<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 18 Apr 2026 00:25:23 +0530</lastBuildDate>
        <atom:link href="https://kannada.asianetnews.com/rss/news" rel="self" type="application/rss+xml"/>
        <item>
            <title><![CDATA[ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲು ಸಿಎಂ ಸಿದ್ದರಾಮಯ್ಯಗೆ ಭಯ: ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪ]]></title>
            <link>https://kannada.asianetnews.com/karnataka-districts/sa-ra-mahesh-slams-siddaramaiah-local-body-elections-gvd/articleshow-e1wxahm</link>
            <guid isPermaLink="true">https://kannada.asianetnews.com/karnataka-districts/sa-ra-mahesh-slams-siddaramaiah-local-body-elections-gvd/articleshow-e1wxahm</guid>
            <pubDate>Sat, 18 Apr 2026 00:25:17 +0530</pubDate>
            <description><![CDATA[&lt;p&gt;ಯತೀಂದ್ರ ಮಾತ್ರ ಅಧಿಕಾರದಲ್ಲಿ ಇರಬೇಕಾ? ದಯಮಾಡಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ ಚುನಾವಣೆ ಮಾಡಿ ಸ್ವಾಮಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆಗ್ರಹಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx23zkyrhj97744pd9qdhcmx,imgname-----------------------2025-06-06t132816.715-1749196722135.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.18): &lt;/strong&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಮತ್ತು ನಿಮ್ಮ ಮಗ ಯತೀಂದ್ರ ಮಾತ್ರ ಅಧಿಕಾರದಲ್ಲಿ ಇರಬೇಕಾ? ದಯಮಾಡಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ ಚುನಾವಣೆ ಮಾಡಿ ಸ್ವಾಮಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆಗ್ರಹಿಸಿದರು. ಐದು ವರ್ಷವೂ ನಮ್ಮ ತಂದೆಯೇ ಸಿಎಂ ಎಂದು ಯತೀಂದ್ರ ಹೇಳಿದ್ದಾರೆ. ಅದು ಅವರ ಪಕ್ಷದ ವಿಚಾರ. ನೀವು ಎಷ್ಟು ವರ್ಷವಾದರೂ ಅಧಿಕಾರದಲ್ಲಿರಿ. ನಿಮ್ಮ ಅಧಿಕಾರದ ಅವಧಿಯಲ್ಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಾಲಿಕೆ, ಗ್ರಾಮ ಪಂಚಾಯಿತಿ ಚುನಾವಣೆ ಮಾಡಿ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.&lt;/p&gt;&lt;p&gt;ಸಮಾಜವಾದಿ ಎಂದು ಹೇಳಿಕೊಳ್ಳುವ ನೀವು, ನಿಮ್ಮ ಮಗನೇ ಅಧಿಕಾರದಲ್ಲಿದ್ದರೆ ಹೇಗೆ? ಪಕ್ಷಕ್ಕಾಗಿ ದುಡಿದಿರುವ ಇತರರಿಗೂ ಅಧಿಕಾರ ಕೊಡಿ. ಯಾವುದೇ ಪಕ್ಷದ ಕಾರ್ಯಕರ್ತನಾಗಿರಲಿ ಅವರು ಜಿಪಂ, ತಾಪಂ, ನಗರ ಪಾಲಿಕೆ ಸದಸ್ಯನಾಗಲು ಚುನಾವಣೆ ನಡೆಸಬೇಕು. ನಮಗೆ ಅಧಿಕಾರಿ ಸಿಗುವುದಿಲ್ಲ ಎಂಬ ಭಯದಿಂದ ಚುನಾವಣೆ ಮಾಡದೇ ಇದ್ದರೆ ಅದು ಪ್ರಜಾಪ್ರಭುತ್ವದ ಕಗ್ಗೊಲೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಎಂಬ ಬದ್ಧತೆ ಇದ್ದರೆ ಕೂಡಲೇ ಚುನಾವಣೆ ಮಾಡಿ ಎಂದು ಅವರು ಆಗ್ರಹಿಸಿದರು.&lt;/p&gt;&lt;p&gt;ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಈಗ ಚುನಾವಣೆ ನಡೆಸಿದರೆ ಎನ್ ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುತ್ತದೆ ಎಂಬ ಭಯ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಇದೇ ಕಾರಣದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸ್ಥಳೀಯ ಸಂಸ್ಥೆ ಚುನಾವಣೆಗೆ ಮೈತ್ರಿ ಮುಂದುವರೆಯುವುದರ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಜೊತೆ ಚರ್ಚೆ ಆಗಿದೆ. ಮೈಸೂರು ಜಿಲ್ಲೆಯಲ್ಲಿ ಎರಡು ಪಕ್ಷಗಳು ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು.&lt;/p&gt;&lt;h2&gt;&lt;strong&gt;ಜೆಡಿಎಸ್ ಪಕ್ಷವೇ ಕುಟುಂಬ&lt;/strong&gt;&lt;/h2&gt;&lt;p&gt;ನಮ್ಮದು ಕುಟುಂಬ ರಾಜಕಾರಣವಲ್ಲ ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾ.ರಾ. ಮಹೇಶ್ ಅವರು, ಆಶ್ರಯ ಸಮಿತಿ ಸದಸ್ಯ ಯಾರು? ಎಂಎಲ್ಸಿ ಯಾರು? ಬಿಡಿಎ ಸದಸ್ಯನಾಗಲು ಮೈಸೂರಿನ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಸಿ, ಬೆಂಗಳೂರಿನಲ್ಲಿ ಸೇರಿಸಿದ್ದು ಯಾಕೆ? ನಿಮ್ಮ ಯಾರೂ ನಿಷ್ಠಾವಂತ ಕಾರ್ಯಕರ್ತ ಇರಲಿಲ್ಲವೇ? ಇದರಲ್ಲಿ ಯಾರದು ಕುಟುಂಬ ರಾಜಕಾರಣ ಎಂದು ಪ್ರಶ್ನಿಸಿದರು. ನಮ್ಮದು ಸಣ್ಣ ಪಕ್ಷ. ನಿಮ್ಮಂತೆ ರಾಷ್ಟ್ರೀಯ ಪಕ್ಷವಲ್ಲ. ನಮಗೆ ಪಕ್ಷವೇ ಕುಟುಂಬ. ಕುಮಾರಸ್ವಾಮಿ ಅವರು ಎಲ್ಲವನ್ನೂ ಬಿಟ್ಟು ಎಲ್ಲಿದ್ದವರನ್ನೋ ಕರೆದುಕೊಂಡು ಬಂದು ಅಧಿಕಾರ ಕೊಡುತ್ತಾರೆ. ಅವರು ಕೈಕೊಟ್ಟು ಹೋಗುತ್ತಾರೆ. ಅದಕ್ಕೆ ಅವರಿಂದ ಬೈಸಿಕೊಳ್ಳುವ ಬದಲು ಕುಟುಂಬದವರಿಗೆ ಕೊಡುತ್ತೇವೆ ಎಂದು ಅವರು ಹೇಳಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sa-ra-mahesh-slams-siddaramaiah-local-body-elections-gvd/articleshow-e1wxahm"/>
        </item>
        <item>
            <title><![CDATA[ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!]]></title>
            <link>https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze</link>
            <guid isPermaLink="true">https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze</guid>
            <pubDate>Fri, 17 Apr 2026 23:07:15 +0530</pubDate>
            <description><![CDATA[ವಿಜಯಪುರ ಜಿಲ್ಲೆಯ ಕುಖ್ಯಾತ ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ನಡುರಸ್ತೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ 6 ಸುತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.]]></description>
            <media:content url="https://geo.dailymotion.com/player/x1tbu.html?video=xa5ptqk" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.17): &lt;/strong&gt;ಭೀಮಾತೀರದ ಕುಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಬಂದೂಕಿನ ನಳಿಕೆಗಳು ಮತ್ತೆ ಬೆಂಕಿ ಉಗುಳಿವೆ! ಹೌದು, ಶಾಂತಿ ನೆಲೆಸಿತು ಎನ್ನುವಷ್ಟರಲ್ಲೇ ಗುಂಡಿನ ಸದ್ದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.&amp;nbsp;&lt;/p&gt;&lt;h3&gt;&lt;strong&gt;ವಿಜಯಪುರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಗ್ರಾಮ ಪಂಚಾಯತ್ ಸದಸ್ಯನ ಭೀಕರ ಹತ್ಯೆ&lt;/strong&gt;&lt;/h3&gt;&lt;p&gt;ಕೆಲವೇ ದಿನಗಳ ಹಿಂದೆ ಜ್ಯುವೆಲರಿ ಶಾಪ್ ಮತ್ತು ಬ್ಯಾಂಕ್ ಲೂಟಿ ಮಾಡಿದ್ದ ಗ್ಯಾಂಗ್&zwnj;ಗಳ ಆರ್ಭಟ ತಣ್ಣಗಾಗುವ ಮೊದಲೇ, ಈಗ ನಡುರಸ್ತೆಯಲ್ಲೇ ನೆತ್ತರು ಹರಿದಿದೆ. ಥೇಟ್ ಯುಪಿ, ಬಿಹಾರ್ ಮಾದರಿಯಲ್ಲಿ 6 ರೌಂಡ್ ಫೈರಿಂಗ್ ನಡೆಸಿ ಮಾಜಿ ಗ್ರಾ.ಪಂ ಸದಸ್ಯನನ್ನ ಹತ್ಯೆ ಮಾಡಲಾಗಿದೆ.&amp;nbsp;ಈ ಭೀಕರ ಹತ್ಯಾಕಾಂಡ ಕಂಡ ಜನ ಮೌನಕ್ಕೆ ಶರಣಾಗಿದ್ದಾರೆ. ಹಾಗಾದ್ರೆ, ಭೀಮಾತೀರದಲ್ಲಿ ಮತ್ತೆ ಶತ್ರು ಸಂಹಾರಕ್ಕೆ ಸ್ಕೆಚ್ ಹಾಕಿದ್ದು ಯಾರು? ಯಾರ ಬಂದೂಕಿನಿಂದ ಸಿಡಿದ ಬುಲೆಟ್&zwnj;ಗಳು ರಾಜು ಎದೆಯನ್ನು ಸೀಳಿದವು?&amp;nbsp;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze"/>
        </item>
        <item>
            <title><![CDATA[IPL 2026 Winner: ಈ ಬಾರಿ RCB ಕಪ್‌ ಗೆಲ್ಲತ್ತಾ?: ಟ್ಯಾರೋ ರೀಡರ್‌ ಭವಿಷ್ಯ ಕೇಳಿ ದಿಗ್ಭ್ರಮೆಗೊಂಡ ಕನ್ನಡಿಗರು!]]></title>
            <link>https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru</link>
            <guid isPermaLink="true">https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru</guid>
            <pubDate>Fri, 17 Apr 2026 22:56:33 +0530</pubDate>
            <description><![CDATA[&lt;p&gt;IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್&zwnj; ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್&zwnj;ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್&zwnj; ನಮ್ದಾಗತ್ತಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe7azck0dp1n9zbczbzbkpw,imgname-new-project--98--1776446438803.jpg" type="image/jpeg" height="390" width="690"/>
            <content:encoded><![CDATA[&lt;p&gt;IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್&zwnj; ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್&zwnj;ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್&zwnj; ನಮ್ದಾಗತ್ತಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;RCB ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದು ಕೋಟ್ಯಂತರ ಕನ್ನಡಿಗರ, ಕ್ರಿಕೆಟ್ ಪ್ರೇಮಿಗಳ ಭಾವನೆ. ಟ್ರೋಫಿ ಇರಲಿ ಬಿಡಲಿ, ಅವರ ಆಕ್ರಮಣಕಾರಿ ಆಟ ಎಂದಿಗೂ ಜನಮಾನಸದಲ್ಲಿ ಉಳಿಯುತ್ತದೆ. ಈ ಬಾರಿ ಟ್ರೋಫಿ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ. ಈ ತಂಡಕ್ಕೆ ಇದ್ದಷ್ಟು ಅಭಿಮಾನಿ ಬಳಗ ಯಾವ ಟೀಂಗೂ ಇಲ್ಲ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿ ಈಗ ತುಂಬ ಆಧ್ಯಾತ್ಮಿಕವಾಗಿದ್ದಾರೆ. ಅವರು ಮೈದಾನದಲ್ಲಿ ಶತಕಗಳನ್ನು ಸಿಡಿಸಲಿದ್ದಾರೆ. ಅವರ ಏಕದಿನ (ODI) ವೃತ್ತಿಜೀವನವು 2028 ಸುಮಾರಿಗೆ ಇದ್ದಕ್ಕಿದ್ದಂತೆ ಕೊನೆಗೊಳ್ಳಬಹುದು.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ಕಪ್&zwnj; ಗೆಲ್ಲಲಿದೆಯಾ ಎಂದು ಪ್ರಶ್ನೆ ಇದೆ. ಟ್ಯಾರೋ ಕಾರ್ಡ್ ರೀಡರ್ ಅಮಾಯ್ರಾ ಅವರು ಆರ್&zwnj;ಸಿಬಿ ಗೆಲ್ಲಲಿದೆಯಾ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ಟೀಂ ಚೆನ್ನಾಗಿ ಆಡುತ್ತಾರೆ, ಆದರೆ ಫೈನಲ್ ಗೆಲ್ಲುವ ಸಾಧ್ಯತೆ ಕಡಿಮೆ ಇದೆ. RCB ತಂಡವು ಕೊನೇವರೆಗೂ ಹೋದರೂ ಕೂಡ ಟ್ರೋಫಿ ಗೆಲ್ಲುವುದು ಕಷ್ಟ ಎಂದು ಅಮಾಯ್ರಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಗುಜರಾತ್ ಟೈಟನ್ಸ್ ಮತ್ತು ಕೆಕೆಆರ್ ಟೀಂ ನಡುವೆ ತೀವ್ರ ಪೈಪೋಟಿ ಇರಲಿದೆ. ಶುಭ್&zwnj;ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾರತವು 2027 ರ ವಿಶ್ವಕಪ್ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru"/>
        </item>
        <item>
            <title><![CDATA[ನೂರಾರು ಮಹಿಳೆಯರ ಅನುಭವಿಸಿದ ಕಾಮಿ ಜ್ಯೋತಿಷಿ ಅಶೋಕ್‌ ಖರಾತ್‌ ಆಪ್ತ ಸಹಚರ ಆಕ್ಸಿಡೆಂಟ್‌ನಲ್ಲಿ ಸಾವು!]]></title>
            <link>https://kannada.asianetnews.com/india-news/jitendra-shelke-death-mystery-ashok-kharat-case-witness-accident-or-murder-san/articleshow-00rrip8</link>
            <guid isPermaLink="true">https://kannada.asianetnews.com/india-news/jitendra-shelke-death-mystery-ashok-kharat-case-witness-accident-or-murder-san/articleshow-00rrip8</guid>
            <pubDate>Fri, 17 Apr 2026 22:45:50 +0530</pubDate>
            <description><![CDATA[&lt;p&gt;ಕಾಮಿ ಬಾಬಾ ಅಶೋಕ್ ಖರಾತ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ, ಆತನ ಆಪ್ತ ಜಿತೇಂದ್ರ ಶೆಲ್ಕೆ ರಸ್ತೆ ಅಪಘಾತದಲ್ಲಿ ಪತ್ನಿ ಸಮೇತ ಸಾವನ್ನಪ್ಪಿದ್ದಾರೆ. ಛತ್ರಪತಿ ಸಂಭಾಜಿನಗರ-ಶಿರಡಿ ರಸ್ತೆಯಲ್ಲಿ ನಿಂತಿದ್ದ ಕಂಟೇನರ್&zwnj;ಗೆ ಇವರ ಕಾರು ಡಿಕ್ಕಿ ಹೊಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe6qprmjq51wr2w1pqpr0cy,imgname-ashok-kharat-1776445807380.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಛತ್ರಪತಿ ಸಂಭಾಜಿನಗರ (ಏ.17): &lt;/strong&gt;ಮಹಾರಾಷ್ಟ್ರದಾದ್ಯಂತ ಸದ್ಯ ಚರ್ಚೆಯಲ್ಲಿರುವ ಕಾಮಿ ಬಾಬಾ ಅಶೋಕ್ ಖರಾತ್ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಅಶೋಕ್ ಖರಾತನ ಅತ್ಯಂತ ಆಪ್ತ ಸಹಚರ ಹಾಗೂ ಶಿವಾನಿಕಾ ಟ್ರಸ್ಟ್&zwnj;ನ ನಿರ್ದೇಶಕ ಮತ್ತು ಉಪಾಧ್ಯಕ್ಷರಾಗಿದ್ದ ಜಿತೇಂದ್ರ ಶೆಲ್ಕೆ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಇದು ಕೇವಲ ಅಪಘಾತವಲ್ಲ, ಸಾಕ್ಷ್ಯ ನಾಶಪಡಿಸಲು ಮಾಡಿದ ಸಂಚು ಎಂಬ ಸಂಶಯ ವ್ಯಕ್ತವಾಗಿದೆ.&lt;/p&gt;&lt;p&gt;ಛತ್ರಪತಿ ಸಂಭಾಜಿನಗರದಿಂದ ಶಿರಡಿಗೆ ಹೋಗುವ ರಸ್ತೆಯ 'ಧೋತ್ರೆ' ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಜಿತೇಂದ್ರ ಶೆಲ್ಕೆ ಮತ್ತು ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಮಗನನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಕಾರು ನಿಂತಿದ್ದ ಕಂಟೇನರ್&zwnj;ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಜಿತೇಂದ್ರ ಶೆಲ್ಕೆಯವರನ್ನು ಸಾಯಿಸಲಾಗಿದೆ: ತೃಪ್ತಿ ದೇಸಾಯಿ ಗಂಭೀರ ಆರೋಪ&lt;/strong&gt;&lt;/h2&gt;&lt;p&gt;ಈ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ, &quot;ಶೆಲ್ಕೆ ಅವರ ಸಾವು ಅತ್ಯಂತ ಶಂಕಾಸ್ಪದವಾಗಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ಮುಗಿಸುವ ಸಂಚು ರೂಪಿಸಲಾಗಿದೆ. ಮಾರ್ಚ್ 17 ರಂದು ಖರಾತ್ ವಿರುದ್ಧ ಪ್ರಕರಣ ದಾಖಲಾಗಿತ್ತು, ಇಂದು ಸರಿಯಾಗಿ ಒಂದು ತಿಂಗಳು ಪೂರೈಸುವಷ್ಟರಲ್ಲಿ ಶೆಲ್ಕೆ ಸಾವನ್ನಪ್ಪಿದ್ದಾರೆ. ಉಪಾಧ್ಯಕ್ಷರಾಗಿ ಟ್ರಸ್ಟ್&zwnj;ನ ಒಳಗಿನ ಎಲ್ಲಾ ವಿಚಾರಗಳು ಅವರಿಗೆ ತಿಳಿದಿತ್ತು. ಈ ಪ್ರಕರಣದಲ್ಲಿ ಇನ್ನೂ ಅನೇಕ ಸಾಕ್ಷಿಗಳಿದ್ದು, ಪೊಲೀಸರು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು&quot; ಎಂದು ಆಗ್ರಹಿಸಿದ್ದಾರೆ.&lt;/p&gt;&lt;p&gt;ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಈ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. 'ಇವರ ಕಾರು ಹೋಗಿ ಕಂಟೇನರ್&zwnj;ಗೆ ಡಿಕ್ಕಿ ಹೊಡೆದಿದೆಯೇ ಅಥವಾ ಕಂಟೇನರ್ ರಿವರ್ಸ್ ಬಂದು ಇವರಿಗೆ ಗುದ್ದಿದೆಯೇ? ಎಂಬುದು ತನಿಖೆಯಾಗಬೇಕು. ಶಿವಾನಿಕಾ ಸಂಸ್ಥೆಯಲ್ಲಿ ಏನು ನಡೆಯುತ್ತಿತ್ತು ಎಂಬ ಪೂರ್ಣ ಮಾಹಿತಿ ಶೆಲ್ಕೆ ಅವರಿಗಿತ್ತು. ಸಂಸ್ಥೆಯಲ್ಲಿ ಅವರು ಖರಾತ್ ಪತ್ನಿಗಿಂತಲೂ ಉನ್ನತ ಹುದ್ದೆಯಲ್ಲಿದ್ದರು. ಅಪಘಾತವಾದ ತಕ್ಷಣ ಕಂಟೇನರ್ ಚಾಲಕ ಮತ್ತು ಕ್ಲೀನರ್ ನಾಪತ್ತೆಯಾಗಿದ್ದು ಏಕೆ? ಶೆಲ್ಕೆ ಅವರೇ ಬಂದು ಡಿಕ್ಕಿ ಹೊಡೆದಿದ್ದರೆ ಇವರು ಓಡಿಹೋಗುವ ಅಗತ್ಯವಿರಲಿಲ್ಲ. ಇದು ಸಂಚು ಎಂಬ ಸಂಶಯವನ್ನು ದಟ್ಟವಾಗಿಸಿದೆ' ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸ್ಥಳೀಯರು ನೀಡಿದ ಮಾಹಿತಿ&lt;/strong&gt;&lt;/h2&gt;&lt;p&gt;ಧೋತ್ರೆ ಗ್ರಾಮದ ಸರ್ಪಂಚ್ ಪ್ರದೀಪ್ ಚೌಹಾಣ್ ಮಾತನಾಡಿ, &quot;ಮಧ್ಯಾಹ್ನ 12.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಗ್ರಾಮಸ್ಥರು ಫೋನ್ ಮಾಡಿದ ತಕ್ಷಣ ನಾವು ಸ್ಥಳಕ್ಕೆ ಬಂದೆವು. ಮಹಿಳೆಯೊಬ್ಬರು (ಶೆಲ್ಕೆ ಪತ್ನಿ) ನೋವಿನಿಂದ ಕಿರುಚುತ್ತಿದ್ದರು. ಮಗನನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ಕಳುಹಿಸಿದೆವು. ಕಂಟೇನರ್ ಒಳಗೆ ಕಾರು ನುಗ್ಗಿತ್ತು. ಕ್ರೇನ್ ಬರುವುದು ತಡವಾದ ಕಾರಣ ಮಹಿಳೆಯನ್ನು ಬೇಗ ಹೊರತೆಗೆಯಲು ಸಾಧ್ಯವಾಗಲಿಲ್ಲ, ಅವರು ಸ್ಥಳದಲ್ಲೇ ಮೃತಪಟ್ಟರು&quot; ಎಂದು ವಿವರಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/jitendra-shelke-death-mystery-ashok-kharat-case-witness-accident-or-murder-san/articleshow-00rrip8"/>
        </item>
        <item>
            <title><![CDATA[ನಾವು ಕ್ಷೇತ್ರವನ್ನು ಅಧಿಕಾರಕ್ಕಾಗಿ ಸೀಮಿತಗೊಳಿಸಿಲ್ಲ: ಎಚ್‌ಡಿಕೆ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ವಾಗ್ದಾಳಿ]]></title>
            <link>https://kannada.asianetnews.com/karnataka-districts/ramanagara-politics-mla-iqbal-hussain-attack-hd-kumaraswamy-gvd/articleshow-yi5p8ga</link>
            <guid isPermaLink="true">https://kannada.asianetnews.com/karnataka-districts/ramanagara-politics-mla-iqbal-hussain-attack-hd-kumaraswamy-gvd/articleshow-yi5p8ga</guid>
            <pubDate>Fri, 17 Apr 2026 22:24:06 +0530</pubDate>
            <description><![CDATA[&lt;p&gt;ಕ್ಷೇತ್ರದಲ್ಲಿ ಇಷ್ಟೊಂದು ಸಮಸ್ಯೆಗಳು ಜೀವಂತವಾಗಿದ್ದು, ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kb1b7gntn3ptxydm7pr35s6y,imgname-vv-1764203152057.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಏ.17):&lt;/strong&gt; ಕಳೆದ 25- 30 ವರ್ಷಗಳಿಂದ ಶಾಸಕರಾಗಿದ್ದವರು ರಾಮನಗರ ಕ್ಷೇತ್ರದ ಬಗ್ಗೆ ಎಂದೂ ಗಮನ ಹರಿಸಲಿಲ್ಲ. ಕೇವಲ ಅಧಿಕಾರ ದಕ್ಕಿಸಿಕೊಳ್ಳಲು ಕ್ಷೇತ್ರವನ್ನು ಸೀಮಿತ ಮಾಡಿಕೊಂಡಿದ್ದರು. ಈ ಕಾರಣದಿಂದಾಗಿಯೇ ಕ್ಷೇತ್ರದಲ್ಲಿ ಇಷ್ಟೊಂದು ಸಮಸ್ಯೆಗಳು ಜೀವಂತವಾಗಿದ್ದು, ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ತಾಲೂಕಿನ ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಾಗಲಿ ಅಥವಾ ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರಾಗಲಿ, ಅವರಂತೆ ರಾಜಕಾರಣ ಮಾಡಲು ಬಂದಿಲ್ಲ. ನಮಗೆ ಅಧಿಕಾರಕ್ಕಿಂತ ಅಭಿವೃದ್ಧಿ ಮುಖ್ಯ ಎಂದರು. ನಾವು ಬೆಳಗಾದರೆ ಸ್ಥಳೀಯ ಜನರೊಂದಿಗೆ ಬೆರೆತು ಜೀವನ ನಡೆಸುತ್ತೇವೆ. ಅವರಂತೆ ನಾವು ಕ್ಷೇತ್ರವನ್ನು ಅಧಿಕಾರಕ್ಕಾಗಿ ಸೀಮಿತ ಮಾಡಿಕೊಂಡಿಲ್ಲ.&lt;/p&gt;&lt;p&gt;ಡಿ.ಕೆ.ಶಿವಕುಮಾರ್ ರವರ ಮಾತನ್ನು ನಂಬಿ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಕೊಟ್ಟ ಮಾತಿನಂತೆ ಮನೆ ಮಗನಾಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು. ಬೇಸಿಗೆ ಆರಂಭವಾಗಿದ್ದು, ಅನೇಕ ಭಾಗಗಳಲ್ಲಿ ಬೋರ್ ವೆಲ್ ಗಳು ಮತ್ತು ಕೆರೆಗಳು ಬತ್ತಿಹೋಗುತ್ತಿವೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ. ಅರ್ಕಾವತಿ ನದಿ ಭಾಗದಲ್ಲಿ ನೀರಿನಲ್ಲಿ ಫ್ಲೋರಿಡ್ ಅಂಶ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಹಕ್ಕು ಪತ್ರ ವಿತರಿಸುವ ಕೆಲಸ&lt;/strong&gt;&lt;/h2&gt;&lt;p&gt;ಅರಣ್ಯ ದಂಚಿನ ಪ್ರದೇಶಗಳಲ್ಲಿ ಅನುಭವದಲ್ಲಿರುವ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡಲು ಅರಣ್ಯ ಇಲಾಖೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರುಗಳು ಬಂದಿವೆ. ಅವುಗಳನ್ನು ಉಪ ಗ್ರಾಮವನ್ನಾಗಿ ಪರಿವರ್ತಿಸಿ ಹಕ್ಕು ಪತ್ರ ವಿತರಿಸುವ ಕೆಲಸ ಮಾಡುತ್ತಿದ್ದೇವೆ. ನಗರ ಮತ್ತು ಗ್ರಾಮಗಳ ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.&lt;/p&gt;&lt;p&gt;ಗ್ಯಾರಂಟಿ ಸಮಿತಿ ಯೋಜನೆಗಳ&zwnj; ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಎಚ್.ರಾಜು, ಮಾಜಿ ಅಧ್ಯಕ್ಷ ಜಯರಾಮಯ್ಯ, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಎ.ಬಿ.ಚೇತನ್ ಕುಮಾರ್, ತಾಪಂ&zwnj; ಮಾಜಿ ಸದಸ್ಯ ಸಿದ್ದೇಗೌಡ, ಮುಖಂಡರಾದ ವಾಸು ಪುಟ್ಟಮಾಸ್ತಿಗೌಡ, ಚೇತನ್, ಮಲ್ಲೇಗೌಡ, ಅಪ್ಪಾಜಿ ಮತ್ತಿತರರು ಹಾಜರಿದ್ದರು&zwnj;.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ramanagara-politics-mla-iqbal-hussain-attack-hd-kumaraswamy-gvd/articleshow-yi5p8ga"/>
        </item>
        <item>
            <title><![CDATA[ಹೊಸ ಬೈಕ್ ಖರೀದಿಸುವ ಪ್ಲ್ಯಾನ್ ಇದೆಯೇ? ಶೋರೂಮ್‌ಗೆ ಹೋಗುವ ಮುನ್ನ ಈ 5 ವಿಷಯ ಮರೆಯಬೇಡಿ!]]></title>
            <link>https://kannada.asianetnews.com/bike-news/tips-to-keep-in-mind-before-buying-a-new-bike-or-scooter-in-india-san/articleshow-g3axrmw</link>
            <guid isPermaLink="true">https://kannada.asianetnews.com/bike-news/tips-to-keep-in-mind-before-buying-a-new-bike-or-scooter-in-india-san/articleshow-g3axrmw</guid>
            <pubDate>Fri, 17 Apr 2026 22:16:42 +0530</pubDate>
            <description><![CDATA[&lt;p&gt;ಹೊಸ ಬೈಕ್ ಖರೀದಿಸುವುದು ಒಂದು ದೊಡ್ಡ ಹೂಡಿಕೆಯಾಗಿದ್ದು, ಕೇವಲ ವಿನ್ಯಾಸ ನೋಡಿ ನಿರ್ಧರಿಸುವುದು ತಪ್ಪು. ಖರೀದಿಯ ಮೊದಲು ಬಜೆಟ್, ಮೈಲೇಜ್, ನಿರ್ವಹಣಾ ವೆಚ್ಚ, ಮತ್ತು ಅಗತ್ಯ ಫೀಚರ್&zwnj;ಗಳನ್ನು ಪರಿಗಣಿಸುವುದು ಬಹಳ ಮುಖ್ಯ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01keeb50pwxpyc57qxg6s0e6yr,imgname-tamil-news---2026-01-08t134924.145-1767860503260.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ಹೊಸ ಬೈಕ್ ಅಥವಾ ಸ್ಕೂಟರ್ ಅನ್ನು ಮನೆಗೆ ತರುವ ಸಂಭ್ರಮವೇ ಬೇರೆ. ಆದರೆ, ಅನೇಕ ಬಾರಿ ಈ ಉತ್ಸಾಹದ ಭರದಲ್ಲಿ ನಾವು ಕೇವಲ ಬೈಕಿನ ವಿನ್ಯಾಸ (Look) ಅಥವಾ ಬಣ್ಣವನ್ನು ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಂತರ ಅದರ ನಿರ್ವಹಣೆ (Maintenance) ಅಥವಾ ಮೈಲೇಜ್ ಸಮಸ್ಯೆಯಿಂದ ಕಷ್ಟಪಡುತ್ತೇವೆ. ಬೈಕ್ ಖರೀದಿಸುವುದು ಒಂದು ದೊಡ್ಡ ಹೂಡಿಕೆಯಿದ್ದಂತೆ, ಹಾಗಾಗಿ ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು. ಖರೀದಿಸುವ ಮುನ್ನ ಯಾವ ತಾಂತ್ರಿಕ ಅಂಶಗಳನ್ನು ಗಮನಿಸಬೇಕು ಎಂಬುದು ಪ್ರತಿಯೊಬ್ಬ ಗ್ರಾಹಕನಿಗೂ ತಿಳಿದಿರಲೇಬೇಕು.&lt;/p&gt;&lt;p&gt;ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಹೊಸ ಫೀಚರ್ಸ್&zwnj;ಗಳಿರುವ ಬೈಕುಗಳ ಹಾವಳಿ ಹೆಚ್ಚಿದೆ. ಆದರೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಯಾವ ಬೈಕ್ ಸೂಕ್ತ ಎಂಬುದನ್ನು ನಿರ್ಧರಿಸುವುದು ಕಷ್ಟವಾಗಬಹುದು. ಕೆಲವೊಮ್ಮೆ ಇಂಜಿನ್ ಸಾಮರ್ಥ್ಯ, ಇನ್ನು ಕೆಲವೊಮ್ಮೆ ಇನ್ಶೂರೆನ್ಸ್ ದಾಖಲೆಗಳು; ಹೀಗೆ ನಾವು ನಿರ್ಲಕ್ಷಿಸುವ ಹಲವು ವಿಷಯಗಳಿವೆ. ನೀವೂ ಸಹ ಹೊಸ ಬೈಕ್ ಖರೀದಿಸುವ ಇರಾದೆಯಲ್ಲಿದ್ದರೆ ಈ 'ಎಕ್ಸೈಟ್&zwnj;ಮೆಂಟ್'ನಲ್ಲಿ ತಪ್ಪು ಮಾಡಬೇಡಿ. ನಿಮ್ಮ ಖರೀದಿಯ ಅನುಭವ ಸುಖಕರವಾಗಲು ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್&zwnj;.&lt;/p&gt;&lt;h2&gt;&lt;strong&gt;ಲುಕ್&zwnj; ನೋಡಿ ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಡಿ&lt;/strong&gt;&lt;/h2&gt;&lt;p&gt;ಜನರು ಮಾಡುವ ಸಾಮಾನ್ಯ ತಪ್ಪು ಎಂದರೆ ಬೈಕಿನ ಲುಕ್ ನೋಡಿ ಮರುಳಾಗುವುದು. ಹೊಳೆಯುವ ವಿನ್ಯಾಸ ಮತ್ತು ಆಕರ್ಷಕ ಸ್ಟೈಲ್ ಕಂಡ ತಕ್ಷಣ ಖರೀದಿಸುವುದು ಸರಿಯಲ್ಲ. ಏಕೆಂದರೆ ಪ್ರತಿ ಬೈಕ್ ಅನ್ನು ವಿಭಿನ್ನ ಉದ್ದೇಶಗಳಿಗಾಗಿ ತಯಾರಿಸಲಾಗಿರುತ್ತದೆ. ನೀವು ಪ್ರತಿದಿನ ನಗರದ ಸಂಚಾರಕ್ಕೆ ಬಳಸುವುದಾದರೆ ಹಗುರವಾದ ಮತ್ತು ಮಿತವ್ಯಯದ ಮಾಡೆಲ್ ಸೂಕ್ತ. ಅದೇ ರೀತಿ ಲಾಂಗ್ ರೈಡ್ ಹೋಗುವುದಾದರೆ ಅದಕ್ಕೆ ತಕ್ಕಂತೆ ಬೇರೆ ಬೈಕ್ ಆರಿಸಬೇಕಾಗುತ್ತದೆ.&lt;/p&gt;&lt;h2&gt;&lt;strong&gt;ಬಜೆಟ್ ನಿರ್ಲಕ್ಷಿಸಬೇಡಿ&lt;/strong&gt;&lt;/h2&gt;&lt;p&gt;ಎರಡನೇ ದೊಡ್ಡ ತಪ್ಪು ಎಂದರೆ ಬಜೆಟ್ ಅನ್ನು ಗಮನಿಸದಿರುವುದು. ಅನೇಕರು ಇಎಂಐ (EMI) ಸೌಲಭ್ಯವಿದೆ ಎಂಬ ಕಾರಣಕ್ಕೆ ದುಬಾರಿ ಬೈಕ್ ಖರೀದಿಸುತ್ತಾರೆ. ಆದರೆ ನಂತರ ಪ್ರತಿ ತಿಂಗಳ ಪಾವತಿ, ಪೆಟ್ರೋಲ್ ಖರ್ಚು ಮತ್ತು ಸರ್ವಿಸಿಂಗ್ ವೆಚ್ಚವನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಯಾವಾಗಲೂ ನಿಮ್ಮ ಬಜೆಟ್&zwnj;ಗೆ ಅನುಗುಣವಾಗಿ ಬೈಕ್ ಆಯ್ಕೆ ಮಾಡಿ ಮತ್ತು ಮೊದಲು ಒಟ್ಟು ವೆಚ್ಚದ ಅಂದಾಜು ಹಾಕಿಕೊಳ್ಳಿ.&lt;/p&gt;&lt;h2&gt;&lt;strong&gt;ಮೈಲೇಜ್ ಮತ್ತು ನಿರ್ವಹಣೆ&lt;/strong&gt;&lt;/h2&gt;&lt;p&gt;ಮೈಲೇಜ್ ಮತ್ತು ಮೇಂಟೆನೆನ್ಸ್ ಕಡೆಗಣಿಸುವುದು ಭವಿಷ್ಯದಲ್ಲಿ ಭಾರವಾಗಬಹುದು. ವಿಶೇಷವಾಗಿ ನೀವು ಪ್ರತಿದಿನ ಬೈಕ್ ಬಳಸುವವರಾಗಿದ್ದರೆ, ಪೆಟ್ರೋಲ್ ಖರ್ಚು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಯಾವ ಕಂಪನಿಯ ಸರ್ವಿಸ್ ಸೆಂಟರ್ ಮತ್ತು ಸ್ಪೇರ್ ಪಾರ್ಟ್ಸ್&zwnj;ಗಳು ಸುಲಭವಾಗಿ ಲಭ್ಯವಿವೆಯೋ ಅಂತಹ ಕಂಪನಿಯ ಬೈಕ್ ಆಯ್ಕೆ ಮಾಡುವುದು ಬುದ್ಧಿವಂತಿಕೆ.&lt;/p&gt;&lt;h2&gt;&lt;strong&gt;ಅಗತ್ಯ ಫೀಚರ್ಸ್&zwnj;ಗಳ ಕಡೆ ಗಮನವಿರಲಿ&lt;/strong&gt;&lt;/h2&gt;&lt;p&gt;ಅನೇಕ ಜನರು 'ಟೆಸ್ಟ್ ರೈಡ್' (Test Ride) ಮಾಡದೆಯೇ ಬೈಕ್ ಖರೀದಿಸುತ್ತಾರೆ, ಇದು ದೊಡ್ಡ ತಪ್ಪು. ಪ್ರತಿ ಬೈಕಿನ ರೈಡಿಂಗ್ ಕಂಫರ್ಟ್ ಬೇರೆ ಬೇರೆಯಾಗಿರುತ್ತದೆ. ಟೆಸ್ಟ್ ರೈಡ್ ಮಾಡುವುದರಿಂದ ಸೀಟ್&zwnj;ನ ಹದ, ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್ ಅನುಭವ ನಿಮಗೆ ತಿಳಿಯುತ್ತದೆ. ಇಂದಿನ ಬೈಕುಗಳಲ್ಲಿ ಹತ್ತಾರು ಆಧುನಿಕ ಫೀಚರ್ಸ್&zwnj;ಗಳಿರುತ್ತವೆ, ಆದರೆ ಅವುಗಳಲ್ಲಿ ಪ್ರತಿಯೊಂದೂ ನಮಗೆ ಉಪಯುಕ್ತವಾಗಿರುವುದಿಲ್ಲ. ನಿಮಗೆ ಅಗತ್ಯವಿರುವ ಫೀಚರ್ಸ್&zwnj;ಗಳ ಮೇಲೆ ಮಾತ್ರ ಗಮನ ಹರಿಸಿ.&lt;/p&gt;&lt;h2&gt;&lt;strong&gt;ಸರಿಯಾದ ವಿಮಾ ಯೋಜನೆ (Insurance) ಆರಿಸಿ&lt;/strong&gt;&lt;/h2&gt;&lt;p&gt;ಇಂಜಿನ್ ಸಾಮರ್ಥ್ಯದ ಆಯ್ಕೆಯೂ ಅಷ್ಟೇ ಮುಖ್ಯ. ಹೈ-ಪವರ್ ಇಂಜಿನ್ ಇರುವ ಬೈಕುಗಳು ಪ್ರತಿಯೊಬ್ಬರಿಗೂ ಅವಶ್ಯಕವಿರುವುದಿಲ್ಲ. ನಗರದ ದೈನಂದಿನ ಬಳಕೆಗೆ ಕಡಿಮೆ ಸಿಸಿ ಇಂಜಿನ್ ಇರುವ ವಾಹನಗಳು ಹೆಚ್ಚು ಆರಾಮದಾಯಕ ಮತ್ತು ಲಾಭದಾಯಕ. ಕೊನೆಯದಾಗಿ, ವಿಮೆ ಮತ್ತು ಅಗತ್ಯ ದಾಖಲೆಗಳನ್ನು ಹಗುರವಾಗಿ ಪರಿಗಣಿಸಬೇಡಿ. ಎಲ್ಲಾ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ನಿಮಗೆ ಸೂಕ್ತವಾದ ವಿಮಾ ಯೋಜನೆಯನ್ನು ಆರಿಸಿ. ಸರಿಯಾದ ಮಾಹಿತಿ ಮತ್ತು ಮುನ್ನೆಚ್ಚರಿಕೆಯೊಂದಿಗೆ ತೆಗೆದುಕೊಳ್ಳುವ ನಿರ್ಧಾರವು ನಿಮಗೆ ಸುಂದರವಾದ ಮತ್ತು ಯಾವುದೇ ತೊಂದರೆಯಿಲ್ಲದ ಪ್ರಯಾಣದ ಅನುಭವವನ್ನು ನೀಡುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/bike-news/tips-to-keep-in-mind-before-buying-a-new-bike-or-scooter-in-india-san/articleshow-g3axrmw"/>
        </item>
        <item>
            <title><![CDATA[ಕನ್ನಡಿಗ ರಾಕೇಶ್‌ ಗಾಂವ್ಕರ್‌ ಸ್ಥಾಪಿಸಿದ ಏರ್‌ ಟ್ಯಾಕ್ಸಿ ಸರಳಾ ಏವಿಯೇಷನ್‌ನಲ್ಲಿ ಪಾಲು ಖರೀದಿಸಿದ ಇಂಡಿಗೋ!]]></title>
            <link>https://kannada.asianetnews.com/business/indigo-invests-10-crore-in-bengaluru-air-taxi-startup-sarla-aviation-san/articleshow-cg3oqzi</link>
            <guid isPermaLink="true">https://kannada.asianetnews.com/business/indigo-invests-10-crore-in-bengaluru-air-taxi-startup-sarla-aviation-san/articleshow-cg3oqzi</guid>
            <pubDate>Fri, 17 Apr 2026 21:27:48 +0530</pubDate>
            <description><![CDATA[&lt;p&gt;ಇಂಡಿಗೋ ಸಂಸ್ಥೆಯು ಬೆಂಗಳೂರು ಮೂಲದ ಏರ್-ಟ್ಯಾಕ್ಸಿ ಸ್ಟಾರ್ಟ್&zwnj;ಅಪ್ 'ಸರಳಾ ಏವಿಯೇಷನ್' ನಲ್ಲಿ 10 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಏರ್-ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. 'ಶೂನ್ಯ' ಹೆಸರಿನ eVTOL ವಿಮಾನಗಳನ್ನು ಅಭಿವೃದ್ಧಿ ಮಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe2c0re3cjz2yxfzmcppavj,imgname-indigo-airlines-and-sarla-aviation-1776441230094.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ಭಾರತದ ವಾಯುಯಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಹೊರಟಿರುವ ಇಂಡಿಗೋ ಸಂಸ್ಥೆಯು, ಬೆಂಗಳೂರು ಮೂಲದ ಏರ್-ಟ್ಯಾಕ್ಸಿ ಸ್ಟಾರ್ಟ್&zwnj;ಅಪ್ ಆಗಿರುವ 'ಸರಳಾ ಏವಿಯೇಷನ್' (Sarla Aviation) ನಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಪಾಲನ್ನು ಖರೀದಿಸಿದೆ. ಈ ಮೂಲಕ ಇಂಡಿಗೋ ಅಧಿಕೃತವಾಗಿ ಭಾರತದ ಬೆಳೆಯುತ್ತಿರುವ ಏರ್-ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. ರೆಗ್ಯುಲೇಟರಿ ಫೈಲಿಂಗ್&zwnj;ಗಳ ಪ್ರಕಾರ, ಇಂಡಿಗೋ ವೆಂಚರ್ಸ್ ಫಂಡ್-I ಮೂಲಕ ಈ ಹೂಡಿಕೆ ಮಾಡಲಾಗಿದೆ. ಸರಳಾ ಏವಿಯೇಷನ್&zwnj;ನ ಮಂಡಳಿಯು ಇಂಡಿಗೋಗೆ ಪ್ರತಿ ಷೇರಿಗೆ ₹1,87,425 ಪ್ರೀಮಿಯಂ ದರದಲ್ಲಿ 10 ಈಕ್ವಿಟಿ ಷೇರುಗಳನ್ನು ಮತ್ತು 524 ಸರಣಿ A1 ಕಡ್ಡಾಯ ಪರಿವರ್ತಿತ ಸಂಚಿತ ಆದ್ಯತೆಯ ಷೇರುಗಳನ್ನು (CCPS) ನೀಡಲು ನಿರ್ಧರಿಸಿದೆ. ಈ ಹೂಡಿಕೆಯ ಒಟ್ಟು ಮೊತ್ತ ಸುಮಾರು 10 ಕೋಟಿ ರೂಪಾಯಿಗಳಾಗಿವೆ.&lt;/p&gt;&lt;h2&gt;&lt;strong&gt;ಬೆಂಗಳೂರು ಮೂಲದ ಸ್ಟಾರ್ಟ್&zwnj;ಅಪ್ 'ಸರಳಾ'&lt;/strong&gt;&lt;/h2&gt;&lt;p&gt;2023ರಲ್ಲಿ ಆಡ್ರಿಯನ್ ಸ್ಮಿತ್, ಕನ್ನಡಿಗ ರಾಕೇಶ್ ಗಾಂವ್ಕರ್ ಮತ್ತು ಶಿವಂ ಚೌಹಾಣ್ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ಸರಳಾ ಏವಿಯೇಷನ್ ಪ್ರಸ್ತುತ 'ಶೂನ್ಯ' (Shunya) ಹೆಸರಿನ ಎಲೆಕ್ಟ್ರಿಕಲ್ ವರ್ಟಿಕಲ್ ಟೇಕ್&zwnj;ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಹೆಲಿಕಾಪ್ಟರ್&zwnj;ನಂತೆ ಲಂಬವಾಗಿ ಟೇಕ್&zwnj;ಆಫ್ ಮತ್ತು ಲ್ಯಾಂಡ್ ಆಗಬಲ್ಲ ವಿದ್ಯುತ್ ಚಾಲಿತ ವಿಮಾನವಾಗಿದೆ.&lt;/p&gt;&lt;p&gt;ಈ ವರ್ಷದ ಏಪ್ರಿಲ್ ವೇಳೆಗೆ ಕಂಪನಿಯು ಒಟ್ಟು 13.4 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ. ಇದರಲ್ಲಿ 2025ರ ಆರಂಭದಲ್ಲಿ 'ಅಕ್ಸೆಲ್' (Accel) ಮತ್ತು 'ನಿಖಿಲ್ ಕಾಮತ್' ನೇತೃತ್ವದಲ್ಲಿ ನಡೆದ 10 ಮಿಲಿಯನ್ ಡಾಲರ್ ಸರಣಿ A1 ಹೂಡಿಕೆಯೂ ಸೇರಿದೆ. ಸಂಗ್ರಹಿಸಿದ ಮೊತ್ತವನ್ನು ಏರ್-ಟ್ಯಾಕ್ಸಿಗಳ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, 2028ರ ವೇಳೆಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಸೇವೆಯನ್ನು ಪ್ರಾರಂಭಿಸುವ ಗುರಿಯನ್ನು ಕಂಪನಿ ಹೊಂದಿದೆ.&lt;/p&gt;&lt;h2&gt;&lt;strong&gt;ಇಂಡಿಗೋದ ಎರಡನೇ ಪ್ರಯತ್ನ&lt;/strong&gt;&lt;/h2&gt;&lt;p&gt;ಇಂಡಿಗೋ ಈ ಹಿಂದೆ ಅಮೆರಿಕ ಮೂಲದ 'ಆರ್ಚರ್ ಏವಿಯೇಷನ್' (Archer Aviation) ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ಟ್ಯಾಕ್ಸಿಗಳನ್ನು ಪ್ರಾರಂಭಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ, ಆರ್ಚರ್ ಏವಿಯೇಷನ್ ನಿಗದಿತ ಸಮಯಕ್ಕೆ ವಿಮಾನಗಳನ್ನು ನೀಡಲು ಸಾಧ್ಯವಾಗದ ಕಾರಣ ಆ ಒಪ್ಪಂದವು ಮುರಿದುಬಿದ್ದಿತ್ತು. ಹೀಗಾಗಿ, ಇಂಡಿಗೋ ಈಗ ದೇಶೀಯ ಸ್ಟಾರ್ಟ್&zwnj;ಅಪ್ 'ಸರಳಾ' ಜೊತೆ ಕೈಜೋಡಿಸಿ ವಾಯು ಟ್ಯಾಕ್ಸಿ ಕನಸನ್ನು ನನಸು ಮಾಡಲು ಮುಂದಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/business/indigo-invests-10-crore-in-bengaluru-air-taxi-startup-sarla-aviation-san/articleshow-cg3oqzi"/>
        </item>
        <item>
            <title><![CDATA['ಗ್ರೇಟರ್ ಬೆಂಗಳೂರು' ಚುನಾವಣೆ ಮತ್ತೆ ಮುಂದೂಡಿಕೆ?; ಸೆಪ್ಟೆಂಬರ್‌ವರೆಗೆ ಕಾಲಾವಕಾಶ ಕೋರಿ ಆಯೋಗಕ್ಕೆ ಸರ್ಕಾರ ಪತ್ರ!]]></title>
            <link>https://kannada.asianetnews.com/state/karnataka-govt-requests-election-commission-to-postpone-greater-bengaluru-authority-elections-until-september-2026-sat/articleshow-saw802n</link>
            <guid isPermaLink="true">https://kannada.asianetnews.com/state/karnataka-govt-requests-election-commission-to-postpone-greater-bengaluru-authority-elections-until-september-2026-sat/articleshow-saw802n</guid>
            <pubDate>Fri, 17 Apr 2026 21:19:16 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರವು ಜನಗಣತಿ ಕಾರ್ಯ ಮತ್ತು ಸಿಬ್ಬಂದಿ ಕೊರತೆಯ ಕಾರಣ ನೀಡಿ, ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸೆಪ್ಟೆಂಬರ್ 30, 2026 ರವರೆಗೆ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಪತ್ರ ಬರೆದಿದೆ. ಇದಕ್ಕೆ 4 ಕಾರಣಗಳನ್ನೂ ಕೊಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk82q6byytxcv8x2jjv36378,imgname-----------------------2026-03-09t064657.095-1773019044222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಹಲವು ವರ್ಷಗಳಿಂದ ನಿರೀಕ್ಷಿಸುತ್ತಿದ್ದ ನಗರ ಸ್ಥಳೀಯ ಸಂಸ್ಥೆಗಳ (ಗ್ರೇಟರ್ ಬೆಂಗಳೂರು ಪ್ರದೇಶ) ಚುನಾವಣೆಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಜನಗಣತಿ ಕಾರ್ಯ ಹಾಗೂ ಸಿಬ್ಬಂದಿಗಳ ಕೊರತೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವು ಚುನಾವಣೆಯನ್ನು ಸೆಪ್ಟೆಂಬರ್ 30, 2026 ರವರೆಗೆ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಪತ್ರ ಬರೆದಿದೆ.&lt;/p&gt;&lt;h2&gt;&lt;strong&gt;ಸರ್ಕಾರದ ಪತ್ರದಲ್ಲೇನಿದೆ?&lt;/strong&gt;&lt;/h2&gt;&lt;p&gt;ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಕಾರ್ಯದರ್ಶಿ ಡಾ. ಕೆ.ಜಿ. ಜಗದೀಶ್ ಅವರು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ, ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕಾಲಾವಕಾಶದ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಈ ಪತ್ರದ ಪ್ರಕಾರ, 1948ರ ಜನಗಣತಿ ಕಾಯ್ದೆಯಡಿ ನಡೆಯುತ್ತಿರುವ ಜನಗಣತಿ ಕಾರ್ಯಗಳಲ್ಲಿ ಇಡೀ ಆಡಳಿತ ಯಂತ್ರವು ಪ್ರಸ್ತುತ ತೊಡಗಿಸಿಕೊಂಡಿದೆ. ಜನಗಣತಿಯು ಒಂದು ಶಾಸನಬದ್ಧ ಮತ್ತು ನಿಗದಿತ ಸಮಯದೊಳಗೆ ಮುಗಿಸಬೇಕಾದ ಕಾರ್ಯವಾಗಿದ್ದು, ಎಣಿಕೆ, ಮೇಲ್ವಿಚಾರಣೆ, ತರಬೇತಿ ಮತ್ತು ಲಾಜಿಸ್ಟಿಕ್ಸ್ಗಾಗಿ ವ್ಯಾಪಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.&lt;/p&gt;&lt;h2&gt;&lt;strong&gt;ಚುನಾವಣೆ ಮುಂದೂಡಿಕೆಗೆ ಪ್ರಮುಖ ಕಾರಣಗಳು:&lt;/strong&gt;&lt;/h2&gt;&lt;p&gt;&lt;strong&gt;1. ಜನಗಣತಿ ಕಾರ್ಯದ ಒತ್ತಡ: &lt;/strong&gt;ಇಡೀ ಜಿಲ್ಲಾ ಮತ್ತು ಕ್ಷೇತ್ರ ಮಟ್ಟದ ಆಡಳಿತ ಯಂತ್ರವು ಜನಗಣತಿಯಲ್ಲಿ ಬ್ಯುಸಿಯಾಗಿರುವುದರಿಂದ, ಚುನಾವಣಾ ಪೂರ್ವಸಿದ್ಧತಾ ಕಾರ್ಯಗಳಿಗೆ ಸಿಬ್ಬಂದಿಗಳ ಲಭ್ಯತೆ ತೀರಾ ಕಡಿಮೆ ಇದೆ ಎಂದು ಸರ್ಕಾರ ಹೇಳಿದೆ.&lt;/p&gt;&lt;p&gt;&lt;strong&gt;2. ಮತದಾರರ ಪಟ್ಟಿಯ ಪರಿಷ್ಕರಣೆ (SIR): &lt;/strong&gt;ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯವು ಏಕಕಾಲದಲ್ಲಿ ನಡೆಯಬೇಕಿದೆ. ಈ ಕೆಲಸಕ್ಕೂ ಅದೇ ಕ್ಷೇತ್ರ ಮಟ್ಟದ ಕಾರ್ಯನಿರ್ವಾಹಕರನ್ನು ಬಳಸಿಕೊಳ್ಳಬೇಕಾಗಿರುವುದರಿಂದ ಮಾನವಶಕ್ತಿಯ ಕೊರತೆ ಎದುರಾಗಿದೆ.&lt;/p&gt;&lt;p&gt;&lt;strong&gt;3. ಶೈಕ್ಷಣಿಕ ಪರೀಕ್ಷೆಗಳ ಕರ್ತವ್ಯ: &lt;/strong&gt;ಮೇ ಮತ್ತು ಜೂನ್ ತಿಂಗಳಲ್ಲಿ 10ನೇ ಮತ್ತು 12ನೇ ತರಗತಿಯ ಪೂರಕ ಪರೀಕ್ಷೆಗಳು ನಡೆಯಲಿವೆ. ಈ ಶೈಕ್ಷಣಿಕ ಪರೀಕ್ಷಾ ಕರ್ತವ್ಯಗಳಿಗೆ ಶಿಕ್ಷಕರು ಮತ್ತು ಸರ್ಕಾರಿ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕಾಗಿರುವುದರಿಂದ ಚುನಾವಣಾ ಕಾರ್ಯಕ್ಕೆ ಹಿನ್ನಡೆಯಾಗಲಿದೆ.&lt;/p&gt;&lt;p&gt;&lt;strong&gt;4. ನಗರೀಕರಣದ ಸವಾಲುಗಳು: &lt;/strong&gt;ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಮಹಾನಗರವಾಗಿದ್ದು, ಇಲ್ಲಿನ ಮತದಾರರ ಪಟ್ಟಿಯ ನಿಖರತೆ ಮತ್ತು ವಾರ್ಡ್&zwnj;ಗಳ ವಿಂಗಡಣೆಯ ಕಾರ್ಯಕ್ಕೆ ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.&lt;/p&gt;&lt;h2&gt;&lt;strong&gt;ಸಮರ್ಪಕ ಸಿದ್ಧತೆಗಾಗಿ ವಿಸ್ತರಣೆ:&lt;/strong&gt;&lt;/h2&gt;&lt;p&gt;ಈ ಎಲ್ಲಾ ಕಾರಣಗಳಿಂದಾಗಿ, ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ ಮತ್ತು ವ್ಯವಸ್ಥಿತವಾಗಿ ನಡೆಸಲು ಈಗಿರುವ ಕಾಲಮಿತಿಯನ್ನು ಸೆಪ್ಟೆಂಬರ್ 30, 2026 ರವರೆಗೆ ವಿಸ್ತರಿಸುವಂತೆ ಮುಖ್ಯ ಆಯುಕ್ತರು ಕೋರಿದ್ದಾರೆ. ಈ ಪ್ರಸ್ತಾವನೆಗೆ ಮುಖ್ಯ ಕಾರ್ಯದರ್ಶಿಯವರಿಂದಲೂ ಅನುಮೋದನೆ ಸಿಕ್ಕಿದ್ದು, ಈಗ ಚೆಂಡು ರಾಜ್ಯ ಚುನಾವಣಾ ಆಯೋಗದ ಅಂಗಳದಲ್ಲಿದೆ.&lt;/p&gt;&lt;p&gt;ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಯದೆ ಈಗಾಗಲೇ ವರ್ಷಗಳೇ ಕಳೆದಿವೆ. ಈಗ 'ಗ್ರೇಟರ್ ಬೆಂಗಳೂರು' ಪರಿಕಲ್ಪನೆಯಡಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದ್ದರೂ, ಸರ್ಕಾರದ ಈ ಹೊಸ ಮನವಿಯು ಚುನಾವಣೆಗಾಗಿ ಕಾಯುತ್ತಿರು&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-requests-election-commission-to-postpone-greater-bengaluru-authority-elections-until-september-2026-sat/articleshow-saw802n"/>
        </item>
        <item>
            <title><![CDATA[ನಮ್ಮ ತಂದೆಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ: ಯತೀಂದ್ರ ಸಿದ್ದರಾಮಯ್ಯ]]></title>
            <link>https://kannada.asianetnews.com/karnataka-districts/mlc-yathindra-siddaramaiah-mass-marriage-belagavi-event-gvd/articleshow-ugcfufx</link>
            <guid isPermaLink="true">https://kannada.asianetnews.com/karnataka-districts/mlc-yathindra-siddaramaiah-mass-marriage-belagavi-event-gvd/articleshow-ugcfufx</guid>
            <pubDate>Fri, 17 Apr 2026 20:00:00 +0530</pubDate>
            <description><![CDATA[&lt;p&gt;ನಮ್ಮ ತಂದೆಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ ಹಾಗೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿ ಎಂಬುದು ನಮ್ಮ ಆಶಯ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ja824npvrbvrs5a29fx9bzj1,imgname-1---2024-10-15t175314.946.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೈಲಹೊಂಗಲ (ಏ.17): &lt;/strong&gt;ನಮ್ಮ ತಂದೆಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ, ಮಳೆ-ಬೆಳೆ ಸಮೃದ್ಧಿಯಾಗಿ ರೈತರ ಬದುಕು ಉನ್ನತಿಗೇರಲಿ ಹಾಗೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿ ಎಂಬುದು ನಮ್ಮ ಆಶಯ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಸಿದ್ದ ಸುಕ್ಷೇತ್ರ ನಯಾನಗರ ಗ್ರಾಮದ ಸುಖದೇವಾನಂದ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.&lt;/p&gt;&lt;p&gt;ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಠ-ಮಾನ್ಯಗಳ ಪಾತ್ರ ಅಪಾರವಾಗಿದೆ. ಸಮಾಜದಲ್ಲಿ ಏಕತೆ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಧರ್ಮಪೀಠಗಳು ಮಹತ್ವದ ಪಾತ್ರ ವಹಿಸುತ್ತಿವೆ. ಸುಖದೇವಾನಂದ ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಹಲವು ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಿಂದ ಮಠಾಧೀಶರು, ಸಾಧು-ಸಂತರನ್ನು ಆಹ್ವಾನಿಸಿ ಧರ್ಮಸಭೆಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಮತ್ತು ಸತ್ಸಂಸ್ಕಾರಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.&lt;/p&gt;&lt;p&gt;ಸಾಮಾಜಿಕ ಕಳಕಳಿ ಇಟ್ಟು ಸಾಮೂಹಿಕ ವಿವಾಹ ಆಯೋಜಿಸಿರುವುದು ಅತ್ಯಂತ ಮಹತ್ವದ ಕೆಲಸ. ಇಂತಹ ಕಾರ್ಯಕ್ರಮಗಳಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಭಾರ ಕಡಿಮೆಯಾಗುತ್ತದೆ. ಜೊತೆಗೆ ಸರಳ ವಿವಾಹದ ಸಂದೇಶ ಸಮಾಜಕ್ಕೆ ತಲುಪುತ್ತದೆ. ಅತಿರೇಕದ ಖರ್ಚುಗಳನ್ನು ತೊರೆದು ಸೌಹಾರ್ದತೆಯ ಬದುಕು ನಡೆಸುವ ಅಗತ್ಯವನ್ನು ಇಂತಹ ಕಾರ್ಯಕ್ರಮಗಳು ಒತ್ತಿ ಹೇಳುತ್ತವೆ ಎಂದು ಅಭಿಪ್ರಾಯಪಟ್ಟರು.&lt;/p&gt;&lt;h2&gt;&lt;strong&gt;ಸಂತೋಷ ತಂದಿದೆ&lt;/strong&gt;&lt;/h2&gt;&lt;p&gt;ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಉದ್ಘಾಟನೆ ನೆರವೇರಿಸುವ ಅವಕಾಶ ದೊರೆತಿರುವುದು ಸಂತೋಷ ತಂದಿದೆ. ಮಠದ ಸೇವಾ ಕಾರ್ಯಗಳು ಇನ್ನಷ್ಟು ವಿಸ್ತರಿಸಿ ಸಮಾಜಕ್ಕೆ ಹೆಚ್ಚಿನ ಸೇವೆ ನೀಡಲಿ ಎಂದು ಹಾರೈಸಿದರು. ಸುಖದೇವಾನಂದ ಪುಣ್ಯಾಶ್ರಮದ ಗುರು ಅಭಿನವ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸಮಾನತೆ ಮತ್ತು ಸರಳತೆಯನ್ನು ಉತ್ತೇಜಿಸಲು ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗುತ್ತಿದೆ.&lt;/p&gt;&lt;p&gt;ಧರ್ಮ, ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಠಗಳು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಉತ್ತಮ ಸಂಸ್ಕಾರಗಳನ್ನು ಬೆಳೆಸಲು ನಿರಂತರ ಪ್ರಯತ್ನಿಸುತ್ತಿವೆ ಎಂದು ಹೇಳಿದರು, ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ-ಪುನಸ್ಕಾರಗಳು ಹಾಗೂ ಸಾಮೂಹಿಕ ವಿವಾಹಗಳು ಭಕ್ತಿಭಾವದಿಂದ ನೆರವೇರಿದವು. ಕಾರ್ಯಕ್ರಮದಲ್ಲಿ ಒಟ್ಟು 20 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mlc-yathindra-siddaramaiah-mass-marriage-belagavi-event-gvd/articleshow-ugcfufx"/>
        </item>
        <item>
            <title><![CDATA[ರಾಜ್ಯದ ಜನತೆಗೆ 'ವಿದ್ಯುತ್ ದರ ಏರಿಕೆ' ಶಾಕ್ ಕೊಟ್ಟ ಗ್ಯಾರಂಟಿ ಸರ್ಕಾರ! ಪ್ರತಿ ಯೂನಿಟ್ ಮೇಲೆ 56 ಪೈಸೆ ಹೆಚ್ಚಳ ಆದೇಶ!]]></title>
            <link>https://kannada.asianetnews.com/state/karnataka-govt-kerc-electricity-tariff-hike-all-escom-s-56-paise-per-unit-from-may-2026-sat/articleshow-szs4nly</link>
            <guid isPermaLink="true">https://kannada.asianetnews.com/state/karnataka-govt-kerc-electricity-tariff-hike-all-escom-s-56-paise-per-unit-from-may-2026-sat/articleshow-szs4nly</guid>
            <pubDate>Fri, 17 Apr 2026 19:58:45 +0530</pubDate>
            <description><![CDATA[&lt;p&gt;ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್&zwnj;ಗೆ 56 ಪೈಸೆ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿದೆ. ಆದಾಯ ಕೊರತೆ ಸರಿದೂಗಿಸಲು ಈ 'ಟ್ರೂ ಅಪ್' ಶುಲ್ಕವನ್ನು ವಿಧಿಸಲಾಗಿದ್ದು, ಮೇ 2026 ರಿಂದ ಗ್ರಾಹಕರ ಬಿಲ್&zwnj;ನಲ್ಲಿ ಇದು ಜಾರಿಗೆ ಬರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdxfp3bn2cqhts9n9av6jte,imgname-karnataka-electricity-tariff-hike-1776436107371.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಸು&lt;/strong&gt;ಡುವ ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ವಿದ್ಯುತ್ (ಎಲ್ಲಾ ಎಸ್ಕಾಂಗಳು-ESCOM) ಗ್ರಾಹಕರಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ಆದೇಶದನ್ವಯ ಪ್ರತಿ ಯೂನಿಟ್ ವಿದ್ಯುತ್ ಬಳಕೆಯ ಮೇಲೆ 56 ಪೈಸೆ ಹೆಚ್ಚುವರಿ ಹೊರೆಯನ್ನು ಗ್ರಾಹಕರು ಹೊರಬೇಕಾಗಿದೆ.&lt;/p&gt;&lt;h2&gt;&lt;strong&gt;ದರ ಏರಿಕೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಕೆಇಆರ್&zwnj;ಸಿ ಹೊರಡಿಸಿರುವ ಆದೇಶದ ಪ್ರಕಾರ, ಈ ದರ ಏರಿಕೆಯು 2024-25ರ ಆರ್ಥಿಕ ವರ್ಷದ ಆದಾಯದ ಕೊರತೆಯನ್ನು ಸರಿದೂಗಿಸಲು ಮಾಡಲಾದ 'ಟ್ರೂ ಅಪ್' (True up Charges) ಪ್ರಕ್ರಿಯೆಯಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಬೆಸ್ಕಾಂ ಒಟ್ಟು 34,087.94 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಿತ್ತು. ಆದರೆ, ವಾಸ್ತವದಲ್ಲಿ ವಿದ್ಯುತ್ ಮಾರಾಟದಿಂದ ಬಂದ ಆದಾಯ ಕೇವಲ 32,019.56 ಕೋಟಿ ರೂಪಾಯಿಗಳು ಮಾತ್ರ. ಇದರಿಂದಾಗಿ ಬೆಸ್ಕಾಂಗೆ ಬರೋಬ್ಬರಿ 2,068.38 ಕೋಟಿ ರೂಪಾಯಿಗಳ ಬೃಹತ್ ಆದಾಯದ ಕೊರತೆ ಉಂಟಾಗಿದೆ.&lt;/p&gt;&lt;p&gt;ಈ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಕೊರತೆಯನ್ನು ತುಂಬಿಕೊಳ್ಳಲು ಎಸ್ಕಾಂಗಳು ದರ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಕೆಇಆರ್ಸಿ, ಕೊರತೆಯನ್ನು ನೀಗಿಸಲು ಪ್ರತಿ ಯೂನಿಟ್&zwnj;ಗೆ 56 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅನುಮತಿ ನೀಡಿದೆ.&lt;/p&gt;&lt;h2&gt;&lt;strong&gt;ಯಾವಾಗಿನಿಂದ ಜಾರಿಗೆ ಬರಲಿದೆ?&lt;/strong&gt;&lt;/h2&gt;&lt;p&gt;ಕೆಇಆರ್&zwnj;ಸಿಯ ಈ ಆದೇಶವು ಏಪ್ರಿಲ್ 17, 2026 ರಂದು ಹೊರಬಿದ್ದಿದ್ದು, ಪರಿಷ್ಕೃತ ದರವು 2026 ರ ಮೇ 1 ರಿಂದ ಜಾರಿಗೆ ಬರಲಿದೆ. ಅಂದರೆ, ಮೇ ತಿಂಗಳಿನಲ್ಲಿ ಬರುವ ವಿದ್ಯುತ್ ಬಿಲ್&zwnj;ಗಳಲ್ಲಿ ಗ್ರಾಹಕರು ಈ ಹೆಚ್ಚುವರಿ 56 ಪೈಸೆ 'ಟ್ರೂ ಅಪ್' ದರವನ್ನು ಪಾವತಿಸಬೇಕಾಗುತ್ತದೆ. ಈ ವಸೂಲಾತಿಯು 2026-27ರ ಇಡೀ ಆರ್ಥಿಕ ವರ್ಷದಲ್ಲಿ ಅನ್ವಯವಾಗಲಿದ್ದು, ಏಪ್ರಿಲ್ 30, 2027 ರವರೆಗೆ ಮುಂದುವರಿಯಲಿದೆ.&lt;/p&gt;&lt;h3&gt;&lt;strong&gt;ಗ್ರಾಹಕರ ಮೇಲೆ ಬೀರುವ ಪ್ರಭಾವ:&lt;/strong&gt;&lt;/h3&gt;&lt;p&gt;ಗೃಹಬಳಕೆದಾರರು ಮಾತ್ರವಲ್ಲದೆ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶದ ವಿದ್ಯುತ್ ಗ್ರಾಹಕರಿಗೂ ಈ ಏರಿಕೆ ಅನ್ವಯವಾಗಲಿದೆ. ಉದಾಹರಣೆಗೆ, ಒಂದು ಮನೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸಿದರೆ, ಆ ಮನೆಯ ಬಿಲ್&zwnj;ನಲ್ಲಿ ಕನಿಷ್ಠ 112 ರೂಪಾಯಿಗಳಷ್ಟು ಹೆಚ್ಚುವರಿ ಮೊತ್ತ ಸೇರ್ಪಡೆಯಾಗಲಿದೆ. ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕೈಗಾರಿಕೆಗಳಿಗೆ ಈ ದರ ಏರಿಕೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ.&lt;/p&gt;&lt;h2&gt;&lt;strong&gt;ಆದೇಶದ ಮುಖ್ಯಾಂಶಗಳು:&lt;/strong&gt;&lt;/h2&gt;&lt;ul&gt; &lt;li&gt;&lt;strong&gt;56 ಪೈಸೆ ಹೆಚ್ಚಳ: &lt;/strong&gt;ಪ್ರತಿ ಯೂನಿಟ್&zwnj;ಗೆ 56 ಪೈಸೆ ಟ್ರೂ ಅಪ್ ಚಾರ್ಜ್ ಸಂಗ್ರಹ.&lt;/li&gt; &lt;li&gt;&lt;strong&gt;ಮೇ 2026 ರಿಂದ ಜಾರಿ: &lt;/strong&gt;ಮೇ 1 ರಿಂದ ಪಡೆಯುವ ಮೀಟರ್ ರೀಡಿಂಗ್&zwnj;ಗಳಲ್ಲಿ ದರ ಅನ್ವಯ.&lt;/li&gt; &lt;li&gt;&lt;strong&gt;ಕೊರತೆ ನೀಗಿಸುವ ಗುರಿ:&lt;/strong&gt; 2,068.38 ಕೋಟಿ ರೂ.ಗಳ ಕಂದಾಯ ಕೊರತೆ ತುಂಬಿಕೊಳ್ಳಲು ಕ್ರಮ.&lt;/li&gt; &lt;li&gt;&lt;strong&gt;ಪ್ರತ್ಯೇಕ ಲೆಕ್ಕಾಚಾರ: &lt;/strong&gt;ವಸೂಲಿ ಮಾಡುವ ಮೊತ್ತದ ಬಗ್ಗೆ ಬೆಸ್ಕಾಂ ಪ್ರತ್ಯೇಕ ಲೆಕ್ಕಪತ್ರವನ್ನು ನಿರ್ವಹಿಸಬೇಕೆಂದು ಕೆಇಆರ್ಸಿ ಸೂಚಿಸಿದೆ.&lt;/li&gt;&lt;/ul&gt;&lt;p&gt;ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈ ವಿದ್ಯುತ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-kerc-electricity-tariff-hike-all-escom-s-56-paise-per-unit-from-may-2026-sat/articleshow-szs4nly"/>
        </item>
        <item>
            <title><![CDATA[Breaking: ವಿಪಕ್ಷಗಳಿಗೆ ಜಯ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು]]></title>
            <link>https://kannada.asianetnews.com/india-news/womens-reservation-amendment-bill-defeated-in-lok-sabha-modi-government-setback-san/articleshow-hlakcvi</link>
            <guid isPermaLink="true">https://kannada.asianetnews.com/india-news/womens-reservation-amendment-bill-defeated-in-lok-sabha-modi-government-setback-san/articleshow-hlakcvi</guid>
            <pubDate>Fri, 17 Apr 2026 19:53:22 +0530</pubDate>
            <description><![CDATA[ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಸೋಲು ಕಂಡಿದೆ. ಹೊಸ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಇಲ್ಲದೆ ತ್ವರಿತವಾಗಿ ಜಾರಿಗೊಳಿಸಲು ಯತ್ನಿಸಿದ ಈ ಮಸೂದೆಯು, ಅಗತ್ಯವಾದ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ವಿಫಲವಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kpdkadn1gy9w8zatd4xdxjjy,imgname-rahul-gandhi-sparks-uproar-in-lok-sabha-jadugar-exposed-remark-triggers-political-storm-over-womens-bill-1776425449120.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.17): &lt;/strong&gt;ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲಾಗಿದೆ. ಶುಕ್ರವಾರ ಲೋಕಸಭೆಯಲ್ಲಿ ನಡೆದ ಮತದಾನದಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಮತದಾನಕ್ಕೆ ಇಳಿಸಿದಾಗ 540 ಸಂಸದರ ಪೈಕಿ 526 ಮಂದಿ ಸಂಸದರ ಮತದಾನ ಮಾಡಿದರು. ತಿದ್ದುಪಡಿಯ ಪರವಾಗಿ 298 ಮಂದಿ ಮತ ಚಲಾಯಿಸಿದ್ದರೆ, ಮೀಸಲಾತಿಯ ವಿರುದ್ಧವಾಗಿ 230 ಮಂದಿ ಮತ ಚಲಾಯಿಸಿದರು. ಇದು ಪ್ರಮುಖವಾದ ಸಂವಿಧಾನ ತಿದ್ದುಪಡಿಯಾಗಿದ್ದ ಕಾರಣ ಮೂರನೇ ಎರಡರಷ್ಟು ಮತದಾನ ಪಡೆಯುವುದು ಅಗತ್ಯವಾಗಿತ್ತು. ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು ಹೊಸ ಜನಗಣತಿಯನ್ನು ನಡೆಸದೆಯೇ ಕ್ಷೇತ್ರ ಪುನರ್ವಿಂಗಡಣೆಯನ್ನು ಕೈಗೊಳ್ಳಲು ಪ್ರಯತ್ನಿಸುವ ಮಸೂದೆಯನ್ನು ಲೋಕಸಭೆ ಶುಕ್ರವಾರ ತಿರಸ್ಕರಿಸಿತು.&lt;/p&gt;&lt;p&gt;ಮತಗಳ ವಿಭಜನೆಯ ನಂತರ ಈ ಪ್ರಸ್ತಾವನೆಯನ್ನು ಸೋಲಿಸಲಾಯಿತು, 298 ಸದಸ್ಯರು ಪರವಾಗಿ ಮತ್ತು 230 ಸದಸ್ಯರು ವಿರುದ್ಧವಾಗಿ ಚಲಾಯಿಸಿದರು. ಒಟ್ಟು 528 ಸಂಸದರು ಮತದಾನದಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಪುನರ್ವಿಂಗಡಣೆಗಾಗಿ ಹೊಸ ಜನಗಣತಿಯ ಅಗತ್ಯವನ್ನು ತಪ್ಪಿಸುವ ಗುರಿಯನ್ನು ಮಸೂದೆ ಹೊಂದಿತ್ತು, ಇದು ಶಾಸಕಾಂಗಗಳಲ್ಲಿ ಮಹಿಳಾ ಕೋಟಾವನ್ನು ಜಾರಿಗೆ ತರುವ ಕೇಂದ್ರ ನಿಬಂಧನೆಯಾಗಿದೆ.&lt;/p&gt;&lt;p&gt;ಲೋಕಸಭೆಯಲ್ಲಿ ನಡೆದ ಮತದಾನದ ವೇಳೆ ಒಟ್ಟು 528 ಸದಸ್ಯರು ಹಾಜರಿದ್ದರು. ಮಸೂದೆ ಪಾಸ್&zwnj; ಮಾಡಲು 352 ಮತಗಳ ಅಗತ್ಯ ಸರ್ಕಾರಕ್ಕೆ ಇತ್ತು. ಕೇವಲ 54 ಮತಗಳ ಅಂತರದಿಂದ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ.&lt;/p&gt;&lt;p&gt;ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಮತ್ತು ಕ್ಷೇತ್ರ ಮರುವಿಂಗಡಣಾ ಚೌಕಟ್ಟಿನಲ್ಲಿ ಬದಲಾವಣೆ ತರಲು ಸರ್ಕಾರವು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಿತ್ತು. ಸಂವಿಧಾನ ತಿದ್ದುಪಡಿ ಮಸೂದೆ, ಕ್ಷೇತ್ರ ಮರುವಿಂಗಡಣಾ (ಡಿಲಿಮಿಟೇಶನ್) ಮಸೂದೆ, 2026 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2026 ಮತದಾನ ಮಾಡಲು ಅಣೀಯಾಗಿತ್ತು.&lt;/p&gt;&lt;h2&gt;&lt;strong&gt;ಸಂಸತ್ತಿನಲ್ಲಿ ನಡೆದ ಹೈಡ್ರಾಮಾ&lt;/strong&gt;&lt;/h2&gt;&lt;p&gt;ಗುರುವಾರ ಈ ಮಸೂದೆಗಳನ್ನು ಸದನದಲ್ಲಿ ಮಂಡಿಸಲಾಯಿತು. ಈ ವೇಳೆ ವಿರೋಧ ಪಕ್ಷಗಳು ಧ್ವನಿ ಮತದ ಬದಲು ಕಡ್ಡಾಯವಾಗಿ ಮತ ವಿಭಜನೆಗೆ (Division Vote) ಆಗ್ರಹಿಸಿದವು. ಮಸೂದೆಗಳ ಮಂಡನೆಯ ಪ್ರಸ್ತಾವನೆಗೆ ನಡೆದ ಆರಂಭಿಕ ಮತದಾನದಲ್ಲಿ 333 ಸದಸ್ಯರ ಪೈಕಿ 251 ಮಂದಿ ಪರವಾಗಿ ಹಾಗೂ 185 ಮಂದಿ ವಿರುದ್ಧವಾಗಿ ಮತ ಚಲಾಯಿಸಿದ್ದರು.&lt;/p&gt;&lt;h2&gt;&lt;strong&gt;ವಿಶೇಷ ಅಧಿವೇಶನದ ಉದ್ದೇಶ&lt;/strong&gt;&lt;/h2&gt;&lt;p&gt;'ನಾರಿ ಶಕ್ತಿ ವಂದನ್ ಅಧಿನಿಯಮ'ಕ್ಕೆ ಸಂಬಂಧಿಸಿದ ತಿದ್ದುಪಡಿಗಳನ್ನು ತ್ವರಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ಏಪ್ರಿಲ್ 16 ರಿಂದ 18 ರವರೆಗೆ ಸಂಸತ್ತಿನ ಈ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಆದರೆ, ಈಗ ತಿದ್ದುಪಡಿ ಮಸೂದೆಗೆ ಸೋಲಾಗಿರುವುದು ಸರ್ಕಾರಕ್ಕೆ ದೊಡ್ಡ ರಾಜತಾಂತ್ರಿಕ ಹಿನ್ನಡೆಯಾಗಿ ಪರಿಣಮಿಸಿದೆ.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/womens-reservation-amendment-bill-defeated-in-lok-sabha-modi-government-setback-san/articleshow-hlakcvi"/>
        </item>
        <item>
            <title><![CDATA[ಸಿನಿಮಾ ಫೋಟೋ: ಹೆಣ್ಣಿನ ಬಗ್ಗೆ ಕಾಂಗ್ರೆಸ್​ ವಕ್ತಾರೆ ಅಶ್ಲೀಲ ಭಾಷೆ- ಸಂಸತ್ತಿನಲ್ಲಿ ಗುಡುಗಿದ Kangana Ranaut]]></title>
            <link>https://kannada.asianetnews.com/gallery/politics/kangana-ranaut-slammed-congress-leader-supriya-shrinat-suc-l7zn826</link>
            <guid isPermaLink="true">https://kannada.asianetnews.com/gallery/politics/kangana-ranaut-slammed-congress-leader-supriya-shrinat-suc-l7zn826</guid>
            <pubDate>Fri, 17 Apr 2026 19:28:21 +0530</pubDate>
            <description><![CDATA[ಸಂಸದೆಯಾದ ಬಳಿಕ ಕಂಗನಾ ರಣಾವತ್, ತಮ್ಮ ಹಳೆಯ ಫೋಟೋ ಬಳಸಿ ಅಶ್ಲೀಲ ಕಮೆಂಟ್ ಮಾಡಿದ್ದ ಕಾಂಗ್ರೆಸ್ ವಕ್ತಾರರ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ್ದಾರೆ. ನಟಿಯಾಗಿ ಪಾತ್ರಕ್ಕೆ ತಕ್ಕಂತೆ ಬಟ್ಟೆ ಧರಿಸುವುದು ನನ್ನ ಧರ್ಮ ಎಂದ ಅವರು, ಈ ಕೀಳು ಮನಸ್ಥಿತಿಯೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdvqag0ne53hxhz2881x8bm,imgname-supriya-shrinath-and-kangana-ranaut-1776434260479.jpg" type="image/jpeg" height="390" width="690"/>
            <content:encoded><![CDATA[ಸಂಸದೆಯಾದ ಬಳಿಕ ಕಂಗನಾ ರಣಾವತ್, ತಮ್ಮ ಹಳೆಯ ಫೋಟೋ ಬಳಸಿ ಅಶ್ಲೀಲ ಕಮೆಂಟ್ ಮಾಡಿದ್ದ ಕಾಂಗ್ರೆಸ್ ವಕ್ತಾರರ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ್ದಾರೆ. ನಟಿಯಾಗಿ ಪಾತ್ರಕ್ಕೆ ತಕ್ಕಂತೆ ಬಟ್ಟೆ ಧರಿಸುವುದು ನನ್ನ ಧರ್ಮ ಎಂದ ಅವರು, ಈ ಕೀಳು ಮನಸ್ಥಿತಿಯೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.&lt;img&gt;&lt;p&gt;ನಟಿ ಕಂಗನಾ ರಣಾವತ್​ ಮೊದಲಿನಿಂದಲೂ ಮಾತಿಗೆ ನಿಂತರೆ ಎಂಥವರಿಗೂ ಕೇರೇ ಮಾಡಲ್ಲ. ಈಗ ಸಂಸದೆ. ಮತ್ತೆ ಕೇಳಬೇಕಾ? ಹಿಮಾಚಲ ಪ್ರದೇಶದಿಂದ ಮೊದಲ ಬಾರಿಗೆ ನಿಂತು ಭರ್ಜರಿ ಗೆಲುವು ಸಾಧಿಸಿದವರು ನಟಿ.&lt;/p&gt;&lt;img&gt;&lt;p&gt;ಕೆಲವೊಮ್ಮೆ ರಾಜಕೀಯದಲ್ಲಿಯಾಗಲೀ, ಬೇರೆ ಜೀವನದಲ್ಲಿ ಆಗಲೀ, ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲದಾಗ, ಅವರನ್ನು ಸೋಲಿಸುವುದು ಸುಲಭ ಅಲ್ಲ ಎಂದು ಎನ್ನಿಸಿದಾಗ ಏನೋ ಒಂದು ವಿಷಯ ಕೆದಕಿ ಕೆಟ್ಟದ್ದಾಗಿ ಮಾತನಾಡಿ ಸಮಾಧಾನ ಪಟ್ಟುಕೊಳ್ಳುವುದು ಮಾಮೂಲು. ಅದೇ ರೀತಿ, ನಟಿ ಕಂಗನಾ ಅವರ ವಿಷಯದಲ್ಲಿಯೂ ಆಗಿದೆ.&lt;/p&gt;&lt;img&gt;&lt;p&gt;ನಟಿಯಾಗಿರುವ ಕಂಗನಾ, ಟೂ ಪೀಸ್​ನಿಂದ ಹಿಡಿದು ಝಾನ್ಸಿ ರಾಣಿಯವರೆಗೂ ಡ್ರೆಸ್​ ಮಾಡಿಕೊಂಡವರು, ನ್ಯಾಷನಲ್​ ಅವಾರ್ಡ್​ ಗೆದ್ದವರು. ಆದರೆ ಅವರ ತುಂಡುಡುಗೆಯ ಫೋಟೋ ಶೇರ್ ಮಾಡಿಕೊಂಡು ಮಂಡಿಯ (ಕಂಗನಾ ಗೆದ್ದ ಪ್ರದೇಶ) ಜನ ಎಷ್ಟಕ್ಕೆ ಸಿಗುತ್ತಾರೆ ಎಂದು ಕಾಂಗ್ರೆಸ್​ ವಕ್ತಾರೆ ಸುಪ್ರಿಯಾ ಶ್ರೀನಾಥ್​ (Supriya Srinath) ಪೋಸ್ಟ್​ ಹಾಕಿದ್ದರು.&lt;/p&gt;&lt;img&gt;&lt;p&gt;ಅದರ ಬಗ್ಗೆ ಸಂಸತ್ತಿನಲ್ಲಿ ಗುಡುಗಿದ್ದಾರೆ ನಟಿ ಕಂಗನಾ. ನಾನು 2014ರಲ್ಲಿ ಚುನಾವಣೆ ನಿಂತಾಗ ಇಂಥದ್ದೊಂದು ಫೋಟೋ ಹಾಕಿ ನನ್ನನ್ನು ಟೀಕಿಸಲಾಗಿತ್ತು. ನಾನೊಬ್ಬ ನಟಿ. ಎಲ್ಲಾ ರೀತಿಯ ಡ್ರೆಸ್​ಗಳನ್ನು ಹಾಕುತ್ತೇನೆ. ಇತಿಹಾಸಕಾರರ ರೋಲ್​ಗಳನ್ನೂ ಮಾಡಿದ್ದೇನೆ, ಸೆ*ಕ್ಸ್ workers, ಫ್ಯಾಷನ್​ ಡ್ರಗ್​ ಎಡಿಕ್ಟ್​ ರೋಲ್​ನಿಂದ ಹಿಡಿದು ಎಲ್ಲಾ ರೀತಿಯ ಪಾತ್ರ ಮಾಡಿದ್ದೇನೆ. ​&lt;/p&gt;&lt;img&gt;&lt;p&gt;ಒಂದು ನಟಿಯಾಗಿ ನನ್ನ ಧರ್ಮ ನಾನು ಪಾಲಿಸಿದ್ದೇನೆ. ಆದರೆ ಯಾವುದೋ ಒಂದು ಸಿನಿಮಾದ ಯಾವುದೋ ಒಂದು ರೋಲ್​ನ ಫೋಟೋ ಹಾಕಿಕೊಂಡು ಕಾಂಗ್ರೆಸ್​ನ ವಕ್ತಾರೆ ಈ ಅಶ್ಲೀಲ ಕಮೆಂಟ್​ ಹಾಕಿದ್ದು, ಇಡೀ ಮಂಡಿ ಮಹಿಳೆಯರನ್ನು ಅವಮಾನಿಸಿದ್ದಾರೆ.&lt;/p&gt;&lt;img&gt;&lt;p&gt;ಮಂಡಿ ಎನ್ನುವುದು ಸಾಧಾರಣ ಸ್ಥಳವಲ್ಲ, ಅಲ್ಲಿ ಮಾಂಡವ ಋಷಿ ತಪಸ್ಸು ಮಾಡಿದ್ದರಿಂದ ಮಂಡಿ ಎಂದು ಹೆಸರು ಬಂದಿದೆ. ಇಂಥ ಮಂಡಿ ಕ್ಷೇತ್ರದ ಬಗ್ಗೆ, ಅಲ್ಲಿರುವ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ಅಶ್ಲೀಲವಾಗಿ ಮಾತನಾಡಲಾಗಿದೆ ಎಂದು ನಟಿ ಕಂಗನಾ ಗುಡುಗಿದ್ದಾರೆ. ಕಾಂಗ್ರೆಸ್ಸಿಗರ ಈ ಕೀಳು ಮನಸ್ಥಿತಿಯಿಂದಲೇ ಅಲ್ಲಿ ಅವರು ಸೋತು, ನಾನು ಗೆಲುವು ಸಾಧಿಸಿದೆ ಎಂದಿದ್ದಾರೆ ನಟಿ. ಹಳೆಯ ವಿಡಿಯೋ ಮತ್ತೀಗ ವೈರಲ್​ ಆಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/politics/kangana-ranaut-slammed-congress-leader-supriya-shrinat-suc-l7zn826"/>
        </item>
        <item>
            <title><![CDATA[ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಚಿತ್ರಿಸಿ 'ವಿಷು' ಹಬ್ಬದ ವಿಶ್‌; ರೆಸ್ಟೋರೆಂಟ್‌ ಮಾಲೀಕ ಆರ್ಶದ್‌ ಅರೆಸ್ಟ್‌!]]></title>
            <link>https://kannada.asianetnews.com/india-news/kerala-restaurant-owner-arshad-arrested-lord-krishna-chicken-mandi-poster-row-san/articleshow-0bqal64</link>
            <guid isPermaLink="true">https://kannada.asianetnews.com/india-news/kerala-restaurant-owner-arshad-arrested-lord-krishna-chicken-mandi-poster-row-san/articleshow-0bqal64</guid>
            <pubDate>Fri, 17 Apr 2026 19:02:53 +0530</pubDate>
            <description><![CDATA[&lt;p&gt;ಕೇರಳದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್&zwnj;ನಲ್ಲಿ ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಇರಿಸಿದ ಚಿತ್ರವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ರೆಸ್ಟೋರೆಂಟ್ ಮಾಲೀಕನನ್ನು ಬಂಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdnzpa7r6t4wfzc88ssgstz,imgname-fotojet--33--1776428243271.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಚ್ಚಿ (ಏ.17): &lt;/strong&gt;ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಕೋರುವ ಪೋಸ್ಟರ್&zwnj;ನಲ್ಲಿ ಶ್ರೀಕೃಷ್ಣನ ಪಕ್ಕದಲ್ಲಿ ಚಿಕನ್ ಮಂದಿ (ಚಿಕನ್ ಮತ್ತು ರೈಸ್) ಖಾದ್ಯವನ್ನು ಚಿತ್ರೀಕರಿಸಿದ ಆರೋಪದ ಮೇಲೆ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಮಲಯಾಳಿಗಳ ಹೊಸ ವರ್ಷವಾದ 'ವಿಷು' ಹಬ್ಬದ ಅಂಗವಾಗಿ ಚೆರ್ತಲಾದ ಮನೋರಮಾ ಜಂಕ್ಷನ್ ಬಳಿ ಇರುವ 'ಮೆಹರ್ ಮಂತಿ ಆ್ಯಂಡ್ ಗ್ರಿಲ್ಸ್' ರೆಸ್ಟೋರೆಂಟ್&zwnj;ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್&zwnj;ವೊಂದು ಹರಿದಾಡಿತ್ತು. ಆ ಪೋಸ್ಟರ್&zwnj;ನಲ್ಲಿ ಶ್ರೀಕೃಷ್ಣನ ಚಿತ್ರದ ಮುಂದೆ ಗ್ರಿಲ್ಡ್ ಚಿಕನ್ ಮತ್ತು ಮಂದಿ ರೈಸ್ ಇರುವ ತಟ್ಟೆಯನ್ನು ಇಡಲಾಗಿತ್ತು. ಈ ಚಿತ್ರವು ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ವಕೀಲ ಎಂ.ವಿ. ಬಿಜು ಎಂಬುವವರು ದೂರು ದಾಖಲಿಸಿದ್ದರು.&lt;/p&gt;&lt;h2&gt;&lt;strong&gt;ರೆಸ್ಟೋರೆಂಟ್&zwnj; ಮಾಲೀಕನ ಬಂಧನ&lt;/strong&gt;&lt;/h2&gt;&lt;p&gt;ದೂರಿನ ಅನ್ವಯ ಪೊಲೀಸರು ರೆಸ್ಟೋರೆಂಟ್ ಮಾಲೀಕ ಅರ್ಷಾದ್ ಎಂಬುವವರನ್ನು ಬಂಧಿಸಿದ್ದಾರೆ. ಕೋಮು ಶಾಂತಿ ಕದಡುವ ಉದ್ದೇಶ ಮತ್ತು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಪರಾಧಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.&lt;/p&gt;&lt;h2&gt;&lt;strong&gt;ರೆಸ್ಟೋರೆಂಟ್ ಪಾಲುದಾರನ ಕ್ಷಮೆಯಾಚನೆ&lt;/strong&gt;&lt;/h2&gt;&lt;p&gt;ವಿವಾದ ತಾರಕಕ್ಕೇರುತ್ತಿದ್ದಂತೆ ರೆಸ್ಟೋರೆಂಟ್&zwnj;ನ ವ್ಯವಸ್ಥಾಪಕ ಪಾಲುದಾರ ಶಮೀರ್ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. &quot;ಈ ಪೋಸ್ಟರ್ ಅನ್ನು ಉದ್ದೇಶಪೂರ್ವಕವಾಗಿ ಹಂಚಿಕೊಂಡಿಲ್ಲ. ಖಾಸಗಿ ಗ್ರೂಪ್ ಒಂದರಲ್ಲಿ ಇದು ಹರಿದಾಡಿತ್ತು, ಅಲ್ಲಿ ಆಕ್ಷೇಪ ವ್ಯಕ್ತವಾದ ತಕ್ಷಣ ಅದನ್ನು ತೆಗೆಯಲು ಯತ್ನಿಸಲಾಯಿತು. ಆದರೆ ಸಂವಹನದ ಕೊರತೆಯಿಂದ ಅದು ವೈರಲ್ ಆಗಿದೆ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ,&quot; ಎಂದು ಅವರು ವಿನಂತಿಸಿದ್ದಾರೆ.&lt;/p&gt;&lt;h2&gt;&lt;strong&gt;ಉಸ್ತಾದ್ ಅನ್ಸಾರಿ ಸುಹ್ರಿ ಅವರ ತೀಕ್ಷ್ಣ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;ಈ ಘಟನೆಯ ಕುರಿತು ಕೇರಳದ ಪ್ರಮುಖ ಮುಸ್ಲಿಂ ನಾಯಕ ಉಸ್ತಾದ್ ಅನ್ಸಾರಿ ಸುಹ್ರಿ ಅವರು ಫೇಸ್&zwnj;ಬುಕ್ ವಿಡಿಯೋ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ. &quot;ನೀವು ವಿಷು ಶುಭಾಶಯ ಕೋರಲೇಬೇಕೆಂದಿಲ್ಲ, ಆದರೆ ಶುಭಾಶಯದ ಹೆಸರಿನಲ್ಲಿ ಕೋಮುದ್ವೇಷ ಹಚ್ಚಬೇಡಿ. ಇಂತಹ ಕೃತ್ಯಗಳು ಸಮಾಜದಲ್ಲಿ ಶಾಂತಿ ಕದಡಲು ದಾರಿ ಮಾಡಿಕೊಡುತ್ತವೆ. ಕೆಲವು ತಪ್ಪುಗಳು ಮನುಷ್ಯನ ಜೀವಕ್ಕೆ ಬೆಲೆ ತೆರುವಂತೆ ಮಾಡುತ್ತವೆ,&quot; ಎಂದು ಅವರು ಎಚ್ಚರಿಸಿದ್ದಾರೆ.&lt;/p&gt;&lt;p&gt;&quot;ಒಂದು ಸಮುದಾಯವು ಅತ್ಯಂತ ಗೌರವದಿಂದ ಕಾಣುವ ದೈವದ ಮುಂದೆ ಮಾಂಸಾಹಾರವನ್ನು ಚಿತ್ರಿಸಬಾರದು ಎಂಬ ಕನಿಷ್ಠ ಜ್ಞಾನ ಚಿಕ್ಕ ಮಕ್ಕಳಿಗೂ ಇರುತ್ತದೆ. ಇಂತಹ ಕೆಲಸಗಳಿಂದ ಸಾಮಾನ್ಯ ಹಿಂದೂ ಸಹೋದರರ ಮನಸ್ಸಿನಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ಮೂಡುವಂತೆ ಮಾಡಲಾಗುತ್ತಿದೆ,&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇದೇ ವೇಳೆ ಅವರು ನೆಯ್ಯಾಟ್ಟಿಂಕರ ದೇವಸ್ಥಾನವೊಂದರಲ್ಲಿ ಮದ್ಯದ ಬಾಟಲಿಗಳು ಪತ್ತೆಯಾದ ಘಟನೆಯನ್ನು ಸ್ಮರಿಸುತ್ತಾ, &quot;ಯಾರೇ ಧಾರ್ಮಿಕ ನಿಂದನೆ ಮಾಡಿದರೂ ಅದನ್ನು ಸಮಾನವಾಗಿ ಖಂಡಿಸಬೇಕು. ಆಯಾ ವ್ಯಕ್ತಿಯ ಧರ್ಮ ಅಥವಾ ವಸ್ತ್ರ ನೋಡಿ ವಿರೋಧದ ತೀವ್ರತೆ ಬದಲಾಗಬಾರದು. ಎಲ್ಲಿ ನಿಂದನೆಯಾದರೂ ಅಲ್ಲಿ ನ್ಯಾಯಯುತವಾಗಿ ಪ್ರತಿಕ್ರಿಯಿಸುವುದೇ ಧರ್ಮ,&quot; ಎಂದು ಅವರು ನುಡಿದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/kerala-restaurant-owner-arshad-arrested-lord-krishna-chicken-mandi-poster-row-san/articleshow-0bqal64"/>
        </item>
        <item>
            <title><![CDATA[ವಿನಯ್ ಕುಲಕರ್ಣಿ ಶಿಕ್ಷೆ ಹಿಂದಿದೆ ಬಿಜೆಪಿ 'ಒಳಸಂಚು': ನನಗೂ ಹೀಗೆಯೇ ಕಿರುಕುಳ ಕೊಟ್ಟಿದ್ದರು! ಡಿಕೆಶಿ ಸ್ಫೋಟಕ ಹೇಳಿಕೆ]]></title>
            <link>https://kannada.asianetnews.com/state/dk-shivakumar-reaction-on-vinay-kulkarni-life-imprisonment-bjp-conspiracy-allegation-sat/articleshow-x0trr11</link>
            <guid isPermaLink="true">https://kannada.asianetnews.com/state/dk-shivakumar-reaction-on-vinay-kulkarni-life-imprisonment-bjp-conspiracy-allegation-sat/articleshow-x0trr11</guid>
            <pubDate>Fri, 17 Apr 2026 18:32:04 +0530</pubDate>
            <description><![CDATA[&lt;p&gt;ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ವಿಧಿಸಲಾದ ಜೀವಾವಧಿ ಶಿಕ್ಷೆಯು ಬಿಜೆಪಿಯ ರಾಜಕೀಯ ಪಿತೂರಿಯಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕುಲಕರ್ಣಿಯವರ ರಾಜಕೀಯ ಬೆಳವಣಿಗೆಯನ್ನು ಸಹಿಸದೆ ಅವರನ್ನು ಸಿಲುಕಿಸಲಾಗಿದೆ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdr9z7v0em636q8kj0wtycz,imgname-dk-shivakumar-about-vinay-kulkarni-in-jail-1776430677243.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.17): ಧಾ&lt;/strong&gt;ರವಾಡದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯ ಬಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ವಿನಯ್ ಕುಲಕರ್ಣಿ ವಿರುದ್ಧದ ಈ ತೀರ್ಪಿನ ಹಿಂದೆ ರಾಜಕೀಯ ಪಿತೂರಿ ಇದೆ' ಎಂದು ನೇರವಾಗಿ ಬಿಜೆಪಿಯತ್ತ ಬೆರಳು ತೋರಿಸಿದ್ದಾರೆ.&lt;/p&gt;&lt;h3&gt;&lt;strong&gt;ಇದು ಬಿಜೆಪಿಯ ರಾಜಕೀಯ ಒಳಸಂಚು:&lt;/strong&gt;&lt;/h3&gt;&lt;p&gt;'ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಆದರೆ ಈ ಇಡೀ ಪ್ರಕರಣದ ತನಿಖೆ ನಡೆದ ಹಾದಿಯಲ್ಲಿ ದೊಡ್ಡ ಒಳಸಂಚು ಅಡಗಿದೆ. ಬಿ-ರಿಪೋರ್ಟ್ ಸಲ್ಲಿಕೆಯಾಗುವ ಹಂತದಲ್ಲಿದ್ದ ಪ್ರಕರಣವನ್ನು ಮತ್ತೆ ಕೆದಕಿ ಅವರನ್ನು ಸಿಲುಕಿಸಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ವಿನಯ್ ಕುಲಕರ್ಣಿ ಅವರು ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದರು. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿ ಅವರ ಬೆಳವಣಿಗೆಯನ್ನು ಸಹಿಸದ ಬಿಜೆಪಿ ನಾಯಕರು, ಅವರನ್ನು ರಾಜಕೀಯವಾಗಿ ಮುಗಿಸಲು ಈ ಸಂಚು ರೂಪಿಸಿದ್ದಾರೆ' ಎಂದು ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದರು.&lt;/p&gt;&lt;h2&gt;&lt;strong&gt;ನನಗೂ ಕಿರುಕುಳ ನೀಡಿದ್ದರು:&lt;/strong&gt;&lt;/h2&gt;&lt;p&gt;ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಡಿಕೆಶಿ, 'ನನಗೂ ಇದೇ ರೀತಿ ಕಿರುಕುಳ ನೀಡಲಾಗಿತ್ತು. ನಾನು ಜೈಲಿಗೆ ಹೋಗಿ ಬಂದೆ, ಆದರೆ ಅಂತಿಮವಾಗಿ ಸುಪ್ರೀಂಕೋರ್ಟ್&zwnj;ನಲ್ಲಿ ನನಗೆ ನ್ಯಾಯ ಸಿಕ್ಕಿತು. ವಿನಯ್ ಕುಲಕರ್ಣಿ ಅವರ ಕುಟುಂಬದ ಜೊತೆ ನಾನು ಮಾತನಾಡಿದ್ದೇನೆ. ಅವರು ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನನಗಿದೆ. ಕಾನೂನಿನಲ್ಲಿ ಇನ್ನು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ, ಅವರನ್ನು ನಂಬಿದ ದೇವರು ಕೈಬಿಡುವುದಿಲ್ಲ' ಎಂದು ಧೈರ್ಯ ತುಂಬಿದರು.&lt;/p&gt;&lt;h2&gt;&lt;strong&gt;ಸಚಿವ ಸ್ಥಾನ ಮತ್ತು ಜಮೀರ್ ರಾಜೀನಾಮೆ:&lt;/strong&gt;&lt;/h2&gt;&lt;p&gt;ರಾಜ್ಯ ಕಾಂಗ್ರೆಸ್&zwnj;ನಲ್ಲಿ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರು ಒತ್ತಡ ಹೇರುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ಅದೆಲ್ಲವೂ ಹಿರಿಯ ಶಾಸಕರಿಗೆ ಬಿಟ್ಟಿದ್ದು. ನಮ್ಮಲ್ಲಿ ಸಿದ್ದರಾಮಯ್ಯ ತಂಡ ಅಥವಾ ಡಿ.ಕೆ. ಶಿವಕುಮಾರ್ ತಂಡ ಎಂಬ ಭೇದವಿಲ್ಲ. ದೆಹಲಿಗೆ ಬರುವ ವಿಚಾರದ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರಿಸುತ್ತಾರೆ' ಎಂದರು. ಇನ್ನು ಸಚಿವ ಜಮೀರ್ ಅಹ್ಮದ್ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗಳೆದ ಡಿಕೆಶಿ, 'ಈ ಬಗ್ಗೆ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಪತ್ರಿಕೆಗಳಲ್ಲಿ ಬಂದ ಸುದ್ದಿ ಬಗ್ಗೆ ನನಗೆ ಗೊತ್ತಿಲ್ಲ' ಎಂದು ಸ್ಪಷ್ಟಪಡಿಸಿದರು.&lt;/p&gt;&lt;h3&gt;&lt;strong&gt;ಮುಸ್ಲಿಂ ನಾಯಕರು ಟಾರ್ಗೆಟ್ ಆಗಿಲ್ಲ:&lt;/strong&gt;&lt;/h3&gt;&lt;p&gt;ಅಲ್ಪಸಂಖ್ಯಾತ ನಾಯಕರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, 'ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ನೀಡಿದಷ್ಟು ಬೆಂಬಲವನ್ನು ಬೇರೆ ಯಾರೂ ನೀಡಿಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರವು ಕೇವಲ ಅಲ್ಪಸಂಖ್ಯಾತರ ಸೀಟು ಅಲ್ಲ, ಅಲ್ಲಿ ಶಾಮನೂರು ಶಿವಶಂಕರಪ್ಪ ಅವರು ದಶಕಗಳಿಂದ ಕ್ಷೇತ್ರವನ್ನು ಉಳಿಸಿಕೊಂಡು ಬಂದಿದ್ದಾರೆ. ಟಿಕೆಟ್ ಹಂಚಿಕೆ ಕೆಲವು ವರದಿಗಳ ಆಧಾರದ ಮೇಲೆ ನಡೆದಿದೆ. ಯಾರನ್ನೂ ನಾವು ಟಾರ್ಗೆಟ್ ಮಾಡುತ್ತಿಲ್ಲ' ಎಂದು ಸಮರ್ಥಿಸಿಕೊಂಡರು.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/dk-shivakumar-reaction-on-vinay-kulkarni-life-imprisonment-bjp-conspiracy-allegation-sat/articleshow-x0trr11"/>
        </item>
        <item>
            <title><![CDATA[ಸಿಎಂ ಸಿದ್ದರಾಮಯ್ಯ ಬಗ್ಗೆ ನಟಿ ಉಮಾಶ್ರಿ ಇದೆಂಥ ಮಾತು- ವ್ಹಾರೆವ್ಹಾ ಎಂದ ನೆಟ್ಟಿಗರು]]></title>
            <link>https://kannada.asianetnews.com/politics/actress-umashree-praising-cm-siddaramaiah-and-his-behaviour-suc/articleshow-f6ltlsw</link>
            <guid isPermaLink="true">https://kannada.asianetnews.com/politics/actress-umashree-praising-cm-siddaramaiah-and-his-behaviour-suc/articleshow-f6ltlsw</guid>
            <pubDate>Fri, 17 Apr 2026 18:27:59 +0530</pubDate>
