ಯಂ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಕ್ವಾ ಫ್ಯಾಕ್ಟರಿಯಲ್ಲಿ ಸೂಪರ್&zwnj;ವೈಸರ್ ಆಗಿ ಕೆಲಸ ಮಾಡುವ ಸಾಮಾನ್ಯ ವ್ಯಕ್ತಿಯಾಗಿ ಅವರ ಪಾತ್ರ ಪರಿಚಯವಾಗಲಿದೆ. ಆದರೆ ಆತನ ಸಾಮಾನ್ಯ ಬದುಕಿನ ಹಿಂದೆ ಒಂದು ಬಲವಾದ ಕಥೆ ಅಡಗಿದೆ ಅನ್ನೋದನ್ನು ಗ್ಲಿಂಪ್ಸ್ ವಿಡಿಯೋ ಸುಳಿವು ನೀಡಿದೆ. ಚಿರಂಜೀವಿ ಅವರ ಹಿಂದಿನ ಸಿನಿಮಾಗಳಿಗಿಂತ ಈ ಪಾತ್ರ ತೀರಾ ಭಿನ್ನವಾಗಿರಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;p&gt;ಮಲಯಾಳಂ ನಟಿ ಅನಸ್ವರಾ ರಾಜನ್ ಕೂಡ ಈ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಅವರು 'ಅಮ್ಮುಲು ಪಾಪ' ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಕಥೆಯಲ್ಲಿ ಈ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿ ಚಿರಂಜೀವಿ ಹಾಗೂ ಅನಸ್ವರಾ ರಾಜನ್ ಪಾತ್ರದ ಸುತ್ತ ಕಥೆ ಹೇಗೆ ಸಾಗಲಿದೆ ಎಂಬ ಕುತೂಹಲ ಮೂಡಿದೆ.&lt;/p&gt;&lt;h2&gt;&lt;strong&gt;ಸಂಕ್ರಾಂತಿ ರಿಲೀಸ್ ಬಗ್ಗೆ ಕ್ಲಾರಿಟಿ&lt;/strong&gt;&lt;/h2&gt;&lt;p&gt;'ಕಾಕಾ' ಸಿನಿಮಾವನ್ನು 2027ರ ಜನವರಿ 13ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡುವುದಾಗಿ ಈಗಾಗಲೇ ಘೋಷಿಸಲಾಗಿದೆ. ಆದರೆ ಚಿರಂಜೀವಿ ನಟನೆಯ 'ವಿಶ್ವಂಭರ' ಕೂಡ ಸಂಕ್ರಾಂತಿಗೆ ಬರಲಿದೆ, ಹೀಗಾಗಿ 'ಕಾಕಾ' ಬೇಸಿಗೆಗೆ ಮುಂದೂಡಿಕೆಯಾಗಲಿದೆ ಎಂಬ ವದಂತಿ ಹಬ್ಬಿತ್ತು. ಈ ಎಲ್ಲಾ ಗಾಸಿಪ್&zwnj;ಗಳಿಗೆ ಬ್ರೇಕ್ ಹಾಕಿರುವ ನಿರ್ಮಾಪಕರು, ಸಿನಿಮಾ ಸಂಕ್ರಾಂತಿಗೇ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರ 2027ರ ಜನವರಿ 13ರಂದು ವಿಶ್ವಾದ್ಯಂತ ತೆರೆಕಾಣಲಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/telugu-movie-kaaka-update-actress-sneha-reported-role-and-chiranjeevi-sankranti-release-gvd/articleshow-713k0wg"/>
        </item>
        <item>
            <title><![CDATA[ನಟಿ ಶ್ರೀದೇವಿ ಚೆನ್ನೈ ಆಸ್ತಿ ವಿವಾದಕ್ಕೆ ಹೊಸ ತಿರುವು: ಸುಪ್ರೀಂ ಕೋರ್ಟ್‌ನಿಂದ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ]]></title>
            <link>https://kannada.asianetnews.com/news-entertainment/sridevi-property-dispute-supreme-court-status-quo-bonney-janhvi-khushi-notice-san/articleshow-ck7mvid</link>
            <guid isPermaLink="true">https://kannada.asianetnews.com/news-entertainment/sridevi-property-dispute-supreme-court-status-quo-bonney-janhvi-khushi-notice-san/articleshow-ck7mvid</guid>
            <pubDate>Thu, 17 Sep 2026 19:50:48 +0530</pubDate>
            <description><![CDATA[&lt;p&gt;ದಿವಂಗತ ನಟಿ ಶ್ರೀದೇವಿ ಕುಟುಂಬಕ್ಕೆ ಸೇರಿದ ಚೆನ್ನೈನ 4.7 ಎಕರೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcgfg0nbvkxz7r3wf25g7wqk,imgname-136365271-10157851099244080-2450102343400715809-n-1765784683179.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.17): &lt;/strong&gt;ದಿವಂಗತ ಖ್ಯಾತ ನಟಿ ಶ್ರೀದೇವಿ (Sridevi) ಅವರ ಕುಟುಂಬಕ್ಕೆ ಸೇರಿದ ಚೆನ್ನೈನ ಬೆಲೆಬಾಳುವ 4.7 ಎಕರೆ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಬುಧವಾರ ಪ್ರಮುಖ ಆದೇಶ ನೀಡಿದ್ದು, ಸದ್ಯಕ್ಕೆ ವಿಷಯದಲ್ಲಿದ್ದ 'ಯಥಾಸ್ಥಿತಿ'ಯನ್ನು (Status Quo) ಕಾಯ್ದುಕೊಳ್ಳುವಂತೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಹಾಗೂ ಅರುಣ್ ಪಲ್ಲಿ ಅವರನ್ನೊಳಗೊಂಡ ಪೀಠವು, ಮದ್ರಾಸ್ ಹೈಕೋರ್ಟ್ ನೀಡಿದ್ದ ಏಪ್ರಿಲ್ 20 ರ ಆದೇಶವನ್ನು ಪ್ರಶ್ನಿಸಿ ಎಂ.ಸಿ. ಶಿವಕಾಮಿ ಮತ್ತು ಅವರ ಸಹೋದರ ಎಂ.ಸಿ. ನಟರಾಜನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಇದರ ಜೊತೆಗೆ, ನಟಿ ಶ್ರೀದೇವಿ ಅವರ ಪತಿ, ನಿರ್ಮಾಪಕ ಬೋನಿ ಕಪೂರ್ (Boney Kapoor) ಹಾಗೂ ಪುತ್ರಿಯರಾದ ಜಾನ್ವಿ ಕಪೂರ್ (Janhvi Kapoor) ಮತ್ತು ಖುಷಿ ಕಪೂರ್ (Khushi Kapoor) ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಅವರ ಪ್ರತಿಕ್ರಿಯೆಯನ್ನು ಕೇಳಿದೆ.&lt;/p&gt;&lt;h2&gt;&lt;strong&gt;ವಿವಾದದ ಹಿನ್ನೆಲೆ: 1988 ರ ಕ್ರಯಪತ್ರಕ್ಕೆ ಸವಾಲು!&lt;/strong&gt;&lt;/h2&gt;&lt;p&gt;ಅರ್ಜಿದಾರರಾದ ಶಿವಕಾಮಿ, ನಟರಾಜನ್ ಮತ್ತು ಅವರ ತಾಯಿ ಚಂದ್ರಭಾನು ಅವರು ಈ ಹಿಂದೆ ಚೆಂಗಲ್ಪಟ್ಟುವಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು (Additional District Judge at Chengalpattu) ಸಂಪರ್ಕಿಸಿದ್ದರು. 1988 ರ ಏಪ್ರಿಲ್ 19 ರಂದು ಎಂ.ಸಿ. ನಿತ್ಯಾನಂದ ಮೂದಲಿಯಾರ್ ಎಂಬವರಿಂದ ನಟಿ ಶ್ರೀದೇವಿ, ಅವರ ತಂಗಿ ಶ್ರೀಲತಾ ಮತ್ತು ತಾಯಿ ರಾಜೇಶ್ವರಿ ಅವರು ಖರೀದಿ ಮಾಡಿದ್ದ ಜಮೀನಿನ ಕ್ರಯಪತ್ರಗಳನ್ನು (Sale Deeds) &quot;ಶೂನ್ಯ ಮತ್ತು ಸಿಂಧುವಲ್ಲ&quot; (Null and Void) ಎಂದು ಘೋಷಿಸುವಂತೆ ಕೋರಿದ್ದರು. ನಿತ್ಯಾನಂದ ಮೂದಲಿಯಾರ್, ಎಂ.ಸಿ. ಚೊಕ್ಕಲಿಂಗಂ ಮೂದಲಿಯಾರ್ ಹಾಗೂ ಎಂ.ಸಿ. ಚಂದ್ರಶೇಖರನ್ ಮೂದಲಿಯಾರ್ ಅವರು ಎಂ.ಸಿ. ಸಂಬಂಧ ಮೂದಲಿಯಾರ್ ಎಂಬುವರ ಪುತ್ರರಾಗಿದ್ದರು.&lt;/p&gt;&lt;p&gt;ಅರ್ಜಿದಾರರು, ಈ ಆಸ್ತಿಯು ಮೂಲತಃ ತಮ್ಮ ತಾತ ಸಂಬಂಧ ಮುದಲಿಯಾರ್ ಅವರಿಗೆ ಸೇರಿದ್ದು, ತಮ್ಮ ತಂದೆ ಚಂದ್ರಶೇಖರನ್ ಮೂದಲಿಯಾರ್ ಅವರ ಮೂಲಕ ತಮಗೆ ಈ ಆಸ್ತಿಯಲ್ಲಿ 5 ನೇ 1 (1/5th share) ಭಾಗದಷ್ಟು ಪಾಲು ಬರಬೇಕಿದೆ ಎಂದು ವಾದಿಸಿದ್ದರು.&lt;/p&gt;&lt;h2&gt;&lt;strong&gt;ಮದ್ರಾಸ್ ಹೈಕೋರ್ಟ್&zwnj;ನಲ್ಲಿ ಕಪೂರ್ ಕುಟುಂಬದ ವಾದ&lt;/strong&gt;&lt;/h2&gt;&lt;p&gt;ಚೆಂಗಲ್ಪಟ್ಟು ನ್ಯಾಯಾಲಯವು ಕಪೂರ್ ಕುಟುಂಬಕ್ಕೆ ಸಮನ್ಸ್ ಜಾರಿ ಮಾಡಿದ ನಂತರ, ಬೋನಿ ಕಪೂರ್ ಕುಟುಂಬವು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಕಪೂರ್ ಕುಟುಂಬವು ನ್ಯಾಯಾಲಯದಲ್ಲಿ ವಾದಿಸಿ, 'ಚಂದ್ರಶೇಖರನ್ ಮತ್ತು ಚಂದ್ರಭಾನು ದಂಪತಿ ಕೇವಲ ಸಹಜೀವನದಲ್ಲಿದ್ದರು (Live-in relationship). ಚಂದ್ರಶೇಖರನ್ ಅವರು 1957 ರ ಜೂನ್&zwnj;ನಲ್ಲಿ ಎಂ.ಸಿ. ಭಾನುಮತಿ ಎಂಬುವವರನ್ನು ವಿವಾಹವಾಗಿದ್ದರು ಮತ್ತು ಈ ಮೊದಲ ಮದುವೆಯನ್ನು ಯಾವುದೇ ನ್ಯಾಯಾಲಯ ರದ್ದುಗೊಳಿಸಿಲ್ಲ. ಹೀಗಾಗಿ ಶಿವಕಾಮಿ, ನಟರಾಜನ್ ಮತ್ತು ಅವರ ತಾಯಿ ಚಂದ್ರಭಾನು ಅವರು ಚಂದ್ರಶೇಖರನ್ ಅವರ ಕಾನೂನುಬದ್ಧ ವಾರಸುದಾರರಾಗಲು ಸಾಧ್ಯವಿಲ್ಲ' ಎಂದು ವಾದಿಸಿತ್ತು.&lt;/p&gt;&lt;h2&gt;&lt;strong&gt;ಹೈಕೋರ್ಟ್ ನೀಡಿದ್ದ ತೀರ್ಪೇನು?&lt;/strong&gt;&lt;/h2&gt;&lt;p&gt;ಕಪೂರ್ ಕುಟುಂಬದ ವಾದವನ್ನು ಆಲಿಸಿದ್ದ ಮದ್ರಾಸ್ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ (Trial Court) ಆದೇಶವನ್ನು ವಜಾಗೊಳಿಸಿತ್ತು.'ಕೇವಲ ಆಸ್ತಿಯನ್ನು ಕಬಳಿಸುವ ದುರುದ್ದೇಶದಿಂದ, ಕಾನೂನಿನ ದುರುಪಯೋಗ ಪಡಿಸಿಕೊಂಡು ದಾವೆದಾರರು ಈ ಪಾಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ಹಾಗೂ ದಾಖಲೆಗಳ ಆಧಾರದ ಮೇಲೆ ಇದು ಅನುಮತಿಸಲು ಸಾಧ್ಯವಿಲ್ಲ. ಕಾಲಮಿತಿಯ ನಿಯಮದ (Barred by Limitation) ಆಧಾರದ ಮೇಲೆ ಮತ್ತು ಯಾವುದೇ ಸಮಂಜಸವಾದ ಕಾರಣವಿಲ್ಲದೆ ಈ ದಾವೆ ಹೂಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ' ಎಂದು ಹೈಕೋರ್ಟ್ ಕಟುವಾಗಿ ಹೇಳಿತ್ತು.&lt;/p&gt;&lt;p&gt;ಅಲ್ಲದೆ, 1998 ರವರೆಗೆ ಜೀವಂತವಾಗಿದ್ದ ಭಾನುಮತಿ ಅವರೇ ಚಂದ್ರಶೇಖರನ್ ಅವರ ಮೊದಲ ಹೆಂಡತಿ ಮತ್ತು ಅವರಿಗೆ ಯಾವುದೇ ಮಕ್ಕಳಿರಲಿಲ್ಲ ಎಂಬುದನ್ನು ಕಂದಾಯ ಇಲಾಖೆಯ ನಡಾವಳಿಗಳ ವೇಳೆ ಅರ್ಜಿದಾರರು ಒಪ್ಪಿಕೊಂಡಿದ್ದರು. ಆದರೆ ಈ ಪ್ರಮುಖ ಸತ್ಯವನ್ನು ನ್ಯಾಯಾಲಯದಿಂದ ಮುಚ್ಚಿಟ್ಟಿದ್ದರು ಎಂದು ಹೈಕೋರ್ಟ್ ಎತ್ತಿ ತೋರಿಸಿತ್ತು. ಜೊತೆಗೆ, ಅರ್ಜಿದಾರರು ಚಂದ್ರಶೇಖರನ್ ಅವರ ಏಕೈಕ ಕಾನೂನುಬದ್ಧ ವಾರಸುದಾರರು ಎಂದು 2005 ರ ಜೂನ್ 21 ರಂದು ಪಡೆದುಕೊಂಡಿದ್ದ ಪ್ರಮಾಣಪತ್ರವನ್ನು ಈಗಾಗಲೇ ರದ್ದುಗೊಳಿಸಲಾಗಿದೆ ಎಂದೂ ಹೈಕೋರ್ಟ್ ಉಲ್ಲೇಖಿಸಿತ್ತು.ಹೈಕೋರ್ಟ್&zwnj;ನ ಈ ತೀರ್ಪನ್ನು ಇದೀಗ ಅರ್ಜಿದಾರರು ಸುಪ್ರೀಂ ಕೋರ್ಟ್&zwnj;ನಲ್ಲಿ ಪ್ರಶ್ನಿಸಿದ್ದು, ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿ ಕಪೂರ್ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿದೆ.&lt;/p&gt;]]></content:encoded>
