<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 13 Jul 2026 22:56:23 +0530</lastBuildDate>
        <atom:link href="https://kannada.asianetnews.com/rss/news" rel="self" type="application/rss+xml"/>
        <item>
            <title><![CDATA[Trump Tax: ಹೊರ್ಮುಜ್ ಜಲಸಂಧಿ ಮೇಲೆ ಶೇ. 20 ತೆರಿಗೆ; ಭಾರತದ ಎಲ್‌ಪಿಜಿ ಪೂರೈಕೆಗೆ ಕುತ್ತು?]]></title>
            <link>https://kannada.asianetnews.com/world-news/trump-proposes-20-percent-tax-on-hormuz-strait-threatening-india-lpg-supply/articleshow-t6pgd4h</link>
            <guid isPermaLink="true">https://kannada.asianetnews.com/world-news/trump-proposes-20-percent-tax-on-hormuz-strait-threatening-india-lpg-supply/articleshow-t6pgd4h</guid>
            <pubDate>Mon, 13 Jul 2026 22:56:18 +0530</pubDate>
            <description><![CDATA[&lt;p&gt;ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳ ಮೇಲೆ ಶೇ. 20ರಷ್ಟು ಭದ್ರತಾ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇರಾನ್&zwnj;ಗೆ ಪಾಠ ಕಲಿಸುವ ಈ ಕ್ರಮದಿಂದ ಭಾರತದಲ್ಲಿ ಎಲ್&zwnj;ಪಿಜಿ ಸಿಲಿಂಡರ್&zwnj;ಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx86hq1tqyabb6vq5p2vyssg,imgname-trump-iran-threat-1000-missiles-assassination-warning-middle-east-tensions-1783760477242.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕ-ಇರಾನ್ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, ಮತ್ತೆ ಜಗತ್ತಿನ ಆರ್ಥಿಕತೆ ಅಲ್ಲೋಲ ಕಲ್ಲೋಲವಾಗುವ ಬಗ್ಗೆ ಚಿಂತೆಗೀಡುಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald trump) ಅವರು ತಮ್ಮನ್ನು ತಾವೇ 'ಹೊರ್ಮುಜ್ ಜಲಸಂಧಿಯ ರಕ್ಷಕ' (Guardian of the Hormuz Strait) ಎಂದು ಘೋಷಿಸಿಕೊಂಡಿದ್ದು, ಜಾಗತಿಕ ವಾಣಿಜ್ಯ ವಲಯದಲ್ಲಿ ತಲ್ಲಣ ಮೂಡಿಸುವಂತಹ ಆದೇಶವೊಂದನ್ನು ಹೊರಡಿಸಿದ್ದಾರೆ.&amp;nbsp;&lt;/p&gt;&lt;h2&gt;ಟ್ರಂಪ್&zwnj;ನ ಈ ನಿರ್ಧಾರ ಜಾಗತಿಕವಾಗಿ ಪರಿಣಾಮ ಬೀರಲಿದೆ&lt;/h2&gt;&lt;p&gt;ಇದರ ಅನ್ವಯ ಇನ್ಮುಂದೆ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿಯೊಂದು ವಾಣಿಜ್ಯ ಸರಕು ಮತ್ತು ತೈಲ ಟ್ಯಾಂಕರ್&zwnj;ಗಳ ಮೇಲೆ ಶೇ. 20ರಷ್ಟು ಭಾರಿ ಭದ್ರತಾ ಶುಲ್ಕವನ್ನು ಹೇರಲಾಗುವುದು ಎಂದು ಘೋಷಿಸಿದ್ದಾರೆ. ಈ ಅನಿರೀಕ್ಷಿತ ಕ್ರಮದಿಂದ ಇರಾನ್&zwnj;ಗೆ ಶಿಕ್ಷೆ ನೀಡುವ ಮಾರ್ಗವೆಂದು ಹೇಳಲಾಗುತ್ತಿದೆ ಆದರೆ, ಈ ಒಂದು ನಿರ್ಧಾರದಿಂದ ಜಾಗತಿಕ ಮಾರುಕಟ್ಟೆಗಳು ಅಕ್ಷರಶಃ ಕಂಗಾಲಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದು ಅಮೆರಿಕದ 'ರಕ್ಷಕ' ಮನೋಭಾವದ ತೆರಿಗೆಯಾಗಲಿದ್ದು, ಇದರ ಪರಿಣಾಮ ಮಾತ್ರ ಜಗತ್ತಿನಾದ್ಯಂತ ಆಗಲಿದೆ.&lt;/p&gt;&lt;h3&gt;ಭಾರತದ ಅಡುಗೆ ಮನೆಗೂ ತಟ್ಟಲಿದೆ ಬಿಸಿ&lt;/h3&gt;&lt;p&gt;ಟ್ರಂಪ್ ಅವರ ಈ 'ತೆರಿಗೆ ದಾಳಿ'ಯ ನೇರ ಪರಿಣಾಮ ಭಾರತದ ಮೇಲೆ ಆಗುವ ಸಾಧ್ಯತೆ ದಟ್ಟವಾಗಿದೆ. ಗಲ್ಫ್ ರಾಷ್ಟ್ರಗಳಿಂದ ಬರುವ ಹಡಗುಗಳ ಮೇಲೆ ಈ ತೆರಿಗೆ ಅನ್ವಯವಾಗುವುದರಿಂದ, ಭಾರತಕ್ಕೆ ಆಮದು ಆಗುವ ವಸ್ತುಗಳ ಬೆಲೆ ಏರಿಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಇದು ಭಾರತದ ಆರ್ಥಿಕತೆಯ ಮೇಲೆ ಹೊಸದೊಂದು ಒತ್ತಡವನ್ನು ಸೃಷ್ಟಿಸಲಿದೆ. ವಿಶೇಷವಾಗಿ, ಭಾರತದ ಕೋಟ್ಯಂತರ ಮನೆಗಳ ಅಡುಗೆ ಮನೆಯ ಬಜೆಟ್&zwnj;ಗೆ ಇದು ನೇರವಾಗಿ ಕತ್ತರಿ ಹಾಕಲಿದೆ. ಈ ತೆರಿಗೆಯಿಂದಾಗಿ ಭಾರತದಲ್ಲಿ ಎಲ್&zwnj;ಪಿಜಿ (LPG) ಸಿಲಿಂಡರ್&zwnj;ಗಳ ಬೆಲೆಗಳು ಗಗನಕ್ಕೇರುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲ, ಅಡುಗೆ ಅನಿಲದ ಸಂಪೂರ್ಣ ಪೂರೈಕೆ ಸರಪಳಿಯೇ ಬುಡಮೇಲಾಗುವ ಅಪಾಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;p&gt;ಒಂದು ಕಡೆ ಇರಾನ್&zwnj;ಗೆ ಬಿಸಿ ಮುಟ್ಟಿಸುವ ಯತ್ನವಾದರೆ, ಇನ್ನೊಂದೆಡೆ ಭಾರತದಂತಹ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಇದು ದೊಡ್ಡ ಹೊಡೆತ ನೀಡಲಿದೆ. ಟ್ರಂಪ್ ಅವರ ಹುಚ್ಚುತನದ ನಿರ್ಧಾರವು ಜಾಗತಿಕ ವಾಣಿಜ್ಯ ಸಮೀಕರಣಗಳನ್ನೇ ಬದಲಿಸುವ ಸೂಚನೆ ನೀಡಿದ್ದು, ಮುಂದೇನಾಗಲಿದೆಯೋ ಎಂಬ ಆತಂಕವಂತೂ ಇದೆ..&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/world-news/trump-proposes-20-percent-tax-on-hormuz-strait-threatening-india-lpg-supply/articleshow-t6pgd4h"/>
        </item>
        <item>
            <title><![CDATA[Rohit Chandel Arrest: ಕಿರುತೆರೆ ನಟ ರೋಹಿತ್ ಚಂದೆಲ್ ಅರೆಸ್ಟ್; ಮುಂಬೈನಲ್ಲಿ ಆ ಆರೋಪದಲ್ಲಿ ಸಿಕ್ಕಬಿದ್ದ ಈ ನಟ!]]></title>
            <link>https://kannada.asianetnews.com/gallery/tv-talk/kashibai-bajirao-ballal-fame-hindi-television-actor-rohit-chandel-has-been-arrested-by-the-mumbai-police-8ad1bro</link>
            <guid isPermaLink="true">https://kannada.asianetnews.com/gallery/tv-talk/kashibai-bajirao-ballal-fame-hindi-television-actor-rohit-chandel-has-been-arrested-by-the-mumbai-police-8ad1bro</guid>
            <pubDate>Mon, 13 Jul 2026 22:43:02 +0530</pubDate>
            <description><![CDATA[&lt;p&gt;ಆರೋಪಿ ರೋಹಿತ್ ಚಂದೆಲ್ ನಿವಾಸದ ಮೇಲೆ ದಾಳಿ ನಡೆಸಿ, ಪೊಲೀಸರು ಜುಲೈ 10ರ ಶುಕ್ರವಾರದಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78 ಮತ್ತು 115(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxe79qg20nqfp9tht8hza1f8,imgname-rohit-chandel-1783962590722.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರೋಪಿ ರೋಹಿತ್ ಚಂದೆಲ್ ನಿವಾಸದ ಮೇಲೆ ದಾಳಿ ನಡೆಸಿ, ಪೊಲೀಸರು ಜುಲೈ 10ರ ಶುಕ್ರವಾರದಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78 ಮತ್ತು 115(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;ಕಿರುತೆರೆಯ 'ಕಾಶಿಬಾಯಿ ಬಾಜೀರಾವ್ ಬಲ್ಲಾಳ್' ಮತ್ತು 'ಪಾಂಡ್ಯ ಸ್ಟೋರ್' ನಂತಹ ಪ್ರಸಿದ್ಧ ಹಿಂದಿ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ಜನಪ್ರಿಯ ಕಿರುತೆರೆ ನಟ ರೋಹಿತ್ ಚಂದೆಲ್ (Rohit Chandel) ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಹಿಂಬಾಲಿಸಿದ ಗಂಭೀರ ಆರೋಪ ನಟನ ಮೇಲಿದ್ದು, ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಇದೀಗ ಪ್ರಗತಿಯಲ್ಲಿದೆ.&lt;/p&gt;&lt;img&gt;&lt;p&gt;ವಿವಿಧ ನಂಬರ್&zwnj;ಗಳಿಂದ ಕರೆ; ಬಾಲಕಿಗೆ ಕಿರುಕುಳ&lt;/p&gt;&lt;p&gt;ಮುಂಬೈನ ಪೂರ್ವ ಉಪನಗರದ ಅಪ್ರಾಪ್ತ ಬಾಲಕಿಯೊಬ್ಬರು ರೋಹಿತ್ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ದಾರೆ. ರೋಹಿತ್ ಚಂದೆಲ್ ತನ್ನ ಮೊಬೈಲ್ ಫೋನ್&zwnj;ಗೆ ಪದೇಪದೇ ಕರೆ ಮಾಡುತ್ತಿದ್ದಲ್ಲದೆ, ವಿವಿಧ ಫೋನ್ ನಂಬರ್&zwnj;ಗಳ ಮೂಲಕ ಸಂಪರ್ಕಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಬಾಲಕಿ ದೂರಿನಲ್ಲಿ ತನ್ನ ತಿಳಿಸಿದ್ದಾಳೆ. ಜೊತೆಗೆ, ಮನೆಯ ಬಳಿ ತನ್ನನ್ನು ಹಿಂಬಾಲಿಸಿಕೊಂಡು ಬಂದು ದೈಹಿಕ ಹಿಂಸೆ ಕೂಡ ನಡೆಸಿದ್ದಾನೆ ಎಂದು ಆ ಅಪ್ರಾಪ್ತ ಬಾಲಕಿ ದೂರಿನಲ್ಲಿ ಬರೆದಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ವಾರ, ಜುಲೈ 5ರಂದು ನಟ ರೋಹಿತ್ ತನ್ನ ಮನೆಯ ಬಳಿ ತನ್ನನ್ನು ಹಿಂಬಾಲಿಸಿಕೊಂಡು ಬಂದು, ನನ್ನನ್ನು ತಡೆದು, ಅಸಭ್ಯವಾಗಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಬಾಲಕಿ ಗಂಭೀರವಾಗಿ ಆರೋಪಿಸಿದ್ದಾಳೆ. ಬಂಧಿತ ಆರೋಪಿ ರೋಹಿತ್ ಹಾಗೂ ಸಂತ್ರಸ್ತ ಬಾಲಕಿಗೆ ಮುಂಚಿನಿಂದಲೇ ಪರಿಚಯವಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ಎಷ್ಟು ವರ್ಷಗಳಿಂದ ಆ ಬಾಲಕಿಯ ಪರಿಚಯ ರೋಹಿತ್&zwnj;ಗೆ ಇತ್ತು, ಅವರಿಬ್ಬರ ನಡುವೆ ವಿಶೇಷವಾದ ಸಂಬಂಧವೇನಾದರೂ ಇತ್ತ? ಈ ಎಲ್ಲಾ ವಿಷಯಗಳೂ ತನಿಖೆ ಬಳಿಕ ತಿಳಿದುಬರಬೇಕಿದೆ. ಸದ್ಯಕ್ಕೆ ಪೋಕ್ಸೋ ಕಾಯಿದೆಯಡೊ ತನಿಖೆ ಚುರುಕುಗೊಂಡಿದೆ.&lt;/p&gt;&lt;p&gt;ಪೊಲೀಸ್ ವಶಕ್ಕೆ ರೋಹಿತ್&zwnj; ಚಂದೆಲ್&hellip;..&lt;/p&gt;&lt;p&gt;ಮುಂದೆ ನೋಡಿ&hellip;&lt;/p&gt;&lt;img&gt;&lt;p&gt;ಬಾಲಕಿ ನೀಡಿದ ಕಂಪ್ಲೇಂಟ್ ಆಧರಿಸಿ ದಹಿಸರ್&zwnj;ನಲ್ಲಿದ್ದ ಆರೋಪಿ ರೋಹಿತ್ ಚಂದೆಲ್ ನಿವಾಸದ ಮೇಲೆ ದಾಳಿ ನಡೆಸಿ, ಪೊಲೀಸರು ಜುಲೈ 10ರ ಶುಕ್ರವಾರದಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78 ಮತ್ತು 115(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ತದನಂತರ ಆರೋಪಿಯನ್ನು ವಿಶೇಷ ಪೋಕ್ಸೋ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ರೋಹಿತ್&zwnj; ಚಂದೆಲ್&zwnj;ನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ. ಸದ್ಯ ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.&lt;/p&gt;&lt;img&gt;&lt;p&gt;ಕ್ರಿಕೆಟರ್ ಆಗಿದ್ದ ರೋಹಿತ್&lt;/p&gt;&lt;p&gt;ರೋಹಿತ್ ಚಂದೆಲ್ ಅವರು ಕಿರುತೆರೆಯಲ್ಲಿ ಸಾಕಷ್ಟು ಫೇಮಸ್ ಆಗುವ ಮೊದಲು ಕಿರಕೆಟರ್ ಆಗಿದ್ದರು. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಪರ ಕ್ರಿಕೆಟ್ ಆಡಿದ್ದರು ಮತ್ತು ಮಾರ್ಷಲ್ ಆರ್ಟ್ಸ್&zwnj;ನಲ್ಲೂ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಆ ಬಳಿಕ, 'ಕಾಶಿಬಾಯಿ ಬಾಜೀರಾವ್ ಬಲ್ಲಾಳ್' ನಲ್ಲಿ ಬಾಜೀರಾವ್ ಪಾತ್ರದ ಮೂಲಕ ಹಾಗೂ 'ಪಾಂಡ್ಯ ಸ್ಟೋರ್' ಧಾರಾವಾಹಿಯಲ್ಲಿ ಧವಳ್ ಮಕ್ವಾನಾ ಎಂಬ ಪ್ರಮುಖ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ಸೆಳೆದು ಮನೆಮಾತಾಗಿದ್ದರು. ಇನ್ನೇನು ಸಿನಿಮಾರಂಗಕ್ಕೆ ಕಾಲಿಡುವ ತಯಾರಿಯಲ್ಲಿದ್ದರು ಎನ್ನಲಾಗಿದೆ. ಅಷ್ಟರಲ್ಲಿ, ಬಂದಿರುವ ಇವರ ಬಂಧನದ ಸುದ್ದಿ ಕಿರುತೆರೆ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/tv-talk/kashibai-bajirao-ballal-fame-hindi-television-actor-rohit-chandel-has-been-arrested-by-the-mumbai-police-8ad1bro"/>
        </item>
        <item>
            <title><![CDATA[ಒಂದೇ ವೇದಿಕೆಯಲ್ಲಿ ಹಳೆ ವಿದ್ಯಾರ್ಥಿಗಳು, ಶಿಕ್ಷಕರು: ಸೈನಿಕ ಶಾಲೆ ಕೊಡಗಿನಲ್ಲಿ ಸಂಭ್ರಮದ ವಾತಾವರಣ]]></title>
            <link>https://kannada.asianetnews.com/karnataka-districts/sainik-school-kodagu-kodaac-2026-alumni-meet-awards-ceremony-gvd/articleshow-9sm41kx</link>
            <guid isPermaLink="true">https://kannada.asianetnews.com/karnataka-districts/sainik-school-kodagu-kodaac-2026-alumni-meet-awards-ceremony-gvd/articleshow-9sm41kx</guid>
            <pubDate>Mon, 13 Jul 2026 22:42:39 +0530</pubDate>
            <description><![CDATA[&lt;p&gt;Sainik School Karnataka: ಕೂಡಿಗೆಯಲ್ಲಿ &amp;nbsp;ಇರುವ ಸೈನಿಕ ಶಾಲೆ ಕೊಡಗು ತನ್ನ 7ನೇ ಹಳೆ ವಿದ್ಯಾರ್ಥಿಗಳ ಸಮಾವೇಶವಾದ 'ಕೋಡಾಕ್' (KODAAC) ಕಾರ್ಯಕ್ರಮ ಅರ್ಥಪೂರ್ಣವಾಗಿ &amp;nbsp;ನೆರೆವೇರಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxe5t97jsvb4cz35e246grf7,imgname-vj-1783961036018.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜು.13):&lt;/strong&gt; ಕೂಡಿಗೆಯಲ್ಲಿ ಇರುವ ಸೈನಿಕ ಶಾಲೆ ಕೊಡಗು ತನ್ನ 7ನೇ ಹಳೆ ವಿದ್ಯಾರ್ಥಿಗಳ ಸಮಾವೇಶವಾದ 'ಕೋಡಾಕ್' (KODAAC) ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರೆವೇರಿತು. ಶಾಲೆಯ ಮಾಜಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಸ್ತುತ ಶಾಲಾ ಸಿಬ್ಬಂದಿ ವರ್ಗದವರು ಸೌಹಾರ್ದತೆ, ಸಂಪ್ರದಾಯ ಮತ್ತು ಸಾಧನೆಗಳನ್ನು ಹಂಚಿಕೊಳ್ಳಲು ಒಂದೆಡೆ ಸೇರಿದ್ದರು. ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಬ್ಯಾಚ್&zwnj;ಗಳ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.&lt;/p&gt;&lt;p&gt;ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಶ್ರೀಮತಿ ದಿವ್ಯಾ ಸಿಂಗ್ ಮತ್ತು ಕೋಡಾಕ್ ಅಸೋಸಿಯೇಷನ್( ಹಳೇ ವಿದ್ಯಾರ್ಥಿಗಳ ಸಂಘದ) ಅಧ್ಯಕ್ಷರಾದ ಶ್ರೀ ಶಫೀವುಲ್ಲಾ ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವು ಹಳೆ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕೆಡೆಟ್ ನಿಶಾಂತ್ ನಾರಾಯಣ್ ಸ್ವಾಗತ ಕೋರಿದರು ಮತ್ತು 11ನೇ ತರಗತಿಯ ಕೆಡೆಟ್ ಗಿತೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಶ್ರೀ ಶಫೀವುಲ್ಲಾ ಅವರು, ಸಂಸ್ಥೆಯೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ಮತ್ತು ಶಾಲೆಯ ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳ ಸಂಘ ಕೈಗೊಂಡಿರುವ ವಿವಿಧ ಕಾರ್ಯಗಳ ಕುರಿತು ವಿವರಿಸಿದರು.&lt;/p&gt;&lt;p&gt;ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆಡೆಟ್&zwnj;ಗಳು ಸುಮಧುರ ಗೀತಗಾಯನ, ರಾಮಾಯಣದ ಪ್ರಸಂಗಗಳನ್ನು ಬಿಂಬಿಸುವ ಆಕರ್ಷಕ ನೃತ್ಯ ಮತ್ತು ಚಂಡೆ ಮೇಳವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭವೂ ನಡೆಯಿತು. ಕರ್ನಲ್ ಅಮರ್ ಜೀತ್ ಸಿಂಗ್ ಅವರು 2025-26ನೇ ಸಾಲಿನ ಅಕಾಡೆಮಿಕ್ ಸಾಧನಾ ಟ್ರೋಫಿ, ಯುಪಿಎಸ್&zwnj;ಸಿ ಪರೀಕ್ಷೆಯ ಸಾಧನಾ ಟ್ರೋಫಿ ಮತ್ತು ಒಟ್ಟಾರೆ ಶ್ರೇಷ್ಠತೆಗಾಗಿ ಕಠಾರಿ ಹೌಸ್&zwnj;ಗೆ ಕಾಕ್ ಹೌಸ್ ಟ್ರೋಫಿಯನ್ನು ಪ್ರದಾನ ಮಾಡಿದರು. ಕೃತಜ್ಞತೆಯ ಸಂಕೇತವಾಗಿ ಶ್ರೀ ಶಫೀವುಲ್ಲಾ ಅವರು ಪ್ರಾಂಶುಪಾಲರಿಗೆ ಸ್ಮರಣಿಕೆಯನ್ನು ನೀಡಿದರು.&lt;/p&gt;&lt;p&gt;ಅಲ್ಲದೆ, ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ದಕ್ಷಿಣಾಮೂರ್ತಿ ಮತ್ತು ಆಗಸ್ಟ್&zwnj;ನಲ್ಲಿ ನಿವೃತ್ತರಾಗಲಿರುವ ಸಾಮಾನ್ಯ ನೌಕರ ಶ್ರೀ ಮಲ್ಲಿಕಾರ್ಜುನ್ ಅವರ ಸೇವೆಯನ್ನು ಗುರುತಿಸಿ ಹಳೆ ವಿದ್ಯಾರ್ಥಿಗಳ ಸಂಘವು ಸನ್ಮಾನಿಸಿತು. ಪ್ರಾಂಶುಪಾಲರು ಕೋಡಾಕ್&zwnj;ನ ಪದಾಧಿಕಾರಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ತಮ್ಮ ಭಾಷಣದಲ್ಲಿ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಹಳೆ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಸಂಸ್ಥೆಯೊಂದಿಗಿನ ಅವರ ನಿರಂತರ ಸಂಬಂಧವನ್ನು ಶ್ಲಾಘಿಸಿದರು.&lt;/p&gt;&lt;h2&gt;&lt;strong&gt;ಮರುನಾಮಕರಣ ಮಾಡುವ ಪ್ರಸ್ತಾವನೆ&lt;/strong&gt;&lt;/h2&gt;&lt;p&gt;ಮಹಿಳಾ ಹಳೆ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸಲು ಸಂಘದ ಹೆಸರನ್ನು 'ಓಲ್ಡ್ ಬಾಯ್ಸ್ ಅಂಡ್ ಗರ್ಲ್ಸ್ ಅಸೋಸಿಯೇಷನ್' (OBGA) ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಅವರು ಮಂಡಿಸಿದರು. ಸೈನಿಕ ಶಾಲೆ ಕೊಡಗು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸೈನಿಕ ಶಾಲೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ ಅವರು, ಶಾಲೆಯು ಚಾರಿತ್ರ್ಯ ನಿರ್ಮಾಣ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಒತ್ತಿ ಹೇಳಿದರು. ಭಾರತೀಯ ನೌಕಾಪಡೆಯ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್ ಅವರು ಸೆಪ್ಟೆಂಬರ್&zwnj;ನಲ್ಲಿ ಆಡಳಿತಾಧಿಕಾರಿಯಾಗಿ ಸೇರಲಿದ್ದಾರೆ ಎಂಬ ವಿಷಯವನ್ನು ಹಂಚಿಕೊಂಡರು.&lt;/p&gt;&lt;p&gt;ಹಳೆ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಶ್ರೀ ಸುನೀಲ್ ಕರಳೆ, ಶಾಲೆಗೆ ಶ್ರೀ ದಕ್ಷಿಣಾಮೂರ್ತಿ ಮತ್ತು ಶ್ರೀ ಮಲ್ಲಿಕಾರ್ಜುನ್ ನೀಡಿದ ಕೊಡುಗೆಗಳಿಗಾಗಿ ಕೃತಜ್ಞತೆ ಸಲ್ಲಿಸಿದರು. ಆಚರಣೆಯು ಹಳೆ ವಿದ್ಯಾರ್ಥಿಗಳು ಮತ್ತು ಶಾಲಾ ತಂಡಗಳ ನಡುವೆ ನಡೆದ ಸೌಹಾರ್ದ ಫುಟ್&zwnj;ಬಾಲ್ ಮತ್ತು ಹಾಕಿ ಪಂದ್ಯಗಳೊಂದಿಗೆ ಮುಕ್ತಾಯಗೊಂಡಿತು. ಕೆಡೆಟ್ ಚಿನ್ಮಯ ಧನ್ಯವಾದ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕ ಶ್ರೀ ಎನ್. ವಿಬಿನ್ ಕುಮಾರ್, ಬೋಧಕ ಮತ್ತು ಆಡಳಿತ ಸಿಬ್ಬಂದಿ, ಎನ್&zwnj;ಸಿಸಿ ಪಿಐ ಸಿಬ್ಬಂದಿ ಮತ್ತು ಕೆಡೆಟ್&zwnj;ಗಳು ಭಾಗವಹಿಸಿದ್ದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sainik-school-kodagu-kodaac-2026-alumni-meet-awards-ceremony-gvd/articleshow-9sm41kx"/>
        </item>
        <item>
            <title><![CDATA[ಈ ವ್ಯವಸ್ಥೆ ಭಾರತದಲ್ಲೂ ಇರಬೇಕಿತ್ತು: ಈ ದೇಶದಲ್ಲಿ ಜೈಲುಗಳಿವೆ ಆದರೆ ಒಬ್ಬನೇ ಒಬ್ಬ ಕೈದಿ ಇಲ್ಲ!]]></title>
            <link>https://kannada.asianetnews.com/gallery/world-news/did-you-know-why-the-netherlands-is-closing-prisons-instead-of-building-them-rav-vf9fqry</link>
            <guid isPermaLink="true">https://kannada.asianetnews.com/gallery/world-news/did-you-know-why-the-netherlands-is-closing-prisons-instead-of-building-them-rav-vf9fqry</guid>
            <pubDate>Mon, 13 Jul 2026 22:26:37 +0530</pubDate>
            <description><![CDATA[&lt;p&gt;ಭಾರತದಲ್ಲಿ ಜೈಲುಗಳು ತುಂಬಿ ತುಳುಕುತ್ತಿವೆ. ಹೊಸ ಜೈಲುಗಳು ಕಟ್ಟುವ ಸ್ಥಿತಿ ಬಂದಿದೆ. ನೀವು ನಂಬುತ್ತಿರೋ ಇಲ್ಲವೋ ಈ ದೇಶದ ಜೈಲುಗಳಿವೆ ಆದರೆ ಜೈಲುಗಳಲ್ಲಿ ಒಬ್ಬನೇ ಒಬ್ಬ ಕೈದಿ ಇಲ್ಲ! ಯಾವುದೇ ತಪ್ಪು ಮಾಡದ ಜನಗಳಿರುವ ಆ ದೇಶ ಯಾವುದಪ್ಪ ಅಂತಾ ಹುಬ್ಬೇರಿಸ್ತೀರಾ?&amp;nbsp;&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxe2rjnm0szc8t384jghgjzb,imgname-----------------------2026-07-13t212012.093-1783957834419.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಜೈಲುಗಳು ತುಂಬಿ ತುಳುಕುತ್ತಿವೆ. ಹೊಸ ಜೈಲುಗಳು ಕಟ್ಟುವ ಸ್ಥಿತಿ ಬಂದಿದೆ. ನೀವು ನಂಬುತ್ತಿರೋ ಇಲ್ಲವೋ ಈ ದೇಶದ ಜೈಲುಗಳಿವೆ ಆದರೆ ಜೈಲುಗಳಲ್ಲಿ ಒಬ್ಬನೇ ಒಬ್ಬ ಕೈದಿ ಇಲ್ಲ! ಯಾವುದೇ ತಪ್ಪು ಮಾಡದ ಜನಗಳಿರುವ ಆ ದೇಶ ಯಾವುದಪ್ಪ ಅಂತಾ ಹುಬ್ಬೇರಿಸ್ತೀರಾ?&amp;nbsp;&lt;/p&gt;&lt;p&gt;&lt;/p&gt;&lt;img&gt;&lt;p&gt;ಭಾರತದಲ್ಲಿ ಜೈಲುಗಳು ತುಂಬಿ ತುಳುಕುತ್ತಿವೆ. ಹೊಸ ಜೈಲುಗಳು ಕಟ್ಟುವ ಸ್ಥಿತಿ ಬಂದಿದೆ. ನೀವು ನಂಬುತ್ತಿರೋ ಇಲ್ಲವೋ ಈ ದೇಶದ ಜೈಲುಗಳಿವೆ ಆದರೆ ಜೈಲುಗಳಲ್ಲಿ ಒಬ್ಬನೇ ಒಬ್ಬ ಕೈದಿ ಇಲ್ಲ! ಯಾವುದೇ ತಪ್ಪು ಮಾಡದ ಜನಗಳಿರುವ ಆ ದೇಶ ಯಾವುದಪ್ಪ ಅಂತಾ ಹುಬ್ಬೇರಿಸ್ತೀರಾ? ಹೌದು ಜೈಲುಗಳಲ್ಲಿ ಕೈದಿಗಳಲ್ಲಿ ದೇಶವೊಂದಿದೆ ಅದು ಯಾವುದೆಂದು ತಿಳಿಯೋಣ.&lt;/p&gt;&lt;img&gt;&lt;p&gt;ನೆದರ್ಲ್ಯಾಂಡ್. ಎಲ್ಲ ದೇಶಗಳಲ್ಲಿರುವಂತೆ ಈ ದೇಶದಲ್ಲೂ ಕಾರಾಗೃಹಗಳಿವೆ ಆದರೆ ಅದರೊಳಗೆ ಕೈದಿಗಳಿಲ್ಲ. ವಾಸ್ತವವಾಗಿ ಈ ದೇಶದ ಅಪರಾಧಗಳು ಕಡಿಮೆ. ಅದರಲ್ಲೂ ಜೈಲು ಶಿಕ್ಷೆ ಅನುಭವಿಸುವಂತಹ ಕೊಲೆ ಸುಲಿಗೆ ದರೋಡೆಗಳಂತಹ ಗಂಭೀರ ಅಪರಾಧಗಳು ಅತ್ಯಂತ ಕಡಿಮೆ. ಇದರ ಪರಿಣಾಮವಾಗಿ ಕಳೆದ ಕೆಲವು ವರ್ಷಗಳಿಂದ ಜೈಲುಗಳನ್ನು ಮುಚ್ಚಲಾಗಿದೆ&lt;/p&gt;&lt;img&gt;&lt;p&gt;ಇದಕ್ಕೆ ಪ್ರಮುಖ ಕಾರಣ ಏನೆಂದರೆ ಏನು ಅಪರಾಧ ಅತ್ಯಂತ ಕಡಿಮೆ ಎಂಬುದು ಒಂದೇ ಕಾರಣವಲ್ಲ. ವಾಸ್ತವವಾಗಿ, ನ್ಯಾಯಾಂಗ ವ್ಯವಸ್ಥೆಯಲ್ಲಿನ ಸುಧಾರಣೆಗಳಿಂದ ಗಂಭೀರ ಅಪರಾಧಗಳಲ್ಲಿ ತೀವ್ರ ಇಳಿಕೆಯಾಗಿದೆ. ಜೊತೆಗೆ ಪ್ರತಿಯೊಂದು ಪ್ರಕರಣಕ್ಕೂ ಜೈಲು ಶಿಕ್ಷೆ ವಿಧಿಸುವ ಬದಲಿಗೆ ಅಧಿಕಾರಿಗಳುಅಪರಾಧಿಗಳಿಗೆ ಪರ್ಯಾಯ ವಿಧಾನಗಳನ್ನು ಬಳಸಲಾಗುತ್ತಿದೆ. ಪುನರ್ವಸತಿಗೆ ಒತ್ತು ನೀಡುತ್ತಿರುವಾಗ ಜೈಲು ಸೇರುವ ಅಪರಾಧಿಗಳ ಸಂಖ್ಯೆ ತೀರಾ ಕಡಿಮೆಯಾಗಿರುವುದೇ ಡಚ್ ಜೈಲುಗಳು ಖಾಲಿಯಾಗಿರಲು ಎಂದು.&lt;/p&gt;&lt;img&gt;&lt;p&gt;ಕೆಲವು ಪ್ರಮುಖ ಬದಲಾವಣೆಗಳಲ್ಲಿ ಪ್ರಮುಖವಾಗಿ ಯಾವುದೇ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಅಪರಾಧಿಗಳಿಗೆ ಕಂಡುಬಂದ ಅಂಕಲ್ ಮಾನಿಟರ್&zwnj;ಗಳ ಬಳಕೆ ಸೇರಿದೆ. ಈ ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಜೈಲಿಗೆ ಕಳುಹಿಸುವ ಬದಲು, ನ್ಯಾಯಾಲಯಗಳು ಅಪರಾಧಿಗಳು ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಜೈಲಿನಿಂದ ಹೊರಗೆ ಉಳಿಯಲು ಅವಕಾಶ ನೀಡಲಾಗಿದೆ. ಈ ಯಾವ ಸಾಧನಗಳಿಂದ ಅಧಿಕಾರಿಗಳಿಗೆ ಅಪರಾಧಿಗಳು ಮಾಡುತ್ತಿದ್ದಾರೆ, ಎಲ್ಲೆಲ್ಲಿ ಹೋಗುತ್ತಾರೆ ಅವರ ಎಲ್ಲ ಚಟುವಟಿಕೆಗಳನ್ನು ನಿರಂತರವಾಗಿ ಮಾನಿಟರಿಂಗ್ ಮಾಡಲು. ಇದು ಸಾರ್ವಜನಿಕ ಸುರಕ್ಷತೆಯ ಜೊತೆಗೆ ಜೈಲು ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಈ ವ್ಯವಸ್ಥೆಯು, ಅಪರಾಧಿಗಳು ಹೊರಗಿದ್ದರೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಮೇಲೆ ಸಾಧನಗಳ ಮೂಲಕ ಪೊಲೀಸ್ ವ್ಯವಸ್ಥೆ ನಿಗಾ ಇಟ್ಟಿದೆ.&lt;/p&gt;&lt;img&gt;&lt;p&gt;ಡಚ್ ಸರ್ಕಾರವು ಜೈಲುಗಳನ್ನು ಮುಚ್ಚುವ ಮೂಲಕ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿಗಳನ್ನು ಉಳಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಏಕೆಂದರೆ ಅಲ್ಲಿ ಒಬ್ಬ ಕೈದಿಯನ್ನು ಇಡಲು ಸರಾಸರಿ ₹25,000 ವೆಚ್ಚವಾಗುತ್ತದೆ. ಇದಲ್ಲದೆ, ಮಾದಕ ದ್ರವ್ಯಗಳು ಮತ್ತು ಇತರ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಕಾನೂನುಗಳು ಇಲ್ಲಿ ಸಾಕಷ್ಟು ಮೃದುವಾಗಿರುತ್ತವೆ. ಪರಿಣಾಮವಾಗಿ, ಸಣ್ಣ ಪ್ರಮಾಣದ ಮಾದಕವಸ್ತು ಸಂಬಂಧಿತ ಅಪರಾಧಗಳಿಗೆ ಬಂಧಿಸಲಾಗಿಲ್ಲ.&lt;/p&gt;&lt;img&gt;&lt;p&gt;ಜೈಲುಗಳು ಇತರೆ ಉದ್ದೇಶಗಳಿಗೆ ಬಳಕೆ&lt;/p&gt;&lt;p&gt;ಈ ದೊಡ್ಡ ಕಟ್ಟಡಗಳನ್ನು ಖಾಲಿ ಬಿಡುವ ಬದಲು, ಅವುಗಳನ್ನು ಇತರೆ ಉಪಯೋಗಗಳಿಗೆ ಬಳಸಲಾಗುತ್ತಿದೆ. ಕೆಲವು ಜೈಲುಗಳನ್ನು ಪ್ರವಾಸಿಗರಿಗೆ ಹೋಟೆಲ್&zwnj;ಗಳು ಮತ್ತು ಹಾಸ್ಟೆಲ್&zwnj;ಗಳಾಗಿ ಪರಿವರ್ತಿಸಲಾಗಿದೆ, ಆದರೆ ಇತರವುಗಳನ್ನು ಈಗ ಶಾಲೆಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು, ನಿರಾಶ್ರಿತರ ವಸತಿ ಕೇಂದ್ರಗಳು ಮತ್ತು ಸಮುದಾಯ ಸೌಲಭ್ಯಗಳಾಗಿ ಬಳಸಲಾಗುತ್ತಿದೆ.&lt;/p&gt;&lt;img&gt;&lt;p&gt;ಆದರೆ ಈ ನಡುವೆ ಒಂದು ವಿಚಿತ್ರ ಸಮಸ್ಯೆ ಇದೆ. ಅದೇನೆಂದರೆ ಜೈಲು ಜನಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಹೊಸ ಸೃಷ್ಟಿಯಾಗಿದೆ. ಜೈಲು ಮುಚ್ಚುವುದರಿಂದ ಅನೇಕ ಜೈಲು ಸಿಬ್ಬಂದಿ ತಮ್ಮ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಅದೇ ಆತಂಕದಲ್ಲಿದ್ದಾರೆ. ಅಸ್ತಿತ್ವದಲ್ಲಿರುವ ಜೈಲು ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಅನುಭವಿ ಸಿಬ್ಬಂದಿಯನ್ನು ಉಳಿಸಿಕೊಳ್ಳಲು, ನೆದರ್ಲ್ಯಾಂಡ್ಸ್ ಅಂತರರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ನಾರ್ವೆ ಸೇರಿದಂತೆ ಹಲವಾರು ದೇಶಗಳ ಕೈದಿಗಳನ್ನು ಡಚ್ ಜೈಲುಗಳಲ್ಲಿ ಇರಿಸಲಾಗಿದೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/world-news/did-you-know-why-the-netherlands-is-closing-prisons-instead-of-building-them-rav-vf9fqry"/>
        </item>
        <item>
            <title><![CDATA[₹8.5 ಕೋಟಿ ಸಂಬಳ ಕೆಲಸ ರಿಜೆಕ್ಟ್ ಮಾಡಿದ ರಿಷಬ್: ಮೆಟಾ ಜನಕ ಜುಕರ್‌ಬರ್ಗ್ ಮಾತನ್ನೇ ವಾಪಸ್ ಹೇಳಿಬಂದ ಭಾರತದ ಪ್ರತಿಭೆ!]]></title>
            <link>https://kannada.asianetnews.com/jobs/iit-bombay-grad-rishabh-agarwal-rejects-meta-mark-zuckerberg-8-cr-salary-for-ai-startup/articleshow-b8ozm34</link>
            <guid isPermaLink="true">https://kannada.asianetnews.com/jobs/iit-bombay-grad-rishabh-agarwal-rejects-meta-mark-zuckerberg-8-cr-salary-for-ai-startup/articleshow-b8ozm34</guid>
            <pubDate>Mon, 13 Jul 2026 22:23:41 +0530</pubDate>
            <description><![CDATA[&lt;p&gt;ಮೆಟಾ ಸಿಇಒ ಮಾರ್ಕ್ ಜುಕರ್&zwnj;ಬರ್ಗ್ ನೀಡಿದ ಬೃಹತ್ ಸಂಬಳದ ಆಫರ್ ತಿರಸ್ಕರಿಸಿದ ಐಐಟಿ ಬಾಂಬೆ ಪದವೀಧರ ರಿಷಬ್ ಅಗರ್ವಾಲ್, ಈಗ ಸ್ವಂತ ಎಐ ಸ್ಟಾರ್ಟ್&zwnj;ಅಪ್ ಕಟ್ಟುತ್ತಿದ್ದಾರೆ. ಇವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx322aseeg62jh28xxn84x1p,imgname-ai-researcher-rishabh-agrawal-1783588006702.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಗತ್ತಿನ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ 'ಮೆಟಾ' (Meta) ತನ್ನ ಕಂಪನಿಗೆ ಸೇರಲು ಕೋಟಿ ಕೋಟಿ ರೂಪಾಯಿ ಆಫರ್ ನೀಡಿದರೆ ಯಾರು ತಾನೇ ಬೇಡ ಎನ್ನುತ್ತಾರೆ? ಆದರೆ, ಐಐಟಿ ಬಾಂಬೆಯ ಪದವೀಧರ ರಿಷಬ್ ಅಗರ್ವಾಲ್ ಮಾತ್ರ ಮಾರ್ಕ್ ಜುಕರ್&zwnj;ಬರ್ಗ್ ನೀಡಿದ ಬೃಹತ್ ಆಫರ್ ಅನ್ನು ನಿರಾಯಾಸವಾಗಿ ತಿರಸ್ಕರಿಸಿ, ತಮ್ಮದೇ ಆದ ಹಾದಿಯನ್ನು ಕಂಡುಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಯಾರು ಈ ರಿಷಬ್ ಅಗರ್ವಾಲ್?&lt;/strong&gt;&lt;/h2&gt;&lt;p&gt;ಭಾರತದ ಅತ್ಯಂತ ಪ್ರತಿಭಾವಂತ ಎಐ (AI) ಸಂಶೋಧಕರಲ್ಲಿ ಒಬ್ಬರಾದ ರಿಷಬ್ ಅಗರ್ವಾಲ್, ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದವರು. ಜೆಇಇ (JEE) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 33ನೇ ರ್ಯಾಂಕ್ (AIR 33) ಪಡೆದಿದ್ದ ಇವರು, ನಂತರ ಕೆನಡಾದ ಮಾಂಟ್ರಿಯಲ್&zwnj;ನಲ್ಲಿ ಕೃತಕ ಬುದ್ಧಿಮತ್ತೆ (AI) ವಿಷಯದಲ್ಲಿ ಪಿಎಚ್&zwnj;ಡಿ ಪೂರ್ಣಗೊಳಿಸಿದರು. ಗೂಗಲ್ ಬ್ರೈನ್ (Google Brain), ಗೂಗಲ್ ಡೀಪ್&zwnj;ಮೈಂಡ್ (DeepMind) ಮತ್ತು ವಾಯ್ಮೊ (Waymo) ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಗೂಗಲ್&zwnj;ನ ಪ್ರಸಿದ್ಧ 'ಜೆಮಿನಿ' (Gemini) ಎಐ ಮಾಡೆಲ್ ರೂಪಿಸುವಲ್ಲಿಯೂ ಇವರ ಪಾತ್ರ ದೊಡ್ಡದಿದೆ.&lt;/p&gt;&lt;h2&gt;&lt;strong&gt;ಜುಕರ್&zwnj;ಬರ್ಗ್ ಆಫರ್ ತಿರಸ್ಕರಿಸಿದ್ದೇಕೆ?&lt;/strong&gt;&lt;/h2&gt;&lt;p&gt;ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮೆಟಾ ಕಂಪನಿಯು ತನ್ನ ಪ್ರಾಬಲ್ಯ ಸಾಧಿಸಲು ಪ್ರಮುಖ ಎಐ ಸಂಶೋಧಕರಿಗೆ ಲಕ್ಷಾಂತರ ಡಾಲರ್ ಸಂಬಳದ ಆಫರ್ ನೀಡುತ್ತಿತ್ತು. ಅದರಂತೆ ರಿಷಬ್ ಅವರಿಗೆ ಸುಮಾರು 1 ಮಿಲಿಯನ್ ಡಾಲರ್ (8.5 ಕೋಟಿ ರೂ.) ಗೂ ಅಧಿಕ ಸಂಬಳದ ಪ್ಯಾಕೇಜ್ ನೀಡಲಾಗಿತ್ತು. ಆದರೆ ರಿಷಬ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿ, 'ಮೆಟಾ ನೀಡಿದ ಆಫರ್ 1 ಮಿಲಿಯನ್ ಡಾಲರ್&zwnj;ಗಿಂತಲೂ ಹತ್ತು ಪಟ್ಟು ಹೆಚ್ಚಾಗಿತ್ತು' ಎಂದು ತಿಳಿಸಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.&lt;/p&gt;&lt;p&gt;ಅಷ್ಟೊಂದು ದೊಡ್ಡ ಮೊತ್ತದ ಸಂಬಳದ ಆಫರ್ ಇದ್ದರೂ, ಮೆಟಾ ಸೂಪರ್ ಇಂಟೆಲಿಜೆನ್ಸ್ ಲ್ಯಾಬ್&zwnj;ನಲ್ಲಿ ಕೇವಲ ಐದು ತಿಂಗಳು ಕೆಲಸ ಮಾಡಿ ಅವರು ರಾಜೀನಾಮೆ ನೀಡಿದರು. ಈ ಬಗ್ಗೆ ಮಾತನಾಡುತ್ತಾ ಅವರು 'ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ, ಯಾವುದೇ ರಿಸ್ಕ್ ತೆಗೆದುಕೊಳ್ಳದಿರುವುದೇ ಜೀವನದ ದೊಡ್ಡ ರಿಸ್ಕ್' ಎಂದು ಜುಕರ್&zwnj;ಬರ್ಗ್ ಅವರದೇ ಮಾತನ್ನು ಉಲ್ಲೇಖಿಸಿದ್ದಾರೆ.&lt;/p&gt;&lt;h2&gt;&lt;strong&gt;ಸ್ವಂತ ಎಐ ಸ್ಟಾರ್ಟ್&zwnj;ಅಪ್ ಆರಂಭ:&lt;/strong&gt;&lt;/h2&gt;&lt;p&gt;ಹಣ ಮತ್ತು ಪ್ರತಿಷ್ಠಿತ ಕಂಪನಿಯ ಕೆಲಸಕ್ಕಿಂತ ಹೆಚ್ಚಾಗಿ ಅವರಿಗೆ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಹೀಗಾಗಿ ಅವರು 'ಪಿರಿಯಾಡಿಕ್ ಲ್ಯಾಬ್ಸ್' (Periodic Labs) ಎಂಬ ಎಐ ಸ್ಟಾರ್ಟ್&zwnj;ಅಪ್ ಅನ್ನು ಸ್ಥಾಪಿಸಿದ್ದಾರೆ. ಈ ಕಂಪನಿಯು ವಿಜ್ಞಾನದ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳನ್ನು (ಔಷಧಿಗಳು, ಹೊಸ ವಸ್ತುಗಳ ಸಂಶೋಧನೆ) ವೇಗಗೊಳಿಸಲು ಸಹಾಯ ಮಾಡುವ 'ಎಐ ಸೈಂಟಿಸ್ಟ್' ಅನ್ನು ಅಭಿವೃದ್ಧಿಪಡಿಸುತ್ತಿದೆ. ವಿಶೇಷವೆಂದರೆ, ಈ ಸ್ಟಾರ್ಟ್&zwnj;ಅಪ್&zwnj;ಗೆ ಜಗತ್ತಿನ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಮತ್ತು ಎನ್&zwnj;ವಿಡಿಯಾ (Nvidia) ಕಂಪನಿ ಬೆಂಬಲ ನೀಡುತ್ತಿವೆ.&lt;/p&gt;&lt;p&gt;ಕೋಟಿ ಕೋಟಿ ಸಂಬಳದ ಆಸೆಗಿಂತ ತನ್ನ ಕನಸು ಮತ್ತು ಸಂಶೋಧನೆಗೆ ಬೆಲೆ ನೀಡಿದ ರಿಷಬ್ ಅಗರ್ವಾಲ್ ಅವರ ಈ ನಿರ್ಧಾರ ಈಗ ಇಡೀ ಟೆಕ್ ಪ್ರಪಂಚದಲ್ಲಿ ಚರ್ಚೆಯ ವಿಷಯವಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/jobs/iit-bombay-grad-rishabh-agarwal-rejects-meta-mark-zuckerberg-8-cr-salary-for-ai-startup/articleshow-b8ozm34"/>
        </item>
        <item>
            <title><![CDATA[Famous Forts: ಭಾರತದ ಅತ್ಯಂತ ಸುಂದರ ಮತ್ತು ನಿಗೂಢ ಕೋಟೆಗಳು; ಇವುಗಳ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಾ?]]></title>
            <link>https://kannada.asianetnews.com/gallery/travel/india-s-most-beautiful-and-mysterious-forts-will-you-be-shocked-to-hear-stories-5a64iam</link>
            <guid isPermaLink="true">https://kannada.asianetnews.com/gallery/travel/india-s-most-beautiful-and-mysterious-forts-will-you-be-shocked-to-hear-stories-5a64iam</guid>
            <pubDate>Mon, 13 Jul 2026 22:20:06 +0530</pubDate>
            <description><![CDATA[ಕೋಟೆಗಳ ಬಗ್ಗೆ ಮಾತು ಬಂದಾಗ, ಇತ್ತೀಚೆಗೆ ಕೇತನ್ ಕೊಲೆ ಪ್ರಕರಣದಿಂದಾಗಿ ಹೆಚ್ಚು ಚರ್ಚೆಯಾಗುತ್ತಿರುವ ಲೋಹಗಢ ಕೋಟೆ ತಕ್ಷಣ ನೆನಪಾಗುತ್ತದೆ. ಆದರೆ ರಾಜಸ್ಥಾನದಲ್ಲಿ ಇಂತಹ ಅನೇಕ ನಿಗೂಢ ಕೋಟೆಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಈ ಫೋಟೋ ಗ್ಯಾಲರಿಯಲ್ಲಿ ಆ ಕೋಟೆಗಳ ಬಗ್ಗೆ ತಿಳಿಯೋಣ ಬನ್ನಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kqewy5xf3v0xcrs1akxr48yf,imgname-history-of-nahargarh-fort-1777542829999.jpeg" type="image/jpeg" height="390" width="690"/>
            <content:encoded><![CDATA[ಕೋಟೆಗಳ ಬಗ್ಗೆ ಮಾತು ಬಂದಾಗ, ಇತ್ತೀಚೆಗೆ ಕೇತನ್ ಕೊಲೆ ಪ್ರಕರಣದಿಂದಾಗಿ ಹೆಚ್ಚು ಚರ್ಚೆಯಾಗುತ್ತಿರುವ ಲೋಹಗಢ ಕೋಟೆ ತಕ್ಷಣ ನೆನಪಾಗುತ್ತದೆ. ಆದರೆ ರಾಜಸ್ಥಾನದಲ್ಲಿ ಇಂತಹ ಅನೇಕ ನಿಗೂಢ ಕೋಟೆಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಈ ಫೋಟೋ ಗ್ಯಾಲರಿಯಲ್ಲಿ ಆ ಕೋಟೆಗಳ ಬಗ್ಗೆ ತಿಳಿಯೋಣ ಬನ್ನಿ.&lt;img&gt;ಇತ್ತೀಚೆಗೆ ಹತ್ಯೆಯಾದ ಉದ್ಯಮಿ ಪುತ್ರ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ, ಪ್ರೇಯಸಿ ಸಿಯಾ ತನ್ನ ಪ್ರಿಯಕರನನ್ನು ರಾಜಸ್ಥಾನದ 2000 ವರ್ಷ ಹಳೆಯ ಲೋಹಗಢ ಕೋಟೆಗೆ ಕರೆದೊಯ್ದಳು. ನಂತರ ಫೋಟೋ ತೆಗೆಯುವ ನೆಪದಲ್ಲಿ ಆತನನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಿದಳು. ಈ ಪ್ರಕರಣದ ನಂತರ ಲೋಹಗಢ ಕೋಟೆ ಮತ್ತೆ ಸುದ್ದಿಯಲ್ಲಿದೆ.&lt;img&gt;ಕೇವಲ ಲೋಹಗಢ ಮಾತ್ರವಲ್ಲ, ದೇಶದ ಅತಿದೊಡ್ಡ ರಾಜ್ಯವಾದ ರಾಜಸ್ಥಾನದಲ್ಲಿ ಮೈ ಜುಮ್ಮೆನಿಸುವ ಕಥೆಗಳನ್ನು ಹೊಂದಿರುವ ಅಸಂಖ್ಯಾತ ಕೋಟೆಗಳಿವೆ. ಅವುಗಳ ಇತಿಹಾಸ ಕೇಳಿದರೆ ನೀವೂ ಬೆರಗಾಗುತ್ತೀರಿ. ಇವುಗಳಲ್ಲಿ ಚಿತ್ತೋರಗಢ ಕೋಟೆಯಂತಹ ಕೆಲವು ಕೋಟೆಗಳು ಬಹಳ ವಿಶೇಷ. ಏಷ್ಯಾದ ಅತಿದೊಡ್ಡ ಕೋಟೆಯಾದ ಇದಕ್ಕೂ ತನ್ನದೇ ಆದ ಅಜ್ಞಾತ ಕಥೆಗಳಿವೆ.&lt;img&gt;ಚಿತ್ತೋರಗಢ ಕೋಟೆ ಸುಮಾರು 700 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಯುನೆಸ್ಕೋ ಇದನ್ನು ವಿಶೇಷ ಪಾರಂಪರಿಕ ತಾಣವೆಂದು ಗುರುತಿಸಿದೆ. ಈ ಕೋಟೆಯು ಪ್ರಾಚೀನ ರಾಜರ ಇತಿಹಾಸ ಮತ್ತು ಮಹಾರಾಣಾ ಪ್ರತಾಪ್ ಅವರಂತಹ ವೀರರ ಶೌರ್ಯಗಾಥೆಗಳನ್ನು ಹೊಂದಿದೆ. 7ನೇ ಶತಮಾನದಲ್ಲಿ ಮೌರ್ಯ ದೊರೆ ಚಿತ್ರಾಂಗದ ಮೋರಿ ಈ ಕೋಟೆಯನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ನಂತರ, ಬಾಪ್ಪಾ ರಾವಲ್ ಇದನ್ನು ಮೇವಾರದ ರಾಜಧಾನಿಯನ್ನಾಗಿ ಮಾಡಿದರು. ಪ್ರಸ್ತುತ ಇದು ರಾಜಸ್ಥಾನದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿದೆ.&lt;img&gt;ಜೈಸಲ್ಮೇರ್ ಕೋಟೆಯು ಅನೇಕ ರಕ್ತಸಿಕ್ತ ಘಟನೆಗಳಿಗೆ ಸಾಕ್ಷಿಯಾಗಿದೆ. ಇದು ವಿಶ್ವದ ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ರಾವಲ್ ಜೈಸ್ವಾಲ್ ಇದನ್ನು ನಿರ್ಮಿಸಿದರು. ಈ ಕೋಟೆಯನ್ನು 'ಸೋನಾರ್ ಕೆಲಾ' ಅಥವಾ 'ಚಿನ್ನದ ಕೋಟೆ' ಎಂದೂ ಕರೆಯುತ್ತಾರೆ. ಜೈನ ದೇವಾಲಯಗಳು, ರಾಜಮನೆತನದ ಅರಮನೆ ಮತ್ತು ಬೃಹತ್ ದ್ವಾರಗಳು ಈ ಕೋಟೆಯ ಪ್ರಮುಖ ಆಕರ್ಷಣೆಗಳಾಗಿವೆ. ಇದರ ಐತಿಹಾಸಿಕ ಸೌಂದರ್ಯವು ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುತ್ತದೆ.&lt;img&gt;ಕೇವಲ ರಾಜಸ್ಥಾನ ಮಾತ್ರವಲ್ಲ, ಭಾರತದ ಪ್ರತಿಯೊಂದು ರಾಜ್ಯದಲ್ಲೂ ಇಂತಹ ಅನೇಕ ಐತಿಹಾಸಿಕ ಕೋಟೆಗಳನ್ನು ನಾವು ನೋಡಬಹುದು. ಕಾಲನ ಹೊಡೆತಕ್ಕೆ ಆ ಸಾಮ್ರಾಜ್ಯಗಳು ಅಳಿದುಹೋಗಿದ್ದರೂ, ಈ ಕೋಟೆಗಳು ಇಂದಿಗೂ ಆ ಗತಕಾಲದ ಇತಿಹಾಸವನ್ನು ಹೊತ್ತು ನಿಂತಿವೆ.]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/india-s-most-beautiful-and-mysterious-forts-will-you-be-shocked-to-hear-stories-5a64iam"/>
        </item>
        <item>
            <title><![CDATA[ಬಾಂಗ್ಲಾದೇಶದಲ್ಲಿ ರಾಮನ ವಿಗ್ರಹ ನಿರ್ಮಿಸುತ್ತಿದ್ದ ವ್ಯಕ್ತಿ ಅರೆಸ್ಟ್! ಯಾರು ಈ ಹರಿದಾಸ್ ಚಂದ್ರ?]]></title>
            <link>https://kannada.asianetnews.com/world-news/man-arrested-in-bangladesh-for-building-ram-statue-amid-suspicious-financial-activity/articleshow-n78mu8a</link>
            <guid isPermaLink="true">https://kannada.asianetnews.com/world-news/man-arrested-in-bangladesh-for-building-ram-statue-amid-suspicious-financial-activity/articleshow-n78mu8a</guid>
            <pubDate>Mon, 13 Jul 2026 22:13:19 +0530</pubDate>
            <description><![CDATA[ಬಾಂಗ್ಲಾದೇಶದಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸುತ್ತಿದ್ದ ಹರಿದಾಸ್ ಅಲಿಯಾಸ್ 'ತೌಹೀದ್ ಇಸ್ಲಾಂ' ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬ್ಯಾಂಕ್ ಖಾತೆಯಲ್ಲಿ ಯಾವುದೇ ಆದಾಯದ ಮೂಲವಿಲ್ಲದೆ ಅನುಮಾನಾಸ್ಪದ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxe5r019qg1bknjkmjc070p7,imgname-----------------------2026-07-13t220942.434-1783960961065.jpg" type="image/jpeg" height="390" width="690"/>
