<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 03 Jun 2026 06:10:47 +0530</lastBuildDate>
        <atom:link href="https://kannada.asianetnews.com/rss/news" rel="self" type="application/rss+xml"/>
        <item>
            <title><![CDATA[Vidhan soudha staff  Holiday: ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ; ವಿಧಾನಸೌಧ ಸಿಬ್ಬಂದಿಗೆಇಂದು ಮಧ್ಯಾಹ್ನ ರಜೆ!]]></title>
            <link>https://kannada.asianetnews.com/state/vidhan-soudha-staff-half-day-holiday-today-for-dks-take-oath-as-24th-karnataka-cm-rav/articleshow-4zgtyk7</link>
            <guid isPermaLink="true">https://kannada.asianetnews.com/state/vidhan-soudha-staff-half-day-holiday-today-for-dks-take-oath-as-24th-karnataka-cm-rav/articleshow-4zgtyk7</guid>
            <pubDate>Wed, 03 Jun 2026 06:10:41 +0530</pubDate>
            <description><![CDATA[&lt;p&gt;ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಗಾಗಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳ ನೌಕರರಿಗೆ ಮಧ್ಯಾಹ್ನ ರಜೆ ಘೋಷಿಸಲಾಗಿದೆ. ಲೋಕಭವನದಲ್ಲಿ ನಡೆಯುವ ಈ ಕಾರ್ಯಕ್ರಮದಿಂದ ಉಂಟಾಗಬಹುದಾದ ಜನದಟ್ಟಣೆಗೆ ಕ್ರಮ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt5ebckwk479txmcswwe148x,imgname-----------------------2026-06-03t060207.936-1780446769787.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಂಎಸ್&zwnj; ಬಿಲ್ಡಿಂಗ್&zwnj;ನಲ್ಲಿನ ಅಧಿಕಾರಿ, ನೌಕರರಿಗೂ ರಜೆ । ಭದ್ರತೆ ದೃಷ್ಟಿಯಿಂದ ಈ ಕ್ರಮ&lt;/p&gt;&lt;p&gt;&lt;strong&gt;ಬೆಂಗಳೂರು (ಜೂ.3): &lt;/strong&gt;ರಾಜ್ಯ ಸರ್ಕಾರ(Karnataka government)ದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್&zwnj;(DK Shivakumar) ಅವರು ಲೋಕಭವನ(Lokbhavan)ದಲ್ಲಿ ಪದಗ್ರಹಣ(Oath) ಮಾಡುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ವಿಧಾನಸೌಧ(Vidhan soudha), ವಿಕಾಸಸೌಧ(Vikas soudha) ಮತ್ತು ಬಹುಮಹಡಿಗಳ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ನೌಕರರಿಗೆ ಬುಧವಾರ ಮಧ್ಯಾಹ್ನ ರಜೆ ಘೋಷಿಸಲಾಗಿದೆ.&lt;/p&gt;&lt;h2&gt;ಲೋಕಭವನದಲ್ಲಿ ಸಂಜೆ 4.05ಕ್ಕೆ ಪ್ರಮಾಣ ವಚನ ಸಮಾರಂಭ&lt;/h2&gt;&lt;p&gt;ಲೋಕಭವನದ ಗಾಜಿನ ಮನೆಯಲ್ಲಿ ಸಂಜೆ 4.05ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಇದರಿಂದ ಲೋಕಭವನ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಜನದಟ್ಟಣೆ ಹಾಗೂ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದೆ.&lt;/p&gt;&lt;p&gt;ಹೀಗಾಗಿ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ರಾಜ್ಯಪಾಲರ ಆದೇಶಾನುಸಾರ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ನೌಕರರಿಗೆ ಮಧ್ಯಾಹ್ನ ರಜೆ ಘೋಷಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/vidhan-soudha-staff-half-day-holiday-today-for-dks-take-oath-as-24th-karnataka-cm-rav/articleshow-4zgtyk7"/>
        </item>
        <item>
            <title><![CDATA[ಇಂದು ಹೊಸ ಸರ್ಕಾರ ರಚನೆ: ದೆಹಲಿಯಲ್ಲಿ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕಾಗಿ ಲಾಬಿ]]></title>
            <link>https://kannada.asianetnews.com/politics/dk-shivakumar-oath-ceremony-priyank-kharge-lobbies-fro-for-minister-post-in-delhi-rav/articleshow-b9q15dr</link>
            <guid isPermaLink="true">https://kannada.asianetnews.com/politics/dk-shivakumar-oath-ceremony-priyank-kharge-lobbies-fro-for-minister-post-in-delhi-rav/articleshow-b9q15dr</guid>
            <pubDate>Wed, 03 Jun 2026 05:40:24 +0530</pubDate>
            <description><![CDATA[ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನಕ್ಕೂ ಮುನ್ನವೇ ದೆಹಲಿಯಲ್ಲಿ ಸಚಿವ ಸಂಪುಟ ರಚನೆಯ ಚಟುವಟಿಕೆಗಳು ಗರಿಗೆದರಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ತಮಗೆ ಹಾಗೂ ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ವರಿಷ್ಠರ ಜೊತೆ ಮಾತುಕತೆ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kre72s6zmgd3mm2dg7476p0a,imgname-image-2026-05-12-191619431-1778593653983.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜೂ.3):&lt;/strong&gt; ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್(DK Shivakumar) ಅವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾದ ಬೆನ್ನಲ್ಲೇ ಮಂತ್ರಿಮಂಡಲ ರಚನೆ ಸಂಬಂಧ ದೆಹಲಿಯಲ್ಲಿ ಮಂಗಳವಾರ ಬಿರುಸಿನ ಚಟುವಟಿಕೆಗಳು ನಡೆದವು. ಸಚಿವಾಕಾಂಕ್ಷಿಗಳು ದೆಹಲಿಗೆ ತೆರಳಿ ಡಿಕೆಶಿ(DKS), ಸಿದ್ದು(Siddaramaiah), ವರಿಷ್ಠರನ್ನು ಭೇಟಿ ಮಾಡಿ, ಸಂಪುಟ ಸೇರುವ ಬಗ್ಗೆ ಲಾಬಿ ನಡೆಸಿದರು.&lt;/p&gt;&lt;h2&gt;ಸಚಿವ ಸಂಪುಟ ಸೇರಲು ಪ್ರಿಯಾಂಕ್ ಗಾಂಧಿ ಲಾಬಿ&lt;/h2&gt;&lt;p&gt;ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC president Mallikarjun kharge) ಅವರ ಪುತ್ರ, ಮಾಜಿ ಸಚಿವ ಪ್ರಿಯಾಂಕ್&zwnj; ಖರ್ಗೆ(Priyank kharge)ಯವರು ರಾಜ್ಯ ಕಾಂಗ್ರೆಸ್&zwnj; ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಿವಾಸಕ್ಕೆ ಭೇಟಿ ನೀಡಿ, ಸಂಪುಟ ರಚನೆ ಸಂಬಂಧ ಮಾತುಕತೆ ನಡೆಸಿದರು. ಬಳಿಕ, ಹಂಗಾಮಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ನೂತನ ಸಚಿವ ಸಂಪುಟ ರಚನೆ ಸಂಬಂಧ ಮಾತುಕತೆ ನಡೆಸಿದರು.&lt;/p&gt;&lt;h3&gt;ಕಲ್ಯಾಣ ಕರ್ನಾಟಕದ ಪ್ರಭಾವಿ ರಾಜಕಾರಣಿ ಖರ್ಗೆ&lt;/h3&gt;&lt;p&gt;ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್&zwnj;ನ ಪ್ರಭಾವಿ ನಾಯಕರಾಗಿರುವ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರರಾಗಿರುವ ಪ್ರಿಯಾಂಕ್&zwnj; ಖರ್ಗೆ, ನೂತನ ಸಚಿವ ಸಂಪುಟ ಸೇರುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಇದೇ ವೇಳೆ, ಹೊಸ ಸಂಪುಟದಲ್ಲಿ ತಮ್ಮ ಆಪ್ತರಿಗೆ ಸ್ಥಾನ ಕಲ್ಪಿಸಿಕೊಡಲು ಖರ್ಗೆ ಬಣ ಸಾಕಷ್ಟು ಪ್ರಯತ್ನ ನಡೆಸಿದ್ದು, ಈ ನಿಟ್ಟಿನಲ್ಲಿಯೂ ಅವರು ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/dk-shivakumar-oath-ceremony-priyank-kharge-lobbies-fro-for-minister-post-in-delhi-rav/articleshow-b9q15dr"/>
        </item>
        <item>
            <title><![CDATA[DK Shivakumar: ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ಭರ್ಜರಿ ಸಿದ್ಧತೆ, ಎಲ್‌ಸಿಡಿ ಸ್ಕ್ರೀನ್, ಸಿಎಂ ಕೊಠಡಿಗೆ ವಾಸ್ತು ಪ್ರಕಾರ ಅಜ್ಜಯ್ಯನ ಫೋಟೋ!]]></title>
            <link>https://kannada.asianetnews.com/politics/dk-shivakumar-take-oath-as-24th-karnataka-cm-lokbhavan-today-great-preparation-rav/articleshow-518sr5a</link>
            <guid isPermaLink="true">https://kannada.asianetnews.com/politics/dk-shivakumar-take-oath-as-24th-karnataka-cm-lokbhavan-today-great-preparation-rav/articleshow-518sr5a</guid>
            <pubDate>Wed, 03 Jun 2026 05:21:05 +0530</pubDate>
            <description><![CDATA[&lt;p&gt;ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದೆ. ನಗರದಾದ್ಯಂತ ಎಲ್&zwnj;ಇಡಿ ಪರದೆಗಳು, ಬಿಗಿ ಭದ್ರತೆ, ಹಾಗೂ ಗಣ್ಯರ ಆಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt5azb7zt4hvk83pc57a95t4,imgname-----------------------2026-06-03t050328.648-1780443229439.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.3): &lt;/strong&gt;ವಿಧಾನಸೌಧ(Vidhan soudha), ಕೆಪಿಸಿಸಿ ಕಚೇರಿ(KPCC office) ಸೇರಿ ಹಲವೆಡೆ ಎಲ್&zwnj;ಇಡಿ ಪರದೆಗಳು(LED screen), ಜನರನ್ನು ಕರೆತರುವ 100ಕ್ಕೂ ಹೆಚ್ಚಿನ ಬಸ್&zwnj;ಗಳ ನಿಯೋಜನೆ, ನಗರದ ತುಂಬೆಲ್ಲ ಬಂಟಿಂಗ್&zwnj; ಬ್ಯಾನರ್&zwnj;, ಗಣ್ಯಾತಿಗಣ್ಯರಿಗೆ ಅತಿಥಿ ಸತ್ಕಾರಕ್ಕೆ ಭರದ ಸಿದ್ಧತೆ, ಲೋಕಭವನದ ಸುತ್ತ ಬಿಗಿ ಪೊಲೀಸ್&zwnj; ಬಂದೋಬಸ್ತ್&zwnj;, ಕೆಪಿಸಿಸಿ ಹಾಗೂ ಶಾಂಗ್ರಿಲಾ ಹೋಟೆಲ್&zwnj; ಸುತ್ತಾ ನೋ ಫ್ಲೈ ಜೋನ್&zwnj; ನಿರ್ಮಾಣ...&lt;/p&gt;&lt;p&gt;ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್&zwnj;(DK Shivakumar) ಅವರು ಪ್ರಮಾಣವಚನ ಸ್ವೀಕಾರಕ್ಕೆ ನಡೆಸಲಾಗಿರುವ ಭರ್ಜರಿ ಸಿದ್ಧತೆಯ ಪರಿಯಿದು.&lt;/p&gt;&lt;p&gt;ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್&zwnj; ಅವರು ಬುಧವಾರ ಸಂಜೆ 4.05ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ 500ಕ್ಕೂ ಹೆಚ್ಚಿನ ಅತೀಗಣ್ಯರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗಾಗಿ ಲೋಕಭವನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರ ಜತೆಗೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದವರಿಗಾಗಿ ಕೆಪಿಸಿಸಿ ಕಚೇರಿಯ ಭಾರತ್&zwnj; ಜೋಡೋ ಭವನ, ರೇಸ್&zwnj;ಕೋರ್ಸ್&zwnj; ರಸ್ತೆಯ ಕಾಂಗ್ರೆಸ್&zwnj; ಕಚೇರಿ ಹಾಗೂ ವಿಧಾನಸೌಧ ಮುಂಭಾಗ ಎಲ್&zwnj;ಇಡಿ ಅಳವಡಿಸಿ ನೇರ ಪ್ರಸಾರ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.&lt;/p&gt;&lt;p&gt;ಇನ್ನು, ಪ್ರಮಾಣವಚನ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಪಾಲ್ಗೊಳ್ಳುತ್ತಿರುವ ಕಾರಣ ಲೋಕಭವನ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಜತೆಗೆ ಲೋಕಸಭವನ ಸುತ್ತಲೂ ಪಾದಚಾರಿ ಮಾರ್ಗಕ್ಕೆ ಬ್ಯಾರಿಕೇಡ್&zwnj;ಗಳನ್ನು ಅಳವಡಿಸಲಾಗಿದ್ದು, ಯಾರೂ ಬ್ಯಾರಿಕೇಡ್&zwnj; ದಾಟಿ ರಸ್ತೆಗಿಳಿಯದಂತೆ ಮಾಡಲಾಗಿದೆ. ಹಾಗೆಯೇ, ಈಗಾಗಲೇ ಪೊಲೀಸ್&zwnj; ಬಿಗಿ ಬಂದೋಬಸ್ತ್&zwnj; ಏರ್ಪಡಿಸಲಾಗಿದೆ.&lt;/p&gt;&lt;h2&gt;ಜನರಿಗಾಗಿ ಎಲ್&zwnj;ಇಡಿ ಅಳವಡಿಕೆ:&lt;/h2&gt;&lt;p&gt;ಬೆಂಗಳೂರು ದಕ್ಷಿಣ (ರಾಮನಗರ), ಮಂಡ್ಯ, ಮೈಸೂರು ಸೇರಿ ಇನ್ನಿತರ ಕಡೆಗಳಿಂದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಣೆಗೆಂದು ನೂರಾರು ಜನ ಬೆಂಗಳೂರಿನತ್ತ ಬುಧವಾರ ಬರಲಿದ್ದಾರೆ. ಅದಕ್ಕಾಗಿ ಶಾಸಕರು ಅವರಿಗೆ ಬಸ್&zwnj; ವ್ಯವಸ್ಥೆ ಮಾಡಿದ್ದು, ಸುಮಾರು 100ಕ್ಕೂ ಹೆಚ್ಚಿನ ಬಸ್&zwnj;ಗಳ ಮೂಲಕ ಜನರನ್ನು ಕರೆತರಲಾಗುತ್ತಿದೆ. ಅದರಲ್ಲೂ ಕನಕಪುರ, ರಾಮನಗರ, ಮಾಗಡಿ, ಮಂಡ್ಯ ಭಾಗದಿಂದ ಅತಿಹೆಚ್ಚಿನ ಜನ ಬರಲಿದ್ದಾರೆ. ಅವರೆಲ್ಲರಿಗೂ ಭಾರತ್&zwnj; ಜೋಡೋ ಭವನ, ವಿಧಾನಸೌಧ ಮುಂಭಾಗ, ರೇಸ್&zwnj;ಕೋರ್ಸ್&zwnj; ರಸ್ತೆಯ ಕಾಂಗ್ರೆಸ್&zwnj; ಕಚೇರಿಯಲ್ಲಿ ಅಳವಡಿಸಲಾಗಿರುವ ಎಲ್&zwnj;ಇಡಿ ಮೂಲಕ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ.&lt;/p&gt;&lt;p&gt;ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್&zwnj; ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ನಗರ ಪ್ರಮುಖ ರಸ್ತೆಗಳಲ್ಲಿ ಫ್ಲೆಕ್ಸ್&zwnj;, ಬ್ಯಾನರ್&zwnj; ಅಳವಡಿಸಿ ಶುಭ ಕೋರಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ರೇಸ್&zwnj;ಕೋರ್ಸ್&zwnj; ರಸ್ತೆ, ವಿಧಾನಸೌಧ ಸುತ್ತಮುತ್ತ, ಲೋಕಭವನ ಸುತ್ತಮುತ್ತಲಿನ ರಸ್ತೆಗಳು ಸೇರಿ ಹಲವೆಡೆಗೆ ನೂರಾರು ಫ್ಲೆಕ್ಸ್&zwnj;ಗಳನ್ನು ಅಳವಡಿಸಿ ನೆಚ್ಚಿನ ನಾಯಕನಿಗೆ ಶುಭ ಕೋರಿದ್ದಾರೆ.&lt;/p&gt;&lt;p&gt;ಇನ್ನು, ಹೈಕೋರ್ಟ್&zwnj; ಮುಂಭಾಗ ಡಿ.ಕೆ.ಶಿವಕುಮಾರ್&zwnj;, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್&zwnj; ಹಿರಿಯ ನಾಯಕರ ಬೃಹತ್&zwnj; ಕಟೌಟ್&zwnj; ಅಳವಡಿಕೆಗೆ ಕಾಂಗ್ರೆಸ್&zwnj; ಕಾರ್ಯಕರ್ತರು ಮುಂದಾಗಿದ್ದರು. ಆದರೆ, ಅದಕ್ಕೆ ಹೈಕೋರ್ಟ್&zwnj; ಅನುಮತಿಸದ ಕಾರಣ, ಮಂಗಳವಾರ ಅದನ್ನು ತೆರವು ಮಾಡಲಾಯಿತು.&lt;/p&gt;&lt;h3&gt;ಸಿಎಂ ಕಚೇರಿಗೆ ವಾಸ್ತು ಪ್ರಕಾರ ಅಜ್ಜಯ್ಯ ಚಿತ್ರ:&lt;/h3&gt;&lt;p&gt;ವಿಧಾನಸೌಧದ ಮೂರನೇ ಮಹಡಿಯಲ್ಲಿನ ಮುಖ್ಯಮಂತ್ರಿ ಅವರ ಕೊಠಡಿಯ ವಾಸ್ತುವನ್ನು ಡಿ.ಕೆ.ಶಿವಕುಮಾರ್&zwnj; ಅವರ ಆಪ್ತ ಜ್ಯೋತಿಷಿ, ವಾಸ್ತು ತಜ್ಞ ಆರಾಧ್ಯ ಅವರು ಮಂಗಳವಾರ ಪರಿಶೀಲನೆ ನಡೆಸಿದರು. ವಾಸ್ತು ಪರಿಶೀಲನೆ ವೇಳೆ ಮುಖ್ಯಮಂತ್ರಿ ಅವರ ಕೊಠಡಿಯಲ್ಲಿದ್ದವರೆಲ್ಲರನ್ನೂ ಹೊರಗೆ ಕಳುಹಿಸಿ ಬಾಗಿಲು ಹಾಕಲಾಗಿತ್ತು. ಆರಾಧ್ಯ ಅವರು ಕೊಠಡಿಯ ಪ್ರತಿಯೊಂದು ಅಂಶವನ್ನೂ ಪರಿಶೀಲಿಸಿದರು. ಈ ವೇಳೆ ಕೆಲ ಬದಲಾವಣೆಗೆ ಸೂಚಿಸಿದ್ದಾರೆ. ಅದರಂತೆ ಕೊಠಡಿಯಲ್ಲಿನ ಪೀಠೋಪಕರಣಗಳನ್ನು ಇಡುವ ಸ್ಥಳ ಸೇರಿ ಮತ್ತಿತರ ಅಂಶಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ.&lt;/p&gt;&lt;h3&gt;ಸಿಎಂ ಕೊಠಡಿಯಲ್ಲಿ ಅಜ್ಜಯ್ಯ:&lt;/h3&gt;&lt;p&gt;ಲೋಕಸಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನದ ನಂತರ ವಿಧಾನಸೌಧಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಹೀಗಾಗಿ ವಿಧಾನಸೌಧ ಪ್ರವೇಶ ದ್ವಾರ ಹಾಗೂ ವಿಧಾನಸೌಧದ ಮೂರನೇ ಮಹಡಿಯ ಮುಖ್ಯಮಂತ್ರಿ ಅವರ ಕೊಠಡಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಜತೆಗೆ, ಡಿ.ಕೆ.ಶಿವಕುಮಾರ್&zwnj; ಅವರ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯ ಅವರ ಭಾವಚಿತ್ರ ಸೇರಿ ದೇವರ ಫೋಟೋಗಳನ್ನಿಟ್ಟು, ವಿಶೇಷ ಪೂಜೆ ನೆರವೇರಿಸಲಾಗಿದೆ.&lt;/p&gt;&lt;h3&gt;ರಾಗಾ, ಸಿಬಲ್&zwnj; ಸೇರಿ 50ಕ್ಕೂ ಹೆಚ್ಚು ಗಣ್ಯರಿಗೆ ಡಿಕೆ ಆಹ್ವಾನ:&lt;/h3&gt;&lt;p&gt;ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಲೋಕಭವನದ ಆವರಣದಲ್ಲಿರುವ ಸುಂದರ ಗಾಜಿನ ಮನೆಯಲ್ಲಿ ಈ ಐತಿಹಾಸಿಕ ಹಾಗೂ ಅದ್ಧೂರಿ ಪದಗ್ರಹಣ ಸಮಾರಂಭ ಜರುಗಲಿದೆ. ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರ ದಂಡೇ ಆಗಮಿಸುತ್ತಿದ್ದು, 50ಕ್ಕೂ ಹೆಚ್ಚು ದೆಹಲಿಗರಿಗೆ ಡಿಕೆಶಿ ಆಹ್ವಾನ ನೀಡಿದ್ದಾರೆ.&lt;/p&gt;&lt;p&gt;ಬುಧವಾರ ಸಂಜೆ 4:10 ಗಂಟೆಗೆ ಸರಿಯಾಗಿ ಆರಂಭವಾಗಲಿರುವ ನಿಗದಿತ ಶುಭ ಮುಹೂರ್ತದಲ್ಲಿ ಡಿಕೆಶಿಯವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರ ದಂಡೇ ಆಗಮಿಸುತ್ತಿದೆ. ಈ ಪ್ರತಿಷ್ಠಿತ ಸಮಾರಂಭಕ್ಕೆ ಅಧಿಕೃತ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಗುತ್ತಿದ್ದು, ಭದ್ರತಾ ದೃಷ್ಟಿಯಿಂದ ಕೇವಲ ಆಯ್ದ ವಿವಿಐಪಿ ಮತ್ತು ಗಣ್ಯ ಅತಿಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸಮಾರಂಭಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.&lt;/p&gt;&lt;p&gt;ಈ ಮಧ್ಯೆ, ಪಕ್ಷದ ದೆಹಲಿ ವಲಯದಲ್ಲಿ ಉತ್ತಮ ಸಂಪರ್ಕ ಬೆಳೆಸಿಕೊಂಡಿರುವ ಡಿಕೆಶಿ, ಪ್ರಮಾಣ ವಚನ ಸಮಾರಂಭಕ್ಕೆ ದೆಹಲಿಯಲ್ಲಿನ ಗಣ್ಯರನ್ನೂ ಆಹ್ವಾನಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್&zwnj; ಹಿರಿಯ ನಾಯಕ ಕಪಿಲ್ ಸಿಬಲ್ ಸೇರಿ ಸುಮಾರು 50ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಎಐಸಿಸಿ ಪದಾಧಿಕಾರಿಗಳು, ವಕೀಲರು, ಮಾಜಿ ಸಿಎಂ ಸೇರಿ ತಮ್ಮ ಆಪ್ತೆಷ್ಟರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/dk-shivakumar-take-oath-as-24th-karnataka-cm-lokbhavan-today-great-preparation-rav/articleshow-518sr5a"/>
        </item>
        <item>
            <title><![CDATA[DK Shivakumar: ಇಂದಿನಿಂದ ಡಿಕೆ ಸರ್ಕಾರ: ಕರುನಾಡಿನ 24ನೇ ಮುಖ್ಯಮಂತ್ರಿಯಾಗಿ ಇಂದು ಸಂಜೆ 4.05ಕ್ಕೆ ಪ್ರಮಾಣ]]></title>
            <link>https://kannada.asianetnews.com/politics/karnataka-cm-swearing-in-ceremony-lok-bhavan-all-set-as-dk-shivakumar-take-oath-today-rav/articleshow-ebp9evl</link>
            <guid isPermaLink="true">https://kannada.asianetnews.com/politics/karnataka-cm-swearing-in-ceremony-lok-bhavan-all-set-as-dk-shivakumar-take-oath-today-rav/articleshow-ebp9evl</guid>
            <pubDate>Wed, 03 Jun 2026 04:49:21 +0530</pubDate>
            <description><![CDATA[&lt;p&gt;ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲೋಕಭವನದಲ್ಲಿ ನಡೆಯುವ ಈ ಸಮಾರಂಭದಲ್ಲಿ 14 ಸಚಿವರು ಸಹ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದು, ಎಐಸಿಸಿ ವರಿಷ್ಠರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt5a00y8g1zvdg9c2qfdge1g,imgname-----------------------2026-06-03t043419.302-1780442203080.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.3): &lt;/strong&gt;ಕರುನಾಡಿನ(Karnataka) 24ನೇ ಮುಖ್ಯಮಂತ್ರಿಯಾಗಿ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್&zwnj;(DK Shivakumar) ಬುಧವಾರ ಸಂಜೆ 4.05ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜತೆಗೆ, ತಮ್ಮ ನೂತನ ಸಂಪುಟಕ್ಕೆ ಬಹುತೇಕ 14 ಮಂದಿ ಹಿರಿಯ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.&lt;/p&gt;&lt;p&gt;2023ರ ಮೇ 20 ರಂದು ಗಂಗಾಧರ ಅಜ್ಜಯ್ಯ(Gangadhara Ajjaiah)ನ ಹೆಸರಿನಲ್ಲಿ ಉಪಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್&zwnj; ಅವರು, ಮುಖ್ಯಮಂತ್ರಿಯಾಗಿಯೂ ಅಜ್ಜಯ್ಯ ಅವರ ಹೆಸರಿನಲ್ಲೇ ಗೋಪ್ಯತಾವಿಧಿ ಸ್ವೀಕರಿಸುವ ಸಾಧ್ಯತೆಯಿದೆ ಎನ್ನುತ್ತವೆ ಅವರ ಆಪ್ತ ಮೂಲಗಳು.&lt;/p&gt;&lt;p&gt;ನಾಡಿನ ನೂತನ ದೊರೆಗೆ ಪಟ್ಟ ಕಟ್ಟಲು ಲೋಕಭವನ ಸಕಲ ರೀತಿಯಿಂದಲೂ ಸಜ್ಜುಗೊಂಡಿದ್ದು, ರಾಜ್ಯಪಾಲ ಥಾವರ್&zwnj;ಚಂದ್&zwnj; ಗೆಹಲೋತ್(Governor Thaawarchand Gehlot) ಅವರಿಂದ ಮುಖ್ಯಮಂತ್ರಿ(Chief Minister) ಹಾಗೂ ಸಚಿವರು ಪ್ರತಿಜ್ಞಾ ವಿಧಿ(oath) ಸ್ವೀಕರಿಸಲಿದ್ದಾರೆ.&lt;/p&gt;&lt;p&gt;ತನ್ಮೂಲಕ 1980ರ ದಶಕದಲ್ಲಿ ವಿದ್ಯಾರ್ಥಿ ಕಾಂಗ್ರೆಸ್&zwnj; ಮೂಲಕ ರಾಜಕೀಯ ಸಂಘಟನೆ ಶುರು ಮಾಡಿದ ಡಿ.ಕೆ. ಶಿವಕುಮಾರ್ ಅವರ ನಾಲ್ಕೂವರೆ ದಶಕಗಳ ಪರಿಶ್ರಮಕ್ಕೆ ಫಲ ದೊರೆತಂತಾಗಲಿದೆ. ಸಾತನೂರಿನಿಂದ ರಾಜಕೀಯ ಶುರು ಮಾಡಿ ಎಚ್.ಡಿ.ದೇವೇಗೌಡರಂತಹ ದಿಗ್ಗಜರೊಂದಿಗೆ ಸೆಣಸಾಡಿ 8 ಬಾರಿ ಶಾಸಕರಾಗಿ, 5 ಬಾರಿ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿ ಆಗಿ ನಾಲ್ಕೂವರೆ ದಶಕದಲ್ಲಿ ಹಲವು ಮೆಟ್ಟಿಲುಗಳನ್ನು ಡಿಕೆಶಿ ಹತ್ತಿದ್ದಾರೆ. ಕಾಂಗ್ರೆಸ್ ಪಾಲಿನ &lsquo;ಟ್ರಬಲ್&zwnj; ಶೂಟರ್&zwnj;&rsquo; ಎಂದೇ ಹೆಸರಾಗಿರುವ ಅವರು 3 ದಶಕಗಳಿಂದ ಕನಸು ಕಂಡಿದ್ದ ಕ್ಷಣ ಇಂದು ನನಸಾಗುತ್ತಿದೆ.&lt;/p&gt;&lt;h2&gt;ಗಣ್ಯಾತಿ ಗಣ್ಯರು ಹಾಜರ್&zwnj;:&lt;/h2&gt;&lt;p&gt;ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್&zwnj;ಗಾಂಧಿ ಸೇರಿದಂತೆ ಎಐಸಿಸಿ ವರಿಷ್ಠರು, ಕಾಂಗ್ರೆಸ್&zwnj; ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, 55ಕ್ಕೂ ಹೆಚ್ಚು ಸರ್ವಧರ್ಮಗುರುಗಳು, ಗಣ್ಯರು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಸೇರಿ 3,000ಕ್ಕೂ ಹೆಚ್ಚು ಮಂದಿ ಸಮ್ಮುಖ ಶಿವಕುಮಾರ್&zwnj; ಅಧಿಕಾರದ ಶಪಥ ಸ್ವೀಕರಿಸಲಿದ್ದಾರೆ.&lt;/p&gt;&lt;p&gt;ದೇವರಿಗೆ ಪೂಜೆ ಸಲ್ಲಿಸುವುದು ಸೇರಿ ವಿವಿಧ ಚಟುವಟಿಕೆ ಬಳಿಕ ಲೋಕಭವನಕ್ಕೆ ಆಗಮಿಸಲಿದ್ದಾರೆ. ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ಕೆಪಿಸಿಸಿಯ ಭಾರತ್ ಜೋಡೋ ಭವನಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3&gt;ಲೋಕಭವನದಲ್ಲಿ ಅದ್ಧೂರಿ ಕಾರ್ಯಕ್ರಮ:&lt;/h3&gt;&lt;p&gt;ಈ ಹಿಂದೆ ಲೋಕಭವನದಲ್ಲಿ ಆಯೋಜಿಸಿದ್ದ ಪ್ರಮಾಣವಚನ ಕಾರ್ಯಕ್ರಮಗಳಿಗಿಂತ ದೊಡ್ಡಮಟ್ಟದಲ್ಲಿ ಸಮಾರಂಭ ಆಯೋಜನೆಗೊಳ್ಳುತ್ತಿದೆ. ಹೆಚ್ಚು ಮಂದಿಗೆ ಅವಕಾಶ ಕಲ್ಪಿಸಲು ವೇದಿಕೆಯ ದಿಕ್ಕು ಬದಲಿಸಿ ವಾಹನ ನಿಲುಗಡೆ ಜಾಗದಲ್ಲಿ ವೇದಿಕೆ ನಿರ್ಮಿಸಲಾಗಿದೆ. ತನ್ಮೂಲಕ 600-700 ಮಂದಿ ಆಸೀನರಾಗುವ ಸಾಮರ್ಥ್ಯವಿದ್ದ ಲೋಕಭವನದಲ್ಲಿ ಹೆಚ್ಚು ಮಂದಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು, ಪಶ್ಚಿಮದಲ್ಲಿದ್ದ ಗಾಜಿನಮನೆ ವೇದಿಕೆಯಲ್ಲಿ ಧರ್ಮಗುರುಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಮೂಲಗಳ ಪ್ರಕಾರ 500 ಎ ಕೆಟಗರಿ ಪಾಸು, 500 ಬಿ ಕೆಟಗರಿ ಪಾಸು, 660 ವಿವಿಐಪಿ ಪಾಸು, 610 ವಿಐಪಿ ಪಾಸು ವಿತರಿಸಲಾಗಿದೆ. 250 ಶಾಸಕರು ಹಾಗೂ ಮಾಜಿ ಶಾಸಕರು ಸೇರಿ 3,000 ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;55 ಸರ್ವ ಧರ್ಮಗುರುಗಳಿಗೆ ಆಹ್ವಾನ:&lt;/h3&gt;&lt;p&gt;ಕಾಂಗ್ರೆಸ್&zwnj; ಮುಖ್ಯಮಂತ್ರಿಗಳಾದ ತೆಲಂಗಾಣದ ರೇವಂತ್&zwnj; ರೆಡ್ಡಿ, ಹಿಮಾಚಲಪ್ರದೇಶದ ಸುಖ್&zwnj;ವಿಂದರ್&zwnj; ಸಿಂಗ್&zwnj; ಸುಖು, ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್&zwnj;, ಛತ್ತೀಸ್&zwnj;ಗಢ ಮಾಜಿ ಮುಖ್ಯಮಂತ್ರಿ ಭೂಪೇಶ್&zwnj; ಬಾಘೆಲ್&zwnj; ಸೇರಿ ಹಲವು ಮಾಜಿ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಜತೆಗೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್&zwnj;, ಬೌದ್ಧ ಧರ್ಮದ 55 ಸರ್ವಧರ್ಮ ಗುರುಗಳಿಗೆ ಆಹ್ವಾನ ನೀಡಲಾಗಿದೆ.&lt;/p&gt;&lt;p&gt;ಆದಿ ಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಮಹಾಬೋಧಿ ಸೊಸೈಟಿಯ ಆನಂದ ಬಿಕ್ಕು, ಆರ್ಚಬಿಷಪ್ ಡಾ.ಪೀಟರ್ ಮಚಾಡೋ, ಖ್ವಾಜಾ ಬಂದೇನವಾಜ್&zwnj; ದರ್ಗಾದ ಧರ್ಮಗುರು ಸೇರಿ ಹಲವರಿಗೆ ಆಹ್ವಾನ ಹೋಗಿದೆ.&lt;/p&gt;&lt;h3&gt;ದೀರ್ಘಾವಧಿ ಸಿಎಂ ಅಧಿಕಾರ ಅಂತ್ಯ:&lt;/h3&gt;&lt;p&gt;ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಪ್ರಮಾಣವಚನ ಸ್ವೀಕಾರದ ಮೂಲಕ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಕೊನೆಗೊಳ್ಳಲಿದೆ. 8 ವರ್ಷ 17 ದಿನಗಳ ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿರುವ ಸಿದ್ದರಾಮಯ್ಯ ಅವರ ಪ್ರಸಕ್ತ ಅವಧಿಯ ಅಧಿಕಾರ ಬುಧವಾರಕ್ಕೆ ಅಂತ್ಯವಾಗಲಿದೆ.&lt;/p&gt;&lt;p&gt;&lt;strong&gt;ಶಾಲಾ ವಿದ್ಯಾರ್ಥಿಗಳೂ ಭಾಗಿ:&lt;/strong&gt;&lt;/p&gt;&lt;p&gt;ಡಿ.ಕೆ.ಶಿವಕುಮಾರ್&zwnj; ಅವರ ಕಚೇರಿ ಹೇಳಿಕೆ ಪ್ರಕಾರ, ವಿವಿಧ ರಾಜ್ಯಗಳ ಕಾಂಗ್ರೆಸ್&zwnj; ಅಧ್ಯಕ್ಷರು, ಉಪಮುಖ್ಯಮಂತ್ರಿಗಳು, ರಾಜ್ಯದ ಶಾಸಕರು, ಸಂಸದರ ಜತೆಗೆ ಕನಕಪುರ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಆಹ್ವಾನಿಸಲಾಗಿದೆ.&lt;/p&gt;&lt;p&gt;ಜತೆಗೆ ಕೂಲಿ ಕಾರ್ಮಿಕರು, ಕನ್ನಡಪರ ಹೋರಾಟಗಾರರು, ಪೌರ ಕಾರ್ಮಿಕರು, ರೈತ ಮುಖಂಡರು, ದಲಿತ, ಹಿಂದುಳಿದ ವರ್ಗದ ಮುಖಂಡರು, ಸ್ತ್ರೀಶಕ್ತಿ ಸಂಘ, ಸಿನಿಮಾರಂಗ, ನ್ಯಾಯಾಂಗ, ಕ್ರೀಡೆ ಸಾಹಿತ್ಯ, ಮಾಧ್ಯಮ, ವಾಣಿಜ್ಯ, ಕೈಗಾರಿಕೆ, ಹೋಟೆಲ್&zwnj; ಉದ್ಯಮಗಳ ಗಣ್ಯರಿಗೆ ಆಹ್ವಾನ ನೀಡಲಾಗಿದೆ.&lt;/p&gt;&lt;p&gt;ಆಹ್ವಾನಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲೋಕಭವನದ ಸುತ್ತಮುತ್ತ ವಿಐಪಿ, ವಿವಿಐಪಿ ಸಂಚಾರ ಹೆಚ್ಚಿರುವ ಸಾಧ್ಯತೆಯಿದೆ. ಹೀಗಾಗಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯು ಸಚಿವಾಲಯ ಹಾಗೂ ವಿಧಾನಸೌಧ ಸುತ್ತಮುತ್ತಲ ಸರ್ಕಾರಿ ಕಚೇರಿಗಳಿಗೆ ಬುಧವಾರ ಮಧ್ಯಾಹ್ನದ ಬಳಿಕ ರಜೆ ಘೋಷಿಸಲಾಗಿದೆ.&lt;/p&gt;&lt;p&gt;&lt;strong&gt;ಯಾರ್&zwj;ಯಾರು ಭಾಗಿ?&lt;/strong&gt;&lt;/p&gt;&lt;p&gt;ರಾಹುಲ್&zwnj; ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂಗಳಾದ ತೆಲಂಗಾಣದ ರೇವಂತರೆಡ್ಡಿ, ಹಿಮಾಚಲದ ಸುಖ್&zwnj;ವಿಂದರ್&zwnj;, ಕೇರಳಂನ ಸತೀಶನ್&zwnj;, 55 ಸರ್ವಧರ್ಮ ಗುರುಗಳು, ದೊಡ್ಡಾಲಹಳ್ಳಿ ಶಾಲೆಯ ಮಕ್ಕಳು, ಕೂಲಿ ಕಾರ್ಮಿಕರು, ರೈತ ಮುಖಂಡರು, ಹೋರಾಟಗಾರರು ವಿವಿಧ ಕ್ಷೇತ್ರ ಗಣ್ಯರು ಸೇರಿ 3000 ಮಂದಿ.&lt;/p&gt;&lt;p&gt;&lt;strong&gt;ಅಜ್ಜಯ್ಯ ಹೆಸರಲ್ಲಿ ಪ್ರಮಾಣವಚನ?&lt;/strong&gt;&lt;/p&gt;&lt;p&gt;3 ವರ್ಷಗಳ ಹಿಂದೆ ಡಿಸಿಎಂ ಆದಾಗ ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಡಿಕೆಶಿ. ಈ ಬಾರಿಯೂ ಅಜ್ಜಯ್ಯ ಹೆಸರಲ್ಲೇ ಶಪಥಗ್ರಹಣ ಸಾಧ್ಯತೆ&lt;/p&gt;&lt;p&gt;&lt;strong&gt;ಗಾಜಿನ ಮನೆಯಲ್ಲಿ ಇಲ್ಲ ಪ್ರಮಾಣವಚನ&lt;/strong&gt;&lt;/p&gt;&lt;p&gt;ಈ ಹಿಂದೆ ಲೋಕಭವನದಲ್ಲಿ ಆಯೋಜಿಸಿದ್ದ ಪ್ರಮಾಣವಚನ ಕಾರ್ಯಕ್ರಮಗಳಿಗಿಂತ ದೊಡ್ಡಮಟ್ಟದಲ್ಲಿ ಸಮಾರಂಭ ಆಯೋಜನೆಗೊಳ್ಳುತ್ತಿದೆ. ಗಾಜಿನಮನೆಯ ಬದಲು ವಾಹನ ನಿಲುಗಡೆ ಜಾಗದಲ್ಲಿ ವೇದಿಕೆ ನಿರ್ಮಿಸಲಾಗಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-cm-swearing-in-ceremony-lok-bhavan-all-set-as-dk-shivakumar-take-oath-today-rav/articleshow-ebp9evl"/>
        </item>
        <item>
            <title><![CDATA[B Nagendra: ವಾಲ್ಮೀಕಿ ನಿಗಮದ ದುಡ್ಡಲ್ಲಿ ಬೇನಾಮಿ ಕಾರು ಖರೀದಿ; ನಾಗೇಂದ್ರ ಮತ್ತಷ್ಟು ಅಕ್ರಮ ಸಿಬಿಐನಿಂದ ಪತ್ತೆ!]]></title>
            <link>https://kannada.asianetnews.com/state/karnataka-valmiki-corporation-scam-case-cbi-files-chargesheets-against-ex-minister-nagendra-rav/articleshow-piw5ba1</link>
            <guid isPermaLink="true">https://kannada.asianetnews.com/state/karnataka-valmiki-corporation-scam-case-cbi-files-chargesheets-against-ex-minister-nagendra-rav/articleshow-piw5ba1</guid>
            <pubDate>Wed, 03 Jun 2026 04:19:02 +0530</pubDate>
            <description><![CDATA[&lt;p&gt;ವಾಲ್ಮೀಕಿ ನಿಗಮದ 89 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ, ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ಇತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ನಾಗೇಂದ್ರ ಬೇನಾಮಿ ಕಾರು ಖರೀದಿ, ಟೆಂಡರ್&zwnj;ನಲ್ಲಿ ಲಂಚ ಪಡೆದಿದ್ದು ಹಾಗೂ ಇತರೆ ಇಲಾಖೆಗಳ ಹಗರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ದೃಢ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt58bytzeq5j6tj65dpjnm33,imgname-----------------------2026-06-03t040239.760-1780440496991.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆರೋಪಪಟ್ಟಿಯಲ್ಲಿ ಏನಿದೆ?&lt;/strong&gt;&lt;/p&gt;&lt;ul&gt; &lt;li&gt;ವಾಲ್ಮೀಕಿ ನಿಗಮದಲ್ಲಿ ನಡೆದ 89 ಕೋಟಿ ರು. ಅಕ್ರಮ ಹಣ ವರ್ಗ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆ&lt;/li&gt; &lt;li&gt;ಅಕ್ರಮವಾಗಿ ವರ್ಗ ಆದ ಹಣ ಬಳಸಿ ಮಾಜಿ ಸಚಿವ ನಾಗೇಂದ್ರರಿಂದ ಬೇನಾಮಿ ಹೆಸರಲ್ಲಿ ಕಾರು ಖರೀದಿ&lt;/li&gt; &lt;li&gt;-ಇಲಾಖೆ ಟೆಂಡರ್&zwnj;ನಲ್ಲಿ ಆಪ್ತ ನೆಕ್ಕುಂಟಿ ಮೂಲಕ 1.20 ಕೋಟಿ ರು. ಲಂಚ ಸ್ವೀಕರಿಸಿದ್ದು ತನಿಖೆಯಲ್ಲಿ ಪತ್ತೆ&lt;/li&gt; &lt;li&gt;&amp;nbsp;ವಾಲ್ಮೀಕಿ ನಿಗಮ ಜತೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲೂ ಹಗರಣ ನಡೆಸಿದ್ದು ದೃಢ&lt;/li&gt; &lt;li&gt;ಕರ್ನಾಟಕ ಜರ್ಮನ್&zwnj; ತಾಂತ್ರಿಕ ತರಬೇತಿ ಸಂಸ್ಥೆಯಲ್ಲೂ ಮಾಜಿ ಸಚಿವ ನಾಗೇಂದ್ರ ವಂಚನೆ ಪತ್ತೆ&lt;/li&gt; &lt;li&gt;ಸಚಿವರ ಆಪ್ತ ನೆಕ್ಕುಂಟಿ ನಾಗರಾಜ್ ಸಹ 5.72 ಕೋಟಿ ರು. ಪಡೆದುಕೊಂಡಿದ್ದು ತನಿಖೇಲಿ ದೃಢ&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಜೂ.3)&lt;/strong&gt;: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ(Karnataka Valmiki Corporation) ನಿಯಮಿತದ ಬಹುಕೋಟಿ ಹಗರಣದ ತನಿಖೆ ಪೂರ್ಣಗೊಳಿಸಿರುವ ಕೇಂದ್ರೀಯ ತನಿಖಾ ಸಂಸ್ಥೆಯು (CBI) ಆರೋಪಿಗಳಾದ ಮಾಜಿ ಸಚಿವ ಬಿ.ನಾಗೇಂದ್ರ(Former minister B Nagendra), ಎಂ.ಜಿ.ರಸ್ತೆ(MG Raod)ಯ ಯೂನಿಯನ್&zwnj; ಬ್ಯಾಂಕ್&zwnj; ಇಂಡಿಯಾ(Union Bank India)ದ ಮೂವರು ಅಧಿಕಾರಿಗಳು ಸೇರಿ ಇತರೆ ಆರೋಪಿಗಳ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ(CBI Special Court)ಕ್ಕೆ ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.&lt;/p&gt;&lt;p&gt;ಎಂ.ಜಿ.ರಸ್ತೆಯ ಯೂನಿಯನ್&zwnj; ಬ್ಯಾಂಕ್&zwnj; ಇಂಡಿಯಾದ ಶಾಖೆಯ ನಿಗಮದ ಬ್ಯಾಂಕ್&zwnj; ಖಾತೆಯಿಂದ ಅಕ್ರಮವಾಗಿ ವರ್ಗಾವಣೆಯಾದ 89.63 ಕೋಟಿ ರು. ಪೈಕಿ ಮಾಜಿ ಸಚಿವ ಬಿ.ನಾಗೇಂದ್ರ ಬೇನಾಮಿ ಕಾರು ಖರೀದಿಸಿದ್ದಾರೆ. ಇಲಾಖೆಯ ಟೆಂಡರ್&zwnj;ವೊಂದರಲ್ಲಿ ಆಪ್ತ ಸಹಾಯಕ ನೆಕ್ಕುಂಟಿ ನಾಗರಾಜ್&zwnj; ಮುಖಾಂತರ 1.20 ಕೋಟಿ ರು. ಪಡೆದುಕೊಂಡಿದ್ದಾರೆ. ಅಂತೆಯೇ ಈ ನೆಕ್ಕುಂಟಿ ನಾಗರಾಜ್ ಸಹ 5.72 ಕೋಟಿ ರು. ಪಡೆದುಕೊಂಡಿದ್ದಾರೆ ಎಂದು ಸಿಬಿಐ ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ಸಿಬಿಐ ತನಿಖೆ ವೇಳೆ ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮಾತ್ರವಲ್ಲದೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಜರ್ಮನ್&zwnj; ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ನಡೆದ ವಂಚನೆ ಸಹ ಬೆಳಕಿಗೆ ಬಂದಿದೆ. ಈ ಮೂರೂ ವಂಚನೆ ಪ್ರಕರಣಗಳಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಭಾಗಿಯಾಗಿರುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಹೈಕೋರ್ಟ್&zwnj; ಸೂಚನೆ ಮೇರೆಗೆ ಪ್ರತ್ಯೇಕ ತನಿಖೆ ನಡೆಸಿರುವ ಸಿಬಿಐ ಅಧಿಕಾರಿಗಳು ಇದೀಗ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮೂರು ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.&lt;/p&gt;&lt;h2&gt;ಪಿತೂರಿ ಮಾಡಿ ವಂಚನೆ:&lt;/h2&gt;&lt;p&gt;ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಅಂದಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಬಿ.ನಾಗೇಂದ್ರ, ಅವರ ಆಪ್ತ ಸಹಾಯಕ ನೆಕ್ಕುಂಟಿ ನಾಗರಾಜ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಹಾಗೂ ಇತರರ ಪೂರ್ವ ನಿಯೋಜಿತ ವಂಚನೆ ಪಿತೂರಿ ಸಿಬಿಐ ತನಿಖೆಯಲ್ಲಿ ಬಯಲಾಗಿದೆ. ಹೈದರಾಬಾದ್&zwnj;ನ ಸತ್ಯನಾರಾಯಣ ವರ್ಮಾ ಈ ವಂಚನೆ ಕಾರ್ಯಗತಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳುವ ಉದ್ದೇಶದಿಂದ ಸತ್ಯನಾರಾಯಣ ವರ್ಮಾ ಮತ್ತು ಹೈದರಾಬಾದ್&zwnj;ನ ಫಸ್ಟ್&zwnj; ಫೈನಾನ್ಸ್&zwnj; ಕ್ರೆಡಿಟ್&zwnj; ಕೋ ಆಪರೇಟಿವ್&zwnj; ಸೊಸೈಟಿ ಲಿಮಿಟೆಡ್&zwnj;ನ ಅಧ್ಯಕ್ಷ ಇಟಕಾರಿ ಸತ್ಯನಾರಾಯಣ ನಕಲಿ ನೋಂದಣಿ ಪ್ರಮಾಣಪತ್ರಗಳು ಮತ್ತು ನಕಲಿ ಇ-ಕೆವೈಸಿ ದಾಖಲೆಗಳನ್ನು ಬಳಸಿಕೊಂಡು ನಕಲಿ ಕಂಪನಿಗಳ ಹೆಸರಿನಲ್ಲಿ 18 ಬ್ಯಾಂಕ್&zwnj; ಖಾತೆಗಳನ್ನು ತೆರೆದಿದ್ದರು.&lt;/p&gt;&lt;h3&gt;ವಂಚನೆಗೆ ಬ್ಯಾಂಕ್&zwnj; ಅಧಿಕಾರಿಗಳ ಸಹಕಾರ:&lt;/h3&gt;&lt;p&gt;ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಸಚಿವರ ಆಪ್ತ ಸಹಾಯಕ ನೆಕ್ಕಂಟಿ ನಾಗರಾಜ್&zwnj;, ಎಂ.ಜಿ.ರಸ್ತೆಯ ಯೂನಿಯನ್&zwnj; ಬ್ಯಾಂಕ್&zwnj; ಆಫ್&zwnj; ಇಂಡಿಯಾ ಶಾಖೆ ಅಧಿಕಾರಿಗಳು ಸೇರಿಕೊಂಡು ಮಾದರಿ ಸಹಿಗಳು, ಬ್ಯಾಂಕಿನ ಮಾಹಿತಿಗಳನ್ನು ಈ ಸತ್ಯನಾರಾಯಣ ವರ್ಮಾನೊಂದಿಗೆ ಹಂಚಿಕೊಂಡಿದ್ದರು. ನಿಗಮದ ವ್ಯವಸ್ಥಾಪಕ ನಿರ್ದೇಶಕನ ಮತ್ತು ಆಡಳಿತಾಧಿಕಾರಿ ನಕಲಿ ರಬ್ಬರ್&zwnj; ಸೀಲುಗಳನ್ನು ಹೈದರಾಬಾದ್&zwnj;ನಲ್ಲಿ ನಕಲಿ ಮಾಡಿ ವಂಚನೆಯ ಬ್ಯಾಂಕಿಂಗ್&zwnj; ವಹಿವಾಟುಗಳಿಗೆ ಬಳಸಲಾಗುತ್ತಿತ್ತು.&lt;/p&gt;&lt;h3&gt;ಬೇನಾಮಿ ಹೆಸರಿನಲ್ಲಿ ಕಾರು ಖರೀದಿ:&lt;/h3&gt;&lt;p&gt;ಎಂ.ಜಿ.ರಸ್ತೆಯ ಯೂನಿಯನ್&zwnj; ಬ್ಯಾಂಕ್&zwnj; ಆಫ್&zwnj; ಇಂಡಿಯಾ ಶಾಖೆಯಲ್ಲಿ ತೆರೆಯಲಾಗಿದ್ದ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಲ್ಲಿದ್ದ 187 ಕೋಟಿ ರು. ಹಣವಿತ್ತು. ನಕಲಿ ಚೆಕ್&zwnj;ಗಳು ಮತ್ತು ಆರ್&zwnj;ಟಿಜಿಎಸ್&zwnj; ವಹಿವಾಟುಗಳ ಮುಖಾಂತರ ಹೈದರಾಬಾದ್&zwnj;ನ 18 ನಕಲಿ ಖಾತೆಗಳಿಗೆ 89.63 ಕೋಟಿ ರು. ವರ್ಗಾಯಿಸಿದ್ದರು. ಬಳಿಕ ಈ 18 ಖಾತೆಗಳಿಂದ ಸುಮಾರು 600 ಬ್ಯಾಂಕ್&zwnj; ಖಾತೆಗಳಿಗೆ ಹಣ ವರ್ಗಾಯಿಸಿದ್ದರು. ಬಳಿಕ ಆರೋಪಿಗಳು ನಗದು, ಬೆಳ್ಳಿ, ಐಷಾರಾಮಿ ವಾಹನಗಳ ಖರೀದಿಗೆ ಈ ಹಣ ಬಳಸಿಕೊಂಡಿದ್ದರು ಎಂಬುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಿಗಮದ ಬ್ಯಾಂಕ್&zwnj; ಖಾತೆಯಿಂದ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಹಣದ ಪೈಕಿ ಮಾಜಿ ಸಚಿವ ನಾಗೇಂದ್ರ ಬೇನಾಮಿ ಹೆಸರಿನಲ್ಲಿ ವಾಹನ ಖರೀದಿಸಿದ್ದರು. ಅಂತೆಯೇ ಅವರ ಆಪ್ತ ಸಹಾಯಕ ನೆಕ್ಕುಂಟಿ ನಾಗರಾಜ್&zwnj; ಮತ್ತು ಅವರ ಸಂಬಂಧಿಕರು ಈ ವಂಚನೆ ಹಣ ಸ್ವೀಕರಿಸಿದ್ದರು ಎಂದು ಸಿಬಿಐ ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಿದೆ.&lt;/p&gt;&lt;h3&gt;ಸಚಿವ ನಾಗೇಂದ್ರಗೆ ಟೆಂಡರ್&zwnj;ನಲ್ಲಿ 1.20 ಕೋಟಿ ರು.:&lt;/h3&gt;&lt;p&gt;ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್&zwnj;ಗಳು ಮತ್ತು ರೊಟ್ಟಿ ತಯಾರಿಸುವ ಯಂತ್ರಗಳಿಗಾಗಿ 13.95 ಕೋಟಿ ರು. ಮೌಲ್ಯದ ಟೆಂಡರ್&zwnj; ಕರೆಯಲಾಗಿತ್ತು. ಈ ಟೆಂಡರ್&zwnj; ಅನ್ನು ನೆಕ್ಕುಂಟಿ ನಾಗರಾಜ್&zwnj;ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕೆ.ಶ್ರೀನಿವಾಸ ರೆಡ್ಡಿ ಮಾಲೀಕತ್ವದ ಬೆಂಗಳೂರಿನ ಎಸ್&zwnj;ಕೆಆರ್&zwnj; ಇನ್ಫ್ರಾಸ್ಟ್ರಕ್ಚರ್&zwnj;ಗೆ ನೀಡಲಾಗಿತ್ತು. ಈ ವೇಳೆ ನೆಕ್ಕುಂಟಿ ನಾಗರಾಜ್&zwnj; ಮುಖಾಂತರ ಸಚಿವ ಬಿ.ನಾಗೇಂದ್ರ ಅವರು 1.20 ಕೋಟಿ ರು. ಪಡೆದುಕೊಂಡಿದ್ದರು.&lt;/p&gt;&lt;p&gt;ಈ ಹಣವನ್ನು ತಮ್ಮ ಸಹೋದರಿ, ಭಾವ, ಬಳ್ಳಾರಿ ಫಾರ್ಮ್&zwnj;ಹೌಸ್&zwnj; ಮಾಲೀಕರ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಅಂತೆಯೇ ಈ ನೆಕ್ಕುಂಟಿ ನಾಗರಾಜ್&zwnj; ಖುದ್ದು ಎಸ್&zwnj;ಕೆಆರ್&zwnj; ಇನ್ಫ್ರಾಸ್ಟ್ರಕ್ಚರ್&zwnj; ಕಂಪನಿ ಮತ್ತು ಅದರ ಸೋದರ ಕಂಪನಿಗಳಿಂದ 5.72 ಕೋಟಿ ರು. ಪಡೆದುಕೊಂಡಿದ್ದರು ಎಂಬುದು ಸಿಬಿಐ ತನಿಖೆಯಲ್ಲಿ ಬಯಲಾಗಿದೆ.&lt;/p&gt;&lt;p&gt;&lt;strong&gt;ಟೆಂಡರ್&zwnj;ನಲ್ಲಿ ಲಂಚ ಸ್ವೀಕಾರ:&lt;/strong&gt;&lt;/p&gt;&lt;p&gt;ಎಸ್&zwnj;ಸಿ-ಎಸ್ಟಿ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮವು ಸಚಿವ ನಾಗೇಂದ್ರ ಸೂಚನೆ ಮೇರೆಗೆ 4.90 ಕೋಟಿ ರು. ಮೌಲ್ಯದ ಕೌಶಲ್ಯ ಅಭಿವೃದ್ಧಿ ತರಬೇತಿ ಕೆಲಸವನ್ನು ಬೆಂಗಳೂರಿನ ಕೆಜಿಟಿಟಿಐಗೆ ನೀಡಿತ್ತು. ಯಾವುದೇ ಟೆಂಡರ್&zwnj; ಪ್ರಕ್ರಿಯೆ ಇಲ್ಲದೆ ಸದ್ಗುರು ಶಿಕ್ಷಣ ಟ್ರಸ್ಟ್&zwnj; ಮತ್ತು ಸದ್ಗುರು ಸೆಲ್ಯೂಷನ್ಸ್&zwnj;ಗೆ ಉಪಗುತ್ತಿಗೆ ನೀಡಿತ್ತು. ಇದರಿಂದ ನಾಗರಾಜ್&zwnj; ಕುಟುಂಬಕ್ಕೆ 64 ಲಕ್ಷ ರು. ಸಂದಾಯವಾಗಿತ್ತು. ಎಸ್&zwnj;ಟಿ ಕಲ್ಯಾಣ ಸಚಿವಾಲಯದ ಅಧಿಕಾರಿ ಎನ್&zwnj;.ಪ್ರಕಾಶ್&zwnj;ಗೆ 15.50 ಲಕ್ಷ ರು. ಲಂಚ ಸಂದಾಯವಾಗಿತ್ತು ಎಂಬುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ಈ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ, ಅವರ ಆಪ್ತ ಸಹಾಯಕ ನೆಕ್ಕುಂಟಿ ನಾಗರಾಜ್&zwnj;, ನಿಗಮದ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಯೂನಿಯನ್&zwnj; ಬ್ಯಾಂಕ್&zwnj; ಇಂಡಿಯಾದ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು, ಮಧ್ಯವರ್ತಿಗಳು ಸೇರಿದಂತೆ 30 ಜನರ ಪಾತ್ರವನ್ನು ಸಿಬಿಐ ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-valmiki-corporation-scam-case-cbi-files-chargesheets-against-ex-minister-nagendra-rav/articleshow-piw5ba1"/>
        </item>
        <item>
            <title><![CDATA[ಕಾಂಗ್ರೆಸ್ ಅಧಿಕಾರ ಹಸ್ತಾಂತರ ಪ್ರಹಸನದಿಂದ ಆಡಳಿತವೇ ಸ್ತಬ್ದ: ಸಂಸದ ಕೋಟ ಶ್ರೀನಿವಾಸ ಪೂಜಾರಿ]]></title>
            <link>https://kannada.asianetnews.com/karnataka-districts/kota-srinivas-poojary-alleges-congress-power-transfer-drama-has-paralysed-karnataka-gvd/articleshow-di6vf3k</link>
            <guid isPermaLink="true">https://kannada.asianetnews.com/karnataka-districts/kota-srinivas-poojary-alleges-congress-power-transfer-drama-has-paralysed-karnataka-gvd/articleshow-di6vf3k</guid>
            <pubDate>Wed, 03 Jun 2026 00:27:00 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಕಾಂಗ್ರೆಸ್&zwnj; ಸರ್ಕಾರದ ಅಧಿಕಾರ ಹಸ್ತಾಂತರ &amp;nbsp;ಪ್ರಹಸನದಿಂದ ಇಡೀ ಆಡಳಿತವೇ ಸ್ತಬ್ದಗೊಂಡಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g9s959vq2haqyfy4z6grswnh,imgname-kota-srinivasa-pujari.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಜೂ.03): &lt;/strong&gt;ರಾಜ್ಯದಲ್ಲಿ ಕಾಂಗ್ರೆಸ್&zwnj; ಸರ್ಕಾರದ ಅಧಿಕಾರ ಹಸ್ತಾಂತರ ಪ್ರಹಸನದಿಂದ ಇಡೀ ಆಡಳಿತವೇ ಸ್ತಬ್ದಗೊಂಡಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. ಪಂಡಿತ್&zwnj; ದೀನ್&zwnj;ದಯಾಳ್&zwnj; ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ಅಂಗವಾಗಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಸಂಘನಿಕೇತನದಲ್ಲಿ ಎರಡು ದಿನಗಳ ದ.ಕ. ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು.&lt;/p&gt;&lt;p&gt;ಇನ್ನೆಂದಿಗೂ ಇಂತಹ ಸರ್ಕಾರ ಬೇಡ ಎಂದು ಕಾಂಗ್ರೆಸ್&zwnj; ಸರ್ಕಾರದ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ನಿಂತು ಹೋಗಿರುವ ಆಡಳಿತದ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡುವುದು ಬಿಜೆಪಿ ಕಾರ್ಯಕರ್ತರ ಕರ್ತವ್ಯ. ಹಿಂದುಳಿದ ವರ್ಗ, ದಲಿತರ ಬಗ್ಗೆ ಕಾಂಗ್ರೆಸ್&zwnj; ಸದಾ ಮಾತನಾಡುತ್ತಿದೆ. ಆದರೆ, ರಾಜ್ಯದಲ್ಲಿ 1.5 ಲಕ್ಷ ದಲಿತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಸ್ಟೆಲ್&zwnj; ಇಲ್ಲದೆ ಪರದಾಡುತ್ತಿದ್ದಾರೆ ಎಂದರು.&lt;/p&gt;&lt;p&gt;ಕೆಲವರು ಶಾಲೆ ಬಿಟ್ಟು ಹೋಗಿದ್ದಾರೆ. ಪರಿಶಿಷ್ಟಜಾತಿ, ಪಂಗಡದ ಬಗ್ಗೆ ಮಾತನಾಡುವ ಸಿದ್ದರಾಮಯ್ಯರ ಸರ್ಕಾರ ಎಸ್&zwnj;ಸಿ, ಎಸ್&zwnj;ಟಿಗಳ ಆರೋಗ್ಯ, ಶಿಕ್ಷಣಕ್ಕಾಗಿ ಮೀಸಲಿಟ್ಟ 60 ಸಾವಿರ ಕೋಟಿ ರು. ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿದೆ. ಕರಾವಳಿಯ ಕಡಲತಡಿಯ ಮೀನುಗಾರಿಕೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರ 22 ಸಾವಿರ ಕೋಟಿ ರು. ಬಿಡುಗಡೆ ಮಾಡಿತ್ತು. ಆದರೆ, ಈ ಯೋಜನೆಗಳು ರಾಜ್ಯ ಸರ್ಕಾರಕ್ಕೆ ಹಣ ಮಾಡುವ ದಂಧೆಯಾಗಿದೆ. ಕೇಂದ್ರದ ಅನುದಾನವನ್ನು ರಾಜ್ಯ ಸರ್ಕಾರ ತನ್ನ ಹಣವೆಂದು ಬಿಂಬಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಈ ವಿಚಾರಗಳ ಬಗ್ಗೆ ಜನಪರ ಹೋರಾಟಗಳ ಮೂಲಕ ಬಿಜೆಪಿ ಕಾರ್ಯಕರ್ತರು ಜನತೆಗೆ ಸತ್ಯ ತಿಳಿಸಬೇಕು ಎಂದರು.&lt;/p&gt;&lt;p&gt;ದೇಶದಲ್ಲಿನ 23 ಸಾವಿರ ನೋಂದಾಯಿತ ರಾಜಕೀಯ ಪಕ್ಷಗಳ ಪೈಕಿ ದೇಶ ಮೊದಲು ಎಂಬ ನೆಲೆಯಲ್ಲಿ ಕಾರ್ಯಕರ್ತರಿಗೆ ಪ್ರಶಿಕ್ಷಣ ವರ್ಗ ನಡೆಸುವುದು ಬಿಜೆಪಿ ಮಾತ್ರ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಪ್ರತಿ ಮಂಡಲ, ಜಿಲ್ಲೆಯಲ್ಲಿ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದೆ ಎಂದರು.&lt;/p&gt;&lt;p&gt;ಸಂಸದ ಕ್ಯಾ. ಬ್ರಿಜೇಶ್&zwnj; ಚೌಟ ಮಾತನಾಡಿ, 2014ರ ಬಳಿಕ ಭಾರತ ಬದಲಾಗಿದೆ. ಜನರ ಸಮಸ್ಯೆಗಳಿಗೆ ಉತ್ತರವಾಗಿ ಬಿಜೆಪಿ ದೇಶದಲ್ಲಿದೆ. ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬಂತಿದ್ದ ಪಶ್ಚಿಮ ಬಂಗಾಳದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್&zwnj; ಸರ್ಕಾರದ ಮೇಲಿನ ಜನರ ಆಕ್ರೋಶಕ್ಕೆ ವೇದಿಕೆಯಾಗಿ ಬಿಜೆಪಿ ಕಾರ್ಯನಿರ್ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕೆ ಪೂರಕವಾಗಿ ವಿಕಸಿತ ಕರ್ನಾಟಕ ನಿರ್ಮಾಣಕ್ಕೆ 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೊಳ್ಳಬೇಕು ಎಂದರು.&lt;/p&gt;&lt;h2&gt;&lt;strong&gt;ಹೆದರುವ ಕಾಲ ಇದಲ್ಲ&lt;/strong&gt;&lt;/h2&gt;&lt;p&gt;ಕಾಕ್ರೋಚ್ ಪಾರ್ಟಿ ಹೆಸರಿನಲ್ಲಿ ಪ್ರಸ್ತುತ ಬಿಜೆಪಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ಜಿರಳೆಗಳಿಗೆ ಹೆದರುವ ಕಾಲ ಇದಲ್ಲ. ದೇಶದ ಚಿನ್ನವನ್ನು ವಿದೇಶಕ್ಕೆ ಅಡವಿಟ್ಟ ಕಾಲವೊಂದಿತ್ತು. ಇಂದು ಭಾರತ 60 ರಾಷ್ಟ್ರಗಳಿಗೆ ಸಾಲ ನೀಡುತ್ತಿದೆ. ಜಿರಳೆ, ಹೆಗ್ಗಣ, ಸೊಳ್ಳೆಗಳಿಗೆ ಹೆದರುವ ಕಾಲ ಇದಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kota-srinivas-poojary-alleges-congress-power-transfer-drama-has-paralysed-karnataka-gvd/articleshow-di6vf3k"/>
        </item>
        <item>
            <title><![CDATA[ಸಿದ್ದರಾಮಯ್ಯಕ್ಕೆ ಮಹತ್ವದ ಜವಾಬ್ದಾರಿ ಕೊಟ್ಟ ಹೈಕಮಾಂಡ್, ಕಾಂಗ್ರೆಸ್ ಕಾರ್ಯಕಾರಿ ಸಮತಿ ಸದಸ್ಯರಾಗಿ ನೇಮಕ]]></title>
            <link>https://kannada.asianetnews.com/state/high-command-rewards-siddaramaiah-with-congress-working-committee-membership/articleshow-gdspehd</link>
            <guid isPermaLink="true">https://kannada.asianetnews.com/state/high-command-rewards-siddaramaiah-with-congress-working-committee-membership/articleshow-gdspehd</guid>
            <pubDate>Tue, 02 Jun 2026 23:01:06 +0530</pubDate>
            <description><![CDATA[&lt;p&gt;ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್&zwnj;ಗೆ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯಗೆ ಇದೀಗ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಸಿದ್ದರಾಮಯ್ಯ ಅವರನ್ನು CWC ಸದಸ್ಯರಾಗಿ ನೇಮಕಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswk26g0ejhmm5811fz3659c,imgname-siddaramaiah-kc-venugopal-1780149721600.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ (ಜೂ.02) &lt;/strong&gt;ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದ್ದ ಭಾರಿ ಚರ್ಚೆಗಳು, ಕುತೂಹಲಗಳು ಇದೀಗ ಸಂಪುಟ ಸೇರ್ಪಡೆಯತ್ತ ನೆಟ್ಟಿದೆ. ಯಾರಿಗೆ ಸಚಿವ ಸ್ಥಾನ ಅನ್ನೋ ಕುರಿತು ಕಾಂಗ್ರೆಸ್ ಹೈಕಮಾಂಡ್ ಸತತ ಚರ್ಚೆ ನಡೆಸುತ್ತಿದೆ. ಇದರ ನಡುವೆ ಮಹತ್ವದ ಆದೇಶ ಹೊರಬಿದ್ದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮ್ಯಗೆ ಕಾಂಗ್ರೆಸ್ ಕಾರ್ಯಕಾರಿ ಸಮತಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಸಿದ್ದರಾಮಯ್ಯ ಅವರನ್ನು CWC ಸದಸ್ಯರಾಗಿ ನೇಮಕಗೊಳಿಸಿ ಕೆಸಿ ವೇಣುಗೋಪಾಲ್ ಅದೇಶ ಹೊರಡಿಸಿದ್ದಾರೆ.&lt;/p&gt;&lt;h2&gt;ಸಿಎಂ ಸ್ಥಾನ ತ್ಯಜಿಸಿದ ಸಿದ್ದರಾಮಯ್ಯಗೆ ಹೊಸ ಜವಾಬ್ದಾರಿ&lt;/h2&gt;&lt;p&gt;ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್ ವಲಯದಲ್ಲೇ ಕಳೆದ ಎರಡು ವರ್ಷದಿಂದ ಭಾರಿ ಚರ್ಚೆಯಾಗುತ್ತಿತ್ತು. ಕೊನೆಗೆ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಬಳಿಕ ಸ್ವತಃ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು. ಇತ್ತ ಉಪ ಮುಖ್ಯಮಂತ್ರಿಯಾಗಿದ್ದ ಡಿಕೆ ಶಿವಕುಮಾರ್ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದರ ನಡುವೆ ರಾಜ್ಯದಲ್ಲಿ ಕೋರ್ ಕಮಿಟಿಗೆ ಸಿದ್ದರಾಮಯ್ಯ ಭಾರಿ ಒತ್ತಾಯಿಸಿದ್ದರು. ಇದೀಗ ಅಳೆದು ತೂಗಿ ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ ಮಾಡಿದೆ.&lt;/p&gt;&lt;p&gt;ಸಿದ್ದರಾಮಯ್ಯ ರಾಜೀನಾಮೆ ಬಳಿಕ ನಡೆದ ಚರ್ಚೆಯಲ್ಲಿ ಹೈಕಮಾಂಡ್ ಮುಂದೆ ಮಹತ್ವದ ಬೇಡಿಕೆ ಮುಂದಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕೋರ್ ಕಮಿಟಿ ರಚನೆಗೆ ಒತ್ತಾಯಿಸಿದ್ದು. ಈ ಕೋರ್ ಕಮಿಟಿಯ ನೇತೃತ್ವ ವಹಿಸಿಕೊಳ್ಳಲು ಸಿದ್ದರಾಮಯ್ಯ ಲೆಕ್ಕಾಚಾರ ಹಾಕಿದ್ದರು. ಆದರೆ ಹೈಕಮಾಂಡ್ ರಾಜ್ಯದಲ್ಲಿ ಕೋರ್ ಕಮಿಟಿ ರಚನೆ ಬಗ್ಕೆ ನಿರಾಸಕ್ತಿ ತೋರಿದೆ. ಮುಖ್ಯಮಂತ್ರಿ ಸ್ಥಾನ ತೊರೆದ ಸಿದ್ದರಾಮಯ್ಯಗೆ ಇದೀಗ CWC ಸದಸ್ಯ ಜವಾಬ್ದಾರಿ ನೀಡಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಹೈಕಮಾಂಡ್ ಸಿದ್ದರಾಮಯ್ಯಗೆ CWC ಸದಸ್ಯರಾಗಿ ನೇಮಿಸಿದ್ದು ಯಾಕೆ..?&lt;/h2&gt;&lt;ul&gt; &lt;li&gt;ಈವರೆಗೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ (CWC)ಯ ವಿಶೇಷ ಆಹ್ವಾನಿತ ಸದಸ್ಯರಾಗಿದ್ದ ಸಿದ್ದರಾಮಯ್ಯ&lt;/li&gt; &lt;li&gt;ಈಗ ಪೂರ್ಣ ಪ್ರಮಾಣದ CWC ಸದಸ್ಯರಾಗಿ ನೇಮಕ&lt;/li&gt; &lt;li&gt;ಕಾಂಗ್ರೆಸ್&zwnj;ನ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಮಿತಿಯಲ್ಲಿ ಸ್ಥಾನ&lt;/li&gt; &lt;li&gt;ಸಿದ್ದರಾಮಯ್ಯ ಪದತ್ಯಾಗ ಮಾಡಿದರೂ ಪಕ್ಷದ ಪ್ರಮುಖ ನಾಯಕ ಎಂಬ ಸ್ಪಷ್ಟ ಸಂದೇಶ ರವಾನಿಸಿದ ಹೈಕಮಾಂಡ್&lt;/li&gt; &lt;li&gt;ಕರ್ನಾಟಕ ಸಿಎಂ ಸ್ಥಾನದಿಂದ ಹೊರಬಂದ ಬಳಿಕವೂ ರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಪಾತ್ರ&lt;/li&gt; &lt;li&gt;ಹಲವು ವರ್ಷಗಳ ಸೇವೆ ಹಾಗೂ ಪಕ್ಷದ ನಿರ್ಧಾರದ ನಿಷ್ಠೆಗಾಗಿ ಹೈಕಮಾಂಡ್&zwnj;ನಿಂದ ಗೌರವ&lt;/li&gt; &lt;li&gt;ಕಾಂಗ್ರೆಸ್&zwnj;ನ ರಾಷ್ಟ್ರೀಯ ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ಸಿದ್ದರಾಮಯ್ಯ ಪಾತ್ರ ಇರಲಿದೆ&lt;/li&gt; &lt;li&gt;ಪಕ್ಷದ ಪ್ರಮುಖ ನಿರ್ಧಾರಗಳ ಮೇಲೆ ಅಧಿಕೃತ ಪ್ರಭಾವ ಬೀರುವ ಅವಕಾಶ&lt;/li&gt; &lt;li&gt;ರಾಜ್ಯ ರಾಜಕೀಯದಾಚೆಗೂ ಸಿದ್ದರಾಮಯ್ಯಗೆ ರಾಷ್ಟ್ರೀಯ ಮಟ್ಟದ ಜವಾಬ್ದಾರಿ&lt;/li&gt; &lt;li&gt;ಸಿದ್ದರಾಮಯ್ಯರನ್ನು ರಾಷ್ಟ್ರೀಯ ರಾಜಕೀಯದಲ್ಲಿ ಸಕ್ರಿಯವಾಗಿಡುವ ಹೈಕಮಾಂಡ್&zwnj;ನ ಮಹತ್ವದ ನಡೆ&lt;/li&gt; &lt;li&gt;ಕಾಂಗ್ರೆಸ್ ಸಂಘಟನೆಯಲ್ಲಿ ಸಿದ್ದರಾಮಯ್ಯ ಸ್ಥಾನಮಾನ ಮತ್ತಷ್ಟು ಬಲಪಡಿಸಿದ ಈ ನೇಮಕ&lt;/li&gt;&lt;/ul&gt;&lt;h2&gt;ಸಂಪುಟ ಸೇರ್ಪಡೆ ಚರ್ಚೆ ಮುಗಿಸಿ ಬೆಂಗಳೂರಿಗೆ ವಾಪಸ್&lt;/h2&gt;&lt;p&gt;ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಸತತ ಸಭೆ ನಡೆಸಿದ್ದಾರೆ. ಸಂಪುಟ ಸೇರ್ಪಡೆ ಕುರಿತು ಉಭಯ ನಾಯಕರು ತಮ್ಮದೇ ಆದ ಲಿಸ್ಟ್ ನೀಡಿದ್ದರು. ಈ ಕುರಿತು ಹಲವು ಸುತ್ತಿನ ಮಾತುಕತೆ ನಡೆದಿದೆ. ಕೊನೆಗೆ 14 ಸಚಿವರು ಡಿಕೆ ಶಿವಕುಮಾರ್ ಜೊತೆ ಪ್ರಮಾಣವಚನ ಸ್ವೀಕರಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/high-command-rewards-siddaramaiah-with-congress-working-committee-membership/articleshow-gdspehd"/>
        </item>
        <item>
            <title><![CDATA[ಒಂದೇ ವಾರದಲ್ಲಿ ಸುರಿಯಬಹುದು ನಾಲ್ಕು ತಿಂಗಳ ಮಳೆ: ಕೊಡಗಿನಲ್ಲಿ ಹೈ ಅಲರ್ಟ್!]]></title>
            <link>https://kannada.asianetnews.com/karnataka-districts/kodagu-flood-landslide-alert-district-administration-prepares-for-heavy-monsoon-gvd/articleshow-zs816fr</link>
            <guid isPermaLink="true">https://kannada.asianetnews.com/karnataka-districts/kodagu-flood-landslide-alert-district-administration-prepares-for-heavy-monsoon-gvd/articleshow-zs816fr</guid>
            <pubDate>Tue, 02 Jun 2026 22:53:14 +0530</pubDate>
            <description><![CDATA[&lt;p&gt;ಈ ವರ್ಷ ಎಲ್ನಿನೋ ಪರಿಣಾಮದಿಂದಾಗಿ ಮಳೆಯ ಪ್ರಮಾಣ ಶೇ 50 ರಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಮೂರ್ನಾಲ್ಕು ತಿಂಗಳ ಕಾಲ ಸುರಿಯುವ ಮಳೆ ಕೇವಲ ಒಂದೇ ವಾರದಲ್ಲಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kscs9xajw4ge8ssfe3kcnx4j,imgname-screenshot-2026-05-23-180203-1779619394898.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜೂ.02):&lt;/strong&gt; ಈ ವರ್ಷ ಎಲ್ನಿನೋ ಪರಿಣಾಮದಿಂದಾಗಿ ಮಳೆಯ ಪ್ರಮಾಣ ಶೇ 50 ರಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಮೂರ್ನಾಲ್ಕು ತಿಂಗಳ ಕಾಲ ಸುರಿಯುವ ಮಳೆ ಕೇವಲ ಒಂದೇ ವಾರದಲ್ಲಿ ಸುರಿದರೆ ಆಗ ಅನಾಹುತಗಳು ಆಗುವುದು ತಪ್ಪಿದ್ದಲ್ಲ. ಇದೇ ವಿಷಯ ಈಗ ಕೊಡಗು ಜಿಲ್ಲಾಡಳಿತ ಆತಂಕಗೊಳ್ಳುವಂತೆ ಮಾಡಿದ್ದು ಜಿಲ್ಲಾಡಳಿತ ಅಲರ್ಟ್ ಆಗಿದೆ. ಹೌದು ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ ಕನಿಷ್ಠ ನಾಲ್ಕೈ ತಿಂಗಳು ನಿರಂತರ ಮಳೆ ಇದ್ದೇ ಇರುತ್ತದೆ. ಈ ನಾಲ್ಕು ತಿಂಗಳು ಕೂಡ ಸಾಧಾರಣ ಮಳೆ ಬರುತ್ತಿದ್ದರೆ ಯಾವುದೇ ಸಮಸ್ಯೆ ಸಂಭವಿಸುವುದಿಲ್ಲ.&lt;/p&gt;&lt;p&gt;ಆದರೆ ಅದೇ ಮಳೆ ಒಂದೇ ವಾರದಲ್ಲಿ ಸುರಿದರೆ ಪ್ರವಾಹ, ಭೂಕುಸಿತ ಆಗುವುದು ಖಚಿತ. 2018 ರಿಂದ 2020 ರವರೆಗೆ ಕೊಡಗು ಜಿಲ್ಲೆಯಲ್ಲಿ ಆಗಿದ್ದು ಕೂಡ ಇದೇ. ಅಂದಿನಿಂದ ಇದುವರೆಗೆ ಪ್ರತೀ ವರ್ಷ ಮಳೆಗಾಲ ಬಂತೆಂದರೆ ಕೊಡಗು ಜಿಲ್ಲೆಯಲ್ಲಿ ಆತಂಕದ ವಾತಾವರಣ ಇದ್ದೇ ಇರುತ್ತದೆ. ಹೀಗಾಗಿಯೇ ಕೊಡಗು ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈಗಾಗಲೇ ಯಾವೆಲ್ಲಾ ಪ್ರದೇಶಗಳಿಗೆ ಅಪಾಯವಿದೆ ಎನ್ನುವುದನ್ನು ಗುರುತ್ತಿಸಿದೆ. ಅಲ್ಲದೆ ಒಂದು ವೇಳೆ ತೀವ್ರತರವಾಗಿ ಮಳೆ ಸುರಿದಲ್ಲಿ ಯಾವ ಪ್ರದೇಶಗಳಲ್ಲಿ ಪ್ರವಾಹ ಎದುರಾಗಬಹುದು ಎಂದು ಕೂಡ ಗುರುತ್ತಿಸಲಾಗಿದೆ.&lt;/p&gt;&lt;p&gt;ಇಂತಹ ಪ್ರದೇಶಗಳಿಂದ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಸ್ಥಳಾಂತರ ಮಾಡಲು ನಿರ್ಧರಿಸಿದೆ. ಎಲ್ಲೆಲ್ಲಿ ಭೂಕುಸಿತ ಅಥವಾ ಪ್ರವಾಹವಾಗುವ ಸಾಧ್ಯತೆ ಇದೆಯೋ ಆ ಪ್ರದೇಶಗಳ ಸಮೀಪದಲ್ಲೇ ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಳಿತ ಮುಂದಾಗಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆಯಿಂದ ತಲಾ ಒಂಭತ್ತು ಜನರಿರುವ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಈ ತಂಡಗಳಿಗೆ ಪ್ರವಾಹ ಮತ್ತು ಭೂಕುಸಿತ ಎದುರಾದಲ್ಲಿ ಜನರನ್ನು ರಕ್ಷಣೆ ಮಾಡುವುದು ಹೇಗೆ ಎಂದೆಲ್ಲಾ ತರಬೇತಿಯನ್ನು ನಡೆಸಲಾಗಿದೆ.&lt;/p&gt;&lt;h2&gt;&lt;strong&gt;ಮಳೆಗಾಲವನ್ನು ಎದುರಿಸಲು ಸಿದ್ಧತೆ&lt;/strong&gt;&lt;/h2&gt;&lt;p&gt;ಹಾರಂಗಿ ಹಿನ್ನೀರಿನಲ್ಲಿ ತರಬೇತಿ ನಡೆಸಲಾಗಿದ್ದು, ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆ ಮಾಡುವುದು ಹೇಗೆ ಎನ್ನುವ ಅಣುಕು ಕಾರ್ಯಾಚರಣೆಯನ್ನು ಕೂಡ ನಡೆಸಲಾಗಿದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಗೆ ಇನ್ನೇನು ಕೆಲವೇ ದಿನಗಳಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶಿಸಲಿದೆ. ಈ ಬಾರಿಯ ಮಳೆಗಾಲದಲ್ಲಿ ಮಳೆಯ ತೀವ್ರ ಕೊರತೆ ಇದೆ ಎನ್ನುವುದನ್ನು ಹೇಳಲಾಗಿದ್ದರೂ ಕೆಲವು ದಿನಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿದಲ್ಲಿ ಊಹಿಸಲು ಅಸಾಧ್ಯವಾದ ಅನಾಹುತಗಳ ಸಂಭವಿಸಲಿವೆ. ಇವೆಲ್ಲವನ್ನು ಮನಗಂಡಿರುವ ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಸಿದ್ಧತೆ ನಡೆಸಿದೆ.&lt;/p&gt;&lt;p&gt;ತೀವ್ರ ಪ್ರಮಾಣದಲ್ಲಿ ಗಾಳಿ ಮಳೆ ಸುರಿದಲ್ಲಿ ಅಪಾರ ಪ್ರಮಾಣದ ವಿದ್ಯುತ್ ಕಂಬಗಳು ಧರೆಗೆ ಉರುಳಬಹುದು. ಹೀಗಾಗಿ ಜಿಲ್ಲೆ ಕತ್ತಲಿನಲ್ಲಿ ಮುಳುಗಬಾರದು ಎನ್ನುವ ದೃಷ್ಟಿಯಿಂದ ಕೆಇಬಿ ಇಲಾಖೆ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ಶೇಕರಣೆ ಮಾಡಿಟ್ಟುಕೊಂಡಿದೆ. ಒಟ್ಟಿನಲ್ಲಿ ಮುಂಗಾರು ಸಮಯದ ನಾಲ್ಕು ತಿಂಗಳು ಸುರಿಯಬೇಕಾದ ಮಳೆ ಹವಾಮಾನ ವೈಪರೀತ್ಯದಿಂದಾಗಿ ಒಂದು ತಿಂಗಳು, ಹದಿನೈದು ದಿನ ಅಥವಾ ನಾಲ್ಕು ದಿನಗಳಲ್ಲಿಯೇ ಸುರಿದು ಬಿಡುವ ಸಾಧ್ಯತೆಯೇ ಹೆಚ್ಚಿದೆ. ಇದು ಅಪಾಯವಾಗಲಿದ್ದು, ಇದರಿಂದಲೇ ಜಿಲ್ಲಾಡಳಿತ ಈ ಬಾರಿ ಮಳೆ ಕೊರತೆ ಎಂಬ ಮಾಹಿತಿ ಇರುವಾಗಲೇ ಸಂಪೂರ್ಣ ಮುನ್ನೆಚ್ಚರಿಕೆ ವಹಿಸಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-flood-landslide-alert-district-administration-prepares-for-heavy-monsoon-gvd/articleshow-zs816fr"/>
        </item>
        <item>
            <title><![CDATA[ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಪೀಕ್ ಹವರ್‌ನಲ್ಲಿ 7 ನಿಮಿಷಕ್ಕೊಂದು ಯೆಲ್ಲೋ ಟ್ರೈನ್]]></title>
            <link>https://kannada.asianetnews.com/gallery/state/bengaluru-namma-metro-yellow-line-trains-run-at-every-7-minutes-during-peak-hours-tw77p6k</link>
            <guid isPermaLink="true">https://kannada.asianetnews.com/gallery/state/bengaluru-namma-metro-yellow-line-trains-run-at-every-7-minutes-during-peak-hours-tw77p6k</guid>
            <pubDate>Tue, 02 Jun 2026 22:33:15 +0530</pubDate>
            <description><![CDATA[&lt;p&gt;ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಇದೀಗ ಪೀಕ್ ಹವರ್&zwnj;ನಲ್ಲಿ ಯೆಲ್ಲೋ ಲೈನ್&zwnj;ನಲ್ಲಿ ಕಾಯುವಿಕೆ ಅವಧಿ ಕಡಿತಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k41h4f8tbxazjwhym0n7zvd6,imgname-bmrcl-yellow-line-1756693151002.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಇದೀಗ ಪೀಕ್ ಹವರ್&zwnj;ನಲ್ಲಿ ಯೆಲ್ಲೋ ಲೈನ್&zwnj;ನಲ್ಲಿ ಕಾಯುವಿಕೆ ಅವಧಿ ಕಡಿತಗೊಂಡಿದೆ.&lt;/p&gt;&lt;img&gt;&lt;p&gt;ನಮ್ಮ ಮೆಟ್ರೋ ಬೆಂಗಳೂರಿನ ಪ್ರಮುಖ ಸಾರಿಗೆ ಸಂಪರ್ಕವಾಗಿದೆ. ಪ್ರತಿ ದಿನ ಮೆಟ್ರೋ ಆಶ್ರಯಿಸುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪಿಂಕ್, ಗ್ರೀನ್ ಸೇರಿದಂತೆ ಬಹುತೇಕ ಮೆಟ್ರೋ ಲೈನ್&zwnj;ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಅತೀ ಕಡಿಮೆ ಸಮಯದ ಅಂತರದಲ್ಲಿ ರೈಲು ಸೇವೆ ನೀಡುತ್ತಿದೆ. ಇದೀಗ ಯೆಲ್ಲೋ ಲೈನ್&zwnj;ನಲ್ಲಿ ಪೀಕ್ ಹವರ್&zwnj;ನಲ್ಲಿ ರೈಲಿಗಾಗಿ ಕಾಯುವ ಸಮಯ ಕಡಿತಗೊಂಡಿದೆ.&lt;/p&gt;&lt;img&gt;&lt;p&gt;ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರು ಇನ್ನು ಪೀಕ್ ಅವರ್&zwnj;ನಲ್ಲಿ ರೈಲಿಗಾಗಿ ಹೆಚ್ಚು ಕಾಯಬೇಕಿಲ್ಲ. ಪ್ರತಿ 7 ನಿಮಿಷಕ್ಕೊಂದು ರೈಲು ಸೇವೆ ನೀಡಲಿದೆ. ಇದರಿಂದ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. ಪ್ರಯಾಣಿಕರು ತಕ್ಕ ಸಮಯಕ್ಕೆ ಕಚೇರಿ ಸೇರಿದಂತೆ ತಮ್ಮ ತಮ್ಮ ಕೆಲಸಕ್ಕೆ ಸೇರಿಕೊಳ್ಳಲು ನೆರವಾಗಲಿದೆ.&lt;/p&gt;&lt;img&gt;&lt;p&gt;ರಾಷ್ಟ್ರೀಯ ವಿದ್ಯಾಲಯದಿಂದ ಬೊಮ್ಮಸಂದ್ರ ನಡುವಿನ ಯೆಲ್ಲೋ ಮೆಟ್ರೋ ರೈಲು ಇದೀಗ ಪೀಕ್ ಹವರ್ ಅಂದರೆ ಬೆಳಗ್ಗೆ 8 ರಿಂದ ಮಧ್ಯಾಹ್ನದ ವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಹೆಚ್ಚುವರಿ ರೈಲು ಸೇವೆ ನೀಡಲಿದೆ. ಸದ್ಯ ಈ ಸಮಯದಲ್ಲಿ ಪ್ರತಿ 9 ನಿಮಿಷಕ್ಕೊಂದು ರೈಲು ಸೇವೆ ನೀಡುತ್ತಿದೆ. ಇನ್ನು ಪ್ರತಿ 7 ನಿಮಿಷಕ್ಕೆ ರೈಲು ಸೇವೆ ಲಭ್ಯವಿದೆ.&lt;/p&gt;&lt;img&gt;&lt;p&gt;ಇನ್ನು ಪೀಕ್ ಅವರ್ ಬಿಟ್ಟು ಇತರ ಸಮಯದಲ್ಲಿ ಸದ್ಯ 14 ನಿಮಿಷಕ್ಕೊಂದು ರೈಲು ಸೇವೆ ಲಭ್ಯವಿದೆ. ಇನ್ನು ಮುಂದೆ ಇದು 10 ನಿಮಿಷಕ್ಕೆ ಇಳಿಕೆಯಾಗುತ್ತಿದೆ. ಹೀಗಾಗಿ ಬೆಂಗಳೂರಿನ ಪ್ರಮುಖ ಟೆಕ್ ಹಬ್ ಸಂಪರ್ಕಿಸುವ ಈ ರೈಲು ರೈಲಿನಲ್ಲಿ ಸಮಯ ಕಡಿತ ಸದುಪಯೋಗವಾಗಲಿದೆ.&lt;/p&gt;&lt;img&gt;&lt;p&gt;ಯೆಲ್ಲೋ ಲೈನ್ ಮೆಟ್ರೋ ಸೇವೆ ಬೆಂಗಳೂರಿನ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ಎಲೆಕ್ಟ್ರಾನಿಸಿಟಿ ಸೇರಿದಂತೆ ಟೆಕ್ ಹಬ್ ಸಂಪರ್ಕಿಸುವ ಈ ಮಾರ್ಗದಲ್ಲಿ 2027ರಲ್ಲಿ ಹೊಸ 6 ರೈಲುಗಳು ಸೇರ್ಪಡೆಗೊಳ್ಳಲಿದೆ. ಈ ಮೂಲಕ ಪ್ರಯಾಣಿಕರ ಕಾಯುವಿಕೆ ಅವಧಿ ಮತ್ತಷ್ಟು ಕಡಿತಗೊಳ್ಳಲಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಯೆಲ್ಲೋ ಲೈನ್ ಮೆಟ್ರೋ 2025ರಲ್ಲಿ ಆರಂಭಗೊಂಡಿತ್ತು. ವಿಳಂಬದ ಬಳಿಕ ಆರಂಭಗೊಂಡ ಈ ಯೆಲ್ಲೋ ಲೈನ್ ಮೆಟ್ರೋ ಅಷ್ಟೇ ವೇಗದಲ್ಲಿ ಗರಿಷ್ಠ ಪ್ರಯಾಣಿಕರನ್ನು ಆಕರ್ಷಿಸಿದೆ. ರಾಷ್ಟ್ರೀಯ ವಿದ್ಯಾಲಯದಿಂದ ಬೊಮ್ಮಸಂದ್ರ ನಡುವಿನ ಈ ಯೆಲ್ಲೋ ಲೈನ್ ಮಾರ್ಗದಲ್ಲಿ ಒಟ್ಟು 18 ಮೆಟ್ರೋ ನಿಲ್ದಾಣಗಳಿವೆ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/bengaluru-namma-metro-yellow-line-trains-run-at-every-7-minutes-during-peak-hours-tw77p6k"/>
        </item>
        <item>
            <title><![CDATA[ಬೆಂಗಳೂರಲ್ಲಿ ಪ್ರತಿ ದಿನದ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ, ಸ್ಥಳದಲ್ಲೇ ಸೇಫ್‌ ಡಿಸ್ಪೋಸ್‌ಗೆ ಚಾಲನೆ]]></title>
            <link>https://kannada.asianetnews.com/state/bengaluru-waste-problem-gets-a-boost-as-neo-san-machine-enables-on-site-garbage-disposal/articleshow-g25plca</link>
            <guid isPermaLink="true">https://kannada.asianetnews.com/state/bengaluru-waste-problem-gets-a-boost-as-neo-san-machine-enables-on-site-garbage-disposal/articleshow-g25plca</guid>
            <pubDate>Tue, 02 Jun 2026 21:59:49 +0530</pubDate>
            <description><![CDATA[&lt;p&gt;ಕಸ ಸಂಗ್ರಹ ಮಾಡಲು ಯಾರೂ ಬರುತ್ತಿಲ್ಲ, ಇತ್ತ ವಿಲೇವಾರಿ ಮಾಡಲು ಆಗದೆ, ಮನೆಯಲ್ಲಿ ಇಡಲು ಆಗದೆ ಸಮಸ್ಯೆ ಅನುಭವಿಸುತ್ತಿದ್ದೀರಾ? ಇದೀಗ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಇದೀಗ ಸ್ಥಳದಲ್ಲೇ ಕಸ ವಿಲೇವಾರಿ ಮಾಡುವ ಸೇಫ್ ಡಿಸ್&zwnj;ಪೋಸ್&zwnj;ಗೆ ಚಾಲನೆ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt4jpsdnyz7ygpsknr7tr37k,imgname-waste-management-1780417783220.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.02)&lt;/strong&gt; ಬೆಂಗಳೂರಲ್ಲಿ ಕಸದ ಸಮಸ್ಯೆ ತೀವ್ರವಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಡುವುದು, ಕಸ ವಿಲೇವಾರಿ ಮಾಡದೇ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ, ಮನೆಯಲ್ಲಿನ ಕಸ ವಿಲೇವಾರಿಯಾಗದೆ ಎದುರಾಗುವ ಸಮಸ್ಯೆಗಳಿಗೆ ಇದೀಗ ಮುಕ್ತಿ ನೀಡಲು ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ. ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಯೋಗದೊಂದಿಗೆ ನಿಯೋ ಸ್ಯಾನ್ ಇದೀಗ ಅತ್ಯಾಧುನಿಕ ಸ್ಮಾರ್ಟ್ ಬಿನ್ ಡಿಸ್&zwnj;ಪೋಸ್ ಮಶಿನ್ ಅಳವಡಡಿಸುತ್ತಿದೆ.ಇದರಿಂದ ಸ್ಥಳದಲ್ಲೇ ಕಸ ವಿಲೇವಾರಿ ಸಮಸ್ಯೆ ಮುಗಿಯಲಿದೆ.&lt;/p&gt;&lt;h2&gt;ಕಸದ ಸಮಸ್ಯೆಗೆ ಪರಿಹಾರ&lt;/h2&gt;&lt;p&gt;ಸ್ಥಳದಲ್ಲೇ ತ್ಯಾಜ್ಯ ವಿಲೇವಾರಿ ಮಾಡುವ ಉನ್ನತ ತಂತ್ರಜ್ಞಾನದ ಥರ್ಮಲ್ ವೇಸ್ಟ್-ಪ್ರೊಸೆಸರ್&zwnj;ಗಳನ್ನು ಅಭಿವೃದ್ಧಿಪಡಿಸುವ ಬೆಂಗಳೂರು ಮೂಲದ ಕ್ಲೀನ್-ಟೆಕ್ ಕಂಪನಿ 'ನಿಯೋ ಸ್ಯಾನ್ ಹೊಸ ಮಶಿನ್ ಅಳವಡಿಸುತ್ತಿದೆ. ಬೆಳೆಯುತ್ತಿರುವ ನಗರದಲ್ಲಿನ ಕಸದ ಸವಾಲು ಪರಿಹರಿಸಲು ದಿಟ್ಟ ಹೆಜ್ಜೆಯಾಗಿದೆ. ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ನಗರದ ವಿವಿಧ ಸೌಲಭ್ಯಗಳಲ್ಲಿ ಸ್ಥಳದಲ್ಲೇ ತ್ಯಾಜ್ಯ ನಿರ್ವಹಣೆ ಮಾಡಲು ನಿಯೋ ಸ್ಯಾನ್ ಮಶಿನ್ ಬಳಸಲಾಗುತ್ತದೆ. ಶೀಘ್ರದಲ್ಲೇ ಆರಂಭವಾಗಲಿರುವ ಈ ಯೋಜನೆಯು, ನಗರದಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ, ಸ್ಥಳದಲ್ಲೇ ಸ್ಯಾನಿಟರಿ ಮತ್ತು ಜೈವಿಕ-ವೈದ್ಯಕೀಯ ತ್ಯಾಜ್ಯಗಳನ್ನು ಸಂಸ್ಕರಿಸುವ ಪ್ರಮಾಣೀಕೃತ ವ್ಯವಸ್ಥೆಯನ್ನು ತರಲಿದ್ದು, ತ್ಯಾಜ್ಯ ನಿರ್ವಹಣೆಯ ಅತ್ಯಂತ ಸವಾಲಿನ ಸಮಸ್ಯೆಯನ್ನು ನಿವಾರಿಸಲಿದೆ.&lt;/p&gt;&lt;h2&gt;ಎರಡನೇ ನಗರ ಬೆಂಗಳೂರು&lt;/h2&gt;&lt;p&gt;ಈ ಯೋಜನೆಯು ಸುಸ್ಥಿರತೆ, ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿನೂತನ ಪರಿಹಾರಗಳನ್ನು ಬೆಂಬಲಿಸುತ್ತದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಂತರ ಈ ಜಾಗತಿಕ ಉಪಕ್ರಮಕ್ಕೆ ಆತಿಥ್ಯ ವಹಿಸುತ್ತಿರುವ ವಿಶ್ವದ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.&lt;/p&gt;&lt;h2&gt;ಸುರಕ್ಷಿತ ಕಲ ವಿಲೇವಾರಿ&lt;/h2&gt;&lt;p&gt;ನಿಯೋ ಸ್ಯಾನ್&zwnj;ಗೆ ಒದಗಿಸಲಾದ ಅನುದಾನವನ್ನು 'ನಿಯೋ-ಎಕ್ಸ್' ಘಟಕಗಳ ಅಳವಡಿಕೆಗೆ ಬಳಸಿಕೊಳ್ಳಲಾಗುವುದು. ಇವು ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳದಲ್ಲೇ ಅದನ್ನು ಸುರಕ್ಷಿತವಾಗಿ ಸಂಸ್ಕರಿಸುತ್ತವೆ. ಬೆಂಗಳೂರಿನಾದ್ಯಂತ ಇರುವ ಕಾಲೇಜುಗಳು, ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs), ಮಹಿಳಾ ಹಾಸ್ಟೆಲ್&zwnj;ಗಳು, ಸರ್ಕಾರಿ ವಸತಿ ಸಮುಚ್ಚಯಗಳು ಮತ್ತು ಇತರ ಕಟ್ಟಡಗಳಲ್ಲಿ ಹಂತಹಂತವಾಗಿ ಈ ಯಂತ್ರಗಳನ್ನು ಅಳವಡಿಸಲಾಗುವುದು. ಇದರಿಂದ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ. ಅಲ್ಲದೆ, ಅಪಾಯಕಾರಿ ತ್ಯಾಜ್ಯವನ್ನು ಕೈಯಾರೆ ವಿಂಗಡಿಸುವ ಪೌರಕಾರ್ಮಿಕರಿಗೆ ಸುರಕ್ಷತೆ ಮತ್ತು ಘನತೆ ಒದಗಿಸಲಿದೆ.&lt;/p&gt;&lt;p&gt;ಸರ್ಕಾರಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಮಹಿಳಾ ಹಾಸ್ಟೆಲ್&zwnj;ಗಳಲ್ಲಿ ನಿತ್ಯವೂ ಸ್ಯಾನಿಟರಿ ಪ್ಯಾಡ್&zwnj;ಗಳು, ಬ್ಯಾಂಡೇಜ್&zwnj;ಗಳು, ಬಳಸಿದ ಟಿಶ್ಯೂಗಳು ಮತ್ತು ಕ್ಲಿನಿಕಲ್ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿವೆ. ಆದರೆ, ಇವುಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇರದ ಕಾರಣ, ಇವುಗಳನ್ನು ಬಯಲಿನಲ್ಲಿ ಸುಡುವುದು ಸಾಮಾನ್ಯವಾಗಿತ್ತು. ಬೆಂಗಳೂರಿನ ಒಟ್ಟು PM2.5 ಮಾಲಿನ್ಯದಲ್ಲಿ ಶೇ.11 ರಷ್ಟು ಪಾಲು ಈ ರೀತಿ ತ್ಯಾಜ್ಯ ಸುಡುವುದರಿಂದಲೇ ಆಗುತ್ತಿದ್ದು, ವಾಹನ ಮತ್ತು ಕೈಗಾರಿಕೆಗಳ ನಂತರ ಇದು ನಗರದ ಮೂರನೇ ಅತಿದೊಡ್ಡ ಮಾಲಿನ್ಯ ಮೂಲವಾಗಿದೆ. ಸ್ವಚ್ಛತಾ ಕಾರ್ಮಿಕರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಇದನ್ನು ನಿರ್ವಹಿಸುತ್ತಿದ್ದರು. ನಿಯೋ ಸ್ಯಾನ್ ಈ ಸಮಸ್ಯೆಯನ್ನು ಪರಿಸರ ಸಂರಕ್ಷಣೆ ಮತ್ತು ಮಹಿಳಾ ಸಬಲೀಕರಣದ ದೃಷ್ಟಿಕೋನದಿಂದ ಪರಿಹರಿಸುತ್ತಿದ್ದು, ಸಾರ್ವಜನಿಕ ಆರೋಗ್ಯ, ಕಾರ್ಮಿಕರ ಘನತೆ ಮತ್ತು ಶುದ್ಧ ಗಾಳಿಯ ನಡುವಿನ ಅಂತರವನ್ನು ತುಂಬುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/bengaluru-waste-problem-gets-a-boost-as-neo-san-machine-enables-on-site-garbage-disposal/articleshow-g25plca"/>
        </item>
        <item>
            <title><![CDATA[14 ಸಚಿವರ ಸೇರ್ಪಡೆ ಕುರಿತು ದೆಹಲಿಯಲ್ಲಿ ಮತ್ತೊಂದು ಸುತ್ತಿನ ಮೀಟಿಂಗ್, ಯಾರು ಹೆಸರು ಫೈನಲ್?]]></title>
            <link>https://kannada.asianetnews.com/state/dk-shivakumar-cabinet-expansion-fresh-delhi-meeting-signals-induction-of-14-ministers/articleshow-fa76eal</link>
            <guid isPermaLink="true">https://kannada.asianetnews.com/state/dk-shivakumar-cabinet-expansion-fresh-delhi-meeting-signals-induction-of-14-ministers/articleshow-fa76eal</guid>
            <pubDate>Tue, 02 Jun 2026 21:49:25 +0530</pubDate>
            <description><![CDATA[&lt;p&gt;ಕರ್ನಾಟಕ ಮುಖ್ಯಮಂತ್ರಿಯಾಗಿ ನಾಳೆ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಡಿಕೆಶಿ ಜೊತೆ ಸಚಿವ ಸಂಪುಟ ಸೇರುತ್ತಿರುವ ಕುರಿತು ಇದೀಗ ಮತ್ತೊಂದು ಸುತ್ತಿನ ಮೀಟಿಂಗ್ ನಡೆಯುತ್ತಿದೆ. 14+1 ಆಯ್ಕೆ ಕುರಿತು ರಾಹುಲ್ ನೀಡಿದ ಸೂಚನೆ ಏನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswed6j5e4c3sbkmpr1saqt7,imgname-whatsapp-image-2026-05-30-at-5.58.08-pm-1780144839237.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ (ಜೂ.02) &lt;/strong&gt;ಕರ್ನಾಟಕ ಹೊಸ ಸಂಪುಟದಲ್ಲಿ ಯಾರು ಸಚಿವರಾಗಿ ಮುಂದುವರಿಯುತ್ತಾರೆ, ಯಾರಿಗೆ ಕೊಕ್? ನೀಡಲಾಗುತ್ತದೆ ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ. ನಾಳೆ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಬಳಿಕ ಶಾಸಕಾಂಗ ಪಕ್ಷದಲ್ಲಿ ಡಿಕೆ ಶಿವಕುಮಾರ್ ನಾಯಕನಾಗಿ ಆಯ್ಕೆಯಾಗಿದ್ದರು. ಇದೀಗ ಡಿಕೆ ಶಿವಕುಮಾರ್ ಸಂಪುಟದಲ್ಲಿ ಯಾರೆಗೆಲ್ಲಾ ಮಂತ್ರಿಭಾಗ್ಯ ಅನ್ನೋ ಚರ್ಚೆ ಅಂತಿಮ ಘಟ್ಟ ತಲುಪಿದೆ. ದೆಹಲಿಯಲ್ಲಿ ಇದೀಗ ಮತ್ತೊಂದು ಸುತ್ತಿನ ಮೀಟಿಂಗ್ ಆರಂಭಗೊಂಡಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಮೀಟಿಂಗ್ ನಡೆಸುತ್ತಿದೆ.&lt;/p&gt;&lt;h2&gt;ಪರಮೇಶ್ವರ್&zwnj;ಗೆ ಡಿಸಿಎಂ ಸ್ಥಾನದ ಬಗ್ಗೆ ಚರ್ಚೆ&lt;/h2&gt;&lt;p&gt;ಈ ಮಹತ್ವದ ಮೀಟಿಂಗ್&zwnj;ನಲ್ಲಿ ಡಾ.ಜಿ ಪರಮೇಶ್ವರ್&zwnj;ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಖಾತೆ ನಿಭಾಯಿಸಿದ ಪರಮೇಶ್ವರ್&zwnj;ಗೆ ಖಾತೆ ಬದಲಾಯಿಸಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.&lt;/p&gt;&lt;h2&gt;14 ಮಂದಿ ಸಂಪುಟ ಸೇರ್ಪಡೆದೆ ಸಿದ್ದರಾಮಯ್ಯ ಪಟ್ಟ&lt;/h2&gt;&lt;p&gt;ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಸಂಪುಟ ಚರ್ಚೆಯಲ್ಲಿ ಸಿದ್ದರಾಮಯ್ಯ ಕೆಲ ಸೂಚನೆ ನೀಡಿದ್ದಾರೆ. 14 ಮಂದಿ ಸೇರ್ಪಡೆಯಾಗಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಆದರೆ 9 ಮಂದಿಗೆ ಮಾತ್ರ ಅವಕಾಶ ಎಂದು ಡಿಕೆ ಶಿವಕುಮಾರ್ ವಾದ ಮಂಡಿಸಿದ್ದಾರೆ. ಹೀಗಾಗಿ ಚರ್ಚೆ ಇದೀಗ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿದೆ.&lt;/p&gt;&lt;h2&gt;ರಾಹುಲ್ ಗಾಂಧಿ ನೀಡಿದ ಸೂಚನೆಗಳೇನು?&lt;/h2&gt;&lt;p&gt;ಡಿಕೆ ಶಿವಕುಮಾರ್ ಸಂಪುಟ ಸೇರ್ಪಡೆ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ 5 ಹೊಸ ಮುಖಗಳಿಗೆ ಅವಕಾಶ ನೀಡಲು ಸೂಚಿಸಿದ್ದಾರೆ. ಇತ್ತ 14+1 ಆಯ್ಕೆಯಲ್ಲಿ 5 ಹೊಸಬರು ಇರಬೇಕು ಎಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಪಟ್ಟು ಹಿಡಿದಂತೆ 14 ಮಂದಿ ಮೊದಲ ಹಂತದಲ್ಲಿ ಸಂಪುಟ ಸೇರುವ ಸಾಧ್ಯತೆ ಇದೆ.&lt;/p&gt;&lt;h2&gt;ಡಿಕೆ ಶಿವಕುಮಾರ್ ಕ್ಯಾಬಿನೆಟ್ ಸೇರುವ ಸಂಭಾವ್ಯರ ಪಟ್ಟಿ&lt;/h2&gt;&lt;ul&gt; &lt;li&gt;ಡಾ.ಜಿ ಪರಮೇಶ್ವರ&lt;/li&gt; &lt;li&gt;ಕೆಜೆ ಜಾರ್ಜ್&lt;/li&gt; &lt;li&gt;ಪ್ರಿಯಾಂಕ ಖರ್ಗೆ&lt;/li&gt; &lt;li&gt;ಎಂಬಿ ಪಾಟೀಲ್&lt;/li&gt; &lt;li&gt;ಸತೀಶ್ ಜಾರಕಿಹೊಳಿ&lt;/li&gt; &lt;li&gt;ಕೃಷ್ಣ ಬೈರೆಗೌಡ&lt;/li&gt; &lt;li&gt;ರಾಮಲಿಂಗಾ ರೆಡ್ಡಿ&lt;/li&gt; &lt;li&gt;ಯುಟಿ ಖಾದರ್&lt;/li&gt; &lt;li&gt;ಯತೀಂದ್ರ ಸಿದ್ದರಾಮಯ್ಯ&lt;/li&gt; &lt;li&gt;ಭೈರತಿ ಸುರೇಶ್&lt;/li&gt; &lt;li&gt;ಈಶ್ವರ ಖಂಡ್ರೆ&lt;/li&gt;&lt;/ul&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/dk-shivakumar-cabinet-expansion-fresh-delhi-meeting-signals-induction-of-14-ministers/articleshow-fa76eal"/>
        </item>
        <item>
            <title><![CDATA[ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಿರುವುದು‌ ನನ್ನ ಅದೃಷ್ಟ: ಶಾಸಕ ಇಕ್ಬಾಲ್ ಹುಸೇನ್]]></title>
            <link>https://kannada.asianetnews.com/karnataka-districts/dk-shivakumar-becoming-cm-is-our-luck-ramanagara-mla-iqbal-hussain-gvd/articleshow-7mkzg5t</link>