            <category>news-entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/news-entertainment/sridevi-property-dispute-supreme-court-status-quo-bonney-janhvi-khushi-notice-san/articleshow-ck7mvid"/>
        </item>
        <item>
            <title><![CDATA[ಅರೆರೆ.. ಇಂಟಿಮೇಟ್ ಸೀನ್‌ಗಳನ್ನು ಹೀಗೆ ಶೂಟ್ ಮಾಡ್ತಾರಾ? ಹಾಲಿವುಡ್ ನಟಿ ಹೇಳಿದ್ರು ಆ ಸೀಕ್ರೆಟ್!]]></title>
            <link>https://kannada.asianetnews.com/entertainment/hollywood-intimate-scenes-actress-sara-shahi-reveals-the-hidden-shooting-technique-gvd/articleshow-dn83e16</link>
            <guid isPermaLink="true">https://kannada.asianetnews.com/entertainment/hollywood-intimate-scenes-actress-sara-shahi-reveals-the-hidden-shooting-technique-gvd/articleshow-dn83e16</guid>
            <pubDate>Thu, 17 Sep 2026 18:44:14 +0530</pubDate>
            <description><![CDATA[&lt;p&gt;ಹಾಲಿವುಡ್ ನಟಿ ಸಾರಾ ಶಾಹಿ ಇಂಟಿಮೇಟ್ ಸೀನ್&zwnj;ಗಳ ಶೂಟಿಂಗ್ ವೇಳೆ ಬಳಸುವ ಯೋಗಾ ಬಾಲ್ ಟ್ರಿಕ್ ಬಗ್ಗೆ ಹೇಳಿದ್ದಾರೆ. ಇಂಥಾ ಸೀನ್&zwnj;ಗಳಲ್ಲಿ ಕಲಾವಿದರ ಕಂಫರ್ಟ್ ಮತ್ತು ಭದ್ರತೆಗೆ ನೀಡುವ ಆದ್ಯತೆ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qr18eech0fex0pw8mewmh6,imgname-nknk-1789650837966.png" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾಗಳು ಮತ್ತು ವೆಬ್ ಸೀರೀಸ್&zwnj;ಗಳಲ್ಲಿ ಬರುವ ಇಂಟಿಮೇಟ್ ಸೀನ್&zwnj;ಗಳನ್ನು ನೋಡಿದಾಗ, ಇವುಗಳನ್ನು ನಿಜವಾಗಿಯೂ ಶೂಟ್ ಮಾಡ್ತಾರಾ ಅನ್ನೋ ಡೌಟ್ ಎಲ್ಲರಿಗೂ ಬರುತ್ತೆ. ಇಂಥಾ ಸೀನ್&zwnj;ಗಳನ್ನು ಹೇಗೆ ಮಾಡ್ತಾರೆ ಅನ್ನೋದರ ಬಗ್ಗೆ ಹಾಲಿವುಡ್ ನಟಿ ಸಾರಾ ಶಾಹಿ ಒಂದು ಅಚ್ಚರಿಯ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಸಿನಿಮಾ, ವೆಬ್ ಸೀರೀಸ್&zwnj;ಗಳಲ್ಲಿ ಹೀರೋ-ಹೀರೋಯಿನ್ ನಡುವೆ ಬರುವ ಇಂಟಿಮೇಟ್ ಸೀನ್&zwnj;ಗಳು ತೆರೆಯ ಮೇಲೆ ತುಂಬಾ ನ್ಯಾಚುರಲ್ ಆಗಿ ಕಾಣಿಸುತ್ತವೆ.&lt;/p&gt;&lt;p&gt;ನಟ-ನಟಿಯರು ನಿಜವಾಗಿಯೂ ಅಷ್ಟು ಹತ್ತಿರವಿದ್ದಾರೇನೋ ಅನ್ನೋ ಫೀಲ್ ಕೊಡುತ್ತವೆ. ಆದರೆ ಕ್ಯಾಮೆರಾ ಮುಂದೆ ಇಂಥಾ ಸೀನ್&zwnj;ಗಳನ್ನು ಶೂಟ್ ಮಾಡೋದು ಅಷ್ಟು ಸುಲಭವಲ್ಲ. ಕಲಾವಿದರ ವೈಯಕ್ತಿಕ ಮಿತಿ, ಕಂಫರ್ಟ್ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ವಿಶೇಷ ತಂತ್ರಗಳನ್ನು ಬಳಸುತ್ತಾರೆ. ಅಂಥದ್ದೇ ಒಂದು ಇಂಟರೆಸ್ಟಿಂಗ್ ಟ್ರಿಕ್ ಬಗ್ಗೆ ಹಾಲಿವುಡ್ ನಟಿ ಸಾರಾ ಶಾಹಿ ಹೇಳಿದ್ದಾರೆ. ಬೋಲ್ಡ್ ಸೀನ್&zwnj;ಗಳನ್ನು ಮಾಡುವಾಗ ನಟ-ನಟಿಯರ ನಡುವೆ ಗಾಳಿ ತೆಗೆದ ಒಂದು ಸಣ್ಣ ಯೋಗಾ ಬಾಲ್ ಇಡುತ್ತಾರಂತೆ.&lt;/p&gt;&lt;p&gt;ಇದು ಕೇಳಲು ಆಶ್ಚರ್ಯ ಎನಿಸಿದರೂ, ಕಲಾವಿದರ ನಡುವೆ ನೇರವಾದ ದೈಹಿಕ ಸ್ಪರ್ಶ ಆಗದಿರಲು ಈ ಟ್ರಿಕ್ ಫಾಲೋ ಮಾಡ್ತಾರೆ. ಸೀನ್&zwnj;ನಲ್ಲಿ ಇಬ್ಬರೂ ತುಂಬಾ ಹತ್ತಿರವಿರುವಂತೆ ಕಾಣಬೇಕು. ಆದರೆ ಕ್ಯಾಮೆರಾಗೆ ಕಾಣಿಸದಂತೆ ಅವರ ನಡುವೆ ಮೆತ್ತಗಿರುವ ಯೋಗಾ ಬಾಲ್ ಇಡುತ್ತಾರೆ. ಇದರಿಂದ ಯಾರಿಗೂ ಮುಜುಗರ ಆಗುವುದಿಲ್ಲ. ಹೀರೋ ಸ್ಪರ್ಶದ ಬದಲಿಗೆ ತನಗೆ ಆ ಬಾಲ್ ಸ್ಪರ್ಶವೇ ಆಗುತ್ತಿರುತ್ತದೆ ಎಂದು ಸಾರಾ ಶಾಹಿ ಹೇಳಿದ್ದಾರೆ.&lt;/p&gt;&lt;p&gt;ಈ ರೀತಿಯ ತಂತ್ರಗಳು ಕಲಾವಿದರ ವೈಯಕ್ತಿಕ ಮಿತಿ ಮತ್ತು ಕಂಫರ್ಟ್ ಅನ್ನು ಗೌರವಿಸಲು ಸಹಾಯ ಮಾಡುತ್ತವೆ. ಮುಖ್ಯವಾಗಿ ಇಂಥಾ ಸೀನ್&zwnj;ಗಳಲ್ಲಿ ನಟ-ನಟಿಯರಿಗೆ ಯಾವುದೇ ಮುಜುಗರ ಆಗಬಾರದು ಎಂದು ಶೂಟಿಂಗ್&zwnj;ಗೂ ಮುನ್ನವೇ ಸೀನ್&zwnj;ನ ಮೂಮೆಂಟ್ಸ್, ಕ್ಯಾಮೆರಾ ಆಂಗಲ್ಸ್ ಮತ್ತು ಮಿತಿಗಳ ಬಗ್ಗೆ ಸ್ಪಷ್ಟವಾಗಿ ಚರ್ಚೆ ಮಾಡುತ್ತಾರೆ.&lt;/p&gt;&lt;h2&gt;&lt;strong&gt;ಇಂಟಿಮಸಿ ಕೋ-ಆರ್ಡಿನೇಟರ್ಸ್&lt;/strong&gt;&lt;/h2&gt;&lt;p&gt;ಇತ್ತೀಚೆಗೆ ಸಿನಿಮಾ ಮತ್ತು ಟೆಲಿವಿಷನ್ ರಂಗದಲ್ಲಿ ಇಂಥಾ ಸೀನ್&zwnj;ಗಳನ್ನು ಶೂಟ್ ಮಾಡುವಾಗ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕೆಲವು ಪ್ರೊಡಕ್ಷನ್ ಸಂಸ್ಥೆಗಳು ಇದಕ್ಕಾಗಿಯೇ 'ಇಂಟಿಮಸಿ ಕೋ-ಆರ್ಡಿನೇಟರ್ಸ್' ಅನ್ನು ನೇಮಿಸಿಕೊಳ್ಳುತ್ತವೆ. ಕಲಾವಿದರು ಎಷ್ಟು ಕಂಫರ್ಟ್ ಆಗಿದ್ದಾರೆ, ದೈಹಿಕ ಸ್ಪರ್ಶಕ್ಕೆ ಒಪ್ಪಿಗೆ ಇದೆಯಾ ಎಂಬುದನ್ನು ಮೊದಲೇ ಮಾತನಾಡಿಕೊಳ್ಳುತ್ತಾರೆ. ತೆರೆಯ ಮೇಲೆ ಕೆಲವು ಸೆಕೆಂಡುಗಳ ಕಾಲ ಬರುವ ಸೀನ್ ಹಿಂದೆ ಇಷ್ಟೆಲ್ಲಾ ಎಚ್ಚರಿಕೆ ಇರುತ್ತದೆ ಅನ್ನೋದು ಸಾಮಾನ್ಯ ವೀಕ್ಷಕರಿಗೆ ಗೊತ್ತಿರುವುದಿಲ್ಲ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/hollywood-intimate-scenes-actress-sara-shahi-reveals-the-hidden-shooting-technique-gvd/articleshow-dn83e16"/>
        </item>
        <item>
            <title><![CDATA[ಅಲ್ಲು ಅರ್ಜುನ್ 'ರಾಕಾ'ದ '37' ಪೋಸ್ಟರ್ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್: ಅಸಲಿ ಸೀಕ್ರೆಟ್ ಇದೇನಾ!]]></title>
            <link>https://kannada.asianetnews.com/entertainment/telugu-actor-allu-arjun-raaka-will-atlee-reveal-the-secret-behind-37-on-his-birthday-gvd/articleshow-ba7gayk</link>
            <guid isPermaLink="true">https://kannada.asianetnews.com/entertainment/telugu-actor-allu-arjun-raaka-will-atlee-reveal-the-secret-behind-37-on-his-birthday-gvd/articleshow-ba7gayk</guid>
            <pubDate>Thu, 17 Sep 2026 16:01:58 +0530</pubDate>
            <description><![CDATA[&lt;p&gt;ಅಲ್ಲು ಅರ್ಜುನ್ ಮತ್ತು ಅಟ್ಲೀ ಕಾಂಬಿನೇಷನ್&zwnj;ನ &lsquo;ರಾಕಾ&rsquo; ಸಿನಿಮಾದ &lsquo;37&rsquo; ಮಿಸ್ಟರಿ ಪೋಸ್ಟರ್ ಕುತೂಹಲ ಮೂಡಿಸಿದೆ. ಅಟ್ಲೀ ಹುಟ್ಟುಹಬ್ಬದಂದು ಈ ರಹಸ್ಯ ರಿವೀಲ್ ಆಗುತ್ತಾ ಎಂಬ ಚರ್ಚೆ ಜೋರಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qeqs225bfcacnheny1hvta,imgname-bkjb-1789641090114.png" type="image/jpeg" height="390" width="690"/>
            <content:encoded><![CDATA[&lt;p&gt;ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಸೆನ್ಸೇಷನಲ್ ನಿರ್ದೇಶಕ ಅಟ್ಲೀ ಕಾಂಬಿನೇಷನ್&zwnj;ನಲ್ಲಿ ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ ಸೋಷಿಯೊ ಫ್ಯಾಂಟಸಿ ಸಿನಿಮಾ &lsquo;ರಾಕಾ&rsquo;. ಇದೀಗ ಈ ಸಿನಿಮಾಗೆ ಸಂಬಂಧಿಸಿದಂತೆ ಕೇವಲ &lsquo;37&rsquo; ಎಂಬ ನಂಬರ್ ಇರುವ ಮಿಸ್ಟರಿ ಪೋಸ್ಟರ್&zwnj;ವೊಂದನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;p&gt;ಇನ್ನೇನು ನಾಲ್ಕೇ ದಿನಗಳಲ್ಲಿ ನಿರ್ದೇಶಕ ಅಟ್ಲೀ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಅದೇ ದಿನ ಈ &lsquo;37&rsquo;ರ ಹಿಂದಿರುವ ಅಸಲಿ ರಹಸ್ಯವನ್ನು ಚಿತ್ರತಂಡ ಬಹಿರಂಗಪಡಿಸಲಿದೆಯೇ ಎಂಬ ಚರ್ಚೆ ಅಭಿಮಾನಿಗಳಲ್ಲಿ ಜೋರಾಗಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ, ಅಟ್ಲೀ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೋಸ್ಟ್ ಅವೈಟೆಡ್ ಸಿನಿಮಾ &lsquo;ರಾಕಾ&rsquo;. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಬಿಗ್ ಬಜೆಟ್ ಸೋಷಿಯೊ ಫ್ಯಾಂಟಸಿ ಆ್ಯಕ್ಷನ್ ಸಿನಿಮಾ ಭರ್ಜರಿ ಮಟ್ಟದಲ್ಲಿ ತಯಾರಾಗುತ್ತಿದೆ.&lt;/p&gt;&lt;p&gt;ಸದ್ಯ ಸಿನಿಮಾ ಶೂಟಿಂಗ್ ಹಂತದಲ್ಲಿದ್ದು, ಕಳೆದ ಕೆಲವು ತಿಂಗಳುಗಳಿಂದ ಯಾವುದೇ ದೊಡ್ಡ ಅಪ್&zwnj;ಡೇಟ್ ನೀಡದೆ ಸೈಲೆಂಟ್ ಆಗಿಯೇ ಚಿತ್ರೀಕರಣ ನಡೆಸಲಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟೈಟಲ್ ಪೋಸ್ಟರ್ ಹಾಗೂ ಅಲ್ಲು ಅರ್ಜುನ್ ಅವರ ಲುಕ್&zwnj;ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇದೀಗ ಚಿತ್ರತಂಡ ಮತ್ತೊಂದು ಇಂಟರೆಸ್ಟಿಂಗ್ ಪೋಸ್ಟರ್&zwnj; ಅನ್ನು ರಿಲೀಸ್ ಮಾಡಿದೆ.