            <content:encoded><![CDATA[&lt;p&gt;ಶ್ರೀರಾಮನ ವಿಗ್ರಹವನ್ನು ನಿರ್ಮಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಬಂಧಿತ ವ್ಯಕ್ತಿಯನ್ನು ಹರಿದಾಸ್ ಎಂದು ಗುರುತಿಸಲಾಗಿದ್ದು, ಈತ 'ತೌಹೀದ್ ಇಸ್ಲಾಂ' ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ದ್ವಂದ್ವ ಹೆಸರೇ ಪೊಲೀಸರ ತನಿಖೆಯ ದಿಕ್ಕನ್ನು ಬದಲಿಸಿದಂತಿದೆ.&lt;/p&gt;&lt;h2&gt;ಬಂಧನಕ್ಕೆ ಕಾರಣವಾದ ಬ್ಯಾಂಕ್ ಖಾತೆ&lt;/h2&gt;&lt;p&gt;ಹರಿದಾಸ್&zwnj;ನ ಚಟುವಟಿಕೆಗಳು ಪೊಲೀಸರ ಗಮನಕ್ಕೆ ಬಂದಿದ್ದೇ ತಡ ಆತನ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹರಿದಾಸ್ ಬ್ಯಾಂಕ್ ಮತ್ತು ಮೊಬೈಲ್ ಫೈನಾನ್ಶಿಯಲ್ ಸರ್ವಿಸಸ್ (MFS) ಖಾತೆಗಳಲ್ಲಿ ಅನುಮಾನಾಸ್ಪದವಾಗಿ ಹಣದ ವಹಿವಾಟು ನಡೆದಿರುವುದನ್ನು ಬಾಂಗ್ಲಾದೇಶದ ಅಧಿಕಾರಿಗಳು ಪತ್ತೆ ಮಾಡಿದ್ದರು. ಈ ಹಣ ಎಲ್ಲಿಂದ ಬಂತು ಎಂಬುದಕ್ಕೆ ಆತನ ಬಳಿ ಯಾವುದೇ ಸಮರ್ಪಕ ದಾಖಲೆಗಳಾಗಲಿ, ಅಧಿಕೃತ ಆದಾಯದ ಮೂಲವಾಗಲಿ ಇರಲಿಲ್ಲ. ಯಾವುದೇ ಖಚಿತ ಆದಾಯದ ಮೂಲವಿಲ್ಲದ ವ್ಯಕ್ತಿಯ ಖಾತೆಯಲ್ಲಿ ದೊಡ್ಡ ಮೊತ್ತದ ಹಣದ ಹರಿದಾಡಿರುವುದು ಕಂಡುಬಂದಿದೆ.&amp;nbsp;&lt;/p&gt;&lt;p&gt;ಪೊಲೀಸರು ಆತನನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ಇದೇ ತನಿಖೆಯ ಭಾಗವಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರಾಮನ ವಿಗ್ರಹ ನಿರ್ಮಾಣಕ್ಕೂ, ಈ ಅನುಮಾನಾಸ್ಪದ ಹಣಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆ ಬಾಂಗ್ಲಾ ಪೊಲೀಸರು ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/world-news/man-arrested-in-bangladesh-for-building-ram-statue-amid-suspicious-financial-activity/articleshow-n78mu8a"/>
        </item>
        <item>
            <title><![CDATA[ಮೋದಿ ರಾಜತಾಂತ್ರಿಕತೆಗೆ ಇಂಡೋನೇಷಿಯಾ ಫಿದಾ, 1965ರಲ್ಲಿ ಪಾಕ್ ಪರ ಇದ್ದ ದೇಶಕ್ಕೀಗ ಭಾರತದ ಬ್ರಹ್ಮೋಸ್ ಬಲ]]></title>
            <link>https://kannada.asianetnews.com/india-news/backing-pak-in-1965-to-buying-brahmos-pm-modi-diplomacy-strengthens-india-indonesia-ties/articleshow-942yfv1</link>
            <guid isPermaLink="true">https://kannada.asianetnews.com/india-news/backing-pak-in-1965-to-buying-brahmos-pm-modi-diplomacy-strengthens-india-indonesia-ties/articleshow-942yfv1</guid>
            <pubDate>Mon, 13 Jul 2026 22:02:19 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಇಂಡೋನೇಷಿಯಾ ಭೇಟಿ ಉಭಯ ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿದ್ದು ಮಾತ್ರವಲ್ಲ ಹೊಸ ಮೈಲಿಗಲ್ಲು ನಿರ್ಮಿಸಿದೆ. ಪಾಕಿಸ್ತಾನ ಬೆಂಬಲಿಸಿದ್ದ ಇಂಡೋನೇಷಿಯಾ ಇದೀಗ ಭಾರತದ ಮಿತ್ರರಾಷ್ಟ್ರವಾಗಿ ಬದಲಾಗಿ ಹಲವು ಜಂಟಿ ಪಾಲುದಾರಿಕೆಯಲ್ಲಿ ಗುರುತಿಸಿಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxs08f3crjknt0p5m8ywnb0,imgname-pm-narendra-modi-and-indonesia-president-prabowo-subianto-1783410729443.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.13)&lt;/strong&gt; ಪ್ರಧಾನಿ ನರೇಂದ್ರ ಮೋದಿ ಮೂರು ರಾಷ್ಟ್ರಗಳ ಭೇಟಿ ಅತ್ಯಂತ ಯಶಸ್ವಿ ಪ್ರವಾಸವಾಗಿ ಗುರುತಿಸಿಕೊಂಡಿದೆ.ಇಂಡೋನೇಷಿಯಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಭಾರತದ ಹಲವು ಐತಿಹಾಸಿಕ ದ್ವಿಪಕ್ಷೀಯ ಒಪ್ಪಂದ ಹಾಗೂ ಸಹಕಾರಗಳಿಗೆ ಸಾಕ್ಷಿಯಾಗಿದೆ. ಈ ಪೈಕಿ ಇಂಡೋನೇಷಿಯಾ ಭೇಟಿ ಮೈಲಿಗಲ್ಲು ನಿರ್ಮಿಸಿದೆ. ಇಂಡೋನೇಷಿಯಾ ಭೇಟಿಯಲ್ಲಿ ಮೋದಿ ಹಾಗೂ ಸ್ಥಳೀಯ ನಾಯಕರ ಜೊತೆಗಿನ ಮಾತುಕತೆ , ಶತಮಾನಗಳ ಸಾಂಸ್ಕೃತಿ ಸಂಬಂಧ, ಆಧುನಿಕ ಜಗತ್ತಿನಲ್ಲಿ ಉಭಯ ರಾಷ್ಟ್ರಗಳ ಪಾಲುದಾರಿಕೆ, ರಕ್ಷಣಾ ಸಹಕಾರ, ಡಿಜಿಟಲ್ ಕ್ರಾಂತಿ, ಹಿಂದೂ ಮಂದಿರಗಳ ಜೀರ್ಣೋದ್ಧಾರ, ಇಂಡೋನೇಷಿಯಾದಲ್ಲಿ ಬೆಂಗಳೂರು ಐಐಎಂ ಕ್ಯಾಂಪಸ್ ಸೇರಿದಂತೆ ಮಹತ್ವದ ಇತಿಹಾಸ ಸೃಷ್ಟಿ ನಿರ್ಧಾರಗಳು ಹೊರಬಿದ್ದಿದೆ.&lt;/p&gt;&lt;h2&gt;ಎರಡು ಸಾವಿರ ವರ್ಷಗಳ ಐತಿಹಾಸಿಕ ಬೆಸುಗೆ&lt;/h2&gt;&lt;p&gt;ಭಾರತ ಮತ್ತು ಇಂಡೋನೇಷಿಯಾ ನಡುವೆ ಬರೋಬ್ಬರಿ 2000 ವರ್ಷಗಳಿಗಿಂತಲೂ ಹಳೆಯದಾದ ನಾಗರಿಕತೆಯ ಸಂಬಂಧವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವದಲ್ಲಿ, ಈ ಪುರಾತನ ಸಾಂಸ್ಕೃತಿಕ ನಂಟನ್ನು ಇಂದು ಅತ್ಯಂತ ಬಲಿಷ್ಠವಾದ ಕಾರ್ಯತಂತ್ರದ ಪಾಲುದಾರಿಕೆಯನ್ನಾಗಿ ಯಶಸ್ವಿಯಾಗಿ ಪರಿವರ್ತಿಸಲಾಗುತ್ತಿದೆ.&lt;/p&gt;&lt;h2&gt;ಭಾರತದ ಪುರಾತನ ನಾಗರಿಕತೆಗೆ ಸಂದ ಗೌರವ&lt;/h2&gt;&lt;p&gt;ಪ್ರಧಾನಿ ಮೋದಿ ಅವರಿಗೆ ಇಂಡೋನೇಷಿಯಾ ಸರ್ಕಾರವು ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದು ಕೇವಲ ಒಬ್ಬ ನಾಯಕನಿಗೆ ಸಂದ ಗೌರವವಲ್ಲ; ಬದಲಿಗೆ ಇದು ಭಾರತದ ಭವ್ಯ ನಾಗರಿಕತೆ ಮತ್ತು ಉಭಯ ದೇಶಗಳ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಕ್ಕೆ ಸಿಕ್ಕ ಜಾಗತಿಕ ಮನ್ನಣೆಯಾಗಿದೆ.&lt;/p&gt;&lt;p&gt;ತಿಹಾಸವನ್ನು ಭವಿಷ್ಯದ ಶಕ್ತಿಯಾಗಿಸಿದ ಮೋದಿ: ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ಭಾರತವು ತನ್ನ ಭವ್ಯ ಇತಿಹಾಸ ಮತ್ತು ನಾಗರಿಕತೆಯನ್ನು ಕೇವಲ ಪಠ್ಯಪುಸ್ತಕಗಳ ಇತಿಹಾಸವಾಗಿ ನೋಡುತ್ತಿಲ್ಲ. ಬದಲಾಗಿ, ಈ ಹಂಚಿಕೊಂಡ ಪರಂಪರೆಯನ್ನು ಬಳಸಿಕೊಂಡು ಭವಿಷ್ಯದ ಬಲಿಷ್ಠ ಜಾಗತಿಕ ಪಾಲುದಾರಿಕೆ ಹಾಗೂ ಮೈತ್ರಿಯನ್ನು ನಿರ್ಮಿಸುತ್ತಿದೆ.&lt;/p&gt;&lt;p&gt;ಇಂಡಿಯನ್ ಡಿಎನ್&zwnj;ಎ' ಪ್ರಶಂಸೆ ಮತ್ತು ಜಾಗತಿಕ ಗೌರವ: ಇಂಡೋನೇಷಿಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ತಮ್ಮಲ್ಲಿ &quot;ಇಂಡಿಯನ್ ಡಿಎನ್&zwnj;ಎ&quot; (ಭಾರತೀಯ ರಕ್ತಗತ ನಂಟು) ಇದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿ ಅವರ ಆಡಳಿತ ಶೈಲಿಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ಸಾಂಸ್ಕೃತಿಕ ಪ್ರಭಾವ ಮತ್ತು ಗೌರವ ಎಷ್ಟು ಹೆಚ್ಚಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.&lt;/p&gt;&lt;p&gt;ಸಾಂಸ್ಕೃತಿಕ ಸಂಕೇತಗಳೇ ಈಗ ಬಾಂಧವ್ಯದ ಅಡಿಪಾಯ: ರಾಮಾಯಣ, ಮಹಾಭಾರತ, ಸಂಸ್ಕೃತ ಭಾಷೆ, ಗರುಡ ಮತ್ತು ಬಾಲಿ ದ್ವೀಪದಂತಹ ಹಂಚಿಕೊಂಡ ಸಾಂಸ್ಕೃತಿಕ ಸಂಕೇತಗಳು ಈಗ ಕೇವಲ ಕಥೆಗಳಾಗಿ ಉಳಿದಿಲ್ಲ. ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಇವು ಭಾರತ-ಇಂಡೋನೇಷಿಯಾ ರಾಜತಾಂತ್ರಿಕ ಸಂಬಂಧದ ಅತ್ಯಂತ ಪ್ರಮುಖ ಅಡಿಪಾಯಗಳಾಗಿ ಮಾರ್ಪಟ್ಟಿವೆ.&lt;/p&gt;&lt;h2&gt;ವಿಕಾಸ್ ಭೀ, ವಿರಾಸತ್ ಭೀ&lt;/h2&gt;&lt;p&gt;ಪ್ರಧಾನಿ ಮೋದಿಯವರ &quot;ವಿಕಾಸ್ ಭೀ, ವಿರಾಸತ್ ಭೀ&quot; ಎಂಬ ಮಂತ್ರದಡಿಯಲ್ಲಿ ಭಾರತವು ಹೆಜ್ಜೆಯಿಡುತ್ತಿದೆ. ಇದರ ಭಾಗವಾಗಿ ಇಂಡೋನೇಷಿಯಾದ ಪ್ರಸಿದ್ಧ 'ಪ್ರಂಬನನ್ ಹಿಂದೂ ದೇವಾಲಯ'ದ ಸಂರಕ್ಷಣೆಗೆ ಭಾರತ ನೆರವು ನೀಡುತ್ತಿದ್ದು, ಜಂಟಿ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ತನ್ನ ಬದ್ಧತೆಯನ್ನು ಜಗತ್ತಿಗೆ ಸಾರಿದೆ.&lt;/p&gt;&lt;p&gt;ಪ್ರಾಚೀನ ನಂಬಿಕೆಯಿಂದ ಆಧುನಿಕ ಸಹಕಾರದವರೆಗೆ&lt;/p&gt;&lt;p&gt;ಹಿಂದೆ ಭಾರತೀಯ ವ್ಯಾಪಾರಿಗಳು ಮತ್ತು ಬೌದ್ಧ ಭಿಕ್ಷುಗಳು ಇಂಡೋನೇಷಿಯಾದೊಂದಿಗೆ ಸಾಂಸ್ಕೃತಿಕ ನಂಟನ್ನು ಬೆಳೆಸಿದ್ದರು. ಇಂದು ಅದೇ ಐತಿಹಾಸಿಕ ನಾಗರಿಕ ನಂಬಿಕೆಯನ್ನು ಬಳಸಿಕೊಂಡು ಪ್ರಧಾನಿ ಮೋದಿ ಅವರು ರಕ್ಷಣೆ, ಶಿಕ್ಷಣ, ತಂತ್ರಜ್ಞಾನ ಮತ್ತು ಕಡಲ ಭದ್ರತೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ವಿಸ್ತರಿಸುತ್ತಿದ್ದಾರೆ.&lt;/p&gt;&lt;p&gt;ವಿದೇಶಾಂಗ ನೀತಿಯ ಪ್ರಮುಖ ಶಕ್ತಿಯಾದ 'ನಾಗರಿಕ ರಾಜತಾಂತ್ರಿಕತೆ': ಹಂಚಿಕೊಂಡ ಸುದೀರ್ಘ ಇತಿಹಾಸವನ್ನು ಭರವಸೆಯ ಹಂಚಿಕೊಂಡ ಭವಿಷ್ಯವನ್ನಾಗಿ ಪರಿವರ್ತಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಪ್ರಧಾನಿ ಮೋದಿ ಅವರು ಈ ನಾಗರಿಕ ರಾಜತಾಂತ್ರಿಕತೆಯನ್ನು (Civilizational Diplomacy) ಭಾರತದ ವಿದೇಶಾಂಗ ನೀತಿಯ ಅತ್ಯಂತ ಪ್ರಮುಖ ಆಧಾರಸ್ತಂಭವನ್ನಾಗಿ ಮಾಡಿದ್ದಾರೆ.&lt;/p&gt;&lt;p&gt;ಯೋಗವನ್ನು ಮೀರಿದ ಭಾರತದ 'ಸಾಫ್ಟ್ ಪವರ್': ಭಾರತದ ಸಾಫ್ಟ್ ಪವರ್ (ಸಾಂಸ್ಕೃತಿಕ ಪ್ರಭಾವ) ಈಗ ಕೇವಲ ಯೋಗ ಮತ್ತು ಕಲೆಗೆ ಮಾತ್ರ ಸೀಮಿತವಾಗಿಲ್ಲ. ಗುಣಮಟ್ಟದ ಶಿಕ್ಷಣ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸುಧಾರಿತ ಆರೋಗ್ಯ ರಕ್ಷಣೆ, ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲವರ್ಧನೆ ಮತ್ತು ಪರಂಪರೆಯ ಸಂರಕ್ಷಣೆಗಳು ಭಾರತದ ಜಾಗತಿಕ ಪ್ರಭಾವದ ಹೊಸ ಆಯುಧಗಳಾಗಿವೆ.&lt;/p&gt;&lt;p&gt;ಇಂಡೋ-ಪೆಸಿಫಿಕ್ ವಲಯದಲ್ಲಿ ಆಧುನಿಕ ಪಾಲುದಾರಿಕೆ: ಹಿಂದೆ ಕೇವಲ ಸಂಸ್ಕೃತಿ ಮತ್ತು ವ್ಯಾಪಾರದ ಮೂಲಕ ಬೆಸೆದುಕೊಂಡಿದ್ದ ಭಾರತ-ಇಂಡೋನೇಷಿಯಾ ಸಂಬಂಧಗಳು, ಈಗ ಪ್ರಧಾನಿ ಮೋದಿ ಅವರ ದೂರದರ್ಶಿತ್ವದ ನಾಯಕತ್ವದಲ್ಲಿ ಇಡೀ ಇಂಡೋ-ಪೆಸಿಫಿಕ್ ವಲಯದ ಭದ್ರತೆ ಮತ್ತು ಆಧುನಿಕ ಪಾಲುದಾರಿಕೆಗೆ ಗಟ್ಟಿ ಬೆಂಬಲವಾಗಿ ನಿಂತಿವೆ.&lt;/p&gt;&lt;h2&gt;1965ರ ಶತ್ರುತ್ವದಿಂದ ಇಂದಿನ ಪರಮ ಮಿತ್ರತ್ವದವರೆಗೆ&lt;/h2&gt;&lt;p&gt;1965ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಇಂಡೋನೇಷಿಯಾ ಪಾಕಿಸ್ತಾನವನ್ನು ಬೆಂಬಲಿಸಿತ್ತು ಎಂಬುದು ಇತಿಹಾಸ. ಆದರೆ ಇಂದು ಪ್ರಧಾನಿ ಮೋದಿ ಅವರ ಸಶಕ್ತ ರಾಜತಾಂತ್ರಿಕತೆಯ ಫಲವಾಗಿ, ಅದೇ ಇಂಡೋನೇಷಿಯಾ ಭಾರತದ ಅತ್ಯಂತ ಆಪ್ತ ಜಾಗತಿಕ ಕಾರ್ಯತಂತ್ರದ ಪಾಲುದಾರ ದೇಶವಾಗಿ ಹೊರಹೊಮ್ಮಿದೆ. ಇದು ಭಾರತದ ಜಾಗತಿಕ ವಿಶ್ವಾಸಾರ್ಹತೆಗೆ ಸಂದ ಜಯ.&lt;/p&gt;&lt;p&gt;ಜಾಗತಿಕ ನಾಯಕತ್ವಕ್ಕೆ ಹೊಸ ದಿಕ್ಸೂಚಿ: ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಯು ಭಾರತದ ಪುರಾತನ ನಾಗರಿಕತೆಯು ಕೇವಲ ಹೆಮ್ಮೆಯ ವಿಷಯ ಮಾತ್ರವಲ್ಲ, ಬದಲಿಗೆ ಜಾಗತಿಕ ಮಟ್ಟದಲ್ಲಿ ಕಾರ್ಯತಂತ್ರದ ಮೈತ್ರಿಗಳನ್ನು ನಿರ್ಮಿಸಲು ಮತ್ತು ಭಾರತದ ಜಾಗತಿಕ ನಾಯಕತ್ವವನ್ನು ಬಲಪಡಿಸಲು ಇರುವ ಪ್ರಬಲ ಸಾಧನ ಎಂಬುದನ್ನು ಸಾಬೀತುಪಡಿಸಿದೆ&lt;/p&gt;&lt;h2&gt;ರಕ್ಷಣಾ ರಂಗದಲ್ಲಿ ಮಹತ್ತರ ಮೈಲಿಗಲ್ಲು&lt;/h2&gt;&lt;p&gt;ಅಂದು ಪಾಕಿಸ್ತಾನದ ಪರ ನಿಂತಿದ್ದ ಇಂಡೋನೇಷಿಯಾ, ಇಂದು ಮೋದಿ ಆಡಳಿತದಲ್ಲಿ ಭಾರತದಿಂದ ಅತ್ಯಾಧುನಿಕ 'ಬ್ರಹ್ಮೋಸ್' ಸೂಪರ್&zwnj;ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಭಾರತದ 'ಆಪರೇಷನ್ ಸಿಂಧೂರ್' ಸಮಯದಲ್ಲಿ ವಾಯುಪಡೆಯ ಕ್ಷಿಪಣಿ ಸಾಮರ್ಥ್ಯದ ಯಶಸ್ಸನ್ನು ಕಂಡ ಇಂಡೋನೇಷಿಯಾ, ಭಾರತದ 'ಅಸ್ತ್ರ' (Astra) ಏರ್-ಟು-ಏರ್ ಕ್ಷಿಪಣಿಗಳನ್ನೂ ಖರೀದಿಸಿದೆ. ಇದರೊಂದಿಗೆ ಇಂಡೋನೇಷಿಯಾದ ಸೇನಾ ಅಧಿಕಾರಿಗಳಿಗೆ ಭಾರತದ ಪ್ರತಿಷ್ಠಿತ ಎನ್&zwnj;ಡಿಎ (NDA) ಮತ್ತು ಡಿಎಸ್&zwnj;ಎಸ್&zwnj;ಸಿ (DSSC) ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುವುದು.&lt;/p&gt;&lt;p&gt;ಮಲಕ್ಕಾ ಜಲಸಂಧಿಯ ಸಮೀಪ ಜಂಟಿ ಬಂದರು ಅಭಿವೃದ್ಧಿ: ಕಡಲ ಭದ್ರತೆ, ಕೋಸ್ಟ್ ಗಾರ್ಡ್ ಸಹಕಾರ, ಬ್ಲೂ ಎಕಾನಮಿ ಮತ್ತು ಹಿಂದೂ ಮಹಾಸಾಗರದಲ್ಲಿ ಕಡಲ ವ್ಯಾಪಾರವನ್ನು ಹೆಚ್ಚಿಸಲು ಉಭಯ ದೇಶಗಳು ನಿರ್ಧರಿಸಿವೆ. ಭಾರತದ ಗಂಟಲು ದ್ವೀಪದ ಗ್ರೇಟ್ ನಿಕೋಬಾರ್ ಬಂದರು ಯೋಜನೆಯಿಂದ ಕೇವಲ ೧೦೦ ಮೈಲಿ ದೂರದಲ್ಲಿರುವ, ಜಾಗತಿಕ ವ್ಯಾಪಾರದ ಆಯಕಟ್ಟಿನ ಜಾಗವಾದ ಮಲಕ್ಕಾ ಜಲಸಂಧಿಯ ಮುಖಭಾಗದಲ್ಲಿರುವ 'ಸಬಾಂಗ್ ಬಂದರು' (Sabang Port) ಅನ್ನು ಉಭಯ ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ.&lt;/p&gt;&lt;p&gt;ಅಪರೂಪದ ಖನಿಜಗಳು ಮತ್ತು ಸ್ಟೀಲ್ ಸಪ್ಲೈ ಚೈನ್ ಒಪ್ಪಂದ: ಭಾರತದ ಎನ್&zwnj;ಎಫ್&zwnj;ಟಿಸಿ (NFTDC), ಮಿಡ್&zwnj;ವೆಸ್ಟ್ ಲಿಮಿಟೆಡ್ ಮತ್ತು ಇಂಡೋನೇಷಿಯಾದ ಪಿಟಿ ಪೆರ್ಮಿನಾಸ್ (PT PERMINAS) ನಡುವೆ ತ್ರಿಪಕ್ಷೀಯ ಒಪ್ಪಂದ ನಡೆದಿದೆ. ಇದು ಅಪರೂಪದ ಭೂಮಿಯ ಮ್ಯಾಗ್ನೆಟ್ (Rare Earth Magnet) ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಜಾಗತಿಕ ಸಪ್ಲೈ ಚೈನ್ ಮೇಲೆ ಚೀನಾದ ಏಕಸ್ವಾಮ್ಯವನ್ನು ಮುರಿಯಲಿದೆ. ಇದರೊಂದಿಗೆ ಇಂಡೋನೇಷಿಯಾದಲ್ಲಿ ಸ್ಟೀಲ್, ನಿಕಲ್ ಮತ್ತು ಮ್ಯಾಗ್ನೆಟ್ ತಯಾರಿಕೆಯಲ್ಲಿ ಭಾರತ ಭಾರಿ ಹೂಡಿಕೆ ಮಾಡಲಿದೆ.&lt;/p&gt;&lt;p&gt;ಬಾಹ್ಯಾಕಾಶ ಸಂಶೋಧನೆಯಲ್ಲಿ ಜಂಟಿ ಹೆಜ್ಜೆ: ಉಪಗ್ರಹ ತಂತ್ರಜ್ಞಾನ ಮತ್ತು ಉಪಗ್ರಹ ಆಧಾರಿತ ದೂರಸಂವೇದಿ (Remote Sensing) ಕ್ಷೇತ್ರದಲ್ಲಿ ಜಂಟಿ ಸಂಶೋಧನೆ ಮತ್ತು ತಂತ್ರಜ್ಞಾನ ಹಂಚಿಕೆಗೆ ಉಭಯ ದೇಶಗಳು ಒಪ್ಪಿಕೊಂಡಿವೆ. ಇದರಿಂದ ಸಿಗುವ ಉಪಗ್ರಹ ದತ್ತಾಂಶಗಳು (Satellite Data) ಉಭಯ ದೇಶಗಳ ಕೃಷಿ ಮೇಲ್ವಿಚಾರಣೆ, ಪ್ರಕೃತಿ ವಿಕೋಪ ನಿರ್ವಹಣೆ ಮತ್ತು ದೂರಸಂಪರ್ಕ ವ್ಯವಸ್ಥೆಗೆ ಭಾರಿ ಸಹಕಾರಿಯಾಗಲಿವೆ.&lt;/p&gt;&lt;h2&gt;ಇಂಡೋನೇಷಿಯಾದಲ್ಲಿ ಐಐಎಂ ಬೆಂಗಳೂರು ಕ್ಯಾಂಪಸ್&lt;/h2&gt;&lt;p&gt;ಭಾರತದ ಪ್ರೀಮಿಯಂ ಮ್ಯಾನೇಜ್&zwnj;ಮೆಂಟ್ ಶಿಕ್ಷಣದ ಬ್ರ್ಯಾಂಡ್ ಈಗ ಆಸಿಯಾನ್ (ASEAN) ವಲಯಕ್ಕೆ ವಿಸ್ತರಿಸುತ್ತಿದೆ. ಇಂಡೋನೇಷಿಯಾದ ಸಿಂಘಸಾರಿ ವಿಶೇಷ ಆರ್ಥಿಕ ವಲಯದಲ್ಲಿ (SEZ) ಐಐಎಂ ಬೆಂಗಳೂರಿನ (IIM Bangalore) ಮೊದಲ ವಿದೇಶಿ ಕ್ಯಾಂಪಸ್ ತಲೆಯೆತ್ತುತ್ತಿದೆ. ಇದು ಭಾರತೀಯ ಶೈಲಿಯಲ್ಲಿ ತರಬೇತಿ ಪಡೆದ ಇಂಡೋನೇಷಿಯನ್ ವೃತ್ತಿಪರರ ಜಾಲವನ್ನು ಸೃಷ್ಟಿಸಲಿದ್ದು, ಆಗ್ನೇಯ ಏಷ್ಯಾದಲ್ಲಿ ಭಾರತದ ಪ್ರಭಾವ ಹೆಚ್ಚಿಸಲಿದೆ.&lt;/p&gt;&lt;p&gt;ಇವಿಎಂ ತಂತ್ರಜ್ಞಾನದ ರಫ್ತು ಮತ್ತು ಪ್ರಜಾಪ್ರಭುತ್ವದ ಬೆಸುಗೆ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವು, ಮೂರನೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಇಂಡೋನೇಷಿಯಾಕ್ಕೆ ತನ್ನದೇ ಆದ ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳನ್ನು (EVM) ಅಭಿವೃದ್ಧಿಪಡಿಸಲು ತಾಂತ್ರಿಕ ಸಹಾಯ ಮಾಡಲಿದೆ. ಭಾರತದ ಚುನಾವಣಾ ಆಯೋಗ (ECI) ಮತ್ತು ಇಂಡೋನೇಷಿಯಾದ ಕೆಪಿಯು (KPU) ನಡುವಿನ ಒಪ್ಪಂದವು ಚುನಾವಣೆ ನಿರ್ವಹಣೆಯಲ್ಲಿ ತಂತ್ರಜ್ಞಾನ ಬಳಕೆಗೆ ಹಾದಿ ಮಾಡಿಕೊಟ್ಟಿದೆ.&lt;/p&gt;&lt;p&gt;ಕೈಗೆಟುಕುವ ಭಾರತೀಯ ಔಷಧ ಹಾಗೂ ಮಧ್ಯಾಹ್ನದ ಬಿಸಿಯೂಟದ ಮಾದರಿ: ಇಂಡೋನೇಷಿಯಾದ 28 ಕೋಟಿ ನಾಗರಿಕರಿಗೆ ಶೀಘ್ರದಲ್ಲೇ ಭಾರತದ ಅಗ್ಗದ ಮತ್ತು ಗುಣಮಟ್ಟದ ಜನರಿಕ್ ಔಷಧಗಳು ಲಭ್ಯವಾಗಲಿವೆ. ಇದರೊಂದಿಗೆ ಅಲ್ಲಿನ ವೈದ್ಯರಿಗೆ ಭಾರತದಲ್ಲಿ ಫೆಲೋಶಿಪ್ ಸಿಗಲಿದೆ. ಭಾರತದಲ್ಲಿ ಯಶಸ್ವಿಯಾಗಿರುವ 'ಮಧ್ಯಾಹ್ನದ ಬಿಸಿಯೂಟ' (Mid-day meal) ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆಯ (PDS) ಮಾದರಿಯನ್ನು ಭಾರತ ಇಂಡೋನೇಷಿಯಾ ಜೊತೆ ಹಂಚಿಕೊಂಡಿದ್ದು, ಬಡತನ ನಿರ್ಮೂಲನೆಗೆ ಕೈಜೋಡಿಸಿದೆ.&lt;/p&gt;&lt;h2&gt;ಇಂಡೋನೇಷಿಯಾ ರೈತರಿಗೆ ಭಾರತದ ಗೋಧಿ ತಳಿ&lt;/h2&gt;&lt;p&gt;ಕೃಷಿ ಪ್ರಧಾನ ದೇಶಗಳಾದ ಭಾರತ ಮತ್ತು ಇಂಡೋನೇಷಿಯಾ ಆಹಾರ ಭದ್ರತೆಗೆ ಆದ್ಯತೆ ನೀಡಿವೆ. ಇದರ ಭಾಗವಾಗಿ ಭಾರತವು ೧೦೦ ಟನ್ ಉತ್ತಮ ಗುಣಮಟ್ಟದ &quot;DWR 162&quot; ಗೋಧಿ ಬಿತ್ತನೆ ಬೀಜಗಳನ್ನು ಇಂಡೋನೇಷಿಯಾಕ್ಕೆ ಪೂರೈಸುವುದಾಗಿ ಘೋಷಿಸಿದೆ. ಇದು ಉಭಯ ದೇಶಗಳ ಕೃಷಿ ತಜ್ಞರ ಜ್ಞಾನ ವಿನಿಮಯಕ್ಕೆ ಸಹಕಾರಿಯಾಗಲಿದೆ.&lt;/p&gt;&lt;p&gt;ಯುಪಿಐ ಮತ್ತು ಕ್ಯೂಆರ್&zwnj;ಐಎಸ್ ಡಿಜಿಟಲ್ ಲಿಂಕ್: ವೈರ್&zwnj;ಲೆಸ್ ನೆಟ್&zwnj;ವರ್ಕ್, ಕ್ವಾಂಟಮ್ ಸಿಸ್ಟಮ್ಸ್ ಮತ್ತು ಮುಂದಿನ ತಲೆಮಾರಿನ ಡಿಜಿಟಲ್ ಮೂಲಸೌಕರ್ಯದಲ್ಲಿ ಸಹಕಾರ ಏರ್ಪಟ್ಟಿದೆ, ಇದು ಭಾರತದ 'ಸ್ಟಾರ್ಟ್ಅಪ್ ಇಂಡಿಯಾ' ಮಿಷನ್&zwnj;ಗೆ ಬಲ ನೀಡಲಿದೆ. ಪ್ರಮುಖವಾಗಿ ಭಾರತದ ಹೆಮ್ಮೆಯ ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇಂಡೋನೇಷಿಯಾದ ಕ್ಯೂಆರ್&zwnj;ಐಎಸ್ (QRIS) ಪಾವತಿ ವ್ಯವಸ್ಥೆಯೊಂದಿಗೆ ಜೋಡಿಸಲು ತಾಂತ್ರಿಕ ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದೆ.&lt;/p&gt;&lt;p&gt;ವಿಪತ್ತು ನಿರ್ವಹಣೆಗೆ ಜಂಟಿ ಮುನ್ನೆಚ್ಚರಿಕೆ ವ್ಯವಸ್ಥೆ: ಭಾರತ ಮತ್ತು ಇಂಡೋನೇಷಿಯಾ ದೇಶಗಳು ನೈಸರ್ಗಿಕ ವಿಕೋಪಗಳಿಗೆ ಹೆಚ್ಚು ತುತ್ತಾಗುವ ಭೂಪ್ರದೇಶಗಳಾಗಿವೆ. ಈ ಹಿನ್ನೆಲೆಯಲ್ಲಿ ಭಾರತದ ಎನ್&zwnj;ಡಿಎಂಎ (NDMA) ಮತ್ತು ಇಂಡೋನೇಷಿಯಾದ ಬಿಎನ್&zwnj;ಪಿಬಿ (BNPB) ಸಂಸ್ಥೆಗಳ ನಡುವೆ ಒಪ್ಪಂದವಾಗಿದ್ದು, ತಂತ್ರಜ್ಞಾನ ಆಧಾರಿತ ಮುಂಚಿನ ಮುನ್ನೆಚ್ಚರಿಕೆ ವ್ಯವಸ್ಥೆ (Early Warning Systems) ಮತ್ತು ಜಂಟಿ ರಕ್ಷಣಾ ಕಾರ್ಯಾಚರಣೆಗಳ ಮೂಲಕ ಲಕ್ಷಾಂತರ ಜೀವಗಳನ್ನು ರಕ್ಷಿಸಲು ತೀರ್ಮಾನಿಸಲಾಗಿದೆ.&lt;/p&gt;&lt;h2&gt;9ನೇ ಶತಮಾನದ ಪ್ರಂಬನನ್ ಹಿಂದೂ ದೇವಾಲಯದ ಜೀರ್ಣೋದ್ಧಾರ&lt;/h2&gt;&lt;p&gt;ಇತಿಹಾಸವನ್ನು ಭವಿಷ್ಯದ ಶಕ್ತಿಯಾಗಿಸುವ &quot;ವಿಕಾಸ್ ಭೀ, ವಿರಾಸತ್ ಭೀ&quot; ಯೋಜನೆಯಡಿ, ಇಂಡೋನೇಷಿಯಾದ ಯೋಗ್ಯಕರ್ತಾದಲ್ಲಿರುವ ಯುನೆಸ್ಕೋ ಮಾನ್ಯತೆ ಪಡೆದ 9ನೇ ಶತಮಾನದ ಪ್ರಸಿದ್ಧ 'ಪ್ರಂಬನನ್ ಹಿಂದೂ ದೇವಾಲಯ ಸಂಕೀರ್ಣ'ದ (Prambanan Temple) ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಭಾರತ ಸಂಪೂರ್ಣ ಸಹಾಯದ ಭರವಸೆ ನೀಡಿದೆ. ಈ ಮೂಲಕ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಸಮರ್ಪಿತವಾದ ಭವ್ಯ ಪರಂಪರೆಯನ್ನು ರಕ್ಷಿಸಲಾಗುತ್ತಿದೆ.&lt;/p&gt;&lt;p&gt;ಮಹಾಸಾಗರ ದೂರದೃಷ್ಟಿ ಮತ್ತು ಅತ್ಯುನ್ನತ ಪ್ರಶಸ್ತಿ: ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷಿಯಾ ಪ್ರವಾಸವು ದ್ವಿಪಕ್ಷೀಯ ಸಂಬಂಧದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಮೈಲಿಗಲ್ಲಾಗಿದೆ. ಈ ಪ್ರವಾಸವು ಭಾರತದ ಪ್ರಸಿದ್ಧ 'ಮಹಾಸಾಗರ' (MAHASAGAR - Mutual and Holistic Advancement for Security Across the Regions) ಪರಿಕಲ್ಪನೆಗೆ ಅನುಗುಣವಾಗಿದ್ದು, ಇಡೀ ಇಂಡೋ-ಪೆಸಿಫಿಕ್ ವಲಯದಲ್ಲಿ ಭದ್ರತೆ, ಸ್ಥಿರತೆ ಮತ್ತು ಅಂತರ್ಗತ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಇಂಡೋನೇಷಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ &quot;ಬೀಂಟಾಂಗ್ ಆದಿಪೂರ್ಣ&quot; (Bintang Adipurna) ನೀಡಿ ಗೌರವಿಸಲಾಯಿತು.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/backing-pak-in-1965-to-buying-brahmos-pm-modi-diplomacy-strengthens-india-indonesia-ties/articleshow-942yfv1"/>
        </item>
        <item>
            <title><![CDATA[ಖತಾರ್‌ನ ಮಾಜಿ ಅಮೀರ್ ಶೇಖ್ ಹಮದ್ ನಿಧನಕ್ಕೆ ಭಾರತದಲ್ಲಿ ರಾಷ್ಟ್ರೀಯ ಶೋಕಾಚರಣೆ]]></title>
            <link>https://kannada.asianetnews.com/india-news/national-mourning-in-india-after-former-qatar-emir-sheikh-hamad-passes-away/articleshow-6a9szrv</link>
            <guid isPermaLink="true">https://kannada.asianetnews.com/india-news/national-mourning-in-india-after-former-qatar-emir-sheikh-hamad-passes-away/articleshow-6a9szrv</guid>
            <pubDate>Mon, 13 Jul 2026 21:55:42 +0530</pubDate>
            <description><![CDATA[&lt;p&gt;ಖತಾರ್ ದೇಶದ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರ ನಿಧನದ ಹಿನ್ನೆಲೆಯಲ್ಲಿ, ಗೌರವಸೂಚಕವಾಗಿ ಭಾರತ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ನಡೆಸಿದೆ. ಎಲ್ಲಾ ಸರ್ಕಾರಿ ಹಾಗೂ ಪ್ರಮುಖ ಕಟ್ಟಡಗಳ ಮೇಲೆ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxah748w491zqqsygq4yj3kt,imgname-sheikh-hamad-bin-khalifa-al-thani-1783838773532.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ (ಜು.13) ಖತಾರ್ ದೇಶದ ಫಾದರ್ ಎಂದೇ ಕರೆಯಲ್ಪಡುವ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ನಿಧನದ ಹಿನ್ನಲೆಯಲ್ಲಿ ಭಾರತ ಇಂದು (ಜು.13) ರಾಷ್ಟ್ರೀಯ ಶೋಕಾಚರಣೆ ನಡೆಸಿದೆ. ಶೋಕಾಚರಣೆಯ ಅಂಗವಾಗಿ ಇಂದು ಭಾರತದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಗೌರವ ನಮನ ಸಲ್ಲಿಸಲಾಗಿದೆ. 74ನೇ ವಯಸ್ಸಿನಲ್ಲಿ ನಿಧನರಾದ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿಗೆ ಭಾರತ ಸರ್ಕಾರ ವಿಶೇಷ ಗೌರವ ಸಲ್ಲಿಸಿದೆ. ಭಾರತ ಸರ್ಕಾರದ ಪರವಾಗಿ ಸಚಿವ ಕಿರಣ್ ರಿಜಿಜು ಖತಾರ್&zwnj;ಗೆ ಪ್ರಯಾಣ ಬೆಳೆಸಿ ರಾಜಮನೆತನಕ್ಕೆ ಸ್ವಾಂತನ ಹೇಳಲಿದ್ದಾರೆ.&lt;/p&gt;&lt;h2&gt;ಪ್ರಧಾನಿ ಮೋದಿ ಕಂಬನಿ&lt;/h2&gt;&lt;p&gt;ಖತಾರ್ ರಾಜ್ಯದ ಫಾದರ್ ಅಮೀರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಸಾಂತ್ವನ ಮಾತುಗಳನ್ನಾಡಿದ್ದಾರೆ. ಖತಾರ್ ರಾಜ್ಯದ ಫಾದರ್ ಅಮೀರ್, ಅವರ ಘನತೆವೆತ್ತ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ಅವರು ಖತಾರ್ ಅನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಉನ್ನತ ಶಿಖರಕ್ಕೆ ಮುನ್ನಡೆಸಿದ ಮಹಾನ್ ದೂರದರ್ಶಿ ನಾಯಕರಾಗಿದ್ದರು. ಫೆಬ್ರವರಿ 2024 ರಲ್ಲಿ ನನ್ನ ಖತಾರ್ ಭೇಟಿಯ ಸಂದರ್ಭದಲ್ಲಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗಿತ್ತು, ಅವರನ್ನು ಭಾರತದ ಅತ್ಯಂತ ಆಪ್ತ ಮಿತ್ರನನ್ನಾಗಿ ನಾವು ಸದಾ ನೆನಪಿಸಿಕೊಳ್ಳುತ್ತೇವೆ. ಖತಾರ್&zwnj;ನ ಪ್ರಸ್ತುತ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಹಾಗೂ ಅಲ್ಲಿನ ರಾಜಮನೆತನ ಮತ್ತು ಜನತೆಗೆ ನನ್ನ ಆಳವಾದ ಸಾಂತ್ವನಗಳು&quot; ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರು 1995 ರಿಂದ 2013 ರವರೆಗೆ ಒಟ್ಟು 18 ವರ್ಷಗಳ ಕಾಲ ಖತಾರ್ ದೇಶದ ಅಮೀರ್ ಆಗಿ ಆಡಳಿತ ನಡೆಸಿದ್ದರು. ಇವರ ಆಡಳಿತಾವಧಿಯಲ್ಲೇ ಖತಾರ್ ದೇಶವು ಜಾಗತಿಕ ಮಟ್ಟದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜತಾಂತ್ರಿಕವಾಗಿ ಅಭೂತಪೂರ್ವ ಬದಲಾವಣೆಗಳನ್ನು ಕಂಡಿತು. ತಮ್ಮ ದೇಶದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವ ಮೂಲಕ ಖತಾರ್ ಅನ್ನು ವಿಶ್ವದ ಅತ್ಯಂತ ಶ್ರೀಮಂತ ದೇಶಗಳ ಸಾಲಿನಲ್ಲಿ ನಿಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.&lt;/p&gt;&lt;p&gt;2013 ರಲ್ಲಿ ಅವರು ಸ್ವಯಂಪ್ರೇರಿತರಾಗಿ ಅಧಿಕಾರದಿಂದ ಕೆಳಗಿಳಿದು, ತಮ್ಮ ಪುತ್ರ ಹಾಗೂ ಪ್ರಸ್ತುತ ಅಮೀರ್ ಆಗಿರುವ ಶೇಖ್ ತಮೀಮ್ ಅವರಿಗೆ ಆಡಳಿತದ ಚುಕ್ಕಾಣಿ ಒಪ್ಪಿಸುವ ಮೂಲಕ ಗಲ್ಫ್ ರಾಷ್ಟ್ರಗಳ ಇತಿಹಾಸದಲ್ಲೇ ಹೊಸ ಪರಂಪರೆಗೆ ನಾಂದಿ ಹಾಡಿದ್ದರು. ಇವರ ಆಡಳಿತಾವಧಿಯಲ್ಲಿ ಖತಾರ್&zwnj;ನಲ್ಲಿ ಭಾರತೀಯ ಸಮುದಾಯದ ಜನಸಂಖ್ಯೆ ಗಣನೀಯವಾಗಿ ಬೆಳೆದಿದ್ದಲ್ಲದೆ, ಇವರು 1999, 2005 ಮತ್ತು 2012 ರಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿ ಉಭಯ ದೇಶಗಳ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದರು&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/national-mourning-in-india-after-former-qatar-emir-sheikh-hamad-passes-away/articleshow-6a9szrv"/>
        </item>
        <item>
            <title><![CDATA[Aamir khan third marriage row: 'ನೀವು ನಾಲ್ಕು ಆಗಿ..' ಬಿಜೆಪಿ ನಾಯಕ ನಿತೇಶ್ ರಾಣೆ ವಿರುದ್ಧ ವಾರಿಸ್ ಪಠಾಣ್ ವ್ಯಂಗ್ಯ]]></title>
            <link>https://kannada.asianetnews.com/india-news/aimim-waris-pathan-reacts-nitesh-rane-claim-love-jihad-on-aamir-khan-third-marriage-rav/articleshow-09k3muy</link>
            <guid isPermaLink="true">https://kannada.asianetnews.com/india-news/aimim-waris-pathan-reacts-nitesh-rane-claim-love-jihad-on-aamir-khan-third-marriage-rav/articleshow-09k3muy</guid>
            <pubDate>Mon, 13 Jul 2026 11:24:51 +0530</pubDate>
            <description><![CDATA[&lt;p&gt;ನಟ ಆಮಿರ್ ಖಾನ್ ಅವರ ಮೂರನೇ ಮದುವೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದನ್ನು 'ಲವ್ ಜಿಹಾದ್' ಎಂದು ಕರೆದ ಬಿಜೆಪಿ ನಾಯಕ ನಿತೇಶ್ ರಾಣೆಗೆ, ಎಐಎಂಐಎಂ ನಾಯಕ ವಾರಿಸ್ ಪಠಾಣ್ ತಿರುಗೇಟು. ಆಮಿರ್ ಕುಟುಂಬಕ್ಕಿಲ್ಲದ ಸಮಸ್ಯೆ ನಿಮಗೇಕೆ, ಬೇಕಿದ್ದರೆ ನೀವು ನಾಲ್ಕು ಮದುವೆಯಾಗಿ ಎಂದು ಪಠಾಣ್ ವ್ಯಂಗ್ಯ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd0e5vf4k82f50rx2zv4es9,imgname-----------------------2026-07-13t111137.611-1783921842031.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟ, ಮಿ.ಪರ್ಫೆಕ್ಟ್ ಆಮಿರ್ ಖಾನ್ ಇತ್ತೀಚೆಗೆ ಗೌರಿ ಸ್ಪ್ರಾಟ್ ಅವರೊಂದಿಗೆ ಮೂರನೇ ಮದುವೆಯಾದರು. ಆಮಿರ್&zwnj; ಖಾನ್&zwnj;ರ ಈ ವಿವಾಹವು ಮಹಾರಾಷ್ಟ್ರದ ರಾಜಕೀಯದಲ್ಲಿ ವಿವಾದ, ಉದ್ವಿಗ್ನತೆಗೆ ಕಾರಣವಾಗಿದೆ. 'ಆಮಿರ್ ಖಾನ್ ಮೂರು ಮದುವೆಯಾದ್ರು, ನೀವು ನಾಲ್ಕು ಮದುವೆ ಆಗಿ ತೋರಿಸಿ' ಎಂದು ಹಿಂದುತ್ವವಾದಿ ರಾಜಕಾರಣಿ ನಿತೇಶ್ ರಾಣೆ ವಿರುದ್ಧ ಎಐಎಂಐ ನಾಯಕ ವಾರಿಸ್ ಪಠಾಣ್ ವ್ಯಂಗ್ಯವಾಡಿದ್ದಾರೆ.&lt;/p&gt;&lt;h2&gt;ಆಮಿರ್ ಖಾನ್ 'ಲವ್ ಜಿಹಾದ್'ನ ಬ್ರಾಂಡ್ ರಾಯಭಾರಿ'&lt;/h2&gt;&lt;p&gt;ಬಾಲಿವುಡ್ ನಟ ಮುಸ್ಲಿಂಮಾಗಿದ್ದರೂ ಮೂವರು ಹಿಂದೂ ಮಹಿಳೆಯರನ್ನ ಮದುವೆಯಾದ್ದಾರೆ. ಆ ಮೂಲಕ ಲವ್ ಜಿಹಾದ್&zwnj;ನ ಬ್ರಾಂಡ್ ರಾಯಭಾರಿ ಆಗಿದ್ದಾರೆ ಎಂದು ನಿತೇಶ್ ರಾಣೆ ಅವರು ಕಿಡಿಕಾರಿದ್ದರು. ಅಲ್ಲದೇ ಹಿಂದೂಗಳು ಆಮಿರ್&zwnj; ಖಾನ್ ಅವರ ಸಿನಿಮಾಗಳನ್ನ ನೋಡದಂತೆ ಕರೆ ನೀಡಿದ್ದರು. ರಾಣೆ ಹೇಳಿಕೆಗೆ ವಾರಿಸ್ ಪಠಾಣ್ ವ್ಯಂಗ್ಯವಾಡಿದ್ದಾರೆ.&lt;/p&gt;&lt;h3&gt;ಆಮಿರ್ ಖಾನ್ ಬಗ್ಗೆ ನಿತೇಶ್ ರಾಣೆಗೆ ಹೊಟ್ಟೆ ಉರಿ&lt;/h3&gt;&lt;p&gt;ಆಮಿರ್ ಖಾನ್ ಬಗ್ಗೆ ಹಿಂದೂತ್ವವಾದಿ ನಿತೇಶ್ ರಾಣೆಗೆ ಅಸೂಯೆ ಹೆಚ್ಚಾಗಿದೆ. ಅದಕ್ಕಾಗಿಯೇ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಮಿರ್ ಖಾನ್ ಮೂರು ಬಾರಿ ಮದುವೆಯಾದರೆ ಏನಾಯ್ತು, ನೀವು ನಾಲ್ಕು ಮದುವೆಯಾಗಬಹುದು. ನಿಮ್ಮನ್ನು ತಡೆಯುವವರು ಯಾರು? ನೀವು ಯಾಕೆ ಅಸೂಯೆ ಪಡುತ್ತಿದ್ದೀರಿ? ಎಂದು ವಾರಿಸ್ ಪಠಾಣ್ ಪ್ರಶ್ನಿಸಿದ್ದಾರೆ.&lt;/p&gt;&lt;p&gt;&lt;strong&gt;ಕುಟುಂಬದವರಿಗಿಲ್ಲದ ಸಿಟ್ಟು ನಿಮಗ್ಯಾಕೆ?&lt;/strong&gt;&lt;/p&gt;&lt;p&gt;ಆಮಿರ್ ಖಾನ್ ಅವರ ಕುಟುಂಬದವರು, ಸ್ನೇಹಿತರು ಮೂರನೇ ಮದುವೆ ಬಗ್ಗೆ ಯಾವುದೇ ಅಸಮಾಧಾನ ಆಕ್ಷೇಪಣೆ ಇಲ್ಲ. ಆಮೀರ್ ಖಾನ್ ಅವರ ಮೊದಲ ಮತ್ತು ಎರಡನೇ ಪತ್ನಿ ಕೂಡ ಮದುವೆಗೆ ಬಂದಿದ್ರು. ಅವರ ಮಗ ಮಗಳು ಕೂಡ ಬಂದಿದ್ರು. ಅಷ್ಟೇ ಅಲ್ಲ, ಈ ಮದುವೆಗೆ ಅಳಿಯ ಕೂಡ ಬಂದಿದ್ರು. ಅವರ ಸ್ನೇಹಿತರು ಮತ್ತು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಕೂಡ ಬಂದಿದ್ರು. ಇವರಾರು ಆಮಿರ್ ಖಾನ್ ಮೂರನೇ ಮದುವೆ ಆಗ್ತಿದ್ದಾರೆ, ಲವ್ ಜಿಹಾದ್ ಮಾಡ್ತಿದ್ದಾರೆ ಅಂತಾ ಅನ್ನಿಸಲಿಲ್ಲ. ಆದ್ರೆ ನೀವು ಮಾತ್ರ. ನೀವು ಮಾತ್ರ ಯಾಕೆ ಅಸೂಯೆ ಮಾಡ್ತೀರಾ ಎಂದು ವಾರಿಸ್ ಪಠಾಣ್ ಪ್ರಶ್ನಿಸಿದ್ದಾರೆ.&lt;/p&gt;&lt;h3&gt;ನಿತೇಶ್ ರಾಣೆಗೆ ಜಿಹಾದ್&zwnj;ನ ಅರ್ಥವೇ ಗೊತ್ತಿಲ್ಲ&lt;/h3&gt;&lt;p&gt;ಅಮಿರ್&zwnj; ಖಾನ್&zwnj;ಗೆ ನೇಮ್ ಫೇಮು, ಹಣ ಎಲ್ಲ ಇದೆ ಆದ್ದರಿಂದ ಅವರು ಮೂರನೇ ಬಾರಿಗೆ ವಿವಾಹವಾದರು. ನಿಮಗೂ ಹಣ ಅಧಿಕಾರಿ ಇದೆ, ನೀವೂ ಹಾಗೆ ಮಾಡಿ. ಕಾನೂನಿನ ಚೌಕಟ್ಟಿನೊಳಗೆ ಯಾರಾದರೂ ಮದುವೆಯಾಗಲು ಬಯಸಿದ್ರೆ ಮದುವೆ ಆಗಬಹುದು. ಬೇಕಿದ್ರೆ ನೀವು ನಾಲ್ಕು ಮದುವೆಯಾಗಿ ಅದುಬಿಟ್ಟು ಲವ್ ಜಿಹಾದ್ ಅಂತಾ ಅಸಂಬದ್ಧ ಹೇಳಿಕೆ ನೀಡಬಾರದು. ಅಷ್ಟಕ್ಕೂ ನಿಮಗೆ(ನಿತೇಶ್ ರಾಣೆ) ಲವ್ ಜಿಹಾದ್ ಅರ್ಥವೇ ತಿಳಿದಿಲ್ಲ ಎಂದು ವಾರಿಸ್ ಪಠಾಣ್ ಲೇವಡಿ ಮಾಡಿದ್ದಾರೆ.&lt;/p&gt;&lt;p&gt;ಮುಸ್ಲಿಂ ಬಗೆಗಿನ ದ್ವೇಷವೇ ನಿತೇಶ್ ರಾಣೆಯವರ ಮಾತುಗಳಿಗೆ ಕಾರಣ. ಅವರ ಗುರಿ ಅಮಿರ್ ಖಾನ್ ಅಲ್ಲ, ಬದಲಾಗಿ ಮುಸ್ಲಿಮರು. ನಾನು ಇಂಹ ಜನರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಇಷ್ಟಪಡೋಲ್ಲ ಅವರು ಮುಸ್ಲಿಮರ ಮೇಲಿನ ದ್ವೇಷ ಹೊರಹಾಕಲು, ದ್ವೇಷವನ್ನು ಹರಡಲು ಒಗ್ಗಿಕೊಂಡಿದ್ದಾರೆ ಪಠಾಣ್ ಹೇಳಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/aimim-waris-pathan-reacts-nitesh-rane-claim-love-jihad-on-aamir-khan-third-marriage-rav/articleshow-09k3muy"/>
        </item>
        <item>
            <title><![CDATA[ಬಿಲಾಸಪುರದಲ್ಲಿ ರೈಲು ಅಪಘಾತ, ಹಳಿ ತಪ್ಪಿದ ಮೂರು ಬೋಗಿಗಳಿಂದ ಸಂಚಾರದಲ್ಲಿ ವ್ಯತ್ಯಯ]]></title>
            <link>https://kannada.asianetnews.com/india-news/goods-train-derails-in-bilaspur-three-coaches-off-track-disrupt-rail-traffic/articleshow-gnotq7d</link>
            <guid isPermaLink="true">https://kannada.asianetnews.com/india-news/goods-train-derails-in-bilaspur-three-coaches-off-track-disrupt-rail-traffic/articleshow-gnotq7d</guid>
            <pubDate>Mon, 13 Jul 2026 20:35:31 +0530</pubDate>
            <description><![CDATA[&lt;p&gt;ಬಿಲಾಸಪುರದಲ್ಲಿ ರೈಲು ಅಪಘಾತ ಸಂಭವಿಸಿದೆ. ಮೂರು ಬೋಗಿಗಳು ಹಳಿ ತಪ್ಪಿದ ಪರಿಣಾಮ ಇತರ ರೈಲು ಸಂಚಾರ ವಿಳಂಬವಾಗಿದೆ. ಈ ಮಾರ್ಗದಲ್ಲಿ ಚಲಿಸಬೇಕಿದ್ದ ಹಲವು ಪ್ರಯಾಣಿಕರ ರೈಲುಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd0t4yha0va9djb4w2xf21b,imgname-railway-board-approves-yelahanka-arsikere-memu-train-service-starting-july-14--3--1783922234321.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಿಲಾಸಪುರ (ಜು.13&lt;/strong&gt;) ಭಾರತೀಯ ರೈಲ್ವೇಯ ಗೂಡ್ಸ್ ರೈಲು ಬಿಲಾಸಪುರದಲ್ಲಿ ಹಳಿ ತಪ್ಪಿ ಅಪಘಾತಕ್ಕೀಡಾಗಿದೆ. ಗೂಡ್ಸ್ ರೈಲು ಚಲಿಸುತ್ತಿದ್ದಂತೆ ಮೂರು ಬೋಗಿಗಳು ಹಳಿ ತಪ್ಪಿ ಅಪಘಾತ ಸಂಭವಿಸಿದೆ. ಪರಿಣಾಮ ರೈಲು ಹಳಿ, ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಗೆ ಹಾನಿಯಾಗದ ಘಟನೆ ಚತ್ತೀಸಗಢದ ಬಿಲಾಸಪುರ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಠವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಇದೇ ಮಾರ್ಗದಲ್ಲಿ ಚಲಿಸಬೇಕಿದ್ದ ಹಲವು ಪ್ರಯಾಣಕರ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.&lt;/p&gt;&lt;h2&gt;ನಿಧಾನವಾಗಿ ಚಲಿಸುತ್ತಿದ್ದ ವೇಳೆ ಹಳಿ ತಪ್ಪಿದ ರೈಲು&lt;/h2&gt;&lt;p&gt;ಗೂಡ್ಸ್ ರೈಲು ಸರಕು ಇಳಿಸಿದ ಬಳಿಕ ನಿಧಾನವಾಗಿ ಸಾಗುತ್ತಿತ್ತು. ಸೌತ್ ಈಸ್ಟರ್ನ್ ಸೆಂಟ್ರಲ್ ರೈಲ್ವೇ ವಲಯದ ಬಿಲಾಸ್&zwnj;ಪುರ ಬಳಿ ಮೂರು ಬೋಗಿಗಳು ಹಳಿ ತಪ್ಪಿ ಅಪಘಾತ ಸಂಭವಿಸಿದೆ. ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ. ವಿದ್ಯುತ್ ಸಂಪರ್ಕಗಳು ಕಡಿತಗೊಂಡಿದೆ. ರೈಲಿನ ಬೋಗಿ ಹಳಿ ತಪ್ಪುತ್ತಿದ್ದಂತೆ ಲೋಕೋ ಪೈಲೆಟ್ ರೈಲು ನಿಲ್ಲಿಸಿ ಮತ್ತಷ್ಟು ಅನಾಹುತ ತಪ್ಪಿಸಿದ್ದಾರೆ.&lt;/p&gt;&lt;p&gt;ರೈಲು ಹಳಿ ತಪ್ಪಿದ ಮಾಹಿತಿ ಸಿಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಇದೇ ವೇಳೆ ರೈಲ್ವೇ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಹಳಿ ತಪ್ಪಿದ ರೈಲು ಬೋಗಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಹಳಿಗಳ ದುರಸ್ತಿ, ವಿದ್ಯುತ್ ಸಂಪರ್ಕ ದುರಸ್ತಿ ಕಾರ್ಯಗಳು ಭರದಿಂದ ಸಾಗಿದೆ. ಇದೇ ಮಾರ್ಗದಲ್ಲಿ ಹಲವು ಪ್ರಯಾಣಿಕ ರೈಲುಗಳು ಸಂಚಾರವಿರುವ ಕಾರಣ ತಕ್ಷಣವೇ ದುರಸ್ತಿ ಕಾರ್ಯಗಳು ಆರಂಭಗೊಂಡಿದೆ.&lt;/p&gt;&lt;p&gt;ಪ್ರಯಾಣಿಕ ರೈಲು, ಸರಕು ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆಲ ರೈಲುಗಳ ಮಾರ್ಗ ಬದಲಿಸಲಾಗಿದೆ. ಬಿಲಾಸಪುರ ರೈಲ್ವೇ ಅಪಘಾತದಲ್ಲಿ ಕೆಲ ಹಳಿಗಳು ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಇವುಗಳನ್ನು ದುರಸ್ತಿ ಮಾಡಿದ ಬಳಿಕ ಪರಿಶೀಲನೆ ನಡೆಯಲಿದೆ. ಅಧಿಕಾರಿಗಳ ಪರಿಶೀಲನೆ ನಡೆಸಿದ ಬಳಿಕ ರೈಲು ಸಂಚಾರ ಮುಂದುವರಿಯಲಿದೆ ಎಂದು ಬಿಲಾಸವುರ ವಿಭಾಗದ ರೈಲು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/goods-train-derails-in-bilaspur-three-coaches-off-track-disrupt-rail-traffic/articleshow-gnotq7d"/>
        </item>
        <item>
            <title><![CDATA[ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ: 8 ಕಂಪನಿಗಳ ಜೊತೆ ಸಭೆ]]></title>
            <link>https://kannada.asianetnews.com/karnataka-districts/mb-patil-invites-industries-to-karnataka-meet-in-kolkata-gvd/articleshow-22n3opm</link>
            <guid isPermaLink="true">https://kannada.asianetnews.com/karnataka-districts/mb-patil-invites-industries-to-karnataka-meet-in-kolkata-gvd/articleshow-22n3opm</guid>
            <pubDate>Mon, 13 Jul 2026 20:25:57 +0530</pubDate>
            <description><![CDATA[&lt;p&gt;ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಬಂಡವಾಳ ಸೆಳೆಯುವ ತಮ್ಮ ಉಪಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮುಂದುವರಿಸಿದ್ದಾರೆ. ಇದರ ಭಾಗವಾಗಿ ಅವರು ಪೂರ್ವ ಭಾರತದತ್ತ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdzhwdravjztdcj4dmvvkbq,imgname-bmb-1783954469303.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13): &lt;/strong&gt;ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಬಂಡವಾಳ ಸೆಳೆಯುವ ತಮ್ಮ ಉಪಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮುಂದುವರಿಸಿದ್ದಾರೆ. ಇದರ ಭಾಗವಾಗಿ ಅವರು ಪೂರ್ವ ಭಾರತದತ್ತ ಗಮನ ಹರಿಸಿದ್ದು, ಎಂಟು ಪ್ರಮುಖ ಕಂಪನಿಗಳ ಜತೆ ಸೋಮವಾರ ಕೋಲ್ಕತ್ತಾದಲ್ಲಿ ಮಾತುಕತೆ ನಡೆಸಿದ್ದಾರೆ.&lt;/p&gt;&lt;p&gt;ಉನ್ನತ ಮಟ್ಟದ ನಿಯೋಗದೊಂದಿಗೆ ಕೋಲ್ಕತ್ತಾ ತಲುಪಿರುವ ಸಚಿವರು ಪ್ಲೈವುಡ್ ತಯಾರಿಕೆಗೆ ಹೆಸರಾಗಿರುವ ಗ್ರೀನ್ ಪ್ಲೈ, ಗಣಿಗಾರಿಕೆ ಮತ್ತು ಖನಿಜ ಸಂಸ್ಕರಣೆಗೆ ಹೆಸರಾಗಿರುವ ತೇಗಾ ಇಂಡಸ್ಟ್ರೀಸ್, ಕೃಷ್ಯುತ್ಪನ್ನ ಸಂಸ್ಕರಣೆಯಲ್ಲಿ ಮುಂಚೂಣಿಯಲ್ಲಿರುವ ರೀಗಾಲ್ ರಿಸೋರ್ಸಸ್, ಗ್ರಾಫೈಟ್ ಎಲೆಕ್ಟ್ರೋಡ್ ತಯಾರಿಕೆಗೆ ಖ್ಯಾತವಾಗಿರುವ ಗ್ರಾಫೈಟ್ ಇಂಡಿಯಾ, ಸೋಲಾರ್ ಪಿ.ವಿ. ಮಾಡ್ಯೂಲ್ ತಯಾರಿಸುವ ವಿಕ್ರಂ ಸೋಲಾರ್, ಉಡುಪು ತಯಾರಿಕೆಗೆ ಹೆಸರಾಗಿರುವ ರೂಪಾ ಇಂಡಸ್ಟ್ರೀಸ್ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ವಿಸ್ತೃತ ವಿಚಾರ ವಿನಿಮಯ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು, ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ ಮತ್ತು ವಿಸ್ತರಣೆಗೆ ಆದ್ಯತೆ ಕೊಡುವಂತೆ ಕೋರಿದ್ದಾರೆ.&lt;/p&gt;&lt;p&gt;ಅಲ್ಲದೆ, ರಾಜ್ಯ ಸರ್ಕಾರವು ಬಿಯಾಂಡ್ ಬೆಂಗಳೂರು ಉಪಕ್ರಮದಡಿ ಸಮಗ್ರ ಕೈಗಾರಿಕಾ ಬೆಳವಣಿಗೆಗೆ ಒತ್ತು ಕೊಟ್ಟಿದೆ. ಆದ್ದರಿಂದ ಹೂಡಿಕೆದಾರರು ವಿಜಯಪುರ, ತುಮಕೂರು, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕಡೆಗಳತ್ತಲೂ ಗಮನ ಹರಿಸಬೇಕು. ಈ ಭಾಗಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಮರುಬಳಕೆ ಇಂಧನ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಬೆಳವಣಿಗೆಗೆ ಯಥೇಚ್ಛ ಅವಕಾಶಗಳಿವೆ. ಹೀಗಾಗಿ ಕಂಪನಿಗಳ ನಿಯೋಗವು ಭೂಮಿ, ನೀರು, ವಿದ್ಯುತ್ ಲಭ್ಯತೆಗಳ ಬಗ್ಗೆ ತಿಳಿದುಕೊಳ್ಳಲು ರಾಜ್ಯಕ್ಕೆ ಭೇಟಿ ನೀಡಬೇಕು. ಇದಕ್ಕೆ ರಾಜ್ಯ ಸರಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಮನದಟ್ಟು ಮಾಡಿಕೊಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಮತ್ತೊಂದು ತಯಾರಿಕಾ ಘಟಕ&lt;/strong&gt;&lt;/h2&gt;&lt;p&gt;ರೀಗಾಲ್ ರಿಸೋರ್ಸಸ್ ಕಂಪನಿಯು ಸದ್ಯಕ್ಕೆ ಮೆಕ್ಕೆಜೋಳದ ಉತ್ಪನ್ನಗಳನ್ನು ಮಾತ್ರ ಉತ್ಪಾದಿಸುತ್ತಿದೆ. ತೊಗರಿಬೇಳೆ ಮತ್ತಿತರ ಕೃಷಿ ಉತ್ಪನ್ನಗಳ ಕಡೆಗೂ ಅದು ಗಮನ ಹರಿಸಬೇಕು. ಹಾಗೆಯೇ, ರೂಪಾ ಇಂಡಸ್ಟ್ರೀಸ್ ರಾಜ್ಯದಲ್ಲಿ ತನ್ನ ಮತ್ತೊಂದು ತಯಾರಿಕಾ ಘಟಕವನ್ನು ಸ್ಥಾಪಿಸಲು ಬಯಸಿದೆ. ಈ ಉದ್ದೇಶಿತ ಯೋಜನೆಗಳಿಗೆ ಸಂಬಂಧಿಸಿ ಮತ್ತಷ್ಟು ಚರ್ಚಿಸಿ, ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದು ಪಾಟೀಲ ವಿವರಿಸಿದ್ದಾರೆ.&lt;/p&gt;&lt;p&gt;ಈ ಮಾತುಕತೆಗಳಲ್ಲಿ ಗ್ರೀನ್ ಪ್ಲೈ ಕಂಪನಿಯ ಸಿಎಫ್ಒ ಸಂಜೀವ್ ಕೇಸರಿ ಮತ್ತು ಉಪಾಧ್ಯಕ್ಷ ಜಿತೇಂದ್ರಕುಮಾರ್ ಜೈನ್, ತೇಗಾ ಇಂಡಸ್ಟ್ರೀಸ್ ಪರವಾಗಿ ಅದರ ಜಾಗತಿಕ ಅಧ್ಯಕ್ಷ ಪ್ರತೀಕ್ ಬಸು ರಾಯ್, ರೀಗಾಲ್ ರಿಸೋರ್ಸಸ್ ಪರವಾಗಿ ಸಿಎಫ್ಒ ರೋಹನ್ ಕಿಶೋರಪುರಿಯಾ ಮತ್ತು ಸಿದ್ಧಾರ್ಥ ವರ್ಮಾ, ಗ್ರಾಫೈಟ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಆಶುತಕೋಷ್ ದೀಕ್ಷಿತ್ ಮತ್ತು ಉಪಾಧ್ಯಕ್ಷ ಸಿದ್ಧಾಂತ್ ಬಾಂಗೂರ್, ವಿಕ್ರಂ ಸೋಲಾರ್ ಕಂಪನಿಯ ಉಪಾಧ್ಯಕ್ಷ ವಿವೇಕ್ ಚೌಧರಿ ಮತ್ತು ಸಿಇಒ ಅರುಣ್ ಮಿತ್ತಲ್, ರೂಪಾ ಇಂಡಸ್ಟ್ರೀಸ್ ಸಂಸ್ಥೆಯ ಸಿಎಫ್ಒ ಸಮಿತ್ ಕೋವಾಲ ಮತ್ತು ಹಣಕಾಸು ವ್ಯವಸ್ಥಾಪಕ ಪ್ರವೀಣ್ ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್ ಮುಂತಾದವರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mb-patil-invites-industries-to-karnataka-meet-in-kolkata-gvd/articleshow-22n3opm"/>
