<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 11 May 2026 20:42:58 +0530</lastBuildDate>
        <atom:link href="https://kannada.asianetnews.com/rss/news" rel="self" type="application/rss+xml"/>
        <item>
            <title><![CDATA[ಇಂದಿನ ತ್ಯಾಗ - ನಾಳಿನ ಸುಭದ್ರ ಭಾರತ: ದೇಶಕ್ಕೆ ಮೋದಿ ಕರೆ]]></title>
            <link>https://kannada.asianetnews.com/india-news/pm-modi-warning-on-petrol-gold-cooking-oil-price-hike-gvd/articleshow-1mtlgmt</link>
            <guid isPermaLink="true">https://kannada.asianetnews.com/india-news/pm-modi-warning-on-petrol-gold-cooking-oil-price-hike-gvd/articleshow-1mtlgmt</guid>
            <pubDate>Mon, 11 May 2026 20:42:53 +0530</pubDate>
            <description><![CDATA[&lt;p&gt;ಮೇ 10ರ ಭಾನುವಾರದಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೈದರಾಬಾದಿನಲ್ಲಿ ಒಂದು ವಿಭಿನ್ನವಾದ ಹೇಳಿಕೆ ನೀಡಿದರು. ಮೋದಿಯವರ ಹೇಳಿಕೆ ಬಹುಮಟ್ಟಿಗೆ ಕೋವಿಡ್ ಲಾಕ್&zwnj;ಡೌನ್ ದಿನಗಳನ್ನು ನೆನಪಿಸಿದವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krbshr4jz2j04v25w7kcb1xc,imgname-kbk-1778512355474.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)&lt;/strong&gt;&lt;/p&gt;&lt;p&gt;ಮೇ 10ರ ಭಾನುವಾರದಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೈದರಾಬಾದಿನಲ್ಲಿ ಒಂದು ವಿಭಿನ್ನವಾದ ಹೇಳಿಕೆ ನೀಡಿದರು. ಮೋದಿಯವರ ಹೇಳಿಕೆ ಬಹುಮಟ್ಟಿಗೆ ಕೋವಿಡ್ ಲಾಕ್&zwnj;ಡೌನ್ ದಿನಗಳನ್ನು ನೆನಪಿಸಿದವು. ತೆಲಂಗಾಣದಲ್ಲಿ 9,400 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಆರಂಭಿಸುವ ಸಂದರ್ಭದಲ್ಲಿ, ಪ್ರಧಾನಿ ಪ್ರತಿಯೊಬ್ಬ ಭಾರತೀಯನಿಗೂ ಇಂಧನ ಬಳಕೆ, ಚಿನ್ನ ಖರೀದಿ, ಅಡುಗೆ ತೈಲ ಮತ್ತು ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಕನಿಷ್ಠ ಮುಂದಿನ ಒಂದು ವರ್ಷದ ಅವಧಿಗೆ ಕಡಿಮೆಗೊಳಿಸುವಂತೆ ಕರೆ ನೀಡಿದರು.&lt;/p&gt;&lt;p&gt;ಕಳೆದ 70ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಅಮೆರಿಕ - ಇರಾನ್ ಯುದ್ಧ ಜಾಗತಿಕ ಪೂರೈಕೆ ಸರಪಳಿಯ ಮೇಲೆ ಗಂಭೀರ ದುಷ್ಪರಿಣಾಮ ಬೀರಿರುವುದು ಇದಕ್ಕೆ ಕಾರಣವಾಗಿದೆ. ದೇಶಪ್ರೇಮ ಎನ್ನುವುದು ದೇಶಕ್ಕಾಗಿ ಪ್ರಾಣ ಅರ್ಪಿಸುವುದು ಮಾತ್ರವಲ್ಲ, ಬದಲಿಗೆ ಕಷ್ಟಕರ ಸಂದರ್ಭಗಳಲ್ಲಿ ಜವಾಬ್ದಾರಿಯುತವಾಗಿ ಜೀವಿಸುವುದೂ ಹೌದು ಎಂದು ಪ್ರಧಾನಿ ಸಂದೇಶ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಇಂಧನ ಯಾಕೆ ಮುಖ್ಯ?&lt;/strong&gt;&lt;/p&gt;&lt;p&gt;ಭಾರತದ ಬಳಿ ತನ್ನ ಯಾವುದೇ ದೊಡ್ಡ ತೈಲ ನಿಕ್ಷೇಪವಿಲ್ಲ. ನಾವು 88%ಕ್ಕಿಂತಲೂ ಹೆಚ್ಚಿನ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತೇವೆ. ಯುದ್ಧದ ಪರಿಣಾಮವಾಗಿ, ಜಗತ್ತಿನ ಬಹುತೇಕ 20% ಕಚ್ಚಾ ತೈಲವನ್ನು ಸಾಗಿಸುವ ಪ್ರಮುಖ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿ ಎರಡು ತಿಂಗಳ ಅವಧಿಯಿಂದ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ, ಯುದ್ದಕ್ಕೆ ಮುನ್ನ ಪ್ರತಿ ಬ್ಯಾರಲ್&zwnj;ಗೆ 70 ಡಾಲರ್ ಬೆಲೆ ಹೊಂದಿದ್ದ ಜಾಗತಿಕ ತೈಲ ದರ ಈಗ 126 ಡಾಲರ್ ತಲುಪಿದೆ.&lt;/p&gt;&lt;p&gt;ಸಾರ್ವಜನಿಕರನ್ನು ಬೆಲೆ ಏರಿಕೆಯ ಬಿಸಿಯಿಂದ ರಕ್ಷಿಸುವ ಸಲುವಾಗಿ, ಇಂಡಿಯನ್ ಆಯಿಲ್, ಬಿಪಿಸಿಎಲ್, ಮತ್ತು ಎಚ್&zwnj;ಪಿಸಿಎಲ್&zwnj;ನಂತಹ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳೂ ಬಹುತೇಕ 30,000 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಸಹಿಸಿಕೊಳ್ಳುತ್ತಿವೆ. ಭಾರತ ಪ್ರತಿದಿನವೂ 1,600ರಿಂದ 1,700 ಕೋಟಿ ರೂಪಾಯಿಗಳನ್ನು ಪ್ರತಿದಿನವೂ ವೆಚ್ಚ ಮಾಡುತ್ತಿದ್ದು, ಜನ ಸಾಮಾನ್ಯರ ಮೇಲೆ ಹೊರೆಯಾಗದಂತೆ ತಡೆಯುತ್ತಿದೆ. ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 24 ರೂಪಾಯಿ ಮತ್ತು ಡೀಸೆಲ್ ಮೇಲೆ 30 ರೂಪಾಯಿ ಭರಿಸುತ್ತಿದೆ.&lt;/p&gt;&lt;p&gt;ಆದ್ದರಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರೂ ಮೆಟ್ರೋ ರೈಲುಗಳನ್ನು ಬಳಸಿ, ಕಾರ್ ಪೂಲಿಂಗ್ ನಡೆಸಿ, ವಿದ್ಯುತ್ ಚಾಲಿತ ವಾಹನಗಳನ್ನು ಬಳಸಿ, ಮನೆಯಿಂದಲೇ ಕೆಲಸ ಮಾಡಿ, ಆನ್&zwnj;ಲೈನ್ ಮೀಟಿಂಗ್ ಮತ್ತು ವೀಡಿಯೋ ಕಾನ್ಫರೆನ್ಸ್ ನಡೆಸಿ ಎಂದು ಕರೆ ನೀಡಿದ್ದು, ಇದು ಕೋವಿಡ್ ಅವಧಿಯನ್ನು ನೆನಪಿಸುತ್ತಿದೆ. ಥೈಲ್ಯಾಂಡ್, ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶಗಳು ಈಗಾಗಲೇ ಇಂತಹ ಕ್ರಮಗಳನ್ನು ಕೈಗೊಂಡಿವೆ. ಇಷ್ಟಾದರೂ, ಮೇ 15ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 4-5 ರೂಪಾಯಿ, ಎಲ್&zwnj;ಪಿಜಿ ಸಿಲಿಂಡರ್ 40-50 ರೂಪಾಯಿ ಹೆಚ್ಚಾಗಬಹುದು ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಚಿನ್ನದ ಕಥೆ&lt;/strong&gt;&lt;/p&gt;&lt;p&gt;ಭಾರತ ಜಗತ್ತಿನಲ್ಲೇ ಚಿನ್ನವನ್ನು ಅತ್ಯಂತ ಹೆಚ್ಚು ಇಷ್ಟಪಡುವ ದೇಶ. ನಾವು ಪ್ರತಿವರ್ಷವೂ 700-800 ಟನ್ ಚಿನ್ನ ಬಳಸುತ್ತೇವೆ. ಆದರೆ, ಭಾರತದಲ್ಲಿ ಉತ್ಪಾದನೆಯಾಗುವುದು ಕೇವಲ 1-2 ಟನ್&zwnj;ಗಳಷ್ಟು ಚಿನ್ನ ಮಾತ್ರ. ಮಿಕ್ಕುಳಿದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಕೇವಲ ಕಳೆದ ಒಂದು ವರ್ಷದಲ್ಲಿ, ಭಾರತ ಚಿನ್ನದ ಆಮದಿಗೆ ಬಹುತೇಕ 72 ಬಿಲಿಯನ್ ಡಾಲರ್ (ಅಂದಾಜು 6.7 ಲಕ್ಷ ಕೋಟಿ ರೂಪಾಯಿ) ವೆಚ್ಚ ಮಾಡಿದ್ದು, ಇದು ಪ್ರತಿ ತಿಂಗಳು 55,800 ಕೋಟಿ ರೂಪಾಯಿಯಷ್ಟಿತ್ತು. ಕುಟುಂಬಗಳು ಮದುವೆಗಾಗಿ ಆಮದು ಚಿನ್ನವನ್ನು ಖರೀದಿಸಿದಾಗ, ಡಾಲರ್ ಭಾರತದಿಂದ ಹೊರಹೋಗಿ, ರೂಪಾಯಿ ದುರ್ಬಲವಾಗಿ, ಚಿನ್ನ ಇನ್ನಷ್ಟು ದುಬಾರಿಯಾಗುತ್ತದೆ.&lt;/p&gt;&lt;p&gt;ಇದೊಂದು ವಿಷಮ ಚಕ್ರದಂತೆ ಮುಂದುವರಿಯುತ್ತದೆ. ಹೆಚ್ಚಿನ ಬೆಲೆಯ ಕಾರಣದಿಂದಾಗಿ ಚಿನ್ನದ ಆಮದು ಈಗಾಗಲೇ ಕಡಿಮೆಯಾಗಿದ್ದು, ಜನವರಿ 2026ರಲ್ಲಿ ಬಹುತೇಕ 100 ಟನ್&zwnj;ಗಳಿಂದ ಎಪ್ರಿಲ್ 2026ರಲ್ಲಿ ಕೇವಲ 15 ಟನ್&zwnj;ಗಳಿಗೆ ಇಳಿಕೆ ಕಂಡಿದ್ದು, ಕಳೆದ 30 ವರ್ಷಗಳಲ್ಲಿ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ. ಆದ್ದರಿಂದಲೇ ಪ್ರಧಾನಿ ಒಂದು ವರ್ಷ ಕಾಲ ಚಿನ್ನ ಖರೀದಿ ನಡೆಸದಂತೆ ಕರೆ ನೀಡಿದ್ದಾರೆ. ಚಿನ್ನ ಖರೀದಿಯನ್ನು ನಿರುತ್ತೇಜಿಸಲು ಸರ್ಕಾರ ಈಗಾಗಲೇ ಇರುವ 6% ಆಮದು ದರವನ್ನು ಇನ್ನಷ್ಟು ಹೆಚ್ಚಿಸಬಹುದು. ಯಾವಾಗ ಆರ್&zwnj;ಬಿಐ ರಾಷ್ಟ್ರೀಯ ನಿಧಿಗಾಗಿ ಚಿನ್ನವನ್ನು ಖರೀದಿಸುತ್ತದೋ (ಈಗ 880 ಟನ್, ವಿದೇಶೀ ವಿನಿಮಯದ 16.7%), ಅದು ದೇಶವನ್ನು ಭದ್ರಪಡಿಸುತ್ತದೆ. ಆದರೆ, ಜನಸಾಮಾನ್ಯರು ಆಮದು ಚಿನ್ನವನ್ನು ಖರೀದಿಸುವಾಗ, ಡಾಲರ್ ಹೊರಹೋಗಿ, ರುಪಾಯಿ ದುರ್ಬಲಗೊಳ್ಳುತ್ತದೆ.&lt;/p&gt;&lt;p&gt;&lt;strong&gt;ಖಾದ್ಯ ತೈಲ - ಪ್ರತಿದಿನದ ಹೊರೆ&lt;/strong&gt;&lt;/p&gt;&lt;p&gt;ಅಡುಗೆ ಎಣ್ಣೆ ಭಾರತದ ಪ್ರತಿ ಅಡುಗೆಮನೆಗೂ ಪ್ರತಿದಿನವೂ ಬೇಕಾಗುತ್ತದೆ. ಭಾರತ ಪಾಮ್ ಎಣ್ಣೆಯನ್ನು ಇಂಡೋನೇಷ್ಯಾ ಮತ್ತು ಮಲೇಷ್ಯಾಗಳಿಂದ ಆಮದು ಮಾಡಿಕೊಂಡರೆ, ಸೂರ್ಯಕಾಂತಿ ಎಣ್ಣೆಯನ್ನು ರಷ್ಯಾ ಮತ್ತು ಉಕ್ರೇನಿನಿಂದ ಖರೀದಿಸುತ್ತದೆ. ಚಿನ್ನ ಅಥವಾ ಪೆಟ್ರೋಲಿನಂತೆ ಅಡುಗೆ ಎಣ್ಣೆ ಖರೀದಿಯನ್ನು ಮುಂದೂಡಲು ಅಥವಾ ತಪ್ಪಿಸಲು ಸಾಧ್ಯವಿಲ್ಲ. ಪ್ರತಿಯೊಂದು ಕುಟುಂಬವೂ 10% ಅಡುಗೆ ಎಣ್ಣೆಯನ್ನು ಕಡಿಮೆಗೊಳಿಸಿದರೆ, ಬಹುದೊಡ್ಡ ವಿದೇಶೀ ವಿನಿಮಯ ಉಳಿಯುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಇದನ್ನು ದುಪ್ಪಟ್ಟು ದೇಶಪ್ರೇಮ ಎಂದು ಪ್ರಧಾನಿ ಕರೆದಿದ್ದು, ಕಡಿಮೆ ತೈಲದ ಆಹಾರದಿಂದ ಬೊಜ್ಜು ಬೆಳೆಯುವುದು ಮತ್ತು ಆರೋಗ್ಯ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದಾರೆ. ಇದು ಕುಟುಂಬದ ಆರೋಗ್ಯ ವೃದ್ಧಿಸಿ ಮತ್ತು ದೇಶದ ವೆಚ್ಚವನ್ನೂ ಕಡಿಮೆಗೊಳಿಸುತ್ತದೆ.&lt;/p&gt;&lt;p&gt;&lt;strong&gt;ರಸಗೊಬ್ಬರ ಮತ್ತು ಕೃಷಿ&lt;/strong&gt;&lt;/p&gt;&lt;p&gt;ಕೃಷಿ ಕ್ಷೇತ್ರದಲ್ಲಿ ಭಾರತ ಅಪಾರ ಹಣ ಖರ್ಚು ಮಾಡುತ್ತದೆ. ಭಾರತ ಅಪಾರ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತದೆ. ಪ್ರಧಾನಿ ಮೋದಿ ರೈತರಿಗೆ 20ರಿಂದ 50% ರಸಗೊಬ್ಬರ ಬಳಕೆಯನ್ನು ಕಡಿಮೆಗೊಳಿಸುವಂತೆ ಕರೆ ನೀಡಿದ್ದು, ನೈಸರ್ಗಿಕ ಮತ್ತು ಸಾವಯವ ಕೃಷಿ ಮಾಡುವಂತೆ ಕರೆ ನೀಡಿದ್ದಾರೆ. ಇದು ವಿದೇಶೀ ವಿನಿಮಯವನ್ನು ಉಳಿಸಿ, ಮಣ್ಣಿನ ಆರೋಗ್ಯ ರಕ್ಷಿಸಿ, ಪರಿಸರವನ್ನು ಮುಂದಿನ ತಲೆಮಾರುಗಳಿಗೆ ಉಳಿಸುತ್ತದೆ.&lt;/p&gt;&lt;h2&gt;&lt;strong&gt;ದೊಡ್ಡ ಚಿತ್ರಣ&lt;/strong&gt;&lt;/h2&gt;&lt;p&gt;ಇಲ್ಲೊಂದು ಒಳ್ಳೆಯ ಸುದ್ದಿ ಎಂದರೆ, ಭಾರತದ ವಿದೇಶೀ ವಿನಿಮಯ ಪ್ರಮಾಣ ಮಾರ್ಚ್ 2026ರ ವೇಳೆಗೆ 691.11 ಬಿಲಿಯನ್ ಡಾಲರ್ (ಅಂದಾಜು 64.27 ಲಕ್ಷ ಕೋಟಿ ರೂಪಾಯಿ) ಇದ್ದು, ಇದು 11 ತಿಂಗಳ ಆಮದಿಗೆ ಸಾಕಾಗುವಷ್ಟಿತ್ತು. ಆದರೆ, ಭಾರತಕ್ಕೆ ಒತ್ತಡ ಹೆಚ್ಚಾಗುತ್ತಿದ್ದು, ಕಳೆದ 10 ವಾರಗಳಲ್ಲಿ ಆಮದು ದುಬಾರಿಯಾಗಿ, ರೂಪಾಯಿ ಮೌಲ್ಯ ಕಡಿಮೆಯಾಗಿರುವುದರಿಂದ ಬಹುತೇಕ 1 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಿದೆ. ಸರ್ಕಾರ ವ್ಯಾಸಂಗ, ಪ್ರವಾಸ, ಅಥವಾ ಆಸ್ತಿಗಾಗಿ ಭಾರತೀಯರು ಪ್ರತಿ ವರ್ಷವೂ ವಿದೇಶಕ್ಕೆ 2,50,000 ಡಾಲರ್ (ಅಂದಾಜು 2.32 ಕೋಟಿ ರೂಪಾಯಿ) ಕಳುಹಿಸಲು ಇರುವ ಅನುಮತಿಯನ್ನು ಬಿಗಿಗೊಳಿಸುವ ಸಾಧ್ಯತೆಗಳಿವೆ. ಪ್ರಧಾನಿ ನರೇಂದ್ರ ಮೋದಿಯವರ ಸಂದೇಶ ಸ್ಪಷ್ಟ ಮತ್ತು ಸರಳವಾಗಿದೆ. ಈಗ ನಾವು ಜಾಗರೂಕವಾಗಿ ಜೀವಿಸಿ, ಬುದ್ಧಿವಂತಿಕೆಯಿಂದ ವೆಚ್ಚ ಮಾಡಿ, ಭಾರತೀಯ ನಿರ್ಮಾಣದ ವಸ್ತುಗಳನ್ನು ಆಯ್ಕೆ ಮಾಡುವ ಸಮಯ ಬಂದಿದೆ. ನಾವೆಲ್ಲರೂ ಒಂದೇ ದೇಶವಾಗಿ ನಿಲ್ಲಬೇಕಿದೆ. ಇಂದು ನಡೆಸುವ ಸಣ್ಣಪುಟ್ಟ ತ್ಯಾಗಗಳು ಭಾರತವನ್ನು ನಾಳೆ ಭದ್ರವಾಗಿಸಲಿವೆ.&lt;/p&gt;&lt;p&gt;(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)&lt;/p&gt;]]></content:encoded>
            <category>news</category>
            <dc:creator>Girish Linganna</dc:creator>
            <atom:link href="https://kannada.asianetnews.com/india-news/pm-modi-warning-on-petrol-gold-cooking-oil-price-hike-gvd/articleshow-1mtlgmt"/>
        </item>
        <item>
            <title><![CDATA[ಬೆಂಗಳೂರು ಉದ್ಯಮಿಗೆ ಪಂಗನಾಮ ಹಾಕಿದ ವಾಟ್ಸಾಪ್ ಮದುವೆ ಆಮಂತ್ರಣ; ಡೌನ್‌ಲೋಡ್ ಮಾಡಿದ 9 ನಿಮಿಷಕ್ಕೆ ₹5 ಲಕ್ಷ ಮಂಗಮಾಯ!]]></title>
            <link>https://kannada.asianetnews.com/state/bengaluru-businessman-loses-rs-5-lakh-after-clicking-whatsapp-wedding-invite-beware-apk-files-sat/articleshow-s39hrzs</link>
            <guid isPermaLink="true">https://kannada.asianetnews.com/state/bengaluru-businessman-loses-rs-5-lakh-after-clicking-whatsapp-wedding-invite-beware-apk-files-sat/articleshow-s39hrzs</guid>
            <pubDate>Mon, 11 May 2026 20:32:19 +0530</pubDate>
            <description><![CDATA[ಬೆಂಗಳೂರಿನ ಉದ್ಯಮಿಯೊಬ್ಬರು ವಾಟ್ಸಾಪ್&zwnj;ನಲ್ಲಿ ಬಂದ ನಕಲಿ ಮದುವೆ ಆಮಂತ್ರಣದ APK ಫೈಲ್ ಡೌನ್&zwnj;ಲೋಡ್ ಮಾಡಿ, ಕೇವಲ 9 ನಿಮಿಷಗಳಲ್ಲಿ 5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆಯು ಅಪರಿಚಿತ ಲಿಂಕ್&zwnj;ಗಳು ಮತ್ತು APK ಫೈಲ್&zwnj;ಗಳಿಂದಾಗುವ ಸೈಬರ್ ವಂಚನೆಯ ಗಂಭೀರ ಅಪಾಯವನ್ನು ಎತ್ತಿ ತೋರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krbrj8x5c9p7f6ttrrek98dc,imgname-bengaluru-wedding-card-cyber-scam-1778511324067.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 11): &lt;/strong&gt;ನೀವು ವಾಟ್ಸಾಪ್&zwnj;ನಲ್ಲಿ ಅಪರಿಚಿತರಿಂದ ಬರುವ ಮದುವೆ ಆಮಂತ್ರಣ ಪತ್ರಗಳನ್ನು ಕುತೂಹಲದಿಂದ ಅಥವಾ ಆತುರದಿಂದ ಡೌನ್&zwnj;ಲೋಡ್ ಮಾಡುತ್ತೀರಾ? ಹಾಗಿದ್ದರೆ ಎಚ್ಚರ! ಬೆಂಗಳೂರಿನ ಉದ್ಯಮಿಯೊಬ್ಬರು ಕೇವಲ ಒಂದು 'ವೆಡ್ಡಿಂಗ್ ಕಾರ್ಡ್' ಲಿಂಕ್ ಕ್ಲಿಕ್ ಮಾಡಿ ಬರೋಬ್ಬರಿ 5 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಬೆಂಗಳೂರಿನ 42 ವರ್ಷದ ಉದ್ಯಮಿ ನೂರ್ ನಹೀದ್ ಖಾನ್ ಅವರಿಗೆ ವಾಟ್ಸಾಪ್&zwnj;ನಲ್ಲಿ ಒಂದು ಸಂದೇಶ ಬಂದಿತ್ತು. ಆ ಸಂದೇಶದಲ್ಲಿ, 'ನಮ್ಮ ಮದುವೆಗೆ ನಿಮ್ಮನ್ನು ಆಹ್ವಾನಿಸಲು ನಮಗೆ ಸಂತೋಷವಾಗಿದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಲಗತ್ತಿಸಲಾದ ಆಮಂತ್ರಣ ಪತ್ರವನ್ನು ಡೌನ್&zwnj;ಲೋಡ್ ಮಾಡಿ. ನಿಮ್ಮ ಉಪಸ್ಥಿತಿ ನಮಗೆ ಮುಖ್ಯ' ಎಂಬ ಬರಹಗಳೊಂದಿಗೆ ಹೂವಿನ ಎಮೋಜಿಗಳಿದ್ದವು. ಇದನ್ನು ನಿಜವಾದ ಆಮಂತ್ರಣ ಎಂದು ನಂಬಿದ ಖಾನ್, ಅದರ ಕೆಳಗಿದ್ದ APK ಫೈಲ್ (APK File) ಅನ್ನು ಡೌನ್&zwnj;ಲೋಡ್ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಕ್ಷಣಾರ್ಧದಲ್ಲಿ ಖಾಲಿಯಾಯಿತು ಬ್ಯಾಂಕ್ ಖಾತೆ:&lt;/strong&gt;&lt;/h2&gt;&lt;p&gt;ಖಾನ್ ಅವರು ಆ ಫೈಲ್ ಡೌನ್&zwnj;ಲೋಡ್ ಮಾಡಿದ ಕೂಡಲೇ ವಂಚಕರಿಗೆ ಖಾನ್ ಅವರ ಮೊಬೈಲ್&zwnj;ನ ಸಂಪೂರ್ಣ ನಿಯಂತ್ರಣ ಸಿಕ್ಕಿದೆ. ಏಪ್ರಿಲ್ 16 ರಂದು ಬೆಳಗಿನ ಜಾವ 4:45 ರಿಂದ 4:54 ರ ನಡುವೆ, ಅಂದರೆ ಕೇವಲ 9 ನಿಮಿಷಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ವಿವಿಧ ಯುಪಿಐ (UPI) ವಹಿವಾಟುಗಳ ಮೂಲಕ ಒಟ್ಟು 5,00,440 ರೂಪಾಯಿ ಹಣವನ್ನು ಲೂಟಿ ಮಾಡಲಾಗಿದೆ.&lt;/p&gt;&lt;h2&gt;&lt;strong&gt;APK ಫೈಲ್ ಮೂಲಕ ವಂಚನೆ ಹೇಗೆ?&lt;/strong&gt;&lt;/h2&gt;&lt;p&gt;ಪೊಲೀಸರ ತನಿಖೆಯ ಪ್ರಕಾರ, ವಂಚಕರು ಕಳುಹಿಸಿದ್ದು ಮದುವೆ ಕಾರ್ಡ್ ಅಲ್ಲ, ಬದಲಿಗೆ ಅದೊಂದು ಮಾಲ್ವೇರ್ ತುಂಬಿದ 'ಎಪಿಕೆ' (APK) ಫೈಲ್ ಆಗಿತ್ತು. ಇದನ್ನು ಇನ್&zwnj;ಸ್ಟಾಲ್ ಮಾಡಿದ ಕೂಡಲೇ ಮೊಬೈಲ್&zwnj;ನಲ್ಲಿರುವ ಗೂಗಲ್ ಪೇ, ಫೋನ್ ಪೇ, ಬ್ಯಾಂಕಿಂಗ್ ಆಪ್&zwnj;ಗಳು, ಕ್ಯಾಮೆರಾ ಮತ್ತು ರಹಸ್ಯ ಮಾಹಿತಿಯನ್ನು ಪ್ರವೇಶಿಸಲು ವಂಚಕರಿಗೆ ಅನುಮತಿ ಸಿಗುತ್ತದೆ. ಬಳಕೆದಾರರಿಗೆ ತಿಳಿಯದಂತೆಯೇ ಅವರ ಫೋನ್&zwnj;ನಿಂದ ಹಣ ವರ್ಗಾವಣೆಯಾಗುತ್ತದೆ.&lt;/p&gt;&lt;h3&gt;&lt;strong&gt;ಪೊಲೀಸ್ ದೂರು ದಾಖಲು:&lt;/strong&gt;&lt;/h3&gt;&lt;p&gt;ಈ ಬಗ್ಗೆ ನೂರ್ ನಹೀದ್ ಖಾನ್ ದೂರು ನೀಡಿದ್ದು, ಸೈಬರ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಮತ್ತು ಭಾರತೀಯ ನ್ಯಾಯ ಸಂಹಿತೆಯಡಿ (BNS) ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಇನ್ನೂ ಅನೇಕ ಜನರಿಗೆ ಇದೇ ರೀತಿಯ ಸಂದೇಶಗಳು ರವಾನೆಯಾಗಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರಿಗೆ ಎಚ್ಚರಿಕೆ:&lt;/strong&gt;&lt;/h3&gt;&lt;p&gt;ಡಿಜಿಟಲ್ ಯುಗದಲ್ಲಿ 'ಎಪಿಕೆ' (APK) ಫೈಲ್ ಮತ್ತು ಇಮೇಜ್ (JPEG/PNG) ಫೈಲ್&zwnj;ಗಳ ನಡುವಿನ ವ್ಯತ್ಯಾಸ ತಿಳಿಯುವುದು ಬಹಳ ಮುಖ್ಯ. ಮದುವೆ ಆಮಂತ್ರಣಗಳು ಸಾಮಾನ್ಯವಾಗಿ ಫೋಟೋ, ವಿಡಿಯೋ ಅಥವಾ ಪಿಡಿಎಫ್ (PDF) ರೂಪದಲ್ಲಿರುತ್ತವೆ. ಆದರೆ, ಯಾರಾದರೂ 'APK' ಫೈಲ್ ಕಳುಹಿಸಿದರೆ ಅದನ್ನು ಅಪ್ಪಿತಪ್ಪಿಯೂ ಡೌನ್&zwnj;ಲೋಡ್ ಮಾಡಬೇಡಿ. ಅಪರಿಚಿತ ನಂಬರ್&zwnj;ಗಳಿಂದ ಬರುವ ಯಾವುದೇ ಲಿಂಕ್&zwnj;ಗಳನ್ನು ಕ್ಲಿಕ್ ಮಾಡುವ ಮುನ್ನ ಹತ್ತು ಬಾರಿ ಯೋಚಿಸಿ. ನಿಮ್ಮ ಒಂದು ಸಣ್ಣ ತಪ್ಪು ನಿಮ್ಮ ಜೀವನದ ಗಳಿಕೆಯನ್ನೇ ಬಲಿಪಡೆಯಬಹುದು.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-businessman-loses-rs-5-lakh-after-clicking-whatsapp-wedding-invite-beware-apk-files-sat/articleshow-s39hrzs"/>
        </item>
        <item>
            <title><![CDATA[ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗ: ಪ್ರಯಾಣಿಕರಿಗೆ ಮಹತ್ವದ ಸುದ್ದಿ, ರೈಲು ಸೇವೆಗಳ ಪರಿಷ್ಕರಣೆ]]></title>
            <link>https://kannada.asianetnews.com/karnataka-districts/mangaluru-subrahmanya-road-train-services-restored-revised-schedule-announced-gdp/articleshow-zeupcpr</link>
            <guid isPermaLink="true">https://kannada.asianetnews.com/karnataka-districts/mangaluru-subrahmanya-road-train-services-restored-revised-schedule-announced-gdp/articleshow-zeupcpr</guid>
            <pubDate>Mon, 11 May 2026 20:00:20 +0530</pubDate>
            <description><![CDATA[ಮಂಗಳೂರು&ndash;ಸುಬ್ರಹ್ಮಣ್ಯ ರಸ್ತೆ ರೈಲು ಮಾರ್ಗದಲ್ಲಿ ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಈ ಹಿಂದೆ ಘೋಷಿಸಲಾಗಿದ್ದ ರೈಲು ಸೇವೆಗಳ ವಿಳಂಬವನ್ನು ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 56629 ಮತ್ತು 56630 ಈಗ ನಿಗದಿತ ದಿನಾಂಕಗಳಿಂದ ತಮ್ಮ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knzr06zeea1hqff78krd0yts,imgname-indian-railways-2026-reforms-vande-bharat-sleeper-hydrogen-train-ticket-refund-cancellation-board-change-policy-2-1775960595438.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು&ndash;ಸುಬ್ರಹ್ಮಣ್ಯ ರಸ್ತೆ ರೈಲು ಮಾರ್ಗದ ಸುಬ್ರಹ್ಮಣ್ಯ ರಸ್ತೆ&ndash;ಎಡಮಂಗಲ ವಿಭಾಗಗಳ ನಡುವೆ ನಡೆಯುತ್ತಿರುವ ಹಳಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಮೊದಲು ನಿಯಂತ್ರಣಕ್ಕೆ ಒಳಪಡಿಸಿ ಮರುನಿಗದಿಪಡಿಸಲಾಗಿದ್ದ ರೈಲು ಸೇವೆಗಳಲ್ಲಿ ಇದೀಗ ಮಹತ್ವದ ಪರಿಷ್ಕರಣೆ ಮಾಡಿ ಮರುಸ್ಥಾಪನೆ ಮಾಡಲಾಗಿದೆ.&lt;/p&gt;&lt;h2&gt;ಈ ಹಿಂದಿನ ವೇಳಾಪಟ್ಟಿ ಕ್ಯಾನ್ಸಲ್&lt;/h2&gt;&lt;p&gt;ಈ ಮೊದಲು ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್&ndash;ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು ಏಪ್ರಿಲ್ 15ರಿಂದ ಜೂನ್ 4ರವರೆಗೆ ಪ್ರತಿದಿನ 35 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಇದೀಗ ಈ ನಿರ್ಧಾರವನ್ನು ಪರಿಷ್ಕರಿಸಲಾಗಿದ್ದು, ಮೇ 11ರಿಂದ ಜೂನ್ 4ರವರೆಗೆ ಈ ರೈಲು ತನ್ನ ನಿಯಮಿತ ವೇಳಾಪಟ್ಟಿಯಂತೆ ಹಾಗೂ ನಿಗದಿತ ಮಾರ್ಗದಲ್ಲೇ ಯಾವುದೇ ಹೆಚ್ಚುವರಿ ವಿಳಂಬವಿಲ್ಲದೆ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಅದೇ ರೀತಿ, ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರಸ್ತೆ&ndash;ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಮರುನಿಗದಿಪಡಿಸುವಿಕೆಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಮೊದಲಿನ ಅಧಿಸೂಚನೆಯ ಪ್ರಕಾರ ಏಪ್ರಿಲ್ 16, 18, 21, 23, 25, 28 ಮತ್ತು 30 ಹಾಗೂ ಮೇ 2, 5, 7, 9, 12, 14, 16, 19, 21, 23, 26, 28 ಮತ್ತು 30, ಜೊತೆಗೆ ಜೂನ್ 2 ಮತ್ತು 4ರಂದು ಸಂಚರಿಸುವ ರೈಲುಗಳಿಗೆ 15 ನಿಮಿಷಗಳ ವಿಳಂಬ ವಿಧಿಸಲಾಗಿತ್ತು.&lt;/p&gt;&lt;h2&gt;ವಿಳಂಬವಿಲ್ಲದೆ ತನ್ನ ನಿಯಮಿತ ವೇಳಾಪಟ್ಟಿಯಂತೆ ಸಂಚಾರ&lt;/h2&gt;&lt;p&gt;ಇದೀಗ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಮೇ 12, 14, 16, 19, 21, 23, 26, 28 ಮತ್ತು 30 ಹಾಗೂ ಜೂನ್ 2 ಮತ್ತು 4ರಂದು ಸಂಚರಿಸುವ ರೈಲು ಸಂಖ್ಯೆ 56630 ಮರುಸ್ಥಾಪನೆಯಾಗಿದ್ದು, ಈ ದಿನಗಳಲ್ಲಿ ರೈಲು ಯಾವುದೇ ವಿಳಂಬವಿಲ್ಲದೆ ತನ್ನ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಹಳಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ರೂಪಿಸಲಾದ ತಾತ್ಕಾಲಿಕ ನಿಯಂತ್ರಣ ಕ್ರಮಗಳಲ್ಲಿ ಸಡಿಲಿಕೆ ನೀಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲು ಸೇವೆಗಳನ್ನು ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ಮರಳಿಸಲಾಗಿದೆ. ಪ್ರಯಾಣಿಕರು ಪರಿಷ್ಕೃತ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-subrahmanya-road-train-services-restored-revised-schedule-announced-gdp/articleshow-zeupcpr"/>
        </item>
        <item>
            <title><![CDATA[ಉತ್ತರ ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿ, ವಿಜಯಪುರ ಜನರಿಗೆ ಈ ರೈಲಿನ ಟಿಕೆಟ್ ದರ ಇಳಿಕೆ!]]></title>
            <link>https://kannada.asianetnews.com/gallery/state/indian-railway-good-news-for-north-karnataka-hubballi-vijayapura-trains-become-regular-connectivity-to-rishikes-sat-ybhs036</link>
            <guid isPermaLink="true">https://kannada.asianetnews.com/gallery/state/indian-railway-good-news-for-north-karnataka-hubballi-vijayapura-trains-become-regular-connectivity-to-rishikes-sat-ybhs036</guid>
            <pubDate>Mon, 11 May 2026 19:53:18 +0530</pubDate>
            <description><![CDATA[&lt;p&gt;ಉತ್ತರ ಕರ್ನಾಟಕದ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ಹುಬ್ಬಳ್ಳಿ-ವಿಜಯಪುರ ಮೆಮು ಮತ್ತು ಹುಬ್ಬಳ್ಳಿ-ಹೃಷಿಕೇಶ ಸೇರಿದಂತೆ ಹಲವು ವಿಶೇಷ ರೈಲುಗಳನ್ನು ನಿಯಮಿತ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಈ ಬದಲಾವಣೆಯಿಂದ ಟಿಕೆಟ್ ದರದಲ್ಲಿ ಶೇ. 30% ರಷ್ಟು ಕಡಿತವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krbp7dt0zx3643fjbw2gffha,imgname-hubballi-to-rishikesh-train-1778508871487.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕರ್ನಾಟಕದ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ಹುಬ್ಬಳ್ಳಿ-ವಿಜಯಪುರ ಮೆಮು ಮತ್ತು ಹುಬ್ಬಳ್ಳಿ-ಹೃಷಿಕೇಶ ಸೇರಿದಂತೆ ಹಲವು ವಿಶೇಷ ರೈಲುಗಳನ್ನು ನಿಯಮಿತ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಈ ಬದಲಾವಣೆಯಿಂದ ಟಿಕೆಟ್ ದರದಲ್ಲಿ ಶೇ. 30% ರಷ್ಟು ಕಡಿತವಾಗಲಿದೆ.&lt;/p&gt;&lt;img&gt;&lt;p&gt;ಹುಬ್ಬಳ್ಳಿ/ಧಾರವಾಡ: ಉತ್ತರ ಕರ್ನಾಟಕದ ಜಿಲ್ಲೆಗಳ ರೈಲ್ವೆ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಈವರೆಗೆ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ಪ್ರಮುಖ ರೈಲುಗಳನ್ನು ಇಂದಿನಿಂದ 'ನಿಯಮಿತ ಸೇವೆ'ಗಳನ್ನಾಗಿ (Regular Train Services) ಪರಿವರ್ತಿಸಲಾಗುತ್ತಿದೆ. ಈ ಮಹತ್ವದ ನಿರ್ಧಾರವು ಉತ್ತರ ಕರ್ನಾಟಕದ ಜಿಲ್ಲೆಗಳ ಸಂಪರ್ಕ ಕ್ರಾಂತಿಗೆ ಹೊಸ ವೇಗ ನೀಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಹುಬ್ಬಳ್ಳಿ ಮತ್ತು ವಿಜಯಪುರ ನಡುವೆ ಸಂಚರಿಸುವ ರೈಲು ಸಂಖ್ಯೆ 56919/20 ಹಾಗೂ 66501/02 ರೈಲುಗಳು ಇನ್ನು ಮುಂದೆ ನಿಯಮಿತವಾಗಿ ಸಂಚರಿಸಲಿವೆ. ಇಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹುಬ್ಬಳ್ಳಿ - ವಿಜಯಪುರ ನೂತನ ನಿಯಮಿತ ಮೆಮು (MEMU- Mainline Electric Multiple Unit) ರೈಲಿಗೆ (ರೈಲು ಸಂಖ್ಯೆ: 66501) ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.&amp;nbsp;&lt;/p&gt;&lt;p&gt;ಇದರಿಂದ ಹುಬ್ಬಳ್ಳಿ, ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನಿತ್ಯ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಮೆಮು ರೈಲು ಸಂಚಾರದಿಂದ ವೇಗದ ಮತ್ತು ಪರಿಸರ ಸ್ನೇಹಿ ಪ್ರಯಾಣ ಸಾಧ್ಯವಾಗಲಿದೆ.&lt;/p&gt;&lt;img&gt;&lt;p&gt;ಉತ್ತರ ಭಾರತಕ್ಕೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 17363/64 ಹುಬ್ಬಳ್ಳಿ - ಯೋಗ ನಗರಿ ಹೃಷಿಕೇಶ ವಾರಕ್ಕೊಮ್ಮೆ ಸಂಚರಿಸುವ ರೈಲನ್ನು ಈಗ ನಿಯಮಿತ ಸೇವೆಯನ್ನಾಗಿ ಮಾಡಲಾಗಿದೆ. ಇದರಿಂದ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವವರಿಗೆ ವರ್ಷಪೂರ್ತಿ ಸುಲಭ ಪ್ರಯಾಣ ಒದಗಿಸಿದಂತಾಗುತ್ತದೆ.&lt;/p&gt;&lt;img&gt;&lt;p&gt;ಈ ರೈಲುಗಳ ಸೇವೆಯು ನಿಯಮಿತವಾಗಿ ಬದಲಾದ ಕಾರಣ ಪ್ರಯಾಣಿಕರಿಗೆ ಆರ್ಥಿಕವಾಗಿ ದೊಡ್ಡ ಲಾಭ ಸಿಗಲಿದೆ.&lt;/p&gt;&lt;p&gt;ಸಾಮಾನ್ಯ ದರ್ಜೆಯ ಪ್ರಯಾಣಿಕರಿಗೆ ಇನ್ನು ಮುಂದೆ ಸೂಪರ್&zwnj;ಫಾಸ್ಟ್ ಹೆಚ್ಚುವರಿ ಶುಲ್ಕವಿರುವುದಿಲ್ಲ.&lt;/p&gt;&lt;p&gt;ಮೀಸಲು ದರ್ಜೆಯ (Reserved Class) ಟಿಕೆಟ್ ದರದಲ್ಲಿ ಸುಮಾರು 30% ರಷ್ಟು ಕಡಿತವಾಗಲಿದ್ದು, ಪ್ರಯಾಣವು ಅತ್ಯಂತ ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ಸಿಗಲಿದೆ.&lt;/p&gt;&lt;img&gt;&lt;p&gt;ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ವೇಗ ತುಂಬುತ್ತಿದೆ. ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಸುಗಮ, ಸುರಕ್ಷಿತ ಹಾಗೂ ವೇಗದಾಯಕವಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಸಚಿವರು ಶ್ಲಾಘಿಸಿದರು.&amp;nbsp;&lt;/p&gt;&lt;p&gt;ಈ ಕಾರ್ಯಕ್ರಮದ ವೇಳೆ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ (SWR) ಜನರಲ್ ಮ್ಯಾನೇಜರ್ ಪಿ. ಅನಂತು ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಬದಲಾವಣೆಯು ಉತ್ತರ ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ವಲಯಕ್ಕೆ ಹೊಸ ಶಕ್ತಿ ತುಂಬಲಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railway-good-news-for-north-karnataka-hubballi-vijayapura-trains-become-regular-connectivity-to-rishikes-sat-ybhs036"/>
        </item>
        <item>
            <title><![CDATA[ನೀವು ಅನ್ಯಾಯ ಮಾಡ್ಬೋದು, ಜನರು ವಿಡಿಯೋ ಮಾಡಬಾರದಾ? ಸರ್ಕಾರದ ಬೆವರಿಳಿಸಿದ ಹೈಕೋರ್ಟ- ಆಗಿದ್ದೇನು]]></title>
            <link>https://kannada.asianetnews.com/india-news/gujarath-high-court-slams-the-police-for-stopping-citizens-from-filming-inside-police-station-suc/articleshow-qgdgync</link>
            <guid isPermaLink="true">https://kannada.asianetnews.com/india-news/gujarath-high-court-slams-the-police-for-stopping-citizens-from-filming-inside-police-station-suc/articleshow-qgdgync</guid>
            <pubDate>Mon, 11 May 2026 19:39:28 +0530</pubDate>
            <description><![CDATA[ಪೊಲೀಸ್ ಠಾಣೆಯೊಳಗೆ ನಾಗರಿಕರು ವಿಡಿಯೋ ಮಾಡುವುದನ್ನು ನಿಷೇಧಿಸಿದ್ದಕ್ಕಾಗಿ ಗುಜರಾತ್ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸಿಸಿಟಿವಿಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಅನ್ಯಾಯದ ವಿರುದ್ಧ ಸಾಕ್ಷಿಗಾಗಿ ವಿಡಿಯೋ ಮಾಡುವುದರಲ್ಲಿ ತಪ್ಪೇನಿದೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krbnwtvb8wfvvraanjx9rv5p,imgname-hc-slams-police-1778508524395.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದು ಎಲ್ಲ ಜನರ ಕೈಯಲ್ಲಿಯೂ ಮೊಬೈಲ್&zwnj; ಇರುವ ಕಾರಣ, ಅದು ಕೆಲವೊಮ್ಮೆ ಮಿಸ್&zwnj;ಯೂಸ್&zwnj; ಆಗುವ ಜೊತೆಗೆ, ಕೆಲವೊಮ್ಮೆ ಭ್ರಷ್ಟಾಚಾರಿಗಳ, ಮೋಸಗಾರರ, ಲೂಟಿಕೋರರ, ವಂಚಕರ, ಅನ್ಯಾಯ ಎಸಗುವವರ ಮೋಸವನ್ನು ಬಯಲು ಮಾಡುವಲ್ಲಿಯೂ ಪ್ರಮುಖ ಸಾಕ್ಷಿಯಾಗಿ ಹೊರಹೊಮ್ಮುತ್ತದೆ. ಆದರೆ, ತಾವು ಮಾಡುವ ಅನ್ಯಾಯವನ್ನು ಜನರು ವಿಡಿಯೋ ಮಾಡುವುದೇ ತಪ್ಪು ಎನ್ನುವಂತೆ ಹೈಕೋರ್ಟ್&zwnj;ನಲ್ಲಿ ವಾದ ಮಾಡಿ, ನ್ಯಾಯಮೂರ್ತಿಗಳಿಂದ ಸರ್ಕಾರ ಉಗಿಸಿಕೊಂಡಿರುವ ಕುತೂಹಲದ ಘಟನೆಯೊಂದು ಹೈಕೋರ್ಟ್&zwnj;ನಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಸರ್ಕಾರದ ಬೆವರಿಳಿಸಿದ ಕೋರ್ಟ್&lt;/strong&gt;&lt;/h2&gt;&lt;p&gt;ಗುಜರಾತ್&zwnj; ಹೈಕೋರ್ಟ್&zwnj;&zwnj;ನಲ್ಲಿ ಈ ಘಟನೆ ನಡೆದಿದ್ದು, ಕೋರ್ಟ್ ಕಲಾಪದ ವಿಡಿಯೋ ಈಗ ಸೋಷಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗುತ್ತಿದೆ. ಪೊಲೀಸ್ ಠಾಣೆಯೊಳಗೆ ನಾಗರಿಕರು ವಿಡಿಯೋಗ್ರಫಿ ಮಾಡುವುದನ್ನು ನಿಷೇಧಿಸಿದ್ದಕ್ಕಾಗಿ ಪೊಲೀಸರನ್ನು ಹೈಕೋರ್ಟ್ ನ್ಯಾಯಮೂರ್ತಿ ನಿರ್ಜರ್ ಎಸ್. ದೇಸಾಯಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಜನರು ಹೀಗೆ ಮಾಡುವುದು ಸರಿಯಲ್ಲ, ಅವರಿಗೆ ವಿಡಿಯೋ ಮಾಡುವ ಅಧಿಕಾರ ಇಲ್ಲ ಎಂದು ವಾದಿಸಿದ್ದ ಸರ್ಕಾರಿ ವಕೀಲರಿಗೆ ಕೋರ್ಟ್ ಬೆವರಿಳಿಸಿದೆ.&lt;/p&gt;&lt;h3&gt;&lt;strong&gt;ಎಷ್ಟು ಸಿಸಿಟಿವಿ ಕೆಲ್ಸ ಮಾಡತ್ತೆ?&lt;/strong&gt;&lt;/h3&gt;&lt;p&gt;ಸಿಸಿಟಿವಿ ಇರುವಾಗ, ಜನರು ಹೀಗೆ ಪೊಲೀಸ್ ಠಾಣೆ ಒಳಗೆ ವಿಡಿಯೋ ಮಾಡುವುದು ಸರಿಯಲ್ಲ, ಅದು ಕಾನೂನು ಉಲ್ಲಂಘನೆ ಎಂದು ಸರ್ಕಾರ ಪರ ವಕೀಲರು ವಾದಿಸಿದರು. ಸರಿ, ನಿಮ್ಮ ವಾದವನ್ನು ಒಪ್ಪೋಣ, ಮೊದಲು ಹಾಗೆಂದು ಯಾವ ಕಾಯ್ದೆ, ಯಾವ ಸೆಕ್ಷನ್&zwnj; ಹೇಳುತ್ತದೆ ಎಂದು ಪ್ರಶ್ನಿಸಿದಾಗ ವಕೀಲರು ಕಕ್ಕಾಬಿಕ್ಕಿಯಾದರು. ಸಿಸಿಟಿವಿ ಎಲ್ಲಾ ಇರುತ್ತದೆ, ವಿಡಿಯೋ ಯಾಕೆ ಎಂದು ಅವರು ಪ್ರಶ್ನಿಸಿದಾಗ, ಸರ್ಕಾರಗಳ ಎಷ್ಟು ಸಿಸಿಟಿವಿ ಕೆಲಸ ಮಾಡುತ್ತದೆ ಎನ್ನುವುದು ನಮಗೆ ಗೊತ್ತಿದೆ. ಶೇಕಡಾ 80 ರಷ್ಟು ಸಿಸಿಟಿವಿ ಕೆಲಸವೇ ಮಾಡುವುದಿಲ್ಲ. ಹೀಗಿರುವಾಗ ಸಾಕ್ಷಿಗಾಗಿ ವಿಡಿಯೋ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ನೀವು (ಪೊಲೀಸರು) ಏನು ಬೇಕಾದರೂ ಅನ್ಯಾಯ ಮಾಡಬಹುದು, ಅದನ್ನು ಜನರು ಪ್ರಶ್ನಿಸಬಾರದೇ, ಇದು ಯಾವ ಕಾನೂನಿನಲ್ಲಿ ಇದೆ ಎಂದು ತೋರಿಸಿ ಎಂದಾಗ ಉತ್ತರಿಸಲಾಗದೇ ಸರ್ಕಾರಿ ವಕೀಲೆ ಸುಮ್ಮನಾದರು.&lt;/p&gt;&lt;h3&gt;&lt;strong&gt;ಹಿಂದೆಯೂ ತೀರ್ಪು&lt;/strong&gt;&lt;/h3&gt;&lt;p&gt;ಈ ವಿಷಯವು ಹೊಸದಲ್ಲ. 2022 ರಲ್ಲಿ, ಬಾಂಬೆ ಹೈಕೋರ್ಟ್ ರವೀಂದ್ರ ಶೀತಲ್&zwnj;ರಾವ್ ಉಪಾಧ್ಯಾಯ ವರ್ಸಸ್ ಮಹಾರಾಷ್ಟ್ರ ಸ್ಟೇಟ್ ಪ್ರಕರಣದಲ್ಲಿ, ಅಧಿಕೃತ ರಹಸ್ಯ ಕಾಯ್ದೆಯಡಿಯಲ್ಲಿ ಪೊಲೀಸ್ ಠಾಣೆಗಳು &quot;ನಿಷೇಧಿತ ಸ್ಥಳಗಳಲ್ಲ&quot; ಎಂದು ತೀರ್ಪು ನೀಡಿತ್ತು. ಪೊಲೀಸ್ ಠಾಣೆಯೊಳಗೆ ರಹಸ್ಯವಾಗಿ ಚಿತ್ರೀಕರಣ ಮಾಡುವುದು ಆ ಕಾಯ್ದೆಯಡಿ ಅಪರಾಧವಲ್ಲ, ಏಕೆಂದರೆ ಅದು ಬೇಹುಗಾರಿಕೆಗೆ ಒಳಪಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/gujarath-high-court-slams-the-police-for-stopping-citizens-from-filming-inside-police-station-suc/articleshow-qgdgync"/>
        </item>
        <item>
            <title><![CDATA[ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿ ಕರೆ ನೀಡಿದ್ದು, ಒಂದು ವರ್ಷ ಪಾಲಿಸಿ: ಸಿ.ಟಿ.ರವಿ]]></title>
            <link>https://kannada.asianetnews.com/karnataka-districts/ct-ravi-supports-pm-modi-fuel-saving-gold-purchase-gvd/articleshow-bm5rani</link>
            <guid isPermaLink="true">https://kannada.asianetnews.com/karnataka-districts/ct-ravi-supports-pm-modi-fuel-saving-gold-purchase-gvd/articleshow-bm5rani</guid>
            <pubDate>Mon, 11 May 2026 19:39:14 +0530</pubDate>
            <description><![CDATA[&lt;p&gt;ಮತ್ತೊಮ್ಮೆ ಮನೆಯಿಂದಲೇ ಕೆಲಸ ಮಾಡಿ ಎಂದು ಪ್ರಧಾನಿ ಮೋದಿ ಹೇಳಿರುವುದು ನಮ್ಮ ದೇಶವನ್ನು ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿಯವರು ಈ ಕರೆ ನೀಡಿದ್ದಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcx4fyk1p4nrct4gxgmzs4x5,imgname-1-1766209354337.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಮೇ.11): &lt;/strong&gt;ಡಿಸೇಲ್ ಮತ್ತು ಪೆಟ್ರೋಲ್ ಕಡಿಮೆ ಬಳಸಿ, ಚಿನ್ನ ಖರೀದಿ ನಿಲ್ಲಿಸಿ ಮತ್ತೊಮ್ಮೆ ಮನೆಯಿಂದಲೇ ಕೆಲಸ ಮಾಡಿ ಎಂದು ಪ್ರಧಾನಿ ಮೋದಿ ಹೇಳಿರುವುದು ನಮ್ಮ ದೇಶವನ್ನು ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿಯವರು ಈ ಕರೆ ನೀಡಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಹಾಗೂ ರಾಜ್ಯ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ಸಮೀಪದ ಖಾಸಗಿ ರೆಸಾರ್ಟ್ ನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಬಿಜೆಪಿ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಅವರು ಮಾತನಾಡಿದರು.&lt;/p&gt;&lt;p&gt;ಇರಾನ್ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಪೆಟ್ರೋಲ್ ಡೀಸೆಲ್ ಖರೀದಿಗೆ ದೊಡ್ಡ ಅಡೆತಡೆ ಬಂದಿದೆ. ಆ ಕಾರಣದಿಂದ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಬಾರಿ ಆಗಿದೆ. ಆ ಹಿನ್ನೆಲೆಯಲ್ಲಿ ಪ್ರಧಾನಿಯವರು ಈ ಕರೆಕೊಟ್ಟಿದ್ದಾರೆ. ಇದು ಸದುದ್ದೇಶದ ಕರೆ. ಯಾವುದರ ಖರೀದಿಗೆ ನಾವು ಹೊರದೇಶಗಳನ್ನು ಅವಲಂಬಿಸಿದ್ದೇವೆಯೋ, ಅದಕ್ಕೆ ಮಿತಿ ಹಾಕಿಕೊಳ್ಳಬೇಕಾಗಿದೆ. ಆ ಮೂಲಕ ನಾವು ಸ್ವಾವಲಂಬನೆ ಕಡೆಗೆ ಹೆಜ್ಜೆ ಹಾಕಬೇಕಾಗಿದೆ. ಆ ನಿಟ್ಟಿನಲ್ಲಿ ಒಂದು ವರ್ಷ ಈ ಕರೆಯನ್ನು ನಾವೆಲ್ಲರೂ ಪಾಲಿಸಬೇಕಾಗಿದೆ.&lt;/p&gt;&lt;p&gt;ಅಷ್ಟರಲ್ಲಿ ಸಮಸ್ಯೆಗಳು ಬಗೆಹರಿಯಬಹುದು. ಆಗ ನಾವು ವಿಪತ್ತಿನಿಂದ ಪಾರಾಗುತ್ತೇವೆ ಎನ್ನುವುದು ಪ್ರಧಾನಿಗಳ ಆಶಯ. ಹಾಗಾಗಿ ನಾವು ಎಲ್ಲರೂ ಅನಗತ್ಯ ಬಳಕೆಯನ್ನು ನಿಲ್ಲಿಸಬೇಕಾಗಿದೆ. ನಾವು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಬೇಕು. ಆ ಮೂಲಕ ನಾವು ರಾಷ್ಟ್ರೀಯ ಕಾರ್ಯಕ್ಕೆ ನಮ್ಮದೇ ಯೋಗ್ದಾನ ಕೊಡಲು ಸಾಧ್ಯವಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ಇನ್ನು ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದ್ದು ಅದು ಅಲುಗಾಡುತ್ತಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು ಅದು ನಿಜನೂ ಹೌದು ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಗೌರವ ತರುವ ವಿಚಾರ ಅಲ್ಲ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಯಾವುದಾದರೂ ಜ್ವಲಂತ ವಿಷಯಗಳು ಬಂದಾಗಲೆಲ್ಲಾ ಸಿಎಂ ಕುರ್ಚಿ ಕಚ್ಚಾಟ ಮುನ್ನಲೆಗೆ ಬಂದು ಬಿಡುತ್ತದೆ. ಆಗ ಜ್ವಲಂತ ವಿಷಯಗಳು ಚರ್ಚೆಯೇ ಆಗಲ್ಲ, ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಮೂರರಲ್ಲಿದೆ, ರೈತರ ಆತ್ಮ*ಹ*ತ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಸರ್ಕಾರಿ ನೌಕರರ ಆತ್ಮ*ಹ*ತ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಇನ್ನು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇದ್ಯಾವುದೂ ರಾಜ್ಯಕ್ಕೆ ಗೌರವ ತರುವ ವಿಚಾರ ಅಲ್ಲ. ಸಮಸ್ಯೆಗಳ ಬಗೆಹರಿಸಬೇಕಾದ ಸರ್ಕಾರ, ತಾನೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಯಾವುದೇ ಗೊಂದಲವೇ ಇಲ್ಲದಂತ ಸಿಎಂ ಹುದ್ದೆ, ಗೊಂದಲಗಳಿಗೆ ಒಳಗಾಗುವಂತಹದ್ದು ಒಳ್ಳೆಯ ಲಕ್ಷಣ ಅಲ್ಲ ಎಂದಿದ್ದಾರೆ.&lt;/p&gt;&lt;p&gt;ನಿಮ್ಮ ಖುರ್ಚಿಯ ಸಮಸ್ಯೆಯನ್ನು ಸಾರ್ವಜನಿಕ ಸಮಸ್ಯೆಯನ್ನಾಗಿ ಮಾಡಿ, ಸಾರ್ವಜನಿಕ ಸಮಸ್ಯೆಗಳನ್ನು ಬದಿಗೆ ತಳ್ಳುವ ಕೆಲಸ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಸಚಿವ ಡಿ ಸುಧಾಕರ್ ನಿಧನಕ್ಕೆ ಅವರ ಕುಟುಂಬಕ್ಕೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಸಾಂತ್ವನ ಹೇಳಿದರು. ಸಚಿವ ಡಿ ಸುಧಾಕರ್ ಅವರ ಸಾವು ಅನಿರೀಕ್ಷಿತ. ಕಳೆದ 25 ದಿನಗಳಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಿ.ಟಿ.ರವಿ ಸಾಂತ್ವನ ಹೇಳಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ct-ravi-supports-pm-modi-fuel-saving-gold-purchase-gvd/articleshow-bm5rani"/>
        </item>
        <item>
            <title><![CDATA[ದೇಶದಲ್ಲಿ 60 ದಿನಗಳ ಕಚ್ಚಾ ತೈಲ, ನೈಸರ್ಗಿಕ ಅನಿಲ ನಿಕ್ಷೇಪ, ಕೇವಲ 45ದಿನಗಳ LPG ದಾಸ್ತಾನಿದೆ ಮಿತವಾಗಿ ಬಳಸಿ: ಕೇಂದ್ರ]]></title>
            <link>https://kannada.asianetnews.com/india-news/india-confirms-sufficient-fuel-reserves-despite-the-west-asia-crisis-with-60-days-of-crude-oil-and-gas-stock-gdp/articleshow-gq8hbg4</link>
            <guid isPermaLink="true">https://kannada.asianetnews.com/india-news/india-confirms-sufficient-fuel-reserves-despite-the-west-asia-crisis-with-60-days-of-crude-oil-and-gas-stock-gdp/articleshow-gq8hbg4</guid>
            <pubDate>Mon, 11 May 2026 18:44:17 +0530</pubDate>
            <description><![CDATA[ಪಶ್ಚಿಮ ಏಷ್ಯಾದ ಉದ್ವಿಗ್ನತೆಯ ನಡುವೆಯೂ ಭಾರತದಲ್ಲಿ ಇಂಧನ ಪೂರೈಕೆ ಸುರಕ್ಷಿತವಾಗಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ದೇಶದಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲ, ಎಲ್&zwnj;ಪಿಜಿ ಹಾಗೂ ರಸಗೊಬ್ಬರಗಳ ಸಾಕಷ್ಟು ದಾಸ್ತಾನು ಲಭ್ಯವಿದ್ದು, ಯಾವುದೇ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದೆ. ನಾಗರಿಕರು ಆತಂಕಪಡದೆ ಇಂಧನವನ್ನು ಜವಾಬ್ದಾರಿಯಿಂದ ಬಳಸುವಂತೆ ಸರ್ಕಾರ ಮನವಿ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knpagx82j4kmzyq3xpjtydva,imgname-thumb-13-1775644472578.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಭಾರತದಲ್ಲಿ ಇಂಧನ ಸರಬರಾಜು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ದೇಶದಲ್ಲಿ ಪ್ರಸ್ತುತ ಸುಮಾರು 60 ದಿನಗಳ ಕಚ್ಚಾ ತೈಲ ನಿಕ್ಷೇಪ, 60 ದಿನಗಳ ನೈಸರ್ಗಿಕ ಅನಿಲ ದಾಸ್ತಾನು ಹಾಗೂ 45 ದಿನಗಳ ಎಲ್&zwnj;ಪಿಜಿ (LPG) ರೋಲಿಂಗ್ ಸ್ಟಾಕ್ ಲಭ್ಯವಿದ್ದು, ಯಾವುದೇ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದೆ.&lt;/p&gt;&lt;p&gt;ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಶ್ಚಿಮ ಏಷ್ಯಾ ಕುರಿತ ಅನೌಪಚಾರಿಕ ಸಚಿವರ ಗುಂಪು (IGoM) ಐದನೇ ಸಭೆಯಲ್ಲಿ ಹೊರಬಿದ್ದಿದೆ. ಸಭೆಯಲ್ಲಿ ಪಶ್ಚಿಮ ಏಷ್ಯಾದ ಸಂಘರ್ಷವು ಭಾರತದ ಇಂಧನ ಭದ್ರತೆ, ಪೂರೈಕೆ ಸರಪಳಿಗಳು ಮತ್ತು ಅಗತ್ಯ ವಸ್ತುಗಳ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ.&lt;/p&gt;&lt;h2&gt;ಇಂಧನ ಭದ್ರತೆ: ಭಾರತ ಸಿದ್ಧವಾಗಿದೆ&lt;/h2&gt;&lt;p&gt;ಸರ್ಕಾರದ ಪ್ರಕಾರ, ಜಾಗತಿಕ ಅಡೆತಡೆಗಳು ಇದ್ದರೂ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ದೇಶವಾಗಿದ್ದು, ನಾಲ್ಕನೇ ಅತಿದೊಡ್ಡ ಪೆಟ್ರೋಲಿಯಂ ಉತ್ಪನ್ನ ರಫ್ತುದಾರವಾಗಿದೆ. 150ಕ್ಕೂ ಹೆಚ್ಚು ದೇಶಗಳಿಗೆ ಇಂಧನ ರಫ್ತು ಮಾಡುತ್ತಿರುವ ಭಾರತ, ತನ್ನ ದೇಶೀಯ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸುತ್ತಿದೆ. ಇದೇ ವೇಳೆ, ಭಾರತದ ವಿದೇಶಿ ವಿನಿಮಯ ಸಂಗ್ರಹವು ಸುಮಾರು 703 ಬಿಲಿಯನ್ ಅಮೆರಿಕನ್ ಡಾಲರ್ ಮಟ್ಟದಲ್ಲಿದ್ದು, ಇದು ಆರ್ಥಿಕ ಸ್ಥಿರತೆಗೆ ಬಲ ನೀಡುತ್ತದೆ ಎಂದು ಸರ್ಕಾರ ಹೇಳಿದೆ&lt;/p&gt;&lt;h2&gt;ತೈಲ ಬೆಲೆ ಏರಿಕೆ: ಕಂಪನಿಗಳಿಗೆ ಭಾರಿ ನಷ್ಟ&lt;/h2&gt;&lt;p&gt;ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶದ ತೈಲ ಮಾರುಕಟ್ಟೆ ಕಂಪನಿಗಳು ದಿನಕ್ಕೆ ಸುಮಾರು ₹1,000 ಕೋಟಿ ನಷ್ಟ ಅನುಭವಿಸುತ್ತಿವೆ. 2026ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು ಕಡಿಮೆ ಚೇತರಿಕೆ ಸುಮಾರು ₹2 ಲಕ್ಷ ಕೋಟಿ ಮಟ್ಟ ತಲುಪಿದೆ. ಈ ನಷ್ಟವನ್ನು ಸರ್ಕಾರ ಮತ್ತು ಕಂಪನಿಗಳು ಹೊತ್ತುಕೊಳ್ಳುವ ಮೂಲಕ ಗ್ರಾಹಕರ ಮೇಲೆ ಬೆಲೆ ಏರಿಕೆಯ ಭಾರ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸಂಘರ್ಷ ಆರಂಭವಾಗಿ ಸುಮಾರು 70 ದಿನಗಳು ಕಳೆದರೂ, ಅನೇಕ ದೇಶಗಳಲ್ಲಿ ಇಂಧನ ಬೆಲೆಗಳು ಶೇಕಡಾ 30ರಿಂದ 70ರವರೆಗೆ ಏರಿಕೆಯಾದರೆ, ಭಾರತದಲ್ಲಿ ಬೆಲೆಗಳನ್ನು ಬಹುಮಟ್ಟಿಗೆ ಸ್ಥಿರವಾಗಿರಿಸಲು ಸಾಧ್ಯವಾಗಿದೆ.&lt;/p&gt;&lt;h2&gt;ರಸಗೊಬ್ಬರ ದಾಸ್ತಾನು: ಖಾರಿಫ್&zwnj;ಗೆ ಸಮರ್ಪಕ ಸಿದ್ಧತೆ&lt;/h2&gt;&lt;p&gt;ಸಭೆಯಲ್ಲಿ ರಸಗೊಬ್ಬರಗಳ ಲಭ್ಯತೆ ಕುರಿತೂ ಚರ್ಚಿಸಲಾಯ್ತು. 2026ರ ಮೇ 11ರ ವೇಳೆಗೆ ದೇಶದಲ್ಲಿ ಒಟ್ಟು 199.65 ಲಕ್ಷ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 178.58 ಲಕ್ಷ ಟನ್&zwnj;ಗಿಂತ ಹೆಚ್ಚು ಇದೆ. ಯೂರಿಯಾ ದಾಸ್ತಾನು 75.48 ಲಕ್ಷ ಟನ್&zwnj;ನಿಂದ 76.65 ಲಕ್ಷ ಟನ್&zwnj;ಗೆ ಏರಿಕೆಯಾದರೆ, ಡಿಎಪಿ (DAP) ದಾಸ್ತಾನು 14.87 ಲಕ್ಷ ಟನ್&zwnj;ನಿಂದ 22.52 ಲಕ್ಷ ಟನ್&zwnj;ಗೆ ಗಣನೀಯವಾಗಿ ಏರಿಕೆಯಾಗಿದೆ. 2026ರ ಖಾರಿಫ್ ಋತುವಿಗೆ ಒಟ್ಟು 390.54 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದ್ದು, ಪ್ರಸ್ತುತ ದಾಸ್ತಾನುಗಳು ಈಗಾಗಲೇ ಶೇಕಡಾ 51ಕ್ಕಿಂತ ಹೆಚ್ಚು ಅಗತ್ಯವನ್ನು ಪೂರೈಸುತ್ತಿವೆ. ಇದು ಸಾಮಾನ್ಯವಾಗಿ ಅಗತ್ಯವಿರುವ 33% ಮಟ್ಟಕ್ಕಿಂತ ಹೆಚ್ಚಿನ ಸಿದ್ಧತೆಯನ್ನು ಸೂಚಿಸುತ್ತದೆ.&lt;/p&gt;&lt;h2&gt;ಕೈಗಾರಿಕೆಗಳಿಗೆ ಬೆಂಬಲ: ECLGS 5.0 ಯೋಜನೆ&lt;/h2&gt;&lt;p&gt;ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME) ಹಾಗೂ ವಿಮಾನಯಾನ ವಲಯಕ್ಕೆ ನೆರವಾಗಲು ಕೇಂದ್ರ ಸರ್ಕಾರವು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ECLGS) 5.0 ಅನ್ನು ಅನುಮೋದಿಸಿದೆ. ಈ ಯೋಜನೆಯಡಿಯಲ್ಲಿ ₹2,55,000 ಕೋಟಿ ಹೆಚ್ಚುವರಿ ಸಾಲದ ಹರಿವನ್ನು ಒದಗಿಸುವ ಗುರಿ ಹೊಂದಿದ್ದು, MSMEಗಳಿಗೆ 100% ಕ್ರೆಡಿಟ್ ಗ್ಯಾರಂಟಿ ಹಾಗೂ ಇತರೆ ವಲಯಗಳಿಗೆ 90% ಗ್ಯಾರಂಟಿ ಸೌಲಭ್ಯ ನೀಡಲಾಗುತ್ತದೆ.&lt;/p&gt;&lt;h2&gt;ನಾಗರಿಕರಿಗೆ ಸೂಚನೆ: ಆತಂಕ ಬೇಡ, ಜವಾಬ್ದಾರಿಯಿಂದ ಬಳಸಿ&lt;/h2&gt;&lt;p&gt;ಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಇಂಧನ ಸಂರಕ್ಷಣೆ ಮತ್ತು ದಕ್ಷ ಬಳಕೆಗೆ ಹೆಚ್ಚು ಒತ್ತು ನೀಡುವಂತೆ ಸಚಿವಾಲಯಗಳು ಮತ್ತು ರಾಜ್ಯಗಳಿಗೆ ಸೂಚಿಸಿದರು. ದೇಶದಲ್ಲಿ ಯಾವುದೇ ಕೊರತೆ ಇಲ್ಲದಿರುವುದರಿಂದ ನಾಗರಿಕರು ಭಯಪಡುವ ಅಗತ್ಯವಿಲ್ಲ ಅಥವಾ ಅತಿಯಾಗಿ ಇಂಧನ ಖರೀದಿಸುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಇಂಧನ ಬಳಕೆಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಕರೆ ನೀಡಿದ್ದಾರೆ. ಸಾರ್ವಜನಿಕ ಸಾರಿಗೆ ಬಳಕೆ, ಕಾರ್&zwnj;ಪೂಲಿಂಗ್, ಅನಗತ್ಯ ವಿದೇಶಿ ಪ್ರಯಾಣ ತಪ್ಪಿಸುವುದು ಹಾಗೂ ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಮೂಲಕ ವಿದೇಶಿ ವಿನಿಮಯ ಸಂಗ್ರಹವನ್ನು ಕಾಪಾಡಿಕೊಳ್ಳಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.&lt;/p&gt;&lt;h2&gt;ಕೃಷಿ ಮತ್ತು ಪರಿಸರದತ್ತ ಗಮನ&lt;/h2&gt;&lt;p&gt;ಪ್ರಧಾನಮಂತ್ರಿ ರೈತರಿಗೆ ರಾಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕ ಕೃಷಿಯತ್ತ ತಿರುಗುವಂತೆ ಸಲಹೆ ನೀಡಿದ್ದಾರೆ. ಜೊತೆಗೆ, ಡೀಸೆಲ್ ಪಂಪ್&zwnj;ಗಳ ಬದಲು ಸೌರಶಕ್ತಿ ಆಧಾರಿತ ನೀರಾವರಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆಯೂ ಭಾರತವು ಇಂಧನ ಭದ್ರತೆ, ಪೂರೈಕೆ ಸರಪಳಿ ನಿರ್ವಹಣೆ ಹಾಗೂ ಅಗತ್ಯ ವಸ್ತುಗಳ ಲಭ್ಯತೆಯಲ್ಲಿ ಕೊರತೆ ಹೊಂದಿಲ್ಲ. ಸರ್ಕಾರದ ಮುನ್ನೆಚ್ಚರಿಕಾ ಕ್ರಮಗಳು ಮತ್ತು ಜನರ ಸಹಕಾರದೊಂದಿಗೆ, ಈ ಸವಾಲಿನ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದೆಂದು ಭರವಸೆ ನೀಡಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/india-confirms-sufficient-fuel-reserves-despite-the-west-asia-crisis-with-60-days-of-crude-oil-and-gas-stock-gdp/articleshow-gq8hbg4"/>
        </item>
        <item>
            <title><![CDATA[ಕುಕ್ಕೆ ಸುಬ್ರಹ್ಮಣ್ಯ ದೇಗುಲದ ದಾಖಲೆ, ವಾರ್ಷಿಕ ಆದಾಯ ₹167 ಕೋಟಿ ಮುಜರಾಯಿಯಲ್ಲೇ ನಂ.1 ಸ್ಥಾನ!]]></title>
            <link>https://kannada.asianetnews.com/gallery/state/kukke-subrahmanya-temple-revenue-crosses-rs-167-crore-in-2025-26-remains-karnataka-s-no-1-gdp-nzvizyk</link>
            <guid isPermaLink="true">https://kannada.asianetnews.com/gallery/state/kukke-subrahmanya-temple-revenue-crosses-rs-167-crore-in-2025-26-remains-karnataka-s-no-1-gdp-nzvizyk</guid>
            <pubDate>Mon, 11 May 2026 17:46:09 +0530</pubDate>
            <description><![CDATA[&lt;p&gt;ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಹಣಕಾಸು ವರ್ಷದಲ್ಲಿ ₹167.89 ಕೋಟಿ ದಾಖಲೆಯ ಆದಾಯ ಗಳಿಸಿದೆ. ಈ ಮೂಲಕ ಸತತ 15ನೇ ವರ್ಷವೂ ರಾಜ್ಯದ ನಂ.1 ಮುಜರಾಯಿ ದೇವಾಲಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಹರಕೆ, ಕಾಣಿಕೆ ಹುಂಡಿ, &amp;nbsp;ಹೂಡಿಕೆಗಳಿಂದ ಬರುವ ಬಡ್ಡಿ ಆದಾಯದ ಪ್ರಮುಖ ಮೂಲಗಳಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jqb1m319q6c55acwytvj9w23,imgname-kukke-subramanya--5-.jpg" type="image/jpeg" height="390" width="690"/>
            <content:encoded><![CDATA[&lt;p&gt;ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಹಣಕಾಸು ವರ್ಷದಲ್ಲಿ ₹167.89 ಕೋಟಿ ದಾಖಲೆಯ ಆದಾಯ ಗಳಿಸಿದೆ. ಈ ಮೂಲಕ ಸತತ 15ನೇ ವರ್ಷವೂ ರಾಜ್ಯದ ನಂ.1 ಮುಜರಾಯಿ ದೇವಾಲಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಹರಕೆ, ಕಾಣಿಕೆ ಹುಂಡಿ, &amp;nbsp;ಹೂಡಿಕೆಗಳಿಂದ ಬರುವ ಬಡ್ಡಿ ಆದಾಯದ ಪ್ರಮುಖ ಮೂಲಗಳಾಗಿವೆ.&lt;/p&gt;&lt;img&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನೆಲೆಗೊಂಡಿರುವ ರಾಜ್ಯದ ಮುಜರಾಯಿ ಇಲಾಖೆ ಆಧೀನದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ 2025-26ನೇ ಹಣಕಾಸು ವರ್ಷದಲ್ಲಿ ಭಾರೀ ಆದಾಯ ಗಳಿಸಿ ಮತ್ತೊಮ್ಮೆ ಗಮನ ಸೆಳೆದಿದೆ. 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ದೇವಾಲಯವು ಒಟ್ಟು ₹167.89 ಕೋಟಿ ಆದಾಯ ಗಳಿಸಿದ್ದು, ಇದರಲ್ಲಿ ₹85.20 ಕೋಟಿ ವೆಚ್ಚ ಮಾಡಲಾಗಿದೆ. ಈ ಮೂಲಕ ಕಳೆದ 2024-25ನೇ ಸಾಲಿನ ₹155 ಕೋಟಿ ಆದಾಯವನ್ನು ಮೀರಿ ಸುಮಾರು ₹12 ಕೋಟಿ ಹೆಚ್ಚುವರಿ ಆದಾಯ ದಾಖಲಿಸಿದೆ. ಸತತ 15ನೇ ವರ್ಷವೂ ರಾಜ್ಯದ ಮುಜರಾಯಿ ದೇವಾಲಯಗಳ ಪೈಕಿ ಅತ್ಯಧಿಕ ಆದಾಯ ಗಳಿಸುವ ನಂ.1 ಸ್ಥಾನವನ್ನು ಈ ದೇವಾಲಯ ಕಾಯ್ದುಕೊಂಡಿದೆ.&lt;/p&gt;&lt;img&gt;&lt;p&gt;ಈ ವರ್ಷ ದೇವಾಲಯವು ಪ್ರಪ್ರಥಮ ಬಾರಿಗೆ ₹167 ಕೋಟಿಗೂ ಅಧಿಕ ಆದಾಯ ದಾಖಲಿಸಿರುವುದು ವಿಶೇಷವಾಗಿದೆ. ದೇವಾಲಯದ ಪ್ರಮುಖ ಆದಾಯ ಮೂಲಗಳಲ್ಲಿ ಹರಕೆ ಸೇವೆಗಳು, ಕಾಣಿಕೆ ಹುಂಡಿ, ಇ-ಹುಂಡಿ, ಕಟ್ಟಡ ಮತ್ತು ಅಂಗಡಿಗಳ ಬಾಡಿಗೆ, ಛತ್ರಗಳ ಬಾಡಿಗೆ, ಕೃಷಿ ತೋಟಗಳಿಂದ ಲಭಿಸುವ ಆದಾಯ ಹಾಗೂ ವಿವಿಧ ಹೂಡಿಕೆಗಳಿಂದ ಬರುವ ಬಡ್ಡಿ ಸೇರಿವೆ.&lt;/p&gt;&lt;img&gt;&lt;ul&gt; &lt;li&gt;ಹರಕೆ ಸೇವೆಗಳಿಂದ ₹64.08 ಕೋಟಿ&lt;/li&gt; &lt;li&gt;ಕಾಣಿಕೆ ಹುಂಡಿಯಿಂದ ₹24.69 ಕೋಟಿ&lt;/li&gt; &lt;li&gt;ಕಾಣಿಕೆ (ನೇರ) ₹5.47 ಕೋಟಿ&lt;/li&gt; &lt;li&gt;ಇ-ಹುಂಡಿ ₹38.01 ಲಕ್ಷ&lt;/li&gt; &lt;li&gt;ಹೂಡಿಕೆ ಬಡ್ಡಿಯಿಂದ ₹49.11 ಕೋಟಿ&lt;/li&gt; &lt;li&gt;ಛತ್ರ ಸಂರಕ್ಷಣಾ ನಿಧಿಯಿಂದ ₹6.93 ಕೋಟಿ&lt;/li&gt; &lt;li&gt;ಅನ್ನಸಂತರ್ಪಣೆ ನಿಧಿಯಿಂದ ₹9.14 ಕೋಟಿ&lt;/li&gt; &lt;li&gt;ಗುತ್ತಿಗೆಗಳಿಂದ ₹2.53 ಕೋಟಿ&lt;/li&gt; &lt;li&gt;ಕಟ್ಟಡ/ಅಂಗಡಿಗಳ ಬಾಡಿಗೆಯಿಂದ ₹94.46 ಲಕ್ಷ&lt;/li&gt; &lt;li&gt;ಕೃಷಿ ತೋಟ ಮತ್ತು ಧಾನ್ಯದಿಂದ ₹10.50 ಲಕ್ಷ&lt;/li&gt; &lt;li&gt;ಇತರೆ ಮೂಲಗಳಿಂದ ₹3.20 ಕೋಟಿ ಸೇರಿದಂತೆ&amp;nbsp;&lt;/li&gt;&lt;/ul&gt;&lt;p&gt;ಒಟ್ಟು ₹167.89 ಕೋಟಿ ಆದಾಯ ಬಂದಿದೆ.&lt;/p&gt;&lt;p&gt;ಈ ಸಾಧನೆ ದೇವಾಲಯದ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗಿದ್ದು, ಭಕ್ತರ ವಿಶ್ವಾಸ ಮತ್ತು ದೇವಾಲಯದ ವ್ಯವಸ್ಥಾಪನಾ ದಕ್ಷತೆಯನ್ನು ಪ್ರತಿಬಿಂಬಿಸುತ್ತದೆ.&lt;/p&gt;&lt;img&gt;&lt;p&gt;ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು ಕಳೆದ ಎರಡು ದಶಕಗಳಿಂದ ನಿರಂತರ ಆದಾಯ ವೃದ್ಧಿಯನ್ನು ಸಾಧಿಸುತ್ತಿದೆ. 2006-07ರಲ್ಲಿ ಕೇವಲ ₹19.76 ಕೋಟಿ ಆದಾಯ ಹೊಂದಿದ್ದ ದೇವಾಲಯ, 2007-08ರಲ್ಲಿ ₹24.44 ಕೋಟಿಗೆ ಏರಿಕೆ ಕಂಡು ರಾಜ್ಯದ ಪ್ರಮುಖ ದೇವಾಲಯಗಳ ಪಟ್ಟಿಗೆ ಸೇರಿತು.&lt;/p&gt;&lt;img&gt;&lt;ul&gt; &lt;li&gt;2008-09: ₹31 ಕೋಟಿ&lt;/li&gt; &lt;li&gt;2009-10: ₹38.51 ಕೋಟಿ&lt;/li&gt; &lt;li&gt;2011-12: ₹56.24 ಕೋಟಿ&lt;/li&gt; &lt;li&gt;2012-13: ₹66.76 ಕೋಟಿ&lt;/li&gt; &lt;li&gt;2014-15: ₹77.60 ಕೋಟಿ&lt;/li&gt; &lt;li&gt;2015-16: ₹88.83 ಕೋಟಿ&lt;/li&gt; &lt;li&gt;2017-18: ₹95.92 ಕೋಟಿ&lt;/li&gt; &lt;li&gt;2019-20: ₹98.92 ಕೋಟಿ&lt;/li&gt; &lt;li&gt;ಕೋವಿಡ್ ಅವಧಿಯಲ್ಲಿ 2020-21: ₹68.94 ಕೋಟಿ&lt;/li&gt; &lt;li&gt;2022-23: ₹123.64 ಕೋಟಿ&lt;/li&gt; &lt;li&gt;2023-24: ₹146 ಕೋಟಿ&lt;/li&gt; &lt;li&gt;2024-25: ₹155 ಕೋಟಿ&lt;/li&gt;&lt;/ul&gt;&lt;p&gt;ಹೀಗೆ ನಿರಂತರ ಏರಿಕೆಯನ್ನು ಸಾಧಿಸುತ್ತಾ ಬಂದ ದೇವಾಲಯವು ಇದೀಗ 2025-26ರಲ್ಲಿ ₹167 ಕೋಟಿಗೂ ಅಧಿಕ ಆದಾಯ ದಾಖಲಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.&lt;/p&gt;&lt;img&gt;&lt;p&gt;ಕಳೆದ 14 ವರ್ಷಗಳಿಂದ ರಾಜ್ಯದ ಅತಿ ಹೆಚ್ಚು ಆದಾಯ ಗಳಿಸುವ ಮುಜರಾಯಿ ದೇವಾಲಯವಾಗಿ ಹೊರಹೊಮ್ಮಿದ್ದ ಈ ಪವಿತ್ರ ಕ್ಷೇತ್ರವು, ಈ ವರ್ಷವೂ ತನ್ನ ಆ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಸತತ 15ನೇ ವರ್ಷವೂ ನಂ.1 ಸ್ಥಾನವನ್ನು ಉಳಿಸಿಕೊಂಡಿರುವುದು ದೇವಾಲಯದ ನಿರ್ವಹಣಾ ವ್ಯವಸ್ಥೆ, ಭಕ್ತರ ಹೆಚ್ಚುತ್ತಿರುವ ಸಂಖ್ಯೆ ಹಾಗೂ ಧಾರ್ಮಿಕ ನಂಬಿಕೆಗಳ ಬಲವನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ತನ್ನ ಆರ್ಥಿಕ ಸ್ಥಿರತೆ, ಭಕ್ತರ ಅಪಾರ ಬೆಂಬಲ ಮತ್ತು ಸುಧಾರಿತ ಆಡಳಿತ ಕ್ರಮಗಳ ಮೂಲಕ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಮತ್ತೊಮ್ಮೆ ತನ್ನ ಮಹತ್ವವನ್ನು ಸಾಬೀತುಪಡಿಸಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಆದಾಯದಲ್ಲಿ ಹೆಚ್ಚಳ ಸಾಧಿಸುವ ನಿರೀಕ್ಷೆ ಇದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/kukke-subrahmanya-temple-revenue-crosses-rs-167-crore-in-2025-26-remains-karnataka-s-no-1-gdp-nzvizyk"/>
        </item>
        <item>
            <title><![CDATA[ಮೈ ಮೇಲೆ ಕತ್ತಿಯಿಂದ ಹೊಡೆದುಕೊಂಡು ರಕ್ತತರ್ಪಣೆ: ಅಷ್ಟಕ್ಕೂ ಅದು ಯಾವ ಹಬ್ಬ? ಎಲ್ಲಿ ನಡೀತು?]]></title>
            <link>https://kannada.asianetnews.com/festivals/chamarajanagar-kathi-habba-chaudeshwari-alagu-seve-gvd/articleshow-2th0pyr</link>
            <guid isPermaLink="true">https://kannada.asianetnews.com/festivals/chamarajanagar-kathi-habba-chaudeshwari-alagu-seve-gvd/articleshow-2th0pyr</guid>
            <pubDate>Mon, 11 May 2026 17:39:11 +0530</pubDate>
            <description><![CDATA[&lt;p&gt;ಅದೊಂದು ವಿಶಿಷ್ಟ ಹಬ್ಬ. ಮೈ ಮೇಲೆ ಹರಿತವಾದ ಕತ್ತಿಗಳಿಂದ ಹೊಡೆದುಕೊಂಡು ರಕ್ತತರ್ಪಣೆ ಮಾಡುವ ಆ ಹಬ್ಬದಲ್ಲಿನ ಆಚರಣೆ ನೋಡಿದರೆ ಮೈ ಜುಂ ಎನ್ನುತ್ತದೆ. ಅಷ್ಟಕ್ಕೂ ಅದು ಯಾವ ಹಬ್ಬ? ಎಲ್ಲಿ ನಡೀತು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krbf1gyc2v6e51qp13fhfz4f,imgname-bj-1778501338060.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಮೇ.11):&lt;/strong&gt; ಅದೊಂದು ವಿಶಿಷ್ಟ ಹಬ್ಬ. ಮೈ ಮೇಲೆ ಹರಿತವಾದ ಕತ್ತಿಗಳಿಂದ ಹೊಡೆದುಕೊಂಡು ರಕ್ತತರ್ಪಣೆ ಮಾಡುವ ಆ ಹಬ್ಬದಲ್ಲಿನ ಆಚರಣೆ ನೋಡಿದರೆ ಮೈ ಜುಂ ಎನ್ನುತ್ತದೆ. ಅಷ್ಟಕ್ಕೂ ಅದು ಯಾವ ಹಬ್ಬ? ಎಲ್ಲಿ ನಡೀತು? ಈ ಸ್ಟೋರಿ ನೋಡಿ. ಚಾಮರಾಜನಗರದ ರಾಮಸಮುದ್ರದಲ್ಲಿ 28 ವರ್ಷಗಳ ಬಳಿಕ ಮೊದಲ ಬಾರಿಗೆ ಚೌಡೇಶ್ವರಿ ದೇವಿಯ 47 ನೇ ವರ್ಷದ ವರ್ದಂತೋತ್ಸವ ಹಾಗು ವಿಶಿಷ್ಟ ರೀತಿಯ ಕತ್ತಿ ಹಬ್ಬ ಆಚರಿಸಲಾಯ್ತು.&lt;/p&gt;&lt;p&gt;ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದಲೇ ಶ್ರೀ ರಾಮಲಿಂಗೇಶ್ವರ ಹಾಗು ಚೌಡೇಶ್ಚರಿ ಅಮ್ಮನವರಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ರಾಕ್ಷಸರನ್ನು ಸಂಹಾರ ಮಾಡಿದ ಉಗ್ರ ಸ್ವರೂಪಿ ಚೌಡೇಶ್ವರಿ ದೇವಿಗೆ ರಕ್ತತರ್ಪಣೆ ಮಾಡಿ ಶಾಂತಗೊಳಿಸುವ ದ್ಯೋತಕವಾಗಿ ದೇವಾಂಗ ಸಮುದಾಯ ಈ ಹಬ್ಬ ಆಚರಿಸಿಕೊಂಡು ಬರುತ್ತಿದೆ. ನಾಲ್ಕು ದಿನಗಳ ಕಾಲ ಚೌಡೇಶ್ವರಿ ದೇವಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳೊಂದಿಗೆ ನಡೆದ ಹಬ್ಬದಲ್ಲಿ ಅಲಗು ಸೇವೆ ಪ್ರಮುಖವಾಗಿದೆ.&lt;/p&gt;&lt;p&gt;ಕತ್ತಿಹಬ್ಬದ ದಿನದಂದು ಬಿಳಿ ಕುದುರೆ ಮೇಲೆ ದೇವಿಯ ಕಳಶ ಇಟ್ಟು ಮೆರವಣಿಗೆ ಮಾಡಿ ನೂರಾರು ಮಂದಿ ಹರಿತವಾದ ಕತ್ತಿಗಳಿಂದ ತಮ್ಮ ಮೈಮೇಲೆ ಹೊಡೆದುಕೊಳ್ಳುತ್ತಾ ರಕ್ತ ಬರುವಂತೆ ತಮ್ಮ ದೇಹವನ್ನು ದಂಡಿಸಿಕೊಳ್ಳುತ್ತಾರೆ. ಕೆಲವರು ಖಡ್ಗಗಳ ಮೇಲೆ ಕುತ್ತಿಗೆ ಇಟ್ಟು ಅವರ ದೇಹದ ಮೇಲೆ ಇನ್ನಿತರರು ನಿಂತು ಕತ್ತಿಗಳಿಂದ ಹೊಡೆದುಕೊಳ್ಳುತ್ತಾರೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.&lt;/p&gt;&lt;p&gt;ಕತ್ತಿ ಹಬ್ಬ ಆಚರಣೆಗೆ ಪೌರಾಣಿಕ ಹಿನ್ನಲೆಯು ಇದೆ. ದೇವಾನುದೇವತೆಗಳಿಗೆ ವಸ್ತ್ರ ತಯಾರು ಮಾಡುತ್ತಿದ್ದ ದೇವಾಂಗ ದೇವಲ ಮಹರ್ಷಿಯನ್ನು ಕೊಲ್ಲಲು ದೈತ್ಯ ರಾಕ್ಷಸರು ಮುಂದಾಗಿದ್ದಾಗ ಪಾರ್ವತಿ ದೇವಿ ಚೌಡೇಶ್ವರಿಯ ಅವತಾರವೆತ್ತಿ ರಾಕ್ಷಸರನ್ನು ಸಂಹಾರ ಮಾಡಿದಳು, ಬಳಿಕ ಉಗ್ರಸ್ವರೂಪಿಯಾಗಿದ್ದ ಚೌಡೇಶ್ವರಿಯ ಮುಂದೆ ದೇವಲ ಮಹರ್ಷಿ ಖಡ್ಗದಿಂದ ತನ್ನ ಮೈಲೆ ಮೇಲೆ ಹೊಡೆದುಕೊಂಡು ರಕ್ತ ತರ್ಪಣೆ ಮಾಡಿ ದೇವಿಯನ್ನು ಶಾಂತಗೊಳಿಸಿದರು ಎಂಬ ನಂಬಿಕೆ ಇದೆ. ಇದರ ದ್ಯೋತಕವಾಗಿ ಇಂದಿಗು ಕತ್ತಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ತಮಿಳುನಾಡು-ಆಂಧ್ರದಿಂದಲೂ ಭಕ್ತರು&lt;/strong&gt;&lt;/h2&gt;&lt;p&gt;ತೀರ ಅಪರೂಪ ಎನಿಸಿದ ಈ ಕತ್ತಿ ಹಬ್ಬದಲ್ಲಿ ರಾಜ್ಯವಷ್ಟೇ ಅಲ್ಲ ನೆರೆಯ ತಮಿಳುನಾಡು, ಆಂಧ್ರ ಪ್ರದೇಶಗಳಿಂದ ಭಕ್ತರು ಪಾಲ್ಗೊಂಡು ತಮ್ಮ ಕುಲದೇವತೆ ಚೌಡೇಶ್ವರಿ ದೇವಿಗೆ ಅಲಗುಸೇವೆ ಸಲ್ಲಿಸಿದರು. ಅಲಗುಸೇವೆ ಮೇಲ್ನೋಟಕ್ಕೆ ಹಿಂಸೆಯ ಆಚರಣೆಯಂತೆ ಕಂಡರೂ ಇದು ಹಿಂಸೆಯ ಪ್ರತೀಕವಲ್ಲ, ಬದಲಿಗೆ ಅರ್ಪಣಾ ಮನೋಭಾವದಿಂದ ದೇವಿಗೆ ಸಲ್ಲಿಸುವ ಸೇವೆ ಎಂಬುದು ಇಲ್ಲಿನ ಭಕ್ತರ ಪ್ರತಿಪಾದನೆಯಾಗಿದೆ. ಹಬ್ಬದ ಪ್ರಯುಕ್ತ ದೇವಾಂಗ ಕುಲಬಾಂಧವರ ಕತ್ತಿ ಹಬ್ಬ ( ಅಲಗು ಸೇವೆ) ಮೆರೆವಣಿಗೆಯನ್ನು ರಾಮಸಮುದ್ರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಸಲಾಯಿತು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/festivals/chamarajanagar-kathi-habba-chaudeshwari-alagu-seve-gvd/articleshow-2th0pyr"/>
        </item>
        <item>
            <title><![CDATA[ಏರ್ ಇಂಡಿಯಾದಿಂದ 1 ಸಾವಿರ ಸಿಬ್ಬಂದಿಗಳ ವಜಾ,  ಭವಿಷ್ಯದಲ್ಲಿ ಕಷ್ಟದ ದಿನಗಳು ಬರದಂತೆ ಈ ನಿರ್ಧಾರವೆಂದ ಸಿಇಒ!]]></title>
            <link>https://kannada.asianetnews.com/gallery/business/air-india-fires-over-1000-employees-for-ethical-violations-amid-rising-financial-pressure-says-ceo-campbell-wilson-gdp-guyqmw8</link>
            <guid isPermaLink="true">https://kannada.asianetnews.com/gallery/business/air-india-fires-over-1000-employees-for-ethical-violations-amid-rising-financial-pressure-says-ceo-campbell-wilson-gdp-guyqmw8</guid>
            <pubDate>Mon, 11 May 2026 16:54:32 +0530</pubDate>
            <description><![CDATA[&lt;p&gt;ಕಳೆದ ಮೂರು ವರ್ಷಗಳಲ್ಲಿ, ಏರ್ ಇಂಡಿಯಾ ನೈತಿಕ ಉಲ್ಲಂಘನೆಗಳಿಗಾಗಿ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಿಇಒ ಕ್ಯಾಂಪ್&zwnj;ಬೆಲ್ ವಿಲ್ಸನ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ELT ಯೋಜನೆಯ ದುರುಪಯೋಗ ಮತ್ತು ಕಳ್ಳಸಾಗಣೆಯಂತಹ ಗಂಭೀರ ಕಾರಣಗಳನ್ನು ಉಲ್ಲೇಖಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqc4hq94dtm23j90h6qn0d5g,imgname-air-india-hub-spoke-varanasi-international-connectivity-udan-india-aviation-model-updates-3-1777450147108.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಮೂರು ವರ್ಷಗಳಲ್ಲಿ, ಏರ್ ಇಂಡಿಯಾ ನೈತಿಕ ಉಲ್ಲಂಘನೆಗಳಿಗಾಗಿ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಿಇಒ ಕ್ಯಾಂಪ್&zwnj;ಬೆಲ್ ವಿಲ್ಸನ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ELT ಯೋಜನೆಯ ದುರುಪಯೋಗ ಮತ್ತು ಕಳ್ಳಸಾಗಣೆಯಂತಹ ಗಂಭೀರ ಕಾರಣಗಳನ್ನು ಉಲ್ಲೇಖಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಕಳೆದ ಮೂರು ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೈತಿಕ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ವಜಾಗೊಳಿಸಿರುವುದು ಬೆಳಕಿಗೆ ಬಂದಿದೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್&zwnj;ಬೆಲ್ ವಿಲ್ಸನ್ ಈ ಮಾಹಿತಿಯನ್ನು ಸಿಬ್ಬಂದಿಯೊಂದಿಗೆ ನಡೆದ ಟೌನ್&zwnj;ಹಾಲ್ ಸಭೆಯಲ್ಲಿ ಬಹಿರಂಗಪಡಿಸಿದ್ದು, ಸಂಸ್ಥೆಯ ಒಳಗೆ ನಿಯಮ ಪಾಲನೆಗೆ ನೀಡಲಾಗುತ್ತಿರುವ ಮಹತ್ವವನ್ನು ಒತ್ತಿಹೇಳಿದ್ದಾರೆ.&lt;/p&gt;&lt;img&gt;&lt;p&gt;ಕ್ಯಾಂಪ್&zwnj;ಬೆಲ್ ವಿಲ್ಸನ್ ಅವರ ಪ್ರಕಾರ, ಪ್ರತಿವರ್ಷ ನೂರಾರು ಉದ್ಯೋಗಿಗಳನ್ನು ವಿವಿಧ ರೀತಿಯ ನಿಯಮ ಉಲ್ಲಂಘನೆಗಳ ಕಾರಣದಿಂದ ವಜಾಗೊಳಿಸಲಾಗುತ್ತಿದೆ. ಯಾರೂ ನೋಡದಿದ್ದರೂ ಸಹ ಸರಿಯಾದ ನಡವಳಿಕೆಯನ್ನು ಅನುಸರಿಸುವುದು ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯ ಎಂದು ಹೇಳಿದರು.&lt;/p&gt;&lt;p&gt;ವಿಮಾನದಿಂದ ವಸ್ತುಗಳನ್ನು ಕಳ್ಳಸಾಗಣೆ ಮಾಡುವುದು, ಶುಲ್ಕವಿಲ್ಲದೆ ಹೆಚ್ಚುವರಿ ಸಾಮಾನುಗಳನ್ನು ಸಾಗಿಸಲು ಅವಕಾಶ ನೀಡುವುದು ಹಾಗೂ ಉದ್ಯೋಗಿಗಳಿಗೆ ನೀಡಲಾಗುವ ಉದ್ಯೋಗಿಗಳ ಮನರಂಜನಾ ಪ್ರಯಾಣ ಯೋಜನೆ (Employee Leisure Travel-ELT) ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದು ಸೇರಿದಂತೆ ಹಲವು ಗಂಭೀರ ಉಲ್ಲಂಘನೆಗಳಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಠಿಣ ಶಿಸ್ತು ಕ್ರಮಗಳನ್ನು ಜಾರಿಗೆ ತರಲಾಗಿದೆ.&lt;/p&gt;&lt;img&gt;&lt;p&gt;ಮಾರ್ಚ್ ತಿಂಗಳಲ್ಲಿ ಸಂಸ್ಥೆಯು ELT (Employee Leisure Travel) ವ್ಯವಸ್ಥೆಯ ಬಳಕೆಯಲ್ಲಿ ದೊಡ್ಡ ಮಟ್ಟದ ಅಕ್ರಮಗಳನ್ನು ಪತ್ತೆಹಚ್ಚಿತ್ತು. ಮೂಲಗಳ ಪ್ರಕಾರ, 4,000 ಕ್ಕೂ ಹೆಚ್ಚು ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ದಂಡ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಈ ಕ್ರಮಗಳು ಸಂಸ್ಥೆ ಎದುರಿಸುತ್ತಿರುವ ಆರ್ಥಿಕ ಸವಾಲುಗಳ ನಡುವೆಯೇ ಜಾರಿಗೆ ಬಂದಿವೆ. ಟಾಟಾ ಗ್ರೂಪ್ ಅಧೀನದಲ್ಲಿರುವ ಏರ್ ಇಂಡಿಯಾ ಪ್ರಸ್ತುತ ಸುಮಾರು 24,000 ಉದ್ಯೋಗಿಗಳನ್ನು ಹೊಂದಿದೆ. ಆದರೆ, ಮಾರ್ಚ್ 2026ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಗ್ರೂಪ್ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸೇರಿ ₹22,000 ಕೋಟಿಗೂ ಅಧಿಕ ನಷ್ಟವನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಸಂಸ್ಥೆ ಹಲವಾರು ವೆಚ್ಚ ಉಳಿತಾಯ ಕ್ರಮಗಳನ್ನು ಜಾರಿಗೆ ತಂದಿದೆ. ವಾರ್ಷಿಕ ವೇತನ ಹೆಚ್ಚಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು, ಅಗತ್ಯವಿಲ್ಲದ ವೆಚ್ಚಗಳನ್ನು ಕಡಿತಗೊಳಿಸುವುದು ಹಾಗೂ ವಿವೇಚನೆಯ ವೆಚ್ಚ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಲೋಕಸಭೆಗೆ ನೀಡಿದ ಲಿಖಿತ ಉತ್ತರದ ಪ್ರಕಾರ, ವಿಮಾನಯಾನ ಸಂಸ್ಥೆಯ ಆರ್ಥಿಕ ಸ್ಥಿತಿ ಗಂಭೀರವಾಗಿದೆ. 2022-23ನೇ ಹಣಕಾಸು ವರ್ಷದಲ್ಲಿ ₹1,16.32 ಕೋಟಿ ಲಾಭ ದಾಖಲಿಸಿದ್ದ ಸಂಸ್ಥೆ, 2023-24ರಲ್ಲಿ ₹1,63.12 ಕೋಟಿ ನಷ್ಟ ಕಂಡಿತ್ತು. ಇದಾದ ಬಳಿಕ 2024-25ರಲ್ಲಿ ₹58,32.37 ಕೋಟಿ ಭಾರೀ ನಷ್ಟವನ್ನು ದಾಖಲಿಸಿರುವುದು ಪರಿಸ್ಥಿತಿಯ ತೀವ್ರತೆಯನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಮಧ್ಯಪ್ರಾಚ್ಯದ ಭೂರಾಜಕೀಯ ಪರಿಸ್ಥಿತಿ ಸೇರಿದಂತೆ ಜಾಗತಿಕ ಅಂಶಗಳು ವಿಮಾನಯಾನ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿವೆ. ಈ ಬಗ್ಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಕ್ಯಾಂಪ್&zwnj;ಬೆಲ್ ವಿಲ್ಸನ್, &ldquo;ಮಧ್ಯಪ್ರಾಚ್ಯದ ಪರಿಸ್ಥಿತಿ ಸುಧಾರಿಸದಿದ್ದರೆ ಈ ಹಣಕಾಸು ವರ್ಷ ಅತ್ಯಂತ ಕಷ್ಟಕರವಾಗಬಹುದು&rdquo; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಏರ್ ಇಂಡಿಯಾ ತನ್ನ ಆಂತರಿಕ ನಿಯಮ ಪಾಲನೆ, ನೈತಿಕ ಮೌಲ್ಯಗಳು ಮತ್ತು ವೆಚ್ಚ ನಿಯಂತ್ರಣದ ಮೇಲೆ ಹೆಚ್ಚು ಒತ್ತು ನೀಡುತ್ತಿರುವುದು ಸ್ಪಷ್ಟವಾಗಿದೆ. ಆರ್ಥಿಕ ಒತ್ತಡ ಮತ್ತು ಕಾರ್ಯಾಚರಣಾ ಸವಾಲುಗಳ ನಡುವೆಯೂ ಸಂಸ್ಥೆ ಶಿಸ್ತು ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು, ಮುಂದಿನ ದಿನಗಳಲ್ಲಿ ಅದರ ಪುನರುತ್ಥಾನಕ್ಕೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/air-india-fires-over-1000-employees-for-ethical-violations-amid-rising-financial-pressure-says-ceo-campbell-wilson-gdp-guyqmw8"/>
        </item>
        <item>
            <title><![CDATA[Thalapathy Vijay:‌ ತಪ್ಪಾದ ಮುಹೂರ್ತದಲ್ಲಿ ದಳಪತಿ ವಿಜಯ್‌ ಸಿಎಂ; 5 ವರ್ಷ ಕಂಪ್ಲೀಟ್‌ ಮಾಡಲ್ವಾ? ಜ್ಯೋತಿಷಿ ಏನಂದ್ರು?]]></title>
            <link>https://kannada.asianetnews.com/gallery/cine-world/astrology-prediction-on-will-tamil-nadu-cm-thalapathy-vijay-rule-for-five-years-7h89ndc</link>
            <guid isPermaLink="true">https://kannada.asianetnews.com/gallery/cine-world/astrology-prediction-on-will-tamil-nadu-cm-thalapathy-vijay-rule-for-five-years-7h89ndc</guid>
            <pubDate>Mon, 11 May 2026 16:28:25 +0530</pubDate>
            <description><![CDATA[&lt;p&gt;Thalapathy Vijay News: ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ದಳಪತಿ ವಿಜಯ್&zwnj; ಅವರು ಮೇ 10ರಂದು ಬೆಳಿಗ್ಗೆ 10 ಗಂಟೆಗೆ ತಮಿಳುನಾಡಿನ ಹೊಸ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ನಿಜಕ್ಕೂ ಈ ಸಮಯ ಹೇಗಿದೆ? ಐದು ವರ್ಷಗಳ ಕಾಲ ಇವರು ಅಧಿಕಾರ ನಡೆಸುತ್ತಾರಾ? ಎಂಬ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krbam2py70gk45wa1erfm5ad,imgname-new-project---2026-05-11t162115.728-1778496703198.jpg" type="image/jpeg" height="390" width="690"/>
            <content:encoded><![CDATA[&lt;p&gt;Thalapathy Vijay News: ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ದಳಪತಿ ವಿಜಯ್&zwnj; ಅವರು ಮೇ 10ರಂದು ಬೆಳಿಗ್ಗೆ 10 ಗಂಟೆಗೆ ತಮಿಳುನಾಡಿನ ಹೊಸ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ನಿಜಕ್ಕೂ ಈ ಸಮಯ ಹೇಗಿದೆ? ಐದು ವರ್ಷಗಳ ಕಾಲ ಇವರು ಅಧಿಕಾರ ನಡೆಸುತ್ತಾರಾ? ಎಂಬ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;&ldquo;ಆರರಿಂದ ಒಂದು ವರ್ಷದೊಳಗಡೆ ತಮಿಳುನಾಡಿನಲ್ಲಿ ಮತ್ತೆ ಚುನಾವಣೆ ಆಗುವುದು. ದಳಪತಿ ವಿಜಯ್&zwnj; ಅವರಿಗೆ ಅಧಿಕಾರದಲ್ಲಿ ನಿಶ್ಚಿತತೆ ಇರೋದಿಲ್ಲ, ಒಂದಿಷ್ಟು ಸಂಕಷ್ಟಗಳನ್ನು ಎದುರಿಸುತ್ತಾರೆ.&lt;/p&gt;&lt;img&gt;&lt;p&gt;ಮೇ 10 ಮಧ್ಯಾಹ್ನ ಪ್ರಮಾಣವಚನ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಜ್ಯೋತಿಷಿ ಹೇಳಿದ್ದಕ್ಕೆ, ಬೆಳಿಗ್ಗೆ 10 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ ಮಾಡಲಾಗಿದೆ. ಬೆಳಿಗ್ಗೆ 10.45 ವರೆಗೆ ಒಳ್ಳೆಯ ಸಮಯ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಲಗ್ನಾಧಿ ಪತಿ ಅಸ್ತ. ಸಾಲದ್ದಕ್ಕೆ ರಾಜ ಪೀಠದಲ್ಲಿ( ಏಕಾದಶ). ಏಕಾದಶಕ್ಕೆ ಗುರು ದೃಷ್ಟಿಯೂ ಇಲ್ಲ. ಬಾಧಕಾಧಿಪತಿ ಗುರು ಲಗ್ನದಲ್ಲೆ ಇರೋದು. ಇದೂ ಸಾಲದ್ದಕ್ಕೆ ಷಷ್ಠಾಧಿಪತಿ ( ಋಣ,ರೋಗ) ಕುಜನ ವೀಕ್ಷಣೆ ಬಾಧಕಾಧಿಪತಿಗೆ. ಇಂತಹ ಲಗ್ನದಲ್ಲಿ ತಮಿಳರರಸನ ಪೀಠಾರೋಹಣ. ಏನಾಗುತ್ತೋ ನೋಡಬೇಕಿದೆ. ಯಾವುದೇ ಮಹಾ ಯೋಗಗಳಿಲ್ಲ ಇದರಲ್ಲಿ. ದೋಷ ಪೂರಿತವೇ ಆಗಿದೆ. ಅವರಿಗೆಲ್ಲ ಚರ್ಚ್ ಫಾದರ್ ತೀರ್ಥ ಹಾಕಿ ವೈನ್ ಕುಡಿಸಿದರೆ ಮುಗಿಯಿತು ಬಿಡಿ. ಹೆಚ್ಚು ಕಡಿಮೆಯಾದರೆ RSS, BJP ಯನ್ನು ಹಳಿದರೆ ಮುಗಿಯಿತು ಬಿಡಿ ಎಂದು ಪ್ರಕಾಶ್&zwnj; ಅಮ್ಮಣ್ಣಾಯ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮೈತ್ರಿ ಮೇಲೆ ವಿಜಯ್&zwnj; ಸಿಎಂ ಆಗಿದ್ದಾರೆ. ಬಹುಮತ ಸಿಕ್ಕರೂ ಕೂಡ, ಸರ್ಕಾರ ರಚಿಸುವಷ್ಟು ಸೀಟ್&zwnj; ಇರಲಿಲ್ಲ. ಹೀಗಾಗಿ ಬೇರೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.&amp;nbsp;&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/astrology-prediction-on-will-tamil-nadu-cm-thalapathy-vijay-rule-for-five-years-7h89ndc"/>
        </item>
        <item>