&lt;/p&gt;&lt;p&gt;&lt;strong&gt;ಭಾರೀ ಕುತೂಹಲ&lt;/strong&gt;&lt;/p&gt;&lt;p&gt;ಈ ಪೋಸ್ಟರ್&zwnj;ನಲ್ಲಿ &lsquo;37&rsquo; ಎಂಬ ಸಂಖ್ಯೆಯೊಂದೇ ಪ್ರಮುಖವಾಗಿ ಕಾಣಿಸಿಕೊಂಡಿದ್ದು, ಅದರ ಜೊತೆಗೆ &lsquo;ರಾಕಾ&rsquo; ಎಂಬ ಟೈಟಲ್ ಮಾತ್ರ ಇದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಹೀಗಾಗಿ ಈ ಮಿಸ್ಟರಿ ನಂಬರ್ ಈಗ ಅಲ್ಲು ಅರ್ಜುನ್ ಅಭಿಮಾನಿಗಳಷ್ಟೇ ಅಲ್ಲದೆ, ಸಿನಿಮಾ ಪ್ರೇಮಿಗಳಲ್ಲೂ ಭಾರೀ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಈ &lsquo;37&rsquo; ಅಂದ್ರೆ ಏನು? ಇದರ ಹಿಂದೆ ಯಾವ ರಹಸ್ಯ ಅಡಗಿದೆ? ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿವೆ. ಅಭಿಮಾನಿಗಳು ತಮ್ಮದೇ ಆದ ಹಲವು ಥಿಯರಿಗಳನ್ನು ಮುಂದಿಡುತ್ತಿದ್ದಾರೆ.&lt;/p&gt;&lt;p&gt;ಇನ್ನು ಸೆಪ್ಟೆಂಬರ್ 21ರಂದು ನಿರ್ದೇಶಕ ಅಟ್ಲೀ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ, ಅದೇ ದಿನ &lsquo;37&rsquo;ರ ಹಿಂದಿರುವ ಅಸಲಿ ಸೀಕ್ರೆಟ್&zwnj; ಏನು ಎಂಬುದನ್ನು ಚಿತ್ರತಂಡ ರಿವೀಲ್ ಮಾಡಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಇನ್ನು &lsquo;ರಾಕಾ&rsquo; ಚಿತ್ರದ ಫಸ್ಟ್ ಲುಕ್&zwnj;ನಲ್ಲಿ ಅಲ್ಲು ಅರ್ಜುನ್ ಬ್ಲಡ್&zwnj;-ಬೀಸ್ಟ್ ರೀತಿಯ ವಿಭಿನ್ನ ಲುಕ್&zwnj;ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಇದಲ್ಲದೆ ಸಿನಿಮಾದಲ್ಲಿ ಅವರು ಒಂದಕ್ಕಿಂತ ಹೆಚ್ಚು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.&lt;/p&gt;&lt;h2&gt;&lt;strong&gt;ವಿಭಿನ್ನ ಪಾತ್ರಗಳಲ್ಲಿ ಅಲ್ಲು ಅರ್ಜುನ್&lt;/strong&gt;&lt;/h2&gt;&lt;p&gt;ತಾತ, ತಂದೆ ಹಾಗೂ ಇಬ್ಬರು ಗಂಡು ಮಕ್ಕಳಾಗಿ, ಅಂದರೆ ಒಟ್ಟು ನಾಲ್ಕು ವಿಭಿನ್ನ ಪಾತ್ರಗಳಲ್ಲಿ ಬನ್ನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮೂಲಕ ಅಲ್ಲು ಅರ್ಜುನ್ ಮತ್ತೊಮ್ಮೆ ವಿಭಿನ್ನ ಅವತಾರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ರಶ್ಮಿಕಾ ಮಂದಣ್ಣ, ಮೃಣಾಲ್ ಠಾಕೂರ್ ಹಾಗೂ ಜಾನ್ವಿ ಕಪೂರ್ ಕೂಡ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.&lt;/p&gt;&lt;p&gt;ರಾಕಾ ಚಿತ್ರಕ್ಕೆ ಸಾಯಿ ಅಭ್ಯಂಕರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಟ್ಲೀ-ಅಲ್ಲು ಅರ್ಜುನ್ ಕಾಂಬಿನೇಷನ್&zwnj;ನಲ್ಲಿನ ಈ ಬಹುನಿರೀಕ್ಷಿತ ಸಿನಿಮಾ ಯಾವ ರೀತಿಯ ಮ್ಯಾಜಿಕ್ ಸೃಷ್ಟಿಸಲಿದೆ ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಅದರಲ್ಲೂ &lsquo;37&rsquo; ಎಂಬ ನಂಬರ್&zwnj;ನ ಅಸಲಿ ರಹಸ್ಯ ಏನು? ಎಂಬ ಪ್ರಶ್ನೆಗೆ ಸೆಪ್ಟೆಂಬರ್ 21ರಂದು ಉತ್ತರ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/telugu-actor-allu-arjun-raaka-will-atlee-reveal-the-secret-behind-37-on-his-birthday-gvd/articleshow-ba7gayk"/>
        </item>
        <item>
            <title><![CDATA[ಸತತ ಫ್ಲಾಪ್ ಸಿನಿಮಾಗಳ ನಡುವೆ ಹೈದರಾಬಾದ್ ಬಿಡ್ತಾರಾ ಶ್ರೀಲೀಲಾ? ಅಷ್ಟಕ್ಕೂ ನಟಿಗೆ ಏನಾಯ್ತು?]]></title>
            <link>https://kannada.asianetnews.com/entertainment/sandalwood-actress-sreeleela-to-shift-to-mumbai-here-s-why-bollywood-could-be-her-new-base-gvd/articleshow-ghob3zn</link>
            <guid isPermaLink="true">https://kannada.asianetnews.com/entertainment/sandalwood-actress-sreeleela-to-shift-to-mumbai-here-s-why-bollywood-could-be-her-new-base-gvd/articleshow-ghob3zn</guid>
            <pubDate>Wed, 16 Sep 2026 20:59:36 +0530</pubDate>
            <description><![CDATA[&lt;p&gt;ಸೌತ್ ಇಂಡಿಯನ್ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಶ್ರೀಲೀಲಾ ಇದೀಗ ಬಾಲಿವುಡ್&zwnj;ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಅವರು ತೆಲುಗು ಸಿನಿಮಾರಂಗವನ್ನು ಸಂಪೂರ್ಣವಾಗಿ ತೊರೆಯಲಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2ndc143wz4xe6zvy032qb6j,imgname-bjb-1789572547714.png" type="image/jpeg" height="390" width="690"/>
            <content:encoded><![CDATA[&lt;p&gt;ಸೌತ್ ಇಂಡಿಯನ್ ಸಿನಿಮಾರಂಗದಿಂದ ಬಾಲಿವುಡ್&zwnj;ನತ್ತ ಹೆಜ್ಜೆ ಇಡುತ್ತಿರುವ ನಟ-ನಟಿಯರ ಪಟ್ಟಿಯಲ್ಲಿ ಇದೀಗ ಶ್ರೀಲೀಲಾ ಹೆಸರು ಕೂಡ ಚರ್ಚೆಯಲ್ಲಿದೆ. ಕನ್ನಡ, ತೆಲುಗು ಚಿತ್ರರಂಗದಲ್ಲಿ ಹಲವು ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡಿದ್ದರೂ, ಕಳೆದ ಕೆಲ ಸಮಯದಿಂದ ಅವರಿಗೆ ನಿರೀಕ್ಷಿತ ಮಟ್ಟದ ಬಾಕ್ಸ್ ಆಫೀಸ್ ಯಶಸ್ಸು ಸಿಗುತ್ತಿಲ್ಲ. ಇದರ ನಡುವೆಯೇ ಇದೀಗ ತಮ್ಮ ವೃತ್ತಿಜೀವನದ ಮುಂದಿನ ಹೆಜ್ಜೆಯನ್ನು ಗಮನದಲ್ಲಿಟ್ಟುಕೊಂಡು ಮುಂಬೈಗೆ ಶಿಫ್ಟ್ ಆಗುವ ಬಗ್ಗೆ ಶ್ರೀಲೀಲಾ ಚಿಂತನೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.&lt;/p&gt;&lt;p&gt;ಹೆಚ್ಚುತ್ತಿರುವ ಹಿಂದಿ ಸಿನಿಮಾ ಪ್ರಾಜೆಕ್ಟ್&zwnj;ಗಳೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಿಗಾಗಿ ಮುಂಬೈನಲ್ಲಿ ಹೆಚ್ಚು ಸಮಯ ಕಳೆಯಬೇಕಾಗುವ ಸಾಧ್ಯತೆ ಇರುವುದರಿಂದ, ಅಲ್ಲೇ ನೆಲೆಸುವುದು ವೃತ್ತಿಪರ ಕಮಿಟ್&zwnj;ಮೆಂಟ್&zwnj;ಗಳನ್ನು ನಿರ್ವಹಿಸಲು ಅನುಕೂಲವಾಗಬಹುದು ಎನ್ನಲಾಗಿದೆ. ಆದರೆ ಶ್ರೀಲೀಲಾ ಅಥವಾ ಅವರ ತಂಡದ ಕಡೆಯಿಂದ ಶಾಶ್ವತವಾಗಿ ಮುಂಬೈಗೆ ಶಿಫ್ಟ್ ಆಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.&lt;/p&gt;&lt;p&gt;&lt;strong&gt;ಶ್ರೀಲೀಲಾ ಮುಂಬೈಗೆ ಶಿಫ್ಟ್ ಆಗೋಕೆ ಕಾರಣವೇನು?&lt;/strong&gt;&lt;/p&gt;&lt;p&gt;ವರದಿಗಳ ಪ್ರಕಾರ, ಶ್ರೀಲೀಲಾ ಸದ್ಯ ಮುಂಬೈಯನ್ನು ತಮ್ಮ ಹೊಸ ಬೇಸ್ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಕನ್ನಡ, ತೆಲುಗು ಸಿನಿಮಾಗಳಿಗಿಂತ ಹಿಂದಿ ಸಿನಿಮಾಗಳ ಪ್ರಾಜೆಕ್ಟ್&zwnj;ಗಳು ನಿಧಾನವಾಗಿ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಮುಂಬೈನಲ್ಲಿ ವಾಸಿಸುವುದು ಅವರ ಶೂಟಿಂಗ್ ಹಾಗೂ ವೃತ್ತಿಪರ ಕಮಿಟ್&zwnj;ಮೆಂಟ್&zwnj;ಗಳನ್ನು ನಿಭಾಯಿಸಲು ಸುಲಭವಾಗಬಹುದು.&lt;/p&gt;&lt;p&gt;&lsquo;ಕಿಸ್&rsquo; ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ, &lsquo;ಧಮಾಕಾ&rsquo; ಸಿನಿಮಾದ ಯಶಸ್ಸಿನ ಬಳಿಕ ಭಾರೀ ಜನಪ್ರಿಯತೆ ಗಳಿಸಿದರು. &lsquo;ಪೆಳ್ಳಿ ಸಂದಡಿ&rsquo; ನಂತರ &lsquo;ಸ್ಕಂದ&rsquo;, &lsquo;ಭಗವಂತ್ ಕೇಸರಿ&rsquo;, &lsquo;ಗುಂಟೂರು ಕಾರಂ&rsquo;, &lsquo;ರಾಬಿನ್&zwnj;ಹುಡ್&rsquo;, &lsquo;ಜೂನಿಯರ್&rsquo; ಹಾಗೂ &lsquo;ಮಾಸ್ ಜತಾರ&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಸ್ಟಾರ್ ಹೀರೋಗಳ ಜೊತೆ ಸಾಲು ಸಾಲು ಅವಕಾಶಗಳು ಸಿಕ್ಕರೂ, ಇತ್ತೀಚಿನ ಸಿನಿಮಾಗಳ ಬಾಕ್ಸ್ ಆಫೀಸ್ ಪ್ರದರ್ಶನ ಮಾತ್ರ ನಿರೀಕ್ಷೆಯಂತೆ ಇರಲಿಲ್ಲ ಎನ್ನಲಾಗಿದೆ. ಇದೇ ವೇಳೆ ನಂದಮೂರಿ ಮೋಕ್ಷಜ್ಞ ಅವರ ಡೆಬ್ಯೂ ಸಿನಿಮಾದಲ್ಲೂ ಶ್ರೀಲೀಲಾ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ತಮಿಳು, ಬಾಲಿವುಡ್&zwnj;ನಲ್ಲೂ ಹೆಚ್ಚಾಗುತ್ತಿದೆ ಅವಕಾಶಗಳು!&lt;/strong&gt;&lt;/p&gt;&lt;p&gt;ತೆಲುಗು ಮಾತ್ರವಲ್ಲದೆ ಶ್ರೀಲೀಲಾ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. &lsquo;ಪರಶಕ್ತಿ&rsquo; ಮೂಲಕ ತಮಿಳಿನಲ್ಲಿ ಪದಾರ್ಪಣೆ ಮಾಡಿರುವ ಅವರು, ಧನುಷ್ ಅಭಿನಯದ ಮುಂಬರುವ &lsquo;ಓಂ&rsquo; ಸಿನಿಮಾದಲ್ಲೂ ಭಾಗವಾಗಿದ್ದಾರೆ ಎನ್ನಲಾಗಿದೆ. ಇನ್ನು ಬಾಲಿವುಡ್&zwnj;ನಲ್ಲೂ ಶ್ರೀಲೀಲಾ ಅವರ ಪಯಣ ಆರಂಭವಾಗಲಿದೆ. ಅನುಭಾಗ್ ಬಸು ನಿರ್ದೇಶನದ, ಕಾರ್ತಿಕ್ ಆರ್ಯನ್ ಅಭಿನಯದ ರೊಮ್ಯಾಂಟಿಕ್ ಮ್ಯೂಸಿಕಲ್ ಸಿನಿಮಾ ಮೂಲಕ ಅವರು ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಈ ಸಿನಿಮಾವನ್ನು ವರದಿಗಳಲ್ಲಿ &lsquo;ತೂ ಮೇರಿ ಜಿಂದಗಿ ಹೈ&rsquo; ಎಂದು ಕರೆಯಲಾಗುತ್ತಿದೆ.&lt;/p&gt;&lt;p&gt;ಈ ಚಿತ್ರದ ಶೂಟಿಂಗ್&zwnj;ಗಾಗಿ ಶ್ರೀಲೀಲಾ ಈಗಾಗಲೇ ಮುಂಬೈನಲ್ಲಿ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಇಬ್ರಾಹಿಂ ಅಲಿ ಖಾನ್ ಅಭಿನಯದ &lsquo;ದಿಲೇರ್&rsquo; ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಜಾಹ್ನವಿ ಕಪೂರ್ ಜೊತೆಗಿನ ಮತ್ತೊಂದು ಪ್ರಾಜೆಕ್ಟ್&zwnj;ನಲ್ಲೂ ಶ್ರೀಲೀಲಾ ಹೆಸರು ಕೇಳಿಬರುತ್ತಿದೆ. ಹೀಗಾಗಿ ಹಿಂದಿ ಸಿನಿಮಾಗಳ ಪ್ರಾಜೆಕ್ಟ್&zwnj;ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಶ್ರೀಲೀಲಾ ಮುಂಬೈನಲ್ಲಿ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.