            <description><![CDATA[ಖ್ಯಾತ ನಟಿ ಉಮಾಶ್ರೀ ಅವರು ಸಂದರ್ಶನವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಕ್ತಿತ್ವ ಮತ್ತು ಕೊಡುಗೆಗಳನ್ನು ಮನಸಾರೆ ಹೊಗಳಿದ್ದಾರೆ. ಅವರೊಬ್ಬ ಶ್ರೇಷ್ಠ ವ್ಯಕ್ತಿ, ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ ಎಂದು ಬಣ್ಣಿಸಿದ್ದು, ಈ ಹೇಳಿಕೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdr92akq8k9q0pdq4ap9xkj,imgname-umashree-about-cm-1776430647635.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟನೆಯಲ್ಲಿ ನಂಬರ್ 1, ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರದೊಳಕ್ಕೆ ಹೋಗಿ ಅದನ್ನು ಮೈಮೇಲೆ ಆಹ್ವಾನಿಸಿಕೊಂಡು ನಟನೆ ಮಾಡುವ ಪರಿಯಿಂದಲೇ ಅಸಂಖ್ಯ ಅಭಿಮಾನಿಗಳನ್ನು ಗಳಿಸಿದವರು ನಟಿ ಉಮಾಶ್ರೀ. ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಪುಟ್ಟಕ್ಕನ ಪಾತ್ರದ ಮೂಲಕ ಇನ್ನೂ ಜನರಿಗೆ ಹತ್ತಿರವಾದವರು ನಟಿ. 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು, 'ಗುಲಾಬಿ ಟಾಕೀಸ್' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ನಟಿ ಮಾತ್ರವಲ್ಲದೇ, ರಾಜಕೀಯದಲ್ಲಿಯೂ ಮುಂದು ಉಮಾಶ್ರೀ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ 2013 ರಿಂದ 2018ರವರೆಗೆ ಸೇವೆ ಸಲ್ಲಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೈಮರೆತು ವರ್ಣನೆ&lt;/strong&gt;&lt;/h2&gt;&lt;p&gt;ಇದೀಗ ನಟಿ, ಸಿದ್ದರಾಮಯ್ಯ ಅವರ ಬಗ್ಗೆ ಕೆಲವೊಂದು ಮಾತುಗಳನ್ನಾಡಿದ್ದು, ಅದಕ್ಕೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಮೆಂಟ್ಸ್​ ಮಾಡುತ್ತಿದ್ದಾರೆ. sabhewithsaba ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ನಿರೂಪಕಿ, ಸಿದ್ದರಾಮಯ್ಯ ಅವರ ಬಗ್ಗೆ ಹೇಳಿ ಅಂದಾಗ, ನಟಿಯ ಹಾವಭಾವವೇ ಬದಲಾಗಿ ಹೋಯ್ತು. ಸಿದ್ದರಾಮಯ್ಯನವರ ಗುಣಗಾನದಲ್ಲಿ ತಮ್ಮ ಮೈಯನ್ನೇ ಮರೆತ ನಟಿ, ಅವರ ಒಂದೊಂದೇ ಒಳ್ಳೆಯ ಕೆಲಸಗಳನ್ನು, ಅವರ ಒಳ್ಳೆಯ ಗುಣಗಳನ್ನು ಹೇಳತೊಡಗಿದರು.&lt;/p&gt;&lt;h3&gt;&lt;strong&gt;ಪದಗಳೇ ಸಾಕಾಗಲ್ಲ&lt;/strong&gt;&lt;/h3&gt;&lt;p&gt;ಸಿದ್ದರಾಮಯ್ಯನವರದ್ದು ಗ್ರೇಟ್​ ಪರ್ಸನ್ಯಾಲಿಟಿ. ಹ್ಯೂಮನ್​. ಅವರ ಬಗ್ಗೆ ನನ್ನಂಥವರು ಮಾತನಾಡಲಿಕ್ಕೆ ಪದಗಳೇ ಸಾಕಾಗುವುದಿಲ್ಲ, ಅಂಥ ಒಂದು ವ್ಯಕ್ತಿತ್ವ. ಅವರಿವರು ಏನೇನೋ ಹೇಳಬಹುದು. ಆದರೆ ಅವರ ಹತ್ತಿರ ಇದ್ದು ಕಂಡವರಿಗೆ ಅವರು ಏನು ಎನ್ನುವುದು ಗೊತ್ತಿದೆ. ಪ್ರೀತಿಯನ್ನು ಹಂಚುವುದನ್ನು ಅವರಿಂದ ನೋಡಿ ಕಲಿಯಬೇಕು. ಅಯ್ಯೋ ಎಷ್ಟು ಚೆಂದ, ಗ್ರಾಮ್ಯ ಎಂದು ಬಣ್ಣಸಿದ್ದಾರೆ ನಟಿ. ಅವರಿಗೆ ಯಾರಾದರೂ ಇಷ್ಟ ಆದರು ಎಂದುಬಿಟ್ಟರೆ ಅವರು ಬೈದರೂ ಸ್ವೀಟ್​ ಆಗಿರುತ್ತದೆ. ಅವರು ಈ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳು ಇರಬಹುದು, ಎಲ್ಲರನ್ನೂ ಸಮಾನವಾಗಿ ಕಾಣುವಂಥದ್ದು ಇರಬಹುದು, ಪ್ರತಿಭೆಗಳನ್ನು ಹುಡುಕಿ ಅವಕಾಶ ಕೊಡುವುದು, ನಂಬಿದವರ ಕೈಹಿಡಿಯುವುದು... ಹೀಗೆ ಹೇಳುತ್ತಾ ಹೋದರೆ ಪದಗಳೇ ಸಾಕಾಗುವುದಿಲ್ಲ ಎಂದು ನಟಿ ಹೊಗಳಿದ್ದಾರೆ.&lt;/p&gt;&lt;h3&gt;&lt;strong&gt;ನೆಟ್ಟಿಗರು ಏನಂದ್ರು?&lt;/strong&gt;&lt;/h3&gt;&lt;p&gt;ಸಿದ್ದರಾಮಯ್ಯನವರ ಅಭಿಮಾನಿಗಳು ನಟಿಯ ಮಾತಿಗೆ ಭಲೆ ಭಲೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರ ವ್ಯಕ್ತಿತ್ವವೇ ಅಂಥದ್ದು ಎನ್ನುತ್ತಿದ್ದಾರೆ. ಇನ್ನು ಆಗದವರು ನಟನೆ ಓವರ್​ ಆಯ್ತು ಎನ್ನುತ್ತಿದ್ದಾರೆ. ಮತ್ತೆ ಕೆಲವರು ನಟಿಯಾಗಿ ನಿಮ್ಮ ಮೇಲೆ ಅಭಿಮಾನ ಇತ್ತು, ಆದರೆ ನೀವು ಈ ರೀತಿ ಮಾತನಾಡಿದ್ದು ಕೇಳಿ ಯಾಕೋ ಇದ್ದ ಅಭಿಮಾನವೂ ಹೋಯ್ತು ಎನ್ನುತ್ತಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/politics/actress-umashree-praising-cm-siddaramaiah-and-his-behaviour-suc/articleshow-f6ltlsw"/>
        </item>
        <item>
            <title><![CDATA[ವಿನಯ್‌ ಕುಲಕರ್ಣಿಗೆ ಜೀವಾವಧಿ: ಮಾಜಿ ಸಿಎಂ ಬಿಎಸ್‌ವೈ ಪ್ರತಿಕ್ರಿಯೆ, ಜೈಕಾರ ಹಾಕಿ ಸಂಭ್ರಮಿಸಿದ ಕಾರ್ಯಕರ್ತರು]]></title>
            <link>https://kannada.asianetnews.com/state/bs-yediyurappa-reacts-to-vinay-kulkarni-life-sentence-emotional-statement-in-chikkamagaluru-gdp/articleshow-15e2arw</link>
            <guid isPermaLink="true">https://kannada.asianetnews.com/state/bs-yediyurappa-reacts-to-vinay-kulkarni-life-sentence-emotional-statement-in-chikkamagaluru-gdp/articleshow-15e2arw</guid>
            <pubDate>Fri, 17 Apr 2026 18:19:23 +0530</pubDate>
            <description><![CDATA[ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾದ ಹಿನ್ನೆಲೆಯಲ್ಲಿ, ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಹಿಂದೆ ತಾನು ಹೇಳಿದ್ದೇ ಇಂದು ಸತ್ಯವಾಗಿದೆ ಎಂದಿದ್ದಾರೆ. 2019ರಲ್ಲಿ ತಾವೇ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿತ್ತು ಎಂದು ಅವರು ಸ್ಮರಿಸಿಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpdqh461n7b0sf06fd06jsxx,imgname-bs-yediyurappa-1776429863104.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಏ.17): &lt;/strong&gt;ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ, ಚಿಕ್ಕಮಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಆಜಾದ್ ಪಾರ್ಕ್ ವೃತ್ತದಲ್ಲಿ ಮಾತನಾಡಿದ ಅವರು, ಈ ಘಟನೆ ಬಗ್ಗೆ ಏನು ಹೇಳಬೇಕು ಎನ್ನುವುದು ನನಗೆ ತೋಚುತ್ತಿಲ್ಲ. ಆ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ. ಈ ರೀತಿಯ ಘಟನೆ ನಡೆಯಬಾರದಿತ್ತು, ಆದರೆ ನಡೆದಿದ್ದು ದುಃಖಕರ. ಅಪರಾಧ ನಡೆದ ಸಂದರ್ಭದಲ್ಲಿ ನಾನು ಹೇಳಬೇಕಿದ್ದನ್ನು ಆಗಲೇ ಹೇಳಿದ್ದೆ. ಇಂದು ನಾನು ಹೇಳಿದ್ದೇ ಸತ್ಯ ಎಂಬಂತೆ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟರು.&lt;/p&gt;&lt;h2&gt;ಬಿಎಸ್&zwnj;ವೈಗೆ &amp;nbsp;ಜೈಕಾರ ಹಾಕಲು ಕಾರಣ&lt;/h2&gt;&lt;p&gt;2016ರಲ್ಲಿ ಯೋಗೇಶ್ ಗೌಡ ಕೊಲೆ ನಡೆದಾಗ ಇಂದಿನ ಸಿಎಂ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಸಿಬಿಐಗೆ ನೀಡಬೇಕೆಂದು ಯೋಗೇಶ್ ಗೌಡ ಕುಟುಂಬ ಒತ್ತಾಯಿಸಿದ್ರು. ಆದರೆ ಆಗ ಕೇಸ್ ಬಗ್ಗೆ ಯಾವ ಬೆಳವಣಿಗೆಯೂ ನಡೆಯಲಿಲ್ಲ. ಆದರೆ ಮೈತ್ರಿ ಸರ್ಕಾರ ಇದ್ದಾಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಈ ಕೇಸ್ ಅನ್ನು 2019ರಲ್ಲಿ ಸಿಬಿಐಗೆ ವಹಿಸಿದರು. ಅಲ್ಲಿಂದ ಈ ಪ್ರಕರಣಕ್ಕೆ ಟರ್ನಿಂಗ್ ಪಾಯಿಂಟ್ ಸಿಕ್ಕಿತು.&lt;/p&gt;&lt;h2&gt;ಘೋಷಣೆ ವೇಳೆ ಗೊಂದಲ&lt;/h2&gt;&lt;p&gt;ಇದಕ್ಕೂ ಮೊದಲು ಚಿಕ್ಕಮಗಳೂರಿಗೆ ಆಗಮಿಸಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ವಾಗತಿಸುವ ವೇಳೆ ಒಂದು ವಿಚಿತ್ರ ಘಟನೆ ಗಮನಸೆಳೆಯಿತು. ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುವ ವೇಳೆ ಗೊಂದಲ ಉಂಟಾಗಿ, ಕೆಲವರು ತಪ್ಪಾಗಿ ಯಡಿಯೂರಪ್ಪ ವಿರುದ್ಧವೇ ಘೋಷಣೆ ಕೂಗಲು ಮುಂದಾದರು. ವಿನಯ್ ಕುಲಕರ್ಣಿಯನ್ನು ಜೈಲಿಗೆ ಕಳುಹಿಸಿದ ಯಡಿಯೂರಪ್ಪನವರಿಗೆ ಜೈ ಎಂದು ಘೋಷಣೆ ಕೂಗುವ ವೇಳೆ, ಕೆಲವರು ತಪ್ಪಾಗಿ ವಿರೋಧದ ಘೋಷಣೆ ಕೂಗಿದಂತಾಗಿದೆ. ನಂತರ ತಕ್ಷಣವೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಕಾರ್ಯಕರ್ತರು ತಮ್ಮ ಘೋಷಣೆಯನ್ನು ನಿಲ್ಲಿಸಿದರು. ಈ ಘಟನೆ ಸ್ಥಳದಲ್ಲಿದ್ದವರ ಗಮನಸೆಳೆಯಿತು.&lt;/p&gt;&lt;h2&gt;ಚಿಕ್ಕಮಗಳೂರಿನಲ್ಲಿ ಬಿ.ಎಸ್.ವೈ. ವಾಸ್ತವ್ಯ&lt;/h2&gt;&lt;p&gt;ಬಿ.ಎಸ್. ಯಡಿಯೂರಪ್ಪ ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ನಾಳೆ ಲಿಂಗಾಯಿತ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೈತ್ರಾದೇವಿ-ಯಡಿಯೂರಪ್ಪ ವೀರಶೈವ ಲಿಂಗಾಯಿತ ಸಮುದಾಯ ಭವನವು ಸುಮಾರು ₹10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ನಗರದ ಎಐಟಿ ಕಾಲೇಜು ಹಿಂಭಾಗದಲ್ಲಿ ಈ ಭವನ ನಿರ್ಮಾಣವಾಗಿದೆ. ಕಾರ್ಯಕ್ರಮದ ಬಳಿಕ ಅವರು ನಾಳೆ ಮಧ್ಯಾಹ್ನ ಬೆಂಗಳೂರಿಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/state/bs-yediyurappa-reacts-to-vinay-kulkarni-life-sentence-emotional-statement-in-chikkamagaluru-gdp/articleshow-15e2arw"/>
        </item>
        <item>
            <title><![CDATA[ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸತ್ತ ಮರಿಯ ಅಸ್ಥಿಪಂಜರ ಹೊತ್ತು ಸಾಗಿದ ತಾಯಿ ಕೋತಿ, ವಿಡಿಯೋ ವೈರಲ್!]]></title>
            <link>https://kannada.asianetnews.com/bengaluru-urban/mother-monkey-carries-dead-infant-skeleton-at-namma-metro-bengaluru-viral-video-san/articleshow-prhgtpy</link>
            <guid isPermaLink="true">https://kannada.asianetnews.com/bengaluru-urban/mother-monkey-carries-dead-infant-skeleton-at-namma-metro-bengaluru-viral-video-san/articleshow-prhgtpy</guid>
            <pubDate>Fri, 17 Apr 2026 18:19:08 +0530</pubDate>
            <description><![CDATA[ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣದಲ್ಲಿ ತಾಯಿ ಕೋತಿಯೊಂದು ತನ್ನ ಮೃತ ಮರಿಯ ಅಸ್ಥಿಪಂಜರವನ್ನು ಹೊತ್ತು ತಿರುಗುತ್ತಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂದಿದೆ. ಈ ಘಟನೆಯು ಪ್ರಾಣಿಗಳಲ್ಲಿನ ತಾಯಿಯ ಮಮತೆ ಮತ್ತು ಶೋಕದ ಆಳವನ್ನು ತೋರಿಸಿದ್ದು, ಪ್ರಯಾಣಿಕರನ್ನು ಮತ್ತು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbd912ftkxxtpben9wr1zbx,imgname-mother-monkey-carries-baby-skeleton-at-bengaluru-metro-station-1776352003151.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17):&lt;/strong&gt; ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣವೊಂದರಲ್ಲಿ ಕಂಡುಬಂದ ಅತ್ಯಂತ ಹೃದಯವಿದ್ರಾವಕ ದೃಶ್ಯವೊಂದು ಪ್ರಯಾಣಿಕರ ಹಾಗೂ ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಮೃತಪಟ್ಟ ತನ್ನ ಮರಿಯ ಅಸ್ಥಿಪಂಜರವನ್ನು ಹೊತ್ತು ತಿರುಗುತ್ತಿರುವ ತಾಯಿ ಕೋತಿಯ ವಿಡಿಯೋ ಸೋಶಿಯಲ್&zwnj; ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರಾಣಿ ಸಂಕುಲದಲ್ಲಿರುವ ಮಮತೆ ಮತ್ತು ಶೋಕದ ಆಳಕ್ಕೆ ಕನ್ನಡಿ ಹಿಡಿದಿದೆ.&lt;/p&gt;&lt;p&gt;ನಮ್ಮ ಮೆಟ್ರೋ ಮಾದಾವರ ನಿಲ್ದಾಣದ ಆವರಣದಲ್ಲಿ ಮೃತಪಟ್ಟ ಮರಿಯ ಅವಶೇಷಗಳನ್ನು ತಾಯಿ ಕೋತಿಯು ಎದೆಯ ಮೇಲೆ ಹೊತ್ತು ತಿರುಗುತ್ತಿರುವುದನ್ನು ಕಂಡು ಪ್ರಯಾಣಿಕರು ಸ್ತಬ್ದರಾಗಿದ್ದಾರೆ. ಮರಿ ಸತ್ತು ಬರಿ ಅಸ್ಥಿಪಂಜರವಾಗಿದ್ದರೂ, ಆ ಮರಿಯನ್ನು ಅಗಲಲು ಒಪ್ಪದ ತಾಯಿ ಮಮತೆ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಸಾವು ಮತ್ತು ಬದುಕಿನ ಆಚೆಗೂ ಇರುವ ತಾಯಿಯ ಬೇಷರತ್ ಪ್ರೀತಿಗೆ ಈ ದೃಶ್ಯ ಸಾಕ್ಷಿಯಾಗಿದೆ.&lt;/p&gt;&lt;p&gt;ಮಗು ಸತ್ತಿದ್ದರೂ ಅದನ್ನು ಬಿಟ್ಟು ಹೋಗಲು ತಾಯಿ ಕೋತಿ ನಿರಾಕರಿಸುತ್ತಿರುವುದು, ಸಾವು ಸಂಭವಿಸಿದ ಮೇಲೆಯೂ ಅದರ ಬಗೆಗಿನ ಅತೀವ ಬಾಂಧವ್ಯ ಮತ್ತು ಅಗಲಿಕೆಯ ನೋವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಸ್ಥಿತಿಯನ್ನು ತೋರಿಸುತ್ತಿದೆ. ಮಾನವರಂತೆಯೇ ಪ್ರಾಣಿಗಳೂ ಕೂಡ ಆಳವಾದ ಭಾವನಾತ್ಮಕ ಸಂಬಂಧಗಳನ್ನು ಹೊಂದಿರುತ್ತವೆ ಮತ್ತು ಶೋಕವನ್ನು ಅನುಭವಿಸುತ್ತವೆ ಎಂಬುದಕ್ಕೆ ಈ ಅಪರೂಪದ ಘಟನೆ ಸಾಕ್ಷಿ ಒದಗಿಸಿದೆ.&lt;/p&gt;&lt;h2&gt;&lt;strong&gt;ಶೋಕ ವ್ಯಕ್ತಪಡಿಸಿದ ಪ್ರಯಾಣಿಕರು&lt;/strong&gt;&lt;/h2&gt;&lt;p&gt;ಈ ದೃಶ್ಯಕ್ಕೆ ಸಾಕ್ಷಿಯಾದ ಮೆಟ್ರೋ ಪ್ರಯಾಣಿಕರು ಮೌನಕ್ಕೆ ಶರಣಾಗಿದ್ದಾರೆ. ಅನೇಕರು ಈ ನೋವಿನ ದೃಶ್ಯವನ್ನು ಕಂಡು ದುಃಖ ವ್ಯಕ್ತಪಡಿಸಿದ್ದು, ನಿಲ್ದಾಣದ ಆವರಣದಲ್ಲಿ ಕೆಲಕಾಲ ವಿಷಾದದ ವಾತಾವರಣ ನಿರ್ಮಾಣವಾಗಿತ್ತು. ತಾಯಿಯ ಮಮತೆಯ ಈ ಹಸಿ ಮತ್ತು ನೋವಿನ ಪ್ರದರ್ಶನವನ್ನು ಜನರು ನಂಬಲಾಗದ ಕಣ್ಣುಗಳಿಂದ ನೋಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾವಿರಾರು ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ಒಬ್ಬ ಯೂಸರ್&zwnj; &quot;ತಾಯಿಯ ಪ್ರೀತಿಯನ್ನು ಯಾವುದೂ ಬೇರ್ಪಡಿಸಲು ಸಾಧ್ಯವಿಲ್ಲ&quot; ಎಂದು ಬರೆದಿದ್ದಾರೆ. ತಾಯ್ತನದ ಸಾರ್ವತ್ರಿಕ ಸ್ವರೂಪ ಮತ್ತು ಪ್ರಾಣಿಗಳ ಭಾವನಾತ್ಮಕ ಬದುಕಿನ ಬಗ್ಗೆ ಈ ವಿಡಿಯೋ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;p&gt;A mother&rsquo;s love never ends.This heartbreaking scene from a Namma metro station in Bengaluru shows a monkey mother walking while carrying the skeletal remains of her baby, refusing to leave it behind. She is not just holding it in one place she continues to move with it, as if&hellip; pic.twitter.com/GuLhdQz1ke&lt;/p&gt;&lt;p&gt;&mdash; Karnataka Portfolio (@karnatakaportf) April 15, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/mother-monkey-carries-dead-infant-skeleton-at-namma-metro-bengaluru-viral-video-san/articleshow-prhgtpy"/>
        </item>
        <item>
            <title><![CDATA[Street Fighter: ಹಾಲಿವುಡ್‌ಗೆ ಹಾರಿದ ವಿದ್ಯುತ್ ಜಮ್ವಾಲ್: ಜೇಸನ್ ಮೊಮೊವಾ ಜೊತೆ ಭರ್ಜರಿ ಫೈಟಿಂಗ್]]></title>
            <link>https://kannada.asianetnews.com/entertainment/street-fighter-trailer-vidyut-jammwal-joins-jason-momoa-in-action-packed-film-gvd/articleshow-foirkne</link>
            <guid isPermaLink="true">https://kannada.asianetnews.com/entertainment/street-fighter-trailer-vidyut-jammwal-joins-jason-momoa-in-action-packed-film-gvd/articleshow-foirkne</guid>
            <pubDate>Fri, 17 Apr 2026 18:03:35 +0530</pubDate>
            <description><![CDATA[&lt;p&gt;ಎಲ್ಲರೂ ಕಾತುರದಿಂದ ಕಾಯುತ್ತಿದ್ದ 'ಸ್ಟ್ರೀಟ್ ಫೈಟರ್' ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಜೊತೆಗೆ ಹಾಲಿವುಡ್&zwnj;ನ ದೊಡ್ಡ ತಾರೆಯರು ನಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdpwx3k680br82tma8s813x,imgname-vjfjk-1776429200499.png" type="image/jpeg" height="390" width="690"/>
            <content:encoded><![CDATA[&lt;p&gt;ಬಹುನಿರೀಕ್ಷಿತ 'ಸ್ಟ್ರೀಟ್ ಫೈಟರ್' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇದರಲ್ಲಿ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್, ಹಾಲಿವುಡ್&zwnj;ನ ನೋವಾ ಸೆಂಟ್ನಿಯೋ, ಜೇಸನ್ ಮೊಮೊವಾ ಮತ್ತು ಆಂಡ್ರ್ಯೂ ಕೋಜಿ ಅವರಂತಹ ದೊಡ್ಡ ತಾರಾಗಣವಿದೆ. ಈ ಆ್ಯಕ್ಷನ್ ಸಿನಿಮಾ ಅಕ್ಟೋಬರ್ 16, 2026 ರಂದು ತೆರೆಗೆ ಬರಲಿದೆ. ಎಲ್ಲರೂ ಕಾತುರದಿಂದ ಕಾಯುತ್ತಿದ್ದ 'ಸ್ಟ್ರೀಟ್ ಫೈಟರ್' ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ.&lt;/p&gt;&lt;p&gt;ಈ ಸಿನಿಮಾದಲ್ಲಿ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಜೊತೆಗೆ ಹಾಲಿವುಡ್&zwnj;ನ ನೋವಾ ಸೆಂಟ್ನಿಯೋ, ಜೇಸನ್ ಮೊಮೊವಾ ಮತ್ತು ಆಂಡ್ರ್ಯೂ ಕೋಜಿ ಅವರಂತಹ ದೊಡ್ಡ ತಾರೆಯರು ಒಂದಾಗಿದ್ದಾರೆ. ಪ್ಯಾರಾಮೌಂಟ್ ಪಿಕ್ಚರ್ಸ್, ಲೆಜೆಂಡರಿ ಎಂಟರ್&zwnj;ಟೈನ್&zwnj;ಮೆಂಟ್ ಮತ್ತು ಕ್ಯಾಪ್&zwnj;ಕಾಮ್ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಇದರಲ್ಲಿ ವಿದ್ಯುತ್ ಜಮ್ವಾಲ್ ಅವರು ಖ್ಯಾತ ಯೋಗ ಮಾಸ್ಟರ್ 'ಧಲ್ಸಿಮ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ರಿಲೀಸ್ ಆದ ಈ ಟ್ರೇಲರ್, ಚಿತ್ರಮಂದಿರಗಳಲ್ಲಿ ಭರ್ಜರಿ ಆ್ಯಕ್ಷನ್ ಮತ್ತು ಸೀಟಿನ ತುದಿಯಲ್ಲಿ ಕೂರಿಸುವ ಅನುಭವ ನೀಡುವ ಭರವಸೆ ಮೂಡಿಸಿದೆ.&lt;/p&gt;&lt;p&gt;&lt;strong&gt;ಸಿನಿಮಾದ ಅಧಿಕೃತ ಕಥೆಯ ಎಳೆ ಹೀಗಿದೆ&lt;/strong&gt;&lt;/p&gt;&lt;p&gt;ಚಿತ್ರತಂಡವು ಸಿನಿಮಾದ ಅಧಿಕೃತ ಸಾರಾಂಶವನ್ನು ಹಂಚಿಕೊಂಡಿದೆ. &quot;ಈ ಕಥೆ 1993ರಲ್ಲಿ ನಡೆಯುತ್ತದೆ. ಒಬ್ಬರಿಗೊಬ್ಬರು ದೂರವಾಗಿದ್ದ ಸ್ಟ್ರೀಟ್ ಫೈಟರ್&zwnj;ಗಳಾದ ರ್ಯು (ಆಂಡ್ರ್ಯೂ ಕೋಜಿ) ಮತ್ತು ಕೆನ್ ಮಾಸ್ಟರ್ಸ್ (ನೋವಾ ಸೆಂಟ್ನಿಯೋ) ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ನಿಗೂಢ ಮಹಿಳೆ ಚುನ್-ಲಿ (ಕ್ಯಾಲಿನಾ ಲಿಯಾಂಗ್) ಮುಂದಿನ 'ವರ್ಲ್ಡ್ ವಾರಿಯರ್ ಟೂರ್ನಮೆಂಟ್'ಗೆ ಇವರಿಬ್ಬರನ್ನು ಸೇರಿಸಿಕೊಳ್ಳುತ್ತಾಳೆ. ಇದು ಕೇವಲ ಮುಷ್ಟಿ ಕಾಳಗವಲ್ಲ, ಬದಲಿಗೆ ಹಣೆಬರಹ ಮತ್ತು ರೋಷದ ಹೋರಾಟ. ಈ ಯುದ್ಧದ ಹಿಂದೆ ಒಂದು ದೊಡ್ಡ ಪಿತೂರಿ ಅಡಗಿದ್ದು, ಅದು ಅವರಿಬ್ಬರನ್ನೂ ಪರಸ್ಪರ ಎದುರಾಳಿಗಳನ್ನಾಗಿ ಮಾಡುತ್ತದೆ. ಅವರು ತಮ್ಮ ಗತಕಾಲದ ಕಹಿ ನೆನಪುಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಅವರು ವಿಫಲವಾದರೆ, ಆಟ ಮುಗಿದಂತೆ!&quot; ಎಂದು ಚಿತ್ರತಂಡ ತಿಳಿಸಿದೆ.&lt;/p&gt;&lt;p&gt;&lt;strong&gt;ದೊಡ್ಡ ತಾರಾಗಣ ಮತ್ತು ನಿರ್ದೇಶಕ&lt;/strong&gt;&lt;/p&gt;&lt;p&gt;ಕಿತಾವೊ ಸಕುರಾಯ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 'ಸ್ಟ್ರೀಟ್ ಫೈಟರ್' ವಿಡಿಯೋ ಗೇಮ್&zwnj;ನಲ್ಲಿದ್ದ ಹಡೋಕೆನ್ಸ್, ರೌಂಡ್&zwnj;ಹೌಸ್ ಕಿಕ್ಸ್ ಮತ್ತು ಎಲ್ಲಾ ನೆಚ್ಚಿನ ಪಾತ್ರಗಳನ್ನು ದೊಡ್ಡ ಪರದೆಗೆ ತರಲು ಚಿತ್ರತಂಡ ಸಜ್ಜಾಗಿದೆ. ಸಿನಿಮಾದಲ್ಲಿ ನೋವಾ ಸೆಂಟ್ನಿಯೋ 'ಕೆನ್ ಮಾಸ್ಟರ್ಸ್' ಆಗಿ, ಆಂಡ್ರ್ಯೂ ಕೋಜಿ 'ರ್ಯು' ಆಗಿ ಮತ್ತು ಜೇಸನ್ ಮೊಮೊವಾ 'ಬ್ಲಾಂಕಾ' ಪಾತ್ರದಲ್ಲಿ ನಟಿಸಿದ್ದಾರೆ. ಇವರಲ್ಲದೆ, ಕ್ಯಾಲಿನಾ ಲಿಯಾಂಗ್, ಜೋ ಅನೋಯಿ, ಡೇವಿಡ್ ಡಸ್ಟ್ಮಾಲ್ಚಿಯನ್, ಕೋಡಿ ರೋಡ್ಸ್, ಆಂಡ್ರ್ಯೂ ಶುಲ್ಜ್, ಎರಿಕ್ ಆಂಡ್ರೆ, ಓರ್ವಿಲ್ಲೆ ಪೆಕ್, ಆಲಿವಿಯರ್ ರಿಕ್ಟರ್ಸ್, ಹಿರೋಕಿ ಗೊಟೊ, ರೇನಾ ವಲ್ಲಾಂಡಿಂಗ್&zwnj;ಹ್ಯಾಮ್, ಅಲೆಕ್ಸಾಂಡರ್ ವೊಲ್ಕಾನೋವ್ಸ್ಕಿ ಮತ್ತು ಕರ್ಟಿಸ್ '50 ಸೆಂಟ್' ಜಾಕ್ಸನ್ ಕೂಡಾ ತಾರಾಗಣದಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಬಿಡುಗಡೆ ದಿನಾಂಕ&lt;/strong&gt;&lt;/h2&gt;&lt;p&gt;ಪ್ಯಾರಾಮೌಂಟ್ ಸ್ಟುಡಿಯೋಸ್ ಇಂಡಿಯಾ 'ಸ್ಟ್ರೀಟ್ ಫೈಟರ್' ಸಿನಿಮಾವನ್ನು ಅಕ್ಟೋಬರ್ 16, 2026 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/street-fighter-trailer-vidyut-jammwal-joins-jason-momoa-in-action-packed-film-gvd/articleshow-foirkne"/>
        </item>
        <item>
            <title><![CDATA[ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಪಲ್ಟಿ: ರಸ್ತೆಗೆ ಬಿದ್ದ ಟನ್‌ಗಟ್ಟಲೇ ಅಕ್ಕಿ]]></title>
            <link>https://kannada.asianetnews.com/gallery/state/lorry-carrying-illegal-ration-rice-overturns-tons-of-rice-fall-onto-the-road-xhaxfaf</link>
            <guid isPermaLink="true">https://kannada.asianetnews.com/gallery/state/lorry-carrying-illegal-ration-rice-overturns-tons-of-rice-fall-onto-the-road-xhaxfaf</guid>
            <pubDate>Fri, 17 Apr 2026 17:42:32 +0530</pubDate>
            <description><![CDATA[&lt;p&gt;ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಬೀದರ್&zwnj;ನ ಝರಣಿ ನರಸಿಂಹ ದೇವಸ್ಥಾನದ ಬಳಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಚಾಲಕ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdn7wjmvgmmraeh9tq69550,imgname-ration-lorry-overturn--4--1776427463252.jpg" type="image/jpeg" height="390" width="690"/>
            <content:encoded><![CDATA[&lt;p&gt;ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಬೀದರ್&zwnj;ನ ಝರಣಿ ನರಸಿಂಹ ದೇವಸ್ಥಾನದ ಬಳಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಚಾಲಕ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.&lt;/p&gt;&lt;img&gt;&lt;p&gt;ಬೀದರ್: ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಈ ಲಾರಿ ಹೋಗುತ್ತಿತ್ತು.&lt;/p&gt;&lt;img&gt;&lt;p&gt;ಬೀದರ್ ನಗರದ ಝರಣಿ ನರಸಿಂಹ ದೇವಸ್ಥಾನದ ಬಳಿ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿ ನೂರು ಟನ್&zwnj;ಗೂ ಅಧಿಕ&zwnj; ಪಡಿತರ ಅಕ್ಕಿ ಇರೋ ಬಗ್ಗೆ ಮಾಹಿತಿ ಇದೆ.&lt;/p&gt;&lt;img&gt;&lt;p&gt;ಕಾರು ಹಾಗೂ ಟಾಟಾ ಮ್ಯಾಜಿಕ್&zwnj;ಗೆ ಡಿಕ್ಕಿ ಹೊಡೆದ ಬಳಿಕ ಲಾರಿ ಪಲ್ಟಿಯಾಗಿದೆ. ಅಕ್ಕಿ ತುಂಬಿದ ಈ ಟ್ರಕ್ ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ಬೀದರ್&zwnj;ನ ರಿಂಗ್ ರೋಡ್&zwnj; ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕಾರಿನಲ್ಲಿದ್ದ 6 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.&lt;/p&gt;&lt;img&gt;&lt;p&gt;ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ನಭಾಗ್ಯದ ಅಕ್ಕಿಯನ್ನ ಅಕ್ರಮವಾಗಿ ಸಾಗಿಸುತ್ತಿದ್ದಿರಬಹುದು ಎಂಬ ಶಂಕೆ ಮೂಡಿದ್ದು, ಅಪಘಾತದ ನಂತರ ಲಾರಿ ಮಗುಚಿ ಬಿದ್ದಿದ್ದರಿಂದ ರಸ್ತೆ ತುಂಬಾ ಅಕ್ಕಿ ಚೆಲ್ಲಿದೆ.&lt;/p&gt;]]></content:encoded>
            <category>news</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/lorry-carrying-illegal-ration-rice-overturns-tons-of-rice-fall-onto-the-road-xhaxfaf"/>
        </item>
        <item>
            <title><![CDATA[ಯೋಗೇಶ್ ಗೌಡ ಕೊಂದ 16 ಮಂದಿಗೆ ಜೀವಾವಧಿ, ವಿನಯ್ ಕುಲಕರ್ಣಿ ಮುಂದಿನ ಆಯ್ಕೆಗಳೇನು? ಜೀವಾವಧಿ ಶಿಕ್ಷೆ ಎಂದರೇನು?]]></title>
            <link>https://kannada.asianetnews.com/state/what-is-mean-by-life-sentence-vinay-kulkarni-and-others-gets-life-sentence-in-dharwad-yogesh-gowda-murder-case-gdp/articleshow-gsupd69</link>
            <guid isPermaLink="true">https://kannada.asianetnews.com/state/what-is-mean-by-life-sentence-vinay-kulkarni-and-others-gets-life-sentence-in-dharwad-yogesh-gowda-murder-case-gdp/articleshow-gsupd69</guid>
            <pubDate>Fri, 17 Apr 2026 17:30:11 +0530</pubDate>
            <description><![CDATA[ಧಾರವಾಡದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 16 ಆರೋಪಿಗಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಸುಮಾರು 10 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಈ ತೀರ್ಪು ಹೊರಬಿದ್ದಿದ್ದು, ಪ್ರತಿಯೊಬ್ಬ ಆರೋಪಿಗೂ ₹1 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಇದೇ ಪ್ರಕರಣದಲ್ಲಿ ಪೊಲೀಸ್ ಇನ್ಸ್&zwnj;ಪೆಕ್ಟರ್&zwnj;ಗೆ 7 ವರ್ಷಗಳ ಜೈಲು ಶಿಕ್ಷೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd0c4911kmv10hee03q82wy,imgname-vinay-kulkarni-1776405582113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದೆ. ಜೊತೆಗೆ ಪ್ರತಿಯೊಬ್ಬ ಆರೋಪಿಗೂ ₹1 ಲಕ್ಷದಂತೆ ಒಟ್ಟು ₹16 ಲಕ್ಷ ದಂಡ ವಿಧಿಸಲಾಗಿದ್ದು, ಈ ಮೊತ್ತವನ್ನು ಯೋಗೇಶ್ ಗೌಡ ಅವರ ಮಕ್ಕಳಿಗೆ ಹಾಗೂ ಅವರ ಸಹೋದರ ಗುರುನಾಥ್ ಗೌಡ ಅವರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೊಲೀಸ್ ಇನ್ಸ್&zwnj;ಪೆಕ್ಟರ್ ಚನ್ನಕೇಶವ ಟಿಂಗರೀಕರ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಲಾಗಿದೆ.&lt;/p&gt;&lt;h2&gt;ಜೀವಾವಧಿ ಶಿಕ್ಷೆ ಎಂದರೆ ಏನು?&lt;/h2&gt;&lt;p&gt;ಜೀವಾವಧಿ ಶಿಕ್ಷೆ ಎಂದರೆ ಅಪರಾಧಿಯು ತನ್ನ ನೈಸರ್ಗಿಕ ಜೀವಿತಾವಧಿಯ ಅಂತ್ಯದವರೆಗೆ ಜೈಲಿನಲ್ಲಿ ಇರಬೇಕಾದ ಶಿಕ್ಷೆಯಾಗಿದೆ. ಇದು ಕೇವಲ 14 ಅಥವಾ 20 ವರ್ಷಗಳ ಶಿಕ್ಷೆಯಲ್ಲ. ವ್ಯಕ್ತಿ ಜೀವಿಸುವವರೆಗೂ ಜೈಲಿನಲ್ಲೇ ಇರಬೇಕಾಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ, ಸರ್ಕಾರ ಸನ್ನಡತೆ ಆಧಾರವಾಗಿ ಶಿಕ್ಷೆಯನ್ನು ಕಡಿಮೆ ಮಾಡಬಹುದು ಅಥವಾ ಪೆರೋಲ್ ನೀಡಬಹುದು. ಆದರೆ ಇದು ಕಡ್ಡಾಯವಲ್ಲ. ಸಾಮಾನ್ಯವಾಗಿ ಕೊಲೆ, ಭಯೋತ್ಪಾದನೆ, ಲೈಂಗಿಕ ದೌರ್ಜನ್ಯ ಹಾಗೂ ರಾಷ್ಟ್ರದ್ರೋಹದಂತಹ ಗಂಭೀರ ಅಪರಾಧಗಳಿಗೆ ಈ ಶಿಕ್ಷೆ ವಿಧಿಸಲಾಗುತ್ತದೆ.&lt;/p&gt;&lt;h2&gt;ಅಪರಾಧಿಗಳ ಮುಂದಿರುವ ಆಯ್ಕೆಗಳೇನು?&lt;/h2&gt;&lt;p&gt;ಜೀವಾವಧಿ ಶಿಕ್ಷೆಗೆ ಒಳಗಾಗಿರುವ 16 ಅಪರಾಧಿಗಳು ಮತ್ತು 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ A19 ಅಪರಾಧಿಗೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಲೇರುವ ಅವಕಾಶವಿದ್ದು, ಅದಾಗಲೇ ಅಪರಾಧಿಗಳ ವಕೀಲರು ಈ ಬಗ್ಗೆ ಮುಂದಿನ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;ದೀರ್ಘಕಾಲದ ವಿಚಾರಣೆಗೆ ತೆರೆ&lt;/h2&gt;&lt;p&gt;2016ರ ಜೂನ್&zwnj;ನಲ್ಲಿ ನಡೆದ ಈ ಹತ್ಯೆ ಪ್ರಕರಣವು ಸುಮಾರು 10 ವರ್ಷಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಟ್ಟಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, 17 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ಜತೆಗೆ ಸಿಬಿಐ ಅಧಿಕಾರಿಗಳ ತನಿಖೆಯನ್ನು ಅಭಿನಂದಿಸಿದರು.&lt;/p&gt;&lt;h2&gt;ಶಿಕ್ಷೆಗೆ ಗುರಿಯಾದ ಪ್ರಮುಖ ಆರೋಪಿಗಳು&lt;/h2&gt;&lt;p&gt;ವಿನಯ್ ಕುಲಕರ್ಣಿ (A15) ಸೇರಿದಂತೆ ವಿಕ್ರಂ ಬಳ್ಳಾರಿ, ಕೀರ್ತಿ ಕುಮಾರ್, ಸಂದೀಪ್, ವಿನಾಯಕ, ಮಹಾಬಲೇಶ್ವರ, ಸಂತೋಷ್, ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಅಹ್ಮದ್, ಶಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ್ ಇಂಡಿ ಮತ್ತು ವಿಕಾಸ್ ಕಲಬುರಗಿ ಸೇರಿದಂತೆ ಒಟ್ಟು 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. A19 ಅಪರಾಧಿಗೆ 7 ವರ್ಷ ಜೈಲು ಶಿಕ್ಷೆಯಾಗಿದೆ. A1 ಬಸವರಾಜ್ ಮುತ್ತಗಿ ಮತ್ತು A17 ಶಿವಾನಂದ್ ಶ್ರೀಶೈಲ ಬಿರಾದರ್ ಅವರನ್ನು ಮಾಫಿ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ.&lt;/p&gt;&lt;h2&gt;ಯಾವ ಸೆಕ್ಷನ್ ಅಡಿಯಲ್ಲಿ ಶಿಕ್ಷೆ?&lt;/h2&gt;&lt;p&gt;ನ್ಯಾಯಾಲಯವು ಆರೋಪಿಗಳಿಗೆ ವಿವಿಧ ಭಾರತೀಯ ದಂಡ ಸಂಹಿತೆ (IPC) ವಿಧಿಗಳಡಿ ಶಿಕ್ಷೆ ವಿಧಿಸಿದೆ:&lt;/p&gt;&lt;p&gt;ಕಲಂ 302 (ಕೊಲೆ): ಜೀವಾವಧಿ ಶಿಕ್ಷೆ&lt;/p&gt;&lt;p&gt;ಕಲಂ 120(B) (ಅಪರಾಧಿಕ ಸಂಚು): ಜೀವಾವಧಿ ಶಿಕ್ಷೆ&lt;/p&gt;&lt;p&gt;ಕಲಂ 201 (ಸಾಕ್ಷ್ಯ ನಾಶ): 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ&lt;/p&gt;&lt;p&gt;ಕಲಂ 143, 147, 148, 149 (ಅಕ್ರಮ ಕೂಟ, ಗಲಭೆ, ಆಯುಧಗಳಿಂದ ದಾಳಿ): 3 ವರ್ಷಗಳವರೆಗೆ ಶಿಕ್ಷೆ&lt;/p&gt;&lt;p&gt;ಚನ್ನಕೇಶವ ಟಿಂಗರೀಕರ್ (A19) ವಿರುದ್ಧ ಕಲಂ 218 ಅಡಿಯಲ್ಲಿ, ತಪ್ಪು ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಸಹಾಯ ಮಾಡಿದ ಆರೋಪ ಸಾಬೀತಾಗಿ ಶಿಕ್ಷೆ ವಿಧಿಸಲಾಗಿದೆ.&lt;/p&gt;&lt;h2&gt;ಯಾವ ಸೆಕ್ಷನ್&zwnj; ಯಾರ ಮೇಲೆ?&lt;/h2&gt;&lt;p&gt;ಪ್ರಕರಣದ 2 ರಿಂದ 16 ಮತ್ತು 18ನೇ ಆರೋಪಿಗಳು ಭಾರತೀಯ ದಂಡ ಸಂಹಿತೆ 302 (ಕೊಲೆ) ಆರೋಪದಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿ ಶಿಕ್ಷೆಗೊಳಗಾಗಿದ್ದಾರೆ. (ಯಾರೆಲ್ಲ A2 - ವಿಕ್ರಂ ಬಳ್ಳಾರಿ, A3 - ಕೀರ್ತಿ ಕುಮಾರ್​, A4 - ಸಂದೀಪ್​, A5 - ವಿನಾಯಕ್, ​​A6 - ಮಹಾಬಲೇಶ್ವರ, A7 - ಸಂತೋಷ್, A8 - ದಿನೇಶ್​​, A9 - ಅಶ್ವಥ್​​, A10 - ಸುನೀಲ್​​ ಕೆ.ಎಸ್​, A11 - ನಜರ್ ಅಹಮದ್​, A12 - ಶಹನವಾಜ್​​, A13 - ನೂತನ್, ​​A14 - ಹರ್ಷಿತ್, ​​A15 - ವಿನಯ್ ಕುಲಕರ್ಣಿ, A16 - ಚಂದ್ರಶೇಖರ್​ ಇಂಡಿ ಮತ್ತು ​A18 - ವಿಕಾಸ್​​ ಕಲಬುರ್ಗಿ )&lt;/p&gt;&lt;p&gt;ಹಾಗೆಯೇ 2 ರಿಂದ 16 ಮತ್ತು 18 ಹಾಗೂ 19ನೇ ಆರೋಪಿಗಳು 120 (ಬಿ) (ಅಪರಾಧಿಕ ಒಳ ಸಂಚು) ರೂಪಿಸಿದ್ದಾರೆ ಮತ್ತು ಮತ್ತು 201 (ಸಾಕ್ಷ್ಯ ನಾಶ ಪಡಿಸಿದ್ದಾರೆ. (ಯಾರೆಲ್ಲ A2 - ವಿಕ್ರಂ ಬಳ್ಳಾರಿ, A3 - ಕೀರ್ತಿ ಕುಮಾರ್​, A4 - ಸಂದೀಪ್​, A5 - ವಿನಾಯಕ್, ​​A6 - ಮಹಾಬಲೇಶ್ವರ, A7 - ಸಂತೋಷ್, A8 - ದಿನೇಶ್​​, A9 - ಅಶ್ವಥ್​​, A10 - ಸುನೀಲ್​​ ಕೆ.ಎಸ್​, A11 - ನಜರ್ ಅಹಮದ್​, A12 - ಶಹನವಾಜ್​​, A13 - ನೂತನ್, ​​A14 - ಹರ್ಷಿತ್, ​​A15 - ವಿನಯ್ ಕುಲಕರ್ಣಿ, A16 - ಚಂದ್ರಶೇಖರ್​ ಇಂಡಿ ಮತ್ತು ​A18 - ವಿಕಾಸ್​​ ಕಲಬುರ್ಗಿ ಮತ್ತು A19 - ಚೆನ್ನಕೇಶವ ಟಿಂಗರಿಕರ್).&lt;/p&gt;&lt;p&gt;ಇನ್ನು ಆರೋಪಿ 2 ರಿಂದ 14 ಮತ್ತು 18ನೇ ಆರೋಪಿಗಳು 143, 149 (ಅಕ್ರಮ ಕೂಟ), 147 (ಗಲಭೆ), 148 (ಆಯುಧಗಳಿಂದ ಕೃತ್ಯ) ಎಸಗಿದ್ದಾರೆ. ( ಯಾರೆಲ್ಲ A2 - ವಿಕ್ರಂ ಬಳ್ಳಾರಿ, A3 - ಕೀರ್ತಿ ಕುಮಾರ್​, A4 - ಸಂದೀಪ್​, A5 - ವಿನಾಯಕ್, ​​A6 - ಮಹಾಬಲೇಶ್ವರ, A7 - ಸಂತೋಷ್, A8 - ದಿನೇಶ್​​, A9 - ಅಶ್ವಥ್​​, A10 - ಸುನೀಲ್​​ ಕೆ.ಎಸ್​, A11 - ನಜರ್ ಅಹಮದ್​, A12 - ಶಹನವಾಜ್​​, A13 - ನೂತನ್, ​​A14 - ಹರ್ಷಿತ್ ಮತ್ತು ​A18 - ವಿಕಾಸ್​​ ಕಲಬುರ್ಗಿ)&lt;/p&gt;&lt;p&gt;19ನೇ ಆರೋಪಿ 218 ಅಡಿಯಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದು ತಪ್ಪುದಾಖಲೆಗಳನ್ನು ಸೃಷ್ಟಿಸಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ. (ಯಾರು A19 - ಚೆನ್ನಕೇಶವ ಟಿಂಗರಿಕರ್)&lt;/p&gt;&lt;h2&gt;ರಾಜಕೀಯ ಹಾಗೂ ಕಾನೂನು ಮಹತ್ವ&lt;/h2&gt;&lt;p&gt;ಯೋಗೇಶ್ ಗೌಡ ಹತ್ಯೆ ಪ್ರಕರಣದ ಈ ತೀರ್ಪು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ದೀರ್ಘಕಾಲದ ವಿಚಾರಣೆಯ ನಂತರ ಹೊರಬಿದ್ದ ಈ ತೀರ್ಪು, ರಾಜಕೀಯ ಪ್ರಭಾವದ ಪ್ರಕರಣಗಳಲ್ಲಿಯೂ ನ್ಯಾಯ ಸಿಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ. &amp;nbsp;ಈ ಪ್ರಕರಣದ ತೀರ್ಪು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಕಾದು ನೋಡಬೇಕಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/state/what-is-mean-by-life-sentence-vinay-kulkarni-and-others-gets-life-sentence-in-dharwad-yogesh-gowda-murder-case-gdp/articleshow-gsupd69"/>
        </item>
        <item>
            <title><![CDATA[ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್‌ನಲ್ಲಿ ದುಪ್ಪಟ್ಟು ಮೊತ್ತಕ್ಕೆ ಐಪಿಎಲ್ ಟಿಕೆಟ್ ಮಾರುತ್ತಿದ್ದ ಖದೀಮ ಅರೆಸ್ಟ್! KSCA ಸದಸ್ಯನ ಕೈವಾಡ ಶಂಕೆ?]]></title>
            <link>https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq</link>
            <guid isPermaLink="true">https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq</guid>
            <pubDate>Fri, 17 Apr 2026 17:25:35 +0530</pubDate>
            <description><![CDATA[ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟಿಕೆಟ್&zwnj;ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಕ್ಯಾಂಟೀನ್ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ 181 ಟಿಕೆಟ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಹಿಂದೆ ಕೆಎಸ್&zwnj;ಸಿಎ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jahtbgdde206k1zz4sghk5hd,imgname-fotojet---2024-10-19t124927.356.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಅದರಲ್ಲೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಹಾಗೆಯೇ ತವರಿನಾಚೆ ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದೆ. ಇನ್ನು ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಬೇಕು ಎಂದು ತುದಿಗಾಲಿನಲ್ಲಿ ಅಭಿಮಾನಿಗಳು ನಿಂತಿರುತ್ತಾರೆ. ಆದರೆ ಟಿಕೆಟ್ ಆನ್&zwnj;ಲೈನ್&zwnj;ನಲ್ಲಿ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್ ಆಗಿ ಬಿಡುತ್ತವೆ. ಆರ್&zwnj;ಸಿಬಿ ಫ್ರಾಂಚೈಸಿ ಹಾಗೂ ಕೆಎಸ್&zwnj;ಸಿಎ ಈ ಬಾರಿ ಐಪಿಎಲ್ ಟಿಕೆಟ್ ಮಾರಾಟದ ವೇಳೆ ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದ್ದು ಈಗ ಯಾಕೋ ಅಭಿಮಾನಿಗಳ ಕಿವಿ ಮೇಲೆ ಹೂವಿಟ್ಟಂತೆ ಅನಿಸಲಾರಂಭಿಸಿದೆ. ಯಾಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕ್ಯಾಂಟೀನ್ ಇಟ್ಟುಕೊಂಡಾತನ ಬಳಿ ರಾಶಿರಾಶಿ ಐಪಿಎಲ್ ಟಿಕೆಟ್&zwnj;ಗಳು ಪತ್ತೆಯಾಗಿದ್ದು, ಬೆಂಗಳೂರು ಸಿಸಿಬಿ ಪೊಲೀಸರು ಈ ಖದೀಮನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಐಪಿಎಲ್ ಕಾಳಸಂತೆಯ ಟಿಕೆಟ್ ದಂಧೆ ಬಯಲಿಗೆಳೆದ ಸಿಸಿಬಿ&lt;/strong&gt;&lt;/h2&gt;&lt;p&gt;ಒಂದು ಕಡೆ ಒಂದು ಐಪಿಎಲ್ ಟಿಕೆಟ್ ಸಿಕ್ಕರೇ ಸಾಕಪ್ಪ ಎಂದು ಕಾದು ಕುಳಿತು, ಆನ್&zwnj;ಲೈನ್&zwnj;ನಲ್ಲಿ ಐಪಿಎಲ್ ಮ್ಯಾಚ್ ಟಿಕೆಟ್ ಖರೀದಿಸಲು ಸಾವಿರಾರು ಮಂದಿ ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗಿರುವಾಗಲೇ ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುವವರ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ, ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್ ನೌಕರನ ಮೂಲಕವೇ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟಕ್ಕೆ ಕೆಎಸ್&zwnj;ಸಿಎ ಸದಸ್ಯನೇ ಮುಂದಾಗಿದ್ದಾರೆ ಎಂದು ವರದಿಯಾಗಿದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Vishnu Prasad (@bangalorebro_)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;h3&gt;&lt;strong&gt;ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ&lt;/strong&gt;&lt;/h3&gt;&lt;p&gt;ಹೌದು, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿರುವ ಶ್ರೀ ಲಕ್ಷ್ಮಿ ಕೇಟರರ್ಸ್&zwnj;ನ 49 ವರ್ಷದ ಚಂದ್ರಶೇಖರ್ ಪಿ ಎಂಬಾತನನ್ನು ಸೆಂಟ್ರಲ್ ಕ್ರೈಮ್ ಬ್ರಾಂಚ್&zwnj;ನ ಪೊಲೀಸರ್ ಐಪಿಎಲ್ ಬ್ಲಾಕ್ ಟಿಕೆಟ್ ಮಾರಾಟ ಮಾಡುವಾಗ ರೆಡ್&zwnj; ಹ್ಯಾಂಡ್&zwnj; ಆಗಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಆರ್&zwnj;ಸಿಬಿ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವೆ ಇತ್ತೀಚೆಗಷ್ಟೇ ನಡೆದ ಪಂದ್ಯದ ಟಿಕೆಟ್&zwnj;ಗಳನ್ನು 15,000 ದಿಂದ 19,000 ರುಪಾಯಿ ವರೆಗೆ ಒಂದು ಟಿಕೆಟ್ ಮಾರಾಟ ಮಾಡಿದ್ದಾರೆ. ಒಟ್ಟಾರೆ ಈತ 181 ಟಿಕೆಟ್&zwnj;ಗಳಿಂದ 17.52 ಲಕ್ಷ ರುಪಾಯಿ ಗಳಿಸಿದ್ದಾನೆ ಎನ್ನಲಾಗುತ್ತಿದೆ.&lt;/p&gt;&lt;p&gt;ಮೇಲ್ನೋಟಕ್ಕೆ ಈಗ ಕ್ಯಾಂಟೀನ್ ನೌಕರ ಸಿಕ್ಕಿಬಿದ್ದಿದ್ದು, ಇದರ ಹಿಂದಿರುವ ಕಾಣದ ಕೈಗಳನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಬೇಕಿದೆ. ಇದಷ್ಟೇ ಅಲ್ಲದೇ ಕೆಎಸ್&zwnj;ಸಿಎ ಚುನಾವಣೆ ವೇಳೆಯಲ್ಲಿ ನಾವು ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದು ಪುನರುಚ್ಚಿಸುತ್ತಲೇ ಬಂದಿರುವ ಕೆಎಸ್&zwnj;ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಈ ಬಗ್ಗೆ ಏನ್ ಹೇಳ್ತಾರೆ ಕಾದು ನೋಡಬೇಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq"/>
        </item>
        <item>
            <title><![CDATA[ಉಟ್ಟ ಬಟ್ಟೆಯಲ್ಲಿ 3 ದಿನ ಕಳೆದ ವಿನಯ್ ಕುಲಕರ್ಣಿ & ಗ್ಯಾಂಗ್; ಬಟ್ಟೆ ಬದಲಿಸಲು ಅನುಮತಿ ಕೇಳಿ ಕಣ್ಣೀರಿಟ್ಟ ಕೊಲೆಗಾರರು!]]></title>
            <link>https://kannada.asianetnews.com/state/vinay-kulkarni-sentenced-to-life-imprisonment-yogesh-gowda-murder-case-final-verdict-clothes-change-request-sat/articleshow-bbcpm8b</link>
            <guid isPermaLink="true">https://kannada.asianetnews.com/state/vinay-kulkarni-sentenced-to-life-imprisonment-yogesh-gowda-murder-case-final-verdict-clothes-change-request-sat/articleshow-bbcpm8b</guid>
            <pubDate>Fri, 17 Apr 2026 17:07:56 +0530</pubDate>
            <description><![CDATA[&lt;p&gt;ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಅಂತಿಮ ತೀರ್ಪು ನೀಡುವುದಕ್ಕೆ ಮೂರು ದಿನಗಳ ಕಾಲ ಕೋರ್ಟ್ ವಿಚಾರಣೆ ನಡೆಸಿ, ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ಅಪರಾಧಿಗಳು ಬಟ್ಟೆ ಬದಲಿಸಿ 3 ದಿನಗಳಾಗಿದ್ದು, ಬಟ್ಟೆ ಬದಲಿಸಲು ಅವಕಾಶಕ್ಕೆ ಮನವಿ ಮಾಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdkegv1hjw084hcqkre1n9r,imgname-vinay-kulkarni-in-jail-1776425583457.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಧಾ&lt;/strong&gt;ರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕೊನೆಗೂ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಜನರ ಗ್ಯಾಂಗ್&zwnj;ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ವೇಳೆ ಕಣ್ಣೀರಿಟ್ಟ ಎಲ್ಲ ಅಪರಾಧಿಗಳು ಕಳೆದ ಮೂರು ದಿನಗಳಿಂದ ಕೋರ್ಟ್ ವಿಚಾರಣೆಗೆ ಬಂದು ಒಂದೇ ಬಟ್ಟೆಯಲ್ಲಿದ್ದಾರೆ. ಅವರಿಗೆ ಬಟ್ಟೆಯನ್ನು ಬದಲಾವಣೆಗೆ ಅವಕಾಶ ಮಾಡಿಕೊಡಿ ಎಂದು ವಕೀಲರು ಮನವಿ ಮಾಡಿದ್ದಾರೆ.&lt;/p&gt;&lt;p&gt;ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯ ದೇವತೆ ಅಂತಿಮ ತೀರ್ಪು ನೀಡಿದ್ದಾಳೆ. ಪ್ರಭಾವಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಬೆನ್ನಲ್ಲೇ, ಈಗ ಅಪರಾಧಿಗಳು 3 ದಿನಗಳ ಕಾಲ ಜೈಲಿನಲ್ಲಿ ಕಳೆದ ಸ್ಥಿತಿ ಹೇಗಿತ್ತು ಎಂಬ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.&lt;/p&gt;&lt;h2&gt;&lt;strong&gt;ಮೂರು ದಿನದಿಂದ ಒಂದೇ ಬಟ್ಟೆಯಲ್ಲಿ ಅಪರಾಧಿಗಳು!&lt;/strong&gt;&lt;/h2&gt;&lt;p&gt;ಪ್ರಕರಣದ ತೀರ್ಪು ಪ್ರಕಟವಾದ ದಿನದಿಂದಲೂ ಅಂದರೆ ಕಳೆದ ಮೂರು ದಿನಗಳಿಂದ ಅಪರಾಧಿಗಳು ಒಂದೇ ಬಟ್ಟೆಯಲ್ಲಿದ್ದಾರೆ ಎಂಬ ಅಂಶ ನ್ಯಾಯಾಲಯದ ಗಮನಕ್ಕೆ ಬಂದಿದೆ. ಏಪ್ರಿಲ್ 15 ರಂದು ನ್ಯಾಯಾಲಯವು ಇವರನ್ನು ದೋಷಿಗಳೆಂದು ಘೋಷಿಸಿ ವಶಕ್ಕೆ ಪಡೆದ ಕ್ಷಣದಿಂದಲೂ ಇವರು ಬಟ್ಟೆ ಬದಲಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಪರಾಧಿಗಳ ಪರ ವಕೀಲರು ನ್ಯಾಯಾಲಯಕ್ಕೆ ವಿಶೇಷ ಮನವಿ ಸಲ್ಲಿಸಿದ್ದಾರೆ. 'ಅಪರಾಧಿಗಳು ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿದ್ದು, ಅವರಿಗೆ ಬಟ್ಟೆ ಬದಲಿಸಲು ಹಾಗೂ ಅಗತ್ಯ ವೈಯಕ್ತಿಕ ವಸ್ತುಗಳನ್ನು ಬಳಸಲು ಅವಕಾಶ ನೀಡಬೇಕು' ಎಂದು ಕೋರಿದರು. ಈ ಮನವಿಯನ್ನು ಆಲಿಸಿದ ನ್ಯಾಯಾಧೀಶರು, ಜೈಲು ಮ್ಯಾನುವಲ್ (Jail Manual) ಪ್ರಕಾರ ನಿಯಮಾನುಸಾರ ಬಟ್ಟೆ ಬದಲಾವಣೆಗೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಶಿಕ್ಷೆಯ ವಿವರ ಮತ್ತು ದಂಡದ ಮೊತ್ತ:&lt;/strong&gt;&lt;/h3&gt;&lt;p&gt;ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ್ದಾರೆ. ಹತ್ಯೆಯ ಸಂಚು ರೂಪಿಸಿದ 15ನೇ ಆರೋಪಿ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪೊಲೀಸ್ ಇನ್ಸ್&zwnj;ಪೆಕ್ಟರ್ ಆಗಿದ್ದ ಚನ್ನಕೇಶವ ಟಿಂಗರೀಕರ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಲಾಗಿದೆ. ಉಳಿದ ಅಪರಾಧಿಗಳಿಗೆ ಒಟ್ಟು 16 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಈ ಮೊತ್ತವನ್ನು ಮೃತ ಯೋಗೇಶ್ ಗೌಡ ಅವರ ಮಕ್ಕಳಿಗೆ ಮತ್ತು ಸಹೋದರ ಗುರುನಾಥ್ ಗೌಡ ಅವರಿಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ:&lt;/strong&gt;&lt;/h2&gt;&lt;p&gt;2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್&zwnj;ನಲ್ಲಿ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ನಂತರ ಪ್ರಕರಣವು ಸಿಬಿಐ ಕೈಗೆ ಹಸ್ತಾಂತರವಾಯಿತು. ಸುಮಾರು 8 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ 17 ಮಂದಿ ಅಪರಾಧಿಗಳು ಎಂದು ಸಾಬೀತಾಗಿದೆ. ಸಿಬಿಐ ಪರ ವಕೀಲರು ಈ ಪ್ರಕರಣವನ್ನು &quot;ಅಪರೂಪದಲ್ಲಿ ಅಪರೂಪದ ಪ್ರಕರಣ&quot; ಎಂದು ಪರಿಗಣಿಸಿ ಗರಿಷ್ಠ ಶಿಕ್ಷೆ ನೀಡಬೇಕೆಂದು ವಾದಿಸಿದ್ದರು.&lt;/p&gt;&lt;h3&gt;&lt;strong&gt;ಯಾರ ಮೇಲೆ ಯಾವ ಸೆಕ್ಷನ್?&lt;/strong&gt;&lt;/h3&gt;&lt;p&gt;ನ್ಯಾಯಾಲಯವು ಐಪಿಸಿ ಸೆಕ್ಷನ್ 302 (ಕೊಲೆ), 120 ಬಿ (ಅಪರಾಧಿಕ ಒಳಸಂಚು), 201 (ಸಾಕ್ಷ್ಯ ನಾಶ) ಸೇರಿದಂತೆ ಅಕ್ರಮ ಕೂಟ ಮತ್ತು ಗಲಭೆ ಎಸಗಿದ ಆರೋಪದಡಿ ಶಿಕ್ಷೆ ವಿಧಿಸಿದೆ. ವಿಶೇಷವೆಂದರೆ, 19ನೇ ಆರೋಪಿಯಾಗಿದ್ದ ಇನ್ಸ್&zwnj;ಪೆಕ್ಟರ್ ಚನ್ನಕೇಶವ ಅವರು ಸಾರ್ವಜನಿಕ ಸೇವೆಯಲ್ಲಿದ್ದುಕೊಂಡು ತಪ್ಪು ದಾಖಲೆ ಸೃಷ್ಟಿಸಿ ಅಪರಾಧಿಗಳಿಗೆ ಸಹಾಯ ಮಾಡಿದ ಕಾರಣಕ್ಕಾಗಿ ಸೆಕ್ಷನ್ 218ರ ಅಡಿ ಶಿಕ್ಷೆಗೊಳಗಾಗಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದ್ದು, ಇನ್ನಿಬ್ಬರನ್ನು ಮಾಫಿ ಸಾಕ್ಷಿಗಳನ್ನಾಗಿ ಮಾಡಲಾಗಿತ್ತು.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/vinay-kulkarni-sentenced-to-life-imprisonment-yogesh-gowda-murder-case-final-verdict-clothes-change-request-sat/articleshow-bbcpm8b"/>
        </item>
        <item>
            <title><![CDATA['ಸೀಕ್ರೆಟ್ ಪ್ರಿವ್ಯೂ' ಮೂಲಕ ಟಾಕ್ಸಿಕ್‌ ಗುಟ್ಟು ರಟ್ಟು; ಯಶ್ 'ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ' ಏನಿದೆ ಗೊತ್ತಾ?]]></title>
            <link>https://kannada.asianetnews.com/cine-world/rocking-star-yash-dominates-the-international-stage-by-his-toxic-magic-hidden-in-that-secret-9-minute-preview/articleshow-bo9wq33</link>
            <guid isPermaLink="true">https://kannada.asianetnews.com/cine-world/rocking-star-yash-dominates-the-international-stage-by-his-toxic-magic-hidden-in-that-secret-9-minute-preview/articleshow-bo9wq33</guid>
            <pubDate>Fri, 17 Apr 2026 17:01:27 +0530</pubDate>
            <description><![CDATA[&lt;p&gt;ಸದ್ಯಕ್ಕೆ ಚಿತ್ರತಂಡ ಈ 9 ನಿಮಿಷದ ಪ್ರಿವ್ಯೂ ಅನ್ನು ಗೌಪ್ಯವಾಗಿಟ್ಟಿದ್ದರೂ, ಮುಂದಿನ ದಿನಗಳಲ್ಲಿ ಇದರ ಸಣ್ಣ ತುಣುಕನ್ನಾದರೂ ಅಭಿಮಾನಿಗಳಿಗಾಗಿ ರಿಲೀಸ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಒಟ್ಟಿನಲ್ಲಿ, ಬರುವ ಜೂನ್ 4 ರಂದು 'ಟಾಕ್ಸಿಕ್' ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳೇ, ನೀವು ಈ &quot;ದೊಡ್ಡವರ ಕಾಲ್ಪನಿಕ ಕಥೆ&quot; ನೋಡಲು ರೆಡಿಯಿದ್ದೀರಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kegs00mdqwmz405zqzaynkah,imgname-rocking-star-yash-geetu-mohandas--1--1767942128269.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟಾಕ್ಸಿಕ್ ಗುಟ್ಟು ರಟ್ಟು?&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಿಂದ ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರುವ ನಮ್ಮ ಹೆಮ್ಮೆಯ 'ರಾಕಿಂಗ್ ಸ್ಟಾರ್' ಯಶ್ (Rocking Star Yash) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 'ಕೆಜಿಎಫ್' ಸರಣಿಯ ನಂತರ ಯಶ್ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ 'ಟಾಕ್ಸಿಕ್' (Toxic) ಉತ್ತರವಾಗಿತ್ತು. ಈಗ ಈ ಚಿತ್ರದ ಬಗ್ಗೆ ಹೊರಬಿದ್ದಿರುವ ಒಂದು ಎಕ್ಸ್&zwnj;ಕ್ಲೂಸಿವ್ ಸುದ್ದಿ ಇಡೀ ಭಾರತೀಯ ಚಿತ್ರರಂಗವನ್ನೇ ಬೆರಗುಗೊಳಿಸಿದೆ. ಅದೇನು ಅಂದುಕೊಂಡಿದ್ದೀರಾ? ಅದುವೇ ಇತ್ತೀಚೆಗೆ ನಡೆದ 'ಸಿನಿಮಾಕಾನ್ 2026' (CinemaCon 2026) ಕಾರ್ಯಕ್ರಮದ ಹವಾ!&lt;/p&gt;&lt;p&gt;ಸಿನಿಮಾಕಾನ್&zwnj;ನಲ್ಲಿ ನಡೆದಿದ್ದೇನು?&lt;/p&gt;&lt;p&gt;ಹೌದು, ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ 'ಸಿನಿಮಾಕಾನ್' ವೇದಿಕೆಯಲ್ಲಿ ಟಾಕ್ಸಿಕ್ ಚಿತ್ರತಂಡ ಒಂದು ಮಾಸ್ಟರ್ ಪ್ಲಾನ್ ಮಾಡಿತ್ತು. ಈ ಹಿಂದೆ ಬಿಡುಗಡೆಯಾದ ಟೀಸರ್ ಕೇವಲ ಒಂದು ಝಲಕ್ ಆಗಿದ್ದರೆ, ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ 9 ನಿಮಿಷಗಳ ಸುದೀರ್ಘ ಪ್ರಿವ್ಯೂ ಅಕ್ಷರಶಃ ಅಲ್ಲಿ ನೆರೆದಿದ್ದವರ ಕಣ್ಣು ಕುಕ್ಕುವಂತೆ ಮಾಡಿದೆ. ಅಂದಹಾಗೆ, ಈ ಸ್ಪೆಷಲ್ ವಿಡಿಯೋ ಸಾರ್ವಜನಿಕರಿಗೆ ಲಭ್ಯವಿಲ್ಲ. ಇದು ಕೇವಲ ಚಿತ್ರರಂಗದ ದಿಗ್ಗಜರು ಮತ್ತು ವಿತರಕರಿಗಾಗಿ ನಡೆದ ಖಾಸಗಿ ಪ್ರದರ್ಶನವಾಗಿತ್ತು.&lt;/p&gt;&lt;h2&gt;ಆ 9 ನಿಮಿಷಗಳಲ್ಲಿ ಏನಿತ್ತು?&lt;/h2&gt;&lt;p&gt;ಈ ಪ್ರಿವ್ಯೂ ನೋಡಿದ ಅದೃಷ್ಟವಂತರು ಹೇಳುವ ಪ್ರಕಾರ, ಇದು ಕೇವಲ ಒಂದು ಆಕ್ಷನ್ ಸಿನಿಮಾವಲ್ಲ, ಇದೊಂದು ಅದ್ಭುತ ಲೋಕ! ಚಿತ್ರದ ಮೇಕಿಂಗ್ ಕ್ವಾಲಿಟಿ ಹಾಲಿವುಡ್ ಮಟ್ಟದಲ್ಲಿದೆಯಂತೆ. 1940 ರಿಂದ 1970 ರ ಕಾಲಘಟ್ಟವನ್ನು ಅತ್ಯಂತ ಅದ್ಭುತವಾಗಿ ಮರುಸೃಷ್ಟಿಸಲಾಗಿದೆ. ಯಶ್ ಅವರ ಮ್ಯಾಸ್ ಲುಕ್, ಗೀತು ಮೋಹನ್ ದಾಸ್ ಅವರ ಸ್ಟೈಲಿಶ್ ಮೇಕಿಂಗ್ ಮತ್ತು ರವಿ ಬಸ್ರೂರು ಅವರ ಕಿವಿಗೊಡುವಂತ ಹಿನ್ನೆಲೆ ಸಂಗೀತ ಈ 9 ನಿಮಿಷಗಳ ಪ್ರಿವ್ಯೂನಲ್ಲಿ ಅಡಗಿತ್ತು. ಈ ಸಿನಿಮಾವನ್ನು &quot;ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ&quot; (Fairy tale for grown-ups) ಎಂದು ವಿವರಿಸಲಾಗಿದ್ದು, ಈ ಸಾಲನ್ನ ಕೇಳಿಯೇ ಸಿನಿಪ್ರಿಯರ ಎದೆಯಲ್ಲಿ ನಡುಕ ಶುರುವಾಗಿದೆ!&lt;/p&gt;&lt;p&gt;ತಾರಾಗಣದ ದಂಡೇ ಇಲ್ಲಿದೆ!&lt;/p&gt;&lt;p&gt;'ಟಾಕ್ಸಿಕ್' ಸಿನಿಮಾ ಕೇವಲ ಯಶ್ ಒಬ್ಬರ ಶೋ ಅಲ್ಲ, ಇಲ್ಲಿ ಸ್ಟಾರ್&zwnj;ಗಳ ದಂಡೇ ಇದೆ. ಸೌತ್ ಲೇಡಿ ಸೂಪರ್&zwnj;ಸ್ಟಾರ್ ನಯನತಾರಾ, ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತು ನಮ್ಮ ಕನ್ನಡದ ಪ್ರತಿಭೆ ರುಕ್ಮಿಣಿ ವಸಂತ್ ಈ ಚಿತ್ರದ ಪ್ರಮುಖ ಆಕರ್ಷಣೆ. ಇಷ್ಟು ದೊಡ್ಡ ತಾರಾಗಣವನ್ನು ಒಂದೇ ಪರದೆಯ ಮೇಲೆ ನೋಡುವುದು ಅಂದ್ರೆ ಅದು ಹಬ್ಬವೇ ಸರಿ.&lt;/p&gt;&lt;h3&gt;ಜೂನ್ 4ಕ್ಕೆ ವಿಶ್ವದಾದ್ಯಂತ ಬಿಡುಗಡೆ&lt;/h3&gt;&lt;p&gt;ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಯಶ್ ಅವರೇ ಸಹ-ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಪ್ರತಿ ಹೆಜ್ಜೆಯಲ್ಲೂ ಯಶ್ ಅವರ ಶ್ರಮ ಎದ್ದುಕಾಣುತ್ತಿದೆ. ಈ ಸುದೀರ್ಘ ಪ್ರಿವ್ಯೂ ಈಗ ಅಂತರಾಷ್ಟ್ರೀಯ ವಿತರಕರಲ್ಲಿ ಭಾರೀ ಡಿಮ್ಯಾಂಡ್ ಸೃಷ್ಟಿಸಿದೆ.&lt;/p&gt;&lt;p&gt;ಸದ್ಯಕ್ಕೆ ಚಿತ್ರತಂಡ ಈ 9 ನಿಮಿಷದ ಪ್ರಿವ್ಯೂ ಅನ್ನು ಗೌಪ್ಯವಾಗಿಟ್ಟಿದ್ದರೂ, ಮುಂದಿನ ದಿನಗಳಲ್ಲಿ ಇದರ ಸಣ್ಣ ತುಣುಕನ್ನಾದರೂ ಅಭಿಮಾನಿಗಳಿಗಾಗಿ ರಿಲೀಸ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಒಟ್ಟಿನಲ್ಲಿ, ಬರುವ ಜೂನ್ 4 ರಂದು 'ಟಾಕ್ಸಿಕ್' ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳೇ, ನೀವು ಈ &quot;ದೊಡ್ಡವರ ಕಾಲ್ಪನಿಕ ಕಥೆ&quot; ನೋಡಲು ರೆಡಿಯಿದ್ದೀರಾ?&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/rocking-star-yash-dominates-the-international-stage-by-his-toxic-magic-hidden-in-that-secret-9-minute-preview/articleshow-bo9wq33"/>
        </item>
        <item>
            <title><![CDATA['ವಿಷ ಸರ್ಪ, ಸಾಯಿಸಿ' ಎಂದ ಖರ್ಗೆಯ ಕೈಹಿಡಿದು ನಡೆಸಿದ ಸಚಿವ ಜೆ.ಪಿ.ನಡ್ಡಾ: Video Viral]]></title>
            <link>https://kannada.asianetnews.com/politics/minister-jp-nadda-helped-mallikarjuna-kharge-to-walk-in-parliament-suc/articleshow-scrgqkr</link>
            <guid isPermaLink="true">https://kannada.asianetnews.com/politics/minister-jp-nadda-helped-mallikarjuna-kharge-to-walk-in-parliament-suc/articleshow-scrgqkr</guid>
            <pubDate>Fri, 17 Apr 2026 16:38:05 +0530</pubDate>
            <description><![CDATA[ಆರ್&zwnj;ಎಸ್&zwnj;ಎಸ್-ಬಿಜೆಪಿಯನ್ನು ವಿಷಪೂರಿತ ಹಾವಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಚಿವ ಜೆ.ಪಿ. ನಡ್ಡಾ ಸಹಾಯ ಮಾಡಿದ್ದಾರೆ. ಮೆಟ್ಟಿಲು ಇಳಿಯಲು ಕಷ್ಟಪಡುತ್ತಿದ್ದ ಖರ್ಗೆಯವರ ಕೈ ಹಿಡಿದು ನಡ್ಡಾ ನಡೆಸಿಕೊಂಡು ಬಂದಿದ್ದು, ಈ ವಿಡಿಯೋ ರಾಜಕೀಯ ಮತ್ತು ವೈಯಕ್ತಿಕ ಸಂಬಂಧಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdhvr50ygz4thecvvm2mgmd,imgname-mallikarjuna-kharge-and-jp-nadda-1776423919776.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಚೆಗಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂನಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡುತ್ತಾ ನಮಾಜ್ ಮಾಡುವಾಗ ವಿಷಪೂರಿತ ಹಾವು ಕಂಡರೆ ಅದನ್ನು ಕೊಲ್ಲಬೇಕು ಎಂದು ಕುರಾನ್&zwnj;ನಲ್ಲಿ ಬರೆಯಲಾಗಿದೆ. ಆರ್&zwnj;ಎಸ್&zwnj;ಎಸ್- ಬಿಜೆಪಿಗಳು ಆ ವಿಷಪೂರಿತ ಹಾವಿನಂತೆ; ನೀವು ಅದನ್ನು ಕೊಲ್ಲದಿದ್ದರೆ, ನೀವು ಬದುಕುಳಿಯುವುದಿಲ್ಲ ಎಂದು ಹೇಳಿದ್ದು ಭಾರಿ ವಿವಾದಕ್ಕೆ ಈಡಾಗಿದ್ದು ಗೊತ್ತೇ ಇದೆ. ಪ್ರಚೋದನಕಾರಿಯಾಗಿ ಮಾತನಾಡಿರುವುದಾಗಿ ಇವರ ವಿರುದ್ಧ ಬಿಜೆಪಿ ಬೆಂಬಲಿಗರು ತಿರುಗಿ ಬಿದ್ದಿದ್ದಾರೆ.&lt;/p&gt;&lt;h2&gt;&lt;strong&gt;ರಾಜ್ಯಸಭೆಯಲ್ಲಿ ಕುತೂಹಲ&lt;/strong&gt;&lt;/h2&gt;&lt;p&gt;ಇದರ ನಡುವೆಯೇ, ಇಂದು ರಾಜ್ಯಸಭೆಯಲ್ಲಿ ಕುತೂಹಲದ ಘಟನೆಗೆ ಸಾಕ್ಷಿಯಾಯಿತು. ರಾಜ್ಯಸಭೆಯ ಸಭಾಪತಿಯಾಗಿ ಹರಿವಂಶ್​ ನಾರಾಯಣ ಸಿಂಗ್​ ಅವರು ಆಯ್ಕೆಯಾಗಿದ್ದಾರೆ. ಇದು ಅವರ ಮೂರನೆಯ ಟರ್ಮ್​. ಈ ಅವಧಿಯಲ್ಲಿ, ಹರಿವಂಶ್​ ಅವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ನಾಯಕರೆಲ್ಲರೂ ತಮ್ಮ ತಮ್ಮ ಸ್ಥಾನಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕುತೂಹಲದ ದೃಶ್ಯವೊಂದು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಅದೇನೆಂದರೆ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರು ಕೂಡ ತಮ್ಮ ಸೀಟಿನಲ್ಲಿ ಕುಳಿತುಕೊಳ್ಳಲು ಬರುತ್ತಿದ್ದರು. ಆ ಸಮಯದಲ್ಲಿ ಅಲ್ಲಿ ಮೆಟ್ಟಿಲುಗಳು ಇದ್ದವು. ಅವರ ಹಿಂದೆ ಮಲ್ಲಿಕಾರ್ಜುನ ಖರ್ಗೆ ಇದ್ದರು. ಇದಾಗಲೇ ಖರ್ಗೆ ಅವರಿಗೆ 83 ವರ್ಷ ವಯಸ್ಸು. ಮೆಟ್ಟಿಲುಗಳನ್ನು ಇಳಿಯುವುದು ಅವರಿಗೆ ಅಷ್ಟು ಸುಲಭದ ಮಾತಾಗಿರಲಿಲ್ಲ.&lt;/p&gt;&lt;h3&gt;&lt;strong&gt;ಕೈಹಿಡಿದ ಖರ್ಗೆ&lt;/strong&gt;&lt;/h3&gt;&lt;p&gt;ಕೂಡಲೇ, ನಡ್ಡಾ ಅವರು ಖರ್ಗೆ ಅವರ ಕೈಯನ್ನು ಹಿಡಿದು ಅವರನ್ನು ನಡೆಸಿಕೊಂಡು ಬಂದರು. ಖರ್ಗೆ ಅವರಿಗೆ ಈ ಮೆಟ್ಟಿಲುಗಳು ಇಳಿಯುವುದು ಕಷ್ಟವಾಗುತ್ತದೆ ಎಂದು ಅವರು ಆ ಕ್ಷಣದಲ್ಲಿ ಅರಿತುಕೊಂಡರು. ಖರ್ಗೆ ಅವರಿಗೂ ಯಾರದ್ದಾದರೂ ಸಹಾಯ ಬೇಕಿತ್ತು. ಆದ್ದರಿಂದ ಆ ಕ್ಷಣದಲ್ಲಿ ಅವರಿಗೆ ನೆರವಾಗಲು ಬಂದದ್ದು, ಬಿಜೆಪಿ ಹಾಗೂ RSSನ ಸಚಿವ ನಡ್ಡಾ. ನಡ್ಡಾ ಅವರ ಕೈಯನ್ನು ಇಳಿದು ಖರ್ಗೆ (Mallikharjuna Kharge) ನಿಧಾನವಾಗಿ ಮೆಟ್ಟಿಲು ಇಳಿದರು. ನಂತರ ಎಲ್ಲರೂ ತಮ್ಮ ತಮ್ಮ ಸ್ಥಾನದಲ್ಲಿ ಆಸೀನರಾದರು.&lt;/p&gt;&lt;h3&gt;&lt;strong&gt;ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ&lt;/strong&gt;&lt;/h3&gt;&lt;p&gt;ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ವಿಭಿನ್ನ ರೀತಿಯ ಚರ್ಚೆಗಳು ಶುರುವಾಗಿದೆ. ಅಷ್ಟಕ್ಕೂ ವೈಯಕ್ತಿಯ ಸಂಬಂಧವೇ ಬೇರೆ, ರಾಜಕಾರಣವೇ ಬೇರೆ. ಬಹುತೇಕ ಎಲ್ಲಾ ಬೇರೆ ಬೇರೆ ಪಕ್ಷಗಳ ಮುಖಂಡರು ಒಟ್ಟಾಗಿ ಮಾತನಾಡುವುದು, ಹಾಸ್ಯ ಮಾಡುವುದನ್ನು ನೋಡಬಹುದು. ಚುನಾವಣೆ, ಪಕ್ಷದ ವಿಷಯ ಬಂದಾಗ ಸಿದ್ಧಾಂತಗಳು ಬೇರೆಬೇರೆ ಇರುವ ಕಾರಣ, ವಾಗ್ದಾಳಿ ಮಾಡುವುದು ಸಹಜ. ಇದನ್ನು ಯಾರೂ ಅಷ್ಟು ಸೀರಿಯಸ್​ ಆಗಿ ತೆಗೆದುಕೊಳ್ಳಬೇಡಿ ಎಂದೂ ಕೆಲವರು ಹೇಳುತ್ತಿದ್ದಾರೆ. ಅವೆಲ್ಲವೂ ಸರಿ, ಆದರೆ ಯಾರನ್ನೋ ಓಲೈಕೆ ಮಾಡಲು ಇನ್ನಾರನ್ನೋ ವಿಷಸರ್ಪ, ಸಾಯಿಸಿ ಎನ್ನುವ ಹೇಳಿಕೆ ನೀಡುವುದು ಯಾವ ಸಿದ್ಧಾಂತ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Asianet Suvarna News (@asianetsuvarnanews)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/politics/minister-jp-nadda-helped-mallikarjuna-kharge-to-walk-in-parliament-suc/articleshow-scrgqkr"/>
        </item>
        <item>
            <title><![CDATA[Breaking: ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ಶಾಸಕ ಸ್ಥಾನದಿಂದ ಅನರ್ಹತೆ ಸಾಧ್ಯತೆ, ನಾಳೆ ಅಧಿಸೂಚನೆ ಪ್ರಕಟ?]]></title>
            <link>https://kannada.asianetnews.com/karnataka-districts/vinay-kulkarni-life-imprisonment-disqualification-dharwad-mla-seat-karnataka-san/articleshow-d5ppg01</link>
            <guid isPermaLink="true">https://kannada.asianetnews.com/karnataka-districts/vinay-kulkarni-life-imprisonment-disqualification-dharwad-mla-seat-karnataka-san/articleshow-d5ppg01</guid>
            <pubDate>Fri, 17 Apr 2026 16:35:45 +0530</pubDate>
            <description><![CDATA[&lt;p&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ, ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯಲ್ಲಿದ್ದಾರೆ. ನ್ಯಾಯಾಲಯದ ತೀರ್ಪಿನ ಪ್ರತಿ ಕೈಸೇರಿದ ತಕ್ಷಣ ಸ್ಪೀಕರ್ ಕಚೇರಿಯು ಅನರ್ಹತೆಯ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdh942e2d4ymngdazxwe5vk,imgname-vinay-kulkarni-1776423309390.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿ ನ್ಯಾಯಾಲ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಅವರ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ಕುತ್ತು ಬಂದಿದ್ದು, ಸದ್ಯದಲ್ಲೇ ಅನರ್ಹತೆಯ ಭೀತಿ ಎದುರಾಗಿದೆ.&lt;/p&gt;&lt;p&gt;ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸುವ ಪ್ರಕ್ರಿಯೆಗೆ ವಿಧಾನಸಭೆ ಸ್ಪೀಕರ್ ಕಚೇರಿ ಸಿದ್ಧತೆ ನಡೆಸುತ್ತಿದೆ. ನ್ಯಾಯಾಲಯದ ಅಧಿಕೃತ ತೀರ್ಪಿನ ಪ್ರತಿ (Order Copy) ಕೈ ಸೇರಿದ ಕೂಡಲೇ ಅನರ್ಹತೆಯ ಆದೇಶವನ್ನು ಪ್ರಕಟಿಸಲು ಸ್ಪೀಕರ್ ಕಚೇರಿ ನಿರ್ಧರಿಸಿದೆ. ಕಾನೂನು ತಜ್ಞರ ಸಲಹೆಯ ಮೇರೆಗೆ ಈ ಅಧಿಸೂಚನೆ ಹೊರಬೀಳಲಿದೆ.&lt;/p&gt;&lt;h2&gt;&lt;strong&gt;ನಾಳೆ ಅಧಿಕೃತ ಅಧಿಸೂಚನೆ ಸಾಧ್ಯತೆ&lt;/strong&gt;&lt;/h2&gt;&lt;p&gt;ವಿಧಾನಸಭಾ ಸ್ಪೀಕರ್ ಕಚೇರಿಯ ಮೂಲಗಳ ಪ್ರಕಾರ, ನಾಳೆಯೊಳಗೆ (ಶನಿವಾರ) ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ, ಯಾವುದೇ ಚುನಾಯಿತ ಪ್ರತಿನಿಧಿಗೆ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆಯಾದರೆ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ಅನರ್ಹರಾಗುತ್ತಾರೆ. ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆಯಾಗಿರುವುದರಿಂದ ಅವರು ಶಾಸಕ ಸ್ಥಾನವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆಯಿಂದ ಧಾರವಾಡ ರಾಜಕಾರಣದಲ್ಲಿ ಭಾರಿ ಬದಲಾವಣೆಗಳಾಗುವ ಮುನ್ಸೂಚನೆ ಸಿಕ್ಕಿದ್ದು, ಒಂದು ವೇಳೆ ಅನರ್ಹತೆ ಪ್ರಕಟವಾದರೆ ಆ ಕ್ಷೇತ್ರದಲ್ಲಿ ಉಪಚುನಾವಣೆಯ ಅನಿವಾರ್ಯತೆ ಎದುರಾಗಲಿದೆ.&lt;/p&gt;&lt;h2&gt;&lt;strong&gt;89,333 ಮತ ಗಳಿಸಿದ್ದ ವಿನಯ್&zwnj; ಕುಲಕರ್ಣಿ&lt;/strong&gt;&lt;/h2&gt;&lt;p&gt;2023ರ ವಿಧಾನಸಭೆ ಚುನಾವಣೆ ವೇಳೆ ವಿನಯ್&zwnj; ಕುಲಕರ್ಣಿಗೆ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಹೋಗಲು ಕೂಡ ಕೋರ್ಟ್&zwnj; ಅವಕಾಶ ನೀಡಿರಲಿಲ್ಲ. ಈ ವೇಳೆ ವಿನಯ್&zwnj; ಕುಲಕರ್ಣಿಯ ಹೆಂಡ್ತಿ ಹಾಗೂ ಮಕ್ಕಳು ಪ್ರಚಾರ ನಡೆಸಿ ಗೆಲುವು ತಂದುಕೊಟ್ಟಿದ್ದರು. ವಿನಯ್&zwnj; ಕುಲಕರ್ಣಿ 89,333 ಮತಗಳಿಸಿದ್ದರೆ, 2ನೇ ಸ್ಥಾನ ಪಡೆದಿದ್ದ ಬಿಜೆಪಿಯ ಅಮೃತ್&zwnj; ಅಯ್ಯಪ್ಪ ದೇಸಾಯಿ 71, 296 ಮತ ಸಂಪಾದನೆ ಮಾಡಿದ್ದರು. ಬರೋಬ್ಬರಿ 18,037 ಮತಗಳ ಅಂತರದಿಂದ ವಿನಯ್&zwnj; ಕುಲಕರ್ಣಿ ಗೆದ್ದಿದ್ದರು. ಅದಕ್ಕೂ ಮುನ್ನ 2013ರ ಚುನಾವಣೆಯಲ್ಲೂ ಈತ ಶಾಸಕನಾಗಿದ್ದ. ಆಗ 18,320 ಮತಗಳಿಂದ 2ನೇ ಸ್ಥಾನ ಪಡೆದಿದ್ದ ಆಗ ಜೆಡಿಎಸ್&zwnj;ನಲ್ಲಿದ್ದ ಅಮೃತ್&zwnj; ಅಯ್ಯಪ್ಪ ದೇಸಾಯಿಯನ್ನು ಸೋಲಿಸಿದ್ದರು.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/vinay-kulkarni-life-imprisonment-disqualification-dharwad-mla-seat-karnataka-san/articleshow-d5ppg01"/>
        </item>
        <item>
            <title><![CDATA[ಕಾಲೇಜಿಗೆ ಹೋಗೋದಾಗಿ ಸುಳ್ಳಿ ಹೇಳಿ ಓಯೋ ರೂಮಿಗೆ ಹೋದ ಮಗಳು; ಬಾಯ್‌ಫ್ರೆಂಡ್ ಸಮೇತ ತಾಯಿಗೆ ಸಿಕ್ಕಿಬಿದ್ದ ವಿಡಿಯೋ ವೈರಲ್]]></title>
            <link>https://kannada.asianetnews.com/relationship/mother-catches-daughter-with-boyfriend-in-hotel-room-viral-video-scripted-or-real-sat/articleshow-v8gcz0q</link>
            <guid isPermaLink="true">https://kannada.asianetnews.com/relationship/mother-catches-daughter-with-boyfriend-in-hotel-room-viral-video-scripted-or-real-sat/articleshow-v8gcz0q</guid>
            <pubDate>Fri, 17 Apr 2026 16:30:16 +0530</pubDate>
            <description><![CDATA[&lt;p&gt;ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಸುಳ್ಳು ಹೇಳಿ, ತನ್ನ ಬಾಯ್&zwnj;ಫ್ರೆಂಡ್ ಜೊತೆ ಓಯೋ ರೂಮಿಗೆ ಹೋದ ಯುವತಿಯನ್ನು ಆಕೆಯ ತಾಯಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರಲ್ಲಿ ಚರ್ಚೆ ಶುರುವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdh628g18tjvac4kj8pe2es,imgname-oyo-room-viral-video-1776423209232.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಅ&lt;/strong&gt;ಮ್ಮಾ ನಾನು ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟ ಮಗಳು, ಮನೆಯವರ ಕಣ್ಣಿಗೆ ಮಣ್ಣೆರಚಿ ಬಾಯ್&zwnj;ಫ್ರೆಂಡ್ ಜೊತೆಗೆ ಓಯೋ ರೂಮಿಗೆ ಹೋಗಿದ್ದಾಳೆ. ಇದರ ಬೆನ್ನಲ್ಲಿಯೇ ಗ್ರಾಮಸ್ಥರ ನೆರವಿನಿಂದ ಮಗಳು ಓಯೋ ರೂಮಿನಲ್ಲಿರುವುದು ಗೊತ್ತಾದ ಕೂಡಲೇ, ಸಹಾಯಕ್ಕೆ ಒಂದಿಬ್ಬರನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದಾರೆ. ಬಾಯ್&zwnj;ಫ್ರೆಂಡ್ ಜೊತೆಗೆ ಮಗಳು ರೆಡ್ ಹ್ಯಾಂಡ್&zwnj; ಆಗಿ ಸಿಕ್ಕಿಬಿದ್ದಿದ್ದು, ಮುಂದೇನಾಯ್ತು ಎಂಬುದನ್ನು ವೈರಲ್ ವಿಡಿಯೋದಲ್ಲಿ ನೋಡಿ..&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವ ವಿಡಿಯೋಗಳು ವೈರಲ್ ಆಗುತ್ತವೆ ಮತ್ತು ಯಾಕೆ ಜನಪ್ರಿಯತೆ ಪಡೆಯುತ್ತವೆ ಎಂದು ಊಹಿಸುವುದು ಕಷ್ಟ. ಪ್ರತಿದಿನ ನೂರಾರು ವಿಡಿಯೋಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಅದರಲ್ಲಿ ಕೆಲವು ನಮ್ಮನ್ನು ನಗಿಸಿದರೆ, ಇನ್ನು ಕೆಲವು ಶಾಕ್ ನೀಡುತ್ತವೆ. ಸದ್ಯ ಇಂಟರ್ನೆಟ್&zwnj;ನಲ್ಲಿ ಇಂತಹದ್ದೇ ಒಂದು ವಿಡಿಯೋ ಸಖತ್ ಸದ್ದು ಮಾಡುತ್ತಿದ್ದು, ನೆಟ್ಟಿಗರ ನಡುವೆ ಪರ-ವಿರೋಧದ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹೋಟೆಲ್ ಕೊಠಡಿಯೊಂದರಲ್ಲಿ ತನ್ನ ಪ್ರಿಯಕರನೊಂದಿಗೆ ಇದ್ದ ಯುವತಿಯನ್ನು ಆಕೆಯ ತಾಯಿ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ದೃಶ್ಯವಿದೆ. ಈ ಘಟನೆಯು ಇಂಟರ್ನೆಟ್&zwnj;ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.&lt;/p&gt;&lt;h2&gt;&lt;strong&gt;ಏನಿದು ವೈರಲ್ ವಿಡಿಯೋ ಕಥೆ?&lt;/strong&gt;&lt;/h2&gt;&lt;p&gt;ವಿಡಿಯೋದೊಂದಿಗೆ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಯುವತಿಯೊಬ್ಬಳು ಮನೆಯಲ್ಲಿ ಕಾಲೇಜಿಗೆ ಹೋಗುವುದಾಗಿ ಸುಳ್ಳು ಹೇಳಿ ತನ್ನ ಪ್ರೇಮಿಯೊಂದಿಗೆ ಹೋಟೆಲ್ ರೂಮ್&zwnj;ಗೆ ಹೋಗಿದ್ದಾಳೆ. ಆದರೆ ಮಗಳ ಮೇಲೆ ಮೊದಲೇ ಅನುಮಾನ ಹೊಂದಿದ್ದ ತಾಯಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೆ, ಸ್ಥಳೀಯ ಪೊಲೀಸರನ್ನೂ ಜೊತೆಗೆ ಕರೆದುಕೊಂಡು ಹೋಟೆಲ್ ರೂಮ್&zwnj;ಗೆ ನುಗ್ಗಿದ್ದಾರೆ. ಹೋಟೆಲ್ ಕೊಠಡಿಯ ಬಾಗಿಲು ತೆರೆಯುತ್ತಿದ್ದಂತೆಯೇ ತಾಯಿ ಮತ್ತು ಪೊಲೀಸರು ಒಳಗೆ ಪ್ರವೇಶಿಸಿದ್ದಾರೆ.&lt;/p&gt;&lt;p&gt;ರೂಮಿನೊಳಗೆ ಮಗಳು ಮತ್ತು ಆಕೆಯ ಪ್ರಿಯಕರ ಇರುವುದನ್ನು ಕಂಡ ತಾಯಿ ವಿಪರೀತ ಕೋಪಗೊಂಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ, ತಾಯಿ ತನ್ನ ಮಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ಆಕೆಗೆ ಕೆನ್ನೆಗೆ ಬಾರಿಸುತ್ತಾರೆ. ಅಷ್ಟಕ್ಕೇ ನಿಲ್ಲದೆ ಆಕೆಯ ಜೊತೆಗಿದ್ದ ಯುವಕನಿಗೂ ಧರ್ಮದೇಟು ನೀಡುತ್ತಾರೆ. ಹೋಟೆಲ್ ರೂಮ್&zwnj;ನಲ್ಲಿ ವಾತಾವರಣ ತೀರಾ ಉದ್ವಿಗ್ನಗೊಂಡಿರುವುದನ್ನು ನಾವು ಕಾಣಬಹುದು. ಅಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಕೋಪಗೊಂಡ ತಾಯಿಯನ್ನು ಸಮಾಧಾನಪಡಿಸಲು ಮತ್ತು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಾರೆ. ಈ ಇಡೀ ಹೈಡ್ರಾಮಾವನ್ನು ರೂಮಿನಲ್ಲಿದ್ದ ಯಾರೋ ಮೊಬೈಲ್&zwnj;ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಈಗ ಅದು 'ಎಕ್ಸ್' (ಟ್ವಿಟ್ಟರ್) ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;मां आई पुलिस लेकर होटल में बेटी कॉलेज जाने को बोलकर प्रेमी के साथ रंगे हाथ पकड़ाई pic.twitter.com/ZhZZpQcnu7&lt;/p&gt;&lt;p&gt;&mdash; ROHIT SINGH (@desHi__chora) April 16, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ನಿಜವೋ ಅಥವಾ ಸುಳ್ಳೋ? ನೆಟ್ಟಿಗರ ಚರ್ಚೆ:&lt;/strong&gt;&lt;/h2&gt;&lt;p&gt;ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಬಾಕ್ಸ್&zwnj;ನಲ್ಲಿ ಎರಡು ಬಣಗಳಾಗಿ ವಿಂಗಡಣೆಯಾಗಿದ್ದಾರೆ. ಕೆಲವರು ಇದು ನಿಜವಾದ ಘಟನೆ ಎಂದು ನಂಬಿ ಕಮೆಂಟ್ ಮಾಡುತ್ತಿದ್ದಾರೆ. &lsquo;ಮನೆಯವರಿಗೆ ಸುಳ್ಳು ಹೇಳಿ ಇಂತಹ ಕೆಲಸ ಮಾಡಿದರೆ ತಕ್ಕ ಶಾಸ್ತಿಯೇ ಆಗುತ್ತದೆ&rsquo;, 'ನಂಬಿಕೆಗೆ ದ್ರೋಹ ಬಗೆದರೆ ಕೊನೆಗೆ ಇಂತಹ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗುತ್ತದೆ' ಎಂದು ಕೆಲವರು ಪೋಷಕರ ಶಿಸ್ತನ್ನು ಬೆಂಬಲಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಓಯೋ ರೂಮ್ ಬಾಗಿಲು ಹಾಕೊಳ್ಳೋದನ್ನ ಮರೆತ ಜೋಡಿ; ಮೆಟ್ರೋ ನಿಲ್ದಾಣದಿಂದ ಕೂಗಿ ಹೇಳಿದ ವ್ಯಕ್ತಿ&lt;/p&gt;&lt;p&gt;ಆದರೆ ಇನ್ನು ಬಹುಪಾಲು ಜನರು ಇದು ಕೇವಲ ಸೋಷಿಯಲ್ ಮೀಡಿಯಾ ಪ್ರಚಾರಕ್ಕಾಗಿ, ವ್ಯೂಸ್ ಹಾಗೂ ಸಬ್&zwnj;ಸ್ಕ್ರೈಬರ್ಸ್&zwnj;ಗಳನ್ನು ಗಿಟ್ಟಿಸಿಕೊಳ್ಳಲು ಮಾಡಿದ 'ಸ್ಕ್ರಿಪ್ಟೆಡ್' ಅಥವಾ ನಕಲಿ ವಿಡಿಯೋ ಎಂದು ವಾದಿಸುತ್ತಿದ್ದಾರೆ. 'ಇವರೆಲ್ಲರೂ ತುಂಬಾ ಚೆನ್ನಾಗಿ ನಟಿಸುತ್ತಿದ್ದಾರೆ, ಆಸ್ಕರ್ ಪ್ರಶಸ್ತಿ ಕೊಡಬೇಕು, 'ವ್ಯೂಸ್&zwnj;ಗಾಗಿ ಜನರನ್ನು ಮೂರ್ಖರನ್ನಾಗಿ ಮಾಡಲು ಇಂತಹ ಡ್ರಾಮಾಗಳನ್ನು ಸೃಷ್ಟಿಸುತ್ತಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇನ್&zwnj;ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್&zwnj;ಗಾಗಿ ಇಂತಹ ನಕಲಿ ಜಗಳಗಳ ವಿಡಿಯೋಗಳನ್ನು ಸೃಷ್ಟಿಸುವುದು ಒಂದು ದಂಧೆಯಾಗಿ ಮಾರ್ಪಟ್ಟಿದೆ.&lt;/p&gt;&lt;p&gt;ಈ ವಿಡಿಯೋ ನಿಜವೋ ಅಥವಾ ಕೇವಲ ನಾಟಕವೋ ಎಂಬುದು ಇನ್ನು ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೂ, ಸುಳ್ಳು ಮತ್ತು ನಂಬಿಕೆ ದ್ರೋಹದ ಮೇಲಣ ಈ ವಿಡಿಯೋ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/mother-catches-daughter-with-boyfriend-in-hotel-room-viral-video-scripted-or-real-sat/articleshow-v8gcz0q"/>
        </item>
        <item>
            <title><![CDATA[Breaking: ಯೋಗೇಶ್ ಗೌಡ ಹತ್ಯೆ ಪ್ರಕರಣ: ಕೊಲೆಗಾರ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ]]></title>
            <link>https://kannada.asianetnews.com/state/life-imprisonment-for-mla-vinay-kulkarni-in-yogesh-gowda-murder-case-gdp/articleshow-8gmbe6n</link>
            <guid isPermaLink="true">https://kannada.asianetnews.com/state/life-imprisonment-for-mla-vinay-kulkarni-in-yogesh-gowda-murder-case-gdp/articleshow-8gmbe6n</guid>
            <pubDate>Fri, 17 Apr 2026 16:19:20 +0530</pubDate>
            <description><![CDATA[ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಈ ಹತ್ಯೆಗೆ ಸಂಬಂಧಿಸಿದಂತೆ ಕುಲಕರ್ಣಿ ಸೇರಿದಂತೆ ಒಟ್ಟು 17 ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdgr23jay4as83c4regv6f2,imgname-whatsapp-image-2026-04-17-at-4.12.18-pm-1776422750322.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ, ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿಗೆ ಸೇರಿ 16 ಮಂದಿ &amp;nbsp;ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. &amp;nbsp;ಟಿಂಗರೀಕರ್&zwnj; ಒಬ್ಬರಿಗೆ ಜೀವಾವಧಿ ಸಿಗದೆ 7 ವರ್ಷಗಳ ಜೈಲು ಮತ್ತು 30000 ದಂಡ ಪ್ರಕಟಿಸಲಾಗಿದೆ. &amp;nbsp;ಇದರ ಜೊತೆಗೆ ಉಳಿದ ಅಪರಾಧಿಗಳಿಗೂ ಶಿಕ್ಷೆಯನ್ನು ಪ್ರಕಟ ಮಾಡಿದೆ. 16ಲಕ್ಷ ರೂ. ದಂಡದ ಮೊತ್ತ ವಿಧಿಸಲಾಗಿದ್ದು ಈ ಪರಿಹಾರವನ್ನು ಯೋಗೇಶ್ ಗೌಡ ಮಕ್ಕಳಿಗೆ ಹಾಗೂ ಸಹೋದರ ಗುರುನಾಥ್ ಗೌಡ ಗೆ ನೀಡಲು ಸೂಚನೆ ನೀಡಲಾಗಿದೆ. &amp;nbsp;&lt;/p&gt;&lt;p&gt;ವಿನಯ್ ಕುಲಕರ್ಣಿ, ಪೊಲೀಸ್&zwnj; ಇನ್ಸ್&zwnj;ಪೆಕ್ಟರ್&zwnj; ಆಗಿದ್ದ ಚನ್ನಕೇಶವ ಟಿಂಗರೀಕರ್&zwnj; ಸೇರಿದಂತೆ 17 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಪ್ರಿಲ್ 15ರಂದು ದೋಷಿಗಳೆಂದು ಘೋಷಿಸಿ ಮಹತ್ವದ ತೀರ್ಪು ನೀಡಿತ್ತು. ಗುರುವಾರವಾಕ್ಕೆ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿದ ನ್ಯಾಯಾಲವು ಸಿಬಿಐ ಮತ್ತು ಆರೋಪಿಗಳ ಪರ ವಕೀಲರ ವಾದ ಪ್ರತಿವಾದವನ್ನು ಆಲಿಸಿತು. ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು. ಬಳಿಕ ಇಂದಿಗೆ ಅಂದರೆ ಏಪ್ರಿಲ್ 17ಕ್ಕೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಪ್ರಕರಣದ 15ನೇ ಅಪರಾಧಿಯಾಗಿರುವ ಪ್ರಭಾವಿ ರಾಜಕಾರಣಿ ವಿನಯ್ ಕುಲಕರ್ಣಿ ಹತ್ಯೆಯ ಹಿಂದೆ ನಡೆದ ಒಳಸಂಚಿನಲ್ಲಿ ಭಾಗಿಯಾದ ಹಿನ್ನೆಲೆ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಉಳಿದ ಆರೋಪಿಗಳಿಗೂ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.&lt;/p&gt;&lt;p&gt;2016ರ ಜೂನ್&zwnj;ನಲ್ಲಿ ನಡೆದ ಕೊಲೆಗೆ ಸಂಬಂಧಿಸಿ ಯೋಗೇಶ್&zwnj; ಗೌಡ ಕೊಲೆ ಪ್ರಕರಣ ಸಂಬಂಧ ಸುಮಾರು 8 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಸಂಜೆ ಅಂತಿಮ ತೀರ್ಪು ಪ್ರಕಟಿಸಿ ಅಪರಾಧಿಗಳೆಂದು ಘೋಷಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್&zwnj; ಗಜಾನನ ಭಟ್&zwnj; ಅವರು, 15ನೇ ಆರೋಪಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ವಿಕ್ರಮ್&zwnj; ಬಳ&zwj;್ಳಾರಿ, ಕೀರ್ತಿ ಕುಮಾರ್&zwnj; ಬಸವರಾಜ್&zwnj; ಕುರಹಟ್ಟಿ, ಸಂದೀಪ್&zwnj; ಸವದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹೊಂಗಲ್&zwnj;, ಸಂತೋಷ್&zwnj; ಸವದತ್ತಿ, ದಿನೇಶ್&zwnj;, ಅಶ್ವತ್ಥ್, ಸುನೀಲ್&zwnj;, ನಜೀರ್ ಅಹ್ಮದ್&zwnj;, ಶಹನವಾಜ್&zwnj;, ನೂತನ್&zwnj;, ಹರ್ಷಿತ್&zwnj;, ಚಂದ್ರಶೇಖರ್&zwnj; ಇಂಡಿ, ವಿಕಾಸ್&zwnj; ಕಲಬುರಗಿ, ಪೊಲೀಸ್&zwnj; ಇನ್ಸ್&zwnj;ಪೆಕ್ಟರ್&zwnj; ಚನ್ನಕೇಶವ ಬಿ.ಟಿಂಗರಿಕರ್&zwnj; ಒಟ್ಟು 17 ಮಂದಿಗೆ ಶಿಕ್ಷೆ ಪ್ರಕಟಿಸಿದ್ದಾರೆ.&lt;/p&gt;&lt;h2&gt;17 ಅಪರಾಧಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು&lt;/h2&gt;&lt;p&gt;ಏಪ್ರಿಲ್ 15ರಂದು ನ್ಯಾಯಾಧೀಶರ ಸೂಚನೆಯ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋದರು. ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಹಿನ್ನೆಲೆಯಲ್ಲಿ 17 ಅಪರಾಧಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆದರೆ ವಾದ ಪ್ರತಿವಾದ ಮಾತ್ರ ನಡೆದಿತ್ತು. ಹೀಗಾಗಿ ಇಂದು ಮತ್ತೆ ಎಲ್ಲಾ ಆರೋಪಿಗಳನ್ನು ಕೋರ್ಟ್&zwnj;ಗೆ ಕರೆತಂದಿದ್ದರು.&lt;/p&gt;&lt;p&gt;ಈ ಪ್ರಕರಣದಲ್ಲಿ ಮೊದಲನೇ ಆರೋಪಿ ಬಸವರಾಜ್&zwnj; ಮುತ್ತಗಿ ಮತ್ತು 17ನೇ ಆರೋಪಿ ಶಿವಾನಂದ್&zwnj; ಅವರನ್ನು ಮಾಫಿ ಸಾಕ್ಷಿಯನ್ನಾಗಿಸಲಾಗಿದೆ. ಜತೆಗೆ 20ನೇ ಆರೋಪಿ ವಾಸುದೇವ್&zwnj; ರಾಮ ನೀಲೆಕಣಿ ಮತ್ತು 21ನೇ ಆರೋಪಿ ಸೋಮಶೇಖರ್&zwnj; ಬಸಪ್ಪ ನ್ಯಾಮಗೌಡ ಅವರನ್ನು ನಿರ್ದೋಷಿಗಳೆಂದು ಕೋರ್ಟ್ ಹೇಳಿದೆ.&lt;/p&gt;&lt;h2&gt;ಯಾವ ಸೆಕ್ಷನ್&zwnj; ಯಾರ ಮೇಲೆ?&lt;/h2&gt;&lt;p&gt;ಪ್ರಕರಣದ 2 ರಿಂದ 16 ಮತ್ತು 18ನೇ ಆರೋಪಿಗಳು ಭಾರತೀಯ ದಂಡ ಸಂಹಿತೆ 302 (ಕೊಲೆ) ಆರೋಪದಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿ ಶಿಕ್ಷೆಗೊಳಗಾಗಿದ್ದಾರೆ. ಹಾಗೆಯೇ 2 ರಿಂದ 16 ಮತ್ತು 18 ಹಾಗೂ 19ನೇ ಆರೋಪಿಗಳು 120 (ಬಿ) (ಅಪರಾಧಿಕ ಒಳ ಸಂಚು) ರೂಪಿಸಿದ್ದಾರೆ ಮತ್ತು 201 (ಸಾಕ್ಷ್ಯ ನಾಶ ಪಡಿಸಿದ್ದಾರೆ). ಇನ್ನು ಆರೋಪಿ 2 ರಿಂದ 14 ಮತ್ತು 18ನೇ ಆರೋಪಿಗಳು 143, 149 (ಅಕ್ರಮ ಕೂಟ), 147 (ಗಲಭೆ), 148 (ಆಯುಧಗಳಿಂದ ಕೃತ್ಯ) ಎಸಗಿದ್ದಾರೆ. 19ನೇ ಆರೋಪಿ 218 ಅಡಿಯಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದು ತಪ್ಪುದಾಖಲೆಗಳನ್ನು ಸೃಷ್ಟಿಸಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/state/life-imprisonment-for-mla-vinay-kulkarni-in-yogesh-gowda-murder-case-gdp/articleshow-8gmbe6n"/>