            <title><![CDATA[ವಿಜಯ್ ತಮಿಳುನಾಡು ಸಿಎಂ ಪಟ್ಟಕ್ಕೇರಿದ ಬೆನ್ನಲ್ಲೇ  'ಜನ ನಾಯಗನ್' ಚಿತ್ರ ಬಿಡುಗಡೆಗೆ ಸಿದ್ಧತೆ, ನಿರ್ಮಾಪಕರ ಸ್ಪಷ್ಟನೆ!]]></title>
            <link>https://kannada.asianetnews.com/gallery/cine-world/jana-nayagan-release-update-thalapathy-vijay-s-last-movie-gets-major-new-timeline-gdp-3gvdhqc</link>
            <guid isPermaLink="true">https://kannada.asianetnews.com/gallery/cine-world/jana-nayagan-release-update-thalapathy-vijay-s-last-movie-gets-major-new-timeline-gdp-3gvdhqc</guid>
            <pubDate>Mon, 11 May 2026 15:49:10 +0530</pubDate>
            <description><![CDATA[&lt;p&gt;ತಮಿಳುನಾಡು ಸಿಎಂ ವಿಜಯ್ ಅವರ ಬಹುನಿರೀಕ್ಷಿತ ಅಂತಿಮ ಚಿತ್ರ 'ಜನ ನಾಯಗನ್' ಮತ್ತೆ ಚರ್ಚೆಯಲ್ಲಿದೆ. ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ಪ್ರಕಾರ, ಚಿತ್ರವು ಸೆನ್ಸಾರ್ ಹಂತದಲ್ಲಿದ್ದು, ಇನ್ನೆರಡು ವಾರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knv9d73cs3f81qmzsd6mpfje,imgname-vijay-last-movie-jana-nayagan-leaked-clip-1775811075180.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಸಿಎಂ ವಿಜಯ್ ಅವರ ಬಹುನಿರೀಕ್ಷಿತ ಅಂತಿಮ ಚಿತ್ರ 'ಜನ ನಾಯಗನ್' ಮತ್ತೆ ಚರ್ಚೆಯಲ್ಲಿದೆ. ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ಪ್ರಕಾರ, ಚಿತ್ರವು ಸೆನ್ಸಾರ್ ಹಂತದಲ್ಲಿದ್ದು, ಇನ್ನೆರಡು ವಾರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. &amp;nbsp;&lt;/p&gt;&lt;img&gt;&lt;p&gt;ತಮಿಳು ಚಿತ್ರರಂಗದ ಖ್ಯಾತ ನಟನಾಗಿ ಈಗ ರಾಜಕೀಯ ನಾಯಕನಾಗಿ ಮೆರೆಯುತ್ತಿರುವ ತಮಿಳುನಾಡಿನ ನೂತನ ಸಿಎಂ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಅವರ ಬಹುಕಾಲದ ನಿರೀಕ್ಷಿತ ಅಂತಿಮ ಚಿತ್ರ ಜನ ನಾಯಗನ್ ಮತ್ತೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವು ತಿಂಗಳುಗಳಿಂದ ವಿಳಂಬವಾಗಿದ್ದ ಈ ರಾಜಕೀಯ ಹಿನ್ನೆಲೆಯ ಚಿತ್ರವು ಇದೀಗ ಬಿಡುಗಡೆಯ ಹಂತಕ್ಕೆ ತಲುಪಿದ್ದು, ಇನ್ನೆರಡು ವಾರಗಳಲ್ಲಿ ತೆರೆಗೆ ಬರಬಹುದೆಂಬ ಸುಳಿವು ದೊರೆತಿದೆ.&lt;/p&gt;&lt;img&gt;&lt;p&gt;ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥಾಪಕ ವೆಂಕಟ್ ಕೆ. ನಾರಾಯಣ ಅವರು ಇತ್ತೀಚೆಗೆ ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಚಿತ್ರದ ಪ್ರಗತಿ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಚಿತ್ರವು ಈಗ ಅಂತಿಮ ಸರ್ಟಿಫಿಕೆಟ್&zwnj; ಹಂತದಲ್ಲಿದ್ದು, ಸೆನ್ಸಾರ್ ಮಂಡಳಿಯಾದ ಸಿಬಿಎಫ್&zwnj;ಸಿ ಜೊತೆ ಮಾತುಕತೆಗಳು ನಡೆಯುತ್ತಿವೆ. ಎಲ್ಲ ಪ್ರಕ್ರಿಯೆಗಳು ಸುಗಮವಾಗಿ ಪೂರ್ಣಗೊಂಡರೆ, ಮುಂದಿನ 14 ದಿನಗಳೊಳಗೆ ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ದೀರ್ಘಕಾಲದ ನಿರೀಕ್ಷೆಯ ನಂತರ ಈ ಚಿತ್ರ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು ಈ ಸುದ್ದಿ ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ.&lt;/p&gt;&lt;img&gt;&lt;p&gt;ಈ ವೇಳೆ ವೆಂಕಟ್ ಕೆ.ನಾರಾಯಣ ಅವರು ವಿಜಯ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು. ಅವರ ಮಾತಿನಂತೆ, ವಿಜಯ್ ಅವರು ತಮ್ಮ ಮಾತಿಗೆ ಬದ್ಧರಾಗಿರುವ, ಸಮಯಪಾಲನೆ ಹಾಗೂ ಶಿಸ್ತಿಗೆ ಆದ್ಯತೆ ನೀಡುವ ವ್ಯಕ್ತಿ. ವೃತ್ತಿಪರ ಜೀವನದ ಜೊತೆಗೆ ವೈಯಕ್ತಿಕ ಜವಾಬ್ದಾರಿಗಳಲ್ಲಿಯೂ ಅವರು ಅದೇ ಮಟ್ಟದ ನಿಯಮಬದ್ಧತೆಯನ್ನು ಪಾಲಿಸುತ್ತಾರೆ ಎಂದು ಹೇಳಿದ್ದಾರೆ. ಚಿತ್ರದ ನಿರ್ಮಾಣದ ಅವಧಿಯಲ್ಲಿ ವಿಜಯ್ ಅವರ ಪರಿಶ್ರಮ, ಶ್ರದ್ಧೆ ಮತ್ತು ಕಾರ್ಯನೀತಿ ಇಡೀ ತಂಡದ ಮೇಲೆ ಗಾಢವಾದ ಪ್ರಭಾವ ಬೀರಿದೆಯೆಂದು ನಿರ್ಮಾಪಕರು ಅಭಿಪ್ರಾಯಪಟ್ಟರು.&lt;/p&gt;&lt;img&gt;&lt;p&gt;ಜನ ನಾಯಗನ್ ಚಿತ್ರವು ತನ್ನ ರಾಜಕೀಯ ಕಥಾಹಂದರ ಮತ್ತು ವಿಜಯ್ ಅವರ ನೈಜ ರಾಜಕೀಯ ಪ್ರವೇಶದ ಬಗ್ಗೆ ಸಾಮ್ಯತೆಗಳಿಂದ ವಿಶೇಷ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್, ನರೈನ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತವಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಆರಂಭದಲ್ಲಿ ಈ ಚಿತ್ರವನ್ನು 2026ರ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಯೋಜನೆ ಇತ್ತು. ಆದರೆ ಸೆನ್ಸಾರ್ ಸಂಬಂಧಿತ ಅಡೆತಡೆಗಳು ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲ್ಪಟ್ಟಿತು ಎಂಬ ವರದಿಗಳು ಹರಿದಾಡಿದ್ದವು.&lt;/p&gt;&lt;img&gt;&lt;p&gt;ಮೇ 10ರಂದು ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಈ ಚಿತ್ರದ ಬಗ್ಗೆ ಮತ್ತೆ ಸಾರ್ವಜನಿಕ ಆಸಕ್ತಿ ತೀವ್ರಗೊಂಡಿದೆ. ರಾಜಕೀಯ ಮತ್ತು ಸಿನೆಮಾ ಎಂಬ ಎರಡು ಪ್ರಮುಖ ಕ್ಷೇತ್ರಗಳ ಸಂಗಮವಾಗಿರುವ ಈ ಚಿತ್ರವು ಬಿಡುಗಡೆಯಾದ ನಂತರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಜನನಾಯಗನ್ ಚಿತ್ರವು ಕೇವಲ ಒಂದು ಸಿನೆಮಾ ಮಾತ್ರವಲ್ಲ, ವಿಜಯ್ ಅವರ ಜೀವನದ ಹೊಸ ಅಧ್ಯಾಯದ ಪ್ರತಿಬಿಂಬವಾಗಿ ಕಾಣಿಸಿಕೊಂಡಿದ್ದು, ಅದರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/cine-world/jana-nayagan-release-update-thalapathy-vijay-s-last-movie-gets-major-new-timeline-gdp-3gvdhqc"/>
        </item>
        <item>
            <title><![CDATA[CM ವಿಜಯ್ ಟೀಮ್‌ನಲ್ಲಿ 22 ಇಂಜಿನಿಯರ್ಸ್-18 ವಕೀಲರು-8 ಡಾಕ್ಟರ್ಸ್-6 PHD ಹೋಲ್ಡರ್ಸ್, ಇನ್ನೂ ಯಾರೆಲ್ಲಾ ಇದಾರೆ? ಹೈ-ಟೆಕ್ ಆರ್ಮಿ ಇದು!]]></title>
            <link>https://kannada.asianetnews.com/gallery/viral/this-is-not-just-politics-it-is-a-blockbuster-entry-of-highly-educated-mlas-in-cm-thalapathy-vijay-team-in-tamil-nadu-e0maxb5</link>
            <guid isPermaLink="true">https://kannada.asianetnews.com/gallery/viral/this-is-not-just-politics-it-is-a-blockbuster-entry-of-highly-educated-mlas-in-cm-thalapathy-vijay-team-in-tamil-nadu-e0maxb5</guid>
            <pubDate>Mon, 11 May 2026 16:18:57 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ನಾಯಕರು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ 'ಎಡಿಟ್' ಮಾಡಿ ಬಿಸಾಕಿದ್ದಾರೆ. ವಿಜಯ್ ಅವರ ಟೀಮ್&zwnj;ನಲ್ಲಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪೊಲಿಟಿಕಲ್ ಪಾರ್ಟಿ ತರ ಅಲ್ಲ, ಬದಲಾಗಿ ಮಲ್ಟಿ-ನ್ಯಾಷನಲ್ ಕಂಪನಿ ತರ ಇದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr960f74r2qrhthw2mzc57gm,imgname-untitled-design---2026-05-10t202213.910-1778424757476.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ನಾಯಕರು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ 'ಎಡಿಟ್' ಮಾಡಿ ಬಿಸಾಕಿದ್ದಾರೆ. ವಿಜಯ್ ಅವರ ಟೀಮ್&zwnj;ನಲ್ಲಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪೊಲಿಟಿಕಲ್ ಪಾರ್ಟಿ ತರ ಅಲ್ಲ, ಬದಲಾಗಿ ಮಲ್ಟಿ-ನ್ಯಾಷನಲ್ ಕಂಪನಿ ತರ ಇದೆ!&lt;/p&gt;&lt;img&gt;&lt;p&gt;ದಳಪತಿ ವಿಜಯ್ 'ಹೈ-ಟೆಕ್' ಆರ್ಮಿ: ಇದು ಬರೀ ರಾಜಕೀಯ ಪಕ್ಷವಲ್ಲ, ಇಂಟೆಲಿಜೆಂಟ್ಸ್ ಗಳ 'ಪವರ್ ಪ್ಯಾಕ್ಡ್' ಸಿನಿಮಾ!&lt;/p&gt;&lt;p&gt;ಸಿನಿಮಾ ತೆರೆಯ ಮೇಲೆ ದಳಪತಿ ವಿಜಯ್ ಅವರ ಸ್ಲೋ-ಮೋಷನ್ ಎಂಟ್ರಿ ಎಂದರೆ ಥಿಯೇಟರ್&zwnj;ಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಆಗುತ್ತದೆ. ವಿಜಯ್ ಅವರ ಒಂದು ಪವರ್&zwnj;ಫುಲ್ ಡೈಲಾಗ್ ಕೇಳಿದರೆ ಸಾಕು, ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ.&lt;/p&gt;&lt;img&gt;&lt;p&gt;ಆದರೆ ಈಗ ಈ 'ಮಾಸ್' ಹೀರೋ ರಾಜಕೀಯದ 'ಬಿಗ್ ಸ್ಕ್ರೀನ್' ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಈ ಎಂಟ್ರಿ ಎಷ್ಟು ಪವರ್&zwnj;ಫುಲ್ ಆಗಿದೆ ಎಂದರೆ, ಇಡೀ ದೇಶದ ರಾಜಕೀಯ ಧುರಿತರಿಗೆ ಈಗಲೇ ಬೆವರು ಇಳಿಯುತ್ತಿದೆ! ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ತಮಿಳುನಾಡು ವಿಧಾನಸಭೆಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಹೊಸ ಅಧ್ಯಾಯವನ್ನು ಬರೆಯಲು ಸಜ್ಜಾಗಿದೆ.&lt;/p&gt;&lt;img&gt;&lt;p&gt;ಈ ಬಾರಿ ಚರ್ಚೆಯಾಗುತ್ತಿರುವುದು ಕೇವಲ ವಿಜಯ್ ಅವರ ಸ್ಟಾರ್ ಫಾಲೋಯಿಂಗ್ ಬಗ್ಗೆ ಅಲ್ಲ, ಬದಲಾಗಿ ಅವರ 'ಹೈಲಿ ಕ್ವಾಲಿಫೈಡ್' ಶಾಸಕರ ತಂಡದ ಬಗ್ಗೆ! ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ನಾಯಕರು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ 'ಎಡಿಟ್' ಮಾಡಿ ಬಿಸಾಕಿದ್ದಾರೆ. ವಿಜಯ್ ಅವರ ಟೀಮ್&zwnj;ನಲ್ಲಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪೊಲಿಟಿಕಲ್ ಪಾರ್ಟಿ ಮೀಟಿಂಗ್ ತರ ಕಾಣುತ್ತಿಲ್ಲ, ಬದಲಾಗಿ ಯಾವುದೋ ಮಲ್ಟಿ-ನ್ಯಾಷನಲ್ ಕಂಪನಿಯ 'ಬೋರ್ಡ್ ಮೀಟಿಂಗ್' ತರ ಕಾಣುತ್ತಿದೆ!&lt;/p&gt;&lt;img&gt;&lt;p&gt;ಅಂಕಿಸಂಖ್ಯೆಗಳಲ್ಲಿದೆ ಅಸಲಿ 'ಕಿಕ್':&lt;/p&gt;&lt;p&gt;ವಿಜಯ್ ಅವರ 107 ಶಾಸಕರ ತಂಡದ 'ಬ್ರೈನ್ ಪವರ್' ಕಂಡು ವಿರೋಧ ಪಕ್ಷಗಳೇ ದಂಗಾಗಿವೆ. ಈ ತಂಡದ ಶೈಕ್ಷಣಿಕ ಬಲ ಹೀಗಿದೆ:&lt;/p&gt;&lt;p&gt;22 ಇಂಜಿನಿಯರ್&zwnj;ಗಳು: ರಾಜ್ಯದ ಮೂಲಸೌಕರ್ಯಗಳನ್ನು 'ಟೆಕ್ನಿಕಲ್' ಆಗಿ ಅಪ್&zwnj;ಗ್ರೇಡ್ ಮಾಡಲು ಈ ಇಂಜಿನಿಯರ್ ಪಡೆ ಸಜ್ಜಾಗಿದೆ.&lt;/p&gt;&lt;p&gt;18 ವಕೀಲರು: ಕಾನೂನಿನ ಚಕ್ರವ್ಯೂಹವನ್ನು ಭೇದಿಸಲು ಈ ಕಿಲಾಡಿ ಲಾಯರ್&zwnj;ಗಳು ವಿಜಯ್ ಬೆನ್ನಿಗಿದ್ದಾರೆ.&lt;/p&gt;&lt;p&gt;8 ಎಂಬಿಬಿಎಸ್ ವೈದ್ಯರು: ಜನಸಾಮಾನ್ಯರ ಆರೋಗ್ಯದ ನಾಡಿಮಿಡಿತ ತಿಳಿಯಲು ಈ ವೈದ್ಯರು ಬಿಳಿ ಕೋಟ್ ಕಳಚಿ ರಾಜಕೀಯಕ್ಕೆ ಬಂದಿದ್ದಾರೆ.&lt;/p&gt;&lt;img&gt;&lt;p&gt;5 ಐಐಟಿಯನ್ಸ್ (IITians): ದೇಶದ ಅತ್ಯಂತ ಕಠಿಣ ಪರೀಕ್ಷೆ ಪಾಸಾದ ಈ ಐವರು ಮೇಧಾವಿಗಳು ದಳಪತಿಯ 'ಮಾಸ್ಟರ್ ಪ್ಲಾನ್' ರೂಪಿಸುತ್ತಿದ್ದಾರೆ.&lt;/p&gt;&lt;p&gt;6 ಪಿಎಚ್&zwnj;ಡಿ (PhD) ಪದವೀಧರರು: ವಿಷಯಾಧಾರಿತ ಜ್ಞಾನ ಹೊಂದಿರುವ ತಜ್ಞರ ದಂಡೇ ಇಲ್ಲಿದೆ.&lt;/p&gt;&lt;p&gt;ಇದಲ್ಲದೆ 25 ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಈ ತಂಡಕ್ಕೆ ಬಲ ತುಂಬುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾ ಸ್ಟೈಲ್ ಎಂಟ್ರಿ, ಕಾರ್ಪೊರೇಟ್ ಸ್ಟೈಲ್ ಆಡಳಿತ!&lt;/p&gt;&lt;p&gt;ಶಾಲಾ ಕೊಠಡಿಗಳು, ಕೋರ್ಟ್ ಹಾಲ್&zwnj;ಗಳು ಮತ್ತು ಆಸ್ಪತ್ರೆಗಳಿಂದ ಬಂದ ಈ ನವ ಪೀಳಿಗೆಯ ನಾಯಕರು ರಾಜಕೀಯಕ್ಕೆ ಹೊಸ ಕಳೆ ತಂದಿದ್ದಾರೆ. ಅಭಿಮಾನಿಗಳು ಇದನ್ನು &quot;ದಳಪತಿಯ ಬ್ಲಾಕ್ ಬಸ್ಟರ್ ಮಾಸ್ಟರ್ ಪ್ಲಾನ್&quot; ಎಂದು ಕರೆಯುತ್ತಿದ್ದಾರೆ. ಕೇವಲ ಅಧಿಕಾರ ಹಿಡಿಯುವುದಷ್ಟೇ ಗುರಿಯಲ್ಲ, ಬದಲಾಗಿ ತಜ್ಞತೆ (Expertise) ಮತ್ತು ಸ್ಪಷ್ಟ ದೃಷ್ಟಿಕೋನದ (Vision) ಮೂಲಕ ಆಡಳಿತ ನಡೆಸುವುದೇ ಈ ಪಕ್ಷದ ಅಸಲಿ ಸೀಕ್ರೆಟ್.&lt;/p&gt;&lt;img&gt;&lt;p&gt;ರಾಜಕೀಯ ಅಂದರೆ ಕೇವಲ ಅಧಿಕಾರದ ದಾಹವಲ್ಲ, ಅದು ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳನ್ನು ಕಂಡುಕೊಳ್ಳುವ ವೇದಿಕೆ ಎಂದು ವಿಜಯ್ ಸಾಬೀತುಪಡಿಸುತ್ತಿದ್ದಾರೆ. ಸಿನಿಮಾ ತೆರೆಯ ಮೇಲೆ 'ದಳಪತಿ'ಯಾಗಿ ಮಿಂಚಿದ್ದ ವಿಜಯ್, ಈಗ ಈ ಹೈ-ಟೆಕ್ ತಂಡದ ಮೂಲಕ ತಮಿಳುನಾಡು ವಿಧಾನಸಭೆಯಲ್ಲಿ ಹೊಸ ಹವಾ ಸೃಷ್ಟಿಸಲು ಸಜ್ಜಾಗಿದ್ದಾರೆ. ಸಿನಿಮಾ ಪ್ರೇಮಿಗಳು ಮತ್ತು ರಾಜಕೀಯ ವಿಶ್ಲೇಷಕರು ಈಗ ಒಟ್ಟಾಗಿ ಹೇಳುತ್ತಿರುವುದು ಒಂದೇ ಮಾತು - &quot;ಪಿಕ್ಚರ್ ಈಗಷ್ಟೇ ಶುರುವಾಗಿದೆ, ಇದು ಬರೀ ಟ್ರೈಲರ್ ಅಷ್ಟೇ!&quot;&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/viral/this-is-not-just-politics-it-is-a-blockbuster-entry-of-highly-educated-mlas-in-cm-thalapathy-vijay-team-in-tamil-nadu-e0maxb5"/>
        </item>
        <item>
            <title><![CDATA[₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?]]></title>
            <link>https://kannada.asianetnews.com/india-news/vijay-tamil-nadu-cm-promises-and-political-challenges-gvd-videoshow-y6re95f</link>
            <guid isPermaLink="true">https://kannada.asianetnews.com/india-news/vijay-tamil-nadu-cm-promises-and-political-challenges-gvd-videoshow-y6re95f</guid>
            <pubDate>Mon, 11 May 2026 16:09:29 +0530</pubDate>
            <description><![CDATA[&lt;p&gt;ತಮಿಳುನಾಡಲ್ಲಿ ವಿಜಯ ಶಕೆ ಆರಂಭವಾಗಿದೆ.. ದ್ರಾವಿಡ ನಾಡಲ್ಲಿ, ವಿಜಯ ಪತಾಕೆ ಹಾರಾಡ್ತಾ ಇದೆ.. ಆದ್ರೆ ಇಲ್ಲಿ ಪ್ರಶ್ನೆ ಇರೋದು, ಮುಖ್ಯವಾಗಿ 2.. ಮೊದಲನೇದು.. ವಿಜಯ್ ಸಿಎಮ್ ಕುರ್ಚಿ ಅದೆಷ್ಟು ಸೇಫ್? ಇನ್ನೊಂದು..&lt;/p&gt;]]></description>
            <media:content url="https://geo.dailymotion.com/player/x1tbu.html?video=xa9aazc" medium="video" height="768" width="1024"/>
            <content:encoded><![CDATA[&lt;p&gt;ತಮಿಳುನಾಡಲ್ಲಿ ವಿಜಯ ಶಕೆ ಆರಂಭವಾಗಿದೆ.. ದ್ರಾವಿಡ ನಾಡಲ್ಲಿ, ವಿಜಯ ಪತಾಕೆ ಹಾರಾಡ್ತಾ ಇದೆ.. ಆದ್ರೆ ಇಲ್ಲಿ ಪ್ರಶ್ನೆ ಇರೋದು, ಮುಖ್ಯವಾಗಿ 2.. ಮೊದಲನೇದು.. ವಿಜಯ್ ಸಿಎಮ್ ಕುರ್ಚಿ ಅದೆಷ್ಟು ಸೇಫ್? ಇನ್ನೊಂದು, ವಿಜಯ್ ಕೊಟ್ಟಿರೋ ವಾಗ್ದಾನ ಯಾವಾಗ ಪೂರೈಕೆ ಮಾಡ್ತಾರೆ? ಹೇಗೆ ಕೊಟ್ಟ ಮಾತು ಈಡೇರಿಸ್ತಾರೆ, ಅದರ ಪರಿಣಾಮ ತಮಿಳುನಾಡಿನ ಮೇಲೆ ಹೇಗಾಗುತ್ತೆ ಅಂತ.. ಈ ಎರಡು ಅನುಮಾನಗಳು ಹುಟ್ಟಿಕೊಂಡಿದ್ದೇಕೆ? ಅದಕ್ಕೆ ಉತ್ತರ ಏನು? ವಿಜಯ್ ಅವರ ವಾಗ್ದಾನ &amp;nbsp;ನೋಡಿದ ಎಂಥವರಿಗೂ ಕೂಡ, ಇದು ಸುಲಭದ ಕೆಲಸ ಅಲ್ಲ ಅನ್ನೋದು ಅರ್ಥವಾಗತ್ತೆ.. &amp;nbsp;ಅಷ್ಟೇ ಅಲ್ಲ, ಅಲ್ಲಿ ವಿಜಯ್ ಸ್ವಂತ ಬಲದ ಮೇಲೆ ಸರ್ಕಾರ ಮಾಡಿಲ್ಲ.&lt;/p&gt;&lt;p&gt;ಒಬ್ಬ ಸದಸ್ಯ ಮುನಿಸಿಕೊಂಡ್ರೂ, ಕುರ್ಚಿಗೇ ಕಂಟಕ ಇದೆ.. ಈ ಸವಾಲನ್ನ ಹೇಗೆ ನಿಭಾಯಿಸ್ತಾರೆ ವಿಜಯ್? ವಿಜಯ್ ಕೊಟ್ಟ ಪ್ರತಿಯೊಂದು ಭರವಸೆ ಕೂಡ ಕೇಳೋಕೆ ಮಾಸ್ ಸಿನಿಮಾ ಡೈಲಾಗ್ ತರಹ ಸೂಪರ್ ಆಗಿದೆ.. ಆದ್ರೆ, ಈ ಕಥೆ ಇರೋದು ತಮಿಳುನಾಡಿನ ಖಜಾನೆಯಲ್ಲಿ. ಈ ಹೊರೆ ಇಳಿಸೋದಕ್ಕೆ, ಅಥವಾ ಹೊರೆ ಹೊರೆಯೇ ಅಲ್ಲ ಅಂತ ತೋರಿಸೋಕೆ, ವಿಜಯ್ ಯಾವ್ದಾದ್ರೂ ದಾರಿ ಹುಡುಕ್ಕೊಂಡಿದಾರಾ? ಅಥವಾ ಏನಾದ್ರೂ ಮ್ಯಾಜಿಕ್ ಮಾಡ್ತಾರಾ? ವಿಜಯ್ ಅವರು ಕೊಟ್ಟಿರೋ ಪ್ರಾಮಿಸ್&zwnj;ಗಳನ್ನ ಈಡೇರಿಸೋಕೆ ವರ್ಷಕ್ಕೆ ಸುಮಾರು 2 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿಯಾಗಿ ಬೇಕು.. ಇದನ್ನ ತರೋದಕ್ಕೆ ವಿಜಯ್ ಟೀಂ ಹತ್ತಿರ ಕೆಲವು ಐಡಿಯಾಗಳಿವೆ. ಏನದು?&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/india-news/vijay-tamil-nadu-cm-promises-and-political-challenges-gvd-videoshow-y6re95f"/>
        </item>
        <item>
            <title><![CDATA[ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!]]></title>
            <link>https://kannada.asianetnews.com/india-news/vijay-government-promises-and-treasury-crisis-suh-videoshow-5wkvsbr</link>
            <guid isPermaLink="true">https://kannada.asianetnews.com/india-news/vijay-government-promises-and-treasury-crisis-suh-videoshow-5wkvsbr</guid>
            <pubDate>Mon, 11 May 2026 15:26:25 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಹೊಸ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ದೊಡ್ಡ ಭರವಸೆಗಳು, ₹4.5 ಲಕ್ಷ ಕೋಟಿ ಹೊರೆ ಮತ್ತು ಸ್ಟಾಲಿನ್ ಎಚ್ಚರಿಕೆ ನಡುವೆ ವಿಜಯ್ ಆಡಳಿತಕ್ಕೆ ಈಗ ನಿಜವಾದ ಅಗ್ನಿಪರೀಕ್ಷೆ ಆರಂಭವಾಗಿದೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xa9bav8" medium="video" height="768" width="1024"/>
            <content:encoded><![CDATA[&lt;p&gt;ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಹೊಸ ಸಮ್ಮಿಶ್ರ ಸರ್ಕಾರ ರಚನೆಯಾಗಿ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಬಹುಮತದ ಬೆಂಬಲ ಪಡೆದು ಮುಖ್ಯಮಂತ್ರಿ ಪಟ್ಟಕ್ಕೇರಿದ ವಿಜಯ್, ಮೊದಲ ದಿನವೇ ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಆದರೆ ₹4.5 ಲಕ್ಷ ಕೋಟಿ ಭರವಸೆಗಳನ್ನು ಈಡೇರಿಸುವುದು ಅವರ ಮುಂದಿನ ದೊಡ್ಡ ಸವಾಲಾಗಿದೆ. ಮಾಜಿ ಸಿಎಂ ಸ್ಟಾಲಿನ್ ನೀಡಿದ ಎಚ್ಚರಿಕೆ ಸರ್ಕಾರದ ಸ್ಥಿರತೆ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಹಲವು ವರ್ಷಗಳ ಬಳಿಕ ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಮುಂದಿನ ದಿನಗಳ ರಾಜಕೀಯ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.&lt;/p&gt;]]></content:encoded>
            <category>news</category>
            <dc:creator>Sushma Hegde</dc:creator>
            <atom:link href="https://kannada.asianetnews.com/india-news/vijay-government-promises-and-treasury-crisis-suh-videoshow-5wkvsbr"/>
        </item>
        <item>
            <title><![CDATA[Thalapathy Vijay ಸಿಎಂ; ಫಸ್ಟ್‌ಟೈಮ್‌ ರಿಯಾಕ್ಷನ್‌ ಕೊಟ್ಟ ತ್ರಿಶಾ ಕೃಷ್ಣನ್;‌ ಈ ಧೈರ್ಯಕ್ಕೆ ಮೆಚ್ಚಬೇಕು!]]></title>
            <link>https://kannada.asianetnews.com/gallery/cine-world/actress-trisha-krishnan-instagrampost-after-thalapathy-vijay-cm-qhc1lmm</link>
            <guid isPermaLink="true">https://kannada.asianetnews.com/gallery/cine-world/actress-trisha-krishnan-instagrampost-after-thalapathy-vijay-cm-qhc1lmm</guid>
            <pubDate>Mon, 11 May 2026 14:52:28 +0530</pubDate>
            <description><![CDATA[&lt;p&gt;Actress Trisha Krishnan: ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ನಟಿ ತ್ರಿಶಾ ಭಾಗವಹಿಸಿದ್ದರು. ಇದೀಗ ಅವರು ಇನ್&zwnj;ಸ್ಟಾಗ್ರಾಂನಲ್ಲಿ ಹಾಕಿರುವ ಒಂದು ಪೋಸ್ಟ್ ಸಖತ್ ವೈರಲ್ ಆಗಿದ್ದು, ಅದರ ಹಿಂದಿನ ಅರ್ಥವೇನು ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krb54j62c0mavsm6v0bmewhn,imgname-new-project---2026-05-11t144457.054-1778490951874.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Trisha Krishnan: ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ನಟಿ ತ್ರಿಶಾ ಭಾಗವಹಿಸಿದ್ದರು. ಇದೀಗ ಅವರು ಇನ್&zwnj;ಸ್ಟಾಗ್ರಾಂನಲ್ಲಿ ಹಾಕಿರುವ ಒಂದು ಪೋಸ್ಟ್ ಸಖತ್ ವೈರಲ್ ಆಗಿದ್ದು, ಅದರ ಹಿಂದಿನ ಅರ್ಥವೇನು ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಾರಂಭಕ್ಕೆ ಹಲವು ಗಣ್ಯರು ಬಂದಿದ್ದರು. ಆದರೆ, ಎಲ್ಲರ ಗಮನ ಸೆಳೆದಿದ್ದು ನಟಿ ತ್ರಿಶಾ. ಸಮಾರಂಭದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ್ದ ತ್ರಿಶಾ, 'ಸೂಪರ್ ಹ್ಯಾಪಿ' ಎಂದಿದ್ದರು.&lt;/p&gt;&lt;p&gt;ಅಷ್ಟೇ ಅಲ್ಲ, ವಿಜಯ್ ಪ್ರಮಾಣ ವಚನ ಸ್ವೀಕರಿಸುವಾಗ ತ್ರಿಶಾ ಭಾವುಕರಾಗಿ ಕಣ್ಣೀರು ಹಾಕಿದ ವಿಡಿಯೋ ಕೂಡ ವೈರಲ್ ಆಗಿತ್ತು. ಆದರೆ, ವಿಜಯ್ ಪ್ರಮಾಣ ವಚನದ ಬಗ್ಗೆ ತ್ರಿಶಾ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿರಲಿಲ್ಲ.&lt;/p&gt;&lt;img&gt;&lt;p&gt;ಇಂದು ಬೆಳಗ್ಗೆ ಅವರು ಒಂದು ಪೋಸ್ಟ್ ಹಾಕಿದ್ದಾರೆ. ವಿಜಯ್ ಪ್ರಮಾಣ ವಚನ ಸಮಾರಂಭಕ್ಕೆ ತಾವು ಉಟ್ಟುಕೊಂಡು ಹೋಗಿದ್ದ ಸೀರೆಯಲ್ಲೇ ಫೋಟೋಶೂಟ್ ಮಾಡಿಸಿ, ಅದಕ್ಕೆ ಒಂದು ಕ್ಯಾಪ್ಶನ್ ನೀಡಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;p&gt;ಈ ಪೋಸ್ಟ್ ಈಗ ಇಂಟರ್&zwnj;ನೆಟ್&zwnj;ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಮುದ್ರ ಹಸಿರು ಬಣ್ಣದ ಸುಂದರ ಸೀರೆ ಮತ್ತು ಆಭರಣಗಳನ್ನು ಧರಿಸಿ ತ್ರಿಶಾ ಸಮಾರಂಭಕ್ಕೆ ಬಂದಿದ್ದರು. ಸಮಾರಂಭ ಮುಗಿದ ನಂತರ, &quot;The love is always louder&quot; (ಪ್ರೀತಿ ಯಾವಾಗಲೂ ಜೋರಾಗಿ ಧ್ವನಿಸುತ್ತದೆ) ಎಂಬ ಕ್ಯಾಪ್ಶನ್&zwnj;ನೊಂದಿಗೆ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿಜಯ್ ಅವರ ರಾಜಕೀಯ ಗೆಲುವಿನ ನಡುವೆ, ತ್ರಿಶಾ ಇಂತಹ ಪೋಸ್ಟ್ ಹಾಕಿರುವುದು, ಅವರಿಬ್ಬರ ನಡುವಿನ ಸ್ನೇಹ ಮತ್ತು ಪ್ರೀತಿಯ ಬಗೆಗಿನ ಹಳೆಯ ಮಾತುಕತೆಗಳನ್ನು ಮತ್ತೆ ಹುಟ್ಟುಹಾಕಿದೆ. 'ಗಿಲ್ಲಿ', 'ತಿರುಪಾಚಿ', 'ಲಿಯೋ' ನಂತಹ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ ಈ ಜೋಡಿ, ತಮಿಳು ಸಿನಿಮಾದ ಅಚ್ಚುಮೆಚ್ಚಿನ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದಾಗಿದೆ.&lt;/p&gt;&lt;p&gt;ವಿಜಯ್&zwnj;ಗೆ ವಿಚ್ಛೇದನ ಎಂಬ ಸುದ್ದಿ ಹರಡಲು ಶುರುವಾದಾಗಿನಿಂದ, ತ್ರಿಶಾ ಹೆಸರನ್ನೂ ಸೇರಿಸಿ ಹಲವರು ಮಾತನಾಡುತ್ತಿದ್ದಾರೆ. ಕೆಲವು ರಾಜಕೀಯ ನಾಯಕರು ಕೂಡ ಈ ಸಂಬಂಧದ ಬಗ್ಗೆ ಮಾತನಾಡಿದ್ದರು. ಆದರೆ, ಈ ವದಂತಿಗಳಿಗೆ ವಿಜಯ್, ತ್ರಿಶಾ ಇಬ್ಬರೂ ಇಲ್ಲಿಯವರೆಗೆ ಅಧಿಕೃತವಾಗಿ ಯಾವುದೇ ಉತ್ತರ ನೀಡಿಲ್ಲ. ಇತ್ತೀಚೆಗೆ ನಡೆದ ಎಜಿಎಸ್ ಕುಟುಂಬದ ವಿವಾಹ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ಭಾಗವಹಿಸಿದ್ದು ದೊಡ್ಡ ಸುದ್ದಿಯಾಗಿತ್ತು.&lt;/p&gt;&lt;img&gt;&lt;p&gt;ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅವರ ತಂದೆ ಎಸ್.ಎ. ಚಂದ್ರಶೇಖರ್ ಮತ್ತು ತಾಯಿ ಶೋಭಾ ಚಂದ್ರಶೇಖರ್ ಇಬ್ಬರೂ ಬಂದಿದ್ದರು. ಅಮ್ಮಂದಿರ ದಿನದಂದೇ ತನ್ನ ಮಗ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ತುಂಬ ಭಾವುಕ ಕ್ಷಣ ಎಂದು ಶೋಭಾ ಚಂದ್ರಶೇಖರ್ ಹೇಳಿದ್ದರು.&amp;nbsp;&lt;/p&gt;&lt;p&gt;ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 108 ಕ್ಷೇತ್ರಗಳಲ್ಲಿ ಗೆದ್ದು ತಮಿಳುನಾಡಿನಲ್ಲಿ ಅಧಿಕಾರ ಹಿಡಿದಿದೆ. ಇದರ ಮೂಲಕ, ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದ್ರಾವಿಡ ಪಕ್ಷಗಳ ಆಡಳಿತಕ್ಕೆ ವಿಜಯ್ ಅಂತ್ಯ ಹಾಡಿದ್ದಾರೆ. ಇಲ್ಲಿಯವರೆಗೆ ಈ ಎರಡು ದ್ರಾವಿಡ ಪಕ್ಷಗಳು ಮಾತ್ರ ಸರದಿಯಂತೆ ಆಡಳಿತ ನಡೆಸುತ್ತಿದ್ದವು. ಇದೀಗ ಆ ಎರಡು ಪಕ್ಷಗಳನ್ನೂ ವಿರೋಧ ಪಕ್ಷಗಳನ್ನಾಗಿಸಿ ವಿಜಯ್ ಒಂದು ಕ್ರಾಂತಿಯನ್ನೇ ಮಾಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/actress-trisha-krishnan-instagrampost-after-thalapathy-vijay-cm-qhc1lmm"/>
        </item>
        <item>
            <title><![CDATA[ಬರೀ ಭಾಷಣಕಾರರಿಲ್ಲ, ಹೈಲಿ ಕ್ವಾಲಿಫೈಡ್ ಶಾಸಕರು; ರೀಲ್ ಹೀರೋ ದಳಪತಿ ಅಧಿಪತ್ಯದಲ್ಲಿ 'ರಿಯಲ್ ಹೀರೋ'ಗಳೇ ಹೆಚ್ಚು!]]></title>
            <link>https://kannada.asianetnews.com/india-news/thalapathy-reign-begins-in-tamil-nadu-this-is-not-just-politics-also-a-blockbuster-entry-of-highly-educated-mlas/articleshow-prae3su</link>
            <guid isPermaLink="true">https://kannada.asianetnews.com/india-news/thalapathy-reign-begins-in-tamil-nadu-this-is-not-just-politics-also-a-blockbuster-entry-of-highly-educated-mlas/articleshow-prae3su</guid>
            <pubDate>Mon, 11 May 2026 14:45:58 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ರಾಜಕಾರಣಿಗಳು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ ಬದಲಿಸಿದ್ದಾರೆ. ಅವರ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಂತಿದೆ. ಯಾರೆಲ್ಲಾ ಇದ್ದಾರೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krb54hbnm1xwe0a1enqh7fjh,imgname-thalapathy-vijay-1778490951029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯ್ ಶಾಕಿಂಗ್ ಕ್ಯಾಬಿನೆಟ್&zwnj;&lt;/strong&gt;&lt;/p&gt;&lt;p&gt;ಸಿನಿಮಾ ತೆರೆಯ ಮೇಲೆ ವಿಜಯ್ (Vijay Joseph) ಅವರ ಎಂಟ್ರಿ ಎಂದರೆ ಅಲ್ಲಿ ಶಿಳ್ಳೆ, ಚಪ್ಪಾಳೆಗಳ ಅಬ್ಬರ ಇರುತ್ತದೆ. ಆದರೆ ಈಗ ದಳಪತಿ ವಿಜಯ್ ರಾಜಕೀಯ ಅಖಾಡಕ್ಕೆ ಕೊಟ್ಟಿರುವ ಎಂಟ್ರಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಹೌದು, ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಬರೆಯಲು ಸಜ್ಜಾಗಿದೆ. ವಿಶೇಷವೆಂದರೆ, ಈ ಬಾರಿ ಚರ್ಚೆಯಾಗುತ್ತಿರುವುದು ಕೇವಲ ವಿಜಯ್ ಅವರ ಜನಪ್ರಿಯತೆಯ ಬಗ್ಗೆ ಅಲ್ಲ, ಬದಲಾಗಿ ಅವರ ತಂಡದಲ್ಲಿರುವ 'ಹೈಲಿ ಕ್ವಾಲಿಫೈಡ್' ಶಾಸಕರ ಬಗ್ಗೆ!&lt;/p&gt;&lt;p&gt;ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ರಾಜಕಾರಣಿಗಳು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ ಬದಲಿಸಿದ್ದಾರೆ. ಅವರ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಂತಿದೆ. ವಿಜಯ್ ಅವರ ಈ ತಂಡದಲ್ಲಿ ಬರೀ ಭಾಷಣಕಾರರಿಲ್ಲ, ಬದಲಾಗಿ ಅದ್ಭುತ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆ ಇರುವ 'ರಿಯಲ್ ಹೀರೋ'ಗಳಿದ್ದಾರೆ.&lt;/p&gt;&lt;h2&gt;ಅಂಕಿಸಂಖ್ಯೆಗಳಲ್ಲಿದೆ ಅಸಲಿ ಮ್ಯಾಜಿಕ್:&lt;/h2&gt;&lt;p&gt;ವಿಜಯ್ ಅವರ 107 ಶಾಸಕರ ತಂಡದ ಶೈಕ್ಷಣಿಕ ಬಲ ಹೀಗಿದೆ:&lt;/p&gt;&lt;p&gt;22 ಇಂಜಿನಿಯರ್&zwnj;ಗಳು: ತಾಂತ್ರಿಕ ಜ್ಞಾನದೊಂದಿಗೆ ನಾಡು ಕಟ್ಟಲು ಇವರು ರೆಡಿಯಾಗಿದ್ದಾರೆ.&lt;/p&gt;&lt;p&gt;18 ವಕೀಲರು: ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೊಡಿಸಲು ಸನ್ನದ್ಧರಾಗಿದ್ದಾರೆ.&lt;/p&gt;&lt;p&gt;8 ಎಂಬಿಬಿಎಸ್ ವೈದ್ಯರು: ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಸಜ್ಜಾಗಿ ಬಂದಿದ್ದಾರೆ.&lt;/p&gt;&lt;p&gt;5 ಐಐಟಿಯನ್ಸ್ (IITians): ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಯ ಬ್ರೈನ್&zwnj;ಗಳು ಈಗ ವಿಜಯ್ ಕೈ ಹಿಡಿದಿವೆ.&lt;/p&gt;&lt;p&gt;6 ಪಿಎಚ್&zwnj;ಡಿ (PhD) ಪದವೀಧರರು: ವಿಷಯಾಧಾರಿತ ಜ್ಞಾನ ಹೊಂದಿರುವ ತಜ್ಞರು ಈ ತಂಡದಲ್ಲಿದ್ದಾರೆ.&lt;/p&gt;&lt;p&gt;ಇದಲ್ಲದೆ 12 ಪದವೀಧರರು ಮತ್ತು 13 ಸ್ನಾತಕೋತ್ತರ ಪದವೀಧರರು ಈ ತಂಡದ ಶಕ್ತಿಯಾಗಿದ್ದಾರೆ.&lt;/p&gt;&lt;h3&gt;ಸಿನಿಮಾ ಸ್ಟೈಲ್ ಎಂಟ್ರಿ, ಕಾರ್ಪೊರೇಟ್ ಸ್ಟೈಲ್ ಆಡಳಿತ!&lt;/h3&gt;&lt;p&gt;ಶಾಲಾ ಕೊಠಡಿಗಳು, ಕೋರ್ಟ್ ಹಾಲ್&zwnj;ಗಳು, ಆಸ್ಪತ್ರೆಗಳು ಮತ್ತು ಇಂಜಿನಿಯರಿಂಗ್ ಕ್ಯಾಂಪಸ್&zwnj;ಗಳಿಂದ ಬಂದ ಈ ನವ ಪೀಳಿಗೆಯ ನಾಯಕರು ರಾಜಕೀಯಕ್ಕೆ ಹೊಸ ಕಳೆ ತಂದಿದ್ದಾರೆ. ಅಭಿಮಾನಿಗಳು ಇದನ್ನು &quot;ದಳಪತಿಯ ಮಾಸ್ ಮಾಸ್ಟರ್ ಪ್ಲಾನ್&quot; ಎಂದು ಕರೆಯುತ್ತಿದ್ದಾರೆ. ಕೇವಲ ಅಧಿಕಾರ ಹಿಡಿಯುವುದಷ್ಟೇ ಗುರಿಯಲ್ಲ, ಬದಲಾಗಿ ತಜ್ಞತೆ (Expertise) ಮತ್ತು ಸ್ಪಷ್ಟ ದೃಷ್ಟಿಕೋನದ (Vision) ಮೂಲಕ ಆಡಳಿತ ನಡೆಸುವುದೇ ಈ ಪಕ್ಷದ ಅಸಲಿ ಸೀಕ್ರೆಟ್ ಎಂಬುದು ಸ್ಪಷ್ಟವಾಗುತ್ತಿದೆ.&lt;/p&gt;&lt;p&gt;ರಾಜಕೀಯ ಅಂದರೆ ಕೇವಲ ಅಧಿಕಾರದ ದಾಹವಲ್ಲ, ಅದು ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳನ್ನು ಕಂಡುಕೊಳ್ಳುವ ವೇದಿಕೆ ಎಂದು ವಿಜಯ್ ಸಾಬೀತುಪಡಿಸುತ್ತಿದ್ದಾರೆ. ಸಿನಿಮಾ ತೆರೆಯ ಮೇಲೆ 'ದಳಪತಿ'ಯಾಗಿ ಮಿಂಚಿದ್ದ ವಿಜಯ್, ಈಗ ಈ ಹೈ-ಟೆಕ್ ತಂಡದ ಮೂಲಕ ತಮಿಳುನಾಡು ವಿಧಾನಸಭೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಸಿನಿಮಾ ಪ್ರೇಮಿಗಳು ಮತ್ತು ರಾಜಕೀಯ ವಿಶ್ಲೇಷಕರು ಈಗ ಒಟ್ಟಾಗಿ ಹೇಳುತ್ತಿರುವುದು ಒಂದೇ ಮಾತು - &quot;ಪಿಕ್ಚರ್ ಈಗಷ್ಟೇ ಶುರುವಾಗಿದೆ!&quot;&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/india-news/thalapathy-reign-begins-in-tamil-nadu-this-is-not-just-politics-also-a-blockbuster-entry-of-highly-educated-mlas/articleshow-prae3su"/>
        </item>
        <item>
            <title><![CDATA[ಇಂಧನ ಆತಂಕ ನಡುವೆ 3 ಗಂಟೆಗೆ ಪೆಟ್ರೋಲಿಯಂ ಮಿನಿಸ್ಟ್ರಿ ಸುದ್ದಿಗೋಷ್ಠಿ, ಮಹತ್ವದ ಘೋಷಣೆ ಸಾಧ್ಯತೆ]]></title>
            <link>https://kannada.asianetnews.com/india-news/petroleum-ministry-to-hold-press-conference-at-3-pm-amid-fuel-supply-concerns/articleshow-pwlxevx</link>
            <guid isPermaLink="true">https://kannada.asianetnews.com/india-news/petroleum-ministry-to-hold-press-conference-at-3-pm-amid-fuel-supply-concerns/articleshow-pwlxevx</guid>
            <pubDate>Mon, 11 May 2026 14:39:30 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಇಂಧನ ಪೂರೈಕೆ ಕೊರತೆ ಕುರಿತು ಸೂಚನೆ ನೀಡಿದ ಬೆನ್ನಲ್ಲೇ ಹಲವೆಡೆ ಪೆಟ್ರೋಲ್ ಬಂಕ್ ಕ್ಲೋಸ್ ಆಗುತ್ತಿದೆ. ಈ ಆತಂಕದ ಬೆನ್ನಲ್ಲೇ ಪೆಟ್ರೋಲಿಯಂ ಸಚಿವಾಲಯ ಸುದ್ದಿಗೋಷ್ಠಿ ಕರೆದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jshfzjwm873wykjb5rz4rqfk,imgname-pm-narendra-modi-cabinet-meeting-photo-1745417653137.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.11)&lt;/strong&gt; ಯುದ್ಧದ ಹಿನ್ನಲೆಯಲ್ಲಿ ಇಂಧನ ಹಾಗೂ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಜೊತೆಗೆ ವಿದೇಶಿ ವಿನಿಮಮಯ ಸಮಸ್ಯೆ, ಆರ್ಥಿಕ ಹಿನ್ನಡೆ, ಹಣ ದುಬ್ಬ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ದೇಶದ ಜನತೆಗೆ ಸೂಚನೆ ನೀಡಿದ್ದಾರೆ. ಇಂಧನ ಉಳಿತಾಯ ಸೇರಿದಂತೆ ಹಲವು ಕ್ರಮಗಳ ಕೈಗೊಳ್ಳಲು ಮೋದಿ ಕೆಲ ಸೂತ್ರ ಅನುಸರಿಸಲು ಸೂಚಿಸಿದ್ದಾರೆ. ಇತ್ತ ದೇಶದ ಕೆಲವೆಡೆ ಪೆಟ್ರೋಲ್ ಬಂಕ್&zwnj;ಗಳಲ್ಲಿ ಇಂಧನ ಕೊರತೆ ಎದುರಾಗಿದೆ. ಇಂಧನ ಆತಂಕ ಹೆಚ್ಚಾಗುತ್ತಿದ್ದಂತೆ ಇಂದು ಮಧ್ಯಾಹ್ನ ಮೂರು ಗಂಟೆಗೆ ಪೆಟ್ರೋಲಿಯಂ ಸಚಿವಾಲಯ ಮಹತ್ವದ ಸುದ್ದಿಗೋಷ್ಠಿ ನಡೆಸುತ್ತಿದೆ. ಈ ವೇಳೆ ಕೆಲ ಆದೇಶಗಳು ಹೊರಬೀಳುವ ಸಾಧ್ಯತೆ ಇದೆ.&lt;/p&gt;&lt;p&gt;ಕಚ್ಚಾ ತೈಲ ಬೆಲೆ ಏರಿಕೆಯಿಂದ ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕತೆಗೆ ತೀವ್ರ ಹೊಡೆತ ಬೀಳುತ್ತಿದೆ. ಮೋದಿ ಮನವಿ ಮಾಡಿದ ಬೆನ್ನಲ್ಲೇ ದೇಶಾದ್ಯಂತ ಭಾರಿ ಚರ್ಚೆಗಳು ಶುರುವಾಗಿದೆ. ಪರ್ಯಾಯ ಮಾರ್ಗ ಬಳಕೆ ಕುರಿತು ಮಾತುಕತೆ ನಡೆಯುತ್ತಿದೆ. ಇದೀಗ ಇಂದಿನ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲ್, ಡೀಸೆಲ್ ಸಂಗ್ರಹ ಹಾಗೂ ಪೂರೈಕೆ, ಅನಿಲ ಪೂರೈಕೆ, ದರ ಸೇರಿದಂತೆ ಹಲವು ನಿರ್ಧಾರಗಳು ಹೊರಬೀಳುವ ಸಾಧ್ಯತೆ ಇದೆ.&lt;/p&gt;&lt;h2&gt;ಸಬ್ಸಿಡಿ ವಿಸ್ತರಣೆ ಅಥವಾ ಬೆಲೆ ಇಳಿಕೆ?&lt;/h2&gt;&lt;p&gt;ಎಲ್&zwnj;ಪಿಜಿ ಅಡುಗೆ ಅನಿಲದ ದರದ ಕುರಿತು ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಸಬ್ಸಿಡಿ ಸೇರಿದಂತೆ ಹಲವು ದರಗಳ ಕುರಿತು ಕೆಲ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಉಜ್ವಲ ಸಿಲಿಂಡರ್ ಸಬ್ಸಿಡಿ ವಿಸ್ತರಿಸುವ ಅಥವಾ ಸಿಲಿಂಡರ್ ಬೆಲೆ ತಗ್ಗಿಸುವ ನಿರ್ಧಾರಗಳು ಹೊರಬಿದ್ದರೂ ಅಚ್ಚರಿಯಿಲ್ಲ.&lt;/p&gt;&lt;p&gt;ಇಂಧನ ದಾಸ್ತಾನು ಎಷ್ಟಿದೆ? ಸರ್ಕಾರದ ಮುನ್ನಚ್ಚರಿಕೆ, ಪೂರೈಕೆಗೆ ಕೈಗೊಂಡಿರುವ ಮಾರ್ಗಗಳ ಕುರಿತು ಸಚಿವಾಲಯ ಸ್ಪಷ್ಟನೆ ನೀಡಲಿದೆ. ಇದೇ ವೇಳೆ ವಿಮಾನದ ಇಂಧನ ದರ ಕುರಿತು ನಿರ್ಧಾರ ಹೊರಬೀಳು ಸಾಧ್ಯತೆ ಇದೆ. ಇದೇ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಕುರಿತು ನಿರ್ಧಾರ ಪ್ರಕಟಗೊಳ್ಳಲಿದೆ ಎಂಬ ನಿರೀಕ್ಷೆಗಳಿವೆ. ಮೂಲಗಳ ಪ್ರಕಾರ 2 ರಿಂದ 3 ರೂಪಾಯಿ ಇಳಿಕೆಯಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.&lt;/p&gt;&lt;p&gt;ಇದೇ ವೇಳೆ ಎಥೆನಾಲ್ ಇಂಧನ ಬಳಕೆ, ಪೆಟ್ರೋಲ್&zwnj;ನಲ್ಲಿ ಎಥೆನಾಲ್ ಮಿಶ್ರಣ, ಪರಿಸರ ಸ್ನೇಹಿ ಇಂಧನ ಬಳಕೆ ಸೇರಿದಂತೆ ಹಲವು ಪರ್ಯಾಯ ಮಾರ್ಗಗಳ ಕುರಿತ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/petroleum-ministry-to-hold-press-conference-at-3-pm-amid-fuel-supply-concerns/articleshow-pwlxevx"/>
        </item>
        <item>
            <title><![CDATA[ಆಂಜನೇಯನಿಗೆ 'ನಾಮ' ಹಾಕಿದ ಉದ್ಯಮಿ: ಅಂಜನಾದ್ರಿಗೆ ಕೊಟ್ಟಿದ್ದು ₹2.50Cr ಚಿನ್ನವಲ್ಲ, ತಾಮ್ರ ಲೇಪಿತ 28 ಗ್ರಾಂ ಬಂಗಾರ!]]></title>
            <link>https://kannada.asianetnews.com/gallery/state/anjanadri-temple-fake-2-5-crore-gold-donation-case-mahesh-reddy-and-janardhana-reddy-sat-0hq3mvd</link>
            <guid isPermaLink="true">https://kannada.asianetnews.com/gallery/state/anjanadri-temple-fake-2-5-crore-gold-donation-case-mahesh-reddy-and-janardhana-reddy-sat-0hq3mvd</guid>
            <pubDate>Mon, 11 May 2026 13:45:26 +0530</pubDate>
            <description><![CDATA[&lt;p&gt;ಕೊಪ್ಪಳದ ಅಂಜನಾದ್ರಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು 2.50 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ದಾನ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಜಿಲ್ಲಾಡಳಿತದ ಪರಿಶೀಲನೆ ವೇಳೆ ಅದು ಅಪ್ಪಟ ಚಿನ್ನವಲ್ಲ, ಬದಲಿಗೆ ಚಿನ್ನದ ಲೇಪಿತ ತಾಮ್ರದ ಆಭರಣಗಳೆಂದು ತಿಳಿದುಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3er26v49pv0emr66s91681,imgname-anjanadri-hanuman-temple-donation-1778232592603.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳದ ಅಂಜನಾದ್ರಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು 2.50 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ದಾನ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಜಿಲ್ಲಾಡಳಿತದ ಪರಿಶೀಲನೆ ವೇಳೆ ಅದು ಅಪ್ಪಟ ಚಿನ್ನವಲ್ಲ, ಬದಲಿಗೆ ಚಿನ್ನದ ಲೇಪಿತ ತಾಮ್ರದ ಆಭರಣಗಳೆಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;&lt;strong&gt;ಕೊಪ್ಪಳ: ಹ&lt;/strong&gt;ನುಮಂತನ ಜನ್ಮಸ್ಥಳವೆಂದೇ ಪ್ರಸಿದ್ಧಿಯಾದ ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬರೋಬ್ಬರಿ 2.50 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದಾನ ನೀಡಿದ್ದೇನೆ ಎಂದು ಹೇಳಿಕೊಂಡಿದ್ದ ಉದ್ಯಮಿಯೊಬ್ಬರ ಅಸಲಿ ಮುಖವಾಡ ಈಗ ಬಯಲಾಗಿದೆ. ಅವರು ನೀಡಿದ್ದು ಅಪ್ಪಟ ಚಿನ್ನದ ಆಭರಣಗಳಲ್ಲ, ಬದಲಿಗೆ ಚಿನ್ನದ ಲೇಪಿತ ತಾಮ್ರದ ಆಭರಣಗಳು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.&lt;/p&gt;&lt;img&gt;&lt;p&gt;ಕಳೆದ ಮೇ 8 ರಂದು ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ಆಗಮಿಸಿ ಅಂಜನಾದ್ರಿ ದೇವಸ್ಥಾನಕ್ಕೆ ಭವ್ಯವಾದ ಪ್ರಭಾವಳಿ, ಚಕ್ರ ಮತ್ತು ಗದೆಯನ್ನು ದಾನವಾಗಿ ನೀಡಿದ್ದರು. ಈ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಜನಾರ್ದನ ರೆಡ್ಡಿ ಅವರು, ತಮ್ಮ ಆಪ್ತ ಸ್ನೇಹಿತರಾದ ಮಹೇಶ್ ರೆಡ್ಡಿ ಅವರು ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದೇವರಿಗೆ ಅರ್ಪಿಸಿದ್ದಾರೆ ಎಂದು ತಿಳಿಸಿದ್ದರು.&lt;/p&gt;&lt;img&gt;&lt;p&gt;ದಾನವಾಗಿ ಪಡೆದ ಆಭರಣಗಳನ್ನು ಜಿಲ್ಲಾಡಳಿತವು ಅಧಿಕೃತವಾಗಿ ಖಜಾನೆಗೆ ಜಮೆ ಮಾಡಿಕೊಳ್ಳುವ ಮೊದಲು ನಿಯಮದಂತೆ ಪರಿಶೀಲನೆ ನಡೆಸಿತು. ಸಹಾಯಕ ಆಯುಕ್ತರಾದ (AC) ಮಹೇಶ್ ಮಾಲಗಿತ್ತಿ ಅವರ ನೇತೃತ್ವದಲ್ಲಿ ಆಭರಣಗಳ ಖಚಿತತೆ ಪರೀಕ್ಷೆ ನಡೆಸಿದಾಗ ಅಧಿಕಾರಿಗಳಿಗೆ ಭಾರಿ ಶಾಕ್ ಕಾದಿತ್ತು.&lt;/p&gt;&lt;img&gt;&lt;p&gt;ಕೋಟಿ ಮೌಲ್ಯದ ಬಂಗಾರ ಎಂದು ನಂಬಲಾಗಿದ್ದ ಆಭರಣಗಳಲ್ಲಿ ಪತ್ತೆಯಾಗಿದ್ದು ಕೇವಲ 28 ಗ್ರಾಂ ಬಂಗಾರ ಮಾತ್ರ! ಉಳಿದಂತೆ ಇಡೀ ಆಭರಣಗಳು ತಾಮ್ರದಿಂದ ಮಾಡಲ್ಪಟ್ಟಿದ್ದು, ಮೇಲೆ ಚಿನ್ನದ ಲೇಪನ (Gold Plated) ಮಾಡಲಾಗಿತ್ತು ಎಂಬುದು ದೃಢಪಟ್ಟಿದೆ.&lt;/p&gt;&lt;img&gt;&lt;p&gt;ಉದ್ಯಮಿ ಮಹೇಶ್ ರೆಡ್ಡಿ ಅವರು ಈ ಆಭರಣಗಳಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಬಿಲ್ ಅಥವಾ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ನೀಡಿರಲಿಲ್ಲ. ಉದ್ಯಮಿಯ ಕೋರಿಕೆಯ ಮೇರೆಗೆ ಎರಡು ದಿನಗಳ ಕಾಲ ಮಾತ್ರ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು. ಆದರೆ ಈಗ ಸತ್ಯಾಂಶ ಬಯಲಾದ ಬೆನ್ನಲ್ಲೇ, ಜಿಲ್ಲಾಧಿಕಾರಿಗಳು ಉದ್ಯಮಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆಭರಣಗಳ ನಿಖರ ಮೌಲ್ಯ ಮತ್ತು ಅದರ ಅಧಿಕೃತ ಬಿಲ್&zwnj;ಗಳನ್ನು ತಕ್ಷಣವೇ ಸಲ್ಲಿಸುವಂತೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಅಧಿಕೃತ ದಾಖಲೆಗಳು ಮತ್ತು ಬಿಲ್&zwnj;ಗಳಿಲ್ಲದ ಕಾರಣ, ಜಿಲ್ಲಾಡಳಿತವು ಈ ಆಭರಣಗಳನ್ನು ಸರ್ಕಾರಿ ಖಜಾನೆಗೆ ಸೇರಿಸಿಕೊಳ್ಳಲು ನಿರಾಕರಿಸಿದೆ. ದೇವಸ್ಥಾನದ ಪಾವಿತ್ರ್ಯತೆ ಮತ್ತು ಭಕ್ತರ ನಂಬಿಕೆಯೊಂದಿಗೆ ಚೆಲ್ಲಾಟವಾಡಿದ ಈ ಘಟನೆ ಈಗ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಭಾವಿ ರಾಜಕಾರಣಿಯ ಜೊತೆ ಬಂದು ಕೋಟಿ ಮೌಲ್ಯದ ದಾನ ಎಂದು ಪ್ರಚಾರ ಪಡೆದ ಉದ್ಯಮಿ, ಈಗ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/anjanadri-temple-fake-2-5-crore-gold-donation-case-mahesh-reddy-and-janardhana-reddy-sat-0hq3mvd"/>
        </item>
        <item>
            <title><![CDATA[ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು]]></title>
            <link>https://kannada.asianetnews.com/india-news/suvendu-adhikari-tough-stand-on-border-infiltration-creates-political-buzz-videoshow-zqysoiw</link>
            <guid isPermaLink="true">https://kannada.asianetnews.com/india-news/suvendu-adhikari-tough-stand-on-border-infiltration-creates-political-buzz-videoshow-zqysoiw</guid>
            <pubDate>Mon, 11 May 2026 13:36:13 +0530</pubDate>
            <description><![CDATA[&lt;p&gt;ಅಕ್ರಮ ವಲಸೆ ಗಡಿಪಾರು ಸಮಸ್ಯೆ.. ಶುರು ಬಾಂಗ್ಲಾ ಕ್ಯಾತೆ..! ಮುಚ್ಚಿದ ಕೈಗಾರಿಕೆಗಳ ಬಾಗಿಲು ತೆರೆಸುತ್ತಾ ಡಬಲ್ ಇಂಜಿನ್..? ಬಂದೂಕು.. ಬಾಂಬು.. ಹಿಂದೂ ಅಸ್ಮಿತೆ.. ಹಿಂಸಾಚಾರ.. ಸವಾಲುಗಳ ಸಾಗರ..!&lt;/p&gt;]]></description>
            <media:content url="https://geo.dailymotion.com/player/x1tbu.html?video=xa9a7ki" medium="video" height="768" width="1024"/>
            <content:encoded><![CDATA[&lt;p&gt;ಪಶ್ಚಿಮ ಬಂಗಾಳದಲ್ಲಿ ಹೊಸ ರಾಜಕೀಯ ಅಧ್ಯಾಯ ಶುರುವಾಗಿದೆ. ದಶಕಗಳ ಕಾಲ ದೀದಿ ಕಟ್ಟಿದ್ದ ಕೋಟೆಯನ್ನ ಕೆಡಿವಿರೋ ಕೇಸರಿ ಪಡೆ ಅಧಿಕಾರದ ಗದ್ದುಗೆಯನ್ನೇರಿದೆ. ಸುವೇಂದು ಅಧಿಕಾರಿಗೆ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕವೂ ಆಗಿದೆ. ಆದ್ರೆ ಇಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು ಒಂದು ಸವಾಲಾದ್ರೆ, ಅಧಿಕಾರ ನಡೆಸೋದು, ಕೊಟ್ಟ ಭರವಸೆಗಳನ್ನ ಈಡೇರಿಸೋದು ಮತ್ತೊಂದು ಮಹಾ ಸವಾಲು. ಹಾಗಿದ್ರೆ ಸಿಎಂ ಸಿಂಹಾಸನದ ಮೇಲೆ ಕೂಳಿತಿರೋ ಸುವೇಂದು ಅಧಿಕಾರಿ ಮುಂದಿರೋ ಅಗ್ನಿಪಥ ಹೇಗಿದೆ.?&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/suvendu-adhikari-tough-stand-on-border-infiltration-creates-political-buzz-videoshow-zqysoiw"/>
        </item>
        <item>
            <title><![CDATA[ದಳಪತಿ ಈಗ ತಮಿಳುನಾಡು ಅಧಿಪತಿ; ಆದ್ರೆ ಸಿಎಂ 'ಪತ್ನಿ'ಯಾಗಿ ಹೊಸ ಇತಿಹಾಸ ಬರೆಯೋದು ಯಾರು? ಸಂಗೀತಾ or ತ್ರಿಷಾ?]]></title>
            <link>https://kannada.asianetnews.com/cine-world/heated-debate-on-social-media-about-whether-sangeetha-will-be-the-wife-of-tamil-nadu-cm-vijay-or-trisha/articleshow-2w7koqb</link>
            <guid isPermaLink="true">https://kannada.asianetnews.com/cine-world/heated-debate-on-social-media-about-whether-sangeetha-will-be-the-wife-of-tamil-nadu-cm-vijay-or-trisha/articleshow-2w7koqb</guid>
            <pubDate>Mon, 11 May 2026 12:22:30 +0530</pubDate>
            <description><![CDATA[&lt;p&gt;ಸಂಗೀತಾ ಅವರು ತಮಿಳುನಾಡಿಗೆ ಮರಳಿ ಬರುತ್ತಾರಾ? ಅಥವಾ ಲಂಡನ್&zwnj;ನಲ್ಲೇ ಉಳಿದು ವಿಚ್ಛೇದನದ ಹಾದಿ ತುಳಿಯುತ್ತಾರಾ? ಎಂಬುದು ಈಗ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಪಾಲಿನ 'ಮಿಲಿಯನ್ ಡಾಲರ್ ಪ್ರಶ್ನೆ'. ಪತಿ ಸಿಎಂ ಆದ ಮೇಲೆ ಸಂಗೀತಾ ಪತ್ನಿಯಾಗಿ ಅವರ ಜೊತೆ ನಿಲ್ಲುತ್ತಾರಾ ಅಥವಾ ಇಲ್ಲವಾ ಎಂಬುದು ಕಾಲವೇ ಉತ್ತರಿಸಬೇಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krawevxn5hamnv6hhgpefcak,imgname-thalapathy-vijay-trisha-sangeetha-1778481852341.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಳಪತಿ ಈಗ ತಮಿಳುನಾಡಿನ ಅಧಿಪತಿ: ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ತ್ರಿಶಾ!&lt;/strong&gt;&lt;/p&gt;&lt;p&gt;ಕಾಲಿವುಡ್&zwnj;ನ 'ದಳಪತಿ' ವಿಜಯ್ ಈಗ ಕೇವಲ ಬೆಳ್ಳಿ ಪರದೆಯ ನಾಯಕನಲ್ಲ, ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿದಿರುವ ಹೊಸ ಮುಖ್ಯಮಂತ್ರಿ! ಭಾನುವಾರ ನಡೆದ ಆ ಐತಿಹಾಸಿಕ ಕ್ಷಣದಲ್ಲಿ ವಿಜಯ್ (Thalapathy Vijay) ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಮ್ಮ ಬದುಕಿನ ಅತಿದೊಡ್ಡ ಮೈಲಿಗಲ್ಲನ್ನು ತಲುಪಿದ್ದಾರೆ. ಇಡೀ ತಮಿಳುನಾಡು ಈ ವಿಜಯೋತ್ಸವದಲ್ಲಿ ತೇಲುತ್ತಿದೆ. ಆದರೆ, ಈ ಸಂಭ್ರಮದ ನಡುವೆಯೂ ಒಂದು ದೊಡ್ಡ ಪ್ರಶ್ನೆ ಮಾತ್ರ ಅಭಿಮಾನಿಗಳನ್ನು ಕಾಡುತ್ತಿದೆ - &quot;ಅಣ್ಣನ ಗೆಲುವಿನ ಸಂಭ್ರಮದಲ್ಲಿ ಅಣ್ಣಿ (ಅತ್ತಿಗೆ) ಎಲ್ಲಿದ್ದಾರೆ?&quot; ಎಂಬುದು!&lt;/p&gt;&lt;p&gt;ಮುಂದಿನ ಸಾಲಿನಲ್ಲಿ ಪೋಷಕರು, ಪಕ್ಕದಲ್ಲೇ ತ್ರಿಶಾ: ಎಲ್ಲಿದ್ದಾಳೆ ಸಂಗೀತಾ?&lt;/p&gt;&lt;p&gt;ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಾಗ ಅವರ ತಂದೆ ಎಸ್.ಎ. ಚಂದ್ರಶೇಖರ್ ಮತ್ತು ತಾಯಿ ಶೋಭಾ ಚಂದ್ರಶೇಖರ್ ಮುಂದಿನ ಸಾಲಿನಲ್ಲಿ ಕುಳಿತು ಮಗನ ಸಾಧನೆಯನ್ನು ಕಂಡು ಆನಂದಬಾಷ್ಪ ಸುರಿಸಿದರು. ಆದರೆ, ಎಲ್ಲರ ಕಣ್ಣುಗಳು ಹುಡುಕುತ್ತಿದ್ದುದು ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳನ್ನು. ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಕುಟುಂಬದ ಅನುಪಸ್ಥಿತಿ ಎಲ್ಲರಿಗೂ ತುಸು ಅಚ್ಚರಿ ಮತ್ತು ಅಪೂರ್ಣತೆಯ ಭಾವ ಮೂಡಿಸಿತು. ಪ್ರಸ್ತುತ ಸಂಗೀತಾ ಲಂಡನ್&zwnj;ನಲ್ಲಿದ್ದಾರೆ ಎಂಬ ವರದಿಗಳಿವೆ. ಇಡೀ ರಾಜ್ಯವೇ ಸಂಭ್ರಮಿಸುತ್ತಿದ್ದರೂ, ಪತಿ ಸಿಎಂ ಆದ ಬಗ್ಗೆ ಸಂಗೀತಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಕೂಡ ಮಾಡದಿರುವುದು ಅಭಿಮಾನಿಗಳಲ್ಲಿ ಅನುಮಾನದ ಕಿಚ್ಚು ಹಚ್ಚಿದೆ.&lt;/p&gt;&lt;h2&gt;ತ್ರಿಶಾ ಕೃಷ್ಣನ್ ಎಂಟ್ರಿ ಮತ್ತು ಹಬ್ಬಿರೋ ವದಂತಿಗಳು!&lt;/h2&gt;&lt;p&gt;ಈ ಸಮಾರಂಭದ ಹೈಲೈಟ್ ಎಂದರೆ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಉಪಸ್ಥಿತಿ. ವಿಜಯ್ ಅವರ ಅತ್ಯಾಪ್ತ ಗೆಳತಿ ಎನ್ನಲಾಗುವ ತ್ರಿಶಾ, ಮುಂದಿನ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದು ಈಗ ಕಾಲಿವುಡ್ ಅಂಗಳದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಜಯ್ ಮತ್ತು ತ್ರಿಶಾ ನಡುವಿನ ಸ್ನೇಹದ ಬಗ್ಗೆ ಈ ಹಿಂದೆಯೇ ಹಲವು ಗಾಳಿಸುದ್ದಿಗಳು ಹರಿದಾಡಿದ್ದವು. ಈಗ ಪತ್ನಿ ಇಲ್ಲದ ಸಮಯದಲ್ಲಿ ತ್ರಿಶಾ ಹಾಜರಿರುವುದು ಅಭಿಮಾನಿಗಳ ನಡುವೆ ಹೊಸ ಪಿಸುಮಾತಿಗೆ ನಾಂದಿ ಹಾಡಿದೆ.&lt;/p&gt;&lt;p&gt;ಪತ್ನಿ ಮನಸ್ಸು ಬದಲಿಸುತ್ತಾರಾ? ಅಥವಾ ವಿಚ್ಛೇದನ ಫಿಕ್ಸ್?&lt;/p&gt;&lt;p&gt;ಸಂಗೀತಾ ಅವರ ಈ ಗೈರುಹಾಜರಿಯನ್ನು ನೋಡಿ ಅನೇಕರು ವಿಜಯ್ ಮತ್ತು ಸಂಗೀತಾ ನಡುವಿನ ವೈವಾಹಿಕ ಜೀವನ ಅಂತ್ಯಗೊಂಡಿದೆ, ವಿಚ್ಛೇದನ ಖಚಿತ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ, ಅಭಿಮಾನಿಗಳ ಒಂದು ವರ್ಗ ಮಾತ್ರ ಆಶಾವಾದದ ಮಾತುಗಳನ್ನಾಡುತ್ತಿದೆ. &quot;ಈಗ ವಿಜಯ್ ಒಂದು ರಾಜ್ಯದ ಮುಖ್ಯಮಂತ್ರಿ. ಇಷ್ಟು ದೊಡ್ಡ ಜವಾಬ್ದಾರಿ ಹೊತ್ತಿರುವ ಪತಿಯನ್ನು ನೋಡಿ ಸಂಗೀತಾ ಮನಸ್ಸು ಕರಗಬಹುದು. ಹಳೆಯ ಕಹಿ ಘಟನೆಗಳನ್ನು ಮರೆತು ಅವರು ಮತ್ತೆ ಒಂದಾಗಬಹುದು,&quot; ಎಂಬುದು ಅವರ ವಾದ.&lt;/p&gt;&lt;h3&gt;ಮಿಲಿಯನ್ ಡಾಲರ್ ಪ್ರಶ್ನೆ!&lt;/h3&gt;&lt;p&gt;ಸಂಗೀತಾ ಅವರು ತಮಿಳುನಾಡಿಗೆ ಮರಳಿ ಬರುತ್ತಾರಾ? ಅಥವಾ ಲಂಡನ್&zwnj;ನಲ್ಲೇ ಉಳಿದು ವಿಚ್ಛೇದನದ ಹಾದಿ ತುಳಿಯುತ್ತಾರಾ? ಎಂಬುದು ಈಗ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಪಾಲಿನ 'ಮಿಲಿಯನ್ ಡಾಲರ್ ಪ್ರಶ್ನೆ'. ಪತಿ ಸಿಎಂ ಆದ ಮೇಲೆ ಸಂಗೀತಾ ಪತ್ನಿಯಾಗಿ ಅವರ ಜೊತೆ ನಿಲ್ಲುತ್ತಾರಾ ಅಥವಾ ಇಲ್ಲವಾ ಎಂಬುದು ಕಾಲವೇ ಉತ್ತರಿಸಬೇಕಿದೆ. ದಳಪತಿ ವಿಜಯ್ ರಾಜಕೀಯ ಇತಿಹಾಸ ಬರೆಯುತ್ತಿದ್ದಾರೆ ನಿಜ, ಆದರೆ ಈ ಇತಿಹಾಸದ ಪುಟಗಳಲ್ಲಿ ಸಂಗೀತಾ ಹೆಸರು ಸ್ಥಾನ ಪಡೆಯುತ್ತದೆಯೇ ಎಂಬುದು ಸದ್ಯಕ್ಕೆ ಸಸ್ಪೆನ್ಸ್!&lt;/p&gt;&lt;p&gt;ಒಟ್ಟಿನಲ್ಲಿ, ವಿಜಯ್ ಅವರ ಈ ರಾಜಕೀಯ ಪಯಣ ಸಿನಿಮಾದಷ್ಟೇ ರೋಚಕ ತಿರುವುಗಳನ್ನು ಪಡೆಯುತ್ತಿರುವುದಂತೂ ಸುಳ್ಳಲ್ಲ!&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/heated-debate-on-social-media-about-whether-sangeetha-will-be-the-wife-of-tamil-nadu-cm-vijay-or-trisha/articleshow-2w7koqb"/>
        </item>
        <item>
            <title><![CDATA[ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ (DA) ಶೇ. 1.50 ರಷ್ಟು ಹೆಚ್ಚಳ - ಸರ್ಕಾರದ ಆದೇಶ ಪ್ರಕಟ]]></title>
            <link>https://kannada.asianetnews.com/gallery/state/karnataka-government-employees-and-pensioners-da-hike-january-2026-order-details-sat-wgk0vf0</link>
            <guid isPermaLink="true">https://kannada.asianetnews.com/gallery/state/karnataka-government-employees-and-pensioners-da-hike-january-2026-order-details-sat-wgk0vf0</guid>
            <pubDate>Mon, 11 May 2026 13:23:49 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿದೆ. ಈ ಶೇ. 1.50 ರಷ್ಟು ಹೆಚ್ಚಳವು 2026ರ ಜನವರಿ 1 ರಿಂದ ಪೂರ್ವಾನ್ವಯ ಆಗಲಿದೆ. ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd0mqnn1gqaxd5veqr661nk,imgname-capturek-1776405864116.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿದೆ. ಈ ಶೇ. 1.50 ರಷ್ಟು ಹೆಚ್ಚಳವು 2026ರ ಜನವರಿ 1 ರಿಂದ ಪೂರ್ವಾನ್ವಯ ಆಗಲಿದೆ. ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತ ವೇತನದಾರರಿಗೆ ಕರ್ನಾಟಕ ಸರ್ಕಾರವು ಒಂದು ಪ್ರಮುಖ ಸಿಹಿ ಸುದ್ದಿಯನ್ನು ನೀಡಿದೆ. ನೌಕರರ ತುಟ್ಟಿಭತ್ಯೆಯನ್ನು (Dearness Allowance) ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿ ಆರ್ಥಿಕ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;img&gt;&lt;p&gt;2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಈ ಹೆಚ್ಚಳ ಅನ್ವಯವಾಗಲಿದೆ. ಪ್ರಸ್ತುತ ಮೂಲ ವೇತನದ ಶೇಕಡಾ 14.25 ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇಕಡಾ 15.75 ಕ್ಕೆ ಪರಿಷ್ಕರಿಸಲಾಗಿದೆ. ಅಂದರೆ ಒಟ್ಟು ಶೇ. 1.50 ರಷ್ಟು ತುಟ್ಟಿಭತ್ಯೆ ಹೆಚ್ಚಳವಾದಂತಾಗಿದೆ.&lt;/p&gt;&lt;img&gt;&lt;p&gt;ಈ ಆದೇಶವು ಕೇವಲ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ, ಇನ್ನುಳಿದ ಹಲವು ವರ್ಗದವರಿಗೂ ಅನ್ವಯವಾಗಲಿದೆ:&lt;/p&gt;&lt;p&gt;ರಾಜ್ಯ ಸರ್ಕಾರದ ನಿವೃತ್ತ ವೇತನದಾರರು ಮತ್ತು ಕುಟುಂಬ ನಿವೃತ್ತ ವೇತನದಾರರು.&lt;/p&gt;&lt;p&gt;ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರು.&lt;/p&gt;&lt;p&gt;ಯುಜಿಸಿ (UGC), ಎಐಸಿಟಿಇ (AICTE), ಐಸಿಎಆರ್ (ICAR) ವೇತನ ಶ್ರೇಣಿಯ ನಿವೃತ್ತ ನೌಕರರು.&lt;/p&gt;&lt;p&gt;ಜಿಲ್ಲಾ ಪಂಚಾಯತ್&zwnj;ಗಳ ಪೂರ್ಣಾವಧಿ ನೌಕರರು.&lt;/p&gt;&lt;p&gt;ಪೂರ್ಣಾವಧಿ ಕೆಲಸ ಮಾಡುವ ವರ್ಕ್&zwnj;ಚಾರ್ಜ್ ನೌಕರರು.&lt;/p&gt;&lt;p&gt;ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಪೂರ್ಣಾವಧಿ ನೌಕರರು.&lt;/p&gt;&lt;img&gt;&lt;p&gt;ಈ ಪರಿಷ್ಕೃತ ತುಟ್ಟಿಭತ್ಯೆಯು 2026ರ ಜನವರಿ 1 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಸರ್ಕಾರಿ ಆದೇಶದ ಪ್ರಕಾರ, ಜನವರಿ 1 ರಿಂದ ಏಪ್ರಿಲ್ ತಿಂಗಳವರೆಗಿನ ಬಾಕಿ ಮೊತ್ತವನ್ನು (Arrears) ಮೇ 2026 ರ ವೇತನದೊಂದಿಗೆ ನಗದಾಗಿ ಪಾವತಿಸಲಾಗುವುದು.&lt;/p&gt;&lt;img&gt;&lt;p&gt;ತುಟ್ಟಿಭತ್ಯೆಯ ಲೆಕ್ಕಾಚಾರಕ್ಕಾಗಿ 'ಮೂಲ ವೇತನ' ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ. ಇದರಲ್ಲಿ ಸ್ಥಗಿತ ವೇತನ ಬಡ್ತಿ ಮತ್ತು ವೈಯಕ್ತಿಕ ವೇತನಗಳನ್ನು ಸೇರಿಸಿಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.&lt;/p&gt;&lt;img&gt;&lt;p&gt;ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸಬೇಕು, ಇದನ್ನು ಯಾವುದೇ ಉದ್ದೇಶಕ್ಕಾಗಿ ವೇತನ ಎಂದು ಪರಿಗಣಿಸಲಾಗುವುದಿಲ್ಲ.&lt;/p&gt;&lt;p&gt;ಹಣ ಪಾವತಿಯಲ್ಲಿ 50 ಪೈಸೆಗಿಂತ ಹೆಚ್ಚಿನ ಭಿನ್ನಾಂಕವಿದ್ದರೆ ಅದನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸಬೇಕು ಮತ್ತು 50 ಪೈಸೆಗಿಂತ ಕಡಿಮೆ ಇದ್ದರೆ ಅದನ್ನು ನಿರ್ಲಕ್ಷಿಸಬೇಕು.&lt;/p&gt;&lt;p&gt;ಈ ನಿರ್ಧಾರದಿಂದಾಗಿ ಲಕ್ಷಾಂತರ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕ ಅನುಕೂಲವಾಗಲಿದ್ದು, ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಇದು ಸಹಕಾರಿಯಾಗಲಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-government-employees-and-pensioners-da-hike-january-2026-order-details-sat-wgk0vf0"/>
        </item>
        <item>
            <title><![CDATA[ಬಟ್ಟೆ ಮೇಲೆ ಬಿದ್ದ ಕೋಳಿ ಸಾರಿನಿಂದ ಮದ್ವೆ ಮನೆಯಲ್ಲಿ ಜಗಳ ಶುರು, ಓರ್ವ ಸಾವು 6 ಮಂದಿಗೆ ಗಾಯ]]></title>
            <link>https://kannada.asianetnews.com/gallery/india-news/chicken-curry-spill-sparks-clash-at-up-wedding-leaves-one-dead-and-six-hurt-160qne1</link>
            <guid isPermaLink="true">https://kannada.asianetnews.com/gallery/india-news/chicken-curry-spill-sparks-clash-at-up-wedding-leaves-one-dead-and-six-hurt-160qne1</guid>
            <pubDate>Mon, 11 May 2026 13:18:32 +0530</pubDate>
            <description><![CDATA[&lt;p&gt;ಮದುವೆ ಮನೆಯಲ್ಲಿ ಊಟ ಬಡಿಸುವಾಗ ಕೋಳಿ ಸಾರು ಸ್ವಲ್ಪ ಬಟ್ಟೆ ಮೇಲೆ ಚೆಲ್ಲಿದೆ. ಇಷ್ಟೇ ನೋಡಿ ವಾಗ್ವಾದ ಆರಂಭಗೊಂಡ ಜಗಳವೇ ನಡೆದು ಹೋಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟರೆ, 6 ಮಂದಿ ಗಾಯಗೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krazj91nvzne4f9jerf3brdb,imgname-wedding-function-turns-violent-1778485109811.png" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ಮನೆಯಲ್ಲಿ ಊಟ ಬಡಿಸುವಾಗ ಕೋಳಿ ಸಾರು ಸ್ವಲ್ಪ ಬಟ್ಟೆ ಮೇಲೆ ಚೆಲ್ಲಿದೆ. ಇಷ್ಟೇ ನೋಡಿ ವಾಗ್ವಾದ ಆರಂಭಗೊಂಡ ಜಗಳವೇ ನಡೆದು ಹೋಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟರೆ, 6 ಮಂದಿ ಗಾಯಗೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮದುವೆ ಸಮಾರಂಭದಲ್ಲಿ ಎಷ್ಟೇ ಕಾಳಜಿ ವಹಿಸಿದರೂ ಒಂದಲ್ಲ ಒಂದು ಘಟನೆಗಳು ಇಡೀ ಸಂಭ್ರಮವನ್ನೇ ಹಾಳು ಮಾಡುತ್ತದೆ. ಮಟನ್ ಸಿಗಲಿಲ್ಲ ಎಂದು ಜಗಳ, ಗೌರವ ಕೊಡಲಿಲ್ಲ ಎಂದು ಜಗಳ ಹೀಗೆ ಜಗಳಕ್ಕೆ ಹಲವು ಕಾರಣ. ಇದೀಗ ಮದುವೆ ಮನೆಯ ಸಮಾರಂಭ ಒಂದರಲ್ಲಿ ಊಟಕ್ಕೆ ಕುಳಿತ ಅತಿಥಿಗಳ ಪೈಕಿ ಒಬ್ಬರ ಮೇಲೆ ಕೋಳಿ ಸಾರು ಸ್ವಲ್ಪ ಚೆಲ್ಲಿದೆ. ಇದರಿಂದ ರಾದ್ದಾಂತವೇ ನಡೆದು ಹೋಗಿದೆ. ಜಗಳದಲ್ಲಿ ಒಂದು ಜೀವ ಬಲಿಯಾಗಿ, 6 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಗೋರಖ್&zwnj;ಪುರದಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಮದುವೆ ಮಂಟಪಕ್ಕೆ ವರ ದಿಬ್ಬಣದ ಮೂಲಕ ಸಾಗಿದ್ದ. ವರನ ಗೆಳೆಯರು ಹಾಗೂ ಪಟಾಲಂ ಬ್ಯಾಂಡ್ ವಾದ್ಯಗಳ ಮೂಲಕ ಮದುವೆ ಮಂಟಪಕ್ಕೆ ಆಗಮಿಸಿದ್ದರು. ಇತ್ತ ಮಂಟಪದ ಬಳಿ ಅದ್ಧೂರಿ ಭೋಜನ ಆಯೋಜನೆ ಮಾಡಲಾಗಿತ್ತು. ಮಂಟಪದ ಬಳಿಕ ಚಿಕನ್ ಸಾರು, ಕಬಾಬ್ ಸೇರಿದಂತೆ ಆಹಾರಕ್ಕಾಗಿ ಜನ ಮುಗಿಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ನೂಕು ನುಗ್ಗಲು ಕಾರಣ ಇದರ ನಡುವೆ ಯುವಕನೊಬ್ಬನ ಬಟ್ಟೆ ಮೇಲೆ ಚಿಕನ್ ಸಾರು ಚೆಲ್ಲಿದೆ. ಈ ವಿಚಾರಕ್ಕೆ ವಾಗ್ವಾದ ಶುರುವಾಗಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಜಟಾಪಟಿಯಲ್ಲಿ ಎರಡು ಗುಂಪುಗಳು ಸಿಕ್ಕ ಸಿಕ್ಕ ವಸ್ತುಗಳಿಂದ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ವರನ ಕಡೆಯಿಂದ ಮದುವೆಗೆ ಆಗಮಿಸಿದ್ದ 26ರ ಹರೆಯದ ಸುಮಿತ್ ಕುಮಾರ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಎರಡು ಗುಂಪುಗಳ ಮಾರಾಮಾರಿ ನಿಲ್ಲಿಸಲು ಬಂದ ಹಲವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ಸಮಾರಂಭ ದುರಂತದಲ್ಲಿ ಅಂತ್ಯಗೊಂಡಿದೆ.&lt;/p&gt;&lt;img&gt;&lt;p&gt;ಮದುವೆ ದಿಬ್ಬಣ ಹಾಗೂ ಮದವೆ ಮನೆ ಬಳಿ ಪೊಲೀಸ್ ಇನ್ ಚಾರ್ಜ್ ನಿರ್ಲಕ್ಷ್ಯವಹಿಸಿದ್ದಾರೆ ಅನ್ನೋ ಆರೋಪದಡಿ ಅಮಾನತುಗೊಂಡಿದ್ದಾರೆ. ಪೊಲೀಸ್ ನಿರ್ಲಕ್ಷ್ಯದಿಂದ ಈ ಮಾರಾಮಾರಿ ನಡೆದಿದೆ ಎಂದು ಆರೋಪಗಳು ಕೇಳಿಬಂದಿದೆ. ಘಟನೆ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.&lt;/p&gt;&lt;h2&gt;ಪೊಲೀಸ್ ಅಮಾನತು&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/chicken-curry-spill-sparks-clash-at-up-wedding-leaves-one-dead-and-six-hurt-160qne1"/>
        </item>
        <item>
            <title><![CDATA[ಭಾರತೀಯ ರೈಲ್ವೆಯ ಚಲಿಸುವ ನರಕ; ತಾಳ್ಮೆ, ಗುಂಡಿಗೆ ಗಟ್ಟಿ ಇದ್ರೆ ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಿ]]></title>
            <link>https://kannada.asianetnews.com/gallery/travel/the-moving-hell-of-indian-railways-train-no-15707-amrapali-express-kir-to-asr-details-mrq-zh10pwk</link>
            <guid isPermaLink="true">https://kannada.asianetnews.com/gallery/travel/the-moving-hell-of-indian-railways-train-no-15707-amrapali-express-kir-to-asr-details-mrq-zh10pwk</guid>
            <pubDate>Mon, 11 May 2026 12:21:30 +0530</pubDate>
            <description><![CDATA[&lt;p&gt;ಭಾರತದಲ್ಲಿ 'ಚಲಿಸುವ ನರಕ' ಎಂದು ಕುಖ್ಯಾತಿ ಪಡೆದ ರೈಲಿದೆ. ಈ ಟ್ರೈನ್ ಕನಿಷ್ಠ 10 ರಿಂದ 12 ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತದೆ. ಈ ಲೇಖನದಲ್ಲಿ ಅದರ ದೀರ್ಘ ಪ್ರಯಾಣ ಮತ್ತು ಪ್ರಯಾಣಿಕರು ಎದುರಿಸುವ ಸಮಸ್ಯೆಗಳ ಬಗ್ಗೆ ವಿವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krawdnj4emzv138cp9en8s6f,imgname-indian-railways--1--1778481813060.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ 'ಚಲಿಸುವ ನರಕ' ಎಂದು ಕುಖ್ಯಾತಿ ಪಡೆದ ರೈಲಿದೆ. ಈ ಟ್ರೈನ್ ಕನಿಷ್ಠ 10 ರಿಂದ 12 ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತದೆ. ಈ ಲೇಖನದಲ್ಲಿ ಅದರ ದೀರ್ಘ ಪ್ರಯಾಣ ಮತ್ತು ಪ್ರಯಾಣಿಕರು ಎದುರಿಸುವ ಸಮಸ್ಯೆಗಳ ಬಗ್ಗೆ ವಿವರಿಸಲಾಗಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಪ್ರತಿನಿತ್ಯ ಡೆಮೊ, ಪ್ಯಾಸೆಂಜರ್, ಎಕ್ಸ್&zwnj;ಪ್ರೆಸ್ ಸೇರಿದಂತೆ ಸಾವಿರಾರು ರೈಲುಗಳು ಚಲಿಸುತ್ತವೆ. ಈ ರೈಲುಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಸಹ ಪ್ರಯಾಣಿಸುತ್ತಾರೆ. ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಂದ ನಿಗದಿತ ಸಮಯಕ್ಕಿಂತ ತಡವಾಗಿ ರೈಲುಗಳು ಚಲಿಸುತ್ತವೆ. ರೈಲು ವಿಳಂಬದ ಮಾಹಿತಿಯನ್ನು ನಿಲ್ದಾಣಗಳಲ್ಲಿ ನೀಡಲಾಗುತ್ತದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ದೀರ್ಘ ಪ್ರಯಾಣದ ಪ್ಯಾಸೆಂಜರ್ ರೈಲುಗಳು ಅಂದ್ರೆ ಎಕ್ಸ್&zwnj;ಪ್ರೆಸ್ ಅಲ್ಲದ ಟ್ರೈನ್&zwnj;ಗಳಲ್ಲಿ ಸಮಯದ ಪಾಲನೆ ಕಡಿಮೆ ಇರುತ್ತದೆ. ಜನಶತಾಬ್ದಿ, ವಂದೇ ಭಾರತ್ ಸೇರಿದಂತೆ ಹೈಸ್ಪೀಡ್ ಎಕ್ಸ್&zwnj;ಪ್ರೆಸ್ ರೈಲುಗಳಿಗೆ ದಾರಿ ನೀಡುವ ಕಾರಣದಿಂದ ಪ್ಯಾಸೆಂಜರ್ ರೈಲುಗಳು ವಿಳಂಬವಾಗುತ್ತವೆ. ಇಂದು ನಾವು ಹೇಳುತ್ತಿರುವ ರೈಲು 'ಚಲಿಸುವ ನರಕ' ಎಂಬ ಕುಖ್ಯಾತಿ ಪಡೆದುಕೊಂಡಿದೆ. ಈ ರೈಲು ಏನಿಲ್ಲ ಅಂದ್ರೆ ಕನಿಷ್ಠ 10 ರಿಂದ 12 ಗಂಟೆ ತಡವಾಗುತ್ತದೆ.&lt;/p&gt;&lt;img&gt;&lt;p&gt;ಕಟಿಹಾರ ಜಂಕ್ಷನ್&zwnj;ನಿಂದ ಸೋಮವಾರ ರಾತ್ರಿ 10.45ಕ್ಕೆ ಪ್ರಯಾಣ ಆರಂಭಿಸುವ ಈ ರೈಲು ವೇಳಾಪಟ್ಟಿಯಂತೆ ಬುಧವಾರ ಮಧ್ಯಾಹ್ನ 12.40ಕ್ಕೆ ಅಮೃತಸರ ನಿಲ್ದಾಣ ತಲುಪಬೇಕಾಗುತ್ತದೆ. ಬರೋಬ್ಬರಿ 37 ಗಂಟೆ 55 ನಿಮಿಷದ ದೀರ್ಘ ಪ್ರಯಾಣದ ರೈಲು ಇದಾಗಿದೆ.&lt;/p&gt;&lt;img&gt;&lt;p&gt;1805 ಕಿಲೋ ಮೀಟರ್ ದೂರ ಕ್ರಮಿಸುವ ಅಮ್ರಪಾಲಿ ಎಕ್ಸ್&zwnj;ಪ್ರೆಸ್ Amrapali Express (KIR ASR EXPRESS) ವಾರದ ಏಳು ದಿನವೂ ಸಂಚರಿಸುತ್ತದೆ. ಈ ದೀರ್ಘ ಪ್ರಯಾಣದಲ್ಲಿ ಒಟ್ಟು 54 ನಿಲುಗಡೆಗಳನ್ನು ಹೊಂದಿದೆ. ದೆಹಲಿಯಲ್ಲಿ 25 ನಿಮಿಷದವರೆಗೆ ಅಮ್ರಪಾಲಿ ಎಕ್ಸ್&zwnj;ಪ್ರೆಸ್ ನಿಲ್ಲಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೊಸಪೇಟೆ ಮಾರ್ಗವಾಗಿ ಚಲಿಸುವ ಯಶವಂತಪುರ-ವಿಜಯಪುರ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ&lt;/strong&gt;&lt;/p&gt;&lt;img&gt;&lt;p&gt;ಎಲ್ಲಾ ಎಕ್ಸ್&zwnj;ಪ್ರೆಸ್ ರೈಲುಗಳಂತೆ 2A, 3A, 3E, Sleeper (SL) ಮತ್ತು ಜನರಲ್ ಬೋಗಿಗಳನ್ನು ಹೊಂದಿದೆ. ಆದ್ರೆ ಪ್ರಯಾಣಿಕರು ಎಲ್ಲಾ ಬೋಗಿಗಳಲ್ಲಿ ಹತ್ತಿಕೊಳ್ಳೋದರಿಂದ ರೈಲು ತುಂಬಿ ತುಳುಕುತ್ತಿರುತ್ತದೆ. ಜನದಟ್ಟಣೆಯಿಂದಾಗಿ ಶೌಚಾಲಯಗಳು ಗಲೀಜು ಆಗಿರುತ್ತವೆ ಎಂಬುವುದು ಪ್ರಯಾಣಿಕರ ಮಾತು ಆಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಜನರು ಅನಿವಾರ್ಯವಾಗಿ ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು-ಮುಂಬೈ&zwnj; ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್! ರೂಟ್ ಹೀಗಿದೆ&lt;/strong&gt;&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/travel/the-moving-hell-of-indian-railways-train-no-15707-amrapali-express-kir-to-asr-details-mrq-zh10pwk"/>
        </item>
        <item>
            <title><![CDATA[ಚಿರತೆ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಘೋಷಿಸಿ ಅರಣ್ಯ ಇಲಾಖೆ]]></title>
            <link>https://kannada.asianetnews.com/gallery/state/rs-20-lakh-compensation-declared-for-leopard-attack-victim-family-in-mm-hills-hlyz5d9</link>
            <guid isPermaLink="true">https://kannada.asianetnews.com/gallery/state/rs-20-lakh-compensation-declared-for-leopard-attack-victim-family-in-mm-hills-hlyz5d9</guid>
            <pubDate>Mon, 11 May 2026 10:54:15 +0530</pubDate>
            <description><![CDATA[&lt;p&gt;ಮಲೆ ಮಹದೇಶ್ವರ ಬೆಟ್ಟದಲ್ಲಿ ದರ್ಶನಕ್ಕೆ ತೆರಳಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆದ ಘಟನೆ ಭಕ್ತರನ್ನು ಬೆಚ್ಚಿ ಬೀಳಿಸಿದೆ. ಮೃತ ಬಾಲಕನ ಅಂತ್ಯಸಂಸ್ಕಾರ ಇಂದು ನಡದಿದೆ. ಇತ್ತ ಅರಣ್ಯ ಇಲಾಖೆ ಪರಿಹಾರ ಘೋಷಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kraqmpb1bvjrwc7bbwk4yjsm,imgname-rs-20-lakh-relief-declared-for-leopard-attack-1778476800353.png" type="image/jpeg" height="390" width="690"/>
            <content:encoded><![CDATA[&lt;p&gt;ಮಲೆ ಮಹದೇಶ್ವರ ಬೆಟ್ಟದಲ್ಲಿ ದರ್ಶನಕ್ಕೆ ತೆರಳಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆದ ಘಟನೆ ಭಕ್ತರನ್ನು ಬೆಚ್ಚಿ ಬೀಳಿಸಿದೆ. ಮೃತ ಬಾಲಕನ ಅಂತ್ಯಸಂಸ್ಕಾರ ಇಂದು ನಡದಿದೆ. ಇತ್ತ ಅರಣ್ಯ ಇಲಾಖೆ ಪರಿಹಾರ ಘೋಷಿಸಿದೆ.&lt;/p&gt;&lt;img&gt;&lt;p&gt;ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಜೊತೆ ದರ್ಶನಕ್ಕೆ ತೆರಳಿದ ಬೆಂಗಳೂರಿನ ಬಾಲಕ ಹರ್ಷಿತ್ ಗೌಡ ಮೇಲೆ ಚಿರತೆ ದಾಳಿ ನಡೆಸಿತ್ತು. ತಾಯಿ ಕಣ್ಣ ಮುಂದೆ ಚಿರತೆ ಬಾಲಕನ ಹೊತ್ತೊಯ್ದು ಕೊಂದು ಹಾಕಿತ್ತು. ಹರ್ಷಿತ್ ಗೌಡ ಮೃತದೇಹ ಚಾಮರಾಜನಗರದಿಂದ ನಿನ್ನ ರಾತ್ರಿ ಬೆಂಗಳೂರಿಗೆ ತರಲಾಗಿದೆ.ಇಂದು ಅಂತ್ಯಕ್ರಿಯೆ ನಡೆದಿದೆ.&lt;/p&gt;&lt;img&gt;&lt;p&gt;ಹರ್ಷಿತ್ ಗೌಡ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇತ್ತ ಅರಣ್ಯ ಇಲಾಖೆ ಒಟ್ಟು 20 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಈ ಪೈಕಿ 5 ಲಕ್ಷ ರೂಪಾಯಿ ಮೊತ್ತವನ್ನು ಈಗಾಗಲೇ ಕುಟುಂಬಕ್ಕೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಸುಮ್ಮನಹಳ್ಳಿ ಚಿತಾಗಾರದಲ್ಲಿ ಬಾಲಕ ಹರ್ಷಿತ್ ಗೌಡ ಅಂತ್ಯಸಂಸ್ಕಾರ ನಡೆದಿದೆ. ಮಗನ ಅಂತಿಮ ವಿಧಿವಿಧಾನ ನಡೆಯುತ್ತಿದ್ದಂತೆ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಪೋಷಕರ ಆಕ್ರಂದನ ನೋಡಿ ಕುಟುಂಬಸ್ಥರು ಕಣ್ಣೀರಾಗಿದ್ದಾರೆ.&lt;/p&gt;&lt;img&gt;&lt;p&gt;ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾಲ್ನಡಿಯಲ್ಲಿ ಸಾಗುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದೆ. ತಾಯಿ ಕೈಹಿಡಿದು ಕೊಂಡು ಬಾಲಕ ಹರ್ಷಿತ್ ಗೌಡ ಸಾಗಿದ್ದ. ಈ ವೇಳೆ ಚಿರತೆ ದಾಳಿ ಮಾಡಿ ಬಾಲಕ ಹೊತ್ತೊಯ್ದಿದೆ. ತಾಯಿ ಚೀರಾಡಿದರೂ ಚಿರತೆ ಕೆಲವೇ ಕ್ಷಣದಲ್ಲಿ ದಾಳಿ ಮಾಡಿ ಬಾಲಕನ ಕೊಂದಿದೆ.&lt;/p&gt;&lt;img&gt;&lt;p&gt;ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ, ಹುಲಿಗಳಿವೆ ಎಂಬ ಯಾವುದೇ ಬೋರ್ಡ್ ಇಲ್ಲ. ಇತ್ತ ಭಕ್ತರಿಗೆ ಅರಣ್ಯ ಇಲಾಖೆ ಯಾವುದೇ ಸೂಚನೆಯನ್ನು ನೀಡಿಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ತಮ್ಮ ಮಗನ ಬಲಿ ಪಡೆದಿದೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.&lt;/p&gt;&lt;h2&gt;ಅರಣ್ಯ ಇಲಾಖೆ ವಿರುದ್ಧ ಆಕ್ರೋಶ&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/rs-20-lakh-compensation-declared-for-leopard-attack-victim-family-in-mm-hills-hlyz5d9"/>
        </item>
        <item>
            <title><![CDATA[Video: ರೈಲ್ವೆ ನಿಲ್ದಾಣದಲ್ಲಿ ಬಣ್ಣದಲ್ಲಿ ಅದ್ದಿದ ಸೌತೆಕಾಯಿ ಮಾರಾಟ: ವಿಚಾರಣೆ ವೇಳೆ ಮಹಿಳೆಯರ ಶಾಕಿಂಗ್​ ಹೇಳಿಕೆ]]></title>
            <link>https://kannada.asianetnews.com/india-news/a-viral-video-from-bihars-katihar-railway-station-has-sparked-outraged-suc/articleshow-pnchilq</link>
            <guid isPermaLink="true">https://kannada.asianetnews.com/india-news/a-viral-video-from-bihars-katihar-railway-station-has-sparked-outraged-suc/articleshow-pnchilq</guid>
            <pubDate>Sat, 09 May 2026 21:05:09 +0530</pubDate>