        </item>
        <item>
            <title><![CDATA[KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಸ್ಪೆಂಡ್ ಬೆನ್ನಲ್ಲೇ ಡಾ.ಪ್ರಭುದೇವ್‌ಗೆ ಹಂಗಾಮಿ ಜವಾಬ್ದಾರಿ! ಇವರ ಹಿನ್ನೆಲೆ?]]></title>
            <link>https://kannada.asianetnews.com/state/kpsc-chairman-shivashankarappa-sahukar-suspended-interim-head-dr-prabhudev-details/articleshow-571g5i9</link>
            <guid isPermaLink="true">https://kannada.asianetnews.com/state/kpsc-chairman-shivashankarappa-sahukar-suspended-interim-head-dr-prabhudev-details/articleshow-571g5i9</guid>
            <pubDate>Mon, 13 Jul 2026 20:05:47 +0530</pubDate>
            <description><![CDATA[ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್&zwnj;ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಗಂಭೀರ ಆರೋಪಗಳ ಮೇಲೆ ರಾಜ್ಯಪಾಲರು ಅಮಾನತುಗೊಳಿಸಿದ್ದಾರೆ. ತಮ್ಮ ಪುತ್ರಿಯರಿಗೆ ಅಕ್ರಮವಾಗಿ ಹುದ್ದೆ ಕೊಡಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪ ಅವರ ಮೇಲಿದ್ದು, ಡಾ. ಬಿ. ಪ್ರಭುದೇವ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxdyebfa80vjz0qk2w6mdp7s,imgname-kpsc-interim-head-dr-prabhudev-1783953305064.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13): ಕ&lt;/strong&gt;ರ್ನಾಟಕ ಲೋಕಸೇವಾ ಆಯೋಗ (Karnataka Public Service Commission - KPSC) ದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಆಯೋಗದ ಅಧ್ಯಕ್ಷರಾಗಿದ್ದ (Chairman) ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ರಾಜ್ಯಪಾಲ (Governor) ಥಾವರ್&zwnj;ಚಂದ್ ಗೆಹ್ಲೋಟ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ (Suspended) ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಶಿವಶಂಕರಪ್ಪ ಸಾಹುಕಾರ್ ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಭ್ರಷ್ಟಾಚಾರ (Corruption) ಮತ್ತು ಸ್ವಜನಪಕ್ಷಪಾತದ (Favoritism) ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, ಆಯೋಗದ ಹಿರಿಯ ಸದಸ್ಯರಾದ ಡಾ. ಬಿ. ಪ್ರಭುದೇವ್ ಅವರನ್ನು ಕೆಪಿಎಸ್&zwnj;ಸಿಯ ಹಂಗಾಮಿ ಅಧ್ಯಕ್ಷರನ್ನಾಗಿ (Interim Chairman) ನೇಮಕ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಅಮಾನತಿಗೆ ಕಾರಣವೇನು? (Reasons for Suspension)&lt;/strong&gt;&lt;/h2&gt;&lt;p&gt;ರಾಜ್ಯಪಾಲರು ಹೊರಡಿಸಿರುವ ಸುದೀರ್ಘ ಆದೇಶದ (Order) ಪ್ರತಿಗಳ ಪ್ರಕಾರ, ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ (Abuse of Power) ಮಾಡಿಕೊಂಡು ತಮ್ಮ ಇಬ್ಬರು ಪುತ್ರಿಯರನ್ನು ಕೈಗಾರಿಕಾ ವಿಸ್ತರಣಾಧಿಕಾರಿ (Industrial Extension Officer - IEO) ಹುದ್ದೆಗಳಿಗೆ ಅಕ್ರಮವಾಗಿ ಆಯ್ಕೆ ಮಾಡಲು ನೆರವಾಗಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;p&gt;ಪ್ರಮುಖವಾಗಿ, ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ಅವರು ಓಬಿಸಿ 3ಬಿ (OBC 3B) ಮೀಸಲಾತಿಯಡಿ ಆಯ್ಕೆಯಾಗಲು ವಾರ್ಷಿಕ ಆದಾಯ ಕೇವಲ 40,000 ರೂ. ಇದೆ ಎಂಬ ಸುಳ್ಳು ಆದಾಯ ಪ್ರಮಾಣಪತ್ರವನ್ನು (Fraudulent Income Certificate) ಸಲ್ಲಿಸಿದ್ದರು. ಆದರೆ, ಶಿವಶಂಕರಪ್ಪ ಅವರ ವಾರ್ಷಿಕ ಆದಾಯ 12 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದು, ಅವರ ಮಕ್ಕಳು 'ಕ್ರೀಮಿ ಲೇಯರ್' (Creamy Layer) ವ್ಯಾಪ್ತಿಗೆ ಬರುತ್ತಾರೆ. ಹೀಗಿದ್ದರೂ ಸುಳ್ಳು ದಾಖಲೆ ನೀಡಿ ಸರ್ಕಾರಕ್ಕೆ ವಂಚಿಸಿರುವುದು ಮೇಲ್ನೋಟಕ್ಕೆ (Prima Facie) ಸಾಬೀತಾಗಿದೆ. ಅಲ್ಲದೆ, ಆಯ್ಕೆ ಪ್ರಕ್ರಿಯೆಯಲ್ಲಿ (Selection Process) ತಮ್ಮ ಮಕ್ಕಳೇ ಅಭ್ಯರ್ಥಿಗಳಾಗಿದ್ದರೂ ಅಧ್ಯಕ್ಷರು ಆ ಪ್ರಕ್ರಿಯೆಯಿಂದ ದೂರ ಉಳಿಯದೆ (Recusal) ಹಿತಾಸಕ್ತಿ ಸಂಘರ್ಷದ (Conflict of Interest) ನಿಯಮ ಉಲ್ಲಂಘಿಸಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಾರು ಈ ಡಾ. ಬಿ. ಪ್ರಭುದೇವ್?&lt;/strong&gt;&lt;/h2&gt;&lt;p&gt;ಶಿವಶಂಕರಪ್ಪ ಅವರ ಅಮಾನತಿನಿಂದ ತೆರವಾದ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ಬಿ. ಪ್ರಭುದೇವ್ (Dr. B. Prabhudev) ಅವರು 2021 ರಿಂದ ಕೆಪಿಎಸ್&zwnj;ಸಿ ಸದಸ್ಯರಾಗಿ (Member) ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕೆಪಿಎಸ್&zwnj;ಸಿಯಲ್ಲಿ ತರಲಾದ ಹಲವು ಪ್ರಮುಖ ಸುಧಾರಣೆಗಳು (Reforms) ಮತ್ತು ಬದಲಾವಣೆಗಳಲ್ಲಿ ಇವರು ಮಹತ್ತರ ಪಾತ್ರ ವಹಿಸಿದ್ದರು. ಇವರ ದಕ್ಷತೆ ಮತ್ತು ಹಿರಿತನವನ್ನು (Seniority) ಪರಿಗಣಿಸಿ ರಾಜ್ಯಪಾಲರು ಇವರಿಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಸಂವಿಧಾನದ 317(2) ಅಡಿಯಲ್ಲಿ ಕ್ರಮ&lt;/strong&gt;&lt;/h2&gt;&lt;p&gt;ರಾಜ್ಯಪಾಲರು ಭಾರತ ಸಂವಿಧಾನದ ವಿಧಿ 317(2) (Article 317(2) of the Constitution) ರ ಅಡಿಯಲ್ಲಿ ತಮಗಿರುವ ಅಧಿಕಾರವನ್ನು ಬಳಸಿ ಈ ಅಮಾನತು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಮೂಲಕ ತನಿಖೆ ನಡೆಸಲು ರಾಷ್ಟ್ರಪತಿಗಳಿಗೆ (President of India) ಶಿಫಾರಸು ಮಾಡಲಾಗಿದೆ. ತನಿಖೆ ಮುಗಿಯುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರು ಕಚೇರಿ ಕೆಲಸಗಳಲ್ಲಿ ಭಾಗವಹಿಸುವಂತಿಲ್ಲ.&lt;/p&gt;&lt;p&gt;ಲಕ್ಷಾಂತರ ಅಭ್ಯರ್ಥಿಗಳ (Candidates) ಭವಿಷ್ಯವನ್ನು ನಿರ್ಧರಿಸುವ ಸಾಂವಿಧಾನಿಕ ಸಂಸ್ಥೆಯ (Constitutional Body) ಮುಖ್ಯಸ್ಥರೇ ಇಂತಹ ಆರೋಪಕ್ಕೆ ಗುರಿಯಾಗಿರುವುದು ಸಾರ್ವಜನಿಕ ನಂಬಿಕೆಗೆ (Public Confidence) ಧಕ್ಕೆ ತಂದಿದೆ. ನೂತನ ಹಂಗಾಮಿ ಅಧ್ಯಕ್ಷ ಡಾ. ಬಿ. ಪ್ರಭುದೇವ್ ಅವರು ಆಯೋಗದ ಪಾರದರ್ಶಕತೆಯನ್ನು (Transparency) ಮರುಸ್ಥಾಪಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kpsc-chairman-shivashankarappa-sahukar-suspended-interim-head-dr-prabhudev-details/articleshow-571g5i9"/>
        </item>
        <item>
            <title><![CDATA[ದೆಹಲಿ ಗಲಭೆಯಲ್ಲಿ ಇಂಟಲಿಜೆನ್ಸ್ ಅಧಿಕಾರಿ ಹತ್ಯೆ ಕೇಸ್ ತೀರ್ಪು, ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ದೋಷಿ]]></title>
            <link>https://kannada.asianetnews.com/india-news/former-aap-leader-tahir-hussain-found-guilty-in-delhi-riots-ib-officer-murder-case/articleshow-asy1fuf</link>
            <guid isPermaLink="true">https://kannada.asianetnews.com/india-news/former-aap-leader-tahir-hussain-found-guilty-in-delhi-riots-ib-officer-murder-case/articleshow-asy1fuf</guid>
            <pubDate>Mon, 13 Jul 2026 19:35:47 +0530</pubDate>
            <description><![CDATA[&lt;p&gt;ದೆಹಲಿ ಗಲಭೆ ವೇಳೆ ಇಂಟಲಿಜೆನ್ಸ್ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದೆ. ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಜಾವೇದ್ ಸೇರಿದಂತೆ ನಾಲ್ವರು ದೋಷಿ ಎಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdwqh1e2p5avtg4gpps7y7b,imgname-delhi-riots-case-tahir-hussain-convicted-1783951508525.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.13) &lt;/strong&gt;ದೇಶವನ್ನೇ ನಡುಗಿಸಿದ 2020ರ ದೆಹಲಿ ದಂಗೆ ಅಚಾನಕ್ಕಾಗಿ ನಡೆದ ಗಲಭೆಯಲ್ಲ, ವ್ಯವಸ್ಥಿತ ಷಡ್ಯಂತ್ರ ಅನ್ನೋದಕ್ಕೆ ಹಲವು ಸಾಕ್ಷ್ಯಗಳು ಲಭ್ಯವಾಗಿದೆ. ಈಶಾನ್ಯ ದೆಹಲಿಯಲ್ಲಿ ನಡೆದ ದಂಗೆ ವೇಳೆ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಯಾಗಿತ್ತು. ಈ ಹತ್ಯೆ ಪ್ರಕರಣದ ತೀರ್ಪನ್ನು ಕೋರ್ಟ್ ಪ್ರಕಟಿಸಿದೆ.ಈ ಪ್ರಕರಣ ಸಂಬಂಧಿಸಿ ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ತಾಹೀರ್ ಹುಸೈನ್ ಜೊತೆ ಇತರ ನಾಲ್ವರು ಅಪರಾಧಿಗಳು ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.&lt;/p&gt;&lt;h2&gt;ತಾಹೀರ್ ಹುಸೇನ್ ಜೊತೆ ಐವರು ಅಪರಾಧಿಗಳು&lt;/h2&gt;&lt;p&gt;ದೆಹಲಿ ಕಾರ್ಕಡೊಮಾ ನ್ಯಾಯಲಯದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಪ್ರವೀಣ್ ಸಿಂಗ್ ತೀರ್ಪು ಪ್ರಕಟಿಸಿದ್ದಾರೆ. ತಾಹೀರ್ ಹುಸೇನ್ ಭಾರತೀಯ ದಂಡ ಸಂಹಿತೆ ಸೆಕ್ಷನ್ 302, 365, 153 ಎ, 147, 148 ಹಾಗೂ 16ೃ49ರ ಅಡಿಯಲ್ಲಿ ದೋಷಿ ಎಂದು ನ್ಯಾಯಲಯ ತೀರ್ಪು ನೀಡಿದೆ. ತಾಹಿರ್ ಹುಸೇನ್ ಜೊತೆ ಜಾವೇದ್, ಅನಾಸ್, ನಾಜಿಮ್ ಹಾಗೂ ಕಾಸಿಮ್ ಸೇರಿ ಐವರನ್ನು ಅಪರಾಧಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.&lt;/p&gt;&lt;h2&gt;ಚರಂಡಿಯಲ್ಲಿ ಅಂಕಿತ್ ಶರ್ಮಾ ಶವ ಪತ್ತೆ&lt;/h2&gt;&lt;p&gt;2020ರ ದೆಹಲಿ ದಂಗೆ ಭಾರತದ ಗಲಭೆಗಳ ಪೈಕಿ ಅತ್ಯಂತ ಭೀಕರ ದಂಗೆಯಾಗಿದೆ. ಫೆಬ್ರವರಿ 25, 2020ರಂದು ಇಂಟೆಲಿಜೆನ್ಸ್ ಆಫೀಸರ್ ಅಂಕಿತ್ ಶರ್ಮಾ ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದಾರೆ. ಸಂಜೆ ಮನೆಯಿಂದ ದಿನಸಿ ಸೇರಿದಂತೆ ಮನೆಯ ವಸ್ತುಗಳ ಖರೀದಿಸಲು ಮನೆಯಿಂದ ಹೊರಗಡೆ ತೆರಳಿದ್ದರು. ಆದರೆ ಎಷ್ಟು ಹೊತ್ತಾದರೂ ಅಂಕಿತ್ ಶರ್ಮಾ ಮನೆಗೆ ಮರಳಲಿಲ್ಲ. ಗಾಬರಿಗೊಂಡ ಅಂಕಿತ್ ಶರ್ಮಾ ಕುಟುಂಬ ಪೊಲೀಸರಿಗೆ ದೂರು ನೀಡಿದ್ದರು. ಅಂಕಿತ್ ಶರ್ಮಾ ತಂದೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದರು.&lt;/p&gt;&lt;p&gt;ಕಾರ್ಯಾಚರಣೆ ವೇಳೆ ಅಂಕಿತ್ ಶರ್ಮಾ ಮೃತೇದಹ ಖಜೂರಿ ಖಾಸ್ ಬಳಿಯ ಚರಂಡಿಯಲ್ಲಿ ಪತ್ತೆಯಾಗಿತ್ತು. ಮಸೀದಿಯಲ್ಲಿ ಅಂಕಿತ್ ಶರ್ಮಾರನ್ನು ಹತ್ಯೆ ಮಾಡಿ ಚರಂಡಿಯಲ್ಲಿ ಎಸೆಯಲಾಗಿತ್ತು ಅನ್ನೋ ಮಾಹಿತಿಯೂ ಬಹಿರಂಗವಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅಂಕಿತ್ ಶರ್ಮಾ ಮೇಲಿನ ಭೀಕರ ದಾಳಿಯ ದಾಖಲೆ ಬಿಚ್ಚಿಟ್ಟಿತ್ತು. ಮಾರಾಕಾಸ್ತ್ರಗಳಿಂದ ಭೀಕರ ದಾಳಿಯಾಗಿರುವುದು ದೃಢಪಟ್ಟಿತ್ತು. ಅಂಕಿತ್ ಶರ್ಮಾ ದೇಹದಲ್ಲಿ 51 ಗಾಯದ ಗುರುತುಗಳಿತ್ತು.&lt;/p&gt;&lt;h2&gt;ಚಾರ್ಜ್&zwnj;ಶೀಟ್&zwnj;ನಲ್ಲಿತ್ತು ಸ್ಫೋಟಕ ಮಾಹಿತಿ&lt;/h2&gt;&lt;p&gt;ಅಂಕಿತ್ ಶರ್ಮಾ ಹತ್ಯೆ ವ್ಯವಸ್ಥಿತವಾಗಿ,ಟಾರ್ಗೆಟ್ ಮಾಡಿ ಮಾಡಿದ ಕೊಲೆಯಾಗಿತ್ತು ಅನ್ನೋದು ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ. ತಾಹೀರ್ ಹುಸೆನ್ ತನ್ನ ಮನೆಯ ಮೇಲ್ಚಾವಣಿಯಲ್ಲಿ ಹಾಗೂ ಮಸೀದಿಯಿಂದ ದಂಗೆಕೋರರ ಗುಂಪನ್ನು ಮುನ್ನಡೆಸುತ್ತಿದ್ದ. ಅಧಿಕಾರಿಯನ್ನು ಟಾರ್ಗೆಟ್ ಮಾಡಿದ್ದ ತಾಹೀರ್ ಹುಸೇನ್ ಹಾಗೂ ಗ್ಯಾಂಗ್ ವ್ಯವಸ್ಥಿತವಾಗಿ ಕೊಲೆ ಮಾಡಿತ್ತು. ಪೊಲೀಸರು ಸಾಕ್ಷಿ ಸಮೇತ ತಾಹೀರ್ ಹುಸೇನ್ ಹಾಗೂ ಗ್ಯಾಂಗ್&zwnj;ನ ಆರೋಪವನ್ನು ಸಾಬೀತುಪಡಿಸಿದ್ದರು. ಇದೀಗ ತಾಹೀರ್ ಹುಸೇನ್ ಸೇರಿದಂತೆ ಐವರ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/former-aap-leader-tahir-hussain-found-guilty-in-delhi-riots-ib-officer-murder-case/articleshow-asy1fuf"/>
        </item>
        <item>
            <title><![CDATA[ಲಕ್ಷ, ಲಕ್ಷ ಪ್ಯಾಕೇಜ್‌ ಸಿಗುತ್ತೆ, ಇಂಜಿನಿಯರ್‌ ಎಂದು ಬೀಗಬೇಡ; ಮುಂದೆ ಇದೆ ಮಾರಿಹಬ್ಬ ಎಂದ AI]]></title>
            <link>https://kannada.asianetnews.com/jobs/why-software-engineer-thinks-ai-will-soon-make-it-jobs-obsolete/articleshow-nw5e9ap</link>
            <guid isPermaLink="true">https://kannada.asianetnews.com/jobs/why-software-engineer-thinks-ai-will-soon-make-it-jobs-obsolete/articleshow-nw5e9ap</guid>
            <pubDate>Mon, 13 Jul 2026 19:33:21 +0530</pubDate>
            <description><![CDATA[&lt;p&gt;AI Replacing Engineers: ಇಂದು ಐಟಿ ಉದ್ಯಮದಲ್ಲಿ ಸಾಕಷ್ಟು ಉದ್ಯೋಗ ಕಡಿತ ಆಗುತ್ತಿವೆ. ಕೆಲಸ ಸಿಗೋದು ಕಷ್ಟ ಆಗಿದೆ. ಹೀಗಿರುವಾಗ ಇಂಜಿನಿಯರ್&zwnj;ಗಳ ಕಥೆ ಏನು? ಎಐ ತಂತ್ರಜ್ಞಾನದಿಂದ ಮುಂದೆ ಏನಾಗುವುದು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdwdqk20wfvw3k6w5yhxesz,imgname-new-project--28--1783951187553.jpg" type="image/jpeg" height="390" width="690"/>
            <content:encoded><![CDATA[&lt;p&gt;AI replacing engineers: ಇಂಜಿನಿಯರ್&zwnj; ಎಂದರೆ ಸಿಕ್ಕಾಪಟ್ಟೆ ಒಳ್ಳೆಯ ಸಂಬಳ ಸಿಗುತ್ತದೆ, ಬೇಡಿಕೆ ಇರುತ್ತದೆ ಎಂದುಕೊಳ್ಳುವ ಕಾಲವಿತ್ತು. ಈಗ ಹಾಗಿಲ್ಲ, ತಿಂಗಳಿಗೆ 15-20 ಸಾವಿರ ರೂಪಾಯಿ ಸಿಗೋದು ಕಷ್ಟ ಆಗಿದೆ. ಕಂಪೆನಿಗಳು ಕ್ಯಾಂಪಸ್&zwnj; ಸೆಲೆಕ್ಷನ್&zwnj;ಗೆ ಬರುತ್ತಿಲ್ಲ. ಇನ್ನು AI ಬಂದು ಸಾಕಷ್ಟು ಉದ್ಯೋಗಗಳು ಕಡಿತ ಆಗಿವೆ.&lt;/p&gt;&lt;p&gt;ಈಗಾಗಲೇ AI ಕಾರಣಕ್ಕೆ ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಎಷ್ಟೋ ಲಕ್ಷ ಉದ್ಯೋಗಗಳು ಕಡಿತ ಆಗಿವೆ. ಹಾಗಾದರೆ ಮುಂದೆ ಏನು? ಅತಿ ಹೆಚ್ಚು ಪ್ಯಾಕೇಜ್&zwnj; ಹೊಂದಿರುವವರು ಏನು ಮಾಡಬೇಕು? ಇಂಜಿನಿಯರಿಂಗ್&zwnj; ಓದಿರುವವರು ಏನು ಮಾಡಬೇಕು?&lt;/p&gt;&lt;h2&gt;ಇಂಜಿನಿಯರ್&zwnj;ಗಳ ಮಾತುಕತೆ&lt;/h2&gt;&lt;p&gt;ಒಬ್ಬ ಸಾಫ್ಟ್&zwnj;ವೇರ್ ಎಂಜಿನಿಯರ್, ಅವರ ಮೇಲಧಿಕಾರಿ (Skip Manager) ಲಿಫ್ಟ್&zwnj;ನಲ್ಲಿ 2 ನಿಮಿಷಗಳ ಕಾಲ ಮಾತನಾಡಿಕೊಂಡಿದ್ದಾರೆ. ಇದೀಗ ಈ ವಿಷಯ ಇಂಟರ್ನೆಟ್&zwnj;ನಲ್ಲಿ ಭಾರಿ ಚರ್ಚೆಯಾಗಿದೆ. ಮುಂದೆ ಇಂಜಿನಿಯರ್ಸ್&zwnj; ಕಥೆ ಏನು? AI ಇಷ್ಟು ಪವರ್&zwnj;ಫುಲ್ ಆಗಿ ಬೆಳೆದು, ಕೋಡ್ (Code) ಬರೆಯುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.&lt;/p&gt;&lt;p&gt;AI ಒಳ್ಳೆಯ ಟೂಲ್&zwnj; ಆದರೂ ಕೂಡ ಅದಕ್ಕೊಂದು ಮಿತಿ ಇದೆ. AI ಬರೆದ ಕೋಡ್ ಪರಿಶೀಲಿಸಲು ಒಬ್ಬ ಇಂಜಿನಿಯರ್ ಬೇಕೇ ಬೇಕು. ಇಂಜಿನಿಯರ್ ಮಾತನ್ನು ತಳ್ಳಿಹಾಕಿದ ಮ್ಯಾನೇಜರ್ ನಗುತ್ತಾ, &quot;ಅದೂ ಸುಳ್ಳು, ಶೀಘ್ರದಲ್ಲೇ ಯಾವುದೇ ವ್ಯಕ್ತಿಯ ಸಹಾಯ ಇಲ್ಲದೆ, ಕೇವಲ AI ಸಂಪೂರ್ಣ ಸಾಫ್ಟ್&zwnj;ವೇರ್ ಫೀಚರ್&zwnj;ಗಳನ್ನು ಸೃಷ್ಟಿ ಮಾಡಲಿದೆ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;&quot;ಇಂದಿನ ದಿನಗಳಲ್ಲಿ ಕಂಪನಿಗಳಿಗೆ ನಮ್ಮ ಮೇಲಿರುವ ಅವಲಂಬನೆ ಮತ್ತು ನಮಗಿರುವ ಮೌಲ್ಯ ಕಡಿಮೆಯಾಗುತ್ತಿದೆ ಎಂಬುದಕ್ಕೆ ಅವರ ಆಲೋಚನೆಯೇ ಸಾಕ್ಷಿ&quot; ಎಂದು ಸಾಫ್ಟ್&zwnj;ವೇರ್&zwnj; ಇಂಜಿನಿಯರ್&zwnj; ಹೇಳಿದ್ದಾರೆ.&lt;/p&gt;&lt;p&gt;ಇದೊಂದು ವ್ಯಕ್ತಿಯ ಅನುಭವ, ಆದರೆ ಐಟಿ ಲೋಕದಲ್ಲಿ ಹೆದರಿಕೆ ಹುಟ್ಟಿಸಿದೆ. AI ತಂತ್ರಜ್ಞಾನ ಬೆಳೆದಂತೆ ಹೆಚ್ಚಿನ ಸಂಬಳ ಕೊಡೋದು ಬೇಕಿಲ್ಲ. ಕಂಪನಿಗಳು ಮನುಷ್ಯರ ಶ್ರಮಕ್ಕೆ ಬೆಲೆ ಕೊಡುತ್ತವೆಯಾ? ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/jobs/why-software-engineer-thinks-ai-will-soon-make-it-jobs-obsolete/articleshow-nw5e9ap"/>
        </item>
        <item>
            <title><![CDATA[ಭಾರತ-ನೇಪಾಳ ಗಡಿಯಲ್ಲಿ ಸಿಕ್ಕಿಬಿದ್ದ ಅಮೆರಿಕನ್ ನೌಕಾಪಡೆ ಅಧಿಕಾರಿ: ಅಟ್ಟಾಡಿಸಿ ಹೊಡೆದು ಸೆರೆಹಿಡಿದ ಹಳ್ಳಿಗರು!]]></title>
            <link>https://kannada.asianetnews.com/india-news/us-navy-veteran-arrested-at-indo-nepal-border-jordan-brown-illegal-entry-into-india/articleshow-7kgna12</link>
            <guid isPermaLink="true">https://kannada.asianetnews.com/india-news/us-navy-veteran-arrested-at-indo-nepal-border-jordan-brown-illegal-entry-into-india/articleshow-7kgna12</guid>
            <pubDate>Mon, 13 Jul 2026 19:07:40 +0530</pubDate>
            <description><![CDATA[ಭಾರತ-ನೇಪಾಳದ ಸೋನೌಲಿ ಗಡಿಯಲ್ಲಿ ಮಾನ್ಯ ದಾಖಲೆಗಳಿಲ್ಲದೆ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆ ಜೋರ್ಡಾನ್ ಬ್ರೌನ್&zwnj;ನನ್ನು ಬಂಧಿಸಲಾಗಿದೆ. ತಾನು ಅಮೆರಿಕದ ಮಾಜಿ ನೌಕಾಪಡೆ ಸದಸ್ಯನೆಂದು ಹೇಳಿಕೊಂಡಿರುವ ಈತ, ಸಮುದ್ರ ಮಾರ್ಗವಾಗಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಾಗಿ ಹೇಳಿಕೆ ನೀಡಿದ್ದು, ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxdv3zj48ck6xrwqbt2pjk22,imgname-us-navy-veteran-arrested-at-indo-nepal-border-1783949819460.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಪ್ರದೇಶ (ಜು.13): ಭಾ&lt;/strong&gt;ರತ ಮತ್ತು ನೇಪಾಳದ ಅಂತರಾಷ್ಟ್ರೀಯ ಗಡಿಯಾದ ಸೋನೌಲಿ ಬಳಿ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆಯನ್ನು ಸಶಸ್ತ್ರ ಸೀಮಾ ಬಲ್ (SSB) ಮತ್ತು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕ್ಯಾಲಿಫೋರ್ನಿಯಾದ 36 ವರ್ಷದ ಜೋರ್ಡಾನ್ ಬ್ರೌನ್ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;&lt;strong&gt;ಸಿನೆಮಾ ಶೈಲಿಯ ಸಬೂಬು!&lt;/strong&gt;&lt;/h2&gt;&lt;p&gt;ಪೊಲೀಸರ ವಿಚಾರಣೆಯ ವೇಳೆ ಜೋರ್ಡಾನ್ ಬ್ರೌನ್ ನೀಡಿರುವ ಹೇಳಿಕೆಗಳು ತನಿಖಾ ಸಂಸ್ಥೆಗಳನ್ನು ದಂಗಾಗಿಸಿವೆ. ಆತ ತಾನು ಅಮೆರಿಕದ ನೌಕಾಪಡೆ (US Navy) ಮತ್ತು ವಿಶೇಷ ಪಡೆಗಳ (Special Forces) ಮಾಜಿ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ತನ್ನ ಪ್ರಯಾಣದ ಬಗ್ಗೆ ವಿವರಿಸುತ್ತಾ, 'ನಾನು ಪ್ರವಾಸಿ ವೀಸಾದ ಮೇಲೆ ಥೈಲ್ಯಾಂಡ್&zwnj;ಗೆ ಹೋಗಿದ್ದೆ, ಅಲ್ಲಿ ನನ್ನ ಪಾಸ್&zwnj;ಪೋರ್ಟ್ ಕಳೆದುಹೋಯಿತು. ನಂತರ ಅಲ್ಲಿಂದ ಸಮುದ್ರ ಮಾರ್ಗವಾಗಿ ಶ್ರೀಲಂಕಾಕ್ಕೆ ತಲುಪಿ, ಅಲ್ಲಿಂದ ನವೆಂಬರ್ 2, 2025 ರಂದು (ವರದಿಯ ಪ್ರಕಾರ) ಸಮುದ್ರ ಮಾರ್ಗದ ಮೂಲಕವೇ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದೆ' ಎಂದು ತಿಳಿಸಿದ್ದಾನೆ.&lt;/p&gt;&lt;h2&gt;&lt;strong&gt;ಗೋವಾದಲ್ಲಿ ವಾಸ, ನೇಪಾಳಕ್ಕೆ ಪಯಣ:&lt;/strong&gt;&lt;/h2&gt;&lt;p&gt;ಭಾರತಕ್ಕೆ ಬಂದ ನಂತರ ಆತ ಕಳೆದ ಕೆಲವು ಸಮಯದಿಂದ ಗೋವಾದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಜುಲೈ 11 ರಂದು ಸೋನೌಲಿ ಗಡಿಯ ಮೂಲಕ ನೇಪಾಳಕ್ಕೆ ಹೋಗಲು ಯತ್ನಿಸುತ್ತಿದ್ದಾಗ, ವಾಡಿಕೆಯ ತಪಾಸಣೆಯ ವೇಳೆ ಎಸ್&zwnj;ಎಸ್&zwnj;ಬಿ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಈ ವೇಳೆ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕಿಲೋಮೀಟರ್ ದೂರದ ಚೇಸ್ ಬಳಿಕ ಪೊಲೀಸರು ಆತನನ್ನು ಸೆರೆಹಿಡಿದಿದ್ದಾರೆ.&lt;/p&gt;&lt;h2&gt;&lt;strong&gt;ಕಾನೂನು ಕ್ರಮ ಮತ್ತು ತನಿಖೆ:&lt;/strong&gt;&lt;/h2&gt;&lt;p&gt;ಮಹಾರಾಜ್&zwnj;ಗಂಜ್&zwnj;ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಅವರು ನೀಡಿರುವ ಮಾಹಿತಿಯಂತೆ, ಜೋರ್ಡಾನ್ ಬ್ರೌನ್ ಬಳಿ ಯಾವುದೇ ಮಾನ್ಯವಾದ ವೀಸಾ ಅಥವಾ ಪ್ರಯಾಣ ದಾಖಲೆಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸೋನೌಲಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಇಮಿಗ್ರೇಷನ್ ಮತ್ತು ವಿದೇಶಿಯರ ಕಾಯ್ದೆಯ (Foreigners Act) ಸೆಕ್ಷನ್ 21/23 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ (Crime No. 68/26). ಪ್ರಸ್ತುತ ಅಮೆರಿಕ ಪ್ರಜೆಯ ಹೇಳಿಕೆಗಳನ್ನು ಭದ್ರತಾ ಏಜೆನ್ಸಿಗಳು ಮತ್ತು ಗುಪ್ತಚರ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/us-navy-veteran-arrested-at-indo-nepal-border-jordan-brown-illegal-entry-into-india/articleshow-7kgna12"/>
        </item>
        <item>
            <title><![CDATA[12ನೇ ವಯಸ್ಸಲ್ಲೇ ಕಂಪೆನಿ ​CEO: 3 ದೇಶಗಳ ವಹಿವಾಟು;  ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ಬಾಲೆ]]></title>
            <link>https://kannada.asianetnews.com/business/indian-origin-12-year-old-turns-her-fathers-business-problem-into-a-global-ai-startup-suc/articleshow-og0dg5i</link>
            <guid isPermaLink="true">https://kannada.asianetnews.com/business/indian-origin-12-year-old-turns-her-fathers-business-problem-into-a-global-ai-startup-suc/articleshow-og0dg5i</guid>
            <pubDate>Mon, 13 Jul 2026 18:58:33 +0530</pubDate>
            <description><![CDATA[ಕೆನಡಾದಲ್ಲಿರುವ 12 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಮನಾ ಜಂಪಾಲಾ, 'ವೋಕ್ಸಾ' ಎಂಬ AI-ಚಾಲಿತ ಸ್ಟಾರ್ಟ್&zwnj;ಅಪ್ ಅನ್ನು ಸ್ಥಾಪಿಸಿ ಜಗತ್ತಿನ ಗಮನ ಸೆಳೆದಿದ್ದಾಳೆ. ಈಕೆಯ ಕಂಪನಿಯು ಸಣ್ಣ ವ್ಯಾಪಾರಗಳಿಗೆ 24/7 ಗ್ರಾಹಕರ ಕರೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ತನ್ನ ತಂದೆಯ ಕಚೇರಿಯ ಸಮಸ್ಯೆಯಿಂದ ಸ್ಫೂರ್ತಿ ಪಡೆದು, ಚಿಕ್ಕ ವಯಸ್ಸಿನಲ್ಲೇ ಕೋಡಿಂಗ್ ಕಲಿತು ಈಕೆ ಈ ಸಾಧನೆ ಮಾಡಿದ್ದಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxdtkthp878bp8xnm0dnc6qs,imgname-mana-jampala-1783949290038.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದು ಜನರು ಕೃತಕ ಬುದ್ಧಿಮತ್ತೆ (AI) ಆಗಮನದಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿದ್ದರೆ, ಇಲ್ಲೊಬ್ಬ ಭಾರತೀಯ ಮೂಲದ ಬಾಲೆ, ಹೊಸ ಪೀಳಿಗೆಯು ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು AI ಅನ್ನು ಒಂದು ಸಾಧನವಾಗಿ ಬಳಸುತ್ತಿದೆ. ಈಕೆಯ ಪ್ರಯಾಣವು ಪ್ರಪಂಚದಾದ್ಯಂತದ ಲಕ್ಷಾಂತರ ಮಕ್ಕಳು ಮತ್ತು ಯುವಕರಿಗೆ ಉತ್ತಮ ಸ್ಫೂರ್ತಿಯಾಗಿದೆ. ಇದು ಭಾರತದ ಮೂಲದ ಸದ್ಯ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಕೆಲೋನಾದ 12 ವರ್ಷದ ವಿದ್ಯಾರ್ಥಿನಿ ಮನಾ ಜಂಪಾಲಾ ಸ್ಟೋರಿ. ಸದ್ಯ ಈಕೆ ವಿಶ್ವದಾದ್ಯಂತ ಸುದ್ದಿಯಾಗಿದ್ದಾಳೆ. ಮಕ್ಕಳು ಶಾಲೆ ಮತ್ತು ಕ್ರೀಡೆಗಳಲ್ಲಿ ನಿರತರಾಗಿರುವ ಚಿಕ್ಕ ವಯಸ್ಸಿನಲ್ಲಿಯೇ, 7ನೇ ಕ್ಲಾಸ್​ನಲ್ಲಿ ಕಲಿಯುತ್ತಿರುವ ಮನಾ ವೋಕ್ಸಾ ಎಂಬ AI-ಚಾಲಿತ ಸ್ಟಾರ್ಟ್&zwnj;ಅಪ್ ಅನ್ನು ಸ್ಥಾಪಿಸಿದ್ದಾಳೆ.&lt;/p&gt;&lt;p&gt;ಈಕೆಯ ಕಂಪೆನಿಯು ಸಣ್ಣ ವ್ಯವಹಾರಗಳಿಗೆ ದಿನದ 24 ಗಂಟೆಗಳ ಕಾಲ ಗ್ರಾಹಕರ ಕರೆಗಳಿಗೆ ಹಾಜರಾಗಲು ಮತ್ತು ಅವರ ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಹಾಯ ಮಾಡುತ್ತದೆ. ಮನಾಳ ಯಶಸ್ಸಿನ ಕಥೆ ಆನ್&zwnj;ಲೈನ್&zwnj;ನಲ್ಲಿ ವೇಗವಾಗಿ ವೈರಲ್ ಆಗುತ್ತಿದೆ, ಈಕೆ ತನ್ನ ತಂದೆಯ ಕೆಲಸದ ಸ್ಥಳದಲ್ಲಿ ಎದುರಿಸಿದ ಸಣ್ಣ ಸಮಸ್ಯೆಯನ್ನು ಅಂತರರಾಷ್ಟ್ರೀಯ ಸ್ಟಾರ್ಟ್&zwnj;ಅಪ್ ಆಗಿ ಹೇಗೆ ಪರಿವರ್ತಿಸಿದಳು ಎನ್ನುವ ಸ್ಟೋರಿ ಕುತೂಹಲವಾಗಿದೆ.&lt;/p&gt;&lt;h2&gt;&lt;strong&gt;ಯಾರೀ ಕುವರಿ?&lt;/strong&gt;&lt;/h2&gt;&lt;p&gt;ಮನಾ ಜಂಪಾಲಾ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ 7 ನೇ ತರಗತಿಯ ವಿದ್ಯಾರ್ಥಿನಿ. ಕೋಡಿಂಗ್ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್&zwnj;ನಲ್ಲಿ ಅವರ ಆಸಕ್ತಿ ಬಹಳ ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಯಿತು. ಇವಳು ಮೊದಲು ಸ್ಕ್ರ್ಯಾಚ್ ಪ್ರೋಗ್ರಾಮಿಂಗ್ ಶಿಬಿರಗಳ ಮೂಲಕ ಕೋಡಿಂಗ್ ಜಗತ್ತನ್ನು ಪ್ರವೇಶಿಸಿದಳು. ತರುವಾಯ, ಕೇವಲ 9 ವರ್ಷ ವಯಸ್ಸಿನಲ್ಲಿ, ಯಾವುದೇ ಹೊರಗಿನ ಸಹಾಯವಿಲ್ಲದೆ ಸ್ವಂತವಾಗಿ ಪೈಥಾನ್ ಎಂಬ ಸಂಕೀರ್ಣ ಕೋಡಿಂಗ್ ಭಾಷೆಯನ್ನು ಕಲಿತಳು. ಅಂದಿನಿಂದ, ಅವರು ಕೃತಕ ಬುದ್ಧಿಮತ್ತೆ (AI) ಯ ಆಳವನ್ನು ಅರ್ಥಮಾಡಿಕೊಳ್ಳುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾಳೆ. ಈ ಬಾಲಕಿ, ಹಲವಾರು ವಿಜ್ಞಾನ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾಳೆ ಮತ್ತು 1517 ಮೆಡಿಸಿ ಪ್ರಾಜೆಕ್ಟ್&zwnj;ನಿಂದ ಹಣವನ್ನು ಪಡೆದಿದ್ದಾಳೆ. ಇದು ಯುವ ಸಂಸ್ಥಾಪಕರಿಗೆ ಸ್ಟಾರ್ಟ್&zwnj;ಅಪ್&zwnj;ಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಶಾಲೆ, ಕ್ರೀಡೆ ಮತ್ತು ಸ್ನೇಹಿತರನ್ನು ಆಡುವಾಗ, ಮಾನಾ ತನ್ನ ಬಿಡುವಿನ ವೇಳೆಯಲ್ಲಿ ಗಮನಾರ್ಹ ಭಾಗವನ್ನು ಸಾಫ್ಟ್&zwnj;ವೇರ್ ಎಂಜಿನಿಯರಿಂಗ್ ಕಲಿಯಲು ಮತ್ತು ಹೊಸ AI ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಕಳೆಯುತ್ತಾಳೆ.&lt;/p&gt;&lt;h3&gt;&lt;strong&gt;ವೋಕ್ಸಾಗೆ ಸ್ಫೂರ್ತಿ ಹೇಗೆ?&lt;/strong&gt;&lt;/h3&gt;&lt;p&gt;ವೋಕ್ಸಾಗೆ ಸ್ಫೂರ್ತಿ ಮಾನಾಗೆ 11 ವರ್ಷದವಳಿದ್ದಾಗ ಬಂದಿತು. ಅವರು ಆಗಾಗ್ಗೆ ತಂದೆಯ ಕಚೇರಿಗೆ ಭೇಟಿ ನೀಡುತ್ತಿದ್ದಳು. ಅಲ್ಲಿ ತಂಡವು ತುಂಬಾ ಚಿಕ್ಕದಾಗಿದೆ ಮತ್ತು ಅವರು ಅನೇಕ ಗ್ರಾಹಕರ ಕರೆಗಳಿಗೆ (ಫೋನ್​ ಕಾಲ್ಸ್​) ಹಾಜರಾಗಲು ಕಷ್ಟವಾಗುತ್ತಿರುವುದನ್ನು ಗಮನಿಸಿದಳು. ಆಗಾಗ್ಗೆ, ಕಾರ್ಯನಿರತ ವೇಳಾಪಟ್ಟಿಯಿಂದಾಗಿ ಫೋನ್​ ಕಾಲ್ಸ್​ಹೇಗೆ ನಿರ್ಲಕ್ಷಿಸಲಾಗುತ್ತದೆ ಎಂದು ಅರಿತದ್ದೇ ಹೊಸ ಯೋಚನೆ ಹುಟ್ಟಿಕೊಂಡಿತು. ವ್ಯವಹಾರದಲ್ಲಿ ಪ್ರತಿ ಮಿಸ್ಡ್ ಕಾಲ್ ಎಂದರೆ ಕಳೆದುಹೋದ ಗ್ರಾಹಕ ಮತ್ತು ಆದಾಯ ನಷ್ಟ ಎಂದು ಮಾನಾ ಬೇಗನೆ ಅರಿತುಕೊಂಡಳು. ಸಾಮಾನ್ಯ ಜನರು ಇದನ್ನು ಸಾಮಾನ್ಯ ವ್ಯವಹಾರ ಸಮಸ್ಯೆ ಎಂದು ತಳ್ಳಿಹಾಕಿದಾಗ, ಮಾನಾ AI ಪರಿಹಾರವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದಳು&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ವೋಕ್ಸಾ ಎಂದರೇನು ಮತ್ತು ಅದು ಏನು ಮಾಡಬಹುದು?&lt;/strong&gt;&lt;/h3&gt;&lt;p&gt;ವೋಕ್ಸಾ ಒಂದು AI-ಚಾಲಿತ ವರ್ಚುವಲ್ ಸ್ವಾಗತಕಾರರಾಗಿದ್ದು, ಯಾವುದೇ ವ್ಯವಹಾರಕ್ಕಾಗಿ, ದಿನದ 24 ಗಂಟೆಗಳು, ವಾರದ 7 ದಿನಗಳು, ದಣಿವರಿಯಿಲ್ಲದೆ ಫೋನ್ ಕರೆಗಳಿಗೆ ಉತ್ತರಿಸಬಹುದು. ಈ ವೇದಿಕೆಯು ವಿವಿಧ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ:&lt;/p&gt;&lt;p&gt;ಗ್ರಾಹಕರ ಫೋನ್ ಕರೆಗಳಿಗೆ ಉತ್ತರಿಸುವುದು ಮತ್ತು ಅವರ ವಿಚಾರಣೆಗಳನ್ನು ನಿರ್ವಹಿಸುವುದು.&lt;/p&gt;&lt;p&gt;ಗ್ರಾಹಕರಿಗೆ ಅಪಾಯಿಂಟ್&zwnj;ಮೆಂಟ್&zwnj;ಗಳು ಮತ್ತು ಸಭೆಗಳನ್ನು ಕಾಯ್ದಿರಿಸುವುದು.&lt;/p&gt;&lt;p&gt;ರೆಸ್ಟಾರೆಂಟ್&zwnj;ಗಳಿಗೆ ಆರ್ಡರ್&zwnj;ಗಳನ್ನು ರೆಕಾರ್ಡ್ ಮಾಡುವುದು.&lt;/p&gt;&lt;p&gt;ಮಿಸ್ಡ್ ಕಾಲ್&zwnj;ಗಳನ್ನು ನಿರ್ವಹಿಸುವುದು ಮತ್ತು ಸ್ವಯಂಚಾಲಿತವಾಗಿ ಅನುಸರಿಸುವುದು.&lt;/p&gt;&lt;p&gt;ಪ್ರತಿ ಕರೆ ಮುಗಿದ ನಂತರ ಸಾರಾಂಶವನ್ನು ರಚಿಸುವುದು.&lt;/p&gt;&lt;p&gt;ವ್ಯವಹಾರಗಳು ಗ್ರಾಹಕರ ಸಂವಹನಗಳನ್ನು ಸ್ವಯಂಚಾಲಿತಗೊಳಿಸಲು ಸಹಾಯ ಮಾಡುವುದು.&lt;/p&gt;&lt;p&gt;ಮನಾ ಪ್ರಕಾರ, ಅವರ ವೇದಿಕೆಯು ಪ್ರಸ್ತುತ ಕೆನಡಾ, ಭಾರತ ಮತ್ತು ಕಾಂಬೋಡಿಯಾದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಮುಖ್ಯ ಗಮನವು ರೆಸ್ಟೋರೆಂಟ್&zwnj;ಗಳು, ಔಷಧಾಲಯಗಳು ಮತ್ತು ಇತರ ಸೇವಾ-ಆಧರಿತ ವಲಯಗಳ ಮೇಲೆ. ಹೆಚ್ಚುವರಿಯಾಗಿ, ಮನಾ &quot;ವೋಕ್ಸಾ ಏಜೆಂಟ್ಸ್&quot; ಎಂಬ ಮತ್ತೊಂದು ವೇದಿಕೆಯನ್ನು ಪ್ರಾರಂಭಿಸಿದೆ, ಇದು ಬಳಕೆದಾರರಿಗೆ ಸರಳ ಪಠ್ಯ ಪ್ರಾಂಪ್ಟ್&zwnj;ಗಳನ್ನು ಟೈಪ್ ಮಾಡುವ ಮೂಲಕ ತಮ್ಮದೇ ಆದ AI ಏಜೆಂಟ್&zwnj;ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಇದೀಗ ಮೂರು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/business/indian-origin-12-year-old-turns-her-fathers-business-problem-into-a-global-ai-startup-suc/articleshow-og0dg5i"/>
        </item>
        <item>
            <title><![CDATA[ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಜನಸಾಗರ: ಟೋಕನ್ ವ್ಯವಸ್ಥೆ ವಿರುದ್ಧ ಅಸಮಾಧಾನ]]></title>
            <link>https://kannada.asianetnews.com/karnataka-districts/gangavathi-aadhaar-update-rush-at-tahsildar-office-gvd/articleshow-p4t8sax</link>
            <guid isPermaLink="true">https://kannada.asianetnews.com/karnataka-districts/gangavathi-aadhaar-update-rush-at-tahsildar-office-gvd/articleshow-p4t8sax</guid>
            <pubDate>Mon, 13 Jul 2026 18:34:09 +0530</pubDate>
            <description><![CDATA[&lt;p&gt;Gangavathi: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವ್ಯಸ್ಥೆಯ ಆಗರವಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಒದಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxds7eykj6ppyh7paxz8ffhv,imgname-bbj-1783947836371.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/p&gt;&lt;p&gt;&lt;strong&gt;ಗಂಗಾವತಿ (ಜು.13): &lt;/strong&gt;ನಗರದ ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವ್ಯಸ್ಥೆಯ ಆಗರವಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಒದಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಆಧಾರ್ ಕಾರ್ಡುಗಳ ತಿದ್ದುಪಡಿ ಮತ್ತು ಹೊಸದಾಗಿ ಸೇರ್ಪಡೆ ಮಾಡುವ ಕಾರ್ಯ, ಈಗ ಪ್ರಾರಂಭವಾಗಿದ್ದು ಜನರು ಕಚೇರಿಯಲ್ಲಿ ನೂಕು ನುಗ್ಗಲು ನಡೆಸಿದ್ದಾರೆ.&lt;/p&gt;&lt;p&gt;ಸರ್ಕಾರ ಹೊಸ ಯೋಜನೆ ಅದರಲ್ಲಿ ಎಸ್&zwnj;ಐಆರ್, ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯ ಪುನರ್ ಪರಿಶೀಲನೆ ಘೋಷಿಸಿದ ಹಿನ್ನಲೆಯಲ್ಲಿ ಜನರು ಮೂಲ ಪ್ರಮಾಣ ಪತ್ರಗಳಿಗಾಗಿ ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದ್ದಾರೆ. ನಗರದ ತಹಶೀಲ್ದಾರ್ ಕಚೇರಿಯ ಪಡಸಾಲೆಯಲ್ಲಿ ಆಧಾರ್ ಕಾರ್ಡ್ ಪಡೆಯಲು ಸೋಮವಾರ ನೂಕು ನುಗ್ಗಲು ನಡೆಸಿದರು.&lt;/p&gt;&lt;h2&gt;&lt;strong&gt;40 ಟೋಕನ್ ವಿತರಣೆ&lt;/strong&gt;&lt;/h2&gt;&lt;p&gt;ನಗರ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಬರುವ ಜನರು ಬೆಳಿಗ್ಗೆಯಿಂದಲೆ ಟೋಕನ್ ಗಾಗಿ ಕಾಯುವ ಪರಿಸ್ಥಿತಿ ಒದಗಿದೆ. ಕಚೇರಿಯ ಪಡಸಾಲೆಯಲ್ಲಿ ಕೇವಲ 40 ಜನರಿಗೆ ಮಾತ್ರ ಟೋಕನ್ ನೀಡುತ್ತಿದ್ದಾರೆ. ಈ ಟೋಕನ್ ಪಡೆಯಲು ಜನರು ಹರಸಾಹಸ ಮಾಡುತ್ತಿದ್ದು, ಟೋಕನ್ ಪಡೆದ ನಂತರ ಆಧಾರ್ ಕಾರ್ಡುಗಳ ತಿದ್ದುಪಡಿಗೆ ಮತ್ತೆ ಸಾಹಸ ಮಾಡುವ ಪರಿಸ್ಥಿತಿ ಒದಗಿದೆ. ಈ ಹಿಂದೆ ಪಡಸಾಲೆಯಲ್ಲಿ ಎರಡು ಕೇಂದ್ರಗಳಿದ್ದವು. ನಂತರ ಒಂದು ಕೇಂದ್ರವನ್ನು ರದ್ದು ಪಡಿಸಿರುವದರಿಂದ ಈಗ ಕೇವಲ ಒಂದೇ ಕೇಂದ್ರದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಕಂಪ್ಯೂಟರ್ ಆಪರೇಟರುಗಳಿಂದ ಬಂದಿದೆ.&lt;/p&gt;&lt;p&gt;ಇದರಿಂದ ಕೆಲಸ ಮಾಡುವದಕ್ಕೆ ಆಪರೇಟರುಗಳಿಗೆ ಆಸ್ಪದ ಇಲ್ಲದಂತಾಗಿದೆ. ಗಂಗಾವತಿ ತಾಲೂಕಿನಲ್ಲಿ ಗಂಗಾವತಿ, ವೆಂಕಟಗಿರಿ ಹೋಬಳಿಯಲ್ಲಿ ಆಧಾರ್ ಕಾರ್ಡುಗಳ ತಿದ್ದುಪಡಿ ಮಾಡುವ ಕೇಂದ್ರ ಇತ್ತು ಈಗ ಅದು ರದ್ದಾಗಿದೆ. ಮರಳಿ ಹೋಬಳಿಯಲ್ಲಿ ಮಾತ್ರ ಆಧಾರ್ ಕಾರ್ಡುಗಳ ತಿದ್ದುಪುಡಿ ಮಾಡುವ ಅವಕಾಶ ಇರುವುದರಿಂದ ಜನರು ದಿನ ನಿತ್ಯ ಅಲೆದಾಡುವ ಪರಿಸ್ಥಿತಿ ಒದಗಿದೆ.&lt;/p&gt;&lt;p&gt;ಗಂಗಾವತಿ ತಹಶೀಲ್ದಾರ್ ಕಚೇರಿ ಅವ್ಯವ್ಯಸ್ಥೆಯ ಆಗರವಾಗಿದೆ. ಆಧಾರ್ ಕಾರ್ಡುಗಳ ತಿದ್ದುಪಡಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳು ಪಡೆಯ ಬೇಕಾದರೆ ಒಂದು ದಿನ ಕಚೇರಿಯಲ್ಲಿ ಕಳೆಯುವ ಪರಿಸ್ಥಿತಿ ಇದೆ. ಸಮಸ್ಯೆ ಹೇಳಬೇಕಾದರೆ ಹೊಸದಾಗಿ ಬಂದ ತಹಸೀಲ್ದಾರರು ಕಚೇರಿಯಲ್ಲಿ ಸಿಗುತ್ತಿಲ್ಲ. ಇದರಿಂದ ಆಧಾರ್ ಕಾರ್ಡುಗಳ ತಿದ್ದುಪಡಿಗಾಗಿ ನೂಕು ನುಗ್ಗಲು ನಡೆಯುತ್ತಿದೆ.-ತಿಮ್ಮಪ್ಪ, ಗಂಗಾವತಿ&lt;/p&gt;&lt;p&gt;ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಆಧಾರ್ ಕಾರ್ಡು ತಿದ್ದುಪಡಿಗಾಗಿ ನೂಕು ನುಗ್ಗಲು ನಡೆದಿದೆ ಎಂದು ಗೊತ್ತಾಗಿದೆ. ಇವತ್ತು ಪ್ರಭಾರಿ ಗ್ರೇಡ್ -2 ತಹಸೀಲ್ದಾರರಾಗಿ ಇವತ್ತು ಹಾಜರಾಗಿದ್ದೇನೆ. ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ.-ಷಣ್ಮುಖಪ್ಪ, ಪ್ರಭಾರಿ ಗ್ರೇಡ್-2 ತಹಶೀಲ್ದಾರ್, ಗಂಗಾವತಿ&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-aadhaar-update-rush-at-tahsildar-office-gvd/articleshow-p4t8sax"/>
        </item>
        <item>
            <title><![CDATA[ಇ20 ಪೆಟ್ರೋಲ್‌ನಿಂದ ಮೈಲೇಜ್ ಕುಸಿತ, ಯೂಟ್ಯೂಬರ್ ಆರೋಪಕ್ಕೆ ಮರ್ಸಿಡೀಸ್ ಬೆಂಜ್ ಕೊಟ್ಟ ಉತ್ತರವೇನು?]]></title>
            <link>https://kannada.asianetnews.com/car-news/mercedes-benz-responds-to-youtuber-saurav-joshi-e20-petrol-mileage-drop-claim/articleshow-n7d3gzt</link>
            <guid isPermaLink="true">https://kannada.asianetnews.com/car-news/mercedes-benz-responds-to-youtuber-saurav-joshi-e20-petrol-mileage-drop-claim/articleshow-n7d3gzt</guid>