            <guid isPermaLink="true">https://kannada.asianetnews.com/karnataka-districts/dk-shivakumar-becoming-cm-is-our-luck-ramanagara-mla-iqbal-hussain-gvd/articleshow-7mkzg5t</guid>
            <pubDate>Tue, 02 Jun 2026 21:48:59 +0530</pubDate>
            <description><![CDATA[&lt;p&gt;ರಾಮನಗರ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ತರಲು ನನ್ನನ್ನು ಆಯ್ಕೆ ಮಾಡಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನ್ನ&zwnj; ಪಾಲಿನ&zwnj; ಅದೃಷ್ಟ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq9jbccfv1jtq5pbcr3wq8xd,imgname-mla-iqbal-hussain-dk-shivakumar-1777363956111.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜೂ.02):&lt;/strong&gt; ರಾಮನಗರ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ತರಲು ನನ್ನನ್ನು ಆಯ್ಕೆ ಮಾಡಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನ್ನ&zwnj; ಪಾಲಿನ&zwnj; ಅದೃಷ್ಟ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಸಹಕಾರದಿಂದ ಕ್ಷೇತ್ರದಲ್ಲಿ ಹಲವು ಕೆಲಸಗಳು ನಡೆದಿವೆ. ಮುಂದುವರಿದ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಸಾಕಾರವಾಗಲಿದ್ದು, ರಾಜ್ಯದ ಎಲ್ಲ ವರ್ಗದ ಜನರ ಬಗ್ಗೆ ಚಿಂತನೆ, ದೂರದೃಷ್ಟಿತ್ವ ಇಟ್ಟುಕೊಂಡಿರುವ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಉತ್ತಮ ಆಡಳಿತ ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.&lt;/p&gt;&lt;p&gt;ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕಿರುವುದು ಜಿಲ್ಲೆಯ ಜನರ ಸಂತಸ ಹೆಚ್ಚಿಸಿರುವುದು ಒಂದೆಡೆಯಾದರೆ, ಜಿಲ್ಲೆಯ ಹಿರಿಮೆಯೂ ಸಹ ಹೆಚ್ಚಿಸಿದೆ. ಡಿಕೆ ಬ್ರದರ್ ಕನಸು ನಮ್ಮ&zwnj; ಕನಸಾಗಿದೆ. ದೇಶದೆಲ್ಲೆಡೆ ಅವರದೇ ಆದ ಅಭಿಮಾನಿಗಳ ಬಳಗವಿದ್ದು, ಅವರಿಗೂ ಮುಖ್ಯಮಂತ್ರಿ ಹುದ್ದೆ ಸಿಕ್ಕಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಮನಗರ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಳ್ಳಲಿದ್ದು, ನಗರದಲ್ಲಿ ಶೇಕಡ 70ರಷ್ಟು ಭಾಗ ಯುಜಿಡಿ ಕೆಲಸ ಆಗಬೇಕಿದೆ. ಇದಕ್ಕಾಗಿ 300 ಕೋಟಿ ರುಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇನ್ನು ರಸ್ತೆ, ಚರಂಡಿಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣದಂತಹ ಹತ್ತು ಹಲವು ಅಭಿವೃದ್ಧಿ ಕೆಲಸಗಳು ನಡೆಯಬೇಕಿದ್ದು, ಅವೆಲ್ಲವೂ ಇನ್ನೆರೆಡು ವರ್ಷಗಳಲ್ಲಿ ಪೂರ್ಣಗೊಂಡು ಕ್ಷೇತ್ರದ ಚಿತ್ರಣ ಬದಲಾಗಲಿದೆ ಎಂದು ಹೇಳಿದರು.&lt;/p&gt;&lt;p&gt;ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಆಶೀರ್ವಾದದಿಂದ ಜಿಲ್ಲೆಯ ಜನರ ಕನಸಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಚಾಲನೆ ಸಿಕ್ಕಿದೆ. ನಗರದಲ್ಲಿ ಕುಡಿಯುವ ನೀರು, ಸೂರು ಕಲ್ಪಿಸಲು 300 ಎಕರೆಗೂ ಹೆಚ್ಚು ಸರ್ಕಾರಿ ಜಮೀನು ಗುರುತಿಸಿರುವುದು, ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ, ಸಾಗುವಳ ಚೀಟಿಗಳ ವಿತರಣೆ, ಸೇತುವೆಗಳ ನಿರ್ಮಾಣ, ಕೆರೆ ತುಂಬಿಸುವುದು, ಅರ್ಕಾವತಿ&zwnj; ನದಿ ದಂಡೆಯಲ್ಲಿ ಪಾರ್ಕ್ ನಿರ್ಮಾಣದಂತಹ ಹತ್ತು ಹಲವು ಯೋಜನೆಗಳು ಕ್ಷೇತ್ರದಲ್ಲಿ ಸಾಕಾರವಾಗುತ್ತಿವೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಅಪಪ್ರಚಾರಗಳಿಗೆ ತಲೆಕೆಡಿಸಿಕೊಳ್ಳುವುದು ಬೇಡ&lt;/strong&gt;&lt;/h2&gt;&lt;p&gt;ರಾಮನಗರದ ಇತಿಹಾಸ ಉಳ್ಳ ಅರ್ಕೇಶ್ವರ ದೇವಾಲಯ, ಪೀರನ್ ಷಾ ವಲಿ ದರ್ಗಾ ಹಾಗೂ ಜನವಸತಿ ಪ್ರದೇಶಗಳನ್ನು ಉಳಿಸಿಕೊಂಡು ಅರ್ಕಾವತಿ ನದಿ ದಂಡೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ನಾನೊಬ್ಬ ಜನರ ಪ್ರತಿನಿಧಿಯಾಗಿದ್ದು, ಜನರಿಗೆ ವಿರುದ್ಧವಾದ ಕೆಲಸ ಮಾಡುವುದಿಲ್ಲ. ದೇವಾಲಯ ಮತ್ತು ದರ್ಗಾಕ್ಕೆ ಅನುದಾನ ತಂದುಕೊಟ್ಟು ಅಭಿವೃದ್ಧಿ ಮಾಡುತ್ತಿದ್ದೇನೆ. ಕೆಲವರು ಪ್ರಚಾರಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಅದಕ್ಕೆಲ್ಲ ನಾನು ತಲೆ&zwnj;ಕಡೆಸಿಕೊಳ್ಳುವುದಿಲ್ಲ. ಸಾರ್ವಜನಿಕರು ಆ ವಿಷಯದ ಬಗ್ಗೆ ತಲೆ&zwnj;ಕೆಡಿಸಿಕೊಳ್ಳುವುದು ಬೇಡ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dk-shivakumar-becoming-cm-is-our-luck-ramanagara-mla-iqbal-hussain-gvd/articleshow-7mkzg5t"/>
        </item>
        <item>
            <title><![CDATA[Viral Video: ಐಫೆಲ್ ಟವರ್ ಮುಂದೆ ಭಾರತೀಯ ಮಹಿಳೆಯರ ಸೀರೆ ಕ್ಯಾಟ್‌ವಾಕ್: ಡ್ಯಾನ್ಸ್‌ಗಿಂತ ಇದೇ ಚೆಂದ ಅನ್ನೋದಾ!]]></title>
            <link>https://kannada.asianetnews.com/viral/indian-women-saree-catwalk-eiffel-tower-viral-video-france-gvd/articleshow-fonc4g6</link>
            <guid isPermaLink="true">https://kannada.asianetnews.com/viral/indian-women-saree-catwalk-eiffel-tower-viral-video-france-gvd/articleshow-fonc4g6</guid>
            <pubDate>Tue, 02 Jun 2026 21:26:00 +0530</pubDate>
            <description><![CDATA[&lt;p&gt;ಈಗಿನ ಕಾಲದಲ್ಲಿ ಟೂರಿಗೆ ಹೋದರೆ ಅಲ್ಲಿ ಒಂದು ರೀಲ್ಸ್ ಮಾಡೋದು ಕಾಮನ್ ಆಗಿದೆ. ಅದರಲ್ಲೂ ಡ್ಯಾನ್ಸ್ ರೀಲ್ಸ್ ಮಾಡೋದು ಈಗಿನ ಟ್ರೆಂಡ್. ಆದರೆ, ಇಂಥಾ ರೀಲ್ಸ್&zwnj;ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋದೇ ಹೆಚ್ಚು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt4gjfn7w9gargywd4xk0cw3,imgname-xgg-1780415544999.png" type="image/jpeg" height="390" width="690"/>
            <content:encoded><![CDATA[&lt;p&gt;ಫ್ರಾನ್ಸ್&zwnj;ನ ಐಫೆಲ್ ಟವರ್ ಮುಂದೆ ಸೀರೆಯುಟ್ಟು ಭಾರತೀಯ ಮಹಿಳೆಯರ ಗುಂಪೊಂದು ಮಾಡಿದ 'ಕ್ಯಾಟ್&zwnj;ವಾಕ್' ರೀಲ್ ಸಖತ್ ವೈರಲ್ ಆಗಿದೆ. ಬೇರೆ ಪ್ರವಾಸಿಗರ ರೀಲ್&zwnj;ಗಳಂತೆ ಇಲ್ಲದೆ, ಇವರ ಮುಗ್ಧ ಪರ್ಫಾರ್ಮೆನ್ಸ್&zwnj;ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಭಾರತೀಯ ಸಂಸ್ಕೃತಿ ಮತ್ತು ಉಡುಗೆಯ ಬಗ್ಗೆ ಒಳ್ಳೆಯ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಈಗಿನ ಕಾಲದಲ್ಲಿ ಟೂರಿಗೆ ಹೋದರೆ ಅಲ್ಲಿ ಒಂದು ರೀಲ್ಸ್ ಮಾಡೋದು ಕಾಮನ್ ಆಗಿದೆ. ಅದರಲ್ಲೂ ಡ್ಯಾನ್ಸ್ ರೀಲ್ಸ್ ಮಾಡೋದು ಈಗಿನ ಟ್ರೆಂಡ್. ಆದರೆ, ಇಂಥಾ ರೀಲ್ಸ್&zwnj;ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋದೇ ಹೆಚ್ಚು. ಯಾಕಂದ್ರೆ, ಪ್ರತಿದಿನ ಸಾವಿರಾರು ರೀಲ್ಸ್ ಅಪ್ಲೋಡ್ ಆಗುತ್ತಿದ್ದು, ಎಲ್ಲವೂ ಒಂದೇ ರೀತಿ ಇರುತ್ತವೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಾರೆ. ಇಂತಹ ಸನ್ನಿವೇಶದ ನಡುವೆಯೇ, ಫ್ರಾನ್ಸ್&zwnj;ಗೆ ಪ್ರವಾಸಕ್ಕೆ ಹೋಗಿದ್ದ ಭಾರತೀಯ ಮಹಿಳೆಯರ ಗುಂಪೊಂದು ಐಫೆಲ್ ಟವರ್ ಮುಂದೆ ಮಾಡಿದ ಒಂದು ರೀಲ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.&lt;/p&gt;&lt;p&gt;&lt;strong&gt;ಸೀರೆಯುಟ್ಟು ಕ್ಯಾಟ್&zwnj;ವಾಕ್&lt;/strong&gt;&lt;/p&gt;&lt;p&gt;ಸೀರೆ ಉಟ್ಟುಕೊಂಡು ಐಫೆಲ್ ಟವರ್ ಮುಂದೆ ಭಾರತೀಯ ಮಹಿಳೆಯರು ಮಾಡಿದ ಕ್ಯಾಟ್&zwnj;ವಾಕ್ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದ ಅನೇಕರು 'ಶುದ್ಧ ಮುಗ್ಧತೆ' (Pure Innocence) ಎಂದು ಕಾಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿರುವ ಎಲ್ಲರೂ ಮಧ್ಯವಯಸ್ಕ ಮಹಿಳೆಯರು. ವಿಶ್ವದ ಅತ್ಯಂತ ಪ್ರಸಿದ್ಧ ಸ್ಥಳವೊಂದರ ಮುಂದೆ ಒಬ್ಬೊಬ್ಬರಾಗಿ ಸರದಿಯಂತೆ ಕ್ಯಾಮರಾ ಮುಂದೆ ಕ್ಯಾಟ್&zwnj;ವಾಕ್ ಮಾಡುವುದನ್ನು ನೋಡಬಹುದು.&lt;/p&gt;&lt;p&gt;ಬೆಂಗಳೂರು ಮೂಲದ ಸೀರೆ ಬೊಟಿಕ್ 'ಧಾನ್ವಿ ಸಿಲ್ಕ್ಸ್' ಈ ಕ್ಲಿಪ್ ಅನ್ನು ಮೊದಲು ಹಂಚಿಕೊಂಡಿದೆ. ಈ ವಿಡಿಯೋ ಇನ್&zwnj;ಸ್ಟಾಗ್ರಾಂನಿಂದ ಎಕ್ಸ್&zwnj; (ಹಿಂದಿನ ಟ್ವಿಟರ್) ಮತ್ತು ಇತರ ಪ್ಲಾಟ್&zwnj;ಫಾರ್ಮ್&zwnj;ಗಳಿಗೆ ವೇಗವಾಗಿ ಹರಡಿತು. ವಿದೇಶದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವುದು ಮತ್ತು ಪ್ರವಾಸಿಗರ ನಡವಳಿಕೆಯ ಬಗ್ಗೆ ಈ ವಿಡಿಯೋ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Pure Mysore Silk by Dhanvi Silks (@pure_mysore_silk)&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಸೀರೆಯೇ ಇಲ್ಲಿ ಸ್ಟಾರ್&lt;/strong&gt;&lt;/h2&gt;&lt;p&gt;ವಿದೇಶ ಪ್ರವಾಸದಲ್ಲಿ ಭಾರತೀಯ ಪ್ರವಾಸಿಗರು ಗಲಾಟೆ ಮಾಡ್ತಾರೆ, ಬೇರೆಯವರಿಗೆ ತೊಂದರೆ ಕೊಡ್ತಾರೆ ಅನ್ನೋ ಒಂದು ಮಾತು ಸೋಶಿಯಲ್ ಮೀಡಿಯಾದಲ್ಲಿ ಇದೆ. ಇತ್ತೀಚೆಗೆ ಇಂತಹ ಹಲವು ವಿಡಿಯೋಗಳು ವೈರಲ್ ಆಗಿದ್ದವು. ಉದಾಹರಣೆಗೆ, ವಿಯೆಟ್ನಾಂ ಏರ್&zwnj;ಪೋರ್ಟ್&zwnj;ನಲ್ಲಿ ಕೆಲವರು 'ಗರ್ಬಾ' ನೃತ್ಯ ಮಾಡಿದ್ದ ವಿಡಿಯೋಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ, ಈ ಹೊಸ ವಿಡಿಯೋ ಎಲ್ಲರ ಮನಗೆದ್ದಿದೆ.&lt;/p&gt;&lt;p&gt;ಯಾರೊಬ್ಬರಿಗೂ ತೊಂದರೆ ಕೊಡದೆ, ತಮ್ಮ ಖುಷಿಯನ್ನು ವ್ಯಕ್ತಪಡಿಸಿದ ಈ 'ಇಂಡಿಯನ್ ಅಮ್ಮಂದಿರು' ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ಹಲವರು ಭಾರತೀಯ ಸಂಸ್ಕೃತಿ ಮತ್ತು ಉಡುಗೆಯನ್ನು ಹೊಗಳಿ ಬರೆದಿದ್ದಾರೆ. ಅದರಲ್ಲೂ, ಬಣ್ಣಬಣ್ಣದ ಸೀರೆಗಳು ನೋಡುಗರನ್ನು ಹೆಚ್ಚು ಆಕರ್ಷಿಸಿವೆ ಎಂಬುದು ಕಾಮೆಂಟ್&zwnj;ಗಳಿಂದ ಸ್ಪಷ್ಟವಾಗಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/viral/indian-women-saree-catwalk-eiffel-tower-viral-video-france-gvd/articleshow-fonc4g6"/>
        </item>
        <item>
            <title><![CDATA[ಕಾಂಗ್ರೆಸ್​ನ​ 72 ವರ್ಷಗಳ ದಾಖಲೆ ಮುರಿದು ಬೀಗಿದ ಪ್ರಧಾನಿ ನರೇಂದ್ರ  ಮೋದಿ: ಏನಿದು ರೆಕಾರ್ಡ್​]]></title>
            <link>https://kannada.asianetnews.com/india-news/on-june-10-pm-narendra-modi-makes-history-as-the-longest-serving-elected-prime-minister-in-india-suc/articleshow-2loqz1c</link>
            <guid isPermaLink="true">https://kannada.asianetnews.com/india-news/on-june-10-pm-narendra-modi-makes-history-as-the-longest-serving-elected-prime-minister-in-india-suc/articleshow-2loqz1c</guid>
            <pubDate>Tue, 02 Jun 2026 20:43:38 +0530</pubDate>
            <description><![CDATA[ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 10 ರಂದು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸತತ ಅತಿ ದೀರ್ಘ ಅವಧಿಯ ಪ್ರಧಾನಿ ಎಂಬ ದಾಖಲೆಯನ್ನು ಮುರಿಯಲಿದ್ದಾರೆ. 2014ರಲ್ಲಿ ಅಧಿಕಾರ ವಹಿಸಿಕೊಂಡ ಮೋದಿ, 4,397 ದಿನಗಳ ನೆಹರೂ ಅವರ ನಿರಂತರ ಅಧಿಕಾರಾವಧಿಯನ್ನು ಮೀರಿಸಲಿದ್ದು, ಈ ಮೂಲಕ ಭಾರತೀಯ ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt4eb1z7gqe78hjk1695rzda,imgname-nehru-and-pm-modi-1780413204455.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಇದಾಗಲೇ ಕೆಲವು ದಾಖಲೆಗಳನ್ನು ಬರೆದಿದ್ದಾರೆ. ಅದೇ ರೀತಿ ಈಗ ಕಾಂಗ್ರೆಸ್​​ನ 72 ವರ್ಷಗಳ ಇತಿಹಾಸವನ್ನು ಮತ್ತೊಮ್ಮೆ ಮೋದಿ ಮುರಿಯಲಿದ್ದಾರೆ. ಇದು ದೇಶದ ಮೊದಲ ಪ್ರಧಾನಿ ಜವಾಹರಲಾಲ ನೆಹರೂ ಅವರ ಹೆಸರಿನಲ್ಲಿ ಇರುವ ರೆಕಾರ್ಡ್​ ಆಗಿದೆ. ಇದೇ 10ರಂದು ನರೇಂದ್ರ ಮೋದಿ ಅವರು ಈ ದಾಖಲೆ ಮುರಿಯಲಿದ್ದಾರೆ. ಈ ಮೂಲಕ ಭಾರತೀಯ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ.&lt;/p&gt;&lt;h2&gt;&lt;strong&gt;ಅತಿ ದೀರ್ಘ ಅವಧಿಯ ಪ್ರಧಾನಿ&lt;/strong&gt;&lt;/h2&gt;&lt;p&gt;ಅದೇನೆಂದರೆ, ಇಲ್ಲಿಯವರೆಗೆ ಭಾರತದ ಸತತ ಅತಿ ದೀರ್ಘ ಅವಧಿಯ ಪ್ರಧಾನಿ ಎಂಬ ಖ್ಯಾತಿ ಇದದ್ದು ಜವಾಹರಲಾಲ ನೆಹರೂ ಅವರಿಗೆ. 1952 ರ ಮೇ 13ರಂದು ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ನೆಹರು ದೇಶದ ಮೊದಲ ಚುನಾಯಿತ ಪ್ರಧಾನಿಯಾದರು. ನಂತರ ಅವರು ಮೇ 27, 1964 ರಂದು ನಿಧನರಾಗುವವರೆಗೂ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ, ಅವರ ಅಧಿಕಾರಾವಧಿ 4,397 ದಿನಗಳು. ಈ ದಾಖಲೆ ಇದುವರೆಗೆ ಯಾರೂ ಮುರಿದಿರಲಿಲ್ಲ. ಇದೀಗ ಜೂನ್​ 10ರಂದು ಆ ದಾಖಲೆಯನ್ನು ನರೇಂದ್ರ ಮೋದಿ ಮುರಿಯಲಿದ್ದಾರೆ. 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ ಅವರು, ಜೂನ್ 9, 2026 ರಂದು ಪ್ರಧಾನಿಯಾಗಿ 4,397 ದಿನಗಳು ಮುಗಿಯುತ್ತವೆ. ಈ ಹಿನ್ನೆಲೆಯಲ್ಲಿ ಸತತವಾಗಿ ಪ್ರಧಾನಿಯಾಗಿರುವ ದಾಖಲೆಯನ್ನು ಜೂನ್​ 10 ಮುರಿಯಲಿದ್ದಾರೆ.&lt;/p&gt;&lt;h3&gt;&lt;strong&gt;ಇಂದಿರಾಗಾಂಧಿ ದಾಖಲೆ ಮುರಿದಿದ್ದರು&lt;/strong&gt;&lt;/h3&gt;&lt;p&gt;ಅಷ್ಟಕ್ಕೂ ಇದಾಗಲೇ ಮೋದಿ ಅವರು, 2025ರ ಜುಲೈನಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ 4,077 ದಿನಗಳ ದಾಖಲೆಯನ್ನು ಮುರಿದಿದ್ದರು. ಆಗ ನೆಹರೂ ಬಳಿಕ ಇಂದಿರಾಗಾಂಧಿ ಹೆಚ್ಚು ಅವಧಿಯ ಪ್ರಧಾನಿ ಎಂಬ ಸ್ಥಾನವನ್ನು ಮೋದಿ ಕಸಿದುಕೊಂಡು ಎರಡನೆಯ ಸ್ಥಾನಕ್ಕೆ ಹೋಗಿದ್ದರು. ಈಗ 2ರಿಂದ 1ನೇ ಸ್ಥಾನಕ್ಕೆ ಏರಲಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ದೀರ್ಘ ಅವಧಿ ನೆಹರು ಹೆಸರಲ್ಲಿ&lt;/strong&gt;&lt;/h3&gt;&lt;p&gt;ಸೆಪ್ಟೆಂಬರ್ 2, 1946 ರಂದು, ನೆಹರು ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರವನ್ನು ರಚಿಸಲಾಯಿತು, ಅದರಲ್ಲಿ ಅವರು ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ಸ್ಥಾನವು ಪ್ರಾಯೋಗಿಕವಾಗಿ ಪ್ರಧಾನ ಮಂತ್ರಿ ಹುದ್ದೆಗೆ ಸಮಾನವಾಗಿತ್ತು. ಆಗಸ್ಟ್ 15, 1947 ರಂದು ಭಾರತ ಸ್ವಾತಂತ್ರ್ಯ ಪಡೆದಾಗ, ಆಗಿನ ಗವರ್ನರ್-ಜನರಲ್ ಲಾರ್ಡ್ ಮೌಂಟ್ ಬ್ಯಾಟನ್, ನೆಹರು ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದನ್ನು ಗಣನೆಗೆ ತೆಗೆದುಕೊಂಡರೆ, ಒಟ್ಟಾರೆಯಾಗಿ ಇನ್ನೂ ಜವಾಹರಲಾಲ್ ನೆಹರು ಅವರೇ ನಂಬರ್​ 1 ಆಗಿದ್ದಾರೆ. ಅವರ ಒಟ್ಟು ಅಧಿಕಾರಾವಧಿಯು ಸುಮಾರು 6,131 ದಿನಗಳಾಗಿವೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/on-june-10-pm-narendra-modi-makes-history-as-the-longest-serving-elected-prime-minister-in-india-suc/articleshow-2loqz1c"/>
        </item>
        <item>
            <title><![CDATA[ಒಂದು ಸಿಗರೇಟ್‌ಗಿಂತಲೂ ಕಡಿಮೆ ಬೆಲೆಗೆ ಬ್ರ್ಯಾಂಡೆಡ್ ಸೈಕಲ್; 88 ವರ್ಷಗಳ ಹಿಂದಿನ 'ಸೈಕಲ್ ಖರೀದಿ ಬಿಲ್' ವೈರಲ್!]]></title>
            <link>https://kannada.asianetnews.com/viral/88-year-old-bicycle-bill-viral-cycle-with-light-and-bell-for-just-rs-18-in-1934-sat/articleshow-q7blgbo</link>
            <guid isPermaLink="true">https://kannada.asianetnews.com/viral/88-year-old-bicycle-bill-viral-cycle-with-light-and-bell-for-just-rs-18-in-1934-sat/articleshow-q7blgbo</guid>
            <pubDate>Tue, 02 Jun 2026 20:37:49 +0530</pubDate>
            <description><![CDATA[&lt;p&gt;ಇಂದಿನ ದಿನಗಳಲ್ಲಿ 18 ರೂ.ಗೆ ಒಂದ ಲೀಟರ್ ಕುಡಿಯುವ ನೀರು, ಒಂದು ಸಿಗರೇಟ್ ಕೂಡ ಬರುವುದಿಲ್ಲ. ಆದರೆ, ಇದೇ 18 ರೂ.ಗೆ ಒಂದು ಹೊಚ್ಚ ಹೊಸ ಬ್ರ್ಯಾಂಡ್ ನ್ಯೂ ಸೈಕಲ್ ಖರೀದಿ ಮಾಡಿದ್ದಾರೆಂದರೆ ನಂಬುತ್ತೀರಾ? ನಂಬಲು ಕಷ್ಟವಾದರೂ 88 ವರ್ಷಗಳ ಹಿಂದೆ ಖರೀದಿಸಿದ ಸೈಕಲ್ ಬಿಲ್ ಇದೀಗ ವೈರಲ್ ಆಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt4dxj53czhz483heb3ec5e7,imgname-90-year-old-bicycle-bill-1780412762274.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ದಿನಗಳಲ್ಲಿ ಒಂದು ಸಿಗರೇಟ್&zwnj;ನ ಬೆಲೆಯೇ ಬರೋಬ್ಬರಿ 20 ರಿಂದ 25 ರೂ. ಬೆಲೆಯಿದೆ. ಒಂದು ಲೀಟರ್ ಕುಡಿಯುವ ನೀರಿನ ಬಾಟಲಿ ಅಥವಾ ಒಂದು ಪ್ಯಾಕೆಟ್ ಬಿಸ್ಕೆಟ್ ಸಿಗುವುದು ಕೂಡ ಕಷ್ಟ. ಅಷ್ಟೇ ಏಕೆ, ಸೈಕಲ್ ಪಂಕ್ಚರ್ ಹಾಕಿಸಬೇಕೆಂದರೂ ಇವತ್ತು 20 ರಿಂದ 30 ರೂಪಾಯಿ ಖರ್ಚಾಗುತ್ತದೆ. ಆದರೆ, 88 ವರ್ಷಗಳ ಹಿಂದೆ ಇದೇ 18 ರೂಪಾಯಿಗೆ ಒಂದು ಬ್ರ್ಯಾಂಡ್ ನ್ಯೂ ಸೈಕಲ್ ಸಿಗುತ್ತಿತ್ತು ಎಂದರೆ ನೀವು ನಂಬುತ್ತೀರಾ? ಹೌದು, ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಒಂದು ಹಳೆಯ ಬಿಲ್ ಈ ಅಚ್ಚರಿಯ ಸತ್ಯವನ್ನು ಬಿಚ್ಚಿಟ್ಟಿದೆ.&lt;/p&gt;&lt;h3&gt;&lt;strong&gt;ವೈರಲ್ ಆದ 1934ರ ಬಿಲ್:&lt;/strong&gt;&lt;/h3&gt;&lt;p&gt;ಇತ್ತೀಚೆಗಷ್ಟೇ 1985ರ ಕಾಲದ ಹೋಟೆಲ್ ಬಿಲ್ ಒಂದು ವೈರಲ್ ಆಗಿತ್ತು. ಅದರಲ್ಲಿ ಶಾಹಿ ಪನೀರ್ ಬೆಲೆ ಕೇವಲ 8 ರೂಪಾಯಿ ಎಂದಿತ್ತು. ಆ ಬೆಲೆ ನೋಡಿಯೇ ಜನ ದಂಗಾಗಿದ್ದರು. ಆದರೆ ಈಗ ಅದಕ್ಕಿಂತಲೂ ಹಳೆಯದಾದ, ಅಂದರೆ 1934ರ ಕಾಲದ ಸೈಕಲ್ ಬಿಲ್ ಒಂದು ಮುನ್ನೆಲೆಗೆ ಬಂದಿದೆ. ಈ ಬಿಲ್ ಅನ್ನು ನೋಡಿದ ನೆಟ್ಟಿಗರು ಕಾಲಚಕ್ರ ಎಷ್ಟು ವೇಗವಾಗಿ ಉರುಳಿದೆ ಮತ್ತು ರೂಪಾಯಿಯ ಮೌಲ್ಯ ಅಂದು ಹೇಗಿತ್ತು ಎಂಬುದನ್ನು ನೆನೆದು ಅಚ್ಚರಿಪಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಬಿಲ್&zwnj;ನಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ಈ ವೈರಲ್ ಬಿಲ್ 1934ರ ಜನವರಿ 7 ರದ್ದು. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ 'ಕುಮುದ್ ಸೈಕಲ್ ವರ್ಕ್ಸ್' (Kumud Cycle Works) ಎಂಬ ಅಂಗಡಿಯಿಂದ ಈ ಸೈಕಲ್ ಖರೀದಿಸಲಾಗಿದೆ. ಬಿಲ್&zwnj;ನಲ್ಲಿ 'ಒಂದು ಚೀಪ್ ಸೈಕಲ್' (One Cheap Cycle) ಎಂದು ಬರೆಯಲಾಗಿದೆ. ಆಶ್ಚರ್ಯವೆಂದರೆ, ಆ ಸೈಕಲ್&zwnj;ನ ಬೆಲೆ ಕೇವಲ 18 ರೂಪಾಯಿ ಮಾತ್ರ! ಅಷ್ಟೇ ಅಲ್ಲ, ಈ 18 ರೂಪಾಯಿಯಲ್ಲಿ ಸೈಕಲ್ ಜೊತೆಗೆ ಒಂದು ಲೈಟ್ ಮತ್ತು ಒಂದು ಬೆಲ್ (ಘಂಟೆ) ಕೂಡ ಸೇರಿದೆ ಎಂಬುದು ಗಮನಾರ್ಹ.&lt;/p&gt;&lt;h2&gt;&lt;strong&gt;ನೆನಪಿನ ಬುತ್ತಿ ಬಿಚ್ಚಿಟ್ಟ ಮೊಮ್ಮಗ:&lt;/strong&gt;&lt;/h2&gt;&lt;p&gt;ಸಂಜಯ್ ಖರೆ ಎಂಬ ಫೇಸ್&zwnj;ಬುಕ್ ಬಳಕೆದಾರರು ಈ ಹಳೆಯ ಬಿಲ್ ಅನ್ನು ಹಂಚಿಕೊಂಡಿದ್ದಾರೆ. 'ಒಂದು ಕಾಲದಲ್ಲಿ ಸೈಕಲ್ ನಮ್ಮ ತಾತನ ಕನಸಾಗಿತ್ತು. ಸೈಕಲ್ ಚಕ್ರದಂತೆ ಕಾಲದ ಚಕ್ರವೂ ಎಷ್ಟು ವೇಗವಾಗಿ ಉರುಳಿದೆ ನೋಡಿ!' ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅಡಿ ನೂರಾರು ಜನರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Just found a 90 yr old bicycle bill, just 18 RsI believe at that time 18 Rs is equivalent to 1800 Rs. Am I Right?#oldbill #Cycle #foundsomethingnew #heritage #olddays pic.twitter.com/Rs7XXcZYUz&lt;/p&gt;&lt;p&gt;&mdash; Pushpit Mehrotra (@pushki3) November 29, 2022&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ನೆಟ್ಟಿಗರ ಪ್ರತಿಕ್ರಿಯೆ:&lt;/strong&gt;&lt;/h3&gt;&lt;p&gt;ಈ ಪೋಸ್ಟ್ ನೋಡಿ ಒಬ್ಬ ಬಳಕೆದಾರರು, '1934ರಲ್ಲಿ ನನ್ನ ತಂದೆ ಜನಿಸಿದ್ದರು, ಈಗ ನನಗೆ ಮೊಮ್ಮಕ್ಕಳಿದ್ದಾರೆ. 1977ರಲ್ಲಿ ನನ್ನ ತಂದೆ ನನಗೆ 240 ರೂಪಾಯಿಗೆ ಸೈಕಲ್ ಕೊಡಿಸಿದ್ದರು' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು '1971ರಲ್ಲಿ ನಾನು 85 ರೂಪಾಯಿಗೆ ಸೈಕಲ್ ಖರೀದಿಸಿದ್ದೆ' ಎಂದು ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಈ ಬಿಲ್ ಕೇವಲ ಒಂದು ಕಾಗದದ ತುಣುಕಲ್ಲ, ಅದು ಅಂದಿನ ಸರಳ ಜೀವನ ಮತ್ತು ಆರ್ಥಿಕ ಸ್ಥಿತಿಯ ಕನ್ನಡಿಯಾಗಿದೆ. ಅಂದು 18 ರೂಪಾಯಿಗೆ ಸಿಗುತ್ತಿದ್ದ ಇಡೀ ಸೈಕಲ್, ಇಂದು ಪಂಕ್ಚರ್ ಹಾಕಿಸಲು ಕೂಡ ಸಾಕಾಗುವುದಿಲ್ಲ ಎಂಬುದು ಬದಲಾದ ಕಾಲಕ್ಕೆ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/88-year-old-bicycle-bill-viral-cycle-with-light-and-bell-for-just-rs-18-in-1934-sat/articleshow-q7blgbo"/>
        </item>
        <item>
            <title><![CDATA[ತಮಿಳುನಾಡಿನಲ್ಲಿ ಮತ್ತೆ ಬಿರುಗಾಳಿ? ವಿಜಯ್ ಸಿಎಂ ಆಗಿರೋ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟ ರೆಡಿ, ಅಜಿತ್ ಅಲ್ಲ!]]></title>
            <link>https://kannada.asianetnews.com/cine-world/after-thalapathy-vijay-became-the-cm-of-tamil-nadu-strong-rumors-that-the-multi-talented-dhanush-will-join-politics-soon/articleshow-k9d94go</link>
            <guid isPermaLink="true">https://kannada.asianetnews.com/cine-world/after-thalapathy-vijay-became-the-cm-of-tamil-nadu-strong-rumors-that-the-multi-talented-dhanush-will-join-politics-soon/articleshow-k9d94go</guid>
            <pubDate>Tue, 02 Jun 2026 20:36:24 +0530</pubDate>
            <description><![CDATA[&lt;p&gt;ತಮಿಳುನಾಡು ಅಂದ್ರೆ ಅಲ್ಲಿ ಸಿನಿಮಾ ರಾಜಕೀಯದ ಹೆಬ್ಬಾಗಿಲು ಎನ್ನಬಹುದು. ಬೆಳ್ಳಿಪರದೆಯ ಮೇಲೆ ಮಿಂಚಿದವರು ಕೋಟೆ ಕಟ್ಟಿ ಆಳೋದು ಅಲ್ಲಿನ ಹಳೆಯ ಸಂಪ್ರದಾಯ. ದಳಪತಿ ವಿಜಯ್ ಸಿಎಂ ಆಗಿ ದೊಡ್ಡ ಸಂಚಲನ ಮೂಡಿಸಿದ ಬೆನ್ನಲ್ಲೇ ಈಗ ಮತ್ತೊಬ್ಬ ಸ್ಟಾರ್ ನಟನ ಹೆಸರು ಕೇಳಿಬರುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt4cznvfbazht1pnz3f48cv1,imgname-cm-vijay-dhanush-1780411783023.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾಲಿವುಡ್&zwnj;ನಲ್ಲಿ ಬಿರುಗಾಳಿ: ವಿಜಯ್ ಬೆನ್ನಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಧನುಷ್? ತಂದೆಯ ಮಾತಿನಲ್ಲಿದೆ ಬಿಗ್ ಸುಳಿವು!&lt;/strong&gt;&lt;/p&gt;&lt;p&gt;ತಮಿಳುನಾಡು ಅಂದ್ರೆ ಅಲ್ಲಿ ಸಿನಿಮಾವೂ ಒಂದು ಧರ್ಮ, ರಾಜಕೀಯವೋ ಒಂದು ಮರ್ಮ! ಬೆಳ್ಳಿಪರದೆಯ ಮೇಲೆ ಮಿಂಚಿದವರು ಕೋಟೆ ಕಟ್ಟಿ ಆಳೋದು ಅಲ್ಲಿನ ಹಳೆಯ ಸಂಪ್ರದಾಯ. ಈಗ ತಾನೇ ದಳಪತಿ ವಿಜಯ್ (Thalapathy Vijay) ತಮ್ಮ ರಾಜಕೀಯ ಇನಿಂಗ್ಸ್ ಆರಂಭಿಸಿ ದೊಡ್ಡ ಸಂಚಲನ ಮೂಡಿಸಿದ್ದಾರೆ. ವಿಜಯ್ ಅವರ ಈ 'ಮಾಸ್ ಎಂಟ್ರಿ'ಯ ಬೆನ್ನಲ್ಲೇ ಈಗ ಮತ್ತೊಬ್ಬ ಸ್ಟಾರ್ ನಟನ ಹೆಸರು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಅವರೇ 'ಕೋಲವರಿ' ಬಾಯ್, ಸಾಲು ಸಾಲು ಹಿಟ್ ಚಿತ್ರಗಳ ಸರದಾರ ಧನುಷ್!&lt;/p&gt;&lt;p&gt;ಅಪ್ಪ ಹಾಕಿದ ಅಡ್ಡಗೋಡೆ ಮೇಲಿನ ದೀಪ!&lt;/p&gt;&lt;p&gt;ಧನುಷ್ (Dhanush) ರಾಜಕೀಯಕ್ಕೆ ಬರ್ತಾರಾ ಅನ್ನೋ ಪ್ರಶ್ನೆಗೆ ಸ್ವತಃ ಅವರ ತಂದೆ, ಹಿರಿಯ ನಿರ್ದೇಶಕ ಕಸ್ತೂರಿ ರಾಜಾ ಅವರು ನೀಡಿರುವ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿದೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, &quot;ಯಾರೇ ಆದರೂ ರಾಜಕೀಯಕ್ಕೆ ಬರಬಹುದು, ಅದು ಅವರ ವೈಯಕ್ತಿಕ ಇಚ್ಛೆ. ಧನುಷ್ ಕೂಡ ಭವಿಷ್ಯದಲ್ಲಿ ರಾಜಕೀಯಕ್ಕೆ ಬರಬಾರದು ಎಂದೇನಿಲ್ಲ. ಬರುವುದಾದರೆ ಬರಲಿ, ನಾವು ಬೇಡ ಅನ್ನಲು ಯಾರು?&quot; ಎಂದು ಹೇಳುವ ಮೂಲಕ ಸಸ್ಪೆನ್ಸ್ ಉಳಿಸಿದ್ದಾರೆ.&lt;/p&gt;&lt;p&gt;ಇದು ಕೇವಲ ತಂದೆಯ ಹಾರೈಕೆಯಲ್ಲ, ಬದಲಾಗಿ ಧನುಷ್ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ವಿಜಯ್ ಅವರು ಪಕ್ಷ ಕಟ್ಟುವ ಮೊದಲೇ ಅಭಿಮಾನಿ ಸಂಘಗಳ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದರು. ಈಗ ಅದೇ ಹಾದಿಯಲ್ಲಿ ಧನುಷ್ ಕೂಡ ತಮ್ಮ ಅಭಿಮಾನಿ ಸಂಘಗಳ ಮೂಲಕ ಸದ್ದಿಲ್ಲದೆ ಬಡವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ನಡೆಯುತ್ತಿರುವ ಈ ಸಮಾಜ ಸೇವೆಗಳು ಬರೀ ಉದಾರತೆಯೋ ಅಥವಾ ಭವಿಷ್ಯದ ವೋಟ್ ಬ್ಯಾಂಕ್ ಗಾಗಿ ನಡೆಯುತ್ತಿರುವ ತಾಲೀಮೋ ಎಂಬ ಚರ್ಚೆ ಶುರುವಾಗಿದೆ.&lt;/p&gt;&lt;h2&gt;ಬಡತನದಿಂದ ಸ್ಟಾರ್&zwnj;ಡಮ್&zwnj;ವರೆಗೆ: ಕಣ್ಣೀರು ತರಿಸುವ ಫ್ಲ್ಯಾಶ್&zwnj;ಬ್ಯಾಕ್!&lt;/h2&gt;&lt;p&gt;ಇದೇ ವೇಳೆ ಕಸ್ತೂರಿ ರಾಜಾ ಅವರು ತಮ್ಮ ಜೀವನದ ಸಂಕಷ್ಟದ ದಿನಗಳನ್ನು ನೆನೆದು ಭಾವುಕರಾದರು. &quot;ಒಂದು ಕಾಲದಲ್ಲಿ ನನ್ನ ಹತ್ತಿರ ತೇನಿಯಿಂದ ಚೆನ್ನೈಗೆ ಬರಲು ಕೇವಲ 50 ರೂಪಾಯಿ ಕೂಡ ಇರಲಿಲ್ಲ. ಅಷ್ಟು ಬಡತನದ ದಿನಗಳನ್ನು ನಾನು ನೋಡಿದ್ದೇನೆ. 19ನೇ ವಯಸ್ಸಿನಲ್ಲೇ ಸಂಸಾರದ ನೊಗ ಹೊತ್ತಿದ್ದೆ. ನನ್ನ ಪತ್ನಿ ವಿಜಯಲಕ್ಷ್ಮಿ ಸಾಥ್ ನೀಡದಿದ್ದರೆ ಇಂದು ನಾನು ಇಲ್ಲಿ ಇರುತ್ತಿರಲಿಲ್ಲ&quot; ಎಂದು ಹಳೆ ದಿನಗಳನ್ನು ಮೆಲುಕು ಹಾಕಿದರು.&lt;/p&gt;&lt;p&gt;ಧನುಷ್ ಕುಟುಂಬ ಇಂದು ಕೇವಲ ಸಿನಿಮಾ ಕುಟುಂಬವಲ್ಲ, ಅದು ಪ್ರತಿಭೆಗಳ ಗಣಿ. ಧನುಷ್ ನಟನೆಯಲ್ಲಿ ಇಂಟರ್ ನ್ಯಾಷನಲ್ ಲೆವೆಲ್ ತಲುಪಿದ್ದರೆ, ಅಣ್ಣ ಸೆಲ್ವರಾಘವನ್ ಕೆಮಿಕಲ್ ಇಂಜಿನಿಯರಿಂಗ್&zwnj;ನಲ್ಲಿ ಗೋಲ್ಡ್ ಮೆಡಲ್ ಪಡೆದು ನಂತರ ನಿರ್ದೇಶನದಲ್ಲಿ ಕ್ರಾಂತಿ ಮಾಡಿದವರು. ಇನ್ನು ಧನುಷ್ ಅವರ ಇಬ್ಬರು ಸಹೋದರಿಯರು ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.&lt;/p&gt;&lt;h3&gt;'ತುಳ್ಳುವದೋ ಇಳಮೈ ಮಹಿಮೆ!&lt;/h3&gt;&lt;p&gt;ಒಟ್ಟಿನಲ್ಲಿ, 'ತುಳ್ಳುವದೋ ಇಳಮೈ' ಚಿತ್ರದಿಂದ ಶುರುವಾದ ಈ ಕುಟುಂಬದ ಪಯಣ ಈಗ ರಾಜಕೀಯದ ಹೊಸ್ತಿಲಿಗೆ ಬಂದು ನಿಂತಿದೆ. ಧನುಷ್ ರಾಜಕೀಯಕ್ಕೆ ಬಂದರೆ ಅದು ತಮಿಳುನಾಡು ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡುವುದಂತೂ ಖಚಿತ. ಧನುಷ್ ಅವರ ಈ 'ಪೊಲಿಟಿಕಲ್ ಮೂವ್' ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ!&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/after-thalapathy-vijay-became-the-cm-of-tamil-nadu-strong-rumors-that-the-multi-talented-dhanush-will-join-politics-soon/articleshow-k9d94go"/>
        </item>
        <item>
            <title><![CDATA[ಅಮೆರಿಕದ ಕಠಿಣ ನಿಯಮಗಳಿಂದ ಬೇಸತ್ತು 12 ವರ್ಷಗಳ ಜೀವನ ತೊರೆದು: ಭಾರತಕ್ಕೆ ಮರಳಿದ ಸ್ಟಾರ್ಟ್ಅಪ್ ಸಹ-ಸಂಸ್ಥಾಪಕ!]]></title>
            <link>https://kannada.asianetnews.com/viral/tired-of-optimizing-for-visa-legal-status-indian-tech-startup-co-founder-leaves-us-after-12-years-to-return-home-gdp/articleshow-p33a1nq</link>
            <guid isPermaLink="true">https://kannada.asianetnews.com/viral/tired-of-optimizing-for-visa-legal-status-indian-tech-startup-co-founder-leaves-us-after-12-years-to-return-home-gdp/articleshow-p33a1nq</guid>
            <pubDate>Tue, 02 Jun 2026 20:11:49 +0530</pubDate>
            <description><![CDATA[ಅಮೆರಿಕದ ಸ್ಟಾರ್ಟ್&zwnj;ಅಪ್ ಸಹ-ಸಂಸ್ಥಾಪಕ ಕರಣ್ ಪಾಟೀಲ್, 12 ವರ್ಷಗಳ ನಂತರ ವೀಸಾ ನಿಯಮಗಳ ಸಂಕಷ್ಟ ಮತ್ತು ಸ್ವಾತಂತ್ರ್ಯದ ಕೊರತೆಯಿಂದಾಗಿ ಭಾರತಕ್ಕೆ ಮರಳಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರವು 'ರಿವರ್ಸ್ ಬ್ರೈನ್ ಡ್ರೈನ್' ಮತ್ತು ವಲಸಿಗರ ಸವಾಲುಗಳ ಕುರಿತು ಜಾಗತಿಕ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knr7mqe563szes47rt27134g,imgname-india-airport-charges-cut-25-percent-flight-ticket-price-impact-domestic-airfare-atf-fuel-cost-airlines-update-1-1775708560837.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಉತ್ತಮ ಭವಿಷ್ಯ, ಉನ್ನತ ಶಿಕ್ಷಣ ಹಾಗೂ ವೃತ್ತಿಜೀವನದಲ್ಲಿ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸುವ ಕನಸಿನೊಂದಿಗೆ ಅಮೆರಿಕಕ್ಕೆ (USA) ವಲಸೆ ಹೋಗುವುದು ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಜೀವಮಾನದ ಗುರಿಯಾಗಿರುತ್ತದೆ. ಆದರೆ, ಈ ಯಶಸ್ಸಿನ ಹಿಂದೆ ವಲಸೆ ನಿಯಮಗಳ ಕಟ್ಟುಪಾಡುಗಳು, ವೀಸಾ ಆತಂಕಗಳು ಹಾಗೂ ಭವಿಷ್ಯದ ಅನಿಶ್ಚಿತತೆಯೊಂದಿಗೆ ದಿನದೂಡುವ ಕಠಿಣ ವಾಸ್ತವವೂ ಅಡಗಿದೆ. ಈ ವಿಷಯ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ಅಮೆರಿಕ ಮೂಲದ ಪ್ರಮುಖ ತಂತ್ರಜ್ಞಾನ ಸ್ಟಾರ್ಟ್&zwnj;ಅಪ್ ಒಂದರ ಸಹ-ಸಂಸ್ಥಾಪಕ ಮತ್ತು ಉತ್ಪನ್ನ ಮುಖ್ಯಸ್ಥರಾಗಿರುವ (Head of Product) ಕರಣ್ ಪಾಟೀಲ್ ಅವರು, ಅಮೆರಿಕದಲ್ಲಿ ಬರೋಬ್ಬರಿ 12 ವರ್ಷಗಳ ಸುದೀರ್ಘ ಜೀವನವನ್ನು ಮುಗಿಸಿ, ತಮ್ಮ ತಾಯ್ನಾಡಾದ ಭಾರತಕ್ಕೆ ಮರಳುತ್ತಿರುವುದಾಗಿ ಪ್ರಕಟಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಾದ 'X' ನಲ್ಲಿ (ಟ್ವಿಟರ್) ಅವರು ಹಂಚಿಕೊಂಡಿರುವ ಈ ಭಾವುಕ ಪೋಸ್ಟ್, ನೆಟ್ಟಿಗರ ಗಮನ ಸೆಳೆದಿದ್ದು, ವಿದೇಶಿ ವಲಸೆ ಸ್ಥಿತಿಗತಿ ಹಾಗೂ ಅಲ್ಲಿನ ನೆಮ್ಮದಿಯ ಬದುಕಿನ ಕುರಿತು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.&lt;/p&gt;&lt;h2&gt;ಬಲವಂತದ ಬದುಕಿಗಿಂತ ಸ್ವತಂತ್ರ ಭಾರತವೇ ಲೇಸು: ಕರಣ್ ನಿರ್ಧಾರದ ಹಿಂದಿನ ಕಾರಣ&lt;/h2&gt;&lt;p&gt;ತಾವು ಅಮೆರಿಕ ತೊರೆಯಲು ನಿರ್ಧರಿಸಿದ ಪ್ರಮುಖ ಕಾರಣವನ್ನು ಕರಣ್ ಪಾಟೀಲ್ ಅತ್ಯಂತ ಆಳವಾಗಿ ವಿವರಿಸಿದ್ದಾರೆ. ಅವರ ಪ್ರಕಾರ, ಬದುಕಿನಲ್ಲಿ ಸದಾ ಕಾಲ ಸಂದರ್ಭಗಳಿಗೆ ತಕ್ಕಂತೆ ಬಲವಂತದಿಂದ ಬದುಕುವುದಕ್ಕಿಂತ, ದೀರ್ಘಾವಧಿಯ ಗುರಿಗಳನ್ನು ಇಟ್ಟುಕೊಂಡು ಸ್ವತಂತ್ರವಾಗಿ ಕಾರ್ಯತಂತ್ರ ರೂಪಿಸುವುದು ಅವರ ತತ್ವವಾಗಿತ್ತು. ಆದರೆ ಅಮೆರಿಕದ ವೀಸಾ ನಿಯಮಗಳು ಅವರ ಈ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಆರಂಭಿಸಿದ್ದವು.&lt;/p&gt;&lt;p&gt;ವೀಸಾ ನಿಯಮಗಳೇ ಬದುಕಿನ ಫಲಿತಾಂಶವಾದಾಗ: ಯಾವಾಗಲೂ ಕಾರ್ಯತಂತ್ರದಿಂದ ವರ್ತಿಸಿ, ಬಲವಂತದಿಂದಲ್ಲ ಎಂಬುದು ನನ್ನ ನಿಯಮ. ಆದರೆ ಅಮೆರಿಕದಲ್ಲಿ ಅದನ್ನು ಮಾಡುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿತ್ತು. ಒಂದು ಅರ್ಥಪೂರ್ಣ ಜೀವನದ ಕಡೆಗೆ ಕಾರ್ಯತಂತ್ರ ರೂಪಿಸುವ ಬದಲು, ಅಲ್ಲಿ ನನ್ನ ಕಾನೂನು ಸ್ಥಾನಮಾನವನ್ನು (Legal Status/Visa) ಕಾಪಾಡಿಕೊಳ್ಳುವುದೇ ನಾನು ಪ್ರತಿದಿನ ಸಾಧಿಸಬೇಕಾದ ಏಕೈಕ ಫಲಿತಾಂಶವಾಗಿಬಿಟ್ಟಿತು. ಹೀಗಾಗಿ ನಾನು ಈಗ ಮನೆಗೆ ಮರಳುತ್ತಿದ್ದೇನೆ. ಹೊಸ ಧ್ಯೇಯದೊಂದಿಗೆ, ಆದರೆ ಸ್ವಾತಂತ್ರ್ಯದೊಂದಿಗೆ. 'ಸ್ವತಂತ್ರರ ಭೂಮಿ' (Land of the Free) ಎಂದು ಕರೆಯಲಾಗುವ ಅಮೆರಿಕದ ಸ್ವಾತಂತ್ರ್ಯದ ಭಾವನೆ ನಿಧಾನವಾಗಿ ನನ್ನಿಂದ ದೂರವಾಗುತ್ತಿತ್ತು&quot; ಎಂದು ಕರಣ್ ಬರೆದುಕೊಂಡಿದ್ದಾರೆ.&lt;/p&gt;&lt;h2&gt;ಟ್ರೋಲ್ ಮಾಡಿದವರಿಗೆ ಕರಣ್ ನೀಡಿದ ಖಡಕ್ ಉತ್ತರ&lt;/h2&gt;&lt;p&gt;ಕರಣ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು &quot;ಗ್ರೀನ್ ಕಾರ್ಡ್ ಇಲ್ಲದೆ 12 ವರ್ಷಗಳ ಕಾಲ ಕೇವಲ ಉದ್ಯೋಗಿಯಾಗಿ ಹೇಗೆ ಉಳಿದಿದ್ದೀರಿ?&quot; ಎಂದು ಅವರ ವಲಸೆ ಸ್ಥಿತಿಯ ಬಗ್ಗೆ ಪ್ರಶ್ನೆ ಮಾಡಲು ಆರಂಭಿಸಿದರು. ಇದಕ್ಕೆ ಕರಣ್ ತಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಪ್ರಯಾಣದ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ:&lt;/p&gt;&lt;p&gt;&lt;strong&gt;ಮೊದಲ 9 ವರ್ಷಗಳು (ಶಿಕ್ಷಣ ಮತ್ತು ಪಿಎಚ್&zwnj;ಡಿ): &lt;/strong&gt;ಕರಣ್ ಅವರು ಅಮೆರಿಕಕ್ಕೆ ಕೇವಲ ಉದ್ಯೋಗಿಯಾಗಿ ಹೋಗಿರಲಿಲ್ಲ. ಅವರು ಅಲ್ಲಿ ಉನ್ನತ ಶಿಕ್ಷಣ ಮುಗಿಸಿ, ನಂತರ ಪ್ರತಿಷ್ಠಿತ ಪಿಎಚ್&zwnj;ಡಿ (PhD) ಪದವಿಯನ್ನು ಪಡೆದರು. ಈ ಸಂಶೋಧನೆಯ ಅವಧಿಯಲ್ಲಿ ಅವರು ನಿರ್ಮಾಣ ಕಾರ್ಮಿಕರಿಗಾಗಿ ಅತ್ಯಾಧುನಿಕ ಸುರಕ್ಷತಾ ತರಬೇತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದರು. ಇದಕ್ಕೆ ಒಟ್ಟು 9 ವರ್ಷಗಳು ತಗುಲಿದ್ದವು.&lt;/p&gt;&lt;p&gt;&lt;strong&gt;ಕೊನೆಯ 3 ವರ್ಷಗಳು (ಸ್ಟಾರ್ಟ್&zwnj;ಅಪ್): &lt;/strong&gt;ಪಿಎಚ್&zwnj;ಡಿ ಮುಗಿದ ನಂತರ, ಅವರು ಕಳೆದ 3 ವರ್ಷಗಳಿಂದ ಅಮೆರಿಕದಲ್ಲಿ ಸ್ವಂತ ತಂತ್ರಜ್ಞಾನ ಸ್ಟಾರ್ಟ್&zwnj;ಅಪ್ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದರು.&lt;/p&gt;&lt;p&gt;ನಾನು 12 ವರ್ಷಗಳ ಕಾಲ ಕೇವಲ ಸಾಧಾರಣ ಕೆಲಸಗಾರನಾಗಿರಲಿಲ್ಲ. ಹಾಗಾಗಿ ನಿಮ್ಮ ಊಹೆಗಳು ಮತ್ತು ನೀವು ತಲುಪಿರುವ ತೀರ್ಮಾನಗಳು ಸಂಪೂರ್ಣವಾಗಿ ತಪ್ಪು ಹಾಗೂ ದೋಷಪೂರಿತವಾಗಿವೆ ಎಂದು ಕರಣ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.&lt;/p&gt;&lt;h2&gt;ಕರಣ್ ನಿರ್ಧಾರಕ್ಕೆ ನೆಟ್ಟಿಗರ ಬೆಂಬಲ ಮತ್ತು ಮಿಶ್ರ ಪ್ರತಿಕ್ರಿಯೆ&lt;/h2&gt;&lt;p&gt;ಕರಣ್ ಅವರ ಈ ದಿಟ್ಟ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಜಾಗತಿಕ ವಲಸಿಗರು ತಮ್ಮದೇ ಆದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;strong&gt;'ನಿಮ್ಮ ಕೌಶಲ್ಯ ಭಾರತಕ್ಕೆ ಬಳಕೆಯಾಗಲಿ': &lt;/strong&gt;ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, &quot;ಕರಣ್, ನಿಮ್ಮ ನಿರ್ಧಾರ ಸಂತೋಷ ತಂದಿದೆ. ತಲೆಯ ಮೇಲೆ ಯಾವಾಗ ವೀಸಾ ಕೊಡಲಿ ಬೀಳುತ್ತದೋ ಎಂಬ ನಿರಂತರ ಅನಿಶ್ಚಿತತೆಯಲ್ಲಿ ಬದುಕುವುದರಲ್ಲಿ ಯಾವುದೇ ಅರ್ಥವಿಲ್ಲ. ನಿಮ್ಮ ಅದ್ಭುತ ಕೌಶಲ್ಯಗಳನ್ನು ತಾಯ್ನಾಡಿಗೆ ತಂದು ಭಾರತದಲ್ಲಿ ಒಳ್ಳೆಯದನ್ನು ನಿರ್ಮಿಸಿ, ನಿಮಗೆ ಶುಭವಾಗಲಿ&quot; ಎಂದು ಬೆಂಬಲಿಸಿದ್ದಾರೆ.&lt;/p&gt;&lt;p&gt;&lt;strong&gt;ಅಮೆರಿಕಕ್ಕೆ ಕಾಡಲಿದೆ ಪಶ್ಚಾತ್ತಾಪ: &lt;/strong&gt;ಸುಮಾರು ಒಂದು ದಶಕದಿಂದ ಅಮೆರಿಕದಲ್ಲಿ ನೆಲೆಸಿರುವ ಮತ್ತೊಬ್ಬ ವಲಸಿಗರು ಕರಣ್ ಮಾತನ್ನು ಒಪ್ಪುತ್ತಾ, &quot;ನಾನು ಕೂಡ ಇಲ್ಲಿ 10 ವರ್ಷಗಳಿಂದ ಇದ್ದೇನೆ ಮತ್ತು ಈ ನೋವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಇನ್ನು 5 ವರ್ಷಗಳ ನಂತರ ಅಮೆರಿಕ ಈ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಖಂಡಿತವಾಗಿಯೂ ವಿಷಾದಿಸಲಿದೆ. ಏಕೆಂದರೆ ಸಾಧನೆ ಮಾಡಬಲ್ಲ ಜಾಣರೆಲ್ಲರೂ ಇಲ್ಲಿನ ಕಿರಿಕಿರಿಯಿಂದ ಬೇಸತ್ತು ದೇಶ ಬಿಟ್ಟು ಹೊರಡುತ್ತಿದ್ದಾರೆ&quot; ಎಂದು ಕಳವಳ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಸ್ವಾತಂತ್ರ್ಯದ ವಿಭಿನ್ನ ವ್ಯಾಖ್ಯಾನ:&lt;/strong&gt; ಇದೇ ವೇಳೆ, ಸ್ವಾತಂತ್ರ್ಯ ಎಂಬುದು ದೇಶದಲ್ಲಲ್ಲ, ಅದು ಮನುಷ್ಯನ ಮನಸ್ಸಿನಲ್ಲಿದೆ. ನಾನು ಅಮೆರಿಕಕ್ಕೆ ಬಂದಿದ್ದೇ ನನ್ನ ನೈಜ ಅಸ್ಮಿತೆಯನ್ನು ಕಂಡುಕೊಳ್ಳಲು ಎಂದು ಕೆಲವು ವಲಸಿಗರು ಭಿನ್ನವಾದ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಕರಣ್ ಪಾಟೀಲ್ ಅವರ ಈ ನಡೆ ಜಾಗತಿಕ ಮಟ್ಟದಲ್ಲಿ ಭಾರತದ 'ರಿವರ್ಸ್ ಬ್ರೈನ್ ಡ್ರೈನ್' (ವಿದೇಶದಿಂದ ಪ್ರತಿಭೆಗಳು ಭಾರತಕ್ಕೆ ಮರಳುವುದು) ಟ್ರೆಂಡ್ ಅನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಭಾರತದಲ್ಲಿ ಹೆಚ್ಚುತ್ತಿರುವ ಸ್ಟಾರ್ಟ್&zwnj;ಅಪ್ ಅವಕಾಶಗಳು ಮತ್ತು ಅಮೆರಿಕದ ವಲಸೆ ನಿಯಮಗಳ ಬಿಗಿತವು ಕೌಶಲ್ಯಯುತ ಭಾರತೀಯರನ್ನು ಮರಳಿ ತಾಯ್ನಾಡಿನತ್ತ ಸೆಳೆಯುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;I&rsquo;m moving back to India after 12 years in the US.Always act from strategy, not compulsion.But that was becoming harder to do. Instead of strategizing toward a meaningful life, preserving legal status became the outcome I HAD to optimize for.I&rsquo;m heading home now. For a new&hellip;&lt;/p&gt;&lt;p&gt;&mdash; Karan P (@Karan_R_Patil) June 1, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/viral/tired-of-optimizing-for-visa-legal-status-indian-tech-startup-co-founder-leaves-us-after-12-years-to-return-home-gdp/articleshow-p33a1nq"/>
        </item>
        <item>
            <title><![CDATA[ಮಳೆಗಾಲ ಆರಂಭಕ್ಕೂ ಮೊದಲೇ ರೈತರ 2 ಲಕ್ಷ ರೂ ಸಾಲ ಮನ್ನ, ಮಹಾ ಸರ್ಕಾರದಿಂದ ಮಹತ್ವದ ಆದೇಶ]]></title>
            <link>https://kannada.asianetnews.com/india-news/rs-2-lakh-farm-loan-waiver-approved-maharashtra-farmers-receive-major-boost/articleshow-74ts3ah</link>
            <guid isPermaLink="true">https://kannada.asianetnews.com/india-news/rs-2-lakh-farm-loan-waiver-approved-maharashtra-farmers-receive-major-boost/articleshow-74ts3ah</guid>
            <pubDate>Tue, 02 Jun 2026 19:51:14 +0530</pubDate>
            <description><![CDATA[&lt;p&gt;ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ರೈತರಿಗೆ ನೀಡಿದ್ದ ಸಾಲದಲ್ಲಿ 2 ಲಕ್ಷ ರೂಪಾಯಿ ಮನ್ನಾ ಮಾಡಲು ಮಹಾ ಸರ್ಕಾರ ಆದೇಶ ನೀಡಿದೆ. ಈ ಆದೇಶ ಹೊರಬೀಳುತ್ತಿದ್ದಂತೆ ರೈತರ ನಿಟ್ಟುಸಿರು ಬಿಟ್ಟಿದ್ದಾರೆ. ಪರಿಣಾಮ 56 ಲಕ್ಷ ರೈತರಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h7y4af7f4e03pfs2m2jerm0v,imgname-asianet-news--11-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜೂ.02) &lt;/strong&gt;ಮುಂಗಾರು ಪ್ರವೇಶಕ್ಕೆ ಕೆಲ ದಿನಗಳು ಮಾತ್ರ ಬಾಕಿ. ದೇಶದೆಲ್ಲೆಡೆ ಮಳೆ ಆರಂಭವಾಗಿದೆ. ಇದರ ನಡುವೆ ರೈತರ ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗಳು ಆರಂಭಗೊಳ್ಳುತ್ತಿದೆ. ಇದರ ಬೆನ್ನಲ್ಲೇ ರೈತರ 2 ಲಕ್ಷ ರೂಪಾಯಿ ಸಾಲ ಮನ್ನಾ ಆದೇಶ ಹೊರಬಿದ್ದಿದೆ. ಮಹಾರಾಷ್ಟ್ರ ಸರ್ಕಾರ ಈ ಮಹತ್ವದ ಆದೇಶ ನೀಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕ್ಯಾಬಿನೆಟ್ ರೈತರ ಸಾಲ ಮನ್ನಾಗೆ ಅನುಮೋದನೆ ನೀಡಿದೆ.&lt;/p&gt;&lt;h2&gt;36,585 ಕೋಟಿ ರೂಪಾಯಿ ಸಾಲ ಮನ್ನ&lt;/h2&gt;&lt;p&gt;ಸರ್ಕಾರದ ಲೆಕ್ಕಾಚಾರಗಳ ಪ್ರಕಾರ, ಈ ಯೋಜನೆಯು ರಾಜ್ಯದ ಒಟ್ಟು 65 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳನ್ನು ಒಳಗೊಳ್ಳಲಿದೆ. ಇದರಲ್ಲಿ ಅರ್ಹತೆ ಹೊಂದಿರುವ ಸುಮಾರು 56 ಲಕ್ಷ ರೈತರ ಒಟ್ಟು 36,585 ಕೋಟಿ ರೂಪಾಯಿ ಮೌಲ್ಯದ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.&lt;/p&gt;&lt;h2&gt;ಪ್ರೋತ್ಸಾಹ ಧನ ಕೊಡುಗೆ&lt;/h2&gt;&lt;p&gt;ಕೇವಲ ಸಾಲಗಾರರಷ್ಟೇ ಅಲ್ಲದೆ, ಬ್ಯಾಂಕ್&zwnj;ಗಳಿಂದ ಪಡೆದ ಕೃಷಿ ಸಾಲವನ್ನು ಯಾವುದೇ ಬಾಕಿ ಉಳಿಸಿಕೊಳ್ಳದೆ ನಿಯಮಿತವಾಗಿ ಮರುಪಾವತಿ ಮಾಡಿರುವ (ಸಾಲ ಸುಸ್ತಿದಾರರಲ್ಲದ) ಪ್ರಾಮಾಣಿಕ ರೈತರಿಗೂ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಅಂತಹ ನಿಯಮಿತವಾಗಿ ಸಾಲ ಪಾವತಿಸಿದ ರೈತ ಖಾತೆದಾರರಿಗೆ ಸರ್ಕಾರದಿಂದ ತಲಾ 50,000 ರೂಪಾಯಿಗಳವರೆಗೆ ಪ್ರೋತ್ಸಾಹಧನ (Incentive) ನೀಡಲು ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ.&lt;/p&gt;&lt;p&gt;ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ತೀರ್ಮಾನಕ್ಕೆ ಒಪ್ಪಿಗೆ ಸಿಕ್ಕಿದ್ದರೂ ಸಹ, ಸರ್ಕಾರದ ವತಿಯಿಂದ ಅಧಿಕೃತ ಸಾರ್ವಜನಿಕ ಘೋಷಣೆ ಹೊರಬಿದ್ದಿಲ್ಲ. ಮಹಾರಾಷ್ಟ್ರದಲ್ಲಿ ಸದ್ಯ ವಿಧಾನ ಪರಿಷತ್ (Legislative Council) ಚುನಾವಣೆಗಳು ನಡೆಯುತ್ತಿರುವುದರಿಂದ ರಾಜ್ಯಾದ್ಯಂತ 'ಮಾದರಿ ಚುನಾವಣಾ ನೀತಿ ಸಂಹಿತೆ' (Model Code of Conduct) ಜಾರಿಯಲ್ಲಿದೆ.&lt;/p&gt;&lt;p&gt;ಸರ್ಕಾರದ ಈ ತೀರ್ಮಾನವನ್ನು ರೈತ ಸಂಘಟನೆಗಳು ಮುಕ್ತಕಂಠದಿಂದ ಸ್ವಾಗತಿಸಿವೆ. ಈ ಬಗ್ಗೆ ಮಾತನಾಡಿರುವ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯದರ್ಶಿ ಅಜಿತ್ ನವಲೆ ಅವರು, &quot;ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಈಗ ಇದರ ಶೀಘ್ರ ಜಾರಿ ಅತ್ಯಂತ ಮುಖ್ಯವಾಗಿದೆ. ಜೂನ್ ತಿಂಗಳು ಬೆಳೆ ಸಾಲ ಮರುಪಾವತಿಗೆ ಕೊನೆಯ ಅವಧಿಯಾಗಿರುವುದರಿಂದ, ಜೂನ್ ಅಂತ್ಯದೊಳಗೆ ಮನ್ನಾ ಆದ ಮೊತ್ತವನ್ನು ಬ್ಯಾಂಕ್&zwnj;ಗಳಿಗೆ ಜಮೆ ಮಾಡಬೇಕು. ಇಲ್ಲದಿದ್ದರೆ ರೈತರು ಸುಸ್ತಿದಾರರ ಪಟ್ಟಿಗೆ ಸೇರಿ ಮುಂಗಾರು ಹಂಗಾಮಿಗೆ ಹೊಸ ಸಾಲ ಪಡೆಯಲು ತೊಂದರೆಯಾಗುತ್ತದೆ&quot; ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/rs-2-lakh-farm-loan-waiver-approved-maharashtra-farmers-receive-major-boost/articleshow-74ts3ah"/>
        </item>
        <item>
            <title><![CDATA[ಜಮೀರ್-ಸಿರಾಜ್ ಆಡಿಯೋದಲ್ಲಿ ಬಿಜೆಪಿ ಅಭ್ಯರ್ಥಿ ಹೆಸರು: ಸ್ಫೋಟಕ ಟ್ವಿಸ್ಟ್ ಕೊಟ್ಟ ಶ್ರೀನಿವಾಸ ದಾಸಕರಿಯಪ್ಪ]]></title>
            <link>https://kannada.asianetnews.com/karnataka-districts/zameer-ahmed-mohammad-siraj-viral-audio-controversy-srinivas-dasakariyappa-reaction-sat/articleshow-u2a6z5l</link>
            <guid isPermaLink="true">https://kannada.asianetnews.com/karnataka-districts/zameer-ahmed-mohammad-siraj-viral-audio-controversy-srinivas-dasakariyappa-reaction-sat/articleshow-u2a6z5l</guid>
            <pubDate>Tue, 02 Jun 2026 19:36:09 +0530</pubDate>
            <description><![CDATA[&lt;p&gt;ದಾವಣಗೆರೆ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ವೈರಲ್ ಆಡಿಯೋ ಕುರಿತು ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಪ್ರತಿಕ್ರಿಯಿಸಿದ್ದಾರೆ. ಆಡಿಯೋದಲ್ಲಿನ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಅವರು, ಅದೊಂದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km35yzfz3520ddfxgb8whhag,imgname-screenshot-2026-03-19-181406-1773928414719.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.02): ದಾ&lt;/strong&gt;ವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಜಿಲ್ಲೆಯ ರಾಜಕೀಯ ವಲಯದಲ್ಲಿ ಈಗ ಜಮೀರ್ ಅಹ್ಮದ್ ಮತ್ತು ಮೊಹಮ್ಮದ್ ಸಿರಾಜ್ ನಡುವಿನದ್ದು ಎನ್ನಲಾದ ಆಡಿಯೋ ಸಂಭಾಷಣೆ ಭಾರಿ ಸಂಚಲನ ಮೂಡಿಸಿದೆ. ಈ ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ನನ್ನ ಬಗ್ಗೆ ಮಾತನಾಡಿರುವುದು ಸತ್ಯಕ್ಕೆ ದೂರವಾದದ್ದು:&lt;/strong&gt;&lt;/h3&gt;&lt;p&gt;ದಾವಣಗೆರೆಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, 'ವೈರಲ್ ಆಗಿರುವ ಆಡಿಯೋದಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆದರೆ ನನ್ನ ಬಗ್ಗೆ ಅಲ್ಲಿ ಮಾತನಾಡಿರುವ ವಿಚಾರಗಳು ಸತ್ಯಕ್ಕೆ ಮೈಲಿ ದೂರದಲ್ಲಿವೆ. ಮೊಹಮ್ಮದ್ ಸಿರಾಜ್ ಅವರು ಸುಮಾರು ಒಂದು ವರ್ಷದ ಹಿಂದೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಸಿಕ್ಕಾಗ ನಮಸ್ಕಾರ ಹೇಳಿದ್ದರು. ಅದು ಬಿಟ್ಟರೆ ಚುನಾವಣೆ ವೇಳೆಯಲ್ಲಿ ಅವರು ನನಗೆ ಎಲ್ಲಿಯೂ ಸಿಕ್ಕಿಲ್ಲ. ಇನ್ನು ಜಮೀರ್ ಅಹ್ಮದ್ ಅವರ ಪರಿಚಯವೇ ನನಗೆ ಇಲ್ಲ' ಎಂದು ಆಡಿಯೋ ಸಂಭಾಷಣೆಯನ್ನು ತಳ್ಳಿಹಾಕಿದರು.&lt;/p&gt;&lt;h2&gt;&lt;strong&gt;ಒಪ್ಪಂದ ಮಾಡಿಕೊಂಡಿದ್ದರೆ ನಾವು ಗೆಲ್ಲುತ್ತಿದ್ದೆವು:&lt;/strong&gt;&lt;/h2&gt;&lt;p&gt;ಆಡಿಯೋದಲ್ಲಿ ಒಪ್ಪಂದದ ಕುರಿತು ಕೇಳಿಬರುತ್ತಿರುವ ಆರೋಪಗಳಿಗೆ ಕಿಡಿಕಾರಿದ ಅವರು, 'ಒಂದು ವೇಳೆ ನಾವು ಯಾರೊಂದಿಗಾದರೂ ಒಪ್ಪಂದ ಮಾಡಿಕೊಂಡಿದ್ದರೆ ಇವತ್ತು ನಾವೇ ಗೆಲ್ಲುತ್ತಿದ್ದೆವು. ನಾನೊಬ್ಬ ಬಡವನ ಮಗನಾಗಿ ಚುನಾವಣೆ ಮಾಡಿದ್ದೇನೆ. ದಾವಣಗೆರೆಯ ಜನ ನನಗೆ 64 ಸಾವಿರ ಮತಗಳನ್ನು ನೀಡಿದ್ದಾರೆ. ಅವರು ಹೇಗೆ ಚುನಾವಣೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಣ, ಹೆಂಡ ಮತ್ತು ಸೀರೆ ಹಂಚಿ ಚುನಾವಣೆ ಗೆದ್ದಿದ್ದಾರೆ' ಎಂದು ಎದುರಾಳಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.&lt;/p&gt;&lt;h3&gt;&lt;strong&gt;ಕಾಲು ಬಿದ್ದಿದ್ದರೆ ಅದು ವೈರಲ್ ಆಗುತ್ತಿರಲಿಲ್ಲವೇ?&lt;/strong&gt;&lt;/h3&gt;&lt;p&gt;ಆಡಿಯೋದಲ್ಲಿ ಶ್ರೀನಿವಾಸ ದಾಸಕರಿಯಪ್ಪ ನನಗೆ ಕಾಲು ಬಿದ್ದರು ಎಂಬ ಮಾತಿನ ಬಗ್ಗೆ ಪ್ರಶ್ನಿಸಿದ ಅವರು, 'ನಾನು ಯಾರ ಕಾಲಿಗೂ ಬಿದ್ದಿಲ್ಲ. ಒಂದು ವೇಳೆ ಸಿರಾಜ್ ಅವರ ಕಾಲು ಬಿದ್ದಿದ್ದರೆ ಅದು ಅಂದೇ ಫೋಟೋ ಅಥವಾ ವಿಡಿಯೋ ಮೂಲಕ ವೈರಲ್ ಆಗುತ್ತಿರಲಿಲ್ಲವೇ? ಇದೆಲ್ಲವೂ ಸುಳ್ಳು ಸುದ್ದಿ' ಎಂದರು. ಅಲ್ಲದೆ, ಮುಸ್ಲಿಂ ಮತಗಳ ಧ್ರುವೀಕರಣದ ಬಗ್ಗೆ ಮಾತನಾಡುತ್ತಾ, 'ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಅವರು ಎಸ್&zwnj;ಡಿಪಿಐಗೆ ಮತ ಹಾಕಿದ್ದಾರೆಯೇ ಹೊರತು, ಬಿಜೆಪಿಯನ್ನು ಗೆಲ್ಲಿಸಬೇಕು ಎಂಬ ಉದ್ದೇಶದಿಂದ ಅಲ್ಲ' ಎಂದು ವಿಶ್ಲೇಷಿಸಿದರು.&lt;/p&gt;&lt;h2&gt;&lt;strong&gt;ಎಐ (AI) ಸೃಷ್ಟಿ ಬಗ್ಗೆ ತನಿಖೆಯಾಗಲಿ:&lt;/strong&gt;&lt;/h2&gt;&lt;p&gt;ಮೊಹಮ್ಮದ್ ಸಿರಾಜ್ ಅವರು ಈ ಆಡಿಯೋ 'ಎಐ ಸೃಷ್ಟಿ' (Deepfake) ಎಂದು ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ದಾಸಕರಿಯಪ್ಪ, 'ಈ ಬಗ್ಗೆ ಕೂಲಂಕುಷ ತನಿಖೆಯಾಗಲಿ. ಅಸಲಿಗೆ ಈ ಆಡಿಯೋವನ್ನು ಯಾರು ಹೊರಗೆ ಬಿಟ್ಟಿದ್ದಾರೆ ಎಂಬುದು ಪತ್ತೆಯಾಗಬೇಕು. ಅವರು ನನಗೇಕೆ ಫೋನ್ ಮಾಡುತ್ತಾರೆ ಮತ್ತು ನಾನು ಅವರ ಹತ್ತಿರ ಮಾತನಾಡುವ ಅಗತ್ಯವೇನಿದೆ? ಸತ್ಯಾಸತ್ಯತೆ ಹೊರಬರಲು ಉನ್ನತ ಮಟ್ಟದ ತನಿಖೆ ಅಗತ್ಯ' ಎಂದು ಒತ್ತಾಯಿಸಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಈ ವೈರಲ್ ಆಡಿಯೋ ದಾವಣಗೆರೆ ರಾಜಕೀಯದಲ್ಲಿ ಹೊಸ ಆಯಾಮ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/zameer-ahmed-mohammad-siraj-viral-audio-controversy-srinivas-dasakariyappa-reaction-sat/articleshow-u2a6z5l"/>
        </item>
        <item>
            <title><![CDATA[ಬ್ಯಾಂಕ್‌ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಹಣ ಪಾವತಿಸಿ! ಯುಪಿಐನಲ್ಲೇ ಸಿಗಲಿದೆ 45 ದಿನಗಳ ಬಡ್ಡಿ ರಹಿತ ಸಾಲ]]></title>
            <link>https://kannada.asianetnews.com/business/bharatpe-launches-bharatpe-flex-with-yes-bank-get-45-day-interest-free-credit-line-directly-on-upi-gdp/articleshow-fo2svkr</link>
            <guid isPermaLink="true">https://kannada.asianetnews.com/business/bharatpe-launches-bharatpe-flex-with-yes-bank-get-45-day-interest-free-credit-line-directly-on-upi-gdp/articleshow-fo2svkr</guid>
            <pubDate>Tue, 02 Jun 2026 19:13:59 +0530</pubDate>
            <description><![CDATA[ಭಾರತ್&zwnj;ಪೇ ಮತ್ತು ಯೆಸ್ ಬ್ಯಾಂಕ್ ಸಹಯೋಗದಲ್ಲಿ 'ಭಾರತ್&zwnj;ಪೇ ಫ್ಲೆಕ್ಸ್' ಎಂಬ ಯುಪಿಐ ಕ್ರೆಡಿಟ್ ಲೈನ್ ಸೌಲಭ್ಯವನ್ನು ಪರಿಚಯಿಸಲಾಗಿದೆ. ಈ ಸೇವೆಯಡಿ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ, ಮಂಜೂರಾದ ಸಾಲದ ಮಿತಿಯನ್ನು ಬಳಸಿ ಕ್ಯೂಆರ್ ಕೋಡ್ ಮೂಲಕ ಪಾವತಿ ಮಾಡಬಹುದು. ಇದು 45 ದಿನಗಳ ಬಡ್ಡಿ ರಹಿತ ಅವಧಿ ಮತ್ತು ಸುಲಭ ಇಎಂಐ ಆಯ್ಕೆಗಳನ್ನು ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hp0ssherer68hy9hpajdfy5p,imgname-BharatPe-1707276551639.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಅಂಗಡಿ ಮುಂಗಟ್ಟುಗಳಿಗೆ ತೆರಳಿ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುವಾಗ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲ ಎಂದು ಇನ್ಮುಂದೆ ಆತಂಕ ಪಡಬೇಕಾದ ಅಗತ್ಯವಿಲ್ಲ! ಭಾರತದ ಪ್ರಮುಖ ಡಿಜಿಟಲ್ ಫಿನಾನ್ಸ್ ಕಂಪನಿಯಾದ 'ಭಾರತ್&zwnj;ಪೇ' (BharatPe), ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ 'ಯೆಸ್ ಬ್ಯಾಂಕ್' (YES Bank) ಸಹಯೋಗದೊಂದಿಗೆ 'ಭಾರತ್&zwnj;ಪೇ ಫ್ಲೆಕ್ಸ್' (BharatPe Flex) ಎಂಬ ವಿನೂತನ &quot;ಯುಪಿಐ ಕ್ರೆಡಿಟ್ ಲೈನ್&quot; ಸೌಲಭ್ಯವನ್ನು ಮಾರುಕಟ್ಟೆಗೆ ಪರಿಚಯಿಸಿದೆ.&lt;/p&gt;&lt;p&gt;ಸಾಮಾನ್ಯವಾಗಿ ನಾವು ಯುಪಿಐ (UPI) ಮೂಲಕ ಹಣ ಪಾವತಿಸಿದಾಗ ಆ ಮೊತ್ತ ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ. ಆದರೆ, ಈ ಹೊಸ ತಂತ್ರಜ್ಞಾನದ ಅಡಿಯಲ್ಲಿ ಗ್ರಾಹಕರು ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ತಮಗೆ ಮಂಜೂರಾದ ಸಾಲದ ಮಿತಿಯನ್ನು (Credit Line) ಬಳಸಿ ತಕ್ಷಣವೇ ಡಿಜಿಟಲ್ ಪಾವತಿ ಮಾಡಬಹುದಾಗಿದೆ.&lt;/p&gt;&lt;h2&gt;ಏನಿದು ಭಾರತ್&zwnj;ಪೇ ಫ್ಲೆಕ್ಸ್? ಇದರ ಬಳಕೆಯ ವ್ಯಾಪ್ತಿ ಎಷ್ಟು?&lt;/h2&gt;&lt;p&gt;'ಭಾರತ್&zwnj;ಪೇ ಫ್ಲೆಕ್ಸ್' ಎಂಬುದು ಸಂಪೂರ್ಣವಾಗಿ ಯುಪಿಐ ಆಧಾರಿತ ಸಾಲದ ಸೌಲಭ್ಯವಾಗಿದೆ. ಗ್ರಾಹಕರು ತಮ್ಮ ದೈನಂದಿನ ಮತ್ತು ಆಕಸ್ಮಿಕವಾಗಿ ಎದುರಾಗುವ ತುರ್ತು ಆರ್ಥಿಕ ಅಗತ್ಯಗಳನ್ನು ನಿಭಾಯಿಸಲು ಈ ಹಣವನ್ನು ಬಳಸಿಕೊಳ್ಳಬಹುದು.&lt;/p&gt;&lt;p&gt;&lt;strong&gt;ಎಲ್ಲೆಲ್ಲಿ ಬಳಸಬಹುದು?: &lt;/strong&gt;ಯಾವುದೇ ಸ್ಥಳೀಯ ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು, ಆನ್&zwnj;ಲೈನ್ ಶಾಪಿಂಗ್ ವೆಬ್&zwnj;ಸೈಟ್&zwnj;ಗಳಲ್ಲಿ ಪಾವತಿಸಲು, ವಿದ್ಯುತ್-ನೀರಿನ ಬಿಲ್&zwnj;ಗಳನ್ನು ಕಟ್ಟಲು, ಮೊಬೈಲ್ ರೀಚಾರ್ಜ್ ಹಾಗೂ ಪೆಟ್ರೋಲ್ ಬಂಕ್&zwnj;ಗಳಲ್ಲಿ ಡಿಜಿಟಲ್ ಪಾವತಿ ಮಾಡಲು ಈ ಸೌಲಭ್ಯವನ್ನು ಮುಕ್ತವಾಗಿ ಬಳಸಬಹುದು.&lt;/p&gt;&lt;h2&gt;ಬಡ್ಡಿ ಮುಕ್ತ ಅವಧಿ ಮತ್ತು ಸುಲಭ ಇಎಂಐ ಸೌಲಭ್ಯ (Key Benefits)&lt;/h2&gt;&lt;p&gt;ಗ್ರಾಹಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಸೇವೆಯು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ:&lt;/p&gt;&lt;p&gt;&lt;strong&gt;45 ದಿನಗಳವರೆಗೆ ಶೂನ್ಯ ಬಡ್ಡಿ: &lt;/strong&gt;ಗ್ರಾಹಕರು ಈ ಸೌಲಭ್ಯದ ಅಡಿಯಲ್ಲಿ ಬಳಸಿದ ಹಣವನ್ನು 45 ದಿನಗಳ ಒಳಗೆ ಮರುಪಾವತಿ ಮಾಡಿದರೆ ಯಾವುದೇ ಬಡ್ಡಿ ಅಥವಾ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.&lt;/p&gt;&lt;p&gt;&lt;strong&gt;ಸುಲಭ ಇಎಂಐ (EMI) ಆಯ್ಕೆ:&lt;/strong&gt; ಬಳಸಿದ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಲು ಸಾಧ್ಯವಾಗದಿದ್ದರೆ, ಅದನ್ನು ಗ್ರಾಹಕರು ತಮಗೆ ಅನುಕೂಲಕರವಾದ ಮಾಸಿಕ ಕಂತುಗಳಾಗಿ (EMI) ಪರಿವರ್ತಿಸಿಕೊಳ್ಳಬಹುದು.&lt;/p&gt;&lt;p&gt;&lt;strong&gt;ತ್ವರಿತ ಡಿಜಿಟಲ್ ಅನುಮೋದನೆ:&lt;/strong&gt; ಭಾರತ್&zwnj;ಪೇ ಆ್ಯಪ್ ಮೂಲಕವೇ ಸಂಪೂರ್ಣ ಡಿಜಿಟಲ್ ಕೆವೈಸಿ (KYC) ಪ್ರಕ್ರಿಯೆ ನಡೆಯಲಿದ್ದು, ಅರ್ಹ ಗ್ರಾಹಕರಿಗೆ ಕೇವಲ 3 ನಿಮಿಷಗಳಲ್ಲಿ ಸಾಲದ ಮಿತಿ ಮಂಜೂರಾಗಲಿದೆ.&lt;/p&gt;&lt;p&gt;&lt;strong&gt;ಟ್ರಾಕಿಂಗ್ ಮತ್ತು ರಿವಾರ್ಡ್ಸ್: &lt;/strong&gt;ಗ್ರಾಹಕರು ತಾವು ಎಷ್ಟು ಸಾಲ ಬಳಸಿದ್ದಾರೆ ಮತ್ತು ಇಎಂಐ ಮೊತ್ತ ಎಷ್ಟು ಎಂಬುದನ್ನು ಆ್ಯಪ್&zwnj;ನಲ್ಲೇ ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ಜೊತೆಗೆ ಪ್ರತಿ ಪಾವತಿಯ ಮೇಲೂ ಆಕರ್ಷಕ ರಿವಾರ್ಡ್ ಪಾಯಿಂಟ್&zwnj;ಗಳನ್ನು ಗಳಿಸಬಹುದು.&lt;/p&gt;&lt;h2&gt;ಡಿಜಿಟಲ್ ಪಾವತಿ ಜಗತ್ತಿನಲ್ಲಿ ಹೊಸ ಕ್ರಾಂತಿ&lt;/h2&gt;&lt;p&gt;ಈ ಮಹತ್ವಾಕಾಂಕ್ಷಿ ಯೋಜನೆಯ ಕುರಿತು ಮಾತನಾಡಿದ ಭಾರತ್&zwnj;ಪೇ ಸಂಸ್ಥೆಯ ಸಿಇಒ (CEO) ನಳಿನ್ ನೇಗಿ, &quot;ಭಾರತದಲ್ಲಿ ಯುಪಿಐ ವ್ಯವಸ್ಥೆಯು ಕ್ರಾಂತಿಕಾರಿ ಬದಲಾವಣೆ ತಂದಿದೆ. ಭವಿಷ್ಯದಲ್ಲಿ ಗ್ರಾಹಕರು ತಮ್ಮ ದೈನಂದಿನ ವೆಚ್ಚಗಳನ್ನು ನಿರ್ವಹಿಸಲು ಮತ್ತಷ್ಟು ಸ್ವಾತಂತ್ರ್ಯ ನೀಡುವ ಉದ್ದೇಶದಿಂದ ನಾವು ಯುಪಿಐ ಜೊತೆಗೆ ಕ್ರೆಡಿಟ್ ಲೈನ್ ಅನ್ನು ಒಗ್ಗೂಡಿಸಿ 'ಭಾರತ್&zwnj;ಪೇ ಫ್ಲೆಕ್ಸ್' ಪರಿಚಯಿಸುತ್ತಿದ್ದೇವೆ,&quot; ಎಂದಿದ್ದಾರೆ.&lt;/p&gt;&lt;p&gt;ಇದೇ ವೇಳೆ ಯೆಸ್ ಬ್ಯಾಂಕ್&zwnj;ನ ಕ್ರೆಡಿಟ್ ಕಾರ್ಡ್ ವಿಭಾಗದ ಮುಖ್ಯಸ್ಥ ಅನಿಲ್ ಸಿಂಗ್ ಮಾತನಾಡಿ, &quot;ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಯೆಸ್ ಬ್ಯಾಂಕ್ ಸದಾ ಮುಂಚೂಣಿಯಲ್ಲಿದೆ. ಭಾರತ್&zwnj;ಪೇ ಜೊತೆಗಿನ ಈ ಸಹಭಾಗಿತ್ವವು ಗ್ರಾಹಕರಿಗೆ ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಸೌಲಭ್ಯವನ್ನು ಒಂದೇ ಸೂರಿನಡಿ ಪಡೆಯಲು ನೆರವಾಗಲಿದೆ,&quot; ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸೇವೆಗೆ ಮಾರುಕಟ್ಟೆಯಲ್ಲಿ ಉತ್ತೇಜನ ನೀಡಲು ಕಂಪನಿಯು &quot;ಪೇ ನೌ, ಸೆಟಲ್ ಲೇಟರ್&quot; (ಈಗ ಪಾವತಿಸಿ, ನಂತರ ತೀರಿಸಿ) ಎಂಬ ವಿಶೇಷ ಜಾಹೀರಾತು ಅಭಿಯಾನವನ್ನು ಹಮ್ಮಿಕೊಂಡಿದೆ.&lt;/p&gt;&lt;h2&gt;ಭಾರತ್&zwnj;ಪೇ ಫ್ಲೆಕ್ಸ್ ಸೌಲಭ್ಯವನ್ನು ಸಕ್ರಿಯಗೊಳಿಸುವುದು ಹೇಗೆ?&lt;/h2&gt;&lt;ul&gt; &lt;li&gt;ಮೊದಲು ನಿಮ್ಮ ಮೊಬೈಲ್&zwnj;ನಲ್ಲಿ BharatPe ಆ್ಯಪ್ ಓಪನ್ ಮಾಡಿ, ಅಲ್ಲಿ ಕಾಣಿಸುವ 'BharatPe Flex' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.&lt;/li&gt; &lt;li&gt;ಆಧಾರ್ ಅಥವಾ ಪ್ಯಾನ್ ಕಾರ್ಡ್ ಬಳಸಿ ಕೇವಲ ಎರಡು ನಿಮಿಷಗಳಲ್ಲಿ ಡಿಜಿಟಲ್ ಕೆವೈಸಿ (KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.&lt;/li&gt; &lt;li&gt;ನಿಮ್ಮ ಅರ್ಹತೆಗೆ ತಕ್ಕಂತೆ ಮಂಜೂರಾಗುವ ಕ್ರೆಡಿಟ್ ಲಿಮಿಟ್ ಅನ್ನು ನಿಮ್ಮ UPI ಐಡಿಗೆ ಲಿಂಕ್ ಮಾಡಿ.&lt;/li&gt; &lt;li&gt;ಸುರಕ್ಷತೆಗಾಗಿ ಹೊಸದಾಗಿ ಯುಪಿಐ ಪಿನ್ (UPI PIN) ಸೆಟ್ ಮಾಡಿಕೊಳ್ಳಿ.&lt;/li&gt; &lt;li&gt;ಪ್ರಕ್ರಿಯೆ ಮುಗಿದ ನಂತರ, ಯಾವುದೇ ಅಂಗಡಿಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೂ ನಿರಾತಂಕವಾಗಿ ಪಾವತಿ ಮಾಡಿ.&lt;/li&gt;&lt;/ul&gt;&lt;h2&gt;ಭಾರತ್&zwnj;ಪೇ ಹಿನ್ನೆಲೆ&lt;/h2&gt;&lt;p&gt;2018ರಲ್ಲಿ ಕಾರ್ಯಾರಂಭ ಮಾಡಿದ ಭಾರತ್&zwnj;ಪೇ, ದೇಶದಲ್ಲೇ ಮೊದಲ ಬಾರಿಗೆ ವ್ಯಾಪಾರಿಗಳಿಗಾಗಿ 'ಝೀರೋ ಎಂಡಿಆರ್' (Zero MDR) ಕ್ಯೂಆರ್ ಕೋಡ್ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ. ಪ್ರಸ್ತುತ ದೇಶದ 450ಕ್ಕೂ ಹೆಚ್ಚು ನಗರಗಳಲ್ಲಿ 1.7 ಕೋಟಿಗೂ ಅಧಿಕ ವ್ಯಾಪಾರಿಗಳ ಜಾಲ ಹೊಂದಿರುವ ಈ ಸಂಸ್ಥೆ, ಪ್ರತಿ ತಿಂಗಳು ಸರಾಸರಿ 45 ಕೋಟಿಗೂ ಅಧಿಕ ಯುಪಿಐ ವಹಿವಾಟುಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/business/bharatpe-launches-bharatpe-flex-with-yes-bank-get-45-day-interest-free-credit-line-directly-on-upi-gdp/articleshow-fo2svkr"/>
        </item>
        <item>
            <title><![CDATA[ಹಿಂದುಗಳ ಮೇಲೆ ದೌರ್ಜನ್ಯ ನಡೆದರೆ ಠಾಣೆಗೂ ಮುತ್ತಿಗೆ: ಬಿ.ವೈ.ವಿಜಯೇಂದ್ರ ಎಚ್ಚರಿಕೆ]]></title>
            <link>https://kannada.asianetnews.com/karnataka-districts/by-vijayendra-warns-protests-over-attacks-on-hindus-kalaburagi-gvd/articleshow-m043ytg</link>
            <guid isPermaLink="true">https://kannada.asianetnews.com/karnataka-districts/by-vijayendra-warns-protests-over-attacks-on-hindus-kalaburagi-gvd/articleshow-m043ytg</guid>
            <pubDate>Tue, 02 Jun 2026 19:11:36 +0530</pubDate>
            <description><![CDATA[&lt;p&gt;ರಾಜ್ಯದ ಯಾವ ಮೂಲೆಯಲ್ಲೆ ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಪ್ರತಿಭಟಿಸುತ್ತೇವೆ, ಕೇಸ್&zwnj; ಮಾಡದೆ ಹೋದರೆ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4wp2b5v03z6v8krfh3yrqaf,imgname-gnghmn-1757604293819.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಜೂ.02):&lt;/strong&gt; ರಾಜ್ಯದ ಯಾವ ಮೂಲೆಯಲ್ಲೆ ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಪ್ರತಿಭಟಿಸುತ್ತೇವೆ, ಕೇಸ್&zwnj; ಮಾಡದೆ ಹೋದರೆ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ. ಕಾಂಗ್ರೆಸ್&zwnj; ಹಿಂದು ವಿರೋಧಿ, ಕಳೆದ 3 ವರ್ಷಗಳ ಕಾಂಗ್ರೆಸ್&zwnj; ಆಡಳಿತದಲ್ಲಿ ರಾಜ್ಯದಲ್ಲಿ ನೂರಾರು ಹಿಂದು ವಿರೋಧಿ ಕೆಲಸಗಳೇ ಆಗಿವೆ ಎಂದು ಕಾಂಗ್ರೆಸ್&zwnj; ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಬಿಜೆಪಿ ಕಲಬುರಗಿ ಘಟಕ ಮಿನಿ ವಿಧಾನಸೌಧ ಕಚೇರಿ ಎದುರು ರಾಜ್ಯದ ಕಾಂಗ್ರೆಸ್ ಸರ್ಕಾರವು ಆಳಂದ ನಗರದ ಲಾಡ್ಲೇ ಮಶಾಕ್&zwnj;, ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಅಡ್ಡಿಪಡಿಸಿದವರ ಮೇಲಿನ ಕೇಸ್ ವಾಪಸ್ ಪಡೆದಿರುವುದರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.&lt;/p&gt;&lt;p&gt;ಈಚೆಗೆ ದಕ್ಷಿಣ ಕನ್ನಡದಲ್ಲಿ ಮಧ್ಯರಾತ್ರಿ ಹಿಂದು ಕಾರ್ಯಕರ್ತನ ಮನೆಗೆ ಹೋಗಿ ಪೊಲೀಸರು ಫೋಟೋ ತೆಗೆದು ವಶಕ್ಕೆ ಪಡೆದಿದ್ದಾರೆ, ಇಂತಹ ಹಲವು ಘಟನೆಗಳಾಗುತ್ತಿವೆ. ಇವನ್ನೆಲ್ಲ ನೋಡಿ ಸುಮ್ಮನಿರೋದಿಲ್ಲ. ರಾಜ್ಯಾದ್ಯಂತ ಎಲ್ಲೇ ಇಂತಹ ಘಟನೆಗಳಾದರೂ ತಕ್ಷಣ ಪ್ರತಿಭಟಿಸುವಂತೆ ಬಿಜೆಪಿ ಜಿಲ್ಲಾ ಘಟಕಗಳಿಗೆ ಕರೆ ನೀಡಿದ ವಿಜಯೇಂದ್ರ, ಕೇಸ್&zwnj; ದಾಖಲಿಸಲು ಹಿಂದೆ ಮುಂದೆ ಪೊಲೀಸರು ನೋಡಿದರೆ ಠಾಣೆಗೂ ಮುತ್ತಿಗೆ ಹಾಕುವಂತೆ ಕರೆ ನೀಡಿದರು.&lt;/p&gt;&lt;p&gt;2028ರಲ್ಲಿ ಬಿಜೆಪಿಯೇ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ನಿಶ್ಚಿತ, ಬಿಜೆಪಿ ಸರ್ಕಾರ ರಚನೆಯಾದ 24 ಗಂಟೆಯೊಳಗೆ ಎಲ್ಲಾ ಹಿಂದು ಕಾರ್ಯಕರ್ತರ ಮೇಲೆ ಹಾಕಲಾಗಿರುವ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಕೇಸ್&zwnj;ಗಳನ್ನು ವಾಪಸ್&zwnj; ಪಡೆಯುತ್ತೇವೆಂದು ಘೋಷಿಸಿದರು.&lt;/p&gt;&lt;p&gt;ಆಳಂದ ಲಾಡ್ಲೆ ಮಶಾಕ್&zwnj; ದರ್ಗಾ, ರಾಘವ ಚೈತನ್ಯ ಶಿವಲಿಂಗ ಪೂಜೆಯ ವಿವಾದ, ಗಲಭೆಯ ಕೇಸ್&zwnj;ಗಳನ್ನು ಸರ್ಕಾರ ವಾಪಸ್ ಪಡೆದುದರ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಯಲಿದೆ. ಕೋರ್ಟ್&zwnj; ಮೆಟ್ಟಿಲು ಹತ್ತಿ ನ್ಯಾಯ ಕೋರುತ್ತೇವೆ. ಕಲಬುರಗಿಗೆ ಬಂದು ಗಿಮಿಕ್&zwnj; ಮಾಡೋದಲ್ಲ, ಇದು ನಮ್ಮ ಪ್ರಾಮಾಣಿಕ ಹೋರಾಟ ಅನ್ನೋದನ್ನು ಯಾರೂ ಮರೆಯಬಾರದು ಎಂದು ವಿಜಯೇಂದ್ರ ಹೇಳಿದರು.&lt;/p&gt;&lt;h2&gt;&lt;strong&gt;ಕೇಸ್&zwnj; ವಾಪಸ್&zwnj;&lt;/strong&gt;&lt;/h2&gt;&lt;p&gt;ಆಳಂದದಲ್ಲಿ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜಿಸಲು ತೆರಳುತ್ತಿದ್ದ ಹಿಂದುಗಳ ಮೇಲೆ ಮುಸ್ಲಿಂ ಸಮುದಾಯದ ಗೂಂಡಾಗಳು ದಾಳಿ ನಡೆಸಿದ್ದನ್ನು ಅಲ್ಲಿನ ಶಾಸಕ ಬಿ.ಆರ್&zwnj;.ಪಾಟೀಲ್&zwnj; ಖಂಡಿಸಬೇಕಿತ್ತು, ಅದನ್ನು ಬಿಟ್ಟು ಯು.ಟಿ.ಖಾದರ್&zwnj; ಪತ್ರ ಮುಂದೆ ಮಾಡಿ ಗೂಂಡಾಗಳ ಮೇಲಿನ ಕೇಸ್&zwnj; ವಾಪಸ್&zwnj; ಮಾಡಿಸಿದ್ದಾರೆ. ಇಂತಹವರು ಹಿಂದುಗಳು ಎನ್ನಲಾದೀತೆ? ಹಿಂದುಗಳು ಇನ್ನಾದರೂ ಎಚ್ಚರವಾಗಬೇಕು, ಹಿಂದುಗಳಿಗೆ ಎಲ್ಲೇ ಸಂಕಷ್ಟ ಎದುರಾದರೂ ಬಿಜೆಪಿಯ ರಾಜ್ಯ, ಜಿಲ್ಲಾ ಮುಖಂಡರು, ಹಾಲಿ, ಮಾಜಿ ಶಾಸಕರು ಅಲ್ಲಿ ಧಾವಿಸುತ್ತೇವೆ, ನೊಂದ ಹಿಂದುಗಳ ನೆರವಿಗೆ ನಿಲ್ಲುತ್ತೇವೆಂದು ಹೇಳಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/by-vijayendra-warns-protests-over-attacks-on-hindus-kalaburagi-gvd/articleshow-m043ytg"/>
        </item>
        <item>
            <title><![CDATA[EPFO: ಎರಡು ತಿಂಗಳಾದ್ರೂ ಬರದ ಹಣ, ನಿಮ್ಮ ಖಾತೆಗೆ EPF ಬಡ್ಡಿ ಜಮೆ ಆಗುವುದು ಯಾವಾಗ? ಇಲ್ಲಿದೆ ಸಂಪೂರ್ಣ ವಿವರ]]></title>
            <link>https://kannada.asianetnews.com/business/epfo-interest-credit-fy-2025-26-delay-how-to-check-epf-balance-online-status-san/articleshow-z42t88o</link>
            <guid isPermaLink="true">https://kannada.asianetnews.com/business/epfo-interest-credit-fy-2025-26-delay-how-to-check-epf-balance-online-status-san/articleshow-z42t88o</guid>
            <pubDate>Tue, 02 Jun 2026 19:04:10 +0530</pubDate>
            <description><![CDATA[&lt;p&gt;2025-26ನೇ ಸಾಲಿನ ಇಪಿಎಫ್ ಬಡ್ಡಿ ದರವನ್ನು ಶೇ. 8.25ಕ್ಕೆ ನಿಗದಿಪಡಿಸಲಾಗಿದ್ದರೂ, ಹಣ ಇನ್ನೂ ಚಂದಾದಾರರ ಖಾತೆಗೆ ಜಮೆಯಾಗಿಲ್ಲ. ಈ ವಿಳಂಬಕ್ಕೆ ಕಾರಣವೇನು, ಇದರಿಂದ ನೌಕರರಿಗೆ ಆರ್ಥಿಕ ನಷ್ಟವಾಗುವುದೇ ಮತ್ತು ಬಡ್ಡಿ ಹಣ ಯಾವಾಗ ಜಮೆಯಾಗಬಹುದು ಎನ್ನುವ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt48c0cwv5mnt4p8afn2tj40,imgname-epf-interest-credit-1780406944155.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜೂ.2): &lt;/strong&gt;ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಕಳೆದ ಮಾರ್ಚ್ ತಿಂಗಳಲ್ಲೇ 2025-26ರ ಹಣಕಾಸು ವರ್ಷಕ್ಕೆ ನೌಕರರ ಭವಿಷ್ಯ ನಿಧಿಯ (EPF) ಬಡ್ಡಿ ದರವನ್ನು ಶೇಕಡಾ 8.25 ರಷ್ಟು ಕಾಯ್ದುಕೊಳ್ಳಲು ಶಿಫಾರಸು ಮಾಡಿದೆ. ಆದರೆ, ಹೊಸ ಹಣಕಾಸು ವರ್ಷ (2026-27) ಆರಂಭವಾಗಿ ಈಗಾಗಲೇ ಎರಡು ತಿಂಗಳು ಕಳೆದಿದ್ದರೂ, ಇಪಿಎಫ್&zwnj;ಒ ಚಂದಾದಾರರ ಖಾತೆಗೆ ಇನ್ನೂ ಬಡ್ಡಿ ಹಣ ಜಮೆಯಾಗಿಲ್ಲ. ಹೀಗಾಗಿ, ಬಡ್ಡಿ ಜಮೆ ವಿಳಂಬವಾಗುತ್ತಿರುವುದರಿಂದ ತಮಗೆ ಆರ್ಥಿಕ ನಷ್ಟ ಉಂಟಾಗಬಹುದೇ ಎಂದು ಕೋಟ್ಯಂತರ ಉದ್ಯೋಗಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ಮಾರ್ಚ್ ಮೊದಲ ವಾರದಲ್ಲಿ ಇಪಿಎಫ್&zwnj;ಒ 2025-26ರ ಹಣಕಾಸು ವರ್ಷಕ್ಕೆ ಶೇಕಡಾ 8.25 ರಷ್ಟು ವಾರ್ಷಿಕ ಬಡ್ಡಿ ದರವನ್ನು ಮುಂದುವರಿಸುವುದಾಗಿ ಪ್ರಕಟಿಸಿತ್ತು. ಈ ಕುರಿತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮಾರ್ಚ್ 2, 2026 ರಂದು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿ, &quot;ವಿವರವಾದ ಸಮಾಲೋಚನೆಗಳ ನಂತರ, ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) 2025-26ರ ಹಣಕಾಸು ವರ್ಷಕ್ಕೆ ಸದಸ್ಯರ ಖಾತೆಗಳಲ್ಲಿರುವ ಇಪಿಎಫ್ ಒಟ್ಟು ಮೊತ್ತಕ್ಕೆ ಶೇ. 8.25 ರಷ್ಟು ವಾರ್ಷಿಕ ಬಡ್ಡಿ ದರವನ್ನು ಜಮೆ ಮಾಡಲು ಶಿಫಾರಸು ಮಾಡಿದೆ&quot; ಎಂದು ತಿಳಿಸಿತ್ತು.&lt;/p&gt;&lt;h2&gt;&lt;strong&gt;ಬಡ್ಡಿ ಹಣ ಖಾತೆಗೆ ಕ್ರೆಡಿಟ್ ಆಗುವುದು ಯಾವಾಗ?&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರದ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಬಡ್ಡಿ ದರವನ್ನು ಮೊದಲು ಭಾರತ ಸರ್ಕಾರವು ಅಧಿಕೃತವಾಗಿ ಅಧಿಸೂಚನೆ (Notification) ಹೊರಡಿಸಬೇಕಾಗುತ್ತದೆ. ಆ ನಂತರವಷ್ಟೇ ಇಪಿಎಫ್&zwnj;ಒ ಚಂದಾದಾರರ ಖಾತೆಗಳಿಗೆ ಬಡ್ಡಿಯನ್ನು ಜಮೆ ಮಾಡುತ್ತದೆ. ಹೀಗಾಗಿ, ಇಪಿಎಫ್&zwnj;ಒ ಬಡ್ಡಿ ಜಮಾವಣೆಗೆ ಯಾವುದೇ ನಿರ್ದಿಷ್ಟ ದಿನಾಂಕವನ್ನು ಘೋಷಿಸಿಲ್ಲ.&lt;/p&gt;&lt;p&gt;ಸಾಮಾನ್ಯವಾಗಿ ಹಣಕಾಸು ವರ್ಷ ಮುಗಿದ ತಕ್ಷಣವೇ ಬಡ್ಡಿ ಹಣ ಜಮೆಯಾಗುವುದಿಲ್ಲ ಎಂದು 'ಬ್ಯಾಂಕ್&zwnj;ಬಜಾರ್&zwnj; ಡಾಟ್&zwnj;ಕಾಮ್' (BankBazaar.com) ಸಿಇಒ ಆದಿಲ್ ಶೆಟ್ಟಿ ತಿಳಿಸಿದ್ದಾರೆ. ಈ ಪ್ರಕ್ರಿಯೆಯು ಸರ್ಕಾರದ ಅನುಮೋದನೆ, ಖಾತೆಗಳ ಮರುಸಂಧಾನ (Reconciliation) ಮತ್ತು ಕೋಟ್ಯಂತರ ಸದಸ್ಯರ ದಾಖಲೆಗಳನ್ನು ಅಪ್&zwnj;ಡೇಟ್ ಮಾಡುವುದನ್ನು ಒಳಗೊಂಡಿರುವುದರಿಂದ ಇದಕ್ಕೆ ಕೆಲವು ವಾರಗಳ ಸಮಯ ಬೇಕಾಗುತ್ತದೆ. ಆದಿಲ್ ಶೆಟ್ಟಿ ಅವರ ಪ್ರಕಾರ, &quot;ಬಡ್ಡಿಯು ಪ್ರತಿ ತಿಂಗಳ ಬ್ಯಾಲೆನ್ಸ್ ಆಧಾರದ ಮೇಲೆ ಲೆಕ್ಕ ಹಾಕಲ್ಪಡುತ್ತದೆ. ಅದು ನಿಮ್ಮ ಪಾಸ್&zwnj;ಬುಕ್&zwnj;ನಲ್ಲಿ ತಕ್ಷಣ ಕಾಣಿಸದಿದ್ದರೂ ಆತಂಕಪಡುವ ಅಗತ್ಯವಿಲ್ಲ. ಸದಸ್ಯರು ನಿಯತಕಾಲಿಕವಾಗಿ ತಮ್ಮ ಇಪಿಎಫ್ ಪಾಸ್&zwnj;ಬುಕ್&zwnj;ನಲ್ಲಿ 'Int. Updated up to 31/03/2026' ಎಂದು ಅಪ್&zwnj;ಡೇಟ್ ಆಗಿದೆಯೇ ಎಂಬುದನ್ನು ಪರಿಶೀಲಿಸುತ್ತಿರಬೇಕು.&quot;&lt;/p&gt;&lt;h2&gt;&lt;strong&gt;ಹಿಂದಿನ ವರ್ಷಗಳಲ್ಲಿ ಬಡ್ಡಿ ಯಾವಾಗ ಜಮೆಯಾಗಿತ್ತು?&lt;/strong&gt;&lt;/h2&gt;&lt;p&gt;ಕಳೆದ 2025 ರ ವರ್ಷದಲ್ಲಿ ಭಾರಿ ಸಂಖ್ಯೆಯ ಇಪಿಎಫ್ ಸದಸ್ಯರ ಖಾತೆಗಳಿಗೆ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಬಡ್ಡಿ ಹಣ ಜಮೆಯಾಗಿತ್ತು. ಈ ಹಿಂದೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಬಡ್ಡಿ ಜಮೆಯಾಗುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದೆ. ತಜ್ಞರ ಪ್ರಕಾರ, ಈ ಬಾರಿಯೂ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬಡ್ಡಿ ಹಣ ಜಮೆಯಾಗುವ ಸಾಧ್ಯತೆಯಿದೆ. ಸರ್ಕಾರದ ಅಧಿಕೃತ ಅಧಿಸೂಚನೆ ಹೊರಬಿದ್ದ ನಂತರವೇ ನಿಖರವಾದ ದಿನಾಂಕ ತಿಳಿಯಲಿದೆ.&lt;/p&gt;&lt;h2&gt;&lt;strong&gt;ಬಡ್ಡಿ ಜಮೆ ವಿಳಂಬವಾದರೆ ಗ್ರಾಹಕರಿಗೆ ನಷ್ಟವಾಗುತ್ತಾ?&lt;/strong&gt;&lt;/h2&gt;&lt;p&gt;ಖಂಡಿತ ಇಲ್ಲ! ಇಪಿಎಫ್ ಯೋಜನೆ 1952 ರ ಪ್ಯಾರಾಗ್ರಾಫ್ 60 ರ ಪ್ರಕಾರ, ಹಣಕಾಸು ವರ್ಷದ ಕೊನೆಯಲ್ಲಿ ಬಡ್ಡಿಯನ್ನು ಜಮೆ ಮಾಡಲಾಗುತ್ತದೆಯಾದರೂ, ಅದರ ಲೆಕ್ಕಾಚಾರವನ್ನು ಮಾತ್ರ ಪ್ರತಿ ತಿಂಗಳ ಚಾಲ್ತಿ ಬ್ಯಾಲೆನ್ಸ್ (Monthly Running Balance) ಆಧಾರದ ಮೇಲೆ ಮಾಡಲಾಗುತ್ತದೆ. ಹೀಗಾಗಿ, ಆಡಳಿತಾತ್ಮಕ ಕಾರಣಗಳಿಂದಾಗಿ ಬಡ್ಡಿ ಜಮಾವಣೆಯು ತಡವಾದರೂ ಚಂದಾದಾರರಿಗೆ ಯಾವುದೇ ರೀತಿಯ ಒಂದು ರೂಪಾಯಿಯೂ ನಷ್ಟವಾಗುವುದಿಲ್ಲ. ಬಡ್ಡಿಯು ವಾರ್ಷಿಕವಾಗಿ ಚಕ್ರಬಡ್ಡಿಯಾಗಿ (Compounded Annually) ಸೇರ್ಪಡೆಯಾಗುವುದರಿಂದ, ವಿಳಂಬವಾದರೂ ನಿಮ್ಮ ಇಡೀ ವರ್ಷದ ಮುಕ್ತಾಯದ ಬಾಕಿಗೆ (Closing Balance) ಪೂರ್ಣ ಮೊತ್ತವನ್ನು ಸೇರಿಸಲಾಗುತ್ತದೆ ಎಂದು ಇಪಿಎಫ್&zwnj;ಒ ಹಲವು ಬಾರಿ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ನಿಮ್ಮ ಇಪಿಎಫ್ ಬಡ್ಡಿ ಮತ್ತು ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ?&lt;/strong&gt;&lt;/h2&gt;&lt;p&gt;ಇಪಿಎಫ್&zwnj;ಒ ಬಡ್ಡಿ ಹಣವನ್ನು ಜಮೆ ಮಾಡಿದ ತಕ್ಷಣ ಅದು ನಿಮ್ಮ ಒಟ್ಟು ಬ್ಯಾಲೆನ್ಸ್&zwnj;ನಲ್ಲಿ ಕಾಣಿಸಿಕೊಳ್ಳುತ್ತದೆ. ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ನೀವು ಈ ಕೆಳಗಿನ 4 ಸುಲಭ ವಿಧಾನಗಳ ಮೂಲಕ ಪರಿಶೀಲಿಸಬಹುದು:&lt;/p&gt;&lt;h3&gt;&lt;strong&gt;1. ಉಮಾಂಗ್ (UMANG) ಆ್ಯಪ್ ಮೂಲಕ&lt;/strong&gt;&lt;/h3&gt;&lt;ul&gt; &lt;li&gt;ಉಮಾಂಗ್ ಆ್ಯಪ್ ಡೌನ್&zwnj;ಲೋಡ್ ಮಾಡಿ ಇನ್&zwnj;ಸ್ಟಾಲ್ ಮಾಡಿಕೊಳ್ಳಿ.&lt;/li&gt; &lt;li&gt;ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ರಿಜಿಸ್ಟರ್ ಮಾಡಿ.&lt;/li&gt; &lt;li&gt;ಆಪ್ಷನ್&zwnj;ಗಳಲ್ಲಿ 'EPFO' ಅನ್ನು ಆಯ್ಕೆ ಮಾಡಿ.&lt;/li&gt; &lt;li&gt;'View Passbook' ಮೇಲೆ ಕ್ಲಿಕ್ ಮಾಡಿ.&lt;/li&gt; &lt;li&gt;ನಿಮ್ಮ ಯುಎಎನ್ (UAN) ಸಂಖ್ಯೆಯನ್ನು ನಮೂದಿಸಿ, 'Get OTP' ಕ್ಲಿಕ್ ಮಾಡಿ.&lt;/li&gt; &lt;li&gt;ಒಟಿಪಿ ದಾಖಲಿಸಿ 'Login' ಮಾಡಿ. ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರದೆಯ ಮೇಲೆ ಕಾಣಿಸುತ್ತದೆ.&lt;/li&gt;&lt;/ul&gt;&lt;h3&gt;&lt;strong&gt;2. ಇಪಿಎಫ್&zwnj;ಒ ಪೋರ್ಟಲ್ (EPFO Portal) ಮೂಲಕ&lt;/strong&gt;&lt;/h3&gt;&lt;ul&gt; &lt;li&gt;ಇಪಿಎಫ್&zwnj;ಒ ವೆಬ್&zwnj;ಸೈಟ್&zwnj;ನ 'Employee' ಸೆಕ್ಷನ್&zwnj;ಗೆ ಹೋಗಿ 'Member Passbook' ಕ್ಲಿಕ್ ಮಾಡಿ.&lt;/li&gt; &lt;li&gt;ನಿಮ್ಮ UAN ಮತ್ತು ಪಾಸ್&zwnj;ವರ್ಡ್ ಬಳಸಿ ಲಾಗಿನ್ ಮಾಡಿ. ಇಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆ, ಆರಂಭಿಕ ಮತ್ತು ಮುಕ್ತಾಯದ ಬಾಕಿ ಹಾಗೂ ಜಮೆಯಾದ ಬಡ್ಡಿಯ ಸಂಪೂರ್ಣ ವಿವರ ಕಾಣಸಿಗುತ್ತದೆ.&lt;/li&gt;&lt;/ul&gt;&lt;h3&gt;&lt;strong&gt;3. ಮಿಸ್ಡ್ ಕಾಲ್ (Missed Call) ಮೂಲಕ&lt;/strong&gt;&lt;/h3&gt;&lt;p&gt;ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಮತ್ತು ಕೊನೆಯ ಕೊಡುಗೆಯ ವಿವರಗಳನ್ನು ಎಸ್&zwnj;ಎಮ್&zwnj;ಎಸ್ ಮೂಲಕ ಪಡೆಯಬಹುದು. (ಇದಕ್ಕಾಗಿ ನಿಮ್ಮ UAN ಸಕ್ರಿಯವಾಗಿರಬೇಕು).&lt;/p&gt;&lt;h3&gt;&lt;strong&gt;4. ಎಸ್&zwnj;ಎಮ್&zwnj;ಎಸ್ (SMS) ಕಳುಹಿಸುವ ಮೂಲಕ&lt;/strong&gt;&lt;/h3&gt;&lt;p&gt;ನಿಮ್ಮ ನೋಂದಾಯಿತ ಮೊಬೈಲ್&zwnj;ನಿಂದ 7738299899 ಸಂಖ್ಯೆಗೆ UAN EPFOHO ENG ಎಂದು ಟೈಪ್ ಮಾಡಿ ಎಸ್&zwnj;ಎಮ್&zwnj;ಎಸ್ ಕಳುಹಿಸಬೇಕು (ENG ಎಂದರೆ ಇಂಗ್ಲಿಷ್ ಭಾಷೆ). ಒಂದು ವೇಳೆ ನಿಮಗೆ ಮಾಹಿತಿ ಕನ್ನಡದಲ್ಲಿ ಬೇಕಿದ್ದರೆ UAN EPFOHO KAN ಎಂದು ಕಳುಹಿಸಬಹುದು.&lt;/p&gt;&lt;p&gt;ಈ ಎಲ್ಲಾ ಸೇವೆಗಳನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ನಿಮ್ಮ UAN ಸಂಖ್ಯೆಯೊಂದಿಗೆ ಲಿಂಕ್ (Seeded) ಆಗಿರುವುದನ್ನು ಖಚಿತಪಡಿಸಿಕೊಳ್ಳಿ ಅಥವಾ ಇತ್ತೀಚಿನ ಮಾಹಿತಿಯೊಂದಿಗೆ ಅಪ್&zwnj;ಡೇಟ್ ಮಾಡಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/business/epfo-interest-credit-fy-2025-26-delay-how-to-check-epf-balance-online-status-san/articleshow-z42t88o"/>