            <description><![CDATA[ಬಿಹಾರದ ರೈಲು ನಿಲ್ದಾಣದಲ್ಲಿ, ಸೌತೆಕಾಯಿಗಳನ್ನು ತಾಜಾ ಎಂದು ತೋರಿಸಲು ರಾಸಾಯನಿಕ ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿದ್ದ ಮಹಿಳೆಯರ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಪ್ರಯಾಣಿಕರಲ್ಲಿ ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr6p1b7ns788ex72x22dv885,imgname-cucumber-1778340900085.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೇಸಿಗೆಯ ತಾಪ ಹೆಚ್ಚಿದಂತೆ ಏನಾದರೂ ತಣ್ಣನೆಯ ವಸ್ತು, ಪಾನೀಯ ತಿನ್ನಬೇಕು, ಕುಡಿಯಬೇಕು ಎನ್ನುವ ಹಂಬಲ ಉಂಟಾಗುತ್ತದೆ. ಅದರಲ್ಲಿಯೂ ಪ್ರಯಾಣದ ಸಮಯದಲ್ಲಿ ಏನಾದರೂ ತಂಪು ಸಿಕ್ಕರೆ ಎಷ್ಟು ಚೆನ್ನ ಎನ್ನುವವರೇ ಎಲ್ಲರೂ. ತಂಪು ಎಂದಾಕ್ಷಣ ಮೊದಲಿಗೆ ಕಾಣಬರುವುದು ಸೌತೇಕಾಯಿ. ರೈಲ್ವೆ ನಿಲ್ದಾಣಗಳಲ್ಲಿ, ಬಸ್​ ನಿಲ್ದಾಣಗಳಲ್ಲಿ ತಾಜಾ ತಾಜಾ ಸೌತೆಕಾಯಿ ನೋಡಿ ಬಾಯಲ್ಲಿ ನೀರೂರುತ್ತದೆ. ಅದಕ್ಕೆ ಉಪ್ಪು, ಮೆಣಸಿನ ಪುಡಿ ಸೇರಿಸಿ ಕೊಟ್ಟರೆ ಆಹಾ, ಬೇಸಿಗೆ ಮಾತ್ರವಲ್ಲದೇ ಎಲ್ಲಾ ಕಾಲದಲ್ಲಿಯೂ ತಿನ್ನಲು ಬಲು ರುಚಿ. ಆದರೆ ಹಾಗೆಂದು ಕಂಡಕಂಡಲ್ಲಿ ಇದನ್ನು ಖರೀದಿಸಿ ಸೇವಿಸುವವರಿಗೆ ಬಿಗ್​ ಶಾಕ್​ ಎನ್ನುವಂಥ ವಿಡಿಯೋ ಒಂದು ರೈಲ್ವೆ ನಿಲ್ದಾಣದಿಂದ ಬಂದಿದೆ.&lt;/p&gt;&lt;h2&gt;&lt;strong&gt;ಬಣ್ಣದಲ್ಲಿ ಅದ್ದಿದ ಸೌತೆಕಾಯಿ&lt;/strong&gt;&lt;/h2&gt;&lt;p&gt;ಬಿಹಾರದ ರೈಲು ನಿಲ್ದಾಣದಲ್ಲಿ ಕೆಲವು ಮಹಿಳೆಯರು ಸೌತೆಕಾಯಿ ಫ್ರೆಷ್​ ಆಗಿರಲಿ ಎನ್ನುವ ಕಾರಣಕ್ಕೆ ಅದರ ಸಿಪ್ಪೆ ತೆಗೆದು ರಾಸಾಯನಿಕ ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿರುವ ಶಾಕಿಂಗ್​ ವಿಡಿಯೋ ಇದಾಗಿದೆ. ಇದನ್ನು ಯಾರೋ ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ. ಇದು ಈಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪ್ರಯಾಣದ ಸಂದರ್ಭಗಳಲ್ಲಿ ಅಲ್ಲಿ ಸಿಗುವುದನ್ನೆಲ್ಲಾ ಕೊಂಡು ತಿನ್ನುವವರಿಗೆ ಇದು ದೊಡ್ಡ ಪಾಠವಾಗಿದೆ. ಇದಾಗಲೇ ರೈಲ್ವೆಯಲ್ಲಿಮಾರಾಟ ಆಗುವ ಚಹ, ನೀರು ಇವುಗಳ ಬಗ್ಗೆಯೂ ಸಾಕಷ್ಟು ವಿಡಿಯೋಗಳು ಬಂದಿವೆ. ಇದೀಗ ಸೌತೆಕಾಯಿಯ ವಿಡಿಯೋ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.&lt;/p&gt;&lt;h3&gt;&lt;strong&gt;ವಿಡಿಯೋ ವೈರಲ್​&lt;/strong&gt;&lt;/h3&gt;&lt;p&gt;ಈ ವಿಡಿಯೋ ವೈರಲ್ ಆಗುತ್ತಲೇ ರೈಲ್ವೆ ಇಲಾಖೆಯ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸೌತೆಕಾಯಿಗಳನ್ನು ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿದ್ದ ಒಂಬತ್ತು ಮಂದಿ ಮಹಿಳೆಯರನ್ನು ವಶಕ್ಕೆ ಪಡೆದುಕೊಂಮಡಿದ್ದಾರೆ. ವೈರಲ್​ ಆಗಿರುವ ವಿಡಿಯೋದಲ್ಲಿ ಈ 9 ಮಂದಿಯೂ ಇರುವುದು ಖಚಿತವಾಗಿದೆ.&lt;/p&gt;&lt;h3&gt;&lt;strong&gt;ಜನರ ಆಕ್ರೋಶ&lt;/strong&gt;&lt;/h3&gt;&lt;p&gt;ವಿಚಾರಣೆ ವೇಳೆ ಇನ್ನೂ ಶಾಕಿಂಗ್​ ವಿಷ್ಯ ತಿಳಿಸಿದ್ದಾರೆ ಮಹಿಳೆಯರು. ಮದುವೆ ಸಮಾರಂಭಗಳಲ್ಲಿ ಸಿಹಿತಿಂಡಿಗಳನ್ನು ತಯಾರಿಸಲು ಬಳಸುವಂತಹ ಹಸಿರು ಬಣ್ಣವನ್ನೇ ತಾನು ಬಳಸುತ್ತಿರುವುದಾಗಿ ಹೇಳಿದ್ದಾಳೆ. ಇದರಿಂದ ಸಿಹಿ ಪದಾರ್ಥಗಳ ಮೇಲೆಯೂ ಈಗ ಸಂದೇಹ ವ್ಯಕ್ತವಾಗಿದೆ. ಇವರು ಬಳಸುತ್ತಿದ್ದ ಕೆಮಿಕಲ್ಸ್​ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ವಿಡಿಯೋ ವೈರಲ್​ ಆಗುತ್ತಲೇ, ಆಹಾರ ಸುರಕ್ಷತೆ ಮತ್ತು ಅಧಿಕಾರಿಗಳ ಹೊಣೆಗಾರಿಕೆಯ ಕುರಿತು ಭಾರಿ ಪ್ರಶ್ನೆ ಕೇಳುತ್ತಿದ್ದಾರೆ ಪ್ರಶ್ನಿಸುತ್ತಿದ್ದಾರೆ. ಸೂಕ್ತ ಕಠಿಣ ಕ್ರಮ ಅಗತ್ಯ. ಎಚ್ಚರಿಕೆ ಕೊಟ್ಟು ಬಿಟ್ಟರೆ ಏನೂ ಪ್ರಯೋಜನವಿಲ್ಲ. ರೈಲ್ವೆ ಅಧಿಕಾರಿಗಳು ಇದರ ಜವಾಬ್ದಾರಿ ಹೊರಬೇಕು ಎಂದೆಲ್ಲಾ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/a-viral-video-from-bihars-katihar-railway-station-has-sparked-outraged-suc/articleshow-pnchilq"/>
        </item>
        <item>
            <title><![CDATA[Do Not Buy Gold: ನರೇಂದ್ರ ಮೋದಿ ಹೇಳಿದಂತೆ ಯಾಕೆ 1 ವರ್ಷ ಬಂಗಾರ ಖರೀದಿ ಮಾಡಬಾರದು? ಏನಾಗುತ್ತೆ?]]></title>
            <link>https://kannada.asianetnews.com/gallery/business/why-prime-minister-narendra-modi-asked-indians-avoid-to-buy-gold-for-one-year-reason-we8w2vk</link>
            <guid isPermaLink="true">https://kannada.asianetnews.com/gallery/business/why-prime-minister-narendra-modi-asked-indians-avoid-to-buy-gold-for-one-year-reason-we8w2vk</guid>
            <pubDate>Mon, 11 May 2026 10:37:13 +0530</pubDate>
            <description><![CDATA[&lt;p&gt;Gold Price: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷವಾದರೂ ಕೂಡ, ಗೋಲ್ಡ್&zwnj; ಖರೀದಿ ಮಾಡಬೇಡಿ ಎಂದು ಹೇಳಿದ್ದಾರೆ. ಅನೇಕರು ಗೋಲ್ಡ್&zwnj; ಖರೀದಿ ಮಾಡುತ್ತಾರೆ, ಇದನ್ನು ದೊಡ್ಡ ಮಟ್ಟದ ಹೂಡಿಕೆ ಎಂದು ಭಾವಿಸಿದ್ದಾರೆ. ಮದುವೆ ಎಂದು ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ನರೇಂದ್ರ ಮೋದಿ ಹೇಳಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krapdm5ypyzq6fd5kkf2axbc,imgname-new-project---2026-05-11t102742.851-1778475520190.jpg" type="image/jpeg" height="390" width="690"/>
            <content:encoded><![CDATA[&lt;p&gt;Gold Price: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷವಾದರೂ ಕೂಡ, ಗೋಲ್ಡ್&zwnj; ಖರೀದಿ ಮಾಡಬೇಡಿ ಎಂದು ಹೇಳಿದ್ದಾರೆ. ಅನೇಕರು ಗೋಲ್ಡ್&zwnj; ಖರೀದಿ ಮಾಡುತ್ತಾರೆ, ಇದನ್ನು ದೊಡ್ಡ ಮಟ್ಟದ ಹೂಡಿಕೆ ಎಂದು ಭಾವಿಸಿದ್ದಾರೆ. ಮದುವೆ ಎಂದು ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ನರೇಂದ್ರ ಮೋದಿ ಹೇಳಿದರು.&amp;nbsp;&lt;/p&gt;&lt;img&gt;&lt;p&gt;ಸಂಪ್ರದಾಯ, ಉಳಿತಾಯ, ಕೌಟುಂಬಿಕ ಆಚರಣೆಗಳ ಜೊತೆ ಬಂಗಾರ ಸೇರಿಕೊಂಡಿದೆ. ಹೀಗಿರುವಾಗ ನರೇಂದ್ರ ಮೋದಿ ಅವರು ಯಾಕೆ ಹೀಗೆ ಹೇಳಿದರು ಎಂಬ ಡೌಟ್&zwnj; ಕಾಡ್ತಿದೆ. ಇದರ ಹಿಂದಿರುವ ಕಾರಣ ಏನು?&lt;/p&gt;&lt;p&gt;ಇರಾನ್-ಇಸ್ರೇಲ್&zwnj; ಯುದ್ಧ ನಡೆಯುತ್ತಿದೆ. ಅಲ್ಲಿಂದ ಒಂದಿಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಪೆಟ್ರೋಲ್&zwnj; ಕೂಡ ಸಿಗೋದು ಕಷ್ಟ ಆಗಿದೆ. ಒಟ್ಟಿನಲ್ಲಿ ಜಾಗತಿಕ ಇಂಧನ ಬಿಕ್ಕಟ್ಟು ನಡೆಯುತ್ತಿದೆ. ಒಟ್ಟಿನಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು (Forex Reserves) ಮೇಲಿನ ಒತ್ತಡ, ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ರಕ್ಷಿಸಬೇಕಿದೆ.&amp;nbsp;&lt;/p&gt;&lt;img&gt;&lt;p&gt;ಪಶ್ಚಿಮ ಏಷ್ಯಾದ ಸಂಘರ್ಷ, ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಸುತ್ತಲು ಉದ್ವಿಗ್ನತೆ ಶುರುವಾಗಿದೆ. ಹೀಗಾಗಿ ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿದೆ.&lt;/p&gt;&lt;p&gt;ಕೆಲವು ವಾರಗಳಿಂದ ಪ್ರತಿ ಬ್ಯಾರೆಲ್&zwnj;ಗೆ ಜಾಗತಿಕ ಕಚ್ಚಾ ತೈಲ ಬೆಲೆಯು ಸುಮಾರು $70 ರಿಂದ ಸುಮಾರು $126 ಕ್ಕೆ ಏರಿದೆ. ಇದರಿಂದ ಭಾರತದ ಆಮದು ವೆಚ್ಚ ಹೋಗಿದೆ. ಪೆಟ್ರೋಲ್, ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ, ವಿದೇಶಿ ವಿನಿಮಯವನ್ನು ಸಂರಕ್ಷಿಸಿ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾರತದ ಪಾಲಿಗೆ ಚಿನ್ನ, ಕಚ್ಚಾ ತೈಲ ಎರಡೂ ಒಂದೇ ಆಗಿದೆ. ಇವೆರಡನ್ನೂ ಹೆಚ್ಚಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ, ಅದನ್ನು ಯುಎಸ್ ಡಾಲರ್&zwnj;ಗಳಲ್ಲಿ ಕೊಡಲಾಗುತ್ತದೆ. ಭಾರತಕ್ಕೆ ಎಷ್ಟು ತೈಲ ಬೇಕೋ ಅದರಲ್ಲಿ, ಸುಮಾರು 85% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ, ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರರಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.&lt;/p&gt;&lt;p&gt;ಪೆಟ್ರೋಲ್&zwnj;, ಡಿಸೇಲ್ ಬೆಲೆ ಹೆಚ್ಚಾದಾಗ, ಚಿನ್ನದ ಆಮದು ಕೂಡ ಹೆಚ್ಚಾಗಿದ್ದಾಗ, ಭಾರತಕ್ಕೆ ಇದನ್ನೆಲ್ಲ ಆಮದು ಪಾವತಿ ಮಾಡಲು ಹೆಚ್ಚಿನ ಡಾಲರ್&zwnj;ಗಳು ಬೇಕು. ಇದರಿಂದ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್&zwnj; ಬೇಡಿಕೆ ಹೆಚ್ಚುವುದು, ರೂಪಾಯಿ ಮೌಲ್ಯದ ಮೇಲೆ ಒತ್ತಡ ಹೇರುತ್ತದೆ.&lt;/p&gt;&lt;img&gt;&lt;p&gt;ಅರ್ಥಶಾಸ್ತ್ರಜ್ಞರದ ಪ್ರಕಾರ, ಚಿನ್ನವು ಸಾಮಾನ್ಯ ಗ್ರಾಹಕ ಉತ್ಪನ್ನವಲ್ಲ. ಚಿನ್ನದ ಆಮದನ್ನು ಹೆಚ್ಚಾಗಿ ಐಚ್ಛಿಕ ಖರ್ಚು ಅಥವಾ ಉಳಿತಾಯದ ಬೇಡಿಕೆ ಎನ್ನಲಾಗುವುದು. ಯುದ್ಧದ ಟೈಮ್&zwnj;ನಲ್ಲಿ ಚಿನ್ನವನ್ನು ಖರೀದಿ ಮಾಡಿದರೆ, ದೇಶದಿಂದ ಹೆಚ್ಚಿನ ಡಾಲರ್&zwnj;ಗಳು ಹೊರಹೋಗುತ್ತವೆ. ಇದು ಭಾರತದ ಚಾಲ್ತಿ ಖಾತೆ ಕೊರತೆಯನ್ನು (Current Account Deficit) ಹೆಚ್ಚಿಸಬಹುದು. ಇದರಿಂದ ರೂಪಾಯಿ ಮೌಲ್ಯ ಕುಂಠಿತವಾಗುತ್ತದೆ.&lt;/p&gt;&lt;img&gt;&lt;p&gt;ಇಂಥ ಟೈಮ್&zwnj;ನಲ್ಲಿ ಚಿನ್ನದ ಆಮದು ಕಡಿಮೆ ಮಾಡಲು ಭಾರತವು, ಭಾರತದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿವೆ, ಆಮದಿನ ಮೇಲೆ ನಿರ್ಬಂಧ ಹೇರಿವೆ, ಸಾವರಿನ್ ಗೋಲ್ಡ್ ಬಾಂಡ್&zwnj;ಗಳನ್ನು ಹೆಚ್ಚು ಮಾಡಿವೆ. ಇದರಿಂದ ವಿದೇಶಿ ವಿನಿಮಯ ಮೀಸಲು ಮೇಲಿನ ಒತ್ತಡ ಕಡಿಮೆ ಮಾಡುವುದು, ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲಾಗುವುದು.&lt;/p&gt;&lt;img&gt;&lt;p&gt;ಒಂದು ಕುಟುಂಬವು ಮದುವೆಗಾಗಿ ಆಭರಣ ಖರೀದಿಯನ್ನು ಮುಂದೂಡಿದೆ, ಇದರಿಂದ ರೂಪಾಯಿ ಮೌಲ್ಯ ಬದಲಾಗುವುದಿಲ್ಲ. ಆದರೆ ಅರ್ಥಶಾಸ್ತ್ರಜ್ಞರು ಒಂದೊಂದು ಕುಟುಂಬ ಎಂದುಕೊಂಡರೂ ಕೂಡ, ನೂರಾರು ಕುಟುಂಬಗಳು ಇದೇ ನಿರ್ಧಾರ ಕೈಗೊಂಡರೆ ಡಾಲರ್&zwnj; ಮೌಲ್ಯ ಕುಸಿಯೋದಿಲ್ಲ. ಮದುವೆಗೆ ಅಥವಾ ಮುಂದಿನ ದಿನಗಳಲ್ಲಿ ಬಂಗಾರದ ರೇಟ್&zwnj; ಹೆಚ್ಚಾಗುತ್ತದೆ ಎಂದು ಖರೀದಿ ಮಾಡುವವರು ಜಾಸ್ತಿ.&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/why-prime-minister-narendra-modi-asked-indians-avoid-to-buy-gold-for-one-year-reason-we8w2vk"/>
        </item>
        <item>
            <title><![CDATA[ಮೋದಿ ಕರೆ ಕೊಟ್ಟ ಬೆನ್ನಲ್ಲೇ ಇಂಧನ ಕೊರತೆ ಆತಂಕ, ಲಗ್ಗೆರೆ ಬಂಕ್‌ನಲ್ಲಿ ಪೆಟ್ರೋಲ್, ಡೀಸೆಲ್ ಖಾಲಿ]]></title>
            <link>https://kannada.asianetnews.com/gallery/state/petrol-diesel-stocks-empty-at-bengaluru-laggere-fuel-station-amid-shortage-concerns-127fyv5</link>
            <guid isPermaLink="true">https://kannada.asianetnews.com/gallery/state/petrol-diesel-stocks-empty-at-bengaluru-laggere-fuel-station-amid-shortage-concerns-127fyv5</guid>
            <pubDate>Mon, 11 May 2026 10:28:26 +0530</pubDate>
            <description><![CDATA[&lt;p&gt;ಪ್ರಧಾನಿ ಮೋದಿ ಪೆಟ್ರೋಲ್ ಡೀಸೆಲ್ ಮಿತ ಬಳಕೆಗೆ ಕರೆ ನೀಡಿದ್ದಾರೆ. ಅನಗತ್ಯ ಪ್ರಯಾಣ ತಪ್ಪಿಸಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಕೆಲ ಪೆಟ್ರೋಲ್ ಬಂಕ್&zwnj;ಗಳಿಗೆ ಇಂಧನ ಸರಬರಾಜು ಕೊರತೆ ಎದುರಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmprj2w5g8phwshcj453qhcb,imgname-india-cuts-excise-duty-on-petrol-diesel-amid-iran-war-crude-oil-price-surge-hormuz-crisis-fuel-price-impact-1-1774585449349.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಧಾನಿ ಮೋದಿ ಪೆಟ್ರೋಲ್ ಡೀಸೆಲ್ ಮಿತ ಬಳಕೆಗೆ ಕರೆ ನೀಡಿದ್ದಾರೆ. ಅನಗತ್ಯ ಪ್ರಯಾಣ ತಪ್ಪಿಸಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಕೆಲ ಪೆಟ್ರೋಲ್ ಬಂಕ್&zwnj;ಗಳಿಗೆ ಇಂಧನ ಸರಬರಾಜು ಕೊರತೆ ಎದುರಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಯುದ್ಧದಿಂದ ಮತ್ತೆ ಇಂಧನ ಸರಬರಾಜು ಕೊರತೆ ಎದುರಾಗಿದೆ. ಹಣದುಬ್ಬರ, ವಿದೇಶಿ ವಿನಿಮಯ, ಆರ್ಥಿಕತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮೋದಿ ಮಹತ್ವದ ಕರೆ ನೀಡಿದ್ದಾರೆ. ಸಾರ್ವಜನಿಕ ಸಾರಿಗೆ ಬಳಕೆ, ಇವಿ ವಾಹನಗಳ ಬಳಕೆ, ಅನಗತ್ಯ ಪ್ರವಾಸ ಕಡಿತ, ಮನೆಯಿಂದ ಕೆಲಸಗಳಿಂದ ಇಂಧನ ಉಳಿತಾಯಕ್ಕೆ ಮೋದಿ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕೆಲವೆಡೆ ಇಂಧನ ಕೊರತೆ ಎದುರಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಲಗ್ಗರೆಯಲ್ಲಿರುವ ಹೆಚ್&zwnj;ಪಿ ಪೆಟ್ರೋಲ್ ಬಂಕ್&zwnj;ನಲ್ಲಿ ಪೆಟ್ರೋಲ್ ಡೀಸೆಲ್ ಕೊರತೆ ಎದುರಾಗಿದೆ. ಇಂಧನ ಸರಬರಾಜು ಆಗದ ಕಾರಣ ಪೆಟ್ರೋಲ್ ಬಂಕ್&zwnj;ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಖಾಲಿಯಾಗಿದೆ. ಇದರ ಪರಿಣಾಮ ಗ್ರಾಹಕರು ಪರದಾಡುವಂತಾಗಿದೆ.&lt;/p&gt;&lt;img&gt;&lt;p&gt;ಲಗ್ಗರೆ ಪೆಟ್ರೋಲ್ ಬಂಕ್&zwnj;ಗೆ ಇಂಧನ ಸರಬರಾಜು ಆಗದ ಕಾರಣ ಪೆಟ್ರೋಲ್ ಬಂಕ್ ಮುಚ್ಚಲಾಗಿದೆ. ನಿನ್ನೆ(ಮೇ.10) ಸಂಜೆಯಿಂದಲೇ ಲಗ್ಗೆರೆ ಬಳಿ ಇರುವ ಹೆಚ್&zwnj;ಪಿ ಪೆಟ್ರೋಲ್ ಬಂಕ್ ಕ್ಲೋಸ್ ಮಾಡಲಾಗಿದೆ. ಗ್ರಾಹಕರು ಪೆಟ್ರೋಲ್ ಬಳಿ ಬಂದು ಮತ್ತೆ ಬೇರೆಡೆ ತೆರಳು ಪರಿಸ್ಥಿತಿ ಎದುರಾಗಿದೆ.&lt;/p&gt;&lt;img&gt;&lt;p&gt;ವಾಹನದಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ನಡೆದುಕೊಂಡು ಬಂದ ವ್ಯಕ್ತಿಗೆ ನಿರಾಸೆಯಾಗಿದೆ. ಬಳಿಕ ಅರ್ಧ ಕಿಲೋಮೀಟರ್ ದೂರ ನಡೆದ ಬಾಟಲಿಯಲ್ಲಿ ಪೆಟ್ರೋಲ್ ತಂದ ಘಟನೆ ನಡೆದಿದೆ. ಹಲವರು ಬಾಟಲಿ ಮೂಲಕ ಪೆಟ್ರೋಲ್ ಖರೀದಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ವಿದೇಶದಲ್ಲಿ ಮದುವೆ ಮಾಡುವ ಬದಲು ಭಾರತದಲ್ಲಿ ಮದುವೆ, ವಿದೇಶಿ ಪ್ರವಾಸ ರದ್ದು ಮಾಡಿ, ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡದಂತೆ ಮೋದಿ ಸೂಚಿಸಿದ್ದಾರೆ. ಸ್ಥಳೀಯ ಉತ್ಪನ್ನಗಳ ಖರೀದಿ, ಸಾರಿಗೆ ವಾಹನಗಳ ಬಳಕೆ ಸೇರಿದಂತೆ ಪ್ರಮುಖ ಸೂತ್ರಗಳನ್ನು ಮೋದಿ ನೀಡಿದ್ದಾರೆ. ಯುದ್ಧ ಕಾರಣದಿಂದ ಇಂಧನ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸ್ವಾಲಂಬಿಯಾಗಲು ಮೋದಿ ಸೂಚಿಸಿದ್ದಾರೆ.&lt;/p&gt;&lt;h2&gt;ಮೋದಿ ಮಹತ್ವದ ಸಂದೇಶ&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/petrol-diesel-stocks-empty-at-bengaluru-laggere-fuel-station-amid-shortage-concerns-127fyv5"/>
        </item>
        <item>
            <title><![CDATA[ಬರ್ತ್​ಡೇ ದಿನ ಗುಡ್​ನ್ಯೂಸ್ ಕೊಡ್ತೀರಾ ಕೇಳಿದ್ರೆ ಅಭಿಮಾನಿಗಳ ಮೇಲೆ ಕೇಸ್​ ಹಾಕೋ ಎಚ್ಚರಿಕೆ ಕೊಟ್ಟ ಡಿಕೆಶಿ- ಫ್ಯಾನ್ಸ್​ ಶಾಕ್​]]></title>
            <link>https://kannada.asianetnews.com/gallery/politics/dcm-dk-shivakumar-wanrs-fans-not-to-put-banner-or-flex-in-his-birthday-suc-v2kg1wv</link>
            <guid isPermaLink="true">https://kannada.asianetnews.com/gallery/politics/dcm-dk-shivakumar-wanrs-fans-not-to-put-banner-or-flex-in-his-birthday-suc-v2kg1wv</guid>
            <pubDate>Sun, 10 May 2026 10:28:09 +0530</pubDate>
            <description><![CDATA[ತಮ್ಮ 64ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಮಾನಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಫ್лекಸ್ ಅಥವಾ ಬ್ಯಾನರ್ ಹಾಕಿದರೆ, ಅವರ ವಿರುದ್ಧ ಕಠಿಣ ಕ್ರಮ ಮತ್ತು ಕೇಸ್ ದಾಖಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khfee2pzd9xkawvh1ewnz2n4,imgname-dk-shivakumar-1771118725855.jpg" type="image/jpeg" height="390" width="690"/>
            <content:encoded><![CDATA[ತಮ್ಮ 64ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಮಾನಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಫ್лекಸ್ ಅಥವಾ ಬ್ಯಾನರ್ ಹಾಕಿದರೆ, ಅವರ ವಿರುದ್ಧ ಕಠಿಣ ಕ್ರಮ ಮತ್ತು ಕೇಸ್ ದಾಖಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.&lt;img&gt;&lt;p&gt;ಸದ್ಯ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ನಡೆಯುತ್ತಿರುವ ಪೈಪೋಟಿ ಬೂದಿ ಮುಚ್ಚಿದ ಕೆಂಡದಂತಿದೆ. ಎರಡೂವರೆ ವರ್ಷಗಳ ಅಧಿಕಾರದ ನಂತರ ಸಿಎಂ ಆಗುವ ಕನಸು ಕಂಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್​ ಅವರ ಕನಸು ಸದ್ಯ ಭಗ್ನವಾದಂತಿದೆ. ಆದರೂ ರಾಜಕೀಯದಲ್ಲಿ ಯಾವಾಗ, ಏನು ಬೇಕಾದರೂ ಆಗಬಹುದು.&lt;/p&gt;&lt;img&gt;&lt;p&gt;ಇದರ ನಡುವೆಯೇ ಇದೇ 15ರಂದು ಡಿ.ಕೆ.ಶಿವಕುಮಾರ್​ ಅವರು, ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. May 15, 1962ರಲ್ಲ ಹುಟ್ಟಿರೋ ಡಿಕೆಶಿ ಅವರು ಇದೀಗ 65ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ಪತ್ರಕರ್ತರು ಅವರನ್ನು ಹುಟ್ಟುಹಬ್ಬಕ್ಕೆ ಏನು ಗುಡ್​ನ್ಯೂಸ್​​ ಕೊಡ್ತೀರಾ ಎಂದು ಕೇಳಿದಾಗ ಡಿಕೆ ಶಿವಕುಮಾರ್​ ಅವರು ಸ್ವಲ್ಪ ಗರಂ ಆಗಿರುವಂತೆ ಕಂಡರು. ಇದೇ ವೇಳೆ ಅಭಿಮಾನಿಗಳು ಶಾಕ್​ ಆಗುವಂಥ ಉತ್ತರ ಕೊಟ್ಟರು.&lt;/p&gt;&lt;img&gt;&lt;p&gt;ಒಂದು ವೇಳೆ ನನ್ನ ಹುಟ್ಟುಹಬ್ಬಕ್ಕೆ ಯಾರಾದರೂ ಫ್ಲೆಕ್ಸ್​, ಬ್ಯಾನರ್​ ಹಾಕಿದ್ರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಕಮಿಷನರ್​ಗೆ ಹೇಳಿದ್ದೇನೆ. ಯಾರೂ ಫ್ಲೆಕ್ಸ್​, ಬ್ಯಾನರ್​ ಹಾಕಿ ಜನರಿಗೆ ತೊಂದರೆ ಕೊಡಬಾರದು. ಅಂಥವರ ವಿರುದ್ಧ ಕೇಸ್​ ಹಾಕಲಾಗುವುದು ಎಂದಿದ್ದಾರೆ.&lt;/p&gt;&lt;img&gt;&lt;p&gt;ಒಂದು ವೇಳೆ ನಿಮಗೆ ಹಾಕಲೇಬೇಕು ಎಂದಾದರೆ, ಪಾಲಿಕೆಗೆ ದುಡ್ಡು ಕೊಟ್ಟು ಹಾಕಿಬೇಕಿದ್ರೆ. ಆದರೆ ಸುಮ್​ಸುಮ್​ನೆ ಹಾಕಿದ್ರೆ ನಾನು ಸುಮ್ಮನೇ ಇರುವುದಿಲ್ಲ. strict action ತೆಗೆದುಕೊಳ್ಳಲು ಹೇಳುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಈ ಮಾತಿನಿಂದ ಶಿವಕುಮಾರ್​ ಅವರ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಅಷ್ಟಕ್ಕೂ ಇದಾಗಲೇ ಹೈಕೋರ್ಟ್​ ಹಲವಾರು ಬಾರಿ ಈ ರೀತಿಯ ಫ್ಲೆಕ್ಸ್​, ಬ್ಯಾನರ್​ಗಳಿಗೆ ತಡೆ ನೀಡಿದೆ. ಹೀಗೆ ಹಾಕಬಾರದು ಎಂದು ಹಲವಾರು ಬಾರಿ ಆದೇಶಿಸಿದರೂ, ಅಭಿಮಾನಿಗಳು ಅದನ್ನು ಮೀರುತ್ತಲೇ ಇದ್ದಾರೆ. ಇದರಿಂದ ಕೆಲವೊಮ್ಮೆ ವಾಹನ ಸವಾರರಿಗೆ ತೊಂದರೆ ಆಗುವುದು ಇದೆ. ಅದಕ್ಕಾಗಿಯೇ ಈ ಕಠಿಣ ನಿಯಮ ಮಾಡಿದ್ದಾರೆ ಉಪ ಮುಖ್ಯಮಂತ್ರಿ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/politics/dcm-dk-shivakumar-wanrs-fans-not-to-put-banner-or-flex-in-his-birthday-suc-v2kg1wv"/>
        </item>
        <item>
            <title><![CDATA[ದಳಪತಿ ವಿಜಯ್​ ಪ್ರಮಾಣ ವಚನ ಸಮಾರಂಭದಲ್ಲಿ ಗಮನ ಸೆಳೆದ ತ್ರಿಷಾ ಟ್ಯಾಟೂ: ಅದೃಷ್ಟ ತಂದ ಮಾರ್ಕ್​?]]></title>
            <link>https://kannada.asianetnews.com/gallery/astrology/on-oath-taking-of-joseph-vijay-as-cm-of-tamil-nadu-trisha-krishnan-tattoo-gone-viral-suc-3z174fa</link>
            <guid isPermaLink="true">https://kannada.asianetnews.com/gallery/astrology/on-oath-taking-of-joseph-vijay-as-cm-of-tamil-nadu-trisha-krishnan-tattoo-gone-viral-suc-3z174fa</guid>
            <pubDate>Sun, 10 May 2026 13:51:11 +0530</pubDate>
            <description><![CDATA[&lt;p&gt;ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಗಮನ ಸೆಳೆದಿದ್ದು ನಟಿ ತ್ರಿಷಾ ಹಾಗೂ ಅವರ ಕೈ ಮೇಲಿನ &amp;nbsp;ಟ್ಯಾಟೂ. ವಿಜಯ್ ಅವರ ರಾಶಿಯೊಂದಿಗೆ ತ್ರಿಷಾ ರಾಶಿಯ ಹೊಂದಾಣಿಕೆ ಮತ್ತು ಆಕೆ ವಿಜಯ್ ಪಾಲಿಗೆ ಅದೃಷ್ಟವೇ ಎಂಬ ಕುತೂಹಲಕಾರಿ ವಿಷಯವನ್ನು &amp;nbsp;ವಿವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr8fhng42z8jey9c19yf108n,imgname-trisha-krishnan-1778401203716.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಗಮನ ಸೆಳೆದಿದ್ದು ನಟಿ ತ್ರಿಷಾ ಹಾಗೂ ಅವರ ಕೈ ಮೇಲಿನ &amp;nbsp;ಟ್ಯಾಟೂ. ವಿಜಯ್ ಅವರ ರಾಶಿಯೊಂದಿಗೆ ತ್ರಿಷಾ ರಾಶಿಯ ಹೊಂದಾಣಿಕೆ ಮತ್ತು ಆಕೆ ವಿಜಯ್ ಪಾಲಿಗೆ ಅದೃಷ್ಟವೇ ಎಂಬ ಕುತೂಹಲಕಾರಿ ವಿಷಯವನ್ನು &amp;nbsp;ವಿವರಿಸಲಾಗಿದೆ.&lt;/p&gt;&lt;img&gt;&lt;p&gt;ತಮಿಳುನಾಡಿನಲ್ಲಿ ಇತಿಹಾಸ ಬರೆದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ನಟ ದಳಪತಿ (ಜೋಸೆಫ್​) ವಿಜಯ್​. ಪ್ರಮಾಣ ವಚನ ಸ್ವೀಕರಿಸುತ್ತಲೇ ಭರ್ಜರಿ ಭಾಷಣವನ್ನೂ ಮಾಡಿದ್ದಾರೆ. ಜನರ ಹಣವನ್ನು ಮುಟ್ಟುವುದಿಲ್ಲ ಎನ್ನುವ ಮೂಲಕ ರಾಜಾರೋಷವಾಗಿ ಭಾಷಣ ಮಾಡಿ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ ಎಲ್ಲರ ಗಮನ ಸೆಳೆದಿರುವುದು ವಿಜಯ್​ ಗರ್ಲ್​ಫ್ರೆಂಡ್​, ನಟಿ ತ್ರಿಷಾ ಕೃಷ್ಣನ್​ (Trisha Krishnan). ನೀಲಿ ಬಣ್ಣದ ಸೀರೆಯುಟ್ಟು, ಮಲ್ಲಿಗೆ ಹೂವು ಮುಡಿದು ಅಪ್ಪಟ ಭಾರತೀಯ ನಾರಿಯಂತೆ ಕಂಡುಬಂದರು ತ್ರಿಷಾ. ಇವರ ಲುಕ್​ ನೋಡಿವರು ಜಯಲಲಿತಾ ಅವರನ್ನು ಹೋಲಿಸುತ್ತಿದ್ದಾರೆ. ಈಕೆ ಮುಖ್ಯಮಂತ್ರಿಯಾಗಬಹುದು ಎನ್ನುವಷ್ಟರ ಮಟ್ಟಿಗೆ ಪ್ರಚಾರ ಆಗುತ್ತಿದೆ.&lt;/p&gt;&lt;img&gt;&lt;p&gt;ಆದರೆ, ಇದರ ನಡುವೆಯೇ ಗಮನ ಸೆಳೆದದ್ದು ತ್ರಿಷಾ ಅವರು ಕೈ ಮೇಲೆ ಹಾಕಿಕೊಂಡಿರುವ ಟ್ಯಾಟೂ. ಏನಿದು ಟ್ಯಾಟೂ, ಇದಕ್ಕೂ ವಿಜಯ್​ಗೂ ಸಂಬಂಧದ ಇದ್ಯಾ ಎಂದೆಲ್ಲಾ ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದಾರೆ. ಆದರೆ ಅದರ ಅಸಲಿಯತ್ತೇ ಬೇರೆ.&lt;/p&gt;&lt;img&gt;&lt;p&gt;ತ್ರಿಷಾ ಅವರು ಕೈ ಮೇಲೆ ಹಾಕಿಕೊಂಡಿರುವ ಟ್ಯಾಟೂ ವೃಷಭ ರಾಶಿಯ ಗುರುತು. ತ್ರಿಷಾ ಅವರದ್ದು ವೃಷಭ ರಾಶಿ. ಈ ಹಿನ್ನೆಲೆಯಲ್ಲಿ ತಮ್ಮ ರಾಶಿ ಅದೃಷ್ಟ ತಂದುಕೊಡಲಿ ಎನ್ನುವ ಕಾರಣಕ್ಕೆ ಅದನ್ನು ಆಕೆ ಕೈಮೇಲೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಇದೇನು ಹೊಸತಾಗಿ ಹಾಕಿಕೊಂಡದಲ್ಲ.ಬದಲಿಗೆ ವಿಜಯ್​ ಅವರು ಸುದ್ದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ತ್ರಿಷಾ ಅವರ ಟ್ಯಾಟೂ ಕೂಡ ಸದ್ದು ಮಾಡುತ್ತಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ವಿಜಯ್​ ಅವರದ್ದು ಕಟಕ ರಾಶಿಯಾಗಿದೆ. ಜ್ಯೋತಿಷದ ಪ್ರಕಾರ ಹೋದರೆ, ವೃಷಭ ರಾಶಿ ಮತ್ತು ಕರ್ಕಾಟಕ ರಾಶಿಯವರು ಹೆಚ್ಚಿನ ಹೊಂದಾಣಿಕೆಯನ್ನು ಹೊಂದಿರುತ್ತಾರೆ. ಇದು ರಾಶಿಚಕ್ರದಲ್ಲಿ ಅತ್ಯಂತ ಸಾಮರಸ್ಯ, ಸ್ಥಿರ ಮತ್ತು ಪೋಷಿಸುವ ಜೋಡಿಗಳಲ್ಲಿ ಒಂದಾಗಿದೆ.&lt;/p&gt;&lt;img&gt;&lt;p&gt;ಅವರು ಸೌಮ್ಯವಾದ, ಆಳವಾದ ಭಾವನಾತ್ಮಕ ಸಂಪರ್ಕವನ್ನು ಹಂಚಿಕೊಳ್ಳುತ್ತಾರೆ. ವೃಷಭ ರಾಶಿಯವರು ಆಧಾರವಾಗಿರುವ ವಿಶ್ವಾಸಾರ್ಹತೆಯನ್ನು ಒದಗಿಸಿದರೆ, ಕರ್ಕ ರಾಶಿಯವರು ಅರ್ಥಗರ್ಭಿತ ಪೋಷಣೆಯನ್ನು ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತ್ರಿಷಾ ಅವರೇ ವಿಜಯ್​ ಪಾಲಿಗೆ ಅದೃಷ್ಟ ತಂದಿರುವುದಾಗಿ ಹೇಳಲಾಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/astrology/on-oath-taking-of-joseph-vijay-as-cm-of-tamil-nadu-trisha-krishnan-tattoo-gone-viral-suc-3z174fa"/>
        </item>
        <item>
            <title><![CDATA[ಹಂಟಾ ವೈರಸ್ ಪೀಡಿತ ಹಡಗಿನಲ್ಲಿದ್ದ ಇಬ್ಬರು ಭಾರತೀಯರು ಸ್ಪೇನ್‌ನಿಂದ ನೆದರ್‌ಲ್ಯಾಂಡ್ಸ್‌ಗೆ ಶಿಫ್ಟ್]]></title>
            <link>https://kannada.asianetnews.com/gallery/world-news/two-indians-on-hanta-virus-hit-ship-shifted-from-spain-to-netherlands-mrq-nhnn9h0</link>
            <guid isPermaLink="true">https://kannada.asianetnews.com/gallery/world-news/two-indians-on-hanta-virus-hit-ship-shifted-from-spain-to-netherlands-mrq-nhnn9h0</guid>
            <pubDate>Mon, 11 May 2026 09:59:05 +0530</pubDate>
            <description><![CDATA[ಹಂಟಾ ವೈರಸ್ ಪೀಡಿತ ಕ್ರೂಸ್ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಯನ್ನು ನೆದರ್&zwnj;ಲ್ಯಾಂಡ್ಸ್&zwnj;ಗೆ ಸ್ಥಳಾಂತರಿಸಲಾಗಿದೆ. ಸ್ಪೇನ್&zwnj;ನಲ್ಲಿ ಹಡಗು ನಿಂತ ನಂತರ, ಆರೋಗ್ಯವಂತರಾಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಇಬ್ಬರನ್ನೂ ಹೆಚ್ಚಿನ ಮೇಲ್ವಿಚಾರಣೆ ಮತ್ತು ಕ್ವಾರಂಟೈನ್&zwnj;ಗಾಗಿ ಕಳುಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kramck6f1zn30tfnqsezwkp0,imgname-hantavirus-cruise-ship-passenger--1--1778473389263.jpg" type="image/jpeg" height="390" width="690"/>
            <content:encoded><![CDATA[ಹಂಟಾ ವೈರಸ್ ಪೀಡಿತ ಕ್ರೂಸ್ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಯನ್ನು ನೆದರ್&zwnj;ಲ್ಯಾಂಡ್ಸ್&zwnj;ಗೆ ಸ್ಥಳಾಂತರಿಸಲಾಗಿದೆ. ಸ್ಪೇನ್&zwnj;ನಲ್ಲಿ ಹಡಗು ನಿಂತ ನಂತರ, ಆರೋಗ್ಯವಂತರಾಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಇಬ್ಬರನ್ನೂ ಹೆಚ್ಚಿನ ಮೇಲ್ವಿಚಾರಣೆ ಮತ್ತು ಕ್ವಾರಂಟೈನ್&zwnj;ಗಾಗಿ ಕಳುಹಿಸಲಾಗಿದೆ.&lt;img&gt;&lt;p&gt;ಹಂಟಾ ವೈರಸ್ ಪೀಡಿತ ಕ್ರೂಸ್ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಪ್ರಜೆಗಳನ್ನು ನೆದರ್&zwnj;ಲ್ಯಾಂಡ್&zwnj;ಗೆ ಶಿಫ್ಟ್ ಮಾಡಲಾಗಿದೆ. ಎಂವಿ ಹೊಂಡಿಯಸ್&zwnj;ನಿಂದ ಹಡಗನ್ನು ಸ್ಥಳಾಂತರಿಸಿದ್ದು, ಭಾನುವಾರ ಸ್ಪೇನ್ ತಲುಪಿದೆ. ಹಡಗು ಸ್ಪೇನ್ ತಲುಪಿದ ಕೂಡಲೇ WHO ಯ ಪ್ರೋಟೋಕಾಲ್&zwnj;ಗಳ ಪ್ರಕಾರ ಸ್ಪೇನ್ ಸರ್ಕಾರದ ಆರೋಗ್ಯ ಅಧಿಕಾರಿಗಳು, ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.,&lt;/p&gt;&lt;img&gt;&lt;p&gt;ಇದೇ ಹಡಗಿನಲ್ಲಿ ಇಬ್ಬರು ಭಾರತೀಯ ಪ್ರಜೆಗಳಿದ್ದರು. ವರದಿಗಳ ಪ್ರಕಾರ, ಇಬ್ಬರು ಭಾರತೀಯರು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಹೆಚ್ಚಿನ ಆರೋಗ್ಯ ಮೇಲ್ವಿಚಾರಣೆಗಾಗಿ ನೆದರ್&zwnj;ಲ್ಯಾಂಡ್ಸ್&zwnj;ಗೆ ಕಳುಹಿಸಲಾಗಿದೆ. ಸ್ಪೇನ್&zwnj;ನ ಭಾರತೀಯ ರಾಯಭಾರಿ ಸ್ಪ್ಯಾನಿಷ್ ಅಧಿಕಾರಿಗಳು, ಇಬ್ಬರು ಭಾರತೀಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಆರೋಗ್ಯದ ಕುರಿತ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಸ್ಪೇನ್&zwnj;ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಮಾಹಿತಿ ಪ್ರಕಾರ, ವೈರಸ್ ಪೀಡಿತ ಹಡಗಿನಲ್ಲಿ ಇಬ್ಬರು ಭಾರತೀಯರು ಸೇರಿದಂತೆ 150 ಜನರಿದ್ದರು. 150 ಜನರನ್ನು ಹೊತ್ತ ಡಚ್ ಧ್ವಜದ ಹಡಗು ಎಂವಿ ಹೊಂಡಿಯಸ್ ಭಾನುವಾರ ಸ್ಪೇನ್ ತಲುಪಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಹಡಗನ್ನು ಸ್ಪೇನ್&zwnj;ನ ಕ್ಯಾನರಿ ದ್ವೀಪಗಳ ಕರಾವಳಿಯಿಂದ ಸ್ವಲ್ಪ ದೂರದಲ್ಲಿ ಲಂಗರು ಹಾಕಲಾಗಿದೆ.&lt;/p&gt;&lt;img&gt;&lt;p&gt;ಇಬ್ಬರು ಭಾರತೀಯರ ಹಡಗಿನ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಾಗಿ ಪ್ರಯಾಣಿಸುತ್ತಿದ್ದರು. WHO ಮತ್ತು ಸ್ಪ್ಯಾನಿಷ್ ಆರೋಗ್ಯ ಇಲಾಖೆ ರೂಪಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಿ ಎಲ್ಲಾ 150 ಜನರನ್ನು ಹಡಗಿನಿಂದ ಹೊರಗೆ ಕರೆದುಕೊಂಡು ಬರಲಾಗಿದೆ. ಸ್ಪ್ಯಾನಿಷ್ ರಾಷ್ಟ್ರೀಯ ತುರ್ತು ಮಾನಿಟರಿಂಗ್ ಮತ್ತು ಸಮನ್ವಯ ಕೇಂದ್ರ (CENEM) ನೀಡಿದ ಮಾಹಿತಿ ಪ್ರಕಾರ, ಇಬ್ಬರು ಭಾರತೀಯರಲ್ಲಿ ಹಂಟಾ ವೈರಸ್&zwnj;ನ ಯಾವುದೇ ಗುಣಲಕ್ಷಣಗಳು ಕಂಡು ಬಂದಿಲ್ಲ. ಸದ್ಯ ಇಬ್ಬರನ್ನು ನೆದರ್&zwnj;ಲ್ಯಾಂಡ್ಸ್&zwnj;ಗೆ ಕಳುಹಿಸಲಾಗಿದ್ದು, ಸಂಬಂಧಿತ ಆರೋಗ್ಯ ಸುರಕ್ಷತಾ ಶಿಷ್ಟಾಚಾರಗಳ ಅಡಿಯಲ್ಲಿ ಅಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ.&lt;/p&gt;&lt;img&gt;&lt;p&gt;ಸ್ಪ್ಯಾನಿಷ್ ಸಿವಿಲ್ ಗಾರ್ಡ್&zwnj;ನ ಬೆಂಗಾವಲಿನೊಂದಿಗೆ ಸ್ಪೇನ್&zwnj;ನ ಮಿಲಿಟರಿ ತುರ್ತು ಘಟಕದಿಂದ ನಿರ್ವಹಿಸಲ್ಪಡುವ ಬಸ್&zwnj;ಗಳು, ಸ್ಥಳಾಂತರಗೊಂಡವರನ್ನು ಗ್ರಾನಡಿಲ್ಲಾ ಬಂದರಿನಿಂದ ನೇರವಾಗಿ ಟೆನೆರಿಫ್ ದಕ್ಷಿಣ ವಿಮಾನ ನಿಲ್ದಾಣದ ರನ್&zwnj;ವೇಗೆ ಕರೆದುಕೊಂಡು ಬಂದಿವೆ. ಇಲ್ಲಿಂದಲೇ ಸ್ಪ್ಯಾನಿಷ್ ಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನವು ಭಾನುವಾರ ಸ್ಪ್ಯಾನಿಷ್ ಕ್ಯಾನರಿ ದ್ವೀಪಗಳಿಂದ ಮ್ಯಾಡ್ರಿಡ್&zwnj;ಗೆ ಹೊರಟಿತು. ಸ್ಪೇನ್&zwnj;ಗೆ ಭೇಟಿ ನೀಡಿರುವ WHO ಅಧಿಕಾರಿಗಳು, ಇದು ಕೋವಿಡ್ ರೂಪಾಂತರಿ ಅಲ್ಲ. ಸಾರ್ವಜನಿಕವಾಗಿ ಅಪಾಯವನ್ನುಂಟು ಮಾಡುವ ತೀವ್ರತೆ ಕಡಿಮೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/world-news/two-indians-on-hanta-virus-hit-ship-shifted-from-spain-to-netherlands-mrq-nhnn9h0"/>
        </item>
        <item>
            <title><![CDATA[ಒಂದು ವರ್ಷ ಚಿನ್ನ ಖರೀದಿ ಬೇಡ, ಮೋದಿ ಕರೆಕೊಟ್ಟ ಬೆನ್ನಲ್ಲೇ ಇಂದು ಬಂಗಾರದ ಬೆಲೆ ಎಷ್ಟಾಗಿದೆ?]]></title>
            <link>https://kannada.asianetnews.com/gallery/business/gold-price-today-after-pm-modi-call-to-avoid-gold-purchases-for-one-year-05yagks</link>
            <guid isPermaLink="true">https://kannada.asianetnews.com/gallery/business/gold-price-today-after-pm-modi-call-to-avoid-gold-purchases-for-one-year-05yagks</guid>
            <pubDate>Mon, 11 May 2026 08:25:40 +0530</pubDate>
            <description><![CDATA[&lt;p&gt;ಬೆಂಗಳೂರು ಸೇರಿದಂತೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಾಗಿದೆ? ಪ್ರಧಾನಿ ಮೋದಿ ಕನಿಷ್ಠ ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಬೇಡಿ, ಪೆಟ್ರೋಲ್ ಡೀಸೆಲ್ ಬಳಕೆ ಕಡಿಮೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kraf4mrvk4shf6h5fdnsh06t,imgname-gold-price-today-1778467885851.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಸೇರಿದಂತೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಾಗಿದೆ? ಪ್ರಧಾನಿ ಮೋದಿ ಕನಿಷ್ಠ ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಬೇಡಿ, ಪೆಟ್ರೋಲ್ ಡೀಸೆಲ್ ಬಳಕೆ ಕಡಿಮೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗಿದೆ.&lt;/p&gt;&lt;img&gt;&lt;p&gt;ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮಹತ್ವದ ಕರೆ ನೀಡಿದ್ದಾರೆ. ಕನಿಷ್ಠ ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡದಂತೆ ಸೂಚಿಸಿದ್ದಾರೆ. ಬೆಲೆ ಏರಿಕೆ, ಡೀಸೆಲ್ ಹಾಗೂ ಇಂಧನ ಬಳಕೆ ಕಡಿಮೆ, ವಿದೇಶಿ ಪ್ರವಾಸ, ವಿದೇಶದಲ್ಲಿ ಮದುವೆ ಸೇರಿದಂತೆ ಹಲವು ಸ್ವಯಂ ನಿರ್ಬಂಧ ವಿಧಿಸಲು ಮನವಿ ಮಾಡಿದ್ದಾರೆ. ಈ ಪೈಕಿ ಚಿನ್ನ ಖರೀದಿ ಬೇಡ ಎಂದ ಬೆನ್ನಲ್ಲೇ ಇಂದು ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗಿದೆ.&lt;/p&gt;&lt;img&gt;&lt;p&gt;ಮೋದಿ ಚಿನ್ನ ಖರೀದಿ ಬೇಡ ಎಂದ ಬೆನ್ನಲ್ಲೇ ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಒಂದೆಡೆ ಯುದ್ಧದ ಸನ್ನಿವೇಶ, ಡೋನಾಲ್ಡ್ ಟ್ರಂಪ್ ಎಚ್ಚರಿಕೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುತ್ತಿರುವ ಏರಿಳಿತಗಳ ಪರಿಣಾಮ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇಂದು 10 ಗ್ರಾಂ ಚಿನ್ನಕ್ಕೆ 1,53,150 ರೂಪಾಯಿ ಆಗಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ 10 ಗ್ರಾಂಗೆ 1,52,990 ರೂಪಾಯಿ ಆಗಿದೆ. ದಕ್ಷಿಣ ಭಾರತದಲ್ಲಿ ಚೆನ್ನೈನಲ್ಲಿ ಚಿನ್ನ ದುಬಾರಿಯಾಗಿದೆ. ಚೆನ್ನೈನಲ್ಲಿ 10 ಗ್ರಾಂಗೆ 1,53,320 ರೂಪಾಯಿ ಆಗಿದೆ. ಬಳಿಕ ಹೈದರಾಬಾದ್&zwnj;ನಲ್ಲಿ 1,53,110 ರೂಪಾಯಿ ಆಗಿದೆ. ಮೂರು ನಗರಗಳ ಪೈಕಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೊಂಚ ಕಡಿಮೆ ಇದೆ.&lt;/p&gt;&lt;img&gt;&lt;ul&gt; &lt;li&gt;ಬೆಂಗಳೂರು 1,52,990 ರೂಪಾಯಿ&lt;/li&gt; &lt;li&gt;ಮುಂಬೈ 1,52,870 ರೂಪಾಯಿ&lt;/li&gt; &lt;li&gt;ದೆಹಲಿ 1,52,610 ರೂಪಾಯಿ&lt;/li&gt; &lt;li&gt;ಚೆನ್ನೈ 1,53,320 ರೂಪಾಯಿ&lt;/li&gt; &lt;li&gt;ಕೋಲ್ಕತಾ 1,52,670 ರೂಪಾಯಿ&lt;/li&gt; &lt;li&gt;ಹೈದರಾಬಾದ್ 1,53,110 ರೂಪಾಯಿ&lt;/li&gt;&lt;/ul&gt;&lt;img&gt;&lt;ol&gt; &lt;li&gt;ಬೆಂಗಳೂರು 2,62,100 ರೂಪಾಯಿ&lt;/li&gt; &lt;li&gt;ಮುಂಬೈ 2,61,900 ರೂಪಾಯಿ&lt;/li&gt; &lt;li&gt;ದೆಹಲಿ 2,61,440 ರೂಪಾಯಿ&lt;/li&gt; &lt;li&gt;ಚೆನ್ನೈ 2,62,660 ರೂಪಾಯಿ&lt;/li&gt; &lt;li&gt;ಹೈದರಾಬಾದ್ 2,62,310 ರೂಪಾಯಿ&lt;/li&gt; &lt;li&gt;ಕೋಲ್ಕಾತಾ 2,61,550 ರೂಪಾಯಿ&lt;/li&gt;&lt;/ol&gt;&lt;h2&gt;ಬೆಳ್ಳಿ ಬೆಲೆ ವಿವಿಧ ನಗರಗಳಲ್ಲಿ (ಪ್ರತಿ ಕೆಜಿಗೆ)&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/gold-price-today-after-pm-modi-call-to-avoid-gold-purchases-for-one-year-05yagks"/>
        </item>
        <item>
            <title><![CDATA[ಅಮೆರಿಕನ್‌ ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಕಟ್‌;  ಇದು ತಾತ್ಕಾಲಿಕವಲ್ಲ, ಶಾಶ್ವತ ಬದಲಾವಣೆ]]></title>
            <link>https://kannada.asianetnews.com/world-news/american-tech-companies-are-making-massive-job-cuts-due-to-the-adoption-of-artificial-intelligence-mrq/articleshow-fckzfvg</link>
            <guid isPermaLink="true">https://kannada.asianetnews.com/world-news/american-tech-companies-are-making-massive-job-cuts-due-to-the-adoption-of-artificial-intelligence-mrq/articleshow-fckzfvg</guid>
            <pubDate>Mon, 11 May 2026 07:26:09 +0530</pubDate>
            <description><![CDATA[ಅಮೆರಿಕದ ಟೆಕ್ ಕಂಪನಿಗಳು ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದಾಗಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುತ್ತಿವೆ. ಇದು ತಾತ್ಕಾಲಿಕವಲ್ಲ, ಶಾಶ್ವತ ಬದಲಾವಣೆ ಎನ್ನಲಾಗಿದ್ದು, ಸಂಬಳದಿಂದ ಉಳಿದ ಹಣವನ್ನು ಎಐ ಮೇಲೆ ಹೂಡಿಕೆ ಮಾಡಲಾಗುತ್ತಿದೆ. ಈ ಬೆಳವಣಿಗೆಯು ಟೆಕ್ ಉದ್ಯೋಗಿಗಳ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krabxwnajdvrmpwv9c0n5drv,imgname-layoff-1778464518826.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj;: &lt;/strong&gt;ಟೆಕ್&zwnj; ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಕ್ರಮಣ ಶುರುವಾದ ಬೆನ್ನಲ್ಲೇ ಅಮೆರಿಕದ ಬಹುತೇಕ ಕಂಪನಿಗಳು ಉದ್ಯೋಗ ಕಡಿತವನ್ನು ಭಾರೀ ಪ್ರಮಾಣದಲ್ಲಿ ಮಾಡುತ್ತಿವೆ. ಇದು ತಾತ್ಕಾಲಿಕ ಬದಲಾವಣೆಯಾಗಿರದೆ, ಶಾಶ್ವತ ರೂಪಾಂತರ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;2026ರಲ್ಲಿ 92,000 ಟೆಕ್ಕಿಗಳನ್ನು ತೆಗೆದುಹಾಕಲಾಗಿದ್ದರೆ, 2020ರಿಂದ ಈವರೆಗೆ 9,00,000 ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಟೆಕ್&zwnj; ದೈತ್ಯ ಮೆಟಾ ಮತ್ತು ಮೈಕ್ರೋಸಾಫ್ಟ್&zwnj;ನಿಂದ ಗೇಟ್&zwnj;ಪಾಸ್&zwnj; ಪಡೆದವರೇ 20,000 ಮಂದಿಯಾಗುತ್ತಾರೆ. ಅಮೆಜಾನ್, ಗೂಗಲ್, ಒರಾಕಲ್, ಸೇಲ್ಸ್&zwnj;ಫೋರ್ಸ್, ನೈಕಿ ಮತ್ತು ಸ್ನ್ಯಾಪ್&zwnj;ನಂತಹ ಕಂಪನಿಗಳೂ ಉದ್ಯೋಗ ಕಡಿತಕ್ಕೆ ಹೊರತಾಗಿಲ್ಲ. ಎಐ ಅಳವಡಿಕೆ ಮತ್ತು ಕೊರೋನಾ ಕಾಲದಲ್ಲಾದ ಅನಗತ್ಯ ನೇಮಕಾತಿಗಳ ಪರಿಣಾಮ ಇದು ಎನ್ನಲಾಗುತ್ತಿದೆ.&lt;/p&gt;&lt;h2&gt;&lt;strong&gt;ನಿಲ್ಲದ ಪ್ರಕ್ರಿಯೆ&lt;/strong&gt;&lt;/h2&gt;&lt;p&gt;ಮುಂದಿನ ದಿನಗಳಲ್ಲಿ 8,000 ಜನರ ಕೆಲಸ ಕಸಿಯುವ ಯೋಜನೆಯಲ್ಲಿರುವ ಮೆಟಾ, 6,000 ಹುದ್ದೆಗಳಿಗೆ ಹೊಸ ನೇಮಕಾತಿಗಳನ್ನು ಮಾಡದೇ ಇರಲು ನಿರ್ಧರಿಸಿದೆ. ಮೈಕ್ರೊಸಾಫ್ಟ್&zwnj; ತನ್ನ ಅಮೆರಿಕನ್&zwnj; ಉದ್ಯೋಗಿಗಳಲ್ಲಿ ಶೇ.7ರಷ್ಟು ಮಂದಿಗೆ ಸ್ವಯಂ ನಿವೃತ್ತಿ ಪಡೆಯಲು ಹಲವು ಪ್ರೋತ್ಸಾಹಿಸುತ್ತಿದೆ. ನೈಕಿ 1,400 ಹುದ್ದೆಗಳನ್ನೇ ರದ್ದು ಮಾಡಿದೆ.&lt;/p&gt;&lt;h3&gt;&lt;strong&gt;ಎಐ ಮೇಲೆ ಅತ್ಯಧಿಕ ಹೂಡಿಕೆ&lt;/strong&gt;&lt;/h3&gt;&lt;p&gt;ಒಂದು ಕಡೆ ವೆಚ್ಚ ಕಡಿತಕ್ಕಾಗಿ ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವ ಕಂಪನಿಗಳು, ಇನ್ನೊಂದು ಕಡೆ ಎಐ ಮೇಲೆ ಅಪಾರ ಹೂಡಿಕೆ ಮಾಡುತ್ತಿವೆ. ಆಲ್ಫಬೆಟ್, ಮೈಕ್ರೋಸಾಫ್ಟ್, ಮೆಟಾ ಮತ್ತು ಅಮೆಜಾನ್ 2026ರಲ್ಲಿ ಮಾಡಲಿರುವ ಹೂಡಿಕೆಯನ್ನು ಒಟ್ಟುಗೂಡಿಸಿದರೆ 66 ಲಕ್ಷ ಕೋಟಿ ರು. ಆಗುತ್ತದೆಂಬ ಅಂದಾಜಿದೆ. ಒರಾಕಲ್&zwnj;ನಲ್ಲಿ ಉದ್ಯೋಗ ಕಡಿತದಿಂದಾಗಿ 75-94 ಸಾವಿರ ಕೋಟಿ ರು. ಉಳಿತಾಯವಾಗಲಿದೆ. ಈ ಮುಂಚೆ 250 ಉದ್ಯೋಗಿಗಳಿದ್ದಾಗ 472 ಕೋಟಿ ರು. ಆದಾಯ ಗಳಿಸುತ್ತಿದ್ದ ಕಂಪನಿಗಳು ಈಗ ಇದೇ ಮೊತ್ತವನ್ನು ಕೇವಲ 50 ಕೆಲಸಗಾರರನ್ನಿಟ್ಟುಕೊಂಡು ಸಂಪಾದಿಸುತ್ತಿವೆ.&lt;/p&gt;&lt;p&gt;ಅಮೆರಿಕದ ಉದ್ಯೋಗಿಗಳು ತನ್ನ ಕಂಪನಿಯ ಭವಿಷ್ಯದ ಬೆಳವಣಿಗೆಯ ಬಗ್ಗೆ ಹೊಂದಿರುವ ಭರವಸೆಯನ್ನು ಅಳೆಯುವ ಗ್ಲಾಸ್&zwnj;ಡೋರ್ ಎಂಪ್ಲಾಯಿ ಕಾನ್ಫಿಡೆನ್ಸ್&zwnj; ಸೂಚ್ಯಂಕದ ಪ್ರಕಾರ, ಟೆಕ್&zwnj; ಕ್ಷೇತ್ರದಲ್ಲಿ ಈ ಭರವಸೆಯು ಶೇ.6.8ರಷ್ಟು ಕುಸಿದು, ಮಾರ್ಚ್&zwnj;ನಲ್ಲಿ ಶೇ.47.2ರಷ್ಟಾಗಿದೆ. ಇದರಿಂದ ಭೀತಿಗೊಳಗಾಗಿ ಹಲವರು ಕೆಲಸ ತೊರೆಯತೊಡಗಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಕದನವಿರಾಮದ ಅಮೆರಿಕ ಪ್ರಸ್ತಾವವಕ್ಕೆ ಇರಾನ್&zwnj; ಪ್ರತ್ಯುತ್ತರ&lt;/strong&gt;&lt;/h3&gt;&lt;p&gt;ಇಸ್ಲಾಮಾಬಾದ್: ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಪ್ರಸ್ತಾವನೆಗೆ ಇರಾನ್&zwnj;ನ ಪ್ರತಿಕ್ರಿಯೆಯನ್ನು ಮಧ್ಯವರ್ತಿ ಪಾಕಿಸ್ತಾನದ ಮೂಲಕ ಕಳುಹಿಸಲಾಗಿದೆ ಎಂದು ಇರಾನ್&zwnj;ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್&zwnj;ಎನ್&zwnj;ಎ ತಿಳಿಸಿದೆ. ಇದನ್ನು ಪಾಕಿಸ್ತಾನ ಕೂಡ ಖಚಿತಪಡಿಸಿದೆ,&lt;/p&gt;&lt;p&gt;ಪ್ರಸ್ತಾವಿತ ಯೋಜನೆಯ ಪ್ರಕಾರ, ಮಾತುಕತೆಗಳ ಮೊದಲ ಹಂತವು ಯುದ್ಧವನ್ನು ಕೊನೆಗೊಳಿಸುವುದರ ಜೊತೆಗೆ ಕೊಲ್ಲಿ ಮತ್ತು ಹೋರ್ಮುಜ್ ಜಲಸಂಧಿಯಲ್ಲಿ &lsquo;ಸಮುದ್ರ ಭದ್ರತೆ&rsquo;ಯನ್ನು ಖಚಿತಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ವರದಿ ಭಾನುವಾರ ತಿಳಿಸಿದೆ.&lt;/p&gt;&lt;p&gt;ಇರಾನಿನ ಪ್ರತಿಕ್ರಿಯೆಯನ್ನು ಪಾಕಿಸ್ತಾನವು ಅಮೆರಿಕದ ಕಡೆಗೆ ವರ್ಗಾಯಿಸಿದೆ ಎಂದು ಪಾಕಿಸ್ತಾನದ ರಾಜತಾಂತ್ರಿಕ ಮೂಲವೊಂದು ತಿಳಿಸಿದೆ. ಆದರೆವಿರಾನ್&zwnj; ಪ್ರಸ್ತಾವದಲ್ಲೇನಿದೆ ಎಂಬುದನ್ನು ಹೇಳಲು ಪಾಕ್&zwnj; ಪ್ರಧಾನಿ ಶೆಹಬಾಜ್&zwnj; ಷರೀಫ್ ನಿರಾಕರಿಸಿದ್ದಾರೆ. ಈ ವಾರದ ಆರಂಭದಲ್ಲಿ ವಾಷಿಂಗ್ಟನ್ ಇರಾನ್&zwnj;ಗೆ 14 ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಿತ್ತು&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/american-tech-companies-are-making-massive-job-cuts-due-to-the-adoption-of-artificial-intelligence-mrq/articleshow-fckzfvg"/>
        </item>
        <item>
            <title><![CDATA[ನಮ್ಮ ಸಾವು ಯಾವಾಗ ಗೊತ್ತಿಲ್ಲ, ಕೊನೆ ಕಾರ್ಯಕ್ರಮದಲ್ಲಿ ಮೃತ್ಯು ಬಗ್ಗೆ ಮಾತನಾಡಿದ್ದ ಸಚಿವ ಡಿ ಸುಧಾಕರ್]]></title>
            <link>https://kannada.asianetnews.com/state/minister-d-sudhakar-final-speech-on-life-and-death-goes-viral-after-tragic-demise/articleshow-9xg7s11</link>
            <guid isPermaLink="true">https://kannada.asianetnews.com/state/minister-d-sudhakar-final-speech-on-life-and-death-goes-viral-after-tragic-demise/articleshow-9xg7s11</guid>
            <pubDate>Mon, 11 May 2026 07:26:09 +0530</pubDate>
            <description><![CDATA[&lt;p&gt;ಅನಾರೋಗ್ಯದಿಂದ ವಿಧಿವಶರಾದ ಸಚಿವ ಡಿ ಸುಧಾಕರ್ ಅಂತ್ಯಕ್ರಿಯೆ ಇಂದು ನಡೆಯಲಿದೆ. ಆದೆರೆ ಸಚಿವ ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮದಲ್ಲಿ ಸಾವಿನ ಕುರಿತು ಮಾರ್ಮಿಕವಾಗಿ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7qmm78f98ykjhm6adnhjng,imgname-d-sudhakar--3--1778376134888.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಮೇ.11) &lt;/strong&gt;ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿ ನಿಧನರಾದ ಯೋಜನೆ ಮತ್ತು ಸಾಂಖಿಕ ಸಚಿವ ಡಿ ಸುಧಾಕರ್ ಅಂತ್ಯಕ್ರಿಯ ಇಂದು ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಚಳ್ಳಕೆರೆಯ ಡಿ ಸುಧಾಕರ್ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸುಧಾಕರ್ ಅವರ ಸೆಟಲ್ ಕಾಕ್ ಕೋಟ್&zwnj;ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಚಿವ ಡಿ ಸುಧಾಕರ್ ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮದ ವಿಡಿಯೋ ಇದೀಗ ಹರಿದಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ತಮ್ಮ ಸಾವು ಯಾವಗ ಗೊತ್ತಿಲ್ಲ, ನಾವು ನಾಳೆ ಇರುತ್ತೀವೋ ಇಲ್ಲವೋ ಅನ್ನೋದು ಗೊತ್ತಿಲ್ಲ ಎಂದು ಮಾರ್ವಿಕವಾಗಿ ಸಾವಿನ ಕುರಿತು ಮಾತನಾಡಿದ್ದರು.&lt;/p&gt;&lt;p&gt;ಸಚಿವ ಡಿ ಸುಧಾಕರ್ ಭಾಗವಹಿಸಿದ ಹಾಗೂ ಭಾಷಣ ಮಾಡಿದ ಕೊನೆಯ ಕಾರ್ಯಕ್ರಮ ಹಿರಿಯೂರು ಪಟ್ಟಣದಲ್ಲಿನ ಶಾರದಾ ಆಶ್ರಮದ ಭೂಮಿಪೂಜೆ ಕಾರ್ಯಕ್ರಮ. ಭೂಮಿಪೂಜೆ ನೆರವೇರಿಸಿದ್ದ ಡಿ ಸುಧಾಕರ್, ಬಳಿಕ ಸಾರ್ವಜನಿಕರ ಉದ್ದೇಶಿ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಸುಧಾಕರ್ ಮಾಡಿದ್ದ ಭಾಷಣ ಕೊನೆಯದ್ದಾಗುತ್ತೆ ಎಂದು ಯಾರು ಊಹಿಸಿರಲಿಲ್ಲ. ಈ ಭಾಷಣದಲ್ಲಿ ಸುಧಾಕರ್ ಮೃತ್ಯು ಕುರಿತು ಮಾತನಾಡಿದ್ದಾರೆ.&lt;/p&gt;&lt;h2&gt;ಇರುವಷ್ಟು ದಿನ ಭಗವಂತನ ಸ್ಮರಣೆ ಮಾಡಿ&lt;/h2&gt;&lt;p&gt;ಭಗವಂತನ ಸ್ಮರಣೆ,ಸ ಧಾರ್ಮಿಕತೆ ಕುರಿತು ಮಾತನಾಡಿದ ಡಿ ಸುಧಾಕರ್, ನಾವು ಇವತ್ತು ಇರುತ್ತಿವೋ ಇಲ್ಲವೋ ಗೊತ್ತಿಲ್ಲ, ನಮ್ಮ ಸಾವು ಯಾವಾಗ ಅನ್ನೋದು ಗೊತ್ತಿಲ್ಲ. ಹೀಗಾಗಿ ನಾವು ಒಂದು ರೀತಿ ಉರಿಯುವ ಬಲ್ಬ್ ಇದ್ದಂತೆ ಯಾವಾಗ ಆಫ್ ಆಗುತ್ತೋ ಗೊತ್ತಿಲ್ಲ. ಇರುವಷ್ಟು ದಿನ ಧಾರ್ಮಿಕವಾಗಿ ಭಗವಂತನ ಸ್ಮರಣೆಯಲ್ಲಿ ಇರಬೇಕು. ಒಬ್ಬೊಬ್ಬರದ್ದು ಒಂದೊಂದು ನಂಬಿಕೆ, ಭಗವಂತ ಇದ್ದಾನೆ. ಕಾಯಕವೇ ಕೈಲಾಸ ಅಂತಾರೆ. ಕೆಲವರು ಪರೋಪಕಾರವೇ ಭಗವಂತನ ಸ್ಮರಣೆ ಎನ್ನುತ್ತಾರೆ ಎಂದು ಸುಧಾಕರ್ ಮಾತನಾಡಿದ್ದಾರೆ.&lt;/p&gt;&lt;p&gt;ಸಚಿವ ಮೊಣಕಾಲು ಆಪರೇಶನ್&zwnj;ಗೆ ತೆರಳುವ ಮುಂದಿನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಮೊಣಕಾಲು ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೊಣಕಾಲು ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಡಿ ಸುಧಾಕರ್&zwnj;ಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ಕೆಲ ತಿಂಗಳಿನಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿತ್ತು. ಮಣಿಪಾಲ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ಡಿ ಸುಧಾಕರ್ ಸ್ಥಳಾಂತರ ಮಾಡಲಾಗಿತ್ತು. ಆದರೆ ಸುಧಾಕರ್ ಆರೋಗ್ಯದಲ್ಲಿ ಚೇತರಿಕೆ ಕಾಣದ ವಿಧಿವಶರಾಗಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/minister-d-sudhakar-final-speech-on-life-and-death-goes-viral-after-tragic-demise/articleshow-9xg7s11"/>
        </item>
        <item>
            <title><![CDATA[ಡಿ. ಸುಧಾಕರ್ ಕುಟುಂಬ ರಾಜಕಾರಣ ಕೊನೆ?]]></title>
            <link>https://kannada.asianetnews.com/politics/death-of-d-sudhakar-has-raised-questions-about-his-family-s-political-future-mrq/articleshow-kgheml3</link>
            <guid isPermaLink="true">https://kannada.asianetnews.com/politics/death-of-d-sudhakar-has-raised-questions-about-his-family-s-political-future-mrq/articleshow-kgheml3</guid>
            <pubDate>Mon, 11 May 2026 06:43:14 +0530</pubDate>
            <description><![CDATA[ಚಳ್ಳಕೆರೆ ಮಾಜಿ ಶಾಸಕ ಡಿ.ಸುಧಾಕರ್ ಅವರ ನಿಧನದಿಂದ ಅವರ ಕುಟುಂಬದ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ದಾನ-ಧರ್ಮಕ್ಕೆ ಹೆಸರಾದ ಜೈನ್ ಕುಟುಂಬದ ಕುಡಿಯಾದ ಇವರು, ಚಿಕ್ಕಪ್ಪ ಎನ್.ಜಯಣ್ಣರ ಹಾದಿಯಲ್ಲಿ ರಾಜಕೀಯ ಪ್ರವೇಶಿಸಿ, 2004-2008ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಅವರ ರಾಜಕೀಯ ಮತ್ತು ವೈಯಕ್ತಿಕ ಬದುಕಿನ ಚಿತ್ರಣ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kra9980nxc11k5nrraqhxdch,imgname-d-sudhakar-1778461745173.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನಲ್ಲಿ ಡಿ.ಸುಧಾಕರ್ ಮನೆತನಕ್ಕೆ ದೊಡ್ಡ ಹೆಸರಿದೆ. ಮೊದಲಿನಿಂದಲೂ ಈ ಕುಟುಂಬ ದಾನ-ಧರ್ಮಗಳಿಗೆ ಎತ್ತಿದ ಕೈ. ಇವರ ತಂದೆ ದಶರಥಯ್ಯ ಮೂಲ ವ್ಯವಹಾರಸ್ಥರು. ಇವರ ಚಿಕ್ಕಪ್ಪ ಎನ್.ಜಯಣ್ಣ, ಚಳ್ಳಕೆರೆ ಕ್ಷೇತ್ರದಲ್ಲಿ ಎರಡು ಬಾರಿಗೆ ಶಾಸಕರಾಗಿದ್ದವರು. ಎನ್.ಜಯಣ್ಣ ಎಂದರೆ ಇಡೀ ಕ್ಷೇತ್ರದಲ್ಲಿ ಬಡವರ ಪರ ಎಂಬ ಖ್ಯಾತಿ ಗಳಿಸಿದವರು. ಸಾಮಾನ್ಯ ಕ್ಷೇತ್ರವಾಗಿದ್ದ ಚಳ್ಳಕೆರೆಯಲ್ಲಿ 1978ರಿಂದ 1983ರವರೆಗೆ ನಂತರ 1989ರಿಂದ 1994ರವರೆಗೆ ಶಾಸಕರಾಗಿದ್ದವರು.ಡಿ.ಸುಧಾಕರ್ ಅವರಿಗೆ ಒಬ್ಬಳು ಮಗಳು ಹಾಗೂ ಒಬ್ಬ ಮಗ ಇದ್ದಾರೆ. ಪುತ್ರ ಸುಹಾಸ್ ಮತ್ತು ಪುತ್ರಿ ಸ್ಫೂರ್ತಿ ಇಬ್ಬರಿಗೂ ವಿವಾಹ ಮಾಡಿರುವ ಸುಧಾಕರ್, ಎಂದಿಗೂ ರಾಜಕಾರಣಕ್ಕೆ ಪತ್ನಿ ಹರ್ಷಿಣಿ ಸುಧಾಕರ್ ಮತ್ತು ಮಕ್ಕಳನ್ನು ಪರಿಚಯಿಸಿದವರಲ್ಲ. ಬಹುಶಃ ಇವರ ನಿಧನದ ನಂತರ ಇವರ ಕುಟುಂಬದ ರಾಜಕಾರಣ ಕೊನೆಗೊಳ್ಳುವುದಾ ಎಂಬ ಪ್ರಶ್ನೆ ಈಗ ಎದುರಾಗಿದೆ.&lt;/p&gt;&lt;h2&gt;&lt;strong&gt;ಡಿ.ಸುಧಾಕರ್ ಕುಟುಂಬ&lt;/strong&gt;&lt;/h2&gt;&lt;p&gt;ಇವರ ಕುಟುಂಬ ಮೂಲತಃ ವ್ಯವಹಾರಸ್ಥರಾಗಿದ್ದರಿಂದ ಗೊಮ್ಮಟೇಶ್ವರ ಬಸ್ ಇಟ್ಟಿದ್ದರು. ಈ ಭಾಗದಲ್ಲಿ ಗೊಮ್ಮಟೇಶ್ವರ ಬಸ್ಸು ಒಂದು ಕಾಲದಲ್ಲಿ ಬಲು ಫೇಮಸ್ಸು. ದಶರಥಯ್ಯ-ಕಾಂಚನ್ ಮಾಲ ದಂಪತಿಗೆ ಏಳು ಜನ ಮಕ್ಕಳು. ಅವರಲ್ಲಿ 6 ಗಂಡು ಮಕ್ಕಳು, ಒಬ್ಬರು ಹೆಣ್ಣುಮಗಳು. ಇವರ ಸಹೋದರರಾದ ಶಾಂತಕುಮಾರ್, ಮಹಾವೀರಪ್ಪ ನಿಧನರಾಗಿದ್ದು. ಇದೀಗ ಡಿ.ಸುಧಾಕರ್ ವಿಧಿವಶರಾಗಿದ್ದಾರೆ.&lt;/p&gt;&lt;p&gt;ಅಣ್ಣ ಶಾಂತಕುಮಾರ್ ಹೆಸರಿನಲ್ಲಿ ಅವರ ನೆನಪಿಗಾಗಿ ಚಳ್ಳಕೆರೆಯ ವಿಠಲ ನಗರದಲ್ಲಿ ಒಳಾಂಗಣ ಕ್ರೀಡಾಂಗಣದ ರೀತಿಯಲ್ಲಿ ಶೆಟಲ್ ಬ್ಯಾಡ್ಮಿಂಟನ್&zwnj; ಕೋರ್ಟ್ ನಿರ್ಮಾಣ ಮಾಡಿದ್ದಾರೆ. 2004ರಿಂದ 2008ರವರೆಗೆ ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದ ಡಿ.ಸುಧಾಕರ್, ದಿನಾಲೂ ಮುಂಜಾನೆ ಇದೇ ಒಳಾಂಗಣ ಕ್ರೀಡಾಂಗಣದಲ್ಲಿ ಶೆಟಲ್ ಕಾಕ್ ಆಡುತ್ತಿದ್ದರು.&lt;/p&gt;&lt;h3&gt;&lt;strong&gt;ಚಿಕ್ಕಪ್ಪನ ರಾಜಕೀಯ&lt;/strong&gt;&lt;/h3&gt;&lt;p&gt;ಚಳ್ಳಕೆರೆ ಕ್ಷೇತ್ರ ಸಾಮಾನ್ಯ ಕ್ಷೇತ್ರದಿಂದ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮೇಲೆ ಹಿರಿಯೂರಿನ ರಾಜಕಾರಣಕ್ಕೆ ಒಗ್ಗಿಕೊಂಡಿದ್ದ ಇವರು ಈ ಕ್ರೀಡಾಂಗಣದಲ್ಲಿ ಆಟ ಆಡುವುದನ್ನು ನಿಲ್ಲಿಸಿದ್ದರು. ಸಹೋದರರ ಪೈಕಿ ಎಲ್ಲರಿಗಿಂತಲೂ ಕಿರಿಯರಾಗಿದ್ದ ಇವರು ರಾಜಕಾರಣದಲ್ಲಿ ಆಸಕ್ತಿ ಇದ್ದ ಕಾರಣ ಜೈನ್ ಮನೆತನದಲ್ಲಿ ಇವರ ಚಿಕ್ಕಪ್ಪ ಶಾಸಕರಾದ ಮೇಲೆ ಅವರ ಹಾದಿಯನ್ನೆ ಮುಂದುವರಿಸಿದ್ದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/death-of-d-sudhakar-has-raised-questions-about-his-family-s-political-future-mrq/articleshow-kgheml3"/>
        </item>
        <item>
            <title><![CDATA[ಒಪನ್ ಮ್ಯೂಸಿಯಂ ವಾರಂಗಲ್ ಹಿಂದಿಕ್ಕಿ, ಐತಿಹಾಸಿಕ ದಾಖಲೆ ಬರೆಯುತ್ತ ಹೆಜ್ಜೆಯಿಟ್ಟ ಲಕ್ಕುಂಡಿ]]></title>
            <link>https://kannada.asianetnews.com/gallery/karnataka-districts/over-3000-ancient-relics-discovered-in-historic-lakkundi-village-overtook-warangal-as-the-most-famous-open-museum-mrq-1aq2ozm</link>
            <guid isPermaLink="true">https://kannada.asianetnews.com/gallery/karnataka-districts/over-3000-ancient-relics-discovered-in-historic-lakkundi-village-overtook-warangal-as-the-most-famous-open-museum-mrq-1aq2ozm</guid>
            <pubDate>Mon, 11 May 2026 06:35:38 +0530</pubDate>
            <description><![CDATA[&lt;p&gt;ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 3000ಕ್ಕೂ ಅಧಿಕ ಪುರಾತನ ಕುರುಹುಗಳು ಪತ್ತೆಯಾಗಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಪ್ರಾಚ್ಯಾವಶೇಷಗಳನ್ನು ಹೊಂದಿದ ಗ್ರಾಮವಾಗುವತ್ತ ಸಾಗಿದೆ. ಇತ್ತೀಚಿನ ಉತ್ಖನನದಲ್ಲಿ 9-10ನೇ ಶತಮಾನದ ರಾಷ್ಟ್ರಕೂಟರ ಕಾಲದ ಅಪರೂಪದ ವೀರಗಲ್ಲು ಕೂಡ ಪತ್ತೆಯಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kra8nj8dqh72cgqsvbsw1cpm,imgname-lakkundi-1778461100301.jpg" type="image/jpeg" height="390" width="690"/>
            <content:encoded><![CDATA[&lt;p&gt;ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 3000ಕ್ಕೂ ಅಧಿಕ ಪುರಾತನ ಕುರುಹುಗಳು ಪತ್ತೆಯಾಗಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಪ್ರಾಚ್ಯಾವಶೇಷಗಳನ್ನು ಹೊಂದಿದ ಗ್ರಾಮವಾಗುವತ್ತ ಸಾಗಿದೆ. ಇತ್ತೀಚಿನ ಉತ್ಖನನದಲ್ಲಿ 9-10ನೇ ಶತಮಾನದ ರಾಷ್ಟ್ರಕೂಟರ ಕಾಲದ ಅಪರೂಪದ ವೀರಗಲ್ಲು ಕೂಡ ಪತ್ತೆಯಾಗಿದೆ&lt;/p&gt;&lt;img&gt;&lt;p&gt;ಕಲೆ ಮತ್ತು ವಾಸ್ತುಶಿಲ್ಪದ ತವರೂರು, ಐತಿಹಾಸಿಕ ಲಕ್ಕುಂಡಿ ಗ್ರಾಮವು ಇದೀಗ ದೇಶದಲ್ಲೇ ಅತಿ ಹೆಚ್ಚು ಪ್ರಾಚ್ಯಾವಶೇಷಗಳನ್ನು ಹೊಂದಿದ ಮೊದಲ ಗ್ರಾಮ ಎಂಬ ಐತಿಹಾಸಿಕ ದಾಖಲೆ ನಿರ್ಮಿಸುವ ಕಾಲ ಸನ್ನಿಹಿತವಾಗಿದೆ. ಈವರೆಗಿನ ಅನ್ವೇಷಣೆ ಹಾಗೂ ಇತ್ತೀಚಿನ ಪ್ರಾಚ್ಯಾವಶೇಷ ಅನ್ವೇಷಣೆ ಮಾಸಾಚರಣೆಯ ಫಲವಾಗಿ ಲಕ್ಕುಂಡಿಯಲ್ಲಿ ಈಗ ಒಟ್ಟು 3000ಕ್ಕೂ ಅಧಿಕ ಪುರಾತನ ಕುರುಹುಗಳು ಪತ್ತೆಯಾಗಿದ್ದು, ಇಡೀ ದೇಶದ ಗಮನ ಸೆಳೆಯುತ್ತಿದೆ.&lt;/p&gt;&lt;img&gt;&lt;p&gt;​ಇದುವರೆಗೆ ತೆಲಂಗಾಣದ ವಾರಂಗಲ್ ದೇಶದ ಮೊದಲ ಒಪನ್ ಮ್ಯೂಸಿಯಂ ಎಂಬ ಹೆಗ್ಗಳಿಕೆ ಹೊಂದಿತ್ತು. ಅಲ್ಲಿ ಸುಮಾರು 2 ಸಾವಿರ ಪ್ರಾಚ್ಯಾವಶೇಷಗಳಿದ್ದವು. ಲಕ್ಕುಂಡಿಯಲ್ಲಿಗ ಈ ಸಂಖ್ಯೆ 3 ಸಾವಿರ ದಾಟುವ ಹಂತದಲ್ಲಿದೆ. ಮೊದಲ ಹಂತದಲ್ಲಿ 1500 ಅವಶೇಷಗಳನ್ನು ಗುರುತಿಸಲಾಗಿತ್ತು. ಇತ್ತೀಚಿನ ವಿಶೇಷ ಅನ್ವೇಷಣಾ ಕಾರ್ಯದಲ್ಲಿ ಮತ್ತೆ 1500 ವಸ್ತುಗಳು ಪತ್ತೆಯಾಗಿವೆ. ಈ ಮೂಲಕ ಲಕ್ಕುಂಡಿ ಅಧಿಕೃತವಾಗಿ ದೇಶದ ಪ್ರಾಚ್ಯಾವಶೇಷಗಳ ರಾಜಧಾನಿ ಎಂಬ ಪಟ್ಟಕ್ಕೇರುವ ಸಾಧ್ಯತೆ ನಿಚ್ಚಳವಾಗಿದೆ.&lt;/p&gt;&lt;img&gt;&lt;p&gt;ಇತ್ತೀಚಿನ ಉತ್ಖನನದ ವೇಳೆ ಲಕ್ಕುಂಡಿಯ ಕುಂಬಾರ ಬಾವಿಯ ಬಳಿ 9- 10ನೇ ಶತಮಾನದ ರಾಷ್ಟ್ರಕೂಟರ ಕಾಲದ ಅತ್ಯಂತ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಇದು ಕೇವಲ ಕಲ್ಲಲ್ಲ, ಅಂದಿನ ಶೌರ್ಯ ಮತ್ತು ಸಂಸ್ಕೃತಿಯ ಜೀವಂತ ಸಾಕ್ಷಿಯಾಗಿವೆ. ಈ ವೀರಗಲ್ಲು ನಾಲ್ಕು ಹಂತದ ಕೆತ್ತನೆಗಳನ್ನು ಹೊಂದಿದೆ. ಕೆಳಗಿನ ಪಟ್ಟಿಕೆಯಲ್ಲಿ ಯುದ್ಧದ ದೃಶ್ಯವಿದ್ದು (ಮಣ್ಣಿನಲ್ಲಿ ಹೂತಿದೆ), ಎರಡನೇ ಪಟ್ಟಿಕೆಯಲ್ಲಿ ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಮನಮೋಹಕ ದೃಶ್ಯವಿದೆ.&lt;/p&gt;&lt;img&gt;&lt;p&gt;ಸಂಗೀತ ವಾದ್ಯಗಳ ಕೆತ್ತನೆ ಅಂದಿನ ವೈಭವವನ್ನು ಸಾರುತ್ತಿದೆ. ಮೂರನೇ ಪಟ್ಟಿಕೆಯಲ್ಲಿ ವೀರನು ಸ್ವರ್ಗದಲ್ಲಿ ಆಸೀನನಾಗಿದ್ದು, ಚಾಮರಧಾರಿಗಳು ಸೇವೆಯಲ್ಲಿ ನಿಂತಿರುವುದು ಕಂಡುಬರುತ್ತದೆ. ಮೇಲ್ಭಾಗದ ಪಟ್ಟಿಕೆಯಲ್ಲಿ ಸೂರ್ಯ- ಚಂದ್ರ ಹಾಗೂ ಶಿವಲಿಂಗಕ್ಕೆ ಯತಿಯೊಬ್ಬರು ಪೂಜೆ ಸಲ್ಲಿಸುತ್ತಿರುವ ಚಿತ್ರಣವಿದ್ದು, ಇದು ಶಾಸನೋಕ್ತವಾದ ವಿಶೇಷ ವೀರಗಲ್ಲಾಗಿದೆ.&lt;/p&gt;&lt;img&gt;&lt;p&gt;ಲಕ್ಕುಂಡಿಯ ಈ ಜಾಗತಿಕ ಮಟ್ಟದ ಸಾಧನೆಯ ಹಿಂದೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರ ಅವಿರತ ಶ್ರಮವಿದೆ. ಲಕ್ಕುಂಡಿಯನ್ನು ವಿಶ್ವ ಪರಂಪರೆಯ ತಾಣವನ್ನಾಗಿ ರೂಪಿಸುವ ಅವರ ಕನಸು ಈಗ ನನಸಾಗುತ್ತಿದೆ. ಅವರ ವಿಶೇಷ ಆಸಕ್ತಿಯಿಂದಾಗಿ ಇಲ್ಲಿ ನಿರಂತರ ಅನ್ವೇಷಣೆ, ಮಾರ್ಕಿಂಗ್ ಹಾಗೂ ಸಂರಕ್ಷಣಾ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಿದ್ದಲಿಂಗೇಶ್ವರ ಪಾಟೀಲ ತಿಳಿಸಿದರು.&lt;/p&gt;&lt;img&gt;&lt;p&gt;​ಒಟ್ಟಾರೆಯಾಗಿ ಲಕ್ಕುಂಡಿಯು ಕೇವಲ ಗದಗ ಜಿಲ್ಲೆಯ ಹೆಮ್ಮೆಯಷ್ಟೇ ಅಲ್ಲದೆ, ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಅಗ್ರಸ್ಥಾನಕ್ಕೇರಿದೆ. ಇಲ್ಲಿನ ಪ್ರತಿಯೊಂದು ಕಲ್ಲು ಈಗ ಇತಿಹಾಸದ ಕಥೆ ಹೇಳುತ್ತಿದ್ದು, ಪ್ರವಾಸಿಗರನ್ನು ಹಾಗೂ ಸಂಶೋಧಕರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ ಮಣ್ಣಿನ ಹುದುಗಿ ಹೋಗಿರುವ ಇತಿಹಾಸ ಅಗೆದಷ್ಟು ಆಳಕ್ಕಿಳಿಯುತ್ತಿದೆ ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.&lt;/p&gt;&lt;img&gt;&lt;p&gt;ಲಕ್ಕುಂಡಿಯನ್ನು ನಾವೆಲ್ಲರೂ ಇಲ್ಲಿಯವರೆಗೂ ನೋಡುತ್ತಿದ್ದ ದೃಷ್ಟಿಕೋನವೇ ಬೇರೆ ಇತ್ತು. ಪ್ರಾಚ್ಯಾವಶೇಷಗಳ ಅನ್ವೇಷಣೆಯ ನಂತರ ಜಗತ್ತೇ ಕಣ್ಣರಳಿಸಿ ನೋಡುವಂತಾಗಿದೆ. ದೇಶ ವಿದೇಶದ ಇತಿಹಾಸ ತಜ್ಞರು ಸಂಶೋಧನಾ ದೃಷ್ಟಿಯಿಂದ ಲಕ್ಕುಂಡಿ ಬರುವಂತಾಗಿದೆ. ಲಕ್ಕುಂಡಿ ಯುನೆಸ್ಕೋ ಪಟ್ಟಿಗೆ ಸೇರುವ ಎಲ್ಲ ಅರ್ಹತೆ ಹೊಂದಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.&lt;/p&gt;&lt;img&gt;&lt;p&gt;ದೇಶದಲ್ಲಿಯೇ ಅತ್ಯುತ್ಕೃಷ್ಟ, ಪ್ರಾಚ್ಯಾವಶೇಷಗಳು ಲಕ್ಕುಂಡಿಯಲ್ಲಿ ಲಭ್ಯವಾಗಿದ್ದು, ಅವುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಜೋಡಿಸುವ ಕಾರ್ಯವೂ ನಡೆದಿದೆ. ಆದರೆ ಪ್ರಸ್ತುತ ದೇಶದಲ್ಲಿಯೇ ಅತಿ ದೊಡ್ಡದು ಎನ್ನಲಾದ ವಾರಂಗಲ್ಲನಲ್ಲಿರುವ ತೆರೆದ ಮ್ಯೂಜಿಯಂಗಿಂತಲೂ ಉತ್ತಮವಾದ ಸೌಲಭ್ಯ ಹೊಂದಿರುವ ಒಪನ್ ಮ್ಯೂಜಿಯಂ ಲಕ್ಕುಂಡಿಯಲ್ಲಿ ನಿರ್ಮಾಣವಾಗಬೇಕಿದೆ. ಅಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಒಂದು ವಿಶೇಷ ಅನುಭವ ಮತ್ತು ಇತಿಹಾಸ ಕಲ್ಪನೆ ದೊರೆಯುವಂತಹ ಮ್ಯೂಜಿಯಂ ನಿರ್ಮಾಣವಾಗಲಿ ಎನ್ನುವುದು ಬಹುತೇಕರ ಆಸೆಯಾಗಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/over-3000-ancient-relics-discovered-in-historic-lakkundi-village-overtook-warangal-as-the-most-famous-open-museum-mrq-1aq2ozm"/>
        </item>
        <item>
            <title><![CDATA[8 ಗ್ರಾಂ ಚಿನ್ನ, 25 ಲಕ್ಷದ ವಿಮೆ, ರೇಷ್ಮೆ ಸೀರೆ; ವಿಜಯ್‌ ಭರವಸೆ ಈಡೇರಿಕೆಗೆ ಬೇಕು ವಾರ್ಷಿಕ ₹1 ಲಕ್ಷ ಕೋಟಿ!]]></title>
            <link>https://kannada.asianetnews.com/india-news/tamil-nadu-cm-c-joseph-vijay-s-promise-requires-rs-1-lakh-crore-annually-to-be-fulfilled-economists-warning-mrq/articleshow-psksupg</link>
            <guid isPermaLink="true">https://kannada.asianetnews.com/india-news/tamil-nadu-cm-c-joseph-vijay-s-promise-requires-rs-1-lakh-crore-annually-to-be-fulfilled-economists-warning-mrq/articleshow-psksupg</guid>
            <pubDate>Mon, 11 May 2026 06:21:28 +0530</pubDate>
            <description><![CDATA[&lt;p&gt;ತಮಿಳುನಾಡು ಸಿಎಂ ವಿಜಯ್ ಅವರ ಚುನಾವಣಾ ಭರವಸೆಗಳನ್ನು ಈಡೇರಿಸಲು ವಾರ್ಷಿಕ ₹1 ಲಕ್ಷ ಕೋಟಿ ಬೇಕಾಗಿದ್ದು, ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಸವಾಲಾಗಿದೆ. ಈ ಯೋಜನೆಗಳು ರಾಜ್ಯದ ಒಟ್ಟು ತೆರಿಗೆ ಆದಾಯದ ಸುಮಾರು 50% ಆಗಿರುವುದರಿಂದ, ಆರ್ಥಿಕ ತಜ್ಞರು ರಾಜ್ಯದ ಸಾಲದ ಹೊರೆ ಹೆಚ್ಚಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr95pmhaax1k210r8py28cea,imgname-untitled-design---2026-05-10t200613.320-1778424435242.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ:&amp;nbsp;&lt;/strong&gt; ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್&zwnj; ಅಧಿಕಾರಕ್ಕೇರಿದ ಬೆನ್ನಲ್ಲೇ, ಚುನಾವಣಾ ಪೂರ್ವದಲ್ಲಿ ಅವರು ಘೋಷಿಸಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಎಂಬ ಚರ್ಚೆ ಎದ್ದಿದೆ. ಏಕೆಂದರೆ ಅವರ ಪ್ರಣಾಳಿಕೆಯಲ್ಲಿದ್ದ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲು ವಾರ್ಷಿಕ 1 ಲಕ್ಷ ಕೋಟಿ ರು. ಬೇಕು!&lt;/p&gt;&lt;p&gt;ವಿಜಯ್&zwnj; ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 2,500 ರು. ಸಹಾಯಧನ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 4,000 ರು., ಡಿಪ್ಲೋಮಾ ಹೊಂದಿರುವವರಿಗೆ ತಿಂಗಳಿಗೆ 2,500 ರು., ವರ್ಷಕ್ಕೆ 6 ಉಚಿತ ಎಲ್&zwnj;ಪಿಜಿ ಸಿಲಿಂಡರ್&zwnj;ಗಳು, ಶಾಲೆಗೆ ಹೋಗುವ ಹೆಣ್ಣಮಕ್ಕಳ ತಾಯಂದಿರಿಗೆ ವರ್ಷಕ್ಕೆ 15,000 ರು, ಮದುವೆಯಾಗುವ ಹೆಣ್ಣುಮಕ್ಕಳಿಗೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ, ಹುಟ್ಟುವ ಪ್ರತಿ ಮಗುವಿಗೆ 1 ಬಂಗಾರದ ಉಂಗುರ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು.&lt;/p&gt;&lt;p&gt;ಈ ಪೈಕಿ ಈಗ 200 ಯುನಿಟ್ ಉಚಿತ ವಿದ್ಯುತ್, ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ ಸ್ಥಾಪನೆ ಹಾಗೂ ರಾಜ್ಯಾದ್ಯಂತ ಡ್ರಗ್ಸ್&zwnj; ಕಳ್ಳಸಾಗಣೆ ತಡೆ ಘಟಕ ಸ್ಥಾಪನೆಗೆ ಮೊದಲ ದಿನ ಅಂಕಿತ ಹಾಕಿದ್ದಾರೆ.&lt;/p&gt;&lt;h2&gt;&lt;strong&gt;₹1 ಲಕ್ಷ ಕೋಟಿ ಬೇಕು&lt;/strong&gt;&lt;/h2&gt;&lt;p&gt;ಆರ್ಥಿಕ ತಜ್ಞರ ಅಂದಾಜಿನ ಪ್ರಕಾರ, ಈ ಭರವಸೆಗಳನ್ನು ಪೂರ್ಣವಾಗಿ ಜಾರಿಗೊಳಿಸಿದಲ್ಲಿ ರಾಜ್ಯಕ್ಕೆ ವಾರ್ಷಿಕ ಸುಮಾರು 1 ಲಕ್ಷ ಕೋಟಿ ರು. ವೆಚ್ಚವಾಗುವ ಸಾಧ್ಯತೆ ಇದೆ. ಇದು 2024-25ನೇ ಸಾಲಿನ ರಾಜ್ಯದ ಒಟ್ಟು ತೆರಿಗೆ ಆದಾಯವಾದ 2.1 ಲಕ್ಷ ಕೋಟಿ ರು.ಗಳ ಸುಮಾರು 50 ಪ್ರತಿಶತಕ್ಕೆ ಸಮನಾಗುತ್ತದೆ. 5 ವರ್ಷಗಳ ಅವಧಿಯಲ್ಲಿ ಈ ಯೋಜನೆಗಳಿಗೆ 4.5 ಲಕ್ಷ ಕೋಟಿ ರು.ಗೂ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದೆ.&lt;/p&gt;&lt;h3&gt;&lt;strong&gt;ಆರ್ಥಿಕ ತಜ್ಞರ ಎಚ್ಚರಿಕೆ&lt;/strong&gt;&lt;/h3&gt;&lt;p&gt;ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಎನ್.ಆರ್. ಭಾನುಮೂರ್ತಿ, &lsquo;ಯೋಜನೆಗಳನ್ನು ಜಾರಿಗೊಳಿಸುವ ಮುನ್ನ ಕೆಲವು ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಮೊದಲು ಫಲಾನುಭವಿಗಳನ್ನು ಗುರುತಿಸಬೇಕು, ಈಗಿರುವ ಯೋಜನೆಗಳನ್ನು ಆಡಿಟ್ ಮಾಡಬೇಕು ಮತ್ತು ಖರ್ಚುಗಳನ್ನು ತರ್ಕಬದ್ಧಗೊಳಿಸಬೇಕು. ಹೊಸ ಯೋಜನೆಗಳು ಈಗಾಗಲೇ ಇರುವ ಯೋಜನೆಗಳೊಂದಿಗೆ ಡೂಪ್ಲಿಕೇಟ್&zwnj; ಆಗುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ಖರ್ಚುಗಳನ್ನು ತರ್ಕಬದ್ಧಗೊಳಿಸದಿದ್ದರೆ ರಾಜ್ಯದ ಬೊಕ್ಕಸಕ್ಕೆ ತೀವ್ರ ಒತ್ತಡ ಬೀಳಲಿದೆ&rsquo; ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;ಹಿರಿಯ ಆರ್ಥಿಕ ತಜ್ಞ ಮತ್ತು ಮದ್ರಾಸ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಮಾಜಿ ನಿರ್ದೇಶಕ ಕೆ. ಷಣ್ಮುಗಂ, &lsquo;ಈಗಾಗಲೇ ಮಧ್ಯಂತರ ಬಜೆಟ್ ಅನ್ನು ಸಾಲದ ಮಿತಿಯ ಒಳಗೆ ತಯಾರಿಸಲಾಗಿದೆ. ಹಣಕಾಸು ಆಯೋಗದ ನಿಯಮಗಳ ಪ್ರಕಾರ ರಾಜ್ಯದ ಆರ್ಥಿಕ ಕೊರತೆಯನ್ನು ಜಿಎಸ್&zwnj;ಡಿಪಿಯ ಸುಮಾರು ಶೇ.3ಕ್ಕೆ ಮಾತ್ರ ಇರಿಸಬಹುದು. ಇಲ್ಲಿ ಹೆಚ್ಚು ಬದಲಾವಣೆಗೆ ಅವಕಾಶವಿಲ್ಲ. ಪ್ರಸ್ತುತ ತಮಿಳುನಾಡಿನ ಆರ್ಥಿಕ ಕೊರತೆ ಶೇ.2.8-3 ನಡುವೆ ಇದೆ. ಇದರಿಂದಾಗಿ ಹೆಚ್ಚಿನ ಖರ್ಚು ಮಾಡಲು ಅವಕಾಶಗಳಿಲ್ಲ. ವಿಜಯ್ ಅವರ ಹೆಚ್ಚುವರಿ ಧನಸಹಾಯ ಯೋಜನೆಗಳಿಗೆ ಮಾತ್ರ ವರ್ಷಕ್ಕೆ 18,000 ರು.ಗಳಿಂದ 20,000 ಕೋಟಿ ರು.ಗೂ ಹೆಚ್ಚು ಹಣ ಬೇಕಾಗುತ್ತದೆ. ರಾಜ್ಯದ ಖರ್ಚಿನ ದೊಡ್ಡ ಭಾಗವು ಸರ್ಕಾರಿ ನೌಕರರ ವೇತನ, ಪೆನ್ಷನ್ ಮತ್ತು ಸಾಲದ ಬಡ್ಡಿಗೆ ಹೋಗುತ್ತದೆ. ಹೀಗಾಗಿ ಹೊಸ ಯೋಜನೆಗಳಿಂದ ರಾಜ್ಯದ ಸಾಲದ ಹೊರೆ ಇನ್ನಷ್ಟು ಹೆಚ್ಚಲಿದೆ&rsquo; ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;200 ಯೂನಿಟ್&zwnj; ಉಚಿತ್&zwnj; ವಿದ್ಯುತ್&zwnj;ಗೆ ವಿಜಯ್&zwnj; ಮುದ್ರೆ; ಅಧಿಕಾರಕ್ಕೆ ಬಂದ ಕೂಡಲೇ 3 ಭರವಸೆ ಈಡೇರಿಕೆ&lt;/strong&gt;&lt;/p&gt;&lt;p&gt;ತಮಿಳುನಾಡು ಸಿಎಂ ಆಗಿ ಅಧಿಕಾರ ಕೈಗೆತ್ತಿಕೊಂಡ ಬೆನ್ನಲ್ಲೇ ವಿಜಯ್&zwnj;, ಗೃಹಬಳಕೆ ಗ್ರಾಹಕರಿಗೆ 200 ಯೂನಿಟ್ ಉಚಿತ ವಿದ್ಯುತ್, ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ ಸ್ಥಾಪನೆ ಹಾಗೂ ರಾಜ್ಯಾದ್ಯಂತ ಡ್ರಗ್ಸ್&zwnj; ಕಳ್ಳಸಾಗಣೆ ತಡೆ ಘಟಕಗಳ ನಿರ್ಮಾಣ ಕಡತಗಳಿಗೆ ಭಾನುವಾರ ಸಹಿ ಹಾಕಿದರು. ಈ ಮೂಲಕ ಚುನಾವಣಾಪೂರ್ವ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಈಡೇರಿಕೆಗೆ ಅಧಿಕೃತವಾಗಿ ಚಾಲನೆ ನೀಡಿದರು.&lt;/p&gt;&lt;p&gt;2 ತಿಂಗಳ ಸರಾಸರಿ 500 ಯೂನಿಟ್&zwnj;ವರೆಗೆ ವಿದ್ಯುತ್&zwnj; ಬಳಸುವವರಿಗೆ ಮಾಸಿಕ 200 ಯೂನಿಟ್&zwnj; ಉಚಿತ ವಿದ್ಯುತ್&zwnj; ಲಭಿಸಲಿದೆ. ಇನ್ನು 500 ಯೂನಿಟ್&zwnj;ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ 2 ತಿಂಗಳಿಗೊಮ್ಮೆ 100 ಯೂನಿಟ್&zwnj; ಉಚಿತ ವಿದ್ಯುತ್ ನೀಡುವ ಹಿಂದಿನ ಯೋಜನೆ ಮುಂದುವರಿಯಲಿದೆ.&lt;/p&gt;&lt;p&gt;ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಅವರ ಸುರಕ್ಷತೆಯನ್ನು ಹೆಚ್ಚಿಸಲು, ಸಾಕಷ್ಟು ಸಿಬ್ಬಂದಿ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ &lsquo;ಸಿಂಗ ಪೆಣ್&zwnj; ವಿಶೇಷ ಕ್ರಿಯಾಪಡೆ&rsquo;ಯನ್ನು ರಾಜ್ಯಾದ್ಯಂತ ಸ್ಥಾಪಿಸಲಾಗುವುದು. &lsquo;ಸಿಂಗಾ ಪೆಣ್&zwnj;&rsquo; ಎಂದರೆ ಅಕ್ಷರಶಃ ''ಸಿಂಹಿಣಿ'' ಎಂದರ್ಥ, ಆದರೆ ಇದನ್ನು ಸಾಮಾನ್ಯವಾಗಿ ಧೈರ್ಯಶಾಲಿ ಮಹಿಳೆಯನ್ನು ವಿವರಿಸಲು ಬಳಸಲಾಗುತ್ತದೆ.&lt;/p&gt;&lt;p&gt;ಅದೇ ರೀತಿ, ತಮಿಳುನಾಡಿನಲ್ಲಿ ಮಾದಕವಸ್ತು ಸಂಬಂಧಿತ ಅಪರಾಧಗಳನ್ನು ನಿಗ್ರಹಿಸಲು ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು, ಒಟ್ಟು 65 ಮಾದಕವಸ್ತು ವಿರೋಧಿ ಕಾರ್ಯಪಡೆ ಘಟಕಗಳನ್ನು ಸ್ಥಾಪಿಸಲಾಗುವುದು. ಪ್ರತಿ ಜಿಲ್ಲೆಗೆ 1 ಘಟಕ ಇರಲಿವೆ, ಉಳಿದ ಘಟಕಗಳನ್ನು ರಾಜ್ಯದ ಒಂಬತ್ತು ಪ್ರಮುಖ ನಗರಗಳಾದ್ಯಂತ ಸ್ಥಾಪಿಸಲಾಗುವುದು.&lt;/p&gt;&lt;p&gt;ವಿಜಯ್&zwnj; ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಮಾಸಿಕ 2,500 ರು. ಸಹಾಯಧನ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 4,000 ರು., ವರ್ಷಕ್ಕೆ 6 ಉಚಿತ ಎಲ್&zwnj;ಪಿಜಿ ಸಿಲಿಂಡರ್&zwnj;ಗಳು, ಶಾಲೆಗೆ ಹೋಗುವ ಹೆಣ್ಣಮಕ್ಕಳ ತಾಯಂದಿರಿಗೆ ವರ್ಷಕ್ಕೆ 15,000 ರು, ಮದುವೆಯಾಗುವ ಹೆಣ್ಣುಮಕ್ಕಳಿಗೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ, ಹುಟ್ಟುವ ಪ್ರತಿ ಮಗುವಿಗೆ 1 ಬಂಗಾರದ ಉಂಗುರ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು. ಇವುಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ವಾರ್ಷಿಕ ಸುಮಾರು 1 ಲಕ್ಷ ಕೋಟಿ ರು. ಬೇಕು. ಈ ಸವಾಲು ಈಗ ವಿಜಯ್&zwnj; ಮುಂದಿದೆ.&lt;/p&gt;&lt;p&gt;&lt;strong&gt;ವಿಜಯ್ ನೀಡಿರುವ ಪ್ರಮುಖ ಭರವಸೆಗಳು&lt;/strong&gt;&lt;/p&gt;&lt;ol&gt; &lt;li&gt;ಪ್ರತಿ ಕುಟುಂಬಕ್ಕೆ ₹25 ಲಕ್ಷ ಆರೋಗ್ಯ ವಿಮೆ&lt;/li&gt; &lt;li&gt;ನವ ವಧುವಿಗೆ 8 ಗ್ರಾಂ ಬಂಗಾರ, ರೇಷ್ಮೆ ಸೀರೆ&lt;/li&gt; &lt;li&gt;ಹುಟ್ಟುವ ಪ್ರತಿ ಮಗುವಿಗೆ ಬಂಗಾರದ ಉಂಗುರ&lt;/li&gt; &lt;li&gt;ನಿರುದ್ಯೋಗಿ ಪದವೀಧರರಿಗೆ ಮಾಸಿಕ ₹4,000&amp;nbsp;&lt;/li&gt; &lt;li&gt;ಡಿಪ್ಲೋಮಾ ಪದವೀಧರರಿಗೆ 2000 ರು. ನೆರವು&lt;/li&gt; &lt;li&gt;ಯುವ ಉದ್ಯಮಿಗಳಿಗೆ ₹25 ಲಕ್ಷ ತನಕ ಸಾಲ&lt;/li&gt;&lt;/ol&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/tamil-nadu-cm-c-joseph-vijay-s-promise-requires-rs-1-lakh-crore-annually-to-be-fulfilled-economists-warning-mrq/articleshow-psksupg"/>
        </item>
        <item>
            <title><![CDATA[ಸರ್ಕಾರಿ ಗೌರವದ ಜತೆ ಚಳ್ಳಕೆರೆಯಲ್ಲಿ ಇಂದು ಸಚಿವ ಸುಧಾಕರ್‌ ಅಂತ್ಯಕ್ರಿಯೆ]]></title>
            <link>https://kannada.asianetnews.com/state/minister-d-sudhakar-s-funeral-today-with-state-honours-in-challakere-mrq/articleshow-donmzkg</link>
            <guid isPermaLink="true">https://kannada.asianetnews.com/state/minister-d-sudhakar-s-funeral-today-with-state-honours-in-challakere-mrq/articleshow-donmzkg</guid>
            <pubDate>Mon, 11 May 2026 06:12:27 +0530</pubDate>