        </item>
        <item>
            <title><![CDATA[Breaking: ವೈದ್ಯಕೀಯ ದಾಖಲೆ ತೋರಿಸಿ ಬ್ಯಾನ್‌ನಿಂದ ಬಚಾವ್‌ ಆದ ರಾಜಸ್ಥಾನ ರಾಯಲ್ಸ್‌ ಮ್ಯಾನೇಜರ್‌, ಬಿಸಿಸಿಐನಿಂದ ಭಾರೀ ದಂಡ]]></title>
            <link>https://kannada.asianetnews.com/cricket-sports/ipl-2026-rajasthan-royals-manager-romi-bhinder-fined-mobile-use-dugout-bcci-san/articleshow-bbi6h66</link>
            <guid isPermaLink="true">https://kannada.asianetnews.com/cricket-sports/ipl-2026-rajasthan-royals-manager-romi-bhinder-fined-mobile-use-dugout-bcci-san/articleshow-bbi6h66</guid>
            <pubDate>Fri, 17 Apr 2026 16:08:31 +0530</pubDate>
            <description><![CDATA[&lt;p&gt;ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಐಪಿಎಲ್ ಪಂದ್ಯದ ವೇಳೆ ಡಗ್&zwnj;ಔಟ್&zwnj;ನಲ್ಲಿ ನಿಯಮಬಾಹಿರವಾಗಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ. ಅವರ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ನಿಷೇಧದಂತಹ ಕಠಿಣ ಶಿಕ್ಷೆಯ ಬದಲು ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp0gqt01pcm5t1c4ha9r2mr4,imgname-romi-bhinder-1775986534401.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗುವಾಹಟಿ (ಏ.17): &lt;/strong&gt;ಐಪಿಎಲ್ 2026ರ ಪಂದ್ಯದ ವೇಳೆ ನಿಯಮ ಬಾಹಿರವಾಗಿ ಡಗ್&zwnj;ಔಟ್&zwnj;ನಲ್ಲಿ ಮೊಬೈಲ್ ಫೋನ್ ಬಳಸಿದ ರಾಜಸ್ಥಾನ ರಾಯಲ್ಸ್ (RR) ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಬಿಸಿಸಿಐ (BCCI) ದಂಡ ವಿಧಿಸಿದೆ. ನಿಷೇಧದಂತಹ ಕಠಿಣ ಶಿಕ್ಷೆಯಿಂದ ಅವರು ಪಾರಾಗಿದ್ದರೂ, ಅವರ ಈ ವರ್ತನೆಗೆ ಭಾರಿ ಬೆಲೆ ತೆರಬೇಕಾಗಿದೆ. ಏಪ್ರಿಲ್ 10ರಂದು ಗುವಾಹಟಿಯಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದ ವೇಳೆ ರೋಮಿ ಭಿಂದರ್ ಅವರು ಆಟಗಾರರ ಡಗೌಟ್&zwnj;ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿತ್ತು. ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕ (ACSU) ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ವೈರಲ್ ಆದ ಫೋಟೋಗಳಲ್ಲಿ ಭಿಂದರ್ ಫ್ರಿಜ್ ಮುಂದೆ ಕುಳಿತು ಫೋನ್ ಬಳಸುತ್ತಿದ್ದರೆ, ಅವರ ಪಕ್ಕದಲ್ಲೇ ಕುಳಿತಿದ್ದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕೂಡ ಫೋನ್ ಕಡೆ ನೋಡುತ್ತಿರುವುದು ಪತ್ತೆಯಾಗಿತ್ತು.&lt;/p&gt;&lt;h2&gt;&lt;strong&gt;ನಿಯಮ ಏನು ಹೇಳುತ್ತದೆ?&lt;/strong&gt;&lt;/h2&gt;&lt;p&gt;PMOA (ಪಿಎಂಒಎ) ನಿಯಮಗಳ ಪ್ರಕಾರ, ತಂಡದ ಮ್ಯಾನೇಜರ್ ಮೊಬೈಲ್ ಬಳಸಲು ಅವಕಾಶವಿದೆ. ಆದರೆ ಅದನ್ನು ಕೇವಲ ಡ್ರೆಸ್ಸಿಂಗ್ ರೂಮ್ ಒಳಗೆ ಮಾತ್ರ ಬಳಸಬೇಕು. ಡಗೌಟ್ ಅಥವಾ ಮೈದಾನದ ಆಸುಪಾಸಿನಲ್ಲಿ ಫೋನ್ ಬಳಸುವುದು ಭ್ರಷ್ಟಾಚಾರ ವಿರೋಧಿ ನೀತಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಭಿಂದರ್ ಅವರು ನಿಗದಿತ ಸ್ಥಳದ ಹೊರಗೆ ಫೋನ್ ಬಳಸಿ ತಪ್ಪು ಮಾಡಿದ್ದರು.&lt;/p&gt;&lt;h2&gt;&lt;strong&gt;ಶಿಕ್ಷೆ ಯಾಕೆ ಕಡಿಮೆ ಆಯಿತು?&lt;/strong&gt;&lt;/h2&gt;&lt;p&gt;ಬಿಸಿಸಿಐ ಮೂಲಗಳ ಪ್ರಕಾರ, ಭಿಂದರ್ ಅವರ ನಡವಳಿಕೆಯಲ್ಲಿ ಯಾವುದೇ ದುರುದ್ದೇಶ ಅಥವಾ ಭ್ರಷ್ಟಾಚಾರದ ಕುರುಹು ಕಂಡುಬಂದಿಲ್ಲ. ಅವರು ಕೇವಲ ಅಸಡ್ಡೆಯಿಂದ ಈ ತಪ್ಪು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಅವರ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಬಿಸಿಸಿಐ ಮೃದು ಧೋರಣೆ ತಳೆದಿದೆ. ರೋಮಿ ಭಿಂದರ್ ಅವರು ತೀವ್ರವಾದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದು ಹಂತದಲ್ಲಿ ನಾಗ್ಪುರದ ವೈದ್ಯರು ಅವರ ಬದುಕುಳಿಯುವ ಭರವಸೆಯನ್ನೇ ಕೈಬಿಟ್ಟಿದ್ದರು. ಬಿಸಿಸಿಐ ನೋಟಿಸ್ ನೀಡಿದ 48 ಗಂಟೆಗಳ ಒಳಗಾಗಿ ಭಿಂದರ್ ಅವರು ತಮ್ಮ ವೈದ್ಯಕೀಯ ದಾಖಲೆಗಳೊಂದಿಗೆ ವಿವರಣೆ ನೀಡಿದ್ದಾರೆ ಮತ್ತು ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಭಿಂದರ್ ಅವರ ನಡವಳಿಕೆ ಶಿಸ್ತುಬದ್ಧವಾಗಿಲ್ಲದಿದ್ದರೂ, ಅವರ ಆರೋಗ್ಯ ಮತ್ತು ಯಾವುದೇ ದುರುದ್ದೇಶವಿಲ್ಲದ ಕಾರಣಕ್ಕಾಗಿ ಅವರನ್ನು ನಿಷೇಧಿಸುವ ಬದಲು 1 ಲಕ್ಷ ರೂಪಾಯಿ ದಂಡ ಅಥವಾ ಎಚ್ಚರಿಕೆ ನೀಡಿ ಬಿಡಲು ಬಿಸಿಸಿಐ ನಿರ್ಧರಿಸಿದೆ. ಎಸಿಎಸ್&zwnj;ಯು (ACSU) ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/ipl-2026-rajasthan-royals-manager-romi-bhinder-fined-mobile-use-dugout-bcci-san/articleshow-bbi6h66"/>
        </item>
        <item>
            <title><![CDATA[ಮಂಡ್ಯ: ಸ್ಟ್ಯಾಲಿನ್ ಗೆ ಬುದ್ದಿ ಇಲ್ಲ ಬುದ್ದಿ ಕಡಿಮೆ, ಆರ್. ಅಶೋಕ್ ಮಾತಿನ ಸಮರ]]></title>
            <link>https://kannada.asianetnews.com/karnataka-districts/karnataka-opposition-leader-r-ashoka-slams-congress-praises-modi-over-women-reservation-bill-gdp/articleshow-ir07b8s</link>
            <guid isPermaLink="true">https://kannada.asianetnews.com/karnataka-districts/karnataka-opposition-leader-r-ashoka-slams-congress-praises-modi-over-women-reservation-bill-gdp/articleshow-ir07b8s</guid>
            <pubDate>Fri, 17 Apr 2026 16:06:48 +0530</pubDate>
            <description><![CDATA[ಮಂಡ್ಯದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಮಹಿಳಾ ಮೀಸಲಾತಿ ಬಿಲ್ ಕುರಿತು ಕೇಂದ್ರವನ್ನು ಶ್ಲಾಘಿಸಿದರು. ಇದೇ ವೇಳೆ, ಕ್ಷೇತ್ರ ಮರುವಿಂಗಡಣೆ, ಹಿಂದಿ ಪರೀಕ್ಷೆ ವಿವಾದ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಅವರು ಟೀಕಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpdfnjbr95edhpdps6a4dekb,imgname-r-ashoka-1776421620088.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ : &lt;/strong&gt;ಮಂಡ್ಯದಲ್ಲಿ ನಡೆದ ಕಾರ್ಯಕ್ರಮದ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಲವು ರಾಜಕೀಯ ಹಾಗೂ ಸಮಕಾಲೀನ ವಿಚಾರಗಳ ಕುರಿತು ತೀಕ್ಷ್ಣ ಹೇಳಿಕೆಗಳನ್ನು ನೀಡಿದ್ದಾರೆ. ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಬಿಲ್&zwnj;ನಿಂದ ಹಿಡಿದು ರಾಜ್ಯ ರಾಜಕೀಯದ ಬೆಳವಣಿಗೆಗಳವರೆಗೆ ಹಲವು ವಿಷಯಗಳನ್ನು ಅವರು ಪ್ರಸ್ತಾಪಿಸಿದರು.&lt;/p&gt;&lt;h2&gt;ಮಹಿಳಾ ಮೀಸಲಾತಿ ಬಿಲ್&zwnj;ಗೆ ಅಭಿನಂದನೆ&lt;/h2&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿರುವುದನ್ನು ಆರ್. ಅಶೋಕ್ ಸ್ವಾಗತಿಸಿದರು. ಬಹಳ ವರ್ಷಗಳಿಂದ ಹಲವರು ಪ್ರಯತ್ನಿಸಿದರೂ ಸಾಧ್ಯವಾಗದ ಕೆಲಸವನ್ನು ಮೋದಿ ಅವರು ಸಾಧಿಸಿದ್ದಾರೆ. ಇದು ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ದೇಶದ ಮಹಿಳೆಯರಿಗೆ ಸಮಾನತೆ ಒದಗಿಸುವ ಮಹತ್ವದ ಕ್ರಮ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ಮಹಿಳೆಯರು ಕೂಡ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;ಕಾಂಗ್ರೆಸ್ ವಿರುದ್ಧ ಟೀಕೆ&lt;/h2&gt;&lt;p&gt;ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಶೋಕ್, ಕಾಂಗ್ರೆಸ್ ಧರ್ಮ ಆಧಾರಿತ ರಾಜಕೀಯ ಮಾಡುತ್ತಿದೆ. ಮಹಿಳಾ ಮೀಸಲಾತಿ ವಿಚಾರದಲ್ಲೂ ಅನಗತ್ಯ ವಿವಾದ ಸೃಷ್ಟಿಸುತ್ತಿದೆ. ಇದು ಇತಿಹಾಸ ನಿರ್ಮಾಣದ ಕ್ಷಣವಾಗಿದ್ದು, ಅದನ್ನು ರಾಜಕೀಯವಾಗಿ ತಿರುಗಿಸುವುದು ಸರಿಯಲ್ಲ ಎಂದು ಹೇಳಿದರು.&lt;/p&gt;&lt;h2&gt;ಕ್ಷೇತ್ರ ಮರುವಿಂಗಡಣೆ ವಿವಾದ&lt;/h2&gt;&lt;p&gt;ತಮಿಳುನಾಡಿನಲ್ಲಿ ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಿಲ್&zwnj;ನಲ್ಲಿ ಜನಸಂಖ್ಯೆ ಆಧಾರದ ಯಾವುದೇ ಅಂಶವಿಲ್ಲ. ಹಿಂದೆಯೇ ಕಾಂಗ್ರೆಸ್ ಈ ರೀತಿಯ ಕ್ರಮಗಳನ್ನು ಕೈಗೊಂಡಿತ್ತು. ಈಗ ತಮಿಳುನಾಡಿನ ಕ್ಷೇತ್ರಗಳು ಹೆಚ್ಚಾಗುತ್ತಿರುವುದರಲ್ಲಿ ಏನು ಸಮಸ್ಯೆ? ಎಂದು ಪ್ರಶ್ನಿಸಿದರು. ತಮಿಳುನಾಡು ಸಿಎಂ ಸ್ಟಾಲಿನ್&zwnj;ಗೆ ಬುದ್ಧಿ ಕಡಿಮೆ ಇದೆ. ಇದೇ ರೀತಿ ಕಾಂಗ್ರೆಸ್&zwnj; ನಾಯಕರು ಕೂಡ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಿಂದೆ ಲೋಕಸಭೆ ಕ್ಷೇತ್ರ ಎಷ್ಟಿರಬೇಕೆಂದು ಕಾಂಗ್ರೆಸ್&zwnj; ನಾಯಕರೇ ತೀರ್ಮಾನ ಮಾಡಿದ್ದರು. ಜನಸಂಖ್ಯೆ ಆಧಾರಿತವಾಗಿಯೇ ಕ್ಷೇತ್ರ ಮರುವಿಂಗಡಣೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳು 42 ಆಗುತ್ತಿವೆ. ಇಲ್ಲಿ ಕ್ಷೇತ್ರಗಳು ಕಡಿಮೆಯಾಗುವುದಿಲ್ಲ. ಕೇರಳದಲ್ಲಿ 20 ಕ್ಷೇತ್ರಗಳಿಂದ 30 ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59 ಕ್ಕೆ ಏರಿಕೆಯಾಗಲಿದೆ. ಆದರೂ ವಿರೋಧ ಮಾಡುತ್ತಿದ್ದಾರೆ. ಇದನ್ನು ಜಾರಿ ಮಾಡಿದರೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಎಲ್ಲರೂ ಟೆಂಟ್&zwnj; ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ವಿರೋಧ ಪಕ್ಷಗಳ ನಾಯಕರಲ್ಲಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯ ಆಗುತ್ತಿಲ್ಲ. ಯಾವುದೇ ರಾಜ್ಯಗಳಲ್ಲಿ ಸ್ಥಾನಗಳು ಕಡಿಮೆಯಾಗುತ್ತಿಲ್ಲ. ವಿರೋಧ ಪಕ್ಷಗಳ ನಾಯಕರಿಗೆ ಅಭಿವೃದ್ಧಿ ಬೇಕಿಲ್ಲ. ಕಾಂಗ್ರೆಸ್&zwnj;ನ ವಂಶಾಡಳಿತಕ್ಕೆ ಪೂರಕವಾಗಿ ಎಲ್ಲರೂ ಮಾತಾಡುತ್ತಿದ್ದಾರೆ ಎಂದರು.&lt;/p&gt;&lt;h2&gt;ಯೋಗೇಶ್ ಗೌಡ ಹತ್ಯೆ ಪ್ರಕರಣ&lt;/h2&gt;&lt;p&gt;ಯೋಗೇಶ್ ಗೌಡ ಹತ್ಯೆ ಪ್ರಕರಣದ ತೀರ್ಪಿನ ಕುರಿತು ಮಾತನಾಡಿದ ಅವರು, ಈ ಪ್ರಕರಣವು ರಾಜಕೀಯ ಕೊಲೆಗಳಿಗೆ ಒಂದು ಪಾಠವಾಗಿದೆ. ಯಾರಾದರೂ ರಾಜಕಾರಣಿಯ ಮಾತು ಕೇಳಿ ಅಪರಾಧದಲ್ಲಿ ಭಾಗಿಯಾದರೆ ಅದರ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ. ಕಾಂಗ್ರೆಸ್ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿತ್ತು, ಆದರೆ ಸಿಬಿಐ ತನಿಖೆಯಿಂದ ಸತ್ಯ ಬಹಿರಂಗವಾಗಿದೆ ಎಂದು ಹೇಳಿದರು.&lt;/p&gt;&lt;h2&gt;ದೇವೇಗೌಡರ ರಾಜ್ಯಸಭೆ ವಿಚಾರ&lt;/h2&gt;&lt;p&gt;ಹೆಚ್&zwnj;.ಡಿ. ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರ ಕುರಿತು ಮಾತನಾಡಿದ ಅವರು, ಇದು ರಾಷ್ಟ್ರೀಯ ಮಟ್ಟದ ನಾಯಕರು ತೀರ್ಮಾನಿಸುವ ವಿಷಯ ಎಂದು ತಿಳಿಸಿದರು.&lt;/p&gt;&lt;h2&gt;ಹಿಂದಿ ಪರೀಕ್ಷೆ, ಗ್ರೇಸ್ ಮಾರ್ಕ್ಸ್ ವಿವಾದ&lt;/h2&gt;&lt;p&gt;ಹಿಂದಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್ ಆದೇಶವನ್ನು ಪಾಲಿಸಬೇಕು. ವಿದ್ಯಾರ್ಥಿಗಳ ವಿಚಾರದಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.&lt;/p&gt;&lt;h2&gt;ಕನ್ನಡಕ್ಕೆ ಆದ್ಯತೆ&lt;/h2&gt;&lt;p&gt;ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಾವುದೇ ನಿರ್ಧಾರ ಕೈಗೊಳ್ಳಬೇಕು. 365 ದಿನ ಓದಿದ ಮಕ್ಕಳಿಗೆ ಅನ್ಯಾಯವಾಗಬಾರದು ಎಂದು ಹೇಳಿದರು. ಉರ್ದು ಶಾಲೆಗಳಲ್ಲಿ ಕನ್ನಡದ ಸ್ಥಿತಿ ಕುರಿತೂ ಪ್ರಶ್ನೆ ಎತ್ತಿದ ಅವರು, ಈ ವಿಷಯದಲ್ಲಿ ಸಮಗ್ರ ಚರ್ಚೆ ಅಗತ್ಯವಿದೆ ಎಂದರು. ರಾಜ್ಯದ ಮಕ್ಕಳು ಹಿಂದಿ ಓದುವ ಮೊದಲೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಪರೀಕ್ಷೆಯ ಸಮಯದಲ್ಲಿ ತುಘಲಕ್&zwnj; ದರ್ಬಾರ್&zwnj; ಮಾಡುವ ಅಗತ್ಯವಿರಲಿಲ್ಲ. ನಾನು ಕೂಡ ಕನ್ನಡದ ಹೋರಾಟಗಾರನಾಗಿದ್ದು, ಗೋಕಾಕ್&zwnj; ಚಳವಳಿಯಲ್ಲಿ ಭಾಗವಹಿಸಿ ಪೊಲೀಸರ ಲಾಠಿ ಏಟಿನಿಂದ ಕಾಲಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದೆ. ಹೊಸೂರಿನಲ್ಲಿ ಹೆಚ್ಚಿನವರು ಕನ್ನಡ ಮಾತಾಡುತ್ತಾರೆ. ಕಾಸರಗೋಡಿನಲ್ಲೂ ಕನ್ನಡಿಗರು ಹೆಚ್ಚಿದ್ದಾರೆ. ಅಲ್ಲಿ ಕನ್ನಡ ಇಲ್ಲವೆಂದರೆ ಸಮಸ್ಯೆಯಾಗುತ್ತದೆ. ಉರ್ದು ಶಾಲೆಗಳಲ್ಲಿ ಮೊದಲಿಗೆ ಉರ್ದು, ಎರಡನೇ ಭಾಷೆಯಾಗಿ ಇಂಗ್ಲಿಷ್&zwnj; ಓದುತ್ತಾರೆ. ಕೊನೆಯ ಭಾಷೆಯಾಗಿ ಕನ್ನಡ ಓದುತ್ತಾರೆ. ತ್ರಿಭಾಷಾ ಸೂತ್ರ ಇಲ್ಲವೆಂದರೆ ಅಲ್ಲಿ ಕನ್ನಡವೂ ಇರುವುದಿಲ್ಲ. ವಿದ್ಯಾರ್ಥಿಗಳ ವಿಚಾರ ಬಂದಾಗ ಸದನ ಸಮಿತಿ ರಚಿಸಿ ಚರ್ಚೆ ಮಾಡಬೇಕಿತ್ತು ಎಂದರು&lt;/p&gt;&lt;h2&gt;ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ&lt;/h2&gt;&lt;p&gt;ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ ಅಶೋಕ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗೊಂದಲದಲ್ಲಿದೆ. ಮುಖ್ಯಮಂತ್ರಿಯ ಸ್ಥಾನಕ್ಕಾಗಿ ಒಳಪೈಪೋಟಿ ನಡೆಯುತ್ತಿದೆ. ಶಾಸಕರು ದೆಹಲಿಗೆ ತೆರಳುತ್ತಿರುವುದು ಇದಕ್ಕೆ ಸಾಕ್ಷಿ ಎಂದರು. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಲಾಗುತ್ತಿದೆ. ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದರು. ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿರುವುದಕ್ಕೆ ಮುಸ್ಲಿಮ್&zwnj; ಮುಖಂಡರು ಕಾಂಗ್ರೆಸ್&zwnj; ವಿರುದ್ಧ ಮಾತಾಡುತ್ತಿದ್ದಾರೆ. ಸಚಿವ ಜಮೀರ್&zwnj; ಅಹ್ಮದ್&zwnj; ಅವರನ್ನೂ ಟಾರ್ಗೆಟ್&zwnj; ಮಾಡಲಾಗುತ್ತಿದೆ. ಇಡೀ ಪಕ್ಷ ಹಾಗೂ ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ. ಇಂದೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್&zwnj;ಡಿಎ ಸರ್ಕಾರ ಬರಲಿದೆ. ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಕ್ಕೆ ನಮಗೇನೂ ಸಮಸ್ಯೆಯಾಗಿಲ್ಲ, ಬಿಜೆಪಿ ಬೆಂಬಲಿಸುತ್ತೇವೆ ಎಂದು ಮುಸ್ಲಿಮರು ಹೇಳಿದ್ದಾರೆ. ಅವರ ಈ ನಡೆಯನ್ನು ಸ್ವಾಗತಿಸುತ್ತೇನೆ ಎಂದರು.&lt;/p&gt;&lt;h2&gt;ಮುಂದಿನ ಚುನಾವಣೆ ಕುರಿತು ಭವಿಷ್ಯ&lt;/h2&gt;&lt;p&gt;ಮುಂದಿನ ಚುನಾವಣೆಯ ಕುರಿತು ಮಾತನಾಡಿದ ಅವರು, 2028ರಲ್ಲ, ಇಂದೇ ಚುನಾವಣೆ ನಡೆದರೂ ನಮ್ಮ ಎನ್&zwnj;ಡಿಎ ಮೈತ್ರಿ ಶೇ.100 ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಒಟ್ಟಾರೆ ಮಂಡ್ಯದಲ್ಲಿ ಆರ್. ಅಶೋಕ್ ನೀಡಿದ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-opposition-leader-r-ashoka-slams-congress-praises-modi-over-women-reservation-bill-gdp/articleshow-ir07b8s"/>
        </item>
        <item>
            <title><![CDATA[ಪಾರ್ಕ್‌ನಲ್ಲಿರೋ 50 ವರ್ಷದ ಹಳೇ ದೇವಸ್ಥಾನ ಒತ್ತುವರಿ ಅಲ್ಲ: ಅರ್ಜಿ ಸಲ್ಲಿಸಿದವನಿಗೆ ಹೈಕೋರ್ಟ್‌ನಿಂದ ಭಾರೀ ದಂಡ!]]></title>
            <link>https://kannada.asianetnews.com/india-news/madras-high-court-temple-in-public-park-not-encroachment-petitioner-fined-san/articleshow-6laz1fz</link>
            <guid isPermaLink="true">https://kannada.asianetnews.com/india-news/madras-high-court-temple-in-public-park-not-encroachment-petitioner-fined-san/articleshow-6laz1fz</guid>
            <pubDate>Fri, 17 Apr 2026 15:53:25 +0530</pubDate>
            <description><![CDATA[&lt;p&gt;ಸಾರ್ವಜನಿಕ ಉದ್ಯಾನವನದಲ್ಲಿರುವ ದಶಕಗಳ ಹಳೆಯ ದೇವಾಲಯವನ್ನು ಒತ್ತುವರಿ ಎಂದು ಪರಿಗಣಿಸಲಾಗದು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ದುರುದ್ದೇಶಪೂರಿತ ಅರ್ಜಿ ಸಲ್ಲಿಸಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಅರ್ಜಿದಾರನಿಗೆ 1 ಲಕ್ಷ ರೂ. ದಂಡ ವಿಧಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jg4c8yhy4qde1r7mkce0k5b2,imgname-mixcollage-27-dec-2024-09-07-pm-2988.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಏ.17): &lt;/strong&gt;ಸಾರ್ವಜನಿಕ ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ದಶಕಗಳಿಂದ ಇರುವ ದೇವಾಲಯವನ್ನು 'ಒತ್ತುವರಿ' ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೆ, ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ನ್ಯಾಯಾಲಯವು 1 ಲಕ್ಷ ರೂಪಾಯಿ ಭಾರಿ ದಂಡ ವಿಧಿಸಿದೆ. ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ಈ ತೀರ್ಪು ನೀಡಿದ್ದು, ದೇವಾಲಯವು ಸಾರ್ವಜನಿಕ ಸ್ಥಳದ ಭಾಗವಾಗಿದೆ ಮತ್ತು ಅದು ನಿವಾಸಿಗಳ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&quot;ಯಾವುದೇ ಕಾರಣಕ್ಕೂ, ಒತ್ತುವರಿಯ ನೆಪವೊಡ್ಡಿ ದೈವವನ್ನು ಆರಾಧಿಸುವ ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ&quot; ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿದೆ. ಈ ದೇವಾಲಯವು ಕಳೆದ 50 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಈ ಹಂತದಲ್ಲಿ ಅದನ್ನು ತೆರವುಗೊಳಿಸುವುದು ಬೃಹತ್ ಸಂಖ್ಯೆಯ ಜನರ ಧಾರ್ಮಿಕ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಅರ್ಜಿದಾರನಿಗೆ ದಂಡ ಯಾಕೆ?&lt;/strong&gt;&lt;/h2&gt;&lt;p&gt;ಜೇಸುದಾಸ್ ಕಾರ್ನೆಲಿಯಸ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು. 1960ರ ವಿನ್ಯಾಸದಂತೆ ಈ ಜಾಗವನ್ನು ಕೇವಲ ಉದ್ಯಾನವನ ಮತ್ತು ಆಟದ ಮೈದಾನವಾಗಿ ಬಳಸಬೇಕು, ಅಲ್ಲಿ ದೇವಾಲಯ ಕಟ್ಟಿ ಒತ್ತುವರಿ ಮಾಡಲಾಗಿದೆ ಎಂದು ಅವರು ವಾದಿಸಿದ್ದರು. ಆದರೆ, ನ್ಯಾಯಾಲಯವು ಈ ಅರ್ಜಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದೆ. &quot;ಈ ಅರ್ಜಿಯು ದುರುದ್ದೇಶಪೂರಿತವಾಗಿದೆ ಮತ್ತು ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಸಲ್ಲಿಕೆಯಾದಂತೆ ಕಾಣುತ್ತಿದೆ&quot; ಎಂದು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಅರ್ಜಿದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಈ ಮೊತ್ತವನ್ನು ನಾಲ್ಕು ವಾರಗಳ ಒಳಗೆ ತಮಿಳುನಾಡು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಲು ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;ಸಾರ್ವಜನಿಕ ಉದ್ದೇಶದ ವಾದ&lt;/strong&gt;&lt;/h2&gt;&lt;p&gt;ಉದ್ಯಾನವನದ ಒಟ್ಟು ವಿಸ್ತೀರ್ಣದಲ್ಲಿ ದೇವಾಲಯವು ಕೇವಲ ಅತ್ಯಲ್ಪ ಭಾಗವನ್ನು ಮಾತ್ರ ಆಕ್ರಮಿಸಿಕೊಂಡಿದೆ ಮತ್ತು ಉಳಿದ ಜಾಗವು ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ ಎಂದು ಪ್ರತಿವಾದಿಗಳು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಉದ್ಯಾನವನಗಳು ಮನರಂಜನೆಗೆ ಮುಖ್ಯವಾದರೆ, ಆರಾಧನಾ ಕೇಂದ್ರಗಳು ಮಾನಸಿಕ ನೆಮ್ಮದಿಗೆ ಸಹಕಾರಿ. ಈ ದೇವಾಲಯವು ಬಹುಸಂಖ್ಯಾತ ನಿವಾಸಿಗಳ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿಯೇ ಬಳಕೆಯಾಗುತ್ತಿದೆ. ಐದು ದಶಕಗಳ ಕಾಲ ಸುಮ್ಮನಿದ್ದು, ಈಗ ವಿಳಂಬವಾಗಿ ಆಕ್ಷೇಪ ಎತ್ತಿರುವುದರಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೂ, ದೇವಾಲಯವಿರುವ ಜಾಗವನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ಉದ್ಯಾನವನವಾಗಿ ಸುಸ್ಥಿತಿಯಲ್ಲಿ ನಿರ್ವಹಿಸುವುದು ಅಧಿಕಾರಿಗಳ ಕರ್ತವ್ಯ ಎಂದು ನ್ಯಾಯಾಲಯ ನೆನಪಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/madras-high-court-temple-in-public-park-not-encroachment-petitioner-fined-san/articleshow-6laz1fz"/>
        </item>
        <item>
            <title><![CDATA[ಅಧಿಕಾರ ಸಿಕ್ಕ ಬೆನ್ನಲ್ಲೇ ಭ್ರಷ್ಟಾಚಾರ: 2024ರ ಸಿವಿಲ್ ಸರ್ವೀಸ್ ಟಾಪರ್ ಎಸಿಬಿ ಬಲೆಗೆ: ಕಚೇರಿಯಲ್ಲಿದ್ದ 4 ಲಕ್ಷ ಜಪ್ತಿ]]></title>
            <link>https://kannada.asianetnews.com/india-news/rajasthan-civil-service-exam-2024-topper-kajal-meena-arrested-while-taking-60000-bribe/articleshow-54y7tmy</link>
            <guid isPermaLink="true">https://kannada.asianetnews.com/india-news/rajasthan-civil-service-exam-2024-topper-kajal-meena-arrested-while-taking-60000-bribe/articleshow-54y7tmy</guid>
            <pubDate>Fri, 17 Apr 2026 15:11:32 +0530</pubDate>
            <description><![CDATA[2024ರ ಸಿವಿಲ್ ಸರ್ವೀಸ್ ಟಾಪರ್ ಹಾಗೂ ಎಸ್&zwnj;ಡಿಎಂ ಅಧಿಕಾರಿಯಾದ ಕಾಜಲ್ ಮೀನಾ, ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ 60 ಸಾವಿರ ಲಂಚ ಸ್ವೀಕರಿಸುವಾಗ ರಾಜಸ್ಥಾನದ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅವರೊಂದಿಗೆ ಇಬ್ಬರು ಸಹಾಯಕರೂ ಬಂಧಿತರಾಗಿದ್ದು, ಕಚೇರಿಯಿಂದ 4 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdcc2ggqgxkr6rfc5782tk8,imgname-acb-raid-1776418163215.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಭ್ರಷ್ಟಾಚಾರ ನಿಗ್ರಹ ದಳದ ಗಾಳಕ್ಕೆ ಬಿದ್ದ ರಾಜಸ್ಥಾನದ ಎಸ್&zwnj;ಡಿಎಂ ಮತ್ತು ಸಿಬ್ಬಂದಿ.&lt;/strong&gt;&lt;/h2&gt;&lt;p&gt;2024ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಟಾಪರ್ ಆಗಿ ಆಯ್ಕೆಯಾಗಿ ಬಳಿಕ ನಾಗರಿಕ ಸೇವೆಗೆ ಸೇರಿದ ಉಪ ವಿಭಾಗೀಯ ಅಧಿಕಾರಿಯೊಬ್ಬರು 60 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ರಾಜಸ್ಥಾನದ ಭ್ರಷ್ಟ್ರಾಚಾರ ನಿಗ್ರಹದಳವು ನಡೆಸಿದ ಕಾರ್ಯಾಚರಣೆಯಲ್ಲಿ ಎಸ್&zwnj;ಡಿಎಂ ಅಧಿಕಾರಿ ಕಾಜಲ್ ಮೀನಾ ಕ್ಲಾರ್ಕ್&zwnj;ಗಳಾದ ದಿನೇಶ್&zwnj; ಕುಮಾರ್ ಸೈನಿ ಹಾಗೂ ಹಿರಿಯ ಸಹಾಯಕ ಪ್ರವೀಣ್ ಧಕಡ್ ಎಂಬುವವರು ರೆಡ್&zwnj;ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಾಲೀಕರಿಂದ ಇವರು ಒಂದು ಲಕ್ಷ ರೂಪಾಯಿ ಲಂಚ ಕೇಳಿದ್ದು, 60 ಸಾವಿರ ಸ್ವೀಕರಿಸುವ ವೇಳೆ ರಾಜಸ್ಥಾನದ ಎಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ರಾಜಸ್ಥಾನದ ಕರೌಲಿ ಜಿಲ್ಲೆಯ ನಡೌತಿ ಎಂಬ ಪ್ರದೇಶದಲ್ಲಿ ಎಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಯ ವೇಳೆ ಎಸ್&zwnj;ಡಿಎಂ ಕಚೇರಿಯಲ್ಲಿದ್ದ 4 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಭೂ ವಿವಾದ ಇತ್ಯರ್ಥಕ್ಕೆ ಲಂಚ ಕೇಳಿ ರೆಡ್&zwnj;ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ.&lt;/strong&gt;&lt;/h3&gt;&lt;p&gt;ಜಂಟಿಯಾಗಿ ನಿರ್ವಹಿಸಲ್ಪಡುತ್ತಿದ್ದ ಕುಟುಂಬದ ಆಸ್ತಿಯೊಂದನ್ನು ಅದರ ಮಾಲೀಕರ ನಡುವೆ ಪಾಲು ಮಾಡುವುದಕ್ಕೆ ಆರಂಭದಲ್ಲಿ ಎಸ್&zwnj;ಡಿಎಂ ಅಧಿಕಾರಿ 1 ಲಕ್ಷ ಲಂಚ ಕೇಳಿದ್ದಾರೆ. ಆದರೆ ನಂತರ ಮಾತುಕತೆ ನಡೆಸಿ ಒಂದು ಲಕ್ಷವನ್ನು 60 ಸಾವಿರಕ್ಕೆ ಇಳಿಸಲಾಗಿತ್ತು. ಈ ಬಗ್ಗೆ ದೂರು ಬಂದ ನಂತರ ಸವಾಯ್&zwnj; ಮದೋಪುರದ ಎಸಿಬಿ ಅಧಿಕಾರಿಗಳು ದೂರಿಗೆ ಸಂಬಂಧಿಸಿದಂತೆ ಲಂಚ ಕೇಳುವುದಕ್ಕೆ ದೂರವಾಣಿ ಕರೆ ಹಾಗೂ ಇತರ ಸಾಕ್ಷ್ಯಗಳನ್ನು ಖಚಿಪಡಿಸಿಕೊಂಡು ಎಸ್&zwnj;ಡಿಎಂ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯಲು ಬಲೆ ಬೀಸಿದ್ದಾರೆ. ಹಾಗೆಯೇ ರೆಡ್&zwnj;ಹ್ಯಾಂಡ್ ಆಗಿ ಅವರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;60 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಎಸ್&zwnj;ಡಿಎಂ ಕಾಜಲ್ ಮೀನಾ!&lt;/strong&gt;&lt;/h3&gt;&lt;p&gt;ಕ್ಲಾರ್ಕ್&zwnj;ಗಳಿಗೆ 10 ಸಾವಿರ ಹಾಗೂ ಎಸ್&zwnj;ಡಿಎಂ ಅಧಿಕಾರಿಗೆ 50 ಸಾವಿರ ಸೇರಿದಂತೆ ಒಟ್ಟು 60 ಸಾವಿರ ರೂಪಾಯಿ ಲಂಚವನ್ನು ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. ನಂತರ ಕಚೇರಿಯಲ್ಲಿ ಪರಿಶೀಲನೆ ನಡೆಸಿದಾಗ ಒಟ್ಟು 4 ಲಕ್ಷ ಮೌಲ್ಯದ ನಗದು ಹಣ ಆರೋಪಿಗಳ ಬಳಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಸಿಬಿ ನಿರ್ದೇಶಕ ಗೋವಿಂದ ಗುಪ್ತ ದಾಳಿ ವಿಚಾರವನ್ನು ಖಚಿತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧವೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್&zwnj;ಗಳಡಿ ಔಪಚಾರಿಕ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ&lt;/strong&gt;&lt;/p&gt;&lt;p&gt;ಎಸಿಬಿಯ ಅಡಿಷನ್&zwnj; ಎಸ್ಪಿ ಗ್ಯಾನ್ ಸಿಂಗ್ ಮಾತನಾಡಿ, ನಡೌತಿ ಎಸ್&zwnj;ಡಿಎಂ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಭೂಮಿಯನ್ನು ಮಾಲೀಕರ ಮಧ್ಯೆ ಪಾಲು ಮಾಡುವುದಕ್ಕೆ ಲಂಚ ಕೇಳುತ್ತಿದ್ದಾರೆ ಎಂದು ದೂರುಗಳು ಬಂದಿದ್ದವು. ಈ ಹಿನ್ನೆಲೆ ಪರಿಶೀಲನೆ ನಡೆಸಿ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಎಸ್&zwnj;ಡಿಎಂ ಅಧಿಕಾರಿಗಳ ತಿಂಗಳ ವೇತನ ಎಷ್ಟು?&lt;/strong&gt;&lt;/p&gt;&lt;p&gt;ಎಸ್&zwnj;ಡಿಎಂ ಅಧಿಕಾರಿಗಳಿಗೆ ಪ್ರತಿ ತಿಂಗಳ ವೇತನ 75,000 ದಿಂದ 1,00,000 ದವರೆಗೆ ಇರುತ್ತದೆ. 7ನೇ ವೇತನ ಆಯೋಗದ ಅಡಿಯಲ್ಲಿ ಗ್ರೂಪ್ ಎ ಅಧಿಕಾರಿಯಾಗಿಅವರು ₹56,100 ಮೂಲ ವೇತನವನ್ನು ಪಡೆಯುತ್ತಾರೆ, ಜೊತೆಗೆ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಮತ್ತು ಸಾರಿಗೆ ಭತ್ಯೆ (TA) ಸೇರಿ ಅವರ ವೇತನ 75,000 ದಿಂದ 1,00,000 ದವರೆಗೆ ಇರುತ್ತದೆ ಹೀಗಿದ್ದು, ಜನರ ಸೇವೆ ಮಾಡುವುದಕ್ಕೆ ಪರೀಕ್ಷೆ ಬರೆದು ಆಯ್ಕೆಯಾಗಿರುವ ಈ ಉನ್ನತ ಮಟ್ಟದ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟು ಜನಸಾಮಾನ್ಯರ ಜೀವ ಹಿಂಡುತ್ತಿರುವುದು ನೋಡಿದರೆ ಇವರಿಗೆ ಯಾವ ಕಾನೂನಿನ ಭಯ ಇಲ್ಲ ಎಂಬುದು ಸ್ಪಷ್ಟವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ: ಒಂದೇ ದಿನ ಮೂವರು ರೇ*ಪಿಸ್ಟ್&zwnj;ಗಳಿಗೆ ಮರಣದಂಡನೆ&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>news</category>
            <dc:creator>Anusha Kb</dc:creator>
            <atom:link href="https://kannada.asianetnews.com/india-news/rajasthan-civil-service-exam-2024-topper-kajal-meena-arrested-while-taking-60000-bribe/articleshow-54y7tmy"/>
        </item>
        <item>
            <title><![CDATA[ಪದೇ ಪದೇ ರಸಗುಲ್ಲ ಕೇಳಿದ್ದೇ ತಪ್ಪಾಯ್ತು, ಕೋಪದಲ್ಲಿ ರಾಕ್ಷಸನಾದ ಅಡುಗೆ ಕಾರ್ಮಿಕ]]></title>
            <link>https://kannada.asianetnews.com/crime/child-attending-wedding-kept-repeatedly-asking-for-a-rasgulla-the-confectioner-threw-him-into-burning-tandoor/articleshow-m6ts236</link>
            <guid isPermaLink="true">https://kannada.asianetnews.com/crime/child-attending-wedding-kept-repeatedly-asking-for-a-rasgulla-the-confectioner-threw-him-into-burning-tandoor/articleshow-m6ts236</guid>
            <pubDate>Fri, 17 Apr 2026 15:05:29 +0530</pubDate>
            <description><![CDATA[&lt;p&gt;ಮದುವೆ ಮನೆಯಲ್ಲಿ ಸ್ವೀಟ್ ಗಾಘಿ ಕೆಲ ಮಕ್ಕಳೂ ಹಠ ಮಾಡೋದು ಕಾಮನ್. ಆದ್ರೆ ಇಲ್ಲೊಬ್ಬ ಬಾಲಕನಿಗೆ ರಸಗುಲ್ಲ ಕೇಳಿದ್ದೇ ತಪ್ಪಾಗಿದೆ. ಈಗ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುವಂತಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdcndt3754wrtqjv0aspzef,imgname-burning-tandoor-1776418469699.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹುಡುಗನೊಬ್ಬ ಪದೇ ಪದೇ ರಸಗುಲ್ಲ ಕೇಳಿದ ಎನ್ನುವ ಕೋಪಕ್ಕೆ ಅಡುಗೆ ಕೆಲಸಗಾರ ಆತನ ಜೊತೆ ರಕ್ಷಸನಂತೆ ವರ್ತಿಸಿದ್ದಾನೆ. ಅಡುಗೆ ಕಾರ್ಮಿಕನ ಕೋಪಕ್ಕೆ ಅಪ್ರಾಪ್ತ ಬಾಲಕ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ.&lt;/p&gt;&lt;h2&gt;ರಸಗುಲ್ಲ ಕೇಳಿದ್ದೇ ತಪ್ಪಾಯ್ತು&lt;/h2&gt;&lt;p&gt;ಘಟನೆ ಕೇಬಸ್ತಿ ಜಿಲ್ಲೆಯ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮಲೋಲಿ ಗೋಸಾಯಿ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಮದುವೆ ನಡೆಯುತ್ತಿತ್ತು. ಎಲ್ಲರೂ ಮದುವೆ ಸಂಭ್ರಮದಲ್ಲಿದ್ದರು. ಆದ್ರೆ ಮದುವೆ ಮನೆ ಕೆಲವೇ ಕ್ಷಣಗಳಲ್ಲಿ ದುಃಖದ ಮನೆಯಾಗಿ ಬದಲಾಗಿದೆ. ಮುಖದಿಂದ ಸೊಂಟದವರೆಗೆ ಸುಟ್ಟಿರುವ ಹುಡುಗ ಜೀವನ್ಮರಣದ ಮಧ್ಯೆ ಹೋರಾಡ್ತಿದ್ದಾನೆ.&lt;/p&gt;&lt;p&gt;ರಾವಣನ ಹಣ್ಣು ರಾಮ ಕದ್ದ: ಪ್ರಕಾಶ್​ ರಾಜ್​ ಹೊಸ ರಾಮಾಯಣ ಸ್ಟೋರಿ; ಗೋಮಾಂಸ ಹಬ್ಬ- FIR ದಾಖಲು&lt;/p&gt;&lt;p&gt;ದುರ್ಜನ್ಪುರ ನಿವಾಸಿ ಸಂತೋಷ್ ಅವರ ಮಗ 11 ವರ್ಷದ ಚಮನ್, ತನ್ನ ತಾಯಿ ಸಾವಿನ ನಂತ್ರ ಬಸ್ತಿಯ ಬಘನಾಲದಲ್ಲಿರುವ ತನ್ನ ಅಜ್ಜ-ಅಜ್ಜಿಯರ ಮನೆಯಲ್ಲಿ ವಾಸಿಸುತ್ತಿದ್ದ. ಬುಧವಾರ, ಅಜ್ಜಿಯೊಂದಿಗೆ ಮಲೋಲಿ ಗೋಸಾಯಿ ಗ್ರಾಮದಲ್ಲಿನಡೆಯುತ್ತಿದ್ದ ಸಂಬಂಧಿಕರ ಮದುವೆಗೆ ಹೋಗಿದ್ದ. ಆಟವಾಡ್ತಾ ಖುಷಿಯಾಗಿದ್ದ ಸಮನ್ ಕಣ್ಣು ರಸಗುಲ್ಲ ಮೇಲೆ ಬಿದ್ದಿದೆ. ಅಡುಗೆ ಮನೆಗೆ ಹೋಗಿ ರಸಗುಲ್ಲ ತಿಂದಿದ್ದಾನೆ. ಒಂದಕ್ಕೆ ಆತನ ಬಯಕೆ ನಿಲ್ಲಲಿಲ್ಲ. ಪದೇ ಪದೇ ರಸಗುಲ್ಲ ತಿನ್ನಲು ಬಂದಿದ್ದಾನೆ. ಇದನ್ನು ನೋಡಿ ಅಡುಗೆ ಗುತ್ತಿಗೆದಾರನಿಗೆ ಕೋಪ ಬಂದಿದೆ. ಮೊದಲು ಚಮನ್ ನಿಲ್ಲಿಸಿ, ಬುದ್ಧಿ ಹೇಳಿದ್ದಾನೆ. ಇದಕ್ಕೂ ಚಮನ್ ಬಗ್ಗದೆ ಹೋದಾಗ ಚಮನನ್ನು ತಂದೂರಿ ಒಲೆ ಮೇಲೆ ಎತ್ತಿದ್ದಾನೆ. ನಿಯಂತ್ರಣ ತಪ್ಪಿ ಚಮನ್ ಉರಿಯುತ್ತಿದ್ದ ಒಲೆಯೊಳಗೆ ಬಿದ್ದಿದ್ದಾನೆ.&lt;/p&gt;&lt;p&gt;ಚಮನ್ ಕೂಗಾಟ ಕೇಳಿ ಅಲ್ಲಿದ್ದವರು ಓಡಿ ಬಂದಿದ್ದಾರೆ. ತಕ್ಷಣ ಚಮನ್ ನನ್ನು ಅಯೋಧ್ಯಾ ವೈದ್ಯಕೀಯ ಕಾಲೇಜಿಗೆ ಸೇರಿಸಿದ್ದಾರೆ. ಆದ್ರೆ ತೀವ್ರ ಸುಟ್ಟ ಗಾಯದಿಂದ ಬಳಲುತ್ತಿರುವ ಚಮನ್ ನನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಮನ್ ಗೆ ಚಿಕಿತ್ಸ ನಡೆಯುತ್ತಿದೆ. ಪರಿಸ್ಥಿರಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.&lt;/p&gt;&lt;p&gt;ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ&lt;/p&gt;&lt;p&gt;ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪ್ರತ್ಯೇಕ ದರ್ಶಿಗಳಿಂದ ಮಾಹಿತಿ ಪಡೆದಿದ್ದಾರೆ. ದೂರು ದಾಖಲಿಸಿಕೊಂಡು ಅರೋಪಿ ಪತ್ತೆಗೆ ಮುಂದಾಗಿದ್ದಾರೆ. ಘಟನಾ ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ. ಅಮಾಯಕ ಚಮಚನ್ ರಸಗುಲ್ಲವನ್ನು ಪದೇ ಪದೇ ಕೇಳಿದ್ದೇ ತಪ್ಪಾಗಿದೆ. ಚಮನ್ ಅಜ್ಜಿಯ ಮನೆಯಲ್ಲಿ ಓದುತ್ತಿದ್ದ. ಮದುವೆ ಮನೆಗೆ ಬಂದಿದ್ದ ಆತ ಅಜ್ಜಿಯ ಜೊತೆ ಖುಷಿಯಾಗಿದ್ದ. ಮುಗ್ದ ಮಗು ಜೊತೆ ಅಡುಗೆ ಗುತ್ತಿಗೆದಾರ ನಡೆದುಕೊಂಡು ರೀತಿ ಎಲ್ಲರನ್ನು ಕೋಪಗೊಳಿಸಿದೆ. ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳವಂತೆ ಜನರು ಆಗ್ರಹಿಸಿದ್ದಾರೆ. ಈ ಘಟನೆ ಪ್ರದೇಶದ ಜನರಲ್ಲಿ ವ್ಯಾಪಕ ಕೋಪವನ್ನು ಹುಟ್ಟುಹಾಕಿದೆ. ಒಂದು ರಸಗುಲ್ಲ ಇಷ್ಟೆಲ್ಲ ಗಲಾಟೆಗೆ ಕಾರಣವಾಗುತ್ತೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಮದುವೆ ಮನೆ ಈಗ ನೋವಿನ ಮನೆಯಾಗಿ ಬದಲಾಗಿದೆ.&lt;/p&gt;]]></content:encoded>
            <category>news</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/child-attending-wedding-kept-repeatedly-asking-for-a-rasgulla-the-confectioner-threw-him-into-burning-tandoor/articleshow-m6ts236"/>
        </item>
        <item>
            <title><![CDATA[ಡಿ.ಕೆ.ಶಿವಕುಮಾರ್-ಸತೀಶ್ ಜಾರಕಿಹೊಳಿ ಹೈವೋಲ್ಟೇಜ್ ಮೀಟಿಂಗ್: ಅಬ್ದುಲ್ ಜಬ್ಬಾರ್ ಅಮಾನತು ರದ್ದತಿಗೆ ಒತ್ತಾಯ!]]></title>
            <link>https://kannada.asianetnews.com/politics/satish-jarkiholi-meets-dk-shivakumar-abdul-jabbar-suspension-revocation-kn-rajanna-statement-sat/articleshow-eqfosoc</link>
            <guid isPermaLink="true">https://kannada.asianetnews.com/politics/satish-jarkiholi-meets-dk-shivakumar-abdul-jabbar-suspension-revocation-kn-rajanna-statement-sat/articleshow-eqfosoc</guid>
            <pubDate>Fri, 17 Apr 2026 15:05:02 +0530</pubDate>
            <description><![CDATA[&lt;p&gt;ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅಬ್ದುಲ್ ಜಬ್ಬಾರ್ ಅವರ ಅಮಾನತು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಈ ಭೇಟಿಯಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಚರ್ಚಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdcjb12gbskmbetazbgwpqa,imgname-satish-jarkiholi-meets-dk-shivakumar-1776418368546.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ರಾ&lt;/strong&gt;ಜ್ಯ ಕಾಂಗ್ರೆಸ್&zwnj;ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ವದಂತಿಗಳ ನಡುವೆಯೇ, ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಭೇಟಿಯಲ್ಲಿ ರಾಜಕೀಯ ಅಜೆಂಡಾ ಮಾತ್ರವಲ್ಲದೆ, ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಚರ್ಚಿಸಲಾಗಿದೆ.&lt;/p&gt;&lt;h2&gt;&lt;strong&gt;ಅಬ್ದುಲ್ ಜಬ್ಬಾರ್ ಅಮಾನತು ವಾಪಸ್&zwnj;ಗೆ ಆಗ್ರಹ:&lt;/strong&gt;&lt;/h2&gt;&lt;p&gt;ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಪ್ರಮುಖವಾಗಿ ಅಬ್ದುಲ್ ಜಬ್ಬಾರ್ ಅವರ ಅಮಾನತು ವಿಚಾರವನ್ನು ಪ್ರಸ್ತಾಪಿಸಿದ್ದಾರೆ. 'ಅಬ್ದುಲ್ ಜಬ್ಬಾರ್ ಅವರ ಅಮಾನತನ್ನು ವಾಪಸ್ ಪಡೆಯುವಂತೆ ನಾನು ಅಧ್ಯಕ್ಷರ ಜೊತೆ ಚರ್ಚಿಸಿದ್ದೇನೆ. ಅಲ್ಪಸಂಖ್ಯಾತರು ಮತ್ತು ದಲಿತರು ನಮ್ಮ ಪ್ರಮುಖ ಮತದಾರರು. ಪಕ್ಷದ ಹಿತದೃಷ್ಟಿಯಿಂದ ಕೆಲವೊಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಸರಿಪಡಿಸಬೇಕಾಗುತ್ತದೆ. ಹೈಕಮಾಂಡ್ ಒಪ್ಪಿಗೆ ಪಡೆದು ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿದ್ದೇನೆ,' ಎಂದು ತಿಳಿಸಿದರು. ಈ ಮೂಲಕ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನವನ್ನು ಹೋಗಲಾಡಿಸಲು 'ಡ್ಯಾಮೇಜ್ ಕಂಟ್ರೋಲ್' ಮಾಡುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗಿದೆ.&lt;/p&gt;&lt;h3&gt;&lt;strong&gt;ರಾಜಣ್ಣ ಹೇಳಿಕೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ:&lt;/strong&gt;&lt;/h3&gt;&lt;p&gt;ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರೆ ಎಂಬ ಕೆ.ಎನ್. ರಾಜಣ್ಣ ಅವರ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಸತೀಶ್ ಜಾರಕಿಹೊಳಿ ರಾಜತಾಂತ್ರಿಕವಾಗಿ ಉತ್ತರಿಸಿದರು. 'ರಾಜಣ್ಣ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿಗಳು ಅಸಹಾಯಕರು ಎಂದು ಅವರು ಎಲ್ಲಿಯೂ ನೇರವಾಗಿ ಹೇಳಿಲ್ಲ. ಪಕ್ಷದಲ್ಲಿ ಎಲ್ಲರಿಗೂ ಸ್ಥಾನಮಾನ ನೀಡಲು ಸಾಧ್ಯವಿಲ್ಲ, ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ' ಎಂದರು.&lt;/p&gt;&lt;h2&gt;&lt;strong&gt;ಡಿಕೆಶಿ ಕಡೆಯಿಂದ ಅಭಿವೃದ್ಧಿ ಮಂತ್ರ:&lt;/strong&gt;&lt;/h2&gt;&lt;p&gt;ಸತೀಶ್ ಜಾರಕಿಹೊಳಿ ಅವರೊಂದಿಗಿನ ಭೇಟಿಯ ಬಗ್ಗೆ ಮಾಹಿತಿ ನೀಡಿದ ಡಿ.ಕೆ. ಶಿವಕುಮಾರ್, ಕೇವಲ ರಾಜಕಾರಣ ಮಾತ್ರವಲ್ಲದೆ ಆಡಳಿತಾತ್ಮಕ ವಿಚಾರಗಳ ಬಗ್ಗೆಯೂ ಚರ್ಚಿಸಿದ್ದಾಗಿ ತಿಳಿಸಿದರು. 'ನೆಲಮಂಗಲ ಭಾಗದಲ್ಲಿ ವಾಹನ ಸಂಚಾರ ದಟ್ಟಣೆ ವಿಪರೀತವಾಗುತ್ತಿದೆ. ಅರ್ಧ-ಮುಕ್ಕಾಲು ಗಂಟೆ ಟ್ರಾಫಿಕ್ ಜಾಮ್ ಆಗುತ್ತಿದ್ದು, ಇದನ್ನು ತಪ್ಪಿಸಲು ಬೆಂಗಳೂರು ಸಿಟಿಗೆ ಬರುವ ವಾಹನಗಳನ್ನು ಹೇಗೆ ನಿಯಂತ್ರಿಸಬಹುದು ಎಂಬ ಬಗ್ಗೆ ಚರ್ಚಿಸಿದ್ದೇವೆ. ನಮ್ಮ ಬ್ಯುಸಿನೆಸ್ ಕಾರಿಡಾರ್ ಯೋಜನೆ ಹಾಗೂ ರಾಜ್ಯದ ಒಟ್ಟಾರೆ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ' ಎಂದು ಹೇಳಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಈ ಭೇಟಿಯು ಮೇಲ್ನೋಟಕ್ಕೆ ಅಭಿವೃದ್ಧಿ ಕಾಮಗಾರಿಗಳ ಚರ್ಚೆಯಂತೆ ಕಂಡರೂ, ಆಂತರಿಕವಾಗಿ ಪಕ್ಷದೊಳಗೆ ನಡೆಯುತ್ತಿರುವ ಕಿತ್ತಾಟಗಳನ್ನು ಶಮನಗೊಳಿಸುವ ಪ್ರಯತ್ನವೆಂದೇ ವಿಶ್ಲೇಷಿಸಲಾಗುತ್ತಿದೆ. ಕೆ.ಎನ್. ರಾಜಣ್ಣ ಅವರ ಆಕ್ರೋಶದ ನುಡಿಗಳ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರನ್ನೂ ಆಗಿರುವ ಡಿಕೆಶಿ ಅವರನ್ನು ಭೇಟಿಯಾಗಿರುವುದು ಹೈಕಮಾಂಡ್ ಸೂಚನೆಯೋ ಅಥವಾ ಸ್ಥಳೀಯ ಹೊಂದಾಣಿಕೆಯೋ ಎಂಬ ಚರ್ಚೆ ಈಗ ಶುರುವಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/satish-jarkiholi-meets-dk-shivakumar-abdul-jabbar-suspension-revocation-kn-rajanna-statement-sat/articleshow-eqfosoc"/>
        </item>
        <item>
            <title><![CDATA[ಅಂಕೋಲಾ ಹೆದ್ದಾರಿಯಲ್ಲಿ ಎಥನಾಲ್ ದ್ರಾವಣ ತುಂಬಿದ ಟ್ಯಾಂಕರ್ ಸ್ಟೋಟ, ಅಗ್ನಿ ಜ್ವಾಲೆಗೆ ತುಮಕೂರು ಮೂಲದ ಚಾಲಕ ಗಂಭೀರ]]></title>
            <link>https://kannada.asianetnews.com/karnataka-districts/uttara-kannada-news-ethanol-tanker-explodes-on-nh-66-near-ankola-driver-injured-traffic-disrupted-gdp/articleshow-5kztsb3</link>
            <guid isPermaLink="true">https://kannada.asianetnews.com/karnataka-districts/uttara-kannada-news-ethanol-tanker-explodes-on-nh-66-near-ankola-driver-injured-traffic-disrupted-gdp/articleshow-5kztsb3</guid>
            <pubDate>Fri, 17 Apr 2026 15:00:53 +0530</pubDate>
            <description><![CDATA[ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ಎಥನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdc98zz796fweqdsekfad8y,imgname-ankola-ethanol-tanker-explosion-1776418071551.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಂಕೋಲಾ: &lt;/strong&gt;ಎಥನಾಲ್ ದ್ರಾವಣ ತುಂಬಿಕೊಂಡು ಬೆಳಗಾವಿಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಸ್ಫೋಟಗೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕಂಚಿನಬಾಗಿಲ ಬಳಿ ಗುರುವಾರ ನಡೆದಿದೆ. ಸ್ಫೋಟದ ತೀವ್ರತೆಗೆ ಟ್ಯಾಂಕರ್&zwnj;ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನಿಗೂ ಬೆಂಕಿ ತಗುಲಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಟ್ಯಾಂಕರ್ ಚಾಲಕ ಮುರುಗೇಶ ಚಿಕಿತ್ಸೆ ಪಡೆಯುತ್ತಿದ್ದು, ತುಮಕೂರಿನ ಚಿಕ್ಕನಾಯಕನಹಳ್ಳಿಯವರೆಂದು ತಿಳಿದುಬಂದಿದೆ.&lt;/p&gt;&lt;h2&gt;ಮರ-ಗಿಡಗಳಿಗೂ ವ್ಯಾಪಿಸಿದ ಬೆಂಕಿ&lt;/h2&gt;&lt;p&gt;ಟ್ಯಾಂಕರ್ ಸ್ಫೋಟಗೊಂಡ ತಕ್ಷಣ ಸುತ್ತಲಿನ ಮರ-ಗಿಡಗಳಿಗೂ ಬೆಂಕಿ ವ್ಯಾಪಿಸಿದ್ದು, ಪರಿಸ್ಥಿತಿ ಗಂಭೀರಗೊಂಡಿತ್ತು. ಬಳಿಕ ಅಂಕೋಲಾ ಹಾಗೂ ಕಾರವಾರದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಐಎನ್&zwnj;ಎಸ್ ವಜ್ರಕೋಶದ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ವೇಳೆ ರಸ್ತೆ ಸಂಪೂರ್ಣ ಸ್ಥಗಿತವಾಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ಥಗೊಂಡಿತು. ಘಟನೆಯ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ&ndash;ಯಲ್ಲಾಪುರ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಹೆದ್ದಾರಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಘಟನಾ ಸ್ಥಳಕ್ಕೆ ಅಂಕೋಲಾ ತಹಸೀಲ್ದಾರ್ ನೋರೊನಾ ಹಾಗೂ ಡಿವೈಎಸ್ಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/uttara-kannada-news-ethanol-tanker-explodes-on-nh-66-near-ankola-driver-injured-traffic-disrupted-gdp/articleshow-5kztsb3"/>
        </item>
        <item>
            <title><![CDATA[ಸಿದ್ದರಾಮಯ್ಯ ಅಸಹಾಯಕರು, ಡಿಕೆಶಿ ಹಾದಿ ತಪ್ಪುತ್ತಿದ್ದಾರೆ! ಕೈ ನಾಯಕರ ವಿರುದ್ಧ ಕೆ.ಎನ್. ರಾಜಣ್ಣ ಗುಡುಗು!]]></title>
            <link>https://kannada.asianetnews.com/politics/kn-rajanna-statement-against-dk-shivakumar-and-siddaramaiah-helplessness-congress-internal-rift-sat/articleshow-vfwuzs7</link>
            <guid isPermaLink="true">https://kannada.asianetnews.com/politics/kn-rajanna-statement-against-dk-shivakumar-and-siddaramaiah-helplessness-congress-internal-rift-sat/articleshow-vfwuzs7</guid>
            <pubDate>Fri, 17 Apr 2026 14:44:18 +0530</pubDate>
            <description><![CDATA[&lt;p&gt;ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಸಚಿವ ಸತೀಶ್ ಜಾರಕಿಹೊಳಿ ಭೇಟಿ ನಂತರ ಕಾಂಗ್ರೆಸ್ ಸರ್ಕಾರದ ಆಂತರಿಕ ಭಿನ್ನಮತವನ್ನು ಬಹಿರಂಗಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಅಸಹಾಯಕತೆ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಶಿಸ್ತು ಉಲ್ಲಂಘನೆಯ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbk7pn2k4paqt3kdndf5t1f2,imgname-----------------------2025-12-04t043559.099-1764803433555.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಕ&lt;/strong&gt;ರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಬಹಿರಂಗ ಸತ್ಯವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ತಟಸ್ಥ ಧೋರಣೆ' ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 'ಶಿಸ್ತು' ಉಲ್ಲಂಘನೆಯ ಬಗ್ಗೆ ರಾಜಣ್ಣ ಅತ್ಯಂತ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h3&gt;&lt;strong&gt;ಸಿದ್ದರಾಮಯ್ಯ ಅಸಹಾಯಕತೆ ನಮಗೆ ಬೇಸರ ತಂದಿದೆ!&lt;/strong&gt;&lt;/h3&gt;&lt;p&gt;ರಾಜಣ್ಣ ಅವರ ಮಾತಿನ ಮೊದಲ ಗುರಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದರು. 'ಸಿದ್ದರಾಮಯ್ಯ ಅವರಿಂದ ಇಂಥ ಅಸಹಾಯಕತೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ಪರವಾಗಿ ಇರುವವರನ್ನು ಸತತವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿಎಂ ಗಟ್ಟಿಯಾಗಿ ನಿಲ್ಲಬೇಕಿತ್ತು, ಆದರೆ ಅವರು ಯಾಕೆ ತಟಸ್ಥರಾಗಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ. ಅವರ ಧ್ವನಿ ಕುಗ್ಗಿದಾಗ ನಮಗೂ ಅಸಹಾಯಕತೆ ಎನಿಸುತ್ತದೆ' ಎಂದು ರಾಜಣ್ಣ ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರಿಗೆ ಯಾವುದಾದರೂ 'ಕಂಪಲ್ಶನ್' (ಒತ್ತಡ) ಇದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹೆಸರೇಳದೆ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿ:&lt;/strong&gt;&lt;/h2&gt;&lt;p&gt;ಪಕ್ಷದ ಶಿಸ್ತಿನ ಬಗ್ಗೆ ಮಾತನಾಡುವ ಡಿ.ಕೆ. ಶಿವಕುಮಾರ್ ವಿರುದ್ಧ ಕೆ.ಎನ್. ರಾಜಣ್ಣ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು. 'ಹಿಂದೆ 'Who is Rahul Gandhi?' (ರಾಹುಲ್ ಗಾಂಧಿ ಅಂದ್ರೆ ಯಾರು?) ಎಂದು ಕೇಳಿದವರ ಜೊತೆ ವೇದಿಕೆ ಹಂಚಿಕೊಳ್ಳುವುದು ಪಕ್ಷದ ಶಿಸ್ತಾ? ರಾಹುಲ್ ಗಾಂಧಿಯವರ ಶತ್ರುಗಳಿಂದ ಆಮಂತ್ರಣ ಬಂದರೂ ಅವರು ಹೋಗುವುದಿಲ್ಲ, ಆದರೆ ಇವರು ಅಂತಹವರ ಮನೆ ಮದುವೆಗಳಿಗೆ ಹೋಗಿ ಬರುತ್ತಾರೆ' ಎಂದು ಟೀಕಿಸಿದರು. ಅಲ್ಲದೆ, 'ಪ್ರಯಾಗ್&zwnj;ರಾಜ್&zwnj;ನಲ್ಲಿ ಹೋಗಿ ಮುಳುಗಿದರೆ ಬಡತನ ಹೋಗುತ್ತಾ ಎಂದು ಎಐಸಿಸಿ ಅಧ್ಯಕ್ಷರೇ ಪ್ರಶ್ನಿಸಿದ್ದರು, ಆದರೆ ಇವರು ಅಲ್ಲಿಗೂ ಹೋಗಿ ಮುಳುಗಿ ಬಂದರು' ಎನ್ನುವ ಮೂಲಕ ಡಿ.ಕೆ. ಶಿವಕುಮಾರ್ ಅವರ ಧಾರ್ಮಿಕ ನಡವಳಿಕೆಗಳನ್ನೂ ರಾಜಕೀಯ ಅಸ್ತ್ರವಾಗಿ ಬಳಸಿದರು.&lt;/p&gt;&lt;h2&gt;&lt;strong&gt;ಶಿಸ್ತಿನ ಕ್ರಮದಲ್ಲಿ ತಾರತಮ್ಯವೇಕೆ?&lt;/strong&gt;&lt;/h2&gt;&lt;p&gt;ಪಕ್ಷದಲ್ಲಿ ಶಿಸ್ತು ಎನ್ನುವುದು ಕೇವಲ ಕೆಲವರಿಗೆ ಮಾತ್ರವೇ? ಎಂಬ ಪ್ರಶ್ನೆಯನ್ನು ರಾಜಣ್ಣ ಕೇಳಿದ್ದಾರೆ. 'ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಶಾಮನೂರು ಶಿವಶಂಕಪ್ಪ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ. ಇನ್ನೊಂದು ಪಕ್ಷಕ್ಕೆ ಮತ ಹಾಕಿ ಎನ್ನುವುದು ಪಕ್ಷ ವಿರೋಧಿ ಚಟುವಟಿಕೆ ಅಲ್ವಾ?' ಎಂದು ಪ್ರಶ್ನಿಸುವ ಮೂಲಕ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವದ ದ್ವಂದ್ವ ನೀತಿಯನ್ನು ಎತ್ತಿ ತೋರಿಸಿದರು.&lt;/p&gt;&lt;h3&gt;&lt;strong&gt;ಸತೀಶ್ ಜಾರಕಿಹೊಳಿ ಭೇಟಿಯ ಮರ್ಮ:&lt;/strong&gt;&lt;/h3&gt;&lt;p&gt;ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, 'ಅವರೆಲ್ಲರೂ ಸಂಪುಟದ ಸದಸ್ಯರು, ಯಾರು ಯಾರನ್ನಾದರೂ ಭೇಟಿ ಮಾಡಬಹುದು. ಅದರಲ್ಲಿ ತಪ್ಪು ಭಾವಿಸುವ ಅಗತ್ಯವಿಲ್ಲ. ಆದರೆ ಸಿದ್ದರಾಮಯ್ಯ ಪರ ಇರುವವರನ್ನು ತುಳಿಯುವ ಪ್ರಯತ್ನ ನಡೆದರೆ ನಾವು ಸುಮ್ಮನಿರುವುದಿಲ್ಲ,' ಎಂದು ಎಚ್ಚರಿಸಿದ್ದಾರೆ. ತಮಗೆ ಸಚಿವ ಸ್ಥಾನದ ಆಕಾಂಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದ ರಾಜಣ್ಣ, ಪಕ್ಷದ ನಿಷ್ಠಾವಂತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿರುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಕೆ.ಎನ್. ರಾಜಣ್ಣ ಅವರ ಈ ಹೇಳಿಕೆಗಳು ಸಿದ್ದರಾಮಯ್ಯ ಬಣದಲ್ಲಿರುವ ಅಸಮಾಧಾನ ಸ್ಫೋಟಗೊಂಡಿರುವುದಕ್ಕೆ ಸಾಕ್ಷಿಯಾಗಿವೆ. ಇದು ಮುಂಬರುವ ದಿನಗಳಲ್ಲಿ ರಾಜ್ಯ ಕಾಂಗ್ರೆಸ್&zwnj;ನಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/kn-rajanna-statement-against-dk-shivakumar-and-siddaramaiah-helplessness-congress-internal-rift-sat/articleshow-vfwuzs7"/>
        </item>
        <item>
            <title><![CDATA[ಎಲೆಕ್ಷನ್​ ಗೆಲ್ಲಲು ಒಂದೇ ಗ್ಯಾರೆಂಟಿ ಸಾಕೆಂದು ತೋರಿದ Brahmagantu ದೀಪಾ: ಕೇಸ್​ ಹಾಕಲು ವೀಕ್ಷಕರು ರೆಡಿ]]></title>
            <link>https://kannada.asianetnews.com/gallery/tv-talk/brahmagantu-serial-twist-deepa-gifted-gas-cylinder-to-ladies-club-members-suc-x7i5o7n</link>
            <guid isPermaLink="true">https://kannada.asianetnews.com/gallery/tv-talk/brahmagantu-serial-twist-deepa-gifted-gas-cylinder-to-ladies-club-members-suc-x7i5o7n</guid>
            <pubDate>Fri, 17 Apr 2026 13:39:59 +0530</pubDate>
            <description><![CDATA[ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನು ಮನೆಗೆ ತಂದ ಸೌಂದರ್ಯಳಿಗೆ ಈಗ ಸಂಕಷ್ಟ ಎದುರಾಗಿದೆ. ಮಹಿಳಾ ಮಂಡಳದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೌಂದರ್ಯಳನ್ನು ಸೋಲಿಸಲು, ದೀಪಾಳು ಉಚಿತ ಸಿಲಿಂಡರ್ ಗ್ಯಾರೆಂಟಿಯ ಆಮಿಷವೊಡ್ಡಿ ಜಾಜಿಯನ್ನು ಕಣಕ್ಕಿಳಿಸಿದ್ದಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd7mfnd50g9rcsnmr2drja8,imgname-brahmagantu-01-1776413195949.jpg" type="image/jpeg" height="390" width="690"/>
            <content:encoded><![CDATA[ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನು ಮನೆಗೆ ತಂದ ಸೌಂದರ್ಯಳಿಗೆ ಈಗ ಸಂಕಷ್ಟ ಎದುರಾಗಿದೆ. ಮಹಿಳಾ ಮಂಡಳದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೌಂದರ್ಯಳನ್ನು ಸೋಲಿಸಲು, ದೀಪಾಳು ಉಚಿತ ಸಿಲಿಂಡರ್ ಗ್ಯಾರೆಂಟಿಯ ಆಮಿಷವೊಡ್ಡಿ ಜಾಜಿಯನ್ನು ಕಣಕ್ಕಿಳಿಸಿದ್ದಾಳೆ.&lt;img&gt;&lt;p&gt;ಬ್ರಹ್ಮಗಂಟು ಸೀರಿಯಲ್​ (Brahmagantu Serial) ಸದ್ಯ ದಿಶಾ ಮತ್ತು ಸೌಂದರ್ಯಳ ನಡುವಿನ ಸಮರವಾಗಿ ಮಾರ್ಪಟ್ಟಿದೆ. ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನೇ ಚಿರುಗೆ ಮದ್ವೆ ಮಾಡಿಸಿರೋ ಸೌಂದರ್ಯಳಿಗೆ ಇದೀಗ ಸಂಕಷ್ಟ ಎದುರಾಗಿದೆ.&lt;/p&gt;&lt;img&gt;&lt;p&gt;ನಾನೇ ಸಾಕಿದಾ ಗಿಣಿ... ಎಂದು ಹಾಡುವ ಹೇಳುವ ಸ್ಥಿತಿ ಸೌಂದರ್ಯಳಿಗೆ ಬಂದಿದೆ. ಸೌಂದರ್ಯಳ ಹುಟ್ಟಡಗಿಸಲು ದೀಪಾ ದಿಶಾ ಆಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಇದೀಗ ಮಹಿಳಾ ಮಂಡಳದ ಅಧ್ಯಕ್ಷ ಸ್ಥಾನಕ್ಕೆ ಸೌಂದರ್ಯ ವಿರುದ್ಧ ಜಾಜಿಯನ್ನು ನಿಲ್ಲಿಸಿದ್ದಾಳೆ.&lt;/p&gt;&lt;img&gt;&lt;p&gt;ಪ್ರತಿಬಾರಿಯೂ ಅವಿರೋಧವಾಗಿ ಆಯ್ಕೆಯಾಗ್ತಿರೋ ಸೌಂದರ್ಯಳನ್ನು ಸೋಲಿಸೋದು ಅಷ್ಟು ಸುಲಭವಲ್ಲ ಎನ್ನೋದು ದೀಪಾಳಿಗೆ ಗೊತ್ತಿರುವ ಕಾರಣ, ಜನರು ವೋಟ್​ ಹಾಕಲು ಉಚಿತಕ್ಕಾಗಿ ಹಂಬಲಿಸೋದೂ ರಿಯಲ್​ ಲೈಫ್​ನಲ್ಲಿ ನಡೆಯುವುದನ್ನೇ ಈ ಸೀರಿಯಲ್​ನಲ್ಲಿಯೂ ತೋರಿಸಲಾಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ದೀಪಾ, ಎಲ್ಲರಿಗೂ ಕೊಟ್ಟಿರೋದು ಒಂದೇ ಗ್ಯಾರೆಂಟಿ. ಅದು ಸಿಲಿಂಡರ್​ ನೀಡೋದು. ಎಲೆಕ್ಷನ್​ ಬಂದಾಗ ಒಂದು ಮತಕ್ಕೆ 5-10 ಸಾವಿರ ಕೊಡುವುದು ಇಂದಿಗೂ ನಡೆದೇ ಇದೆ. ಅದೇ ರೀತಿ ಗ್ಯಾರೆಂಟಿಗಳ ಸುರಿಮಳೆಯೂ ಶುರುವಾಗುತ್ತದೆ. ಇದೀಗ ಸಿಲಿಂಡರ್​ ನೀಡುವ ಮೂಲಕ ದಿಶಾ ಜಾಜಿಯನ್ನು ಗೆಲ್ಲಿಸುತ್ತಿದ್ದಾಳೆ.&lt;/p&gt;&lt;img&gt;&lt;p&gt;ಸದ್ಯ ಚುನಾವಣೆ ರಿಸಲ್ಟ್​ ಬರಬೇಕಿದೆ ಅಷ್ಟೇ. ಆದರೆ ಇದು ಸೀರಿಯಲ್​ ಆಗಿರೋ ಕಾರಣ, ಅದಕ್ಕಿಂತ ಮುಖ್ಯವಾಗಿ ಮಹಿಳೆಯರಿಗೇ ಗಿಫ್ಟ್​ ಸಿಕ್ಕಮೇಲೆ ಇನ್ನು ಕೇಳಬೇಕೆ, ಜಾಜಿ ಗೆಲ್ಲೋದು ಕನ್​ಫರ್ಮ್​ ಆಗಿದೆ.&lt;/p&gt;&lt;img&gt;&lt;p&gt;ಆದರೆ, ಇದರ ಪ್ರೊಮೋ ರಿಲೀಸ್​ ಆಗುತ್ತಲೇ ಈ ಬಗ್ಗೆ ತನಿಖೆ ಮಾಡಬೇಕು ಎಂದು ನೆಟ್ಟಿಗರು ತಮಾಷೆಯಿಂದ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಕಾರಣ, ಸದ್ಯ ಸಿಲಿಂಡರ್​ ಸ್ಟಾಕ್​ ಇಲ್ಲ. ಒಬ್ಬರಿಗೆ ಒಂದು ಸಿಲಿಂಡರ್​ ಸಿಗೋದೇ ಕಷ್ಟ ಆಗಿರುವಾಗ, ಗಿಫ್ಟ್​ ಕೊಡಲು ಅಷ್ಟೆಲ್ಲಾ ಸಿಲಿಂಡರ್​ ಹೇಗೆ ಬಂದಿದೆ, ಇದರ ತನಿಖೆ ಆಗಬೇಕು ಎನ್ನುತ್ತಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್​ ಮಾರಾಟ ಆಗ್ತಿರೋ ಕಾರಣ, ಸೀರಿಯಲ್​ ಮೇಲೆ ಕೇಸ್​ ಹಾಕಬೇಕು ಎಂದು ತಮಾಷೆಯಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ!&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/brahmagantu-serial-twist-deepa-gifted-gas-cylinder-to-ladies-club-members-suc-x7i5o7n"/>
        </item>
        <item>
            <title><![CDATA[ಯಾದಗಿರಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ, ರಾಯಚೂರು ಪಟ್ಟಣದ ಪಂಚಾಯತ್ ಸದಸ್ಯನ ಇಡೀ ಕುಟುಂಬ ನಾಶ!]]></title>
            <link>https://kannada.asianetnews.com/karnataka-districts/yadagiri-bus-car-collision-raichuru-family-returning-from-temple-visit-burnt-alive-on-the-spot-gdp/articleshow-7k94qpd</link>
            <guid isPermaLink="true">https://kannada.asianetnews.com/karnataka-districts/yadagiri-bus-car-collision-raichuru-family-returning-from-temple-visit-burnt-alive-on-the-spot-gdp/articleshow-7k94qpd</guid>
            <pubDate>Fri, 17 Apr 2026 13:36:19 +0530</pubDate>
            <description><![CDATA[ಯಾದಗಿರಿ ಜಿಲ್ಲೆಯ ಸುರಪುರ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ತಿಂಥಣಿ ಮೌನೇಶ್ವರ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ರಾಯಚೂರು ಜಿಲ್ಲೆಯ ಸಿರವಾರದ ಕುಟುಂಬ ಈ ದುರಂತಕ್ಕೆ ಬಲಿಯಾಗಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd7knr6ry08qs6jy7peng04,imgname-yadagiri-accident-1776413169412.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ/ರಾಯಚೂರು : &lt;/strong&gt;ನಿನ್ನೆ ಅಂದರೆ ಎಪ್ರಿಲ್ 16ರಂದು ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆಂದು ಹೊರಟ್ಟಿದ್ದ ಚಿಕ್ಕಮಗಳೂರು ಮತ್ತು ಹಾಸನದ 8 ಮಂದಿ ಕುಟುಂಬದವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಕಹಿ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ದುರಂತ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಈ ದುರಂತವು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಅಪಘಾತ ಅದೆಷ್ಟು ಭಯಾನಕವಾಗಿತ್ತು ಎಂದರೆ ಘಟನಾ ಸ್ಥಳದಲ್ಲಿ ಹೊತ್ತಿ ಉರಿದ ತಲೆಬುರುಡೆಗಳು ಕಾಣಿಸಿತು.&lt;/p&gt;&lt;h2&gt;ಬೆಳಗ್ಗೆ ನಡೆದ ಭೀಕರ ಅಪಘಾತ&lt;/h2&gt;&lt;p&gt;ಇಂದು ಬೆಳಗ್ಗೆ ಸುಮಾರು 9:45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಕಲಬುರಗಿಯಿಂದ ರಾಯಚೂರು ಜಿಲ್ಲೆಯ ಸಿರವಾರ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಭೀಕರ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ.&lt;/p&gt;&lt;h2&gt;ಒಂದೇ ಕುಟುಂಬದ 6 ಮಂದಿ ಸಜೀವ ದಹನ&lt;/h2&gt;&lt;p&gt;ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿಯಲ್ಲಿ ಆರು ಮಂದಿ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಮೃತರು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣನಾಯಕ ಕುಟುಂಬಸ್ಥರು ಎಂದು ಗುರುತಿಸಲಾಗಿದೆ. ಮೃತರಲ್ಲಿ ಕೃಷ್ಣನಾಯಕ (52), ಪತ್ನಿ ಅನಂತಕಲಾ (45), ಅಳಿಯ ಶರಣಪ್ಪ (36), ಮಗಳು ನಿಸರ್ಗ (30), ಶಶಿಕಲಾ (30) ಹಾಗೂ ಮಗು ಸಿದ್ಧಾರ್ಥ (3) ಸೇರಿದ್ದಾರೆ.&lt;/p&gt;&lt;h2&gt;ಇಬ್ಬರಿಗೆ ಗಂಭೀರ ಗಾಯ&lt;/h2&gt;&lt;p&gt;ಕಾರಿನಲ್ಲಿ ಇದ್ದ ಅದ್ವಿಕಾ (5) ಮತ್ತು ಶ್ರೀನಿಧಿ (ಒಂದೂವರೆ ವರ್ಷದ ಮಗು) ಗಂಭೀರವಾಗಿ ಗಾಯಗೊಂಡಿದ್ದು, ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಿದೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ&lt;/p&gt;&lt;h2&gt;ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ದುರಂತ&lt;/h2&gt;&lt;p&gt;ಈ ಕುಟುಂಬ ಅಮಾವಾಸ್ಯೆ ನಿಮಿತ್ತ ತಿಂಥಣಿ ಮೌನೇಶ್ವರ/ವೇಣುಗೋಪಾಲ ಸ್ವಾಮಿ ದರ್ಶನ ಮುಗಿಸಿಕೊಂಡು ಸಿರವಾರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂತೋಷದ ಪ್ರಯಾಣ ಕ್ಷಣಾರ್ಧದಲ್ಲಿ ದುರಂತ ಅಂತ್ಯ ಕಂಡಿದೆ. ಅಪಘಾತದಲ್ಲಿ ಬಸ್&zwnj;ಗೂ ಬೆಂಕಿ ತಗುಲಿದರೂ, ಅದರಲ್ಲಿದ್ದ ಸುಮಾರು 33 ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;ಭೀಕರ ದೃಶ್ಯ &ndash; ಕಾರು ಭಸ್ಮ&lt;/h2&gt;&lt;p&gt;ಅಪಘಾತದ ತೀವ್ರತೆಗೆ ಕಾರಿನ ಬಾಗಿಲುಗಳು ಲಾಕ್ ಆಗಿ ಒಳಗಿದ್ದವರು ಹೊರಬರಲು ಸಾಧ್ಯವಾಗಿಲ್ಲ. ಬೆಂಕಿ ವೇಗವಾಗಿ ವ್ಯಾಪಿಸಿ ಕಾರು ಸಂಪೂರ್ಣ ಕರಕಲಾಗಿದ್ದು, ಸುಟ್ಟ ಅವಶೇಷಗಳ ನಡುವೆ ತಲೆಬುರುಡೆಗಳು ಪತ್ತೆಯಾಗಿದ್ದು ಆ ದೃಶ್ಯಗಳು ಮನಕಲುಕುವಂತಿತ್ತು. ಘಟನೆಯ ಮಾಹಿತಿ ತಿಳಿದು ಸುರಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬಳಿಕ ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಮಾಡಲಾಯ್ತು.&lt;/p&gt;&lt;h2&gt;ತನಿಖೆ ಆರಂಭ&lt;/h2&gt;&lt;p&gt;ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಆರಂಭಿಸಿದ್ದಾರೆ. ಅತಿವೇಗ, ನಿರ್ಲಕ್ಷ್ಯ ಚಾಲನೆ ಅಥವಾ ತಾಂತ್ರಿಕ ದೋಷವೇ ಕಾರಣವೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ಈ ದುರಂತದಿಂದ ರಾಜ್ಯದಲ್ಲಿ ರಸ್ತೆ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ. ಇತ್ತೀಚಿನ ಸರಣಿ ಅಪಘಾತದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/yadagiri-bus-car-collision-raichuru-family-returning-from-temple-visit-burnt-alive-on-the-spot-gdp/articleshow-7k94qpd"/>
        </item>
        <item>
            <title><![CDATA[ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ: ಒಂದೇ ದಿನ ಮೂವರು ರೇ*ಪಿಸ್ಟ್‌ಗಳಿಗೆ ಮರಣದಂಡನೆ]]></title>
            <link>https://kannada.asianetnews.com/world-news/china-executes-three-pedophiles-in-same-day/articleshow-o93unpk</link>
            <guid isPermaLink="true">https://kannada.asianetnews.com/world-news/china-executes-three-pedophiles-in-same-day/articleshow-o93unpk</guid>
            <pubDate>Fri, 17 Apr 2026 13:21:58 +0530</pubDate>
            <description><![CDATA[ಚೀನಾದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಮಕ್ಕಳ ಮೇಲೆ ಘೋರ ಲೈಂಗಿಕ ದೌರ್ಜನ್ಯ ಎಸಗಿದ್ದ ಮೂವರು ಶಿಶು ಕಾಮಿಗಳನ್ನು ಒಂದೇ ದಿನ ಗಲ್ಲಿಗೇರಿಸಲಾಗಿದೆ. ಮಕ್ಕಳ ಮೇಲಿನ ಅಪರಾಧಗಳಿಗೆ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುವ ಚೀನಾ, ಈ ಮೂಲಕ ಕಠಿಣ ಸಂದೇಶವನ್ನು ರವಾನಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd69k00kqwyahcmrfqga0jy,imgname-china-hangs-3-child-rapesit-on-same-day-1776411790336.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ&lt;/strong&gt;&lt;/h2&gt;&lt;p&gt;ಭಾರತದಲ್ಲಿ ಶಿಶು ಹಾಗೂ ಮಕ್ಕಳ ಕಾಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಅಮರಾವತಿಯಲ್ಲಿ 180ಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾಜ್ ಎಂಬಾತನನ್ನು ಬಂಧಿಸಲಾಗಿತ್ತು. ಇನ್ನು ಕಾನೂನಿನ ವ್ಯಾಪ್ತಿಗೆ ಬಾರದ ಹಲವು ಪ್ರಕರಣಗಳು ದೇಶದಲ್ಲಿ ಪ್ರತಿದಿನವೂ ನಡೆಯುತ್ತಲೇ ಇದೆ. ಆದರೆ ಭಾರತದ ಕಾನೂನು ವ್ಯವಸ್ಥೆಯ ವಿಳಂಬ ಗತಿಯ ತನಿಖೆಯಿಂದಾಗಿ ಯಾವುದೇ ಆರೋಪಿಗಳಿಗೆ ದೊಡ್ಡ ಮಟ್ಟದ ಶಿಕ್ಷೆ ಆಗುವುದೇ ಇಲ್ಲ, ಹಲವು ಪ್ರಕರಣಗಳಲ್ಲಿ ಆರೋಪಿಗಳು ರಾಜರೋಷವಾಗಿ ತಿರುಗಾಡುತ್ತಿರುತ್ತಾರೆ. ಭಾರಿ ಭಾರತ ಮಾತ್ರವಲ್ಲ ಹಲವು ದೇಶಗಳಲ್ಲಿ ಆರೋಪಿಗಳು ಅಥವಾ ತಪ್ಪಿತಸಸ್ಥರಿಗೆ ಕಾನೂನಿನ ಭಯವೆಂಬುದೇ ಇಲ್ಲವಾಗಿದೆ. ಅಮೆರಿಕಾದಲ್ಲಿ ಮಕ್ಕಳ ಅತ್ಯಾ*ಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಚರ್ಚೆ ನಡೆಯುತ್ತಿದೆಯೇ ಹೊರತು ಕಾನೂನು ಜಾರಿಗೆ ಬಂದಿಲ್ಲ. ಆದರೆ ಕಮ್ಯುನಿಷ್ಟ್ ರಾಷ್ಟ್ರ ಚೀನಾದಲ್ಲಿ ಮಾತ್ರ ಒಂದೇ ದಿನ ಒಟ್ಟು ಮೂವರು ಶಿಶು ಕಾಮಿಗಳನ್ನು ಗಲ್ಲಿಗೇರಿಸಲಾಗಿದೆ.&lt;/p&gt;&lt;h3&gt;&lt;strong&gt;ಒಂದೇ ದಿನ 3 ರೇ*ಪಿಸ್ಟ್&zwnj;ಗಳ ಗಲ್ಲಿಗೇರಿಸಿ ಸ್ಪಷ್ಟ ಸಂದೇಶ&lt;/strong&gt;&lt;/h3&gt;&lt;p&gt;ಆರೋಪಿಗಳು ಮಕ್ಕಳ ಮೇಲೆ ಎಸಗಿದ್ದ ಲೈಂಗಿಕ ದೌರ್ಜನ್ಯ ಅತ್ಯಂತ ಘೋರವಾದುದು ಎಂದು ತೀರ್ಪು ನೀಡಿದ ಚೀನಾದ ಸರ್ವೋಚ್ಚ ನ್ಯಾಯಾಲಯವು ಮೂವರು ಮಕ್ಕಳ ಕಾಮಿಗಳಿಗೆ ಅತ್ಯಧಿಕ ಶಿಕ್ಷೆಯಾದ ಗಲ್ಲು ಶಿಕ್ಷೆ ನೀಡುವಂತೆ ಆದೇಶಿಸಿತ್ತು. ಅದಂತೆ ಚೀನಾದಲ್ಲಿ ಒಂದೇ ದಿನ ಮೂವರು ಶಿಶು ಕಾಮಿಗಳನ್ನು ಗಲ್ಲಿಗೇರಿಸಲಾಗಿದೆ. ಚೀನಾದಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಯಾವುದೇ ಕ್ಷಮೆ ಇಲ್ಲ, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶೂನ್ಯ ಸಹಿಷ್ಣುತೆಯನ್ನು ಪಾಲಿಸುತ್ತಾ ಬಂದಿರುವ ಚೀನಾ ಇಂತಹ ಪ್ರತಿಯೊಂದು ಪ್ರಕರಣವನ್ನು ಸಾರ್ವಜನಿಕಗೊಳಿಸುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ&lt;/strong&gt;&lt;/p&gt;&lt;p&gt;ಚೀನಾದ ನ್ಯಾಯಾಲಯದಿಂದ ಗಲ್ಲಿಗೇರಿಸಲ್ಪಟ್ಟ ತಪ್ಪಿತಸ್ಥರಲ್ಲಿ ಓರ್ವ ಅಕ್ರಮವಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದ ಹಾಗೂ ಅಲ್ಲಿ ಡಜನ್&zwnj;ಗೂ ಹೆಚ್ಚು ಮಕ್ಕಳನ್ನು ಬಂಧನದಲ್ಲಿ ಇರಿಸಿದ್ದ. ಅದರಲ್ಲಿ 14ರೊಳಗಿನ ಕನಿಷ್ಠ 8 ಮಕ್ಕಳ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಹಾಗೆಯೇ ಗಲ್ಲಿಗೇರಿಸಲ್ಪಟ್ಟ ತಪ್ಪಿತಸ್ಥರಲ್ಲಿ 2ನೇಯ ಆರೋಪಿಯೂ ಆನ್&zwnj;ಲೈನ್&zwnj;ನಲ್ಲಿ ಪ್ರತೀಭಾ ಶೋಧನೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಹಾಗೂ ಅದರ ಮೂಲಕ ಸಂಪರ್ಕಕ್ಕೆ ಬಂದ 9 ಮಕ್ಕಳನ್ನು ಭೇಟಿಯಾಗುವ ನೆಪ ಮಾಡಿ ಅವರ ಮೇಲೆ ದೌರ್ಜನ್ಯವೆಸಗಿದ್ದ, ಈತ ಲೈಂಗಿಕ ದೌರ್ಜನ್ಯವೆಸಗಿದ್ದ ಮಕ್ಕಳಲ್ಲಿ ವಿಶೇಷ ಚೇತನ ಮಗುವೂ ಸೇರಿತ್ತು. ಹಾಗೆಯೇ ಗಲ್ಲು ಶಿಕ್ಷೆಗೊಳಗಾದ ಮತ್ತೊಬ್ಬ ಆರೋಪಿಯೂ ಅಪರಾದವನ್ನು ಮತ್ತೆ ಮತ್ತೆ ಮಾಡಿದ ಆರೋಪಿಯಾಗಿದ್ದಾನೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆತನಿಗೆ ಈಗಾಗಲೇ ಶಿಕ್ಷೆಯಾಗಿ ಆತ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದವನಾಗಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ನಾನು ಗರ್ಭಿಣಿ ನನಗೆ ರಿಲೀಫ್ ಬೇಕು: ನಾಸಿಕ್ ಟಿಸಿಎಸ್ ಮತಾಂತರ ಕೇಸ್ ಆರೋಪಿ ನಿದಾ ಖಾನ್ ನಿರೀಕ್ಷಣಾ ಜಾಮೀನಿಗೆ ಅರ್ಜಿ!&lt;/p&gt;&lt;p&gt;ಮೊದಲ ಬಾರಿಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆ ಪೂರೈಸಿ ಜೈಲಿನಿಂದ ಬಿಡುಗಡೆಯಾಗಿದ್ದ ಆತ ಶಾಲೆಯೊಂದರ ಚಾಟ್&zwnj;ಗ್ರೂಪ್ ಒಳನುಸುಳಿ ಅಲ್ಲಿ 14ರ ಪ್ರಾಯದೊಳಗಿನ ಹಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಲ್ಲದೇ ಆತ ಈ ಲೈಂಗಿಕ ದೌರ್ಜನ್ಯದ ದೃಶ್ಯವನ್ನು ಚಿತ್ರೀಕರಿಸಿಕೊಂಡು ಆ ಮಕ್ಕಳಿಗೆ ಬ್ಲಾಕ್&zwnj;ಮೇಲ್ ಮಾಡುತ್ತಿದ್ದ ಎಂದು ನ್ಯಾಯಾಲಯ ಹೇಳಿದೆ. ಈ ಮರಣದಂಡನೆ ಶಿಕ್ಷೆಯೂ ಮಕ್ಕಳ ಮೇಲಿನ ಅಪರಾಧಕ್ಕೆ ಯಾವುದೇ ಕ್ಷಮೆ ಇಲ್ಲ ಹಾಗೂ ಅದನ್ನು ದೇಶವೂ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂಬುದರ ಸ್ಪಷ್ಟ ಚಿತ್ರಣವಾಗಿದೆ.&lt;/p&gt;]]></content:encoded>
            <category>news</category>
            <dc:creator>Anusha Kb</dc:creator>
            <atom:link href="https://kannada.asianetnews.com/world-news/china-executes-three-pedophiles-in-same-day/articleshow-o93unpk"/>
        </item>
        <item>
            <title><![CDATA[ದೇಶದಲ್ಲೇ ಮೊದಲು! ಪ್ರತಿಷ್ಠಿತ ISO 50001:2018 ಪ್ರಮಾಣಪತ್ರ ಮುಡಿಗೇರಿಸಿಕೊಂಡ ಬೆಂಗಳೂರು ಜಲಮಂಡಳಿ!]]></title>
            <link>https://kannada.asianetnews.com/state/bengaluru-bwssb-first-water-board-india-to-get-iso-50001-2018-certification-dk-shivakumar-sat/articleshow-26u4mop</link>
            <guid isPermaLink="true">https://kannada.asianetnews.com/state/bengaluru-bwssb-first-water-board-india-to-get-iso-50001-2018-certification-dk-shivakumar-sat/articleshow-26u4mop</guid>
            <pubDate>Fri, 17 Apr 2026 13:19:02 +0530</pubDate>
            <description><![CDATA[&lt;p&gt;ಬೆಂಗಳೂರು ಜಲಮಂಡಳಿಯು (BWSSB) ಇಂಧನ ನಿರ್ವಹಣಾ ವ್ಯವಸ್ಥೆಯಲ್ಲಿನ ಅತ್ಯುತ್ತಮ ಸಾಧನೆಗಾಗಿ ISO 50001:2018 ಪ್ರಮಾಣಪತ್ರವನ್ನು ಪಡೆದಿದೆ. ಈ ಮೂಲಕ, ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ದೇಶದ ಮೊದಲ ಜಲಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd6k63nm609bpnbf8mfbntv,imgname-bwssb-dk-shivakumar-1776412104821.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿಯಾಗಿರುವ ಬೆಂಗಳೂರು ಜಲಮಂಡಳಿ (BWSSB) ಈಗ ಇತಿಹಾಸ ನಿರ್ಮಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಇಂಧನ ನಿರ್ವಹಣಾ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಜಲಮಂಡಳಿ, ಇದೀಗ ISO 50001:2018 ಪ್ರಮಾಣಪತ್ರವನ್ನು ಪಡೆದ ದೇಶದ ಪ್ರಥಮ ಜಲಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಬೆಂಗಳೂರಿನ ನೀರಿನ ಸರಬರಾಜು ವ್ಯವಸ್ಥೆ ಕೇವಲ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದ ಮಾನದಂಡಗಳನ್ನು ಹೊಂದಿದೆ ಎಂಬುದು ಸಾಬೀತಾಗಿದೆ.&lt;/p&gt;&lt;h2&gt;&lt;strong&gt;ಏನಿದು ISO 50001:2018 ಸಾಧನೆ?&lt;/strong&gt;&lt;/h2&gt;&lt;p&gt;ಬ್ಯೂರೋ ವೆರಿಟಾಸ್ (Bureau Veritas) ನೀಡಿರುವ ಈ ಪ್ರತಿಷ್ಠಿತ ಪ್ರಮಾಣಪತ್ರವು ಜಲಮಂಡಳಿಯ ಅತ್ಯುತ್ತಮ ಇಂಧನ ನಿರ್ವಹಣಾ ವ್ಯವಸ್ಥೆಯನ್ನು (Energy Management Systems) ಗುರುತಿಸಿ ನೀಡಲಾಗಿದೆ. ಮುಖ್ಯವಾಗಿ ಕಾವೇರಿ ನೀರನ್ನು ನಗರಕ್ಕೆ ಪಂಪ್ ಮಾಡುವ ಪ್ರಮುಖ ಕೇಂದ್ರಗಳಾದ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿ ಪಂಪಿಂಗ್ ಸ್ಟೇಷನ್&zwnj;ಗಳಲ್ಲಿ ಇಂಧನವನ್ನು ಅತ್ಯಂತ ದಕ್ಷತೆಯಿಂದ ಬಳಸಲಾಗುತ್ತಿದೆ ಎಂಬುದಕ್ಕೆ ಈ ಪ್ರಮಾಣಪತ್ರ ಸಾಕ್ಷಿಯಾಗಿದೆ. ಬೃಹತ್ ಪ್ರಮಾಣದ ನೀರನ್ನು ಸರಬರಾಜು ಮಾಡುವಾಗ ಇಂಧನ ಉಳಿತಾಯ ಮತ್ತು ದಕ್ಷತೆ ಕಾಪಾಡುವುದು ಸವಾಲಿನ ಕೆಲಸ, ಅದನ್ನು BWSSB ಅಚ್ಚುಕಟ್ಟಾಗಿ ನಿಭಾಯಿಸಿದೆ.&lt;/p&gt;&lt;h3&gt;&lt;strong&gt;ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಮಾಣಪತ್ರ ಹಸ್ತಾಂತರ:&lt;/strong&gt;&lt;/h3&gt;&lt;p&gt;ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್&zwnj; ಪ್ರಸಾತ್&zwnj; ಮನೋಹರ್&zwnj; ಅವರ ನೇತೃತ್ವದಲ್ಲಿ ಜಲಮಂಡಳಿಯ ಹಿರಿಯ ಅಧಿಕಾರಿಗಳ ತಂಡವು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಈ ಅಂತಾರಾಷ್ಟ್ರೀಯ ಪ್ರಮಾಣಪತ್ರವನ್ನು ಹಸ್ತಾಂತರಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, 'ಇದು ಕೇವಲ ಜಲಮಂಡಳಿಯ ಸಾಧನೆಯಲ್ಲ, ಇದು ಬ್ರ್ಯಾಂಡ್ ಬೆಂಗಳೂರು (Brand Bengaluru) ಪರಿಕಲ್ಪನೆಯ ಗೆಲುವು. ಸುಸ್ಥಿರ ಜಲ ಮೂಲಸೌಕರ್ಯ ನಿರ್ಮಿಸುವ ನಮ್ಮ ಸರ್ಕಾರದ ಬದ್ಧತೆಗೆ ಇದು ಪ್ರತಿಫಲ' ಎಂದು ಶ್ಲಾಘಿಸಿದರು.&lt;/p&gt;&lt;h2&gt;&lt;strong&gt;ತಂತ್ರಜ್ಞಾನ ಮತ್ತು ದಕ್ಷತೆಗೆ ಆದ್ಯತೆ:&lt;/strong&gt;&lt;/h2&gt;&lt;p&gt;ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, 'ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ತಲುಪಿಸುವುದು ನಮ್ಮ ಗುರಿ. ಇದಕ್ಕಾಗಿ ನಾವು ತಂತ್ರಜ್ಞಾನವನ್ನು ನಿರಂತರವಾಗಿ ಮೇಲ್ದರ್ಜೆಗೇರಿಸುತ್ತಿದ್ದೇವೆ. ಈ ಮೈಲಿಗಲ್ಲು ಸಾಧಿಸುವಲ್ಲಿ ಮುಖ್ಯ ಅಭಿಯಂತರರಾದ ಡಾ. ರಾಜೀವ್ ಮತ್ತು ಶ್ರೀ ರಾಜಶೇಖರ್ ಅವರ ಶ್ರಮ ಅಪಾರವಾಗಿದೆ' ಎಂದರು. ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಸಹ ಜಲಮಂಡಳಿಯ ಈ ರೂಪಾಂತರವನ್ನು ಕೊಂಡಾಡಿದ್ದಾರೆ.&lt;/p&gt;&lt;h2&gt;&lt;strong&gt;ಸತತ ಎರಡನೇ ರಾಷ್ಟ್ರೀಯ ಮೈಲಿಗಲ್ಲು:&lt;/strong&gt;&lt;/h2&gt;&lt;p&gt;ಗಮನಾರ್ಹ ವಿಷಯವೆಂದರೆ, BWSSB ಕಳೆದ ವರ್ಷವಷ್ಟೇ ಭಾರತೀಯ ಮಾನದಂಡಗಳ ಬ್ಯೂರೋ (BIS) ಪ್ರಮಾಣಪತ್ರ ಪಡೆದ ದೇಶದ ಮೊದಲ ಜಲಮಂಡಳಿಯಾಗಿ ಹೊರಹೊಮ್ಮಿತ್ತು. ಈಗ ISO 50001:2018 ಸೇರ್ಪಡೆಯೊಂದಿಗೆ, ಜಲಮಂಡಳಿಯು ಇಂಧನ ದಕ್ಷತೆ ಮತ್ತು ಗುಣಮಟ್ಟದ ಸೇವೆಯಲ್ಲಿ ದ್ವಿಪದಕ ಗೆದ್ದಂತಾಗಿದೆ. ಇದು ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಹವಾಮಾನ-ಸ್ಥಿತಿಸ್ಥಾಪಕ (Climate-resilient) ಹಾಗೂ ಸುಸ್ಥಿರ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.&lt;/p&gt;&lt;p&gt;ಬೆಂಗಳೂರು ಜಲಮಂಡಳಿಯ ಈ ಸಾಧನೆಯು ದೇಶದ ಇತರ ರಾಜ್ಯಗಳ ಜಲಮಂಡಳಿಗಳಿಗೆ ಮಾದರಿಯಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-bwssb-first-water-board-india-to-get-iso-50001-2018-certification-dk-shivakumar-sat/articleshow-26u4mop"/>