        </item>
        <item>
            <title><![CDATA[ಹಾಲು ಕುಡಿಸಿ ಮಹಿಳೆಯರ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ 29ರ ಧಾರ್ಮಿಕ ಗುರು,12 ವಿಡಿಯೋ ಪತ್ತೆ]]></title>
            <link>https://kannada.asianetnews.com/india-news/iit-graduate-turned-religious-guru-arrested-for-exploit-women-12-videos-recovered/articleshow-rk1ial8</link>
            <guid isPermaLink="true">https://kannada.asianetnews.com/india-news/iit-graduate-turned-religious-guru-arrested-for-exploit-women-12-videos-recovered/articleshow-rk1ial8</guid>
            <pubDate>Tue, 02 Jun 2026 19:01:46 +0530</pubDate>
            <description><![CDATA[&lt;p&gt;ನಾಸಿಕ್ ಗುರು ಅರೆಸ್ಟ್ ಬಳಿಕ ನೂರಾರು ವಿಡಿಯೋ ಪತ್ತೆಯಾಗಿತ್ತು. ಇದೀಗ 29ರ ಹರೆಯದ ಐಟಿಟಿ ಪದವೀಧರ ಧಾರ್ಮಿಕ ಗುರು ಅನ್ನೋ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪತ್ತೆಯಾಗಿದೆ. ಗುರು ಅರೆಸ್ಟ್ ಆಗಿದ್ದು, 12 ವಿಡಿಯೋಗಳು ಪತ್ತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt48gmnzyx3c7149vfjwpsqj,imgname-spiritual-guru-abhishek-mishra-arrest-1780407095998.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಖನೌ(ಜೂ.02) &lt;/strong&gt;ಭಾರತದಲ್ಲಿ ಧಾರ್ಮಿಕ ಗುರು, ಬಾಬಾ ಹೆಸರಿನಲ್ಲಿ ನಡೆಯುತ್ತಿರುವ ಮೋಸ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ನಾಸಿಕ್&zwnj;ನ ಧಾರ್ಮಿಕ ಗುರು ಅಶೋಕ್ ಖಾರಟ್ ಅರೆಸ್ಟ್ ಬಳಿಕ ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಪ್ರಕರಣ ತಣ್ಣಾಗುತ್ತಿದ್ದಂತೆ ಇದೀಗ ಒಡಿಶಾ ಮೂಲಕ ಐಐಟಿ ಪದವೀಧರ ಅಭಿಷೇಕ್ ಮಿಶ್ರಾ, ಉತ್ತರ ಪ್ರದೇಶದ ಮಥುರಾದಲ್ಲಿ ಆಚಾರ್ತ ನಾರಾಯಣ ದಾಸ್ ಗುರು ಎಂದು ಗುರುತಿಸಿಕೊಂಡಿದ್ದ. ಯೂಟ್ಯೂಬ್ ಮೂಲಕ ಭಜನೆ ಹಾಡಿ ಮರಳು ಮಾಡುತ್ತಿದ್ದ ಈ ಗುರು ಮಹಿಳೆಯರು, ಯುವತಿಯರಿಗೆ ಪ್ರಸಾದ ರೂಪದಲ್ಲಿ ಹಾಲು ಕುಡಿಸಿ ಲೈ0ಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇದೀಗ ಯುಪಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.&lt;/p&gt;&lt;h2&gt;ಮೆಕಾನಿಕಲ್ ಎಂಜಿನೀಯರ್ ಮುಗಿಸಿ ಧಾರ್ಮಿಕ ಗುರು&lt;/h2&gt;&lt;p&gt;ರೂರ್ಕೆಯಲ್ಲಿ ಮೆಕಾನಿಕಲ್ ಎಂಜಿನೀಯರ್ ಪದವಿ ಮುಗಿಸಿ ರಾಧಾ ಕೃಪಾ ಅಮೃತಾ ಅನ್ನೋ ಯೂಟ್ಯೂಬ್ ಚಾನೆಲ್ ಆರಂಭಿಸಿದ ಅಭಿಷೇಕ್ ಮಿಶ್ರಾ ಭಜನೆ, ಧಾರ್ಮಿಕ ಕಾರ್ಯಕ್ರಮ, ಆಧ್ಯಾತ್ಮ ಮಾತುಗಳ ಮೂಲಕ ಭಾರಿ ಸದ್ದು ಮಾಡಿದ್ದ. ಯೂಟ್ಯೂಬ್ ಮೂಲಕ ಅಪಾರ ಅನುಯಾಯಿಗಳ ಪಡೆದುಕೊಂಡ ಅಭಿಷೇಕ್ ಮಿಶ್ರಾ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಚಲನ ಮೂಡಿಸಿದ್ದ.&lt;/p&gt;&lt;h2&gt;ಹಾಲಿನಲ್ಲಿ ಅಮಲು ಪದಾರ್ಥ&lt;/h2&gt;&lt;p&gt;ಕೇವಲ 29ರ ಹರೆಯದ ಅಭಿಷೇಕ್ ಮಿಶ್ರಾ ಧಾರ್ಮಿಕ ಗುರುವಾಗಿ ಗುರುತಿಸಿಕೊಂಡಿದ್ದ. ಮಥುರಾದ ವೃಂದಾವನದಲ್ಲಿ ನೆಲೆ ನಿಂತ ಅಭಿಷೇಕ್ ಮಿಶ್ರಾ ಎಂಜಿನೀಯರಿಂಗ್ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಯುವತಿಯರನ್ನು ಆಧ್ಯಾತ್ಮದ ಹೆಸರಲ್ಲಿ ಅವರ ಕುಟುಂಬದಿಂದ ದೂರ ಉಳಿಯುವಂತೆ ಮಾಡುತ್ತಿದ್ದ. ಬಳಿಕ ಮಥುರಾದಲ್ಲಿ ಈತನ ಅಪಾರ್ಟ್&zwnj;ಮೆಂಟ್&zwnj;ಗೆ ಕರೆದೊಯ್ಯುತ್ತಿದ್ದ. ಹಾಲಿನಲ್ಲಿ ಮತ್ತುಭರಿಸುವ ಪದಾರ್ಥ ನೀಡಿ ಲೈ0ಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.&lt;/p&gt;&lt;h2&gt;ಗಂಧರ್ವ ವಿವಾಹ ಹೆಸರಿನಲ್ಲಿ ದೌರ್ಜನ್ಯ&lt;/h2&gt;&lt;p&gt;ಅಮಲಿನಲ್ಲಿರುವ ಯುವತಿಯರನ್ನು ಗಂಧರ್ವ ವಿವಾಹ ಹೆಸರಿನಲ್ಲಿ ಮದುವೆ, ಮೊದಲ ರಾತ್ರಿ ಎಂದೆಲ್ಲಾ ಶಾಸ್ತ್ರಗಳನ್ನು ಮಾಡಿ ಯುವತಿಯರನ್ನು ಬಳಸಿಕೊಳ್ಳುತ್ತಿದ್ದ. ಈ ಎಲ್ಲಾ ಘಟನೆಗಳನ್ನು ಮೊಬೈಲ್ ಮೂಲಕ ರೆಕಾರ್ಡ್ ಮಾಡುತ್ತಿದ್ದ. ಮತ್ತು ಇಳಿದಂತೆ ಯುವತಿಯರಿಗೆ ತಾವು ಮೋಸ ಹೋಗಿರುವುದಾಗಿ ಅರಿವಾಗುತ್ತಿದ್ದಂತೆ ವಿಡಿಯೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದ. ಹಲವು ಪೋಷಕರಿಗೂ ವಿಡಿಯೋ ಕಳುಹಿಸಿ ಲಕ್ಷ ಲಕ್ಷ ರೂಪಾಯಿ ಪೀಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.&lt;/p&gt;&lt;h2&gt;ಮೊಬೈಲ್&zwnj;ನಲ್ಲಿ 12 ವಿಡಿಯೋ ಪತ್ತೆ&lt;/h2&gt;&lt;p&gt;ಅರೆಸ್ಟ್ ಆಗಿರುವ ಅಭಿಷೇಕ್ ಮಿಶ್ರಾ ಮೊಬೈಲ್&zwnj;ನಲ್ಲಿ 12 ಬೇರೆ ಬೇರೆ ಯುವತಿಯರ ಜೊತೆಗಿನ ವಿಡಿಯೋ ಪತ್ತೆಯಾಗಿದೆ. ಹಲವು ದಾಖಲೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/iit-graduate-turned-religious-guru-arrested-for-exploit-women-12-videos-recovered/articleshow-rk1ial8"/>
        </item>
        <item>
            <title><![CDATA[ಬರೋಬ್ಬರಿ 5 ಪುಟಗಳ ಸುದೀರ್ಘ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಅಣ್ಣಾಮಲೈ!]]></title>
            <link>https://kannada.asianetnews.com/gallery/politics/tamil-nadu-politics-annamalai-submits-resignation-to-bjp-chief-nitin-nabin-and-meets-amit-shah-gdp-wocxm9r</link>
            <guid isPermaLink="true">https://kannada.asianetnews.com/gallery/politics/tamil-nadu-politics-annamalai-submits-resignation-to-bjp-chief-nitin-nabin-and-meets-amit-shah-gdp-wocxm9r</guid>
            <pubDate>Tue, 02 Jun 2026 18:24:39 +0530</pubDate>
            <description><![CDATA[&lt;p&gt;ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಹೈಕಮಾಂಡ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮದೇ ಆದ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಮೂಲಕ 'ದ್ರಾವಿಡ ಮಾದರಿ'ಗೆ ಪರ್ಯಾಯವನ್ನು ಒದಗಿಸಲು ಸಜ್ಜಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt454kj5ywhfmbqaa94va70q,imgname-annamalai--1--1780403555909.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಹೈಕಮಾಂಡ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮದೇ ಆದ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಮೂಲಕ 'ದ್ರಾವಿಡ ಮಾದರಿ'ಗೆ ಪರ್ಯಾಯವನ್ನು ಒದಗಿಸಲು ಸಜ್ಜಾಗಿದ್ದಾರೆ.&lt;/p&gt;&lt;img&gt;&lt;p&gt;ಚೆನ್ನೈ: ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ಮುಂದಿನ ರಾಜಕೀಯ ನಡೆ ಕೊನೆಗೂ ಸ್ಪಷ್ಟವಾಗುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿದ್ದ ಅಣ್ಣಾಮಲೈ, ಪ್ರಸ್ತುತ ರಾಷ್ಟ್ರೀಯ ನಾಯಕರ ಕಡೆಗಣನೆಯಿಂದ ಬೇಸತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ (ಜೂನ್ 2) ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿದ ಅಣ್ಣಾಮಲೈ, ತಮ್ಮ 5 ಪುಟಗಳ ಸುದೀರ್ಘ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಈ ಬೆಳವಣಿಗೆಯು ದಕ್ಷಿಣ ಭಾರತದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ರಾಜೀನಾಮೆ ಸಲ್ಲಿಕೆಯ ಬೆನ್ನಲ್ಲೇ ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ನಾಯಕರು ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿ ನೀಡಲು ಕೊನೆಯ ಕ್ಷಣದವರೆಗೂ ಮನವೊಲಿಸುವ ಪ್ರಯತ್ನ ನಡೆಸಿದರಾದರೂ, ಅಣ್ಣಾಮಲೈ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎನ್ನಲಾಗಿದೆ. &quot;ನನ್ನದೇ ಆದ ಸ್ವತಂತ್ರ ರಾಜಕೀಯ ಮಾರ್ಗವನ್ನು ರೂಪಿಸಿಕೊಳ್ಳಲು ಬಯಸುತ್ತೇನೆ&quot; ಎಂದು ಅವರು ಹೈಕಮಾಂಡ್&zwnj;ಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ&lt;/p&gt;&lt;img&gt;&lt;p&gt;2020ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ಅತ್ಯಂತ ಕಿರಿಯ ವಯಸ್ಸಿಗೆ ತಮಿಳುನಾಡು ಬಿಜೆಪಿ ಸಾರಥ್ಯ ವಹಿಸಿದ್ದ ಅಣ್ಣಾಮಲೈ ಮತ್ತು ಹೈಕಮಾಂಡ್ ನಡುವಿನ ಭಿನ್ನಾಭಿಪ್ರಾಯ ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿತ್ತು. 2026ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಎಐಎಡಿಎಂಕೆ (AIADMK) ಜೊತೆ ಮೈತ್ರಿ ಪುನರುಜ್ಜೀವನಗೊಳಿಸಲು ಹೈಕಮಾಂಡ್ ಬಯಸಿತ್ತು. ಆದರೆ ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿ ಹಾಗೂ ಇವಿಆರ್, ಎಂಜಿಆರ್ ಮತ್ತು ಜಯಲಲಿತಾ ಅವರ ಮೇಲಿನ ರಾಜಕೀಯ ಟೀಕೆಗಳು ಮೈತ್ರಿಗೆ ಮುಳುವಾಗಿದ್ದವು. ಈ ಕಾರಣ ನೀಡಿ 2025ರಲ್ಲೇ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ನೈನಾರ್ ನಾಗೇಂದ್ರನ್ ಅವರನ್ನು ನೇಮಿಸಲಾಯಿತು.&lt;/p&gt;&lt;p&gt;ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಮಲೈ ತಾವು ಸ್ಪರ್ಧಿಸಲು ಇಚ್ಛಿಸಿದ್ದ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಹೈಕಮಾಂಡ್ ಟಿಕೆಟ್ ನಿರಾಕರಿಸಿತ್ತು. ಆದಾಗ್ಯೂ, ಅವರು ಪಕ್ಷದ ಪರವಾಗಿ ರಾಜ್ಯಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ, ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದ್ದು ಅಣ್ಣಾಮಲೈ ಬೆಂಬಲಿಗರನ್ನು ಮತ್ತಷ್ಟು ಕೆರಳಿಸಿತ್ತು. ಅಣ್ಣಾಮಲೈ ಅವರ ಶ್ರಮವನ್ನು ಹೈಕಮಾಂಡ್ ಸರಿಯಾಗಿ ಗುರುತಿಸುತ್ತಿಲ್ಲ ಎಂಬ ಅಸಮಾಧಾನ ಅವರ ಆಪ್ತ ವಲಯದಲ್ಲಿ ತೀವ್ರವಾಗಿತ್ತು.&lt;/p&gt;&lt;img&gt;&lt;p&gt;ಅಣ್ಣಾಮಲೈ ಅವರ ಈ ತೀರ್ಮಾನದ ಹಿಂದೆ ತಮಿಳುನಾಡಿನ ಪ್ರಸ್ತುತ ರಾಜಕೀಯ ಸ್ಥಿತ್ಯಂತರಗಳು ಪ್ರಮುಖ ಪಾತ್ರ ವಹಿಸಿವೆ. ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅವರು ಸಿನಿಮಾ ರಂಗ ತ್ಯಜಿಸಿ &quot;ತಮಿಳಗ ವೆಟ್ರಿ ಕಳಗಂ&quot; (TVK) ಪಕ್ಷ ಸ್ಥಾಪಿಸಿ ಯಶಸ್ವಿಯಾಗಿ ಉದಯಿಸಿರುವುದು ಅಣ್ಣಾಮಲೈ ಅವರ ಯೋಚನೆಯನ್ನು ಬದಲಿಸಿದೆ.&lt;/p&gt;&lt;p&gt;ತಮಿಳುನಾಡಿನಲ್ಲಿ ಸಾಂಪ್ರದಾಯಿಕ ದ್ರಾವಿಡ ರಾಜಕೀಯದ ಯುಗ ಮುಗಿದಿದೆ. ಕೇವಲ ಭಾಷಾ ಪ್ರೇಮದ ಮೇಲಿನ ರಾಜಕೀಯ ಇನ್ಮುಂದೆ ನಡೆಯುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಟ ವಿಜಯ್ ಅವರ ಜನಪ್ರಿಯತೆಗೆ ಸರಿಸಮನಾಗಿ ನಿಂತು ಹೋರಾಡಬಲ್ಲ ಸಮರ್ಥ ನಾಯಕ ರಾಜ್ಯದಲ್ಲಿಲ್ಲ. ಈ ಶೂನ್ಯವನ್ನು ತುಂಬಲು ಅಣ್ಣಾಮಲೈ ಅವರಿಗೆ ಪ್ರಾದೇಶಿಕ ಅಸ್ಮಿತೆಯ ವೇದಿಕೆ ಅಗತ್ಯವಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಬಿಜೆಪಿಯಿಂದ ಹೊರಬರಲಿರುವ ಅಣ್ಣಾಮಲೈ ಮುಂದೇನು ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಜೂನ್ 4 ರಂದು ಉತ್ತರ ಸಿಗುವ ಸಾಧ್ಯತೆ ಇದೆ. ಅಂದು ಅಣ್ಣಾಮಲೈ ಅವರ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲೇ ಅವರು ತಮ್ಮ ಸ್ವಂತ ಪ್ರಾದೇಶಿಕ ಪಕ್ಷ ಅಥವಾ ಜನಾಂದೋಲನ ವೇದಿಕೆಯನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;p&gt;ಈಗಾಗಲೇ ಕೊಯಮತ್ತೂರು ಹಾಗೂ ಮಧುರೈನಾದ್ಯಂತ ಅವರ ಬೆಂಬಲಿಗರು ಬೃಹತ್ ಪೋಸ್ಟರ್&zwnj;ಗಳನ್ನು ಅಂಟಿಸಿದ್ದು, ಅಣ್ಣಾಮಲೈ ಅವರ ಮುಂದಿನ ಅವತಾರವೇ ತಮಿಳುನಾಡಿನ ರಕ್ಷಣೆ ಎಂದು ಘೋಷಿಸಿದ್ದಾರೆ. ಮೂಲಗಳ ಪ್ರಕಾರ, ಬಿಜೆಪಿಯ ಕೇಂದ್ರ ನಾಯಕತ್ವ ನೀಡಿದ ದೆಹಲಿ ಮಟ್ಟದ ಹುದ್ದೆಗಳ ಆಫರ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ಅವರು, ತಮಿಳುನಾಡಿನಲ್ಲೇ ನೆಲೆ ನಿಂತು 'ದ್ರಾವಿಡ ಮಾದರಿ'ಗೆ ಪರ್ಯಾಯವಾಗಿ ತೀವ್ರ ರಾಷ್ಟ್ರೀಯತಾವಾದಿ ಸದ್ಧಾಂತಿಕ ಪ್ರಾದೇಶಿಕ ಪಕ್ಷವನ್ನು ಕಟ್ಟಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಚೆನ್ನೈನಿಂದ ದೆಹಲಿಗೆ ತೆರಳುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ್ದ ಅಣ್ಣಾಮಲೈ, ಎರಡು ದಿನಗಳ ಕಾಲ ತಾಳ್ಮೆಯಿಂದ ಕಾಯುವಂತೆ ವಿನಂತಿಸಿದ್ದರು. ಆ ಎರಡು ದಿನಗಳ ಗಡುವು ನಾಳೆಗೆ ಮುಗಿಯಲಿದ್ದು, ಬುಧವಾರ ಅಥವಾ ಗುರುವಾರ ಅವರ ರಾಜಕೀಯ ಭವಿಷ್ಯದ ಅಧಿಕೃತ ಘೋಷಣೆ ಹೊರಬೀಳಲಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/politics/tamil-nadu-politics-annamalai-submits-resignation-to-bjp-chief-nitin-nabin-and-meets-amit-shah-gdp-wocxm9r"/>
        </item>
        <item>
            <title><![CDATA[OSM ಪೋರ್ಟಲ್ ಹಗರಣದ ಬೆನ್ನಲ್ಲೇ ಕೇಂದ್ರ ಆಪರೇಷನ್‌: CBSE ಅಧ್ಯಕ್ಷ, ಕಾರ್ಯದರ್ಶಿ ವರ್ಗಾವಣೆ; ಭ್ರಷ್ಟಾಚಾರದ ಕುರಿತು ತನಿಖೆ]]></title>
            <link>https://kannada.asianetnews.com/education/cbse-osm-portal-scam-chairman-secretary-transferred-inquiry-committee-formed-san/articleshow-iyod2zt</link>
            <guid isPermaLink="true">https://kannada.asianetnews.com/education/cbse-osm-portal-scam-chairman-secretary-transferred-inquiry-committee-formed-san/articleshow-iyod2zt</guid>
            <pubDate>Tue, 02 Jun 2026 18:21:24 +0530</pubDate>
            <description><![CDATA[&lt;p&gt;ಸಿಬಿಎಸ್ಇಯ 'ಆನ್-ಸ್ಕ್ರೀನ್ ಮಾರ್ಕಿಂಗ್' (OSM) ಪೋರ್ಟಲ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮತ್ತು ತಾಂತ್ರಿಕ ವೈಫಲ್ಯಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyeemmq0wg1yd9kc9g7wwwn,imgname-cbse-class-12-marksheet-controversy-board-exam-trust-crisis-osm-revaluation-student-anxiety-1780211995287.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ (ಜೂ.2): ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ಇತ್ತೀಚೆಗೆ ಜಾರಿಗೆ ತಂದಿದ್ದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಾದ 'ಆನ್-ಸ್ಕ್ರೀನ್ ಮಾರ್ಕಿಂಗ್' (OSM) ಪೋರ್ಟಲ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಭಾರಿ ಆಡಳಿತಾತ್ಮಕ ಕ್ರಮ ಕೈಗೊಂಡಿದೆ. ಮಂಡಳಿಯ ಇಬ್ಬರು ಉನ್ನತ ಅಧಿಕಾರಿಗಳಾದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಒಎಸ್ಎಂ ಸೇವೆಗಳ ಟೆಂಡರ್ ಪ್ರಕ್ರಿಯೆಯ ತನಿಖೆಗಾಗಿ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಕಳೆದ ಕೆಲವು ವಾರಗಳಿಂದ ಸಿಬಿಎಸ್ಇ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆ, ಆನ್&zwnj;ಲೈನ್ ಪೋರ್ಟಲ್&zwnj;ನಲ್ಲಿನ ತಾಂತ್ರಿಕ ದೋಷಗಳು ಮತ್ತು ಖಾಸಗಿ ವೆಂಡರ್ (Vendor) ಆಯ್ಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ದಿಢೀರ್ ಕ್ರಮಕ್ಕೆ ಮುಂದಾಗಿದೆ.&lt;/p&gt;&lt;p&gt;ಸಿಬಿಎಸ್ಇ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಶಿಸ್ತುಕ್ರಮ ಜರುಗಿಸಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಮಂಡಳಿಯ ಒಟ್ಟಾರೆ ಕಾರ್ಯನಿರ್ವಹಣೆ ಮತ್ತು ಪರೀಕ್ಷಾ ಸುಧಾರಣೆಗಳ ನೇತೃತ್ವ ವಹಿಸಿದ್ದ ಸಿಬಿಎಸ್ಇ ಅಧ್ಯಕ್ಷ ರಾಹುಲ್ ಸಿಂಗ್ (IAS) ಹಾಗೂ ಮಂಡಳಿಯ ಆಡಳಿತ, ಹಣಕಾಸು ಮತ್ತು ಸಂಯೋಜನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಾರ್ಯದರ್ಶಿ ಹಿಮಾಂಶು ಗುಪ್ತಾ (IAS) ಅವರನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿದೆ. ದೇಶದ ಅತ್ಯಂತ ದೊಡ್ಡ ಶಾಲಾ ಪರೀಕ್ಷಾ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.&lt;/p&gt;&lt;p&gt;ದೇಶಾದ್ಯಂತ ತಲ್ಲಣ ಮೂಡಿಸಿದ್ದ ಸಿಬಿಎಸ್ಇ ಡಿಜಿಟಲ್ ವ್ಯವಸ್ಥೆ&lt;/p&gt;&lt;p&gt;ಇತ್ತೀಚೆಗೆ ಸಿಬಿಎಸ್ಇ 10 ಮತ್ತು 12 ನೇ ತರಗತಿಯ ಫಲಿತಾಂಶಗಳು ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಒಎಸ್ಎಂ (OSM) ಪೋರ್ಟಲ್&zwnj;ನಲ್ಲಿ ಉತ್ತರ ಪತ್ರಿಕೆಗಳನ್ನು ನೋಡುವಾಗ ಪುಟಗಳು ಮಸುಕಾಗಿರುವುದು (Blurred), ಪ್ರಮುಖ ವಿಭಾಗಗಳೇ ಕಾಣೆಯಾಗಿರುವುದು (Missing Sections) ಹಾಗೂ ಪೋರ್ಟಲ್ ಸಂಪೂರ್ಣವಾಗಿ ಕ್ರ್ಯಾಶ್ ಆಗಿರುವುದು ಬೆಳಕಿಗೆ ಬಂದಿತ್ತು. ಇದರಿಂದಾಗಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.&lt;/p&gt;&lt;p&gt;ಈ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆಯನ್ನು ಮಂಡಳಿಯು ಅತ್ಯಂತ ಆತುರವಾಗಿ ಮತ್ತು ಸೂಕ್ತ ಪರೀಕ್ಷೆಗಳನ್ನು ನಡೆಸದೇ ಜಾರಿಗೆ ತಂದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ, ಈ ಡಿಜಿಟಲ್ ಮೌಲ್ಯಮಾಪನ ಕಾಂಟ್ರಾಕ್ಟ್ ಅನ್ನು ಖಾಸಗಿ ವೆಂಡರ್&zwnj;ಗೆ ನೀಡಿದ ಟೆಂಡರ್ ಪ್ರಕ್ರಿಯೆ, ಸೈಬರ್ ಭದ್ರತೆಯ ದೋಷಗಳು ಹಾಗೂ ಮರು-ಮೌಲ್ಯಮಾಪನ (Re-evaluation) ಪ್ರಕ್ರಿಯೆಯಲ್ಲಿ ಉಂಟಾದ ಭಾರಿ ವಿಳಂಬದ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ವಿವಾದ ತಾರಕಕ್ಕೇರಿದಾಗ ಸಿಬಿಎಸ್ಇ ಮಂಡಳಿಯು ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ, ಹಲವು ಸ್ಪಷ್ಟೀಕರಣಗಳನ್ನು ನೀಡಿತ್ತಲ್ಲದೆ, ವಿದ್ಯಾರ್ಥಿಗಳ ಪ್ರತಿ ದೂರನ್ನು ಪರಿಶೀಲಿಸುವುದಾಗಿ ಹೇಳಿತ್ತು. ಆದರೂ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ತಣ್ಣಗಾಗಿರಲಿಲ್ಲ.&lt;/p&gt;&lt;p&gt;ಉನ್ನತ ಮಟ್ಟದ ಸಮಿತಿಯಿಂದ ಸಮಗ್ರ ತನಿಖೆ&lt;/p&gt;&lt;p&gt;ಈ ಇಡೀ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಒಎಸ್ಎಂ (OSM) ಸೇವೆಗಳ ಖರೀದಿ ಮತ್ತು ಗುತ್ತಿಗೆ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಖಾಸಗಿ ಕಂಪನಿಗೆ ಡಿಜಿಟಲ್ ಮೌಲ್ಯಮಾಪನದ ಕಾಂಟ್ರಾಕ್ಟ್ ಅನ್ನು ನಿಯಮಾನುಸಾರ ನೀಡಲಾಗಿದೆಯೇ? ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ಲಾ ಅಧಿಕೃತ ನಿಯಮಗಳನ್ನು ಪಾಲಿಸಲಾಗಿದೆಯೇ? ಮತ್ತು ತಾಂತ್ರಿಕ ವೈಫಲ್ಯಕ್ಕೆ ಕಾರಣ ಯಾರು? ಎಂಬಿತ್ಯಾದಿ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/education/cbse-osm-portal-scam-chairman-secretary-transferred-inquiry-committee-formed-san/articleshow-iyod2zt"/>
        </item>
        <item>
            <title><![CDATA[ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಪದೇ ಪದೇ ಬೃಂದಾವನಕ್ಕೆ ಹೋಗುವುದೇಕೆ? ಪ್ರೇಮಾನಂದ್ ಗುರೂಜಿ ಮೇಲಿನ ಭಕ್ತಿ ತಿಳಿಯಿರಿ]]></title>
            <link>https://kannada.asianetnews.com/gallery/cricket-sports/why-virat-kohli-and-anushka-sharma-frequently-visit-vrindavan-premanand-ji-maharaj-mutt-sat-ykz0ygb</link>
            <guid isPermaLink="true">https://kannada.asianetnews.com/gallery/cricket-sports/why-virat-kohli-and-anushka-sharma-frequently-visit-vrindavan-premanand-ji-maharaj-mutt-sat-ykz0ygb</guid>
            <pubDate>Tue, 02 Jun 2026 18:08:19 +0530</pubDate>
            <description><![CDATA[&lt;p&gt;ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ (Anushka Sharma) ಜೋಡಿಯು ಪದೇ ಪದೇ ಬೃಂದಾವನದ ಪ್ರೇಮಾನಂದ್ ಗುರೂಜಿ (Vrindavan Premananda Maharaj) ಅವರನ್ನು ಭೇಟಿ ಮಾಡುತ್ತಿರುವುದರ ಹಿಂದೆ ಹಲವು ಕಾರಣಗಳಿವೆ. ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಯಲು ಈ ಸುದ್ದಿಯನ್ನು ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt43gwrgngfhf9g4fz0251dh,imgname-virat-kohli-visit-premanand-maharaj-mutt--2--1780401861391.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ (Anushka Sharma) ಜೋಡಿಯು ಪದೇ ಪದೇ ಬೃಂದಾವನದ ಪ್ರೇಮಾನಂದ್ ಗುರೂಜಿ (Vrindavan Premananda Maharaj) ಅವರನ್ನು ಭೇಟಿ ಮಾಡುತ್ತಿರುವುದರ ಹಿಂದೆ ಹಲವು ಕಾರಣಗಳಿವೆ. ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಯಲು ಈ ಸುದ್ದಿಯನ್ನು ಓದಿ.&lt;/p&gt;&lt;img&gt;&lt;p&gt;ಕ್ರಿಕೆಟ್ ಮೈದಾನದಲ್ಲಿ ರನ್ ಮಷೀನ್ ಆಗಿ ಅಬ್ಬರಿಸುವ ವಿರಾಟ್ ಕೊಹ್ಲಿ ಮತ್ತು ಬೆಳ್ಳಿ ಪರದೆಯ ಮೇಲೆ ಮಿಂಚುವ ಅನುಷ್ಕಾ ಶರ್ಮಾ, ಇಂದು ವಿಶ್ವದ ಅತ್ಯಂತ ಪ್ರಭಾವಶಾಲಿ ಜೋಡಿಗಳಲ್ಲಿ ಒಬ್ಬರು. ಸತತ ಎರಡನೇ ಬಾರಿ ಐಪಿಎಲ್ ಕಪ್ ಗೆದ್ದ ಸಂಭ್ರಮದಲ್ಲಿರುವ ಆರ್&zwnj;ಸಿಬಿ ಸ್ಟಾರ್ ಆಟಗಾರ ವಿರಾಟ್, ಈ ಗೆಲುವಿನ ಬೆನ್ನಲ್ಲೇ ಮತ್ತೆ ಬೃಂದಾವನದತ್ತ ಮುಖ ಮಾಡಿದ್ದಾರೆ.&amp;nbsp;&lt;/p&gt;&lt;p&gt;ಗ್ಲಾಮರ್ ಜಗತ್ತಿನ ಈ ಜೋಡಿ ಪದೇ ಪದೇ ಮಥುರಾ ಮತ್ತು ಬೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ್ ಗುರೂಜಿ ಅವರ ಸನ್ನಿಧಿಗೆ ಭೇಟಿ ನೀಡುವುದು ಅನೇಕರಲ್ಲಿ ಕುತೂಹಲ ಮೂಡಿಸಿದೆ. ಇವರ ಈ ಆಧ್ಯಾತ್ಮಿಕ ಸೆಳೆತದ ಹಿಂದೆ ಕೆಲವು ಮಹತ್ವದ ಕಾರಣಗಳಿವೆ.&lt;/p&gt;&lt;img&gt;&lt;p&gt;ಕೆಲವು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಹಂತದಲ್ಲಿದ್ದರು. ಮೂರು ವರ್ಷಗಳ ಕಾಲ ಒಂದೂ ಶತಕ ದಾಖಲಾಗದೆ, ಫಾರ್ಮ್ ಕಳೆದುಕೊಂಡು ತೀವ್ರ ಟೀಕೆಗೆ ಗುರಿಯಾಗಿದ್ದರು. ಆ ಸಮಯದಲ್ಲಿ ಮಾನಸಿಕ ನೆಮ್ಮದಿ ಹುಡುಕುತ್ತಾ ಅನುಷ್ಕಾ ಅವರೊಂದಿಗೆ ಬೃಂದಾವನಕ್ಕೆ ತೆರಳಿ ಪ್ರೇಮಾನಂದ್ ಗುರೂಜಿಯವರ ಆಶೀರ್ವಾದ ಪಡೆದಿದ್ದರು.&amp;nbsp;&lt;/p&gt;&lt;p&gt;ಆ ಭೇಟಿಯ ನಂತರ ವಿರಾಟ್ ಅವರ ಆಟದಲ್ಲಿ ಅದ್ಭುತ ಬದಲಾವಣೆ ಕಂಡುಬಂತು. ಶತಕಗಳ ಮಳೆ ಸುರಿಸಿದ ಕೊಹ್ಲಿ, ತಮ್ಮ ಹಳೆಯ ಲಯಕ್ಕೆ ಮರಳಿದರು. ಅಂದಿನಿಂದ ಗುರೂಜಿಯವರ ಬೋಧನೆಗಳ ಮೇಲೆ ಈ ದಂಪತಿಗೆ ಅಪಾರ ನಂಬಿಕೆ ಬೆಳೆದಿದೆ.&lt;/p&gt;&lt;img&gt;&lt;p&gt;ಪ್ರೇಮಾನಂದ್ ಗುರೂಜಿಯವರ ಬದುಕು ಅತ್ಯಂತ ಸರಳ. ಅವರ ಎರಡು ಕಿಡ್ನಿಗಳು ವೈಫಲ್ಯಗೊಂಡಿದ್ದರೂ, ಅವರು ದಿನದ 24 ಗಂಟೆಯೂ ರಾಧಾ-ಕೃಷ್ಣರ ಸ್ಮರಣೆಯಲ್ಲಿ ತೊಡಗಿರುತ್ತಾರೆ. 'ನಮ್ಮ ಅಹಂಕಾರವನ್ನು ಬಿಟ್ಟು, ಪ್ರಾಮಾಣಿಕವಾಗಿ ಕರ್ಮ ಮಾಡಬೇಕು' ಎಂಬ ಗುರೂಜಿಯವರ ಸರಳ ಮಾತುಗಳು ವಿರಾಟ್ ಅವರ ಜೀವನಶೈಲಿಯನ್ನು ಬದಲಿಸಿವೆ.&amp;nbsp;&lt;/p&gt;&lt;p&gt;ವಿರಾಟ್ ಒಪ್ಪಿಕೊಂಡಿರುವಂತೆ, ಅನುಷ್ಕಾ ಅವರ ಜೀವನಕ್ಕೆ ಬಂದ ಮೇಲೆ ಅವರಲ್ಲಿನ ಆಕ್ರಮಣಕಾರಿ ಸ್ವಭಾವ ಕಡಿಮೆಯಾಗಿ, ತಾಳ್ಮೆ ಮತ್ತು ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಕೋಟಿ ಕೋಟಿ ಅಭಿಮಾನಿಗಳು, ಐಷಾರಾಮಿ ಬದುಕು ಇದ್ದರೂ ಈ ದಂಪತಿ ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರಿಗೆ ಬಾಲ್ಯದಲ್ಲೇ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಲು ಬಯಸುತ್ತಾರೆ. ಆಶ್ರಮಕ್ಕೆ ಭೇಟಿ ನೀಡಿದಾಗ ಈ ಸ್ಟಾರ್ ಜೋಡಿ ತಮ್ಮ 'ಸ್ಟಾರ್&zwnj;ಗಿರಿ'ಯನ್ನು ಬದಿಗಿಟ್ಟು ಸಾಮಾನ್ಯ ಭಕ್ತರಂತೆ ನೆಲದ ಮೇಲೆ ಕುಳಿತು ಗುರೂಜಿಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ. ಮಕ್ಕಳು ಕೂಡ ಇದೇ ಸಂಸ್ಕಾರದಲ್ಲಿ ಬೆಳೆಯಲಿ ಎಂಬುದು ಇವರ ಆಶಯ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ವಿರಾಟ್ ಮತ್ತು ಅನುಷ್ಕಾ ಅವರಿಗೆ ಬೃಂದಾವನ ಎನ್ನುವುದು ಕೇವಲ ಪ್ರವಾಸಿ ತಾಣವಲ್ಲ, ಅದು ಅವರ ಮಾನಸಿಕ ನೆಮ್ಮದಿಯ ಕೇಂದ್ರ. ಪ್ರೇಮಾನಂದ್ ಗುರೂಜಿಯವರ ಸನ್ನಿಧಿಯಲ್ಲಿ ಸಿಗುವ ಆ ಶಾಂತಿ ಮತ್ತು ಮಾರ್ಗದರ್ಶನವೇ ಇವರನ್ನು ಪದೇ ಪದೇ ಅಲ್ಲಿಗೆ ಸೆಳೆಯುತ್ತಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/why-virat-kohli-and-anushka-sharma-frequently-visit-vrindavan-premanand-ji-maharaj-mutt-sat-ykz0ygb"/>
        </item>
        <item>
            <title><![CDATA[ಜೂನ್ 4 ರಿಂದ ಈ ರಾಜ್ಯಗಳಲ್ಲಿ ಭಾರಿ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೇ ಅಲರ್ಟ್]]></title>
            <link>https://kannada.asianetnews.com/gallery/india-news/heavy-rain-alert-for-several-states-from-june-4-weather-department-issues-warning-9btcn14</link>
            <guid isPermaLink="true">https://kannada.asianetnews.com/gallery/india-news/heavy-rain-alert-for-several-states-from-june-4-weather-department-issues-warning-9btcn14</guid>
            <pubDate>Tue, 02 Jun 2026 18:04:06 +0530</pubDate>
            <description><![CDATA[&lt;p&gt;ಜೂನ್ 4 ರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಗಾಳಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಅಲರ್ಟ್ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jpz0knhs80f37ca3bm3h7s61,imgname-bengaluru-rain.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೂನ್ 4 ರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಗಾಳಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಅಲರ್ಟ್ ನೀಡಲಾಗಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಮುಂಗಾರು ಮಳೆ ವಿಳಂಬವಾಗಿದೆ. ಮೇ.26ರ ವೇಳೆ ಕೇರಳಕ್ಕೆ ಮುಂಗಾರು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಇದೀಗ ಜೂನ್ 4 ರಿಂದ ಜೂನ್ 6ರ ವರೆಗೆ ಕೇರಳಕ್ಕೆ ಮುಂಗಾರು ಅಪ್ಪಳಿಸಲಿದೆ ಎಂದಿದೆ. ಪರಿಣಾಮ ಜೂನ್ 4 ರಿಂದ ಕೆಲ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದಿದೆ.&lt;/p&gt;&lt;img&gt;&lt;p&gt;ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಕೆಲೆಡೆವಡಿ ಭಾರಿ ಮಳೆಯಾಗಿದೆ. ಜೂನ್ 3 ರಿಂದ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದಿದೆ. ಕೇರಳಕ್ಕೆ ಮುಂಗಾರು ಪ್ರವೇಶದೊಂದಿಗೆ ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿಗಳಲ್ಲಿ ಉತ್ತಮ ಮಳೆಯಾಗಲಿದೆ. ಇದೇ ವೇಳೆ ಆಂಧ್ರಪ್ರದೇಶದ ಕರಾವಳಿ ರಾಯಲ್&zwnj;ಸೀಮಾ, ಕರ್ನಾಟಕದ ಕರಾವಳಿ ತೀರದಲ್ಲಿ ಭಾರಿ ಗಾಳಿ ಮಳೆಯಾಗಲಿದೆ ಎಂದಿದೆ.&lt;/p&gt;&lt;img&gt;&lt;p&gt;ಉತ್ತರ ಪ್ರದೇಶದಲ್ಲಿ 90 ಕಿಲೋಮೀಟರ್ ವೇಗದಲ್ಲಿ ಭಾರಿ ಗಾಳಿ ಬೀಸಲಿದೆ. ಪ್ರಮುಖವಾಗಿ ದೆಹಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಗಾಳಿ ಮಳೆಯಾಗಲಿದೆ. ಈ ಪೈಕಿ ಬಿಸಲ ಬೇಗೆಯಿಂದ ಕೂಡಿದ ಕೆಲ ಪ್ರದೇಶಗಳು ತಂಪಾಗಲಿದೆ.&lt;/p&gt;&lt;img&gt;&lt;p&gt;ಒಡಿಶಾದಲ್ಲಿ ಆಲಿಕಲ್ಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಜೂನ್ 1 ರಿಂದ ಒಡಿಶಾದ ಬಹುತೇಕ ಭಾಗದಲ್ಲಿ ಮಳೆಯಾಗಲಿದೆ. ಇತ್ತ ಪಶ್ಚಿಮ ಬಂಗಾಳ ಹಾಗೂ ಸಿಕ್ಕಂ ರಾಜ್ಯಗಳು ಕೂಡ ಬಾರಿ ಮಳೆ ಕಾಣಲಿದೆ. ಇತ್ತ ಅಂಡಮಾನ್ ನಿಕೋಬಾರ್&zwnj;ನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದಿದೆ.&lt;/p&gt;&lt;img&gt;&lt;p&gt;ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಮೆಘಾಲಯ, ಮಣಿಪುರ, ನಾಗಾಲ್ಯಾಂಡ್, ಅಸ್ಸಾಂನಲ್ಲಿ ಭಾರಿ ಮಳೆಯಾಗಲಿದೆ. ಮಿಜೋರಾಂ, ಮಣಿಪುರದಲ್ಲಿ ಉತ್ತಮ ಮಳೆಯಾಗಲಿದೆ ಎಂದಿದೆ. ಹವಾಮಾನ ಇಲಾಖೆ ಸೂಚನೆ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ಅಲರ್ಟ್ ನೀಡಲಾಗಿದೆ.&lt;/p&gt;&lt;img&gt;&lt;p&gt;ದೇಶದಲ್ಲಿ ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಪ್ರವೇಶ ವಿಳಂಬ, ಎಲ್ ನೀನೋ ರೂಪುಗೊಂಡಿರುವ ಕಾರಣ ಸರಾಸರಿ ಮಳೆಯಲ್ಲಿ ಕೊರತೆಯಾಗಲಿದೆ ಎಂದಿದೆ. ಇದರಿಂದ ಬೆಳೆ, ನೀರಿನ ಮೇಲೆ ತೀವ್ರ ಪರಿಣಾಮ ಬೀರಲಿದೆ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/heavy-rain-alert-for-several-states-from-june-4-weather-department-issues-warning-9btcn14"/>
        </item>
        <item>
            <title><![CDATA[₹35 ಕೇಕ್‌ಗೆ ₹50 ಯಾಕೆ? ವ್ಯಾಪಾರಿ ಕೊಟ್ಟ ಉತ್ತರ ಕೇಳಿ ದಂಗಾದ ಪ್ರಯಾಣಿಕ!]]></title>
            <link>https://kannada.asianetnews.com/viral/vendor-charges-50-for-35-rupee-cake-on-train-cites-bizarre-reason-gvd/articleshow-gxmxa1m</link>
            <guid isPermaLink="true">https://kannada.asianetnews.com/viral/vendor-charges-50-for-35-rupee-cake-on-train-cites-bizarre-reason-gvd/articleshow-gxmxa1m</guid>
            <pubDate>Tue, 02 Jun 2026 18:02:22 +0530</pubDate>
            <description><![CDATA[&lt;p&gt;ಟ್ರೈನ್ ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರು ಖರೀದಿಸಿದ ಒಂದು ಕೇಕ್ ಪ್ಯಾಕೆಟ್ ಬೆಲೆ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. 35 ರೂಪಾಯಿ MRP ಇದ್ದ ಕೇಕ್&zwnj;ಗೆ ವ್ಯಾಪಾರಿಯೊಬ್ಬ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3xkp140hs4ygvwwzrawvv9,imgname-train-passenger-alleges--15-overcharge-on--35-cake-purchase-1780395661348.jpg" type="image/jpeg" height="390" width="690"/>
            <content:encoded><![CDATA[&lt;p&gt;ಟ್ರೈನ್&zwnj;ನಲ್ಲಿ ಪ್ರಯಾಣಿಸುವಾಗ 35 ರೂಪಾಯಿ MRP ಇರೋ ಕೇಕ್&zwnj;ಗೆ 50 ರೂಪಾಯಿ ಪಡೆದ ವ್ಯಾಪಾರಿಯೊಬ್ಬ, ಯಾಕೆ ಹೆಚ್ಚು ಹಣ ತೆಗೆದುಕೊಂಡೆ ಎಂದು ಕೇಳಿದ ಪ್ರಯಾಣಿಕನಿಗೆ ವಿಚಿತ್ರ ಕಾರಣ ಕೊಟ್ಟಿದ್ದಾನೆ. ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಲ್ಲಿದೆ.&lt;/p&gt;&lt;p&gt;ಟ್ರೈನ್ ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರು ಖರೀದಿಸಿದ ಒಂದು ಕೇಕ್ ಪ್ಯಾಕೆಟ್ ಬೆಲೆ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. 35 ರೂಪಾಯಿ MRP ಇದ್ದ ಕೇಕ್&zwnj;ಗೆ ವ್ಯಾಪಾರಿಯೊಬ್ಬ ಪ್ರಯಾಣಿಕನಿಂದ 50 ರೂಪಾಯಿ ತೆಗೆದುಕೊಂಡಿದ್ದಾನೆ. ಯಾಕೆ 15 ರೂಪಾಯಿ ಹೆಚ್ಚು ತೆಗೆದುಕೊಂಡೆ ಎಂದು ಕೇಳಿದ್ದಕ್ಕೆ ಆ ವ್ಯಾಪಾರಿ ಕೊಟ್ಟ ವಿಚಿತ್ರ ಕಾರಣ ಕೇಳಿ ಪ್ರಯಾಣಿಕರು ದಂಗಾಗಿದ್ದಾರೆ.&lt;/p&gt;&lt;p&gt;@ItsAradhya_ ಎಂಬ ಯೂಸರ್&zwnj; ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಕೇಕ್&zwnj;ಗೆ 50 ರೂಪಾಯಿ ಕೊಟ್ಟ ನಂತರ, ಪ್ಯಾಕೆಟ್ ಮೇಲೆ ನೋಡಿದಾಗ ಅದರ MRP ಬೆಲೆ 35 ರೂಪಾಯಿ ಅಂತ ಗೊತ್ತಾಗಿದೆ. ಪ್ರಯಾಣಿಕರು ಈ ಬಗ್ಗೆ ವ್ಯಾಪಾರಿಯನ್ನು ಪ್ರಶ್ನಿಸಿದ್ದಾರೆ. ಆಗ ವ್ಯಾಪಾರಿ, 'ಈ ದುಡ್ಡು ನನಗೊಬ್ಬನಿಗೇ ಅಲ್ಲ, ಬೇರೆಯವರಿಗೂ ಹಂಚಬೇಕು' ಅಂತ ವಿಚಿತ್ರ ಉತ್ತರ ಕೊಟ್ಟಿದ್ದಾನೆ.&amp;nbsp;&lt;/p&gt;&lt;p&gt;A simple cake purchase on a train has now triggered a much bigger conversation online. A passenger travelling on a train decided to buy a packet of cakes from a vendor to satisfy his hunger. It seemed like an ordinary transaction until he looked at the packet more carefully.&hellip; pic.twitter.com/jfzTIo8LWR&lt;/p&gt;&lt;p&gt;&mdash; Aradhya (@ItsAradhya__) June 1, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ವ್ಯಾಪಾರಿಗಳಿಗೆ ಬಿಡಬಾರದು&lt;/strong&gt;&lt;/h2&gt;&lt;p&gt;ಈ ಪೋಸ್ಟ್ ವೈರಲ್ ಆದ್ಮೇಲೆ, ಟ್ರೈನ್&zwnj;ಗಳಲ್ಲಿ ಹೆಚ್ಚು ಹಣ ವಸೂಲಿ ಮಾಡುವ ಬಗ್ಗೆ ದೊಡ್ಡ ಚರ್ಚೆಯೇ ಶುರುವಾಗಿದೆ. 'ನಮಗೂ ಇದೇ ರೀತಿ ಅನುಭವ ಆಗಿದೆ' ಅಂತ ಹಲವರು ಕಾಮೆಂಟ್&zwnj;ಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಪ್ರಯಾಣದ ವೇಳೆ ಜಗಳ ಯಾಕೆ ಅಂತ ಸುಮ್ಮನಾಗಿದ್ದೇ ಹೆಚ್ಚು ಅಂತಾನೂ ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು, 'MRP ಗಿಂತ ಹೆಚ್ಚು ಹಣ ಕೊಡಲು ವ್ಯಾಪಾರಿಗಳಿಗೆ ಬಿಡಬಾರದು' ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಪ್ರತಿದಿನ ಲಕ್ಷಾಂತರ ಜನ ಟ್ರೈನ್&zwnj;ನಲ್ಲಿ ಪ್ರಯಾಣ ಮಾಡ್ತಾರೆ. ಹೆಚ್ಚು ಲಾಭಕ್ಕಾಗಿ ಪ್ರಯಾಣಿಕರ ನಂಬಿಕೆಯನ್ನು ವ್ಯಾಪಾರಿಗಳು ದುರುಪಯೋಗಪಡಿಸಿಕೊಳ್ಳಬಾರದು' ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/viral/vendor-charges-50-for-35-rupee-cake-on-train-cites-bizarre-reason-gvd/articleshow-gxmxa1m"/>
        </item>
        <item>
            <title><![CDATA[ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ; ಬಿಜೆಪಿ ಕಾರ್ಯಕರ್ತರಿಗೆ ರೇಣುಕಾಚಾರ್ಯ ಕರೆ]]></title>
            <link>https://kannada.asianetnews.com/karnataka-districts/mp-renukacharya-asks-bjp-workers-to-promote-modi-government-achievements-gvd/articleshow-01gu75z</link>
            <guid isPermaLink="true">https://kannada.asianetnews.com/karnataka-districts/mp-renukacharya-asks-bjp-workers-to-promote-modi-government-achievements-gvd/articleshow-01gu75z</guid>
            <pubDate>Tue, 02 Jun 2026 17:47:16 +0530</pubDate>
            <description><![CDATA[&lt;p&gt;ಮೋದಿ ಅವರ ಆಡಳಿತದ ಸಾಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವ ಕೆಲಸ ಮಾಡಬೇಕು ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke9gvn831sm04q06yrjpv529,imgname-----------------------2026-01-06t165158.634-1767698715907.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊನ್ನಾಳಿ (ಜೂ.02):&lt;/strong&gt; ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಸಾಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.&lt;/p&gt;&lt;p&gt;ಬಿಜೆಪಿ ಹೊನ್ನಾಳಿ ಮಂಡಲ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿಯಿಂದ ಆಗಿರುವಂತಹ ಅಭಿವೃದ್ಧಿ ಕೆಲಸಗಳ ಬಗ್ಗೆ ಯಾವುದೇ ಕಾರಣಕ್ಕೂ ಕಾರ್ಯಕರ್ತರು ನಿರ್ಲಕ್ಷ ಮಾಡದೇ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಬೇಕು. ನಮ್ಮ ತಾಲೂಕಿನಲ್ಲಿ ಈ ಹಿಂದೆ ಅಭಿವೃದ್ಧಿ ಪರ್ವ ನಡೆದರೂ ಕಾರ್ಯಕರ್ತರು ಹೆಚ್ಚಿನ ಪ್ರಚಾರ ಮಾಡದಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಬಿಜೆಪಿ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ನೋಡಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ತಾಕೀತು ಮಾಡಿದರು.&lt;/p&gt;&lt;h2&gt;&lt;strong&gt;ಹೆಚ್ಚು ಅನುದಾನ&lt;/strong&gt;&lt;/h2&gt;&lt;p&gt;ಪಕ್ಷ ಸಂಘಟನೆಯಲ್ಲಿ ಬಿಜೆಪಿ ಸದಾ ಮುಂದಿದೆ. ಇದೇ ರೀತಿ ಜನಪರ ಯೋಜನೆಗಳು ಜಾರಿಯಾದಾಗ ವ್ಯವಸ್ಥಿತ ರೀತಿಯಲ್ಲಿ ಪ್ರಚಾರವೂ ಆಗಬೇಕು. ಮೂರನೇ ಬಾರಿಗೆ ಪ್ರಧಾನಿ ಆಗಿರುವ ನರೇಂದ್ರ ಮೋದಿ ಇಂದು ವಿಶ್ವಕ್ಕೆ ನಾಯಕರಾಗಿ ಹೊರಹೊಮ್ಮಿದ್ದಾರೆ. ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ದೇಶಗಳ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುವುದೇ ಇದಕ್ಕೆ ಉದಾಹರಣೆ ಎಂದ ಅವರು, ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ತಾಲೂಕಿಗೆ ₹5000 ಕೋಟಿಗೂ ಹೆಚ್ಚು ಅನುದಾನದ ಕಾಮಗಾರಿಗಳು ನಡೆದಿವೆ. ಅವುಗಳ ಪ್ರಚಾರ ಮಾಡಬೇಕು ಎಂದು ಹೇಳಿದರು.&lt;/p&gt;&lt;p&gt;ಶಿವಮೊಗ್ಗ ವಿಭಾಗದ ಸಾಮಾಜಿಕ ಜಾಲತಾಣದ ಪ್ರಮುಖ್ಯಸ್ಥ ಪ್ರಶಾಂತ್ ಕೊಂಡಜ್ಜಿ ಸಾಮಾಜಿಕ ಜಾಲತಾಣದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದರು. ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಮುಖಂಡರಾದ ಕೆ.ಪಿ. ಕುಬೇಂದ್ರಪ್ಪ, ಎಸ್.ಎಸ್. ಬೀರಪ್ಪ, ಸಿ.ಆರ್. ಶಿವಾನಂದ್, ಮಾರುತಿ ನಾಯ್ಕ, ಪಾಲಾಪಕ್ಷಪ್ಪ, ನೆಲಹೊನ್ನೆ ಮಂಜುನಾಥ, ಕೆ.ಇ. ನಾಗರಾಜ್&zwnj; ಇತರರು ಇದ್ದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-renukacharya-asks-bjp-workers-to-promote-modi-government-achievements-gvd/articleshow-01gu75z"/>
        </item>
        <item>
            <title><![CDATA[1.14 ಲಕ್ಷ ಕೋಟಿ ರೂಪಾಯಿ ಮೌಲ್ಯದ ಚಿನ್ನ ಮಾರಾಟ ಮಾಡಿದ್ದೇಕೆ RBI]]></title>
            <link>https://kannada.asianetnews.com/gallery/business/rbi-sells-gold-worth-12-billion-protect-forex-reserves-rupee-fall-inflation-san-ac4702g</link>
            <guid isPermaLink="true">https://kannada.asianetnews.com/gallery/business/rbi-sells-gold-worth-12-billion-protect-forex-reserves-rupee-fall-inflation-san-ac4702g</guid>
            <pubDate>Tue, 02 Jun 2026 17:48:26 +0530</pubDate>
            <description><![CDATA[&lt;p&gt;ಅಮೆರಿಕ-ಇರಾನ್ ಸಂಘರ್ಷದಿಂದ ಉಂಟಾದ ಆರ್ಥಿಕ ಒತ್ತಡವನ್ನು ಎದುರಿಸಲು ಆರ್&zwnj;ಬಿಐ ತನ್ನ ಚಿನ್ನದ ನಿಧಿಯ ಒಂದು ಭಾಗವನ್ನು ಮಾರಾಟ ಮಾಡಿದೆ. ಇಂಧನ ವೆಚ್ಚ ಮತ್ತು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯದಂತಹ ಬಾಹ್ಯ ಆಘಾತಗಳಿಂದ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt196mq0dsms2bfe5s0y1rtv,imgname-1-gram-gold-locket-designs-1780307153632.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕ-ಇರಾನ್ ಸಂಘರ್ಷದಿಂದ ಉಂಟಾದ ಆರ್ಥಿಕ ಒತ್ತಡವನ್ನು ಎದುರಿಸಲು ಆರ್&zwnj;ಬಿಐ ತನ್ನ ಚಿನ್ನದ ನಿಧಿಯ ಒಂದು ಭಾಗವನ್ನು ಮಾರಾಟ ಮಾಡಿದೆ. ಇಂಧನ ವೆಚ್ಚ ಮತ್ತು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯದಂತಹ ಬಾಹ್ಯ ಆಘಾತಗಳಿಂದ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.&amp;nbsp;&lt;/p&gt;&lt;img&gt;&lt;p&gt;ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದಿಂದ ಉಂಟಾಗಿರುವ ಆರ್ಥಿಕ ಹಾನಿಯಿಂದ ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು (Foreign Exchange Reserves) ರಕ್ಷಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನಲ್ಲಿರುವ ಚಿನ್ನದ ನಿಧಿಯ ಒಂದು ಭಾಗವನ್ನು ಮಾರಾಟ ಮಾಡಿದೆ ಎಂದು ವರದಿಯಾಗಿದೆ. ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿರುವ ಭಾರತಕ್ಕೆ, ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಇಂಧನ ವೆಚ್ಚದ ಹೊರೆ ಹೆಚ್ಚಾಗುತ್ತಿದೆ ಮತ್ತು ದೇಶೀಯ ಕರೆನ್ಸಿಯಾದ ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತಿದೆ. ಈ ಬಾಹ್ಯ ಆಘಾತಗಳ ಪ್ರಭಾವವನ್ನು ಮಿತಿಗೊಳಿಸಲು, ಸರ್ಕಾರವು ಇಂಧನ ಬೆಲೆ ಏರಿಕೆ ಮತ್ತು ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ತೀವ್ರವಾಗಿ ಹೆಚ್ಚಿಸುವ ಮೂಲಕ ವಿದೇಶಿ ವಿನಿಮಯ ಹೊರಹರಿವನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿದೆ.&lt;/p&gt;&lt;img&gt;&lt;p&gt;'ಬ್ಲೂಮ್&zwnj;ಬರ್ಗ್ ಎಕನಾಮಿಕ್ಸ್' ಸಾರ್ವಜನಿಕವಾಗಿ ಲಭ್ಯವಿರುವ ಡೇಟಾ ಆಧರಿಸಿ ನಡೆಸಿರುವ ಮೌಲ್ಯಮಾಪನದ ಪ್ರಕಾರ, ಮೇ 22 ಕ್ಕೆ ಕೊನೆಗೊಂಡ ಎರಡು ವಾರಗಳ ಅವಧಿಯಲ್ಲಿ ಆರ್&zwnj;ಬಿಐ ಸುಮಾರು 12 ಬಿಲಿಯನ್ ಡಾಲರ್ (1.14 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಚಿನ್ನವನ್ನು ಮಾರಾಟ ಮಾಡಿದೆ. ಬ್ಲೂಮ್&zwnj;ಬರ್ಗ್ ಎಕನಾಮಿಕ್ಸ್&zwnj;ನ ಹಿರಿಯ ಭಾರತೀಯ ಆರ್ಥಿಕ ತಜ್ಞ ಅಭಿಷೇಕ್ ಗುಪ್ತಾ ಅವರ ಅಂದಾಜಿನ ಪ್ರಕಾರ, ಆರ್&zwnj;ಬಿಐ ಈ ಮೂಲಕ ತನ್ನ ವಿದೇಶಿ ಕರೆನ್ಸಿ ಆಸ್ತಿಗಳಿಗೆ (Foreign Currency Assets) ಸುಮಾರು 7.5 ಬಿಲಿಯನ್ ಡಾಲರ್&zwnj;ಗಳನ್ನು ಸೇರ್ಪಡೆಗೊಳಿಸಿದೆ. ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದ್ದರೂ ಸಹ ಆರ್&zwnj;ಬಿಐನ ಚಿನ್ನದ ದಾಸ್ತಾನು ಮೌಲ್ಯ ಕುಸಿದಿರುವುದು ಈ ಮಾರಾಟ ಪ್ರಕ್ರಿಯೆಯನ್ನು ದೃಢೀಕರಿಸುತ್ತದೆ. ಇರಾನ್ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರಕ್ಕೆ ಉಂಟಾಗಿರುವ ಅಡಚಣೆಯಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದು, ಬಂಡವಾಳದ ಹೊರಹರಿವನ್ನು ತಡೆಯಲು ಆರ್&zwnj;ಬಿಐ ಇಂತಹ ತಕ್ಷಣದ ನಿರ್ಧಾರಕ್ಕೆ ಮುಂದಾಗಿದೆ.&lt;/p&gt;&lt;img&gt;&lt;p&gt;ಆರ್ಥಿಕ ವಿಶ್ಲೇಷಕ ಅಭಿಷೇಕ್ ಗುಪ್ತಾ ಅವರ ಪ್ರಕಾರ, ಮಾರುಕಟ್ಟೆಯ ಪರಿಸ್ಥಿತಿಗಳು ಅನುಕೂಲಕರವಾಗಿರುವಾಗಲೆಲ್ಲಾ ಆರ್&zwnj;ಬಿಐ ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಮತ್ತಷ್ಟು ಬಲಪಡಿಸುವುದನ್ನು ಮುಂದುವರಿಸುವ ಸಾಧ್ಯತೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಮೌಲ್ಯ ಮೃದುವಾಗುವ ಅವಧಿ, ವಿದೇಶಿ ಬಂಡವಾಳದ ಮರು-ಹರಿವು ಅಥವಾ ಕಚ್ಚಾ ತೈಲ ಬೆಲೆಗಳು ಇಳಿಕೆಯಾಗುವ ಸಮಯವನ್ನು ಬಳಸಿಕೊಂಡು ಕೇಂದ್ರ ಬ್ಯಾಂಕ್ ತನ್ನ ವಿದೇಶಿ ಕರೆನ್ಸಿ ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಅವರು ಅಂದಾಜಿಸಿದ್ದಾರೆ.&lt;/p&gt;&lt;img&gt;&lt;p&gt;ಮಾರ್ಚ್ ಅಂತ್ಯದ ವೇಳೆಗೆ ಆರ್&zwnj;ಬಿಐ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದ ದಾಸ್ತಾನನ್ನು ಹೊಂದಿತ್ತು. ವಿಶೇಷವೆಂದರೆ, ಆರ್&zwnj;ಬಿಐ ತನ್ನ ಒಟ್ಟು ಚಿನ್ನದ ಮೀಸಲು ನಿಧಿಯ ಸುಮಾರು ಶೇಕಡಾ 77 ರಷ್ಟನ್ನು ಭಾರತದ ಒಳಗಡೆಯೇ ಸುರಕ್ಷಿತವಾಗಿ ಸಂಗ್ರಹಿಸಿಟ್ಟಿದೆ. ಆರು ತಿಂಗಳ ಹಿಂದೆ ಇದು ಕೇವಲ ಶೇಕಡಾ 66 ರಷ್ಟಿತ್ತು. ಆರ್&zwnj;ಬಿಐ ಏಪ್ರಿಲ್&zwnj;ನಲ್ಲಿ ಬಿಡುಗಡೆ ಮಾಡಿದ ಅರ್ಧವಾರ್ಷಿಕ ವಿದೇಶಿ ವಿನಿಮಯ ವರದಿಯಲ್ಲಿ, ತನ್ನ ವಿದೇಶಿ ಚಿನ್ನದ ದಾಸ್ತಾನುಗಳ ಬಹುಪಾಲು ಭಾಗವನ್ನು ಇಂಗ್ಲೆಂಡ್ ಬ್ಯಾಂಕ್ (Bank of England) ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ (BIS) ನಲ್ಲಿ ಇರಿಸಲಾಗಿದೆ ಎಂದು ತಿಳಿಸಿತ್ತು. ಉಕ್ರೇನ್ ಸಂಘರ್ಷದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೀಸಲು ನಿಧಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಎಚ್ಚೆತ್ತಿರುವ ಆರ್&zwnj;ಬಿಐ, ಇತರ ಉದಯೋನ್ಮುಖ ಮಾರುಕಟ್ಟೆಗಳ ಕೇಂದ್ರ ಬ್ಯಾಂಕ್&zwnj;ಗಳಂತೆ ತನ್ನ ಚಿನ್ನವನ್ನು ಸ್ವದೇಶಕ್ಕೆ ಮರಳಿ ತರುತ್ತಿದೆ (Gold Repatriation).&lt;/p&gt;&lt;img&gt;&lt;p&gt;ಮತ್ತೊಂದು ಬ್ಲೂಮ್&zwnj;ಬರ್ಗ್ ವರದಿಯ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿರುವ ಸಂಜಯ್ ಮಲ್ಹೋತ್ರಾ ಅವರು ರೂಪಾಯಿ ಮೌಲ್ಯವನ್ನು ಬೆಂಬಲಿಸಲು ಬಡ್ಡಿದರಗಳನ್ನು ಹೆಚ್ಚಿಸುವುದು ಮತ್ತು ವಿದೇಶಿ ಹೂಡಿಕೆದಾರರಿಂದ ಹೆಚ್ಚುವರಿ ಡಾಲರ್ ಒಳಹರಿವನ್ನು ಆಕರ್ಷಿಸುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಆರ್&zwnj;ಬಿಐ ನಡೆಸಿದ ಮಧ್ಯಪ್ರವೇಶದಿಂದಾಗಿ ರೂಪಾಯಿ ಮೌಲ್ಯಕ್ಕೆ ಒಂದಷ್ಟು ಬೆಂಬಲ ಸಿಕ್ಕಿದ್ದು, ಮೇ 20 ರಂದು ಸಾರ್ವಕಾಲಿಕ ಕುಸಿತ ಕಂಡ ನಂತರ, ಇತರ ಏಷ್ಯನ್ ಕರೆನ್ಸಿಗಳಿಗಿಂತ ಭಾರತೀಯ ರೂಪಾಯಿ ಉತ್ತಮ ಪ್ರದರ್ಶನ ನೀಡಿದೆ. ಆದಾಗ್ಯೂ, ಮಂಗಳವಾರದ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಶೇಕಡಾ 0.2 ರಷ್ಟು ಕುಸಿದು 95.17 ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ರೂಪಾಯಿ ರಕ್ಷಣೆಗೆ ಮತ್ತಷ್ಟು ಪ್ರಕಟಣೆಗಳು ಹೊರಬೀಳುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/rbi-sells-gold-worth-12-billion-protect-forex-reserves-rupee-fall-inflation-san-ac4702g"/>
        </item>
        <item>
            <title><![CDATA[Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!]]></title>
            <link>https://kannada.asianetnews.com/state/karnataka-new-cm-dk-shivakumar-friends-list-videoshow-gxupdwr</link>
            <guid isPermaLink="true">https://kannada.asianetnews.com/state/karnataka-new-cm-dk-shivakumar-friends-list-videoshow-gxupdwr</guid>
            <pubDate>Tue, 02 Jun 2026 17:33:27 +0530</pubDate>
            <description><![CDATA[&lt;p&gt;ಹೊರಜಗತ್ತಿಗೆ ಪವರ್&zwnj;ಫುಲ್ ನಾಯಕ.. ಗೆಳೆಯರ ಜೊತೆ ಸೇರಿದರೆ ಬಾಲಕ..!,, ರಾಜಕೀಯದಲ್ಲಿ ಟ್ರಬಲ್ ಶೂಟರ್.. ಸ್ನೇಹಿತರ ಪಾಲಿಗೆ ಟ್ರಬಲ್ ನೀಗಿಸುವ ಫ್ರೆಂಡ್..!,, ಸ್ಕೂಲ್​ ಫ್ರೆಂಡ್ ರವಿಚಂದ್ರನ್ ಕಷ್ಟಕ್ಕೆ ಸ್ಪಂದಿಸಿದ್ಹೇಗೆ DK Shivakumar? ಸಿಎಂ ಪಟ್ಟವೇರ್ತಿರೋ ಡಿಕೆ ಅಂತರಂಗ ಮಿತ್ರರು ಯಾರ್ಯಾರು?&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xacqbqu" medium="video" height="768" width="1024"/>
            <content:encoded><![CDATA[&lt;p&gt;ರಾಜಕಾರಣದಲ್ಲಿ ಅವರು ಕರುನಾಡಿನ 'ಟ್ರಬಲ್ ಶೂಟರ್'. ವಿರೋಧಿಗಳ ಪಾಲಿಗೆ ಎಂದೆಂದಿಗೂ ಕರಗದ 'ಕನಕಪುರದ ಬಂಡೆ'. ಆದರೆ, ಕ್ಯಾಮೆರಾ ಕಣ್ಣುಗಳಿಂದ ಆಚೆಗೆ, ರಾಜಕೀಯದ ಹಗ್ಗಜಗ್ಗಾಟದಿಂದ ಹೊರಗೆ ಅವರೊಬ್ಬ ಸ್ನೇಹಜೀವಿ. ಹೌದು, ಸಿಎಂ ಆಗ್ತಾ ಇರೋ ಡಿ.ಕೆ. ಶಿವಕುಮಾರ್ ಅವರಿಗೆ ಇರೋದು ರಾಜಕೀಯದ ಬಳಗ ಮಾತ್ರವಲ್ಲ, ಅದಕ್ಕಿಂತ ದೊಡ್ಡದಾದ ಒಂದು ಅಚ್ಚಳಿಯದ ಗೆಳೆಯರ ಬಳಗವಿದೆ. ಅಧಿಕಾರದ ಉತ್ತುಂಗದಲ್ಲಿದ್ದರೂ, ಡಿಕೆ ಗೆಳೆಯರ ಜೊತೆ ಸೇರಿದರೆ ಇಂದಿಗೂ ಅದೇ ಹಳೆಯ ಬಾಲಕ ಆಗಿಬಿಡ್ತಾರೆ.&amp;nbsp;&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/state/karnataka-new-cm-dk-shivakumar-friends-list-videoshow-gxupdwr"/>
        </item>
        <item>
            <title><![CDATA[ಕರಾವಳಿಗೆ ಖುಷಿ, ಸೂರತ್-ಮಂಗಳೂರು ಸ್ಪೆಷಲ್ ರೈಲು ಶಾಶ್ವತ  ಸೇವೆಗೆ ಪರಿವರ್ತಿಸಿದ ರೈಲ್ವೆ ಇಲಾಖೆ, ಗೋವಾ ಈಗ ಹತ್ತಿರ!]]></title>
            <link>https://kannada.asianetnews.com/karnataka-districts/western-railway-regularizes-surat-mangaluru-special-into-permanent-bi-weekly-express-train-check-route-and-timings-gdp/articleshow-x0fhv66</link>
            <guid isPermaLink="true">https://kannada.asianetnews.com/karnataka-districts/western-railway-regularizes-surat-mangaluru-special-into-permanent-bi-weekly-express-train-check-route-and-timings-gdp/articleshow-x0fhv66</guid>
            <pubDate>Tue, 02 Jun 2026 17:31:21 +0530</pubDate>
            <description><![CDATA[ಪಶ್ಚಿಮ ರೈಲ್ವೆಯು ಸೂರತ್ ಮತ್ತು ಮಂಗಳೂರು ನಡುವಿನ ವಿಶೇಷ ಎಕ್ಸ್&zwnj;ಪ್ರೆಸ್ ರೈಲನ್ನು ಶಾಶ್ವತ ವಾರಕ್ಕೆ ಎರಡು ಬಾರಿಯ ಸೇವೆಗೆ ಪರಿವರ್ತಿಸಿದೆ. ಜೂನ್ 2026 ರಿಂದ ನಿಯಮಿತ ಸಂಚಾರ ಆರಂಭಿಸಲಿರುವ ಈ ರೈಲು, ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಕರಾವಳಿ ಭಾಗದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01gxacphd5f0g2e36jgxnae9tb,imgname-otpz5z75-1680754820517.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಕರಾವಳಿ ಭಾಗದ ನಡುವೆ ಸಂಚರಿಸುವ ರೈಲ್ವೆ ಪ್ರಯಾಣಿಕರಿಗೆ ಪಶ್ಚಿಮ ರೈಲ್ವೆಯು (Western Railway) ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ಮಾರ್ಗದಲ್ಲಿ ದೀರ್ಘಕಾಲದಿಂದ ಇದ್ದ ಪ್ರಯಾಣಿಕರ ಅತಿಯಾದ ಬೇಡಿಕೆಯನ್ನು ಪರಿಗಣಿಸಿ, ಸೂರತ್ ಮತ್ತು ಮಂಗಳೂರು ನಡುವೆ ಸಂಚರಿಸುತ್ತಿದ್ದ &quot;ವಿಶೇಷ ಎಕ್ಸ್&zwnj;ಪ್ರೆಸ್&quot; ರೈಲನ್ನು ಇನ್ಮುಂದೆ ಶಾಶ್ವತ ವಾರಕ್ಕೆ ಎರಡು ಬಾರಿಯ (Bi-weekly) ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನಾಗಿ ಪರಿವರ್ತಿಸಲು ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.&lt;/p&gt;&lt;p&gt;ಇದುವರೆಗೆ ಕೇವಲ ರಜೆ ಹಾಗೂ ಹಬ್ಬದ ದಿನಗಳ ವಿಶೇಷ ರೈಲಾಗಿ ಓಡುತ್ತಿದ್ದ ಈ ಸೇವೆಯನ್ನು ಈಗ ರದ್ದುಗೊಳಿಸುವ ಬದಲು ಕಾಯಂ ಗೊಳಿಸಲಾಗಿದ್ದು, ಜೂನ್ 3, 2026 ರಿಂದ ಈ ರೈಲು ತನ್ನ ನಿಯಮಿತ ಹಾಗೂ ನಿಗದಿತ ವೇಳಾಪಟ್ಟಿಯೊಂದಿಗೆ ಹಳಿಗಳ ಮೇಲೆ ಓಡಲು ಪ್ರಾರಂಭಿಸಲಿದೆ. ಇದು ನಾಲ್ಕು ರಾಜ್ಯಗಳ ನಡುವಿನ ಕನೆಕ್ಟಿವಿಟಿಯನ್ನು ಮತ್ತಷ್ಟು ಬಲಪಡಿಸಲಿದೆ.&lt;/p&gt;&lt;h2&gt;ರೈಲು ಸಂಚಾರದ ದಿನಗಳು ಮತ್ತು ವೇಳಾಪಟ್ಟಿ (Train Timings &amp;amp; Schedule)&lt;/h2&gt;&lt;p&gt;ಈ ರೈಲು ಇನ್ಮುಂದೆ ಎರಡೂ ದಿಕ್ಕುಗಳಿಂದ ವಾರಕ್ಕೆ ಎರಡು ದಿನಗಳ ಕಾಲ ನಿಯಮಿತವಾಗಿ ಸಂಚರಿಸಲಿದ್ದು, ಇದರ ಸಂಪೂರ್ಣ ವಿವರ ಇಲ್ಲಿದೆ:&lt;/p&gt;&lt;p&gt;&lt;strong&gt;ಸೂರತ್&zwnj;ನಿಂದ ಮಂಗಳೂರಿಗೆ (ರೈಲು ಸಂಖ್ಯೆ: 19057) &lt;/strong&gt;ನಿಯಮಿತ ಸೇವೆ ಜೂನ್ 03, 2026 ರಿಂದ ಆರಂಭವಾಗಿದೆ. ಈ ರೈಲು ಪ್ರತಿ ವಾರದ ಬುಧವಾರ ಮತ್ತು ಭಾನುವಾರ ಸೂರತ್&zwnj;ನಿಂದ ಹೊರಡಲಿದೆ.&lt;/p&gt;&lt;p&gt;&lt;strong&gt;ಮಂಗಳೂರಿನಿಂದ ಸೂರತ್&zwnj;ಗೆ (ರೈಲು ಸಂಖ್ಯೆ: 19058) &lt;/strong&gt;ಹಿಂತಿರುಗುವ ಪ್ರಯಾಣವು ಜೂನ್ 04, 2026 ರಿಂದ ಆರಂಭವಾಗಿದೆ. ಈ ರೈಲು ಪ್ರತಿ ವಾರದ ಗುರುವಾರ ಮತ್ತು ಸೋಮವಾರ ಮಂಗಳೂರಿನಿಂದ ಹೊರಡಲಿದೆ.&lt;/p&gt;&lt;p&gt;&lt;strong&gt;ಕೊಂಕಣ ರೈಲ್ವೆ ಮಾರ್ಗದ ಪ್ರಮುಖ ನಿಲ್ದಾಣಗಳು (Stoppages &amp;amp; Route)&lt;/strong&gt;&lt;/p&gt;&lt;p&gt;ಈ ಎಕ್ಸ್&zwnj;ಪ್ರೆಸ್ ರೈಲು ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಪ್ರಸಿದ್ಧ ವಾಣಿಜ್ಯ, ಪ್ರವಾಸಿ ಮತ್ತು ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸುತ್ತಾ ಸಾಗಲಿದ್ದು, ಪ್ರಮುಖ ನಿಲುಗಡೆಗಳ ಪಟ್ಟಿ ಈ ಕೆಳಗಿನಂತಿದೆ:&lt;/p&gt;&lt;p&gt;ಗುಜರಾತ್ ಮತ್ತು ಮಹಾರಾಷ್ಟ್ರ ಭಾಗ: ಸೂರತ್, ಉದ್ನಾ, ವಲ್ಸಾದ್, ವಾಪಿ, ಪಾಲ್ಘರ್, ವಸಾಯಿ ರಸ್ತೆ, ಭಿವಂಡಿ ರಸ್ತೆ, ಪನ್ವೇಲ್, ಪೆನ್, ರೋಹಾ, ಮಂಗಾಂವ್, ಖೇಡ್, ಚಿಪ್ಲುನ್, ಸವಾರ್ದಾ, ಸಂಗಮೇಶ್ವರ ರಸ್ತೆ, ರತ್ನಗಿರಿ, ರಾಜಾಪುರ ರಸ್ತೆ, ವೈಭವ್ವಾಡಿ ರಸ್ತೆ, ಕಂಕವ್ಲಿ, ಕುಡಾಲ್, ಸಾವಂತವಾಡಿ ರಸ್ತೆ.&lt;/p&gt;&lt;p&gt;&lt;strong&gt;ಗೋವಾ ಮತ್ತು ಉತ್ತರ ಕನ್ನಡ ಭಾಗ: &lt;/strong&gt;ಕರ್ಮಾಲಿ, ಥಿವಿಮ್, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ.&lt;/p&gt;&lt;p&gt;&lt;strong&gt;ಉಡುಪಿ ಮತ್ತು ಮಂಗಳೂರು ಭಾಗ: &lt;/strong&gt;ಮೂಕಾಂಬಿಕಾ ರಸ್ತೆ ಬೈಂದೂರು (ಕೊಲ್ಲೂರು ಭಕ್ತರಿಗೆ ಅನುಕೂಲ), ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್ ಮತ್ತು ಮಂಗಳೂರು.&lt;/p&gt;&lt;h2&gt;ಪ್ರಯಾಣಿಕರಿಗೆ ಸಿಗಲಿರುವ ದೊಡ್ಡ ರಿಲೀಫ್ ಏನು?&lt;/h2&gt;&lt;p&gt;&lt;strong&gt;ವಿಶೇಷ ರೈಲುಗಳ ಮೇಲಿನ ಅವಲಂಬನೆ ಮುಕ್ತಿ:&lt;/strong&gt; ಇದುವರೆಗೆ ಹಬ್ಬ ಅಥವಾ ಬೇಸಿಗೆ ರಜೆಯ ಸಂದರ್ಭದಲ್ಲಿ ಮಾತ್ರ ಘೋಷಣೆಯಾಗುತ್ತಿದ್ದ ವಿಶೇಷ ರೈಲುಗಳಿಗಾಗಿ ಪ್ರಯಾಣಿಕರು ಕಾಯಬೇಕಾಗುತ್ತಿತ್ತು. ಆದರೆ ಈಗ ಇದು ಕಾಯಂ ಆಗಿರುವುದರಿಂದ ಸಾರ್ವಜನಿಕರು ಹಲವು ತಿಂಗಳುಗಳ ಮುಂಚಿತವಾಗಿಯೇ ತಮ್ಮ ಪ್ರಯಾಣವನ್ನು ವ್ಯವಸ್ಥಿತವಾಗಿ ಪ್ಲಾನ್ ಮಾಡಿಕೊಳ್ಳಬಹುದು.&lt;/p&gt;&lt;p&gt;&lt;strong&gt;ಜನದಟ್ಟಣೆಗೆ ಬ್ರೇಕ್: &lt;/strong&gt;ಮುಂಬೈ ಮತ್ತು ಗೋವಾ ಮಾರ್ಗವಾಗಿ ಮಂಗಳೂರಿಗೆ ಬರುವ ಇತರ ರೈಲುಗಳಲ್ಲಿ ಸದಾ ಕಾಲ ಇರುವ ಭಾರಿ ವೇಟಿಂಗ್ ಲಿಸ್ಟ್ ಸಮಸ್ಯೆಗೆ ಈ ರೈಲು ದೊಡ್ಡ ಪರಿಹಾರ ನೀಡಲಿದೆ. ಅಲ್ಲದೆ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ನೆಲೆಸಿರುವ ಕರಾವಳಿ ಮೂಲದ ಉದ್ಯಮಿಗಳಿಗೆ, ಉದ್ಯೋಗಿಗಳಿಗೆ ಮತ್ತು ಕೊಲ್ಲೂರು, ಮುರ್ಡೇಶ್ವರ, ಗೋಕರ್ಣಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇದು ಅತ್ಯಂತ ಆರಾಮದಾಯಕ ಹಾಗೂ ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯಾಗಲಿದೆ.&lt;/p&gt;&lt;p&gt;ಈ ಮಾರ್ಗದ ಟಿಕೆಟ್ ಬುಕ್ಕಿಂಗ್ ಶೀಘ್ರದಲ್ಲೇ ರೈಲ್ವೆ ಕೌಂಟರ್ ಹಾಗೂ ಐಆರ್&zwnj;ಸಿಟಿಸಿ (IRCTC) ವೆಬ್&zwnj;ಸೈಟ್&zwnj;ನಲ್ಲಿ ಲಭ್ಯವಾಗಲಿದ್ದು, ಪ್ರಯಾಣಿಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/western-railway-regularizes-surat-mangaluru-special-into-permanent-bi-weekly-express-train-check-route-and-timings-gdp/articleshow-x0fhv66"/>
        </item>
        <item>
            <title><![CDATA[ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ಸಮೀಕ್ಷೆ ಸರಿಯಲ್ಲ: ಗುಡುಗಿದ ಕೆ.ಎಸ್.ಈಶ್ವರಪ್ಪ]]></title>
            <link>https://kannada.asianetnews.com/karnataka-districts/sharavathi-pumped-storage-project-cec-visit-row-ks-eshwarappa-gvd/articleshow-5e3ulbg</link>
            <guid isPermaLink="true">https://kannada.asianetnews.com/karnataka-districts/sharavathi-pumped-storage-project-cec-visit-row-ks-eshwarappa-gvd/articleshow-5e3ulbg</guid>
            <pubDate>Tue, 02 Jun 2026 17:22:36 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ ಕಮಿಟಿಯು (ಸಿಇಸಿ) ಸ್ಥಳೀಯರಿಗೆ ಗೊತ್ತಾಗದ ರೀತಿಯಲ್ಲಿ ಯೋಜನಾ ಪ್ರದೇಶಕ್ಕೆ ಸಮೀಕ್ಷೆಗೆಂದು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಒಳ್ಳೆ ಬೆಳವಣಿಗೆಯಲ್ಲ ಎಂದು ಕೆ.ಎಸ್.ಈಶ್ವರಪ್ಪ ಗುಡುಗಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g975x17kzyppr01r9h4rdkry,imgname-ks-eshwarappa.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಜೂ.02):&lt;/strong&gt; ಪರಿಸರ ಮಾರಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ತಡೆಹಿಡಿಯುವಂತೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ ಕಮಿಟಿಯು (ಸಿಇಸಿ) ಸ್ಥಳೀಯರಿಗೆ ಗೊತ್ತಾಗದ ರೀತಿಯಲ್ಲಿ ಯೋಜನಾ ಪ್ರದೇಶಕ್ಕೆ ಸಮೀಕ್ಷೆಗೆಂದು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಒಳ್ಳೆ ಬೆಳವಣಿಗೆಯಲ್ಲ ಎಂದು ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಗುಡುಗಿದರು.&lt;/p&gt;&lt;p&gt;ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಸರ ಮಾರಕ ಯೋಜನೆಯ ವಿರುದ್ಧ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ಅಲ್ಲದೆ ಕೇಂದ್ರ ಸರ್ಕಾರದ ಪರಿಸರ ಮತ್ತು ಹವಾಮಾನ ಇಲಾಖೆಯ ಸಂಶೋಧನಾ ಮುಖ್ಯಸ್ಥರಾದ ಪ್ರಣೀತಾ ಕೌರ್ ಹಾಗೂ ಇತರ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದ ಮುಖ್ಯಸ್ಥರೇ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಶರಾವತಿ ಕಣಿವೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು ಎಂಬ ಸ್ಪಷ್ಟ ಅಭಿಪ್ರಾಯ ನೀಡಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಅಲ್ಲದೆ, ರಾಜ್ಯ ಉಚ್ಛ ನ್ಯಾಯಾಲಯವು ಕೂಡ ಈ ಯೋಜನೆಗೆ ತಡೆಯಾಜ್ಞೆ ನೀಡಿದೆ. ಆದಾಗ್ಯೂ ಸಿಇಸಿ ಕಮಿಟಿಯವರು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆಪಿಸಿಎಲ್ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸುವುದು ಎಂದು ಮೇ 18ರಂದು ಹೊರಡಿಸಿದ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದ ಪತ್ರವೊಂದರಲ್ಲಿ ತಿಳಿಸಲಾಗಿದೆ. ಇದು ಉಚ್ಚ ನ್ಯಾಯಾಲಯದ ಸ್ಪಷ್ಟ ನಿಂದನೆಯಾಗಿದೆ ಎಂದು ಕಿಡಿಕಾರಿದರು.&lt;/p&gt;&lt;h2&gt;&lt;strong&gt;ಅನುಮಾನ ಗಾಢ&lt;/strong&gt;&lt;/h2&gt;&lt;p&gt;ಒಂದು ಸಾಂವಿಧಾನಿಕ, ಸ್ವಾಯತ್ತ ಸಂಸ್ಥೆ ಸ್ಥಳೀಯ ಯೋಜನಾ ಪ್ರದೇಶಕ್ಕೆ ಬರುವ ಸಂದರ್ಭದಲ್ಲಿ ಯೋಜನೆಯ ವಿರುದ್ಧ ಜನಾಭಿಪ್ರಾಯ, ಉಗ್ರ ಹೋರಾಟ ಮಾಡುತ್ತಿರುವ ಸಂಘಟನೆಗಳನ್ನೇ ನಿರ್ಲಕ್ಷಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಈ ಸಮಿತಿಯ ಇಲ್ಲಿಗೆ ಬರುವಾಗ ಸಾರ್ವಜನಿಕರಿಗೆ ಮಾಹಿತಿ ಕೊಡದಿರಲು ಕಾರಣವೇನು, ಇದರ ಹಿಂದೆ ಯಾವುದೋ ಕಾಣದ ಕೈಗಳು ಷಡ್ಯಂತ್ರ ನಡೆಸುತ್ತಿವೆ ಎಂಬ ಅನುಮಾನ ಗಾಢವಾಗಿದೆ. ಅಲ್ಲದೆ ಮೂಕಾಂಬಿಕ ಸಂರಕ್ಷಿತ ಅರಣ್ಯ ಪ್ರದೇಶದ 4000 ಮೆಗಾ ವ್ಯಾಟ್ ಸಾಮರ್ಥ್ಯದ ವರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗೂ ತಾಂತ್ರಿಕ ಅನುಮೋದನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ 75 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇಂತಹದ್ದರಲ್ಲಿ ಸಿಇಸಿ ಸೌಜನ್ಯಕ್ಕಾದರೂ ಇಲ್ಲಿಯ ಭೇಟಿಯ ಮಾಹಿತಿಯನ್ನು ನಮಗೆ ನೀಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಜೂನ್ 2 ರಂದು ಸಂಜೆ 4 ಗಂಟೆಗೆ ಸಿಇಸಿ ಇಲ್ಲಿಯ ಶ್ರೀಗಂಧದ ಕೋಠಿಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಲಿದೆ. ನಮ್ಮ ಸಮಿತಿಯ ಪದಾಧಿಕಾರಿಗಳು ಸಿಇಸಿ ಮುಖ್ಯಸ್ಥರನ್ನು, ಸದಸ್ಯರನ್ನು ಭೇಟಿ ಮಾಡಿ ಯೋಜನೆಯ ವಿರುದ್ಧ ತಾವು ಹಮ್ಮಿಕೊಂಡ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಜತೆಗೆ ನ್ಯಾಯಾಲಯದ ಅನುಮತಿ ಇಲ್ಲದೆ ಪರಿಶೀಲನೆಗೆ ಬಂದಿರುವುದು ನ್ಯಾಯಾಲಯದ ನಿಂದನೆಯಾಗುತ್ತಿದ್ದು, ಈ ಬಗ್ಗೆ ಅವರಿಗೆ ರಾಷ್ಟ್ರಭಕ್ತರ ಬಳಗ ಪ್ರಶ್ನಿಸಲಿದೆ ಎಂದು ತಿಳಿಸಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sharavathi-pumped-storage-project-cec-visit-row-ks-eshwarappa-gvd/articleshow-5e3ulbg"/>
        </item>
        <item>
            <title><![CDATA[Thalapathy Vijay: ಫಸ್ಟ್ ಭಾಷಣದಲ್ಲೇ ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ‌ ಎಬ್ಬಿಸಿದ ಹೊಸ ಸಿಎಂ ವಿಜಯ್]]></title>
            <link>https://kannada.asianetnews.com/gallery/cine-world/tvk-actor-thalapathy-vijay-first-speech-as-cm-stirs-tamil-nadu-politics-with-mgr-reference-xtxrslg</link>
            <guid isPermaLink="true">https://kannada.asianetnews.com/gallery/cine-world/tvk-actor-thalapathy-vijay-first-speech-as-cm-stirs-tamil-nadu-politics-with-mgr-reference-xtxrslg</guid>
            <pubDate>Tue, 02 Jun 2026 17:19:08 +0530</pubDate>
            <description><![CDATA[&lt;p&gt;Thalapathy Vijay: ಇಷ್ಟು ದಿನ ನಿಮ್ಮನ್ನು ಕ್ಯೂನಲ್ಲಿ ನಿಲ್ಲಿಸಿ ಮೋಸ ಮಾಡಿದ ಎರಡು ಪಕ್ಷಗಳನ್ನು ನೀವು ಪಕ್ಕಕ್ಕೆ ಸರಿಸಿದ್ದೀರಿ. ನೀವು ನನ್ನನ್ನು ಸಿಎಂ ಮಾಡಿಲ್ಲ, ನಿಮ್ಮ 'ಮೊದಲ ಸೇವಕ'ನನ್ನಾಗಿ ಮಾಡಿದ್ದೀರಿ ಎಂದು ತಮಿಳುನಾಡು ಸಿಎಂ ವಿಜಯ್ ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ ಸಂಚಲನ ಮೂಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr88x7k0q1g7de1g8kt4kjw2,imgname-tamil-nadu-cm-vijay-first-speech-secular-social-justice-tvk-govt-transparency-10-lakh-crore-debt-news-3-1778394242656.jpg" type="image/jpeg" height="390" width="690"/>
            <content:encoded><![CDATA[&lt;p&gt;Thalapathy Vijay: ಇಷ್ಟು ದಿನ ನಿಮ್ಮನ್ನು ಕ್ಯೂನಲ್ಲಿ ನಿಲ್ಲಿಸಿ ಮೋಸ ಮಾಡಿದ ಎರಡು ಪಕ್ಷಗಳನ್ನು ನೀವು ಪಕ್ಕಕ್ಕೆ ಸರಿಸಿದ್ದೀರಿ. ನೀವು ನನ್ನನ್ನು ಸಿಎಂ ಮಾಡಿಲ್ಲ, ನಿಮ್ಮ 'ಮೊದಲ ಸೇವಕ'ನನ್ನಾಗಿ ಮಾಡಿದ್ದೀರಿ ಎಂದು ತಮಿಳುನಾಡು ಸಿಎಂ ವಿಜಯ್ ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ ಸಂಚಲನ ಮೂಡಿಸಿದ್ದಾರೆ.&lt;/p&gt;&lt;img&gt;ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ಶಕೆ ಆರಂಭವಾಗಿದೆ. ಬೆಳ್ಳಿತೆರೆಯಲ್ಲಿ ವಿಲನ್&zwnj;ಗಳನ್ನು చితಪಟ ಮಾಡಿದ 'ದಳಪತಿ' ವಿಜಯ್, ಈಗ ರಾಜಕೀಯ ಅಖಾಡದಲ್ಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಎಂ ಆದ ನಂತರ ತಿರುಚಿರಾಪಳ್ಳಿಯಲ್ಲಿ ನಡೆದ ತಮ್ಮ ಮೊದಲ ಬೃಹತ್ ರ&zwj;್ಯಾಲಿಯಲ್ಲಿ ವಿಜಯ್ (Thalapathy Vijay) ಮಾತನಾಡಿದ ರೀತಿ ಈಗ ದಕ್ಷಿಣ ಭಾರತದಲ್ಲೇ ಹಾಟ್ ಟಾಪಿಕ್ ಆಗಿದೆ. ಇದು ಕೇವಲ ಭಾಷಣವಲ್ಲ, ವಿರೋಧಿಗಳಿಗೆ ನೀಡಿದ ಖಡಕ್ ಎಚ್ಚರಿಕೆ.&lt;img&gt;ರ&zwj;್ಯಾಲಿಗೆ ಬಂದಿದ್ದ ಜನಸಾಗರವನ್ನು ಕಂಡು ಭಾವುಕರಾದ ವಿಜಯ್, ಒಂದು ಸಂಚಲನಾತ್ಮಕ ಹೇಳಿಕೆ ನೀಡಿದರು. 'ತಮಿಳುನಾಡಿನ ಆರಾಧ್ಯ ದೈವ, ದಿವಂಗತ ಸಿಎಂ ಎಂಜಿಆರ್ ಅವರಿಗೂ ಮೊದಲ ಚುನಾವಣೆಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಮತಗಳು ಬಂದಿರಲಿಲ್ಲ. ಅಂತಹ ಅದ್ಭುತ ಬೆಂಬಲವನ್ನು ನೀವು ನನಗೆ ಮತ್ತು ನಮ್ಮ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷಕ್ಕೆ ನೀಡಿದ್ದೀರಿ' ಎಂದು ವಿಜಯ್ ಹೇಳಿದರು. ಆದರೆ, ತಕ್ಷಣವೇ 'ಅಯ್ಯೋ, ನಾನು ನನ್ನನ್ನು ಎಂಜಿಆರ್ ಅವರಿಗೆ ಹೋಲಿಸಿಕೊಳ್ಳುತ್ತಿಲ್ಲ. ಅವರು ಮಹಾನ್ ನಾಯಕ. ನಾನು ಕೇವಲ ಎಂಜಿಆರ್, ಅಣ್ಣಾ, ಪೆರಿಯಾರ್ ತೋರಿಸಿದ ದಾರಿಯಲ್ಲಿ ನಡೆಯಲು ಬಂದ ನಿಮ್ಮ ಮನೆ ಮಗ' ಎಂದು ಹೇಳಿ ಎಲ್ಲರ ಮನಗೆದ್ದರು.&lt;img&gt;ದಶಕಗಳಿಂದ ತಮಿಳುನಾಡನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದೊಡ್ಡ ಪಕ್ಷಗಳ ಪ್ರಾಬಲ್ಯಕ್ಕೆ ವಿಜಯ್ ಬ್ರೇಕ್ ಹಾಕಿದ್ದಾರೆ. 'ಇಷ್ಟು ವರ್ಷ ನಿಮ್ಮನ್ನು ಕ್ಯೂನಲ್ಲಿ ನಿಲ್ಲಿಸಿ ಮೋಸ ಮಾಡಿದ ಇಬ್ಬರನ್ನೂ ನೀವು ತಿರಸ್ಕರಿಸಿದ್ದೀರಿ. ಆರು ತಿಂಗಳು ಸುಮ್ಮನಿರುತ್ತೇನೆ ಅಂದರು, ಆದರೆ ಅವರಿಂದ ಆರು ದಿನವೂ ಸುಮ್ಮನಿರಲು ಆಗಲಿಲ್ಲ. ನೀವು ನನ್ನನ್ನು ಕೇವಲ ಮುಖ್ಯಮಂತ್ರಿ ಮಾಡಿಲ್ಲ, ನಿಮ್ಮ 'ಮೊದಲ ಸೇವಕ'ನಾಗಿ ಆಯ್ಕೆ ಮಾಡಿದ್ದೀರಿ' ಎಂದು ವಿಜಯ್ ಭಾವುಕರಾಗಿ ಮಾತನಾಡಿದರು.&lt;img&gt;ಏಪ್ರಿಲ್ 23ರಂದು ನಡೆದ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಬರೋಬ್ಬರಿ 108 ಸ್ಥಾನಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ಸ್ವತಃ ವಿಜಯ್ ಎರಡು ಕಡೆ ಸ್ಪರ್ಧಿಸಿ, ಎರಡರಲ್ಲೂ ಭರ್ಜರಿ ಜಯ ಸಾಧಿಸಿದ್ದಾರೆ. ಚೆನ್ನೈ ಪೆರಂಬೂರ್&zwnj;ನಲ್ಲಿ ವಿಜಯ್ 1,19,454 ಮತಗಳನ್ನು ಪಡೆದು, 53,532 ಮತಗಳ ಭಾರಿ ಅಂತರದಿಂದ ಗೆದ್ದಿದ್ದಾರೆ. ತಿರುಚಿರಾಪಳ್ಳಿ ಪೂರ್ವದಲ್ಲಿ 91,381 ಮತಗಳನ್ನು ಪಡೆದು, 27,416 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಸದ್ಯ ವಿಜಯ್ ತಿರುಚಿರಾಪಳ್ಳಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಚೆನ್ನೈ ಪೆರಂಬೂರ್ ಶಾಸಕರಾಗಿ ಮುಂದುವರಿದಿದ್ದಾರೆ.&lt;img&gt;ತೆರೆಯ ಮೇಲೆ ಹೀರೋ ಆಗಿ ಪ್ರೇಕ್ಷಕರನ್ನು ರಂಜಿಸಿದ ವಿಜಯ್, ಈಗ ನಿಜ ಜೀವನದಲ್ಲಿ ಜನರ ಸೇವೆಗೆ ಸಿದ್ಧರಾಗಿದ್ದಾರೆ. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ವಿಜಯ್ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ. ದೇವಸ್ಥಾನ, ಶಾಲೆಗಳಿಂದ ವೈನ್ ಶಾಪ್&zwnj;ಗಳನ್ನು ದೂರ ಸರಿಸುವುದು, ಹಿಂದಿನ ಮುಖ್ಯಮಂತ್ರಿಗಳ ಯೋಜನೆಗಳನ್ನು ನಿಲ್ಲಿಸದೆ ಮುಂದುವರಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ವಿಜಯ್ ದಿಟ್ಟ ನಿಲುವು ತೋರಿದ್ದಾರೆ. 1977ರಿಂದ 1987ರವರೆಗೆ ತಮಿಳುನಾಡನ್ನು ಆಳಿದ ಮೊದಲ ನಟ-ಸಿಎಂ ಎಂಜಿಆರ್ ದಾರಿಯಲ್ಲೇ ವಿಜಯ್ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಒಟ್ಟಿನಲ್ಲಿ, ದಳಪತಿ ರಾಜಕೀಯ ಪಯಣ ಮುಂದೆ ಇನ್ನೆಷ್ಟು ದಾಖಲೆಗಳನ್ನು ಸೃಷ್ಟಿಸುತ್ತದೋ ನೋಡಬೇಕು.]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/tvk-actor-thalapathy-vijay-first-speech-as-cm-stirs-tamil-nadu-politics-with-mgr-reference-xtxrslg"/>
        </item>
        <item>
            <title><![CDATA[Snake Droppings: ಪಕ್ಷಿ ಹಿಕ್ಕೆ ಎಂದು ಮೋಸ ಹೋಗ್ಬೇಡಿ! ಆ ರೀತಿ ಇದ್ರೆ ಪಕ್ಕಾ ಹಾವಿನ ಮಲ! ಮುಟ್ಟಿದ್ರೂ ಡೇಂಜರ್‌]]></title>
            <link>https://kannada.asianetnews.com/gallery/life/is-snake-droppings-dangerous-how-to-find-out-this-zgx2wpv</link>
            <guid isPermaLink="true">https://kannada.asianetnews.com/gallery/life/is-snake-droppings-dangerous-how-to-find-out-this-zgx2wpv</guid>
            <pubDate>Tue, 02 Jun 2026 16:53:09 +0530</pubDate>
            <description><![CDATA[&lt;p&gt;Snake Droppings: ಹಾವಿನ ಬಗ್ಗೆ ಮಾತನಾಡುತ್ತೇವೆ, ಆದರೆ ಹಾವಿನ ಮಲದ ಬಗ್ಗೆ ನಿರ್ಲಕ್ಷ್ಯ ಮಾಡುತ್ತೇವೆ. ನೀವೂ ಊಹಿಸೋಕೂ ಆಗದ ಜಾಗದಲ್ಲಿ ಮಲ ಇರುತ್ತದೆ. ಆ ಮಲ ಸಿಕ್ಕಾಪಟ್ಟೆ ಡೇಂಜರ್. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq4tyqsctthnvvk1pnpap0z9,imgname-whatsapp-image-2026-04-26-at-5.30.24-pm-1777205206828.jpeg" type="image/jpeg" height="390" width="690"/>
            <content:encoded><![CDATA[&lt;p&gt;Snake Droppings: ಹಾವಿನ ಬಗ್ಗೆ ಮಾತನಾಡುತ್ತೇವೆ, ಆದರೆ ಹಾವಿನ ಮಲದ ಬಗ್ಗೆ ನಿರ್ಲಕ್ಷ್ಯ ಮಾಡುತ್ತೇವೆ. ನೀವೂ ಊಹಿಸೋಕೂ ಆಗದ ಜಾಗದಲ್ಲಿ ಮಲ ಇರುತ್ತದೆ. ಆ ಮಲ ಸಿಕ್ಕಾಪಟ್ಟೆ ಡೇಂಜರ್. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;img&gt;&lt;p&gt;ಹಾವಿನ ಮಲವು ಬೇರೆ ಪ್ರಾಣಿಗಳ ಮಲದಂತೆ ಇರೋದಿಲ್ಲ. ಪಕ್ಷಿಗಳಂತೆ ಹಾವುಗಳು ಕೂಡ ಮಲವನ್ನು ಒಂದೇ ದ್ವಾರದಿಂದ ( ಕ್ಲೋಕಾ ) ಹೊರಹಾಕುತ್ತವೆ. ಇದರಲ್ಲಿ ದ್ರವ, ಗಟ್ಟಿ ಮಲ ಕೂಡ ಮಿಕ್ಸ್&zwnj; ಆಗಿರುತ್ತದೆ.&lt;/p&gt;&lt;p&gt;ಮಲವು ಸಾಮಾನ್ಯವಾಗಿ ಕಡು ಕಂದು ಅಥವಾ ಕಪ್ಪು ಬಣ್ಣದಲ್ಲಿರುತ್ತದೆ. ಮಲದ ತುದಿಯಲ್ಲಿ ಬಿಳಿ ಅಥವಾ ಆಫ್-ವೈಟ್ ಬಣ್ಣದ ಭಾಗ ಇರುತ್ತದೆ. ಇದು ಯೂರಿಕ್ ಆಸಿಡ್ (Uric acid) ಆಗಿರುತ್ತದೆ, ಅಂದರೆ ಹಾವಿನ ಗಟ್ಟಿ ರೂಪದ ಮೂತ್ರವಾಗಿರಲಿದೆ. ಕಡು ಬಣ್ಣದ, ಕೊಳವೆಯಾಕಾರದ, ಒಂದು ತುದಿಯಲ್ಲಿ ಸೀಮೆಸುಣ್ಣದಂತಹ ಬಿಳಿ ಬಣ್ಣದ ಮೊಗ್ಗು ಇರುವ ತ್ಯಾಜ್ಯವನ್ನು ಕಂಡರೆ, ಅದು ಹಾವಿನ ಮಲ ಆಗಿರುತ್ತದೆ. ಹಸಿಯಾದ ಮಲವು ಮೃದುವಾಗಿರುತ್ತದೆ, ನಯವಾಗಿರುತ್ತದೆ. ಅದು ಒಣಗಿದಾ, ಬಣ್ಣ ತಿಳಿಯಾಗುವುದು, ಪುಡಿಯಾಗುವುದು.&lt;/p&gt;&lt;p&gt;ಹಾವಿನ ಮಲದಲ್ಲಿ ಅವುಗಳು ತಿಂದ ಪ್ರಾಣಿಗಳ ತುಪ್ಪಳ (ಗೂದಲು), ಮೂಳೆ, ಹಲ್ಲು ಇರುತ್ತವೆ. ಹಾವಿನ ಮಲದಲ್ಲಿ ಯಾವುದೇ ಸಸ್ಯದ ನಾರು ಇರುವುದಿಲ್ಲ. ಸಣ್ಣ ಮೂಳೆ, ಕೂದಲನ್ನು ಹೊಂದಿರುವ, ಯಾವುದೇ ಸಸ್ಯದ ಅಂಶವಿಲ್ಲದ ಮಲ ಕಂಡರೆ, ಅದು ಹಾವಿನದ್ದೇ ಆಗಿರುತ್ತದೆ.&lt;/p&gt;&lt;img&gt;&lt;p&gt;ಹಾವಿನ ಮಲ ಕಂಡರೆ ಅದು ಹಕ್ಕಿಯ ಮಲ ಎಂದು ಕಾಣಿಸುತ್ತದೆ. ಬಿಳಿ ಯೂರಿಕ್ ಆಸಿಡ್ ಭಾಗವು ಪಕ್ಷಿಗಳ ಮಲದ ಥರ ಕಾಣಿಸುತತದೆ. ಆದರೆ ಪಕ್ಷಿಗಳ ಮಲವು ಬಿಳಿಯಾಗಿ, ಹರಡಿಕೊಂಡಿರುತ್ತದೆ. ಹಾವಿನ ಮಲದಲ್ಲಿ ಬಿಳಿ ಭಾಗದ ಜೊತೆಗೆ ಕಪ್ಪು ಬಣ್ಣದ ತ್ಯಾಜ್ಯವೂ ಇರುತ್ತದೆ. ಹಾವಿನ ಮಲವು ಹೆಚ್ಚು ಕೊಳವೆಯಾಕಾರದಲ್ಲಿ ಉದ್ದವಾಗಿರುತ್ತದೆ. ಈ ಮಲವು ದೊಡ್ಡದಾಗಿರುತ್ತದೆ.&lt;/p&gt;&lt;img&gt;&lt;p&gt;ಹಾವು ಮನೆಗಳ ಅಟ್ಟ, ಬೇಸ್&zwnj;ಮೆಂಟ್&zwnj;ಗಳಲ್ಲಿ ಮಲ ಮಾಡುತ್ತದೆ. ಹಾವಿನ ರಂಧ್ರಗಳ ಸುತ್ತಮುತ್ತ, ತೋಟದ ಬಳಿ, ಕಟ್ಟಿಗೆಯ ರಾಶಿ ಬಳಿ, ಗಿಡಗಂಟಿಗಳ ಅಡಿಯಲ್ಲಿ ಮಲ ಮಾಡುವುದುಂಟು. ಅಂಗಳದಲ್ಲಿ ಮಲ ಕಾಣಿಸಿದ್ರೆ, ಅಲ್ಲೇ ಎಲ್ಲೋ ಹಾವಿದೆ ಎಂದರ್ಥ.&lt;/p&gt;&lt;img&gt;&lt;p&gt;ಹಾವಿನ ಮಲದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುತ್ತದೆ. ಮಲವನ್ನು ಮುಟ್ಟಿ, ಕೈ ತೊಳೆಯದೆ ಮುಖ ಅಥವಾ ಆಹಾರವನ್ನು ಮುಟ್ಟಿದರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಬರುತ್ತದೆ. ಮಲವು ವಾಸನೆಯಿಂದ ಇರುತ್ತದೆ, ಅಪಾಯ ಮಾಡುತ್ತದೆ. ಈ ಮಲವನ್ನು ಬರಿಗೈಯಿಂದ ಮುಟ್ಟಬೇಡಿ. ಮಾಸ್ಕ್ ಹಾಕಿಕೊಂಡು, ಸೋಂಕು ನಿವಾರಕ ಹಾಕಿ ಆ ಮಲ ಕ್ಲೀನ್&zwnj; ಮಾಡಿ.&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/life/is-snake-droppings-dangerous-how-to-find-out-this-zgx2wpv"/>