            <pubDate>Mon, 13 Jul 2026 18:21:13 +0530</pubDate>
            <description><![CDATA[&lt;p&gt;ಇ20 ಪೆಟ್ರೋಲ್ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ಯೂಟ್ಯೂಬರ್ ತನ್ನ ಬೆಂಜ್ ಕಾರಿನ ಮೈಲೇಜ್ ಕುಸಿತವಾಗಿದ್ದು ಮಾತ್ರವಲ್ಲ ಎಂಜಿನ್ ಕೂಡ ಶೀಗ್ರದಲ್ಲೇ ಹಾಳಾಗಲಿದೆ ಎಂದು ಆರೋಪಿಸಿದ ವಿಡಿಯೋಗೆ ಖುದ್ದು ಮರ್ಸಿಡೀಸ್ ಬೆಂಜ್ ಉತ್ತರ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdrexpzatqpt3w0v0rhbsny,imgname-mercedes-benz-replies-to-youtuber-saurav-joshi-1783947032286.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.13)&lt;/strong&gt; ಭಾರತದಲ್ಲಿ ಪೆಟ್ರೋಲ್&zwnj;ನಲ್ಲಿ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಇ20 ಪೆಟ್ರೋಲ್ ದೇಶದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಹಲವರು ತಮ್ಮ ವಾಹನಗಳ ಎಂಜಿನ್ ಸಮಸ್ಯೆಯಾಗುತ್ತಿದೆ, ಮೈಲೇಜ್ ಸಿಗುತ್ತಿಲ್ಲ, ವಿಮೆಗಳು ಅನ್ವಯವಾಗುತ್ತಿಲ್ಲ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಇದರ ನಡುವೆ ಯೂಟ್ಯೂಬರ್ ಸೌರವ್ ಜೋಶಿ ಮಾಡಿದ ಗಂಭೀರ ಆರೋಪ ಭಾರಿ ಸದ್ದು ಮಾಡಿತ್ತು. ತನ್ನ ಬೆಂಜ್ ಕಾರು 16 ರಿಂದ 17 ಕಿಲೋಮೀಟರ್ ಮೈಲೇಜ್ ನೀಡುತ್ತಿತ್ತು. ಆದರೆ ಇ20 ಪೆಟ್ರೋಲ್&zwnj;ನಿಂದ 5ಕ್ಕೆ ಕುಸಿದಿದೆ ಎಂಬ ಆರೋಪ ಮಾಡಿದ್ದರು. ಈ ಆರೋಪ ಹಾಗೂ ಕೋಲಾಹಲಕ್ಕೆ ಖುದ್ದು ಮರ್ಸಿಡೀಸ್ ಬೆಂಜ್ ಸ್ಪಷ್ಟನೆ ನೀಡಿದೆ.&lt;/p&gt;&lt;h2&gt;ಸೌರವ್ ಜೋಶಿ ಆರೋಪವೇನು?&lt;/h2&gt;&lt;p&gt;ವ್ಲಾಗರ್ ಸೌರವ್ ಜೋಶಿ ಸೋಶಿಯಲ್ ಮೀಡಿಯಾ ಪ್ಲಾಟ್&zwnj;ಫಾರ್ಮ್ ಮೂಲಕ ಗಂಭೀರ ಆರೋಪ ಮಾಡಿದ್ದರು. ವಿಡಿಯೋ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದರು. ನನ್ನ ಕಾರಿಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಹಾಕಲು ಭಯವಾಗುತ್ತಿದೆ. ಮೊದಲು ನನ್ನ ಮರ್ಸಿಡಿಸ್ ಬೆಂಜ್ ಕಾರು ಪ್ರತಿ ಲೀಟರ್ ಪೆಟ್ರೋಲ್&zwnj;ಗೆ 16 ರಿಂದ 17 ಕಿಲೋಮೀಟರ್ ಮೈಲೇಜ್ ನೀಡುತ್ತಿತ್ತು. ಇದೀಗ ಕೇವಲ 5 ಕಿಲೋಮೀಟರ್&zwnj;ಗೆ ಕುಸಿದಿದೆ. ನನ್ನ ಕಾರು ಶೀಘ್ರದಲ್ಲೇ ಸಂಪೂರ್ಣ ಹಾಳಾಗಲಿದೆ ಎಂದು ಆರೋಪಿಸಿದ್ದರು.&lt;/p&gt;&lt;p&gt;ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಹಲವರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದರು. ತಮ್ಮ ವಾಹನ ಕೂಡ ಮೈಲೇಜ್ ಡ್ರಾಪ್ ಆಗಿದೆ. ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀಡಿ ಜನರ ವಾಹನಗಳನ್ನು ಹಾಳು ಮಾಡುತ್ತಿದೆ. ಅವೈಜ್ಞಾನಿಕ ಮಿಶ್ರಣದಿಂದ ವಾಹನದ ಎಂಜಿನ್ ಹಾಳಾಗುತ್ತಿದೆ. ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವಂತ ಮಾಡಲು ಈ ತಂತ್ರ ಪ್ರಯೋಗಿಸಿದೆ ಎಂದು ಹಲವರು ಆರೋಪ ಮಾಡಿದ್ದರು. ವಿಡಿಯೋ ಸದ್ದು ಮಾಡುತ್ತಿದ್ದಂತೆ ಇದೀಗ ಮರ್ಸಿಡೀಸ್ ಬೆಂಜ್ ಸ್ಪಷ್ಟನೆ ನೀಡಿದೆ.&lt;/p&gt;&lt;h2&gt;ಮರ್ಸಿಡೀಸ್ ಬೆಂಜ್ ಕೊಟ್ಟ ಉತ್ತರವೇನು?&lt;/h2&gt;&lt;p&gt;ಮರ್ಸಿಡೀಸ್ ಬೆಂಜ್ ತನ್ನ ಗ್ರಾಹಕರ ಸುರಕ್ಷತೆ, ವಾಹನಗಳ ಬಾಳಿಕೆ, ಪರ್ಫಾಮೆನ್ಸ್ ಬಗ್ಗೆ ಹೆಚ್ಚಿನ ಗಮನಕೇಂದ್ರಿರಿಸಿದೆ. ಇದು ಕಂಪನಿಯ ಅತ್ಯುನ್ನತ ಜವಾಬ್ದಾರಿಯಾಗಿದೆ. ಎಲ್ಲಾ ಮರ್ಸಿಡೀಸ್ ಬೆಂಜ್ ಬಿಎಸ್6 ವಾಹನ ಇ20 ಪೆಟ್ರೋಲ್ ಇಂಧನಕ್ಕೆ ಹೊಂದಿಕೆಯಾಗುವಂತ ಎಂಜಿನ್ ಹಾಗೂ ತಂತ್ರಜ್ಞಾನ ಬಳಸಲಾಗಿದೆ. ಸಂಬಂಧಪಟ್ಟ ಇಲಾಖೆ, ಪರಿಣಿತರಿಂದ ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ. ಈ ಕುರಿತು ನಮ್ಮ ಗ್ರಾಹಕರ ಯಾವುದೇ ತಾಂತ್ರಿಕ ಸೇರಿದಂತೆ ಇತರ ಪ್ರಶ್ನೆಗಳಿಗೆ ಉತ್ತರಿಸಲು, ನೆರವು ನೀಡಲು ಬೆಂಜ್ ಸದಾ ಸಿದ್ಧವಾಗಿದೆ ಎಂದು ಬೆಂಜ್ ಸ್ಪಷ್ಟನೆ ನೀಡಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Customer Advisory pic.twitter.com/RxuTYl6Phz&lt;/p&gt;&lt;p&gt;&mdash; Mercedes-Benz India (@MercedesBenzInd) July 12, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/car-news/mercedes-benz-responds-to-youtuber-saurav-joshi-e20-petrol-mileage-drop-claim/articleshow-n7d3gzt"/>
        </item>
        <item>
            <title><![CDATA[ಜಗಳದ ಭರದಲ್ಲಿ ಕೋಪದಿಂದ ಮೊಬೈಲ್​ ಫೋನ್​ ಎಸೆದ ಪತ್ನಿ: ತಲೆಗೆ ಬಿದ್ದು ಪತಿಯ ಸಾವು- ಆಗಿದ್ದೇನು]]></title>
            <link>https://kannada.asianetnews.com/crime/odisha-man-dies-after-wife-hits-him-on-head-with-mobile-during-fight-suc/articleshow-tgelw64</link>
            <guid isPermaLink="true">https://kannada.asianetnews.com/crime/odisha-man-dies-after-wife-hits-him-on-head-with-mobile-during-fight-suc/articleshow-tgelw64</guid>
            <pubDate>Mon, 13 Jul 2026 18:03:39 +0530</pubDate>
            <description><![CDATA[ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ, ಗಂಡ-ಹೆಂಡತಿಯ ಜಗಳದ ವೇಳೆ ಪತ್ನಿ ಎಸೆದ ಮೊಬೈಲ್ ಫೋನ್ ತಲೆಗೆ ಬಡಿದು ಪತಿ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಬಳಿಕ ಆತ ಮೃತಪಟ್ಟಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxdqfqys269c2z18rrfwzxs6,imgname-mobile-death-1783946010584.jpg" type="image/jpeg" height="390" width="690"/>
            <content:encoded><![CDATA[&lt;p&gt;ಭುವನೇಶ್ವರ: ಗಂಡ-ಹೆಂಡತಿ ಜಗಳವಾಡುತ್ತಿದ್ದ ಸಮಯದಲ್ಲಿ ಆ ಜಗಳದ ಭರದಲ್ಲಿ ಕೋಪದಿಂದ ಮೊಬೈಲ್​ ಫೋನ್​ ಅನ್ನು ಪತ್ನಿ ಎಸೆದಿದ್ದು, ಅದು ಗಂಡನ ತಲೆಗೆ ಬಡಿದು ಸಾವನ್ನಪ್ಪಿರುವ ಘಟನೆ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರ ಮನೆಯಲ್ಲಿ ಪತಿ ಮತ್ತು ಪತ್ನಿ ನಡುವೆ ಜಗಳ ನಡೆದಿದೆ. ಈ ಜಗಳದಲ್ಲಿ, ಪತ್ನಿ ಮೊಬೈಲ್ ಫೋನ್&zwnj;ನಿಂದ ತನ್ನ ಪತಿಯ ತಲೆಗೆ ಎಸೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.&lt;/p&gt;&lt;h2&gt;&lt;strong&gt;ಮನೆಗೆ ಮರಳಿದ ಬಳಿಕ ಸಾವು&lt;/strong&gt;&lt;/h2&gt;&lt;p&gt;ಕುಟುಂಬ ಸದಸ್ಯರು ಗಾಯಾಳು ವ್ಯಕ್ತಿಯನ್ನು ಬೋಲಂಗಿರ್&zwnj;ನಲ್ಲಿರುವ ಜಿಲ್ಲಾ ಪ್ರಧಾನ ಕಚೇರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಚಿಕಿತ್ಸೆ ಪಡೆದರು. ನಂತರ, ಅವರ ಸ್ಥಿತಿಯಲ್ಲಿ ಸುಧಾರಣೆ ಕಂಡ ವೈದ್ಯರು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಚಿಕಿತ್ಸೆಯ ನಂತರ, ಅವರ ಸ್ಥಿತಿ ಸುಧಾರಿಸಿತು ಎನ್ನುವ ಕಾರಣಕ್ಕೆ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿತ್ತು.&lt;/p&gt;&lt;p&gt;ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಮನೆಗೆ ತಲುಪಿದ ಸ್ವಲ್ಪ ಸಮಯದ ನಂತರ, ಪತಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಅವರ ಕುಟುಂಬವು ಅವರನ್ನು ಬಲಂಗೀರ್ ಜಿಲ್ಲಾ ಪ್ರಧಾನ ಕಚೇರಿ ಆಸ್ಪತ್ರೆಗೆ ಕರೆದೊಯ್ದಿತು, ಅಲ್ಲಿ ವೈದ್ಯರ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಅವರು ನಿಧನರಾದರು. ಘಟನೆಯ ನಂತರ, ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಘಟನೆಯ ಸಂದರ್ಭಗಳು ಮತ್ತು ಸಾವಿಗೆ ನಿಜವಾದ ಕಾರಣವನ್ನು ನಿರ್ಧರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಪೊಲೀಸ್​ ತನಿಖೆ&lt;/strong&gt;&lt;/h3&gt;&lt;p&gt;ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿಗೆ ಕಾರಣವೇನು ಮತ್ತು ದಾಳಿಯಲ್ಲಿ ಉಂಟಾದ ಗಾಯಗಳಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆಯೇ ಎಂಬುದು ಸ್ಪಷ್ಟವಾಗುತ್ತದೆ. ಪೊಲೀಸರು ಕುಟುಂಬ ಸದಸ್ಯರು ಮತ್ತು ಇತರ ಸಂಬಂಧಿತ ವ್ಯಕ್ತಿಗಳನ್ನು ಪ್ರಶ್ನಿಸುತ್ತಿದ್ದಾರೆ. ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಪುರಾವೆಗಳು ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ತನಿಖೆ ಪ್ರಸ್ತುತ ಮುಂದುವರೆದಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/odisha-man-dies-after-wife-hits-him-on-head-with-mobile-during-fight-suc/articleshow-tgelw64"/>
        </item>
        <item>
            <title><![CDATA[13 ವರ್ಷಗಳ ಮಮತೆಯ ನೆರಳು:  ಆ ದಿನಗಳನ್ನು ನೆನೆದು ಸಿಎಂ ಡಿ.ಕೆ. ಶಿವಕುಮಾರ್​ ಭಾವುಕ ಪೋಸ್ಟ್​]]></title>
            <link>https://kannada.asianetnews.com/relationship/chief-minister-dk-shivakumar-about-his-aunty-and-early-childhood-days/articleshow-g3ewlgp</link>
            <guid isPermaLink="true">https://kannada.asianetnews.com/relationship/chief-minister-dk-shivakumar-about-his-aunty-and-early-childhood-days/articleshow-g3ewlgp</guid>
            <pubDate>Mon, 13 Jul 2026 17:24:29 +0530</pubDate>
            <description><![CDATA[ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ದೊಡ್ಡಮ್ಮ ಲಿಂಗಮ್ಮ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಾಗ 13 ವರ್ಷಗಳ ಕಾಲ ತಮ್ಮನ್ನು ಸಾಕಿ ಸಲಹಿದ ದೊಡ್ಡಮ್ಮನೊಂದಿಗಿನ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, 'ಮಮತೆಯ ನೆರಳು' ಶೀರ್ಷಿಕೆಯಡಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxdn29qrk16q413dqzq33wf8,imgname-dk-shivakumar-1783943472888.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪತ್ನಿಯ ಜೊತೆಗೂಡಿ ಇಂದು ತಮ್ಮ ದೊಡ್ಡಮ್ಮ ಅರ್ಥಾತ್​ ತಾಯಿಯ ಅಕ್ಕ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಬಳಿಕ, ದೊಡ್ಡಮ್ಮನ ಜೊತೆಗೆ ಕಳೆದ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡು ಎಕ್ಸ್​ ಖಾತೆಯಲ್ಲಿ ಭಾವುಕ ಪೋಸ್ಟ್​ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು, 'ಮಮತೆಯ ನೆರಳು' ಎನ್ನುವ ಶೀರ್ಷಿಕೆ ಕೊಟ್ಟಿದ್ದಾರೆ.&lt;/p&gt;&lt;h2&gt;&lt;strong&gt;13 ವರ್ಷ ಸಾಕಿ ಬೆಳೆಸಿದ ದೊಡ್ಡಮ್ಮ&lt;/strong&gt;&lt;/h2&gt;&lt;p&gt;ಅವರ ಮಾತಿನಲ್ಲಿಯೇ ಹೇಳುವುದಾದರೆ, 'ಶಿಕ್ಷಣಕ್ಕಾಗಿ ಕನಕಪುರದಿಂದ ಬೆಂಗಳೂರಿನ ಮೆಟ್ಟಿಲು ಹತ್ತಿದಾಗ, ನನಗೆ ಆಶ್ರಯ ನೀಡಿ ಹೆತ್ತ ತಾಯಿಗಿಂತಲೂ ಹೆಚ್ಚಾಗಿ ಬರೋಬ್ಬರಿ 13 ವರ್ಷಗಳ ಕಾಲ ಪ್ರೀತಿಯಿಂದ ಸಾಕಿ ಬೆಳೆಸಿದವರು ನನ್ನ ದೊಡ್ಡಮ್ಮ ಲಿಂಗಮ್ಮ ಅವರು. ಇಂದು ಬೆಂಗಳೂರಿನಲ್ಲಿ ನನ್ನ ಧರ್ಮಪತ್ನಿ ಉಷಾ ಅವರೊಂದಿಗೆ ದೊಡ್ಡಮ್ಮನನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿ, ಅವರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದೆ. ಕಾಲ ಬದಲಾಗಬಹುದು, ಜವಾಬ್ದಾರಿಗಳು ದೊಡ್ಡದಾಗಬಹುದು. ಆದರೆ, ದೊಡ್ಡಮ್ಮನ ಕೈ ತುತ್ತು ಉಂಡು ಬೆಳೆದ ಆ ದಿನಗಳ ನೆನಪುಗಳು ಎಂದಿಗೂ ಮಾಸದವು. ಇಂದು ಅವರ ಕೈಯನ್ನು ನನ್ನ ಕೈಯಲ್ಲಿ ಹಿಡಿದು ಕುಳಿತಾಗ, ಅವರ ಕಣ್ಣುಗಳಲ್ಲಿ ಕಂಡ ಆ ಅಕ್ಕರೆ ಮತ್ತು ತಲೆಯ ಮೇಲಿಟ್ಟು ಹರಸಿದ ಆ ಕೈಗಳು ನನ್ನ ಎಲ್ಲ ಆಯಾಸವನ್ನು ಮರೆಸಿ, ಮನಸ್ಸಿಗೆ ಅಪಾರ ನೆಮ್ಮದಿಯನ್ನು ನೀಡಿದವು' ಎಂದಿದ್ದಾರೆ.&lt;/p&gt;&lt;p&gt;'ನಿಜಕ್ಕೂ, ನನ್ನ ಹೆತ್ತ ಅಮ್ಮ ಗೌರಮ್ಮ ಮತ್ತು ದೊಡ್ಡಮ್ಮ ಲಿಂಗಮ್ಮನವರ ನಡುವೆ ಇಂದಿಗೂ ಇರುವ ಆ ಅಪೂರ್ವ, ಅವಿನಾಭಾವ ಸಂಬಂಧವನ್ನು ಹತ್ತಿರದಿಂದ ನೋಡುತ್ತಾ ಬೆಳೆಯುವ ಭಾಗ್ಯ ನನ್ನದು. ಆ ಇಬ್ಬರು ತಾಯಂದಿರ ನಡುವಿನ ಈ ನಿಸ್ವಾರ್ಥ ಪ್ರೀತಿ ಮತ್ತು ಕೌಟುಂಬಿಕ ಒಗ್ಗಟ್ಟೇ ಇಂದು ನನ್ನ ಬದುಕಿನಲ್ಲಿ ನನ್ನ ಒಡಹುಟ್ಟಿದ ತಮ್ಮ ಹಾಗೂ ತಂಗಿಯ ಜೊತೆಗೆ ಇಷ್ಟೊಂದು ಆತ್ಮೀಯವಾದ, ಗಟ್ಟಿಯಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಅಡಿಪಾಯವಾಗಿದೆ. ಹಿರಿಯರು ತೋರಿದ ಆ ದಾರಿಯೇ ಇಂದು ನಮ್ಮನ್ನು ಒಂದಾಗಿ ಹಿಡಿದಿಟ್ಟಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ದೊಡ್ಡಪ್ಪನ ಸಮಾಧಿಗೆ ಮಾಲಾರ್ಪಣೆ&lt;/strong&gt;&lt;/h3&gt;&lt;p&gt;ಇದೇ ಸಂದರ್ಭದಲ್ಲಿ, ನನ್ನ ಬೆಳವಣಿಗೆಯ ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ್ದ ದೊಡ್ಡಪ್ಪನವರಾದ ದಿವಂಗತ ಎಂ. ಕೃಷ್ಣಪ್ಪ ಅವರ ಸಮಾಧಿಗೆ ಮಾಲಾರ್ಪಣೆ ಮಾಡಿ ಭಾವಪೂರ್ಣ ನಮನ ಸಲ್ಲಿಸಿದೆ. ದೈಹಿಕವಾಗಿ ಅವರು ನಮ್ಮೊಂದಿಗಿಲ್ಲದಿದ್ದರೂ, ಅವರು ಹಾಕಿಕೊಟ್ಟ ದಾರಿ ಮತ್ತು ಆಶೀರ್ವಾದದ ಶಕ್ತಿ ಸದಾ ನನ್ನೊಂದಿಗಿರುತ್ತದೆ ಎಂಬ ಭಾವನೆ ಮನಸ್ಸನ್ನು ತುಂಬಿತು. ಹಿರಿಯರ ಈ ಪ್ರೀತಿಯೇ ನನ್ನ ಬದುಕಿನ ದಾರಿ ದೀಪ' ಎಂದು ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/chief-minister-dk-shivakumar-about-his-aunty-and-early-childhood-days/articleshow-g3ewlgp"/>
        </item>
        <item>
            <title><![CDATA[ಅಂಬಾನಿ 16 ವರ್ಷದ ಹಿಂದೆ 15,000 ಕೋಟಿಯಲ್ಲಿ ನಿರ್ಮಿಸಿದ ಆಂಟಿಲಿಯಾ ಅರಮನೆ, ಇಂದು ನಿರ್ಮಿಸಿದರೆ ಕೋಟಿ ಖರ್ಚಾಗುತ್ತೆ?]]></title>
            <link>https://kannada.asianetnews.com/gallery/business/mukesh-ambani-antilia-rebuilding-cost-2026-luxury-home-value-rs-15000-crore-to-rs-38000-crore-3eloggt</link>
            <guid isPermaLink="true">https://kannada.asianetnews.com/gallery/business/mukesh-ambani-antilia-rebuilding-cost-2026-luxury-home-value-rs-15000-crore-to-rs-38000-crore-3eloggt</guid>
            <pubDate>Mon, 13 Jul 2026 17:18:24 +0530</pubDate>
            <description><![CDATA[&lt;p&gt;2010ರಲ್ಲಿ ಸುಮಾರು 15,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಮುಕೇಶ್ ಅಂಬಾನಿ ಅವರ 'ಆಂಟಿಲಿಯಾ' ಮನೆಯನ್ನು, ಇಂದಿನ ಹಣದುಬ್ಬರ ಮತ್ತು ಹೆಚ್ಚಿದ ಭೂಮಿ ಬೆಲೆಯಿಂದಾಗಿ 2026ರಲ್ಲಿ ನಿರ್ಮಿಸಲು ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈಗಿನ ಬೆಲೆ ಎಷ್ಟಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdma9b50vg5tee29n13eny1,imgname-mukesh-ambani-antilia-rebuilding-cost--2--1783942686052.jpg" type="image/jpeg" height="390" width="690"/>
            <content:encoded><![CDATA[&lt;p&gt;2010ರಲ್ಲಿ ಸುಮಾರು 15,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಮುಕೇಶ್ ಅಂಬಾನಿ ಅವರ 'ಆಂಟಿಲಿಯಾ' ಮನೆಯನ್ನು, ಇಂದಿನ ಹಣದುಬ್ಬರ ಮತ್ತು ಹೆಚ್ಚಿದ ಭೂಮಿ ಬೆಲೆಯಿಂದಾಗಿ 2026ರಲ್ಲಿ ನಿರ್ಮಿಸಲು ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈಗಿನ ಬೆಲೆ ಎಷ್ಟಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ನಿವಾಸ 'ಆಂಟಿಲಿಯಾ' ಬಗ್ಗೆ ಕೇಳದವರೇ ಇಲ್ಲ. ಮುಂಬೈನ ಪ್ರತಿಷ್ಠಿತ ಅಲ್ಟಾಮೌಂಟ್ ರಸ್ತೆಯಲ್ಲಿರುವ ಈ 27 ಅಂತಸ್ತಿನ ಗಗನಚುಂಬಿ ಕಟ್ಟಡವು ವಿಶ್ವದ ಅತ್ಯಂತ ದುಬಾರಿ ಖಾಸಗಿ ಮನೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.&amp;nbsp;&lt;/p&gt;&lt;p&gt;2010 ರಲ್ಲಿ ಈ ಮನೆ ನಿರ್ಮಾಣವಾದಾಗ ಇದರ ವೆಚ್ಚ ಸುಮಾರು 15,000 ಕೋಟಿ ರೂಪಾಯಿಗಳಾಗಿತ್ತು. ಆದರೆ, ಇಂದಿನ ಹಣದುಬ್ಬರ ಮತ್ತು ಗಗನಕ್ಕೇರಿರುವ ಭೂಮಿಯ ಬೆಲೆಯನ್ನು ಗಮನಿಸಿದರೆ, ಇದೇ ರೀತಿಯ ಮನೆಯನ್ನು 2026ರಲ್ಲಿ ನಿರ್ಮಿಸಲು ಎಷ್ಟು ಹಣ ಬೇಕಾಗಬಹುದು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.&lt;/p&gt;&lt;img&gt;&lt;p&gt;&lt;strong&gt;2010 ರಲ್ಲಿ ಎಷ್ಟು ವೆಚ್ಚವಾಗಿತ್ತು?&lt;/strong&gt;&lt;/p&gt;&lt;p&gt;ಆಂಟಿಲಿಯಾ ನಿರ್ಮಾಣ ಕಾರ್ಯವು 2006 ರಲ್ಲಿ ಪ್ರಾರಂಭವಾಗಿ 2010 ರಲ್ಲಿ ಪೂರ್ಣಗೊಂಡಿತು. ಅಂದಿನ ಅಂದಾಜಿನ ಪ್ರಕಾರ, ಇದರ ಒಟ್ಟು ನಿರ್ಮಾಣ ವೆಚ್ಚ ಸುಮಾರು 2 ಬಿಲಿಯನ್ ಡಾಲರ್ ಆಗಿತ್ತು. ಅಂದಿನ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ ಇದು ಸುಮಾರು 15,000 ದಿಂದ 17,400 ಕೋಟಿ ರೂಪಾಯಿಗಳಾಗುತ್ತದೆ. ಕೇವಲ ಈ ಕಟ್ಟಡದ ಮೂಲ ರಚನೆಯನ್ನು (Core Structure) ನಿರ್ಮಿಸಲು ಸುಮಾರು 6,000 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು ಎಂದು ವರದಿಗಳು ತಿಳಿಸುತ್ತವೆ. ನಂತರ ಆಮದು ಮಾಡಿಕೊಂಡ ಅಮೃತಶಿಲೆ, ಅತ್ಯಾಧುನಿಕ ಒಳಾಂಗಣ ವಿನ್ಯಾಸ ಮತ್ತು ಐಷಾರಾಮಿ ಸೌಲಭ್ಯಗಳನ್ನು ಸೇರಿಸಿದಾಗ ಈ ವೆಚ್ಚ ದುಪ್ಪಟ್ಟಾಯಿತು.&lt;/p&gt;&lt;img&gt;&lt;p&gt;&lt;strong&gt;ಇಂದು ಕಟ್ಟಬೇಕೆಂದರೆ ಎಷ್ಟು ಹಣ ಬೇಕು?&lt;/strong&gt;&lt;/p&gt;&lt;p&gt;ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, 2026 ರ ವೇಳೆಗೆ ಆಂಟಿಲಿಯಾದಂತಹ ಮತ್ತೊಂದು ಮನೆಯನ್ನು ನಿರ್ಮಿಸಲು ಈಗಿನ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚು ಹಣದ ಅಗತ್ಯವಿದೆ. ಅಂದರೆ, ಸುಮಾರು 4.6 ಬಿಲಿಯನ್ ಡಾಲರ್ ಅಥವಾ 38,000 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹೂಡಿಕೆ ಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಮುಂಬೈನಲ್ಲಿ ಗಗನಕ್ಕೇರಿರುವ ಭೂಮಿಯ ಬೆಲೆ, ಹೆಚ್ಚುತ್ತಿರುವ ಸಿಮೆಂಟ್, ಸ್ಟೀಲ್ ಮುಂತಾದ ನಿರ್ಮಾಣ ಸಾಮಗ್ರಿಗಳ ದರ ಮತ್ತು ಕಾರ್ಮಿಕರ ವೆಚ್ಚ.&lt;/p&gt;&lt;img&gt;&lt;p&gt;&lt;strong&gt;ಆಂಟಿಲಿಯಾದ ವಿಶೇಷತೆಗಳೇನು?&lt;/strong&gt;&lt;/p&gt;&lt;p&gt;&lt;strong&gt;ವಿಸ್ತೀರ್ಣ: &lt;/strong&gt;ಸುಮಾರು 4,00,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಮನೆಯು ಕೇವಲ ನಿವಾಸವಲ್ಲ, ಇದೊಂದು ಅದ್ಭುತ ಎಂಜಿನಿಯರಿಂಗ್ ಕೌಶಲವಾಗಿದೆ.&lt;/p&gt;&lt;p&gt;&lt;strong&gt;ಅಂತಸ್ತುಗಳ ಎತ್ತರ: &lt;/strong&gt;ಇದರಲ್ಲಿ ಕೇವಲ 27 ಅಂತಸ್ತುಗಳಿದ್ದರೂ, ಪ್ರತಿಯೊಂದು ಅಂತಸ್ತಿನ ಸೀಲಿಂಗ್ ಬಹಳ ಎತ್ತರವಿರುವುದರಿಂದ, ಇದು ಸಾಮಾನ್ಯ 60 ಅಂತಸ್ತುಗಳ ಕಟ್ಟಡದಷ್ಟು ಎತ್ತರವಾಗಿ ಕಾಣುತ್ತದೆ.&lt;/p&gt;&lt;p&gt;&lt;strong&gt;ಭೂಕಂಪ ನಿರೋಧಕ: &lt;/strong&gt;ಈ ಬೃಹತ್ ಕಟ್ಟಡವನ್ನು ರಿಕ್ಟರ್ ಮಾಪಕದಲ್ಲಿ 8.0 ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ಐಷಾರಾಮಿ ಸೌಲಭ್ಯಗಳು:&lt;/strong&gt; ಮನೆಯಲ್ಲಿ ಮೂರು ಹೆಲಿಪ್ಯಾಡ್&zwnj;ಗಳು, 168 ಕಾರುಗಳನ್ನು ನಿಲ್ಲಿಸಲು 6 ಹಂತದ ಪಾರ್ಕಿಂಗ್ ವ್ಯವಸ್ಥೆ, ಖಾಸಗಿ ಚಿತ್ರಮಂದಿರ, ಜಿಮ್, ಸ್ಪಾ ಮತ್ತು ಸುಂದರವಾದ ದೇವಾಲಯವಿದೆ.&lt;/p&gt;&lt;p&gt;&lt;strong&gt;ಸ್ನೋ ರೂಮ್: &lt;/strong&gt;ಮುಂಬೈನ ಸೆಖೆಯನ್ನು ತಣಿಸಲು ಈ ಮನೆಯಲ್ಲಿ ವಿಶೇಷ 'ಸ್ನೋ ರೂಮ್' (ಹಿಮದ ಕೊಠಡಿ) ಕೂಡ ಇದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ಅಂಬಾನಿ ಕುಟುಂಬದ ಈ ಆಂಟಿಲಿಯಾ ಕೇವಲ ಹಣದ ಸಂಕೇತವಲ್ಲ, ಬದಲಾಗಿ ಇದು ಆಧುನಿಕ ವಾಸ್ತುಶಿಲ್ಪದ ಒಂದು ಮೈಲಿಗಲ್ಲಾಗಿದೆ. ಇಂದು ಮುಂಬೈನ ಹೃದಯಭಾಗದಲ್ಲಿ ಇಂತಹ ಮತ್ತೊಂದು ಸಾಮ್ರಾಜ್ಯವನ್ನು ನಿರ್ಮಿಸುವುದು ಸಾಮಾನ್ಯ ವ್ಯಕ್ತಿಯ ಕನಸಿನ ಮಾತು ಬಿಡಿ, ವಿಶ್ವದ ದೊಡ್ಡ ಉದ್ಯಮಿಗಳಿಗೂ ಇದು ಸವಾಲಿನ ಕೆಲಸವಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/business/mukesh-ambani-antilia-rebuilding-cost-2026-luxury-home-value-rs-15000-crore-to-rs-38000-crore-3eloggt"/>
        </item>
        <item>
            <title><![CDATA[ಸಾಫ್ಟ್‌ವೇರ್ ಇಂಜಿನಿಯರ್ ಮಾತ್ರವಲ್ಲ; ಅಮೆರಿಕದಲ್ಲಿ ಕಸ ಎತ್ತುವವರಿಗೂ ಲಕ್ಷಾಂತರ ಸಂಬಳ!]]></title>
            <link>https://kannada.asianetnews.com/jobs/us-garbage-collector-salary-here-is-how-much-trash-collectors-make-every-month-kvn/articleshow-d256z44</link>
            <guid isPermaLink="true">https://kannada.asianetnews.com/jobs/us-garbage-collector-salary-here-is-how-much-trash-collectors-make-every-month-kvn/articleshow-d256z44</guid>
            <pubDate>Mon, 13 Jul 2026 16:55:15 +0530</pubDate>
            <description><![CDATA[ಅಮೆರಿಕದಲ್ಲಿ ವೈದ್ಯರು, ಇಂಜಿನಿಯರ್&zwnj;ಗಳಂತಹ ಉನ್ನತ ವೃತ್ತಿಪರರು ಮಾತ್ರವಲ್ಲ, ಕಸ ಎತ್ತುವವರು ಮತ್ತು ಟ್ರಕ್ ಡ್ರೈವರ್&zwnj;ಗಳಂತಹ ಸಣ್ಣಪುಟ್ಟ ಕೆಲಸ ಮಾಡುವವರೂ ಉತ್ತಮ ಸಂಬಳ ಪಡೆಯುತ್ತಾರೆ. ಈ ಲೇಖನವು ಅಮೆರಿಕದ ವಿವಿಧ ಉದ್ಯೋಗಗಳ ಸಂಬಳದ ವಿವರಗಳನ್ನು ನೀಡುತ್ತದೆ, ಅಲ್ಲಿ ಕಸ ಸಂಗ್ರಹಿಸುವವರು ತಿಂಗಳಿಗೆ 1.5 ಲಕ್ಷದಿಂದ 4 ಲಕ್ಷದವರೆಗೆ ಸಂಪಾದಿಸಬಹುದು ಎಂದು ತಿಳಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxdke1v51qmwpb7698kpwcf3,imgname-us-jobs-1783941760869.jpeg" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕ ಅಂದ್ರೆ ಸಾಕು, ಯುವಕರು ಅಲ್ಲಿಗೆ ಹಾರಲು ರೆಡಿಯಾಗಿರುತ್ತಾರೆ. ಅಲ್ಲಿ ಹೆಚ್ಚು ದುಡಿಮೆ ಇದೆ, ಚೆನ್ನಾಗಿ ಸಂಪಾದಿಸಬಹುದು ಅನ್ನೋದು ಅವರ ನಂಬಿಕೆ. ಹಾಗಿದ್ರೆ, ಅಮೆರಿಕದಲ್ಲಿ ಕಸ ಎತ್ತುವವರ ಸಂಬಳ ಎಷ್ಟು ಗೊತ್ತಾ? ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಾ!&lt;/p&gt;&lt;h2&gt;&lt;strong&gt;ಅಮೆರಿಕದತ್ತ ಯುವಕರ ಚಿತ್ತ&lt;/strong&gt;&lt;/h2&gt;&lt;p&gt;ಹೆಚ್ಚು ಸಂಬಳ, ಐಷಾರಾಮಿ ಜೀವನಶೈಲಿಗಾಗಿ ಜಗತ್ತಿನಾದ್ಯಂತ ಯುವಕರು ಅಮೆರಿಕದತ್ತ (USA) ಮುಖ ಮಾಡುತ್ತಾರೆ. ಭಾರತದಿಂದಲೂ ಸಾಫ್ಟ್&zwnj;ವೇರ್ ಇಂಜಿನಿಯರ್&zwnj;ಗಳು, ವೈದ್ಯರು, ವಕೀಲರಂತಹ ಉನ್ನತ ವೃತ್ತಿಪರರು ಅಲ್ಲಿಗೆ ಹೋಗಿ ನೆಲೆಸುತ್ತಾರೆ. ಆದರೆ ಅಮೆರಿಕದಲ್ಲಿ ದೊಡ್ಡ ಹುದ್ದೆಗಳಿಗೆ ಮಾತ್ರವಲ್ಲ, ಸಣ್ಣಪುಟ್ಟ ಕೆಲಸ ಮಾಡುವವರಿಗೂ ಗೌರವಾನ್ವಿತ ಸಂಬಳ ಸಿಗುತ್ತದೆ. ಅಲ್ಲಿ ಯಾವ ಕೆಲಸಕ್ಕೆ ಎಷ್ಟು ಸಂಬಳ, ಅದರಲ್ಲೂ ಕಸ ಎತ್ತುವವರ ಸಂಪಾದನೆ ಎಷ್ಟಿರಬಹುದು? ಈ ಬಗ್ಗೆ ಯೂಟ್ಯೂಬರ್ ಒಬ್ಬರು ನೀಡಿದ ಮಾಹಿತಿ ಇಲ್ಲಿದೆ.&lt;/p&gt;&lt;h3&gt;&lt;strong&gt;ದೊಡ್ಡ ಹುದ್ದೆಗಳಲ್ಲಿರುವವರ ಸಂಬಳದ ವಿವರ&lt;/strong&gt;&lt;/h3&gt;&lt;p&gt;ಅಮೆರಿಕದಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಅನುಭವವಿರುವ ಉನ್ನತ ಮಟ್ಟದ ವೃತ್ತಿಪರರಿಗೆ ಭಾರಿ ಸಂಬಳ ಸಿಗುತ್ತದೆ. ಯೂಟ್ಯೂಬರ್ ಒಬ್ಬರ ಪ್ರಕಾರ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಅವರ ತಿಂಗಳ ಸಂಪಾದನೆ ಹೀಗಿದೆ: ಸಾಮಾನ್ಯ ವೈದ್ಯರು ತಿಂಗಳಿಗೆ ಸುಮಾರು 21 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಗಳಿಸುತ್ತಾರೆ. ಪಶುವೈದ್ಯರು (ವೆಟರ್ನರಿ) ತಿಂಗಳಿಗೆ 7 ಲಕ್ಷದವರೆಗೆ ಸಂಪಾದಿಸುತ್ತಾರೆ. ಇನ್ನು ವಕೀಲರ ವಿಷಯಕ್ಕೆ ಬಂದರೆ, ಜೂನಿಯರ್ ವಕೀಲರು ತಿಂಗಳಿಗೆ 5 ರಿಂದ 6 ಲಕ್ಷ ರೂ. ಸಂಪಾದಿಸಿದರೆ, ಸೀನಿಯರ್ ವಕೀಲರು 15 ರಿಂದ 20 ಲಕ್ಷ ರೂ.ವರೆಗೂ ಗಳಿಸುತ್ತಾರೆ.&lt;/p&gt;&lt;h3&gt;&lt;strong&gt;ಅಮೆರಿಕದಲ್ಲಿ ಮಧ್ಯಮ ವರ್ಗದ ಉದ್ಯೋಗಿಗಳ ಸಂಪಾದನೆ ಎಷ್ಟು?&lt;/strong&gt;&lt;/h3&gt;&lt;p&gt;ಅಮೆರಿಕದಲ್ಲಿ ಸಣ್ಣಪುಟ್ಟ ಉದ್ಯೋಗಗಳಿಗೂ ಉತ್ತಮ ಮೌಲ್ಯವಿದೆ. 16-ಚಕ್ರಗಳ ದೊಡ್ಡ ಟ್ರಕ್&zwnj;ಗಳನ್ನು ಓಡಿಸುವ ಡ್ರೈವರ್&zwnj;ಗಳು, ಸಾಫ್ಟ್&zwnj;ವೇರ್ ಇಂಜಿನಿಯರ್&zwnj;ಗಳಷ್ಟೇ ಅಥವಾ ಅವರಿಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಟ್ರಕ್ ಡ್ರೈವರ್&zwnj;ಗಳು ತಿಂಗಳಿಗೆ 5 ಲಕ್ಷಕ್ಕಿಂತ ಹೆಚ್ಚು ಸಂಪಾದಿಸುತ್ತಾರೆ. ಆದರೆ, ಅಮೆರಿಕದಲ್ಲಿ ಟೀಚರ್&zwnj;ಗಳ ಸಂಬಳ ಸ್ವಲ್ಪ ಕಡಿಮೆ. ಅವರು ತಿಂಗಳಿಗೆ 3 ರಿಂದ 4 ಲಕ್ಷದವರೆಗೆ ಮಾತ್ರ ಗಳಿಸುತ್ತಾರೆ. ಬ್ಯಾಂಕ್ ಉದ್ಯೋಗಿಗಳು, ಬಾರ್ಬರ್&zwnj;ಗಳು, ಮತ್ತು ಟೈಲರ್&zwnj;ಗಳು ತಮ್ಮ ಕೆಲಸಕ್ಕೆ ಅನುಗುಣವಾಗಿ 2 ರಿಂದ 4 ಲಕ್ಷದವರೆಗೆ ಸಂಪಾದಿಸುತ್ತಾರೆ.&lt;/p&gt;&lt;h3&gt;&lt;strong&gt;ಅಮೆರಿಕದಲ್ಲಿ ಕಸ ಎತ್ತುವವರ ಸಂಪಾದನೆ&lt;/strong&gt;&lt;/h3&gt;&lt;p&gt;ಅಮೆರಿಕದಲ್ಲಿ ಮನೆಗಳ ಬಳಿ ಕಸ ಸಂಗ್ರಹಿಸುವ (Trash Collectors) ಕೆಲಸವನ್ನು ಬಹಳ ಗೌರವದಿಂದ ಕಾಣುತ್ತಾರೆ. ಇವರಿಗೆ ಸಿಗುವ ಸಂಬಳ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ. ಇಲ್ಲಿ ಗಂಟೆಗಳ ಆಧಾರದ ಮೇಲೆ (Hourly Based) ಹಣ ಪಾವತಿಸಲಾಗುತ್ತದೆ. ಸಾಮಾನ್ಯವಾಗಿ ಒಂದು ಗಂಟೆಗೆ ಕನಿಷ್ಠ 15 ಡಾಲರ್ ($15) ಅಥವಾ ಅದಕ್ಕಿಂತ ಹೆಚ್ಚು ಸಿಗುತ್ತದೆ. ಈ ಲೆಕ್ಕಾಚಾರದಲ್ಲಿ, ಅಮೆರಿಕದಲ್ಲಿ ಯಾವುದೇ ಸಣ್ಣ ಅಥವಾ ಕ್ಲೀನಿಂಗ್ ಕೆಲಸ ಮಾಡಿದರೂ ತಿಂಗಳಿಗೆ ಕನಿಷ್ಠ 1.5 ಲಕ್ಷದಿಂದ 2 ಲಕ್ಷ ರೂಪಾಯಿಗಳನ್ನು ಸುಲಭವಾಗಿ ಸಂಪಾದಿಸಬಹುದು. ಕೆಲವರಂತೂ 4 ಲಕ್ಷದವರೆಗೂ ದುಡಿಯುತ್ತಾರೆ.&lt;/p&gt;&lt;h3&gt;&lt;strong&gt;ಟಿಪ್ಸ್ ರೂಪದಲ್ಲಿ ಹೆಚ್ಚು ಸಂಪಾದನೆ&lt;/strong&gt;&lt;/h3&gt;&lt;p&gt;ಭಾರತದಿಂದ ಅಮೆರಿಕಕ್ಕೆ ಹೋಗಿ ಪಾರ್ಟ್&zwnj;ಟೈಮ್ ಆಗಿ ವೇಟರ್ ಕೆಲಸ ಮಾಡುವವರು ಹೆಚ್ಚು ಸಂಪಾದಿಸುತ್ತಾರೆ. ಅವರ ಸಂಬಳ ತಿಂಗಳಿಗೆ 1 ರಿಂದ 2 ಲಕ್ಷದವರೆಗೆ ಇರಬಹುದು. ಆದರೆ ಟಿಪ್ಸ್ ರೂಪದಲ್ಲಿ ಅವರಿಗೆ ಹೆಚ್ಚು ಹಣ ಬರುತ್ತದೆ. ಸಂಬಳ ಮತ್ತು ಟಿಪ್ಸ್ ಸೇರಿ ತಿಂಗಳಿಗೆ 4 ಲಕ್ಷದವರೆಗೂ ಗಳಿಸುತ್ತಾರೆ. ಅಮೆರಿಕದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಅಲ್ಲಿ ಯಾವುದೇ ಕೆಲಸ ಮಾಡಿದರೂ ತಿಂಗಳಿಗೆ ಕನಿಷ್ಠ ಒಂದು ಲಕ್ಷ ರೂಪಾಯಿ ಆದಾಯ ಗ್ಯಾರಂಟಿ. ಅಲ್ಲಿನ ಜನರು ಒಂದೇ ಕೆಲಸಕ್ಕೆ ಸೀಮಿತವಾಗದೆ, ಹಲವು ಪಾರ್ಟ್&zwnj;ಟೈಮ್ ಕೆಲಸಗಳನ್ನು ಮಾಡಿ ಹೆಚ್ಚು ಸಂಪಾದಿಸುತ್ತಾರೆ.&lt;/p&gt;&lt;h3&gt;&lt;strong&gt;ಸಾಫ್ಟ್&zwnj;ವೇರ್ ಇಂಜಿನಿಯರ್&zwnj;ಗಳು ಎಷ್ಟು ಸಂಪಾದಿಸುತ್ತಾರೆ?&lt;/strong&gt;&lt;/h3&gt;&lt;p&gt;ಭಾರತದಿಂದ ಅಮೆರಿಕಕ್ಕೆ ಅತಿ ಹೆಚ್ಚು ಹೋಗುವುದೇ ಸಾಫ್ಟ್&zwnj;ವೇರ್ ಇಂಜಿನಿಯರ್&zwnj;ಗಳು. ಅಲ್ಲಿ ಪಾರ್ಟ್&zwnj;ಟೈಮ್ ಕೆಲಸ ಮಾಡುತ್ತಾ ಸ್ನಾತಕೋತ್ತರ ಪದವಿ ಮುಗಿಸಿ, ಹೆಚ್ಚು ಸಂಬಳದ ಆಸೆಯಿಂದ ಅಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಸಾಫ್ಟ್&zwnj;ವೇರ್ ಕ್ಷೇತ್ರದಲ್ಲಿ ಸರಾಸರಿ ಉದ್ಯೋಗಿಗೆ ತಿಂಗಳಿಗೆ 4 ರಿಂದ 5 ಲಕ್ಷ ರೂ. ಸಂಬಳವಿರುತ್ತದೆ. ಸೀನಿಯರ್&zwnj;ಗಳು 10 ಲಕ್ಷಕ್ಕಿಂತ ಹೆಚ್ಚು ಸಂಪಾದಿಸುತ್ತಾರೆ. ಕಾಂಟ್ರ್ಯಾಕ್ಟ್ ಆಧಾರದ ಮೇಲೆ ಕೆಲಸ ಮಾಡುವವರಿಗೆ 6 ರಿಂದ 7 ಲಕ್ಷ ರೂ. ಸಿಗುತ್ತದೆ. ವಿಮಾನ ಪೈಲಟ್&zwnj;ಗಳಿಗೆ ತಿಂಗಳಿಗೆ ಸುಮಾರು 15 ರಿಂದ 16 ಲಕ್ಷ ರೂ. ಮತ್ತು ಯೂನಿವರ್ಸಿಟಿ ಪ್ರೊಫೆಸರ್&zwnj;ಗಳಿಗೆ 7 ರಿಂದ 8 ಲಕ್ಷ ರೂ. ಸಂಬಳವಿರುತ್ತದೆ. ಆದರೆ, ಗಳಿಕೆಗೆ ತಕ್ಕಂತೆ ಅಲ್ಲಿ ಖರ್ಚು ಮತ್ತು ತೆರಿಗೆಗಳು ಕೂಡ ಹೆಚ್ಚಾಗಿಯೇ ಇರುತ್ತವೆ.&lt;/p&gt;]]></content:encoded>
            <category>news</category>
            <dc:creator>Naveen Kodase</dc:creator>
            <atom:link href="https://kannada.asianetnews.com/jobs/us-garbage-collector-salary-here-is-how-much-trash-collectors-make-every-month-kvn/articleshow-d256z44"/>
        </item>
        <item>
            <title><![CDATA[900ರೂ ಸ್ಕಾಲರ್‌ಶಿಪ್ ಡ್ರಾ ಮಾಡಲು ಹೋದ 7ನೇ ತರಗತಿ ಬಾಲಕಿಗೆ ಅಚ್ಚರಿ, 759 ಕೋಟಿ ರೂ ಜಾಕ್‌ಪಾಟ್]]></title>
            <link>https://kannada.asianetnews.com/viral/seventh-standard-girl-went-to-withdraw-rs-900-scholarship-finds-rs-759-crore-in-bengal/articleshow-eowx1n8</link>
            <guid isPermaLink="true">https://kannada.asianetnews.com/viral/seventh-standard-girl-went-to-withdraw-rs-900-scholarship-finds-rs-759-crore-in-bengal/articleshow-eowx1n8</guid>
            <pubDate>Mon, 13 Jul 2026 16:53:25 +0530</pubDate>
            <description><![CDATA[&lt;p&gt;ಕಡು ಬಡತನದ ಕುಟುಂಬ. 7ನೇ ತರಗತಿ ಬಾಲಕಿ ಶೂ ಹರಿದಿತ್ತು. ಹೊಸ ಶೂ ಖರೀದಿಸಲು ಸ್ಕಾಲರ್&zwnj;ಶಿಪ್ ಹಣ ಡ್ರಾ ಮಾಡಲು ಅಣ್ಣನ ಜೊತೆ ಎಟಿಎಂ ಬಳಿ ತೆರಳಿದ್ದಾಳೆ. ಆದರೆ ಸ್ಕಾಲರ್&zwnj;ಶಿಪ್ ಚೆಕ್ ಮಾಡಿದಾಗ ಅಚ್ಚರಿ ಕಾದಿದೆ. ಕಾರಣ ಖಾತೆಯಲ್ಲಿದ್ದಿದ್ದು ಬರೋಬ್ಬರಿ 759 ಕೋಟಿ ರೂಪಾಯಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyksvc1vzsqmdx8s8d0hke6,imgname-karnataka-rain-school-holiday--1--1783438830977.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೂಚ್ ಬಿಹಾರ್ (ಜು.13) &lt;/strong&gt;ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಬಡ ಕುಟುಂಬ ಅದು. ತಂದೆ ಕೇರಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ಕೂಡ ಕೂಲಿ ಕೆಲಸ ಮಾಡಿ ಇಬ್ಬರು ಮಕ್ಕಳ ಖರ್ಚು ವೆಚ್ಚ ನೋಡಿಕೊಳ್ಳುತ್ತಾರೆ. ಕಡು ಬಡತನದಲ್ಲಿದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್&zwnj;&zwnj;ಶಿಪ್ ಪ್ರಮುಖ ಆಸರೆಯಾಗಿತ್ತು. ಶಾಲೆ, ಪುಸ್ತಕ ಸೇರಿದಂತೆ ಇತರ ಖರ್ಚು ವೆಚ್ಚಗಳಿಗೆ ಇದು ಸಾಕಾಗುತ್ತಿರಲಿಲ್ಲ. ಇದರ ನಡುವೆ 7ನೇ ತರಗತಿ ಬಾಲಕಿಯ ಶೂ ಹರಿದಿತ್ತು. ಬದಲಿ ಶೂ ಖರೀದಿಗೆ ಪೋಷಕರ ಬಳಿ ಹಣ ಇರಲಿಲ್ಲ. ಹೀಗಾಗಿ ಜುಲೈ ತಿಂಗಳ 900 ರೂಪಾಯಿ ಸ್ಕಾಲರ್&zwnj;ಶಿಪ್&zwnj;ನಲ್ಲಿ ಶೂ ಖರೀದಿಗೆ ನಿರ್ಧರಿಸಿದ್ದಾರೆ. ಸ್ಕಾಲರ್&zwnj;ಶಿಪ್ ಹಣ ಜಮೆ ದಿನಾಂಕದ ಮರುದಿನ ಬಾಲಕಿ ತನ್ನ ಸಹೋದರನ ಜೊತೆ ಹೋಗಿ 900 ರೂಪಾಯಿ ಜಮೆ ಆಗಿದೆಯಾ ಅನ್ನೋದು ಪರಿಶೀಲಿಸಿದಾಗ ಅಚ್ಚರಿಯಾಗಿದೆ. ನಾಲ್ಕು ಬಾರಿ ಚೆಕ್ ಮಾಡಿದರೂ ಖಾತೆಯಲ್ಲಿ 759 ಕೋಟಿ ರೂಪಾಯಿ ಜಮೆ ಆಗಿತ್ತು. ಕೋಟಿ ಕೋಟಿ ರೂಪಾಯಿ ನೋಡಿದ ಬಾಲಕಿ ಗಾಬರಿಯಾಗಿದ್ದಾಳೆ.&lt;/p&gt;&lt;h2&gt;ಬ್ಯಾಂಕ್ ಬ್ಯಾಲೆನ್ಸ್ 759,69,51,951 ರೂಪಾಯಿ&lt;/h2&gt;&lt;p&gt;ಬಾಲಕಿ ಸುಪರ್ಣ ರಾಯ್ ಹಾಗೂ ಆತನ ಸಹೋದರ ಎಟಿಎಂ ಬಳಿ ಬಂದು ಸ್ಕಾಲರ್&zwnj;ಶಿಪ್ ಹಣ ಡ್ರಾ ಮಾಡಲು ಮುಂದಾಗಿದ್ದಾರೆ. ಎಟಿಎಂ ಕಾರ್ಡ್ ಹಿಡಿದು ಬ್ಯಾಲೆನ್ಸ್ ಚೆಕ್ ಮಾಡಿದ್ದಾರೆ. 900 ರೂಪಾಯಿ ಬಂದಿಯೋ ಅಥವಾ ಇಲ್ಲವೋ ಎಂದು ಮೊದಲು ಪರಿಶೀಲಿಸಿದ್ದಾರೆ. 900 ರೂಪಾಯಿ ಬದಲು 759,69,51,951 ರೂಪಾಯಿ ತೋರಿಸಿದೆ. ಇದು ತಾಂತ್ರಿಕ ದೋಷ ಎಂದು ಮತ್ತೆ ಕಾರ್ಡ್ ಹಾಕಿ ಚೆಕ್ ಮಾಡಿದ್ದಾರೆ. ಆಗಲೂ ಅಷ್ಟೇ ಮೊತ್ತ ತೋರಿಸಿದೆ.&lt;/p&gt;&lt;h2&gt;ಬ್ಯಾಂಕ್&zwnj;ಗೆ ಮಾಹಿತಿ ನೀಡಿದ ಬಾಲಕಿ&lt;/h2&gt;&lt;p&gt;ಹೀಗೆ ನಾಲ್ಕು ಬಾರಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ದಾರೆ. ನಾಲ್ಕು ಬಾರಿ ಪರಿಶೀಲಿಸಿದಾಗ 759 ಕೋಟಿ ರೂಪಾಯಿ ಇರುವುದು ನಿಜವಾಗಿದೆ. ಬಾಲಕಿ ಹಾಗೂ ಆಕೆಯ ಸಹೋದರ ಗಾಬರಿಯಾಗಿದ್ದಾರೆ. 900 ರೂಪಾಯಿ ಡ್ರಾ ಮಾಡಿದ ಬಾಲಕಿ ಉಳಿದ ಹಾಗೇ ಇರಲಿ ಎಂದು ಮರಳಿದ್ದಾಳೆ. ಬಳಿಕ ನೇರವಾಗಿ ಬ್ಯಾಂಕ್&zwnj;ಗೆ ತೆರಳಿದ್ದಾರೆ. ಬ್ಯಾಂಕ್&zwnj;ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್&zwnj;ನಲ್ಲಿ ಚೆಕ್ ಮಾಡಿದಾಗ 759 ಕೋಟಿ ರೂಪಾಯಿ ಇರುವುದು ನಿಜವಾಗಿದೆ.&lt;/p&gt;&lt;p&gt;ಬಾಲಕಿ ಬ್ಯಾಂಕ್&zwnj;ಗೆ ಮಾಹಿತಿ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇತ್ತ ಈ ಮಾಹಿತಿ ಪೊಲೀಸರಿಗೂ ಸಿಕ್ಕಿದೆ. ಪೊಲೀಸರು ಆಗಮಿಸಿ ಇದೀಗ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ಮೂಲಗಳ ಪ್ರಕಾರ ಇದು ತಾಂತ್ರಿಕ ದೋಷದಿಂದ ಆಗಿರುವ ಸಾಧ್ಯತೆ ಇದೆ. ಇನ್ನು ಇಷ್ಟು ಮೊತ್ತವನ್ನು ಹೀಗೆ ವರ್ಗಾವಣೆ ಮಾಡುವುದಿಲ್ಲ. ಹೀಗಾಗಿ ತಾಂತ್ರಿಕ ದೋಷವಾಗಿರುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ. ತನಿಖೆ ಬಳಿಕ ಖಚಿತ ಮಾಹಿತಿ ಸಿಗಲಿದೆ ಎಂದಿದ್ದಾರೆ.&lt;/p&gt;&lt;h2&gt;ಬಾಲಕಿ ಹಾಗೂ ಪೋಷಕರಿಗೆ ಆದಾಯ ತೆರಿಗೆ ತಲೆನೋವು&lt;/h2&gt;&lt;p&gt;759 ಕೋಟಿ ರೂಪಾಯಿ ಖಾತೆಗೆ ಜಮೆ ಆಗಿದೆ. ಕೂಲಿ ಕೆಲಸ ಮಾಡಿಕೊಂಡು ಮೂರು ಹೊತ್ತು ಊಟ ಮಾಡುತ್ತಿರುವುದೇ ದೊಡ್ಡ ವಿಷಯ. ಇದರ ನಡುವೆ ನಮ್ಮಿಂದ ಆದಾಯ ತೆರಿಗೆ ಕಸಿದುಕೊಳ್ಳಬೇಡಿ ಎಂದು ಬಾಲಕಿ ತಾಯಿ ಮನವಿ ಮಾಡಿದ್ದಾರೆ. ಖಾತೆಯಲ್ಲಿ ಕೋಟಿ ಕೋಟಿ ದುಡ್ಡ ಜಮೆ ಆಗಿದೆ. ಇದು ನಮ್ಮ ದುಡ್ಡಲ್ಲ. ಹೀಗಾಗಿ ತೆರಿಗೆ ಸಂಕಷ್ಟಕ್ಕೆ ನಮ್ಮನ್ನು ಸಿಲುಕಿಸಬೇಡಿ ಎಂದು ಬ್ಯಾಂಕ್ ಬಳಿ ಮನವಿ ಮಾಡಿದ್ದಾರೆ. ಇತ್ತ ಗ್ರಾಮಸ್ಥರು ಇದೀಗ ಈ ಬಡ ಕುಟುಂಬದ ಮನೆಯತ್ತ ತಂಡೋಪ ತಂಡವಾಗಿ ಧಾವಿಸುತ್ತಿದ್ದಾರೆ.&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/seventh-standard-girl-went-to-withdraw-rs-900-scholarship-finds-rs-759-crore-in-bengal/articleshow-eowx1n8"/>
        </item>
        <item>
            <title><![CDATA[ಸಮಾಧಿಯಲ್ಲಿ ಪತ್ತೆಯಾಯ್ತು 2,300 ವರ್ಷದ ಹಳೆಯ ಬಿಯರ್.. ಕಂಚಿನ ಪಾತ್ರೆಯಲ್ಲಿ ಅಡಗಿದ್ದ ನಿಗೂಢ ರಹಸ್ಯ ರಿವೀಲ್]]></title>
            <link>https://kannada.asianetnews.com/world-news/china-beer-more-the-2300-year-old-sealed-beer-discovered-in-china-gkn/articleshow-1w018fu</link>
            <guid isPermaLink="true">https://kannada.asianetnews.com/world-news/china-beer-more-the-2300-year-old-sealed-beer-discovered-in-china-gkn/articleshow-1w018fu</guid>
            <pubDate>Mon, 13 Jul 2026 16:00:41 +0530</pubDate>