            <description><![CDATA[ಭಾನುವಾರ ನಿಧನರಾದ ಸಚಿವ ಡಿ.ಸುಧಾಕರ್ ಅವರ ಅಂತ್ಯ ಸಂಸ್ಕಾರವು ಸೋಮವಾರ ಮಧ್ಯಾಹ್ನ 4 ಗಂಟೆಗೆ ಚಳ್ಳಕೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7qmm773k2vpsezezd6ydjq,imgname-d-sudhakar--1--1778376134887.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ&lt;/strong&gt;: ಭಾನುವಾರ ಮುಂಜಾನೆ ನಿಧನ ಹೊಂದಿದ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರವನ್ನು ಚಳ್ಳಕೆರೆಯ ಅವರ ನಿವಾಸ, &lsquo;ಗೊಮ್ಮಟ ನಿಲಯ&rsquo;ಕ್ಕೆ ತರಲಾಗಿದ್ದು, ಸೋಮವಾರ ಮಧ್ಯಾಹ್ನ 4 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ.&lt;/p&gt;&lt;p&gt;ಇದಕ್ಕೂ ಮೊದಲು, ಸೋಮವಾರ ಬೆಳಗ್ಗೆ ಸಚಿವರ ಸ್ವಂತ ಮನೆ ಗೊಮ್ಮಟ ನಿಲಯದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ. ಬಳಿಕ, ಚಳ್ಳಕೆರೆ ಎಚ್&zwnj;ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ.ಸುಧಾಕರ್ ಮೈದಾನಕ್ಕೆ ಮೃತದೇಹ ಕೊಂಡೊಯ್ದು, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಮಧ್ಯಾಹ್ನ 4 ಗಂಟೆಗೆ ಚಿತ್ರದುರ್ಗ ರಸ್ತೆಯ ವಿಠ್ಠಲ ನಗರದಲ್ಲಿರುವ ಶಾಂತಕುಮಾರ್ ಮೆಮೋರಿಯಲ್ ಶೆಟಲ್ ಕೋರ್ಟ್ ಆವರಣಕ್ಕೆ ಮೃತದೇಹವನ್ನು ಕೊಂಡೊಯ್ಯಲಾಗುವುದು. ಬಳಿಕ, ಸಕಲ ಸರ್ಕಾರಿ ಗೌರವಗಳೊಂದಿಗೆ, ಜೈನ ಧರ್ಮದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.&lt;/p&gt;&lt;p&gt;ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ &zwnj;ಸಿಂಗ್ ಸುರ್ಜೆವಾಲ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಶಾಸಕರು, ಮಂತ್ರಿಗಳು, ಮುಖಂಡರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.&lt;/p&gt;&lt;h2&gt;&lt;strong&gt;ಸಚಿವ ಸುಧಾಕರ್ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ&lt;/strong&gt;&lt;/h2&gt;&lt;p&gt;ಚಳ್ಳಕೆರೆ: ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಖಾತೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಸುಧಾಕರ್ ನಿಧನಕ್ಕೆ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಭಾರತ್ ಜೋಡೋ ಯಾತ್ರೆಯಲ್ಲಿ ತಮ್ಮನ್ನು ಸುಧಾಕರ್ ಅಪ್ಪಿಕೊಂಡಿದ್ದ ಫೋಟೋವನ್ನು ಎಕ್ಸ್&zwnj;ನಲ್ಲಿ ಅವರು ಹಂಚಿಕೊಂಡಿದ್ದಾರೆ. ಸುಧಾಕರ್ ಬಡವರ ಪರ ಇದ್ದವರು. ಇವರ ಅಕಾಲಿಕ ಸಾವು ತಮಗೆ ಅತೀವ ನೋವು ತಂದಿದೆ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಸುಧಾಕರ್&zwnj; ನಿಧನ ರಾಜ್ಯಾದ್ಯಂತ 3 ದಿನ ಶೋಕಾಚರಣೆ ಘೋಷಣೆ&lt;/strong&gt;&lt;/h3&gt;&lt;p&gt;ಸಚಿವ ಡಿ.ಸುಧಾಕರ್ ಅವರ ನಿಧನದ ಹಿನ್ನೆಲೆಯಲ್ಲಿ ಮೇ 10 ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಪ್ರಕಟಿಸಿದ್ದು, ಮೇ 11 ರಂದು ಸೋಮವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.&lt;/p&gt;&lt;p&gt;ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು, ಚಿತ್ರದುರ್ಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಸುಧಾಕರ್&zwnj; ನಿಧನದ ಹಿನ್ನೆಲೆ ಮೇ 11 ರಂದು ಸೋಮವಾರ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಕಚೇರಿಗಳು, ಎಲ್ಲಾ ಶಾಲಾ ಕಾಲೇಜುಗಳು (ಅನುದಾನ ಪಡೆಯುವ ಎಲ್ಲಾ ವಿದ್ಯಾಸಂಸ್ಥೆ ಸೇರಿ) ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ.&lt;/p&gt;&lt;p&gt;ಮೇ 10 ರಿಂದ ಮೇ 12 ರವರೆಗೆ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಮಾಡಲಾಗುವುದು. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನರಂಜನಾ ಕಾರ್ಯಮಗಳು ಇರುವುದಿಲ್ಲ. ಕಟ್ಟಡಗಳ ಮೇ&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/minister-d-sudhakar-s-funeral-today-with-state-honours-in-challakere-mrq/articleshow-donmzkg"/>
        </item>
        <item>
            <title><![CDATA[ಬಿಜೆಪಿ ಬಂಗಾಳದ ನಾಗರಿಕತೆಯ ಯುದ್ಧ ಗೆದ್ದಿದ್ದು ಹೇಗೆ?]]></title>
            <link>https://kannada.asianetnews.com/india-news/how-did-the-bjp-win-the-civilisation-war-in-west-bengal-mrq/articleshow-radzg2g</link>
            <guid isPermaLink="true">https://kannada.asianetnews.com/india-news/how-did-the-bjp-win-the-civilisation-war-in-west-bengal-mrq/articleshow-radzg2g</guid>
            <pubDate>Mon, 11 May 2026 06:04:45 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ಹಿಂಸಾಚಾರ ಮತ್ತು ದುರಾಡಳಿತದ ನಡುವೆ, ಸಂದೇಶಖಾಲಿ ಮತ್ತು ಆರ್&zwnj;ಜಿ ಕರ್ ವೈದ್ಯಕೀಯ ಕಾಲೇಜು ಘಟನೆಗಳು ಜನರ ಆಕ್ರೋಶಕ್ಕೆ ಕಾರಣವಾದವು. ಈ ಹಿನ್ನೆಲೆಯಲ್ಲಿ, ಬಿಜೆಪಿ ಸವಾಲುಗಳನ್ನು ಎದುರಿಸಿ ಗೆಲುವು ಸಾಧಿಸಿದ್ದು, ಇದು ಶ್ಯಾಮಪ್ರಸಾದ್ ಮುಖರ್ಜಿಯವರ ಕನಸನ್ನು ನನಸು ಮಾಡಿದ ಐತಿಹಾಸಿಕ ಬದಲಾವಣೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kra735z4hrj2wjsq5te97149,imgname-suvendu-adhikari-1778459449316.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ರಾಕೇಶ್ ಶೆಟ್ಟಿ, ಲೇಖಕರು&lt;/strong&gt;&lt;/p&gt;&lt;p&gt;&lt;strong&gt;ಟಿಎಂಸಿ ಗೂಂಡಾಗಿರಿ ನಡುವೆ ಕೇಸರಿ ಉದಯ । ನನಸಾದ ಶ್ಯಾಮಪ್ರಸಾದ್&zwnj; ಮುಖರ್ಜಿ ಕನಸು&lt;/strong&gt;&lt;/p&gt;&lt;p&gt;&lsquo;ಬಂಗಾಳ ಇಂದು ಯೋಚಿಸುವುದನ್ನು ಭಾರತ ನಾಳೆ ಯೋಚಿಸುತ್ತದೆ&rsquo; ಎನ್ನುವ ಕಾಲವೊಂದಿತ್ತು. ಸ್ವಾತಂತ್ರ್ಯಪೂರ್ವದ ಬಂಗಾಳದ ಸಾಂಸ್ಕೃತಿಕ, ಬೌದ್ಧಿಕ ಸಾಮರ್ಥ್ಯದ ಕನ್ನಡಿಯಂತಿದೆ ಈ ಮಾತು. ಇರದೇ ಏನು ಹೇಳಿ? ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರಬಿಂದೋ, ರವೀಂದ್ರನಾಥ್ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್, ರಾಸ್ ಬಿಹಾರಿ ಬೋಸ್, ಪರಮಹಂಸ ಯೋಗಾನಂದ, ಜಗದೀಶ್ ಚಂದ್ರ ಬೋಸ್, ಶ್ಯಾಮಪ್ರಸಾದ ಮುಖರ್ಜಿ.. ಹೀಗೆ ಖ್ಯಾತನಾಮ ಬಂಗಾಳಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.&lt;/p&gt;&lt;p&gt;ಭಾರತದ ಸ್ವಾತಂತ್ರ್ಯ ಹೋರಾಟದ ಕೇಂದ್ರಸ್ಥಾನ ಬಂಗಾಳವೇ ಆಗಿತ್ತು. ಬ್ರಿಟಿಷರು ಭಾರತ ಬಿಟ್ಟು ಹೋಗುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದವರು ಬಂಗಾಳದ ಮಣ್ಣಿನಿಂದ ಬಂದ ಸುಭಾಷ್ ಚಂದ್ರ ಬೋಸ್&zwnj;. ಅಂತಹ ಬಂಗಾಳದ ಭಾಗ್ಯ ಸ್ವಾತಂತ್ರ್ಯಾನಂತರ ಹಿಮ್ಮುಖವಾಗಿ ಚಲಿಸಲಾರಂಭಿಸಿತು. &lsquo;ಭಾರತ ಇಂದು ಸಾಧಿಸುವುದನ್ನು ಬಂಗಾಳ ನಾಳೆ-ನಾಡಿದ್ದಾದರೂ ಸಾಧಿಸಬಲ್ಲದೇ?&rsquo; ಎಂದು ಕೇಳಿಕೊಳ್ಳುವಂತಹ ಸ್ಥಿತಿಗೆ ರಾಜಕೀಯ ಪಕ್ಷಗಳು ತಂದು ನಿಲ್ಲಿಸಿದವು.&lt;/p&gt;&lt;h2&gt;&lt;strong&gt;ದುರಾಡಳಿತಕ್ಕೆ ನಲುಗಿದ ಬಂಗಾಳ&lt;/strong&gt;&lt;/h2&gt;&lt;p&gt;ಬಂಗಾಳಿಗಳ ಬಗ್ಗೆ ಯೋಚಿಸುವಾಗ ಕನಿಕರವಾಗುತ್ತದೆ. ಸ್ವಾತಂತ್ರ್ಯಾನಂತರದ ಬರೋಬ್ಬರಿ 30 ವರ್ಷವನ್ನು ಕಾಂಗ್ರೆಸ್ (ಐಎನ್&zwnj;ಸಿ ಮತ್ತು ಬಂಗಾಳಿ ಕಾಂಗ್ರೆಸ್) ಕೈಗೆ ಕೊಟ್ಟು ಪೆಟ್ಟು ತಿಂದು, ನಂತರ 34 ವರ್ಷಗಳಷ್ಟು ಕಾಲ ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿ ಸಿಲುಕಿ ಹೈರಾಣಾಗಿ, ಕಡೆಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದ ಕೈಗೆ ರಾಜ್ಯದ ಚುಕ್ಕಾಣಿಯನ್ನು ಕೊಟ್ಟು ಬೆಂಕಿಯಿಂದ ಬಾಣಲೆಗೆ ಬಿದ್ದ ದುಃಸ್ಥಿತಿ ಬಂಗಾಳಿಗಳದ್ದು. ಕಮ್ಯುನಿಸ್ಟರ ಹಿಂಸಾಚಾರ, ಓಲೈಕೆಯ ರಾಜಕಾರಣವನ್ನು ವಿರೋಧಿಸುತ್ತಲೇ 2011ರಲ್ಲಿ ಅಧಿಕಾರಕ್ಕೇರಿದ ಮಮತಾ ನಂತರ ಅಳವಡಿಸಿಕೊಂಡಿದ್ದು ಮಾತ್ರ ಕಮ್ಯುನಿಸ್ಟರ ಹಿಂಸಾಚಾರ, ಓಲೈಕೆಯ ರಾಜಕಾರಣವನ್ನೇ.&lt;/p&gt;&lt;p&gt;ಭಾರತದ ಉಳಿದ ರಾಜ್ಯಗಳ ಚುನಾವಣೆಗಳು ಆಡಳಿತ ವಿರೋಧಿ ಅಲೆ, ಪ್ರಣಾಳಿಕೆ, ಅಭಿವೃದ್ಧಿ ಕಾರ್ಯ ಇತ್ಯಾದಿಗಳ ಮೇಲೆ ನಡೆದರೆ ಬಂಗಾಳದಲ್ಲಿ ಹಾಗೆ ನಡೆಯುವ ಪರಿಸ್ಥಿತಿಯಿಲ್ಲ. ಟಿಎಂಸಿ ಪಕ್ಷದವರು ತಮಗೆ ಮತ ಹಾಕಿ ಎಂದು ಮತದಾರರಲ್ಲಿ ಬೇಡುವುದಿಲ್ಲ. ತಮಗೆ ಮತ ಹಾಕದಿದ್ದರೆ ನಿಮ್ಮನ್ನು ಉಳಿಸುವುದಿಲ್ಲ ಎನ್ನುತ್ತಾರೆ. ಕಮ್ಯುನಿಸ್ಟರ ಆಡಳಿತವಿದ್ದ ಕೇರಳ, ತ್ರಿಪುರಾದಲ್ಲೂ ಇದೇ ಪರಿಸ್ಥಿತಿಯಿತ್ತು. ತ್ರಿಪುರಾದಲ್ಲಿ ಬಿಜೆಪಿ ಆಡಳಿತ ಬಂದ ನಂತರ ಅಲ್ಲಿ ಪರಿಸ್ಥಿತಿ ಬದಲಾಯಿತು. ಕೇರಳದಲ್ಲಿ ಇದು ನಿಂತಿದ್ದು 2017ರಲ್ಲಿ ಬಿಜೆಪಿ ನಡೆಸಿದ ಜನಸುರಕ್ಷಾ ಯಾತ್ರೆಯ ನಂತರ. ಸೋಷಿಯಲ್ ಮೀಡಿಯಾ ಕಾಲದಲ್ಲಿ ಹಿಂಸಾಚಾರ ನಡೆಸಿ ಮುಚ್ಟಿಡುವುದು ಸುಲಭವಲ್ಲ ಎಂಬ ಕನಿಷ್ಠ ನಾಚಿಕೆ ಕೇರಳದ ಕಮ್ಯುನಿಸ್ಟರಿಗೆ ಬಂದಿತು. ಆದರೆ ಮಮತಾ ಬ್ಯಾನರ್ಜಿಯವರಿಗೆ ಯಾವುದೂ ಲೆಕ್ಕಕ್ಕಿರಲಿಲ್ಲ. ಇಂತಹ ರಾಜ್ಯದಲ್ಲಿ ಬದಲಾವಣೆ ಸುಲಭವಿರಲಿಲ್ಲ. ಆದರೆ ಕಾಲ ಎಲ್ಲದಕ್ಕೂ ದಾರಿ ಮಾಡಿಕೊಡುತ್ತದೆ.&lt;/p&gt;&lt;h2&gt;&lt;strong&gt;ಸವಾಲಿನ ಹಾದಿಯಲ್ಲಿ ಬಿಜೆಪಿ&lt;/strong&gt;&lt;/h2&gt;&lt;p&gt;34 ವರ್ಷಗಳ ಕಮ್ಯುನಿಸ್ಟರ ದುರಾಡಳಿತ ಕೊನೆಯಾಗಿಸಿದ್ದು ನಂದಿಗ್ರಾಮದಲ್ಲಿ ಮಮತಾ ನಡೆಸಿದ ಹೋರಾಟ. ಆಗ ಅವರ ಬೆಂಬಲಕ್ಕೆ ನಿಂತಿದ್ದು ಬಿಜೆಪಿ. ಎನ್&zwnj;ಡಿಎ ಜೊತೆಗಿನ ಸಂಬಂಧ ಕಮ್ಯುನಿಸ್ಟರ ವಿರುದ್ಧ ಹೋರಾಟದ ಇಂಧನವಾಗಿತ್ತು. ಆದರೆ ಅಧಿಕಾರಕ್ಕೇರಿದ ನಂತರ ಅದೇ ಬಿಜೆಪಿಯನ್ನು ಮಮತಾ ಉಳಿಯಲು ಬಿಡಲಿಲ್ಲ. ಬಿಜೆಪಿ ಕಾರ್ಯಕರ್ತರ ಹತ್ಯೆ, ಮನೆಯ ಹೆಣ್ಣುಮಕ್ಕಳ ಅತ್ಯಾ*ಚಾರ ಮುಂದುವರಿಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ಅಲೆಯಿದ್ದರೂ, ಬಂಗಾಳದಲ್ಲಿ ಗೆದ್ದಿದ್ದು 2 ಸೀಟು. ಆದರೆ 2019ರ ವೇಳೆಗೆ ಬಂಗಾಳದ ದೊಡ್ಡ ಬೌದ್ಧಿಕ ವರ್ಗ ಬಿಜೆಪಿಯೆಡೆಗೆ ಬಂದಿತು. ಪರಿಣಾಮವಾಗಿ 18 ಸೀಟುಗಳನ್ನು ಪಡೆಯಿತು. 2021ರ ಚುನಾವಣೆ ವೇಳೆಗೆ ಒಂದು ಕಾಲದ ಮಮತಾ ಬಲಗೈಯಾಗಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಬಂದರು. ಆಗ ಅಖಾಡ ರಂಗೇರಿತು. ಟಿಎಂಸಿ ಗೂಂಡಾಗಳ ವ್ಯಾಪಕ ಹಿಂಸಾಚಾರದ ನಡುವೆಯೂ ಬಿಜೆಪಿ 77 ಸೀಟು ಗೆದ್ದಿತು.&lt;/p&gt;&lt;p&gt;ಬಿಜೆಪಿಯ ಪೈಪೋಟಿಯಿಂದ ಬುಸುಗುಡುತ್ತಿದ್ದ ಮಮತಾ ಚುನಾವಣೆಯ ಬಹಿರಂಗ ಪ್ರಚಾರದಲ್ಲಿ, &lsquo;ಕೇಂದ್ರದ ಭದ್ರತಾ ಪಡೆಗಳಿವೆ ಎಂದು ತುಂಬಾ ಮೆರೆಯಬೇಡಿ. ಅವರು ಹೋದ ನಂತರ ಖೇಲಾ ಹೋಬೆ&rsquo; ಎಂದಿದ್ದರು. ಫಲಿತಾಂಶದ ನಂತರ ಆಕೆಯ ಮಾತನ್ನು ಟಿಎಂಸಿ ಗೂಂಡಾಗಳು ಅಕ್ಷರಶಃ ಮಾಡಿ ತೋರಿಸಿದರು. ಬಿಜೆಪಿ ಕಾರ್ಯಕರ್ತರ ರಕ್ತ ಹರಿಯಿತು. 300ಕ್ಕೂ ಹೆಚ್ಚು ಜೀವಗಳು ಹೋದವು. ಹೆಣ್ಣುಮಕ್ಕಳ ಅತ್ಯಾ*ಚಾರ, ಮನೆಗಳು ಸುಟ್ಟು ಕರಕಲಾದವು. 2024ರ ಲೋಕಸಭಾ ಚುನಾವಣೆಯಲ್ಲಿ ಬೂತ್ ಏಜೆಂಟರೂ ಸಿಗದ ಪರಿಸ್ಥಿತಿಯಿತ್ತು, ಪರಿಣಾಮ ಬಿಜೆಪಿ 6 ಸೀಟು ಕಳೆದುಕೊಂಡು 12ಕ್ಕೆ ಇಳಿಯಿತು.&lt;/p&gt;&lt;h3&gt;&lt;strong&gt;ಬಂಗಾಳಿಗರ ಬಡಿದೆಬ್ಬಿಸಿದ ಘಟನೆ&lt;/strong&gt;&lt;/h3&gt;&lt;p&gt;2024ರಲ್ಲಿ ಕೋಲ್ಕತಾದ ಆರ್&zwnj;ಜಿ ಕರ್&zwnj; ಮೆಡಿಕಲ್ ಕಾಲೇಜಿನಲ್ಲಿ ಹೆಣ್ಣುಮಗಳ ಮೇಲೆ ಅತ್ಯಾ*ಚಾರ, ಕೊಲೆ ನಡೆಯಿತು. ಪ್ರಾಂಶುಪಾಲ ಹಾಗೂ ಸ್ಥಳೀಯ ಪೋಲಿಸರು ಆತ್ಮಹ*ತ್ಯೆಯ ಕತೆ ಕಟ್ಟಿದರು. ಇದರ ವಿರುದ್ಧ ಸುಮಾರು 42 ದಿನಗಳ ಕಾಲ ವೈದ್ಯರು ಬೃಹತ್ ಹೋರಾಟ ನಡೆಸಿದರು. ಈ ಘಟನೆ ಬಂಗಾಳದ ಅಂತಃಸತ್ವವನ್ನು ಬಡಿದೆಬ್ಬಿಸಿತು. ಮಮತಾ ದುರಾಡಳಿತದ ಅಂತ್ಯ ಆರಂಭವಾಗಿದ್ದೇ ಇಲ್ಲಿಂದ. ಈ ಹೆಣ್ಣುಮಗಳ ತಾಯಿ ರತ್ನಾ ದೇಬನಾಥ್ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿತ್ತು. ಆಕೆ ಮತ ಬೇಡಲು ಹೋದಾಗ ಹೆಣ್ಣುಮಕ್ಕಳೆಲ್ಲ ಆ ತಾಯಿಯನ್ನು ತಬ್ಬಿ ಅಳುತ್ತಾ ನಿಮ್ಮ ಜೊತೆ ನಾವಿದ್ದೇವೆ ಎನ್ನುತ್ತಿದ್ದರು. ಈಗ ರತ್ನಾ ಗೆದ್ದು ಶಾಸಕಿಯಾಗಿದ್ದಾರೆ.&lt;/p&gt;&lt;p&gt;ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಇನ್ನೊಂದು ಭಯಾನಕ ಕೇಸ್ ಸಂದೇಶಖಾಲಿಯದ್ದು. ಪಡಿತರ ಹಗರಣದ ಆರೋಪದ ಮೇಲೆ ಟಿಎಂಸಿಯ ಶೇಖ್&zwnj; ಷಹಜಹಾನ್&zwnj;ನ ಕಚೇರಿಯ ಮೇಲಿ ಇ.ಡಿ ದಾಳಿ ಮಾಡಿದಾಗ ಟಿಎಂಸಿ ಗೂಂಡಾಗಳು ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ ಮಾಡಿದರು. ಇದೇ ಷಹಜಹಾನ್ ಮತ್ತವನ ತಂಡ ಆ ಊರಿನ ಹೆಣ್ಣುಮಕ್ಕಳನ್ನು ಪಕ್ಷದ ಕಚೇರಿಗೆ ಕರೆದು ಅತ್ಯಾ*ಚಾರ ಮಾಡುತ್ತಿತ್ತು. ಆ ಊರಿನ ರೈತರ ಜಮೀನಿಗೆ ಉಪ್ಪು ನೀರು ಸುರಿದು ಬರಡು ಮಾಡಿ ಜಮೀನು ಕಬ್ಜಾ ಮಾಡಲಾಗುತ್ತಿತ್ತು. ಜನರ ತಾಳ್ಮೆಯ ಕಟ್ಟೆಯೊಡೆದಾಗ ಅದರ ನೇತೃತ್ವ ವಹಿಸಿದ ದಿಟ್ಟ ಹೆಣ್ಣು ರೇಖಾ ಪಾತ್ರ. ಅವರು ಕೂಡ ಈಗ ಶಾಸಕಿಯಾಗಿದ್ದಾರೆ. ಷಹಜಹಾನ್ ಜೈಲಿನಲ್ಲಿದ್ದಾನೆ.&lt;/p&gt;&lt;p&gt;ಈ 2 ಘಟನೆಗಳ ಜೊತೆಗೆ ನೆರೆಯ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಹತ್ಯೆ, ವಲಸೆಯೂ ಬಂಗಾಳಿಗಳನ್ನು ಬಡಿದೆಬ್ಬಿಸಿತು. ಏನೇ ಧೈರ್ಯ ಮಾಡಿ ನಿಂತರೂ ಟಿಎಂಸಿಯ ಗೂಂಡಾಗಳ ವಿರುದ್ಧ ಬಡಿದಾಡಲು ಒಂದು ಹೆಗಲು ಬೇಕಲ್ಲ, ಬಿಜೆಪಿ ಆ ಹೆಗಲಾಯಿತು. ನಾನಾ ಕೇಸುಗಳಲ್ಲಿ ಒಳಗೆ ಹೋಗಿದ್ದ ಕಾರ್ಯಕರ್ತರನ್ನು ಬಿಡಿಸಿ ಹೊರತಂದು ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಲಾಯಿತು. ಕೇಂದ್ರದ ಭದ್ರತಾ ಪಡೆಗಳು ಟಿಎಂಸಿಯ ಆರ್ಭಟಕ್ಕೆ ಬ್ರೇಕ್ ಹಾಕಿ, ನಿರ್ಭಯವಾಗಿ ಬಂದು ಮತ ಚಲಾಯಿಸುವ ವಾತಾವರಣ ನಿರ್ಮಿಸಿದವು.&lt;/p&gt;&lt;p&gt;&lt;strong&gt;ಗೆಲುವಿನ ಹಿಂದೆ ಕನ್ನಡಿಗನ ಶ್ರಮ&lt;/strong&gt;&lt;/p&gt;&lt;p&gt;ಈಗ ಬಿಜೆಪಿ ಗೆದ್ದಿದೆ. ಶ್ಯಾಮಪ್ರಸಾದ್ ಮುಖರ್ಜಿಯವರ ಕನಸೂ ನನಸಾಗಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು, &lsquo;ಬಂಗಾಳ ನಮಗೆ ರಾಜಕೀಯ ಯುದ್ಧವಲ್ಲ, ನಾಗರಿಕತೆಯ ಯುದ್ಧ. ಬಂಗಾಳದ ಗೆಲುವಿನಲ್ಲಿ ಭಾರತದ ಗೆಲುವಿದೆ&rsquo; ಎಂದಿದ್ದರು. ಈ ನಾಗರಿಕತೆಯ ಯುದ್ಧವನ್ನು ಬಿಜೆಪಿ ಗೆದ್ದಿದೆ. ಖುಷಿಯ ವಿಷಯವೇನೆಂದರೆ, ನಾಗರಿಕತೆ ರಕ್ಷಣೆಯ ಈ ಹೋರಾಟದಲ್ಲಿ ನಮ್ಮ ಕರ್ನಾಟಕದ ಮೂಡಿಗೆರೆಯ ಯುವಕ ಅರುಣ್ ಬಿನ್ನಡಿ ಪ್ರಮುಖ ಪಾತ್ರ ವಹಿಸಿದ್ದರು. ನಾರ್ತ್&zwnj; ಜೋನ್ ಸಿಲಿಗುರಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಹೋಗಿದ್ದ ಅರುಣ್ 28 ಕ್ಷೇತ್ರಗಳಲ್ಲಿ 26ನ್ನು ಗೆಲ್ಲಿಸಿದ್ದಾರೆ. ಇದೇನು ಸುಲಭದ ಕಾರ್ಯವಾಗಿರಲಿಲ್ಲ ಎನ್ನುವುದು ಅವರ ಜೊತೆ ಮಾತನಾಡಿದಾಗ ಅರ್ಥವಾಗುತ್ತದೆ. ಬೂತ್ ಮಟ್ಟದ ಸಭೆಗಳನ್ನು ನಡೆಸಲು ಸಹ ಟಿಎಂಸಿ ಗೂಂಡಾಗಳು ಬಿಡುತ್ತಿರಲಿಲ್ಲ. ಅಂತಹ ಕಡೆ ಅವರೆದುರು ತೊಡೆ ತಟ್ಟಿ ನಿಂತು ತಂದಿರುವ ಗೆಲುವಿದು. ಇಂಥ ಪರಿಶ್ರಮದ ಫಲವಾಗಿ ದೊರೆತಿರುವ ಬಿಜೆಪಿಯ ಗೆಲುವು ಸುವರ್ಣ ಬಾಂಗ್ಲಾ ಉದಯಕ್ಕೆ ನಾಂದಿಯಾಗಲಿ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/how-did-the-bjp-win-the-civilisation-war-in-west-bengal-mrq/articleshow-radzg2g"/>
        </item>
        <item>
            <title><![CDATA[ಮಳೆ ನಿಂತು 10 ದಿನ ಕಳೆದ್ರೂ ಬಿದ್ದ ಮರಗಳ ಸಂಗ್ರಹಕ್ಕೆ ಜಿಬಿಎ ಪರದಾಟ; ಅಗತ್ಯ ಜಾಗವೇ ಇಲ್ಲ]]></title>
            <link>https://kannada.asianetnews.com/bengaluru-urban/even-after-10-days-of-rain-greater-bengaluru-authority-is-struggling-to-collect-fallen-trees-mrq/articleshow-pyuqz4k</link>
            <guid isPermaLink="true">https://kannada.asianetnews.com/bengaluru-urban/even-after-10-days-of-rain-greater-bengaluru-authority-is-struggling-to-collect-fallen-trees-mrq/articleshow-pyuqz4k</guid>
            <pubDate>Mon, 11 May 2026 05:41:52 +0530</pubDate>
            <description><![CDATA[ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ನೂರಾರು ಮರಗಳು ಧರೆಗುರುಳಿವೆ. ಆದರೆ, ಬಿದ್ದ ಮರಗಳನ್ನು ಸಂಗ್ರಹಿಸಲು ಪಾಲಿಕೆಗೆ ಅಧಿಕೃತ ಡಿಪೋ ಇಲ್ಲದಿರುವುದರಿಂದ, ಸ್ಮಶಾನ ಮತ್ತು ಕೆರೆ ಅಂಗಳಗಳಂತಹ ತಾತ್ಕಾಲಿಕ ಸ್ಥಳಗಳಲ್ಲಿ ಸಂಗ್ರಹಿಸಲಾಗುತ್ತಿದ್ದು, ಇದು ತೆರವು ಕಾರ್ಯ ವಿಳಂಬಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jq3dz1q4796zp22e297pqwrm,imgname-1.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಮಾಶಂಕರ ಕಾರ್ಯ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು:&lt;/strong&gt; ರಣಭೀಕರ ಮಳೆಗೆ ನಗರದಲ್ಲಿ ಮರ ಬಿದ್ದು 10 ದಿನ ಕಳೆದರೂ ಮರ ಸಾಗಿಸಿ ಒಂದೆಡೆ ಸಂಗ್ರಹಿಸಲು ಪಾಲಿಕೆಗೆ ಸ್ಥಳದ ಅಭಾವ ಕಾಡುತ್ತಿದೆ. ಪಾಲಿಕೆಯಲ್ಲಿ ಮರ ಇಂತಹ ಮರ ಸಂಗ್ರಹಿಸಲು ಅಧಿಕೃತ ಸ್ಥಳ ಇಲ್ಲವೇ ಇಲ್ಲ. ಇದರಿಂದಾಗಿ ಅಧಿಕಾರಿಗಳು, ಸಿಬ್ಬಂದಿ ಮರಗಳನ್ನು ಸ್ಮಶಾನದ ಖಾಲಿ ಜಾಗ, ಕೆರೆ ಅಂಗಳ, ಆಸ್ಪತ್ರೆ(ಪಿಎಚ್ ಸಿ) ಮೈದಾನದಂತಹ ಸಣ್ಣ ಸಣ್ಣ ಜಾಗಗಳಲ್ಲಿ ಸಂಗ್ರಹಿಸುತ್ತಾ ಪರದಾಡುತ್ತಿದ್ದಾರೆ.&lt;/p&gt;&lt;p&gt;ಮರ ಬಿದ್ದಿರುವುದು ಒಂದು ಕಡೆಯಾದರೆ, ಸಾಗಿಸಿ ಸಂಗ್ರಹಿಸುತ್ತಿರುವುದು ನಗರದ ಹೊರಭಾಗದ ಜಾಗಗಳಲ್ಲಿ. ಈ ಕಾರಣದಿಂದ ಮರಗಳ ತೆರವು ಕಾರ್ಯ ವಿಳಂಬವಾಗುತ್ತಿದೆ. ಮರ ತುಂಡು ಮಾಡಿ ಸಾಗಿಸುವ ಜವಾಬ್ದಾರಿ ವಹಿಸಿಕೊಂಡ ಸಾರ್ವಜನಿಕ ಅರಣ್ಯ ವಿಭಾಗದ ಅಧಿಕಾರಿಗಳು ಸುಮಾರು 15 ಟಿಪ್ಪರ್, 4 ಕ್ರೇನ್&zwnj;ಗಳು ಹಾಗೂ ಸಿಬ್ಬಂದಿ, ಖಾಸಗಿ ತಂಡ ಬಳಸಿ ನಗರದ ಹೊರವಲಯಗಳ ತಾತ್ಕಾಲಿಕ ಡಿಪೋಗಳಿಗೆ ಸಾಗಿಸುತ್ತಿದ್ದಾರೆ.&lt;/p&gt;&lt;p&gt;ಪಾಲಿಕೆಯಲ್ಲಿ ನೋಟಿಫೈಡ್ ಡಿಪೋ ಇಲ್ಲದಿರುವುದರಿಂದ ಮರ ಸಂಗ್ರಹ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಬಿಬಿಎಂಪಿ ರಚನೆಯಾದಾಗ ಅರಣ್ಯವಿಭಾಗಕ್ಕೆ 2 ಎಕರೆ ಜಾಗ ನೋಟಿಫೈಡ್ ಡಿಪೋಗಾಗಿ ನಗರದ ಮಧ್ಯಭಾಗದಲ್ಲಿ ಮೀಸಲಿಡಬೇಕಾಗಿತ್ತು. ಆದರೆ, ಬಿಬಿಎಂಪಿ ರಚನೆಯಾದಾಗಲೂ ಇಡಲಿಲ್ಲ ಅಥವಾ ಜಿಬಿಎ ರಚನೆಯಾದಾಗಲೂ ಚಕಾರ ಎತ್ತಿಲ್ಲ.&lt;/p&gt;&lt;p&gt;ಇಂತಹ ನೋಟಿಫೈಡ್ ಡಿಪೋ ಅರಣ್ಯ ಇಲಾಖೆಯಲ್ಲಿ ಇದೆ. ಆದರೆ, ಈ ಪ್ರದೇಶದಲ್ಲಿ ಪಾಲಿಕೆಗೆ ಸಂಬಂಧಿಸಿದ ಮರ ಇಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಏಕೆಂದರೆ, ನಗರದಲ್ಲಿ ಇರುವ ಮರಗಳ ವರ್ಗವೇ ಬೇರೆ, ಅರಣ್ಯ ಇಲಾಖೆಯಲ್ಲಿ ಸಂಗ್ರಹವಾಗುವ ಮರಗಳ ವರ್ಗವೇ ಬೇರೆಯಾಗಿರುತ್ತವೆ.&lt;/p&gt;&lt;p&gt;ನಗರದಲ್ಲಿ ಬಿದ್ದಿರುವ 516 ಮರಗಳಲ್ಲಿ ಕಾಪರ್ ಪಾಡ್, ಸ್ಪೆಥೋಡಿಯಾ, ಡಾಲಿಚಾಂದ್, ಗುಲ್ ಮೊಹರ್, ಆಕಾಶ್ ಮಲ್ಲಿಗೆ, ರೇನ್ ಟ್ರೀ ಜಾತಿ ಮರಗಳು ಶೇ80ರಷ್ಟು ಇವೆ. ಇವು ಹೂ ಬಿಡುವ ಮರಗಳಾದರೂ ಗಾತ್ರ ಹಾಗೂ ತೂಕ ಹೆಚ್ಚು. ಅಲ್ಲಲ್ಲಿ ಬಿದ್ದಿರುವ ಸರ್ವೇ ಮರ, ನೀಲಗಿರಿ ಮರಗಳ ಪ್ರಮಾಣ ಶೇ 20 ಮಾತ್ರ.&lt;/p&gt;&lt;p&gt;ಬೃಹತ್ ಗಾತ್ರದ ಮರಗಳೇ ಬಿದ್ದಿದ್ದು, ಒಂದೆಡೆ ಸಾಗಿಸಿ, ತೂಕ ಹಾಕಿ, ನಿಯಮದಂತೆ ಇವುಗಳನ್ನು ಮಾರಾಟ ಮಾಡಲು ಆನ್ ಲೈನ್ ನಲ್ಲಿ ಟೆಂಡರ್ ಕರೆಯಲಾಗುತ್ತದೆ. ಅಲ್ಲಿಯವರೆಗೆ ಒಂದು ಕಡೆ ಮರ ಸಂಗ್ರಹಿಸುವುದು ಅನಿವಾರ್ಯ. ಉದಾಹರಣೆಗೆ ಮಲ್ಲೇಶ್ವರದಿಂದ ಸುಮ್ಮನಹಳ್ಳಿ ಕುಷ್ಠರೋಗ ಆಸ್ಪತ್ರೆ ಅಂಗಳಕ್ಕೆ ಮರ ಸಂಗ್ರಹಿಸುವುದು ಸಮಸ್ಯೆಯಾಗಿದೆ. ಒಂದು ಬೃಹತ್ ಮರ ತುಂಡು ಮಾಡಿದರೆ ಒಂದು ಲಾರಿಯಲ್ಲಿ ಎರಡು ಬಾರಿ ಸಾಗಿಸಬೇಕು. ಬೆಳಿಗ್ಗೆ 8ರಿಂದ 11ರವರೆಗೆ ಲಾರಿ ಸಂಚಾರಕ್ಕೆ ನಗರದಲ್ಲಿ ಅನುಮತಿ ಇಲ್ಲ. ಬೆಳಿಗ್ಗೆ 11ರ ನಂತರ ಮಲ್ಲೇಶ್ವರದಿಂದ ಕುಷ್ಠರೋಗ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಸಂಜೆಯಾಗುತ್ತದೆ. ಇಲ್ಲಿ ಸಂಚಾರ ದಟ್ಟಣೆ, ಲೋಡ್ ಮತ್ತು ಅನ್ ಲೋಡ್ ಮಾಡುವ ಸಮಯವೂ ಸೇರುವುದರಿಂದ ತೆರವು ತಡವಾಗುತ್ತಿದೆ. ನಗರದ ಮಧ್ಯೆದಲ್ಲಿ ಪಾಲಿಕೆಗೆ 2 ಎಕರೆ ನೋಟಿಫೈಡ್ ಡಿಪೋ ಇದ್ದರೆ, ಸಮಯ ಉಳಿದು, ಕೆಲಸವೂ ಬೇಗ ಮುಗಿಯುತ್ತಿತ್ತು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;8 ತಾತ್ಕಾಲಿಕ ಡಿಪೋಗಳಲ್ಲಿ 1305 ಕೊಂಬೆಗಳ ಸಂಗ್ರಹ&lt;/strong&gt;&lt;/h2&gt;&lt;p&gt;ನಗರದಲ್ಲಿ ಮರ ತೆರವು ಜೊತೆಗೆ, ಕೊಂಬೆ ತೆರವು ತಡವಾಗುತ್ತಿದೆ. ಏಪ್ರಿಲ್ 29 ಮತ್ತು 30ರಂದು ಒಟ್ಟು 516 ಮರಗಳು 1305 ಕೊಂಬೆಗಳು ಮುರಿದು ಬಿದ್ದಿವೆ. ಇವುಗಳನ್ನು ನಗರದ ಹೊರವಲಯದಲ್ಲಿ 8 ಸ್ಥಳಗಳಲ್ಲಿ ತಾತ್ಕಾಲಿಕ ಡಿಪೋಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಮುಂಗಾರು ಮಳೆ ಸಂದರ್ಭಕ್ಕೆ 16 ಸ್ಥಳಗಳಲ್ಲಿ ತಾತ್ಕಾಲಿಕ ಡಿಪೋ ತೆರೆಯಲು ಕೆರೆ, ಸ್ಮಶಾನ ಪ್ರದೇಶ ಗುರುತಿಸಲಾಗಿದೆ. ಪ್ರಸ್ತುತ ರಸ್ತೆ ಮಧ್ಯೆ ಬಿದ್ದ ಮರಗಳನ್ನು ಪಕ್ಕಕ್ಕೆ ಸರಿಸಲಾಗಿದೆ ಎಂದು ಪಾಲಿಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಕನ್ನಡಪ್ರಭಕ್ಕೆ ತಿಳಿಸಿದರು.\B&lt;/p&gt;&lt;h3&gt;&lt;strong&gt;ನಗರದಲ್ಲಿನ ತಾತ್ಕಾಲಿಕ ಡಿಪೋಗಳು&lt;/strong&gt;&lt;/h3&gt;&lt;p&gt;ಉತ್ತರ ಪಾಲಿಕೆ ವ್ಯಾಪ್ತಿ, ಅಟ್ಟೂರು ಕೆರೆ ಬಳಿ ಅಟ್ಟೂರು ಡಿಪೋ, ಶೆಟ್ಟಿಹಳ್ಳಿ ನರ್ಸರಿ ಎದುರು ದಾಸರಹಳ್ಳಿ, ಪೂರ್ವ ಪಾಲಿಕೆ ವ್ಯಾಪ್ತಿಯ ಡಿಪೋ, ಕೆಂಪಾಪುರ ನರ್ಸರಿ, ಮಹದೇವಪುರ, ಕೇಂದ್ರ ಪಾಲಿಕೆ ವ್ಯಾಪ್ತಿಯ ಡಿಪೋ, ಕಲ್ಪಳ್ಳಿ ಸ್ಮಶಾನ ಮೈದಾನ, ದಕ್ಷಿಣ ಪಾಲಿಕೆ ವ್ಯಾಪ್ತಿಯ ಡಿಪೋ, ಕೂಡ್ಲು ನರ್ಸರಿ, ಮಡಿವಾಳ ಕೆರೆ ಮೈದಾನ, ಪಶ್ಚಿಮ ಪಾಲಿಕೆ ವ್ಯಾಪ್ತಿಯ ಡಿಪೋ, ಸುಮ್ಮನಹಳ್ಳಿ ಕುಷ್ಠರೋಗ ಆಸ್ಪತ್ರೆ ಹಿಂಭಾಗ ಜ್ಞಾನಭಾರತಿ ನರ್ಸರಿ.&lt;/p&gt;&lt;h3&gt;&lt;strong&gt;ಏಪ್ರಿಲ್ 29ರಂದು ಗಾಳಿ ಮಳೆಗೆ ಬಿದ್ದ ಮರಗಳ ವಿವರ&lt;/strong&gt;&lt;/h3&gt;&lt;p&gt;ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿ: ಸಿ.ವಿ.ರಾಮನ್ ನಗರ- 18, ಶಾಂತಿನಗರ- 19, ಗಾಂಧಿನಗರ-26, ಶಿವಾಜಿನಗರ-25, ಚಾಮರಾಜಪೇಟೆ-18, ಚಿಕ್ಕಪೇಟೆ-15, ದಕ್ಷಿಣ ಪಾಲಿಕೆ , ಬೊಮ್ಮನಹಳ್ಳಿ-10, ಬೆಂಗಳೂರು ದಕ್ಷಿಣ-12, ಬಿಟಿಎಂ ಲೇ ಔಟ್ -14, ಜಯನಗರ- 16, ಪದ್ಮನಾಭನಗರ (4 ವಾರ್ಡ್ ಗಳು)-10.&lt;/p&gt;&lt;p&gt;ಬೆಂಗಳೂರು ಪಶ್ಚಿಮ ಪಾಲಿಕೆ: ಮಲ್ಲೇಶ್ವರಂ-18, ರಾಜಾಜಿನಗರ-22, ಮಹಾಲಕ್ಷ್ಮಿಲೇ ಔಟ್ -20, ವಿಜಯನಗರ-16, ಗೋವಿಂದರಾಜನಗರ-12, ಆರ್.ಆರ್.ನಗರ-10, ಯಶವಂತಪುರ-10, ದಾಸರಹಳ್ಳಿ(4 ವಾರ್ಡ್)-6, ಬಸವನಗುಡಿ-23, ಪದ್ಮನಾಭನಗರ (4 ವಾರ್ಡ್)-15&lt;/p&gt;&lt;p&gt;ಬೆಂಗಳೂರು ಉತ್ತರ ಪಾಲಿಕೆ: ದಾಸರಹಳ್ಳಿ/ಆರ್.ಆರ್.ನಗರ-9, ಹೆಬ್ಬಾಳ-4, ಯಲಹಂಕ-5, ಬ್ಯಾಟರಾಯನಪುರ-3, ಸರ್ವಜ್ಞನಗರ-7, ಪುಲಿಕೇಶಿನಗರ-7, ಬೆಂಗಳೂರು ಪೂರ್ವ ಪಾಲಿಕೆ: ಮಹದೇವಪುರ-4, ಕೆ.ಆರ್.ಪುರ-2&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/even-after-10-days-of-rain-greater-bengaluru-authority-is-struggling-to-collect-fallen-trees-mrq/articleshow-pyuqz4k"/>
        </item>
        <item>
            <title><![CDATA[ಬೈಕ್‌ ಸವಾರನ ಸಾವಿಗೆ ಕಾರಣನಾಗಿದ್ದ ವ್ಯಕ್ತಿಗೆ 1 ವರ್ಷದ ಬದಲು 1 ದಿನ ಜೈಲು: ಹೈಕೋರ್ಟ್]]></title>
            <link>https://kannada.asianetnews.com/state/man-who-caused-biker-s-death-gets-1-day-in-jail-instead-of-1-year-karnataka-high-court-mrq/articleshow-r8sgm86</link>
            <guid isPermaLink="true">https://kannada.asianetnews.com/state/man-who-caused-biker-s-death-gets-1-day-in-jail-instead-of-1-year-karnataka-high-court-mrq/articleshow-r8sgm86</guid>
            <pubDate>Mon, 11 May 2026 05:34:44 +0530</pubDate>
            <description><![CDATA[14 ವರ್ಷಗಳ ಹಿಂದೆ ಕಾರು ಟೆಸ್ಟ್ ಡ್ರೈವ್ ವೇಳೆ ಬೈಕ್ ಸವಾರನ ಸಾವಿಗೆ ಕಾರಣರಾದ 78 ವರ್ಷದ ವೃದ್ಧನಿಗೆ ಹೈಕೋರ್ಟ್ ಮಾನವೀಯತೆ ತೋರಿದೆ. ಗಾಲಿ ಕುರ್ಚಿಯಲ್ಲಿರುವ ಆರೋಪಿಯ ಒಂದು ವರ್ಷದ ಜೈಲು ಶಿಕ್ಷೆಯನ್ನು ಒಂದು ದಿನಕ್ಕೆ ಇಳಿಸಿ, ಮೃತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k5xvrhbtf3jycpmrdj3gwwck,imgname-karnataka-high-court-1758717560186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವೆಂಕಟೇಶ್&zwnj; ಕಲಿಪಿ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು: &lt;/strong&gt;14 ವರ್ಷದ ಹಿಂದೆ ಕಾರು ಟೆಸ್ಟ್ ಡ್ರೈವ್ ವೇಳೆ ಅಪಘಾತ ನಡೆಸಿ ಬೈಕ್ ಸವಾರನ ಸಾವಿಗೆ ಕಾರಣರಾದ ವ್ಯಕ್ತಿಗೆ 78 ವರ್ಷವಾಗಿ ಗಾಲಿ ಕುರ್ಚಿಯಲ್ಲಿ ಜೀವನ ನಡೆಸುತ್ತಿರುವುದನ್ನು&zwnj; ಪರಿಗಣಿಸಿದ ಹೈಕೋರ್ಟ್, ಆತನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ 1 ವರ್ಷದ ಜೈಲು ಶಿಕ್ಷೆಯನ್ನು ಒಂದು ದಿನಕ್ಕೆ ಮಾರ್ಪಡಿಸಿ ಮಾನವೀಯತೆ ಮೆರೆದಿದೆ.&lt;/p&gt;&lt;p&gt;ವಿಚಾರಣಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಆರೋಪಿ ಮೈಸೂರಿನ ಸಯ್ಯದ್ ಸೈಫುದ್ದೀನ್ (78) ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಅಪರೂಪದ ಆದೇಶ ಮಾಡಿದೆ.&lt;/p&gt;&lt;p&gt;ಅರ್ಜಿ ಇತ್ತೀಚಿಗೆ ವಿಚಾರಣೆಗೆ ಬಂದಾಗ ಅರ್ಜಿದಾರ ಆರೋಪಿಯು ಗಾಲಿ ಕುರ್ಚಿಯಲ್ಲಿ ಬಂದು ನ್ಯಾಯಾಲಯದ ಮುಂದೆಗೆ ಹಾಜರಾಗಿದ್ದರು. ಪುತ್ರನ ನೆರವಿನಿಂದ ಆರೋಪಿ ಕೋರ್ಟ್&zwnj;ಗೆ ಹಾಜರಾಗಿದ್ದರು. ಈ ವೇಳೆ, ಪ್ರಕರಣ ಸಂಬಂಧ ಮೋಟಾರು ವಾಹನ ಅಪಘಾತ ಕ್ಲೇಮು&zwnj; ನ್ಯಾಯಾಧೀಕರಣ ಘೋಷಿಸಿದ ಪರಿಹಾರವಲ್ಲದೇ, ಮೃತನ ಕುಟುಂಬದ ಅವಲಂಬಿತರಿಗೆ 5 ಲಕ್ಷ ರು. ಪರಿಹಾರವನ್ನು ತಾವು ನೀಡುತ್ತೇವೆ. ಅದನ್ನು&zwnj; ಪರಿಗಣಿಸಿ ಜೈಲು ಶಿಕ್ಷೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದರು.&lt;/p&gt;&lt;p&gt;ಈ ಅಂಶ ಪರಿಗಣಿಸಿದ ಹೈಕೋರ್ಟ್, ಘಟನೆಯು 2012ರ ಜು.28ರಂದು ನಡೆದಿದೆ.&zwnj; ಅರ್ಜಿದಾರರು ವಯೋವೃದ್ಧರಾಗಿದ್ದು ಗಾಲಿ ಕುರ್ಚಿಯನ್ನು ಅವಲಂಬಿಸಿದ್ದಾರೆ. ಮತ್ತೊಬ್ಬರ ಸಹಾಯವಿಲ್ಲದೆ ದಿನದ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಾಗೂ ಘಟನೆ ನಡೆದು ನಂತರ ಸಾಕಷ್ಟು ಸಮಯ ಕಳೆದಿರುವ ಕಾರಣ ಅರ್ಜಿದಾರರನ್ನು ಈಗ ಶಿಕ್ಷೆ ಅನುಭವಿಸಲು ಜೈಲಿಗೆ ಕಳಿಸುವುದರಿಂದ ಯಾವುದೇ ಉಪಯುಕ್ತ ಉದ್ದೇಶ ಈಡೇರುವುದಿಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.&lt;/p&gt;&lt;h2&gt;&lt;strong&gt;1 ವರ್ಷದ ಜೈಲು ಶಿಕ್ಷೆಯನ್ನು 1 ದಿನಕ್ಕೆ&lt;/strong&gt;&lt;/h2&gt;&lt;p&gt;ಅರ್ಜಿದಾರರ ಆರೋಗ್ಯ ಪರಿಸ್ಥಿತಿ ಮತ್ತು ಪ್ರಕರಣ ವಿಚಿತ್ರ ಸನ್ನಿವೇಶವನ್ನು ಪರಿಗಣನೆಗೆ ತೆಗೆದುಕೊಂಡು 1 ವರ್ಷದ ಜೈಲು ಶಿಕ್ಷೆಯನ್ನು 1 ದಿನಕ್ಕೆ (ನ್ಯಾಯಾಲಯದ ಕಲಾಪ ಅವಧಿ ಮುಗಿಯುವ ಸಮಯದವರೆಗೆ) ಕಡಿತಗೊಳಿಸಿ ಅಧೀನ ನ್ಯಾಯಾಲಯ ಆದೇಶ ಮಾರ್ಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.&lt;/p&gt;&lt;p&gt;ಅಂತಿಮವಾಗಿ ಮೇ 15ರ ಒಳಗೆ 5 ಲಕ್ಷ ರು.&zwnj; ಪರಿಹಾರವನ್ನು ವಿಚಾರಣಾ ನ್ಯಾಯಾಲಯಕ್ಕೆ ಪಾವತಿಸಬೇಕು. ಆ ನ್ಯಾಯಾಲಯ ಮೃತನ ಅಲವಂಬಿತರನ್ನು ಗುರುತಿಸಿ ಪರಿಹಾರ ಹಣ ಪಾವತಿಸಬೇಕು.&zwnj; ಅರ್ಜಿದಾರರು ಒಂದೊಮ್ಮೆ ಮೇ 15ರೊಳಗೆ ಐದು ಲಕ್ಷ ರು. ಪರಿಹಾರ ಪಾವತಿಸಲು ವಿಫಲವಾದರೆ ವಿಚಾರಣಾ ನ್ಯಾಯಾಲಯದ ಆದೇಶದಂತೆ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಹೈಕೋರ್ಟ್ ಆದೇಶಿಸಿ, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.&lt;/p&gt;&lt;h3&gt;&lt;strong&gt;ಪ್ರಕರಣವೇನು?&lt;/strong&gt;&lt;/h3&gt;&lt;p&gt;ಅರ್ಜಿದಾರರು 2012ರ ಜು.28ರಂದು ಕಾರನ್ನು ಟೆಸ್ಟ್ ಡ್ರೈವ್ ಮಾಡುತ್ತಿದ್ದಾಗ ಬೈಕ್ ಸವಾರರಿಗೆ ಢಿಕ್ಕಿ ಹೊಡೆದಿದ್ದರು.&zwnj; ಈ ಅಪಘಾತದಿಂದ ಸವಾರ ಸಾವನ್ನಪ್ಪಿದ್ದ. ಪ್ರಕರಣ ದಾಖಲಿಸಿ ತನಿಖೆ ಪೂರ್ಣಗೊಳಿಸಿದ ನರಸಿಂಹರಾಜ ಸಂಚಾರ ಠಾಣಾ&zwnj; ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ್ದ ಮೈಸೂರಿನ 3ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯವು ಸೈಫುದ್ದೀನ್ ಅವರನ್ನು ಭಾರತೀಯ ದಂಡ ಸಂಹಿತೆ ವಿವಿಧ ಕಲಂ ಅಡಿ ದೋಷಿಯಾಗಿ ತೀರ್ಮಾನಿಸಿತ್ತು. ಜೊತೆಗೆ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ 2018ರ ಮಾ.26ರಂದು ಆದೇಶಿಸಿತ್ತು.&amp;nbsp;&lt;/p&gt;&lt;p&gt;ಈ ಆದೇಶವನ್ನು ಪ್ರಶ್ನಿಸಿ ಸೈಫುದ್ದೀನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ 2ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಸಿಜೆಎಂ ನ್ಯಾಯಾಲಯದ ಆದೇಶ ಪುರಸ್ಕರಿಸಿ 2018ರ ಆ.9ರಂದು ಆದೇಶಿಸಿತ್ತು. ಇದರಿಂದ ಸೈಫುದ್ದೀನ್ ಅವರು ಹೈಕೋರ್ಟ್ ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.&zwnj;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/man-who-caused-biker-s-death-gets-1-day-in-jail-instead-of-1-year-karnataka-high-court-mrq/articleshow-r8sgm86"/>
        </item>
        <item>
            <title><![CDATA[ಪ್ರಧಾನಿ ಮೋದಿ ಮಾರ್ಗದಲ್ಲಿ ಪತ್ತೆಯಾದ ಜಿಲೆಟಿನ್‌ ಕಡ್ಡಿಗಳು ಪತ್ತೆ; ಓರ್ವ ಶಂಕಿತನ ಬಂಧನ]]></title>
            <link>https://kannada.asianetnews.com/state/gelatin-sticks-found-on-pm-narendra-modi-s-route-suspect-arrested-mrq/articleshow-dlhn5zx</link>
            <guid isPermaLink="true">https://kannada.asianetnews.com/state/gelatin-sticks-found-on-pm-narendra-modi-s-route-suspect-arrested-mrq/articleshow-dlhn5zx</guid>
            <pubDate>Mon, 11 May 2026 05:20:59 +0530</pubDate>
            <description><![CDATA[ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟ್&zwnj; ಆಫ್&zwnj; ಲಿವಿಂಗ್&zwnj; ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಎರಡು ಜಿಲೆಟಿನ್&zwnj; ಕಡ್ಡಿಗಳು ಪತ್ತೆಯಾಗಿ ಆತಂಕ ಸೃಷ್ಟಿಸಿವೆ. ಈ ಸಂಬಂಧ ಸ್ಫೋಟದ ಬೆದರಿಕೆ ಕರೆ ಮಾಡಿದ್ದ ಶಂಕಿತನನ್ನು ವಶಕ್ಕೆ ಪಡೆಯಲಾಗಿದ್ದು, ಭದ್ರತಾ ಲೋಪದ ಕುರಿತು ತನಿಖೆಗಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmwfb0qby460rpjnejne8600,imgname-fotojet--25--1774777107179.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ರಾಮನಗರ: &amp;nbsp;&lt;/strong&gt;ಆರ್ಟ್&zwnj; ಆಫ್&zwnj; ಲಿವಿಂಗ್&zwnj; ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಭಾನುವಾರ ಬೆಳಗ್ಗೆ ಎರಡು ಜಿಲೆಟಿನ್&zwnj; ಕಡ್ಡಿಗಳು ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;p&gt;ಕನಕಪುರ ರಸ್ತೆಯಲ್ಲಿರುವ ಆರ್ಟ್&zwnj; ಆಫ್&zwnj; ಲಿವಿಂಗ್&zwnj;ನ ಧ್ಯಾನಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ತೆರಳುವ ಒಂದೂವರೆ ತಾಸು ಮೊದಲು ಕಗ್ಗಲೀಪುರ ಪೊಲೀಸ್&zwnj; ಠಾಣಾ ವ್ಯಾಪ್ತಿಯ ತಾತಗುಣಿ ಬಳಿಯ ಒಡೆಯರಹಳ್ಳಿ ಗೇಟ್&zwnj; ಬಳಿ ಬೆಳಗ್ಗೆ 10.30ರ ಸುಮಾರಿಗೆ ಈ ಜಿಲೆಟಿನ್&zwnj; ಕಡ್ಡಿಗಳು ಪತ್ತೆಯಾಗಿವೆ.&lt;/p&gt;&lt;p&gt;ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದ್ದು, ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ, ಪ್ರಕರಣ ಕುರಿತು ತನಿಖೆಗೆ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತನಿಖಾ ತಂಡಗಳನ್ನೂ ರಚಿಸಲಾಗಿದೆ.&lt;/p&gt;&lt;h2&gt;&lt;strong&gt;ಅನುಮಾನಾಸ್ಪದ ಪ್ಯಾಕೆಟ್&zwnj;ನಲ್ಲಿ ಪತ್ತೆ&lt;/strong&gt;&lt;/h2&gt;&lt;p&gt;ನೈಸ್ ರಸ್ತೆ ಜಂಕ್ಷನ್&zwnj;ನಿಂದ ಸುಮಾರು ಒಂದು ಕಿಲೋಮೀಟರ್ ಹಾಗೂ ರಸ್ತೆಯಿಂದ ಸುಮಾರು 50 ಮೀಟರ್&zwnj; ದೂರದಲ್ಲಿರುವ ಕಾಂಪೌಂಡ್ ಬಳಿ ಅನುಮಾನಾಸ್ಪದ ಪ್ಯಾಕೆಟ್ ಒಂದನ್ನು ಕರ್ತವ್ಯ ನಿರತ ಕಾನ್&zwnj;ಸ್ಟೆಬಲ್&zwnj; ಗಮನಿಸಿದ್ದಾರೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಕಂಡುಬಂದಿದೆ. ತಕ್ಷಣ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆ್ಯಂಟಿ ಸಬೊಟೇಜ್ ಚೆಕ್ (ಎಎಸ್&zwnj;ಸಿ) ತಂಡ, ಬಾಂಬ್&zwnj; ನಿಷ್ಕ್ರಿಯ ದಳ, ಎಫ್&zwnj;ಎಸ್&zwnj;ಎಲ್&zwnj; ತಂಡ ಸ್ಥಳಕ್ಕೆ ದೌಡಾಯಿಸಿ ತೀವ್ರ ತಪಾಸಣೆ ನಡೆಸಿ ಜಿಲೆಟಿನ್ ಕಡ್ಡಿಗಳನ್ನು ತೆರವುಗೊಳಿಸಿದರು. ಯಾವುದೇ ಅಪಾಯವಿಲ್ಲ ಎಂದು ಖಚಿತವಾದ ನಂತರ ಪ್ರಧಾನಿಗಳು ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ಬೆಂಗಳೂರು ನಗರ ಪೊಲೀಸರು ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಹೈ ಅಲರ್ಟ್&zwnj;:&lt;/strong&gt;&lt;/h3&gt;&lt;p&gt;ಎಚ್&zwnj;ಎಎಲ್&zwnj; ವಿಮಾನ ನಿಲ್ದಾಣದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ ನಂತರ ಕನಕಪುರ ರಸ್ತೆಯಲ್ಲಿರುವ ಆರ್ಟ್&zwnj; ಆಫ್&zwnj; ಲಿವಿಂಗ್&zwnj;ನ ಧ್ಯಾನಮಂದಿರ ಉದ್ಘಾಟನೆಗೆ ಪ್ರಧಾನಿ ತೆರಳಬೇಕಿತ್ತು. ಆದರೆ ಅದಕ್ಕೂ ಮುನ್ನ ಜಿಲೆಟಿನ್&zwnj; ಕಡ್ಡಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್&zwnj; ಘೋಷಿಸಿದರು. ಎಚ್&zwnj;ಎಎಲ್&zwnj; ಏರ್&zwnj;ಪೋರ್ಟ್&zwnj;ನಿಂದ ಕನಕಪುರ ರಸ್ತೆಯಲ್ಲಿರುವ ಆರ್ಟ್&zwnj; ಆಫ್&zwnj; ಲಿವಿಂಗ್&zwnj;ವರೆಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಯಾವುದೇ ಅನಾಹುತ ಸಂಭವಿಸದ ಹಿನ್ನೆಲೆಯಲ್ಲಿ ಪೊಲೀಸರು ನಿಟ್ಟುಸಿರು ಬಿಟ್ಟರು.&lt;/p&gt;&lt;p&gt;ಪ್ರಧಾನಿ ಸಾಗುವ ದಾರಿ ಉದ್ದಕ್ಕೂ 7 ಹಂತದ ಭದ್ರತೆ ಕಲ್ಪಿಸಲಾಗಿರುತ್ತದೆ. ಅಲ್ಲದೆ ಒಂದು ವಾರ ಮುಂಚಿತವಾಗಿ ತೀವ್ರ ಪರಿಶೀಲನೆ ನಡೆಸುತ್ತಾರೆ. ಇದರ ನಡುವೆಯೂ ಜಿಲೆಟಿನ್&zwnj; ಕಡ್ಡಿಗಳು ಪತ್ತೆಯಾಗಿರುವುದು ಪೊಲೀಸರ ತಲೆ ಬಿಸಿ ಹೆಚ್ಚಿಸಿತ್ತು.&lt;/p&gt;&lt;h3&gt;&lt;strong&gt;ಅಪರಿಚಿತನ ಕರೆಯಿಂದ ಎಚ್ಚೆತ್ತ ಪೊಲೀಸರು&lt;/strong&gt;&lt;/h3&gt;&lt;p&gt;ಬೆಳಗ್ಗೆ 8 ಗಂಟೆ ಸುಮಾರಿಗೆ ತುರ್ತು ಸಹಾಯವಾಣಿ 112ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಆರ್ಟ್ ಆಫ್ ಲಿವಿಂಗ್ ಬಳಿ ಸ್ಫೋಟ ನಡೆಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ತಕ್ಷಣ ಅಲರ್ಟ್ ಆದ ಬೆಂಗಳೂರು ಮತ್ತು ರಾಮನಗರ ಪೊಲೀಸರು ತಪಾಸಣೆ ಚುರುಕುಗೊಳಿಸಿದ್ದರು. ಬೆಂಗಳೂರು ಪೊಲೀಸರು ತಕ್ಷಣ ಎಚ್&zwnj;ಎಎಲ್&zwnj; ಬಳಿ ತೀವ್ರ ಶೋಧ ನಡೆಸಿದ್ದಾರೆ. ಈ ಮಧ್ಯೆ, ರಾಮನಗರ ಪೊಲೀಸರು ಆರ್ಟ್&zwnj; ಆಫ್&zwnj; ಲಿವಿಂಗ್&zwnj; ಸುತ್ತಮುತ್ತ ತೀವ್ರ ತಪಾಸಣೆ ನಡೆಸಿದಾಗ ಆಶ್ರಮದ ಹೊರಗಿನ ರಸ್ತೆಯ 50 ಮೀಟರ್&zwnj; ದೂರದಲ್ಲಿ ಕಸದ ಬಳಿ 5 ಇಂಚಿನ ಎರಡು ಜಿಲೆಟಿನ್&zwnj; ಕಡ್ಡಿಗಳು ಪತ್ತೆಯಾಗಿದೆ.&lt;/p&gt;&lt;h3&gt;&lt;strong&gt;ಬೆದರಿಕೆ ಹಾಕಿದವನನ್ನು ವಶಕ್ಕೆ ಪಡೆದು ವಿಚಾರಣೆ&amp;nbsp;&lt;/strong&gt;&lt;/h3&gt;&lt;p&gt;ಸ್ಫೋಟದ ಬೆದರಿಕೆ ಕರೆ ಮಾಡಿದ್ದ ಶಂಕೆ ಮೇರೆಗೆ ಕೋರಮಂಗಲ ಠಾಣೆ ಪೊಲೀಸರು ಲೋಹಿತ್&zwnj; (40) ಎಂಬಾತನನ್ನು ಕೋರಮಂಗಲದ ಕೆಎಚ್&zwnj;ಬಿ ಕಾಲೊನಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಈತನನ್ನು ರಹಸ್ಯ ಸ್ಥಳದಲ್ಲಿರಿಸಿ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್&zwnj; ಸುಜಿತಾ ಅವರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಈತ ಹಿಂದೆಯೂ ಗಣ್ಯರು ನಗರಕ್ಕೆ ಬಂದಾಗಲೆಲ್ಲ ಇದೇ ರೀತಿ ಹುಸಿ ಬಾಂಬ್ ಕರೆ ಮಾಡುತ್ತಿದ್ದ ವಿಷಯ ಬಯಲಾಗಿದೆ. ಹಿಂದೆ ಈತನನ್ನು ವಶಕ್ಕೆ ಪಡೆದಿದ್ದಾಗ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಕಾರಣಕ್ಕೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿಕೊಡಲಾಗಿತ್ತು. ಲೋಹಿತ್&zwnj; ಪದವೀಧರನಾಗಿದ್ದು, ಈತನ ತಂದೆ-ತಾಯಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಕೌಟುಂಬಿಕ ವಿಚಾರದಿಂದಾಗಿ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.&lt;/p&gt;&lt;h3&gt;&lt;strong&gt;ತನಿಖೆಗಾಗಿ ನಾಲ್ಕು ತಂಡ ರಚನೆ&lt;/strong&gt;&lt;/h3&gt;&lt;p&gt;ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣದ ತನಿಖೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ 50 ಪೊಲೀಸರನ್ನೊಳಗೊಂಡ ನಾಲ್ಕು ತಂಡಗಳನ್ನು ರಚಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ ಶ್ರೀನಿವಾಸ್&zwnj; ಗೌಡ ಆದೇಶಿಸಿದ್ದಾರೆ. ಜಿಲೆಟಿನ್ ಕಡ್ಡಿ ಹೇಗೆ ಬಂತು? ಯಾರು ತಂದು ಹಾಕಿದ್ದಾರೆ? ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಪತ್ತೆಯಾದ ಜಿಲೆಟಿನ್ ಕಡ್ಡಿಗಳು ಕಲ್ಲು ಕ್ವಾರಿ ಸ್ಫೋಟಿಸಲು ಬಳಸುವಂಥ ಸ್ಫೋಟಕ ಎಂಬ ಅನುಮಾನದ ಮೇರೆಗೆ ತಾತಗುಣಿ ಸುತ್ತಮುತ್ತಲಿನ ಕಾರ್ಮಿಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;p&gt;ತಾತಗುಣಿ ಸಮೀಪದ ಆಶ್ರಮದ ಹೊರಗಡೆ ಎರಡು ಜಿಲೆಟಿನ್ ಕಡ್ಡಿಗಳು ಸಿಕ್ಕಿದೆ. ಭಾನುವಾರ ಬೆಳಗ್ಗೆ ಕೋರಮಂಗಲ ಪೊಲೀಸರಿಗೆ ವ್ಯಕ್ತಿ ಓರ್ವ ಬೆದರಿಕೆ ಕರೆ ಮಾಡಿದ್ದ. ಆತನಿಗೂ ಈ ಜಿಲೆಟಿನ್&zwnj; ಕಡ್ಡಿಗೂ ಸಂಬಂಧ ಇದೆಯೇ, ಇಲ್ವೇ ಅಂತ ತನಿಖೆ ಮಾಡಲಾಗುತ್ತಿದೆ. ಜೆಲೆಟಿನ್ ಕಡ್ಡಿಗಳು ಯಾರು ಇಟ್ಟಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಅವರಿಗಾಗಿ ಹುಡುಕಾಟ ನಡೆಸಲಾಗಿದೆ.&lt;/p&gt;&lt;p&gt;&lt;strong&gt;ಗಿರೀಶ್, ಕೇಂದ್ರ ವಲಯ ಡಿಐಜಿ&lt;/strong&gt;&lt;/p&gt;&lt;p&gt;ಪ್ರಧಾನಿಗಳು ಬರುವ ಎರಡು ಗಂಟೆ ಮುಂಚಿತವಾಗಿ ಜಿಲೆಟಿನ್&zwnj; ಕಡ್ಡಿಗಳು ಪತ್ತೆಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಆಗಿಲ್ಲ. ಕಂಟ್ರೋಲ್ ರೂಂಗೆ ಬಂದಿರುವ ಕರೆಗೂ, ಈ ಘಟನೆಗೂ ಮೇಲ್ನೋಟಕ್ಕೆ ಸಂಬಂಧವಿಲ್ಲ ಅಂತ ಗೊತ್ತಾಗಿದೆ. ನಮ್ಮ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿ ಇನ್ನೂ ಯಾರು ಪತ್ತೆಯಾಗಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ವಿಶೇಷ ತಂಡ ರಚನೆ ಮಾಡಿ ತನಿಖೆ ಕೂಡ ನಡೆಸುತ್ತಿದ್ದೇವೆ.&lt;/p&gt;&lt;p&gt;ಶ್ರೀನಿವಾಸ್&zwnj; ಗೌಡ, ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ&lt;/p&gt;&lt;p&gt;&lt;strong&gt;ಜಿಲೆಟಿನ್&zwnj; ಕಡ್ಡಿ ಪತ್ತೆ ಭಾರೀ ಭದ್ರತಾ ಲೋಪ: ಬಿವೈವಿ&lt;/strong&gt;&lt;/p&gt;&lt;p&gt;ದೇಶದ ಪ್ರಧಾನಿಗಳ ನಿಗದಿತ ಸಂಚಾರದ ರಸ್ತೆಯಲ್ಲೇ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಗಂಭೀರ ಭದ್ರತಾ ಲೋಪ ಮಾತ್ರವಲ್ಲ, ರಾಜ್ಯದ ಕಾಂಗ್ರೆಸ್ ಸರ್ಕಾರದ ಗಂಭೀರ ವೈಫಲ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಮತ್ತು ಭದ್ರತೆ ಸಂಪೂರ್ಣ ಕುಸಿದಿದೆ. ಗರಿಷ್ಠ ಭದ್ರತೆ ನೀಡಬೇಕಾದ ದೇಶದ ಪ್ರಧಾನಮಂತ್ರಿ ಅವರ ಸುರಕ್ಷತೆ ವಿಷಯದಲ್ಲಿ ಕಿಂಚಿತ್ ಲೋಪಕ್ಕೂ ಅವಕಾಶ ನೀಡಬಾರದು ಎಂದಿದ್ದಾರೆ.&lt;/p&gt;&lt;p&gt;ಇಂತಹ ಸೂಕ್ಷ್ಮ, ಗಂಭೀರ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಶೀಘ್ರದಲ್ಲೇ ಕೂಲಂಕಷ ತನಿಖೆ ನಡೆಸಿ, ಕೃತ್ಯದ ಹಿಂದಿನ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಶಿಕ್ಷಿಸಬೇಕು. ಜೊತೆಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/gelatin-sticks-found-on-pm-narendra-modi-s-route-suspect-arrested-mrq/articleshow-dlhn5zx"/>
        </item>
        <item>
            <title><![CDATA[ಪೆಟ್ರೋಲ್‌ ಕಡಿಮೆ ಬಳಸಿ, 1 ವರ್ಷ ಚಿನ್ನ ಬಿಡಿ: ಬೆಲೆ ಏರಿಕೆ ನಡುವೆಯೇ ಪ್ರಧಾನಿ ಎಚ್ಚರಿಕೆ]]></title>
            <link>https://kannada.asianetnews.com/india-news/use-less-petrol-leave-gold-for-1-year-pm-narendra-modi-warns-amid-price-hike-mrq/articleshow-mchv9v1</link>
            <guid isPermaLink="true">https://kannada.asianetnews.com/india-news/use-less-petrol-leave-gold-for-1-year-pm-narendra-modi-warns-amid-price-hike-mrq/articleshow-mchv9v1</guid>
            <pubDate>Mon, 11 May 2026 05:14:20 +0530</pubDate>
            <description><![CDATA[ಮಧ್ಯಪ್ರಾಚ್ಯ ಯುದ್ಧದಿಂದಾಗಿ ಸಂಭವನೀಯ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರು ಸಾಮೂಹಿಕ ಭಾಗೀದಾರಿಕೆಗೆ ಕರೆ ನೀಡಿದ್ದಾರೆ. ಇಂಧನ ಬಳಕೆ ಕಡಿತ, ವರ್ಕ್&zwnj; ಫ್ರಂ ಹೋಂ, ಮತ್ತು ಒಂದು ವರ್ಷ ಚಿನ್ನದ ಖರೀದಿ ತಪ್ಪಿಸುವಂತಹ ಮಿತವ್ಯಯ ಕ್ರಮಗಳನ್ನು ಪಾಲಿಸುವಂತೆ ಅವರು ಜನರಿಗೆ ಸಲಹೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqc4k0psf7knbf2xjfbdpkdc,imgname-asianet-news-bangla-images-size---2026-04-29t133911.724-1777450189529.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್&zwnj;: &lt;/strong&gt;ಮಧ್ಯಪ್ರಾಚ್ಯ ಯುದ್ಧದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಭೀತಿ ಉಂಟಾಗಿರುವ ನಡುವೆಯೇ, ಎಚ್ಚರಿಕೆಯ ನುಡಿಗಳನ್ನು ಆಡಿರುವ ಪ್ರಧಾನಿ ನರೇಂದ್ರ ಮೋದಿ, &lsquo;ಅಂತಾರಾಷ್ಟ್ರೀಯ ಸಂಘರ್ಷಗಳಿಂದ ಆಗುತ್ತಿರುವ ಬೆಲೆ ಏರಿಕೆಗಳನ್ನು ಎದುರಿಸಲು ಎಲ್ಲರ ಸಾಮೂಹಿಕ ಭಾಗೀದಾರಿಕೆ ಅಗತ್ಯವಾಗಿದೆ&rsquo; ಎಂದು ಹೇಳಿದ್ದಾರೆ. ಈ ಮೂಲಕ ಪೆಟ್ರೋಲ್&zwnj;, ಡೀಸೆಲ್&zwnj; ಬೆಲೆ ಏರಿಕೆ ಸನ್ನಿಹಿತವಾಗಿದೆ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.&lt;/p&gt;&lt;p&gt;ಇದಲ್ಲದೆ, ಈ ಬೆಲೆ ಏರಿಕೆಯ ಆಘಾತ ಎದುರಿಸಲು ಮಿತವ್ಯಯ ಮಂತ್ರ ಪಠಿಸಿರುವ ಅವರು, &lsquo;ಕೊರೋನಾ ಕಾಲದಂತೆ ಜನರು ಮನೆಯಿಂದ ಕೆಲಸ ಮಾಡುವ (ವರ್ಕ್&zwnj; ಫ್ರಂ ಹೋಂ) ಪದ್ಧತಿಗಳನ್ನು ಪುನರುಜ್ಜೀವನಗೊಳಿಸಬೇಕು. ಇಂಧನ ಬಳಕೆ ಕಡಿತಗೊಳಿಸಬೇಕು ಮತ್ತು ದೇಶದ ವಿದೇಶಿ ವಿನಿಮಯ ಉಳಿತಾಯ ಆಗುವಂತೆ ಮಾಡಲು 1 ವರ್ಷದವರೆಗೆ ಮದುವೆ/ಸಮಾರಂಭಗಳಿಗೆ ಚಿನ್ನ ಖರೀದಿಸುವುದನ್ನು ತಪ್ಪಿಸಬೇಕು&rsquo; ಎಂದು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್&zwnj;ಗೆ ಸುಮಾರು 70 ಡಾಲರ್&zwnj;ಗಳಿಂದ ಸುಮಾರು 126 ಡಾಲರ್&zwnj;ಗೆ ಏರಿದ್ದು, ಮೇ 15ರೊಳಗೆ ಪೆಟ್ರೋಲ್&zwnj;, ಡೀಸೆಲ್ ಬೆಲೆ ಏರಿಕೆ ಸನ್ನಿಹಿತವಾಗಿದೆ ಎನ್ನಲಾಗಿದೆ. ಇದರ ನಡುವೆಯೇ ಮೋದಿ ಅವರ ಈ ಹೇಳಿಕೆ ಬಂದಿದೆ.&lt;/p&gt;&lt;h2&gt;&lt;strong&gt;ಮೋದಿ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ತೆಲಂಗಾಣದಲ್ಲಿ 9,400 ಕೋಟಿ ರು.ಗಳ ಅಭಿವೃದ್ಧಿ ಯೋಜನೆಗಳಿಗೆ ವರ್ಚುವಲ್&zwnj; ಮೂಲಕ ಚಾಲನೆ ನೀಡಿದ ಅ&zwj;ವರು, &lsquo;ಆಮದಾಗುವ ಪೆಟ್ರೋಲಿಯಂ ಉತ್ಪನ್ನಗಳನ್ನು ಜಾಗರೂಕವಾಗಿ ಬಳಸಬೇಕು. ಈ ರೀತಿಯ ನಡೆ ವಿದೇಶಿ ವಿನಿಮಯ ಉಳಿಸುವುದು ಮಾತ್ರವಲ್ಲದೆ, ಯುದ್ಧದ ಅಡ್ಡಪರಿಣಾಮ ತಗ್ಗಿಸಲೂ ನೆರವಾಗುತ್ತದೆ&rsquo; ಎಂದರು.&lt;/p&gt;&lt;p&gt;&lsquo;ಪೆಟ್ರೋಲ್ ಮತ್ತು ಡೀಸಲ್ ಬಳಕೆಯನ್ನು ಕಡಿಮೆ ಮಾಡಬೇಕು. ಇದಕ್ಕಾಗಿ:ಎಲ್ಲಿ ಲಭ್ಯವಿದೆಯೋ ಅಲ್ಲಿ ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆ ಬಳಸಬೇಕು. ಖಾಸಗಿ ವಾಹನ ಬಳಸುವಾಗ ಕಾರ್ ಪೂಲಿಂಗ್ ಮಾಡಬೇಕು. ಸರಕು ಸಾಗಾಟಕ್ಕೆ ರೈಲು ಸಾರಿಗೆಯನ್ನು ಆದ್ಯತೆಯಾಗಿ ಬಳಸಬೇಕು. ಸಾಧ್ಯವಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಬೇಕು. ಈ ರೀತಿಯ ಕೋವಿಡ್ ಕಾಲದ ಉಳಿತಾಯ ಮತ್ತು ದಕ್ಷತಾ ಕ್ರಮಗಳನ್ನು ರಾಷ್ಟ್ರೀಯ ಹಿತದೃಷ್ಟಿಯಿಂದ ಮತ್ತೆ ಅಳವಡಿಸಿಕೊಳ್ಳಬೇಕು&rsquo; ಎಂದು ಕರೆ ನೀಡಿದರು&lt;/p&gt;&lt;p&gt;ಇದಲ್ಲದೆ, &lsquo;ಕೋವಿಡ್&zwnj; ಕಾಲದಂತೆ ವರ್ಕ್ ಫ್ರಮ್ ಹೋಮ್ ಅಳವಡಿಸಿಕೊಳ್ಳಬೇಕು. ಆನ್&zwnj;ಲೈನ್ ಸಮ್ಮೇಳನ/ವರ್ಚುವಲ್ ಮೀಟಿಂಗ್&zwnj;ಗಳನ್ನು ಮಾಡಬೇಕು&rsquo; ಎಂದೂ ಮನವಿ ಮಾಡಿದರು.&lt;/p&gt;&lt;p&gt;ವಿದೇಶಿ ವಿನಿಮಯ ಮೀಸಲು ಉಳಿಸಲು ನಾಗರಿಕರು ಸಹಕರಿಸುವಂತೆ ಕೋರಿದ ಮೋದಿ, &lsquo;ಅನಗತ್ಯ ವಿದೇಶ ಪ್ರಯಾಣ ಮಾಡಬಾರದು. ವಿದೇಶಿ ರಜೆ ಮತ್ತು ವಿದೇಶಿ ಮದುವೆಗಳನ್ನು ತಪ್ಪಿಸಬೇಕು. ದೇಶೀಯ ಪ್ರವಾಸ ಮತ್ತು ದೇಶದೊಳಗೆಯೇ ಉತ್ಸವ-ಆಚರಣೆಗಳನ್ನು ನಡೆಸುವುದಕ್ಕೆ ಆದ್ಯತೆ ನೀಡಬೇಕು. 1 ವರ್ಷದವರೆಗೆ ಅನಗತ್ಯ ಚಿನ್ನದ ಖರೀದಿಯನ್ನು ತಪ್ಪಿಸಬೇಕು. ಇದು ವಿದೇಶಿ ವಿನಿಮಯ ಹರಿವಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ&rsquo; ಎಂದು ಕೋರಿದರು.&lt;/p&gt;&lt;p&gt;&lsquo;ದೇಶೀಯ ಉತ್ಪನ್ನಗಳನ್ನು (ಮೇಡ್ ಇನ್ ಇಂಡಿಯಾ) ಆದ್ಯತೆ ನೀಡುವಂತೆ ಕೂಡ ಮೋದಿ ಒತ್ತಾಯಿಸಿದರು. ದೈನಂದಿನ ಬಳಕೆಯ ವಸ್ತುಗಳಾದ ಬ್ಯಾಗ್, ಅಕ್ಸೆಸರೀಸ್&zwnj;ಗಳನ್ನು ಸಹ ಸ್ಥಳೀಯವಾಗಿ ತಯಾರಾದವುಗಳನ್ನೇ ಖರೀದಿಸಬೇಕು&rsquo; ಎಂದರು.&lt;/p&gt;&lt;h3&gt;&lt;strong&gt;ರೈತರಿಗೆ ಮನವಿ:&lt;/strong&gt;&lt;/h3&gt;&lt;p&gt;ಯುದ್ಧದಿಂದ ರಸಗೊಬ್ಬರ ಪೂರೈಕೆಗೂ ಏಟು ಬಿದ್ದಿರುವುದನ್ನು ಪ್ರಸ್ತಾಪಿಸಿದ ಅವರು, &lsquo;ರಾಸಾಯನಿಕ ಗೊಬ್ಬರ ಬಳಕೆಯನ್ನು ಶೇ,50ರಷ್ಟು ಕಡಿಮೆ ಮಾಡಬೇಕು. ಸಹಜ ಕೃಷಿ (ನ್ಯಾಚುರಲ್ ಫಾರ್ಮಿಂಗ್) ಕಡೆಗೆ ಗಮನ ನೀಡಬೇಕು. ಈ ಮೂಲಕ ಮಣ್ಣಿನ ಆರೋಗ್ಯ ರಕ್ಷಿಸಬೇಕು ಮತ್ತು ಆಮದು ಅವಲಂಬನೆ ಕಡಿಮೆ ಮಾಡಬೇಕು&rsquo; ಎಂದರು.&lt;/p&gt;&lt;p&gt;&lsquo;ಡೀಸಲ್ ಪಂಪುಗಳ ಬದಲು ಸೌರಶಕ್ತಿ ಚಾಲಿತ ನೀರಾವರಿ ಪಂಪುಗಳನ್ನು ಹೆಚ್ಚಾಗಿ ಬಳಸಬೇಕು. ಈ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ದೇಶದ ಆರ್ಥಿಕ ಸವಾಲುಗಳನ್ನು ಎದುರಿಸೋಣ. ಇಂದು, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ನಾವು ಆ ಅಭ್ಯಾಸಗಳನ್ನು ಪುನರಾರಂಭಿಸುವುದು ಇಂದಿನ ಅಗತ್ಯವಾಗಿದೆ. ನಾವು ಮತ್ತೊಮ್ಮೆ ಅವುಗಳಿಗೆ ಆದ್ಯತೆ ನೀಡಬೇಕು&rsquo; ಎಂದು ಕರೆ ನೀಡಿದರು.&lt;/p&gt;&lt;p&gt;&lsquo;ಕುಟುಂಬಗಳು ಎಣ್ಣೆ ಬಳಕೆ ಕಡಿಮೆ ಮಾಡುಬೇಕು&rsquo; ಎಂದು ಕೋರಿದ ಮೋದಿ &lsquo;ಇದು ರಾಷ್ಟ್ರೀಯ ಆರ್ಥಿಕತೆಗೂ ವೈಯಕ್ತಿಕ ಆರೋಗ್ಯಕ್ಕೂ ಒಳ್ಳೆಯದು&rsquo; ಎಂದರು.&lt;/p&gt;&lt;p&gt;&lt;strong&gt;ಸರ್ಕಾರದಿಂದ ಕ್ರಮ:&lt;/strong&gt;&lt;/p&gt;&lt;p&gt;ಕೇಂದ್ರ ಸರ್ಕಾರವು ಮೊದಲು ಎಲ್ಲರಿಗೂ ಎಲ್&zwnj;ಪಿಜಿ ಸಿಗುವಂತೆ ನೋಡಿಕೊಂಡಿದ್ದು, ಆ ಬಳಿಕ ಇದೀಗ ಕಡಿಮೆ ದರದಲ್ಲಿ ಪೈಪ್&zwnj;ಲೈನ್&zwnj; ಮೂಲಕ ಗ್ಯಾಸ್&zwnj; ಪೂರೈಕೆಗೆ ಗಮನ ಕೇಂದ್ರೀಕರಿಸಿದೆ. ಇದರ ಜತೆಗೆ ಸಿಎನ್&zwnj;ಜಿ ಆಧಾರಿತ ವ್ಯವಸ್ಥೆಗೂ ಉತ್ತೇಜನ ನೀಡುತ್ತಿದೆ. ಈ ಮೂರೂ ಪ್ರಯತ್ನಗಳಿಂದಾಗಿ ಭಾರತವು ಮಧ್ಯಪ್ರಾಚ್ಯ ಸಂಘರ್ಷದಿಂದ ಎದುರಾಗಿರುವ ಇಂಧನ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದರು.&lt;/p&gt;&lt;h3&gt;&lt;strong&gt;ಮೋದಿ ಅಷ್ಟ ಸಂದೇಶ- ಬೆಲೆ ಏರಿಕೆ ಎದುರಿಸಲು ಸಾಮೂಹಿಕ ಭಾಗೀದಾರಿಕೆ ಅಗತ್ಯ&lt;/strong&gt;&lt;/h3&gt;&lt;p&gt;1. ಕೊರೋನಾ ಟೈಂ ರೀತಿ ವರ್ಕ್&zwnj; ಫ್ರಂ ಹೋಮ್&zwnj; ಮರುಜಾರಿ&lt;/p&gt;&lt;p&gt;2. ಆನ್&zwnj;ಲೈನ್&zwnj;, ವರ್ಚ್ಯುವಲ್&zwnj; ಸಭೆ ನಡೆಸಲು ಕ್ರಮ ಕೈಗೊಳ್ಳಿ&lt;/p&gt;&lt;p&gt;3. ಸ್ವಂತ ವಾಹನ ಬಿಟ್ಟು ಬಸ್&zwnj;, ಮೆಟ್ರೋ, ರೈಲುಗಳನ್ನು ಬಳಸಿ&lt;/p&gt;&lt;p&gt;4. ಅನಗತ್ಯ ವಿದೇಶಿ ಪ್ರವಾಸ, ರಜೆ, ವಿದೇಶಿ ಮದುವೆ ತಪ್ಪಿಸಿ&lt;/p&gt;&lt;p&gt;5. ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಲು ಹೋಗಬೇಡಿ&lt;/p&gt;&lt;p&gt;6. ಗೊಬ್ಬರ ಬಳಕೆ ಶೇ.50 ಕಡಿತ. ಸಾವಯವ ಕೃಷಿಗೆ ಆದ್ಯತೆ&lt;/p&gt;&lt;p&gt;7. ಕೃಷಿಗೆ ಡೀಸೆಲ್&zwnj; ಬಿಟ್ಟು ಸೌರಶಕ್ತಿ ಪಂಪಸೆಟ್&zwnj; ಬಳಕೆಗೆ ಆದ್ಯತೆ&lt;/p&gt;&lt;p&gt;8. ಕೋವಿಡ್&zwnj; ಕಾಲದ ರೀತಿಯ ಮಿತವ್ಯಯ, ದಕ್ಷತೆ ಜಾರಿಯಾಗಬೇಕು&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/use-less-petrol-leave-gold-for-1-year-pm-narendra-modi-warns-amid-price-hike-mrq/articleshow-mchv9v1"/>
        </item>
        <item>
            <title><![CDATA[ದೇಶದ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ: ಸಚಿವ ಶಿವಾನಂದ ಪಾಟೀಲ]]></title>
            <link>https://kannada.asianetnews.com/karnataka-districts/minister-shivananda-patil-on-cooperative-sector-and-dcc-bank-gvd/articleshow-0op3g18</link>
            <guid isPermaLink="true">https://kannada.asianetnews.com/karnataka-districts/minister-shivananda-patil-on-cooperative-sector-and-dcc-bank-gvd/articleshow-0op3g18</guid>
            <pubDate>Mon, 11 May 2026 00:25:35 +0530</pubDate>
            <description><![CDATA[&lt;p&gt;ಸಹಕಾರಿ ಚಳವಳಿ ದೇಶದಲ್ಲಿ ದೊಡ್ಡ ಸಾಧನೆ ಮಾಡಿದೆ. ಬಡವರು ಆರ್ಥಿಕ ಸಧೃಡತೆಗೆ ಸಹಕಾರಿ ಕ್ಷೇತ್ರ ಸಹಕಾರಿಯಾಗಿದೆ. ಸಾಲ ಕೊಡುವುದು ಸುಲಭ ಆದರೆ ಸಾಲ ವಸೂಲಿ ಮಾಡುವುದು ಬಹಳ ಕಷ್ಟದ ಕೆಲಸ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hdv9x0kz2vxq49c8xyxh51mj,imgname-screenshot-2023-10-28-185239.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗುಳೇದಗುಡ್ಡ (ಮೇ.11):&lt;/strong&gt; ಸಹಕಾರಿ ಚಳವಳಿ ದೇಶದಲ್ಲಿ ದೊಡ್ಡ ಸಾಧನೆ ಮಾಡಿದೆ. ಬಡವರು ಆರ್ಥಿಕ ಸಧೃಡತೆಗೆ ಸಹಕಾರಿ ಕ್ಷೇತ್ರ ಸಹಕಾರಿಯಾಗಿದೆ. ಸಾಲ ಕೊಡುವುದು ಸುಲಭ ಆದರೆ ಸಾಲ ವಸೂಲಿ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ. ಸಂಜಯ ಬರಗುಂಡಿಯವರು ಸಹಕಾರಿ ಬ್ಯಾಂಕ್&zwnj;ನ್ನು 25 ವರ್ಷಗಳ ಮುನ್ನಡೆಸಿಕೊಂಡು ಬಂದು ಇಂದು ಸ್ವಂತ ಕಟ್ಟಡ ನಿರ್ಮಿಸಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.&lt;/p&gt;&lt;p&gt;ಪಟ್ಟಣದಲ್ಲಿ ಬಸವೇಶ್ವರ ಪತ್ತಿನ ಸಹಕಾರಿ ಸಂಘದ (25ನೇ ವಾರ್ಷಿಕೋತ್ಸವ) ರಜತ ಮಹೋತ್ಸವದ ಸಂದರ್ಭದಲ್ಲಿ ಬ್ಯಾಂಕಿನಲ್ಲಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಈ ದೇಶದಲ್ಲಿ ಸಹಕಾರಿ ಚಳವಳಿ ನಡೆಯದಿದ್ದರೆ ಬಡವರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬೆಳೆಯುವುದು ಕಷ್ಟವಾಗುತ್ತಿತ್ತು. ನೆಹರು, ವಲ್ಲಭಭಾಯಿ ಪಟೇಲರು ಸೇರಿ ಅನೇಕ ಮಹನೀಯರು ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಡೀ ದೇಶದಲ್ಲಿಯೇ ಹೆಚ್ಚಿನ ಸಾಲ ಸೌಲಭ್ಯ ಕೊಡುವ ಏಕೈಕ ಬ್ಯಾಂಕ್ ಬಾಗಲಕೋಟೆ, ವಿಜಯಪುರ ಡಿಸಿಸಿ ಬ್ಯಾಂಕ್ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಸಾಲಮನ್ನಾ&lt;/strong&gt;&lt;/h2&gt;&lt;p&gt;ಡಿಸಿಸಿ ಬ್ಯಾಂಕ್&zwnj; ರೈತರಿಗೆ ನೆರವಾಗಿದೆ. ಸಕಲಾಕ್ಕೆ ಸಾಲ ಸಿಗುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಲ ನೀಡಿದಂತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ರೀತಿಯಲ್ಲಿ ಇಲ್ಲ. ಅಲ್ಲದೆ ವಿಪತ್ತು, ಬರ ಪರಿಸ್ಥಿಗಳು ಎದುರಾದಾಗ ರಾಜ್ಯ ಸರಕಾರಗಳು ಮಾಡಿದ ಸಾಲ ಮನ್ನಾದಿಂದ ವಿಜಯಪುರ ಹಾಗೂ ಬಾಗಲಕೋಟೆ ಡಿಸಿಸಿ ಬ್ಯಾಂಕಿನಲ್ಲಿ ಸುಮಾರು ₹7500 ಕೋಟಿಯಷ್ಟು ಸಾಲಮನ್ನಾ ಆಗಿದೆ ಎಂದರು. ಇಳಕಲ್ ಚಿತ್ತರಗಿ ಸಂಸ್ಥಾನದ ಗುರುಮಹಾಂತ ಶ್ರೀಗಳು, ಕಮತಗಿ ಹೊಳೆಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.&lt;/p&gt;&lt;p&gt;ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಶಿವಾನಂದ ಉದುಪುಡಿ, ಮುರಗೇಶ ಕಡ್ಲಿಮಟ್ಟಿ, ಮಹಾಂತೇಶ ಮಮದಾಪೂರ, ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಜಯ ಬರಗುಂಡಿ, ಉಪಾಧ್ಯಕ್ಷ ಉಮೇಶ ಹುನಗುಂದ, ನಿರ್ದೇಶಕರಾದ ಚಂದ್ರಶೇಖರ ಹರವಿ, ಮುಪ್ಪಣ್ಣ ಶೀಲವಂತ, ರಮೇಶ ಅಗಸಿಮನಿ, ಚಂದ್ರು ಪಟ್ಟಣಶೆಟ್ಟಿ, ಸಂಗಪ್ಪ ಹಡಪದ, ಸಿದ್ಲಿಂಗಪ್ಪ ಬರಗುಂಡಿ, ಅಶೋಕ ಬರಗುಂಡಿ, ಮುತ್ತು ಮೊರಬದ, ರಾಚಣ್ಣ ಕೆರೂರು, ನಾಗಪ್ಪ ಚಿಂದಿ, ಬಸವರಾಜ ಬಂಡಿವಡ್ಡರ, ಶರಣಬಸಪ್ಪ ಚಿಕ್ಕನರಗುಂದ, ಮ್ಯಾನೇಜರ ರಮೇಶ ಹಡಪದ, ಸಂಗಮೇಶ ಜೋಗುರ ಸೇರಿದಂತೆ ಸೇರಿದಂತೆ ಇದ್ದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/minister-shivananda-patil-on-cooperative-sector-and-dcc-bank-gvd/articleshow-0op3g18"/>
        </item>
        <item>
            <title><![CDATA[ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ]]></title>
            <link>https://kannada.asianetnews.com/gallery/state/mother-breaks-down-after-leopard-kills-her-child-in-male-mahadeshwara-hills-iuxh2y5</link>
            <guid isPermaLink="true">https://kannada.asianetnews.com/gallery/state/mother-breaks-down-after-leopard-kills-her-child-in-male-mahadeshwara-hills-iuxh2y5</guid>
            <pubDate>Sun, 10 May 2026 22:48:52 +0530</pubDate>
            <description><![CDATA[&lt;p&gt;ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr9dztfkyh46fqqs4bk1769q,imgname-leopard-kills-child-mm-hills-1778433124851.png" type="image/jpeg" height="390" width="690"/>
            <content:encoded><![CDATA[&lt;p&gt;ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ತಾಯಿ ಜೊತೆ ದೇವರ ದರ್ಶನಕ್ಕಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಬೆಂಗಳೂರಿನ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ತಾಯಿ ಮುಂದೆ ಮಗನ ಎತ್ತಿಕೊಂಡು ಹೋದ ಚಿರತೆ ಕೊಂದು ಹಾಕಿದೆ. ಸುರೇಶ್ ಹಾಗೂ ಪವಿತ್ರ ದಂಪತಿಯ ಪುತ್ರ ಹರ್ಷಿತ್ ಗೌಡ ದುರಂತ ಅಂತ್ಯ ಕಂಡ ಬಾಲಕನ. ಇದೀಗ ಬಾಲಕನ ಮೃತದೇಹ ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸ ತಲುಪಿದೆ.&lt;/p&gt;&lt;img&gt;&lt;p&gt;ಇಂದು ಬೆಳಗ್ಗೆ 7.30 ಸುಮಾರಿಗೆ ಚಿರತೆ ದಾಳಿ ನಡೆಸಿದೆ. ಘಟನೆ ಕುರಿತು ಮೃತ ಬಾಲಕನ ತಂದೆ ಸುರೇಶ್ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೇವರ ದರ್ಶನಕ್ಕೆ ಹೋಗಿದ್ದ ಮಗ ಶವವಾಗಿ ಬಂದಿದ್ದಾನೆ. ನನ್ನ ಮಗನ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ತಂದೆ ಸುರೇಶ್ ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದ ಹೀಗಾಗಿದೆ. ನಾನು ಬೆಂಗಳೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಿಚಾರಿಸುವವರೆಗೂ ನಮ್ಮ ಮನೆಯವರಿಗೆ ಮಾಹಿತಿ ನೀಡಿಲ್ಲ. ನಾನು ಮಧ್ಯಾಹ್ನ 2.30ಕ್ಕೆ ಹೋಗಿ ವಿಚಾರಿಸಿದಾಗ ಮೃತದೇಹ ತಂದು ಕೊಟ್ಟರು. ಇನ್ನು ಮುಂದೆಯಾದ್ರೂ ಅರಣ್ಯ ಇಲಾಖೆಯವರು ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲಿ ಎಂದು ಸುರೇಶ್ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ನನ್ನ ಕಣ್ಣ ಮುಂದೆಯೇ ನನ್ನ ಮಗುವನ್ನು ಚಿರತೆ ಎತ್ತಿಕೊಂಡು ಹೊಯ್ತು. ನಾವು ಬೆದರಿಸಿದ್ರು ಮಗುವನ್ನು ಹೊತ್ತೊಯ್ದು ಕೊಂದು ಹಾಕಿದೆ. ನನ್ನ ಮಗ ನನ್ನ ಕಣ್ಮುಂದೆಯೇ ಸತ್ತು ಹೋಗಿದ್ದಾನೆ ಎಂದು ಹರ್ಷಿತ್ ತಾಯಿ ಪವಿತ್ರ ಕಣ್ಣೀರು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸರಿಯಾದ ಭದ್ರತೆ ಕೈಗೊಂಡಿಲ್ಲ. ಹುಲಿ, ಚಿರತೆ ಇದೆ ಅಂತ ಒಂದು ಎಚ್ಚರಿಕೆ ಬೋರ್ಡ್ ಕೂಡ ಹಾಕಿಲ್ಲ. ನಮಗೆ ಮೊದಲೇ ಗೊತ್ತಿದ್ರೆ ಅಲ್ಲಿ ಹೋಗ್ತಾನೆ ಇರಲಿಲ್ಲ ಎಂದು ಮೃತ ಬಾಲಕನ ತಾಯಿ ಪವಿತ್ರ ಕಣ್ಣೀರು ಹಾಕಿದ್ದಾರೆ.&lt;/p&gt;&lt;h2&gt;ಹುಲಿ ಚಿರತೆ ಇದೆ ಗೊತ್ತಿದ್ದರೆ ಹೋಗ್ತಾನೆ ಇರಲಿಲ್ಲ&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/mother-breaks-down-after-leopard-kills-her-child-in-male-mahadeshwara-hills-iuxh2y5"/>
        </item>
        <item>
            <title><![CDATA[ಯುದ್ಧ ಬೆನ್ನಲ್ಲೇ ಮೋದಿ ಮಹತ್ವದ ಸಂದೇಶ,  ಸಾರಿಗೆ ಬಳಕೆ, WFH ಸೇರಿ 8 ಸೂತ್ರ ಅನುಸರಿಸಲು ಸೂಚನೆ]]></title>
            <link>https://kannada.asianetnews.com/india-news/pm-modi-urges-citizens-to-follow-8-key-measures-including-wfh-amid-conflict-concerns/articleshow-wwy5r20</link>
            <guid isPermaLink="true">https://kannada.asianetnews.com/india-news/pm-modi-urges-citizens-to-follow-8-key-measures-including-wfh-amid-conflict-concerns/articleshow-wwy5r20</guid>
            <pubDate>Sun, 10 May 2026 22:28:16 +0530</pubDate>
            <description><![CDATA[&lt;p&gt;ವರ್ಕ್ ಫ್ರಮ್ ಹೋಮ್, ವಿದೇಶದಲ್ಲಿ ಮದುವೆ ಬೇಡ, ವಿದೇಶ ಯಾತ್ರೆ ಕಡಿತ, ಮನೆಯಿಂದ ಕೆಲಸ, ಇವಿ ವಾಹನ ಬಳಕೆ, ಅನಗತ್ಯ ಚಿನ್ನ ಖರೀದಿ ಬೇಡ ಸೇರಿದಂತೆ ಈ ಒಂದು ವರ್ಷ 8 ಸೂತ್ರ ಅನುಸರಿಸಲು ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr9d4zjkwcywrzgvnxhr2cy6,imgname-modi-1778432245330.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.10) &lt;/strong&gt;ಯುದ್ಧಗಳಿಂದ ಭಾರತ ಸೇರಿದಂತೆ ವಿಶ್ವದಲ್ಲೇ ಅನಿಲ, ಇಂಧನ ಕೊರತೆ ಎದುರಾಗಿದೆ. ಯುದ್ಧ ಕಾರ್ಮೋಡದಲ್ಲಿ ಸರಬರಾಜು ನಿಂತಿದೆ. ಇದರ ಪರಿಣಾಮ ಬೆಲೆ ಏರಿಕೆ ತೀವ್ರಗೊಂಡಿದೆ. ಇದು ಭಾರತದ ಆರ್ಥಿಕ ನೀತಿ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹೀಗಾಗಿ ಭಾರತೀಯರು ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆ ಮಾಡಲು ಪ್ರಧಾನಿ ಮೋದಿ ಸೂಚಿಸಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡುವುದು ಕೇವಲ ಗಡಿಯಲ್ಲಿ ಮಾತ್ರವಲ್ಲ, ನಾಗರೀಕರಾಗಿ ದೇಶದ ಅಗತ್ಯ ಅರಿತುಕೊಂಡು ಕೆಲ ತ್ಯಾಗ ಮಾಡಲು ಮೋದಿ ಸೂಚಿಸಿದ್ದಾರೆ. ಇಂಧನ, ವಿದೇಶಿ ವಿನಿಮಯ ಸಮಸ್ಯೆಗಳ ಪರಿಹರಿಸಲು ಮೋದಿ 8 ಸೂತ್ರ ಅನುಸರಿಸಲು ಸೂಚಿಸಿದ್ದಾರೆ.&lt;/p&gt;&lt;h2&gt;ಬೆಲೆ ಏರಿಕೆ ನಿಯಂತ್ರಣಕ್ಕೆ ಮೋದಿ ಸೂಚನೆ&lt;/h2&gt;&lt;p&gt;ವಿದೇಶಿ ವಿನಿಮಯ ಉಳಿಸಲು ಹಾಗೂ ಇಂಧನ ಮೇಲಿನ ಅವಲಂಬನೆ ಕಡಿಮೆ ಮಾಡಿ ಬೆಲೆ ಏರಿಕೆ ನಿಯಂತ್ರಿಸಲು ಕೆಲ ಕ್ರಮಗಳು ಅನಿವಾರ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ. ದೇಶದಲ್ಲಿ ಎದುರಾಗಿರುವ ಹಣದುಬ್ಬರ ಹಾಗೂ ಬೆಲೆ ಏರಿಕೆ ತಡೆಯಲು ಬದಲಾವಣೆಗೆ ಸೂಚಿಸಿದ್ದಾರೆ. ಪೆಟ್ರೋಲ್ ಡೀಸೆಲ್ ಬಳಕೆ ಕಡಿಮೆ ಮಾಡಲು ಸಾರಿಗೆ ವಾಹನ ಬಳಕೆ ಮಾಡಲು ಸೂಚಿಸಿದ್ದಾರೆ. ರೈಲು ಸೇವೆ, ಸಾರಿಗೆ ಬಸ್ ಸೇವೆ, ಕಾರ್ ಪುಲ್ಲಿಂಗ್ ಸೇರಿದಂತೆ ಹಲವು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.&lt;/p&gt;&lt;h2&gt;ವರ್ಕ್ ಫ್ರಮ್ ಹೋಮ್&zwnj;ಗೆ ಒತ್ತು ನೀಡಿದ ಮೋದಿ&lt;/h2&gt;&lt;p&gt;ಇದೇ ವೇಳೆ ಎಲೆಕ್ಟ್ರಿಕ್ ವಾಗನಗಳ ಬಳಕೆ ಮಾಡಲು ಮೋದಿ ಸೂಚಿಸಿದ್ದಾರೆ. ಕೋವಿಡ್ ಸಮಯದಲ್ಲಿ ಬಹುತೇಕರು ಮನೆಯಿಂದಲೇ ಕೆಲಸಕ್ಕೆ ( ವರ್ಕ್ ಫ್ರಮ್ ಹೋಮ್) ಒತ್ತು ನೀಡಿದ್ದರು. ಇದೀಗ ಇಂಧನ ಉಳಿತಾಯ ಹಾಗೂ ವಿದೇಶಿ ವಿನಿಮಯ ಉಳಿತಾಯಕ್ಕೂ ಮನೆಯಿಂದ ಕೆಲಸಕ್ಕೆ ಒತ್ತು ನೀಡುವಂತೆ ಮೋದಿ ಸೂಚಿಸಿದ್ದಾರೆ.&lt;/p&gt;&lt;h2&gt;ವಿದೇಶದಲ್ಲಿ ಮದುವೆಗಿಂತ ಭಾರತದಲ್ಲೇ ಮದುವೆ&lt;/h2&gt;&lt;p&gt;ವಿದೇಶದಲ್ಲಿ ಮದುವೆಯಾಗುವ ಬದಲು ಭಾರತದಲ್ಲೇ ಮದುವೆಯಾಗಲು ಮೋದಿ ಮನವಿ ಮಾಡಿದ್ದಾರೆ. ವಿದೇಶದಲ್ಲಿ ಅದ್ಧೂರಿ ವಿವಾಹ ಮಾಡುವುದರಿಂದ ದೇಶದ ಹಣ ವಿದೇಶಗಳಲ್ಲಿ ಖರ್ಚಾಗುತ್ತಿದೆ. ಇದರ ಬದಲು ವೆಡ್ ಇನ್ ಇಂಡಿಯಾಗೆ ಒತ್ತು ನೀಡಬೇಕು ಎಂದಿದ್ದಾರೆ. ಇದರಿಂದ ಸ್ಥಳೀಯ ಉದ್ಯೋಗವಕಾಶದ ಜೊತೆ ಆರ್ಥಿಕತೆಗೂ ಬಲ ನೀಡಲಿದೆ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;India continues to scale new heights of progress but at the same time there are several challenges we have to overcome.&amp;nbsp;Here is my appeal to my fellow Indians. pic.twitter.com/vIz1nT2EF6&lt;/p&gt;&lt;p&gt;&mdash; Narendra Modi (@narendramodi) May 10, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;ಅನಗತ್ಯ ಚಿನ್ನ ಖರೀದಿ ಬೇಡ&lt;/h2&gt;&lt;p&gt;ಕನಿಷ್ಠ ಒಂದು ವರ್ಷ ಭಾರತೀಯರು ಅನಗತ್ಯ ಚಿನ್ನ ಖರೀದಿಗೆ ಮಾಡುವುದು ತಪ್ಪಿಸಲು ಸೂಚಿಸಿದ್ದಾರೆ. ಅಗತ್ಯವಿಲ್ಲದ, ಅನಿವಾರ್ಯವಲ್ಲದ ಚಿನ್ನ ಖರೀದಿ ಒಂದು ವರ್ಷ ಮುಂದೂಡಿ ಎಂದಿದ್ದಾರೆ. ಭಾರತ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಈ ಆಮದು ಕಡಿಮೆ ಮಾಡಲು ಮೋದಿ ಮನವಿ ಮಾಡಿದ್ದಾರೆ.&lt;/p&gt;&lt;h2&gt;ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ&lt;/h2&gt;&lt;p&gt;ಇದರ ನಡುವೆ ಮೋದಿ ಕುಟುಂಬಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಭಾರತ ಅಡುಗೆ ಎಣ್ಣೆಗಳನ್ನು ಹೆಚ್ಚಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದೀಗ ಆರ್ಥಿಕ ಸಂಕಷ್ಟ ಸರಿದೂಗಿಸಲು ಅಡುಗೆ ಎಣ್ಣೆಗಳನ್ನು ಕಡಿಮೆ ಬಳಸಲು ಸೂಚಿಸಿದ್ದಾರೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಜೊತೆಗೆ ದೇಶದ ಆರ್ಥಿಕತೆಗೂ ಬಲ ಸಿಗಲಿದೆ ಎಂದಿದ್ದಾರೆ.&lt;/p&gt;&lt;h2&gt;ಮೇಡ್ ಇಂಡಿಯಾ ಉತ್ಪನ್ನ ಬಳಕೆ&lt;/h2&gt;&lt;p&gt;ಭಾರತೀಯರು ಭಾರತದಲ್ಲೇ ತಯಾರಾದ ಉತ್ಪನ್ನಗಳ ಬಳಕೆಗೆ ಮನವಿ ಮಾಡಿದ್ದಾರೆ. ಇದರಿಂದ ಸ್ಥಳೀಯರ ಆರ್ಥಿಕತೆ ಉತ್ತಮವಾಗಲಿದೆ. ಪ್ರತಿನಿತ್ಯ ಬಳಸುವ ವಸ್ತುಗಳಿಂದ ಹಿಡಿದು, ಶೂ, ಚಪ್ಪಲ್, ಬ್ಯಾಗ್ ಸೇರಿದಂತೆ ಪ್ರಮುಖ ವಸ್ತುಗಳಲ್ಲಿ ವಿದೇಶಿ ಬ್ರ್ಯಾಂಡ್ ಬದಲು ಸ್ಥಳೀಯ ಉತ್ತಮ ಉತ್ಪನ್ನ ಬಳಸಲು ಸೂಚಿಸಿದ್ದಾರೆ.&lt;/p&gt;&lt;p&gt;ರೈತರು ರಸಗೊಬ್ಬರ, ರಾಸಾಯನಿಕ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಲು ಮೋದಿ ಸೂಚಿಸಿದ್ದಾರೆ. ಇದೇ ವೇಳೆ ಡೀಸೆಲ್ ಪಂಪ್&zwnj;ಗದಳ ಬದಲು ಸೋಲಾರ್ ಚಾಲಿತ ಪಂಪ್ ಬಳಕೆಗೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ವಿದೇಶಿ ಪ್ರವಾಸ ಕಡಿತಗೊಳಿಸಲು ಸೂಚಿಸದ್ದಾರೆ. ಇದರ ಬದಲು ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸೂಚಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/pm-modi-urges-citizens-to-follow-8-key-measures-including-wfh-amid-conflict-concerns/articleshow-wwy5r20"/>
        </item>
        <item>
            <title><![CDATA[ಅಂಜನಾದ್ರಿ ದೇವಾಲಯಕ್ಕೆ ದಾನವಾದ ಆಭರಣಗಳು ಸಂಪೂರ್ಣ ಚಿನ್ನವಲ್ಲ: ಎಸಿ ಮಾಲಗಿತ್ತಿ ಹೇಳೋದೇನು?]]></title>
            <link>https://kannada.asianetnews.com/karnataka-districts/anjanadri-temple-gold-plated-copper-jewellery-clarification-gvd/articleshow-yreyb09</link>
            <guid isPermaLink="true">https://kannada.asianetnews.com/karnataka-districts/anjanadri-temple-gold-plated-copper-jewellery-clarification-gvd/articleshow-yreyb09</guid>
            <pubDate>Sun, 10 May 2026 21:23:13 +0530</pubDate>
            <description><![CDATA[&lt;p&gt;ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದ್ರಾಬಾದ್ ಮೂಲಕ ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸಮರ್ಪಣೆ ಮಾಡಿರುವ ಪ್ರಭಾವಳಿ,ಕಿರೀಟ, ಗಧೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr99f2cbd7jgykhwwvc96aqm,imgname-mvm-1778428381579.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.10): &lt;/strong&gt;ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದ್ರಾಬಾದ್ ಮೂಲಕ ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸಮರ್ಪಣೆ ಮಾಡಿರುವ ಪ್ರಭಾವಳಿ,ಕಿರೀಟ, ಗಧೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದೆ. ಎಲ್ಲವೂ ಚಿನ್ನದಿಂದ ಕೂಡಿಲ್ಲ ಎಂದು ಕಿಷ್ಕಿಂಧಾ ಅಂಜನಾದ್ರಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.&lt;/p&gt;&lt;p&gt;ಅವರು ಭಾನುವಾರ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ದೇವಾಲಯಕ್ಕೆ ಸಮರ್ಪಣೆಯಾಗಿರುವ ಸಾಮಾನುಗಳನ್ನು ಲೋಹ ತಜ್ಞರಿಂದ ಪರೀಕ್ಷೆ ಮಾಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹೈದ್ರಾಬಾದ್ ಮೂಲಕ ಎಎಂಆರ್ ಕಂಷ್ಟ್ರಕ್ಷನ್ ಕಂಪನಿಯ ಮಹೇಶ ರೆಡ್ಡಿ ಹಾಗೂ ಕುಟುಂಬದವರು ಮೇ.8 ರಂದು ಒಂದುವರೇ ಕೆಜಿ ಚಿನ್ನ ಅಂದಾಜು 2 ಕೋಟಿ 30 ಲಕ್ಷ ರು ಮೌಲ್ಯದ ಆಭರಣಗಳನ್ನು ಸಮರ್ಪಣೆ ಮಾಡಿದ ಪ್ರಭಾವಳಿ ಗದೆ, ಕಿರೀಟ ಇತರೆ ಪೂಜಾ ಸಾಮಾನುಗಳು ಎಂದು ಹೇಳಲಾಗಿತ್ತು.&lt;/p&gt;&lt;h2&gt;&lt;strong&gt;ಚಿನ್ನದ ತಗಡು ಲೇಪನ&lt;/strong&gt;&lt;/h2&gt;&lt;p&gt;ಈಗ ಚಿನ್ನ ಲೇಪಿತ ತಾಮ್ರದಿಂದ ಕೂಡಿವೆ ಎಂದು ಲೋಹ ಪರಿಶೋಧಕರು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡವಾಗ ಬಂಗಾರದ ಮೌಲ್ಯ ಮಾಪನ ಮಾಡುವ ಗುಂಡಾಚಾರ್ ಮತ್ತು ಪರಶುರಾಮ ವಿಶ್ವಕರ್ಮ ಇವರು ದೃಢಪಡಿಸಿದ್ದು, ತಾಮ್ರದ ಸಾಮಾನುಗಳಿಗೆ ಚಿನ್ನದ ತಗಡು ಲೇಪನ ಮಾಡಲಾಗಿದೆ. ಎಲ್ಲವೂ ಚಿನ್ನದ ಸಾಮಾನುಗಳು ಅಲ್ಲ. ದಾನ ನೀಡಿದ ದಾನಿಗಳನ್ನು ಸಂಪರ್ಕ ಮಾಡಿ ಶ್ರೀಆಂಜನೇಯನಿಗೆ ಸಮರ್ಪಣೆ ಮಾಡಿದ ಸಾಮಾನುಗಳ ಮೌಲ್ಯ ಹಾಗೂ ರಸೀದಿಯನ್ನು ದೇವಾಲಯ ಕಮೀಟಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು ಶೀಘ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದಾನಿಗಳು ದೇವಾಲಯಗಳಿಗೆ ನೀಡಿದ ಚಿನ್ನಾಭರಣೆ, ಬೆಳ್ಳಿ, ವಜ್ರ, ವೈಡೂರ್ಯ ಇತರೆ ಅಮೂಲ್ಯ ವಸ್ತುಗಳ ಮೌಲ್ಯ ಮಾಪನ ಮಾಡಿ ರಸೀದಿ ಸಮೇತ ದಾಖಲೆಗಳನ್ನು ಇಡಬೇಕಾಗುತ್ತದೆ. ಆದ್ದರಿಂದ ಲೋಹ ಶೋಧಕರು ಮತ್ತು ಮೌಲ್ಯಮಾಪನ ಮಾಡುವವರಿಂದ ಮೌಲ್ಯ ಮಾಡಿಸಿ ದಾಖಲೆ ಇರಿಸಲಾಗುತ್ತದೆ ಎಂದು ಮಾಲಗಿತ್ತಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಯು.ವಸಂತಕುಮಾರಿ, ಕಂದಾಯ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳಿದ್ದರು.&lt;/p&gt;]]></content:encoded>
            <category>news</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/anjanadri-temple-gold-plated-copper-jewellery-clarification-gvd/articleshow-yreyb09"/>
        </item>
        <item>
            <title><![CDATA[ಸಿಎಂ ಚಂದ್ರಬಾಬು, ಡಿಸಿಎಂ ಪವನ್ ಕಲ್ಯಾಣ್ ಮನೆಗೆ ಮೋದಿ ದಿಢೀರ್ ಭೇಟಿ, ಕಾರಣವೇನು?]]></title>
            <link>https://kannada.asianetnews.com/gallery/india-news/pm-modi-surprise-meeting-with-chandrababu-and-pawan-kalyan-sparks-political-buzz-axhd6eb</link>
            <guid isPermaLink="true">https://kannada.asianetnews.com/gallery/india-news/pm-modi-surprise-meeting-with-chandrababu-and-pawan-kalyan-sparks-political-buzz-axhd6eb</guid>
            <pubDate>Sun, 10 May 2026 20:54:18 +0530</pubDate>
            <description><![CDATA[&lt;p&gt;ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮೋದಿ ಹೈದರಾಬಾದ್ ಪ್ರವಾಸದ ವೇಳೆ ದಿಢೀರ್ ಆಂಧ್ರ ಸಿಎಂ ಚಂದ್ರಬಾಬು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ಭೇಟಿಗೆ ಕಾರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr977ed6wgyhknkn4cwx7cfn,imgname-modi-meets-chandrababu-naidu-and-pawan-kalyan-1778426034597.png" type="image/jpeg" height="390" width="690"/>