        </item>
        <item>
            <title><![CDATA[ಫೆಡರಲ್ ಕೋರ್ಟ್ ಆವರಣದಲ್ಲಿ ಪೊಲೀಸ್ ಜೊತೆ ಮಹಿಳಾ ಜಡ್ಜ್ ಸರಸ, ಸುಳ್ಳು ಹೇಳಿದ್ರೂ ಸಿಕ್ಕಿತು ಸಾಕ್ಷ್ಯ]]></title>
            <link>https://kannada.asianetnews.com/world-news/alleged-romance-between-judge-and-police-officer-sparks-controversy-in-us-court/articleshow-1fngbyy</link>
            <guid isPermaLink="true">https://kannada.asianetnews.com/world-news/alleged-romance-between-judge-and-police-officer-sparks-controversy-in-us-court/articleshow-1fngbyy</guid>
            <pubDate>Tue, 02 Jun 2026 17:15:02 +0530</pubDate>
            <description><![CDATA[&lt;p&gt;ಫೆಡರಲ್ ಕೋರ್ಟ್ ಆವರಣದ ಛೇಂಬರ್&zwnj;ನಲ್ಲೇ ಮಹಿಳಾ ನ್ಯಾಯಾಧೀಶೆ ಪೊಲೀಸ್ ಅಧಿಕಾರಿ ಜೊತೆ ಸರಸವಾಡಿ ಸಿಕ್ಕಿ ಬಿದ್ದಿದ್ದಾರೆ. ಆದರೆ ವಿಷಯ ಇದಲ್ಲ, ನ್ಯಾಯದೇವತೆಯ ಮಂದಿರದಲ್ಲಿ ನಿಯಮ ಉಲ್ಲಂಘಿಸಿದ ಮಹಿಳಾ ಜಡ್ಜ್&zwnj;ಗೆ ಯಾವುದೇ ಶಿಕ್ಷೆ ನೀಡಿದ ಕ್ಷಮಾದಾನ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfntgzs37jghkra9ht42fv9,imgname-fotojet--73--1776495182841.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಟ್ಲಾಂಟಾ (ಜೂ.02)&lt;/strong&gt; ಕೋರ್ಟ್&zwnj;ಗೆ ಪ್ರತಿ ದಿನ ಹಲವರು ನ್ಯಾಯ ಕೇಳಿಕೊಂಡು ಆಗಮಿಸುತ್ತಾರೆ. ನ್ಯಾಯದೇವತೆ ದೇಗುಲ ಎಂದೇ ಗುರುತಿಸಿಕೊಂಡಿರುವ ಅಮೆರಿಕದ ಫೆಡರಲ್ ಕೋರ್ಟ್ ಆವರಣದಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಫೆಡರಲ್ ಕೋರ್ಟ್&zwnj;ನ ಮಹಿಳಾ ಜಡ್ಜ್ ಕೋರ್ಟ್ ಛೇಂಬರ್&zwnj;ನಲ್ಲಿ ಪುರುಷ ಪೊಲೀಸ್ ಅಧಿಕಾರಿ ಜೊತೆ ಸರಸವಾಡಿದ್ದಾರೆ. ಬಳಿಕ ಸುಳ್ಳು ಹೇಳಿದ್ದಾರೆ. ಆದರೆ ಘಟನೆ ಜಗಜ್ಜಾಹೀರಾಗಿದ್ದು ಮಾತ್ರವಲ್ಲ, ಆರೋಪ ಸಾಬೀತಾಗಿದೆ. ಆದರೆ ಈ ಘಟನೆ ವಿವಾದಕ್ಕೆ ಕಾರಣಾಗಿದ್ದು ತೀರ್ಪಿನ ಬಳಿಕ. ನ್ಯಾಯದೇಗುಲದಲ್ಲಿ ತಪ್ಪು ಎಸೆಗಿದರೂ ಮಹಿಳಾ ಜಡ್ಜ್&zwnj;ಗೆ ಯಾವುದೇ ಶಿಕ್ಷೆ ನೀಡಿಲ್ಲ, ಅಮಾನತು ಮಾಡಿಲ್ಲ, ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ. ಇದು ವಿವಾದಕ್ಕೆ ಗುರಿಯಾಗಿದೆ.&lt;/p&gt;&lt;p&gt;ಅಲಬಾಮಾ, ಫ್ಲೋರಿಡಾ ಮತ್ತು ಜಾರ್ಜಿಯಾ ರಾಜ್ಯಗಳನ್ನು ಒಳಗೊಂಡಿರುವ '11ನೇ ಜುಡಿಷಿಯಲ್ ಸರ್ಕ್ಯೂಟ್' ವ್ಯಾಪ್ತಿಯ ಫೆಡರಲ್ ಕೋರ್ಟ್&zwnj;ನಲ್ಲಿ ಈ ಘಟನೆ ನಡೆದಿದೆ. ಕೆಲಸದ ಅವಧಿಯಲ್ಲೇ ಛೇಂಬರ್ ಒಳಗೆ ಮಂಚದಾಟ ನಡೆದಿದೆ. ಬಳಿಕ ಮಹಿಳಾ ಜಡ್ಜ್ ಸುಳ್ಳು ಹೇಳಿ ಪ್ರಕರಣದ ದಾರಿ ತಪ್ಪಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.&lt;/p&gt;&lt;h2&gt;ಚೇಂಬರ್&zwnj;ನಲ್ಲೇ ಲೀಲೆ&lt;/h2&gt;&lt;p&gt;ನ್ಯಾಯಾಧೀಶರು ಮತ್ತು ಸಮವಸ್ತ್ರದಲ್ಲಿದ್ದ ಉನ್ನತ ಪೊಲೀಸ್ ಅಧಿಕಾರಿ ಕೆಲಸದ ಅವಧಿಯಲ್ಲೇ ದೈಹಿಕ ಸಂಪರ್ಕ ಶುರುಮಾಡಿದ್ದಾರೆ. ಮಧ್ಯಾಹ್ನ ಊಟದ ಸಮಯದಲ್ಲಿ ಹಲವು ಬಾರಿ ಇವರಿಬ್ಬರು ದೈಹಿಕ ಸಂಬಂಧದಲ್ಲಿ ತೊಡಗುತ್ತಿದ್ದರು. ಪಕ್ಕದಲ್ಲಿರುವ ಕ್ಲರ್ಕ್ ಹಾಗೂ ಇತರ ಸಿಬ್ಬಂದಿಗಳಿಗೆ ಕೇಳಿಸಿದ ಶಬ್ದದಿಂದ ಬೇಸತ್ತು ಮುಖ್ಯ ನ್ಯಾಯಾಧೀಶರಿಗೆ ದೂರು ನೀಡಿದ್ದಾರೆ. ಹೀಗಾಗಿ ತನಿಖೆ ಆರಂಭಗೊಂಡಿದೆ. 2025ರ ಸೆಪ್ಟೆಂಬರ್ ತಿಂಗಳಲ್ಲಿ ದೂರು ನೀಡಲಾಗಿತ್ತು.&lt;/p&gt;&lt;p&gt;ಹೀಗೆ ನಡೆದೇ ಇಲ್ಲ, ಇದು ವೈಯುಕ್ತಿಕ ದ್ವೇಷದಿಂದ ಸಲ್ಲಿಸಿದ ದೂರು ಎಂದು ಮಹಿಳಾ ಜಡ್ಜ್ ಹೇಳಿದ್ದರು. ಆದರೆ ಸಿಸಿಟಿವಿ ದೃಶ್ಯಗಳು ಸಾಕ್ಷ್ಯ ನುಡಿದಿತ್ತು. ಇತ್ತ ಹಲವು ಸಿಬ್ಬಂದಿಗಳು ತಮಗೆ ಕೇಳಿಸಿದ ಶಬ್ದ, ನಡೆ, ಪೊಲೀಸ್ ಅಧಿಕಾರಿ ಭೇಟಿ ಸಾಕ್ಷ್ಯ ನುಡಿದಿದ್ದಾರೆ. ಕೊನೆಗೆ ಮಹಿಳಾ ನ್ಯಾಯಾಧೀಶೆ ಸತ್ಯ ಒಪ್ಪಿಕೊಂಡಿದ್ದಾರೆ. ಇತ್ತ ಅಟ್ಲಾಂಟ ಪೊಲೀಸ್ ಅಧಿಕಾರಿ ಜಡ್ಜ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡ ಕಾರಣ ಅಟ್ಲಾಂಟ ಪೊಲೀಸರು ಆತಂರಿಕ ತನಿಖೆ ನಡೆಸಿದ್ದಾರೆ.&lt;/p&gt;&lt;p&gt;ಮುಖ್ಯ ನ್ಯಾಯಾಧೀಶೆ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಆದರೆ ಮಹಿಳಾ ಜಡ್ಜ್&zwnj;ಗೆ ಯಾವುದೇ ಶಿಕ್ಷೆ ನೀಡಿಲ್ಲ. ಹುದ್ದೆಯಿಂದ ಅಮಾನತು ಮಾಡಿಲ್ಲ. ಘಟನೆ ಖಂಡಿಸಿ ಮಹಿಳಾ ಜಡ್ಜ್ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ. ಆದರೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಮಹಿಳಾ ಜಡ್ಜ್ ಮುಖ್ಯ ನ್ಯಾಯಾಧೀಶೆ ಹುದ್ದೆಗೆ ಏರುವಂತಿಲ್ಲ. ನ್ಯಾಯಾಂಗ ಸಮಿತಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ. 6 ಕ್ಲರ್ಕ್&zwnj;ಗಳಿಗೆ ಕ್ಷಮಾಪಣ ಪತ್ರ ಬರೆಯಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/alleged-romance-between-judge-and-police-officer-sparks-controversy-in-us-court/articleshow-1fngbyy"/>
        </item>
        <item>
            <title><![CDATA[ವಿದೇಶದಲ್ಲಿ ಭಾರತದ ಮಾನ ಕಳೆದ ಮಹಿಳೆ: ಜಪಾನ್ ಜೈಲು ಪಾಲಾಗುವುದರಿಂದ ಬಚಾವ್ ಮಾಡಿದ್ದು ಇದೊಂದೇ ಕಾರಣ!]]></title>
            <link>https://kannada.asianetnews.com/world-news/indian-woman-caught-stealing-in-japan-reportedly-tried-to-bribe-police-saved-by-indias-respect/articleshow-qar65t9</link>
            <guid isPermaLink="true">https://kannada.asianetnews.com/world-news/indian-woman-caught-stealing-in-japan-reportedly-tried-to-bribe-police-saved-by-indias-respect/articleshow-qar65t9</guid>
            <pubDate>Tue, 02 Jun 2026 17:12:38 +0530</pubDate>
            <description><![CDATA[&lt;p&gt;&lt;strong&gt;Indian tourist shoplifting Japan: &lt;/strong&gt;ಜಪಾನ್ ಪ್ರವಾಸಕ್ಕೆ ತೆರಳಿದ್ದ ಭಾರತೀಯ ಮಹಿಳೆಯೊಬ್ಬರು ಸ್ಥಳೀಯ ಸುವೆನೀರ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಇಂಟರ್ನೆಟ್&zwnj;ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಪ್ರವಾಸಿ ಗುಂಪಿನಲ್ಲಿದ್ದ ಹೂಡಿಕೆ ಸಲಹೆಗಾರ ಮುತ್ತುಕೃಷ್ಣನ್ ದಂಡಪಾಣಿ ಅವರು ಎಕ್ಸ್ (ಟ್ವಿಟರ್)ನಲ್ಲಿ ಈ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt426dhsj48rvza6c0cjkdq1,imgname-thumbnail---2026-06-02t170752.601-1780400469560.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿ&lt;/strong&gt;ದೇಶ ಪ್ರವಾಸದಲ್ಲಿ ಒಬ್ಬ ವ್ಯಕ್ತಿ ಮಾಡುವ ಸಣ್ಣ ತಪ್ಪು ಇಡೀ ದೇಶದ ವರ್ಚಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಜಪಾನ್&zwnj;ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಜಪಾನ್ ಪ್ರವಾಸದಲ್ಲಿದ್ದ ಭಾರತೀಯ ಮಹಿಳೆಯೊಬ್ಬರು ಸ್ಥಳೀಯ ನೆನಪಿನ ಕಾಣಿಕೆ (ಸುವೆನೀರ್) ಅಂಗಡಿಯೊಂದರಲ್ಲಿ ಕಳ್ಳತನದ ಆರೋಪದ ಮೇಲೆ ಸಿಕ್ಕಿಬಿದ್ದಿದ್ದಾರೆ. ಸಹ-ಪ್ರವಾಸಿಗರಾಗಿದ್ದ ಮುತ್ತುಕೃಷ್ಣನ್ ದಂಡಪಾಣಿ ಅವರು ಈ ಕಹಿ ಅನುಭವವನ್ನು ಇಂಟರ್ನೆಟ್&zwnj;ನಲ್ಲಿ ಹಂಚಿಕೊಂಡಿದ್ದು, ಈಗ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ.&lt;/p&gt;&lt;p&gt;ದಂಡಪಾಣಿ ಅವರ ವಿವರಣೆಯ ಪ್ರಕಾರ, ಅವರು ಒಂದು ಪ್ರವಾಸಿ ಗುಂಪಿನೊಂದಿಗೆ ಜಪಾನ್ ಪ್ರವಾಸದಲ್ಲಿದ್ದರು. ಆ ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಪ್ರವಾಸದ ಉದ್ದಕ್ಕೂ ವಿವಿಧ ಪ್ರವಾಸಿ ಸ್ಥಳಗಳಲ್ಲಿ ಯಾರಿಗೂ ತಿಳಿಯದಂತೆ ಕಳ್ಳತನ ಮಾಡುತ್ತಿದ್ದರು ಎಂಬ ವಿಷಯ ಸಹ-ಪ್ರವಾಸಿಗರಿಗೆ ತಿಳಿದಿರಲಿಲ್ಲ. ಆದರೆ, ಪ್ರಸಿದ್ಧ ಸುವೆನೀರ್ (ನೆನಪಿನ ಕಾಣಿಕೆ) ಅಂಗಡಿಯೊಂದರಲ್ಲಿ ಆಕೆ ಬೆಲೆಬಾಳುವ ಸಾಮಗ್ರಿಗಳನ್ನು ಹಣ ನೀಡದೆ ಕೊಂಡೊಯ್ಯುವಾಗ ಮಾಲೀಕರ ಕೈಗೆ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಆಕೆ ತಪ್ಪು ಮುಚ್ಚಿಕೊಳ್ಳಲು ಅಂಗಡಿಯವನಿಗೆ ಹಣ ನೀಡುವ ಆಫರ್ ಮಾಡಿದ್ದಾಳೆ.&lt;/p&gt;&lt;p&gt;ಆದರೆ, ಅಂಗಡಿಯ ಮಾಲೀಕರು ಆಕೆಯ ಹಣವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಜಪಾನ್ ದೇಶವು &quot;ಉನ್ನತ ನಂಬಿಕೆಯ ಸಮಾಜ&quot; (High-trust society) ಆಗಿದ್ದು, ಅಲ್ಲಿ ಕಳ್ಳತನದ ಪ್ರಕರಣಗಳು ಅತ್ಯಂತ ಅಪರೂಪ ಮತ್ತು ಅಲ್ಲಿನ ಜನ ಭಾರತ ದೇಶವನ್ನು ಅಪಾರವಾಗಿ ಗೌರವಿಸುತ್ತಾರೆ ಎಂದು ಮಾಲೀಕರು ಹೇಳಿದ್ದಾರೆ. ಕಳ್ಳತನಕ್ಕಿಂತ ಹೆಚ್ಚಾಗಿ, ಸಿಕ್ಕಿಬಿದ್ದ ನಂತರ ಕೇವಲ ಹಣ ನೀಡಿ ಪ್ರಕರಣವನ್ನು ತಣ್ಣಗಾಗಿಸಲು ಪ್ರಯತ್ನಿಸಿದ ಮಹಿಳೆಯ ನಡವಳಿಕೆ ತಮಗೆ ತೀವ್ರ ಬೇಸರ ತರಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ಠಾಣೆಯಲ್ಲೂ ಲಂಚದ ಆಫರ್&lt;/strong&gt;&lt;/h2&gt;&lt;p&gt;ಅಂಗಡಿಯ ಮಾಲೀಕರು ಕೂಡಲೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾರೆ. ಜಪಾನ್&zwnj;ನಲ್ಲಿ ಅಪರಾಧ ದರ ಕಡಿಮೆ ಇರುವುದರಿಂದ ಪೊಲೀಸರು ಸಾಮಾನ್ಯವಾಗಿ ಬೀದಿಗಳಲ್ಲಿ ಹೆಚ್ಚು ಕಾಣಿಸುವುದಿಲ್ಲ. ಆದರೆ ಕರೆ ಬಂದ ತಕ್ಷಣ ಆಗಮಿಸಿದ ಪೊಲೀಸರು ಮತ್ತು ಟೂರ್ ಮ್ಯಾನೇಜರ್ ಆ ಮಹಿಳೆಯನ್ನು ಪೊಲೀಸ್ ಸ್ಟೇಷನ್&zwnj;ಗೆ ಕರೆದೊಯ್ದಿದ್ದಾರೆ. ಅಲ್ಲಿಯೂ ಸಹ ಆಕೆ ಪೊಲೀಸರಿಗೆ ಹಣದ ಆಮಿಷ ಒಡ್ಡಲು ಯತ್ನಿಸಿದ್ದಾಳೆ. ಆದರೆ ಜಪಾನಿ ಪೊಲೀಸರು ಇದಕ್ಕೆ ಮಣಿಯದೆ, ಅಲ್ಲಿನ ಕಟ್ಟುನಿಟ್ಟಾದ ಕಾನೂನು ವ್ಯವಸ್ಥೆ, ಕಳ್ಳತನದ ಶಿಕ್ಷೆ ಎಷ್ಟು ಕಠಿಣವಾಗಿರುತ್ತದೆ ಮತ್ತು ಜೈಲು ಶಿಕ್ಷೆಯಾಗುವ ಸಾಧ್ಯತೆಯ ಬಗ್ಗೆ ಕಟುವಾಗಿ ಎಚ್ಚರಿಸಿದ್ದಾರೆ. ಕೊನೆಗೆ, ಆಕೆ ಭಾರತೀಯಳಾಗಿದ್ದರಿಂದ ಮತ್ತು ಭಾರತದ ಮೇಲಿನ ವಿಶೇಷ ಗೌರವದಿಂದಾಗಿ ಪೊಲೀಸರು ಕಠಿಣ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ ಎಂದು ದಂಡಪಾಣಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದ್ದು, ಅನೇಕ ಭಾರತೀಯರು ತೀವ್ರ ಮುಜುಗರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದೇಶಗಳಲ್ಲಿ ಪ್ರತಿಯೊಬ್ಬ ನಾಗರಿಕನೂ ತನ್ನ ದೇಶದ ರಾಯಭಾರಿಯಾಗಿರುತ್ತಾನೆ. ಒಬ್ಬ ವ್ಯಕ್ತಿಯ ಇಂತಹ ಬೇಜವಾಬ್ದಾರಿ ಮತ್ತು ಕಾನೂನುಬಾಹಿರ ನಡವಳಿಕೆಯು ಇಡೀ ದೇಶದ ಹಾಗೂ ಇತರೆ ಪ್ರಾಮಾಣಿಕ ಪ್ರವಾಸಿಗರ ವರ್ಚಸ್ಸಿಗೆ ಮಸಿ ಬಳಿಯುತ್ತದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ವಿದೇಶಿ ಸಂಸ್ಕೃತಿ ಮತ್ತು ಕಾನೂನುಗಳನ್ನು ಗೌರವಿಸುವುದು ಪ್ರತಿಯೊಬ್ಬ ಪ್ರವಾಸಿಯ ಕರ್ತವ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.&lt;/p&gt;&lt;h3&gt;&lt;strong&gt;ಜಪಾನ್&zwnj;ನಲ್ಲಿ ಕಳ್ಳತನಕ್ಕೆ ಇರುವ ಶಿಕ್ಷೆ ಎಷ್ಟು ಕಠಿಣ?&lt;/strong&gt;&lt;/h3&gt;&lt;p&gt;ಜಪಾನ್&zwnj;ನಲ್ಲಿ ಸಣ್ಣ ಪುಟ್ಟ ಕಳ್ಳತನವನ್ನೂ (Shoplifting) ಅತ್ಯಂತ ಗಂಭೀರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅಲ್ಲಿನ ದಂಡ ಸಂಹಿತೆಯ (Penal Code) ಪ್ರಕಾರ ಕಳ್ಳತನಕ್ಕೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಭಾರಿ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ.&lt;/p&gt;&lt;p&gt;ವಿದೇಶಿಯರು ಸಿಕ್ಕಿಬಿದ್ದರೆ ತಕ್ಷಣವೇ ಅವರ ವೀಸಾವನ್ನು ರದ್ದುಗೊಳಿಸಿ, ಜೈಲು ಶಿಕ್ಷೆಯ ನಂತರ ದೇಶದಿಂದ ಗಡೀಪಾರು (Deport) ಮಾಡಲಾಗುತ್ತದೆ ಮತ್ತು ಮುಂದೆಂದೂ ಜಪಾನ್&zwnj;ಗೆ ಬರದಂತೆ ನಿಷೇಧ ಹೇರಲಾಗುತ್ತದೆ.&lt;/p&gt;&lt;p&gt;In our group, from the beginning one lady has been shoplifting. We were not aware of it. In one of the tourist souvenir shops, she was caught. She immediately offered to pay money. The Japanese shop keeper said that they are a high trust society where stealing is rare and have&hellip;&lt;/p&gt;&lt;p&gt;&mdash; Muthukrishnan Dhandapani (@dmuthuk) May 30, 2026&lt;/p&gt;]]></content:encoded>
            <category>news</category>
            <dc:creator>Ashwini HR</dc:creator>
            <atom:link href="https://kannada.asianetnews.com/world-news/indian-woman-caught-stealing-in-japan-reportedly-tried-to-bribe-police-saved-by-indias-respect/articleshow-qar65t9"/>
        </item>
        <item>
            <title><![CDATA[Viral Video: ಮೂಡ್ ಆಫ್ ಆಗಿದೆಯಾ? ಈ ಅಪ್ಪ-ಮಗಳ ವಿಡಿಯೋ ಒಮ್ಮೆ ನೋಡಿ!]]></title>
            <link>https://kannada.asianetnews.com/viral/bengaluru-father-daughter-dance-to-bollywood-song-goes-viral-gvd/articleshow-oavbtns</link>
            <guid isPermaLink="true">https://kannada.asianetnews.com/viral/bengaluru-father-daughter-dance-to-bollywood-song-goes-viral-gvd/articleshow-oavbtns</guid>
            <pubDate>Tue, 02 Jun 2026 16:52:11 +0530</pubDate>
            <description><![CDATA[&lt;p&gt;ಬೆಂಗಳೂರಿನ ಅಪ್ಪ-ಮಗಳ ಬಾಂಧವ್ಯದ ಒಂದು ಮುದ್ದಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಜನರ ಮನಗೆದ್ದಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರ ಮುಖದಲ್ಲೂ ನಗು ಮೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt413a2zq7kygm3yw15n7bm7,imgname-xh-1780399319135.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಅಪ್ಪ-ಮಗಳ ಬಾಂಧವ್ಯದ ಒಂದು ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಕೋಟ್ಯಂತರ ಜನರ ಮುಖದಲ್ಲಿ ನಗು ಮೂಡಿಸಿದೆ. ಅಪ್ಪ ತನ್ನ ಪುಟ್ಟ ಮಗಳ ಜೊತೆ ಡ್ಯಾನ್ಸ್ ಮಾಡಿರೋ ಈ ಇನ್&zwnj;ಸ್ಟಾಗ್ರಾಮ್ ವಿಡಿಯೋಗೆ ಈಗಾಗಲೇ 22 ಮಿಲಿಯನ್&zwnj;ಗೂ ಹೆಚ್ಚು ವ್ಯೂಸ್ ಬಂದಿದೆ.&lt;/p&gt;&lt;p&gt;ಅಕ್ಷಯ್ ಪಾಲಿವಾಲ್ ಅನ್ನೋರು ತಮ್ಮ little_munchkin28 ಅನ್ನೋ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅಕ್ಷಯ್, ತಮ್ಮ ಮಗಳನ್ನು ಬೇಬಿ ಕ್ಯಾರಿಯರ್&zwnj;ನಲ್ಲಿ ಕೂರಿಸಿಕೊಂಡು ಖುಷಿಯಿಂದ ಡ್ಯಾನ್ಸ್ ಮಾಡ್ತಾರೆ. 2001ರಲ್ಲಿ ಬಂದ 'ದಿಲ್ ಚಾಹ್ತಾ ಹೈ' ಸಿನಿಮಾದ ಫೇಮಸ್ ಹಾಡು 'ವೋ ಲಡ್ಕಿ ಹೈ ಕಹಾಂ'ಗೆ ಅವರು ಹೆಜ್ಜೆ ಹಾಕಿದ್ದಾರೆ.&lt;/p&gt;&lt;p&gt;ಈ ವಿಡಿಯೋ ಇಷ್ಟೊಂದು ಕ್ಯೂಟ್ ಆಗಿ ಕಾಣಲು ಪುಟ್ಟ ಮಗುವಿನ ರಿಯಾಕ್ಷನ್ ಕೂಡ ಕಾರಣ. ಅಪ್ಪ ಹಾಡಿಗೆ ತಕ್ಕಂತೆ ಕುಣಿಯುತ್ತಿದ್ದರೆ, ಆ ಪುಟ್ಟ ಪೋರಿ ಮುಖದಲ್ಲಿ ನಗು ತುಂಬಿಕೊಂಡು, ನಗುತ್ತಾ ಎಂಜಾಯ್ ಮಾಡುತ್ತದೆ. ಈ ಅಪ್ಪ-ಮಗಳ ಖುಷಿಯ ಕ್ಷಣ ಎಲ್ಲರ ಮನಸ್ಸನ್ನು ಗೆದ್ದಿದೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Adrija Paliwal (@little_munchkin28)&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಅತ್ಯಂತ ಮುದ್ದಾದ ವಿಡಿಯೋ&lt;/strong&gt;&lt;/h2&gt;&lt;p&gt;ಸೋಷಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಸೆಕ್ಷನ್&zwnj;ನಲ್ಲಿ ಈ ಅಪ್ಪ-ಮಗಳ ಜೋಡಿಯನ್ನು ಹಾಡಿ ಹೊಗಳಿದ್ದಾರೆ. ಅವರ ಖುಷಿ ಮತ್ತು ಸುಂದರ ಬಾಂಧವ್ಯವನ್ನು ಮೆಚ್ಚಿಕೊಂಡಿದ್ದಾರೆ. 'ಮೂಡ್ ಸರಿ ಇಲ್ಲದಿದ್ದಾಗ ನೋಡಬೇಕಾದ ವಿಡಿಯೋ ಇದು' ಅಂತ ಕೆಲವರು ಹೇಳಿದ್ರೆ, 'ಇತ್ತೀಚೆಗೆ ನೋಡಿದ ಅತ್ಯಂತ ಮುದ್ದಾದ ವಿಡಿಯೋ' ಅಂತ ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಈ ವೈರಲ್ ವಿಡಿಯೋದಿಂದ ಬಾಲಿವುಡ್&zwnj;ನ ಎವರ್&zwnj;ಗ್ರೀನ್ ಹಾಡು 'ವೋ ಲಡ್ಕಿ ಹೈ ಕಹಾಂ' ಮತ್ತೆ ನೆನಪಾಗಿದೆ. ಶಾನ್ ಮತ್ತು ಕವಿತಾ ಕೃಷ್ಣಮೂರ್ತಿ ಹಾಡಿರುವ ಈ ಹಾಡು, ಬಿಡುಗಡೆಯಾಗಿ ಎರಡು ದಶಕಗಳೇ ಕಳೆದರೂ ಇಂದಿಗೂ ಜನರನ್ನು ಸೆಳೆಯುತ್ತಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/viral/bengaluru-father-daughter-dance-to-bollywood-song-goes-viral-gvd/articleshow-oavbtns"/>
        </item>
        <item>
            <title><![CDATA[ಮಂಗಳೂರು ಪಾಲಿಕೆ ಚುನಾವಣೆ ವಿಳಂಬ, 15 ತಿಂಗಳಾದರೂ ಚುನಾವಣೆ ನಡೆಸದ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್]]></title>
            <link>https://kannada.asianetnews.com/karnataka-districts/mangaluru-city-corporation-election-delay-karnataka-high-court-issues-notice-to-state-government-gdp/articleshow-7nz8nee</link>
            <guid isPermaLink="true">https://kannada.asianetnews.com/karnataka-districts/mangaluru-city-corporation-election-delay-karnataka-high-court-issues-notice-to-state-government-gdp/articleshow-7nz8nee</guid>
            <pubDate>Tue, 02 Jun 2026 16:50:32 +0530</pubDate>
            <description><![CDATA[ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ 15 ತಿಂಗಳು ವಿಳಂಬವಾದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್&zwnj;ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಈ ವಿಳಂಬದಿಂದ ನಗರದ ಆಡಳಿತ ಕುಸಿದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt40yxd6d061nshbbr1jrbfj,imgname-mangaluru-1780399175078.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ದಕ್ಷಿಣ ಕನ್ನಡ: &lt;/strong&gt;ಅವಧಿ ಮುಗಿದು ಬರೋಬ್ಬರಿ 15 ತಿಂಗಳುಗಳು ಕಳೆದಿದ್ದರೂ ಮಂಗಳೂರು ಮಹಾನಗರ ಪಾಲಿಕೆಗೆ (MCC) ಚುನಾವಣೆ ನಡೆಸದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪಾಲಿಕೆಗೆ ತಕ್ಷಣವೇ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು, ಈ ಸಂಬಂಧ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ತುರ್ತು ನೋಟಿಸ್ ಜಾರಿ ಮಾಡಿದೆ.&lt;/p&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಅತ್ತಾವರ ನಿವಾಸಿಯೂ ಹಾಗೂ ಹಿರಿಯ ಪತ್ರಕರ್ತರೂ ಆದ ರಹಿಮಾನ್ ಖಾನ್ ಲೊಹಾನಿ ಅವರು ಸಲ್ಲಿಸಿದ್ದ ಅರ್ಜಿಯ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್&zwnj;ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ಈ ಆದೇಶ ನೀಡಿದೆ. ಅಲ್ಲದೆ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ, ರಾಜ್ಯ ಚುನಾವಣಾ ಆಯೋಗ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ತಲುಪಿಸಲು ಸೂಚಿಸಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿದೆ.&lt;/p&gt;&lt;h2&gt;ಸಂವಿಧಾನದ ಆಶಯಕ್ಕೆ ಧಕ್ಕೆ: ಅರ್ಜಿಯಲ್ಲೇನಿದೆ?&lt;/h2&gt;&lt;p&gt;ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದ ಪ್ರಮುಖ ಅಂಶಗಳ ವಿವರ ಇಲ್ಲಿದೆ.&lt;/p&gt;&lt;p&gt;&lt;strong&gt;ಅವಧಿ ಮುಗಿದರೂ ನಿಲ್ಲದ ಆಡಳಿತಾಧಿಕಾರಿ ಆಳ್ವಿಕೆ: &lt;/strong&gt;ಮಂಗಳೂರು ಮಹಾನಗರ ಪಾಲಿಕೆಯ ಐದು ವರ್ಷಗಳ ಅಧಿಕಾರಾವಧಿಯು 2025ರ ಫೆಬ್ರವರಿ 27ಕ್ಕೇ ಪೂರ್ಣಗೊಂಡಿದೆ. ನಿಯಮಾವಳಿಗಳ ಪ್ರಕಾರ ಅದಕ್ಕೂ ಮುನ್ನವೇ ಚುನಾವಣೆ ಪ್ರಕ್ರಿಯೆ ಮುಗಿಯಬೇಕಿತ್ತು. ಆದರೆ, ಅವಧಿ ಮುಗಿದು 15 ತಿಂಗಳುಗಳು ಉರುಳಿದರೂ ಸರ್ಕಾರ ಹೊಸದಾಗಿ ಚುನಾವಣೆ ನಡೆಸುವ ಯಾವುದೇ ಮುನ್ಸೂಚನೆ ನೀಡಿಲ್ಲ. ಸದ್ಯ ಪಾಲಿಕೆಯು ಜನಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಯ ಸುಪರ್ದಿಯಲ್ಲಿದೆ.&lt;/p&gt;&lt;p&gt;&lt;strong&gt;ವಿಧಿ 243-ಯು ಸ್ಪಷ್ಟ ಉಲ್ಲಂಘನೆ: &lt;/strong&gt;ಭಾರತೀಯ ಸಂವಿಧಾನದ ವಿಧಿ 243-ಯು (Article 243-U) ಪ್ರಕಾರ, ಯಾವುದೇ ಸ್ಥಳೀಯ ಸಂಸ್ಥೆಯ ಅಧಿಕಾರಾವಧಿ ಮುಗಿಯುವುದಕ್ಕಿಂತ ಕನಿಷ್ಠ 6 ತಿಂಗಳು ಮುಂಚಿತವಾಗಿಯೇ ಮುಂದಿನ ಅವಧಿಗೆ ಚುನಾವಣೆ ನಡೆಸುವ ಪ್ರಕ್ರಿಯೆ ಆರಂಭವಾಗಬೇಕು. ಆದರೆ ಇಲ್ಲಿ ಸಂವಿಧಾನದ ಆಶಯವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.&lt;/p&gt;&lt;h2&gt;ಜನಪ್ರತಿನಿಧಿಗಳಿಲ್ಲದೆ ಕರಾವಳಿ ನಗರಿ ತತ್ತರ: ಆಡಳಿತ ಕುಸಿತದ ಆರೋಪ&lt;/h2&gt;&lt;p&gt;ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಯದೇ ಇರುವುದರಿಂದ ಮಂಗಳೂರು ನಗರದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರ್ಜಿಯಲ್ಲಿ ಸುದೀರ್ಘವಾಗಿ ವಿವರಿಸಲಾಗಿದೆ.&lt;/p&gt;&lt;p&gt;&lt;strong&gt;ಮೂಲಸೌಕರ್ಯಗಳ ಕೊರತೆ: &lt;/strong&gt;ಪಾಲಿಕೆಯಲ್ಲಿ ಚುನಾಯಿತ ಮೇಯರ್, ಉಪಮೇಯರ್ ಹಾಗೂ ಕಾರ್ಪೊರೇಟರ್&zwnj;ಗಳು ಇಲ್ಲದಿರುವುದರಿಂದ ಸಾರ್ವಜನಿಕರ ದೂರುಗಳನ್ನು ಕೇಳುವವರೇ ಇಲ್ಲದಂತಾಗಿದೆ. ವಾರ್ಡ್ ಮಟ್ಟದ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ರಸ್ತೆ, ಕುಡಿಯುವ ನೀರು ಮತ್ತು ಒಳಚರಂಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಜನರನ್ನು ಕಾಡುತ್ತಿದೆ.&lt;/p&gt;&lt;p&gt;&lt;strong&gt;ಅಧಿಕಾರಶಾಹಿಯ ದರ್ಬಾರ್: &lt;/strong&gt;ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿಯುತ ಆಡಳಿತ ಇಲ್ಲದಿರುವುದರಿಂದ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಅಧಿಕಾರಶಾಹಿಯ ಕೈಗೆ ಸಿಲುಕಿ ನಲುಗುತ್ತಿದ್ದು, ಉತ್ತಮ ಆಡಳಿತದ ಕಲ್ಪನೆಯೇ ಮಾಯವಾಗಿದೆ ಎಂದು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿದ್ದಾರೆ.&lt;/p&gt;&lt;h2&gt;ತಕ್ಷಣದ ಚುನಾವಣೆಗೆ ಆಗ್ರಹ&lt;/h2&gt;&lt;p&gt;ಜನಸಾಮಾನ್ಯರ ಹಿತದೃಷ್ಟಿಯಿಂದ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಮಂಗಳೂರು ಮಹಾನಗರ ಪಾಲಿಕೆಗೆ ವಿಳಂಬವಿಲ್ಲದೆ ತಕ್ಷಣವೇ ಸಾರ್ವತ್ರಿಕ ಚುನಾವಣೆ ನಡೆಸಲು ಆದೇಶಿಸಬೇಕು ಎಂದು ಅರ್ಜಿದಾರರು ನ್ಯಾಯಪೀಠವನ್ನು ಪ್ರಾರ್ಥಿಸಿದ್ದಾರೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿರುವ ನೋಟಿಸ್&zwnj;ಗೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗವು ಆಗಸ್ಟ್ 25ರ ಒಳಗಾಗಿ ಯಾವ ರೀತಿಯ ಸಮಜಾಯಿಷಿ ನೀಡಲಿದೆ ಮತ್ತು ಕರಾವಳಿಯ ಪ್ರಮುಖ ಪಾಲಿಕೆಯ ಚುನಾವಣಾ ಭವಿಷ್ಯ ಏನಾಗಲಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-city-corporation-election-delay-karnataka-high-court-issues-notice-to-state-government-gdp/articleshow-7nz8nee"/>
        </item>
        <item>
            <title><![CDATA[ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ: ಹೈಕಮಾಂಡ್‌ನಿಂದ 11 ಸಚಿವರ ಪಟ್ಟಿ ಅಂತಿಮ, ಇಲ್ಲಿದೆ ಸಂಪುಟ ಪಟ್ಟಿ!]]></title>
            <link>https://kannada.asianetnews.com/state/dk-shivakumar-swearing-in-ceremony-high-command-finalizes-11-cabinet-ministers-list-sat/articleshow-ptdlcw0</link>
            <guid isPermaLink="true">https://kannada.asianetnews.com/state/dk-shivakumar-swearing-in-ceremony-high-command-finalizes-11-cabinet-ministers-list-sat/articleshow-ptdlcw0</guid>
            <pubDate>Tue, 02 Jun 2026 16:26:50 +0530</pubDate>
            <description><![CDATA[ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರೊಂದಿಗೆ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹೈಕಮಾಂಡ್ ಅನುಮೋದಿಸಿದ ಈ ಪಟ್ಟಿಯಲ್ಲಿ ಹಿರಿಯರು, ಯುವಕರು, ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kswj9b3q8vjp6da636me2hcq,imgname-dk-shivakumar-new-karnataka-chief-minister-1780148907124.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ/ಬೆಂಗಳೂರು (ಜೂ.02): ಕೆ&lt;/strong&gt;ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ನಾಳೆ (ಜೂನ್ 3) ಸಂಜೆ 4:05ಕ್ಕೆ ಬೆಂಗಳೂರಿನ ಲೋಕಭವನದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೇವಲ ಮುಖ್ಯಮಂತ್ರಿ ಮಾತ್ರವಲ್ಲದೆ, ಅವರೊಂದಿಗೆ ಸಚಿವ ಸಂಪುಟ ಸೇರಲಿರುವ 11 ಶಾಸಕರ ಪಟ್ಟಿಗೂ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ನೀಡಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ಸಿದ್ಧಪಡಿಸಿ ನೀಡಿದ್ದ ಸಂಭವನೀಯ ಸಚಿವರ ಪಟ್ಟಿಯನ್ನು ಪರಿಶೀಲಿಸಿದ ಹೈಕಮಾಂಡ್, ಅಂತಿಮವಾಗಿ '1+11' ಸೂತ್ರಕ್ಕೆ ಮೊಹರು ಒತ್ತಿದೆ.&lt;/p&gt;&lt;h2&gt;&lt;strong&gt;ಸಚಿವ ಸಂಪುಟ ಸೇರಲಿರುವ 11 ಆಪ್ತರು ಇವರೇ!&lt;/strong&gt;&lt;/h2&gt;&lt;p&gt;ಹೈಕಮಾಂಡ್ ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಹಿರಿಯರು ಮತ್ತು ಯುವ ನಾಯಕರ ಸಮತೋಲನ ಕಂಡುಬಂದಿದೆ.&lt;/p&gt;&lt;p&gt;&lt;strong&gt;ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ:&lt;/strong&gt;&lt;/p&gt;&lt;p&gt;&lt;strong&gt;ಜಿ. ಪರಮೇಶ್ವರ್: &lt;/strong&gt;ಹಿರಿಯ ನಾಯಕ ಮತ್ತು ಅನುಭವದ ಆಧಾರದಲ್ಲಿ ಸಂಪುಟ ಸೇರ್ಪಡೆ.&lt;/p&gt;&lt;p&gt;&lt;strong&gt;ಸತೀಶ್ ಜಾರಕಿಹೊಳಿ:&lt;/strong&gt; ಬೆಳಗಾವಿ ಭಾಗದ ಪ್ರಭಾವಿ ನಾಯಕ.&lt;/p&gt;&lt;p&gt;&lt;strong&gt;ಎಂ.ಬಿ. ಪಾಟೀಲ್: &lt;/strong&gt;ಲಿಂಗಾಯತ ಸಮುದಾಯದ ಪ್ರಮುಖ ಮುಖವಾಗಿ ಸಂಪುಟಕ್ಕೆ.&lt;/p&gt;&lt;p&gt;&lt;strong&gt;ಈಶ್ವರ್ ಖಂಡ್ರೆ:&lt;/strong&gt; ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು.&lt;/p&gt;&lt;p&gt;&lt;strong&gt;ರಾಮಲಿಂಗ ರೆಡ್ಡಿ: &lt;/strong&gt;ಬೆಂಗಳೂರು ನಗರದ ಹಿರಿಯ ನಾಯಕ.&lt;/p&gt;&lt;p&gt;&lt;strong&gt;ಕೆ.ಜೆ. ಜಾರ್ಜ್: &lt;/strong&gt;ಅನುಭವಿ ನಾಯಕ ಮತ್ತು ಹೈಕಮಾಂಡ್ ಆಪ್ತರು.&lt;/p&gt;&lt;p&gt;&lt;strong&gt;ಪ್ರಿಯಾಂಕ್ ಖರ್ಗೆ: &lt;/strong&gt;ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಯುವ ನಾಯಕ.&lt;/p&gt;&lt;p&gt;&lt;strong&gt;ಯತೀಂದ್ರ ಸಿದ್ದರಾಮಯ್ಯ: &lt;/strong&gt;ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ, ಹೊಸ ಸಂಚಲನ ಮೂಡಿಸಿರುವ ಯುವ ಮುಖ.&lt;/p&gt;&lt;p&gt;&lt;strong&gt;ಶಿವರಾಜ ತಂಗಡಗಿ:&lt;/strong&gt; ಹಿಂದುಳಿದ ವರ್ಗದ ಪ್ರಬಲ ನಾಯಕ.&lt;/p&gt;&lt;p&gt;&lt;strong&gt;ರೂಪಾ ಶಶಿಧರ್:&lt;/strong&gt; ಮಹಿಳಾ ಪ್ರತಿನಿಧಿಯಾಗಿ ಸಂಪುಟದಲ್ಲಿ ಸ್ಥಾನ.&lt;/p&gt;&lt;p&gt;&lt;strong&gt;ಯು.ಟಿ. ಖಾದರ್: &lt;/strong&gt;ಕರಾವಳಿ ಭಾಗದ ಪ್ರಮುಖ ಅಲ್ಪಸಂಖ್ಯಾತ ನಾಯಕ.&lt;/p&gt;&lt;h2&gt;&lt;strong&gt;ಜಾತಿ ಮತ್ತು ಪ್ರಾದೇಶಿಕ ಸಮತೋಲನ:&lt;/strong&gt;&lt;/h2&gt;&lt;p&gt;ಈ ಬಾರಿ ಸಚಿವರ ಆಯ್ಕೆಯಲ್ಲಿ ಹೈಕಮಾಂಡ್ ಬಹಳ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಹಳೆಯ ಮೈಸೂರು ಭಾಗ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರು ನಗರಕ್ಕೆ ಸಮಾನ ಆದ್ಯತೆ ನೀಡಲಾಗಿದೆ. ಜೊತೆಗೆ ದಲಿತ, ಲಿಂಗಾಯತ, ಅಲ್ಪಸಂಖ್ಯಾತ ಮತ್ತು ಮಹಿಳಾ ಕೋಟಾವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ನಾಳೆ ಮಧ್ಯಾಹ್ನದಿಂದಲೇ ಲೋಕಭವನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಈಗಾಗಲೇ ಸರ್ಕಾರಿ ಸಿಬ್ಬಂದಿಗೆ ರಜೆ ಘೋಷಿಸಲಾಗಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ಲಕ್ಷಾಂತರ ಕಾರ್ಯಕರ್ತರು ಬರುವ ನಿರೀಕ್ಷೆಯಿದೆ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಈ ನೂತನ ಸರ್ಕಾರ ರಾಜ್ಯದ ಅಭಿವೃದ್ಧಿಯಲ್ಲಿ ಹೊಸ ಮನ್ವಂತರ ಬರೆಯಲಿದೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/dk-shivakumar-swearing-in-ceremony-high-command-finalizes-11-cabinet-ministers-list-sat/articleshow-ptdlcw0"/>
        </item>
        <item>
            <title><![CDATA[ಬಿಜೆಪಿ, ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ಗೆ ಸೇರಿದ್ಯಾಕೆ? ಟ್ರೋಲರ್ಸ್‌ಗೆ ಬಿಗ್‌ಬಾಸ್‌ ಜಾಹ್ನವಿ ಕೊಟ್ರು ಖಡಕ್‌ ಉತ್ತರ]]></title>
            <link>https://kannada.asianetnews.com/tv-talk/bigg-boss-jahnavi-reveals-reason-joining-jds-party-hd-kumaraswamy-viral-san/articleshow-wr7re0c</link>
            <guid isPermaLink="true">https://kannada.asianetnews.com/tv-talk/bigg-boss-jahnavi-reveals-reason-joining-jds-party-hd-kumaraswamy-viral-san/articleshow-wr7re0c</guid>
            <pubDate>Tue, 02 Jun 2026 16:04:00 +0530</pubDate>
            <description><![CDATA[&lt;p&gt;ಖ್ಯಾತ ನಿರೂಪಕಿ ಜಾಹ್ನವಿ ಅವರು ಇತ್ತೀಚೆಗೆ ಜೆಡಿಎಸ್&zwnj; ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಒಂದು ಮಣ್ಣಿನ ಪಕ್ಷವಾಗಿದ್ದು, ದೇವೇಗೌಡರ ಸಾಧನೆ ಮತ್ತು ಕುಮಾರಸ್ವಾಮಿಯವರ ರೈತ ಹಾಗೂ ಮಹಿಳಾ ಪರ ಕಾಳಜಿಯಿಂದ ಪ್ರೇರಿತರಾಗಿ ಈ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgcvgr5zf05vntyym9enktry,imgname-bigg-boss-jhanvi-1769958039743.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಜೂ.2): ನ್ಯೂಸ್&zwnj; ಚಾನೆಲ್&zwnj;ಗಳಲ್ಲಿ ನಿರೂಪಕಿಯಾಗಿ ಪ್ರಸಿದ್ಧರಾದ ಬಳಿಕ, ಬಿಗ್&zwnj;ಬಾಸ್&zwnj;ನಲ್ಲಿ ಭಾಗವಹಿಸಿ ಜನಪ್ರಿಯತೆ ಗಳಿಸಿದ್ದ ನಿರೂಪಕಿ ಜಾಹ್ನವಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್&zwnj;ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್&zwnj;ಗೆ ಸೇರಿದ್ದರು. ಇದರ ನಡುವೆ ಹೆಚ್ಚಿನವರಿಗೆ ಅವರು ಜೆಡಿಎಸ್&zwnj;ಅನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದರು. ಮೂಲತಃ ಹಾಸನ ಮೂಲದವರಾಗಿದ್ದರೂ, ರಾಜಕೀಯ ಇನ್ನಿಂಗ್ಸ್&zwnj; ಪಾದಾರ್ಪಣೆಗೆ ಜೆಡಿಎಸ್&zwnj;ಅನ್ನು ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;p&gt;ಖಾಸಗಿ ಟಿವಿಗೆ ಮಾತನಾಡಿರುವ ಜಾಹ್ನವಿ, ಎಲ್ಲರೂ ಇದೇ ಪ್ರಶ್ನೆಯನ್ನು ಯಾಕೆ. ಇಲ್ಲಿ ಯಾಕೆ ಅನ್ನೋದಕ್ಕಿಂತ ಯಾಕಾಗಬಾರದು ಅನ್ನೋದು ನನ್ನ ಪ್ರಶ್ನೆ. ಏಕೆಂದರೆ, ಜನರ ಆಶೋತ್ತರಗಳನ್ನ ಪ್ರಬಲವಾಗಿ ಪ್ರತಿಪಾದಿಸುವಂತ ಪಕ್ಷ ಯಾವುದಾದ್ರೂ ಇದ್ರೆ ಅದು ನಮ್ಮ ಮಣ್ಣಿನ ಪಕ್ಷ ನಮ್ಮ ಪ್ರಾದೇಶಿಕ ಪಕ್ಷ ಜೆಡಿಎಸ್. ಯಾಕಂದ್ರೆ ಜೆಡಿಎಸ್ ಅಂತ ಬಂದಾಗ ಅಪ್ಪಾಜಿ. ಅಪ್ಪಾಜಿ ಅವರ ಸಾಧನೆಗಳನ್ನ ಇವತ್ತು ಯಾರಿಗೂ ಕೂಡ ಮರೆತಿಲ್ಲ. ನಮ್ಮ ನಾಡಿನಿಂದ ನಾವು ಏಕೈಕ ಪ್ರಧಾನ ಮಂತ್ರಿಗಳನ್ನ ಕೊಟ್ಟಿದ್ದೀವಿ ಅಂತ ಅಂದ್ರೆ ಅದು ಅಪ್ಪಾಜಿ ಮಾತ್ರ' ಎಂದು ಹೇಳಿದ್ದಾರೆ.&lt;/p&gt;&lt;p&gt;ಮಹಿಳಾ ಸಬಲೀಕರಣದ ಪಕ್ಷ ಜೆಡಿಎಸ್&zwnj;&lt;/p&gt;&lt;p&gt;ಕುಮಾರಣ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ತೆಗೆದುಕೊಂಡಂತಹ ನಿರ್ಣಯಗಳು, ಮಹಿಳಾ ಸಬಲೀಕರಣಕ್ಕೋಸ್ಕರ ಅವರು ಪಕ್ಷದ ಚಿನ್ಹೆಯನ್ನೇ ತೆನೆ ಹೊತ್ತ ಮಹಿಳೆ ಅಂತ ರೈತ ಮಹಿಳೆ ಅಂತ ಇಟ್ಟಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದಾರೆ. 22 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದನ್ನು ಯಾರಾದರೂ ಮರೆಯೋಕೆ ಸಾರ್ಧಯವೇ?. ಒಂದು ಪ್ರಬಲವಾದ ಪ್ರಾದೇಶಿಕ ಪಕ್ಷ ಸೇರಿಕೊಂಡು ಇನ್ನ ಇನ್ನಿಂಗ್ಸ್&zwnj; ಆರಂಭಿಸಬೇಕು ಅಂತಾ ಅಂದುಕೊಂಡಿದ್ದೆ. ಒಂದು ಮಾರ್ಗದರ್ಶನ ಸಲಹೆ ಎಲ್ಲವೂ ಸಿಕ್ತು. ಸೇರ್ಪಡೆ ಆದಮೇಲೆ ನಾನು ನಿಜವಾಗಲೂ ಹೇಳಬೇಕು ಒಂದು ಕುಟುಂಬ ನನಗೆ ಸಿಕ್ಕಿದೆ. ಅಪ್ಪಾಜಿ ಅವರ ಆಶೀರ್ವಾದ ಇರಬಹುದು ಕುಮಾರಣ್ಣ ಅವರ ಒಂದು ಸಪೋರ್ಟ್&zwnj; ಸಿಕ್ಕಿದೆ ಎಂದಿದ್ದಾರೆ.&lt;/p&gt;&lt;p&gt;ಹಗಲು-ರಾತ್ರಿ ಪಕ್ಷಕ್ಕೆ ದುಡುಯುತ್ತೇನೆ&lt;/p&gt;&lt;p&gt;ಪಕ್ಷದಲ್ಲಿರುವಂತ ಎಲ್ಲಾ ಅಧ್ಯಕ್ಷರು, ಪದಾಧಿಕಾರಿ, ಸೋಶಿಯಲ್ ಮೀಡಿಯಾ ವಿಂಗ್&zwnj; ನೋಡಿಕೊಳ್ಳುವರು ಜಿಲ್ಲಾ ಅಧ್ಯಕ್ಷ, ಕಾರ್ಯಕರ್ತರು ಪ್ರತಿಯೊಬ್ಬರು ನನಗೆ ಕಾಲ್ ಮಾಡಿ ಅವರು ಕೊಡ್ತಾ ಇರೋ ಸಲಹೆ ಸೂಚನೆಗಳು ಅವರು ನನ್ನನ್ನ ವೆಲ್ಕಮ್ ಮಾಡ್ತಾ ಇರೋ ರೀತಿ ನಿಜವಾಗಲೂ ಒಂದು ಒಳ್ಳೆ ಕುಟುಂಬಕ್ಕೆ ನಾನು ಸೇರ್ಪಡೆಯಾಗಿದ್ದೀನಿ ಅನಿಸುತ್ತದೆ. ಎಲ್ಲರೂ ನನಗೆ ತುಂಬಾ ಸಹಕಾರವನ್ನ ಕೊಡ್ತಾ ಇದ್ದಾರೆ ಅಂದ್ರೆ ಇದು ನನಗೆ ಮೊದಲನೇ ಹೆಜ್ಜೆ ನಾನು ತಿಳ್ಕೊಳ್ಳೋದು ಕಲಿಯೋದು ಬಹಳಷ್ಟು ಇರುತ್ತೆ ಸೋ ನಾನು ಇಲ್ಲಿ ಕಲಿತುಕೊಂಡು ಪಕ್ಷಕ್ಕೋಸ್ಕರ ಸಕ್ರಿಯವಾಗಿದ್ದು ಹಗಲು ರಾತ್ರಿ ದುಡಿಬೇಕು. ಜನಸೇವೆ ಮಾಡೋದಕ್ಕೆ ನನಗೆ ಇದಕ್ಕಿಂತ ಉತ್ತಮವಾದಂತಹ ಇನ್ನೊಂದು ಪಕ್ಷ ಇಲ್ಲ ಅಂತ ನನಗೆ ಅನ್ಸುತ್ತೆ ಎಂದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/bigg-boss-jahnavi-reveals-reason-joining-jds-party-hd-kumaraswamy-viral-san/articleshow-wr7re0c"/>
        </item>
        <item>
            <title><![CDATA[ಮಂಗಳೂರು-ಹೈದರಾಬಾದ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು, 24ಕೋಚ್‌,4 ಟ್ರಿಪ್,3 ರಾಜ್ಯ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ]]></title>
            <link>https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx</link>
            <guid isPermaLink="true">https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx</guid>
            <pubDate>Tue, 02 Jun 2026 15:53:57 +0530</pubDate>
            <description><![CDATA[&lt;p&gt;ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆ ಘೋಷಿಸಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ಸುತ್ತಿನ ಸಂಚಾರ ನಡೆಸಲಿರುವ ಈ ರೈಲು, ತೆಲಂಗಾಣ, ಕರ್ನಾಟಕ, ಮತ್ತು ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0gwrjmwtt8zae7c8ssgk4mn,imgname-thane-railway-station-1752913693340.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆ ಘೋಷಿಸಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ಸುತ್ತಿನ ಸಂಚಾರ ನಡೆಸಲಿರುವ ಈ ರೈಲು, ತೆಲಂಗಾಣ, ಕರ್ನಾಟಕ, ಮತ್ತು ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;&lt;img&gt;&lt;p&gt;ಮಂಗಳೂರು: ಬೇಸಿಗೆಯ ನಂತರದ ದಿನಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ. ಈ ವಿಶೇಷ ರೈಲು ಪ್ರಸಕ್ತ ಜೂನ್ ತಿಂಗಳಿನಲ್ಲಿ ಒಟ್ಟು ನಾಲ್ಕು ಸುತ್ತಿನ (4 Trips) ಸಂಚಾರವನ್ನು ನಡೆಸಲಿದ್ದು, ತೆಲಂಗಾಣ, ಕರ್ನಾಟಕದ ಒಳನಾಡು ಹಾಗೂ ಕೇರಳದ ಕರಾವಳಿ ಭಾಗದ ಪ್ರಯಾಣಿಕರಿಗೆ ತಡೆರಹಿತ ಕನೆಕ್ಟಿವಿಟಿ ಕಲ್ಪಿಸಲಿದೆ.&lt;/p&gt;&lt;img&gt;&lt;p&gt;ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಈ ವಿಶೇಷ ರೈಲಿನ ಸಂಪೂರ್ಣ ವೇಳಾಪಟ್ಟಿ ಹಾಗೂ ಕೋಚ್&zwnj;ಗಳ ವಿವರ ಈ ಕೆಳಗಿನಂತಿದೆ:&lt;/p&gt;&lt;h3&gt;ರೈಲು ಸಂಚಾರದ ದಿನ ಹಾಗೂ ವೇಳಾಪಟ್ಟಿ&lt;/h3&gt;&lt;p&gt;1. ಹೈದರಾಬಾದ್&zwnj;ನಿಂದ ಮಂಗಳೂರಿಗೆ (ರೈಲು ಸಂಖ್ಯೆ: 07097)&lt;/p&gt;&lt;p&gt;ಸಂಚಾರದ ಅವಧಿ: ಜೂನ್ 3 ರಿಂದ ಜೂನ್ 24 ರವರೆಗೆ ಪ್ರತಿ ಬುಧವಾರ ಈ ರೈಲು ಚಲಿಸಲಿದೆ.&lt;/p&gt;&lt;p&gt;ಸಮಯ: ಹೈದರಾಬಾದ್ ನಿಲ್ದಾಣದಿಂದ ಬುಧವಾರ ಮುಂಜಾನೆ 4:20 ಕ್ಕೆ ಹೊರಡುವ ಈ ರೈಲು, ಮರುದಿನ (ಗುರುವಾರ) ಮುಂಜಾನೆ 9:30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.&lt;/p&gt;&lt;p&gt;2. ಮಂಗಳೂರಿನಿಂದ ಹೈದರಾಬಾದ್&zwnj;ಗೆ (ರೈಲು ಸಂಖ್ಯೆ: 07098) - ಹಿಂತಿರುಗುವ ಪ್ರಯಾಣ&lt;/p&gt;&lt;p&gt;ಸಂಚಾರದ ಅವಧಿ: ಜೂನ್ 4 ರಿಂದ ಜೂನ್ 25 ರವರೆಗೆ ಪ್ರತಿ ಗುರುವಾರ ಈ ರೈಲು ಸಂಚರಿಸಲಿದೆ.&lt;/p&gt;&lt;p&gt;ಸಮಯ: ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಗುರುವಾರ ರಾತ್ರಿ 8:00 ಗಂಟೆಗೆ ಹೊರಡುವ ರೈಲು, ಶನಿವಾರ ಮುಂಜಾನೆ 4:00 ಗಂಟೆಗೆ ಹೈದರಾಬಾದ್ ತಲುಪಲಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲಿಗೆ ಒಟ್ಟು 24 ಬೋಗಿಗಳನ್ನು (Coaches) ಅಳವಡಿಸಲಾಗಿದೆ. ಇದು ವಿಭಿನ್ನ ಆರ್ಥಿಕ ಪರಿಸ್ಥಿತಿ ಹಾಗೂ ಆದ್ಯತೆಗಳನ್ನು ಹೊಂದಿರುವ ಎಲ್ಲಾ ವರ್ಗದ ಪ್ರಯಾಣಿಕರಿಗೂ ಆಸನ ಸೌಲಭ್ಯವನ್ನು ಖಚಿತಪಡಿಸಲಿದೆ. ಬೋಗಿಗಳ ಸಂಯೋಜನೆ ಈ ಕೆಳಗಿನಂತಿದೆ:&lt;/p&gt;&lt;p&gt;ಎಸಿ 2-ಟೈರ್ ಕೋಚ್&zwnj;ಗಳು: 03&lt;/p&gt;&lt;p&gt;ಎಸಿ 3-ಟೈರ್ ಕೋಚ್&zwnj;ಗಳು: 05&lt;/p&gt;&lt;p&gt;ಸ್ಲೀಪರ್ ಕ್ಲಾಸ್ ಕೋಚ್&zwnj;ಗಳು: 10&lt;/p&gt;&lt;p&gt;ಸಾಮಾನ್ಯ ದ್ವಿತೀಯ ದರ್ಜೆ (General) ಕೋಚ್&zwnj;ಗಳು: 04&lt;/p&gt;&lt;p&gt;ಲಗೇಜ್-ಕಮ್-ಬ್ರೇಕ್ ವ್ಯಾನ್&zwnj;ಗಳು: 02&lt;/p&gt;&lt;img&gt;&lt;p&gt;ಈ ವಿಶೇಷ ರೈಲು ತನ್ನ ಸುದೀರ್ಘ ಪ್ರಯಾಣದ ಅವಧಿಯಲ್ಲಿ ಮೂರೂ ರಾಜ್ಯಗಳ ಪ್ರಮುಖ ವಾಣಿಜ್ಯ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ನಿಲುಗಡೆ ಪಡೆಯಲಿದೆ.&lt;/p&gt;&lt;p&gt;&lt;strong&gt;ತೆಲಂಗಾಣ ಮತ್ತು ಆಂಧ್ರ ಭಾಗ: &lt;/strong&gt;ಬೇಗಂಪೇಟ್, ಲಿಂಗಂಪಲ್ಲಿ, ವಿಕ್ರಾಬಾದ್, ರಾಯಚೂರು, ಮಂತ್ರಾಲಯ ರಸ್ತೆ (ಶ್ರೀ ರಾಘವೇಂದ್ರ ಸ್ವಾಮಿ ಮಠದ ಭಕ್ತರಿಗೆ ಅನುಕೂಲ), ಗುಂತಕಲ್, ಅನಂತಪುರ, ಧರ್ಮಾವರಂ ಮತ್ತು ಹಿಂದೂಪುರ.&lt;/p&gt;&lt;p&gt;&lt;strong&gt;ಕರ್ನಾಟಕದ ಒಳನಾಡು (ಬೆಂಗಳೂರು ಭಾಗ): &lt;/strong&gt;ಸೇಡಂ, ಸೂಳೇಹಳ್ಳಿ ಪಶ್ಚಿಮ, ಯಾದಗಿರಿ, ಕೃಷ್ಣ, ಯಲಹಂಕ, ಕೃಷ್ಣರಾಜಪುರಂ (KR ಪುರಂ) ಮತ್ತು ಬಂಗಾರಪೇಟೆ.&lt;/p&gt;&lt;p&gt;&lt;strong&gt;ತಮಿಳುನಾಡು ಮತ್ತು ಕೇರಳ ಭಾಗ: &lt;/strong&gt;ಕುಪ್ಪಂ, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪುರ್, ಪಾಲಕ್ಕಾಡ್ ಜಂಕ್ಷನ್, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನೂರು, ಕಾಞಂಗಾಡ್ ಮತ್ತು ಕಾಸರಗೋಡು.&lt;/p&gt;&lt;img&gt;&lt;p&gt;ಪ್ರಸ್ತುತ ಜೂನ್ ತಿಂಗಳಿನಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಳ್ಳುತ್ತಿರುವುದರಿಂದ ಹಾಗೂ ಉದ್ಯೋಗ ನಿಮಿತ್ತ ಮತ್ತು ಪ್ರವಾಸೋದ್ಯಮಕ್ಕಾಗಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸಾಮಾನ್ಯ ರೈಲುಗಳಲ್ಲಿ ಭಾರಿ ವೇಟಿಂಗ್ ಲಿಸ್ಟ್ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಪರಿಚಯಿಸಿರುವ ಈ ವಿಶೇಷ ಸೇವೆಯು ನಿಯಮಿತ ರೈಲುಗಳ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.&lt;/p&gt;&lt;img&gt;&lt;p&gt;ಕೆಲಸದ ನಿಮಿತ್ತ ಐಟಿ ಹಬ್&zwnj;ಗಳಾದ ಹೈದರಾಬಾದ್-ಬೆಂಗಳೂರಿಗೆ ಸಂಚರಿಸುವವರಿಗೆ, ಪ್ರವಾಸಿಗರಿಗೆ ಹಾಗೂ ಕರಾವಳಿ ಮತ್ತು ಮಂತ್ರಾಲಯ ಕ್ಷೇತ್ರಗಳಿಗೆ ಕೌಟುಂಬಿಕ ಭೇಟಿ ನೀಡುವ ಧಾರ್ಮಿಕ ಪ್ರಯಾಣಿಕರಿಗೆ ಈ ರೈಲು ಅತ್ಯಂತ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣದ ಅನುಭವವನ್ನು ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx"/>
        </item>
        <item>
            <title><![CDATA[ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ: ಬೆಂಗಳೂರಿನ ಈ ಭಾಗದ ಸರ್ಕಾರಿ ನೌಕರರಿಗೆ ರಜೆ ಘೋಷಣೆ!]]></title>
            <link>https://kannada.asianetnews.com/state/karnataka-new-cm-dk-shivakumar-swearing-in-ceremony-holiday-for-staff-and-dinner-party-details-sat/articleshow-odzwnss</link>
            <guid isPermaLink="true">https://kannada.asianetnews.com/state/karnataka-new-cm-dk-shivakumar-swearing-in-ceremony-holiday-for-staff-and-dinner-party-details-sat/articleshow-odzwnss</guid>
            <pubDate>Tue, 02 Jun 2026 14:38:37 +0530</pubDate>
            <description><![CDATA[&lt;p&gt;ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ಜೂ.3 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ಭಾಗದ ಸರ್ಕಾರಿ ನೌಕರರಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿದೆ. ಇದೇ ವೇಳೆ, ವಿಧಾನಸಭೆ ಸಚಿವಾಲಯದ ನೌಕರರಿಗಾಗಿ ಸಭಾಧ್ಯಕ್ಷರು ವಿಶೇಷ ಭೋಜನ &amp;nbsp;ಆಯೋಜಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswhvsm3y8f5v573cav0exp3,imgname-untitled-design---2026-05-30t191030.751-1780148463234.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.02): ಕ&lt;/strong&gt;ರ್ನಾಟಕದ ರಾಜಕೀಯ ಅಂಗಳದಲ್ಲಿ ನೂತನ ಮುಖ್ಯಮಂತ್ರಿಯವರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಜೂನ್ 03, 2026) ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು ಅದ್ಧೂರಿಯಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಸಿಬ್ಬಂದಿಗೆ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ. ಅತ್ತ ವಿಧಾನಸಭೆ ಸಚಿವಾಲಯದ ನೌಕರರಿಗೆ ಸಭಾಧ್ಯಕ್ಷರು ಇಂದು ವಿಶೇಷ ಭೋಜನ ಕೂಟವನ್ನು ಆಯೋಜಿಸಿದ್ದಾರೆ.&lt;/p&gt;&lt;h2&gt;&lt;strong&gt;ಜೂನ್ 3 ರಂದು ಮಧ್ಯಾಹ್ನ ರಜೆ ಘೋಷಣೆ:&lt;/strong&gt;&lt;/h2&gt;&lt;p&gt;ಕರ್ನಾಟಕ ಸರ್ಕಾರದ ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು ಜೂನ್ 3, 2026 ರಂದು ಅಪರಾಹ್ನ 4:05 ಗಂಟೆಗೆ ಬೆಂಗಳೂರಿನ 'ಲೋಕಭವನ'ದಲ್ಲಿ ನಡೆಯಲಿದೆ. ಸಮಾರಂಭಕ್ಕೆ ಗಣ್ಯಾತಿಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವ ನಿರೀಕ್ಷೆಯಿರುವುದರಿಂದ, ಭದ್ರತೆ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.&lt;/p&gt;&lt;p&gt;ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜೂನ್ 3 ರಂದು ಅಪರಾಹ್ನ (ಮಧ್ಯಾಹ್ನದ ನಂತರ) ರಜೆ ಘೋಷಿಸಲಾಗಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಯದು ಕುಮಾರ್ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಇಂದು ವಿಧಾನಸಭೆ ನೌಕರರಿಗೆ ಭೋಜನ:&lt;/strong&gt;&lt;/h2&gt;&lt;p&gt;ಮತ್ತೊಂದೆಡೆ, ನೂತನ ಸರ್ಕಾರದ ಸ್ವಾಗತದ ಸಡಗರದ ನಡುವೆಯೇ ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧಿಕಾರಿ ಮತ್ತು ನೌಕರರಿಗೆ ಇಂದು (ಜೂನ್ 02) ಸಂಜೆ 6:00 ಗಂಟೆಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್&zwnj;ನಲ್ಲಿ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗಿದೆ.&lt;/p&gt;&lt;p&gt;ಸನ್ಮಾನ್ಯ ಸಭಾಧ್ಯಕ್ಷರ ಆದೇಶದಂತೆ ಆಯೋಜಿಸಲಾಗಿರುವ ಈ ಕೂಟದಲ್ಲಿ ಸಚಿವಾಲಯದ ಎಲ್ಲಾ ನೌಕರರು ಭಾಗವಹಿಸುವಂತೆ ಸೂಚಿಸಿ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಪಿ. ಲಲಿತಾ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರದ ಆಡಳಿತ ಆರಂಭವಾಗುವ ಮುನ್ನವೇ ವಿಧಾನಸೌಧದ ಆವರಣದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ನಾಳಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-new-cm-dk-shivakumar-swearing-in-ceremony-holiday-for-staff-and-dinner-party-details-sat/articleshow-odzwnss"/>
        </item>
        <item>
            <title><![CDATA[ಜೂನ್ 3ರಂದು ನಿಗದಿಯಾಗಿದ್ದ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ದಿಢೀರ್ ರದ್ದು!]]></title>
            <link>https://kannada.asianetnews.com/karnataka-districts/june-3-mangaluru-bengaluru-vande-bharat-trial-run-cancelled-here-is-why-gdp/articleshow-ybc3m3q</link>
            <guid isPermaLink="true">https://kannada.asianetnews.com/karnataka-districts/june-3-mangaluru-bengaluru-vande-bharat-trial-run-cancelled-here-is-why-gdp/articleshow-ybc3m3q</guid>
            <pubDate>Tue, 02 Jun 2026 14:35:04 +0530</pubDate>
            <description><![CDATA[ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ಬಹುನಿರೀಕ್ಷಿತ 'ವಂದೇ ಭಾರತ್ ಎಕ್ಸ್&zwnj;ಪ್ರೆಸ್' ರೈಲಿನ ಪ್ರಾಯೋಗಿಕ ಸಂಚಾರವನ್ನು ನೈಋತ್ಯ ರೈಲ್ವೆ ವಲಯವು ಕೊನೆ ಕ್ಷಣದಲ್ಲಿ ರದ್ದುಗೊಳಿಸಿದೆ. ಶಿರಾಡಿ ಘಾಟ್&zwnj;ನ ಕಠಿಣ ಮಾರ್ಗದಲ್ಲಿ ಸುರಕ್ಷತೆಗೆ ಅಗತ್ಯವಾದ AEB ವ್ಯವಸ್ಥೆಯ ಕೊರತೆ ಮತ್ತು ಇತರ ತಾಂತ್ರಿಕ ಸವಾಲುಗಳು ಈ ತಾತ್ಕಾಲಿಕ ಹಿನ್ನಡೆಗೆ ಕಾರಣವೆಂದು ಹೇಳಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krx9mm2vxr2d61xcyz24606m,imgname-karnataka-railway-project--5--1779099652187.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ಜನತೆಯ ಬಹುದಿನಗಳ ಕನಸಾಗಿದ್ದ 'ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್&zwnj;ಪ್ರೆಸ್' ರೈಲಿನ ಆರಂಭಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ. ಜೂನ್ 3 ರಂದು ಅದ್ಧೂರಿಯಾಗಿ ನಡೆಯಬೇಕಿದ್ದ ಈ ವಂದೇ ಭಾರತ್ ರೈಲಿನ ಬಹುನಿರೀಕ್ಷಿತ ಪ್ರಾಯೋಗಿಕ ಸಂಚಾರವನ್ನು (Trial Run) ನೈಋತ್ಯ ರೈಲ್ವೆ ವಲಯವು ಕೊನೆ ನಿಮಿಷದಲ್ಲಿ ರದ್ದುಗೊಳಿಸಿದೆ. ಇದರಿಂದಾಗಿ ರೈಲಿನ ಆರಂಭವನ್ನು ಎದುರುನೋಡುತ್ತಿದ್ದ ಮಂಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ನಿವಾಸಿಗಳು ಹಾಗೂ ರೈಲ್ವೆ ಉತ್ಸಾಹಿಗಳಿಗೆ ತೀವ್ರ ನಿರಾಸೆಯಾಗಿದೆ.&lt;/p&gt;&lt;p&gt;ಕಳೆದ ಶನಿವಾರವಷ್ಟೇ ರೈಲ್ವೆ ಹಿರಿಯ ಅಧಿಕಾರಿಗಳು ವಂದೇ ಭಾರತ್ ರೈಲು ಸಂಚಾರದ ಕುರಿತು ಅಧಿಕೃತ ಪ್ರಸ್ತಾವನೆ ಸಿದ್ಧಪಡಿಸಿರುವ ಮಾಹಿತಿ ಹೊರಬಿದ್ದಿತ್ತು. ಈ ಪ್ರಾಯೋಗಿಕ ಓಡಾಟದ ಸುದ್ದಿ ಕೇಳಿ ಕರಾವಳಿ ಮತ್ತು ರಾಜಧಾನಿ ನಡುವೆ ಸಂಚರಿಸುವ ಪ್ರಯಾಣಿಕರು ಅತ್ಯಂತ ಸಂತಸಗೊಂಡಿದ್ದರು. ಆದರೆ, ಈಗ ದಿಢೀರನೆ ಸಂಚಾರ ಸ್ಥಗಿತಗೊಂಡಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.&lt;/p&gt;&lt;h2&gt;ರದ್ದಾಗಲು ಅಸಲಿ ಕಾರಣವೇನು? ಸವಾಲಿನ ಘಾಟ್ ವಿಭಾಗದ ಸಮಸ್ಯೆ!&lt;/h2&gt;&lt;p&gt;ಈ ಪ್ರಾಯೋಗಿಕ ಪರೀಕ್ಷೆಯು ಅತ್ಯಂತ ಕಡಿದಾದ ಮತ್ತು ಸವಾಲಿನಿಂದ ಕೂಡಿರುವ ಶಿರಾಡಿ ಘಾಟ್ (ಸುಬ್ರಹ್ಮಣ್ಯ ರೋಡ್-ಸಕಲೇಶಪುರ) ವಿಭಾಗದ ರೈಲ್ವೆ ಮಾರ್ಗದ ಮೂಲಕ ವಂದೇ ಭಾರತ್ ರೈಲಿನ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ನಿಗದಿಯಾಗಿತ್ತು. ರೈಲ್ವೆ ಇಲಾಖೆಯು ಈ ಪ್ರಾಯೋಗಿಕ ಸಂಚಾರದ ರದ್ದತಿಗೆ ಯಾವುದೇ ಅಧಿಕೃತ ಕಾರಣವನ್ನು ಬಹಿರಂಗಪಡಿಸಿಲ್ಲವಾದರೂ, ಮೂಲಗಳ ಪ್ರಕಾರ ಪ್ರಮುಖ ಎರಡು ತಾಂತ್ರಿಕ ಕಾರಣಗಳು ಎನ್ನಲಾಗುತ್ತಿದೆ.&lt;/p&gt;&lt;p&gt;AEB (ಅಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್) ಕೊರತೆ: ಪಶ್ಚಿಮ ಘಟ್ಟಗಳ ಕಠಿಣ ಭೂಪ್ರದೇಶ ಹಾಗೂ ಇಳಿಜಾರು ಪ್ರದೇಶಗಳಲ್ಲಿ ರೈಲು ಸುರಕ್ಷಿತವಾಗಿ ಚಲಿಸಲು 'ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆ' (AEB) ಅತ್ಯಂತ ಕಡ್ಡಾಯವಾಗಿದೆ. ಪ್ರಸ್ತುತ ನಿಯೋಜಿಸಲಾಗಿದ್ದ ವಂದೇ ಭಾರತ್ ರೈಲಿನ ರೇಕ್&zwnj;ನಲ್ಲಿ ಈ ಅತ್ಯಾಧುನಿಕ ಬ್ರೇಕಿಂಗ್ ಸಿಸ್ಟಮ್ ಇಲ್ಲದೇ ಇರುವುದೇ ಈ ರದ್ದತಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.&lt;/p&gt;&lt;p&gt;ರೇಕ್ ಲಭ್ಯತೆ ಮತ್ತು ಕಾರ್ಯಾಚರಣೆಯ ಸವಾಲುಗಳು: ಮತ್ತೊಂದೆಡೆ, ಸೂಕ್ತ ರೈಲ್ವೆ ರೇಕ್&zwnj;ಗಳ (ಬೋಗಿಗಳ ಸೆಟ್) ಕೊರತೆ ಹಾಗೂ ಕಾರ್ಯಾಚರಣೆಯ ಕೆಲವು ತಾಂತ್ರಿಕ ಕಾರಣಗಳು ಈ ನಿರ್ಧಾರದ ಮೇಲೆ ಪ್ರಭಾವ ಬೀರಿವೆ ಎಂದು ಹೇಳಲಾಗುತ್ತಿದೆ.&lt;/p&gt;&lt;h2&gt;ಮುಂದಿನ ಹಾದಿಯೇನು? ಕಾದುನೋಡುತ್ತಿರುವ ಪ್ರಯಾಣಿಕರು&lt;/h2&gt;&lt;p&gt;ಬೆಂಗಳೂರು ಮತ್ತು ಕರಾವಳಿ ಕರ್ನಾಟಕವನ್ನು ಅತಿ ಕಡಿಮೆ ಅವಧಿಯಲ್ಲಿ ಜೋಡಿಸುವ ವಂದೇ ಭಾರತ್ ಸೇವೆಗಳು ಉಭಯ ವಲಯಗಳ ವಾಣಿಜ್ಯ, ಪ್ರವಾಸೋದ್ಯಮ ಮತ್ತು ದೈನಂದಿನ ಪ್ರಯಾಣಿಕರಿಗೆ ವರದಾನವಾಗಲಿವೆ. ಹೀಗಾಗಿ, ಈ ಯೋಜನೆ ಸಂಪೂರ್ಣವಾಗಿ ರದ್ದಾಗಿಲ್ಲ, ಬದಲಿಗೆ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ.&lt;/p&gt;&lt;p&gt;ಸುರಕ್ಷತಾ ಮೌಲ್ಯಮಾಪನಗಳು ಮುಗಿದ ನಂತರ ಭಾರತೀಯ ರೈಲ್ವೆಯು ಹೊಸ ಪರಿಷ್ಕೃತ ಪ್ರಾಯೋಗಿಕ ದಿನಾಂಕವನ್ನು ಪ್ರಕಟಿಸಲಿದೆ. ಪ್ರಸ್ತುತ ಮಂಗಳೂರು ಹಾಗೂ ಸುತ್ತಮುತ್ತಲಿನ ಭಾಗದ ನಿವಾಸಿಗಳು ತಾಂತ್ರಿಕ ದೋಷಗಳು ಶೀಘ್ರದಲ್ಲೇ ಪರಿಹಾರಗೊಂಡು, ರೈಲ್ವೆ ಇಲಾಖೆಯಿಂದ ಹೊಸ ಪ್ರಕಟಣೆ ಹೊರಬರಲಿ ಎಂದು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/june-3-mangaluru-bengaluru-vande-bharat-trial-run-cancelled-here-is-why-gdp/articleshow-ybc3m3q"/>
        </item>
        <item>
            <title><![CDATA[ದೇಹದಲ್ಲಿ 51 ಗಾಯ, ಸಿಗರೇಟ್‌ನಿಂದ ಸುಟ್ಟ ಗುರುತು: ಕೇರಳದಲ್ಲಿ ಮಲತಂದೆಯ ಕ್ರೌರ್ಯಕ್ಕೆ ಸಾವು ಕಂಡ ಒಂದೂವರೆ ವರ್ಷದ ಮಗು!]]></title>
            <link>https://kannada.asianetnews.com/india-news/kerala-toddler-murdered-by-stepfather-51-wounds-cigarette-burns-viral-news-san/articleshow-q1g16ek</link>
            <guid isPermaLink="true">https://kannada.asianetnews.com/india-news/kerala-toddler-murdered-by-stepfather-51-wounds-cigarette-burns-viral-news-san/articleshow-q1g16ek</guid>
            <pubDate>Tue, 02 Jun 2026 14:31:24 +0530</pubDate>
            <description><![CDATA[ತಿರುವನಂತಪುರಂ ಬಳಿ, ಆಹಾರ ಗಂಟಲಲ್ಲಿ ಸಿಲುಕಿ ಮಗು ಸತ್ತಿದೆ ಎಂದು ಬಿಂಬಿಸಲಾದ ಪ್ರಕರಣ ಭೀಕರ ಕೊಲೆಯೆಂದು ಬಯಲಾಗಿದೆ. ಮಲತಂದೆಯೇ ಹಲ್ಲೆ ನಡೆಸಿ ಕೊಂದಿದ್ದು, ತಾಯಿ ಮೂಕಪ್ರೇಕ್ಷಕಳಾಗಿದ್ದಳು. ಶವಪರೀಕ್ಷೆಯಲ್ಲಿ ಮಗುವಿನ ದೇಹದ ಮೇಲೆ 51 ಗಾಯಗಳಿರುವುದು ಪತ್ತೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt3r7es1fgzn2n3413qk80yf,imgname-kerala-child-death-1780390017825.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ (ಜೂ.2): &lt;/strong&gt;ಆಹಾರ ಗಂಟಲಿನಲ್ಲಿ ಸಿಲುಕಿ ಮಗು ಮೃತಪಟ್ಟಿದೆ ಎಂಬ ಸಾಮಾನ್ಯ ಸಾವಿನ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ, ಮೂರು ತಿಂಗಳ ಹಿಂದೆಯೇ ಹೆಣೆದಿದ್ದ ಭೀಕರ ಕೊಲೆ ಸಂಚು ಹಾಗೂ ಮಗುವಿನ ಮೇಲಿನ ದೈಹಿಕ ದೌರ್ಜನ್ಯದ ಮಾಹಿತಿಗಳು ಲಭ್ಯವಾಗಿದೆ. ಕೇವಲ ಒಂದೂವರೆ ವರ್ಷದ ಹಸುಗೂಸು ಅರ್ಶಿದ್&zwnj;ನನ್ನು ಆತನ ಮಲತಂದೆ ಕ್ರೂರವಾಗಿ ಹೊಡೆದು ಕೊಂದಿದ್ದು, ಹೆತ್ತ ತಾಯಿ ಮೂಕಪ್ರೇಕ್ಷಕಳಾಗಿ ನಿಂತಿದ್ದಾಳೆ. ರಾಜಧಾನಿ ತಿರುವನಂತಪುರಂನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ನೆಡುಮಂಗಾಡ್&zwnj;ನ ಪನವೂರು ಎಂಬಲ್ಲಿ ಈ ಘೋರ ಘಟನೆ ನಡೆದಿದೆ.&lt;/p&gt;&lt;p&gt;ಮೇ 29 ರ ಸಂಜೆ, ಒಂದೂವರೆ ವರ್ಷದ ಮಗು ಅರ್ಶಿದ್&zwnj;ನನ್ನು ಮೊದಲು ಪನವೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಶ್ರೀ ಅವಿಟ್ಟಂ ತಿರುನಾಳ್ (SAT) ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿನ ವೈದ್ಯರು ಮಗು ಆಗಲೇ ಮೃತಪಟ್ಟಿದೆ ಎಂದು ಘೋಷಿಸಿದರು. ಈ ವೇಳೆ ಮಗುವಿನ ಮಲತಂದೆ ಅಶ್ಕರ್ ಆಸ್ಪತ್ರೆಯ ಸಿಬ್ಬಂದಿಗೆ ಹೇಳಿಕೆ ನೀಡಿ, 'ಮಗು ಊಟ ಮಾಡುವಾಗ ಗಂಟಲಿನಲ್ಲಿ ಅನ್ನ ಸಿಲುಕಿ ಪ್ರಜ್ಞೆ ತಪ್ಪಿ ಬಿದ್ದಿತು' ಎಂದು ಕಟ್ಟುಕಥೆ ಹೆಣೆದಿದ್ದ.&lt;/p&gt;&lt;p&gt;ಆದರೆ, ಮಗುವಿನ ಸಾವಿನ ಬಗ್ಗೆ ಆತನ ಹತ್ತಿರದ ಸಂಬಂಧಿಕರು ತೀವ್ರ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ನಡೆಸಿದ ಶವಪರೀಕ್ಷೆ (Post-Mortem) ವರದಿಯು ವೈದ್ಯರನ್ನೇ ಬೆಚ್ಚಿಬೀಳಿಸಿದೆ. ಮಗುವಿನ ಸಾವು ನಿರಂತರವಾಗಿ ಮಾಡಿದ ಭೀಕರ ಹಲ್ಲೆಯಿಂದಾದ ಆಂತರಿಕ ರಕ್ತಸ್ರಾವದಿಂದ ಸಂಭವಿಸಿದೆ ಎಂದು ವರದಿ ಬಹಿರಂಗಪಡಿಸಿದೆ. ಮಗುವಿನ ಇಡೀ ದೇಹದ ತುಂಬಾ ಗಂಭೀರವಾದ ಗಾಯಗಳಾಗಿದ್ದವು. ತನಿಖಾಧಿಕಾರಿಗಳಿಗೆ ಮಗುವಿನ ಮೈಮೇಲೆ ಬರೋಬ್ಬರಿ 51 ಗಾಯದ ಗುರುತುಗಳು ಪತ್ತೆಯಾಗಿದ್ದು, ಅದರಲ್ಲಿ ಮಗುವಿನ ಗುಪ್ತಾಂಗಕ್ಕೆ ತೀವ್ರವಾದ ಗಾಯವಾಗಿತ್ತು ಹಾಗೂ ಕಾಲಿನ ಭಾಗಗಳಲ್ಲಿ ಸಿಗರೇಟಿನಿಂದ ಸುಟ್ಟ ಭೀಕರ ಬರೆಗಳಿದ್ದವು!&lt;/p&gt;&lt;p&gt;ಈ ಆಘಾತಕಾರಿ ಸತ್ಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ನೆಡುಮಂಗಾಡ್ ಪೊಲೀಸರು, ಮೇ 30ರ ರಾತ್ರಿ ಮಗುವಿನ ತಾಯಿ 21 ವರ್ಷದ ಅಖಿಲಾ ಮತ್ತು ಆಕೆಯ ಲಿವ್-ಇನ್ ಪಾಲುದಾರ (ಮಲತಂದೆ) ಅಶ್ಕರ್&zwnj;ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಅವನು ನಮ್ಮಿಬ್ಬರ ಬದುಕಿಗೆ ಮುಳ್ಳಾಗಿದ್ದ ಎಂದು ಒಪ್ಪಿಕೊಂಡ ಪಾಪಿ&lt;/strong&gt;&lt;/h2&gt;&lt;p&gt;ಸೋಮವಾರ ಪೊಲೀಸರು ಆರೋಪಿ ಅಶ್ಕರ್&zwnj;ನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು (Scene Reconstruction) ನಡೆಸಿದ್ದಾರೆ. ಈ ವೇಳೆ ಮಗುವಿಗೆ ಹೊಡೆಯಲು ಬಳಸಿದ್ದ ಕೋಲು ಮತ್ತು ಬರೆ ಎಳೆಯಲು ಬಳಸಿದ್ದ ಲೈಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡ ಅಶ್ಕರ್, &quot;ನಾನು ಮೂರು ತಿಂಗಳ ಹಿಂದೆಯೇ ಅರ್ಶಿದ್&zwnj;ನನ್ನು ಕೊಲ್ಲಲು ನಿರ್ಧರಿಸಿದ್ದೆ ಮತ್ತು ಕಳೆದ ಒಂದು ತಿಂಗಳಿನಿಂದ ಆತನಿಗೆ ನಿರಂತರವಾಗಿ ದೈಹಿಕ ಹಿಂಸೆ ನೀಡುತ್ತಿದ್ದೆ. ನನ್ನ ಮತ್ತು ಅಖಿಲಾಳ ಜೀವನಕ್ಕೆ ಈ ಮಗು ದೊಡ್ಡ ಅಡ್ಡಿಯಾಗಿದ್ದ (Obstacle). ಅದಕ್ಕಾಗಿಯೇ ಅವನನ್ನು ಮುಗಿಸಲು ಪ್ಲಾನ್ ಮಾಡಿದ್ದೆ&quot; ಎಂದು ಹೇಳಿದ್ದಾನೆ.&lt;/p&gt;&lt;p&gt;ಮೇ 29 ರಂದು ಮಗು ಜೋರಾಗಿ ಅತ್ತಾಗ, ಅಶ್ಕರ್ ಕೋಪಗೊಂಡು ಆತನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಮಗು ಸತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ, ಇಡೀ ಮನೆಯನ್ನು ತೊಳೆದು ರಕ್ತದ ಕಲೆ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸಿ, ಆ ನಂತರವೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಮಗು ಜೋರಾಗಿ ಕಿರುಚಾಡಬಾರದು ಎಂದು ಪ್ರತಿದಿನ ಆತನ ಬಾಯಿಗೆ ಬಟ್ಟೆ ತುರುಕುತ್ತಿದ್ದ ಕ್ರೂರಿ, ಹಲ್ಲೆ ನಡೆಸಿದ ವಸ್ತುಗಳನ್ನು ಕಾಲುವೆಗೆ ಎಸೆದು, ಉಳಿದಿದ್ದನ್ನು ಸುಟ್ಟುಹಾಕಿದ್ದಾಗಿ ಹೇಳಿದ್ದಾನೆ.&lt;/p&gt;&lt;h2&gt;&lt;strong&gt;ಸೈಕಲ್&zwnj;ನಿಂದ ಬಿದ್ದನೆಂದು ಮಗುವಿನ ಎರಡು ಕೈಗಳನ್ನೇ ಮುರಿದಿದ್ದ ಮಲತಂದೆ!&lt;/strong&gt;&lt;/h2&gt;&lt;p&gt;ಕೊಲೆಯಾಗುವ ಸುಮಾರು ಒಂದು ತಿಂಗಳ ಮುಂಚೆಯೇ ಪುಟ್ಟ ಮಗುವಿನ ಎರಡು ಕೈಗಳು ಮುರಿದುಹೋಗಿದ್ದವು. ಈ ಬಗ್ಗೆ ನೆರೆಹೊರೆಯವರು ಪ್ರಶ್ನಿಸಿದಾಗ, &quot;ಮಗು ಸೈಕಲ್&zwnj;ನಿಂದ ಕೆಳಗೆ ಬಿದ್ದಿದ್ದರಿಂದ ಕೈ ಮುರಿದಿದೆ&quot; ಎಂದು ಅಶ್ಕರ್ ಸುಳ್ಳು ಹೇಳಿ ನಂಬಿಸಿದ್ದ. ತಾಯಿ ಅಖಿಲಾ ಕೂಡ ಕೈಗೆ ಪ್ಲಾಸ್ಟರ್ ಹಾಕಿಸಿಕೊಂಡಿದ್ದ ಮಗುವಿನ ಫೋಟೋವನ್ನು ತನ್ನ ವಾಟ್ಸಾಪ್ ಸ್ಟೇಟಸ್&zwnj;ನಲ್ಲಿ ಹಾಕಿಕೊಂಡಿದ್ದಳು!&lt;/p&gt;&lt;p&gt;ಮಗು ಕೊಲೆಯಾಗುವ ಕೇವಲ ಎರಡು ವಾರಗಳ ಮುನ್ನ (ಮೇ 16ರಂದು) ಬಸ್ ನಿಲ್ದಾಣವೊಂದರಲ್ಲಿ ಇನ್&zwnj;ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಒಬ್ಬರು ಇವರನ್ನು ಭೇಟಿಯಾಗಿ, ತಮ್ಮ ಖಾತೆಯನ್ನು ಫಾಲೋ ಮಾಡಿದ್ದಕ್ಕಾಗಿ ಉಡುಗೊರೆಗಳನ್ನು ನೀಡಿದ್ದರು. ಆ ವಿಡಿಯೋದಲ್ಲೂ ಮಗುವಿನ ಎರಡೂ ಕೈಗಳಿಗೆ ಬಿಳಿ ಬಣ್ಣದ ಪ್ಲಾಸ್ಟರ್ ಹಾಕಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಆಗಲೂ ಆ ಸೋಷಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಮಗುವಿಗೆ ಏನಾಗಿದೆ ಎಂದು ಕೇಳಿದಾಗ, ಹೆತ್ತ ತಾಯಿ &quot;ಸೈಕಲ್&zwnj;ನಿಂದ ಬಿದ್ದಿದ್ದಾನೆ&quot; ಎಂದೇ ಸುಳ್ಳು ಹೇಳಿದ್ದಳು. ಜೂನ್ 1 ರಂದು ಪೊಲೀಸರು ತನಿಖೆ ನಡೆಸುವಾಗ ಆ ಮುರಿದ ಕೈಗೆ ಹಾಕಿದ್ದ ಪ್ಲಾಸ್ಟರ್ ಕಟ್ ಅನ್ನು ಮನೆಯ ಆವರಣದಲ್ಲಿ ಪತ್ತೆಹಚ್ಚಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by JITHIN BABU (@jithin_boy_ghillli)&lt;/p&gt;&lt;h2&gt;&lt;strong&gt;ಮೂಕಪ್ರೇಕ್ಷಕಳಾಗಿದ್ದ ಪಾಪಿ ತಾಯಿ!&lt;/strong&gt;&lt;/h2&gt;&lt;p&gt;ಪೊಲೀಸರ ಮುಂದೆ ಹೇಳಿಕೆ ನೀಡಿರುವ ತಾಯಿ ಅಖಿಲಾ, ತನ್ನ ಪ್ರೇಮಿ ತನ್ನ ಮಗನಿಗೆ ಕೈಯಿಂದ ಮತ್ತು ಕೋಲುಗಳಿಂದ ಅತಿ ಕ್ರೂರವಾಗಿ ಹೊಡೆಯುತ್ತಿದ್ದ ಪ್ರತಿಯೊಂದು ದೃಶ್ಯವನ್ನೂ ತಾನು ಕಣ್ಣಾರೆ ಕಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ತನ್ನ ಮಗನನ್ನು ಉಳಿಸಲು ಅಥವಾ ಆತನ ಮೇಲಿನ ದೌರ್ಜನ್ಯವನ್ನು ತಡೆಯಲು ತಾನು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಆಕೆ ಹೇಳಿರುವುದು ಹೆತ್ತ ಕರುಳಿನ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/kerala-toddler-murdered-by-stepfather-51-wounds-cigarette-burns-viral-news-san/articleshow-q1g16ek"/>
        </item>
        <item>
            <title><![CDATA[ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚಾರಕ್ಕೂ ಮುನ್ನ ಗಮನಿಸಿ: ಜೂನ್ 15 ರಿಂದ ಜಾರಿಯಾಗಲಿದೆ ಮಾನ್ಸೂನ್‌ ವೇಳಾಪಟ್ಟಿ]]></title>
            <link>https://kannada.asianetnews.com/india-news/central-railway-monsoon-timetable-2026-konkan-route-train-timings-changed-san/articleshow-krdcokt</link>
            <guid isPermaLink="true">https://kannada.asianetnews.com/india-news/central-railway-monsoon-timetable-2026-konkan-route-train-timings-changed-san/articleshow-krdcokt</guid>
            <pubDate>Tue, 02 Jun 2026 13:27:58 +0530</pubDate>
            <description><![CDATA[&lt;p&gt;ಕೇಂದ್ರ ರೈಲ್ವೆಯು ಮುಂಬರುವ ಮುಂಗಾರು ಋತುವಿಗಾಗಿ ಕೊಂಕಣ ರೈಲ್ವೆ ಮಾರ್ಗದ 40 ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಜೂನ್ 15 ರಿಂದ ಅ.20 ರವರೆಗೆ ಜಾರಿಯಲ್ಲಿರುವ ಈ ಹೊಸ ವೇಳಾಪಟ್ಟಿಯ ಪ್ರಕಾರ, ವಂದೇ ಭಾರತ್ ಮತ್ತು ತೇಜಸ್ ಎಕ್ಸ್&zwnj;ಪ್ರೆಸ್&zwnj;ನಂತಹ ಪ್ರಮುಖ ರೈಲುಗಳ ಸಂಚಾರದ ದಿನ ಕಡಿತಗೊಳಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3n5qcdeknrs04fxpwy231v,imgname-konkan-railway-1780386815373.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜೂ.2): &lt;/strong&gt;ಮುಂಬರುವ ಮುಂಗಾರು (ಮಳೆಗಾಲ) ಋತುವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರೈಲ್ವೆ ವಲಯವು ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಒಟ್ಟು 40 ಪ್ರಮುಖ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಈ ಹೊಸ ಪಟ್ಟಿಯಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್, ತೇಜಸ್ ಎಕ್ಸ್&zwnj;ಪ್ರೆಸ್ ಮತ್ತು ದುರಂತೋ ಎಕ್ಸ್&zwnj;ಪ್ರೆಸ್&zwnj;ನಂತಹ ಪ್ರೀಮಿಯಂ ರೈಲುಗಳ ಸಮಯ ಹಾಗೂ ಸಂಚಾರದ ದಿನಗಳೂ ಬದಲಾಗಿದ್ದು, ಜೂನ್&zwnj;ನಿಂದ ಅಕ್ಟೋಬರ್&zwnj;ವರೆಗಿನ ಮಳೆಗಾಲದ ಅವಧಿಗೆ ಇದು ಅನ್ವಯಿಸಲಿದೆ.&lt;/p&gt;&lt;h2&gt;&lt;strong&gt;ಜೂನ್ 15 ರಿಂದ ಅಕ್ಟೋಬರ್ 20 ರವರೆಗೆ ಹೊಸ ವೇಳಾಪಟ್ಟಿ ಜಾರಿ&lt;/strong&gt;&lt;/h2&gt;&lt;p&gt;ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಡಾ. ಸ್ವಪ್ನಿಲ್ ನಿಲಾ ಅವರು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, &quot;ಸೆಂಟ್ರಲ್ ರೈಲ್ವೆ ಮಾರ್ಗವಾಗಿ ಪ್ರಾರಂಭವಾಗುವ, ಕೊನೆಗೊಳ್ಳುವ ಅಥವಾ ಹಾದುಹೋಗುವ ಕೊಂಕಣ ಮಾರ್ಗದ ರೈಲುಗಳ &lsquo;ಮುಂಗಾರು ವೇಳಾಪಟ್ಟಿ&rsquo;ಯು (Monsoon Timetable) 15.06.2026 ರಿಂದ ಜಾರಿಗೆ ಬರಲಿದ್ದು, 20.10.2026 ರವರೆಗೆ ಚಾಲ್ತಿಯಲ್ಲಿರಲಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮುನ್ನ ಪರಿಷ್ಕೃತ ರೈಲು ವೇಳಾಪಟ್ಟಿ ಮತ್ತು ಲೈವ್ ಸ್ಟೇಟಸ್ ಪರಿಶೀಲಿಸಿಕೊಳ್ಳಬೇಕು&quot; ಎಂದು ತಿಳಿಸಿದ್ದಾರೆ. ಪ್ರಯಾಣಿಕರು ಇತ್ತೀಚಿನ ಅಪ್&zwnj;ಡೇಟ್&zwnj;ಗಳಿಗಾಗಿ ಅಧಿಕೃತ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (NTES) ವೆಬ್&zwnj;ಸೈಟ್ ಅಥವಾ ಮೊಬೈಲ್&zwnj;ನಲ್ಲಿ ಲಭ್ಯವಿರುವ NTES ಆ್ಯಪ್ ಅನ್ನು ಬಳಸಲು ಸೂಚಿಸಲಾಗಿದೆ.&lt;/p&gt;&lt;h3&gt;&lt;strong&gt;ಮಳೆಗಾಲದ ಅವಧಿಯಲ್ಲಿ ರೈಲುಗಳ ಸಂಚಾರ ದಿನಗಳ ಪ್ರಮುಖ ಬದಲಾವಣೆ&lt;/strong&gt;&lt;/h3&gt;&lt;p&gt;ಮುಂಗಾರು ಸುರಕ್ಷತೆಯ ದೃಷ್ಟಿಯಿಂದ ಈ ಕೆಳಗಿನ ಪ್ರಮುಖ ಪ್ರೀಮಿಯಂ ರೈಲುಗಳ ವಾರದ ಸಂಚಾರ ದಿನಗಳನ್ನು ಕಡಿತಗೊಳಿಸಲಾಗಿದೆ:&lt;/p&gt;&lt;p&gt;&lt;strong&gt;ಸಿಎಸ್&zwnj;ಎಂಟಿ - ಮಡಗಾಂವ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22229):&lt;/strong&gt; ಸಾಮಾನ್ಯವಾಗಿ ವಾರದಲ್ಲಿ 6 ದಿನ (ಶುಕ್ರವಾರ ಹೊರತುಪಡಿಸಿ) ಚಲಿಸುವ ಈ ರೈಲು, ಮುಂಗಾರು ಅವಧಿಯಲ್ಲಿ (15/06/2026 ರಿಂದ 19/10/2026) ವಾರಕ್ಕೆ ಕೇವಲ 3 ದಿನ ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಸಂಚರಿಸಲಿದೆ.&lt;/p&gt;&lt;p&gt;&lt;strong&gt;ಮಡಗಾಂವ್ - ಸಿಎಸ್&zwnj;ಎಂಟಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22230): &lt;/strong&gt;ವಾರದಲ್ಲಿ 6 ದಿನ ಓಡುತ್ತಿದ್ದ ಈ ರೈಲು, ಮಳೆಗಾಲದ ಅವಧಿಯಲ್ಲಿ (16/06/2026 ರಿಂದ 20/10/2026) ವಾರಕ್ಕೆ ಮೂರು ದಿನ ಅಂದರೆ ಮಂಗಳವಾರ, ಗುರುವಾರ ಮತ್ತು ಶನಿವಾರ ಮಾತ್ರ ಚಲಿಸಲಿದೆ.&lt;/p&gt;&lt;p&gt;&lt;strong&gt;ಸಿಎಸ್&zwnj;ಎಂಟಿ - ಮಡಗಾಂವ್ ತೇಜಸ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22119): &lt;/strong&gt;ಮೂಲತಃ ವಾರದಲ್ಲಿ 5 ದಿನ (ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ) ಸಂಚರಿಸುತ್ತಿದ್ದ ಈ ರೈಲು, ಜೂನ್ 16 ರಿಂದ ಅಕ್ಟೋಬರ್ 20 ರವರೆಗೆ ವಾರಕ್ಕೆ 3 ದಿನ ಅಂದರೆ ಮಂಗಳವಾರ, ಗುರುವಾರ ಮತ್ತು ಶನಿವಾರ ಓಡಲಿದೆ.&lt;/p&gt;&lt;p&gt;&lt;strong&gt;ಮಡಗಾಂವ್ - ಸಿಎಸ್&zwnj;ಎಂಟಿ ತೇಜಸ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22120): &lt;/strong&gt;ವಾರದಲ್ಲಿ 5 ದಿನ (ಸೋಮವಾರ ಮತ್ತು ಗುರುವಾರ ಹೊರತುಪಡಿಸಿ) ಸಂಚರಿಸುತ್ತಿದ್ದ ಈ ರೈಲು, ಜೂನ್ 17 ರಿಂದ ಅಕ್ಟೋಬರ್ 18 ರವರೆಗೆ ವಾರಕ್ಕೆ 3 ದಿನ ಅಂದರೆ ಬುಧವಾರ, ಶುಕ್ರವಾರ ಮತ್ತು ಭಾನುವಾರ ಮಾತ್ರ ಸಂಚರಿಸಲಿದೆ.&lt;/p&gt;&lt;p&gt;&lt;strong&gt;ಎಲ್&zwnj;ಟಿಟಿ - ಮಡಗಾಂವ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 11099): &lt;/strong&gt;ವಾರದಲ್ಲಿ 4 ದಿನ (ಮಂಗಳವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ) ಚಲಿಸುತ್ತಿದ್ದ ಈ ರೈಲು, ಮುಂಗಾರು ಅವಧಿಯಲ್ಲಿ (19/06/2026 ರಿಂದ 18/10/2026) ವಾರಕ್ಕೆ ಕೇವಲ 2 ದಿನ ಅಂದರೆ ಶುಕ್ರವಾರ ಮತ್ತು ಭಾನುವಾರ ಮಾತ್ರ ಕಾರ್ಯನಿರ್ವಹಿಸಲಿದೆ.&lt;/p&gt;&lt;p&gt;&lt;strong&gt;ಮಡಗಾಂವ್ - ಎಲ್&zwnj;ಟಿಟಿ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 11100):&lt;/strong&gt; ವಾರದಲ್ಲಿ 4 ದಿನ (ಮಂಗಳವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ) ಓಡುತ್ತಿದ್ದ ಈ ರೈಲು, ಜೂನ್ 20 ರಿಂದ ಅಕ್ಟೋಬರ್ 19 ರವರೆಗೆ ವಾರಕ್ಕೆ 2 ದಿನ ಅಂದರೆ ಶನಿವಾರ ಮತ್ತು ಸೋಮವಾರ ಮಾತ್ರ ಸಂಚರಿಸಲಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;img&gt;&lt;/p&gt;&lt;p&gt;&lt;img&gt;&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/central-railway-monsoon-timetable-2026-konkan-route-train-timings-changed-san/articleshow-krdcokt"/>
        </item>
        <item>
            <title><![CDATA[Viral Post: ಡ್ರೈವಿಂಗ್ ವೇಳೆ ಸೀರಿಯಲ್ ನೋಡ್ತಿದ್ದ ಚಾಲಕ! ಪ್ರಶ್ನಿಸಿದ್ದಕ್ಕೆ 'ಇಷ್ಟ ಇಲ್ಲದಿದ್ರೆ ಇಳಿದು ಹೋಗಿ' ಅನ್ನಬೇಕಾ ಭೂಪ!]]></title>
            <link>https://kannada.asianetnews.com/viral/ola-driver-watches-taarak-mehta-while-driving-tells-passenger-to-get-out/articleshow-ili6gvm</link>
            <guid isPermaLink="true">https://kannada.asianetnews.com/viral/ola-driver-watches-taarak-mehta-while-driving-tells-passenger-to-get-out/articleshow-ili6gvm</guid>
            <pubDate>Tue, 02 Jun 2026 13:18:35 +0530</pubDate>
            <description><![CDATA[&lt;p&gt;ಡ್ರೈವಿಂಗ್ ವೇಳೆ ಮೊಬೈಲ್&zwnj;ನಲ್ಲಿ ಸೀರಿಯಲ್ ನೋಡ್ತಿದ್ದ ಚಾಲಕ. ಇದನ್ನ ಪ್ರಶ್ನಿಸಿದ್ದ ಪ್ರಯಾಣಿಕನ ಮೇಲೆ ರೇಗಾಡಿದ ಡ್ರೈವರ್, 'ಇಷ್ಟ ಇಲ್ಲದಿದ್ರೆ ಇಳಿದು ಹೋಗಿ' ಅನ್ನೋ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಚಾಲಕನ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3j82dtvrzbx4z73ymsc6pk,imgname-new-project---2026-06-02t122808.640-1780383746490.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ ಬೆಂಗಳೂರಿನಲ್ಲಿ ಆಟೋ ಚಾಲಕನೋರ್ವ ಚಾಲನೆ ವೇಳೆ ವಿಡಿಯೋ ನೋಡುತ್ತಾ ಮುಂದೆ ಹೋಗುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆಯಿತು. ಚಾಲನೆ ವೇಳೆ ರೀಲ್ಸ್, ವಿಡಿಯೋ, ಸಿನಿಮಾ ನೋಡುವುದು ಗೀಳಾಗಿ ಪರಿಣಮಿಸಿದೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂಥದ್ದೇ ಪ್ರಕರಣ ಇದೀಗ ನೋಯ್ಡಾದಲ್ಲಿ ನಡೆದಿದೆ.&lt;/p&gt;&lt;p&gt;ಪ್ರಯಾಣಿಕರೊಬ್ಬರು ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸಲೆಂದು ಟ್ಯಾಕ್ಸಿ ಬುಕ್ ಮಾಡಿದ್ದರು. ಸಾರ್ವಜನಿಕ ಸಾರಿಗೆಯಲ್ಲಿ ಬೇಗ ತಲುಪಲು ಅಸಾಧ್ಯವೆಂದು ತುಸು ಹೆಚ್ಚು ಹಣ ಕೊಟ್ಟು ಟ್ಯಾಕ್ಸಿಯಲ್ಲಿ ಹೊರಟಿದ್ದರು. ಪ್ರಯಾಣದ ವೇಳೆ ತಮಗಾದ ಅಪಾಯಕಾರಿ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಹೈವೇಯಲ್ಲಿ ಫುಲ್ ಸ್ಪೀಡಲ್ಲಿ ಟ್ಯಾಕ್ಸಿ ಓಡಿಸುವಾಗ ಡ್ರೈವರ್ ಎಷ್ಟು ಎಚ್ಚರಿಕೆ ಇದ್ರೂ ಸಾಲದು. ಆದರೆ ಈ ಕ್ಯಾಬ್ ಡ್ರೈವರ್ ಮೊಬೈಲ್ ಫೋನ್&zwnj;ನಲ್ಲಿ ಟಿವಿ ಸೀರಿಯಲ್ ನೋಡ್ತಾ ಇದ್ದನಂತೆ! ಈ ಘಟನೆಯನ್ನ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆ್ಯಪ್ ಆಧಾರಿತ ಟ್ಯಾಕ್ಸಿಗಳ ಸುರಕ್ಷತೆ ಮತ್ತು ಚಾಲಕರ ಬೇಜವಾಬ್ದಾರಿ ಬಗ್ಗೆ ಜನ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಡ್ಯಾಶ್&zwnj;ಬೋರ್ಡ್ ಪಕ್ಕದಲ್ಲಿ ಫೋನ್ ಇಟ್ಕೊಂಡಿದ್ದ ಚಾಲಕ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಅನ್ನೋ ಫೇಮಸ್ ಸೀರಿಯಲ್ ನೋಡ್ತಾ ವೇಗವಾಗಿ ಟ್ಯಾಕ್ಸಿ ಓಡಿಸುತ್ತಿದ್ದ. ಹೊರಗಡೆ ಬರೋಬ್ಬರಿ 45 ಡಿಗ್ರಿ ಸೆಲ್ಸಿಯಸ್ ಸುಡು ಬಿಸಿಲು. ಎದುರುಗಡೆಯಿಂದ ಬುಲೆಟ್&zwnj;ನಂತೆ ನುಗ್ಗುತ್ತಿರುವ ವಾಹನಗಳು. ಚಾಲಕನ ನಿರ್ಲಕ್ಷ್ಯದಿಂದ ಏನಾದರೂ ಹೆಚ್ಚುಕಮ್ಮಿಆದರೆ ಅಪಾಘಾತದ ಕಲ್ಪನೆಯೇ ಪ್ರಯಾಣಿಕನಿಗೆ ಭಯಂಕರ ಭಯ ಹುಟ್ಟಿಸುತ್ತಿತ್ತು.. ಈ ವೇಳೆ ಪ್ರಯಾಣಿಕ, ಡ್ರೈವರ್ ಹತ್ತಿರ ಹೋಗಿ, ದಯಮಾಡಿ ಸ್ಕ್ರೀನ್ ಆಫ್ ಮಾಡಿ ಡ್ರೈವಿಂಗ್ ಮೇಲೆ ಗಮನ ಕೊಡಿ ಅಂತ ವಿನಯದಿಂದ ಕೇಳಿದ್ದಾರೆ. ಆದ್ರೆ ಅದಕ್ಕೆ ಚಾಲಕ ಒಪ್ಪಲಿಲ್ಲ. 'ನಿಮಗೆ ಏನಾದ್ರೂ ಸಮಸ್ಯೆ ಇದ್ರೆ, ಕ್ಯಾಬ್&zwnj; ಇಳಿದು ಹೋಗಿ' ಅಂತಾ ಉಡಾಫೆಯಾಗಿ ಉತ್ತರ ಕೊಟ್ಟಿದ್ದಾನೆ. ಎಂಥ ಬೇಜಾವಾಬ್ದಾರಿ ಹೇಳಿಕೆ ಇದು? ಸುಡು ಬಿಸಿಲಲ್ಲಿ, ಕುಟುಂಬದ ಜೊತೆ ಹೈವೇ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ, ಬೇರೆ ದಾರಿ ಇಲ್ಲದೆ ಸುಮ್ಮನೆ ಪ್ರಯಾಣ ಮುಂದುವರಿಸಬೇಕಾಯ್ತು ಅಂತ ಪ್ರಯಾಣಿಕ ಬೇಸರದಿಂದ ಹೇಳಿಕೊಂಡಿದ್ದಾರೆ.&lt;/p&gt;&lt;h2&gt;ಭಯ್ಯಾ, ದಯವಿಟ್ಟು ಸ್ಕ್ರೀನ್ ಆಫ್ ಮಾಡು ಡ್ರೈವಿಂಗ್ ಮೇಲೆ ಗಮನ ಕೊಡಿ'&lt;/h2&gt;&lt;p&gt;ಭಯ್ಯಾ, ದಯವಿಟ್ಟು ಸ್ಕ್ರೀನ್ ಆಫ್ ಮಾಡಿ ಡ್ರೈವಿಂಗ್ ಮೇಲೆ ಗಮನ ಕೊಡಿ' ಅಂತ ನಾನು ವಿನಯದಿಂದ ಹೇಳಿದೆ. ಅದಕ್ಕೆ, 'ಸಮಸ್ಯೆ ಇದ್ರೆ ಗಾಡಿಯಿಂದ ಇಳಿದು ಹೋಗಿ' ಅನ್ನೋದು ಚಾಲಕನ ಉತ್ತರವಾಗಿತ್ತು. 45 ಡಿಗ್ರಿ ಬಿಸಿಲಲ್ಲಿ ಕುಟುಂಬದ ಜೊತೆ ಹೈವೇ ಮಧ್ಯೆ ನಿಂತು ನಾವೇನು ಮಾಡೋದು? ಹಾಗಾಗಿ ಸುಮ್ಮನಾದೆವು. ಊಬರ್-ಓಲಾ ದಂತಹ ಸೇವೆಗಳಲ್ಲಿ ನಮ್ಮ ಜೀವಕ್ಕೆ ಬೆಲೆ ಇಲ್ವಾ?' ಅಂತ ಅವರು ತಮ್ಮ ಎಕ್ಸ್ ಪೋಸ್ಟ್&zwnj;ನಲ್ಲಿ ಪ್ರಶ್ನಿಸಿದ್ದಾರೆ.&lt;/p&gt;&lt;p&gt;चलती Ola में 45&deg; गर्मी के बीच,ड्राइवर &lsquo;तारक मेहता&rsquo; देख रहा था!&amp;nbsp;Noida से दिल्ली जा रहा था,पत्नी और छोटे भाई के साथ।मैंने विनम्रता से बोला कि भैया, स्क्रीन बंद करो,&amp;nbsp;ड्राइविंग पर ध्यान दो।ड्राइवर का जवाब कि&amp;nbsp;&ldquo;दिक्कत है तो उतर जाओ&rdquo;हाईवे के बीच परिवार को 45 डिग्री धूप&hellip; pic.twitter.com/uUNopNUXxW&lt;/p&gt;&lt;p&gt;&mdash; Nunu (@Dreams_realites) June 1, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಈ ಪೋಸ್ಟ್&zwnj;ಗೆ ಸಾವಿರಾರು ಜನ ಟ್ಯಾಕ್ಸಿ ಚಾಲಕನ ವರ್ತನೆಗೆ ಆಕ್ರೋಶಭರಿತರಾಗಿ ಕಾಮೆಂಟ್ ಮಾಡಿದ್ದಾರೆ. ಚಾಲಕನ ಈ ಅಜಾಗರೂಕತೆ ಕೇವಲ ಆ ಪ್ರಯಾಣಿಕರಿಗೆ ಮಾತ್ರವಲ್ಲ, ರಸ್ತೆಯಲ್ಲಿ ಹೋಗೋ ಬೇರೆ ವಾಹನ ಸವಾರರು ಮತ್ತು ಪಾದಚಾರಿಗಳ ಜೀವಕ್ಕೂ ಅಪಾಯ ತರಬಹುದು. ಇಂತಹ ಚಾಲಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತಾ ನೆಟ್ಟಿಗರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/viral/ola-driver-watches-taarak-mehta-while-driving-tells-passenger-to-get-out/articleshow-ili6gvm"/>