        </item>
        <item>
            <title><![CDATA[Richest Person: ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ, ಈಗ ಏಷ್ಯಾದ ನಂಬರ್ 1 ಶ್ರೀಮಂತ!]]></title>
            <link>https://kannada.asianetnews.com/business/gautam-adani-overtakes-mukesh-ambani-to-reclaim-title-of-asia-s-richest-man/articleshow-v2nc3eg</link>
            <guid isPermaLink="true">https://kannada.asianetnews.com/business/gautam-adani-overtakes-mukesh-ambani-to-reclaim-title-of-asia-s-richest-man/articleshow-v2nc3eg</guid>
            <pubDate>Fri, 17 Apr 2026 13:04:13 +0530</pubDate>
            <description><![CDATA[&lt;p&gt;ಗೌತಮ್ ಅದಾನಿ ಈಗ ಏಷ್ಯಾದ ನಂಬರ್ 1 ಶ್ರೀಮಂತ. ಬ್ಲೂಮ್&zwnj;ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್&zwnj;ನ ಹೊಸ ಪಟ್ಟಿ ಪ್ರಕಾರ, ಅದಾನಿ &amp;nbsp;ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷರ ನಿವ್ವಳ ಆಸ್ತಿ 92.6 ಬಿಲಿಯನ್ ಡಾಲರ್ . ಜಾಗತಿಕವಾಗಿ 19ನೇ ಸ್ಥಾನದಲ್ಲಿದ್ದಾರೆ. ಅಂಬಾನಿ 20ನೇ ಸ್ಥಾನ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-aea8e137-90ec-4e56-bb20-9ec373e651b2.jpg" type="image/jpeg" height="390" width="690"/>
            <content:encoded><![CDATA[&lt;h2&gt;ಏಷ್ಯಾದ ನಂಬರ್ 1 ಶ್ರೀಮಂತ ಪಟ್ಟ ಅದಾನಿ ಪಾಲು&lt;/h2&gt;&lt;p&gt;ಬ್ಲೂಮ್&zwnj;ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಬಿಡುಗಡೆ ಮಾಡಿರುವ ಹೊಸ ಪಟ್ಟಿಯ ಪ್ರಕಾರ, ಗೌತಮ್ ಅದಾನಿ ಈಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಶುಕ್ರವಾರ ಬಿಡುಗಡೆಯಾದ ಈ ರ&zwj;್ಯಾಂಕಿಂಗ್&zwnj;ನಲ್ಲಿ, ಅದಾನಿ ಗ್ರೂಪ್&zwnj;ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ, 92.6 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯೊಂದಿಗೆ ಜಾಗತಿಕವಾಗಿ 19ನೇ ಸ್ಥಾನಕ್ಕೆ ಏರಿದ್ದಾರೆ.&lt;/p&gt;&lt;p&gt;ಇದೇ ವೇಳೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿ 90.8 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 20ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಅದಾನಿ ಅವರ ಆಸ್ತಿಯಲ್ಲಿ ಭಾರೀ ಏರಿಕೆಯಾಗಿದ್ದು, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಯನ್ನು ಹಿಂದಿಕ್ಕಲು ಇದು ಕಾರಣವಾಗಿದೆ.&lt;/p&gt;&lt;h3&gt;ಜಾಗತಿಕ ಶ್ರೀಮಂತರ ಪಟ್ಟಿ ಹೇಗಿದೆ?&lt;/h3&gt;&lt;p&gt;ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಎಲಾನ್ ಮಸ್ಕ್ 656 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇವರ ನಂತರ ಆಲ್ಫಾಬೆಟ್&zwnj;ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್ (286 ಬಿಲಿಯನ್ ಡಾಲರ್) ಮತ್ತು ಅಮೆಜಾನ್&zwnj;ನ ಜೆಫ್ ಬೆಜೋಸ್ (269 ಬಿಲಿಯನ್ ಡಾಲರ್) ಇದ್ದಾರೆ. ಮೆಟಾದ ಮಾರ್ಕ್ ಜುಕರ್&zwnj;ಬರ್ಗ್ ಮತ್ತು ಒರಾಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಕೂಡಾ ಟಾಪ್ ಲಿಸ್ಟ್&zwnj;ನಲ್ಲಿದ್ದಾರೆ. ಟೆಕ್ ಉದ್ಯಮಿಗಳೇ ಈ ಪಟ್ಟಿಯಲ್ಲಿ ಹೆಚ್ಚು ಪ್ರಾಬಲ್ಯ ಮೆರೆದಿದ್ದಾರೆ.&lt;/p&gt;&lt;h3&gt;ಅದಾನಿ ಗ್ರೂಪ್&zwnj;ನ ಬೃಹತ್ ಉದ್ಯಮ ಸಾಮ್ರಾಜ್ಯ&lt;/h3&gt;&lt;p&gt;ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ಭಾರತದ ಅತಿದೊಡ್ಡ ಮೂಲಸೌಕರ್ಯ ಸಮೂಹವಾಗಿದೆ. ಹಲವು ಕ್ಷೇತ್ರಗಳಲ್ಲಿ ಈ ಗ್ರೂಪ್ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಮೊದಲು ಕೇವಲ B2B (ಬಿಸಿನೆಸ್-ಟು-ಬಿಸಿನೆಸ್) ವಲಯದಲ್ಲಿ ಗಮನಹರಿಸಿದ್ದ ಕಂಪನಿ, ಈಗ B2C (ಬಿಸಿನೆಸ್-ಟು-ಕನ್ಸ್ಯೂಮರ್) ವ್ಯವಹಾರಗಳಿಗೂ ಕಾಲಿಡುತ್ತಿದೆ. ಸಾರಿಗೆ, ಇಂಧನ, ನೈಸರ್ಗಿಕ ಸಂಪನ್ಮೂಲ, ವಿಮಾನ ನಿಲ್ದಾಣ, ರಕ್ಷಣೆ, ಡೇಟಾ ಸೆಂಟರ್, ಸಿಮೆಂಟ್, ಮೀಡಿಯಾ, ರಸ್ತೆ, ರೈಲು, ಮೆಟ್ರೋ, ರಿಯಲ್ ಎಸ್ಟೇಟ್, ಆಹಾರ FMCG, ಡಿಜಿಟಲ್ ಪ್ಲಾಟ್&zwnj;ಫಾರ್ಮ್&zwnj;ಗಳಂತಹ ಅನೇಕ ಕ್ಷೇತ್ರಗಳಲ್ಲಿ ಅದಾನಿ ಗ್ರೂಪ್ ಹೂಡಿಕೆ ಮಾಡಿದೆ.&lt;/p&gt;&lt;h3&gt;ಅದಾನಿ ಸಾಧನೆ ಮತ್ತು ಕೊಡುಗೆಗಳು&lt;/h3&gt;&lt;p&gt;ಅದಾನಿ ಗ್ರೂಪ್ ಪ್ರಕಾರ, 200 ಬಿಲಿಯನ್ ಡಾಲರ್&zwnj;ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯದ ಬಿಸಿನೆಸ್ ಗ್ರೂಪ್ ಕಟ್ಟಿದ ಭಾರತದ ಮೊದಲ ತಲೆಮಾರಿನ ಉದ್ಯಮಿ ಗೌತಮ್ ಅದಾನಿ. ಇವರು ಗ್ರಾಮೀಣ ಭಾರತದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ 7 ಬಿಲಿಯನ್ ಡಾಲರ್ ದೇಣಿಗೆ ನೀಡುತ್ತಿದ್ದಾರೆ. ಜೊತೆಗೆ, ಭಾರತದ ಹಸಿರು ಇಂಧನ ಪರಿವರ್ತನೆಗೆ 70 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.&lt;/p&gt;&lt;p&gt;ಸದ್ಯ 150 ಬಿಲಿಯನ್ ಡಾಲರ್&zwnj;ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಅದಾನಿ ಗ್ರೂಪ್, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ 12 ಕಂಪನಿಗಳನ್ನು ಒಳಗೊಂಡಿದೆ. 'Nation Building' and 'Growth with Goodness ಎಂಬ ತತ್ವಗಳ ಮೇಲೆ ಈ ಸಮೂಹ ಕಾರ್ಯನಿರ್ವಹಿಸುತ್ತಿದೆ. (ANI)&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/business/gautam-adani-overtakes-mukesh-ambani-to-reclaim-title-of-asia-s-richest-man/articleshow-v2nc3eg"/>
        </item>
        <item>
            <title><![CDATA[ಬಂಧನ ವಿರುದ್ಧ ರಕ್ಷಣೆ ಬಯಸಿದ ಕಾಂಗ್ರೆಸ್ ನಾಯಕನ ಪವರ್ ಖೆರಾಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ]]></title>
            <link>https://kannada.asianetnews.com/india-news/big-setback-for-pawan-khera-supreme-court-refuse-to-extend-anticipatory-bail/articleshow-815oeab</link>
            <guid isPermaLink="true">https://kannada.asianetnews.com/india-news/big-setback-for-pawan-khera-supreme-court-refuse-to-extend-anticipatory-bail/articleshow-815oeab</guid>
            <pubDate>Fri, 17 Apr 2026 13:15:45 +0530</pubDate>
            <description><![CDATA[&lt;p&gt;ಬಂಧನ ವಿರುದ್ಧ ರಕ್ಷಣೆ ಬಯಸಿದ ಕಾಂಗ್ರೆಸ್ ನಾಯಕನ ಪವರ್ ಖೆರಾಗೆ ಸುಪ್ರೀಂ ಕೋರ್ಟ್&zwnj;ನಲ್ಲಿ ಹಿನ್ನಡೆ, ನಿರೀಕ್ಷಾ ಜಾಮೀನು ಕೋರಿದ್ದ ಪವನ್ ಖೆರಾಗೆ ಖಡಕ್ ಸೂಚನೆ ನೀಡಿದೆ. ಇದೀಗ ಖೆರಾ ಸಂಕಷ್ಟ ತೀವ್ರಗೊಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k6mct2jx0vkb3fht3wee6jrj,imgname-congress-leader-pawan-khera-1759473633885.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.17)&lt;/strong&gt; ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೆರಾ ಸಂಕಷ್ಟ ಹೆಚ್ಚಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹಾಗೂ ಅವರ ಪತ್ನಿ ವಿರುದ್ದ ಗಂಭೀರ ಆರೋಪ ಮಾಡಿದ್ದ ಪವನ್ ಖೆರಾ ಇದೀಗ ಬಂಧನ ಭೀತಿಯಲ್ಲಿದ್ದಾರೆ. ಪವನ್ ಖೆರಾ ಹೇಳಿಕೆ ವಿರುದ್ಧ ಹಿಮಂತ ಬಿಸ್ವ ಶರ್ಮಾ ದೂರು ನೀಡಿದ್ದರು. ಹೀಗಾಗಿ ತೆಲಂಗಾಣ ಹೈಕೋರ್ಟ್&zwnj;ನಿಂದ ಮಧ್ಯಂತರ ಜಾಮೀನು ಪಡೆದಿದ್ದ ಪವನ್ ಖೆರಾಗೆ ಇದೀಗ 2ನೇ ಬಾರಿ ಸುಪ್ರೀಂ ಕೋರ್ಟ್&zwnj;ನಲ್ಲಿ ಹಿನ್ನಡೆಯಾಗಿದೆ. ನಿರೀಕ್ಷಣಾ ಜಾಮೀನು ಪಡೆಯಲು ಪವನ್ ಖೆರಾ ಅಸ್ಸಾಂ ನ್ಯಾಯಲಕ್ಕೆ ತೆರಳಲು ಸೂಚಿಸಿದೆ. ಇದೇ ವೇಳೆ ನಿಮ್ಮ ಯಾವುದೇ ಅವಲೋಕಗಳಿನಿಂದ ಕೋರ್ಟ್ ಪ್ರಭಾವಿತರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.&lt;/p&gt;&lt;h2&gt;ನಾನು ಭಯೋತ್ಪಾದಕನೇ?&lt;/h2&gt;&lt;p&gt;ಪವನ್ ಖೆರಾ ಅಸ್ಸಾಂಗೆ ತೆರಳಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ನಿರೀಕ್ಷಣಾ ಜಾಮೀನು ನೀಡುವಂತೆ ಕೋರ್ಟ್ ಮುಂದೆ ಮನವಿ ಮಾಡಿದ್ದ ಪವನ್ ಖೆರಾಗೆ ಖಡಕ್ ಆಗಿ ಕೋರ್ಟ್ ಕೆಲ ವಿಚಾರ ಹೇಳಿದೆ. ಖೆರಾ ಪರ ಅಭಿಷೇಕ್ ಮನು ಸಿಂಗ್ವಿ ವಾದ ಮಂಡಿಸಿದ್ದರು. ನಿರೀಕ್ಷಣಾ ಜಾಮೀನು ನಿರಾಕರಿಸುತ್ತಿದ್ದಂತೆ ತನಗೆ ನಿರೀಕ್ಷಣಾ ಜಾಮೀನು ನೀಡದಿರಲು ನಾನೇನು ಭಯೋತ್ಪಾದಕನೇ ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಯಾವುದೇ ಅವಲೋಕನಗಳಿಂದ ನ್ಯಾಯಾಲಯವು ಪ್ರಭಾವಿತವಾಗುವುದಿಲ್ಲ ಎಂದ ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ನ್ಯಾಯಾಲಯವು ತನ್ನದೇ ಆದ ಅರ್ಹತೆಯ ಮೇಲೆ ಜಾಮೀನು ಅರ್ಜಿಯನ್ನು ನಿರ್ಧರಿಸಬೇಕು ಎಂದಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಪವನ್ ಖೆರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸ್ಸಾಂಗೆ ತೆರಳಿದರೆ ಬಂಧನ ಭೀತಿ ಹೆಚ್ಚಾಗಲಿದೆ.&lt;/p&gt;&lt;h2&gt;ಏನಿದು ಪ್ರಕರಣ&lt;/h2&gt;&lt;p&gt;ಅಸ್ಸಾಂ ಚುನಾವಣೆ ಕಾವಿನಲ್ಲಿ ಪವನ್ ಖೆರಾ ಗಂಭೀರ ಆರೋಪ ಮಾಡಿದ್ದರು. ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಪತ್ನಿ ಕೆಲ ವಿದೇಶಿ ಪಾಸ್&zwnj;ಪೋರ್ಟ್ ಹೊಂದಿದ್ದಾರೆ. ಜೊತೆಗೆ ವಿದೇಶದಲ್ಲಿ ಕೆಲ ಆಸ್ತಿ, ಉದ್ಯಮ ವ್ಯವಹಾರಗಳಿವೆ. ಇದನ್ನು ಹಿಮಂತ ಬಿಸ್ವ ಶರ್ಮಾ ತಮ್ಮ ಚುನಾವಣಾ ಅಫಿದವಿತ್&zwnj;ನಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆ ವಿರುದ್ದ ಹಿಮಂತ ಬಿಸ್ವ ಶರ್ಮಾ ಕೆಂಡಾಮಂಡಲರಾಗಿದ್ದರು. ಇಷ್ಟೇ ಅಲ್ಲ ದೂರು ನೀಡಿದ್ದರು. ದೂರು ದಾಖಳಿಸಿದ ಅಸ್ಸಾಂ ಪೊಲೀಸರು ಪವನ್ ಖೆರಾ ಬಂಧಿಸಲು ತಯಾರಿ ನಡೆಸಿದ್ದರು. ಇದೇ ವೇಳೆ ಪವನ್ ಖೆರಾ ತೆಲಂಗಾಣ ಹೈಕೋರ್ಟ್&zwnj;ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.&lt;/p&gt;&lt;p&gt;ಹೈಕೋರ್ಟ್ ನಿರೀಕ್ಷಣಾ ಜಾಮೀನು ವಿರುದ್ದ ಅಸ್ಸಾಂ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ತೆಲಂಗಾಣ ಹೈಕೋರ್ಟ್ ವ್ಯಾಪ್ತಿಗೆ ಈ ಪ್ರಕರಣ ಒಳಪಡುವುದಿಲ್ಲ ಎಂದು ಅಸ್ಸಾಂ ಪೊಲೀಸರು ವಾದಿಸಿದ್ದರು. ಈ ವಾದ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್ ನೀಡಿದ ಮಧ್ಯಂತರ ಜಾಮೀನಿಗೆ ತಡೆ ನೀಡಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/big-setback-for-pawan-khera-supreme-court-refuse-to-extend-anticipatory-bail/articleshow-815oeab"/>
        </item>
        <item>
            <title><![CDATA[ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!]]></title>
            <link>https://kannada.asianetnews.com/politics/vinay-kulkarni-yogesh-gowda-murder-case-verdict-bs-yediyurappa-vow-fulfilled-sat-videoshow-wvvc7hr</link>
            <guid isPermaLink="true">https://kannada.asianetnews.com/politics/vinay-kulkarni-yogesh-gowda-murder-case-verdict-bs-yediyurappa-vow-fulfilled-sat-videoshow-wvvc7hr</guid>
            <pubDate>Fri, 17 Apr 2026 13:12:21 +0530</pubDate>
            <description><![CDATA[&lt;p&gt;ಧಾರವಾಡ ಶಾಸಕ ವಿನಯ್ ಕುಲಕರ್ಣಿ ರಾಜಕೀಯ ಭವಿಷ್ಯವು ಯೋಗೀಶ್ ಗೌಡ ಹತ್ಯೆ ಪ್ರಕರಣದಿಂದಾಗಿ ಸಂಕಷ್ಟದಲ್ಲಿದೆ. ಸಿಬಿಐ ತನಿಖೆಯು ಅವರನ್ನು ಆರೋಪಿಯನ್ನಾಗಿಸಿದ್ದು, ನ್ಯಾಯಾಲಯದ ಅಂತಿಮ ತೀರ್ಪು ಅವರ ಶಾಸಕ ಸ್ಥಾನ ನಿರ್ಧರಿಸಲಿದೆ, ಇದು ದಶಕದ ಹಿಂದಿನ ರಾಜಕೀಯ ವೈಷಮ್ಯಕ್ಕೆ ಅಂತ್ಯ ಹಾಡುವ ಸಾಧ್ಯತೆಯಿದೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xa5pt1c" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ಧಾರವಾಡ: ಅ&lt;/strong&gt;ಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ. ಅಹಂಕಾರ ನೆತ್ತಿಗೇರಿದಾಗ, ಆಡಿದ್ದೇ ಆಟ ಎಂದು ಮೆರೆದಾಗ ಕಾಲವೊಂದು ಉತ್ತರ ನೀಡಿಯೇ ನೀಡುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ಎಂಬಂತೆ ಧಾರವಾಡದ ಪ್ರಭಾವಿ ರಾಜಕಾರಣಿ ವಿನಯ್ ಕುಲಕರ್ಣಿ ಅವರ 'ಅಹಂಕಾರದ ಅರಮನೆ' ಇಂದು ಕುಸಿದು ಬಿದ್ದಿದೆ. ದಶಕದ ಹಿಂದೆ ನಡೆದ ಆ ಒಂದು ಹತ್ಯೆ ಪ್ರಕರಣ, ಇಂದು ಒಬ್ಬ ಪ್ರಭಾವಿ ನಾಯಕನ ರಾಜಕೀಯ ಭವಿಷ್ಯವನ್ನೇ ಕರಾಳವಾಗಿಸಿದೆ.&lt;/p&gt;&lt;p&gt;&lt;strong&gt;ಏನಿದು ಪಾಪದ ಕೋಟೆ?&lt;/strong&gt;&lt;/p&gt;&lt;p&gt;ಧಾರವಾಡದಲ್ಲಿ ವಿನಯ್ ಕುಲಕರ್ಣಿ ಎಂದರೆ ಒಂದು ಕಾಲದಲ್ಲಿ ಅಧಿಪತಿ ಎಂಬಂತಿದ್ದರು. ಮಾಜಿ ಸಚಿವರಾಗಿ, ಜಿಲ್ಲೆಯ ಪ್ರಬಲ ಲಿಂಗಾಯತ ನಾಯಕರಾಗಿ ಬೆಳೆದಿದ್ದ ಕುಲಕರ್ಣಿ ಅವರಿಗೆ ಅಧಿಕಾರ ಮತ್ತು ಬಲದ ಅಹಂಕಾರವಿತ್ತು ಎನ್ನಲಾಗುತ್ತಿತ್ತು. ಆದರೆ, 2016ರ ಜೂನ್ 15ರಂದು ನಡೆದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಗೌಡರ್ ಹತ್ಯೆ ಪ್ರಕರಣ ಇಡೀ ಕರ್ನಾಟಕವನ್ನೇ ನಡುಗಿಸಿತ್ತು. ಈ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರ ಹೆಸರು ಕೇಳಿಬಂದಾಗ, ಅದು ಕೇವಲ ರಾಜಕೀಯ ಪಿತೂರಿ ಎಂದು ಬಿಂಬಿಸಲಾಗಿತ್ತು. ಆದರೆ, ಕಾನೂನಿನ ಕುಣಿಕೆ ನಿಧಾನವಾಗಿಯಾದರೂ ಬಿಗಿಯಾಗುತ್ತಾ ಬಂದಿತು.&lt;/p&gt;&lt;p&gt;&lt;strong&gt;ರಾಜಾಹುಲಿ ಬಿಎಸ್​ವೈ ಮಾಡಿದ ಆ ಭೀಷ್ಮ ಪ್ರತಿಜ್ಞೆ!&lt;/strong&gt;&lt;/p&gt;&lt;p&gt;ಯೋಗೀಶ್ ಗೌಡ ಹತ್ಯೆಯಾದ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಕಿಚ್ಚು ಹತ್ತಿತ್ತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಧಾರವಾಡದ ಬೀದಿಗಳಲ್ಲಿ ಗುಡುಗಿದ್ದರು. 'ಯೋಗೀಶ್ ಗೌಡ ಹತ್ಯೆಯ ಹಿಂದಿರುವ ಶಕ್ತಿಗಳನ್ನು ಜೈಲಿಗೆ ಕಳುಹಿಸದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ' ಎಂದು ರಾಜಾಹುಲಿ ಪ್ರತಿಜ್ಞೆ ಮಾಡಿದ್ದರು. ಅಂದು ಯಡಿಯೂರಪ್ಪ ಮಾಡಿದ ಆವೇಶದ ಮಾತುಗಳು ಇಂದು ನಿಜವಾಗುವ ಹಂತಕ್ಕೆ ಬಂದು ನಿಂತಿವೆ. ಸಿಬಿಐ ತನಿಖೆ ಚುರುಕುಗೊಂಡ ನಂತರ ವಿನಯ್ ಕುಲಕರ್ಣಿ ಅವರ ಮುಖವಾಡ ಕಳಚಿಬಿದ್ದಿತ್ತು.&lt;/p&gt;&lt;p&gt;&lt;strong&gt;ಸಿಬಿಐ ಎಂಟ್ರಿ ಮತ್ತು ರೋಚಕ ತಿರುವು:&lt;/strong&gt;&lt;/p&gt;&lt;p&gt;ಸ್ಥಳೀಯ ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲದಿದ್ದಾಗ ಪ್ರಕರಣ ಸಿಬಿಐ ಕೈಗೆ ಹಸ್ತಾಂತರವಾಯಿತು. ಸಿಬಿಐ ಅಧಿಕಾರಿಗಳು ಪ್ರವೇಶಿಸುತ್ತಿದ್ದಂತೆ ಪ್ರಕರಣಕ್ಕೆ ಹೊಸ ರೆಕ್ಕೆಗಳು ಬಂದವು. ಸಾಕ್ಷ್ಯ ನಾಶ, ಬೆದರಿಕೆ ಮತ್ತು ರಾಜಕೀಯ ಪ್ರಭಾವದ ನಡುವೆಯೂ ಸಿಬಿಐ ಭದ್ರವಾದ ಸಾಕ್ಷ್ಯಗಳನ್ನು ಕಲೆಹಾಕಿತು. ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ವಿನಯ್ ಕುಲಕರ್ಣಿ ಕಂಬಿ ಎಣಿಸುವಂತಾಯಿತು. 2023ರ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಪ್ರವೇಶ ನಿಷೇಧವಿದ್ದರೂ ಸಹ ಗೆದ್ದು ಬೀಗಿದ್ದ ಕುಲಕರ್ಣಿಗೆ, ಈಗ ಕಾನೂನಿನ ಅಂತಿಮ ತೀರ್ಪು ಸಿಂಹಸ್ವಪ್ನವಾಗಿ ಪರಿಣಮಿಸಿದೆ.&lt;/p&gt;&lt;p&gt;&lt;strong&gt;ಶಿಕ್ಷೆಯ ಪ್ರಮಾಣ ಮತ್ತು ಶಾಸಕ ಸ್ಥಾನದ ತೂಗುಗತ್ತಿ:&lt;/strong&gt;&lt;/p&gt;&lt;p&gt;ಪ್ರಕರಣದ ವಿಚಾರಣೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಕೋರ್ಟ್ ಅಪರಾಧಿಗಳಿಗೆ ನೀಡುವ ಶಿಕ್ಷೆಯ ಪ್ರಮಾಣದ ಮೇಲೆ ಎಲ್ಲರ ಕಣ್ಣಿದೆ. ಒಂದು ವೇಳೆ ವಿನಯ್ ಕುಲಕರ್ಣಿಗೆ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಾದಲ್ಲಿ, ಅವರ ಶಾಸಕ ಸ್ಥಾನವೂ ಅಪಾಯಕ್ಕೆ ಸಿಲುಕಲಿದೆ. ಜನಪ್ರತಿನಿಧಿಗಳ ಕಾಯ್ದೆಯಡಿ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ದಶಕದ ಕಾಲ ನಡೆದ ಈ ಸುದೀರ್ಘ ಹೋರಾಟಕ್ಕೆ ಈಗ ನ್ಯಾಯ ಸಿಗುವ ಕಾಲ ಸನ್ನಿಹಿತವಾಗಿದೆ. 'ಮಾಡಿದ್ದುಣ್ಣೋ ಮಹಾರಾಯ' ಎಂಬಂತೆ, ಅಧಿಕಾರದ ಅಮಲಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡವರಿಗೆ ಕಂಬಿ ಹಿಂದಿನ ಕರಾಳ ಭವಿಷ್ಯ ಕಾದಿದೆ. ಅಂದು ಯಡಿಯೂರಪ್ಪ ಮಾಡಿದ್ದ ಪ್ರತಿಜ್ಞೆ ಇಂದು ಪೂರ್ಣಗೊಂಡಂತೆ ಭಾಸವಾಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/vinay-kulkarni-yogesh-gowda-murder-case-verdict-bs-yediyurappa-vow-fulfilled-sat-videoshow-wvvc7hr"/>
        </item>
        <item>
            <title><![CDATA[ಟೋಲ್ ದಾಟುವ ಮುನ್ನ ಎಚ್ಚರ, ಸರಕು ಸಾಗಾಣೆ ಮಾಡೋ ವಾಹನ ಮಾಲೀಕರಿಗೆ ಶಾಕ್ ಕೊಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ!]]></title>
            <link>https://kannada.asianetnews.com/india-news/nhai-introduces-strict-rules-on-overloaded-vehicles-heavy-penalties-at-toll-plazas-gdp/articleshow-kvk5994</link>
            <guid isPermaLink="true">https://kannada.asianetnews.com/india-news/nhai-introduces-strict-rules-on-overloaded-vehicles-heavy-penalties-at-toll-plazas-gdp/articleshow-kvk5994</guid>
            <pubDate>Fri, 17 Apr 2026 13:02:51 +0530</pubDate>
            <description><![CDATA[ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓವರ್&zwnj;ಲೋಡ್ ವಾಹನಗಳಿಗೆ ಕಡಿವಾಣ ಹಾಕಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಟೋಲ್ ಪ್ಲಾಜಾಗಳಲ್ಲಿ &quot;ವೈ-ಇನ್-ಮೋಶನ್&quot; ತಂತ್ರಜ್ಞಾನ ಬಳಸಿ ವಾಹನಗಳ ತೂಕವನ್ನು ಅಳೆದು, ನಿಗದಿತ ಮಿತಿಗಿಂತ ಹೆಚ್ಚು ಭಾರವಿದ್ದಲ್ಲಿ 4 ಪಟ್ಟು ಹೆಚ್ಚು ದಂಡ ವಿಧಿಸಲಾಗುತ್ತದೆ. ಈ ಕ್ರಮಕ್ಕೆ ಲಾರಿ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k3zkbpgqd41m9j8yegwtctq1,imgname-fotojet---2025-08-31t134740.338-1756628376087.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸರಕು ಸಾಗಣೆ ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರದಿಂದ ದೊಡ್ಡ ಶಾಕ್ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸದ್ದಿಲ್ಲದೇ ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದು, ಓವರ್&zwnj;ಲೋಡ್ ಮೂಲಕ ಹೆಚ್ಚುವರಿ ಸಂಪಾದನೆ ಮಾಡುವವರಿಗೆ ಬ್ರೇಕ್ ಹಾಕಲು ಮುಂದಾಗಿದೆ. ರಸ್ತೆ ಹಾನಿಯನ್ನು ತಡೆಯುವ ಉದ್ದೇಶದಿಂದ ಟೋಲ್ ಪ್ಲಾಜಾಗಳಲ್ಲಿ ನೂತನ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ.&lt;/p&gt;&lt;h2&gt;ಟೋಲ್ ಪ್ಲಾಜಾಗಳಲ್ಲಿ ಕಟ್ಟುನಿಟ್ಟಿನ ನಿಗಾ&lt;/h2&gt;&lt;p&gt;ಇನ್ನು ಮುಂದೆ ದೇಶದ ಎಲ್ಲಾ ಪ್ರಮುಖ ಟೋಲ್ ಪ್ಲಾಜಾಗಳಲ್ಲಿ ಓವರ್&zwnj;ಲೋಡ್ ವಾಹನಗಳ ಮೇಲೆ ಕಣ್ಣಿಡಲಾಗುತ್ತದೆ. ವಾಹನಗಳ ತೂಕವನ್ನು ಟೋಲ್&zwnj;ಗಳಲ್ಲೇ ನೇರವಾಗಿ ಮಾಪನ ಮಾಡುವ ವ್ಯವಸ್ಥೆ ಜಾರಿಗೊಳ್ಳಲಿದೆ. ಈ ಮೂಲಕ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ತೂಕ ಸಾಗಿಸುತ್ತಿರುವ ವಾಹನಗಳನ್ನು ತಕ್ಷಣವೇ ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತದೆ.&lt;/p&gt;&lt;h2&gt;&ldquo;ವೈ-ಇನ್-ಮೋಶನ್&rdquo; ತಂತ್ರಜ್ಞಾನ ಜಾರಿ&lt;/h2&gt;&lt;p&gt;ಹೊಸ ನಿಯಮಗಳ ಭಾಗವಾಗಿ ಟೋಲ್ ಪ್ಲಾಜಾಗಳಲ್ಲಿ &ldquo;Weigh-in-Motion&rdquo; ಎಂಬ ಡಿಜಿಟಲ್ ತೂಕ ಮಾಪನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ವಾಹನಗಳು ನಿಲ್ಲದೇ ಚಲಿಸುತ್ತಿರುವಾಗಲೇ ಅವುಗಳ ತೂಕವನ್ನು ಅಳೆಯುವ ಈ ತಂತ್ರಜ್ಞಾನದಿಂದ ಓವರ್&zwnj;ಲೋಡ್ ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು.&lt;/p&gt;&lt;h2&gt;ಓವರ್&zwnj;ಲೋಡ್ ವಾಹನಗಳಿಗೆ ಭಾರಿ ದಂಡ&lt;/h2&gt;&lt;h3&gt;ಹೊಸ ನಿಯಮಗಳ ಪ್ರಕಾರ:&lt;/h3&gt;&lt;ul&gt; &lt;li&gt;ವಾಹನದ ಸಾಮರ್ಥ್ಯಕ್ಕಿಂತ 10% ತನಕ ಹೆಚ್ಚುವರಿ ತೂಕ ಸಾಗಾಣಿಕೆಗೆ ದಂಡ ವಿಧಿಸಲಾಗುವುದಿಲ್ಲ.&lt;/li&gt; &lt;li&gt;10% ರಿಂದ 40%ರವರೆಗೆ ಓವರ್&zwnj;ಲೋಡ್ ಇದ್ದರೆ ಟೋಲ್ ಶುಲ್ಕವನ್ನು 2 ಪಟ್ಟು ಹೆಚ್ಚಿಸಲಾಗುತ್ತದೆ.&lt;/li&gt; &lt;li&gt;40% ಕ್ಕಿಂತ ಹೆಚ್ಚು ತೂಕ ಇದ್ದರೆ ಟೋಲ್ ಶುಲ್ಕವನ್ನು 4 ಪಟ್ಟು ವಸೂಲಿ ಮಾಡಲಾಗುತ್ತದೆ.&lt;/li&gt;&lt;/ul&gt;&lt;p&gt;ಈ ನಿಯಮದಿಂದ ಓವರ್&zwnj;ಲೋಡ್ ವಾಹನಗಳಿಗೆ ಭಾರೀ ದಂಡದ ಹೊರೆ ಬೀಳಲಿದ್ದು, ನಿಯಮ ಉಲ್ಲಂಘನೆಗೆ ಕಟ್ಟುನಿಟ್ಟಿನ ಕ್ರಮ ಜಾರಿಯಾಗಲಿದೆ.&lt;/p&gt;&lt;h2&gt;ಡಿಜಿಟಲ್ ಪಾವತಿ ಕಡ್ಡಾಯ&lt;/h2&gt;&lt;p&gt;ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ FASTag ಅಥವಾ UPI ಮೂಲಕವೇ ಪಾವತಿ ಮಾಡುವುದು ಕಡ್ಡಾಯವಾಗಲಿದೆ. ಜೊತೆಗೆ, ಓವರ್&zwnj;ಲೋಡ್ ವಾಹನಗಳ ವಿವರಗಳನ್ನು VAHAN ಆ್ಯಪ್&zwnj;ನಲ್ಲಿ ದಾಖಲಿಸಲಾಗುತ್ತದೆ. ಇದರಿಂದ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಮೇಲಿನ ನಿಗಾವನ್ನು ಹೆಚ್ಚಿಸಲು ಸಾಧ್ಯವಾಗಲಿದೆ.&lt;/p&gt;&lt;h2&gt;ಟೋಲ್ ಸಿಬ್ಬಂದಿಗೆ ಹೆಚ್ಚುವರಿ ಅಧಿಕಾರ&lt;/h2&gt;&lt;p&gt;ರಸ್ತೆಗಳ ಹಾನಿಯನ್ನು ತಡೆಯಲು ಟೋಲ್ ಸಿಬ್ಬಂದಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ. ಓವರ್&zwnj;ಲೋಡ್ ವಾಹನಗಳು ಪತ್ತೆಯಾದಲ್ಲಿ, ಅವುಗಳನ್ನು ಟೋಲ್ ಪ್ಲಾಜಾದಲ್ಲೇ ತಡೆಹಿಡಿಯುವ ಅಧಿಕಾರವೂ ನೀಡಲಾಗಿದೆ.&lt;/p&gt;&lt;h2&gt;ಲಾರಿ ಮಾಲೀಕರ ವಿರೋಧ&lt;/h2&gt;&lt;p&gt;ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಲಾರಿ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. &ldquo;ಓವರ್&zwnj;ಲೋಡ್ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆ&rdquo; ಎಂದು ಆರೋಪಿಸಿರುವ ಅವರು, ಈ ನಿಯಮಗಳನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ, &ldquo;ಹೈವೇಯಲ್ಲಿ ದಂಡ ಕಟ್ಟಿದ ನಂತರ ಓವರ್&zwnj;ಲೋಡ್ ಸಾಗಾಣಿಕೆಗೆ ಅನುಮತಿ ನೀಡಲಾಗುತ್ತದೆಯೇ?&rdquo; ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.&lt;/p&gt;&lt;h2&gt;ಕಂಪನಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ&lt;/h2&gt;&lt;p&gt;ಓವರ್&zwnj;ಲೋಡ್ ಮಾಡುವುದಕ್ಕೆ ಕಾರಣವಾಗಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲಾರಿ ಮಾಲೀಕರು ಒತ್ತಾಯಿಸಿದ್ದಾರೆ. ಕೇವಲ ವಾಹನ ಚಾಲಕರ ಮೇಲೆ ದಂಡ ವಿಧಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.&lt;/p&gt;&lt;h2&gt;ಎಲ್ಲಿ ಅನ್ವಯ?&lt;/h2&gt;&lt;p&gt;ತೂಕ ಮಾಪನ ಯಂತ್ರಗಳಿರುವ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಈ ನಿಯಮಗಳು ಅನ್ವಯವಾಗಲಿವೆ. ತೂಕ ಯಂತ್ರಗಳಿಲ್ಲದ ಟೋಲ್&zwnj;ಗಳಲ್ಲಿ ಈ ನಿಯಮ ಜಾರಿಯಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ, ರಸ್ತೆ ಸುರಕ್ಷತೆ ಮತ್ತು ಮೂಲಸೌಕರ್ಯಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಈ ಕ್ರಮವು ದೇಶದ ಸರಕು ಸಾಗಣೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/nhai-introduces-strict-rules-on-overloaded-vehicles-heavy-penalties-at-toll-plazas-gdp/articleshow-kvk5994"/>
        </item>
        <item>
            <title><![CDATA[ರಾವಣನ ಹಣ್ಣು ರಾಮ ಕದ್ದ: ಪ್ರಕಾಶ್​ ರಾಜ್​ ಹೊಸ ರಾಮಾಯಣ ಸ್ಟೋರಿ; ಗೋಮಾಂಸ ಹಬ್ಬ- FIR ದಾಖಲು]]></title>
            <link>https://kannada.asianetnews.com/gallery/sandalwood/prakash-raj-contraversy-statement-against-ramayana-and-also-beef-fest-suc-vzciok2</link>
            <guid isPermaLink="true">https://kannada.asianetnews.com/gallery/sandalwood/prakash-raj-contraversy-statement-against-ramayana-and-also-beef-fest-suc-vzciok2</guid>
            <pubDate>Fri, 17 Apr 2026 12:51:11 +0530</pubDate>
            <description><![CDATA[&lt;p&gt;ಕೇರಳದ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ತಿರುಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಮತ್ತು ರಾವಣರ ಕುರಿತು ತಮ್ಮದೇ ಆದ ಕಥೆ ಕಟ್ಟಿ, ಅದನ್ನು ಹಿಂದಿ ಹೇರಿಕೆ ಮತ್ತು ಜಿಎಸ್&zwnj;ಟಿಗೆ ಹೋಲಿಸಿದ್ದು, &amp;nbsp;ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd4vy0gex4razqeq7ransrp,imgname-prakash-raj-about-ramayana-1776410294288.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ತಿರುಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಮತ್ತು ರಾವಣರ ಕುರಿತು ತಮ್ಮದೇ ಆದ ಕಥೆ ಕಟ್ಟಿ, ಅದನ್ನು ಹಿಂದಿ ಹೇರಿಕೆ ಮತ್ತು ಜಿಎಸ್&zwnj;ಟಿಗೆ ಹೋಲಿಸಿದ್ದು, &amp;nbsp;ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ನಟ ಪ್ರಕಾಶ್​ ರಾಜ್​ ಅವರಿಗೆ ಕಾಂಟ್ರವರ್ಸಿ ಮೂಲಕ ಫೇಮಸ್​ ಆಗುವುದು ಎಂದರೆ ಇನ್ನಿಲ್ಲದ ಖುಷಿ. ಸದಾ ಬಿಜೆಪಿ, ಕೇಂದ್ರ ಸರ್ಕಾರ, ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಲೇ ಒಂದಷ್ಟು ವರ್ಗವನ್ನು ಓಲೈಸಲು, ತಮ್ಮ ಮೇಲೆ ಕೇಸ್​ ಆದರೂ ಏನೂ ಆಗುವುದಿಲ್ಲ ಎನ್ನುವ ಬಂಢ ಧೈರ್ಯದಿಂದಲೇ ಹಿಂದೂಗಳ ವಿರುದ್ಧವೂ ಸಾಕಷ್ಟು ಚರ್ಚಾಸ್ಪದ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಅದರಲ್ಲಿ ಇದೀಗ ಕೇರಳಿಗರ ಓಲೈಕೆಗೆ, ಅವರ ಚಪ್ಪಾಳೆ ಗಿಟ್ಟಿಸಲು ಅಲ್ಲಿ ಕೆಲವು ಮಾತನಾಡಿದ್ದು, ಇದೀಗ ಅವರ ವಿರುದ್ಧ ಕ್ರಿಮಿನಲ್​ ಕೇಸ್​​ ದಾಖಲಾಗಿದೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಕೇರಳದಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ನಟ ರಾಮಾಯಣದ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ, ಹಿಂದಿ ಭಾಷೆ ಎಲ್ಲವನ್ನೂ ಟೀಕಿಸುವ ಭರದಲ್ಲಿ, ಶ್ರೀರಾಮಚಂದ್ರನನ್ನೇ ಉದಾಹರಣೆ ಮಾಡಿಕೊಂಡು ಕಾಂಟ್ರವರ್ಸಿ ಕ್ರಿಯೇಟ್​ ಮಾಡಿದ್ದಾರೆ ಪ್ರಕಾಶ್​ ರಾಜ್​.&lt;/p&gt;&lt;img&gt;&lt;p&gt;ಶ್ರೀರಾಮ ಉತ್ತರ ಭಾರತದವನು ಹಾಗೆಯೇ ರಾವಣ ದಕ್ಷಿಣ ಭಾರತದ ಆದಿವಾಸಿ ಅಷ್ಟೇ. ರಾಮನು ದಕ್ಷಿಣ ಭಾರತದ ಜಮೀನಿಗೆ ನುಗ್ಗಿ ಹಣ್ಣನ್ನು ಕಿತ್ತು ತಿಂದಿದ್ದಾನೆ ಎನ್ನುವ ಮೂಲಕ ತಾವೇ ಸೃಷ್ಟಿಸಿರುವ ಕಥೆಯೊಂದನ್ನು ಹೇಳಿದ್ದಾರೆ. ರಾಮ, ಲಕ್ಷ್ಮಣ, ಸೀತೆ ದಕ್ಷಿಣ ಭಾರತಕ್ಕೆ ಅವರಿಗೆ ಒಂದು ತೋಟದಲ್ಲಿ ಹಣ್ಣುಗಳು ಕಾಣುತ್ತವೆ. ಆಗ ಲಕ್ಷ್ಮಣ ಆ ಹಣ್ಣುಗಳನ್ನು ನಾವು ತಿನ್ನಬಹುದೇ ಎಂದು ರಾಮನಲ್ಲಿ ಕೇಳಿದಾಗ, ರಾಮ ಹಸಿವಾಗಿದ್ದರೆ ತಿನ್ನು ಎನ್ನುತ್ತಾನೆ. ಹಣ್ಣುಗಳನ್ನು ತಿನ್ನುವಾಗ, ಶೂರ್ಪನಕಿ ಹಾಗೂ ರಾವಣ ಬರುತ್ತಾರೆ. ಶೂರ್ಪನಕಿಗೆ ಸಿಟ್ಟು ಬಂದು ರಾವಣನಲ್ಲಿ ವಿಷಯ ಹೇಳುತ್ತಾಳೆ ಎಂದು ತಮ್ಮ ಸ್ಟೋರಿ ಆರಂಭಿಸಿದ್ದಾರೆ.&lt;/p&gt;&lt;img&gt;&lt;p&gt;ಬಳಿಕ, ರಾವಣ ಅವರಿಗೆ ಹಸಿವಾಗಿದೆ ಬಿಡು ತಿನ್ನಲಿ, ಆ ಮೇಲೆ ಮಾತಾಡೋಣ ಎನ್ನುತ್ತಾನೆ. ಅದಾದ ಬಳಿಕ ರಾವಣ, ಶೂರ್ಪನಕಿ ರಾಮ, ಲಕ್ಷ್ಮಣರ ಎದುರಿಗೆ ಹೋದಾಗ ರಾಮ ಯಾರೋ ಬುಡಕಟ್ಟ ಜನಾಂಗದವರು ಬಂದರು ಎನ್ನುತ್ತಾನೆ. ಹಣ್ಣುಗಳನ್ನು ತಿಂದಿದ್ದಕ್ಕೆ ಹಣ ನೀಡಬೇಕು ಎಂದು ರಾವಣ ಹೇಳುತ್ತಾನೆ. ಲೆಕ್ಕ ಮಾಡಿ 2000 ಸಾವಿರ ಡಾಲರ್ ಜೊತೆ ಜಿಎಸ್&zwnj;ಟಿ ಕಟ್ಟಬೇಕು ಎಂದು ಹೇಳುತ್ತಾನೆ ಎನ್ನುವುದು ಈ ಕಥೆಯ ಮುಂದುವರೆದ ಭಾಗ.&lt;/p&gt;&lt;img&gt;&lt;p&gt;ಆಗ ರಾಮ, ಲಕ್ಷ್ಮಣ ನಮ್ಮ ಬಳಿ ಹಣವಿಲ್ಲ ಹೇಳುತ್ತಾರೆ . ಆ ಸಮಯದಲ್ಲಿ ರಾವಣ ನಿಮಗೆ ಕೆಲವೊಂದು ರಿಯಾಯ್ತಿ ನೀಡುತ್ತೇವೆ ಎಂದು ಹೇಳಿದರೂ ನಮ್ಮ ಬಳಿ ಹಣ ಇಲ್ಲ ಎನ್ನುತ್ತಾನೆ ರಾಮ. ಆಗ ರಾವಣ ಹಣ್ಣುಗಳನ್ನು ತಿಂದ ಬಳಿಕ ಉಳಿದ ಬೀಜವನ್ನು ನೆಟ್ಟು ಅದನ್ನು ಗಿಡವನ್ನಾಗಿ ಮಾಡಿ ಹೋಗಿ ಎನ್ನುತ್ತಾನೆ. ಹಾಗೆಯೇ ಹೆಸರು ಕೇಳಿದಾಗ, ನಾನು ರಾಮ, ನಾವು ಉತ್ತರ ಭಾರತದವರು ಎಂದು ಹೇಳುತ್ತಾನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಕೊನೆಗೆ ಇದನ್ನು ಹಿಂದಿಗೆ ಲಿಂಕ್​ ಮಾಡಿ, ಹಿಂದಿ ಹೇರಿಕೆ ಸ್ಥಿತಿಯೂ ಇದೇ ಆಗಿದೆ. ದುಡ್ಡೇ ಇಲ್ಲದ ಮೇಲೆ ಡಿಸ್ಕೌಂಟ್​ ಕೊಟ್ರೆ ಏನು ಪ್ರಯೋಜನ ಎನ್ನುವ ರೀತಿ ಹಿಂದಿ ಹೇರಿಕೆ ಮಾಡಬೇಡಿ. ಇಲ್ಲಿ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಬೀಫ್ ಫೆಸ್ಟ್ ಮಾಡುತ್ತೇವೆ&rsquo; ಎಂದಿದ್ದಾರೆ ಪ್ರಕಾಶ್ ರಾಜ್. ರಾಮಾಯಣ ಹಾಗೂ ಬೀಫ್​ ಫೆಸ್ಟ್​ ಬಗ್ಗೆ ಮಾತನಾಡಿದ್ದಕ್ಕೆ ಕ್ರಿಮಿನಲ್​ ಕೇಸ್​ ದಾಖಲಾಗಿದೆ ಎನ್ನಲಾಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/prakash-raj-contraversy-statement-against-ramayana-and-also-beef-fest-suc-vzciok2"/>
        </item>
        <item>
            <title><![CDATA[ಪದೇ ಪದೇ ಸಿದ್ದರಾಮಯ್ಯ ಆಪ್ತರ ಟಾರ್ಗೆಟ್; ರಕ್ಷಣೆಗೆ ಮುಂದಾಗದ ಸಿಎಂ, ಆಪ್ತರಿಂದಲೇ ಬಹಿರಂಗ ಅಸಮಾಧಾನ!]]></title>
            <link>https://kannada.asianetnews.com/state/cm-s-aides-targeted-repeatedly-what-reason-behind-siddaramaiah-s-silence/articleshow-ct622hy</link>
            <guid isPermaLink="true">https://kannada.asianetnews.com/state/cm-s-aides-targeted-repeatedly-what-reason-behind-siddaramaiah-s-silence/articleshow-ct622hy</guid>
            <pubDate>Fri, 17 Apr 2026 12:45:33 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದ ನಾಯಕರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಚರ್ಚೆ ಕಾಂಗ್ರೆಸ್&zwnj;ನಲ್ಲೇ ಶುರುವಾಗಿದೆ. ಈ ಷಡ್ಯಂತ್ರದ ನಡುವೆಯೂ ಸಿಎಂ ತಮ್ಮ ಆಪ್ತರ ರಕ್ಷಣೆಗೆ ನಿಲ್ಲದೆ ಮೌನ ವಹಿಸಿರುವುದು ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ &amp;nbsp;ಆತಂಕಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd4e4reqsw40dzqxj6zwhga,imgname-----------------------2026-04-17t124020.451-1776409842446.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ರಾಜ್ಯ ರಾಜಕೀಯದಲ್ಲೀಗ ಹೊಸದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಂತ ಆಪ್ತರು ಎಂದು ಗುರುತಿಸಿಕೊಂಡಿರುವ ನಾಯಕರನ್ನು ಪದೇ ಪದೇ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗೆ ಆರೋಪಿಸುತ್ತಿರುವವರು ವಿರೋಧ ಪಕ್ಷಗಳ ನಾಯಕರಲ್ಲ ಬದಲಾಗಿ ಆಡಳಿತ ಪಕ್ಷದ ನಾಯಕರಲ್ಲೇ ಇಂಥ ಆರೋಪ, ಚರ್ಚೆಗಳು ನಡೆಯಲಾರಂಭಿಸಿವೆ. ಸಿದ್ದರಾಮಯ್ಯ ಅವರ ಬಲವನ್ನು ಕುಗ್ಗಿಸಲು ಈ ರೀತಿ ಷಡ್ಯಂತ್ರ ನಡೆಯುತ್ತಿದೆ. ಈ ಬೆಳವಣಿಗೆಯಿಂದ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಆತಂಕ, ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಆಪ್ತರ ರಕ್ಷಣೆಗೆ ಮುಂದಾಗದ ಸಿಎಂ&lt;/h2&gt;&lt;p&gt;ಸಿಎಂ ಆಪ್ತರೆಂದೇ ಗುರುತಿಸಿಕೊಂಡಿರುವ ಕೆಲವು ನಾಯಕರ ಮೇಲೆ ಈಗಾಗಲೇ ಟಾರ್ಗೆಟ್ ಮಾಡಲಾಗಿದೆ. ಇನ್ನು ಕೆಲವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಮಾತುಗಳು ಆಪ್ತಬಳಗದಲ್ಲಿ ಕೇಳಿಬರುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ಆಪ್ತರ ರಕ್ಷಣೆಗೆ ನಿಲ್ಲುತ್ತಿಲ್ಲ, ಆಪ್ತರ ವಿಷಯದಲ್ಲಿ ಗಟ್ಟಿ ನಿಲುವು ತಾಳುತ್ತಿಲ್ಲ ಎಂಬ ಬಹಿರಂಗ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;h3&gt;ಹೈಕಮಾಂಡ್ ಮುಂದೆ ಸಿಎಂ ಅಸಹಾಯಕತೆ?&lt;/h3&gt;&lt;p&gt;ಆಪ್ತರ ವಿರುದ್ಧ ಯಾವುದೇ ಕಠಿಣ ಕ್ರಮಗಳು ಜರುಗಿಸುವಾಗ ಅಥವಾ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳಾಗುವಾಗ ಸಿದ್ದರಾಮಯ್ಯ ಅವರು ಅಸಹಾಯಕರಂತೆ ವರ್ತಿಸುತ್ತಿದ್ದಾರೆ, ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಮೌನಕ್ಕೆ ಜಾರಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಆಪ್ತರ ರಕ್ಷಣೆಗೆ ಏನು ಕ್ರಮ ಕೈಗೊಳ್ಳುತ್ತಿಲ್ಲ. ಇದು ಅವರ ಅಸಹಾಯಕತೆ ತೋರಿಸುತ್ತಿದೆ. ಹೀಗಾದರೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಭಾರೀ ಹಿನ್ನಡೆ ಆಗಬಹುದು. ಪಕ್ಷಕ್ಕೆ ಹಗಲಿರುಳು ದುಡಿದವರನ್ನೇ ಉದ್ದೇಶಪೂರ್ವಕ ಟಾರ್ಗೆಟ್ ಮಾಡಿದರೆ ಪಕ್ಷ ಸಂಘಟನೆ ಹೇಗೆ ಸಾಧ್ಯ ಇಂಥ ಸಂದರ್ಭದಲ್ಲಿ ಸಿಎಂ ಆಪ್ತರನ್ನ ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕಠಿಣ ಪರಿಸ್ಥಿತಿ ಎದುರಾದಾಗ ಅವರು ಕೈ ಕಟ್ಟಿ ಕುಳಿತಿರುವುದು ಅವರ ಆಪ್ತರ ಬೇಸರಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ಸಮುದಾಯಗಳ ಆಕ್ರೋಶ ಮತ್ತು ಹಿನ್ನಡೆ&lt;/strong&gt;&lt;/p&gt;&lt;p&gt;ಈ ಬೆಳವಣಿಗೆ ಕೇವಲ ವ್ಯಕ್ತಿಗಳ ಮೇಲಿನ ಟಾರ್ಗೆಟ್ ಆಗಿ ಉಳಿದಿಲ್ಲ. ಹೀಗೆ ಗುರಿಯಾಗುತ್ತಿರುವ ನಾಯಕರು ಬೇರೆ ಬೇರೆ ಸಮುದಾಯಗಳನ್ನ ಪ್ರತಿನಿಧಿಸುತ್ತಿರುವುದರಿಂದ ಆಯಾ ಸಮುದಾಯಗಳು ಈಗ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ದಟ್ಟವಾಗಿದೆ. ಪಕ್ಷಕ್ಕಾಗಿ ಹಗಲಿರುಳು ದುಡಿದವರನ್ನು ಹೀಗೆ ಮೂಲೆಗುಂಪು ಮಾಡಿದರೆ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಭಾರೀ ಹಿನ್ನಡೆಯಾಗಲಿದೆ ಎಂಬ ಎಚ್ಚರಿಕೆ ನೀಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಆಪ್ತರಿಗೆ ಆಘಾತ:&lt;/strong&gt;&lt;/p&gt;&lt;p&gt;ತಮ್ಮ ನಾಯಕ ಸಿದ್ದರಾಮಯ್ಯ ಎಂಥ ಸಂದರ್ಭದಲ್ಲೂ ನಮ್ಮ ಕೈಬಿಡುವುದಿಲ್ಲ ಎಂದು ಅವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಆಪ್ತರು ಈಗ ತೀವ್ರ ಆಘಾತಕ್ಕೊಳಗಾಗಿದ್ದಾರೆ. ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿದಾಗ ನಾಯಕನೇ ರಕ್ಷಿಸದಿದ್ದರೆ ಮುಂದೆ ದಾರಿ ಏನು ಎಂಬ ಪ್ರಶ್ನೆ ಅವರ ಮುಂದಿದೆ. ಸಿದ್ದರಾಮಯ್ಯ ಅವರ ಈ ನಿಗೂಢ ಮೌನ ಮತ್ತು ಅಸಹಾಯಕತೆ ರಾಜ್ಯ ರಾಜಕಾರಣದಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/cm-s-aides-targeted-repeatedly-what-reason-behind-siddaramaiah-s-silence/articleshow-ct622hy"/>
        </item>
        <item>
            <title><![CDATA[ಹಿಂಡಲಗಾ ಜೈಲಿನ ಮೇಲೆ ದಾಳಿ, ಸಿಗರೆಟ್, ಜೀಮ್ ಡೆಂಬಲ್ಸ್ ಪತ್ತೆ! ಜೈಲು ಸಿಬ್ಬಂದಿ ಚಳಿಬಿಡಿಸಿದ ಡಿಜಿಪಿ ಅಲೋಕ ಕುಮಾರ]]></title>
            <link>https://kannada.asianetnews.com/karnataka-districts/karnataka-dgp-alok-kumar-conducts-sudden-inspection-at-belagavi-hindalga-jail-gdp/articleshow-iutvvmk</link>
            <guid isPermaLink="true">https://kannada.asianetnews.com/karnataka-districts/karnataka-dgp-alok-kumar-conducts-sudden-inspection-at-belagavi-hindalga-jail-gdp/articleshow-iutvvmk</guid>
            <pubDate>Fri, 17 Apr 2026 12:36:23 +0530</pubDate>
            <description><![CDATA[ಬಂದಿಖಾನೆ ಡಿಜಿಪಿ ಅಲೋಕ ಕುಮಾರ್ ಅವರು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಎರಡು ಶ್ವಾನಗಳ ಸಹಾಯದಿಂದ ನಡೆದ ಈ ಶೋಧದಲ್ಲಿ ಸಿಗರೇಟ್ ಪ್ಯಾಕೆಟ್ ಹಾಗೂ ಡಂಬೆಲ್ಸ್ ಪತ್ತೆಯಾಗಿದ್ದು, ನಿರ್ಲಕ್ಷ್ಯ ತೋರಿದ ಜೈಲು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd40k7aghaft77ytz7qcy93,imgname-hindalga-jail-1776409398506.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಜಿಲ್ಲೆಯ ಹಿಂಡಲಗಾ ಗ್ರಾಮದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಬಂದಿಖಾನೆ ಡಿಜಿಪಿ ಅಲೋಕ ಕುಮಾರ್ ಅವರು ದಿಢೀರ್ ದಾಳಿ ನಡೆಸಿದ್ದಾರೆ. ಈ ದಾಳಿಯು ಬೆಳಗಾವಿ ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಜೈಲು ವ್ಯವಸ್ಥೆಯ ಮೇಲಿನ ಕಟ್ಟುನಿಟ್ಟಿನ ಕ್ರಮಗಳ ಸೂಚನೆ ನೀಡಿದೆ.&lt;/p&gt;&lt;h2&gt;ಎರಡು ಶ್ವಾನಗಳ ಸಹಾಯದಿಂದ ನಡೆಸಲಾದ ವಿಶೇಷ ಶೋಧ&lt;/h2&gt;&lt;p&gt;ಡಿಜಿಪಿ ಅಲೋಕ ಕುಮಾರ್ ಅವರ ನೇತೃತ್ವದಲ್ಲಿ ಒಟ್ಟು 52 ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ಬೆಳಗಾವಿ ನಗರ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಎರಡು ಶ್ವಾನಗಳ ಸಹಾಯದಿಂದ ನಡೆಸಲಾದ ಈ ವಿಶೇಷ ಶೋಧ ಕಾರ್ಯಾಚರಣೆ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ನಡೆಯಿತು. ಈ ವೇಳೆ ಜೈಲಿನ ವಿವಿಧ ವಿಭಾಗಗಳು ಹಾಗೂ ಕೈದಿಗಳ ಸೆಲ್&zwnj;ಗಳನ್ನು ಸವಿಸ್ತಾರವಾಗಿ ಪರಿಶೀಲಿಸಲಾಯಿತು.&lt;/p&gt;&lt;h2&gt;ಏನೆಲ್ಲ ಸಿಕ್ಕಿದೆ?&lt;/h2&gt;&lt;p&gt;ಶೋಧ ಕಾರ್ಯಾಚರಣೆಯ ವೇಳೆ ಒಂದು ಸಿಗರೆಟ್ ಪ್ಯಾಕೇಟ್ ಮತ್ತು ಜಿಮ್&zwnj;ನಲ್ಲಿ ಬಳಸುವ ಡಂಬೆಲ್ಸ್ ಪತ್ತೆಯಾಗಿವೆ. ಜೈಲಿನೊಳಗೆ ಇಂತಹ ವಸ್ತುಗಳ ಇರುವಿಕೆ ಗಂಭೀರ ವಿಚಾರವಾಗಿದ್ದು, ಭದ್ರತಾ ಲೋಪಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿಯ ನಿರ್ಲಕ್ಷ್ಯವನ್ನು ಗಮನಿಸಿದ ಡಿಜಿಪಿ ಅಲೋಕ ಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ, ಮರಳುವ ವೇಳೆ ಜೈಲಾಧಿಕಾರಿಗಳಿಗೆ ಚಿಕ್ಕ ಶಿಕ್ಷೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರೆಂದು ತಿಳಿದುಬಂದಿದೆ.&lt;/p&gt;&lt;p&gt;ಜೈಲಿನೊಳಗೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಹಾಗೂ ಭದ್ರತೆಯನ್ನು ಬಲಪಡಿಸಲು ಈ ದಾಳಿ ಕೈಗೊಳ್ಳಲಾಗಿದೆ. ಈ ಕ್ರಮದಿಂದ ಜೈಲು ವ್ಯವಸ್ಥೆಯಲ್ಲಿ ಮತ್ತಷ್ಟು ಶಿಸ್ತು ಮತ್ತು ಕಟ್ಟುನಿಟ್ಟು ಜಾರಿಗೆ ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-dgp-alok-kumar-conducts-sudden-inspection-at-belagavi-hindalga-jail-gdp/articleshow-iutvvmk"/>
        </item>
        <item>
            <title><![CDATA[ಫೋನ್ ಸ್ವಿಚ್ ಆಫ್ ಆಗಿ ನೆರವೂ ಸಿಗಲಿಲ್ಲ, ಇಬ್ಬರು ಕಾನೂನು ವಿದ್ಯಾರ್ಥಿಗಳ ದುರಂತ ಸಾವು]]></title>
            <link>https://kannada.asianetnews.com/india-news/tragic-death-of-two-nagpur-law-students-bike-plunges-into-gorge-on-unlit-stretch/articleshow-ufpotxq</link>
            <guid isPermaLink="true">https://kannada.asianetnews.com/india-news/tragic-death-of-two-nagpur-law-students-bike-plunges-into-gorge-on-unlit-stretch/articleshow-ufpotxq</guid>
            <pubDate>Fri, 17 Apr 2026 12:30:41 +0530</pubDate>
            <description><![CDATA[&lt;p&gt;ಫೋನ್ ಸ್ವಿಚ್ ಆಫ್ ಆಗಿ ನೆರವೂ ಸಿಗಲಿಲ್ಲ, ಇಬ್ಬರು ಕಾನೂನು ವಿದ್ಯಾರ್ಥಿಗಳ ದುರಂತ ಸಾವು, ಒಬ್ಬನ ಬಳಿ ಫೋನ್ ಇರಲಿಲ್ಲ, ಮತ್ತೊಬ್ಬನ ಫೋನ್ ಸ್ವಿಚ್ ಆಫ್. ಇಷ್ಟೇ ನೆರವಿಗೆ ಕರೆ ಮಾಡಲು ಸಾಧ್ಯವಾಗದೆ ಸಾವು ಕಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khznmc5mx2xmwswhqa6k4pws,imgname-faridabad-wife-shot-dead-during-divorce-dispute-basntpur-sunlight-colony-murder-case-police-investigation-3-1771663143092.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಗಪುರ (ಏ.17) &lt;/strong&gt;ಕಾನೂನು ವಿದ್ಯಾರ್ಥಿಗಳಿಬ್ಬರು ಬೈಕ್ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದ್ದಾರೆ. ಆದರೆ ಕೈಯಲ್ಲಿ ಫೋನ್ ಇದ್ದರೂ ಸ್ವಿಚ್ ಆಫ್ ಆಗಿದ್ದ ಕಾರಣ ನೆರವು ಸಿಗದೆ ದುರಂತ ಅಂತ್ಯ ಕಂಡ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಇಬ್ಬರು ಕಾನೂನು ವಿದ್ಯಾರ್ಥಿಗಳು ರಾತ್ರಿ ಹೊಟೆಲ್&zwnj;ಗೆ ತೆರಳಿ ಊಟ ಮಾಡಿ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆದ ಕಾರಣ ನೆರವು ಸಿಗದೇ ಸಾವು ಕಂಡ ಘಟನೆ ನಡೆದಿದೆ.&lt;/p&gt;&lt;h2&gt;ಮೂರನೇ ವರ್ಷದ ಕಾನೂನು ವಿದ್ಯಾರ್ಥಿಗಳು ಸಾವು&lt;/h2&gt;&lt;p&gt;ಹೊಟೆಲ್&zwnj;ನಲ್ಲಿ ಊಟಕ್ಕ ತೆರಳಿ ಮರಳುವಾದ ಮಹಾರಾಷ್ಟ್ರ ಲಾ ಕಾಲೇಜಿನ ಸಕ್ಷಮ್ ಬನ್ಸೋದ್ (20), ಆರ್ಯನ್ ಸೊಂಟಕ್ಕೆ(20) ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಮಾಹಿತಿ ಕೇಳಿ ವಿದ್ಯಾರ್ಥಿಗಳ ಪೋಷಕರು ಕಂಗಾಲಾಗಿದ್ದಾರೆ.&lt;/p&gt;&lt;h2&gt;ಫೋನ್ ಸ್ವಿಚ್ ಆಗಿ ವಿದ್ಯಾರ್ಥಿಗಳು ಮೃತಪಟ್ಟಿದ್ದು ಹೇಗೆ&lt;/h2&gt;&lt;p&gt;ನಾಗಪುರದ ಹೊಟೆಲ್&zwnj;ಗೆ ರಾತ್ರಿ ಇಬ್ಬರು ವಿದ್ಯಾರ್ಥಿಗಳು ತೆರಳಿದ್ದಾರೆ. ಈ ಹೊಟೆಲ್&zwnj;ನಲ್ಲಿ ಫೋನ್&zwnj;ಗೆ ಅವಕಾಶವಿಲ್ಲ. ಹೀಗಾಗಿ ಒರ್ವ ವಿದ್ಯಾರ್ಥಿ ಫೋನ್ ಕೊಠಡಿಯಲ್ಲೇ ಇಟ್ಟು ತೆರಳಿದ್ದರೆ, ಮತ್ತೊರ್ವ ವಿದ್ಯಾರ್ಥಿ ಫೋನ್ ತೆಗೆದುಕೊಂಡು ಹೋಗಿದ್ದಾನೆ. ಹೊಟೆಲ್&zwnj;ನಲ್ಲಿ ಊಟ ಮುಗಿಸಿ ಬೈಕ್ ಮೂಲಕ ಮರಳಿದ್ದಾರೆ. ಆದರೆ ವಾರ್ಸಿಟಿ ಕ್ಯಾಂಪಸ್ ಪಕ್ಕದ ರಸ್ತೆಯಲ್ಲಿ ಬರುವಾಗ ಬೈಕ್ ಸ್ಕಿಡ್ ಆಗಿದೆ.&lt;/p&gt;&lt;p&gt;ರಸ್ತೆಯ ಎರಡೂ ಬದಿಯಲ್ಲಿ ಸಣ್ಣ ಕಾಡು, ಕುರುಚಲು ಗಿಡಗಳಿಂದ ತುಂಬಿದ್ದು. ಬೈಕ್ ಸ್ಕಿಡ್ ಆದ ಪರಿಣಾಮ ವಿದ್ಯಾರ್ಥಿಗಳು ಈ ಕುರುಚಲು ಪೊದೆಗಳ ಪಕ್ಕದಲ್ಲಿದ್ದ ಗುಂಡಿಗೆ ಬಿದ್ದಿದ್ದಾರೆ. ಇಬ್ಬರಿಗೆ ತೀವ್ರವಾಗಿ ಗಾಯವಾಗಿದೆ. ಎದ್ದು ಬರಲು ಸಾಧ್ಯವಾಗದ ಪರಿಸ್ಥಿತಿ. ಇತ್ತ ಬೈಕ್ ಕೂಡ ಕಾಡಿನಲ್ಲಿ ಬಿದ್ದಿದೆ. ಈ ರಸ್ತೆಯಲ್ಲಿ ಸಾಗುವಾಗ ಇಲ್ಲೊಂದು ಅಪಘಾತವಾಗಿದೆ ಅನ್ನೋ ಯಾವುದೇ ಕುರುಹು, ಸುಳಿವು ಸಿಗುತ್ತಿರಲಿಲ್ಲ. ಹೀಗಾಗಿ ಯಾರಿಗೂ ಗೊತ್ತೇ ಆಗಲಿಲ್ಲ. ಇತ್ತ ಇಬ್ಬರು ವಿದ್ಯಾರ್ಥಿಗಳ ಪೈಕಿ ಓರ್ವನಲ್ಲಿದ್ದ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ತಾವು ಅಪಘಾತವಾಗಿ ಸಿಲುಕಿದ್ದೇವೆ ನೆರವು ನೀಡಿ ಎಂದು ಹೇಳಲು, ತಮ್ಮ ಲೋಕೇಶನ್ ಹೇಳಲು ಸಾಧ್ಯವಾಗಲಿಲ್ಲ. ಕೂಗಿಕೂಂಡರು ಯಾರಿಗೂ ಗೊತ್ತಾಗಲಿಲ್ಲ. ಪರಿಣಾಮ ಇದೇ ಗುಂಡಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/tragic-death-of-two-nagpur-law-students-bike-plunges-into-gorge-on-unlit-stretch/articleshow-ufpotxq"/>
        </item>
        <item>
            <title><![CDATA[ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ]]></title>
            <link>https://kannada.asianetnews.com/crime/jealous-woman-made-his-co-sisters-son-drink-acid/articleshow-glteulo</link>
            <guid isPermaLink="true">https://kannada.asianetnews.com/crime/jealous-woman-made-his-co-sisters-son-drink-acid/articleshow-glteulo</guid>
            <pubDate>Fri, 17 Apr 2026 12:29:05 +0530</pubDate>
            <description><![CDATA[ಹೈದರಾಬಾದ್&zwnj;ನಲ್ಲಿ, ಅತ್ತೆ-ಮಾವ ತನ್ನ ಮಗನಿಗಿಂತ ಓರಗಿತ್ತಿಯ ಮಗನಿಗೆ ಹೆಚ್ಚು ಪ್ರೀತಿ ತೋರುತ್ತಾರೆ ಎಂಬ ಅಸೂಯೆಯಿಂದ ಮಹಿಳೆಯೊಬ್ಬಳು ಆ ಬಾಲಕನಿಗೆ ಜ್ಯೂಸ್ ನೆಪದಲ್ಲಿ ಆಸಿಡ್ ಕುಡಿಸಿ ಕೊಲ್ಲಲು ಯತ್ನಿಸಿದ್ದಾಳೆ. ಮಗು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd3rjck5rq3thqs7qj9xas0,imgname-aunt-mix-acid-in-kids-juice-1776409135506.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು:&lt;/strong&gt;&lt;/h2&gt;&lt;p&gt;ಹೈದರಾಬಾದ್: ಒರಗಿತ್ತಿಯರ ಜಗಳವೊಂದು ಬಾಲಕನ ಜೀವಕ್ಕೆ ಎರವಾದಂತಹ ಘಟನೆ ನಡೆದಿದೆ. ಸಾಮಾನ್ಯವಾಗಿ ಸೀರಿಯಲ್&zwnj;ಗಳಲ್ಲಿ ಇಂತಹ ದೃಶ್ಯಗಳನ್ನು ನೀವು ನೋಡಿರುತ್ತಿರಿ. ಅಣ್ಣತಮ್ಮಂದಿರ ಮಕ್ಕಳೇ ದಯಾದಿಗಳಾಗೋದು, ಅವರ ನಡುವೆ ಪೋಷಕರು ಅಥವಾ ಮನೆಯ ಹಿರಿಯರು ಬೇದಭಾವ ತೋರುವುದು. ಇದರಿಂದ ಮಕ್ಕಳ ಪೋಷಕರು ಸಿಟ್ಟಿಗೆದ್ದು, ಮನೆಯ ಹಿರಿಯರು ಯಾರ ಮೇಲೆ ಹೆಚ್ಚು ಪ್ರೀತಿಸುತ್ತಾರೋ ಆ ಮಕ್ಕಳ ಕತೆಯನ್ನೇ ಮುಗಿಸುವುದಕ್ಕೆ ನೋಡುವುದು ಇಂತಹ ಘಟನೆಗಳನ್ನು ನೀವು ಸೀರಿಯಲ್&zwnj;ಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಂದು ಕಡೆ ಇಂತಹದ್ದೇ ಘಟನೆಯೊಂದು ನಿಜವಾಗಿಯೂ ನಡೆದಿದ್ದು, ತನ್ನ ಓರಗಿತ್ತಿಯ ಮಗುವನ್ನು ಸಾಯಿಸುವುದಕ್ಕೆ ಯತ್ನಿಸಿದಂತಹ ಆಘಾತಕಾರಿ ಘಟನೆ ನೆರೆಯ ರಾಜ್ಯ ತೆಲಂಗಾಣದ ರಾಜಧಾಣಿ ಹೈದರಾಬಾದ್&zwnj;ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಮಗುವಿಗೆ ಜ್ಯೂಸ್ ಎಂದು ಆಸಿಡ್ ಕುಡಿಸಿದ ಮಹಿಳೆಯನ್ನು ಬಂಧಿಸಲಾಗಿದೆ.&lt;/p&gt;&lt;h3&gt;&lt;strong&gt;ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ&lt;/strong&gt;&lt;/h3&gt;&lt;p&gt;ಆರೋಪಿ ಹಾಗೂ ದೂರುದಾರ ಮಹಿಳೆ ಇಬ್ಬರು ಒಂದೇ ಮನೆಯಲ್ಲಿ ವಾಸಿಸುವ ಕೂಡು ಕುಟುಂಬದ ಅಣ್ಣ ತಮ್ಮಂದಿರ ಪತ್ನಿಯರಾಗಿದ್ದು, ಇಬ್ಬರಿಗೂ ಒಂದೊಂದು ಮಕ್ಕಳಿದ್ದರು. ಮನೆಯಲ್ಲಿದ್ದ ಹಿರಿಯರು ಎಂದರೆ ಅತ್ತೆ ಮಾವ ಈ ಮಕ್ಕಳಲ್ಲಿ ಬೇದಭಾವ ತೋರುತ್ತಿದ್ದರು. ಆರೋಪಿ ಮಹಿಳೆಯ ಮಗುವಿಗಿಂತ ದೂರುದಾರ ಮಹಿಳೆಯ ಮಗುವಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದರು. ಆತನನ್ನು ಹೆಚ್ಚು ಪ್ರೀತಿ ಮಾಡುತ್ತಿದ್ದರು. ಮಕ್ಕಳ ನಡುವೆ ಈ ರೀತಿ ಬೇದಭಾವ ತೋರುತ್ತಿರುವುದು, ಹಾಗೂ ತನ್ನ ಮಗುವಿನ ಬದಲು ಆ ಮಗುವಿಗೆ ಹೆಚ್ಚು ಪ್ರೀತಿ ನೀಡುವುದನ್ನು ನೋಡಿ ತಾಯಿಯ ಹೊಟ್ಟೆ ಉರಿಯಲು ಶುರುವಾಗಿತ್ತು. ಇದುವೇ ಅಸೂಯೆ ಹಾಗೂ ದ್ವೇಷವಾಗಿ ಬದಲಾಗಿದ್ದು, ಇದಕ್ಕೊಂದು ಮುಕ್ತಿ ಕಾಣಿಸಲು ತಾಯಿ ನಿರ್ಧರಿಸಿದ್ದಾಳೆ.&lt;/p&gt;&lt;h3&gt;&lt;strong&gt;ಓರಗಿತ್ತಿಯ ಮಗನಿಗೆ ಜ್ಯೂಸ್ ನೆಪದಲ್ಲಿ ಆಸಿಡ್ ಕುಡಿಸಿದ ಮಹಿಳೆ&lt;/strong&gt;&lt;/h3&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಪೊಲೀಸರಿಗೆ ನೀಡಿದ್ದು, ಈ ದೂರಿನಲ್ಲಿರುವ ಪ್ರಕಾರ ಆಕೆಯ ಓರಗಿತ್ತಿ ಏಪ್ರಿಲ್ 9ರಂದು ಮನೆಯ ಅಡುಗೆ ಮನೆಯಲ್ಲಿ ಮಗುವಿಗೆ ಹಣ್ಣಿನ ಜ್ಯೂಸ್&zwnj; ನೀಡುವ ನೆಪದಲ್ಲಿ ಆಸಿಡ್ ಕುಡಿಸಿ ಆತನನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾಳೆ. ಈ ಜ್ಯೂಸ್ ಕುಡಿದರೆ ಚಾಕೋಲೇಟ್ ನೀಡುವುದಾಗಿ ಆಕೆ ಹೇಳಿದ್ದಾಳೆ. ಇತ್ತ ಆಕೆಯ ಮಾತು ನಂಬಿ ಸಂಚಿನ ಅರಿವಿಲ್ಲದೇ ಮಗು ಜ್ಯೂಸ್ ಕುಡಿದಿದ್ದು, ನಂತರ ಮಗು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿಲಾಗಿದೆ. ನಂತರ ಬಾಲಕ ಚೇತರಿಸಿಕೊಂಡಿದೆ ಎಂದು ಮೆಡಿಪಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ತನ್ನ ಮಗುವಿಗೆ ಮನೆಯವರ ಪ್ರೀತಿ ಸಿಗಲಿಲ್ಲವೆಂದು ಓರಗಿತ್ತಿಯ ಮಗುವಿಗೆ ಆಸಿಡ್&lt;/strong&gt;&lt;/h3&gt;&lt;p&gt;ಪೊಲೀಸರ ತನಿಖೆ ವೇಳೆ ಮಗುವಿನ ಅಜ್ಜ ಅಜ್ಜಿ ಇಬ್ಬರು ಮಕ್ಕಳ ಮಕ್ಕಳಲ್ಲಿ ಒಂದು ಮಗುವಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಿದೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಈ ಮಕ್ಕಳ ಅಜ್ಜ, ದೂರುದಾರರ ಮಗುವಿನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಇದು ಆರೋಪಿ ಮಹಿಳೆಯನ್ನು ಮತ್ತಷ್ಟು ಉರಿದು ಬೀಳುವಂತೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;TCSನಲ್ಲಿ ಉದ್ಯೋಗಿಗಳ ಮತಾಂತರ ಕಿರುಕುಳ ಕೇಸ್&zwnj;: ಬಂಧನ ಭೀತಿಯಲ್ಲಿ HR ನಿದಾ ಖಾನ್; ಗರ್ಭಿಣಿ ಎಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ!&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Anusha Kb</dc:creator>
            <atom:link href="https://kannada.asianetnews.com/crime/jealous-woman-made-his-co-sisters-son-drink-acid/articleshow-glteulo"/>
        </item>
        <item>
            <title><![CDATA[ಯಾದಗಿರಿ ಬಳಿ ಬಸ್ ಮತ್ತು ಕಾರು ನಡುವೆ  ಭಯಾನಕ ಅಪಘಾತ: ಕಾರಲ್ಲಿದ್ದ 6 ಮಂದಿ ಸುಟ್ಟು ಭಸ್ಮ!]]></title>
            <link>https://kannada.asianetnews.com/karnataka-districts/horrific-bus-car-collision-in-yadagiri-shantapura-cross-many-burnt-alive-gdp/articleshow-21hf9na</link>
            <guid isPermaLink="true">https://kannada.asianetnews.com/karnataka-districts/horrific-bus-car-collision-in-yadagiri-shantapura-cross-many-burnt-alive-gdp/articleshow-21hf9na</guid>
            <pubDate>Fri, 17 Apr 2026 12:03:57 +0530</pubDate>
            <description><![CDATA[ಯಾದಗಿರಿ ಜಿಲ್ಲೆಯ ಸುರಪುರ ಬಳಿ ಕಾರು ಮತ್ತು ಖಾಸಗಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್&zwnj;ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd28gy82ct386kxm2tnn8g5,imgname-yadagiri-accident-news-1776407561160.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಭಯಾನಕ ಅಪಘಾತದಲ್ಲಿ ಕನಿಷ್ಠ 6 ಮಂದಿ ಸಜೀವ ದಹನಗೊಂಡಿರುವ ದಾರುಣ ಘಟನೆ ನಡೆದಿದೆ. ಕಾರು ಮತ್ತು ಖಾಸಗಿ ಬಸ್ ನಡುವಿನ ಮುಖಾಮುಖಿ ಡಿಕ್ಕಿಯಿಂದ ಈ ದುರಂತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಬೆಂಕಿಗಾಹುತಿಯಾಗಿವೆ. ಅಪಘಾತದ ಭೀಕರತೆ ಎಷ್ಟಿದೆ ಎಂದರೆ ಮೃತರ ತಲೆಬುರುಡೆಗಳು ಕಾರಿನಲ್ಲಿ ಕಾಣಿಸಿದೆ.&lt;/p&gt;&lt;h2&gt;ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್&lt;/h2&gt;&lt;p&gt;ಪ್ರಾಥಮಿಕ ಮಾಹಿತಿ ಪ್ರಕಾರ, ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಏಸಿ ಬಸ್ ಮತ್ತು ಯಾದಗಿರಿಯಿಂದ ರಾಯಚೂರಿನ ಲಿಂಗಸೂಗೂರು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ಬೆಂಕಿಯಲ್ಲಿ ಸಿಲುಕಿಕೊಂಡು ಸಜೀವ ದಹನಗೊಂಡಿದ್ದಾರೆ. ಕಾರು ಸಂಪೂರ್ಣವಾಗಿ ಕರಕಲಾಗಿದ್ದು, ಅದರಲ್ಲಿದ್ದ 6 ಮಂದಿ ಸ್ಥಳದಲ್ಲೇ &amp;nbsp;ಭಸ್ಮವಾಗಿದ್ದಾರೆ. ಬಸ್&zwnj;ನಲ್ಲಿ ಸುಮಾರು 40 ಜನ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;h2&gt;ಬಸ್&zwnj;ಗೂ ವ್ಯಾಪಿಸಿದ ಬೆಂಕಿ&lt;/h2&gt;&lt;p&gt;ಅಪಘಾತದ ಹೊಡೆತಕ್ಕೆ ಬಸ್&zwnj;ಗೂ ಬೆಂಕಿ ತಗುಲಿದ್ದು, ಕೆಲ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸ್ಥಳೀಯರು ಹಾಗೂ ತಕ್ಷಣ ಆಗಮಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಲು ಮುಂದಾದರು. ಆದರೆ ಕಾರು ಅಪ್ಪಚ್ಚಿಯಾಗಿ &amp;nbsp;ಡೋರ್ ಓಪನ್ &amp;nbsp;ಆಗಲೇ ಇಲ್ಲ. ನೋಡ ನೋಡುತ್ತಿದ್ದಂತೆಯೇ ಬೆಂಕಿ ಹರಡಿತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಬೆಂಕಿ ನಂದಿಸಿದ ನಂತರ ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಆರಂಭಿಸಲಾಗಿದೆ.&lt;/p&gt;&lt;p&gt;ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಸುರಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮೃತರ ಗುರುತು ಪತ್ತೆ ಹಾಗೂ ಅಪಘಾತದ ನಿಖರ ಕಾರಣವನ್ನು ತಿಳಿಯುವ ಕಾರ್ಯ ಮುಂದುವರೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಈ ದುರಂತದಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದಲ್ಲಿ ಮತ್ತೆ ಖಾಸಗಿ ಬಸ್ ಅಪಘಾತದ ಭೀತಿ ಮೂಡಿಸಿದೆ. ರಸ್ತೆ ಸುರಕ್ಷತೆ ಕುರಿತು ಪ್ರಶ್ನೆಗಳು ಮತ್ತೆ ಉದ್ಭವಿಸಿವೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/horrific-bus-car-collision-in-yadagiri-shantapura-cross-many-burnt-alive-gdp/articleshow-21hf9na"/>
        </item>
        <item>
            <title><![CDATA[ರೋಹಿತ್ ಶೆಟ್ಟಿ ಮನೆ ಮುಂದೆ ಹ್ಯಾಟ್ರಿಕ್ ದಾಳಿ ನಡೆಸಿದ್ದ ಶೂಟರ್ ಸೆರೆ; ಯಾರಿವನು, ಯಾಕೆ ದಾಳಿ ನಡೆಸಿದ್ದ ಗೊತ್ತಾ?]]></title>
            <link>https://kannada.asianetnews.com/cine-world/police-arrested-the-key-accused-in-connection-with-director-rohit-shetty-residence-fire-in-mumbai-juhu/articleshow-nvurnu8</link>
            <guid isPermaLink="true">https://kannada.asianetnews.com/cine-world/police-arrested-the-key-accused-in-connection-with-director-rohit-shetty-residence-fire-in-mumbai-juhu/articleshow-nvurnu8</guid>
            <pubDate>Fri, 17 Apr 2026 11:55:49 +0530</pubDate>
            <description><![CDATA[&lt;p&gt;ಮುಂಬೈನ ಜುಹುವಿನಲ್ಲಿರುವ ರೋಹಿತ್ ಶೆಟ್ಟಿ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 'ಬ್ಲಾಕ್ ಬಸ್ಟರ್' ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಸೆರೆಹಿಡಿದಿದ್ದಾರೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd1b7m5vsx8e61dns8f9eqj,imgname-rohit-shetty-1776406601349.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಲಿವುಡ್ &lsquo;ಸಿಂಗಂ&rsquo; ಮನೆ ಮುಂದೆ ಗುಂಡಿನ ಸದ್ದು: ಇದು ಸಿನಿಮೀಯ ಶೈಲಿಯ ಅಸಲಿ ಪೊಲೀಸ್&zwnj; ಬೇಟೆ!&lt;/strong&gt;&lt;/p&gt;&lt;p&gt;ಬಾಲಿವುಡ್ ಚಿತ್ರರಂಗದಲ್ಲಿ ಗಾಳಿಯಲ್ಲಿ ಹಾರುವ ಕಾರುಗಳು, ಖಡಕ್ ಪೊಲೀಸ್ ಅಧಿಕಾರಿಗಳು ಮತ್ತು ಮೈ ನಡುಗಿಸುವ ಆಕ್ಷನ್ ದೃಶ್ಯಗಳಿಗೆ ಹೆಸರಾದವರು ನಿರ್ದೇಶಕ ರೋಹಿತ್ ಶೆಟ್ಟಿ. ಆದರೆ, ಕಳೆದ ಫೆಬ್ರವರಿಯಲ್ಲಿ ಅವರ ಜೀವನದಲ್ಲೇ ಒಂದು ಅನಿರೀಕ್ಷಿತ 'ರಿಯಲ್ ಲೈಫ್' ಕ್ರೈಮ್ ಸೀನ್ ಸೃಷ್ಟಿಯಾಗಿತ್ತು. ಮುಂಬೈನ ಜುಹುವಿನಲ್ಲಿರುವ ಅವರ (Rohit Shetty) ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 'ಬ್ಲಾಕ್ ಬಸ್ಟರ್' ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಸೆರೆಹಿಡಿದಿದ್ದಾರೆ!&lt;/p&gt;&lt;p&gt;ಆಗ್ರಾ ರಸ್ತೆಯಲ್ಲಿ ನಡೆದ ಹೈ-ವೋಲ್ಟೇಜ್ ಡ್ರಾಮಾ!&lt;/p&gt;&lt;p&gt;ಅದು ಗುರುವಾರ ಮಧ್ಯಾಹ್ನ ಸುಮಾರು 3:56ರ ಸಮಯ. ಉತ್ತರ ಪ್ರದೇಶದ ಆಗ್ರಾ-ಎಟಾ ರಸ್ತೆಯ ಛದಮಿ ಮತ್ತಾ ಪ್ರದೇಶದಲ್ಲಿ ಪೊಲೀಸರು ಹೊಂಚು ಹಾಕಿ ಕುಳಿತಿದ್ದರು. ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF) ಮತ್ತು ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರ ಜಂಟಿ ತಂಡಕ್ಕೆ ಸಿಕ್ಕ ಖಚಿತ ಮಾಹಿತಿಯಂತೆ, ಹ್ಯಾಟ್ರಿಕ್ ದಾಳಿ ನಡೆಸಿದ್ದ ಶೂಟರ್ ಅಲ್ಲಿ ಅಡಗಿದ್ದ. ಪೊಲೀಸರು ಕ್ಷಿಪ್ರವಾಗಿ ದಾಳಿ ನಡೆಸಿ, ಪ್ರದೀಪ್ ಕುಮಾರ್ ಅಲಿಯಾಸ್ ಗಾತ್ ಎಂಬ ಆರೋಪಿಯನ್ನು ಸಿನಿಮೀಯ ಮಾದರಿಯಲ್ಲಿ ಬಂಧಿಸಿದ್ದಾರೆ. ಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದ ಈ ಹಂತಕ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.&lt;/p&gt;&lt;h2&gt;ಏನಿದು ದಗಾ? ಯಾಕಿಷ್ಟು ಭಯ?&lt;/h2&gt;&lt;p&gt;ಫೆಬ್ರವರಿ 1, 2026ರ ಕತ್ತಲ ರಾತ್ರಿ ಮುಂಬೈನ ಜುಹು ಉಪನಗರದಲ್ಲಿರುವ ರೋಹಿತ್ ಶೆಟ್ಟಿ ಅವರ 'ಶೆಟ್ಟಿ ಟವರ್' ನಿವಾಸದ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದು ಕೇವಲ ದಾಳಿಯಲ್ಲ, ಬದಲಾಗಿ ಅಂಡರ್ ವರ್ಲ್ಡ್&zwnj;ನ ಕರಾಳ ಮುಖವಾಗಿತ್ತು. ಕುಖ್ಯಾತ ಶುಭಂ ಲೋಂಕರ್ ಗ್ಯಾಂಗ್&zwnj;ನ ಆದೇಶದ ಮೇರೆಗೆ ಈ ಕೃತ್ಯ ಎಸಗಲಾಗಿತ್ತು ಎನ್ನಲಾಗಿದೆ. ಚಲನಚಿತ್ರೋದ್ಯಮದಲ್ಲಿ ಭಯ ಹುಟ್ಟಿಸಿ, ಕೋಟಿ ಕೋಟಿ ಹಣ ಸುಲಿಗೆ ಮಾಡುವುದು ಈ ಗ್ಯಾಂಗ್&zwnj;ನ ಮುಖ್ಯ ಉದ್ದೇಶವಾಗಿತ್ತು. ರೋಹಿತ್ ಶೆಟ್ಟಿಯಂತಹ ಸ್ಟಾರ್ ನಿರ್ದೇಶಕರನ್ನೇ ಗುರಿ ಮಾಡಿದ್ದರಿಂದ ಇಡೀ ಬಾಲಿವುಡ್ ಒಂದು ಕ್ಷಣ ಆತಂಕಕ್ಕೀಡಾಗಿತ್ತು.&lt;/p&gt;&lt;p&gt;ಪೊಲೀಸರ ಖಡಕ್ ಆಕ್ಷನ್:&lt;/p&gt;&lt;p&gt;ಘಟನೆ ನಡೆದ ಬೆನ್ನಲ್ಲೇ ಮುಂಬೈ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಠಿಣ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹೈಪ್ರೊಫೈಲ್ ಕೇಸ್&zwnj;ನಲ್ಲಿ ಈಗಾಗಲೇ ಪ್ರದೀಪ್ ಶರ್ಮಾ ಅಲಿಯಾಸ್ ಗೋಲು, ದೀಪಕ್ ಮತ್ತು ವಿಷ್ಣು ಕುಶ್ವಾಹ ಸೇರಿದಂತೆ ಎಂಟು ಜನರನ್ನು ಜೈಲಿಗಟ್ಟಲಾಗಿತ್ತು. ಈಗ ಪ್ರದೀಪ್ ಕುಮಾರ್ ಒಂಬತ್ತನೇ ಆರೋಪಿಯಾಗಿ ಪೊಲೀಸರ ಅತಿಥಿಯಾಗಿದ್ದಾನೆ.&lt;/p&gt;&lt;h3&gt;ರೋಹಿತ್ ಶೆಟ್ಟಿ: ದ ರಿಯಲ್ ಬಾಸ್!&lt;/h3&gt;&lt;p&gt;ಹಿಂದಿ ಚಿತ್ರರಂಗದಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ರೋಹಿತ್ ಶೆಟ್ಟಿ, ತಮ್ಮ ಎರಡು ದಶಕಗಳ ವೃತ್ತಿಜೀವನದಲ್ಲಿ 'ಗೋಲ್ಮಾಲ್', 'ಸಿಂಗಂ'ನಂತಹ ಬೃಹತ್ ಫ್ರಾಂಚೈಸಿಗಳನ್ನು ನೀಡಿದವರು. ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಅವರನ್ನೊಳಗೊಂಡ 'ಕಾಪ್ ಯೂನಿವರ್ಸ್' ಸೃಷ್ಟಿಸಿದ ಕೀರ್ತಿ ಇವರದ್ದು. ತೆರೆಯ ಮೇಲೆ ಪೊಲೀಸರ ಶೌರ್ಯವನ್ನು ವೈಭವೀಕರಿಸುವ ರೋಹಿತ್, ಈಗ ನಿಜ ಜೀವನದಲ್ಲೂ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಸಿನಿಮಾದಲ್ಲಿ ವಿಲನ್&zwnj;ಗಳನ್ನು ಮಟ್ಟಹಾಕುವ ರೋಹಿತ್ ಶೆಟ್ಟಿ ಅವರ ಶತ್ರುಗಳನ್ನು ಈಗ ಅಸಲಿ ಪೊಲೀಸರು ಜೈಲಿಗೆ ಕಳುಹಿಸುತ್ತಿದ್ದಾರೆ. &quot;ಸಿಂಗಂ&quot; ಸ್ಟೈಲ್&zwnj;ನಲ್ಲಿಯೇ ಈ ಕೇಸ್ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ!&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/police-arrested-the-key-accused-in-connection-with-director-rohit-shetty-residence-fire-in-mumbai-juhu/articleshow-nvurnu8"/>
        </item>
        <item>
            <title><![CDATA[ಕ್ಷೇತ್ರ ವಿಂಗಡಣೆ: ಕನ್ನಡಿಗರ ಪಾಲೇ ಕಡಿಮೆ ಆಗುತ್ತೆ, ಅದನ್ನೇಕೆ ಹೇಳ್ತಿಲ್ಲ?: ಕರವೇ  ನಾರಾಯಣಗೌಡ]]></title>
            <link>https://kannada.asianetnews.com/state/delimitation-kannadigas-share-will-decrease-why-isnt-that-being-mentioned-krv-narayana-gowda-rav/articleshow-adgyynd</link>
            <guid isPermaLink="true">https://kannada.asianetnews.com/state/delimitation-kannadigas-share-will-decrease-why-isnt-that-being-mentioned-krv-narayana-gowda-rav/articleshow-adgyynd</guid>
            <pubDate>Fri, 17 Apr 2026 11:41:05 +0530</pubDate>
            <description><![CDATA[&lt;p&gt;ಕ್ಷೇತ್ರ ಪುನರ್ ವಿಂಗಡಣೆ ಜನಸಂಖ್ಯೆ ನಿಯಂತ್ರಿಸಿದ ಕರ್ನಾಟಕದಂತಹ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ &amp;nbsp;ಕುಗ್ಗಿಸುವ ಅಪಾಯ ಒಡ್ಡಿದೆ. ಇದು ದಕ್ಷಿಣದ ರಾಜ್ಯಗಳು ತಮ್ಮ ಯಶಸ್ವಿ ಜನಸಂಖ್ಯಾ ನೀತಿಗಾಗಿ ಶಿಕ್ಷೆ ಅನುಭವಿಸಿದಂತೆ ಆಗಲಿದ್ದು, ತೆರಿಗೆ ಹಂಚಿಕೆಯಲ್ಲಿ ಅನ್ಯಾಯವನ್ನು ಮತ್ತಷ್ಟು ಹೆಚ್ಚಿಸಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hb75xgzk2ys1w3bg12wkztne,imgname-nray.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟಿ.ಎ.ನಾರಾಯಣಗೌಡ&lt;/strong&gt;&lt;/p&gt;&lt;p&gt;ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ&lt;/p&gt;&lt;p&gt;ನಾವು ಕನ್ನಡಿಗರು ಅದೇನು ಪಾಪ ಮಾಡಿದ್ದೇವೋ ಎಂಬುದು ಅರ್ಥವಾಗುತ್ತಿಲ್ಲ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ನಾವು ಹೋರಾಡಿದೆವು. ಆ ಬಂಧನದಿಂದ ಬಿಡುಗಡೆಯಾದಾಗ ಅತ್ಯಂತ ಸಂತೋಷದಿಂದ ಭಾರತ ಒಕ್ಕೂಟವನ್ನು ಸೇರಿಕೊಂಡೆವು. ರಾಷ್ಟ್ರೀಯ ಮನೋಭಾವವನ್ನು ಬೆಳೆಸಿಕೊಂಡೆವು. ಭಾರತ ಸರ್ಕಾರದ ಕೆಲವು ನಿಲುವುಗಳು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ನಾವು ಇದೇ ರಾಷ್ಟ್ರೀಯ ಮನೋಭಾವದಿಂದ ಶಿರಬಾಗಿ ಪಾಲಿಸಿದೆವು. ಆದರೆ ನಮಗೆ ಸಿಕ್ಕಿದ್ದೇನು? ಅನ್ಯಾಯಗಳ ಮೇಲೆ ಅನ್ಯಾಯ, ಮಾಡದ ತಪ್ಪಿಗಾಗಿ ಶಿಕ್ಷೆಗಳು.&lt;/p&gt;&lt;p&gt;ಈಗ ಕ್ಷೇತ್ರ ಪುನರ್ ವಿಂಗಡಣೆಯ ತೂಗುಗತ್ತಿ ನಮ್ಮ ಮೇಲೆ ತೂಗುತ್ತಿದೆ. ಈ ಕತ್ತಿ ನೇರವಾಗಿ ನಮ್ಮ ಅಸ್ಮಿತೆಯನ್ನೇ ಸೀಳಿ ಹಾಕಲಿದೆ. ನಮ್ಮ ಧ್ವನಿಯನ್ನು ಕ್ಷೀಣವಾಗುವಂತೆ ಮಾಡಲಿದೆ. ನಮ್ಮ ಸಂಕಟಗಳನ್ನು ಹೆಚ್ಚಿಸುತ್ತಾ ಹೋಗಲಿದೆ. ನಮ್ಮ ಪಾಲಿನ ಹಕ್ಕನ್ನು ನಗಣ್ಯಗೊಳಿಸಲಿದೆ. ನಮ್ಮನ್ನು ಈ ದೇಶದ ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಲಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಇನ್ನಷ್ಟು ಅಮಾನವೀಯ ಶಾಸನಗಳನ್ನು ರೂಪಿಸಲು ಅವಕಾಶವನ್ನು ಕೊಡಲಿದೆ.&lt;/p&gt;&lt;h2&gt;ನಾವು ಏಕೆ ಸಹಿಸಿಕೊಳ್ಳಬೇಕು?&lt;/h2&gt;&lt;p&gt;ಕೊನೆಯ ಬಾರಿ 1971ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಲಾಯಿತು. ಅದರ ನಂತರ 1976ರಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಸೀಟುಗಳ ಸಂಖ್ಯೆಯನ್ನು ಸ್ಥಗಿತಗೊಳಿಸಲಾಯಿತು (ಫ್ರೀಜ್). ಈಗ 2026ರ ಜನಗಣತಿ ನಂತರ ಈ ಫ್ರೀಜ್ ತೆಗೆದುಹಾಕಿ ಹೊಸದಾಗಿ ವಿಂಗಡಣೆ ಮಾಡುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಈಗ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದೆ. ಇಲ್ಲಿ ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಶನ್ ಮಸೂದೆಗಳನ್ನು ಚರ್ಚಿಸಲಾಗುತ್ತಿದೆ. ಸರ್ಕಾರ ಲೋಕಸಭಾ ಸದಸ್ಯ ಸ್ಥಾನಗಳನ್ನು 543ರಿಂದ ಸುಮಾರು 850ಕ್ಕೆ ಏರಿಸುವ ಪ್ರಸ್ತಾವವನ್ನು ಮಂಡಿಸಿದೆ.&lt;/p&gt;&lt;p&gt;ಮೊಟ್ಟ ಮೊದಲನೆಯದಾಗಿ ಈ ಕ್ಷೇತ್ರ ಪುನರ್ ವಿಂಗಡಣೆ ಜಾರಿಗೆ ಬಂದರೆ ನಮ್ಮ ರಾಜ್ಯದ ಲೋಕಸಭಾ ಸದಸ್ಯರ ಸಂಖ್ಯೆ ಅಲ್ಪಪ್ರಮಾಣದಲ್ಲಿ ಹೆಚ್ಚಬಹುದು. ಆದರೆ ಇತರ ಉತ್ತರ ರಾಜ್ಯಗಳ ಹೋಲಿಕೆಯಲ್ಲಿ ನಮ್ಮ ಪ್ರಾತಿನಿಧ್ಯದ ಪ್ರಮಾಣ ಗಂಭೀರ ಸ್ವರೂಪದಲ್ಲಿ ಕಡಿಮೆಯಾಗಲಿದೆ. ಇದನ್ನು ನಮ್ಮ ಕೆಲವು ಅರೆಬೆಂದ ರಾಜಕಾರಣಿಗಳು, ಹೈಕಮಾಂಡ್ ಗುಲಾಮಗಿರಿಯ ರೋಗದಿಂದ ಬಳಲುತ್ತಿರುವ ನಾಯಕರು ತಪ್ಪುತಪ್ಪಾಗಿ ವ್ಯಾಖ್ಯಾನ ಮಾಡುತ್ತಾರೆ. ಕರ್ನಾಟಕದ ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚುತ್ತದೆಯಲ್ಲ, ಏನು ಸಮಸ್ಯೆ ಎಂದು ಪ್ರಶ್ನಿಸುತ್ತಾರೆ. ಆದರೆ ನಮ್ಮ ಪಾಲು (ರಿಲೇಟಿವ್ ಶೇರ್) ಕುಗ್ಗುತ್ತದೆ ಎಂಬುದನ್ನು ಅವರು ಮರೆಮಾಚುತ್ತಾರೆ.&lt;/p&gt;&lt;h3&gt;ದಕ್ಷಿಣಕ್ಕೆ &lsquo;ಶಿಕ್ಷೆ&rsquo; ತಪ್ಪಿಸಿದ್ದ ಇಂದಿರಾ&lt;/h3&gt;&lt;p&gt;ಕ್ಷೇತ್ರ ವಿಂಗಡಣೆಗೆ ಸಂಬಂಧಿಸಿದಂತೆ ಚರ್ಚೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಬಹಳ ಮುಖ್ಯವಾಗಿ ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರುಗಳ ಕಾಲಘಟ್ಟದಲ್ಲಿ ಆದ ತೀರ್ಮಾನಗಳನ್ನು ನಾವು ಗಮನಿಸಬೇಕು. ತುರ್ತುಪರಿಸ್ಥಿತಿ ಸಮಯದಲ್ಲಿ ಇಂದಿರಾ ಗಾಂಧಿ ಅವರ ಸರ್ಕಾರ 42ನೇ ಸಂವಿಧಾನ ತಿದ್ದುಪಡಿ ತಂದು ಲೋಕಸಭಾ ಮತ್ತು ರಾಜ್ಯ ವಿಧಾನಸಭೆಗಳ ಸೀಟುಗಳನ್ನು 1971ರ ಜನಗಣತಿ ಆಧಾರದಲ್ಲಿ ಸ್ಥಗಿತ(ಫ್ರೀಜ್)ಗೊಳಿಸಿತು. ಇದು 2001ರ ಜನಗಣತಿಯವರೆಗೆ ಮುಂದುವರಿಯುವಂತೆ ಮಾಡಲಾಯಿತು.&lt;/p&gt;&lt;p&gt;ಹೀಗೆ ಫ್ರೀಜ್ ಮಾಡುವುದರ ಹಿಂದಿನ ಉದ್ದೇಶ ಸ್ಪಷ್ಟವಾಗಿತ್ತು. ಜನಸಂಖ್ಯಾ ನಿಯಂತ್ರಣ (ಫ್ಯಾಮಿಲಿ ಪ್ಲಾನಿಂಗ್) ಕಾರ್ಯಕ್ರಮಗಳನ್ನು ರಾಜ್ಯಗಳು ಯಶಸ್ವಿಯಾಗಿ ಅನುಸರಿಸುವಂತೆ ಪ್ರೋತ್ಸಾಹಿಸುವುದಾಗಿತ್ತು. ದಕ್ಷಿಣ ಭಾರತದ ರಾಜ್ಯಗಳು ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಚೆನ್ನಾಗಿ ಅನುಸರಿಸಿ ಜನಸಂಖ್ಯೆ ನಿಯಂತ್ರಿಸಿದ್ದವು. ಅವುಗಳ ಲೋಕಸಭಾ ಸದಸ್ಯ ಸ್ಥಾನಗಳು ಕಡಿಮೆಯಾಗುವುದು ಅನ್ಯಾಯ ಎಂದು ಭಾವಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಉತ್ತರ ಭಾರತದಲ್ಲಿ ಅಲ್ಪ ಪ್ರಮಾಣದಲ್ಲಿ ಜನಸಂಖ್ಯಾ ನಿಯಂತ್ರಣ ಕಡಿಮೆಯಾಗಿದ್ದರೂ, ದಕ್ಷಿಣದ ಯಶಸ್ಸನ್ನು ಶಿಕ್ಷಿಸಬಾರದು ಎಂಬುದು ಗುರಿಯಾಗಿತ್ತು.&lt;/p&gt;&lt;p&gt;&lt;strong&gt;ವಾಜಪೇಯಿ ವಿವೇಕಯುತ ನಡೆ&lt;/strong&gt;&lt;/p&gt;&lt;p&gt;2001ರಲ್ಲಿ ಫ್ರೀಜ್ ಅವಧಿ ಮುಗಿಯುವ ಸಮಯ ಬಂದಾಗ, ವಾಜಪೇಯಿ ಅವರ ಎನ್&zwnj;ಡಿಎ ಸರ್ಕಾರ 84ನೇ ಸಂವಿಧಾನ ತಿದ್ದುಪಡಿ ತಂದು ಈ ಸ್ಥಗಿತವನ್ನು 2026ರ ನಂತರದ ಮೊದಲ ಜನಗಣತಿಯವರೆಗೆ ವಿಸ್ತರಿಸಿತು. ಅಂದು ಕಾನೂನು ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಬಹಳ ಸ್ಪಷ್ಟವಾಗಿ ಹೀಗೆ ಹೇಳಿದ್ದರು: &ldquo;ಕೆಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ಅನುಸರಿಸಿವೆ, ಕೆಲವು ಅನುಸರಿಸಿಲ್ಲ. ರಾಷ್ಟ್ರೀಯ ಜನಸಂಖ್ಯಾ ನೀತಿ 2026ರಲ್ಲಿ ಜನಸಂಖ್ಯೆ ಸ್ಥಿರೀಕರಣವನ್ನು ಗುರಿಯಾಗಿಟ್ಟುಕೊಂಡಿದೆ. ಆದ್ದರಿಂದ ಮತ್ತೆ 25 ವರ್ಷಗಳ ಕಾಲ ಫ್ರೀಜ್ ಮುಂದುವರಿಸುತ್ತೇವೆ.ʼʼ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರವೂ ಅತ್ಯಂತ ವಿವೇಕಯುತವಾಗಿ ನಡೆದುಕೊಂಡು ದಕ್ಷಿಣದ ರಾಜ್ಯಗಳಿಗೆ ಆಗಬಹುದಾಗಿದ್ದ ಅನ್ಯಾಯವನ್ನು ತಪ್ಪಿಸಿತ್ತು. ಈ ಎರಡು ಐತಿಹಾಸಿಕ ನಿರ್ಧಾರಗಳು ದಕ್ಷಿಣ ಭಾರತದ ಜನರು ಮತ್ತು ನಾಯಕರು ಮಾಡಿದ ತ್ಯಾಗವನ್ನು ಗೌರವಿಸುವಂತಿದ್ದವು.&lt;/p&gt;&lt;p&gt;ದಕ್ಷಿಣ ಭಾರತದ ರಾಜ್ಯಗಳು (ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ) ದಶಕಗಳಿಂದ ಜನಸಂಖ್ಯಾ ನಿಯಂತ್ರಣದಲ್ಲಿ ಯಶಸ್ಸು ಕಂಡಿವೆ. ಟೋಟಲ್ ಫರ್ಟಿಲಿಟಿ ರೇಟ್ (TFR &ndash; ಪ್ರತಿ ಮಹಿಳೆಗೆ ಸರಾಸರಿ ಮಕ್ಕಳ ಸಂಖ್ಯೆ):&lt;/p&gt;&lt;p&gt;&lt;strong&gt;- ಕೇರಳ ಮತ್ತು ತಮಿಳುನಾಡು: 1.8&lt;/strong&gt;&lt;/p&gt;&lt;p&gt;- ಆಂಧ್ರ, ತೆಲಂಗಾಣ, ಕರ್ನಾಟಕ: 1.7ರ ಸುಮಾರು&lt;/p&gt;&lt;p&gt;ಇದು ರಾಷ್ಟ್ರೀಯ ಸರಾಸರಿ 2.0ಕ್ಕಿಂತ ಕಡಿಮೆ.&lt;/p&gt;&lt;p&gt;ಉತ್ತರ ಭಾರತದಲ್ಲಿ: ಬಿಹಾರ 3.0+, ಉತ್ತರ ಪ್ರದೇಶ 2.7! ಇದು ಏನನ್ನು ಹೇಳುತ್ತಿದೆ ಎಂದರೆ ಉತ್ತರದ ಜನಸಂಖ್ಯೆ ಬೆಳೆಯುತ್ತಿದೆ, ದಕ್ಷಿಣ ಭಾರತದಲ್ಲಿ ಸ್ಥಿರವಾಗುತ್ತಿದೆ ಅಥವಾ ಕುಸಿಯುತ್ತಿದೆ. ಜಾಗತಿಕ ಸರಾಸರಿಯ ಮಾನದಂಡವಾದ 2.1 ಸರಾಸರಿಗಿಂತ ಕರ್ನಾಟಕದ (ಕನ್ನಡಿಗರ) ಜನಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿದ್ದು 1.7 ತಲುಪಿದೆ. ಇದೇ ಸಂದರ್ಭದಲ್ಲಿ ಉತ್ತರದ ರಾಜ್ಯಗಳಲ್ಲಿ ಅದು ಅಪಾಯಕಾರಿ ಮಟ್ಟದಲ್ಲಿಯೇ ಇದೆ.&lt;/p&gt;&lt;p&gt;ಕ್ಷೇತ್ರ ಪುನರ್ ವಿಂಗಡಣೆಯ ನಂತರ ಲೋಕಸಭಾ ಸ್ಥಾನಗಳು 543ರಲ್ಲೇ ಉಳಿದರೆ: ದಕ್ಷಿಣ ರಾಜ್ಯಗಳು ಒಟ್ಟು 24-27 ಸೀಟುಗಳನ್ನು ಕಳೆದುಕೊಳ್ಳಬಹುದು (ತಮಿಳುನಾಡು -9, ಕೇರಳ -6, ಕರ್ನಾಟಕ -3, ಆಂಧ್ರ -4, ತೆಲಂಗಾಣ -2). ಒಂದು ವೇಳೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಏರಿಸಿದರೆ ಉತ್ತರ ಪ್ರದೇಶ 80ರಿಂದ 120+, ಬಿಹಾರ 40ರಿಂದ 60+ಕ್ಕೆ ಏರಬಹುದು. ದಕ್ಷಿಣದ ಸ್ಥಾನಗಳ ಪಾಲು 24%ರಿಂದ 19%ಕ್ಕೆ ಕುಸಿಯುತ್ತದೆ. ಕರ್ನಾಟಕಕ್ಕೆ ಕೆಲವು ಹೆಚ್ಚಿನ ಸ್ಥಾನಗಳು ಸಿಗಬಹುದು. ಆದರೆ ಲೋಕಸಭೆಯಲ್ಲಿ ಪ್ರಾತಿನಿಧ್ಯದ ಪ್ರಮಾಣ ದೊಡ್ಡಮಟ್ಟದಲ್ಲಿ ಕುಸಿಯುತ್ತದೆ. ಇದು ದಕ್ಷಿಣದ ಇತರ ರಾಜ್ಯಗಳಿಗೂ ಅನ್ವಯಿಸುತ್ತದೆ.&lt;/p&gt;&lt;p&gt;&lt;strong&gt;ಇದು ಯಾವ ಸೀಮೆಯ ನ್ಯಾಯ?&lt;/strong&gt;&lt;/p&gt;&lt;p&gt;ದಕ್ಷಿಣವು ದೇಶದ ಜಿಡಿಪಿಗೆ 30-35% ಕೊಡುಗೆ ನೀಡುತ್ತದೆ. ಅತಿ ಹೆಚ್ಚು ತೆರಿಗೆಯನ್ನು ನೀಡುತ್ತದೆ. ಈಗ ಕರ್ನಾಟಕದ ಉದಾಹರಣೆಯನ್ನು ತೆಗೆದುಕೊಳ್ಳೋಣ. ಕರ್ನಾಟಕ ಭಾರತ ಸರ್ಕಾರಕ್ಕೆ ನೀಡುವ ಎಲ್ಲ ಬಗೆಯ ತೆರಿಗೆಗಳು (Direct Tax, GST, Customs, Excise, Cess, Surcharge ಎಲ್ಲವೂ ಸೇರಿ) ಮತ್ತು ಕೇಂದ್ರದಿಂದ ಹಿಂತಿರುಗುವ ಹಣದ ಅನುಪಾತವನ್ನು ಸರಾಸರಿಯಾಗಿ ಹೇಳುವುದಾದರೆ ಕರ್ನಾಟಕ ಪ್ರತಿ ವರ್ಷ ಕೇಂದ್ರಕ್ಕೆ ಸುಮಾರು ₹4.3 ಲಕ್ಷ ಕೋಟಿ ರುಪಾಯಿ (₹4,30,000 ಕೋಟಿ) ತೆರಿಗೆಯ ರೂಪದಲ್ಲಿ ಕೊಡುತ್ತದೆ. ಕೇಂದ್ರದಿಂದ ಕರ್ನಾಟಕಕ್ಕೆ ಹಿಂತಿರುಗುವುದು (Tax Devolution + Grants) ಸುಮಾರು ₹50,000 ಕೋಟಿ ರುಪಾಯಿ ಮಾತ್ರ (ಕೆಲವು ವರ್ಷಗಳಲ್ಲಿ ₹45,000 ರಿಂದ ₹79,000 ಕೋಟಿವರೆಗೆ ಇದೆ). ಸರಾಸರಿ ಅನುಪಾತ ನೋಡುವುದಾದರೆ ಭಾರತ ಸರ್ಕಾರಕ್ಕೆ ನಾವು ₹100 ಕೊಟ್ಟರೆ ಕರ್ನಾಟಕಕ್ಕೆ ಹಿಂದಿರುಗುವುದು ₹12 ರಿಂದ ₹15 ಮಾತ್ರ.&lt;/p&gt;&lt;p&gt;ಇದೇ ಸಂದರ್ಭದಲ್ಲಿ ಕೇಂದ್ರದಿಂದ ತೆರಿಗೆ ಹಂಚಿಕೆ (Tax Devolution)ಯಲ್ಲಿ ಉತ್ತರ ಪ್ರದೇಶ ರಾಜ್ಯವು ಸುಮಾರು 15.8% ಪಾಲು ಪಡೆಯುತ್ತದೆ. ಸರಾಸರಿ ಅನುಪಾತ ನೋಡುವುದಾದರೆ ಭಾರತ ಸರ್ಕಾರಕ್ಕೆ ಉತ್ತರ ಪ್ರದೇಶ ರಾಜ್ಯವು ತೆರಿಗೆ ರೂಪದಲ್ಲಿ ₹100 ಕೊಟ್ಟರೆ ಸುಮಾರು ₹170 ರಿಂದ ₹200 ಅವರಿಗೆ ವಾಪಸ್&zwnj; ಬರುತ್ತದೆ. ಬಿಹಾರ ರಾಜ್ಯದ ಕತೆಯೂ ಹೀಗೇ ಇದೆ. ಬಿಹಾರ ರಾಜ್ಯವು ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಸುಮಾರು 9.9% ರಿಂದ 10% ಪಾಲು ಪಡೆಯುತ್ತದೆ. ಸರಾಸರಿ ಅನುಪಾತ ನೋಡುವುದಾದರೆ ಪ್ರತಿ ₹100 ತೆರಿಗೆ ಕೊಟ್ಟರೆ ಸುಮಾರು ₹300 ರಿಂದ ₹700 ಬಿಹಾರಕ್ಕೆ ಹಿಂದಿರುಗುತ್ತದೆ!&lt;/p&gt;&lt;p&gt;ಇದನ್ನು ನಾವು ಯಾವ ಸೀಮೆಯ ನ್ಯಾಯ ಎಂದು ಕರೆಯಬೇಕು? ಜನಸಂಖ್ಯಾ ನಿಯಂತ್ರಣ ಮಾಡಿಕೊಂಡ ನಾವು ಶಿಕ್ಷೆ ಅನುಭವಿಸಬೇಕು, ನಿಯಂತ್ರಣ ಮಾಡಿಕೊಳ್ಳದ ರಾಜ್ಯಗಳು ಬಂಪರ್&zwnj; ಕೊಡುಗೆಗಳನ್ನು ಪಡೆಯಬೇಕು!&lt;/p&gt;&lt;p&gt;ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ದಕ್ಷಿಣ ಭಾರತದ ಶಾಂತಿಯನ್ನು ಕದಡಬೇಡಿ, ಇಲ್ಲಿ ಕ್ಷೋಭೆಯನ್ನು ಹೊತ್ತಿಸಬೇಡಿ ಎಂದು ಎಚ್ಚರಿಸಿದ್ದಾರೆ. ಎಲ್ಲ ದಕ್ಷಿಣ ರಾಜ್ಯಗಳೊಂದಿಗೆ ಜಂಟಿ ಕ್ರಿಯಾ ಸಮಿತಿ (ಜೆಎಸಿ) ರಚಿಸಿ ಪ್ರತಿಭಟನೆ ಮಾಡುವುದಾಗಿ ಹೇಳುತ್ತಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಡಿಲಿಮಿಟೇಶನ್ ಎಂಬುದು ದಕ್ಷಿಣ ಭಾರತದ ಮೇಲೆ ಡಾಮೋಕ್ಲೀಸ್ ಕತ್ತಿಯಂತೆ ಹೇರಲಾಗುತ್ತಿದೆ. ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಅನುಸರಿಸಿದ್ದಕ್ಕೆ ನಮಗೆ ಶಿಕ್ಷೆ ಸಿಗುತ್ತಿದೆ ಎಂದು ಹೇಳುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ: ಇದು ನರೇಂದ್ರ ಮೋದಿ ಸರ್ಕಾರ ದಕ್ಷಿಣ ರಾಜ್ಯಗಳ ವಿರುದ್ಧ ನಡೆಸುತ್ತಿರುವ ಸಂಚು. ಜನಸಂಖ್ಯೆ ನಿಯಂತ್ರಿಸಿದ್ದಕ್ಕೆ ನಾವು ಪಡೆದುಕೊಳ್ಳುತ್ತಿರುವ ಶಿಕ್ಷೆ ಎಂದು ಹೇಳುತ್ತಿದ್ದಾರೆ.&lt;/p&gt;&lt;p&gt;ಆದರೆ ಪ್ರಧಾನಿ ಮೋದಿ ಅವರು, ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಮೋಸದ ಮಾತು. ಸೀಟು ಕಳೆದುಕೊಳ್ಳುತ್ತೇವೆ ಎಂಬ ಆತಂಕ ನಮಗಿಲ್ಲ, ನಮಗಿರುವ ಆತಂಕ ನಮ್ಮ ಸ್ಥಾನಗಳ ಪ್ರಮಾಣ ಕುಸಿಯುತ್ತದೆ ಎಂಬುದು. ಅದು ಮೋದಿಯವರಿಗೆ ಗೊತ್ತಿಲ್ಲದ ವಿಷಯವೇನಲ್ಲ.&lt;/p&gt;&lt;p&gt;&lt;strong&gt;ಉತ್ತರ- ದಕ್ಷಿಣ ವಿಭಜನೆ ಇನ್ನಷ್ಟು ಆಳ&lt;/strong&gt;&lt;/p&gt;&lt;p&gt;ಕ್ಷೇತ್ರ ಪುನರ್ ವಿಂಗಡಣೆ ಜಾರಿಯಾದರೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಊಹಿಸಲು ಕಷ್ಟವೇನೂ ಆಗದು. ನಿಸ್ಸಂಶಯವಾಗಿ ಲೋಕಸಭೆಯಲ್ಲಿ ದಕ್ಷಿಣದ ಧ್ವನಿ ಕ್ಷೀಣವಾಗುತ್ತದೆ. ದೇಶದ ಭವಿಷ್ಯವನ್ನು ರೂಪಿಸುವ ಕಾನೂನು, ಬಜೆಟ್, ಯೋಜನೆಗಳು ಉತ್ತರದ ಪ್ರಭಾವಕ್ಕೆ ಒಳಗಾಗುತ್ತವೆ. ಉತ್ತರದ ರಾಜ್ಯಗಳು ಈಗಾಗಲೇ ಸಿಂಹಪಾಲನ್ನು ಪಡೆಯುತ್ತಿವೆ. ಅದು ದುಪ್ಪಟ್ಟಾಗುತ್ತದೆ. ದಕ್ಷಿಣದ ಕೃಷಿ, ಉದ್ಯಮ, ನೀರಾವರಿ, ತಂತ್ರಜ್ಞಾನ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಎಲ್ಲ ಯೋಜನೆಗಳು ನಿರ್ಲಕ್ಷಕ್ಕೆ ಒಳಗಾಗುತ್ತವೆ.&lt;/p&gt;&lt;p&gt;ಕ್ಷೇತ್ರ ಪುನರ್ ವಿಂಗಡಣೆ ಜಾರಿಯಾದರೆ ಪ್ರಾದೇಶಿಕ ಅಸಮಾನತೆ ಇನ್ನಷ್ಟು ಹೆಚ್ಚುತ್ತದೆ. ದಕ್ಷಿಣವು ಹೆಚ್ಚು ತೆರಿಗೆ ಕೊಡುತ್ತದೆ, ಆದರೆ ಪ್ರಾತಿನಿಧ್ಯ ಕಡಿಮೆಯಾದರೆ ಕೇಂದ್ರ ನೆರವು ಇನ್ನಷ್ಟು ಕಡಿಮೆಯಾಗುತ್ತದೆ. ಇದು ಆರ್ಥಿಕ ಅಸಮತೋಲನಕ್ಕೆ ಕಾರಣವಾಗುತ್ತದೆ.&lt;/p&gt;&lt;p&gt;ಮತ್ತೊಂದು ಬಹಳ ಮುಖ್ಯವಾದ ಅಂಶವೆಂದರೆ ಭಾರತದ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ. ಎಲ್ಲ ರಾಜ್ಯಗಳಿಗೆ ಸಮಾನ ಗೌರವ ಬೇಕು ಎಂಬ ನೀತಿ ಮೂಲೆಗೆ ಸೇರುತ್ತದೆ. ಅಷ್ಟೇ ಅಲ್ಲ ಉತ್ತರ-ದಕ್ಷಿಣ ವಿಭಜನೆಯನ್ನು ಇನ್ನಷ್ಟು ಆಳವಾಗಿಸುತ್ತದೆ.&lt;/p&gt;&lt;p&gt;ನಾವು ಅತ್ಯಂತ ಗಂಭೀರವಾಗಿ ಚಿಂತಿಸಬೇಕಾದ ಮತ್ತೊಂದು ಆಯಾಮವೂ ಇದೆ. ಇದು ದೇಶದ ಏಕತೆಗೆ ಧಕ್ಕೆ ತರುತ್ತದೆ. ದಕ್ಷಿಣದ ಜನರು ಈ ಅನ್ಯಾಯಗಳ ವಿರುದ್ಧ ಸಿಡಿದು ನಿಂತರೆ ಅದು ದೇಶದ ಒಗ್ಗಟ್ಟಿಗೆ ಮಾರಕವಾಗಲಿದೆ.&lt;/p&gt;&lt;p&gt;&lt;strong&gt;ಇದಕ್ಕೆಲ್ಲಾ ಪರಿಹಾರ ಏನು?&lt;/strong&gt;&lt;/p&gt;&lt;p&gt;ಹಾಗಿದ್ದರೆ ಇದಕ್ಕೆ ಪರಿಹಾರವೇನು ಎಂದು ಹಲವರು ಪ್ರಶ್ನಿಸಬಹುದು. ಜನಸಂಖ್ಯಾ ನಿಯಂತ್ರಣದಲ್ಲಿ ಎಲ್ಲ ಭಾಗದಲ್ಲೂ ಸ್ಥಿರತೆಯನ್ನು ಕಾಪಾಡಿಕೊಳ್ಳುವವರೆಗೆ ಕ್ಷೇತ್ರ ಪುನರ್ ವಿಂಗಡಣೆಯನ್ನು ಮುಂದೂಡಬೇಕಾಗುತ್ತದೆ. ಉತ್ತರದ ರಾಜ್ಯಗಳಿಗೆ ಇನ್ನೂ ಎಪ್ಪತ್ತೈದು ವರ್ಷಗಳ ಕಾಲಾವಧಿಯನ್ನು ನೀಡಿ, 2100ರವರೆಗೆ ಈಗಿನ ಲೋಕಸಭಾ ಸದಸ್ಯ ಸ್ಥಾನಗಳನ್ನು ಫ್ರೀಜ್ ಮಾಡುವುದು ಉತ್ತಮ. ಅದನ್ನು ಹೊರತಾಗಿ ಇನ್ಯಾವ ಪರಿಹಾರವೂ ಇಲ್ಲ ಎಂಬುದು ಸ್ಪಷ್ಟ. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆಯನ್ನು ಯಾಕೆ ಅನುಭವಿಸಬೇಕು?&lt;/p&gt;&lt;p&gt;ದಕ್ಷಿಣ ಭಾರತವು ಈಗಾಗಲೇ ದೇಶದ ಹಿತಕ್ಕಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿವೆ. ನಮ್ಮ ತೆರಿಗೆ ಹಣವು ಉತ್ತರದ ರಾಜ್ಯಗಳಿಗೆ ಹಂಚಿಕೆಯಾದರೂ ದೇಶದ ಒಗ್ಗಟ್ಟಿಗೆ ಧಕ್ಕೆಯಾಗಬಾರದೆಂದು ನಾವು ಹಲ್ಲು ಕಚ್ಚಿ ಸಹಿಸಿಕೊಂಡಿದ್ದೇವೆ. ನಾವು ದೇಶದ ಪ್ರಗತಿಗೆ ಯಾವತ್ತಿಗೂ ಮುಂಚೂಣಿಯಲ್ಲಿ ನಿಂತಿದ್ದೇವೆ. ಜಿಡಿಪಿಯನ್ನು ಹೆಚ್ಚಿಸಿದ್ದೇವೆ, ತಲಾದಾಯವನ್ನು ಹೆಚ್ಚಿಸಿದ್ದೇವೆ. ಜನಸಂಖ್ಯಾ ನಿಯಂತ್ರಣ ಆಗಬೇಕು ಎಂದು ಭಾರತ ಸರ್ಕಾರ ಹೇಳಿದಾಗಿನಿಂದ ಅದನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಜನಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದೇವೆ. ಇಷ್ಟಾದ ಮೇಲೂ ನಾವು ಇನ್ನೇನು ತ್ಯಾಗ ಮಾಡಬೇಕು?&lt;/p&gt;&lt;p&gt;ಉತ್ತರದ ರಾಜ್ಯಗಳ ಜನಸಂಖ್ಯಾ ಸ್ಫೋಟದಿಂದಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅಲ್ಲಿಂದ ಮಹಾವಲಸೆ ಅಬಾಧಿತವಾಗಿ ನಡೆಯುತ್ತಿದೆ. ಈ ವಲಸೆ ಇದೇ ಪ್ರಮಾಣದಲ್ಲಿ ನಡೆದರೆ ಮುಂದಿನ ಐವತ್ತು ವರ್ಷಗಳಲ್ಲಿ ಕನಿಷ್ಠ ಇಪ್ಪತ್ತು ಕೋಟಿ ಉತ್ತರ ಭಾರತೀಯರನ್ನು ದಕ್ಷಿಣ ಭಾರತಕ್ಕೆ ಕಳುಹಿಸುವ ಸಾಧ್ಯತೆ ಇದೆ. ಈ ಮಹಾವಲಸೆಯು ಈಗಾಗಲೇ ನಮ್ಮ ಅಸ್ಮಿತೆಯನ್ನು ನಾಶಮಾಡುತ್ತಿದೆ. ಇದು ಇನ್ನಷ್ಟು ತೀವ್ರವಾಗುತ್ತ ಹೋಗಲಿದೆ. ಇದರ ನಡುವೆ ಕ್ಷೇತ್ರ ಪುನರ್ ವಿಂಗಡಣೆಯ ಹೆಸರಿನಲ್ಲಿ ಭಾರತ ಸರ್ಕಾರ ನಮ್ಮ ಕುತ್ತಿಗೆಯ ಮೇಲೆ ಕಾಲಿಟ್ಟಿದೆ. ಈಗ ನಾವೇನು ಮಾಡಬೇಕು? ಯಾರ ಮೊರೆ ಹೋಗಬೇಕು?&lt;/p&gt;&lt;p&gt;ನಿಜ, ಭಾರತ ಮಾತೆಯನ್ನು ನಾವು ತಾಯಿ ಎಂದು ಆರಾಧಿಸಿದೆವು. ಆದರೆ ತಾಯ ಮೊಲೆ ಹಾಲು ನಂಜಾಗಿ ಹೋದರೆ ಏನು ಮಾಡುವುದು?&lt;/p&gt;&lt;p&gt;ಆದರೆ ಜನಸಾಮಾನ್ಯರ ಸಿಟ್ಟು ರಟ್ಟೆಗೆ ಬಂದರೆ ಅದನ್ನು ತಡೆಹಿಡಿಯುವವರು ಯಾರು? ದಕ್ಷಿಣ ಭಾರತ ಒಂದೇ ಬಾರಿಗೆ ಸಿಡಿದೆದ್ದು ನಿಂತರೆ ಅದರ ಹೊಡೆತವನ್ನು ನರೇಂದ್ರ ಮೋದಿಯವರ ಸರ್ಕಾರ ತಡೆದುಕೊಳ್ಳುವುದೇ? ಅಥವಾ ನಮ್ಮ ಮೇಲೂ ಮಿಲಿಟರಿಯನ್ನು ಬಿಟ್ಟು ನಮ್ಮ ಧ್ವನಿಯನ್ನು ಹತ್ತಿಕ್ಕುವುದೇ?&lt;/p&gt;&lt;p&gt;ಸನ್ನಿವೇಶ ನಿಜಕ್ಕೂ ಗಂಭೀರವಾಗಿದೆ. ನಮ್ಮನ್ನು ಆಳುವ ಜನರಿಗೆ ಆ ದೇವರು ಸದ್ಬುದ್ಧಿಯನ್ನು ಕೊಡಲಿ. ಇಂದಿರಾಗಾಂಧಿ, ವಾಜಪೇಯಿ ಅವರು ತೋರಿದ ವಿವೇಕವನ್ನು ನರೇಂದ್ರ ಮೋದಿಯವರೂ ತೋರುವಂತಾಗಲಿ ಎಂದು ಆಶಿಸುತ್ತೇನೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/delimitation-kannadigas-share-will-decrease-why-isnt-that-being-mentioned-krv-narayana-gowda-rav/articleshow-adgyynd"/>