            <content:encoded><![CDATA[&lt;p&gt;ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮೋದಿ ಹೈದರಾಬಾದ್ ಪ್ರವಾಸದ ವೇಳೆ ದಿಢೀರ್ ಆಂಧ್ರ ಸಿಎಂ ಚಂದ್ರಬಾಬು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ಭೇಟಿಗೆ ಕಾರಣವೇನು?&lt;/p&gt;&lt;img&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಹಲವು ಅಭಿವೃದ್ಧಿ ಯೋಜನೆಗಳ ಕಾರ್ಯಕ್ರಮಕ್ಕಾಗಿ ಹೈದರಾಬಾದ್&zwnj;ಗೆ ಪ್ರಯಾಣ ಬೆಳೆಸಿದ್ದರು. ಕಾರ್ಯಕ್ರಮ ಮುಗಿಸಿದ ಬಳಿಕ ಪ್ರಧಾನಿ ಮೋದಿ ದಿಢೀರ್ ಆಂದ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತರಿ ಪವನ್ ಕಲ್ಯಾಣ್ ಮನೆಗೆ ಭೇಟಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಪ್ರವಾಸದಲ್ಲಿ ಇದೇ ಮೊದಲ ಬಾರಿಗೆ ಮನೆಗೆ ಭೇಟಿ ನೀಡಿದ್ದಾರೆ. ಚಂದ್ರಬಾಬು ನಾಯ್ದ ಮನೆಗೆ ಭೇಟಿ ನೀಡಿದ ಮೋದಿ, ಕುಟುಂಬಸ್ಥರ ಜೊತೆ ಮಾತನಾಡುತ್ತಾ ಕೆಲ ಹೊತ್ತು ಕಳೆದಿದ್ದಾರೆ. ಇದೇ ವೇಳೆ ಸಚಿವ ನಾರಾ ಲೋಕೇಶ್ ಕುಟುಂಬ ಕೂಡ ಉಪಸ್ಥಿತವಿತ್ತು.&lt;/p&gt;&lt;img&gt;&lt;p&gt;ಇದೇ ವೇಳೆ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮನೆಗೆ ಮೋದಿ ಭೇಟಿ ನೀಡಿದ್ದಾರೆ. ಪವನ್ ಕಲ್ಯಾಣ್ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಪವನ್ ಕಲ್ಯಾಣ್ ಕುಟುಂಬಸ್ಥರೊಂದಿಗೆ ಸಮಯ ಕಳೆದಿದ್ದಾರೆ. ಇದೇ ವೇಳೆ ಪವನ್ ಕಲ್ಯಾಣ್ ಕುಟುಂಬಸ್ಥರ ಜೊತೆ ಫೋಟೋಗೆ ಫೋಸ್ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮೋದಿ ಆಗಮಿಸುತ್ತಿದ್ದಂತೆ ಪವನ್ ಕಲ್ಯಾಣ್ ಕೈಹಿಡಿದು ಮನೆಗೆ ಬರ ಮಾಡಿಕೊಂಡಿದ್ದಾರೆ. ಪವನ್ ಕಲ್ಯಾಣ್ ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದ ಸರ್ಜರಿಗೆ ಒಳಗಾಗಿದ್ದರು. ಹೀಗಾಗಿ ಮೋದಿ ಮನೆಗೆ ಭೇಟಿ ನೀಡಿದ ಆರಂಭದಲ್ಲೇ ಪವನ್ ಕಲ್ಯಾಣ್ ಆರೋಗ್ಯದ ಕುರಿತು ಕೇಳಿದ್ದಾರೆ. ಪವನ್ ಕಲ್ಯಾಣ್ ಭೇಚಿ ಹಿಂದೆ ಸರ್ಜರಿ ಪ್ರಮುಖ ಕಾರಣನ್ನು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮನೆಗೆ ಭೇಟಿ ನೀಡಿದರ ಹಿಂದಿನ ಕಾರಣ ಸ್ಪಷ್ಟವಿಲ್ಲ. ಆದರೆ ಈ ಎರಡೂ ಭೇಟಿಗಳು ಸೌಹಾರ್ದಯುತ ಭೇಟಿ ಎಂದು ವಿಶ್ಲೇಷಿಸಲಾಗುತ್ತದೆ. ಹೈದರಾಬಾದ್ ಕಾರ್ಯಕ್ರಮ ಮುಗಿಸಿ ಬಿಡುವಿನ ಸಮಯದಲ್ಲಿ ಮೋದಿ ಭೇಟಿ ನೀಡಿದ್ದಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ&lt;/p&gt;&lt;img&gt;&lt;p&gt;ಇದೇ ವೇಳೆ ಕೆಲವರು ಮೋದಿ ದಿಢೀರ್ ಭೇಟಿ ಹಿಂದೆ ದಕ್ಷಿಣ ಭಾರತದಲ್ಲಿ ಬಿಜೆಪಿ ಬಲವರ್ಧನೆ ಮಾಡುವ ಪ್ರಯತ್ನವಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಸದ್ಯ ಈ ಭೇಟಿ ಹಿಂದೆ ವಿಶೇಷ ಉದ್ದೇಶ, ಅರ್ಥಗಳಿಲ್ಲ.&lt;/p&gt;&lt;h2&gt;ದಕ್ಷಿಣದಲ್ಲಿ ಬಿಜೆಪಿ ಬಲವರ್ಧನೆ&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/pm-modi-surprise-meeting-with-chandrababu-and-pawan-kalyan-sparks-political-buzz-axhd6eb"/>
        </item>
        <item>
            <title><![CDATA['ಅಮ್ಮ' ಸಂಗೀತಾಗೆ ಬಿಗ್ ಗಿಫ್ಟ್ ನೀಡಿ ನೆಟ್ಟಿಗರ ಮೆಚ್ಚುಗೆ ಪಡೆದ ದಳಪತಿ ವಿಜಯ್ ಮಕ್ಕಳು!]]></title>
            <link>https://kannada.asianetnews.com/gallery/cine-world/by-missing-childrens-of-cm-vijay-swearing-in-ceremony-have-won-the-hearts-of-netizens-tivqi5i</link>
            <guid isPermaLink="true">https://kannada.asianetnews.com/gallery/cine-world/by-missing-childrens-of-cm-vijay-swearing-in-ceremony-have-won-the-hearts-of-netizens-tivqi5i</guid>
            <pubDate>Sun, 10 May 2026 20:43:18 +0530</pubDate>
            <description><![CDATA[&lt;p&gt;ನಟ, ತಮಿಳುನಾಡು ನೂತನ ಸಿಎಂ ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಸಮಾರಂಭದಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಇದು ತಮಿಳು ಚಿತ್ರರಂಗದ ಅತಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಕ್ಕಳು ತಮ್ಮ ಅಮ್ಮನಿಗೆ ಕೊಟ್ಟ ಉಡುಗೊರೆ ಏನು?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr96fd10fhzk7w7h8ygvbpke,imgname-thalapathy-vijay-sangeetha-1778425246752.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ, ತಮಿಳುನಾಡು ನೂತನ ಸಿಎಂ ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಸಮಾರಂಭದಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಇದು ತಮಿಳು ಚಿತ್ರರಂಗದ ಅತಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಕ್ಕಳು ತಮ್ಮ ಅಮ್ಮನಿಗೆ ಕೊಟ್ಟ ಉಡುಗೊರೆ ಏನು?&amp;nbsp;&lt;/p&gt;&lt;img&gt;&lt;p&gt;ದಳಪತಿ ಪಟ್ಟಾಭಿಷೇಕದಲ್ಲಿ ತ್ರಿಷಾ ಮಿನುಗು, ಮಕ್ಕಳ ಗೈರುಹಾಜರಿ; ಅಮ್ಮಂದಿರ ದಿನದಂದು ತಂದೆಯ ಗೆಲುವನ್ನು ದೂರದಿಂದಲೇ ನೋಡಿದರಾ ಸಂಜಯ್-ದಿವ್ಯಾ?&lt;/p&gt;&lt;p&gt;ಚೆನ್ನೈನ ಜವಾಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿ ಅಕ್ಷರಶಃ ಹಬ್ಬದ ವಾತಾವರಣ. ಸಿನೆಮಾ ತೆರೆಯ ಮೇಲೆ ಸಾವಿರಾರು ಜನರನ್ನು ರಂಜಿಸುತ್ತಿದ್ದ 'ದಳಪತಿ' ವಿಜಯ್ (Thalapathy Vijay) ಇಂದು ನಿಜ ಜೀವನದ 'ಜನನಾಯಕ'ನಾಗಿ ತಮಿಳುನಾಡಿನ ಸಿಎಂ ಗದ್ದುಗೆ ಏರಿದ ಐತಿಹಾಸಿಕ ಕ್ಷಣವದು.&lt;/p&gt;&lt;img&gt;&lt;p&gt;ಆದರೆ, ಈ ಅದ್ಧೂರಿ ಸಮಾರಂಭದಲ್ಲಿ ಅಭಿಮಾನಿಗಳ ಕಣ್ಣು ವಿಜಯ್ ಅವರ ಪ್ರಮಾಣ ವಚನಕ್ಕಿಂತ ಹೆಚ್ಚಾಗಿ ಇಬ್ಬರ ಮೇಲೆ ನೆಟ್ಟಿತ್ತು. ಒಬ್ಬರು ಸ್ಟೇಡಿಯಂನಲ್ಲಿ ಮಿಂಚುತ್ತಿದ್ದ ನಟಿ ತ್ರಿಷಾ ಕೃಷ್ಣನ್, ಇನ್ನೊಬ್ಬರು ಸಮಾರಂಭದಲ್ಲಿ ಕಾಣಿಸಿಕೊಳ್ಳದ ವಿಜಯ್ ಪತ್ನಿ ಸಂಗೀತಾ ಮತ್ತು ಮಕ್ಕಳು!&lt;/p&gt;&lt;img&gt;&lt;p&gt;ತ್ರಿಷಾ: ಸ್ಟೇಡಿಯಂನ ಅಘೋಷಿತ ರಾಜಕುಮಾರಿ!&lt;/p&gt;&lt;p&gt;ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಇಡೀ ವೇದಿಕೆಯಲ್ಲಿ ನಟಿ ತ್ರಿಷಾ ಕೃಷ್ಣನ್ (Trisha Krishnan) ಕೇಂದ್ರಬಿಂದುವಾದರು. ನೀಲಿ ಬಣ್ಣದ ಸಾಂಪ್ರದಾಯಿಕ ಸೀರೆ, ಕುತ್ತಿಗೆಯಲ್ಲಿ ವಜ್ರದ ಹಾರ, ಮುಡಿಯಲ್ಲಿ ಹೂವು ಮುಡಿದು ಅತ್ಯಂತ ಸರಳವಾಗಿದ್ದರೂ ಸುಂದರವಾಗಿ ಕಾಣುತ್ತಿದ್ದ ತ್ರಿಷಾ ನೋಟ ಸಾವಿರಾರು ಜನರ ಕಣ್ಣು ಕುಕ್ಕುವಂತಿತ್ತು.&lt;/p&gt;&lt;img&gt;&lt;p&gt;ವಿಜಯ್ ಅವರ ತಾಯಿ ಶೋಭಾ ಅವರನ್ನು ಅತ್ಯಂತ ಆತ್ಮೀಯವಾಗಿ ಅಪ್ಪಿಕೊಂಡ ತ್ರಿಷಾ, ವಿಜಯ್ ಪ್ರಮಾಣ ವಚನ ಸ್ವೀಕರಿಸುವಾಗ ಭಾವುಕರಾಗಿ ಕಣ್ಣೀರು ಹಾಕಿದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ವಿಜಯ್ ಕುಟುಂಬದ ಸದಸ್ಯರಂತೆಯೇ ಮೊದಲ ಸಾಲಿನಲ್ಲಿ ಕುಳಿತಿದ್ದ ತ್ರಿಷಾ ಅವರನ್ನು ಕಂಡು ನೆಟ್ಟಿಗರು &quot;ಡೇಟಿಂಗ್ ವದಂತಿ ನಿಜವೇ ಇರಬಹುದಾ?&quot; ಎಂಬ ಚರ್ಚೆಗೆ ಮರುಜೀವ ನೀಡಿದ್ದಾರೆ.&lt;/p&gt;&lt;img&gt;&lt;p&gt;ಸೂಟ್&zwnj;ನಲ್ಲಿ ವಿಜಯ್ ಸ್ಟೈಲ್, ಕಣ್ಣೀರಲ್ಲಿ ತ್ರಿಷಾ ಭಾವ!&lt;/p&gt;&lt;p&gt;ಸಾಮಾನ್ಯವಾಗಿ ರಾಜಕಾರಣಿಗಳು ಬಿಳಿ ಅಂಗಿ, ಪಂಚೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ವಿಜಯ್ ಸೂಟ್ ಧರಿಸಿ ಸ್ಟೈಲಿಶ್ ಆಗಿ ಕಾಣುತ್ತಿದ್ದರೆ, ತ್ರಿಷಾ ಅವರ ಸಾಂಪ್ರದಾಯಿಕ ನೋಟ ಅದಕ್ಕೆ ಪೂರಕವಾಗಿತ್ತು. ವಿಜಯ್ ಅವರ ಪ್ರತಿ ಸಾಧನೆಯ ಹಿಂದೆಯೂ ತ್ರಿಷಾ ಸದಾ ಇರುತ್ತಾರೆ ಎಂಬ ಮಾತಿಗೆ ಪುಷ್ಠಿ ನೀಡುವಂತೆ ಈ ಸಮಾರಂಭ ಸಾಕ್ಷಿಯಾಯಿತು. ಈ ಜೋಡಿ ಈಗಾಗಲೇ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡು ಗಾಸಿಪ್ ಕಾಲಂಗಳಲ್ಲಿ ಜಾಗ ಪಡೆದಿದ್ದವು. ಈಗ ಸಿಎಂ ಸಮಾರಂಭದಲ್ಲೂ ತ್ರಿಷಾ ಹೈಲೈಟ್ ಆಗಿರುವುದು ಕಾಲಿವುಡ್ ಅಂಗಳದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ಮಕ್ಕಳ ಗೈರು: ತಾಯಿಗಾಗಿ ಅಪ್ಪನ ಸಂಭ್ರಮವನ್ನೇ ತ್ಯಜಿಸಿದರಾ?&lt;/p&gt;&lt;p&gt;ಒಂದು ಕಡೆ ತ್ರಿಷಾ ಸಂಭ್ರಮಿಸುತ್ತಿದ್ದರೆ, ಇನ್ನೊಂದೆಡೆ ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಸಮಾರಂಭದಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಇದು ತಮಿಳು ಚಿತ್ರರಂಗದ ಅತಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಜಯ್ ಮತ್ತು ಸಂಗೀತಾ ನಡುವೆ ವಿಚ್ಛೇದನದ ಪ್ರಕ್ರಿಯೆ ನಡೆಯುತ್ತಿದೆ ಎಂಬ ಸುದ್ದಿಗಳ ನಡುವೆಯೇ ಮಕ್ಕಳು ಸಮಾರಂಭಕ್ಕೆ ಬಾರದಿರುವುದು ಪರೋಕ್ಷವಾಗಿ ತಾಯಿಗೆ ಬೆಂಬಲ ಸೂಚಿಸಿದಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ವಿಶೇಷವೆಂದರೆ, ಈ ಸಮಾರಂಭ ನಡೆದದ್ದು 'ವಿಶ್ವ ಅಮ್ಮಂದಿರ ದಿನ'ದಂದು. ಈ ದಿನದಂದೇ ಮಕ್ಕಳು ತಂದೆಯ ಅತಿ ದೊಡ್ಡ ಗೆಲುವಿನ ಕಾರ್ಯಕ್ರಮದಿಂದ ದೂರ ಉಳಿದು, ತಮ್ಮ ತಾಯಿ ಸಂಗೀತಾರ ಜೊತೆಗಿದ್ದಾರೆ ಎನ್ನಲಾಗಿದೆ. &quot;ತಂದೆಯ ಗೆಲುವನ್ನು ಬಹಿಷ್ಕರಿಸಿ ತಾಯಿಗೆ ಬೆಂಬಲ ನೀಡಿದ ಮಕ್ಕಳು, ಅಮ್ಮಂದಿರ ದಿನದಂದು ಸಂಗೀತಾಗೆ ಬೆಲೆಕಟ್ಟಲಾಗದ ಉಡುಗೊರೆ ನೀಡಿದ್ದಾರೆ&quot; ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ವಿಜಯ್ ಜೀವನದ ಈ ಐತಿಹಾಸಿಕ ದಿನದಂದು ಸಿನೆಮಾ ರಂಗದ 'ಜೋಡಿ'ಯ ಸಂಭ್ರಮ ಒಂದು ಕಡೆಯಾದರೆ, ನಿಜ ಜೀವನದ 'ಕುಟುಂಬ'ದ ಮೌನ ಮತ್ತೊಂದು ಕಡೆಯಾಗಿತ್ತು. ವಿಜಯ್ ಅವರ ರಾಜಕೀಯ ಪಯಣ ಎಷ್ಟು ಅದ್ಧೂರಿಯಾಗಿ ಆರಂಭವಾಗಿದೆಯೋ, ಅಷ್ಟೇ ಜಟಿಲವಾಗಿ ಅವರ ವೈಯಕ್ತಿಕ ಜೀವನದ ಕಥೆಯೂ ಮುಂದುವರಿಯುತ್ತಿದೆ.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/by-missing-childrens-of-cm-vijay-swearing-in-ceremony-have-won-the-hearts-of-netizens-tivqi5i"/>
        </item>
        <item>
            <title><![CDATA[25 ವರ್ಷಗಳಲ್ಲಾಗದ ಅಭಿವೃದ್ಧಿ 3 ವರ್ಷದಲ್ಲಿ ಮಾಡಿರುವೆ: ಎಚ್‌ಡಿಕೆ ವಿರುದ್ಧ ಇಕ್ಬಾಲ್ ಹುಸೇನ್ ವಾಗ್ದಾಳಿ]]></title>
            <link>https://kannada.asianetnews.com/karnataka-districts/iqbal-hussain-slams-kumaraswamy-over-ramanagara-development-gvd/articleshow-3bxz8mz</link>
            <guid isPermaLink="true">https://kannada.asianetnews.com/karnataka-districts/iqbal-hussain-slams-kumaraswamy-over-ramanagara-development-gvd/articleshow-3bxz8mz</guid>
            <pubDate>Sun, 10 May 2026 20:32:58 +0530</pubDate>
            <description><![CDATA[&lt;p&gt;ರಾಮನಗರ ಕ್ಷೇತ್ರದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿದ್ದವರು ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ 3 ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ ಎಂದು ಎಚ್&zwnj;ಡಿಕೆ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdphskv0t488bvg9wj4dsjxf,imgname-iqbal-hussain--1--1767062163296.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮೇ.10): &lt;/strong&gt;ರಾಮನಗರ ಕ್ಷೇತ್ರದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿದ್ದವರು ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ 3 ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಈ ಹಿಂದೆ ಶಾಸಕರಾಗಿದ್ದವರು ಕೇವಲ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿದರು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರೂ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದರು.&lt;/p&gt;&lt;p&gt;ಆದರೆ, ನಾನು ಶಾಸಕನಾದ ಮೇಲೆ ರಸ್ತೆ, ಚರಂಡಿ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಿದ್ದೇನೆ ಎಂದರು. ಅಭಿವೃದ್ಧಿಕೆ ಕ್ರಮ ಕೈಗೊಂಡಿದ್ದೇನೆ ಎಂದರು. ಸಿ.ಎಂ.ಲಿಂಗಪ್ಪರವರು ಶಾಸಕರಾಗಿದ್ದ ವೇಳೆ ಸೂರಿಲ್ಲದವರಿಗೆ ನಿವೇಶನ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಉಳುಮೆ ಚೀಟಿ ನೀಡಿದ್ದರು. ಆನಂತರ 25 ವರ್ಷಗಳ ಅವಧಿಯಲ್ಲಿ ಒಬ್ಬನೇ ಒಬ್ಬ ಬಡವನಿಗೆ ನಿವೇಶನ, ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಇಷ್ಟಾದರೂ ತಾವು ಮಣ್ಣಿನ ಮಕ್ಕಳೆಂದು ಹೇಳಿಕೊಂಡು ಕಣ್ಣೀರು ಹಾಕುತ್ತಾರೆ ಎಂದು ಟೀಕಿಸಿದರು.&lt;/p&gt;&lt;p&gt;ಈಗ 10 ಸಾವಿರ ನಿವೇಶನ ಹಂಚಲು 300 ಎಕರೆ ಜಾಗ ಗುರುತಿಸಲಾಗಿದೆ. ಈಗಾಗಲೇ ಸೂರಿಲ್ಲದ ಕಡುಬಡವರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂಬರುವ 3 -4 ತಿಂಗಳಲ್ಲಿ ನಿವೇಶನ ಹಂಚಲಾಗುವುದು. ಬಗರ್&zwnj;ಹುಕುಂ ಸಾಗುವಳಿದಾರರ ಜಮೀನುಗಳ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಉಳುಮೆ ಚೀಟಿ ನೀಡಲಾಗುವುದು ಎಂದರು. ಕಳೆದ ಮೂರು ದಶಕಗಳಿಂದ ಜೆಡಿಎಸ್ ಪಕ್ಷದಲ್ಲಿ ದುಡಿದವರು ಸೂಕ್ತ ಸ್ಥಾನಮಾನ ದೊರೆಯದ ಹಿನ್ನೆಲೆ ಹಾಗೂ ತಮ್ಮ ಗ್ರಾಮಗಳ ಅಭಿವೃದ್ಧಿ ಆಗದಿರುವುದರಿಂದ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಕಾಂಗ್ರೆಸ್ ಪಕ್ಷವನ್ನು ಸೇರುವಂತೆ ಮನವಿ&lt;/strong&gt;&lt;/h2&gt;&lt;p&gt;ಸಮ ಸಮಾಜದ ನಿರ್ಮಾಣ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರ ಕೈ ಬಲಪಡಿಸಲು ಯುವಕರು ಕಾಂಗ್ರೆಸ್ ಪಕ್ಷವನ್ನು ಸೇರುವಂತೆ ಇಕ್ಬಾಲ್ ಹುಸೇನ್ ಮನವಿ ಮಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಮಾತನಾಡಿ, ಈ ಹಿಂದೆ ಶಾಸಕರಾಗಿದ್ದವರ ನಿರ್ಲಕ್ಷ್ಯದಿಂದ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು. ಆದರೀಗ ಇಕ್ಬಾಲ್ ಹುಸೇನ್ ಶಾಸಕರಾದ ನಂತರ ಅಭಿವೃದ್ಧಿ ಪರ್ವ ಪ್ರಾರಂಭಗೊಂಡಿದೆ.&lt;/p&gt;&lt;p&gt;ಇದನ್ನು ಮೆಚ್ಚಿದ ಅನ್ಯಪಕ್ಷಗಳ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಇದು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್&zwnj;ಕುಮಾರ್ ಮಾತನಾಡಿ, ಈ ಹಿಂದೆ ಶಾಸಕರನ್ನು ನೋಡಲು ಬೆಂಗಳೂರಿಗೆ ಹೋಗಬೇಕಿತ್ತು. ಈಗ ಶಾಸಕರು ನಿಮ್ಮ ಮನೆ ಬಾಗಿಲಿಗೇ ಆಗಮಿಸಿ, ನಿಮ್ಮ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಯುವಕರು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಶಾಸಕರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/iqbal-hussain-slams-kumaraswamy-over-ramanagara-development-gvd/articleshow-3bxz8mz"/>
        </item>
        <item>
            <title><![CDATA[ಮನೆ ತಲುಪಲು 2 ಕಿ.ಮಿ ಬಾಕಿ ಇರುವಾಗಲೇ ಮದುವೆಗೆ ತೆರಳಿದ್ದ ಬಸ್ ಯಲ್ಲಾಪುರದ ಬಳಿ ಅಪಘಾತ]]></title>
            <link>https://kannada.asianetnews.com/gallery/state/wedding-bus-meets-with-accident-near-yellapur-just-2-km-before-reaching-home-03hoo1l</link>
            <guid isPermaLink="true">https://kannada.asianetnews.com/gallery/state/wedding-bus-meets-with-accident-near-yellapur-just-2-km-before-reaching-home-03hoo1l</guid>
            <pubDate>Sun, 10 May 2026 20:16:26 +0530</pubDate>
            <description><![CDATA[&lt;p&gt;ಮದುವೆ ಮುಗಿಸಿಕೊಂಡು ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಮಿನಿ ಬಸ್ ಯಲ್ಲಾಪುರ ಸಮೀಪ ಅಪಘಾತಕ್ಕೀಡಾದ ಘಟನೆ ನಡೆದಿದೆ. ಇನ್ನೇನು ಮನೆ ತಲುಪಿತು ಅನ್ನೋವಷ್ಟರಲ್ಲೇ ಘಟನೆ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr95cj9ey0jtswsayae5vbff,imgname-yellapur-mini-bus-accident-1778424105261.png" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ಮುಗಿಸಿಕೊಂಡು ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಮಿನಿ ಬಸ್ ಯಲ್ಲಾಪುರ ಸಮೀಪ ಅಪಘಾತಕ್ಕೀಡಾದ ಘಟನೆ ನಡೆದಿದೆ. ಇನ್ನೇನು ಮನೆ ತಲುಪಿತು ಅನ್ನೋವಷ್ಟರಲ್ಲೇ ಘಟನೆ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.&lt;/p&gt;&lt;img&gt;&lt;p&gt;ಎಪ್ರಿಲ್ ಮೇ ತಿಂಗಳು ಸಹಜವಾಗಿ ಮದುವೆ ಸೀಸನ್. ಉರಿ ಬಿಸಿಲು ಜೋರಾಗಿದ್ದರೂ ಮದುವೆ ಸಂಭ್ರಮ ಕಳೆಗಟ್ಟಿರುತ್ತದೆ. ಹೀಗೆ ಕುಟುಂಬಸ್ಥರು ಮಿನಿ ಬಸ್ ಮೂಲಕ ಮದುವೆಗೆ ತೆರಳಿದ್ದಾರೆ. ಮದುವೆ ಮುಗಿಸಿಕೊಂಡು ಮರಳಿ ಬರುತ್ತಿದ್ದ ವೇಳೆ ಮಿನಿ ಬಸ್ ಅಪಘಾತಕ್ಕೀಡಾದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ನಡೆದಿದೆ.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ಮಿನಿ ಬಸ್ ಅಪಘಾತವಾಗಿದೆ. ನಿಯಂತ್ರಣ ತಪ್ಪಿದ ಬಸ್ ಅಪಘಾತಕ್ಕೀಡಾಗಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಬೆನ್ನಲ್ಲೇ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಅಪಘಾತದ ಬೆನ್ನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;ಕುಟುಂಬಸ್ಥರು ಮಿನಿ ಬಸ್ ಮೂಲಕ ಅರಬೈಲ್ ನಿಂದ ಬೆಳಗಾವಿಯಲ್ಲಿ ನಡೆದ ಮದುವೆಗೆ ತೆರಳಿದ್ದರು. ಮದುವೆ ಮುಗಿಸಿ ಕೊಂಡು ಮರಳಿ ಬರುತ್ತಿದ್ದಾಗ ಬಸ್ ಅಪಘಾತವಾಗಿದೆ. ಇನ್ನು ಕೇವಲ 2 ಕಿಲೋಮೀಟರ್ ಸಾಗಿದರೆ ಕುಟುಂಬಸ್ಥರು ಯಾವುದೇ ಅಪಾಯವಿಲ್ಲದೆ ಮನೆ ಸೇರಿಕೊಳ್ಳುತ್ತಿದ್ದರು.&lt;/p&gt;&lt;img&gt;&lt;p&gt;ಯಲ್ಲಾಪುರ ಭಾಗದಲ್ಲಿ ಮಳೆಯಾಗುತ್ತಿದ್ದ ಕಾರಣ ಬಸ್ ನಿಧಾನವಾಗಿ ಸಾಗುತ್ತಿತ್ತು. ಇದರ ನಡುವೆ ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡಕ್ಕೆ ಗುದ್ದಿದೆ. ಮುಂಭಾಗದಲ್ಲಿ ಕುಳಿತಿದ್ದ ಹಲವರಿಗೆ ಗಾಯವಾಗಿದೆ. ಇನ್ನು ಮಕ್ಕಳು, ಹೆಣ್ಣುಮಕ್ಕಳೂ ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ರಾಷ್ಟ್ರೀಯ ಹೆದ್ದಾರಿ 52 ರ ಅರಬೈಲ್ ಘಟ್ಟದತಿರುವಿನಲ್ಲಿ ಅಪಘಾತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಯಾಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;&lt;h2&gt;ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/wedding-bus-meets-with-accident-near-yellapur-just-2-km-before-reaching-home-03hoo1l"/>
        </item>
        <item>
            <title><![CDATA[ಭ್ರಷ್ಟಾಚಾರದ ವಿರುದ್ಧ ವಾಟಾಳ್ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ: ವಾಟಾಳ್ ನಾಗರಾಜ್]]></title>
            <link>https://kannada.asianetnews.com/karnataka-districts/vatal-nagaraj-slams-bjp-congress-jds-over-corruption-gvd/articleshow-u6wg4w6</link>
            <guid isPermaLink="true">https://kannada.asianetnews.com/karnataka-districts/vatal-nagaraj-slams-bjp-congress-jds-over-corruption-gvd/articleshow-u6wg4w6</guid>
            <pubDate>Sun, 10 May 2026 19:53:08 +0530</pubDate>
            <description><![CDATA[&lt;p&gt;ಭ್ರಷ್ಟಾಚಾರ, ಲಂಚಾವತಾರ ವಿರೋಧಿಸಿ ವಾಟಾಳ್ ಕನ್ನಡ ಪಕ್ಷದ ವತಿಯಿಂದ ಯುವಜನರು, ರೈತರು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jhf5hpm5m85njw5af5rs6yck,imgname-1.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಮೇ.10): &lt;/strong&gt;ಭ್ರಷ್ಟಾಚಾರ, ಲಂಚಾವತಾರ ವಿರೋಧಿಸಿ ವಾಟಾಳ್ ಕನ್ನಡ ಪಕ್ಷದ ವತಿಯಿಂದ ಯುವಜನರು, ರೈತರು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು. ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಈಡುಗಾಯಿ ಚಳವಳಿ ನಡೆಸಿ, ರಾಜ್ಯ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅತಿಯಾದ ಭ್ರಷ್ಟಾಚಾರ, ಲಂಚಗುಳಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಈ ಭ್ರಷ್ಟ ವ್ಯವಸ್ಥೆ ವಿರುದ್ಧ ರಾಜ್ಯಾದ್ಯಂತ ವಾಟಾಳ್ ಪಕ್ಷದ ವತಿಯಿಂದ ಪ್ರವಾಸ ಮಾಡಿ ಯುವ ಜನರು, ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳನ್ನು ಸಂಘಟಿಸಿ ಹೊಸ ಚೈತನ್ಯ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಅದ್ಭುತ ಕನ್ನಡ ಶಕ್ತಿ ಉದಯವಾಗಬೇಕು. ಆಗ ಮಾತ್ರ ಭ್ರಷ್ಟಾಚಾರ ತೊಲಗಲು ಸಾಧ್ಯ ಎಂದು ಹೇಳಿದರು.&lt;/p&gt;&lt;p&gt;ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಎಲ್ಲರೂ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದಾರೆ. ಹೊಸ ಕನ್ನಡ ಶಕ್ತಿ ಉದಯವಾಗಿ ಪ್ರಾಮಾಣಿಕರು, ನಂಬಿಕಸ್ಥರು, ಪ್ರೀತಿವಂತರು ಬರಬೇಕು. ಭ್ರಷ್ಟಾಚಾರ ನಿಲ್ಲಿಸಬೇಕು. ಇದಕ್ಕಾಗಿ ತೀವ್ರ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 80ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಸ್ವಾತಂತ್ರ್ಯ ಬಂದಿರುವುದು ಭ್ರಷ್ಟಾಚಾರಕ್ಕಲ್ಲ.&lt;/p&gt;&lt;p&gt;ಮಹಾತ್ಮಾ ಗಾಂಧೀಜಿ ಈ ದೇಶಕ್ಕಾಗಿ ಪ್ರಾಮಾಣಿಕ ಹೋರಾಟ ಮಾಡಿದ್ದರು, ಅವರ ಜೀವನವೇ ದಿವ್ಯ ಸಂದೇಶ, ಆದರೆ, ಇಂದು ವ್ಯವಸ್ಥೆ ಅದಕ್ಕೆ ವಿರುದ್ಧವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಿಧಾನ ಸಭೆ, ಪರಿಷತ್, ಲೋಕಸಭೆ, ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತಲೆದೋರಿದೆ. ವರ್ಗಾವಣೆ, ಉದ್ಯೋಗ ಎಲ್ಲದರಲ್ಲೂ ಲಂಚಾವತಾರ ಮನೆಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಸಿಎಂ ಆಗಿದ್ದಾಗ ಭಾರೀ ಭ್ರಷ್ಟಾಚಾರ&lt;/strong&gt;&lt;/h2&gt;&lt;p&gt;ಈಗ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಾನು ಶಾಸಕನಾಗಿದ್ದ ಅವಧಿಯಲ್ಲಿ ಕಂಡಿರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಭಾರೀ ಭ್ರಷ್ಟಾಚಾರ ನಡೆಸಿದ್ದರು, ಶಾಸಕರನ್ನು ಕೋಟ್ಯಾಂತರ ರುಪಾಯಿಗಳಿಗೆ ಖರೀದಿಸಿದ್ದರು, ವಾಮಮಾರ್ಗದಿಂದ ಅಧಿಕಾರ ಹಿಡಿದಿದ್ದರು. ಅಂದಿನಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಪ್ರಾರಂಭವಾಯಿತು, ಭ್ರಷ್ಟಾಚಾರದಿಂದ ಯಡಿಯೂರಪ್ಪನವರು ಜೈಲಿಗೆ ಹೋಗಿದ್ದರು, ಅಂತಹ ವ್ಯಕ್ತಿಯ ಬಗ್ಗೆ ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ಅಭಿಮಾನೋತ್ಸವ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/vatal-nagaraj-slams-bjp-congress-jds-over-corruption-gvd/articleshow-u6wg4w6"/>
        </item>
        <item>
            <title><![CDATA[ರಾಜ್ಯ ಪೊಲೀಸ್ ಇಲಾಖೆ 293 ಇನ್ಸ್‌ಪೆಕ್ಟರ್ ಹಾಗೂ 74 ಡಿವೈಎಸ್‌ಪಿಗಳ ವರ್ಗಾವಣೆ! ನಿಮ್ಮ ಠಾಣೆಗೆ ಬಂದವರಾರು ಪಟ್ಟಿನೋಡಿ!]]></title>
            <link>https://kannada.asianetnews.com/state/karnataka-government-massive-police-transfer-293-inspectors-and-74-dysp-list-2026-sat/articleshow-6beo47m</link>
            <guid isPermaLink="true">https://kannada.asianetnews.com/state/karnataka-government-massive-police-transfer-293-inspectors-and-74-dysp-list-2026-sat/articleshow-6beo47m</guid>
            <pubDate>Sun, 10 May 2026 19:28:49 +0530</pubDate>
            <description><![CDATA[&lt;p&gt;ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ! 293 ಇನ್ಸ್&zwnj;ಪೆಕ್ಟರ್&zwnj;ಗಳು ಹಾಗೂ 74 ಡಿವೈಎಸ್&zwnj;ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಯಾವ ಅಧಿಕಾರಿಗಳು ಬಂದಿದ್ದಾರೆ ಸಂಪೂರ್ಣ ಪಟ್ಟಿ ಮತ್ತು ವಿವರಗಳಿಗಾಗಿ ಇಲ್ಲಿ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k1a4265x54yexyhfasv0e6yc,imgname-----------------------2025-07-29t090628.790-1753760209085.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 10): ರಾ&lt;/strong&gt;ಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಭಾರಿ ಮಟ್ಟದ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದೆ. ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಪೊಲೀಸ್ ಇನ್ಸ್&zwnj;ಪೆಕ್ಟರ್ ಹಾಗೂ ಡಿವೈಎಸ್&zwnj;ಪಿ ದರ್ಜೆಯ ಅಧಿಕಾರಿಗಳ ವರ್ಗಾವಣೆಗೆ ಕೊನೆಗೂ ಚಾಲನೆ ನೀಡಲಾಗಿದ್ದು, ಒಟ್ಟು 293 ಪೊಲೀಸ್ ಇನ್ಸ್&zwnj;ಪೆಕ್ಟರ್ (ಸಿವಿಲ್) ಹಾಗೂ 74 ಡಿವೈಎಸ್&zwnj;ಪಿ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ಸಿಬ್ಬಂದಿ ಮಂಡಳಿ ನಿರ್ಧಾರ&lt;/strong&gt;&lt;/h3&gt;&lt;p&gt;ಮೇ 10, 2026ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ (Police Establishment Board) ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಡಿಜಿ ಮತ್ತು ಐಜಿಪಿ ಕಚೇರಿಯ ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;293 ಇನ್ಸ್&zwnj;ಪೆಕ್ಟರ್&zwnj;ಗಳ ಅದಲು-ಬದಲು&lt;/strong&gt;&lt;/h2&gt;&lt;p&gt;ವರ್ಗಾವಣೆಗೊಂಡ 293 ಇನ್ಸ್&zwnj;ಪೆಕ್ಟರ್&zwnj;ಗಳಲ್ಲಿ ಹೆಚ್ಚಿನವರು ಬೆಂಗಳೂರು ನಗರ, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದಂತಹ ಪ್ರಮುಖ ನಗರ ಪ್ರದೇಶಗಳ ವಿವಿಧ ಠಾಣೆಗಳಿಗೆ ನಿಯುಕ್ತಿಗೊಂಡಿದ್ದಾರೆ. ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಮತ್ತು ವಿಶೇಷ ತನಿಖಾ ತಂಡಗಳಿಂದ (SIT) ಹಲವು ಅಧಿಕಾರಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ತರಲಾಗಿದ್ದರೆ, ಕೆಲವು ಅನುಭವಿ ಅಧಿಕಾರಿಗಳನ್ನು ಕ್ರೈಂ ಬ್ರಾಂಚ್ ಮತ್ತು ಗುಪ್ತಚರ ವಿಭಾಗಗಳಿಗೆ ನಿಯೋಜಿಸಲಾಗಿದೆ. ಪ್ರಮುಖವಾಗಿ ಸೂರ್ಯನಗರ, ಮಡಿವಾಳ, ಚಂದ್ರಾ ಲೇಔಟ್&zwnj;ನಂತಹ ಪ್ರಮುಖ ಠಾಣೆಗಳ ಇನ್ಸ್&zwnj;ಪೆಕ್ಟರ್&zwnj;ಗಳನ್ನು ಬದಲಾಯಿಸಲಾಗಿದೆ.&lt;/p&gt;&lt;p&gt;&lt;/p&gt;&lt;h3&gt;&lt;strong&gt;74 ಡಿವೈಎಸ್&zwnj;ಪಿಗಳ ವರ್ಗಾವಣೆ&lt;/strong&gt;&lt;/h3&gt;&lt;p&gt;ಇನ್ಸ್&zwnj;ಪೆಕ್ಟರ್&zwnj;ಗಳ ಜೊತೆಗೆ 74 ಡಿವೈಎಸ್&zwnj;ಪಿ (DySP) ದರ್ಜೆಯ ಅಧಿಕಾರಿಗಳಿಗೂ ಹೊಸ ಸ್ಥಳಗಳನ್ನು ನಿಯುಕ್ತಿಗೊಳಿಸಲಾಗಿದೆ. ಉಪವಿಭಾಗಗಳ ಎಸಿಪಿ (ACP) ಮತ್ತು ಡಿವೈಎಸ್&zwnj;ಪಿ ಹುದ್ದೆಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಬೆಂಗಳೂರು ನಗರದ ಸಂಚಾರ ವಿಭಾಗ, ವಿಶೇಷ ಜಾರಿ ಕೋಶ (EEC) ಮತ್ತು ಜಿಲ್ಲಾ ಪೊಲೀಸ್ ಉಪವಿಭಾಗಗಳಲ್ಲಿ ಹೊಸ ಅಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ.&lt;/p&gt;&lt;p&gt;&lt;/p&gt;&lt;h3&gt;&lt;strong&gt;ತಕ್ಷಣದಿಂದ ಜಾರಿಗೆ ಆದೇಶ&lt;/strong&gt;&lt;/h3&gt;&lt;p&gt;ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹಳೆಯ ಹುದ್ದೆಗಳಿಂದ ಬಿಡುಗಡೆಗೊಂಡು, ನಿಯೋಜಿತ ಹೊಸ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ (Wait) ಅನೇಕ ಅಧಿಕಾರಿಗಳಿಗೆ ಈ ಆದೇಶದ ಮೂಲಕ ಸಕ್ರಿಯ ಹುದ್ದೆಗಳನ್ನು ನೀಡಲಾಗಿದೆ. ಪ್ರಧಾನಿ ಮೋದಿ ಅವರ ಭೇಟಿ ಹಾಗೂ ರಾಜ್ಯದ ಹವಾಮಾನ ವೈಪರೀತ್ಯದಂತಹ ಸವಾಲುಗಳ ನಡುವೆಯೇ ಈ ವರ್ಗಾವಣೆ ನಡೆದಿರುವುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-government-massive-police-transfer-293-inspectors-and-74-dysp-list-2026-sat/articleshow-6beo47m"/>
        </item>
        <item>
            <title><![CDATA[ಒಳ ಮೀಸಲಾತಿಯಿಂದ ಯಾರಿಗೂ ಅನ್ಯಾಯ ಆಗಲ್ಲ: ಸಚಿವ ಕೆ.ಎಚ್‌.ಮುನಿಯಪ್ಪ]]></title>
            <link>https://kannada.asianetnews.com/karnataka-districts/karnataka-sc-internal-reservation-formula-kh-muniyappa-statement-gvd/articleshow-eb209fs</link>
            <guid isPermaLink="true">https://kannada.asianetnews.com/karnataka-districts/karnataka-sc-internal-reservation-formula-kh-muniyappa-statement-gvd/articleshow-eb209fs</guid>
            <pubDate>Sun, 10 May 2026 19:16:59 +0530</pubDate>
            <description><![CDATA[&lt;p&gt;ಒಳ ಮೀಸಲಾತಿಗೆ ಸಂಬಂಧಿಸಿ ವಿಶ್ರಾಂತ ನ್ಯಾ.ನಾಗಮೋಹನ್&zwnj; ದಾಸ್&zwnj; ವರದಿಯನ್ನು ಕಾಂಗ್ರೆಸ್&zwnj; ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಭೆ ಅವಿರೋಧವಾಗಿ ಒಪ್ಪಿಕೊಂಡಿದೆ ಸಚಿವ ಕೆ.ಎಚ್&zwnj;.ಮುನಿಯಪ್ಪ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jd6j1a3a88tsmt4bm25hk3jr,imgname-1.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.10): &lt;/strong&gt;ಒಳ ಮೀಸಲಾತಿಗೆ ಸಂಬಂಧಿಸಿ ವಿಶ್ರಾಂತ ನ್ಯಾ.ನಾಗಮೋಹನ್&zwnj; ದಾಸ್&zwnj; ವರದಿಯನ್ನು ಕಾಂಗ್ರೆಸ್&zwnj; ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಭೆ ಅವಿರೋಧವಾಗಿ ಒಪ್ಪಿಕೊಂಡಿದೆ. ಯಾವ ಜಾತಿಗಳಿಗೂ ಇದರಿಂದ ಅನ್ಯಾಯ ಆಗುವುದಿಲ್ಲ ಎಂದು ಆಹಾರ ಸಚಿವ ಕೆ.ಎಚ್&zwnj;.ಮುನಿಯಪ್ಪ ಹೇಳಿದ್ದಾರೆ.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡುವಂತೆ ನ್ಯಾಯಾಲಯ ಹೇಳಿತ್ತು. ಶೇ.56ಕ್ಕಿಂತ ಮೇಲೆ ಹೋಗಬಾರದು ಎಂದು ಸೂಚಿಸಿದ್ದರಿಂದ ನಾವು ಈ ಹಿಂದೆ ಶೇ.56ಕ್ಕೆ 6-6-5 ಅನುಪಾತದಲ್ಲಿ ಮಾಡಿದ್ದೆವು. ಇದೀಗ ಪರಿಷ್ಕೃತ ಸೂತ್ರದಲ್ಲಿ ಪರಿಶಿಷ್ಟ ಜಾತಿಯ ಶೇ.15ರ ಒಳ ಮೀಸಲಾತಿಯನ್ನು 5.25-5.25-4.5 ಅನುಪಾತದಲ್ಲಿ (ಎಡಗೈ-ಶೇ.5.25, ಬಲಗೈ-ಶೇ.5.25, ಇತರೆ- ಶೇ.4.5) ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಕಾಂಗ್ರೆಸ್&zwnj;ನಿಂದ ದಿಟ್ಟ ತೀರ್ಮಾನ&lt;/strong&gt;&lt;/h2&gt;&lt;p&gt;ಇಲ್ಲಿ ಕೊರಮ, ಕೊರಚ, ಲಂಬಾಣಿ ಸೇರಿ ಯಾವ ಜಾತಿಗಳಿಗೂ ಅನ್ಯಾಯ ಆಗುವುದಿಲ್ಲ. ನಾಗಮೋಹನ್&zwnj; ದಾಸ್&zwnj; ವರದಿಯನ್ನು ನಾವು ಸಂಪೂರ್ಣವಾಗಿ ಒಪ್ಪಿಕೊಂಡು ಒಳಮೀಸಲು ಜಾರಿ ಮಾಡಿದ್ದೇವೆ. ಇಂಥ ಒಂದು ದಿಟ್ಟ ತೀರ್ಮಾನವನ್ನು ಕಾಂಗ್ರೆಸ್&zwnj; ಸರ್ಕಾರ ಮಾಡಿದೆ. 101 ಜಾತಿಯಿಂದ ವಂಚಿತರಾಗಿದ್ದರೂ ಅವರಿಗೂ ನ್ಯಾಯ ಸಿಗುವಂತಾಗಿದೆ ಎಂದು ಹೇಳಿದರು.&lt;/p&gt;&lt;p&gt;ರೋಸ್ಟರ್ ಬಿಂದುಗಳಲ್ಲಿ 15 ವರೆಗೂ ಅವಕಾಶ ಇದೆ. 14.8 ಅಥವಾ 15 ಬಂದರೆ 12 ಸಾಮಾನ್ಯ, ಮೂರು ಒಳ ಮೀಸಲಾತಿ ಬರುತ್ತದೆ. 14 ಬಂದಾಗ ಎ.ಬಿ.ಗೆ ಸಿಗುತ್ತೆ, ಸಿ ಗೆ ಇಲ್ಲ. ಇದಕ್ಕೆ 101 ಜಾತಿಗಳಲ್ಲಿ ಇರುವವರು ಸ್ಪರ್ಧಿಸಲಿ. ಎಲ್ಲರಿಗೂ ಅನ್ವಯವಾಗುವಂತೆ 101 ಜಾತಿಗಳಿಗೂ ಅನ್ಯಾಯ ಆಗದಂತೆ ಒಳಮೀಸಲು ತಂದಿದ್ದೇವೆ ಎಂದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/karnataka-sc-internal-reservation-formula-kh-muniyappa-statement-gvd/articleshow-eb209fs"/>
        </item>
        <item>
            <title><![CDATA[ಭಾರತೀಯ ರೈಲ್ವೆ ವೇಯ್ಟಿಂಗ್ ಲಿಸ್ಟ್  ಸಮಸ್ಯೆ, ಬರೋಬ್ಬರಿ 3.39 ಕೋಟಿ ಪ್ರಯಾಣಿಕರು ಪ್ರಯಾಣ ವಂಚಿತ!]]></title>
            <link>https://kannada.asianetnews.com/india-news/indian-railways-crisis-3-39-crore-passengers-missed-travel-in-2025-26-due-to-unconfirmed-waitlist-tickets-gdp/articleshow-40wo98g</link>
            <guid isPermaLink="true">https://kannada.asianetnews.com/india-news/indian-railways-crisis-3-39-crore-passengers-missed-travel-in-2025-26-due-to-unconfirmed-waitlist-tickets-gdp/articleshow-40wo98g</guid>
            <pubDate>Sun, 10 May 2026 19:06:32 +0530</pubDate>
            <description><![CDATA[2025-26ನೇ ಹಣಕಾಸು ವರ್ಷದಲ್ಲಿ, ವೇಯ್ಟಿಂಗ್ ಲಿಸ್ಟ್ ಟಿಕೆಟ್&zwnj;ಗಳು ರದ್ದಾದ ಕಾರಣ 3.39 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣದಿಂದ ವಂಚಿತರಾಗಿದ್ದಾರೆ ಎಂದು ಆರ್&zwnj;ಟಿಐ ವರದಿಯು ಬಹಿರಂಗಪಡಿಸಿದೆ. ಸ್ಲೀಪರ್ ಮತ್ತು 3 ಎಸಿ ಕ್ಲಾಸ್&zwnj;ಗಳಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಕಷ್ಟ ಹೆಚ್ಚುತ್ತಿರುವುದು ಭಾರತೀಯ ರೈಲ್ವೆಯ ಮೂಲಭೂತ ವೈಫಲ್ಯವನ್ನು ತೋರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01e40mz48ce66wyq5jk9rsm6t1,imgname-fotojet--5--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;2025-26ನೇ ಹಣಕಾಸು ವರ್ಷದಲ್ಲಿ ಭಾರತದಲ್ಲಿ ರೈಲ್ವೆ ಪ್ರಯಾಣಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಯೊಂದು ಆರ್&zwnj;ಟಿಐ ಮೂಲಕ ಬಹಿರಂಗವಾಗಿದೆ. ವೇಯ್ಟಿಂಗ್ ಲಿಸ್ಟ್ ಟಿಕೆಟ್&zwnj;ಗಳು ದೃಢೀಕರಿಸದೆ ಹಾಗೇ ಉಳಿದು ಸ್ವಯಂಚಾಲಿತವಾಗಿ ರದ್ದಾಗಿರುವ ಕಾರಣದಿಂದ ಒಟ್ಟು 3.39 ಕೋಟಿ ಪ್ರಯಾಣಿಕರು ತಮ್ಮ ಪ್ರಯಾಣದಿಂದ ವಂಚಿತರಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಇದರಿಂದ ಪ್ರತಿ ಕ್ಷಣಕ್ಕೂ ಒಂದಕ್ಕಿಂತ ಹೆಚ್ಚು ಪ್ರಯಾಣಿಕರು ರೈಲಿನಲ್ಲಿ ಆಸನ ಸಿಗದೆ ಪ್ರಯಾಣದ ಅವಕಾಶವನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.&lt;/p&gt;&lt;p&gt;ನೀಮಚ್ ಮೂಲದ ಆರ್&zwnj;ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ರೈಲ್ವೆ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ, 2025-26ನೇ ಸಾಲಿನಲ್ಲಿ ಈ ಪ್ರಮಾಣವು ಭಾರೀ ಮಟ್ಟದಲ್ಲಿ ಏರಿಕೆಯಾಗಿದೆ. ಚಾರ್ಟ್ ಸಿದ್ಧಪಡಿಸುವ ವೇಳೆಗೆ ವೇಯ್ಟಿಂಗ್ ಲಿಸ್ಟ್ ಟಿಕೆಟ್&zwnj;ಗಳು ದೃಢೀಕರಿಸದೆ ಉಳಿದ ಹಿನ್ನೆಲೆಯಲ್ಲಿ ಅವು ಸ್ವಯಂಚಾಲಿತವಾಗಿ ರದ್ದುಗೊಂಡು ಲಕ್ಷಾಂತರ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಾಹಿತಿಯಲ್ಲಿ ವರ್ಗವಾರು ವಿವರಗಳೂ ಸೇರಿದ್ದು, ಸ್ಲೀಪರ್ ಕ್ಲಾಸ್ ಮತ್ತು 3 ಎಸಿ ವಿಭಾಗಗಳಲ್ಲಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗದೆ ವಂಚಿತರಾಗಿದ್ದಾರೆ ಅಂಶ ಬಹಿರಂಗವಾಗಿದೆ.&lt;/p&gt;&lt;h2&gt;ಗಂಟೆಗೆ ಸುಮಾರು 3,870 ಪ್ರಯಾಣಿಕರು ಪ್ರಯಾಣದಿಂದ ವಂಚಿತ&lt;/h2&gt;&lt;p&gt;ಈ ಸಂಖ್ಯೆಯನ್ನು ದಿನವಾರು ಮತ್ತು ಸಮಯವಾರು ಹಂಚಿಕೆ ಮಾಡಿದಾಗ ಸಮಸ್ಯೆಯ ತೀವ್ರತೆ ಇನ್ನಷ್ಟು ಹೆಚ್ಚಿದೆ. ದಿನಕ್ಕೆ ಸರಾಸರಿ 92,877 ಪ್ರಯಾಣಿಕರು, ಗಂಟೆಗೆ ಸುಮಾರು 3,870 ಪ್ರಯಾಣಿಕರು, ನಿಮಿಷಕ್ಕೆ 64 ಪ್ರಯಾಣಿಕರು ಮತ್ತು ಪ್ರತಿ ಸೆಕೆಂಡಿಗೆ ಒಂದಕ್ಕಿಂತ ಹೆಚ್ಚು ಪ್ರಯಾಣಿಕರು ರೈಲು ಪ್ರಯಾಣದಿಂದ ವಂಚಿತರಾಗುತ್ತಿದ್ದಾರೆ. ಇದು ಕೇವಲ ಅಂಕಿಅಂಶವಲ್ಲ ಲಕ್ಷಾಂತರ ಜನರ ದಿನನಿತ್ಯದ ಬದುಕಿನ ಮೇಲೆ ಬೀರಿರುವ ಪರಿಣಾಮವನ್ನು ಸೂಚಿಸುವ ಗಂಭೀರ ವಿಷಯವಾಗಿದೆ. ಭಾರತದಲ್ಲಿ ರೈಲುಗಳು ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಜನಜೀವನದ ಅವಿಭಾಜ್ಯ ಅಂಗವಾಗಿದೆ. ಕಾರ್ಮಿಕರು, ವಿದ್ಯಾರ್ಥಿಗಳು, ರೋಗಿಗಳು, ಕುಟುಂಬಗಳು, ಯಾತ್ರಿಕರು ಮತ್ತು ಸಣ್ಣ ವ್ಯಾಪಾರಿಗಳು ಸೇರಿದಂತೆ ಅನೇಕ ವರ್ಗದ ಜನರು ರೈಲಿನ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ದೇಶದಲ್ಲಿ ವೇಯ್ಟಿಂಗ್ ಲಿಸ್ಟ್ ಎಂಬ ಪದದ ಹಿಂದೆ ಅಡಗಿರುವ ಈ ಸಮಸ್ಯೆ ರಾಷ್ಟ್ರೀಯ ಚಲನಶೀಲತೆಯ ವೈಫಲ್ಯವನ್ನು ತೋರಿಸುತ್ತದೆ.&lt;/p&gt;&lt;h2&gt;ವರ್ಷದಿಂದ ವರ್ಷಕ್ಕೆ ಏರುತ್ತಿರುವ ಅಂಕಿ ಅಂಶ&lt;/h2&gt;&lt;p&gt;ದತ್ತಾಂಶವು ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಸೂಚಿಸಿದೆ. 2021-22ರಲ್ಲಿ ಸುಮಾರು 1.65 ಕೋಟಿ ಪ್ರಯಾಣಿಕರು ಕನ್ಫಮೆಷನ್ ಕೊರತೆಯಿಂದ ಪ್ರಯಾಣಿಸಲು ಸಾಧ್ಯವಾಗಲಿಲ್ಲ. 2022-23ರಲ್ಲಿ ಈ ಸಂಖ್ಯೆ 2.72 ಕೋಟಿಗೆ ಏರಿತು. 2023-24ರಲ್ಲಿ 2.96 ಕೋಟಿ, 2024-25ರಲ್ಲಿ 3.27 ಕೋಟಿ ಮತ್ತು ಇದೀಗ 2025-26ರಲ್ಲಿ 3.39 ಕೋಟಿಗೆ ತಲುಪಿದೆ. ಈ ಏರಿಕೆ ನಿರಂತರವಾಗಿ ಮುಂದುವರಿಯುತ್ತಿರುವುದರಿಂದ, ಸಮಸ್ಯೆ ಮತ್ತಷ್ಟು ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ.&lt;/p&gt;&lt;p&gt;ಇದು ಸಾಮಾನ್ಯ ವರ್ಗದ ಪ್ರಯಾಣಿಕರ ಮೇಲೆ ಭಾರೀ ಪರಿಣಾಮ ಬೀರಿದೆ. ಸ್ಲೀಪರ್ ಕ್ಲಾಸ್ ಮಾತ್ರವೇ 1.68 ಕೋಟಿ ಪ್ರಯಾಣಿಕರನ್ನು ಬಾಧಿಸಿದ್ದು, ಇದು ಎಲ್ಲಾ ವರ್ಗಗಳಲ್ಲಿ ಅತಿ ಹೆಚ್ಚು. ಇದು ಕಡಿಮೆ ಆದಾಯದ ಜನರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಣ್ಣ ಪಟ್ಟಣದ ಕುಟುಂಬಗಳು ಹೆಚ್ಚಾಗಿ ಅವಲಂಬಿಸುವ ವಿಭಾಗವಾಗಿರುವುದರಿಂದ, ಅವರ ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರಿದೆ.&lt;/p&gt;&lt;p&gt;ಮುಂದಿನ ಸ್ಥಾನದಲ್ಲಿ 3 ಎಸಿ ವಿಭಾಗವಿದ್ದು, ಇಲ್ಲಿ 74.55 ಲಕ್ಷ ಪ್ರಯಾಣಿಕರು ಪ್ರಯಾಣದ ಅವಕಾಶ ಕಳೆದುಕೊಂಡಿದ್ದಾರೆ. 2 ಎಸಿ ವಿಭಾಗದಲ್ಲಿಯೂ ಗಮನಾರ್ಹ ಪ್ರಮಾಣದ ಪ್ರಯಾಣಿಕರು ಕೂಡ ವಂಚಿತರಾಗಿದ್ದಾರೆ. ಈ ಸಮಸ್ಯೆ ಈಗ ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಎಲ್ಲಾ ವರ್ಗಗಳಿಗೂ ವ್ಯಾಪಿಸಿರುವುದು ಕೂಡ ದೊಡ್ಡ ವಿಚಾದದ ಸಂಗತಿಯಾಗಿದೆ&lt;/p&gt;&lt;p&gt;ಸ್ವಯಂ ರದ್ದಾದ ಟಿಕೆಟ್ ಕೇವಲ ಹಣ ಮರಳಿಸುವ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ . ಇದು ತಪ್ಪಿದ ಪರೀಕ್ಷೆ, ಕಳೆದುಹೋದ ಉದ್ಯೋಗದ ಅವಕಾಶ, ವಿಳಂಬವಾದ ವೈದ್ಯಕೀಯ ಚಿಕಿತ್ಸೆ, ಮಿಸ್ ಆದ ಕುಟುಂಬ ಕಾರ್ಯಕ್ರಮಗಳು ಅಥವಾ ತುರ್ತು ಪ್ರಯಾಣವನ್ನು ನೆರವೇರಿಸಲಾಗದ ಪರಿಸ್ಥಿತಿಯನ್ನು ಸೂಚಿಸುತ್ತದೆ. ಅಂದರೆ, ಇದರ ಪರಿಣಾಮ ವ್ಯಕ್ತಿಯ ಜೀವನದ ಅನೇಕ ಪ್ರಮುಖ ವಿಚಾರಗಳ ಮೇಲೆ ಬಿದ್ದಿದೆ.&lt;/p&gt;&lt;p&gt;ಈ ಕುರಿತು ಚಂದ್ರಶೇಖರ್ ಗೌರ್ ಅವರು ಪ್ರತಿಕ್ರಿಯೆ ನೀಡುತ್ತಾ, ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳಾದರೂ ದೃಢೀಕೃತ ರೈಲು ಟಿಕೆಟ್ ಪಡೆಯುವುದು ಅದೃಷ್ಟದ ವಿಷಯವಾಗಿರಬಾರದು. ಅದು ಮೂಲಭೂತ ಸೌಲಭ್ಯವಾಗಬೇಕು. ಭವಿಷ್ಯದ ದೊಡ್ಡ ಯೋಜನೆಗಳ ಕನಸುಗಳನ್ನು ತೋರಿಸುವ ಬದಲು, ಈಗಲೇ ಈ ಸಮಸ್ಯೆಗೆ ಸ್ಪಷ್ಟ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ರೈಲ್ವೆ ಇಲಾಖೆ ಸಾಮಾನ್ಯವಾಗಿ ಆಧುನಿಕ ನಿಲ್ದಾಣಗಳು, ವೇಗದ ರೈಲುಗಳು, ಹೊಸ ಕಾರಿಡಾರ್&zwnj;ಗಳು ಮತ್ತು ಭವಿಷ್ಯನಿರ್ದೇಶಿತ ಮೂಲಸೌಕರ್ಯಗಳ ಬಗ್ಗೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಮೂಲಭೂತವಾಗಿ ಕೋಟ್ಯಂತರ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದಿದ್ದರೆ, ಆಧುನೀಕರಣದ ನಿಜವಾದ ಅರ್ಥವೇನು?&lt;/p&gt;&lt;p&gt;ಒಟ್ಟಿನಲ್ಲಿ, ಈ ದತ್ತಾಂಶವು ಭಾರತದ ರೈಲ್ವೆ ವ್ಯವಸ್ಥೆಯಲ್ಲಿ ತಕ್ಷಣದ ಸುಧಾರಣೆಗಳ ಅಗತ್ಯವಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸೇವೆಗಳನ್ನು ವಿಸ್ತರಿಸುವುದು, ಹೆಚ್ಚುವರಿ ರೈಲುಗಳು ಹಾಗೂ ಬೋಗಿಗಳನ್ನು ಪರಿಚಯಿಸುವುದು ಮತ್ತು ಟಿಕೆಟ್ ವ್ಯವಸ್ಥೆಯನ್ನು ಸುಧಾರಿಸುವುದು ಸೇರಿದಂತೆ ಹಲವು ಕ್ರಮಗಳನ್ನು ತಕ್ಷಣವೇ ಜಾರಿಗೆ ತರುವುದು ಅನಿವಾರ್ಯವಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/indian-railways-crisis-3-39-crore-passengers-missed-travel-in-2025-26-due-to-unconfirmed-waitlist-tickets-gdp/articleshow-40wo98g"/>
        </item>
        <item>
            <title><![CDATA[ಹಾವು ಹಿಡಿಯಲು ಬಂದ ಉರಗ ತಜ್ಞ ರಜಾಕ್ ಶಾ ಹೊಟ್ಟೆಗೆ ಕಚ್ಚಿದ 15 ಅಡಿ ಉದ್ದದ ಹೆಬ್ಬಾವು; ಮುಂದೇನಾಯ್ತು ನೋಡಿ!]]></title>
            <link>https://kannada.asianetnews.com/gallery/state/python-attacks-on-snake-expert-razak-shah-during-rescue-in-dandeli-15-foot-python-safely-released-sat-vysgzbi</link>
            <guid isPermaLink="true">https://kannada.asianetnews.com/gallery/state/python-attacks-on-snake-expert-razak-shah-during-rescue-in-dandeli-15-foot-python-safely-released-sat-vysgzbi</guid>
            <pubDate>Sun, 10 May 2026 18:49:29 +0530</pubDate>
            <description><![CDATA[ದಾಂಡೇಲಿಯಲ್ಲಿ 15 ಅಡಿ ಉದ್ದದ ಬೃಹತ್ ಹೆಬ್ಬಾವನ್ನು ರಕ್ಷಿಸುವಾಗ ಉರಗ ತಜ್ಞ ರಾಜಾಕ್ ಶಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಬ್ಬಾವು ಕಚ್ಚಿದರೂ ಧೈರ್ಯಗೆಡದೆ, ಅದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡುವ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8zkmppnzb1fww74hyafpz1,imgname-screenshot-2026-05-10-183014-1778418045654.png" type="image/jpeg" height="390" width="690"/>
            <content:encoded><![CDATA[ದಾಂಡೇಲಿಯಲ್ಲಿ 15 ಅಡಿ ಉದ್ದದ ಬೃಹತ್ ಹೆಬ್ಬಾವನ್ನು ರಕ್ಷಿಸುವಾಗ ಉರಗ ತಜ್ಞ ರಾಜಾಕ್ ಶಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಬ್ಬಾವು ಕಚ್ಚಿದರೂ ಧೈರ್ಯಗೆಡದೆ, ಅದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡುವ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಬೃಹತ್ ಹೆಬ್ಬಾವೊಂದನ್ನು ರಕ್ಷಿಸುವ ಕಾರ್ಯಾಚರಣೆ ವೇಳೆ ಉರಗ ತಜ್ಞರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೀವದ ಹಂಗು ತೊರೆದು 15 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿದ ಉರಗ ತಜ್ಞ ರಾಜಾಕ್ ಶಾ ಅವರ ಸಾಹಸಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;img&gt;&lt;p&gt;ದಾಂಡೇಲಿಯ ವಿಟಿಯು (VTU) ಕಾಲೇಜು ಮೈದಾನದ ಗಟಾರಿನಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಆತಂಕಗೊಂಡ ಕಾಲೇಜು ಶಿಕ್ಷಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆಯ ಸೂಚನೆಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರಾಜಾಕ್ ಶಾ ಅವರು ಹಾವನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದರು.&lt;/p&gt;&lt;img&gt;&lt;p&gt;ಗಟಾರಿನಲ್ಲಿದ್ದ ಹಾವನ್ನು ಹೊರತೆಗೆಯುವ ಪ್ರಯತ್ನದಲ್ಲಿದ್ದಾಗ, ಹೆಬ್ಬಾವು ಹಠಾತ್ತನೆ ರಾಜಾಕ್ ಶಾ ಅವರ &lt;strong&gt;ಹೊಟ್ಟೆಯ ಭಾಗಕ್ಕೆ ಕಚ್ಚಿದೆ&lt;/strong&gt;. ಹಾವಿನ ವೇಗ ಮತ್ತು ಬಲಕ್ಕೆ ರಾಜಾಕ್ ಶಾ ಒಂದು ಕ್ಷಣ ತಬ್ಬಿಬ್ಬಾದರೂ, ಧೈರ್ಯಗೆಡದೆ ಹಾವನ್ನು ಸುರಕ್ಷಿತವಾಗಿ ಹಿಡಿದು ಬಳಿಕ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವಿನ ಕಡಿತದಿಂದ ರಾಜಾಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಹೆಬ್ಬಾವು ವಿಷಕಾರಿ ಅಲ್ಲ ಎಂಬ ನಂಬಿಕೆ ಇದೆ, ಇದು ನಿಜವೂ ಹೌದು. ಆದರೆ ಹೆಬ್ಬಾವು ಕಚ್ಚುವುದಿಲ್ಲ ಎಂಬುದು ತಪ್ಪು ಕಲ್ಪನೆ. ಉರಗ ತಜ್ಞರ ಪ್ರಕಾರ, ಹೆಬ್ಬಾವು ಎಲ್ಲ ಹಾವುಗಳಿಗಿಂತ ಅತ್ಯಂತ ಬಲವಾಗಿ ಕಚ್ಚುವ ಸಾಮರ್ಥ್ಯ ಹೊಂದಿದೆ.&lt;/p&gt;&lt;img&gt;&lt;p&gt;&lt;strong&gt;ಒಳಬಾಗಿರುವ ಹಲ್ಲುಗಳು: &lt;/strong&gt;ಹೆಬ್ಬಾವಿನ ಹಲ್ಲುಗಳು ಬಾಯಿಯ ಒಳಭಾಗಕ್ಕೆ ಬಾಗಿರುತ್ತವೆ. ಇದು ಬೇಟೆಯನ್ನು ಹಿಡಿದಾಗ ಅದು ತಪ್ಪಿಸಿಕೊಳ್ಳದಂತೆ ತಡೆಯಲು ಸಹಾಯ ಮಾಡುತ್ತದೆ. ಒಮ್ಮೆ ಹೆಬ್ಬಾವು ಕಚ್ಚಿದರೆ, ಅದು ಹಿಡಿದ ಮಾಂಸದ ಭಾಗವನ್ನೇ ಕಿತ್ತುಕೊಂಡು ಬರುವಷ್ಟು ಬಲವಾಗಿರುತ್ತದೆ.&lt;/p&gt;&lt;img&gt;&lt;p&gt;&lt;strong&gt;ನುಂಗುವ ತಂತ್ರ: &lt;/strong&gt;ಹೆಬ್ಬಾವು ತನ್ನ ಬೇಟೆಯನ್ನು ನುಂಗುವಾಗ ಅದು ವಾಪಸ್ ಹೊರಬರದಂತೆ ಈ ಒಳಬಾಗಿರುವ ಹಲ್ಲುಗಳು ಹೂಕ್&zwnj;ನಂತೆ ಕೆಲಸ ಮಾಡುತ್ತವೆ. ಹೀಗಾಗಿ ಇದರ ಬಾಯಿಗೆ ಸಿಲುಕಿದ ಪ್ರಾಣಿ ತಪ್ಪಿಸಿಕೊಳ್ಳುವುದು ಅಸಾಧ್ಯ.&lt;/p&gt;&lt;img&gt;&lt;p&gt;&lt;strong&gt;ಉಸಿರುಗಟ್ಟಿಸಿ ಕೊಲ್ಲುವ ಶಕ್ತಿ: &lt;/strong&gt;ಹೆಬ್ಬಾವು ವಿಷವನ್ನು ಬಿಡುವುದಿಲ್ಲ, ಬದಲಾಗಿ ತನ್ನ ಬೇಟೆಯನ್ನು ಗಟ್ಟಿಯಾಗಿ ಬಿಗಿದು ಸುತ್ತಿಕೊಂಡು ಉಸಿರುಗಟ್ಟಿಸುತ್ತದೆ. ರಕ್ತ ಸಂಚಾರ ನಿಲ್ಲುವಂತೆ ಮಾಡಿ ಪ್ರಾಣಿಯನ್ನು ಸಾಯಿಸಿದ ನಂತರವೇ ಅದು ನುಂಗುತ್ತದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ವಿಷವಿಲ್ಲದಿದ್ದರೂ ಹೆಬ್ಬಾವು ತನ್ನ ದೈಹಿಕ ಬಲ ಮತ್ತು ಬಲಿಷ್ಠ ಹಲ್ಲುಗಳಿಂದ ಪ್ರಾಣಾಪಾಯ ತಂದೊಡ್ಡಬಲ್ಲದು. ದಾಂಡೇಲಿಯಲ್ಲಿ ರಾಜಾಕ್ ಶಾ ಅವರು ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಒಂದು ಬೃಹತ್ ಜೀವದ ರಕ್ಷಣೆಯಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/python-attacks-on-snake-expert-razak-shah-during-rescue-in-dandeli-15-foot-python-safely-released-sat-vysgzbi"/>
        </item>
        <item>
            <title><![CDATA[ಯಕ್ಷ ಪ್ರಶ್ನೆ! ವಿಜಯ್ ಜೊತೆ ಕೆವಿಎನ್‌ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ರಾಜ್ಯಪಾಲರನ್ನು ಭೇಟಿ ಆಗಿದ್ದೇಕೆ?]]></title>
            <link>https://kannada.asianetnews.com/cine-world/why-did-kvn-productions-producer-venkat-k-narayana-accompany-thalapathy-vijay-to-meet-the-governor/articleshow-rqp4uy4</link>
            <guid isPermaLink="true">https://kannada.asianetnews.com/cine-world/why-did-kvn-productions-producer-venkat-k-narayana-accompany-thalapathy-vijay-to-meet-the-governor/articleshow-rqp4uy4</guid>
            <pubDate>Sun, 10 May 2026 18:37:19 +0530</pubDate>
            <description><![CDATA[&lt;p&gt;ಕೆಲ ದಿನಗಳ ಹಿಂದೆ ವಿಜಯ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿಯಾಗಲು ಲೊಕ ಭವನಕ್ಕೆ ಹೋದಾಗ, ಅವರ ಜೊತೆ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಕೂಡ ಕಾಣಿಸಿಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಉತ್ತರ..?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr8zdc0zwyrz2cxhyza3tw4y,imgname-venkat-k-narayana-1778417840159.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಿಯಲ್ ಲೈಫ್ 'ಜನ ನಾಯಗನ್' ಪಟ್ಟಕ್ಕೇರಿದ ದಳಪತಿ ವಿಜಯ್!&lt;/strong&gt;&lt;/p&gt;&lt;p&gt;ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ 'ದಳಪತಿ' ವಿಜಯ್ ಹೊಸ ಸುನಾಮಿ ಸೃಷ್ಟಿಸಿದ್ದಾರೆ. ಸಿನಿಮಾದಲ್ಲಿ ಅಬ್ಬರಿಸುತ್ತಿದ್ದ ಈ ರೌಡಿ ಹೀರೊ, ಈಗ ನಿಜ ಜೀವನದಲ್ಲಿ ತಮಿಳುನಾಡಿನ ಸಿಎಂ ಆಗಿ ಗದ್ದುಗೆ ಏರಿದ್ದಾರೆ. ವಿಜಯ್ ಅವರ ಈ ಐತಿಹಾಸಿಕ ಗೆಲುವನ್ನು ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಆದರೆ, ಈ ಸಂಭ್ರಮದ ನಡುವೆಯೇ ವಿಜಯ್ ಅವರ ಅಪ್ಪಟ ಅಭಿಮಾನಿಗಳನ್ನು ಒಂದು ಪ್ರಶ್ನೆ ಸತತವಾಗಿ ಕಾಡುತ್ತಿದೆ. ಅದೇನಪ್ಪಾ ಅಂದರೆ, ವಿಜಯ್ ಅವರ ಸಿನಿ ಪಯಣದ ಕೊನೆಯ ಕಾಣಿಕೆ 'ಜನ ನಾಯಗನ್' ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬುದು!&lt;/p&gt;&lt;p&gt;ಲೊಕ ಭವನದಲ್ಲಿ ನಿರ್ಮಾಪಕ: ಶುರುವಾಯ್ತು ಹೊಸ ಚರ್ಚೆ!&lt;/p&gt;&lt;p&gt;ಕೆಲ ದಿನಗಳ ಹಿಂದೆ ವಿಜಯ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿಯಾಗಲು ಲೊಕ ಭವನಕ್ಕೆ ಹೋದಾಗ, ಅವರ ಜೊತೆ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಕೂಡ ಕಾಣಿಸಿಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ರಾಜಕೀಯಕ್ಕೂ ಸಿನಿಮಾ ನಿರ್ಮಾಪಕರಿಗೂ ಏನು ಸಂಬಂಧ? ಟಿವಿಕೆ ಪಕ್ಷದಲ್ಲಿ ಯಾವುದೇ ಸ್ಥಾನವಿಲ್ಲದಿದ್ದರೂ ಇವರು ಯಾಕೆ ವಿಜಯ್ ಜೊತೆಗಿದ್ದಾರೆ? ಎಂಬ ಪ್ರಶ್ನೆಗಳು ಎದ್ದಿದ್ದವು.&lt;/p&gt;&lt;h2&gt;&quot;ನಮ್ಮದು ಬರೀ ಸಿನಿಮಾವಲ್ಲ, ಇದು ನಿಜವಾದ ಜನನಾಯಕನ ಕಥೆ!&quot;&lt;/h2&gt;&lt;p&gt;ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇಡೀ ಕಾಲಿವುಡ್ ಅಂಗಳವೇ ಸಾಕ್ಷಿಯಾಗಿತ್ತು. ಇದೇ ಸಂದರ್ಭದಲ್ಲಿ 'ಜನ ನಾಯಗನ್' ಚಿತ್ರದ ನಿರ್ಮಾಪಕ, ಕೆವಿಎನ್ (KVN) ಪ್ರೊಡಕ್ಷನ್ಸ್&zwnj;ನ ವೆಂಕಟ್ ಕೆ. ನಾರಾಯಣ ಅವರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿನಿಮಾದ ಬಗ್ಗೆ ಕುತೂಹಲಕಾರಿ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. &quot;ನಮಗೆ ಅತೀವ ಸಂತೋಷವಾಗುತ್ತಿದೆ. ಆರಂಭದಲ್ಲಿ ಎಲ್ಲರೂ 'ಜನ ನಾಯಗನ್' ಎನ್ನುವುದು ಕೇವಲ ಒಂದು ಸಿನಿಮಾದ ಶೀರ್ಷಿಕೆ ಎಂದುಕೊಂಡಿದ್ದರು. ಆದರೆ ಇಂದು ವಿಜಯ್ ಅವರು ನಿಜ ಜೀವನದಲ್ಲೂ ತಮಿಳುನಾಡಿನ 'ಜನ ನಾಯಗನ್' (ಜನನಾಯಕ) ಆಗಿ ಹೊರಹೊಮ್ಮಿದ್ದಾರೆ. ಇದು ನಮಗೆ ಹೆಮ್ಮೆಯ ವಿಚಾರ&quot; ಎಂದಿದ್ದಾರೆ.&lt;/p&gt;&lt;h3&gt;ಸೆನ್ಸಾರ್ ಮಂಡಳಿಯ ಅಡೆತಡೆಗಳು ಯಾವಾಗ ಬಗೆಹರಿಯಲಿವೆ?&lt;/h3&gt;&lt;p&gt;ವಿಜಯ್ ಅವರ ರಾಜಕೀಯ ಪ್ರವೇಶದ ಕಾರಣದಿಂದಾಗಿ 'ಜನ ನಾಯಗನ್' ಚಿತ್ರಕ್ಕೆ ಆರಂಭದಿಂದಲೂ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ವಾಸ್ತವವಾಗಿ ಈ ಸಿನಿಮಾ ಜನವರಿ 9ರಂದೇ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆಯಾಗಿ ಈಗ 4 ತಿಂಗಳು ಕಳೆದರೂ ಸೆನ್ಸಾರ್ ಮಂಡಳಿಯಿಂದ (CBFC) ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಪಕರು, &quot;ನಾವು ಪ್ರಸ್ತುತ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇವೆ. ಪ್ರಮಾಣಪತ್ರ ಕೈ ಸೇರಿದ ಕ್ಷಣವೇ ಬಿಡುಗಡೆಯ ದಿನಾಂಕವನ್ನು ಘೋಷಿಸುತ್ತೇವೆ&quot; ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.&lt;/p&gt;&lt;p&gt;ಆದರೆ, 'ವಿಜಯ್ ಜೊತೆ ಕೆವಿಎನ್&zwnj; ಪ್ರೊಡಕ್ಷನ್ಸ್&zwnj;ನ ವೆಂಕಟ್ ಕೆ. ನಾರಾಯಣ ರಾಜ್ಯಪಾಲರನ್ನು ಭೇಟಿ ಆಗಿದ್ದೇಕೆ? ಎಂಬ ಆ ಪ್ರಶ್ನೆಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ ಈಗ ವಿಜಯ್ ಸಿಎಂ ಆಗಿರುವುದರಿಂದ ಸಿನಿಮಾ ಬಿಡುಗಡೆಗೆ ಎದುರಾಗಿರುವ ಕಾನೂನು ಅಡೆತಡೆಗಳು ಸುಲಭವಾಗಿ ಬಗೆಹರಿಯಲಿವೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಪರದೆಯ ಮೇಲೆ 'ಜನ ನಾಯಕ'ನಾಗಿ ಕಾಣಿಸಿಕೊಳ್ಳುವ ಮುನ್ನವೇ ನಿಜ ಜೀವನದಲ್ಲಿ ರಾಜ್ಯವನ್ನಾಳಲು ಸಜ್ಜಾಗಿರುವ ದಳಪತಿ ವಿಜಯ್ ಅವರ ಕೊನೆಯ ಚಿತ್ರವನ್ನು ನೋಡಲು ಇಡೀ ದಕ್ಷಿಣ ಭಾರತವೇ ಕಾತರದಿಂದ ಕಾಯುತ್ತಿದೆ.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/why-did-kvn-productions-producer-venkat-k-narayana-accompany-thalapathy-vijay-to-meet-the-governor/articleshow-rqp4uy4"/>
        </item>
        <item>
            <title><![CDATA[ಮಣಿಪಾಲದ ಎಂಐಟಿಗೆ ವಿಶ್ವ ಗರಿ, CFA ಮಾನ್ಯತೆ ಪಡೆದ ದೇಶದ ಮೊದಲ ಎಂಜಿನಿಯರಿಂಗ್ ಸಂಸ್ಥೆ! ಇನ್ಮುಂದೆ ಜಾಗತಿಕ ಶಿಕ್ಷಣ]]></title>
            <link>https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp</link>
            <guid isPermaLink="true">https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp</guid>
            <pubDate>Sun, 10 May 2026 18:06:20 +0530</pubDate>
            <description><![CDATA[ಮಣಿಪಾಲದ ಎಂಐಟಿಯು ಪ್ರತಿಷ್ಠಿತ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನಿಂದ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆಯಾಗಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸಲಿದೆ. ಸಂಸ್ಥೆಯು 2023ರಿಂದ ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿಯಲ್ಲಿ ಬಿಟೆಕ್ ಕೋರ್ಸ್ ಅನ್ನು ಸಹ ಆರಂಭಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8xykemzxs2053j4vh0t6hw,imgname-mit-manipal--1--1778416307667.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಣಿಪಾಲ: &lt;/strong&gt;ಮಣಿಪಾಲ್ ಅಕಾಡೆಮಿ ಆಫ್&zwnj; ಹೈಯರ್&zwnj; ಎಜುಕೇಶನ್&zwnj; (ಮಾಹೆ) ವಿವಿಯ ಅಂಗ ಸಂಸ್ಥೆ ಮಣಿಪಾಲ್ ಇನ್&zwnj;ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂಐಟಿ)ಗೆ ಪ್ರತಿಷ್ಠಿತ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್ ವಿಶ್ವವಿದ್ಯಾಲಯದಿಂದ ಮಾನ್ಯತೆ ಸಿಕ್ಕಿದ್ದು, ಎಂಐಟಿಯು ಈ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ಮೇ 6ರಂದು ಮಣಿಪಾಲದಲ್ಲಿ ನಡೆದ ಕಾರ್&zwj;ಯಕ್ರಮದಲ್ಲಿ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನ ಪ್ರತಿನಿಧಿಗಳಾದ ಸೈಮ್ ಫಕಿಹ್ ಮತ್ತು ಕುಮಾರಿ ಅಂಜನಾ ನಹರ್ ಅವರು ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರಿಗೆ ಈ ಮಾನ್ಯತೆ ಪ್ರಮಾಣಪತ್ರ ಅಧಿಕೃತವಾಗಿ ಹಸ್ತಾಂತರಿಸಿದರು.&lt;/p&gt;&lt;p&gt;ಎಂಐಟಿ ನಿರ್ದೇಶಕರಾದ ಕಮಾಂಡರ್ (ಡಾ) ಅನಿಲ್ ರಾಣಾ ಮತ್ತು ಡಾ. ಕುಂಚಂ ಶ್ಯಾಮ್ ಪ್ರಸಾದ್, ಎಂಐಟಿ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, ಹ್ಯುಮಾನಿಟೀಸ್ ಅಂಡ್ ಮ್ಯಾನೇಜ್&zwnj;ಮೆಂಟ್&zwnj;ನ ಸಹ ಡೀನ್ ಡಾ. ಯೋಗೇಶ್ ಪೈ ಪಿ. ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.&lt;/p&gt;&lt;h2&gt;ಜಾಗತಿಕ ಮಟ್ಟದ ಶಿಕ್ಷಣ&lt;/h2&gt;&lt;p&gt;ಈ ಮಾನ್ಯತೆಯಿಂದ ಎಂಐಟಿ ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ದೊರೆಯಲಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವುದಲ್ಲದೆ, ಉದ್ಯಮದ ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಮತ್ತು ವಿವಿಧ ವಿದ್ಯಾರ್ಥಿವೇತನಗಳನ್ನು ಪಡೆಯಲು ದಾರಿಯಾಗಲಿದೆ.&lt;/p&gt;&lt;p&gt;ಜಾಗತಿಕ ಮಟ್ಟದಲ್ಲಿ ಹಣಕಾಸು ಮತ್ತು ಹೂಡಿಕೆ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನೊಂದಿಗೆ ಕೈಜೋಡಿಸಿರುವುದು ಎಂಐಟಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಜತೆಗೆ ಹಣಕಾಸು ಕ್ಷೇತ್ರದ ಜಾಗತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.&lt;/p&gt;&lt;h2&gt;ಬಿಟೆಕ್ ನೂತನ ಕೋರ್ಸ್ ಆರಂಭ&lt;/h2&gt;&lt;p&gt;ಸಿಎಸ್&zwnj;-ಎಫ್&zwnj;ಟಿ ಕೋರ್ಸ್ ಎಂಐಟಿಯ 2023ರಿಂದ ಬಿಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿ) ಎಂಬ ವಿನೂತನ ಕೋರ್ಸನ್ನು ಆರಂಭಿಸಿದೆ. ಕಂಪ್ಯೂಟರ್ ಸೈನ್ಸ್ ಜತೆಗೆ ಹಣಕಾಸು, ಅನಲಿಟಿಕ್ಸ್&zwnj;, ತಂತ್ರಜ್ಞಾನಗಳನ್ನು ಒಳಗೊಂಡ ಅಂತರಶಿಸ್ತೀಯ ಕೋರ್ಸ್&zwnj; ಪರಿಚಯಿಸಿದ ದೇಶದ ಮೊದಲ ಮತ್ತು ಏಕೈಕ ಸಂಸ್ಥೆ ಎಂಬ ಕೀರ್ತಿಗೆ ಎಂಐಟಿ ಪಾತ್ರವಾಗಿದೆ. ಇಂದಿನ ಆಧುನಿಕ ಉದ್ಯೋಗ ಮಾರುಕಟ್ಟೆಗೆ ಪೂರಕವಾದ ಪರಿಣಿತರನ್ನು ಸಿದ್ಧಪಡಿಸುವಲ್ಲಿ ಎಂಐಟಿ ಮಹತ್ವದ ಪಾತ್ರ ವಹಿಸುತ್ತಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp"/>
        </item>
        <item>
            <title><![CDATA[ಮಂಗಳೂರು ಕದ್ರಿಯಲ್ಲಿ ಮತ್ತೊಂದು ಉದ್ಯಾನವನಕ್ಕೆ ಸಿದ್ಧತೆ! 3.50ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಇಲ್ಲಿ ಏನೇನಿರಲಿದೆ?]]></title>
            <link>https://kannada.asianetnews.com/karnataka-districts/new-3-5-acre-park-planned-opposite-kadri-park-in-mangaluru-under-amrut-scheme-gdp/articleshow-zxggkku</link>
            <guid isPermaLink="true">https://kannada.asianetnews.com/karnataka-districts/new-3-5-acre-park-planned-opposite-kadri-park-in-mangaluru-under-amrut-scheme-gdp/articleshow-zxggkku</guid>
            <pubDate>Sun, 10 May 2026 17:38:39 +0530</pubDate>
            <description><![CDATA[ಮಂಗಳೂರಿನ ಕದ್ರಿಯಲ್ಲಿ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 3.50 ಕೋಟಿ ರೂ. ವೆಚ್ಚದಲ್ಲಿ ಹೊಸ ಉದ್ಯಾನವನ ನಿರ್ಮಾಣವಾಗಲಿದೆ. ಹಾಲಿ ಉದ್ಯಾನವನದ ಎದುರು ನಿರ್ಮಾಣವಾಗಲಿರುವ ಈ ಪಾರ್ಕ್&zwnj;ನಲ್ಲಿ ವಾಕಿಂಗ್ ಪಥ, ಸಣ್ಣ ವೇದಿಕೆ ಹಾಗೂ ಪಾರ್ಕಿಂಗ್ ಸೌಲಭ್ಯಗಳಿರಲಿವೆ. ಅಲ್ಲದೆ, ಹಳೆಯ ಪಾರ್ಕ್&zwnj;ನ ನೀರಿನ ಕೊರತೆ ನೀಗಿಸಲು ಎಸ್&zwnj;ಟಿಪಿ ನೀರು ಮರುಬಳಕೆ ಯೋಜನೆ ರೂಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8wfdqwf33qphz0s3p3n5cq,imgname-new-park-in-kadri-mangaluru-1778414761724.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ಮಂಗಳೂರಿಗೆ ಶಿಖರಪ್ರಾಯವಾಗಿರುವ ಕದ್ರಿಯ ಹಾಲಿ ಉದ್ಯಾನವನದ ಎದುರು ಭಾಗದಲ್ಲೇ ಶೀಘ್ರವೇ ಇನ್ನೊಂದು ದೊಡ್ಡ ಉದ್ಯಾನವನ ನಿರ್ಮಾಣವಾಗಲಿದೆ. ಸುಮಾರು 3.50 ಎಕರೆ ಜಾಗದಲ್ಲಿ ಕೇಂದ್ರ ಸರ್ಕಾರದ ಅಮೃತ್&zwnj; ಯೋಜನೆಯಡಿ 3.50 ಕೋಟಿ ರು. ವೆಚ್ಚದಲ್ಲಿ ಈ ಉದ್ಯಾನವನ ನಿರ್ಮಾಣವಾಗಲಿದೆ. ಕದ್ರಿ ಉದ್ಯಾನವನ ಹೊರತುಪಡಿಸಿದರೆ, ಬೇರೆ ದೊಡ್ಡ ಉದ್ಯಾನವನ ಮಂಗಳೂರಲ್ಲಿ ಇಲ್ಲ. ಉಳಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10ಕ್ಕೂ ಅಧಿಕ ಸಣ್ಣ ಪಾರ್ಕ್&zwnj;ಗಳು ಇವೆ.&lt;/p&gt;&lt;p&gt;ಕದ್ರಿಯಲ್ಲಿರುವ ಹಾಲಿ ಪಾರ್ಕ್&zwnj;ನ್ನು ತೋಟಗಾರಿಕಾ ಇಲಾಖೆ ನಿರ್ವಹಿಸುತ್ತಿದೆ. ಒಟ್ಟು 17 ಎಕರೆ ಪೈಕಿ 13 ಎಕರೆ ಪಾರ್ಕ್&zwnj; ಹಾಗೂ 4 ಎಕರೆ ಜಿಂಕೆ ಉದ್ಯಾನವಿದೆ. ಹೆಸರಿಗೆ ಪಾರ್ಕ್&zwnj; ಆದರೂ ಬೇಸಗೆಯಲ್ಲಿ ನಳನಳಿಸುವ ಸಸ್ಯಗಳು ವಿರಳ. ಯಾಕೆಂದರೆ, ಈ ಪಾರ್ಕ್&zwnj;ನಲ್ಲಿ ನೀರಿನ ಕೊರತೆ ಇದೆ. ಇದರಿಂದಾಗಿ ಪಾರ್ಕ್&zwnj; ಬಿಸಿಲಿಗೆ ಬಣಗುಡುತ್ತಿರುವಂತೆ ಕಂಡುಬರುತ್ತಿದೆ. ಪಾರ್ಕಿಂಗ್&zwnj; ಕೊರತೆಯಿಂದ ಕದ್ರಿ ಉದ್ಯಾನವನ ರಸ್ತೆಯ ಇಕ್ಕೆಲಗಳಲ್ಲೇ ಪಾರ್ಕ್&zwnj; ಮಾಡಬೇಕಾಗಿದೆ. ಕದ್ರಿ ಪಾರ್ಕ್&zwnj;ನಲ್ಲಿ ಬಯಲು ರಂಗ ಮಂದಿರ ಇದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವಗಳು ನಡೆಯುತ್ತಿರುತ್ತವೆ.&lt;/p&gt;&lt;h2&gt;2ನೇ ಪಾರ್ಕ್&zwnj; ನವೋದ್ಯಾನ:&lt;/h2&gt;&lt;p&gt;ಪ್ರಸ್ತಾವಿತ 2ನೇ ಪಾರ್ಕ್&zwnj;ನಲ್ಲಿ ಹಾಲಿ ಕದ್ರಿ ಪಾರ್ಕ್&zwnj;ನಲ್ಲಿ ಇಲ್ಲದ ಅನೇಕ ಸಂಗತಿಗಳು ಇರಲಿವೆ. ಹೊಸ ಪಾರ್ಕ್&zwnj;ನಲ್ಲಿ ಸಣ್ಣ ವೇದಿಕೆ, ಗಾರ್ಡನ್&zwnj;, ವಾಕಿಂಗ್&zwnj; ಪಥ ನಿರ್ಮಾಣವಾಗಲಿದೆ. ಅಲ್ಲದೆ ಪಾರ್ಕ್&zwnj;ನ ಪ್ರವೇಶ ದ್ವಾರದ ಎರಡೂ ಕಡೆಗಳಲ್ಲಿ ಗರಿಷ್ಠ ವಾಹನಗಳ ನಿಲುಗಡೆಗೆ ಉದ್ದೇಶಿಸಲಾಗಿದೆ.&lt;/p&gt;&lt;p&gt;ಜಿಲ್ಲಾಧಿಕಾರಿ ದರ್ಶನ್&zwnj;, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್&zwnj;, ಮೂಡಾ ಕಮಿಷನರ್&zwnj; ಮೊಹಮ್ಮದ್&zwnj; ನಝೀರ್&zwnj; ಹಾಗೂ ಪಾಲಿಕೆ ಉಪ ಆಯುಕ್ತ ನರೇಶ್&zwnj; ಶೆಣೈ ಮತ್ತಿತರರು ಪ್ರಸ್ತಾವಿತ ಹೊಸ ಪಾರ್ಕ್&zwnj; ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;ಕದ್ರಿ ಪಾರ್ಕ್&zwnj;ಗೆ ಎಸ್&zwnj;ಟಿಪಿ ನೀರು ಮರು ಬಳಕೆಗೆ ಯೋಜನೆ&lt;/h2&gt;&lt;p&gt;ಕದ್ರಿಯ ಹಾಲಿ ಉದ್ಯಾನವನ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದನ್ನು ನಿವಾರಿಸಲು ಕದ್ರಿ ಉದ್ಯಾನ ಸಮಿತಿ ಬೆಂದೂರ್&zwnj;ವೆಲ್&zwnj; ಎಸ್&zwnj;ಟಿಪಿ ನೀರನ್ನು ಮರು ಬಳಕೆ ಮಾಡಲು ಯೋಜನೆ ರೂಪಿಸಿದೆ. ಅಲ್ಲಿಂದ ಶೇ.30ರಷ್ಟು ಮರು ಬಳಕೆಯ ನೀರನ್ನು ಪಂಪ್&zwnj; ಮಾಡಿ ಕದ್ರಿ ಪಾರ್ಕ್&zwnj; ಬಳಿಯ ದೊಡ್ಡ ಟ್ಯಾಂಕ್&zwnj;ನಲ್ಲಿ ಸಂಗ್ರಹಿಸುವುದು. 70 ಲಕ್ಷ ಲೀಟರ್&zwnj; ಸಾಮರ್ಥ್ಯದ ಈ ಟ್ಯಾಂಕ್&zwnj;ನಿಂದ ಇಡೀ ಕದ್ರಿ ಪಾರ್ಕ್&zwnj;ಗೆ ನೀರುಣಿಸಲು ಬಳಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಪಾರ್ಕ್&zwnj;ಗೆ ನೀರಿನ ಕೊರತೆ ದೂರವಾಗಲಿದೆ.&lt;/p&gt;&lt;p&gt;ಕದ್ರಿ ಪಾರ್ಕ್&zwnj;ನ ಎದುರು ಭಾಗದಲ್ಲಿ ಈ ಹಿಂದೆ ಪಾರ್ಕ್&zwnj; ಆಗಿ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲಿ ಸ್ಕೇಟಿಂಗ್&zwnj; ಜಾಗದ ಬಳಿ ಇನ್ನೊಂದು ಪಾರ್ಕ್&zwnj;ನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಹೊಸ ಪಾರ್ಕ್&zwnj;ನಲ್ಲಿ ಏನೇನು ಇರಬೇಕು ಎಂಬ ಬಗ್ಗೆ ರೂಪುರೇಷೆ ಹಾಕಿಕೊಳ್ಳಲಾಗಿದೆ. ಈ ಕುರಿತ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ.&lt;/p&gt;&lt;p&gt;-ಜಗನ್ನಾಥ ಗಂಭೀರ್&zwnj;, ಸದಸ್ಯರು, ಕದ್ರಿ ಉದ್ಯಾನ ಸಮಿತಿ ಕಾರ್ಯಕಾರಿ ಸಮಿತಿ&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/new-3-5-acre-park-planned-opposite-kadri-park-in-mangaluru-under-amrut-scheme-gdp/articleshow-zxggkku"/>
        </item>
        <item>
            <title><![CDATA[ವಿಜಯ್ ಸಿಎಂ ಆದ ಬೆನ್ನಲ್ಲೇ ವಿವಾದ ಶುರು, ಪ್ರಮಾಣವಚನದಲ್ಲಿ ತಮಿಳು ಗೀತೆಗೆ 3ನೇ ಸ್ಥಾನ ಆರೋಪ]]></title>
            <link>https://kannada.asianetnews.com/india-news/vijay-faces-first-major-row-as-cm-over-tamil-song-ranking-during-oath-ceremony/articleshow-2u4r64b</link>
            <guid isPermaLink="true">https://kannada.asianetnews.com/india-news/vijay-faces-first-major-row-as-cm-over-tamil-song-ranking-during-oath-ceremony/articleshow-2u4r64b</guid>
            <pubDate>Sun, 10 May 2026 17:22:10 +0530</pubDate>
            <description><![CDATA[&lt;p&gt;ನಟ ಜೊಸೆಫ್ ವಿಜಯ್ ಮುಖ್ಯಮಂತ್ರಿ ಆದ ಬೆನ್ನಲ್ಲೇ ತಲೆನೋವು ಶುರುವಾಗಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಂಪ್ರದಾಯದ ಉಲ್ಲಂಘನೆ ಆರೋಪ ಕೇಳಿಬಂದಿದೆ. ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ತಮಿಳು ಗೀತೆ ಸ್ಥಾನವನ್ನು ಸಿಪಿಐ ಪ್ರಶ್ನಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr83qyehv4fa6vwgd6m388pc,imgname-fotojet---2026-05-10t102321.541-1778388826577.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೇ (ಮೇ.10) ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆಯಾಗಿದೆ. ನಟ ಜೊಸೆಫ್ ವಿಜಯ್ ಅವರ ಟಿವಿಕೆ ಡಿಎಂಕೆ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಮುಖ್ಯಮಂತ್ರಿಯಾಗಿ ನಟ ಜೊಸೆಫ್ ವಿಜಯ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿಯಾದ ಬೆನ್ನಲ್ಲೇ ಕೆಲ ಆದೇಶಗಳನ್ನು ಜೊಸೆಫ್ ವಿಜಯ್ ಹೊರಡಿಸಿದ್ದಾರೆ. ಆದರೆ ಸಿಎಂ ಕುರ್ಚಿಯಲ್ಲಿ ಕುಳಿತ ಬೆನ್ನಲ್ಲೇ ವಿವಾದಗಳು, ತಲೆನೋವು ಆರಂಭಗೊಂಡಿದೆ. ಇದೀಗ ಪ್ರಮಾಣವಚನ ಸಮಾರಂಭದಲ್ಲಿ ಸಂಪ್ರದಾಯ ಉಲ್ಲಂಘನೆಯಾಗಿದೆ ಎಂದು ಸಿಪಿಐ ಆರೋಪಿಸಿದೆ. ಈ ಕುರಿತು ಸ್ಪಷ್ಟನೆ ನೀಡುವಂತೆ ತಮಿಳುನಾಡು ನೂತನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.&lt;/p&gt;&lt;h2&gt;ಏನಿದು ಮೊದಲ ವಿವಾದ&lt;/h2&gt;&lt;p&gt;ನಟ ಜೊಸೆಫ್ ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ತಮಿಳು ಗೀತೆಯನ್ನು ಹಾಡಲಾಗಿದೆ. ಇಲ್ಲೇ ವಿವಾದ ಸೃಷ್ಟಿಯಾದಗಿದೆ. ಸಿಪಿಐ ಕಾರ್ಯದರ್ಶಿ ಎಂ ವೀರಪಾಂಡಿಯನ್ ಈ ಕುರಿತು ಕೆಲ ಪ್ರಮುಖ ಪ್ರಶ್ನೆ ಎತ್ತಿದ್ದಾರೆ. ವಿಜಯ್ ಪ್ರಮಾಣವಚನ ಸಮಾರಂಭದಲ್ಲಿ ವಂದೇ ಮಾತರಂ ಬಳಿಕ ರಾಷ್ಟ್ರಗೀತೆ ಹಾಗೂ ತಮಿಳು ವಂದನೆ ಗೀತೆ ಹಾಡಲಾಗಿದೆ. ಈ ಮೂಲಕ ತಮಿಳು ತಾಯಿ ವಂದನೆ (Thamizhthai Vaazhthu) ಗೀತೆಗೆ ಮೂರನೇ ಸ್ಥಾನ ನೀಡಿದ್ದಾರೆ. ಇದು ಸಂಪ್ರದಾಯದ ಉಲ್ಲಂಘನೆ ಎಂದು ಎಂ ವೀರಪಾಂಡಿಯನ್ ಆರೋಪಿಸಿದ್ದಾರೆ.&lt;/p&gt;&lt;p&gt;ತಮಿಳುನಾಡು ಸರ್ಕಾರ ಆಯೋಜಿಸಿದ ಕಾರ್ಯಕ್ರಮ ಇದು. ಇಲ್ಲಿ ವಂದೇ ಮಾತರಂ ಹಾಡಿಗೆ ಪ್ರಾಧಾನ್ಯತೆ ನೀಡಲಾಗಿದೆ. ಆದರೆ ರಾಜ್ಯದ ತಮಿಳು ಗೀತೆಗೆ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಇದು ಸ್ಥಾಪಿತ ಸಂಪ್ರದಾಯದಕ್ಕೆ ವಿರುದ್ಧವಾಗಿದೆ. ಇದಕ್ಕೆ ಹೊಣೆ ಯಾರು? ಟಿವಿಕೆ ಪಕ್ಷ ತಮಿಳು ತಾಯಿಗೆ ವಂದನೆ ಗೀತೆಗೆ ಆದ್ಯತೆ ಯಾಕೆ ನೀಡಿಲ್ಲ. ಇದನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದು ಯಾಕೆ ಅನ್ನೋದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಎಂ ವೀರಪಾಂಡಿಯನ್ ಆಗ್ರಹಿಸಿದ್ದಾರೆ.ಇಂತಹ ತಪ್ಪುಗಳು ಮುಂದುವರೆಯಬಾರದು ಎಂದಿದ್ದಾರೆ.&lt;/p&gt;&lt;h2&gt;ತಮಿಳು ಗೀತೆ ಮೊದಲು ಹಾಡಬೇಕು&lt;/h2&gt;&lt;p&gt;ಎಂ ವೀರಪಾಂಡಿಯನ್ ಬರೆದ ಪತ್ರದಲ್ಲಿ ಕೆಲ ಸೂಚನೆ ನೀಡಿದ್ದಾರೆ. ಶಾಸಕರ ಪ್ರಮಾಣವಚನಕ್ಕೆ ಕರೆಯದ ಅಧಿವೇಶನ ಹಾಗೂ ಇತರ ಎಲ್ಲಾಸರ್ಕಾರಿ ಕಾರ್ಯಕ್ರಮಗಳಲ್ಲಿ ತಮಿಳು ತಾಯಿಗೆ ವಂದನೆ ಗೀತೆಯನ್ನು ಮೊದಲು ಹಾಡಬೇಕು. ರಾಷ್ಟ್ರಗೀತೆಯನ್ನು ಸಮಾರಂಭದ ಕೊನೆಯಲ್ಲಿ ನುಡಿಸಬೇಕು. ಈ ಸಂಪ್ರದಾಯದಲ್ಲಿ ಉಲ್ಲಂಘನೆಯಾಗದಂತೆ ಸಿಎಂ ಜೊಸೆಫ್ ವಿಜಯ್ ಹಾಗೂ ಹಂಗಾಮಿ ಸ್ಪೀಕರ್ ಎಚ್ಚರವಹಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.&lt;/p&gt;&lt;p&gt;ಜೊಸೆಫ್ ವಿಜಯ್ ಸಿಎಂ ಕುರ್ಚಿ ಮೇಲೆ ಕುಳಿತಿ ಮೊದಲ ಆದೇಶ ಹೊರಡಿಸಿದ ಬೆನ್ನಲ್ಲೇ ವಿವಾದಗಳು, ಆರೋಪಗಳು ಕೇಳಿಬಂದಿದೆ. ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭ ಇದೀಗ ಭಾರಿ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Tamil Nadu CPI Secretary M Veerapandiyan has issued a letter taking exception to Thamizhthai Vaazhthu being pushed to third place, next to Vande Mataram and the National Anthem, at the swearing-in ceremony of Tamil Nadu Chief Minister C Joseph Vijay.He says, &quot;As per&hellip;&lt;/p&gt;&lt;p&gt;&mdash; ANI (@ANI) May 10, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/vijay-faces-first-major-row-as-cm-over-tamil-song-ranking-during-oath-ceremony/articleshow-2u4r64b"/>
        </item>
        <item>
            <title><![CDATA['ತ್ರಿಷಾ-ವಿಜಯ್ ಮದುವೆ ಆಗ್ಬೇಕು' ಎಂದ ಬಾಲಿವುಡ್ ನಟಿ; ಆಕೆ ಕೊಟ್ಟ ಕಾರಣಕ್ಕೆ ಬೆಚ್ಚಿಬಿದ್ದ ತಮಿಳುನಾಡು-ಭಾರತ!]]></title>