&lt;/p&gt;&lt;h2&gt;&lt;strong&gt;ಹಾಗಾದ್ರೆ ಶ್ರೀಲೀಲಾ ತೆಲುಗು ಸಿನಿಮಾ ಬಿಡ್ತಾರಾ?&lt;/strong&gt;&lt;/h2&gt;&lt;p&gt;ಸದ್ಯಕ್ಕೆ ಹಾಗೆ ಹೇಳುವುದು ತುಂಬಾ ಬೇಗವಾಗುತ್ತದೆ. ಶ್ರೀಲೀಲಾ ಮುಂಬೈಗೆ ಶಿಫ್ಟ್ ಆಗುವ ಸಾಧ್ಯತೆಯ ಸುದ್ದಿಯನ್ನು ಅವರ ಹೆಚ್ಚುತ್ತಿರುವ ಬಾಲಿವುಡ್ ಕಮಿಟ್&zwnj;ಮೆಂಟ್&zwnj;ಗಳೊಂದಿಗೆ ಜೋಡಿಸಿ ನೋಡಲಾಗುತ್ತಿದೆ. ಶ್ರೀಲೀಲಾ ತೆಲುಗು ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಲಿದ್ದಾರೆ ಎಂಬ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅಲ್ಲದೆ, ನಂದಮೂರಿ ಮೋಕ್ಷಜ್ಞ ಅವರ ಸಿನಿಮಾದ ಬಗ್ಗೆಯೂ ಮಾತುಕತೆ ಮುಂದುವರಿದಿದೆ ಎನ್ನಲಾಗಿದೆ.&lt;/p&gt;&lt;p&gt;ಹೀಗಾಗಿ ಶ್ರೀಲೀಲಾ ಸೌತ್ ಸಿನಿಮಾಗಳಿಗೆ ಗುಡ್&zwnj;ಬೈ ಹೇಳಿ ಬಾಲಿವುಡ್&zwnj;ನಲ್ಲೇ ಸೆಟಲ್ ಆಗ್ತಾರಾ? ಅಥವಾ ಮುಂಬೈಯನ್ನು ಮತ್ತೊಂದು ಬೇಸ್ ಮಾಡಿಕೊಂಡು ತೆಲುಗು ಸಿನಿಮಾಗಳಲ್ಲೂ ಮುಂದುವರಿಯುತ್ತಾರಾ? ಅನ್ನೋದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗಬೇಕಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sandalwood-actress-sreeleela-to-shift-to-mumbai-here-s-why-bollywood-could-be-her-new-base-gvd/articleshow-ghob3zn"/>
        </item>
        <item>
            <title><![CDATA[ನಿಮ್ಮನ್ನು ನೋಡಿ ಅಸೂಯೆಪಡುತ್ತಿಲ್ಲ, ನಾನಾದ್ರೆ ನಡುಗುತ್ತಿದ್ದೆ: ರಶ್ಮಿಕಾಗೆ ಕಮಲ್ ಹಾಸನ್ ಏನ್ ಹೇಳಿದ್ರು?]]></title>
            <link>https://kannada.asianetnews.com/entertainment/tamil-actor-kamal-haasan-special-advice-to-rashmika-mandanna-for-ms-subbulakshmi-biopic-gvd/articleshow-hkg9hce</link>
            <guid isPermaLink="true">https://kannada.asianetnews.com/entertainment/tamil-actor-kamal-haasan-special-advice-to-rashmika-mandanna-for-ms-subbulakshmi-biopic-gvd/articleshow-hkg9hce</guid>
            <pubDate>Thu, 17 Sep 2026 16:43:58 +0530</pubDate>
            <description><![CDATA[&lt;p&gt;ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್ ಮುಹೂರ್ತ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಕಮಲ್ ಹಾಸನ್ ವಿಶೇಷ ಸಲಹೆ ನೀಡಿದ್ದಾರೆ. ಈ ಪಾತ್ರವನ್ನು ತಾನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ ಕಮಲ್ ಹಾಸನ್, ರಶ್ಮಿಕಾಗೆ ಧೈರ್ಯವಾಗಿ ಪಾತ್ರ ನಿರ್ವಹಿಸುವಂತೆ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qh4ffq0h30ps4681s3rf97,imgname-m-nk-1789643603447.png" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಭಿಮಾನಿಗಳಿಂದ ಅಪಾರ ಪ್ರೀತಿ ಪಡೆದಿರುವ ನಟ, ಉಲಗನಾಯಗನ್ ಕಮಲ್ ಹಾಸನ್. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಲಿರುವ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ರಶ್ಮಿಕಾ ಮಂದಣ್ಣ ಅವರಿಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ. ಅಷ್ಟಕ್ಕೂ ಕಮಲ್ ಹಾಸನ್ ಹೇಳಿದ್ದೇನು ಎಂಬುದನ್ನು ನೋಡೋಣ.&lt;/p&gt;&lt;p&gt;ಕಾಲಿವುಡ್&zwnj;ನ ಖ್ಯಾತ ನಟರಾಗಿರುವ ಕಮಲ್ ಹಾಸನ್, ತಮಿಳು ಮಾತ್ರವಲ್ಲದೆ ತೆಲುಗು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರ ಅಭಿನಯದ ಕೊನೆಯ ತಮಿಳು ಸಿನಿಮಾ &lsquo;ಥಗ್ ಲೈಫ್&rsquo;. ಮಣಿರತ್ನಂ ನಿರ್ದೇಶನದ ಈ ಸಿನಿಮಾ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಪಡೆಯಲಿಲ್ಲ.&lt;/p&gt;&lt;p&gt;ಇದೀಗ &lsquo;ಥಗ್ ಲೈಫ್&rsquo; ಬಳಿಕ ಕಮಲ್ ಹಾಸನ್ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. &lsquo;ಸಿದ್ಧ&rsquo; ಸಿನಿಮಾ ನಿರ್ದೇಶಕ ಎಸ್.ಯು. ಅರುಣ್ ಕುಮಾರ್ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಸಿನಿಮಾದ ಶೂಟಿಂಗ್ ಆರಂಭವಾಗಿದೆ ಎನ್ನಲಾಗಿದೆ. ಇದರ ಜೊತೆಗೆ ನಾಗ್ ಅಶ್ವಿನ್ ನಿರ್ದೇಶನದ &lsquo;ಕಲ್ಕಿ 2&rsquo; ಸಿನಿಮಾದಲ್ಲೂ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ರಶ್ಮಿಕಾಗೆ ಕಮಲ್ ಹಾಸನ್ ಕೊಟ್ಟ ಸಲಹೆ ಏನು?&lt;/strong&gt;&lt;/p&gt;&lt;p&gt;ಸೆಪ್ಟೆಂಬರ್ 16, 2026ರಂದು ಚೆನ್ನೈನಲ್ಲಿ ನಡೆದ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ವೇದಿಕೆಯಲ್ಲಿ ಅವರು ರಶ್ಮಿಕಾ ಮಂದಣ್ಣ ಅವರ ಪಾತ್ರದ ಕುರಿತು ಮಾತನಾಡುತ್ತಾ, ಅವರಿಗೆ ಆತ್ಮವಿಶ್ವಾಸ ತುಂಬುವ ಮಾತುಗಳನ್ನು ಹೇಳಿದ್ದಾರೆ.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್ ಹಾಸನ್, ರಶ್ಮಿಕಾ ಅವರನ್ನು ಉದ್ದೇಶಿಸಿ, ರಶ್ಮಿಕಾ, ನಾನು ನಿಮ್ಮನ್ನು ನೋಡಿ ಅಸೂಯೆಪಡುತ್ತಿಲ್ಲ. ಏಕೆಂದರೆ ಈ ಪಾತ್ರವನ್ನು ನನ್ನಿಂದ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಗಡ್ಡ ತೆಗೆದರೂ ಕೂಡ. ನಾನು ಅವ್ವೈ ಷಣ್ಮುಖಿಯಾಗಿ ನಟಿಸಬಹುದು, ಆದರೆ ಎಂ.ಎಸ್. ಸುಬ್ಬುಲಕ್ಷ್ಮಿ ಅಮ್ಮನ ಪಾತ್ರವನ್ನು ಮಾಡಲು ಸಾಧ್ಯವಿಲ್ಲ. ನಾನು ನಡುಗುತ್ತಿದ್ದೆ. ಹಾಗಾಗಿ ಧೈರ್ಯವಾಗಿ ಮಾಡಿ ಎಂದು ಹೇಳಿದ್ದಾರೆ.&lt;/p&gt;&lt;p&gt;ಕಮಲ್ ಹಾಸನ್ ಅವರ ಈ ಮಾತುಗಳು ಇದೀಗ ಅಭಿಮಾನಿಗಳ ಗಮನ ಸೆಳೆದಿವೆ. ವಿಶೇಷವಾಗಿ ಇಷ್ಟು ಮಹತ್ವದ ವ್ಯಕ್ತಿತ್ವದ ಪಾತ್ರವನ್ನು ನಿರ್ವಹಿಸಲಿರುವ ರಶ್ಮಿಕಾಗೆ ಅವರು ನೀಡಿರುವ ಈ ಸಲಹೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.&lt;/p&gt;&lt;h2&gt;&lt;strong&gt;ಎಂ.ಎಸ್. ಸುಬ್ಬುಲಕ್ಷ್ಮಿಯಾಗಿ ರಶ್ಮಿಕಾ&lt;/strong&gt;&lt;/h2&gt;&lt;p&gt;ಖ್ಯಾತ ನಿರ್ದೇಶಕ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಬಯೋಪಿಕ್ ಸಿನಿಮಾ &lsquo;ಎಂ.ಎಸ್. ಸುಬ್ಬುಲಕ್ಷ್ಮಿ&rsquo;. ಈ ಚಿತ್ರದಲ್ಲಿ ರಶ್ಮಿಕಾ, ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೀತಾ ಆರ್ಟ್ಸ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಸೆಪ್ಟೆಂಬರ್ 16ರಂದು ಆಯೋಜಿಸಲಾಗಿತ್ತು. ಕಮಲ್ ಹಾಸನ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.&lt;/p&gt;&lt;p&gt;ಇನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಅವರಂತಹ ಮಹಾನ್ ಕಲಾವಿದೆಯ ಜೀವನವನ್ನು ತೆರೆಯ ಮೇಲೆ ರಶ್ಮಿಕಾ ಹೇಗೆ ಕಟ್ಟಿಕೊಡಲಿದ್ದಾರೆ ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, 2027ರಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/tamil-actor-kamal-haasan-special-advice-to-rashmika-mandanna-for-ms-subbulakshmi-biopic-gvd/articleshow-hkg9hce"/>
        </item>
        <item>
            <title><![CDATA[25 ಕೋಟಿ ಬಜೆಟ್.. 300 ಕೋಟಿ ಕಲೆಕ್ಷನ್! OTTಗೆ ಬರ್ತಿದೆ ಈ ಸಿನಿಮಾ: ಸ್ಟ್ರೀಮಿಂಗ್ ಯಾವಾಗ?]]></title>
            <link>https://kannada.asianetnews.com/entertainment/malayalam-bethlehem-kudumba-unit-film-ott-25-crore-budget-300-crore-collection-streaming-date-revealed-gvd/articleshow-mqltug6</link>
            <guid isPermaLink="true">https://kannada.asianetnews.com/entertainment/malayalam-bethlehem-kudumba-unit-film-ott-25-crore-budget-300-crore-collection-streaming-date-revealed-gvd/articleshow-mqltug6</guid>
            <pubDate>Thu, 17 Sep 2026 08:30:07 +0530</pubDate>