        </item>
        <item>
            <title><![CDATA[TCSನಲ್ಲಿ ಉದ್ಯೋಗಿಗಳ ಮತಾಂತರ ಕಿರುಕುಳ ಕೇಸ್‌: ಬಂಧನ ಭೀತಿಯಲ್ಲಿ HR ನಿದಾ ಖಾನ್; ಗರ್ಭಿಣಿ ಎಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ!]]></title>
            <link>https://kannada.asianetnews.com/india-news/i-am-pregnant-nashik-tcs-conversion-case-accused-nida-khan-filed-anticipatory-bail/articleshow-qsydnsw</link>
            <guid isPermaLink="true">https://kannada.asianetnews.com/india-news/i-am-pregnant-nashik-tcs-conversion-case-accused-nida-khan-filed-anticipatory-bail/articleshow-qsydnsw</guid>
            <pubDate>Fri, 17 Apr 2026 11:33:04 +0530</pubDate>
            <description><![CDATA[&lt;p&gt;ಟಿಸಿಎಸ್&zwnj;ನ ನಾಸಿಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಒತ್ತಾಯಪೂರ್ವಕ ಮತಾಂತರ ಮತ್ತು ಕಿರುಕುಳ ಪ್ರಕರಣದ ಪ್ರಮುಖ ಆರೋಪಿ, ಹೆಚ್&zwnj;ಆರ್ ನಿದಾ ಖಾನ್ ತಾನು ಗರ್ಭಿಣಿ ಎಂದು ಹೇಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾೆಳೆ. ಈ ಪ್ರಕರಣದಲ್ಲಿ ಈಗಾಗಲೇ 7 ಮಂದಿ ಬಂಧಿತರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpcxm6yg9zcv79qvr2qewp4e,imgname-nida-khan--1776402701264.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ನಾನು ಗರ್ಭಿಣಿ ನನಗೆ ರಿಲೀಫ್ ಬೇಕು: ನಾಸಿಕ್ ಟಿಸಿಎಸ್ ಮತಾಂತರ ಕೇಸ್ ಆರೋಪಿ ನಿದಾ ಖಾನ್&lt;/strong&gt;&lt;/h2&gt;&lt;p&gt;ಮುಂಬೈ: ಟಿಸಿಎಸ್&zwnj; ಸಂಸ್ಥೆಯ ನಾಸಿಕ್ ಬ್ರಾಂಚ್&zwnj;ನಲ್ಲಿ ಉದ್ಯೋಗಿಗಳಿಗೆ ಒತ್ತಾಯಪೂರ್ವಕವಾಗಿ ಮತಾಂತರ ಆಗುವುದಕ್ಕೆ ಕಿರುಕುಳ ನೀಡಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಸ್ತುತ ತಲೆಮರೆಸಿಕೊಂಡಿರುವ ಐಟಿ ಸಂಸ್ಥೆ ಟಿಸಿಎಸ್&zwnj; ಸಂಸ್ಥೆಯ ಹೆಚ್&zwnj;ಆರ್ ನಿದಾ ಖಾನ್ ಈಗ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ತಾನು ಗರ್ಭಿಣಿಯಾಗಿದ್ದು, ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h3&gt;&lt;strong&gt;ಬಂಧನ ಭೀತಿಯಲ್ಲಿ HR ನಿದಾ ಖಾನ್; ಗರ್ಭಿಣಿ ಎಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ!&lt;/strong&gt;&lt;/h3&gt;&lt;p&gt;ಆಕೆಯ ಕುಟುಂಬದವರ ಪ್ರಕಾರ ನಿದಾ ಖಾನ್ ಪ್ರಸ್ತುತ ಮುಂಬೈನಲ್ಲಿ ಇದ್ದು, ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ಘಟನೆಯ ಬಳಿಕ ತಲೆ ಮರೆಸಿಕೊಂಡಿರುವ ಆಕೆ ನಾಸಿಕ್&zwnj;ನ ಸ್ಥಳೀಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ತನ್ನ ವೈದ್ಯಕೀಯ ಸ್ಥಿತಿಯನ್ನೇ ಆಕೆ ಈ ಅರ್ಜಿಯಲ್ಲಿ ಪ್ರಮುಖ ವಿಷಯವಾಗಿ ಆಕೆ ಉಲ್ಲೇಖಿಸಿದ್ದಾಳೆ ಎಂದು ವರದಿಯಾಗಿದೆ.&lt;/p&gt;&lt;h3&gt;&lt;strong&gt;2021ರಲ್ಲಿ ಟಿಸಿಎಸ್&zwnj; ಸೇರಿದ 25ರ ಹರೆಯದ ನಿದಾ ಖಾನ್&lt;/strong&gt;&lt;/h3&gt;&lt;p&gt;ಅಧಿಕಾರಿಗಳು ಆಕೆ ಗರ್ಭಿಣಿ ಎಂಬ ವಿಚಾರದ ಸತ್ಯಾಸತ್ಯತೆಯನ್ನು ವಿಶೇಷ ತನಿಖಾ ತಂಡದ ವೈದ್ಯಕೀಯ ಪರೀಕ್ಷೆಗಳ ಮೂಲಕ ಪರಿಶೀಲಿಸಲು ನಿರ್ಧರಿಸಿದ್ದು, ಆಕೆಯನ್ನು ಕಸ್ಟಡಿಗೆ ಪಡೆಯುವುದಕ್ಕೆ ಎಲ್ಲಾ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. 25 ವರ್ಷದ ನಿದಾ ಖಾನ್ 2021ರಲ್ಲಿ ಟಿಸಿಎಸ್&zwnj;ನ ನಾಸಿಕ್&zwnj;ನಲ್ಲಿರುವ ಬಿಪಿಒ ಘಟಕಕ್ಕೆ ಸೇರಿಕೊಂಡಿದ್ದಳು.&lt;/p&gt;&lt;h3&gt;&lt;strong&gt;ಪ್ರಕರಣದಲ್ಲಿ 7 ಮಂದಿಯ ಬಂಧನ&lt;/strong&gt;&lt;/h3&gt;&lt;p&gt;ಇಲ್ಲಿ ನಡೆದ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಹಾಗೂ ಒತ್ತಾಯಪೂರ್ವಕ ಮತಾಂತರದ ಬಗ್ಗೆ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 9 ಉದ್ಯೋಗಿಗಳು ನೀಡಿದ ದೂರಿನ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದು, ಇದುವರೆಗೆ ಈ ಪ್ರಕರಣದಲ್ಲಿ ಒಟ್ಟು 7 ಉದ್ಯೋಗಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಆರು ಜನ ಪುರುಷರು ಹಾಗೂ ಓರ್ವ ಮಹಿಳಾ ಹೆಚ್&zwnj;ಆರ್&zwnj; ಮುಖ್ಯಸ್ಥೆ ಆಗಿದ್ದಾರೆ.&lt;/p&gt;&lt;h3&gt;&lt;strong&gt;ಉದ್ಯೋಗಿಗಳು ನೀಡಿದ ದೂರಿನ ಬಗ್ಗೆ ನಿರ್ಲಕ್ಷ್ಯ&lt;/strong&gt;&lt;/h3&gt;&lt;p&gt;8 ಮಹಿಳಾ ಉದ್ಯೋಗಿಗಳು ನೀಡಿದ ದೂರನ್ನು ಆಧರಿಸಿ ಘಟನೆ ಬಗ್ಗೆ ತನಿಖೆಗೆ ಕಳೆದ ವಾರ ವಿಶೇಷ ತನಿಖಾ ತಂಡವನ್ನು ಪೊಲೀಸರು ರಚಿಸಿದ್ದಾರೆ. ಮಹಿಳಾ ಉದ್ಯೋಗಿಗಳ ದೂರಿನ ಪ್ರಕಾರ, ಅವರ ಹಿರಿಯ ಸಹೋದ್ಯೋಗಿಗಳು ಅವರನ್ನು ಮಾನಸಿಕವಾಗಿ ಲೈಂಗಿಕವಾಗಿ ಕಿರುಕುಳ ನೀಡಿ ಹಿಂಸಿಸಿದ್ದಾರೆ. ಈ ಬಗ್ಗೆ ಹೆಚ್&zwnj;ಆರ್&zwnj;ಗಳಿಗೆ ದೂರು ನೀಡಿದಾಗ ಹೆಚ್&zwnj;ಆರ್&zwnj;ಗಳು ಅವರ ದೂರಿನ ಬಗ್ಗೆ ವಿಚಾರಣೆ ಮಾಡದೇ ನಿರ್ಲಕ್ಷಿಸಿದ್ದಾರೆ. ಫೆಬ್ರವರಿ 2022 ಹಾಗೂ ಮಾರ್ಚ್ 2026ರ ನಡುವೆ ಈ ಘಟನೆ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂಓದಿ: &lt;/strong&gt;&lt;strong&gt;ತನಗೆ GAY Lord ಅಂತ ಹೆಸರಿಟ್ಟ ಪೋಷಕರ ವಿರುದ್ಧ ಕೋರ್ಟ್&zwnj; ಮೆಟ್ಟಿಲೇರಿದ್ದ ಯುವಕ&lt;/strong&gt;&lt;/p&gt;&lt;p&gt;ಅವರಲ್ಲಿ ಒಬ್ಬರ ಆರೋಪಿ ನಿರಂತರವಾಗಿ ಮಹಿಳಾ ಉದ್ಯೋಗಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಜೊತೆಗೆ ಆಕೆಗೆ ಮದುವೆಯ ಭರವಸೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ ಒಬ್ಬ ಆರೋಪಿ ಮಹಿಳಾ ಉದ್ಯೋಗಿಯೊಬ್ಬಳನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಲ್ಲವೇ ಆಕೆಯ ವೈಯಕ್ತಿಕ ಬದುಕಿನ ಬಗ್ಗೆ ಕೆಟ್ಟದಾಗಿ ರಿಮಾರ್ಕ್ ಮಾಡಿದ್ದಾನೆ.&lt;/p&gt;&lt;p&gt;ಕಚೇರಿಯಲ್ಲೇ ಇದ್ದ ಈ ಕಾಮುಕರ ಬಗ್ಗೆ ಮಹಿಳಾ ಉದ್ಯೋಗಿಗಳು ಕಂಪನಿಯ ಮುಖ್ಯ ಅಧಿಕಾರಿಗೆ ಅಲಿಖಿತ / ಮೌಖಿಕವಾಗಿ ದೂರು ನೀಡಿದಾಗ ಅವರು ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದಕ್ಕೆ ವಿಫಲರಾಗಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ ಆ ಮುಖ್ಯ ಅಧಿಕಾರಿ ಆರೋಪಿಗಳ ಕೃತ್ಯಕ್ಕೆ ಕುಮ್ಮಕ್ಕು ನೀಡಿ ಆರೋಪಿಗಳನ್ನು ಬೆಂಬಲಿಸಿದ್ದಾನೆ. ಅಲ್ಲದೇ ಆರೋಪಿಗಳಲ್ಲಿ ಓರ್ವ ಒಬ್ಬ ಪುರುಷ ಉದ್ಯೋಗಿಗೆ ನಮಾಜ್ ಮಾಡುವಂತೆ ಒತ್ತಾಯ ಮಾಡಿದ್ದಲ್ಲದೇ ಅವನ ಮೂಲ ಧರ್ಮವನ್ನು ಅವಮಾನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂಓದಿ: &lt;/strong&gt;&lt;strong&gt;ಗಂಡನ ಮನೆಗೆ ಹೋಗಬೇಡ ಎಂದು ಸೋದರತ್ತೆಯನ್ನು ತಬ್ಬಿ ಹಠ ಹಿಡಿದ ಪುಟಾಣಿ ಸೊಸೆ; ಎಲ್ಲರ ಕಣ್ಣಾಲಿಗಳು ತೇವ!&lt;/strong&gt;&lt;/p&gt;&lt;p&gt;ಈ ಪ್ರಕರಣದಲ್ಲಿ ಬಂಧಿತರಾಗಿ ಉದ್ಯೋಗದಿಂದ ಅಮಾನತಾಗಿರುವ ಉದ್ಯೋಗಿಗಳನ್ನು ದಾನಿಶ್ ಶೇಖ್, ತೌಸಿಫ್ ಅತ್ತರ್, ರಾಝಾ ಮೆಮನ್, ಶಾರುಖ್ ಖುರೇಶಿ, ಶಾಫಿ ಶೇಖ್, ಅಸೀಫ್ ಅಫ್ತಾಬ್ ಅನ್ಸಾರಿ ಹಾಗೂ ಹೆಚ್&zwnj; ಆರ್ ಮುಖ್ಯಸ್ಥೆಅಶ್ವಿನಿ ಚೈನಾನಿ ಎಂದು ಗುರುತಿಸಲಾಗಿದೆ.&lt;/p&gt;&lt;p&gt;ತನ್ನ ಸಂಸ್ಥೆಯೊಳಗೆ ನಡೆದಂತಹ ಈ ಆಘಾತಕಾರಿ ಘಟನೆಯ ಬಗ್ಗೆ ಟಿಸಿಎಸ್ ಭಾನುವಾರ ಹೇಳಿಕೆ ನೀಡಿದ್ದು, ಇಂತಹ ಕಿರುಕುಳದ ಬಗ್ಗೆ ಯಾವುದೇ ಸಹನೆ ಇಲ್ಲ, ಇಂತಹ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನಿಯಮವನ್ನು ಪಾಲಿಸಲಾಗುವುದು ಎಂಬ ಹೇಳಿಕೆ ನೀಡಿದೆ. ಟಿಸಿಎಸ್ ತುಂಬಾ ಹಿಂದಿನಿಂದಲೂ ಇಂತಹ ಕಿರುಕುಳಗಳ ವಿರುದ್ದಧ ಶೂನ್ಯ ಸಹಿಷ್ಣುತೆ ನಿಯಮವನ್ನು ಹೊಂದಿದೆ. ಕೆಲಸದ ಸ್ಥಳದಲ್ಲಿ ನಮ್ಮ ಉದ್ಯೋಗಿಗಳ ಸಂಪೂರ್ಣ ಸುರಕ್ಷತೆ ಹಾಗೂ ಯೋಗಕ್ಷೇಮ ನಮ್ಮ ಆದ್ಯತೆಯಾಗಿದೆ ಎಂದು ಟಿಸಿಸ್ ಸಂಸ್ಥೆ ಘಟನೆಯ ಬಳಿಕ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ನಮಗೆ ನಾಸಿಕ್&zwnj;ನ ಕಚೇರಿಯಲ್ಲಿ ನಡೆದ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ನಾವು ಕೂಡಲೇ ಕ್ರಮ ಕೈಗೊಂಡಿದ್ದೇವೆ ಹಾಗೂ ಈ ಪ್ರಕರಣದಲ್ಲಿ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಪ್ರಕರಣದಲ್ಲಿ ಉದ್ಯೋಗಿಗಳನ್ನು ವಿಚಾರಣೆ ನಡೆಸಲಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸರೊಂದಿಗೆ ತನಿಖೆಗೆ ಸಹಕರಿಸಲಾಗುತ್ತಿದೆ. ಪೊಲೀಸರ ತನಿಖೆ ಪೂರ್ಣಗೊಂಡ ನಂತರ ಅವರ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಟಿಸಿಎಸ್ ಸಂಸ್ಥೆ ಹೇಳಿದೆ.&lt;/p&gt;]]></content:encoded>
            <category>news</category>
            <dc:creator>Anusha Kb</dc:creator>
            <atom:link href="https://kannada.asianetnews.com/india-news/i-am-pregnant-nashik-tcs-conversion-case-accused-nida-khan-filed-anticipatory-bail/articleshow-qsydnsw"/>
        </item>
        <item>
            <title><![CDATA[ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್, ಮಹಿಳೆ ಮೇಲೆ ಹಲ್ಲೆ ಕೊಲೆ ಬೆದರಿಕೆ ಕೇಸ್]]></title>
            <link>https://kannada.asianetnews.com/state/justice-served-shivamogga-court-sentences-five-for-assault-and-criminal-intimidation/articleshow-o8lln1p</link>
            <guid isPermaLink="true">https://kannada.asianetnews.com/state/justice-served-shivamogga-court-sentences-five-for-assault-and-criminal-intimidation/articleshow-o8lln1p</guid>
            <pubDate>Fri, 17 Apr 2026 11:23:17 +0530</pubDate>
            <description><![CDATA[&lt;p&gt;ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್, ಮಹಿಳೆ ಮೇಲೆ ಹಲ್ಲೆ ಕೊಲೆ ಬೆದರಿಕೆ ಕೇಸ್ ಸಂಬಂಧ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಕಟಿಸಿದೆ. ಏನಿದು ಪ್ರಕರಣ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khadhzj3jrk4f60tggjf2m7a,imgname-uttar-pradesh-sonbhadra-minor-girl-rape-father-life-imprisonment-pocso-court-verdict-india-news-1-1770950032963.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಏ.17) &lt;/strong&gt;ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ ಯೋಗೇಶ್ ಗೌಡ ಕೊಲೆ ಪ್ರಕರಣ ಹಾಗೂ ವಿನಯ್ ಕುಲಕರ್ಣಿ ಶಿಕ್ಷೆ ಕೇಸ್ ನಡುವೆ ಇದೀಗ ಶಿವಮೊಗ್ಗದ ಅಂತರಗಂಗೆಯಲ್ಲಿ ನಡೆದಿದ್ದ ಹಲ್ಲೆ ಹಾಗೂ ಕೊಲೆ ಪ್ರಕರಣದ ತೀರ್ಪು ಹೊರಬಿದ್ದಿದೆ. ಭದ್ರಾವತಿ ತಾಲೂಕಿನ ಅಂತರಗಂಗೆಯಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ నిందిసి, ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಧಲ್ಲಿ ಅಪರಾಧಿಗಳಿಗೆ 2 ವರ್ಷ ಜೈಲು ಶಿಕ್ಷೆ ಜೊತೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.&lt;/p&gt;&lt;h2&gt;ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು&lt;/h2&gt;&lt;p&gt;2023ರಲ್ಲಿ ನಡೆದ ಈ ಪ್ರಕರಣ ಸಂಬಂಧ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಐವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ಅಂತರಗಂಗೆಯ ನವೀನ್ (25), ಮನು (31), ಕೆ ಸಂತೋಷ್(31), ಅಭಿಷೇಕ್ (24), ವಿ.ಮಂಜುನಾಥ&zwnj;ಗೆ(33) ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.&lt;/p&gt;&lt;h2&gt;ಏನಿದು ಪ್ರಕರಣ&lt;/h2&gt;&lt;p&gt;2023 ರ ಜೂನ್ 6 ರಂದು ರಾತ್ರಿ 11:45 ಸುಮಾರಿಗೆ ಅದೇ ಗ್ರಾಮದ ರಾಧಾ(35) ಎಂಬುವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ಮಾಡಿದ್ದಲ್ಲದೆ, ಜಾತಿ 'ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದರು. ರಾಧಾ ನೀಡಿದ ದೂರಿನ ಮೇರೆಗೆ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿ ಎಎಸ್&zwnj;ಪಿ ಜಿತೇಂದ್ರಕುಮಾರ ದಯಾಮ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಆರೋಪ ಸಾಬೀತಾಗಿದ್ದರಿಂದ ಐವರಿಗೂ ಕಾರಾವಾಸ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಪಿ.ರತ್ನಮ್ಮ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.&lt;/p&gt;&lt;h2&gt;ಯೋಗೇಶ್ ಗೌಡ ಪ್ರಕರಣ&lt;/h2&gt;&lt;p&gt;ಧಾರವಾಡ ಜಿಲ್ಲಾಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಲಯ 17 ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದೆ. ಈ ಪೈಕಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದ್ದಾರೆ. ಇಂದು (ಏ.17) ಕೋರ್ಟ್ ಎಲ್ಲಾ ಆರೋಪಿಗಳ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ಈ ಪ್ರಕರಣ ರಾಜ್ಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಈ ತೀರ್ಪಿನ ನಡುವೆ ಭದ್ರಾವತಿ ಕೋರ್ಟ್ ನೀಡಿದ ತೀರ್ಪು ಮಹತ್ವ ಪಡೆದುಕೊಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/justice-served-shivamogga-court-sentences-five-for-assault-and-criminal-intimidation/articleshow-o8lln1p"/>
        </item>
        <item>
            <title><![CDATA[ಅನಂತಕುಮಾರ್ ಹೆಗಡೆ ಪುತ್ರನ  ವಿರುದ್ಧದ ಗಲಾಟೆ ಪ್ರಕರಣಕ್ಕೆ ಹೈಕೋರ್ಟ್ ತಡೆ; ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ಕೇಸಿನಲ್ಲಿ ಸಿಲುಕಿದ್ದೇಕೆ?]]></title>
            <link>https://kannada.asianetnews.com/state/high-court-stays-proceedings-in-scuffle-case-against-former-minister-anant-kumar-hegdes-son-rav/articleshow-kihu5gh</link>
            <guid isPermaLink="true">https://kannada.asianetnews.com/state/high-court-stays-proceedings-in-scuffle-case-against-former-minister-anant-kumar-hegdes-son-rav/articleshow-kihu5gh</guid>
            <pubDate>Fri, 17 Apr 2026 11:15:54 +0530</pubDate>
            <description><![CDATA[&lt;p&gt;ಮಾಜಿ ಸಚಿವ ಅನಂತಕುಮಾರ್ ಹೆಗಡೆ ಪುತ್ರ ಅಶುತೋಷ್ ಹೆಗಡೆ ವಿರುದ್ಧದ ಗಲಾಟೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಎಫ್&zwnj;ಐಆರ್ ಅಥವಾ ಆರೋಪಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತ್ತು ಮೇಲ್ನೋಟಕ್ಕೆ ಅಪರಾಧದ ಆರೋಪಗಳಿಲ್ಲವೆಂದು ಪರಿಗಣಿಸಿ, ನ್ಯಾಯಪೀಠವು ಈ ಮಧ್ಯಂತರ ಆದೇಶವನ್ನು ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250701141517,imgname-image-408d05c9-671c-48f0-8364-ade811f01f6b.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು ಏ.17): &lt;/strong&gt;ಗುಂಪೊಂದರ ಜೊತೆ ಗಲಾಟೆ ಮಾಡಿಕೊಂಡ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ, ಬಿಜೆಪಿ ಮಾಜಿ ಸಂಸದ ಅನಂತಕುಮಾರ್&zwnj; ಹೆಗಡೆ ಪುತ್ರ ಅಶುತೋಷ್&zwnj; ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್&zwnj; ಗುರುವಾರ ತಡೆಯಾಜ್ಞೆ ನೀಡಿದೆ.&lt;/p&gt;&lt;p&gt;ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್&zwnj;ಐಆರ್&zwnj; ಮತ್ತು ಆರೋಪ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೇ ಇರುವುದರಿಂದ ಪ್ರಕರಣದಿಂದ ಕೈಬಿಡುವಂತೆ ಕೋರಿ ಅಶುತೋಷ್&zwnj; ಹೆಗಡೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಸ್&zwnj;.ಸುನೀಲ್&zwnj; ದತ್&zwnj; ಯಾದವ್&zwnj; ಅವರ ಪೀಠ ವಿಚಾರಣೆ ನಡೆಸಿತು.&lt;/p&gt;&lt;p&gt;ಅರ್ಜಿ ಕುರಿತು ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ನಾಲ್ಕನೇ ಆರೋಪಿ ಅಶುತೋಷ್&zwnj; ವಿರುದ್ಧ ಮೇಲ್ನೋಟಕ್ಕೆ ಅಪರಾಧವಾಗುವಂತಹ ಆರೋಪಗಳಿಲ್ಲ. ಮುಂದಿನ ವಿಚಾರಣೆಗೆ ಒಳಪಟ್ಟು ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಈ ಮಧ್ಯಂತರ ಆದೇಶ ನಾಲ್ಕನೇ ಆರೋಪಿಗೆ ಮಾತ್ರ ಸೀಮಿತವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಅಶುತೋಷ್&zwnj; ಪರ ವಕೀಲ ಪವನ್&zwnj;ಚಂದ್ರ ಶೆಟ್ಟಿ ಅವರು, ಎಫ್&zwnj;ಐಆರ್&zwnj; ಅಥವಾ ಆರೋಪ ಪಟ್ಟಿಯಲ್ಲಿ ಅಶುತೋಷ್&zwnj; ಹೆಸರಿಲ್ಲ. ತನ್ನ ಅಜ್ಜನನ್ನು ನೋಡಲು ಅವರು ಭಾರತಕ್ಕೆ ಬಂದಿದ್ದರು. ತಂದೆಯ ಅಧಿಕೃತ ಕಾರಿನಲ್ಲಿ ವಾಪಸ್&zwnj; ಬರುವಾಗ ಕೃತ್ಯ ನಡೆದಿದೆ. ಅದರಲ್ಲಿ ಅಶುತೋಷ್&zwnj; ಪಾತ್ರವಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.&lt;/p&gt;&lt;p&gt;ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್&zwnj;.ಜಗದೀಶ್&zwnj; ಅವರು, ಅರ್ಜಿಯಲ್ಲಿ ಮೊದಲಿಗೆ ಅಶುತೋಷ್&zwnj; ಪಕ್ಷಕಾರರಾಗಿಲ್ಲ. ಹೀಗಾಗಿ, ಅರ್ಜಿಯನ್ನು ತಿದ್ದುಪಡಿ ಮಾಡಿ ಅಥವಾ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದರೆ ನ್ಯಾಯಾಲಯದ ಅದನ್ನು ಪರಿಗಣಿಸಬೇಕು ಎಂದು ಕೋರಿದರು.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ:&lt;/h2&gt;&lt;p&gt;ತುಮಕೂರಿನಲ್ಲಿ ಮದುವೆಗೆ ಹೋಗಿ, ಮುಸ್ಲಿಂ ಸಮುದಾಯದ ಏಳು ಮಂದಿ ಇನ್ನೋವಾ ಕಾರಿನಲ್ಲಿ ಹಳೇ ನಿಜಗಲ್&zwnj; ಬಳಿ ಬರುತ್ತಿದ್ದಾಗ ಹಿಂದಿನಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಕಾರಿನ ಚಾಲಕ ನಮ್ಮ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ನಿಲುಗಡೆ ಮಾಡುತ್ತಿದ್ದಂತೆಯೇ ಮುಖಕ್ಕೆ ಗುದ್ದಿದರು. ಮತ್ತೊಬ್ಬ ವ್ಯಕ್ತಿ ನಮ್ಮನ್ನು ಕಾರಿನಿಂದ ಹೊರಗೆ ಎಳೆದುಕೊಂಡು ಹಲ್ಲೆ ನಡೆಸಿದರು. ಇದರಿಂದ&zwnj; ಕಾರಿನಲ್ಲಿದ್ದ ಸಲ್ಮಾನ್&zwnj; ಖಾನ್&zwnj; ಅವರ ಮೂರು ಹಲ್ಲುಗಳು ಮುರಿದಿವೆ. ಅನಂತ್&zwnj; ಕುಮಾರ್&zwnj; ಹೆಗಡೆ ಕಾರಿನಲ್ಲಿದ್ದರು. ಅವರು ಕರೆದ ತಕ್ಷಣವೇ ಉಳಿದವರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮ ತಾಯಿ ಮೇಲೆ ಅನಂತ್&zwnj; ಕುಮಾರ್&zwnj; ಹಲ್ಲೆ ನಡೆಸಿದರು. ಭದ್ರತಾ ಸಿಬ್ಬಂದಿ ಪಿಸ್ತೂಲ್&zwnj; ತೋರಿಸಿ ಜೀವ ಬೆದರಿಕೆ ಹಾಕಿದರು ಎಂದು ಎಂದು ಗಾಯಾಳು, ಹಾಲೇನಹಳ್ಳಿಯ ಸೈಫ್&zwnj; ಖಾನ್&zwnj; ದೂರು ನೀಡಿದ್ದರು.&lt;/p&gt;&lt;p&gt;ದೂರು ಆಧರಿಸಿ ದಾಬಸ್&zwnj; ಠಾಣೆಯ ಪೊಲೀಸರು ಅನಂತ್&zwnj; ಕುಮಾರ್&zwnj; ಹೆಗಡೆ, ಭದ್ರತಾ ಸಿಬ್ಬಂದಿ ಶ್ರೀಧರ್&zwnj; ಹಾಗೂ ಕಾರು ಚಾಲಕ ಮಹೇಶ್&zwnj; ವಿರುದ್ಧ ಬಿಎನ್&zwnj;ಎಸ್&zwnj; ಸೆಕ್ಷನ್&zwnj;ಗಳಾದ 117 (ಸ್ವಯಂಪ್ರೇರಿತವಾಗಿ ತೀವ್ರ ಹಾನಿ ಮಾಡುವುದು), 126 (ತಪ್ಪಾಗಿ ನಿರ್ಬಂಧಿಸುವುದು), 74 (ಮಹಿಳೆಯ ನಮ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗವನ್ನು ಶಿಕ್ಷಿಸಲು ಅವಕಾಶ ನೀಡುತ್ತದೆ), 351(4) (ಅನಾಮಧೇಯ ಕ್ರಿಮಿನಲ್ ಬೆದರಿಕೆ) ಪ್ರಕರಣ ದಾಖಲಿಸಿದ್ದರು.&lt;/p&gt;&lt;p&gt;ಈ ಪ್ರಕರಣ ಕುರಿತ ಎಫ್&zwnj;ಐಆರ್ ರದ್ದುಪಡಿಸುವಂತೆ ಕೋರಿ ಅನಂತ್&zwnj; ಕುಮಾರ್&zwnj; ಹೆಗಡೆ, ಭದ್ರತಾ ಸಿಬ್ಬಂದಿ ಶ್ರೀಧರ್&zwnj; ಹಾಗೂ ಕಾರು ಚಾಲಕ ಮಹೇಶ್&zwnj; ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/high-court-stays-proceedings-in-scuffle-case-against-former-minister-anant-kumar-hegdes-son-rav/articleshow-kihu5gh"/>
        </item>
        <item>
            <title><![CDATA[TCS Love Jihad ಬೇಧಿಸಲು ಟಾಯ್ಲೆಟ್​ ತೊಳೆದ ಪೊಲೀಸರು! ಹಿಂದೂಗಳ ಬುರ್ಖಾ ಸೆಲ್ಫಿ- ಸಿನಿಮಾ ಮೀರಿಸೋ ಸ್ಟೋರಿ]]></title>
            <link>https://kannada.asianetnews.com/india-news/tcs-love-jihad-case-lady-police-in-guise-of-house-keepers-suc/articleshow-7s2s2ns</link>
            <guid isPermaLink="true">https://kannada.asianetnews.com/india-news/tcs-love-jihad-case-lady-police-in-guise-of-house-keepers-suc/articleshow-7s2s2ns</guid>
            <pubDate>Thu, 16 Apr 2026 20:28:00 +0530</pubDate>
            <description><![CDATA[ನಾಸಿಕ್&zwnj;ನ ಟಾಟಾ ಕನ್ಸಲ್ಟೆನ್ಸಿ (ಟಿಸಿಎಸ್) ಕಚೇರಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳಾ ಕಾನ್ಸ್&zwnj;ಟೇಬಲ್&zwnj;ಗಳು ಹೌಸ್ ಕೀಪಿಂಗ್ ಸಿಬ್ಬಂದಿಯ ಮಾರುವೇಷದಲ್ಲಿ ಸಾಕ್ಷ್ಯ ಸಂಗ್ರಹಿಸಿ, ಹಿಂದೂ ಯುವತಿಯರನ್ನು ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಜಾಲದ ಕಿಂಗ್&zwnj;ಪಿನ್ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbcqyxhb77ezfwdqc1esy7v,imgname-love-jihad-1776351443889.jpg" type="image/jpeg" height="390" width="690"/>
            <content:encoded><![CDATA[&lt;p&gt;ಲವ್​ ಜಿಹಾದ್​ ಎನ್ನೋದು ಇದೀಗ ಭಾರಿ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ದಿ ಕೇರಳ ಸ್ಟೋರಿಯಲ್ಲಿ ತೋರಿದ ಪ್ರತಿಯೊಂದು ಅಂಶದಂತೆ, ಅದೇ ಮಾದರಿಯಲ್ಲಿ ಪ್ರತಿಯೊಂದು ಲವ್ ಜಿಹಾದ್​ (Love Jihad) ನಡೆಯುತ್ತಿದೆ. ಅದೇ ಒಬ್ಬಳು ಹುಡುಗಿ, ಅದೇ ಬುದ್ಧಿ ಇಲ್ಲದ ಹಿಂದೂ ಹುಡುಗಿಯರು, ಅದೇ ರೀತಿಯ ಬ್ರೈನ್​ ವಾಷ್​, ಅಲ್ಲೊಬ್ಬ ಸ್ಮಾರ್ಟ್​ ಹುಡುಗ, ಹುಡುಗನನ್ನು ಪರಿಚಯ ಮಾಡಿಸುವ ಅವನ ಗ್ಯಾಂಗ್​ನವರು, ಆ ಹುಡುಗನ ಶ್ರೀಮಂತಿಕೆಗೋ, ಲವ್​ ಮಾಡುವ ವಿಧಾನಕ್ಕೋ ಇನ್ನಾವುದಕ್ಕೋ ಮನಸೋಲುವ ಹಿಂದೂ ಹುಡುಗಿಯರು... ಎಲ್ಲವೂ ಸೇಮ್​ ಟು ಸೇಮ್​. ಅದೂ ಸೋ ಕಾಲ್ಡ್​ ಎಜುಕೇಟೆಡ್​ ಎನ್ನುವ ಹುಡುಗಿಯರು ಎನ್ನುವುದು ಮಾತ್ರ ತೀವ್ರ ಅಚ್ಚರಿ ತರುವಂಥ ಹಾಗೂ ಅಷ್ಟೇ ನಿಗೂಢವಾಗಿರುವ ವಿಷಯವಾಗಿದೆ.&lt;/p&gt;&lt;h2&gt;&lt;strong&gt;ಟಾಟಾ ಕನ್ಸಲ್​ಟೆನ್ಸಿಯ ಲವ್​ ಜಿಹಾದ್​&lt;/strong&gt;&lt;/h2&gt;&lt;p&gt;ಇದೀಗ ಮಹಾರಾಷ್ಟ್ರದ ನಾಸಿಕ್​ನಲ್ಲಿ ಟಾಟಾ ಕನ್ಸಲ್​ಟೆನ್ಸಿಯ ಲವ್​ ಜಿಹಾದ್​ ಪ್ರಕರಣ ಮಾತ್ರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹಿಂದೂ ಅಪ್ಪ-ಅಮ್ಮ ತಮ್ಮ ಹೆಣ್ಣುಮಕ್ಕಳು ಉದ್ಯೋಗಕ್ಕೇ ಕಳುಹಿಸಲು ಬೆದರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಕಿಂಗ್​ಪಿನ್​ ನಿದಾ ಖಾನ್​ (Nida Khan- Love Jihad). ಅಷ್ಟಕ್ಕೂ ಈ ಪ್ರಕರಣವನ್ನು ಭೇದಿಸಲು ಪೊಲೀಸರು ಸಿನಿಮಾ ಸ್ಟೋರಿಯನ್ನೂ ಮೀರುವ ರೀತಿಯಲ್ಲಿ ಕಾರ್ಯಾಚರಣೆ ಮಾಡಿರುವ ಸಂಗತಿ ಇದೀಗ ಬಯಲಿದೆ ಬಂದಿದೆ.&lt;/p&gt;&lt;h3&gt;&lt;strong&gt;ಪೊಲೀಸರು ಮಾಡಿದ್ದೇನು?&lt;/strong&gt;&lt;/h3&gt;&lt;p&gt;ಮೊದಲಿಗೆ ನಾಲ್ಕು ಜನ ಫೀಮೇಲ್ ಕಾನ್​ಸ್ಟೆಬಲ್​ಗಳನ್ನು ಟಿಸಿಎಸ್ ನ ಒಳಗಡೆ ಕೆಲಸಕ್ಕೆ ಅಂತ ಸೇರಿಸಿದರು, ಅದೂ ಮಾರುವಷದಲ್ಲಿ. ಹೌಸ್ ಕೀಪಿಂಗ್ ಕೆಲಸವದು. ಅಷ್ಟಕ್ಕೂ ಈ ಕಂಪೆನಿಯಲ್ಲಿ ಜಾಬ್ ತಗೊಳ್ಬೇಕು ಅಂತಂದ್ರೆ ಅದಕ್ಕೆ ಅದರದೇ ಆದ ಕ್ವಾಲಿಫಿಕೇಶನ್ ಇರುತ್ತದೆ. ಆದರೆ ಹೌಸ್​ ಕೀಪಿಂಗ್​ ಔಟ್​ ಸೋರ್ಸ್​ ಮಾಡುವ ಕಾರಣ ಆ ಏಜೆನ್ಸಿಗೆ ಹೋದ ಪೊಲೀಸರು ನಮ್ಮವರು ನಾಲ್ಕು ಜನ ಅಲ್ಲಿ ಕೆಲಸಕ್ಕೆ ಕಳಿಸಿ ಎಂದರು. ಪಾಪ ಅಲ್ಲಿ ಅವರ ಕೆಲಸ ಕಸ ಗುಡಿಸುವುದು, ಟಾಯ್ಲೆಟ್ ಕ್ಲೀನ್ ಮಾಡುವುದು, ನೆಲ ಒರೆಸುವುದು, ಕಾಫಿ ಟೀ ಕೊಡುವುದು ಇತ್ಯಾದಿ.&lt;/p&gt;&lt;p&gt;ಕೊನೆಗೆ ಒಂದೊಂದೇ ಸಾಕ್ಷ್ಯ ಸಂಗ್ರಹ ಮಾಡಿದರು. ಅಲ್ಲಿಯ ಲವ್​ ಜಿಹಾದ್​ನ ದೊಡ್ಡ ಪ್ರಪಂಚವೇ ತೆರೆದುಕೊಂಡಿತು. ಒಂದೊಂದೇ ಸಾಕ್ಷ ಸಂಗ್ರಹ ಮಾಡಿದ ಬಳಿಕ ಕೊನೆಗೆ ಒಬ್ಬ ಸಿಕ್ಕ. ಪೊಲೀಸರು ಅವನನ್ನು ಅರೆಸ್ಟ್ ಮಾಡಿಕೊಂಡು ಬಂದರು. ಅವನು ನನಗೇನೂ ಗೊತ್ತಿಲ್ಲ ಎಂದ, ಇನ್ನೊಬ್ಬನ ಹೆಸರು ಹೇಳಿದ. ಅವನ ಮೊಬೈಲ್ ತೆಗೆದರೆ ಹಿಂದೂ ಹುಡುಗಿಯರು ಹಿಜಾಬ್ ಹಾಕೊಂಡು ನಿಕಾಬ್ ಹಾಕೊಂಡು ಕಳಿಸಿರುವ ಫೋಟೋಗಳು ಸೆಲ್ಫಿಗಳು ಅವನ ಮೊಬೈನ್​ನಲ್ಲಿ ಕಂಡವು. ಹಿಂದೂ ಹುಡುಗಿಯರನ್ನು ಮರಳು ಮಾಡುವ ಹಿಂದೆ ನಿದಾ ಖಾನ್ ಕೈವಾಡ ಇರುವುದು ತಿಳಿಯಿತು. ಪೊಲೀಸರು ತನ್ನ ಚೇಲಾಗಳನ್ನು ಅರೆಸ್ಟ್​ ಮಾಡುತ್ತಿದ್ದಂತೆಯೇ ಆಕೆ ಎಸ್ಕೇಪ್​ ಆಗಿದ್ದಾಳೆ.&lt;/p&gt;&lt;h3&gt;&lt;strong&gt;ಬುರ್ಖಾ ನಮಾಜ್​&lt;/strong&gt;&lt;/h3&gt;&lt;p&gt;ಅಷ್ಟಕ್ಕೂ ಈ ಹಿಂದೂ ಹುಡುಗಿಯರು ಇವರ ಬಲೆಗೆ ಬಿದ್ದು, ಮನೆಯಲ್ಲಿ ಯಾರಿಗೂ ತಿಳಿಯದಂತೆ ಬುರ್ಖಾ ಹಾಕಿಕೊಂಡು ನಮಾಜ್​ ಮಾಡುತ್ತಾ, ತಾನು ಇದೆಲ್ಲಾ ಮಾಡುತ್ತಿದ್ದೇನೆ ಎಂದು ಈ ಅರೆಸ್ಟ್​ ಆದ ಆಸಾಮಿಗೆ ಫೋಟೋ ಕಳಿಸುತ್ತಿದ್ದುದು ತಿಳಿಯಿತು. ಇವೆಲ್ಲರೂ ಶ್ರೀಮಂತ ಮನೆತನದವರಾಗಿದ್ದರಿಂದ ಅವರಿಗೇ ಆದ ಸೆಪೆರೇಟ್​ ರೂಮ್​ಗಳು ಇರುತ್ತಿದ್ದುದರಿಂದ ಅಪ್ಪ-ಅಮ್ಮನಿಗೆ ತಮ್ಮ ಮಗಳು ಹೀಗೆಲ್ಲಾ ಮಾಡುತ್ತಿದ್ದಾಳೆ ಎನ್ನೋದು ಅರಿವೇ ಇರಲಿಲ್ಲ. ಕೊನೆಗೆ ಒಬ್ಬಳ ಪೋಷಕರಿಗೆ ಮಗಳ ಸ್ವಭಾವದ ಬಗ್ಗೆ ಡೌಟ್​ ಬರುತ್ತಲೇ ವಿಷಯ ಬೆಳಕಿಗೆ ಬಂದು, ಪೊಲೀಸರು ಮಾರುವೇಷದ ಕಾರ್ಯಾಚರಣೆ ನಡೆಸಿದ್ದಾರೆ.&lt;/p&gt;&lt;p&gt;ನಿದಾ ಖಾನ್​ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದಾಳೆ. ಅದು ಎಷ್ಟು ವ್ಯವಸ್ಥಿತ ಪ್ರದೇಶ ಎಂದರೆ ಎಲ್ಲರೂ ಮುಸ್ಲಿಂಮರು, ಎಲ್ಲರೂ ಬುರ್ಖಾ ಹಾಕಿಕೊಂಡವರು. ಆದ್ದರಿಂದ ಪೊಲೀಸರಿಗೆ ಅವಳನ್ನು ಹಿಡಿಯುವುದೇ ದೊಡ್ಡ ತಲೆನೋವಾಗಿದೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/tcs-love-jihad-case-lady-police-in-guise-of-house-keepers-suc/articleshow-7s2s2ns"/>
        </item>
        <item>
            <title><![CDATA[ಮಹಿಳಾ ಮೀಸಲು ವಿಧೇಯಕಕ್ಕೆ ಬಹುಮತದ ಕೊರತೆ; ಮೋದಿ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ]]></title>
            <link>https://kannada.asianetnews.com/india-news/lack-of-majority-for-the-women-s-reservation-bill-a-litmus-test-for-the-modi-government-today-rav/articleshow-ut6yl6i</link>
            <guid isPermaLink="true">https://kannada.asianetnews.com/india-news/lack-of-majority-for-the-women-s-reservation-bill-a-litmus-test-for-the-modi-government-today-rav/articleshow-ut6yl6i</guid>
            <pubDate>Fri, 17 Apr 2026 06:47:30 +0530</pubDate>
            <description><![CDATA[ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಕುರಿತ ವಿಧೇಯಕಗಳನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದ್ದು, ಎನ್&zwnj;ಡಿಎಗೆ ಸಂಖ್ಯಾಬಲದ ಕೊರತೆ ಇರುವುದರಿಂದ ವಿಪಕ್ಷಗಳ ಬೆಂಬಲವಿಲ್ಲದೆ ಈ ವಿಧೇಯಕದ ಭವಿಷ್ಯ ಅನಿಶ್ಚಿತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpcczdevn8g0m8c3n4mqn1mv,imgname-fotojet---2026-04-17t055023.016-1776385242587.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.17): &lt;/strong&gt;ಲೋಕಸಭೆ ಹಾಗೂ ವಿಧಾಮನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆಯ ಕುರಿತಾದ ಮಹತ್ವದ ಮೂರು ವಿಧೇಯಕಗಳನ್ನು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ. ಇವುಗಳ ಕುರಿತು ಶುಕ್ರವಾರ ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ.&lt;/p&gt;&lt;p&gt;ಸಾಂವಿಧಾನಿಕ ತಿದ್ದುಪಡಿ ಇರುವ ಕಾರಣ ಈ ಮಸೂದೆಗಳನ್ನು ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸುವುದು ಕಡ್ಡಾಯ. ಆದರೆ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್&zwnj;ಡಿಎ ಕೂಟಕ್ಕೆ ಅಷ್ಟು ಬಲ ಇಲ್ಲ. ಮತ್ತೊಂದೆಡೆ ವಿಪಕ್ಷಗಳು ಈ ವಿಧೇಯಕವನ್ನು ವಿರೋಧಿಸುವುದಾಗಿ ಘೋಷಿಸಿವೆ. ಹೀಗಾಗಿ ವಿಧೇಯಕ ಅಂಗೀಕಾರ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವ ತಂತ್ರ ರೂಪಿಸಲಿದೆ ಎಂಬ ಕುತೂಹಲ ಮೂಡಿದೆ.&lt;/p&gt;&lt;p&gt;ಒಂದು ವೇಳೆ ಈಗಾಗಲೇ ಘೋಷಿಸಿರುವಂತೆ ವಿಪಕ್ಷಗಳು, ಮಹಿಳಾ ಮೀಸಲು ವಿಧೇಯಕ ವಿರೋಧಿಸಿದರೆ ಅದನ್ನು ಮುಂಬರುವ ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮತ್ತು ಮುಂಬರುವ ದಿನಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಮುಖ ವಿಷಯವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ವಿಪಕ್ಷಗಳ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;p&gt;ಮಂಡನೆ:&lt;/p&gt;&lt;p&gt;ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ವಿಧೇಯಕ ಸೇರಿ 3 ಮಸೂದೆಗಳನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಅದರ ಬಗ್ಗೆ ಆಡಳಿತ ಮತ್ತು ವಿಪಕ್ಷಗಳು ಸುದೀರ್ಘ ಚರ್ಚೆ ನಡೆಸಿವೆ.&lt;/p&gt;&lt;p&gt;ವಿಧೇಯಕ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್&zwnj; ಶಾ ಸೇರಿ ಬಿಜೆಪಿಯ ನಾಯಕರು ಮಹಿಳಾ ಮೀಸಲು ಜಾರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮಹಿಳಾ ಮೀಸಲು ಜಾರಿಯಿಂದ ಪುರುಷರಿಗಾಗಲೀ ಅಥವಾ ದಕ್ಷಿಣದ ಸೇರಿದಂತೆ ಯಾವುದೇ ರಾಜ್ಯಗಳಿಗಾಗಲೀ ಅನ್ಯಾಯವಾಗದು. ಶೇ.50ರಷ್ಟು ಸೀಟು ಹೆಚ್ಚಳದ ಕಾರಣ ಎಲ್ಲಾ ರಾಜ್ಯಗಳು ಏರಿಕೆಯ ಲಾಭ ಪಡೆದುಕೊಳ್ಳಲಿವೆ. ಲೋಕಸಭಾ ಸ್ಥಾನವನ್ನು 543ರಿಂದ 816ಕ್ಕೆ ಏರಿಸುವ ಕಾರಣ ಮಹಿಳೆಯರಿಗೆ 272 ಸೀಟು ಲಭ್ಯವಾಗಲಿವೆ ಎಂದು ಭರವಸೆ ನೀಡಿದ್ಧಾರೆ. ಆದರೆ ಮತ್ತೊಂದೆಡೆ, ಈ ಮಸೂದೆ ಅಂಗೀಕಾರವಾದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಕಥೆಯೇ ಮುಗಿದು ಹೋಗಲಿವೆ ಎಂದು ಕಳವಳ ವ್ಯಕ್ತಪಡಿಸಿವೆ.&lt;/p&gt;&lt;h2&gt;ಮಹಿಳಾ ಮೀಸಲಾತಿಗಿಂದು ಅಗ್ನಿಪರೀಕ್ಷೆ:&lt;/h2&gt;&lt;p&gt;ಲೋಕಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಳ್ಳಲು 360 ಮತಗಳ ಅಗತ್ಯವಿದೆ. ಆದರೆ ಎನ್&zwnj;ಡಿಎ ಬಲ ಇರುವುದು 293 ಮಾತ್ರ. ವಿಪಕ್ಷಗಳ ಬಲ 233 ಇದೆ. ಉಳಿದಂತೆ 7 ಪಕ್ಷೇತರರು, 7 ಜನ ವೈಎಸ್&zwnj;ಆರ್&zwnj;ಪಿ, ಎಂಐಎಂ, ಶಿರೋಮಣಿ ಅಕಾಲಿದಳ ಸದಸ್ಯರಿದ್ದಾರೆ. ಆದರೆ ಇವರು ಇನ್ನೂ ಬಹಿರಂಗವಾಗಿ ತಮ್ಮ ನಿರ್ಧಾರ ಪ್ರಕಟಿಸಿಲ್ಲ.&lt;/p&gt;&lt;p&gt;ಹೀಗಾಗಿ ವಿಧೇಯಕ ಅಂಗೀಕಾರಕ್ಕೆ 360 ಮತಗಳನ್ನು ಪಡೆಯಲು, ಒಂದೋ ಅತಿದೊಡ್ಡ ವಿಪಕ್ಷವಾಗಿರುವ ಕಾಂಗ್ರೆಸ್&zwnj; (98) ಬೆಂಬಲಿಸಬೇಕು. ಇಲ್ಲದೇ ಹೋದಲ್ಲಿ ಎಸ್&zwnj;ಪಿ (37), ಟಿಎಂಸಿ (28), ಡಿಎಂಕೆ (22) ಪೈಕಿ ಯಾವುದಾದರೂ ಎರಡು ಪಕ್ಷಗಳು ಬೆಂಬಲಿಸಬೇಕು. ಒಂದು ವೇಳೆ ಬೆಂಬಲಿಸದಿದ್ದರೂ, ಮತದಾನದ ವೇಳೆ ಗೈರಾದರು ಸದನದ ಬಲ ಕುಸಿದು ಸರ್ಕಾರ ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಬಹುದು.&lt;/p&gt;&lt;p&gt;ಒಂದು ವೇಳೆ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾದರೆ ಮಾತ್ರವೇ ಅದನ್ನು ರಾಜ್ಯಸಭೆಯಲ್ಲೂ ಪರಿಗಣಿಸಲಾಗುವುದು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/lack-of-majority-for-the-women-s-reservation-bill-a-litmus-test-for-the-modi-government-today-rav/articleshow-ut6yl6i"/>
        </item>
        <item>
            <title><![CDATA[ಕ್ಷೇತ್ರ ಪುನರವಿಂಗಡಣೆ: ದಕ್ಷಿಣಕ್ಕೆ ಅನ್ಯಾಯ ಆಗಲ್ಲ, ಇದು ಗ್ಯಾರಂಟಿ: ಪ್ರಧಾನಿ ಮೋದಿ]]></title>
            <link>https://kannada.asianetnews.com/india-news/delimitation-no-injustice-will-be-done-to-the-south-this-is-my-guarantee-says-pm-modi-rav/articleshow-od66f32</link>
            <guid isPermaLink="true">https://kannada.asianetnews.com/india-news/delimitation-no-injustice-will-be-done-to-the-south-this-is-my-guarantee-says-pm-modi-rav/articleshow-od66f32</guid>
            <pubDate>Fri, 17 Apr 2026 07:06:43 +0530</pubDate>
            <description><![CDATA[&lt;p&gt;ಲೋಕಸಭೆ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಸ್ಥಾನಗಳು ಗಣನೀಯವಾಗಿ ಹೆಚ್ಚಾಗಲಿವೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpaymqtp9hd169n0s6dada43,imgname-pm-modi-new-1776336658262.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.17): &lt;/strong&gt;ಭಾರೀ ಕುತೂಹಲ ಮೂಡಿಸಿದ್ದ ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆಗೆ ವೇದಿಕೆಯಾಗಿರುವ ಲೋಕಸಭೆ ವಿಶೇಷ ಅಧಿವೇಶನದಲ್ಲಿ ಆ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, &lsquo;ಕ್ಷೇತ್ರಗಳ ಪುನರ್&zwnj;ವಿಂಗಡಣೆಯಿಂದ ದಕ್ಷಿಣ ಸೇರಿದಂತೆ ಯಾವ ರಾಜ್ಯಗಳಿಗೂ ಅನ್ಯಾಯ ಆಗುವುದಿಲ್ಲ&rsquo; ಎಂಬ ಭರವಸೆ ನೀಡಿದ್ದಾರೆ. ಅತ್ತ ಪ್ರತಿಪಕ್ಷ ಕಾಂಗ್ರೆಸ್&zwnj;, &lsquo;ಮೋದಿ ಉದ್ದೇಶಪೂರ್ವಕವಾಗಿ ಕ್ಷೇತ್ರ ಮರುವಿಂಗಡಣೆ ವಿಷಯದ ಬಗ್ಗೆ ಮಾತನಾಡಲಿಲ್ಲ&rsquo; ಎಂದು ಆರೋಪಿಸಿದೆ.&lt;/p&gt;&lt;p&gt;ಮಹಿಳಾ ಮೀಸಲು ತಿದ್ದುಪಡಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಆಯೋಗ ರಚನೆಗೆ ಸಂಬಂಧಿಸಿದ ಮಸೂದೆ ಮಂಡನೆಯಾದ ಬಳಿಕ ಸದನವನ್ನುದ್ದೇಶಿಸಿ ಮಾತನಾಡಿದ ಮೋದಿ, &lsquo;ಈ ಪ್ರಕ್ರಿಯೆಯಲ್ಲಿ ಉತ್ತರದಿಂದ ದಕ್ಷಿಣದ ವರೆಗೆ, ಪೂರ್ವದಿಂದ ಪಶ್ಚಿಮದ ವರೆಗೆ ಯಾವ ರಾಜ್ಯಗಳಿಗೂ ಅನ್ಯಾಯ ಆಗುವುದಿಲ್ಲ. ಯಾವುದೇ ರಾಜ್ಯದ ಲೋಕಸಭಾ ಸೀಟುಗಳ ಅನುಪಾತದಲ್ಲಿ ಇಳಿಕೆ ಆಗದು. ಹೆಚ್ಚಳವಾದರೂ ಅದು ಎಲ್ಲರಿಗೂ ಸಮಾನವಾಗಿರುತ್ತದೆ ಎಂದು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ&rsquo; ಎಂದರು.&lt;/p&gt;&lt;h2&gt;ಮೀಸಲಾತಿ ಮಹಿಳೆಯರ ಹಕ್ಕು:&lt;/h2&gt;&lt;p&gt;ಸದನದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಪ್ರಾತಿನಿಧ್ಯ ಕೊಡುವ ಬಗ್ಗೆ ಮಾತನಾಡುತ್ತಾ, &lsquo;ಮೀಸಲಾತಿ ಮಹಿಳೆಯರ ಹಕ್ಕು. ನಾವು ಅವರಿಗೆ ಏನೋ ಕೊಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಯಾರೂ ಇರಬಾರದು. ಇದು ರಾಷ್ಟ್ರೀಯ ಹಿತಾಸಕ್ತಿಯ ನಿರ್ಧಾರವಾಗಿದೆ. ದೇಶ-ವಿದೇಶಗಳಲ್ಲಿರುವ ಮಹಿಳೆಯರು ನಮ್ಮನ್ನು ನೋಡುತ್ತಿದ್ದಾರೆ ಹಾಗೂ ನಮ್ಮ ಉದ್ದೇಶವನ್ನು ಅಳೆಯುತ್ತಿದ್ದಾರೆ. 2023ರಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದ್ದಾಗ ಅವಸರಿಸಲಾಯಿತು. ಆದರೆ ಈಗ ಅದಕ್ಕಾಗಿ ಸಮಯ ತೆಗೆದುಕೊಂಡು ಮಾಡುತ್ತಿದ್ದೇವೆ. ಈ ಕೆಲಸಕ್ಕಿದು ಸಕಾಲ&rsquo; ಎಂದು ಪ್ರತಿಪಾದಿಸಿದರು.&lt;/p&gt;&lt;p&gt;ಜತೆಗೆ, &lsquo;ಮಹಿಳಾ ಮೀಸಲನ್ನು ವಿರೋಧಿಸಿದವರನ್ನು ಈ ದೇಶದ ಸ್ತ್ರೀಯರು ಮರೆತಿಲ್ಲ. ಈಗಲೂ ನೀವದನ್ನು ವಿರೋಧಿಸಿದರೆ ರಾಜಕೀಯವಾಗಿ ನನಗೇ ಲಾಭವಾಗುತ್ತದೆ. ಆದರೆ ಇದನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ನನಗಿದರ ಶ್ರೇಯ ಬೇಡ. ಇದನ್ನು ಗ್ಯಾರೆಂಟಿ ಎನ್ನಬಹುದು ಇಲ್ಲವೇ ಭರವಸೆ ಎನ್ನಲೂಬಹುದು. ಉದ್ದೇಶ ಸ್ಪಷ್ಟವಾಗಿದ್ದರೆ ಪದಗಳೊಂದಿಗೆ ಆಟವಾಡುವ ಅಗತ್ಯ ಇರುವುದಿಲ್ಲ &rsquo; ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.&lt;/p&gt;&lt;h2&gt;ಸ್ತ್ರೀಯರು ಇನ್ನು ಕಾಯೋದಿಲ್ಲ:&lt;/h2&gt;&lt;p&gt;&lsquo;ಕಳೆದ 25-30 ವರ್ಷಗಳಲ್ಲಿ ಪಂಚಾಯಿತಿ ಚುನಾವಣೆಗಳಲ್ಲಿ ಗೆದ್ದ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಇದೆ. ಮೊದಲಾದರೆ ಎಲ್ಲಾ ತಿಳಿದಿದ್ದರೂ ಮಾತನಾಡುತ್ತಿರಲಿಲ್ಲ. ಆದರೆ ಈಗ ಅವರು ಅನ್ನಿಸಿದ್ದನ್ನು ಹೇಳುತ್ತಾರೆ. ಇನ್ನು ಸಂಕೀರ್ಣ ಕಾರ್ಯವಿಧಾನದ ನೆಪವೊಡ್ಡಿ ಅವರನ್ನು ಕಾಯಿಸಿದರೆ, ಅವರು ತಾಳ್ಮೆ ಕಳೆದುಕೊಳ್ಳುತ್ತಾರೆ&rsquo; ಎಂದ ಮೋದಿ, &lsquo;ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕೇವಲ ಸಂಖ್ಯೆಯಲ್ಲ, ಬದಲಿಗೆ ಪ್ರಜಾಪ್ರಭುತ್ವ ಮೌಲ್ಯಗಳ ಪ್ರತಿ ಇರುವ ಬದ್ಧತೆಯಾಗಿದೆ&rsquo; ಎಂದು ಹೇಳಿದರು.&lt;/p&gt;&lt;p&gt;ನಾರಿಶಕ್ತಿಯನ್ನು ಬಣ್ಣಿಸುತ್ತಾ, &lsquo;ಎಲ್ಲಾ ವಯೋಮಾನದ ಸ್ತ್ರೀಯರು ದೇಶದ ಹೆಮ್ಮೆಯನ್ನು ಹೆಚ್ಚಿಸುತ್ತಿದ್ದಾರೆ. ದೇಶದ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರು ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತಗಳನ್ನು ಮಾಡುತ್ತಿದ್ದಾರೆ. ಅವರ ಪಾಲ್ಗೊಳ್ಳುವಿಕೆಯಿಂದ ದೇಶದ ಸಾಮರ್ಥ್ಯ ಹೆಚ್ಚಲಿದೆ. ತಳಮಟ್ಟದಲ್ಲಿ ನಾಯಕಿಯರು ಹುಟ್ಟಿಕೊಂಡು ನಿರ್ಧಾರ ಕೈಗೊಳ್ಳುವಲ್ಲಿ ತೊಡಗಿದರೆ, ಇದು ವಿಕಸಿತ ಭಾರತ ನಿರ್ಮಾಣಕ್ಕಿದು ಪ್ರಮುಖವಾಗಲಿದೆ&rsquo; ಎಂದರು.&lt;/p&gt;&lt;h3&gt;ಉದ್ದೇಶಪೂರ್ವಕ ಕುರುಡು-ಕೈ:&lt;/h3&gt;&lt;p&gt;ಪ್ರಧಾನಿಯವರ ಭಾಷಣವನ್ನು ಟೀಕಿಸಿರುವ ಕಾಂಗ್ರೆಸ್&zwnj;, &lsquo;ಕ್ಷೇತ್ರ ಮರುವಿಂಗಡಣೆ ಬಿಟ್ಟು ಬೇರೆಲ್ಲಾ ವಿಷಯಗಳ ಬಗ್ಗೆ ಮೋದಿ ಮಾತನಾಡಿದರು. ಇದು, ಆ ವಿಷಯದ ಬಗ್ಗೆ ಅವರ ಉದ್ದೇಶಪೂರ್ವಕ ಕುರುಡುತನವನ್ನು ತೋರಿಸುತ್ತದೆ&rsquo; ಎಂದು ವ್ಯಂಗ್ಯವಾಡಿದೆ.&lt;/p&gt;&lt;p&gt;ಕಾಂಗ್ರೆಸ್&zwnj; ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್&zwnj; ಅವರು ಮೋದಿಯನ್ನು &lsquo;ಗೃಹಸ್ಥರಲ್ಲದ ಪ್ರಧಾನಿ&rsquo; ಎಂದು ಸಂಬೋಧಿಸುತ್ತಾ, &lsquo;ಮಸೂದೆ ಬಗ್ಗೆ ಎದ್ದಿರುವ ಯಾವೊಂದೂ ಕಳವಳದ ಬಗ್ಗೆ ಉಲ್ಲೇಖವನ್ನೇ ಮಾಡಿಲ್ಲ. ಎಲ್ಲಾ ಪಕ್ಷಗಳೂ ಸರ್ವಾನುಮತದಿಂದ ಮಸೂದೆಗಳನ್ನು ಅಂಗೀಕರಿಸಬೇಕೆಂದು ಅವರು ಕರೆ ನೀಡಿರುವರಾದರೂ, ಅಂತಹ ವಿಶ್ವಾಸ ಗಳಿಸುವ ಕೆಲಸವನ್ನು ಅವರ ಸರ್ಕಾರ ಮಾಡಿಯೇ ಇಲ್ಲ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳು ಮುಗಿದಮೇಲೆ ಸರ್ವಪಕ್ಷ ಸಭೆ ಕರೆಯುವಂತೆ ವಿಪಕ್ಷ ನಾಯಕ ರಾಹುಲ್&zwnj; ಗಾಂಧಿ ಆಗ್ರಹಿಸಿದರೂ ಅದನ್ನು ತಿರಸ್ಕರಿಸಲಾಯಿತು. ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿಲ್ಲ. ಅವರ ಆತಂಕಗಳನ್ನೂ ಕಠೋರವಾಗಿ ತಿರಸ್ಕರಿಸಲಾಯಿತು. ಆ ಪ್ರಕ್ರಿಯೆಯ ಬಗ್ಗೆ ಲಿಖಿತರೂಪದಲ್ಲೂ ಸ್ಪಷ್ಟ ಮಾಹಿತಿ ನೀಡಿಲ್ಲ&rsquo; ಎಂದು ಆರೋಪಗಳ ಸುರಿಮಳೆಗೈದರು.&lt;/p&gt;&lt;p&gt;ಜತೆಗೆ, &lsquo;ಮಹಿಳೆಯರಿಗೆ ನೀಡಲಾಗುವ ಶೇ.33ರಷ್ಟು ಮೀಸಲಾತಿಯ ಒಳಗೆ ಎಸ್&zwnj;ಸಿ ಮತ್ತು ಎಸ್&zwnj;ಟಿಗೆ ಸೇರಿದವರಿಗೆ ಮೀಸಲಾತಿಯನ್ನು ನೀಡಬೇಕು. ಈ ಆಗ್ರಹವನ್ನೂ ಅವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ&rsquo; ಎಂದೂ ಆಪಾದಿಸಿದರು.&lt;/p&gt;&lt;p&gt;ದಕ್ಷಿಣಕ್ಕೆ ಅನ್ಯಾಯ ಆಗಲ್ಲ: ಅಮಿತ್&zwnj; ಶಾ&lt;/p&gt;&lt;p&gt;&lt;strong&gt;ದಕ್ಷಿಣ ಭಾರತದ ಲೋಕ ಸೀಟು 129ರಿಂದ 195ಕ್ಕೆ&lt;/strong&gt;&lt;/p&gt;&lt;h3&gt;ಶೇ.50ರಷ್ಟು ಸೀಟು ಏರಿಕೆಯಿಂದ ಲಾಭ: ಗೃಹ ಸಚಿವ&lt;/h3&gt;&lt;p&gt;\\Bನವದೆಹಲಿ:\\B ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಲೋಕಸಭಾ ಸ್ಥಾನ ಮತ್ತು ಸಂಸತ್ತಿನ ಒಟ್ಟು ಸ್ಥಾನದಲ್ಲಿ ಶೇಕಡವಾರು ಪ್ರಮಾಣ ಇಳಿಕೆಯಾಗುತ್ತದೆ ಎಂಬ ಅಸಮಾಧಾನದ ನಡುವೆಯೇ, ಈ ವಾದವನ್ನು ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಅಲ್ಲಗಳೆದಿದ್ದು, &lsquo;ಸುಳ್ಳು ನಿರೂಪಣೆಯನ್ನು ಹರಡಲಾಗುತ್ತಿದೆ&rsquo; ಎಂದಿದ್ದಾರೆ. ಅಲ್ಲದೆ ಅಂಕಿ ಅಂಶಗಳ ಸಮೇತ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಸ್ಥಾನ, ಪಾಲು ಹೇಗೆ ಏರಿಕೆಯಾಗುತ್ತದೆ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಗುರುವಾರ ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪರ ಮಾತನಾಡಿದ ಅಮಿತ್&zwnj; ಶಾ &lsquo;ಸದ್ಯ 129 ಲೋಕಸಭಾ ಸ್ಥಾನ ಹೊಂದಿರುವ ದಕ್ಷಿಣದ 5 ರಾಜ್ಯಗಳ ಬಲವು, ಕ್ಷೇತ್ರ ಮರುವಿಂಗಡಣೆಯ ಬಳಿಕ 195ಕ್ಕೆ ಏರಲಿದೆ. ಶೇಕಡವಾರು ನೋಡುವುದಾದರೆ ದಕ್ಷಿಣದ ಪಾಲು ಶೇ.23.76ರಿಂದ ಶೇ.23.87 ಅಥವಾ ಶೇ.24ಕ್ಕೆ ತಲುಪಲಿದೆ. ಇದು ಸೀಟು ಮತ್ತು ಪಾಲು ಎರಡೂ ಏರಿಕೆಗೆ ಸಾಕ್ಷಿ ಎಂದು ಹೇಳಿದರು&lt;/p&gt;&lt;p&gt;ಜೊತೆಗೆ ದಕ್ಷಿಣದ ರಾಜ್ಯವಾರು ಮಾಹಿತಿ ಹಂಚಿಕೊಂಡ ಶಾ, &lsquo;ಕರ್ನಾಟಕದಲ್ಲಿ ಈಗಿರುವ 28 ಸೀಟುಗಳು ಪ್ರಮಾಣ 42ಕ್ಕೇರಲಿದೆ. ಅಂತೆಯೇ ಆಂಧ್ರದಲ್ಲಿ 25ರಿಂದ 38ಕ್ಕೆ, ತೆಲಂಗಾಣದಲ್ಲಿ 17ರಿಂದ 26ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59ಕ್ಕೆ, ಕೇರಳದಲ್ಲಿ 20ರಿಂದ 30ಕ್ಕೆ ಏರಿಕೆ ಆಗಲಿದೆ&rsquo; ಎಂದು ಶಾ ಮಾಹಿತಿ ನೀಡಿದರು. ಈ ಮೂಲಕ, ಶೇ.50ರಷ್ಟು ಏರಿಕೆಯಾಗಲಿದೆ ಎಂಬ ಸುಳಿವು ನೀಡಿದರು.&lt;/p&gt;&lt;p&gt;ಇದೇ ವೇಳೆ, &lsquo;ಕಾಂಗ್ರೆಸ್&zwnj; ಸರ್ಕಾರ ತಂದ ಕ್ಷೇತ್ರ ಮರುವಿಂಗಡಣೆ ಕಾನೂನಲ್ಲಿ ಎನ್&zwnj;ಡಿಎ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಒಂದು ಪೂರ್ಣವಿರಾಮ, ಅಲ್ಪವಿರಾಮ ಕೂಡ ಬದಲಾಗಿಲ್ಲ&rsquo; ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಜೊತೆಗೆ 2029ರ ಲೋಕಸಭಾ ಚುನಾವಣೆವರೆಗೆ ನಡೆಯುವ ಎಲ್ಲಾ ಚುನಾವಣೆಗಳು ಹಾಲಿ ಇರುವ ಸ್ವರೂಪದಲ್ಲೇ ಮುಂದುವರೆಯಲಿದೆ ಎಂದು ಹೇಳಿದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/delimitation-no-injustice-will-be-done-to-the-south-this-is-my-guarantee-says-pm-modi-rav/articleshow-od66f32"/>
        </item>
        <item>
            <title><![CDATA[ಚಿನ್ನ ಸ್ಮಗ್ಲಿಂಗ್ ಕೇಸ್‌ನಲ್ಲಿ ನಟಿ ರನ್ಯಾಗೆ ಸುಪ್ರೀಂನಲ್ಲಿ ಹಿನ್ನಡೆ, ಸಿಇಐಬಿ ಕಾಫಿಪೋಸಾ ಬಂಧನ ಎತ್ತಿಹಿಡಿದ ಕೋರ್ಟ್]]></title>
            <link>https://kannada.asianetnews.com/gallery/state/supreme-court-upholds-cofeposa-detention-of-actress-ranya-rao-in-gold-smuggling-case-gdp-u7at7xx</link>
            <guid isPermaLink="true">https://kannada.asianetnews.com/gallery/state/supreme-court-upholds-cofeposa-detention-of-actress-ranya-rao-in-gold-smuggling-case-gdp-u7at7xx</guid>
            <pubDate>Fri, 17 Apr 2026 11:03:02 +0530</pubDate>
            <description><![CDATA[&lt;p&gt;ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್&zwnj;ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಕಾಫಿಪೋಸಾ ಕಾಯ್ದೆಯಡಿ ಅವರ ಮುನ್ನೆಚ್ಚರಿಕಾ ಬಂಧನವನ್ನು ನ್ಯಾಯಾಲಯ ಎತ್ತಿಹಿಡಿದಿದ್ದು, ಅವರ ಪರವಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ವಜಾಗೊಳಿಸಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jq9qrd9hev3j63z28kzhas4y,imgname-ranya-rao.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್&zwnj;ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಕಾಫಿಪೋಸಾ ಕಾಯ್ದೆಯಡಿ ಅವರ ಮುನ್ನೆಚ್ಚರಿಕಾ ಬಂಧನವನ್ನು ನ್ಯಾಯಾಲಯ ಎತ್ತಿಹಿಡಿದಿದ್ದು, ಅವರ ಪರವಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ವಜಾಗೊಳಿಸಿದೆ. &amp;nbsp;&lt;/p&gt;&lt;img&gt;&lt;p&gt;ನವದೆಹಲಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಿತ್ರನಟಿ ರನ್ಯಾ ರಾವ್ ಗೆ ಸುಪ್ರೀಂ ಕೋರ್ಟ್&zwnj;ನಲ್ಲಿ ದೊಡ್ಡ ಹಿನ್ನಡೆ ಉಂಟಾಗಿದೆ. ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ (CEIB) ಹೊರಡಿಸಿದ್ದ ಮುನ್ನೆಚ್ಚರಿಕಾ ಬಂಧನ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದ್ದು, ಈ ಮೂಲಕ ನಟಿಯ ಪರವಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಈ ಮಹತ್ವದ ತೀರ್ಪು ನೀಡಿದೆ. ರನ್ಯಾ ರಾವ್ ಅವರ ತಾಯಿ ಹಾಗೂ ಇನ್ನೊಬ್ಬ ಆರೋಪಿ ಸಾಹಿಲ್ ಸರ್ಕರಿಯಾ ಜೈನ್ ಅವರ ಸೋದರ ಸಂಬಂಧಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಾಲಯ ತಳ್ಳಿ ಹಾಕಿದೆ.&lt;/p&gt;&lt;img&gt;&lt;p&gt;ತೀರ್ಪಿನಲ್ಲಿ ನ್ಯಾಯಪೀಠವು, ಬಂಧನ ಆದೇಶವು ಸಂವಿಧಾನದ ಅನುಚ್ಛೇದ 22(3)(ಬಿ) ಉಲ್ಲಂಘನೆಯಡಿ ಹೊರಡಿಸಲಾಗಿಲ್ಲ ಎಂಬುದನ್ನು ಅಧಿಕಾರಿಗಳು ಸಮರ್ಪಕವಾಗಿ ಸಾಬೀತುಪಡಿಸಿದ್ದಾರೆ. ಜೊತೆಗೆ, COFEPOSA ಕಾಯ್ದೆಯ ವಿಧಿ 8(ಇ) ಮತ್ತು ಸಂವಿಧಾನದ ಅನುಚ್ಛೇದ 22(3)(ಬಿ) ಪ್ರಕಾರ ಮುನ್ನೆಚ್ಚರಿಕಾ ಬಂಧನಕ್ಕೊಳಗಾದವರಿಗೆ ಕಾನೂನು ಸಹಾಯವನ್ನು ಹಕ್ಕಿನ ರೂಪದಲ್ಲಿ ಬೇಡುವ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.&lt;/p&gt;&lt;img&gt;&lt;p&gt;ಪ್ರಕರಣದ ವಿವರಗಳ ಪ್ರಕಾರ, ರನ್ಯಾ ರಾವ್ ಅವರನ್ನು 2025ರ ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ದುಬೈನಿಂದ ಅಕ್ರಮವಾಗಿ ಸುಮಾರು 14 ಕೆ.ಜಿ. ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಅವರು ದೇಹದಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ 12.56 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧನದ ಬಳಿಕ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ, 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2.67 ಕೋಟಿ ರೂಪಾಯಿ ನಗದು ಹಣವನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದರು.&lt;/p&gt;&lt;img&gt;&lt;p&gt;ಈ ಪ್ರಕರಣ ಸಂಬಂಧ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (DRI) ಮತ್ತು ಸಿಬಿಐ ದಾಖಲಿಸಿದ್ದ ಎಫ್&zwnj;ಐಆರ್ ಆಧಾರವಾಗಿ ಜಾರಿಗೆ ನಿರ್ದೇಶನಾಲಯ (ED) ತನಿಖೆ ಆರಂಭಿಸಿತ್ತು. ತನಿಖೆಯಲ್ಲಿ ಆಶ್ಚರ್ಯಕರ ಮಾಹಿತಿಗಳು ಬಹಿರಂಗವಾಗಿದ್ದು, ಆರೋಪಿಗಳು 2024ರ ಮಾರ್ಚ್&zwnj;ನಿಂದ 2025ರ ಮಾರ್ಚ್ ಅವಧಿಯೊಳಗೆ ಒಟ್ಟು 102.55 ಕೋಟಿ ರೂಪಾಯಿ ಮೌಲ್ಯದ 127 ಕೆ.ಜಿ. ಚಿನ್ನವನ್ನು ವಿದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಕಳ್ಳ ಸಾಗಣೆ ಮಾಡಿರುವುದು ಪತ್ತೆಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ, ಕಳೆದ ಒಂದು ವರ್ಷದಿಂದ ಜೈಲಿನಲ್ಲಿರುವ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್&zwnj;ನ ಈ ತೀರ್ಪು ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಮತ್ತು ತನಿಖೆಯ ಮೇಲಿನ ಗಮನ ಇದೀಗ ಹೆಚ್ಚಿದೆ.&lt;/p&gt;&lt;img&gt;&lt;p&gt;ವಿದೇಶದಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನ ಕಳ್ಳ ಸಾಗಿಸಿದ ಪ್ರಕರಣದಲ್ಲಿ ನಟಿ ರನ್ಯಾ ರಾವ್&zwnj;, ತರುಣ್&zwnj; ಕೊಂಡೂರು ರಾಜು ಮತ್ತು ಸಾಹೀಲ್&zwnj; ಜೈನ್&zwnj; ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (ಕಾಫಿಪೋಸಾ) ಅಡಿ ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಕೂಡ ಕಳೆದ 2025ರ ಡಿಸೆಂಬರ್&zwnj;ನಲ್ಲಿ ಎತ್ತಿ ಹಿಡಿದಿತ್ತು. ಕಾಫಿಪೋಸಾ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲು ಬಂಧನ ಮಾಡಿರುವುದು ಕಾನೂನುಬಾಹಿರವೆಂದು ಘೋಷಿಸುವಂತೆ ಕೋರಿ ರನ್ಯಾ ತಾಯಿ ಎಚ್&zwnj;.ಎಸ್&zwnj;.ರೋಹಿಣಿ, ತರುಣ್&zwnj; ಅವರ ತಾಯಿ ರಮಾ ರಾಜು ಮತ್ತು ಸಾಹೀಲ್&zwnj; ಜೈನ್&zwnj; ತಾಯಿ ಪ್ರಿಯಾಂಕಾ ಸರ್ಕಾರಿಯಾ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿಗಳಾದ ಅನು ಶಿವರಾಮನ್&zwnj; ಅವರ ನೇತೃತ್ವದ ವಿಭಾಗೀಯ ಪೀಠ ಮಹತ್ವದ ಆದೇಶ ಹೊರಡಿಸಿತ್ತು. ಈ ಮೂವರು ಆರೋಪಿಗಳ ಮೇಲೆ ಕಾಫಿಫೋಸಾ ಅಡಿ ಹೇರಿ ಕೇಂದ್ರ ಸರ್ಕಾರದ ಹಣಕಾಸು, ಕಂದಾಯ ಇಲಾಖೆ, ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿ ಏ.22ರಂದು ಆದೇಶಿಸಿದ್ದರು. ಈ ಕ್ರಮ ಕಾನುನು ಬಾಹಿರವೆಂದು ಘೋಷಿಸುವಂತೆ ಕೋರಿ ಅರ್ಜಿದಾರರು ಹೇಬಿಯಸ್&zwnj; ಕಾರ್ಪಸ್&zwnj; ಅರ್ಜಿ ಸಲ್ಲಿಸಿದ್ದರು.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/supreme-court-upholds-cofeposa-detention-of-actress-ranya-rao-in-gold-smuggling-case-gdp-u7at7xx"/>
        </item>
        <item>
            <title><![CDATA[ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಾಣೆಗಾರರ ಕ್ವಾರಂಟೈನ್ ಮಾಡಿದ ವೈದ್ಯರು]]></title>
            <link>https://kannada.asianetnews.com/state/bird-flu-scare-in-karnataka-h5n1-virus-detected-at-hesaraghatta-poultry-farm/articleshow-fl6qzar</link>
            <guid isPermaLink="true">https://kannada.asianetnews.com/state/bird-flu-scare-in-karnataka-h5n1-virus-detected-at-hesaraghatta-poultry-farm/articleshow-fl6qzar</guid>
            <pubDate>Fri, 17 Apr 2026 11:01:10 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಾಣೆಗಾರರ ಕ್ವಾರಂಟೈನ್ ಮಾಡಿದ ವೈದ್ಯರು, ಕೇಂದ್ರ ಸರ್ಕಾರದ ಅನುಮತಿ ಮೇರೆ ರಾಜ್ಯದಲ್ಲಿ ತಪಾಸಣೆ ನಡೆಯುತ್ತಿದೆ. ಈ ವೇಳೆ ವೈರಸ್ ಪತ್ತೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01e2w05hh7de8mwrwdned3fany,imgname-pjimage---2020-03-08t080845-020-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17)&lt;/strong&gt; ಕರ್ನಾಟಕದಲ್ಲಿ H5 N1 ಹಕ್ಕಿ ಜ್ವರ ಪತ್ತೆಯಾಗಿದೆ. ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂಗಳಲ್ಲಿ ತಪಾಸಣೆ ನಡೆಲಾಗಿದೆ. ಈ ವೇಳೆ ಕೋಳಿಗಳಲ್ಲಿ H5 N1 ವೈರಸ್ ಪತ್ತೆಯಾಗಿದೆ. ಮೊದಲ ತಪಾಸಣೆಯಲ್ಲಿ H5 N1 ವೈರಸ್ ಪತ್ತೆಯಾಗಿರುವ ಹಿನ್ನಲ್ಲೆ ಅಲರ್ಟ್ ನೀಡಲಾಗಿದೆ. ವೈರಸ್ ಪತ್ತೆಯಾದ ಪೌಲ್ಟ್ರಿ ಫಾರಂ ಕೋಳಿಗಳನ್ನು ಗುಂಡಿ ಹಾಕಿ ಮುಚ್ಚಲಾಗಿದೆ.&lt;/p&gt;&lt;h2&gt;ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಪೌಲ್ಟ್ರಿ ಫಾರಂ&lt;/h2&gt;&lt;p&gt;ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಪೌಲ್ಟ್ರಿ ಫಾರಂನಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ H5 N1 ಹಕ್ಕಿ ಜ್ವರ ಪತ್ತೆಯಾಗಿದೆ. ಇದೇ ಪೌಲ್ಟ್ರಿ ಫಾರಂನಿಂದ ರಾಜ್ಯದ ಹಲವು ಕಡೆಗೆ ಕೋಳಿಗಳನ್ನು ಸರಬರಾಜು ಮಾಡಲಾಗುತ್ತದೆ. ಇದೇ ಘಟಕದಲ್ಲಿ H5 N1 ವೈರಸ್ ಪತ್ತೆಯಾಗಿರುವ ಕಾರಣ ಈ ಪೌಲ್ಟ್ರಿ ಫಾರಂ ಕೋಳಿಗಳನ್ನು ಗುಂಡಿ ತೆಗೆದು ಮುಚ್ಚಲಾಗಿದೆ.&lt;/p&gt;&lt;h2&gt;ಕೋಳಿ ಸಾಗಾಣೆಗಾರರು ಕ್ವಾರಂಟೈನ್&lt;/h2&gt;&lt;p&gt;H5 N1 ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಹೆಸರಘಟ್ಟ ಪೌಲ್ಟ್ರಿ ಫಾರಂನಿಂದ ಇತರ ಭಾಗಗಳಿಗೆ ಕೋಳಿ ಸಾಗಾಣೆ ಮಾಡುವ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ H5 N1 ವೈರಸ್ ಮತ್ತಷ್ಟು ಹರಡದಂತೆ ಎಚ್ಚರವಹಿಸಲಾಗಿದೆ. ಸರ್ಕಾರದ ಪಶು ವೈದ್ಯಾಧಿಕಾರಿಗಳಿಂದ ಸುತ್ತಮುತ್ತ ಪಂಚಾಯಿತಿಗಳಿಗೂ ನೋಟಿಸ್ ನೀಡಲಾಗಿದೆ.&lt;/p&gt;&lt;p&gt;ಕೋಳಿ ಸಾಕಾಣೆ ಶೆಡ್ ಕೋಳಿ ಅಂಗಡಿಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಬಿಸಿಲ ತಾಪದಲ್ಲಿ H5 N1 ಹಕ್ಕಿ ಜ್ವರ ಬಂದಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಬಾರಿ ಬಿಸಿಲ ಬೇಗೆ ಹೆಚ್ಚಾಗಿದೆ. ಇದರಿಂದ ಕೋಳಿಗಳಲ್ಲಿH5 N1 ವೈರಸ್ ತೀವ್ರವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಮುನ್ನಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ಪಶು ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಸುತ್ತ ಮುತ್ತಲಿನ ಕೋಳಿ ಶೆಡ್ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/bird-flu-scare-in-karnataka-h5n1-virus-detected-at-hesaraghatta-poultry-farm/articleshow-fl6qzar"/>
        </item>
        <item>
            <title><![CDATA[ಬಿಡಿಎ ವಿರುದ್ಧ ಹೋರಾಡಿ ₹56 ಲಕ್ಷ ಬಡ್ಡಿ ಗೆದ್ದ ನಿವೇಶನದಾರೆ! ಏನಿದು ಪ್ರಕರಣ?]]></title>
            <link>https://kannada.asianetnews.com/state/site-owner-wins-rs-56-lakh-in-interest-after-fighting-against-bda-rav/articleshow-dv81ykr</link>
            <guid isPermaLink="true">https://kannada.asianetnews.com/state/site-owner-wins-rs-56-lakh-in-interest-after-fighting-against-bda-rav/articleshow-dv81ykr</guid>
            <pubDate>Fri, 17 Apr 2026 07:40:32 +0530</pubDate>
            <description><![CDATA[&lt;p&gt;ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಲು ಅಗತ್ಯವಾದ ಮೂಲಸೌಲಭ್ಯ ನೀಡದ ಕಾರಣಕ್ಕಾಗಿ ನಿವೇಶನದಾರರೊಬ್ಬರಿಗೆ ಬರೋಬ್ಬರಿ ₹56.3 ಲಕ್ಷ ಬಡ್ಡಿ ಪರಿಹಾರ ನೀಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಆದೇಶಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpcjveceqjp76c54qkf0ketm,imgname-----------------------2026-04-17t073306.162-1776391403918.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಲು ಅಗತ್ಯವಾದ ಮೂಲಸೌಲಭ್ಯ ನೀಡದ ಕಾರಣಕ್ಕಾಗಿ ನಿವೇಶನದಾರರೊಬ್ಬರಿಗೆ ಬರೋಬ್ಬರಿ ₹56.3 ಲಕ್ಷ ಬಡ್ಡಿ ಪರಿಹಾರ ನೀಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಆದೇಶಿಸಿದೆ.&lt;/p&gt;&lt;p&gt;ಬೆಂಗಳೂರಿನ ಜಯನಗರ ನಿವಾಸಿ ಮೃದುಲಾ ಕೃಷ್ಣಪುರ್ ಎಂಬುವರು ನಾಡಪ್ರಭು ಕೆಂಪೇಗೌಡ ಬಡಾವಣೆಯ 8ನೇ ಬ್ಲಾಕ್&zwnj;ನಲ್ಲಿ 50x80 ಅಳತೆಯ (ಸೈಟ್ ಸಂಖ್ಯೆ 456) ನಿವೇಶನವನ್ನು 2020ರಲ್ಲಿ ಸುಮಾರು ₹96,87,510 ಗಳನ್ನು ಪಾವತಿಸಿ ಪಡೆದಿದ್ದರು. ಬಿಡಿಎ ಅವರಿಗೆ 2020ರ ಜೂ.16 ರಂದು ಸ್ವಾಧೀನ ಪತ್ರವನ್ನೂ ನೀಡಿತ್ತು. ಆದರೆ, ನಿವೇಶನ ಹಂಚಿಕೆಯಾಗಿದ್ದರೂ ರಸ್ತೆ, ಕುಡಿಯುವ ನೀರು, ವಿದ್ಯುತ್&zwnj; ಸಂಪರ್ಕ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳಿಲ್ಲದೆ ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ. ಈ ಕುರಿತು ನಿವೇಶನದ ಮಾಲೀಕರಾದ ಮೃದುಲಾ ಅವರು ರೇರಾ ಕೋರ್ಟ್&zwnj; ಮೊರೆ ಹೋಗಿದ್ದರು.&lt;/p&gt;&lt;p&gt;ಪ್ರಕರಣದ ವಿಚಾರಣೆ ನಡೆಸಿದ ರೇರಾ ಅಧ್ಯಕ್ಷ ರಾಕೇಶ್&zwnj; ಸಿಂಗ್ ಮತ್ತು ಸದಸ್ಯ ಜಿ.ಆರ್.ರೆಡ್ಡಿ ಅವರ ಪೀಠ ಬಿಡಿಎ ಧೋರಣೆಯನ್ನು ತೀವ್ರವಾಗಿ ಖಂಡಿಸಿದೆ. ''ಕೇವಲ ಕಾಗದದ ಮೇಲೆ ಸೈಟ್ ಸ್ವಾಧೀನ ಪತ್ರ ನೀಡುವುದು ಸಾಕಾಗುವುದಿಲ್ಲ. ಒಬ್ಬ ನಿವೇಶನದಾರ ಆ ಸೈಟ್&zwnj;ನಲ್ಲಿ ಮನೆ ಕಟ್ಟಲು ಮತ್ತು ನೆಮ್ಮದಿಯಿಂದ ವಾಸಿಸಲು ಅಗತ್ಯವಿರುವ ರಸ್ತೆ, ನೀರು, ಚರಂಡಿಯಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಡೆವಲಪರ್&zwnj;ನ (ಬಿಡಿಎ) ಪ್ರಾಥಮಿಕ ಕರ್ತವ್ಯ ಎಂದು ಸ್ಪಷ್ಟಪಡಿಸಿದೆ.&lt;/p&gt;&lt;p&gt;ಸುಪ್ರೀಂ ಕೋರ್ಟ್&zwnj;ನ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ರೇರಾ, ವಿಳಂಬ ಅವಧಿಗೆ ಎಸ್&zwnj;ಬಿಐ ಎಂಸಿಎಲ್&zwnj; ಆರ್&zwnj; + ಶೇ.2 ದರದಲ್ಲಿ ಬಡ್ಡಿ ನೀಡಲು ಆದೇಶಿಸಿದೆ. ಮೃದುಲಾ ಅವರಿಗೆ 2020 ಜೂ.10ರಿಂದ 2026 ಫೆ.2ರ ವರೆಗಿನ ಅವಧಿಗೆ ಒಟ್ಟು ₹56,03,736 ಬಡ್ಡಿಯನ್ನು 60 ದಿನಗಳ ಒಳಗಾಗಿ ಪಾವತಿಸಬೇಕು. 2026 ಫೆ.3ರಿಂದ ಬಡಾವಣೆಯಲ್ಲಿ ಮೂಲಸೌಕರ್ಯಗಳು ಪೂರ್ಣಗೊಳ್ಳುವವರೆಗೂ ಪ್ರತಿ ತಿಂಗಳು ಇದೇ ದರದಲ್ಲಿ ಬಡ್ಡಿ ಪರಿಹಾರವನ್ನು ನೀಡುತ್ತಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/site-owner-wins-rs-56-lakh-in-interest-after-fighting-against-bda-rav/articleshow-dv81ykr"/>
        </item>
        <item>
            <title><![CDATA[ರಾಹುಲ್ ಗಾಂಧಿ ತಮಿಳುನಾಡು ಸಮಾವೇಶದ ಉಸ್ತುವಾರಿ ಡಿಕೆ ಸುರೇಶ್ ಹೆಗಲಿಗೆ!]]></title>
            <link>https://kannada.asianetnews.com/india-news/dk-suresh-entrusted-with-the-responsibility-of-overseeing-rahul-gandhis-tamil-nadu-convention-rav/articleshow-ftbcvk5</link>
            <guid isPermaLink="true">https://kannada.asianetnews.com/india-news/dk-suresh-entrusted-with-the-responsibility-of-overseeing-rahul-gandhis-tamil-nadu-convention-rav/articleshow-ftbcvk5</guid>
            <pubDate>Fri, 17 Apr 2026 10:43:32 +0530</pubDate>
            <description><![CDATA[ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಚಾರ ಕಾರ್ಯಕ್ರಮದ ಉಸ್ತುವಾರಿಯನ್ನು ಮಾಜಿ ಸಂಸದ ಡಿ.ಕೆ. ಸುರೇಶ್ ಅವರಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪೊನ್ನೇರಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpcwze91pn746eaqy0yf59w6,imgname-----------------------2026-04-17t102905.429-1776402020641.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್&zwnj; ನಾಯಕ ರಾಹುಲ್&zwnj; ಗಾಂಧಿ ಅವರ ಪ್ರಚಾರ ಕಾರ್ಯಕ್ರಮದ ಉಸ್ತುವಾರಿಯನ್ನು ಬಮುಲ್&zwnj; ಅಧ್ಯಕ್ಷ, ಮಾಜಿ ಸಂಸದ ಡಿ.ಕೆ. ಸುರೇಶ್&zwnj; ಅವರಿಗೆ ವಹಿಸಲಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್&zwnj; ಗಾಂಧಿ ಅವರು ಏ. 18ರಂದು ತಮಿಳುನಾಡಿನ ಪೊನ್ನೇರಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಸಿದ್ಧತೆಯನ್ನು ಡಿ.ಕೆ. ಸುರೇಶ್ ಅವರಿಗೆ ವಹಿಸಲಾಗಿದೆ.&amp;nbsp;&lt;/p&gt;&lt;p&gt;&lt;img&gt;&lt;/p&gt;&lt;p&gt;ಆ ಹಿನ್ನೆಲೆಯಲ್ಲಿ ಡಿ.ಕೆ. ಸುರೇಶ್&zwnj; ಅವರು ಗುರುವಾರ ಸಮಾವೇಶ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಜತೆಗೆ ಕೇಂದ್ರ ವೀಕ್ಷಕರ ಸಭೆ ನಡೆಸಿ ಸಮಾವೇಶ ಆಯೋಜನೆ ಕುರಿತಂತೆ ಚರ್ಚೆ ನಡೆಸಿದರು.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/dk-suresh-entrusted-with-the-responsibility-of-overseeing-rahul-gandhis-tamil-nadu-convention-rav/articleshow-ftbcvk5"/>
        </item>
        <item>
            <title><![CDATA[ದಾಬಸ್‍ಪೇಟೆ ಬಳಿ ನಾಪತ್ತೆಯಾಗಿದ್ದ ಯಮುನಾಳ ತಲೆಬುರುಡೆ ಪತ್ತೆ! ಸಿಸಿಟಿವಿಯಲ್ಲಿ ಸೆರೆಯಾಯ್ತು ಕೊನೆಯ ದೃಶ್ಯ !]]></title>
            <link>https://kannada.asianetnews.com/crime/missing-yamunas-skull-found-near-dabaspet-last-scene-captured-on-cctv-rav/articleshow-l439u4u</link>
            <guid isPermaLink="true">https://kannada.asianetnews.com/crime/missing-yamunas-skull-found-near-dabaspet-last-scene-captured-on-cctv-rav/articleshow-l439u4u</guid>
            <pubDate>Fri, 17 Apr 2026 07:56:59 +0530</pubDate>
            <description><![CDATA[ದಾಬಸ್&zwj;ಪೇಟೆ ಬಳಿ ನಾಪತ್ತೆಯಾಗಿದ್ದ ಯಮುನಾ ಎಂಬ ಮಹಿಳೆಯ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದು, ಸಿಸಿ ಕ್ಯಾಮೆರಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpckzvjyv16s1vfp6mrtymt6,imgname-----------------------2026-04-17t074554.140-1776392597086.jpg" type="image/jpeg" height="390" width="690"/>
            <content:encoded><![CDATA[&lt;p&gt;ಬುರುಡೆ, ಮೂಳೆ, ಬ್ಯಾಗ್, ಕಂಪನಿಯ ಐಡಿ ಕಾರ್ಡ್ ಪತ್ತೆ । ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ&lt;/p&gt;&lt;p&gt;&lt;strong&gt;&amp;nbsp;ದಾಬಸ್&zwj;ಪೇಟೆ (ಏ.17): &amp;nbsp;&lt;/strong&gt;ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಕಳೆಬರ ಪತ್ತೆಯಾಗಿರುವ ಘಟನೆ ದಾಬಸ್&zwj;ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;p&gt;ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದ ಬಸವೇಶ್ವರ ಬಡಾವಣೆಯಲ್ಲಿ ವಾಸವಿದ್ದ ಯಮುನಾ (38) ಮೃತಪಟ್ಟ ಮಹಿಳೆಯಾಗಿದ್ದು, ಹಳೆನಿಜಗಲ್ ಬಳಿಯಿರುವ ರಿಲಯನ್ಸ್ ಕಂಪನಿಯಲ್ಲಿ ಕಳೆದ ಆರೇಳು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದರು. ಮಹಿಳೆ ಮಲ್ಲಿಕಾರ್ಜುನ್ ಎಂಬುವವರ ಜೊತೆ 19 ವರ್ಷದ ಹಿಂದೆ ವಿವಾಹವಾಗಿದ್ದರು. ಈಕೆಗೆ ಒಬ್ಬ ಗಂಡು ಹಾಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಈಕೆಯ ತಲೆಬುರುಡೆ, ಬ್ಯಾಗ್, ಬಟ್ಟೆಯು ಸೋಂಪುರ ಹೋಬಳಿಯ ಹಳೆನಿಜಗಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ- 48ರ ರಸ್ತೆಪಕ್ಕದ ಜಮೀನಿನಲ್ಲಿ ಪತ್ತೆಯಾಗಿದೆ.&lt;/p&gt;&lt;h2&gt;ಘಟನಾ ಹಿನ್ನೆಲೆ:&lt;/h2&gt;&lt;p&gt;ಮೃತ ಯಮುನಾ ಕಳೆದ ಮಾ.21ರಂದು ಕೆಲಸಕ್ಕೆ ಬಂದಿದ್ದು, ನಂತರ ಮನೆಗೆ ವಾಪಾಸ್ಸು ಹೋಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮೃತಳ ಪತಿ ಮಲ್ಲಿಕಾರ್ಜುನ್ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.&lt;/p&gt;&lt;p&gt;ನಂದಿಹಳ್ಳಿ ಗ್ರಾಮದ ಉಮೇಶ್ ಎಂಬುವವರು ತನ್ನ ಜಮೀನಿನಲ್ಲಿ ದೇವರ ಕಲ್ಲುಗಳಿದ್ದು, ಅದನ್ನು ಪೂಜಿಸಲು ಬಂದಾಗ ತಲೆಬುರುಡೆ ಬಿದ್ದಿರುವುದನ್ನು ಕಂಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;ತಲೆಬುರುಡೆ, ಮೂಳೆ, ಬ್ಯಾಗ್, ಬಟ್ಟೆ ಪತ್ತೆ:&lt;/h3&gt;&lt;p&gt;ಘಟನಾ ಸ್ಥಳಕ್ಕೆ ದಾಬಸ್&zwj;ಪೇಟೆ ಹಾಗೂ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಘಟನಾ ಸ್ಥಳದಲ್ಲಿ ತಲೆಬುರುಡೆ, ಕಾಲಿನ ಮೂಳೆಗಳು, ಬ್ಯಾಗ್, ವಾಟರ್ ಬಾಟಲ್, ಕಂಪನಿ ಐಡಿ ಕಾರ್ಡ್, ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಮಹಿಳೆಯ ಗುರುತು ಪತ್ತೆಯಾಗಿದೆ.&lt;/p&gt;&lt;p&gt;&lt;strong&gt;ಅನೈತಿಕ ಸಂಬಂಧದ ಶಂಕೆ:&lt;/strong&gt;&lt;/p&gt;&lt;p&gt;ಮೃತಳಿಗೆ ಗಂಡನ ತವರೂರಾದ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮದಲ್ಲಿ ರಾಘವೇಂದ್ರ ಎಂಬಾತನ ಜೊತೆ ಅನೈತಿಕ ಸಂಬಂಧವಿತ್ತು. ಆತನ ಜೊತೆ ಆರೇಳು ವರ್ಷ ಸಂಸಾರ ನಡೆಸಿ ನಂತರ ಗಂಡನ ಮನೆಗೆ ವಾಪಾಸ್ಸು ಬಂದಿದ್ದರು. ಆದಾದ ಮೇಲೂ ರಾಘವೇಂದ್ರ ಈಕೆಗೆ ಮತ್ತೆ ನನ್ನ ಜೊತೆ ಬಂದು ಸಂಸಾರ ನಡೆಸುವಂತೆ ಕಿರುಕುಳ ಕೊಡುವುದಲ್ಲದೆ ನನ್ನ ಜೊತೆ ಬಾರದಿದ್ದರೆ ನಿನ್ನ ಗಂಡ, ಮಕ್ಕಳು ಸೇರಿದಂತೆ ನಿನ್ನನ್ನು ಸಾಯಿಸುತ್ತೇನೆಂದು ಜೀವ ಬೆದರಿಕೆ ಕೂಡ ಹಾಕಿರುವ ಬಗ್ಗೆ ಕುಟುಂಬಸ್ಥರು ಆರೋಪಿಸಿದ್ದಾರೆ.&lt;/p&gt;&lt;h3&gt;ಕೊಲೆ ಮಾಡಿರುವ ಶಂಕೆ:&lt;/h3&gt;&lt;p&gt;ಮೃತ ಯುಮುನಾ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮಾ.19ರಂದು ಬರ್ತಡೇ ಆಚರಿಸಿಕೊಂಡಿದ್ದರು. ನಂತರ ಮಾ.21ರಂದು ಎಂದಿನಂತೆ ಕೆಲಸಕ್ಕೆ ಬಂದಿದ್ದಾರೆ. ಅಂದು ಸಂಜೆ ಕೆಲಸ ಬಿಟ್ಟಾಗ ಅನೈತಿಕ ಸಂಬಂಧ ಹೊಂದಿದ್ದ ರಾಘವೇಂದ್ರನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.&lt;/p&gt;&lt;p&gt;ರಸ್ತೆ ಪಕ್ಕದಲ್ಲೇ ಇರುವ ಜಮೀನಿಗೆ ಇಬ್ಬರೂ ಹೋಗಿದ್ದು ಅಲ್ಲಿ ಮೃತ ಯುಮುನಾ ಹಾಗೂ ರಾಘವೇಂದ್ರನ ನಡುವೆ ಜಗಳವಾಗಿದ್ದು, ಮಾತಿಗೆ ಮಾತು ಬೆಳೆದು ರಾಘವೇಂದ್ರ ಆಕೆಯನ್ನು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದು, ನಾಪತ್ತೆಯಾಗಿರುವ ರಾಘವೇಂದ್ರನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.&lt;/p&gt;&lt;p&gt;ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ, ಡಿವೈಎಸ್ ಪಿ ಜಗದೀಶ್, ಇನ್ಸ್ ಪೆಕ್ಟರ್ ಗಳಾದ ಭರತ್ ಗೌಡ, ಗಿರೀಶ್, ನರೇಂದ್ರಬಾಬು, ಸಬ್ ಇನ್ಸ್ ಪೆಕ್ಟರ್ ಗಳಾದ ಸಿದ್ದಪ್ಪ, ದಿವ್ಯ, ವಿಧಿವಿಜ್ಞಾನ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.&lt;/p&gt;&lt;p&gt;--------&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/missing-yamunas-skull-found-near-dabaspet-last-scene-captured-on-cctv-rav/articleshow-l439u4u"/>