        </item>
        <item>
            <title><![CDATA[ಮೇ 26ಕ್ಕೆ ಕೈಕೊಟ್ಟ ಮುಂಗಾರು, ಜೂ.4ಕ್ಕೆ ಆಗಮನ ಮುಹೂರ್ತ ಫಿಕ್ಸ್; ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ ಅಬ್ಬರ!]]></title>
            <link>https://kannada.asianetnews.com/gallery/state/karnataka-weather-update-heavy-rain-alert-for-5-days-monsoon-to-hit-soon-sat-a0mrer6</link>
            <guid isPermaLink="true">https://kannada.asianetnews.com/gallery/state/karnataka-weather-update-heavy-rain-alert-for-5-days-monsoon-to-hit-soon-sat-a0mrer6</guid>
            <pubDate>Tue, 02 Jun 2026 13:20:22 +0530</pubDate>
            <description><![CDATA[&lt;p&gt;ನೈಋತ್ಯ ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ, ಚಂಡಮಾರುತದ ಸುಳಿ ಹಾಗೂ ಟ್ರಫ್ ಪ್ರಭಾವದಿಂದಾಗಿ ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksrzc3b4r2gsc0xpgf8aa2br,imgname-kerala-rain-1780028411236.jpg" type="image/jpeg" height="390" width="690"/>
            <content:encoded><![CDATA[&lt;p&gt;ನೈಋತ್ಯ ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ, ಚಂಡಮಾರುತದ ಸುಳಿ ಹಾಗೂ ಟ್ರಫ್ ಪ್ರಭಾವದಿಂದಾಗಿ ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು (ಜೂ.02): ಜೂ&lt;/strong&gt;ನ್ ತಿಂಗಳ ಆರಂಭದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಲಿದ್ದು, ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ. ಎನ್. ಪುವಿಯರಸನ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ನೈಋತ್ಯ ಮುಂಗಾರು ಮಳೆಯು ವೇಗವಾಗಿ ಭಾರತದತ್ತ ಮುನ್ನುಗ್ಗುತ್ತಿದ್ದು, ಪ್ರಸ್ತುತ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಸಕ್ರಿಯವಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಜೂನ್ 4ರ ಸುಮಾರಿಗೆ ಮುಂಗಾರು ಮಳೆಯು ಅರಬ್ಬಿ ಸಮುದ್ರದ ಉಳಿದ ಭಾಗಗಳು, ಲಕ್ಷದ್ವೀಪ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಿಗೆ ಪ್ರವೇಶಿಸಲು ಪೂರಕ ವಾತಾವರಣ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಕರ್ನಾಟಕದಲ್ಲೂ ಮಳೆಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಲಿದೆ.&lt;/p&gt;&lt;img&gt;&lt;p&gt;ದಕ್ಷಿಣ ಕೇರಳ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಸಮುದ್ರ ಮಟ್ಟದಿಂದ ಸುಮಾರು 5.8 ಕಿಮೀ ಎತ್ತರದಲ್ಲಿ ಸುಳಿಗಾಳಿ ಉಂಟಾಗಿದೆ. ಇದರೊಂದಿಗೆ ಮಧ್ಯಪ್ರದೇಶದಿಂದ ತಮಿಳುನಾಡಿನವರೆಗೆ ಹರಡಿರುವ ಟ್ರಫ್ (ಕಡಿಮೆ ಒತ್ತಡದ ಪಟ್ಟಿ) ಕಾರಣದಿಂದಾಗಿ ಕರ್ನಾಟಕದ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಜೂನ್ 6 ರವರೆಗೆ ರಾಜ್ಯದ ಹಲವೆಡೆ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;1. ಕರಾವಳಿ ಕರ್ನಾಟಕ:&lt;/strong&gt;&lt;/p&gt;&lt;p&gt;ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 2 ರಿಂದ ಜೂನ್ 6 ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೂನ್ 7 ಮತ್ತು 8 ರಂದು ಕರಾವಳಿಯ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.&lt;/p&gt;&lt;p&gt;&lt;strong&gt;2. ಉತ್ತರ ಒಳನಾಡು:&lt;/strong&gt;&lt;/p&gt;&lt;p&gt;ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಜೂನ್ 2 ರಿಂದ ಜೂನ್ 5 ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ಭಾಗದಲ್ಲಿ ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದ್ದು, ಜನ ಜಾಗರೂಕರಾಗಿರಲು ಸೂಚಿಸಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.&lt;/p&gt;&lt;p&gt;&lt;strong&gt;3. ದಕ್ಷಿಣ ಒಳನಾಡು:&lt;/strong&gt;&lt;/p&gt;&lt;p&gt;ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಇಲ್ಲಿ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜೂನ್ 3 ರಿಂದ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.&lt;/p&gt;&lt;img&gt;&lt;p&gt;ಕಳೆದ 24 ಗಂಟೆಗಳಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನವು ವಾಡಿಕೆಗಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿ ದಾಖಲಾಗಿದೆ. ಆದರೆ, ಮುಂದಿನ ಐದು ದಿನಗಳಲ್ಲಿ ಮಳೆ ಆರಂಭವಾಗುವುದರಿಂದ ತಾಪಮಾನದಲ್ಲಿ ಯಾವುದೇ ದೊಡ್ಡ ಮಟ್ಟದ ಏರಿಕೆ ಕಂಡುಬರುವುದಿಲ್ಲ ಎಂದು ಇಲಾಖೆ ತಿಳಿಸಿದೆ. ಸಾರ್ವಜನಿಕರು ಗುಡುಗು ಮತ್ತು ಮಿಂಚಿನ ಸಂದರ್ಭದಲ್ಲಿ ಮರದ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ಆಶ್ರಯ ಪಡೆಯಬಾರದು. ಗಾಳಿ ಜೋರಾಗಿ ಬೀಸುವುದರಿಂದ ಹಳೆಯ ಕಟ್ಟಡಗಳು ಮತ್ತು ತಗಡಿನ ಶೆಡ್&zwnj;ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-update-heavy-rain-alert-for-5-days-monsoon-to-hit-soon-sat-a0mrer6"/>
        </item>
        <item>
            <title><![CDATA[ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ]]></title>
            <link>https://kannada.asianetnews.com/politics/an-audio-purportedly-of-former-minister-zameer-ahmed-khan-goes-viral-siddaramaiah-sent-an-important-message-mrq-videoshow-xhukg90</link>
            <guid isPermaLink="true">https://kannada.asianetnews.com/politics/an-audio-purportedly-of-former-minister-zameer-ahmed-khan-goes-viral-siddaramaiah-sent-an-important-message-mrq-videoshow-xhukg90</guid>
            <pubDate>Tue, 02 Jun 2026 13:20:07 +0530</pubDate>
            <description><![CDATA[&lt;p&gt;ಮಾಜಿ ಸಚಿವ ಜಮೀರ್ ಅಹ್ಮದ್ ಅವರದೆನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಎಸ್&zwnj;ಡಿಪಿಐಗೆ ಮತ ಹಾಕಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಆರೋಪವನ್ನು ಜಮೀರ್ ನಿರಾಕರಿಸಿ, ಇದು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿದ ನಕಲಿ ಆಡಿಯೋ ಎಂದಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xacq9vg" medium="video" height="768" width="1024"/>
            <content:encoded><![CDATA[&lt;p&gt;ಷಡ್ಯಂತ್ರದ ಆಡಿಯೋ ವೈರಲ್.. ಕಂಗಾಲಾದ ಜಮೀರ್ ಅಹ್ಮದ್! ಬೆಳಗ್ಗೆ ಸಿದ್ದರಾಮಯ್ಯ ಭೇಟಿ ಮಾಡಿದ ಜಮೀರ್ ಅಹ್ಮದ್ ಖಾನ್ಎ ಚ್​ಎಎಲ್​ನಲ್ಲಿ ಸಿದ್ದರಾಮಯ್ಯ ಭೇಟಿಯಾಗಿ ಜಮೀರ್ ಮಾಹಿತಿ. &amp;nbsp;ಸಿದ್ದು ಎದುರು ಆಡಿಯೋ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ ಜಮೀರ್!&lsquo;ನೀನು ದಿಲ್ಲಿಗೆ ಬರೋದು ಸೂಕ್ತವಲ್ಲ..!&rsquo;- ಸಿದ್ದರಾಮಯ್ಯ ಸಂದೇಶ&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/politics/an-audio-purportedly-of-former-minister-zameer-ahmed-khan-goes-viral-siddaramaiah-sent-an-important-message-mrq-videoshow-xhukg90"/>
        </item>
        <item>
            <title><![CDATA[1.92 ಲಕ್ಷದಿಂದ 57.8 ಲಕ್ಷ ರೂ. ಸಂಬಳಕ್ಕೆ ಜಂಪ್: ಸಿಎ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದ ಬೆಂಗಳೂರು ಹುಡುಗನ ಯಶೋಗಾಥೆ!]]></title>
            <link>https://kannada.asianetnews.com/gallery/viral/aniruddh-rapol-ca-success-story-how-a-bengaluru-ca-trainee-rose-to-become-a-big-4-manager-in-sweden-gdp-u4bo4bh</link>
            <guid isPermaLink="true">https://kannada.asianetnews.com/gallery/viral/aniruddh-rapol-ca-success-story-how-a-bengaluru-ca-trainee-rose-to-become-a-big-4-manager-in-sweden-gdp-u4bo4bh</guid>
            <pubDate>Tue, 02 Jun 2026 13:17:11 +0530</pubDate>
            <description><![CDATA[&lt;p&gt;ಬೆಂಗಳೂರಿನ ಅನಿರುದ್ಧ್ ರಾಪೋಲ್, 10ವರ್ಷಗಳಲ್ಲಿ ತಮ್ಮ ಸಿಎ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸು ಕಂಡಿದ್ದಾರೆ. ಕೆಪಿಎಂಜಿ ಸಂಸ್ಥೆಯಲ್ಲಿ 1.92ಲಕ್ಷ ರೂ. ಸ್ಟೈಫಂಡ್&zwnj;ನಿಂದ ಆರಂಭಿಸಿ, ಸ್ವೀಡನ್&zwnj;ನಲ್ಲಿ 57.8ಲಕ್ಷ ರೂ. ವಾರ್ಷಿಕ ವೇತನದವರೆಗೆ ಬೆಳೆದ ತಮ್ಮ ಸ್ಪೂರ್ತಿದಾಯಕ ಪಯಣವನ್ನು ಅವರು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3m30xwdqhvg3nt3c1v77ef,imgname-anirudh-rapole-ca-salary-journey--4--1780385678268.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಅನಿರುದ್ಧ್ ರಾಪೋಲ್, 10ವರ್ಷಗಳಲ್ಲಿ ತಮ್ಮ ಸಿಎ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸು ಕಂಡಿದ್ದಾರೆ. ಕೆಪಿಎಂಜಿ ಸಂಸ್ಥೆಯಲ್ಲಿ 1.92ಲಕ್ಷ ರೂ. ಸ್ಟೈಫಂಡ್&zwnj;ನಿಂದ ಆರಂಭಿಸಿ, ಸ್ವೀಡನ್&zwnj;ನಲ್ಲಿ 57.8ಲಕ್ಷ ರೂ. ವಾರ್ಷಿಕ ವೇತನದವರೆಗೆ ಬೆಳೆದ ತಮ್ಮ ಸ್ಪೂರ್ತಿದಾಯಕ ಪಯಣವನ್ನು ಅವರು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು: ಶ್ರಮ ವಹಿಸಿ ಓದಿದರೆ ಚಾರ್ಟರ್ಡ್ ಅಕೌಂಟೆನ್ಸಿ (CA) ವೃತ್ತಿಜೀವನವು ಒಬ್ಬ ವ್ಯಕ್ತಿಯ ಬದುಕನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಬೆಂಗಳೂರಿನ ಅನಿರುದ್ಧ್ ರಾಪೋಲ್ ಅವರ ಯಶೋಗಾಥೆಯೇ ಸಾಕ್ಷಿ. 2013 ರಲ್ಲಿ ಕೇವಲ 1.92 ಲಕ್ಷ ರೂಪಾಯಿಗಳ ವಾರ್ಷಿಕ ಸ್ಟೈಫಂಡ್&zwnj;ನೊಂದಿಗೆ ಪ್ರಸಿದ್ಧ &lsquo;KPMG&rsquo; ಸಂಸ್ಥೆಯಲ್ಲಿ ಆರ್ಟಿಕಲ್&zwnj;ಶಿಪ್ ತರಬೇತಿ ಆರಂಭಿಸಿದ ಅನಿರುದ್ಧ್, ಕೇವಲ ಹತ್ತು ವರ್ಷಗಳಲ್ಲಿ ಅಂದರೆ 2022 ರ ವೇಳೆಗೆ ಸ್ವೀಡನ್&zwnj;ನ KPMG ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಬರೋಬ್ಬರಿ 57.8 ಲಕ್ಷ ರೂಪಾಯಿಗಳ ವಾರ್ಷಿಕ ವೇತನ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ.&lt;/p&gt;&lt;p&gt;ತಮ್ಮ ಈ ರೋಮಾಂಚಕ ಹಾಗೂ ಸ್ಪೂರ್ತಿದಾಯಕ 10 ವರ್ಷಗಳ ವೃತ್ತಿಜೀವನದ ಏರಿಳಿತದ ಪಯಣವನ್ನು ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. &quot;ಕೆಪಿಎಂಜಿಯಲ್ಲಿ ಸಿಎ ಆಗಿ ನನ್ನ ಸಂಬಳ - ವಯಸ್ಸು 18 ರಿಂದ 28&quot; ಎಂಬ ಶೀರ್ಷಿಕೆಯಡಿ ಅನಿರುದ್ಧ್ ತಮ್ಮ ವೃತ್ತಿಜೀವನದ ಸಂಪೂರ್ಣ ಆದಾಯದ ವಿವರಗಳನ್ನು ಪಾರದರ್ಶಕವಾಗಿ ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;ul&gt; &lt;li&gt;2013 (ಆರ್ಟಿಕಲ್&zwnj;ಶಿಪ್ ಮೊದಲ ವರ್ಷ): KPMG ಇಂಡಿಯಾದಲ್ಲಿ ತರಬೇತಿ ನಿರತ ವಿದ್ಯಾರ್ಥಿಯಾಗಿ ವೃತ್ತಿಜೀವನ ಆರಂಭಿಸಿದಾಗ ಅವರ ವಾರ್ಷಿಕ ಗಳಿಕೆ ಕೇವಲ 1.92 ಲಕ್ಷ ರೂ. ಆಗಿತ್ತು.&lt;/li&gt; &lt;li&gt;2014 &amp;amp; 2015 (ತರಬೇತಿಯ ಮುಂದಿನ ವರ್ಷಗಳು): ಎರಡನೇ ವರ್ಷದಲ್ಲಿ ಇವರ ವೇತನ 2.52 ಲಕ್ಷ ರೂ. ಹಾಗೂ ಮೂರನೇ ವರ್ಷದಲ್ಲಿ 3.36 ಲಕ್ಷ ರೂ. ಗೆ ಏರಿಕೆಯಾಯಿತು.&lt;/li&gt; &lt;li&gt;2016 (ಅರ್ಹ ಸಿಎ ಆಗಿ ನೇಮಕಾತಿ): ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಪಾಸ್ ಆದ ನಂತರ, ಅದೇ KPMG ಸಂಸ್ಥೆಯಲ್ಲಿ 'ಸೀನಿಯರ್' ಹುದ್ದೆಗೆ ಬಡ್ತಿ ಪಡೆದರು. ಈ ವೇಳೆ ಬೋನಸ್ ಒಳಗೊಂಡಂತೆ ಅವರ ವಾರ್ಷಿಕ ಸಂಬಳ 8.5 ಲಕ್ಷ ರೂ. ತಲುಪಿತು.&lt;/li&gt; &lt;li&gt;2018 (ಅಸಿಸ್ಟೆಂಟ್ ಮ್ಯಾನೇಜರ್): ಸಂಸ್ಥೆಯಲ್ಲಿ ನಿರಂತರ ಪ್ರದರ್ಶನ ತೋರಿದ ಇವರಿಗೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಬಡ್ತಿ ದೊರೆಯಿತು. ಆಗ ಬೋನಸ್ ಸಮೇತ ವಾರ್ಷಿಕ ವೇತನ 13.5 ಲಕ್ಷ ರೂ. ಆಯಿತು.&lt;/li&gt; &lt;li&gt;2021 (ಸ್ವೀಡನ್&zwnj;ಗೆ ಪಯಣ): ಸೆಪ್ಟೆಂಬರ್ 2013 ರಿಂದ ಡಿಸೆಂಬರ್ 2020 ರವರೆಗೆ KPMG ಭಾರತದಲ್ಲಿ ಸೇವೆ ಸಲ್ಲಿಸಿದ ಅನಿರುದ್ಧ್, ಜನವರಿ 2021 ರಲ್ಲಿ 'KPMG ಸ್ವೀಡನ್' ಸಂಸ್ಥೆಗೆ 'ಅಸಿಸ್ಟೆಂಟ್ ಮ್ಯಾನೇಜರ್ 2' ಆಗಿ ಆಯ್ಕೆಯಾದರು. ಆಗ ಅವರ ವಾರ್ಷಿಕ ಗಳಿಕೆ ಬರೋಬ್ಬರಿ 46.3 ಲಕ್ಷ ರೂ. ಗೆ ಜಿಗಿಯಿತು.&lt;/li&gt; &lt;li&gt;2022 (ಮ್ಯಾನೇಜರ್ ಹುದ್ದೆ): ಸ್ವೀಡನ್&zwnj;ನಲ್ಲೇ ಮ್ಯಾನೇಜರ್ ಆಗಿ ಬಡ್ತಿ ಪಡೆದ ಇವರ ವಾರ್ಷಿಕ ವೇತನ ಬೋನಸ್ ಒಳಗೊಂಡಂತೆ 57.8 ಲಕ್ಷ ರೂ. ಗಳ ಗಡಿಯನ್ನು ತಲುಪಿತು.&lt;/li&gt;&lt;/ul&gt;&lt;img&gt;&lt;p&gt;ಕೇವಲ ಸಿಎ ಪದವಿಗೆ ತೃಪ್ತರಾಗದ ಅನಿರುದ್ಧ್, ತಮ್ಮ ನಾಯಕತ್ವದ ಗುಣಗಳನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಇಂಡಿಯನ್ ಇನ್&zwnj;ಸ್ಟಿಟ್ಯೂಟ್ ಆಫ್ ಮ್ಯಾನೇಜ್&zwnj;ಮೆಂಟ್ (IIM) ಅಹಮದಾಬಾದ್ ಸೇರಿದರು. ಏಪ್ರಿಲ್ 2023 ರಿಂದ ಮಾರ್ಚ್ 2024 ರ ಅವಧಿಯಲ್ಲಿ ಅವರು ಸ್ಟ್ರಾಟಜಿ ಮತ್ತು ಮಾರ್ಕೆಟಿಂಗ್ ವಿಷಯದಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಪ್ರಸ್ತುತ ಅವರು ಏಪ್ರಿಲ್ 2026 ರಿಂದ ಜನಪ್ರಿಯ ಫಿನ್&zwnj;ಟೆಕ್ ಸಂಸ್ಥೆಯಾದ 'ಝಾಗಲ್' (Zaggle) ನಲ್ಲಿ ಪ್ರಮುಖ ಲೀಡರ್&zwnj;ಶಿಪ್&zwnj; ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ವೀಡಿಯೊದ ವಿವರಣೆಯಲ್ಲಿ ಅನಿರುದ್ಧ್ ಚಾರ್ಟರ್ಡ್ ಅಕೌಂಟೆನ್ಸಿ ವೃತ್ತಿಯ ಬಗ್ಗೆ ಅತ್ಯಂತ ಗೌರವದ ಮಾತುಗಳನ್ನಾಡಿದ್ದಾರೆ. &quot;ಸಿಎ ಎಂಬುದು ನಿಜವಾದ ಸಮಾನತೆಯ ವೃತ್ತಿ. ಇದು ಜಗತ್ತಿನ ಎಲ್ಲರಿಗೂ ಮುಕ್ತವಾಗಿದೆ. ಇಲ್ಲಿ ಯಾವುದೇ ರೀತಿಯ ಮೀಸಲಾತಿಗಳಿಲ್ಲ, ಎಲ್ಲರೂ ಸಮಾನರು. ಕಠಿಣ ಪರಿಶ್ರಮ ಮತ್ತು ಸ್ಥಿರತೆ ಇದ್ದರೆ ಮಾತ್ರ ಚಾರ್ಟರ್ಡ್ ಅಕೌಂಟೆಂಟ್ ಆಗಿ ಜೀವನದಲ್ಲಿ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಅದ್ಭುತವಾಗಿ ಬೆಳೆಯಲು ಸಾಧ್ಯವಿದೆ&quot; ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ತಮ್ಮ ಕುಟುಂಬದಲ್ಲೇ ತಾವೇ ಮೊದಲ ಚಾರ್ಟರ್ಡ್ ಅಕೌಂಟೆಂಟ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅನಿರುದ್ಧ್, ತಾವು ಕಲಿಯುವಾಗ ಯಾವುದೇ ವೃತ್ತಿಪರ ಮಾರ್ಗದರ್ಶನ ನೀಡುವವರು ಇರಲಿಲ್ಲ ಎಂಬುದನ್ನು ನೆನಪಿಸಿಕೊಂಡಿದ್ದಾರೆ. &quot;ನನಗೆ ಯಾವುದೇ ಹಿನ್ನೆಲೆ ಅಥವಾ ಗೈಡೆನ್ಸ್ ಇರಲಿಲ್ಲ. ಆದರೆ ದಾರಿಯುದ್ದಕ್ಕೂ ಸರಿಯಾದ ಹಾದಿಯನ್ನು ಕಂಡುಕೊಳ್ಳುವಲ್ಲಿ ನಾನು ಅದೃಷ್ಟಶಾಲಿಯಾಗಿದ್ದೆ. ಪ್ರಮುಖವಾಗಿ KPMG ಸಂಸ್ಥೆಯಲ್ಲಿ ನಾನು ಪಡೆದ ಆರ್ಟಿಕಲ್&zwnj;ಶಿಪ್ ತರಬೇತಿಯೇ ನನ್ನ ವೃತ್ತಿಜೀವನದ ಪಥವನ್ನು ಸಂಪೂರ್ಣವಾಗಿ ಬದಲಾಯಿಸಿತು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಗಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ ಉದ್ದೇಶದ ಬಗ್ಗೆ ಸ್ಪಷ್ಟನೆ ನೀಡಿರುವ ಅನಿರುದ್ಧ್, &quot;ಇದು ನನ್ನ ಸಂಬಳದ ಬಗ್ಗೆ ಹೆಮ್ಮೆ ಪಡುವ ಅಥವಾ ಅಹಂಕಾರ ಪ್ರದರ್ಶಿಸುವ ಪೋಸ್ಟ್ ಖಂಡಿತ ಅಲ್ಲ. ಜಗತ್ತಿನ ಟಾಪ್ ಬಿಗ್ 4 (Big 4) ಕಂಪನಿಗಳಲ್ಲಿ ಕೆಲಸ ಮಾಡುವ ಒಬ್ಬ ಸಿಎ ವೃತ್ತಿಜೀವನವು ವರ್ಷಗಳ ಅವಧಿಯಲ್ಲಿ ಹೇಗೆ ಬದಲಾಗುತ್ತಾ ಹೋಗುತ್ತದೆ ಎಂಬ ನೈಜ ಚಿತ್ರಣವನ್ನು ಮಹತ್ವಾಕಾಂಕ್ಷಿ ಸಿಎ ವಿದ್ಯಾರ್ಥಿಗಳಿಗೆ ತೋರಿಸುವುದು ಮಾತ್ರ ನನ್ನ ಉದ್ದೇಶ ಎಂದಿದ್ದಾರೆ.&lt;/p&gt;&lt;p&gt;ಅಲ್ಲದೆ, ವೀಕ್ಷಕರು ಭಾರತ ಮತ್ತು ಸ್ವೀಡನ್ ದೇಶಗಳ ನಡುವಿನ ಖರೀದಿ ಸಾಮರ್ಥ್ಯದ ಸಮಾನತೆ (Purchasing Power Parity - PPP) ಮತ್ತು ಜೀವನ ವೆಚ್ಚದ (Cost of Living) ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ. ಈ ವಿಡಿಯೋ ಕೇವಲ ವೃತ್ತಿಜೀವನದ ಪ್ರಗತಿಯನ್ನು ತೋರಿಸಲು ಮಾತ್ರವೇ ಹೊರತು ಎರಡು ದೇಶಗಳ ವೇತನವನ್ನು ಹೋಲಿಕೆ ಮಾಡಲು ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಅನಿರುದ್ಧ್ ಅವರ ಈ ಪಾರದರ್ಶಕ ನಡೆಗೆ ಮತ್ತು ಪ್ರಾಮಾಣಿಕತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿಎ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಯುವ ವೃತ್ತಿಪರರಿಗೆ ಈ ವಿಡಿಯೋ ಒಂದು ದಿಕ್ಸೂಚಿಯಂತೆ ಕಾಣಿಸುತ್ತಿದ್ದು, ದೀರ್ಘಾವಧಿಯ ವೃತ್ತಿಜೀವನದ ಬೆಳವಣಿಗೆಗೆ ಶ್ರಮ ಮತ್ತು ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ಈ ಯಶೋಗಾಥೆ ಸಾಬೀತುಪಡಿಸಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/viral/aniruddh-rapol-ca-success-story-how-a-bengaluru-ca-trainee-rose-to-become-a-big-4-manager-in-sweden-gdp-u4bo4bh"/>
        </item>
        <item>
            <title><![CDATA[DK Suresh Meets Zameer: ವೈರಲ್‌ ಆಡಿಯೋ ಬೆನ್ನಲ್ಲೇ ಜಮೀರ್ ನಿವಾಸಕ್ಕೆ ಡಿಕೆ ಸುರೇಶ್ ದಿಢೀರ್ ಭೇಟಿ!]]></title>
            <link>https://kannada.asianetnews.com/gallery/politics/dk-suresh-meets-zameer-ahmed-after-viral-audio-row-bengaluru-2kl6sgf</link>
            <guid isPermaLink="true">https://kannada.asianetnews.com/gallery/politics/dk-suresh-meets-zameer-ahmed-after-viral-audio-row-bengaluru-2kl6sgf</guid>
            <pubDate>Tue, 02 Jun 2026 12:42:45 +0530</pubDate>
            <description><![CDATA[&lt;p&gt;ಸಂಪುಟ ರಚನೆ ಹೊತ್ತಲ್ಲಿ ಜಮೀರ್ ಅವರ ವಿರುದ್ಧದ ವೈರಲ್ ಆಡಿಯೋ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ ಈ ನಡುವೆ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಜಮೀರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ದಿಢೀರ್ ಭೇಟಿ ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3hxtanhheq7cf8w0zykgvv,imgname-whatsapp-image-2026-06-02-at-11.20.54-am-1780383410517.jpeg" type="image/jpeg" height="390" width="690"/>
            <content:encoded><![CDATA[&lt;p&gt;ಸಂಪುಟ ರಚನೆ ಹೊತ್ತಲ್ಲಿ ಜಮೀರ್ ಅವರ ವಿರುದ್ಧದ ವೈರಲ್ ಆಡಿಯೋ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ ಈ ನಡುವೆ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಜಮೀರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ದಿಢೀರ್ ಭೇಟಿ ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜಮೀರ್ ಅಹಮದ್(Zameer ahmed khan) ವಿರುದ್ಧದ ಆಡಿಯೋ(Audio viral) ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಕಾಂಗ್ರೆಸ್&zwnj; ನಾಯಕ ಡಿಕೆ ಸುರೇಶ್(DK Suresh) ಅವರು ಜಮೀರ್ ಅಹಮದ್ ಅವರ ನಿವಾಸಕ್ಕೆ ತೆರಳಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.&amp;nbsp;&lt;/p&gt;&lt;p&gt;ದಾವಣಗೆರೆ ಉಪಚುನಾವಣೆ ಸಂದರ್ಭಕ್ಕೆ ಸಂಬಂಧಿಸಿದೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣ(Social media)ಗಳಲ್ಲಿ ವೈರಲ್&zwnj; ಆಗಿ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ಈ ಎಲ್ಲ ಬೆಳವಣಿಗೆಗಳ ನಡುವೆ ದಿಢೀರ್ ಡಿಕೆ ಸುರೇಶ್&zwnj; ಅವರ ಭೇಟಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ಅಂದುಕೊಂಡಂತೆ ಆಗಿದ್ದರೆ ಇವತ್ತು ಜಮೀರ್ ದೆಹಲಿಗೆ ಹೊರಡಬೇಕಿತ್ತು. ಆದರೆ ಇದರ ಮಧ್ಯೆಯೇ ಆಡಿಯೋ ವೈರಲ್ ಆಗಿದ್ದು ಇದರಿಂದ ಹೈಕಮಾಂಡ್ ಮಟ್ಟದಲ್ಲಿ ಆಗುವ ಮುಜುಗರ ತಪ್ಪಿಸಲು ದೆಹಲಿಗೆ ತೆರಳದೇ ಬೆಂಗಳೂರಿನ ನಿವಾಸದಲ್ಲೇ ಉಳಿದಿರುವ ಜಮೀರ್ ಅಹಮದ್&zwnj;, ತಮ್ಮ ಸರ್ಕಾರಿ ನಿವಾಸದಲ್ಲಿ ಡಿಕೆ ಸುರೇಶ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯಲ್ಲಿ ಏನೆಲ್ಲ ವಿಚಾರಗಳು ಚರ್ಚೆಯಾಗಿವೆ ಎಂಬುದು ಬಹಿರಂಗವಾಗಿಲ್ಲ. ಆದರೆ ವಿವಾದದ ಹೊತ್ತಲ್ಲೇ ನಡೆದ ಈ ಭೇಟಿ ಕಾಂಗ್ರೆಸ್&zwnj; ಪಾಳಯದಲ್ಲಿ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣದೆ.&lt;/p&gt;&lt;img&gt;&lt;p&gt;ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕ ಜಮೀರ್ ಅಹಮದ್&zwnj; ಖಾನ್&zwnj; ವಿರುದ್ಧ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಆರೋಪ ಕೇಳಿ ಬಂದಿದೆ ಇದಕ್ಕೆ ಪೂರಕವಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್&zwnj; ಆಗಿದೆ.&lt;/p&gt;&lt;p&gt;ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;(DK Shivakumar) ಹಾಗೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddarammaiah) ಅವರು ಸಂಪುಟ ರಚನೆ ಕುರಿತು ಚರ್ಚಿಸಲು ದೆಹಲಿಗೆ ತೆರಳುವ ಕೆಲವೇ ನಿಮಿಷಗಳ ಹಿಂದೆ ಈ ಆಡಿಯೋ ಹೊರಗೆ ಬಂದಿರುವುದು ತೀವ್ರ ಚರ್ಚೆ ಹುಟ್ಟುಹಾಕಿದೆ.&lt;/p&gt;&lt;p&gt;ದಾವಣಗೆರೆ ಕಾಂಗ್ರೆಸ್ ಮುಖಂಡ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್ನಲಾದ ಮೊಹಮ್ಮದ್ ಸಿರಾಜ್&zwnj; ಜತೆ ಜಮೀರ್&zwnj; ಅಹ್ಮದ್&zwnj; ಮಾತನಾಡಿದ್ದಾರೆ ಎಂಬ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.&lt;/p&gt;&lt;img&gt;&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ವೇಳೆ ಕಾಂಗ್ರೆಸ್&zwnj; ಅಭ್ಯರ್ಥಿ ಬದಲು ಎಸ್&zwnj;ಡಿಪಿಐ ಅಭ್ಯರ್ಥಿ ಗೆಲ್ಲುವಂತೆ ಮಾಡಲು ಜಮೀರ್ ಅಹ್ಮದ್&zwnj; ಅವರು ಸಿರಾಜ್&zwnj;ಗೆ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ.&lt;/p&gt;&lt;p&gt;ಜಮೀರ್&zwnj; ಅವರು, &lsquo;ಮುಸ್ಲಿಂ ವೋಟಿಂಗ್ ಕಡಿಮೆ ಆಗಬೇಕು. ಮುಸ್ಲಿಮರು ಹೊರಗಡೆ ಬಂದರೆ ಕಾಂಗ್ರೆಸ್&zwnj;ಗೆ ಮತ ಹಾಕುತ್ತಾರೆ. ಆದಷ್ಟೂ ಮನೆಗಳಿಂದ ಹೊರ ಬಾರದಂತೆ ನೋಡಿಕೊಳ್ಳಬೇಕು. ಹೊರಗೆ ಬಂದರೆ ಕುಕ್ಕರ್&zwnj; (ಎಸ್&zwnj;ಡಿಪಿಐ ಅಭ್ಯರ್ಥಿ ಗುರುತು) ಅಥವಾ ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವಂತೆ ಸೂಚಿಸಬೇಕು&rsquo; ಎಂದಿರುವುದಾಗಿ ಆಡಿಯೋದಲ್ಲಿದೆ.&lt;/p&gt;&lt;img&gt;&lt;p&gt;ರಾಜ್ಯದ ಕೆಲ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ ಹಾಗೂ ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.&lt;/p&gt;&lt;p&gt;ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ, ಇದನ್ನು ಯಾರೂ ನಂಬಬಾರದು. ಆಡಿಯೋವನ್ನು ತನಿಖೆಗೆ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/politics/dk-suresh-meets-zameer-ahmed-after-viral-audio-row-bengaluru-2kl6sgf"/>
        </item>
        <item>
            <title><![CDATA[ಕೈ-ಕಾಲು ಕತ್ತರಿಸಿದರೆ ಮಾತ್ರ ಜನರಿಗೆ ಕಾನೂನಿನ ಬಗ್ಗೆ ಭಯ ಬರುತ್ತೆ: ಕರ್ನಾಟಕ ಹೈಕೋರ್ಟ್‌]]></title>
            <link>https://kannada.asianetnews.com/gallery/state/karnataka-hc-judge-chop-off-hands-legs-statement-accused-bail-refused-san-lru63an</link>
            <guid isPermaLink="true">https://kannada.asianetnews.com/gallery/state/karnataka-hc-judge-chop-off-hands-legs-statement-accused-bail-refused-san-lru63an</guid>
            <pubDate>Tue, 02 Jun 2026 12:24:35 +0530</pubDate>
            <description><![CDATA[&lt;p&gt;ಅ*ತ್ಯಾಚಾರ ಆರೋಪ ಎದುರಿಸುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಯ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ವಿಚಾರಣೆ ವೇಳೆ, ನ್ಯಾಯಮೂರ್ತಿಗಳು ದೇಶದ ಕಾನೂನು ವ್ಯವಸ್ಥೆಯು ದುರ್ಬಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gx5f1qbzygb2qqtyff7mb9kd,imgname-Unique-order-of-Karnataka-High-Court-Murder-accused-given-parole-1680589512063.jpg" type="image/jpeg" height="390" width="690"/>
            <content:encoded><![CDATA[&lt;p&gt;ಅ*ತ್ಯಾಚಾರ ಆರೋಪ ಎದುರಿಸುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಯ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ವಿಚಾರಣೆ ವೇಳೆ, ನ್ಯಾಯಮೂರ್ತಿಗಳು ದೇಶದ ಕಾನೂನು ವ್ಯವಸ್ಥೆಯು ದುರ್ಬಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.&lt;/p&gt;&lt;img&gt;&lt;p&gt;ಅ*ತ್ಯಾಚಾರದ ಗಂಭೀರ ಆರೋಪ ಎದುರಿಸುತ್ತಿರುವ 23 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಳ್ಳಿಹಾಕಿದೆ. ಈ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿನ ಅಪರಾಧ ನ್ಯಾಯ ವ್ಯವಸ್ಥೆ ಹಾಗೂ ನ್ಯಾಯಾಂಗದ ಕುರಿತು ದೇಶಾದ್ಯಂತ ಭಾರಿ ಚರ್ಚೆ ಮತ್ತು ಸಂವಾದಕ್ಕೆ ಕಾರಣವಾಗುವಂತಹ ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದ್ದಾರೆ.&lt;/p&gt;&lt;img&gt;&lt;p&gt;ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರು, &quot;ನಾವು ಅಪರಾಧಿಗಳನ್ನು ಕಠಿಣವಾಗಿ ನಡೆಸಿಕೊಳ್ಳದ ಕಾರಣ ಇವತ್ತು ಕಾನೂನು ತನ್ನ ಹಲ್ಲುಗಳನ್ನು ಕಳೆದುಕೊಂಡಿದೆ (Law has lost its teeth). ಒಂದು ವೇಳೆ ಅಪರಾಧ ಮಾಡಿದವರ ಕೈಯನ್ನೋ ಅಥವಾ ಕಾಲನ್ನೋ ಕತ್ತರಿಸುವಂತಹ ಕಠಿಣ ಶಿಕ್ಷೆ ಜಾರಿಗೆ ತಂದರೆ, ಆಗ ಬಹುಶಃ ಜನರು ಕಾನೂನನ್ನು ಪಾಲಿಸಲು ಮತ್ತು ಗೌರವಿಸಲು ಕಲಿಯುತ್ತಾರೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದರಿಂದಲೇ ಪ್ರತಿಯೊಬ್ಬರೂ ಇದರ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ,&quot; ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸದ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅತ್ಯಂತ ಸಹಜವಾಗಿ ಮತ್ತು ಯಾವುದೇ ಭಯವಿಲ್ಲದೆ ಅಪರಾಧಗಳು ನಡೆಯುತ್ತಿವೆ ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಭಾರತದ ಪ್ರಸಕ್ತ ಪರಿಸ್ಥಿತಿಯನ್ನು ಕೆಲವು ಪಶ್ಚಿಮ ಏಷ್ಯಾ (ಗಲ್ಫ್) ದೇಶಗಳಲ್ಲಿನ ಕಠಿಣ ಶಿಕ್ಷಾ ಪದ್ಧತಿಗಳೊಂದಿಗೆ ಹೋಲಿಸಿ ಮಾತನಾಡಿದ ಅವರು, ಅಲ್ಲಿನ ಕಠಿಣ ಕಾನೂನುಗಳು ಅಪರಾಧದ ಪ್ರಮಾಣವನ್ನು ಹೇಗೆ ತಡೆಗಟ್ಟುತ್ತವೆ ಎಂಬುದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.&lt;/p&gt;&lt;img&gt;&lt;p&gt;ವಿಚಾರಣೆ ವೇಳೆ ಪ್ರತಿವಾದಿ (ಆರೋಪಿ) ಪರ ವಕೀಲರು ವಾದ ಮಂಡಿಸಿ, 'ತಮ್ಮ ಕಕ್ಷಿದಾರ ತಾನು ಮಾಡದ ಅಪರಾಧಕ್ಕಾಗಿ ಈಗಾಗಲೇ ಸುಮಾರು ಎರಡು ತಿಂಗಳಿನಿಂದ ಜೈಲಿನಲ್ಲಿದ್ದಾನೆ. ಇದಲ್ಲದೆ ಈ ಆರೋಪಗಳು ಸುಮಾರು ಮೂರು ವರ್ಷಗಳಷ್ಟು ಹಳೆಯದಾದ ಘಟನೆಗೆ ಸಂಬಂಧಿಸಿವೆ..' ಎಂದು ಕೋರಿದರು. ಇದಕ್ಕೆ ತಕ್ಷಣವೇ ಕಟುವಾದ ಶೈಲಿಯಲ್ಲೇ ತಿರುಗೇಟು ನೀಡಿದ ನ್ಯಾಯಾಧೀಶರು, 'ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು (If you eat salt, you got to drink water). ಅವನು ಇನ್ನೊಂದು ನಾಲ್ಕೈದು ದಿನ ಜೈಲಿನಲ್ಲೇ ಇರಲಿ, ಜೈಲು ವಾಸಕ್ಕೆ ಒಗ್ಗಿಕೊಳ್ಳಲಿ. ಮುಂದೆ ಒಂದು ವೇಳೆ ಅಪರಾಧ ಸಾಬೀತಾಗಿ ಶಿಕ್ಷೆಯಾದರೆ ಮತ್ತೆ ಅಲ್ಲಿಗೇ ಹೋಗಬೇಕಾಗುತ್ತದೋ ಯಾರಿಗೆ ಗೊತ್ತು!&quot; ಎಂದರು.&lt;/p&gt;&lt;img&gt;&lt;p&gt;ಪ್ರಕರಣದ ತನಿಖೆ ನಡೆಸಿರುವ ಪೊಲೀಸರ ಪ್ರಕಾರ, ಆರೋಪಿತ ವಿದ್ಯಾರ್ಥಿಯು ಸೆಪ್ಟೆಂಬರ್ 12, 2023 ರಂದು ತನ್ನ ಹಳೆಯ ಸಹಪಾಠಿಯಾಗಿದ್ದ ಯುವತಿಯನ್ನು ನಂಬಿಸಿ ಅಪಾರ್ಟ್&zwnj;ಮೆಂಟ್&zwnj;ವೊಂದಕ್ಕೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಸಂತ್ರಸ್ತೆ ಮೊದಲು ನವದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗವನ್ನು (NCW) ಸಂಪರ್ಕಿಸಿ ದೂರು ನೀಡಿದ ಬಳಿಕವಷ್ಟೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯು ಏಪ್ರಿಲ್ ಆರಂಭದಿಂದಲೂ ನ್ಯಾಯಾಂಗ ಬಂಧನದಲ್ಲಿದ್ದಾನೆ. ಸದ್ಯ ಹೈಕೋರ್ಟ್ ಈ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 8 ಕ್ಕೆ ಮುಂದೂಡಿದೆ.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/karnataka-hc-judge-chop-off-hands-legs-statement-accused-bail-refused-san-lru63an"/>
        </item>
        <item>
            <title><![CDATA[Cylinder Delivery New Rules : ಕಮರ್ಷಿಯಲ್ ಸಿಲಿಂಡರ್ ನಿಯಮದಲ್ಲಿ ಬದಲಾವಣೆ, ಗ್ರಾಹಕರು ಮಾಡ್ಬೇಕು ಈ ಕೆಲ್ಸ]]></title>
            <link>https://kannada.asianetnews.com/gallery/business/bharat-gas-agency-will-deliver-commercial-cylinder-now-with-dac-verification-n9612cg</link>
            <guid isPermaLink="true">https://kannada.asianetnews.com/gallery/business/bharat-gas-agency-will-deliver-commercial-cylinder-now-with-dac-verification-n9612cg</guid>
            <pubDate>Tue, 02 Jun 2026 12:16:04 +0530</pubDate>
            <description><![CDATA[&lt;p&gt;ನೀವು ಕಮರ್ಷಿಯಲ್ ಸಿಲಿಂಡರ್ ಖರೀದಿ ಮಾಡ್ತಿದ್ದರೆ ನಿಮಗೆ ಮುಖ್ಯ ಮಾಹಿತಿ ಒಂದಿದೆ. ಕಮರ್ಷಿಯಲ್ ಸಿಲಿಂಡರ್ ವಿತರಣೆಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಸಿಲಿಂಡರ್ ವಂಚನೆ ತಪ್ಪಿಸಲು ಕಂಪನಿಗಳು ಮಹತ್ವದ ಹೆಜ್ಜೆ ಇಟ್ಟಿವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3gzayxjhq3h1151e5mhv4y,imgname-cylinder-delivery-new-rules-1780382411741.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ಕಮರ್ಷಿಯಲ್ ಸಿಲಿಂಡರ್ ಖರೀದಿ ಮಾಡ್ತಿದ್ದರೆ ನಿಮಗೆ ಮುಖ್ಯ ಮಾಹಿತಿ ಒಂದಿದೆ. ಕಮರ್ಷಿಯಲ್ ಸಿಲಿಂಡರ್ ವಿತರಣೆಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಸಿಲಿಂಡರ್ ವಂಚನೆ ತಪ್ಪಿಸಲು ಕಂಪನಿಗಳು ಮಹತ್ವದ ಹೆಜ್ಜೆ ಇಟ್ಟಿವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ವಾಣಿಜ್ಯ ಸಿಲಿಂಡರ್ ಗಳ ವಿತರಣೆಗೆ ಸಂಬಂಧಿಸಿದಂತೆ LPG ಬಳಕೆದಾರರಿಗೆ ಹೊಸ ನಿಯಮವನ್ನು ಪರಿಚಯಿಸಲಾಗಿದೆ. ಭಾರತ್ ಗ್ಯಾಸ್ ಏಜೆನ್ಸಿ ವಾಣಿಜ್ಯ ಸಿಲಿಂಡರ್ ವಿತರಣೆಯ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮದ ಪ್ರಕಾರ, ಭಾರತ್ ಗ್ಯಾಸ್ ಏಜೆನ್ಸಿ ಈಗ ವಾಣಿಜ್ಯ ಸಿಲಿಂಡರ್ಗಳನ್ನು DAC ಕೋಡ್ನೊಂದಿಗೆ ತಲುಪಿಸಲಿದೆ. ಸಿಲಿಂಡರ್ ಬುಕ್ ಮಾಡಿದ ನಂತ್ರ, ಕೋಡ್ ಬರುತ್ತೆ. ನೀವು ಈ ಕೋಡ್ ಅನ್ನು ಡೆಲಿವರಿ ಸಮಯದಲ್ಲಿ ಏಜೆಂಟ್ಗೆ ಒದಗಿಸಿದ್ರೆ ಮಾತ್ರ ಅವರು ನಿಮಗೆ ವಾಣಿಜ್ಯ ಸಿಲಿಂಡರ್ ನೀಡಲಿದ್ದಾರೆ. ಇಲ್ಲ ಅಂದ್ರೆ ನಿಮಗೆ ಸಿಲಿಂಡರ್ ಸಿಗೋದಿಲ್ಲ.&lt;/p&gt;&lt;img&gt;&lt;p&gt;DAC ಕೋಡ್ ಒಂದು ರೀತಿಯ OTP ಆಗಿದೆ. ಇದು ಕಮರ್ಷಿಯಲ್ ಸಿಲಿಂಡರ್ ಗಳಿಗೆ ಇನ್ಮುಂದೆ ಕಡ್ಡಾಯವಾಗಲಿದೆ. ಕಂಪನಿಯ ಹೊಸ ನಿಯಮವು ತಪ್ಪು ವಿತರಣೆ, ವಂಚನೆ ಮತ್ತು ಗ್ರಾಹಕರ ದೂರುಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಅಂಗಡಿಗಳಿಗೆ ಈ ಕೋಡ್ ಕಡ್ಡಾಯವಾಗಿದೆ.&lt;/p&gt;&lt;img&gt;&lt;p&gt;ಭಾರತ್ ಗ್ಯಾಸ್ ಏಜೆನ್ಸಿಯ ಪ್ರಕಾರ, ಗ್ರಾಹಕರು ಸಿಲಿಂಡರ್ ವಿತರಣೆಯ ನಂತರ ಕೋಡ್ ಹಂಚಿಕೊಳ್ಳಬೇಕು. ಗ್ರಾಹಕರ ಸುರಕ್ಷತೆಗಾಗಿ ಈ ಕೋಡ್ ನಿರ್ಣಾಯಕವಾಗಿದೆ. ಕೋಡ್ ಅನ್ನು ಮೊದಲೇ ಹಂಚಿಕೊಂಡ್ರೆ ಮೋಸವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ, ಮೊದಲು ಸಿಲಿಂಡರ್ ಅನ್ನು ಪರಿಶೀಲಿಸಿ ಮತ್ತು ನಂತರ DAC ಹಂಚಿಕೊಳ್ಳಿ.&lt;/p&gt;&lt;img&gt;&lt;p&gt;ಕಂಪನಿಯ ಪ್ರಕಾರ, ಹೊಸ DAC ವ್ಯವಸ್ಥೆಯಡಿಯಲ್ಲಿ, ಏಜೆಂಟ್ ಸಿಲಿಂಡರ್ ಡೆಲಿವರಿ ಮಾಡಿದ ನಂತ್ರ ಗ್ರಾಹಕರಿಗೆ ಡಿಜಿಟಲ್ ನಗದು ಮೆಮೊವನ್ನು ಸಹ ಒದಗಿಸುತ್ತಾರೆ. ಇದು ಸಿಲಿಂಡರ್ ವಿತರಣೆಯ ಆನ್ಲೈನ್ ರೆಕಾರ್ಡ್ ಇರುತ್ತದೆ. ಪೇಮೆಂಟ್ ಹಾಗೂ ಡೆಲಿವರಿ ಮಾಹಿತಿ ಮೊಬೈಲ್ನಲ್ಲಿ ಲಭ್ಯವಿರುತ್ತವೆ. ಇದ್ರಿಂದಾಗಿ ನೀವು ಭೌತಿಕ ಬಿಲ್ ಇಟ್ಟುಕೊಳ್ಳುವ ಅಗತ್ಯವಿಲ್ಲ.&lt;/p&gt;&lt;img&gt;&lt;p&gt;ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡುವಂತೆ ಕಂಪನಿ ಸೂಚನೆ ನೀಡಿದೆ. ಒಂದ್ವೇಳೆ ನಂಬರ್ ಅನ್ನು ನಿಷ್ಕ್ರಿಯಗೊಳಿಸಿದ್ದರೆ ಅದನ್ನು ಮತ್ತೆ ಸಕ್ರಿಯಗೊಳಿಸಿ. DAC ಕೋಡ್ ಅನ್ನು ಯಾವುದೇ ಅಪರಿಚಿತ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ. ಸಿಲಿಂಡರ್ ಸ್ವೀಕರಿಸಿದ ನಂತರವೇ ಕೋಡ್ ಹಂಚಿಕೊಳ್ಳಿ.&lt;/p&gt;]]></content:encoded>
            <category>news</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/business/bharat-gas-agency-will-deliver-commercial-cylinder-now-with-dac-verification-n9612cg"/>
        </item>
        <item>
            <title><![CDATA[ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು  ಗೊತ್ತಾ?]]></title>
            <link>https://kannada.asianetnews.com/politics/the-power-behind-dk-shivakumar-the-story-of-mother-gauramma-gdp-videoshow-sorkdtg</link>
            <guid isPermaLink="true">https://kannada.asianetnews.com/politics/the-power-behind-dk-shivakumar-the-story-of-mother-gauramma-gdp-videoshow-sorkdtg</guid>
            <pubDate>Tue, 02 Jun 2026 11:58:53 +0530</pubDate>
            <description><![CDATA[ಮುಖ್ಯಮಂತ್ರಿ ಸ್ಥಾನದತ್ತ ಸಾಗುತ್ತಿರುವ ಡಿಕೆ ಶಿವಕುಮಾರ್ ಅವರ ರಾಜಕೀಯ ಶಕ್ತಿಯ ಹಿಂದಿರುವ ರಹಸ್ಯ ಅವರ ತಾಯಿ ಗೌರಮ್ಮ. ಮಗನ ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತು, ಆತನ ಯಶಸ್ಸಿಗಾಗಿ ಅವರು ಮಾಡಿದ ತ್ಯಾಗ ಮತ್ತು ಹರಕೆಯ ಕಥೆಯನ್ನು ಈ ಲೇಖನ ವಿವರಿಸುತ್ತದೆ.]]></description>
            <media:content url="https://geo.dailymotion.com/player/x1tbu.html?video=xacqe6e" medium="video" height="768" width="1024"/>
            <content:encoded><![CDATA[&lt;p&gt;ಇಡೀ ರಾಜ್ಯ ರಾಜಕಾರಣ ಈಗ ಹೊಸದೊಂದು ಬದಲಾವಣೆಯ ಕಡೆ ಹೆಜ್ಜೆ ಹಾಕ್ತಾ ಇದೆ.. ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರೋದಕ್ಕೆ, ಡಿಕೆ ಶಿವಕುಮಾರ್ ಸನ್ನದ್ಧರಾಗ್ತಾ ಇದಾರೆ.. ಇವರ ಬಗ್ಗೆ ಈಗಾಗ್ಲೇ ಸಾಕಷ್ಟು ಮಾತಾಡಿಯಾಗಿದೆ.. ಆದ್ರೆ ಈಗ ಮಾತಾಡ್ಬೇಕಿರೋದು, ಈ ಕನಪುರದ ಬಂಡೆ ಹಿಂದಿರೋ ಅಗೋಚರ ಶಕ್ತಿಯ ಬಗ್ಗೆ.. ಆ ಶಕ್ತಿಯ ರಹಸ್ಯದ ಬಗ್ಗೆ.. ಈ ಪೊಲಿಟಿಕಲ್ ಪವರ್ ಸ್ಟಾರ್ ಹಿಂದಿರೋ ಮೆಗಾ ಪವರ್ ಯಾರು ಗೊತ್ತಾ? ಡಿಕೆಶಿ ಅವರ ತಾಯಿ.. ಗೌರಮ್ಮ.. ಅದ್ ಹೇಗೆ? ಮಗನಿಗಾಗಿ ತಾಯಿ ಪಟ್ಟ ಆ ಕಷ್ಟಗಳೇನು? ಆ ತ್ಯಾಗದ ಕತೆ ಏನು?&lt;/p&gt;&lt;p&gt;ಡಿಕೆ ಶಿವಕುಮಾರ್ ಅವರ ತಾಯಿ, ಮಗ ಗೆದ್ದು ಬಂದಾಗ ಹಣೆಗೆ ತಿಲಕವಿಟ್ಟವರಲ್ಲ.. ಹೆತ್ತ ಮಗ ಕಷ್ಟದಲ್ಲಿದಾನೆ ಅಂತ ಗೊತ್ತಾದಾಗ, ತಾವೇ ಧಾವಿಸಿ ಬಂದು ಸಹಾಯ ಮಾಡಿದವರು.. ಮಗನ ಎದುರು ಸವಾಲು ಹಾಕಿದವರಿಗೆ ಉತ್ತರ ಕೊಟ್ಟವರು.. ಈ ಮಾತಿಗೆ ಸಾಕ್ಷೀಭೂತವಾದಂಥ ಘಟನೆ ಒಂದು ನಡೀತು.. ಅದೇನು ಗೊತ್ತಾ?&lt;/p&gt;&lt;p&gt;ಅಂತೂ ಆ ತಾಯಿಯ ಆಶೀರ್ವಾದದ ಫಲವಾಗಿ, ಆ ತಾಯಿ ಕಟ್ಟಿದ ಹರಕೆಯ ಫಲವಾಗಿ, ಡಿಕೆ ಶಿವಕುಮಾರ್ ಜೀವಮಾನದ ಕನಸು ನನಸಾಗ್ತಾ ಇದೆ.. ಇಲ್ಲಿಂದ ಮುಂದೇನು? ನೋಡೋಣ&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/politics/the-power-behind-dk-shivakumar-the-story-of-mother-gauramma-gdp-videoshow-sorkdtg"/>
        </item>
        <item>
            <title><![CDATA[Viral: ಹಗಲು ಆಫೀಸ್, ರಾತ್ರಿ ಬೈಕ್ ಟ್ಯಾಕ್ಸಿ! ಜೊತೆಗೆ PhD, ಅಡುಗೆ!  ‘ಟೈಮೇ ಸಿಗ್ತಿಲ್ಲರೀ..' ಅನ್ನೋರು ಈ ಯುವಕನ  ವಿಡಿಯೋ ನೋಡಲೇಬೇಕು!]]></title>
            <link>https://kannada.asianetnews.com/viral/a-man-name-deepak-pandey-juggles-9-to-5-job-bike-taxi-and-phd-study-in-viral-story-rav/articleshow-bn86mtg</link>
            <guid isPermaLink="true">https://kannada.asianetnews.com/viral/a-man-name-deepak-pandey-juggles-9-to-5-job-bike-taxi-and-phd-study-in-viral-story-rav/articleshow-bn86mtg</guid>
            <pubDate>Tue, 02 Jun 2026 11:42:05 +0530</pubDate>
            <description><![CDATA[&lt;p&gt;ಒಂದೇ ಶಿಫ್ಟ್&zwnj;ಗೆ ಹೈರಾಗಿಹೋಗುವ ಜನರ ಮಧ್ಯೆ ಇಲ್ಲೊಬ್ಬ ಬೆಳಗ್ಗೆಯಿಂದ ಸಂಜೆವರೆಗೆ ಆಫೀಸ್ ಕೆಲಸ, ರಾತ್ರಿ ಬೈಕ್ ಟ್ಯಾಕ್ಸಿ ಡ್ರೈವರ್, ಇದರ ಜೊತೆಗೆ ಪಿಎಚ್&zwnj;ಡಿ, ಅಡುಗೆ, ವಿಡಿಯೋ ಎಡಿಟಿಂಗ್! ಹೀಗೆ ಒಂದೇ ಸಮನೆ ಹಲವು ಕೆಲಸ ಮಾಡುತ್ತಾ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾನೆ ಈ ಯುವಕ! ಫುಲ್ ಸ್ಟೋರಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt36r1xjxt6r6eqk3f07zb3b,imgname-new-project---2026-06-02t091104.436-1780371687346.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿಮ್ಮ ಸುತ್ತಮುತ್ತಲಿನ ಜನರು, ಸಹೋದ್ಯೋಗಿಗಳನ್ನ ನೋಡಿರಬಹುದು. ಅವರು ಮಾಡುತ್ತಿರೋದು ಒಂದೇ ಶಿಫ್ಟ್ ಕೆಲಸ ಆದ್ರೂ 'ಯಾವುದಕ್ಕೂ ಟೈಮೇ ಇಲ್ಲ' ಅಂತಾ ದೂರುತ್ತಲೇ ಇರುತ್ತಾರೆ. ಮನಸು ಮಾಡಿದರೆ ಎಲ್ಲದಕ್ಕೂ ಸಮಯ ಸಿಗುತ್ತೆ ಅನ್ನೋದನ್ನು ಸಾಬೀತುಪಡಿಸುವ ವಿಡಿಯೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ&lt;/p&gt;&lt;p&gt;ಒಂದೇ ಒಂದೇ ಶಿಫ್ಟ್&zwnj; ಸುಸ್ತಾಗುವ, ಟೈಮೇ ಸಿಗ್ತಿಲ್ಲ ಅಂತಾ ಬಿಲ್ಡಪ್ ಕೊಡುವವರು ನೀವಾಗಿದ್ರೆ ಈ ವಿಡಿಯೋ ನೋಡಲೇಬೇಕು. ಈ ಹುಡುಗ ಬೆಳಗ್ಗೆ 9ರಿಂದ 5ರವರೆಗೆ ಆಫೀಸ್ ಕೆಲಸ ಮಾಡ್ತಾನೆ. ಆಫೀಸ್&zwnj;ನಿಂದ ಬಂದು ಮನೆಯಲ್ಲೇನೂ ಮಲಗೋಲ್ಲ. ಬಂದವನೇ ಬೈಕ್ ಏರಿ ರಾತ್ರಿ ಹೊತ್ತು ಬೈಕ್ ಟ್ಯಾಕ್ಸಿ ಡ್ರೈವರ್ ಆಗ್ತಾನೆ. ಇದರ ಮಧ್ಯೆಯೇ ಸಮಯ ಹೊಂದಿಸಿಕೊಂಡು ಪಿಎಚ್&zwnj;ಡಿನೂ ಮಾಡ್ತಿದ್ದಾನೆ, ಹಸಿವಾದಾಗ ಹೊರಗಡೆ ತಿನ್ನದೇ ಮೂರು ಹೊತ್ತು ಅಡುಗೆನೂ ಮಾಡ್ಕೊಳ್ತಾನೆ, ಇಷ್ಟು ಸಾಲದಂತೆ ವಿಡಿಯೋ ಎಡಿಟಿಂಗ್...! ಒಂದಲ್ಲ ಎರಡಲ್ಲ ಹೀಗೆ ಒಂಭತ್ತಕ್ಕೂ ಹೆಚ್ಚು ಕೆಲಸಗಳನ್ನು ಒಟ್ಟಿಗೆ ನಿಭಾಯಿಸುತ್ತಿರುವ ಯುವಕನೊಬ್ಬ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾನೆ. ದೀಪಕ್ ಪಾಂಡೆ(Deepak pandey) ಎಂಬ ಯುವಕ ತನ್ನ ಇನ್&zwnj;ಸ್ಟಾಗ್ರಾಮ್&zwnj;(Instagram)ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಬೆಳಗ್ಗೆ 9ರಿಂದ 5ರ ಕೆಲಸದ ನಂತರ ಬೇರೆ ಯಾವುದಕ್ಕೂ ಎನರ್ಜಿಯೇ ಇರಲ್ಲ' ಇರೋದು ಒಂದು ಶಿಫ್ಟ್ ಕೆಲಸ ಮಾಡಿದ್ರೆ ಸಾಕಪ್ಪ ಅಂದುಕೊಂಡು, ಜೀವನದಲ್ಲಿ ಖುಷಿಯೇ ಇಲ್ಲದೆ ಬದುಕುತ್ತಿದ್ದವನು ಇಂದು ಅದೇ ವ್ಯಕ್ತಿ 9-5 ಕೆಲಸದ ನಂತರ ಸಂಜೆ 5ರಿಂದ ರಾತ್ರಿ 11ರವರೆಗೆ ಬೈಕ್ ಟ್ಯಾಕ್ಸಿ ಓಡಿಸುತ್ತಾನೆ, ತನಗಾಗಿ ಅಡುಗೆ ಮಾಡಿಕೊಳ್ಳುತ್ತಾನೆ, ವಿಡಿಯೋ ಎಡಿಟಿಂಗ್ ಮಾಡುತ್ತಾನೆ, ಜೊತೆಗೆ ಪಿಎಚ್&zwnj;ಡಿ ಕೂಡ ಮಾಡುತ್ತಿದ್ದಾನೆ. ಇಷ್ಟೆಲ್ಲಾ ಮಾಡಿದರೂ ಅವನು ಇಂದು ತುಂಬಾ ಖುಷಿಯಾಗಿದ್ದಾನೆ. ಆ ಖುಷಿಯಾಗಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ಅದು ನಾನೇ ಎಂದು ಅವನೇ ಹೇಳಿಕೊಂಡು ನಗುತ್ತಾನೆ!&lt;/p&gt;&lt;h2&gt;ನಾನೀಗ ಮೊದಲಿಗಿಂತಲೂ ಖುಷಿಯಾಗಿದ್ದೇನೆ:&lt;/h2&gt;&lt;p&gt;ನಾನೀಗ ಮೊದಲಿಗಿಂತಲೂ ಖುಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಅದಕ್ಕೆ ಕಾರಣವೂ ಕೊಟ್ಟಿದ್ದಾನೆ. 'ನಾನೀಗ ಯಾಕೆ ಖುಷಿಯಾಗಿದ್ದೇನೆ ಗೊತ್ತಾ? ನನ್ನ ಜೀವನದಲ್ಲಿ ಮೊದಲ ಬಾರಿಗೆ, ನನ್ನಲ್ಲಿ ಎಷ್ಟೊಂದು ಸಾಮರ್ಥ್ಯವಿದೆ ಎಂಬುದು ಅರಿವಾಯಿತು.'ನಾಲ್ಕು ಜನ ಏನು ಅಂತಾರೋ' 'ನನ್ನಿಂದ ಈ ಕೆಲಸ ಸಾಧ್ಯವಿಲ್ಲ', ಅಥವಾ 'ಹೊಸದಾಗಿ ಏನಾದರೂ ಮಾಡಬೇಕೆಂದರೆ ಈಗಿನ ಕೆಲಸ ಬಿಡಬೇಕು' ಎಂಬ ಭಯದಿಂದ ನನ್ನ ಸಾಮರ್ಥ್ಯವನ್ನು ನಾನು ಗುರುತಿಸಿರಲಿಲ್ಲ. ಆದರೆ, ನಾನು ನಿಧಾನವಾಗಿ ಬದಲಾಗಲು ಶುರುಮಾಡಿದೆ. ಮೊದಲು ಪಿಎಚ್&zwnj;ಡಿಗೆ ಸೇರಿಕೊಂಡೆ, ನಂತರ ಬೈಕ್ ಟ್ಯಾಕ್ಸಿ ಓಡಿಸಲು ಶುರುಮಾಡಿದೆ, ಆಮೇಲೆ ಕಂಟೆಂಟ್ ಕ್ರಿಯೇಷನ್&zwnj;ಗೂ ಕಾಲಿಟ್ಟೆ. ಇಂದು ನಾನು ಎಲ್ಲವನ್ನೂ ಒಟ್ಟಿಗೆ ನಿಭಾಯಿಸಬಲ್ಲೆ' ಎಂಬ ಆತ್ಮವಿಶ್ವಾಸ ಬಂದಿದೆ ಎಂದು ಪಾಂಡೆ ಬರೆದುಕೊಂಡಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಈ ಪೋಸ್ಟ್ ನೋಡಿ&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;ದೀಪಕ್ ಪಾಂಡೆ (@trippypandey03) ಹಂಚಿಕೊಂಡ ಪೋಸ್ಟ್&lt;/p&gt;&lt;p&gt;&lt;/p&gt;&lt;p&gt;ಇಷ್ಟು ಓದಿದ ಮೇಲೆ ನಿಮಗೂ 'ನನಗೇಕೆ ಇದು ಸಾಧ್ಯವಿಲ್ಲ? ನಾನು ಯಾಕೆ ಮಾಡಬಾರದು ಎಂದು ಅನಿಸಿರುತ್ತದಲ್ಲವೇ? ಖಂಡಿತ, ನಿಮ್ಮಲ್ಲೂ ಸಾಮರ್ಥ್ಯವಿದೆ. ನಿಮಗೂ ಏನಾದರೂ ಪ್ಯಾಷನ್ ಇದ್ದರೆ, ಅದಕ್ಕಾಗಿ ಈಗಲೇ ಕೆಲಸ ಶುರು ಮಾಡಿ. ಹೊಸ ಕೆಲಸಕ್ಕಾಗಿ ಈಗ ಮಾಡುತ್ತಿರುವ ಕೆಲಸ, ಓದು ನಿಲ್ಲಿಸಬೇಕಾಗಿಲ್ಲ. ಕಷ್ಟಗಳು, ಸವಾಲುಗಳು ಬರುತ್ತವೆ, ಆದರೆ ನಿಮ್ಮ ಸಾಮರ್ಥ್ಯವನ್ನು ನೀವು ಅರಿತುಕೊಳ್ಳಲು ಶುರು ಮಾಡಿದಾಗ, ಆ ಕಠಿಣ ಪರಿಶ್ರಮದಲ್ಲೇ ನಿಮಗೆ ಸಂತೋಷ ಸಿಗುತ್ತದೆ. ಈ ಪೋಸ್ಟ್&zwnj;ಗೆ ಅನೇಕರು ಕಾಮೆಂಟ್ ಮಾಡಿದ್ದು, 'You are truly inspirational' ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/viral/a-man-name-deepak-pandey-juggles-9-to-5-job-bike-taxi-and-phd-study-in-viral-story-rav/articleshow-bn86mtg"/>
        </item>
        <item>
            <title><![CDATA[ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?]]></title>
            <link>https://kannada.asianetnews.com/politics/mylara-linga-blessings-dk-shivakumar-cm-yoga-story-suh-videoshow-pceqxzp</link>
            <guid isPermaLink="true">https://kannada.asianetnews.com/politics/mylara-linga-blessings-dk-shivakumar-cm-yoga-story-suh-videoshow-pceqxzp</guid>
            <pubDate>Tue, 02 Jun 2026 11:16:10 +0530</pubDate>
            <description><![CDATA[&lt;p&gt;ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರುವ ಹಾದಿಯಲ್ಲಿ ಹೂವಿನಹಡಗಲಿಯ ಮೈಲಾರಲಿಂಗನ ಕೃಪೆ ಮತ್ತು ದೈವಾನುಗ್ರಹದ ಕಥೆ ಮತ್ತೆ ಚರ್ಚೆಗೆ ಬಂದಿದೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xacps1c" medium="video" height="768" width="1024"/>
            <content:encoded><![CDATA[&lt;p&gt;ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರುವ ಹಾದಿಯಲ್ಲಿ ಹೂವಿನಹಡಗಲಿಯ ಮೈಲಾರಲಿಂಗನ ಕೃಪೆ ಮತ್ತು ದೈವಾನುಗ್ರಹದ ಕಥೆ ಮತ್ತೆ ಚರ್ಚೆಗೆ ಬಂದಿದೆ. ಮೈಲಾರ ದೇವಸ್ಥಾನದ ಗೋಪುರದ ಮೇಲೆ ಹೆಲಿಕಾಪ್ಟರ್ ಹಾರಿಸಿದ ಘಟನೆ ಬಳಿಕ ದೇವರ ಮುನಿಸಿಗೆ ಗುರಿಯಾಗಿದ್ದರು ಎಂಬ ನಂಬಿಕೆ ಭಕ್ತರಲ್ಲಿ ಇದೆ. ನಂತರ 1 ಕೆಜಿ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆ ನೀಡಿ ಕ್ಷಮೆ ಕೋರಿದ ಬಳಿಕ ಸಂಕಷ್ಟಗಳು ದೂರವಾಗಿ ದೈವ ಕೃಪೆ ದೊರೆಯಿತು ಎನ್ನಲಾಗುತ್ತಿದೆ. ಮೈಲಾರ ಕಾರ್ಣಿಕದ &ldquo;ತುಂಬಿದ ಕೊಡ ತುಳುಕಿತಲೇ ಪರಾಕ್&rdquo; ಎಂಬ ನುಡಿ ಡಿಕೆ ಅವರ ಮುಖ್ಯಮಂತ್ರಿ ಯೋಗದ ಸಂಕೇತವೆಂದು ಭಕ್ತರು ವಿಶ್ಲೇಷಿಸುತ್ತಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Sushma Hegde</dc:creator>
            <atom:link href="https://kannada.asianetnews.com/politics/mylara-linga-blessings-dk-shivakumar-cm-yoga-story-suh-videoshow-pceqxzp"/>
        </item>
        <item>
            <title><![CDATA[ಕಾರ್‌ನಲ್ಲಿ ಗರ್ಭಿಣಿ ಪತ್ನಿಯೇ ಇರಲಿಲ್ಲ; ರಸ್ತೆಮಧ್ಯೆ ಪ್ರತಿಭಟಿಸಿದ ವ್ಯಕ್ತಿಯ ಡ್ರಾಮಾ ಬಯಲು]]></title>
            <link>https://kannada.asianetnews.com/gallery/viral/bengaluru-drama-unfolds-as-man-protests-in-the-middle-of-the-road-pregnant-wife-not-in-car-mrq-kz1frvh</link>
            <guid isPermaLink="true">https://kannada.asianetnews.com/gallery/viral/bengaluru-drama-unfolds-as-man-protests-in-the-middle-of-the-road-pregnant-wife-not-in-car-mrq-kz1frvh</guid>
            <pubDate>Tue, 02 Jun 2026 11:13:29 +0530</pubDate>
            <description><![CDATA[&lt;p&gt;ರಾಜ್ಯಪಾಲರ ಮಾರ್ಗದಲ್ಲಿ ವಾಹನ ತಡೆದಿದ್ದಕ್ಕೆ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ್ದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಎಂದು &amp;nbsp;ಹೇಳಲಾಗಿತ್ತು. ಆದರೆ, ಪೊಲೀಸ್ ತನಿಖೆಯಿಂದ ಕಾರಿನಲ್ಲಿ ಪತ್ನಿ ಇರಲಿಲ್ಲ ಎಂಬ ಸತ್ಯಾಂಶ ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3dd0xr8tp2s7dnpggmz8ww,imgname-bengaluru--5--1780378665912.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯಪಾಲರ ಮಾರ್ಗದಲ್ಲಿ ವಾಹನ ತಡೆದಿದ್ದಕ್ಕೆ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ್ದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಎಂದು &amp;nbsp;ಹೇಳಲಾಗಿತ್ತು. ಆದರೆ, ಪೊಲೀಸ್ ತನಿಖೆಯಿಂದ ಕಾರಿನಲ್ಲಿ ಪತ್ನಿ ಇರಲಿಲ್ಲ ಎಂಬ ಸತ್ಯಾಂಶ ಬಯಲಾಗಿದೆ.&lt;/p&gt;&lt;img&gt;&lt;p&gt;ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಅಗಿತ್ತು. ಈ ವಿಡಿಯೋ ವೈರಲ್ ಬಳಿಕ, ವಿಐಪಿ ಸಂಸ್ಕೃತಿ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ ಇದೀಗ ಪೊಲೀಸ್ ತನಿಖೆ ವೇಳೆ ವ್ಯಕ್ತಿಯ ಹೈಡ್ರಾಮಾ ಬಯಲಾಗಿದೆ.&lt;/p&gt;&lt;img&gt;&lt;p&gt;ರಾಜ್ಯಪಾಲರ ಮಾರ್ಗದಲ್ಲಿ ವಾಹನಗಳನ್ನು ತಡೆಹಿಡಿಯಲಾಗಿತ್ತು. ಇದರಿಂದ ಕೋಪಗೊಂಡ ಮೋಹಿತ್ ಎಂಬಾತ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ್ದನು. ಈ ಮೋಹಿತ್ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ವೈರಲ್ ಆಗಿತ್ತು. ಆದ್ರೆ ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದ್ದು, ಮೋಹಿತ್ ಕಾರ್&zwnj;ನಲ್ಲಿ ಆತನ ಪತ್ನಿಯೇ ಇರಲಿಲ್ಲ ಎಂದು ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ಪತ್ರಿಭಟನೆ ಕುಳಿತ ವ್ಯಕ್ತಿ ಜೊತೆ ಗರ್ಭಿಣಿ ಪತ್ನಿ ಇರಲಿಲ್ಲ. ಮನೆಗೆ ಹೋಗಬೇಕಿದ್ದ ಮೋಹಿತ್ ಅವಸರದಲ್ಲಿ ಪತ್ನಿ ಗರ್ಭಿಣಿ ಕಾರಿನಲ್ಲಿ ಇದ್ದಾಳೆ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದನು. ಈ ಘಟನೆಯನ್ನು ಸಾರ್ವಜನಿಕರು ಮೊಬೈಲ್&zwnj;ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಬೆನ್ನಲ್ಲೇ ರಸ್ತೆಯಲ್ಲಿ ಕುಳಿತು ಪತ್ರಿಭಟನೆ ನಡೆಸಿದ್ದ ಮೋಹಿತ್&zwnj;ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.&lt;/p&gt;&lt;img&gt;&lt;p&gt;ಹೆಚ್&zwnj;ಎಎಲ್ ಪೊಲೀಸರ ವಿಚಾರಣೆ ವೇಳೆ ಮನೆಗೆ ತುರ್ತಾಗಿ ಹೋಗಬೇಕಿದ್ದೆ.ಮನೆಯಲ್ಲಿದ್ದ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಮನೆಯಲ್ಲಿ ಗರ್ಭಿಣಿ ಪತ್ನಿ ಇರುವ ಒತ್ತಡದಲ್ಲಿದ್ದರಿಂದ ನಾನು ರಸ್ತೆಯಲ್ಲಿ ಕುಳಿತು ಪತ್ರಿಭಟನೆ ನಡೆಸಿದೆ. ಪೊಲೀಸರ ಮೇಲೆ ವೈಯುಕ್ತಿಕ ಟಾರ್ಗೆಟ್ ಇಲ್ಲ ಎಂದು ಮೋಹಿತ್ ಹೇಳಿಕೆ ದಾಖಲಿಸಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಲವ್ ಮಾಕ್ಟೇಲ್ ಸಿನಿಮಾ ಕಥೆ ಹೇಳಿ ನರ್ಸ್&zwnj;ಗೆ ತಾಳಿ ಕಟ್ಟಿದ ಭೂಪ&zwnj;; ವಿದೇಶದಿಂದ ಬರುತ್ತಿದ್ದಂತೆ ಶಾಕ್!&lt;/strong&gt;&lt;/p&gt;&lt;img&gt;&lt;p&gt;ನಾನು&zwnj; 15 ನಿಮಿಷಗಳಿಂದ ಹೆಚ್&zwnj;ಎಎಲ್ ISRO ಜಂಕ್ಷನ್ ನಲ್ಲಿ ಕಾಯುತ್ತಿದ್ದೆ. 15 ನಿಮಿಷಗಳ ಕಾಲ ವಾಹನಗಳನ್ನ ಪೊಲೀಸರು ತಡೆದಿದ್ದರು. ಈ ಹಿನ್ನೆಲೆ ನಾನು ರಸ್ತೆಯಲ್ಲಿ ಕುಳಿತು ಪತ್ರಿಭಟನೆ ನಡೆಸಿದೆ ಎಂದು ಪೊಲೀಸರ ಮುಂದೆ ಮೋಹಿತ್ ಹೇಳಿಕೆ ದಾಖಲಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸದೆ ಹೇಳಿಕೆ ದಾಖಲಿಸಿಕೊಂಡು ಮೋಹಿತ್&zwnj;ನನ್ನು ಪೊಲೀಸರು ಕಳುಹಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಎಕ್ಸ್ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ. ಇತ್ತ ಮೋಹಿತ್ ಸಹ ಎಕ್ಸ್ ಖಾತೆಯಲ್ಲಿ ಘಟನೆ ಬಗ್ಗೆ ಬರೆದುಕೊಂಡಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;40 ವರ್ಷವಾದ್ರೂ ಮಾಳವ್ವ ಹೋಟೆಲ್&zwnj;ನ ರುಚಿ ಕಡಿಮೆಯಾಗಿಲ್ಲ; ಇಲ್ಲಿ ಜನಕ್ಕೆ ಇವ್ರೇ ಅನ್ನಪೂರ್ಣೇಶ್ವರಿ&lt;/strong&gt;&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/viral/bengaluru-drama-unfolds-as-man-protests-in-the-middle-of-the-road-pregnant-wife-not-in-car-mrq-kz1frvh"/>
        </item>
        <item>
            <title><![CDATA[ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು!  ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!]]></title>
            <link>https://kannada.asianetnews.com/politics/how-d-shivakumar-the-untold-challenges-hdk-rivalry-and-comebacks-gdp-videoshow-mg00tkd</link>
            <guid isPermaLink="true">https://kannada.asianetnews.com/politics/how-d-shivakumar-the-untold-challenges-hdk-rivalry-and-comebacks-gdp-videoshow-mg00tkd</guid>
            <pubDate>Tue, 02 Jun 2026 10:48:05 +0530</pubDate>
            <description><![CDATA[&lt;p&gt;ಡಿ.ಕೆ.ಶಿವಕುಮಾರ್ ಅವರನ್ನು ಗಟ್ಟಿ ನಾಯಕನನ್ನಾಗಿ ರೂಪಿಸಿದ ಸವಾಲುಗಳ ಕುರಿತು ಈ ಲೇಖನವು ವಿವರಿಸುತ್ತದೆ. ಅವರ ರಾಜಕೀಯ ಪಯಣದ ಆರಂಭ, ಹೆಚ್.ಡಿ.ಕೆ ಕುಟುಂಬದೊಂದಿಗಿನ ಜಿದ್ದಾಜಿದ್ದಿ ಮತ್ತು ಅವರ ರಾಜಕೀಯ ಜೀವನವನ್ನೇ ಬದಲಿಸಿದ ಒಂದು ನಿರ್ಣಾಯಕ ಘಟನೆಯನ್ನು ಇದು ಪರಿಶೋಧಿಸುತ್ತದೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xachoxi" medium="video" height="768" width="1024"/>
            <content:encoded><![CDATA[&lt;p&gt;ಡಿ.ಕೆ.ಶಿವಕುಮಾರ್.. ಈ ಹೆಸರು ಕೇಳಿದಾಕ್ಷಣ ಗಟ್ಟಿ ನಾಯಕ, ಬಂಡೆಯಂತಹ ಲೀಡರ್ ಅನ್ಸುತ್ತೆ. ಆದ್ರೆ ಆ ಗಟ್ಟಿತನ ಬಂದಿದ್ದು ಹೇಗೆ..? ಆದ್ರ ಹಿಂದೊಂದು ರೋಚಕ ಇತಿಹಾಸವಿದೆ. ಕನಕಾಧಿಪತಿಯ ರಾಜಕೀಯ ಜರ್ನಿ ಶುರುವಾಗಿದ್ದೇ ಯಾರೂ ನಿರೀಕ್ಷಿಸದ ಮಹಾ ಸವಾಲಿನಿಂದ. ಆ ಜರ್ನಿ ಶುರುವಾದ ನಂತ್ರವೂ ಹೆಜ್ಜೆ ಹೆಜ್ಜೆಗೂ ಅವರನ್ನ ಕಾಡಿವೆ ಚಾಲೆಂಜಸ್​ಗಳು. ಅವುಗಳನ್ನೆಲ್ಲಾ ಎದುರಿಸಿಯೇ ಡಿ.ಕೆ.ಶಿವಕುಮಾರ್ ಇಷ್ಟು ಗಟ್ಟಿಯಾಗಿ ಬೆಳೆದು ನಿಂತಿರೋದು. ಹಾಗಿದ್ರೆ ಕನಕವೀರನ ರಾಜಕೀಯ ಜರ್ನಿಯಲ್ಲಿ ಎದುರಾದ ಸವಾಲುಗಳು ಯಾವು..? ಅವುಗಳನ್ನ ಡಿಕೆ ಮೆಟ್ಟಿ ನಿಂತಿದ್ದು ಹೇಗೆ..?&lt;/p&gt;&lt;p&gt;ಡಿಕೆ ವರ್ಸಸ್ ಹೆಚ್​ಡಿಕೆ ಕುಟುಂಬದ ರಾಜಕೀಯ ಜಿದ್ದಾಜಿದ್ದಿ 2024ರಲ್ಲಿ ನೆಕ್ಸ್ಟ್​​ ಲವೆಲ್​ಗೆ ಹೋಗಿತ್ತು. ಹಾಗಿದ್ರೆ ಆ ವರ್ಷ ನಡೆದ ಎರಡು ಚುನಾವಣೆಯಲ್ಲಿ ಹೇಗಿತ್ತು ಪೈಪೋಟಿ..?&lt;/p&gt;&lt;p&gt;ಅದೊಂದು ಘಟನೆ ಡಿಕೆ ರಾಜಕೀಯ ಜೀವನವನ್ನೇ ಬದಲಾಯಿಸಿತ್ತು.. ಅಂದು ಬಂಡೆ ಎದುರಿಗೆ ಬಂದು ನಿಂತಿದ್ದ ಆ ಸವಾಲು ಅಂತಿಂಥದ್ದಲ್ಲ.. ಸಾಮಾನ್ಯವರು ಅದನ್ನ ಎದುರಿಸಿ ರಾಜಕೀಯದಲ್ಲಿ ಮತ್ತೆ ಪುಟಿದೇಳೋಕೆ ಸಾಧ್ಯವೇ ಇಲ್ಲ. ಹಾಗಿದ್ರೆ ಯಾವುದು ಆ ಸವಾಲು.? ಡಿಕೆ ಪೊಲಿಟಿಕಲ್ ಪಥದಲ್ಲಿ ಬಿರುಗಾಳಿಯಂತೆ ನುಗ್ಗಿದ ಆ ಬಿರುಗಾಳಿ ಯಾವುದು.?&amp;nbsp;&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/politics/how-d-shivakumar-the-untold-challenges-hdk-rivalry-and-comebacks-gdp-videoshow-mg00tkd"/>
        </item>
        <item>
            <title><![CDATA[ಲವ್ ಮಾಕ್ಟೇಲ್ ಸಿನಿಮಾ ಕಥೆ ಹೇಳಿ ನರ್ಸ್‌ಗೆ ತಾಳಿ ಕಟ್ಟಿದ ಭೂಪ‌; ವಿದೇಶದಿಂದ ಬರುತ್ತಿದ್ದಂತೆ ಶಾಕ್!]]></title>
            <link>https://kannada.asianetnews.com/gallery/relationship/complaint-filed-against-husband-who-married-her-by-telling-her-a-love-mocktail-movie-story-mrq-2s0hg5u</link>
            <guid isPermaLink="true">https://kannada.asianetnews.com/gallery/relationship/complaint-filed-against-husband-who-married-her-by-telling-her-a-love-mocktail-movie-story-mrq-2s0hg5u</guid>
            <pubDate>Tue, 02 Jun 2026 10:42:17 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ, &quot;ಲವ್ ಮಾಕ್ಟೇಲ್&quot; ಸಿನಿಮಾದಂತೆ ತನ್ನ ಪತ್ನಿ ಕ್ಯಾನ್ಸರ್&zwnj;ನಿಂದ ನಿಧನಳಾಗಿದ್ದಾಳೆ ಎಂದು ಸುಳ್ಳು ಹೇಳಿ ಪವನ್ ಎಂಬಾತ ನರ್ಸ್ ಒಬ್ಬರನ್ನು ಮದುವೆಯಾಗಿದ್ದಾನೆ. ಮದುವೆಯಾದ ಎಂಟು ತಿಂಗಳ ನಂತರ, ಅಪರಿಚಿತ ಮಹಿಳೆಯ ಕರೆಯಿಂದ ಪವನ್&zwnj;ನ ಮೊದಲ ಪತ್ನಿ ಜೀವಂತವಿರುವ ಸತ್ಯ ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3bhvdataextak385zvxkmx,imgname-cheating-1780376726954.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿ, &quot;ಲವ್ ಮಾಕ್ಟೇಲ್&quot; ಸಿನಿಮಾದಂತೆ ತನ್ನ ಪತ್ನಿ ಕ್ಯಾನ್ಸರ್&zwnj;ನಿಂದ ನಿಧನಳಾಗಿದ್ದಾಳೆ ಎಂದು ಸುಳ್ಳು ಹೇಳಿ ಪವನ್ ಎಂಬಾತ ನರ್ಸ್ ಒಬ್ಬರನ್ನು ಮದುವೆಯಾಗಿದ್ದಾನೆ. ಮದುವೆಯಾದ ಎಂಟು ತಿಂಗಳ ನಂತರ, ಅಪರಿಚಿತ ಮಹಿಳೆಯ ಕರೆಯಿಂದ ಪವನ್&zwnj;ನ ಮೊದಲ ಪತ್ನಿ ಜೀವಂತವಿರುವ ಸತ್ಯ ಬಯಲಾಗಿದೆ.&lt;/p&gt;&lt;img&gt;&lt;p&gt;ಲವ್ ಮಾಕ್ಟೇಲ್ ಸಿನಿಮಾ ಕಥೆಯಂತೆ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಸುಳ್ಳು ಹೇಳಿ ಮದುವೆಯಾಗಿರುವ ಗಂಡನ ವಿರುದ್ಧ ಮಹಿಳೆ ಕೆಆರ್&zwnj; ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಂಡನ ಸುಳ್ಳಿನ ಕಥೆ ಬಯಲಾಗಿದ್ದು ಹೇಗೆ ಎಂಬುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದು ಸಂಗೀತಾ (ಹೆಸರು ಬದಲಾಯಿಸಲಾಗಿದೆ) ಎಂಬವರಿಗೆ ಒಂದು ವರ್ಷದ ಹಿಂದೆ ಪವನ್ ಎಂಬಾತನ ಪರಿಚಯವಾಗಿತ್ತು. ಪತ್ನಿ ಕ್ಯಾನ್ಸರ್&zwnj;ನಿಂದ ನಿಧನವಾಗಿದ್ದಾಳೆ ಎಂದು ಲವ್&zwnj; ಮಾಕ್ಟೇಲ್&zwnj; ಸಿನಿಮಾ ಕಥೆಯನ್ನು ಎಮೋಷನಲ್ ಆಗಿ ಹೇಳಿದ್ದನು. ಪವನ್ ಹೇಳಿದೆಲ್ಲವನ್ನು ಸಂಗೀತಾ ನಂಬಿದ್ದರು.&lt;/p&gt;&lt;img&gt;&lt;p&gt;ಇದೇ ನೆಪದಲ್ಲಿ ಸಂಗೀತಾ ಅವರಿಗೆ ಪವನ್ ಹತ್ತಿರವಾಗಿ ಸ್ನೇಹ ಬೆಳೆಸಿಕೊಂಡಿದ್ದನು. ಪರಿಚಯದ ಬಳಿಕ ಸಂಗೀತಾಗೆ ಪವನ್ ಲವ್ ಪ್ರಪೋಸ್ ಸಹ ಮಾಡಿದ್ದನು. ಒಳ್ಳೆಯವನೆಂದು ಪವನ್ ಪ್ರೀತಿಯನ್ನು ಸಂಗೀತಾ ಒಪ್ಪಿಕೊಂಡಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಸಂಗೀತಾ ಮತ್ತು ಪವನ್ ಮದುವೆಯಾಗಿತ್ತು. ಮದುವೆ ಬಳಿಕ ಸಂಗೀತಾ ಕೆಲ ತಿಂಗಳು ವಿದೇಶದಲ್ಲಿ ನೆಲೆಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮನದಲ್ಲಿ ಪ್ರಿಯಕರನ ನೆನಪು, ಟವರ್ ಏಣಿ ಹತ್ತಿದ ವಿವಾಹಿತ ಮಹಿಳೆ; ಉತ್ತರ ಪ್ರದೇಶದಲ್ಲೊಂದು ಭಾರೀ ಹೈಡ್ರಾಮಾ!&lt;/strong&gt;&lt;/p&gt;&lt;img&gt;&lt;p&gt;ಇತ್ತೀಚೆಗೆ ವಿದೇಶದಿಂದ ಬಂದ ಸಂಗೀತಾ ಅವರಿಗೆ ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ, ತಾನು ಪವನ್ ಹೆಂಡತಿ ಎಂಬ ವಿಷಯ ತಿಳಿಸಿದ್ದಾರೆ. ಹಾಗೆಯೇ ಪವನ್, ಮತ್ತೋರ್ವ ಯುವತಿ ಜೊತೆ ರಿಲೇಶನ್&zwnj;ಶಿಪ್&zwnj; ಇಟ್ಕೊಂಡಿರೋ ವಿಷಯ ಗೊತ್ತಾಗಿದೆ. ಸದ್ಯ ಗಂಡ ಪವನ್ ವಿರುದ್ಧ ಸಂಗೀತಾ ದೂರು ದಾಖಲಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶೇ.60 ರಷ್ಟು ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಜೊತೆ ಅಫೇರ್; ಸಮೀಕ್ಷೆಯಲ್ಲಿ ಹೊರಬಿತ್ತು ಶಾಕಿಂಗ್ ರಿಪೋರ್ಟ್&lt;/strong&gt;&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/relationship/complaint-filed-against-husband-who-married-her-by-telling-her-a-love-mocktail-movie-story-mrq-2s0hg5u"/>
        </item>
        <item>
            <title><![CDATA[Blinkit vs Supermarket: ಬ್ಲಿಂಕಿಟ್‌, ಸೂಪರ್‌ಮಾರ್ಕೆಟ್‌ ಮಧ್ಯೆ ಕಡಿಮೆ ಬೆಲೆಗೆ ದಿನಸಿ ವಸ್ತು ಸಿಗೋದೆಲ್ಲಿ?]]></title>
            <link>https://kannada.asianetnews.com/gallery/india-news/blinkit-delivery-app-vs-supermarket-which-is-better-in-price-difference-s3gvnpo</link>
            <guid isPermaLink="true">https://kannada.asianetnews.com/gallery/india-news/blinkit-delivery-app-vs-supermarket-which-is-better-in-price-difference-s3gvnpo</guid>
            <pubDate>Mon, 01 Jun 2026 17:35:05 +0530</pubDate>
            <description><![CDATA[&lt;p&gt;Blinkit, ಸೂಪರ್&zwnj;ಮಾರ್ಕೆಟ್&zwnj;ಗಳ ನಡುವಿನ ದಿನಸಿ ವೆಚ್ಚವನ್ನು ಹೋಲಿಸಿದ ಪೋಸ್ಟ್ ವೈರಲ್ ಆಗಿದೆ. 1 ತಿಂಗಳ ಖರ್ಚಿನಲ್ಲಿ ಒಟ್ಟಾರೆ ಬೆಲೆ ವ್ಯತ್ಯಾಸವು ನಿರೀಕ್ಷೆಗಿಂತ ಕಡಿಮೆ ಇತ್ತು. ಬ್ಲಿಂಕಿಟ್&zwnj;ನಲ್ಲಿ ಕೆಲವು ವಸ್ತುಗಳು ದುಬಾರಿ, ಇನ್ನು ಕೆಲವು ವಸ್ತುಗಳ ಬೆಲೆ ಒಂದೇ ರೀತಿ, ರಿಯಾಯಿತಿಯಲ್ಲಿ ಲಭ್ಯವಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1gtrr53sqbtsfxeeqd9cd0,imgname-new-project---2026-06-01t172406.379-1780315153157.jpg" type="image/jpeg" height="390" width="690"/>
            <content:encoded><![CDATA[&lt;p&gt;Blinkit, ಸೂಪರ್&zwnj;ಮಾರ್ಕೆಟ್&zwnj;ಗಳ ನಡುವಿನ ದಿನಸಿ ವೆಚ್ಚವನ್ನು ಹೋಲಿಸಿದ ಪೋಸ್ಟ್ ವೈರಲ್ ಆಗಿದೆ. 1 ತಿಂಗಳ ಖರ್ಚಿನಲ್ಲಿ ಒಟ್ಟಾರೆ ಬೆಲೆ ವ್ಯತ್ಯಾಸವು ನಿರೀಕ್ಷೆಗಿಂತ ಕಡಿಮೆ ಇತ್ತು. ಬ್ಲಿಂಕಿಟ್&zwnj;ನಲ್ಲಿ ಕೆಲವು ವಸ್ತುಗಳು ದುಬಾರಿ, ಇನ್ನು ಕೆಲವು ವಸ್ತುಗಳ ಬೆಲೆ ಒಂದೇ ರೀತಿ, ರಿಯಾಯಿತಿಯಲ್ಲಿ ಲಭ್ಯವಿತ್ತು.&lt;/p&gt;&lt;img&gt;&lt;p&gt;ಕ್ವಿಕ್-ಕಾಮರ್ಸ್ ಪ್ಲಾಟ್&zwnj;ಫಾರ್ಮ್ ಬ್ಲಿಂಕಿಟ್, ಸ್ಥಳೀಯ ಸೂಪರ್&zwnj;ಮಾರ್ಕೆಟ್&zwnj;ಗಳಲ್ಲಿನ ದಿನಸಿ ಖರ್ಚಿನ ಬಗ್ಗೆ ದಂಪತಿಯೊಬ್ಬರು ಮಾಡಿದ ವಿವರವಾದ ಹೋಲಿಕೆಯ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೇಗದ ಡೆಲಿವರಿ ಕೊಡುವ ಆ್ಯಪ್&zwnj;ಗಳು ಹೆಚ್ಚು ದುಬಾರಿಯೇ ಎಂಬ ಚರ್ಚೆಯನ್ನು ಇದು ಮತ್ತೆ ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ಈ ದಂಪತಿ ಒಂದು ತಿಂಗಳಲ್ಲಿ ಬ್ಲಿಂಕಿಟ್ ಮೂಲಕ ಸುಮಾರು ₹20,000 ಮೌಲ್ಯದ ದಿನಸಿ ವಸ್ತುಗಳನ್ನು ಖರೀದಿಸಿದ್ದರು. ಈ ಪ್ರಯೋಗವು, ಅನುಕೂಲ, ಮನೆ ಬಜೆಟ್ ನಡುವೆ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತಿರುವ ಗ್ರಾಹಕರಿಂದ ವ್ಯಾಪಕ ಗಮನ ಸೆಳೆದಿದೆ. ತಮ್ಮ ತಿಂಗಳ ದಿನಸಿ ಬಜೆಟ್&zwnj;ನ ದೊಡ್ಡ ಪಾಲು ಕ್ವಿಕ್-ಡೆಲಿವರಿ ಪ್ಲಾಟ್&zwnj;ಫಾರ್ಮ್&zwnj;ಗೆ ಹೋಗುತ್ತಿರುವುದನ್ನು ಗಮನಿಸಿದ ನಂತರ, ಈ ದಂಪತಿ ತಮ್ಮ ಖರ್ಚಿನ ಬಗ್ಗೆ ವಿಶ್ಲೇಷಿಸಲು ನಿರ್ಧರಿಸಿದರು. ಈ ಅನುಕೂಲಕ್ಕಾಗಿ ತಾವು ಹೆಚ್ಚು ಹಣ ಪಾವತಿಸುತ್ತಿದ್ದೇವೆಯೇ ಎಂದು ತಿಳಿಯಲು, ಅವರು ಬ್ಲಿಂಕಿಟ್&zwnj;ನಲ್ಲಿ ಖರೀದಿಸಿದ ವಸ್ತುಗಳ ಬೆಲೆಗಳನ್ನು ಹತ್ತಿರದ ಸೂಪರ್&zwnj;ಮಾರ್ಕೆಟ್&zwnj;ಗಳಲ್ಲಿ ಲಭ್ಯವಿರುವ ಬೆಲೆಗಳೊಂದಿಗೆ ಹೋಲಿಕೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಸಂಶೋಧನೆಯನ್ನು ಆನ್&zwnj;ಲೈನ್&zwnj;ನಲ್ಲಿ ಹಂಚಿಕೊಂಡ ಅವರು, ತಾವು ಅಂದುಕೊಂಡಿದ್ದಕ್ಕಿಂತ ಈ ಎರಡು ಶಾಪಿಂಗ್ ವಿಧಾನಗಳ ನಡುವಿನ ಒಟ್ಟಾರೆ ವ್ಯತ್ಯಾಸವು ತುಂಬಾ ಕಡಿಮೆ ಎಂದು ಬಹಿರಂಗಪಡಿಸಿದ್ದಾರೆ. ಬ್ಲಿಂಕಿಟ್&zwnj;ನಲ್ಲಿ ಕೆಲವು ಉತ್ಪನ್ನಗಳು ಹೆಚ್ಚು ದುಬಾರಿಯಾಗಿದ್ದರೂ, ಇತರ ವಸ್ತುಗಳ ಬೆಲೆಗಳು ಒಂದೇ ರೀತಿ ಇದ್ದವು ಅಥವಾ ಪ್ರೊಮೋಷನ್&zwnj; ಮತ್ತು ಆಫರ್&zwnj;ಗಳ ಮೂಲಕ ರಿಯಾಯಿತಿಯಲ್ಲಿ ಸಿಕ್ಕಿದ್ದವು. ಕ್ವಿಕ್-ಕಾಮರ್ಸ್&zwnj;ನಲ್ಲಿ ಮಾಡುವ ಎಲ್ಲ ಖರೀದಿಗಳು ಹೆಚ್ಚು ದುಬಾರಿ ಎಂಬ ಸಾಮಾನ್ಯ ನಂಬಿಕೆಗೆ ಈ ಹೋಲಿಕೆಯು ಸವಾಲು ಹಾಕಿದೆ.&lt;/p&gt;&lt;img&gt;&lt;p&gt;ವೈರಲ್ ಪೋಸ್ಟ್ ಪ್ರಕಾರ, ಅನುಕೂಲವೇ ಅವರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ತ್ವರಿತ ಡೆಲಿವರಿ ಸೇವೆಗಳು ಸಮಯವನ್ನು ಉಳಿಸುತ್ತವೆ, ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡುತ್ತವೆ, ಪದೇ ಪದೇ ಸೂಪರ್&zwnj;ಮಾರ್ಕೆಟ್&zwnj;ಗೆ ಹೋಗುವುದನ್ನು ತಪ್ಪಿಸುತ್ತವೆ ಎಂದು ದಂಪತಿ ಹೇಳಿದ್ದಾರೆ. ಆದರೆ, ಬಳಕೆದಾರರು ಜಾಗರೂಕರಾಗಿರದಿದ್ದರೆ, ಸಣ್ಣ ಸಣ್ಣ ಆರ್ಡರ್&zwnj;ಗಳು ಮತ್ತು ಇಂಪಲ್ಸ್ ಖರೀದಿಗಳು ತಿಂಗಳ ಖರ್ಚನ್ನು ಹೆಚ್ಚಿಸಬಹುದು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಪೋಸ್ಟ್&zwnj;ಗೆ ಆನ್&zwnj;ಲೈನ್&zwnj;ನಲ್ಲಿ ಸಾವಿರಾರು ಪ್ರತಿಕ್ರಿಯೆಗಳು ಬಂದಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರು ಕ್ವಿಕ್-ಕಾಮರ್ಸ್ ಪ್ಲಾಟ್&zwnj;ಫಾರ್ಮ್&zwnj;ಗಳೊಂದಿಗೆ ತಮ್ಮದೇ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು, ವಿಶೇಷವಾಗಿ ನಗರಗಳಲ್ಲಿನ ಉದ್ಯೋಗಿಗಳಿಗೆ, ಈ ಸಣ್ಣ ಬೆಲೆ ವ್ಯತ್ಯಾಸವು ಅನುಕೂಲಕ್ಕೆ ತಕ್ಕ ಬೆಲೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು, ದೊಡ್ಡ ಪ್ರಮಾಣದ ಖರೀದಿ ಮತ್ತು ಯೋಜಿತ ಮಾಸಿಕ ಶಾಪಿಂಗ್&zwnj;ಗೆ ಸಾಂಪ್ರದಾಯಿಕ ಸೂಪರ್&zwnj;ಮಾರ್ಕೆಟ್&zwnj;ಗಳೇ ಹೆಚ್ಚು ಆರ್ಥಿಕ ಎಂದು ವಾದಿಸಿದ್ದಾರೆ.&lt;/p&gt;&lt;img&gt;&lt;p&gt;ಶಾಪಿಂಗ್ ವೆಚ್ಚಗಳನ್ನು ಹೋಲಿಸುವಾಗ ಇಂಧನ, ಸಾರಿಗೆ, ಪಾರ್ಕಿಂಗ್ ಶುಲ್ಕ ಮತ್ತು ವೈಯಕ್ತಿಕ ಸಮಯದ ಮೌಲ್ಯದಂತಹ ಅಂಶಗಳನ್ನು ಸಹ ಪರಿಗಣಿಸಬೇಕು ಎಂದು ಹಲವಾರು ಮಂದಿ ಕಮೆಂಟ್&zwnj;ಗಳಲ್ಲಿ ಹೇಳಿದ್ದಾರೆ. ಈ ಚರ್ಚೆಯು ಭಾರತೀಯ ನಗರಗಳಲ್ಲಿ ಬದಲಾಗುತ್ತಿರುವ ಗ್ರಾಹಕರ ನಡವಳಿಕೆ ಮತ್ತು ತ್ವರಿತ-ಡೆಲಿವರಿ ಸೇವೆಗಳ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ದೊಡ್ಡ ಸಂಭಾಷಣೆಯಾಗಿ ಬದಲಾಗಿದೆ.&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/blinkit-delivery-app-vs-supermarket-which-is-better-in-price-difference-s3gvnpo"/>
        </item>
        <item>
            <title><![CDATA[ಸೈಕಲ್‌ ವೇಗದಲ್ಲಿ ಹೋಗುವ ಭಾರತದ ಈ Train ;‌ ಆದರೂ 2-3 ತಿಂಗಳು ಮುಂಚೆ ಟಿಕೆಟ್ ಬುಕ್‌ ಮಾಡಬೇಕು!]]></title>
            <link>https://kannada.asianetnews.com/gallery/india-news/unesco-world-heritage-slowest-train-nilgiri-mountain-railway-ooty-toy-train-facts-m6alzys</link>
            <guid isPermaLink="true">https://kannada.asianetnews.com/gallery/india-news/unesco-world-heritage-slowest-train-nilgiri-mountain-railway-ooty-toy-train-facts-m6alzys</guid>
            <pubDate>Mon, 01 Jun 2026 18:15:07 +0530</pubDate>
            <description><![CDATA[&lt;p&gt;UNESCO World Heritage slow Train: ಭಾರತದ ಅತಿ ನಿಧಾನದ ರೈಲು ಎಂಬ ಖ್ಯಾತಿ ನೀಲಗಿರಿ ಮೌಂಟೇನ್ ರೈಲ್ವೆಗೆ ಇದೆ. ಯುನೆಸ್ಕೋ ಮಾನ್ಯತೆ ಪಡೆದ ಈ ಊಟಿ ಟಾಯ್ ಟ್ರೈನ್, ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ. ನಿಧಾನವಾಗಿ ಹೋದರೂ ಇದು ಯಾಕೆ ಇಷ್ಟು ಸ್ಪೆಷಲ್?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjhzk33wghe7d3vkgtfc30km,imgname-nilgiri-mountain-railway--3--1772277566588.jpg" type="image/jpeg" height="390" width="690"/>
            <content:encoded><![CDATA[&lt;p&gt;UNESCO World Heritage slow Train: ಭಾರತದ ಅತಿ ನಿಧಾನದ ರೈಲು ಎಂಬ ಖ್ಯಾತಿ ನೀಲಗಿರಿ ಮೌಂಟೇನ್ ರೈಲ್ವೆಗೆ ಇದೆ. ಯುನೆಸ್ಕೋ ಮಾನ್ಯತೆ ಪಡೆದ ಈ ಊಟಿ ಟಾಯ್ ಟ್ರೈನ್, ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ. ನಿಧಾನವಾಗಿ ಹೋದರೂ ಇದು ಯಾಕೆ ಇಷ್ಟು ಸ್ಪೆಷಲ್?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈ ಸ್ಪೀಡ್ ಯುಗದಲ್ಲಿ, ಸೈಕಲ್ ವೇಗದಲ್ಲಿ, ಅಂದರೆ ಗಂಟೆಗೆ ಕೇವಲ 9 ರಿಂದ 12 ಕಿ.ಮೀ. ವೇಗದಲ್ಲಿ ಚಲಿಸುವ ಒಂದು ವಿಚಿತ್ರ ರೈಲು ನಮ್ಮ ದೇಶದಲ್ಲಿದೆ. ಆದರೆ, ಈ ನಿಧಾನವೇ ಇದರ ನಿಜವಾದ ಸೌಂದರ್ಯ. ಈ ರೈಲು ಹತ್ತಲು ಜನರು ತಿಂಗಳುಗಳ ಮೊದಲೇ ಟಿಕೆಟ್ ಬುಕ್ ಮಾಡಿ ಸರದಿಯಲ್ಲಿ ನಿಲ್ಲುತ್ತಾರೆ. ಅದೇ ತಮಿಳುನಾಡಿನ ನೀಲಗಿರಿ ಮೌಂಟೇನ್ ರೈಲ್ವೆ, ನಮ್ಮೆಲ್ಲರ ಪ್ರೀತಿಯ 'ಊಟಿ ಟಾಯ್ ಟ್ರೈನ್'.&lt;/p&gt;&lt;img&gt;&lt;p&gt;ಈ ರೈಲು ಕೇವಲ ಬೊಂಬೆ ರೈಲಲ್ಲ, ಇದರ ಹಿಂದೆ ಒಂದು ಶತಮಾನದ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ, ಅಂದರೆ 1908ರಲ್ಲಿ ನಿರ್ಮಿಸಿದ ಈ ರೈಲ್ವೆ ಮಾರ್ಗದ ಮಹತ್ವವನ್ನು ಗುರುತಿಸಿ 2005ರಲ್ಲಿ 'ಯುನೆಸ್ಕೋ' ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು. ಕೇವಲ 46 ಕಿ.ಮೀ. ದೂರವನ್ನು ಕ್ರಮಿಸಲು ಈ ರೈಲಿಗೆ ಸುಮಾರು 5 ಗಂಟೆ ಬೇಕಾಗುತ್ತದೆ.&lt;/p&gt;&lt;img&gt;&lt;p&gt;ಮೆಟ್ಟುಪಾಳಯಂನಿಂದ ಊಟಿಯವರೆಗಿನ 5 ಗಂಟೆಗಳ ಪ್ರಯಾಣದಲ್ಲಿ, ರೈಲು 208 ತಿರುವುಗಳು, 16 ಸುರಂಗಗಳು ಮತ್ತು 250ಕ್ಕೂ ಹೆಚ್ಚು ಸೇತುವೆಗಳ ಮೇಲೆ ಸಾಗುತ್ತದೆ. ಕಿಟಕಿಯಿಂದ ಹೊರಗೆ ನೋಡಿದರೆ ದಟ್ಟವಾದ ಕಣಿವೆಗಳು, ಹಸಿರು ಚಹಾ ತೋಟಗಳು ಮತ್ತು ಜಲಪಾತಗಳ ಸುಂದರ ದೃಶ್ಯಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.&lt;/p&gt;&lt;img&gt;&lt;p&gt;ಈ ರೈಲು ಇಷ್ಟು ನಿಧಾನವಾಗಿ ಹೋಗಲು 'ರ್ಯಾಕ್ ಮತ್ತು ಪಿನಿಯನ್' ಎಂಬ ವಿಶಿಷ್ಟ ತಂತ್ರಜ್ಞಾನವೇ ಕಾರಣ. ಮೆಟ್ಟುಪಾಳಯಂನಲ್ಲಿ 326 ಮೀಟರ್ ಎತ್ತರದಲ್ಲಿ ಪ್ರಾರಂಭವಾಗುವ ಹಳಿ, ಊಟಿ ತಲುಪುವಷ್ಟರಲ್ಲಿ 2,203 ಮೀಟರ್ ಎತ್ತರಕ್ಕೆ ಏರುತ್ತದೆ. ಈ ಕಡಿದಾದ ಹಾದಿಯಲ್ಲಿ ರೈಲು ಹಿಂದಕ್ಕೆ ಜಾರದಂತೆ ಈ ತಂತ್ರಜ್ಞಾನ ಸಹಾಯ ಮಾಡುತ್ತದೆ. ಭಾರತದಲ್ಲಿ ಈ ತಂತ್ರಜ್ಞಾನವಿರುವ ಏಕೈಕ ರೈಲು ಮಾರ್ಗ ಇದಾಗಿದೆ.&lt;/p&gt;&lt;img&gt;&lt;p&gt;ಈ ರೈಲು ಪ್ರತಿದಿನ ಬೆಳಗ್ಗೆ 07:10ಕ್ಕೆ ಮೆಟ್ಟುಪಾಳಯಂನಿಂದ ಹೊರಟು ಮಧ್ಯಾಹ್ನ 12:00ಕ್ಕೆ ಊಟಿ ತಲುಪುತ್ತದೆ. ಮರಳಿ ಮಧ್ಯಾಹ್ನ 02:00ಕ್ಕೆ ಊಟಿಯಿಂದ ಹೊರಟು ಸಂಜೆ 05:30ಕ್ಕೆ ಮೆಟ್ಟುಪಾಳಯಂಗೆ ಬರುತ್ತದೆ. ಕೂನೂರ್&zwnj;ವರೆಗೆ ಹಬೆಯಂತ್ರದಿಂದ, ನಂತರ ಡೀಸೆಲ್ ಇಂಜಿನ್&zwnj;ನಿಂದ ಈ ರೈಲು ಚಲಿಸುತ್ತದೆ.&lt;/p&gt;&lt;p&gt;ಈ ಟಾಯ್ ಟ್ರೈನ್&zwnj;ಗೆ ವಿಶ್ವಾದ್ಯಂತ ಬೇಡಿಕೆಯಿರುವುದರಿಂದ, ಕನಿಷ್ಠ 2-3 ತಿಂಗಳು ಮುಂಚಿತವಾಗಿ ಐಆರ್&zwnj;ಸಿಟಿಸಿ (IRCTC) ವೆಬ್&zwnj;ಸೈಟ್&zwnj;ನಲ್ಲಿ ಟಿಕೆಟ್ ಬುಕ್ ಮಾಡುವುದು ಉತ್ತಮ. ಬೆಟ್ಟದ ಮೇಲೆ ಚಳಿ ಇರುವುದರಿಂದ ಸ್ವೆಟರ್ ಅಥವಾ ಜಾಕೆಟ್ ಇಟ್ಟುಕೊಳ್ಳಿ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಮುಂಗಡ ಬುಕ್ಕಿಂಗ್ ಅತ್ಯಗತ್ಯ.&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/unesco-world-heritage-slowest-train-nilgiri-mountain-railway-ooty-toy-train-facts-m6alzys"/>