            <description><![CDATA[&lt;p&gt;&lsquo;ಬೆತ್ಲೆಹೆಂ ಫ್ಯಾಮಿಲಿ ಯೂನಿಟ್&rsquo; ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, 25 ಕೋಟಿ ರೂಪಾಯಿ ಬಜೆಟ್&zwnj;ನಲ್ಲಿ ನಿರ್ಮಾಣವಾಗಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಮಲಯಾಳಂ ಜೊತೆಗೆ ತೆಲುಗು ವರ್ಷನ್ ಕೂಡ ಓಟಿಟಿಗೆ ಬರಲಿದೆ ಎನ್ನಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2ngmre0k3qgqt6sjeacaw0h,imgname-b-1789575979456.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಪ್ರೇಮಲು&rsquo;ನಂತಹ ಕ್ಲಾಸಿಕ್ ಸಿನಿಮಾವನ್ನು ನಿರ್ದೇಶಿಸಿರುವ ಗಿರೀಶ್ ಎ.ಡಿ. ಇದೀಗ ಈ ನ್ಯೂ ಏಜ್ ಲವ್ ಸ್ಟೋರಿಯನ್ನು ತೆರೆಮೇಲೆ ತಂದಿದ್ದಾರೆ. ಮಲಯಾಳಂ ಸ್ಟಾರ್ ಹೀರೋ ನಿವಿನ್ ಪೌಲಿ ಹಾಗೂ ಟ್ರೆಂಡಿಂಗ್ ಬ್ಯೂಟಿ ಮಮಿತಾ ಬೈಜು ನಾಯಕ-ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಇದೀಗ ಓಟಿಟಿಗೆ ಬರಲು ಸಜ್ಜಾಗಿದೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾಗಳು ಯಾವುದೇ ದೊಡ್ಡ ನಿರೀಕ್ಷೆಗಳಿಲ್ಲದೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್&zwnj;ನಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಭರ್ಜರಿ ಆಕ್ಷನ್ ಸೀಕ್ವೆನ್ಸ್&zwnj;ಗಳು, ಸ್ಪೆಷಲ್ ಸಾಂಗ್ಸ್, ಭಾರೀ VFX ಹಂಗುಗಳಿಲ್ಲದಿದ್ದರೂ ಕೇವಲ ಕಂಟೆಂಟ್&zwnj;ನ ಬಲದಿಂದ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡುತ್ತಿವೆ. ನಿವಿನ್ ಪೌಲಿ ಮತ್ತು ಮಮಿತಾ ಬೈಜು ನಟಿಸಿರುವ &lsquo;ಬೆತ್ಲೆಹೆಂ ಫ್ಯಾಮಿಲಿ ಯೂನಿಟ್&rsquo; ಕೂಡ ಇದೇ ಸಾಲಿಗೆ ಸೇರುತ್ತದೆ.&lt;/p&gt;&lt;p&gt;ಕೆಲವೇ ದಿನಗಳ ಹಿಂದೆ ಮಲಯಾಳಂನಲ್ಲಿ ಬಿಡುಗಡೆಯಾದ ಈ ಸಿನಿಮಾ ಸದ್ಯ ಬಾಕ್ಸ್ ಆಫೀಸ್&zwnj;ನಲ್ಲಿ ಕಲೆಕ್ಷನ್&zwnj;ಗಳ ಸುರಿಮಳೆಗೈಯುತ್ತಿದೆ. ಟ್ರೇಡ್ ವಲಯವೇ ಅಚ್ಚರಿಪಡುವ ರೀತಿಯಲ್ಲಿ ದಾಖಲೆ ಮಟ್ಟದ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾ, ಕೇವಲ 25 ಕೋಟಿ ರೂಪಾಯಿ ಬಜೆಟ್&zwnj;ನಲ್ಲಿ ನಿರ್ಮಾಣವಾಗಿ ಇದುವರೆಗೆ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದರಿಂದ ನಿರ್ಮಾಪಕರಿಗೆ ಭರ್ಜರಿ ಲಾಭವೂ ಸಿಕ್ಕಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;ಥಿಯೇಟರ್&zwnj;ಗಳಲ್ಲಿ ಬಿಡುಗಡೆಯಾಗಿ ಸುಮಾರು ಒಂದು ತಿಂಗಳು ಸಮೀಪಿಸುತ್ತಿದ್ದರೂ ಸಿನಿಮಾದ ಕಲೆಕ್ಷನ್ ಓಟ ಮಾತ್ರ ನಿಂತಿಲ್ಲ. ಇತ್ತೀಚೆಗೆ ತೆಲುಗು ರಾಜ್ಯಗಳಲ್ಲೂ ಚಿತ್ರದ ತೆಲುಗು ವರ್ಷನ್ ಬಿಡುಗಡೆಯಾಗಿದ್ದು, ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎನ್ನಲಾಗಿದೆ. ಸದ್ಯ ಥಿಯೇಟರ್&zwnj;ಗಳಲ್ಲಿ ಸದ್ದು ಮಾಡುತ್ತಿರುವ ಈ ಫ್ಯಾಮಿಲಿ ಎಂಟರ್&zwnj;ಟೈನರ್&zwnj;ನ ಓಟಿಟಿ ಸ್ಟ್ರೀಮಿಂಗ್ ಡೇಟ್ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.&lt;/p&gt;&lt;h2&gt;&lt;strong&gt;ಓಟಿಟಿಗೆ ಯಾವಾಗ ಬರುತ್ತೆ?&lt;/strong&gt;&lt;/h2&gt;&lt;p&gt;&lsquo;ಬೆತ್ಲೆಹೆಂ ಫ್ಯಾಮಿಲಿ ಯೂನಿಟ್&rsquo; ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಜನಪ್ರಿಯ ಓಟಿಟಿ ಸಂಸ್ಥೆ ಜಿಯೋ ಹಾಟ್&zwnj;ಸ್ಟಾರ್ ಪಡೆದುಕೊಂಡಿದೆ. ಥಿಯೇಟ್ರಿಕಲ್ ರಿಲೀಸ್ ಬಳಿಕ 4ರಿಂದ 6 ವಾರಗಳ ನಂತರ ಸಿನಿಮಾವನ್ನು ಓಟಿಟಿಯಲ್ಲಿ ಸ್ಟ್ರೀಮಿಂಗ್&zwnj;ಗೆ ತರಲು ಒಪ್ಪಂದವಾಗಿರುವುದಾಗಿ ವರದಿಯಾಗಿದೆ.&lt;/p&gt;&lt;p&gt;ಈ ಲೆಕ್ಕಾಚಾರದ ಪ್ರಕಾರ, ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಈ ಬ್ಲಾಕ್&zwnj;ಬಸ್ಟರ್ ಸಿನಿಮಾ ಓಟಿಟಿಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ. ಮಲಯಾಳಂ ಜೊತೆಗೆ ತೆಲುಗು ವರ್ಷನ್ ಕೂಡ ಒಂದೇ ಸಮಯದಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.&lt;/p&gt;&lt;p&gt;ಇನ್ನು &lsquo;ಬೆತ್ಲೆಹೆಂ ಫ್ಯಾಮಿಲಿ ಯೂನಿಟ್&rsquo; ಸಿನಿಮಾದಲ್ಲಿ ನಿವಿನ್ ಪೌಲಿ, ಮಮಿತಾ ಬೈಜು ಜೊತೆಗೆ ಸಂಗೀತ್ ಪ್ರತಾಪ್, ಸುರೇಶ್ ಕೃಷ್ಣ, ವಿನಯ್ ಫೋರ್ಟ್, ರೋಷನ್ ಶಾನವಾಸ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಿಲೀಶ್ ಪೋಥನ್, ಫಹಾದ್ ಫಾಸಿಲ್ ಹಾಗೂ ಶ್ಯಾಮ್ ಪುಷ್ಕರನ್ ಸೇರಿದಂತೆ ಹಲವರು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ವಿಶೇಷವೆಂದರೆ, ತೆಲುಗಿನಲ್ಲಿ ಈ ಸಿನಿಮಾವನ್ನು ದೊಡ್ಡ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬಿಡುಗಡೆ ಮಾಡಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/malayalam-bethlehem-kudumba-unit-film-ott-25-crore-budget-300-crore-collection-streaming-date-revealed-gvd/articleshow-mqltug6"/>
        </item>
        <item>
            <title><![CDATA[ಈ ಸಿನಿಮಾ 460 ಕೋಟಿ ಗಳಿಸಿದ್ರೆ ಸಾಕು.. ನಟ ಸೂರ್ಯ ಬರೆಯಲಿದ್ದಾರೆ ಯಾರೂ ಮಾಡದ ಹೊಸ ದಾಖಲೆ!]]></title>
            <link>https://kannada.asianetnews.com/entertainment/tamil-actor-suriya-at-560-crore-already-can-scene-film-take-him-to-1000-crore-gvd/articleshow-p9ss6ww</link>
            <guid isPermaLink="true">https://kannada.asianetnews.com/entertainment/tamil-actor-suriya-at-560-crore-already-can-scene-film-take-him-to-1000-crore-gvd/articleshow-p9ss6ww</guid>
            <pubDate>Thu, 17 Sep 2026 08:45:53 +0530</pubDate>
            <description><![CDATA[&lt;p&gt;ತಮಿಳು ನಟ ಸೂರ್ಯ ಅವರ 2026ರ ಬಾಕ್ಸ್ ಆಫೀಸ್ ಜರ್ನಿ ಇದೀಗ ಭಾರೀ ಕುತೂಹಲ ಮೂಡಿಸಿದೆ. &lsquo;ಕರುಪ್ಪು&rsquo; ಮತ್ತು &lsquo;ವಿಶ್ವನಾಥ್ ಅಂಡ್ ಸನ್ಸ್&rsquo; ಸಿನಿಮಾಗಳು ಸೇರಿ 560 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿವೆ ಎನ್ನಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2nj3my323ymxd8609d1s6dc,imgname-kk-1789577515971.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ವಿಜಯ್ ಮತ್ತು ಅಜಿತ್ ಇಬ್ಬರೂ ಬೇರೆ ದಾರಿ ಹಿಡಿದಿದ್ದಾರೆ. ಇತ್ತ 10 ವರ್ಷಗಳಿಂದ ಒಂದು ಹಿಟ್ ಕೊಡಲು ಪರದಾಡುತ್ತಿದ್ದ ಸೂರ್ಯ, ಈ ವರ್ಷ ರಿಲೀಸ್ ಆದ 2 ಸಿನಿಮಾಗಳಿಂದಲೇ 560 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದಾರೆ. ಈಗ ದೀಪಾವಳಿಗೆ ಬರ್ತಿರೋ 'ಸೀನ್' ಸಿನಿಮಾ ಮೇಲೆ ಭಾರಿ ನಿರೀಕ್ಷೆ ಹುಟ್ಟಿದೆ. ಆರ್.ಜೆ. ಬಾಲಾಜಿ ನಿರ್ದೇಶನದಲ್ಲಿ ಬಂದ 'ಕರುಪ್ಪು' ಸಿನಿಮಾ ಸೂರ್ಯ ಕೆರಿಯರ್&zwnj;ನಲ್ಲಿ ಹೊಸ ಕಲೆಕ್ಷನ್ ರೆಕಾರ್ಡ್ ಬರೆದಿದೆ. ತಮಿಳುನಾಡಿನಲ್ಲಿ ಮಾತ್ರವೇ 100 ಕೋಟಿ ರೂ. ದಾಟಿದ ಸೂರ್ಯ ಅವರ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.&lt;/p&gt;&lt;p&gt;ಪ್ರಪಂಚದಾದ್ಯಂತ ಈ ಸಿನಿಮಾ 300 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರಿಂದ ಸೂರ್ಯ ಅವರ ಸ್ಟಾರ್ ವ್ಯಾಲ್ಯೂ ಮತ್ತೆ ಉತ್ತುಂಗಕ್ಕೇರಿದೆ. 'ಕರುಪ್ಪು' ಸಿನಿಮಾದ ಭಾರಿ ಯಶಸ್ಸಿನ ಬೆನ್ನಲ್ಲೇ ರಿಲೀಸ್ ಆದ 'ವಿಶ್ವನಾಥ್ ಅಂಡ್ ಸನ್ಸ್' ಸಿನಿಮಾ ಕೂಡ ಬಾಕ್ಸ್ ಆಫೀಸ್&zwnj;ನಲ್ಲಿ ಧೂಳೆಬ್ಬಿಸಿದೆ. ಈ ಎರಡೂ ಸಿನಿಮಾಗಳು ಸೇರಿ ಪ್ರಪಂಚದಾದ್ಯಂತ 560 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿವೆ. ಒಂದೇ ವರ್ಷದಲ್ಲಿ ಬ್ಯಾಕ್ ಟು ಬ್ಯಾಕ್ ರಿಲೀಸ್ ಆದ ಎರಡು ಸಿನಿಮಾಗಳು ಇಷ್ಟು ದೊಡ್ಡ ಮೊತ್ತ ಗಳಿಸಿರುವುದು ಹೊಸ ಇತಿಹಾಸ ಸೃಷ್ಟಿಸಲು ವೇದಿಕೆ ಸಿದ್ಧಪಡಿಸಿದೆ.&lt;/p&gt;&lt;p&gt;ಸೂರ್ಯ ನಟನೆಯ 47ನೇ ಸಿನಿಮಾ 'ಸೀನ್' ಮೇಲೆ ಈಗ ಎಲ್ಲರ ಕಣ್ಣಿದೆ. ಜಿತ್ತು ಮಾಧವನ್ ನಿರ್ದೇಶನ ಮಾಡಿರುವ ಈ ಸಿನಿಮಾದ ಫಸ್ಟ್ ಲುಕ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಫ್ಯಾನ್ಸ್ ಗಮನ ಸೆಳೆದಿದೆ. ನವೆಂಬರ್ 6ರಂದು ದೀಪಾವಳಿ ಹಬ್ಬದ ಪ್ರಯುಕ್ತ ಈ ಸಿನಿಮಾ ಥಿಯೇಟರ್&zwnj;ಗೆ ಎಂಟ್ರಿ ಕೊಡಲಿದೆ. ಈಗಾಗಲೇ ರಿಲೀಸ್ ಆದ 2 ಸಿನಿಮಾಗಳಿಂದ 560 ಕೋಟಿ ರೂ. ಕಲೆಕ್ಷನ್ ಆಗಿದೆ. ಈಗ 'ಸೀನ್' ಸಿನಿಮಾ ಏನಾದರೂ 460 ಕೋಟಿ ರೂ. ಗಳಿಸಿದರೆ, ಒಂದೇ ವರ್ಷದಲ್ಲಿ 1,000 ಕೋಟಿ ರೂ. ಕಲೆಕ್ಷನ್ ಮಾಡಿದ ಮೊದಲ ತಮಿಳು ನಟ ಎಂಬ ಹೊಸ ದಾಖಲೆಯನ್ನು ಸೂರ್ಯ ಬರೆಯಲಿದ್ದಾರೆ.&lt;/p&gt;&lt;p&gt;'ಸೀನ್' ಸಿನಿಮಾವನ್ನು ಜಿತ್ತು ಮಾಧವನ್ ನಿರ್ದೇಶನ ಮಾಡುತ್ತಿರುವುದರಿಂದ ಕೇರಳದಲ್ಲೂ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಜಿತ್ತು ಮಾಧವನ್ ಅವರ ಹಿಂದಿನ ಹಿಟ್ ಸಿನಿಮಾಗಳು ಹಾಗೂ ಸೂರ್ಯಗೆ ಕೇರಳದಲ್ಲಿರುವ ದೊಡ್ಡ ಅಭಿಮಾನಿ ಬಳಗ ಇದಕ್ಕೆ ಮುಖ್ಯ ಕಾರಣ. ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ವಿದೇಶಗಳಲ್ಲೂ ಸಿನಿಮಾಗೆ ಪೂರಕ ವಾತಾವರಣವಿದೆ. 