        </item>
        <item>
            <title><![CDATA[ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು]]></title>
            <link>https://kannada.asianetnews.com/gallery/business/rbi-mulls-1-hour-cooling-off-period-for-upi-transfers-over-rs-10-000-to-curb-fraud-gg6lqez</link>
            <guid isPermaLink="true">https://kannada.asianetnews.com/gallery/business/rbi-mulls-1-hour-cooling-off-period-for-upi-transfers-over-rs-10-000-to-curb-fraud-gg6lqez</guid>
            <pubDate>Fri, 17 Apr 2026 10:31:58 +0530</pubDate>
            <description><![CDATA[&lt;p&gt;ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು, ಹಣ ವರ್ಗಾವಣೆಯಲ್ಲಿನ ವಂಚನೆ ತಡೆಯಲು ಆರ್&zwnj;ಬಿಐ ಹೊಸ ನಿಯಮ ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ ಹಣ ವರ್ಗಾವಣೆ ನಿಯದಲ್ಲಿನ ಬದಲಾವಣೆ ಏನು?&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmpqcncf05867y2qcf626995,imgname-upi--3--1774584223119.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು, ಹಣ ವರ್ಗಾವಣೆಯಲ್ಲಿನ ವಂಚನೆ ತಡೆಯಲು ಆರ್&zwnj;ಬಿಐ ಹೊಸ ನಿಯಮ ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ ಹಣ ವರ್ಗಾವಣೆ ನಿಯದಲ್ಲಿನ ಬದಲಾವಣೆ ಏನು?&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹಣ ವರ್ಗಾವಣೆ, ಪಾವತಿ ಸೇರಿದಂತೆ ಹಣ ವಹಿವಾಟುಗಳು ಈಗ ಡಿಜಿಟಲ್ ಮೂಲಕವೇ ಅತೀ ಹೆಚ್ಚು ನಡೆಯುತ್ತಿದೆ. ವಿಶೇಷವಾಗಿ ಯುಪಿಐ ಮೂಲಕವೇ ಹೆಚ್ಚಿನ ವಹಿವಾಟು ನಡೆಯುತ್ತದೆ. ಇದರ ಜೊತೆಗೆ ಯುಪಿಐನಲ್ಲಿ ವಂಚನೆಗಳ ಸಂಖ್ಯೆಯೂ ಹಚ್ಚಾಗುತ್ತಿದೆ. ಇದನ್ನು ತಡೆಯಲು ಆರ್&zwnj;ಬಿಐ ಕಟ್ಟು ನಿಟ್ಟಿನ ಕೆಲ ನಿಯಮ ಜಾರಿಗೆ ತರುತ್ತಿದೆ. ಈ ಪೈಕಿ 10 ಸಾವಿರ ರೂಪಾಯಿ ಟ್ರಾನ್ಸಾಕ್ಷನ್ ಮಾಡಲು 1 ಗಂಟೆ ಕಾಯಬೇಕು.&lt;/p&gt;&lt;img&gt;&lt;p&gt;ಮೇ.1 ರಿಂದ ಯುಪಿಐ ನಿಮಯದಲ್ಲಿ ಭಾರಿ ಬದಲಾವಣೆ ಮಾಡಲಾಗುತ್ತಿದೆ. ಹೊಸಬರಿಗೆ 10 ಸಾವಿರ ರೂಪಾಯಿಗಿಂತ ಅಧಿಕ ಹಣ ವರ್ಹಾವಣೆ ಮಾಡಲು ಒಂದು ಗಂಟೆ ಗಾಯಬೇಕು. ಸೈಬರ್ ಕಳ್ಳರು ಹ್ಯಾಕ್ ಮಾಡಿ ಅಥವಾ ಇನ್ಯಾವುದೋ ರೀತಿಯಲ್ಲಿ ಯುಪಿಐ ಮೂಲಕ ಹಣವನ್ನು ಕ್ಷಣಾರ್ಧದಲ್ಲಿ ವರ್ಗವಣೆ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಒಂದು ಗಂಟೆ ಕಾಯಬೇಕು.&lt;/p&gt;&lt;img&gt;&lt;p&gt;ಸೈಬರ್ ಕಳ್ಳರು ತಮ್ಮ ಖಾತೆಗೆ ಅಥವಾ ಫ್ರಾಡ್ ಖಾತೆಗೆ ಹಣ ವರ್ಗಾವಣೆ ಮಾಡಿ ಖಾತೆಯಲ್ಲಿರುವ ಹಣ ಖಾಲಿ ಮಾಡುತ್ತಾರೆ. ಹೀಗಾಗಿ 10 ಸಾವಿರ ರೂಪಾಯಿಗಿಂತ ಅಧಿಕ ಹಣ ಹೊಸಬರಿಗೆ ವರ್ಗಾವಣೆ ಮಾಡಿದರೆ ಒಂದು ಗಂಟೆ ಬ್ಯಾಂಕ್ ಸೆಂಟ್ರಲ್ ಸಿಸ್ಟಮ್&zwnj;ನಲ್ಲಿರುತ್ತದೆ. ಒಂದು ಗಂಟೆ ಬಳಿಕ ಹಣ ಹೊಸಬರ ಖಾತೆಗೆ ಜಮೆ ಆಗಲಿದೆ. ಈ ಒಂದು ಗಂಟೆಯಲ್ಲಿ ಮೂಲ ಖಾತೆಗೆ ಹಣ ಹಿಂಪಡೆಯಲು ಅವಕಾಶವಿದೆ.&lt;/p&gt;&lt;img&gt;&lt;p&gt;ಹಣ ರಿಸೀವರ್ ಕೈಗೆ ಸೇರಲು 1 ಗಂಟೆಯ ಕಾಲ ಅತಂತ್ರವಾಗಿ ಮಧ್ಯದಲ್ಲೇ ನಿಂತಿರಲಿದೆ. ಇದಕ್ಕೆ ಆರ್&zwnj;ಬಿಐ ಡಿಲೇ ರೂಲ್ಸ್ ತರುತ್ತಿದೆ. ಈ ರೂಲ್ಸ್ ಮರ್ಚೆಂಟ್ ಪೇಮೆಂಟ್ಸ್ ಗಳಿಗೆ,ರಿಕರಿಂಗ ಪೇಮೆಂಟ್, ಮೆಡಿಕಲ್ ಪೇಮೆಂಟ್ಸ್ ಗಳಿಗೆ ಅನ್ವಯವಾಗುವುದಿಲ್ಲ.&lt;/p&gt;&lt;img&gt;&lt;p&gt;ಈ ನಿಯಮ ಹೊಸಬರಿಗೆ ಅನ್ವಯವಾಗಲಿದೆ. ಅಂದರೆ ಈಗಾಗಲೇ ಹಣ ವರ್ಗಾವಣೆ ಮಾಡುತ್ತಿರುವ ಕಾಂಟಾಕ್ಟ್ ನಂಬರ್ ಅಥವಾ ಖಾತೆಗಳಿಗೆ ಅನ್ವಯವಾಗುವುದಿಲ್ಲ. ಸೈಬರ್ ಕ್ರೈಂ ಗೆ ಕಡಿವಾಣ ಹಾಕಲು ರಿಸರ್ವ್ ಬ್ಯಾಂಕ್ ಹೊಸ ಪ್ಲಾನ್ ಮಾಡಿದೆ.&lt;/p&gt;&lt;img&gt;&lt;p&gt;2021ರಲ್ಲಿ 2.6 ಲಕ್ಷ ಡಿಜಿಟಲ್ ಪೇಮೆಂಟ್ ವಂಚನೆ ಪ್ರಕರಣ ದಾಖಲಾಗಿದೆ. 2025ರಲ್ಲಿ 28 ಲಕ್ಷ ಕೇಸ್ ದಾಖಲಾಗಿದೆ. 2025ರಲ್ಲಿ ಸೈಬರ್ ವಂಚಕರಿಂದ ಲಪಾಟಾಸಿದ ಒಟ್ಟು ಹಣ 22931 ಕೋಟಿ ರೂಪಾಯಿ.&lt;/p&gt;&lt;h2&gt;ಕಳೆದ 28 ಲಕ್ಷ ಸೈಬರ್ ಕೇಸ್&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/rbi-mulls-1-hour-cooling-off-period-for-upi-transfers-over-rs-10-000-to-curb-fraud-gg6lqez"/>
        </item>
        <item>
            <title><![CDATA[ತನಗೆ GAY LORD ಅಂತ ಹೆಸರಿಟ್ಟ ಪೋಷಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಯುವಕ]]></title>
            <link>https://kannada.asianetnews.com/india-news/young-man-takes-parents-to-court-for-naming-him-gay-lord-demands-150000-dollor-compensation/articleshow-op04pom</link>
            <guid isPermaLink="true">https://kannada.asianetnews.com/india-news/young-man-takes-parents-to-court-for-naming-him-gay-lord-demands-150000-dollor-compensation/articleshow-op04pom</guid>
            <pubDate>Fri, 17 Apr 2026 10:20:08 +0530</pubDate>
            <description><![CDATA[&lt;p&gt;&lt;strong&gt;boy sues parents over name: &lt;/strong&gt;ಅಮೆರಿಕಾದ ಯುವಕನೊಬ್ಬ, ತನಗೆ ಪೋಷಕರು 'ಗೇಲಾರ್ಡ್' ಎಂದು ಇಟ್ಟ ಕೆಟ್ಟ ಹೆಸರಿಟ್ಟಿದ್ದರಿಂದ ತೀವ್ರ ಅವಮಾನ ಹಾಗೂ ಭಾವನಾತ್ಮಕ ಯಾತನೆಯಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದು, 150 ಸಾವಿರ ಡಾಲರ್ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kerppmtn08tc2sp48a7pkga9,imgname-baby-name-reveal-ceremony-d-1768208159573.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಹೆಸರು ಅಜ್ಜನದ್ದು, ನೋವು ಮೊಮ್ಮಗನದ್ದು&lt;/strong&gt;&lt;/h2&gt;&lt;p&gt;ಹೆಸರಲ್ಲೇನಿದೆ ಎಂದು ಅನೇಕರು ಕೇಳುವುದನ್ನು ನೋಡಬಹುದು. ಆದರೆ ಹೆಸರಲ್ಲೇ ಎಲ್ಲಾ ಇದೆ. ನಿಮಗಿಟ್ಟ ಹೆಸರು ಕೆಟ್ಟದಾಗಿದ್ದರೆ ಅದು ನಿಮಗೆ ಮಾನಸಿಕ ಯಾತನೆ ನೀಡುವುದು ನಿಮ್ಮ ನಿಮ್ಮೆದಿ ಕೆಡಿಸುವುದು. ಹಾಗೆಯೇ ಇಲ್ಲೊಬ್ಬ ಯುವಕನಿಗೆ ಪೋಷಕರಿಟ್ಟ ಹೆಸರೇ ದೊಡ್ಡ ತಲೆನೋವಾಗಿ ಕಾಡಿದೆ.&lt;/p&gt;&lt;p&gt;ಹೊಸದಾಗಿ ಹುಟ್ಟಿದ ಮಕ್ಕಳ ಹೆಸರನ್ನು ಅವರೇ ನಿರ್ಧರಿಸಲಾಗದು. ಬೇಕಿದ್ದಲ್ಲಿ ಒಂದು ವಯಸ್ಸಿನ ನಂತರ ಪೋಷಕರು ತಮ್ಮಗಿಟ್ಟ ಹೆಸರು ಚೆನ್ನಾಗಿಲ್ಲ ಎಂದೆನಿಸಿದರೆ ಮಕ್ಕಳು ಆ ಹೆಸರನ್ನು ವಕೀಲರ ಮೂಲಕ ಅಫಿಡವಿಟ್ ಮಾಡಿಸಿ ಬದಲಾಯಿಸಿಕೊಳ್ಳಬಹುದು. ಆದರೆ ಇಲ್ಲೊಂದು ಕಡೆ ಯುವಕನೋರ್ವ ತನಗೆ ಪೋಷಕರು ಕೆಟ್ಟದಾಗಿ ಹೆಸರಿಟ್ಟಿದ್ದಾರೆ ಎಂದು ಕೋರ್ಟ್ ಮೊರೆ ಹೋಗಿದ್ದಲ್ಲದೇ ಪೋಷಕರಿಂದ ತನಗೆ 150 ಸಾವಿರ ಡಾಲರ್ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದ್ದಾನೆ.&lt;/p&gt;&lt;h3&gt;&lt;strong&gt;ತನಗೆ ಕೆಟ್ಟದಾಗಿ ಹೆಸರಿಟ್ಟ ಪೋಷಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಯುವಕ&lt;/strong&gt;&lt;/h3&gt;&lt;p&gt;ಇಂತಹದೊಂದು ವಿಚಿತ್ರ ಘಟನೆ ನಡೆದಿರೋದು ಅಮೆರಿಕಾದ ಸ್ಪ್ರಿಂಗ್&zwnj;ಫೀಲ್ಡ್&zwnj;ನ ಮಿಸೌರಿ ಎಂಬಲ್ಲಿ. ಮಿಸೌರಿಯ ಸ್ಪ್ರಿಂಗ್&zwnj;ಫೀಲ್ಡ್&zwnj;ನ 19 ವರ್ಷದ ಯುವಕ ತಾನು ಜನಿಸಿದ ಸಮಯದಲ್ಲಿ ತನಗೆ ಪೋಷಕರು ಕೆಟ್ಟದಾಗಿ ಹೆಸರಿಟ್ಟಿದ್ದಾರೆ. ಅವರಿಟ್ಟ ಹೆಸರಿನಿಂದ ತನಗೆ ತೀವ್ರ ಹಾನಿಯಾಗಿದೆ ಎಂದು ಆರೋಪಿಸಿ ಕೋರ್ಟ್&zwnj; ಮೆಟ್ಟಿಲೇರಿದ್ದು, ತನಗಾದ ನಷ್ಟಕ್ಕೆ 150 ಸಾವಿರ ಡಾಲರ್ ಪರಿಹಾರ ನೀಡಬೇಕು ಎಂದು ಆತ ಆಗ್ರಹಿಸಿದ್ದಾನೆ.&lt;/p&gt;&lt;p&gt;&lt;strong&gt;ಹಾಗಾದ್ರೆ ಆತನಿಗೆ ಪೋಷಕರು ಇಟ್ಟ ಹೆಸರೇನು?&lt;/strong&gt;&lt;/p&gt;&lt;p&gt;ಕೋರ್ಟ್&zwnj;ನಲ್ಲಿ ದಾಖಲಾದ ಪ್ರಕರಣದ ಮಾಹಿತಿಯ ಪ್ರಕಾರ, ಯುವಕನ ಜನನದ ಸಮಯದಲ್ಲಿ ಪೋಷಕರು ಆತನಿಗೆ ಗೇಲಾರ್ಡ್ ಥಾಮ್ಸನ್&zwnj; ಎಂದು ಹೆಸರಿಟ್ಟಿದ್ದರು ಎಂದು ವರದಿಯಾಗಿದೆ. ಆ ಹೆಸರಿನಿಂದ ತನಗೆ ಸಾಕಷ್ಟು ವರ್ಷಗಳಿಂದ ಭಾವನಾತ್ಮಕವಾದ ಯಾತನೆ ಉಂಟಾಗಿದೆ. ನನ್ನ ಹಸೆರಿನ ಕಾರಣಕ್ಕೆ ನನ್ನ ಸಹಪಾಠಿಗಳು ಆತ್ಮೀಯರು ತನ್ನನ್ನು ನಿರಂತರವಾಗಿ ಛೇಡಿಸುತ್ತಾ, ತಮಾಷೆ ಮಾಡುತ್ತಾ ಬಂದಿದ್ದಾರೆ. ಅಲ್ಲದೇ ತರಗತಿಯಲ್ಲಿ ಶಿಕ್ಷಕರು ಹಾಜರಾತಿ ಕರೆಯುವ ವೇಳೆ ನನ್ನ ಹೆಸರನ್ನು ಓದಿದ ತಕ್ಷಣ ಕೆಲ ನಿಮಿಷ ಗೊಂದಲದಿಂದ ನಿಲ್ಲುತ್ತಾರೆ. ಇದೇನು ತಮಾಷೆಯ ಎಂದು ಭಾವಿಸುತ್ತಾರೆ ಹಾಗೂ ಈ ರೀತಿ ತನ್ನ ಹೆಸರಿನ ಮೇಲಿನ ತಮಾಷೆಯಿಂದಾಗಿ ತನ್ನ ಅಧ್ಯಯನದಲ್ಲಿ ಏರುಪೇರಾಗಿದೆ ಎಂದು ಆ ವಿದ್ಯಾರ್ಥಿ ತಾನು ಪೋಷಕರ ವಿರುದ್ಧ ಕೋರ್ಟ್&zwnj;ಗೆ ಹಾಕಿದ ದೂರಿನಲ್ಲಿ ತಿಳಿಸಿದ್ದಾರೆ. ಈ ವಿದ್ಯಾರ್ಥಿ ಕಿಕಾಪೂ ಹೈ ಸ್ಕೂಲ್&zwnj;ನಲ್ಲಿ ಹಿರಿಯ ವಿದ್ಯಾರ್ಥಿಯಾಗಿ ಓದುತ್ತಿದ್ದ.&lt;/p&gt;&lt;h3&gt;&lt;strong&gt;1.25 ಕೋಟಿ ರೂ. ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ ಮಗ&lt;/strong&gt;&lt;/h3&gt;&lt;p&gt;ತನ್ನ ಪೋಷಕರು ತನಗೆ ಸರಿಯಾದ ಹೆಸರಿಡುವುದರಲ್ಲಿ ಅಸಮರ್ಥರಾಗಿದ್ದಾರೆ. ವಿಶೇಷವಾಗಿ ಆಧುನಿಕ ಸಾಮಾಜಿಕ ವಾತಾವರಣದಲ್ಲಿ ಸಮಂಜಸವಾದ ಹೆಸರನ್ನು ಇಡುವಲ್ಲಿ ವಿಫಲರಾಗಿದ್ದಾರೆ ಎಂದು ಆ ವಿದ್ಯಾರ್ಥಿ ಆರೋಪಿಸಿದ್ದಾರೆ. ಆತನ ತಂದೆ ಟ್ರಕ್ ಚಾಲಕರಾಗಿದ್ದು, ತಾಯಿ ಚರ್ಚೊಂದರ ಕಾರ್ಯದರ್ಶಿಯಾಗಿ ಆ ಸಮಯದಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕನ ಅಜ್ಜನ ಮೇಲಿನ ಗೌರವದಿಂದ ಮಗನಿಗೆ ಆ ರೀತಿಯ ಹೆಸರಿಟ್ಟೆವು ಆದರೆ ಆ ಹೆಸರು ಈ ರೀತಿ ಅವಾಂತರ ಸೃಷ್ಟಿಸಬಹುದು ಎಂಬ ನಿರೀಕ್ಷೆ ನಮಗಿರಲಿಲ್ಲ ಎಂದು ಅವರು ಕೋರ್ಟ್&zwnj;ನಲ್ಲಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೇವಲ ಒಂದು ದಿನ ಖಡ್ಗಮೃಗ ಮರಿಯ ಎಂದಾದರೂ ನೋಡಿದ್ದೀರಾ? IFS ಅಧಿಕಾರಿ ಹಂಚಿಕೊಂಡ ಅಪರೂಪದ ವೀಡಿಯೋ&lt;/strong&gt;&lt;/p&gt;&lt;p&gt;ಕೆಲವು ವರ್ಷಗಳ ಹಿಂದೆ ನಡೆದ ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಸ್ವಾರಸ್ಯಕರವಾದ ಕಾಮೆಂಟ್&zwnj;ಗಳಿಗೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಅಂದಹಾಗೆ ಗೇಲಾರ್ಡ್ ಪದದ ಅರ್ಥ ಏನು?&lt;/strong&gt;&lt;/h3&gt;&lt;p&gt;ಮೂಲತಃ ಗೇಲಾರ್ಡ್ ಎಂಬುದು ಪ್ರಾಥಮಿಕವಾಗಿ ಫ್ರೆಂಚ್/ಸೆಲ್ಟಿಕ್ ಮೂಲದ ಪುಲ್ಲಿಂಗ ಹೆಸರಾಗಿದ್ದು, ಇದರ ಅರ್ಥ ಉತ್ಸಾಹಭರಿತ ಅಥವಾ ಸಂತೋಷಭರಿತ ಪ್ರಭು (ದೇವರು) ಎಂದರ್ಥ. ಆದರೆ ಬದಲಾದ ಕಾಲಮಾನದಲ್ಲಿ ಈ ಹೆಸರು ಬೇರೆಯದೇ ಅರ್ಥವನ್ನು ನೀಡುತ್ತಾರೆ. ಗೇ ಎಂದರೆ ಸಲಿಂಗಕಾಮಿ ಎಂಬ ಅರ್ಥವಿದ್ದು, ಗೇಲಾರ್ಡ್ ಎಂದರೆ ಸಲಿಂಗಕಾಮಿ ಪ್ರಭು ಎಂಬ ಅರ್ಥವನ್ನು ನೀಡುತ್ತದೆ. ಸಲಿಂಗಿಗಳನ್ನು ಸಮಾಜದಲ್ಲಿ ನೋಡುವ ರೀತಿ ವಿಭಿನ್ನವಾಗಿದ್ದು, ಇದರಿಂದಾಗಿ ಈ ಹೆಸರು ಸಹಜವಾಗಿಯೇ ಜನರ ಗಮನ ಸೆಳೆಯುವುದಕ್ಕೆ ಕಾರಣವಾಗಿರುವುದಲ್ಲದೇ ಹೆಸರು ಹೊಂದಿರುವವರನ್ನು ವಿಲಕ್ಷಣವಾಗಿ ನೋಡುವುದಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಾಲ್ಯದ ನೆನಪು ಕೆದಕಿದ 'ಅತ್ತೆ-ಸೊಸೆಯ' ಪ್ರೀತಿ:ಗಂಡನ ಮನೆಗೆ ಹೋಗಬೇಡ ಎಂದು ಸೋದರತ್ತೆಯ ತಬ್ಬಿ ಹಿಡಿದು ಅತ್ತ ಪುಟಾಣಿ&lt;/strong&gt;&lt;/p&gt;]]></content:encoded>
            <category>news</category>
            <dc:creator>Anusha Kb</dc:creator>
            <atom:link href="https://kannada.asianetnews.com/india-news/young-man-takes-parents-to-court-for-naming-him-gay-lord-demands-150000-dollor-compensation/articleshow-op04pom"/>
        </item>
        <item>
            <title><![CDATA[delimitation 2026: ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣಕ್ಕೆ ಹೆಚ್ಚು ಲಾಭ; ಸಂಸದ ತೇಜಸ್ವಿ ಹೊಸ ಲೆಕ್ಕಾಚಾರ ಏನು?]]></title>
            <link>https://kannada.asianetnews.com/india-news/more-benefit-to-the-south-india-from-delimitation-says-mp-tejasv-surya-rav/articleshow-b9x4tcg</link>
            <guid isPermaLink="true">https://kannada.asianetnews.com/india-news/more-benefit-to-the-south-india-from-delimitation-says-mp-tejasv-surya-rav/articleshow-b9x4tcg</guid>
            <pubDate>Fri, 17 Apr 2026 10:19:38 +0530</pubDate>
            <description><![CDATA[&lt;p&gt;ಲೋಕಸಭಾ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ವಿಪಕ್ಷಗಳ ಆರೋಪವನ್ನು ಸಂಸದ ತೇಜಸ್ವಿ ಸೂರ್ಯ ತಳ್ಳಿಹಾಕಿದ್ದಾರೆ. ಜನಗಣತಿ ಬದಲು ಶೇ.50ರಷ್ಟು ಸ್ಥಾನ ಹೆಚ್ಚಳದ ಸೂತ್ರದಿಂದ ದಕ್ಷಿಣದ ರಾಜ್ಯಗಳಿಗೆ ಹೆಚ್ಚು ಲಾಭವಾಗಲಿದೆ ಎಂದು ಅವರು ಅಂಕಿಅಂಶ ಸಹಿತ ವಿವರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpcvvfeywpk0gph6t9mh8an0,imgname-----------------------2026-04-17t101019.824-1776400842206.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಜನಗಣತಿಗಿಂತ ಶೇ.50ರ ಹೆಚ್ಚಳದಿಂದ ಲಾಭ: ಸಂಸದ&lt;/li&gt; &lt;li&gt;ಶೇ.50ರ ಸೂತ್ರದಲ್ಲಿ ಕರ್ನಾಟಕದಲ್ಲಿ 28 ರಿಂದ 42ಕ್ಕೆ&lt;/li&gt; &lt;li&gt;ತಮಿಳುನಾಡು, ಕೇರಳದಲ್ಲೂ ಸ್ಥಾನಗಳು ಏರಿಕೆ&lt;/li&gt;&lt;/ul&gt;&lt;p&gt;&lt;strong&gt;ನವದೆಹಲಿ (ಏ.17):&lt;/strong&gt; &lsquo; ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಹೆಚ್ಚು ಅನ್ಯಾಯವಾಗಲಿದೆ ಎನ್ನುವ ಮೂಲಕ ವಿಪಕ್ಷಗಳು ಜನರ ದಾರಿ ತಪ್ಪಿಸಲು ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿವೆ. ಅಸಲಿಗೆ ಈ ಮಸೂದೆಯಿಂದ ದಕ್ಷಿಣ ರಾಜ್ಯಗಳಿಗೆ ಹೆಚ್ಚು ಲಾಭ ಆಗಲಿದೆ&rsquo; ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.&lt;/p&gt;&lt;p&gt;ಗುರುವಾರ ಲೋಕಸಭಾ ಕಲಾಪದಲ್ಲಿ ಮಾತನಾಡಿದ ಸೂರ್ಯ, &lsquo;ಪ್ರತಿಪಕ್ಷಗಳು ದಕ್ಷಿಣ ರಾಜ್ಯಗಳ ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ. ಈ ಮಸೂದೆಯು ಜನಸಂಖ್ಯೆಯನ್ನು ನಿಯಂತ್ರಿಸಿದ ದಕ್ಷಿಣದ ರಾಜ್ಯಗಳು ಹಾಗೂ ಸಣ್ಣ ರಾಜ್ಯಗಳಿಗೆ ಮೋದಿ ಸರ್ಕಾರ ನೀಡಿದ ಉತ್ತಮ ಯೋಜನೆಯಾಗಿದೆ&rsquo; ಎಂದಿದ್ದಾರೆ.&lt;/p&gt;&lt;p&gt;ಜೊತೆಗೆ 2011ರ ಜನಗಣತಿ ಅನ್ವಯ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವುದರ ಬದಲಾಗಿ ಲೋಕಸಭೆಯ ಹಾಲಿ ಬಲದ ಶೇ.50ರಷ್ಟು ಹೆಚ್ಚಿಸಲಾಗುತ್ತದೆ. ಇದರಿಂದ ದಕ್ಷಿಣ ಭಾಗಕ್ಕೆ ಹೆಚ್ಚು ಲಾಭವಾಗಲಿದೆ&rsquo; ಎಂದರು.&lt;/p&gt;&lt;h2&gt;ದಕ್ಷಿಣದಲ್ಲಿ 50%ರ ಸೂತ್ರ ಹೇಗೆ?&lt;/h2&gt;&lt;p&gt;ಕರ್ನಾಟಕದಲ್ಲಿ ಸದ್ಯ 28 ಕ್ಷೇತ್ರಗಳಿವೆ, ಅದು 2011ರ ಜನಗಣತಿ ಆಧಾರದಲ್ಲಿ ಮರು ಹಂಚಿಕೆ ಮಾಡಿದರೆ 41ಕ್ಕೆ ಏರಿಕೆ ಆಗಲಿದೆ. ಒಂದು ವೇಳೆ ಶೇ.50ರ ಸೂತ್ರ ಬಳಕೆಯಾದರೆ 42ಕ್ಕೆ ಏರಿಕೆ ಆಗಲಿದೆ. ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳಿದ್ದು ಶೇ.50ರ ಸೂತ್ರದ ಆಧಾರದಲ್ಲಿ ಸಂಖ್ಯೆ 59ಕ್ಕೆ ಏರಲಿದೆ. ಕೇರಳದಲ್ಲಿ 20 ರಿಂದ 30ಕ್ಕೆ, ಆಂಧ್ರದಲ್ಲಿ 25ರಿಂದ ಸಂಖ್ಯೆ 37ಕ್ಕೆ , ಒಡಿಶಾದಲ್ಲಿ 21ರಿಂದ 31ಕ್ಕೆ ತೆಲಂಗಾಣದಲ್ಲಿ 17ರಿಂದ 25ಕ್ಕೆ ಏರಿಕೆ ಆಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.&lt;/p&gt;&lt;h3&gt;ದಕ್ಷಿಣ ಭಾರತಕ್ಕೆ ಹೇಗೆ ಲಾಭ?&lt;/h3&gt;&lt;p&gt;ರಾಜ್ಯ ಹಾಲಿ ಸ್ಥಾನ ಜನಗಣತಿ ಶೇ.50ರ ಸೂತ್ರ&lt;/p&gt;&lt;p&gt;ಕರ್ನಾಟಕ 28 41 42&lt;/p&gt;&lt;p&gt;ತಮಿಳುನಾಡು 39 59 59&lt;/p&gt;&lt;p&gt;ಕೇರಳ 22 33 37&lt;/p&gt;&lt;p&gt;ಆಂಧ್ರಪ್ರದೇಶ 25 33 37&lt;/p&gt;&lt;p&gt;ತೆಲಂಗಾಣ 17 24 25&lt;/p&gt;&lt;p&gt;ಒಡಿಶಾ 21 28 31&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/more-benefit-to-the-south-india-from-delimitation-says-mp-tejasv-surya-rav/articleshow-b9x4tcg"/>
        </item>
        <item>
            <title><![CDATA[ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಇನ್ನು ಇರೋಲ್ಲ? 13,262 ಕೋಟಿ ವೆಚ್ಚದಲ್ಲಿ 11 ಎಲಿವೇಟೆಡ್ ಕಾರಿಡಾರ್‌ಗೆ ಸಂಪುಟ ಅಸ್ತು!]]></title>
            <link>https://kannada.asianetnews.com/state/solution-to-bengaluru-traffic-problem-cabinet-approves-construction-of-11-elevated-corridors-rav/articleshow-k7l88sx</link>
            <guid isPermaLink="true">https://kannada.asianetnews.com/state/solution-to-bengaluru-traffic-problem-cabinet-approves-construction-of-11-elevated-corridors-rav/articleshow-k7l88sx</guid>
            <pubDate>Fri, 17 Apr 2026 09:58:48 +0530</pubDate>
            <description><![CDATA[&lt;p&gt;ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 13,262.70 ಕೋಟಿ ರು. ವೆಚ್ಚದಲ್ಲಿ 72.60 ಕಿ.ಮೀ ಉದ್ದದ 11 ಎಲಿವೇಟೆಡ್ ಕಾರಿಡಾರ್&zwnj;ಗಳ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಂಗಳೂರು ಸ್ಮಾರ್ಟ್&zwnj; ಇನ್&zwnj;ಫ್ರಾಸ್ಟ್ರಕ್ಚರ್&zwnj; ಲಿ. (ಬಿ-ಸ್ಮೈಲ್&zwnj;) ಸಂಸ್ಥೆಯು ಈ ಯೋಜನೆ ಅನುಷ್ಠಾನಗೊಳಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpctt390b6q1vma3ybbfevs2,imgname-----------------------2026-04-17t095201.571-1776399748383.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ಬೆಂಗಳೂರು (ಏ.17) &lt;/strong&gt;ಗ್ರೇಟರ್&zwnj; ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿನ 13262.70 ಕೋಟಿ ರು. ವೆಚ್ಚದಲ್ಲಿ 72.60 ಕಿಮೀ ಉದ್ದದ 11 ಎಲಿವೇಟೆಡ್&zwnj; ಕಾರಿಡಾರ್&zwnj; ನಿರ್ಮಾಣಕ್ಕೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.&lt;/p&gt;&lt;p&gt;ಬೆಂಗಳೂರು ಸ್ಮಾರ್ಟ್&zwnj; ಇನ್&zwnj;ಫ್ರಾಸ್ಟ್ರಕ್ಚರ್&zwnj; ಲಿ. (ಬಿ-ಸ್ಮೈಲ್&zwnj;) ಸಂಸ್ಥೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ 11 ಎಲಿವೇಟೆಡ್&zwnj; ಕಾರಿಡಾರ್&zwnj; ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮೋದಿಸಲಾಗಿದೆ. 2025-26ನೇ ಸಾಲಿನ ರಾಜ್ಯ ಬಜೆಟ್&zwnj;ನಲ್ಲಿ 120 ಕಿಮೀ ಉದ್ದದ ಸಿಗ್ನಲ್&zwnj; ಫ್ರೀ ಎಲೆವೇಟೆಡ್&zwnj; ಕಾರಿಡಾರ್&zwnj;ಗಳ ನಿರ್ಮಾಣದ ಘೋಷಣೆ ಮಾಡಲಾಗಿತ್ತು. ಅದರಲ್ಲಿ 72.60 ಕಿಮೀ ಉದ್ದದ 11 ಎಲಿವೇಟೆಡ್&zwnj; ಕಾರಿಡಾರ್&zwnj;ಗಳ ನಿರ್ಮಾಣಕ್ಕೆ ಅನುಮೋದಿಸಲಾಗಿದೆ. ಒಟ್ಟಾರೆ ಯೋಜನೆಗೆ 13262.70 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಆ ಪೈಕಿ 2 ಮೇಲ್ಸೇತುವೆಗಳು ಬಿಒಟಿ ಮಾದರಿಯಲ್ಲಿ ನಿರ್ಮಾಣಗೊಂಡರೆ, ಉಳಿದ 9 ಮೇಲ್ಸೇತುವೆಗಳು ಇಟಿಸಿ ಮಾದರಿಯಲ್ಲಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ.&lt;/p&gt;&lt;p&gt;ಒಟ್ಟಾರೆ 11 ಮೇಲ್ಸೇತುವೆಗಳ ನಿರ್ಮಾಣಕ್ಕೆ13262.70 ಕೋಟಿ ರು.ಗಳಾಗಲಿದ್ದು, ಅದರಲ್ಲಿ ರಾಜ್ಯ ಸರ್ಕಾರ 7150 ಕೋಟಿ ರು. ನೀಡಲಿದೆ. ಉಳಿದಂತೆ 2072.57 ಕೋಟಿ ರು. ಭೂಸ್ವಾಧೀನಕ್ಕೆ ವ್ಯಯಿಸಲಾಗುತ್ತದೆ. ಬಾಕಿ ಅನುದಾನವನ್ನು ಖಾಸಗಿ ಸಂಸ್ಥೆ ಮೂಲಕ ಪಡೆಯುವ ಯೋಚನೆ ಮಾಡಲಾಗಿದೆ.&lt;/p&gt;&lt;h2&gt;ಎಲ್ಲೆಲ್ಲಿ ಮೇಲ್ಸೇತುವೆಗಳ ನಿರ್ಮಾಣ&lt;/h2&gt;&lt;p&gt;ಯಶವಂತಪುರದಿಂದ ಹಳೇ ಮದ್ರಾಸ್&zwnj; ರಸ್ತೆ, ಮಾರೇನಹಳ್ಳಿ ಮುಖ್ಯರಸ್ತೆಯಿಂದ ಕನಕಪುರ ಮುಖ್ಯರಸ್ತೆ, ಶೋಲೇ ವೃತ್ತದಿಂದ ಸೇಂಟ್&zwnj; ಜಾನ್&zwnj; ಆಸ್ಪತ್ರೆ, ಹಳೇ ಮದ್ರಾಸ್&zwnj; ರಸ್ತೆಯಿಂದ ಎಲೆಕ್ಟ್ರಾನಿಕ್&zwnj; ಸಿಟಿ ಮೇಲ್ಸೇತುವೆವರೆಗೆ, ದೊಡ್ಡಬಳ್ಳಾಪುರ ರಸ್ತೆಯಿಂದ ಕೋಗಿಲು ವೃತ್ತ, ಕೋಣನಕುಂಟೆ ಕ್ರಾಸ್&zwnj; ಬಳಿ, ಸಿರ್ಸಿ ವೃತ್ತದಿಂದ ನಾಯಂಡಹಳ್ಳಿ, ಕನಕಪುರ ರಸ್ತೆ ರಘುವನಹಳ್ಳಿ ಕ್ರಾಸ್&zwnj;, ಮಿನರ್ವ ವೃತ್ತದಿಂದ ಹಡ್ಸನ್&zwnj; ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ನೃಪತುಂಗ ರಸ್ತೆ, ತುಮಕೂರು ರಸ್ತೆಯ ಎಂಇಐ ಜಂಕ್ಷನ್&zwnj;, ವೆಸ್ಟ್&zwnj; ಆಫ್&zwnj; ಕಾರ್ಡ್&zwnj; ರಸ್ತೆಯಿಂದ ಹೊರವರ್ತುಲ ರಸ್ತೆ, ನಾಗವಾರ ಜಂಕ್ಷನ್&zwnj;ನಿಂದ ಬಾಗಲೂರು ಮುಖ್ಯರಸ್ತೆ, ಮದರ್&zwnj; ಥೆರೇಸಾ ಕ್ರಾಸ್&zwnj;ನಿಂದ ಬಾಗಲೂರು&lt;/p&gt;&lt;h3&gt;ರೋಟರಿ ಮೇಲ್ಸೇತುವೆಗೂ ಅಸ್ತು&lt;/h3&gt;&lt;p&gt;ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೈಯಪ್ಪನಹಳ್ಳಿಯ ಐಒಸಿ ಜಂಕ್ಷನ್&zwnj;ನಲ್ಲಿ ರೋಟರಿ ಮೇಲ್ಸೇತುವೆ ನಿರ್ಮಾಣ ಯೋಜನೆಯ 436.44 ಕೋಟಿ ರು. ಪರಿಷ್ಕೃತ ಅಂದಾಜಿಗೂ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.&lt;/p&gt;&lt;p&gt;ಹಾಗೆಯೇ, ಜಲಮಂಡಳಿಯ 5 ತ್ಯಾಜ್ಯ ನೀರು ಸಂರಕ್ಷಣಾ ಘಟಕದಿಂದ ಉತ್ಪತ್ತಿಯಾಗುವ ಬಯೋಗ್ಯಾಸ್&zwnj;ನ್ನು ಬಳಸಿ ಬಯೋಗ್ಯಾಸ್&zwnj; ಪ್ಯೂರಿಫಿಕೇಷನ್&zwnj; ಆ್ಯಂಡ್&zwnj; ಕಾಂಪ್ರಹೇನ್ಸಿವ್&zwnj; ಸಿಸ್ಟಂ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 85 ಕೋಟಿ ರು. ಮುಂದಿನ 20 ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/solution-to-bengaluru-traffic-problem-cabinet-approves-construction-of-11-elevated-corridors-rav/articleshow-k7l88sx"/>
        </item>
        <item>
            <title><![CDATA[ರಾಜ್ಯದಲ್ಲಿ ಮೇ.29ರಿಂದ ಶಾಲೆ ಪುನಾರಂಭ, ದಸರಾ ರಜೆ ಸೇರಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ]]></title>
            <link>https://kannada.asianetnews.com/state/karnataka-schools-to-reopen-for-2026-27-academic-year-on-may-29/articleshow-uq8fg0p</link>
            <guid isPermaLink="true">https://kannada.asianetnews.com/state/karnataka-schools-to-reopen-for-2026-27-academic-year-on-may-29/articleshow-uq8fg0p</guid>
            <pubDate>Fri, 17 Apr 2026 09:49:29 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮೇ.29ರಿಂದ ಶಾಲೆ ಪುನಾರಂಭ, ದಸರಾ ರಜೆ ಸೇರಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ರಾಜ್ಯದ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ದಸರಾ ರಜೆ ದಿನವನ್ನು ನಿರ್ಧರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmm9bahnss2hkr4z98zkc1ey,imgname-private-school-book-price-hike-class-5-english-book-1035-parents-protest-fee-regulation-ncert-vs-private-publishers-1-1774502390324.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17) &lt;/strong&gt;ಪರೀಕ್ಷೆ, ಫಲಿತಾಂಶ ಮುಗಿಸಿ ರಜೆಯ ಮಜಾ ಸವಿಯುತ್ತಿರುವ ವಿದ್ಯಾರ್ಥಿಗಳಿಗೆ ಇದೀಗ 2026-27ರ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಬಾರಿ ರಾಜ್ಯದಲ್ಲಿ ಮೇ.29ರಿಂದ ಶಾಲೆಗಳು ಪುನರ್ ಆರಂಭಗೊಳ್ಳಲಿದೆ. ರಾಜ್ಯದ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 2026-27 ನೆ ಶೈಕ್ಷಣಿಕ ವರ್ಷವು ಮೇ 29 ರಿಂದ ಆರಂಭವಾಗಲಿವೆ ಎಂದಿದೆ.&lt;/p&gt;&lt;h2&gt;ದಸರಾಗೆ 18 ದಿನ ರಜೆ&lt;/h2&gt;&lt;p&gt;ಮೇ.29 ರಿಂದ ಶಾಲೆಗಳು ಆರಂಭಗೊಂಡರೆ, ಈ ಬಾರಿ ದಸರಾ ಹಬ್ಬಕ್ಕೆ 18 ದಿನ ರಜೆ ನೀಡಲಾಗಿದೆ. ಹೀಗಾಗಿ ಶೈಕ್ಷಣಿಕ ಸಾಲಿನ ಮೊದಲ ಅವಧಿ ಮೇ.29 ರಿಂದ ಅಕ್ಟೋಬರ್ 2ರ ವರೆಗೆ ಇರಲಿದೆ. ಬಳಿಕ 18 ದಿನ ದಸರ ರಜೆ ಸವಿಯನ್ನು ವಿದ್ಯಾರ್ಥಿಗಳು ಅನುಭವಿಸಲಿದ್ದಾರೆ.&lt;/p&gt;&lt;h2&gt;ಅಕ್ಟೋಬರ್ 22ರಿಂದ ಎರಡನೇ ಅವಧಿ&lt;/h2&gt;&lt;p&gt;2026-27ರ ಸಾಲಿನ ಶೈಕ್ಷಣಿಕ ವರ್ಷದ ಎರಡನೇ ಅವಧಿ ಅಕ್ಟೋಬರ್ 22 ರಿಂದ ಆರಂಭಗೊಳ್ಳಲಿದೆ. ಈ ಅವಧಿ ಎಪ್ರಿಲ್ ತಿಂಗಳವರೆಗೆ ಇರಲಿದೆ. ಎಪ್ರಿಲ್ ತಿಂಗಳಲ್ಲಿ ಪರೀಕ್ಷೆಯೊಂದಿಗೆ ಶೈಕ್ಷಣಿಕ ವರ್ಷ ಅಂತ್ಯಗೊಳ್ಳಲಿದೆ. ಒಟ್ಟು 365 ದಿನಗಳಲ್ಲಿ 245 ಕರ್ತವ್ಯ ದಿನಗಳಾಗಿದೆ ಎಂದಿದೆ. ಇದರಲ್ಲಿ ಬೋಧನೆಗೆ 181 ದಿನ , ಪಠ್ಯೇತರ ಚಟುವಟಿಕೆ ಉಳಿದ ದಿನಗಳನ್ನು ಮೀಸಲಿಡಲಾಗುವುದು ಎಂದು ಶೈಕ್ಷಣಿಕ ಪ್ರಕಟಣೆಯಲ್ಲಿ ಹೇಳಲಾಗಿದೆ. ಜೂನ್ 30ರೊಳಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.&lt;/p&gt;&lt;h2&gt;ಶಾಲೆ ಬಿಟ್ಟ ಮಕ್ಕಳಿಗಾಗಿ ವಿಶೇಷ ಆಂದೋಲನ&lt;/h2&gt;&lt;p&gt;ಶಾಲೆ ಬಿಟ್ಟ 6 ರಿಂದ 18 ವರ್ಷದ ಮಕ್ಕಳನ್ನು ಮರಳಿ ತರಲು ವಿಶೇಷ ಆಂದೋಲನ ನಡೆಸಲು ಇಲಾಖೆ ಆದೇಶಿಸಿಸಿದೆ. ಜಿಲ್ಲೆ, ತಾಲೂಕು, ಹಾಗೂ ಗ್ರಾಮಮಟ್ಟದಲ್ಲಿ ಈ ಆಂದೋಲ ಸಕ್ರಿಯವಾಗಿ ಜಾರಿಗೊಳಿಸಲು ಇಲಾಖೆ ತಯಾರಿ ಮಾಡಿಕೊಂಡಿದೆ. ಈ ಮೂಲಕ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ ವಿದ್ಯಾಭ್ಯಾಸ ಮಟ್ಟ ಹೆಚ್ಚಿಸಲು, ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಇಲಾಖೆ ಮುಂದಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/karnataka-schools-to-reopen-for-2026-27-academic-year-on-may-29/articleshow-uq8fg0p"/>
        </item>
        <item>
            <title><![CDATA[ಇರಾನ್‌ ಸಂಸ್ಕರಿತ ಯುರೇನಿಯಂ ನೀಡಲು ಒಪ್ಪಿದೆ:  ಟ್ರಂಪ್]]></title>
            <link>https://kannada.asianetnews.com/world-news/iran-agreed-to-provide-enriched-uranium-says-trump-rav/articleshow-5mlte21</link>
            <guid isPermaLink="true">https://kannada.asianetnews.com/world-news/iran-agreed-to-provide-enriched-uranium-says-trump-rav/articleshow-5mlte21</guid>
            <pubDate>Fri, 17 Apr 2026 09:32:50 +0530</pubDate>
            <description><![CDATA[&lt;p&gt;ಇಸ್ರೇಲ್&zwnj;- ಲೆಬನಾನ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಇರಾನ್&zwnj; ಸಂಘರ್ಷದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. &lsquo;ಇರಾನ್&zwnj; ಸಂಸ್ಕರಿತ ಯುರೇನಿಯಂ ನೀಡಲು ಒಪ್ಪಿದೆ&rsquo; ಎಂದಿದ್ದು ಕುತೂಹಲಕ್ಕೆ ಕಾರಣವಾಗಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpcjbf87ejcqmm73a1svjchm,imgname-trump-iran-nuclear-deal-enriched-uranium-nuclear-dust-hormuz-crisis-us-iran-talks-2026-peace-agreement-update-0000-1776390880519.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj;:&lt;/strong&gt; ಇಸ್ರೇಲ್&zwnj;- ಲೆಬನಾನ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಇರಾನ್&zwnj; ಸಂಘರ್ಷದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. &lsquo;ಇರಾನ್&zwnj; ಸಂಸ್ಕರಿತ ಯುರೇನಿಯಂ ನೀಡಲು ಒಪ್ಪಿದೆ&rsquo; ಎಂದಿದ್ದು ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;p&gt;ಶ್ವೇತ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್&zwnj;, &lsquo;ಇರಾನ್&zwnj; ನಮಗೆ ಸಂಸ್ಕರಿಸಿದ ಯುರೇನಿಯಂ ನೀಡಲು ಒಪ್ಪಿದೆ. ಹೀಗಾಗಿ ನಾವು ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ&rsquo; ಎಂದರು. ಕಳೆದ ವಾರ ಇಸ್ಲಾಮಾಬಾದ್&zwnj; ಮಾತುಕತೆ ವೇಳೆ ಅಮೆರಿಕ ಇರಾನ್&zwnj; ಬಳಿ 20 ವರ್ಷ ಯುರೇನಿಯಂ ಸ್ಥಗಿತಕ್ಕೆ ಬೇಡಿಕೆಯಿಟ್ಟಿತ್ತು. ಆದರೆ ಇರಾನ್&zwnj; 5 ವರ್ಷಕಷ್ಟೇ ಸಮ್ಮತಿಸಿತ್ತು. ಇದೇ ಕಾರಣಕ್ಕೆ ಸಂಧಾನ ಮಾತುಕತೆ ಮುರಿದು ಬಿದ್ದಿತ್ತು ಎಂದು ವರದಿಯಾಗಿತ್ತು.&lt;/p&gt;&lt;h2&gt;ಇರಾನ್&zwnj;ನಿಂದ ಯುರೇನಿಯಂ?&lt;/h2&gt;&lt;p&gt;ರಷ್ಯಾ, ಇರಾನ್&zwnj; ತೈಲ ನಿರ್ಬಂಧದ ವಿನಾಯಿತಿ ವಿಸ್ತರಣೆ ಇಲ್ಲ: ಅಮೆರಿಕ ಕಳೆದ ತಿಂಗಳು ನೀಡಲಾಗಿದ್ದ ರಷ್ಯಾ ಮತ್ತು ಇರಾನ್ ತೈಲದ ಮೇಲಿನ ನಿರ್ಬಂಧಗಳ ವಿನಾಯಿತಿ ವಿಸ್ತರಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಹೋರ್ಮುಜ್&zwnj; ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ಈ ಘೋಷಣೆ ಮಾಡಿದ್ದು, ಇದು ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅಮೆರಿಕದ ವಿತ್ತ ಸಚಿವ ಸ್ಕಾಟ್ ಬೆಸೆಂಟ್, &lsquo;ರಷ್ಯಾ ಮತ್ತು ಇರಾನ್&zwnj; ತೈಲದ ಮೇಲಿನ ಸಾಮಾನ್ಯ ಪರವಾನಗಿ ನವೀಕರಿಸುವುದಿಲ್ಲ. ಮಾರ್ಚ್&zwnj;ನಲ್ಲಿ ತಾತ್ಕಾಲಿಕವಾಗಿ ನೀಡಲಾದ ವಿನಾಯಿತಿಗಳು ಯುದ್ಧದಿಂದ ಉಂಟಾದ ತೈಲ ಸರಬರಾಜು ಸಮಸ್ಯೆಯನ್ನು ಸರಿಪಡಿಸುವ ಉದ್ದೇಶ ಹೊಂದಿದ್ದವು. ಇರಾನ್ ತೈಲಕ್ಕೆ ನೀಡಲಾದ ವಿನಾಯಿತಿ ಈ ವಾರ ಮುಗಿಯುತ್ತಿದೆ. ರಷ್ಯಾದ್ದು ಕಳೆದ ವಾರಾಂತ್ಯವೇ ಅಂತ್ಯಗೊಂಡಿದೆ. ಇವನ್ನು ಮತ್ತೆ ವಿಸ್ತರಿಸುವುದಿಲ್ಲ&rsquo; ಎಂದು ಘೋಷಿಸಿದ್ದಾರೆ. ಭಾರತವನ್ನು &lsquo;ಅತ್ಯಂತ ಮುಖ್ಯ ಪಾಲುದಾರ&rsquo; ಎಂದು ಕರೆದಿರುವ ಅವರು, ಅಮೆರಿಕದ ತೈಲವನ್ನು ಹೆಚ್ಚು ಖರೀದಿಸುವಂತೆ ಸಲಹೆ ನೀಡಿದ್ದಾರೆ&lt;/p&gt;&lt;p&gt;ಮಾ.12ರಂದು ಅಮೆರಿಕ ಭಾರತಕ್ಕೆ ರಷ್ಯಾ ತೈಲ ಖರೀದಿಸಲು ವಿಶೇಷ 30 ದಿನಗಳ ವಿನಾಯಿತಿ ನೀಡಿತ್ತು. ಇರಾನ್ ತೈಲಕ್ಕೆ ನೀಡಲಾದ ವಿನಾಯಿತಿ ಸುಮಾರು 14 ಕೋಟಿ ಬ್ಯಾರೆಲ್ ತೈಲವನ್ನು ಒಳಗೊಂಡಿತ್ತು. ಭಾರತ ಈ ವಿನಾಯಿತಿಯಿಂದ ಗಣನೀಯ ಲಾಭ ಪಡೆದಿದ್ದು, ಸುಮಾರು 3 ಕೋಟಿ ಬ್ಯಾರೆಲ್ ರಷ್ಯಾ ತೈಲವನ್ನು ಆರ್ಡರ್ ಮಾಡಿತ್ತು. ಆದರೆ ಈಗ ಈ ಕ್ರಮವನ್ನು ಮುಂದುವರಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಈ ನಿರ್ಧಾರದಿಂದ ಭಾರತಕ್ಕೆ ರಿಯಾಯಿತಿಯಲ್ಲಿ ತೈಲ ಸಿಗುವುದು ಕಷ್ಟವಾಗಬಹುದು ಮತ್ತು ಜಾಗತಿಕ ತೈಲ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/iran-agreed-to-provide-enriched-uranium-says-trump-rav/articleshow-5mlte21"/>
        </item>
        <item>
            <title><![CDATA[ಕುಡಿದ ಗ್ರಾಹಕನಿಗೆ ಟೆಸ್ಟ್ ಡ್ರೈವ್ ಕೊಟ್ಟು ಎಡವಟ್ಟು ಮಾಡಿದ ಮಹೀಂದ್ರ ಶೋ ರೂಂ, ಹಲವು ಕಾರಿಗೆ ಡಿಕ್ಕಿ]]></title>
            <link>https://kannada.asianetnews.com/gallery/state/mahindra-showroom-under-fire-for-allowing-test-drive-to-inebriated-customer-bengaluru-x9xakf4</link>
            <guid isPermaLink="true">https://kannada.asianetnews.com/gallery/state/mahindra-showroom-under-fire-for-allowing-test-drive-to-inebriated-customer-bengaluru-x9xakf4</guid>
            <pubDate>Fri, 17 Apr 2026 09:14:47 +0530</pubDate>
            <description><![CDATA[&lt;p&gt;ಕುಡಿದ ಗ್ರಾಹಕನಿಗೆ ಟೆಸ್ಟ್ ಡ್ರೈವ್ ಕೊಟ್ಟ ಎಡವಟ್ಟು ಮಾಡಿದ ಮಹೀಂದ್ರ ಶೋ ರೂಂ, ಹಲವು ಕಾರಿಗೆ ಡಿಕ್ಕಿ, ಕುಡಿದ ಮತ್ತಿನಲ್ಲಿ ಮನಸ್ಸೋ ಇಚ್ಚೆ ಕಾರು ಚಲಾಯಿಸಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpcrc4m0n7vy0zjsh5rs3j6c,imgname-mahindra-test-drive-goes-wrong-1776397193856.png" type="image/jpeg" height="390" width="690"/>
            <content:encoded><![CDATA[&lt;p&gt;ಕುಡಿದ ಗ್ರಾಹಕನಿಗೆ ಟೆಸ್ಟ್ ಡ್ರೈವ್ ಕೊಟ್ಟ ಎಡವಟ್ಟು ಮಾಡಿದ ಮಹೀಂದ್ರ ಶೋ ರೂಂ, ಹಲವು ಕಾರಿಗೆ ಡಿಕ್ಕಿ, ಕುಡಿದ ಮತ್ತಿನಲ್ಲಿ ಮನಸ್ಸೋ ಇಚ್ಚೆ ಕಾರು ಚಲಾಯಿಸಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಕಂಠಪೂರ್ತಿ ಕುಡಿದ ಬಂದ ಗ್ರಾಹಕನೊಬ್ಬನಿಗೆ ಮಹಿಂದ್ರ ಶೋ ರೂಂ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಕೇಸ್ ದಾಖಲಾಗಿದೆ. ಮಹಾದೇವಪುರ ಸಿಬ್ಬಂದಿಗಳು ಅಭಿಲಾಶ್ ಅನ್ನೋ ಗ್ರಾಹಕನ ಹೆಚ್ಚು ಪರಿಶೀಲಿಸದೆ, ಕಣ್ಮುಚ್ಚಿ ಟೆಸ್ಟ್ ಡ್ರೈವ್ ಮಾಡಲು ಮಹೀಂದ್ರ ಎಲೆಕ್ಟ್ರಿಕ್ ಕಾರು ನೀಡಿದ್ದಾರೆ.&lt;/p&gt;&lt;img&gt;&lt;p&gt;ಮಹಾದೇವರ ಮಹೀಂದ್ರ ಶೋ ರೂಂ ಸಿಬ್ಬಂದಿಗಳು ಗ್ರಾಹಕನ ಟೆಸ್ಟ್ ಡ್ರೈವ್ ಕೇಳಿದ ಬೆನ್ನಲ್ಲೇ ಕಾರು ನೀಡಿದ್ದಾರೆ. ಹೆಚ್ಚಿನ ಪರಿಶೀಲನೆ ಇಲ್ಲದೆ ಕಾರು ನೀಡಲಾಗಿದೆ. ಆದರೆ ಕಂಠಪೂರ್ತಿ ಕುಡಿದಿದ್ದ ಅಭಿಲಾಶ್ ಕಾರನ್ನು ಅಡ್ಡಾದಿಟ್ಟಿ ಚಲಾಯಿಸಿದ್ದಾನೆ. ಇದರ ಪರಿಣಾಮ ಅಪಘಾತ ಸಂಭವಿಸಿದೆ.&lt;/p&gt;&lt;img&gt;&lt;p&gt;ಅಭಿಲಾಶ್ ಕುಡಿದ ನಶೆಯಲ್ಲಿ ಮಹೀಂದ್ರ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಹ್ಯುಂಡೈ ಕ್ರೆಟಾ ಸೇರಿದಂತೆ ನಾಲ್ಕು ಕಾರುಗಳು ಜಖಂ ಗೊಂಡಿದೆ. ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ&lt;/p&gt;&lt;img&gt;&lt;p&gt;ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದ ಅಭಿಲಾಶ್, ರಮೇಶ್ ಎಂಬುವವರಿಗೂ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ರಮೇಶ್ ಕಾಲು ಕಟ್ ಆಗಿದೆ. ರಮೇಶ್ ಅವರನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಡಿದ ಮತ್ತಿನಲ್ಲಿ ಗ್ರಾಹಕ ಅಭಿಲಾಶ್ ಟೆಸ್ಟ್ ಡ್ರೈವ್ ಮಾಡಿ ಹಲವು ಅವಾಂತರ ಸೃಷ್ಟಿಸಿದ್ದಾನೆ.&lt;/p&gt;&lt;img&gt;&lt;p&gt;ರಮೇಶ್ ಕಾಲು ಮುರಿದು ನಾಲ್ಕು ಕಾರುಗಳನ್ನು ಜಖಂ ಗೊಳಿಸಿದ ಅಭಿಲಾಶ್&zwnj;ನನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಅಭಿಲಾಶ್&zwnj;ನ ವಶಕ್ಕೆ ಪಡೆದಿದ್ದಾರೆ. ಗಾಯಗೊಂಡಿದ್ದ ಅಭಿಲಾಶ್&zwnj;ನನ್ನು ಆಸ್ಪತ್ರೆ ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಲಾಶ್&zwnj;ಗೆ ಮಹಾದೇವಪುರ ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದಾರೆ. ಭಾರತೀಯ ಮೋಟಾರು ಕಾಯ್ದೆ ಹಾಗೂ BNS 125(a), 281 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ಅಭಿಲಾಶ್&zwnj;ಗೆ ನೋಟಿಸ್&lt;/h2&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/mahindra-showroom-under-fire-for-allowing-test-drive-to-inebriated-customer-bengaluru-x9xakf4"/>
        </item>
        <item>
            <title><![CDATA[ಮಹಾರಾಷ್ಟ್ರ ಮಾದರಿಯಲ್ಲಿ ಕನ್ನಡ ಮಾತಾಡಲು ಬಾರದ ಟ್ಯಾಕ್ಸಿ ಚಾಲಕರ ಡಿಎಲ್ ರದ್ದಾಗಲಿ: ಕರವೇ]]></title>
            <link>https://kannada.asianetnews.com/state/cancel-the-dl-of-taxi-drivers-who-cannot-speak-kannada-krv-narayanagowda-demand-rav/articleshow-et7s80d</link>
            <guid isPermaLink="true">https://kannada.asianetnews.com/state/cancel-the-dl-of-taxi-drivers-who-cannot-speak-kannada-krv-narayanagowda-demand-rav/articleshow-et7s80d</guid>
            <pubDate>Fri, 17 Apr 2026 09:14:03 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದಲ್ಲಿ ಮರಾಠಿ ಬಾರದ ಚಾಲಕರ ಪರವಾನಗಿ ರದ್ದುಗೊಳಿಸುವ ನಿರ್ಧಾರವನ್ನು ಸ್ವಾಗತಿಸಿರುವ ಕರವೇ, ಕರ್ನಾಟಕದಲ್ಲೂ ಇದೇ ನಿಯಮ ಜಾರಿಗೆ ತರಲು ಆಗ್ರಹಿಸಿದೆ. ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಬಾರದ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರ ಪರವಾನಗಿ ರದ್ದುಗೊಳಿಸಲು ಕರವೇ ಆಗ್ರಹಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hb75xgzk2ys1w3bg12wkztne,imgname-nray.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಬಾರದ ಟ್ಯಾಕ್ಸಿ ಮತ್ತು ಆಟೋ ಚಾಲಕರ ಪರವಾನಗಿಯನ್ನು ರದ್ದುಪಡಿಸಲು ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ. ಇದೇ ನಿಯಮವನ್ನು ಇಲ್ಲಿಯೂ ಕರ್ನಾಟಕ ಸರ್ಕಾರ ಅನುಷ್ಠಾನಕ್ಕೆ ತರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.&lt;/p&gt;&lt;h2&gt;ಕರವೇ ಎಕ್ಸ್ ಖಾತೆಯಲ್ಲಿ ಏನಿದೆ?&lt;/h2&gt;&lt;p&gt;ಈ ನಿಯಮ ಮಹಾರಾಷ್ಟ್ರದಲ್ಲಿ ಮೇ 1ರಿಂದ ಜಾರಿಗೆ ಬರಲಿದೆ. ಈಗಾಗಲೇ ಸಾರಿಗೆ ಇಲಾಖೆಯ ಅಧಿಕಾರಿಗಳು ಆ ರಾಜ್ಯಾದ್ಯಂತ 59 ಆರ್&zwnj;ಟಿಒ ಕಚೇರಿಗಳಲ್ಲಿ ತಪಾಸಣೆ ನಡೆಸಿ, ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿಯದ ಚಾಲಕರ ಪರವಾನಗಿಗಳನ್ನು ರದ್ದುಗೊಳಿಸುವ ಕೆಲಸ ಆರಂಭಿಸಿರುವುದನ್ನು ಕರವೇ ಸ್ವಾಗತಿಸುತ್ತದೆ ಎಂದು &lsquo;ಎಕ್ಸ್&zwnj;&rsquo; ಖಾತೆಯಲ್ಲಿ ಟ್ವೀಟ್&zwnj; ಮಾಡಿದ್ದಾರೆ.&lt;/p&gt;&lt;h3&gt;ಮಹಾರಾಷ್ಟ್ರ ತೀರ್ಮಾನ ಸರಿ ಇದೆ&lt;/h3&gt;&lt;p&gt;ಜೀವನ ನಿರ್ವಹಣೆಗಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವವರು ಆ ರಾಜ್ಯದ ಅಧಿಕೃತ ಭಾಷೆಯನ್ನು ಕಲಿಯುವುದು ಅತ್ಯಂತ ಮೂಲಭೂತ ಕರ್ತವ್ಯವಾಗಿದೆ. ತಮ್ಮ ಜೀವನಾಧಾರಕ್ಕಾಗಿ ಆ ರಾಜ್ಯದ ಮಣ್ಣು, ನೀರು ಮತ್ತು ಜನರನ್ನು ಅವಲಂಬಿಸುವಾಗ, ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ಜನರೊಂದಿಗೆ ಬೆರೆಯುವುದು ಸಹಜವಾದ ನೈತಿಕ ಜವಾಬ್ದಾರಿಯಾಗಿದೆ. ಹಾಗಾಗಿ ಮಹಾರಾಷ್ಟ್ರ ಸರ್ಕಾರದ ಈ ತೀರ್ಮಾನ ಸಂಪೂರ್ಣವಾಗಿ ಸರಿಯಾಗಿದ್ದು ಇಂದಿನ ಅಗತ್ಯವಾದದ್ದು ಎಂದಿದ್ದಾರೆ.&lt;/p&gt;&lt;p&gt;ತಮಿಳುನಾಡಿನಲ್ಲೂ ಅಲ್ಲಿನ ಚಾಲಕರು ಪರವಾನಗಿ ಪಡೆಯುವಾಗ ಅಥವಾ ನವೀಕರಿಸುವಾಗ ತಮಿಳು ಭಾಷೆಯಲ್ಲಿ ಕನಿಷ್ಠ ಮಟ್ಟದ ಜ್ಞಾನ ಇದೆಯೇ ಎಂದು ಪರೀಕ್ಷಿಸಲಾಗುತ್ತಿದೆ. ಈ ಧೋರಣೆಯನ್ನು ಕರ್ನಾಟಕ ಸರ್ಕಾರವೂ ತಕ್ಷಣ ಅನುಸರಿಸಬೇಕು. ಕನ್ನಡ ಬಾರದ ಆಟೋ, ಟ್ಯಾಕ್ಸಿ, ಕ್ಯಾಬ್ ಮತ್ತು ಇತರ ಸಾರಿಗೆ ವಾಹನ ಚಾಲಕರ ಪರವಾನಗಿ ರದ್ದುಗೊಳಿಸುವ ಸ್ಪಷ್ಟ ನಿಯಮಾವಳಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cancel-the-dl-of-taxi-drivers-who-cannot-speak-kannada-krv-narayanagowda-demand-rav/articleshow-et7s80d"/>
        </item>
        <item>
            <title><![CDATA[ನಿನ್ನ ಹೆಂಡತಿಯನ್ನು ನಮ್ಮ ಬಳಿ ಕಳಿಸು, ಟಿಸಿಎಸ್ ಜಿಹಾದ್ ಸ್ಫೋಟಕ ಮಾಹಿತಿ ಬಯಲು]]></title>
            <link>https://kannada.asianetnews.com/india-news/tcs-corporate-jihad-row-shocking-allegations-of-workplace-harassment-emerge/articleshow-33dnde1</link>
            <guid isPermaLink="true">https://kannada.asianetnews.com/india-news/tcs-corporate-jihad-row-shocking-allegations-of-workplace-harassment-emerge/articleshow-33dnde1</guid>
            <pubDate>Fri, 17 Apr 2026 08:37:49 +0530</pubDate>
            <description><![CDATA[&lt;p&gt;ನಿನ್ನ ಹೆಂಡತಿಯನ್ನು ನಮ್ಮ ಬಳಿ ಕಳಿಸು, ಟಿಸಿಎಸ್ ಜಿಹಾದ್ ಸ್ಫೋಟಕ ಮಾಹಿತಿ ಬಯಲು, ಟಿಸಿಎಸ್ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲ, ಪುರುಷರ ಮೇಲೂ ಕಾರ್ಪೋರೇಟ್ ಜಿಹಾದ್ ನಡೆಸಿರುವುದು ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpa9nxz3g45rynfz9g7h2k2h,imgname-tcs-nashik-employee-harassment-forced-religion-conversion-sexual-abuse-allegations-india-workplace-case---6-1776314677219.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಸಿಕ್ (ಏ.17) &lt;/strong&gt;ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಕಂಪನಿಯಲ್ಲಿ ನಡೆಯುತ್ತಿರುವ ಕಾರ್ಪೋರೇಟ್ ಜಿಹಾದ್ ಕುರಿತು ನಾಸಿಕ್ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಬಯಲು ಮಾಡಿದ್ದಾರೆ. ಈ ಸಂಬಂಧ ಕಂಪನಿ ಹೆಚ್ಆರ್ ನಿದಾ ಖಾನ್ ಸೇರಿದಂತೆ 7 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಮಹಿಳಾ ಉದ್ಯೋಗಿಗಳ ಅತ್ಯಾ**ರ, ಲವ್ ಜಿಹಾದ್ ಪ್ರಕರಣ ತನಿಖೆ ತೀವ್ರಗೊಂಡಂತೆ ಇದೀಗ ಕೆಲ ಸ್ಫೋಟಕ ಮಾಹಿತಿ ಬಯಲಾಗಿದೆ. ಪುರುಷ ಉದ್ಯೋಗಳ ಮೇಲೂ ಕಾರ್ಪೋರೇಟ್ ಜಿಹಾದ್ ನಡೆಸಲಾಗಿದೆ. ಕೆಲ ಉದ್ಯೋಗಿಗಳ ಹೆಂಡತಿಯನ್ನು ತಮ್ಮ ಬಳಿ ಕಳುಹಿಸು ಎಂದು ಅಲ್ಪಸಂಖ್ಯಾತ ಸಮುದಾಯದ ಟೀಂ ಲೀಡರ್ಸ್ ಹೇಳಿರುವುದು ಮಾತ್ರವಲ್ಲ, ಕಳುಹಿಸದೇ ಇದ್ದ ಉದ್ಯೋಗಿಗಳಿಗೆ ಕಲ್ಮಾ ಪಠಿಸುವಂತೆ, ನಮಾಜ್ ಮಾಡುವಂತೆ ಬೆದರಿಸಿದ ಘಟನೆಯೂ ನಡೆದಿದೆ.&lt;/p&gt;&lt;h2&gt;ಕಚೇರಿಯಲ್ಲಿ ಜಿಹಾದ್&lt;/h2&gt;&lt;p&gt;ಟಿಸಿಎಸ್&zwnj; ಕಚೇರಿಯಲ್ಲಿ ಜಿಹಾದ್&zwnj; ನಡೆಸುತ್ತಿದ್ದ ಆರೋಪಿಗಳು ಕೇವಲ ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ. ಪುರುಷರಿಗೂ ಅವರ ಪತ್ನಿಯನ್ನು ತಮ್ಮ ಬಳಿ ಕಳಿಸುವಂತೆ ಕಿರುಕುಳ ನೀಡುತ್ತಿದ್ದರು. ಒಪ್ಪದಿದ್ದಾಗ ಮುಸ್ಲಿಮರ ಟೋಪಿ ಧರಿಸುವಂತೆ, ಕಲ್ಮಾ ಪಠಿಸುವಂತೆ ಮತ್ತು ನಮಾಜ್&zwnj; ಮಾಡುವಂತೆ ಪೀಡಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.&lt;/p&gt;&lt;p&gt;ಈ ಬಗ್ಗೆ ಉದ್ಯೋಗಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದು, &lsquo;ನಿನಗೆ ಮಕ್ಕಳಾಗಿಲ್ಲ. ಹೀಗಾಗಿ ನಿನಗೆ ಮಗು ಬೇಕೆಂದರೆ, ಹೆಂಡತಿಯನ್ನು ನಮ್ಮ ಬಳಿ ಕಳಿಸು ಎಂದು ಟೀಂ ಮುಖ್ಯಸ್ಥ ತೌಸಿಫ್&zwnj; ಅಖ್ತರ್&zwnj;, ಡ್ಯಾನಿಷ್&zwnj; ಶೇಖ್&zwnj; ಹಾಗೂ ಇತರರು ಅವಾಚ್ಯವಾಗಿ ಮಾತಾಡುತ್ತಿದ್ದರು. ಒಪ್ಪದೇ ಇದ್ದಾಗ ಮುಖ್ಯ ಕಚೇರಿಗೆ ನನ್ನ ಬಗ್ಗೆ ಸುಳ್ಳು ವರದಿ ಕಳಿಸುತ್ತಿದ್ದರು. ಮುಸ್ಲಿಂ ಟೋಪಿ ಧರಿಸುವಂತೆ, ಕಲ್ಮಾ ಪಠಿಸುವಂತೆ ಮತ್ತು ನಮಾಜ್&zwnj; ಮಾಡುವಂತೆ ಪೀಡಿಸುತ್ತಿದ್ದರು. ಒಮ್ಮೆಯಂತೂ ಸಿಟ್ಟಿಗೆದ್ದ ಡ್ಯಾನಿಷ್&zwnj; ನನ್ನ ಮೇಲೆ ಫ್ಯಾನ್&zwnj; ಎಸೆದು, ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ&rsquo; ಎಂದು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/tcs-corporate-jihad-row-shocking-allegations-of-workplace-harassment-emerge/articleshow-33dnde1"/>
        </item>
        <item>
            <title><![CDATA[ಬೆಂಗಳೂರಿನ IISC ದಾಳಿಕೋರ ಉಗ್ರನ ಹಮ್ಜಾ ಮೇಲೆ ದಾಳಿ ನಡೆಸಿದ ಅನಾಮಿಕ ಯಾರು?]]></title>
            <link>https://kannada.asianetnews.com/world-news/second-attempt-on-life-iisc-bengaluru-blast-accused-amir-hamza-shot-at-in-lahore/articleshow-89w6m8u</link>
            <guid isPermaLink="true">https://kannada.asianetnews.com/world-news/second-attempt-on-life-iisc-bengaluru-blast-accused-amir-hamza-shot-at-in-lahore/articleshow-89w6m8u</guid>
            <pubDate>Fri, 17 Apr 2026 08:15:54 +0530</pubDate>
            <description><![CDATA[&lt;p&gt;ಬೆಂಗಳೂರಿನ IISC ದಾಳಿಕೋರ ಉಗ್ರನ ಹಮ್ಜಾ ಮೇಲೆ ದಾಳಿ ನಡೆಸಿದ ಅನಾಮಿಕ ಯಾರು? ದಾಳಿಯಲ್ಲಿ ಹಮ್ಜಾ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpamcya2r762ysnpgdqgkhej,imgname-lashkar-e-taiba-co-founderaamir-hamza-lahore-shooting-attack-injured-terror-update-pakistan-leadership-2-1776325916994.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಸ್ಲಾಮಾಬಾದ್&zwnj; (ಏ.17):&lt;/strong&gt; ಲಷ್ಕರ್&zwnj; ಎ ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕರ ಪೈಕಿ ಒಬ್ಬನಾದ ಅಮೀರ್&zwnj; ಹಮ್ಜಾ (66) ಮೇಲೆ ಅನಾಮಿಕ ವ್ಯಕ್ತಿಗಳು ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಲಾಹೋರ್&zwnj;ನಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಮ್ಜಾ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ಕಳೆದ ವರ್ಷ ಬುದುಕುಳಿದಿದ್ದ ಹಮ್ಜಾ&lt;/h2&gt;&lt;p&gt;ಲಾಹೋರ್&zwnj;ನ ಟೀವಿ ವಾಹಿನಿಯೊಂದರ ಕಚೇರಿ ಮೇಲೆ ಅನಾಮಿಕ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಳೆದ ವರ್ಷ ಕೂಡಾ ಹಮ್ಜಾನ ಮೇಲೆ ಗುಂಡಿನ ದಾಳಿ ನಡೆದಿತ್ತಾದರೂ ಆತ ಬದುಕುಳಿಗಿದ್ದ. ಬಳಿಕ ಆತನ ಭದ್ರತೆಯನ್ನು ಹೆಚ್ಚಿಸಲಾಗಿತ್ತು.&lt;/p&gt;&lt;h2&gt;ಬೆಂಗಳೂರಿನ ಐಐಎಸ್&zwnj;ಸಿ ಮೇಲೆ ದಾಳಿ&lt;/h2&gt;&lt;p&gt;ಈಗ ಪಂಜಾಬ್&zwnj; ಪ್ರಾಂತ್ಯದ ಗುಜ್ರನ್ವಾಲಾ ಮೂಲದ ವ್ಯಕ್ತಿಯಾಗಿದ್ದು 1985ರಲ್ಲಿ ಹಫೀಜ್&zwnj; ಸಯೀದ್&zwnj; ಜೊತೆಗೂಡಿ ಲಷ್ಕರ್&zwnj; ಸಂಘಟನೆ ಸ್ಥಾಪಿಸಿದ್ದ. ಈತ 2005ರಲ್ಲಿ ಬೆಂಗಳೂರಿನ ಐಐಎಸ್&zwnj;ಸಿ ಮೇಲಿನ ದಾಳಿ ಸೇರಿದಂತೆ ಭಾರತದಾದ್ಯಂತ ನಡೆದ ಹಲವು ಉಗ್ರ ದಾಳಿಗಳ ಹಿಂದೆ ಹಮ್ಜಾನ ಕೈವಾಡವಿತ್ತು. ಸಂಘಟನೆಯಲ್ಲಿ ಸಯೀದ್&zwnj; ನಂತರದ ಸ್ಥಾನ ಹೊಂದಿರುವ ಹಮ್ಜಾ ಕಾಲದಿಂದ ಕಾಲಕ್ಕೆ ಸಂಘಟನೆಗೆ ಹೊಸ ದಿಕ್ಕು ತೋರಿಸುತ್ತಾ, ಉಗ್ರ ಸಿದ್ದಾಂತವನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.&lt;/p&gt;&lt;p&gt;ಪ್ರಖರ ಭಾಷಣಕಾರನಾಗಿ, ಲೇಖಕನಾಗಿ, ಲಷ್ಕರ್&zwnj; ಸಂಘಟನೆಯ ಮುಖವಾಣಿ ಪತ್ರಿಕೆಯ ಸಂಪಾದಕನಾಗಿಯೂ ಹಮ್ಜಾ ಗುರುತಿಸಿಕೊಂಡಿದ್ದಾನೆ. ಬೆಂಗಳೂರಿನ ಇಂಡಿಯನ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ಮೇಲೆ ದಾಳಿ ನಡೆಸಿದ ಮಾಸ್ಟರ್ ಮೈಂಡ್ ಈತ. ಭಾರತದ ಮೇಲೆ ದಾಳಿ ನಡೆಸಿ ಪಾಕಿಸ್ತಾನದಲ್ಲಿ ಭಾರಿ ಭದ್ರತೆಯಲ್ಲಿ ಕಳೆಯುತ್ತಿರುವ ಹಲವು ಉಗ್ರರಿಗೆ ಅನಾಮಿಕ ಸಿಂಹಸ್ವಪ್ನವಾಗಿ ಪರಿಣಿಮಿಸಿದ್ದಾನೆ.&lt;/p&gt;&lt;p&gt;ಭಾರತದ ಮೇಲೆ ಉಗ್ರ ದಾಳಿ ನಡೆಸುತ್ತಿರುವ ಉಗ್ರರು ಇದೀಗ ಭಾರಿ ಭದ್ರತೆ ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಅರ್ಜಿಗಳು ಹೆಚ್ಚಾಗುತ್ತಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ, ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಇತ್ತ ಕೆಲ ಉಗ್ರರಿಗೆ ಹೆಚ್ಚಿನ ಭದ್ರತೆ ಒದಗಿಸಲು ಸಾಧ್ಯವಾಗದೇ ಪರದಾಡುವ ಸ್ಥಿತಿ ಎದುರಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/second-attempt-on-life-iisc-bengaluru-blast-accused-amir-hamza-shot-at-in-lahore/articleshow-89w6m8u"/>
        </item>
        <item>
            <title><![CDATA[ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿಗೆ ಇಂದು ಶಿಕ್ಷೆ ಪ್ರಕಟ | ಯಾರಿಗೂ ತೊಂದರೆ ಕೊಟ್ಟಿಲ್ಲ: ಜಡ್ಜ್‌ ಮುಂದೆ ಕಣ್ಣೀರಿಟ್ಟ ಶಾಸಕ]]></title>
            <link>https://kannada.asianetnews.com/state/yogesh-gowda-murder-case-vinay-kulkarni-sentenced-today-rav/articleshow-tqgsczu</link>
            <guid isPermaLink="true">https://kannada.asianetnews.com/state/yogesh-gowda-murder-case-vinay-kulkarni-sentenced-today-rav/articleshow-tqgsczu</guid>
            <pubDate>Fri, 17 Apr 2026 06:31:49 +0530</pubDate>
            <description><![CDATA[&lt;p&gt;ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ. ಶಿಕ್ಷೆಯ ಪ್ರಮಾಣದ ಕುರಿತ ವಾದ-ವಿವಾದದ ವೇಳೆ, ಕುಲಕರ್ಣಿ ಕಣ್ಣೀರಿಟ್ಟು ಕಡಿಮೆ ಶಿಕ್ಷೆಗಾಗಿ ಮನವಿ ಮಾಡಿದ್ದು ಇಂದು ಪ್ರಕಟವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8mhxkyn1ggn98rsk20f2vw,imgname-vinay-kulkarni-convicted-1776258971261.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್&zwnj; ಶಾಸಕ ವಿನಯ್&zwnj; ಕುಲಕರ್ಣಿ ಸೇರಿ 17 ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ​​ ಹೇಳಿದೆ.&lt;/p&gt;&lt;p&gt;ಶಿಕ್ಷೆಯ ಪ್ರಮಾಣದ ಬಗ್ಗೆ ಗುರುವಾರ ನ್ಯಾಯಾಲಯದಲ್ಲಿ ಸುದೀರ್ಘ ವಾದ-ಪ್ರತಿವಾದ ನಡೆಯಿತು. ಈ ವೇಳೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಪ್ರತಿಯೊಬ್ಬ ಅಪರಾಧಿಯೂ ತಮ್ಮ ಕೊನೆಯ ಹೇಳಿಕೆ ದಾಖಲಿಸಿದರು. ಈ ವೇಳೆ ಕೆಲವರು ತಮ್ಮ ವೈಯಕ್ತಿಕ ಸಮಸ್ಯೆಗಳು, ಆರೋಗ್ಯದ ಸ್ಥಿತಿ ಹಾಗೂ ಕುಟುಂಬದ ಜವಾಬ್ದಾರಿಯನ್ನು ವಿವರಿಸುತ್ತಾ ಶಿಕ್ಷೆ ಕಡಿಮೆ ಮಾಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿ ಕಣ್ಣೀರಿಟ್ಟರು.&lt;/p&gt;&lt;p&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ, ಒಬ್ಬ ಪೊಲೀಸ್ ಅಧಿಕಾರಿ ಸೇರಿ 17 ಮಂದಿ ಅಪರಾಧಿಗಳಿಗೆ ಜೀವಿತಾವಧಿ ಶಿಕ್ಷೆ ಜತೆಗೆ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.&lt;/p&gt;&lt;p&gt;ನ್ಯಾಯಾಧೀಶರಾದ ಸಂತೋಷ್&zwnj; ಗಜಾನನ ಭಟ್&zwnj; ಅವರು ಬುಧವಾರ ವಿನಯ್ ಕುಲಕರ್ಣಿ ಸೇರಿ 17 ಮಂದಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿ ತೀರ್ಪು ಪ್ರಕಟಿಸಿದ್ದರು. ಶಿಕ್ಷೆಯ ಪ್ರಮಾಣ ಕುರಿತು ಗುರುವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಶುಕ್ರವಾರ ತೀರ್ಪು ನೀಡುವುದಾಗಿ ಹೇಳಿದರು.&lt;/p&gt;&lt;p&gt;ಇದಕ್ಕೂ ಮೊದಲು ಸಿಬಿಐ ಪರ ವಾದ ಮಂಡಿಸಿದ ಸಿಬಿಐ ವಿಶೇಷ ಅಭಿಯೋಜಕರಾದ ಶಿವಾನಂದ ಪೆರ್ಲ ಮತ್ತು ಹೇಮಾ, ಯೋಗೇಶ್&zwnj;ಗೌಡ ಕೊಲೆ ಪ್ರಕರಣದಲ್ಲಿ ಭಾರೀ ಪ್ರಮಾಣದಲ್ಲಿ ಅಪರಾಧಿಕ ಒಳಸಂಚು ನಡೆದಿದೆ. ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿದ್ದಾರೆ. ಹೀಗಾಗಿ ಅಪರಾಧಿಗಳಿಗೆ ಯಾವುದೇ ವಿನಾಯಿತಿ ನೀಡದೆ, ಕಠಿಣಾತಿ ಕಠಿಣ ಶಿಕ್ಷೆಯಾದ ಜೀವಿತಾವಧಿ (ಕ್ಷಮಾದಾನವಿಲ್ಲದ ಜೀವನ ಪರ್ಯಂತ) ಶಿಕ್ಷೆ ವಿಧಿಸಬೇಕು. ಜತೆಗೆ ಹತ್ಯೆಗೀಡಾದ ಯೋಗೇಶ್&zwnj;ಗೌಡನ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕೋರಿದರು.&lt;/p&gt;&lt;h2&gt;ವಿರಳಾತಿ ವಿರಳ ಪ್ರಕರಣ- ಸಿಬಿಐ:&lt;/h2&gt;&lt;p&gt;ಯೋಗೇಶ್&zwnj; ಗೌಡನ ಕಣ್ಣಿಗೆ ಕಾರದಪುಡಿ ಎರಚಿ, ತಪ್ಪಿಸಿಕೊಳ್ಳಲು ಅವಕಾಶ ನೀಡದೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೊಂದು ವಿರಳಾತಿ ವಿರಳ ಪ್ರಕರಣವಾಗಿದ್ದು, ಸಿಬಿಐ ತನಿಖೆ ಆರಂಭಿಸಿದ ಬಳಿಕ ಪಿತೂರಿ ಬಯಲಾಗಿದೆ. ಪೊಲೀಸ್&zwnj; ಅಧಿಕಾರಿಗಳು ಮತ್ತು ಇಡೀ ವ್ಯವಸ್ಥೆಯನ್ನು ದುರ್ಬಳಕೆ ಮಾಡಲಾಗಿದೆ. ನ್ಯಾಯಾಂಗಕ್ಕೆ ವಂಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು. ಈ ಮೂಲಕ ಸಮಾಜದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿದೆ ಎಂದು ಹೇಳುವ ಸಂದೇಶ ನೀಡಬೇಕು ಎಂದು ಸಿಬಿಐ ಪರ ವಕೀಲರು ಕೋರಿದರು.&lt;/p&gt;&lt;p&gt;--&lt;/p&gt;&lt;h3&gt;ಅಪರಾಧಿಗಳ ಅಳಲು ಹೇಗಿತ್ತು?&lt;/h3&gt;&lt;p&gt;&lt;strong&gt;15ನೇ ಅಪರಾಧಿ ವಿನಯ್ ಕುಲಕರ್ಣಿ&lt;/strong&gt;&lt;/p&gt;&lt;p&gt;ಕಳೆದ 27 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ನೀಡಿಲ್ಲ. ಮದುವೆ ವಯಸ್ಸಿಗೆ ಬಂದಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಜಕೀಯ ದ್ವೇಷಕ್ಕಾಗಿ ಕೇಸ್ ಹಾಕಲಾಗಿದೆ. ನಾನೊಬ್ಬ ಕೃಷಿಕ, ಸುಮಾರು ಮೂರೂವರೆ ಸಾವಿರ ಹಸು ಮತ್ತು ಎಮ್ಮೆಗಳನ್ನು ಸಾಕುತ್ತಿದ್ದೇನೆ, ನನ್ನ ಮೇಲೆ ಅವಲಂಬಿತರಾದವರಿದ್ದಾರೆ.&lt;/p&gt;&lt;p&gt;&lt;strong&gt;4ನೇ ಅಪರಾಧಿ ಸಂದೀಪ್&zwnj; ಸವದತ್ತಿ:&lt;/strong&gt;&lt;/p&gt;&lt;p&gt;ಚಾಲಕನಾಗಿದ್ದು, ವಯಸ್ಸಾದ ತಂದೆ-ತಾಯಿ ಇದ್ದಾರೆ. ಮನೆಯಲ್ಲಿ ನಾನು ಒಬ್ಬನೇ ದುಡಿಯುವುದು, ಶಿಕ್ಷೆ ಕಠಿಣವಾದರೆ ಅವರ ಜೀವನ ಬೀದಿಗೆ ಬೀಳುತ್ತದೆ.&lt;/p&gt;&lt;p&gt;&lt;strong&gt;5ನೇ ಅಪರಾಧಿ ವಿನಾಯಕ್&zwnj; ಕಾಟಗಿ:&lt;/strong&gt;&lt;/p&gt;&lt;p&gt;ರಿಯಲ್ ಎಸ್ಟೇಟ್ ಉದ್ಯೋಗಿಯಾಗಿದ್ದು, ನನ್ನ ಪೋಷಕರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ.&lt;/p&gt;&lt;p&gt;&lt;strong&gt;3ನೇ ಅಪರಾಧಿ ಕೀರ್ತಿ ಕುಮಾರ್&zwnj;:&lt;/strong&gt;&lt;/p&gt;&lt;p&gt;ರಿಯಲ್&zwnj; ಎಸ್ಟೇಟ್&zwnj; ಏಜೆಂಟ್&zwnj; ಆಗಿದ್ದೆ. ನಾನು ತಪ್ಪು ಮಾಡಿಲ್ಲ.&lt;/p&gt;&lt;p&gt;&lt;strong&gt;ಅಪರಾಧಿ 4- ಸಂದೀಪ್&zwnj; ಸವದತ್ತಿ&lt;/strong&gt;&lt;/p&gt;&lt;p&gt;ನನಗೆ ಚಿಕ್ಕ ಮಕ್ಕಳಿದ್ದಾರೆ. ನಾನು ತಪ್ಪು ಮಾಡಿಲ್ಲ.&lt;/p&gt;&lt;p&gt;&lt;strong&gt;ಅಪರಾಧಿ-9 ಅಶ್ವತ್ಥ್, ಅಪರಾಧಿ-10 ಸುನೀಲ್, ಅಪರಾಧಿ-11 ನಾಜೀರ್&zwnj; ಅಹಮ್ಮದ್:&lt;/strong&gt;&lt;/p&gt;&lt;p&gt;ವಯಸ್ಸಾದ ತಂದೆ-ತಾಯಿ ಇದ್ದಾರೆ. ಸಣ್ಣ ಮಕ್ಕಳ ಭವಿಷ್ಯಕ್ಕಾಗಿ ಕರುಣೆ ತೋರಿ.&lt;/p&gt;&lt;p&gt;&lt;strong&gt;ಅಪರಾಧಿ- 6 ಮಹಾಬಲೇಶ್ವರ್:&lt;/strong&gt;&lt;/p&gt;&lt;p&gt;ನನಗೆ ಒಂದು ವರ್ಷದ ಹಾಗೂ ಮೂರು ವರ್ಷದ ಮಕ್ಕಳಿದ್ದಾರೆ. ನಾನು ದುಡಿದರೆ ಮಾತ್ರ ನಮ್ಮ ಕುಟುಂಬ ನಡೆಯುತ್ತದೆ.&lt;/p&gt;&lt;p&gt;&lt;strong&gt;ಅಪರಾಧಿ-12 ಶಾನವಾಜ್&zwnj; ಮತ್ತು ಅಪರಾಧಿ-18 ವಿಕಾಸ್&zwnj; ಕಲಬುರ್ಗಿ:&lt;/strong&gt;&lt;/p&gt;&lt;p&gt;ವೃತ್ತಿಯಲ್ಲಿ ಗುತ್ತಿಗೆದಾರರು ಮತ್ತು ಕೃಷಿಕರಾಗಿದ್ದು, ಚಿಕ್ಕ ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಮದುವೆ ಮಾಡುವ ಜವಾಬ್ದಾರಿ ಇದೆ.&lt;/p&gt;&lt;p&gt;&lt;strong&gt;13ನೇ ಅಪರಾಧಿ ನೂತನ್&zwnj;:&lt;/strong&gt; ನನಗೆ ಹೃದಯ ಶಸ್ತ್ರಚಿಕಿತ್ಸೆಯಾಗಿ ಸ್ಟಂಟ್ ಅಳವಡಿಸಲಾಗಿದೆ ಶಿಕ್ಷೆ ಕಡಿಮೆ ಮಾಡಿ.&lt;/p&gt;&lt;p&gt;&lt;strong&gt;ಅಪರಾಧಿ-16 ಚಂದ್ರಶೇಖರ್&zwnj; ಹಿಂಡಿ:&lt;/strong&gt;&lt;/p&gt;&lt;p&gt;ನಾನು ಮತ್ತು ನನ್ನ ಪತ್ನಿ ಇಬ್ಬರೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ನಮ್ಮ ಮೊಮ್ಮಗನನ್ನು ಕಳೆದುಕೊಂಡಿದ್ದೇವೆ.&lt;/p&gt;&lt;p&gt;&lt;strong&gt;ಅಪರಾಧಿ-7 ಸಂತೋಷ್&zwnj; ಸವದತ್ತಿ:&lt;/strong&gt;&lt;/p&gt;&lt;p&gt;ತೀವ್ರ ಕಣ್ಣಿನ ಸಮಸ್ಯೆಯಿಂದ ದೃಷ್ಟಿ ದೋಷ ಎದುರಿಸುತ್ತಿದ್ದೇನೆ.&lt;/p&gt;&lt;p&gt;&lt;strong&gt;ಅಪರಾಧಿ-19 ಚನ್ನಕೇಶವ (ಪೊಲೀಸ್ ಅಧಿಕಾರಿ):&lt;/strong&gt;&lt;/p&gt;&lt;p&gt;ನಾನು ಇದುವರೆಗೂ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ ಮತ್ತು ಸಮಾಜದಲ್ಲಿ ಉತ್ತಮ ಹೆಸರು ಹೊಂದಿದ್ದೇನೆ. ಈ ಹಿಂದೆ ಪ್ರಶಸ್ತಿ ಕೂಡ ಪಡೆದುಕೊಂಡಿದ್ದೇನೆ.&lt;/p&gt;&lt;p&gt;&lt;strong&gt;ನೊಂದವರಿಗೆ ಪರಿಹಾರಕ್ಕೆ ಮನವಿ:&lt;/strong&gt;&lt;/p&gt;&lt;p&gt;ಸಿಬಿಐ ವಿಶೇಷ ಅಭಿಯೋಜಕರಾದ ಹೇಮಾ, ನೊಂದವರಿಗೆ ಪರಿಹಾರ ನೀಡುವಂತೆ ಕೋರಿದರು. ಇದಕ್ಕೆ ನ್ಯಾಯಾಧೀಶರು ಯಾರಿಗೆ ಪರಿಹಾರ ಎಂದು ಪ್ರಶ್ನಿಸಿದರು. ಯೋಗೇಶ್&zwnj;ಗೌಡ ಅವರ ಮಕ್ಕಳಿಗೆ ಪರಿಹಾರ ನೀಡಬೇಕು ಎಂದರು. ನ್ಯಾಯಾಧೀಶರು, ಪತ್ನಿ ಮಲ್ಲಮ್ಮ ಈ ಪ್ರಕರಣದಲ್ಲಿ ನೊಂದ ವ್ಯಕ್ತಿ ಅಲ್ಲ ಎಂದರು. ಪತ್ನಿ ಮಲ್ಲಮ್ಮಗೆ ಅಲ್ಲ. ಬದಲಿಗೆ ಮಕ್ಕಳಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರು. ಈ ಪ್ರಕರಣದಲ್ಲಿ ಪರಿಹಾರಕ್ಕೆ ಆದೇಶಿಸಬಾರದು ಎಂದು ವಿನಯ್&zwnj; ಕುಲಕರ್ಣಿ ಪರ ವಕೀಲರಾದ ಶ್ಯಾಮ್&zwnj; ಸುಂದರ್&zwnj; ಇದೇ ವೇಳೆ ಮನವಿ ಮಾಡಿದರು.&lt;/p&gt;&lt;p&gt;&lt;strong&gt;ಯಾರಿಗೂ ತೊಂದರೆ ಕೊಟ್ಟಿಲ್ಲ: ಜಡ್ಜ್&zwnj; ಮುಂದೆ ವಿನಯ್&zwnj; ಕಣ್ಣೀರು:&lt;/strong&gt;&lt;/p&gt;&lt;p&gt;ನಾನು ಕಳೆದ 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ಕೊಟ್ಟಿಲ್ಲ. ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೃಷಿಕನಾದ ನಾನು ಸಾವಿರಾರು ಹಸುಗಳನ್ನು ಸಾಕುತ್ತಿದ್ದೇನೆ. ರಾಜಕೀಯ ಕಾರಣಕ್ಕೆ ನನ್ನ ಮೇಲೆ ಕೇಸ್ ಹಾಕಲಾಗಿದೆ. ಹೀಗಾಗಿ ಕಡಿಮೆ ಶಿಕ್ಷೆ ವಿಧಿಸಿ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ನ್ಯಾಯಾಧೀಶರ ಮುಂದೆ ಅಲವತ್ತುಕೊಂಡಿದ್ದಾರೆ.&lt;/p&gt;&lt;p&gt;ಗುರುವಾರ ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣದ ಬಗ್ಗೆ ಸುದೀರ್ಘ ವಾದ-ಪ್ರತಿವಾದ ನಡೆಯಿತು. ಈ ವೇಳೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ವಿನಯ್&zwnj; ಕುಲಕರ್ಣಿ ತಮ್ಮ ಕೊನೆಯ ಹೇಳಿಕೆ ದಾಖಲಿಸಿದರು.&lt;/p&gt;&lt;p&gt;ವಿನಯ್&zwnj; ಕುಲಕರ್ಣಿ ಪರ ವಕೀಲರಾದ ಎಂ.ಎಸ್&zwnj;.ಶ್ಯಾಮ್&zwnj;ಸುಂದರ್&zwnj; ಅವರು, ವಿನಯ್&zwnj; ಕುಲಕರ್ಣಿ ಜನರ ವಿಶ್ವಾಸ ಗಳಿಸಿ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದಿದ್ದಾರೆ. ಮೂರು ಬಾರಿ ಶಾಸಕ, ಒಮ್ಮೆ ಸಚಿವರು ಆಗಿದ್ದರು. ಅವರಿಗೆ ಮೂವರು ಮಕ್ಕಳಿದ್ದು, 3,500ಕ್ಕೂ ಅಧಿಕ ಆಕಳು/ಎಮ್ಮೆ ಸಾಕಿದ್ದು, ಅವುಗಳನ್ನು ನೋಡಿಕೊಳ್ಳಬೇಕಿದೆ. ರಾಜಕೀಯ ಕಾರಣಕ್ಕಾಗಿ ಅವರನ್ನು ಕೃತ್ಯದಲ್ಲಿ ಸಿಲುಕಿಸಲಾಗಿದೆ. ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಕೋರಿದರು.&lt;/p&gt;&lt;p&gt;&lt;strong&gt;ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ:&lt;/strong&gt;&lt;/p&gt;&lt;p&gt;ನ್ಯಾಯಾಲಯದ ಸೂಚನೆಯಂತೆ ಪೀಠದ ಮುಂದೆ ಹಾಜರಾದ ವಿನಯ್&zwnj; ಕುಲಕರ್ಣಿ, ನಾನು 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯ ಪ್ರತೀಕಾರಕ್ಕಾಗಿ ಈ ಕೆಲಸ ಮಾಡಿದ್ದಾರೆ. ಮೂವರು ಮಕ್ಕಳಿದ್ದಾರೆ. ಆ ಪೈಕಿ ಇಬ್ಬರು ಹೆಣ್ಣುಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದಾರೆ. ಮೂರು ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ಸಂಸತ್&zwnj; ಚುನಾವಣೆಯಲ್ಲಿ ನಿಂತು ಸೋತಿದ್ದೇನೆ. ಒಮ್ಮೆ ಸಚಿವನಾಗಿದ್ದೇನೆ. ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಜತೆಗೆ 3,500 ಹಸು/ಎಮ್ಮೆ ಇವೆ. ಅವುಗಳನ್ನು ನೋಡಿಕೊಳ್ಳಬೇಕಿದೆ. ಹೀಗಾಗಿ, ವಿನಾಯಿತಿ ತೋರಬೇಕು ಎಂದು ಕೈಮುಗಿದು ಕಣ್ಣೀರಿಟ್ಟು ಮನವಿ ಮಾಡಿದರು.&lt;/p&gt;&lt;p&gt;&lt;strong&gt;ಮುತ್ತಗಿ ಮನೆಗೆ ಹೆಚ್ಚುವರಿ ಭದ್ರತೆ:&lt;/strong&gt;&lt;/p&gt;&lt;p&gt;ಜಿಪಂ ಸದಸ್ಯ ಯೋಗೇಶಗೌಡ ಹತ್ಯೆಯ ಎ-1 ಆರೋಪಿ, ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಅವರ ಮನೆಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಶಾಸಕ ವಿನಯ್&zwnj; ಕುಲಕರ್ಣಿ ಪರಮಾಪ್ತನಾಗಿದ್ದ ಮುತ್ತಗಿ, ವಿನಯ್&zwnj; ವಿರುದ್ಧವಾಗಿ ಮಾಫಿ ಸಾಕ್ಷಿಯಾಗಿದ್ದಾರೆ. ಹೀಗಾಗಿ ಅವರು ತಮಗೆ ಜೀವ ಬೆದರಿಕೆ ಇದೆ ಎಂದು ಕೋರ್ಟ್&zwnj;ಗೆ ತಿಳಿಸಿದ್ದರು. ಅದರಂತೆ ಭದ್ರತೆ ಒದಗಿಸಲಾಗಿತ್ತು. ಬುಧವಾರ ವಿನಯ್&zwnj; ಸೇರಿದಂತೆ 17 ಜನ ಅಪರಾಧಿಗಳು ಎಂದು ಘೋಷಿಸಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಬಂದೋಬಸ್ತ್&zwnj; ನಿಯೋಜನೆ ಮಾಡಲಾಗಿದೆ. ಧಾರವಾಡದ ಕೆಲಗೇರಿ ರಸ್ತೆಯಲ್ಲಿರುವ ಮುತ್ತಗಿ ನಿವಾಸಕ್ಕೆ ಸಿಆರ್&zwnj;ಫಿಎಫ್&zwnj;ನ 12 ಸಿಬ್ಬಂದಿ, ಒಂದು ಸಿಎಆರ್ ತುಕಡಿ ನಿಯೋಜಿಸಲಾಗಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/yogesh-gowda-murder-case-vinay-kulkarni-sentenced-today-rav/articleshow-tqgsczu"/>
        </item>
        <item>
            <title><![CDATA[Karnataka Politics: ತಂದೆ ಸಿಎಂ ಇರುವಾಗ ನಾ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸ್ಪಷ್ಟನೆ]]></title>
            <link>https://kannada.asianetnews.com/politics/i-am-not-an-aspirant-for-a-ministerial-post-while-my-father-is-the-chief-minister-says-yathindra-siddaramaiah-rav/articleshow-awfhtxg</link>
            <guid isPermaLink="true">https://kannada.asianetnews.com/politics/i-am-not-an-aspirant-for-a-ministerial-post-while-my-father-is-the-chief-minister-says-yathindra-siddaramaiah-rav/articleshow-awfhtxg</guid>
            <pubDate>Fri, 17 Apr 2026 05:42:27 +0530</pubDate>
            <description><![CDATA[ತಮ್ಮ ತಂದೆ ಮುಖ್ಯಮಂತ್ರಿಯಾಗಿರುವವರೆಗೆ ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹಿರಿಯರಿಗೆ ಅವಕಾಶ ಸಿಗಬೇಕು ಎಂದಿರುವ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಸಹಜ ಎಂದು ಬೈಲಹೊಂಗಲದಲ್ಲಿ ಹೇಳಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ht74ayq8tthetz5ddx7kgs7n,imgname-Screenshot-2024-03-30-130111-1711783901928.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೈಲಹೊಂಗಲ (ಏ.17):&lt;/strong&gt; ನಮ್ಮ ತಂದೆ ಮುಖ್ಯಮಂತ್ರಿ ಇರುವವರೆಗೆ ಸಚಿವ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ಲ. ಹಿರಿಯರು ಹಾಗೂ ಅನುಭವಿಗಳಿಗೆ ಅವಕಾಶ ಸಿಗಬೇಕು ಎಂದು ವಿಧಾನ ಪರಿಷತ್&zwnj; ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.&lt;/p&gt;&lt;p&gt;ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಶಾಸಕರು ಸಚಿವ ಸ್ಥಾನ ಕೇಳುವುದು ಸಹಜ. ಯಾವುದೇ ಸಚಿವ ಸಂಪುಟದಲ್ಲಿ ಹೊಸಬರು ಹಾಗೂ ಅನುಭವಿಗಳಿರುತ್ತಾರೆ ಎಂದರು. ತಮ್ಮ ತಂದೆ ಮುಂದಿನ ಐದು ವರ್ಷ ರಾಜ್ಯವನ್ನು ಮುನ್ನಡೆಸಲಿ ಎಂಬುದು ನನ್ನ ವೈಯಕ್ತಿಕ ಆಶಯ ಮಾತ್ರ. ಐದು ವರ್ಷ ಆಡಳಿತದ ಕುರಿತು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಸಿಎಂ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಸಹಜ. ರಾಜ್ಯದ ಜನರಿಗೆ ಒಳ್ಳೆಯದಾಗುವುದೇ ಮುಖ್ಯ ಎಂದು ಹೇಳಿದರು.&lt;/p&gt;&lt;p&gt;136 ಶಾಸಕರಿದ್ದರೂ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲ ಸರ್ಕಾರಗಳಲ್ಲಿಯೂ ಇಂತಹ ಚರ್ಚೆಗಳು ನಡೆಯುತ್ತವೆ. ಬಿಜೆಪಿ ಸರ್ಕಾರದಲ್ಲಿಯೂ ಮುಖ್ಯಮಂತ್ರಿಗಳ ಬದಲಾವಣೆ ನಡೆದಿತ್ತು. ಎಲ್ಲ ಪಕ್ಷಗಳಲ್ಲಿಯೂ ಸಿಎಂ ಆಕಾಂಕ್ಷಿಗಳು ಇರುವುದು ಸಾಮಾನ್ಯ ಎಂದರು. ಬಾಗಲಕೋಟೆ ಹಾಗೂ ದಾವಣಗೆರೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/i-am-not-an-aspirant-for-a-ministerial-post-while-my-father-is-the-chief-minister-says-yathindra-siddaramaiah-rav/articleshow-awfhtxg"/>
        </item>
        <item>
            <title><![CDATA[Delimitation 2026: ಕ್ಷೇತ್ರ ಮರುವಿಂಗಡಣೇಲಿ ದಕ್ಷಿಣ ಭಾರತಕ್ಕೆ ಅನ್ಯಾಯವೇ? ಕಾಂಗ್ರೆಸ್‌ ವಾದವೇ ಪೂರ್ವಾಗ್ರಹಪೀಡಿತ!]]></title>
            <link>https://kannada.asianetnews.com/state/injustice-to-south-india-in-delimitation-congress-allegations-are-biased-and-prejudiced-rav/articleshow-17axwi1</link>
            <guid isPermaLink="true">https://kannada.asianetnews.com/state/injustice-to-south-india-in-delimitation-congress-allegations-are-biased-and-prejudiced-rav/articleshow-17axwi1</guid>
            <pubDate>Fri, 17 Apr 2026 05:29:55 +0530</pubDate>