            <description><![CDATA[&lt;p&gt;ಪುರಾತತ್ವ ಶಾಸ್ತ್ರಜ್ಞರು ಚೀನಾದ ಶಂಜಿಯಾಬೋ (Shanjiaobo) ಶ್ಮಶಾನದಲ್ಲಿ ನಡೆಸಿದ ಉತ್ಖನನದಲ್ಲಿ ಬರೋಬ್ಬರಿ 2,300 ವರ್ಷಗಳ ಹಿಂದಿನ ಅಚ್ಚರಿಯ ರಹಸ್ಯ ಬಯಲಾಗಿದೆ. ಒಬ್ಬ ಸಾಧಾರಣ ಸೈನಿಕನ ಸಮಾಧಿಯಲ್ಲಿ ಪುರಾತನ ಕಾಲದ ಮದ್ಯ ಪತ್ತೆಯಾಗಿದ್ದು, ಅದು ಇಂದಿಗೂ ದ್ರವ ರೂಪದಲ್ಲಿಯೇ ಇರುವುದು ವಿಜ್ಞಾನಿಗಳನ್ನು ದಂಗಾಗಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdgbbgswvk1ad6xe2nywkw6,imgname-2-300-year-old-liquor-discovered-in-grave--1--1783938526745.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀಜಿಂಗ್ (ಚೀನಾ): &lt;/strong&gt;ಪುರಾತತ್ವ ಶಾಸ್ತ್ರಜ್ಞರು ಚೀನಾದ ಶಂಜಿಯಾಬೋ (Shanjiaobo) ಶ್ಮಶಾನದಲ್ಲಿ ನಡೆಸಿದ ಉತ್ಖನನದಲ್ಲಿ ಬರೋಬ್ಬರಿ 2,300 ವರ್ಷಗಳ ಹಿಂದಿನ ಅಚ್ಚರಿಯ ರಹಸ್ಯ ಬಯಲಾಗಿದೆ. ಕ್ರೀ.ಪೂ. 547 ರಿಂದ 221 ರ ನಡುವಿನ 'ಕ್ವಿನ್' (Qin) ಸಾಮ್ರಾಜ್ಯದ ಕಾಲದ ಒಬ್ಬ ಸಾಧಾರಣ ಸೈನಿಕನ ಸಮಾಧಿಯಲ್ಲಿ ಪುರಾತನ ಕಾಲದ ಮದ್ಯ ಪತ್ತೆಯಾಗಿದ್ದು, ಅದು ಇಂದಿಗೂ ದ್ರವ ರೂಪದಲ್ಲಿಯೇ ಇರುವುದು ವಿಜ್ಞಾನಿಗಳನ್ನು ದಂಗಾಗಿಸಿದೆ.&lt;/p&gt;&lt;h2&gt;&lt;strong&gt;ಸಾವಿರಾರು ವರ್ಷಗಳಾದರೂ ಆವಿಯಾಗದ ದ್ರವ&lt;/strong&gt;&lt;/h2&gt;&lt;p&gt;ಶತಮಾನಗಳ ಕಾಲ ಭೂಗತವಾಗಿದ್ದರೂ ಈ ಕಂಚಿನ ಪಾತ್ರೆಯಲ್ಲಿದ್ದ ದ್ರವ ಆವಿಯಾಗದೆ ಹಾಗೆಯೇ ಉಳಿದಿದೆ. ಬೆಳ್ಳುಳ್ಳಿಯ ಆಕಾರದ ಕುತ್ತಿಗೆಯನ್ನು ಹೊಂದಿರುವ ಈ ವಿಶೇಷ ಪಾತ್ರೆಯಲ್ಲಿ ತಿಳಿ ನೀಲಿ-ಹಸಿರು ಬಣ್ಣದ ಸುಮಾರು 15 ಕಪ್ ದ್ರವ ಸುಸ್ಥಿತಿಯಲ್ಲಿದೆ. ಇದರ ರಸಾಯನಿಕ ವಿಶ್ಲೇಷಣೆ ನಡೆಸಿದಾಗ ಇದರಲ್ಲಿ ಬರೋಬ್ಬರಿ 2,400 ಕ್ಕೂ ಹೆಚ್ಚು ವಿಧದ ಸಂಯುಕ್ತಗಳು (Compounds) ಇರುವುದು ಪತ್ತೆಯಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಇದು ವೈನ್ ಅಲ್ಲ, ಪ್ರಾಚೀನ ಬಿಯರ್!&lt;/strong&gt;&lt;/h3&gt;&lt;p&gt;ಸಂಶೋಧನೆಯ ಪ್ರಕಾರ, ಇದು ಹಣ್ಣುಗಳಿಂದ ತಯಾರಿಸಿದ ವೈನ್ ಅಲ್ಲ. ಬದಲಿಗೆ ಗೋಧಿ, ಬಾರ್ಲಿ ಮತ್ತು ಸಾಮೆಗಳಂತಹ ಧಾನ್ಯಗಳನ್ನು ಹುದುಗಿಸಿ (Fermentation) ತಯಾರಿಸಿದ ಒಂದು ರೀತಿಯ ಪ್ರಾಚೀನ ಕಾಲದ ಬಿಯರ್ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಅಂದಿನ ಕಾಲದ ಜನರು ಧಾನ್ಯಗಳಿಂದ ಮದ್ಯ ತಯಾರಿಸುವ ಕಲೆ ಹೊಂದಿದ್ದರು ಎಂಬುದಕ್ಕೆ ಇದೊಂದು ದೊಡ್ಡ ಸಾಕ್ಷಿಯಾಗಿದೆ.&lt;/p&gt;&lt;h3&gt;&lt;strong&gt;ಸೀಲಿಂಗ್ ತಂತ್ರಜ್ಞಾನವೇ ಅಚ್ಚರಿ&lt;/strong&gt;&lt;/h3&gt;&lt;p&gt;ಸಾವಿರಾರು ವರ್ಷಗಳ ಕಾಲ ಈ ದ್ರವ ಆವಿಯಾಗದೆ ಉಳಿಯಲು ಅಂದಿನ ಕಾಲದ ಅದ್ಭುತ 'ಸೀಲಿಂಗ್' ತಂತ್ರಜ್ಞಾನವೇ ಕಾರಣ. ಪಾತ್ರೆಯ ಬಾಯಿಯನ್ನು ಮೊದಲು ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿ, ನಂತರ ಮಣ್ಣಿನ ಮಿಶ್ರಣದಿಂದ ಎರಡನೇ ಪದರವಾಗಿ ಸೀಲ್ ಮಾಡಲಾಗಿತ್ತು. ಈ ಗಾಳಿಯಾಡದ (Airtight) ತಂತ್ರಜ್ಞಾನದಿಂದಾಗಿ ದ್ರವವು ಹೊರಹೋಗದೆ ಸುರಕ್ಷಿತವಾಗಿತ್ತು.&lt;/p&gt;&lt;h3&gt;&lt;strong&gt;ಸಾಮಾನ್ಯರಿಗೂ ಲಭ್ಯವಿತ್ತು ತಂತ್ರಜ್ಞಾನ&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಇಂತಹ ಐಷಾರಾಮಿ ವಸ್ತುಗಳು ಮತ್ತು ಸುಧಾರಿತ ತಂತ್ರಜ್ಞಾನ ರಾಜಮನೆತನಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂಬ ನಂಬಿಕೆ ಇತ್ತು. ಒಬ್ಬ ಸಾಧಾರಣ ಸೈನಿಕನ ಸಮಾಧಿಯಲ್ಲಿ ಇದು ಪತ್ತೆಯಾಗಿರುವುದು, ಅಂದಿನ ಕಾಲದ ಮದ್ಯ ತಯಾರಿಕೆ ಮತ್ತು ಶೇಖರಣಾ ತಂತ್ರಜ್ಞಾನವು ಸಾಮಾನ್ಯ ಜನರಿಗೂ ತಿಳಿದಿತ್ತು ಎಂಬುದನ್ನು ತೋರಿಸಿಕೊಟ್ಟಿದೆ. ಈ ಕುತೂಹಲಕಾರಿ ಸಂಶೋಧನೆಯ ವಿವರಗಳು ಪ್ರಸಿದ್ಧ &lsquo;ಜರ್ನಲ್ ಆಫ್ ಆರ್ಕಿಯಾಲಜಿಕಲ್ ಸೈನ್ಸ್&rsquo; (Journal of Archaeological Science) ವರದಿಯಲ್ಲಿ ಪ್ರಕಟವಾಗಿವೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/world-news/china-beer-more-the-2300-year-old-sealed-beer-discovered-in-china-gkn/articleshow-1w018fu"/>
        </item>
        <item>
            <title><![CDATA[Salary Trap: ಹೆಚ್ಚು, ಕಡಿಮೆ ವಿಷಯವಲ್ಲ!‌ 2026ರಲ್ಲಿ ತಿಂಗಳಿಗೆ ನೀವು ಇಷ್ಟು ಸಂಬಳ ತಗೊಂಡ್ರೆ ಸಿಕ್ಕಾಪಟ್ಟೆ ಡೇಂಜರ್]]></title>
            <link>https://kannada.asianetnews.com/jobs/a-salary-of-1-lakh-rupees-is-extremely-dangerous-says-woman-why/articleshow-474qns0</link>
            <guid isPermaLink="true">https://kannada.asianetnews.com/jobs/a-salary-of-1-lakh-rupees-is-extremely-dangerous-says-woman-why/articleshow-474qns0</guid>
            <pubDate>Mon, 13 Jul 2026 14:39:55 +0530</pubDate>
            <description><![CDATA[&lt;p&gt;Most Dangerous Salary in 2026: ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ತಗೊಂಡರೆ ಆರಾಮಾಗಿ ಇರಬಹುದು ಎಂದು ಕೆಲವರು ಲೆಕ್ಕ ಹಾಕ್ತಾರೆ. ಆದರೆ ಇದು ಒಳ್ಳೆಯದಲ್ಲ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಈ ಮಾತು ಈಗ ದೊಡ್ಡ ಚರ್ಚೆ ಉಂಟು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdbm89b5e9by0by7g83vmxv,imgname-new-project--26--1783933575467.jpg" type="image/jpeg" height="390" width="690"/>
            <content:encoded><![CDATA[&lt;p&gt;Most Dangerous Salary in 2026: ಕೆಲವರು ತಿಂಗಳಿಗೆ ಹತ್ತು- ಹದಿನೈದು ಸಾವಿರ ತಗೊಳ್ತಾರೆ, ಇನ್ನೂ ಕೆಲವರು ಒಂದು ಲಕ್ಷ ರೂಪಾಯಿ ತಗೊಂಡರೂ ಕೂಡ ಸಾಕಾಗಲ್ಲ ಎಂದು ಹೇಳೊದುಂಟು. ಒಂದು ಲಕ್ಷ ರೂಪಾಯಿಯಲ್ಲಿ ಐಷಾರಾಮಿ ಜೀವನವನ್ನೇ ನಡೆಸಬಹುದು ಬಿಡಿ. 2026 ರಲ್ಲಿ ಪಡೆಯಬಹುದಾದ ಅತ್ಯಂತ ಅಪಾಯಕಾರಿ ಸಂಬಳ ಎಂದು ಮಹಿಳೆ ಹೇಳಿದ್ದಾರೆ.&lt;/p&gt;&lt;h2&gt;ಬೌಂಡರಿ ಹಾಕುತ್ತದೆ&lt;/h2&gt;&lt;p&gt;ಈ ಸಂಬಳವು ಕೆಲವರಿಗೆ ಸಾಕಾಗುವುದಿಲ್ಲ ಎನ್ನುವ ಕಾರಣಕ್ಕೆ ಅಪಾಯಕಾರಿಯಲ್ಲ, ಬದಲಿಗೆ ದೊಡ್ಡ ಗುರಿಗಳ ಕಡೆಗೆ ಗಮನ ಕೊಡದೆ ಆರಾಮಾಗಿ ಇರುತ್ತಾರೆ ಎಂದು ಅವರು ಹೇಳಿದ್ದಾರೆ. ಕಂಟೆಂಟ್ ಕ್ರಿಯೇಟರ್ ನಿಧಿ ಕುಶ್ವಾಹಾ ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಈ ಬಗ್ಗೆ ಒಂದು ವಿಡಿಯೋ ಶೇರ್&zwnj; ಮಾಡಿದ್ದಾರೆ. ತಿಂಗಳಿಗೆ ₹1 ಲಕ್ಷ ರೂಪಾಯಿ ಗಳಿಸುವುದು ಕರಿಯರ್&zwnj;, ಪರ್ಸನಲ್ ಲೈಫ್&zwnj;ಗೆ ಹೇಗೆ ಬೌಂಡರಿ ಮಾಡುತ್ತದೆ ಎಂದು ವಿವರಣೆ ನೀಡಿದ್ದಾರೆ.&lt;/p&gt;&lt;h2&gt;ಆರಾಮಾಗಿರ್ತೀರಿ&lt;/h2&gt;&lt;p&gt;&quot;2026 ರಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿ ಗಳಿಸುವುದು ಅತ್ಯಂತ ಡೇಂಜರ್. ಈ ಸಂಬಳ ಸಾಕು ಎಂದು ನೀವು ಸುಮ್ಮನಾಗ್ತೀರಿ, ಹೊಸದಾಗಿ ಏನಾದರೂ ಮಾಡಬೇಕು ಎಂದು ನೀವು ಯೋಚನೆ ಮಾಡೋದಿಲ್ಲ. ಅಷ್ಟು ಕಂಫರ್ಟ್&zwnj; ನೀಡುತ್ತದೆ. ಮನೆ ಬಾಡಿಗೆ, ಹೋಟೆಲ್&zwnj; ಊಟ, ವರ್ಷಕ್ಕೆ ಒಂದೆರಡು ಪ್ರವಾಸ, ಮೂಲಭೂತ ಅಗತ್ಯಗಳಿಗೋಸ್ಕರ ಈ ಹಣ ಸಾಕು. ಹೀಗಾಗಿ ಅವರು ಬೇರೆ ಯೋಚನೆ ಮಾಡೋದಿಲ್ಲ, ರಿಸ್ಕ್&zwnj; ತಗೊಳ್ಳೋದಿಲ್ಲ ಎಂದು ಕಾಶ್ವಾಹಾ ಹೇಳಿದ್ದಾರೆ.&lt;/p&gt;&lt;h2&gt;ಬೆಳವಣಿಗೆ ನಿಲ್ಲುತ್ತದೆ&lt;/h2&gt;&lt;p&gt;&quot;ನೀವು ಮನೆ ಬಾಡಿಗೆ ಕಟ್ಟಬಹುದು, ವೀಕೆಂಡ್&zwnj;ನಲ್ಲಿ ಡಿನ್ನರ್ ಮಾಡಬಹುದು, ವರ್ಷಕ್ಕೆ ಒಂದೆರಡು ಬಾರಿ ಟೂರ್&zwnj; ಮಾಡಬಹುದು, ಸೌಕರ್ಯಗಳು ಸಿಗುತ್ತವೆ. ಇದೇ ಅತಿ ದೊಡ್ಡ ಬಲೆಯಾಗಿದೆ. ನಿಮ್ಮ ಬಳಿ ಎಲ್ಲವೂ ಇದ್ದಾಗ, ಇನ್ನೂ ಹೆಚ್ಚಿನದ್ದು ಏಕೆ ಬೇಕು? ಎಂದು ಯೋಚಿಸೋದಿಲ್ಲ. ಲೈಫ್&zwnj; ಸೆಟ್ ಆಗಿದೆ ಎಂದು ಅಂದುಕೊಂಡ್ರೆ ನಿಮ್ಮ ಬೆಳವಣಿಗೆ ನಿಲ್ಲುತ್ತದೆ. ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಸೇಫ್&zwnj; ಎಂದೆನಿಸುತ್ತದೆ. ಇದೇ ನಿಜವಾದ ಸಮಸ್ಯೆ. ಸಾಮರ್ಥ್ಯದ ಕೊರತೆಯಿಂದಲ್ಲ, ಬದಲಿಗೆ ಕಂಫರ್ಟ್&zwnj; ಜಾಗ ಎಂದು ಒಂದೇ ಕಡೆ ಇರುತ್ತಾರೆ&rdquo; ಎಂದಿದ್ದಾರೆ.&lt;/p&gt;&lt;p&gt;ಈ ಮಾತನ್ನು ಕೆಲವರು ಒಪ್ಪಿದರೆ, ಇನ್ನೂ ಕೆಲವರು ವಿರೋಧ ಮಾಡಿದ್ದಾರೆ. ಜೀವನದಲ್ಲಿ ಬೆಳೆಯುವುದು ಅಥವಾ ಸುಧಾರಣೆ ಎಂದರೆ ಯಾವಾಗಲೂ ಹಣದ ಹಿಂದೆ ಓಡುವುದಲ್ಲ ಎಂದಿದ್ದಾರೆ. ತಿಂಗಳಿಗೆ ₹10 ಲಕ್ಷ ಸಂಬಳ ಗಳಿಸುವುದರ ಬಗ್ಗೆ ಏನು ಹೇಳ್ತೀರಿ ಎಂದು ಕೂಡ ಕೆಲವರು ಪ್ರಶ್ನೆ ಮಾಡಿದ್ದಾರೆ. &quot;ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ, ಇಲ್ಲಿ ಸಂಖ್ಯೆಗಿಂತ ನಮ್ಮ ಮನಸ್ಥಿತಿ ಮುಖ್ಯ&rdquo; ಎಂದು ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/jobs/a-salary-of-1-lakh-rupees-is-extremely-dangerous-says-woman-why/articleshow-474qns0"/>
        </item>
        <item>
            <title><![CDATA[ಸೌಜನ್ಯ ಪ್ರಕರಣ; ಮಹೇಶ್ ಶೆಟ್ಟಿ ತಿಮರೋಡಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ, ಗಡೀಪಾರು ಪ್ರಶ್ನಿಸಿದ್ದ ಅರ್ಜಿ ವಜಾ]]></title>
            <link>https://kannada.asianetnews.com/karnataka-districts/supreme-court-rejects-mahesh-shetty-timarodi-petition-challenging-extradition/articleshow-2f7r19m</link>
            <guid isPermaLink="true">https://kannada.asianetnews.com/karnataka-districts/supreme-court-rejects-mahesh-shetty-timarodi-petition-challenging-extradition/articleshow-2f7r19m</guid>
            <pubDate>Mon, 13 Jul 2026 15:28:17 +0530</pubDate>
            <description><![CDATA[&lt;p&gt;ಸೌಜನ್ಯ ಪ್ರಕರಣ ಬಳಸಿ ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನ ನಡೆಸಿದ ಮಹೇಶೆ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ತಮ್ಮ ಗಡೀಪಾರು ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdegn8vnhcjnar9zcd67dbd,imgname-mahesh-shetty-timarodi-case-1783936603419.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.13) &lt;/strong&gt;ಕರ್ನಾಟಕದಲ್ಲಿ ಭಾರಿ ಕೋಲಾಹಲ ಮೂಡಿಸಿದ ಸೌಜನ್ಯ ಪ್ರಕರಣ ಹಾಗೂ ಈ ಪ್ರಕರಣ ಹಿಡಿದು ಮಾಡಿದ ಹೋರಾಟ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಅಂಶವನ್ನು ಉಲ್ಲೇಖಿಸಿದೆ. ಸೌಜನ್ಯ ಪ್ರಕರಣವನ್ನು ಬಳಸಿಕೊಂಡು ಧರ್ಮಸ್ಥಳ ವಿರುದ್ಧ ಭಾರಿ ಪ್ರತಿಭಟನೆ, ಗಂಭೀರ ಆರೋಪಗಳನ್ನು ಮಾಡಿದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸೌಜನ್ಯ ಪ್ರಕರಣವನ್ನು ಬಳಸಿಕೊಂಡು ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನವನ್ನು ಮಹೇಶ್ ಶೆಟ್ಟಿ ತಿಮರೋಡಿ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಗಡೀಪಾರು ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.&lt;/p&gt;&lt;h2&gt;ಮಹೇಶ್ ಶೆಟ್ಟಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ&lt;/h2&gt;&lt;p&gt;ಸೌಜನ್ಯ ಪ್ರಕರಣ, ಬುರುಡೆ ಪ್ರಕರಣಗಳಲ್ಲಿ ಬುರುಡೆ ಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕೆಲ ಪ್ರಕರಣಗಳು ದಾಖಲಾಗಿದೆ. ಇದೇ ವೇಳೆ ಮಹೇಶ್ ಶೆಟ್ಟಿ ಗಡೀಪಾರಿಗೆ ಆದೇಶ ನೀಡಲಾಗಿತ್ತು. ಈ ಆದೇಶ ಪ್ರಶ್ನಿಸಿ ತಿಮರೋಡಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆದರೆ ತಿಮರೋಡಿ ಸಲ್ಲಿಸಿದ್ದ ಅರ್ಜಿ ಪ್ರಶ್ನಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಕಾನೂನು ಪ್ರಕಾರ ಸೂಕ್ತ ಸಕ್ಷಮ ಪ್ರಾಧಿಕಾರವನ್ನೇ ಸಂಪರ್ಕಿಸುವಂತೆ ನಿರ್ದೇಶಿಸಿದೆ. ಮಹೇಶ್ ಶೆಟ್ಟಿ ಗಡೀಪಾರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಲಭ್ಯವಿರುವ ಶಾಸನಬದ್ಧ ಪರಿಹಾರಗಳನ್ನು ಬಳಸಿಕೊಳ್ಳುವ ಬದಲು ನೇರವಾಗಿ ಸುಪ್ರೀಂ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿರುವುದರ ಕುರಿತು ನ್ಯಾಯಪೀಠವು ಪ್ರಶ್ನಿಸಿದೆ.&lt;/p&gt;&lt;h2&gt;ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ&lt;/h2&gt;&lt;p&gt;ಮಹೇಶ್ ಶೆಟ್ಟಿ ವಕೀಲರು ಸುಪ್ರೀಂ ಕೋರ್ಟ್&zwnj;ನಲ್ಲಿ ವಿಚಿತ್ರ ವಾದ ಮಂಡಿಸಿದ್ದರು. ಮಹೇಶ್ ಶೆಟ್ಟಿ ಗಡೀಪಾರು ಪ್ರಕರಣ ಹಾಗೂ ಸೌಜನ್ಯ ಪ್ರಕರಣ ಜೋಡಿಸಿ ವಾದ ಮಂಡಿಸಿದ್ದರು. ಇಷ್ಟೇ ಅಲ್ಲ ಸ್ಥಳೀಯ ದೇವಸ್ಥಾನದ ಪ್ರಮುಖರು ತಮ್ಮನ್ನು ಗುರಿಯಾಗಿಸಿದ್ದಾರೆ. ಹೀಗಾಗಿ ತಮ್ಮ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಾದ ಮಂಡಿಸಿದ್ದರು. ಈ ವಾದ ಕೇಳಿ ಗರಂ ಆದ ಸುಪ್ರೀಂ ಕೋರ್ಟ್, ಅಸಂಬಂಧಿತ ವಿಷಯಗಳನ್ನು ಬಳಸಿ ಸಾರ್ವಜನಿಕ ಭಾವನೆಗಳನ್ನು ಕೆರಳಿಸುವುದು ಅಥವಾ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ತರಾಟೆ ತೆಗೆದುಕೊಂಡಿತು.&lt;/p&gt;&lt;p&gt;ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ ಪರಿಹಾರ ನೀಡಲೂ ನಿರಾಕರಿಸಿದೆ. ಊಹಾತ್ಮಕ ವಾದ ಮಂಡಿಸಿದ ವಕೀಲರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ನ್ಯಾಯಾಲಯದಲ್ಲಿ ಜೂಜಾಟ ಬೇಡ. ಇಲ್ಲಿ ಅವಕಾಶಗಳಿಲ್ಲ. ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸಂಜಯ್ ಕುಮಾರ್ ಹಾಗೂ ನ್ಯಾಯಮೂರ್ತಿ ಶ್ರೀ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್&zwnj;ನ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/supreme-court-rejects-mahesh-shetty-timarodi-petition-challenging-extradition/articleshow-2f7r19m"/>
        </item>
        <item>
            <title><![CDATA[Home Earthing: ಮನೆಯಲ್ಲಿ ಇದೊಂದು ವ್ಯವಸ್ಥೆ ಸರಿ ಇಲ್ಲ ಅಂದ್ರೆ ಪ್ರಾಣ ಹೋಗ್ಬಹುದು ! ಈಗ್ಲೇ ಚೆಕ್ ಮಾಡಿ]]></title>
            <link>https://kannada.asianetnews.com/gallery/life/why-earthing-is-important-in-home-benefits-cost-vqhcqze</link>
            <guid isPermaLink="true">https://kannada.asianetnews.com/gallery/life/why-earthing-is-important-in-home-benefits-cost-vqhcqze</guid>
            <pubDate>Mon, 13 Jul 2026 12:40:01 +0530</pubDate>
            <description><![CDATA[&lt;p&gt;ಮನೆಯ ಕರೆಂಟ್ ಕನೆಕ್ಷನ್ ವಿಷ್ಯ ಬಂದಾಗ ವೈರಿಂಗ್, ಸ್ವಿಚ್, ಫ್ಯಾನ್, ಲೈಟ್ ಬಗ್ಗೆ ನಾವು ಗಮನ ನೀಡ್ತೇವೆ. ಬಹುತೇಕರು ಈ ಎಲ್ಲದರ ಮಧ್ಯೆ ಅರ್ಥಿಂಗ್ ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಎಲ್ಲಕ್ಕಿಂತ ಮುಖ್ಯವಾದದ್ದು ಅರ್ಥಿಂಗ್. ಅದನ್ನು ಯಾಕೆ ಮನೆಗೆ ಹಾಕ್ಬೇಕು, ಖರ್ಚು ಎಷ್ಟು ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd4g30d7satea5bbkc7ds4c,imgname-electric-shock-1783926098957.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆಯ ಕರೆಂಟ್ ಕನೆಕ್ಷನ್ ವಿಷ್ಯ ಬಂದಾಗ ವೈರಿಂಗ್, ಸ್ವಿಚ್, ಫ್ಯಾನ್, ಲೈಟ್ ಬಗ್ಗೆ ನಾವು ಗಮನ ನೀಡ್ತೇವೆ. ಬಹುತೇಕರು ಈ ಎಲ್ಲದರ ಮಧ್ಯೆ ಅರ್ಥಿಂಗ್ ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಎಲ್ಲಕ್ಕಿಂತ ಮುಖ್ಯವಾದದ್ದು ಅರ್ಥಿಂಗ್. ಅದನ್ನು ಯಾಕೆ ಮನೆಗೆ ಹಾಕ್ಬೇಕು, ಖರ್ಚು ಎಷ್ಟು ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಸರಳವಾಗಿ ಹೇಳುವುದಾದರೆ, ಅರ್ಥಿಂಗ್ ಎಂದರೆ ಹೆಚ್ಚುವರಿ ಅಥವಾ ಸೋರಿಕೆಯಾಗುವ ವಿದ್ಯುತ್ನ್ನು ಸುರಕ್ಷಿತವಾಗಿ ನೆಲಕ್ಕೆ ಕಳುಹಿಸುವ ವ್ಯವಸ್ಥೆ. ಲೋಹದ ರಾಡ್ ಅಥವಾ ಪ್ಲೇಟ್ ಮೂಲಕ ನೆಲಕ್ಕೆ ಸಂಪರ್ಕಿಸುತ್ತದೆ. ಇದರಿಂದ ವಿದ್ಯುತ್ ಶಾಕ್ ಆಗುವ ಅಪಾಯ ಕಡಿಮೆಯಾಗುತ್ತದೆ ಮತ್ತು ಮನೆ ಹಾಗೂ ವಿದ್ಯುತ್ ಉಪಕರಣಗಳು ಸುರಕ್ಷಿತವಾಗಿರುತ್ತವೆ.&lt;/p&gt;&lt;img&gt;&lt;p&gt;ಅರ್ಥಿಂಗ್ನ ದೊಡ್ಡ ಪ್ರಯೋಜನವೆಂದರೆ ಸುರಕ್ಷತೆ. ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಗೀಸರ್, ಏರ್ ಕಂಡಿಷನರ್ ಅಥವಾ ವಾಟರ್ ಮೋಟಾರ್ ನಿಂದ ವಿದ್ಯುತ್ ಸೋರಿಕೆಯಾದರೆ, ಅದನ್ನು ಗ್ರೌಂಡಿಂಗ್ ಇಲ್ಲದೆ ಸ್ಪರ್ಶಿಸಿದ್ರೆ ಶಾಕ್ ಹೊಡೆಯುತ್ತದೆ. ಅದೇ ಅರ್ಥಿಂಗ್ ಸರಿಯಾಗಿದ್ದರೆ ಸೋರಿಕೆಯಾದ ಕರೆಂಟ್ ನೆಲಕ್ಕೆ ಬಿಡುಗಡೆಯಾಗುತ್ತದೆ. ಅನೇಕ ಸಂದರ್ಭಗಳಲ್ಲಿ, MCB ಅಥವಾ ELCB/RCCB ನಂತಹ ಸುರಕ್ಷತಾ ಸಾಧನಗಳು ತಕ್ಷಣವೇ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತವೆ. ಇದು ಅಪಘಾತದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.&lt;/p&gt;&lt;img&gt;&lt;p&gt;ಬಹುತೇಕ ಪ್ರತಿಯೊಬ್ಬರ ಮನೆಯಲ್ಲಿ ಟಿವಿ, ರೆಫ್ರಿಜರೇಟರ್, ಎಸಿ, ಕಂಪ್ಯೂಟರ್ಗಳು, ಇನ್ವರ್ಟರ್ಗಳು ಮತ್ತು ಸ್ಮಾರ್ಟ್ ಹೋಮ್ ಇದ್ದೇ ಇರುತ್ತೆ. ವಿದ್ಯುತ್ ವೋಲ್ಟೇಜ್ನಲ್ಲಿ ಹಠಾತ್ ಏರಿಕೆ ಅಥವಾ ಮಿಂಚಿನ ಹೊಡೆತವಾದ್ರೆ ಈ ಸಾಧನಗಳು ಹಾನಿಗೊಳಗಾಗಬಹುದು. ಮನೆಯನ್ನು ಸರಿಯಾಗಿ ಅರ್ಥ್ ಮಾಡಿದ್ದರೆ, ಹೆಚ್ಚುವರಿ ಕರೆಂಟ್ ನೆಲಕ್ಕೆ ಹೋಗುತ್ತದೆ. ಇದು ಎಲೆಕ್ಟ್ರಾನಿಕ್ ಸಾಧನಗಳ ರಕ್ಷಿಸುತ್ತದೆ.&lt;/p&gt;&lt;img&gt;&lt;p&gt;ಹೊಸ ಮನೆಯಾಗಿರಲಿ ಅಥವಾ ಹಳೆಯದಾಗಿರಲಿ, ಫ್ಲಾಟ್ ಆಗಿರಲಿ ಅಥವಾ ಮನೆಯಾಗಿರಲಿ, ಸರಿಯಾದ ಅರ್ಥಿಂಗ್ ಅತ್ಯಂತ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಎಸಿಗಳು, ಗೀಸರ್ಗಳು, ಮೋಟಾರ್ಗಳು, ಇನ್ವರ್ಟರ್ಗಳು ಮತ್ತು ಇತರ ಭಾರೀ ವಿದ್ಯುತ್ ಉಪಕರಣಗಳನ್ನು ಬಳಸುವ ಮನೆಗಳಲ್ಲಿ ಅರ್ಥಿಂಗ್ ಅತ್ಯಗತ್ಯ. ಹೊಸ ಮನೆ ನಿರ್ಮಿಸುತ್ತಿದ್ದರೆ, ಆರಂಭದಲ್ಲಿಯೇ ಉತ್ತಮ ಗುಣಮಟ್ಟದ ಅರ್ಥಿಂಗ್ ವ್ಯವಸ್ಥೆ ಮಾಡ್ಕೊಳ್ಳಿ.&lt;/p&gt;&lt;img&gt;&lt;p&gt;ಅರ್ಥಿಂಗ್ ವೆಚ್ಚವು ಅರ್ಥಿಂಗ್ ಪ್ರಕಾರ, ಮಣ್ಣಿನ ಸ್ಥಿತಿ ಮತ್ತು ಬಳಸಿದ ವಸ್ತುಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಒಂದು ಸಾಮಾನ್ಯ ಮನೆಯಲ್ಲಿ GI ಪೈಪ್ ಅರ್ಥಿಂಗ್ ವೆಚ್ಚ3,000 ಸಾವಿರದಿಂದ 8,000 ರೂಪಾಯಿವರೆಗೆ ಬರುತ್ತದೆ. ತಾಮ್ರ ಅರ್ಥಿಂಗ್ ಮಾಡಿದರೆ, ಅದಕ್ಕೆ ಸುಮಾರು 8,000 ರಿಂದ 20,000 ಅಥವಾ ಅದಕ್ಕಿಂತ ಹೆಚ್ಚು ವೆಚ್ಚವಾಗಬಹುದು. ದೊಡ್ಡ ಮನೆಗಳು, ಕಾರ್ಖಾನೆಗಳು ಅಥವಾ ವಾಣಿಜ್ಯ ಕಟ್ಟಡಗಳಲ್ಲಿ ಈ ವೆಚ್ಚವು ಮತ್ತಷ್ಟು ಹೆಚ್ಚಾಗಬಹುದು.&lt;/p&gt;&lt;img&gt;&lt;p&gt;ಮನೆಯಲ್ಲಿ MCB ಆಗಾಗ್ಗೆ ಟ್ರಿಪ್ ಆಗುತ್ತಿದ್ದರೆ, ವಿದ್ಯುತ್ ಉಪಕರಣಗಳನ್ನು ಮುಟ್ಟುವಾಗ ಸ್ವಲ್ಪ ವಿದ್ಯುತ್ ಶಾಕ್ ಅನುಭವವಾದ್ರೆ ಅಥವಾ ಎಲೆಕ್ಟ್ರಾನಿಕ್ ಸಾಧನಗಳು ಪದೇ ಪದೇ ಹಾಳಾದ್ರೆ ಇದು ಕಳಪೆ ಅರ್ಥಿಂಗ್ನ ಸಂಕೇತವಾಗಿರಬಹುದು. ಈ ಚಿಹ್ನೆಗಳನ್ನು ಮಾತ್ರ ಆಧರಿಸಿ ನಿರ್ಧಾರ ತೆಗೆದುಕೊಳ್ಳಬಾರದು. ಅರ್ಹ ಎಲೆಕ್ಟ್ರಿಷಿಯನ್, ಅರ್ಥಿಂಗ್ ಪರೀಕ್ಷಕವನ್ನು ಬಳಸಿಕೊಂಡು ಪರೀಕ್ಷೆ ಮಾಡಬೇಕು.&lt;/p&gt;]]></content:encoded>
            <category>news</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/life/why-earthing-is-important-in-home-benefits-cost-vqhcqze"/>
        </item>
        <item>
            <title><![CDATA[Antilia House: ಅಂಬಾನಿ ಮನೆ ಮೇಲೆ ನೀಲಿ ಟಾರ್ಪಲ್! ಕೋಟ್ಯಾಧೀಶರ ಮನೆಯಲ್ಲೂ ಹೀಗೇನಾ… Viral ಫೋಟೊ ಹಿಂದಿನ ಸತ್ಯ ಏನು?]]></title>
            <link>https://kannada.asianetnews.com/viral/why-mukesh-ambanis-antilia-covered-with-blue-tarpaulin-viral-post/articleshow-tqu54f0</link>
            <guid isPermaLink="true">https://kannada.asianetnews.com/viral/why-mukesh-ambanis-antilia-covered-with-blue-tarpaulin-viral-post/articleshow-tqu54f0</guid>
            <pubDate>Mon, 13 Jul 2026 12:48:14 +0530</pubDate>
            <description><![CDATA[&lt;p&gt;ಮುಖೇಶ್ ಅಂಬಾನಿಯವರ ಆಂಟಿಲಿಯಾ ಬಂಗಲೆಯನ್ನು ನೀಲಿ ಟಾರ್ಪಾಲಿನ್&zwnj;ನಿಂದ ಕವರ್ ಮಾಡಲಾಗಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಮಳೆಗಾಲಕ್ಕೆ ಕೋಟ್ಯಾಧೀಶರ ಮನೆ ಕೂಡ ಸಾಮಾನ್ಯರ ಮನೆ ರೀತಿ ಸೋರಿಕೆಯಾಗುತ್ತಾ ಎಂದು ಜನ ಆಡಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd5dz69pnek51jym8deqadj,imgname-mukesh-ambani-1783927078087.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮುಖೇಶ್ ಅಂಬಾನಿಯವರ ಆಂಟಿಲಿಯಾ&lt;/strong&gt;&lt;/h2&gt;&lt;p&gt;ಮುಖೇಶ್ ಅಂಬಾನಿಯವರ ಆಂಟಿಲಿಯಾ ಮುಂಬೈನಲ್ಲಿರುವ ಪ್ರಸಿದ್ಧ 27 ಅಂತಸ್ತಿನ ಐಷಾರಾಮಿ ನಿವಾಸ. ಆಂಟಿಲಿಯಾ ನಿರ್ಮಾಣ, ಅಲ್ಲಿನ ಲಕ್ಸುರಿ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇತ್ತೀಚೆಗೆ, ಆಂಟಿಲಿಯಾವನ್ನು ನೀಲಿ ಟಾರ್ಪಲ್ ನಿಂದ ಮುಚ್ಚಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಜನರು ಇದನ್ನು ಆಂಟೆಲಿಯಾದಲ್ಲೂ ಮಳೆಯಿಂದ ಸೋರಿಕೆಯಾಗುತ್ತಿದ್ದು, ಅದಕ್ಕಾಗಿ ಟಾರ್ಪಲ್ ಬಳಕೆ ಮಾಡಿದ್ದಾರೆ ಎನ್ನುತ್ತಿದ್ದಾರೆ. ಆದರೆ ಸತ್ಯ ಏನು?&lt;/p&gt;&lt;h3&gt;&lt;strong&gt;ನಿಜವಾಗಿಯೂ ಆಂಟಿಲಿಯಾ ಸೋರುತ್ತಿದೆಯೆ?&lt;/strong&gt;&lt;/h3&gt;&lt;p&gt;ಆಂಟಿಲಿಯಾ ದೇಶದ ಆಗರ್ಭ ಶ್ರೀಮಂತನ ಮನೆ. ಅದರ ನಿರ್ಮಾಣವೂ ಸಂಪೂರ್ಣವಾಗಿ ಆಗಿದೆ. ಅದರ ನಿರ್ವಹಣೆಯಲ್ಲಿ ಸುಮಾರು 600 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದು ಐಷಾರಾಮಿ ನಿವಾಸವಾಗಿರುವುದರಿಂದ, ಇದರಲ್ಲಿ ನೀರಿನ ಸೋರಿಕೆ ಸಮಸ್ಯೆ ಇರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಫೋಟೊ ಆಂಟಿಲಿಯಾ ನಿರ್ಮಾಣ ಹಂತದ ಫೋಟೊ ಆಗಿದೆ. ಆ ಸಮಯದಲ್ಲಿ ಮಳೆಯಿಂದ ರಕ್ಷಿಸಲು ಟಾರ್ಪಲ್ ಬಳಕೆ ಮಾಡಲಾಗಿತ್ತು. ಇದೀಗ ಮಳೆಗಾಲದಲ್ಲಿ ಮತ್ತೆ ಆ ಫೋಟೊ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಜನರು ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸದೇ ವ್ಯಂಗ್ಯವಾಗಿ ಪೋಸ್ಟ್ ಮಾಡುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಆಂಟಿಲಿಯಾ ಹೈ-ಟೆಕ್ ಕಟ್ಟಡ&lt;/strong&gt;&lt;/h3&gt;&lt;p&gt;ಮುಂಬೈನ ಭಾರೀ ಮಳೆಯ ಸಮಯದಲ್ಲಿ ಅನೇಕ ಕಟ್ಟಡಗಳ ಮೇಲೆ ಟಾರ್ಪಲ್ ಸಾಮಾನ್ಯವಾಗಿ ಕಂಡುಬರುತ್ತವೆ, ಆದರೆ ಆಂಟಿಲಿಯಾದಂತಹ ಹೈಟೆಕ್ ಕಟ್ಟಡಕ್ಕೆ ಇದರ ಅಗತ್ಯವಿಲ್ಲ. ಆಂಟಿಲಿಯಾ ಶತಕೋಟಿ ಡಾಲರ್&zwnj;ಗಳಷ್ಟು ಮೌಲ್ಯದ್ದಾಗಿದೆ. ಇದರಲ್ಲಿ ಈಜುಕೊಳ, ಹೆಲಿಪ್ಯಾಡ್, ಬಹುಮಹಡಿ ಉದ್ಯಾನಗಳು ಮತ್ತು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಇದರ ನಿರ್ವಹಣೆಗೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಹಾಗಾಗಿ ಇದಂತೂ ಸೋರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಜನ ಮಾತ್ರ ವೈರಲ್ ಪೋಸ್ಟ್&zwnj; ನೋಡಿ, ಶ್ರೀಮಂತ ಮತ್ತು ಬಡವರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎನ್ನುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಮುಂಬೈನಲ್ಲಿ ಸೋರಿಕೆ ಸಾಮಾನ್ಯ, ಆದರೆ ಆಂಟಿಲಿಯಾದಲ್ಲಿ ಅಲ್ಲ&lt;/strong&gt;&lt;/h3&gt;&lt;p&gt;ಮುಂಬೈನಲ್ಲಿ ಮಳೆಗಾಲದಲ್ಲಿ ಸೋರಿಕೆ ಸಮಸ್ಯೆಗಳು ಸಾಮಾನ್ಯ, ಆದರೆ ಆಂಟಿಲಿಯಾದಂತಹ ಕಟ್ಟಡಗಳನ್ನು ಸುಧಾರಿತ ವಾಟರ್ ಪ್ರೂಫ್ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ಆದರೆ ಜನರು ಹಳೆಯ ಫೋಟೊವನ್ನು ನೋಡಿ ಶ್ರೀಮಂತರ ಮನೆಯಲ್ಲೂ ಇದೆಂತಹ ಸಮಸ್ಯೆ ಎನ್ನುವಂತೆ, ಹಾಸ್ಯಾಸ್ಪದವಾದ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ. ನೀವು ಪೋಸ್ಟ್ ಮಾಡುವ ಮುನ್ನ ಫ್ಯಾಕ್ಟ್ ಚೆಕ್ ಮಾಡಲು ಮರೆಯಬೇಡಿ.&lt;/p&gt;]]></content:encoded>
            <category>news</category>
            <dc:creator>Pavna Das</dc:creator>
            <atom:link href="https://kannada.asianetnews.com/viral/why-mukesh-ambanis-antilia-covered-with-blue-tarpaulin-viral-post/articleshow-tqu54f0"/>
        </item>
        <item>
            <title><![CDATA[Crow Funeral: ಕಾಗೆ ಸತ್ತಾಗ ಡಜನ್ ಕಾಗೆಗಳು ಸೇರೋದು ಯಾಕೆ? ಅಂತ್ಯಕ್ರಿಯೆಯ ಹಿಂದಿದೆ ಅಚ್ಚರಿಯ ಸತ್ಯ]]></title>
            <link>https://kannada.asianetnews.com/viral/why-group-of-crows-mourns-around-dead-crow-know-the-scientific-reason/articleshow-bk7ygud</link>
            <guid isPermaLink="true">https://kannada.asianetnews.com/viral/why-group-of-crows-mourns-around-dead-crow-know-the-scientific-reason/articleshow-bk7ygud</guid>
            <pubDate>Mon, 13 Jul 2026 14:02:40 +0530</pubDate>
            <description><![CDATA[&lt;p&gt;Mourning Rituals of Crow: ಒಬ್ಬ ವ್ಯಕ್ತಿಯ ಕುಟುಂಬವು ಅವರ ಸಾವಿನ ಶೋಕವನ್ನು ಹೇಗೆ ಆಚರಿಸುತ್ತಾರೆ ಎನ್ನುವುದನ್ನು ನೀವು ನೋಡಿರಬಹುದು, ಆದರೆ ಮಾನವರಂತೆ, ಪ್ರಾಣಿಗಳು ಮತ್ತು ಪಕ್ಷಿಗಳು ಸಹ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಶೋಕಿಸಲು ವಿಶಿಷ್ಟ ವಿಧಾನಗಳನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ?&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd9nmyzw64tfy6edcdjjq2v,imgname-crow-mourning-1783931524062.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಾಣಿ-ಪಕ್ಷಿಗಳಿಗೂ ಮನುಷ್ಯರಂತೆ ಭಾವನೆಗಳಿವೆ&lt;/strong&gt;&lt;/h2&gt;&lt;p&gt;ಪ್ರಕೃತಿ ತನ್ನೊಳಗೆ ಅನೇಕ ರಹಸ್ಯಗಳನ್ನು ಇಟ್ಟುಕೊಂಡಿದೆ. ಈ ರಹಸ್ಯಗಳು ಬಹಿರಂಗವಾದಾಗಲೆಲ್ಲಾ ಅವು ಅಚ್ಚರಿಯನ್ನುಂಟುಮಾಡುವುದಲ್ಲದೆ, ಯೋಚಿಸುವಂತೆಯೂ ಮಾಡುತ್ತದೆ. ಅಂತಹ ಒಂದು ರಹಸ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೊದ ಮೂಲಕ ಜನರನ್ನು ಅಚ್ಚರಿಗೊಳಿಸುತ್ತಿದೆ. ಮನುಷ್ಯರಂತೆ ಪ್ರಾಣಿಗಳು ಸಹ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತವೆ ಎಂದು ನಿಮಗೆ ತಿಳಿದಿರಬೇಕು, ಆದರೆ ಅವುಗಳಲ್ಲಿ ಕಾಗೆಗಳ ನಡವಳಿಕೆಯು ಸ್ವಲ್ಪ ವಿಶಿಷ್ಟ ಮತ್ತು ವಿಚಿತ್ರ ಎನಿಸುತ್ತದೆ. ಉದಾಹರಣೆಗೆ, ಕಾಗೆ ಸತ್ತಾಗ, ಅದರ ಸಹಚರರು ಅದರ ಸುತ್ತಲೂ ಒಟ್ಟುಗೂಡುತ್ತಾರೆ ಮತ್ತು ಜೋರಾಗಿ ಕೂಗುತ್ತವೆ. ಆದರೆ ಇದು ಕೇವಲ ಕೂಗು ಅಲ್ಲ, ತಮ್ಮ ದುಃಖವನ್ನು ಹೊರ ಹಾಕುವ ಒಂದು ವಿಧಾನವೂ ಆಗಿದೆ.&lt;/p&gt;&lt;h3&gt;&lt;strong&gt;ಕಾಗೆಯ ಶೋಕಾಚರಣೆ&lt;/strong&gt;&lt;/h3&gt;&lt;p&gt;ಒಂದು ಕಾಗೆ ಸತ್ತ ತಕ್ಷಣ, ಇನ್ನೊಂದು ಕಾಗೆ ಜೋರಾಗಿ ಕೂಗುವ ಮೂಲಕ ಇತರ ಕಾಗೆಗಳನ್ನು ಕರೆಯಲು ಪ್ರಯತ್ನಿಸುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ, ಡಜನ್&zwnj;ಗಟ್ಟಲೆ ಕಾಗೆಗಳು ಒಂದೆಡೆ ಸೇರಿ ಜೋರಾಗಿ ಕೂಗುವುದನ್ನು ಸಾಮಾನ್ಯವಾಗಿ ನೀವು ಗಮನಿಸಿರಬಹುದು. ತಜ್ಞರ ಪ್ರಕಾರ, ಕಾಗೆಗಳು ತಮ್ಮ ಸಂಗಾತಿಯ ಸಾವಿನ ಕಾರಣವನ್ನು ನಿರ್ಧರಿಸಲು ಅಂತ್ಯಕ್ರಿಯೆಯ ಸಭೆಯನ್ನು ನಡೆಸುತ್ತವೆ, ಇದರಲ್ಲಿ ಡಜನ್ಗಟ್ಟಲೆ ಕಾಗೆಗಳು ತಮ್ಮ ಮೃತ ಸಂಗಾತಿಯ ದೇಹವನ್ನು ಸುತ್ತುವರೆದು ಪ್ರತಿಕ್ರಿಯಿಸುತ್ತವೆ. ಇದನ್ನು &lsquo;crow wake&rsquo; ಎಂದೂ ಕರೆಯುತ್ತಾರೆ.&lt;/p&gt;&lt;h3&gt;&lt;strong&gt;ತಮ್ಮ ಸಂಗಾತಿಯ ಮರಣದ ಸಮಯದಲ್ಲಿ ವಿಚಿತ್ರ ಶಬ್ಧ&lt;/strong&gt;&lt;/h3&gt;&lt;p&gt;ಕಾಗೆಗಳು ಅತ್ಯಂತ ಕುತೂಹಲಕಾರಿ ಮತ್ತು ಬುದ್ಧಿವಂತ ಪಕ್ಷಿಗಳು. ಗಾಯ ಅಥವಾ ಅನಾರೋಗ್ಯದಂತಹ ಸಾವಿನ ಕಾರಣವನ್ನು ನಿರ್ಧರಿಸಲು ಅವು ಸತ್ತ ಸಂಗಾತಿಯ ದೇಹವನ್ನು ತಮ್ಮ ಕೊಕ್ಕಿನಿಂದ ಸ್ಪರ್ಶಿಸುತ್ತವೆ, ಇದರಿಂದಾಗಿ ಇತರ ಸಹಚರರು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಬಹುದು. ಪರಭಕ್ಷಕ ಬೆಕ್ಕು ಅಥವಾ ನಾಯಿಯಿಂದ ಬೆದರಿಕೆ ಇದ್ದಲ್ಲಿ, ಈ ಕಾಗೆಗಳು ತಮ್ಮ ಇಡೀ ಗುಂಪಿಗೆ ಎಚ್ಚರಿಕೆ ನೀಡುತ್ತವೆ. ಇದಲ್ಲದೆ, ಭವಿಷ್ಯದ ಅಪಾಯವನ್ನು ತಡೆಗಟ್ಟಲು ಅವು ತೊಂದರೆಯಾಗಿರುವ ಪ್ರದೇಶವನ್ನು ನೆನಪಿಟ್ಟುಕೊಳ್ಳುತ್ತವೆ. ಈ ನಡವಳಿಕೆಯು ಇಡೀ ಗುಂಪಿನ ಸುರಕ್ಷತೆಗಾಗಿ ಆಗಿರುತ್ತದೆ. .&lt;/p&gt;&lt;h3&gt;&lt;strong&gt;ಮಾನವನಂತಹ ಬುದ್ಧಿಮತ್ತೆಯನ್ನು ಹೊಂದಿರುವ ಕಾಗೆಗಳು&lt;/strong&gt;&lt;/h3&gt;&lt;p&gt;ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಜಾನ್ ಮಾರ್ಜ್ಲಫ್ ಈ ಪಕ್ಷಿಗಳ ಬಗ್ಗೆ ವರ್ಷಗಳಿಂದ ಅಧ್ಯಯನ ಮಾಡಿದ್ದಾರೆ. ಕಾಗೆಗಳು ದೊಡ್ಡದಾದ ಮತ್ತು ಹೆಚ್ಚು ಶಕ್ತಿಶಾಲಿಯಾದ ಮೆದುಳನ್ನು ಹೊಂದಿವೆ ಎಂದು ಅವರ ಸಂಶೋಧನೆಯು ಬಹಿರಂಗಪಡಿಸಿದೆ. ತಜ್ಞರ ಪ್ರಕಾರ, ಕಾಗೆಗಳು ಸತ್ತ ಸಹಚರರಿಂದ ಕಲಿಯುತ್ತವೆ ಮತ್ತು ಅಪಾಯವನ್ನು ನೆನಪಿಸಿಕೊಳ್ಳುತ್ತವೆ. ಇದು ಅವುಗಳ ಬುದ್ಧಿವಂತಿಕೆಗೆ ಶ್ರೇಷ್ಠ ಪುರಾವೆಯಾಗಿದೆ.&lt;/p&gt;]]></content:encoded>
            <category>news</category>
            <dc:creator>Pavna Das</dc:creator>
            <atom:link href="https://kannada.asianetnews.com/viral/why-group-of-crows-mourns-around-dead-crow-know-the-scientific-reason/articleshow-bk7ygud"/>
        </item>
        <item>
            <title><![CDATA[ಕುಟುಂಬ ನಿರ್ವಹಣೆಗೆ ಕೇಂದ್ರದಿಂದ 5 ಅದ್ಭುತ ಯೋಜನೆಗಳು.. ಇವು ನಿಮ್ಮ ಖರ್ಚನ್ನ ಕಡಿಮೆಗೊಳಿಸುತ್ತವೆ..!]]></title>
            <link>https://kannada.asianetnews.com/gallery/money/central-government-welfare-top-5-schemes-you-can-apply-now-gkn-msmyk44</link>
            <guid isPermaLink="true">https://kannada.asianetnews.com/gallery/money/central-government-welfare-top-5-schemes-you-can-apply-now-gkn-msmyk44</guid>
            <pubDate>Mon, 13 Jul 2026 14:22:40 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರವು ಜನರ ಆರ್ಥಿಕ ಸದೃಢತೆಗಾಗಿ ಮತ್ತು ಖರ್ಚು ಕಡಿಮೆ ಮಾಡಲು ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಲೇಖನದಲ್ಲಿ ಪಿಎಂ ಸೂರ್ಯ ಘರ್, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಅಟಲ್ ಪೆನ್ಷನ್ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳನ್ನು ವಿವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwpzg27z4d5g16cyhtp0nfq6,imgname-saving-money-1280720--1--1783182657791.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರ ಸರ್ಕಾರವು ಜನರ ಆರ್ಥಿಕ ಸದೃಢತೆಗಾಗಿ ಮತ್ತು ಖರ್ಚು ಕಡಿಮೆ ಮಾಡಲು ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಲೇಖನದಲ್ಲಿ ಪಿಎಂ ಸೂರ್ಯ ಘರ್, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಅಟಲ್ ಪೆನ್ಷನ್ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳನ್ನು ವಿವರಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: &lt;/strong&gt;ಕೇಂದ್ರ ಸರ್ಕಾರವು ಸಾರ್ವಜನಿಕ ಸೇವೆಗಳನ್ನು ವೇಗಗೊಳಿಸಲು ಮತ್ತು ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡಲು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ. ನೀವು ಆರ್ಥಿಕವಾಗಿ ಸದೃಢರಾಗಲು ಮತ್ತು ಕುಟುಂಬದ ಖರ್ಚುಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಐದು ಪ್ರಮುಖ ಯೋಜನೆಗಳು ಇಲ್ಲಿವೆ.&lt;/p&gt;&lt;img&gt;&lt;p&gt;ಈ ಯೋಜನೆಯನ್ನು ಫೆಬ್ರವರಿ 13, 2024 ರಂದು ಪ್ರಧಾನಿ ಮೋದಿಯವರು ಪ್ರಾರಂಭಿಸಿದರು. ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳುವ ಮೂಲಕ ಉಚಿತ ವಿದ್ಯುತ್ ಪಡೆಯಬಹುದು. 2 ಕಿಲೋವ್ಯಾಟ್ ಸೋಲಾರ್&zwnj;ಗೆ 30,000 ರೂ. ಮತ್ತು 3 ಕಿಲೋವ್ಯಾಟ್ ಸೋಲಾರ್ ಪ್ಯಾನಲ್&zwnj;ಗೆ 78,000 ರೂ. ವರೆಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ. ಪ್ರತಿ ತಿಂಗಳು 300 ಯೂನಿಟ್&zwnj;ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು.&lt;/p&gt;&lt;img&gt;&lt;p&gt;ಗ್ಯಾಸ್ ಸಂಪರ್ಕವಿಲ್ಲದ ಬಡ ಕುಟುಂಬಗಳಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಉಚಿತ ಗ್ಯಾಸ್ ಸಂಪರ್ಕದ ಜೊತೆಗೆ ಮೊದಲ ಸಿಲಿಂಡರ್ ಮತ್ತು ಗ್ಯಾಸ್ ಸ್ಟವ್ ಸಂಪೂರ್ಣ ಉಚಿತವಾಗಿ ಸಿಗುತ್ತದೆ. ವಾರ್ಷಿಕ ಆರು ಸಿಲಿಂಡರ್&zwnj;ಗಳವರೆಗೆ ಪ್ರತಿ ಸಿಲಿಂಡರ್&zwnj;ಗೆ 300 ರೂ. ಸಬ್ಸಿಡಿ ನೀಡಲಾಗುತ್ತದೆ. ಉಜ್ವಲ ಯೋಜನೆಯ ಅಧಿಕೃತ ವೆಬ್&zwnj;ಸೈಟ್ ಮೂಲಕ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಬಹುದು.&lt;/p&gt;&lt;img&gt;&lt;p&gt;ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಜಾರಿಗೆ ತಂದಿರುವ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ ಇದಾಗಿದೆ. ಪಡಿತರ ಚೀಟಿ (BPL/Anthyodaya) ಹೊಂದಿರುವ ಕುಟುಂಬಗಳಿಗೆ ದೇಶದ ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ಉಚಿತ ನಗದು ರಹಿತ (Cashless) ಚಿಕಿತ್ಸೆ ಸಿಗುತ್ತದೆ. ಅಧಿಕೃತ ಪೋರ್ಟಲ್ ಅಥವಾ ವಾಟ್ಸಾಪ್ ಮೂಲಕವೂ ಇದಕ್ಕೆ ನೋಂದಣಿ ಮಾಡಿಕೊಳ್ಳಬಹುದು.&lt;/p&gt;&lt;img&gt;&lt;p&gt;ಅಸಂಘಟಿತ ವಲಯದ ಕಾರ್ಮಿಕರಿಗೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆ ನೀಡಲು ಈ ಯೋಜನೆ ಸಹಕಾರಿ. 60 ವರ್ಷ ವಯಸ್ಸಿನ ನಂತರ ನೀವು ಪಾವತಿಸಿದ ಪ್ರೀಮಿಯಂಗೆ ಅನುಗುಣವಾಗಿ ಪ್ರತಿ ತಿಂಗಳು 1,000 ರೂ.ನಿಂದ 5,000 ರೂ. ವರೆಗೆ ನಿಶ್ಚಿತ ಪಿಂಚಣಿ ಲಭ್ಯವಿರುತ್ತದೆ. 18 ರಿಂದ 40 ವರ್ಷದೊಳಗಿನವರು ಈ ಯೋಜನೆಗೆ ಸೇರಬಹುದು.&lt;/p&gt;&lt;img&gt;&lt;p&gt;ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಯ ಖರ್ಚುಗಳಿಗಾಗಿ ಪೋಷಕರು ಹಣ ಉಳಿಸಲು ಇದು ಅತ್ಯುತ್ತಮ ಯೋಜನೆ. ಇದು ಸಣ್ಣ ಉಳಿತಾಯ ಯೋಜನೆಗಳಲ್ಲಿ ಅತಿ ಹೆಚ್ಚು ಬಡ್ಡಿ ನೀಡುವ ಯೋಜನೆಯಾಗಿದೆ. ಪ್ರಸ್ತುತ ವಾರ್ಷಿಕ 8.2% ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಈ ಎಲ್ಲಾ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಥವಾ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ಅಧಿಕೃತ ವೆಬ್&zwnj;ಸೈಟ್&zwnj;ಗಳಿಗೆ ಭೇಟಿ ನೀಡಿ. ಈ ಸೌಲಭ್ಯಗಳನ್ನು ಪಡೆದು ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿಸಿಕೊಳ್ಳಿ&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/money/central-government-welfare-top-5-schemes-you-can-apply-now-gkn-msmyk44"/>
        </item>
        <item>
            <title><![CDATA[ಮೀನುಗಾರನ ಬಲೆಗೆ ಬಿದ್ದ ಅಪರೂಪದ ಕಡಲ ಹಸು, ಆತ್ಮೀಯವಾಗಿ ಮರಳಿ ಸಮುದ್ರಕ್ಕೆ ಬಿಟ್ಟು ಮಾನವೀಯತೆ]]></title>
            <link>https://kannada.asianetnews.com/gallery/viral/tamil-nadu-fisherman-releases-dugong-pudukkottai-sea-grass-conservation-san-nt2rirw</link>
            <guid isPermaLink="true">https://kannada.asianetnews.com/gallery/viral/tamil-nadu-fisherman-releases-dugong-pudukkottai-sea-grass-conservation-san-nt2rirw</guid>
            <pubDate>Mon, 13 Jul 2026 14:19:01 +0530</pubDate>