460 ಕೋಟಿ ರೂ. ಅನ್ನೋದು ದೊಡ್ಡ ಟಾರ್ಗೆಟ್. ದೀಪಾವಳಿ ರೇಸ್, ಥಿಯೇಟರ್&zwnj;ಗಳ ಸಂಖ್ಯೆ, ವಿಮರ್ಶೆ ಹಾಗೂ ಜನರ ಪ್ರತಿಕ್ರಿಯೆ ಮೇಲೆ ಈ ಮೈಲಿಗಲ್ಲು ನಿರ್ಧಾರವಾಗಲಿದೆ. ವಿಜಯ್ ಮತ್ತು ಅಜಿತ್ ಬೇರೆ ಕಡೆ ಗಮನ ಹರಿಸಿರುವಾಗ, 10 ವರ್ಷಗಳಿಂದ ಕಾಯುತ್ತಿದ್ದ ಸೂರ್ಯಗೆ 'ಕರುಪ್ಪು' ಮತ್ತು 'ವಿಶ್ವನಾಥ್ ಅಂಡ್ ಸನ್ಸ್' ಸಿನಿಮಾಗಳ ಸಕ್ಸಸ್ ಬಳಿಕ, ಈ 2026ನೇ ವರ್ಷ 1,000 ಕೋಟಿ ರೂ. ಬಾಕ್ಸ್ ಆಫೀಸ್ ಕ್ಲಬ್ ಸೇರುವ ಲಕ್ಕಿ ವರ್ಷ ಆಗುತ್ತಾ ಅನ್ನೋದೇ ಸದ್ಯದ ಕುತೂಹಲ.&lt;/p&gt;&lt;h2&gt;&lt;strong&gt;ಒಂದೇ ವರ್ಷದಲ್ಲಿ 1000 ಕೋಟಿ ಕಲೆಕ್ಷನ್ ಸಾಧ್ಯನಾ?&lt;/strong&gt;&lt;/h2&gt;&lt;p&gt;ಈ ಹಿಂದೆ ರಜನಿಕಾಂತ್ ನಟನೆಯ '2.0' ಹಾಗೂ 'ಕಾಲಾ' ಸಿನಿಮಾಗಳು ಒಂದೇ ವರ್ಷದಲ್ಲಿ 860 ಕೋಟಿ ರೂ. ಕಲೆಕ್ಷನ್ ಮಾಡಿದ್ದವು. ಹಾಗೇ ವಿಜಯ್ ನಟನೆಯ 'ಲಿಯೋ' ಮತ್ತು 'ವಾರಿಸು' ಸಿನಿಮಾಗಳು 900 ಕೋಟಿ ರೂ. ಗಳಿಸಿದ್ದವು. ತಮಿಳು ಚಿತ್ರರಂಗದಲ್ಲಿ ಇಲ್ಲಿಯವರೆಗೆ ಯಾವೊಬ್ಬ ಸ್ಟಾರ್ ನಟ ಕೂಡ ಒಂದೇ ವರ್ಷದಲ್ಲಿ 1,000 ಕೋಟಿ ರೂ. ಮೈಲಿಗಲ್ಲು ತಲುಪಿಲ್ಲ. ಈಗ ಆ ಅದೃಷ್ಟ ಸೂರ್ಯ ಪಾಲಿಗೆ ಒಲಿದು ಬಂದಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/tamil-actor-suriya-at-560-crore-already-can-scene-film-take-him-to-1000-crore-gvd/articleshow-p9ss6ww"/>
        </item>
        <item>
            <title><![CDATA[ವಿಜಯ್-ರಶ್ಮಿಕಾ ಫ್ಯಾನ್ಸ್‌ಗೆ ಗುಡ್‌ನ್ಯೂಸ್: 'ರಣಬಾಲಿ' ಶೂಟಿಂಗ್ ಕಂಪ್ಲೀಟ್, ಈ ದಿನದಂದು ರಿಲೀಸ್!]]></title>
            <link>https://kannada.asianetnews.com/entertainment/telugu-actor-vijay-deverakonda-rashmika-mandanna-ranabaali-shooting-comes-to-an-end-gvd/articleshow-q7qg4pd</link>
            <guid isPermaLink="true">https://kannada.asianetnews.com/entertainment/telugu-actor-vijay-deverakonda-rashmika-mandanna-ranabaali-shooting-comes-to-an-end-gvd/articleshow-q7qg4pd</guid>
            <pubDate>Thu, 17 Sep 2026 16:19:58 +0530</pubDate>
            <description><![CDATA[&lt;p&gt;ಮದುವೆ ಬಳಿಕ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿಯ ಮೊದಲ ಸಿನಿಮಾ &lsquo;ರಣಬಾಲಿ&rsquo; ಶೂಟಿಂಗ್ ಕಂಪ್ಲೀಟ್ ಆಗಿದೆ. ಅಕ್ಟೋಬರ್ 16ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, 29 ದಿನಗಳ ಕೌಂಟ್&zwnj;ಡೌನ್ ಶುರುವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qfjxqmtmgbj3k4tw9spp0h,imgname-nkbk-1789641979635.png" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ರಣಬಾಲಿ' ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಚಿತ್ರ, ಮದುವೆಯಾದ ಬಳಿಕ ಈ ಜೋಡಿ ಒಟ್ಟಿಗೆ ನಟಿಸುತ್ತಿರುವ ಮೊದಲ ಸಿನಿಮಾವಾಗಿದೆ. 2026ರ ಅಕ್ಟೋಬರ್ 16ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ.ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಾಗಿ ನಟಿಸುತ್ತಿರುವ 'ರಣಬಾಲಿ' ಸಿನಿಮಾದ ಶೂಟಿಂಗ್ ಅಧಿಕೃತವಾಗಿ ಮುಕ್ತಾಯವಾಗಿದೆ.&lt;/p&gt;&lt;p&gt;2026ರ ಅಕ್ಟೋಬರ್ 16ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದ್ದು, ಚಿತ್ರತಂಡ 29 ದಿನಗಳ ಕೌಂಟ್&zwnj;ಡೌನ್ ಶುರು ಮಾಡಿದೆ. ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪ್ಯಾನ್-ಇಂಡಿಯಾ ಪಿರಿಯಡ್ ಆಕ್ಷನ್ ಡ್ರಾಮಾದ ಚಿತ್ರೀಕರಣ ಮುಗಿದಿರುವ ಬಗ್ಗೆ ಮೈತ್ರಿ ಮೂವಿ ಮೇಕರ್ಸ್ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದೆ.&lt;/p&gt;&lt;p&gt;&lt;strong&gt;ಸೆಟ್&zwnj;ನಲ್ಲಿ ಭಾವುಕ ಕ್ಷಣ&lt;/strong&gt;&lt;/p&gt;&lt;p&gt;ಕೊನೆಯ ಹಂತದ ಶೂಟಿಂಗ್ ವೇಳೆ 'ಜಯಮ್ಮ' ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಸೆಟ್&zwnj;ನಲ್ಲಿ ಭಾವುಕರಾದರು. ಚಿತ್ರೀಕರಣ ಮುಕ್ತಾಯಗೊಂಡ ಈ ಕ್ಷಣ ಇಡೀ ಚಿತ್ರತಂಡಕ್ಕೆ ತುಂಬಾನೇ ಸ್ಪೆಷಲ್ ಆಗಿತ್ತು.&lt;/p&gt;&lt;p&gt;&lt;strong&gt;ಪಿರಿಯಡ್ ಡ್ರಾಮಾ ಮೇಲಿನ ನಿರೀಕ್ಷೆ ಡಬಲ್&lt;/strong&gt;&lt;/p&gt;&lt;p&gt;ಸಿನಿಮಾದ ಸೂಪರ್ ಹಿಟ್ ಹಾಡು &quot;ಎಂದಯ್ಯ ಸಾಮಿ&quot; ಶೀಘ್ರದಲ್ಲೇ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ. ಈಗಾಗಲೇ ರಿಲೀಸ್ ಆಗಿರುವ 'ರಣಬಾಲಿ' ಟೀಸರ್ ನೋಡಿ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ. 1854 ರಿಂದ 1878ರ ಕಾಲಘಟ್ಟದ ಐತಿಹಾಸಿಕ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. 'ರಣಬಾಲಿ' ಒಂದು ಪಿರಿಯಡ್ ಆಕ್ಷನ್ ಡ್ರಾಮಾ ಆಗಿದ್ದು, ಹೋರಾಟ ಹಾಗೂ ಭರ್ಜರಿ ಆಕ್ಷನ್ ದೃಶ್ಯಗಳು ಇದರಲ್ಲಿವೆ. ಶೂಟಿಂಗ್ ಕಂಪ್ಲೀಟ್ ಆಗಿರುವ ಈ ಸಿನಿಮಾ 2026ರ ಅಕ್ಟೋಬರ್ 16ರಂದು ಪ್ರಪಂಚದಾದ್ಯಂತ ಥಿಯೇಟರ್&zwnj;ಗಳಿಗೆ ಲಗ್ಗೆ ಇಡಲಿದೆ.&lt;/p&gt;&lt;h2&gt;&lt;strong&gt;ಮದುವೆ ಬಳಿಕ ಮೊದಲ ಸಿನಿಮಾ&lt;/strong&gt;&lt;/h2&gt;&lt;p&gt;2026ರ ಫೆಬ್ರವರಿಯಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ರಿಯಲ್ ಲೈಫ್&zwnj;ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕ ಈ ಜೋಡಿ ಒಟ್ಟಿಗೆ ನಟಿಸುತ್ತಿರುವ ಮೊದಲ ಸಿನಿಮಾ 'ರಣಬಾಲಿ'. ಗಂಡ-ಹೆಂಡತಿಯಾಗಿ ಇದು ಇವರ ಮೊದಲ ರಿಲೀಸ್ ಆದರೂ, ಒಟ್ಟಾರೆಯಾಗಿ ಇದು ಇವರ ಮೂರನೇ ಸಿನಿಮಾ. ಈ ಹಿಂದೆ 'ಗೀತ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿ ಬ್ಲಾಕ್&zwnj;ಬಸ್ಟರ್ ಹಿಟ್ ಕೊಟ್ಟಿದ್ದರು.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/telugu-actor-vijay-deverakonda-rashmika-mandanna-ranabaali-shooting-comes-to-an-end-gvd/articleshow-q7qg4pd"/>
        </item>
        <item>
            <title><![CDATA[ಕಯಾದು ಲೋಹರ್ ಕೈಯಲ್ಲಿ ಸಿಗರೇಟ್, ನಾನಿ ಜೊತೆ ವಿಲನ್ ಲುಕ್: 'ದಿ ಪ್ಯಾರಡೈಸ್'ನಲ್ಲಿ ಹೊಸ ಟ್ವಿಸ್ಟ್?]]></title>
            <link>https://kannada.asianetnews.com/entertainment/telugu-movie-the-paradise-new-poster-is-kayadu-lohar-playing-the-villain-opposite-nani-gvd/articleshow-srb04ih</link>
            <guid isPermaLink="true">https://kannada.asianetnews.com/entertainment/telugu-movie-the-paradise-new-poster-is-kayadu-lohar-playing-the-villain-opposite-nani-gvd/articleshow-srb04ih</guid>
            <pubDate>Thu, 17 Sep 2026 17:06:59 +0530</pubDate>
            <description><![CDATA[&lt;p&gt;&lsquo;ದಿ ಪ್ಯಾರಡೈಸ್&rsquo; ಹೊಸ ಪೋಸ್ಟರ್&zwnj;ನಲ್ಲಿ ನಾನಿ ಜೊತೆ ಕಯಾದು ಲೋಹರ್ ಕಾಣಿಸಿಕೊಂಡಿದ್ದಾರೆ. ಸಿಗರೇಟ್ ಸೇದುತ್ತಿರುವ ಅವರ ಲುಕ್ ವಿಲನ್ ಪಾತ್ರದ ಸುಳಿವು ನೀಡಿದೆಯಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qjexdqgfraz7n57fy02cbj,imgname-bkb-1789644993975.png" type="image/jpeg" height="390" width="690"/>