            <description><![CDATA[&lt;p&gt;'ನಾರಿ ಶಕ್ತಿ ವಂದನ್ ಅಧಿನಿಯಮ'ದ ಜೊತೆಗೆ ಲೋಕಸಭೆ ಹಾಗೂ ವಿಧಾನಸಭೆಗಳ ಸದಸ್ಯಬಲ ಹೆಚ್ಚಳದ ಪ್ರಸ್ತಾಪವು ಚರ್ಚೆಯಲ್ಲಿದೆ. 1971ರ ಜನಗಣತಿಯ ಆಧಾರದ ಮೇಲೆ ಇಂದಿರಾ ಗಾಂಧಿಯವರಿಂದ ಸ್ಥಗಿತಗೊಂಡಿದ್ದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpcbh2r9tmnrdv09h6phrftr,imgname-----------------------2026-04-17t052445.169-1776383724296.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಕಾಸ್ ಪುತ್ತೂರು, &lt;/strong&gt;ಬಿಜೆಪಿ ಮುಖಂಡರು, &lsquo;ಸಂವಿಧಾನ ಬದಲಾಯಿಸಿದ್ದು ಯಾರು&rsquo; ಕೃತಿ ಲೇಖಕ&lt;/p&gt;&lt;p&gt;ಸಂಸತ್ತಿನ ಕಲಾಪವು ಇದೀಗ ಹೆಚ್ಚುವರಿಯಾಗಿ ಪ್ರಾರಂಭವಾಗಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಶೇ.33 ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ &lsquo;ನಾರಿ ಶಕ್ತಿ ವಂದನ್ ಅಧಿನಿಯಮ&rsquo;ಕ್ಕೆ ತಿದ್ದುಪಡಿ ತರುವುದು ಹಾಗೂ ಉಭಯ ಸದನಗಳ ಸಂಖ್ಯಾಬಲವನ್ನು ಹೆಚ್ಚಿಸುವ ಕಾನೂನು ರೂಪಿಸುವುದು ಈ ಅಧಿವೇಶನದ ಉದ್ದೇಶ ಎಂಬುದು ಮಂಡನೆಯಾದ ಪ್ರಸ್ತಾವನೆಗಳಿಂದ ದೇಶದ ಗಮನಕ್ಕೆ ಬಂದಿದೆ.&lt;/p&gt;&lt;p&gt;ಪ್ರಧಾನಿ ಮೋದಿ ಅವರೂ ತಮ್ಮ ಭಾಷಣದಲ್ಲಿ, &lsquo;ಸದನದ ಸಂಖ್ಯಾಬಲ ವೃದ್ಧಿಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ&rsquo; ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಪ್ರಧಾನಿಗಳ ಈ ಹೇಳಿಕೆಯ ಬೆನ್ನಲ್ಲೇ ಪೂರ್ವಾಗ್ರಹಪೂರಿತ ಪ್ರತಿಕ್ರಿಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದಿಯಾಗಿ ಪ್ರತಿಪಕ್ಷಗಳು ಸಾಲುಸಾಲಾಗಿ ನೀಡಿರುವುದು ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;ಅಂಬೇಡ್ಕರ್&zwnj; ಅವರು ರೂಪಿಸಿದ್ದ ಸೂತ್ರ&lt;/h2&gt;&lt;p&gt;ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತದ ಜನಸಂಖ್ಯೆ ಸುಮಾರು 40 ಕೋಟಿಯಷ್ಟು ಇರಬಹುದೆಂಬ ಲೆಕ್ಕಾಚಾರದಲ್ಲಿ ಹಾಗೂ ಮುಂದುವರಿದ ರಾಷ್ಟ್ರಗಳು ತಮ್ಮ ಸದನಗಳ ಸದಸ್ಯಬಲ ನಿಶ್ಚಯಿಸಲು ಅನುಸರಿಸುತ್ತಿದ್ದ &lsquo;ಜನಸಂಖ್ಯೆ-ಜನಪ್ರತಿನಿಧಿಗಳ ಅನುಪಾತ&rsquo;ವನ್ನು ಆಧರಿಸಿ ಬಾಬಾಸಾಹೇಬರು 1949ರ ಮೇ 19 ಹಾಗೂ ಜೂ.3ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಒಂದು ಸೂತ್ರವನ್ನು ಅಂತಿಮಗೊಳಿಸಿದರು. ಅದರಂತೆ ಕನಿಷ್ಠ 5 ಲಕ್ಷ ಹಾಗೂ ಗರಿಷ್ಠ 7.5 ಲಕ್ಷ ಜನರಿಗೊಬ್ಬರಂತೆ ಲೋಕಸಭಾ ಸದಸ್ಯರು ಆಯ್ಕೆಯಾಗುವ ಹಾಗೆ ಹಾಗೂ ಅದಕ್ಕನುಗುಣವಾಗಿಯೇ ಲೋಕಸಭೆಯ ಒಟ್ಟು ಸದಸ್ಯಬಲ 500 ಮೀರದಂತೆ ಅನುಚ್ಛೇದ 81ರ ಅಡಿಯಲ್ಲಿ ನೀತಿ ರೂಪಿಸಲಾಯಿತು. ಹಾಗೆಯೇ ಪ್ರತಿ 75 ಸಾವಿರ ಜನರಿಗೊಬ್ಬರು ವಿಧಾನಸಭಾ ಸದಸ್ಯರು ಆಯ್ಕೆಯಾಗುವಂತೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿಯೂ ಕನಿಷ್ಠ 60 ಹಾಗೂ ಗರಿಷ್ಠ 500 ಸದಸ್ಯ ಬಲವಿರುವಂತೆ ಅನುಚ್ಛೇದ 170ರ ಅಡಿಯಲ್ಲಿ ನೀತಿ ನಿರೂಪಿಸಲಾಯಿತು. ಅಷ್ಟೇ ಅಲ್ಲದೆ, ಪ್ರತಿ ದಶವಾರ್ಷಿಕ ಜನಗಣತಿಯ ಬಳಿಕ ಲೋಕಸಭೆ ಹಾಗೂ ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆಯ ಕಾರ್ಯವನ್ನು ಕಡ್ಡಾಯವಾಗಿ ಜರುಗಿಸಬೇಕೆಂಬ ನಿಯಮವನ್ನೂ ಬಾಬಾಸಾಹೇಬರು ರೂಪಿಸಿದ್ದರು.&lt;/p&gt;&lt;h3&gt;ಇಂದಿರಾ ಗಾಂಧಿ ಮಾಡಿದ್ದು ಏನು?&lt;/h3&gt;&lt;p&gt;ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ನಿಗದಿಪಡಿಸಲಾಗಿದ್ದ ಜನಸಂಖ್ಯೆಯ ಕೆಳಮಿತಿ ಹಾಗೂ ಮೇಲು ಮಿತಿಯನ್ನು 1952 ಹಾಗೂ 1956ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ತೆಗೆದುಹಾಕಲಾಯಿತು. ನೆಹರೂ ಕಾಲದ ಈ ತಿದ್ದುಪಡಿಗಳಿಂದ ಮತಕ್ಷೇತ್ರಗಳಿಗೆ ಜನಸಂಖ್ಯೆಯ ಇತಿ-ಮಿತಿ ಇಲ್ಲದಂತಾಯಿತಾದರೂ, ಕ್ಷೇತ್ರ ಮರುವಿಂಗಡಣೆಯ ಕಾರ್ಯ ಮಾತ್ರ ಬಾಬಾಸಾಹೇಬರು ನಿಗದಿಪಡಿಸಿದಂತೆಯೇ ಪ್ರತಿ ದಶವಾರ್ಷಿಕ ಜನಗಣತಿಯ ಬಳಿಕ ಜರುಗುತ್ತಿತ್ತು. 1961ರ ಜನಗಣತಿಯ ಆಧಾರದ ಮೇಲೆ 1963ರಲ್ಲಿ ಜರುಗಿದ ಎರಡನೇ ಮರುವಿಂಗಡಣೆಯಂತೆ ಲೋಕಸಭೆಗೆ 522 ಕ್ಷೇತ್ರಗಳು ಹಾಗೂ ಕರ್ನಾಟಕ ವಿಧಾನಸಭೆಗೆ 216 ಕ್ಷೇತ್ರಗಳೆಂದು ನಿಶ್ಚಯವಾದವು. ಮುಂದೆ 1971ರ ಜನಗಣತಿ ಆಧಾರದ ಮೇಲೆ 1973ರಲ್ಲಿ ಜರುಗಿದ ಮೂರನೇ ವಿಂಗಡಣೆಯಂತೆ ಲೋಕಸಭಾ ಕ್ಷೇತ್ರಗಳು 543ಕ್ಕೆ ವೃದ್ಧಿಯಾದರೆ, ಕರ್ನಾಟಕ ವಿಧಾನಸಭೆಗೆ 224 ಕ್ಷೇತ್ರಗಳೆಂದು ನಿಶ್ಚಯವಾದವು. ಅದೇ ಕೊನೆ. ಸದನದ ಸದಸ್ಯಬಲವು ಅಷ್ಟಕ್ಕೇ ಸಿಲುಕಿಕೊಂಡು ಇಂದಿಗೂ ಸ್ತಬ್ಧವಾಗಿದೆ!&lt;/p&gt;&lt;p&gt;ದೇಶದ ಮೇಲೆ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ಹಲವು ಬಾರಿ ಸಂವಿಧಾನದ ಮೇಲೆ ಪ್ರಹಾರ ಮಾಡಿದ ಇಂದಿರಾ ಗಾಂಧಿಯವರು, ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಕ್ಷೇತ್ರ ಮರುವಿಂಗಡಣೆಯನ್ನೂ ಸ್ತಬ್ಧಗೊಳಿಸಿದರು. ಕ್ಷೇತ್ರ ಮರುವಿಂಗಡಣೆಯನ್ನು ಮುಂದಿನ 25 ವರ್ಷಗಳ ಕಾಲ, ಅಂದರೆ 2000ನೇ ಇಸವಿಯವರೆಗೂ ಮಾಡಬಾರದೆಂದೂ; ಆನಂತರದ ಮರುವಿಂಗಡಣೆಯನ್ನು 2000ನೇ ಇಸವಿಯ ನಂತರ ಕೈಗೊಳ್ಳುವ ಮೊದಲ ಜನಗಣತಿಯ ಆಧಾರದ ಮೇಲೆ ಮಾಡಬೇಕೆಂದೂ ನಿಯಮ ರೂಪಿಸಲಾಯಿತು. ಅಲ್ಲಿಯವರೆಗೂ 1971ರ ಜನಗಣತಿಯ ಆಧಾರದಲ್ಲಿರುವ ಕ್ಷೇತ್ರ ವಿಂಗಡಣೆಯನ್ನೇ ಅನುಸರಿಸುವಂತೆ ಅನುಚ್ಛೇದ 81 ಹಾಗೂ 170 ಅನ್ನು ಬದಲಿಸಲಾಯಿತು.&lt;/p&gt;&lt;p&gt;2001ರಲ್ಲಿ ಸಹಜ ಪರಿಷ್ಕರಣೆಗೆ ಬಂದ ಈ ವಿಧೇಯಕವನ್ನು ಬಾಬಾಸಾಹೇಬರ ಆಶಯದ ಮೂಲಸ್ವರೂಪಕ್ಕೆ ಹಿಂದಿರುಗಿಸಲು ಅಂದಿನ ಬಿಜೆಪಿ ಸರ್ಕಾರಕ್ಕೆ ಸಹಮತ ಸಿಗಲಿಲ್ಲ. ಪ್ರಾದೇಶಿಕ ಪಕ್ಷಗಳ ಬೆಂಬಲದ ಮೇಲೆ ಅವಲಂಬಿತವಾಗಿದ್ದ ಸರ್ಕಾರವು, ಒಲ್ಲದ ಮನಸ್ಸಿನಿಂದ ಅವರ ಆಗ್ರಹಕ್ಕೆ ಮಣಿದು ಕ್ಷೇತ್ರ ಮರುವಿಂಗಡಣೆಯನ್ನು ಯಥಾವತ್ತಾಗಿ ಮುಂದಿನ 25 ವರ್ಷಗಳ ಕಾಲ, ಅಂದರೆ 2026ರವರೆಗೆ ಅನಿವಾರ್ಯವಾಗಿ ಮುಂದೂಡಿತು.&lt;/p&gt;&lt;h3&gt;ಕಾಂಗ್ರೆಸ್ ವಾದ ಮತ್ತು ವಾಸ್ತವ&lt;/h3&gt;&lt;p&gt;ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆಯಾಗುವುದರಿಂದ, ಜನಸಂಖ್ಯೆಯನ್ನು ನಿಯಂತ್ರಿಸುತ್ತಿರುವ ದಕ್ಷಿಣದ ರಾಜ್ಯಗಳಿಗಿಂತ ಉಳಿದ ರಾಜ್ಯಗಳಿಗೆ ಲೋಕಸಭೆಯಲ್ಲಿ ಪ್ರಾತಿನಿಧ್ಯ ಹೆಚ್ಚು ದೊರೆಯಲಿದೆ; ಆ ಕಾರಣಕ್ಕಾಗಿ ಕ್ಷೇತ್ರ ವಿಂಗಡಣೆಯನ್ನೇ ಸ್ಥಗಿತಗೊಳಿಸಬೇಕೆಂಬ ವಾದವನ್ನು ಐದು ದಶಕಗಳ ಕಾಲ ಕಾಂಗ್ರೆಸ್ ಪ್ರತಿಪಾದಿಸಿದೆ. ಈ ವಾದವನ್ನು ಇದೀಗ ಕಾಂಗ್ರೆಸ್ ಕೊಂಚ ಬದಲಿಸಿದಂತಿದೆ. &lsquo;ದಕ್ಷಿಣದ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಏರಿಕೆಯಾಗಬಾರದೆಂದಲ್ಲ, ಆದರೆ ಅದು ಹೇಗೆ ಏರಿಕೆಯಾಗಲಿದೆ ಎಂಬುದು ನಮ್ಮ ಪ್ರಶ್ನೆ&rsquo; ಎಂದು ಸಿದ್ದರಾಮಯ್ಯನವರು ಕೇಳಿದ್ದಾರೆ.&lt;/p&gt;&lt;p&gt;ಸಿದ್ದರಾಮಯ್ಯನವರ ಈ ಪ್ರಶ್ನೆಯನ್ನು ಗಾಢವಾಗಿ ಅಧ್ಯಯನ ಮಾಡಿದಾಗ, &lsquo;ಕ್ಷೇತ್ರಗಳನ್ನು ಹೆಚ್ಚಿಸುವುದಕ್ಕೆ&rsquo; ಅವರಿಗೆ ಮತ್ತು ಕಾಂಗ್ರೆಸ್&zwnj;ಗೆ ಮೊದಲಿದ್ದ ಆಕ್ಷೇಪ ಈಗ ಇಲ್ಲದಿರುವ ಸಕಾರಾತ್ಮಕ ಅಂಶ ಗೋಚರವಾಗುತ್ತದೆ.&lt;/p&gt;&lt;p&gt;ಎಲ್ಲಾ ರಾಜ್ಯಗಳಲ್ಲಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಲಿದೆ; ಅದರಿಂದ ಬಿಜೆಪಿ ಆಡಳಿತವಿರುವ ಯು.ಪಿ., ಬಿಹಾರ, ಎಂ.ಪಿ., ರಾಜಸ್ಥಾನ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಲಾಭವಾಗಲಿದೆ ಎಂಬುದು ಅವರ ತಕರಾರು. ಕರ್ನಾಟಕ, ಕೇರಳ, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಒಟ್ಟು 129 ಲೋಕಸಭಾ ಕ್ಷೇತ್ರಗಳಿದ್ದು, ಈ ಪ್ರಸ್ತಾವನೆಯಿಂದ ಸುಮಾರು 66 ಕ್ಷೇತ್ರಗಳು ಮಾತ್ರ ವೃದ್ಧಿಯಾಗಲಿವೆ; ಇದನ್ನು ಭಾರತದ ಇತರ ರಾಜ್ಯಗಳಿಗೆ ತುಲನೆ ಮಾಡಿದಾಗ ಈ ಹೆಚ್ಚಳ ಕಡಿಮೆ ಮತ್ತು ದಕ್ಷಿಣದ ರಾಜ್ಯಗಳ ಒಟ್ಟು ಕ್ಷೇತ್ರಗಳ ಪ್ರಮಾಣ ಕೇವಲ ಶೇ.24ರಷ್ಟು ಮಾತ್ರ ಉಳಿಯಲಿದೆ ಎಂದು ಅವರು ವಾದಿಸುತ್ತಿದ್ದಾರೆ.&lt;/p&gt;&lt;h3&gt;ದಕ್ಷಿಣಕ್ಕೆ ಅನ್ಯಾಯವಾದಂತೆ ಕಾಣುವುದಿಲ್ಲ&lt;/h3&gt;&lt;p&gt;ಕ್ಷೇತ್ರ ವಿಂಗಡಣೆಯ ಮಾನದಂಡಗಳನ್ನಾಗಲಿ ಅಥವಾ ಅವುಗಳ ಏರಿಕೆಯ ಪ್ರಮಾಣದ ಬಗ್ಗೆಯಾಗಲಿ ಕೇಂದ್ರ ಸರ್ಕಾರ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಹೀಗಿದ್ದರೂ ಸಿದ್ದರಾಮಯ್ಯನವರು ಕೆಲವು ಅಂಕಿ-ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳನ್ನೇ ಆಧಾರವಾಗಿಟ್ಟು ನೋಡಿದರೂ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವಂತೆ ಕಾಣುವುದಿಲ್ಲ. ಭಾರತದ ದಕ್ಷಿಣದ ರಾಜ್ಯಗಳನ್ನು ಒಂದು ವಿಭಾಗದಂತೆ ಹಾಗೂ ಇನ್ನುಳಿದ ಸಂಪೂರ್ಣ ಭಾರತವನ್ನು ಮತ್ತೊಂದು ವಿಭಾಗದಂತೆ ನೋಡುವುದು ಪೂರ್ವಾಗ್ರಹ ಪೀಡಿತವಾಗುತ್ತದೆ.&lt;/p&gt;&lt;p&gt;ಭೌಗೋಳಿಕ ಹಾಗೂ ಆಡಳಿತಾತ್ಮಕ ದೃಷ್ಟಿಕೋನದಿಂದ ನೋಡಿದಾಗ ಭಾರತದಲ್ಲಿ ಕನಿಷ್ಠ ಐದು ವಿಭಾಗಗಳು ಕಂಡುಬರುತ್ತವೆ. ಕನ್ನಡಿಗರಾದ ನಮ್ಮನ್ನು ಉತ್ತರಭಾಗದವರು ಎಂದು ಯಾರಾದರೂ ಕರೆದಾಗ ನಮಗೆ ಹೇಗೆ ಒಪ್ಪಲು ಸಾಧ್ಯವಿಲ್ಲವೋ, ಅದೇ ರೀತಿ ಪಶ್ಚಿಮ, ಪೂರ್ವ ಮತ್ತು ಮಧ್ಯ ಭಾಗದ ಭಾರತೀಯರು ಕೂಡ ತಮ್ಮನ್ನು &lsquo;ಉತ್ತರ ಭಾಗದವರು&rsquo; ಎಂದು ಕರೆಸಿಕೊಳ್ಳಲು ಒಪ್ಪಲಾರರು. ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ನಮ್ಮದಲ್ಲದ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕುವ ಮೂಲಕ ಸಿದ್ದರಾಮಯ್ಯನವರು ದೇಶದ ಒಕ್ಕೂಟ ವ್ಯವಸ್ಥೆಯ ಸಾರಕ್ಕೆ ಧಕ್ಕೆ ತರುತ್ತಿದ್ದಾರೆಯೇ?&lt;/p&gt;&lt;h3&gt;ಜನರ ದಾರಿ ತಪ್ಪಿಸಿದಂತಾಗುವುದಿಲ್ಲವೇ&lt;/h3&gt;&lt;p&gt;ಅಂದಹಾಗೆ 5 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳು ಭಾರತದ ದಕ್ಷಿಣಕ್ಕಿದ್ದು, ಅವು ಶೇ.24ರಷ್ಟು ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ಹಾಗೆಯೇ 6 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳು ಭಾರತದ ಉತ್ತರಕ್ಕಿದ್ದು, ಅವು ಶೇ.23ರಷ್ಟು ಕ್ಷೇತ್ರಗಳನ್ನು ಹೊಂದಿವೆ. ಭಾರತದ ಮಧ್ಯಭಾಗ, ಪಶ್ಚಿಮ ಹಾಗೂ ಪೂರ್ವಗಳು ಕ್ರಮವಾಗಿ 5, 4 ಹಾಗೂ 9 ರಾಜ್ಯಗಳನ್ನು ಮತ್ತು ಶೇ.18, 13 ಹಾಗೂ 22ರಷ್ಟು ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ.&lt;/p&gt;&lt;p&gt;ಸಿದ್ದರಾಮಯ್ಯ ಅವರು ಹೇಳಿರುವ ಪ್ರಸ್ತಾವಿತ ಅಂಕಿ-ಅಂಶಗಳನ್ನು ಆಧರಿಸಿದರೂ, ಪ್ರಸ್ತುತವಿರುವ ಪ್ರಮಾಣದಲ್ಲಿಯೇ ಕ್ಷೇತ್ರಗಳ ಸಂಖ್ಯೆ ವೃದ್ಧಿಯಾಗಲಿದ್ದು, ದಕ್ಷಿಣದ ಪಾಲಿಗೆ ನ್ಯಾಯಯುತ ಪ್ರಾತಿನಿಧ್ಯ ಸಿಗಲಿದೆ. ಹೀಗಿರುವಾಗ ದಕ್ಷಿಣಕ್ಕೆ ಅನ್ಯಾಯವಾಗಲಿದೆ ಎನ್ನುವುದು ಜನರ ಹಾದಿ ತಪ್ಪಿಸಿದಂತಾಗುವುದಿಲ್ಲವೇ?&lt;/p&gt;&lt;p&gt;ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿಯೂ ಕಾಂಗ್ರೆಸ್&zwnj;ಗೆ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲವೆಂಬುದನ್ನು ಅರಿತಿರುವ ಸಿದ್ದರಾಮಯ್ಯನವರು, ಈ ಮೂಲಕ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ. ಜನಬೆಂಬಲ ಸಿಗದ ಕಾರಣಕ್ಕೆ ಜನಪ್ರಾತಿನಿಧ್ಯವನ್ನೇ ಕುಂಠಿತಗೊಳಿಸುವುದು ಸೂಕ್ತವೆಂಬ ಕಾಂಗ್ರೆಸ್&zwnj;ನ ಈ ಒಳಸಂಚು ಲೋಕತಂತ್ರ ಮತ್ತು ಸಂವಿಧಾನದ ಆಶಯಗಳನ್ನು ಅಣಕಿಸುವಂತಿದೆ.&lt;/p&gt;&lt;h3&gt;ಕಲಾಪ ಪ್ರಕ್ರಿಯೆ&lt;/h3&gt;&lt;p&gt;ಸದನದಲ್ಲಿ ಕೇಂದ್ರ ಸರ್ಕಾರ ಮಂಡಸಿರುವ ನಾರಿಶಕ್ತಿ ವಂದನ ಅಧಿನಿಯಮವನ್ನು ಒಪ್ಪಲೇ ಬೇಕಾದ ನೈತಿಕ ಅನಿವಾರ್ಯತೆ ಪ್ರತಿಪಕ್ಷಗಳಿಗಿರುವುದರಿಂದ ಅದು ಜಾರಿಯಾಗುವುದು ಬಹುತೇಕ ನಿಶ್ಚಿತ. ಇದಾದ ಬಳಿಕ ಮುಂಬರುವ ಎಲ್ಲ ವಿಧಾನಸಭೆ ಹಾಗು ಲೋಕಸಭೆಯ ಚುನಾವಣೆಯಲ್ಲಿ ಶೇ.33ರಷ್ಟು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗುತ್ತದೆ. ಕ್ಷೇತ್ರ ಮರುವಿಂಗಡಣೆಯ ಕುರಿತ ವಿಧೇಯಕವೂ ಸಾಂವಿಧಾನಕ ಅನಿವಾರ್ಯತೆಯಾಗಿರುವ ಕಾರಣ ಇದರ ಬೆನ್ನಲ್ಲೇ ಮಂಡನೆಯಾಗಿದೆ. ಇದರ ಕುರಿತು ಕೇಂದ್ರ ಸರ್ಕಾರದ ಪ್ರಸ್ತಾವನೆಗಿಂತಲೂ ಉತ್ತಮವಾದ ಪ್ರಸ್ತಾವನೆಯನ್ನು ಕಾಂಗ್ರೆಸ್ ಹೊಂದಿದ್ದ ಪಕ್ಷದಲ್ಲಿ, ಸದನದಲ್ಲಿ ಅದನ್ನು ಮಂಡಿಸಿ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬದ್ಧತೆ ಪ್ರದರ್ಶಿಸಲಿ. ಲೋಕತಂತ್ರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಿ. ಅದಲ್ಲದೆ ಅವರು ತಮ್ಮ ಎಂದಿನ ಪರಿಪಾಠವನ್ನೇ ಈ ಬಾರಿಯೂ ಮುಂದುವರಿಸಿದರೆ ಬಾಬಾಸಾಹೇಬರ ಆಶಯಗಳಿಗೆ ಅವರು ಮಾಡುವ ಮಹಾಪಚಾರವಾಗಲಿದೆಯೇ ಹೊರತು ಕ್ಷೇತ್ರ ಮರುವಿಂಗಡನೆಯ ಪ್ರಕ್ರಿಯೆಗೆ ಹಿನ್ನಡೆಯಾಗದು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/injustice-to-south-india-in-delimitation-congress-allegations-are-biased-and-prejudiced-rav/articleshow-17axwi1"/>
        </item>
        <item>
            <title><![CDATA[SSLC ತೃತೀಯ ಭಾಷಾ ಪರೀಕ್ಷೆಗೆ ಗ್ರೇಡಿಂಗ್‌ ಪದ್ಧತಿ ಜಾರಿಗೆ ಹೈಕೋರ್ಟ್‌ ತಡೆ; ಹಲವು ಮಕ್ಕಳಿಗೆ ಹಿಂದಿ ಫೇಲ್‌ ಆಗುವ ಆತಂಕ!]]></title>
            <link>https://kannada.asianetnews.com/state/high-court-stays-sslc-grading-system-third-language-exam-many-students-fear-failing-hindi-rav/articleshow-d9iv108</link>
            <guid isPermaLink="true">https://kannada.asianetnews.com/state/high-court-stays-sslc-grading-system-third-language-exam-many-students-fear-failing-hindi-rav/articleshow-d9iv108</guid>
            <pubDate>Fri, 17 Apr 2026 05:06:06 +0530</pubDate>
            <description><![CDATA[ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್ ನೀಡುವ ಸರ್ಕಾರದ ತರಾತುರಿ ನಿರ್ಧಾರಕ್ಕೆ ಹೈಕೋರ್ಟ್&zwnj; ತಡೆ ನೀಡಿದೆ. ಈ ಆದೇಶದಿಂದ ಶಿಕ್ಷಣ ಇಲಾಖೆ ಇಕ್ಕಟ್ಟಿಗೆ ಸಿಲುಕಿದ್ದು, ಗ್ರೇಡಿಂಗ್ ಎಂದು ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸದ ವಿದ್ಯಾರ್ಥಿಗಳಲ್ಲಿ ಫಲಿತಾಂಶದ ಬಗ್ಗೆ ಆತಂಕ ಸೃಷ್ಟಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpca3w440bgpyyt6vq3ksgj3,imgname-----------------------2026-04-17t050003.796-1776382242948.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಪರೀಕ್ಷಾ ಫಲಿತಾಂಶದಲ್ಲಿ ಈ ಬಾರಿಯಿಂದಲೇ ಅಂಕಗಳ ಬದಲು ಗ್ರೇಡಿಂಗ್&zwnj; ನೀಡುವ ತರಾತುರಿ ನಿರ್ಧಾರಕ್ಕೆ ಹೈಕೋರ್ಟ್&zwnj; ಬ್ರೇಕ್&zwnj; ಹಾಕಿರುವುದು ಶಾಲಾ ಶಿಕ್ಷಣ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.&lt;/p&gt;&lt;p&gt;ಹೈಕೋರ್ಟ್&zwnj; ಆದೇಶದಿಂದ ಇಲಾಖೆ ಮುಖಭಂಗಕ್ಕೀಡಾಗಿದೆ. ಈ ಮಧ್ಯೆ, ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಈ ವರ್ಷ ಆದೇಶ ಪಾಲಿಸಿ ತೃತೀಯ ಭಾಷೆಗೂ ಅಂಕಗಳನ್ನೇ ನೀಡಬೇಕೇ ಎನ್ನುವ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ತಜ್ಞರ ಸಲಹೆ ಬಳಿಕ ಶೀಘ್ರ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.&lt;/p&gt;&lt;p&gt;ಮತ್ತೊಂದೆಡೆ ಗ್ರೇಡಿಂಗ್&zwnj; ಪದ್ಧತಿ ಎನ್ನುವ ಕಾರಣಕ್ಕೆ ತೃತೀಯ ಭಾಷಾ ಪರೀಕ್ಷೆಯನ್ನು ಗಂಭೀರವಾಗಿ ಎದುರಿಸದ ಬಹಳಷ್ಟು ವಿದ್ಯಾರ್ಥಿಗಳಲ್ಲಿ ಈಗ ಅನುತ್ತೀರ್ಣದ ಆತಂಕವನ್ನೂ ಸೃಷ್ಟಿಸಿದೆ. ಹಿಂದಿ ಸೇರಿದಂತೆ ತೃತೀಯ ಭಾಷಾ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಸಿದ್ಧರಾಗಿದ್ದ ವಿದ್ಯಾರ್ಥಿಗಳು ಕೂಡ ಒಟ್ಟಾರೆ ಫಲಿತಾಂಶಕ್ಕೆ ಈ ವಿಷಯದ ಅಂಕಗಳನ್ನು ಪರಿಗಣಿಸುವುದಿಲ್ಲ ಎನ್ನುವಂತೆ ಮಾಡಿದ ಕಾರಣಕ್ಕೆ ತುಂಬಾ ಉತ್ತಮವಾಗಿ ಅಥವಾ ಶೇ.100ಕ್ಕೆ ನೂರು ಅಂಕ ಪಡೆಯುವ ನಿಟ್ಟಿನಲ್ಲಿ ಪರೀಕ್ಷೆಗೆ ಸಿದ್ಧರಾದವರೂ ಅಷ್ಟು ಗಾಂಭೀರ್ಯವಾಗಿ ಪರೀಕ್ಷೆ ಬರೆಯದೆ ಹೋಗಿರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಅಂತಹ ಮಕ್ಕಳನ್ನೂ ಸರ್ಕಾರದ ನಿರ್ಧಾರ ಫಲಿತಾಂಶ ಕಡಿಮೆಯಾಗುವ ಆತಂಕಕ್ಕೆ ದೂಡಿದೆ.&lt;/p&gt;&lt;p&gt;ಸಾಮಾನ್ಯವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತರುವುದಾದರೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ನಿಯಮಾವಳಿ ಬದಲಾವಣೆ ಮಾಡಿ ತರಬೇಕು. ಅದನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಬಂಧಿಸಿದ ಎಲ್ಲಾ ಭಾಗೀದಾರರಿಗೂ ತಿಳಿಸಬೇಕು. ಆದರೆ, ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆಯಂತಹ ವಿಷಯದಲ್ಲಿ ಶೈಕ್ಷಣಿಕ ವರ್ಷಾಂತ್ಯದಲ್ಲಿ ಅದರಲ್ಲೂ ಪರೀಕ್ಷೆ ನಡೆಯುತ್ತಿರುವಾಗ ತೃತೀಯ ಭಾಷೆ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ. ಗ್ರೇಡಿಂಗ್&zwnj; ಅಷ್ಟೇ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದ್ದು ವಿವೇಚನಾರಹಿತ ನಿರ್ಧಾರ. ಅಲ್ಲದೆ, 2026ನೇ ಸಾಲಿನ ಪರೀಕ್ಷೆಗಳು ಮುಗಿದ ಮೇಲೆ ಆ ಪರೀಕ್ಷೆಗಳ ಬದಲಾವಣೆಗೆ ಕರಡು ನಿಯಮಾವಳಿ ಪ್ರಕಟಿಸಿದ ಸರ್ಕಾರದ ನಿರ್ಧಾರ ಇನ್ನೂ ಮೂರ್ಖತನದ್ದು ಎನ್ನುತ್ತಾರೆ ಶಿಕ್ಷಣ ತಜ್ಞರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/high-court-stays-sslc-grading-system-third-language-exam-many-students-fear-failing-hindi-rav/articleshow-d9iv108"/>
        </item>
        <item>
            <title><![CDATA[ಇನ್ನೂ 1 ವರ್ಷ ಸಲೀಂ ರಾಜ್ಯ ಪೊಲೀಸ್ ಬಾಸ್‌- ಡಿಜಿ-ಐಜಿ ಅಧಿಕಾರಾವಧಿ 1 ವರ್ಷ ವಿಸ್ತರಿಸಿ ಸರ್ಕಾರದಿಂದ ಆದೇಶ]]></title>
            <link>https://kannada.asianetnews.com/state/karnataka-ips-dr-ma-saleem-s-tenure-as-dg-igp-extended-till-2027-rav/articleshow-8cqp80b</link>
            <guid isPermaLink="true">https://kannada.asianetnews.com/state/karnataka-ips-dr-ma-saleem-s-tenure-as-dg-igp-extended-till-2027-rav/articleshow-8cqp80b</guid>
            <pubDate>Fri, 17 Apr 2026 04:48:58 +0530</pubDate>
            <description><![CDATA[&lt;p&gt;ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಿ ರಾಜ್ಯ ಸರ್ಕಾರ ಗುರುವಾರ ಮಹತ್ವದ ಆದೇಶ ಹೊರಡಿಸಿದೆ. ಜೂನ್&zwnj;ನಲ್ಲಿ ನಿವೃತ್ತರಾಗಬೇಕಿದ್ದ ಅವರಿಗೆ, ಸುಪ್ರೀಂ ಕೋರ್ಟ್&zwnj;ನ ನಿರ್ದೇಶನದಂತೆ ಈ ವಿಸ್ತರಣೆ ದೊರೆತಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpc8v67srxza5bdmqzdtyrsc,imgname-----------------------2026-04-17t043808.356-1776380909817.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಿ ರಾಜ್ಯ ಸರ್ಕಾರ ಗುರುವಾರ ಮಹತ್ವದ ಆದೇಶ ಹೊರಡಿಸಿದೆ.&lt;/p&gt;&lt;p&gt;ಇದೇ ವರ್ಷದ ಜೂನ್ ತಿಂಗಳಿಗೆ ಸಲೀಂ ಅವರು ನಿವೃತ್ತರಾಗಲಿದ್ದರು. ಆದರೆ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ 2027ರ ಆಗಸ್ಟ್&zwnj;ನಲ್ಲಿ ರಾಜ್ಯ ಪೊಲೀಸ್ ಮಹಾದಂಡನಾಯಕ ಹುದ್ದೆಯಿಂದ ಅವರು ಬಿಡುಗಡೆ ಆಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದನ್ವಯ ಡಿಜಿ-ಐಜಿಪಿ ಸಲೀಂ ಅವರಿಗೆ ಅಧಿಕಾರಾವಧಿ ವಿಸ್ತರಣೆ ಮಾಡಲಾಗಿದೆ ಎಂದು ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸೇವಾ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ಎಸ್&zwnj;.ಸಂಜಯ್ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;p&gt;2006ರಲ್ಲಿ ಪಂಜಾಬ್&zwnj; ರಾಜ್ಯದ ಐಪಿಎಸ್ ಅಧಿಕಾರಿ ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ ಅಧಿಕಾರಾವಧಿ ಕನಿಷ್ಠ 2 ವರ್ಷಗಳಿರಬೇಕು ಎಂದು ಆದೇಶಿಸಿತ್ತು. ಆದರೆ ಡಿಜಿ-ಐಜಿ ಹುದ್ದೆಗೆ ನೇಮಕಗೊಳ್ಳುವ ಐಪಿಎಸ್&zwnj; ಅಧಿಕಾರಿ ನಿವೃತ್ತಿಗೆ ಕನಿಷ್ಠ 6 ತಿಂಗಳಿಗಿಂತ ಹೆಚ್ಚಿನ ಸೇವಾವಧಿ ಇದ್ದರೆ ಪರಿಗಣಿಸಬಹುದು ಎಂಬ ನಿಯಮ ರೂಪಿಸಿತ್ತು. ಈ ನ್ಯಾಯಾಲಯದ ಆದೇಶದನ್ವಯ ಸಲೀಂ ಅವರಿಗೆ ಅಧಿಕಾರಾವಧಿ ವಿಸ್ತರಣೆಯಾಗಿದೆ.&lt;/p&gt;&lt;h2&gt;ನಾಲ್ಕು ತಿಂಗಳಿಗಿಂತ ಮುನ್ನ:&lt;/h2&gt;&lt;p&gt;ಇದೇ ವರ್ಷದ ಜೂನ್&zwnj; ತಿಂಗಳಿಗೆ ಸಲೀಂ ಅವರು ಸೇವಾ ನಿವೃತ್ತಿ ಆಗಲಿದ್ದರು. ಅಲ್ಲದೆ 2024ರ ಮೇ 22ರಂದು ಅವರು ಡಿಜಿ-ಐಜಿಪಿ ಹುದ್ದೆ ನೇಮಕಗೊಂಡಿದ್ದರು. ಹೀಗಾಗಿ ಜೂನ್&zwnj; ಅಥವಾ ಆಗಸ್ಟ್&zwnj;ನಲ್ಲಿ ಅಧಿಕಾರ ವಿಸ್ತರಣೆ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಬೇಕಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಸಲೀಂ ಅವರ ಅಧಿಕಾರ ವಿಸ್ತರಣೆ ಆದೇಶ ಹೊರಬಿದ್ದಿರುವುದು ಇಲಾಖೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.&lt;/p&gt;&lt;p&gt;ಮೊದಲು ಪ್ರಭಾರಿಯಾಗಿ ಡಿಜಿಪಿ ಹುದ್ದೆಗೆ ಅಧಿಕಾರ ವಹಿಸಿಕೊಂಡ ಅವರು ನಾಲ್ಕು ತಿಂಗಳ ಬಳಿಕ ಕೇಂದ್ರ ಲೋಕಸೇವಾ ಆಯೋಗದ ಅನುಮೋದನೆ ಮೇರೆಗೆ ಕಾಯಂ ಆಗಿದ್ದರು. ಇನ್ನು ಈ ಹಿಂದೆ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರಿಗೆ ಪ್ರಭಾರ ಆಡಳಿತಾವಧಿಯನ್ನು ಸರ್ಕಾರ ಪರಿಗಣಿಸಿತ್ತು. ಆದರೆ ಸಲೀಂ ಅವರ ವಿಚಾರದಲ್ಲಿ ಉಸ್ತುವಾರಿ ಅವಧಿಯನ್ನು ಪರಿಗಣಿಸದೆ ಹುದ್ದೆ ಕಾಯಂಗೊಂಡ ದಿನದಿಂದ ಲೆಕ್ಕ ಹಾಕಿ ಅಧಿಕಾರಾವಧಿಯನ್ನು ಸರ್ಕಾರ ವಿಸ್ತರಿಸಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-ips-dr-ma-saleem-s-tenure-as-dg-igp-extended-till-2027-rav/articleshow-8cqp80b"/>
        </item>
        <item>
            <title><![CDATA[ನಾಯಕರ ತಲೆದಂಡಕ್ಕೆ ಕೈ ವಿರುದ್ಧ ಮುಸ್ಲಿಮರು ಕಿಡಿ; ಬಿಜೆಪಿಯ ರಾಘವೇಂದ್ರ ಪರ ಪ್ರಚಾರ ಮಾಡಿದ್ದ ಶಾಮನೂರು ಮೇಲೇಕೆ ಕ್ರಮ ಆಗಿರಲಿಲ್ಲ?]]></title>
            <link>https://kannada.asianetnews.com/politics/karnataka-politics-muslims-community-outraged-at-congress-over-leaders-ouster-rav/articleshow-ffiqteu</link>
            <guid isPermaLink="true">https://kannada.asianetnews.com/politics/karnataka-politics-muslims-community-outraged-at-congress-over-leaders-ouster-rav/articleshow-ffiqteu</guid>
            <pubDate>Fri, 17 Apr 2026 04:28:07 +0530</pubDate>
            <description><![CDATA[&lt;p&gt;2024ರಲ್ಲಿ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಮತಯಾಚನೆ ಮಾಡಿದ್ದ ದಿ.ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳದ ಕಾಂಗ್ರೆಸ್&zwnj;, ಈಗ ಮುಸ್ಲಿಂ ನಾಯಕರನ್ನು ವಜಾ ಮಾಡಿದ್ದೇಕೆ ಎಂದು ಮುಸ್ಲಿಂ ಮುಖಂಡ ಶಬ್ಬೀರ್ ಅಹ್ಮದ್ ನದ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzhdmkgbd5a6zgrtse7mevx,imgname-----------------------2026-04-12t055752.365-1775953695344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;2024ರಲ್ಲಿ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಮತಯಾಚನೆ ಮಾಡಿದ್ದ ದಿ.ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳದ ಕಾಂಗ್ರೆಸ್&zwnj;, ಈಗ ಮುಸ್ಲಿಂ ನಾಯಕರನ್ನು ವಜಾ ಮಾಡಿದ್ದೇಕೆ ಎಂದು ಮುಸ್ಲಿಂ ಮುಖಂಡ ಶಬ್ಬೀರ್ ಅಹ್ಮದ್ ನದ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಗುರುವಾರ ನಗರದಲ್ಲಿ ಉಲಮಾ ಎ ಕರ್ನಾಟಕ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.&lt;/p&gt;&lt;p&gt;2013, 2018, 2023, 2024ರ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪರ ಬಲವಾಗಿ ನಿಂತುಕೊಂಡಿತ್ತು. ಆದರೆ ಈಗ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ನಿರ್ಲಕ್ಷ್ಯ ಮಾಡಿದೆ. ನಮ್ಮ ನಾಯಕರನ್ನು ವಜಾ ಮಾಡುತ್ತಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದರಿಂದ ಆಶ್ಚರ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್&zwnj; ಪಕ್ಷ ಒಂದು ಕುಟುಂಬಕ್ಕಾಗಿ ಮುಸ್ಲಿಮರನ್ನು ಕೈಬಿಟ್ಟು, ಆ ಸಮುದಾಯದ ಮುಖಂಡರ ಮೇಲೆ ಕ್ರಮ ಕೈಗೊಳ್ಳುತ್ತಿದೆ. ಕಾಂಗ್ರೆಸ್&zwnj; ನಡೆ ಸ್ವೀಕಾರಾರ್ಹವಲ್ಲ. ಇದರಿಂದ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ಬೇಸರವಿದೆ. ಎಲ್ಲವನ್ನೂ ಸಮುದಾಯದ ಜನರು ನೋಡುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು.&lt;/p&gt;&lt;p&gt;ಉಲಮಾ ಎ ಕರ್ನಾಟಕ ಅಧ್ಯಕ್ಷ ಇಫ್ತಿಖಾರ್ ಖಾಸ್ಮೀ ಮಾತನಾಡಿ, ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ಕ್ರಮಗಳು ಖಂಡನೀಯ. 2023ರ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲು ಒತ್ತಾಯ ಮಾಡಲಾಗಿತ್ತು. ಆಗ ಶಾಮನೂರು ಶಿವಶಂಕರಪ್ಪ ಅವರು ಮುಂದೆ ಮುಸ್ಲಿಮರಿಗೆ ನೀಡುವ ಭರವಸೆ ನೀಡಿದ್ದರು. ಬಾಗಲಕೋಟೆಯಲ್ಲಿ ಮೇಟಿ ಅವರು ನಿಧನದ ನಂತರ ಅವರ ಮಗನಿಗೆ ಟಿಕೆಟ್&zwnj; ನೀಡಿದರು. ದಾವಣಗೆರೆಯಲ್ಲಿ ಶಾಮನೂರು ಅವರ ಮೊಮ್ಮಗನಿಗೆ ನೀಡಿದ್ದಾರೆ. ಇದು ಮುಸ್ಲಿಮರಿಗೆ ನೋವುಂಟು ಮಾಡಿದೆ ಎಂದರು.&lt;/p&gt;&lt;p&gt;ಕಾಂಗ್ರೆಸ್&zwnj;ಗಾಗಿ ಮುಸ್ಲಿಂ ಮುಖಂಡರು ದಾವಣಗೆರೆ, ಬಾಗಲಕೋಟೆಯಲ್ಲಿ ಕೆಲಸ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ಮೊದಲು ಶೋಕಾಸ್ ನೋಟಿಸ್ ನೀಡಬೇಕಿತ್ತು. ಆದರೆ ಕಾಂಗ್ರೆಸ್ ನೇರವಾಗಿ ಶಿಸ್ತು ಕ್ರಮದ ಮೂಲಕ ದಾಳಿ ನಡೆಸಿದೆ. ಜಬ್ಬಾರ್ ಮತ್ತು ನಜೀರ್ ಅಹ್ಮದ್ ಮೇಲೆ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ಕ್ರಮ ಸರಿಯಲ್ಲ ಎಂದು ಟೀಕಿಸಿದರು.&lt;/p&gt;&lt;p&gt;ಮೌಲಾನಾ ಖಾರಿ ಝುಲ್ಫಿಕರ್ ಅಹ್ಮದ್ ನೂರಿ ಮಾತನಾಡಿ, ದಾವಣಗೆರೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಭರವಸೆ ನೀಡಿದ್ದರು. ಆದರೆ, ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮೌಲಾನಾ ಝೈನುಲ್ ಆಬಿದಿನ್, ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮೌಲಾನಾ ಸೈಯದ್ ಆಸಿಮ್ ಅಬ್ದುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-politics-muslims-community-outraged-at-congress-over-leaders-ouster-rav/articleshow-ffiqteu"/>
        </item>
        <item>
            <title><![CDATA[ಉಳ್ಳಾಲ, ಮಂಗಳೂರಲ್ಲಿ ಭೂಗತ ಕೇಬಲ್‌ ಕಾಮಗಾರಿ ಶೀಘ್ರ: ಸ್ಪೀಕರ್‌ ಯು.ಟಿ.ಖಾದರ್‌]]></title>
            <link>https://kannada.asianetnews.com/karnataka-districts/mangaluru-underground-electric-cable-project-ut-khader-update-gvd/articleshow-6of9ddz</link>
            <guid isPermaLink="true">https://kannada.asianetnews.com/karnataka-districts/mangaluru-underground-electric-cable-project-ut-khader-update-gvd/articleshow-6of9ddz</guid>
            <pubDate>Thu, 16 Apr 2026 23:51:45 +0530</pubDate>
            <description><![CDATA[&lt;p&gt;ಪುರಸಭೆಯ ಹಲವು ಪ್ರದೇಶಗಳಲ್ಲಿ 186.45 ಕೋಟಿ ರು. ವೆಚ್ಚದಲ್ಲಿ ಭೂಗತ ವಿದ್ಯುತ್ ಕೇಬಲ್&zwnj; ಅಳವಡಿಸುವ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ವಿಧಾನಸಭೆ ಸ್ಪೀಕರ್&zwnj; ಯು.ಟಿ.ಖಾದರ್&zwnj; ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h5xk1er728j97aq7whwc3ekr,imgname-khader.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಏ.16): &lt;/strong&gt;ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ನಗರಸಭೆಯ ಸಂಪೂರ್ಣ ವ್ಯಾಪ್ತಿ ಹಾಗೂ ಸೋಮೇಶ್ವರ ಪುರಸಭೆಯ ಹಲವು ಪ್ರದೇಶಗಳಲ್ಲಿ 186.45 ಕೋಟಿ ರು. ವೆಚ್ಚದಲ್ಲಿ ಭೂಗತ ವಿದ್ಯುತ್ ಕೇಬಲ್&zwnj; ಅಳವಡಿಸುವ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ವಿಧಾನಸಭೆ ಸ್ಪೀಕರ್&zwnj; ಯು.ಟಿ.ಖಾದರ್&zwnj; ತಿಳಿಸಿದ್ದಾರೆ.&lt;/p&gt;&lt;p&gt;ನಗರದ ಮೆಸ್ಕಾಂ ಭವನದಲ್ಲಿ ಈ ಕುರಿತು ಅಧಿಕಾರಿಗಳೊಂದಿಗೆ ಮಹತ್ವದ ಸಮನ್ವಯ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪೆರಿಬೈಲ್, ಕುಂಪಲ, ಮೂರುಕಟ್ಟೆ, ಕೊಲ್ಯ, ಬಗಂಬಿಲ, ಉಚ್ಚಿಲದಲ್ಲಿ ಭೂಗತ ಕೇಬಲ್&zwnj; ಅಳವಡಿಸಲು ನಿರ್ಧರಿಸಲಾಗಿದೆ ಎಂದರು.&lt;/p&gt;&lt;p&gt;&lt;strong&gt;ಮಂಗಳೂರು ನಗರದಲ್ಲೂ ಕೇಬಲ್&zwnj;: &lt;/strong&gt;ಉಳ್ಳಾಲ ಮಾತ್ರವಲ್ಲದೆ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕುದ್ರೋಳಿ- ಬಿಜೈ- ಕೆಎಸ್ಸಾರ್ಟಿಸಿ- ಉರ್ವ ಸ್ಟೋರ್&zwnj; ಭಾಗದಲ್ಲಿ 67 ಕೋಟಿ ರು. ವೆಚ್ಚದಲ್ಲಿ ಹಾಗೂ ವಿಮಾನ ನಿಲ್ದಾಣಕ್ಕೆ ಸಾಗುವ ಲೈನ್&zwnj;ನಲ್ಲಿ 51 ಕೋಟಿ ರು. ವೆಚ್ಚದಲ್ಲಿ ಭೂಗತ ಕೇಬಲ್&zwnj; ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಇದೇ ಸಂದರ್ಭ ಖಾದರ್&zwnj; ಹೇಳಿದರು.&lt;/p&gt;&lt;p&gt;ಉಳ್ಳಾಲದಲ್ಲಿ 144.16 ಕಿ.ಮೀ. ಎಚ್&zwnj;ಟಿ ಲೈನ್, 223.48 ಕಿ.ಮೀ ಎಲ್&zwnj;ಟಿ ಲೈನ್, ಮಣ್ಣಗುಡ್ಡೆ ಉಪವಿಭಾಗದಲ್ಲಿ 62.83 ಕಿಮೀ ಎಚ್&zwnj;ಟಿ ಲೈನ್, 45.70 ಕಿ.ಮೀ ಎಲ್&zwnj;ಟಿ ಲೈನ್, ಕಾವೂರು ಉಪವಿಭಾಗದಲ್ಲಿ 47.40 ಕಿಮೀ ಎಚ್&zwnj;ಟಿ ಲೈನ್, 48.75 ಕಿಮೀ ಎಲ್&zwnj;ಟಿ ಲೈನ್ ಭೂಗತ ಕೇಬಲ್ ಆಗಿ ಪರಿವರ್ತನೆಗೊಳ್ಳಲಿದೆ. ಉಳ್ಳಾಲದ ಪ್ರವಾಹ ಪೀಡಿತ ಪ್ರದೇಶದ 12 ಕಿ.ಮೀ ವ್ಯಾಪ್ತಿಯಲ್ಲಿ ಎಬಿ ಕೇಬಲ್ ಅಳವಡಿಸಲಾಗುವುದು ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;24 ತಿಂಗಳಲ್ಲಿ ಕಾಮಗಾರಿ ಸಂಪೂರ್ಣ: &lt;/strong&gt;ಇವೆಲ್ಲ ಕಾಮಗಾರಿ ಪೂರ್ಣವಾಗಲು 24 ತಿಂಗಳ ಅವಧಿ ನಿಗದಿಪಡಿಸಲಾಗಿದೆ. ಭೂಗತ ಕೇಬಲ್ ಅಳವಡಿಸಲು ದುಪ್ಪಟ್ಟು ಖರ್ಚು ತಗುಲಿದರೂ, ಇದರಿಂದ ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ, ಅವಘಡಗಳು ಉಂಟಾಗುವುದು ತಪ್ಪಲಿದೆ. ನಗರಗಳ ಸೌಂದರ್ಯ ವೃದ್ಧಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾಗಲಿದೆ. ಹಾಗಾಗಿ ಕಾಮಗಾರಿ ವೇಳೆ ಕೊಂಚ ತೊಂದರೆ ಉಂಟಾದರೂ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಮಾತನಾಡಿ, ಮೆಸ್ಕಾಂ ವ್ಯಾಪ್ತಿಯಲ್ಲಿ ಈಗಾಗಲೇ ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು ನಗರ ವ್ಯಾಪ್ತಿಯ ಕೆಲವೆಡೆ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಈವರೆಗೆ 1,055 ಕಿ.ಮೀ. ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸಲಾಗಿದೆ. ನೆಲದಡಿ 1.50 ಮೀಟರ್ ಆಳ ಮತ್ತು ಅರ್ಧ ಮೀಟರ್ ಅಗಲದಲ್ಲಿ ಈ ಕೇಬಲ್ ಅಳವಡಿಸಲಾಗುವುದು ಎಂದು ತಿಳಿಸಿದರು. ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಇದ್ದರು.&lt;/p&gt;&lt;h2&gt;&lt;strong&gt;ಕಡಲ್ಕೊರೆತ ತಡೆಗೆ ಯೋಜನೆ&lt;/strong&gt;&lt;/h2&gt;&lt;p&gt;ಅವಿಭಜಿತ ದ.ಕ., ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸಲು ಎನ್&zwnj;ಐಟಿಕೆ ತಜ್ಞರು ವಿನ್ಯಾಸ ತಯಾರಿಸಿದ್ದರು. ಅದನ್ನು ಕಂದಾಯ ಇಲಾಖೆಯವರು ಪರಿಶೀಲನೆ ಮಾಡುತ್ತಿದ್ದಾರೆ. ಅಗತ್ಯ ಕಾಲಾವಕಾಶ ಪಡೆದು ವ್ಯವಸ್ಥಿತವಾದ ಶಾಶ್ವತ ಯೋಜನೆ ರೂಪಿಸಲು ಸೂಚಿಸಲಾಗಿದೆ. ಕಡಲ್ಕೊರೆತದ ಅಪಾಯದ ಸ್ಥಳಗಳಲ್ಲಿ ಈಗಾಗಲೇ ತಡೆಗೋಡೆ ರಚಿಸಲಾಗಿದ್ದು ಅಲ್ಲಿ ಈ ಬಾರಿ ಸಮಸ್ಯೆ ಉಂಟಾಗದು ಎಂದು ಸ್ಪೀಕರ್ ಯು.ಟಿ. ಖಾದರ್&zwnj; ತಿಳಿಸಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mangaluru-underground-electric-cable-project-ut-khader-update-gvd/articleshow-6of9ddz"/>
        </item>
        <item>
            <title><![CDATA[ಸಿಂದೂರ, ತಿಲಕಕ್ಕೆ ಬ್ಯಾನ್‌, ಹಿಜಾಬ್‌ಗೆ ಅವಕಾಶ? ಡ್ರೆಸ್‌ ಕೋಡ್‌ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ ಲೆನ್ಸ್‌ಕಾರ್ಟ್‌]]></title>
            <link>https://kannada.asianetnews.com/india-news/lenskart-dress-code-controversy-bindi-tilak-hijab-guidelines-peyush-bansal-san/articleshow-7o6ii2s</link>
            <guid isPermaLink="true">https://kannada.asianetnews.com/india-news/lenskart-dress-code-controversy-bindi-tilak-hijab-guidelines-peyush-bansal-san/articleshow-7o6ii2s</guid>
            <pubDate>Thu, 16 Apr 2026 22:41:58 +0530</pubDate>
            <description><![CDATA[&lt;p&gt;ಲೆನ್ಸ್&zwnj;ಕಾರ್ಟ್ ತನ್ನ ಕಚೇರಿ ಡ್ರೆಸ್&zwnj;ಕೋಡ್&zwnj;ನಲ್ಲಿ ಬಿಂದಿ, ತಿಲಕದಂತಹ ಹಿಂದೂ ಸಂಪ್ರದಾಯದ ಕುರುಹುಗಳನ್ನು ನಿಷೇಧಿಸಿ, ಹಿಜಾಬ್&zwnj;ಗೆ ಅನುಮತಿ ನೀಡಿದೆ ಎಂಬ ಆರೋಪದಿಂದ ವಿವಾದಕ್ಕೆ ಸಿಲುಕಿದೆ. ಈ ಬಗ್ಗೆ ಸಿಇಒ ಪಿಯೂಷ್ ಬನ್ಸಾಲ್ ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpbm4c34fwescmqxz3y3mt13,imgname-peyush-bansal-lenskart-1776359190628.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.16): &lt;/strong&gt;ಪ್ರಮುಖ ಐವೇರ್ ಸ್ಟಾರ್ಟ್&zwnj;ಅಪ್ ಸಂಸ್ಥೆಯಾದ ಲೆನ್ಸ್&zwnj;ಕಾರ್ಟ್ ತನ್ನ ಕಚೇರಿ ಡ್ರೆಸ್&zwnj;ಕೋಡ್&zwnj; ಮಾರ್ಗಸೂಚಿಯಲ್ಲಿ 'ಹಿಂದೂ ಸಂಪ್ರದಾಯದ ಕುರುಹುಗಳಾದ ಬಿಂದಿ, ತಿಲಕ ಮತ್ತು ಕೈಗೆ ಕಟ್ಟುವ ದಾರಗಳನ್ನು ನಿಷೇಧಿಸಿ, ಹಿಜಾಬ್&zwnj;ಗೆ ಅನುಮತಿ ನೀಡಿದೆ' ಎಂಬ ಆರೋಪದ ಮೇಲೆ ಭಾರಿ ಆಕ್ರೋಶ ಎದುರಿಸುತ್ತಿದೆ. ವಿವಾದ ತಾರಕಕ್ಕೇರುತ್ತಿದ್ದಂತೆ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಪಿಯೂಷ್ ಬನ್ಸಾಲ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ದಾಖಲೆಯು ಹಳೆಯದಾಗಿದ್ದು ಪ್ರಸ್ತುತ ಮಾರ್ಗಸೂಚಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿವಾದಕ್ಕೆ ಕಾರಣವಾದ ಅಂಶಗಳೇನು?&lt;/strong&gt;&lt;/h2&gt;&lt;p&gt;ಲೆನ್ಸ್&zwnj;ಕಾರ್ಟ್&zwnj;ನ ಆಂತರಿಕ ದಾಖಲೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಉದ್ಯೋಗಿಗಳಿಗೆ ಪ್ರಮುಖ ಸೂಚನೆ ನೀಡಲಾಗಿತ್ತು. ವಿವಾಹಿತ ಮಹಿಳೆಯರು ಧರಿಸುವ ಸಿಂಧೂರವು ಹಣೆಯ ಮೇಲೆ ಬೀಳದಂತೆ ಅತಿ ಕಡಿಮೆಯಿರಬೇಕು. ಬಿಂದಿ ಧರಿಸಲು ಅನುಮತಿಯಿಲ್ಲ. ಕೈಗೆ ಕಟ್ಟುವ ಧಾರ್ಮಿಕ ದಾರಗಳು ಅಥವಾ ರಿಸ್ಟ್&zwnj;ಬ್ಯಾಂಡ್&zwnj;ಗಳನ್ನು ತೆಗೆಯಬೇಕು. ಮುಸ್ಲಿಂ ಮಹಿಳೆಯರಿಗೆ ಕಪ್ಪು ಬಣ್ಣದ ಹಿಜಾಬ್ ಧರಿಸಲು ಅನುಮತಿಯಿದೆ (ಅದು ಕಂಪನಿಯ ಲೋಗೋವನ್ನು ಮುಚ್ಚಬಾರದು). ಆದರೆ ಸ್ಟೋರ್&zwnj;ನ ಒಳಗೆ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಇನ್ನು ಹಣೆಯ ಮೇಲೆ ತಿಲಕ ಧರಿಸಲು ಅವಕಾಶವಿಲ್ಲ.&lt;/p&gt;&lt;p&gt;ಲೇಖಕಿ ಶಫಾಲಿ ವೈದ್ಯ ಸೇರಿದಂತೆ ಹಲವು ಗಣ್ಯರು, &quot;ಹಿಜಾಬ್&zwnj;ಗೆ ಓಕೆ ಎನ್ನುವ ಲೆನ್ಸ್&zwnj;ಕಾರ್ಟ್ ಬಿಂದಿ ಮತ್ತು ಕೈಗೆ ಕಟ್ಟುವ ದಾರದ ವಿಚಾರದಲ್ಲಿ ಯಾಕೆ ಇಷ್ಟೊಂದು ಕಠಿಣವಾಗಿದೆ?&quot; ಎಂದು ಪ್ರಶ್ನಿಸಿ ಪಿಯೂಷ್ ಬನ್ಸಾಲ್ ಅವರನ್ನು ಟ್ಯಾಗ್ ಮಾಡಿದ್ದರು.&lt;/p&gt;&lt;h2&gt;&lt;strong&gt;ಪಿಯೂಷ್ ಬನ್ಸಾಲ್ ನೀಡಿದ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ವಿವಾದದ ಬೆನ್ನಲ್ಲೇ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ ಪಿಯೂಷ್ ಬನ್ಸಾಲ್, &quot;ಈ ದಾಖಲೆಯು ನಮ್ಮ ಪ್ರಸ್ತುತ ಮಾರ್ಗಸೂಚಿಯನ್ನು ಪ್ರತಿನಿಧಿಸುವುದಿಲ್ಲ. ನಮ್ಮ ಗ್ರೂಮಿಂಗ್ ಪಾಲಿಸಿಯು ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಹಳೆಯ ಆವೃತ್ತಿಗಳು ನಾವು ಇಂದು ಏನಾಗಿದ್ದೇವೆ ಎಂಬುದನ್ನು ಬಿಂಬಿಸುವುದಿಲ್ಲ. ಇದರಿಂದ ಉಂಟಾದ ಗೊಂದಲಕ್ಕೆ ನಾವು ಕ್ಷಮೆಯಾಚಿಸುತ್ತೇವೆ,&quot; ಎಂದು ತಿಳಿಸಿದರು.&lt;/p&gt;&lt;p&gt;ಅಲ್ಲದೆ, &quot;ಬಿಂದಿ ಮತ್ತು ತಿಲಕ ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ನಂಬಿಕೆಗಳ ಅಭಿವ್ಯಕ್ತಿಗೆ ಲೆನ್ಸ್&zwnj;ಕಾರ್ಟ್&zwnj;ನಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಭಾರತದಾದ್ಯಂತ ಇರುವ ನಮ್ಮ ಸಾವಿರಾರು ಉದ್ಯೋಗಿಗಳು ಪ್ರತಿದಿನ ತಮ್ಮ ಸಂಸ್ಕೃತಿ ಮತ್ತು ನಂಬಿಕೆಯನ್ನು ಹೆಮ್ಮೆಯಿಂದ ಧರಿಸುತ್ತಿದ್ದಾರೆ,&quot; ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ತಪ್ಪನ್ನು ಒಪ್ಪಿಕೊಂಡ 'ಶಾರ್ಕ್ ಟ್ಯಾಂಕ್' ಜಡ್ಜ್&zwnj;&lt;/strong&gt;&lt;/h2&gt;&lt;p&gt;ಸುಮಾರು 12 ಗಂಟೆಗಳ ನಂತರ ಮತ್ತೊಂದು ಸ್ಪಷ್ಟನೆ ನೀಡಿದ ಬನ್ಸಾಲ್, ಇದು ಕಂಪನಿಯ ಅಧಿಕೃತ 'ಎಚ್&zwnj;ಆರ್ ಪಾಲಿಸಿ' ಅಲ್ಲ, ಬದಲಾಗಿ ಹಳೆಯ 'ಆಂತರಿಕ ತರಬೇತಿ ಟಿಪ್ಪಣಿ' (Internal Training Note) ಎಂದು ಹೇಳಿದರು. &quot;ಬಿಂದಿ/ತಿಲಕದ ಬಗ್ಗೆ ಅದರಲ್ಲಿ ಬರೆಯಲಾದ ಸಾಲು ತಪ್ಪಾಗಿತ್ತು. ಫೆಬ್ರವರಿ 17ರಂದೇ ಇದನ್ನು ಗಮನಿಸಿ ತಕ್ಷಣವೇ ತೆಗೆದುಹಾಕಲಾಗಿತ್ತು. ಆದರೆ ಸಂಸ್ಥಾಪಕನಾಗಿ ಈ ಲೋಪವನ್ನು ಮೊದಲೇ ಸರಿಪಡಿಸಬೇಕಿತ್ತು,&quot; ಎಂದು ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.&lt;/p&gt;&lt;p&gt;ಈ ವಿವಾದದ ನಡುವೆಯೂ ಲೆನ್ಸ್&zwnj;ಕಾರ್ಟ್ ತನ್ನ ಆರ್ಥಿಕ ಪ್ರಗತಿಯನ್ನು ಮುಂದುವರಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು 70 ಪಟ್ಟು ಹೆಚ್ಚಾಗಿದೆ. ಆದಾಯವು ಶೇ. 38.8ರಷ್ಟು ಏರಿಕೆಯಾಗಿ ₹23.08 ಬಿಲಿಯನ್ ತಲುಪಿದೆ. ಪ್ರಸ್ತುತ ಲೆನ್ಸ್&zwnj;ಕಾರ್ಟ್&zwnj;ನ ಮೌಲ್ಯವು ಸುಮಾರು $5.6 ಬಿಲಿಯನ್ (ಸುಮಾರು ₹46,000 ಕೋಟಿಗೂ ಹೆಚ್ಚು) ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/lenskart-dress-code-controversy-bindi-tilak-hijab-guidelines-peyush-bansal-san/articleshow-7o6ii2s"/>
        </item>
        <item>
            <title><![CDATA[34 ವರ್ಷಗಳ ನಂತರ ಇಸ್ರೇಲ್-ಲೆಬನಾನ್ ಮಾತುಕತೆ: 10 ದಿನಗಳ ಕದನ ವಿರಾಮ ಘೋಷಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!]]></title>
            <link>https://kannada.asianetnews.com/world-news/trump-announces-israel-lebanon-ceasefire-10-day-peace-deal-white-house-talks-san/articleshow-1yh1iys</link>
            <guid isPermaLink="true">https://kannada.asianetnews.com/world-news/trump-announces-israel-lebanon-ceasefire-10-day-peace-deal-white-house-talks-san/articleshow-1yh1iys</guid>
            <pubDate>Thu, 16 Apr 2026 22:17:09 +0530</pubDate>
            <description><![CDATA[&lt;p&gt;ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ, ದಶಕಗಳಿಂದ ಸಂಘರ್ಷದಲ್ಲಿರುವ ಇಸ್ರೇಲ್ ಮತ್ತು ಲೆಬನಾನ್ 10 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. 34 ವರ್ಷಗಳ ಈ ಎರಡೂ ದೇಶಗಳು ಮಾತುಕತೆಯ ಟೇಬಲ್&zwnj;ಗೆ ಬಂದಿದ್ದವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp7m91zcdq7c6vascnwa05wz,imgname-us-iran-talks-restart-conditions-trump-hormuz-strait-irgc-approval-islamabad-negotiations-middle-east-crisis-1-1776225126380.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್/ಬೈರೂತ್ (ಏ.16):&lt;/strong&gt; ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ದಶಕಗಳ ನಂತರದ ಅತಿದೊಡ್ಡ ಬೆಳವಣಿಗೆಯೊಂದು ನಡೆದಿದೆ. ಸತತ ಸಂಘರ್ಷದಲ್ಲಿ ತೊಡಗಿದ್ದ ಇಸ್ರೇಲ್ ಮತ್ತು ಲೆಬನಾನ್ ದೇಶಗಳು 10 ದಿನಗಳ ಕಾಲ 'ಕದನ ವಿರಾಮ'ಕ್ಕೆ (Ceasefire) ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರು ತಮ್ಮ 'ಟ್ರೂತ್ ಸೋಶಿಯಲ್' (Truth Social) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ 34 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಸ್ರೇಲ್ ಮತ್ತು ಲೆಬನಾನ್ ಪ್ರತಿನಿಧಿಗಳು ಈ ವಾರದ ಆರಂಭದಲ್ಲಿ ವಾಷಿಂಗ್ಟನ್&zwnj;ನಲ್ಲಿ ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಸಮ್ಮುಖದಲ್ಲಿ ಈ ಮಾತುಕತೆ ನಡೆದಿದೆ.&lt;/p&gt;&lt;h2&gt;&lt;strong&gt;ಟ್ರಂಪ್ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಈ ತಾತ್ಕಾಲಿಕ ಕದನ ವಿರಾಮವು ಇಂದೇ (ಗುರುವಾರ) ಸಂಜೆ 5 ಗಂಟೆಯಿಂದ (ಭಾರತೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ 3:30) ಆರಂಭವಾಗಲಿದೆ. ಇದರೊಂದಿಗೆ 1983ರ ನಂತರ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಮೊದಲ ಅರ್ಥಪೂರ್ಣ ಮಾತುಕತೆ ಇದಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರನ್ನು ಮುಂದಿನ ಮಾತುಕತೆಗಾಗಿ ಶ್ವೇತಭವನಕ್ಕೆ (White House) ಆಹ್ವಾನಿಸುವುದಾಗಿ ಟ್ರಂಪ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&quot;ಇದು ನನ್ನ 10ನೇ ಸಾಧನೆ&quot;: ಟ್ರಂಪ್&lt;/strong&gt;&lt;/h2&gt;&lt;p&gt;ಈ ಒಪ್ಪಂದದ ಬಗ್ಗೆ ಸಂತಸ ಹಂಚಿಕೊಂಡಿರುವ ಟ್ರಂಪ್, &quot;ವಿಶ್ವದಾದ್ಯಂತ 9 ಯುದ್ಧಗಳನ್ನು ಪರಿಹರಿಸಿದ ಗೌರವ ನನಗಿದೆ, ಇದು ನನ್ನ 10ನೇ ಸಾಧನೆಯಾಗಲಿದೆ. ಬನ್ನಿ, ಇದನ್ನು ಪೂರ್ಣಗೊಳಿಸೋಣ!&quot; ಎಂದು ಬರೆದುಕೊಂಡಿದ್ದಾರೆ. ಈ ಶಾಂತಿ ಪ್ರಕ್ರಿಯೆಯನ್ನು ಮುಂದುವರಿಸಲು ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಕಾರ್ಯದರ್ಶಿ ರೂಬಿಯೊ ಮತ್ತು ಜಂಟಿ ಮುಖ್ಯಸ್ಥರ ಅಧ್ಯಕ್ಷ ಡ್ಯಾನ್ ಕೈನ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.&lt;/p&gt;&lt;h2&gt;&lt;strong&gt;ಸಂಘರ್ಷದ ಹಿನ್ನೆಲೆ&lt;/strong&gt;&lt;/h2&gt;&lt;p&gt;ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯು ಮಾರ್ಚ್ 2 ರಂದು ಉತ್ತರ ಇಸ್ರೇಲ್&zwnj;ನ ಹೈಫಾ ಬಳಿಯ ಕ್ಷಿಪಣಿ ರಕ್ಷಣಾ ನೆಲೆಯ ಮೇಲೆ ಡ್ರೋನ್ ಮತ್ತು ರಾಕೆಟ್ ದಾಳಿ ನಡೆಸಿದ ನಂತರ ಸಂಘರ್ಷ ತೀವ್ರಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಬೈರೂತ್ ಮತ್ತು ದಕ್ಷಿಣ ಲೆಬನಾನ್ ಮೇಲೆ ಭಾರಿ ದಾಳಿ ನಡೆಸಿತ್ತು. ಸದ್ಯದ ಈ 10 ದಿನಗಳ ಕಾಲಾವಕಾಶವು ಎರಡೂ ದೇಶಗಳ ನಡುವೆ ಶಾಂತಿ ಮರುಸ್ಥಾಪಿಸಲು ಪರೀಕ್ಷಾರ್ಥ ಅವಧಿಯಾಗಿರಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/world-news/trump-announces-israel-lebanon-ceasefire-10-day-peace-deal-white-house-talks-san/articleshow-1yh1iys"/>
        </item>
        <item>
            <title><![CDATA[ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ: ಶಾಸಕ ಲಕ್ಷ್ಮಣ ಸವದಿ]]></title>
            <link>https://kannada.asianetnews.com/karnataka-districts/karnataka-cabinet-reshuffle-mla-laxman-savadi-statement-gvd/articleshow-qg8ex53</link>
            <guid isPermaLink="true">https://kannada.asianetnews.com/karnataka-districts/karnataka-cabinet-reshuffle-mla-laxman-savadi-statement-gvd/articleshow-qg8ex53</guid>
            <pubDate>Thu, 16 Apr 2026 21:42:33 +0530</pubDate>
            <description><![CDATA[&lt;p&gt;ಅನೇಕ ಶಾಸಕರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದಾರೆ. ಎರಡೂವರೆ ವರ್ಷ ಆಗಿರುವುದರಿಂದ ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಶಾಸಕರು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gxt0nm2ad76yv3w8wqbwxwkx,imgname-Lakshman-Savadi-1681279078473.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಥಣಿ (ಏ.16): &lt;/strong&gt;ಸರ್ಕಾರಕ್ಕೆ ಎರಡೂವರೆ ವರ್ಷ ಕಳೆದ ನಂತರ ಬೇರೆಯವರಿಗೆ ಸಚಿವ ಸ್ಥಾನದ ಅವಕಾಶ ಕೊಡುತ್ತೇವೆ ಎಂದು ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು, ಅಧ್ಯಕ್ಷರು ಹೇಳಿದ್ದರು. ಹೀಗಾಗಿ, ಅನೇಕ ಶಾಸಕರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದಾರೆ. ಎರಡೂವರೆ ವರ್ಷ ಆಗಿರುವುದರಿಂದ ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಶಾಸಕರು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.&lt;/p&gt;&lt;p&gt;ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಗೊತ್ತಿದೆ. ಅವರ ಒಪ್ಪಿಗೆ ಪಡೆದೇ ಶಾಸಕರು ದೆಹಲಿಗೆ ಹೋಗಿದ್ದಾರೆ. ಅದರಲ್ಲಿ ಏನೂ ವಿಶೇಷವಿಲ್ಲ ಎಂದರು. ನೂತನ ಸಚಿವ ಸಂಪುಟದಲ್ಲಿ ನಿಮ್ಮ ಹೆಸರೂ ಇದೆಯೇ, ತಾವೇಕೆ ದೆಹಲಿಗೆ ತೆರಳಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಮಂತ್ರಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಜನವರಿ ತಿಂಗಳ ನಂತರ ಶುಕ್ರದೆಸೆ ಬರುತ್ತದೆ ಎಂದಿದ್ದೆ. ಮಂತ್ರಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ.&lt;/p&gt;&lt;p&gt;ಮಂತ್ರಿ ಸ್ಥಾನ ಬಂದರೆ ಅದನ್ನು ನಿಭಾಯಿಸಬಲ್ಲೆ, ಬಾರದು ಬಪ್ಪದು, ಬಪ್ಪದು ತಪ್ಪದು ಎಂಬಂತೆ ನಾವು ನಮ್ಮ ಕೆಲಸದಲ್ಲಿ ನಿರತರಾಗಿರಬೇಕು. ಮಂತ್ರಿಸ್ಥಾನ ಬರುವುದಾದರೆ ಬಂದೇ ಬರುತ್ತದೆ. ನನಗೆ ಮಂತ್ರಿ ಸ್ಥಾನಕ್ಕಿಂತ ಮತಕ್ಷೇತ್ರದ ಅಭಿವೃದ್ಧಿ ಮುಖ್ಯ. ಅಥಣಿ ಕ್ಷೇತ್ರಕ್ಕೆ ಇಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ನೀಡಿದ್ದಾರೆ. ₹ 508 ಕೋಟಿ ವೆಚ್ಚದ ಕೃಷಿ ಮಹಾವಿದ್ಯಾಲಯ ನಿರ್ಮಾಣಕ್ಕೆ ಬಜೆಟ್&zwnj;ನಲ್ಲಿ ಅವಕಾಶ ಕಲ್ಪಿಸಿದ್ದಾರೆ. ಅದೇ ದೊಡ್ಡ ಶುಕ್ರದೆಸೆ ಎಂದರು.&lt;/p&gt;&lt;h2&gt;&lt;strong&gt;ಸಂವಿಧಾನದ ಆಶಯಗಳಿಗೆ ಪ್ರತಿಯೊಬ್ಬರೂ ಬದ್ಧರಾಗಿ&lt;/strong&gt;&lt;/h2&gt;&lt;p&gt;ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ದೂರದೃಷ್ಟಿಯಿಂದ ಮೂಡಿಬಂದಿರುವ ಸಂವಿಧಾನದ ಆಶಯಗಳಾದ ಸೌಹಾರ್ದತೆ, ಸಮಾನತೆ ಮತ್ತು ಜಾತ್ಯತೀತತೆಯನ್ನು ಪಾಲಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕನು ಬದ್ಧನಾಗಿರಬೇಕು ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಕಲಾವಿದ ವಿನಾಯಕ ಸುತಾರ ನೂಲಿನ ದಾರದ ಸಹಾಯದಿಂದ ತಮ್ಮ ಕೌಶಲ್ಯದ ಮೂಲಕ ಚಿತ್ರಿಸಿದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.&lt;/p&gt;&lt;p&gt;ಸಂವಿಧಾನವು ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳ ಮೇಲೆ ನಿರ್ಮಿತವಾಗಿದೆ. ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನ ನಮ್ಮದು. ಹಲವು ಜಾತಿ ಧರ್ಮಗಳು ಇರುವ ನಮ್ಮ ದೇಶಕ್ಕೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದ ಅಡಿ ಅಂಬೇಡ್ಕರ್ ಅವರು ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು. ಅವರ ಜನ್ಮ ದಿನಾಚರಣೆ ಕೇವಲ ಉತ್ಸವವಾಗದೇ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಅನುಸರಿಸುವ ಮೂಲಕ ಸುಭದ್ರ ರಾಷ್ಟ್ರದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/karnataka-cabinet-reshuffle-mla-laxman-savadi-statement-gvd/articleshow-qg8ex53"/>
        </item>
        <item>
            <title><![CDATA[ಚಾಣಕ್ಯ ಬದುಕಿದ್ದಿದ್ದರೆ ನಿಮ್ಮ ರಾಜಕೀಯ ಚತುರತೆ ಕಂಡು ಬೆಚ್ಚಿಬೀಳುತ್ತಿದ್ದ: ಪ್ರಿಯಾಂಕಾ ವಾದ್ರಾ  ಮಾತಿಗೆ ನಕ್ಕ ಅಮಿತ್‌ ಶಾ]]></title>
            <link>https://kannada.asianetnews.com/india-news/priyanka-gandhi-calls-amit-shah-shrewd-like-chanakya-lok-sabha-debate-womens-quota-san/articleshow-g09pbng</link>
            <guid isPermaLink="true">https://kannada.asianetnews.com/india-news/priyanka-gandhi-calls-amit-shah-shrewd-like-chanakya-lok-sabha-debate-womens-quota-san/articleshow-g09pbng</guid>
            <pubDate>Thu, 16 Apr 2026 21:27:18 +0530</pubDate>
            <description><![CDATA[&lt;p&gt;ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಚರ್ಚೆಯ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಚತುರತೆಯನ್ನು 'ಚಾಣಕ್ಯನ ಕುಟಿಲತೆ'ಗೆ ಹೋಲಿಸಿ ವ್ಯಂಗ್ಯವಾಡಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpbfxf21tm1xxzpdmdxa2c3y,imgname-amit-shah-and-priyanka-gandhi-1776354769985.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.16): &lt;/strong&gt;ಲೋಕಸಭೆಯಲ್ಲಿ ಗುರುವಾರ ನಡೆದ ಮಹಿಳಾ ಮೀಸಲು ಕಾನೂನು ತಿದ್ದುಪಡಿ ಮತ್ತು ಡಿಲಿಮಿಟೇಷನ್&zwnj; ಆಯೋಗ ಸ್ಥಾಪನೆಗೆ ಸಂಬಂಧಿಸಿದ ಮೂರು ವಿಧೇಯಕಗಳ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಚತುರತೆಯನ್ನು ವ್ಯಂಗ್ಯವಾಗಿ ಶ್ಲಾಘಿಸಿದರು. &quot;ಒಂದು ವೇಳೆ ಇಂದು ಚಾಣಕ್ಯ ಬದುಕಿದ್ದಿದ್ದರೆ, ನಿಮ್ಮ ರಾಜಕೀಯ ಕುಟಿಲತೆಯನ್ನು ಕಂಡು ಆತನೇ ಬೆಚ್ಚಿಬೀಳುತ್ತಿದ್ದ&quot; ಎಂದು ಹೇಳುವ ಮೂಲಕ ಸದನದಲ್ಲಿ ಲಘು ಹಾಸ್ಯದ ಜೊತೆಗೆ ತೀವ್ರ ವಾಗ್ದಾಳಿ ನಡೆಸಿದರು. ಪ್ರಿಯಾಂಕಾ ಅವರ ಮಾತು ಕೇಳೀ ಸ್ವತಃ ಅಮಿತ್&zwnj; ಶಾ ಕೂಡ ನಕ್ಕರು.&lt;/p&gt;&lt;h2&gt;&lt;strong&gt;ಸರ್ಕಾರದ ವಿರುದ್ಧ 'ವಂಚನೆ'ಯ ಆರೋಪ&lt;/strong&gt;&lt;/h2&gt;&lt;p&gt;ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಸರ್ಕಾರವು ಜನರನ್ನು ಮತ್ತೊಮ್ಮೆ &quot;ವಂಚಿಸಲು&quot; ಹೊರಟಿದೆ ಮತ್ತು ದೇಶದ ಸಮಗ್ರತೆಯ ಮೇಲೆ &quot;ದೊಡ್ಡ ದಾಳಿ&quot; ನಡೆಸುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು. &quot;ಒಂದೆಡೆ ಮಹಿಳಾ ಮೀಸಲಾತಿಯ ಬಗ್ಗೆ ದೊಡ್ಡ ಮಾತುಗಳನ್ನಾಡಲಾಗುತ್ತಿದೆ, ಇನ್ನೊಂದೆಡೆ ಒಬಿಸಿಗಳ (OBC) ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಸಣ್ಣ ರಾಜ್ಯಗಳ ಪ್ರಭಾವವನ್ನು ಕುಗ್ಗಿಸುವ ಮೂಲಕ ಮತ್ತು ಪ್ರಜಾಪ್ರಭುತ್ವವನ್ನು ತುಂಡು ತುಂಡು ಮಾಡುವ ಮೂಲಕ ಮುಂದಿನ ಚುನಾವಣೆಗಾಗಿ ಬಲವಾದ ರಚನೆಯನ್ನು ನಿರ್ಮಿಸಲಾಗುತ್ತಿದೆ&quot; ಎಂದು ಅವರು ಕಿಡಿಕಾರಿದರು.&lt;/p&gt;&lt;h2&gt;&lt;strong&gt;ಅಮಿತ್ ಶಾ ನಗು ಮತ್ತು ಪ್ರಿಯಾಂಕಾ ವಾಗ್ದಾಳಿ&lt;/strong&gt;&lt;/h2&gt;&lt;p&gt;ಚರ್ಚೆಯ ವೇಳೆ ಅಮಿತ್ ಶಾ ಅವರು ನಗುತ್ತಿರುವುದನ್ನು ಗಮನಿಸಿದ ವಯನಾಡ್ ಸಂಸದೆಯೂ ಆಗಿರುವ ಪ್ರಿಯಾಂಕಾ, &quot;ಗೃಹ ಸಚಿವರು ನಗುತ್ತಿದ್ದಾರೆ... ಅವರು ಈ ಸಂಪೂರ್ಣ ಯೋಜನೆಯನ್ನು ರೂಪಿಸಿದ್ದಾರೆ. ಚಾಣಕ್ಯ ಬದುಕಿದ್ದಿದ್ದರೆ ನಿಮ್ಮ 'ರಾಜಕೀಯ ಕುಟಿಲತೆ' ಕಂಡು ಆಶ್ಚರ್ಯಚಕಿತರಾಗುತ್ತಿದ್ದರು. ಅವರು (ಶಾ) ಪ್ಲಾನ್ ಮಾಡಿದ್ದಕ್ಕೆ ಈಗ ನಗುತ್ತಿದ್ದಾರೆ... ಅಂದರೆ ಅವರು ನನ್ನ ಮಾತನ್ನು ಒಪ್ಪುತ್ತಿದ್ದಾರೆ ಎಂದೇ ಅರ್ಥ&quot; ಎಂದು ಲೇವಡಿ ಮಾಡಿದರು.&lt;/p&gt;&lt;h2&gt;&lt;strong&gt;ಬಿಜೆಪಿಯ ರಣತಂತ್ರದ ಬಗ್ಗೆ ಟೀಕೆ&lt;/strong&gt;&lt;/h2&gt;&lt;p&gt;ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಚುನಾವಣಾ ಸಮಯದಲ್ಲಿ ಸಂಸತ್ತಿನ ಅಧಿವೇಶನ ಕರೆಯುವುದು, ಸರ್ವಪಕ್ಷ ಸಭೆ ನಡೆಸದಿರುವುದು ಮತ್ತು ಮಸೂದೆಯ ಕರಡನ್ನು ಕೇವಲ ಒಂದು ದಿನ ಮುಂಚಿತವಾಗಿ ಹಂಚಿಕೊಳ್ಳುವುದರ ಹಿಂದೆ ವಿರೋಧ ಪಕ್ಷಗಳಿಗೆ ಚರ್ಚಿಸಲು ಅವಕಾಶ ನೀಡಬಾರದು ಎಂಬ ಸಂಚಿದೆ ಎಂದು ಆರೋಪಿಸಿದರು. &quot;ಮಹಿಳಾ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ದೊಡ್ಡ ಹೆಜ್ಜೆ ಇಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಚರ್ಚೆ ಶುರು ಮಾಡಿಸಿ, ವಿರೋಧ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು ಇವರ ತಂತ್ರ&quot; ಎಂದರು.&lt;/p&gt;&lt;p&gt;&quot;ರಾಜಕೀಯದಲ್ಲಿ ಚತುರತೆ ಇರುವುದು ಒಂದು ವಿಷಯ, ಬಹುಶಃ ನಾವು (ವಿರೋಧ ಪಕ್ಷಗಳು) ಈ ವಿಷಯದಲ್ಲಿ ಸ್ವಲ್ಪ ಹೆಚ್ಚು ಚತುರರಾಗಬೇಕಿರಬಹುದು. ಆದರೆ ಅಧಿಕಾರ ಹಿಡಿಯುವ ಆಕಾಂಕ್ಷೆಯನ್ನು ಬದಿಗಿಟ್ಟು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮತ್ತೊಂದು ವಿಷಯ&quot; ಎಂದು ಪ್ರಿಯಾಂಕಾ ಹೇಳಿದರು.&lt;/p&gt;&lt;h2&gt;&lt;strong&gt;ಮೋದಿ ಮತ್ತು ಬಿಜೆಪಿಗೆ ಟಾಂಗ್&lt;/strong&gt;&lt;/h2&gt;&lt;p&gt;ಮಹಿಳಾ ಮೀಸಲಾತಿಯ ಏಕೈಕ ಚಾಂಪಿಯನ್ ತಾವೇ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿಯವರ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು. &quot;ತಮ್ಮನ್ನು ಪದೇ ಪದೇ ದಾರಿತಪ್ಪಿಸಲು ಪ್ರಯತ್ನಿಸುವ ಪುರುಷರನ್ನು ಮಹಿಳೆಯರು ತಕ್ಷಣವೇ ಗುರುತಿಸಬಲ್ಲರು ಎಂದು ಯಾವುದೇ ಮಹಿಳೆಯೂ ನಿಮಗೆ ಹೇಳಬಲ್ಲಳು&quot; ಎಂದು ಅವರು ಮಾರ್ಮಿಕವಾಗಿ ನುಡಿದರು.&lt;/p&gt;&lt;h2&gt;&lt;strong&gt;ನೆಹರೂ-ಪಟೇಲ್ ಕಾಲದ ಇತಿಹಾಸ ನೆನಪಿಸಿದ ಪ್ರಿಯಾಂಕಾ&lt;/strong&gt;&lt;/h2&gt;&lt;p&gt;ಮಹಿಳಾ ಮೀಸಲಾತಿಯ ಇತಿಹಾಸವನ್ನು ವಿವರಿಸಿದ ಅವರು, ಈ ಹೋರಾಟವು ಬಿಜೆಪಿ ಹೇಳುತ್ತಿರುವಂತೆ ಈಗ ಶುರುವಾಗಿದ್ದಲ್ಲ ಎಂದರು. &quot;ಈ ಕಥೆ ನೆಹರೂ ಹೆಸರಿನ ವ್ಯಕ್ತಿಯಿಂದ ಆರಂಭವಾಯಿತು. ಆದರೆ ನೀವು ಯಾರನ್ನು ತಪ್ಪಿಸಲು ಪ್ರಯತ್ನಿಸುತ್ತೀರೋ ಆ ನೆಹರೂ ಅಲ್ಲ (ಜವಾಹರಲಾಲ್ ನೆಹರೂ ಅವರನ್ನು ಉದ್ದೇಶಿಸಿ), ಅವರ ತಂದೆ ಮೋತಿಲಾಲ್ ನೆಹರೂ ಅವರ ಬಗ್ಗೆ ನಾನು ಹೇಳುತ್ತಿದ್ದೇನೆ&quot; ಎಂದು ಟಾಂಗ್ ನೀಡಿದರು. 1928ರಲ್ಲಿ ಮೋತಿಲಾಲ್ ನೆಹರೂ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ 19 ಮೂಲಭೂತ ಹಕ್ಕುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು. 1931ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರಾಚಿ ಅಧಿವೇಶನದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.&lt;/p&gt;&lt;p&gt;ಅಂದೇ 'ಒಂದು ಮತ, ಒಬ್ಬ ನಾಗರಿಕ, ಒಂದು ಮೌಲ್ಯ' ಎಂಬ ತತ್ವ ಜಾರಿಗೆ ಬಂದಿದ್ದರಿಂದ ಸ್ವಾತಂತ್ರ್ಯದ ಮೊದಲ ದಿನವೇ ಭಾರತದ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತು. ಅಮೆರಿಕದಂತಹ ದೇಶಗಳಲ್ಲಿ ಮಹಿಳೆಯರು ಇದಕ್ಕಾಗಿ 150 ವರ್ಷ ಕಾಯಬೇಕಾಯಿತು ಎಂದು ಅವರು ನೆನಪಿಸಿದರು. ಅಂತಿಮವಾಗಿ, 2023ರಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಮಂಡನೆಯಾದಾಗ ಕಾಂಗ್ರೆಸ್ ತನ್ನ ಸೈದ್ಧಾಂತಿಕ ಬದ್ಧತೆಯಂತೆ ಅದನ್ನು ಪೂರ್ಣವಾಗಿ ಬೆಂಬಲಿಸಿತ್ತು ಮತ್ತು ಕಾಂಗ್ರೆಸ್ ಯಾವಾಗಲೂ ಮಹಿಳಾ ಮೀಸಲಾತಿಯ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;&lt;p&gt;&amp;nbsp;&lt;/p&gt;&lt;p&gt;VIDEO | Delhi: In the Lok Sabha, Congress MP Priyanka Gandhi Vadra takes 'Chanakya' swipe at Union Home Minister Amit Shah on delimitation.&amp;nbsp;She says, &ldquo;On one hand, there are big claims about women&rsquo;s empowerment, while on the other hand, the rights of the OBC community are being&hellip; pic.twitter.com/CSyji0OnxS&lt;/p&gt;&lt;p&gt;&mdash; Press Trust of India (@PTI_News) April 16, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/priyanka-gandhi-calls-amit-shah-shrewd-like-chanakya-lok-sabha-debate-womens-quota-san/articleshow-g09pbng"/>
        </item>
        <item>
            <title><![CDATA[ಇರುವೆಗಳನ್ನು ಕದ್ದು ಸಿಕ್ಕಿಬಿದ್ದ ಕಳ್ಳ; ಪ್ರತಿ ಇರುವೆಗೆ ₹290ರಂತೆ ₹6.4 ಲಕ್ಷ ದಂಡ, ಜೈಲು ಶಿಕ್ಷೆ ವಿಧಿಸಿದ ಕೋರ್ಟ್]]></title>
            <link>https://kannada.asianetnews.com/world-news/chinese-man-arrested-nairobi-airport-2200-ant-smuggling-sentence-kenya-sat/articleshow-6w7r0ak</link>
            <guid isPermaLink="true">https://kannada.asianetnews.com/world-news/chinese-man-arrested-nairobi-airport-2200-ant-smuggling-sentence-kenya-sat/articleshow-6w7r0ak</guid>
            <pubDate>Thu, 16 Apr 2026 21:02:15 +0530</pubDate>
            <description><![CDATA[&lt;p&gt;ಆನೆ ಕದ್ದರೂ ಕಳ್ಳ, ಇರುವೆ ಕದ್ದರೂ ಕಳ್ಳ ಎಂದು ನಾವು ಆಡುಮಾತಿನಲ್ಲಿ ಹೇಳುತ್ತೇವೆ. ಆದರೆ, ಇಲ್ಲೊಬ್ಬ ಚೀನಾದ ವ್ಯಕ್ತಿ 2,200 ಜೀವಂತ ಇರುವೆಗಳನ್ನು ಕದ್ದುಕೊಂಡು ಹೋಗಲು ಪ್ರಯತ್ನಿಸಿ ಸಿಕ್ಕಿಬಿದ್ದು, ಜೈಲು ಸೇರಿದ್ದಾನೆ. ಆತನಿಗೆ ಪ್ರತಿ ಇರುವೆಗೆ ₹290 ರಂತೆ 6.40 ಲಕ್ಷ ರೂ. ದಂಡ ಹಾಕಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb3g729dsqz80bbmr7ndcyy,imgname-gettyimages-2266528408-594x594-1776341752905.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳ್ಳಸಾಗಣೆದಾರರು ಆನೆ ದಂತ, ಚಿನ್ನ ಅಥವಾ ಅಮೂಲ್ಯ ರತ್ನಗಳನ್ನು ಸಾಗಿಸುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಜೀವಂತ ಇರುವೆಗಳನ್ನು ಲಗೇಜ್&zwnj;ನಲ್ಲಿ ಬಚ್ಚಿಟ್ಟು ಸಾಗಿಸಲು ಹೋಗಿ ಕೀನ್ಯಾ ಪೊಲೀಸರ ಅತಿಥಿಯಾಗಿದ್ದಾನೆ. ಬರೋಬ್ಬರಿ 2,200ಕ್ಕೂ ಅಧಿಕ ಗಾರ್ಡನ್ ಇರುವೆಗಳನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಚೀನಾ ಪ್ರಜೆಗೆ ಕೀನ್ಯಾ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.&lt;/p&gt;&lt;h2&gt;&lt;strong&gt;ವಿಮಾನ ನಿಲ್ದಾಣದಲ್ಲಿ ಬಯಲಾದ ಕಳ್ಳಸಾಗಣೆ:&lt;/strong&gt;&lt;/h2&gt;&lt;p&gt;ಕಳೆದ ತಿಂಗಳು ಕೀನ್ಯಾದ ನೈರೋಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಲಗೇಜ್ ತಪಾಸಣೆ ನಡೆಸುತ್ತಿದ್ದಾಗ ಝಾಂಗ್ ಕೆಕುನ್ ಎಂಬ ಚೀನೀ ಪ್ರಜೆಯ ಬ್ಯಾಗ್&zwnj;ನಲ್ಲಿ ಅನುಮಾನಾಸ್ಪದ ಡಬ್ಬಿಗಳು ಪತ್ತೆಯಾಗಿವೆ. ಅವುಗಳನ್ನು ತೆರೆದು ನೋಡಿದ ಅಧಿಕಾರಿಗಳು ದಂಗಾಗಿದ್ದಾರೆ. ಸಣ್ಣ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಬರೋಬ್ಬರಿ 2,200 ಜೀವಂತ ಗಾರ್ಡನ್ ಇರುವೆಗಳನ್ನು ತುಂಬಿ ಸಾಗಿಸಲಾಗುತ್ತಿತ್ತು. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ:&lt;/strong&gt;&lt;/h2&gt;&lt;p&gt;ಈ ಪ್ರಕರಣದ ವಿಚಾರಣೆ ನಡೆಸಿದ ಕೀನ್ಯಾ ನ್ಯಾಯಾಲಯವು ಆರೋಪಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 7,746 ಡಾಲರ್ (ಅಂದಾಜು ₹6.4 ಲಕ್ಷ) ದಂಡ ವಿಧಿಸಿ ಆದೇಶಿಸಿದೆ. ಮೊದಲು ತಾನು ನಿರಪರಾಧಿ ಎಂದು ವಾದಿಸಿದ್ದ ಝಾಂಗ್ ಕೆಕುನ್, ನಂತರ ಸಾಕ್ಷ್ಯಗಳು ಸಿಕ್ಕ ಮೇಲೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈತನಿಗೆ ಇರುವೆಗಳನ್ನು ಪೂರೈಸಿದ್ದ ಕೀನ್ಯಾದ ಪ್ರಜೆಯೊಬ್ಬನ ವಿರುದ್ಧವೂ ಪ್ರಕರಣ ದಾಖಲಾಗಿದೆ.&lt;/p&gt;&lt;h3&gt;&lt;strong&gt;ಚೀನಾದಲ್ಲಿ ಇರುವೆಗಳಿಗೆ ಏಕೆ ಅಷ್ಟು ಡಿಮ್ಯಾಂಡ್?&lt;/strong&gt;&lt;/h3&gt;&lt;p&gt;ಚೀನಾದಲ್ಲಿ ಗಾರ್ಡನ್ ಇರುವೆಗಳನ್ನು ಸಾಕುವುದು ಮತ್ತು ಮಾರಾಟ ಮಾಡುವುದು ಈಗ ದೊಡ್ಡ ಹವ್ಯಾಸವಾಗಿ ಬೆಳೆದಿದೆ. ಅಲ್ಲಿ 'ಫಾರ್ಮಿಕೇರಿಯಂ' (Formicarium) ಎಂಬ ಗಾಜಿನ ಪಾತ್ರೆಗಳಲ್ಲಿ ಇರುವೆಗಳ ಕಾಲನಿಯನ್ನು ಸಾಕುವ ಹವ್ಯಾಸ ಹಲವರಿಗಿದೆ. ಈ ಇರುವೆಗಳಿಗೆ ಚೀನಾದ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಇದೆ. ಇದೇ ಕಾರಣಕ್ಕೆ ಕಳ್ಳಸಾಗಣೆದಾರರು ಈಗ ಕೀನ್ಯಾದಂತಹ ದೇಶಗಳಿಂದ ಇರುವೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಆನೆ ದಂತ ಬಿಟ್ಟು ಇರುವೆಗಳತ್ತ ಸಾಗಿದ ಕಳ್ಳರು!&lt;/strong&gt;&lt;/h2&gt;&lt;p&gt;ಹಿಂದೆ ಕೀನ್ಯಾದಿಂದ ಆನೆ ದಂತ, ಚಿರತೆ ಚರ್ಮದಂತಹ ವಸ್ತುಗಳ ಕಳ್ಳಸಾಗಣೆ ಹೆಚ್ಚಾಗಿತ್ತು. ಆದರೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕಣ್ಗಾವಲು ಹೆಚ್ಚಾಗಿರುವುದರಿಂದ ಕಳ್ಳಸಾಗಣೆದಾರರು ಇರುವೆ, ಜೇಡ ಮತ್ತು ಸಣ್ಣಪುಟ್ಟ ಕೀಟಗಳ ಮೇಲೆ ಕಣ್ಣು ಹಾಕಿದ್ದಾರೆ. ಇವುಗಳನ್ನು ಪತ್ತೆ ಮಾಡುವುದು ಕಷ್ಟ ಎಂಬುದು ಅವರ ಆಲೋಚನೆ. ಆದರೆ, ಕೀನ್ಯಾ ನ್ಯಾಯಾಲಯವು ಈ ಪ್ರಕರಣದ ಮೂಲಕ ಅಕ್ರಮವಾಗಿ ಸಣ್ಣ ಜೀವಿಗಳನ್ನೂ ಸಾಗಿಸುವುದು ಅಪರಾಧ ಎಂಬ ಕಠಿಣ ಸಂದೇಶವನ್ನು ನೀಡಿದೆ.&lt;/p&gt;&lt;p&gt;ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಆರೋಪಿ ಪರ ವಕೀಲರು ತಿಳಿಸಿದ್ದಾರೆ. ಆದರೆ, ವನ್ಯಜೀವಿ ರಕ್ಷಣೆಯ ದೃಷ್ಟಿಯಿಂದ ಕೀನ್ಯಾ ಅಧಿಕಾರಿಗಳು ಇಂತಹ ಸಣ್ಣಪುಟ್ಟ ಜೀವಿಗಳ ಕಳ್ಳಸಾಗಣೆ ವಿರುದ್ಧವೂ ಈಗ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/chinese-man-arrested-nairobi-airport-2200-ant-smuggling-sentence-kenya-sat/articleshow-6w7r0ak"/>
        </item>
        <item>
            <title><![CDATA[ಸುಡುವ ಬಿಸಿಲಲ್ಲಿ 5 ವರ್ಷದ ಮೊಮ್ಮಗಳ ಕೈಕಾಲು ಕಟ್ಟಿ ನೆಲದಲ್ಲಿ ಮಲಗಿಸಿದ ASI ಅಜ್ಜಿ, ಸಸ್ಪೆಂಡ್‌ ಮಾಡಿದ ಸರ್ಕಾರ]]></title>
            <link>https://kannada.asianetnews.com/india-news/punjab-police-asi-suspended-granddaughter-tied-up-in-hot-sun-faridkot-video-san/articleshow-cbzcaqa</link>
            <guid isPermaLink="true">https://kannada.asianetnews.com/india-news/punjab-police-asi-suspended-granddaughter-tied-up-in-hot-sun-faridkot-video-san/articleshow-cbzcaqa</guid>
            <pubDate>Thu, 16 Apr 2026 20:59:07 +0530</pubDate>
            <description><![CDATA[&lt;p&gt;ಪಂಜಾಬ್&zwnj;ನ ಫರೀದ್&zwnj;ಕೋಟ್&zwnj;ನಲ್ಲಿ, ಎಎಸ್&zwnj;ಐ ಸರಬ್ಜಿತ್ ಕೌರ್ ಎಂಬುವವರು ತಮ್ಮ ಮೊಮ್ಮಗಳನ್ನು ಬಿಸಿಲಿನಲ್ಲಿ ಕಟ್ಟಿಹಾಕಿದ ಅಮಾನವೀಯ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ನಂತರ, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpbe46pp5xe99ytyg6zy9104,imgname-child-1776352893654.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಫರೀದ್&zwnj;ಕೋಟ್&zwnj; (ಏ.16): &lt;/strong&gt;ರಕ್ಷಣೆ ನೀಡಬೇಕಾದ ಪೊಲೀಸರೇ ಕ್ರೌರ್ಯ ಮೆರೆದ ಘಟನೆಯೊಂದು ಪಂಜಾಬ್&zwnj;ನಲ್ಲಿ ನಡೆದಿದೆ. ತನ್ನ ಮೊಮ್ಮಗಳ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಸುಡುವ ಬಿಸಿಲಿನಲ್ಲಿ ನೆಲದಲ್ಲಿ ಮಲಗಿಸಿದ್ದ ಪೊಲೀಸ್ ಎಎಸ್&zwnj;ಐ (ASI) ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಎಎಸ್&zwnj;ಐ ಆಗಿ ಕಾರ್ಯನಿರ್ವಹಿಸುತ್ತಿರುವ ಸರಬ್ಜಿತ್ ಕೌರ್ ಎಂಬುವವರು ತಮ್ಮ ಮೊಮ್ಮಗಳನ್ನು ಮನೆಯ ಗೇಟ್&zwnj;ಗೆ ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿದ್ದರು. ಬಾಲಕಿ ಬಿಸಿಲಿನಲ್ಲಿ ನಿಲ್ಲಲಾರದೆ ಜೋರಾಗಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ಮಗುವಿನ ಎದೆ ಸೀಳುವಂತಹ ಅಳು ಕೇಳಿದ ನೆರೆಹೊರೆಯವರು ತಕ್ಷಣ ಧಾವಿಸಿ ಬಂದಿದ್ದಾರೆ. ಅಲ್ಲಿ ಮಗುವನ್ನು ಕಟ್ಟಿ ಹಾಕಿರುವುದನ್ನು ಕಂಡು ದಂಗಾದ ಅವರು, ಕೂಡಲೇ ವಿಡಿಯೋ ರೆಕಾರ್ಡ್ ಮಾಡಿಕೊಂಡು ಮಗುವಿನ ಕೈಕಾಲುಗಳನ್ನು ಬಿಡಿಸಿ ರಕ್ಷಿಸಿದ್ದಾರೆ. ಈ ವಿಡಿಯೋ ಇಂಟರ್ನೆಟ್&zwnj;ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು.&lt;/p&gt;&lt;h2&gt;&lt;strong&gt;ವಿದೇಶದಲ್ಲಿರುವ ಪೋಷಕರು&lt;/strong&gt;&lt;/h2&gt;&lt;p&gt;ಪೊಲೀಸರ ಮಾಹಿತಿಯ ಪ್ರಕಾರ, ಈ ಬಾಲಕಿಯ ಪೋಷಕರು ಪೋರ್ಚುಗಲ್&zwnj;ನಲ್ಲಿ ವಾಸಿಸುತ್ತಿದ್ದಾರೆ. ಮಗುವಿನ ಆರೈಕೆಗಾಗಿ ಅಜ್ಜಿಯ ಬಳಿ ಬಿಟ್ಟು ಹೋಗಿದ್ದರು. ಆದರೆ, 'ಮಹಿಳಾ ಮಿತ್ರ' (ಮಹಿಳಾ ಸಹಾಯವಾಣಿ) ವಿಭಾಗದಲ್ಲಿ ಎಎಸ್&zwnj;ಐ ಆಗಿ ಕೆಲಸ ಮಾಡುತ್ತಿದ್ದ ಸರಬ್ಜಿತ್ ಕೌರ್, ಮಗುವಿಗೆ ಈ ರೀತಿಯ ಶಿಕ್ಷೆ ನೀಡಿರುವುದು ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ.&lt;/p&gt;&lt;p&gt;ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಫರಿದ್ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಪ್ರಜ್ಞಾ ಜೈನ್ ಅವರು ತಕ್ಷಣವೇ ಎಎಸ್&zwnj;ಐ ಸರಬ್ಜಿತ್ ಕೌರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಡಿಎಸ್&zwnj;ಪಿ ತರ್ಲೋಚನ್ ಸಿಂಗ್ ಮಾತನಾಡಿ, &quot;ಪೊಲೀಸ್ ಪಡೆಯಲ್ಲಿದ್ದರೂ ಮಗುವನ್ನು ಸುಡುವ ಬಿಸಿಲಿನಲ್ಲಿ ಕಟ್ಟಿಹಾಕಿರುವುದು ಸ್ವೀಕಾರಾರ್ಹವಲ್ಲದ ನಡೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಪ್ರಕರಣವನ್ನು ಮಕ್ಕಳ ಕಲ್ಯಾಣ ಸಮಿತಿಗೆ (CWC) ಒಪ್ಪಿಸಲಾಗಿದೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Parents please be vigilant ⚠️A police officer responsible for women's helpdesk ti..ed her own 5-year-old granddaughter to a gate in the burning sun in Faridkot.No child should ever suffer. Though she is suspended the trauma remains. Hard to digest that such heartless women are&hellip; pic.twitter.com/6l1xvPpjRr&lt;/p&gt;&lt;p&gt;&mdash; Aparajite (@amshilparaghu) April 16, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/punjab-police-asi-suspended-granddaughter-tied-up-in-hot-sun-faridkot-video-san/articleshow-cbzcaqa"/>
        </item>
        <item>
            <title><![CDATA[ಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರಹಾವು ಕಡಿತ: ಚಿಕಿತ್ಸೆ ಫಲಿಸದೆ  ಸಾವು!]]></title>
            <link>https://kannada.asianetnews.com/karnataka-districts/shivamogga-child-death-snake-bite-sagara-tragedy-gvd/articleshow-9099k52</link>
            <guid isPermaLink="true">https://kannada.asianetnews.com/karnataka-districts/shivamogga-child-death-snake-bite-sagara-tragedy-gvd/articleshow-9099k52</guid>
            <pubDate>Thu, 16 Apr 2026 20:51:32 +0530</pubDate>
            <description><![CDATA[&lt;p&gt;ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಹಾವಿನ ಕಡಿತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಸಾಗರ ಪಟ್ಟಣದ ಎಸ್&zwnj;ಎನ್ ನಗರದಲ್ಲಿ ನಡೆದಿದೆ. ಭವೀನ್ (2.5) ಮೃತಪಟ್ಟ ಬಾಲಕ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpbe3p2pqrwm6dfjxkq2q717,imgname-iigi-1776352876629.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಏ.16): &lt;/strong&gt;ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಹಾವಿನ ಕಡಿತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಸಾಗರ ಪಟ್ಟಣದ ಎಸ್&zwnj;ಎನ್ ನಗರದಲ್ಲಿ ನಡೆದಿದೆ. ಭವೀನ್ (2.5) ಮೃತಪಟ್ಟ ಬಾಲಕ. ಮೃತ ಮಗು ಭವೀನ್ ತನ್ನ ತಂದೆ-ತಾಯಿಯೊಂದಿಗೆ ರಜೆ ಕಳೆಯಲು ಅಜ್ಜಿ ಮನೆಗೆ ಬಂದಿದ್ದನು.&lt;/p&gt;&lt;p&gt;ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನಾಗರಹಾವೊಂದು ಮಗುವಿನ ಕೈಗೆ ಕಚ್ಚಿದೆ. ತಕ್ಷಣವೇ ಎಚ್ಚೆತ್ತ ಪೋಷಕರು ಮಗುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆಗೆ ಮಗು ಕೊನೆಯುಸಿರೆಳೆದಿದೆ.&lt;/p&gt;&lt;h2&gt;&lt;strong&gt;ಮಧುಗಿರಿಯಲ್ಲಿ ನಾಗಾರ್ಜುನ ಸಾಗರ ರೇಸರ್ ಹಾವು ಪತ್ತೆ&lt;/strong&gt;&lt;/h2&gt;&lt;p&gt;ಮಧುಗಿರಿ ಪಟ್ಟಣದ ಬೆಟ್ಟದ ಇಳಿಜಾರಿನ ಕಲ್ಲು ಬಂಡೆಗಳಿಂದ ಕೂಡಿದ ಬಂಡೆಯ ಬುಡದಲ್ಲಿ ಅಪರೂಪದ ನಾಗಾರ್ಜುನ ಸಾಗರ ರೇಸರ್ ಹಾವು ಪತ್ತೆಯಾಗಿದ್ದು ಉರಗ ಪ್ರೇಮಿಗಳಿಗೆ ಕುತೂಹಲ ಹೆಚ್ಚಾಗಿದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ತಿಳಿಸಿದ್ದಾರೆ.&lt;/p&gt;&lt;p&gt;ಇದು ರಸೆಲ್ಸ್ ಕುಕ್ರಿ ಹಾವನ್ನು ಹೋಲುತ್ತದೆಯಾದರೂ ಮೊನಚಾದ ತಲೆ,ದೇಹದ ಮೇಲಿನ ಹುರುಪೆಗಳು ಹಾಗೂ ಬಣ್ಣದ ಸಹಾಯದಿಂದ ವ್ಯತ್ಯಾಸ ತಿಳಿಯಬಹುದು. ನೀಳ ದೇಹದ ಮೇಲೆ ಮೃದುವಾದ ಹುರುಪೆಗಳು, ಬೆನ್ನಿನ ಭಾಗದಲ್ಲಿ ಗಾಡವಾದ ಬೂದು ಬಣ್ಣದ ಉಂಗುರಾಕಾರದ ರಚನೆಗಳು ದೇಹದ ಅರ್ದ ಭಾಗದವರೆಗೂ ಕಂಡುಬರುತ್ತವೆ.ದೇಹದ ನಡು ಭಾಗದಿಂದ ಬಾಲದ ತುದಿಯವರೆಗೆ ಉಂಗುರಾಕಾರದ ರಚನೆಗಳು ಕಂಡು ಬರುವುದಿಲ್ಲ.&lt;/p&gt;&lt;p&gt;ದಕ್ಷಿಣ ಭಾರತದ ದಖನ್ ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡು ಬರುವ ಈ ಹಾವು 1976 ರಲ್ಲಿ ಆಂಧ್ರ ಪ್ರದೇಶದ ಗೂಂಟೂರು ಜಿಲ್ಲೆಯ ನಾಗಾರ್ಜುನ ಬೆಟ್ಟದಲ್ಲಿ ಕಂಡು ಬಂದಿದ್ದರಿಂದ ಈ ಹಾವಿಗೆ ಈ ಹೆಸರಿಟ್ಟಿದ್ದಾರೆ. ಈ ಹಾವುಗಳು ಶತೃಗಳಿಂದ ರಕ್ಷಸಿ ಕೊಳ್ಳಲು ಹಾಗೂ ಆಹಾರ ಜೀವಿಗಳನ್ನು ಹಿಡಿಯಲು ವೇಗ ಗತಿಯಲ್ಲಿ ಸಾಗುವುದರಿಂದ ರೇಸರ್ ಹೆಸರು ಬಂದಿದೆ. ಇದು ವಿಷ ರಹಿತ ಹಾವಾಗಿದ್ದು ಮಾನವರಿಗೆ ಯಾವುದೇ ಹಾನಿ ಇಲ್ಲ. ಹಗಲು ಹೊತ್ತಿನಲ್ಲಿ ಹಲ್ಲಿ,ಓತಿ, ಹಾವುರಾಣಿ, ಸಣ್ಣ ಇಲಿ ಮರಿಗಳನ್ನು ತಿಂದು ಕಲ್ಲಿನ ಪೊಟರೆಗಳಲ್ಲಿ ವಾಸಿಸುತ್ತದೆ ಎಂದು ತಿಳಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/shivamogga-child-death-snake-bite-sagara-tragedy-gvd/articleshow-9099k52"/>
        </item>
        <item>
            <title><![CDATA[ಕೆಂಪೇಗೌಡ ಲೇಔಟ್‌ಗೆ ಮೂಲ ಸೌಕರ್ಯ ಕಲ್ಪಿಸದ  BDAಗೆ ಬರೆ ಎಳೆದ K-RERA; ಸೈಟ್ ಓನರ್‌ಗೆ ಕೊಡಿ ₹56 ಲಕ್ಷ ಬಡ್ಡಿ ಪರಿಹಾರ]]></title>
            <link>https://kannada.asianetnews.com/state/karnataka-rera-order-bda-nadaprabhu-kempegowda-layout-site-owners-compensation-interest-sat/articleshow-73b41dg</link>
            <guid isPermaLink="true">https://kannada.asianetnews.com/state/karnataka-rera-order-bda-nadaprabhu-kempegowda-layout-site-owners-compensation-interest-sat/articleshow-73b41dg</guid>
            <pubDate>Thu, 16 Apr 2026 20:38:55 +0530</pubDate>
            <description><![CDATA[&lt;p&gt;ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಒದಗಿಸದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (BDA) ಕರ್ನಾಟಕ ರೇರಾ (K-RERA) ಐತಿಹಾಸಿಕ ಆದೇಶ ನೀಡಿದೆ. ನಿವೇಶನದಾರರೊಬ್ಬರಿಗೆ ₹56 ಲಕ್ಷಕ್ಕೂ ಅಧಿಕ ಬಡ್ಡಿ ಪರಿಹಾರ ಪಾವತಿಸುವಂತೆ ಸೂಚಿಸಿದ್ದು, ಇದು ಬಡಾವಣೆ ಇತರ ನಿವೇಶನದಾರರಿಗೂ ಭರವಸೆ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpbd7dmqfchcfhvv183rw20g,imgname-bda-nadaprahu-kempegowda-layout--1--1776351950487.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.16): ನಾ&lt;/strong&gt;ಡಪ್ರಭು ಕೆಂಪೇಗೌಡ ಬಡಾವಣೆಯ (NPKL) ಸಾವಿರಾರು ನಿವೇಶನದಾರರಿಗೆ ದಶಕಗಳಿಂದ ಮೂಲಸೌಕರ್ಯ ಒದಗಿಸದೆ ಸತಾಯಿಸುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (BDA) ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (K-RERA) ಈಗ ಸರಿಯಾದ ಪಾಠ ಕಲಿಸಿದೆ. ಬಡಾವಣೆಯಲ್ಲಿ ಸೈಟ್ ನೀಡಿದರೂ ಮನೆ ಕಟ್ಟಲು ಅಗತ್ಯವಾದ ಕನಿಷ್ಠ ಸೌಲಭ್ಯಗಳನ್ನು ನೀಡದ ಕಾರಣಕ್ಕಾಗಿ, ಒಬ್ಬರೇ ನಿವೇಶನದಾರರಿಗೆ ಬರೋಬ್ಬರಿ ₹56,03,736 ಬಡ್ಡಿ ಪರಿಹಾರ ನೀಡುವಂತೆ ಬಿಡಿಎಗೆ ರೇರಾ ಐತಿಹಾಸಿಕ ಆದೇಶ ನೀಡಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಬೆಂಗಳೂರಿನ ಜಯನಗರ ನಿವಾಸಿ ಮೃದುಲಾ ಕೃಷ್ಣಪುರ್ ಎಂಬುವವರು ನಾಡಪ್ರಭು ಕೆಂಪೇಗೌಡ ಬಡಾವಣೆಯ 8ನೇ ಬ್ಲಾಕ್&zwnj;ನಲ್ಲಿ 50x80 ಅಳತೆಯ (ಸೈಟ್ ಸಂಖ್ಯೆ 456) ನಿವೇಶನವನ್ನು 2020ರಲ್ಲಿ ಸುಮಾರು ₹96,87,510 ಪಾವತಿಸಿ ಪಡೆದಿದ್ದರು. ಬಿಡಿಎ ಅವರಿಗೆ 2020ರ ಜೂನ್ 16ರಂದು ಸ್ವಾಧೀನ ಪತ್ರವನ್ನೂ (Possession Certificate) ನೀಡಿತ್ತು. ಆದರೆ, ಸೈಟ್ ಕೈಗೆ ಸಿಕ್ಕರೂ ಅಲ್ಲಿ ರಸ್ತೆ ಇಲ್ಲ, ಕುಡಿಯುವ ನೀರಿಲ್ಲ, ವಿದ್ಯುತ್ ಸಂಪರ್ಕವಿಲ್ಲ ಅಥವಾ ಒಳಚರಂಡಿ ವ್ಯವಸ್ಥೆಯೂ ಇಲ್ಲ. ಮೂಲಸೌಕರ್ಯಗಳಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿ ಮೃದುಲಾ ಅವರು ರೇರಾ ಮೊರೆ ಹೋಗಿದ್ದರು.&lt;/p&gt;&lt;h2&gt;&lt;strong&gt;ರೇರಾ ಪೀಠದ ಕಠಿಣ ನಿಲುವು:&lt;/strong&gt;&lt;/h2&gt;&lt;p&gt;ಪ್ರಕರಣದ ವಿಚಾರಣೆ ನಡೆಸಿದ ರೇರಾ ಅಧ್ಯಕ್ಷ ರಾಕೇಶ್&zwnj; ಸಿಂಗ್ ಮತ್ತು ಸದಸ್ಯ ಜಿ.ಆರ್. ರೆಡ್ಡಿ ಅವರ ಪೀಠವು ಬಿಡಿಎ ಧೋರಣೆಯನ್ನು ತೀವ್ರವಾಗಿ ಖಂಡಿಸಿದೆ. 'ಕೇವಲ ಕಾಗದದ ಮೇಲೆ ಸೈಟ್ ಸ್ವಾಧೀನ ಪತ್ರ ನೀಡುವುದು ಸಾಕಾಗುವುದಿಲ್ಲ. ಒಬ್ಬ ನಿವೇಶನದಾರ ಆ ಸೈಟ್&zwnj;ನಲ್ಲಿ ಮನೆ ಕಟ್ಟಲು ಮತ್ತು ನೆಮ್ಮದಿಯಿಂದ ವಾಸಿಸಲು ಅಗತ್ಯವಿರುವ ರಸ್ತೆ, ನೀರು, ಚರಂಡಿಯಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಡೆವಲಪರ್&zwnj;ನ (ಬಿಡಿಎ) ಪ್ರಾಥಮಿಕ ಕರ್ತವ್ಯ' ಎಂದು ರೇರಾ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಪರಿಹಾರದ ಲೆಕ್ಕಾಚಾರ ಹೀಗಿದೆ:&lt;/strong&gt;&lt;/h2&gt;&lt;p&gt;ಸುಪ್ರೀಂ ಕೋರ್ಟ್&zwnj;ನ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ರೇರಾ, ವಿಳಂಬ ಅವಧಿಗೆ SBI MCLR + 2% ದರದಲ್ಲಿ ಬಡ್ಡಿ ನೀಡಲು ಆದೇಶಿಸಿದೆ.&lt;/p&gt;&lt;p&gt;ಮೃದುಲಾ ಅವರಿಗೆ 10-06-2020 ರಿಂದ 02-02-2026ರ ವರೆಗಿನ ಅವಧಿಗೆ ಒಟ್ಟು ₹56,03,736 ಬಡ್ಡಿಯನ್ನು 60 ದಿನಗಳ ಒಳಗಾಗಿ ಪಾವತಿಸಬೇಕು.&lt;/p&gt;&lt;p&gt;ಅಷ್ಟೇ ಅಲ್ಲದೆ, 03-02-2026 ರಿಂದ ಬಡಾವಣೆಯಲ್ಲಿ ಮೂಲಸೌಕರ್ಯಗಳು ಪೂರ್ಣಗೊಳ್ಳುವವರೆಗೂ ಪ್ರತಿ ತಿಂಗಳು ಇದೇ ದರದಲ್ಲಿ ಬಡ್ಡಿ ಪರಿಹಾರವನ್ನು ನೀಡುತ್ತಿರಬೇಕು.&lt;/p&gt;&lt;h2&gt;&lt;strong&gt;ಇತರೆ ಸೈಟ್ ಮಾಲೀಕರಿಗೆ ಇದು ಸುವರ್ಣ ಅವಕಾಶ:&lt;/strong&gt;&lt;/h2&gt;&lt;p&gt;ಈ ತೀರ್ಪು ಕೇವಲ ಒಬ್ಬರಿಗೆ ಸೀಮಿತವಲ್ಲ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸೈಟ್ ಪಡೆದು ಇನ್ನೂ ಮೂಲಸೌಕರ್ಯಕ್ಕಾಗಿ ಕಾಯುತ್ತಿರುವ ಸಾವಿರಾರು ಮಾಲೀಕರಿಗೆ ಇದೊಂದು ಭರವಸೆಯ ಕಿರಣವಾಗಿದೆ. ರೇರಾ ಪೀಠವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ಯಾರು ಅಗತ್ಯ ದಾಖಲೆಗಳೊಂದಿಗೆ ದೂರು ಸಲ್ಲಿಸುತ್ತಾರೋ ಅವರೆಲ್ಲರಿಗೂ ಇಂತಹದ್ದೇ ಪರಿಹಾರ ದೊರಕಲಿದೆ. ಬಿಡಿಎಯ ನಿಷ್ಕ್ರಿಯತೆಯಿಂದ ಸಾವಿರಾರು ಕುಟುಂಬಗಳ ಜೀವಮಾನದ ಉಳಿತಾಯ ನೆನೆಗುದಿಗೆ ಬಿದ್ದಿದೆ. ಬಡಾವಣೆಯ ಅಭಿವೃದ್ಧಿ ಕಾರ್ಯಗಳು ಕುಂಟುತ್ತಾ ಸಾಗುತ್ತಿರುವುದಕ್ಕೆ ಈ ದಂಡದ ರೂಪದ ಬಡ್ಡಿ ಪರಿಹಾರವು ಬಿಡಿಎಗೆ ದೊಡ್ಡ ಹೊಡೆತ ನೀಡಲಿದೆ. ಈ ತೀರ್ಪಿನಿಂದಾಗಿ ಈಗಲಾದರೂ ಬಿಡಿಎ ಎಚ್ಚೆತ್ತುಕೊಂಡು ಬಡಾವಣೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುತ್ತದೆಯೇ ಎಂದು ನಿವೇಶನದಾರರು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-rera-order-bda-nadaprabhu-kempegowda-layout-site-owners-compensation-interest-sat/articleshow-73b41dg"/>