            <link>https://kannada.asianetnews.com/cine-world/rakhi-sawant-stated-that-thalapathy-vijay-and-actress-trisha-krishnan-should-get-married/articleshow-ixlpc54</link>
            <guid isPermaLink="true">https://kannada.asianetnews.com/cine-world/rakhi-sawant-stated-that-thalapathy-vijay-and-actress-trisha-krishnan-should-get-married/articleshow-ixlpc54</guid>
            <pubDate>Sun, 10 May 2026 17:06:42 +0530</pubDate>
            <description><![CDATA[&lt;p&gt;ಯಾವಾಗಲೂ ತನ್ನ ವಿಚಿತ್ರ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಈ ನಟಿ, ಈಗ ವಿಜಯ್ ಮತ್ತು ತ್ರಿಷಾ ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. &quot;ವಿಜಯ್ ಮತ್ತು ತ್ರಿಷಾ ಇಬ್ಬರೂ ನನಗೆ ಚೆನ್ನಾಗಿ ಗೊತ್ತು. ಅವರಿಬ್ಬರೂ ಮದುವೆಯಾಗಬೇಕು ಎಂಬುದು ನನ್ನ ಆಸೆ. ಒಂದು ವೇಳೆ ಅವರು ಮದುವೆಯಾದರೆ, ಅವರ ಮೆಹಂದಿ ಶಾಸ್ತ್ರಕ್ಕೆ ನಾನು ಖಂಡಿತವಾಗಿಯೂ ಹಾಜರಾಗುತ್ತೇನೆ&quot; ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyzfq779sbn3zenx41tefrd,imgname-thalapathy-vijay-trisha-krishanan-1778082372839.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯ್&zwnj; - ತ್ರಿಷಾ ಮದುವೆ ಫಿಕ್ಸ್? &quot;ಮೆಹಂದಿ ಶಾಸ್ತ್ರಕ್ಕೆ ನಾನೇ ಮೊದಲು ಬರ್ತೀನಿ&quot; ಅಂದರು ಬಾಲಿವುಡ್ ಡ್ರಾಮಾ ಕ್ವೀನ್!&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸದ್ಯ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಚಾರವೆಂದರೆ ಅದು 'ದಳಪತಿ' ವಿಜಯ್ (Thalapathy Vijay) ಅವರ ರಾಜಕೀಯ ಎಂಟ್ರಿ ಮತ್ತು ಅವರ ವೈಯಕ್ತಿಕ ಜೀವನ. ಒಂದು ಕಡೆ ವಿಜಯ್ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದು ಸಿಎಂ ಗಾದಿಯತ್ತ ಹೆಜ್ಜೆ ಹಾಕುತ್ತಿದ್ದರೆ, ಇನ್ನೊಂದೆಡೆ ಅವರ ಮತ್ತು ನಟಿ ತ್ರಿಷಾ ಕೃಷ್ಣನ್ (Trisha Krishnan) ನಡುವಿನ ಸ್ನೇಹದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಗುಲ್ಲೆದ್ದಿದೆ. ಈ ಉರಿಯುವ ಬೆಂಕಿಗೆ ಈಗ ಬಾಲಿವುಡ್&zwnj;ನ ವಿವಾದಾತ್ಮಕ ನಟಿ ರಾಖಿ ಸಾವಂತ್ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ!&lt;/p&gt;&lt;h2&gt;ಬಾಲಿವುಡ್ ಬೆಡಗಿಯ 'ಮೆಹಂದಿ' ಆಸೆ!&lt;/h2&gt;&lt;p&gt;ಯಾವಾಗಲೂ ತನ್ನ ವಿಚಿತ್ರ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ರಾಖಿ ಸಾವಂತ್, ಈಗ ವಿಜಯ್ ಮತ್ತು ತ್ರಿಷಾ ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. &quot;ವಿಜಯ್ ಮತ್ತು ತ್ರಿಷಾ ಜೋಡಿ ನೋಡಲು ತುಂಬಾ ಚೆನ್ನಾಗಿದೆ. ಅವರಿಬ್ಬರೂ ಮದುವೆಯಾಗಬೇಕು ಎಂಬುದು ನನ್ನ ಆಸೆ. ಒಂದು ವೇಳೆ ಅವರು ಮದುವೆಯಾದರೆ, ಅವರ ಮೆಹಂದಿ ಶಾಸ್ತ್ರಕ್ಕೆ ನಾನು ಖಂಡಿತವಾಗಿಯೂ ಹಾಜರಾಗುತ್ತೇನೆ&quot; ಎಂದು ರಾಖಿ ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಅಷ್ಟೇ ಅಲ್ಲದೆ, ವಿಜಯ್ ಅವರ ರಾಜಕೀಯ ಪಕ್ಷವನ್ನು ಸೇರುವ ಇಚ್ಛೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ತ್ರಿಷಾ ಜೊತೆಗಿನ ಹಳೆಯ ನಂಟು ಬಿಚ್ಚಿಟ್ಟ ರಾಖಿ!&lt;/p&gt;&lt;p&gt;ರಾಖಿ ಸಾವಂತ್ ಕೇವಲ ವಿಜಯ್ ಅವರ ಅಭಿಮಾನಿ ಮಾತ್ರವಲ್ಲ, ಅವರಿಗೆ ತ್ರಿಷಾ ಅವರೊಂದಿಗೆ ಹಳೆಯ ಪರಿಚಯವಿದೆಯಂತೆ. &quot;ನಾನು ಮತ್ತು ತ್ರಿಷಾ ಇಬ್ಬರೂ ಬಾಲಿವುಡ್&zwnj;ನಲ್ಲಿ ಒಟ್ಟಿಗೆ ಕೆರಿಯರ್ ಆರಂಭಿಸಿದವರು. ನಂತರ ಅವರು ದಕ್ಷಿಣ ಭಾರತದತ್ತ ಮುಖ ಮಾಡಿದರು. ತ್ರಿಷಾ ತುಂಬಾ ಒಳ್ಳೆಯ ಹುಡುಗಿ, ವಿಜಯ್ ಕೂಡ ಅದ್ಭುತ ವ್ಯಕ್ತಿ. ಅವರಿಬ್ಬರದು ಮೇಡ್ ಫಾರ್ ಈಚ್ ಅದರ್ ಜೋಡಿ&quot; ಎಂದು ರಾಖಿ ಹೊಗಳಿಕೆಯ ಮಹಾಪೂರವನ್ನೇ ಹರಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;22 ವರ್ಷಗಳ ಸ್ನೇಹ... 15 ವರ್ಷಗಳ ಮೌನ!&lt;/h3&gt;&lt;p&gt;ವಿಜಯ್ ಮತ್ತು ತ್ರಿಷಾ ಜೋಡಿಗೆ ಚಿತ್ರರಂಗದಲ್ಲಿ ಸುಮಾರು 22 ವರ್ಷಗಳ ಇತಿಹಾಸವಿದೆ. 'ಗಿಲ್ಲಿ', 'ಕುರುವಿ'ಯಂತಹ ಬ್ಲಾಕ್&zwnj;ಬಸ್ಟರ್ ಸಿನಿಮಾಗಳನ್ನು ನೀಡಿದ ಈ ಜೋಡಿ ಅಂದು ಪ್ರೇಕ್ಷಕರ ಹಾಟ್ ಫೇವರಿಟ್ ಆಗಿತ್ತು. ಆದರೆ, ಇವರಿಬ್ಬರ ನಡುವೆ ಸಂಬಂಧವಿದೆ ಎಂಬ ವದಂತಿಗಳು ಜೋರಾದಾಗ, ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಸುಮಾರು 15 ವರ್ಷಗಳ ಕಾಲ ಈ ಜೋಡಿ ಒಟ್ಟಿಗೆ ನಟಿಸಿರಲಿಲ್ಲ. ಆದರೆ, ಇತ್ತೀಚೆಗೆ ತೆರೆಕಂಡ 'ಲಿಯೋ' ಚಿತ್ರದ ಮೂಲಕ ಈ ಜೋಡಿ ಮತ್ತೆ ಒಂದಾಗಿದ್ದು, ಹಳೆಯ ವದಂತಿಗಳಿಗೆ ಮರುಜೀವ ಬಂದಂತಾಗಿದೆ.&lt;/p&gt;&lt;p&gt;ಸಂಗೀತಾ ವಿಚ್ಛೇದನ ವದಂತಿ ಮತ್ತು ತ್ರಿಷಾ ಎಂಟ್ರಿ!&lt;/p&gt;&lt;p&gt;ಕಳೆದ ಕೆಲವು ಸಮಯದಿಂದ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಇದರ ನಡುವೆಯೇ ವಿಜಯ್ ಅವರ ರಾಜಕೀಯ ಸಮಾರಂಭಗಳಲ್ಲಿ ತ್ರಿಷಾ ಅವರ ಸಕ್ರಿಯ ಉಪಸ್ಥಿತಿ ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ. ರಾಖಿ ಸಾವಂತ್ ಅವರ ಈ ಹೊಸ ಹೇಳಿಕೆ ಈಗ ಗಾಯದ ಮೇಲೆ ಉಪ್ಪು ಸವರಿದಂತಾಗಿದ್ದು, ಅಭಿಮಾನಿಗಳು &quot;ಇದು ಕೇವಲ ವದಂತಿಯೋ ಅಥವಾ ಶೀಘ್ರದಲ್ಲೇ ಏನಾದರೂ ಸಿಹಿ ಸುದ್ದಿ ಸಿಗಲಿದೆಯೋ?&quot; ಎಂದು ಕಾದು ನೋಡುತ್ತಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಲೈಫ್&zwnj;ಸ್ಟೈಲ್ ಮತ್ತು ಗಾಸಿಪ್ ಕಾಲಂಗಳಲ್ಲಿ ಈಗ ವಿಜಯ್-ತ್ರಿಷಾ ಜೋಡಿಯೇ ಅತಿ ದೊಡ್ಡ ಟ್ರೆಂಡಿಂಗ್ ವಿಷಯವಾಗಿದೆ. ರಾಖಿ ಸಾವಂತ್ ಅವರ ಮೆಹಂದಿ ಫಂಕ್ಷನ್ ಕನಸು ನನಸಾಗುತ್ತಾ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ!&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Filmymantra Media (@filmymantramedia)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/rakhi-sawant-stated-that-thalapathy-vijay-and-actress-trisha-krishnan-should-get-married/articleshow-ixlpc54"/>
        </item>
        <item>
            <title><![CDATA[ನಟ ಜೊಸೆಫ್ ವಿಜಯ್ ಮುಖ್ಯಮಂತ್ರಿ ಆದ ಬೆನ್ನಲ್ಲೇ ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ರಾಜೀನಾಮೆ]]></title>
            <link>https://kannada.asianetnews.com/gallery/india-news/tvk-vijay-quits-tiruchchi-east-seat-soon-after-taking-oath-as-chief-minister-lvz06st</link>
            <guid isPermaLink="true">https://kannada.asianetnews.com/gallery/india-news/tvk-vijay-quits-tiruchchi-east-seat-soon-after-taking-oath-as-chief-minister-lvz06st</guid>
            <pubDate>Sun, 10 May 2026 16:50:27 +0530</pubDate>
            <description><![CDATA[&lt;p&gt;ನಟ ಜೊಸೆಫ್ ವಿಜಯ್ ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr833tnrm0hngx0eb530a57e,imgname-fotojet---2026-05-10t101220.631-1778388167352.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ಜೊಸೆಫ್ ವಿಜಯ್ ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ನಟ ಜೊಸೆಫ್ ವಿಜಯ್ ತಮಿಳುನಾಡಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. 2 ವರ್ಷಗಳ ಹಿಂದೆ ಪಕ್ಷ ಸ್ಥಾಪಿಸಿ ಅತ್ಯಲ್ಪ ಅವಧಿಯಲ್ಲಿ ಅಧಿಕಾರಕ್ಕೇರಿದ ಜೊಸೆಫ್ ವಿಜಯ್ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಕುರ್ಚಿಯಲಿ ಕುಳಿತು ಕೆಲ ಆದೇಶ ಹೊರಡಿಸಿದ ಬೆನ್ನಲ್ಲೇ ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ನಟ ಜೊಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿ ಕಚೇರಿಗೆ ಆಗಮಿಸಿದ ಬಳಿಕ ಮಹಿಳಾ ಸುರಕ್ಷತೆ, ಉಚಿತ ವಿದ್ಯುತ್ ಸೇರಿದಂತೆ ಕೆಲ ಪ್ರಮುಖ ಭರವಸೆಗಳ ಕುರಿತು ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ತಾವು ಗೆದ್ದ ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಟಿವಿಕೆ ಪಕ್ಷದ ಬಿರುಸಿನ ಪ್ರಚಾರ ಮಾಡಿದ ವಿಜಯ್ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರು.ತಿರುಚ್ಚಿ ಪೂರ್ವ ಹಾಗೂ ಪೆರಂಬೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರದಿಂದ ವಿಜಯ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದೀಗ ಪೆರಂಬೂರು ಶಾಸಕ ಸ್ಥಾನ ಉಳಿಸಿಕೊಂಡು, ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ವಿಜಯ್ ರಾಜೀನಾಮೆ ನೀಡಿ ತಿರುಚ್ಚಿ ಪೂರ್ವ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಲಿದೆ. ಈ ವೇಳೆ ನಟಿ ತ್ರಿಶಾ ಕೃಷ್ಣನ್ ಇಲ್ಲಿ ಸ್ಪರ್ಧಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಮಾಹಿತಿಗಳಿಗೆ ಯಾವುದೇ ಸ್ಪಷ್ಟತೆ ಇಲ್ಲ. ಹಲವು ಊಹಾಪೋಹಗಳು ಹರಿದಾಡುತ್ತಿದೆ.&lt;/p&gt;&lt;img&gt;&lt;p&gt;ನಟ ಜೊಸೆಫ್ ವಿಜಯ್ ಪ್ರಮಾಣವಚನದ ವಿಡಿಯೋಗಳು ಭಾರಿ ವೈರಲ್ ಆಗುತ್ತಿದೆ. ಸಿನಿಮಾ ಶೈಲಿಯಲ್ಲಿ ನಟ ವಿಜಯ್ ಪ್ರಮಾಣವಚನ ಸ್ವೀಕರಿಸಿ ಮಾತನಾಡಿದ್ದಾರೆ.ತಮಿಳುನಾಡಿನಲ್ಲಿ ಹೊಸ ಅಧ್ಯಾಯ ಹೊಸ ಯುಗ ಆರಂಭವಾಗಿದೆ ಎಂದಿದ್ದಾರೆ. ಇದು ಜನಸಾಮಾನ್ಯರ ಸರ್ಕಾರ ಎಂದಿದ್ದಾರೆ.&lt;/p&gt;&lt;h2&gt;ವಿಜಯ್ ಪ್ರಮಾಣವಚನ ವೈರಲ್&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/tvk-vijay-quits-tiruchchi-east-seat-soon-after-taking-oath-as-chief-minister-lvz06st"/>
        </item>
        <item>
            <title><![CDATA[ಮಂಗಳೂರು ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಹಿಡಿದ ರೈಲ್ವೆ ಪೊಲೀಸರೇ ಶಾಕ್ ಆದ್ರು!]]></title>
            <link>https://kannada.asianetnews.com/karnataka-districts/notorious-robbery-accused-arrested-at-mangaluru-central-railway-station-with-gold-worth-rs13-lakh-gdp/articleshow-ffd21yi</link>
            <guid isPermaLink="true">https://kannada.asianetnews.com/karnataka-districts/notorious-robbery-accused-arrested-at-mangaluru-central-railway-station-with-gold-worth-rs13-lakh-gdp/articleshow-ffd21yi</guid>
            <pubDate>Sun, 10 May 2026 16:36:29 +0530</pubDate>
            <description><![CDATA[ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವಕನನ್ನು ರೈಲ್ವೆ ಪೊಲೀಸರು ವಿಚಾರಿಸಿದಾಗ, ಆತ ಕೇರಳದ ಕುಖ್ಯಾತ ದರೋಡೆಕೋರ ಎಂದು ತಿಳಿದುಬಂದಿದೆ. ಬಂಧಿತ ಕಾಸರಗೋಡು ಮೂಲದ ಆಶಿಫ್&zwnj;ನಿಂದ ಸುಮಾರು ₹13.06 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕೇರಳದ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.]]></description>
            <media:content url="https://static.asianetnews.com/images/w-1280,h-720,format-jpg,imgid-01kr8rzsf2fsa7ab7bnx3mz8nh,imgname----1778411103714.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಯುವಕನ ವಿಚಾರಣೆ ನಡೆಸಿದ ರೈಲ್ವೆ ಪೊಲೀಸರಿಗೆ ಶಾಕ್ ಆಗಿದ್ದು, ವಿಚಾರಣೆ ವೇಳೆ ಆತ ಕುಖ್ಯಾತ ದರೋಡೆಕೋರನಾಗಿದ್ದು, ಇದೀಗ ಆತನನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು13.06 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;h2&gt;ಶಂಕಾಸ್ಪದ ತಿರುಗಾಡುತ್ತಿದ್ದ ಕುಖ್ಯಾತ ದರೋಡೆ ಆರೋಪಿ&lt;/h2&gt;&lt;p&gt;ಕಾಸರಗೋಡು ಮೂಲದ ಆಶಿಫ್ ಪಿ.ಎಚ್. (25) ಬಂಧಿತ ಆರೋಪಿ. ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಈತನ ಬ್ಯಾಗ್ ತಪಾಸಣೆ ನಡೆಸಿದಾಗ ಯಾವುದೇ ದಾಖಲೆಗಳಿಲ್ಲದ 93.5 ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿವೆ. ಇದರಲ್ಲಿ 4 ಬಳೆಗಳು, 3 ಹಾರಗಳು, 4 ಉಂಗುರಗಳು, ಚೈನ್, ಬ್ರೇಸ್&zwnj;ಲೆಟ್ ಹಾಗೂ ಸ್ಟಡ್&zwnj;ಗಳು ಸೇರಿವೆ.&lt;/p&gt;&lt;h2&gt;ಕೇರಳದಲ್ಲಿ ದೊಡ್ಡ ಕಳ್ಳ&lt;/h2&gt;&lt;p&gt;ವಿಚಾರಣೆ ವೇಳೆ ಈತ ಕೇರಳದ ತ್ರಿಶೂರ್ ಜಿಲ್ಲೆಯ ಪಾವರಟ್ಟಿ ಎಂಬಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಪಾವರಟ್ಟಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಎರ್ನಾಕುಳಂ ಮತ್ತು ಕಾಸರಗೋಡು ವ್ಯಾಪ್ತಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯ ವಿರುದ್ಧ ಹಲವು ಬಾಕಿ ವಾರಂಟ್&zwnj;ಗಳಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/notorious-robbery-accused-arrested-at-mangaluru-central-railway-station-with-gold-worth-rs13-lakh-gdp/articleshow-ffd21yi"/>
        </item>
        <item>
            <title><![CDATA[ವಿಜಯ್ ಸಿಎಂ ಪ್ರಮಾಣವಚನಕ್ಕೆ ಪತ್ನಿ-ಮಕ್ಕಳು ಗೈರು, ನಟಿ ತ್ರಿಷಾ ಹಾಜರಿ! ಇದೀಗ ಶುರುವಾಯ್ತು ಹೊಸ ಸಂಕಷ್ಟ!]]></title>
            <link>https://kannada.asianetnews.com/gallery/cine-world/trisha-krishnan-at-vijay-s-chief-minister-ceremony-sparks-controversy-amid-family-absence-sat-zaxnfas</link>
            <guid isPermaLink="true">https://kannada.asianetnews.com/gallery/cine-world/trisha-krishnan-at-vijay-s-chief-minister-ceremony-sparks-controversy-amid-family-absence-sat-zaxnfas</guid>
            <pubDate>Sun, 10 May 2026 16:28:30 +0530</pubDate>
            <description><![CDATA[ನಟ 'ದಳಪತಿ' ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಈ ಸಮಾರಂಭಕ್ಕೆ ಅವರ ಕುಟುಂಬದ ಬದಲು ನಟಿ ತ್ರಿಷಾ ಕೃಷ್ಣನ್ ಹಾಜರಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವಿವಾದ ಮತ್ತು ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8m27g24ggv7367cjxdv6za,imgname-befunky-collage--14--1778405940738.jpg" type="image/jpeg" height="390" width="690"/>
            <content:encoded><![CDATA[ನಟ 'ದಳಪತಿ' ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಈ ಸಮಾರಂಭಕ್ಕೆ ಅವರ ಕುಟುಂಬದ ಬದಲು ನಟಿ ತ್ರಿಷಾ ಕೃಷ್ಣನ್ ಹಾಜರಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವಿವಾದ ಮತ್ತು ಚರ್ಚೆಗೆ ಕಾರಣವಾಗಿದೆ.&lt;img&gt;&lt;p&gt;ತಮಿಳು ಸಿನಿಮಾರಂಗದ 'ದಳಪತಿ' ವಿಜಯ್ ಈಗ ತಮಿಳುನಾಡಿನ ಮುಖ್ಯಮಂತ್ರಿ. ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅವರು ರಾಜ್ಯದ 13ನೇ ಸಿಎಂ ಆಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾದ್ರು. ಆದರೆ, ಎಲ್ಲರ ಕಣ್ಣು ಬಿದ್ದಿದ್ದು ಮಾತ್ರ ನಟಿ ತ್ರಿಷಾ ಕೃಷ್ಣನ್ ಮೇಲೆ.&lt;/p&gt;&lt;img&gt;&lt;p&gt;ಸಿನಿಮಾರಂಗದಿಂದ ಬಂದಿದ್ದ ಕೆಲವೇ ಕೆಲವು ಗಣ್ಯರಲ್ಲಿ ತ್ರಿಷಾ ಕೂಡ ಒಬ್ಬರಾಗಿದ್ದರು. ಅವರಿಗೆ ವೇದಿಕೆ ಮುಂಭಾಗದಲ್ಲೇ ಆಸನ ವ್ಯವಸ್ಥೆ ಮಾಡಲಾಗಿತ್ತು. ವಿಜಯ್ ಅವರ ತಾಯಿ, ತ್ರಿಷಾರನ್ನು ಅಪ್ಪಿಕೊಂಡು ಸ್ವಾಗತಿಸಿದ ವಿಡಿಯೋ ಕೂಡ ಹೊರಬಿದ್ದಿದೆ.&lt;/p&gt;&lt;img&gt;&lt;p&gt;ವಿಜಯ್ ಅಭಿಮಾನಿಗಳು ತ್ರಿಷಾರನ್ನು ಹರ್ಷೋದ್ಗಾರದಿಂದ ಸ್ವಾಗತಿಸಿದರು. ತ್ರಿಷಾ ತಮ್ಮ ತಾಯಿ ಉಮಾ ಕೃಷ್ಣನ್ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದರು. ವಿಜಯ್ ಅವರ ತಾಯಿಯ ಸಹೋದರರ ಮಕ್ಕಳು ತ್ರಿಷಾರನ್ನು ಅಪ್ಪಿಕೊಂಡು ಬರಮಾಡಿಕೊಂಡರು. ಈ ಬೆಳವಣಿಗೆಯು, ವಿಜಯ್ ಮತ್ತು ತ್ರಿಷಾ ನಡುವೆ ಸಂಬಂಧವಿದೆ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.&lt;/p&gt;&lt;img&gt;&lt;p&gt;ಇದೇ ಹೊತ್ತಲ್ಲಿ, ಪ್ರಮಾಣವಚನ ಸಮಾರಂಭಕ್ಕೆ ತ್ರಿಷಾ ಬಂದಿದ್ದನ್ನು ಪ್ರಶ್ನಿಸಿ ಮತ್ತು ಟೀಕಿಸಿ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಪೋಸ್ಟ್&zwnj;ಗಳು ಮತ್ತು ಕಮೆಂಟ್&zwnj;ಗಳು ಹರಿದಾಡುತ್ತಿವೆ. 'ನಿಮ್ಮ ಮಕ್ಕಳು ಎಲ್ಲಿ?' ಎಂದು ಹಲವರು ವಿಜಯ್ ಅವರನ್ನು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;&lsquo;ಪತ್ನಿ ಜೊತೆ ಏನೋ ಸಮಸ್ಯೆ ಇರಬಹುದು. ಆದರೆ, ಮಕ್ಕಳು ಬರದೇ ಇರೋ ಕಾರ್ಯಕ್ರಮಕ್ಕೆ ಇವರನ್ನು (ತ್ರಿಷಾ) ಕರ್ಕೊಂಡು ಬಂದಿದ್ದು ತುಂಬಾನೇ ತಪ್ಪು,&rsquo; ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಬಹಳ ಕಟುವಾದ ಭಾಷೆಯಲ್ಲಿ ಪೋಸ್ಟ್&zwnj;ಗಳನ್ನು ಹಾಕುತ್ತಿದ್ದಾರೆ.&lt;/p&gt;&lt;img&gt;&lt;p&gt;&lsquo;ಆತನ ಇಬ್ಬರು ಮಕ್ಕಳನ್ನು ಹೆತ್ತು, ಬೆಳೆಸಿ, ಓದಿಸಿ, ಮನೆ-ಮಂದಿಯನ್ನ ನೋಡಿಕೊಂಡು, ಆತನ ಬೆಳವಣಿಗೆಗೆ ಮನೆಯಲ್ಲೇ ಇದ್ದು ಬೆಂಬಲಿಸಿದ ಹೆಂಡತಿಗೆ ಬೆಲೆಯೇ ಇಲ್ವಾ? ಕೊನೆಗೆ ಕರಿಬೇವು ತರ ಬಿಸಾಕಿದ್ರು. ಚಿತ್ರರಂಗದಲ್ಲಿ ಅವಮಾನವಾದಾಗ ಹೆಂಡತಿ-ಮಕ್ಕಳೇ ಜೊತೆಗಿದ್ದರು. ಈಗ ಯಶಸ್ಸು ಬಂದಾಗ ಅವರನ್ನೇ ಮರೆತಿದ್ದು ಸರಿಯಲ್ಲ. ತ್ರಿಷಾ ಈ ಕಾರ್ಯಕ್ರಮಕ್ಕೆ ಬರದೇ ಇರಬಹುದಿತ್ತು ಅಲ್ವಾ?&rsquo; ಎಂದೂ ಸಹ ಕಮೆಂಟ್&zwnj;ಗಳು ಬಂದಿವೆ.&lt;/p&gt;&lt;img&gt;&lt;p&gt;ಇದೆಲ್ಲದರ ನಡುವೆ, ಕೆಲವರು ವಿಜಯ್&zwnj;ರನ್ನು ಬೆಂಬಲಿಸಿದ್ದಾರೆ. 'ಇದು ಅವರ ವೈಯಕ್ತಿಕ ವಿಚಾರ, ಅದರಲ್ಲಿ ಬೇರೆಯವರು ಯಾಕೆ ತಲೆಹಾಕಬೇಕು?' ಅಂತ ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ಕಾರ್ಯಕ್ರಮಕ್ಕೆ ಬಾರದ ವಿಜಯ್ ಮಗ ಜೈಸನ್ ಸಂಜಯ್ ನಿರ್ಧಾರವನ್ನು ಹೊಗಳಿದ್ದಾರೆ. &lsquo;ತಾಯಿಯ ಪರ ನಿಲ್ಲುವ ಮಗನಿದ್ದಾಗ, ಆ ತಾಯಿ ಅಲ್ಲಿ ಸುರಕ್ಷಿತವಾಗಿರುತ್ತಾಳೆ&rsquo; ಎಂಬಂತಹ ಕಮೆಂಟ್&zwnj;ಗಳೂ ಸಹ ಕಾಣಸಿಗುತ್ತಿವೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cine-world/trisha-krishnan-at-vijay-s-chief-minister-ceremony-sparks-controversy-amid-family-absence-sat-zaxnfas"/>
        </item>
        <item>
            <title><![CDATA[ತಮಿಳುನಾಡು ನೂತನ ಸಿಎಂ ವಿಜಯ್‌ಗೆ 'ಕೈಲಾಸದಿಂದ ಶುಭ ಸಂದೇಶ ಕಳಿಸಿದ ನಿತ್ಯಾನಂದ ಸ್ವಾಮಿ'; ಆ ಸಂದೇಶವಾದರೂ ಏನು?]]></title>
            <link>https://kannada.asianetnews.com/india-news/godman-nithyananda-swami-sent-congratulatory-message-to-tamil-nadu-cm-vijay-from-his-country-kailasa-sat/articleshow-wytgkvi</link>
            <guid isPermaLink="true">https://kannada.asianetnews.com/india-news/godman-nithyananda-swami-sent-congratulatory-message-to-tamil-nadu-cm-vijay-from-his-country-kailasa-sat/articleshow-wytgkvi</guid>
            <pubDate>Sun, 10 May 2026 16:02:06 +0530</pubDate>
            <description><![CDATA[ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ದೇಶಭ್ರಷ್ಟ ಸ್ವಾಮೀಜಿ ನಿತ್ಯಾನಂದ ತನ್ನ 'ಕೈಲಾಸ' ದೇಶದಿಂದ ಶುಭ ಕೋರಿದ್ದಾನೆ. ಈತನ ಪೋಸ್ಟ್&zwnj;ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆತನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8ptbtjpvm3h75a1p7827g8,imgname-nithyananda-paramashivam-1778408828753.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ: ತ&lt;/strong&gt;ಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕರಿಸುತ್ತಿದ್ದಂತೆ, ದೇಶಭ್ರಷ್ಟ ಘೋಷಿತ ವಿವಾದಿತ ಸ್ವಾಮೀಜಿ ನಿತ್ಯಾನಂದ ತನ್ನ 'ಕೈಲಾಸ' ದೇಶದಿಂದ ಶುಭ ಸಂದೇಶ ಕಳುಹಿಸುವ ಮೂಲಕ ಸುದ್ದಿಯಾಗಿದ್ದಾನೆ. ವಿಜಯ್ ಅವರ ರಾಜಕೀಯ ಇನ್ನಿಂಗ್ಸ್&zwnj;ಗೆ ಅಭಿನಂದನೆ ಸಲ್ಲಿಸಿರುವ ನಿತ್ಯಾನಂದನ ನಡೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h3&gt;&lt;strong&gt;ನಿತ್ಯಾನಂದನ ಶುಭ ಸಂದೇಶದಲ್ಲಿ ಏನಿದೆ?&lt;/strong&gt;&lt;/h3&gt;&lt;p&gt;ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ನಿತ್ಯಾನಂದ, &quot;ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಮತ್ತು ಹಿಂದೂ ಧರ್ಮದ ಪರಮೋಚ್ಚ ಗುರುಗಳ ಪರವಾಗಿ ಭಗವಾನ್ ಶ್ರೀ ನಿತ್ಯಾನಂದ ಪರಮಶಿವಂ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ತಿರು ವಿಜಯ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾರೆ&quot; ಎಂದು ತಿಳಿಸಿದ್ದಾರೆ. ಈ ಪೋಸ್ಟ್&zwnj;ನೊಂದಿಗೆ #CMJosephVijay ಎನ್ನುವ ಹ್ಯಾಶ್&zwnj;ಟ್ಯಾಗ್ ಬಳಸಲಾಗಿದೆ.&lt;/p&gt;&lt;h2&gt;&lt;strong&gt;ನೆಟ್ಟಿಗರ ಕಿಡಿ: 'ಇವನನ್ನು ಮೊದಲು ಹಿಡಿದು ತನ್ನಿ'&lt;/strong&gt;&lt;/h2&gt;&lt;p&gt;ನಿತ್ಯಾನಂದನ ಈ ಪೋಸ್ಟ್&zwnj;ಗೆ ತಮಿಳುನಾಡಿನ ಜನರು ಹಾಗೂ ವಿಜಯ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;'ಮುಖ್ಯಮಂತ್ರಿಗಳೇ, ಈತ ಎಲ್ಲಿ ಅಡಗಿದ್ದಾನೆಂದು ಪತ್ತೆ ಹಚ್ಚಿ ಹೊರಗೆ ಎಳೆದು ತನ್ನಿ ಮತ್ತು ಕಾನೂನಿನ ಪ್ರಕಾರ ಶಿಕ್ಷಿಸಿ' ಎಂದು ಅರುಣ್ ಆರ್ಮುಗಂ ಎಂಬುವವರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಇನ್ನು ಕೆಲವರು ವ್ಯಂಗ್ಯವಾಗಿ, 'ಸ್ವಾಮೀಜಿ, ನಿಮ್ಮ ದೇಶದ ರಾಜಧಾನಿ ಯಾವುದು? ಅಧಿಕೃತ ಭಾಷೆ ಯಾವುದು? ನಾನೊಮ್ಮೆ ಅಲ್ಲಿಗೆ ಪ್ರವಾಸ ಬರಬೇಕು' ಎಂದು ಕೇಳಿದ್ದಾರೆ.&lt;/p&gt;&lt;h3&gt;&lt;strong&gt;ಯಾರು ಈ ನಿತ್ಯಾನಂದ? ಈತನ ಮೇಲಿರುವ ಕೇಸುಗಳೇನು?&lt;/strong&gt;&lt;/h3&gt;&lt;p&gt;ಮೂಲತಃ ತಮಿಳುನಾಡಿನವನೇ ಆದ ನಿತ್ಯಾನಂದ, ಬೆಂಗಳೂರು ಸಮೀಪದ ಬಿಡದಿಯಲ್ಲಿ ಆಶ್ರಮ ಹೊಂದಿದ್ದ. ಆದರೆ, ಈತನ ಮೇಲೆ ಅತ್ಯಾ*ಚಾರ, ಕಿಡ್ನಾಪ್ ಹಾಗೂ ಮಕ್ಕಳನ್ನು ಅಕ್ರಮವಾಗಿ ಬಂಧಿಸಿಟ್ಟಿರುವ ಗಂಭೀರ ಆರೋಪಗಳಿವೆ. 2019ರಲ್ಲಿ ಭಾರತದಿಂದ ಪರಾರಿಯಾದ ಈತನನ್ನು ಹಿಡಿಯಲು ಇಂಟರ್ ಪೋಲ್ 'ಬ್ಲೂ ಕಾರ್ನರ್ ನೋಟಿಸ್' ಕೂಡ ಹೊರಡಿಸಿದೆ. ಭಾರತದ ಕಾನೂನಿನ ಕಣ್ಣಿಗೆ ಮಣ್ಣೆರಚಿ ಓಡಿಹೋಗಿರುವ ಈತ, ಇಕ್ವೆಡಾರ್ ಸಮೀಪದ ದ್ವೀಪವೊಂದರಲ್ಲಿ ಅಡಗಿದ್ದಾನೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಏನಿದು 'ಕೈಲಾಸ' ದೇಶ?&lt;/strong&gt;&lt;/h2&gt;&lt;p&gt;ನಿತ್ಯಾನಂದ ತಾನು ಭಾರತದಿಂದ ಓಡಿಹೋದ ಮೇಲೆ ಪೆಸಿಫಿಕ್ ಮಹಾಸಾಗರದ ದ್ವೀಪವೊಂದರಲ್ಲಿ 'ಕೈಲಾಸ' ಎಂಬ ಸ್ವತಂತ್ರ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರುವುದಾಗಿ ಘೋಷಿಸಿಕೊಂಡಿದ್ದಾನೆ. ಈ ದೇಶಕ್ಕೆ ತನ್ನದೇ ಆದ ಧ್ವಜ, ಪಾಸ್&zwnj;ಪೋರ್ಟ್, ಕರೆನ್ಸಿ (ಕೈಲಾಸಿಯನ್ ಡಾಲರ್) ಮತ್ತು ಸಂವಿಧಾನವಿದೆ ಎಂದು ಆತ ಪ್ರತಿಪಾದಿಸುತ್ತಾನೆ. ವಿಶ್ವಸಂಸ್ಥೆಯ ಕೆಲವು ಸಭೆಗಳಲ್ಲೂ ಈತನ ಪ್ರತಿನಿಧಿಗಳು ಭಾಗವಹಿಸಿ ಅಚ್ಚರಿ ಮೂಡಿಸಿದ್ದರು. ಆದರೆ, ಜಗತ್ತಿನ ಯಾವುದೇ ಅಧಿಕೃತ ರಾಷ್ಟ್ರ ಈ 'ಕೈಲಾಸ'ವನ್ನು ದೇಶವೆಂದು ಮಾನ್ಯ ಮಾಡಿಲ್ಲ.&lt;/p&gt;&lt;p&gt;ನಿತ್ಯಾನಂದನ ಅಧಿಕೃತ ಪೋಸ್ಟ್ ನೋಡಲು &lt;strong&gt;ಇಲ್ಲಿ ಕ್ಲಿಕ್ ಮಾಡಿ.&lt;/strong&gt;&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/godman-nithyananda-swami-sent-congratulatory-message-to-tamil-nadu-cm-vijay-from-his-country-kailasa-sat/articleshow-wytgkvi"/>
        </item>
        <item>
            <title><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬೆಂಗಳೂರು ಬಾಲಕ ಬಲಿಯಾಗಲು ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ!]]></title>
            <link>https://kannada.asianetnews.com/karnataka-districts/leopard-attack-in-male-mahadeshwara-hills-boy-death-sparks-outrage-forest-department-faces-negligence-allegations-gdp/articleshow-rl48v6n</link>
            <guid isPermaLink="true">https://kannada.asianetnews.com/karnataka-districts/leopard-attack-in-male-mahadeshwara-hills-boy-death-sparks-outrage-forest-department-faces-negligence-allegations-gdp/articleshow-rl48v6n</guid>
            <pubDate>Sun, 10 May 2026 15:55:43 +0530</pubDate>
            <description><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಈ ದುರ್ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಭಕ್ತರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8ppq903cpjp9911w2vdw4w,imgname-leopard-attack-in-mm-hills--1--1778408709408.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಬಾಲಕ ಬಲಿಯಾದ ದುರ್ಘಟನೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಬಳಿಕ ಮೃತ ಬಾಲಕನ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ದುರ್ಘಟನೆ ನಡೆಯಲು ಅರಣ್ಯ ಇಲಾಖೆಯೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಅರಣ್ಯ ಇಲಾಖೆಯ ನಿರ್ಲಕ್ಷ್ಯ ಆರೋಪ&lt;/h2&gt;&lt;p&gt;ನಾಗಮಲೆಗೆ ತೆರಳುವ ಪಾದಯಾತ್ರಿಗಳಿಗೆ ಅರಣ್ಯ ಇಲಾಖೆ ತಲಾ ₹200 ಶುಲ್ಕವನ್ನು ನಿಗದಿ ಮಾಡಿದೆ. ಈ ಶುಲ್ಕವನ್ನು ಪಾವತಿಸುವ ಭಕ್ತರಿಗೆ ಅರಣ್ಯ ಸಿಬ್ಬಂದಿ ಸುರಕ್ಷತೆ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂಬ ನಿಯಮವಿದೆ. ಆದರೆ, ನಿಯಮಬಾಹಿರವಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಜೊತೆಗೆ ಪಾದಯಾತ್ರಿಗಳಿಗೆ ಯಾವುದೇ ರಕ್ಷಣಾ ವ್ಯವಸ್ಥೆ ಒದಗಿಸದೇ, &amp;nbsp;ಜೊತೆಯಲ್ಲಿ ಯಾವುದೇ ಸಿಬ್ಬಂದಿಗಳು ಕೂಡ ಇರದೆ. ಪ್ರಾಣಿಗಳಿವೆ ಎಚ್ಚರಿಕೆ ಇಂದಿರಿ ಎಂಬ ನಾಮಫಲಕವನ್ನೂ ಹಾಕದೆ. ಕನಿಷ್ಠ ಕಾಡು ಪ್ರಾಣಿಗಳ ಸಂಚಾರದ ಬಗ್ಗೆ ಮಾಹಿತಿಯನ್ನೂ ನೀಡದೆ ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಮತ್ತು ಜೊತೆಯಲ್ಲಿದ್ದವರು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಸುರಕ್ಷತಾ ಕ್ರಮಗಳ ಕೊರತೆ&lt;/h2&gt;&lt;p&gt;ಮಹದೇಶ್ವರ ಬೆಟ್ಟದಿಂದ ನಾಗಮಲೆಯತ್ತ ಹೋಗುವ ಮಾರ್ಗವು ದಟ್ಟ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಕಾಡುಪ್ರಾಣಿಗಳ ಸಂಚಾರ ಸಾಮಾನ್ಯವಾಗಿದೆ. ಇಂತಹ ಅಪಾಯಕರ ಮಾರ್ಗದಲ್ಲಿ ಪಾದಯಾತ್ರೆ ಮಾಡುವ ಭಕ್ತರಿಗೆ ಸೂಕ್ತ ಭದ್ರತೆ ಕಲ್ಪಿಸುವುದು ಅತ್ಯವಶ್ಯಕವಾಗಿದ್ದರೂ, ಅದು ಸರಿಯಾಗಿ ಜಾರಿಯಾಗಿಲ್ಲ ಎಂಬುದು ಈ ಘಟನೆ ನಂತರ ಬಹಿರಂಗವಾಗಿದೆ.&lt;/p&gt;&lt;h2&gt;ಶಾಸಕ ಮಂಜುನಾಥ್ ಪ್ರತಿಕ್ರಿಯೆ&lt;/h2&gt;&lt;p&gt;ಈ ದುರ್ಘಟನೆ ಕುರಿತು ಹನೂರು ಕ್ಷೇತ್ರದ ಶಾಸಕ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಬಾಲಕನ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಬೆಳಗಿನ ವೇಳೆಯಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚು ಇರುತ್ತದೆ. ನಡೆಯಬಾರದ ಘಟನೆ ನಡೆದಿದೆ. ಭಕ್ತರ ಸುರಕ್ಷತೆ ನಮ್ಮ ಆದ್ಯತೆ ಎಂದು ತಿಳಿಸಿದರು.&lt;/p&gt;&lt;p&gt;ಹೆಚ್ಚು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾತನಾಡಿದ ಶಾಸಕ ಮಂಜುನಾಥ್, ಪಾದಯಾತ್ರೆ ಮಾಡುವ ಭಕ್ತರಿಗೆ ಅನುಕೂಲವಾಗುವಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ನಾಗಮಲೆಗೆ ಸುರಕ್ಷಿತ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.&lt;/p&gt;&lt;p&gt;ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರದ ವತಿಯಿಂದ ಮಿನಿ ಬಸ್ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ರೂಪಿಸಲಾಗುತ್ತಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.&lt;/p&gt;&lt;p&gt;ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶಗಳಿಗೆ ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮಾಡುತ್ತಿದ್ದು, ಇಂತಹ ಘಟನೆಗಳು ಅವರಲ್ಲಿ ಭೀತಿ ಹುಟ್ಟಿಸಿವೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/leopard-attack-in-male-mahadeshwara-hills-boy-death-sparks-outrage-forest-department-faces-negligence-allegations-gdp/articleshow-rl48v6n"/>
        </item>
        <item>
            <title><![CDATA[ಪ್ರತಿ ದಿನ 25 ಕಿ.ಮಿ ಇವಿ ಯೂನಿಸೈಕಲ್‌ನಲ್ಲಿ ಬೆಂಗಳೂರಿಗನ ಪ್ರಯಾಣ, ಪೊಲೀಸ್ ತಡೆದಿದ್ದೇಕೆ?]]></title>
            <link>https://kannada.asianetnews.com/state/bengaluru-man-commutes-25-km-daily-on-ev-unicycle-leaves-traffic-police-surprised/articleshow-ll720h7</link>
            <guid isPermaLink="true">https://kannada.asianetnews.com/state/bengaluru-man-commutes-25-km-daily-on-ev-unicycle-leaves-traffic-police-surprised/articleshow-ll720h7</guid>
            <pubDate>Sun, 10 May 2026 15:43:01 +0530</pubDate>
            <description><![CDATA[&lt;p&gt;ಬೆಂಗಳೂರಿನ ಯವಕ ಪ್ರತಿ ದಿನ ಮನೆಯಿಂದ ಕಚೇರಿಗೆ ಎಲೆಕ್ಟ್ರಿಕ್ ಯೂನಿಸೈಕಲ್&zwnj;ನಲ್ಲಿ ಪ್ರಯಾಣ ಮಾಡುತ್ತಾನೆ. ಟ್ರಾಫಿಕ್ ನಡುವೆ ಸರಾಗವಾಗಿ ಸಾಗಬಹುದು, ಪಾರ್ಕಿಂಗ್ ಸಮಸ್ಯೆ ಇಲ್ಲ, ದಿಢೀರ್ ಟ್ರಾಫಿಕ್ ಪೊಲೀಸರು ತಡೆದು ಮಾಡಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr8nz6qr1pgmy5asdevj4ya2,imgname-bengaluru-man-ev-unicycle-ride-1778407938807.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.10) &lt;/strong&gt;ಬೆಂಗಳೂರಿನ ಟ್ರಾಫಿಕ್&zwnj;ನಲ್ಲಿ ಬೈಕ್, ಸ್ಕೂಟರ್ ಕೂಡ ದೊಡ್ಡದಾಗುತ್ತಿದೆ. ನುಗ್ಗಿಸಲು ಸ್ಥಳವೇ ಇಲ್ಲದಾಗಿದೆ. ಈ ಕಿರಿಕಿರಿ ತಪ್ಪಿಸಲು ಬೆಂಗಳೂರಲ್ಲಿ ಹಲವರು ಎಲೆಕ್ಟ್ರಿಕ್ ಯೂನಿಸೈಕಲ್ ಮೂಲಕ ಪ್ರಯಾಣ ಮಾಡುತ್ತಾರೆ. ಈ ಪೈಕಿ ಯುವಕನೊಬ್ಬ ಪ್ರತಿ ದಿನ ತನ್ನ ಮನೆಯಿಂದ ಕಚೇರಿ ಹಾಗೂ ಕಚೇರಿಯಿಂದ ಮನೆಗೆ ಇದೇ ಇವಿ ಯೂನಿಸೈಕಲ್ ಮೂಲಕ ಪ್ರಯಾಣ ಮಾಡುತ್ತಿದ್ದಾನೆ. ಅಚಾನಕ್ಕಾಗಿ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಈತನ ನೋಡಿದ್ದೇ ತಡೆದಿದ್ದಾರೆ. ಬಳಿಕ ನಡೆದ ಘಟನೆಯನ್ನು ಈತ ವಿವರಿಸಿದ್ದಾನೆ.&lt;/p&gt;&lt;h2&gt;ಬೆಂಗಳೂರು ಪೊಲೀಸರು ತಡೆದಿದ್ದೇಕೆ?&lt;/h2&gt;&lt;p&gt;ಎಂದಿನಂತೆ ಆಫೀಸ್&zwnj;ನಿಂದ ಮರಳಿ ಬರುತ್ತಿದ್ದ ವೇಳೆ ಈತನ ಯೂನಿಸೈಕಲ್ ನೋಡಿ ಟ್ರಾಫಿಕ್ ಪೊಲೀಸರು ಅಚ್ಚರಿಗೊಂಡಿದ್ದಾರೆ. ತಕ್ಷಣವೇ ನಿಲ್ಲಿಸಲು ಸೂಚಿಸಿದ್ದಾರೆ. ಬಳಿಕ ಈ ಹೊಸ ಮಾದರಿ ಇವಿ ಸೈಕಲ್ ಕುರಿತು ಯುವಕನ ಬಳಿ ಕೇಳಿದ್ದಾರೆ. ಪೊಲೀಸರು ತಡೆದಾಗ, ದಂಡ ಹಾಕುತ್ತಾರೋ, ಅಥವಾ ಹಲವು ದಾಖಲೆಗಳಿಗಾಗಿ ಅಲೆದಾಡಬೇಕಾಗುತ್ತೋ ಅನ್ನೋ ಸಣ್ಣ ಆತಂಕ ಕಾಡಿದ್ದು ಸುಳ್ಳಲ್ಲ. ಆದರೆ ಪೊಲೀಸರು ನಿಲ್ಲಿಸಿ ಕೇಳಿದ್ದು, ಈ ಇವಿ ಯೂನಿಸೈಕಲ್ ಕುರಿತು. ಇದರ ಪ್ರಯಾಣ, ಪ್ರಯೋಜನ, ಸಾಧಕ ಬಾಧಕ ಕುರಿತು ಟ್ರಾಫಿಕ್ ಪೊಲೀಸರು ಮಾಹಿತಿ ಕೇಳಿದ್ದಾರೆ.&lt;/p&gt;&lt;p&gt;ಟ್ರಾಫಿಕ್ ಪೊಲೀಸರು ಪ್ರಶ್ನೆಗಳಿಗೆ ಯುವಕ ಉತ್ತರ ನೀಡಿದ್ದಾರೆ. ಇದು ಎಲೆಕ್ಟ್ರಿಕ್ ಯೂನಿಸೈಕಲ್. ಬೆಂಗಳೂರಿಂತ ಟ್ರಾಫಿಕ್ ಸಿಟಿಗಳಲ್ಲಿ ಈ ರೀತಿಯ ಯೂನಿಸೈಕಲ್ ಉಪಯೋಗವಾಗುತ್ತದೆ. ಟ್ರಾಫಿಕ್ ನಡುವೆ ಸಾಗಬಹುದು. ಪಾರ್ಕಿಂಗ್ ಸಮಸ್ಯೆಗೂ ಉದ್ಭವಿಸುವುದಿಲ್ಲ. ಬ್ಯಾಲೆನ್ಸ್ ಕಲಿತರೆ ಸಾಕು ಸುಲಭವಾಗಿ ಮನೆಯಿಂದ ಕಚೇರಿ ಸೇರಿದಂತೆ ಬೆಂಗಳೂರು ಓಡಾಟಕ್ಕೆ ಉಪಯುಕ್ತ ಅನ್ನೋ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;ಇವಿ ಯೂನಿಸೈಕಲ್ ರೈಡ್ ಮಾಡಿದ ಟ್ರಾಫಿಕ್ ಪೊಲೀಸ್&lt;/h2&gt;&lt;p&gt;ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ ಯುವಕ ನೀವು ಒಂದು ಬಾರಿ ರೈಡ್ ಟ್ರೈ ಮಾಡಿ ಎಂದು ಸೂಚಿಸಿದ್ದಾನೆ. ಇದರಂತೆ ಪೊಲೀಸ್ ಯೂನಿಸೈಕಲ್ ಹತ್ತಿ ಕೆಲ ದೂರ ಪ್ರಯತ್ನಸಿದ್ದಾರೆ. ಯುವಕನ ಸಹಾಯದೊಂದಿಗೆ ರೈಡ್ ಮಾಡಿದ್ದಾರೆ. ಮುಂದೇ ಬೆಂಗಳೂರು ಟ್ರಾಫಿಕ್ ಅತಿಯಾಗಿ ಪೊಲೀಸರು ಕೂಡ ಈ ರೀತಿಯ ವಾಹನ ಉಪಯೋಗಿಸಿದರೂ ಅಚ್ಚರಿಯಿಲ್ಲ ಎಂದು ಯುವಕ ಹೇಳಿದ್ದಾನೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Jerome anand (@jro_thestreetrider)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;ಟ್ರಾಫಿಕ್ ಪೊಲೀಸರು ತಮ್ಮ ಕುತೂಹಲಕ್ಕಾಗಿ ಯೂನಿಸೈಕಲ್ ತಡೆದು ಮಾಹಿತಿ ಪಡೆದಿದ್ದಾರೆ. ಯುವಕನ ಜೊತೆ ಫೋಟೋ ಕ್ಲಿಕ್ಕಿಸಿದ್ದಾರೆ. ಇದೀಗ ಬೆಂಗಳೂರಲ್ಲಿ ಇವಿ ಯೂನಿಸೈಕಲ್ ಟ್ರೆಂಡ್ ಆಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/bengaluru-man-commutes-25-km-daily-on-ev-unicycle-leaves-traffic-police-surprised/articleshow-ll720h7"/>
        </item>
        <item>
            <title><![CDATA[ದಳಪತಿ ವಿಜಯ್ 13 ವರ್ಷಗಳ ಸೇಡಿಗೆ ಸಿಎಂ ಆಗಿ ಪ್ರತೀಕಾರ; ಕೂರಲು ಅವಕಾಶ ಕೊಡದವರಿಂದ ಸೆಲ್ಯೂಟ್ ಹೊಡೆಸಿಕೊಂಡ ರಿಯಲ್ ಹೀರೋ]]></title>
            <link>https://kannada.asianetnews.com/gallery/india-news/actor-vijay-chief-minister-success-story-and-2013-insult-incident-viral-sat-f95xott</link>
            <guid isPermaLink="true">https://kannada.asianetnews.com/gallery/india-news/actor-vijay-chief-minister-success-story-and-2013-insult-incident-viral-sat-f95xott</guid>
            <pubDate>Sun, 10 May 2026 15:36:02 +0530</pubDate>
            <description><![CDATA[&lt;p&gt;ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, 13 ವರ್ಷಗಳ ಹಿಂದೆ ನಡೆದ ಒಂದು ಅವಮಾನಕಾರಿ ಘಟನೆಯೇ ಅವರ ಈ ರಾಜಕೀಯ ಯಶಸ್ಸಿಗೆ ಸ್ಫೂರ್ತಿಯಾಗಿದೆ. ಅಂದು ಅವಮಾನಿಸಿದವರೇ ಇಂದು ಸೆಲ್ಯೂಟ್ ಹೊಡೆಯುವಂತೆ ಮಾಡಿ, &amp;nbsp;'ರಿಯಲ್ ಲೈಫ್ ಮಾಸ್ ಹೀರೋ' ಆಗಿ ಹೊರಹೊಮ್ಮಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7zdx01skw1fh39dk77jx3y,imgname-befunky-collage--9--1778384303105.jpg" type="image/jpeg" height="390" width="690"/>
            <content:encoded><![CDATA[&lt;p&gt;ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, 13 ವರ್ಷಗಳ ಹಿಂದೆ ನಡೆದ ಒಂದು ಅವಮಾನಕಾರಿ ಘಟನೆಯೇ ಅವರ ಈ ರಾಜಕೀಯ ಯಶಸ್ಸಿಗೆ ಸ್ಫೂರ್ತಿಯಾಗಿದೆ. ಅಂದು ಅವಮಾನಿಸಿದವರೇ ಇಂದು ಸೆಲ್ಯೂಟ್ ಹೊಡೆಯುವಂತೆ ಮಾಡಿ, &amp;nbsp;'ರಿಯಲ್ ಲೈಫ್ ಮಾಸ್ ಹೀರೋ' ಆಗಿ ಹೊರಹೊಮ್ಮಿದ್ದಾರೆ.&lt;/p&gt;&lt;img&gt;&lt;p&gt;ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ಚಿತ್ರರಂಗದಲ್ಲಿ 'ದಳಪತಿ'ಯಾಗಿ ಮೆರೆದ ನಟ ವಿಜಯ್, ಈಗ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಅವರ ಈ ಯಶಸ್ಸಿನ ಹಿಂದೆ 13 ವರ್ಷಗಳ ಹಿಂದಿನ ಒಂದು ನೋವಿನ ಕಥೆಯಿದೆ. ಅಂದು ಅವಮಾನಿಸಿದವರೇ ಇಂದು ಸೆಲ್ಯೂಟ್ ಹೊಡೆಯುವಂತೆ ಮಾಡುವ ಮೂಲಕ ವಿಜಯ್&zwnj; ತಮ್ಮ ಜೀವನದ ಅತಿದೊಡ್ಡ 'ರಿಯಲ್ ಲೈಫ್ ಮಾಸ್' ದೃಶ್ಯವನ್ನು ಸೃಷ್ಟಿಸಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾ ರಂಗದಲ್ಲಿ ವಿಜಯ್ ಬೆಳೆಯುತ್ತಿದ್ದ ಕಾಲದಲ್ಲಿ, 'ಈ ಮುಖ ನೋಡೋಕೆ ಯಾರು ಬರ್ತಾರೆ?' ಎಂದು ಹೀಯಾಳಿಸಿದವರೇ ಹೆಚ್ಚು. ಆದರೆ 2013ರಲ್ಲಿ ನಡೆದ ಒಂದು ಘಟನೆ ವಿಜಯ್ ಅಭಿಮಾನಿಗಳ ಮನಸ್ಸಿನಲ್ಲಿ ಮಾಯದ ಗಾಯವಾಗಿ ಉಳಿದಿತ್ತು. ಅದು ಭಾರತೀಯ ಚಿತ್ರರಂಗದ 100ನೇ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮ. ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರು ಅಲ್ಲಿ ನೆರೆದಿದ್ದರು. ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರೇ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.&lt;/p&gt;&lt;img&gt;&lt;p&gt;ಆ ಸಮಾರಂಭದಲ್ಲಿ ವಿಜಯ್ ಅವರಿಗಿಂತ ಕಿರಿಯ ನಟರಿಗೆ ಮುಂಚೂಣಿ ಸಾಲಿನಲ್ಲಿ ಆಸನ ಕಾಯ್ದಿರಿಸಲಾಗಿತ್ತು. ಆದರೆ, ಸೂಪರ್&zwnj;ಸ್ಟಾರ್ ಪಟ್ಟದಲ್ಲಿದ್ದ ವಿಜಯ್&zwnj; ಅವರಿಗೆ ಕೂರಲು ಸರಿಯಾದ ಸೀಟನ್ನೇ ನೀಡಿರಲಿಲ್ಲ. ಅನಿವಾರ್ಯವಾಗಿ ವಿಜಯ್ ಕೊನೆಯ ಸಾಲಿನಲ್ಲಿ ಜನರ ಗುಂಪಿನ ನಡುವೆ ಹೋಗಿ ಕುಳಿತುಕೊಳ್ಳಬೇಕಾಯಿತು. ಆವತ್ತು ವಿಜಯ್ ಅವರ ಬೆಂಬಲಕ್ಕೆ ನಿಂತ ನಟ ವಿಕ್ರಮ್ ಕೂಡ ಅವರ ಪಕ್ಕದಲ್ಲೇ ಹೋಗಿ ಕುಳಿತಿದ್ದರು. ಈ ಅವಮಾನದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ಯಾವುದೇ ದೂರು ಅಥವಾ ಬೇಸರ ವ್ಯಕ್ತಪಡಿಸದೆ ಅಂದು ಜನರ ನಡುವೆ ಕುಳಿತಿದ್ದ ಅದೇ ವ್ಯಕ್ತಿ, ಇಂದು ಅದೇ ಆಯೋಜಕರು ಮತ್ತು 9 ಕೋಟಿ ಜನರನ್ನು ಆಳುವ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಅಂದು ಕೂರಲು ಸೀಟು ಕೊಡದವರ ಮುಂದೆ, ಇಂದು ತಾನೇ ರಾಜ್ಯದ ಅತ್ಯುನ್ನತ ಸ್ಥಾನದಲ್ಲಿ ಕುಳಿತು ರಾಜ್ಯಭಾರ ಮಾಡುವ ಮೂಲಕ ವಿಜಯ್ 'ಹಳೆಯ ಸೇಡು' ತೀರಿಸಿಕೊಂಡಿದ್ದಾರೆ.&lt;/p&gt;&lt;p&gt;ವಿಡಿಯೋ ನೋಡಲು &lt;strong&gt;ಈ ಲಿಂಕ್ ಕ್ಲಿಕ್ ಮಾಡಿ&lt;/strong&gt;&lt;/p&gt;&lt;img&gt;&lt;p&gt;'ಇದಕ್ಕಿಂತ ದೊಡ್ಡ ರಿಯಲ್ ಲೈಫ್ ಮಾಸ್ ಸೀನ್ ಬೇರೆ ಇಲ್ಲ' ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕೋಟ್ಯಂತರ ಸಂಭಾವನೆ ಮತ್ತು ಸ್ಟಾರ್&zwnj;ಡಮ್ ಬದಿಗಿಟ್ಟು ಜನರಿಗಾಗಿ ರಾಜಕೀಯಕ್ಕೆ ಬಂದ ವಿಜಯ್ ಅವರ ಈ ನಿರ್ಧಾರಕ್ಕೆ ಕನ್ನಡಿಗರು ಸೇರಿದಂತೆ ಇಡೀ ದಕ್ಷಿಣ ಭಾರತವೇ ಮೆಚ್ಚುಗೆ ಸೂಚಿಸುತ್ತಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/india-news/actor-vijay-chief-minister-success-story-and-2013-insult-incident-viral-sat-f95xott"/>
        </item>
        <item>
            <title><![CDATA[ಹೆದ್ದಾರಿಯಲ್ಲಿ ಸಂಸದೆ ಸುಪ್ರಿಯಾ ಸುಳೆ ಕಾರು ಅಪಘಾತ, ಅಡ್ಡಾದಿಡ್ಡಿಯಾಗಿ ಬಂದ ವಾಹನ ಡಿಕ್ಕಿ]]></title>
            <link>https://kannada.asianetnews.com/india-news/vehicle-rams-into-mp-supriya-sule-car-on-pune-mumbai-highway-all-escapes-unhurt/articleshow-tvxmdzl</link>
            <guid isPermaLink="true">https://kannada.asianetnews.com/india-news/vehicle-rams-into-mp-supriya-sule-car-on-pune-mumbai-highway-all-escapes-unhurt/articleshow-tvxmdzl</guid>
            <pubDate>Sun, 10 May 2026 15:05:44 +0530</pubDate>
            <description><![CDATA[&lt;p&gt;ಎನ್&zwnj;ಸಿಪಿ ನಾಯಕಿ, ಸಂಸದೆ ಸುಪ್ರಿಯಾ ಸುಳೆ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅಡ್ಡಾದಿಡ್ಡಿ ಹಾಗೂ ಅಜಾಗರೂಕತೆ ಚಾಲನೆಯಲ್ಲಿದ್ದ ಕಾರೊಂದು ಸುಪ್ರಿಯಾ ಸುಳೆ ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250521090824,imgname-image-63a97e5a-9a8a-4568-96e7-65c5d75d4583.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಮೇ.10) &lt;/strong&gt;ವಿಪಕ್ಷಗಳ ಪ್ರಮುಖ ನಾಯಕಿ, ಎನ್&zwnj;ಸಿಪಿಯ ಸಂಸದೆ ಸುಪ್ರಿಯಾ ಸುಳೆ ಕಾರು ಮುಂಬೈ ಪುಣೆ ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಅಪಘಾತಕ್ಕೀಡಾಗಿದೆ. ಬಾರಾಮತಿ ಕ್ಷೇತ್ರದ ಸಂಸದೆ ಪುಣೆಯಿಂದ ಮುಂಬೈನತ್ತ ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇದೇ ವೇಳೆ ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಅಜಾಗರೂಕತೆ ಹಾಗೂ ಅಡ್ಡಾದಿಡ್ಡಿಯಾಗಿ ಅತೀ ವೇಗದಲ್ಲಿ ಬಂದ ವಾಹನವೊಂದು ಸುಪ್ರಿಯಾ ಸುಳೆ ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಕೆಲ ಆಪ್ತರು ಪ್ರಯಾಣಿಸುತ್ತಿದ್ದರು. ಅದೃಷ್ಠವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.&lt;/p&gt;&lt;h2&gt;ಘಟನೆ ನಡೆದಿದ್ದು ಹೇಗೆ?&lt;/h2&gt;&lt;p&gt;ಸಂಸದೆ ಸುಪ್ರಿಯಾ ಸುಳೆ ಕೆಲದ ನಿಮಿತ್ತ ಪುಣೆಗೆ ಆಗಮಿಸಿದ್ದರು. ಬಳಿಕ ಕಾರ್ಯಕ್ರಮ ಮುಗಿಸಿ ಮರಳಿ ಮುಂಬೈಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಪುಣೆ ಮುಂಬೈ ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಸುಪ್ರಿಯಾ ಸುಳೆ ಹಾಗೂ ಆಪ್ತರಿದ್ದ ಕಾರು ತೆರಳುತ್ತಿತ್ತು. ಇದೇ ವೇಳೆ ಇದೇ ಹೆದ್ದಾರಿಯಲ್ಲಿ ರ್ಯಾಶ್ ಡ್ರೈವಿಂಗ್ ಮಾಡುತ್ತಾ ಸಾಗಿದ ಕಾರು ಸುಪ್ರಿಯಾ ಸುಳೆ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸುಪ್ರಿಯಾ ಸುಳೆ ಸೇರಿದಂತೆ ಎಲ್ಲರು ಸುರಕ್ಷಿತವಾಗಿದ್ದಾರೆ.&lt;/p&gt;&lt;h2&gt;ಅಪಘಾತ ಕುರಿತು ಸುಪ್ರಿಯಾ ಸುಳೆಯಿಂದ ಮಾಹಿತಿ&lt;/h2&gt;&lt;p&gt;ಹೆದ್ದಾರಿಯಲ್ಲಿ ನಡೆದ ಅಪಘಾತ ಕುರಿತು ಸಂಸದೆ ಸುಪ್ರಿಯಾ ಸುಳೆ ಮಾಹಿತಿ ನೀಡಿದ್ದಾರೆ. ತಮ್ಮ ಎಕ್ಸ್ ಪೋಸ್ಟ್&zwnj;ನಲ್ಲಿ ತಮ್ಮ ಕಾರಿಗೆ ಡಿಕ್ಕಿಯಾದ ವಾಹನದ ನಂಬರ್ ಸೇರಿದಂತೆ ಪ್ರಮುಖ ಮಾಹಿತಿಯನ್ನು ನೀಡಿದ್ದಾರೆ. ಇಂದು ಪುಣೆಯಿಂದ ಮುಂಬೈಗೆ ತೆರಳುತ್ತಿದ್ದ ವೇಳೆ ಆತಂತಕಾರಿ ಘಟನೆ ನಡೆದಿದೆ. GJ13CF5257 ನಂಬರ್ ಹೊಂದಿರುವ ಕಾರೊಂದು ಅಡ್ಡಾದಿಡ್ಡಿಯಾಗಿ ಹಾಗೂ ಅತೀ ವೇಗವಾಗಿ ಬಂದು ನಾವು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಠವಶಾತ್ ಎಲ್ಲರು ಸುರಕ್ಷಿತವಾಗಿದ್ದಾರೆ. ಈ ಘಟನೆ ಅತೀ ವೇಗದ ಹಾಗೂ ಅಜಾಗರೂಕತೆಯ ಚಾಲನೆಗೆ ಹಿಡಿದ ಕನ್ನಡಿಯಾಗಿದೆ. ಇದು ಗಂಭೀರ ವಿಚಾರವಾಗಿದೆ. ಈ ರೀತಿಯ ಚಾಲನೆಯಿಂದ ಹಲವು ಜೀವಗಳು ಹೆದ್ದಾರಿಯಲ್ಲಿ ಬಲಿಯಾಗುತ್ತಿದೆ. ಇದೇ ವೇಳೆ ಎಲ್ಲರು ಸೀಟ್ ಬೆಲ್ಟ್ ಧರಿಸಿ, ಇದೇ ವೇಳೆ ಎಲ್ಲರೂ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ, ಇದರಿಂದ ನಮ್ಮ ಹೆದ್ದಾರಿಗಳು ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತವಾಗಲಿದೆ ಎಂದು ಸುಳೆ ಮನವಿ ಮಾಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಟ್ರಾಫಿಕ್ ಕುರಿತು ಸುಪ್ರಿಯಾ ಸುಲೆ ಲೈವ್&lt;/h2&gt;&lt;p&gt;ಇತ್ತೀಚೆಗೆ ಮುಂಬೈನ ವಿಪರೀತ ಟ್ರಾಫಿಕ್ ಕುರಿತು ಫೇಸ್&zwnj;ಬುಕ್ ಲೈವ್ ಮೂಲಕ ಸುಪ್ರಿಯಾ ಸುಳೆ ಗಮನಸೆಳೆದಿದ್ದರು. ಮುಂಬೈ ಪುಣೆ ಮಿಸ್ಸಿಂಗ್ ಲಿಂಕ್ ಸೆಕ್ಷನ್ ಬಳಿ ಉದ್ಭವಿಸಿದ ಟ್ರಾಫಿಕ್ ಕುರಿತು ಸುಪ್ರಿಯಾ ಸುಳೆ ಲೈವ್ ಮೂಲಕ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಿದ್ದರು. ಬರೋಬ್ಬರಿ ಎರಡು ಗಂಟೆಗಳ ಕಾರು ಈ ಟ್ರಾಫಿಕ್&zwnj;ನಲ್ಲು ಸುಪ್ರಿಯಾ ಸುಳೆ ಸಿಲುಕಿಕೊಂಡಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/vehicle-rams-into-mp-supriya-sule-car-on-pune-mumbai-highway-all-escapes-unhurt/articleshow-tvxmdzl"/>
        </item>
        <item>
            <title><![CDATA[ಪ್ರಧಾನಿ ಮೋದಿ ಸಾಗುವ ದಾರಿ ಸ್ಫೋಟಿಸೋದಾಗಿ ಪೊಲೀಸರಿಗೆ ಸಂದೇಶ; ತಾತಗುಣಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ!]]></title>
            <link>https://kannada.asianetnews.com/gallery/state/gelatin-sticks-found-near-pm-modi-s-route-in-bengaluru-one-detained-sat-1ukfceu</link>
            <guid isPermaLink="true">https://kannada.asianetnews.com/gallery/state/gelatin-sticks-found-near-pm-modi-s-route-in-bengaluru-one-detained-sat-1ukfceu</guid>
            <pubDate>Sun, 10 May 2026 14:59:50 +0530</pubDate>
            <description><![CDATA[ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ, ಅವರು ಸಂಚರಿಸುವ ಮಾರ್ಗದ ಸಮೀಪದ ತಾತಗುಣಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಸ್ಫೋಟದ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಘಟನೆಯ ಹಿಂದಿನ ಸತ್ಯಾಸತ್ಯತೆಯನ್ನು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8jpdk0a28gtqcrfgsa86z4,imgname-whatsapp-image-2026-05-10-at-10.55.52-am--1--1778404505184.jpeg" type="image/jpeg" height="390" width="690"/>
            <content:encoded><![CDATA[ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ, ಅವರು ಸಂಚರಿಸುವ ಮಾರ್ಗದ ಸಮೀಪದ ತಾತಗುಣಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಸ್ಫೋಟದ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಘಟನೆಯ ಹಿಂದಿನ ಸತ್ಯಾಸತ್ಯತೆಯನ್ನು ತನಿಖೆ ನಡೆಸುತ್ತಿದ್ದಾರೆ.&lt;img&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹೊತ್ತಲ್ಲೇ ಸಿಲಿಕಾನ್ ಸಿಟಿಯಲ್ಲಿ ಭಾರಿ ಆತಂಕ ಮೂಡಿಸುವ ಘಟನೆಯೊಂದು ನಡೆದಿದೆ. ಪ್ರಧಾನಿಗಳು ಸಂಚರಿಸುವ ಮಾರ್ಗದ ಸಮೀಪದಲ್ಲೇ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಭದ್ರತಾ ಲೋಪದ ಬಗ್ಗೆ ಅನುಮಾನ ಮೂಡಿಸಿವೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು ಹೊರವಲಯದ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾತಗುಣಿ ಬಳಿ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಪ್ರದೇಶವು ಪ್ರಧಾನಿ ಮೋದಿ ಅವರು ಸಂಚರಿಸುವ ರಸ್ತೆಯ ಸಮೀಪದಲ್ಲೇ ಇರುವುದು ಪೊಲೀಸರ ನಿದ್ದೆ ಗೆಡಿಸಿದೆ. ಆಂಟಿ ಸಬೊಟೇಜ್ ಚೆಕ್ (ASC) ತಂಡವು ಪ್ರಧಾನಿಗಳ ಆಗಮನಕ್ಕೂ ಮುನ್ನ ರಸ್ತೆಯನ್ನು ಸ್ಯಾನಿಟೈಜ್ ಮಾಡುತ್ತಿದ್ದಾಗ, ರಸ್ತೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ಬ್ರಿಡ್ಜ್ ಪಕ್ಕದ ಕಾಂಪೌಂಡ್ ಬಳಿ ಈ ಜಿಲೆಟಿನ್ ಕಡ್ಡಿಗಳನ್ನು ಪತ್ತೆ ಹಚ್ಚಿದೆ.&lt;/p&gt;&lt;img&gt;&lt;p&gt;ಈ ಜಿಲೆಟಿನ್ ಕಡ್ಡಿಗಳ ಪತ್ತೆಯ ಹಿಂದೆ ಕುತೂಹಲಕಾರಿ ಕಥೆಯಿದೆ. ಮುಂಜಾನೆ ಕೋರಮಂಗಲ ಪೊಲೀಸರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ. 'ಹೆಚ್ ಎ ಎಲ್ (HAL) ಹಾಗೂ ಆರ್ಟ್ ಆಫ್ ಲಿವಿಂಗ್ ಬಳಿ ಸ್ಫೋಟಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದ. ತಕ್ಷಣ ಅಲರ್ಟ್ ಆದ ಬೆಂಗಳೂರು ಪೊಲೀಸರು ರಾಮನಗರ ಭಾಗದ ಪೊಲೀಸರಿಗೆ ಮಾಹಿತಿ ರವಾನಿಸಿದರು. ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ತಪಾಸಣೆ ನಡೆಸಿದಾಗ HAL ಬಳಿ ಏನೂ ಸಿಗಲಿಲ್ಲ. ಆದರೆ, ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆಶ್ರಮದ ಹೊರಗಡೆ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.&lt;/p&gt;&lt;img&gt;&lt;p&gt;ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಕೋರಮಂಗಲ ಸಮೀಪದ ಮನೆಯೊಂದರಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈತ ಈ ಹಿಂದೆಯೂ ವಿಐಪಿಗಳು ನಗರಕ್ಕೆ ಬಂದಾಗಲೆಲ್ಲಾ ಇದೇ ರೀತಿ ಹುಸಿ ಬಾಂಬ್ ಕರೆಗಳನ್ನು ಮಾಡುತ್ತಿದ್ದ ಎಂಬ ಆಘಾತಕಾರಿ ವಿಷಯ ಬಯಲಾಗಿದೆ.&lt;/p&gt;&lt;p&gt;&lt;strong&gt;ಮಾನಸಿಕ ಸ್ಥಿತಿ: &lt;/strong&gt;ಈ ಹಿಂದೆ ಈತನನ್ನು ವಶಕ್ಕೆ ಪಡೆದಾಗ ಆತನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಕಾರಣಕ್ಕೆ ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದರು.&lt;/p&gt;&lt;p&gt;&lt;strong&gt;ಈ ಬಾರಿಯ ಗಂಭೀರತೆ: &lt;/strong&gt;ಪ್ರತಿ ಬಾರಿ ಕೇವಲ ಹುಸಿ ಕರೆ ಮಾಡುತ್ತಿದ್ದ ವ್ಯಕ್ತಿ, ಈ ಬಾರಿ ಜಿಲೆಟಿನ್ ಕಡ್ಡಿಗಳನ್ನು ಎಸೆದಿರುವುದು ಪೊಲೀಸರ ತೀವ್ರ ತನಿಖೆಗೆ ಕಾರಣವಾಗಿದೆ. ನಿಜವಾಗಿಯೂ ಆತನೇ ಇಟ್ಟಿದ್ದಾನಾ ಅಥವಾ ಇದರ ಹಿಂದೆ ಬೇರೆ ಯಾರಾದರೂ ಇದ್ದಾರಾ ಎಂಬ ನಿಟ್ಟಿನಲ್ಲಿ ಸದ್ಯ ನಿಗೂಢ ಸ್ಥಳದಲ್ಲಿ ವಿಚಾರಣೆ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಕೇಂದ್ರ ವಲಯದ ಡಿಐಜಿ ಗಿರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. 'ಜಿಲೆಟಿನ್ ಕಡ್ಡಿಗಳು ಸಿಕ್ಕಿರುವುದು ನಿಜ, ಕರೆ ಮಾಡಿದ ವ್ಯಕ್ತಿಗೂ ಈ ಸ್ಫೋಟಕಗಳಿಗೂ ಇರುವ ಸಂಬಂಧದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ' ಎಂದು ಅವರು ತಿಳಿಸಿದ್ದಾರೆ. ಸದ್ಯ ಸಿಕ್ಕಿರುವ ಜಿಲೆಟಿನ್ ಕಡ್ಡಿಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗಿದ್ದು, ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/gelatin-sticks-found-near-pm-modi-s-route-in-bengaluru-one-detained-sat-1ukfceu"/>
        </item>
        <item>
            <title><![CDATA[ನಟ ವಿಜಯ್ ಸಿಎಂ ಆದ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಎಸ್‌ಕೆ ತಂಡದಿಂದ ವಿಶೇಷ ಮನವಿ, ಪರ ವಿರೋಧ]]></title>
            <link>https://kannada.asianetnews.com/gallery/cricket-sports/csk-appeals-to-fans-over-political-hoardings-following-tvk-vijay-rise-as-chief-minister-lv0un70</link>
            <guid isPermaLink="true">https://kannada.asianetnews.com/gallery/cricket-sports/csk-appeals-to-fans-over-political-hoardings-following-tvk-vijay-rise-as-chief-minister-lv0un70</guid>
            <pubDate>Sun, 10 May 2026 14:38:45 +0530</pubDate>
            <description><![CDATA[&lt;p&gt;ನಟ ಜೊಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಲಖನೌ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಸಿಎಸ್&zwnj;ಕೆ ವಿಶೇಷ ಮನವಿಯೊಂದನ್ನು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr8j0afnbjhmdg8qw2qx0wqj,imgname-csk-request-to-fans-1778403781108.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ಜೊಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಲಖನೌ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಸಿಎಸ್&zwnj;ಕೆ ವಿಶೇಷ ಮನವಿಯೊಂದನ್ನು ಮಾಡಿದೆ.&lt;/p&gt;&lt;img&gt;&lt;p&gt;ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ ಜೊಸೆಫ್ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಳಿಕ ಸಿನಿಮೀಯ ಶೈಲಿಯ ಡೈಲಾಗ್ ಮೂಲಕ ಅಭಿಮಾನಿಗಳ ರಂಜಿಸಿದ್ದಾರೆ. ಹೊಸ ಸರ್ಕಾರ, ಹೊಸ ಅಧ್ಯಾಯ ಆರಂಭಗೊಳ್ಳುತ್ತಿದೆ ಎಂದಿದ್ದಾರೆ. ಚೆನ್ನೈನಲ್ಲಿ ನಟ ವಿಜಯ್ ಪ್ರಮಾಣವಚನ ಸಮಾರಂಭದ ದಿನವೇ ಸಿಎಸ್&zwnj;ಕೆ ಹಾಗೂ ಲಖನೌ ಹೋರಾಟ ನಡೆಸುತ್ತಿದೆ. ಇದೀಗ ಸಿಎಸ್&zwnj;ಕೆ ವಿಶೇಷ ಮನವಿಯೊಂದನ್ನು ಮಾಡಿದೆ.&lt;/p&gt;&lt;img&gt;&lt;p&gt;ಚೆನ್ನೈನಲ್ಲೇ ಇಂದು ಸಿಎಸ್&zwnj;ಕೆ ಹಾಗೂ ಲಖನೌ ತಂಡ ಮುಖಾಮುಖಿಯಾಗುತ್ತಿದೆ. ವಿಜಯ್ ಸಿಎಂ ಆಗಿ ಸಂಭ್ರಮಾಚರಣೆ ಜೋರಾಗುತ್ತಿದ್ದಂತೆ ಸಿಎಸ್&zwnj;ಕೆ ತಂಡ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದೆ. ಇಂದು ಚೆನ್ನೈನಲ್ಲಿ ಪಂದ್ಯ ವೀಕ್ಷಣೆಗೆ ಆಗಮಿಸುವ ಅಭಿಮಾನಿಗಳು ಕ್ರೀಡಾಸ್ಪೂರ್ತಿಯಿಂದ ಬನ್ನಿ, ಯಾವುದೇ ರಾಜಕೀಯ ಪಕ್ಷದ ಬ್ಯಾನರ್ ಹಿಡಿದು ಬರಬೇಡಿ ಎಂದು ಮನವಿ ಮಾಡಿದೆ.&lt;/p&gt;&lt;img&gt;&lt;p&gt;ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳಲ್ಲಿ ವಿಶೇಷ ಮನವಿ. ಪ್ರೀತಿಯಿಂದ ಬಂದು ಕ್ರಿಕೆಟ್ ಅಸ್ವಾಸಿದಿಸಿ, ಕ್ರೀಡಾ ಸ್ಪೂರ್ತಿಯೊಂದಿಗೆ ನಮ್ಮ ಜೊತೆ ಕ್ರಿಕೆಟ್ ವೀಕ್ಷಿಸಿ. ಇದೇ ವೇಳೆ ನಮ್ಮ ಕಳಕಳಿಯ ವಿನಂತಿ ಎನಂದರೆ ಅಭಿಮಾನಿಗಳು ಯಾವುದೇ ಕಾರಣಕ್ಕೆ ಯಾವುದೇ ಪಕ್ಷದ ಅಥವಾ ರಾಜಕೀಯ ನಾಯಕರ ಬೋರ್ಡಿಂಗ್, ಬಂಟಿಂಗ್, ಬ್ಯಾನರ್, ಫ್ಲ್ಯಾಗ್&zwnj;ಗಳನ್ನು ಕ್ರೀಡಾಂಗಣಕ್ಕೆ ತರಬೇಡಿ. ಕ್ರೀಡಾಂಗಣದಲ್ಲಿ ಸಿಎಸ್&zwnj;ಕೆಯ ಹಳದಿ ಪ್ರೀತಿ ತುಂಬಿರಲಿ ಎಂದು ಮನವಿ ಮಾಡಿದೆ.&lt;/p&gt;&lt;img&gt;&lt;p&gt;ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಚೆನ್ನೈನಲ್ಲಿ ಪಂದ್ಯ ಆರಂಭಗೊಳ್ಳುತ್ತಿದೆ. ಹೀಗಾಗಿ ಚೆನ್ನೈ ಫ್ರಾಂಚೈಸಿ ಅಭಿಮಾನಿಗಳಿಗೆ ಈ ಮನವಿ ಮಾಡಿದೆ. ಕ್ರಿಕೆಟ್ ಪಂದ್ಯದಲ್ಲಿ ರಾಜಕೀಯ ಮೇಲಾಟಗಳು ಬೇಡ, ಕ್ರೀಡಾ ಸ್ಪೂರ್ತಿಯಿಂದ ಪಂದ್ಯ ಆನಂದಿಸೋಣ ಎಂಬ ಮನವಿ ಇದೀಗ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಸಿಎಸ್&zwnj;ಕೆ ತಂಡದ ಈ ಮನವಿಗೆ ಪರ ವಿರೋಧಗಳು ವ್ಯಕ್ತವಾಗಿದೆ. ಹಲವರು ಸರಿ ಎಂದರೆ, ಮತ್ತೆ ಕೆಲವರು ಅಭಿಮಾನಿಗಳು ಹೇಗೆ ಇರಬೇಕು ಎಂದು ತಂಡ ಸೂಚಿಸುವುದು ಬೇಡ. ಪಂದ್ಯದ ನಡುವೆ ಅಭಿಮಾನಿಗಳು ಘೋಷಣೆ ಕೂಗಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.&lt;/p&gt;&lt;h2&gt;ಘೋಷಣೆ ಕೂಗಿದರೆ ಏನು ಮಾಡುತ್ತೀರಿ?&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/csk-appeals-to-fans-over-political-hoardings-following-tvk-vijay-rise-as-chief-minister-lv0un70"/>
        </item>
        <item>
            <title><![CDATA[ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ರಾಜ್ಯಾದ್ಯಂತ 5 ದಿನ ಮಳೆ; ನಿಮ್ಮ ಜಿಲ್ಲೆ ಇದೆಯಾ ಚೆಕ್ ಮಾಡಿ!]]></title>
            <link>https://kannada.asianetnews.com/gallery/state/karnataka-weather-update-thunderstorms-and-gusty-winds-likely-for-next-5-days-sat-ldvkszz</link>
            <guid isPermaLink="true">https://kannada.asianetnews.com/gallery/state/karnataka-weather-update-thunderstorms-and-gusty-winds-likely-for-next-5-days-sat-ldvkszz</guid>
            <pubDate>Sun, 10 May 2026 14:33:46 +0530</pubDate>
            <description><![CDATA[&lt;p&gt;ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ, ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆಯಾಗುವ ಸಾಧ್ಯತೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn1x4cwfqy4p7vmc5pksrm56,imgname-weather-1774959342479.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ, ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಬೆಂಗಳೂರು (ಮೇ 10): ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ವರದಿ ಮಾಡಿದೆ.&lt;/p&gt;&lt;img&gt;&lt;p&gt;ವಾಯುಭಾರ ಕುಸಿತದ ಪ್ರಭಾವ&lt;/p&gt;&lt;p&gt;ಮನ್ನಾರ್ ಕೊಲ್ಲಿ ಮತ್ತು ಶ್ರೀಲಂಕಾವನ್ನು ಒಳಗೊಂಡ ಪ್ರದೇಶದಲ್ಲಿ ಚಂಡಮಾರುತದ ಸುಳಿಗಾಳಿ (Cyclonic Circulation) ಸಕ್ರಿಯವಾಗಿದೆ. ಇದರ ಪ್ರಭಾವದಿಂದ ಮುಂದಿನ 48 ಗಂಟೆಗಳಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತ ಉಂಟಾಗುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಕರ್ನಾಟಕದ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಹವಾಮಾನ ಬದಲಾಗಲಿದೆ.&lt;/p&gt;&lt;img&gt;&lt;p&gt;&lt;strong&gt;ಜಿಲ್ಲಾವಾರು ಮಳೆ ಮುನ್ಸೂಚನೆ&lt;/strong&gt;&lt;/p&gt;&lt;p&gt;ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಈ ಕೆಳಗಿನ ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ:&lt;/p&gt;&lt;p&gt;&lt;strong&gt;ಕರಾವಳಿ ಕರ್ನಾಟಕ: &lt;/strong&gt;ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 10 ರಿಂದ 14 ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;p&gt;&lt;strong&gt;ಉತ್ತರ ಒಳನಾಡು: &lt;/strong&gt;ಹಾವೇರಿ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರತಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುವ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮೇ 14 ರಂದು ಕಲಬುರಗಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲೂ ಮಳೆಯಾಗಬಹುದು.&lt;/p&gt;&lt;img&gt;&lt;p&gt;&lt;strong&gt;ದಕ್ಷಿಣ ಒಳನಾಡು:&lt;/strong&gt; ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೇ 10 ರಿಂದ 14 ರವರೆಗೆ ಗುಡುಗು ಸಹಿತ ಮಳೆಯಾಗಲಿದೆ. ಮೇ 14 ರಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲೂ ಮಳೆಯ ಸಿಂಚನವಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;&lt;strong&gt;ತಾಪಮಾನ ಮತ್ತು ಎಚ್ಚರಿಕೆ&lt;/strong&gt;&lt;/p&gt;&lt;p&gt;ಮುಂದಿನ 5 ದಿನಗಳವರೆಗೆ ರಾಜ್ಯದ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ. ಕರಾವಳಿ ಭಾಗದಲ್ಲಿ ತಾಪಮಾನವು ವಾಡಿಕೆಗಿಂತ ಸ್ವಲ್ಪ ಹೆಚ್ಚಿದ್ದರೆ, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ವಾಡಿಕೆಗಿಂತ ಕಡಿಮೆ ತಾಪಮಾನ ದಾಖಲಾಗಿದೆ. ಮೇ 14 ರವರೆಗೆ ಗುಡುಗು ಮತ್ತು ಮಿಂಚಿನ ಮುನ್ನೆಚ್ಚರಿಕೆ ನೀಡಲಾಗಿದ್ದು, ಜನರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರಿನ ಹವಾಮಾನ ಹೇಗಿರಲಿದೆ?&lt;/strong&gt;&lt;/p&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಆಕಾಶವು ಭಾಗಶಃ ಮೋಡದಿಂದ ಕೂಡ ಇರಲಿದೆ. ನಗರದಲ್ಲಿ ಗರಿಷ್ಠ ತಾಪಮಾನ 33&deg;C ಮತ್ತು ಕನಿಷ್ಠ ತಾಪಮಾನ 22&deg;C ದಾಖಲಾಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-update-thunderstorms-and-gusty-winds-likely-for-next-5-days-sat-ldvkszz"/>
        </item>
        <item>
            <title><![CDATA[ಬಿಟ್ ಕಾಯಿನ್: ಇಷ್ಟೆಲ್ಲಾ ಆದ್ರೂ ಬುದ್ಧಿ ಕಲಿಯದ ಶ್ರೀಕಿ, ಇಡಿ ಬಂಧನದ ಹಿಂದಿನ ದಿನ ಅಮೆರಿಕ ಕಂಪನಿಯ ಸರ್ವರ್ ಹ್ಯಾಕ್]]></title>
            <link>https://kannada.asianetnews.com/state/ed-arrests-hacker-sriki-and-two-others-in-multi-crore-bitcoin-money-laundering-case-in-bengaluru-gdp/articleshow-of3oppx</link>
            <guid isPermaLink="true">https://kannada.asianetnews.com/state/ed-arrests-hacker-sriki-and-two-others-in-multi-crore-bitcoin-money-laundering-case-in-bengaluru-gdp/articleshow-of3oppx</guid>
            <pubDate>Sun, 10 May 2026 14:22:14 +0530</pubDate>
            <description><![CDATA[ಬಹುಕೋಟಿ ಬಿಟ್&zwnj;ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ಕುಖ್ಯಾತ ಹ್ಯಾಕರ್ ಶ್ರೀಕಿ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದೆ. ಸರ್ಕಾರದ ವೆಬ್&zwnj;ಸೈಟ್&zwnj; ಹ್ಯಾಕ್ ಮಾಡಿ, ಹಣವನ್ನು ಬಿಟ್&zwnj;ಕಾಯಿನ್ ಮೂಲಕ ವರ್ಗಾಯಿಸುತ್ತಿದ್ದ ಈ ಜಾಲವನ್ನು ಇಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8hasp4gv5fngaapmp9ajft,imgname-sriki-bitcoin-case-1778403075780.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಆರೋಪದಡಿ ಬಹುಕೋಟಿ ಬಿಟ್&zwnj;ಕಾಯಿನ್ ಹಗರಣದ ಪ್ರಮುಖ ಆರೋಪಿ, ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀಕಿ ಜೊತೆಗೆ ಆತನ ಸಹಚರರಾದ ರಾಬಿನ್ ಖಂಡೇವಾಲಾ ಮತ್ತು ಸುನೀಶ್ ಹೆಗ್ಡೆ ಅವರನ್ನು ಕೂಡ ಬಂಧಿಸಲಾಗಿದೆ.&lt;/p&gt;&lt;p&gt;ಶುಕ್ರವಾರ ತಡರಾತ್ರಿ ಬಂಧಿಸಲ್ಪಟ್ಟ ಮೂವರು ಆರೋಪಿಗಳನ್ನು ಶನಿವಾರ ಬೆಳಗ್ಗೆ ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಇಡಿ ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;ಹ್ಯಾಕಿಂಗ್, ಬಿಟ್&zwnj;ಕಾಯಿನ್ ವಹಿವಾಟು ಮತ್ತು ಮನಿ ಲಾಂಡರಿಂಗ್ ಜಾಲ&lt;/h2&gt;&lt;p&gt;ತನಿಖೆ ವೇಳೆ ಆರೋಪಿಗಳ ಅಪರಾಧ ಜಾಲದ ಕಾರ್ಯವೈಖರಿ ಬಹಿರಂಗವಾಗಿದೆ. ಪ್ರಮುಖ ಆರೋಪಿ ಶ್ರೀಕಿ ಹ್ಯಾಕಿಂಗ್&zwnj;ನಲ್ಲಿ ಪರಿಣತಿಯಾಗಿದ್ದು, ವಿವಿಧ ವೆಬ್&zwnj;ಸೈಟ್&zwnj;ಗಳನ್ನು ಹ್ಯಾಕ್ ಮಾಡಿ, ಆನ್&zwnj;ಲೈನ್ ಮೂಲಕ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದನೆಂಬ ಆರೋಪವಿದೆ. ಈ ಮೂಲಕ ಪಡೆದ ಹಣವನ್ನು ಬಿಟ್&zwnj;ಕಾಯಿನ್ ಹಾಗೂ ಇಥೇರಿಯಮ್ ರೂಪದಲ್ಲಿ ಸಂಗ್ರಹಿಸುತ್ತಿದ್ದನು.&lt;/p&gt;&lt;p&gt;ರಾಬಿನ್ ಖಂಡೇವಾಲಾ ಬಿಟ್&zwnj;ಕಾಯಿನ್ ಬ್ರೋಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶ್ರೀಕಿ ಸಂಗ್ರಹಿಸಿದ್ದ ಡಿಜಿಟಲ್ ಕರೆನ್ಸಿಯನ್ನು ವ್ಯಾಪಾರ ಮಾಡಿ, ಹಂತ ಹಂತವಾಗಿ ಭಾರತೀಯ ರೂಪಾಯಿಗೆ ಪರಿವರ್ತಿಸಿ ವಿವಿಧ ಖಾತೆಗಳ ಮೂಲಕ ಹಿಂತಿರುಗಿಸುವ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಈ ಪ್ರಕ್ರಿಯೆಯಲ್ಲಿ ರಾಬಿನ್ ಪ್ರಮುಖ ಮನಿ ಲಾಂಡರಿಂಗ್ ಕೊಂಡಿಯಾಗಿ ಗುರುತಿಸಲಾಗಿದೆ.&lt;/p&gt;&lt;p&gt;ಸುನೀಶ್ ಹೆಗ್ಡೆ ಉದ್ಯಮಿಯಾಗಿದ್ದು, ಕಾಂಟ್ರಾಕ್ಟ್ ಕೆಲಸಗಳನ್ನು ಮಾಡಿಸುತ್ತಿದ್ದನು. ಶ್ರೀಕಿಯನ್ನು ಬಳಸಿ ಹ್ಯಾಕಿಂಗ್ ಕಾರ್ಯಗಳನ್ನು ನಡೆಸಿಸುತ್ತಿದ್ದನೆಂಬ ಆರೋಪವೂ ಕೇಳಿಬಂದಿದೆ.&lt;/p&gt;&lt;h2&gt;ಸರ್ಕಾರದ ವೆಬ್&zwnj;ಸೈಟ್ ಹ್ಯಾಕ್ ಆರೋಪ&lt;/h2&gt;&lt;p&gt;ಈ ತಂಡವು ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್&zwnj;ಮೆಂಟ್ ವೆಬ್&zwnj;ಸೈಟ್&zwnj;ನ್ನು ಹ್ಯಾಕ್ ಮಾಡಿ, ಸರ್ಕಾರದ ಹಣವನ್ನು ಅಕ್ರಮ ಖಾತೆಗಳಿಗೆ ವರ್ಗಾಯಿಸಿದ ಆರೋಪ ಎದುರಿಸುತ್ತಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ಎಸ್&zwnj;ಐಟಿ ತನಿಖೆಗೆ ವಹಿಸಿತ್ತು. ತನಿಖೆ ವೇಳೆ ಹಲವು ಡಿಜಿಟಲ್ ವಾಲೆಟ್&zwnj;ಗಳ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದವು.&lt;/p&gt;&lt;h2&gt;ಸಿಸಿಬಿ ತನಿಖೆ ಮತ್ತು ಡ್ರಗ್ಸ್ ಸಂಪರ್ಕ&lt;/h2&gt;&lt;p&gt;ಈ ಪ್ರಕರಣವನ್ನು ಮೊದಲಿಗೆ ಬೆಂಗಳೂರು ಸಿಸಿಬಿ ಪೊಲೀಸರು ತನಿಖೆ ನಡೆಸಿ ಶ್ರೀಕಿ ಸೇರಿದಂತೆ ಮೂವರನ್ನು ಬಂಧಿಸಿದ್ದರು. ನಂತರ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ತನಿಖೆ ವೇಳೆ ಅಂತಾರಾಷ್ಟ್ರೀಯ ಪೋಸ್ಟ್ ಆಫೀಸ್ ಮೂಲಕ ಡ್ರಗ್ಸ್ ತರಿಸಿಕೊಂಡಿದ್ದ ಆರೋಪವೂ ಬೆಳಕಿಗೆ ಬಂದಿತ್ತು. ಡ್ರಗ್ಸ್ ಪ್ರಕರಣ ದಾಖಲಾದ ನಂತರವೇ ಹ್ಯಾಕಿಂಗ್, ಬಿಟ್&zwnj;ಕಾಯಿನ್ ವಹಿವಾಟು ಹಾಗೂ ಆನ್&zwnj;ಲೈನ್ ಸುಲಿಗೆ ಜಾಲ ಬಹಿರಂಗಗೊಂಡಿತ್ತು.&lt;/p&gt;&lt;h2&gt;ಇಡಿ ದಾಳಿ ಮತ್ತು ನಿಗಾ&amp;nbsp;&lt;/h2&gt;&lt;p&gt;ಪ್ರಕರಣ ಸಂಬಂಧ ಏಪ್ರಿಲ್ 20ರಂದು ಇಡಿ ಅಧಿಕಾರಿಗಳು ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್, ಅವರ ಪುತ್ರರಾದ ಮೊಹಮ್ಮದ್ ನಲಪಾಡ್ ಮತ್ತು ಒಮರ್ ನಲಪಾಡ್ ಸೇರಿದಂತೆ ಹಲವು ಮಂದಿಯ ನಿವಾಸಗಳಲ್ಲಿ ಪರಿಶೀಲನೆ ನಡೆಸಿ ಮಹತ್ವದ ದಾಖಲೆಗಳು, ಮೊಬೈಲ್&zwnj;ಗಳನ್ನು ಜಪ್ತಿ ಮಾಡಲಾಗಿತ್ತು.&lt;/p&gt;&lt;p&gt;ಇದಾದ ಬಳಿಕ ಶ್ರೀಕಿಯ ಚಲನವಲನಗಳ ಮೇಲೆ ಇಡಿ ಅಧಿಕಾರಿಗಳು ನಿಗಾವಹಿಸಿದ್ದರು. ಹಲವು ಪ್ರಕರಣಗಳ ಬಳಿಕವೂ ಶ್ರೀಕಿ ಹ್ಯಾಕಿಂಗ್ ಚಟುವಟಿಕೆಗಳನ್ನು ನಿಲ್ಲಿಸಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;h2&gt;ಬಂಧನಕ್ಕೂ ಮುನ್ನವೂ ಹ್ಯಾಕಿಂಗ್ ಯತ್ನ&lt;/h2&gt;&lt;p&gt;ಬಂಧನಕ್ಕೆ ಮುನ್ನದ ದಿನವೇ ಶ್ರೀಕಿ ಅಮೆರಿಕದ ಒಂದು ಕಂಪನಿಯ ಸರ್ವರ್&zwnj;ನ್ನು ಹ್ಯಾಕ್ ಮಾಡಲು ಯತ್ನಿಸಿ, ಹಣಕ್ಕೆ ಬೇಡಿಕೆ ಇಡಲು ಮುಂದಾಗಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ಇಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶ್ರೀಕಿಯನ್ನು ಬಂಧಿಸಿದ್ದಾರೆ.&lt;/p&gt;&lt;h2&gt;ರಾಜಕೀಯ ಸಂಪರ್ಕಗಳ ಕುರಿತು ತನಿಖೆ&lt;/h2&gt;&lt;p&gt;ಶ್ರೀಕಿ ಬಂಧನದಿಂದಾಗಿ ಆತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕೆಲವು ರಾಜಕೀಯ ವ್ಯಕ್ತಿಗಳಿಗೂ ಆತಂಕ ಶುರುವಾಗಿದೆ ಎನ್ನಲಾಗಿದೆ. ವಿಶೇಷವಾಗಿ ಹಣಕಾಸು ವ್ಯವಹಾರಗಳ ಕುರಿತಾಗಿ ಕೆಲವು ಹೆಸರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಇಡಿ ತನಿಖೆ ಮುಂದುವರಿದಿದೆ.&lt;/p&gt;&lt;h2&gt;ಮುಂದಿನ ತನಿಖೆಗೆ ಕುತೂಹಲ&lt;/h2&gt;&lt;p&gt;ಪ್ರಸ್ತುತ ಇಡಿ ಅಧಿಕಾರಿಗಳು ಮೂವರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು, ಇವರ ಹೇಳಿಕೆಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಹಣ ಮತ್ತು ಡಿಜಿಟಲ್ ಆಸ್ತಿಗಳ ದುರುಪಯೋಗದಲ್ಲಿ ಇನ್ನೂ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದು ಮುಂದಿನ ತನಿಖೆಯಿಂದ ಬಹಿರಂಗವಾಗಬೇಕಿದೆ.&lt;/p&gt;&lt;p&gt;ಇದುವರೆಗೆ ಈ ಬಂಧನ ಕುರಿತು ಇಡಿ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲದಿದ್ದರೂ, ಪ್ರಕರಣ ರಾಜ್ಯದ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/state/ed-arrests-hacker-sriki-and-two-others-in-multi-crore-bitcoin-money-laundering-case-in-bengaluru-gdp/articleshow-of3oppx"/>
        </item>
        <item>
            <title><![CDATA[ದಳಪತಿ ವಿಜಯ್‌ಗೆ ಸಿನಿಮಾದಿಂದ ನೂರಾರು ಕೋಟಿ ಸಂಭಾವನೆ; ಸಿಎಂ ಆದಮೇಲೆ ಸಿಗುವ ಸಂಬಳವೆಷ್ಟು? ಒಟ್ಟು ಆಸ್ತಿ ವಿವರ ನೋಡಿ!]]></title>
            <link>https://kannada.asianetnews.com/gallery/india-news/chief-minister-thalapathy-vijay-net-worth-and-salary-as-tamil-nadu-cm-updates-sat-o0loo26</link>
            <guid isPermaLink="true">https://kannada.asianetnews.com/gallery/india-news/chief-minister-thalapathy-vijay-net-worth-and-salary-as-tamil-nadu-cm-updates-sat-o0loo26</guid>