            <description><![CDATA[&lt;p&gt;ತಮಿಳುನಾಡಿನ ಪುದುಕ್ಕೊಟ್ಟೈ ಕರಾವಳಿಯಲ್ಲಿ, ಮೀನುಗಾರನೊಬ್ಬ ತನ್ನ ಬಲೆಗೆ ಸಿಕ್ಕ ಅಪರೂಪದ ಕಡಲ ಹಸುವನ್ನು (ಡುಗಾಂಗ್) ಪ್ರೀತಿಯಿಂದ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾನೆ. ಈ ಮಾನವೀಯ ಘಟನೆಯು, ವನ್ಯಜೀವಿ ಸಂರಕ್ಷಣಾ ಇಲಾಖೆಯು ವರ್ಷಗಳಿಂದ ನಡೆಸಿದ ಜಾಗೃತಿ ಕಾರ್ಯಕ್ರಮಗಳ ಯಶಸ್ಸಿಗೆ ಸಾಕ್ಷಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd9th72w0xm8kp8xfq7zkn1,imgname-tamil-nadu-fisherman-rescues-and-releases-rare-dugong-into-sea--6--1783931684066.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡಿನ ಪುದುಕ್ಕೊಟ್ಟೈ ಕರಾವಳಿಯಲ್ಲಿ, ಮೀನುಗಾರನೊಬ್ಬ ತನ್ನ ಬಲೆಗೆ ಸಿಕ್ಕ ಅಪರೂಪದ ಕಡಲ ಹಸುವನ್ನು (ಡುಗಾಂಗ್) ಪ್ರೀತಿಯಿಂದ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾನೆ. ಈ ಮಾನವೀಯ ಘಟನೆಯು, ವನ್ಯಜೀವಿ ಸಂರಕ್ಷಣಾ ಇಲಾಖೆಯು ವರ್ಷಗಳಿಂದ ನಡೆಸಿದ ಜಾಗೃತಿ ಕಾರ್ಯಕ್ರಮಗಳ ಯಶಸ್ಸಿಗೆ ಸಾಕ್ಷಿಯಾಗಿದೆ.&lt;/p&gt;&lt;img&gt;&lt;p&gt;ತಮಿಳುನಾಡಿನ ಪುದುಕ್ಕೊಟ್ಟೈ ಕರಾವಳಿಯಲ್ಲಿ ಮೀನುಗಾರನೊಬ್ಬ ತನ್ನ ಬಲೆಗೆ ಆಕಸ್ಮಿಕವಾಗಿ ಬಿದ್ದ ಅಪರೂಪದ ಸಣ್ಣ ಕಡಲ ಹಸುವನ್ನು (ಡುಗಾಂಗ್) ಅತ್ಯಂತ ಜಾಗರೂಕತೆಯಿಂದ ಮರಳಿ ಸಮುದ್ರಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ತಮಿಳು ಭಾಷೆಯಲ್ಲಿ ಅತ್ಯಂತ ಪ್ರೀತಿಯ ಮಾತುಗಳನ್ನು ಆಡುತ್ತಾ ಆತ ಈ ಜಲಚರವನ್ನು ಮುಕ್ತಗೊಳಿಸಿದ ವಿಡಿಯೋ ಈಗ ಪರಿಸರ ಪ್ರೇಮಿಗಳ ಮನಗೆದ್ದಿದೆ.&lt;/p&gt;&lt;img&gt;&lt;p&gt;ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಆತನ ಬಲೆಗೆ ಈ ಪುಟ್ಟ ಕಡಲ ಹಸು (ಡುಗಾಂಗ್) ಸಿಲುಕಿತ್ತು. ಆದರೆ, ಆ ಮೀನುಗಾರ ಅದನ್ನು ಹಾನಿ ಮಾಡದೇ ಅತ್ಯಂತ ಮೃದುವಾಗಿ, ಪ್ರೀತಿಯ ತಮಿಳು ನುಡಿಗಳನ್ನು ಆಡುತ್ತಾ ಮರಳಿ ಸಮುದ್ರದ ಆಳಕ್ಕೆ ಬಿಟ್ಟಿದ್ದಾನೆ. ಈ ಸುಂದರ ಕ್ಷಣವು ಕೇವಲ ಬರೀ ಆಕಸ್ಮಿಕ ಘಟನೆಯಲ್ಲ, ಇದರ ಹಿಂದೆ ವರ್ಷಗಳ ಕಾಲ ನಡೆದ ನಿರಂತರ ಜಾಗೃತಿಯ ಶ್ರಮ ಅಡಗಿದೆ.&lt;/p&gt;&lt;img&gt;&lt;p&gt;ಸ್ಥಳೀಯ ಮೀನುಗಾರರೊಂದಿಗೆ ವನ್ಯಜೀವಿ ಸಂರಕ್ಷಣಾ ಇಲಾಖೆಯು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಸಮಾಲೋಚನೆಗಳು ಮತ್ತು ಅವರಲ್ಲಿ ಬಿತ್ತಿದ ನಂಬಿಕೆ ಈಗ ಫಲ ನೀಡಲಾರಂಭಿಸಿದೆ. ಕರಾವಳಿ ಸಮುದಾಯಗಳು ವನ್ಯಜೀವಿ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಈ ಅಭಿಯಾನ ಯಶಸ್ವಿಯಾಗಿದೆ.&lt;/p&gt;&lt;img&gt;&lt;p&gt;ಸ್ಥಳೀಯ ಮೀನುಗಾರರನ್ನು ಈ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಪ್ರೋತ್ಸಾಹಕ ಮತ್ತು ಉತ್ತೇಜನಾ ಯೋಜನೆಗಳನ್ನು ಪರಿಚಯಿಸಲಾಗಿತ್ತು. ಇದು ಮೀನುಗಾರರಲ್ಲಿ ಹೊಸ ಉತ್ಸಾಹ ತುಂಬಿದ್ದು, ಅಪರೂಪದ ಜಲಚರಗಳು ಜಾಲಕ್ಕೆ ಬಿದ್ದಾಗ ಅವುಗಳನ್ನು ಕೊಲ್ಲದೆ ಸುರಕ್ಷಿತವಾಗಿ ರಕ್ಷಿಸಲು ಪ್ರೇರಣೆಯಾಗಿದೆ.&lt;/p&gt;&lt;img&gt;&lt;p&gt;ಈ ನಿರಂತರ ಶ್ರಮದ ಫಲವಾಗಿ, ಕಳೆದ 2023 ರಿಂದ ಇಂದಿನವರೆಗೂ ಒಟ್ಟು 21 ಕಡಲ ಹಸುಗಳನ್ನು (Dugongs) ಮೀನುಗಾರರು ಮತ್ತು ಅರಣ್ಯ ಇಲಾಖೆಯ ಜಂಟಿ ಶ್ರಮದಿಂದ ಯಶಸ್ವಿಯಾಗಿ ರಕ್ಷಿಸಿ ಮರಳಿ ಸಮುದ್ರಕ್ಕೆ ಬಿಡಲಾಗಿದೆ. ಇದು ಕರಾವಳಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ಯಶಸ್ಸು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕಡಲ ಹಸುಗಳ ಜೀವನಾಡಿಯಾಗಿರುವ ಸಮುದ್ರದೊಳಗಿನ ಹಸಿರು ಹುಲ್ಲುಗಾವಲನ್ನು (Seagrass) ರಕ್ಷಿಸಲು ಇಲಾಖೆ ಒತ್ತು ನೀಡಿದೆ. ಸದ್ಯ ಸುಮಾರು 3 ಎಕರೆ ವಿಸ್ತೀರ್ಣದ ಸಮುದ್ರದ ಹಸಿರು ಹುಲ್ಲುಗಾವಲನ್ನು ಯಶಸ್ವಿಯಾಗಿ ಪುನಶ್ಚೇತನಗೊಳಿಸಲಾಗಿದ್ದು, ಇದು ಈ ಜಲಚರಗಳ ಆವಾಸಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವುದರಿಂದ ಮಾತ್ರ ವನ್ಯಜೀವಿ ಸಂರಕ್ಷಣೆ ಸಾಧ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಈ ಅದ್ಭುತ ಕಾರ್ಯಕ್ಕಾಗಿ ಪುದುಕ್ಕೊಟ್ಟೈ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CF), ಜಿಲ್ಲಾ ಅರಣ್ಯ ಅಧಿಕಾರಿ (DFO) ಮತ್ತು ಅವರ ಇಡೀ ತಂಡಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.&lt;/p&gt;&lt;p&gt;&ldquo; ஓடுங்க ஓடுங்க தங்கப்பிள்ளை...&rdquo;( Run, run, golden child )&amp;nbsp;These are the affectionate words of a fisherman as he calls out in Tamil while gently releasing a juvenile dugong, accidentally caught in his fishing net, back into the sea in Pudukkottai, Tamil Nadu.What makes this&hellip; pic.twitter.com/PeRLcZFn9O&lt;/p&gt;&lt;p&gt;&mdash; Supriya Sahu IAS (@supriyasahuias) July 13, 2026&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/viral/tamil-nadu-fisherman-releases-dugong-pudukkottai-sea-grass-conservation-san-nt2rirw"/>
        </item>
        <item>
            <title><![CDATA[S Janaki: ದಕ್ಷಿಣ ಭಾರತದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅನ್ಯಾಯ, ಸಿಡಿದೆದ್ದ ಎಸ್ ಜಾನಕಿ; ಮುಂದೆ ಆಗಿದ್ದು ಇತಿಹಾಸ!]]></title>
            <link>https://kannada.asianetnews.com/gallery/cine-world/s-janaki-created-history-by-refusing-padma-bhushan-award-speaking-out-against-the-discrimination-in-indian-languages-bnaylim</link>
            <guid isPermaLink="true">https://kannada.asianetnews.com/gallery/cine-world/s-janaki-created-history-by-refusing-padma-bhushan-award-speaking-out-against-the-discrimination-in-indian-languages-bnaylim</guid>
            <pubDate>Mon, 13 Jul 2026 13:32:25 +0530</pubDate>
            <description><![CDATA[&lt;p&gt;2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. ಆ ಮೂಲಕ ಈ ಮೇರು ಗಾಯಕಿ ಇತಿಹಾಸ ಸೃಷ್ಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxbc0jk8dbs2m1sawtgvs7s4,imgname-janaki-last-moments-1783866870376.jpg" type="image/jpeg" height="390" width="690"/>
            <content:encoded><![CDATA[&lt;p&gt;2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. ಆ ಮೂಲಕ ಈ ಮೇರು ಗಾಯಕಿ ಇತಿಹಾಸ ಸೃಷ್ಟಿಸಿದ್ದಾರೆ.&lt;/p&gt;&lt;img&gt;&lt;p&gt;ಮೊನ್ನೆ, ಅಂದರೆ 11 ಜುಲೈ 2026ರಂದು ಭಾರತದ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್ ಜಾನಕಿ (S Janaki) ನಿಧರಾಗಿದ್ದು ಗೊತ್ತೇ ಇದೆ. ಈ ಗಂಧರ್ವ ಗಾಯಕಿಯ ಬಗ್ಗೆ ಭಾರತೀಯರಿಗೆ ಹೆಚ್ಚಾಗಿ ಹೇಳುವ ಅಗತ್ಯವೇನಿಲ್ಲ. 4 ರಾಷ್ಟ್ರೀಯ ಪ್ರಶಸ್ತಿ, 30 ರಾಜ್ಯ ಪ್ರಶಸ್ತಿ, ಹಲವಾರು ನಂದಿ ಪ್ರಶಸ್ತಿ ಜೊತೆಗೆ ಬಹಳಷ್ಟು ಸಂಘ-ಸಂಸ್ಥೆಗಳಿಂದ ಲೆಕ್ಕವಿಡಲಾಗದಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಎಸ್ ಜಾನಕಿಯವರಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಇಂಥ ಮೇರು ಗಾಯಕಿ ಎಸ್&zwnj; ಜಾನಕಿಯವರು, ಚಿತ್ರರಂಗದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಿನ್ನೆಲೆ ಗಾಯಕ-ಗಾಯಕಿಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಮಾತನ್ನಾಡಿದ್ದರು. ಈ ವಿಷಯ ಹಲವರಿಗೆ ಗೊತ್ತಿಲ್ಲ.&lt;/p&gt;&lt;img&gt;&lt;p&gt;2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. '50 ವರ್ಷಗಳ ನನ್ನ ಸಂಗೀತದ ಸೇವೆಗೆ ಈಗ ಪ್ರಶಸ್ತಿ ಕೋಡುವುದು ತುಂಬಾ ತಡವಾಯ್ತು. ಅದಕ್ಕೆ ಕಾರಣ ನಾವು ಹಿಂದಿಯಲ್ಲಿ ಹಾಡಿಲ್ಲ, ದಕ್ಷಿಣ ಭಾರತದ ಭಾಷೆಗಳಲ್ಲಿ ಹಾಡಿರೋದು' ಎಂದು ಎಸ್ ಜಾನಕಿಯವರು ಆ ಬಗ್ಗೆ ಅವರು ನೀಡಿದ್ದ ಹೇಳಿಕೆ ಹಲವರ ಮೆಚ್ಚುಗೆ ಗಳಿಸಿತ್ತು. ಜೊತೆಗೆ, ಎಸ್ ಜಾನಕಿಯವರು ಕೊಟ್ಟ ಕಾರಣ ಹಾಗೂ ಮಾಡಿದ್ದ ನಿರಾಕರಣೆಗೆ ಬಹಳಷ್ಟು ಜನರು ಸಮ್ಮತಿ ಸೂಚಿಸಿದ್ದು ಮಾತ್ರವಲ್ಲ, ಅವರ ದೃಢ ನಿರ್ಧಾರಕ್ಕೆ ಬೆನ್ನೆಲುಬಾಗಿ ನಿಂತಿದ್ದರು.&lt;/p&gt;&lt;img&gt;&lt;p&gt;ಈ ಬಗ್ಗೆ ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್&zwnj;ಪಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಹೇಳುವ ಮೂಲಕ ಸಹಮತ ಸೂಚಿಸಿದ್ದರು. ಜೊತೆಗೆ, ಆ ದಕ್ಷಿಣ ಭಾರತ-ಉತ್ತರ ಭಾರತದ ಕಲಾವಿದರ ನಡುವಿನ ತಾರತಮ್ಯದ ನೋವು ತಾವೂ ಸೇರಿದಂತೆ, ದಕ್ಷಿಣ ಭಾರತದ ಎಲ್ಲ ಕಲಾವಿದರೂ ಅನುಭವಿಸುತ್ತಿದ್ದಾರೆ ಎಂದಿದ್ದರು. ಜೊತೆಗೆ, ಎಸ್ ಜಾನಕಿಯವರ ದಿಟ್ಟ ನಿರ್ಧಾರ ಹಾಗೂ ಪ್ರಶಸ್ತಿಯನ್ನು ನಿರಾಕರಿಸಿದ್ದನ್ನು ಶ್ಲಾಘಿಸುವ ಅರ್ಥದಲ್ಲಿ ಮಾತನ್ನಾಡಿದ್ದರು.&lt;/p&gt;&lt;img&gt;&lt;p&gt;ಈ ಬಗ್ಗೆ ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್&zwnj;ಪಿ ಬಾಲಸುಬ್ರಹ್ಮಣ್ಯಂ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಹೀಗೆ ಹೇಳಿದ್ದರು-&lt;/p&gt;&lt;p&gt;'ಭಾರತದ ಸರ್ಕಾರ ಎಸ್ ಜಾನಕಿಯವರ ಪ್ರತಿಭೆಗೆ ತಕ್ಕ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಲಿಲ್ಲ. ನಮ್ಮವರಿಗೆ ಅಂದರೆ ದಕ್ಷಿಣ ಭಾರತದ ಸಂಸದರಿಗೆ ಲಾಬಿ ಮಾಡಲು ಬರುವುದಿಲ್ಲ' ಎಂದು ನೇರವಾಗಿಯೇ ಹೇಳಿದ್ದರು.&lt;/p&gt;&lt;img&gt;&lt;p&gt;ಸುಮಾರು 48000 ಕ್ಕೂ ಹೆಚ್ಚು ಹಾಡುಗಳನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಯಲ್ಲಿ ಹಾಡಿದ್ದರೂ ಇವರು &quot;ಭಾರತದ ನೈಟಿಂಗೆಲ್&quot; ಆಗಲಿಲ್ಲ. ಏಕೆಂದರೆ ಭಾರತದ ಸರ್ಕಾರದ ಪ್ರಕಾರ ಇವರು ಹಿಂದಿಯಲ್ಲಿ ಅಷ್ಟಾಗಿ ಹಾಡಲಿಲ್ಲ. ಇದೂ ಒಂದು ಕಾರಣ ಎಂಬುದೇ ದುರಂತ. ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ಸಂಗೀತಕ್ಕೆ, ಕಲೆಗೆ ಯಾವುದೇ ಬೇಧಭಾವ ಇರುವುದಿಲ್ಲ, ಇರಬಾರದು. ಭಾರತದ ಸರ್ಕಾರವು ಇಂತಹ ಮಲತಾಯಿಯ ಧೋರಣೆಯನ್ನು ಬಿಡುವವರೆಗೂ ಕಲೆಯಲ್ಲಿ ಸಾಧಿಸಿದವರಿಗೆ ಸಮನಾದ ಪ್ರಾಮುಖ್ಯತೆ ಸಿಗುವುದಿಲ್ಲ' ಎಂದಿದ್ದರು.&lt;/p&gt;&lt;img&gt;&lt;p&gt;ಇದು 'ನ್ಯಾಷನಲ್ ಅವಾರ್ಡ್' ಅಂದರೆ 'ಪದ್ಮ' ಕೆಟಗರಿಯ ಹಾಗೂ ಭಾರತ ರತ್ನ, ದಾದಾ ಸಾಹೇಬ್ ಪ್ರಶಸ್ತಿಗಳು ಮುಂತಾದವುಗಳ ವಿಷಯಕ್ಕೆ ಎಸ್ ಜಾನಕಿಯವರು ಹೇಳಿದ್ದ ಮಾತು ಹಾಗೂ ಮಾಡಿದ್ದ ಗಟ್ಟಿ ನಿರ್ಧಾರ. ಪ್ರಶಸ್ತಿ ಬಂದಿದ್ದರೂ ಅದನ್ನೂ ಸ್ವೀಕರಿಸದೇ ಅದಕ್ಕೆ ಸೂಕ್ತ ಕಾರಣ ಕೊಟ್ಟು ನಿರಾಕರಿಸಿದ್ದು ಎಸ್ ಜಾನಕಿಯವರ ಬಗ್ಗೆ 'ದಕ್ಷಿಣ ಭಾರತೀಯರ' ಪ್ರೀತಿ ಆದರ ಹೆಚ್ಚಾಗಲು ಕಾರಣವಾಯಿತು, ಜೊತೆಗೆ, ಹಿಂದಿ ಭಾಷಿಗರು ಹಾಗೂ ದಕ್ಷಿಣ ಭಾರತೀಯರ ಕಲಾವಿದರ ನಡುವೆ ಭಾರತದ ಸರ್ಕಾರ ತೋರುತ್ತಿದ್ದ ತಾರತಮ್ಮು ಇಡೀ ಜಗತ್ತಿಗೆ ಅರ್ಥವಾಗಲು ಕಾರಣವಾಯಿತು. ಎಸ್ ಜಾನಕಿಯವರ ಕಾರಣಕ್ಕೆ ಈ ಸಂಗತಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ದಾಖಲಾಗಿದೆ.&lt;/p&gt;&lt;p&gt;ಇಂದು ಎಸ್ ಜಾನಕಿಯವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರ ಸ್ವರ ಮಾಧುರ್ಯ ಹಾಗೂ ಹಾಡಿರುವ ಗೀತೆಗಳು ಈ ಜಗತ್ತು ಇರುವವರೆಗೂ ಅಜರಾಮರ!&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/s-janaki-created-history-by-refusing-padma-bhushan-award-speaking-out-against-the-discrimination-in-indian-languages-bnaylim"/>
        </item>
        <item>
            <title><![CDATA[ಧರ್ಮಸ್ಥಳದಲ್ಲಿ ಮದುವೆ ಆಗಿದ್ದ ಜೋಡಿ; ಬೆಳಗ್ಗೆ ಬರ್ತೀನಿ ಎಂದ ಪತಿ, ವಿಷ ಕುಡಿದ ನವವಿವಾಹಿತೆ]]></title>
            <link>https://kannada.asianetnews.com/bengaluru-rural/newly-married-women-died-in-an-incident-in-nelamangala-gkn/articleshow-onts8gz</link>
            <guid isPermaLink="true">https://kannada.asianetnews.com/bengaluru-rural/newly-married-women-died-in-an-incident-in-nelamangala-gkn/articleshow-onts8gz</guid>
            <pubDate>Mon, 13 Jul 2026 13:02:15 +0530</pubDate>
            <description><![CDATA[&lt;p&gt;ಪ್ರೀತಿಸಿ ಧರ್ಮಸ್ಥಳದಲ್ಲಿ ಮದುವೆಯಾಗಿದ್ದ ನವಜೋಡಿಯ ಬಾಳಲ್ಲಿ ದುರಂತ ಸಂಭವಿಸಿದೆ. ಪತಿ ಈಗ ಬರಲು ಸಾಧ್ಯವಿಲ್ಲ, ಬೆಳಿಗ್ಗೆ ಬರುತ್ತೇನೆ ಎಂದಿದ್ದಕ್ಕೆ ಮನನೊಂದ ನವವಿವಾಹಿತೆ ತನುಜಾ, ನೆಲಮಂಗಲದ ಬಸವನಹಳ್ಳಿಯಲ್ಲಿ ವಿಷ ಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪೊಲೀಸರು ಪತಿಯ ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd67mzxpdsqbmn3y1hsfw8a,imgname-newly-married-women-died-in-nelamangala-1783927919613.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನೆಲಮಂಗಲ: &lt;/strong&gt;ಪ್ರೀತಿಸಿ ಮದುವೆಯಾಗಿದ್ದ ನವಜೋಡಿಯ ಜೀವನದಲ್ಲಿ ಅರಿಷಿಣದ ಬಣ್ಣ ಮಾಸುವ ಮುನ್ನವೇ ದೊಡ್ಡ ದುರಂತವೊಂದು ಸಂಭವಿಸಿದೆ. ಈಗ ಬರಲಾಗಲ್ಲ, ಬೆಳಿಗ್ಗೆ ಬರ್ತೀನಿ ಎಂದು ಪತಿ ಹೇಳಿದ್ದಕ್ಕೆ ಮನನೊಂದ ನವವಿವಾಹಿತೆಯೊಬ್ಬರು ವಿಷ ಕುಡಿದು ದುರಂತ ಅಂತ್ಯಕಂಡ ಘಟನೆ ನೆಲಮಂಗಲದ ಬಸವನಹಳ್ಳಿಯಲ್ಲಿ ನಡೆದಿದೆ.&lt;/p&gt;&lt;p&gt;ಗೌರಿಬಿದನೂರಿನ ಬೀರಮ್ಮನಹಳ್ಳಿ ನಿವಾಸಿ ತನುಜಾ (31) ಮೃತಪಟ್ಟ ದುರ್ದೈವಿ. ಈಕೆ ಯಲಹಂಕದ ಮಾಯಸಂದ್ರ ನಿವಾಸಿ ರವೀಂದ್ರ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು.&lt;/p&gt;&lt;h2&gt;&lt;strong&gt;ಪರಿಚಯ ಪ್ರೀತಿಗೆ ತಿರುಗಿ ಧರ್ಮಸ್ಥಳದಲ್ಲಿ ಮದುವೆ&lt;/strong&gt;&lt;/h2&gt;&lt;p&gt;ಮೃತ ತನುಜಾ ಮತ್ತು ರವೀಂದ್ರ ಕೆಲಸಕ್ಕೆ ಹೋಗುವಾಗ ಪರಿಚಯವಾಗಿದ್ದರು. ಈ ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಮನೆಯಲ್ಲಿ ಮದುವೆ ವಿಷಯ ತಿಳಿಸಲು ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದ ರವೀಂದ್ರ, ಪತ್ನಿ ತನುಜಾಳನ್ನು ಯಲಹಂಕದ ಸಿಂಗಾಪುರ ಲೇಔಟ್&zwnj;ನಲ್ಲಿ ಬಾಡಿಗೆ ಮನೆಯಲ್ಲಿ ಇರಿಸಿದ್ದರು.&lt;/p&gt;&lt;p&gt;ಘಟನೆಯ ದಿನದಂದು ತನುಜಾ ತನ್ನ ಪತಿ ರವೀಂದ್ರನಿಗೆ ಫೋನ್ ಮಾಡಿ ಕೂಡಲೇ ಮನೆಗೆ ಬರುವಂತೆ ಹೇಳಿದ್ದರು. ಆದರೆ ಕೆಲಸದ ನಿಮಿತ್ತ ರವೀಂದ್ರ, ಈಗ ಬರಲು ಸಾಧ್ಯವಿಲ್ಲ, ನಾಳೆ ಬೆಳಿಗ್ಗೆ ಬರುತ್ತೇನೆ ಎಂದು ಉತ್ತರಿಸಿದ್ದರು. ಪತಿಯ ಈ ಮಾತಿನಿಂದ ತೀವ್ರ ಆಕ್ರೋಶಗೊಂಡ ತನುಜಾ, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.&lt;/p&gt;&lt;h3&gt;&lt;strong&gt;ಕೊನೆಯ ಮೆಸೇಜ್&lt;/strong&gt;&lt;/h3&gt;&lt;p&gt;ಪತಿಯ ಮೇಲೆ ಸಿಟ್ಟು ಮಾಡಿಕೊಂಡಿದ್ದ ತನುಜಾ ಅಂತಿಮವಾಗಿ ರಾತ್ರಿ 10 ಗಂಟೆ ಸುಮಾರಿಗೆ ರವೀಂದ್ರನಿಗೆ ಮೆಸೇಜ್ ಮಾಡಿದ್ದರು. ನಾನು ವಿಷ ಕುಡಿದಿದ್ದೇನೆ, ನೆಲಮಂಗಲದ ಬಸವನಹಳ್ಳಿಯಲ್ಲಿ ಕುಳಿತಿದ್ದೇನೆ ಎಂದು ತಿಳಿಸಿದ್ದರು. ಗಾಬರಿಗೊಂಡ ರವೀಂದ್ರ ಕೂಡಲೇ ಸ್ಥಳಕ್ಕೆ ಧಾವಿಸಿ ತನುಜಾಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತನುಜಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರವೀಂದ್ರನ ವಿಚಾರಣೆ ನಡೆಸುತ್ತಿದ್ದಾರೆ. ಪ್ರೀತಿಸಿ ಹಸೆಮಣೆ ಏರಿದ್ದ ಯುವತಿ ಹೀಗೆ ಕ್ಷಣಿಕ ಆವೇಶದಲ್ಲಿ ಪ್ರಾಣ ಕಳೆದುಕೊಂಡಿರುವುದು ಎರಡೂ ಕುಟುಂಬಗಳಲ್ಲಿ ಶೋಕವನ್ನುಂಟು ಮಾಡಿದೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-rural/newly-married-women-died-in-an-incident-in-nelamangala-gkn/articleshow-onts8gz"/>
        </item>
        <item>
            <title><![CDATA[ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ]]></title>
            <link>https://kannada.asianetnews.com/india-news/sc-stays-madras-hc-order-banning-cow-slaughter-in-tamil-nadu-slp-abhishek-singhvi-san/articleshow-6380xt8</link>
            <guid isPermaLink="true">https://kannada.asianetnews.com/india-news/sc-stays-madras-hc-order-banning-cow-slaughter-in-tamil-nadu-slp-abhishek-singhvi-san/articleshow-6380xt8</guid>
            <pubDate>Mon, 13 Jul 2026 12:59:48 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಆದೇಶವು ಚಾಲ್ತಿಯಲ್ಲಿರುವ 'ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958'ಕ್ಕೆ ವಿರುದ್ಧವಾಗಿದೆ ಎಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd60k3np8pbd1pcghgdm0rd,imgname-supreme-court-cow-slaughter-stay-madras-high-court-tamil-nadu-ban-1783927688309.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.13):&lt;/strong&gt; ತಮಿಳುನಾಡು ರಾಜ್ಯದಾದ್ಯಂತ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಥವಾ ಇನ್ಯಾವುದೇ ದಿನಗಳಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ. ಮದ್ರಾಸ್ ಹೈಕೋರ್ಟ್&zwnj;ನ ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯ (SLP) ವಿಚಾರಣೆ ನಡೆಸಿದ ನ್ಯಾಯಾಲಯವು ಈ ಮಹತ್ವದ ಆದೇಶ ಹೊರಡಿಸಿದೆ.&lt;/p&gt;&lt;p&gt;ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಈ ಮಧ್ಯಂತರ ಆದೇಶವನ್ನು ಪ್ರಕಟಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮೊದಲ ನೋಟಕ್ಕೆ ಹೈಕೋರ್ಟ್ ಆದೇಶದ ಕೊನೆಯ ಪ್ಯಾರಾಗ್ರಾಫ್ (ರಾಜ್ಯಾದ್ಯಂತ ಸಂಪೂರ್ಣ ನಿಷೇಧ ಹೇರಿರುವ ಭಾಗ) &quot;ತಿದ್ದುಪಡಿ&quot;ಗೆ ಅರ್ಹವಾಗಿದೆ ಎಂದು ಪೀಠವು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.&lt;/p&gt;&lt;h2&gt;&lt;strong&gt;ಸರ್ಕಾರದ ಪರ ಹಿರಿಯ ವಕೀಲ ಸಿಂಘ್ವಿ ವಾದ&lt;/strong&gt;&lt;/h2&gt;&lt;p&gt;ತಮಿಳುನಾಡು ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿದರು. &quot;ಹೈಕೋರ್ಟ್&zwnj;ನ ಈ ಆದೇಶವು ಜಾರಿಯಲ್ಲಿರುವ 'ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958' ಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಈ ಕಾಯ್ದೆಯ ಪ್ರಕಾರ, ಕೆಲಸ ಮಾಡಲು ಮತ್ತು ಸಂತಾನೋತ್ಪತ್ತಿಗೆ ಅಸಮರ್ಥವಾಗಿರುವ 10 ವರ್ಷ ಮೇಲ್ಪಟ್ಟ ಹಸುಗಳನ್ನು ಸಕ್ಷಮ ಅಧಿಕಾರಿಯಿಂದ ಸೂಕ್ತ ಪ್ರಮಾಣಪತ್ರ ಪಡೆದು ನಿಯಮಾನುಸಾರ ಹತ್ಯೆ ಮಾಡಲು ಅವಕಾಶವಿದೆ. ಇದನ್ನು ಹೈಕೋರ್ಟ್ ನಿರ್ಲಕ್ಷಿಸಿದೆ&quot; ಎಂದು ಅವರು ವಾದಿಸಿದರು.&lt;/p&gt;&lt;p&gt;ಅಲ್ಲದೆ, ಪ್ರಾಣಿ ಹಿಂಸೆ ತಡೆ ಕಾಯ್ದೆ 1960, ಪ್ರಾಣಿ ಹಿಂಸೆ ತಡೆ (ಕಸಾಯಿಖಾನೆ) ನಿಯಮಗಳು 2001, ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆ 1998 ಮತ್ತು ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ನಿಯಮಗಳು 2023 ರಂತಹ ಚಾಲ್ತಿಯಲ್ಲಿರುವ ಕಾನೂನುಗಳು ಪ್ರಾಣಿಗಳನ್ನು ಹತ್ಯೆ ಮಾಡುವ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ಪರಿಸ್ಥಿತಿಗಳನ್ನು ನಿಯಂತ್ರಿಸುತ್ತವೆಯೇ ಹೊರತು, ಸಂಪೂರ್ಣ ನಿಷೇಧವನ್ನು ಹೇರುವುದಿಲ್ಲ. ಹೀಗಿದ್ದೂ ಹೈಕೋರ್ಟ್ ಸಂಪೂರ್ಣ ನಿಷೇಧದ ನಿರ್ದೇಶನ ನೀಡುವ ಮೂಲಕ ಶಾಸನಬದ್ಧ ಕಾನೂನಿನ ಜಾಗದಲ್ಲಿ 'ನ್ಯಾಯಾಂಗ ಶಾಸನ'ವನ್ನು (Judicial Legislation) ಜಾರಿಗೆ ತರಲು ಯತ್ನಿಸಿದೆ ಎಂದು ತಮಿಳುನಾಡು ಸರ್ಕಾರ ಆಕ್ಷೇಪಿಸಿದೆ.&lt;/p&gt;&lt;h2&gt;&lt;strong&gt;ಹೈಕೋರ್ಟ್ ಆದೇಶದ ಹಿನ್ನೆಲೆ&lt;/strong&gt;&lt;/h2&gt;&lt;p&gt;ಹಿಂದೂ ಮಕ್ಕಳ್ ಕಚ್ಚಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್&zwnj;ನ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಅವರಿದ್ದ ಪೀಠವು, ಕಳೆದ ಮೇ 27 ರಂದು ಬಕ್ರೀದ್ ಹಬ್ಬದ ಮುನ್ನಾದಿನ ಈ ನಿಷೇಧದ ಆದೇಶ ಹೊರಡಿಸಿತ್ತು.&lt;/p&gt;&lt;p&gt;ಅರ್ಜಿದಾರರು ಕೇವಲ ನಿಗದಿಪಡಿಸಿದ ಅಧಿಕೃತ ಜಾಗಗಳಲ್ಲಿ ಮಾತ್ರ ಹತ್ಯೆ ನಡೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಆದರೆ ಹೈಕೋರ್ಟ್ ಮಾತ್ರ ಯಾವುದೇ ದಿನದಲ್ಲೂ, ಎಲ್ಲೂ ಹಸು ಅಥವಾ ಕರುಗಳನ್ನು ಕೊಲ್ಲಬಾರದು ಎಂದು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಸಂಪೂರ್ಣ ನಿಷೇಧದ ಆದೇಶ ನೀಡಿತ್ತು. ಹಾಲಿನ ಉತ್ಪಾದನೆ ಹೆಚ್ಚಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸಲು ಗೋಹತ್ಯೆ ನಿಷೇಧ ಅಗತ್ಯ ಎಂಬ ಸರ್ಕಾರಿ ಆದೇಶವನ್ನು (GO) ಹೈಕೋರ್ಟ್ ಉಲ್ಲೇಖಿಸಿತ್ತು. ಜೊತೆಗೆ, ಬಕ್ರೀದ್ ಆಚರಣೆಗೆ ಗೋಹತ್ಯೆ ಅತ್ಯಗತ್ಯ ಆಚರಣೆಯಲ್ಲ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನೂ ಹೈಕೋರ್ಟ್ ಉಲ್ಲೇಖಿಸಿತ್ತು.&lt;/p&gt;&lt;h2&gt;&lt;strong&gt;ತಮಿಳುನಾಡು ಸರ್ಕಾರದ ಆಕ್ಷೇಪಣೆಗಳೇನು?&lt;/strong&gt;&lt;/h2&gt;&lt;p&gt;ಸುಪ್ರೀಂ ಕೋರ್ಟ್&zwnj;ನಲ್ಲಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ವಿಶೇಷ ರಜೆ ಅರ್ಜಿಯಲ್ಲಿ (SLP) ಹೈಕೋರ್ಟ್ ತೀರ್ಪಿನ ವಿರುದ್ಧ ಹಲವು ಗಂಭೀರ ತಾಂತ್ರಿಕ ಅಂಶಗಳನ್ನು ಎತ್ತಿ ತೋರಿಸಲಾಗಿದೆ:&lt;/p&gt;&lt;p&gt;&lt;strong&gt;ಕಾನೂನು ಮೀರಿ ಸರ್ಕಾರಿ ಆದೇಶಕ್ಕೆ ಮನ್ನಣೆ: &lt;/strong&gt;ಪ್ರಕರಣದಲ್ಲಿ ಯಾವುದೇ ವಿವಾದಕ್ಕೆ ಒಳಗಾಗದ ಅಥವಾ ಅನ್ವಯವಾಗದ ಸರ್ಕಾರಿ ಆದೇಶ ಸಂಖ್ಯೆ 1715 ಅನ್ನು ಹೈಕೋರ್ಟ್ ನೆಚ್ಚಿಕೊಂಡಿರುವುದು ತಪ್ಪು. ಯಾವುದೇ ಕಾರ್ಯಾಂಗದ ಸೂಚನೆಯು ತಮಿಳುನಾಡಿನಲ್ಲಿ ಜಾರಿಯಲ್ಲಿರುವ ಶಾಸನಬದ್ಧ ಕಾಯ್ದೆಗಳನ್ನು ಮೀರಲು ಸಾಧ್ಯವಿಲ್ಲ.&lt;/p&gt;&lt;p&gt;&lt;strong&gt;ಕೋರದ ಪರಿಹಾರವನ್ನು ನೀಡಿದ ಕೋರ್ಟ್: &lt;/strong&gt;ಮೂಲ ಅರ್ಜಿಯು ಕೇವಲ ಕೊಯಮತ್ತೂರಿನಲ್ಲಿ ಬಕ್ರೀದ್ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಹತ್ಯೆ ತಡೆಯುವುದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಹೈಕೋರ್ಟ್ ವ್ಯಾಪ್ತಿಯನ್ನು ವಿಸ್ತರಿಸಿ, ಅರ್ಜಿದಾರರು ಕೇಳದಿದ್ದರೂ ಅಧಿಕೃತ ಕಸಾಯಿಖಾನೆಗಳಲ್ಲೂ ಹತ್ಯೆ ಮಾಡದಂತೆ ಸಂಪೂರ್ಣ ನಿಷೇಧ ಹೇರಿದೆ.&lt;/p&gt;&lt;p&gt;&lt;strong&gt;ತೀರ್ಪಿನಲ್ಲೇ ಇದೆ ಪರಸ್ಪರ ವಿರೋಧ: &lt;/strong&gt;ಹೈಕೋರ್ಟ್ ತನ್ನ ತೀರ್ಪಿನ ಒಂದು ಭಾಗದಲ್ಲಿ ಪ್ರಾಣಿಗಳನ್ನು ಕೇವಲ ನಿಗದಿಪಡಿಸಿದ ಕಸಾಯಿಖಾನೆಗಳಲ್ಲೇ ಹತ್ಯೆ ಮಾಡಬೇಕು ಎಂದು ಹೇಳುತ್ತಲೇ, ಮತ್ತೊಂದು ಭಾಗದಲ್ಲಿ ಬಕ್ರೀದ್ ಅಥವಾ ಇನ್ಯಾವ ದಿನದಲ್ಲೂ ಹಸು-ಕರುಗಳನ್ನು ಕೊಲ್ಲುವಂತಿಲ್ಲ ಎಂದಿದೆ. ಇದು ತೀರ್ಪಿನ ಒಳಗೇ ಇರುವ ಪರಸ್ಪರ ವಿರೋಧಾಭಾಸವಾಗಿದೆ.&lt;/p&gt;&lt;p&gt;&lt;strong&gt;ಪೊಲೀಸ್ ವರದಿಯ ತಪ್ಪು ಅರ್ಥೈಕೆ: &lt;/strong&gt;ಸಾರ್ವಜನಿಕ ಸ್ಥಳಗಳಲ್ಲಿ ಹತ್ಯೆ ನಡೆಯಲಿದೆ ಎಂಬುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೈಕೋರ್ಟ್ ತಪ್ಪಾಗಿ ಗ್ರಹಿಸಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಹತ್ಯೆ ನಡೆಯದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಮತ್ತು ಧಾರ್ಮಿಕ ಆಚರಣೆಗಳನ್ನು ಸಾರ್ವಜನಿಕವಲ್ಲದ, ಆವರಣದ ಒಳಗಿರುವ ಸ್ಥಳಗಳಿಗೆ ಸೀಮಿತಗೊಳಿಸಲಾಗುವುದು ಎಂದು ಪೊಲೀಸರು ಅಫಿಡವಿಟ್&zwnj;ನಲ್ಲಿ ಸ್ಪಷ್ಟಪಡಿಸಿದ್ದರು. ಇದನ್ನು ಹೈಕೋರ್ಟ್ ನಿರ್ಲಕ್ಷಿಸಿದೆ.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/sc-stays-madras-hc-order-banning-cow-slaughter-in-tamil-nadu-slp-abhishek-singhvi-san/articleshow-6380xt8"/>
        </item>
        <item>
            <title><![CDATA['ಹೆಣ್ಣಾನೆ ಇದ್ರೆ ದಾನ ಮಾಡಿ..' ಕೇರಳ ಸಿಎಂಗೆ ಪತ್ರ ಬರೆದ ಸಿಎಂ ಡಿಕೆ ಶಿವಕುಮಾರ್‌]]></title>
            <link>https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va</link>
            <guid isPermaLink="true">https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va</guid>
            <pubDate>Mon, 13 Jul 2026 12:38:25 +0530</pubDate>
            <description><![CDATA[&lt;p&gt;ಉಡುಪಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗಾಗಿ ಹೆಣ್ಣಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2xg6xfggnqq9znzah8jaq5,imgname-dk-shivakumar--5--1783583218607.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13): &lt;/strong&gt;ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯುಳ್ಳ ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಿಗಾಗಿ ಹೆಣ್ಣು ಸಾಕಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಅಧಿಕೃತ ವಿನಂತಿ ಮಾಡಿದೆ. ನೆರೆರಾಜ್ಯಗಳಿಗೆ ಸಾಕಾನೆಗಳನ್ನು ದಾನ ಮಾಡುವ ಅಥವಾ ವರ್ಗಾವಣೆ ಮಾಡುವಂತೆ ಕೇರಳ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ಕೇರಳದ ಯಾವುದೇ ದೇವಸ್ಥಾನದಿಂದ ಇಚ್ಛಾಪೂರ್ವಕವಾಗಿ ಹೆಣ್ಣು ಆನೆಯೊಂದನ್ನು ದಾನವಾಗಿ ನೀಡಲು ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದಾರೆ.&lt;/p&gt;&lt;p&gt;ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಮತ್ತು ದೇವಸ್ಥಾನದ ಆಚರಣೆಗಳಲ್ಲಿ ಭಾಗವಹಿಸಲು ಆನೆಯ ಅಗತ್ಯವಿದೆ. ಚಾಲ್ತಿಯಲ್ಲಿರುವ ಎಲ್ಲಾ ಕಾನೂನು ನಿಬಂಧನೆಗಳು ಮತ್ತು ನಿಯಮಾವಳಿಗಳಿಗೆ ಬದ್ಧವಾಗಿಯೇ ಈ ಆನೆ ದಾನದ ಪ್ರಕ್ರಿಯೆಗೆ ನೆರವಾಗಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಪತ್ರದಲ್ಲಿ ವಿನಂತಿಸಿದ್ದಾರೆ. ಕೇರಳ ಸರ್ಕಾರದ ಈ ತ ನಡೆ ಉಭಯ ರಾಜ್ಯಗಳ ನಡುವಿನ ಶತಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ತೆಲಂಗಾಣ ಪ್ರಸ್ತಾವನೆ ತಿರಸ್ಕರಿಸಿದ್ದ ಕೇರಳ&lt;/strong&gt;&lt;/h2&gt;&lt;p&gt;ಇದಕ್ಕೂ ಮುನ್ನ, ತೆಲಂಗಾಣ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಧಾರ್ಮಿಕ ಉದ್ದೇಶಗಳಿಗಾಗಿ ಕೇರಳದ ಅರಣ್ಯ ಇಲಾಖೆಯ ಶಿಬಿರದ ಆನೆಗಳನ್ನು (ರಕ್ಷಿಸಿ ಸಾಕಲಾಗುತ್ತಿರುವ ಆನೆಗಳು) ನೀಡುವಂತೆ ಕೋರಿದ್ದ ಪ್ರಸ್ತಾವನೆಯನ್ನು ಕೇರಳ ಸರ್ಕಾರ ತಿರಸ್ಕರಿಸಿತ್ತು ಎಂದು ಅರಣ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಪ್ರಸ್ತುತ ಕೇರಳದ ಕೊಟ್ಟೂರು, ಧೋನಿ, ಮಲಯಾತ್ತೂರು ಮತ್ತು ಕೊನ್ನಿ ಸೇರಿದಂತೆ ರಾಜ್ಯದಾದ್ಯಂತ ಇರುವ ವಿವಿಧ ಶಿಬಿರಗಳಲ್ಲಿ ಸುಮಾರು 30 ಸಾಕಾನೆಗಳನ್ನು ನಿರ್ವಹಿಸಲಾಗುತ್ತಿದೆ. ಇಡೀ ಕೇರಳ ರಾಜ್ಯದಲ್ಲಿ ಒಟ್ಟು ಸಾಕಾನೆಗಳ ಸಂಖ್ಯೆ ಸುಮಾರು 368 ರಷ್ಟಿದ್ದು, ವಾರ್ಷಿಕವಾಗಿ 15 ರಿಂದ 20 ಆನೆಗಳು ಮೃತಪಡುತ್ತಿವೆ.&lt;/p&gt;&lt;p&gt;ಕೇವಲ ತೆಲಂಗಾಣ ಮಾತ್ರವಲ್ಲದೆ, ಮೂರು ವರ್ಷಗಳ ಹಿಂದೆ ತ್ರಿಪುರಾದ ವ್ಯಕ್ತಿಯೊಬ್ಬರು ಮಾವೇಲಿಕ್ಕರಾದ ದೇವಸ್ಥಾನಕ್ಕೆ ಆನೆಯೊಂದನ್ನು ಉಡುಗೊರೆಯಾಗಿ ನೀಡಲು ಕೋರಿದ್ದ ಮನವಿಯನ್ನೂ ಕೇರಳ ಅಧಿಕಾರಿಗಳು ತಿರಸ್ಕರಿಸಿದ್ದರು. ಅಸ್ಸಾಂ ಮತ್ತು ಇತರ ಆನೆ ಬಾಹುಳ್ಯವಿರುವ ರಾಜ್ಯಗಳಿಂದ ಸಾಕಾನೆಗಳನ್ನು ತರಲು ಈ ಹಿಂದೆ ಕೆಲವು ಮಧ್ಯವರ್ತಿಗಳು ಅನೌಪಚಾರಿಕವಾಗಿ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಅಂತರರಾಜ್ಯ ಆನೆ ವರ್ಗಾವಣೆಗೆ ಕಠಿಣ ನಿಯಮಗಳು&lt;/strong&gt;&lt;/h2&gt;&lt;p&gt;ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ 'ಸಾಕಾನೆ (ವರ್ಗಾವಣೆ ಅಥವಾ ಸಾರಿಗೆ) ನಿಯಮಗಳು, 2024' ರ ಅಡಿಯಲ್ಲಿ ಅಂತರರಾಜ್ಯ ಆನೆ ವರ್ಗಾವಣೆಗೆ ಕಟ್ಟುನಿಟ್ಟಿನ ನಿಯಮಗಳಿವೆ. ಫೆಬ್ರವರಿ 24, 2024 ಕ್ಕಿಂತ ಮೊದಲು ಮಾಲೀಕತ್ವದ ಪ್ರಮಾಣಪತ್ರವನ್ನು ಹೊಂದಿರುವ ಮತ್ತು ಕೇಂದ್ರ ಸಚಿವಾಲಯದ ಎಲೆಕ್ಟ್ರಾನಿಕ್ ಮಾನಿಟರಿಂಗ್ ಅಪ್ಲಿಕೇಶನ್&zwnj;ನಲ್ಲಿ ಜೆನೆಟಿಕ್ ಪ್ರೊಫೈಲ್ (Genetic Profile) ನಮೂದಾಗಿರುವ ಆನೆಗಳ ವರ್ಗಾವಣೆಗೆ ಮಾತ್ರ ಅವಕಾಶವಿರುತ್ತದೆ. ದಾನ ನೀಡುವ ರಾಜ್ಯದ ಮುಖ್ಯ ವನ್ಯಜೀವಿ ಪಾಲಕರು (Chief Wildlife Warden), ಪ್ರಸ್ತುತ ಮಾಲೀಕರು ಆನೆಯನ್ನು ಪೋಷಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಮತ್ತು ಹೊಸ ಸ್ಥಳದಲ್ಲಿ ಪ್ರಸ್ತುತ ಸಂದರ್ಭಕ್ಕಿಂತ ಉತ್ತಮ ಪಾಲನೆ ಸಿಗಲಿದೆ ಎಂದು ತೃಪ್ತಿಪಟ್ಟರೆ ಮಾತ್ರ ವರ್ಗಾವಣೆಗೆ ಒಪ್ಪಿಗೆ ನೀಡಬಹುದು.&lt;/p&gt;&lt;h2&gt;&lt;strong&gt;ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಕೇರಳ ಅರಣ್ಯ ಇಲಾಖೆ&lt;/strong&gt;&lt;/h2&gt;&lt;p&gt;ಕರ್ನಾಟಕ ಮುಖ್ಯಮಂತ್ರಿಗಳಿಂದ ಪತ್ರ ಬಂದಿರುವುದನ್ನು ಕೇರಳದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ, ದೇವಸ್ಥಾನಗಳಿಂದ ದಾನಿಗಳನ್ನು ಹುಡುಕುವುದು ಅಥವಾ ಆನೆ ದಾನದ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಅರಣ್ಯ ಇಲಾಖೆಯ ಕಾನೂನು ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ನಿಯಮಾವಳಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ಮೌಲ್ಯೀಕರಿಸುವುದು ಮತ್ತು ಅದರ ಆಧಾರದ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಇಲಾಖೆಯ ಕೆಲಸ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va"/>
        </item>
        <item>
            <title><![CDATA[ಭಿಕ್ಷುಕರಿಗೆ ಬಿರಿಯಾನಿ ಕೊಟ್ಟು ಅಕ್ರಮ ವೀರ್ಯ ಸಂಗ್ರಹ: ಆಘಾತಕಾರಿ ಮಾನವ ಕಳ್ಳಸಾಗಾಣಿಕೆ ಜಾಲ ಬಯಲು]]></title>
            <link>https://kannada.asianetnews.com/crime/hyderabad-sperm-bank-racket-beggars-lured-with-biryani-and-money-for-donation-case-exposed-suc/articleshow-vk48pxk</link>
            <guid isPermaLink="true">https://kannada.asianetnews.com/crime/hyderabad-sperm-bank-racket-beggars-lured-with-biryani-and-money-for-donation-case-exposed-suc/articleshow-vk48pxk</guid>
            <pubDate>Mon, 13 Jul 2026 12:24:28 +0530</pubDate>
            <description><![CDATA[&lt;p&gt;ಪೊಲೀಸರು ಖಾಸಗಿ ವೀರ್ಯ ಬ್ಯಾಂಕ್ ಮೇಲೆ ದಾಳಿ ನಡೆಸಿ, ಭಿಕ್ಷುಕರಿಗೆ ಬಿರಿಯಾನಿ ಮತ್ತು ಹಣದ ಆಮಿಷವೊಡ್ಡಿ ವೀರ್ಯ ಸಂಗ್ರಹಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಅಕ್ರಮವು ಬಾಡಿಗೆ ತಾಯ್ತನ ಮತ್ತು ಮಕ್ಕಳ ಕಳ್ಳಸಾಗಾಣಿಕೆಯ ದೊಡ್ಡ ದಂಧೆಯ ಭಾಗವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿನ ಅನೈತಿಕ ಶೋಷಣೆಯನ್ನು ಇದು ಎತ್ತಿ ತೋರಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd42mcn14g8kbpw2hgknpxg,imgname-crime-1783925658005.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿಕಂದರಾಬಾದ್​: ಬಾಡಿಗೆ ತಾಯ್ತತನದ ಮೂಲಕ ಮಕ್ಕಳನ್ನು ಪಡೆಯುವವರು ಸಂಖ್ಯೆ ದೊಡ್ಡದಾಗುತ್ತಿದೆ. ಇದಕ್ಕೆ ವೀರ್ಯದ ಅವಶ್ಯಕತೆ ಇದೆ. ಅದೇ ಇನ್ನೊಂದೆಡೆ, ಮಕ್ಕಳ ಕಳ್ಳ ಸಾಗಾಣಿಕೆಯಂತೂ ಅವ್ಯಾಹತವಾಗಿ ನಡೆಯುತ್ತಿದ್ದು, ಇದು ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಬಿಜ್​ನೆಸ್​​ ಆಗಿಬಿಟ್ಟಿದೆ. ಇವೆಲ್ಲಕ್ಕೂ ಬೇಕಾಗಿದ್ದು ವೀರ್ಯದಾನಿಗಳು. ವೀರ್ಯ ಸಂಗ್ರಹ ಮಾಡಿ ಮಕ್ಕಳನ್ನು ಹುಟ್ಟಿಸಿ ಅಕ್ರಮ ಕಳ್ಳಸಾಗಾಣಿಕೆ ಮಾಡುವುದು ಜೊತೆಗೆ ಬಾಡಿಗೆ ತಾಯಿಯಾಗಬಯಸುವವರಿಂದ ಕೋಟಿ ಕೋಟಿ ಹಣ ಪಡೆದು ಮಕ್ಕಳನ್ನು ನೀಡುವ ದೊಡ್ಡ ಜಾಲ ಇದಾಗಿದ್ದು, ಆಘಾತಕಾರಿ ಜಾಲವೊಂದನ್ನು ಇದೀಗ ಪೊಲೀಸರು ಬೇಧಿಸಿದ್ದಾರೆ!&lt;/p&gt;&lt;p&gt;ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಶೋಷಣೆ ಮತ್ತು ಅನೈತಿಕ ಪದ್ಧತಿಗಳ ಆಘಾತಕಾರಿ ಪ್ರಕರಣ ಇದಾಗಿದ್ದು, ಜನರು ಆಘಾತಕ್ಕೊಳಗಾಗಿದ್ದಾರೆ. ಟಾಸ್ಕ್ ಫೋರ್ಸ್ ಪೊಲೀಸರು ಸಿಕಂದರಾಬಾದ್&zwnj;ನ ಖಾಸಗಿ ವೀರ್ಯ ಬ್ಯಾಂಕ್ ಮೇಲೆ ದಾಳಿ ನಡೆಸಿ, ಒಂದು ದೊಡ್ಡ ಹಗರಣವನ್ನು ಬಯಲು ಮಾಡಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಭಿಕ್ಷುಕರು ಮತ್ತು ಪಾದಚಾರಿಗಳಿಗೆ ಬಿರಿಯಾನಿ ಆಮಿಷ ಒಡ್ಡಿ ವೀರ್ಯ ದಾನ ಮಾಡಿಸಿಕೊಳ್ಳುತ್ತಿರುವ ಹಗರಣ ಇದಾಗಿದೆ. ಪೊಲೀಸರ ಪ್ರಕಾರ, ಆಸ್ಪತ್ರೆಯ ಹೊರಗೆ ಕುಳಿತಿರುವ ಭಿಕ್ಷುಕರೇ ಈ ಕ್ಷಿನಿಕ್​ ಸಿಬ್ಬಂದಿ ಟಾರ್ಗೆಟ್​. ಅವರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಆಸ್ಪತ್ರೆಗೆ ಕರೆಸಲಾಗುತ್ತದೆ. ಬಿರಿಯಾನಿ ಕೊಡಲಾಗುತ್ತದೆ, ಜೊತೆಗೆ 4,000 ರಿಂದ 6,000 ರೂಪಾಯಿ ಹಣವನ್ನೂ ನೀಡಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಅವರಿಂದ ವೀರ್ಯದ ಸಹಾಯ ಕೇಳಲಾಗುತ್ತದೆ. ವೀರ್ಯ ಮಾದರಿಗಳಿಗಾಗಿ ಸ್ನಾನಗೃಹ ಅಥವಾ ಪ್ರತ್ಯೇಕ ಕೋಣೆಗೆ ಕರೆದೊಯ್ದು, ಅದನ್ನು ಸಂಗ್ರಹಿಸಿ, ನಂತರ ಈ ಮಾದರಿಗಳನ್ನು ಅಹಮದಾಬಾದ್&zwnj;ನಲ್ಲಿರುವ ಫಲವತ್ತತೆ ಕೇಂದ್ರಗಳಿಗೆ ಕಳುಹಿಸುವ ಜಾಲ ಪತ್ತೆಯಾಗಿದೆ.&lt;/p&gt;&lt;h2&gt;&lt;strong&gt;ಸರೊಗಸಿ ಮತ್ತು ಮಕ್ಕಳ ಕಳ್ಳಸಾಗಣೆಯೊಂದಿಗೆ ಸಂಪರ್ಕಗಳು&lt;/strong&gt;&lt;/h2&gt;&lt;p&gt;ಈ ಕ್ಲಿನಿಕ್ ಅಕ್ರಮ ಸರೊಗಸಿ ಮತ್ತು ಮಕ್ಕಳ ಕಳ್ಳಸಾಗಣೆಯ ದೊಡ್ಡ ದಂಧೆಯ ಭಾಗವಾಗಿತ್ತು ಎಂದು ತಿಳಿದುಬಂದಿದೆ. ಬಡವರು ಮತ್ತು ಭಿಕ್ಷುಕರನ್ನು ಶೋಷಿಸುವ ಮೂಲಕ ವೀರ್ಯವನ್ನು ಅಗ್ಗವಾಗಿ ಸಂಗ್ರಹಿಸಲಾಗಿದ್ದು, ಪೊಲೀಸರು 16 ಮಾದರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಮತ್ತು ನಿರ್ವಾಹಕರು ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ. ಎಫ್&zwnj;ಐಆರ್ ದಾಖಲಿಸಿ ತನಿಖೆ ಆರಂಭಿಸಲಾಯಿತು. ಆದಾಗ್ಯೂ, ಎಲ್ಲಾ ಮಾದರಿಗಳು ಭಿಕ್ಷುಕರಿಂದ ಬಂದವು ಎಂದು ದೃಢೀಕರಿಸಲು ಸಾಧ್ಯವಾಗಲಿಲ್ಲ.&lt;/p&gt;&lt;h3&gt;&lt;strong&gt;ಆರೋಗ್ಯ ವಲಯದಲ್ಲಿ ಗುಣಮಟ್ಟ ಕುಸಿಯುತ್ತಿದೆ&lt;/strong&gt;&lt;/h3&gt;&lt;p&gt;ಈ ಪ್ರಕರಣವು ಫಲವತ್ತತೆ ಚಿಕಿತ್ಸಾಲಯಗಳಲ್ಲಿ ನಡೆಯುತ್ತಿರುವ ಅನೈತಿಕ ಪದ್ಧತಿಗಳನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ ವೀರ್ಯ ದಾನ ಕಾನೂನುಬದ್ಧವಾಗಿದೆ, ಆದರೆ ಇದಕ್ಕೆ ಕಟ್ಟುನಿಟ್ಟಾದ ನಿಯಮಗಳು ಮತ್ತು ಒಪ್ಪಿಗೆಯ ಅಗತ್ಯವಿದೆ. ಬಡವರನ್ನು ಆಕರ್ಷಿಸುವ ಮೂಲಕ ಅವರ ಲಾಭ ಪಡೆಯುವುದು ಸಂಪೂರ್ಣವಾಗಿ ಕಾನೂನುಬಾಹಿರ. ದಾಳಿಯ ಸಮಯದಲ್ಲಿ ಕಾರ್ಯಪಡೆ ಹಲವಾರು ದಾಖಲೆಗಳು ಮತ್ತು ಮಾದರಿಗಳನ್ನು ವಶಪಡಿಸಿಕೊಂಡಿದೆ. ಕ್ಲಿನಿಕ್ ಅಹಮದಾಬಾದ್&zwnj;ನಲ್ಲಿರುವ ಫಲವತ್ತತೆ ಕೇಂದ್ರಕ್ಕೆ ಸಂಪರ್ಕ ಹೊಂದಿದೆ ಎಂದು ವರದಿಯಾಗಿದೆ. ಈ ಸುದ್ದಿ ಕೋಲಾಹಲಕ್ಕೆ ಕಾರಣವಾಯಿತು. ಭಾರತೀಯ ಕಾನೂನಿನ ಪ್ರಕಾರ, ವೀರ್ಯ ದಾನ ಸ್ವಯಂಪ್ರೇರಿತವಾಗಿರಬೇಕು. ಆರ್ಥಿಕ ಪ್ರೇರಣೆ ಅಥವಾ ವಂಚನೆಯ ಮೂಲಕ ದೇಣಿಗೆ ನೀಡುವುದು ಕಾನೂನುಬಾಹಿರ. ಸರೊಗಸಿ ನಿಯಂತ್ರಣ ಕಾಯ್ದೆ ಕೂಡ ಕಠಿಣವಾಗಿದೆ. ಅಂತಹ ದಂಧೆಗಳನ್ನು ಹತ್ತಿಕ್ಕುವುದು ಮುಖ್ಯವಾಗಿದೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/hyderabad-sperm-bank-racket-beggars-lured-with-biryani-and-money-for-donation-case-exposed-suc/articleshow-vk48pxk"/>
        </item>
        <item>
            <title><![CDATA[ಚಲಿಸುವ ರೈಲಿನಲ್ಲಿ ಹೋಮ-ಹವನ, ಪೂಜೆ! ಭುಗಿಲೆದ್ದ ವಿವಾದ.. ಅಸಲಿಗೆ ಆಗಿದ್ದೇನು?]]></title>
            <link>https://kannada.asianetnews.com/viral/big-controversy-religious-ceremony-inside-moving-train-goes-viral-gkn/articleshow-2l5xag5</link>
            <guid isPermaLink="true">https://kannada.asianetnews.com/viral/big-controversy-religious-ceremony-inside-moving-train-goes-viral-gkn/articleshow-2l5xag5</guid>
            <pubDate>Mon, 13 Jul 2026 12:27:30 +0530</pubDate>