            <content:encoded><![CDATA[&lt;p&gt;ಟಾಲಿವುಡ್&zwnj;ನ ಪ್ರಮುಖ ನಟರಲ್ಲಿ ಒಬ್ಬರಾಗಿರುವ ನಾನಿ ಅಭಿನಯದ ಬಹುನಿರೀಕ್ಷಿತ ಸಿನಿಮಾ &lsquo;ದಿ ಪ್ಯಾರಡೈಸ್&rsquo;. ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಚಿತ್ರತಂಡ ಕಯಾದು ಲೋಹರ್ ಜೊತೆಗಿನ ಹೊಸ ಪೋಸ್ಟರ್&zwnj;ವೊಂದನ್ನು ಹಂಚಿಕೊಂಡಿದೆ. ಈ ಪೋಸ್ಟರ್ ಇದೀಗ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಟಾಲಿವುಡ್&zwnj;ನಲ್ಲಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಟ ನಾನಿ ಅವರನ್ನು &lsquo;ನ್ಯಾಚುರಲ್ ಸ್ಟಾರ್&rsquo; ಎಂದೇ ಕರೆಯಲಾಗುತ್ತದೆ.&lt;/p&gt;&lt;p&gt;ತೆಲುಗು ಮಾತ್ರವಲ್ಲದೆ ತಮಿಳು ಸೇರಿದಂತೆ ಹಲವು ಭಾಷೆಗಳಲ್ಲೂ ನಾನಿ ಅಭಿನಯದ ಸಿನಿಮಾಗಳು ಬಿಡುಗಡೆಯಾಗಿವೆ. 2025ರಲ್ಲಿ ನಾನಿ ಅಭಿನಯದ &lsquo;ಹಿಟ್ 3&rsquo; ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಅದರ ಬಳಿಕ ನಾನಿ ನಟಿಸಿರುವ ಬಹು ದೊಡ್ಡ ಸಿನಿಮಾ &lsquo;ದಿ ಪ್ಯಾರಡೈಸ್&rsquo; ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರವನ್ನು ನಿರ್ದೇಶಕ ಶ್ರೀಕಾಂತ್ ಓಡೆಲಾ ನಿರ್ದೇಶಿಸುತ್ತಿದ್ದು, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಸಂಸ್ಥೆ ನಿರ್ಮಿಸುತ್ತಿದೆ.&lt;/p&gt;&lt;p&gt;ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದು, ಈಗಾಗಲೇ ಸಿನಿಮಾದಿಂದ ಎರಡು ಹಾಡುಗಳು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಸಿನಿಮಾದ ಹಾಡುಗಳು ಸದ್ಯ ಟ್ರೆಂಡಿಂಗ್&zwnj;ನಲ್ಲಿದ್ದು, &lsquo;ದಿ ಪ್ಯಾರಡೈಸ್&rsquo; ಚಿತ್ರದ ಮೇಲಿನ ನಿರೀಕ್ಷೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೆಪ್ಟೆಂಬರ್ 24, 2026ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇದೀಗ ಹೊಸ ಸ್ಪೆಷಲ್ ಪೋಸ್ಟರ್&zwnj;ವೊಂದನ್ನು ಹಂಚಿಕೊಂಡಿದೆ.&lt;/p&gt;&lt;p&gt;&lt;strong&gt;ನಾನಿ ಜೊತೆ ಕಯಾದು ಲೋಹರ್: ವಿಲನ್ ಪಾತ್ರನಾ?&lt;/strong&gt;&lt;/p&gt;&lt;p&gt;ಹೊಸ ಪೋಸ್ಟರ್&zwnj;ನಲ್ಲಿ ನಟ ನಾನಿ ಜೊತೆ ನಟಿ ಕಯಾದು ಲೋಹರ್ ಕಾಣಿಸಿಕೊಂಡಿದ್ದಾರೆ. ಪೋಸ್ಟರ್&zwnj;ನಲ್ಲಿ ಕಯಾದು ಲೋಹರ್ ಸಿಗರೇಟ್ ಸೇದುತ್ತಿರುವ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ನೋಡಿದಾಗ ಸಿನಿಮಾದಲ್ಲಿ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಆದರೆ ಪೋಸ್ಟರ್&zwnj;ನ ಕೆಳಭಾಗದಲ್ಲಿ ಚಿತ್ರತಂಡ ಹಂಚಿಕೊಂಡಿರುವ ಸಾಲು ಮತ್ತಷ್ಟು ಕುತೂಹಲ ಮೂಡಿಸಿದೆ.&lt;/p&gt;&lt;p&gt;ಅವರ ಪ್ರೀತಿ ನೀವು ಇದುವರೆಗೆ ನೋಡಿರದ ರೀತಿಯದ್ದಾಗಿರುತ್ತದೆ ಎಂಬ ಅರ್ಥದ ಸಾಲನ್ನು ಚಿತ್ರತಂಡ ಪೋಸ್ಟರ್&zwnj;ನಲ್ಲಿ ಬರೆದಿದೆ. ಹೀಗಾಗಿ ಕಯಾದು ಲೋಹರ್ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿದ್ದಾರಾ? ಅಥವಾ ನಾನಿ ಜೊತೆಗಿನ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಪ್ರಶ್ನೆಗೆ ಸಿನಿಮಾದ ಬಿಡುಗಡೆಯ ಬಳಿಕವೇ ಸ್ಪಷ್ಟ ಉತ್ತರ ಸಿಗಲಿದೆ.&lt;/p&gt;&lt;h2&gt;&lt;strong&gt;&lsquo;ದಿ ಪ್ಯಾರಡೈಸ್&rsquo; ಟ್ರೇಲರ್ ಬರಲ್ವಾ?&lt;/strong&gt;&lt;/h2&gt;&lt;p&gt;&lsquo;ದಿ ಪ್ಯಾರಡೈಸ್&rsquo; ಸಿನಿಮಾ ಆ್ಯಕ್ಷನ್ ಹಾಗೂ ಗ್ಯಾಂಗ್&zwnj;ಸ್ಟರ್ ಹಿನ್ನೆಲೆಯ ಕಥೆಯನ್ನು ಹೊಂದಿರುವ ಬೃಹತ್ ಚಿತ್ರವಾಗಿದೆ. ಸಿನಿಮಾದಲ್ಲಿ ನಾನಿ ಮತ್ತು ಕಯಾದು ಲೋಹರ್ ಜೊತೆಗೆ ಕೀರ್ತಿ ಸುರೇಶ್, ಮೋಹನ್ ಬಾಬು ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.&lt;/p&gt;&lt;p&gt;ಸೆಪ್ಟೆಂಬರ್ 24, 2026ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ನಡುವೆ ಸಿನಿಮಾದ ಟ್ರೇಲರ್ ಕುರಿತು ಕೂಡ ಕುತೂಹಲ ಹೆಚ್ಚಾಗಿದೆ. ಆದರೆ &lsquo;ದಿ ಪ್ಯಾರಡೈಸ್&rsquo; ಸಿನಿಮಾಗೆ ಟ್ರೇಲರ್ ಬಿಡುಗಡೆ ಮಾಡುವುದಿಲ್ಲ ಎಂಬ ಮಾತು ಚಿತ್ರರಂಗದ ವಲಯಗಳಲ್ಲಿ ಕೇಳಿಬರುತ್ತಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹೀಗಾಗಿ ಟ್ರೇಲರ್ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/telugu-movie-the-paradise-new-poster-is-kayadu-lohar-playing-the-villain-opposite-nani-gvd/articleshow-srb04ih"/>
        </item>
        <item>
            <title><![CDATA[ಬೆಂಗಳೂರಿನ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಆಗಿದ್ದೇನು?]]></title>
            <link>https://kannada.asianetnews.com/entertainment/nirmala-sitharaman-emotional-ms-subbulakshmi-110th-birth-anniversary-bengaluru-san/articleshow-w4qgri3</link>
            <guid isPermaLink="true">https://kannada.asianetnews.com/entertainment/nirmala-sitharaman-emotional-ms-subbulakshmi-110th-birth-anniversary-bengaluru-san/articleshow-w4qgri3</guid>
            <pubDate>Wed, 16 Sep 2026 23:02:09 +0530</pubDate>
            <description><![CDATA[ಬೆಂಗಳೂರಿನಲ್ಲಿ ನಡೆದ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತ್ಯುತ್ಸವದಲ್ಲಿ ಗಾನ ಸುಧೆ ಆಲಿಸುತ್ತಾ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭಾವುಕರಾದರು. ಕರ್ನಾಟಿಕ್ ಸಂಗೀತದಲ್ಲಿ ಭಕ್ತಿಯೇ ಜೀವಾಳ ಎಂದ ಅವರು, ಸುಬ್ಬುಲಕ್ಷ್ಮಿ ಅವರ ಸಾಧನೆ ಹಾಗೂ ಗಾಂಧೀಜಿಯವರೊಂದಿಗಿನ ಒಡನಾಟವನ್ನು ಸ್ಮರಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m2nm7teck2xb8sqdse20ycxh,imgname-nirmala-sitharaman-emotional--1789579749836.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.16):&lt;/strong&gt; ಕರ್ನಾಟಿಕ್&zwnj; ಸಂಗೀತ ಕ್ಷೇತ್ರದ ದಂತಕಥೆ, 'ಭಾರತ ರತ್ನ' ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110 ನೇ ಜಯಂತ್ಯುತ್ಸವದ ಅಂಗವಾಗಿ ಬುಧವಾರ ನಗರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗಾನ ಸುಧೆಯನ್ನು ಆಲಿಸುತ್ತಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, 'ಭಕ್ತಿ'ಯನ್ನು ಕರ್ನಾಟಿಕ್&zwnj; ಸಂಗೀತದ &quot;ಜೀವಕೋಶ&quot; (Living soul) ಎಂದು ಬಣ್ಣಿಸಿದರು. ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ರೂಪಿಸುವಲ್ಲಿ ವಿವಿಧ ಭಾಷೆಗಳು ಹಾಗೂ ಧಾರ್ಮಿಕ ಚೌಕಟ್ಟುಗಳು ವಹಿಸಿದ ಪ್ರಮುಖ ಪಾತ್ರವನ್ನು ಅವರು ಉಲ್ಲೇಖಿಸಿದರು.&lt;/p&gt;&lt;p&gt;&quot;ಕರ್ನಾಟಿಕ್&zwnj; ಸಂಗೀತದಲ್ಲಿರುವ ಭಕ್ತಿಯು ಈ ಪರಂಪರೆಯ ಜೀವಂತ ಆತ್ಮವಾಗಿದೆ. ಇದು ಪ್ರಮುಖ ಭಾಷೆಗಳ ಭವ್ಯ ಸಂಗಮದ ಮೂಲಕ ಸದಾ ಜೀವಂತವಾಗಿ ಸಾಗಿದೆ. ಒಂದೇ ಸಂಗೀತ ಕಚೇರಿಯಲ್ಲಿ, ವಿವಿಧ ಭಾಷಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳು ನದಿಗಳು ಸಾಗರವನ್ನು ಸೇರುವಂತೆ ಒಂದಾಗಿ ಹರಿಯುತ್ತವೆ&quot; ಎಂದು ಸಚಿವೆ ಹೇಳಿದರು. ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ಭಕ್ತಿ ಪರಂಪರೆಯು 12, 13 ಮತ್ತು 14 ನೇ ಶತಮಾನಗಳಲ್ಲಿ ಉತ್ತರ ಭಾರತಕ್ಕೂ ಪಸರಿಸಿತು ಮತ್ತು ಇದು ಹಿಂದುಸ್ತಾನಿ ಭಜನೆಗಳ ಮೇಲೆಯೂ ಪ್ರಭಾವ ಬೀರಿದೆ ಎಂದರು.&lt;/p&gt;&lt;h2&gt;&lt;strong&gt;ಮಹಾತ್ಮ ಗಾಂಧೀಜಿ ಮತ್ತು 'ಹರಿ ತುಮ್ ಹರೋ' ಭಜನೆಯ ನೆನಪು&lt;/strong&gt;&lt;/h2&gt;&lt;p&gt;ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕಠಿಣ ಸಂಗೀತ ಅಭ್ಯಾಸ, ವಿನಯತೆ ಹಾಗೂ ಕಲೆಯ ಮೇಲಿದ್ದ ನಿಷ್ಠೆಯನ್ನು ಸಚಿವೆ ನೆನಪಿಸಿಕೊಂಡರು. &quot;ಅವರ ಗಾಯನ ಪ್ರತಿಭೆಯು ಕಠಿಣ ಬೌದ್ಧಿಕ ಶಿಸ್ತನ್ನು ಆಧರಿಸಿತ್ತು. ತಮ್ಮ ಅಪಾರ ಸಾಧನೆಯ ಹೊರತಾಗಿಯೂ ಅವರು ಕೊನೆಯವರೆಗೂ ತಮ್ಮನ್ನು ಸಂಗೀತ ವಿದ್ಯಾರ್ಥಿಯೆಂದೇ ಪರಿಭಾವಿಸಿದ್ದರು&quot; ಎಂದರು.&lt;/p&gt;&lt;p&gt;ಇದೇ ವೇಳೆ, ಮಹಾತ್ಮ ಗಾಂಧೀಜಿ ಅವರಿಗಾಗಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಮೀರಾಬಾಯಿ ಅವರ &quot;ಹರಿ ತುಮ್ ಹರೋ&quot; ಭಜನೆಯನ್ನು ಹಾಡಿದ ಘಟನೆಯನ್ನು ಸಚಿವರು ಸ್ಮರಿಸಿದರು. ಗಾಂಧೀಜಿಯವರಿಗಾಗಿ ಈ ಭಜನೆಯನ್ನು ಧ್ವನಿಮುದ್ರಣ ಮಾಡುವ ಮುನ್ನ, ಅದರ ಸರಿಯಾದ ಉಚ್ಚಾರಣೆಗಾಗಿ ಸುಬ್ಬುಲಕ್ಷ್ಮಿ ಅವರು ಇಡೀ ರಾತ್ರಿ ಶ್ರಮಿಸಿದ್ದರು. ಈ ಬಗ್ಗೆ ಗಾಂಧೀಜಿಯವರು, &quot;ಬೇರಾರೂ ಹಾಡುವುದಕ್ಕಿಂತ ಸುಬ್ಬುಲಕ್ಷ್ಮಿ ಅವರು ಈ ಭಜನೆಯನ್ನು ಹೇಳುವುದನ್ನೇ ನಾನು ಹೆಚ್ಚು ಇಷ್ಟಪಡುತ್ತೇನೆ&quot; ಎಂದು ಹೇಳಿದ್ದನ್ನು ಸಚಿವರು ಉಲ್ಲೇಖಿಸಿದರು.&lt;/p&gt;&lt;p&gt;ಅಲ್ಲದೆ, ಸುಬ್ಬುಲಕ್ಷ್ಮಿ ಅವರ ಪರೋಪಕಾರಿ ಗುಣವನ್ನು ಕೊಂಡಾಡಿದ ಸಚಿವೆ, ತಾವು ಕಚೇರಿಗಳಿಂದ ಗಳಿಸಿದ ಆದಾಯವನ್ನು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಾಗೂ ವಿವಿಧ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡುತ್ತಿದ್ದರು ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಸಂಗೀತ ಕ್ಷೇತ್ರದ ಮಹಾನ್ ಚೇತನ 'ಎಂ.ಎಸ್. ಸುಬ್ಬುಲಕ್ಷ್ಮಿ'&lt;/strong&gt;&lt;/h2&gt;&lt;p&gt;ಜನನ ಮತ್ತು ಹಿನ್ನೆಲೆ: ಸೆಪ್ಟೆಂಬರ್ 16, 1916 ರಂದು ಮಧುರೈನಲ್ಲಿ ಸಾಂಪ್ರದಾಯಿಕ ಕಲಾ ಕುಟುಂಬದಲ್ಲಿ ಜನಿಸಿದ ಮಧುರೈ ಶಣ್ಮುಖವಡಿವು ಸುಬ್ಬುಲಕ್ಷ್ಮಿ (MS Subbulakshmi) ಅವರು, 20 ನೇ ಶತಮಾನದ ಕರ್ನಾಟಿಕ್&zwnj; ಸಂಗೀತದ ಶ್ರೇಷ್ಠ ಕಂಠಸಿರಿಯಾಗಿ ಹೊರಹೊಮ್ಮಿದರು. ಇವರ ಸಂಗೀತವು ದೇಶ-ವಿದೇಶಗಳ ಗಡಿಗಳನ್ನು ದಾಟಿ ಜಾತಿ, ಭಾಷೆ, ಪ್ರಾದೇಶಿಕತೆ ಮತ್ತು ಧರ್ಮಗಳ ಬೇಲಿಗಳನ್ನು ಮೀರಿ ಜನಪ್ರಿಯತೆ ಗಳಿಸಿತ್ತು.