        </item>
        <item>
            <title><![CDATA[ಅಯ್ಯೋ..ಪ್ರಧಾನಿಗೆ ಅವಾಚ್ಯ ಶಬ್ದ ಬಳಸಿದ ಅಮೆರಿಕ ಅಧ್ಯಕ್ಷ Donald Trump; ಸುಮ್ನೆ ಇರಲ್ಲ ಎಂದ ಇಸ್ರೇಲ್]]></title>
            <link>https://kannada.asianetnews.com/gallery/world-news/america-president-donald-trump-warn-to-israel-president-netanyahu-gkxgspg</link>
            <guid isPermaLink="true">https://kannada.asianetnews.com/gallery/world-news/america-president-donald-trump-warn-to-israel-president-netanyahu-gkxgspg</guid>
            <pubDate>Tue, 02 Jun 2026 09:10:27 +0530</pubDate>
            <description><![CDATA[&lt;p&gt;Iran Israel War: ಅಮೆರಿಕ ಹಾಗೂ ಇರಾನ್&zwnj; ನಡುವಿನ ಈಗಿನ ಸಂಬಂಧ, ಯುದ್ಧದ ಬಗ್ಗೆ ಹೊಸತಾಗಿ ಹೇಳುವಂಥದ್ದು ಏನೂ ಇಲ್ಲ. ಈಗ ಅಮೆರಿಕ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳಬೇಕಾದರೆ ಲೆಬನಾನ್&zwnj;ನಲ್ಲಿ ಕದನ ವಿರಾಮ ಘೋಷಿಸಲೇಬೇಕು ಎಂದು ಇರಾನ್&zwnj; ಹೇಳಿದೆ. ಈಗ ಟ್ರಂಪ್&zwnj; ಅವರು ಬೈದಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksf5w37xfmjcrqy5xy5jf1s1,imgname-gettyimages-2277690732-1779699682557.jpg" type="image/jpeg" height="390" width="690"/>
            <content:encoded><![CDATA[&lt;p&gt;Iran Israel War: ಅಮೆರಿಕ ಹಾಗೂ ಇರಾನ್&zwnj; ನಡುವಿನ ಈಗಿನ ಸಂಬಂಧ, ಯುದ್ಧದ ಬಗ್ಗೆ ಹೊಸತಾಗಿ ಹೇಳುವಂಥದ್ದು ಏನೂ ಇಲ್ಲ. ಈಗ ಅಮೆರಿಕ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳಬೇಕಾದರೆ ಲೆಬನಾನ್&zwnj;ನಲ್ಲಿ ಕದನ ವಿರಾಮ ಘೋಷಿಸಲೇಬೇಕು ಎಂದು ಇರಾನ್&zwnj; ಹೇಳಿದೆ. ಈಗ ಟ್ರಂಪ್&zwnj; ಅವರು ಬೈದಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಇರಾನ್&zwnj; ಹಾಗೂ ಇಸ್ರೇಲ್&zwnj;ಗೆ ಆಗಿ ಬರೋದಿಲ್ಲ. ಇಸ್ಲಾಂಮಿಕ್&zwnj; ಕ್ರಾಂತಿ ಆದ ಬಳಿಕ ಕೂಡ ಇಸ್ರೇಲ್&zwnj;ಗೆ ಕಾನೂನುಬದ್ಧ ದೇಶ ಎಂಬ ಪಟ್ಟ ಕೂಡ ಸಿಕ್ಕಿಲ್ಲ. ಇಸ್ರೇಲ್&zwnj;ನ್ನು ನಿರ್ನಾಮ ಮಾಡೋದು ಇರಾನ್&zwnj; ಗುರಿ. ಇಸ್ರೇಲ್&zwnj; ಹಾಗೂ ಅಮೆರಿಕ ಒಳ್ಳೆಯ ಸ್ನೇಹ ಸಂಬಂಧ ದೇಶಗಳು. ಇಸ್ರೇಲ್&zwnj;ಗೆ ಏನೇ ಆದರೂ ಅಮೆರಿಕ ಅದರ ಪರ ಇರುತ್ತದೆ. ಹೀಗಾಗಿ ಇರಾನ್&zwnj; ಗಾಜಾದ ಹಮಾಸ್ (Hamas), ಲೆಬನಾನ್&zwnj;ನ ಹೆಜ್ಬುಲ್ಲಾ (Hezbollah), ಯೆಮನ್&zwnj;ನ ಹೌತಿ (Houthis) ಬಂಡುಕೋರರರಿಗೆ ಹಣ ಕೊಟ್ಟು ಇಟ್ಟುಕೊಂಡಿದೆ.&lt;/p&gt;&lt;img&gt;&lt;p&gt;ಫೋನ್&zwnj;ನಲ್ಲಿ&zwnj; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು &quot;ಹುಚ್ಚ&quot;, ಕೃತಘ್ನ ಎಂದು ಹೇಳಿದ್ದಾರೆ. &ldquo;ನಿನಗೇನಾದರೂ ಹುಚ್ಚು ಹಿಡಿದಿದ್ಯಾ? ನಾನಿಲ್ಲ ಅಂದ್ರೆ ನೀನು ಈಗ ಜೈಲಿನಲ್ಲಿ ಇರಬೇಕಾಗಿತ್ತು. ನಾನು ನಿನ್ನನ್ನು ಸೇಫ್&zwnj; ಮಾಡಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ಹೀಗಾಗಿ ಇಡೀ ಜಗತ್ತೇ ಇಸ್ರೇಲ್ ಅನ್ನು ದ್ವೇಷ ಮಾಡುವಂತಾಗಿದೆ&quot; ಎಂದು ಹೇಳಿದ್ದಾರಂತೆ.&lt;/p&gt;&lt;img&gt;&lt;p&gt;ಟ್ರಂಪ್ ಅವರು ನೆತನ್ಯಾಹು ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. &quot;ನೀನು ಏನು ಮಾಡುತ್ತಿದ್ದೀಯಾ?&quot; ಎಂದು ಕೂಗಿದ್ದಾರಂತೆ. ಇಸ್ರೇಲ್&zwnj;ನ ನಾಯಕ ಭ್ರಷ್ಟಾಚಾರ ಮಾಡಿದ್ದರೂ ಕೂಡ, ನಾನು ಬೆಂಬಲ ಕೊಟ್ಟೆ, ಹೀಗಾಗಿ ಜೈಲಿಗೆ ಹೋಗಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಲೆಬನಾನ್&zwnj;ನ ರಾಜಧಾನಿ ಬೀರತ್ ಮೇಲೆ ದಾಳಿ ಮಾಡ್ತೀವಿ ಎಂದು ಇಸ್ರೇಲ್&zwnj; ಬೆದರಿಕೆ ಹಾಕುತ್ತಿವೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಆ ದೇಶವನ್ನು ಮತ್ತಷ್ಟು ಒಂಟಿಯಾಗಿಸುತ್ತವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.&lt;/p&gt;&lt;p&gt;ಲೆಬನಾನ್&zwnj;ನಲ್ಲಿ ನಾಗರಿಕರ ಸಾವು, ಹಬ್ದುಲ್ಲಾ ನಾಯಕರನ್ನು ಗುರಿ ಮಾಡಿಕೊಂಡು, ವಸತಿ ಕಟ್ಟಡಗಳ ಮೇಲೆ ದಾಳಿ ಮಾಡುತ್ತಿರುವ ಬಗ್ಗೆ ಟ್ರಂಪ್&zwnj; ಕಿಡಿಕಾರಿದ್ದಾರೆ. ಸದ್ಯಕ್ಕೆ ಇಸ್ರೇಲ್, ಬೀರತ್&zwnj;ನಲ್ಲಿರುವ ಹಬ್ದುಲ್ಲಾ ನೆಲೆಗಳ ಮೇಲೆ ದಾಳಿ ಮಾಡೋದು ಬೇಡ ಎಂದು ಸುಮ್ಮನಾಗಿದೆಯಂತೆ.&lt;/p&gt;&lt;img&gt;&lt;p&gt;ಇದಾದ ಬಳಿಕ ನೆತನ್ಯಾಹು ಅವರು, &quot;ಹಬ್ದುಲ್ಲಾ ಇಸ್ರೇಲ್ ಮೇಲಿನ ದಾಳಿ ನಿಲ್ಲಿಸಿಲ್ಲ ಅಂದರೆ, ಬೀರತ್&zwnj;ನಲ್ಲಿರುವ ನೆಲೆಗಳ ಮೇಲೆ ಇಸ್ರೇಲ್ ದಾಳಿ ಮಾಡುತ್ತೆ, ಈ ನಡುವೆ ದಕ್ಷಿಣ ಲೆಬನಾನ್&zwnj;ನಲ್ಲಿ ಕಾರ್ಯಾಚರಣೆ ಮುಂದುವರಿಯುತ್ತೆ ಎಂದು ಡೊನಾಲ್ಡ್ ಟ್ರಂಪ್&zwnj;ಗೆ ಹೇಳಿದ್ದೀನಿ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ&quot; ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/world-news/america-president-donald-trump-warn-to-israel-president-netanyahu-gkxgspg"/>
        </item>
        <item>
            <title><![CDATA[NEET Row: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಟೀಕೆ ನಡುವೆಯೇ ಪ್ರಧಾನಿ ಮೋದಿಗೆ ಹಿರಿಯ ಕಾಂಗ್ರೆಸಿಗ ದಿಗ್ವಿಜಯ್‌ ಸಾಥ್‌!]]></title>
            <link>https://kannada.asianetnews.com/politics/neet-row-congress-leader-digvijaya-singh-expresses-faith-in-pm-modi-and-the-system-rav/articleshow-5acgff5</link>
            <guid isPermaLink="true">https://kannada.asianetnews.com/politics/neet-row-congress-leader-digvijaya-singh-expresses-faith-in-pm-modi-and-the-system-rav/articleshow-5acgff5</guid>
            <pubDate>Tue, 02 Jun 2026 10:05:39 +0530</pubDate>
            <description><![CDATA[&lt;p&gt;ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ಮೋದಿ ಮತ್ತು ವ್ಯವಸ್ಥೆಯ ಮೇಲೆ ತಮಗೆ ನಂಬಿಕೆ ಇದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದು ರಾಜಕೀಯ ವಿಷಯವಲ್ಲ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt38pxg5r2fgydrxrz0g8a40,imgname-----------------------2026-06-02t094356.137-1780373747205.jpg" type="image/jpeg" height="390" width="690"/>
            <content:encoded><![CDATA[&lt;p&gt;\Bಮೋದಿ, ವ್ಯವಸ್ಥೆ ಮೇಲೆ ವಿಶ್ವಾಸವಿದೆ: ಸಿಂಗ್&zwnj;\B&lt;/p&gt;&lt;p&gt;\Bಇದು ರಾಜಕೀಯ ವಿಷಯ ಅಲ್ಲ: ಸ್ಪಷ್ಟನೆ\B&lt;/p&gt;&lt;p&gt;&lt;strong&gt;ನವದೆಹಲಿ (ಜೂ.2):&lt;/strong&gt; ನೀಟ್(NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ(Paper leak)ಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ, ಬಿಜೆಪಿ ಸರ್ಕಾರ(BJP Government)ದ ವಿರುದ್ಧ ಕಾಂಗ್ರೆಸ್&zwnj;(Congress) ಹರಿಹಾಯುತ್ತಿರುವ ನಡುವೆ ಅಚ್ಚರಿಯೆಂಬಂತೆ ಕಾಂಗ್ರೆಸ್&zwnj; ನಾಯಕ ದಿಗ್ವಿಜಯ್&zwnj; ಸಿಂಗ್&zwnj;(Congress Leader Digvijaya Singh) ಅವರು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.&lt;/p&gt;&lt;p&gt;ಜೂ. 21ರಂದು ನಡೆಯಲಿರುವ ಮರುಪರೀಕ್ಷೆಯ ಸಿದ್ಧತೆ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದ ಸಿಂಗ್&zwnj;, &lsquo;ನಾವು ಪ್ರಧಾನಿ ಹಾಗೂ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದೇವೆ. ನೀಟ್&zwnj; ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದು ಎಂಬುದು ನಮ್ಮ ವಿಶ್ವಾಸ&rsquo; ಎಂದರು.&lt;/p&gt;&lt;p&gt;ಸಭೆಗೂ ಮುನ್ನ ನಡೆದ ಅನೌಪಚಾರಿಕ ಚರ್ಚೆಯ ವೇಳೆ ಈ ವಿವಾದವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬ ಆಡಳಿತ ಪಕ್ಷದವರ ಕಳವಳಕ್ಕೆ ಪ್ರತಿಕ್ರಿಯಿಸಿದ ಸಿಂಗ್&zwnj;, &lsquo;ಇದು ರಾಜಕೀಯ ವಿಷಯವಲ್ಲ. ಬದಲಿಗೆ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಪರಿಣಾಮ ಬೀರಿರುವ ಘಟನೆ. ಸಮಿತಿಯ ಉದ್ದೇಶವು ಪರೀಕ್ಷೆ ಬಗೆಗಿನ ಕಳವಳಗಳನ್ನು ಇತ್ಯರ್ಥಗೊಳಿಸಿ ನ್ಯಾಯಯುತವಾಗಿ ಪರೀಕ್ಷೆ ನಡೆಸುವುದಾಗಿದೆ&rsquo; ಎಂದರು. ಜತೆಗೆ ಇದಕ್ಕಾಗಿ ಅವರು ಶಿಕ್ಷಣ ಸಚಿವಾಲಯ ಮತ್ತು ಅಧಿಕಾರಿಗಳಿಗೆ ಶುಭ ಕೋರಿದರು.&lt;/p&gt;&lt;p&gt;ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ಅವರ ರಾಜೀನಾಮೆ ಕೇಳಿದ್ದ ಕಾಂಗ್ರೆಸ್&zwnj; ಪಕ್ಷದ ಹಿರಿಯರೊಬ್ಬರ ಈ ನಡೆ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/neet-row-congress-leader-digvijaya-singh-expresses-faith-in-pm-modi-and-the-system-rav/articleshow-5acgff5"/>
        </item>
        <item>
            <title><![CDATA[TCS ಬಾಸ್ ಹೊಟ್ಟೆಕಿಚ್ಚು ಪಡುವಂತಿದೆ ಇನ್ಫೋಸಿಸ್ CEO ಸ್ಯಾಲರಿ! ನಂಬರ್ 1 ಆದ್ರೂ, ಸಂಬಳ ಕಡಿಮೆ]]></title>
            <link>https://kannada.asianetnews.com/gallery/business/salary-details-of-ceos-of-tcs-and-infosys-revealed-salil-parekh-king-on-salary-mrq-rans4s5</link>
            <guid isPermaLink="true">https://kannada.asianetnews.com/gallery/business/salary-details-of-ceos-of-tcs-and-infosys-revealed-salil-parekh-king-on-salary-mrq-rans4s5</guid>
            <pubDate>Tue, 02 Jun 2026 10:00:20 +0530</pubDate>
            <description><![CDATA[&lt;p&gt;ಟಿಸಿಎಸ್ ಮತ್ತು ಇನ್ಫೋಸಿಸ್ ಕಂಪನಿಗಳ 2025-26ರ ವಾರ್ಷಿಕ ವರದಿಯ ಪ್ರಕಾರ, ಸಿಇಒಗಳ ಸಂಬಳದಲ್ಲಿ ದೊಡ್ಡ ವ್ಯತ್ಯಾಸವಿದೆ. ಟಿಸಿಎಸ್&zwnj;ಗಿಂತ ಇನ್ಫೋಸಿಸ್ ವಹಿವಾಟು ಕಡಿಮೆ ಇದ್ದರೂ, ಸಿಇಒ ಸಂಬಳದಲ್ಲಿ ಈ ಅಂತರ ಕಂಡುಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt390kpfy677a1twxe8x100k,imgname-tcs-infosys--4--1780374064846.jpg" type="image/jpeg" height="390" width="690"/>
            <content:encoded><![CDATA[&lt;p&gt;ಟಿಸಿಎಸ್ ಮತ್ತು ಇನ್ಫೋಸಿಸ್ ಕಂಪನಿಗಳ 2025-26ರ ವಾರ್ಷಿಕ ವರದಿಯ ಪ್ರಕಾರ, ಸಿಇಒಗಳ ಸಂಬಳದಲ್ಲಿ ದೊಡ್ಡ ವ್ಯತ್ಯಾಸವಿದೆ. ಟಿಸಿಎಸ್&zwnj;ಗಿಂತ ಇನ್ಫೋಸಿಸ್ ವಹಿವಾಟು ಕಡಿಮೆ ಇದ್ದರೂ, ಸಿಇಒ ಸಂಬಳದಲ್ಲಿ ಈ ಅಂತರ ಕಂಡುಬಂದಿದೆ.&lt;/p&gt;&lt;img&gt;&lt;p&gt;ಟಿಸಿಎಸ್ ಮತ್ತು ಇನ್ಫೋಸಿಸ್ ಸಂಸ್ಥೆಗಳಲ್ಲಿ ಕೆಲಸ ಮಾಡೋದು ಎಷ್ಟೋ ಜನರ ಕನಸು ಆಗಿರುತ್ತದೆ. ಈ ಎರಡೂ ಖಾಸಗಿ ಕಂಪನಿಗಳ ಬಗ್ಗೆ ಪರಿಚಯ ಮಾಡುವ ಅಗತ್ಯವಿಲ್ಲ. ಇಂದು ಈ ಎರಡೂ ಕಂಪನಿಗಳ ಸಿಇಒಗಳು ಪಡೆದುಕೊಳ್ಳುತ್ತಿರುವ ಸಂಬಳದ ಮಾಹಿತಿ ಹೊರಬಿದ್ದಿದೆ. ಎರಡೂ ಕಂಪನಿಗಳ ವಾರ್ಷಿಕ ದಾಖಲೆಗಳ ಪ್ರಕಾರ, ಅವರ ಸಿಇಒ ಸಂಬಳದಲ್ಲಿ ಗಮನಾರ್ಹ ವ್ಯತ್ಯಾಸವಿದೆ.&lt;/p&gt;&lt;img&gt;&lt;p&gt;ಇನ್ಫೋಸಿಸ್ ಮತ್ತು ಟಿಸಿಎಸ್&zwnj; ಕಂಪನಿಗಳ 2025-26ರ ವಾರ್ಷಿಕ ವರದಿ ಪ್ರಕಟವಾಗಿದೆ. ಈ ವರದಿಯಲ್ಲಿ ಸಿಇಒ ಪಡೆದುಕೊಳ್ಳುತ್ತಿರುವ ಸಂಬಳ ದಾಖಲಾಗಿದೆ. ವರದಿಗಳ ಪ್ರಕಾರ, ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಈ ವರ್ಷ ₹82.6 ಕೋಟಿ (ಸುಮಾರು $1.2 ಬಿಲಿಯನ್) ಸಂಬಳವನ್ನು ಪಡೆದುಕೊಂಡಿದ್ದಾರೆ. ಟಿಸಿಎಸ್&zwnj;ನ ಸಿಇಒ ಆಗಿರುವ ಕೆ. ಕೃತಿವಾಸನ್ ₹28 ಕೋಟಿ (ಸುಮಾರು $1.2 ಬಿಲಿಯನ್) ಸಂಬಳ ತೆಗೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸಲೀಲ್ ಪರೇಖ್ ಅವರು ಟಿಸಿಎಸ್ ಸಿಇಒಗಿಂತ ಸುಮಾರು 55 ಕೋಟಿ ರೂಪಾಯಿಗಳಷ್ಟು ಹೆಚ್ಚು ಸಂಬಳ ಪಡೆದಿದ್ದಾರೆ. ಟಿಸಿಎಸ್&zwnj; ವಹಿವಾಟು ಇನ್ಪೋಸಿಸಸ್&zwnj;ಗಿಂತ ಹೆಚ್ಚಾಗಿದ್ರೂ ಇಬ್ಬರು ಸಿಇಒ ಸಂಬಳದಲ್ಲಿ ಗಮನಾರ್ಹ ವ್ಯತ್ಯಾಸ ಕಾಣಬಹುದು. 2026ರ ಆರ್ಥಿಕ ವರ್ಷದಲ್ಲಿ ಟಿಸಿಎಸ್ ಆದಾಯ 2.67 ಲಕ್ಷ ಕೋಟಿ ಮತ್ತು ಲಾಭ 49,201 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;img&gt;&lt;p&gt;ಇನ್ನು ಇನ್ಫೋಸಿಸ್&zwnj;ನ ಆದಾಯ ₹1.79 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇನ್ಪೋಸಿಸ್ ಕಂಪನಿಯ ಗಾತ್ರ ಚಿಕ್ಕದಾಗಿದ್ರೂ, ಇಲ್ಲಿಯ ಸಿಇಒ ಸಲೀಲ್ ಹೆಚ್ಚು ಸಂಬಳ ಪಡೆಯುತ್ತಾರೆ. ಸಲೀಲ್ ಪರೇಖ್ ಪಡೆದುಕೊಳ್ಳುವ ಸಂಬಳದ ಬಹುಪಾಲು ಷೇರುಗಳು ಆಗಿದೆ.&lt;/p&gt;&lt;p&gt;ಸ್ಥಿರ ವೇತನ: ರೂ 7.97 ಕೋಟಿ&lt;/p&gt;&lt;p&gt;ನಿವೃತ್ತಿ ಮತ್ತು ಇತರ ಭತ್ಯೆಗಳು: ರೂ 0.53 ಕೋಟಿ&lt;/p&gt;&lt;p&gt;ಕಾರ್ಯಕ್ಷಮತೆ ಆಧಾರಿತ ಬೋನಸ್: ರೂ 8.5 ಕೋಟಿ&lt;/p&gt;&lt;p&gt;ಸ್ಟಾಕ್ (ಷೇರು) ಆಧಾರಿತ ಪ್ರೋತ್ಸಾಹ: ರೂ 23.35 ಕೋಟಿ&lt;/p&gt;&lt;p&gt;ಷೇರು ಆಯ್ಕೆಗಳನ್ನು ಮಾರಾಟ / ಚಲಾಯಿಸುವುದರಿಂದ ಲಾಭ: ರೂ 50.75 ಕೋಟಿ&lt;/p&gt;&lt;img&gt;&lt;p&gt;ಸಿಇಒ ಕೆ. ಕೃತಿವಾಸನ್ ಅವರ ಒಟ್ಟು ವಾರ್ಷಿಕ ಸಂಬಳ ₹28 ಕೋಟಿ&lt;/p&gt;&lt;p&gt;ಮೂಲ ವೇತನ: ರೂ 1.67 ಕೋಟಿ&lt;/p&gt;&lt;p&gt;ಭತ್ಯೆಗಳು ಮತ್ತು ಇತರ ಸವಲತ್ತುಗಳು: ರೂ 1.43 ಕೋಟಿ&lt;/p&gt;&lt;p&gt;ಕಾರ್ಯಕ್ಷಮತೆ ಆಧಾರಿತ ಆಯೋಗ: ರೂ 25 ಕೋಟಿ&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/salary-details-of-ceos-of-tcs-and-infosys-revealed-salil-parekh-king-on-salary-mrq-rans4s5"/>
        </item>
        <item>
            <title><![CDATA[ಮಹಿಳೆಯರೇ 'ಗೃಹಲಕ್ಷ್ಮಿ' 3 ಲಕ್ಷ ಸಾಲದ ಬಲೆಯಲ್ಲಿ ಸಿಲುಕಿಕೊಳ್ಳಬೇಡಿ; ಇಲ್ಲಿದೆ ಸತ್ಯಾಂಶ]]></title>
            <link>https://kannada.asianetnews.com/gallery/karnataka-districts/it-is-a-false-news-that-loans-up-to-rs-3-lakh-can-be-availed-under-the-gruha-lakshmi-loan-scheme-mrq-q96mpaa</link>
            <guid isPermaLink="true">https://kannada.asianetnews.com/gallery/karnataka-districts/it-is-a-false-news-that-loans-up-to-rs-3-lakh-can-be-availed-under-the-gruha-lakshmi-loan-scheme-mrq-q96mpaa</guid>
            <pubDate>Tue, 02 Jun 2026 08:41:06 +0530</pubDate>
            <description><![CDATA[&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹಲಕ್ಷ್ಮಿ ಲೋನ್ ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತದೆ ಎಂಬುದು ಸುಳ್ಳು ಸುದ್ದಿ. ಸರ್ಕಾರದಿಂದ ಇಂತಹ ಯಾವುದೇ ಅಧಿಕೃತ ಯೋಜನೆ ಪ್ರಕಟವಾಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hqe0x5h8z66e4xdmhwx0638h,imgname-23krmn3-131.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹಲಕ್ಷ್ಮಿ ಲೋನ್ ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತದೆ ಎಂಬುದು ಸುಳ್ಳು ಸುದ್ದಿ. ಸರ್ಕಾರದಿಂದ ಇಂತಹ ಯಾವುದೇ ಅಧಿಕೃತ ಯೋಜನೆ ಪ್ರಕಟವಾಗಿಲ್ಲ.&lt;/p&gt;&lt;img&gt;&lt;p&gt;ಗೃಹಲಕ್ಷ್ಮಿ ಲೋನ್ ಯೋಜನೆಯಿಂದ 30 ಸಾವಿರದಿಂದ 3 ಲಕ್ಷದವರೆಗೆ ಸಾಲ ಸಿಗುತ್ತದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಗಮನಕ್ಕೆ ಬಂದಿದ್ದು, ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಕರೆ ಮಾಡುತ್ತಿರುತ್ತಾರೆ.&lt;/p&gt;&lt;img&gt;&lt;p&gt;ಗೃಹಲಕ್ಷ್ಮಿ ಲೋನ್ ಯೋಜನೆ ಎಂಬ ಅಧಿಕೃತ ಯೋಜನೆ ಪ್ರಕಟವಾಗಿರುವುದಿಲ್ಲ. ಜನರು ಮೋಸ ಹೋಗಬೇಡಿ, ಇದು ಸುಳ್ಳು ಸುದ್ದಿಯಾಗಿದ್ದು, ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿರುವುದಿಲ್ಲ ಹಾಗೂ ಯಾವುದೇ ಅಪರಿಚಿತ ಎಪಿಕೆ ಫೈಲ್ ಲಿಂಕ್&zwnj; ಗಳನ್ನು ಇನ್&zwnj; ಸ್ಟಾಲ್ ಮಾಡಬೇಡಿ ಮತ್ತು ಓಟಿಪಿ ಬ್ಯಾಂಕ್ ಡಿಟೇಲ್ಸ್ ಹಾಗೂ ಪರ್ಸನಲ್ ಇನ್&zwnj; ಫರ್&zwnj; ಮೇಷನ್&zwnj; ಗಳನ್ನು ಯಾರೊಂದಿಗೂ ಷೇರ್ ಮಾಡಬೇಡಿ.&lt;/p&gt;&lt;img&gt;&lt;p&gt;ಸಾಮಾಜಿಕ ಜಾಲತಾಣಗಳಾದ ಇನ್&zwnj; ಸ್ಟಾ ಗ್ರಾಮ್, ಫೇಸ್&zwnj; ಬುಕ್, ಯುಟ್ಯೂಬ್&zwnj; ಗಳನ್ನು ನಂಬಿ ಹಣ ಪಾವತಿಸಬೇಡಿ. ಸರ್ಕಾರದಿಂದ ಅಧಿಕೃತ ಆದೇಶ ಅಥವಾ ನ್ಯೂಸ್ ಪೇಪರ್ ಸ್ಟೇಟ್&zwnj; ಮೆಂಟ್ ಬಂದಾಗ ಮಾತ್ರ ನಂಬಿಕೆ ಇಡಿ. ಯಾರಿಗೂ ದುಡ್ಡು ಕೊಟ್ಟು ಮೋಸ ಹೋಗಬೇಡಿ ಎಂದು ಮೈಸೂರು ಮಹಾನಗರ ಪಾಲಿಕೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಪುಷ್ಪವಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/it-is-a-false-news-that-loans-up-to-rs-3-lakh-can-be-availed-under-the-gruha-lakshmi-loan-scheme-mrq-q96mpaa"/>
        </item>
        <item>
            <title><![CDATA[DK Shivakumar: ತಣ್ಣಗಾಯ್ತು ಮೈಲಾರ ಲಿಂಗೇಶ್ವರನ ಮುನಿಸು, ನನಸಾಯ್ತು ಡಿಕೆಶಿ ಸಿಎಂ ಕನಸು!]]></title>
            <link>https://kannada.asianetnews.com/politics/mylara-lingeshwara-s-wrath-over-dk-shivakumar-s-dream-of-becoming-karnataka-cm-comes-true-rav/articleshow-2vggfyi</link>
            <guid isPermaLink="true">https://kannada.asianetnews.com/politics/mylara-lingeshwara-s-wrath-over-dk-shivakumar-s-dream-of-becoming-karnataka-cm-comes-true-rav/articleshow-2vggfyi</guid>
            <pubDate>Tue, 02 Jun 2026 08:27:37 +0530</pubDate>
            <description><![CDATA[&lt;p&gt;2018ರಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಹೆಲಿಕಾಪ್ಟರ್ ಹಾರಿಸಿ ದೋಷಕ್ಕೆ ಒಳಗಾಗಿದ್ದ ಡಿ.ಕೆ. ಶಿವಕುಮಾರ್, ಬಳಿಕ ದೇವಸ್ಥಾನಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡಿದ್ದರು. ಈಗ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆ ಈ ಘಟನೆ ಮತ್ತೆ ಮುನ್ನೆಲೆಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt33yfgyzprdrwczy62rq5rc,imgname-----------------------2026-06-02t082206.456-1780368752158.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೂವಿನಹಡಗಲಿ (ಜೂ.2):&lt;/strong&gt; ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ(DK Shivakumar) ಅವರು 2018 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಮೈಲಾರದ ಮೈಲಾರಲಿಂಗೇಶ್ವರ(Mylaralingeshwar) ಸುಕ್ಷೇತ್ರಕ್ಕೆ ಹೆಲಿಕಾಪ್ಟರ್&zwnj;ನಲ್ಲಿ ಆಗಮಿಸಿದ್ದ ಸಂದರ್ಭದಲ್ಲಿ ದೇವಾಲಯದ ಗೋಪುರದ ಮೇಲೆ ಹಾಯ್ದು ಬಂದಿದ್ದರಿಂದ ದೋಷ ಉಂಟಾಗಿದೆ ಎಂದು ಹೇಳಿ ಬಳಿಕ ದೇವಾಲಯಕ್ಕೆ ಬೆಳ್ಳಿಯ ಹೆಲಿಕಾಪ್ಟರ್&zwnj; ಕಾಣಿಕೆಯಾಗಿ ನೀಡಿ ದೋಷ ಪರಿಹಾರ ಮಾಡಿಕೊಂಡಿದ್ದರು.&lt;/p&gt;&lt;h2&gt;ಮೈಲಾರ ಲಿಂಗೇಶ್ವರನ ಕೋಪಕ್ಕೆ ಗುರಿಯಾಗಿದ್ದ ಡಿಕೆ!&lt;/h2&gt;&lt;p&gt;ಇದೀಗ ಮುಖ್ಯಮಂತ್ರಿಯಾಗುತ್ತಿರುವ ಸಂದರ್ಭದಲ್ಲಿ ಈ ಹಿಂದೆ ಮೈಲಾರ ಲಿಂಗೇಶ್ವರನ ಕೋಪಕ್ಕೆ ಗುರಿಯಾಗಿದ್ದ ಡಿ.ಕೆ. ಶಿವಕುಮಾರ ಅವರು ದೋಷ ಪರಿಹಾರ ಮಾಡಿಕೊಂಡಿರುವ ಪ್ರಸಂಗ ಮುನ್ನೆಲೆಗೆ ಬಂದಿದೆ.&lt;/p&gt;&lt;p&gt;2018ರಲ್ಲಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಹೆಲಿಕಾಪ್ಟರ್&zwnj;ನಲ್ಲಿ ಮೈಲಾರಲಿಂಗೇಶ್ವರ ಮೈಲಾರ ಸುಕ್ಷೇತ್ರಕ್ಕೆ ಬಂದಿದ್ದರು. ಆ ಕಾಪ್ಟರ್&zwnj; ದೇವಸ್ಥಾನದ ಗೋಪುರದ ಮೇಲೆ ಹಾಯ್ದು ಬಂದಿದ್ದು, ಕಾರ್ಣಿಕ ಹೇಳುವ ಡೆಂಕಣ ಮರಡಿಯ ಪಕ್ಕದ ಜಮೀನು ಹಾಗೂ ದೇವಸ್ಥಾನದ ಗೋಪುರದ ಮೇಲೆ ಹೆಲಿಕಾಪ್ಟರ್&zwnj; ಹಾರಿ ಹೋಗಿತ್ತು. ಇದರಿಂದ ದೋಷ ಉಂಟಾಗಿದೆ. ಪರಿಹಾರಕ್ಕಾಗಿ ದೇವರಿಗೆ ಹರಕೆ ಹೊತ್ತು ಕನಸು ನನಸು ಮಾಡಿಕೊಳ್ಳಬೇಕೆಂದು ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆ ಮಾಡಲಾಯಿತು.&lt;/p&gt;&lt;p&gt;ಈ ದೋಷದಿಂದ ಡಿ.ಕೆ. ಶಿವಕುಮಾರ ಅವರು ಹಲವು ಕಷ್ಟ ನಷ್ಟ ಅನುಭವಿಸುವಂತೆ ಆಗಿತ್ತು. ತೊಂದರೆ, ಆತಂಕವೂ ಎದುರಾಗಿತ್ತು. ಜೈಲುವಾಸವನ್ನೂ ಅನುಭವಿಸಬೇಕಾಯಿತು. ಈ ಪ್ರಮಾದದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್, 2020ರ ಡಿಸೆಂಬರ್&zwnj; 18ರಂದು ಮತ್ತೆ ಮೈಲಾರಕ್ಕೆ ಭೇಟಿ ನೀಡಿ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್&zwnj;(Venkappaiah wadeyar) ಸಲಹೆಯಂತೆ ಪೂಜೆ ಸಲ್ಲಿಸಿದ್ದರು. ದೇವಸ್ಥಾನಕ್ಕೆ ಒಂದು ಕೆಜಿ ತೂಕದ ಬೆಳ್ಳಿಯ ಹೆಲಿಕಾಪ್ಟರ್&zwnj;ನ್ನು ತಪ್ಪು ಕಾಣಿಕೆಯನ್ನಾಗಿ ದೇಣಿಗೆ ನೀಡಿದ್ದರು. ಸಂಕಷ್ಟ ಪರಿಹಾರಕ್ಕೆ ಬೆಳ್ಳಿಯ ಹೆಲಿಕಾಪ್ಟರನ್ನೇ ಕಾಣಿಕೆಯಾಗಿ ಅರ್ಪಿಸಿದ್ದರು. ಮೈಲಾರ ಲಿಂಗೇಶ್ವರನ ಆಶೀರ್ವಾದದಿಂದಲೇ ಡಿ.ಕೆ. ಶಿವಕುಮಾರಗೆ ಸಿಎಂ ಪಟ್ಟ ಪಾಪ್ತಿಯಾಗಿದೆ ಎಂದು ಭಕ್ತರು ಹೇಳಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ರೆಡ್ಡಿಗೂ ಸಂಕಷ್ಟ: ಹಿಂದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಜನಾರ್ದನ ರೆಡ್ಡಿ ಕೂಡ ಮೈಲಾರ ಲಿಂಗೇಶ್ವರ ದೇವಸ್ಥಾನದ ಮೇಲೆ ಹೆಲಿಕಾಪ್ಟರ್&zwnj;ನಲ್ಲಿ ಬಂದಿದ್ದರು ಎಂಬ ಕಾರಣಕ್ಕೆ ಸಾಲು ಸಾಲು ಸಂಕಷ್ಟ ಅನುಭವಿಸಿದ್ದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/mylara-lingeshwara-s-wrath-over-dk-shivakumar-s-dream-of-becoming-karnataka-cm-comes-true-rav/articleshow-2vggfyi"/>
        </item>
        <item>
            <title><![CDATA[ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ; ಜೊತೆಯಾಗಿಯೇ ಇಬ್ಬರ ಅಂತ್ಯಕ್ರಿಯೆ]]></title>
            <link>https://kannada.asianetnews.com/karnataka-districts/vijayanagar-gadag-sister-also-has-heart-attack-after-hearing-news-of-her-brother-s-death-both-are-cremated-together-mrq/articleshow-lakd8er</link>
            <guid isPermaLink="true">https://kannada.asianetnews.com/karnataka-districts/vijayanagar-gadag-sister-also-has-heart-attack-after-hearing-news-of-her-brother-s-death-both-are-cremated-together-mrq/articleshow-lakd8er</guid>
            <pubDate>Tue, 02 Jun 2026 08:13:00 +0530</pubDate>
            <description><![CDATA[&lt;p&gt;ಗದಗ ಜಿಲ್ಲೆಯ ಬೂದಿಹಾಳ ಗ್ರಾಮದಲ್ಲಿ ನಡೆದ ದಾರುಣ ಘಟನೆಯಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ಅಕ್ಕನಿಗೆ ಚಿಕಿತ್ಸೆ ಕೊಡಿಸಿ ಮರಳುತ್ತಿದ್ದ ತಮ್ಮ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈ ಸುದ್ದಿ ಕೇಳಿದ ಆಘಾತಕ್ಕೆ ಅಕ್ಕ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt338n0exf5h3cdgm6q7gwnk,imgname-death-1780368036878.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ/ಗದಗ: &lt;/strong&gt;ಅನಾರೋಗ್ಯದಿಂದ ಬಳಲುತ್ತಿದ್ದ ತನಗೆ (ಸಹೋದರಿ) ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಮರಳಿ ತೆರಳುವಾಗ ಬೈಕ್&zwnj; ಅಪಘಾತದಲ್ಲಿ ಸಹೋದರ ಮೃತಪಟ್ಟ ಘಟನೆಯ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತವಾಗಿ ಮೃತಪಟ್ಟ ದಾರುಣ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಭಾನುವಾರ ನಡೆದಿದೆ.&lt;/p&gt;&lt;p&gt;ಹೂವಿನಹಡಗಲಿ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಮ್ಮ (48) ಮೃತ ಮಹಿಳೆ. ಇವರ ತಮ್ಮ ನಿಂಗಪ್ಪ ಇಲ್ಲಿನ ಜೆಸ್ಕಾಂ ಕಚೇರಿಯ ಲೈನ್&zwnj;ಮ್ಯಾನ್&zwnj; ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗದಗ: 101 ವರ್ಷ ಹಳೆಯ ಅಪರೂಪದ ಔಷಧಿ ಗುಣದ ಮಡ್ಡಿ ಮರ ಪತ್ತೆ; ಮಧುಮೇಹ ನಿಯಂತ್ರಣಕ್ಕೆ ರಾಮಬಾಣ&lt;/strong&gt;&lt;/p&gt;&lt;h2&gt;&lt;strong&gt;ಅಪಘಾತದಲ್ಲಿ ತಮ್ಮನ ಸಾವು&lt;/strong&gt;&lt;/h2&gt;&lt;p&gt;ಮಲ್ಲಮ್ಮ ಅನಾರೋಗ್ಯದಿಂದಾಗಿ ಕಳೆದೊಂದು ವಾರದಿಂದ ರಜೆ ಪಡೆದಿದ್ದರು. ಅವರನ್ನು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೂದಿಹಾಳದಲ್ಲಿ ಬಿಟ್ಟು ಬರುವಾಗ ತಾಲೂಕಿನ ಕಾಗನೂರು ಬಳಿ ನಿಂಗಪ್ಪನ ಬೈಕ್&zwnj;ಗೆ ನಾಯಿಯೊಂದು ಅಡ್ಡ ಬಂದು ಬೈಕ್ ಅಪಘಾತವಾಗಿ ಅಸುನೀಗಿದರು. ಸಹೋದರ ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಮಲ್ಲಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಬ್ಬರ ಅಂತ್ಯಕ್ರಿಯೆ ಬೂದಿಹಾಳದಲ್ಲಿ ಭಾನುವಾರ ನಡೆಯಿತು.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Gadag: ಅಪಾಯದಂಚಿನ ಮಾರ್ಗ: ಜೀವ ಪಣಕ್ಕಿಟ್ಟು ಸಾಗುವ 1 ಕಿ.ಮೀ ರಸ್ತೆ ಪಯಣ, ಆಟೋಗಷ್ಟೇ ದಾರಿ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagar-gadag-sister-also-has-heart-attack-after-hearing-news-of-her-brother-s-death-both-are-cremated-together-mrq/articleshow-lakd8er"/>
        </item>
        <item>
            <title><![CDATA[CJP Protest delhi: ಆನ್‌ಲೈನ್‌ನಲ್ಲಿ ಕಿಡಿ ಹಚ್ಚಿದ್ದ ಜಿರಳೆ ಪಕ್ಷ ಈಗ ಬೀದಿಗಿಳಿದಿದೆ! ನೀಟ್ ಸೋರಿಕೆ ವಿರುದ್ಧ ನೇರ ಹೋರಾಟ!]]></title>
            <link>https://kannada.asianetnews.com/india-news/online-outrage-hits-the-streets-cockroach-party-plans-mega-protest-against-neet-paper-leak-on-june-6-rav/articleshow-d8nm8xs</link>
            <guid isPermaLink="true">https://kannada.asianetnews.com/india-news/online-outrage-hits-the-streets-cockroach-party-plans-mega-protest-against-neet-paper-leak-on-june-6-rav/articleshow-d8nm8xs</guid>
            <pubDate>Tue, 02 Jun 2026 07:52:33 +0530</pubDate>
            <description><![CDATA[&lt;p&gt;ಆನ್&zwnj;ಲೈನ್&zwnj;ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಿಸಿ ಸಂಚಲನ ಮೂಡಿಸಿದ್ದ ಅಮೆರಿಕ ವಾಸಿ ಅಭಿಜಿತ್ ದೀಪ್ಕೆ, ಇದೀಗ ಭಾರತಕ್ಕೆ ಆಗಮಿಸುತ್ತಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್&zwnj;ನಲ್ಲಿ ಅವರು ಪ್ರತಿಭಟನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt31nq1frbf4qxjyxey6rcm5,imgname-----------------------2026-06-02t074209.452-1780366367791.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಮೊದಲ ಹೋರಾಟಕ್ಕೆ ಸಜ್ಜು&lt;/li&gt; &lt;li&gt;ತಮಿಳ್ನಾಡಲ್ಲಿ ಇದೀಗ ವಿಜಯ್&zwnj;ಗೆ ಸೂಕ್ತ ಪ್ರತಿಸ್ಪರ್ಧಿಗಳಿಲ್ಲ. ಈ ಸ್ಥಾನ ತುಂಬುವ ಇರಾದೆ&lt;/li&gt; &lt;li&gt;ನಿರುದ್ಯೋಗಿಗಳು ಜಿರಳೆ ಎಂಬ ಇತ್ತೀಚಿನ ಸುಪ್ರೀಂ ಜಡ್ಜ್&zwnj; ಹೇಳಿಕೆಯಿಂದ ಭಾರೀ ವಿವಾದ&lt;/li&gt; &lt;li&gt;ಅದರ ಬೆನ್ನಲ್ಲೇ ಆನ್&zwnj;ಲೈನಲ್ಲಿ ಕಾಕ್ರೋಚ್&zwnj; ಜನತಾ ಪಕ್ಷ ಸ್ಥಾಪಿಸಿದ್ದ ಅಮೆರಿಕ ವಾಸಿ ದೀಪ್ಕೆ&lt;/li&gt; &lt;li&gt;ಇದಕ್ಕೆ ಜನ ಬೆಂಬಲ. ಈ ಹಿನ್ನೆಲೆಯಲ್ಲಿ ಜೂ.6ಕ್ಕೆ ದಿಲ್ಲಿಗೆ ಆಗಮನ.&amp;nbsp;&lt;/li&gt; &lt;li&gt;ಜಂತರ್&zwnj;ಮಂತರ್&zwnj;ನಲ್ಲಿ ನೀಟ್&zwnj; ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸಮರ&lt;/li&gt;&lt;/ul&gt;&lt;p&gt;&lt;strong&gt;ನವದೆಹಲಿ (ಜೂ.2):&lt;/strong&gt; ಆನ್&zwnj;ಲೈನ್&zwnj;ನಲ್ಲಿ ಕಾಕ್ರೋಚ್&zwnj; ಜನತಾ ಪಾರ್ಟಿ (CJP) ಸ್ಥಾಪಿಸುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದ ಅಭಿಜಿತ್&zwnj; ದೀಪ್ಕೆ, ಇದೀಗ ನೇರವಾಗಿ ಬೀದಿಗಿಳಿದು ಹೋರಾಟದ ಘೋಷಣೆ ಮಾಡಿದ್ದಾರೆ. ಸದ್ಯ ಅಮೆರಿಕ ವಾಸಿಯಾಗಿರುವ ದೀಪ್ಕೆ ಜೂ.6ರಂದು ಭಾರತಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್&zwnj;ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿಯೂ ಘೋಷಿಸಿದ್ದಾರೆ.&lt;/p&gt;&lt;p&gt;ದೀಪ್ಕೆ ಸದ್ಯ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಿಜೆಪಿ ಸ್ಥಾಪನೆಯ ಬಳಿಕ ಇದು ಅವರ ಮೊದಲ ಭಾರತ ಭೇಟಿ. ಈ ಬಗ್ಗೆ ಎಕ್ಸ್&zwnj;ನಲ್ಲಿ ಮಾಹಿತಿ ನೀಡಿರುವ ಅವರು, &lsquo;ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮ ವ್ಯರ್ಥವಾಯಿತು. ಹೀಗಾಗಿ ಶಿಕ್ಷಣ ಸಚಿವ ಪ್ರಧಾನ್&zwnj; ಅವರ ರಾಜೀನಾಮೆ ಕೇಳಲು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ. ಶನಿವಾರ ಬೆಳಿಗ್ಗೆ ನೀವೆಲ್ಲರೂ ನನ್ನನ್ನು ಏರ್ಪೋರ್ಟ್&zwnj;ನಲ್ಲಿ ಭೇಟಿಯಾಗಿ. ನಾವೆಲ್ಲ ಸಂಸತ್&zwnj; ಮಾರ್ಗದ ಪೊಲೀಸ್&zwnj; ಠಾಣೆಗೆ ತೆರಳಿ, ಜಂತರ್&zwnj; ಮಂತರ್&zwnj;ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೇಳೋಣ&rsquo; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ನಾನು ಗಾಂಧಿ ಅನುಯಾಯಿ:&lt;/h2&gt;&lt;p&gt;&lsquo;ಈ ದೇಶ ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಇದು ನಮ್ಮೆಲ್ಲರಿಗೂ ಸೇರಿದ್ದು. ಇದು ನಮ್ಮ ಭವಿಷ್ಯದ ಪ್ರಶ್ನೆ. ನಮ್ಮದು ಪ್ರಜಾಪ್ರಭುತ್ವದ ದೇಶ ಎಂಬುದನ್ನು ನಾನಿಂದೂ ನಂಬುತ್ತೇನೆ. ನಮಗೆ ಪ್ರತಿಭಟನೆ ನಡೆಸಲು ಅನುಮತಿ ಸಿಗುತ್ತದೆ ಎಂಬ ವಿಶ್ವಾಸವಿದೆ. ನಾನೊಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನಾನು ಗಾಂಧಿ, ಅಂಬೇಡ್ಕರ್&zwnj;, ಭಗತ್&zwnj; ಸಿಂಗ್&zwnj; ಹಾಗೂ ನೆಹರೂ ಅವರ ದೊಡ್ಡ ಅನುಯಾಯಿ. ಪ್ರಜಾಪ್ರಭುತ್ವದಲ್ಲಿ ನಮಗೆ ಧ್ವನಿಯೆತ್ತುವ ಹಕ್ಕು ನೀಡಿದ ಸಂವಿಧಾನದ ಮೇಲೆ ನನಗೆ ಎಲ್ಲಕ್ಕಿಂತ ಹೆಚ್ಚು ನಂಬಿಕೆಯಿದೆ&rsquo; ಎಂದಿದ್ದಾರೆ.&lt;/p&gt;&lt;p&gt;ಸುಪ್ರೀಂ ಕೋರ್ಟ್&zwnj; ಮುಖ್ಯ ನ್ಯಾಯಮೂರ್ತಿ ಹೇಳಿಕೆ ಹಾಗೂ ದೇಶದ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಲು ಹುಟ್ಟಿಕೊಂಡ ಸಿಜೆಪಿ, ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ವಿಚಾರಗಳ ವಿರುದ್ಧ ಧ್ವನಿಯೆತ್ತುತ್ತಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/online-outrage-hits-the-streets-cockroach-party-plans-mega-protest-against-neet-paper-leak-on-june-6-rav/articleshow-d8nm8xs"/>
        </item>
        <item>
            <title><![CDATA[ಬೆಂಗಳೂರಿನಲ್ಲಿದ್ದ ಬಾಂಗ್ಲಾ ಪ್ರಜೆಗಳಿಗೆ ಆಧಾರ್ ಕಾರ್ಡ್ ಮಾಡಿಕೊಟ್ಟವಗೆ ಕೋರ್ಟ್‌ ಚಾಟಿ]]></title>
            <link>https://kannada.asianetnews.com/state/high-court-refuses-to-quash-case-against-accused-who-was-providing-fake-aadhaar-cards-to-bangladeshi-nationals-mrq/articleshow-ey3r32i</link>
            <guid isPermaLink="true">https://kannada.asianetnews.com/state/high-court-refuses-to-quash-case-against-accused-who-was-providing-fake-aadhaar-cards-to-bangladeshi-nationals-mrq/articleshow-ey3r32i</guid>
            <pubDate>Tue, 02 Jun 2026 07:40:33 +0530</pubDate>
            <description><![CDATA[ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪಿಯೊಬ್ಬನ ವಿರುದ್ಧದ ಫೋರ್ಜರಿ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಇದು ದೇಶದ ಹಿತಾಸಕ್ತಿಗೆ ವಿರುದ್ಧವಾದ ಕೆಲಸವಾಗಿದ್ದು, ದೇಶದ ವ್ಯವಸ್ಥೆಯನ್ನೇ ನಾಶಮಾಡುತ್ತಿದೆ ಎಂದು ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j6160hya2hjdzgnf9wrwbtb8,imgname-Baal-Aadhar-Card-1724469233610.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಮಾಡಿಸಿಕೊಟ್ಟ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಪಶ್ಚಿಮ ಬಂಗಾಳ ನಿವಾಸಿ ವಿರುದ್ಧ ಫೋರ್ಜರಿ ಪ್ರಕರಣ ರದ್ದುಪಡಿಸಲು ಹೈಕೋರ್ಟ್&zwnj; ನಿರಾಕರಿಸಿದೆ.&lt;/p&gt;&lt;p&gt;ಇದೇ ವೇಳೆ ಭಾರತಕ್ಕೆ ಬಂದ ವಿದೇಶಿಯರಿಗೆ ನಕಲಿ ಆಧಾರ್ ಕಾರ್ಡ್ ನೀಡುವ ಮೂಲಕ ದೇಶದ ವ್ಯವಸ್ಥೆಯನ್ನು ನಾಶಮಾಡುತ್ತಿದ್ದಾರೆ. ಇದು ದೇಶದ ಹಿತಾಸಕ್ತಿಯ ವಿರುದ್ಧದ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.&lt;/p&gt;&lt;p&gt;ಪಶ್ಚಿಮ ಬಂಗಾಳದ ಅರ್ನಾಬ್&zwnj; ಮಂಡಲ್&zwnj; (28) ತನ್ನ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಫೋರ್ಜರಿ ಆರೋಪ ಹಾಗೂ ವಿದೇಶಿಯರ ಮತ್ತು ಭಾರತೀಯ ಪಾಸ್&zwnj;ಪೋರ್ಟ್&zwnj; ಕಾಯ್ದೆಯಡಿ&zwnj; ದಾಖಲಿಸಿರುವ ಕ್ರಿಮಿನಲ್&zwnj; ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಬಂಧಿಸಲು ಕಾರಣ ನೀಡಿಲ್ಲ. ಅರ್ಜಿದಾರರು ಯಾವುದೇ ಅಪರಾಧ ಎಸಗಿಲ್ಲ ಎಂದರು.&lt;/p&gt;&lt;p&gt;ಈ ವಾದ ಕೇಳಿ ಕೆಂಡಮಂಡಲರಾದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಅರ್ಜಿದಾರರ ವಕೀಲರನ್ನು ಉದ್ದೇಶಿಸಿ, ಪ್ರಕರಣದಲ್ಲಿ ಗಂಭೀರ ಸ್ವರೂಪದ ಅಪರಾಧಗಳಿವೆ. ಅರ್ಜಿದಾರರು ಬೇರೆ ದೇಶಗಳಿಂದ ಭಾರತಕ್ಕೆ ಬಂದವರಿಗೆ ನಕಲಿ ಆಧಾರ್ ಕಾರ್ಡ್ ನೀಡುವ ಮೂಲಕ ದೇಶದ ಎಲ್ಲ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾರೆ. ಅರ್ಜಿದಾರ ದೇಶದ ಹಿತಾಸಕ್ತಿ ವಿರುದ್ಧ ಕೆಲಸ ಮಾಡಿದ್ದಾರೆ. ಇಂತಹವರ ವಿರುದ್ಧ ಪ್ರಕರಣ ರದ್ದುಪಡಿಸಬೇಕು ಬಯಸುತ್ತಿರಾ? ಅದೂ ಬಂಧನಕ್ಕೆ ಕಾರಣ ನೀಡಿಲ್ಲವೆಂದು ತೀಕ್ಷ್ಣವಾಗಿ ಪ್ರಶ್ನಿಸಿದರು.&lt;/p&gt;&lt;p&gt;ಅಲ್ಲದೇ, ಎಷ್ಟು ಆಧಾರ್ ಕಾರ್ಡ್ ಸೃಷ್ಟಿಸುತ್ತೀರಿ? ಎಷ್ಟು ಜನರಿಗೆ ಭಾರತಕ್ಕೆ ಬರಲು ಅವಕಾಶ ಕೊಡುತ್ತೀರಿ? ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಪಡೆಯುತ್ತಾರೆ. ಏಕೆ? ಇಂಥ ಜನರಿಂದ. ದೇಶದ ಹಿತಾಸಕ್ತಿ ಬಗ್ಗೆ ಸ್ವಲ್ಪಮಟ್ಟಿಗಾದರೂ ಕಾಳಜಿ ಹೊಂದಿರಬೇಕು. ಅರ್ಜಿದಾರರು ತಮ್ಮ ಮನೆಯ ಬಾಗಿಲಿಗೆ ಬಂದ ವಿದೇಶಿಯರಿಗೆಲ್ಲ ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಾರೆಯೇ? ವ್ಯವಸ್ಥೆಯನ್ನು ಗಮನಿಸಿದರೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ&zwnj; ಎಂದು ಹೈಕೋರ್ಟ್&zwnj; ತೀವ್ರ ಆತಂಕ ವ್ಯಕ್ತಪಡಿಸಿತು.&lt;/p&gt;&lt;h2&gt;&lt;strong&gt;ಕಾಯ್ದೆ ಅನ್ವಯಿಸುವುದಿಲ್ಲ&lt;/strong&gt;&lt;/h2&gt;&lt;p&gt;ಆಗ ಅರ್ಜಿದಾರ 2024ರ ಫೆ.21ರಿಂದ ಜೈಲಿನಲ್ಲಿ ಇದ್ದಾರೆ. ಅರ್ಜಿದಾರರು, ಅವರ ಮೇಲಿನ ಅಪರಾಧಗಳಿಗೆ ಕಾನೂನಿನಲ್ಲಿ ನಿಗದಿಯಾಗಿರುವ ಜೈಲು ಶಿಕ್ಷೆಯ ಅವಧಿ ಪೈಕಿ ಅರ್ಧ ಅವಧಿಯನ್ನು ಈಗಾಗಲೇ ಜೈಲಿನಲ್ಲಿ ಪೂರೈಸಿದ್ದರು&zwnj;. ವಿದೇಶಿಯರ ಕಾಯ್ದೆಯ ಅಪರಾಧವನ್ನು ಹೊರಿಸಲಾಗಿದೆ. ಆದರೆ, ಈ ಅಪರಾಧಗಳು ಅರ್ಜಿದಾರರಿಗೆ ಅನ್ವಯಿಸುವುದೇ ಇಲ್ಲ&zwnj; ಎಂದು ವಿವರಿಸಿದರು.&lt;/p&gt;&lt;p&gt;ಅದಕ್ಕೆ ಆಕ್ಷೇಪಿಸಿದ ನ್ಯಾಯಮೂರ್ತಿಗಳು, ಅರ್ಜಿದಾರರು ಕಸ್ಟಡಿಯಲ್ಲಿರುವುದು ಸರಿಯಾಗಿಯೇ ಇದೆ. ಅದರಲ್ಲಿ ಹೈಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ. ಆಧಾರ್ ಕಾರ್ಡ್ ನೀಡಿ ವಿದೇಶಿಯರಿಗೂ ಸಹ ನಮ್ಮ ದೇಶದಲ್ಲಿ ಬೇರೆ ಬೇರೆ ಹಕ್ಕು ಸೃಷ್ಟಿಸುತ್ತೀರಿ ಎಂದರು.&lt;/p&gt;&lt;p&gt;ನಂತರ ವಿಚಾರಣಾ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಹಾಕಿಕೊಳ್ಳಲು ಅನುಮತಿಸಲಾಗುವುದು. ಅದನ್ನು ಪರಿಗಣಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಲಾಗುವುದು. ಆದರೆ, ಪ್ರಕರಣ ರದ್ದತಿಗೆ ಕೋರಬೇಡಿ&zwnj;. ಈ ನ್ಯಾಯಪೀಠವು ಪ್ರಕರಣದ ರದ್ದತಿಗೆ ನಿರಾಕರಿಸಿ ಆದೇಶ ಬರೆಯಿಸಿದರೆ, ನಿಮಗೆ ಜಾಮೀನು ಸಹ ಸಿಗುವುದಿಲ್ಲ ಎಂದು ಖಡಕ್ ಆಗಿ ಹೇಳಿದರು&zwnj;. ಅದಕ್ಕೆ ವಕೀಲರು, ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು. ಅದನ್ನು ಅನುಮತಿಸಿದ&zwnj; ಪೀಠ ಅರ್ಜಿ ವಜಾಗೊಳಿಸಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಿಯರ್ ಬೆಲೆ ಕಡಿಮೆಯಾದ್ರೂ ಗ್ರಾಹಕರಿಗೆ ಯಾಕಿಷ್ಟು ಸಂಕಟ? ಮಾರುಕಟ್ಟೆ ಸಮಸ್ಯೆ ಏನು?&lt;/strong&gt;&lt;/p&gt;&lt;h3&gt;&lt;strong&gt;ಪ್ರಕರಣವೇನು?:&lt;/strong&gt;&lt;/h3&gt;&lt;p&gt;ಖಚಿತ ಮಾಹಿತಿ ಮೇರೆಗೆ ಸೂರ್ಯನಗರ ಠಾಣಾ&zwnj;&zwnj; ಪೊಲೀಸರು 2024ರ ನ.21ರಂದು&zwnj; ಅಂದಿನ&zwnj; ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಬಿ.ಕೆ.ಮೋಹನ್ ಕುಮಾರ್ ಅವರ&zwnj; ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿ ಹೀಲಲೆಗೆ ಗ್ರಾಮದಲ್ಲಿ ಸೈಬರ್ ಸೆಂಟರ್ ಮೇಲೆ ದಾಳಿ ನಡೆಸಿದ್ದರು.&zwnj; ಅಲ್ಲಿ ಅರ್ನಾಬ್ ಮಂಡಲ್ ಎಂಬ ವ್ಯಕ್ತಿ ಸುಳ್ಳು ದಾಖಲೆ ಬಳಸಿ ಬಾಂಗ್ಲಾ ದೇಶದ ವ್ಯಕ್ತಿಗಳಿಗೆ ಆಧಾರ್ ಕಾರ್ಡ್ ಮಾಡಿ&zwnj; ಕೊಡುತ್ತಿರುವುದು ಕಂಡು ಬಂದಿತ್ತು. ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು.&zwnj; ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ&zwnj; 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ಅರ್ನಾಬ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Bengaluru: 7 ತಿಂಗಳಿಂದ ಏಳು ಕೋಟಿ ರೂಪಾಯಿಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲೇ ಕಾವಲು!&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/high-court-refuses-to-quash-case-against-accused-who-was-providing-fake-aadhaar-cards-to-bangladeshi-nationals-mrq/articleshow-ey3r32i"/>
        </item>
        <item>
            <title><![CDATA[ಬಿಯರ್ ಬೆಲೆ ಕಡಿಮೆಯಾದ್ರೂ ಗ್ರಾಹಕರಿಗೆ ಯಾಕಿಷ್ಟು ಸಂಕಟ? ಮಾರುಕಟ್ಟೆ ಸಮಸ್ಯೆ ಏನು ?]]></title>
            <link>https://kannada.asianetnews.com/business/beer-stock-shortages-of-popular-brands-due-to-increased-demand-due-to-price-cuts-mrq/articleshow-fwnv6lc</link>
            <guid isPermaLink="true">https://kannada.asianetnews.com/business/beer-stock-shortages-of-popular-brands-due-to-increased-demand-due-to-price-cuts-mrq/articleshow-fwnv6lc</guid>
            <pubDate>Tue, 02 Jun 2026 07:30:23 +0530</pubDate>
            <description><![CDATA[ರಾಜ್ಯದಲ್ಲಿ ಹೊಸ ಆಲ್ಕೋಹಾಲ್&zwnj; ಇನ್&zwnj; ಬೇವರೇಜ್&zwnj; (ಎಐಬಿ) ಪದ್ಧತಿಯಿಂದ ಬಿಯರ್&zwnj; ಬೆಲೆ ಗಣನೀಯವಾಗಿ ಇಳಿದಿದೆ. ಆದರೆ, ಕೆಲವು ಅಂಗಡಿಗಳು ಹಳೆಯ ದರದಲ್ಲೇ ಮಾರಾಟ ಮಾಡುತ್ತಿದ್ದು, ಹೆಚ್ಚಿದ ಬೇಡಿಕೆಯಿಂದಾಗಿ ಜನಪ್ರಿಯ ಬ್ರ್ಯಾಂಡ್&zwnj;ಗಳ ಬಿಯರ್&zwnj; ಸ್ಟಾಕ್ ಕೊರತೆ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt30teg9bbpz2x4tyc94hsaf,imgname-beer-stock-shortages-1780365474313.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿದ್ದು ಚಿಕ್ಕಬಳ್ಳೇಕೆರೆ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದಲ್ಲಿ ಆಲ್ಕೋಹಾಲ್&zwnj; ಇನ್&zwnj; ಬೇವರೇಜ್&zwnj;(ಎಐಬಿ) ಪದ್ಧತಿ ಜಾರಿಯಾಗಿ 20 ದಿನವಾದರೂ ಇನ್ನೂ ಕೆಲವೆಡೆ ಮೊದಲಿನ ದುಬಾರಿ ದರಕ್ಕೇ ಬಿಯರ್&zwnj; ಮಾರಾಟ ಮಾಡಲಾಗುತ್ತಿದೆ. ಮತ್ತೊಂದೆಡೆ, ಬಿಯರ್&zwnj; ಅಗ್ಗವಾಗಿರುವುದರಿಂದ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು ಮದ್ಯದಂಗಡಿಗಳಿಗೆ ಬೇಡಿಕೆಗೆ ತಕ್ಕಂತೆ &lsquo;ಸ್ಟಾಕ್&zwnj;&rsquo; ಪೂರೈಕೆಯಾಗುತ್ತಿಲ್ಲ.&lt;/p&gt;&lt;p&gt;ರಾಜ್ಯದಲ್ಲಿ ಹಲವು ದಶಕದಿಂದ ಬಲ್ಕ್&zwnj; ಲೀಟರ್&zwnj; ಆಧಾರಿತ ತೆರಿಗೆ ಪದ್ಧತಿ ಜಾರಿಯಲ್ಲಿದ್ದು, ಮೇ 11ರಿಂದ ದೇಶದಲ್ಲೇ ಮೊದಲ ಬಾರಿ ಮದ್ಯದಲ್ಲಿನ ಆಲ್ಕೋಹಾಲ್&zwnj; ಅಂಶ ಆಧರಿಸಿದ ಎಐಬಿ ಪದ್ಧತಿ ಜಾರಿಯಾಗಿದೆ. ಇದರಿಂದಾಗಿ ಬಿಯರ್&zwnj;ಗಳ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಮಾಮೂಲಿಗಿಂತ ಎರಡ್ಮೂರು ಪಟ್ಟು ಮಾರಾಟವಾಗುತ್ತಿವೆ. ಆದರೆ ಮದ್ಯದಂಗಡಿಗಳ ಬೇಡಿಕೆಗೆ ತಕ್ಕಂತೆ ಸ್ಟಾಕ್&zwnj; ಸರಬರಾಜಾಗುತ್ತಿಲ್ಲ.&lt;/p&gt;&lt;p&gt;ಹೊಸ ಎಐಬಿ ಪದ್ಧತಿಯಲ್ಲಿ ಬಿಯರ್&zwnj; ಮತ್ತು ಕೆಲ ಪ್ರೀಮಿಯಂ ಮದ್ಯಗಳ ಬೆಲೆ ಇಳಿಕೆಯಾಗಿದ್ದರೂ ಇನ್ನೂ ಕೆಲವೆಡೆ ಹಳೆಯ ದುಬಾರಿ ದರಕ್ಕೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಇದನ್ನು ಪ್ರಶ್ನಿಸಿದರೆ, ನಮ್ಮಲ್ಲಿ ಇನ್ನೂ ಹಳೆಯ ಸ್ಟಾಕ್ ಇದೆ ಎಂದು ಸಬೂಬು ಹೇಳಲಾಗುತ್ತಿದೆ. ಎಲ್ಲಾ ಬ್ರ್ಯಾಂಡ್&zwnj;ಗಳ ಹೊಸ ದರದ ಲೇಬಲ್&zwnj;ಗಳನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಳವಡಿಸದಿರುವುದು ಇದಕ್ಕೆ ಕಾರಣ.&lt;/p&gt;&lt;p&gt;ಆದರೆ ಮದ್ಯದಂಗಡಿಗಳಿಗೆ ಮಾತ್ರ ಹೊಸ ದರದಂತೆ ಕಡಿಮೆ ಬೆಲೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮವು (ಕೆಎಸ್&zwnj;ಬಿಸಿಎಲ್&zwnj;) ಮದ್ಯ ಸರಬರಾಜು ಮಾಡುತ್ತಿದೆ. ಇದನ್ನು ಮುಚ್ಚಿಡುತ್ತಿರುವ ಕೆಲ ಬಾರ್&zwnj; ಆ್ಯಂಡ್&zwnj; ರೆಸ್ಟೋರೆಂಟ್&zwnj;, ವೈನ್ ಸ್ಟೋರ್&zwnj;ನವರು ಹಳೆಯ ಲೇಬಲ್&zwnj; ತೋರಿಸಿ ಅಧಿಕ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಕಿಂಗ್&zwnj; ಫಿಶರ್&zwnj;ಗೆ ಭಾರೀ ಡಿಮ್ಯಾಂಡ್&zwnj;&lt;/strong&gt;&lt;/h2&gt;&lt;p&gt;ಕಿಂಗ್&zwnj; ಫಿಶರ್&zwnj; ಬಿಯರ್&zwnj; ದರ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಬಹಳಷ್ಟು ಬೇಡಿಕೆ ಉಂಟಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್&zwnj; ಸರಬರಾಜು ಆಗುತ್ತಿಲ್ಲ. 650 ಎಂಎಲ್&zwnj;ನ ಕಿಂಗ್&zwnj;ಫಿಶರ್&zwnj; ಪ್ರೀಮಿಯಂ ಬೆಲೆ 185 ರಿಂದ 110 ಕ್ಕೆ ಇಳಿಕೆಯಾಗಿದೆ. ಪಿಂಟ್&zwnj; 125 ರಿಂದ 60, ಅರ್ಧ ಲೀಟರ್&zwnj; ಟಿನ್&zwnj; 145 ರಿಂದ 80, 350 ಎಂಎಲ್&zwnj;ನ ಟಿನ್&zwnj; 100 ರಿಂದ 60 ರು.ಗೆ ಇಳಿಕೆಯಾಗಿರುವುದು ಭಾರೀ ಬೇಡಿಕೆ ಸೃಷ್ಟಿಗೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಶುಲ್ಕ ಹೆಚ್ಚಳ ವಿರೋಧಿಸಿ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಕೆ&lt;/strong&gt;&lt;/h3&gt;&lt;p&gt;ಶುಭ ಕಾರ್ಯಗಳ ಸಂದರ್ಭದಲ್ಲಿ ಮನೆ ಅಥವಾ ಖಾಸಗಿ ಸ್ಥಳಗಳಲ್ಲಿ ಆಯೋಜಿಸುವ ಪಾರ್ಟಿಗೆ ಪಡೆಯುವ ತಾತ್ಕಾಲಿಕ ಮದ್ಯದ ಪರ್ಮಿಟ್&zwnj;(ಸಿಎಲ್&zwnj; 5) ಶುಲ್ಕ ದುಪ್ಪಟ್ಟು ಮಾಡಿರುವುದನ್ನು ವಿರೋಧಿಸಿ ಸೋಮವಾರ ಮದ್ಯ ಮಾರಾಟಗಾರರು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಿದ್ದಾರೆ.&lt;/p&gt;&lt;p&gt;ಈ ಬಗ್ಗೆ &lsquo;ಕನ್ನಡಪ್ರಭ&rsquo;ದೊಂದಿಗೆ ಮಾತನಾಡಿದ ಫೆಡರೇಶನ್&zwnj; ಆಫ್&zwnj; ವೈನ್&zwnj; ಮರ್ಚೆಂಟ್ಸ್&zwnj; ಅಸೋಸಿಯೇಶನ್&zwnj; ಕರ್ನಾಟಕ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್&zwnj; ಹೆಗ್ಡೆ, &lsquo;ಸಿಎಲ್&zwnj; 5 ಲೈಸೆನ್ಸ್&zwnj; ಪಡೆಯಲು ಇದ್ದ ಶುಲ್ಕವನ್ನು ಸರ್ಕಾರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದನ್ನು ವಿರೋಧಿಸಿ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಗೆ ಸಂಘದಿಂದ ಸೋಮವಾರ ಆಕ್ಷೇಪಣೆ ಸಲ್ಲಿಸಲಾಗುವುದು&rsquo; ಎಂದು ತಿಳಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;&lt;p&gt;ದರ ಇಳಿಕೆಯಾದ್ರೂ ಹಳೆ ಬೆಲೆಯಲ್ಲಿ ಮದ್ಯದ ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ಮೋಸ#Alcohol #Liquor https://t.co/KAcD8aykkJ&lt;/p&gt;&lt;p&gt;&mdash; Asianet Suvarna News (@AsianetNewsSN) May 23, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/business/beer-stock-shortages-of-popular-brands-due-to-increased-demand-due-to-price-cuts-mrq/articleshow-fwnv6lc"/>
        </item>
        <item>
            <title><![CDATA[West Bengal Kalita Majhi: ಮನೆ ಮನೆ ಮುಸುರೆ ತಿಕ್ಕುತ್ತಿದ್ದ ಕಲಿತಾ ಮಾಝಿ ಈಗ ಬಂಗಾಳ ಸಚಿವೆ!]]></title>
            <link>https://kannada.asianetnews.com/india-news/from-domestic-worker-to-bengal-minister-the-inspiring-journey-of-kalita-majhi-rav/articleshow-pwl15lz</link>
            <guid isPermaLink="true">https://kannada.asianetnews.com/india-news/from-domestic-worker-to-bengal-minister-the-inspiring-journey-of-kalita-majhi-rav/articleshow-pwl15lz</guid>
            <pubDate>Tue, 02 Jun 2026 07:26:30 +0530</pubDate>
            <description><![CDATA[ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಂಪುಟ ವಿಸ್ತರಣೆಯಾಗಿದ್ದು, 35 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಾಜಿ ಕ್ರಿಕೆಟಿಗ ಅಶೋಕ್&zwnj; ದಿಂಡಾ ಹಾಗೂ ಈ ಹಿಂದೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಅವರು ಸಚಿವರಾಗಿರುವುದು ವಿಶೇಷ.]]></description>
            <media:content url="https://static.asianetnews.com/images/w-1280,h-720,format-jpg,imgid-01kqw0thbanbcgtzw4k72yezfh,imgname-----------------------2026-05-05t171538.510-1777983112554.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಸುವೇಂದು ಸಂಪುಟ ವಿಸ್ತರಣೆ: 35 ಸಚಿವರ ಶಪಥ&lt;/li&gt; &lt;li&gt;ಮಾಜಿ ಕ್ರಿಕೆಟಿಗ ಅಶೋಕ್&zwnj; ದಿಂಡಾಗೂ ಮಂತ್ರಿಗಿರಿ&lt;/li&gt;&lt;/ul&gt;&lt;p&gt;&lt;strong&gt;ಕೋಲ್ಕತಾ (ಜೂ.2): &lt;/strong&gt;ಪಶ್ಚಿಮ ಬಂಗಾಳ(West Bengal)ದ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ(Suvendu adhikari) ಅಧಿಕಾರ ವಹಿಸಿಕೊಂಡ 3 ವಾರ ಬಳಿಕ ಇದೀಗ ಸಂಪುಟ ವಿಸ್ತರಣೆ ಆಗಿದ್ದು, ಪಕ್ಷದ 35 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.&lt;/p&gt;&lt;p&gt;ಇವರಲ್ಲಿ ಈ ಹಿಂದೆ ಅನ್ಯರ ಮನೆಗಳ ಮುಸುರೆ ತಿಕ್ಕಿ ಜೀವನ ನಡೆಸುತ್ತಿದ್ದ ಹಾಗೂ ಇತ್ತೀಚೆಗೆ ಶಾಸಕಿ ಆಗಿ ಆಯ್ಕೆ ಆಗಿದ್ದ ಕಲಿತಾ ಮಾಝಿ(Kalita majhi) ಅವರೂ ಇದ್ದಾರೆ. ಮಾಜಿ ಕ್ರಿಕೆಟಿಗ ಅಶೋಕ್&zwnj; ದಿಂಡಾ ಕೂಡ ಸಚಿವ ಸ್ಥಾನ ಪಡೆದಿದ್ದಾರೆ.&lt;/p&gt;&lt;p&gt;ಕೋಲ್ಕತಾದ ಲೋಕಭವನದಲ್ಲಿಯ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್&zwnj;.ಎನ್&zwnj;.ರವಿ ಪ್ರಮಾಣ ಬೋಧಿಸಿದರು. ಕೆಲವರು ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕರಿಸಿದರೆ ಇನ್ನು ಕೆಲವರು ರಾಜ್ಯ ಸಚಿವರಾಗಿ ಪ್ರಮಾಣ ಪಡೆದರು. ಈ ಮೂಲಕ ಮಂತ್ರಿಮಂಡಲ ಸಾಮರ್ಥ್ಯ 41ಕ್ಕೆ ಏರಿಕೆಯಾಗಿದೆ. ಈಗ ಸುವೇಂದು ಸರ್ಕಾರ ವಿಧಾನಸಭೆಯಲ್ಲಿ 294 ಸದಸ್ಯ ಬಲ ಹೊಂದಿದೆ.&lt;/p&gt;&lt;p&gt;ಇತ್ತೀಚಿನ ಚುನಾವಣೆಯಲ್ಲಿ ಬಜೆಪಿ ಗೆಲುವಿನ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಸುವೇಂದು ಮೇ 3ಕ್ಕೆ ಪ್ರಮಾಣ ಸ್ವೀಕರಿಸಿದ್ದರು.&lt;/p&gt;&lt;h2&gt;2021ರಲ್ಲೂ ಸ್ಪರ್ಧಿಸಿದ್ದ ಕಲಿತಾ:&lt;/h2&gt;&lt;p&gt;ರಾಜಕೀಯ ಪ್ರವೇಶಕ್ಕೂ ಮುನ್ನ ಮುಸುರೆ ತಿಕ್ಕುತ್ತಿದ್ದ ಕಲಿತಾ, ಈ ಹಿಂದಿನ 2021ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ ಪೂರ್ವ ಬರ್ಧಮಾನ್&zwnj; ಜಿಲ್ಲೆಯ ಆಸುಗ್ರಾಮ ಕ್ಷೇತ್ರದಿಂದ ಪಕ್ಷದ ಟಿಕೆಟ್&zwnj; ಪಡೆದು ಗೆದ್ದಿದ್ದರು. ಅವರ ಪತಿ ಪ್ಲಂಬರ್&zwnj; ಆಗಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/from-domestic-worker-to-bengal-minister-the-inspiring-journey-of-kalita-majhi-rav/articleshow-pwl15lz"/>
        </item>
        <item>
            <title><![CDATA[ರಾಜ್ಯಸಭೆ ಚುನಾವಣೆ ರೇಸ್‌ನಲ್ಲಿ ಸುಮಲತಾ: ಡಿಕೆಶಿ ಸಿಎಂ ಆಗ್ತಿರೋದಕ್ಕೂ ಇದಕ್ಕೂ ಇರುವ ಕನೆಕ್ಷನ್‌ ಏನು? ಬಿಜೆಪಿ ಮಾಸ್ಟರ್‌ ಪ್ಲಾನ್ ಬಯಲು!]]></title>
            <link>https://kannada.asianetnews.com/politics/sumalatha-ambareesh-in-the-race-for-rajya-sabha-elections-what-bjps-master-plan-rav/articleshow-udd8ras</link>
            <guid isPermaLink="true">https://kannada.asianetnews.com/politics/sumalatha-ambareesh-in-the-race-for-rajya-sabha-elections-what-bjps-master-plan-rav/articleshow-udd8ras</guid>
            <pubDate>Tue, 02 Jun 2026 06:33:45 +0530</pubDate>
            <description><![CDATA[&lt;p&gt;ರಾಜ್ಯಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು, ಬಿಜೆಪಿ ಪಾಳಯದಿಂದ ಸುಮಲತಾ ಅಂಬರೀಷ್ ಅವರ ಹೆಸರು ಮುಂಚೂಣಿಯಲ್ಲಿದೆ. ಜೆಡಿಎಸ್&zwnj;ನ ದೇವೇಗೌಡರಿಗೆ ಬೆಂಬಲ ನೀಡದಿದ್ದರೆ, ಸುಮಲತಾ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke9t2tqckvqh49v1b437294f,imgname-sumalatha-ambareesh--3--1767708388076.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.2):&lt;/strong&gt; ರಾಜ್ಯಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ಪಾಳೆಯದಿಂದ ಮಾಜಿ ಸಂಸದೆ ಸುಮಲತಾ ಅಂಬರೀಷ್(Sumalata Ambareesh) ಅವರ ಹೆಸರು ಮುಂಚೂಣಿಗೆ ಬಂದಿದೆ.&lt;/p&gt;&lt;p&gt;ಹಲವು ದಿನಗಳ ಹಿಂದೆ ನಡೆದ ರಾಜ್ಯ ಬಿಜೆಪಿ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ(DV Sadanandagowda) ಹಾಗೂ ಮಾಜಿ ಶಾಸಕ ನಿರ್ಮಲ್&zwnj; ಕುಮಾರ್ ಸುರಾನ ಅವರ ಹೆಸರುಗಳು ಪ್ರಮುಖವಾಗಿ ಪ್ರಸ್ತಾಪವಾಗಿ ವರಿಷ್ಠರಿಗೆ ರವಾನಿಸಲಾಗಿತ್ತು.&lt;/p&gt;&lt;p&gt;ಇದೀಗ ಆಡಳಿತಾರೂಢ ಕಾಂಗ್ರೆಸ್(Congress) ಪಾಳೆಯದಲ್ಲಿ ಮಹತ್ತರ ಬದಲಾವಣೆಯಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ.ಶಿವಕುಮಾರ್(DK Shivakumar) ಅವರು ಮುಖ್ಯಮಂತ್ರಿ ಗಾದಿ ಏರಲು ಸಜ್ಜಾಗುತ್ತಿದ್ದಂತೆಯೇ ಸುಮಲತಾ ಅಂಬರೀಷ್&zwnj; ಅವರ ಹೆಸರು ಬಲವಾಗಿ ಕೇಳಿಬಂದಿದ್ದು, ಖುದ್ದು ಬಿಜೆಪಿ ವರಿಷ್ಠರೇ ಆಸಕ್ತಿ ತೋರಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;ಗೌಡರ ಆಯ್ಕೆ ಬಗ್ಗೆ ಬಗೆಹರಿಯದ ಗೊಂದಲ:&lt;/h2&gt;&lt;p&gt;ಈ ನಡುವೆ ಸಿಗುವ ಒಂದು ಸ್ಥಾನಕ್ಕೆ ಮಾಜಿ ಪ್ರಧಾನಿ ಹಾಗೂ ಮಿತ್ರ ಪಕ್ಷವಾದ ಜೆಡಿಎಸ್&zwnj;ನ ರಾಷ್ಟ್ರೀಯ ಅಧ್ಯಕ್ಷ ಎಚ್&zwnj;.ಡಿ.ದೇವೇಗೌಡ(HD Devegowda)ರನ್ನು ಪರಿಗಣಿಸಲು ವರಿಷ್ಠರ ಮಟ್ಟದಲ್ಲಿ ಚರ್ಚೆ ನಡೆಸುತ್ತಿದೆಯಾದರೂ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ದೇವೇಗೌಡರಿಗೆ ಬೆಂಬಲ ನೀಡುವುದು ಬೇಡ ಎಂದಾದಲ್ಲಿ ಬಿಜೆಪಿಯಿಂದಲೇ ಸುಮಲತಾ ಅಂಬರೀಷ್&zwnj; ಹೆಸರು ಅಂತಿಮಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ.&lt;/p&gt;&lt;p&gt;ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಬೆಂಬಲ ನೀಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸದಸ್ಯರಾಗಿದ್ದ ಸುಮಲತಾ ಅವರು ಜೆಡಿಎಸ್&zwnj; ಪಕ್ಷ ಎನ್&zwnj;ಡಿಎ ಭಾಗವಾದ ಬಳಿಕ ಎಚ್&zwnj;.ಡಿ.ಕುಮಾರಸ್ವಾಮಿ ಅವರಿಗೆ ಆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆ ಬಳಿಕ ಸುಮಲತಾ ಅವರಿಗೆ ಎರಡು ವರ್ಷಗಳಾದರೂ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಇದೀಗ ಅವರ ವರ್ಚಸ್ಸು ಮತ್ತು ರಾಜಕೀಯ ಶಕ್ತಿ ಬಳಸಿಕೊಳ್ಳುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಚಿಂತನೆ ನಡೆದಿದೆ. ಅಂತಿಮವಾಗಿ ಟಿಕೆಟ್ ಘೋಷಣೆಯಾಗುವವರೆಗೆ ಕಾದು ನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/sumalatha-ambareesh-in-the-race-for-rajya-sabha-elections-what-bjps-master-plan-rav/articleshow-udd8ras"/>
        </item>
        <item>
            <title><![CDATA[Pakistan energy crisis: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ರಾತ್ರಿ 8ಕ್ಕೆಲ್ಲ ಪಾಕ್‌ನಲ್ಲಿ ಅಂಗಡಿ ಬಂದ್!]]></title>
            <link>https://kannada.asianetnews.com/world-news/middle-east-crisis-shops-in-pakistan-to-close-at-8pm-every-night-rav/articleshow-5e6ghqs</link>
            <guid isPermaLink="true">https://kannada.asianetnews.com/world-news/middle-east-crisis-shops-in-pakistan-to-close-at-8pm-every-night-rav/articleshow-5e6ghqs</guid>
            <pubDate>Tue, 02 Jun 2026 06:11:01 +0530</pubDate>
            <description><![CDATA[&lt;p&gt;ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ತೀವ್ರ ಇಂಧನ, ಆರ್ಥಿಕದಲ್ಲಿರುವ ಪಾಕಿಸ್ತಾನ, ವೆಚ್ಚ ಕಡಿತಗೊಳಿಸಲು ಮಿತವ್ಯಯದ ಕ್ರಮಗಳನ್ನು ಜಾರಿಗೊಳಿಸಿದೆ. ಇದರ ಭಾಗವಾಗಿ, ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಹಲವೆಡೆ ಶಾಪಿಂಗ್ ಮಾಲ್&zwnj;ಗಳು ಮತ್ತು ಅಂಗಡಿಗಳನ್ನು ರಾತ್ರಿ 8 ಗಂಟೆಗೆ ಮುಚ್ಚಲು ಸರ್ಕಾರ ಆದೇಶಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt2w8h7t5r79tj8m5g048end,imgname-----------------------2026-06-02t060748.738-1780360692986.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ತನ್ನ ಬಹುತೇಕ ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಕೊಲ್ಲಿ ದೇಶ ಅವಲಂಬಿಸಿರುವ ಪಾಕಿಸ್ತಾನ&lt;/li&gt; &lt;li&gt;ಆದರೆ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಅಗತ್ಯ ತೈಲ ಪೂರೈಕೆಯಾಗದೇ ದೇಶದಲ್ಲಿ ಭಾರೀ ಸಮಸ್ಯೆ&lt;/li&gt; &lt;li&gt;ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಪಾಕ್&zwnj;ಗೆ ತೈಲದ ದರ ಹೆಚ್ಚಳದಿಂದಾಗಿ ಮತ್ತಷ್ಟು ತೊಂದರೆ&lt;/li&gt; &lt;li&gt;ಈ ಬಿಕ್ಕಟ್ಟಿನಿಂದ ಹೊರಬರಲು ದೇಶವ್ಯಾಪಿ ಹಲವು ಮಿತವ್ಯಯದ ಕ್ರಮ ಘೋಷಿಸಿದ ಸರ್ಕಾರ&lt;/li&gt; &lt;li&gt;ಇದರ ಭಾಗವಾಗಿ ರಾಜಧಾನಿ ಸೇರಿ ಹಲವೆಡೆ ರಾತ್ರಿ 8ಕ್ಕೆ ವಾಣಿಜ್ಯ ಚಟುವಟಿಕೆ ಬಂದ್&zwnj;ಗೆ ಸೂಚನೆ&lt;/li&gt;&lt;/ul&gt;&lt;p&gt;&lt;strong&gt;ಇಸ್ಲಾಮಾಬಾದ್&zwnj; (ಜೂ.2):&lt;/strong&gt; ಮಧ್ಯಪ್ರಾಚ್ಯ ಸಂಘರ್ಷ(Middle east conflict)ದ ಬಳಿಕ ತೀವ್ರ ಇಂಧನ ಹಾಗೂ ವಿದ್ಯುತ್&zwnj; ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನ(Pakistan), ಇದೀಗ ರಾಜಧಾನಿ ಇಸ್ಲಾಮಾಬಾದ್&zwnj;(Islamabad) ಸೇರಿ ಹಲವು ಕಡೆ ಶಾಪಿಂಗ್&zwnj; ಮಾಲ್&zwnj;, ಮತ್ತಿತರ ಅಂಗಡಿಗಳನ್ನು ರಾತ್ರಿ 8 ಗಂಟೆಗೆ ಬಂದ್&zwnj; ಮಾಡಲು ಆದೇಶಿಸಿದೆ.&lt;/p&gt;&lt;p&gt;ಈ ಮೊದಲು ಅಮೆರಿಕ-ಇರಾನ್&zwnj; ಕದನ(US-Iran war) ತೀವ್ರಗೊಂಡಾಗ ಇದೇ ರೀತಿಯ ಕ್ರಮಗಳನ್ನು ಪಾಕ್&zwnj; ಜಾರಿ ಮಾಡಿತ್ತಾದರೂ ನಂತರ ಬಕ್ರೀದ್ ವೇಳೆ ಕೈಬಿಟ್ಟಿತ್ತು. ಇದೀಗ ಪುನಃ ಅದೇ ಮಾದರಿಯ ಕ್ರಮಗಳಿಗೆ ಆದೇಶಿಸಿದೆ.&lt;/p&gt;&lt;h2&gt;ಏನು ಕ್ರಮ?:&lt;/h2&gt;&lt;p&gt;ಅದರಂತೆ ಶಾಪಿಂಗ್ ಮಾಲ್&zwnj;ಗಳು, ಮಾರ್ಕೆಟ್&zwnj;ಗಳು, ಅಂಗಡಿಗಳನ್ನು 8 ಗಂಟೆಗೇ ಬಂದ್ ಮಾಡಬೇಕು. ಬೇಕರಿಗಳು, ರೆಸ್ಟೋರೆಂಟ್&zwnj;ಗಳು, ದಿನಸಿ ಅಂಗಡಿಗಳು, ಆಹಾರದ ಮಳಿಗೆಗಳು 10 ಗಂಟೆವರೆಗೆ ತೆರೆಯಲು ಅವಕಾಶವಿದೆ. ಮದುವೆ ಸಭಾಂಗಣಗಳು ಮತ್ತು ಇತರ ಕಾರ್ಯಕ್ರಮ ನಡೆಯುವ ಸ್ಥಳಗಳು ರಾತ್ರಿ 10 ಗಂಟೆಗೆ ಮುಚ್ಚಬೇಕು. ತುರ್ತು ಸೇವೆಗಳಾದ ಮೆಡಿಕಲ್&zwnj;, ಆಸ್ಪತ್ರೆಗಳು, ಪೆಟ್ರೋಲ್&zwnj; ಪಂಪ್&zwnj;ಗಳು, ಐಟಿ ಕಂಪನಿಗಳಿಗೆ ಈ ನಿರ್ದೇಶನದಿಂದ ವಿನಾಯ್ತಿ ಇರಲಿದೆ.&lt;/p&gt;&lt;h3&gt;ಈ ಕ್ರಮ ಏಕೆ?:&lt;/h3&gt;&lt;p&gt;ಮಧ್ಯಪ್ರಾಚ್ಯ ಸಂಘರ್ಷದಿಂದ ಪೆಟ್ರೋಲ್&zwnj;, ಡೀಸೆಲ್&zwnj; ದರ ಏರಿಕೆ ಹಾಗೂ ವಿದ್ಯುತ್&zwnj; ಸಮಸ್ಯೆಯಿಂದಾಗಿ ಪಾಕ್&zwnj; ಸರ್ಕಾರ ಕಂಗಾಲಾಗಿದೆ. ರಾತ್ರಿ ವೇಳೆ ವಿದ್ಯುತ್&zwnj; ಬಳಕೆ ಹೆಚ್ಚಿದರೆ ವೆಚ್ಚ ಸರ್ಕಾರಕ್ಕೆ ವೆಚ್ಚ ಹೆಚ್ಚಾಗುತ್ತದೆ. ಹೀಗಾಗಿ ವೆಚ್ಚ ಕಡಿತದಂಥ ಮಾರ್ಗಗಳತ್ತ ಮುಂದಾಗಿದೆ. ಇದರ ಭಾಗವಾಗಿ ಈ ಆದೇಶ ಹೊರಡಿಸಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/middle-east-crisis-shops-in-pakistan-to-close-at-8pm-every-night-rav/articleshow-5e6ghqs"/>
        </item>
        <item>
            <title><![CDATA[Google Mosquito: ಸೊಳ್ಳೆ ನಿಯಂತ್ರಣಕ್ಕೆ ಬರಲಿವೆ ಗೂಗಲ್ ಸೊಳ್ಳೆ! ಹೆಣ್ಣು ಸೊಳ್ಳೆಗಳಿಗೆ ಮರಿ ಹುಟ್ಟದಂತೆ ತಡೆಯೋದೇ ಇವುಗಳ ಗುರಿ!]]></title>
            <link>https://kannada.asianetnews.com/world-news/google-s-32-million-strong-mosquito-army-to-fight-against-mosquitoes-rav/articleshow-7wus099</link>
            <guid isPermaLink="true">https://kannada.asianetnews.com/world-news/google-s-32-million-strong-mosquito-army-to-fight-against-mosquitoes-rav/articleshow-7wus099</guid>
            <pubDate>Tue, 02 Jun 2026 05:49:14 +0530</pubDate>
            <description><![CDATA[ಗೂಗಲ್ ತನ್ನ 'ಡೀಬಗ್' ಯೋಜನೆಯಡಿ 3.2 ಕೋಟಿ ಗಂಡು ಸೊಳ್ಳೆಗಳನ್ನು ಸೃಷ್ಟಿಸಿದೆ. ವೋಲ್ಬಾಚಿಯಾ ಬ್ಯಾಕ್ಟೀರಿಯಾ ಹೊಂದಿರುವ ಈ ಸೊಳ್ಳೆಗಳು, ರೋಗಕಾರಕ ಹೆಣ್ಣು ಸೊಳ್ಳೆಗಳ ಮೊಟ್ಟೆಗಳನ್ನು ನಾಶಪಡಿಸುವ ಮೂಲಕ ಸೊಳ್ಳೆಗಳ ಸಂತತಿಯನ್ನು ನಿರ್ನಾಮ ಮಾಡುವ ಗುರಿ ಹೊಂದಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt2ttdtqwqjzs9qrk21cnqng,imgname-----------------------2026-06-02t054245.683-1780359182167.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಗೂಗಲ್&zwnj;ನಿಂದ 3.2 ಕೋಟಿ ಗಂಡು ಸೊಳ್ಳೆಗಳ ಸೃಷ್ಟಿ!&lt;/li&gt; &lt;li&gt;ಬಿಡುಗಡೆಗೆ ಸರ್ಕಾರದ ಬಳಿ ಮನವಿ&lt;/li&gt; &lt;li&gt;ಜಗತ್ತನ್ನು ಸೊಳ್ಳೆ ಮುಕ್ತ ಮಾಡುವ ಗುರಿ&lt;/li&gt;&lt;/ul&gt;&lt;p&gt;&lt;strong&gt;ವಾಷಿಂಗ್ಟನ್&zwnj; (ಜೂ.2)&lt;/strong&gt;: ಸೊಳ್ಳೆಗಳಿಂದ ಮುಕ್ತಿಗೆ ಜಗತ್ತೇ ಯತ್ನಿಸುತ್ತಿರುವ ನಡುವೆ ಗೂಗಲ್&zwnj; ಕಂಪನಿಯು 3.2 ಕೋಟಿ ಸೊಳ್ಳೆಗಳನ್ನು ಸೃಷ್ಟಿಸಿ ಬಿಡುಗಡೆ ಮಾಡಲು ಮುಂದಾಗಿದೆ. ವಿಚಿತ್ರವೆನಿಸುವ ಈ ಯೋಜನೆಯ ಉದ್ದೇಶ ಸೊಳ್ಳೆಗಳ ಸಂತತಿಯನ್ನು ನಿರ್ನಾಮ ಮಾಡುವುದೇ ಆಗಿದೆ.&lt;/p&gt;&lt;p&gt;ಕಂಪನಿಯು ರೋಗಕಾರಕ ಸೊಳ್ಳೆಗಳಿಂದ ಮುಕ್ತಿಗಾಗಿ ದಶಕದ ಹಿಂದೆ &lsquo;ಡೀಬಗ್&zwnj;&rsquo; ಎಂಬ ಯೋಜನೆ ಆರಂಭಿಸಿದ್ದು, ಇದರ ಭಾಗವಾಗಿ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಕಳೆದ 2 ವರ್ಷಗಳಲ್ಲಿ 3.2 ಕೋಟಿ ಸೊಳ್ಳೆಗಳನ್ನು ಸೃಷ್ಟಿಸಿತ್ತು. ಈಗ ಅವುಗಳನ್ನು 2 ಹಂತದಲ್ಲಿ ಬಿಡುಗಡೆಗೆ ಅನುಮತಿಗಾಗಿ ಅಮೆರಿಕದ ಪರಿಸರ ಸಂರಕ್ಷಣಾ ಇಲಾಖೆಗೆ ಮನವಿ ಮಾಡಿದೆ.&lt;/p&gt;&lt;p&gt;ಈ ತಂತ್ರವನ್ನು ಈಗಾಗಲೇ ಸ್ಕ್ರೂವರ್ಮ ಎಂಬ ನೊಣದ ರೀತಿಯ ಜೀವಿಯ ಮೇಲೆ ಪ್ರಯೋಗ ಮಾಡಲಾಗಿದೆ.&lt;/p&gt;&lt;h2&gt;ಸೊಳ್ಳೆಗಳೇನು ಮಾಡ್ತವೆ?:&lt;/h2&gt;&lt;p&gt;ಗೂಗಲ್&zwnj;ನ ಸೊಳ್ಳೆಗಳಲ್ಲಿ ವೋಲ್ಬಾಚಿಯಾ ಪೈಪಿಯೆಂಟಿಸ್ ಬ್ಯಾಕ್ಟೀರಿಯಾ ಇರುತ್ತದೆ. ಇವುಗಳ ಜತೆಗಿನ ಸಂಭೋಗದಿಂದ ಹೆಣ್ಣುಸೊಳ್ಳೆಗಳಿಡುವ ಮೊಟ್ಟೆಗಳು ಒಡೆಯುವುದೇ ಇಲ್ಲ. ಹೀಗೆ ಕ್ರಮೇಣ ಸೊಳ್ಳೆಗಳ ಜನನವೇ ನಿಂತು ಅವು ನಿರ್ನಾಮವಾಗುತ್ತವೆ ಎಂಬುದು ಈ ಯೋಜನೆಯ ಲೆಕ್ಕಾಚಾರ.&lt;/p&gt;&lt;p&gt;ಇದಕ್ಕೆಂದು ಬಿಡುಗಡೆ ಮಾಡಲಾಗುವ 3.2 ಕೋಟಿ ಗಂಡು ಸೊಳ್ಳೆಗಳಿಂದ ಮನುಷ್ಯರಿಗೆ ಯಾವುದೇ ಅಪಾಯವಾಗದು. ಕಾರಣ ಕಚ್ಚುವುದು ಹೆಣ್ಣುಸೊಳ್ಳೆಗಳು ಮಾತ್ರ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/google-s-32-million-strong-mosquito-army-to-fight-against-mosquitoes-rav/articleshow-7wus099"/>
        </item>
        <item>
            <title><![CDATA[ಅಭಿಷೇಕ್ ಬಳಿಕ ಮತ್ತೋರ್ವ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ, ಬಂಧಿತರಲ್ಲಿ ಟಿಎಂಸಿ ಬೆಂಬಲಿಗರೇ!]]></title>
            <link>https://kannada.asianetnews.com/india-news/after-abhishek-tmc-mp-kalyan-banerjee-attack-in-west-bengal-rav/articleshow-rkd0drg</link>
            <guid isPermaLink="true">https://kannada.asianetnews.com/india-news/after-abhishek-tmc-mp-kalyan-banerjee-attack-in-west-bengal-rav/articleshow-rkd0drg</guid>
            <pubDate>Tue, 02 Jun 2026 05:23:25 +0530</pubDate>
            <description><![CDATA[&lt;p&gt;ಟಿಎಂಸಿ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಕಲ್ಯಾಣ್ ಬ್ಯಾನರ್ಜಿ ಮೇಲೆ ನಡೆದ ಹಲ್ಲೆಯ ನಂತರ, ಮಮತಾ ಬ್ಯಾನರ್ಜಿ ಕರೆದಿದ್ದ ಶಾಸಕರ ಸಭೆಗೆ 80 ಶಾಸಕರಲ್ಲಿ ಕೇವಲ 20 ಮಂದಿ ಹಾಜರಾಗಿದ್ದಾರೆ. ಈ ಬೆಳವಣಿಗೆಯು ಟಿಎಂಸಿಯಲ್ಲಿ ಆಂತರಿಕ ಒಡಕು ಮೂಡಿರುವ ಶಂಕೆಯನ್ನು ಬಲಪಡಿಸಿದ್ದು, ಪಕ್ಷದಲ್ಲಿ ತೀವ್ರ ಕಳವಳ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt2sgdxksafgxxq3s4djyzst,imgname-----------------------2026-06-02t051937.795-1780357806003.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ (ಜೂ.2):&lt;/strong&gt; ಇತ್ತೀಚಿನ ವಿಧಾನಸಭಾ ಚುನಾವಣೆಯ ಆಘಾತಕಾರಿ ಸೋಲಿನಿಂದ ಚೇತರಿಸಿಕೊಳ್ಳುವ ಮೊದಲೇ ಪಶ್ಚಿಮ ಬಂಗಾಳ(West bengal)ದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(mamata banerjee)ಗೆ ಮತ್ತಷ್ಟು ಆಘಾತ ಎದುರಾಗಿದೆ. ಶನಿವಾರ ಮಮತಾರ ಸೋದರಳಿಯ ಅಭಿಷೇಕ್&zwnj; ಬ್ಯಾನರ್ಜಿ(Abhishek banerjee) ಮೇಲಿನ ಹಲ್ಲೆಯ ಬೆನ್ನಲ್ಲೇ ಟಿಎಂಸಿ(TMC)ಯ ಮತ್ತೋರ್ವ ಸಂಸದ ಕಲ್ಯಾಣ್&zwnj; ಬ್ಯಾನರ್ಜಿ(MP Kalyan banerjee) ಮೇಲೆ ಭಾನುವಾರ ಗುಂಪೊಂದು ಕೋಲ್ಕತಾದಲ್ಲಿ ಹಲ್ಲೆ ನಡೆಸಿದೆ. ಇದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಭಾರೀ ಕಳವಳ ಹುಟ್ಟಿಸಿದೆ.&lt;/p&gt;&lt;p&gt;ಈ ಬೆಳವಣಿಗೆ ನಡುವೆಯೇ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾನುವಾರ ಇಲ್ಲಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ. ಮಮತಾ ಅವರ ಕಾಳಿಘಾಟ್&zwnj; ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.&lt;/p&gt;&lt;p&gt;ಇಬ್ಬರು ನಾಯಕರ ಮೇಲಿನ ದಾಳಿಯಿಂದ ಭೀತಿಗೊಳಗಾಗಿ ಶಾಸಕರು ಸಭೆಗೆ ಗೈರಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದ್ದರೆ, ಚುನಾವಣಾ ಫಲಿತಾಂಶದ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿರುವುದೇ ಶಾಸಕರು ಸಭೆಗೆ ಗೈರಾಗಲು ಕಾರಣ ಎಂದು ವರದಿಗಳು ಹೇಳಿವೆ.&lt;/p&gt;&lt;h2&gt;ಅಭಿಷೇಕ್&zwnj;ರನ್ನು ದಾಖಲಿಸದ್ದಕ್ಕೆ ಮಮತಾ ಕೂಗಾಟ: ವಿಡಿಯೋ&lt;/h2&gt;&lt;p&gt;ಕೋಲ್ಕತಾ: ಟಿಎಂಸಿ ಸಂಸದ ಅಭಿಷೇಕ್&zwnj; ಬ್ಯಾನರ್ಜಿ ಮೇಲೆ ಹಲ್ಲೆ ಸಂಬಂಧ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಆಸ್ಪತ್ರೆ ಸಿಇಒ ಮೇಲೆಯೇ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಕೂಗಾಟ ನಡೆಸಿದ್ದಾರೆ. ಇದರ ವಿಡಿಯೋ ಹಂಚಿಕೊಂಡು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.&lt;/p&gt;&lt;p&gt;ಹಲ್ಲೆ ಬಳಿಕ ಅಭಿಷೇಕ್&zwnj; ಅವರನ್ನು ಕೋಲ್ಕತ್ತಾದ ಬೆಲ್ಲೆ ವ್ಯೂ ಆಸ್ಪತ್ರೆ(Bellevue Hospital, Kolkata)ಗೆ ಕರೆದೊಯ್ಯಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿದ್ದ ವೈದ್ಯರು, ಅವರನ್ನು ದಾಖಲಿಸಿಕೊಳ್ಳುವ ಅಗತ್ಯವಿರಲಿಲ್ಲ ಎಂದಿದ್ದರು. ಇಷ್ಟಕ್ಕೆ ಸಿಟ್ಟಾದ ಮಮತಾ ಆಸ್ಪತ್ರೆ ಸಿಇಒ ಪ್ರದೀಪ್&zwnj; ಟಂಡನ್&zwnj; ವಿರುದ್ಧ ಕಿಡಿಕಾರಿದ್ದಾರೆ. &lsquo;ನೀವು ತಪ್ಪು ಮಾಡುತ್ತಿದ್ದೀರಿ. ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ನಾಚಿಕೆ ಪಡಬೇಕು. ಬಿಜೆಪಿ ಅಧಿಕಾರದಲ್ಲಿರುವುದರಿಂದ ನೀವು ಆಸ್ಪತ್ರೆ ನಡೆಸುತ್ತಿದ್ದೀರಿ. ವೈದ್ಯರನ್ನು ಬೆದರಿಸುತ್ತಿದ್ದೀರಿ. ಒಂದು ವೇಳೆ ನಾಳೆ ಕೇಂದ್ರ ಅಧಿಕಾರದಲ್ಲಿರದಿದ್ದರೆ ನಾವು ಇದನ್ನು ನೋಡಿಕೊಳ್ಳುತ್ತೇವೆ&rsquo; ಎಂದು ಬೆದರಿಸಿದ್ದಾರೆ.&lt;/p&gt;&lt;p&gt;ಬಿಜೆಪಿ ರಾಜ್ಯ ವಕ್ತಾರ ದೇವಜಿತ್&zwnj; ಸರ್ಕಾರ್ ಈ ವಿಡಿಯೋ ಎಕ್ಸ್&zwnj;ನಲ್ಲಿ ಹಂಚಿಕೊಂಡಿದ್ದು, &lsquo;ಗಂಭೀರ ಗಾಯಗಳಾಗದಿದ್ದರೂ ತಮ್ಮ ಸೋದರಳಿಯನನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಮಮತಾ ಬ್ಯಾನರ್ಜಿ ಆಸ್ಪತ್ರೆಯವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಸಿಐಡಿ ಸಮನ್ಸ್&zwnj;ನಿಂದ ತಪ್ಪಿಸಿಕೊಳ್ಳುವ ಪ್ರಯತ್ನವೇ? &rsquo; ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;ಟಿಎಂಸಿಯಲ್ಲಿ ಒಡಕು?: ಸಭೆಗೆ 20 ಶಾಸಕರಷ್ಟೆ ಭಾಗಿ&lt;/h3&gt;&lt;p&gt;ಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣಾ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿದೆ ಎನ್ನುವ ವದಂತಿ ನಡುವೆ ಅದನ್ನು ಪುಷ್ಟೀಕರಿಸುವಂತೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ.&lt;/p&gt;&lt;p&gt;ಮಮತಾ ಅವರ ಕಾಳಿಘಾಟ್&zwnj; ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.&lt;/p&gt;&lt;p&gt;ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಟಿಎಂಸಿ ವಕ್ತಾರ ಕುನಾಲ್&zwnj; ಘೋಷ್&zwnj;, &lsquo;ನಮ್ಮ ನಾಯಕ ಅಭಿಷೇಕ್&zwnj; ಬ್ಯಾನರ್ಜಿ ಮತ್ತು ಸಂಸದ ಕಲ್ಯಾಣ್&zwnj; ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಕಾರಣದಿಂದ ಆತಂಕಗೊಂಡಿರುವ ಶಾಸಕರು ಸಭೆಗೆ ಬಂದಿಲ್ಲ. ಗೈರಾದ ಶಾಸಕರ ವಿನಂತಿ ಮೇರೆಗೆ ಸಭೆ ಮುಂದೂಡಲಾಗಿದೆ. ಶೀಘ್ರದಲ್ಲಿ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು&rsquo; ಎಂದರು.&lt;/p&gt;&lt;p&gt;&lt;strong&gt;ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣ: 6 ಜನರ ಬಂಧನ&lt;/strong&gt;&lt;/p&gt;&lt;p&gt;ಇನ್ನು ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ್&zwnj; ಬ್ಯಾನರ್ಜಿ ಮೇಲೆ ಶನಿವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ 6 ಜನರನ್ನು ಬಂಧಿಸಿದ್ದಾರೆ.&lt;/p&gt;&lt;p&gt;ಶನಿವಾರ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್&zwnj; ಬ್ಯಾನರ್ಜಿ ಆಗಲಿ ಅಥವಾ ತೃಣಮೂಲ ಕಾಂಗ್ರೆಸ್&zwnj; ಯಾವುದೇ ದೂರು ನೀಡಿರಲಿಲ್ಲ. ಹೀಗಾಗಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅದರಂತೆ ಸೋನಾರ್ಪುರ್ ದಕ್ಷಿಣದಲ್ಲಿ ಶನಿವಾರ ನಡೆದಿದ್ದ ಹಲ್ಲೆ ಸಂದರ್ಭದಲ್ಲಿನ ಸಿಸಿಟೀವಿ ದೃಶ್ಯಗಳ ಪರಿಶೀಲಿಸಿ ಪೊಲೀಸರು ರಾತ್ರಿಯಿಡೀ ಶೋಧ ನಡೆಸಿ 6 ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಚುನಾವಣೋತ್ತರ ಹಿಂಸಾಚಾರಕ್ಕೆ ತುತ್ತಾಗಿದ್ದ ಪಕ್ಷದ ಕಾರ್ಯಕರ್ತರ ಮನೆಗೆ ತೆರಳಿದ್ದ ಟಿಎಂಸಿ ನಂ.2 ನಾಯಕನ ಮೇಲೆ ಶನಿವಾರ ಗುಂಪೊಂದು ಕಲ್ಲು, ಚಪ್ಪಲಿ, ಮೊಟ್ಟೆಯಿಂದ ದಾಳಿ ಮಾಡಿತ್ತು. ಆಗ ಪೊಲೀಸರು ಹೆಲ್ಮೆಟ್&zwnj; ಹಾಕಿ ರಕ್ಷಣೆ ಮಾಡಿದ್ದರು.&lt;/p&gt;&lt;p&gt;&lt;strong&gt;ಬಂಧಿತರಲ್ಲಿ ಹಲವರು ಟಿಎಂಸಿಯವರೇ?&lt;/strong&gt;&lt;/p&gt;&lt;p&gt;ಬಂಧಿತರಲ್ಲಿ ತಪನ್ ಮೈಟಿ, ಆಕಾಶ್, ನಿರ್ಮಾಲ್ಯ ಸೇನ್&zwnj;ಗುಪ್ತಾ, ಕಾಜಲ್ ದಾಸ್ ಮತ್ತು ದೇಬಾಶಿಶ್ ದತ್ತಾ ಎಂಬುವರು ಇದ್ದಾರೆ. ಇವರಲ್ಲಿ ದಾಸ್&zwnj;, ನಿರ್ಮಾಲ್ಯ ಹಾಗೂ ದತ್ತಾ ಟಿಎಂಸಿಯ ಮಾಜಿ ಶಾಸಕಿ ಲವ್ಲಿ ಮೈತ್ರಾ ಅವರ ಆಪ್ತರಾಗಿದ್ದರು. ಬಹುಶಃ ಪಕ್ಷದಲ್ಲಿನ ಒಳಜಗಳ ಘಟನೆಗೆ ಕಾರಣವಾಗಿರಬಹುದೆ ಎಂದು ಪ್ರಶ್ನೆ ಉದ್ಭವಿಸಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/after-abhishek-tmc-mp-kalyan-banerjee-attack-in-west-bengal-rav/articleshow-rkd0drg"/>