            <description><![CDATA[ಚಲಿಸುವ ರೈಲಿನಲ್ಲಿ ಅರ್ಚಕರು ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ಚರ್ಚೆಗೆ ಕಾರಣವಾಗಿತ್ತು. ಇದು ಸಾಮಾನ್ಯ ಕೋಚ್ ಅಲ್ಲ, ಬದಲಿಗೆ ಐಆರ್&zwnj;ಸಿಟಿಸಿ ಮೂಲಕ 3 ಲಕ್ಷಕ್ಕೂ ಹೆಚ್ಚು ಹಣ ಪಾವತಿಸಿ ಬುಕ್ ಮಾಡಲಾಗಿದ್ದ ಖಾಸಗಿ 'ಸಲೂನ್ ಕಾರ್' ಎಂದು ಉತ್ತರ ರೈಲ್ವೆ ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxd46vr107nh3x5b4nmrjy8q,imgname-religious-ceremony-inside-moving-train-goes-viral-1783925796609.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಇತ್ತೀಚೆಗಷ್ಟೇ ರೈಲೊಂದರ ಕೋಚ್ ಅನ್ನು ಹನಿಮೂನ್ ಕೋಚ್ ರೀತಿ ಅಲಂಕರಿಸಿದ್ದ ವಿಡಿಯೋ ವೈರಲ್ ಆಗಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಬೆನ್ನಲ್ಲೇ ಈಗ ಚಲಿಸುವ ರೈಲಿನಲ್ಲಿ ಅರ್ಚಕರು ಮತ್ತು ಭಕ್ತರು ಸೇರಿ ಪೂಜೆ ಮಾಡ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರೈಲಿನಲ್ಲಿ ಇಂತಹ ಧಾರ್ಮಿಕ ವಿಧಿವಿಧಾನಗಳಿಗೆ ಅವಕಾಶವಿದೆಯೇ? ಎಂಬ ಪ್ರಶ್ನೆಗಳು ಕೇಳಿಬಂದ ಬೆನ್ನಲ್ಲೇ ಉತ್ತರ ರೈಲ್ವೆ (Northern Railway) ಈ ಬಗ್ಗೆ ಸ್ಪಷ್ಟನೆ ನೀಡಿದೆ.&lt;/p&gt;&lt;h2&gt;&lt;strong&gt;ವೈರಲ್ ವಿಡಿಯೋದಲ್ಲೇನಿದೆ?&lt;/strong&gt;&lt;/h2&gt;&lt;p&gt;ಟ್ವಿಟರ್ (X) ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ರೈಲ್ವೆ ಕೋಚ್&zwnj;ನ ನೆಲದ ಮೇಲೆ ಅರ್ಚಕರೊಬ್ಬರು ಕುಳಿತು ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಅವರ ಸುತ್ತಲೂ ಬಿಳಿ ಬಟ್ಟೆ ಧರಿಸಿದ ಹಲವಾರು ಭಕ್ತರು ಕುಳಿತು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಇದು ಸಾಮಾನ್ಯ ಪ್ರಯಾಣಿಕರ ಕೋಚ್ ಇರಬಹುದು ಎಂದು ಭಾವಿಸಿದ ನೆಟ್ಟಿಗರು ರೈಲ್ವೆ ಇಲಾಖೆಯನ್ನು ಪ್ರಶ್ನಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;&lt;p&gt;After honeymoon coach, now worship rituals in saloon coach of Indian Railways. Indian Railway is becoming circus. pic.twitter.com/5UwZIJAdGb&lt;/p&gt;&lt;p&gt;&mdash; VIZHPUNEET (@vizhpuneet) July 12, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ರೈಲ್ವೆ ಇಲಾಖೆಯ ಸ್ಪಷ್ಟನೆ&lt;/strong&gt;&lt;/h3&gt;&lt;p&gt;ವಿಡಿಯೋ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಉತ್ತರ ರೈಲ್ವೆ, ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದೆ. ಈ ಪೂಜೆ ನಡೆದಿರುವುದು ಸಾಮಾನ್ಯ ಪ್ರಯಾಣಿಕರ ಕೋಚ್&zwnj;ನಲ್ಲಿ ಅಲ್ಲ, ಬದಲಾಗಿ ಖಾಸಗಿಯಾಗಿ ಬುಕ್ ಮಾಡಲಾದ 'ಸಲೂನ್ ಕಾರ್' (Saloon Car) ಒಳಗೆ ಎಂದು ಇಲಾಖೆ ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt; The Saloon Car was booked by IRCTC on 08.07.26.The party made an advance payment of Rs 3,08,580as commercial booking. The Saloon Car was to be attached in Train No. 12926 Paschim Express on one way journey from New Delhi (NDLS) to Mumbai (BDTS) on 10.07.2026.NR issued&hellip;&lt;/p&gt;&lt;p&gt;&mdash; Northern Railway (@RailwayNorthern) July 12, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಬಾಡಿಗೆ ಬರೋಬ್ಬರಿ 3 ಲಕ್ಷ ರೂಪಾಯಿ!&lt;/strong&gt;&lt;/h3&gt;&lt;p&gt;ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈ ಸಲೂನ್ ಕಾರ್ ಅನ್ನು ಐಆರ್&zwnj;ಸಿಟಿಸಿ (IRCTC) ಮೂಲಕ ಖಾಸಗಿ ಪಾರ್ಟಿಯೊಂದು ಜುಲೈ 8 ರಂದು ಬುಕ್ ಮಾಡಿತ್ತು. ಈ ವಿಶೇಷ ಕೋಚ್&zwnj;ಗಾಗಿ ಬರೋಬ್ಬರಿ 3,08,580 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದೆ. ಜುಲೈ 10 ರಂದು ನವದೆಹಲಿಯಿಂದ ಮುಂಬೈಗೆ ತೆರಳುವ 'ಪಶ್ಚಿಮ ಎಕ್ಸ್&zwnj;ಪ್ರೆಸ್' (ರೈಲು ಸಂಖ್ಯೆ 12926) ರೈಲಿಗೆ ಈ ಕೋಚ್ ಅನ್ನು ಜೋಡಿಸಲಾಗಿತ್ತು.&lt;/p&gt;&lt;h3&gt;&lt;strong&gt;ಏನಿದು ಸಲೂನ್ ಕಾರ್?&lt;/strong&gt;&lt;/h3&gt;&lt;p&gt;ಸಲೂನ್ ಕಾರ್ ಎಂಬುದು ರೈಲ್ವೆಯ ಅತ್ಯಂತ ಐಷಾರಾಮಿ ಕೋಚ್ ಆಗಿದ್ದು, ಇದನ್ನು ಸಾಮಾನ್ಯವಾಗಿ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ವಿಐಪಿಗಳು ಬಳಸುತ್ತಾರೆ. ಇದು ಚಲಿಸುವ ಮನೆಯಂತೆಯೇ ಇರುತ್ತದೆ. ಇದರಲ್ಲಿ, ಹವಾನಿಯಂತ್ರಿತ ಮಲಗುವ ಕೋಣೆಗಳು (AC Bedrooms), ಸಣ್ಣ ಅಡುಗೆ ಮನೆ (Kitchenette), ಲಿವಿಂಗ್ ಮತ್ತು ಡೈನಿಂಗ್ ರೂಮ್, ಅಟ್ಯಾಚ್ಡ್ ಶೌಚಾಲಯಗಳು ಮತ್ತು ಎಲ್ಲಾ ಆಧುನಿಕ ಸೌಲಭ್ಯಗಳಿರುತ್ತವೆ, ಖಾಸಗಿ ವ್ಯಕ್ತಿಗಳು ಹಣ ಪಾವತಿಸಿ ಈ ಕೋಚ್ ಅನ್ನು ಬುಕ್ ಮಾಡಬಹುದಾಗಿದ್ದು, ಅಂತಹ ಒಂದು ಖಾಸಗಿ ಬುಕಿಂಗ್&zwnj;ನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆದಿದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಈ ಮೂಲಕ ರೈಲಿನಲ್ಲಿ ಪೂಜೆ ನಡೆದ ವಿವಾದಕ್ಕೆ ತೆರೆ ಬಿದ್ದಂತಾಗಿದೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/big-controversy-religious-ceremony-inside-moving-train-goes-viral-gkn/articleshow-2l5xag5"/>
        </item>
        <item>
            <title><![CDATA[ಪಕ್ಕದಲ್ಲಿ ಕೂರುತ್ತಿದ್ದ ಮಹಿಳೆ ಮಾಡಿದ ಕೆಲಸಕ್ಕೆ ಸಹದ್ಯೋಗಿ ಕರಿಯರ್‌ಗೆ ಕುತ್ತು ತಂದ ಮ್ಯಾನೇಜರ್!]]></title>
            <link>https://kannada.asianetnews.com/jobs/a-manager-threatened-a-woman-saying-i-will-destroy-your-career/articleshow-l3wndc4</link>
            <guid isPermaLink="true">https://kannada.asianetnews.com/jobs/a-manager-threatened-a-woman-saying-i-will-destroy-your-career/articleshow-l3wndc4</guid>
            <pubDate>Mon, 13 Jul 2026 12:24:28 +0530</pubDate>
            <description><![CDATA[&lt;p&gt;Toxic Work Environment: ಸಹದ್ಯೋಗಿಯೊಬ್ಬರು ಪರ್ಸನಲ್&zwnj; ನೋಟ್&zwnj; ಮಾಡಿದ್ದರು. ಹೀಗಾಗಿ ನನ್ನ ಮ್ಯಾನೇಜರ್&zwnj; ನನ್ನ ಕರಿಯರ್&zwnj; ಹಾಳು ಮಾಡ್ತೀನಿ ಎಂದಿದ್ದಾನೆ ಎಂದು ಉದ್ಯೋಗಿಯೋರ್ವರು ಹೇಳಿಕೊಂಡಿದ್ದಾರೆ. ರೆಡ್ಡಿಟ್&zwnj;ನಲ್ಲಿ ಅವರು ಈ ವಿಷಯವನ್ನು ಪೋಸ್ಟ್&zwnj; ಮಾಡಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd3nyvh4pkvya7n151qg35x,imgname-new-project--25--1783925242736.jpg" type="image/jpeg" height="390" width="690"/>
            <content:encoded><![CDATA[&lt;p&gt;Toxic Work Environment: ಕಂಪೆನಿಗಳಲ್ಲಿ ಮ್ಯಾನೇಜರ್&zwnj;, ಸಹದ್ಯೋಗಿಗಳ ಕಿರುಕುಳ, ಗಾಸಿಪ್&zwnj;, ಪಾಲಿಟಿಕ್ಸ್&zwnj;, ತಾರತಮ್ಯ ಎಲ್ಲ ಇರುವುದು. ಇಲ್ಲೋರ್ವ ಉದ್ಯೋಗಿಗೆ ಮ್ಯಾನೇಜರ್&zwnj; ಬೆದರಿಕೆ ಹಾಕಿದ್ದಾರಂತೆ. ಪರ್ಸನಲ್&zwnj; ನೋಟ್&zwnj; ಮಾಡಲು ಸಹಾಯ ಮಾಡಿದ್ದೀಯಾ, ನಿನ್ನ ಕರಿಯರ್&zwnj; ಹಾಳು ಮಾಡ್ತೀನಿ ಎಂದು ಮ್ಯಾನೇಜರ್&zwnj; ಬೆದರಿಕೆ ಹಾಕಿದ್ದಾರೆ.&lt;/p&gt;&lt;p&gt;ಪರ್ಸನಲ್&zwnj; ನೋಟ್&zwnj; ಮಾಡಲು ನಾನು ಯಾವುದೇ ಸಹಾಯ ಮಾಡಿಲ್ಲ. ಆ ಉದ್ಯೋಗಿ ಪಕ್ಕದಲ್ಲಿ ಕೂರುತ್ತಿದ್ದ ಕಾರಣ, ನಮ್ಮನ್ನು ಬಲಿಪಶು ಮಾಡ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಉದ್ಯೋಗಿ ಹೇಳಿದ್ದೇನು?&lt;/h2&gt;&lt;p&gt;&ldquo;ಸಹೋದ್ಯೋಗಿಯ ಪರ್ಸನಲ್&zwnj; ನೋಟ್&zwnj; ಮಾಡಿದ್ದಾರೆ. ಹೀಗಾಗಿ ಕರಿಯರ್&zwnj; ಹಾಳು ಮಾಡ್ತೀನಿ ಎಂದು ಮ್ಯಾನೇಜರ್&zwnj; ಬೆದರಿಕೆ ಹಾಕಿದ್ದಾನೆ, ಏನು ಮಾಡಲಿ? ನಮ್ಮ ಟೀಂನಲ್ಲಿದ್ದ ಮಹಿಳೆಗೆ ಬೇರೆ ಉದ್ಯೋಗಿಗಳ ಜೊತೆ ಸಮಸ್ಯೆ ಇತ್ತು, ನನ್ನ ಬಗ್ಗೆ ಗಾಸಿಪ್ ಮಾಡ್ತಾರೆ, ಕೆಟ್ಟದಾಗಿ ಬಿಹೇವ್&zwnj; ಮಾಡ್ತಾರೆ ಎಂದು ಅವರು ಅಂದುಕೊಂಡಿದ್ದರು&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಆ ಸಹೋದ್ಯೋಗಿ ಒಂದು ಎಕ್ಸೆಲ್ ಶೀಟ್ ರೆಡಿ ಮಾಡಿದ್ದಾರೆ. ಅದರಲ್ಲಿ ಹಲವು ಸಹೋದ್ಯೋಗಿಗಳ ಹೆಸರುಗಳನ್ನು ಬರೆದಿದ್ದಾರೆ. ಆಯಾ ಹೆಸರಿನ ಮುಂದೆ ನನ್ನನ್ನು ಕೆಟ್ಟದಾಗಿ ನೋಡುತ್ತಾರೆ, ನನ್ನ ಬೆನ್ನ ಹಿಂದೆ ಮಾತನಾಡುತ್ತಾರೆ, ಕೆಟ್ಟ ಸನ್ನೆ ಮಾಡ್ತಾರೆ ಎಂದೆಲ್ಲ ಕಾಮೆಂಟ್&zwnj; ಮಾಡಿದ್ದರು. ಆ ಸಹದ್ಯೋಗಿ ಮನೆಗೆ ಹೋದ್ಮೇಲೆ ಮ್ಯಾನೇಜರ್&zwnj; ಆ ಎಕ್ಸೆಲ್&zwnj; ಶೀಟ್&zwnj; ಹುಡುಕಿದ್ದಾರೆ. ಆಮೇಲೆ ನನ್ನ ಬಳಿ ಬಂದು ಕೂಗಾಡಿದ್ದಾರೆ. ನಾನು ಆ ಸಹದ್ಯೋಗಿ ಪಕ್ಕದಲ್ಲಿ ಕೂರ್ತೀನಿ, ಅವರಿಗೆ ಕ್ಲೋಸ್&zwnj; ಎಂಬ ಕಾರಣಕ್ಕೆ ಬೈಯ್ದರು.&lt;/p&gt;&lt;p&gt;&quot;ಈ ಸಮಸ್ಯೆಯಲ್ಲಿ ನನ್ನ ಹೆಸರು ಏನಾದರೂ ಬಂದರೆ, ನನ್ನ ಕರಿಯರ್&zwnj; ಹಾಳುಮಾಡ್ತೀನಿ&rdquo; ಎಂದು ಹೇಳಿದ್ದಾರೆ. ಆ ಎಕ್ಸೆಲ್ ಶೀಟ್ ರೆಡಿ ಆದ ಬಗ್ಗೆ ಕೂಡ ನನಗೆ ಯಾವುದೇ ಮಾಹಿತಿ ಇರಲಿಲ್ಲ, ಅದನ್ನು ರೆಡಿ ಮಾಡೋಕೆ ಸಹಾಯ ಮಾಡಿಲ್ಲ, ಆ ನಡವಳಿಕೆಯನ್ನು ಕೂಡ ನಾನು ಎಂದಿಗೂ ಸಪೋರ್ಟ್&zwnj; ಮಾಡಿಲ್ಲ. ಇದನ್ನು ನಾನು ರೆಕಾರ್ಡ್&zwnj; ಮಾಡಬೇಕಾ? HR ಕಾಂಟ್ಯಾಕ್ಟ್&zwnj; ಮಾಡಬೇಕಾ? ಇದರಿಂದ ದೂರ ಇರಲಾ? ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಸೋಶಿಯಲ್&zwnj; ಮೀಡಿಯಾದಲ್ಲಿ ಏನು ಹೇಳಿದರು?&lt;/h2&gt;&lt;p&gt;ಈ ಘಟನೆ ಬಗ್ಗೆ ಕೇಳಿದವರು ಸೋಶಿಯಲ್&zwnj; ಮೀಡಿಯಾದಲ್ಲಿ, &ldquo;ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಿ. ಇದರಿಂದ ದೂರ ಇರಿ, ಈ ಬಗ್ಗೆ ಚರ್ಚೆ ಮಾಡದಂತೆ ಮ್ಯಾನೇಜರ್&zwnj;ಗೆ ಹೇಳಿ&rdquo; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಮತ್ತೊಬ್ಬರು HR ಕಾಂಟ್ಯಾಕ್ಟ್&zwnj; ಮಾಡಿ, ಇದರಲ್ಲಿ HR ಸೇರಿಸಿಕೊಳ್ಳಿ. ಏನು ನಡೆದಿದೆ, ನಿಮ್ಮ ಮ್ಯಾನೇಜರ್ ನಿಮಗೆ ಹೇಗೆ ಬೆದರಿಕೆ ಹಾಕಿದ್ದಾರೆ ಎಂಬುದನ್ನು ವಿವರಿಸಿ ಎಚ್&zwnj;ಆರ್&zwnj;ಗೆ ಮೇಲ್ ಕಳುಹಿಸಿ. ಉದ್ಯೋಗಿಗಳು ಎಲ್ಲವನ್ನೂ ದಾಖಲಿಸಿಡಬೇಕು, ತಮ್ಮ ಪರವಾಗಿ ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ.&lt;/p&gt;&lt;p&gt;ಮ್ಯಾನೇಜರ್ ಮೊದಲಿಗೆ ಆ ದಾಖಲೆಯನ್ನು ಹೇಗೆ ಪತ್ತೆಹಚ್ಚಿದರು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಎಚ್&zwnj;ಆರ್ ಸಂಪರ್ಕಿಸುವುದು ಉತ್ತಮ, ಆದರೆ ಅಧಿಕೃತ ಸಂವಹನ ಮಾಧ್ಯಮಗಳನ್ನು ಮಾತ್ರ ಬಳಸಿ. ಮ್ಯಾನೇಜರ್ ಜೊತೆ ಚರ್ಚೆ ಮಾಡುವಾಗ HR ಉಪಸ್ಥಿತಿ ಇರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/jobs/a-manager-threatened-a-woman-saying-i-will-destroy-your-career/articleshow-l3wndc4"/>
        </item>
        <item>
            <title><![CDATA[ಮಲ್ಲೇಶ್ವರದ ಮೈಸೂರು ಲ್ಯಾಂಪ್ಸ್ ಜಾಗದಲ್ಲಿ ಕನ್ವೆನ್ಷನ್ ಸೆಂಟರ್ ನಿರ್ಮಾಣಕ್ಕೆ ಭಾರಿ ವಿರೋಧ: ನಿವಾಸಿಗಳಿಂದ ‘ಗ್ರೀನ್ ಸ್ಪೇಸ್’ಗೆ ಆಗ್ರಹ]]></title>
            <link>https://kannada.asianetnews.com/bengaluru-urban/malleswaram-mysore-lamps-convention-centre-oppose-greenpeace-survey-bengaluru-san/articleshow-shbw12f</link>
            <guid isPermaLink="true">https://kannada.asianetnews.com/bengaluru-urban/malleswaram-mysore-lamps-convention-centre-oppose-greenpeace-survey-bengaluru-san/articleshow-shbw12f</guid>
            <pubDate>Mon, 13 Jul 2026 12:20:10 +0530</pubDate>
            <description><![CDATA[&lt;p&gt;ಮಲ್ಲೇಶ್ವರಂನ ಮೈಸೂರು ಲ್ಯಾಂಪ್ಸ್ ಆವರಣದಲ್ಲಿ ಸಮಾವೇಶ ಕೇಂದ್ರ ನಿರ್ಮಿಸುವ ಸರ್ಕಾರದ ಪ್ರಸ್ತಾವನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗ್ರೀನ್&zwnj;ಪೀಸ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಶೇ. 81ರಷ್ಟು ನಿವಾಸಿಗಳು ಈ ಜಾಗವನ್ನು ಸಾರ್ವಜನಿಕ ಹಸಿರು ವಲಯವಾಗಿ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd3r9364wbeehc7wg383b8z,imgname-mysuru-lamps-1783925318758.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13): &lt;/strong&gt;ಮಲ್ಲೇಶ್ವರಂನ ಐತಿಹಾಸಿಕ 'ಮೈಸೂರು ಲ್ಯಾಂಪ್ಸ್' ಆವರಣದಲ್ಲಿ ಸಮಾವೇಶ ಕೇಂದ್ರ (ಕನ್ವೆನ್ಷನ್ ಸೆಂಟರ್) ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಜಾಗವನ್ನು ಕಾಂಕ್ರೀಟ್ ಮಯ ಮಾಡುವ ಬದಲು ಸಾರ್ವಜನಿಕ ಹಸಿರು ವಲಯವನ್ನಾಗಿ (ಪಬ್ಲಿಕ್ ಗ್ರೀನ್ ಸ್ಪೇಸ್) ಉಳಿಸಿಕೊಳ್ಳಬೇಕು ಎಂದು ಜನಾಭಿಪ್ರಾಯ ಮೂಡಿಬಂದಿದೆ. &lsquo;ಗ್ರೀನ್&zwnj;ಪೀಸ್ ಇಂಡಿಯಾ&rsquo; ಸಂಸ್ಥೆಯು ನಡೆಸಿದ ವಿಶೇಷ ಸಮೀಕ್ಷೆಯಲ್ಲಿ ಈ ಆಘಾತಕಾರಿ ಹಾಗೂ ಮಹತ್ವದ ಜನಾಕ್ರೋಶದ ಅಂಶಗಳು ಬಹಿರಂಗಗೊಂಡಿವೆ.&lt;/p&gt;&lt;p&gt;ಗ್ರೀನ್&zwnj;ಪೀಸ್ ಇಂಡಿಯಾ ಸಂಸ್ಥೆಯು ತನ್ನ &lsquo;ಬೆಂಗಳೂರು ರೈಸಿಂಗ್&rsquo; (Bengaluru Rising) ಅಭಿಯಾನದ ಅಡಿಯಲ್ಲಿ ಮಲ್ಲೇಶ್ವರಂನ 245 ನಿವಾಸಿಗಳನ್ನು ಒಳಪಡಿಸಿ ವಿಶೇಷ ಸಮೀಕ್ಷೆಯೊಂದನ್ನು ನಡೆಸಿತ್ತು. ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇಕಡಾ 81 ರಷ್ಟು ನಿವಾಸಿಗಳು, ಮೈಸೂರು ಲ್ಯಾಂಪ್ಸ್ ಜಾಗದಲ್ಲಿ ಸಮಾವೇಶ ಕೇಂದ್ರ ನಿರ್ಮಿಸುವ ಸರ್ಕಾರದ ಆಲೋಚನೆಯನ್ನು &quot;ಮೂರ್ಖತನದ ಪರಮಾವಧಿ&quot; ಎಂದು ಕಟುವಾಗಿ ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಅಮೂಲ್ಯವಾದ ಜಾಗವನ್ನು ಸಾರ್ವಜನಿಕ ಹಸಿರು ಪ್ರದೇಶವಾಗಿ ಸಂರಕ್ಷಿಸಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನಮ್ಮ ಹಸಿರು ನಡಿಗೆ&rsquo; ಮೂಲಕ ಜಾಗೃತಿ&lt;/strong&gt;&lt;/h2&gt;&lt;p&gt;ಗ್ರೀನ್&zwnj;ಪೀಸ್ ಇಂಡಿಯಾ ಮತ್ತು ಸ್ಥಳೀಯ ನಿವಾಸಿಗಳ ಒಕ್ಕೂಟವಾದ &lsquo;ಪ್ರೀತಿ4ಮಲ್ಲೇಶ್ವರಂ&rsquo; (Preeti4Malleswaram) ಜಂಟಿಯಾಗಿ ಭಾನುವಾರ ಹಮ್ಮಿಕೊಂಡಿದ್ದ &lsquo;ನಮ್ಮ ಹಸಿರು ನಡಿಗೆ&rsquo; ಎಂಬ ಸಮುದಾಯದ ನಡಿಗೆ ಕಾರ್ಯಕ್ರಮದಲ್ಲಿ ಈ ಸಮೀಕ್ಷೆಯ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ನೆರೆಹೊರೆಯ ಹಸಿರು ವಲಯಗಳನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಸಾರಲು ಈ ನಡಿಗೆಯನ್ನು ಆಯೋಜಿಸಲಾಗಿತ್ತು. ನೂರಾರು ನಿವಾಸಿಗಳು ಕೈಯಲ್ಲಿ ಬ್ಯಾನರ್&zwnj;ಗಳನ್ನು ಹಿಡಿದು, ಸಮೀಕ್ಷೆಯ ಫಲಿತಾಂಶಗಳನ್ನು ಪ್ರದರ್ಶಿಸುತ್ತಾ ಸರ್ಕಾರದ ಪ್ರಸ್ತಾವನೆಗೆ ತಮ್ಮ ಪ್ರತಿರೋಧ ದಾಖಲಿಸಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ &lsquo;ಕಾಡು ಮಲ್ಲೇಶ್ವರ ಗೆಳೆಯರ ಬಳಗ&rsquo;ದ ಅಧ್ಯಕ್ಷರಾದ ಬಿ.ಕೆ. ಶಿವರಾಮ್ ಅವರು ಮಾತನಾಡಿ, &quot;ಮೈಸೂರು ಲ್ಯಾಂಪ್ಸ್ ಆವರಣವು ಮಲ್ಲೇಶ್ವರಂನ ಸುದೀರ್ಘ ಇತಿಹಾಸ ಮತ್ತು ಅನನ್ಯ ಗುರುತಿನ ಪ್ರಮುಖ ಭಾಗವಾಗಿದೆ. ಇದನ್ನು ಮುಂದಿನ ಪೀಳಿಗೆಗಾಗಿ ನಾವು ಹಾಗೆಯೇ ಉಳಿಸಿಕೊಳ್ಳಬೇಕಾಗಿದೆ&quot; ಎಂದರು. ಇದೇ ವೇಳೆ, ಈ ಐತಿಹಾಸಿಕ ಜಾಗಕ್ಕೆ ಮೈಸೂರು ಮಹಾರಾಜ'ನಾಲ್ವಡಿ ಕೃಷ್ಣರಾಜ ಒಡೆಯರ್' ಅವರ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.&lt;/p&gt;&lt;p&gt;ಬೆಂಗಳೂರು ನಗರದಲ್ಲಿ ಮತ್ತೊಂದು ಕಾಂಕ್ರೀಟ್ ಕಟ್ಟಡವನ್ನು ತಲೆ ಎತ್ತಲು ಬಿಡುವುದಕ್ಕಿಂತ, ಮೈಸೂರು ಲ್ಯಾಂಪ್ಸ್ ಜಾಗವನ್ನು ಸಂರಕ್ಷಿಸುವುದೇ ಸೂಕ್ತ ಎಂಬುದನ್ನು ಈ ಸಮೀಕ್ಷೆ ಸಾಬೀತುಪಡಿಸಿದೆ ಎಂದು ನಿವಾಸಿಗಳು ಒಕ್ಕೊರಲಿನಿಂದ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಾರ್ವಜನಿಕ ಹಸಿರು ವಲಯಗಳನ್ನು ರಕ್ಷಿಸುವುದು ಮತ್ತು ವಿಸ್ತರಿಸುವುದು ಜೈವಿಕ ವೈವಿಧ್ಯತೆಯನ್ನು ಸುಧಾರಿಸಲು, ಹವಾಮಾನ ವೈಪರೀತ್ಯದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಮತ್ತು ನಾಗರಿಕರ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು ಅತ್ಯಗತ್ಯವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರಕ್ಕೆ ನಿವಾಸಿಗಳ ನೇರ ಮನವಿ&lt;/strong&gt;&lt;/h2&gt;&lt;p&gt;ಮೈಸೂರು ಲ್ಯಾಂಪ್ಸ್ ಆವರಣದ ಭವಿಷ್ಯದ ಕುರಿತು ಯಾವುದೇ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುವ ಮುನ್ನ, ರಾಜ್ಯ ಸರ್ಕಾರವು ಸ್ಥಳೀಯ ನಿವಾಸಿಗಳು ಮತ್ತು ನಾಗರಿಕ ಸಂಘಟನೆಗಳೊಂದಿಗೆ ಕಡ್ಡಾಯವಾಗಿ ಸಮಾಲೋಚನೆ ನಡೆಸಬೇಕು ಹಾಗೂ ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಮಲ್ಲೇಶ್ವರಂ ನಿವಾಸಿಗಳು ಸರ್ಕಾರಕ್ಕೆ ಅಧಿಕೃತವಾಗಿ ವಿನಂತಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/malleswaram-mysore-lamps-convention-centre-oppose-greenpeace-survey-bengaluru-san/articleshow-shbw12f"/>
        </item>
        <item>
            <title><![CDATA[ರಾತ್ರಿ 2 ಗಂಟೆಗೆ ವಿಧಾನಸೌಧದ ಬಳಿ ವಿಡಿಯೋ ಮಾಡಿದ ಇಬ್ಬರು ಮಹಿಳೆಯರು.. ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು]]></title>
            <link>https://kannada.asianetnews.com/viral/viral-video-noida-women-praise-bengalurus-safety-during-2-am-walk-outside-vidhana-soudha/articleshow-b99cvfa</link>
            <guid isPermaLink="true">https://kannada.asianetnews.com/viral/viral-video-noida-women-praise-bengalurus-safety-during-2-am-walk-outside-vidhana-soudha/articleshow-b99cvfa</guid>
            <pubDate>Mon, 13 Jul 2026 12:11:55 +0530</pubDate>
            <description><![CDATA[&lt;p&gt;&lt;strong&gt;Viral Bangalore video: &lt;/strong&gt;ನೊಯ್ಡಾದ ಮಹಿಳೆಯೊಬ್ಬರು ರಾತ್ರಿ 2 ಗಂಟೆಯ ಸುಮಾರಿಗೆ ಸ್ನೇಹಿತೆಯೊಂದಿಗೆ ಬೆಂಗಳೂರಿನ ವಿಧಾನಸೌಧದ ಬಳಿ ನಡೆದುಕೊಂಡು ಹೋಗಿದ್ದು, ಆ ನಂತರ ನಗರದ ಕುರಿತು ಶೇರ್ ಮಾಡಿದ ವಿಷಯ ಈಗ ಇಂಟರ್&zwnj;ನೆಟ್&zwnj;ನಲ್ಲಿ ಭಾರೀ ಸದ್ದು ಮಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd381ewf5za1x1s6t9mewmj,imgname-thumbnail---2026-07-13t120324.283-1783924786652.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನೊ&lt;/strong&gt;ಯ್ಡಾದ ಮಹಿಳೆಯೊಬ್ಬರು, ರಾತ್ರಿ 2 ಗಂಟೆಯ ಸುಮಾರಿಗೆ ಸ್ನೇಹಿತೆಯೊಂದಿಗೆ ಬೆಂಗಳೂರಿನ ವಿಧಾನಸೌಧದ ಬಳಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಹಂಚಿಕೊಂಡ ನಂತರ ಆನ್&zwnj;ಲೈನ್&zwnj;ನಲ್ಲಿ ಚರ್ಚೆ ಆರಂಭವಾಗಿದೆ. ವಿಡಿಯೋದಲ್ಲಿ ಅವರು ನಗರದ ಕುರಿತು ಶ್ಲಾಘನೆ ಮಾಡಿದ್ದಲ್ಲದೆ, ನೊಯ್ಡಾ-ಬೆಂಗಳೂರನ್ನು ಹೋಲಿಕೆ ಮಾಡಿದ್ದಾರೆ.&lt;/p&gt;&lt;p&gt;ಇನ್&zwnj;ಸ್ಟಾಗ್ರಾಂ ಪೇಜ್&zwnj;ನಲ್ಲಿ ಶಾಲಿನಿ ಎಂಬುವವರು ತನ್ನ ಸ್ನೇಹಿತೆ ಅನುಜಾ ಅವರೊಂದಿಗೆ ಈ ವಿಡಿಯೋ ಪೋಸ್ಟ್ ಮಾಡಿದ್ದು, ಇಬ್ಬರೂ ಮಹಿಳೆಯರು ತಡ ರಾತ್ರಿಯಲ್ಲಿ ವಿಧಾನಸೌಧದ ಮುಂದೆ ಬಹುತೇಕ ಖಾಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.&lt;/p&gt;&lt;p&gt;&ldquo;ಈಗ ರಾತ್ರಿ 2 ಗಂಟೆಯಾಗಿದೆ. ನಾವು ಬೆಂಗಳೂರಿನ ಬೀದಿಯಲ್ಲಿ ಸುತ್ತಾಡುತ್ತಿದ್ದೇವೆ. ವಾಸ್ತವವಾಗಿ ಇದು ಬೀದಿಯಲ್ಲ, ವಿಧಾನಸೌಧದ ಮುಂದೆ. ಹೌದು. ಇದು ಬೆಂಗಳೂರಿನ ವಿಧಾನಸೌಧ. ನಾವು ಅದರ ಮುಂದೆ ನಿಂತಿದ್ದೇವೆ&quot; ಎಂದು ಮೊದಲು ಶಾಲಿನಿ ಹೇಳುತ್ತಾರೆ.&lt;/p&gt;&lt;p&gt;ಜೊತೆಗೆ ಎರಡು ನಗರಗಳನ್ನೂ ಹೋಲಿಸುತ್ತಾರೆ.. &ldquo;ಇದು ನೊಯ್ಡಾವಾಗಿದ್ದರೆ, ನಮಗೆ ರಸ್ತೆಯಲ್ಲಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅದು ಸುರಕ್ಷಿತವಲ್ಲ. ಆದರೆ ಇದು ಬೆಂಗಳೂರು. ತುಂಬಾ ಸುರಕ್ಷಿತವಾಗಿದೆ. ನಾವು ರಾತ್ರಿ 2 ಗಂಟೆಗೆ ತಿರುಗಾಡುತ್ತಿದ್ದೇವೆ.&lt;/p&gt;&lt;p&gt;ನಂತರ ಅನುಜಾ ಎರಡೂ ನಗರಗಳ ನಡುವಿನ ಅನುಭವವನ್ನು ತಮಾಷೆಯಾಗಿ ಎತ್ತಿ ತೋರಿಸಿದ್ದು, &ldquo;ನೊಯ್ಡಾದಲ್ಲಿ, ನೀವು ಟ್ರಾಫಿಕ್ ತಪ್ಪಿಸಬಹುದು. ಆದರೆ ಬೆಂಗಳೂರಿನಲ್ಲಿ, ನೀವು ಟ್ರಾಫಿಕ್ ತಪ್ಪಿಸಲು ಸಾಧ್ಯವಿಲ್ಲ&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಕೊನೆಗೆ ಟ್ರಾಫಿಕ್ ನಿರ್ವಹಿಸಬಹುದಾದರೂ, ಸುರಕ್ಷತೆ ಮುಖ್ಯ ಎಂದು ಶಾಲಿನಿ ಪ್ರತಿಕ್ರಿಯಿಸಿದ್ದಾರೆ. &ldquo;ಬೆಂಗಳೂರಿನಲ್ಲಿ ಸುರಕ್ಷತೆ ಹೆಚ್ಚು. ಬೆಳಗ್ಗೆ 2:30 ಆಗಿದ್ದು, ನಾವು ವಿಧಾನಸೌಧದ ಮುಂದೆ ನಡೆದುಕೊಂಡು ಹೋಗುತ್ತಿದ್ದೇವೆ. ಬೆಂಗಳೂರು ಎಷ್ಟು ಸುರಕ್ಷಿತ ಎಂದು ಯೋಚಿಸಿ&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ನೊಯ್ಡಾ ಬಿಡಲು ಬಯಸಿದ ಮಹಿಳೆ&lt;/strong&gt;&lt;/h2&gt;&lt;p&gt;ಸಂಭಾಷಣೆಯ ಸಮಯದಲ್ಲಿ, ಶಾಲಿನಿ ಬೆಂಗಳೂರಿಗೆ ಬರುವ ಇಚ್ಛೆಯನ್ನು ಸಹ ವ್ಯಕ್ತಪಡಿಸಿದ್ದಾರೆ. &ldquo;ನಾನು ನೊಯ್ಡಾ ಬಿಟ್ಟು ಬೆಂಗಳೂರಿಗೆ ಬರಲು ಬಯಸುತ್ತೇನೆ. ಇಂತಹ ಸುರಕ್ಷತೆ ಮತ್ತು ಭದ್ರತೆಯನ್ನು ಯಾರು ತಾನೇ ಬಯಸುವುದಿಲ್ಲ&quot;? ಎಂದು ಹೇಳಿದ್ದಾರೆ.&lt;/p&gt;&lt;p&gt;ರಾತ್ರಿ ತಡವಾಗಿದ್ದರೂ ಇಬ್ಬರೂ ಮಹಿಳೆಯರು ಆರಾಮವಾಗಿ ನಡೆಯುತ್ತಿರುವುದನ್ನು ಮತ್ತಷ್ಟು ಹೈಲೈಟ್ ಮಾಡಿದರು. &ldquo;ನಾವು ಸಂಜೆ 6 ಗಂಟೆ ಏನೋ ಎಂಬಂತೆ ಸುಮ್ಮನೆ ತಿರುಗಾಡುತ್ತಿದ್ದೇವೆ. ಅದು ಬೆಂಗಳೂರಿನ ವಿಧಾನಸೌಧದ ಮುಂದೆ ಇಬ್ಬರು ಹುಡುಗಿಯರು ತಿರುಗಾಡುತ್ತಿದ್ದೇವೆ. ಯಾರೂ ಚುಡಾಯಿಸುತ್ತಿಲ್ಲ, ಯಾರೂ ನಮಗೆ ತೊಂದರೆ ಕೊಡುತ್ತಿಲ್ಲ ಮತ್ತು ಯಾರೂ ನಮಗೆ ಕೆಟ್ಟದಾಗಿ ಲುಕ್ ನೀಡುತ್ತಿಲ್ಲ&quot; ಎಂದು ನಿರ್ಜನ ರಸ್ತೆ ಮತ್ತು ಅವುಗಳ ಹಿಂದಿರುವ ಹೆಗ್ಗುರುತನ್ನು ತೋರಿಸುತ್ತಾ ಶಾಲಿನಿ ಹೇಳಿದರು, &ldquo;ಇಡೀ ರಸ್ತೆ ಖಾಲಿಯಾಗಿದೆ. ಇದು ವಿಧಾನಸೌಧ. ಇದರ ಸೌಂದರ್ಯ ತುಂಬಾ ಸುಂದರವಾಗಿ ಕಾಣುತ್ತದೆ. ಅಲ್ಲವೇ? &rdquo; ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಕ್ಲಿಪ್ ಅನ್ನು ಇಲ್ಲಿ ವೀಕ್ಷಿಸಿ&lt;/strong&gt;&lt;/h3&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by LiveWithShalini (@livewithshalini_)&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಪ್ರತಿಕ್ರಿಯೆಗಳು&lt;/strong&gt;&lt;/h3&gt;&lt;p&gt;ವಿಡಿಯೋಗೆ ಹಲವಾರು ಮಿಶ್ರ ಪ್ರತಿಕ್ರಿಯೆ ಬಂದಿದ್ದು, &ldquo;ಹೌದು, ಇದನ್ನು ನಾನು ಒಪ್ಪುತ್ತೇನೆ&rdquo; ಎಂದು ಕೆಲವು ಬಳಕೆದಾರರು ಹೇಳಿದರೆ, ಮತ್ತೆ ಕೆಲವರು &ldquo;ಹೌದು, ಬೆಂಗಳೂರು ಸುರಕ್ಷಿತವಾಗಿದೆ.&rdquo; ಎಂದಿದ್ದಾರೆ. ಹಾಗೆಯೇ &ldquo;ಅದಕ್ಕಾಗಿಯೇ ಬೆಂಗಳೂರು ನನ್ನ ನೆಚ್ಚಿನ ನಗರ,&rdquo;, &ldquo;ಸುರಕ್ಷತೆಯ ವಿಷಯಕ್ಕೆ ಬಂದರೆ ಬೆಂಗಳೂರು ಎದ್ದು ಕಾಣುತ್ತದೆ.&rdquo; ಎಂದೆಲ್ಲಾ ಕೊಂಡಾಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/viral-video-noida-women-praise-bengalurus-safety-during-2-am-walk-outside-vidhana-soudha/articleshow-b99cvfa"/>
        </item>
        <item>
            <title><![CDATA[Actor Arya Case: ತಮಿಳು ನಟ ಆರ್ಯ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ದಾಖಲು!]]></title>
            <link>https://kannada.asianetnews.com/cine-world/a-camera-equipment-rental-company-has-filed-a-complaint-against-actor-arya-on-allegations-of-financial-fraud/articleshow-fs0f5lq</link>
            <guid isPermaLink="true">https://kannada.asianetnews.com/cine-world/a-camera-equipment-rental-company-has-filed-a-complaint-against-actor-arya-on-allegations-of-financial-fraud/articleshow-fs0f5lq</guid>
            <pubDate>Mon, 13 Jul 2026 12:10:20 +0530</pubDate>
            <description><![CDATA[&lt;p&gt;ವಿವಾದಗಳು ನಡೆಯುತ್ತಿದ್ದರೂ, ಆರ್ಯ ತಮ್ಮ ಚಲನಚಿತ್ರದ ಯೋಜನೆ ಹಾಗೂ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸಂತೋಷ್ ಶ್ರೀವತ್ಸನ್ ನಿರ್ದೇಶನದ ಮತ್ತು ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಸಹ-ನಿರ್ಮಿಸಿದ 'ಸೀ ಯು' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಇತ್ತೀಚೆಗೆ ಅನಾವರಣಗೊಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvj2jk0fgw6a362w4wy4859b,imgname-fotojet--72--1781944372239.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಟ ಆರ್ಯ ವಿರುದ್ಧ ಕೇಸ್ ದಾಖಲು&lt;/strong&gt;&lt;/p&gt;&lt;p&gt;ನಟ ಆರ್ಯ (Actor Arya) ವಿರುದ್ಧ ಈಗ ಹೈದರಾಬಾದ್ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಟ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಯಾಮೆರಾ ಉಪಕರಣಗಳನ್ನು ಬಾಡಿಗೆಗೆ ನೀಡುವ ಕಂಪನಿಯೊಂದು ನಟ ಆರ್ಯ ವಿರುದ್ಧ ದೂರು ದಾಖಲು ಮಾಡಿದ್ದು, ಹಣಕಾಸು ವಂಚನೆ ಮಾಡಿದ್ದಾರೆಂದು ಆರೋಪಿಸಿದೆ. 'ಅನಂತನ್ ಕಾಡು' ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದಂತೆ, ನಟ ಆರ್ಯ, ನಿರ್ಮಾಪಕ ವಿನೋದ್ (Vinod) ಮತ್ತು ಇತರರ ಮೇಲೆ ಕೇಸ್ ದಾಖಲಿಸಲಾಗಿದೆ. ಆ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬಳಸಲಾದ ಕ್ಯಾಮೆರಾ ಮತ್ತು ಬೆಳಕಿನ ಉಪಕರಣಗಳಿಗೆ ಬಾಕಿ ಇರುವ ₹ 1.80 ಕೋಟಿಗಿಂತ ಹೆಚ್ಚಿನ ಹಣವನ್ನು ಪಾವತಿಸಲು ವಿಫಲರಾಗಿದ್ದಾರೆ (Rental Dues) ಎಂದು ಕಂಪನಿ ಆರೋಪಿಸಿದೆ.&lt;/p&gt;&lt;h2&gt;ದೂರಿನಲ್ಲಿ ಏನಿದೆ?&lt;/h2&gt;&lt;p&gt;ವರದಿಯ ಪ್ರಕಾರ, 'ಅನಂತನ್ ಕಾಡು' ಚಿತ್ರದ ತಯಾರಕರು ಚಿತ್ರೀಕರಣಕ್ಕಾಗಿ ಹೈದರಾಬಾದ್ ಮೂಲದ ಬಾಡಿಗೆ ಕಂಪನಿಯಿಂದ ಪ್ರೀಮಿಯಂ ಡಿಜಿಟಲ್ ಕ್ಯಾಮೆರಾಗಳು, ಬೆಳಕಿನ ಘಟಕಗಳು ಮತ್ತು ಇತರ ಚಿತ್ರೀಕರಣ ಉಪಕರಣಗಳನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ದೂರುದಾರರು ಹೇಳಿಕೊಂಡಿದ್ದಾರೆ. ಕೊಟ್ಟ ಮಾತಿನಂತೆ ಸಮಯಕ್ಕೆ ಸರಿಯಾಗಿ ಹಣವನ್ನು ನೀಡಲಾಗುವುದು ಎಂದು ನಿರ್ಮಾಣ ತಂಡವು ಭರವಸೆ ನೀಡಿತ್ತು, ಆದರೆ ಚಿತ್ರತಂಡ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲವಾಗಿದೆ ಎಂದು ಕಂಪನಿ ಆರೋಪಿಸಿದೆ. ಚಿತ್ರೀಕರಣ ಮುಗಿದ ನಂತರ, ನಿರ್ಮಾಪಕರು ಒಟ್ಟು 2.12 ಕೋಟಿ ರೂಪಾಯಿಗಳ ಪೈಕಿ 1.80 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಾವತಿಸಿಲ್ಲ ಎಂದು ಕಂಪನಿ ಆರೋಪಿಸಿದೆ.&lt;/p&gt;&lt;p&gt;ಆ ನಿರ್ಮಾಪಕರು ಬಾಕಿ ಪಾವತಿಯನ್ನು ಲಿಖಿತವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಚಿತ್ರದ ಬಿಡುಗಡೆಗೆ ಮುನ್ನ ಬಾಕಿ ಮೊತ್ತವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಬಾಡಿಗೆ ಸಂಸ್ಥೆ ಆರೋಪಿಸಿದೆ. ಪತ್ರಗಳು, ಫೋನ್ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳ ಮೂಲಕ ಹಲವಾರು ಬಾರಿ ನೆನಪಿಸಿದರೂ, ಭರವಸೆ ನೀಡಿದ ಪಾವತಿಯನ್ನು ಅವರು ಪಾವತಿಸದೇ ತಮ್ಮ ವೃತ್ತಿಗೆ ಸಮಸ್ಯೆ ಮಾಡುತ್ತಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ.&lt;/p&gt;&lt;p&gt;ಬಾಕಿ ಇರುವ ಬಾಕಿ ಹಣವನ್ನು ಕೋರಿ ಕಂಪನಿಯ ವ್ಯವಸ್ಥಾಪಕರು ನಿರ್ಮಾಣ ತಂಡವನ್ನು ಸಂಪರ್ಕಿಸಿದಾಗ, ಆರ್ಯ, ನಿರ್ಮಾಪಕ ವಿನೋದ್ ಮತ್ತು ಆಪ್ತ ಸಹಾಯಕರು ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.&lt;/p&gt;&lt;h3&gt;ಪೊಲೀಸರಿಂದ ತನಿಖೆ ಆರಂಭ&lt;/h3&gt;&lt;p&gt;ಈ ದೂರಿನ ಆಧಾರದಲ್ಲಿ ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜುಬಿಲಿ ಹಿಲ್ಸ್ ಪೊಲೀಸರು ವಂಚನೆ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆದಂತೆ ದೂರಿನಲ್ಲಿ ಹೆಸರಿಸಲಾದವರನ್ನು ಪ್ರಶ್ನಿಸುವ ಸಾಧ್ಯತೆಯಿದೆ. ಆರ್ಯ ಮತ್ತು ಅನಂತನ್ ಕಾಡು ಚಿತ್ರದ ನಿರ್ಮಾಪಕರು ಆರೋಪಗಳ ಕುರಿತು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.&lt;/p&gt;&lt;p&gt;ವಿವಾದಗಳು ನಡೆಯುತ್ತಿದ್ದರೂ, ಆರ್ಯ ತಮ್ಮ ಚಲನಚಿತ್ರದ ಯೋಜನೆ ಹಾಗೂ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸಂತೋಷ್ ಶ್ರೀವತ್ಸನ್ ನಿರ್ದೇಶನದ ಮತ್ತು ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಸಹ-ನಿರ್ಮಿಸಿದ 'ಸೀ ಯು' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಇತ್ತೀಚೆಗೆ ಅನಾವರಣಗೊಳಿಸಿದರು. ಈ ಚಿತ್ರದಲ್ಲಿ ಕಿಶನ್ ದಾಸ್ ಮತ್ತು ಸಂಜನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಮುಂಬರುವ 'ಅನಂತನ್ ಕಾಡು' ಚಿತ್ರದಲ್ಲಿ ವೆಟ್ರಿವೇಲ್ ಕುಮಾರನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕಾಗಿದೆ.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/a-camera-equipment-rental-company-has-filed-a-complaint-against-actor-arya-on-allegations-of-financial-fraud/articleshow-fs0f5lq"/>
        </item>
        <item>
            <title><![CDATA[ಬಂಗಾರದ ಬೆಲೆಯಲ್ಲಿಂದು ಮಹಾ ಪತನ; ಬೆಂಗಳೂರಿನಲ್ಲಿಂದು ಗೋಲ್ಡ್ ರೇಟ್ ಎಷ್ಟು?]]></title>
            <link>https://kannada.asianetnews.com/gallery/business/gold-price-falls-for-third-straight-day-check-today-gold-and-silver-rates-in-bengaluru-kvn-ziqilhr</link>
            <guid isPermaLink="true">https://kannada.asianetnews.com/gallery/business/gold-price-falls-for-third-straight-day-check-today-gold-and-silver-rates-in-bengaluru-kvn-ziqilhr</guid>
            <pubDate>Mon, 13 Jul 2026 11:43:38 +0530</pubDate>
            <description><![CDATA[&lt;p&gt;ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯು ಇಳಿಮುಖ ಮಾಡಿದೆ. ಇದು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಜೂನ್ 13ರಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ? ನೋಡೋಣ ಬನ್ನಿ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvf9mgcb14h5bhtq93xwyyyy,imgname-gold-price-in-india-1781851111819.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯು ಇಳಿಮುಖ ಮಾಡಿದೆ. ಇದು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಜೂನ್ 13ರಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ? ನೋಡೋಣ ಬನ್ನಿ.&lt;/p&gt;&lt;p&gt;&lt;/p&gt;&lt;img&gt;&lt;p&gt;ಅಮೆರಿಕ ಮತ್ತು ಇರಾನ್ ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸುವ ಮೂಲಕ ಮತ್ತೆ ಯುದ್ದ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಕಚ್ಛಾ ತೈಲಗಳ ಬೆಲೆಯಲ್ಲಿ 4-5% ಏರಿಕೆ ಕಂಡಿದ್ದು, ಯುಎಸ್&zwnj; ಡಾಲರ್&zwnj; ಕೂಡಾ ಮತ್ತಷ್ಟು ಬಲವಾಗಿದೆ. ಇದರ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ.&lt;/p&gt;&lt;img&gt;&lt;p&gt;ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಸುಮಾರು 2% ರಷ್ಟು ಕುಸಿತ ಕಂಡಿದ್ದು, ಪ್ರತಿ ಔನ್ಸ್&zwnj;ಗೆ $4,060ಕ್ಕಿಂತ ಕಡಿಮೆಯಾಗಿದೆ. ಕಚ್ಛಾ ತೈಲದ ಬೆಲೆ ಏರಿಕೆಯು ಹಣದುಬ್ಬರಕ್ಕೆ ಒಳ್ಳೆಯ ಸೂಚನೆಯಲ್ಲ. ಹೀಗಾಗಿ ಚಿನ್ನ ಮತ್ತು ಬೆಳ್ಳಿಯಂತಹ ಇಳುವರಿ ನೀಡದ ಸ್ವತ್ತುಗಳ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಕಡಿಮೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಇದೀಗ 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿಂದು ಸುಮಾರು ₹1,420 ರುಪಾಯಿ ಕುಸಿತವಾಗಿದೆ. ಈ ಮೂಲಕ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,291 ರುಪಾಯಿಗಳಾಗಿದೆ. ಇದು ಚಿನ್ನದ ಮೇಲೆ ಹೂಡಿಕೆ ಮಾಡುವವರ ಪಾಲಿಗೆ ಗುಡ್ ನ್ಯೂಸ್ ಆಗಿದೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲೂ ಸಹಾ ಭಾರೀ ಇಳಿಕೆ ಕಂಡಿದೆ. 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1300 ರುಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 13,100 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿರುವುದು ಆಭರಣ ಪ್ರಿಯರು ಬಂಗಾರದ ಅಂಗಡಿಯತ್ತ ದಾಪುಗಾಲು ಹಾಕಲಾರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.&lt;/p&gt;&lt;img&gt;&lt;p&gt;ಇನ್ನು ಚಿನ್ನದ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಇಳಿಕೆಯಾಗಿದ್ದರೂ ಬೆಳ್ಳಿ ಬೆಲೆಯು ಕಳೆದ ಮೂರು ದಿನಗಳಿಂದ ಯಾವುದೇ ಏರಿಳಿತ ಕಾಣದೇ ಸ್ಥಿರವಾಗಿದೆ. ಇದೀಗ ಒಂದು ಕೆಜಿ ಬೆಳ್ಳಿ ಬೆಲೆ 2,35,000 ರುಪಾಯಿಗಳಾಗಿದೆ.&lt;/p&gt;]]></content:encoded>
            <category>news</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/gold-price-falls-for-third-straight-day-check-today-gold-and-silver-rates-in-bengaluru-kvn-ziqilhr"/>
        </item>
        <item>
            <title><![CDATA[ಸೊಸೆಯಾಗಿ ಬಂದವಳನ್ನು ಮಗಳಾಗಿ ಬೀಳ್ಕೊಟ್ಟ ಮಾವ: ಮಗನ ಅಗಲಿಕೆಯ ನೋವಲ್ಲೂ ವಿಧವೆ ಸೊಸೆಗೆ ಅದ್ದೂರಿ ಮದುವೆ]]></title>
            <link>https://kannada.asianetnews.com/india-news/inspiring-story-of-father-in-law-remarries-his-widowed-daughter-in-law-in-ujjain/articleshow-8k0mn36</link>
            <guid isPermaLink="true">https://kannada.asianetnews.com/india-news/inspiring-story-of-father-in-law-remarries-his-widowed-daughter-in-law-in-ujjain/articleshow-8k0mn36</guid>
            <pubDate>Mon, 13 Jul 2026 11:36:23 +0530</pubDate>
            <description><![CDATA[&lt;p&gt;Inspiring story: ಉಜ್ಜಯಿನಿಯ ದಿನೇಶ್ ವೈರಾಗಿ ತಮ್ಮ ಮಗನ ಮರಣದ ನಂತರ, ಮಗಳಂತಿದ್ದ ತಮ್ಮ ಸೊಸೆಗೆ ಯೋಗ್ಯ ವರನನ್ನು ಹುಡುಕಿ, ತಾವೇ ಕನ್ಯಾದಾನ ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾದ ಘಟನೆ ನಡೆದಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd1ag57p3n39xc9ad5fv2c6,imgname-ujjain-news-1783922770086.jpg" type="image/jpeg" height="390" width="690"/>