&lt;/p&gt;&lt;p&gt;1974 ರಲ್ಲಿ 'ರಾಮನ್ ಮ್ಯಾಗ್ಸೆಸೆ' (Ramon Magsaysay) ಪ್ರಶಸ್ತಿ ಪಡೆದ ಮೊದಲ ಭಾರತೀಯ ಸಂಗೀತಗಾರ್ತಿ ಇವರಾಗಿದ್ದರು. 1966 ರಲ್ಲಿ ಸಂಯುಕ್ತ ರಾಷ್ಟ್ರಸಂಸ್ಥೆಯ (UN General Assembly) ಮಹಾಸಭೆಯಲ್ಲಿ ಗಾಯನ ನಡೆಸಿಕೊಟ್ಟ ಪ್ರಥಮ ಭಾರತೀಯ ಕಲಾಕಾರರೆನಿಸಿದ್ದರು. 1998 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ಪ್ರಶಸ್ತಿ ಪುರಸ್ಕೃತರಾದ ಮೊದಲ ಸಂಗೀತಗಾರ್ತಿ ಇವರು. ತಮ್ಮ ನಾದೋಪಾಸನೆಯ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದ ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಡಿಸೆಂಬರ್ 11, 2004 ರಂದು ತಮ್ಮ 88 ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು.&lt;/p&gt;&lt;p&gt;#WATCH | Karnataka: Union Minister Nirmala Sitharaman gets emotional and breaks down as she hears a song being sung at an event in Bengaluru to mark the 110th birth anniversary of legendary singer MS Subbulakshmi. pic.twitter.com/FjDpAtwDqN&lt;/p&gt;&lt;p&gt;&mdash; ANI (@ANI) September 16, 2026&lt;/p&gt;&lt;p&gt;&lt;/p&gt;]]></content:encoded>
            <category>news-entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/entertainment/nirmala-sitharaman-emotional-ms-subbulakshmi-110th-birth-anniversary-bengaluru-san/articleshow-w4qgri3"/>
        </item>
        <item>
            <title><![CDATA[ಒಂದೇ ಒಂದು ಸಿನಿಮಾದಿಂದ ಎಲ್ಲರ ಗಮನ ಸೆಳೆದ್ರು ಈ ಬ್ಯೂಟಿ: ಈಗ ಎಲ್ಲಿಗೆ ಎಂಟ್ರಿ ಕೊಡ್ತಿದ್ದಾರೆ ಗೊತ್ತಾ?]]></title>
            <link>https://kannada.asianetnews.com/entertainment/tamil-actress-divyabharathi-social-media-craze-continues-as-she-eyes-tollywood-gvd/articleshow-xez175s</link>
            <guid isPermaLink="true">https://kannada.asianetnews.com/entertainment/tamil-actress-divyabharathi-social-media-craze-continues-as-she-eyes-tollywood-gvd/articleshow-xez175s</guid>
            <pubDate>Thu, 17 Sep 2026 09:00:19 +0530</pubDate>
            <description><![CDATA[&lt;p&gt;&lsquo;ಬ್ಯಾಚುಲರ್&rsquo; ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟು ಮೊದಲ ಸಿನಿಮಾದಲ್ಲೇ ಯೂತ್&zwnj;ನಲ್ಲಿ ಭಾರೀ ಕ್ರೇಜ್ ಸಂಪಾದಿಸಿಕೊಂಡ ನಟಿ ದಿವ್ಯ ಭಾರತಿ ಇದೀಗ ಟಾಲಿವುಡ್&zwnj;ನತ್ತ ಹೆಜ್ಜೆ ಇಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2nn3qzaxc3c2t558r7zw5gp,imgname-bjb-1789580664810.png" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಯಿನ್ ಆಗಿ ಗುರುತಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಪ್ರತಿಭೆಯ ಜೊತೆಗೆ ಅದೃಷ್ಟ, ಒಳ್ಳೆಯ ಕಥೆ, ಪ್ರೇಕ್ಷಕರನ್ನು ಸೆಳೆಯುವ ಪಾತ್ರ.. ಹೀಗೆ ಹಲವು ಅಂಶಗಳು ಒಟ್ಟಿಗೆ ಕ್ಲಿಕ್ ಆದರೆ ಮಾತ್ರ ನಾಯಕಿಯರಿಗೆ ದೊಡ್ಡ ಮಟ್ಟದ ಕ್ರೇಜ್ ಸಿಗುತ್ತದೆ. ಆದರೆ ಈಗ ಪರಿಸ್ಥಿತಿ ಕೊಂಚ ಬದಲಾಗಿದೆ. ಒಂದೇ ಒಂದು ಸಿನಿಮಾದ ಮೂಲಕವೇ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಳ್ಳುತ್ತಿರುವ ಹೀರೋಯಿನ್&zwnj;ಗಳು ಸಾಕಷ್ಟು ಮಂದಿ ಇದ್ದಾರೆ.&lt;/p&gt;&lt;p&gt;ವಿಶೇಷವಾಗಿ ಸೋಷಿಯಲ್ ಮೀಡಿಯಾದ ಪ್ರಭಾವದಿಂದ ಕೆಲವರು ಒಂದೇ ಒಂದು ಹಾಡಿನ ಮೂಲಕವೇ ಓವರ್&zwnj;ನೈಟ್ ಸೆನ್ಸೇಷನ್ ಆಗುತ್ತಿದ್ದಾರೆ. ಅಂತಹ ಬ್ಯೂಟಿಗಳ ಪಟ್ಟಿಗೆ ಸೇರಿದ ನಟಿಯರಲ್ಲಿ ದಿವ್ಯ ಭಾರತಿ ಕೂಡ ಒಬ್ಬರು. ಮೊದಲ ಸಿನಿಮಾದಲ್ಲೇ ಯೂತ್&zwnj;ನಲ್ಲಿ ಉತ್ತಮ ಗುರುತಿಸಿಕೊಂಡ ಈ ಬ್ಯೂಟಿ, ಇದೀಗ ಕಾಲಿವುಡ್ ಮಾತ್ರವಲ್ಲದೆ ಟಾಲಿವುಡ್&zwnj;ನಲ್ಲೂ ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ದಿವ್ಯ ಭಾರತಿ ಯಾರು? ಅವರ ಸಿನಿ ಪಯಣ ಹೇಗಿದೆ? ನೋಡೋಣ.&lt;/p&gt;&lt;p&gt;&lt;strong&gt;&lsquo;ಬ್ಯಾಚುಲರ್&rsquo; ಮೂಲಕ ಹೀರೋಯಿನ್ ಎಂಟ್ರಿ&lt;/strong&gt;&lt;/p&gt;&lt;p&gt;ದಿವ್ಯ ಭಾರತಿ ತಮಿಳಿನ &lsquo;ಬ್ಯಾಚುಲರ್&rsquo; ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಜೀವಿ ಪ್ರಕಾಶ್ ಕುಮಾರ್ ನಾಯಕನಾಗಿ ನಟಿಸಿದ್ದ ಈ ಚಿತ್ರವನ್ನು ಸತೀಶ್ ಸೆಲ್ವಕುಮಾರ್ ನಿರ್ದೇಶಿಸಿದ್ದರು. ರೊಮ್ಯಾಂಟಿಕ್ ಎಂಟರ್&zwnj;ಟೈನರ್ ಆಗಿ ಮೂಡಿಬಂದಿದ್ದ ಈ ಸಿನಿಮಾದಲ್ಲಿ ದಿವ್ಯ ಭಾರತಿ ತಮ್ಮ ನಟನೆ ಮಾತ್ರವಲ್ಲದೆ ಗ್ಲಾಮರ್&zwnj;ನಿಂದಲೂ ಪ್ರೇಕ್ಷಕರ ಗಮನ ಸೆಳೆದರು.&lt;/p&gt;&lt;p&gt;ಮೊದಲ ಸಿನಿಮಾದಲ್ಲೇ ಈ ಬ್ಯೂಟಿಗೆ ಉತ್ತಮ ಜನಪ್ರಿಯತೆ ಸಿಕ್ಕಿತು. ವಿಶೇಷವಾಗಿ ಸಿನಿಮಾದ ಹಾಡುಗಳು ಹಾಗೂ ರೊಮ್ಯಾಂಟಿಕ್ ಸನ್ನಿವೇಶಗಳು ಯುವಕರನ್ನು ಸೆಳೆಯುವುದರೊಂದಿಗೆ ದಿವ್ಯ ಭಾರತಿ ಹೆಸರು ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡತೊಡಗಿತು.&lt;/p&gt;&lt;p&gt;&lt;strong&gt;ಒಂದೇ ಸಿನಿಮಾದಿಂದ ಸೋಷಿಯಲ್ ಮೀಡಿಯಾ ಕ್ರೇಜ್&lt;/strong&gt;&lt;/p&gt;&lt;p&gt;&lsquo;ಬ್ಯಾಚುಲರ್&rsquo; ಸಿನಿಮಾದ ಕೆಲವು ಹಾಡುಗಳು ಆ ಸಮಯದಲ್ಲಿ ಭಾರೀ ಜನಪ್ರಿಯವಾಗಿದ್ದವು. ಆ ಹಾಡುಗಳಲ್ಲಿ ದಿವ್ಯ ಭಾರತಿ ಕಾಣಿಸಿಕೊಂಡ ರೀತಿ ಹಾಗೂ ಅವರ ಸ್ಕ್ರೀನ್ ಪ್ರೆಸೆನ್ಸ್ ಯುವಕರನ್ನು ಆಕರ್ಷಿಸಿತ್ತು. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಅವರ ಫ್ಯಾನ್ ಫಾಲೋಯಿಂಗ್ ಕೂಡ ವೇಗವಾಗಿ ಹೆಚ್ಚಾಯಿತು.&lt;/p&gt;&lt;p&gt;ಮೊದಲ ಸಿನಿಮಾದಲ್ಲೇ ವಿಶೇಷ ಗುರುತು ಸಿಕ್ಕಿದ್ದರಿಂದ ದಿವ್ಯ ಭಾರತಿ ಅವರ ಫೋಟೋಗಳು, ವಿಡಿಯೋಗಳು ನಟ್ಟಿಂಟದಲ್ಲಿ ವೈರಲ್ ಆಗತೊಡಗಿದವು. ಅವರ ಸೌಂದರ್ಯ ಹಾಗೂ ಸ್ಟೈಲಿಶ್ ಲುಕ್&zwnj;ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದರ ಪರಿಣಾಮವಾಗಿ ತಮಿಳು ಪ್ರೇಕ್ಷಕರಲ್ಲಿ ದಿವ್ಯ ಭಾರತಿ ತಮ್ಮದೇ ಆದ ಗುರುತನ್ನು ಪಡೆದುಕೊಂಡರು.&lt;/p&gt;&lt;p&gt;&lt;strong&gt;ಸಿನಿಮಾಗಳು ಮಾತ್ರ ನಿರೀಕ್ಷಿತ ಯಶಸ್ಸು ನೀಡಲಿಲ್ಲ!&lt;/strong&gt;&lt;/p&gt;&lt;p&gt;ಮೊದಲ ಸಿನಿಮಾದಿಂದಲೇ ಉತ್ತಮ ಹೆಸರು ಗಳಿಸಿದ ದಿವ್ಯ ಭಾರತಿ ನಂತರವೂ ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಮುಂದುವರಿದರು. ಜೀವಿ ಪ್ರಕಾಶ್ ಕುಮಾರ್ ಜೊತೆ &lsquo;ಕಿಂಗ್&zwnj;ಸ್ಟನ್&rsquo; ಸಿನಿಮಾದಲ್ಲೂ ಕಾಣಿಸಿಕೊಂಡರು. ಆದರೆ ನಂತರದ ಸಿನಿಮಾಗಳು ಬಾಕ್ಸ್ ಆಫೀಸ್&zwnj;ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಆದರೂ ದಿವ್ಯ ಭಾರತಿ ಅವರ ಕ್ರೇಜ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಮುಂದುವರಿದಿದೆ.&lt;/p&gt;&lt;h2&gt;&lt;strong&gt;ಈಗ ಟಾಲಿವುಡ್&zwnj;ನತ್ತ ಹೆಜ್ಜೆ!&lt;/strong&gt;&lt;/h2&gt;&lt;p&gt;ತಮಿಳಿನಲ್ಲಿ ನಾಯಕಿಯಾಗಿ ಪರಿಚಯವಾದ ದಿವ್ಯ ಭಾರತಿ ಇದೀಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಟಾಲಿವುಡ್ ಹೀರೋ ಸುಡಿಗಾಳಿ ಸುಧೀರ್ ನಟಿಸುತ್ತಿರುವ ಸಿನಿಮಾದಲ್ಲಿ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲಿದ್ದಾರೆ. ಸಿನಿಮಾ ಅವಕಾಶಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ದಿವ್ಯ ಭಾರತಿ ಸಖತ್ ಆಕ್ಟಿವ್ ಆಗಿದ್ದಾರೆ.&lt;/p&gt;&lt;p&gt;ಇನ್ನು ತಮ್ಮ ಫೋಟೋಶೂಟ್&zwnj;ಗಳಿಗೆ ಸಂಬಂಧಿಸಿದ ಚಿತ್ರಗಳು ಹಾಗೂ ವೈಯಕ್ತಿಕ ಫೋಟೋಗಳನ್ನು ಆಗಾಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಗ್ಲಾಮರಸ್ ಲುಕ್&zwnj;ಗಳಿಗೆ ನೆಟ್ಟಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುತ್ತದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/tamil-actress-divyabharathi-social-media-craze-continues-as-she-eyes-tollywood-gvd/articleshow-xez175s"/>
        </item>
    </channel>
</rss>