            <pubDate>Sun, 10 May 2026 13:37:14 +0530</pubDate>
            <description><![CDATA[ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರ 624 ಕೋಟಿ ರೂಪಾಯಿ ಮೌಲ್ಯದ ಒಟ್ಟು ಆಸ್ತಿಯ ವಿವರಗಳು ಬಹಿರಂಗಗೊಂಡಿವೆ. ಮುಖ್ಯಮಂತ್ರಿಯಾಗಿ ಅವರಿಗೆ ಸಿಗುವ ಸಂಬಳ, ಸೌಲಭ್ಯಗಳು ಮತ್ತು ಅವರ ಆಸ್ತಿಪಾಸ್ತಿಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyabwx0q17mtmeqmy646dp8,imgname-thalapathy-vijay-tamil-nadu-cm-2026-net-worth-assets-car-collection-tvk-property-affidavit-1778060227488.jpg" type="image/jpeg" height="390" width="690"/>
            <content:encoded><![CDATA[ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರ 624 ಕೋಟಿ ರೂಪಾಯಿ ಮೌಲ್ಯದ ಒಟ್ಟು ಆಸ್ತಿಯ ವಿವರಗಳು ಬಹಿರಂಗಗೊಂಡಿವೆ. ಮುಖ್ಯಮಂತ್ರಿಯಾಗಿ ಅವರಿಗೆ ಸಿಗುವ ಸಂಬಳ, ಸೌಲಭ್ಯಗಳು ಮತ್ತು ಅವರ ಆಸ್ತಿಪಾಸ್ತಿಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.&lt;img&gt;&lt;p&gt;ತಮಿಳು ಚಿತ್ರರಂಗದ ಸೂಪರ್&zwnj;ಸ್ಟಾರ್ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಸಿ. ಜೋಸೆಫ್ ವಿಜಯ್ ಅವರು ಇಂದು ಬೆಳಗ್ಗೆ 10 ಗಂಟೆಗೆ ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಐತಿಹಾಸಿಕ ಕ್ಷಣದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ಈಗ ವಿಜಯ್ ಅವರಿಗೆ ಸಿಗುವ ಸಂಬಳ ಮತ್ತು ಅವರ ಒಟ್ಟು ಆಸ್ತಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.&lt;/p&gt;&lt;img&gt;&lt;p&gt;ವರದಿಗಳ ಪ್ರಕಾರ, ತಮಿಳುನಾಡು ಮುಖ್ಯಮಂತ್ರಿಗೆ ತಿಂಗಳಿಗೆ ಸುಮಾರು 2.85 ಲಕ್ಷ ರೂಪಾಯಿ ಸಂಬಳ ಸಿಗುತ್ತದೆ. ಇದರಲ್ಲಿ ಶಾಸಕರಾಗಿ ಸಿಗುವ ಸಂಬಳ ಮತ್ತು ಬೇರೆ ಬೇರೆ ಭತ್ಯೆಗಳೂ ಸೇರಿವೆ. ಈ ಲೆಕ್ಕಾಚಾರದ ಪ್ರಕಾರ, ಮುಖ್ಯಮಂತ್ರಿಯ ವಾರ್ಷಿಕ ಆದಾಯ ಸುಮಾರು 34 ಲಕ್ಷ ರೂಪಾಯಿ ಆಗಲಿದೆ.&lt;/p&gt;&lt;img&gt;&lt;p&gt;ಬರಿ ಸಂಬಳ ಮಾತ್ರವಲ್ಲದೆ, ಮುಖ್ಯಮಂತ್ರಿಯಾದವರಿಗೆ ಸರ್ಕಾರಿ ನಿವಾಸ, ಪ್ರತ್ಯೇಕ ಸಿಬ್ಬಂದಿ ವರ್ಗ, ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ, ಅಧಿಕೃತ ಪ್ರಯಾಣದ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳು ಮತ್ತು ಕಮ್ಯೂನಿಕೇಷನ್ ಸೌಲಭ್ಯಗಳೂ ಸಿಗುತ್ತವೆ. ವಿಶೇಷವೆಂದರೆ, ಹುದ್ದೆಯಿಂದ ನಿವೃತ್ತರಾದ ಮೇಲೂ ವಿಜಯ್&zwnj;ಗೆ ಕೆಲವು ಪ್ರಮುಖ ಸೌಲಭ್ಯಗಳು ಮುಂದುವರಿಯಲಿವೆ.&lt;/p&gt;&lt;img&gt;&lt;p&gt;ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ, ಚುನಾವಣಾ ಆಯೋಗಕ್ಕೆ ಕೊಟ್ಟ 27 ಪುಟಗಳ ಅಫಿಡವಿಟ್&zwnj;ನಲ್ಲಿ ವಿಜಯ್ ತಮ್ಮ ಆಸ್ತಿ ವಿವರಗಳನ್ನು ಅಧಿಕೃತವಾಗಿ ಘೋಷಿಸಿದ್ದರು. ವರದಿಗಳ ಪ್ರಕಾರ, 'ದಳಪತಿ' ವಿಜಯ್ ಅವರ ಒಟ್ಟು ಆಸ್ತಿ 624 ಕೋಟಿ ರೂಪಾಯಿ. ಇದರೊಂದಿಗೆ ವಿಜಯ್ ದೇಶದ ಶ್ರೀಮಂತ ರಾಜಕಾರಣಿಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿಜಯ್ ಅವರ ಆಸ್ತಿಯಲ್ಲಿ ಬ್ಯಾಂಕ್ ಡೆಪಾಸಿಟ್&zwnj;ಗಳಿಂದ ಹಿಡಿದು ಐಷಾರಾಮಿ ಕಾರುಗಳವರೆಗೆ ಎಲ್ಲವೂ ಅಡಕವಾಗಿದೆ:&lt;/p&gt;&lt;p&gt;&lt;strong&gt;ಬ್ಯಾಂಕ್ ಬ್ಯಾಲೆನ್ಸ್:&lt;/strong&gt; ಚೆನ್ನೈನ ಐಒಬಿ ಶಾಲಿಗ್ರಾಮಂ ಬ್ರಾಂಚ್&zwnj;ನ ಒಂದು ಸೇವಿಂಗ್ಸ್ ಅಕೌಂಟ್&zwnj;ನಲ್ಲೇ ಬರೋಬ್ಬರಿ 213.36 ಕೋಟಿ ರೂಪಾಯಿ ಬ್ಯಾಲೆನ್ಸ್ ಇದೆ.&lt;/p&gt;&lt;p&gt;&lt;strong&gt;ಫಿಕ್ಸೆಡ್ ಡೆಪಾಸಿಟ್: &lt;/strong&gt;ಬೇರೆ ನಾಲ್ಕು ಬ್ಯಾಂಕ್&zwnj;ಗಳಲ್ಲಿ ಒಟ್ಟು 100 ಕೋಟಿ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇದೆ.&lt;/p&gt;&lt;p&gt;&lt;strong&gt;ಸ್ಥಿರ ಆಸ್ತಿ:&lt;/strong&gt; ಸುಮಾರು 220 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳು ಅವರ ಹೆಸರಿನಲ್ಲಿವೆ.&lt;/p&gt;&lt;img&gt;&lt;p&gt;&lt;strong&gt;ಐಷಾರಾಮಿ ಕಾರುಗಳು: &lt;/strong&gt;ಸುಮಾರು 13.52 ಕೋಟಿ ರೂಪಾಯಿ ಮೌಲ್ಯದ ಕಾರುಗಳ ಕಲೆಕ್ಷನ್ ವಿಜಯ್ ಬಳಿಯಿದೆ.&lt;/p&gt;&lt;p&gt;&lt;strong&gt;ಚಿನ್ನ ಮತ್ತು ವಜ್ರ: &lt;/strong&gt;ವಿಜಯ್ ಹೆಸರಲ್ಲಿ 1.20 ಕೋಟಿ ರೂಪಾಯಿ ಬೆಲೆಬಾಳುವ 883 ಗ್ರಾಂ ಚಿನ್ನವಿದ್ದರೆ, ಅವರ ಪತ್ನಿ ಸಂಗೀತಾ ಹೆಸರಲ್ಲಿ 4.07 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ಒಂದು ಕೋಟಿ ರೂಪಾಯಿ ಮೌಲ್ಯದ ವಜ್ರಗಳಿವೆ.&lt;/p&gt;&lt;p&gt;&lt;strong&gt;ಸಾಲದ ವಿವರ:&lt;/strong&gt; ವಿವಿಧ ವ್ಯಕ್ತಿಗಳು ಮತ್ತು ಟ್ರಸ್ಟ್&zwnj;ಗಳಿಗೆ ವಿಜಯ್ ಅವರು 75.5 ಕೋಟಿ ರೂಪಾಯಿ ಸಾಲ ನೀಡಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾ ಮತ್ತು ರಾಜಕೀಯದಲ್ಲಿ ದೊಡ್ಡ ರಿಸ್ಕ್ ತೆಗೆದುಕೊಂಡರೂ, ಶೇರು ಮಾರುಕಟ್ಟೆಯಲ್ಲಿ ವಿಜಯ್ ದೊಡ್ಡ ಮಟ್ಟದ ಹೂಡಿಕೆ ಮಾಡಿಲ್ಲ ಎಂಬುದು ಕುತೂಹಲಕಾರಿ ಸಂಗತಿ. ಕೇವಲ 19.37 ಲಕ್ಷ ರೂಪಾಯಿ ಮಾತ್ರ ಶೇರುಗಳಲ್ಲಿದೆ. ಮ್ಯೂಚುವಲ್ ಫಂಡ್ ಅಥವಾ ಬಾಂಡ್&zwnj;ಗಳಲ್ಲಿ ಅವರು ಯಾವುದೇ ಹೂಡಿಕೆ ಮಾಡಿಲ್ಲ. 2024-25ರ ಆರ್ಥಿಕ ವರ್ಷವೊಂದರಲ್ಲೇ ವಿಜಯ್ ಅವರ ಆದಾಯ 184.53 ಕೋಟಿ ರೂಪಾಯಿ ಆಗಿದೆ.&lt;/p&gt;&lt;img&gt;&lt;p&gt;ಸಿನಿಮಾಗಳಲ್ಲಿ ನಟಿಸಿ ವರ್ಷಕ್ಕೆ 180 ಕೋಟಿ ರೂಪಾಯಿಗಿಂತ ಹೆಚ್ಚು ಸಂಪಾದಿಸುತ್ತಿದ್ದ ವಿಜಯ್&zwnj;ಗೆ, ಮುಖ್ಯಮಂತ್ರಿಯಾದ ಮೇಲೆ ಸಿಗುವುದು ವರ್ಷಕ್ಕೆ ಕೇವಲ 34 ಲಕ್ಷ ರೂಪಾಯಿ ಮಾತ್ರ. ಆದರೆ, ಹಣಕಾಸಿನ ಆದಾಯಕ್ಕಿಂತ ರಾಜ್ಯದ ಹಿತದೃಷ್ಟಿಯಿಂದ ದೊಡ್ಡ ಜವಾಬ್ದಾರಿ ಈಗ ಅವರ ಮುಂದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/india-news/chief-minister-thalapathy-vijay-net-worth-and-salary-as-tamil-nadu-cm-updates-sat-o0loo26"/>
        </item>
        <item>
            <title><![CDATA[ದಳಪತಿ ವಿಜಯ್ ಸಿನಿಮೀಯ ಸ್ಟೈಲ್‌ನಲ್ಲಿ ಪ್ರಮಾಣವಚನ ಸ್ವೀಕಾರ; ಆ ಒಂದು ಡೈಲಾಗ್‌ಗೆ ಚಪ್ಪಾಳೆ, ಶಿಳ್ಳೆ ಹೊಡೆದ ಜನ!]]></title>
            <link>https://kannada.asianetnews.com/gallery/india-news/thalapathy-vijay-sworn-in-as-tamil-nadu-cm-29-year-old-keerthana-becomes-youngest-minister-sat-9pgc9bq</link>
            <guid isPermaLink="true">https://kannada.asianetnews.com/gallery/india-news/thalapathy-vijay-sworn-in-as-tamil-nadu-cm-29-year-old-keerthana-becomes-youngest-minister-sat-9pgc9bq</guid>
            <pubDate>Sun, 10 May 2026 13:02:04 +0530</pubDate>
            <description><![CDATA[ನಟ 'ದಳಪತಿ' ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು, ಟಿವಿಕೆ ಪಕ್ಷದ ಸರ್ಕಾರವನ್ನು ಮುನ್ನಡೆಸಲಿದ್ದು, ಅವರ ಸಂಪುಟದಲ್ಲಿ 29 ವರ್ಷದ ಕೀರ್ತನಾ ಅತ್ಯಂತ ಕಿರಿಯ ಸಚಿವೆಯಾಗಿ ಗಮನ ಸೆಳೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr884h5fv85a0tshw0ynv41r,imgname-vijay-cm-oath-ceremony-controversy-1778393433263.jpg" type="image/jpeg" height="390" width="690"/>
            <content:encoded><![CDATA[ನಟ 'ದಳಪತಿ' ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು, ಟಿವಿಕೆ ಪಕ್ಷದ ಸರ್ಕಾರವನ್ನು ಮುನ್ನಡೆಸಲಿದ್ದು, ಅವರ ಸಂಪುಟದಲ್ಲಿ 29 ವರ್ಷದ ಕೀರ್ತನಾ ಅತ್ಯಂತ ಕಿರಿಯ ಸಚಿವೆಯಾಗಿ ಗಮನ ಸೆಳೆದಿದ್ದಾರೆ.&lt;img&gt;&lt;p&gt;&lt;strong&gt;ಚೆನ್ನೈ: &lt;/strong&gt;ತಮಿಳು ಚಿತ್ರರಂಗದ ಸುಪರ್ ಸ್ಟಾರ್, 'ದಳಪತಿ' ವಿಜಯ್ ಅವರು ಇಂದು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ತಮ್ಮ ಜೀವನದ ಹೊಸ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಿನಿಮೀಯ ಶೈಲಿಯಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.&lt;/p&gt;&lt;img&gt;&lt;p&gt;ಸಮಾರಂಭದ ಅತ್ಯಂತ ಆಕರ್ಷಕ ಕ್ಷಣವೆಂದರೆ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ. 'ಸಿ. ಜೋಸೆಫ್ ವಿಜಯ್ ಎಂಬ ನಾನು&hellip;.' ಎಂದು ಆರಂಭಿಸಿದ ಅವರು, ಯಾವುದೇ ಪೇಪರ್ ಅಥವಾ ಹಸ್ತಪ್ರತಿಯನ್ನು ನೋಡದೆಯೇ ಮೊದಲ ಭಾಗದ ಪ್ರಮಾಣ ವಚನವನ್ನು ಬೋಧಿಸಿದರು. 'ಆಂಡವನ್' (ದೇವರು) ಹೆಸರಿನಲ್ಲಿ ಆಣೆ ಮಾಡಿದ ಅವರು, ತಮ್ಮ ಸಿನಿಮಾದ ಪಂಚ್ ಡೈಲಾಗ್&zwnj;ಗಳ ಮಾದರಿಯಲ್ಲೇ ಗಂಭೀರವಾಗಿ ಮತ್ತು ಆತ್ಮವಿಶ್ವಾಸದಿಂದ ಮಾತನಾಡಿದ್ದು ನೆರೆದಿದ್ದ ಸಾವಿರಾರು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿತು. ಎಲ್ಲ ಅಭಿಮಾನಿಗಳು ಚಪ್ಪಾಳೆ ಹೊಡೆದು, ಶಿಳ್ಳೆ ಹಾಕಿ ಸಂಭ್ರಮಿಸಿದರು. ಕೇವಲ ಎರಡನೇ ಭಾಗವನ್ನು ಮಾತ್ರ ಅವರು ಪೇಪರ್ ನೋಡಿ ಓದಿದರು.&lt;/p&gt;&lt;img&gt;&lt;p&gt;ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಅವರು ವಿಜಯ್ ಅವರಿಗೆ ಪದವಿ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಿಜಯ್ ಅವರ ಕುಟುಂಬಸ್ಥರು, ಟಿವಿಕೆ (TVK) ಪಕ್ಷದ ಕಾರ್ಯಕರ್ತರು ಮತ್ತು ದಕ್ಷಿಣ ಭಾರತದ ಖ್ಯಾತ ಸಿನಿಮಾ ತಾರೆಯರು ಸಾಕ್ಷಿಯಾದರು.&lt;/p&gt;&lt;img&gt;&lt;p&gt;ತಮಿಳುನಾಡು ವಿಧಾನಸಭೆಯಲ್ಲಿ 120 ಶಾಸಕರ ಬಲದೊಂದಿಗೆ ಟಿವಿಕೆ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ವಿಜಯ್ ಅವರೊಂದಿಗೆ ಒಟ್ಟು 9 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸದ್ಯ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಮೈತ್ರಿ ಪಕ್ಷವಾದ ಕಾಂಗ್ರೆಸ್&zwnj;ನ ಸಚಿವರ ಹೆಸರುಗಳಿಲ್ಲ. ಮೂಲಗಳ ಪ್ರಕಾರ, ವಿಶ್ವಾಸಮತ ಯಾಚನೆಯ ನಂತರ ಕಾಂಗ್ರೆಸ್ ಶಾಸಕರಿಗೂ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಈ ಬಾರಿಯ ಸಚಿವ ಸಂಪುಟದ ಪ್ರಮುಖ ಆಕರ್ಷಣೆ ಎಂದರೆ 29 ವರ್ಷದ ಸೆಲ್ವಿ ಎಸ್. ಕೀರ್ತನಾ. ಶಿವಕಾಶಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಇವರು, ವಿಜಯ್ ಸಂಪುಟದ ಅತ್ಯಂತ ಕಿರಿಯ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.&lt;/p&gt;&lt;p&gt;&lt;strong&gt;ವೃತ್ತಿಜೀವನ:&lt;/strong&gt; ಈ ಹಿಂದೆ ಪೊಲಿಟಿಕಲ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದ್ದ ಕೀರ್ತನಾ, ಟಿವಿಕೆ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;&lt;p&gt;&lt;strong&gt;ದಾಖಲೆ: &lt;/strong&gt;ಶಿವಕಾಶಿಯಲ್ಲಿ ಏಳು ದಶಕಗಳ ಪುರುಷ ಪ್ರಾಬಲ್ಯವನ್ನು ಮುರಿದು ಗೆದ್ದ ಮೊದಲ ಮಹಿಳಾ ಶಾಸಕಿ ಇವರಾಗಿದ್ದಾರೆ.&lt;/p&gt;&lt;p&gt;&lt;strong&gt;ಶಿಕ್ಷಣ:&lt;/strong&gt; ಎಂ.ಎಸ್ಸಿ (ಅಂಕಿಅಂಶ) ಪದವೀಧರೆಯಾಗಿರುವ ಇವರು, ಬಹುಭಾಷಾ ಪಂಡಿತರೂ ಹೌದು.&lt;/p&gt;&lt;p&gt;ಒಟ್ಟಾರೆಯಾಗಿ, ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ದಶಕಗಳ ಆಳ್ವಿಕೆಗೆ ವಿರಾಮ ಹಾಡಿರುವ ವಿಜಯ್, ಹೊಸ ಆಶಯಗಳೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/india-news/thalapathy-vijay-sworn-in-as-tamil-nadu-cm-29-year-old-keerthana-becomes-youngest-minister-sat-9pgc9bq"/>
        </item>
        <item>
            <title><![CDATA[ರಾಯಚೂರು: ಲಿಂಗಸುಗೂರು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳಿಂದಲೇ ತಡರಾತ್ರಿಯವರೆಗೆ ಗುಂಡು-ತುಂಡು ಪಾರ್ಟಿ, ಭಾರೀ ಆಕ್ರೋಶ]]></title>
            <link>https://kannada.asianetnews.com/karnataka-districts/late-night-party-at-pwd-office-in-raichur-sparks-outrage-gdp/articleshow-gqtme3a</link>
            <guid isPermaLink="true">https://kannada.asianetnews.com/karnataka-districts/late-night-party-at-pwd-office-in-raichur-sparks-outrage-gdp/articleshow-gqtme3a</guid>
            <pubDate>Sun, 10 May 2026 12:48:02 +0530</pubDate>
            <description><![CDATA[ರಾಯಚೂರು ಜಿಲ್ಲೆಯ ಲಿಂಗಸುಗೂರು ಪಿಡಬ್ಲ್ಯುಡಿ ಕಚೇರಿಯಲ್ಲಿ, ಎಇಇ ಹನುಮಪ್ಪ ಅದವಾನಿ ನೇತೃತ್ವದಲ್ಲಿ ತಡರಾತ್ರಿ ಪಾರ್ಟಿ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8bwm541vw8pfagmb2318ss,imgname-raichur-pwd-office-party-1778397368484.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ (ಪಿಡಬ್ಲ್ಯುಡಿ) ಕಚೇರಿಯಲ್ಲಿ ನಡೆದ ರಾತ್ರಿ ಪಾರ್ಟಿ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ಕಚೇರಿಯಲ್ಲೇ ತಡರಾತ್ರಿ ವರೆಗೆ ಪಾರ್ಟಿ ನಡೆಸಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಲಿಂಗಸುಗೂರಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಈ ಪಾರ್ಟಿ ನಡೆದಿದ್ದು, ಎಇಇ ಹನುಮಪ್ಪ ಅದವಾನಿ ನೇತೃತ್ವದಲ್ಲಿ ಈ ಪಾರ್ಟಿ ನಡೆದಿದೆ ಎನ್ನಲಾಗಿದೆ. ಕಚೇರಿಯಲ್ಲೇ ಪರಿಚಯಸ್ಥರು ಹಾಗೂ ಕೆಲವು ಸಿಬ್ಬಂದಿಯನ್ನು ಸೇರಿಸಿಕೊಂಡು ಈ ಪಾರ್ಟಿ ಮಾಡಲಾಗಿದೆಯಂತೆ. ಯಾವ ಉದ್ದೇಶದಿಂದ ಈ ಪಾರ್ಟಿ ನಡೆದಿದೆ ಎಂಬ ಬಗ್ಗೆ ಮಾಹೊತೊ ತಿಳಿದುಬಂದಿಲ್ಲ.&lt;/p&gt;&lt;h2&gt;ನಿಯಮಗಳನ್ನು ಗಾಳಿಗೆ ತೂರಿದ ಅಧಿಕಾರಿಗಳು&lt;/h2&gt;&lt;p&gt;ಸರ್ಕಾರಿ ಕಚೇರಿಗಳಲ್ಲಿ ಕಚೇರಿ ಸಮಯ ಮುಗಿದ ನಂತರ ಇಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲದಿದ್ದರೂ, ಇಲಾಖೆಯ ನಿಯಮಗಳನ್ನು ಲೆಕ್ಕಿಸದೆ ತಡರಾತ್ರಿ ವರೆಗೆ ಪಾರ್ಟಿ ನಡೆದಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾರ್ವಜನಿಕ ಸೇವೆಗೆ ಮೀಸಲಾಗಿರುವ ಕಚೇರಿಯನ್ನು ಖಾಸಗಿ ಉದ್ದೇಶಗಳಿಗೆ ಬಳಸಿಕೊಂಡಿರುವುದನ್ನು ಜನರು ತೀವ್ರವಾಗಿ ಖಂಡಿಸಿದ್ದಾರೆ.&lt;/p&gt;&lt;h2&gt;ವೈರಲ್ ವಿಡಿಯೋದಿಂದ ಬಯಲಾದ ಪಾರ್ಟಿ ಕಥೆ&lt;/h2&gt;&lt;p&gt;ಈ ಪಾರ್ಟಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಇದು ಬೆಳಕಿಗೆ ಬಂದಿದೆ. ಈ ಘಟನೆ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸರ್ಕಾರಿ ಕಚೇರಿಗಳ ಗೌರವ ಕಾಪಾಡುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳೇ ಇಂತಹ ನಡೆ ತೋರಿರುವುದು ಆತಂಕಕಾರಿ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಇದು ರಾಯಚೂರು ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯ ಪ್ರಶ್ನಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/late-night-party-at-pwd-office-in-raichur-sparks-outrage-gdp/articleshow-gqtme3a"/>
        </item>
        <item>
            <title><![CDATA[Art of Living: ಬಂಜರು ಭೂಮಿಯಲ್ಲಿ ಅರಳಿದ ಆರ್ಟ್ ಆಫ್ ಲಿವಿಂಗ್!]]></title>
            <link>https://kannada.asianetnews.com/state/pm-modi-inaugurates-art-of-living-meditation-hall-in-bengaluru-with-sri-sri-ravi-shankar-rav/articleshow-aacyb7r</link>
            <guid isPermaLink="true">https://kannada.asianetnews.com/state/pm-modi-inaugurates-art-of-living-meditation-hall-in-bengaluru-with-sri-sri-ravi-shankar-rav/articleshow-aacyb7r</guid>
            <pubDate>Sun, 10 May 2026 12:15:53 +0530</pubDate>
            <description><![CDATA[&lt;p&gt;ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ದಿ ಆರ್ಟ್&zwnj; ಆಫ್&zwnj; ಲಿವಿಂಗ್&zwnj; ಅಂತಾರಾಷ್ಟ್ರೀಯ ಕೇಂದ್ರವು ಶ್ರೀ ಶ್ರೀ ರವಿಶಂಕರ ಗುರೂಜಿಯವರಿಂದ ಸ್ಥಾಪಿತವಾದ ಒಂದು ಪ್ರಶಾಂತ ತಾಣವಾಗಿದೆ. ಯೋಗ, ಧ್ಯಾನ, ಸತ್ಸಂಗಗಳ ಜೊತೆಗೆ, &amp;nbsp;ಅಪಾರ ಜೀವವೈವಿಧ್ಯದಿಂದ ಕೂಡಿರುವ ಈ ಆಶ್ರಮ ಆತ್ಮಶೋಧನೆಗೆ, ನೆಮ್ಮದಿಗೆ ಪ್ರಸಿದ್ಧವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr8a4pr9wathz3nk2aka37fh,imgname-----------------------2026-05-10t121505.841-1778395536137.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ ಸಾಗಿದರೆ ನಿಮಗೊಂದು ಅಚ್ಚರಿ ಕಾದಿರುತ್ತದೆ. ನಗರದ ಜಂಜಾಟದಿಂದ ಬೇಸತ್ತ ಜನರಿಗೆ ಇಲ್ಲೊಂದು ನೆಮ್ಮದಿ ನೀಡುವ, ನಿಮ್ಮನ್ನು ಪುನಶ್ಚೇತನಗೊಳಿಸುವ ಕೇಂದ್ರವಿದೆ. ಅದೇ ದಿ ಆರ್ಟ್&zwnj; ಆಫ್&zwnj; ಲಿವಿಂಗ್&zwnj; ಅಂತಾರಾಷ್ಟ್ರೀಯ ಕೇಂದ್ರ.&lt;/p&gt;&lt;p&gt;ಗುರುದೇವರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಆಸಕ್ತಿಯಿಂದ ರೂಪುಗೊಂಡು ಈ ಕೇಂದ್ರ ಒಂದು ಕಾಲದಲ್ಲಿ ಬಂಡೆಗಳಿಂದ ತುಂಬಿದ್ದ ಬಂಜರು ಭೂಮಿ ಆಗಿತ್ತು. ಈಗ ನಳನಳಿಸುತ್ತಿರುವ ಪರಿಸರ ವ್ಯವಸ್ಥೆಯಾಗಿ ರೂಪುಗೊಂಡಿದೆ. 108 ಅಡಿ ಎತ್ತರದ, 81 ಸ್ತಂಭಗಳ, ಐದು ಮಹಡಿಗಳಲ್ಲಿ 1008 ಕಮಲ ಅಲಂಕಾರಗಳನ್ನು ಹೊಂದಿದ ಪ್ರಸಿದ್ಧ ವಿಶಾಲಾಕ್ಷಿ ಮಂಟಪ ಇರುವ ಸ್ಥಳವಾಗಿದೆ.&lt;/p&gt;&lt;p&gt;ಸಾವಿರಾರು ಜನರು ಇಲ್ಲಿ ಆತ್ಮೋನ್ನತಿಗಾಗಿ ಧ್ಯಾನ, ಯೋಗ ಮತ್ತು ಸುದರ್ಶನ ಕ್ರಿಯೆಗಳಲ್ಲಿ ನಿರತರಾಗಲು ಜಗತ್ತಿನ ಮೂಲೆ ಮೂಲೆಗಳಿಂದ ವರ್ಷದ ಎಲ್ಲಾ ದಿನಗಳಲ್ಲಿಯೂ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಪ್ರತಿದಿನ ನಡೆಯುವ ಸತ್ಸಂಗವು ಆಶ್ರಮಜೀವನದ ದಿನಚರಿಯ ಪ್ರಮುಖ ಕಾರ್ಯಕ್ರಮವಾಗಿದೆ. ಇದು ಜನರು ಒಟ್ಟಿಗೆ ಕಲೆತು ಗಾಯನ, ಧ್ಯಾನ ಮತ್ತು ಜ್ಞಾನಗಳ ಮೂಲಕ ಉಲ್ಲಾಸಮಯ, ಪ್ರಶಾಂತ &zwnj;ಮತ್ತು ಅಂತರಂಗದ ಪಯಣದಲ್ಲಿ ನಿರತರಾಗುತ್ತಾರೆ.&lt;/p&gt;&lt;p&gt;ರಾಧಾಕುಂಜ, ಕೆರೆಯ ತೀರದ ಉದ್ಯಾನವನ, ಧ್ಯಾನಕ್ಕೆ ಪೂರಕವಾದ ನಡೆಹಾದಿಗಳು ಆಶ್ರಮದ ವಿಶೇಷಗಳಾಗಿವೆ.&lt;/p&gt;&lt;p&gt;ಭಾರತೀಯ ದೇವಾಲಯಗಳ ಸಂಪ್ರದಾಯವನ್ನು&zwnj; ಮತ್ತು ವೇದಪಠಣದ ಕ್ರಮವನ್ನು ಉಳಿಸುವ ದಿಸೆಯಲ್ಲಿ ವೇದ ಆಗಮ ಶಾಲೆ ಆಶ್ರಮವು ಈ ಪರಿಸರದಲ್ಲಿದೆ. ಗುರುಕುಲದಲ್ಲಿ ತರಬೇತಿ ಪಡೆದ 510ಕ್ಕೂ ಹೆಚ್ಚು ಅರ್ಚಕರು ಈಗ ಅಮೆರಿಕ, ಕೆನಡಾ, ಮಾರಿಷಸ್ ಸೇರಿದಂತೆ ವಿಶ್ವದಾದ್ಯಂತ ಇನ್ನೂ ಅನೇಕ ದೇಶಗಳ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೇದಗಳು ಮತ್ತು ಆಗಮಗಳ ಜೊತೆಗೆ, ವಿದ್ಯಾರ್ಥಿಗಳಿಗೆ ಶಿಲ್ಪಶಾಸ್ತ್ರ, ಯೋಗ, ಸಂಗೀತ, ತೇವಾರಂ, ಭಾರತೀಯ ಭಾಷೆಗಳು ಮತ್ತು ಕಂಪ್ಯೂಟರ್ ಶಿಕ್ಷಣದಲ್ಲಿಯೂ ತರಬೇತಿ ನೀಡಲಾಗುತ್ತದೆ. ಇಲ್ಲಿನ ಅನೇಕ ಹಳೆ ವಿದ್ಯಾರ್ಥಿಗಳು ಭಾರತೀಯ ಜ್ಞಾನ ಪರಂಪರೆ ವ್ಯವಸ್ಥೆಗಳ ಕುರಿತು ಉನ್ನತ ಮಟ್ಟದ ಸಂಶೋಧನೆ ನಡೆಸಿ ಪಿಎಚ್&zwnj;ಡಿ ಪದವಿಗಳನ್ನು ಪಡೆದಿದ್ದಾರೆ.&lt;/p&gt;&lt;p&gt;1008 ಕಿರು ಶಿವಲಿಂಗಗಳನ್ನು ಕೆತ್ತಲಾಗಿರುವ ಸಹಸ್ರಲಿಂಗವಿರುವ ಸಾಂಬ ಪರಮೇಶ್ವರ ದೇವಾಲಯವೂ ಇಲ್ಲಿದೆ. ಸುಮಾರು ಒಂದು ಲಕ್ಷ ಜನರು ಕುಳಿತು ಧ್ಯಾನ ಮಾಡುವಷ್ಟು ವಿಶಾಲವಾದ ಬಯಲು ರಂಗಮಂದಿರ &lsquo;ಗುರು&zwnj; ಪಾದುಕಾ ವನ&rsquo; ಇಲ್ಲಿದೆ.&lt;/p&gt;&lt;p&gt;ಸುಮಾರು 600ಕ್ಕೂ ಹೆಚ್ಚು ಸಸ್ಯತಳಿಗಳು, 137ಕ್ಕೂ ಹೆಚ್ಚು ಪಕ್ಷಿಜಾತಿಗಳು, 102 ಜಾತಿಯ ಚಿಟ್ಟೆಗಳು, ಔಷಧಿ ಸಸ್ಯಗಳು, ಸಮೃದ್ಧವಾಗಿರುವ ವನ್ಯಜೀವಿಗಳು ಇವೆಲ್ಲವನ್ನೂ ಹೊಂದಿರುವ ಜೀವವೈವಿಧ್ಯ ಪ್ರದೇಶವಾಗಿದೆ. 27 ನಕ್ಷತ್ರಗಳಿಗೆ ಸಂಯೋಜಿತವಾಗಿರುವ 27 ವೃಕ್ಷಗಳನ್ನು ಒಳಗೊಂಡ ಪವಿತ್ರ ನಕ್ಷತ್ರವನ ಇಲ್ಲಿದೆ. ಪ್ರತಿದಿನ 30,000 ಜನರಿಗೆ ಮತ್ತು ವಿಶೇಷ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಸಾತ್ವಿಕ ಆಹಾರವನ್ನು ತಯಾರಿಸುವ ಬೃಹತ್&zwnj; ಅಡುಗೆ ಮನೆ &lsquo;ಅನ್ನಪೂರ್ಣ&rsquo; ಇಲ್ಲಿನ ಇಲ್ಲಿನ ಇನ್ನೊಂದು ವಿಶೇಷತೆ ಆಗಿದೆ.&lt;/p&gt;&lt;p&gt;ಆಶ್ರಮದಲ್ಲಿ ಜೈವಿಕ ಇಂಧನ ಸ್ಥಾವರಗಳು, ಕಾಂಪೋಸ್ಟಿಂಗ್&zwnj;, ಸೌರಶಕ್ತಿ ಮತ್ತು ಸಹಜಕೃಷಿಯ ಮೂಲಕ ಸುಸ್ಥಿರ ಬದುಕಿನ ಮೇಲೆ ಒತ್ತು ನೀಡಲಾಗುತ್ತಿದೆ. ಕಾಸರಗೋಡು, ಒಂಗೋಲ್, ಹಳ್ಳಿಕಾರ್, ಅಲಂಬಾಡಿ ಸೇರಿದಂತೆ, 19 ತಳಿಗಳ 1600 ಗೋವುಗಳನ್ನು ಹೊಂದಿರುವ ವಿಶಾಲವಾದ ಗೋಶಾಲೆಯು ಇಲ್ಲಿದೆ. ನೆಮ್ಮದಿಯಿಂದ ಪ್ರಕೃತಿ ನಡಿಗೆ, ಸುಂದರವಾದ ಸೂರ್ಯಾಸ್ತ, ಹಕ್ಕಿಗಳ ಕಲರವ, ಚಿಟ್ಟೆಗಳ ಆವಾಸ ಸ್ಥಾನ, ಮತ್ತು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ನಿರತರಾಗುವ ಮುಕ್ತ ಅವಕಾಶ ಆಶ್ರಮದಲ್ಲಿ ದೊರೆಯುತ್ತದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/pm-modi-inaugurates-art-of-living-meditation-hall-in-bengaluru-with-sri-sri-ravi-shankar-rav/articleshow-aacyb7r"/>
        </item>
        <item>
            <title><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ, ಕುಟುಂಬದೊಂದಿಗೆ ನಾಗಮಲೆಯತ್ತ ಹೋಗುತ್ತಿದ್ದಾಗ ಬೆಂಗಳೂರು ಮೂಲದ ಬಾಲಕ ಬಲಿ!]]></title>
            <link>https://kannada.asianetnews.com/karnataka-districts/leopard-kills-boy-during-pilgrimage-near-male-mahadeshwara-hills-in-karnataka-gdp/articleshow-isfyxlz</link>
            <guid isPermaLink="true">https://kannada.asianetnews.com/karnataka-districts/leopard-kills-boy-during-pilgrimage-near-male-mahadeshwara-hills-in-karnataka-gdp/articleshow-isfyxlz</guid>
            <pubDate>Sun, 10 May 2026 12:11:53 +0530</pubDate>
            <description><![CDATA[ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಬಳಿ ಪಾದಯಾತ್ರೆಗೆ ತೆರಳಿದ್ದ ಬೆಂಗಳೂರಿನ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಎಳೆದೊಯ್ದಿದ್ದು, ಬಳಿಕ ಅರಣ್ಯ ಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಘಟನೆಯು ಪಾದಯಾತ್ರಿಗಳ ಸುರಕ್ಷತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr89sdqjww62ghpxymyp41nw,imgname-leopard-attack-male-mahadeshwara-hills-1778395166450.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ:&lt;/strong&gt; ಜಿಲ್ಲೆಯಲ್ಲಿ ಮನಕಲಕುವ ಘಟನೆ ಸಂಭವಿಸಿದ್ದು, ಮಲೆ ಮಹದೇಶ್ವರ ಬೆಟ್ಟದ ಸಮೀಪ ಪಾದಯಾತ್ರೆ ಹೋಗುತ್ತಿದ್ದ ಬಾಲಕನನ್ನು ಚಿರತೆ ಎಳೆದೊಯ್ದು ಕೊಂದಿರುವ ದುರ್ಘಟನೆ ನಡೆದಿದೆ. ಬೆಂಗಳೂರಿನ ಲಗ್ಗೆರೆ ಮೂಲದ ಬಾಲಕ ಹರ್ಷಿತ್ ಎಂಬ ಬಾಲಕ ತನ್ನ ಕುಟುಂಬದೊಂದಿಗೆ ಮಹದೇಶ್ವರ ಬೆಟ್ಟದಿಂದ ನಾಗಮಲೆಯತ್ತ ಪಾದಯಾತ್ರೆ ನಡೆಸುತ್ತಿದ್ದನು. ಕುಟುಂಬದ ಸುಮಾರು 10 ಮಂದಿ ಒಟ್ಟಾಗಿ ತೆರಳುತ್ತಿದ್ದ ವೇಳೆ, ನಾಗಮಲೆ ಮಾರ್ಗದ ಇಂಡಿಗನತ್ತ ಸಮೀಪ ಚಿರತೆ ಬಾಲಕನನ್ನು ಕಚ್ಚಿ ಎಳೆದೊಯ್ದಿದಿದೆ.&lt;/p&gt;&lt;h2&gt;ಕಣ್ಣೆದುರೇ ಎಳೆದೊಯ್ದ ಚಿರತೆ&lt;/h2&gt;&lt;p&gt;ಪಾದಯಾತ್ರೆಯ ಮಧ್ಯದಲ್ಲೇ ಹಠಾತ್&zwnj;ವಾಗಿ ದಾಳಿ ನಡೆಸಿದ ಚಿರತೆ, ಬಾಲಕನನ್ನು ಕುಟುಂಬಸ್ಥರ ಕಣ್ಣೆದುರೇ ಎಳೆದೊಯ್ದಿದೆ. ಈ ದೃಶ್ಯ ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದು, ಕಿರುಚಾಡಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡರು.&lt;/p&gt;&lt;h2&gt;ಅಪಾಯಕರ ಮಾರ್ಗ, ಹೆಚ್ಚುತ್ತಿರುವ ಆತಂಕ&lt;/h2&gt;&lt;p&gt;ಸುದೀರ್ಘ ಶೋಧ ಕಾರ್ಯಾಚರಣೆಯ ಬಳಿಕ, ಬಾಲಕನ ಶವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ನಾಗಮಲೆ ಮಾರ್ಗವು Male Mahadeshwara Hills ಭಾಗವಾಗಿದ್ದು, ಮಹದೇಶ್ವರನ 77 ಮಲೆಗಳಲ್ಲಿ ಒಂದಾಗಿದೆ. ಈ ಪ್ರದೇಶವು ದಟ್ಟ ಅರಣ್ಯದಿಂದ ಕೂಡಿರುವುದರಿಂದ ಕಾಡುಪ್ರಾಣಿಗಳ ಸಂಚಾರ ಸಾಮಾನ್ಯವಾಗಿದೆ. ಈ ಮಾರ್ಗದಲ್ಲಿ ಈ ಹಿಂದೆ ಕೂಡ ಇಂತಹ ದುರ್ಘಟನೆಗಳು ನಡೆದಿದ್ದು, ಪಾದಯಾತ್ರೆಗೆ ತೆರಳುವ ಭಕ್ತರಲ್ಲಿ ಆತಂಕ ಹೆಚ್ಚಿಸಿದೆ. ಕೆಲ ತಿಂಗಳ ಹಿಂದೆಯೂ ಇದೇ ಭಾಗದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಯಿಂದ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ಗಾಯವಾಗಿತ್ತು.&lt;/p&gt;&lt;h2&gt;ಭಕ್ತರ ಸುರಕ್ಷತೆ ಬಗ್ಗೆ ಪ್ರಶ್ನೆಗಳು&lt;/h2&gt;&lt;p&gt;ಇಂತಹ ಘಟನೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾರ್ಗಗಳಲ್ಲಿ ಭಕ್ತರ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿವೆ. ವಿಶೇಷವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಕಾಡುಪ್ರಾಣಿಗಳ ಚಲನವಲನ ಹೆಚ್ಚಿರುವುದರಿಂದ, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/leopard-kills-boy-during-pilgrimage-near-male-mahadeshwara-hills-in-karnataka-gdp/articleshow-isfyxlz"/>
        </item>
        <item>
            <title><![CDATA[JDS: ಮೈಚಳಿ ಬಿಟ್ಟು ಪಕ್ಷ ಸಂಘಟಿಸಿ, ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ, ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ]]></title>
            <link>https://kannada.asianetnews.com/politics/jds-will-come-to-power-in-the-coming-days-nikhil-kumaraswamy-assures-party-workers-rav/articleshow-vaptsyt</link>
            <guid isPermaLink="true">https://kannada.asianetnews.com/politics/jds-will-come-to-power-in-the-coming-days-nikhil-kumaraswamy-assures-party-workers-rav/articleshow-vaptsyt</guid>
            <pubDate>Sun, 10 May 2026 11:55:28 +0530</pubDate>
            <description><![CDATA[&lt;p&gt;ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮುಖಂಡರು ವೈಮನಸ್ಸು ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು. ರಾಜ್ಯ ಸರ್ಕಾರದ ವೈಫಲ್ಯ ಜನರ ಮುಂದಿಟ್ಟು, ಮುಂಬರುವ ಚುನಾವಣೆಗಳಲ್ಲಿ ಯುವಶಕ್ತಿಯ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr88q9bg1a81x50jfgjnvwdk,imgname-----------------------2026-05-10t115024.276-1778394047856.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೊಡ್ಡಬಳ್ಳಾಪುರ (ಮೇ.10): &lt;/strong&gt;ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ. ಸ್ಥಳೀಯ ನಾಯಕರು ಸ್ವಪ್ರತಿಷ್ಠೆ ಹಾಗೂ ವೈಮನಸ್ಯ ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.&lt;/p&gt;&lt;p&gt;ನಗರದ ಭಗತ್&zwnj;ಸಿಂಗ್ ಕ್ರೀಡಾಂಗಣದಲ್ಲಿ ಜೆಡಿಎಸ್ ರಜತ ಮಹೋತ್ಸವದ ಪ್ರಯುಕ್ತ &lsquo;ಜನರೊಂದಿಗೆ ಜನತಾದಳ-ಸಶಕ್ತ ಜನತಾದಳ, ಸಮೃದ್ಧ ಕರ್ನಾಟಕ&rsquo; ಧ್ಯೇಯದೊಂದಿಗೆ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು. ಮುಂಬರುವ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮಕ್ಕೆ ತಕ್ಕ ಅಧಿಕಾರ ಸಿಗಬೇಕು. ಜೆಡಿಎಸ್ ಎಲ್ಲಿದೆ ಎಂದು ಅಪಹಾಸ್ಯ ಮಾಡಿದವರಿಗೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.&lt;/p&gt;&lt;p&gt;ಅದಕ್ಕೆ ಕಾರ್ಯಕರ್ತರು ಸಜ್ಜಾಗಿದ್ದು, ಮುಖಂಡರಲ್ಲಿನ ಪ್ರತಿಷ್ಠೆ ಇಂದಿಗೇ ಮುಕ್ತಾಯವಾಗಬೇಕು. ಕ್ಷೇತ್ರದಲ್ಲಿ ನಮ್ಮ ಪಕ್ಷದ ಸ್ಥಿತಿ ಹೇಗೆನ್ನುವ ಆತಂಕ ಬೇಡ. ಕಾಲವೇ ಎಲ್ಲವನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.&lt;/p&gt;&lt;h2&gt;ಯುವ ಸಮುದಾಯ ನಿರ್ಣಾಯಕ:&lt;/h2&gt;&lt;p&gt;ದಕ್ಷಿಣ ಭಾರತದ ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವ ಶಕ್ತಿ ಯುವ ಸಮುದಾಯಕ್ಕಿದೆ ಎನ್ನುವುದು ಸಾಬೀತಾಗಿದೆ. ಪ್ರಧಾನಿ ಮೋದಿ ಅವರ ವಿಕಸಿತ ಭಾರತವನ್ನು ಬೆಂಬಲಿಸಬೇಕಿದೆ. ಯುವಶಕ್ತಿ, ಜೆಡಿಎಸ್ ಅಧಿಕಾರಕ್ಕೆ ತರಲು ಮುಂದಾಗಬೇಕಿದೆ ಎಂದು ಕರೆ ನೀಡಿದರು.&lt;/p&gt;&lt;h3&gt;ರಾಜ್ಯ ಸರ್ಕಾರದ ವೈಫಲ್ಯವನ್ನು ಜನರ ಮುಂದಿಡಿ:&lt;/h3&gt;&lt;p&gt;ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಿಂದುಳಿದವರ ಪರವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ಹಿಂದುಳಿದ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವೆಲ್ಲವು ಬೇರೆಡೆಗೆ ಹೋಗುತ್ತಿದೆ. 3 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಅಹಿಂದ ವರ್ಗದ ಅಭಿವೃದ್ಧಿ ನಿಗಮಗಳಿಗೆ ಮೀಸಲಿಟ್ಟಿದ್ದ ಹಣ ವಿನಿಯೋಗವಾಗಿಯೇ ಇಲ್ಲ. ಪರಿಶಿಷ್ಟ ಜಾತಿ, ಪಂಗಡಕ್ಕಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಮಹಿಳೆಯರಿಗೆ ₹2 ಸಾವಿರ ಗೃಹಲಕ್ಷ್ಮೀ ಹಣ ನೀಡಿದ ಮಾತ್ರಕ್ಕೆ ಅವರ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರಿಗೆ ಸಾಂವಿಧಾನಿಕವಾಗಿ ದೊರೆಯಬೇಕಿರುವ ಹಕ್ಕುಗಳನ್ನು ಕಲ್ಪಿಸಬೇಕು ಎಂದು ಹೇಳಿದರು.&lt;/p&gt;&lt;p&gt;ವಿದ್ಯಾವಂತ ಯುವ ಸಮುದಾಯಕ್ಕೆ ಉದ್ಯೋಗಗಳೆ ದೊರೆಯದಾಗಿವೆ. ಸರ್ಕಾರ ಕಾಟಾಚಾರಕ್ಕೆ ಉದ್ಯೋಗ ಮೇಳ ನಡೆಸುವ ಮೂಲಕ ವಿದ್ಯಾವಂತರನ್ನು ವಂಚಿಸುತ್ತಿದೆ. ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ಕಿತ್ತು ಹಾಕದೇ ಇದ್ದರೆ ಯುವ ಸಮುದಾಯಕ್ಕೆ ಉದ್ಯೋಗ ದೊರೆಯಲು ಸಾಧ್ಯವೇ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕಾರ್ಯಕರ್ತರು ಜನರ ಮುಂದಿಡಬೇಕು ಎಂದು ವಿವರಿಸಿದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/jds-will-come-to-power-in-the-coming-days-nikhil-kumaraswamy-assures-party-workers-rav/articleshow-vaptsyt"/>
        </item>
        <item>
            <title><![CDATA[Vijay: ಕೊನೆಗೂ ತಮಿಳುನಾಡು  ಮುಖ್ಯಮಂತ್ರಿ ಗದ್ದುಗೆ ಏರಿದ ನಟ ವಿಜಯ್: ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಿಂಚಿಂಗ್!]]></title>
            <link>https://kannada.asianetnews.com/india-news/thalapathy-vijay-takes-oath-as-tamil-nadu-cm-in-historic-ceremony-rav/articleshow-dt61yfy</link>
            <guid isPermaLink="true">https://kannada.asianetnews.com/india-news/thalapathy-vijay-takes-oath-as-tamil-nadu-cm-in-historic-ceremony-rav/articleshow-dt61yfy</guid>
            <pubDate>Sun, 10 May 2026 11:36:03 +0530</pubDate>
            <description><![CDATA[&lt;p&gt;2026ರ ತಮಿಳುನಾಡು ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಟ ವಿಜಯ್, ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಹಾಜರಾಗಿದ್ದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-80cbdfa7-32b6-492f-8f73-94252f6076be.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡಲ್ಲಿ ಇವತ್ತು ಹೊಸ ರಾಜಕೀಯ ಯುಗ ಶುರುವಾಗಿದೆ. ನಟ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಚೆನ್ನೈನ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ಈ ಭಾರಿ ಸಮಾರಂಭಕ್ಕೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಹಾಜರಾಗಿದ್ದರು. ಈ ಐತಿಹಾಸಿಕ ಕ್ಷಣದಲ್ಲಿ ವಿಜಯ್ ಪಕ್ಕದಲ್ಲೇ ಕುಳಿತಿದ್ದ ರಾಹುಲ್ ಗಾಂಧಿ, ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದು ಕಂಡುಬಂತು.&lt;/p&gt;&lt;p&gt;ಪ್ರಮಾಣವಚನಕ್ಕೂ ಮುನ್ನ, ವಿಜಯ್ ಅವರು ರಾಜ್ಯಪಾಲ ಅರ್ಲೇಕರ್ ಅವರನ್ನು ವೇದಿಕೆಗೆ ಆತ್ಮೀಯವಾಗಿ ಸ್ವಾಗತಿಸಿದರು.&lt;/p&gt;&lt;h2&gt;2026ರ ಚುನಾವಣೆಯಲ್ಲಿ ಐತಿಹಾಸಿಕ ಜನಾದೇಶ&lt;/h2&gt;&lt;p&gt;2026ರ ತಮಿಳುನಾಡು ಚುನಾವಣೆ, ನಟ ವಿಜಯ್ ಅವರಿಗೆ ಹಿಂದೆಂದೂ ಕಂಡರಿಯದ ಜನಾದೇಶ ನೀಡಿ ಇತಿಹಾಸದ ಪುಟ ಸೇರಿದೆ. ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ, ರಾಜಕೀಯಕ್ಕೆ ಕಾಲಿಟ್ಟ ಮೊದಲ ಪ್ರಯತ್ನದಲ್ಲೇ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದುಕೊಂಡಿದೆ. ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ, ಎರಡೂ ಪ್ರಮುಖ 'ದ್ರಾವಿಡ' ಪಕ್ಷಗಳು ಅಧಿಕಾರದಿಂದ ಹೊರಗುಳಿದಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; &lt;/strong&gt;'GOAT' ಸಿನಿಮಾದಲ್ಲೇ 2026ಕ್ಕೆ ತಮಿಳ ನಾಡು ಸಿಎಂ ಆಗುವ ಸುಳಿವು ನೀಡಿದ್ದ ವಿಜಯ್!&lt;/p&gt;&lt;p&gt;&amp;nbsp;&lt;/p&gt;&lt;p&gt;ಆದರೆ, ವಿಜಯ್ ಪಕ್ಷಕ್ಕೆ ಸ್ವಂತವಾಗಿ ಬಹುಮತ ಸಿಕ್ಕಿರಲಿಲ್ಲ. ಈ ಹಿಂದೆ ಡಿಎಂಕೆ ನೇತೃತ್ವದ 'ಸೆಕ್ಯುಲರ್ ಪ್ರೊಗ್ರೆಸ್ಸಿವ್ ಅಲೈಯನ್ಸ್'ನಲ್ಲಿದ್ದ ಕಾಂಗ್ರೆಸ್ (5), ಸಿಪಿಐ-ಎಂ (2), ಸಿಪಿಐ (2), ವಿಸಿಕೆ (2) ಮತ್ತು ಐಯುಎಂಎಲ್ (2) ಪಕ್ಷಗಳು ವಿಜಯ್ ಅವರಿಗೆ ಬೆಂಬಲ ನೀಡಿ ಸರ್ಕಾರ ರಚನೆಗೆ ಸಹಾಯ ಮಾಡಿವೆ.&lt;/p&gt;&lt;h3&gt;'ತಳಪತಿ'ಯ ರಾಜಕೀಯ ಪಯಣ&lt;/h3&gt;&lt;p&gt;ಚುನಾವಣಾ ರ&zwj;್ಯಾಲಿಗಳಲ್ಲಿ 'ತಳಪತಿ' ಅಂತಾನೇ ಫೇಮಸ್ ಆಗಿರುವ ವಿಜಯ್, ಭಾರಿ ಜನಸ್ತೋಮವನ್ನು ಸೇರಿಸುತ್ತಿದ್ದರು. ಇವರ ಜನಪ್ರಿಯತೆಯನ್ನು ಮಾಜಿ ಸಿಎಂ ಹಾಗೂ ನಟ ಎಂ.ಜಿ. ರಾಮಚಂದ್ರನ್ (MGR) ಅವರಿಗೆ ಹೋಲಿಸಲಾಗುತ್ತಿದೆ. ತಮಿಳುನಾಡಿಗೆ ನಟರು ರಾಜಕೀಯಕ್ಕೆ ಬಂದು ಯಶಸ್ವಿಯಾಗುವುದು ಹೊಸದೇನಲ್ಲ. ಕ್ಯಾಪ್ಟನ್ ವಿಜಯಕಾಂತ್ ನಂತರ, ಮತ್ತೊಬ್ಬ ಸ್ಟಾರ್ ನಟನ ರಾಜಕೀಯ ಪ್ರವೇಶಕ್ಕಾಗಿ ರಾಜ್ಯ ಕಾಯುತ್ತಿತ್ತು.&lt;/p&gt;&lt;p&gt;ವಿಜಯ್ ತಮ್ಮ ಕ್ರಿಶ್ಚಿಯನ್ ಗುರುತನ್ನು ಒಪ್ಪಿಕೊಳ್ಳುವುದರ ಜೊತೆಗೆ, ಜಾತ್ಯತೀತ ರಾಜಕಾರಣದ ಬಗ್ಗೆಯೂ ಸದಾ ಮಾತನಾಡುತ್ತಿದ್ದರು. ಅವರ TVK ಪಕ್ಷ 2024ರಲ್ಲಿ ಆರಂಭವಾದರೂ, ಅವರು ಮೊದಲಿನಿಂದಲೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಡ್ರಗ್ಸ್ ಹಾವಳಿ, ಭ್ರಷ್ಟಾಚಾರ ಮತ್ತು ಇತರ ಸಾಮಾಜಿಕ-ರಾಜಕೀಯ ಸಮಸ್ಯೆಗಳ ಬಗ್ಗೆ ಅವರ ಸಿನಿಮಾಗಳು ಮಾತನಾಡುತ್ತಿದ್ದವು.&lt;/p&gt;&lt;p&gt;2009ರಿಂದಲೇ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ವಿಜಯ್ ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದರು. 2026ರ ಚುನಾವಣೆಯಲ್ಲಿ ಅವರು ಪೆರಂಬೂರ್ ಮತ್ತು ಟ್ರಿಚಿ ಈಸ್ಟ್ ಕ್ಷೇತ್ರಗಳಿಂದ ಗೆದ್ದಿದ್ದು, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. (ANI)&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದ ವಿಷಯವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/thalapathy-vijay-takes-oath-as-tamil-nadu-cm-in-historic-ceremony-rav/articleshow-dt61yfy"/>
        </item>
        <item>
            <title><![CDATA[TamilNadu New CM: ಪ್ರಮಾಣವಚನ ಸ್ವೀಕರಿಸಿ ಎರಡು ಪ್ರಮುಖ ಘೋಷಣೆ ಮಾಡಿದ ಸಿಎಂ ವಿಜಯ್]]></title>
            <link>https://kannada.asianetnews.com/gallery/india-news/tamil-nadu-new-cm-c-joeph-vijay-200-units-of-free-electricity-and-women-s-safety-signed-mrq-z37mgus</link>
            <guid isPermaLink="true">https://kannada.asianetnews.com/gallery/india-news/tamil-nadu-new-cm-c-joeph-vijay-200-units-of-free-electricity-and-women-s-safety-signed-mrq-z37mgus</guid>
            <pubDate>Sun, 10 May 2026 11:31:44 +0530</pubDate>
            <description><![CDATA[ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಅವರು 200 ಯೂನಿಟ್ ಉಚಿತ ವಿದ್ಯುತ್ ಮತ್ತು ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಎರಡು ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr85ynjrqm0wzx0gd3cwfrpz,imgname-vijay-tamil-nadu-cm-oath-ceremony-trisha-rahul-gandhi-tvk-108-seats-chennaivote-crisis-6-1778391144024.jpg" type="image/jpeg" height="390" width="690"/>
            <content:encoded><![CDATA[ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಅವರು 200 ಯೂನಿಟ್ ಉಚಿತ ವಿದ್ಯುತ್ ಮತ್ತು ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಎರಡು ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದಾರೆ.&lt;img&gt;&lt;p&gt;ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ನಟ ವಿಜಯ್ ಎರಡು ಪ್ರಮುಖ ಘೋಷಣೆಗಳನ್ನು ಪ್ರಕಟಿಸಿದ್ದಾರೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳ ಪೈಕಿ ಈ ಎರಡು ಘೋಷಣೆಗಳು ಸೇರಿಕೊಂಡಿವೆ.&lt;/p&gt;&lt;img&gt;&lt;p&gt;ಉಚಿತ 200 ಯುನಿಟ್ ನೀಡುವ ಯೋಜನೆ ಮತ್ತು ಮಾದಕ ವಸ್ತುಗಳ ವಿರುದ್ಧ ಕ್ರಮ ಮತ್ತು ಮಹಿಳೆಯರ ಸುರಕ್ಷತೆಯನ್ನು ಒಳಗೊಂಡ ಫೈಲ್&zwnj;ಗೆ ಮುಖ್ಯಮಂತ್ರಿ ವಿಜಯ್ ಸಹಿ ಹಾಕಿದ್ದಾರೆ. ಪ್ರಮಾಣ ವಚನಕ್ಕೂ ಮುನ್ನ ಎನ್ ನೆಂಜಿಲ್ ಕುಡಿಯಿರುಕ್ಕುಮ್ (ನನ್ನ ಹೃದಯದಲ್ಲಿ ವಾಸಿಸುವವರು) ಎಂಬ ಸಾಲಿನಿಂದ ವಿಜಯ್ ಹೇಳಿದರು. ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ವಿಜಯ್ ಹಲವು ಬಾರಿ ಎನ್ ನೆಂಜಿಲ್ ಕುಡಿಯಿರುಕ್ಕುಮ್ ಎಂಬ ಪದ ಬಳಕೆ ಮಾಡುತ್ತಾರೆ.&lt;/p&gt;&lt;img&gt;&lt;p&gt;ನಟ ವಿಜಯ್, ತಮಿಳುನಾಡು ಮುಖ್ಯಮಂತ್ರಿಯಾಗಿ ಸಿನಿಮಾ ಸ್ಟೈಲ್&zwnj;ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. &quot;ಸಿ. ಜೋಸೆಫ್ ವಿಜಯ್ ಎಂಬ ನಾನು...&quot; ಅಂತ ಶುರು ಮಾಡಿದ ವಿಜಯ್, ಪೇಪರ್ ನೋಡದೆಯೇ ಪ್ರಮಾಣವಚನ ಹೇಳಿದರು. ದೇವರ ಮೇಲೆ ಆಣೆ ಮಾಡಿ ಪ್ರಮಾಣ ವಚನ ಸ್ವೀಕರಿಸಿದರು. ತಮ್ಮ ಸಿನಿಮಾದ ಪಂಚ್ ಡೈಲಾಗ್&zwnj;ಗಳಂತೆ, ನೆರೆದಿದ್ದ ಸಾವಿರಾರು ಜನರನ್ನು ಹುಚ್ಚೆಬ್ಬಿಸುವಂತಿತ್ತು ಅವರ ಮಾತುಗಳು. ಪ್ರಮಾಣ ವಚನದ ಎರಡನೇ ಭಾಗವನ್ನು ಮಾತ್ರ ಅವರು ಪೇಪರ್ ನೋಡಿ ಓದಿದರು.&lt;/p&gt;&lt;img&gt;&lt;p&gt;ಪ್ರಮಾಣವಚನ ಸಮಾರಂಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಭಾಗವಹಿಸಿದ್ದರು. ಬಹಳ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಜಯ್ ಕುಟುಂಬಸ್ಥರು, ಟಿವಿಕೆ ಕಾರ್ಯಕರ್ತರು ಮತ್ತು ಸಿನಿಮಾ ತಾರೆಯರ ದೊಡ್ಡ ಬಳಗವೇ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಟಿವಿಕೆ ಪಕ್ಷವು 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ವಿಜಯ್ ಅವರೊಂದಿಗೆ ಒಟ್ಟು 9 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/india-news/tamil-nadu-new-cm-c-joeph-vijay-200-units-of-free-electricity-and-women-s-safety-signed-mrq-z37mgus"/>
        </item>
        <item>
            <title><![CDATA[ಮೈಸೂರು ಕನ್ನಡಿ ಗೋಡೆ: ಮೂತ್ರ ವಿಸರ್ಜನೆ ತಡೆ ಯೋಜನೆ ವಿಫಲ! ಕ್ಯಾರೇ ಅನ್ನದೆ ಕನ್ನಡಿ ಮುಂದೆ ನಿಂತೇ ಮೂತ್ರ ಮಾಡಿದ!]]></title>
            <link>https://kannada.asianetnews.com/karnataka-districts/mysuru-installs-mirror-walls-to-stop-public-urination-incident-sparks-debate-on-civic-sense-gdp/articleshow-lilsap8</link>
            <guid isPermaLink="true">https://kannada.asianetnews.com/karnataka-districts/mysuru-installs-mirror-walls-to-stop-public-urination-incident-sparks-debate-on-civic-sense-gdp/articleshow-lilsap8</guid>
            <pubDate>Sun, 10 May 2026 11:19:30 +0530</pubDate>
            <description><![CDATA[ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಸ್ಥಾನಕ್ಕೇರಲು ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಕನ್ನಡಿ ಗೋಡೆಗಳನ್ನು ಅಳವಡಿಸಿತ್ತು. ಆದರೆ, ಸಬರ್ಬ್ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ಈ ಕನ್ನಡಿಯ ಎದುರೇ ಮೂತ್ರ ವಿಸರ್ಜಿಸುವ ಮೂಲಕ ಈ ಯೋಜನೆಗೆ ಹಿನ್ನಡೆ ಉಂಟುಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr86rhqx75qwewgz46wv0dxq,imgname-mysuru-installs-mirror-1778391992061.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು: ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಪಟ್ಟಕ್ಕೇರಲು ಹವಣಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆಯು ನಗರದಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ವಿಶೇಷ ಯೋಜನೆಯೊಂದನ್ನು ಕೈಗೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ಕಸ ಸುರಿಯುವುದನ್ನು ತಡೆಗಟ್ಟಲು ನಗರ ಪ್ರಮುಖ ರಸ್ತೆಯೊಂದರ ಪಾದಚಾರಿ ಮಾರ್ಗಕ್ಕೆ ಅಂಟಿಕೊಂಡಿರುವ ಕಾಂಪೌಂಡ್&zwnj;ಗೆ ಕನ್ನಡಿ ಅಳವಡಿಸಿ ಗಮನ ಸೆಳೆಯುತ್ತಿದೆ.&lt;/p&gt;&lt;h2&gt;ಕನ್ನಡಿ ಎದುರು ನಿಂತೇ ಮೂತ್ರ ವಿಸರ್ಜಿಸಿದ ವ್ಯಕ್ತಿ&lt;/h2&gt;&lt;p&gt;ಆದರೆ ಇದೆರೆಲ್ಲದರ ಮಧ್ಯೆ ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಎದುರು ಅಳವಡಿಸಿರುವ ಮಿರರ್ ಕಾಂಪೌಂಡ್ ಗೆ ವ್ಯಕ್ತಿಯೋರ್ವ ಮೂತ್ರ ವಿಸರ್ಜಿಸಿದ್ದಾನೆ. ಮೂತ್ರ ವಿಸರ್ಜನೆ ತಪ್ಪಿಸಲು ಹಾಕಿದ್ದ ಮಿರರ್ ಅನ್ನು ಲೆಕ್ಕಿಸದೆ ಎದುರೇ ನಿಂತೇ ಮೂತ್ರ ವಿಸರ್ಜಿಸಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರಿಂದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳಲಾಯ್ತು. ಒಟ್ಟು 9.5 ಲಕ್ಷ ವೆಚ್ಚದಲ್ಲಿ ಮಿರರ್ ಅಳವಡಿಸಲಾಗಿದೆ. ಕೇವಲ ಒಂದು ವಾರ ಕಳೆಯುವ ಮುನ್ನವೇ ಹಳೆ ಚಾಳಿ ಮುಂದುವರಿಸಿದ ಸಾರ್ವಜನಿಕ. ಎಲ್ಲೆಡೆ ಪ್ರಶಂಸೆಗೆ ಒಳಗಾಗಿದ್ದ ಪಾಲಿಕೆಗೆ ಮತ್ತೆ ತಲೆ ನೋವು ತಂದಿಟ್ಟಿದ್ದಾನೆ. ನೆಟ್ಟಿಗರು ಸಿವಿಕ್ ಸೆನ್ಸ್ ಇಲ್ಲ ಎಂದು ಛೀಮಾರಿ ಹಾಕುತ್ತಿದ್ದಾರೆ.&lt;/p&gt;&lt;h2&gt;ಕನ್ನಡಿ ಅಳವಡಿಸಲು ಕಾರಣವೇನು?&lt;/h2&gt;&lt;p&gt;ಇಲ್ಲಿ ಸಾಮಾನ್ಯವಾಗಿ ಬಸ್&zwnj; ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಸಾರ್ವಜನಿಕರು, ದಾರಿಹೋಕರು ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿತ್ತು. ಇದನ್ನು ತಪ್ಪಿಸಲು ಈಗ ಕನ್ನಡಿ ಅಳವಡಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ನಿಂತರೇ ಮೂತ್ರ ವಿಸರ್ಜಿಸುವುದನ್ನು ತಾವೇ ನೋಡುವಂತಾಗುತ್ತದೆ. ಜೊತೆಗೆ ರಸ್ತೆಯಲ್ಲಿ ಓಡಾಡುವ ಜನರಿಗೂ ಕಾಣುತ್ತದೆ. ಇದರಿಂದ ಅನೈರ್ಮಲ್ಯ ತಪ್ಪಿಸಬಹುದು ಎಂಬುದು ನಗರ ಪಾಲಿಕೆ ಯೋಜನೆ ಮತ್ತು ಯೋಚನೆ.&lt;/p&gt;&lt;p&gt;ಅಲ್ಲದೆ ರಾತ್ರಿ ವೇಳೆ ಈ ಕನ್ನಡಿಯ ಕೆಳಗೆ ಎಲ್&zwnj;ಇಡಿ ಬಲ್ಪ್&zwnj; ಅಳವಡಿಸಿರುವುದರಿಂದ ರಾತ್ರಿ ವೇಳೆಯೂ ಮೂತ್ರ ವಿಸರ್ಜನೆ ಮಾಡುವುದು ತಪ್ಪಿಸಬಹುದು. ಈ ಕಾರ್ಯ ಯಶಸ್ವಿಯಾದರೆ ನಗರದ ಇತರ ಕಡೆಗೂ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ. ಈ ಸಲಹೆಯನ್ನು ಯಾರು ಕೊಟ್ಟರೋ ಏನೋ ಆದರೆ ಉತ್ತಮವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಕನ್ನಡಿ ಅಳವಡಿಸಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್&zwnj; ಆಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mysuru-installs-mirror-walls-to-stop-public-urination-incident-sparks-debate-on-civic-sense-gdp/articleshow-lilsap8"/>
        </item>
        <item>
            <title><![CDATA[ಬೆಂಗಳೂರಿನ ನೆಲದಲ್ಲಿಂದು ಕೇಸರಿ ಸೂರ್ಯ ಉದಯ, ಎಚ್‌ಎಎಲ್‌ನಲ್ಲಿ ಪ್ರಧಾನಿ ಮೋದಿ ಅಬ್ಬರ,  ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ!]]></title>
            <link>https://kannada.asianetnews.com/state/saffron-sun-rises-in-bengaluru-pm-modi-s-high-octane-speech-at-hal-slams-congress-rav/articleshow-8cyak1x</link>
            <guid isPermaLink="true">https://kannada.asianetnews.com/state/saffron-sun-rises-in-bengaluru-pm-modi-s-high-octane-speech-at-hal-slams-congress-rav/articleshow-8cyak1x</guid>
            <pubDate>Sun, 10 May 2026 11:09:08 +0530</pubDate>
            <description><![CDATA[&lt;p&gt;ಪಂಚರಾಜ್ಯ ಚುನಾವಣೆಯಲ್ಲಿನ ಗೆಲುವಿನ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತ ದೊರೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡು, ದಕ್ಷಿಣ ಭಾರತದಲ್ಲಿ ಪಕ್ಷದ ಬೆಳವಣಿಗೆಯನ್ನು ಶ್ಲಾಘಿಸಿದರು&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr851adwks5qakzddp4c35tz,imgname-----------------------2026-05-10t104526.942-1778390182332.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.10)&lt;/strong&gt; ದೇಶದ ಪಂಚರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾದಿಸಿದೆ. ಈ ಅಭೂತಪೂರ್ವ ಗೆಲುವಿನ ಬೆನ್ನಲ್ಲೇ ಇಂದು ಸಿಲಿಕಾನ್ ಸಿಟಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರಿನ ಎಚ್&zwnj;ಎಎಲ್ (HAL) ವಿಮಾನ ನಿಲ್ದಾಣದಲ್ಲಿ ಕೇಸರಿ ಪಡೆಯಿಂದ ಭವ್ಯ ಸ್ವಾಗತ, ಅಭೂತಪೂರ್ವ ಸನ್ಮಾನ ಕಾರ್ಯಕ್ರಮ ನೆರವೇರಿತು.&lt;/p&gt;&lt;h2&gt;ವೇದಿಕೆಯಲ್ಲಿ ಯಡಿಯೂರಪ್ಪ ಕೈಕುಲುಕಿದ ಮೋದಿ:&lt;/h2&gt;&lt;p&gt;ಕಾರ್ಯಕ್ರಮದ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪ್ರಧಾನಿ ಮೋದಿ ಅವರು ರಾಜ್ಯದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಕೈ ಕುಲುಕಿ ಅತ್ಯಂತ ಆತ್ಮೀಯವಾಗಿ ವಿಚಾರಿಸಿದರು. ಈ ವೇಳೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿಯವರಿಗೆ ಮೈಸೂರು ಶಲ್ಯ, ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, '13 ಕೆಜಿಯ ಬೃಹತ್ ಬೆಳ್ಳಿಯ ಪ್ರತಿಮೆಯನ್ನು ನೀಡಿ ಗೌರವಿಸಿದರು.&lt;/p&gt;&lt;h3&gt;ಬೆಂಗಳೂರಿನ ನೆಲದಲ್ಲಿ ಕೇಸರಿ ಸೂರ್ಯನ ಉದಯ!&lt;/h3&gt;&lt;p&gt;ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, 'ನಾನು ಈ ಹಿಂದೆ ಸಾಕಷ್ಟು ಬಾರಿ ಬೆಂಗಳೂರಿಗೆ ಬಂದಿದ್ದೇನೆ. ಸಾಮಾನ್ಯವಾಗಿ ವಿಮಾನ ನಿಲ್ದಾಣದ ಬಳಿ ಸಣ್ಣ ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದೆ. ಆದರೆ ಈ ಬಾರಿ ಏರ್&zwnj;ಪೋರ್ಟ್ ಬಳಿ ಇಷ್ಡು ದೊಡ್ಡ ಕಾರ್ಯಕ್ರಮ ಮಾಡಿದ್ದೀರಿ. ನನಗೆ ಅನಿಸುತ್ತೆ ಬೆಂಗಳೂರಿನ ಈ ನೆಲದಲ್ಲಿ ಕೇಸರಿ ಸೂರ್ಯ ಉದಯವಾಗಿದೆ. ಇಷ್ಟು ಬೆಳಗ್ಗೆ ಎಲ್ಲರೂ ಸಂಘಟಿತರಾಗಿ ಬಂದಿದ್ದೀರಿ. ನಿಮಗೆ ನಾನು ಆಭಾರಿ ಆಗಿದ್ದೇನೆ. ನಿಮ್ಮ ಕಣ್ಣುಗಳಲ್ಲಿ ನೋಡ್ತಿದ್ದೇನೆ. ನಿಮ್ಮ ಪ್ರೀತಿಯ ಕಣ್ಣುಗಳಲ್ಲಿ ನಾನು ಪಶ್ಚಿಮ ಬಂಗಾಳದ ಗೆಲುವಿನ ಸಂಭ್ರಮವನ್ನು ಕಾಣುತ್ತಿದ್ದೇನೆ' ಎಂದು ಹರ್ಷ ವ್ಯಕ್ತಪಡಿಸಿದರು.&lt;/p&gt;&lt;h3&gt;ಸ್ಥಿರತೆಯ ಮಂತ್ರ ಜಪಿಸುತ್ತಿದೆ ಭಾರತ: ಮೋದಿ ವಿಶ್ವಾಸ&lt;/h3&gt;&lt;p&gt;'ದೇಶದ ಜನತೆ ಇಂದು ಸ್ಥಿರತೆ ಮತ್ತು ರಾಷ್ಟ್ರನೀತಿಗೆ ಜೈ ಎಂದಿದ್ದಾರೆ. ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಮ್ಮ ಸರ್ಕಾರ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಕೇವಲ 3 ಸ್ಥಾನದಿಂದ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಇತಿಹಾಸ ಬರೆದಿದ್ದೇವೆ. ಗುಜರಾತ್&zwnj;ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ. ಜನರಿಗೆ ಈಗ ಲೂಟಿ ಮಾಡುವ ಸರ್ಕಾರ ಬೇಡ, ಪರಿಹಾರ ನೀಡುವ ಸರ್ಕಾರ ಬೇಕಾಗಿದೆ' ಎಂದು ಮೋದಿ ಗುಡುಗಿದರು.&lt;/p&gt;&lt;p&gt;&lt;strong&gt;ದಕ್ಷಿಣ ಭಾರತದಲ್ಲಿ ಬಿಜೆಪಿಯ ವಿಶ್ವರೂಪ&lt;/strong&gt;&lt;/p&gt;&lt;p&gt;ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯ ಬಲದ ಬಗ್ಗೆ ಮಾತನಾಡಿದ ಅವರು, &quot;ಕರ್ನಾಟಕದಲ್ಲಿ ಬಿಜೆಪಿ ನಂಬರ್ 1 ಶಕ್ತಿಯಾಗಿ ಹೊರಹೊಮ್ಮಿದೆ. ತೆಲಂಗಾಣದಲ್ಲಿ ನಂಬರ್ 2 ಸ್ಥಾನಕ್ಕೇರಿದ್ದೇವೆ. ಇನ್ನು ಕೇರಳದಲ್ಲಿ ಈ ಬಾರಿ ಮೂರು ಸ್ಥಾನಗಳನ್ನು ಗೆದ್ದಿದ್ದೇವೆ. ಮುಂದೆ ಕೇರಳದಲ್ಲೂ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ ಎಂದು ಭವಿಷ್ಯ ನುಡಿದರು.&lt;/p&gt;&lt;h3&gt;ಕಾಂಗ್ರೆಸ್ ಒಂದು ಅಜೆಂಡಾ ಇಲ್ಲದ ವಿಶ್ವಾಸದ್ರೋಹಿ ಪಕ್ಷ!&lt;/h3&gt;&lt;p&gt;ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, 'ಕಳೆದ ಮೂರು ಚುನಾವಣೆಗಳಿಂದ ದೇಶದ ಜನತೆ ಕಾಂಗ್ರೆಸ್&zwnj;ಗೆ ಅವಕಾಶವೇ ಇಲ್ಲದಂತೆ ಮಾಡಿದ್ದಾರೆ. ಅವರ ಬಳಿ ಅಭಿವೃದ್ಧಿಯ ಅಜೆಂಡಾ ಇಲ್ಲ, ಕೇವಲ ನಿರಾಶೆ ಮನೆಮಾಡಿದೆ. ನಮ್ಮದು 'ಸಬ್ ಕಾ ಸಾತ್ ಸಬ್ ಕಾ ವಿಕಾಸ್' ಮಂತ್ರವಾದರೆ, ಕಾಂಗ್ರೆಸ್&zwnj;ನದ್ದು ಅಧಿಕಾರಕ್ಕೆ ಬಂದು ಜನರಿಗೆ ವಿಶ್ವಾಸದ್ರೋಹ ಮಾಡುವ ತಂತ್ರ' ಎಂದು ಟೀಕಿಸಿದರು.&lt;/p&gt;&lt;p&gt;&lt;strong&gt;ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಗ್ಯಾರಂಟಿಗಳ ವಿರುದ್ಧ ಕಿಡಿ&lt;/strong&gt;&lt;/p&gt;&lt;p&gt;ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದರೆ, ಇಲ್ಲಿನ ನಾಯಕರು ಮಾತ್ರ ಕುರ್ಚಿಗಾಗಿ ಜಗಳವಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ. ಇನ್ನು ಇವರ ಗ್ಯಾರಂಟಿಗಳೆಲ್ಲಾ ಬರೀ ಸುಳ್ಳು. ಹಿಮಾಚಲ ಪ್ರದೇಶದಲ್ಲಿ ಪೌರಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ, ತೆಲಂಗಾಣದಲ್ಲಿ ಲೂಟಿ ಹೊಡೆದ ಹಣಕ್ಕಾಗಿ ಗಲಾಟೆ ನಡೆಯುತ್ತಿದೆ. ತಮಿಳುನಾಡಿನಲ್ಲೂ ಡಿಎಂಕೆ ಜೊತೆಗಿನ ಮೈತ್ರಿ ಕಡಿದುಕೊಂಡು ಕಾಂಗ್ರೆಸ್ ತನ್ನ ವಿಶ್ವಾಸದ್ರೋಹಿ ಗುಣವನ್ನು ಸಾಬೀತುಪಡಿಸಿದೆ' ಎಂದು ಪ್ರಧಾನಿ ಮೋದಿ ಕಿಡಿಕಾರಿದರು.&lt;/p&gt;&lt;p&gt;Addressing BJP Karyakartas in Bengaluru. Watch. @BJP4Karnataka https://t.co/bYpaPzLjZT&lt;/p&gt;&lt;p&gt;&mdash; Narendra Modi (@narendramodi) May 10, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/saffron-sun-rises-in-bengaluru-pm-modi-s-high-octane-speech-at-hal-slams-congress-rav/articleshow-8cyak1x"/>
        </item>
        <item>
            <title><![CDATA[C Joseph Vijay: ಪೇಪರ್ ನೋಡದೆ, ಸಿನಿಮಾ ಸ್ಟೈಲ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದ ವಿಜಯ್!]]></title>
            <link>https://kannada.asianetnews.com/gallery/india-news/tvk-chief-actor-c-joseph-vijay-has-been-sworn-in-as-the-13th-chief-minister-of-tamil-nadu-mrq-w4vdn5x</link>
            <guid isPermaLink="true">https://kannada.asianetnews.com/gallery/india-news/tvk-chief-actor-c-joseph-vijay-has-been-sworn-in-as-the-13th-chief-minister-of-tamil-nadu-mrq-w4vdn5x</guid>
            <pubDate>Sun, 10 May 2026 10:40:05 +0530</pubDate>
            <description><![CDATA[ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್, ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ವಿಜಯ್ ಜೊತೆ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಮಾರಂಭದಲ್ಲಿ ನಟಿ ತ್ರಿಷಾ ವಿಶೇಷ ಆಕರ್ಷಣೆಯಾಗಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr84krprbc3qfm2kjzx91hmz,imgname-whatsapp-image-2026-05-10-at-10.36.31-1778389738200.jpeg" type="image/jpeg" height="390" width="690"/>
            <content:encoded><![CDATA[ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್, ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ವಿಜಯ್ ಜೊತೆ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಮಾರಂಭದಲ್ಲಿ ನಟಿ ತ್ರಿಷಾ ವಿಶೇಷ ಆಕರ್ಷಣೆಯಾಗಿದ್ದರು.&lt;img&gt;&lt;p&gt;ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್&zwnj;ಗೆ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ವಿಜಯ್ ಜೊತೆಯಲ್ಲಿ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಹುಮತದ ಸಂಖ್ಯೆಯಾದ 118 ಅನ್ನು ಮೀರಿ ಅವರು 120 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಶನಿವಾರ ಸಂಜೆ ಸಲ್ಲಿಸಿದ್ದರು.&lt;/p&gt;&lt;img&gt;&lt;p&gt;ಇದರ ಬೆನ್ನಲ್ಲೇ ರಾಜ್ಯಪಾಲರು ವಿಜಯ್ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಲಾಗಿತ್ತು. ಇಂದು ಬೆಳಗ್ಗೆ ಜವಾಹರಲಾಲ್&zwnj; ನೆಹರು ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭ ನಡೆದಿದೆ. ಮೇ 13ರೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ನಿಯೋಜಿತ ಸಿಎಂ ವಿಜಯ್&zwnj;ಗೆ ರಾಜ್ಯಪಾಲರು ಸೂಚಿಸಿದ್ದಾರೆ.&lt;/p&gt;&lt;img&gt;&lt;p&gt;ವಿಜಯ್ ಜೊತೆ 9 ಶಾಸಕರು ಪ್ರಮಾಣವಚನ ಸ್ವೀಕರಿಸಿದರು.&lt;/p&gt;&lt;p&gt;ಎನ್.ಆನಂದ್, ಅಧವ್ ಅರ್ಜುನ್, ಡಾ.ಕೆ.ಜಿ.ಅರುಣ್&zwnj;ರಾಜ್, ಕೆಎ ಸೆಂಗೊಟಯ್ಯನ್, ಪಿ.ವೆಂಕಟರಮಣಂ, ಆರ್.ನಿರ್ಮಲ್&zwnj;ಕುಮಾರ್, ರಾಜಮೋಹನ್, ಡಾ.ಟಿಕೆ ಪ್ರಭು, ಸೆಲ್ವಿ ಎಸ್ ಕೀರ್ತನಾ&lt;/p&gt;&lt;img&gt;&lt;p&gt;234 ಸದಸ್ಯಬಲದ ತಮಿಳುನಾಡಿನಲ್ಲಿ ಸರಳ ಬಹುಮತಕ್ಕೆ 118 ಸ್ಥಾನಗಳು ಅಗತ್ಯ. ಟಿವಿಕೆ 108 ಸ್ಥಾನಗಳನ್ನು ಹೊಂದಿದೆ. ಆದರೆ ವಿಜಯ್&zwnj; 2 ಕ್ಷೇತ್ರದಲ್ಲಿ ಗೆದ್ದ ಕಾರಣ ಅದರ ಬಲವನ್ನು 107 ಎಂದು ಪರಿಗಣಿಸಲಾಗುತ್ತದೆ. ಬಹುಮತಕ್ಕೆ ಆರಂಭದಲ್ಲಿ 11 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿತ್ತು. ಹೀಗಾಗಿ ಮೊದಲು ಕಾಂಗ್ರೆಸ್&zwnj; ಪಕ್ಷ ಅವರನ್ನು ಬೆಂಬಲಿಸಿತ್ತು. ಪರಿಣಾಮವಾಗಿ ಮೈತ್ರಿಕೂಟದ ಬಲ 112ಕ್ಕೆ ಏರಿತ್ತು. ಬಳಿಕ ಸಿಪಿಎಂನ 2 ಹಾಗೂ ಸಿಪಿಐನ 2 ಶಾಸಕರು ಬೆಂಬಲ ಘೋಷಿಸಿದ್ದರು. ಆಗ ಬಲ 116ಕ್ಕೆ ಏರಿತ್ತು. ಇದೀಗ ಸಿವಿಕೆಯ 2 ಹಾಗೂ ಮುಸ್ಲಿಂ ಲೀಗ್&zwnj;ನ 2 ಶಾಸಕರ ಬೆಂಬಲದೊಂದಿಗೆ 118ರ ಮ್ಯಾಜಿಕ್&zwnj; ಸಂಖ್ಯೆ ದಾಟಿ 120ಕ್ಕೆ ಕೂಟದ ಬಲವರ್ಧನೆ ಆಗಿದೆ.&lt;/p&gt;&lt;img&gt;&lt;p&gt;ಸಿಎಂ ದಳಪತಿ ವಿಜಯ್ ಅವರ ಗೆಳತಿ, ಖ್ಯಾತ ನಟಿ ತ್ರಿಷಾ ಸಾಂಪ್ರದಾಯಿಕ ಉಡುಪಿನಲ್ಲಿ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ್ದರು. ಕಾರ್&zwnj;ನಿಂದ ಇಳಿಯುತ್ತಲೇ ಜನರತ್ತ ಸಂತೋಷದಿಂದ ಕೈಬೀಸಿದರು. ತ್ರಿಷಾ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಘೋಷಣೆ ಕೂಗಲು ಆರಂಭಿಸಿದರು.&amp;nbsp;&lt;/p&gt;&lt;p&gt;#WATCH | Tamil Nadu: Actor Trisha Krishnan at the Jawaharlal Nehru Stadium in Chennai, where TVK Chief C Joseph Vijay will take oath as the Chief Minister of Tamil Nadu, shortly. pic.twitter.com/oCevs6N1Wx&lt;/p&gt;&lt;p&gt;&mdash; ANI (@ANI) May 10, 2026&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/india-news/tvk-chief-actor-c-joseph-vijay-has-been-sworn-in-as-the-13th-chief-minister-of-tamil-nadu-mrq-w4vdn5x"/>
        </item>
        <item>
            <title><![CDATA[ವಿಜಯ್ ಪ್ರಮಾಣವಚನ ಸಮಾರಂಭದಲ್ಲಿ ತ್ರಿಶಾ ಕೃಷ್ಣನ್; ನೀಲಿ ರೇಷ್ಮೆ ಸೀರೆಯಲ್ಲಿ ಮಿಂಚಿದ ನಟಿ]]></title>
            <link>https://kannada.asianetnews.com/gallery/entertainment/trisha-krishnan-vijay-oath-taking-ceremony-chennai-nehru-stadium-suh-13e2zpc</link>
            <guid isPermaLink="true">https://kannada.asianetnews.com/gallery/entertainment/trisha-krishnan-vijay-oath-taking-ceremony-chennai-nehru-stadium-suh-13e2zpc</guid>
            <pubDate>Sun, 10 May 2026 10:39:33 +0530</pubDate>
            <description><![CDATA[&lt;p&gt;Trisha krishnan ಚೆನ್ನೈನಲ್ಲಿ ನಡೆದ ಸಿ ಜೋಸೆಫ್ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಟಿ ತ್ರಿಷಾ ಭಾಗವಹಿಸಿ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ನೀಲಿ ರೇಷ್ಮೆ ಸೀರೆ ಧರಿಸಿದ್ದ ನಟಿ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಂತೆ ಗಮನ ಸೆಳೆದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr847ckbzjjn8ymsb7jcr2pf,imgname-trisha-krishnan-1778389332587.jpeg" type="image/jpeg" height="390" width="690"/>
            <content:encoded><![CDATA[&lt;p&gt;Trisha krishnan ಚೆನ್ನೈನಲ್ಲಿ ನಡೆದ ಸಿ ಜೋಸೆಫ್ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಟಿ ತ್ರಿಷಾ ಭಾಗವಹಿಸಿ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ನೀಲಿ ರೇಷ್ಮೆ ಸೀರೆ ಧರಿಸಿದ್ದ ನಟಿ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಂತೆ ಗಮನ ಸೆಳೆದರು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾದ ಕ್ಷಣಕ್ಕೆ ನಟಿ Trisha Krishnan ಸಾಕ್ಷಿಯಾಗಿದ್ದು ಈಗ ಸಿನಿ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. Vijay ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ತ್ರಿಷಾ ಅವರ ಹಾಜರಾತಿ ಎಲ್ಲರ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಚೆನ್ನೈನ Jawaharlal Nehru Stadiumನಲ್ಲಿ ನಡೆದ ಭವ್ಯ ಸಮಾರಂಭಕ್ಕೆ ನೀಲಿ ಬಣ್ಣದ ರೇಷ್ಮೆ ಸೀರೆಯಲ್ಲಿ ಆಗಮಿಸಿದ ತ್ರಿಷಾ, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಗೋಲ್ಡನ್ ಕಸೂತಿ ಬ್ಲೌಸ್&zwnj;, ಡೈಮಂಡ್ ಕಿವಿಯೋಲೆ, ರೂಬಿ ಚೋಕರ್&zwnj;, ಚಿಕ್ಕ ಬಿಂದಿ ಹಾಗೂ ಮಲ್ಲಿಗೆ ಹೂವಿನ ಅಲಂಕಾರ ಅವರ ಲುಕ್&zwnj;ಗೆ ಮತ್ತಷ್ಟು ಮೆರಗು ತಂದಿತ್ತು. ಸಮಾರಂಭದಲ್ಲಿ ಕ್ಯಾಮೆರಾಗಳ ಗಮನ ಬಹುತೇಕ ಸಮಯ ತ್ರಿಷಾ ಅವರತ್ತಲೇ ನೆಟ್ಟಿತ್ತು.&lt;/p&gt;&lt;img&gt;&lt;p&gt;ಇದೇ ವೇಳೆ, ವಿಜಯ್ ರಾಜಕೀಯ ಪ್ರವೇಶದ ನಂತರ ಖಾಲಿಯಾಗಲಿರುವ ಕ್ಷೇತ್ರದಿಂದ ತ್ರಿಷಾ ಸ್ಪರ್ಧಿಸಬಹುದು ಎಂಬ ವದಂತಿಗಳು ಕೂಡ ಹರಿದಾಡುತ್ತಿವೆ. ಈ ಹಿನ್ನೆಲೆ ಅವರ ಸಮಾರಂಭದ ಹಾಜರಾತಿ ಮತ್ತಷ್ಟು ಕುತೂಹಲ ಹುಟ್ಟಿಸಿದೆ. ವಿಜಯ್ ಅವರ ಪೋಷಕರು ಹಾಗೂ ಕುಟುಂಬ ಸದಸ್ಯರೂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು.&lt;/p&gt;&lt;img&gt;&lt;p&gt;ಚುನಾವಣಾ ಸಮಯದಲ್ಲಿ ವಿಜಯ್ ಮತ್ತು ತ್ರಿಷಾ ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ವಿಜಯ್ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವದಂತಿಗಳಲ್ಲೂ ತ್ರಿಷಾ ಹೆಸರು ಕೇಳಿಬಂದಿತ್ತು. ಆದರೆ ಈ ಎಲ್ಲ ಸುದ್ದಿಗಳನ್ನು ತಾರೆಯ ಆಪ್ತರು ತಳ್ಳಿಹಾಕಿದ್ದರು.&lt;/p&gt;&lt;p&gt;ಇತ್ತೀಚೆಗೆ ಟಿವಿಕೆ ಅಲೆ ಸೃಷ್ಟಿಸಿ ಭರ್ಜರಿ ಗೆಲುವು ಸಾಧಿಸಿದ್ದ ವಿಜಯ್ ಅವರನ್ನು ಅಭಿನಂದಿಸಲು ತ್ರಿಷಾ ಅವರ ಮನೆಗೆ ಭೇಟಿ ನೀಡಿದ್ದರು ಎನ್ನುವ ವರದಿಗಳೂ ವೈರಲ್ ಆಗಿದ್ದವು. ಈಗ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭದಲ್ಲಿನ ಅವರ ಹಾಜರಾತಿ ಮತ್ತೆ ಹೊಸ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>news</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/entertainment/trisha-krishnan-vijay-oath-taking-ceremony-chennai-nehru-stadium-suh-13e2zpc"/>
        </item>
        <item>
            <title><![CDATA[ಅಧಿಕಾರ ಸ್ವೀಕಾರಕ್ಕೂ ಮುನ್ನವೇ ನಟ ವಿಜಯ್‌ಗೆ ಬಿಗ್ ಶಾಕ್! ಕೋರ್ಟ್ ಮೆಟ್ಟಿಲೇರಿದ ನಾಯಕ!]]></title>
            <link>https://kannada.asianetnews.com/gallery/india-news/dmk-leader-periyakaruppan-challenges-tvk-mla-victory-in-chennai-high-court-mrq-u2lde3k</link>
            <guid isPermaLink="true">https://kannada.asianetnews.com/gallery/india-news/dmk-leader-periyakaruppan-challenges-tvk-mla-victory-in-chennai-high-court-mrq-u2lde3k</guid>
            <pubDate>Sun, 10 May 2026 10:06:40 +0530</pubDate>
            <description><![CDATA[&lt;p&gt;ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ! ತಿರುಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದಿಂದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ಗೆದ್ದಿರುವುದನ್ನು ಪ್ರಶ್ನಿಸಿ ಡಿಎಂಕೆ ಮಾಜಿ ಸಚಿವ ಪೆರಿಯಕರುಪ್ಪನ್ ಚೆನ್ನೈ ಹೈಕೋರ್ಟ್&zwnj;ನಲ್ಲಿ ಧಾವೆ ಹೂಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr19akrwgberspna15dk1myh,imgname-tvk-vijay--3--1778159800091.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ! ತಿರುಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದಿಂದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ಗೆದ್ದಿರುವುದನ್ನು ಪ್ರಶ್ನಿಸಿ ಡಿಎಂಕೆ ಮಾಜಿ ಸಚಿವ ಪೆರಿಯಕರುಪ್ಪನ್ ಚೆನ್ನೈ ಹೈಕೋರ್ಟ್&zwnj;ನಲ್ಲಿ ಧಾವೆ ಹೂಡಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಶಿವಗಂಗಾ ಜಿಲ್ಲೆಯ ತಿರುಪತ್ತೂರು ಕ್ಷೇತ್ರದಲ್ಲಿ ಡಿಎಂಕೆ ಮಾಜಿ ಸಚಿವ ಪೆರಿಯಕರುಪ್ಪನ್, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪರವಾಗಿ ಶ್ರೀನಿವಾಸ ಸೇತುಪತಿ, ಎಐಎಡಿಎಂಕೆ ಮೈತ್ರಿಕೂಟದ ಬಿಜೆಪಿ ಬೆಂಬಲಿತ ಅಭ್ಯರ್ಥಿ ತಿರುಮಾರನ್ ಮತ್ತು ನಾಮ್ ತಮಿಳರ್ ಕಚ್ಚಿ ಪಕ್ಷದಿಂದ ರಮ್ಯಾ ಮೋಹನ್ ಕಣಕ್ಕಿಳಿದಿದ್ದರು. ಏಪ್ರಿಲ್ 23 ರಂದು ಮತದಾನ ನಡೆದು, ಮೇ 4 ರಂದು ಮತ ಎಣಿಕೆ ನಡೆಯಿತು. ಆರಂಭದಿಂದಲೂ ಡಿಎಂಕೆ ಮತ್ತು ಟಿವಿಕೆ ನಡುವೆ ತೀವ್ರ ಪೈಪೋಟಿ ಇತ್ತು.&lt;/p&gt;&lt;img&gt;ಮತ ಎಣಿಕೆಯ ಪ್ರತಿ ಸುತ್ತಿನಲ್ಲೂ ಇಬ್ಬರೂ ಅಭ್ಯರ್ಥಿಗಳು ಅಲ್ಪ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸುತ್ತಿದ್ದರು. ಇದರಿಂದಾಗಿ ತೀವ್ರ ಕುತೂಹಲ ಕೆರಳಿತ್ತು. ಕೊನೆಯ ಸುತ್ತಿನ ಎಣಿಕೆ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ (EVM) ಹಠಾತ್ ದೋಷ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಇದರಿಂದಾಗಿ ಮತ ಎಣಿಕೆಯನ್ನು ಸ್ವಲ್ಪ ಸಮಯ ನಿಲ್ಲಿಸಿ ಮತ್ತೆ ಆರಂಭಿಸಲಾಯಿತು.&lt;img&gt;ಅಂತಿಮವಾಗಿ, ಡಿಎಂಕೆ ಮಾಜಿ ಸಚಿವ ಪೆರಿಯಕರುಪ್ಪನ್ 83,374 ಮತಗಳನ್ನು ಮತ್ತು ಶ್ರೀನಿವಾಸ ಸೇತುಪತಿ 83,375 ಮತಗಳನ್ನು ಪಡೆದರು. ಹೀಗಾಗಿ ಟಿವಿಕೆ ಅಭ್ಯರ್ಥಿ ಕೇವಲ ಒಂದು ಮತದ ಅಂತರದಿಂದ ಗೆದ್ದಿದ್ದಾರೆ ಎಂದು ಘೋಷಿಸಲಾಯಿತು. ಇದರಲ್ಲಿ ಅಕ್ರಮ ನಡೆದಿದೆ ಎಂದು ಪೆರಿಯಕರುಪ್ಪನ್ ಆರೋಪಿಸಿ, ಚೆನ್ನೈ ಹೈಕೋರ್ಟ್&zwnj;ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.&lt;img&gt;ಅಂಚೆ ಮತಗಳನ್ನು ಸರಿಯಾಗಿ ಪರಿಗಣಿಸಿಲ್ಲ ಮತ್ತು ಮರು ಎಣಿಕೆಯನ್ನು ಸರಿಯಾಗಿ ನಡೆಸಿಲ್ಲ ಎಂದು ಪೆರಿಯಕರುಪ್ಪನ್ ತಮ್ಮ ಅರ್ಜಿಯಲ್ಲಿ ದೂರಿದ್ದಾರೆ. ಮತ ಎಣಿಕೆಯ ವಿಡಿಯೋ ದಾಖಲೆಗಳನ್ನು ಸಂರಕ್ಷಿಸಬೇಕೆಂದು ಅವರು ಕೋರಿದ್ದಾರೆ. ಅಷ್ಟೇ ಅಲ್ಲದೆ, ಮೇ 13 ರಂದು ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಶ್ರೀನಿವಾಸ ಸೇತುಪತಿ ಭಾಗವಹಿಸದಂತೆ ತಾತ್ಕಾಲಿಕ ತಡೆ ನೀಡಬೇಕೆಂದೂ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.&lt;img&gt;ಈ ಪ್ರಕರಣದ ತುರ್ತು ವಿಚಾರಣೆಯನ್ನು ಇಂದು ಚೆನ್ನೈ ಹೈಕೋರ್ಟ್&zwnj;ನ ನ್ಯಾಯಮೂರ್ತಿಗಳಾದ ಎಲ್. ವಿಕ್ಟೋರಿಯಾ ಗೌರಿ ಮತ್ತು ಎನ್. ಸೆಂಥಿಲ್&zwnj;ಕುಮಾರ್ ಅವರಿದ್ದ ರಜಾಕಾಲದ ವಿಶೇಷ ಪೀಠ ನಡೆಸಲಿದೆ. ತಮಿಳುನಾಡಿನಲ್ಲಿ ವಿಜಯ್ ಅವರ ಹೊಸ ಸರ್ಕಾರ ರಚನೆಯಾಗುತ್ತಿರುವ ಹೊತ್ತಿನಲ್ಲೇ ಈ ಪ್ರಕರಣ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/india-news/dmk-leader-periyakaruppan-challenges-tvk-mla-victory-in-chennai-high-court-mrq-u2lde3k"/>
        </item>
        <item>
            <title><![CDATA[ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಈ ಭಾಗದಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣ]]></title>
            <link>https://kannada.asianetnews.com/gallery/bengaluru-urban/construction-of-a-10-point-20-km-long-new-road-in-the-buffer-zone-of-bengaluru-to-control-traffic-mrq-ifgk4m9</link>
            <guid isPermaLink="true">https://kannada.asianetnews.com/gallery/bengaluru-urban/construction-of-a-10-point-20-km-long-new-road-in-the-buffer-zone-of-bengaluru-to-control-traffic-mrq-ifgk4m9</guid>
            <pubDate>Sun, 10 May 2026 09:20:00 +0530</pubDate>