        </item>
        <item>
            <title><![CDATA[ನಿನ್ನೆ ನಡೆಯಬೇಕಿದ್ದ ಸಭೆ ಇಂದು ಬೆಳಗ್ಗೆ 11ಕ್ಕೆ, ದಿಲ್ಲಿಯಲ್ಲಿಂದು ಸಂಪುಟ ಸರ್ಕಸ್‌, ಇಂದೇ ಈ ಸಚಿವರ ಹೆಸರು ಘೋಷಣೆಯಾಗುತ್ತಾ?]]></title>
            <link>https://kannada.asianetnews.com/politics/meeting-postponed-yesterday-to-be-held-today-at-11-am-karnataka-new-cabinet-reshuffle-circus-in-delhi-rav/articleshow-xbgr3uu</link>
            <guid isPermaLink="true">https://kannada.asianetnews.com/politics/meeting-postponed-yesterday-to-be-held-today-at-11-am-karnataka-new-cabinet-reshuffle-circus-in-delhi-rav/articleshow-xbgr3uu</guid>
            <pubDate>Tue, 02 Jun 2026 04:58:02 +0530</pubDate>
            <description><![CDATA[&lt;p&gt;ಕರ್ನಾಟಕ ನೂತನ ಸಂಪುಟ ರಚನೆ ಕುರಿತ ಕಾಂಗ್ರೆಸ್ ವರಿಷ್ಠರ ದೆಹಲಿ ಸಭೆಯು ಸೋಮವಾರದ ಬದಲು ಮಂಗಳವಾರ ನಡೆಯಲಿದೆ. ಈ ನಡುವೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಮ್ಮ ಪ್ರತ್ಯೇಕ ಪಟ್ಟಿಗಳೊಂದಿಗೆ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇಂದು ಸಭೆಯಲ್ಲಿ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt2qmzg9w7agj5gwqd11r7ke,imgname-----------------------2026-06-02t044528.224-1780355857929.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.2): &lt;/strong&gt;ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj;(DK Shivakumar) ಅವರ ಸಂಪುಟ ರಚನೆ(Cabinet Reshuffle) ಸಂಬಂಧ ದೆಹಲಿಯಲ್ಲಿ ಸೋಮವಾರ ನಡೆಯಬೇಕಿದ್ದ ಕಾಂಗ್ರೆಸ್&zwnj; ವರಿಷ್ಠರ ಸಭೆ ಮಂಗಳವಾರಕ್ಕೆ ಮುಂದೂಡಿಕೆ ಕಂಡಿದೆ.&lt;/p&gt;&lt;p&gt;ವರಿಷ್ಠ ರಾಹುಲ್ ಗಾಂಧಿ ಅವರ ಅಲಭ್ಯತೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಂಜೆ ತಡವಾಗಿ ಆಗಮಿಸಿದ ಕಾರಣ ಸಭೆ ಮಂಗಳವಾರ ಬೆಳಗ್ಗೆ 11ಕ್ಕೆ ಮುಂದೂಡಿಕೆಯಾಗಿದೆ.&lt;/p&gt;&lt;p&gt;ರಾಜಸ್ಥಾನ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ(Rajasthan) ಅವರು ಸೋಮವಾರ ತಡವಾಗಿ ದೆಹಲಿ(Delhi)ಗೆ ತಲುಪಿದ್ದರಿಂದ ಹಾಗೂ ವಿಮಾನ ರದ್ದಾದ ಕಾರಣ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ(KC Venugopal) ಅವರು ಸಂಜೆ ವೇಳೆ ದೆಹಲಿಗೆ ಆಗಮಿಸಿದ್ದರಿಂದ ಸಭೆಯನ್ನು ಮುಂದೂಡಲಾಯಿತು ಎಂದು ಮೂಲಗಳು ಹೇಳಿವೆ.&lt;/p&gt;&lt;p&gt;ಆದಾಗ್ಯೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅವರು ಪ್ರತ್ಯೇಕವಾಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದರು. ಸಿದ್ದರಾಮಯ್ಯ ಅವರು ವೇಣುಗೋಪಾಲ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರೆ, ಶಿವಕುಮಾರ್&zwnj; ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.&lt;/p&gt;&lt;p&gt;ಪ್ರತ್ಯೇಕ ಪಟ್ಟಿಯೊಂದಿಗೆ ದೆಹಲಿಗೆ ತಲುಪಿರುವ ಈ ನಾಯಕರು ತಮ್ಮ ಪಟ್ಟಿಯ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದು, ಮಂಗಳವಾರ ಬೆಳಗ್ಗೆ 11ಕ್ಕೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್&zwnj;, ವೇಣುಗೋಪಾಲ್, ಸುರ್ಜೇವಾಲಾ ಅವರು ಸಭೆ ಸೇರಿ ಪಟ್ಟಿ ಅಖೈರುಗೊಳಿಸುವರು. ಇದಾದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಅಂತಿಮ ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸುವರು ಎಂದು ಹೇಳಲಾಗಿದೆ.&lt;/p&gt;&lt;p&gt;--&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/meeting-postponed-yesterday-to-be-held-today-at-11-am-karnataka-new-cabinet-reshuffle-circus-in-delhi-rav/articleshow-xbgr3uu"/>
        </item>
        <item>
            <title><![CDATA[ಇಂಧನ ಉಳಿಸಿ ಎಂದ ಪ್ರಧಾನಿ ಮೋದಿ, ತಾವೇ 53 ನಗರ ಸುತ್ತಾಡಿದರು: ಪ್ರಿಯಾಂಕ್ ಖರ್ಗೆ ಟೀಕೆ]]></title>
            <link>https://kannada.asianetnews.com/karnataka-districts/priyank-kharge-slams-pm-modi-over-fuel-crisis-gvd/articleshow-0ylxxp2</link>
            <guid isPermaLink="true">https://kannada.asianetnews.com/karnataka-districts/priyank-kharge-slams-pm-modi-over-fuel-crisis-gvd/articleshow-0ylxxp2</guid>
            <pubDate>Tue, 02 Jun 2026 00:26:54 +0530</pubDate>
            <description><![CDATA[&lt;p&gt;ಜಾಲತಾಣದ ಪ್ರಭಾವಿ ಇನ್&zwnj;ಫ್ಲೂಯೆನ್ಸರ್ ಹಾಗೂ ವಿಷಯ ರಚನಾಕಾರ ಮಹಾಮಾನವ ಮೋದಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಓಡಾಡುತ್ತಿದ್ದರು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಮೋದಿ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk67zh6mptcmb3mr46h0kb1y,imgname----------------------95--1772957451476.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಜೂ.02): &lt;/strong&gt;ಒಂದು ಕಡೆ ಇಡೀ ದೇಶ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಹಾಗೂ ಡಿಸೇಲ್ ಕೊರತೆ ಎದುರಿಸುತ್ತಿದ್ದಾಗ, ಮತ್ತೊಂದು ಕಡೆ ಭಾರತದ ಸಾಮಾಜಿಕ ಜಾಲತಾಣದ ಪ್ರಭಾವಿ ಇನ್&zwnj;ಫ್ಲೂಯೆನ್ಸರ್ ಹಾಗೂ ವಿಷಯ ರಚನಾಕಾರ ಮಹಾಮಾನವ ಮೋದಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಓಡಾಡುತ್ತಿದ್ದರು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಮೋದಿ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.&lt;/p&gt;&lt;p&gt;ದಿ ವೈರ್ ವೆಬ್ ಸೈಟ್ ನ್ಯೂಸ್ ಪೋರ್ಟಲ್ ನಲ್ಲಿ ಪ್ರಕಟವಾದ ಸುದ್ದಿಯ ಲಿಂಕ್ ನ್ನು ಎಕ್ಸ್ ನಲ್ಲಿ ಹಂಚಿಕೊಂಡು ಬರೆದುಕೊಂಡಿರುವ ಖರ್ಗೆ, ಇಂಧನ ಉಳಿಸುವಂತೆ ಮೇ 10ರಂದು ಸಾರ್ವಜನಿಕರಿಗೆ ಕರೆ ನೀಡಿದ್ದ ಮೋದಿ ಪ್ರತಿಯೊಬ್ಬರು ಕಾರ್ ಬಳಸುವ ಬದಲು ಸಾರ್ವಜನಿಕ ಸಾರಿಗೆ ಬಳಸುವ ಮೂಲಕ ಇಂಧನ ಉಳಿಸುವಂತೆ ಹೇಳಿದ್ದರು.&lt;/p&gt;&lt;p&gt;ಆದರೆ, ಯುದ್ದ ಪ್ರಾರಂಭವಾದ 70 ದಿನಗಳ ನಂತರವೂ, ಮೋದಿ ದೇಶದ 12 ರಾಜ್ಯಗಳ 53 ನಗರಗಳಿಗೆ ಭೇಟಿ ನೀಡಿ 25 ರೋಡ್ ಶೋ ಗಳು ಸೇರಿದಂತೆ 81 ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಈ 81ರಲ್ಲಿ ಕೇವಲ 13 ಸಮಾರಂಭಗಳು ಮಾತ್ರ ಸರ್ಕಾರಿ ಕಾರ್ಯಕ್ರಮಗಳಾಗಿವೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಬಿಜೆಪಿ ವಿರುದ್ಧ ವಾಗ್ದಾಳಿ&lt;/strong&gt;&lt;/h2&gt;&lt;p&gt;ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಿಂದಾಗಿ ವ್ಯಾಪಾರ ವ್ಯವಹಾರಗಳು ನಿಂತುಹೋಗಿ, ಜನರು ಅಡುಗೆ ಅ&zwnj;ನಿಲ ಪಡೆದುಕೊಳ್ಳಲು ಸರದಿಯಲ್ಲಿ ನಿಂತಿರುವಾಗ, ಮೋದಿ ಅವರು ತಮ್ಮ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಆಯೋಜಿಸಲಾದ ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ ಪ್ರದರ್ಶನ ಮತ್ತು ಹೆಲಿಕಾಪ್ಟರ್ ಪುಷ್ಪ ವೃಷ್ಟಿಯನ್ನು ನೋಡಿ ಆನಂದಿಸುತ್ತಿದ್ದರು ಎಂದು ಕುಟುಕಿದ್ದಾರೆ.&lt;/p&gt;&lt;p&gt;ಚುನಾವಣೆ ಫಲಿತಾಂಶ ಘೋಷಣೆಯಾದ ನಂತರದ 10 ದಿನಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರಗಳನ್ನು ನಾಲ್ಕು ಸಲ ಏರಿಸಲಾಯಿತು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಪದೇ ಪದೇ ಮಾಡುತ್ತಿರುವ ಹೆಚ್ಚಳ ಸಾಮಾನ್ಯ ಜನರ ಮೇಲೆ ಬಿಜೆಪಿ ನಡೆಸುತ್ತಿರುವ ವಂಚನೆ ಹಾಗೂ ಕ್ರೌರ್ಯಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/priyank-kharge-slams-pm-modi-over-fuel-crisis-gvd/articleshow-0ylxxp2"/>
        </item>
        <item>
            <title><![CDATA[ಉತ್ತರ ಕನ್ನಡ ಜಿಲ್ಲಾದ್ಯಂತ ವಾಟರ್ ಸ್ಪೋರ್ಟ್ಸ್, ಬೋಟಿಂಗ್ ನಿಷೇಧ: ಕಾರಣವೇನು?]]></title>
            <link>https://kannada.asianetnews.com/karnataka-districts/uttara-kannada-water-sports-ban-during-monsoon-gvd/articleshow-ngsrpga</link>
            <guid isPermaLink="true">https://kannada.asianetnews.com/karnataka-districts/uttara-kannada-water-sports-ban-during-monsoon-gvd/articleshow-ngsrpga</guid>
            <pubDate>Mon, 01 Jun 2026 22:56:03 +0530</pubDate>
            <description><![CDATA[&lt;p&gt;ಎಲ್ಲ ರೀತಿಯ ಜಲಸಾಹಸ ಕ್ರೀಡೆ ಹಾಗೂ ನೀರು ಆಧಾರಿತ ಮನರಂಜನಾ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮೀಪ್ರಿಯಾ ಕೆ. ಆದೇಶ ಹೊರಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt20wrrkxdsfxcrvkz5v13j0,imgname-vj-1780331995923.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ (ಜೂ.01):&lt;/strong&gt; ಮುಂಬರುವ ನೈಋತ್ಯ ಮುಂಗಾರು ಮಳೆಗಾಲದ ಹಿನ್ನೆಲೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಜೀವ ರಕ್ಷಣೆಯ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲಾದ್ಯಂತ ಜೂ. 1ರಿಂದ ಆ. 31, 2026ರ ವರೆಗೆ ಎಲ್ಲ ರೀತಿಯ ಜಲಸಾಹಸ ಕ್ರೀಡೆ ಹಾಗೂ ನೀರು ಆಧಾರಿತ ಮನರಂಜನಾ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮೀಪ್ರಿಯಾ ಕೆ. ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಮಳೆಗಾಲದ ಅವಧಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ನದಿಗಳಲ್ಲಿ ನೀರಿನ ಹರಿವು ದಿಢೀರನೆ ಹೆಚ್ಚಾಗುತ್ತದೆ. ಹಠಾತ್ ಪ್ರವಾಹ ಹಾಗೂ ಸಮುದ್ರದಲ್ಲಿ ಬಲವಾದ ಅಲೆಗಳು ಏಳುವುದರಿಂದ, ಪ್ರವಾಸಿಗರು ನೀರಿಗಿಳಿದರೆ ಪ್ರಾಣಹಾನಿ ಸಂಭವಿಸುವ ತೀವ್ರ ಅಪಾಯವಿರುತ್ತದೆ. ಈ ಹಿನ್ನೆಲೆ ಮೇ 13ರಂದು ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ, ಯಾವುದೇ ಅನಾಹುತಗಳನ್ನು ತಪ್ಪಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 33 ಮತ್ತು 34ರ ಅನ್ವಯ ಕಾಳಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ನಡೆಯುವ ರಿವರ್&zwnj;ರ್&zwj;ಯಾಫ್ಟಿಂಗ್, ನದಿ, ಜಲಾಶಯ, ಹಿನ್ನೀರು, ಅಳಿವೆ ಹಾಗೂ ಇತರ ಒಳನಾಡು ಜಲಮೂಲಗಳಲ್ಲಿ ಬೋಟಿಂಗ್, ಸಮುದ್ರದಲ್ಲಿ ನಡೆಯುವ ಜೆಟ್ ಸ್ಕೀಯಿಂಗ್, ಕಯಾಕಿಂಗ್, ಬನಾನಾ ರೈಡ್, ಪ್ಯಾರಾಸೈಲಿಂಗ್, ಸ್ಪೀಡ್ ಬೋಟ್ ರೈಡ್&zwnj;ನಂತಹ ಕ್ರೀಡೆಗಳು, ಸ್ಕೂಬಾ ಡೈವಿಂಗ್ ಮತ್ತು ಅದಕ್ಕೆ ಸಂಬಂಧಿಸಿದ ನೀರಿನೊಳಗಿನ ಸಾಹಸ ಚಟುವಟಿಕೆ ಹಾಗೂ ಕರಾವಳಿ ಪ್ರದೇಶಗಳಲ್ಲಿ ನಡೆಯುವ ಎಲ್ಲ ಸಮುದ್ರಾಧಾರಿತ ಪ್ರವಾಸೋದ್ಯಮ ಮತ್ತು ಮನರಂಜನಾ ಆಟಗಳನ್ನು ಮುಂದಿನ ಮೂರು ತಿಂಗಳ ಕಾಲ ನಿರ್ಬಂಧಿಸಲಾಗಿದೆ.&lt;/p&gt;&lt;p&gt;ಜಿಲ್ಲಾಡಳಿತದ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲೆಯ ಎಲ್ಲ ಸಹಾಯಕ ಆಯುಕ್ತರು, ತಹಸೀಲ್ದಾರ್&zwnj;ಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಕಠಿಣ ಕ್ರಮ ಜರುಗಿಸಲಾಗುವುದು&lt;/strong&gt;&lt;/h2&gt;&lt;p&gt;ಒಂದು ವೇಳೆ ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರನ್ನು ನೀರಿಗಿಳಿಸುವ ಪ್ರವಾಸೋದ್ಯಮ ಸೇವಾ ಪೂರೈಕೆದಾರರು, ಏಜೆನ್ಸಿಗಳು ಅಥವಾ ಯಾವುದೇ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60ರ ಅಡಿಯಲ್ಲಿ ಹಾಗೂ ಇತರ ಕಾನೂನುಗಳನ್ವಯ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/uttara-kannada-water-sports-ban-during-monsoon-gvd/articleshow-ngsrpga"/>
        </item>
        <item>
            <title><![CDATA[ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಮತ್ತೆ ಕೆಮಿಕಲ್ ತ್ಯಾಜ್ಯ ಕಳ್ಳಾಟ? ಗ್ರಾಮಸ್ಥರ ಆತಂಕವೇನು?]]></title>
            <link>https://kannada.asianetnews.com/karnataka-districts/yadgir-kadechur-industrial-area-chemical-waste-water-pollution-gvd/articleshow-eik553g</link>
            <guid isPermaLink="true">https://kannada.asianetnews.com/karnataka-districts/yadgir-kadechur-industrial-area-chemical-waste-water-pollution-gvd/articleshow-eik553g</guid>
            <pubDate>Mon, 01 Jun 2026 21:46:21 +0530</pubDate>
            <description><![CDATA[&lt;p&gt;ಮಳೆಗಾಲ ಆರಂಭಿಸುತ್ತಿದ್ದಂತೆ ಮತ್ತೆ ತಮ್ಮ ಕಳ್ಳಾಟ ಆರಂಭಿಸಿರುವ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು, ಕೆಮಿಕಲ್&zwnj; ತ್ಯಾಜ್ಯ ನೀರನ್ನು ಚರಂಡಿ ಮಾರ್ಗದ ಮೂಲಕ ಹಳ್ಳಕ್ಕೆ ಬಿಡುತ್ತಿದ್ದು, ಇದು ಜೀವಸಂಕುಲಕ್ಕೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1z0kk15az5gyw922nb4bwq,imgname-fjf-1780330024545.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಜೂ.01): &lt;/strong&gt;ಮಳೆಗಾಲ ಆರಂಭಿಸುತ್ತಿದ್ದಂತೆ ಮತ್ತೆ ತಮ್ಮ ಕಳ್ಳಾಟ ಆರಂಭಿಸಿರುವ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು, ಕೆಮಿಕಲ್&zwnj; ತ್ಯಾಜ್ಯ ನೀರನ್ನು ಚರಂಡಿ ಮಾರ್ಗದ ಮೂಲಕ ಹಳ್ಳಕ್ಕೆ ಬಿಡುತ್ತಿದ್ದು, ಇದು ಜೀವಸಂಕುಲಕ್ಕೆ ಕುತ್ತು ತರುವಂತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಕೈಗಾರಿಕಾ ಪ್ರದೇಶದಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕದಿಂದ ವಿಷಯುಕ್ತ ಕೆಮಿಕಲ್&zwnj; ತ್ಯಾಜ್ಯವನ್ನು ಭಾನುವಾರ ಸಂಜೆ ಸದ್ದಿಲ್ಲದೆ ಹೊರಬಿಡಲಾಗಿತ್ತು. ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಕೆಮಿಕಲ್&zwnj; ತ್ಯಾಜ್ಯ ಸಂಗ್ರಹಿಸುವ ಈ ಘಟಕವು, ವೈಜ್ಞಾನಿಕಾಗಿ ತ್ಯಾಜ್ಯ ವಿಲೇವಾರಿ ಮಾಡದೇ, ಯಾರಿಗೂ ಗೊತ್ತಾಗದಂತೆ ಪ್ರತ್ಯೇಕ ಕಳ್ಳಮಾರ್ಗದಿಂದ ಚರಂಡಿ ಮೂಲಕ ಹೊರಬಿಡುತ್ತಿರುವುದರಿಂದ, ಈ ನೀರನ್ನು ಅವಲಂಬಿಸಿರುವ ಗ್ರಾಮಸ್ಥರ ಬದುಕಿಗೆ ಕುತ್ತಾಗಿ ಪರಿಣಮಿಸುವ ಆತಂಕ ಎದುರಾಗಿದೆ. ಜೊತೆಗೆ, ಜೀವಜಂತುಗಳು ಸಾವನ್ನಪ್ಪುವ ಸಾಧ್ಯತೆಯಿದೆ.&lt;/p&gt;&lt;p&gt;ಈ ಹಿಂದೆಯೂ ಕೂಡ, ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಇಲ್ಲಿನ ಕಾರ್ಖಾನೆಗಳ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹಳ್ಳಕ್ಕೆ ತ್ಯಾಜ್ಯ ಬಿಟ್ಟ ಪರಿಣಾಮ ಸಾವಿರಾರು ಮೀನುಗಳು ಹಾಗೂ ಕುರಿ-ದನಕರುಗಳು ಹಳ್ಳದ ನೀರು ಕುಡಿದು ಮೃತಪಟ್ಟಿದ್ದವು. ಈಗ, ಕಳೆದ ಕೆಲವು ದಿನಗಳಿಂದ ಕಾರ್ಖಾನೆಗಳು ಯಾರಿಗೂ ಗೊತ್ತಾಗದ ಹಾಗೆ ರಾತ್ರಿ ವೇಳೆ ಮತ್ತೇ ತ್ಯಾಜ್ಯ ಹೊರಬಿಡುತ್ತಿರುವುದು ಕಂಡುಬರುತ್ತಿದೆ ಎಂದು ದೂರಿದ ಶೆಟ್ಟಿಹಳ್ಳಿ ಗ್ರಾಮದ ಕಾಶೀನಾಥ್&zwnj;, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಗೂ ನಾವು ಮೊನ್ನೆಯೂ ಕೂಡ ಈ ಬಗ್ಗೆ ತಿಳಿಸಿದ್ದೆವಾದರೂ, ಕ್ರಮ ಕೈಗೊಳ್ಳುವುದಾಗಲೀ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವುದಾಗಲೀ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಜಿಲ್ಲಾಡಳಿತ ಸ್ಪಂದಿಸಬೇಕಿದೆ&lt;/strong&gt;&lt;/h2&gt;&lt;p&gt;ಮಳೆಗಾಲದ ಈ ಸಂದರ್ಭದಲ್ಲಿ ಮತ್ತೇ ಇಂತಹ ಕೃತ್ಯಗಳು ಜೀವಸಂಕುಲಕ್ಕೆ ಮಾರಕ. ಕಂಪನಿಗಳು ನಿಯಮಗಳ ಪಾಲಿಸುತ್ತಿಲ್ಲ, ಇದ ತಡೆಯಬೇಕಾದ ಅಧಿಕಾರಿಗಳು ಕಂಡೂ ಕಾಣದ ಹಾಗೆ ಮೌನಕ್ಕೆ ಶರಣಾಗಿದ್ದಾರೆ. ಕಾರ್ಖಾನೆಗಳ ಅವೈಜ್ಞಾನಿಕ ಕ್ರಮ ಗೊತ್ತಿದ್ದರೂ, ಮಾಲೀಕರುಗಳ ಪ್ರಭಾವದಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಬರುವಲ್ಲಿ ಹಿಂದೇಟು ಹಾಕುತ್ತಿರಬಹುದು ಎಂದು ಸಾಮಾಜಿಕ ಕಾರ್ಯಕರ್ತ ಭೀಮಣ್ಣ ವಡವಟ್&zwnj; ಶಂಕೆ ವ್ಯಕ್ತಪಡಿಸಿದರು. ಕಡೇಚೂರ ಭಾಗದಲ್ಲಿನ ಜನರ ಅಹವಾಲುಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕಿದೆ. ದೊಡ್ಡ ಅನಾಹುತಗಳು ನಡೆಯುವ ಮುನ್ನ ಕ್ರಮಕ್ಕೆ ಮುಂದಾಗಬೇಕಿದೆ ಅಂತಾರೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/yadgir-kadechur-industrial-area-chemical-waste-water-pollution-gvd/articleshow-eik553g"/>
        </item>
        <item>
            <title><![CDATA[ಮಂತ್ರಾಲಯದಲ್ಲಿ ಭೀಕರ ದುರಂತ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐವರು ನೀರು ಪಾಲು]]></title>
            <link>https://kannada.asianetnews.com/crime/mantralayam-tungabhadra-river-drowning-tragedy-five-dead-gvd/articleshow-kddeq4u</link>
            <guid isPermaLink="true">https://kannada.asianetnews.com/crime/mantralayam-tungabhadra-river-drowning-tragedy-five-dead-gvd/articleshow-kddeq4u</guid>
            <pubDate>Mon, 01 Jun 2026 21:22:32 +0530</pubDate>
            <description><![CDATA[&lt;p&gt;ಪಕ್ಕದ ಆಂಧ್ರಪ್ರದೇಶದ ರಾಜ್ಯದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ವಡ್ಲ ಸತೀಶ್..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1y5eq6fjadjn05kq1176wb,imgname-vj-1780329134822.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜೂ.01): &lt;/strong&gt;ಪಕ್ಕದ ಆಂಧ್ರಪ್ರದೇಶದ ರಾಜ್ಯದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ವಡ್ಲ ಸತೀಶ್ (35) ಇವರ ಪುತ್ರ ಯುವನ್ ಚಂದ್ರ(5) ಮಂತ್ರಾಲಯ ನಿವಾಸಿ ರಾಘವೇಂದ್ರ (28), ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ನಿವಾಸಿ ವಡ್ಲ ಧನು (23) ಹಾಗೂ ಅನಂತಪುರದ ನಿವಾಸಿ ಸಂಧ್ಯಾ (22) ನೀರುಪಾಲಾದವರು ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಆಗಮಿಸಿದ್ದ ಇವರುಗಳು, ಶನಿವಾರ ಸಂಜೆ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಬಾಲಕ ಯುವನ್ ಚಂದ್ರ ನೀರಲ್ಲಿ ಮುಳುಗಲು ಪ್ರಾರಂಭಿಸಿದ್ದಾನೆ. ಈತನ ರಕ್ಷಣೆಗಾಗಿ ಉಳಿದ ಐವರು ನದಿಯ ಆಳಕ್ಕಿಳಿದಿದ್ದು ನಾಲ್ವರೂ ಕೊಚ್ಚಿಕೊಂಡು ಹೋಗಿದ್ದಾರೆ. ಇವರಲ್ಲಿ ಯುವತಿ ಅಪರ್ಣಾ ಅದೋನಿ ಎಂಬವರು ಪಾರಾಗಿ ತಡ ಸೇರಿ ಸ್ಥಳೀಯರು ಹಾಗೂ ಕುಟುಂಬದವರಿಗೆ ಘಟನೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ದುರಂತದ ವಿಷಯ ತಿಳಿದ ಮಂತ್ರಾಲಯ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪರಿಣತ ಈಜುಗಾರರು ಕಂಟ್ರಿ ಬೋಟ್&zwnj;ಗಳನ್ನು ಬಳಸಿ ಶನಿವಾರ ರಾತ್ರಿ 8:30ರವರೆಗೆ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಧನು ಎಂಬ ಯುವಕನ ಮೃತದೇಹ ಸಿಕ್ಕಿದ್ದು, ಭಾನುವಾರ ಬೆಳಗ್ಗೆ ಯುವನ್ ಚಂದ್ರ ಹಾಗೂ ಆತನ ತಂದೆ ವಡ್ಲ ಸತೀಶ್ ಮೃತದೇಹಗಳು ಪತ್ತೆಯಾಗಿವೆ.&lt;/p&gt;&lt;h2&gt;&lt;strong&gt;ಕುಟುಂಬಸ್ಥರಿಗೆ ಹಸ್ತಾಂತರ&lt;/strong&gt;&lt;/h2&gt;&lt;p&gt;ಮೃತದೇಹಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು, ಸ್ಥಳೀಯ ಮೀನುಗಾರರೊಂದಿಗೆ ಉಳಿದ ಇಬ್ಬರಿಗೆ ಶೋಧಾಕಾರ್ಯವನ್ನು ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಆಂಧ್ರಪ್ರದೇಶ ಸಚವರಾದ ನಿಮ್ಮಲಾ ರಾಮನಾಯ್ಡು ಮತ್ತು ಟಿ.ಜಿ.ಭರತ್ ಹಾಗೂ ಎಮ್ಮಿಗನೂರು ಡಿವೈಎಸ್ಪಿ ಭಾರ್ಗವಿ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸತ್ಯನಾರಾಯಣ ಪೂಜೆ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣವಿದ್ದ ಮನೆ ಮಾಡಿದ್ದ ಮನೆಯಲ್ಲಿ ದುರ್ಘಟನೆಯಿಂದ ಸೂತಕದ ಛಾಯೆ ಆವರಿಸಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/mantralayam-tungabhadra-river-drowning-tragedy-five-dead-gvd/articleshow-kddeq4u"/>
        </item>
        <item>
            <title><![CDATA[Shocking: ಭಾರತೀಯ ಪ್ರವಾಸಿಗರ ಅಸಭ್ಯ ವರ್ತನೆ; ಚೀನಾದ ಮಹಾಗೋಡೆಯ ಮೇಲೆ ನಿಂತು ಮಾಡಿದ್ದೇನು ಗೊತ್ತಾ?]]></title>
            <link>https://kannada.asianetnews.com/viral/netizens-are-furious-over-the-behavior-of-indian-tourists-who-performed-garba-on-the-great-wall-of-china/articleshow-btk6r9i</link>
            <guid isPermaLink="true">https://kannada.asianetnews.com/viral/netizens-are-furious-over-the-behavior-of-indian-tourists-who-performed-garba-on-the-great-wall-of-china/articleshow-btk6r9i</guid>
            <pubDate>Mon, 01 Jun 2026 21:20:52 +0530</pubDate>
            <description><![CDATA[&lt;p&gt;ವಿದೇಶ ಪ್ರವಾಸ ಮಾಡುವುದು ಸಂತೋಷದ ವಿಷಯ, ಆದರೆ ನಾವು ಹೋಗುವ ಪ್ರತಿ ಜಾಗದಲ್ಲೂ ನಾವು ನಮ್ಮ ದೇಶದ ರಾಯಭಾರಿಗಳಾಗಿರುತ್ತೇವೆ ಎಂಬುದು ನೆನಪಿರಲಿ. ಅತಿಯಾದ ಪ್ರಚಾರಕ್ಕಾಗಿ ಅಥವಾ ರೀಲ್ಸ್ ಮಾಡುವ ಹುಚ್ಚಿಗಾಗಿ ದೇಶದ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವುದು ಎಷ್ಟು ಸರಿ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1y165v3wqbv9qdqv1e7xmk,imgname-indians-bad-behaviour-1780328995002.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀಜಿಂಗ್/ಟೋಕಿಯೋ: ಭಾರತೀಯರೆಂದರೆ ಇಡೀ ಜಗತ್ತಿನಲ್ಲಿ ಒಂದು ವಿಶಿಷ್ಟ ಗೌರವವಿದೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಜಗತ್ತು ಮೆಚ್ಚುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸಕ್ಕೆ ಹೋಗುವ ಕೆಲವು ಭಾರತೀಯರು ತೋರುತ್ತಿರುವ 'ನಾಗರಿಕ ಪ್ರಜ್ಞೆ' ಇಲ್ಲದ ವರ್ತನೆಗಳು ಈಗ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಚೀನಾದ ಮಹಾಗೋಡೆಯಿಂದ ಹಿಡಿದು ಜಪಾನ್&zwnj;ನ ಶಿಸ್ತಿನ ಬೀದಿಗಳವರೆಗೆ ಭಾರತೀಯ ಪ್ರವಾಸಿಗರ ಹುಚ್ಚಾಟದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿವೆ!&lt;/p&gt;&lt;p&gt;&lt;strong&gt;1. ಚೀನಾದ ಮಹಾಗೋಡೆಯ ಮೇಲೆ ಗರ್ಬಾ ಸ್ಟೆಪ್ಸ್!&lt;/strong&gt;&lt;/p&gt;&lt;p&gt;ಹೌದು, ನೀವು ಓದುತ್ತಿರುವುದು ನಿಜ. ಚೀನಾದ ಐತಿಹಾಸಿಕ 'ಗ್ರೇಟ್ ವಾಲ್' ಮೇಲೆ ನಿಂತು ಭಾರತೀಯರ ಗುಂಪೊಂದು ಮೈಮರೆತು ನೃತ್ಯ ಮಾಡಿದೆ. ಬಾಲಿವುಡ್&zwnj;ನ ಪ್ರಸಿದ್ಧ 'ಚೋಗಾಡಾ' ಹಾಡಿಗೆ ಈ ಗುಂಪು ಹಬ್ಬದ ಉಡುಪುಗಳನ್ನು ಧರಿಸಿ ಗರ್ಬಾ ನೃತ್ಯ ಮಾಡಿದೆ. ಒಂದು ಐತಿಹಾಸಿಕ ಸ್ಮಾರಕದ ಮೇಲೆ ಅದರ ಗಾಂಭೀರ್ಯವನ್ನು ಅರಿಯದೆ ನೃತ್ಯ ಮಾಡಿದ್ದನ್ನು ಕಂಡ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. &quot;ಇದು ಹೆಮ್ಮೆಯ ವಿಷಯವಲ್ಲ, ಬದಲಿಗೆ ಅತ್ಯಂತ ಮುಜುಗುರದ ಸಂಗತಿ. ವಿದೇಶಕ್ಕೆ ಹೋಗಿ ದೇಶದ ಮರ್ಯಾದೆ ಕಳೆಯುವ ಬದಲು ಮನೆಯಲ್ಲೇ ಇರಿ&quot; ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.&lt;/p&gt;&lt;h2&gt;2. ಶಿಸ್ತಿನ ಜಪಾನ್&zwnj;ನಲ್ಲಿ ಭಾರತೀಯರ ಅಶಿಸ್ತು!&lt;/h2&gt;&lt;p&gt;ಜಪಾನ್ ಎಂದರೆ ಅದು ಶಿಸ್ತಿಗೆ ಇನ್ನೊಂದು ಹೆಸರು. ಆದರೆ ಅಲ್ಲಿಗೂ ಹೋದ ನಮ್ಮವರು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಜಪಾನ್&zwnj;ನ ಪ್ರಸಿದ್ಧ 'ಹಾಚಿಕೊ' ಶ್ವಾನದ ಪ್ರತಿಮೆಯ ಮುಂದೆ ಫೋಟೋ ತೆಗೆದುಕೊಳ್ಳಲು ಪ್ರವಾಸಿಗರು ಸಾಲಿನಲ್ಲಿ ನಿಂತಿದ್ದರು. ಆದರೆ ಭಾರತೀಯ ಮೂಲದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ, ಇಡೀ ಸಾಲನ್ನು ಧಿಕ್ಕರಿಸಿ ನೇರವಾಗಿ ಪ್ರತಿಮೆಯ ಮುಂದೆ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ. ಇದನ್ನು ಕಂಡ ಅಲ್ಲಿನ ಸ್ಥಳೀಯರು ಮತ್ತು ಇತರ ಪ್ರವಾಸಿಗರು ಭಾರತೀಯರ ಅಸಭ್ಯ ವರ್ತನೆಯನ್ನು ಕಂಡು ವಾಕರಿಸಿದ್ದಾರೆ.&lt;/p&gt;&lt;p&gt;3. ವಿಮಾನ ನಿಲ್ದಾಣದ ರನ್-ವೇ ಮೇಲೆ ಡಾನ್ಸ್!&lt;/p&gt;&lt;p&gt;ಹುಚ್ಚಾಟ ಇಲ್ಲಿಗೆ ನಿಂತಿಲ್ಲ, ವಿಯೆಟ್ನಾಂನಲ್ಲಿ ವಿಮಾನ ನಿಲ್ದಾಣದ ರನ್-ವೇ ಮೇಲೆಯೇ ಪ್ರವಾಸಿಗರು ನೃತ್ಯ ಮಾಡಿದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ವಿಮಾನ ನಿಲ್ದಾಣದಂತಹ ಅತೀ ಭದ್ರತೆಯ ಜಾಗದಲ್ಲಿ ಈ ರೀತಿ ವರ್ತಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ಈಗ ಜಾಗತಿಕ ಮಟ್ಟದಲ್ಲಿ ಎದ್ದಿದೆ.&lt;/p&gt;&lt;h3&gt;ನೆಟ್ಟಿಗರ ಆಕ್ರೋಶದ ಅಲೆ:&lt;/h3&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಕಮೆಂಟ್&zwnj;ಗಳ ಸುರಿಮಳೆಯೇ ಆಗುತ್ತಿದೆ. ಒಬ್ಬ ನೆಟ್ಟಿಗ, &quot;ನಮ್ಮ ಮಕ್ಕಳಿಗೆ ಪುಸ್ತಕದ ಪಾಠಕ್ಕಿಂತ ಮೊದಲು ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂಬ ನಾಗರಿಕ ಪ್ರಜ್ಞೆಯನ್ನು ಕಲಿಸಿಕೊಡಬೇಕಿದೆ&quot; ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, &quot;ಇಂತಹ ಜನರ ವರ್ತನೆಯಿಂದಾಗಿ ಒಳ್ಳೆಯ ಪ್ರವಾಸಿಗರಿಗೂ ವಿದೇಶಗಳಲ್ಲಿ ಕೆಟ್ಟ ಹೆಸರು ಬರುತ್ತಿದೆ&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಕೊನೆಯ ಮಾತು:&lt;/p&gt;&lt;p&gt;ವಿದೇಶ ಪ್ರವಾಸ ಮಾಡುವುದು ಸಂತೋಷದ ವಿಷಯ, ಆದರೆ ನಾವು ಹೋಗುವ ಪ್ರತಿ ಜಾಗದಲ್ಲೂ ನಾವು ನಮ್ಮ ದೇಶದ ರಾಯಭಾರಿಗಳಾಗಿರುತ್ತೇವೆ ಎಂಬುದು ನೆನಪಿರಲಿ. ಅತಿಯಾದ ಪ್ರಚಾರಕ್ಕಾಗಿ ಅಥವಾ ರೀಲ್ಸ್ ಮಾಡುವ ಹುಚ್ಚಿಗಾಗಿ ದೇಶದ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವುದು ಎಷ್ಟು ಸರಿ?&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/viral/netizens-are-furious-over-the-behavior-of-indian-tourists-who-performed-garba-on-the-great-wall-of-china/articleshow-btk6r9i"/>
        </item>
        <item>
            <title><![CDATA[ಹೆಂಡತಿಯನ್ನೇ ₹50,000ಕ್ಕೆ ಮಾರಿದ ಗಂಡ; ಮಹಿಳೆ ಸಿಗುವಷ್ಟರಲ್ಲಿ ಪೊಲೀಸರೇ ಬೆಚ್ಚಿ ಬೀಳುವ ಘಟನೆ ನಡೆದುಹೋಗಿತ್ತು!]]></title>
            <link>https://kannada.asianetnews.com/relationship/gujarat-palanpur-husband-sells-wife-only-rs-50000-human-trafficking-assault-arrest-sat/articleshow-u70fl95</link>
            <guid isPermaLink="true">https://kannada.asianetnews.com/relationship/gujarat-palanpur-husband-sells-wife-only-rs-50000-human-trafficking-assault-arrest-sat/articleshow-u70fl95</guid>
            <pubDate>Mon, 01 Jun 2026 21:17:18 +0530</pubDate>
            <description><![CDATA[&lt;p&gt;ನನಗೆ ಈ ಹೆಂಡತಿಯೊಂದಿಗೆ ಸಂಸಾರ ಮಾಡುವುದಕ್ಕೆ ಸಾಕಾಗಿದೆ. ಮತ್ತೊಂದು ಮದುವೆಯಾಗುವ ದುರಾಸೆಯಿಂದ ಪತಿಯೊಬ್ಬ ತನ್ನ ಪತ್ನಿಯನ್ನೇ 50,000 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಈ ಅಮಾನವೀಯ ಕೃತ್ಯದಲ್ಲಿ, ಮಹಿಳೆ 10 ದಿನಗಳ ಕಾಲ ನರಕ ಅನುಭವಿಸಿದ್ದು, ಕೃತ್ಯ ಬೇಧಿಸಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1xv2gvteks8k9a066jr5gd,imgname-husband-sell-wife-only-50000-1780328794651.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆಯಾಗಿ 12 ವರ್ಷಗಳ ಕಾಲ ಜೊತೆಯಾಗಿದ್ದ ಪತ್ನಿಯನ್ನೇ ಪತಿಯೊಬ್ಬ ಕೇವಲ 50,000 ರೂಪಾಯಿಗೆ ಮಾರಾಟ ಮಾಡಿದ ಅಮಾನವೀಯ ಮತ್ತು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮತ್ತೊಂದು ಮದುವೆಯಾಗುವ ಆಸೆಗೆ ಬಿದ್ದ ಪತಿ, ಸ್ನೇಹಿತರೊಂದಿಗೆ ಸೇರಿ ಪತ್ನಿಯನ್ನೇ ಮಾನವ ಕಳ್ಳಸಾಗಣೆಗೆ ದೂಡಿದ್ದಾನೆ. ಇಷ್ಟೇ ಅಲ್ಲದೆ, ಮಾರಾಟವಾದ ಬಳಿಕ ಆ ಮಹಿಳೆ ಸತತ 10 ದಿನಗಳ ಕಾಲ ಸಾಮೂಹಿಕ ಅತ್ಯಾ*ಚಾರ ಹಾಗೂ ನರಕಯಾತನೆಗೆ ಒಳಗಾಗಿದ್ದಾಳೆ. ಸದ್ಯ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದು, ಪತಿ ಸೇರಿದಂತೆ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;&lt;h3&gt;&lt;strong&gt;ನಾಪತ್ತೆ ಕೇಸ್ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಶಾಕ್!&lt;/strong&gt;&lt;/h3&gt;&lt;p&gt;ಈ ಘಟನೆ ಗುಜರಾತ್&zwnj;ನ ಪಾಲನ್&zwnj;ಪುರದಲ್ಲಿ ನಡೆದಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಮಹಿಳೆ ನಾಪತ್ತೆ ಪ್ರಕರಣದಂತೆ ಕಂಡುಬಂದಿತ್ತು. ಮೇ 11 ರಂದು ಪಾಲನ್&zwnj;ಪುರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪತಿಯೇ ಬಂದು, 'ನನ್ನ ಪತ್ನಿ ಮೇ 10 ರಿಂದ ಯಾರಿಗೂ ಹೇಳದೆ ಕಾಣೆಯಾಗಿದ್ದಾಳೆ' ಎಂದು ದೂರು ನೀಡಿದ್ದನು. ಆದರೆ, ಮಹಿಳೆಯ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ ಪೊಲೀಸರಿಗೆ ಪತಿಯ ನಡವಳಿಕೆಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ಪೊಲೀಸರು ತೀವ್ರ ವಿಚಾರಣೆ ಆರಂಭಿಸುತ್ತಿದ್ದಂತೆ ಹೆದರಿದ ಪತಿ ಅಲ್ಲಿಂದ ಪರಾರಿಯಾಗಿದ್ದನು. ತದನಂತರ ಪೊಲೀಸರು ತಾಂತ್ರಿಕ ಕಣ್ಗಾವಲು (Technical Surveillance) ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಕರಾಳ ಕಥೆ ಬಯಲಾಗಿದೆ.&lt;/p&gt;&lt;h2&gt;&lt;strong&gt;ಪತ್ನಿಯಿಂದ ಮುಕ್ತಿ ಪಡೆಯಲು ಸ್ನೇಹಿತರೊಂದಿಗೆ ಪ್ಲಾನ್!&lt;/strong&gt;&lt;/h2&gt;&lt;p&gt;ಪೊಲೀಸ್ ತನಿಖೆಯ ಪ್ರಕಾರ, 30 ವರ್ಷದ ಆರೋಪಿ ಪತಿಗೆ ತನ್ನ 26 ವರ್ಷದ ಪತ್ನಿಯ ಮೇಲೆ ಜಿಗುಪ್ಸೆ ಉಂಟಾಗಿತ್ತು. ಅವಳನ್ನು ಮನೆಯಿಂದ ಹೊರಹಾಕಿ, ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತರಲು ಸಂಚು ರೂಪಿಸಿದ್ದನು. ಇದಕ್ಕಾಗಿ ತನ್ನ ಇಬ್ಬರು ಸ್ನೇಹಿತರ ಸಹಾಯ ಪಡೆದ ಆತ, ಮದುವೆಯ ವ್ಯವಸ್ಥೆ ಮಾಡುವ ನೆಪದಲ್ಲಿ ಪತ್ನಿಯನ್ನು ಬೇರೆ ಕಡೆಗೆ ಸಾಗಿಸಲು ಯೋಚಿಸಿದ್ದನು. ಮೇ 10 ರಂದು ಸ್ನೇಹಿತರು ಮಹಿಳೆಯನ್ನು ರಿಕ್ಷಾದಲ್ಲಿ ಫ್ಲಾಟ್&zwnj;ವೊಂದಕ್ಕೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಮೊದಲ ಬಾರಿಗೆ ಸಾಮೂಹಿಕವಾಗಿ ಅತ್ಯಾ*ಚಾರ ಎಸಗಿದ್ದಾರೆ.&lt;/p&gt;&lt;h3&gt;&lt;strong&gt;1.5 ಲಕ್ಷಕ್ಕೆ ಡೀಲ್, 10 ದಿನಗಳ ಕಾಲ ಸತತ ಅತ್ಯಾ*ಚಾರ&lt;/strong&gt;&lt;/h3&gt;&lt;p&gt;ಅಲ್ಲಿಂದ ಮಹಿಳೆಯನ್ನು ಥರಾದ್ ಎಂಬ ಹಳ್ಳಿಯ ಒಂದು ಕುಟುಂಬಕ್ಕೆ ಮಾರಾಟ ಮಾಡಲು ಡೀಲ್ ಕುದುರಿಸಲಾಗಿತ್ತು. ಒಟ್ಟು 1.5 ಲಕ್ಷ ರೂಪಾಯಿಗೆ ಡೀಲ್ ಫಿಕ್ಸ್ ಆಗಿದ್ದು, ಅದರಲ್ಲಿ 50,000 ರೂಪಾಯಿ ಮುಂಗಡವನ್ನು ಪತಿ ಪಡೆದುಕೊಂಡಿದ್ದನು. ಥರಾದ್&zwnj;ಗೆ ಕರೆದೊಯ್ದ ಬಳಿಕ ಮಹಿಳೆಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ, ಅಲ್ಲಿನ ಆರೋಪಿಗಳು ಸತತ ಒಂದು ವಾರಕ್ಕೂ ಹೆಚ್ಚು ಕಾಲ ಆಕೆಯ ಮೇಲೆ ನಿರಂತರವಾಗಿ ಅತ್ಯಾ*ಚಾರ ನಡೆಸಿದ್ದಾರೆ. ಈ ಇಡೀ ಘಟನೆಯಲ್ಲಿ ಮಹಿಳೆ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ನರಕಯಾತನೆ ಅನುಭವಿಸಿದ್ದಾಳೆ.&lt;/p&gt;&lt;h3&gt;&lt;strong&gt;ಆರೋಪಿಯ ಹಳೇ ಚಾಳಿ ಬಿಚ್ಚಿಟ್ಟ ಪೊಲೀಸರು!&lt;/strong&gt;&lt;/h3&gt;&lt;p&gt;ಮೇ 21 ರಂದು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಇಷ್ಟೇ ಅಲ್ಲದೆ, ಆರೋಪಿ ಪತಿ ಮಹಿಳೆಯ 15,000 ರೂ. ಮೌಲ್ಯದ ಚಿನ್ನದ ಓಲೆಯನ್ನು ಕದ್ದು ದೀಸಾದಲ್ಲಿ ಮಾರಾಟ ಮಾಡಿದ್ದನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಪತಿಗೆ ಈ ಹಿಂದೆಯೂ ಇಂತಹ ಚಾಳಿ ಇತ್ತು ಎನ್ನಲಾಗಿದ್ದು, ಈ ಮುಂಚೆ ಇಬ್ಬರು ವಿವಾಹಿತ ಮಹಿಳೆಯರನ್ನು ಪುಸಲಾಯಿಸಿ ಓಡಿಸಿಕೊಂಡು ಹೋಗಿದ್ದನು. ಸದ್ಯ ಸಂತ್ರಸ್ತ ಮಹಿಳೆಗೆ ಸೂಕ್ತ ಆಪ್ತಸಮಾಲೋಚನೆ (Counselling) ನಡೆಸಲಾಗಿದ್ದು, ನ್ಯಾಯಾಲಯಕ್ಕೆ ಅಗತ್ಯವಿರುವ ಎಲ್ಲಾ ಸಿಸಿಟಿವಿ ಮತ್ತು ಕಾಲ್ ರೆಕಾರ್ಡ್ಸ್ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/gujarat-palanpur-husband-sells-wife-only-rs-50000-human-trafficking-assault-arrest-sat/articleshow-u70fl95"/>
        </item>
        <item>
            <title><![CDATA[ಜಮೀರ್ ಅಹಮದ್ ಆಡಿಯೋ ವಿವಾದಕ್ಕೆ ಬಿಗ್ ಟ್ವಿಸ್ಟ್: ದಾವಣಗೆರೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊಹಮ್ಮದ್ ಸಿರಾಜ್!]]></title>
            <link>https://kannada.asianetnews.com/state/zameer-ahmed-khan-audio-row-mohammed-siraj-lodges-in-davanagere-cen-police-complaint-sat/articleshow-2id4mrb</link>
            <guid isPermaLink="true">https://kannada.asianetnews.com/state/zameer-ahmed-khan-audio-row-mohammed-siraj-lodges-in-davanagere-cen-police-complaint-sat/articleshow-2id4mrb</guid>
            <pubDate>Mon, 01 Jun 2026 20:55:00 +0530</pubDate>
            <description><![CDATA[&lt;p&gt;ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಅವರ ಆಪ್ತ ಮೊಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ, ಸಿರಾಜ್ ದಾವಣಗೆರೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಆಡಿಯೋ ನಕಲಿಯಾಗಿದ್ದು, ತಮ್ಮ ತೇಜೋವಧೆ ಮಾಡಲು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1wjmse4pjfh5k9hx0d9smy,imgname-zameer-ahmed-khan-and-mohammed-siraj-1780327469869.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.01): ಮಾ&lt;/strong&gt;ಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಅವರ ಆಪ್ತ ಮೊಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ ಬೆನ್ನಲ್ಲೇ, ಪ್ರಕರಣ ಈಗ ಕಾನೂನು ಸಮರದ ರೂಪ ಪಡೆದುಕೊಂಡಿದೆ. ತಮ್ಮ ವಿರುದ್ಧ ಸುಳ್ಳು ಆಡಿಯೋ ಸೃಷ್ಟಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮೊಹಮ್ಮದ್ ಸಿರಾಜ್ ಅವರು ದಾವಣಗೆರೆಯ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;h2&gt;&lt;strong&gt;ತೇಜೋವಧೆಯ ಹುನ್ನಾರ:&lt;/strong&gt;&lt;/h2&gt;&lt;p&gt;ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೊಹಮ್ಮದ್ ಸಿರಾಜ್, &quot;ನಾನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (KMDC) ನಾಮನಿರ್ದೇಶಿತ ಸದಸ್ಯನಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ, ರಾಜಕೀಯ ದುರುದ್ದೇಶದಿಂದ ನಮ್ಮನ್ನು ಗುರಿಯಾಗಿಸಿಕೊಂಡು ಈ ನಕಲಿ ಆಡಿಯೋ ಸೃಷ್ಟಿಸಲಾಗಿದೆ,&quot; ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ನಕಲಿ ಧ್ವನಿ ಸೃಷ್ಟಿ ಆರೋಪ:&lt;/strong&gt;&lt;/h2&gt;&lt;p&gt;ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿ ತನ್ನದಲ್ಲ ಎಂದು ಸ್ಪಷ್ಟಪಡಿಸಿದ ಸಿರಾಜ್, &quot;ನನ್ನ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ನಡುವಿನ ಬಾಂಧವ್ಯವನ್ನು ಹಾಳು ಮಾಡಲು ಮತ್ತು ಸಾರ್ವಜನಿಕವಾಗಿ ನಮ್ಮ ಗೌರವಕ್ಕೆ ಧಕ್ಕೆ ತರಲು ಯಾರೋ ಕಿಡಿಗೇಡಿಗಳು ತಂತ್ರಜ್ಞಾನ ಬಳಸಿ ಸುಳ್ಳು ಧ್ವನಿಯನ್ನು ಸೃಷ್ಟಿಸಿದ್ದಾರೆ. ದೂರವಾಣಿ ಮೂಲಕ ಚರ್ಚಿಸಿದಂತೆ ಬಿಂಬಿಸಲಾಗಿರುವ ಈ ಆಡಿಯೋ ಸಂಪೂರ್ಣ ಸೃಷ್ಟಿತವಾದದ್ದು,&quot; ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಕಠಿಣ ಕ್ರಮಕ್ಕೆ ಆಗ್ರಹ:&lt;/strong&gt;&lt;/h2&gt;&lt;p&gt;ರಾಜಕೀಯ ಲಾಭಕ್ಕಾಗಿ ಇಂತಹ ನೀಚ ಕೃತ್ಯ ಎಸಗಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಿರಾಜ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಜಮೀರ್ ಅಹ್ಮದ್ ಖಾನ್ ಈಗಾಗಲೇ ಇದನ್ನು ಎಐ (AI) ಸೃಷ್ಟಿತ ನಕಲಿ ಆಡಿಯೋ ಎಂದು ಹೇಳಿದ್ದು, ಈಗ ಸಿರಾಜ್ ಕೂಡ ಅಧಿಕೃತವಾಗಿ ದೂರು ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಸದ್ಯ ದಾವಣಗೆರೆ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆಡಿಯೋದ ಅಸಲಿಯತ್ತು ತಿಳಿಯಲು ತನಿಖೆ ಆರಂಭಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/zameer-ahmed-khan-audio-row-mohammed-siraj-lodges-in-davanagere-cen-police-complaint-sat/articleshow-2id4mrb"/>
        </item>
        <item>
            <title><![CDATA[ವೀರಶೈವ- ಲಿಂಗಾಯತ ಸಮಾಜ ಒಡೆಯಲು ಯತ್ನ: ಸಂಸದ ಜಗದೀಶ ಶೆಟ್ಟರ್ ಆರೋಪ]]></title>
            <link>https://kannada.asianetnews.com/karnataka-districts/mp-jagadish-shettar-on-veerashaiva-lingayat-unity-gvd/articleshow-uql0g0t</link>
            <guid isPermaLink="true">https://kannada.asianetnews.com/karnataka-districts/mp-jagadish-shettar-on-veerashaiva-lingayat-unity-gvd/articleshow-uql0g0t</guid>
            <pubDate>Mon, 01 Jun 2026 20:51:32 +0530</pubDate>
            <description><![CDATA[&lt;p&gt;ದೊಡ್ಡದಾಗಿ ಬೆಳೆದಿರುವ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಚಿಂತನೆಯಾಗಬೇಕಿದೆ. ಸದ್ಯ ತಮ್ಮ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ವೀರಶೈವ ಮತ್ತು ಲಿಂಗಾಯತ ಒಂದೇ ಸಮಾಜ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hw6qx6pf4tna05fn0ccz4bzy,imgname-1.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಜೂ.01):&lt;/strong&gt; ದೊಡ್ಡದಾಗಿ ಬೆಳೆದಿರುವ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಚಿಂತನೆಯಾಗಬೇಕಿದೆ. ಸದ್ಯ ತಮ್ಮ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ವೀರಶೈವ ಮತ್ತು ಲಿಂಗಾಯತ ಒಂದೇ ಸಮಾಜ. ಇದರಲ್ಲಿ ಪ್ರತ್ಯೇಕ ವಿಷಯವೇ ಬರುವುದಿಲ್ಲ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.&lt;/p&gt;&lt;p&gt;ಅವರು ಇಲ್ಲಿನ ಸವಾಯಿ ಗಂಧರ್ವ ಸಭಾಭವನದಲ್ಲಿ ವೀರಶೈವ ಲಿಂಗಾಯತ ಸೇವಾ ಸಮಿತಿಯಿಂದ ನಡೆದ ವೀರಶೈವ ಲಿಂಗಾಯತ ಒಳಪಂಗಡಗಳ ಸಮಾಜದ ಎಸ್&zwnj;ಎಸ್&zwnj;ಎಲ್&zwnj;ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.&lt;/p&gt;&lt;p&gt;ಸಮಾಜದ ಮುಂಚೂಣಿ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ನಮ್ಮವರನ್ನೇ ಬಳಕೆ ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಹಾಗಾಗಿ, ಸಮಾಜ ಒಂದಾಗಿದ್ದರೆ ಮಾತ್ರ ಇದೆಲ್ಲವನ್ನೂ ಸಮರ್ಥವಾಗಿ ಮೆಟ್ಟಿ ನಿಲ್ಲಲು ಸಾಧ್ಯವಾಗಲಿದೆ. ಅಲ್ಲದೇ, ಸಾಮಾಜಿಕವಾಗಿ ಹಿಂದುಳಿದ ಸಮಾಜದ ಬಂಧುಗಳನ್ನು ಮೇಲೆತ್ತಲು ಸಾಧ್ಯವಾಗಲಿದೆ ಎಂದರು.&lt;/p&gt;&lt;p&gt;ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಮಾಜದ ಬಂಧುಗಳು ಒಗ್ಗಟ್ಟಿನ ಹೋರಾಟದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಪ್ರಯತ್ನ ಮಾಡಬೇಕಿದೆ. ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸಮಾಜ ಸೇರ್ಪಡೆಯಾದರೆ ಹೆಚ್ಚಿನ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ ಎಂದರು.&lt;/p&gt;&lt;h2&gt;&lt;strong&gt;ನಡೆದು ಬಂದ ದಾರಿ ಭಿನ್ನ&lt;/strong&gt;&lt;/h2&gt;&lt;p&gt;ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಧರ್ಮಾಚರಣೆ, ನಡೆದು ಬಂದ ದಾರಿ ಭಿನ್ನವಾಗಿದೆ. ಬಸವಣ್ಣವರ ಹಾಕಿಕೊಟ್ಟು ತತ್ವಾದರ್ಶ, ಮಾರ್ಗದರ್ಶನದಲ್ಲಿ ಸಮಾಜ ಮುನ್ನಡೆದಿದೆ. ಬೇರೆ ಯಾವ ಸಮಾಜವನ್ನೂ ದ್ವೇಷ ಮಾಡದ ಸಮಾಜ ವೀರಶೈವ ಲಿಂಗಾಯತ ಸಮಾಜವಾಗಿದ್ದು, ಎಲ್ಲರೂ ನಮ್ಮವರು ಎಂದು ಸಮಾಜದಲ್ಲಿ ಸಹಬಾಳ್ವೆ ನಡೆಸುತ್ತಿದೆ ಎಂದರು.&lt;/p&gt;&lt;p&gt;ಸಮಾಜದ ಮಕ್ಕಳು ಎತ್ತರಕ್ಕೆ ಬೆಳೆಯಬೇಕು ಎಂಬ ಸುದುದ್ದೇಶದಿಂದ ಮಕ್ಕಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸಮಾಜದ ಮಕ್ಕಳು ಮನೆ ಮತ್ತು ಸಮಾಜಕ್ಕೆ ಸೀಮಿತವಾಗದೇ, ಭಾರತ ಮಾತೆಯ ಮಕ್ಕಳಾಗಿ ಬೆಳೆಯಬೇಕು ಎಂದರು.&lt;/p&gt;&lt;p&gt;ವೀರಶೈವ ಲಿಂಗಾಯತ ಸೇವಾ ಸಮಿತಿಯ ಮಲ್ಲಿಕಾರ್ಜುನ ಸಾಹುಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ಎಸ್&zwnj;ಎಸ್ಎಲ್&zwnj;ಸಿ ಹಾಗೂ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೇ, ಬಿಲ್ಡರ್&zwnj; ಆ್ಯಂಡ್&zwnj; ಡೆವಲಪರ್&zwnj; ವೀರೇಶ ಉಂಡಿ, ಸಿಪಿಐ ಮುರಗೇಶ ಚನ್ನಣ್ಣವರ, ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ, ಉದ್ಯಮಿ ನಾಗರಾಜ ಗೌರಿ, ನಾಗೇಶ ಅಣ್ಣಿಗೇರಿ, ಮಂಜುನಾಥ ಮುನವಳ್ಳಿ ಅವರನ್ನು ಸನ್ಮಾನಿಸಲಾಯಿತು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-jagadish-shettar-on-veerashaiva-lingayat-unity-gvd/articleshow-uql0g0t"/>
        </item>
        <item>
            <title><![CDATA[CM Vijay :ಮೊದಲ ಪಬ್ಲಿಕ್ ಬಾಷಣದಲ್ಲೇ 'MGR' ಬಗ್ಗೆ ಹೀಗೆ ಹೇಳಿದ ಸಿಎಂ ಪವರ್‌ಫುಲ್ 'ಗೂಗ್ಲಿ' ವೈರಲ್!]]></title>
            <link>https://kannada.asianetnews.com/cine-world/cm-vijay-direct-statement-that-even-mgr-did-not-secure-this-many-votes-in-his-first-election-has-now-gone-viral/articleshow-ksvuxut</link>
            <guid isPermaLink="true">https://kannada.asianetnews.com/cine-world/cm-vijay-direct-statement-that-even-mgr-did-not-secure-this-many-votes-in-his-first-election-has-now-gone-viral/articleshow-ksvuxut</guid>
            <pubDate>Mon, 01 Jun 2026 20:31:06 +0530</pubDate>
            <description><![CDATA[&lt;p&gt;'ಇಷ್ಟು ವರ್ಷಗಳಿಂದ ನಿಮ್ಮನ್ನು ಸರದಿಯಲ್ಲಿ ನಿಲ್ಲಿಸಿ ಮೋಸ ಮಾಡುತ್ತಿದ್ದ ಇಬ್ಬರನ್ನು ನೀವು ತಿರಸ್ಕರಿಸಿದ್ದೀರಿ. ನೀವು ನನ್ನನ್ನು ಕೇವಲ ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ, ಬದಲಿಗೆ ನಿಮ್ಮ 'ಮೊದಲ ಸೇವಕ'ನನ್ನಾಗಿ ಆರಿಸಿದ್ದೀರಿ' ಎಂದಿದ್ದಾರೆ ವಿಜಯ್.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kszhvptk8qpycxdg86g00dax,imgname-vijay-joseph-1780249123667.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಳಪತಿಯಿಂದ ಅಧಿಪತಿಯವರೆಗೆ: &quot;ಎಂಜಿಆರ್ ಕೂಡ ಮೊದಲ ಬಾರಿ ಇಷ್ಟೊಂದು ಮತ ಗಳಿಸಿರಲಿಲ್ಲ!&quot; - ಸಿಎಂ ವಿಜಯ್ ಸಿಂಹಗರ್ಜನೆ!&lt;/strong&gt;&lt;/p&gt;&lt;p&gt;ತಮಿಳುನಾಡು ರಾಜಕಾರಣದಲ್ಲಿ ಈಗ ಹೊಸ ಶಕೆಯ ಆರಂಭವಾಗಿದೆ. ಬೆಳ್ಳಿಪರದೆಯ ಮೇಲೆ ಬೌನ್ಸರ್&zwnj;ಗಳನ್ನು ಹೊಡೆದುರುಳಿಸುತ್ತಿದ್ದ 'ದಳಪತಿ' ವಿಜಯ್, ಈಗ ರಾಜಕೀಯದ ಅಖಾಡದಲ್ಲಿ ವಿರೋಧಿಗಳ ಕೋಟೆಯನ್ನು ಧೂಳೀಪಟ ಮಾಡಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಿಎಂ ಆದ ಬಳಿಕ ತಿರುಚಿರಾಪಳ್ಳಿಯಲ್ಲಿ ನಡೆದ ತಮ್ಮ ಚೊಚ್ಚಲ ಬೃಹತ್ ರ್ಯಾಲಿಯಲ್ಲಿ ವಿಜಯ್ (Thalapathy Vijay) ಮಾತನಾಡಿದ ರೀತಿ ಈಗ ಇಡೀ ದಕ್ಷಿಣ ಭಾರತದಲ್ಲೇ ಸಂಚಲನ ಮೂಡಿಸಿದೆ. ಇದು ಬರೀ ಭಾಷಣವಾಗಿರಲಿಲ್ಲ, ಬದಲಿಗೆ ಎದುರಾಳಿಗಳಿಗೆ ನೀಡಿದ ಖಡಕ್ ವಾರ್ನಿಂಗ್ ಆಗಿತ್ತು!&lt;/p&gt;&lt;p&gt;&lt;img&gt;&lt;/p&gt;&lt;p&gt;ಎಂಜಿಆರ್ ದಾಖಲೆ ಮತ್ತು ವಿಜಯ್ ವಿನಯ:&lt;/p&gt;&lt;p&gt;ರ್ಯಾಲಿಯಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿ ಸಾಗರವನ್ನು ನೋಡಿ ಭಾವುಕರಾದ ವಿಜಯ್, ಒಂದು ಸಂಚಲನಕಾರಿ ಹೇಳಿಕೆ ನೀಡಿದರು. &quot;ತಮಿಳುನಾಡಿನ ಆರಾಧ್ಯ ದೈವ, ದಿವಂಗತ ಸಿಎಂ ಎಂಜಿಆರ್ (MGR) ಅವರು ಕೂಡ ತಮ್ಮ ಮೊದಲ ಚುನಾವಣೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಮತಗಳನ್ನು ಗಳಿಸಿರಲಿಲ್ಲ. ಅಂತಹ ಅಭೂತಪೂರ್ವ ಬೆಂಬಲವನ್ನು ನೀವು ನನಗೆ ಮತ್ತು ನಮ್ಮ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷಕ್ಕೆ ನೀಡಿದ್ದೀರಿ&quot; ಎಂದು ಗುಡುಗಿದರು. ಆದರೆ, ತಕ್ಷಣವೇ &quot;ನಾನು ನನ್ನನ್ನು ಎಂಜಿಆರ್ ಅವರಿಗೆ ಹೋಲಿಸಿಕೊಳ್ಳುತ್ತಿಲ್ಲ. ಅವರು ಮಹಾನ್ ನಾಯಕರು. ನಾನು ಕೇವಲ ಎಂಜಿಆರ್, ಅಣ್ಣಾ ಮತ್ತು ಪೆರಿಯಾರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಲು ಬಂದಿರುವ ನಿಮ್ಮ ಮನೆಯ ಮಗ&quot; ಎಂದು ಹೇಳುವ ಮೂಲಕ ಜನರ ಹೃದಯ ಗೆದ್ದರು.&lt;/p&gt;&lt;p&gt;&lt;img&gt;&lt;/p&gt;&lt;h2&gt;ಡಿಎಂಕೆ-ಎಐಎಡಿಎಂಕೆ ದ್ವಿಪಕ್ಷೀಯತೆಗೆ ಬ್ರೇಕ್!&lt;/h2&gt;&lt;p&gt;ದಶಕಗಳಿಂದ ತಮಿಳುನಾಡನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದೈತ್ಯ ಪಕ್ಷಗಳ ಅಧಿಪತ್ಯಕ್ಕೆ ವಿಜಯ್ ಅಂತ್ಯ ಹಾಡಿದ್ದಾರೆ. &quot;ಇಷ್ಟು ವರ್ಷಗಳಿಂದ ನಿಮ್ಮನ್ನು ಸರದಿಯಲ್ಲಿ ನಿಲ್ಲಿಸಿ ಮೋಸ ಮಾಡುತ್ತಿದ್ದ ಇಬ್ಬರನ್ನು ನೀವು ತಿರಸ್ಕರಿಸಿದ್ದೀರಿ. ಆರು ತಿಂಗಳು ಮೌನವಾಗಿರುತ್ತಾನೆ ಎಂದು ನನ್ನ ಬಗ್ಗೆ ಹೇಳುತ್ತಿದ್ದವರಿಗೆ, ಆರು ದಿನಗಳೂ ಮೌನವಾಗಿರಲು ಸಾಧ್ಯವಾಗಲಿಲ್ಲ. ನೀವು ನನ್ನನ್ನು ಕೇವಲ ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ, ಬದಲಿಗೆ ನಿಮ್ಮ 'ಮೊದಲ ಸೇವಕ'ನನ್ನಾಗಿ ಆರಿಸಿದ್ದೀರಿ&quot; ಎಂದು ವಿಜಯ್ ಭಾವನಾತ್ಮಕವಾಗಿ ನುಡಿದರು.&lt;/p&gt;&lt;p&gt;ಸಂಖ್ಯೆಗಳಲ್ಲಿ ವಿಜಯ್ ಹವಾ!&lt;/p&gt;&lt;p&gt;ಏಪ್ರಿಲ್ 23 ರಂದು ನಡೆದ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಬರೋಬ್ಬರಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸ್ವತಃ ವಿಜಯ್ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಭರ್ಜರಿ ಜಯ ದಾಖಲಿಸಿದ್ದಾರೆ.&lt;/p&gt;&lt;p&gt;ಚೆನ್ನೈ ಪೆರಂಬೂರು: ಇಲ್ಲಿ ವಿಜಯ್ 1,19,454 ಮತಗಳನ್ನು ಪಡೆದು, 53,532 ಮತಗಳ ಬೃಹತ್ ಅಂತರದಿಂದ ಗೆದ್ದರು.&lt;/p&gt;&lt;p&gt;ತಿರುಚಿರಾಪಳ್ಳಿ ಪೂರ್ವ: ಇಲ್ಲಿ 91,381 ಮತಗಳನ್ನು ಪಡೆದು 27,416 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು.&lt;/p&gt;&lt;p&gt;ಸದ್ಯ ವಿಜಯ್ ಅವರು ತಿರುಚಿರಾಪಳ್ಳಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು, ಚೆನ್ನೈ ಪೆರಂಬೂರು ಕ್ಷೇತ್ರದ ಶಾಸಕರಾಗಿ ಮುಂದುವರಿಯಲಿದ್ದಾರೆ.&lt;/p&gt;&lt;h3&gt;ಸಿನಿಮಾ ಸ್ಟೈಲ್ ಪೊಲಿಟಿಕ್ಸ್:&lt;/h3&gt;&lt;p&gt;ಬೆಳ್ಳಿಪರದೆಯ ಮೇಲೆ 'ತಮಿಳಗಂ' ಪ್ರೇಕ್ಷಕರನ್ನು ರಂಜಿಸುತ್ತಿದ್ದ ವಿಜಯ್, ಈಗ ಮೈದಾನಕ್ಕಿಳಿದು ಜನರ ಸೇವೆಗೆ ನಿಂತಿದ್ದಾರೆ. 1977 ರಿಂದ 1987 ರವರೆಗೆ ತಮಿಳುನಾಡನ್ನು ಆಳಿದ ಮೊದಲ ನಟ-ಸಿಎಂ ಎಂಜಿಆರ್ ಅವರ ಹಾದಿಯಲ್ಲೇ ವಿಜಯ್ ಸಾಗುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಒಟ್ಟಿನಲ್ಲಿ, ದಳಪತಿಯ ಈ ರಾಜಕೀಯ ಜರ್ನಿ ಮುಂದಿನ ದಿನಗಳಲ್ಲಿ ಇನ್ನೆಷ್ಟು ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ!&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/cm-vijay-direct-statement-that-even-mgr-did-not-secure-this-many-votes-in-his-first-election-has-now-gone-viral/articleshow-ksvuxut"/>
        </item>
        <item>
            <title><![CDATA[ಉತ್ತರ ಬೆಂಗಳೂರಿನಲ್ಲಿ ಪುರವಂಕರದಿಂದ ₹1,100 ಕೋಟಿ ವಸತಿ ಯೋಜನೆ, ವಾರ್ಷಿಕ ಮಾರಾಟ ದಾಖಲೆಯ ₹7,407 ಕೋಟಿ!]]></title>
            <link>https://kannada.asianetnews.com/karnataka-districts/puravankara-signs-rs-1100-cr-jda-in-north-bengaluru-revenue-doubles-gdp/articleshow-gq2wh67</link>
            <guid isPermaLink="true">https://kannada.asianetnews.com/karnataka-districts/puravankara-signs-rs-1100-cr-jda-in-north-bengaluru-revenue-doubles-gdp/articleshow-gq2wh67</guid>
            <pubDate>Mon, 01 Jun 2026 20:17:06 +0530</pubDate>
            <description><![CDATA[ರಿಯಾಲ್ಟಿ ಡೆವಲಪರ್ ಪುರವಂಕರ, ಉತ್ತರ ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿ ₹1,100 ಕೋಟಿ ಮೌಲ್ಯದ ವಸತಿ ಯೋಜನೆಗಾಗಿ ಜಂಟಿ ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯೋಜನೆಯು 11.23 ಎಕರೆ ಭೂಮಿಯಲ್ಲಿ 0.74 ಮಿಲಿಯನ್ ಚದರ ಅಡಿ ವಿಸ್ತೀರ್ಣದ ಅಪಾರ್ಟ್ಮೆಂಟ್ ಗಳನ್ನು ಒಳಗೊಂಡಿದ್ದು, ಕಂಪನಿಯು ದಾಖಲೆಯ ವಾರ್ಷಿಕ ಮಾರಾಟ ಮತ್ತು ಲಾಭವನ್ನು ವರದಿ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt1sz765f95ybh7aqq066yfy,imgname-puravankara-north-bengaluru-project-1780324736196.jpg" type="image/jpeg" height="390" width="690"/>
            <content:encoded><![CDATA[&lt;p&gt;ರಿಯಾಲ್ಟಿ ಡೆವಲಪರ್ ಪುರವಂಕರ, ಉತ್ತರ ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿ 11.23 ಎಕರೆ ಭೂಮಿಗೆ ಜಂಟಿ ಅಭಿವೃದ್ಧಿ ಒಪ್ಪಂದಕ್ಕೆ (ಜೆಡಿಎ) ಸಹಿ ಹಾಕಿದ್ದು, ಅಂದಾಜು ಒಟ್ಟು ಅಭಿವೃದ್ಧಿ ಮೌಲ್ಯ ₹1,100 ಕೋಟಿ. ಪ್ರಸ್ತಾವಿತ ವಸತಿ ಅಪಾರ್ಟ್ಮೆಂಟ್ ಯೋಜನೆಯು ಸುಮಾರು 0.74 ಮಿಲಿಯನ್ ಚದರ ಅಡಿ ವಿಸ್ತೀರ್ಣವನ್ನು ಅಭಿವೃದ್ಧಿಪಡಿಸಬಹುದಾಗಿದೆ.ಉತ್ತರ ಬೆಂಗಳೂರಿನ ಉದಯೋನ್ಮುಖ ವಸತಿ ಕಾರಿಡಾರ್&zwnj;ಗಳಲ್ಲಿ ಒಂದಾದ ದೊಡ್ಡಗುಬ್ಬಿ, ಹೆಣ್ಣೂರು, ಹೆಬ್ಬಾಳ, ಯಲಹಂಕ, ಮಾನ್ಯತಾ ಟೆಕ್ ಪಾರ್ಕ್ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಪ್ರಮುಖ ಕೇಂದ್ರಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗ ಆಧಾರಿತ ಬೆಳವಣಿಗೆಯಿಂದ ಬೆಂಬಲಿತವಾದ ಈ ಪ್ರದೇಶವು ಹೆಚ್ಚುತ್ತಿರುವ ವಸತಿ ಬೇಡಿಕೆಗೆ ಸಾಕ್ಷಿಯಾಗಿದೆ.&lt;/p&gt;&lt;p&gt;ಈ ಅಭಿವೃದ್ಧಿಯ ಕುರಿತು ಪ್ರತಿಕ್ರಿಯಿಸಿದ ಪುರವಂಕರ ಲಿಮಿಟೆಡ್&zwnj;ನ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಪುರವಂಕರ, ಈ ಯೋಜನೆಯು ಬಂಡವಾಳ-ಸಮರ್ಥ ಅಭಿವೃದ್ಧಿ ಮಾದರಿಯ ಮೂಲಕ ಹೆಚ್ಚಿನ ಬೇಡಿಕೆಯ ನಗರ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಕಂಪನಿಯ ಕಾರ್ಯತಂತ್ರಕ್ಕೆ ಹೊಂದಿಕೆಯಾಗುತ್ತದೆ ಎಂದು ಹೇಳಿದರು.&lt;/p&gt;&lt;h2&gt;ವಾರ್ಷಿಕ ಮಾರಾಟವು ದಾಖಲೆಯ ₹7,407 ಕೋಟಿ ತಲುಪಿದೆ&lt;/h2&gt;&lt;p&gt;&quot;2026ನೇ ಹಣಕಾಸು ವರ್ಷವು ನಮಗೆ ಒಂದು ಹೆಗ್ಗುರುತು ವರ್ಷವಾಗಿತ್ತು, ವಾರ್ಷಿಕ ಮಾರಾಟವು ದಾಖಲೆಯ ₹7,407 ಕೋಟಿ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ. 55 ರಷ್ಟು ಹೆಚ್ಚಾಗಿದೆ. ಬೆಂಗಳೂರು ಮತ್ತು ಮುಂಬೈನ ಪ್ರಮುಖ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ನಮ್ಮ ಅಭಿವೃದ್ಧಿ ಪೈಪ್&zwnj;ಲೈನ್ ಅನ್ನು ನಾವು ಬಲಪಡಿಸಿದ್ದೇವೆ. ಉತ್ತರ ಬೆಂಗಳೂರಿನಲ್ಲಿ ಈ ಜಂಟಿ ಅಭಿವೃದ್ಧಿಯು ಮಾಪನಾಂಕ ನಿರ್ಣಯಿಸಿದ ಮತ್ತು ಬಂಡವಾಳ-ಸಮರ್ಥ ವಿಧಾನವನ್ನು ಕಾಯ್ದುಕೊಳ್ಳುವಾಗ ಹೆಚ್ಚಿನ ಬೆಳವಣಿಗೆಯ ನಗರ ಕಾರಿಡಾರ್&zwnj;ಗಳಲ್ಲಿ ವಿಸ್ತರಿಸುವ ನಮ್ಮ ಕಾರ್ಯತಂತ್ರದ ಭಾಗವಾಗಿದೆ, &rdquo;ಎಂದು ಅವರು ಹೇಳಿದರು.&lt;/p&gt;&lt;p&gt;ಕಂಪನಿಯು ಬಲವಾದ ಮೂಲಸೌಕರ್ಯ, ಉದ್ಯೋಗಾವಕಾಶಗಳು ಮತ್ತು ದೀರ್ಘಾವಧಿಯ ಬೇಡಿಕೆಯ ಗೋಚರತೆಯಿಂದ ಬೆಂಬಲಿತವಾದ ಮಾರುಕಟ್ಟೆಗಳ ಮೇಲೆ ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು, ಏಕೆಂದರೆ ಅದು FY27 ಮಾರಾಟ ಮಾರ್ಗದರ್ಶನ ₹11,200 ಕೋಟಿಗಳತ್ತ ಕೆಲಸ ಮಾಡುತ್ತದೆ.&lt;/p&gt;&lt;h2&gt;₹109.95 ಕೋಟಿಗಳ ಕ್ರೋಢೀಕೃತ ನಿವ್ವಳ ಲಾಭ&lt;/h2&gt;&lt;p&gt;ಇತ್ತೀಚಿನ ಸೇರ್ಪಡೆಯೊಂದಿಗೆ, ಪುರವಂಕರ ಬೆಂಗಳೂರು ಅಭಿವೃದ್ಧಿ ಪೈಪ್&zwnj;ಲೈನ್ ಈಗ ₹13,800 ಕೋಟಿಗೂ ಹೆಚ್ಚಿನ GDV ಅನ್ನು ಪ್ರತಿನಿಧಿಸುತ್ತದೆ. ಪ್ರತ್ಯೇಕವಾಗಿ, ಕಂಪನಿಯು ಮಾರ್ಚ್ 2026 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹109.95 ಕೋಟಿಗಳ ಕ್ರೋಢೀಕೃತ ನಿವ್ವಳ ಲಾಭವನ್ನು ವರದಿ ಮಾಡಿದೆ, ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹88 ಕೋಟಿಗಳಷ್ಟಿತ್ತು. ಒಟ್ಟು ಆದಾಯವು ಇದೇ ಅವಧಿಯಲ್ಲಿ ₹563.70 ಕೋಟಿಗಳಿಂದ ₹1,540.99 ಕೋಟಿಗಳಿಗೆ ದ್ವಿಗುಣಗೊಂಡಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/puravankara-signs-rs-1100-cr-jda-in-north-bengaluru-revenue-doubles-gdp/articleshow-gq2wh67"/>
        </item>
        <item>
            <title><![CDATA[ಎರಡು ದಿನ ಕಾಯಿರಿ, ಬಿಜೆಪಿ ತೊರೆಯುವ ಪ್ರಶ್ನೆಗೆ ಅಣ್ಣಾಮಲೈ ಉತ್ತರ, ಹುಟ್ಟಹಬ್ಬಕ್ಕೆ ಹೊಸ ಪಾರ್ಟಿ?]]></title>
            <link>https://kannada.asianetnews.com/india-news/annamalai-breaks-silence-on-bjp-exit-rumours-says-wait-for-two-days/articleshow-kixzqvc</link>
            <guid isPermaLink="true">https://kannada.asianetnews.com/india-news/annamalai-breaks-silence-on-bjp-exit-rumours-says-wait-for-two-days/articleshow-kixzqvc</guid>
            <pubDate>Mon, 01 Jun 2026 20:16:43 +0530</pubDate>
            <description><![CDATA[&lt;p&gt;ಬಿಜೆಪಿಯಲ್ಲಿ ಮೂಲೆಗುಂಪಾದ ಅಣ್ಣಾಮಲೈ ಪಕ್ಷ ತೊರೆಯುತ್ತಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ದೆಹಲಿ ಭೇಟಿ ಬಳಿಕ ಈ ಪ್ರಶ್ನೆಗೆ ಅಣ್ಣಾಮಲೈ ನೀಡಿದ ಉತ್ತರ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kerqkk33g8cszb61yqnrt4ha,imgname-annamalai2-1768209108067.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಜೂ.01)&lt;/strong&gt; ಪೊಲೀಸ್ ಕರ್ತವ್ಯಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡ ಅಣ್ಣಾಮಲೈ ತಮಿಳುನಾಡಿನಲ್ಲಿ ಹೊಸ ಅಲೆ ಸೃಷ್ಟಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಹಾಕಿದ ಬ್ರೇಕ್, ಬಳಿಕ ಹಿರಿಯ ನಾಯಕರ ನಿರ್ಲಕ್ಷ್ಯದಿಂದ ತಮಿಳುನಾಡಿನಲ್ಲಿ ಅಣ್ಣಾಮಲೈ ಮಾತ್ರವಲ್ಲ ಬಿಜೆಪಿ ಮೂಲೆಗುಂಪಾಯಿತು. ದಿಢೀರ್ ದೆಹಲಿಗೆ ತೆರಳಿ ವರಿಷ್ಠರ ಭೇಟಿಯಾದ ಅಣ್ಣಾಮಲೈ ಬಿಜೆಪಿ ತೊರೆಯುತ್ತಿದ್ದಾರೆ. ಹೊಸ ಪಕ್ಷ ಕಟ್ಟುತ್ತಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಅಣ್ಣಾಮಲೈ ನೀಡಿದ ಉತ್ತರ ಇದೀಗ ತಮಿಳುನಾಡು ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಎರಡು ದಿನ ಕಾಯಿರಿ, ಎಲ್ಲಾ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಇನ್ನೆರಡು ದಿನದಲ್ಲಿ ಅಣ್ಣಾಮೈಲೆ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ಇದೇ ದಿನ ಹೊಸ ಪಕ್ಷ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ದೆಹಲಿ ಭೇಟಿ ಬಳಿಕ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಣ್ಣಾಮಲೈಗೆ ಮಾಧ್ಯಮಗಳು ನೇರ ಪ್ರಶ್ನೆ ಕೇಳಿತ್ತು. ಅಣ್ಣಾಮಲೈ ಬಿಜೆಪಿ ತೊರೆಯುತ್ತಿದ್ದಾರೆ, ಹೊಸ ಪಕ್ಷ ಆರಂಭಿಸುತ್ತಿದ್ದಾರೆ, ತಮಿಳುನಾಡಿನಲ್ಲಿ ಅಣ್ಣಾಮಲೈ ನೇತೃತ್ವದಲ್ಲಿ ಹೊಸ ಆಂದೋಲನ ಶುರುವಾಗಲಿದೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ ಎಂದು ಪ್ರಶ್ನಿಸಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ ಇನ್ನೆರಡು ದಿನ ಕಾಯಬೇಕು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದಿದ್ದಾರೆ.&lt;/p&gt;&lt;h2&gt;ಜೂನ್ 4ಕ್ಕೆ ಹುಟ್ಟುಹಬ್ಬ, ಇದೇ ದಿನ ನಿರ್ಧಾರ ಘೋಷಣೆ&lt;/h2&gt;&lt;p&gt;ಅಣ್ಣಾಮಲೈ ಇನ್ನೆರಡು ದಿನ ಕಾಯಬೇಕು ಎಂದಿದ್ದಾರೆ. ಇನ್ನೆರಡು ದಿನ ಅಂದರೆ ಜೂನ್ ನಾಲ್ಕರಂದು ಅಣ್ಣಾಮಲೈ 42ನೇ ವರ್ಷದ ಹುಟ್ಟುಹಬ್ಬ ಆಚರಿಸಲಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನವೇ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ ಎಂದು ರಾಜಕೀಯ ತಜ್ಞರು ವ್ಯಾಖ್ಯಾನಿಸಿದ್ದಾರೆ. ಅಣ್ಣಾಮಲೈ ಹುಟ್ಟುಹಬ್ಬ ದಿನವೇ ಹೊಸ ಪಕ್ಷದ ಉದಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.&lt;/p&gt;&lt;h2&gt;ಕೊಯಂಬತ್ತೂರಿನ ಹಲೆವೆಡೆ ಪೋಸ್ಟರ್&lt;/h2&gt;&lt;p&gt;ಅಣ್ಣಾಮಲೈ ಹುಟ್ಟುಹಬ್ಬ ಹಿನ್ನಲೆಯಲ್ಲಿ ಕೊಯಂಬತ್ತೂರಿನ ಹಲವೆಡೆ ಹೊಸ ಪೋಸ್ಟರ್ ಅಂಟಿಸಲಾಗಿದೆ. ನಮ್ಮ ನಾಯಕ ನಮ್ಮ ಆಡಳಿತ ನಡೆಸುತ್ತಾರೆ. ದೂರದೃಷ್ಠಿಯುಳ್ಳ ನಾಯಕನಿಗೆ ಮಿತಿಗಳಿಲ್ಲ ಎಂಬೆಲ್ಲಾ ಬರಹ ಹಾಗೂ ಅಣ್ಣಾಮಲೈ ಫೋಟೋ ಇರುವ ಪೋಸ್ಟರ್ ಕಾಣಿಸಿಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳು ಅಣ್ಣಾಮಲೈ ಬಿಜೆಪಿ ತೊರೆದು ಹೊಸ ಪಾರ್ಟಿ ಆರಂಭಿಸುತ್ತಿರುವ ಸೂಚನೆಗಳು ನೀಡುತ್ತಿದೆ.&lt;/p&gt;&lt;h3&gt;ವಿಜಯ್ ಟಿವಿಕೆ ಪಾರ್ಟಿ ಸ್ಪೂರ್ತಿ?&lt;/h3&gt;&lt;p&gt;ನಟ ವಿಜಯ್ ಟಿವಿಕೆ ಪಕ್ಷ ಕಟ್ಟಿ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದು ಮಾತ್ರವಲ್ಲ, ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿಯೊಂದಿಗೆ ಹೊಸ ಅಲೆ ಸೃಷ್ಟಿಸಿದ ಅಣ್ಣಾಮಲೈ, ಮೈತ್ರಿ ರಾಜಕೀಯಕ್ಕೆ ತಲೆಬಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನ ಗೆದ್ದುಕೊಂಡಿದೆ. ಟಿವಿಕೆ ರೀತಿ ಹೊಸ ಪಕ್ಷ ಸ್ಥಾಪಿಸಿ ಮುಂಬರುವ ಲೋಕಸಭೆ ಚುನಾವಣೆಗೆ ಶಕ್ತಿ ಸಾಮರ್ಥ್ಯ ತೋರಿಸಲು ಅಣ್ಣಾಮಲೈ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡು ಜನ, ರಾಜಕೀಯ ಪ್ರಾದೇಶಿಕ ಪಕ್ಷಕ್ಕೆ ನೀಡಿದ ಸ್ಥಾನಮಾನ, ರಾಷ್ಟ್ರೀಯ ಪಕ್ಷಗಳಿಗೆ ನೀಡುತ್ತಿಲ್ಲ ಅನ್ನೋ ಸ್ಪಷ್ಟ ಅರಿವು ಅಣ್ಣಾಮಲೈಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;#WATCH | Tamil Nadu | BJP leader K. Annamalai leaves for Delhi from Chennai.When asked on speculations about him expected to launch a new party, he says, &quot;Please wait. We will sit down and talk in two days&quot; pic.twitter.com/5qOZfp7OHD&lt;/p&gt;&lt;p&gt;&mdash; ANI (@ANI) June 1, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/annamalai-breaks-silence-on-bjp-exit-rumours-says-wait-for-two-days/articleshow-kixzqvc"/>
        </item>
        <item>
            <title><![CDATA[ನಿವೃತ್ತಿಗೆ ಕೊನೆಯ ದಿನ: ಮನೆ ಹರಾಜು ಹಾಕುವ ಬದಲು, ಬಡವರ ಸಾಲ ತೀರಿಸಿದ ಪತ್ರ ವಾಪಸ್ ಕೊಟ್ಟ ಬ್ಯಾಂಕ್ ಅಧಿಕಾರಿ!]]></title>
            <link>https://kannada.asianetnews.com/viral/kerala-bank-officer-mercy-cherian-pays-poor-family-loan-on-retirement-day-save-home-sat/articleshow-oxfw18b</link>
            <guid isPermaLink="true">https://kannada.asianetnews.com/viral/kerala-bank-officer-mercy-cherian-pays-poor-family-loan-on-retirement-day-save-home-sat/articleshow-oxfw18b</guid>
            <pubDate>Mon, 01 Jun 2026 20:03:35 +0530</pubDate>
            <description><![CDATA[&lt;p&gt;ಸಾಲ ವಸೂಲಾತಿಗಾಗಿ ಬಡ ಕುಟುಂಬದ ಮನೆ ಜಪ್ತಿ ಮಾಡಲು ಹೋದ ಬ್ಯಾಂಕ್ ಅಧಿಕಾರಿಯೊಬ್ಬರು, ಅವರ ಬಡತನ ಕಂಡು ಮನಕರಗಿ, ತಾವೇ ಸಂಪೂರ್ಣ ಸಾಲವನ್ನು ತೀರಿಸಿದ್ದಾರೆ. ತಮ್ಮ ನಿವೃತ್ತಿಯ ದಿನದಂದು ಆ ಕುಟುಂಬಕ್ಕೆ ಮನೆಯ ಮೂಲ ಪತ್ರಗಳನ್ನು ಹಸ್ತಾಂತರಿಸಿ, ಮಾನವೀಯತೆ ಮೆರೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz4c4w5jfv9z6apk44fsmey,imgname-recovery-officer-repays-debt-1780234982277.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಧಿಕಾರ, ಕಾನೂನು, ನಿಯಮಗಳ ನಡುವೆ ಇಂದಿನ ಜಗತ್ತಿನಲ್ಲಿ ಮಾನವೀಯತೆ ಎಂಬುದು ಮರೆಯಾಗುತ್ತಿದೆ ಎನ್ನುವವರೇ ಹೆಚ್ಚು. ಆದರೆ, ಇಲಾಖೆಯ ನಿಯಮಗಳ ಆಚೆಗೂ ಕರುಣೆಯುಳ್ಳ ಹೃದಯಗಳು ಇರುತ್ತವೆ ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ಸಾಲ ವಸೂಲಾತಿಗಾಗಿ ಬಡ ಕುಟುಂಬವೊಂದರ ಮನೆಗೆ ಜಪ್ತಿ ಮಾಡಲು ಹೋದ ಸರ್ಕಾರಿ ಬ್ಯಾಂಕ್ ಅಧಿಕಾರಿಯೊಬ್ಬರು, ಅಲ್ಲಿನ ಕಡು ಬಡತನವನ್ನು ಕಂಡು ಕರಗಿದ್ದಾರೆ. ಕಾನೂನು ಪ್ರಕಾರ ಮನೆಯನ್ನು ಹರಾಜು ಹಾಕುವ ಬದಲು, ಆ ಬಡ ಕುಟುಂಬದ ಸಂಪೂರ್ಣ ಸಾಲವನ್ನು ತಾವೇ ತೀರಿಸಿ, ಅವರ ಮುಖದಲ್ಲಿ ನಗು ಮೂಡಿಸಿದ್ದಾರೆ. ತಮ್ಮ ನಿವೃತ್ತಿಯ ದಿನದಂದೇ ಆ ಕುಟುಂಬಕ್ಕೆ ಮನೆಯ ಮೂಲ ಪತ್ರಗಳನ್ನು ಹಸ್ತಾಂತರಿಸಿ ಎಲ್ಲರ ಮನ ಗೆದ್ದಿದ್ದಾರೆ.&lt;/p&gt;&lt;h2&gt;&lt;strong&gt;ಮನೆ ಹರಾಜು ಹಾಕಲು ಬಂದಿತ್ತು ಆದೇಶ!&lt;/strong&gt;&lt;/h2&gt;&lt;p&gt;ಈ ಮನ ಮಿಡಿಯುವ ಘಟನೆ ನಡೆದಿರುವುದು ನೆರೆರಾಜ್ಯ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ. ಕೊಯಿಲಾಂಡಿ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ技 ಬ್ಯಾಂಕ್&zwnj;ನ ರಿಕवरी ಆಫೀಸರ್ ಆಗಿದ್ದ ಮರ್ಸಿ ಚೆರಿಯಾನ್ ಅವರೇ ಈ ಕಥೆಯ ರಿಯಲ್ ಹೀರೋಯಿನ್. ಬಾಲುശ്ശೇರಿ ಪಂಚಾಯತ್&zwnj;ನ ಪುತ್ತೂರ್&zwnj;ವಟ್ಟಂ ನಿವಾಸಿ ಜಾನು ಮತ್ತು ಅವರ ಮಗಳು ಪ್ರಮೀಳಾ ಎಂಬುವವರೇ ಈ ಮಾನವೀಯತೆಯ ಲಾಭ ಪಡೆದ ದುರ್ದೈವಿಗಳು. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಈ ತಾಯಿ-ಮಗಳು ಅನಿವಾರ್ಯವಾಗಿ ತಮ್ಮ ಪುಟ್ಟ ಮನೆಯನ್ನು ಅಡವಿಟ್ಟು 75,000 ರೂಪಾಯಿ ಸಾಲ ಪಡೆದಿದ್ದರು. ಆದರೆ, ಬಡತನದ ಕಾರಣದಿಂದ ಅವರಿಗೆ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗಲೇ ಇಲ್ಲ.&lt;/p&gt;&lt;h2&gt;&lt;strong&gt;ಜಪ್ತಿ ಮಾಡಲು ಹೋದ ಅಧಿಕಾರಿಯ ಮನ ಕರಗಿದ ಕ್ಷಣ&lt;/strong&gt;&lt;/h2&gt;&lt;p&gt;ನಿಯಮಗಳ ಪ್ರಕಾರ ಬ್ಯಾಂಕ್, ಸಾಲ ವಸೂಲಾತಿಗಾಗಿ ಕಾನೂನು ಕ್ರಮಕ್ಕೆ ಮುಂದಾಗಿ ಮನೆಯನ್ನು ಹರಾಜು ಹಾಕಲು ನಿರ್ಧರಿಸಿತು. ಈ ಜಾಗವನ್ನು ಅಳತೆ ಮಾಡಿ, ಜಪ್ತಿ ಪ್ರಕ್ರಿಯೆ ನಡೆಸುವ ಜವಾಬ್ದಾರಿಯನ್ನು ಬ್ಯಾಂಕ್ ಅಧಿಕಾರಿ ಮರ್ಸಿ ಚೆರಿಯಾನ್ ಅವರಿಗೆ ವಹಿಸಲಾಗಿತ್ತು. ಕರ್ತವ್ಯದ ಭಾಗವಾಗಿ ಜಾನು ಅವರ ಮನೆಗೆ ಭೇಟಿ ನೀಡಿದ ಮರ್ಸಿಗೆ, ಅಲ್ಲಿನ ಕಷ್ಟದ ಪರಿಸ್ಥಿತಿ ಕಂಡು ಕಣ್ಣಾಲಿಗಳು ತುಂಬಿ ಬಂದವು. ಆ ಬಡ ಕುಟುಂಬವನ್ನು ಬೀದಿಗೆ ತಳ್ಳಲು ಅವರ ಮನಸ್ಸು ಒಪ್ಪಲಿಲ್ಲ. ತಕ್ಷಣವೇ ಅವರು ಒಂದು ಧೈರ್ಯದ ನಿರ್ಧಾರ ಮಾಡಿದರು; ಆ ಸಾಲದ ಜವಾಬ್ದಾರಿಯನ್ನು ತಾವೇ ಹೊತ್ತುಕೊಳ್ಳಲು ನಿರ್ಧರಿಸಿದರು.&lt;/p&gt;&lt;h2&gt;&lt;strong&gt;ಸ್ವಂತ ಹಣದಲ್ಲೇ 4 ವರ್ಷ ಸಾಲ ಕಟ್ಟಿದ 'ಮರ್ಸಿ'&lt;/strong&gt;&lt;/h2&gt;&lt;p&gt;ಕಳೆದ 2022ರಲ್ಲಿ, 80,000 ರೂಪಾಯಿಗೆ ಆ ಸಾಲವನ್ನು ನವೀಕರಿಸಿದ ಮರ್ಸಿ ಚೆರಿಯಾನ್, ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು ತಮ್ಮ ಸ್ವಂತ ಹಣದಿಂದ 1500 ರೂಪಾಯಿಗಳ ಕಂತನ್ನು ಬ್ಯಾಂಕ್&zwnj;ಗೆ ಪಾವತಿಸುತ್ತಾ ಬಂದರು. ಇತ್ತೀಚೆಗೆ ಅವರ ನಿವೃತ್ತಿಯ ದಿನ ಹತ್ತಿರ ಬಂದಾಗ, ಇನ್ನು ಮುಂದೆ ಕಂತು ಪಾವತಿ ವಿಳಂಬವಾಗಬಾರದು ಎಂದು ಯೋಚಿಸಿದ ಮರ್ಸಿ, ಬಾಕಿ ಉಳಿದಿದ್ದ ಇಡೀ 41,000 ರೂಪಾಯಿಗಳನ್ನು ಒಂದೇ ಬಾರಿಗೆ ಪಾವತಿಸಿ ಸಾಲವನ್ನು ಸಂಪೂರ್ಣವಾಗಿ ಚುಕ್ತಾ ಮಾಡಿದರು.&lt;/p&gt;&lt;h3&gt;&lt;strong&gt;ನಿವೃತ್ತಿಯ ದಿನದಂದು ಕಣ್ಣೀರು ತರಿಸಿದ ಆ ಒಂದು ಗಿಫ್ಟ್!&lt;/strong&gt;&lt;/h3&gt;&lt;p&gt;ಬಾಕಿ ಹಣವನ್ನೆಲ್ಲಾ ಪಾವತಿಸಿದ ಮರ್ಸಿ, ಆ ಕುಟುಂಬದ ಮನೆಯ ಮೂಲ ಪತ್ರಗಳನ್ನು (ರಜಿಸ್ಟರ್ಡ್ ಡಾಕ್ಯುಮೆಂಟ್ಸ್) ಬ್ಯಾಂಕ್&zwnj;ನಿಂದ ಬಿಡಿಸಿ ತಂದು ಅವರಿಗೆ ಹಿಂದಿರುಗಿಸಿದರು. ತಮ್ಮ ಅಧಿಕೃತ ಸೇವೆಯ ಕೊನೆಯ ದಿನ, ಮರ್ಸಿ ಚೆರಿಯಾನ್ ಅವರು ಬ್ಯಾಂಕ್&zwnj;ನಿಂದ ಬೀಳ್ಕೊಡುಗೆ ಪಡೆಯುವಾಗ ಜಾನು ಮತ್ತು ಪ್ರಮೀಳಾ ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದರು. ಕೇವಲ ಕಾನೂನು ಪಾಲಿಸದೆ, ಮಾನವೀಯತೆಯನ್ನು ಎತ್ತಿಹಿಡಿದ ಮರ್ಸಿ ಅವರ ಕಾರ್ಯಕ್ಕೆ ಈಗ ಇಡೀ ದೇಶವೇ ಸಲಾಂ ಎನ್ನುತ್ತಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/kerala-bank-officer-mercy-cherian-pays-poor-family-loan-on-retirement-day-save-home-sat/articleshow-oxfw18b"/>
        </item>
        <item>
            <title><![CDATA[ಯಾದಗಿರಿ ಹೊರಗುತ್ತಿಗೆ ಹಗರಣ: ಇಪಿಎಫ್, ಇಎಸ್‌ಐ ವಂಚನೆ ಬಯಲು, ₹8 ಕೋಟಿ ಬಾಕಿ!]]></title>
            <link>https://kannada.asianetnews.com/karnataka-districts/yadagiri-manpower-agency-rs8-cr-epf-esi-scam-ceo-lavish-oryadia-action-against-outsourcing-agencies-gdp/articleshow-yr61h9a</link>
            <guid isPermaLink="true">https://kannada.asianetnews.com/karnataka-districts/yadagiri-manpower-agency-rs8-cr-epf-esi-scam-ceo-lavish-oryadia-action-against-outsourcing-agencies-gdp/articleshow-yr61h9a</guid>
            <pubDate>Mon, 01 Jun 2026 19:33:13 +0530</pubDate>