        </item>
        <item>
            <title><![CDATA[ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ: ಸಿಎಂ ಸಿದ್ದರಾಮಯ್ಯ]]></title>
            <link>https://kannada.asianetnews.com/karnataka-districts/siddaramaiah-on-caste-system-social-equality-kannada-books-gvd/articleshow-x1mw3op</link>
            <guid isPermaLink="true">https://kannada.asianetnews.com/karnataka-districts/siddaramaiah-on-caste-system-social-equality-kannada-books-gvd/articleshow-x1mw3op</guid>
            <pubDate>Thu, 16 Apr 2026 20:31:58 +0530</pubDate>
            <description><![CDATA[&lt;p&gt;ಬದಲಾವಣೆಯಾಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆ ಗುಣಗಳು ನಮ್ಮಲ್ಲಿ ಇಲ್ಲದಿದ್ದರೆ ಅದು ಜೀವನದ ಶಿಕ್ಷಣವಲ್ಲ ಎಂದು ಸಿದ್ದರಾಮಯ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3jepcvnxw2xxsh06th8afa2,imgname-1-1756187276149.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.16): &lt;/strong&gt;ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆಯಾಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆ ಗುಣಗಳು ನಮ್ಮಲ್ಲಿ ಇಲ್ಲದಿದ್ದರೆ ಅದು ಜೀವನದ ಶಿಕ್ಷಣವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ವಿಧಾನಸೌಧದ ಬ್ಯಾಕ್ವಿಂಟ್&zwnj; ಹಾಲ್&zwnj;ನಲ್ಲಿ ಆಯೋಜಿಸಲಾಗಿದ್ದ &lsquo;ಕನ್ನಡ ಸಾಮರಸ್ಯದ ನೆಲೆಗಳ 41 ಕೃತಿಗಳ&rsquo; ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.&lt;/p&gt;&lt;p&gt;ಕನ್ನಡ ಸಾಮರಸ್ಯ ನೆಲೆ ಯೋಜನೆಯಡಿ ನೂರು ಪುಸ್ತಕಗಳನ್ನು ಹೊರತರಲು ಉದ್ದೇಶಿಸಿದ್ದು, ಸದ್ಯ 41 ಪುಸ್ತಕಗಳನ್ನು ಹೊರ ತರಲಾಗಿದೆ. ಉಳಿದ 59 ಪುಸ್ತಕಗಳು ಸಹ ಶೀಘ್ರ ಬಿಡುಗಡೆಯಾಗಲಿವೆ. ನಮ್ಮ ದೇಶದಲ್ಲಿ ಅನೇಕ ಭಾಷೆ ಧರ್ಮ ಸಂಸ್ಕೃತಿಗಳು ಇದ್ದು, ರಾಜ್ಯದಲ್ಲಿಯೂ ವೈವಿಧ್ಯತೆ ಇದೆ. ಇದರಲ್ಲಿಯೇ ಏಕತೆಯನ್ನು ನಾವು ಸಾಧಿಸಿದ್ದೇವೆ ಎಂದರು.&lt;/p&gt;&lt;p&gt;ಬಸವ, ಬಾಬಾ ಸಾಹೇಬ್ ಅಂಬೇಡ್ಕರ್, ಬುದ್ಧನಿಂದ ಹಿಡಿದು ಅನೇಕರು ಸಮಾಜ ಸುಧಾರಣೆ ಮಾಡಲು ಪ್ರಯತ್ನಿಸಿದ್ದಾರೆ. ಸಂವಿಧಾನ ಜಾರಿಯಾದ ನಂತರ ಸಮಾಜದ ಸುಧಾರಣೆಯಲ್ಲಿ ವೇಗ ಹೆಚ್ಚಿದೆ. ಆದರೂ ಸಾಮಾಜಿಕ ವ್ಯವಸ್ಥೆ ನೂರಕ್ಕೆ ನೂರು ಬದಲಾವಣೆಯಾಗಿಲ್ಲ. ಬಸವಣ್ಣ ಹೇಳಿದ ಇವ ನಮ್ಮವ ಎನ್ನುವ ಭಾವನೆ ಎಲ್ಲರಲ್ಲಿ ಬರಬೇಕು. ಜಾತಿ ವ್ಯವಸ್ಥೆಯನ್ನು ಗಟ್ಟಿ ಮಾಡಲೆಂದೇ ಮನುವಾದ ಎಂಬ ವರ್ಗವಿದೆ. ಕರ್ಮ ಸಿದ್ಧಾಂತವನ್ನು ವಿದ್ಯಾವಂತರು ನಂಬುವುದು ನಮ್ಮ ಸಮಾಜದ ದೊಡ್ಡ ದುರಂತ ಎಂದರು.&lt;/p&gt;&lt;h2&gt;&lt;strong&gt;ಬಸವಣ್ಣಗೆ ದೇವರ ಬಗ್ಗೆ ನಂಬಿಕೆ ಇರಲಿಲ್ಲ&lt;/strong&gt;&lt;/h2&gt;&lt;p&gt;ದೇವರು ದೇವಸ್ಥಾನಗಳ ಬಗ್ಗೆ ಬಸವಣ್ಣನವರಿಗೆ ನಂಬಿಕೆ ಇರಲಿಲ್ಲ. ಕುವೆಂಪುರವರು ಗುಡಿ, ಚರ್ಚ್ ಮಸೀದಿಗಳನ್ನು ಬಿಟ್ಟು ಹೊರ ಬರಲು ಕರೆ ನೀಡಿದರು. ಮನುಷ್ಯತ್ವವಿಲ್ಲದೆ ಪೂಜೆ ಮಾಡಿದರೆ ಫಲ ದೊರಕುವುದಿಲ್ಲ. ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಮನುಷ್ಯರು ಪರಸ್ಪರರನ್ನು ಪ್ರೀತಿಸಬೇಕು ಎಂದರು. ದ್ವೇಷ ಬಿತ್ತುವವರ ಬಗ್ಗೆ ಜನತೆ ಜಾಗೃತರಾಗಿರಬೇಕು. ಇದು ರಾಜಕಾರಣಕ್ಕಾಗಿ ಮಾಡುವ ಕೆಲಸ. ಶೋಷಣೆ ಮಾಡಲು ಜಾತಿ ವ್ಯವಸ್ಥೆ ಅಗತ್ಯ ಎಂದು ಭಾವಿಸುವವರು ಸಮಾಜದಲ್ಲಿ ಇದ್ದಾರೆ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಶಾಸಕ ರಿಜ್ವಾನ್ ಅರ್ಷದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿ ಮಲೆ, ವಿಧಾನ ಪರಿಷತ್ತು ಸದಸ್ಯ ಭೋಜೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/siddaramaiah-on-caste-system-social-equality-kannada-books-gvd/articleshow-x1mw3op"/>
        </item>
        <item>
            <title><![CDATA[ಕರಾಟೆ ಬ್ಲ್ಯಾಕ್‌ ಬೆಲ್ಟ್‌ಗೆ ತರಬೇತಿ ವೇಳೆ ಕುಸಿದು ಬಿದ್ದು 11 ವರ್ಷದ ಬಾಲಕಿ ದಾರುಣ ಸಾವು]]></title>
            <link>https://kannada.asianetnews.com/india-news/11-year-old-girl-dies-during-karate-black-belt-practice-kollam-kerala-san/articleshow-u68qmn1</link>
            <guid isPermaLink="true">https://kannada.asianetnews.com/india-news/11-year-old-girl-dies-during-karate-black-belt-practice-kollam-kerala-san/articleshow-u68qmn1</guid>
            <pubDate>Thu, 16 Apr 2026 20:06:40 +0530</pubDate>
            <description><![CDATA[&lt;p&gt;ಕೇರಳದ ಕೊಲ್ಲಂನಲ್ಲಿ, ಬ್ಲಾಕ್ ಬೆಲ್ಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 11 ವರ್ಷದ ಬಾಲಕಿ ಕರಾಟೆ ತರಬೇತಿ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತೀವ್ರ ಹೊಟ್ಟೆನೋವು ಮತ್ತು ವಾಂತಿಯಿಂದ ಬಳಲಿದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpbb59t7061bb7wh7nfnmy3j,imgname-karate-child-death-1776349783879.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಲ್ಲಂ (ಕೇರಳ): &lt;/strong&gt;ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್&zwnj;ನಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದ 11 ವರ್ಷದ ಬಾಲಕಿಯೊಬ್ಬಳು ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ವಾಲಕಂ ತೆಕ್ಕೆಯ ಅಂಬಲಕ್ಕರ ನಿವಾಸಿ ಅಹನ್ನಾ ಬಿನೋಯ್ ಮೃತಪಟ್ಟ ಬಾಲಕಿ. ಅಹನ್ನಾ ಬಿನೋಯ್ ಬ್ಲಾಕ್ ಬೆಲ್ಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಈ ಪರೀಕ್ಷೆಗೂ ಮುನ್ನ ನಡೆಯುವ 'ಮಾಕ್ ಟೆಸ್ಟ್'ನಲ್ಲಿ (ಪೂರ್ವಾಭ್ಯಾಸ ಪರೀಕ್ಷೆ) ಭಾಗವಹಿಸಲು ಆಕೆ ಇಂದು ಬಂದಿದ್ದಳು. ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ತರಬೇತಿ ಪಡೆಯುತ್ತಿದ್ದಾಗ ಆಕೆಗೆ ದಿಢೀರ್ ದೈಹಿಕ ಅಸ್ವಸ್ಥತೆ ಕಾಣಿಸಿಕೊಂಡಿದೆ.&lt;/p&gt;&lt;p&gt;ಬಾಲಕಿಗೆ ತೀವ್ರವಾದ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡು ನಂತರ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.&lt;/p&gt;&lt;h2&gt;&lt;strong&gt;ತರಬೇತಿ ಸ್ಥಳ ಬದಲಾಯಿಸಲಾಗಿತ್ತು&lt;/strong&gt;&lt;/h2&gt;&lt;p&gt;ಬಾಲಕಿ ಆರಂಭದಲ್ಲಿ ತನ್ನ ಮನೆಯ ಸಮೀಪವಿರುವ ವಾಲಕಂನಲ್ಲಿರುವ ಸಂಸ್ಥೆಯೊಂದರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಳು. ಆದರೆ, ಬ್ಲಾಕ್ ಬೆಲ್ಟ್ ಪರೀಕ್ಷೆಯ ಹಂತ ತಲುಪಿದ್ದರಿಂದ, ಹೆಚ್ಚಿನ ಸೌಲಭ್ಯಗಳಿರುವ ದೊಡ್ಡ ತರಬೇತಿ ಕೇಂದ್ರಕ್ಕೆ ಇತ್ತೀಚೆಗಷ್ಟೇ ಬದಲಾಯಿಸಲಾಗಿತ್ತು. ಈ ಹೊಸ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ.&lt;/p&gt;&lt;p&gt;ಈ ಕುರಿತು ಅಂಚಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಸಹಜ ಸಾವು ಎಂದು ಪ್ರಕರಣವನ್ನು ಪರಿಗಣಿಸಿದ್ದಾರೆ. ಪೊಲೀಸರು ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿ ಸಂಬಂಧಿಕರು ಮತ್ತು ತರಬೇತುದಾರರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಸೇರಿದಂತೆ ವೈಜ್ಞಾನಿಕ ತನಿಖೆಗಳ ನಂತರವಷ್ಟೇ ಬಾಲಕಿಯ ಸಾವಿಗೆ ನಿಖರವಾದ ಕಾರಣವೇನು ಎಂಬುದು ತಿಳಿದುಬರಬೇಕಿದೆ. ಈ ಘಟನೆ ಸ್ಥಳೀಯವಾಗಿ ಭಾರಿ ಆತಂಕ ಮತ್ತು ವಿಷಾದ ಮೂಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/11-year-old-girl-dies-during-karate-black-belt-practice-kollam-kerala-san/articleshow-u68qmn1"/>
        </item>
        <item>
            <title><![CDATA[ಮಂಗಳೂರು-ಸುಬ್ರಹ್ಮಣ್ಯ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ರದ್ದಾಗಿದ್ದ ಪ್ಯಾಸೆಂಜರ್‌ ರೈಲು  ಮತ್ತೆ ಆರಂಭ]]></title>
            <link>https://kannada.asianetnews.com/karnataka-districts/mangaluru-subrahmanya-road-passenger-train-services-restored-revised-schedule-announced-gdp/articleshow-aglc24b</link>
            <guid isPermaLink="true">https://kannada.asianetnews.com/karnataka-districts/mangaluru-subrahmanya-road-passenger-train-services-restored-revised-schedule-announced-gdp/articleshow-aglc24b</guid>
            <pubDate>Thu, 16 Apr 2026 20:03:16 +0530</pubDate>
            <description><![CDATA[ನಿರ್ವಹಣಾ ಕಾಮಗಾರಿ ಹಿನ್ನೆಲೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಇದೀಗ ಮರುಸ್ಥಾಪಿಸಲಾಗಿದೆ. ರೈಲ್ವೆ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಕೆಲವು ರೈಲುಗಳ ವಿಳಂಬದ ಅವಧಿಯನ್ನು ಕಡಿಮೆ ಮಾಡಿದೆ ಮತ್ತು ಇತರ ರೈಲುಗಳ ಸಂಚಾರಕ್ಕೆ ಹೊಸ ದಿನಾಂಕಗಳನ್ನು ನಿಗದಿಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km4xsq1xkfvyypbsnr1ny7hr,imgname-mangaluru-subrahmanya-passenger-trains-1773986962493.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಸುಬ್ರಹ್ಮಣ್ಯ ರೋಡ್&zwnj;, ಎಡಮಂಗಲ ಮತ್ತು ನರಿಮೊಗರು ರೈಲು ಮಾರ್ಗಗಳ ನಡುವೆ ಹಳಿ ಹಾಗೂ ವಿದ್ಯುತ್ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಹಾಗೂ ಮರುನಿಗದಿಗೊಳಿಸಲಾಗಿದ್ದ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಇದೀಗ ಮರುಸ್ಥಾಪಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.&lt;/p&gt;&lt;p&gt;ಈ ಕುರಿತು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ ನೀಡಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ವೇಳಾಪಟ್ಟಿಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಯಾವ ರೈಲು?&lt;/h2&gt;&lt;p&gt;ಮೊದಲು ಜೂನ್&zwnj; 10ರಿಂದ 21ರವರೆಗೆ ರದ್ದುಪಡಿಸಲಾಗಿದ್ದ ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್&ndash;ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ಹಾಗೂ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್&ndash;ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲುಗಳು ಈಗ ಮರುಸ್ಥಾಪನೆಯಾಗಿದ್ದು, ನಿಗದಿತ ಮಾರ್ಗ ಮತ್ತು ಸಮಯದಂತೆ ಸಂಚರಿಸಲಿವೆ.&lt;/p&gt;&lt;p&gt;ಇನ್ನು ರೈಲು ಸಂಖ್ಯೆ 56229 ಮಂಗಳೂರು ಸೆಂಟ್ರಲ್&ndash;ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲಿಗೆ ಮೊದಲು ಏಪ್ರಿಲ್&zwnj; 21ರಿಂದ ಜೂನ್&zwnj; 9ರವರೆಗೆ 55 ನಿಮಿಷಗಳ ವಿಳಂಬ ಇರಲಿದೆ ಎಂದು ತಿಳಿಸಲಾಗಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್&zwnj; 16ರಿಂದ ಜೂನ್&zwnj; 4ರವರೆಗೆ ಆರಂಭವಾಗುವ ಪ್ರಯಾಣಗಳಲ್ಲಿ ಈ ರೈಲು ಕೇವಲ 35 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ. ಜೂನ್&zwnj; 5ರಿಂದ 9ರವರೆಗೆ ಉಳಿದ ದಿನಗಳಲ್ಲಿ ರೈಲು ತನ್ನ ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸುವುದಾಗಿ ತಿಳಿಸಲಾಗಿದೆ.&lt;/p&gt;&lt;h2&gt;ಮರುನಿಗದಿ ದಿನಾಂಕಗಳಲ್ಲಿಯೂ ಬದಲಾವಣೆ&lt;/h2&gt;&lt;p&gt;ಅದೇ ರೀತಿ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್&ndash;ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಮರುನಿಗದಿ ದಿನಾಂಕಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಏಪ್ರಿಲ್&zwnj; 16, 18, 21, 23, 25, 28, 30 ಹಾಗೂ ಮೇ 2, 5, 7, 9, 12, 14, 16, 19, 21, 23, 26, 28, 30 ಮತ್ತು ಜೂನ್&zwnj; 2 ಹಾಗೂ 4ರಂದು ಈ ರೈಲು 15 ನಿಮಿಷ ತಡವಾಗಿ ಸಂಚರಿಸಲಿದೆ. ಹಿಂದೆ ಸೂಚಿಸಲಾಗಿದ್ದಂತೆ ಜೂನ್&zwnj; 6 ಮತ್ತು 9ರಂದು ಈ ರೈಲುಗಳು ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾಗಿದ್ದ ಅಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಈ ಪರಿಷ್ಕರಣೆಗಳನ್ನು ಮಾಡಿದ್ದು, ಈಗ ಬಹುತೇಕ ಸೇವೆಗಳು ಮರುಸ್ಥಾಪನೆಯಾಗಿರುವುದರಿಂದ ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಲಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-subrahmanya-road-passenger-train-services-restored-revised-schedule-announced-gdp/articleshow-aglc24b"/>
        </item>
        <item>
            <title><![CDATA[ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಅತ್ಯಂತ ವೇಗದ ಗಳಿಕೆಯ ಉದ್ಯೋಗ:ಲಿಂಕ್ಡ್‌ ಇನ್!]]></title>
            <link>https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od</link>
            <guid isPermaLink="true">https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od</guid>
            <pubDate>Thu, 16 Apr 2026 19:33:08 +0530</pubDate>
            <description><![CDATA[&lt;p&gt;ಲಿಂಕ್ಡ್&zwnj;ಇನ್ ತನ್ನ 'ಗ್ರಾಡ್ಸ್ ಗೈಡ್ 2026' ವರದಿಯನ್ನು ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿ ಹೊಸ ಪದವೀಧರರಿಗೆ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಈ ವರದಿಯ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ggh15q1vpmatfr0qfn7hgsgg,imgname-linkedin-is-introducing-a-new-feature-to-identify-fake-profiles.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್&zwnj; ಇನ್, ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೊಸ ಪದವೀಧರರಿಗೆ ಅವಕಾಶಗಳು ಎಲ್ಲಿವೆ ಎಂದು ತಿಳಿಯಲು ನೆರವಾಗುಲು ಮತ್ತು ಬದಲಾಗುತ್ತಿರುವ ಉದ್ಯೋಗದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ, ತನ್ನ 'ಗ್ರಾಡ್ಸ್ ಗೈಡ್ 2026' ಅನ್ನು ಬಿಡುಗಡೆ ಮಾಡಿದೆ. ಈ ವರದಿಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ಕೈಗಾರಿಕೆಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಲಿಂಕ್ಡ್&zwnj; ಇನ್ ಅಂಕಿಅಂಶಗಳ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಯುವ ಪ್ರತಿಭೆಗಳ ನಡುವೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.&lt;/p&gt;&lt;h2&gt;ಉದ್ಯಮ ಮತ್ತು ಜನಕೇಂದ್ರಿತ ವಲಯಗಳಲ್ಲಿ ಹೆಚ್ಚುತ್ತಿರುವ ಅವಕಾಶಗಳು&lt;/h2&gt;&lt;p&gt;ಯುವ ವೃತ್ತಿಪರರಿಗೆ ಕೇವಲ ತಂತ್ರಜ್ಞಾನ ಮಾತ್ರವಲ್ಲದೆ, ಉದ್ಯಮ ಅಭಿವೃದ್ಧಿ ಮತ್ತು ಜನಕೇಂದ್ರಿತ ಕೈಗಾರಿಕೆಗಳಲ್ಲೂ ಅವಕಾಶಗಳು ಲಭ್ಯವಾಗುತ್ತಿವೆ. ಶಿಕ್ಷಣ, ಸರ್ಕಾರಿ ಆಡಳಿತ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಹಾಗೂ ಎನರ್ಜಿ ಟೆಕ್ನಾಲಜಿ ಜೊತೆಗೆ 'ಯುಟಿಲಿಟಿಸ್' ಕ್ಷೇತ್ರವು ಈಗ ವೃತ್ತಿಜೀವನ ಆರಂಭಿಸುವವರಿಗೆ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಒಂದಾಗಿದೆ. ಮಾನವ ಸಂಪನ್ಮೂಲ, ಕನ್ಸಲ್ಟಿಂಗ್, ಮಾಹಿತಿ ತಂತ್ರಜ್ಞಾನ (ಐಟಿ), ಮಾರ್ಕೆಟಿಂಗ್, ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj; ಮೆಂಟ್ ಹಾಗೂ ಬಿಸಿನೆಸ್ ಡೆವಲಪ್&zwnj; ಮೆಂಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆರಂಭಿಕ ಹಂತದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ.&lt;/p&gt;&lt;p&gt;ಈ ಕುರಿತು ಲಿಂಕ್ಡ್&zwnj; ಇನ್&zwnj; ನ ಕರಿಯರ್ ಎಕ್ಸ್ ಪರ್ಟ್ ಮತ್ತು ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ಆದ ನಿರಾಜಿತಾ ಬ್ಯಾನರ್ಜಿ ಅವರು, &quot;ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಿರುವ ಯುವ ವೃತ್ತಿಪರರಿಗೆ ನನ್ನ ಅತ್ಯುತ್ತಮ ಸಲಹೆ ಎಂದರೆ, ಅಸಾಂಪ್ರದಾಯಿಕ ಹಾದಿಗಳು ಮತ್ತು ಅನಿರೀಕ್ಷಿತ ಸ್ಥಳಗಳಲ್ಲಿ ಸಿಗುವ ಉದ್ಯೋಗ ಅವಕಾಶಗಳಿಗೆ ಮುಕ್ತವಾಗಿರಿ. ಸರಿಯಾದ ಅವಕಾಶವು ನೀವು ನಿರೀಕ್ಷಿಸಿದ ಕಡೆಯೇ ಇರಬೇಕೆಂದಿಲ್ಲ. ಅದು ಬೇರೆ ಯಾವುದೋ ಉದ್ಯಮದಲ್ಲಿರಬಹುದು, ಹೊಸ ನಗರದಲ್ಲಿರಬಹುದು ಅಥವಾ ನೀವು ಇದುವರೆಗೆ ಪರಿಗಣಿಸದ ಹುದ್ದೆಯೂ ಆಗಿರಬಹುದು. ಕೌಶಲಗಳು ಒಂದು ವಲಯದಿಂದ ಇನ್ನೊಂದು ವಲಯಕ್ಕೂ ಹೊಂದಿಕೊಳ್ಳಬಲ್ಲ ಇಂದಿನ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ, ವೃತ್ತಿಪರರು ಬಹುಮುಖ ಕೌಶಲಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಆರಂಭಿಕ ವೃತ್ತಿಜೀವನವು ವಿವಿಧ ಹುದ್ದೆಗಳು ಮತ್ತು ಉದ್ಯಮಗಳ ಅನುಭವದಿಂದ ಹೆಚ್ಚು ಉತ್ತಮವಾಗಿ ರೂಪುಗೊಳ್ಳುತ್ತವೆ. ಆದರೆ ಮೊದಲ ಉದ್ಯೋಗದ ಹಾದಿಯು ಯಾವಾಗಲೂ ನೇರವಾಗಿರುವುದಿಲ್ಲ, ಹಾಗಾಗಿ ವೈವಿಧ್ಯಮಯ ಅನುಭವಗಳಿಗೆ ಮುಕ್ತವಾಗಿರುವುದು ನಿಮ್ಮ ವೃತ್ತಿಜೀವನಕ್ಕೆ ವೇಗವನ್ನು ನೀಡಲು ಮತ್ತು ನಿಮಗೆ ಸೂಕ್ತವಾದ ಉದ್ಯೋಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ&quot; ಎಂದು ಹೇಳುತ್ತಾರೆ.&lt;/p&gt;&lt;p&gt;ಲಿಂಕ್ಡ್&zwnj; ಇನ್ ಗ್ರಾಡ್ಸ್ ಗೈಡ್ 2026ರ ಪ್ರಕಾರ ಪದವೀಧರರಿಗಾಗಿ ಈ ವರ್ಷದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಕಾರ್ಯವಿಭಾಗಗಳು ಇಲ್ಲಿವೆ:&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ಉದ್ಯೋಗ ಹುದ್ದೆಗಳು:&lt;/h3&gt;&lt;p&gt;ಎಐ (Artificial Intelligence) ಸ್ಪೆಷಲಿಸ್ಟ್&lt;/p&gt;&lt;p&gt;ಜನರೇಟಿವ್ ಎಐ ಇಂಜಿನಿಯರ್&lt;/p&gt;&lt;p&gt;ಡಿಜಿಟಲ್ ಕಂಟೆಂಟ್ ಕ್ರಿಯೇಟರ್&lt;/p&gt;&lt;p&gt;ಬ್ರ್ಯಾಂಡ್ ರೆಪ್ರೆಸೆಂಟೇಟಿವ್&lt;/p&gt;&lt;p&gt;ಐಟಿ ಸ್ಪೆಷಲಿಸ್ಟ್&lt;/p&gt;&lt;p&gt;ಮೀಡಿಯಾ ಪ್ರೊಡಕ್ಷನ್ ಕ್ರೂ&lt;/p&gt;&lt;p&gt;ಬಿಡ್ ಮ್ಯಾನೇಜರ್&lt;/p&gt;&lt;p&gt;ಕೆಟಗರಿ ಮ್ಯಾನೇಜರ್&lt;/p&gt;&lt;p&gt;ಟೆಕ್ನಿಕಲ್ ಸಪೋರ್ಟ್ ಕನ್ಸಲ್ಟೆಂಟ್&lt;/p&gt;&lt;p&gt;ಸ್ಟೋರೇಜ್ ಇಂಜಿನಿಯರ್&lt;/p&gt;&lt;p&gt;&amp;nbsp;&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ವಲಯಗಳು:&lt;/h3&gt;&lt;p&gt;ಎಐ ಸ್ಪೆಷಲಿಸ್ಟ್ ಯುಟಿಲಿಟಿಸ್&lt;/p&gt;&lt;p&gt;ಶಿಕ್ಷಣ&lt;/p&gt;&lt;p&gt;ಸರ್ಕಾರಿ ಆಡಳಿತ&lt;/p&gt;&lt;p&gt;ಟ್ರಾನ್ಸ್&zwnj;ಪೋರ್ಟ್ ಮತ್ತು ಲಾಜಿಸ್ಟಿಕ್ಸ್&lt;/p&gt;&lt;p&gt;ಎನರ್ಜಿ ಟೆಕ್ನಾಲಜಿ&lt;/p&gt;&lt;p&gt;&amp;nbsp;&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ಕಾರ್ಯವಿಭಾಗಗಳು:&lt;/h3&gt;&lt;p&gt;ಮಾನವ ಸಂಪನ್ಮೂಲ (HR)&lt;/p&gt;&lt;p&gt;ಕನ್ಸಲ್ಟಿಂಗ್&lt;/p&gt;&lt;p&gt;ಮಾಹಿತಿ ತಂತ್ರಜ್ಞಾನ (IT)&lt;/p&gt;&lt;p&gt;ಮಾರ್ಕೆಟಿಂಗ್&lt;/p&gt;&lt;p&gt;ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj;ಮೆಂಟ್&lt;/p&gt;&lt;h2&gt;ಸಣ್ಣ ಸಂಸ್ಥೆಗಳು ಮತ್ತು ಮಹಾನಗರವಲ್ಲದ ನಗರಗಳಲ್ಲಿ ಹೆಚ್ಚುತ್ತಿರುವ ನೇಮಕಾತಿ&lt;/h2&gt;&lt;p&gt;ಸಣ್ಣ ಕಂಪನಿಗಳು ಉದ್ಯೋಗ ಮಾರುಕಟ್ಟೆಯ ಪ್ರಮುಖ ಪ್ರವೇಶ ದ್ವಾರಗಳಾಗಿ ಬೆಳೆಯುತ್ತಿವೆ. ಹೀಗಾಗಿ, ವೃತ್ತಿಜೀವನ ಆರಂಭಿಸುವವರು ಕೇವಲ ದೊಡ್ಡ ಕಂಪನಿಗಳ ಬಗ್ಗೆ ಮಾತ್ರ ಯೋಚಿಸದೆ ಸಣ್ಣ ಸಂಸ್ಥೆಗಳಲ್ಲಿನ ಅವಕಾಶಗಳನ್ನು ಪರಿಗಣಿಸುವುದು ಅನಿವಾರ್ಯವಾಗಿದೆ. ಪದವೀಧರರಿಗೆ 1 ರಿಂದ 10 ಉದ್ಯೋಗಿಗಳಿರುವ ಸಣ್ಣ ಸಂಸ್ಥೆಗಳಲ್ಲಿನ ನೇಮಕಾತಿಯು 2023 ಮತ್ತು 2025ರ ನಡುವೆ 64% ರಷ್ಟು ಹೆಚ್ಚಾಗಿದೆ. ಇನ್ನು ಒಟ್ಟಾರೆ ಆರಂಭಿಕ ಹಂತದ ಉದ್ಯೋಗಿಗಳನ್ನು ಪರಿಗಣಿಸಿದರೆ, ಈ ಬೆಳವಣಿಗೆಯು 168% ರಷ್ಟಿದೆ. ಉದ್ಯೋಗಾವಕಾಶಗಳು ಈಗ ಭೌಗೋಳಿಕವಾಗಿ ಎಲ್ಲಾ ಕಡೆ ವ್ಯಾಪಿಸುತ್ತಿವೆ. ವಿಜಯವಾಡ, ಭೋಪಾಲ್, ಜೈಪುರ, ಇಂದೋರ್, ಗ್ವಾಲಿಯರ್ ಮತ್ತು ವಡೋದರಾ ಅಂತಹ ನಗರಗಳು ಈಗ ಮಹಾನಗರಗಳ ಜೊತೆಗೆ ಭಾರತದ ಪ್ರಮುಖ ನೇಮಕಾತಿ ಕೇಂದ್ರಗಳಾಗಿ ಹೊರಹೊಮ್ಮುತ್ತಿದ್ದು, ಇದು ಯುವಕರಿಗೆ ಸಾಂಪ್ರದಾಯಿಕ ಉದ್ಯೋಗ ಕೇಂದ್ರಗಳ ಹೊರತಾಗಿ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದೆ.&lt;/p&gt;&lt;h2&gt;ಇಂಟರ್ನ್&zwnj; ಶಿಪ್ ಮೂಲಕ ವೃತ್ತಿಜೀವನದತ್ತ ಹೆಜ್ಜೆ&lt;/h2&gt;&lt;p&gt;2020-2022ಕ್ಕೆ ಹೋಲಿಸಿದರೆ, 2023-2025ರ ಅವಧಿಯಲ್ಲಿ ಆರಂಭಿಕ ಹಂತದ ನೇಮಕಾತಿಗಳಲ್ಲಿ ಇಂಟರ್ನ್&zwnj; ಶಿಪ್ ಪೂರ್ಣಗೊಳಿಸಿದವರ ಸಂಖ್ಯೆ ಹೆಚ್ಚಿದೆ. ಲಿಂಕ್ಡ್&zwnj; ಇನ್ ದತ್ತಾಂಶದ ಪ್ರಕಾರ, ಕಾನೂನು, ಪ್ರಾಡಕ್ಟ್ ಮ್ಯಾನೇಜ್&zwnj; ಮೆಂಟ್, ಕನ್ಸಲ್ಟಿಂಗ್, ಇಂಜಿನಿಯರಿಂಗ್ ಮತ್ತು ಬಿಸಿನೆಸ್ ಡೆವಲಪ್&zwnj; ಮೆಂಟ್ ವಿಭಾಗಗಳಲ್ಲಿ ಇದು ಗಣನೀಯವಾಗಿ ಕಂಡುಬಂದಿದೆ. ಪದವಿ ಮುಗಿದ ನಂತರ ಇಂಟರ್ನ್&zwnj; ಶಿಪ್ ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದ್ದು, ವಿಶೇಷವಾಗಿ ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj; ಮೆಂಟ್, ಇಂಜಿನಿಯರಿಂಗ್, ಐಟಿ, ಮೀಡಿಯಾ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ.&lt;/p&gt;&lt;p&gt;ನೀವು ಈಗಷ್ಟೇ ವೃತ್ತಿಜೀವನ ಆರಂಭಿಸುತ್ತಿದ್ದರೆ, ಉದ್ಯೋಗ ಮಾರುಕಟ್ಟೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಲಿಂಕ್ಡ್&zwnj; ಇನ್ ವೃತ್ತಿಜೀವನ ತಜ್ಞರಾದ ನಿರಾಜಿತಾ ಬ್ಯಾನರ್ಜಿ ಅವರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ:&lt;/p&gt;&lt;p&gt;&quot;ಅದೃಶ್ಯ&quot; ಉದ್ಯೋಗ ಮಾರುಕಟ್ಟೆಯನ್ನು ನಿರ್ಲಕ್ಷಿಸಬೇಡಿ: ನಿಮ್ಮ ಕೌಶಲಗಳು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಬಹುಮುಖಿಯಾಗಿವೆ. ಲಿಂಕ್ಡ್&zwnj; ಇನ್&zwnj; ನ ಎಐ-ಚಾಲಿತ ಉದ್ಯೋಗ ಹುಡುಕಾಟವು ನಿಮ್ಮ ಹಿನ್ನೆಲೆಗೆ ಹೊಂದಿಕೆಯಾಗುವ ಹುದ್ದೆಗಳನ್ನು ತೋರಿಸುವ ಮೂಲಕ ಇದನ್ನು ಸಾಬೀತುಪಡಿಸುತ್ತದೆ. ನೀವು ಯಾವತ್ತೂ ಪರಿಗಣಿಸದ ಉದ್ಯಮಗಳು ಅಥವಾ ಹುದ್ದೆಗಳನ್ನೂ ಇದು ನಿಮಗೆ ಸೂಚಿಸುತ್ತದೆ. ಈ ಎಐ-ಚಾಲಿತ ಉದ್ಯೋಗ ಹುಡುಕಾಟವು ಪ್ರಸ್ತುತ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್, ಪೋರ್ಚುಗೀಸ್ ಮತ್ತು ಜರ್ಮನ್ ಭಾಷೆಗಳಲ್ಲಿ ಲಭ್ಯವಿದೆ.&lt;/p&gt;&lt;p&gt;ಹೆಚ್ಚು ಫಲಿತಾಂಶ ನೀಡುವ ಕಡೆ ಗಮನಹರಿಸಿ: ಸಿಕ್ಕಸಿಕ್ಕ ಎಲ್ಲಾ ಕೆಲಸಗಳಿಗೂ ಅರ್ಜಿ ಸಲ್ಲಿಸುವ ಬದಲು, ನಿಮ್ಮ ಕೌಶಲಗಳಿಗೆ ಉತ್ತಮವಾಗಿ ಹೊಂದಿಕೆಯಾಗುವ ಉದ್ಯೋಗಗಳಿಗೆ ಆದ್ಯತೆ ನೀಡಿ. ಲಿಂಕ್ಡ್&zwnj; ಇನ್&zwnj; ನ 'ಜಾಬ್ ಮ್ಯಾಚ್' ನಂತಹ ಟೂಲ್ ಗಳು ನೀವು ಯಾವ ಉದ್ಯೋಗಕ್ಕೆ ಹೆಚ್ಚು ಸೂಕ್ತ ಎಂಬುದನ್ನು ತ್ವರಿತವಾಗಿ ಗುರುತಿಸಲು ಸಹಾಯ ಮಾಡುತ್ತವೆ. ಇದರಿಂದ ನೀವು ಹೆಚ್ಚು ಅವಕಾಶವಿರುವ ಅರ್ಜಿಗಳ ಮೇಲೆ ಹೆಚ್ಚಿನ ಸಮಯ ಕಳೆಯಬಹುದು.&lt;/p&gt;&lt;p&gt;ಕೇವಲ ಸಾಮರ್ಥ್ಯವಲ್ಲ, ಪುರಾವೆಯನ್ನು ತೋರಿಸಿ: ನಿಮಗೆ ವರ್ಷಗಳ ಅನುಭವ ಇಲ್ಲದಿದ್ದರೂ ಪರವಾಗಿಲ್ಲ. ನೀವು ಏನು ಮಾಡಬಲ್ಲಿರಿ ಎಂಬುದನ್ನು ತೋರಿಸುವುದು ಇಲ್ಲಿ ಮುಖ್ಯ. ನೀವು ಮಾಡಿದ ಪ್ರಾಜೆಕ್ಟ್&zwnj; ಗಳು, ಕೆಲಸದ ಉದಾಹರಣೆಗಳು ಮತ್ತು ನೀವು ಬೆಳೆಸಿಕೊಂಡ ಕೌಶಲಗಳನ್ನು ಹಂಚಿಕೊಳ್ಳಿ. ನೀವು ಬಳಸುವ Loveable ಅಥವಾ Replit ನಂತಹ ಎಐ ಟೂಲ್ ಗಳ ಮೂಲಕ ಕೌಶಲಗಳನ್ನು ದೃಢೀಕರಿಸುವುದರಿಂದ ಅಥವಾ ವೆರಿಫೈ ಮಾಡುವುದರಿಂದ ಉದ್ಯೋಗದಾತರು ನಿಮ್ಮ ಸಾಮರ್ಥ್ಯವನ್ನು ಬೇಗನೆ ಗುರುತಿಸಲು ಸಹಾಯ ಮಾಡುತ್ತದೆ.&lt;/p&gt;&lt;p&gt;ಸಂಘಟಿತರಾಗಿರಿ ಮತ್ತು ಉತ್ಸಾಹ ಕಳೆದುಕೊಳ್ಳಬೇಡಿ: ಅರ್ಜಿ ಸಲ್ಲಿಸಿದ ನಂತರ ಮುಂದೇನು ಎಂಬ ಗೊಂದಲ ಸಹಜ. ನಿಮ್ಮ ಅರ್ಜಿಯ ಸ್ಥಿತಿ ಮತ್ತು ಫಾಲೋ- ಅಪ್&zwnj; ಗಳನ್ನು ಟ್ರ್ಯಾಕ್ ಮಾಡಲು ಲಿಂಕ್ಡ್&zwnj; ಇನ್&zwnj; ನ 'ಜಾಬ್ ಟ್ರ್ಯಾಕರ್' ಬಳಸಿ. ಅಲ್ಲದೆ, ನಿಮ್ಮ ನೆಟ್&zwnj; ವರ್ಕ್&zwnj; ನಲ್ಲಿ ಯಾರು ನಿಮಗೆ ಸಹಾಯ ಮಾಡಬಲ್ಲರು ಎಂಬುದನ್ನು ಗುರುತಿಸಿ.&lt;/p&gt;&lt;p&gt;ಕಲಿಯಲು 'ಫಾಲೋ' ಮಾಡಿ: ನಿಮಗೆ ಪರಿಚಯವಿರುವ ಮತ್ತು ನಂಬಿಕಸ್ತ ವ್ಯಕ್ತಿಗಳೊಂದಿಗೆ ಮಾತ್ರ ಕನೆಕ್ಟ್ ಆಗಿ. ಉಳಿದವರಿಗೆ ಕೇವಲ &quot;ಫಾಲೋ&quot; ಬಟನ್ ಒತ್ತಿ. ಇದರಿಂದ ಅವರ ಪೋಸ್ಟ್&zwnj; ಗಳನ್ನು ನೋಡಲು ಮತ್ತು ಅವರ ವಿಷಯಗಳ ಬಗ್ಗೆ ಚರ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ಲಿಂಕ್ಡ್&zwnj; ಇನ್&zwnj; ನ ಹೊಸ 'ಪೀಪಲ್ ಸರ್ಚ್' ಮೂಲಕ ನಿಮಗೆ ಸ್ಫೂರ್ತಿ ನೀಡುವ ವೃತ್ತಿಪರರನ್ನು ಹುಡುಕುವುದು ಮತ್ತು ಸಂಪರ್ಕಿಸುವುದು ಈಗ ಸುಲಭವಾಗಿದೆ (ಪ್ರಸ್ತುತ ಅಮೆರಿಕದಲ್ಲಿ ಮಾತ್ರ ಲಭ್ಯ).&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od"/>
        </item>
        <item>
            <title><![CDATA[ರಾಜ್ಯದ 12 ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್': ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಸಾಧ್ಯತೆ!]]></title>
            <link>https://kannada.asianetnews.com/karnataka-districts/karnataka-weather-update-yellow-alert-12-districts-hailstorm-warning-imd-san/articleshow-eoax3kv</link>
            <guid isPermaLink="true">https://kannada.asianetnews.com/karnataka-districts/karnataka-weather-update-yellow-alert-12-districts-hailstorm-warning-imd-san/articleshow-eoax3kv</guid>
            <pubDate>Thu, 16 Apr 2026 19:23:32 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು (IMD) ಕರ್ನಾಟಕದ 12 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ 'ಎಲ್ಲೋ ಅಲರ್ಟ್' ಘೋಷಿಸಿದೆ. ಈ ಅವಧಿಯಲ್ಲಿ ಗುಡುಗು, ಮಿಂಚು, ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knds8w34zxderfy8e77w0egc,imgname-delhi-ncr-weather-alert-rain-hailstorm-thunderstorm-western-disturbance-imd-warning-wind-speed-storm-india-4-1775357948004.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.16): &lt;/strong&gt;ರಾಜ್ಯದ ಹಲವೆಡೆ ಮಳೆಯ ಅಬ್ಬರ ಜೋರಾಗಲಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಮೂರು ಗಂಟೆಗಳ ಕಾಲ 12 ಜಿಲ್ಲೆಗಳಲ್ಲಿ 'ಎಲ್ಲೋ ಅಲರ್ಟ್' ಘೋಷಿಸಿದೆ. ವಾತಾವರಣದಲ್ಲಿನ ದಿಢೀರ್ ಬದಲಾವಣೆಯಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ಅಲರ್ಟ್ ಘೋಷಿಸಲಾಗಿದೆ?&lt;/strong&gt;&lt;/h2&gt;&lt;p&gt;ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದಕ್ಷಿಣ ಕನ್ನಡ, ಬಾಗಲಕೋಟೆ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಈ ಎಚ್ಚರಿಕೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ಆಲಿಕಲ್ಲು ಮಳೆಯ ಮುನ್ನೆಚ್ಚರಿಕೆ&lt;/strong&gt;&lt;/h2&gt;&lt;p&gt;ಕೇವಲ ಸಾಧಾರಣ ಮಳೆಯಲ್ಲದೆ, ಗಾಳಿಯ ವೇಗ ಹೆಚ್ಚಿರಲಿದ್ದು ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆ ಸಂಭವಿಸುವ ಸಾಧ್ಯತೆಯಿದೆ. ಇದರಿಂದ ಕೃಷಿ ಭೂಮಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ. ಗುಡುಗು ಸಹಿತ ಮಳೆ ಬರುವಾಗ ಸಾರ್ವಜನಿಕರು ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಲಾಗಿದೆ. ಬಿರುಗಾಳಿಯ ತೀವ್ರತೆಗೆ ಹಳೆಯ ಕಟ್ಟಡಗಳು ಹಾಗೂ ದುರ್ಬಲ ಮರಗಳು ಉರುಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಲು ಜಿಲ್ಲಾಡಳಿತಗಳು ಸೂಚಿಸಿವೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-weather-update-yellow-alert-12-districts-hailstorm-warning-imd-san/articleshow-eoax3kv"/>
        </item>
        <item>
            <title><![CDATA[ರಾಜ್ಯದಲ್ಲಿ ಬಿಸಿಗಾಳಿ ಆರ್ಭಟ: 12 ಜಿಲ್ಲೆಗಳಿಗೆ 4 ದಿನ ಕಾಲ ಹೀಟ್‌ವೇವ್‌ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ!]]></title>
            <link>https://kannada.asianetnews.com/state/karnataka-heatwave-alert-12-districts-under-warning-as-kalaburagi-records-45c-gdp/articleshow-kx8ucyr</link>
            <guid isPermaLink="true">https://kannada.asianetnews.com/state/karnataka-heatwave-alert-12-districts-under-warning-as-kalaburagi-records-45c-gdp/articleshow-kx8ucyr</guid>
            <pubDate>Thu, 16 Apr 2026 19:14:50 +0530</pubDate>
            <description><![CDATA[ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಕಲಬುರಗಿಯಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹವಾಮಾನ ಇಲಾಖೆಯು ಉತ್ತರ ಕರ್ನಾಟಕ ಸೇರಿದಂತೆ 12 ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ಬಿಸಿಗಾಳಿಯ ಯೆಲ್ಲೋ ಅಲರ್ಟ್&zwnj; ಘೋಷಿಸಿದ್ದು, ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hyjjqpac85zwfh821211zw9n,imgname-imd-weather-heat-wave-alert-IN-Rajasthan-1716463065420.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ತಾಪಮಾನ ತಾರಕಕ್ಕೇರಿದೆ. ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ರಾಜ್ಯದ 12 ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ಹೀಟ್&zwnj;ವೇವ್&zwnj; (ಬಿಸಿಗಾಳಿ) ಎಚ್ಚರಿಕೆ ನೀಡಲಾಗಿದೆ.&lt;/p&gt;&lt;p&gt;ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಏಪ್ರಿಲ್&zwnj; 15ರಿಂದ ಉತ್ತರ ಒಳನಾಡು ಭಾಗಗಳಲ್ಲಿ ಬಿಸಿಗಾಳಿ ತೀವ್ರಗೊಂಡಿದ್ದು, ಏಪ್ರಿಲ್&zwnj; 19ರವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಮಧ್ಯ ಭಾರತದಲ್ಲಿ ಉಂಟಾಗಿರುವ ವಾಯು ಒತ್ತಡದ ಹೆಚ್ಚಳ ಹಾಗೂ ಜಾಗತಿಕ ಉಷ್ಣಾಂಶ ಏರಿಕೆಯಿಂದಾಗಿ ಈ ಬಿಸಿಗಾಳಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಲಾಗಿದೆ.&lt;/p&gt;&lt;p&gt;ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್&zwnj; ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ತಾಪಮಾನ ಹೆಚ್ಚಾಗಿ, ಬಿಸಿಗಾಳಿಯ ಪರಿಣಾಮ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು&lt;/h2&gt;&lt;p&gt;ಈ ಕುರಿತು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಸಿ.ಎಸ್&zwnj;. ಪಾಟೀಲ್&zwnj; ಅವರು ಪ್ರತಿಕ್ರಿಯಿಸಿ, &ldquo;ರಾಜ್ಯದ 12 ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಬಿಸಿಗಾಳಿಯ ವಾತಾವರಣ ಮುಂದುವರಿಯಲಿದೆ. ಕಲಬುರಗಿಯಲ್ಲಿ ಸದ್ಯ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಮುಂದಿನ ದಿನಗಳಲ್ಲಿ ಅದು 44 ರಿಂದ 45 ಡಿಗ್ರಿ ಸೆಲ್ಸಿಯಸ್&zwnj;ಗೆ ಏರಬಹುದು ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಅದೇ ವೇಳೆ, ಬೆಂಗಳೂರಿನಲ್ಲಿ ಈಗಾಗಲೇ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಅದು 38 ರಿಂದ 39 ಡಿಗ್ರಿ ಸೆಲ್ಸಿಯಸ್&zwnj;ಗೆ ಏರಬಹುದು. ಕರಾವಳಿ ಜಿಲ್ಲೆಗಳಲ್ಲಿಯೂ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್&zwnj;ವರೆಗೆ ತಲುಪುವ ಸಾಧ್ಯತೆ ಇದೆ. ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಇನ್ನೂ ಹಲವು ರಾಜ್ಯಗಳಲ್ಲಿಯೂ ಬಿಸಿಗಾಳಿ ತೀವ್ರವಾಗಿರುವುದಾಗಿ ಅವರು ವಿವರಿಸಿದರು.&lt;/p&gt;&lt;h2&gt;ಏಪ್ರಿಲ್&zwnj;ನಲ್ಲೇ ಕಾಣಿಸಿಕೊಂಡಿರುವುದು ಅಸಾಮಾನ್ಯ ಬೆಳವಣಿಗೆ&lt;/h2&gt;&lt;p&gt;ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು, ವಿಜಯಪುರ ಸೇರಿದಂತೆ ಹಲವೆಡೆ ಉಷ್ಣಾಂಶ ತೀವ್ರವಾಗಿ ಏರಿಕೆಯಾಗಿದ್ದು, ಕಲಬುರಗಿಯಲ್ಲಿ ದಾಖಲೆಯ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ದಾಖಲಾಗುವ ಈ ಮಟ್ಟದ ಉಷ್ಣಾಂಶ ಈ ಬಾರಿ ಏಪ್ರಿಲ್&zwnj;ನಲ್ಲೇ ಕಾಣಿಸಿಕೊಂಡಿರುವುದು ಅಸಾಮಾನ್ಯ ಬೆಳವಣಿಗೆಯಾಗಿದೆ.&lt;/p&gt;&lt;p&gt;ಇದೇ ವೇಳೆ ವಿಜಯಪುರ ಮತ್ತು ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್, ಕೊಪ್ಪಳ, ಬೀದರ್, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ 39 ಡಿಗ್ರಿ ಸೆಲ್ಸಿಯಸ್, ಧಾರವಾಡ ಮತ್ತು ಚಿತ್ರದುರ್ಗದಲ್ಲಿ 38 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ, ಹಾವೇರಿ, ದಾವಣಗೆರೆ, ಬೆಂಗಳೂರು ಹಾಗೂ ಮೈಸೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.&lt;/p&gt;&lt;h2&gt;ಆರೆಂಜ್&zwnj; ಅಲರ್ಟ್&zwnj; ಘೋಷಣೆ&lt;/h2&gt;&lt;p&gt;ವಿಪರೀತ ಬಿಸಿಲು ಹಾಗೂ ಉಷ್ಣಾಂಶ ಏರಿಕೆಯಿಂದಾಗಿ ಕಲಬುರಗಿ ಜಿಲ್ಲಾಡಳಿತ ಆರೆಂಜ್&zwnj; ಅಲರ್ಟ್&zwnj; ಘೋಷಿಸಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನದವರೆಗೆ ಅನಾವಶ್ಯಕವಾಗಿ ಹೊರಗೆ ಹೋಗದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವುದು, ನೆರಳಿನಲ್ಲಿ ಕಾಲ ಕಳೆಯುವುದು, ತಲೆ ಮುಚ್ಚಿಕೊಳ್ಳುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.&lt;/p&gt;&lt;p&gt;ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಮಧ್ಯಾಹ್ನ ವೇಳೆಗೆ ರಸ್ತೆಗಳು ಬಿಕೋ ಎನ್ನುತ್ತಿವೆ. ಸಂಜೆ 6 ಗಂಟೆಯ ನಂತರ ಬಿಸಿಲು ತಗ್ಗಿದಾಗ ಮಾತ್ರ ಜನರು ಹೊರಗೆ ಬರುತ್ತಿರುವುದು ಕಂಡು ಬರುತ್ತಿದೆ.&lt;/p&gt;&lt;p&gt;ಒಟ್ಟಾರೆ, ರಾಜ್ಯದಲ್ಲಿ ಮುಂದಿನ ಕೆಲವು ದಿನಗಳ ಕಾಲ ಬಿಸಿಗಾಳಿಯ ತೀವ್ರತೆ ಮುಂದುವರಿಯುವ ಸಾಧ್ಯತೆ ಇದ್ದು, ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-heatwave-alert-12-districts-under-warning-as-kalaburagi-records-45c-gdp/articleshow-kx8ucyr"/>
        </item>
        <item>
            <title><![CDATA[ಅರವಿಂದ್‌ ಕೇಜ್ರಿವಾಲ್‌ ಲಾಜಿಕ್‌ ಪ್ರಕಾರ ಹೋದ್ರೆ ಯಾವ ಜಡ್ಜ್‌ ಕೂಡ ಸರ್ಕಾರ, ರಾಜಕಾರಣಿ ವಿಚಾರಣೆ ಮಾಡೋದು ಸಾಧ್ಯವಿಲ್ಲ: ಸಿಬಿಐ]]></title>
            <link>https://kannada.asianetnews.com/india-news/cbi-opposes-arvind-kejriwal-recusal-plea-justice-swarana-kanta-sharma-delhi-hc-san/articleshow-yb0evw0</link>
            <guid isPermaLink="true">https://kannada.asianetnews.com/india-news/cbi-opposes-arvind-kejriwal-recusal-plea-justice-swarana-kanta-sharma-delhi-hc-san/articleshow-yb0evw0</guid>
            <pubDate>Thu, 16 Apr 2026 19:11:56 +0530</pubDate>
            <description><![CDATA[&lt;p&gt;ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕೆಂಬ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಸಿಬಿಐ ಬಲವಾಗಿ ವಿರೋಧಿಸಿದೆ. ಕೇಜ್ರಿವಾಲ್ ಅವರ ತರ್ಕವು ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಸಿಬಿಐ ವಾದಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb856sggad2fbdwa934f9gf,imgname-justice-swarana-kanta-sharma-and-arvind-kejriwal-1776346635056.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.16):&lt;/strong&gt; ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕು (Recusal) ಎಂಬ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಸಿಬಿಐ ಗುರುವಾರ ಲಿಖಿತ ರೂಪದಲ್ಲಿ ಬಲವಾಗಿ ವಿರೋಧಿಸಿದೆ. ಕೇಜ್ರಿವಾಲ್ ಅವರ ತರ್ಕವನ್ನು ಒಪ್ಪಿಕೊಂಡರೆ ದೇಶದ ಯಾವುದೇ ನ್ಯಾಯಾಧೀಶರು ಸರ್ಕಾರ ಅಥವಾ ರಾಜಕಾರಣಿಗಳ ವಿರುದ್ಧದ ಪ್ರಕರಣಗಳನ್ನು ಆಲಿಸಲು ಸಾಧ್ಯವಾಗುವುದಿಲ್ಲ ಎಂದು ಸಿಬಿಐ ವಾದಿಸಿದೆ.&lt;/p&gt;&lt;h2&gt;&lt;strong&gt;ಸಿಬಿಐ ಮಂಡಿಸಿದ ಪ್ರಬಲ ವಾದಗಳೇನು?&lt;/strong&gt;&lt;/h2&gt;&lt;p&gt;ನ್ಯಾಯಮೂರ್ತಿ ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರ ಪ್ಯಾನಲ್&zwnj;ನಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂಬುದು ಕೇಜ್ರಿವಾಲ್ ಅವರ ವಾದವಾಗಿತ್ತು. ಇದಕ್ಕೆ ಸಿಬಿಐ ಲಿಖಿತ ರೂಪದಲ್ಲಿ ತಿರುಗೇಟು ನೀಡಿದೆ. ಕೇಜ್ರಿವಾಲ್ ತರ್ಕದಂತೆ ಹೋದರೆ, ತಮ್ಮ ಸಂಬಂಧಿಕರು ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಪ್ಯಾನಲ್&zwnj;ನಲ್ಲಿ ಇರುವ ಎಲ್ಲಾ ನ್ಯಾಯಾಧೀಶರು ಆಯಾ ಸರ್ಕಾರ ಅಥವಾ ರಾಜಕೀಯ ನಾಯಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸಲು ಅನರ್ಹರಾಗುತ್ತಾರೆ. ಇದು ಅತ್ಯಂತ ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ.&lt;/p&gt;&lt;p&gt;ಕೇಜ್ರಿವಾಲ್ ಅವರು ಹೆಚ್ಚುವರಿ ಅಫಿಡವಿಟ್ ಸಲ್ಲಿಸಿರುವುದು ನ್ಯಾಯಾಂಗ ಸಂಸ್ಥೆ ಮತ್ತು ವ್ಯಕ್ತಿಗಳ ಮೇಲೆ ಒತ್ತಡ ಹೇರಲು ಹಾಗೂ ಸಂಸ್ಥೆಯ ಘನತೆಗೆ ಮಸಿ ಬಳಿಯಲು ಮಾಡಿದ ಪ್ರಯತ್ನ ಎಂದು ಸಿಬಿಐ ಕಿಡಿಕಾರಿದೆ. ನ್ಯಾಯಮೂರ್ತಿ ಶರ್ಮಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತ ಅಭಿಯಾನ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅವರು ವಿಚಾರಣೆಯಿಂದ ಹಿಂದೆ ಸರಿಯುವುದು ನ್ಯಾಯಾಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಿಬಿಐ ಹೇಳಿದೆ.&lt;/p&gt;&lt;h2&gt;&lt;strong&gt;ಎಬಿಎಪಿ ಕಾರ್ಯಕ್ರಮದ ವಿವಾದ&lt;/strong&gt;&lt;/h2&gt;&lt;p&gt;ಅಖಿಲ ಭಾರತ ಅಧಿವಕ್ತ ಪರಿಷತ್ (ABAP) ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳು ಭಾಗವಹಿಸಿದ್ದನ್ನು ಕೇಜ್ರಿವಾಲ್ ಆಕ್ಷೇಪಿಸಿದ್ದರು. ಇದಕ್ಕೆ ಉತ್ತರಿಸಿದ ಸಿಬಿಐ, &quot;ಕೇವಲ ಒಂದು ಸೆಮಿನಾರ್&zwnj;ನಲ್ಲಿ ಭಾಗವಹಿಸುವುದು ಅವರ ಸಿದ್ಧಾಂತವನ್ನು ಪ್ರತಿಬಿಂಬಿಸುವುದಿಲ್ಲ. ಇದನ್ನೇ ಕಾರಣವಾಗಿಸಿದರೆ, ಸರ್ವೋಚ್ಚ ನ್ಯಾಯಾಲಯ ಅಥವಾ ಹೈಕೋರ್ಟ್&zwnj;ನ ಯಾವುದೇ ನ್ಯಾಯಾಧೀಶರು ಆಮ್ ಆದ್ಮಿ ಪಕ್ಷದ ನಾಯಕರ ಪ್ರಕರಣಗಳನ್ನು ಆಲಿಸಲು ಸಾಧ್ಯವಾಗುವುದಿಲ್ಲ&quot; ಎಂದು ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ&lt;/strong&gt;&lt;/h2&gt;&lt;p&gt;ಫೆಬ್ರವರಿ 27 ರಂದು ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್ ಮತ್ತು ಇತರ 22 ಜನರನ್ನು ಅಬಕಾರಿ ಹಗರಣದಿಂದ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಶರ್ಮಾ ಅವರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶ ದೋಷಪೂರಿತವಾಗಿದೆ ಎಂದು ಅವರು ಮೇಲ್ನೋಟಕ್ಕೆ ಅಭಿಪ್ರಾಯಪಟ್ಟಿದ್ದರು. ಇದರಿಂದ ಆತಂಕಗೊಂಡ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರು ನ್ಯಾಯಮೂರ್ತಿಗಳ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 13 ರಂದು ಕೇಜ್ರಿವಾಲ್ ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದ್ದರು. ಈ ವೇಳೆ ನ್ಯಾಯಾಲಯದ ಒಳಗಿನ ವಿಡಿಯೋಗಳು ವೈರಲ್ ಆಗಿದ್ದು, ಅದನ್ನು ತೆಗೆದುಹಾಕುವಂತೆ ಹೈಕೋರ್ಟ್ ಈಗಾಗಲೇ ಆದೇಶಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/cbi-opposes-arvind-kejriwal-recusal-plea-justice-swarana-kanta-sharma-delhi-hc-san/articleshow-yb0evw0"/>
        </item>
        <item>
            <title><![CDATA[1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್‌, ದಂಡ ಕಟ್ಟಿ ಎಂದ ಮದ್ರಾಸ್‌ ಹೈಕೋರ್ಟ್‌]]></title>
            <link>https://kannada.asianetnews.com/gallery/news-entertainment/madras-high-court-dismisses-tamannaah-bhatia-1-crore-damages-plea-power-soaps-san-xob1cfg</link>
            <guid isPermaLink="true">https://kannada.asianetnews.com/gallery/news-entertainment/madras-high-court-dismisses-tamannaah-bhatia-1-crore-damages-plea-power-soaps-san-xob1cfg</guid>
            <pubDate>Thu, 16 Apr 2026 18:42:58 +0530</pubDate>
            <description><![CDATA[&lt;p&gt;ಪವರ್ ಸೋಪ್ಸ್ ಲಿಮಿಟೆಡ್ ಕಂಪನಿಯು ತಮ್ಮ ಫೋಟೋಗಳನ್ನು ಒಪ್ಪಂದದ ನಂತರವೂ ಅನಧಿಕೃತವಾಗಿ ಬಳಸಿದೆ ಎಂದು ಆರೋಪಿಸಿ ನಟಿ ತಮನ್ನಾ ಭಾಟಿಯಾ ಸಲ್ಲಿಸಿದ್ದ 1 ಕೋಟಿ ರೂ. ನಷ್ಟ ಪರಿಹಾರದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb6c7knmpnyhfejf0w4xedb,imgname-madras-high-court-tamannaah-bhatia--2--1776344768117.jpg" type="image/jpeg" height="390" width="690"/>
            <content:encoded><![CDATA[&lt;p&gt;ಪವರ್ ಸೋಪ್ಸ್ ಲಿಮಿಟೆಡ್ ಕಂಪನಿಯು ತಮ್ಮ ಫೋಟೋಗಳನ್ನು ಒಪ್ಪಂದದ ನಂತರವೂ ಅನಧಿಕೃತವಾಗಿ ಬಳಸಿದೆ ಎಂದು ಆರೋಪಿಸಿ ನಟಿ ತಮನ್ನಾ ಭಾಟಿಯಾ ಸಲ್ಲಿಸಿದ್ದ 1 ಕೋಟಿ ರೂ. ನಷ್ಟ ಪರಿಹಾರದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.&amp;nbsp;&lt;/p&gt;&lt;img&gt;&lt;p&gt;ತಮ್ಮ ಫೋಟೋಗಳನ್ನು ಅನಧಿಕೃತವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ 'ಪವರ್ ಸೋಪ್ಸ್' ಲಿಮಿಟೆಡ್ ಕಂಪನಿ ವಿರುದ್ಧ 1 ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ನಟಿ ತಮನ್ನಾ ಭಾಟಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಈ ವಿವಾದವು 2008ರಲ್ಲಿ ನಡೆದ ಒಪ್ಪಂದದಿಂದ ಆರಂಭವಾಗಿತ್ತು. ಆ ಸಮಯದಲ್ಲಿ ತಮನ್ನಾ ಭಾಟಿಯಾ ಅವರು ಪವರ್ ಸೋಪ್ಸ್ ಉತ್ಪನ್ನಗಳ ಪ್ರಚಾರಕ್ಕಾಗಿ ತಮ್ಮ ಚಿತ್ರಗಳನ್ನು ಬಳಸಲು ಒಂದು ವರ್ಷದ ಅವಧಿಗೆ (ಅಕ್ಟೋಬರ್ 2009 ರವರೆಗೆ) ಅನುಮತಿ ನೀಡಿದ್ದರು.&lt;/p&gt;&lt;img&gt;&lt;p&gt;ಆದರೆ, ಒಪ್ಪಂದದ ಅವಧಿ ಮುಗಿದ ನಂತರವೂ (ಅಂದರೆ 2010-2011ರ ಅವಧಿಯಲ್ಲಿ) ಕಂಪನಿಯು ತನ್ನ ಉತ್ಪನ್ನದ ರಾಪರ್&zwnj;ಗಳು (Wrappers), ಜಾಹೀರಾತುಗಳು ಮತ್ತು ಆನ್&zwnj;ಲೈನ್ ಲಿಸ್ಟಿಂಗ್&zwnj;ಗಳಲ್ಲಿ ತಮ್ಮ ಚಿತ್ರಗಳನ್ನು ಬಳಸುವುದನ್ನು ಮುಂದುವರಿಸಿದೆ ಎಂದು ತಮನ್ನಾ ಆರೋಪಿಸಿದ್ದರು. ಇದರಿಂದಾಗಿ ತಾವು ಇತರ ಸ್ಪರ್ಧಿ ಬ್ರಾಂಡ್&zwnj;ಗಳೊಂದಿಗೆ ಮಾತುಕತೆ ನಡೆಸುವಾಗ ವಾಣಿಜ್ಯಿಕವಾಗಿ ತೊಂದರೆಯಾಗಿದೆ ಮತ್ತು ನಷ್ಟ ಉಂಟಾಗಿದೆ ಎಂದು ಅವರು ಪ್ರತಿಪಾದಿಸಿದ್ದರು.&lt;/p&gt;&lt;img&gt;&lt;p&gt;ನ್ಯಾಯಮೂರ್ತಿಗಳಾದ ಪಿ. ವೇಲ್ಮುರುಗನ್ ಮತ್ತು ಕೆ. ಗೋವಿಂದರಾಜನ್ ತಿಲಕವಾಡಿ ಅವರಿದ್ದ ವಿಭಾಗೀಯ ಪೀಠವು ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.ಒಪ್ಪಂದದ ಅವಧಿ ಮುಗಿದ ನಂತರವೂ ಕಂಪನಿಯು ತನ್ನ ಫೋಟೋಗಳನ್ನು ಬಳಸಿದೆ ಎಂಬುದನ್ನು ಸಾಬೀತುಪಡಿಸಲು ತಮನ್ನಾ ಭಾಟಿಯಾ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.&lt;/p&gt;&lt;img&gt;&lt;p&gt;ತಮನ್ನಾ ಅವರು ಸಲ್ಲಿಸಿದ ಉತ್ಪನ್ನದ ರಾಪರ್&zwnj;ಗಳು, ಖರೀದಿ ದಾಖಲೆಗಳು ಮತ್ತು ಇಂಟರ್ನೆಟ್ ಲಿಸ್ಟಿಂಗ್&zwnj;ಗಳು ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ದಾಖಲೆಗಳು ಮತ್ತು ಕಂಪನಿಯ ನಡುವಿನ ಸಂಬಂಧವನ್ನು ಸ್ಥಾಪಿಸಲು ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ನ್ಯಾಯಾಧೀಶರು ತೀರ್ಮಾನಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಹಿಂದೆ ಏಕಸದಸ್ಯ ಪೀಠವು ತಮನ್ನಾ ಅವರ ವಾದದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಂಡುಬಂದ ಹಿನ್ನೆಲೆಯಲ್ಲಿ, ನಷ್ಟ ಪರಿಹಾರ ಮತ್ತು ಶಾಶ್ವತ ತಡೆಯಾಜ್ಞೆ ಕೋರಿದ್ದ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೆ, ತಮನ್ನಾ ಅವರಿಗೆ ದಂಡವನ್ನೂ (Costs) ವಿಧಿಸಲಾಗಿತ್ತು. ಇದೀಗ ವಿಭಾಗೀಯ ಪೀಠವೂ ಈ ಆದೇಶವನ್ನು ಸರಿ ಎಂದು ಘೋಷಿಸುವ ಮೂಲಕ ನಟಿಯ ಮೇಲ್ಮನವಿಯನ್ನು ತಿರಸ್ಕರಿಸಿದೆ.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/news-entertainment/madras-high-court-dismisses-tamannaah-bhatia-1-crore-damages-plea-power-soaps-san-xob1cfg"/>
        </item>
        <item>
            <title><![CDATA[ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...]]></title>
            <link>https://kannada.asianetnews.com/state/former-minister-vinay-kulkarni-convicted-in-yogesh-gowda-murder-case-update-news-sat-videoshow-mtde3wt</link>
            <guid isPermaLink="true">https://kannada.asianetnews.com/state/former-minister-vinay-kulkarni-convicted-in-yogesh-gowda-murder-case-update-news-sat-videoshow-mtde3wt</guid>
            <pubDate>Thu, 16 Apr 2026 18:30:02 +0530</pubDate>
            <description><![CDATA[&lt;p&gt;ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ನ್ಯಾಯಾಲಯ 'ಅಪರಾಧಿ' ಎಂದು ಘೋಷಿಸಿದೆ. ಸಿಬಿಐ ತನಿಖೆಯು ಈ ಕೊಲೆಯ ಮಾಸ್ಟರ್ ಮೈಂಡ್ ವಿನಯ್ ಕುಲಕರ್ಣಿ ಎಂದು ಸಾಕ್ಷ್ಯ ಸಮೇತ ಸಾಬೀತುಪಡಿಸಿದ ನಂತರ, ಸುದೀರ್ಘ ಕಾನೂನು ಹೋರಾಟಕ್ಕೆ ಅಂತಿಮ ತೆರೆ ಬಿದ್ದಿದೆ.&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xa5nrha" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಧಾರವಾಡ (ಏ.16): 'ನ್ಯಾ&lt;/strong&gt;ಯ ವಿಳಂಬವಾಗಬಹುದು, ಆದರೆ ಸತ್ಯಕ್ಕೆ ಸೋಲಿಲ್ಲ' (Justice may be delayed but truth prevail) ಎಂಬ ಮಾತಿಗೆ ಇಂದು ಮತ್ತೆ ಜಯ ಸಿಕ್ಕಿದೆ. ದಶಕದ ಹಿಂದೆ ನಡೆದಿದ್ದ ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರ ಬರ್ಬರ ಕೊಲೆ ಪ್ರಕರಣದಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ನ್ಯಾಯಾಲಯವು 'ಅಪರಾಧಿ' ಎಂದು ಘೋಷಿಸಿದೆ. ಈ ತೀರ್ಪಿನೊಂದಿಗೆ ಹತ್ತು ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟ ಮತ್ತು ರಾಜಕೀಯ ಹಸ್ತಕ್ಷೇಪಗಳ ನಾಟಕಕ್ಕೆ ಅಂತಿಮ ತೆರೆ ಬಿದ್ದಂತಾಗಿದೆ.&lt;/p&gt;&lt;p&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/p&gt;&lt;p&gt;2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್&zwnj;ನಲ್ಲಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಆರಂಭದಲ್ಲಿ ಇದೊಂದು ಭೂಮಿ ವಿವಾದದ ಕೊಲೆ ಎಂದು ಬಿಂಬಿಸಲು ರಾಜ್ಯ ಪೊಲೀಸರ ಮೇಲೆ ತೀವ್ರ ರಾಜಕೀಯ ಒತ್ತಡ ಹೇರಲಾಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿದ್ದರೂ, ಸ್ಥಳೀಯ ಪೊಲೀಸರು ಪ್ರಕರಣವನ್ನು ಹಳ್ಳ ಹಿಡಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು.&lt;/p&gt;&lt;p&gt;&lt;strong&gt;ಸುವರ್ಣ ನ್ಯೂಸ್ ಬೆನ್ನತ್ತಿದ ಪ್ರಕರಣ:&lt;/strong&gt;&lt;/p&gt;&lt;p&gt;ಯೋಗೇಶ್ ಗೌಡ ಅವರ ಕುಟುಂಬದವರು ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾಗ, ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಪ್ರಕರಣವನ್ನು ತನ್ನ 'ಎಫ್.ಐ.ಆರ್' (FIR) ಕಾರ್ಯಕ್ರಮದ ಮೂಲಕ ನಿರಂತರವಾಗಿ ಬೆನ್ನತ್ತಿತ್ತು. ಅಧಿಕಾರದ ಬಲದಿಂದ ಈ ಕೊಲೆಯನ್ನು ಹೇಗೆ ಮುಚ್ಚಿ ಹಾಕಲಾಗುತ್ತಿದೆ ಎಂಬುದನ್ನು ದಾಖಲೆ ಸಮೇತವಾಗಿ ಸಮಾಜದ ಮುಂದೆ ತೆರೆದಿಟ್ಟಿತ್ತು. ಈ ನಿರಂತರ ಹೋರಾಟದ ಫಲವಾಗಿಯೇ ಪ್ರಕರಣಕ್ಕೆ ಹೊಸ ಜೀವ ಸಿಕ್ಕಿತು.&lt;/p&gt;&lt;p&gt;&lt;strong&gt;ಸಿಬಿಐ ಎಂಟ್ರಿ ಮತ್ತು ಅಸಲಿ ಸತ್ಯ ಬಯಲು:&lt;/strong&gt;&lt;/p&gt;&lt;p&gt;ರಾಜ್ಯದಲ್ಲಿ ಅಧಿಕಾರ ಬದಲಾದ ಮೇಲೆ ಮತ್ತು ಯೋಗೇಶ್ ಗೌಡ ಅವರ ಪತ್ನಿ ಹಾಗೂ ಕುಟುಂಬದವರ ಹಕ್ಕೊತ್ತಾಯದ ಮೇರೆಗೆ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸಲಾಯಿತು. ಸಿಬಿಐ ತನಿಖೆಯನ್ನು ತಡೆಯಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್&zwnj;ಗಳಲ್ಲಿ ಹಲವು ಸ್ಟೇ ಆರ್ಡರ್&zwnj;ಗಳನ್ನು ತರಲಾಗಿತ್ತು. ಆದರೆ, ಅಂತಿಮವಾಗಿ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ ನಂತರ ಸಿಬಿಐ ಅಧಿಕಾರಿಗಳು ಫೀಲ್ಡ್&zwnj;ಗೆ ಇಳಿದರು. ಸಿಬಿಐ ತನಿಖೆಯ ವೇಳೆ ನೈಜ ಹಂತಕರು ಯಾರು ಎಂಬುದು ಬಯಲಾಯಿತು. ಈ ಹಿಂದೆ ತಾವೇ ಕೊಲೆ ಮಾಡಿದ್ದೇವೆ ಎಂದು ಶರಣಾಗಿದ್ದವರು ನಕಲಿ ಆರೋಪಿಗಳು ಎಂಬುದು ಸಾಬೀತಾಯಿತು. ಸಿಬಿಐ ಅಧಿಕಾರಿಗಳು ಒಬ್ಬ ಆರೋಪಿಯನ್ನು 'ಮಾಫಿ ಸಾಕ್ಷಿ'ಯನ್ನಾಗಿ (Approver) ಮಾಡಿಕೊಂಡಿದ್ದು ಈ ಕೇಸ್&zwnj;ನಲ್ಲಿ ದೊಡ್ಡ ತಿರುವು ನೀಡಿತು. ಒಟ್ಟು 21 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ, ವಿನಯ್ ಕುಲಕರ್ಣಿಯೇ ಈ ಕೊಲೆಯ ಮಾಸ್ಟರ್ ಮೈಂಡ್ ಎಂಬುದನ್ನು ಸಾಕ್ಷ್ಯಧಾರ ಸಮೇತ ನಿರೂಪಿಸಿತು.&lt;/p&gt;&lt;p&gt;&lt;strong&gt;ನ್ಯಾಯದೇವತೆಯ ತೀರ್ಪು:&lt;/strong&gt;&lt;/p&gt;&lt;p&gt;ದಶಕದ ಕಾಲ ನಡೆದ ವಾದ-ಪ್ರತಿವಾದಗಳ ನಂತರ, ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಅವರನ್ನು ಅಪರಾಧಿ ಎಂದು ತೀರ್ಪು ನೀಡಿದೆ. ಈ ಮೂಲಕ ಯೋಗೇಶ್ ಗೌಡ ಅವರ ಆತ್ಮಕ್ಕೆ ಅಂತಿಮವಾಗಿ ಶಾಂತಿ ಸಿಕ್ಕಿದೆ. ಯಾರು ಎಷ್ಟೇ ಪ್ರಭಾವಿಯಾಗಿದ್ದರೂ, ಕಾನೂನು ಮತ್ತು ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು ಎಂಬುದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ. ಅಧಿಕಾರದ ಅಹಂಕಾರದಿಂದ ಕೊಲೆ ಮಾಡಿ ಬಚಾವಾಗಬಹುದು ಎಂಬ ಕನಸು ಕಂಡಿದ್ದ ರಾಜಕಾರಣಿಗೆ ನ್ಯಾಯಾಲಯವು ಕಠಿಣ ಸಂದೇಶ ರವಾನಿಸಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/former-minister-vinay-kulkarni-convicted-in-yogesh-gowda-murder-case-update-news-sat-videoshow-mtde3wt"/>
        </item>
        <item>
            <title><![CDATA[ಎಚ್‌ಡಿಕೆ ಚನ್ನಪಟ್ಟಣದಿಂದ ಸ್ಪರ್ಧಿಸಬೇಕೆಂಬುದು ಜನರ ಅಭಿಲಾಷೆ: ನಿಖಿಲ್ ಕುಮಾರಸ್ವಾಮಿ]]></title>
            <link>https://kannada.asianetnews.com/karnataka-districts/hd-kumaraswamy-channapatna-election-nikhil-kumaraswamy-statement-gvd/articleshow-2aioc9q</link>
            <guid isPermaLink="true">https://kannada.asianetnews.com/karnataka-districts/hd-kumaraswamy-channapatna-election-nikhil-kumaraswamy-statement-gvd/articleshow-2aioc9q</guid>
            <pubDate>Thu, 16 Apr 2026 18:29:41 +0530</pubDate>
            <description><![CDATA[&lt;p&gt;ಕುಮಾರಸ್ವಾಮಿಯವರು ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಬೇಡಿಕೆ ಇಟ್ಟಿದ್ದಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3ysn5htx309shf04ngrtkpf,imgname-jds-nikhil-kumaraswamy-dharmasthala-yatre-1756601423418.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚನ್ನಪಟ್ಟಣ (ಏ.16): &lt;/strong&gt;ಕುಮಾರಸ್ವಾಮಿಯವರು ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಇದು ಚನ್ನಪಟ್ಟಣ ಜನರ ಅಭಿಲಾಷೆ ಕೂಡ. ಈ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಕಾಲವೇ ತೀರ್ಮಾನ ಮಾಡುತ್ತದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.&lt;/p&gt;&lt;p&gt;ತಾಲೂಕಿನ ಖಾಸಗಿ ರೆಸಾರ್ಟ್&zwnj;ನಲ್ಲಿ ಆಯೋಜಿಸಿದ್ದ ಜೆಡಿಎಸ್ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಬಿಎಲ್&zwnj;ಎ-2ಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎಚ್&zwnj;ಡಿಕೆ 2023ರಲ್ಲಿ ಚನ್ನಪಟ್ಟಣದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅನಿರೀಕ್ಷಿತವಾಗಿ ಸಂಸತ್ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡಬೇಕಾಯ್ತು. ಮತ್ತೆ ರಾಜ್ಯ ರಾಜಕಾರಣಕ್ಕೆ ಒಂದಲ್ಲ ಒಂದು ದಿನ ಬರಲೇಬೇಕಾಗುತ್ತದೆ.&lt;/p&gt;&lt;p&gt;ಕುಮಾರಣ್ಣನಿಗೆ ಕಾರ್ಯಕರ್ತರು ಇಲ್ಲೇ ಸ್ಪರ್ಧೆ ಮಾಡಿ ಅಂತ ಬೇಡಿಕೆ ಇಟ್ಟಿರೋದಕ್ಕೆ ನಾನೇ ಸಾಕ್ಷಿ. ಇದು ಚನ್ನಪಟ್ಟಣ ಜನರ ಅಭಿಲಾಷೆ ಎಂದು ಹೇಳಿದರು. ಈ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಕಾಲವೇ ತೀರ್ಮಾನ ಮಾಡುತ್ತದೆ. ನಾವು ಎನ್&zwnj;ಡಿಎ ಮೈತ್ರಿ ಕೂಟದಲ್ಲಿದ್ದೇವೆ. ಯಾವ ಕ್ಷೇತ್ರವನ್ನು ಜೆಡಿಎಸ್&zwnj;ಗೆ ಬಿಟ್ಟು ಕೊಡುತ್ತಾರೆ. ಯಾರ್&zwj;ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದು 2028ಕ್ಕೆ ತೀರ್ಮಾನ ಆಗುತ್ತದೆ ಎಂದರು.&lt;/p&gt;&lt;p&gt;&lt;strong&gt;ಜನರ ಮನಸ್ಸಿನಲ್ಲಿ ಎಚ್ಡಿಕೆ ಸಿಎಂ ಆಗಬೇಕೆಂದಿದೆ:&lt;/strong&gt; ಮುಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ಪಕ್ಷದ ಕಾರ್ಯಕರ್ತರು, ರಾಜ್ಯದ ಜನರ ಮನಸ್ಸಿನಲ್ಲಿ ಕುಮಾರಸ್ವಾಮಿ ಸಿಎಂ ಆಗಬೇಕು ಎಂಬ ಭಾವನೆ ಇದೆ. ಈ ಬಗ್ಗೆ ಎನ್&zwnj;ಡಿಎ ಮೈತ್ರಿಕೂಟದ ರಾಷ್ಟ್ರ ಹಾಗೂ ರಾಜ್ಯ ನಾಯಕರು ತೀರ್ಮಾನ ಮಾಡುತ್ತಾರೆ. ಸಿಎಂ ಆಗೋ ವಿಚಾರ ಇನ್ನೂ ಬಹಳ ದೂರ ಇದೆ. ಕಾಲ ಬರುವವರೆಗೂ ಕಾದು ನೋಡೋಣ ಎಂದರು.&lt;/p&gt;&lt;h2&gt;&lt;strong&gt;ಶಾಸಕ ಎಸ್.ಟಿ. ಸೋಮಶೇಖರ್ ವಿರುದ್ಧ ಕಿಡಿ&lt;/strong&gt;&lt;/h2&gt;&lt;p&gt;ಚನ್ನಪಟ್ಟಣ ಕ್ಷೇತ್ರವನ್ನು ಎಚ್&zwnj;ಡಿಕೆ ಅಭಿವೃದ್ಧಿ ಮಾಡಿಲ್ಲ ಎಂದು ಎಸ್.ಟಿ. ಸೋಮಶೇಖರ್ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಯಶವಂತಪುರ ಕ್ಷೇತ್ರದ ಕಾರ್ಯಕರ್ತರೇ ಉತ್ತರ ಕೊಡುತ್ತಾರೆ. ಅಭಿವೃದ್ಧಿ ಆಧಾರದ ಮೇಲೆ ಓಟ್ ಹಾಕುತ್ತಿಲ್ಲ. ಒಂದು ವರ್ಗದ ಮುಗ್ದ ಜನರಿಗೆ ರಾತ್ರೋರಾತ್ರಿ ಕೂಪನ್, ಫುಡ್&zwnj;ಕಿಟ್ ಕೊಟ್ಟು ದಾರಿತಪ್ಪಿಸಿ ಓಟ್ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕರ ಸೋಮಶೇಖರ್ ವಿರುದ್ಧ ಕಿಡಿಕರಿದರು.&lt;/p&gt;&lt;p&gt;ಚನ್ನಪಟ್ಟಣದಲ್ಲಿ ಕುಮಾರಣ್ಣ ಏಳು ವರ್ಷದಲ್ಲಿ ₹1200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಎಸ್ ಟಿ. ಸೋಮಶೇಖರ್ ಅವರಿಗೆ ಮಾಹಿತಿ ಕೊರತೆಯಿದೆ. ಅವರಿಗೆ ನಾನೇ ಅಭಿವೃದ್ಧಿ ಲಿಸ್ಟ್&zwnj;ಗಳನ್ನು ಅವರ ಮನೆಗೆ ಕೊರಿಯರ್ ಮಾಡುತ್ತೇನೆ ಎಂದರು. ಜಮೀರ್ ಅಹ್ಮದ್ ಖಾನ್ ಜೆಡಿಎಸ್&zwnj;ಗೆ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಹೊಸ ವಿಷಯ. ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/hd-kumaraswamy-channapatna-election-nikhil-kumaraswamy-statement-gvd/articleshow-2aioc9q"/>
        </item>
        <item>
            <title><![CDATA[ಭದ್ರಾ ಅರಣ್ಯದಲ್ಲಿ 'ಬೆಂಗಾಲ್ ಟೈಗರ್' ರಾಜ ಗಾಂಭೀರ್ಯದ ನಡಿಗೆ: ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾದ ಶಾರ್ದೂಲ]]></title>
            <link>https://kannada.asianetnews.com/gallery/state/bengal-tiger-walks-majestically-in-bhadra-forest-shardul-caught-on-tourists-camera-1leek83</link>
            <guid isPermaLink="true">https://kannada.asianetnews.com/gallery/state/bengal-tiger-walks-majestically-in-bhadra-forest-shardul-caught-on-tourists-camera-1leek83</guid>
            <pubDate>Thu, 16 Apr 2026 18:20:13 +0530</pubDate>
            <description><![CDATA[&lt;p&gt;&lt;strong&gt;Bhadra Wildlife Sanctuary tiger sighting:&lt;/strong&gt; ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯ ದರ್ಶನವಾಗಿದೆ. ಕೆಮ್ಮಣ್ಣುಗುಂಡಿಯ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದ ಹುಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb52nc4hdmxnt7bzzya4jp7,imgname--bengal-tiger-walks-majestically-in-bhadra-forest--2--1776343405956.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Bhadra Wildlife Sanctuary tiger sighting:&lt;/strong&gt; ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯ ದರ್ಶನವಾಗಿದೆ. ಕೆಮ್ಮಣ್ಣುಗುಂಡಿಯ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದ ಹುಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ವನ್ಯಜೀವಿ ಚಟುವಟಿಕೆ ಹೆಚ್ಚಳವಾಗಿದ್ದು, ತರೀಕೆರೆ ತಾಲೂಕಿನ ಭದ್ರಾ ಅರಣ್ಯದಲ್ಲಿ ಮತ್ತೆ ಹುಲಿ ಚಲನವಲನ ಕಾಣಿಸಿಕೊಂಡಿದೆ&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೇವಲ ಒಂದು ದಿನ ಖಡ್ಗಮೃಗ ಮರಿಯ ಎಂದಾದರೂ ನೋಡಿದ್ದೀರಾ? IFS ಅಧಿಕಾರಿ ಹಂಚಿಕೊಂಡ ಅಪರೂಪದ ವೀಡಿಯೋ&lt;/strong&gt;&lt;/p&gt;&lt;img&gt;&lt;p&gt;ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಹುಲಿಯ ದರ್ಶನವಾಗಿದೆ. ಕೆಮ್ಮಣ್ಣುಗುಂಡಿಯ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ಹುಲಿ ಸಂಚಾರ ಕ್ಯಾಮರಾದಲ್ಲಿ ಸೆರೆಯಾಗಿದೆ.&lt;/p&gt;&lt;p&gt;ಪ್ರವಾಸಿಗರ ಕ್ಯಾಮೆರಾದಲ್ಲಿ ದೈತ್ಯಾಕಾರದ ಹುಲಿಯ ಓಡಾಟ ಸೆರೆಯಾಗಿದ್ದು, ಹುಲಿಯನ್ನು ನೋಡಿ ಸಫಾರಿಗೆ ತೆರಳಿದವರು ಸಂತಸಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ರಸ್ತೆ ಬದಿಯಲ್ಲಿ ನಿರ್ಭೀತಿಯಿಂದ ಹುಲಿಯೊಂದು ಓಡಾಡುತ್ತಿರುವುದನ್ನು ನೋಡಿದ ಪ್ರವಾಸಿಗರು ಹುಲಿಯನ್ನು ನೋಡಿ ಖುಷಿಪಡುತ್ತಿದ್ದಾರೆ. ಹುಲಿಯ ಓಡಾಟದಿಂದ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರಲ್ಲಿ ಸಂತಸ ಮನೆ ಮಾಡಿದೆ.&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಂಕೋಲಾ: ಹೆದ್ದಾರಿ 52ರಲ್ಲಿ ರಾಸಾಯನಿಕ ಟ್ಯಾಂಕರ್ ಸ್ಫೋಟ, ಚಾಲಕ ನಾಪತ್ತೆ&lt;/strong&gt;&lt;/p&gt;]]></content:encoded>
            <category>news</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/bengal-tiger-walks-majestically-in-bhadra-forest-shardul-caught-on-tourists-camera-1leek83"/>
        </item>
        <item>
            <title><![CDATA[ದೆಹಲಿ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ, ಪ್ರಯಾಣಿಕರು ಸೇಫ್‌!]]></title>
            <link>https://kannada.asianetnews.com/india-news/akasa-air-spicejet-plane-collision-delhi-airport-passengers-safe-investigation-san/articleshow-cnuvr6f</link>
            <guid isPermaLink="true">https://kannada.asianetnews.com/india-news/akasa-air-spicejet-plane-collision-delhi-airport-passengers-safe-investigation-san/articleshow-cnuvr6f</guid>
            <pubDate>Thu, 16 Apr 2026 18:18:33 +0530</pubDate>
            <description><![CDATA[ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಸ್ಪೈಸ್&zwnj;ಜೆಟ್ ಮತ್ತು ಆಕಾಶ ಏರ್ ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆ. ಈ ಘಟನೆಯಲ್ಲಿ ಎರಡೂ ವಿಮಾನಗಳಿಗೆ ಹಾನಿಯಾಗಿದ್ದರೂ, ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpb4zy1cbkdhmcksra1eyh3c,imgname-delhi-airport-1776343316524.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.16): &lt;/strong&gt;ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸ್ಪೈಸ್&zwnj;ಜೆಟ್ ಮತ್ತು ಆಕಾಶ ಏರ್ ಸಂಸ್ಥೆಯ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿದ್ದು, ಎರಡೂ ವಿಮಾನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ದೆಹಲಿಯಿಂದ ಹೈದರಾಬಾದ್&zwnj;ಗೆ ಹೊರಡಬೇಕಿದ್ದ ಆಕಾಶ ಏರ್ (ವಿಮಾನ ಸಂಖ್ಯೆ QP1406) ಪಾರ್ಕಿಂಗ್ ಬೇನಿಂದ ಹಿಂದಕ್ಕೆ ಚಲಿಸುತ್ತಿತ್ತು (Push Back). ಇದೇ ಸಮಯದಲ್ಲಿ ಲೇಹ್&zwnj;ನಿಂದ ದೆಹಲಿಗೆ ಆಗಮಿಸಿದ್ದ ಸ್ಪೈಸ್&zwnj;ಜೆಟ್ B737-700 ವಿಮಾನವು ಟ್ಯಾಕ್ಸಿವೇ ಮೂಲಕ ಗೇಟ್&zwnj;ನತ್ತ ಚಲಿಸುತ್ತಿತ್ತು. ಈ ವೇಳೆ ಎರಡೂ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ.&lt;/p&gt;&lt;h2&gt;&lt;strong&gt;ವಿಮಾನಗಳಿಗೆ ಭಾರಿ ಹಾನಿ&lt;/strong&gt;&lt;/h2&gt;&lt;p&gt;ಈ ಅಪಘಾತದಲ್ಲಿ ಸ್ಪೈಸ್&zwnj;ಜೆಟ್ ವಿಮಾನದ ಬಲ ರೆಕ್ಕೆಯ ತುದಿ (Right Winglet) ಮುರಿದುಹೋಗಿದೆ. ಇತ್ತ ಆಕಾಶ ಏರ್ ವಿಮಾನದ Left Horizontal Stabilizer ಹಾನಿಯಾಗಿದೆ. ಘಟನೆ ನಡೆದ ತಕ್ಷಣ ಎಚ್ಚೆತ್ತ ಆನ್&zwnj; ಗ್ರೌಂಡ್&zwnj; ಸಿಬ್ಬಂದಿ, ಎರಡೂ ವಿಮಾನಗಳಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿಮಾನಗಳು ಗ್ರೌಂಡೆಡ್; ತನಿಖೆಗೆ ಆದೇಶ&lt;/strong&gt;&lt;/h2&gt;&lt;p&gt;ಅಪಘಾತದ ಬೆನ್ನಲ್ಲೇ ಸ್ಪೈಸ್&zwnj;ಜೆಟ್ ಮತ್ತು ಆಕಾಶ ಏರ್ ಎರಡೂ ವಿಮಾನಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ನಿಲ್ಲಿಸಲಾಗಿದೆ. ಅಂದರೆ ಈ ವಿಮಾನಗಳು ದುರಸ್ತಿಯಾಗುವವರೆಗೂ ಮುಂದಿನ ಹಾರಾಟ ನಡೆಸುವಂತಿಲ್ಲ. ಸದ್ಯ ಈ ಭೀಕರ ಘಟನೆಗೆ ಕಾರಣವೇನು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.&lt;/p&gt;&lt;h2&gt;&lt;strong&gt;ಆಕಾಶ ಏರ್&zwnj;ಲೈನ್ಸ್ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ಈ ಕುರಿತು ಪ್ರತಿಕ್ರಿಯಿಸಿರುವ ಆಕಾಶ ಏರ್&zwnj;ಲೈನ್ಸ್ ವಕ್ತಾರರು, &quot;ಏಪ್ರಿಲ್ 16, 2026ರಂದು ದೆಹಲಿಯಿಂದ ಹೈದರಾಬಾದ್&zwnj;ಗೆ ಹೊರಡಬೇಕಿದ್ದ QP 1406 ವಿಮಾನವು ಪಾರ್ಕಿಂಗ್ ಪ್ರದೇಶದಲ್ಲಿ ತಾಂತ್ರಿಕ ಕಾರಣದಿಂದ ಮರಳಬೇಕಾಯಿತು. ಹೈದರಾಬಾದ್&zwnj;ಗೆ ತೆರಳಬೇಕಿದ್ದ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಬೇಗ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲು ನಮ್ಮ ತಂಡ ಶ್ರಮಿಸುತ್ತಿದೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Akasa &amp;amp; SpiceJet planes hit each other @DelhiAirport&amp;nbsp;Or as some would say &quot;came in contact&quot;@DGCAIndia statement awaitedps : SpiceJet hasn't paid even Feb salaries yet, some got evicted from their homes. Being helped by sr. managers who are giving from their own savings✈️ pic.twitter.com/6JCPLbj19r&lt;/p&gt;&lt;p&gt;&mdash; Tarun Shukla (@shukla_tarun) April 16, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/akasa-air-spicejet-plane-collision-delhi-airport-passengers-safe-investigation-san/articleshow-cnuvr6f"/>
        </item>
        <item>
            <title><![CDATA[ಸಂಪುಟ ಪುನಾರಚನೆ ಹೈಕಮಾಂಡ್‌ ನಾಯಕರು ತೀರ್ಮಾನಿಸುತ್ತಾರೆ: ಸಚಿವ ರಾಮಲಿಂಗಾರೆಡ್ಡಿ]]></title>
            <link>https://kannada.asianetnews.com/karnataka-districts/karnataka-cabinet-reshuffle-minister-ramalinga-reddy-statement-gvd/articleshow-whp74g8</link>
            <guid isPermaLink="true">https://kannada.asianetnews.com/karnataka-districts/karnataka-cabinet-reshuffle-minister-ramalinga-reddy-statement-gvd/articleshow-whp74g8</guid>
            <pubDate>Thu, 16 Apr 2026 18:15:57 +0530</pubDate>
            <description><![CDATA[&lt;p&gt;ಸಂಪುಟ ಪುನಾರಚನೆಯಾಗಿ ಈಗ ಮೂರು ವರ್ಷಗಳಾಗುತ್ತಿದ್ದು, ಶಾಸಕರು ಸಚಿವ ಸ್ಥಾನ ಕೇಳುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್&zwnj; ನಾಯಕರು ತೀರ್ಮಾನಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2r8h86wx9cj02k188dzrdaa,imgname-minister-ramalinga-reddy-on-dharmasthala-case-1755308400860.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.16):&lt;/strong&gt; ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಎರಡೂವರೆ ವರ್ಷಕ್ಕೆ ಸಚಿವ ಸಂಪುಟ ಪುನಾರಚನೆಯಾಗುತ್ತದೆ ಎಂದು ಬಹುತೇಕರು ತಿಳಿದಿದ್ದರು. ಈಗ ಮೂರು ವರ್ಷಗಳಾಗುತ್ತಿದ್ದು, ಶಾಸಕರು ಸಚಿವ ಸ್ಥಾನ ಕೇಳುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್&zwnj; ನಾಯಕರು ತೀರ್ಮಾನಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನಮ್ಮ ಸರ್ಕಾರ ಬಂದು ಮೂರು ವರ್ಷಗಳಾಗುತ್ತಿದೆ.&lt;/p&gt;&lt;p&gt;ಎರಡೂವರೆ ವರ್ಷಕ್ಕೆ ಸಚಿವ ಸಂಪುಟ ಪುನಾರಚನೆಯಾಗುತ್ತದೆ ಎಂದು ಬಹುತೇಕರು ತಿಳಿದಿದ್ದರು. ಹೀಗಾಗಿ ಶಾಸಕರು ಸಹಜವಾಗಿ ಸಚಿವರಾಗಬೇಕು ಎಂಬ ಆಸೆಯಿಂದಿದ್ದಾರೆ. ಅವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ, ಈ ವಿಚಾರವಾಗಿ ಯಾರೂ ಮಾಧ್ಯಮಗಳ ಮುಂದೆ ಮಾತನಾಡಬಾರದು. ನಮ್ಮ ನಾಯಕರಾದ ರಾಹುಲ್&zwnj; ಗಾಂಧಿ, ಎಐಸಿಸಿ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಸೇರಿ ಇತರ ನಾಯಕರನ್ನು ಶಾಸಕರು ಭೇಟಿ ಮಾಡಿದರೆ ತಪ್ಪೇನು ಇಲ್ಲ ಎಂದರು.&lt;/p&gt;&lt;p&gt;ಸಚಿವ ಸಂಪುಟ ಪುನಾರಚನೆ ಮಾಡಿದರೆ ಹಿರಿಯರನ್ನು ಸಂಪುಟದಿಂದ ಕೈಬಿಡುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಹೊಸಬರು ಸಂಪುಟಕ್ಕೆ ಬರಬೇಕಾದರೆ ಈಗಿರುವ ಕೆಲವರು ಹೊರಗೆ ಹೋಗಬೇಕಾಗುತ್ತದೆ. ಯಾರನ್ನು ಬಿಡಬೇಕು. ಯಾರನ್ನು ತೆಗೆದುಕೊಳ್ಳಬೇಕು ಎನ್ನುವುದು ಹೈಕಮಾಂಡ್&zwnj; ನಾಯಕರಿಗೆ ಬಿಟ್ಟಿದ್ದು ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಸೋಲೂರು ನೆಲಮಂಗಲ ತಾಲೂಕಿಗೆ ಅಧಿಕೃತ ಸೇರ್ಪಡೆ&lt;/strong&gt;&lt;/h2&gt;&lt;p&gt;ಸೋಲೂರು ಆಡಳಿತಾತ್ಮಕವಾಗಿ ಮಾಗಡಿ ತಾಲೂಕಿನಿಂದ ನೆಲಮಂಗಲ ತಾಲೂಕಿಗೆ ಅಧಿಕೃತ ಸೇರ್ಪಡೆಯಾಗಿದ್ದು, ಶಾಸಕ ಎನ್.ಶ್ರೀನಿವಾಸ್&zwj;ರವರ ನಿರಂತರ ಪ್ರಯತ್ನದ ಫಲವಾಗಿ ಮಾತ್ರ ಈ ಕೆಲಸವಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ನಗರದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸೋಲೂರು ಸೇರ್ಪಡೆ ಹಾಗೂ ದಾಖಲಾತಿಗಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.&lt;/p&gt;&lt;p&gt;ನೆಲಮಂಗಲಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಹಳಷ್ಟು ಯೋಜನೆಗಳನ್ನು ನೀಡಿದೆ. ಶಾಸಕರ ಕ್ರೀಯಾಶೀಲತೆಗೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದೆ. ಸೋಲೂರು ಸೇರ್ಪಡೆಯಲ್ಲಿ ಸಚಿವರು, ಸರ್ಕಾರದ ಪ್ರಯತ್ನ ಶೇ.10ರಷ್ಟಿದ್ದರೆ, ಶಾಸಕ ಶ್ರೀನಿವಾಸ್&zwnj; ಪ್ರಯತ್ನ ಶೇ.90ರಷ್ಟಿದೆ. ಸೋಲೂರು ದಾಖಲಾತಿಗಳು ನೆಲಮಂಗಲಕ್ಕೆ ಹಸ್ತಾಂತರವಾಗಿದ್ದು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳು ಶೀಘ್ರದಲ್ಲಿ ನೆಲಮಂಗಲಕ್ಕೆ ಬರಲಿವೆ ಎಂದು ಹೇಳಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/karnataka-cabinet-reshuffle-minister-ramalinga-reddy-statement-gvd/articleshow-whp74g8"/>
        </item>
    </channel>
</rss>