            <description><![CDATA[&lt;p&gt;ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು, &amp;nbsp;ಬಫರ್&zwnj; ಜೋನ್&zwnj;ನಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಬಿ-ಸ್ಮೈಲ್ ಮುಂದಾಗಿದೆ. ಈ ಯೋಜನೆಯಲ್ಲಿ ಸೌಂದರ್ಯೀಕರಣದ ಜೊತೆಗೆ, 200ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗುವುದು ಮತ್ತು ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7zq1c570ncwctx9xdwh8jd,imgname-bengaluru-roads--4--1778384602501.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು, &amp;nbsp;ಬಫರ್&zwnj; ಜೋನ್&zwnj;ನಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಬಿ-ಸ್ಮೈಲ್ ಮುಂದಾಗಿದೆ. ಈ ಯೋಜನೆಯಲ್ಲಿ ಸೌಂದರ್ಯೀಕರಣದ ಜೊತೆಗೆ, 200ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗುವುದು ಮತ್ತು ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲಾಗುವುದು.&lt;/p&gt;&lt;img&gt;&lt;p&gt;ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ನಗರದ ಮೈಸೂರು ರಸ್ತೆಯ ಹೊಸಕೆರೆಹಳ್ಳಿಯ ವಿ-ಲೆಗಸಿ ರಸ್ತೆಯಿಂದ ರಾಜರಾಜೇಶ್ವರಿ ನಗರ ಆರ್ಚ್&zwnj;ವರೆಗೆ ರಾಜಕಾಲುವೆಯ ಬಫರ್&zwnj; ಜೋನ್&zwnj;ನಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್&zwnj;ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಮುಂದಾಗಿದೆ.&lt;/p&gt;&lt;img&gt;&lt;p&gt;ಈ ಯೋಜನೆಯಡಿ ರಸ್ತೆ ನಿರ್ಮಾಣದ ಜತೆ ಪಾದಚಾರಿ ಮಾರ್ಗ ಮತ್ತು ವ್ಯವಸ್ಥಿತ ಚರಂಡಿ, ರಾಜಕಾಲುವೆ ಮತ್ತು ಕೆರೆಗಳ ಆಸುಪಾಸಿನಲ್ಲಿ ಅಲಂಕಾರಿಕ ಗಿಡ ಬೆಳೆಸುವುದು ಸೇರಿದಂತೆ ಸೌಂದರ್ಯೀಕರಣವನ್ನು ಮಾಡಲಾಗುತ್ತದೆ. ಬಫರ್ ವಲಯದಲ್ಲಿ ರಸ್ತೆ ನಿರ್ಮಾಣದಿಂದ ಹಾಲಿ ಇರುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾಗುವ ಜೊತೆಗೆ ರಾಜಕಾಲುವೆ ನಿರ್ವಹಣೆಯನ್ನು ಉತ್ತಮವಾಗಿ ಮಾಡಲು ಉದ್ದೇಶಿಸಲಾಗಿದೆ.&lt;/p&gt;&lt;img&gt;&lt;p&gt;10.20 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಯೋಜನೆಗೆ ಸುಮಾರು 200ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗುತ್ತದೆ. ಯೋಜನೆ ಅನುಷ್ಠಾನಗೊಳಿಸುವ ಜಾಗದಲ್ಲಿ ಯಾವುದಾದರೂ ಆಸ್ತಿಗಳು, ಕಟ್ಟಡಗಳು ಇದ್ದಲ್ಲಿ ವಶಪಡಿಸಿಕೊಳ್ಳಲಾಗುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪೀಣ್ಯ ಫ್ಲೈಓವರ್&zwnj;ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ; ರಿಸಲ್ಟ್&zwnj;ನಲ್ಲಿ ಬಂದಿದ್ದೇನು?&lt;/strong&gt;&lt;/p&gt;&lt;img&gt;&lt;p&gt;ಸಾರ್ವಜನಿಕರು ಕಳೆದುಕೊಳ್ಳುವ ಜಾಗಕ್ಕೆ ಮಾರುಕಟ್ಟೆ ದರದಲ್ಲಿ ಪರಿಹಾರದ ಹಣವನ್ನು ಪಾವತಿಸಲಾಗುತ್ತದೆ ಎಂದು ಬಿ ಸ್ಮೈಲ್&zwnj; ತಿಳಿಸಿದೆ. ಈಗಾಗಲೇ ಎಂ.ಜಿ. ರಸ್ತೆಯಿಂದ ಬೆಳ್ಳಂದೂರುವರೆಗೆ ರಾಜಕಾಲುವೆಯ ಬಫರ್&zwnj; ಜೋನ್&zwnj;ನಲ್ಲಿ ಸುಮಾರು 10 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಬಿ ಸ್ಮೈಲ್&zwnj;ನಿಂದ ಕೈಗೆತ್ತಿಕೊಳ್ಳಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ಬಸ್; ಒಂದು ದಿನದ ಟ್ರಿಪ್&zwnj;ಗೆ ಬೆಸ್ಟ್ ಆಯ್ಕೆ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/bengaluru-urban/construction-of-a-10-point-20-km-long-new-road-in-the-buffer-zone-of-bengaluru-to-control-traffic-mrq-ifgk4m9"/>
        </item>
        <item>
            <title><![CDATA[ಸಚಿವ ಡಿ. ಸುಧಾಕರ್ ನಿಧನ: ಹಿರಿಯೂರು ಶಾಸಕ, ಜನಪರ ನಾಯಕನ ರಾಜಕೀಯ ಜೀವನಕ್ಕೆ ಸ್ಪೂರ್ತಿಯೇ ಚಿಕ್ಕಪ್ಪ!]]></title>
            <link>https://kannada.asianetnews.com/politics/senior-karnataka-minister-d-sudhakar-passes-away-early-life-and-education-and-political-journey-gdp/articleshow-sgq8526</link>
            <guid isPermaLink="true">https://kannada.asianetnews.com/politics/senior-karnataka-minister-d-sudhakar-passes-away-early-life-and-education-and-political-journey-gdp/articleshow-sgq8526</guid>
            <pubDate>Sun, 10 May 2026 09:14:54 +0530</pubDate>
            <description><![CDATA[ಕರ್ನಾಟಕದ ಸಾಂಖ್ಯಿಕ ಮತ್ತು ಯೋಜನಾ ಸಚಿವ ಡಿ. ಸುಧಾಕರ್ ಅವರು ಅನಾರೋಗ್ಯದಿಂದಾಗಿ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಿರಿಯೂರು ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 'ಬಡವರ ಬಂಧು' ಎಂದೇ ಜನಪ್ರಿಯರಾಗಿದ್ದರು ಮತ್ತು ಸಹಕಾರ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr7zhpd5fvvjm2nq8g0nyp49,imgname-mla-d-sudhakar-1778384427429.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕರ್ನಾಟಕ ರಾಜ್ಯದ ಸಾಂಖ್ಯಿಕ ಮತ್ತು ಯೋಜನಾ ಸಚಿವರಾಗಿದ್ದ ಡಿ. ಸುಧಾಕರ್ ಅವರು ಭಾನುವಾರ ಬೆಳಗಿನ ಜಾವ 3.15 ಗಂಟೆಗೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ಡಿ. ಸುಧಾಕರ್ ಅವರ ನಿಧನದಿಂದ ರಾಜ್ಯ ರಾಜಕೀಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಜನಪರ ನಾಯಕನಾಗಿ ಗುರುತಿಸಿಕೊಂಡಿದ್ದ ಅವರು ಬಡವರ ಪರ ಕಾಳಜಿ ವಹಿಸಿದ ರಾಜಕಾರಣಿಯಾಗಿ ಹೆಸರುವಾಸಿಯಾಗಿದ್ದರು. ಹಿರಿಯೂರು ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.&lt;/p&gt;&lt;h2&gt;ರಾಜಕೀಯಕ್ಕೆ ಚಿಕ್ಕಪ್ಪನೇ ಪ್ರೇರಣೆ&lt;/h2&gt;&lt;p&gt;1961ರ ಮಾರ್ಚ್ 28ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಜನಿಸಿದ ಸುಧಾಕರ್ ಅವರು ತಮ್ಮ ಪ್ರಾಥಮಿಕ ಹಾಗೂ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಚಿತ್ರದುರ್ಗದಲ್ಲೇ ಪೂರ್ಣಗೊಳಿಸಿದರು. ನಂತರ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದರು. ಪದವಿ ಶಿಕ್ಷಣದ ನಂತರ ಅವರು ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಂಡರು. ಅವರ ರಾಜಕೀಯ ಪ್ರವೇಶಕ್ಕೆ ಕುಟುಂಬ ಹಿನ್ನೆಲೆ ಪ್ರಮುಖ ಕಾರಣವಾಗಿತ್ತು. ಅವರ ಚಿಕ್ಕಪ್ಪ ಎನ್. ಜಯಣ್ಣ ಅವರು ಚಳ್ಳಕೆರೆ ಕ್ಷೇತ್ರದ ಶಾಸಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸುಧಾಕರ್ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಚಿಕ್ಕಪ್ಪನ ರಾಜಕೀಯ ಉಸ್ತುವಾರಿಯನ್ನು ಡಿ.ಸುಧಾಕರ್ ವಹಿಸಿಕೊಂಡಿದ್ದರು.&lt;/p&gt;&lt;h2&gt;ರಾಜಕೀಯ ಜೀವನದ ಬೆಳವಣಿಗೆ&lt;/h2&gt;&lt;p&gt;ಡಿ. ಸುಧಾಕರ್ ಅವರು 2004ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚಳ್ಳಕೆರೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗುತ್ತಿದ್ದಂತೆ ಅವರು ಸಾಮಾನ್ಯ ಕ್ಷೇತ್ರವಾದ ಹಿರಿಯೂರು ಕಡೆಗೆ ತನ್ನ ರಾಜಕೀಯ ಸ್ಥಾನವನ್ನು ಬದಲಿಸಿದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ನಂತರ ಬಿಎಸ್&zwnj;. ಯಡಿಯೂರಪ್ಪ ಅವರ ಸರ್ಕಾರಕ್ಕೆ ಬೆಂಬಲ ನೀಡಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದರು.&lt;/p&gt;&lt;p&gt;2013ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾದ ಅವರು, 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡರು. ಆದರೆ 2023ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಾಂಖ್ಯಿಕ ಮತ್ತು ಯೋಜನಾ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು.&lt;/p&gt;&lt;h2&gt;ಸಹಕಾರ ಕ್ಷೇತ್ರದಲ್ಲಿ ಸಾಧನೆ&lt;/h2&gt;&lt;p&gt;ರಾಜಕೀಯದ ಜೊತೆಗೆ ಸಹಕಾರ ಕ್ಷೇತ್ರದಲ್ಲೂ ಅವರು ಮಹತ್ವದ ಪಾತ್ರ ವಹಿಸಿದ್ದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಅಧ್ಯಕ್ಷರಾಗಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ ಸಹಕಾರ ಸಂಘಗಳ ಮೂಲಕ ಸಾವಿರಾರು ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.&lt;/p&gt;&lt;h2&gt;ಜನಪ್ರಿಯ ನಾಯಕ&lt;/h2&gt;&lt;p&gt;ಚಳ್ಳಕೆರೆ ಹಾಗೂ ಹಿರಿಯೂರು ಕ್ಷೇತ್ರಗಳಲ್ಲಿ ಜೈನ ಸಮುದಾಯದ ಮತದಾರರ ಸಂಖ್ಯೆ ಅತಿ ಕಡಿಮೆ ಇದ್ದರೂ, ಇತರ ಸಮುದಾಯಗಳ ವಿಶ್ವಾಸವನ್ನು ಗಳಿಸುವ ಮೂಲಕ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬಡವರ ನೆರವಿಗೆ ಸದಾ ಸಿದ್ಧರಾಗಿದ್ದ ಕಾರಣ ಅವರಿಗೆ &quot;ಬಡವರ ಬಂಧು&quot; ಎಂಬ ಹೆಸರೂ ದೊರಕಿತ್ತು.&lt;/p&gt;&lt;p&gt;ಡಿ. ಸುಧಾಕರ್ ಅವರು ಶ್ರೀಮತಿ ಹರ್ಷಿಣಿ ಅವರೊಂದಿಗೆ ಸುದೀರ್ಘ ದಾಂಪತ್ಯ ಜೀವನ ನಡೆಸಿದ್ದು, ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಈಗ ತಮ್ಮ 65ನೇ ವರ್ಷದಲ್ಲಿ ಕುಟುಂಬವನ್ನು ಅಗಲಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/politics/senior-karnataka-minister-d-sudhakar-passes-away-early-life-and-education-and-political-journey-gdp/articleshow-sgq8526"/>
        </item>
        <item>
            <title><![CDATA[Mavu Mela: ಬೆಂಗಳೂರಿನ ಕಬ್ಬನ್ ಪಾರ್ಕ್‌ ಮೇಳ; 2 ದಿನದಲ್ಲಿಯೇ 7 ಟನ್‌+ ಮಾವು ಮಾರಾಟ]]></title>
            <link>https://kannada.asianetnews.com/gallery/state/bengaluru-s-cubbon-park-mavu-halasu-mela-7-tons-mangoes-sold-in-just-2-days-mrq-fbg1bv3</link>
            <guid isPermaLink="true">https://kannada.asianetnews.com/gallery/state/bengaluru-s-cubbon-park-mavu-halasu-mela-7-tons-mangoes-sold-in-just-2-days-mrq-fbg1bv3</guid>
            <pubDate>Sun, 10 May 2026 09:00:23 +0530</pubDate>
            <description><![CDATA[&lt;p&gt;ಮಾವು-ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಸಾಯನಿಕ ಮುಕ್ತ, ನೈಸರ್ಗಿಕವಾಗಿ ಮಾಗಿದ ಮಾವು ಮತ್ತು ಹಲಸನ್ನು ರೈತರಿಂದ ನೇರವಾಗಿ ಕಡಿಮೆ ದರದಲ್ಲಿ ಒದಗಿಸುತ್ತಿದ್ದು, ಮೊದಲ ಎರಡು ದಿನಗಳಲ್ಲಿ ಏಳು ಟನ್&zwnj;ಗೂ ಹೆಚ್ಚು ಮಾವು ಮಾರಾಟವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7ymchfgccmjsxe082mrrpd,imgname-mango-1778383467055.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾವು-ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಸಾಯನಿಕ ಮುಕ್ತ, ನೈಸರ್ಗಿಕವಾಗಿ ಮಾಗಿದ ಮಾವು ಮತ್ತು ಹಲಸನ್ನು ರೈತರಿಂದ ನೇರವಾಗಿ ಕಡಿಮೆ ದರದಲ್ಲಿ ಒದಗಿಸುತ್ತಿದ್ದು, ಮೊದಲ ಎರಡು ದಿನಗಳಲ್ಲಿ ಏಳು ಟನ್&zwnj;ಗೂ ಹೆಚ್ಚು ಮಾವು ಮಾರಾಟವಾಗಿದೆ.&lt;/p&gt;&lt;img&gt;&lt;p&gt;ಕಬ್ಬನ್&zwnj; ಉದ್ಯಾನದಲ್ಲಿ ನಡೆಯುತ್ತಿರುವ ಮಾವು- ಹಲಸು ಮೇಳಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೇವಲ ಎರಡನೇ ದಿನದಲ್ಲಿ ಏಳು ಟನ್&zwnj;ಗೂ ಹೆಚ್ಚು ಮಾವು ಮಾರಾಟವಾಗಿದೆ.&lt;/p&gt;&lt;img&gt;&lt;p&gt;ಕಾರ್ಬೈಡ್&zwnj; ಮುಕ್ತ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸುವುದು, ದಳ್ಳಾಳಿಗಳ ಹಾವಳಿ ತಡೆ ಹಾಗೂ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಕಬ್ಬನ್&zwnj; ಉದ್ಯಾನದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಮಾವು ಮೇಳ ಆಯೋಜಿಸಿದ್ದು ಮೇ 10 ದಿನ ನಡೆಯಲಿದೆ.&lt;/p&gt;&lt;img&gt;&lt;p&gt;ಶುಕ್ರವಾರ 2.5 ಟನ್&zwnj; ಹಾಗೂ ಶನಿವಾರ 5 ಟನ್&zwnj; ಮಾವು ಮಾರಾಟವಾಗಿದೆ. ರಾಸಾಯನಿಕ ಮುಕ್ತ ಮಾವಿನ ವಿವಿಧ ತಳಿಯ ಹಣ್ಣುಗಳು, ಹಲಸು ಹೊರಗಿನ ದರಕ್ಕಿಂತ ಕಡಿಮೆ ದರದಲ್ಲಿ ಸಿಗುತ್ತಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ. ಎರಡು ದಿನಗಳಲ್ಲಿ 7 ಟನ್&zwnj;ಗಿಂತ ಹೆಚ್ಚು ಮಾರಾಟವಾಗಲು ಇದುವೇ ಕಾರಣ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ವೇದಮೂರ್ತಿ ಕನ್ನಡಪ್ರಭಕ್ಕೆ ತಿಳಿಸಿದರು.&lt;/p&gt;&lt;img&gt;&lt;p&gt;ಮೇಳದಲ್ಲಿ ಬಾದಾಮಿ/ಆಲ್ಫಾನ್ಸೊ, ರಸಪುರಿ, ಸೇಂದೂರ, ಮಲಗೋವ, ಮಲ್ಲಿಕಾ, ಬಂಗನಪಲ್ಲಿ, ದಶೇರಿ, ಕಾಲಪಾಡು, ಕೇಸರಿ, ನೀಲಂ, ತೋತಾಪುರಿ, ಇಮಾಮ್ ಪಸಂದ್&zwnj; ಮುಂತಾದ ತಳಿಯ ಮಾವಿನ ತಳಿಗಳು ಲಭ್ಯ. ಇದರ ಜತೆಗೆ ಚಂದ್ರ ಹಲಸು, ನಾನಾ ಸ್ಥಳೀಯ ಹಲಸುಗಳು ಕಡಿಮೆ ದರದಲ್ಲಿ ಸಿಗುತ್ತಿವೆ. ಮುಖ್ಯವಾಗಿ ಯಾವುದೇ ರಾಸಾಯನಿಕ ಇಲ್ಲದೇ, ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಲಭ್ಯವಿದ್ದು, ತಾಜಾತನದಿಂದ ಕೂಡಿವೆ. ಬೆಂಗಳೂರಿನ ನಾಗರಿಕರು, ಕಬ್ಬನ್&zwnj; ಉದ್ಯಾನಕ್ಕೆ ಭೇಟಿ ನೀಡಿ ರೈತರಿಂದ ನೇರವಾಗಿ ಮಾವು ಖರೀದಿಸಬಹುದು. ಆಸಕ್ತ ರೈತರು ಗ್ರಾಹಕರಿಗೆ ರಿಯಾಯಿತಿ ಕೂಡ ನೀಡಲಿದ್ದಾರೆ ಎಂದು ಮಾವು ಅಭಿವೃದ್ಧಿ ನಿಗಮ ತಿಳಿಸಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/bengaluru-s-cubbon-park-mavu-halasu-mela-7-tons-mangoes-sold-in-just-2-days-mrq-fbg1bv3"/>
        </item>
        <item>
            <title><![CDATA[ಬೇರೊಬ್ಬರ ವರದಿಯನ್ನು ಮತ್ತ್ಯಾರಿಗೋ ನೀಡಿ ರೋಗಿಯ ಪತಿಯನ್ನೇ ನಿಂದಿಸಿದ ಸ್ಕ್ಯಾನಿಂಗ್‌ ಸೆಂಟರ್‌ ಸಿಬ್ಬಂದಿ]]></title>
            <link>https://kannada.asianetnews.com/karnataka-districts/hassan-sakaleshpur-medical-negligence-scanning-center-staff-scolded-for-giving-someone-else-s-report-mrq/articleshow-x1bp7pi</link>
            <guid isPermaLink="true">https://kannada.asianetnews.com/karnataka-districts/hassan-sakaleshpur-medical-negligence-scanning-center-staff-scolded-for-giving-someone-else-s-report-mrq/articleshow-x1bp7pi</guid>
            <pubDate>Sun, 10 May 2026 08:44:41 +0530</pubDate>
            <description><![CDATA[&lt;p&gt;ಸ್ಕ್ಯಾನಿಂಗ್ ಸೆಂಟರ್&zwnj;ನಲ್ಲಿ ಬೇರೊಬ್ಬರ ವರದಿಯನ್ನು ಮಹಿಳೆಯೊಬ್ಬರಿಗೆ ನೀಡಿದ ಪರಿಣಾಮ, ತಪ್ಪಾದ ಚಿಕಿತ್ಸೆಯಿಂದ ಅವರ ಆರೋಗ್ಯ ಹದಗೆಟ್ಟಿದೆ. ಕೇಂದ್ರದ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದು, ಈ ಘಟನೆಯು ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರದ ದುಸ್ಥಿತಿಯನ್ನು ಸಹ ಬೆಳಕಿಗೆ ತಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7xqk57bagfgtta6gp9ja0x,imgname-scanning--report-exchange-1778382523559.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ಸಕಲೇಶಪುರ ಪಟ್ಟಣದ ಟೋಲ್ ಗೇಟ್ ಸಮೀಪ ಕಾರ್ಯನಿರ್ವಹಿಸುತ್ತಿರುವ &ldquo;ಸ್ಕಂದ ಸ್ಕ್ಯಾನಿಂಗ್ ಸೆಂಟರ್&rdquo;ನ ಬೇಜವಾಬ್ದಾರಿತನದಿಂದ ಮಹಿಳೆಯೊಬ್ಬರು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ತಾಲೂಕಿನ ಮಠಸಾಗರ ಗ್ರಾಮದ ಹಸೈನಾರ್ ಹಾಜಿ ಅವರ ಪತ್ನಿ ಸಂಶಿಯಾ ಎಂಬುವವರು ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಗುರುವಾರ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ವೈದ್ಯರು ಸ್ಕ್ಯಾನಿಂಗ್ ಮಾಡುವಂತೆ ಸೂಚಿಸಿದ್ದು, ಅವರನ್ನು ಪಟ್ಟಣದ ಟೋಲ್ ಗೇಟ್ ಸಮೀಪದ ಸ್ಕಂದ ಸ್ಕ್ಯಾನಿಂಗ್ ಸೆಂಟರ್&zwnj;ಗೆ ಕಳುಹಿಸಲಾಗಿತ್ತು. ಸ್ಕ್ಯಾನಿಂಗ್ ಮಾಡಿದ ಬಳಿಕ ಕೇಂದ್ರದ ಸಿಬ್ಬಂದಿ ನೀಡಿದ ವರದಿಯನ್ನು ವೈದ್ಯರಿಗೆ ತೋರಿಸಿದಾಗ, ಅದರ ಆಧಾರದ ಮೇಲೆ ಔಷಧಿ ನೀಡಲಾಗಿತ್ತು. ಆದರೆ ಔಷಧಿ ಸೇವಿಸಿದ ಬಳಿಕವೂ ಮಹಿಳೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಿಸದೇ, ಮತ್ತಷ್ಟು ಅಸ್ವಸ್ಥಗೊಂಡು ನಿಶಕ್ತರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ರೋಗಿಯ ಆರೋಗ್ಯದಲ್ಲಿ ವ್ಯತ್ಯಾಸ&lt;/strong&gt;&lt;/h2&gt;&lt;p&gt;ಈ ನಡುವೆ ಶುಕ್ರವಾರ ಸ್ಕಂದ ಸ್ಕ್ಯಾನಿಂಗ್ ಸೆಂಟರ್ ಸಿಬ್ಬಂದಿ ದೂರವಾಣಿ ಮೂಲಕ ಸಂಪರ್ಕಿಸಿ &ldquo;ನಿಮ್ಮ ರಿಪೋರ್ಟ್ ಬದಲಾಗಿ ವೈಶಾಲಿ ಎಂಬುವವರ ವರದಿ ನಿಮ್ಮ ಕೈ ಸೇರಿದೆ, ಬಂದು ಹೊಸ ವರದಿ ಪಡೆದುಕೊಳ್ಳಿ&rdquo; ಎಂದು ತಿಳಿಸಿದ್ದಾರೆ. ಇದರಿಂದ ಕೇಂದ್ರದ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಬಹಿರಂಗವಾಗಿದ್ದು, ತಪ್ಪಾದ ವರದಿ ನೀಡಿದ ಪರಿಣಾಮ ರೋಗಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಕೇಂದ್ರದ ಸಿಬ್ಬಂದಿ &ldquo;ಇಂತಹದ್ದು ಕೆಲವೊಮ್ಮೆ ಆಗುತ್ತದೆ, ಬೇಕಾದರೆ ಹೊಸ ರಿಪೋರ್ಟ್ ತೆಗೆದುಕೊಂಡು ಹೋಗಿ, ಇಲ್ಲವಾದರೆ ಬಿಡಿ&rdquo; ಎಂದು ನಿರ್ಲಕ್ಷ್ಯವಾಗಿ ಉತ್ತರಿಸಿ, ರೋಗಿ ಹಾಗೂ ಅವರ ಪತಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.&lt;/p&gt;&lt;p&gt;ಈ ಕುರಿತು ರೋಗಿಯ ಪತಿ ಹಸನ್ ಹಾಜಿ ಮಾತನಾಡಿ, ನಾವು ಅನಕ್ಷರಸ್ಥರು. ವೈದ್ಯಕೀಯ ವರದಿಗಳ ಬಗ್ಗೆ ಅರಿವು ಇಲ್ಲ. ಆದರೆ ಸ್ಕ್ಯಾನಿಂಗ್ ಕೇಂದ್ರದ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ನಮ್ಮ ಮೇಲೆಯೇ ದರ್ಪ ತೋರಿಸುತ್ತಿದ್ದಾರೆ. ಇಂತಹ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯ ಉಂಟಾಗಬಹುದು. ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.&lt;/p&gt;&lt;h3&gt;&lt;strong&gt;ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರ ಬಳಕೆಯಾಗದ ಸ್ಥಿತಿ&lt;/strong&gt;&lt;/h3&gt;&lt;p&gt;ಸಕಲೇಶಪುರ ಕ್ರಾಫರ್ಡ್&zwnj; ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದರೂ, ನುರಿತ ತಜ್ಞರ ಕೊರತೆಯಿಂದ ಅದು ಬಳಕೆಯಾಗದೇ ತುಕ್ಕು ಹಿಡಿಯುತ್ತಿದೆ. ಖಾಸಗಿ ಕೇಂದ್ರಗಳ ಅವಲಂಬನೆ ತಪ್ಪಿಸಲು ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಘಟಕವನ್ನು ಶೀಘ್ರ ದುರಸ್ತಿ ಮಾಡಿ, ತಜ್ಞರನ್ನು ನೇಮಿಸಿ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-sakaleshpur-medical-negligence-scanning-center-staff-scolded-for-giving-someone-else-s-report-mrq/articleshow-x1bp7pi"/>
        </item>
        <item>
            <title><![CDATA[ಪಂಚರಾಜ್ಯ ಚುನಾವಣಾ ಫಲಿತಾಂಶ ಬಳಿಕ ಕರ್ನಾಟಕ ಪ್ರಧಾನಿ ಮೋದಿ, ಆರು ತಿಂಗಳಲ್ಲಿ ಮೂರನೇ ಭೇಟಿ!]]></title>
            <link>https://kannada.asianetnews.com/state/pm-modi-to-visit-karnataka-after-five-state-election-results-third-visit-in-six-months-rav/articleshow-nskwmrz</link>
            <guid isPermaLink="true">https://kannada.asianetnews.com/state/pm-modi-to-visit-karnataka-after-five-state-election-results-third-visit-in-six-months-rav/articleshow-nskwmrz</guid>
            <pubDate>Sun, 10 May 2026 08:33:10 +0530</pubDate>
            <description><![CDATA[&lt;p&gt;ಪಂಚರಾಜ್ಯಗಳ ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಬಿಜೆಪಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ, ಅವರು ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7xaeqssbsmq92mrgfcs34z,imgname-----------------------2026-05-10t083058.681-1778382093049.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.10):&lt;/strong&gt; ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕವು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ.&lt;/p&gt;&lt;h2&gt;ಎಚ್&zwnj;ಎಎಲ್&zwnj;ನಲ್ಲಿ ಅಭಿನಂದನಾ ಸಮಾರಂಭ:&lt;/h2&gt;&lt;p&gt;ಬೆಂಗಳೂರಿನ ಎಚ್&zwnj;ಎಎಲ್ ಮುಖ್ಯದ್ವಾರದ ಬಳಿ ಈ ಬೃಹತ್ ಕಾರ್ಯಕ್ರಮ ಆಯೋಜನೆಯಾಗಿದ್ದು, ರಾಜ್ಯ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಪಂಚರಾಜ್ಯ ಫಲಿತಾಂಶದಿಂದ ಈಗಾಗಲೇ ಜೋಶ್&zwnj;ನಲ್ಲಿರುವ ಕರ್ನಾಟಕ ಬಿಜೆಪಿಗೆ ಪ್ರಧಾನಿ ಮೋದಿಯವರ ಆಗಮನ ಮತ್ತಷ್ಟು ಹುರುಪು ನೀಡಿದೆ.&lt;/p&gt;&lt;h3&gt;ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ&lt;/h3&gt;&lt;p&gt;ಬೆಳಿಗ್ಗೆ 9:45 ರಿಂದ 10:15 ರವರೆಗೆ ಅಂದರೆ ಸುಮಾರು ಅರ್ಧ ತಾಸು ಪ್ರಧಾನಿ ಮೋದಿ ಎಚ್&zwnj;ಎಎಲ್ ಕಾರ್ಯಕ್ರಮದ ವೇದಿಕೆಯಲ್ಲಿ ಇರಲಿದ್ದಾರೆ. ಈ ವೇಳೆ ಅಲ್ಲಿ ನೆರೆಯಲಿರುವ ಸುಮಾರು 10 ರಿಂದ 15 ಸಾವಿರ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ.&lt;/p&gt;&lt;h3&gt;ಆರು ತಿಂಗಳು.. ಮೂರು ಭೇಟಿ.. ಎಲ್ಲವೂ ಧಾರ್ಮಿಕ ಕೇಂದ್ರಗಳಿಗೆ!&lt;/h3&gt;&lt;p&gt;ಕಳೆದ ಆರು ತಿಂಗಳ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ನೀಡುತ್ತಿರುವ ಮೂರನೇ ಭೇಟಿ ಇದಾಗಿದೆ. ವಿಶೇಷವೆಂದರೆ ಈ ಮೂರೂ ಭೇಟಿಗಳ ಸಂದರ್ಭದಲ್ಲಿ ಅವರು ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ:&lt;/p&gt;&lt;p&gt;&lt;strong&gt;ಮೊದಲ ಭೇಟಿ (ನವೆಂಬರ್ 28, 2025): &lt;/strong&gt;ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗಿದ್ದರು. ನೂತನ 'ಸುವರ್ಣ ತೀರ್ಥ ಮಂಟಪ' ಹಾಗೂ 'ಕನಕನ ಕಿಂಡಿ'ಯ ಚಿನ್ನದ ಕವಚ ಲೋಕಾರ್ಪಣೆ ಮಾಡಿ ರೋಡ್ ಶೋ ನಡೆಸಿದ್ದರು.&lt;/p&gt;&lt;p&gt;&lt;strong&gt;ಎರಡನೇ ಭೇಟಿ (ಏಪ್ರಿಲ್ 15, 2026)&lt;/strong&gt;: ಕಳೆದ ತಿಂಗಳಷ್ಟೇ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಆದಿಚುಂಚನಗಿರಿ ಮಠದಲ್ಲಿ ​ಗುರು ಭೈರವೈಕ್ಯ ಮಂದಿರ ಉದ್ಘಾಟಿಸಿದ್ದರು. ಒಕ್ಕಲಿಗ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರದಲ್ಲಿ ಪೂಜೆ ಸಲ್ಲಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.&lt;/p&gt;&lt;p&gt;&lt;strong&gt;ಮೂರನೇ ಭೇಟಿ (ಮೇ 10, 2026): &lt;/strong&gt;ಇಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಆರ್ಟ್ ಆಫ್ ಲಿವಿಂಗ್&zwnj;ನಲ್ಲಿ ಧ್ಯಾನ ಮಂದಿರ ಲೋಕಾರ್ಪಣೆ:&lt;/strong&gt;&lt;/p&gt;&lt;p&gt;ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲಾದ ಬೃಹತ್ ಧ್ಯಾನ ಮಂದಿರವನ್ನು ಅವರು ಲೋಕಾರ್ಪಣೆಗೊಳಿಸಲಿದ್ದಾರೆ.&lt;/p&gt;&lt;p&gt;&lt;strong&gt;ವಾಹನ ಸವಾರರ ಗಮನಕ್ಕೆ: ಸಂಚಾರ ಮಾರ್ಗ ಬದಲಾವಣೆ&lt;/strong&gt;&lt;/p&gt;&lt;p&gt;ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಬೆಂಗಳೂರು-ಕನಕಪುರ ರಸ್ತೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.&lt;/p&gt;&lt;p&gt;&lt;strong&gt;ಬೆಂಗಳೂರಿನಿಂದ ಕನಕಪುರಕ್ಕೆ ಹೋಗುವವರು: &lt;/strong&gt;ಬೆಂಗಳೂರು-ಕೆಂಗೇರಿ-ಬಿಡದಿ-ರಾಮನಗರ ಮೂಲಕ ಕನಕಪುರ ತಲುಪಲು ಸೂಚಿಸಲಾಗಿದೆ.&lt;/p&gt;&lt;p&gt;&lt;strong&gt;ಕನಕಪುರದಿಂದ ಬೆಂಗಳೂರಿಗೆ ಬರುವವರು:&lt;/strong&gt; ಕನಕಪುರ-ಹಾರೋಹಳ್ಳಿ-ಕಗ್ಗಲಿಪುರ ರಸ್ತೆ-ಬನ್ನೇರಘಟ್ಟ ಮಾರ್ಗವಾಗಿ ಬೆಂಗಳೂರು ಪ್ರವೇಶಿಸಲು ಪೊಲೀಸ್ ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/pm-modi-to-visit-karnataka-after-five-state-election-results-third-visit-in-six-months-rav/articleshow-nskwmrz"/>
        </item>
        <item>
            <title><![CDATA[ಪೀಣ್ಯ ಫ್ಲೈಓವರ್‌ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ;   ರಿಸಲ್ಟ್‌ನಲ್ಲಿ ಬಂದಿದ್ದೇನು?]]></title>
            <link>https://kannada.asianetnews.com/gallery/bengaluru-urban/after-4-years-all-types-of-vehicular-traffic-will-soon-be-allowed-on-tumakuru-route-peenya-flyover-bengaluru-mrq-b6q6vve</link>
            <guid isPermaLink="true">https://kannada.asianetnews.com/gallery/bengaluru-urban/after-4-years-all-types-of-vehicular-traffic-will-soon-be-allowed-on-tumakuru-route-peenya-flyover-bengaluru-mrq-b6q6vve</guid>
            <pubDate>Sun, 10 May 2026 08:31:41 +0530</pubDate>
            <description><![CDATA[&lt;p&gt;ಕೇಬಲ್ ಸಮಸ್ಯೆಯಿಂದ ಸುದ್ದಿಯಾಗಿದ್ದ ಪೀಣ್ಯ ಫ್ಲೈಓವರ್ ಕುರಿತ ಮಾಹಿತಿ ಇಲ್ಲಿದೆ. ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ಮೇ 5 ರಿಂದ ಲೋಡ್&zwnj; ಟೆಸ್ಟಿಂಗ್&zwnj; ನಡೆಸಿದೆ. ಈ ಪರೀಕ್ಷೆಯ ಫಲಿತಾಂಶ ಹೊರ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7wwqc4cpdk655a06vemd1j,imgname-peenya-flyover--1--1778381643140.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಬಲ್ ಸಮಸ್ಯೆಯಿಂದ ಸುದ್ದಿಯಾಗಿದ್ದ ಪೀಣ್ಯ ಫ್ಲೈಓವರ್ ಕುರಿತ ಮಾಹಿತಿ ಇಲ್ಲಿದೆ. ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ಮೇ 5 ರಿಂದ ಲೋಡ್&zwnj; ಟೆಸ್ಟಿಂಗ್&zwnj; ನಡೆಸಿದೆ. ಈ ಪರೀಕ್ಷೆಯ ಫಲಿತಾಂಶ ಹೊರ ಬಂದಿದೆ.&lt;/p&gt;&lt;img&gt;&lt;p&gt;ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್&zwnj; ಸದೃಢವಾಗಿದ್ದು ಲೋಡ್&zwnj; ಟೆಸ್ಟಿಂಗ್&zwnj;ನಲ್ಲಿ ಪಾಸ್&zwnj; ಆಗಿದೆ. ಇದರಿಂದಾಗಿ ತಿಂಗಳೊಳಗೆ ಎಲ್ಲ ಬಗೆಯ ವಾಹನಗಳು ವಾರದ 7 ದಿನವೂ ಯಾವುದೇ ತಡೆ ಇಲ್ಲದಂತೆ ಮೇಲ್ಸೇತುವೆ ಮೇಲೆ ಸಂಚರಿಸಲು ಕಾಲ ಕೂಡಿಬರಲಿದೆ.&lt;/p&gt;&lt;p&gt;ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯದ ರಾಷ್ಟ್ರೀಯ ಹೆದ್ದಾರಿ- 4 ರಲ್ಲಿ ಬರುವ ಫ್ಲೈಓವರ್&zwnj;(ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಇದಾಗಿದ್ದು ಭಾರೀ ವಾಹನಗಳು ಅಧಿಕ ತೂಕದೊಂದಿಗೆ ಸಂಚರಿಸಿದ್ದರಿಂದ 8ನೇ ಮೈಲಿ ಜಂಕ್ಷನ್&zwnj; ಸಮೀಪ 102 ಮತ್ತು 103 ನೇ ಪಿಲ್ಲರ್&zwnj; ನಡುವೆ ಎರಡು ಕೇಬಲ್&zwnj;ಗಳು 2021 ಡಿಸೆಂಬರ್&zwnj; ಕೊನೆಯ ವಾರದಲ್ಲಿ ಬಾಗಿದ್ದರಿಂದ ಸಮಸ್ಯೆ ಉಂಟಾಗಿತ್ತು.&lt;/p&gt;&lt;img&gt;&lt;p&gt;ಮುಂಬೈನ್ ಪ್ರೆಸಿನೇಟ್&zwnj; ಕಂಪನಿಯು ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು ಮೊದಲಿಗೆ 120 ಪಿಲ್ಲರ್&zwnj; ನಡುವೆ ತಲಾ ಎರಡರಂತೆ ಹೊಸದಾಗಿ 240 ಕೇಬಲ್&zwnj;ಗಳನ್ನು ಅಳವಡಿಸಲಾಗಿತ್ತು. ಬಳಿಕ ಪ್ರತಿ ಪಿಲ್ಲರ್&zwnj;ನ ತಲಾ 10 ಕೇಬಲ್&zwnj;ನಂತೆ 1200 ಕೇಬಲ್&zwnj;ಗಳನ್ನೂ ಬದಲಾಯಿಸಿ ಮೇಲ್ಸೇತುವೆಯನ್ನು ಸದೃಢಗೊಳಿಲಾಗಿತ್ತು. ಇದೀಗ ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ಮೇ 5 ರಿಂದ ಲೋಡ್&zwnj; ಟೆಸ್ಟಿಂಗ್&zwnj; ನಡೆಸಿದ್ದು ಇದರಲ್ಲಿ ಮೇಲ್ಸೇತುವೆ ಪಾಸ್&zwnj; ಆಗಿದೆ.&lt;/p&gt;&lt;img&gt;&lt;p&gt;ತಲಾ 30 ಟನ್&zwnj; ತೂಕದ 6 ಟ್ರಕ್&zwnj;ಗಳನ್ನು ಸಿದ್ಧಪಡಿಸಿಕೊಂಡು ಮೇಲ್ಸೇತುವೆಯ ಮೇಲೆ ಒಂದು ಟ್ರಕ್&zwnj; ನಿಲ್ಲಿಸಿ ಪಿಲ್ಲರ್&zwnj; ಮೇಲ್ಭಾಗದ ಡಯಲ್&zwnj; ಗೇಜ್&zwnj; ಎಷ್ಟು ಕೆಳಕ್ಕೆ ಬರುತ್ತದೆ ಎಂದು ಅಳತೆ ತೆಗೆದುಕೊಳ್ಳಲಾಗಿದೆ. 1 ಗಂಟೆಯ ಬಳಿಕ ಮತ್ತೊಂದು ಟ್ರಕ್&zwnj; ಅನ್ನು ಮೇಲ್ಸೇತುವೆ ಮೇಲೆ ಕಳುಹಿಸಿ ಪುನಃ ಡಯಲ್&zwnj; ಗೇಜ್&zwnj; ಎಷ್ಟು ಕೆಳಕ್ಕೆ ಹೋಗಿದೆ ಎಂದು ಲೆಕ್ಕ ಹಾಕಲಾಗಿದೆ. ಹೀಗೆ ಒಂದೊಂದು ಗಂಟೆಗೆ ಒಂದೊಂದು ಟ್ರಕ್&zwnj; ನಿಲ್ಲಿಸಿ ಅಳತೆ ತೆಗೆದುಕೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಮೇಲ್ಸೇತುವೆ ಮೇಲೆ ಎಲ್ಲಾ 6 ಟ್ರಕ್&zwnj;ಗಳು ನಿಂತ ಬಳಿಕ 24 ಗಂಟೆ ಎಲ್ಲಾ ಟ್ರಕ್&zwnj;ಗಳನ್ನು ಹಾಗೆಯೇ ಬಿಡಲಾಗಿದೆ. ಬಳಿಕ ಒಂದೊಂದು ಗಂಟೆಯ ನಂತರ ಒಂದೊಂದು ಟ್ರಕ್&zwnj;ಗಳನ್ನು ಕೆಳಗಿಳಿಸಲಾಗಿದೆ. ಪ್ರತಿ ಹಂತದಲ್ಲೂ ಪಿಲ್ಲರ್&zwnj; ಮೇಲ್ಭಾಗದ ಡಯಲ್&zwnj; ಗೇಜ್&zwnj; ಎಷ್ಟು ಆಳಕ್ಕೆ ಹೋಗಿದೆ ಎಂಬುದನ್ನು ಲೆಕ್ಕಾಚಾರ ಮಾಡಲಾಗಿದೆ. ಇದರ ಆಧಾರದಲ್ಲಿ ಮೇಲ್ಸೇತುವೆಯ ಧಾರಣಾ ಸಾಮರ್ಥ್ಯವನ್ನು ಅಳೆಯಲಾಗಿದೆ. ಹೀಗಾಗಿ ಫ್ಲೈಓವರ್&zwnj; ಸದೃಢವಾಗಿದೆ ಎಂದು ಮೂಲಗಳು ವಿವರಿಸಿವೆ.&lt;/p&gt;&lt;img&gt;&lt;p&gt;ರಾಜ್ಯದ 20 ಕ್ಕೂ ಅಧಿಕ ಜಿಲ್ಲೆಗಳು, ಗೋವಾ, ಮಹಾರಾಷ್ಟ್ರಕ್ಕೂ ಸಂಪರ್ಕ ಕಲ್ಪಿಸುವ 4.2 ಕಿ.ಮೀ. ಉದ್ದದ ಈ ಮೇಲ್ಸೇತುವೆಯು 2021 ರಲ್ಲಿ ಎರಡು ಕೇಬಲ್&zwnj; ಭಾಗಿದ್ದರಿಂದ ಭಾರೀ ಸುದ್ದಿಯಾಗಿತ್ತು. ಸೇತುವೆ ಸದೃಢತೆಯ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್&zwnj;ಎಚ್&zwnj;ಎಐ)ವು ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್&zwnj;ಸಿ)ಯನ್ನು ಕೋರಿತ್ತು. ಐಐಎಸ್&zwnj;ಸಿಯ ಪರಿಣತರ ತಂಡವು ಪರಿಶೀಲನೆ ನಡೆಸಿ ಭಾರೀ ವಾಹನಗಳ ಸಂಚಾರದಿಂದ ಕೇಬಲ್&zwnj; ಬಾಗಿವೆ ಎಂದು ವರದಿ ನೀಡಿತ್ತು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/bengaluru-urban/after-4-years-all-types-of-vehicular-traffic-will-soon-be-allowed-on-tumakuru-route-peenya-flyover-bengaluru-mrq-b6q6vve"/>
        </item>
        <item>
            <title><![CDATA[ಯಶವಂತಪುರ -ವಿಜಯಪುರ-ಸಿಂಧನೂರು ​ರೈಲಿಗೆ ಜರ್ಮನ್ ತಂತ್ರಜ್ಞಾನ ; ಈಗ ಮತ್ತಷ್ಟು ಆರಾಮದಾಯಕ ಪ್ರಯಾಣ]]></title>
            <link>https://kannada.asianetnews.com/gallery/travel/indian-railways-german-technology-lhp-coaches-for-yeshwantpur-vijayapura-sindhanur-express-more-comfortable-journey-mrq-ai8glma</link>
            <guid isPermaLink="true">https://kannada.asianetnews.com/gallery/travel/indian-railways-german-technology-lhp-coaches-for-yeshwantpur-vijayapura-sindhanur-express-more-comfortable-journey-mrq-ai8glma</guid>
            <pubDate>Sun, 10 May 2026 08:12:31 +0530</pubDate>
            <description><![CDATA[&lt;p&gt;ಯಶ್ವಂತಪುರ ​ವಿಜಯಪುರ ​ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ​ಸಿಂಧನೂರು ​ಯಶ್ವಂತಪುರ (16 545/46) ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಆಧುನಿಕ ಮೂಲ ಸೌಲಭ್ಯ ನೀಡುತ್ತಿರುವ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7vqdjdvnc1cy078ydnn1kj,imgname-idnian-railways--3--1778380420685.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಶ್ವಂತಪುರ ​ವಿಜಯಪುರ ​ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ​ಸಿಂಧನೂರು ​ಯಶ್ವಂತಪುರ (16 545/46) ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಆಧುನಿಕ ಮೂಲ ಸೌಲಭ್ಯ ನೀಡುತ್ತಿರುವ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಯಶ್ವಂತಪುರ ​ವಿಜಯಪುರ, ​ಯಶ್ವಂತಪುರ ಹಾಗೂ ಯಶ್ವಂತಪುರ ಸಿಂಧನೂರು ​ಯಶ್ವಂತಪುರ ರೈಲಿಗೆ ರೈಲ್ವೆ ಇಲಾಖೆ (ನೈಋತ್ಯ ವಲಯ) ಆಧುನಿಕ ತಂತ್ರಜ್ಞಾನದ ಎಲ್&zwnj;ಎಚ್&zwnj;ಪಿ ಕೋಚ್&zwnj;ಗಳನ್ನು ಅಳವಡಿಸಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ.&lt;/p&gt;&lt;img&gt;&lt;p&gt;ಯಶ್ವಂತಪುರ ​ವಿಜಯಪುರ ​ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ​ಸಿಂಧನೂರು ​ಯಶ್ವಂತಪುರ (16 545/46) ಈ ಎರಡು ರೈಲುಗಳ ಸಾಂಪ್ರದಾಯಿಕ ಐಸಿಎಫ್ ಬೋಗಿಗಳನ್ನು ಬದಲಿಸಿ, ಆಧುನಿಕ ತಂತ್ರಜ್ಞಾನದ ಎಲ್&zwnj;ಎಚ್&zwnj;ಪಿ ಕೋಚ್&zwnj;ಗಳನ್ನು ಅಳವಡಿಸಿ ಮೇಲ್ದರ್ಜೆಗೇರಿಸಿ ಮೇ 9ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. ಪ್ರತಿಯೊಂದು ರೈಲಿಗೆ ಎರಡು ಮೂರನೇ ದರ್ಜೆ ಎಸಿ ಏಳು ಸ್ಲೀಪರ್ ಬೋಗಿ ಹಾಗೂ ಒಂಬತ್ತು ಸಾಮಾನ್ಯ ದರ್ಜೆಯ ಬೋಗಿಗಳನ್ನು ಅಳವಡಿಸಲಾಗಿದೆ.&lt;/p&gt;&lt;img&gt;&lt;p&gt;ಜರ್ಮನ್&zwnj; ದೇಶದ ಯಂತ್ರಶಿಲ್ಪಿ ಲಿಂಕ್&zwnj;ಹೋಫ್&zwnj;ಮೆನ್ ಬೋಷ್ಚ್ ಅವರು ಸಂಶೋಧಿಸಿ ಅವಿಷ್ಕಾರಗೊಳಿಸಿದ ಅವರ ಹೆಸರಿನ ಎಲ್&zwnj;ಎಚ್&zwnj;ಪಿ ಕೋಚ್&zwnj;ಗಳು ಹೆಚ್ಚು ಸುರಕ್ಷತೆ, ಆರಾಮದಾಯಕ ಹಾಗೂ ವೇಗದ ಸಾಮರ್ಥ್ಯವನ್ನು ಹೊಂದಿವೆ. ಅಪಘಾತದ ವೇಳೆ ಒಂದು ಬೋಗಿಯು ಮತ್ತೊಂದು ಬೋಗಿಯ ಮೇಲೆ ಏರುವ ಅಥವಾ ಬೀಳುವ ಕಡಿಮೆ ಅಪಾಯವಿರುವುದರಿಂದ ಜೀವಹಾನಿಯ ಪ್ರಮಾಣವೂ ಕಡಿಮೆ ಇರುತ್ತದೆ.&lt;/p&gt;&lt;img&gt;&lt;p&gt;ಈ ಬೋಗಿಗಳು ಹೆಚ್ಚು ಆರಾಮದಾಯಕವಾಗಿದ್ದು, ಕಂಪನ ಮತ್ತು ಜರ್ಕ್ ಕಡಿಮೆಯಾಗಿರುವುದರಿಂದ ಮೃದುವಾದ ಪ್ರಯಾಣದ ಅನುಭವವಾಗುತ್ತದೆ. ಸಂಚಾರದ ವೇಳೆಯಲ್ಲಿ ಕಡಿಮೆ ಶಬ್ದ, ಬೋಗಿಯ ಒಳಗಡೆ ಉತ್ತಮ ಬೆಳಕು, ಒಳಾಂಗಣ ವಿನ್ಯಾಸ ಹೆಚ್ಚು ಸುಧಾರಿತವಾಗಿದೆ. ಈ ಕೋಚುಗಳು ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚಿನ ವೇಗ ಸಾಮರ್ಥ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ರೈಲಿನ ವೇಗ ನಿಯಂತ್ರಣ ವ್ಯವಸ್ಥೆ ಅತ್ಯುತ್ತಮವಾಗಿದೆ. ಬೋಗಿಗಳ ತೂಕ ಕಡಿಮೆ ಇರುವುದರಿಂದ ಎಂಜಿನ್ ಮೇಲಿನ ಒತ್ತಡ ಕಡಿಮೆಯಾಗಿ ಇಲಾಖೆಯ ನಿರ್ವಹಣೆ ವೆಚ್ಚ ಕಡಿಮೆ ಇರುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;1900 ಕಿಮೀ ಪ್ರಯಾಣ, ಜಸ್ಟ್ 6 ನಿಲುಗಡೆ; ಬೆಂಗಳೂರಿನಿಂದ ಎಲ್ಲಿಗೆ ಹೋಗುತ್ತೆ ಈ ಸೂಪರ್&zwnj;ಫಾಸ್ಟ್ ರೈಲು!&lt;/strong&gt;&lt;/p&gt;&lt;img&gt;&lt;p&gt;ಪ್ರಯಾಣಿಕರಿಗೆ ಆಧುನಿಕ ಮಾದರಿಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿರುವ ರೈಲ್ವೆ ಇಲಾಖೆ ಕ್ರಮವನ್ನು ವಿಜಯನಗರ ರೈಲ್ವೆ ಬಳಕೆದಾರರ ಸಂಘ ಹಾಗೂ ಸಲಹಾ ಸಮಿತಿಯ ಹಿರಿಯ ಸದಸ್ಯ ಬಾಬುಬಾಲ್ ಜೈನ್&zwnj;, ವಿಜಯನಗರ ರೈಲ್ವೆ ಬಳಿಕೆದಾರರ ಸಂಘದ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ್&zwnj; ಕುಡುತಿನಿ ಸ್ವಾಗತಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ಬಸ್; ಒಂದು ದಿನದ ಟ್ರಿಪ್&zwnj;ಗೆ ಬೆಸ್ಟ್ ಆಯ್ಕೆ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/travel/indian-railways-german-technology-lhp-coaches-for-yeshwantpur-vijayapura-sindhanur-express-more-comfortable-journey-mrq-ai8glma"/>
        </item>
        <item>
            <title><![CDATA[ಸಚಿವ ಡಿ. ಸುಧಾಕರ್ ನಿಧನ; ಡಿಸಿಎಂ ಡಿಕೆ ಶಿವಕುಮಾರ ರಾಯಚೂರು ಪ್ರವಾಸ ದಿಢೀರ್ ರದ್ದು?]]></title>
            <link>https://kannada.asianetnews.com/state/minister-d-sudhakar-passes-away-dcm-dk-shivakumar-s-raichur-visit-abruptly-cancelled/articleshow-wzazyzn</link>
            <guid isPermaLink="true">https://kannada.asianetnews.com/state/minister-d-sudhakar-passes-away-dcm-dk-shivakumar-s-raichur-visit-abruptly-cancelled/articleshow-wzazyzn</guid>
            <pubDate>Sun, 10 May 2026 08:07:00 +0530</pubDate>
            <description><![CDATA[ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಯಚೂರು ಜಿಲ್ಲಾ ಪ್ರವಾಸವು, ಅವರ ಸಂಪುಟ ಸಹೋದ್ಯೋಗಿ ಹಾಗೂ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರದ್ದಾಗಿದೆ. ತಮ್ಮ ಆಪ್ತ ಗೆಳೆಯನ ಅಗಲಿಕೆಗೆ ಡಿಕೆಶಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7vr56y011dfjq2tdzyr8ka,imgname-----------------------2026-05-10t080350.098-1778380444894.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಮೇ.10):&lt;/strong&gt; ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣಕ್ಕೆ ಇಂದು ಆಗಮಿಸಬೇಕಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿ ಬಹುತೇಕ ರದ್ದಾಗಿದೆ. ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಈ ಪ್ರವಾಸವನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;ಕೈ ಕೊಟ್ಟ ಆರೋಗ್ಯ, ಸಚಿವ ಸುಧಾಕರ್ ಇನ್ನಿಲ್ಲ:&lt;/h2&gt;&lt;p&gt;ಹಿರಿಯೂರು ಶಾಸಕರು ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಸುಧಾಕರ್ ಅವರ ಸಾವು ಕಾಂಗ್ರೆಸ್ ಪಾಳಯದಲ್ಲಿ ಆಘಾತ ಮೂಡಿಸಿದೆ.&lt;/p&gt;&lt;h3&gt;ಆಪ್ತ ಗೆಳೆಯನ ಅಗಲಿಕೆಗೆ ಡಿಕೆಶಿ ಕಂಬನಿ&lt;/h3&gt;&lt;p&gt;ತಮ್ಮ ಸಂಪುಟ ಸಹೋದ್ಯೋಗಿಯ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. 'ನಮ್ಮ ಸಂಪುಟ ಸಹೋದ್ಯೋಗಿ ಹಾಗೂ ನನ್ನ ಆಪ್ತರೂ ಆಗಿದ್ದ ಡಿ. ಸುಧಾಕರ್ ಅವರ ಸಾವು ನನಗೆ ಅತೀವ ದುಃಖವನ್ನುಂಟು ಮಾಡಿದೆ. ಉತ್ತಮ ಜನಪರ ಸೇವಕನನ್ನು ನಾವು ಕಳೆದುಕೊಂಡಿದ್ದೇವೆ' ಎಂದು ಭಾವುಕರಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ಆಪ್ತರೂ ಆಗಿದ್ದ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದಿದ್ದು ಅತೀವ ದುಃಖವನ್ನುಂಟು ಮಾಡಿದೆ.&amp;nbsp;ಹಿರಿಯೂರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಉತ್ತಮ ರೀತಿಯಲ್ಲಿ ಜನಪರ ಸೇವೆ&hellip; pic.twitter.com/XqMbuzm08f&lt;/p&gt;&lt;p&gt;&mdash; DK Shivakumar (@DKShivakumar) May 10, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;'ಶೋಕ ಸಾಗರದಲ್ಲಿ ಆಪ್ತರು&lt;/h3&gt;&lt;p&gt;'ಭಗವಂತ ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ' ಎಂದು ಡಿಕೆ ಶಿವಕುಮಾರ್ ಪ್ರಾರ್ಥಿಸಿದ್ದಾರೆ. ಸಚಿವರ ನಿಧನದ ಹಿನ್ನೆಲೆಯಲ್ಲಿ ಇಂದಿನ ರಾಯಚೂರು ಪ್ರವಾಸ ಬಹುತೇಕ ರದ್ದಾಗಿದೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/minister-d-sudhakar-passes-away-dcm-dk-shivakumar-s-raichur-visit-abruptly-cancelled/articleshow-wzazyzn"/>
        </item>
        <item>
            <title><![CDATA[Belagavi: ಪತಿ ಮನೆಯಲ್ಲೇ ಕಳ್ಳತನ ಮಾಡಿ ಪ್ರಿಯಕರನೊಂದಿಗೆ ತಗ್ಲಾಕೊಂಡ ನವವಿವಾಹಿತೆ]]></title>
            <link>https://kannada.asianetnews.com/gallery/karnataka-districts/belagavi-theft-at-husbands-house-wife-lover-arrested-hosakoti-ramadurga-mrq-f48bkg0</link>
            <guid isPermaLink="true">https://kannada.asianetnews.com/gallery/karnataka-districts/belagavi-theft-at-husbands-house-wife-lover-arrested-hosakoti-ramadurga-mrq-f48bkg0</guid>
            <pubDate>Sun, 10 May 2026 07:43:17 +0530</pubDate>
            <description><![CDATA[ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ, ಪತಿಯ ಮನೆಯಲ್ಲಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ 48 ಗಂಟೆಗಳಲ್ಲಿ ಆರೋಪಿಗಳನ್ನು ಸೆರೆಹಿಡಿದು, ಕಳವಾದ ಸಂಪೂರ್ಣ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7t87qwy2vwb3hyvk0mzmd9,imgname-arrested--1--1778378874620.jpg" type="image/jpeg" height="390" width="690"/>
            <content:encoded><![CDATA[ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ, ಪತಿಯ ಮನೆಯಲ್ಲಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ 48 ಗಂಟೆಗಳಲ್ಲಿ ಆರೋಪಿಗಳನ್ನು ಸೆರೆಹಿಡಿದು, ಕಳವಾದ ಸಂಪೂರ್ಣ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;img&gt;&lt;p&gt;ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಪತಿಯ ಮನೆಯಲ್ಲಿ ಕಳವು ಮಾಡಿದ ಆರೋಪದ ಮೇಲೆ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಹಣಮಂತ ಮಾರಾಪೂರ ಮತ್ತು ಹಸೀನಾ ನದಾಫ್ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.&lt;/p&gt;&lt;img&gt;&lt;p&gt;ಮೂಲತಃ ಮೂಡಲಗಿ ತಾಲೂಕಿನ ನಿವಾಸಿಯಾಗಿರುವ ಹಸೀನಾ ನದಾಫ್ ಅವರು ಕಳೆದೆರಡು ತಿಂಗಳ ಹಿಂದೆ ಹೊಸಕೋಟಿ ಗ್ರಾಮದ ಶರೀಫ್ ಅವರನ್ನು ವಿವಾಹವಾಗಿದ್ದರು. ವಿವಾಹದ ನಂತರವೂ ಹಣಮಂತ ಮಾರಾಪೂರ ಅವರೊಂದಿಗೆ ಸಂಪರ್ಕದಲ್ಲಿದ್ದ ಹಸೀನಾ, ಆತನೊಂದಿಗೆ ಸೇರಿ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಹೊಸಕೋಟಿ ಗ್ರಾಮದ ಶರೀಫ್ ಎಂಬುವರ ಮನೆಯಲ್ಲಿ 154.6 ಗ್ರಾಂ ತೂಕದ, ₹21 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 45 ಗ್ರಾಂ ತೂಕದ, ₹11 ಸಾವಿರ ಮೌಲ್ಯದ ಬೆಳ್ಳಿ ಆಭರಣ ಕಳುವಾಗಿತ್ತು. ಈ ಸಂಬಂಧ ದಿಲಶಾನ್ ನದಾಫ್ ಅವರು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.&lt;/p&gt;&lt;img&gt;&lt;p&gt;ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಹಾಗೂ ಪಿಎಸೈ ಬಸವರಾಜ್ ಕೊಣ್ಣೂರೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಕೃತ್ಯ ನಡೆದ 48 ಗಂಟೆಗಳೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಕಳವಾದ ಎಲ್ಲ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ರಾಮದುರ್ಗ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/belagavi-theft-at-husbands-house-wife-lover-arrested-hosakoti-ramadurga-mrq-f48bkg0"/>
        </item>
        <item>
            <title><![CDATA[Minister D Sudhakar No More: ಹಿರಿಯೂರಿನ ಧ್ವನಿ ಮೌನ: ಸಚಿವ ಡಿ. ಸುಧಾಕರ್ ಇನ್ನಿಲ್ಲ]]></title>
            <link>https://kannada.asianetnews.com/gallery/state/statistics-and-data-minister-d-sudhakar-passed-away-in-a-hospital-in-bengaluru-due-to-illness-mrq-ymilzad</link>
            <guid isPermaLink="true">https://kannada.asianetnews.com/gallery/state/statistics-and-data-minister-d-sudhakar-passed-away-in-a-hospital-in-bengaluru-due-to-illness-mrq-ymilzad</guid>
            <pubDate>Sun, 10 May 2026 06:56:56 +0530</pubDate>
            <description><![CDATA[ಸಾಂಖ್ಯಿಕ ಮತ್ತು ಅಂಕಿ ಸಂಖ್ಯೆ ಸಚಿವರಾಗಿದ್ದ ಡಿ. ಸುಧಾಕರ್ ಅವರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಿರಿಯೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ತಮ್ಮ ಚಿಕ್ಕಪ್ಪನ ರಾಜಕೀಯ ಮಾರ್ಗದರ್ಶನದಲ್ಲಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr7qmm78pvxgshcg30xkyw9w,imgname-d-sudhakar--2--1778376134888.jpg" type="image/jpeg" height="390" width="690"/>
            <content:encoded><![CDATA[ಸಾಂಖ್ಯಿಕ ಮತ್ತು ಅಂಕಿ ಸಂಖ್ಯೆ ಸಚಿವರಾಗಿದ್ದ ಡಿ. ಸುಧಾಕರ್ ಅವರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಿರಿಯೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ತಮ್ಮ ಚಿಕ್ಕಪ್ಪನ ರಾಜಕೀಯ ಮಾರ್ಗದರ್ಶನದಲ್ಲಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು.&lt;img&gt;&lt;p&gt;ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಂಖ್ಯಿಕ ಮತ್ತು ಅಂಕಿ ಸಂಖ್ಯೆ ಸಚಿವ ಡಿ ಸುಧಾಕರ್ ಇಂದು ಬೆಳಗಿನ ಜಾವ 3.15ಕ್ಕೆ ನಿಧನರಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಡಿ.ಸುಧಾಕರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸುಧಾಕರ್ ಅವರ ಮೃತದೇಹವನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ಡಿ ಸುಧಾಕರ್ ಹಿರಿಯೂರು ಕ್ಷೇತ್ರದಿಂದ 3 ಬಾರಿ ಶಾಸಕರಾಗಿದ್ದರು. ಚಿತ್ರದುರ್ಗ ಚಳ್ಳಕೆರೆಯಲ್ಲಿ 1961ರಲ್ಲಿ ಮಾ. 28ರಂದು ಜನಿಸಿದ್ದ ಡಿ.ಸುಧಾಕರ್, ಚಿತ್ರದುರ್ಗ ಜಿಲ್ಲೆಯಲ್ಲೇ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದರು. ನಂತರ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದುಕೊಂಡಿದ್ದರು.&lt;/p&gt;&lt;img&gt;&lt;p&gt;2004ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಗೆದ್ದಿದ್ದರು. ನಂತರ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಆಯ್ಕೆಯಾಗಿದ್ದಾರೆ. ಪದವಿ ಶಿಕ್ಷಣ ಬಳಿಕ ಬ್ಯುಸಿನೆಸ್​ನಲ್ಲಿ ತೊಡಗಿಕೊಂಡಿದ್ದರು. ಪತ್ನಿ ಹರ್ಷಿಣಿ, ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಡಿ.ಸುಧಾಕರ್ ಅಗಲಿದ್ದಾರೆ.&lt;/p&gt;&lt;img&gt;&lt;p&gt;ಡಿ.ಸುಧಾಕರ್ ಅವರ ಚಿಕ್ಕಪ್ಪ ಎನ್. ಜಯಣ್ಣ ಚಳ್ಳಕೆರೆ ಕ್ಷೇತ್ರದಿಂದ ಶಾಕರಾಗಿದ್ದರು. ಚಿಕ್ಕಪ್ಪನ ರಾಜಕೀಯ ಉಸ್ತುವಾರಿ ಡಿ.ಸುಧಾಕರ್ ವಹಿಸಿಕೊಂಡಿದ್ದರು. ಚಿಕ್ಕಪ್ಪನ ಜೊತೆ ಬೆರೆತು ರಾಜಕೀಯಕ್ಕೆ ಸುಧಾಕರ್ ಪಾದರ್ಪಣೆ ಮಾಡಿದ್ದರು.&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/state/statistics-and-data-minister-d-sudhakar-passed-away-in-a-hospital-in-bengaluru-due-to-illness-mrq-ymilzad"/>
        </item>
        <item>
            <title><![CDATA[Makhanlal Sarkar: 98 ವರ್ಷದ ಮುಖರ್ಜಿ ಆಪ್ತನ ಪಾದ ಮುಟ್ಟಿ ಮೋದಿ ಗೌರವ!]]></title>
            <link>https://kannada.asianetnews.com/gallery/india-news/who-is-makhanlal-sarkar-pm-modi-honours-98-years-old-bjp-veteran-west-bengal-q302lgy</link>
            <guid isPermaLink="true">https://kannada.asianetnews.com/gallery/india-news/who-is-makhanlal-sarkar-pm-modi-honours-98-years-old-bjp-veteran-west-bengal-q302lgy</guid>
            <pubDate>Sun, 10 May 2026 06:54:53 +0530</pubDate>
            <description><![CDATA[&lt;p&gt;ಪಶ್ಚಿಮ ಬಂಗಾಳದಲ್ಲಿ ಪಕ್ಷದ ಮೊದಲ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 98 ವರ್ಷದ ಬಿಜೆಪಿಯ ಹಿರಿಯ ನಾಯಕ ಮಖನ್&zwnj;ಲಾಲ್&zwnj; ಸರ್ಕಾರ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7q1njtdtbxj4mhawz2nthw,imgname-1-1778375513690.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಬಂಗಾಳದಲ್ಲಿ ಪಕ್ಷದ ಮೊದಲ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 98 ವರ್ಷದ ಬಿಜೆಪಿಯ ಹಿರಿಯ ನಾಯಕ ಮಖನ್&zwnj;ಲಾಲ್&zwnj; ಸರ್ಕಾರ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು.&lt;/p&gt;&lt;img&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಪಕ್ಷದ ಮೊದಲ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 98 ವರ್ಷದ ಬಿಜೆಪಿಯ ಹಿರಿಯ ನಾಯಕ ಮಖನ್&zwnj;ಲಾಲ್&zwnj; ಸರ್ಕಾರ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು.&lt;/p&gt;&lt;img&gt;&lt;p&gt;1952ರಲ್ಲಿ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸುವ ಚಳವಳಿಯ ವೇಳೆ ಸರ್ಕಾರ್ ಅವರನ್ನು ಕಾಶ್ಮೀರದಲ್ಲಿ ಬಂಧಿಸಲಾಗಿತ್ತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಷ್ಟ್ರೀಯವಾದಿ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಗಳಲ್ಲಿ ಸರ್ಕಾರ್ ಕೂಡ ಒಬ್ಬರಾಗಿದ್ದರು.&lt;/p&gt;&lt;img&gt;&lt;p&gt;ವೇದಿಕೆಯಲ್ಲಿ ಸರ್ಕಾರ್ ಅವರನ್ನು ಸನ್ಮಾನಿಸಿದ ಪ್ರಧಾನಿ, ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು ಮತ್ತು ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೊದಲು ಹಿರಿಯ ನಾಯಕನನ್ನು ಅಪ್ಪಿಕೊಂಡರು.&lt;/p&gt;&lt;img&gt;&lt;p&gt;1980 ರಲ್ಲಿ ಬಿಜೆಪಿ ರಚನೆಯಾದ ನಂತರ, ಸರ್ಕಾರ್ ಅವರು ಎಡರಂಗ ಆಳ್ವಿಕೆ ನಡೆಸುತ್ತಿದ್ದ ಪ.ಬಂಗಾಳದ ಆಗಿನ ಪಶ್ಚಿಮ ದಿನಾಜ್&zwnj;ಪುರ, ಜಲ್&zwnj;ಪೈಗುರಿ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳಿಗೆ ಸಂಘಟನಾ ಸಂಯೋಜಕರಾಗಿದ್ದರು.&lt;/p&gt;&lt;img&gt;&lt;p&gt;1981ರಿಂದ ಅವರು ನಿರಂತರವಾಗಿ 7 ವರ್ಷಗಳ ಕಾಲ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/india-news/who-is-makhanlal-sarkar-pm-modi-honours-98-years-old-bjp-veteran-west-bengal-q302lgy"/>
        </item>
        <item>
            <title><![CDATA[ಉಡುಪಿ ಗ್ರಾಪಂ ದೇಶಕ್ಕೇ ನಂಬರ್ ಒನ್, ಬಡತನರಹಿತ ವಿಭಾಗದಲ್ಲಿ ಮುದ್ರಾಡಿ ಗ್ರಾಪಂಗೆ ₹1 ಕೋಟಿಯ ಪ್ರಥಮ ಪ್ರಶಸ್ತಿ]]></title>
            <link>https://kannada.asianetnews.com/india-news/udupi-gram-panchayat-ranks-no-1-in-india-mudradi-gp-wins-first-prize-of-rs-1-crore-in-poverty-free-category-rav/articleshow-qi56zwr</link>
            <guid isPermaLink="true">https://kannada.asianetnews.com/india-news/udupi-gram-panchayat-ranks-no-1-in-india-mudradi-gp-wins-first-prize-of-rs-1-crore-in-poverty-free-category-rav/articleshow-qi56zwr</guid>
            <pubDate>Sun, 10 May 2026 06:07:42 +0530</pubDate>
            <description><![CDATA[&lt;p&gt;ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 2025ನೇ ಸಾಲಿನ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಘೋಷಿಸಿದ್ದು, 'ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ' ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮುದ್ರಾಡಿ ಗ್ರಾಮ ಪಂಚಾಯತ್ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7mn5feyjgrvnqzqt8c5gcx,imgname-----------------------2026-05-10t055919.140-1778373006830.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.10): &lt;/strong&gt;ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 2025ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಘೋಷಿಸಿದ್ದು, &lsquo;ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ&rsquo; ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮುದ್ರಾಡಿ ಗ್ರಾಮ ಪಂಚಾಯತ್&zwnj;, ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.&lt;/p&gt;&lt;p&gt;ರಾಜ್ಯದ ಒಟ್ಟಾರೆ 6 ಗ್ರಾ.ಪಂ.ಗಳು ವಿವಿಧ ವಿಭಾಗಗಳಲ್ಲಿ ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿವೆ. ರಾಜ್ಯಕ್ಕೆ ಲಭಿಸಿದ 6 ಪ್ರಶಸ್ತಿಗಳ ಪೈಕಿ 5 ಪ್ರಶಸ್ತಿಗಳು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ಲಭಿಸಿವೆ. ಜೂನ್&zwnj; 3ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಯ್ಕೆಯಾದ ಗ್ರಾ.ಪಂ.ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.&lt;/p&gt;&lt;p&gt;ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ, &lsquo;ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ&rsquo; ವಿಭಾಗದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಈ ಅಪೂರ್ವ ಸಾಧನೆಗಾಗಿ ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಲಾಗಿದೆ. ಆ ಮೂಲಕ ಮುದ್ರಾಡಿ, ಇಂದು ಭಾರತದ ಮಾದರಿ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ಈ ಮಧ್ಯೆ, ಆರೋಗ್ಯ ಮತ್ತು ಕಲ್ಯಾಣ ವಿಭಾಗದಲ್ಲಿ ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಮ ಪಂಚಾಯಿತಿ ಹಾಗೂ ಮಕ್ಕಳ ಸ್ನೇಹಿ ಪಂಚಾಯಿತಿ ವಿಭಾಗದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಹಲನಾಯಕನಹಳ್ಳಿ ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಸಮಗ್ರ ನೀರು ನಿರ್ವಹಣೆ ವಿಭಾಗದಲ್ಲಿ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದು, ಇವುಗಳಿಗೆ ತಲಾ ₹75 ಲಕ್ಷ ಬಹುಮಾನ ಘೋಷಿಸಲಾಗಿದೆ.&lt;/p&gt;&lt;p&gt;ಅಲ್ಲದೆ, ಸ್ವಾವಲಂಬಿ ಮೂಲಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಸಾಣೂರು ಹಾಗೂ ಸಾಮಾಜಿಕ ನ್ಯಾಯ ವಿಭಾಗದಲ್ಲಿ ಉಡುಪಿ ಜಿಲ್ಲೆ ಕುಂದಾಪುರದ ಹಕ್ಲಾಡಿ ಗ್ರಾಮ ಪಂಚಾಯಿತಿಗಳು ದೇಶದಲ್ಲಿ ಮೂರನೇ ಸ್ಥಾನ ಪಡೆದು, ತಲಾ 50 ಲಕ್ಷ ರುಪಾಯಿ ಬಹುಮಾನ ಗಳಿಸಿವೆ. ಮುದ್ರಾಡಿ ಗ್ರಾಪಂ ಸಾಧನೆಯೇನು?:&lt;/p&gt;&lt;p&gt;ಮುದ್ರಾಡಿ ಪಂಚಾಯಿತಿ ಒಟ್ಟು 1,671 ಮನೆಗಳನ್ನು ಹೊಂದಿದ್ದು, ಸುಮಾರು 6,102 ಜನರಿಗೆ ಸಮರ್ಪಕ ಸೇವೆ ಒದಗಿಸುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿರುವ 1,046 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಏಳಿಗೆಗಾಗಿ ವಿಶೇಷ ಆದ್ಯತೆ ನೀಡಲಾಗಿದೆ.ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಪಂಚಾಯಿತಿ, ಕಾಡು ಉತ್ಪನ್ನ ಆಧಾರಿತ ಜೀವನೋಪಾಯ, ನೀರಿನ ಸಂರಕ್ಷಣೆ, ಮಣ್ಣಿನ ಸುಧಾರಣೆ ಮತ್ತು ಹಸಿರು ಆರ್ಥಿಕತೆಯತ್ತ ಗ್ರಾಮಸ್ಥರನ್ನು ಪ್ರೇರೇಪಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದು, ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗ ಭದ್ರತೆ ಒದಗಿಸುವುದರ ಜೊತೆಗೆ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗೂ ಯೋಜನೆಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಶೇ.100ರಷ್ಟು ವ್ಯಾಪ್ತಿ ಸಾಧಿಸಿರುವುದು ಇಲ್ಲಿನ ಮತ್ತೊಂದು ಮೈಲಿಗಲ್ಲು. ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ನೆರವು ಸೇರಿದಂತೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸಿದೆ.-----&lt;/p&gt;&lt;p&gt;ಪಂಚಾಯತಿಗಳ ಅಭಿವೃದ್ಧಿಯ ದೃಷ್ಟಿಕೋನ, ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಎಲ್ಲರ ಸಹಕಾರದಿಂದ ಈ ಅಭಿವೃದ್ಧಿ ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.&lt;/p&gt;&lt;h2&gt;-ವಿ&zwnj;.ಸುನೀಲ್ ಕುಮಾರ್, ಶಾಸಕರು ಕಾರ್ಕಳ.&lt;/h2&gt;&lt;p&gt;ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಶಾಶ್ವತ ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತೆಯನ್ನು ಸಮಗ್ರವಾಗಿ ಜಾರಿಗೊಳಿಸಿದ ಮುದ್ರಾಡಿ ಪಂಚಾಯಿತಿ, ಗ್ರಾಮೀಣಾಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿದೆ.&lt;/p&gt;&lt;p&gt;&lt;strong&gt;-ಸುಭಾಸ್, ಪಿಡಿಒ, ಮುದ್ರಾಡಿ.&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/udupi-gram-panchayat-ranks-no-1-in-india-mudradi-gp-wins-first-prize-of-rs-1-crore-in-poverty-free-category-rav/articleshow-qi56zwr"/>
        </item>
        <item>
            <title><![CDATA[NCRB Report : ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶಕ್ಕೇ ನಂ.3!  ಮಹಾರಾಷ್ಟ್ರ ಪ್ರಥಮ, ತಮಿಳುನಾಡಿಗೆ 2ನೇ ಸ್ಥಾನ: NCRB ವರದಿ]]></title>
            <link>https://kannada.asianetnews.com/india-news/karnataka-ranks-no-3-in-corruption-across-india-maharashtra-tops-list-tamil-nadu-takes-second-reveals-ncrb-report-rav/articleshow-hd9ou54</link>
            <guid isPermaLink="true">https://kannada.asianetnews.com/india-news/karnataka-ranks-no-3-in-corruption-across-india-maharashtra-tops-list-tamil-nadu-takes-second-reveals-ncrb-report-rav/articleshow-hd9ou54</guid>
            <pubDate>Sun, 10 May 2026 05:45:07 +0530</pubDate>
            <description><![CDATA[2024ರ ಎನ್&zwnj;ಸಿಆರ್&zwnj;ಬಿ ವರದಿಯ ಪ್ರಕಾರ, ಕರ್ನಾಟಕವು 334 ಭ್ರಷ್ಟಾಚಾರ ಪ್ರಕರಣಗಳೊಂದಿಗೆ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ಮೊದಲ ಎರಡು ಸ್ಥಾನಗಳಲ್ಲಿವೆ. ಆದಾಗ್ಯೂ, ಅಕ್ರಮ ಆಸ್ತಿ ಪ್ರಕರಣಗಳಲ್ಲಿ 75 ಕೇಸ್&zwnj;ಗಳೊಂದಿಗೆ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನವನ್ನು ಪಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7k7bgcnwjham3exs9h8pwz,imgname-----------------------2026-05-10t053430.217-1778371505676.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;2024ರಲ್ಲಿ ಎಷ್ಟು ಕೇಸ್&zwnj;?&lt;/li&gt; &lt;li&gt;ಮಹಾರಾಷ್ಟ್ರ 721&lt;/li&gt; &lt;li&gt;ತಮಿಳುನಾಡು 374&lt;/li&gt; &lt;li&gt;ಕರ್ನಾಟಕ 334&lt;/li&gt;&lt;/ul&gt;&lt;p&gt;--ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್&zwnj;ಸಿಆರ್&zwnj;ಬಿ) ಅಂಕಿ-ಅಂಶಗಳ ಪ್ರಕಾರ, 2024ರಲ್ಲಿ ಕರ್ನಾಟಕದಲ್ಲಿ 334 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯವು ಭ್ರಷ್ಟಾಚಾರದಲ್ಲಿ ದೇಶದಲ್ಲೇ ಮೂರನೇ ಸ್ಥಾನ ಪಡೆದಿದೆ.&lt;/p&gt;&lt;p&gt;ಪಟ್ಟಿಯಲ್ಲಿ ಮಹಾರಾಷ್ಟ್ರವು 721 ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ತಮಿಳುನಾಡು 374 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಕರ್ನಾಟಕವು ಮೂರನೇ ಸ್ಥಾನದಲ್ಲಿದೆ ಎಂದು ಮೇ 7ರ ಗುರುವಾರ ಬಿಡುಗಡೆಯಾದ ವರದಿ ಹೇಳಿದೆ.&lt;/p&gt;&lt;p&gt;ಆದಾಗ್ಯೂ, ಅಕ್ರಮ ಆಸ್ತಿ (ಡಿಎ) ಪ್ರಕರಣಗಳಲ್ಲಿ ಕರ್ನಾಟಕವು ಎಲ್ಲರಿಗಿಂತ ಮುಂದಿದೆ. 75 ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಇದರ ನಂತರ ಒಡಿಶಾ 62 ಪ್ರಕರಣ ಮತ್ತು ಅಸ್ಸಾಂ 44 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ.&lt;/p&gt;&lt;h2&gt;ಕೊಂಚ ಕಡಿಮೆ:&lt;/h2&gt;&lt;p&gt;ಆದಾಗ್ಯೂ,ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದ ಭ್ರಷ್ಟಾಚಾರ ಪ್ರಕರಣಗಳನ್ನು ಪರಿಗಣಿಸಿದಾಗ, ಈಗ ಸ್ವಲ್ಪ ಇಳಿಕೆ ಕಂಡುಬಂದಿದೆ, ಏಕೆಂದರೆ ರಾಜ್ಯವು 2023ರಲ್ಲಿ 362 ಪ್ರಕರಣಗಳು ಮತ್ತು 2022ರಲ್ಲಿ 389 ಪ್ರಕರಣಗಳನ್ನು ದಾಖಲಿಸಿತ್ತು ಎಂದು ವರದಿ ಹೇಳಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/karnataka-ranks-no-3-in-corruption-across-india-maharashtra-tops-list-tamil-nadu-takes-second-reveals-ncrb-report-rav/articleshow-hd9ou54"/>
        </item>
        <item>
            <title><![CDATA[Actor Vijay Tamil Nadu CM: ಬಹುಮತ ವಿಜಯ- 120 ನಂಬರ್ ಪಡೆದ ನಟ । ಇಂದು ಬೆಳಗ್ಗೆ 10ಕ್ಕೆ ಸಿಎಂ ಆಗಿ ಶಪಥ!]]></title>
            <link>https://kannada.asianetnews.com/india-news/actor-vijay-secures-support-of-120-mlas-to-form-govt-set-to-take-oath-as-chief-minister-of-tamil-nadu-today-at-10-am-rav/articleshow-5twl4up</link>
            <guid isPermaLink="true">https://kannada.asianetnews.com/india-news/actor-vijay-secures-support-of-120-mlas-to-form-govt-set-to-take-oath-as-chief-minister-of-tamil-nadu-today-at-10-am-rav/articleshow-5twl4up</guid>
            <pubDate>Sun, 10 May 2026 05:28:06 +0530</pubDate>
            <description><![CDATA[&lt;p&gt;ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್, 120 ಶಾಸಕರ ಬೆಂಬಲದೊಂದಿಗೆ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಲಿದ್ದಾರೆ. ರಾಜ್ಯಪಾಲರಿಂದ ಸರ್ಕಾರ ರಚನೆಗೆ ಆಹ್ವಾನ, ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಿಂದ ಕೂದಲೆಳೆ ಅಂತರದಲ್ಲಿ ಪಾರು!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7j8tj7qc1h1chhfmjwkm45,imgname-----------------------2026-05-10t051750.683-1778370505287.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಿಟಿಐ ಚೆನ್ನೈ (ಮೇ.10) &lt;/strong&gt;ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್&zwnj;ಗೆ ತಮಿಳುನಾಡಿನ 13ನೇ ಮುಖ್ಯಮಂತ್ರಿ ಆಗುವ ಯೋಗ ಕೊನೆಗೂ ಒಲಿದುಬಂದಿದೆ. ಬಹುಮತದ ಸಂಖ್ಯೆಯಾದ 118 ಅನ್ನು ಮೀರಿ ಅವರು 120 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಶನಿವಾರ ಸಂಜೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಲಾಗಿದ್ದು, ಭಾನುವಾರ ಬೆಳಗ್ಗೆ 10 ಗಂಟೆಗೆ ಜವಾಹರಲಾಲ್&zwnj; ನೆಹರು ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.&lt;/p&gt;&lt;p&gt;ಇದೇ ವೇಳೆ, ರಾಜ್ಯಪಾಲರು ವಿಜಯ್&zwnj; ಅವರಿಗೆ ಮೇ 13ರೊಳಗೆ ಬಹುಮತ ಸಾಬೀತುಪಡಿಸಲು ಸೂಚಿಸಿದ್ದಾರೆ.&lt;/p&gt;&lt;p&gt;ತಮಿಳುನಾಡಿನಲ್ಲಿ ಈ ಹಿಂದಿನ ಸರ್ಕಾರದ ಅವಧಿ ಭಾನುವಾರ ಅಂತ್ಯವಾಗುತ್ತದೆ. ಅದುವರೆಗೂ ಹೊಸ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗುತ್ತಿತ್ತು. ಹೀಗಾಗಿ ಕೂದಲೆಳೆ ಅಂತರದಿಂದ ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಿಂದ ಪಾರಾಗಿದೆ.&lt;/p&gt;&lt;p&gt;ವಿಜಯ್ ಪ್ರಮಾಣ ವಚನದಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.&lt;/p&gt;&lt;h2&gt;ಬೆಂಬಲ ನೀಡಿದ ವಿಸಿಕೆ, ಮುಸ್ಲಿಂ ಲೀಗ್:&lt;/h2&gt;&lt;p&gt;ವಿಜಯ್&zwnj; ಕಳೆದ 3 ದಿನದಲ್ಲಿ 3 ಸಲ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರಿದ್ದರು. ಆದರೆ ಸರ್ಕಾರ ರಚಿಸಲು 118 ಸ್ಥಾನಗಳ ಸರಳ ಬಹುಮತ ತಲುಪಲಾಗದೆ ತೊಳಲಾಡುತ್ತಿದ್ದರು. ಶನಿವಾರ ಸಂಜೆ ವಿಜಯ್&zwnj;ಗೆ ತಲಾ 2 ಶಾಸಕರನ್ನು ಹೊಂದಿರುವ ವಿಸಿಕೆ ಮತ್ತು ಇಂಡಿಯನ್&zwnj; ಯೂನಿಯನ್&zwnj; ಮುಸ್ಲಿಂ ಲೀಗ್&zwnj; (ಐಯುಎಂಎಲ್&zwnj;) ಪಕ್ಷಗಳು ಕೊನೆಗೂ ಅಧಿಕೃತವಾಗಿ ಬೆಂಬಲ ಪ್ರಕಟಿಸಿದವು. ಈ ಮೂಲಕ ಟಿವಿಕೆ ಸರ್ಕಾರ ರಚನೆಗೆ ಎದುರಾಗಿದ್ದ ಅನಿಶ್ಚಿತತೆಗೆ ಅಂತ್ಯ ಹಾಡಿದವು.&lt;/p&gt;&lt;h3&gt;ಈ 2 ಸಣ್ಣ ಪಕ್ಷಗಳ ಬೆಂಬಲದೊಂದಿಗೆ, ಟಿವಿಕೆ ಪರ ಶಾಸಕರ ಸಂಖ್ಯೆ 120ಕ್ಕೆ ಏರಿದೆ.&lt;/h3&gt;&lt;p&gt;ವಿಸಿಕೆ ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಟಿವಿಕೆಗೆ ಬೆಂಬಲ ಘೋಷಿಸುವ ಪತ್ರವನ್ನು ವಿಜಯ್&zwnj;ಗೆ ಹಸ್ತಾಂತರ ಮಾಡಿದ್ದಾರೆ. ಈ ಬೆನ್ನಲ್ಲೇ ಐಯುಎಂಎಲ್&zwnj; ಕೂಡಾ ಟಿವಿಕೆಯನ್ನು ಬೆಂಬಲಿಸುವುದಾಗಿ ಅಧಿಕೃತ ಪತ್ರ ಮುಖೇನ ಹೇಳಿದೆ.&lt;/p&gt;&lt;p&gt;ವಿಸಿಕೆಗೆ ಡಿಸಿಎಂ ಪಟ್ಟ ಬೇಕು ಎಂದು ಟಿವಿಕೆ ಅಧ್ಯಕ್ಷ ತೋಲ್ ತಿರುಮಾವಲವನ್ ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು. ಹೀಗಾಗಿ ಸರ್ಕಾರಕ್ಕೆ ಶುಕ್ರವಾರ ಅವರು ಅಧಿಕೃತ ಬೆಂಬಲ ಘೋಷಿಸಿರಲಿಲ್ಲ. ಆದರೆ ಶನಿವಾರ ಮಾತನಾಡಿದ ಅವರು, &lsquo;ರಾಜ್ಯವನ್ನು ರಾಷ್ಟ್ರಪತಿ ಆಡಳಿತದಿಂದ ಪಾರು ಮಾಡಲು ವಿಜಯ್&zwnj;ಗೆ ಬೆಂಬಲ ನೀಡುತ್ತಿದ್ದೇನೆ&rsquo; ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;&lt;strong&gt;ವಿಜಯ್&zwnj; ಬಲ 120 ಹೇಗೆ?:&lt;/strong&gt;&lt;/p&gt;&lt;p&gt;234 ಸದಸ್ಯಬಲದ ತಮಿಳುನಾಡಿನಲ್ಲಿ ಸರಳ ಬಹುಮತಕ್ಕೆ 118 ಸ್ಥಾನಗಳು ಅಗತ್ಯ. ಟಿವಿಕೆ 108 ಸ್ಥಾನಗಳನ್ನು ಹೊಂದಿದೆ. ಆದರೆ ವಿಜಯ್&zwnj; 2 ಕ್ಷೇತ್ರದಲ್ಲಿ ಗೆದ್ದ ಕಾರಣ ಅದರ ಬಲವನ್ನು 107 ಎಂದು ಪರಿಗಣಿಸಲಾಗುತ್ತದೆ. ಬಹುಮತಕ್ಕೆ ಆರಂಭದಲ್ಲಿ 11 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿತ್ತು. ಹೀಗಾಗಿ ಮೊದಲು ಕಾಂಗ್ರೆಸ್&zwnj; ಪಕ್ಷ ಅವರನ್ನು ಬೆಂಬಲಿಸಿತ್ತು. ಪರಿಣಾಮವಾಗಿ ಮೈತ್ರಿಕೂಟದ ಬಲ 112ಕ್ಕೆ ಏರಿತ್ತು. ಬಳಿಕ ಸಿಪಿಎಂನ 2 ಹಾಗೂ ಸಿಪಿಐನ 2 ಶಾಸಕರು ಬೆಂಬಲ ಘೋಷಿಸಿದ್ದರು. ಆಗ ಬಲ 116ಕ್ಕೆ ಏರಿತ್ತು. ಇದೀಗ ಸಿವಿಕೆಯ 2 ಹಾಗೂ ಮುಸ್ಲಿಂ ಲೀಗ್&zwnj;ನ 2 ಶಾಸಕರ ಬೆಂಬಲದೊಂದಿಗೆ 118ರ ಮ್ಯಾಜಿಕ್&zwnj; ಸಂಖ್ಯೆ ದಾಟಿ 120ಕ್ಕೆ ಕೂಟದ ಬಲವರ್ಧನೆ ಆಗಿದೆ.&lt;/p&gt;&lt;p&gt;&lt;strong&gt;3 ಬಾರಿ ನಿರಾಕರಿಸಿದ್ದ ಅರ್ಲೇಕರ್:&lt;/strong&gt;&lt;/p&gt;&lt;p&gt;ಬುಧವಾರ, ಗುರುವಾರ ಮತ್ತು ಶುಕ್ರವಾರ ಬಹುಮತದ ಕೊರತೆಯನ್ನು ಉಲ್ಲೇಖಿಸಿ, ಸರ್ಕಾರ ರಚನೆಗೆ ವಿಜಯ್ ಅವರನ್ನು ಆಹ್ವಾನಿಸಲು ಅರ್ಲೇಕರ್ ನಿರಾಕರಿಸಿದ್ದರು. ಇದು ಕೇಂದ್ರವು ಸರ್ಕಾರ ರಚನೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಆಕ್ರೋಶಕ್ಕೆ ನಾಂದಿ ಹಾಡಿತ್ತು ಹಾಗೂ ವಿರೋಧ ಪಕ್ಷಗಳಿಂದ ಪ್ರತಿಭಟನೆಗೆ ನಾಂದಿ ಹಾಡಿತ್ತು.&lt;/p&gt;&lt;p&gt;&lt;strong&gt;ತ.ನಾಡು ವಿಧಾನಸಭೆ ಬಲ 234&lt;/strong&gt;&lt;/p&gt;&lt;p&gt;ಟಿವಿಕೆ 107 ಕಾಂಗ್ರೆಸ್&zwnj; 5 ಸಿಪಿಐ 2 ಸಿಪಿಎಂ 2 ಸಿವಿಕೆ 2 ಮುಸ್ಲಿಂ ಲೀಗ್ 2 (ಒಟ್ಟು 120)&lt;/p&gt;&lt;p&gt;&lt;strong&gt;ವಿಜಯ್&zwnj; ಪರ ಖರ್ಗೆ ಮನವೊಲಿಕೆ ಯಶಸ್ವಿ&lt;/strong&gt;&lt;/p&gt;&lt;p&gt;ಕಾಂಗ್ರೆಸ್&zwnj; ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್ ಮತ್ತು ಮುಸ್ಲಿಂ ಲೀಗ್&zwnj; ಜತೆ ಶುಕ್ರವಾರವೇ ಮಾತನಾಡಿ ಟಿವಿಕೆ-ಕಾಂಗ್ರೆಸ್ ಕೂಟಕ್ಕೆ ಬೆಂಬಲ ಯಾಚಿಸಿದ್ದರು. ಇದು ವಿಜಯ್ ಪರವಾಗಿ ಸಂಖ್ಯೆಗಳನ್ನು ಕ್ರೋಢೀಕರಿಸಲು ಸಹಾಯ ಮಾಡಿತು ಎನ್ನಲಾಗಿದೆ.&lt;/p&gt;&lt;p&gt;--&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/actor-vijay-secures-support-of-120-mlas-to-form-govt-set-to-take-oath-as-chief-minister-of-tamil-nadu-today-at-10-am-rav/articleshow-5twl4up"/>
        </item>
    </channel>
</rss>