            <description><![CDATA[ಯಾದಗಿರಿ ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸುತ್ತಿದ್ದ ಮ್ಯಾನ್&zwnj; ಪವರ್ ಏಜೆನ್ಸಿಗಳು ಎಸಗಿದ್ದ ಕೋಟ್ಯಂತರ ರೂಪಾಯಿ ಇಪಿಎಫ್ ಮತ್ತು ಇಎಸ್&zwnj;ಐ ವಂಚನೆ ಬಯಲಾಗಿದೆ. ಜಿ.ಪಂ. ಸಿಇಒ ಲವೀಶ್ ಒರಡಿಯಾ ಅವರು ಈ ಅಕ್ರಮದ ವಿರುದ್ಧ ಕಾನೂನು ಸಮರ ಸಾರಿದ್ದು, ತಪ್ಪಿತಸ್ಥ ಏಜೆನ್ಸಿಗಳ ವಿರುದ್ಧ ಎಫ್&zwnj;ಐಆರ್ ದಾಖಲಿಸಲು ಮತ್ತು ಬಡ್ಡಿ ಸಮೇತ ಹಣ ವಸೂಲಿ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j5cyt9vmgxzdsm4npmxk5ncf,imgname-istockphoto-1464136006-612x612--1-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ: &lt;/strong&gt;ಜಿಲ್ಲೆಯಲ್ಲಿ ಬಾಹ್ಯ ಗುತ್ತಿಗೆ (ಹೊರಗುತ್ತಿಗೆ) ಆಧಾರದ ಮೇಲೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಕಾರ್ಮಿಕರನ್ನು ಒದಗಿಸುವ ಟೆಂಡರ್ ಪಡೆದು, ನಂತರ ಕೋಟ್ಯಂತರ ರೂಪಾಯಿ ಆರ್ಥಿಕ ಅಕ್ರಮ ಎಸಗಿದ್ದ ಮಾನವ ಸಂಪನ್ಮೂಲ ಸಂಸ್ಥೆಗಳ (ಮ್ಯಾನ್&zwnj; ಪವರ್ ಏಜೆನ್ಸಿ) ವಿರುದ್ಧ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಲವೀಶ್ ಒರಡಿಯಾ ಅವರು ಭರ್ಜರಿ ಕಾನೂನು ಸಮರ ಸಾರಿದ್ದಾರೆ. ಕಾರ್ಮಿಕರ ಶೋಷಣೆ ಹಾಗೂ ಅವರಿಗೆ ಶಾಸನಬದ್ಧವಾಗಿ ಸಿಗಬೇಕಿದ್ದ ನಿಧಿಯನ್ನು ದುರುಪಯೋಗಪಡಿಸಿಕೊಂಡ ಗಂಭೀರ ಆರೋಪದಡಿ, ಹತ್ತಕ್ಕೂ ಹೆಚ್ಚು ಏಜೆನ್ಸಿಗಳ ಮಾಲೀಕರು ಹಾಗೂ ನಿರ್ದೇಶಕರ ವಿರುದ್ಧ ವೈಯಕ್ತಿಕವಾಗಿ ಎಫ್&zwnj;ಐಆರ್ (FIR) ದಾಖಲಿಸಲು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.&lt;/p&gt;&lt;p&gt;ಈ ಬೃಹತ್ ಆರ್ಥಿಕ ವಂಚನೆಯ ಹಿನ್ನೆಲೆಯಲ್ಲಿ ಸಿಇಒ ಲವೀಶ್ ಒರಡಿಯಾ ಅವರು ಕಲಬುರಗಿಯಲ್ಲಿರುವ ಇಎಸ್&zwnj;ಐ ಜಂಟಿ ನಿರ್ದೇಶಕರು, ಇಪಿಎಫ್ ಆಯುಕ್ತರು ಹಾಗೂ ಉಪ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗಳಿಗೆ ವಿವರವಾದ ಪತ್ರಗಳನ್ನು ಬರೆದು ತಕ್ಷಣದ ಕ್ರಮಕ್ಕೆ ಕೋರಿದ್ದಾರೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿ, ಕಾರ್ಮಿಕರ ಹಕ್ಕುಗಳಿಗೆ ದ್ರೋಹ ಬಗೆದ ಏಜೆನ್ಸಿಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿ ಈ ಬಿಸಿ ಮುಟ್ಟಿಸಲಾಗಿದೆ.&lt;/p&gt;&lt;h2&gt;ಮುಖ್ಯ ಲೆಕ್ಕಾಧಿಕಾರಿಗಳ ತನಿಖೆಯಿಂದ ಬಯಲಾದ ದಶಕದ ಆರ್ಥಿಕ ಹಗರಣ&lt;/h2&gt;&lt;p&gt;ಮ್ಯಾನ್&zwnj; ಪವರ್ ಏಜೆನ್ಸಿಗಳು ಕಾರ್ಮಿಕರ ಭವಿಷ್ಯ ನಿಧಿ (EPF) ಹಾಗೂ ಕಾರ್ಮಿಕರ ರಾಜ್ಯ ವಿಮೆ (ESI) ಹಣವನ್ನು ಸರಿಯಾಗಿ ಪಾವತಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿ.ಪಂ. ಸಿಇಒ ಲವೀಶ್ ಒರಡಿಯಾ ಅವರು 2010 ರಿಂದ 2020 ರವರೆಗಿನ ಹತ್ತು ವರ್ಷಗಳ ಅವಧಿಯ ನಿಧಿ ಪಾವತಿಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದರು. ಅದರಂತೆ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳ ನೇತೃತ್ವದ ಉನ್ನತ ಮಟ್ಟದ ಸಮಿತಿಯು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಏಜೆನ್ಸಿಗಳು ನಡೆಸಿರುವ ಆಘಾತಕಾರಿ ಆರ್ಥಿಕ ಅಕ್ರಮದ ಸಂಪೂರ್ಣ ಕರಾಳ ಮುಖ ಬಯಲಾಗಿದೆ.&lt;/p&gt;&lt;h2&gt;ಕೋಟ್ಯಂತರ ರೂಪಾಯಿ ಪಿಎಫ್ ಮತ್ತು ಇಎಸ್&zwnj;ಐ ಹಣದ ಇಂಗು ತಿನ್ನಿ&lt;/h2&gt;&lt;p&gt;ವರದಿಯ ಪ್ರಕಾರ, 2010 ರಿಂದ 2020 ರವರೆಗಿನ ಅವಧಿಯಲ್ಲಿ ಸರ್ಕಾರದಿಂದ ವಿವಿಧ ಮ್ಯಾನ್&zwnj; ಪವರ್ ಏಜೆನ್ಸಿಗಳಿಗೆ ಕಾರ್ಮಿಕರ ವೇತನ ಮತ್ತು ಭತ್ಯೆಗಾಗಿ ಒಟ್ಟು 23 ಕೋಟಿ 32 ಲಕ್ಷ 45 ಸಾವಿರದ 939 ರೂಪಾಯಿಗಳನ್ನು ಪಾವತಿಸಲಾಗಿತ್ತು. ನಿಯಮಗಳ ಪ್ರಕಾರ, ಈ ಮೊತ್ತದಲ್ಲಿ ಒಟ್ಟು 3 ಕೋಟಿ 71 ಲಕ್ಷ 93 ಸಾವಿರದ 909 ರೂಪಾಯಿಗಳನ್ನು ಇಪಿಎಫ್ (PF) ಖಾತೆಗೆ ಜಮೆ ಮಾಡಬೇಕಾಗಿತ್ತು. ಆದರೆ, ಕಾರ್ಮಿಕರ ಹೊಟ್ಟೆ ಹೊಡೆದ ಏಜೆನ್ಸಿಗಳು ಕೇವಲ 83 ಲಕ್ಷ 31 sಾವಿರದ 018 ರೂಪಾಯಿಗಳನ್ನು ಮಾತ್ರ ಪಾವತಿಸಿ, ಬರೋಬ್ಬರಿ 2 ಕೋಟಿ 88 ಲಕ್ಷ 62 ಸಾವಿರದ 891 ರೂಪಾಯಿಗಳ ಬೃಹತ್ ಮೊತ್ತವನ್ನು ಬಾಕಿ ಉಳಿಸಿಕೊಂಡು ದುರುಪಯೋಗಪಡಿಸಿಕೊಂಡಿದ್ದವು.&lt;/p&gt;&lt;p&gt;ಇದೇ ರೀತಿ ಕಾರ್ಮಿಕರ ಆರೋಗ್ಯ ಸುರಕ್ಷತೆಯ ಇಎಸ್&zwnj;ಐ (ESI) ಪಾವತಿಯಲ್ಲೂ ಭಾರಿ ವಂಚನೆ ಎಸಗಲಾಗಿದೆ. ನಿಯಮಾವಳಿಗಳ ಅನ್ವಯ ಒಟ್ಟು 62 ಲಕ್ಷ 10 ಸಾವಿರದ 087 ರೂಪಾಯಿಗಳನ್ನು ಇಎಸ್&zwnj;ಐ ಖಾತೆಗೆ ತುಂಬಬೇಕಿದ್ದ ಜಾಗದಲ್ಲಿ, ಏಜೆನ್ಸಿಗಳು ಕೇವಲ 11 ಲಕ್ಷ 47 ಸಾವಿರದ 614 ರೂಪಾಯಿಗಳನ್ನು ಮಾತ್ರ ಪಾವತಿಸಿದ್ದವು. ಈ ಮೂಲಕ 50 ಲಕ್ಷ 62 ಸಾವಿರದ 473 ರೂಪಾಯಿಗಳ ಇಎಸ್&zwnj;ಐ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಇಪಿಎಫ್ ಮತ್ತು ಇಎಸ್&zwnj;ಐ ಎರಡೂ ಸೇರಿ ಆರಂಭಿಕ ಹಂತದಲ್ಲೇ ಅಂದಾಜು 3.39 ಕೋಟಿ ರೂಪಾಯಿಗಳ ಅಸಲು ಮೊತ್ತದ ನೇರ ಬಾಕಿ ಕಂಡುಬಂದಿದೆ.&lt;/p&gt;&lt;h2&gt;ವಾರ್ಷಿಕ ಶೇಕಡಾ 12 ರ ಬಡ್ಡಿ ಸೇರಿ 8 ಕೋಟಿ ರೂಪಾಯಿ ಜಪ್ತಿಗೆ ಆದೇಶ&lt;/h2&gt;&lt;p&gt;ಕಾರ್ಮಿಕರ ಹಣವನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡಿರುವ ಏಜೆನ್ಸಿಗಳಿಗೆ ಸಿಇಒ ಲವೀಶ್ ಅವರು ಕಾನೂನಿನ ಸರಿಯಾದ ಪಾಠ ಕಲಿಸಲು ಮುಂದಾಗಿದ್ದಾರೆ. ಇಪಿಎಫ್ ಕಾಯ್ದೆಯ ಸೆಕ್ಷನ್ 7-ಕ್ಯು ಅಡಿಯಲ್ಲಿ, ಬಾಕಿ ಉಳಿಸಿಕೊಂಡ ದಿನಾಂಕದಿಂದ ಅಂದರೆ ಕಳೆದ 14 ವರ್ಷಗಳಿಗೂ ಹೆಚ್ಚಿನ ಅವಧಿಗೆ ವಾರ್ಷಿಕ ಶೇಕಡಾ 12 ರಷ್ಟು ಚಕ್ರಬಡ್ಡಿ ದರವನ್ನು ವಿಧಿಸಲಾಗುತ್ತಿದೆ. ಈ ಬಡ್ಡಿಯ ಲೆಕ್ಕಾಚಾರವನ್ನು ಒಳಗೊಂಡರೆ ಒಟ್ಟು ವಸೂಲಾತಿ ಮೊತ್ತವೇ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ ಬರೋಬ್ಬರಿ 8 ಕೋಟಿ ರೂಪಾಯಿಗಳಿಗೂ ಹೆಚ್ಚಾಗಲಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಕೇವಲ 7 ದಿನಗಳ ಅಂತಿಮ ಗಡುವನ್ನು ನೀಡಿರುವ ಸಿಇಒ, ಅಷ್ಟರೊಳಗೆ ಏಜೆನ್ಸಿಗಳು ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಸರ್ಕಾರಿ ಖಜಾನೆಗೆ ಜಮೆ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಒಂದು ವೇಳೆ ಈ ವಸೂಲಾತಿ ಪ್ರಕ್ರಿಯೆಗೆ ತಪ್ಪಿದ್ದಲ್ಲಿ, ಮ್ಯಾನ್&zwnj; ಪವರ್ ಏಜೆನ್ಸಿಗಳ ಮಾಲೀಕರು ಹಾಗೂ ನಿರ್ದೇಶಕರುಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 316 ರ ಅಡಿಯಲ್ಲಿ 'ಕ್ರಿಮಿನಲ್ ನಂಬಿಕೆ ದ್ರೋಹ' (Criminal Breach of Trust) ಆರೋಪದ ಮುಖದ್ದಮೆ ಹೂಡಿ ವೈಯಕ್ತಿಕವಾಗಿ ಎಫ್&zwnj;ಐಆರ್ ದಾಖಲಿಸಲು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.&lt;/p&gt;&lt;h2&gt;ಭ್ರಷ್ಟರ ವಿರುದ್ಧ ನಿರಂತರ ಸಮರ ಸಾರಿರುವ ಯಾದಗಿರಿ ಸಿಇಒ ಲವೀಶ್&lt;/h2&gt;&lt;p&gt;ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಲವೀಶ್ ಒರಡಿಯಾ ಅವರು ಭ್ರಷ್ಟಾಚಾರ ಮತ್ತು ನಿಯಮ ಉಲ್ಲಂಘನೆಗಳ ವಿರುದ್ಧ ಸರಣಿ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೇ ಸಾಕ್ಷಿ ಪುರಾವೆಗಳಿಲ್ಲದೆ, ಕೇವಲ ಸ್ವಾರ್ಥ ಹಾಗೂ ದುರುದ್ದೇಶಪೂರಿತವಾಗಿ ಸರ್ಕಾರಿ ಅಧಿಕಾರಿಗಳ ಮೇಲೆ ಸುಳ್ಳು ದೂರುಗಳನ್ನು ಸಲ್ಲಿಸಿ, ನಂತರ ತಪ್ಪು ತಿಳಿವಳಿಕೆ ಅಥವಾ ವೈಯಕ್ತಿಕ ಕಾರಣಗಳನ್ನು ನೀಡಿ ದೂರನ್ನು ಹಿಂಪಡೆಯುವ ಬ್ಲ್ಯಾಕ್&zwnj;ಮೇಲ್ ಪ್ರವೃತ್ತಿಯ ಕೆಲವು ಸಂಘಟನೆಗಳು ಹಾಗೂ ನಕಲಿ ಪತ್ರಕರ್ತರು ಸೇರಿದಂತೆ ಒಟ್ಟು 24 ಜನರ ವಿರುದ್ಧ ವಸೂಲಾತಿ ನೋಟಿಸ್ ಜಾರಿ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಕಲಿ ಬಯೋಮೆಟ್ರಿಕ್ ಹಾಜರಾತಿ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸುತ್ತಿದ್ದ ಜಿಲ್ಲೆಯ 80 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ನೋಟಿಸ್ ನೀಡಿ ಶಿಸ್ತುಕ್ರಮ ಜರುಗಿಸಿದ್ದರು.&lt;/p&gt;&lt;h2&gt;ತನಿಖೆಯ ಮುಂದಿನ ಹಂತ ಮತ್ತು ಕಪ್ಪು ಪಟ್ಟಿ ಭೀತಿ&lt;/h2&gt;&lt;p&gt;ಈ ಇಡೀ ಆಡಳಿತಾತ್ಮಕ ಮತ್ತು ಕಾನೂನು ಮುನ್ನಡೆಯ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿರುವ ಸಿಇಒ ಲವೀಶ್ ಒರಡಿಯಾ ಅವರು, 2010 ರಿಂದ 2020 ರವರೆಗಿನ ಮೊದಲ ಹಂತದ ತನಿಖೆ ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಇದರ ಮುಂದುವರಿದ ಭಾಗವಾಗಿ, 2020 ರಿಂದ ಪ್ರಸ್ತುತ 2026 ರವರೆಗಿನ ಇತ್ತೀಚಿನ ಅವಧಿಯಲ್ಲೂ ಮ್ಯಾನ್&zwnj; ಪವರ್ ಏಜೆನ್ಸಿಗಳು ನಡೆಸಿರುವ ವ್ಯವಹಾರಗಳ ಬಗ್ಗೆ ಎರಡನೇ ಹಂತದ ತನಿಖೆ ಪ್ರಗತಿಯಲ್ಲಿದೆ. ಈ ತನಿಖಾ ವರದಿಯು ಕೈಸೇರಿದ ತಕ್ಷಣವೇ, ಇಪಿಎಫ್ ಹಾಗೂ ಇಎಸ್&zwnj;ಐ ಪಾವತಿಸದ ಮತ್ತು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡ ಎಲ್ಲಾ ಗುತ್ತಿಗೆ ಸಂಸ್ಥೆಗಳನ್ನು ಕಾಯಂ ಆಗಿ 'ಕಪ್ಪು ಪಟ್ಟಿ'ಗೆ (Blacklist) ಸೇರಿಸಲಾಗುವುದು ಹಾಗೂ ಅವರ ವಿರುದ್ಧವೂ ಕ್ರಿಮಿನಲ್ ಎಫ್&zwnj;ಐಆರ್ ದಾಖಲಿಸಿ ಜೈಲಿಗಟ್ಟುವ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಅವರು ಭ್ರಷ್ಟ ಏಜೆನ್ಸಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/yadagiri-manpower-agency-rs8-cr-epf-esi-scam-ceo-lavish-oryadia-action-against-outsourcing-agencies-gdp/articleshow-yr61h9a"/>
        </item>
        <item>
            <title><![CDATA[ಮಂಗಳೂರು: ಆಗಾಗ ಮನೆ ಬಿಟ್ಟು ಹೋಗ್ತಿದ್ದ ವ್ಯಕ್ತಿಯನ್ನು ಕಳ್ಳ ಅಂತಾ ಆರೋಪಿಸಿ ಥಳಿಸಿ ಹತ್ಯೆ‌!]]></title>
            <link>https://kannada.asianetnews.com/karnataka-districts/mangaluru-news-belthangady-man-suspected-as-thief-tied-and-beaten-to-death-gdp/articleshow-igihcxt</link>
            <guid isPermaLink="true">https://kannada.asianetnews.com/karnataka-districts/mangaluru-news-belthangady-man-suspected-as-thief-tied-and-beaten-to-death-gdp/articleshow-igihcxt</guid>
            <pubDate>Mon, 01 Jun 2026 18:53:47 +0530</pubDate>
            <description><![CDATA[ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ, ಕಳ್ಳತನದ ಆರೋಪದ ಮೇಲೆ ಯತೀಶ್ ಗೌಡ ಎಂಬ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ಹತ್ಯೆ ಮಾಡಲಾಗಿದೆ. ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಯುವಕನ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt1nkkcn3v7adsgsd3nn4g1f,imgname-dd-1780320161173.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಕಳ್ಳತನದ ಆರೋಪ ಹೊರಿಸಿ ವ್ಯಕ್ತಿಯೊಬ್ಬನಿಗೆ ಕ್ರೂರವಾಗಿ ಹಗ್ಗದಿಂದ ಕಟ್ಟಿ ಹಾಕಿ, ಮನಬಂದಂತೆ ಥಳಿಸಿ ಹತ್ಯೆ ಮಾಡಿರುವ ಅಮಾನುಷ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ, ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ನಿವಾಸಿಯಾದ ಯತೀಶ್ ಗೌಡ (32) ಎಂಬ ಯುವಕ ಅತ್ಯಂತ ದುರಂತಮಯವಾಗಿ ಪ್ರಾಣ ಕಳೆದುಕೊಂಡಿದ್ದಾನೆ.&lt;/p&gt;&lt;h2&gt;ಕಳೆದ ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಯುವಕ&lt;/h2&gt;&lt;p&gt;ಕೊಲೆಯಾದ ಯತೀಶ್ ಗೌಡ ಅವರ ಕುಟುಂಬದ ಮೂಲಗಳ ಪ್ರಕಾರ, ಯತೀಶ್ ಗೌಡ ಕಳೆದ ಎರಡು ತಿಂಗಳಿಂದ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದರು. ಯತೀಶ್ ಗೌಡ ಅವರಿಗೆ ಆಗಾಗ ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗುವ ಹವ್ಯಾಸವಿತ್ತು. ಪ್ರತಿ ಬಾರಿಯೂ ಅವರು ಮನೆ ಬಿಟ್ಟು ಹೋದ ಮೇಲೆ ಒಂದೆರಡು ತಿಂಗಳುಗಳ ಕಾಲ ಎಲ್ಲೋ ಇದ್ದು, ನಂತರ ತಾವಾಗಿಯೇ ಮರಳಿ ಮನೆಗೆ ಬರುತ್ತಿದ್ದರು. ಈ ಬಾರಿಯೂ ಅದೇ ರೀತಿ ಮರಳಿ ಬರಬಹುದು ಎಂದು ಕುಟುಂಬಸ್ಥರು ಕಾಯುತ್ತಿದ್ದಾಗ, ಅವರು ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಸುದ್ದಿ ಕೇಳಿಬಂದಿದೆ.&lt;/p&gt;&lt;h2&gt;ಹಗ್ಗದಿಂದ ಕಟ್ಟಿ ಹಾಕಿ ತಡರಾತ್ರಿ ಭೀಕರ ಹಲ್ಲೆ&lt;/h2&gt;&lt;p&gt;ಗುರುವಾಯನಕೆರೆಯ ನಿರ್ಜನ ಪ್ರದೇಶವೊಂದರಲ್ಲಿ ಯತೀಶ್ ಗೌಡ ಅವರು ಕಾಣಿಸಿಕೊಂಡಾಗ, ಸ್ಥಳೀಯ ಕೆಲವರು ಇವರನ್ನು ಕಳ್ಳನೆಂದು ತಪ್ಪಾಗಿ ಶಂಕಿಸಿದ್ದಾರೆನ್ನಲಾಗಿದೆ. ಕಳ್ಳತನದ ಉದ್ದೇಶದಿಂದಲೇ ಇವರು ಬಂದಿದ್ದಾರೆ ಎಂದು ಆರೋಪಿಸಿದ ಸ್ಥಳೀಯ ದುಷ್ಕರ್ಮಿಗಳ ಗುಂಪು, ತಡರಾತ್ರಿ ಇವರನ್ನು ಹಿಡಿದು ಹಗ್ಗದಿಂದ ಕಂಬಕ್ಕೆ ಕ್ರೂರವಾಗಿ ಕಟ್ಟಿ ಹಾಕಿದೆ. ಯತೀಶ್ ಗೌಡ ಅವರು ತಮ್ಮನ್ನು ರಕ್ಷಿಸುವಂತೆ ಎಷ್ಟೇ ಬೇಡಿಕೊಂಡರೂ ಬಿಡದ ಆರೋಪಿಗಳು, ಮಾರಕಾಸ್ತ್ರಗಳು ಹಾಗೂ ಕೈಗಳಿಂದ ಮನಬಂದಂತೆ ಭೀಕರವಾಗಿ ಥಳಿಸಿದ್ದಾರೆ. ತೀವ್ರ ಸ್ವರೂಪದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವ ಹಾಗೂ ಆಘಾತದಿಂದಾಗಿ ಯತೀಶ್ ಗೌಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.&lt;/p&gt;&lt;p&gt;ಇಂದು ಮುಂಜಾನೆ ಗುರುವಾಯನಕೆರೆಯ ರಸ್ತೆಯ ಬಳಿ ಯತೀಶ್ ಗೌಡ ಅವರ ಮೃತದೇಹ ಪತ್ತೆಯಾದಾಗ ಈ ಘೋರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹದ ಮೇಲೆ ಬಿದ್ದಿರುವ ಗಾಯದ ಗುರುತುಗಳು ಹಾಗೂ ಹಗ್ಗದಿಂದ ಕಟ್ಟಿದ ಗುರುತುಗಳು ಕೊಲೆಯ ತೀವ್ರತೆಯನ್ನು ಸಾರುತ್ತಿದ್ದವು.&lt;/p&gt;&lt;h2&gt;ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಕೆಲವೇ ಗಂಟೆಗಳಲ್ಲಿ ಆರೋಪಿಗಳು ಸೆರೆ&lt;/h2&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅತ್ಯಂತ ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ರಾಹಿಂ, ಯಶೋಧರ ಗೌಡ ಮತ್ತು ಮೋಹನ ಎಂಬ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಈ ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೊಲೆ (IPC 302/BNS ಸಂಬಂಧಿತ ಸೆಕ್ಷನ್) ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-news-belthangady-man-suspected-as-thief-tied-and-beaten-to-death-gdp/articleshow-igihcxt"/>
        </item>
        <item>
            <title><![CDATA[ಹಿರೇಬೆಣಕಲ್ ಮೋರೆರ್ ಶಿಲಾ ಸಮಾಧಿಗಳಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಬೆಳಕು: ಎಚ್.ಆರ್.ಶ್ರೀನಾಥ ಪ್ರಶಂಸೆ]]></title>
            <link>https://kannada.asianetnews.com/karnataka-districts/kannadaprabha-suvarna-news-hirebenakal-morer-hill-stone-tombs-heritage-news-gvd/articleshow-chrxnix</link>
            <guid isPermaLink="true">https://kannada.asianetnews.com/karnataka-districts/kannadaprabha-suvarna-news-hirebenakal-morer-hill-stone-tombs-heritage-news-gvd/articleshow-chrxnix</guid>
            <pubDate>Mon, 01 Jun 2026 18:06:57 +0530</pubDate>
            <description><![CDATA[&lt;p&gt;ಕನ್ನಡಪ್ರಭ-ಏಷ್ಯಾನೆಟ್ ಸೂವರ್ಣ ನ್ಯೂಸ್ ವಾಹಿನಿಯಿಂದ ಹಿರೇಬೆಕಲ್ ಮೋರೆರ್ ಬೆಟ್ಟದ ಶಿಲಾ ಸಮಾಧಿಗಳು ಬೆಳಕಿಗೆ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಪ್ರಶಂಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1jzm2mqh5kzww6012vc1d8,imgname-vhjc-1780317409364.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.01): &lt;/strong&gt;ಕನ್ನಡಪ್ರಭ-ಏಷ್ಯಾನೆಟ್ ಸೂವರ್ಣ ನ್ಯೂಸ್ ವಾಹಿನಿಯಿಂದ ಹಿರೇಬೆಕಲ್ ಮೋರೆರ್ ಬೆಟ್ಟದ ಶಿಲಾ ಸಮಾಧಿಗಳು ಬೆಳಕಿಗೆ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಪ್ರಶಂಸಿದರು. ನಗರದ ಕೊಟ್ಟೂರು ಬಸವೇಶ್ವರ ದೇವಸ್ಥನ ವೇದಿಕೆಯಲ್ಲಿ ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಪ್ರತಿಷ್ಠಾನ, ಹಾಗು ಪರಿಸರ ಸೇವಾ ಟ್ರಸ್ಟ್ ಏರ್ಪಿಡಿಸಿದ್ದ &ldquo;ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಸಂಭ್ರಮ&rdquo; ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.&lt;/p&gt;&lt;p&gt;ಕಳೆದ 40 ದಶಕಗಳ ಹಿಂದೆ ಹಿರೇಬೆಣಕಲ್ ಬೆಟ್ಟದಲ್ಲಿರುವ ಮೋರೆರ್ ಶಿಲಾ ಸಮಾಧಿಗಳ ಬಗ್ಗೆ ಇತಿಹಾಸ ಕೇಳಿದ್ದಲ್ಲದೆ ಆ ಸ್ಥಳವನ್ನು ವೀಕ್ಷಿಸಲಾಗಿತ್ತು. ಈಗ ಸರಕಾರ ಈ ಪ್ರದೇಶವನ್ನು ಅಭಿವೃದ್ದಿ ಪಡಿಸುವದಕ್ಕೆ ಮುಂದೆ ಬರಬೇಕೆಂದರು. ಇತ್ತೀಚಿಗೆ ಸರಕಾರ ಮೋರೆರ್ ಬೆಟ್ಟದ ಬಳಿ ಅಣು ಸ್ಥಾವರ ಸ್ಥಾಪನೆಗೆ ಸರಕಾರ ಮುಂದಾಗಿತ್ತು. ಇದರ ವಿರುದ್ಧ ಹೋರಾಟ ನಡೆಸಿದ್ದರಿಂದ ಸ್ಥಾಪನೆ ರದ್ದಾಗಿತು ಎಂದರು. ಕೂಡಲೆ ಸರಕಾರ ಐತಿಹಾಸಿಕ ಪ್ರದೇಶಗಳ ಅಭಿವೃದ್ದಿಗೆ ಅನುದಾನ ನೀಡಬೇಕೆಂದರು.&lt;/p&gt;&lt;p&gt;ಪ್ರಾಸ್ತಾವಿಕವಾಗಿ ಮಾತನಾಡಿದ ಸಂಶೋದಕ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಮೋರೆರ್ ಬೆಟ್ಟದಲ್ಲಿರುವ ಶಿಲಾ ಸಮಾಧಿಗಳ ಬಗ್ಗೆ ಇತಿಹಾಸ ಇದ್ದು, ಇತ್ತ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ವಾಹಿನಿಯು 7 ಅಧ್ಬುತಗಳ ಪರಿಚಯದ ಸಂದರ್ಭದಲ್ಲಿ ಹಿರೇಬೆಣಕಲ್&zwnj;ಗೆ ಪ್ರಥಮ ಸ್ಥಾನ ನೀಡಿ ಬೆಳಕು ಚೆಲ್ಲಿದರು ಎಂದು ಶ್ಲಾಘಿಸಿದರು.&lt;/p&gt;&lt;h2&gt;&lt;strong&gt;ಸರ್ಕಾರಕ್ಕೆ ಪ್ರಸ್ತಾವನೆ&lt;/strong&gt;&lt;/h2&gt;&lt;p&gt;ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಹಿರೇಬೆಣಕಲ್ ಇತಿಹಾಸ ಪ್ರಸಿದ್ಧವಾಗಿದ್ದು, ತಾವು ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಪ್ರದೇಶದ ಅಭಿವೃದ್ದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿದರು. ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಪ್ರತಿಷ್ಠಾನದ ಮಂಜುನಾಥ ಗುಡ್ಲಾನೂರ ಅವರು ಮೋರೆರ್ ಶಿಲಾ ಸಮಾದಿಗಳು ಮತ್ತು ಅಭಿವೃದ್ದಿಯ ಕುರಿತು ವಿವರಿಸಿದರು. ಇದೇ ವೇಳೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.&lt;/p&gt;&lt;p&gt;ಸಾನಿದ್ಯವನ್ನು ತಲೇಖಾನ್ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಎಚ್.ಎಸ್.ಮುರುಳಿಧರ, ಲಲಿತರಾಣಿ ಶ್ರೀರಂಗದೇವರಾಯಲು, ಡಾ. ಸೋಮರಾಜು, ಡಾ. ಚಂದ್ರಪ್ಪ, ಹಾಸ್ಯ ಕಲಾವಿದರಾದ ಬಿ.ಪ್ರಾಣೇಶ, ನರಸಿಂಹ ಜೋಷಿ, ಕನ್ನಡಪ್ರಭ ವರರದಿಗಾರ ರಾಮಮೂರ್ತಿ ನವಲಿ, ಟಿ.ಆಂಜನೇಯ, ಡಾ.ಸುಲೋಚನ ಚಿನಿವಾಲರ್, ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮೀದೇವಿ ಗುಡ್ಲಾನೂರ, ಡಾ.ಬದರಿಪ್ರಸಾದ್, ಶಿಕ್ಷಕ ಶರಣಪ್ಪ ಹಕ್ಕಂಡಿ, ವಿರೂಪಾಕ್ಷಪ್ಪ ಶಿರವಾರ್, ಮಾರುತಿ ಐಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>news</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/kannadaprabha-suvarna-news-hirebenakal-morer-hill-stone-tombs-heritage-news-gvd/articleshow-chrxnix"/>
        </item>
        <item>
            <title><![CDATA[ಕೊಪ್ಪಳ ತಳಕಲ್‌ನಲ್ಲಿ 13ನೇ ಶತಮಾನದ ಅಪರೂಪದ ಶಾಸನ ಪತ್ತೆ: ಇತಿಹಾಸದ ಪುಟಗಳಲ್ಲಿದ್ದ ಅಗ್ರಹಾರದ ರಹಸ್ಯ ಬಯಲು!]]></title>
            <link>https://kannada.asianetnews.com/karnataka-districts/rare-13th-century-inscription-discovered-in-talakal-karnataka-koppala-gdp/articleshow-41n7th6</link>
            <guid isPermaLink="true">https://kannada.asianetnews.com/karnataka-districts/rare-13th-century-inscription-discovered-in-talakal-karnataka-koppala-gdp/articleshow-41n7th6</guid>
            <pubDate>Mon, 01 Jun 2026 18:06:47 +0530</pubDate>
            <description><![CDATA[ಕೊಪ್ಪಳ ಜಿಲ್ಲೆಯ ತಳಕಲ್ ಗ್ರಾಮದಲ್ಲಿ 13ನೇ ಶತಮಾನದ ಅಪರೂಪದ ಶಿಲಾಶಾಸನ ಪತ್ತೆಯಾಗಿದೆ. ಮೈಲಾರಲಿಂಗೇಶ್ವರ ಪರಂಪರೆಗೆ ಸೇರಿದ ಈ ಶಾಸನವು, ಅಂದಿನ ಕಾಲದಲ್ಲಿ ಪಂಡಿತರು ಮತ್ತು ಸಂಗೀತಗಾರರಿಗೆ ನೀಡಲಾಗುತ್ತಿದ್ದ ಭೂದಾನ ಹಾಗೂ ಸಂಭಾವನೆಯ ಐತಿಹಾಸಿಕ ವಿವರಗಳನ್ನು ದಾಖಲಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt1jy2v9xe0h9be2r6rmqfeh,imgname-13th-century-inscription-discovered-in-talakal-1780317358952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುಕನೂರು: &lt;/strong&gt;ಇತಿಹಾಸ ಮತ್ತು ಸಂಸ್ಕೃತಿಯ ತವರೂರಾದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ 13ನೇ ಶತಮಾನಕ್ಕೆ ಸೇರಿದ ಅತ್ಯಂತ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದೆ. ತಳಕಲ್ ಗ್ರಾಮದ ಪ್ರಸಿದ್ಧ ಉಡಚಲಮ್ಮದೇವಿ ದೇವಾಲಯದ ಆವರಣದ ಬಳಿ ಈ ಮಹತ್ವದ ಶಾಸನ ಪತ್ತೆಯಾಗಿದೆ ಎಂದು ಗಂಗಾವತಿಯ ಖ್ಯಾತ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಅಧಿಕೃತವಾಗಿ ತಿಳಿಸಿದ್ದಾರೆ. ಈ ಸಂಶೋಧನೆಯು ಕಲ್ಯಾಣ ಕರ್ನಾಟಕ ಭಾಗದ ಮಧ್ಯಕಾಲೀನ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಹೊಸ ದಾರಿಯೊಂದನ್ನು ತೆರೆದಿದೆ.&lt;/p&gt;&lt;h2&gt;ಮೈಲಾರಲಿಂಗೇಶ್ವರ ಪರಂಪರೆ ಸಾರುವ ಕಪ್ಪು ಶಿಲೆಯ ಶಾಸನ&lt;/h2&gt;&lt;p&gt;ಸಂಶೋಧಕರ ಪ್ರಕಾರ, ಈ ಶಾಸನವನ್ನು ಅತ್ಯಂತ ಗಟ್ಟಿಯಾದ ಕಪ್ಪು ಶಿಲೆಯಲ್ಲಿ (Black Stone) ಕೆತ್ತಲಾಗಿದ್ದು, ಒಟ್ಟು 20 ಸಾಲುಗಳ ಬರಹವನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದ ಶಿಲ್ಪಕಲೆಯಲ್ಲಿ ಕುದುರೆ (ಅಶ್ವ), ತ್ರಿಶೂಲವಿರುವ ಶಿಬಾರಗಟ್ಟೆ, ಖಡ್ಗ ಮತ್ತು ಚಾಮರಗಳ ಚಿತ್ರಗಳನ್ನು ಅತ್ಯಂತ ಸುಂದರವಾಗಿ ಕೊರೆಯಲಾಗಿದೆ. ಈ ಎಲ್ಲಾ ಸಾಂಕೇತಿಕ ಚಿತ್ರಗಳು ಹಾಗೂ ಆಯುಧಗಳ ಕೆತ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಖಂಡಿತವಾಗಿಯೂ ಆ ಕಾಲದ ಅತ್ಯಂತ ಜನಪ್ರಿಯ ಧಾರ್ಮಿಕ ಪಂಥವಾಗಿದ್ದ 'ಮೈಲಾರಲಿಂಗೇಶ್ವರ ಪರಂಪರೆ'ಗೆ ನೇರವಾಗಿ ಸಂಬಂಧಿಸಿದ ಶಾಸನವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.&lt;/p&gt;&lt;h2&gt;ಗ್ರಹಣ ಕಾಲದ ಉಲ್ಲೇಖ ಮತ್ತು ಶಾಸನದ ಕಾಲ ನಿರ್ಣಯ&lt;/h2&gt;&lt;p&gt;ಈ ಐತಿಹಾಸಿಕ ಶಾಸನವು ಹಿಂದೂ ಧರ್ಮದ ಸಾಂಪ್ರದಾಯಿಕ ದೇವತೆಗಳಾದ ಗಣೇಶ, ಸರಸ್ವತಿ ಹಾಗೂ ಶಿವನ ಸ್ತುತಿಯೊಂದಿಗೆ (ಪ್ರಾರ್ಥನೆ) ಪ್ರಾರಂಭವಾಗುತ್ತದೆ. ಶಾಸನದ ಬರಹದಲ್ಲಿ &quot;ಸ್ವಸ್ತಿ ಶ್ರೀ ಶಕ ವರ್ಷದ 1201 ಪ್ರಮಾದಿ ಸಂವತ್ಸರದ ಚೈತ್ರ ಬಹುಳ ಶುದ್ಧ 15&quot; ರಂದು ಸಂಭವಿಸಿದ ಸೂರ್ಯ ಅಥವಾ ಚಂದ್ರ ಗ್ರಹಣದ ಕಾಲವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆಧುನಿಕ ಕ್ಯಾಲೆಂಡರ್ ಪ್ರಕಾರ ಲೆಕ್ಕಾಚಾರ ಮಾಡಿದಾಗ ಈ ಸಮಯವು ಪ್ರಸಕ್ತ ಶಕ ವರ್ಷ (ಕ್ರಿ.ಶ) 1279ಕ್ಕೆ ನಿಖರವಾಗಿ ಸರಿಹೊಂದುತ್ತದೆ. ಅಂದರೆ ಈ ಶಾಸನವು ಇಂದಿಗೆ ಸುಮಾರು 740 ವರ್ಷಗಳಿಗಿಂತಲೂ ಹಳೆಯದಾಗಿದೆ.&lt;/p&gt;&lt;h2&gt;ಪಂಡಿತರು ಹಾಗೂ ಸಂಗೀತಗಾರರಿಗೆ ರಾಜಾಶ್ರಯದ ದಾನ ಧರ್ಮ&lt;/h2&gt;&lt;p&gt;ಈ ಶಾಸನದ ಮುಖ್ಯ ಉದ್ದೇಶ ಆ ಕಾಲದಲ್ಲಿದ್ದ ಮಹಾನ್ ಪಂಡಿತರಿಗೆ ಹಾಗೂ ಸಮಾಜದ ಕೆಲವು ಗಣ್ಯ ವ್ಯಕ್ತಿಗಳಿಗೆ ರಾಜಾಶ್ರಯದಲ್ಲಿ ನೀಡಲಾದ ಭೂಮಿ ಮತ್ತು ಆರ್ಥಿಕ ದಾನದ ವಿವರಗಳನ್ನು ದಾಖಲಿಸುವುದಾಗಿದೆ. ಆದರೆ, ದುರದೃಷ್ಟವಶಾತ್ ಕಾಲದ ಹೊಡೆತಕ್ಕೆ ಸಿಲುಕಿ ದಾನ ನೀಡಿದ ಪ್ರಮುಖ ರಾಜನ ಅಥವಾ ದಾನಿಯ ಹೆಸರು ಮಾತ್ರ ಅಸ್ಪಷ್ಟವಾಗಿದೆ (ಅಳಿಸಿಹೋಗಿದೆ).&lt;/p&gt;&lt;p&gt;ಶಾಸನದಲ್ಲಿ ಪ್ರಸ್ತುತ ತಳಕಲ್ ಎಂದು ಕರೆಯಲಾಗುವ ಈ ಗ್ರಾಮವನ್ನು ಅಂದು 'ತಳ್ಕಲ್ಲು' ಎಂದು ಉಲ್ಲೇಖಿಸಲಾಗಿದೆ. ವಿಶೇಷವೆಂದರೆ, ಆ ಕಾಲದಲ್ಲಿ ತಳ್ಕಲ್ಲು ಕೇವಲ ಸಾಮಾನ್ಯ ಹಳ್ಳಿಯಾಗಿರದೆ, ಜ್ಞಾನದ ಕೇಂದ್ರವಾದ ಒಂದು ದೊಡ್ಡ 'ಅಗ್ರಹಾರ'ವಾಗಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ವೇದ, ಶಾಸ್ತ್ರ ಕೋವಿದರಾದ ಪಂಡಿತರಿದ್ದು, ಅವರನ್ನು 'ಮಹಾಜನಗಳು' ಎಂದು ಕರೆಯಲಾಗುತ್ತಿತ್ತು ಎಂಬ ಅತ್ಯಮೂಲ್ಯ ಮಾಹಿತಿ ಇಲ್ಲಿ ಸಿಕ್ಕಿದೆ.&lt;/p&gt;&lt;h2&gt;ಗಾಯಕ-ಗಾಯಕಿಯರ ಸಂಭಾವನೆ ಮತ್ತು ಭೂದಾನದ ರೋಚಕ ವಿವರ&lt;/h2&gt;&lt;p&gt;ಮಧ್ಯಕಾಲೀನ ಕರ್ನಾಟಕದಲ್ಲಿ ಕಲೆ ಮತ್ತು ಸಂಗೀತಕ್ಕೆ ಸಿಗುತ್ತಿದ್ದ ಮನ್ನಣೆಗೆ ಈ ಶಾಸನವು ಜೀವಂತ ಸಾಕ್ಷಿಯಾಗಿದೆ. ಶಾಸನದಲ್ಲಿ ಅಗ್ರಹಾರದ ಪಂಡಿತರ ಜೊತೆಗೆ ರಾಜಾಸ್ಥಾನದ ಪ್ರಮುಖ ಸಂಗೀತಗಾರರಿಗೂ ದಾನ ನೀಡಿದ ವಿವರಗಳಿವೆ. ಅವರ ಪೈಕಿ ಮಹೇಶ್ವರಿ ಎಂಬ ಪ್ರತಿಭಾವಂತ ಗಾಯಕಿಯ ಗಾನಮಧುರ್ಯಕ್ಕೆ ಮೆಚ್ಚಿ ಆಕೆಗೆ 12 ಪಣ (ಆ ಕಾಲದ ನಾಣ್ಯ) ಸಂಭಾವನೆ ನೀಡಲಾಗಿದೆ. ಜೋಗಮ ಎಂಬ ಮತ್ತೊಬ್ಬ ಗಾಯಕನ ಅದ್ಭುತ ಗಾಯನಕ್ಕೆ 12 ಪಣಗಳನ್ನು ದಾನವಾಗಿ ನೀಡಲಾಗಿದೆ. ಖೇಮಣ್ಣ ಎಂಬ ವ್ಯಕ್ತಿಗೆ ಎರಡು ಪಣ ಮತ್ತು 12 ಹೊನ್ನುಗಳನ್ನು (ಚಿನ್ನದ ನಾಣ್ಯ) ಉಡುಗೊರೆಯಾಗಿ ನೀಡಲಾಗಿದೆ.&lt;/p&gt;&lt;p&gt;ಈ ನಗದು ಬಹುಮಾನದ ಜೊತೆಗೆ, ಇವರೆಲ್ಲರಿಗೂ ಆ ಕಾಲದ 'ಹೊಂನಕಹಾಳ' (ಪ್ರಸ್ತುತ ಹೊನ್ನಕಹಾಳ) ಎಂಬ ಗ್ರಾಮದಲ್ಲಿ ಕೃಷಿ ಭೂಮಿಯನ್ನು ದಾನವಾಗಿ ಕೊಟ್ಟ ಬಗ್ಗೆ ಶಾಸನದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಇದರೊಂದಿಗೆ ದಾನವಾಗಿ ನೀಡಲಾದ ಜಮೀನುಗಳ ನಾಲ್ಕೂ ದಿಕ್ಕುಗಳ ಗಡಿಗಳು (ಮೇರೆಗಳು) ಮತ್ತು ಅವುಗಳ ಭೌಗೋಳಿಕ ದಿಕ್ಕುಗಳ ನಿಖರ ವಿವರಗಳನ್ನು ಸಹ ದಾಖಲಿಸಲಾಗಿದೆ.&lt;/p&gt;&lt;h2&gt;ಗ್ರಾಮಸ್ಥರು ಹಾಗೂ ಸಂಶೋಧಕರಿಂದ ಇತಿಹಾಸದ ಪುನರುತ್ಥಾನ&lt;/h2&gt;&lt;p&gt;ನೆಲದ ಇತಿಹಾಸವನ್ನು ಸಾರುವ ಈ ಅಪರೂಪದ ಶಾಸನವನ್ನು ಸಂರಕ್ಷಿಸುವಲ್ಲಿ ತಳಕಲ್ ಗ್ರಾಮಸ್ಥರು ಹಾಗೂ ಇತಿಹಾಸ ತಜ್ಞರು ಮಾದರಿ ಕೆಲಸ ಮಾಡಿದ್ದಾರೆ. ಗ್ರಾಮದ ಮುಖಂಡರಾದ ಉದಯ ಎಸ್. ರಾಯರೆಡ್ಡಿ ಅವರ ನೇತೃತ್ವದಲ್ಲಿ, ಪ್ರಮುಖ ಸಂಶೋಧಕರಾದ ಡಾ. ಚನ್ನಬಸಪ್ಪ ಮಲ್ಕಂದಿನ್ನಿ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ರಮೇಶ್ ಗಬ್ಬೂರ್, ಡಾ. ಜಾಜಿ ದೇವೇಂದ್ರಪ್ಪ ಹಾಗೂ ಡಾ. ಬದ್ರಿ ಪ್ರಸಾದ್ ಅವರು ಗ್ರಾಮಸ್ಥರ ಸಂಪೂರ್ಣ ಸಹಕಾರದೊಂದಿಗೆ ದೇವಾಲಯದ ಗೋಡೆಗೆ ಹೊಂದಿಕೊಂಡಂತೆ ಒಂದು ಭದ್ರವಾದ ಕಾಂಕ್ರೀಟ್ ಕಟ್ಟೆಯನ್ನು ನಿರ್ಮಿಸಿದ್ದಾರೆ. ಅದರ ಮೇಲೆ ಶಾಸನವನ್ನು ಸುರಕ್ಷಿತವಾಗಿ ಸ್ಥಾಪಿಸುವ ಮೂಲಕ ಮುಂದಿನ ಪೀಳಿಗೆಗೆ ಹಾನಿಯಾಗದಂತೆ ಇತಿಹಾಸವನ್ನು ಯಶಸ್ವಿಯಾಗಿ ಸಂರಕ್ಷಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-13th-century-inscription-discovered-in-talakal-karnataka-koppala-gdp/articleshow-41n7th6"/>
        </item>
        <item>
            <title><![CDATA[ಬೆಂಗಳೂರು-ಫುಕೆಟ್ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ಸೇವೆ, ಸ್ವರ್ಗವೆಂಬ ದ್ವೀಪಕ್ಕೆ ಹೊಸ ಸೇತುವೆ!]]></title>
            <link>https://kannada.asianetnews.com/karnataka-districts/air-india-express-launches-direct-bengaluru-phuket-flights-gdp/articleshow-puhbsc5</link>
            <guid isPermaLink="true">https://kannada.asianetnews.com/karnataka-districts/air-india-express-launches-direct-bengaluru-phuket-flights-gdp/articleshow-puhbsc5</guid>
            <pubDate>Mon, 01 Jun 2026 17:38:05 +0530</pubDate>
            <description><![CDATA[ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸಂಸ್ಥೆಯು ಬೆಂಗಳೂರಿನಿಂದ ಥೈಲ್ಯಾಂಡ್&zwnj;ನ ಪ್ರಸಿದ್ಧ ಪ್ರವಾಸಿ ತಾಣವಾದ ಫುಕೆಟ್&zwnj;ಗೆ ಹೊಸ ನೇರ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ವಾರದಲ್ಲಿ ನಾಲ್ಕು ದಿನಗಳು ಲಭ್ಯವಿರುವ ಈ ಸೇವೆಯು, ಪ್ರವಾಸಿಗರಿಗೆ ಫುಕೆಟ್&zwnj;ನ ಸುಂದರ ಕಡಲತೀರಗಳು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸುಲಭವಾಗಿ ತಲುಪಲು ಅನುವು ಮಾಡಿಕೊಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfqkfx2n2t4vr5bh2ga6xxjy,imgname-air-india-express-award-1769244980309.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಥೈಲ್ಯಾಂಡ್&zwnj;ನ ಸುಂದರ ಪ್ರವಾಸಿ ತಾಣವಾದ ಫುಕೆಟ್&zwnj;ಗೆ ಪ್ರವಾಸ ಕೈಗೊಳ್ಳಲು ಬಯಸುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಯಾದ 'ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್' (Air India Express) ಭರ್ಜರಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಮತ್ತು ಫುಕೆಟ್ ನಡುವೆ ಸಂಸ್ಥೆಯು ಹೊಸದಾಗಿ ನೇರ ವಿಮಾನಯಾನ ಸೇವೆಯನ್ನು (Direct Flight Service) ಅಧಿಕೃತವಾಗಿ ಆರಂಭಿಸಿದ್ದು, ಉದ್ಘಾಟನಾ ವಿಮಾನವು ಇಂದು ಯಶಸ್ವಿಯಾಗಿ ರನ್-ವೇ ನಿಂದ ಟೇಕ್-ಆಫ್ ಆಗಿದೆ.&lt;/p&gt;&lt;h2&gt;ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಫುಕೆಟ್ ನಗರವು ಅತ್ಯಂತ ಪ್ರಸಿದ್ಧಿ&lt;/h2&gt;&lt;p&gt;ವಿಶ್ವದಾದ್ಯಂತ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಬೆರಗುಗೊಳಿಸುವ ಕಡಲತೀರಗಳು (Beaches), ಉತ್ಸಾಹಭರಿತ ರಾತ್ರಿಜೀವನ (Nightlife), ಗದ್ದಲದಿಂದ ಕೂಡಿರುವ ಸಾಂಪ್ರದಾಯಿಕ ಮಾರುಕಟ್ಟೆಗಳು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಫುಕೆಟ್ ನಗರವು ಅತ್ಯಂತ ಪ್ರಸಿದ್ಧಿ ಪಡೆದಿದೆ. ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್&zwnj;ನ ಈ ಹೊಸ ನೇರ ವಿಮಾನ ಸೇವೆಯು ಕರಾವಳಿ ತೀರದ ಸುಂದರ ನಿಸರ್ಗವನ್ನು ಸವಿಯಲು ಬಯಸುವ ಭಾರತೀಯ ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕ ಮತ್ತು ಸುಲಭ ಪ್ರವೇಶವನ್ನು ಒದಗಿಸಲಿದೆ.&lt;/p&gt;&lt;p&gt;ವಾರಕ್ಕೆ 4 ದಿನ ಲಭ್ಯವಿರಲಿದೆ ವಿಮಾನಯಾನ ಸೇವೆ ಪ್ರಯಾಣಿಕರ ಅನುಕೂಲಕ್ಕಾಗಿ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸಂಸ್ಥೆಯು ಪ್ರಸ್ತುತ ಈ ಹೊಸ ಮಾರ್ಗದಲ್ಲಿ ವಾರಕ್ಕೆ ನಾಲ್ಕು ದಿನಗಳ ಕಾಲ ವಿಮಾನಯಾನ ಸೇವೆಗಳನ್ನು ಒದಗಿಸುತ್ತಿದೆ. ಈಗಾಗಲೇ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿರುವ ಬೆಂಗಳೂರು-ಬ್ಯಾಂಕಾಕ್ ದೈನಂದಿನ ವಿಮಾನ ಸೇವೆಗೆ ಪೂರಕವಾಗಿ ಈ ಹೊಸ ಫುಕೆಟ್ ಸೇವೆಯನ್ನು ಸೇರ್ಪಡೆಗೊಳಿಸಲಾಗಿದೆ.&lt;/p&gt;&lt;h2&gt;ಅಂತರರಾಷ್ಟ್ರೀಯ ಸಂಪರ್ಕ ಮತ್ತಷ್ಟು ಬಲ&lt;/h2&gt;&lt;p&gt;ಹೊಸ ವೇಳಾಪಟ್ಟಿಯ ಪ್ರಕಾರ, ವಾರದ ಸೋಮವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫುಕೆಟ್&zwnj;ಗೆ ವಿಮಾನಗಳು ನಿರ್ಗಮಿಸಲಿವೆ. ಹಾಗೆಯೇ, ಅದೇ ದಿನಗಳಲ್ಲಿ ಫುಕೆಟ್&zwnj;ನಿಂದ ಬೆಂಗಳೂರಿಗೆ ಹಿಂದಿರುಗುವ ವಿಮಾನಗಳು ಕಾರ್ಯನಿರ್ವಹಿಸಲಿವೆ. ಭಾರತದ ಪ್ರಮುಖ ಮಹಾನಗರಗಳಿಂದ ಆಗ್ನೇಯ ಏಷ್ಯಾ (South East Asia) ಮತ್ತು ಮಧ್ಯಪ್ರಾಚ್ಯದ (Middle East) ಹೆಚ್ಚಿನ ಬೇಡಿಕೆಯಿರುವ ಪ್ರವಾಸಿ ತಾಣಗಳಿಗೆ ಅಂತರರಾಷ್ಟ್ರೀಯ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್&zwnj;ನ ಈ ವಿಸ್ತರಣಾ ಕಾರ್ಯತಂತ್ರದ ಮುಖ್ಯ ಉದ್ದೇಶವಾಗಿದೆ.&lt;/p&gt;&lt;p&gt;ನಮ್ಮ ಬೆಂಗಳೂರಿನಿಂದ ವಾರಕ್ಕೆ ಬರೋಬ್ಬರಿ 500 ವಿಮಾನಗಳ ಹಾರಾಟ! ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನ ವಲಯದಲ್ಲಿ ಬೆಂಗಳೂರು ನಗರವು ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್&zwnj;ಗೆ ಪ್ರಮುಖ ಕೇಂದ್ರವಾಗಿ (Hub) ಹೊರಹೊಮ್ಮಿದೆ. ಪ್ರಸ್ತುತ ಈ ವಿಮಾನಯಾನ ಸಂಸ್ಥೆಯು ಬೆಂಗಳೂರಿನಿಂದ ಮಾತ್ರವೇ ವಾರಕ್ಕೆ ಸುಮಾರು 500 ವಿಮಾನಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ಮೂಲಕ ದೇಶದ 31 ಪ್ರಮುಖ ದೇಶೀಯ ಸ್ಥಳಗಳನ್ನು ಮತ್ತು ವಿದೇಶಗಳ 8 ಅಂತರರಾಷ್ಟ್ರೀಯ ಪ್ರವಾಸಿ ತಾಣಗಳನ್ನು ನೇರವಾಗಿ ಬೆಂಗಳೂರಿಗೆ ಸಂಪರ್ಕಿಸುತ್ತಿದೆ.&lt;/p&gt;&lt;p&gt;ಸಂಸ್ಥೆಯ ಈ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ, ಇತ್ತೀಚೆಗೆ ನಡೆದ ಬೆಂಗಳೂರು ವಿಮಾನ ನಿಲ್ದಾಣದ ಪ್ರತಿಷ್ಠಿತ 'ಪಿನಾಕಲ್ ಪ್ರಶಸ್ತಿ' ಸಮಾರಂಭದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ವಿಭಾಗಗಳಲ್ಲಿ 'ವರ್ಷದ ಅತ್ಯುತ್ತಮ ವಿಮಾನಯಾನ ಸಂಸ್ಥೆ' (Airline of the Year) ಎಂಬ ಹೆಗ್ಗಳಿಕೆಗೆ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಪಾತ್ರವಾಗಿದೆ. ಇದರ ಜೊತೆಗೆ, 'ವಿಂಗ್ಸ್ ಇಂಡಿಯಾ 2026' ರಾಷ್ಟ್ರೀಯ ಸಮಾವೇಶದಲ್ಲಿಯೂ ಸಹ ಸಂಸ್ಥೆಗೆ ಅತ್ಯುನ್ನತ 'ದೇಶೀಯ ಸಂಪರ್ಕ ಪ್ರಶಸ್ತಿ' (Domestic Connectivity Award) ನೀಡಿ ಗೌರವಿಸಲಾಗಿದೆ.&lt;/p&gt;&lt;p&gt;ಪಂಕಜ್ ತ್ರಿಪಾಠಿ ಅಭಿಯಾನ ಮತ್ತು ಭಾರತೀಯ ಆತಿಥ್ಯದ ಮೆರುಗು ಪ್ರಯಾಣಿಕರನ್ನು ಮತ್ತಷ್ಟು ಸೆಳೆಯುವ ನಿಟ್ಟಿನಲ್ಲಿ, ಪ್ರಖ್ಯಾತ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರನ್ನು ಒಳಗೊಂಡ ಏರ್&zwnj;ಲೈನ್&zwnj;ನ ಇತ್ತೀಚಿನ ನೂತನ ಅಭಿಯಾನವಾದ 'ಎಕ್ಸ್&zwnj;ಪ್ರೆಸ್ ವಾಲಿ ಬಾತ್ ಹೈ' (Express Waali Baat Hai) ಸಾರ್ವಜನಿಕವಾಗಿ ಭಾರಿ ಗಮನ ಸೆಳೆಯುತ್ತಿದೆ. ಈ ಜಾಹೀರಾತು ಅಭಿಯಾನದ ಮೂಲಕ ಸಂಸ್ಥೆಯು ತನ್ನ ವಿಮಾನಗಳಲ್ಲಿ ಲಭ್ಯವಿರುವ ಆರಾಮದಾಯಕ ಆಸನಗಳು, ಅತ್ಯಂತ ರುಚಿಕರವಾದ 'ಗೌರ್ಮೈರ್' (Gourmair) ಬಿಸಿ ಬಿಸಿ ಊಟದ ಸೌಲಭ್ಯ ಹಾಗೂ ಸಾಂಪ್ರದಾಯಿಕ ಭಾರತೀಯ ಆತಿಥ್ಯದ ವಿಶಿಷ್ಟ ಅನುಭವವನ್ನು ದೇಶ-ವಿದೇಶಗಳ ಪ್ರಯಾಣಿಕರಿಗೆ ಪರಿಚಯಿಸುತ್ತಿದೆ.&lt;/p&gt;&lt;p&gt;ದೇಶೀಯ ಮತ್ತು ಅಂತರರಾಷ್ಟ್ರೀಯ ತಾಣಗಳಲ್ಲಿ ವಾಯು ಸಂಪರ್ಕವನ್ನು ನಿರಂತರವಾಗಿ ಹೆಚ್ಚಿಸುವ ಜೊತೆಗೆ, ಪ್ರತಿಯೊಬ್ಬ ಪ್ರಯಾಣಿಕನ ಹಾರಾಟವನ್ನು ಅತ್ಯಂತ ವೈಯಕ್ತಿಕ, ಆರಾಮದಾಯಕ ಮತ್ತು ಸ್ಮರಣೀಯ ಅನುಭವವಾಗಿ ಪರಿವರ್ತಿಸುವ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್&zwnj;ನ ಬದ್ಧತೆಯನ್ನು ಈ ಹೊಸ ಬೆಂಗಳೂರು-ಫುಕೆಟ್ ವಿಮಾನ ಸೇವೆ ಮತ್ತು ಉಪಕ್ರಮಗಳು ಮತ್ತೊಮ್ಮೆ ಸ್ಪಷ್ಟಪಡಿಸಿವೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/air-india-express-launches-direct-bengaluru-phuket-flights-gdp/articleshow-puhbsc5"/>
        </item>
        <item>
            <title><![CDATA[ಆರ್‌ಸಿಬಿ ಮಾಜಿ ವೇಗಿ ಈಗ ಮಿನಿಸ್ಟರ್, ಪ್ರಮಾಣವಚನ ಸ್ವೀಕರಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/gallery/cricket-sports/former-rcb-pacer-ashok-dinda-takes-oath-as-minister-in-west-bengal-meci3ql</link>
            <guid isPermaLink="true">https://kannada.asianetnews.com/gallery/cricket-sports/former-rcb-pacer-ashok-dinda-takes-oath-as-minister-in-west-bengal-meci3ql</guid>
            <pubDate>Mon, 01 Jun 2026 17:09:08 +0530</pubDate>
            <description><![CDATA[&lt;p&gt;ಟೀಂ ಇಂಡಿಯಾ, ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಆಂದರೆ ಈ ವೇಗಿ ಆರ್&zwnj;ಸಿಬಿ ಪರವೂ ಆಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1f8z11362xm0875swdpfrk,imgname-ashok-dinda-sworn-in-as-west-bengal-minister-1780313521182.png" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾ, ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಆಂದರೆ ಈ ವೇಗಿ ಆರ್&zwnj;ಸಿಬಿ ಪರವೂ ಆಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು , ಕೆಕೆಆರ್, ಪುಣೆ ಸೂಪರ್&zwnj;ಜೈಂಟ್ಸ್ ಸೇರಿದಂತೆ ಪ್ರಮುಖ ಐಪಿಎಲ್ ತಂಡಗಳಲ್ಲಿ ಆಡಿದ ವೇಗಿ, ಟೀಂ ಇಂಡಿಯಾದಲ್ಲೂ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದಲ್ಲಿ ಸಚಿವನಾಗಿ ಪ್ರಮಾಣಚನ ಸ್ವೀಕರಿಸಿದ್ದಾರೆ. ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾದ ಮಾಜಿ ವೇಗಿ ಬೇರೆ ಯಾರು ಅಲ್ಲ, ಅಶೋಕ್ ದಿಂಡಾ.&lt;/p&gt;&lt;img&gt;&lt;p&gt;ಸುವೇಂದು ಅಧಿಕಾರಿ ಕ್ಯಾಬಿನೆಟ್ ವಿಸ್ತರಣೆಯಾಗಿದೆ. 35 ಶಾಸಕರು ಪ್ರಮಾಣವಚನ ಸ್ವೀಕರಿಸಿ ಸಚಿವರಾಗಿದ್ದಾರೆ. ಈ ಪೈಕಿ ಅಶೋಕ್ ದಿಂಡಾ ಕೂಡ ಸೇರಿದ್ದಾರೆ. ರಾಜ್ಯಪಾಲ ಆರ್&zwnj;ಎನ್ ರವಿ ಪ್ರತಿಜ್ಞಾವಿಧಿ ಭೋಧಿಸಿದ್ದಾರೆ. ಟೀಂ ಇಂಡಿಯಾ ಮಾಜಿ ವೇಗಿ ಎಂದು ಕರೆಯಿಸಿಕೊಳ್ಳುತ್ತಿದ್ದ ದಿಂಡಾ ಇದೀಗ ಬಂಗಾಳದ ಸಚಿವನಾಗಿ ಬಡ್ತಿ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಹಾಗೂ ಐಪಿಎಲ್ ಟೂರ್ನಿಗೆ ವಿದಾಯ ಹೇಳಿದ ಬಳಿಕ ವೇಗಿ ಅಶೋಕ್ ದಿಂಡಾ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ಸೇರಿಕೊಂಡರು. ಈ ವೇಳೆ ಬಂಗಾಳದಲ್ಲಿ ಬಿಜೆಪಿ ಮೂರನೇ ಪಾರ್ಟಿಯಾಗಿತ್ತು. ಬೆದರಿಕೆ, ಬಿಜೆಪಿ ನಾಯಕರ ಮೇಲೆ ಸತತ ದಾಳಿಗಳ ನಡುವೆಯೂ ದಿಂಡಾ ಬಿಜೆಪಿಯಲ್ಲೇ ಉಳಿದಿಕೊಂಡು ಜನ ನಾಯಕನಾಗಿ ಬೆಳೆದರು.&lt;/p&gt;&lt;img&gt;&lt;p&gt;ಮೊಯ್ನಾ ವಿಧಾನಸಭ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ ಅಶೋಕ್ ದಿಂಡಾ ತೃಣಮೂಲ ಕಾಂಗ್ರೆಸ್ ನಾಯಕ ಚಂದನ್ ಮಂಡಲ್ ವಿರುದ್ದ 16,241 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ವಿಶೇಷ ಅಂದರೆ ದಿಂಡಾ ಸ್ಪರ್ಧಿಸಿದ ಎರಡು ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಅಶೋಕ್ ದಿಂಡಾ ಬಿಜೆಪಿ ಸೇರಿಕೊಂಡ ಕೆಲ ವರ್ಷಗ ಬಳಿಕ ಅಂದರೆ 2021ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲಿ ದಿಂಡಾ ಟಿಎಂಸಿಯ ಸಂಗ್ರಾಮ್ ದುಲೈ ವಿರುದ್ದ 1,260 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.&lt;/p&gt;&lt;img&gt;&lt;p&gt;ಅಶೋಕ್ ದಿಂಡಾ ಆರ್&zwnj;ಸಿಬಿ, ಪುಣೆ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪುಣೆ ಸೂಪರ್&zwnj;ಜೈಂಟ್ಸ್ ತಂಡ ಸೇರಿದಂತೆ ಒಟ್ಟು ಐದು ತಂಡ ಪ್ರತಿನಿಧಿಸಿದ್ದಾರೆ. ಈ ಪೈಕಿ ಪುಣೆ ವಾರಿಯರ್ಸ್ ತಂಡದ ಪರ ಬಲು ದುಬಾರಿಯಾಗಿದ್ದ ಅಶೋಕ್ ದಿಂಡಾ ಟೀಕೆಗೆ ಗುರಿಯಾಗಿದ್ದರು. 78 ಐಪಿಎಲ್ ಪಂದ್ಯದಿಂದ 69 ವಿಕೆಟ್ ಕಬಳಿಸಿದ್ದಾರೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಪರ 2009ರಲ್ಲಿ ಡೆಬ್ಯೂ ಮಾಡಿದ ಅಶೋಕ್ ದಿಂಡಾ 13 ಎಕದಿನ ಪಂದ್ಯ ಆಡಿದ್ದಾರೆ. ಏಕದಿನದಲ್ಲಿ 12 ವಿಕೆಟ್ ಹಾಗೂ 9 ಟಿ20 ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದಾರೆ. ತಲೆಗೆ ಬ್ಯಾಂಡ್ ಹಾಕಿ ತಮ್ಮ ವಿಶೇಷ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಅಶೋಕ್ ದಿಂಡಾ ಇದೀಗ ಪಶ್ಚಿಮ ಬಂಗಾಳದ ಸಚಿವನಾಗಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/former-rcb-pacer-ashok-dinda-takes-oath-as-minister-in-west-bengal-meci3ql"/>
        </item>
        <item>
            <title><![CDATA[ಜಮೀರ್ ಆಡಿಯೋ ವಿವಾದ ಬೆನ್ನಲ್ಲೇ ಮುಸ್ಲಿಂ ನಾಯಕರ ರಹಸ್ಯ ಸಭೆ! ದೆಹಲಿ ಪ್ರವಾಸಕ್ಕೂ ಸಿದ್ದರಾಮಯ್ಯ ಬ್ರೇಕ್!]]></title>
            <link>https://kannada.asianetnews.com/politics/bz-zameer-ahmed-khan-audio-row-delhi-trip-cancelled-siddaramaiah-advice-sat/articleshow-ifo8zh2</link>
            <guid isPermaLink="true">https://kannada.asianetnews.com/politics/bz-zameer-ahmed-khan-audio-row-delhi-trip-cancelled-siddaramaiah-advice-sat/articleshow-ifo8zh2</guid>
            <pubDate>Mon, 01 Jun 2026 17:14:27 +0530</pubDate>
            <description><![CDATA[&lt;p&gt;ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ವಿವಾದ ಹೈಕಮಾಂಡ್ ತಲುಪುವ ಹಂತದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆಯಂತೆ ದೆಹಲಿ ಪ್ರವಾಸ ರದ್ದುಗೊಳಿಸಿರುವ ಜಮೀರ್, ಬೆಂಗಳೂರಿನಲ್ಲಿ ಮುಸ್ಲಿಂ ನಾಯಕರೊಂದಿಗೆ ರಹಸ್ಯ ಸಭೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8cfj5pxfcgrpg6dhcfwbj7,imgname-zameer-ahmed-khan--1--1776250505397.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.01): ಮಾ&lt;/strong&gt;ಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಪ್ರಕರಣ ಈಗ ಹೈಕಮಾಂಡ್ ಮಟ್ಟಕ್ಕೆ ತಲುಪುವ ಲಕ್ಷಣಗಳು ಕಾಣಿಸುತ್ತಿವೆ. ಈ ವಿವಾದದ ಬೆನ್ನಲ್ಲೇ ಜಮೀರ್ ಅಹಮದ್ ತೀವ್ರ ಆತಂಕಕ್ಕೆ ಒಳಗಾಗಿದ್ದು, ಬೆಂಗಳೂರಿನಲ್ಲಿ ಸಂಧಾನ ಮತ್ತು ತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ, ಜಮೀರ್ ಅವರ ದೆಹಲಿ ಪ್ರವಾಸಕ್ಕೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬ್ರೇಕ್ ಹಾಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.&lt;/p&gt;&lt;h3&gt;&lt;strong&gt;ಸಿದ್ದರಾಮಯ್ಯ ನೀಡಿದ ಆ 'ಸೂಕ್ಷ್ಮ' ಸಂದೇಶವೇನು?&lt;/strong&gt;&lt;/h3&gt;&lt;p&gt;ಸೋಮವಾರ ಬೆಳಿಗ್ಗೆ ದೆಹಲಿಗೆ ಹೋಗುವ ಸಿದ್ಧತೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಮೀರ್ ಅಹಮದ್ ಖಾನ್ ಭೇಟಿ ಮಾಡಿದ್ದರು. ಈ ವೇಳೆ ವೈರಲ್ ಆಗಿರುವ ಆಡಿಯೋ ಕುರಿತು ಜಮೀರ್ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ಈ ಸಮಯದಲ್ಲಿ ಜಮೀರ್ ದೆಹಲಿಗೆ ಬರುವುದು ಸೂಕ್ತವಲ್ಲ ಎಂಬ ಕಿವಿಮಾತು ಹೇಳಿದ್ದಾರೆ. &quot;ಈಗಾಗಲೇ ವಿವಾದ ಸೃಷ್ಟಿಯಾಗಿದೆ, ಈ ಹೊತ್ತಿನಲ್ಲಿ ನೀವು ದೆಹಲಿಗೆ ಬಂದರೆ ಅದು ನೆಗೆಟಿವ್ ಆಗಿ ಬಿಂಬಿತವಾಗಬಹುದು. ಸದ್ಯಕ್ಕೆ ಬೆಂಗಳೂರಿನಲ್ಲೇ ಉಳಿದುಕೊಳ್ಳಿ&quot; ಎಂದು ಸಿಎಂ ಸೂಕ್ಷ್ಮವಾಗಿ ಸಲಹೆ ನೀಡಿದ್ದಾರೆ. ಸಿಎಂ ಸಲಹೆಯ ಬೆನ್ನಲ್ಲೇ ಜಮೀರ್ ತಮ್ಮ ದೆಹಲಿ ಪ್ರವಾಸವನ್ನು ರದ್ದುಗೊಳಿಸಿ ಬೆಂಗಳೂರಿನಲ್ಲೇ ಉಳಿಯಲು ನಿರ್ಧರಿಸಿದ್ದಾರೆ.&lt;/p&gt;&lt;h2&gt;&lt;strong&gt;ಖಾಸಗಿ ಗೆಸ್ಟ್ ಹೌಸ್&zwnj;ನಲ್ಲಿ ರಹಸ್ಯ ಸಭೆ:&lt;/strong&gt;&lt;/h2&gt;&lt;p&gt;ದೆಹಲಿ ಪ್ರವಾಸ ರದ್ದಾದ ಬೆನ್ನಲ್ಲೇ ಜಮೀರ್ ಅಹಮದ್ ಆತಂಕದಿಂದ ಮುಸ್ಲಿಂ ನಾಯಕರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಕಾಂಗ್ರೆಸ್ ನಾಯಕರೊಬ್ಬರಿಗೆ ಸೇರಿದ ಖಾಸಗಿ ಗೆಸ್ಟ್ ಹೌಸ್&zwnj;ನಲ್ಲಿ ಜಮೀರ್ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ಹಾಗೂ ಎಂಎಲ್ಸಿ ನಸೀರ್ ಅಹ್ಮದ್ ಖಾನ್ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ. ಆಡಿಯೋ ವಿವಾದದಿಂದ ಆಗಬಹುದಾದ ರಾಜಕೀಯ ಹಾನಿಯನ್ನು ತಡೆಯುವುದು ಹೇಗೆ ಮತ್ತು ಹೈಕಮಾಂಡ್ ಮುಂದೆ ಯಾವ ರೀತಿ ಸ್ಪಷ್ಟನೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ.&lt;/p&gt;&lt;h2&gt;&lt;strong&gt;ಹೆಚ್ಚಿದ ಆತಂಕ:&lt;/strong&gt;&lt;/h2&gt;&lt;p&gt;ವೈರಲ್ ಆಡಿಯೋದಲ್ಲಿ ಕಾಂಗ್ರೆಸ್ ವಿರೋಧಿ ಮಾತುಗಳು ಕೇಳಿಬಂದಿರುವುದು ಜಮೀರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದರಲ್ಲೂ ದಾವಣಗೆರೆಯ ಶಾಸಕ ಸಮರ್ಥ ಶಾಮನೂರು ಅವರು ಈ ಬಗ್ಗೆ ಹೈಕಮಾಂಡ್&zwnj;ಗೆ ದೂರು ನೀಡುವ ಎಚ್ಚರಿಕೆ ನೀಡಿರುವುದು ಜಮೀರ್ ಅವರ ನಿದ್ದೆಗೆಡಿಸಿದೆ. ಒಂದು ಕಡೆ ಇದು 'ನಕಲಿ ಆಡಿಯೋ' ಎಂದು ಜಮೀರ್ ವಾದಿಸುತ್ತಿದ್ದರೂ, ಪಕ್ಷದೊಳಗಿನ ಇತರ ನಾಯಕರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಜಮೀರ್, ಈ ವಿವಾದದ ಹುತ್ತದಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/bz-zameer-ahmed-khan-audio-row-delhi-trip-cancelled-siddaramaiah-advice-sat/articleshow-ifo8zh2"/>
        </item>
        <item>
            <title><![CDATA[ಐಆರ್‌ಸಿಟಿಸಿ ಬಿಗ್ ಆಫರ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ! ಕರ್ನಾಟಕದ ಭಕ್ತರಿಗೂ ಸುವರ್ಣಾವಕಾಶ]]></title>
            <link>https://kannada.asianetnews.com/gallery/life/irctc-ayodhya-kashi-tour-package-bharat-gaurav-train-10-day-pilgrimage-gdp-iixr03y</link>
            <guid isPermaLink="true">https://kannada.asianetnews.com/gallery/life/irctc-ayodhya-kashi-tour-package-bharat-gaurav-train-10-day-pilgrimage-gdp-iixr03y</guid>
            <pubDate>Mon, 01 Jun 2026 16:44:56 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆಯ ಐಆರ್&zwnj;ಸಿಟಿಸಿ ಸಂಸ್ಥೆಯು ಪುಣ್ಯಕ್ಷೇತ್ರ ಯಾತ್ರೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. 9 ರಾತ್ರಿ ಮತ್ತು 10 ದಿನಗಳ ಈ ಯಾತ್ರೆಯು ಭಾರತ್ ಗೌರವ್ ವಿಶೇಷ ರೈಲಿನ ಮೂಲಕ ಅಯೋಧ್ಯೆ, ಕಾಶಿ, ಪುರಿ, ಗಯಾ , ಪ್ರಯಾಗ್&zwnj;ರಾಜ್&zwnj;ನಂತಹ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಕೈಗೆಟುಕುವ ದರದಲ್ಲಿ ಭೇಟಿ ನೀಡಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz1n8v82s9c33xyvnzh81v9,imgname-2-1780232135528.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರೈಲ್ವೆಯ ಐಆರ್&zwnj;ಸಿಟಿಸಿ ಸಂಸ್ಥೆಯು ಪುಣ್ಯಕ್ಷೇತ್ರ ಯಾತ್ರೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. 9 ರಾತ್ರಿ ಮತ್ತು 10 ದಿನಗಳ ಈ ಯಾತ್ರೆಯು ಭಾರತ್ ಗೌರವ್ ವಿಶೇಷ ರೈಲಿನ ಮೂಲಕ ಅಯೋಧ್ಯೆ, ಕಾಶಿ, ಪುರಿ, ಗಯಾ , ಪ್ರಯಾಗ್&zwnj;ರಾಜ್&zwnj;ನಂತಹ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಕೈಗೆಟುಕುವ ದರದಲ್ಲಿ ಭೇಟಿ ನೀಡಿ&lt;/p&gt;&lt;img&gt;&lt;p&gt;ಬೆಂಗಳೂರು: ಭಾರತದ ಅತ್ಯಂತ ಪವಿತ್ರ ಪುಣ್ಯಕ್ಷೇತ್ರಗಳ ದರ್ಶನ ಮಾಡಲು ಬಯಸುವ ಭಕ್ತಾದಿಗಳಿಗೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಅವಕಾಶ ನೀಡುತ್ತಿದೆ. ಐಆರ್&zwnj;ಸಿಟಿಸಿ ಸಂಸ್ಥೆಯು ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸುತ್ತಿರುವ 'ಅಯೋಧ್ಯೆ ಮತ್ತು ಕಾಶಿ ಪುಣ್ಯಕ್ಷೇತ್ರ ಯಾತ್ರೆ' ಹೆಸರಿನ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಒಟ್ಟು 9 ರಾತ್ರಿಗಳು ಮತ್ತು 10 ದಿನಗಳ ಕಾಲ ನಡೆಯುವ ಈ ಸುದೀರ್ಘ ಹಾಗೂ ದಿವ್ಯ ಯಾತ್ರೆಯು ಭಕ್ತರಿಗೆ ಅತ್ಯದ್ಭುತ ಆಧ್ಯಾತ್ಮಿಕ ಅನುಭೂತಿ ಸಿಗಲಿದೆ. ಈ ವಿಶೇಷ ಪ್ರವಾಸಕ್ಕಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಭಾರತ್ ಗೌರವ ಸ್ಪೆಷಲ್ ಟೂರಿಸ್ಟ್ ರೈಲು' ಅನ್ನು ಬಳಸಲಾಗುತ್ತಿದ್ದು, ಈ ರೈಲು ಆಗಸ್ಟ್ 4, 2026ರಂದು ಸಿಕಂದರಾಬಾದ್ ನಿಲ್ದಾಣದಿಂದ ತನ್ನ ಪವಿತ್ರ ಪ್ರಯಾಣವನ್ನು ಆರಂಭಿಸಲಿದೆ.&lt;/p&gt;&lt;img&gt;&lt;p&gt;ಈ ಪವಿತ್ರ ಯಾತ್ರೆಯು ನೆರೆರಾಜ್ಯದ ಸಿಕಂದರಾಬಾದ್&zwnj;ನಿಂದ ಅಧಿಕೃತವಾಗಿ ಆರಂಭವಾಗಲಿದ್ದರೂ, ಕರ್ನಾಟಕದ ಭಕ್ತರು ಕೂಡ ಸುಲಭವಾಗಿ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ನಗರಗಳಿಂದ ಸಿಕಂದರಾಬಾದ್&zwnj;ಗೆ ಅತ್ಯುತ್ತಮ ರೈಲು ಹಾಗೂ ಬಸ್ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ. ಹೀಗಾಗಿ, ಕರ್ನಾಟಕದ ಯಾತ್ರಾರ್ಥಿಗಳು ಆರಾಮವಾಗಿ ಸಿಕಂದರಾಬಾದ್&zwnj; ತಲುಪಿ ಅಲ್ಲಿಂದ ಈ ವಿಶೇಷ ರೈಲನ್ನು ಹತ್ತಬಹುದು. ಅಯೋಧ್ಯೆ, ಕಾಶಿ, ಪುರಿ ಮತ್ತು ಪ್ರಯಾಗ್&zwnj;ರಾಜ್&zwnj;ನಂತಹ ದೇಶದ ಶ್ರೇಷ್ಠ ಪುಣ್ಯಕ್ಷೇತ್ರಗಳನ್ನು ಒಂದೇ ಪ್ಯಾಕೇಜ್&zwnj;ನಲ್ಲಿ ದರ್ಶನ ಮಾಡುವ ಅಪರೂಪದ ಅವಕಾಶ ಇದಾಗಿರುವುದರಿಂದ, ರಾಜ್ಯದ ಭಕ್ತರಲ್ಲಿ ಈ ಪ್ರವಾಸದ ಕುರಿತು ಭಾರಿ ಆಸಕ್ತಿ ಮೂಡಿದೆ.&lt;/p&gt;&lt;img&gt;&lt;p&gt;ಈ ಹತ್ತು ದಿನಗಳ ಸುದೀರ್ಘ ಆಧ್ಯಾತ್ಮಿಕ ಪ್ರವಾಸದಲ್ಲಿ ಭಕ್ತರು ಭಾರತದ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಪುರಿ, ಕೋಣಾರ್ಕ್, ಗಯಾ, ಕಾಶಿ (ವಾರಣಾಸಿ), ಅಯೋಧ್ಯೆ ಹಾಗೂ ಪ್ರಯಾಗ್&zwnj;ರಾಜ್ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಯಾತ್ರೆಯ ಮೊದಲ ಹಂತದಲ್ಲಿ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ದರ್ಶನ ಭಾಗ್ಯ ಸಿಗಲಿದ್ದು, ಅದರ ಜೊತೆಗೆ ಕೋಣಾರ್ಕದ ಅದ್ಭುತ ಸೂರ್ಯ ದೇವಾಲಯ ವೀಕ್ಷಣೆಗೆ ಅವಕಾಶ ಇರಲಿದೆ. ತದನಂತರ ಪಿತೃಕಾರ್ಯಗಳಿಗೆ ಜಗತ್ಪ್ರಸಿದ್ಧವಾಗಿರುವ ಗಯಾದ ಪವಿತ್ರ ವಿಷ್ಣುಪಾದ ದೇವಾಲಯದ ದರ್ಶನವನ್ನು ಭಕ್ತರು ಪಡೆಯಲಿದ್ದಾರೆ.&lt;/p&gt;&lt;p&gt;ಯಾತ್ರೆಯ ಪ್ರಮುಖ ಆಕರ್ಷಣೆಯಾಗಿ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯ, ನೂತನವಾಗಿ ನಿರ್ಮಾಣಗೊಂಡಿರುವ ಭವ್ಯ ವಿಶ್ವನಾಥ ಕಾರಿಡಾರ್, ವಿಶಾಲಾಕ್ಷಿ ದೇವಸ್ಥಾನ ಮತ್ತು ಅನ್ನಪೂರ್ಣೇಶ್ವರಿ ದೇವಸ್ಥಾನಗಳ ದರ್ಶನ ಲಭ್ಯವಾಗಲಿದೆ. ಇದರ ಜೊತೆಗೆ ಸಂಜೆಯ ಸಮಯದಲ್ಲಿ ಮನಸೆಳೆಯುವ ಪವಿತ್ರ ಗಂಗಾ ಆರತಿಯ ದಿವ್ಯ ವೀಕ್ಷಣೆಯನ್ನು ಕಣ್ಣುಂಬಿಕೊಳ್ಳಬಹುದು. ಮುಂದೆ ಸಾಗುವ ರೈಲು ಇತ್ತೀಚೆಗಷ್ಟೇ ಭವ್ಯವಾಗಿ ಲೋಕಾರ್ಪಣೆಗೊಂಡ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ, ಹನುಮಾನ್ ಗಢಿ ದರ್ಶನ ಮತ್ತು ಸರಯೂ ನದಿಯ ಭವ್ಯ ಆರತಿ ವೀಕ್ಷಣೆಗೆ ದಾರಿ ಮಾಡಿಕೊಡಲಿದೆ. ಕೊನೆಯದಾಗಿ ಪವಿತ್ರ ನದಿಗಳ ಸಂಗಮ ಸ್ಥಾನವಾದ ಪ್ರಯಾಗ್&zwnj;ರಾಜ್&zwnj;ನ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮತ್ತು ದರ್ಶನ ಮಾಡಲು ವ್ಯವಸ್ಥೆ ಇರಲಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರು ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ವರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಒಟ್ಟು ಮೂರು ವಿಭಾಗಗಳಲ್ಲಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಸ್ಲೀಪರ್ ಕ್ಲಾಸ್ ಒಳಗೊಂಡಿರುವ ಎಕಾನಮಿ ವರ್ಗಕ್ಕೆ ಪ್ರತಿ ವ್ಯಕ್ತಿಗೆ 16,500 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇನ್ನು ತೃತೀಯ ಎಸಿ ಅಂದರೆ ಸ್ಟ್ಯಾಂಡರ್ಡ್ ವರ್ಗದಲ್ಲಿ ಪ್ರಯಾಣಿಸಲು ಬಯಸುವವರಿಗೆ ಪ್ರತಿ ವ್ಯಕ್ತಿಗೆ 25,600 ರೂಪಾಯಿಗಳ ದರ ಇರಲಿದೆ. ಅತ್ಯಂತ ಆರಾಮದಾಯಕ ಪ್ರಯಾಣವನ್ನು ಬಯಸುವವರಿಗಾಗಿ ದ್ವಿತೀಯ ಎಸಿ ಕಂಫರ್ಟ್ ವರ್ಗವನ್ನು ಮೀಸಲಿಡಲಾಗಿದ್ದು, ಇದಕ್ಕೆ ಪ್ರತಿ ವ್ಯಕ್ತಿಗೆ 33,400 ರೂಪಾಯಿಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.&lt;/p&gt;&lt;img&gt;&lt;p&gt;ಐಆರ್&zwnj;ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಸಂಪೂರ್ಣವಾಗಿ 'ಆಲ್-ಇನ್&zwnj;ಕ್ಲೂಸಿವ್' ಯೋಜನೆಯಾಗಿದೆ. ಅಂದರೆ, ನೀವು ಒಮ್ಮೆ ಟಿಕೆಟ್ ಬುಕ್ ಮಾಡಿದರೆ ಪ್ರಯಾಣದ ಅವಧಿಯಲ್ಲಿ ನಿಮ್ಮ ಇತರೆ ಯಾವುದೇ ಪ್ರಮುಖ ವೆಚ್ಚಗಳು ಇರುವುದಿಲ್ಲ. ಇದರಲ್ಲಿ ಭಾರತ್ ಗೌರವ ರೈಲಿನಲ್ಲಿ ಆಯ್ದ ವರ್ಗದ ಉನ್ನತ ಪ್ರಯಾಣ ವ್ಯವಸ್ಥೆ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಸ್ಥಳೀಯವಾಗಿ ಬಸ್ಸುಗಳು ಅಥವಾ ವಾಹನಗಳ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ರಾತ್ರಿ ತಂಗಲು ಸುಸಜ್ಜಿತ ಹೋಟೆಲ್ ಅಥವಾ ಧರ್ಮಶಾಲೆಗಳಲ್ಲಿ ವಸತಿ ಸೌಕರ್ಯ ಒದಗಿಸುವುದರ ಜೊತೆಗೆ, ಪ್ರತಿದಿನ ಬೆಳಗಿನ ಶುದ್ಧ ಸಸ್ಯಹಾರಿ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ರೈಲ್ವೆ ಇಲಾಖೆಯೇ ನಿರ್ವಹಿಸಲಿದೆ. ಇದರೊಂದಿಗೆ ಪ್ರವಾಸದ ಉದ್ದಕ್ಕೂ ಮಾಹಿತಿ ನೀಡಲು ಅನುಭವಿ ಪ್ರವಾಸ ಮಾರ್ಗದರ್ಶಕರ ಸೇವೆ ಇರಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಉಚಿತ ಪ್ರಯಾಣ ವಿಮೆ ಮತ್ತು ವಿಶೇಷ ಭದ್ರತಾ ಸಿಬ್ಬಂದಿಯ ಸೌಲಭ್ಯವೂ ಲಭ್ಯವಿರಲಿದೆ.&lt;/p&gt;&lt;img&gt;&lt;p&gt;ಈ ಪ್ರವಾಸದ ರೈಲು ಸಿಕಂದರಾಬಾದ್&zwnj;ನಿಂದ ಹೊರಟು ಚರ್ಲಪಳ್ಳಿ, ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ಗುಡಿವಾಡ, ಭೀಮಾವರಂ, ತನೂಕು, ನಿಡದವೋಲು, ರಾಜಮಹೇಂದ್ರವರಂ, ಸಮಲ್ಕೋಟ್, ತುಣಿ, ದುವ್ವಾಡ, ಪೆಂಡುರ್ತಿ ಹಾಗೂ ವಿಜಯನಗರಂ ಜಂಕ್ಷನ್ ಸೇರಿದಂತೆ ಹಲವು ನಿಗದಿತ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ಎಲ್ಲಾ ನಿಲ್ದಾಣಗಳ ಮಾರ್ಗವಾಗಿ ರೈಲು ಸಾಗುವುದರಿಂದ ಪ್ರಯಾಣಿಕರು ತಮಗೆ ಅತ್ಯಂತ ಹತ್ತಿರವಿರುವ ಅಥವಾ ಅನುಕೂಲಕರವಾದ ನಿಲ್ದಾಣಗಳಲ್ಲಿ ರೈಲು ಹತ್ತಲು ಮತ್ತು ಇಳಿಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;img&gt;&lt;p&gt;ಈ ಪವಿತ್ರ ಮತ್ತು ಐತಿಹಾಸಿಕ ಯಾತ್ರೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಕ್ತಾದಿಗಳು ಐಆರ್&zwnj;ಸಿಟಿಸಿ ಪ್ರವಾಸೋದ್ಯಮದ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ ಆನ್&zwnj;ಲೈನ್ ಮೂಲಕ ಅತ್ಯಂತ ಸುಲಭವಾಗಿ ತಮ್ಮ ಆಸನಗಳನ್ನು ಬುಕ್ ಮಾಡಿಕೊಳ್ಳಬಹುದು. ಈ ವಿಶೇಷ ರೈಲಿನಲ್ಲಿ ಒಟ್ಟು 702 ಆಸನಗಳ ಮಿತಿ ಇದ್ದು, ಅದರಲ್ಲಿ 160 ಸ್ಲೀಪರ್ ಕ್ಲಾಸ್ ಆಸನಗಳು, 490 ತೃತೀಯ ಎಸಿ ಆಸನಗಳು ಹಾಗೂ ಕೇವಲ 52 ದ್ವಿತೀಯ ಎಸಿ ಆಸನಗಳು ಮಾತ್ರ ಲಭ್ಯವಿವೆ. ರೈಲಿನಲ್ಲಿ ಆಸನಗಳ ಸಂಖ್ಯೆ ಸೀಮಿತವಾಗಿರುವುದರಿಂದ ಮತ್ತು ಬೇಡಿಕೆ ಹೆಚ್ಚಿರುವುದರಿಂದ ಭಕ್ತರು ಆದಷ್ಟು ಬೇಗ ಬುಕ್ಕಿಂಗ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದೇಶದ ಅತ್ಯಂತ ಪವಿತ್ರ ಧರ್ಮಕ್ಷೇತ್ರಗಳನ್ನು ಸಂದರ್ಶಿಸಲು ಬಯಸುವ ಮಧ್ಯಮ ವರ್ಗದ ಜನರಿಗೆ ಇದೊಂದು ಅತ್ಯುತ್ತಮ, ನಂಬಿಕಸ್ಥ ಮತ್ತು ಸುರಕ್ಷಿತ ಅವಕಾಶವಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/life/irctc-ayodhya-kashi-tour-package-bharat-gaurav-train-10-day-pilgrimage-gdp-iixr03y"/>
        </item>
        <item>
            <title><![CDATA[135 ಸೀಟ್ ಗೆಲ್ಲಿಸಿದ್ರೂ ಸಿಗದ ಸಿಂಹಾಸನ! ಪಕ್ಷಕ್ಕಾಗಿ ಜೈಲು, ಅವಮಾನ ಸಹಿಸಿದ 'ಕನಕಪುರ ಬಂಡೆ' ಡಿಕೆಶಿ ರೋಚಕ ಕಥೆ]]></title>
            <link>https://kannada.asianetnews.com/politics/dk-shivakumar-political-journey-karnataka-congress-troubleshooter-135-seats-sat-videoshow-gsl68ri</link>
            <guid isPermaLink="true">https://kannada.asianetnews.com/politics/dk-shivakumar-political-journey-karnataka-congress-troubleshooter-135-seats-sat-videoshow-gsl68ri</guid>
            <pubDate>Mon, 01 Jun 2026 16:42:18 +0530</pubDate>
            <description><![CDATA[&lt;p&gt;ಕಾಂಗ್ರೆಸ್ 'ಟ್ರಬಲ್ ಶೂಟರ್' ಡಿ.ಕೆ. ಶಿವಕುಮಾರ್, 2023ರ ಚುನಾವಣೆಯಲ್ಲಿ ಪಕ್ಷಕ್ಕೆ ಭರ್ಜರಿ ಜಯ ತಂದುಕೊಟ್ಟರೂ ಸಿಎಂ ಸ್ಥಾನದಿಂದ ವಂಚಿತರಾದರು. ದಶಕಗಳ ರಾಜಕೀಯ ಹೋರಾಟ, ಪಕ್ಷ ನಿಷ್ಠೆ ಮತ್ತು ಸಂಘಟನಾ ಚಾತುರ್ಯದ ಹೊರತಾಗಿಯೂ, ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿದ್ದಕ್ಕೆ ಈಗ ಸಿಎಂ ಪಟ್ಟ ದಕ್ಕಿದೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xachqgc" medium="video" height="768" width="1024"/>
            <content:encoded><![CDATA[&lt;p&gt;ಕರ್ನಾಟಕ ರಾಜಕಾರಣದಲ್ಲಿ 'ಟ್ರಬಲ್ ಶೂಟರ್' ಎನ್ನುವ ಪದಕ್ಕೆ ಪರ್ಯಾಯ ಹೆಸರೇ ಡಿ.ಕೆ. ಶಿವಕುಮಾರ್. ಕಾಂಗ್ರೆಸ್ ಪಕ್ಷಕ್ಕೆ ಯಾವಾಗೆಲ್ಲಾ ಸಂಕಷ್ಟ ಎದುರಾಯಿತೋ, ಆಗೆಲ್ಲಾ ಎದೆಯೊಡ್ಡಿ ನಿಂತವರು ಇದೇ ಕನಕಪುರದ ಕದನ ಕಲಿ. 2023ರ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 135 ಸ್ಥಾನಗಳನ್ನು ಗೆಲ್ಲಿಸಿ, ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಕೀರ್ತಿ ಡಿಕೆಶಿಗೆ ಸಲ್ಲುತ್ತದೆ. ಆದರೆ, ಅಷ್ಟೊಂದು ಸೀಟು ಗೆಲ್ಲಿಸಿಕೊಟ್ಟರೂ ಸಿಎಂ ಸಿಂಹಾಸನ ಮಾತ್ರ ಕೈಗೆ ಬಂದು ತುತ್ತಿಗೆ ಬರಲಿಲ್ಲ. ಹೈಕಮಾಂಡ್ ಆಜ್ಞೆಯಂತೆ ಮೌನಕ್ಕೆ ಶರಣಾದ ಈ ನಾಯಕನ ಹಿಂದೆ ದಶಕಗಳ ಸುದೀರ್ಘ ಹೋರಾಟದ ಕಥೆಯಿದೆ.&lt;/p&gt;&lt;p&gt;&lt;strong&gt;ಆರ್.ಸಿ. ಕಾಲೇಜಿನಿಂದ ರಾಜಕೀಯದ ಎತ್ತರದವರೆಗೆ:&lt;/strong&gt;&lt;/p&gt;&lt;p&gt;ಅದು 1980ರ ದಶಕದ ಆರಂಭ. ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಸಾಧಾರಣ ಹುಡುಗನಿಗೆ ಯಾವುದೇ ದೊಡ್ಡ ರಾಜಕೀಯ ಹಿನ್ನೆಲೆ ಇರಲಿಲ್ಲ. ಆದರೆ, ಆತನ ಕಣ್ಣಿನಲ್ಲಿ ಒಂದು ಕಿಚ್ಚಿತ್ತು, ಸಂಘಟನೆಯ ಚಾತುರ್ಯವಿತ್ತು. ಅದೇ ಕಿಚ್ಚು ಮುಂದೆ ಅವರನ್ನು ಕರ್ನಾಟಕ ಕಾಂಗ್ರೆಸ್&zwnj;ನ ಅಧಿನಾಯಕನನ್ನಾಗಿ ಮಾಡಿತು. ಸಾತನೂರು ಸಮರಾಂಗಣದಲ್ಲಿ ಸಿದ್ಧಗೊಂಡು, 'ಕನಕಪುರದ ಬಂಡೆ'ಯಾಗಿ ಬೆಳೆದ ಡಿಕೆಶಿ, ಎಚ್.ಡಿ. ದೇವೇಗೌಡರಂತಹ ದಿಗ್ಗಜರ ವಿರುದ್ಧವೇ ರಾಜಕೀಯ ಸಮರ ಸಾರಿದವರು.&lt;/p&gt;&lt;p&gt;&lt;strong&gt;ಕಷ್ಟಕಾಲದ ಆಪದ್ಬಾಂಧವ:&lt;/strong&gt;&lt;/p&gt;&lt;p&gt;ಪಕ್ಷಕ್ಕೆ ಕಷ್ಟ ಬಂದಾಗೆಲ್ಲಾ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್&zwnj;ನ ಕಟ್ಟಪ್ಪನಂತೆ ಕೆಲಸ ಮಾಡಿದ್ದಾರೆ. ಗುಜರಾತ್ ಶಾಸಕರ ರಕ್ಷಣೆಯಿರಲಿ ಅಥವಾ ಮೈತ್ರಿ ಸರ್ಕಾರ ಉಳಿಸುವ ಪ್ರಯತ್ನವಿರಲಿ, ಡಿಕೆಶಿ ಸದಾ ಮುಂಚೂಣಿಯಲ್ಲಿದ್ದರು. ಇದೇ ಕಾರಣಕ್ಕೆ ಅವರು ಐಟಿ, ಇಡಿ ತನಿಖೆಗಳನ್ನು ಎದುರಿಸಬೇಕಾಯಿತು, ತಿಹಾರ್ ಜೈಲು ಸೇರಬೇಕಾಯಿತು. ಜೈಲಿನ ಕಂಬಿಗಳ ಹಿಂದೆ ಇದ್ದಾಗಲೂ ಅವರು ಪಕ್ಷದ ನಿಷ್ಠೆಯನ್ನು ಬಿಡಲಿಲ್ಲ. &quot;ನನ್ನ ಲಾಭಕ್ಕಿಂತ ಪಾರ್ಟಿ ಮುಖ್ಯ&quot; ಎಂಬುದು ಅವರ ಅಚಲ ನಂಬಿಕೆಯಾಗಿತ್ತು.&lt;/p&gt;&lt;p&gt;&lt;strong&gt;2023ರ ವಿಜಯ ಮತ್ತು ಮೌನ:&lt;/strong&gt;&lt;/p&gt;&lt;p&gt;2023ರ ಚುನಾವಣೆಯಲ್ಲಿ ರಾಜ್ಯಾದ್ಯಂತ ಮಿಂಚಿನ ಸಂಚಲನ ಮೂಡಿಸಿ 135 ಸೀಟುಗಳನ್ನು ತಂದುಕೊಟ್ಟಾಗ, ಡಿಕೆಶಿ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಹೈಕಮಾಂಡ್&zwnj;ನ ಲೆಕ್ಕಾಚಾರವೇ ಬೇರೆಯಾಗಿತ್ತು. 10 ವರ್ಷಗಳ ಕಾಲ ತಾನು ಪಟ್ಟ ಕಷ್ಟ, ಎದುರಿಸಿದ ಅವಮಾನಗಳನ್ನು ಬದಿಗಿಟ್ಟು, ಪಕ್ಷದ ಶಿಸ್ತಿಗೆ ತಲೆಬಾಗಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅವರು ಒಪ್ಪಿಕೊಂಡರು.&lt;/p&gt;&lt;p&gt;ಅಧಿಕಾರಕ್ಕಿಂತ ಪಕ್ಷದ ಹಿತವೇ ಮುಖ್ಯ ಎಂದು ಭಾವಿಸಿದ ಈ 'ಬಂಡೆ', ಸದ್ಯ ಹಸ್ತಪಾಳಯದ ಆಪದ್ಬಾಂಧವನಾಗಿ ಕೆಲಸ ಮಾಡುತ್ತಿದ್ದಾರೆ. ಸಿಂಹಾಸನ ಸಿಗದಿದ್ದರೂ ಜನರ ಮನಸ್ಸಿನಲ್ಲಿ ಡಿಕೆಶಿ ಒಬ್ಬ ಅಪ್ರತಿಮ ಸಂಘಟನಾ ಚತುರನಾಗಿ ಉಳಿದಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/dk-shivakumar-political-journey-karnataka-congress-troubleshooter-135-seats-sat-videoshow-gsl68ri"/>
        </item>
        <item>
            <title><![CDATA[ನನ್ನ ಗರ್ಭಪಾತಕ್ಕೆ ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಕಾರಣ: ನಟಿ ಜೂಲಿ ಗಂಭೀರ ಆರೋಪ]]></title>
            <link>https://kannada.asianetnews.com/gallery/entertainment/tamilnadu-cm-thalapathy-vijay-accused-for-miscarriage-bigg-boss-tamil-fame-actress-julie-maria-juliana-suc-xczcf4h</link>
            <guid isPermaLink="true">https://kannada.asianetnews.com/gallery/entertainment/tamilnadu-cm-thalapathy-vijay-accused-for-miscarriage-bigg-boss-tamil-fame-actress-julie-maria-juliana-suc-xczcf4h</guid>
            <pubDate>Mon, 01 Jun 2026 16:29:52 +0530</pubDate>
            <description><![CDATA[&lt;p&gt;ಬಿಗ್​ಬಾಸ್ ಸ್ಪರ್ಧಿ ಹಾಗೂ ನಟಿ ಮಾರಿಯಾ ಜೂಲಿ, ತಮಗೆ ಆದ ಗರ್ಭಪಾತಕ್ಕೆ ತಮಿಳುನಾಡು ಸಿಎಂ ದಳಪತಿ ವಿಜಯ್ ಅವರ ಬೆಂಬಲಿಗರೇ ಕಾರಣ ಎಂದು ಆರೋಪಿಸಿದ್ದಾರೆ. ಆನ್&zwnj;ಲೈನ್ ಕಿರುಕುಳದಿಂದ ಉಂಟಾದ ತೀವ್ರ ಮಾನಸಿಕ ಯಾತನೆಯೇ ತಮ್ಮ ಮಗುವಿನ ಸಾವಿಗೆ ಕಾರಣವಾಯಿತು ಎಂದು ಅವರು ನೋವು ತೋಡಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1dcgw4yqbwe9gh9q0rckt2,imgname-joseph-vijay-and-julie-1780311540612.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್​ಬಾಸ್ ಸ್ಪರ್ಧಿ ಹಾಗೂ ನಟಿ ಮಾರಿಯಾ ಜೂಲಿ, ತಮಗೆ ಆದ ಗರ್ಭಪಾತಕ್ಕೆ ತಮಿಳುನಾಡು ಸಿಎಂ ದಳಪತಿ ವಿಜಯ್ ಅವರ ಬೆಂಬಲಿಗರೇ ಕಾರಣ ಎಂದು ಆರೋಪಿಸಿದ್ದಾರೆ. ಆನ್&zwnj;ಲೈನ್ ಕಿರುಕುಳದಿಂದ ಉಂಟಾದ ತೀವ್ರ ಮಾನಸಿಕ ಯಾತನೆಯೇ ತಮ್ಮ ಮಗುವಿನ ಸಾವಿಗೆ ಕಾರಣವಾಯಿತು ಎಂದು ಅವರು ನೋವು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ತಾವು ಗರ್ಭಪಾತದಿಂದ ಮಗುವನ್ನು ಕಳೆದುಕೊಳ್ಳಲು ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ಜೋಸೆಫ್​ ವಿಜಯ್​ ಅವರೇ ಕಾರಣ ಎಂಬ ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟಿದ್ದಾರೆ ಬಿಗ್​ಬಾಸ್ ಸ್ಪರ್ಧಿ, ಮಾಜಿ ನರ್ಸ್​ ಹಾಗೂ ಟಾಲಿವುಡ್​ ನಟಿ ಮಾರಿಯಾ ಜೂಲಿ.&lt;/p&gt;&lt;img&gt;&lt;p&gt;ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅವರ ಬೆಂಬಲಗರಿಂದ ಕಿರುಕುಳದ ನಂತರ ತನಗೆ ಗರ್ಭಪಾತವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಮಾರ್ಚ್​ನಲ್ಲಿ ಎಂಟು ಜನರ ವಿರುದ್ಧ ದೂರು ದಾಖಲಿರುವುದಾಗಿ ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಟಿವಿಕೆ ಬೆಂಬಲಿಗರಿಂದ ನನ್ನನ್ನು ಜಾಲತಾಣದಲ್ಲಿ ಟ್ರೋಲ್​ ಮಾಡಲಾಗುತ್ತಿದೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಗರ್ಭಧಾರಣೆಯ ಸಮಯದಲ್ಲಿಯೂ ಇವೆಲ್ಲವುಗಳಿಂದ ಮಾನಸಿಕವಾಗಿ ನೊಂದದ್ದೇ ನನ್ನ ಗರ್ಭಪಾತಕ್ಕೆ ಕಾರಣವಾಗಿದೆ ಎಂದು ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನನ್ನ ಪತಿಯ ವಿರುದ್ಧ ಪಿತೂರಿ ನಡೆಸಲಾಗಿದೆ. 15 ಲಕ್ಷ ರೂ. ಮೂತ್ರಪಿಂಡ ಹಗರಣದಲ್ಲಿ ಅವರನ್ನು ಸಿಲುಕಿಸಲಾಗಿದೆ. ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದರ ಬಗ್ಗೆ ನನಗೆ ನೋಟಿಸ್ ಕಳಿಸಿ, ಹಿಂಸೆ ನೀಡಲಾಗುತ್ತಿದೆ. ಇದರ ಹಿಂದೆ, ಟಿವಿಕೆ ಬೆಂಬಲಿಗ ಮತ್ತು ವಕೀಲರ ಕೈವಾಡವಿದೆ ಎಂದು ನಟಿ ಆರೋಪಿಸಿದ್ದಅರೆ.&lt;/p&gt;&lt;img&gt;&lt;p&gt;&quot;ನಾವು ನಮ್ಮ ಮಗುವನ್ನು ಕಳೆದುಕೊಂಡೆವು. ನಾನು ಇತ್ತೀಚೆಗೆ ಮದುವೆಯಾಗಿದ್ದೆ, ಮತ್ತು ನಾವು ನಮ್ಮ ಮೊದಲ ಮಗುವನ್ನು ಕಳೆದುಕೊಂಡೆವು. ಆನ್&zwnj;ಲೈನ್ ಕಿರುಕುಳದಿಂದ ಉಂಟಾದ ತೀವ್ರ ಮಾನಸಿಕ ಯಾತನೆಯಿಂದಾಗಿ ನನ್ನ ಮಗು ಸಾವನ್ನಪ್ಪಿತು. ನಾನು ಇದನ್ನು ಸಹಾನುಭೂತಿಗಾಗಿ ಬಳಸಬಹುದು, ಆದರೆ ನನ್ನ ಉದ್ದೇಶವೆಂದರೆ ನನ್ನ ಗಂಡ ಮತ್ತು ನನ್ನ ಬಗ್ಗೆ ಮಾನನಷ್ಟ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಮಾಡಲಾಗುತ್ತಿದೆ ಎಂದು ನಟಿ ನೋವು ತೋಡಿಕೊಂಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/tamilnadu-cm-thalapathy-vijay-accused-for-miscarriage-bigg-boss-tamil-fame-actress-julie-maria-juliana-suc-xczcf4h"/>
        </item>
        <item>
            <title><![CDATA[ಚೀನಾಕ್ಕೆ ಬೇಕಿರೋದು ಮಕ್ಕಳೇ ಹೊರತು ಕಾಂಡೋಮ್‌ಗಳಲ್ಲ! ವಿಶ್ವದ ನಂ.1 ಬ್ರ್ಯಾಂಡ್ 'ಡ್ಯುರೆಕ್ಸ್'ಗೆ ಸರ್ಕಾರದ ಬ್ರೇಕ್!]]></title>
            <link>https://kannada.asianetnews.com/world-news/china-baby-boom-policy-hits-durex-sales-plunge-as-government-imposes-strict-rules-on-condoms-sat/articleshow-g7z4lpm</link>
            <guid isPermaLink="true">https://kannada.asianetnews.com/world-news/china-baby-boom-policy-hits-durex-sales-plunge-as-government-imposes-strict-rules-on-condoms-sat/articleshow-g7z4lpm</guid>
            <pubDate>Mon, 01 Jun 2026 16:23:58 +0530</pubDate>
            <description><![CDATA[ಚೀನಾದಲ್ಲಿ ಕುಸಿಯುತ್ತಿರುವ ಜನನ ದರವನ್ನು ಹೆಚ್ಚಿಸಲು ಸರ್ಕಾರ ಕಠಿಣ ನೀತಿಗಳನ್ನು ಜಾರಿಗೆ ತಂದಿದೆ. ಈ ನೀತಿಗಳ ಭಾಗವಾಗಿ, ಕಾಂಡೋಮ್&zwnj;ಗಳ ಮೇಲಿನ ತೆರಿಗೆ ವಿನಾಯಿತಿ ರದ್ದು ಮತ್ತು ಜಾಹೀರಾತು ನಿರ್ಬಂಧಗಳಿಂದಾಗಿ, ವಿಶ್ವದ ಪ್ರಮುಖ ಬ್ರ್ಯಾಂಡ್ ಡ್ಯುರೆಕ್ಸ್ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kd4vkbztdmp8e0nb8frg3zed,imgname-condom-sale-1766468464634.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆ ಹೊಂದಿದ್ದ ಚೀನಾ, ಈಗ ಜನನ ದರ ಕುಸಿತದಿಂದ ತೀವ್ರ ಕಂಗಾಲಾಗಿದೆ. ದೇಶದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿರುವುದು ಚೀನಾ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಿಕ್ಕಟ್ಟಿನಿಂದ ಪಾರಾಗಲು ಚೀನಾ ಸರ್ಕಾರ ಜನಸಂಖ್ಯೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಗರ್ಭನಿರೋಧಕ ಉತ್ಪನ್ನಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುತ್ತಿದೆ. ಸರ್ಕಾರದ ಈ ಆಕ್ರಮಣಕಾರಿ ನಿರ್ಧಾರವು ವಿಶ್ವದ ನಂ.1 ಕಾಂಡೋಮ್ ಬ್ರ್ಯಾಂಡ್ 'ಡ್ಯುರೆಕ್ಸ್'ಗೆ ಚೀನಾ ಮಾರುಕಟ್ಟೆಯಲ್ಲಿ ಭಾರೀ ಆಘಾತ ನೀಡಿದೆ.&lt;/p&gt;&lt;h3&gt;&lt;strong&gt;ಡ್ಯುರೆಕ್ಸ್ ಮಾರಾಟದಲ್ಲಿ ದಿಢೀರ್ ಕುಸಿತ&lt;/strong&gt;&lt;/h3&gt;&lt;p&gt;ಬ್ರಿಟಿಷ್ ಮೂಲದ ಕಂಪನಿ ರೆಕಿಟ್ ಬೆನ್&zwnj;ಕೀಸರ್&zwnj;ನ ಪ್ರಮುಖ ಉತ್ಪನ್ನವಾದ ಡ್ಯುರೆಕ್ಸ್, ಚೀನಾದಲ್ಲಿ ದಶಕಗಳಿಂದ ಏಕಸ್ವಾಮ್ಯ ಹೊಂದಿತ್ತು. ಆದರೆ, ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾದಲ್ಲಿ ಡ್ಯುರೆಕ್ಸ್ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಇದೇ ಮಾರುಕಟ್ಟೆಯಲ್ಲಿ ಶೇ. 40ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದ್ದ ಕಂಪನಿಗೆ ಇದು ದೊಡ್ಡ ಹಿನ್ನಡೆಯಾಗಿದೆ.&lt;/p&gt;&lt;h2&gt;&lt;strong&gt;ಮಕ್ಕಳನ್ನು ಪಡೆಯಲು ಸರ್ಕಾರದ ಆಫರ್!&lt;/strong&gt;&lt;/h2&gt;&lt;p&gt;ಕಳೆದ ವರ್ಷ ಚೀನಾದಲ್ಲಿ ಕೇವಲ 79.2 ಲಕ್ಷ ಮಕ್ಕಳು ಮಾತ್ರ ಜನಿಸಿದ್ದಾರೆ. ಇದು 2015ರ ಅಂಕಿಅಂಶಗಳಿಗೆ ಹೋಲಿಸಿದರೆ ಅರ್ಧಕ್ಕಿಂತಲೂ ಕಡಿಮೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, 2016ರಲ್ಲಿ ದಶಕಗಳ ಕಾಲ ಜಾರಿಯಲ್ಲಿದ್ದ 'ಒಂದೇ ಮಗು' ನೀತಿಯನ್ನು ಕೈಬಿಟ್ಟು ಈಗ 'ಮೂರು ಮಕ್ಕಳನ್ನು ಹೊಂದಬಹುದು' ಎಂಬ ಹೊಸ ಕಾನೂನು ತಂದಿದೆ. ಅಷ್ಟೇ ಅಲ್ಲದೆ, ಮೂರು ವರ್ಷದೊಳಗಿನ ಪ್ರತಿ ಮಗುವಿಗೆ ವಾರ್ಷಿಕ 3,600 ಯುವಾನ್ ಸಬ್ಸಿಡಿ ನೀಡುವ ಮೂಲಕ ಜನರನ್ನು ಮಕ್ಕಳನ್ನು ಪಡೆಯಲು ಉತ್ತೇಜಿಸುತ್ತಿದೆ.&lt;/p&gt;&lt;h3&gt;&lt;strong&gt;ತೆರಿಗೆ ಏರಿಕೆ ಮತ್ತು ಜಾಹೀರಾತು ನಿಷೇಧದ ಬಿಸಿ&lt;/strong&gt;&lt;/h3&gt;&lt;p&gt;ಜನನ ದರ ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಕಾಂಡೋಮ್&zwnj;ಗಳ ಮೇಲೆ ನೀಡಲಾಗುತ್ತಿದ್ದ ರಿಯಾಯಿತಿಗಳನ್ನು ಹಿಂಪಡೆದಿದೆ. 1993ರಿಂದ ಕಾಂಡೋಮ್&zwnj;ಗಳಿಗೆ ನೀಡಲಾಗುತ್ತಿದ್ದ ಮೌಲ್ಯವರ್ಧಿತ ತೆರಿಗೆ (VAT) ವಿನಾಯಿತಿಯನ್ನು ಈ ವರ್ಷದ ಜನವರಿಯಿಂದ ರದ್ದುಗೊಳಿಸಲಾಗಿದೆ. ಪ್ರಸ್ತುತ, ಈ ಉತ್ಪನ್ನಗಳ ಮೇಲೆ ಶೇ. 13ರಷ್ಟು ವ್ಯಾಟ್ ವಿಧಿಸಲಾಗುತ್ತಿದ್ದು, ಇದರಿಂದ ಬೆಲೆ ಹೆಚ್ಚಾಗಿ ಮಾರಾಟ ಕುಸಿದಿದೆ.&lt;/p&gt;&lt;p&gt;ಇದಲ್ಲದೆ, ಆನ್&zwnj;ಲೈನ್ ಜಾಹೀರಾತುಗಳ ಮೇಲೆ ಚೀನಾ ಸರ್ಕಾರ ಕಠಿಣ ಚಾಟಿ ಬೀಸಿದೆ. ಚೀನಾದ ಜನಪ್ರಿಯ ವಿಡಿಯೋ ಪ್ಲಾಟ್&zwnj;ಫಾರ್ಮ್ 'ಡೊಯಿನ್' (Douyin), ಕಾಂಡೋಮ್&zwnj;ಗಳ ಲೈವ್ ಕಾಮರ್ಸ್ ಮಾರಾಟವನ್ನು ಬಹುತೇಕ ನಿಷೇಧಿಸಿದೆ. ಲೈವ್ ವಿಡಿಯೋಗಳಲ್ಲಿ ಉತ್ಪನ್ನ ಪ್ರದರ್ಶಿಸುವುದು ಅಥವಾ ಆಕರ್ಷಕ ಸ್ಲೋಗನ್&zwnj;ಗಳ ಮೂಲಕ ಗ್ರಾಹಕರನ್ನು ಸೆಳೆಯುವುದಕ್ಕೆ ಅಧಿಕಾರಿಗಳು ಬೀಗ ಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಕಂಪನಿಯ ಪ್ರತಿಕ್ರಿಯೆ:&lt;/strong&gt;&lt;/h2&gt;&lt;p&gt;&lsquo;ಚೀನಾ ಮಾರುಕಟ್ಟೆಯಲ್ಲಿ ಮಾರಾಟವು ನಿರೀಕ್ಷೆಗಿಂತ ಕಳಪೆಯಾಗಿದೆ&rsquo; ಎಂದು ರೆಕಿಟ್ ಬೆನ್&zwnj;ಕೀಸರ್ ಕಂಪನಿಯ ಸಿಇಒ ಕ್ರಿಸ್ ಲಿಕ್ಟ್ ಒಪ್ಪಿಕೊಂಡಿದ್ದಾರೆ. ಹೊಸ ತೆರಿಗೆ ನೀತಿ ಮತ್ತು ಜಾಹೀರಾತು ನಿರ್ಬಂಧಗಳೇ ಈ ಹಿನ್ನಡೆಗೆ ಪ್ರಮುಖ ಕಾರಣ ಎಂದು ಅವರು ತಿಳಿಸಿದ್ದಾರೆ. ಆದರೂ, ಬ್ರ್ಯಾಂಡ್ ಮೇಲಿನ ಬೇಡಿಕೆ ಸಂಪೂರ್ಣವಾಗಿ ಕುಸಿದಿಲ್ಲ, ಇದೊಂದು ತಾತ್ಕಾಲಿಕ ಹಿನ್ನಡೆ ಎಂದು ಕಂಪನಿ ಆಶಾವಾದ ವ್ಯಕ್ತಪಡಿಸಿದೆ.&amp;nbsp;&lt;/p&gt;&lt;p&gt;ಒಟ್ಟಾರೆಯಾಗಿ, ಚೀನಾದ ಜನಸಂಖ್ಯಾ ಸಮತೋಲನ ಕಾಪಾಡುವ ಸರ್ಕಾರದ ಪ್ರಯತ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಸ್ಥಿತ್ಯಂತರಕ್ಕೆ ಕಾರಣವಾಗುತ್ತಿವೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/china-baby-boom-policy-hits-durex-sales-plunge-as-government-imposes-strict-rules-on-condoms-sat/articleshow-g7z4lpm"/>
        </item>
        <item>
            <title><![CDATA[ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್]]></title>
            <link>https://kannada.asianetnews.com/state/dk-shivakumar-political-journey-how-determination-turned-dreams-into-reality-videoshow-cv5k55m</link>
            <guid isPermaLink="true">https://kannada.asianetnews.com/state/dk-shivakumar-political-journey-how-determination-turned-dreams-into-reality-videoshow-cv5k55m</guid>
            <pubDate>Mon, 01 Jun 2026 16:22:03 +0530</pubDate>
            <description><![CDATA[&lt;p&gt;ಕನಕಪುರದಿಂದ ಬೆಂಗಳೂರಿಗೆ ಹೊರಟು ನಿಂತ ಆ ಹುಡುಗನ ಕಣ್ಣುಗಳಲ್ಲಿ ಅದೇನೋ ಮಿಂಚು.. ಜಗತ್ತೇ ಎದುರಾಗಿ ನಿಂತ್ರೂ ಎದುರಿಸಬಲ್ಲೆ ಅನ್ನೋ ಆತ್ಮವಿಶ್ವಾಸ.. ಊರು ಬಿಟ್ಟು ಹೊರಟವನಿಗೆ ತಾಯಿ ಒಂದು ಆಶೀರ್ವಾದ ಮಾಡಿ ಕಳುಹಿಸ್ತಾರೆ..&lt;/p&gt;]]></description>
            <media:content url="https://geo.dailymotion.com/player/x1tbu.html?video=xaci198" medium="video" height="768" width="1024"/>
            <content:encoded><![CDATA[&lt;p&gt;ಡಿಕೆ ಶಿವಕುಮಾರ್ ಅನ್ನೋದು ರಾಜ್ಯ ಕಾಂಗ್ರೆಸ್ ಪಾಲಿಗೆ ಆನೆಬಲ, ಭೀಮಬಲ.. ಒಬ್ಬ ಸಾಮಾನ್ಯ ಕಾರ್ಯಕರ್ತ.. ಪಕ್ಷದ ಧ್ವಜ ಹಿಡಿದು ನಿಂತ ಕಾರ್ಯಕರ್ತನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗ್ತಾನೆ ಅಂದ್ರೆ, ಅದು ಕಾರ್ಯಕರ್ತನ ಗೆಲುವು.45 ವರ್ಷಗಳ ರಾಜಕಾರಣ.. ಜಿದ್ದಾಜಿದ್ದಿ, ಸೋಲು-ಗೆಲುವು, ಏಳು-ಬೀಳು.. ಎದ್ದು ಬಿದ್ದು, ಬಿದ್ದು ಎದ್ದು.. ಮೇಲೆದ್ದು ನಿಂತ ಡಿಕೆ, ಈಗ ರಾಜ್ಯದ ಮುಖ್ಯಮಂತ್ರಿ.. ಈ ಪ್ರಯಾಣ ಶುರುವಾಗಿದ್ದು ಇದು ಶುರುವಾಗಿದ್ದು 48 ವರ್ಷಗಳ ಹಿಂದೆ.. ಆ ದಿನ ದೊಡ್ಡಾಲಹಳ್ಳಿಯಿಂದ ಹೊರಟು ನಿಂತಿದ್ದ ಆ ಹುಡುಗ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/dk-shivakumar-political-journey-how-determination-turned-dreams-into-reality-videoshow-cv5k55m"/>
        </item>
    </channel>
</rss>