            <content:encoded><![CDATA[&lt;h2&gt;ಸಮಾಜಕ್ಕೆ ಮಾದರಿಯಾದ ಮಾವ&lt;/h2&gt;&lt;p&gt;ಸೊಸೆ ಮೇಲೆ ಹಲ್ಲೆ, ಸೊಸೆಯ ಕಥೆ ಮುಗಿಸಿದ ಗಂಡನ ಮನೆಯವರು ಎನ್ನುವ ಹಲವಾರು ಕ್ರೈಂ ಸುದ್ದಿಗಳ ನಡುವೆ, ಅಥವಾ ಮಗ ಸಣ್ಣ ವಯಸ್ಸಲ್ಲೆ ಸತ್ತರೆ ಸೊಸೆಯನ್ನೇ ದೂಷಿಸುವವರ ಮಧ್ಯೆ ಇಲ್ಲೊಬ್ಬರು ಮಾವ ತಮ್ಮ ಮಗನ ಜೀವನಕ್ಕೆ ಪತ್ನಿಯಾಗಿ ಬಂದು, ತಮ್ಮ ಮನೆಯ ಮಗಳೇ ಆಗಿದ್ದ ಸೊಸೆಗೆ, ಮಗನ ಮರಣದ ಬಳಿಕ, ಯೋಗ್ಯ ವರ ಹುಡುಕಿ ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ. ತಾವೇ ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಕೂಡ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;19 ನೇ ವಯಸ್ಸಿನಲ್ಲಿ ಮದುವೆ, ಐದು ವರ್ಷದಲ್ಲೇ ವಿಧವೆ&lt;/strong&gt;&lt;/h3&gt;&lt;p&gt;2018 ರಲ್ಲಿ , ಭೋಪಾಲ್ ನಿವಾಸಿ ಪ್ರಿಯಾಂಕಾ ಉಜ್ಜಯಿನಿಯ ಜೈತಾಲ್ ಗ್ರಾಮದ ನಿವಾಸಿ ಕಪಿಲ್ ಬೈರಾಗಿಯನ್ನು ವರಿಸಿದ್ದರು. ಆ ಸಮಯದಲ್ಲಿ ಪ್ರಿಯಾಂಕಾಗೆ ಕೇವಲ 19 ವರ್ಷ. ಮದುವೆಯ ನಂತರ ಜೀವನವು ಸಂತೋಷದಿಂದ ಕೂಡಿತ್ತು, ಆದರೆ ಕೆಲವೇ ವರ್ಷಗಳಲ್ಲಿ ಆ ಸಂತೋಷ ಮಣ್ಣು ಪಾಲಾಯಿತು. ಪ್ರಿಯಾಂಕಾ ಪತಿ ಕಪಿಲ್ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗಿದ್ದರು. ಒಂದು ವರ್ಷ ಕಪಿಲ್ ಗೆ ಕ್ಯಾನ್ಸರ್ ಚಿಕಿತ್ಸೆ ನೀಡಲಾಗಿತ್ತು. ಇನ್ನೇನು ಎಲ್ಲವೂ ಸರಿ ಹೋಗುತ್ತದೆ ಎನ್ನುವಾಗಲೇ ಅಂದರೆ 2023ರಲ್ಲಿ ಕಪಿಲ್ ಕ್ಯಾನ್ಸರ್ ಗೆ ಸೋತು ಜೀವ ತೆತ್ತಿದ್ದರು. ಪತಿಯ ಮರಣದ ಬಳಿಕ ಪ್ರಿಯಾಂಕಾ ಪ್ರಪಂಚವು ಛಿದ್ರವಾಯಿತು. 24ನೇ ವಯಸ್ಸಲ್ಲೇ ವಿಧವೆಯಾಗಿದ್ದ ಪ್ರಿಯಾಂಕಾಳ ನಂತರ ಜೀವನದ ಬಗ್ಗೆ ಕುಟುಂಬದ ಮಂದಿ ಚಿಂತಿತರಾಗಿದ್ದರು.&lt;/p&gt;&lt;h3&gt;&lt;strong&gt;ಸೊಸೆಯಾಗಿ ಬಂದವಳನ್ನು ಮಗಳಾಗಿ ಬೀಳ್ಕೊಟ್ಟ ಮಾವ&lt;/strong&gt;&lt;/h3&gt;&lt;p&gt;ತನ್ನ ಮಗನನ್ನು ಕಳೆದುಕೊಂಡ ದುಃಖ ದಿನೇಶ್ ಬೈರಾಗಿಯವರನ್ನು ಕಾಡುತ್ತಿತ್ತು. ಆದರೆ ತಮ್ಮ ಕಣ್ಣೀರನ್ನು ಬದಿಗೊತ್ತಿ ದಿನೇಶ್ ದಿಟ್ಟ ಮತ್ತು ಧೈರ್ಯಶಾಲಿ ನಿರ್ಧಾರ ತೆಗೆದುಕೊಂಡರು. ಅವರು ಸೊಸೆ ಪ್ರಿಯಾಂಕಾಳ ಕೈ ಹಿಡಿದು, &quot;ನಾನು ಅವಳನ್ನು ನನ್ನ ಸೊಸೆಯಾಗಿ ಕರೆತಂದೆ, ಆದರೆ ಈಗ ನಾನು ಅವಳನ್ನು ನನ್ನ ಮಗಳಂತೆ ಘನತೆಯಿಂದ ಕಳುಹಿಸುತ್ತೇನೆ&quot; ಎಂದು ಪ್ರತಿಜ್ಞೆ ಮಾಡಿದನು.&lt;/p&gt;&lt;p&gt;&lt;strong&gt;ಎರಡು ವರ್ಷಗಳಿಂದ ಸೂಕ್ತ ವರನ ಹುಡುಕಾಟ: &lt;/strong&gt;ದಿನೇಶ್ ಬೈರಾಗಿ ಖಾಂಡ್ವಾದಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದರು. ಪ್ರಿಯಾಂಕಾಳ ಜೀವನವನ್ನು ಸರಿಮಾಡಲು, ಸೂಕ್ತ ವರನಿಗಾಗಿ ಹುಡುಕಾಟ ನಡೆಸಿದರು. ಪ್ರಿಯಾಂಕಾ ಸಾಮಾಜಿಕ ನಿಂದನೆಗಳನ್ನು ಎದುರಿಸುತ್ತಾ, ಒಂಟಿತನದಲ್ಲಿ ಬದುಕಬಾರದು ಎಂದು ಎರಡು ವರ್ಷ ಸೂಕ್ತ ವರನಿಗಾಗಿ ಹುಡುಕಿ, ಸರಿಯಾದ ವರನನ್ನು ಹುಡುಕಿದರು. ದಿನೇಶ್ ಖುದ್ದಾಗಿ ಗೋವಿಂದ್ ಅವರ ಮನೆಗೆ ಭೇಟಿ ನೀಡಿ, ಹುಡುಗನ ಕುಟುಂಬ ಮತ್ತು ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ತೃಪ್ತರಾದ ನಂತರ,ಪ್ರಿಯಾಂಕಾಗೆ ಮದುವೆ ಮಾಡಲು ನಿರ್ಧರಿಸಿದರು. ಗೋವಿಂದ್ ಅವರ ಕುಟುಂಬವೂ ಸಹ ಇದಕ್ಕೆ ಒಪ್ಪಿಕೊಂಡರು.&lt;/p&gt;&lt;h3&gt;&lt;strong&gt;ರೆಸಾರ್ಟ್&zwnj;ನಲ್ಲಿ ಅದ್ಧೂರಿ ಮದುವೆ ಮಾಡಿಸಿದ ಮಾವ&lt;/strong&gt;&lt;/h3&gt;&lt;p&gt;ಇತ್ತೀಚೆಗೆ, ಪ್ರಿಯಾಂಕಾ ಮತ್ತು ಗೋವಿಂದ ಅವರ ವಿವಾಹವು ಭೋಪಾಲ್&zwnj;ನ ಐಷಾರಾಮಿ ರೆಸಾರ್ಟ್&zwnj;ನಲ್ಲಿ ಸುಮಾರು 350 ಅತಿಥಿಗಳ ಸಮ್ಮುಖದಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಪ್ರಿಯಾಂಕಾ ಅವರ ಮಾವ ದಿನೇಶ್ ಬೈರಾಗಿ ಅವರೇ ಮದುವೆಯ ಸಂಪೂರ್ಣ ವೆಚ್ಚವನ್ನು ಭರಿಸಿದರು. ಅಷ್ಟೇ ಅಲ್ಲ ತಾವೇ ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಕೂಡ ಮಾಡಿದರು. ಆ ಮೂಲಕ ಮಾವ ಇಡಿ ಸಮಾಜಕ್ಕೆ ಮಾದರಿಯಾದರು.&lt;/p&gt;]]></content:encoded>
            <category>news</category>
            <dc:creator>Pavna Das</dc:creator>
            <atom:link href="https://kannada.asianetnews.com/india-news/inspiring-story-of-father-in-law-remarries-his-widowed-daughter-in-law-in-ujjain/articleshow-8k0mn36"/>
        </item>
        <item>
            <title><![CDATA[Earth: ಬೆಂಕಿಯ ಉಂಡೆಯಾಗಿದ್ದ ಭೂಮಿ ಮೇಲೆ ಇಷ್ಟೊಂದು ನೀರು ಎಲ್ಲಿಂದ ಬಂತು?]]></title>
            <link>https://kannada.asianetnews.com/gallery/science/how-did-earth-get-its-water-rav-gb3s6bq</link>
            <guid isPermaLink="true">https://kannada.asianetnews.com/gallery/science/how-did-earth-get-its-water-rav-gb3s6bq</guid>
            <pubDate>Sun, 12 Jul 2026 11:53:35 +0530</pubDate>
            <description><![CDATA[&lt;p&gt;ಸುಮಾರು 4.6 ಬಿಲಿಯನ್ (460 ಕೋಟಿ) ವರ್ಷಗಳ ಹಿಂದೆ ಭೂಮಿ ರೂಪುಗೊಳ್ಳುವ ಸಮಯದಲ್ಲಿ ಭೂಮಿ ಧಗಧಗ ಉರಿಯುವ ಬೆಂಕಿಯ ಉಂಡೆಯಂತಿತ್ತು. ಆಗಿದ್ದಾಗ ನೀರು ಇರಲು ಹೇಗೆ ಸಾಧ್ಯ? ಆವಿಯಾಗಿರಬೇಕಲ್ಲವೇ? ಭೂಮಿ ರಚನೆ ಬಳಿಕ ನೀರು ಬಂದಿದ್ದು ಎಲ್ಲಿಂದ? ವೈಜ್ಞಾನಿಕ ಸಂಶೋಧನೆ ಹೇಳೋದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxafnyvdctbbm8yd642e5vs0,imgname-----------------------2026-07-12t114848.044-1783837162349.jpg" type="image/jpeg" height="390" width="690"/>
            <content:encoded><![CDATA[&lt;p&gt;ಸುಮಾರು 4.6 ಬಿಲಿಯನ್ (460 ಕೋಟಿ) ವರ್ಷಗಳ ಹಿಂದೆ ಭೂಮಿ ರೂಪುಗೊಳ್ಳುವ ಸಮಯದಲ್ಲಿ ಭೂಮಿ ಧಗಧಗ ಉರಿಯುವ ಬೆಂಕಿಯ ಉಂಡೆಯಂತಿತ್ತು. ಆಗಿದ್ದಾಗ ನೀರು ಇರಲು ಹೇಗೆ ಸಾಧ್ಯ? ಆವಿಯಾಗಿರಬೇಕಲ್ಲವೇ? ಭೂಮಿ ರಚನೆ ಬಳಿಕ ನೀರು ಬಂದಿದ್ದು ಎಲ್ಲಿಂದ? ವೈಜ್ಞಾನಿಕ ಸಂಶೋಧನೆ ಹೇಳೋದೇನು?&lt;/p&gt;&lt;img&gt;&lt;p&gt;ಸುಮಾರು 4.6 ಬಿಲಿಯನ್ (460 ಕೋಟಿ) ವರ್ಷಗಳ ಹಿಂದೆ ಭೂಮಿ ರೂಪುಗೊಳ್ಳುವ ಸಮಯದಲ್ಲಿ ಭೂಮಿ ಧಗಧಗ ಉರಿಯುವ ಬೆಂಕಿಯ ಉಂಡೆಯಂತಿತ್ತು. ಸೌರಮಂಡಲದ ರಚನೆಯ ಕಾಲದಲ್ಲಿ ತೇಲುತ್ತಿದ್ದ ಧೂಳು-ಅನಿಲಗಳು ಪರಸ್ಪರ ಡಿಕ್ಕಿ ಹೊಡೆದು ಗುರುತ್ವಾಕರ್ಷಣೆಯಿಂದ ಒಟ್ಟಾಗಿ ಸೇರಿದಾಗ ಭೂಮಿ ಉತ್ಪತ್ತಿಯಾಯಿತು ಎಂದು ಹೇಳಲಾಗುತ್ತದೆ. ಆದರೆ ಬಹುತೇಕರಿಗೆ ಒಂದು ಪ್ರಶ್ನೆ ಉದ್ಭುವಿಸಿದೆ. ಭೂಮಿ ಬೆಂಕಿಯ ಉಂಡೆ ಆಗಿದ್ದಾಗ ನೀರು ಇರಲು ಹೇಗೆ ಸಾಧ್ಯ? ಆವಿಯಾಗಿರಬೇಕಲ್ಲವೇ? ಭೂಮಿ ರಚನೆ ಬಳಿಕ ನೀರು ಬಂದಿದ್ದು ಎಲ್ಲಿಂದ ಎಂಬ ಪ್ರಶ್ನೆ ಎದ್ದಿದೆ.&lt;/p&gt;&lt;img&gt;&lt;p&gt;ಭೂಮಿಯ ಮೇಲ್ಮೈಯ ಶೇ 70ರಷ್ಟು ಭಾಗ ನೀರಿನಿಂದ ಆವೃತ್ತವಾಗಿದೆ. ಭೂಮಿ ಮೇಲಿನ ಎಲ್ಲ ಜೀವರಾಶಿಗಳಿಗೂ ನೀರು ಅತ್ಯಗತ್ಯ, ನೀರು ಇಲ್ಲದೆ ಯಾವ ಜೀವ ಸಂಕುಲವೂ ಉಳಿಯುವುದಿಲ್ಲ ಎಂಬುದು ನಾವು ಚಿಕ್ಕವಯಸ್ಸಿನಲ್ಲಿ ಶಾಲಾ ಪಠ್ಯದಲ್ಲಿ ಓದಿದ್ದೇವೆ. ಆದರೆ. ಸೌರಮಂಡಲದ ಯಾವ ಗ್ರಹದಲ್ಲೂ ಕಾಣದ ನೀರು, ನಮ್ಮ ಗ್ರಹಕ್ಕೆ ಇಷ್ಟೊಂದು ನೀರು ಹೇಗೆ ಸಿಕ್ಕಿತು ಎಂಬ ಪ್ರಶ್ನೆ ವೈಜ್ಞಾನಿಕ ರಹಸ್ಯಗಳಲ್ಲಿ ಒಂದಾಗಿದೆ.&lt;/p&gt;&lt;p&gt;ಪ್ರಸ್ತುತ ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಭೂಮಿ ಮೇಲಿನ ನೀರು ನಿನ್ನೆ ಮೊನ್ನೆಯದಲ್ಲ, ಅದು ತುಂಬಾ ಪ್ರಾಚೀನವಾದುದು, ಭೂಮಿ ಮೇಲಿನ ನೀರು 4.6 ಶತಕೋಟಿ ವರ್ಷಗಳಿಗೂ ಹಿಂದಿನದು ಎಂದು ಹೇಳಿದೆ. ಅಂದರೆ ಸೂರ್ಯ ಮತ್ತು ಸೌರವ್ಯೂಹದ ರಚನೆಗೂ ಮುಂಚೆಯೇ ನೀರಿನ ದೊಡ್ಡ ಭಾಗವು ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ. ಭೂಮಿಯ ಮೇಲಿನ ಅರ್ಧದಷ್ಟು ನೀರು ಅಂತರತಾರಾ ಮಂಜುಗಡ್ಡೆ(Interstellar ice)ಯಿಂದ ಬಂದಿದೆ ಎಂದು ಖಗೋಳಶಾಸ್ತ್ರಜ್ಞರು ನಂಬುತ್ತಾರೆ&lt;/p&gt;&lt;img&gt;&lt;p&gt;ಇವು ಸೂರ್ಯನ ಹುಟ್ಟಿಗೆ ಮೊದಲು ಬಾಹ್ಯಾಕಾಶದಲ್ಲಿ ತಂಪಾದ ಅಣುವಿನ ರೂಪದ ಮೋಡಗಳಲ್ಲಿ ಅಸ್ತಿತ್ವದಲ್ಲಿದ್ದ ಮಂಜುಗಡ್ಡೆಯ ಸಣ್ಣ ಕಣಗಳಾಗಿದ್ದವು. ಸುಮಾರು 4.6 ಶತಕೋಟಿ ವರ್ಷಗಳ ಹಿಂದೆ ಸೌರವ್ಯೂಹವು ರೂಪುಗೊಳ್ಳಲು ಪ್ರಾರಂಭಿಸಿದಾಗ, ಈ ಹಳೆಯ ಮಂಜುಗಡ್ಡೆಯ ಒಂದು ಭಾಗ ಉಳಿದುಕೊಂಡಿತು. ಅದು ಅಂತಿಮವಾಗಿ ಭೂಮಿಯನ್ನು ರೂಪಿಸಿದ ವಸ್ತುವಿನ ಭಾಗವಾಯಿತು ಎಂದು ಹೇಳುತ್ತಾರೆ.&lt;/p&gt;&lt;img&gt;&lt;p&gt;ಭೂಮಿ ಮೊದಲು ರೂಪುಗೊಂಡಾಗ, ಅದು ಬಿಸಿಯಾದ, ಕಲ್ಲಿನ ಜಗತ್ತಾಗಿತ್ತು. ಕಲ್ಲು ಬಂಡೆಗಳ ಹೊರತು ಅಲ್ಲೇ ಯಾವುದೇ ಜೀವ ಕುರುಹುಗಳಿರಲಿಲ್ಲ. ಏಕೆ ಭೂಮಿ ಮೇಲೆ ಒಂದು ಬೊಗಸೆಯಷ್ಟೂ ನೀರು ಇರಲಿಲ್ಲ. ಮುಂದಿನ ಹಲವಾರು ಮಿಲಿಯನ್ ವರ್ಷಗಳಲ್ಲಿ, ಹೊಸ ಗ್ರಹವು ಲೆಕ್ಕವಿಲ್ಲದಷ್ಟು ಇಂಗಾಲ-ಸಮೃದ್ಧ ಉಲ್ಕೆಗಳು ಮತ್ತು ಕ್ಷುದ್ರಗ್ರಹಗಳಿಂದ ದಾಳಿಗೊಳಗಾದವು, ಅವು ಮಂಜುಗಡ್ಡೆ ಮತ್ತು ಹೈಡ್ರೀಕರಿಸಿದ ಖನಿಜಗಳನ್ನು ಹೊತ್ತು ತಂದವು. ಈ ಪ್ರಾಚೀನ ಬಾಹ್ಯಾಕಾಶ ಶಿಲೆಗಳಲ್ಲಿ ಸಿಲುಕಿರುವ ನೀರಿನ ರಾಸಾಯನಿಕ ಸಂಯೋಜನೆಯು ಇಂದು ಭೂಮಿಯ ಸಾಗರಗಳಲ್ಲಿ ಕಂಡುಬರುವ ನೀರಿಗೆ ಹೋಲುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.&lt;/p&gt;&lt;img&gt;&lt;p&gt;ಗ್ರಹವು ರೂಪುಗೊಂಡಾಗ ಭೂಮಿಯೊಳಗೆ ಸ್ವಲ್ಪ ನೀರು ಸೇರಿತ್ತು ಎಂದು ನಂಬಲಾಗಿದೆ. ಈ ನೀರು ನಿಲುವಂಗಿಯ ಆಳವಾದ ಖನಿಜಗಳಲ್ಲಿ ಸಿಲುಕಿಕೊಂಡಿತ್ತು. ಭೂಮಿಯು ತಣ್ಣಗಾಗುತ್ತಿದ್ದಂತೆ, ತೀವ್ರವಾದ ಜ್ವಾಲಾಮುಖಿ ಚಟುವಟಿಕೆಯು ಈ ಸಿಕ್ಕಿಹಾಕಿಕೊಂಡ ನೀರನ್ನು ಉಗಿಯ ರೂಪದಲ್ಲಿ ಬಿಡುಗಡೆ ಮಾಡಿತು. ಕಾಲಾನಂತರದಲ್ಲಿ, ಬೃಹತ್ ಜ್ವಾಲಾಮುಖಿ ಸ್ಫೋಟಗಳು ನಿರಂತರವಾಗಿ ನೀರಿನ ಆವಿಯನ್ನು ವಾತಾವರಣಕ್ಕೆ ಬಿಡುಗಡೆ ಮಾಡಿ, ಗ್ರಹದ ಬೆಳೆಯುತ್ತಿರುವ ನೀರಿನ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಿದವು.&lt;/p&gt;&lt;img&gt;&lt;p&gt;ಭೂಮಿಯ ಆರಂಭಿಕ ಇತಿಹಾಸದಲ್ಲಿ, ಜ್ವಾಲಾಮುಖಿ ಉಗಿ, ಉಲ್ಕಾಶಿಲೆ ನೀರು ದಟ್ಟವಾದ, ತೇವಾಂಶ-ಸಮೃದ್ಧ ವಾತಾವರಣವನ್ನು ಸೃಷ್ಟಿಸಿತು. ಗ್ರಹವು ನಿಧಾನವಾಗಿ ತಣ್ಣಗಾಗುತ್ತಿದ್ದಂತೆ, ಈ ನೀರಿನ ಆವಿ ಸಾಂದ್ರೀಕೃತಗೊಂಡು ಮೋಡಗಳನ್ನು ರೂಪಿಸಿತು. ಸಾವಿರಾರು, ಬಹುಶಃ ಲಕ್ಷಾಂತರ ವರ್ಷಗಳ ಕಾಲ ಭಾರೀ ಮಳೆ ಮುಂದುವರೆಯಿತು ಎಂದು ವಿಜ್ಞಾನಿಗಳು ನಂಬುತ್ತಾರೆ. ಈ ಮಳೆನೀರು ಭೂಮಿಯ ಮೇಲ್ಮೈಯಲ್ಲಿ ದೊಡ್ಡ ತಗ್ಗುಗಳಲ್ಲಿ ಸಂಗ್ರಹವಾಯಿತು, ಅಂತಿಮವಾಗಿ ಮೊದಲ ಸಾಗರಗಳು, ಸಮುದ್ರಗಳು, ಸರೋವರಗಳು ಮತ್ತು ನದಿಗಳನ್ನು ರೂಪಿಸಿತು ಎಂದು ನಂಬಲಾಗಿದೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/science/how-did-earth-get-its-water-rav-gb3s6bq"/>
        </item>
        <item>
            <title><![CDATA[ನಾಳೆಯಿಂದ ಯಲಹಂಕ-ಅರಸೀಕೆರೆ ನಡುವೆ Memu Train ಸರ್ವೀಸ್‌ ಆರಂಭ, ಈ ಸ್ಟೇಷನ್‌ಗಳಲ್ಲಿ ಇರಲಿದೆ ಸ್ಟಾಪ್‌]]></title>
            <link>https://kannada.asianetnews.com/gallery/bengaluru-urban/yelahanka-arsikere-memu-train-service-starts-july-14-timetable-stoppages-san-op7hr1o</link>
            <guid isPermaLink="true">https://kannada.asianetnews.com/gallery/bengaluru-urban/yelahanka-arsikere-memu-train-service-starts-july-14-timetable-stoppages-san-op7hr1o</guid>
            <pubDate>Mon, 13 Jul 2026 11:32:37 +0530</pubDate>
            <description><![CDATA[&lt;p&gt;ಯಲಹಂಕ ಮತ್ತು ಅರಸೀಕೆರೆ ನಡುವೆ ಹೊಸ ಮೇಮು (MEMU) ರೈಲು ಸೇವೆ ಜುಲೈ 14 ರಿಂದ ಆರಂಭವಾಗಲಿದೆ. ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲು, ಯಶವಂತಪುರ, ತುಮಕೂರು, ಮತ್ತು ತಿಪಟೂರಿನಂತಹ ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd0t4yhbyg2axjmk5vpadr9,imgname-railway-board-approves-yelahanka-arsikere-memu-train-service-starting-july-14--2--1783922234321.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಲಹಂಕ ಮತ್ತು ಅರಸೀಕೆರೆ ನಡುವೆ ಹೊಸ ಮೇಮು (MEMU) ರೈಲು ಸೇವೆ ಜುಲೈ 14 ರಿಂದ ಆರಂಭವಾಗಲಿದೆ. ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲು, ಯಶವಂತಪುರ, ತುಮಕೂರು, ಮತ್ತು ತಿಪಟೂರಿನಂತಹ ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸಲಿದೆ.&lt;/p&gt;&lt;img&gt;&lt;p&gt;ಯಲಹಂಕ ಮತ್ತು ಅರಸೀಕೆರೆ ನಡುವೆ ದೈನಂದಿನ ಪ್ರಯಾಣ ಬೆಳೆಸುವ ಸಾರ್ವಜನಿಕರಿಗೆ ರೈಲ್ವೆ ಮಂಡಳಿಯು ಭರ್ಜರಿ ಕೊಡುಗೆ ನೀಡಿದೆ. ಈ ಎರಡು ಪ್ರಮುಖ ನಿಲ್ದಾಣಗಳ ಮಧ್ಯೆ ಹೊಸ ಮೇಮು (MEMU) ರೈಲು ಸೇವೆಗೆ ಅಧಿಕೃತ ಅನುಮೋದನೆ ದೊರೆತಿದ್ದು, ಜುಲೈ 14 ರಿಂದ (ಮಂಗಳವಾರ) ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.&lt;/p&gt;&lt;img&gt;&lt;p&gt;ರೈಲು ಸಂಖ್ಯೆ 66505 ಯಲಹಂಕ-ಅರಸೀಕೆರೆ ಮೇಮು ರೈಲು ಪ್ರತಿದಿನ ಬೆಳಿಗ್ಗೆ 6:45 ಕ್ಕೆ ಯಲಹಂಕದಿಂದ ಹೊರಟು, 11:00 ಗಂಟೆಗೆ ಅರಸೀಕೆರೆಯನ್ನು ತಲುಪಲಿದೆ. ಅದೇ ರೀತಿ ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 66506 ಅರಸೀಕೆರೆ-ಯಲಹಂಕ ಮೇಮು ರೈಲು ಮಧ್ಯಾಹ್ನ 2:10 ಕ್ಕೆ ಅರಸೀಕೆರೆಯಿಂದ ನಿರ್ಗಮಿಸಿ, ಸಂಜೆ 7:15 ಕ್ಕೆ ಯಲಹಂಕ ನಿಲ್ದಾಣಕ್ಕೆ ಬಂದು ತಲುಪಲಿದೆ.&lt;/p&gt;&lt;img&gt;&lt;p&gt;ಈ ಹೊಸ ರೈಲು ಸೇವೆಯು ಒಟ್ಟು 8 ಮೇಮು (MEMU) ಕೋಚ್&zwnj;ಗಳನ್ನು ಒಳಗೊಂಡಿರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ರೈಲು ವಾರದಲ್ಲಿ ಒಟ್ಟು 6 ದಿನಗಳ ಕಾಲ (ಭಾನುವಾರವನ್ನು ಹೊರತುಪಡಿಸಿ) ನಿಯಮಿತವಾಗಿ ಸಂಚರಿಸಲಿದೆ.&lt;/p&gt;&lt;img&gt;&lt;p&gt;ಹೊಸ ಯೋಜನೆಯ ಅಧಿಕೃತ ಚಾಲನೆಗಾಗಿ ಜುಲೈ 13 ರಂದು (ಸೋಮವಾರ) ವಿಶೇಷ ಉದ್ಘಾಟನಾ ರೈಲನ್ನು ಓಡಿಸಲಾಗುತ್ತಿದೆ. ನೈಋತ್ಯ ರೈಲ್ವೆಯ (SWR) ಪ್ರಕಟಣೆಯ ಪ್ರಕಾರ, ಈ ಸೇವೆಯು ಯಲಹಂಕ, ಯಶವಂತಪುರ, ತುಮಕೂರು, ತಿಪಟೂರು ಮತ್ತು ಅರಸೀಕೆರೆ ನಡುವೆ ಸಂಚರಿಸುವ ಮಧ್ಯಮ ವರ್ಗದ ಪ್ರಯಾಣಿಕರಿಗೆ ಅತ್ಯಂತ ಆರ್ಥಿಕ, ಆರಾಮದಾಯಕ ಮತ್ತು ನಂಬಿಕಸ್ಥ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಿದೆ.&lt;/p&gt;&lt;img&gt;&lt;p&gt;ಈ ರೈಲು ಮಾರ್ಗವು ಬೆಂಗಳೂರಿನ ಹೊರವಲಯ ಹಾಗೂ ಗ್ರಾಮಾಂತರ ಪ್ರದೇಶಗಳ ನಡುವಿನ ಸಂಪರ್ಕವನ್ನು ಗಣನೀಯವಾಗಿ ಸುಧಾರಿಸಲಿದೆ. ಯಲಹಂಕದಿಂದ ಹೊರಡುವ ರೈಲು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಯಶವಂತಪುರ, ತುಮಕೂರು ಹಾಗೂ ತಿಪಟೂರು ನಗರಗಳನ್ನು ಜೋಡಿಸುವ ಮೂಲಕ ಸಾವಿರಾರು ದೈನಂದಿನ ಉದ್ಯೋಗಿಗಳಿಗೆ ನೆರವಾಗಲಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲು ಮಾರ್ಗದ ಮಧ್ಯೆ ಬರುವ ಒಟ್ಟು 26 ಸಣ್ಣ ಮತ್ತು ದೊಡ್ಡ ನಿಲ್ದಾಣಗಳಲ್ಲಿ ನಿಲ್ಲಲಿದೆ. ನಿಲ್ದಾಣಗಳ ವಿವರ ಹೀಗಿದೆ:&lt;/p&gt;&lt;p&gt;ಕೊಡಿಗೆಹಳ್ಳಿ, ಯಶವಂತಪುರ, ಚಿಕ್ಕಬಾಣಾವರ, ಗೊಲ್ಲಹಳ್ಳಿ, ಬೈರನಾಯಕನಹಳ್ಳಿ, ದೊಡ್ಡಬೆಲೆ, ಮುದ್ದಲಿಂಗನಹಳ್ಳಿ, ನಿಡವಂದ, ದಾಬಸ್&zwnj;ಪೇಟೆ, ಹಿರೇಹಳ್ಳಿ, ಕ್ಯಾತ್ಸಂದ್ರ, ತುಮಕೂರು, ಹೆಗ್ಗರೆ ಹಾಲ್ಟ್, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ, ಕರ್ಡಿ, ಬನಶಂಕರಿ ಹಾಲ್ಟ್, ತಿಪಟೂರು, ಶ್ರೀ ಶಾರದಾನಗರ, ಹೊನ್ನವಳ್ಳಿ ರೋಡ್ ಮತ್ತು ಆದಿಹಳ್ಳಿ.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/yelahanka-arsikere-memu-train-service-starts-july-14-timetable-stoppages-san-op7hr1o"/>
        </item>
        <item>
            <title><![CDATA[Zepto Delivery Boy Earning: ಅಬ್ಬಬ್ಬಾ.. ಏನ್ರೀ ಇದು.. 1 ವಾರದ ಆದಾಯ ರಿವೀಲ್‌ ಮಾಡಿದ ಜೆಪ್ಟೊ ಡೆಲಿವರಿ ಬಾಯ್‌]]></title>
            <link>https://kannada.asianetnews.com/jobs/zepto-delivery-partner-1-week-earning-14-thousand-video-viral/articleshow-oqci6r1</link>
            <guid isPermaLink="true">https://kannada.asianetnews.com/jobs/zepto-delivery-partner-1-week-earning-14-thousand-video-viral/articleshow-oqci6r1</guid>
            <pubDate>Sun, 12 Jul 2026 14:38:16 +0530</pubDate>
            <description><![CDATA[&lt;p&gt;Zepto delivery partner salary: ಇಂದು ನಿರುದ್ಯೋಗ ತಾಂಡವವಾಡುತ್ತಿದೆ. ಎಷ್ಟೋ ಜನರಿಗೆ ಕೆಲಸವೇ ಇಲ್ಲ. ಐಟಿ ಉದ್ಯಮ ಕೂಡ ಕುಸಿಯುತ್ತಿದೆ. ಹೀಗಾಗಿ ಡೆಲಿವರಿ ಮಾಡ್ಕೊಂಡು ಅನೇಕರು ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ. ಈಗ ಜೆಪ್ಟೋ (Zepto) ಡೆಲಿವರಿ ಪಾರ್ಟ್ನರ ವಾರದ ಆದಾಯ ಅನೇಕರ ನಿದ್ದೆ ಹಾಳು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxas5zn13wsv823zvc5x92qw,imgname-new-project--20--1783847124641.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಲ್ಲರಿಗೂ ಇಂದು ಗಡಿಬಿಡಿಯ ಜೀವನ. ಈಗ ಅವಶ್ಯಕತೆ ಇರುವ ವಸ್ತು ಈಗಲೇ ಬೇಕು. ಈಗ ಪ್ರತಿಯೊಂದು ರೆಡಿಮೇಡ್&zwnj; ಸಿಗುತ್ತದೆ. ಯಾರಿಗೂ ಮನೆಯಿಂದ ಹೊರಗಡೆ ಹೋಗಿ ವಸ್ತುಗಳನ್ನು ತಂದುಕೊಳ್ಳುವಷ್ಟು ಸಂಯಮ, ಸಮಯ ಇಲ್ಲ. ಹೀಗಾಗಿ ಡೆಲಿವರಿ ಬಾಯ್&zwnj;ಗಳ ಬೇಡಿಕೆ ಜಾಸ್ತಿ ಆಗಿದೆ. ಸಿಟಿಗಳಲ್ಲಿ Zepto ಮುಂತಾದ ಡೆಲಿವರಿ ಕಂಪೆನಿಗಳು ಇವೆ.&lt;/p&gt;&lt;h2&gt;ವಾರಕ್ಕೆ 14 ಸಾವಿರ ರೂಪಾಯಿ ಆದಾಯ&lt;/h2&gt;&lt;p&gt;Zepto Delivary partner ಒಬ್ಬರು ಸೋಶಿಯಲ್&zwnj; ಮೀಡಿಯಾದಲ್ಲಿ ರೀಲ್ಸ್&zwnj; ಅಪ್&zwnj;ಲೋಡ್&zwnj; ಮಾಡುತ್ತಾರೆ. ಈ ವಾರ ಅವರು ₹14,000 ಕ್ಕೂ ಹೆಚ್ಚು ಗಳಿಸಿರುವುದನ್ನು ಅವರು ರೀಲ್ಸ್&zwnj; ಮಾಡಿದ್ದಾರೆ. ಇದು ಈಗ ಭಾರೀ ಚರ್ಚೆ ಆಗಿದೆ. ಭಾರತದ ಡೆಲಿವರಿ ಮಾರುಕಟ್ಟೆಯಲ್ಲಿ ಸ್ವತಂತ್ರ ಉದ್ಯೋಗಗಳು ಹೇಗೆ ಒಳ್ಳೆಯ ಗಳಿಕೆಯ ಅವಕಾಶಗಳನ್ನು ಕೊಡುತ್ತವೆ ಎಂದು ತೋರಿಸುತ್ತದೆ.&lt;/p&gt;&lt;h2&gt;ಅಸಲಿ ಸತ್ಯ ಏನು?&lt;/h2&gt;&lt;p&gt;ಇದನ್ನು ಸಂಪೂರ್ಣವಾಗಿ ನಂಬಲಾಗದು. ಒಂದು ವಾರದ ಆದಾಯ ನಿಜಕ್ಕೂ ಸಂಪೂರ್ಣ ಸತ್ಯವನ್ನು ಹೇಳುವುದಿಲ್ಲ. ಕೆಲಸದ ಅವಧಿ, ಸಿಟಿಯಲ್ಲಿ ಡೆಲಿವರಿ, ಪ್ರೋತ್ಸಾಹಕ ಧನ (incentives), ಪೆಟ್ರೋಲ್ ವೆಚ್ಚ, ವಾಹನ ನಿರ್ವಹಣೆ, ಆರ್ಡರ್&zwnj;ಗಳ ಪ್ರಮಾಣ&zwnj;, ಪ್ಲಾಟ್&zwnj;ಫಾರ್ಮ್&zwnj;ನ ನೀತಿಗಳನ್ನು ಅವಲಂಬಿಸಿ ಬದಲಾಗಬಹುದು. ಇದು ಎಲ್ಲ ಡೆಲಿವರಿ ಬಾಯ್&zwnj;ಗೂ ಒಂದೇ ತರ ಆಗಿರೋದಿಲ್ಲ.&lt;/p&gt;&lt;h2&gt;ದೊಡ್ಡ ಚರ್ಚೆ ಶುರು ಆಗಿದೆ&lt;/h2&gt;&lt;p&gt;ಈ ವಿಡಿಯೋವು ಜೆಪ್ಟೋ, ಡೆಲಿವರಿ ಉದ್ಯೋಗಗಳು, ಗಿಗ್ ಕಾರ್ಮಿಕರ ವೇತನ, ಆದಾಯದ ಪಾರದರ್ಶಕತೆ, ಇಂತಹ ಪ್ಲಾಟ್&zwnj;ಫಾರ್ಮ್ ಕೆಲಸಗಳು ದೀರ್ಘಾವಧಿಯ ಸ್ಥಿರ ಆದಾಯದ ಮೂಲವಾಗಬಲ್ಲವೇ ಎಂಬ ಬಗ್ಗೆ ಒಂದು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/jobs/zepto-delivery-partner-1-week-earning-14-thousand-video-viral/articleshow-oqci6r1"/>
        </item>
        <item>
            <title><![CDATA[7 ನಿಮಿಷಗಳ ಕಾಲ ಸತ್ತೇ ಹೋಗಿದ್ದ ಯಶಸ್ವಿ ಕ್ರೀಡಾ ಟೀಂನ ಕೋಚ್‌; ವೈದ್ಯಕೀಯ ಜಗತ್ತೇ ಘೋಷಿಸಿದ್ದ ಘಟನೆಯಿದು!]]></title>
            <link>https://kannada.asianetnews.com/sports/norway-football-player-stale-solbakken-7-minutes-death-experience/articleshow-0iixzsp</link>
            <guid isPermaLink="true">https://kannada.asianetnews.com/sports/norway-football-player-stale-solbakken-7-minutes-death-experience/articleshow-0iixzsp</guid>
            <pubDate>Sun, 12 Jul 2026 18:31:21 +0530</pubDate>
            <description><![CDATA[&lt;p&gt;Stale Solbakken 7 minutes clinically dead: ಓರ್ವ ವ್ಯಕ್ತಿಯ ಪ್ರಾಣ ಹೋಗಲು ಕೆಲವೇ ನಿಮಿಷ ಅಥವಾ ಸೆಕೆಂಡ್&zwnj; ಸಾಕು ಎನ್ನುತ್ತಾರೆ. ಆದರೆ ಇಲ್ಲೋರ್ವ ಕ್ರೀಡಾ ಸ್ಪರ್ಧಿ ಏಳು ನಿಮಿಷಗಳ ಸಾಲ ಸತ್ತಿದ್ದರಂತೆ. ಹೌದು, ಮೆಡಿಕಲ್&zwnj; ಟೀಂ ಇದನ್ನು ಘೋಷಣೆ ಮಾಡಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxb6h7nfx9g976eefz2w79fv,imgname-new-project--23--1783861124783.jpg" type="image/jpeg" height="390" width="690"/>
            <content:encoded><![CDATA[&lt;p&gt;Stale Solbakken 7 minutes clinically dead: 2026ರ ವಿಶ್ವಕಪ್&zwnj;ನಲ್ಲಿ ನಾರ್ವೆ ಟೀಂ Dark horse ಹಂತದಿಂದ ದಾಟಿ, ಪ್ರಶಸ್ತಿಯನ್ನು ಗೆಲ್ಲುವ ಟೀಂನಲ್ಲಿ ಒಂದಾಗಿತ್ತು. 28 ವರ್ಷಗಳಿಂದ ಈ ಸ್ಟೇಜ್&zwnj;ನಿಂದ ದೂರವಿದ್ದ ಸ್ಕ್ಯಾಂಡಿನೇವಿಯನ್&zwnj; ದೇಶವು ಇಟಲಿ ಒಳಗೊಂಡಿದ್ದ ಕ್ವಾಲಿಫೈಯರ್&zwnj; ಟೀಂನಲ್ಲಿ ತನ್ನ ಎಲ್ಲ 8 ಪಂದ್ಯಗಳನ್ನೂ ಗೆದ್ದು ಬೀಗಿದೆ. ಇಡೀ ಯುರೋಪ್ ಖಂಡದಲ್ಲೇ ಅತಿ ಹೆಚ್ಚು ಅಂದರೆ 37 ಗೋಲುಗಳನ್ನು ಬಾರಿಸಿದೆ.&lt;/p&gt;&lt;h2&gt;ಸಾವಿನ ಅನುಭವ ಆಗಿತ್ತು!&lt;/h2&gt;&lt;p&gt;ಈ ತಂಡದಲ್ಲಿ ಅಪಾಯಕಾರಿ ಸ್ಟ್ರೈಕರ್ ಎನಿಸಿಕೊಂಡಿರುವ ಅರ್ಲಿಂಗ್ ಹಾಲೆಂಡ್ (Erling Haaland) ಇದ್ದಾರೆ. ಕ್ವಾಲಿಫೈಯರ್&zwnj; ಹಂತದಲ್ಲಿ 16 ಗೋಲುಗಳನ್ನು ಬಾರಿಸಿದ್ದಾರೆ. ಈ ತಂಡಕ್ಕೆ St&aring;le Solbakken ಮುಖ್ಯ ತರಬೇತುದಾರರು. 2001ರಲ್ಲಿ 58 ವರ್ಷದ ಸೋಲ್&zwnj;ಬಾಕನ್ ಅವರು ಎಫ್&zwnj;ಸಿ ಕೋಪನ್&zwnj;ಹೇಗನ್ ಕ್ಲಬ್ ಪರ ಆಡುತ್ತಿದ್ದಾಗ 'ಸಾವಿನ ಅನುಭವ' ಪಡೆದಿದ್ದರು.&lt;/p&gt;&lt;h2&gt;7 ನಿಮಿಷಗಳ ಕಾಲ ತೀರಿಕೊಂಡ್ರು!&lt;/h2&gt;&lt;p&gt;ಡ್ಯಾನಿಶ್ ಕ್ಲಬ್ ಪರ ತರಬೇತಿಯಲ್ಲಿದ್ದರು. ಆಗ ದಿಢೀರನೆ ಮೈದಾನದಲ್ಲಿ ಕುಸಿದು ಬಿದ್ದರು. ಅವರಿಗೆ ಆಗ ತೀವ್ರ ಹೃದಯಾಘಾತವಾಗಿತ್ತು. ಅವರ ಹೃದಯ ಬಡಿತ ಸಂಪೂರ್ಣವಾಗಿ ನಿಂತುಹೋಗಿತ್ತು. ಕ್ಲಬ್&zwnj;ನ ವೈದ್ಯ ಫ್ರಾಂಕ್ ಒಡ್ಗಾರ್ಡ್ ಅಲ್ಲೇ ಇದ್ದರು. ಆಮೇಲೆ ಸೋಲ್&zwnj;ಬಾಕನ್ ಅವರ ಮೆದುಳಿಗೆ ಆಮ್ಲಜನಕದ ಸರಬರಾಜು ನಿಲ್ಲದಂತೆ ಸಿಪಿಆರ್ (CPR) ಚಿಕಿತ್ಸೆ ನೀಡಿದ್ದರು. ಆಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋದರು, ಆಮೇಲೆ ಆಂಬುಲೆನ್ಸ್&zwnj;ನಲ್ಲಿ ಶಾಕ್&zwnj; ನೀಡುವ ಮೂಲಕ ಹೃದಯ ಮತ್ತೆ ಬಡಿಯುವಂತೆ ಮಾಡುತ್ತಿದ್ದರು. ಒಟ್ಟಿನಲ್ಲಿ ವೈದ್ಯಕೀಯ ಭಾಷೆಯಲ್ಲಿ ಹೇಳುವಂತೆ ಅವರು 7 ನಿಮಿಷಗಳ ಕಾಲ ತೀರಿಕೊಂಡಿದ್ದರಂತೆ.&lt;/p&gt;&lt;p&gt;ನಂತರ ಸೋಲ್&zwnj;ಬಾಕನ್ ಅವರ ಹೃದಯಕ್ಕೆ ಪೇಸ್&zwnj;ಮೇಕರ್ (Pacemaker) ಅಳವಡಿಸಲಾಯಿತು. ಫುಟ್&zwnj;ಬಾಲ್ ಆಟ ಮುಂದುವರೆಸೋದು ಕಷ್ಟ ಎಂದು ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/sports/norway-football-player-stale-solbakken-7-minutes-death-experience/articleshow-0iixzsp"/>
        </item>
        <item>
            <title><![CDATA[ಪ್ರವೀಣ್‌ ನೆಟ್ಟಾರು ಹ*ತ್ಯೆ ಕೇಸ್‌: ಎನ್‌ಐಎನಿಂದ ಮತ್ತಿಬ್ಬರ ಸೆರೆ]]></title>
            <link>https://kannada.asianetnews.com/state/nia-arrests-two-absconding-accused-praveen-nettaru-murder-case-san/articleshow-ymumcct</link>
            <guid isPermaLink="true">https://kannada.asianetnews.com/state/nia-arrests-two-absconding-accused-praveen-nettaru-murder-case-san/articleshow-ymumcct</guid>
            <pubDate>Mon, 13 Jul 2026 10:57:09 +0530</pubDate>
            <description><![CDATA[&lt;p&gt;ಬಿಜೆಪಿ ಕಾರ್ಯಕರ್ತ ಪ್ರವೀಣ್&zwnj; ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳಾದ ಅಬ್ದುಲ್&zwnj; ನಾಸೀರ್&zwnj; ಮತ್ತು ನೌಶಾದ್&zwnj;ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್&zwnj;ಐಎ) ಬಂಧಿಸಿದೆ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kttcg5j8j8p468vap7qtz6bb,imgname-praveen-nettaru--1781149472328.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು (ಜು.13): &lt;/strong&gt;ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್&zwnj; ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್&zwnj;ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆಯ ಅಬ್ದುಲ್&zwnj; ನಾಸೀರ್&zwnj; ಅಲಿಯಾಸ್&zwnj; ನಾಸೀರ್&zwnj;(41) ಮತ್ತು ಬೆಳ್ತಂಗಡಿಯ ನೌಶಾದ್&zwnj;(32) ಬಂಧಿತರು.&lt;/p&gt;&lt;p&gt;ಆಂಧ್ರದ ಪೊಲೀಸರು ನೀಡಿದ ಖಚಿತ ಮಾಹಿತಿ ಮೇರೆಗೆ ಎನ್&zwnj;ಐಎ ಅಧಿಕಾರಿಗಳು ಕೇರಳದ ಕೊಚ್ಚಿ ಮತ್ತು ತಮಿಳುನಾಡಿನ ಹೊಸೂರಿನಲ್ಲಿ ಕಾರ್ಯಾಚರಣೆ ಕೈಗೊಂಡು ಕ್ರಮವಾಗಿ ಅಬ್ದುಲ್&zwnj; ನಾಸೀರ್&zwnj; ಮತ್ತು ನೌಶಾದ್&zwnj;ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರ ಬಂಧನದ ಮೂಲಕ ಈವರೆಗೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೆ ಎನ್&zwnj;ಐಎ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ&lt;/strong&gt;&lt;/h2&gt;&lt;p&gt;ನಿಷೇಧಿತ ಪಾಪ್ಯೂಲರ್&zwnj; ಫ್ರಂಟ್&zwnj; ಆಫ್&zwnj; ಇಂಡಿಯಾ (ಪಿಎಫ್&zwnj;ಐ) ಕಾರ್ಯಕರ್ತರು 2022ರ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಹಿಂದೂ ಮುಖಂಡರನ್ನು ಗುರಿಯಾಗಿಸಿ ಹತ್ಯೆ ಮಾಡುವ ಭಾಗವಾಗಿ ಪ್ರವೀಣ್ ನೆಟ್ಟಾರು ಅವರ ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು.&lt;/p&gt;&lt;p&gt;ಈ ಸಂಬಂಧ ಎನ್&zwnj;ಐಎ ಯುಎಪಿಎ ಕಾಯ್ದೆಯ ವಿವಿಧ ಸೆಕ್ಷನ್&zwnj;ಗಳ ಅಡಿ 27 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಬಳಿಕ ಕಾರ್ಯಾಚರಣೆ ನಡೆಸಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಒಬ್ಬೊಬ್ಬರಂತೆ ಒಟ್ಟು 22 ಮಂದಿ ಆರೋಪಿಗಳನ್ನು ಬಂಧಿಸಿತ್ತು. ಬಳಿಕ ವಿಸ್ತೃತ ತನಿಖೆ ನಡೆಸಿ ಬೆಂಗಳೂರಿನ ಎನ್&zwnj;ಐಎ ವಿಶೇಷ ನ್ಯಾಯಾಲಯಕ್ಕೆ ಜಾರ್ಜ್&zwnj;ಶೀಟ್&zwnj; ಸಲ್ಲಿಸಿತ್ತು.&lt;/p&gt;&lt;h2&gt;&lt;strong&gt;ತಲಾ 4 ಲಕ್ಷ ರು. ಬಹುಮಾನ&lt;/strong&gt;&lt;/h2&gt;&lt;p&gt;ಪ್ರಕರಣದ ಪ್ರಮುಖ ಆರೋಪಿಗಳಾದ ಅಬ್ದುಲ್ ನಾಸೀರ್&zwnj;, ನೌಶಾದ್&zwnj; ಸೇರಿ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಇವರ ಬಂಧನಕ್ಕೆ ಎನ್&zwnj;ಐಎ ವಿಶೇಷ ನ್ಯಾಯಾಲಯ ಲುಕ್&zwnj; ಔಟ್&zwnj; ನೋಟಿಸ್&zwnj; ಮತ್ತು ಬಂಧನದ ವಾರೆಂಟ್ ಸಹ ಹೊರಡಿಸಿತ್ತು. ಈ ಐವರು ಆರೋಪಿಗಳ ಬಗ್ಗೆ ಮಾಹಿತಿ ನೀಡುವವರೆಗೆ ತಲಾ 4 ಲಕ್ಷ ರು. ಬಹುಮಾನ ಘೋಷಿಸಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಐವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಎನ್&zwnj;ಐಎ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/nia-arrests-two-absconding-accused-praveen-nettaru-murder-case-san/articleshow-ymumcct"/>
        </item>
        <item>
            <title><![CDATA[KPSC Chairman Suspended: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಕೊನೆಗೂ ಅಮಾನತು! ಹಂಗಾಮಿ ಅಧ್ಯಕ್ಷ ಯಾರು?]]></title>
            <link>https://kannada.asianetnews.com/state/kpsc-chairman-shivashankarappa-sahukar-finally-suspended-rav/articleshow-apbhs5z</link>
            <guid isPermaLink="true">https://kannada.asianetnews.com/state/kpsc-chairman-shivashankarappa-sahukar-finally-suspended-rav/articleshow-apbhs5z</guid>
            <pubDate>Mon, 13 Jul 2026 10:30:55 +0530</pubDate>
            <description><![CDATA[&lt;p&gt;ತಮ್ಮ ಪುತ್ರಿಯರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ, ಅಧಿಕಾರ ದುರುಪಯೋಗ, ಪಕ್ಷಪಾತ, ಅಕ್ರಮ ಎಸಗಿದ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್&zwnj;ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು ಕೊನೆಗೂ ಅಮಾನತು ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxcwjbbjwsy0w5egbdevt28d,imgname-----------------------2026-07-13t101232.321-1783917784434.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13): &lt;/strong&gt;ತಮ್ಮ ಪುತ್ರಿಯರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ, ಅಧಿಕಾರ ದುರುಪಯೋಗ, ಪಕ್ಷಪಾತ, ಅಕ್ರಮ ಎಸಗಿದ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್&zwnj;ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು ಕೊನೆಗೂ ಅಮಾನತು ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಸಂವಿಧಾನದ ವಿಧಿ 317(1)ರ ಅಡಿಯಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್&zwnj;ಗೆ ಉಲ್ಲೇಖಿಸುವಂತೆ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ. ಮುಂದಿನ ಆದೇಶದವರೆಗೆ KPSC ಹಿರಿಯ ಸದಸ್ಯರೊಬ್ಬರನ್ನ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.&lt;/p&gt;&lt;h2&gt;ಶಿವಶಂಕರಪ್ಪ ಎಸ್ ಸಾಹುಕಾರ್ ಮೇಲಿದ್ದ ಆರೋಪಗಳೇನು&amp;gt;&lt;/h2&gt;&lt;ul&gt; &lt;li&gt;ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು 'ಕೈಗಾರಿಕಾ ವಿಸ್ತರಣಾ ಅಧಿಕಾರಿ' ಹುದ್ದೆಗಳಿಗೆ ಕಾನೂನುಬಾಹಿರವಾಗಿ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ.&lt;/li&gt; &lt;li&gt;ನೇರ ಅವಲಂಬಿತರೇ KPSC ಆಯ್ಕೆ ಪ್ರಕ್ರಿಯೆಯಲ್ಲಿದ್ದರೂ, ಅಧ್ಯಕ್ಷರು ಈ ಪ್ರಕ್ರಿಯೆಯಿಂದ ದೂರವಿರದೆ&zwnj; ನಿಯಮ ಉಲ್ಲಂಘಿಸಿದ್ದಾರೆ.&lt;/li&gt; &lt;li&gt;ಸುಳ್ಳು ಆದಾಯ ಪ್ರಮಾಣಪತ್ರದ ಆರೋಪ ನಿಯಮಿತ ಮಿತಿಗಿಂತ ಹೆಚ್ಚಿನ ಆದಾಯವಿದ್ದರೂ, ಸಾಹುಕಾರ್ ಅವರ ಪುತ್ರಿಯೊಬ್ಬರು ತಮ್ಮ ಕುಟುಂಬದ ವಾರ್ಷಿಕ ಆದಾಯ ಕೇವಲ 40,000 ರೂ. ಎಂದು ಸುಳ್ಳು ಘೋಷಣೆ ನೀಡಿ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ.&lt;/li&gt; &lt;li&gt;ತಂದೆ KPSC ಅಧ್ಯಕ್ಷರಾಗಿದ್ದಾರೆ ಎಂಬ ಸತ್ಯವನ್ನು ಮರೆಮಾಚಿ, ಸುಳ್ಳು ದಾಖಲೆಗಳ ಮೂಲಕ ಹಿಂದುಳಿದ ವರ್ಗಗಳ (OBC) ಮೀಸಲಾತಿ ಮತ್ತು 'ಕ್ರೀಮಿ ಲೇಯರ್' ವಿನಾಯಿತಿಯನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆ.&lt;/li&gt; &lt;li&gt;30-03-2002ರ ಸರ್ಕಾರಿ ಆದೇಶದ (SWD 225 BCA 2000) ಪ್ರಕಾರ KPSC ಅಧ್ಯಕ್ಷರ ಮಕ್ಕಳು ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿ ಪಡೆಯಲು ಅರ್ಹರಲ್ಲದಿದ್ದರೂ, ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ಮರೆಮಾಚಿ ಲಾಭ ಪಡೆದಿದ್ದಾರೆ.&lt;/li&gt; &lt;li&gt;ಅಧ್ಯಕ್ಷರು ಸಲ್ಲಿಸಿದ ಆದಾಯ, ಆಸ್ತಿ ವಿವರ ಹಾಗೂ ಇತರ ದಾಖಲೆಗಳು ಅವರ &quot;ದುರ್ನಡತೆ&quot;ಯನ್ನು (Misbehaviour) ಸ್ಪಷ್ಟಪಡಿಸುತ್ತವೆ.&lt;/li&gt; &lt;li&gt;ಹೀಗಾಗಿ ಆಯೋಗದ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ರಾಜ್ಯಪಾಲರು ಕಠಿಣ ಕ್ರಮ ಕೈಗೊಂಡಿದ್ದಾರೆ.&lt;/li&gt;&lt;/ul&gt;&lt;h3&gt;ಕೆಪಿಎಸ್&zwnj;ಸಿ ಹಂಗಾಮಿ ಅಧ್ಯಕ್ಷ ಯಾರು?&lt;/h3&gt;&lt;p&gt;ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಎಸ್&zwnj; ಸಾಹುಕಾರ ಅಮಾನತುಗೊಳಿಸಿದ ರಾಜ್ಯಪಾಲರು ಆದೇಶ ಹೊರಡಿಸಿದ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ ಹಿರಿಯ ಸದಸ್ಯ ಬಿ. ಪ್ರಭುದೇವ ಅವರನ್ನು ಅಧ್ಯಕ್ಷರಾಗಿ ನೇಮಿಸಿ ಅಧಿಸೂಚನೆ ಹೊರಡಿಸಿದ್ದಾರೆ.&lt;/p&gt;&lt;p&gt;&hellip;&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/kpsc-chairman-shivashankarappa-sahukar-finally-suspended-rav/articleshow-apbhs5z"/>
        </item>
        <item>
            <title><![CDATA[35 ವರ್ಷದ ಹಿಂದೆ ಪಡೆದ ₹1000ಕ್ಕೆ ಬಡ್ಡಿ ಸೇರಿಸಿ ಈಗ ₹35,000 ಪಾವತಿ]]></title>
            <link>https://kannada.asianetnews.com/india-news/man-returns-loan-after-35-years-ismail-lachanna-saudi-dharmapuri-honesty-san/articleshow-ef036zl</link>
            <guid isPermaLink="true">https://kannada.asianetnews.com/india-news/man-returns-loan-after-35-years-ismail-lachanna-saudi-dharmapuri-honesty-san/articleshow-ef036zl</guid>
            <pubDate>Mon, 13 Jul 2026 10:35:36 +0530</pubDate>
            <description><![CDATA[&lt;p&gt;35 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಸಹೋದ್ಯೋಗಿ ಲಚ್ಚಣ್ಣನಿಂದ 1000 ರೂ. ಸಾಲ ಪಡೆದಿದ್ದ ಇಸ್ಮಾಯಿಲ್, ಸಂಪರ್ಕ ಕಳೆದುಕೊಂಡರೂ ಅವರನ್ನು ಮರೆತಿರಲಿಲ್ಲ. ಇತ್ತೀಚೆಗೆ, ಕೇವಲ ಅಲ್ಪ ಮಾಹಿತಿಯಿಂದ ಲಚ್ಚಣ್ಣನ ವಿಳಾಸ ಪತ್ತೆಹಚ್ಚಿ, ಅವರ ಕುಟುಂಬಕ್ಕೆ ಬಡ್ಡಿ ಸಮೇತ 25,000 ರೂ. ಮರಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxcxq54fn6b3h0vyk5qtkwdb,imgname-ismail-borrowed-120-saudi-riyals-from-lachanna-1783918990478.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ (ಜು.13): &lt;/strong&gt;ಸಾಲವು ಸಂಬಂಧಗಳ ಪಾಲಿಗೆ ಶೂಲ ಆಗುತ್ತಿರುವ ಈ ಕಾಲದಲ್ಲಿ, ವ್ಯಕ್ತಿಯೊಬ್ಬರು 35 ವರ್ಷಗಳ ಹಿಂದೆ ತಮಗೆ ಸಾಲ ನೀಡಿದವರನ್ನು ಹುಡುಕಿಕೊಂಡು ಹೋಗಿ ಅದನ್ನು ಬಡ್ಡಿ ಸಮೇತ ಪಾವತಿಸಿದ್ದಾರೆ. ಈ ಮೂಲಕ ಪ್ರಾಮಾಣಿಕತೆ ಮೆರೆದ ಇಸ್ಮಾಯಿಲ್&zwnj; ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲಸಕ್ಕೆಂದು ಸೌದಿ ಅರೇಬಿಯಾದ ಅಬ್ಕೈಕ್ ಎಂಬಲ್ಲಿ ನೆಲೆಸಿದ್ದ ಇಸ್ಮಾಯಿಲ್&zwnj; ಮತ್ತು ಲಚ್ಚಣ್ಣ 1991ರಲ್ಲಿ ಪರಸ್ಪರ ಪರಿಚಯವಾಗಿದ್ದರು. ಸಹೋದ್ಯೋಗಿಗಳೂ ಆಗಿದ್ದ ಇವರು, ಒಂದೇ ಕೋಣೆಯಲ್ಲಿ ಸುಮಾರು 5 ವರ್ಷ ವಾಸವಿದ್ದರು. ಆಗ ಲಚ್ಚಣ್ಣನಿಂದ 120 ರಿಯಾಲ್&zwnj; (1 ಸಾವಿರ ರು.) ಪಡೆದ ಇಸ್ಮಾಯಿಲ್&zwnj;, ಸಾಧ್ಯವಾದಾಗ ಅದನ್ನು ಮರಳಿಸುವ ಭರವಸೆ ನೀಡಿದ್ದರು.&lt;/p&gt;&lt;p&gt;ಕೆಲ ವರ್ಷಗಳ ಬಳಿಕ ಲಚ್ಚಣ್ಣ ಭಾರತಕ್ಕೆ ಮರಳಿದರು. ಇಬ್ಬರ ಬಳಿಯೂ ಪರಸ್ಪರರ ದೂರವಾಣಿ ಸಂಖ್ಯೆ ಇರಲಿಲ್ಲ. ಕಾಲಕ್ರಮೇಣ ಅವರ ನಡುವೆ ಸಂಪರ್ಕವೇ ಇಲ್ಲವಾಯಿತು. ಆದರೆ ತಾವು ಪಡೆದ ಸಾಲವನ್ನು ಇಸ್ಮಾಯಿಲ್&zwnj; ಮರೆತಿರಲಿಲ್ಲ.&lt;/p&gt;&lt;h2&gt;&lt;strong&gt;ಹುಡುಕಿದ್ದು ಹೇಗೆ?&lt;/strong&gt;&lt;/h2&gt;&lt;p&gt;35 ವರ್ಷದ ಹಿಂದೆ ಪಡೆದಿದ್ದ ಸಾಲವನ್ನು ಮರುಪಾವತಿಸಬೇಕೆಂದು ಹೊರಟ ಇಸ್ಮಾಯಿಲ್&zwnj; ಬಳಿ ಲಚ್ಚಣ್ಣನ ದೂರವಾಣಿ ಸಂಖ್ಯೆಯಾಗಲಿ, ವಿಳಾಸವಾಗಲಿ ಇರಲಿಲ್ಲ. ತಿಳಿದಿದ್ದದ್ದು, ಅವರು ಧರ್ಮಪುರಿಯವರು ಎಂದು. ಆ ಅಲ್ಪ ಮಾಹಿತಿಯನ್ನು ಬಳಸಿಕೊಂಡು ಆನ್&zwnj;ಲೈನ್&zwnj; ಮೂಲಕ ಲಚ್ಚಣ್ಣ ವಾಸವಿರುವ ಸ್ಥಳ ಪತ್ತೆ ಮಾಡಿದ ಇಸ್ಮಾಯಿಲ್&zwnj;, ಸೀದಾ ಅಲ್ಲಿಗೆ ಹೋಗಿ, ಅವರ ಪರಿವಾರಕ್ಕೆ 25 ಸಾವಿರ ರು. ಮರಳಿಸಿದ್ದಾರೆ. ಸದ್ಯ ಲಚ್ಚಣ್ಣ ಕಾರ್ಯನಿಮಿತ್ತ ಗಲ್ಫ್&zwnj;ನಲ್ಲೇ ಇರುವ ಕಾರಣ ವಾಟ್ಸಪ್&zwnj; ವಿಡಿಯೋ ಕರೆ ಮೂಲಕ ಇಬ್ಬರ ನಡುವೆ ಮಾತುಕತೆ ನಡೆಯಿತು.&lt;/p&gt;&lt;p&gt;ಗೆಳೆಯ ಹಣ ಮರಳಿಸಿದ್ದರ ಬಗ್ಗೆ ಮಾತನಾಡಿದ ಲಚ್ಚಣ್ಣ, &lsquo;25 ಸಾವಿರ ರು.ಅನ್ನು ಹೇಗೆ ಲೆಕ್ಕ ಮಾಡಿ ಕೊಟ್ಟನೋ ಗೊತ್ತಿಲ್ಲ. ಬಹುಶಃ ಬಡ್ಡಿ ಸೇರಿಸಿ ಕೊಟ್ಟಿರಬೇಕು. ಆತ ಪ್ರಾಮಾಣಿಕ ವ್ಯಕ್ತಿ. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ&rsquo; ಎಂದು ಸ್ನೇಹಿತನ ಗುಣಗಾನ ಮಾಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/man-returns-loan-after-35-years-ismail-lachanna-saudi-dharmapuri-honesty-san/articleshow-ef036zl"/>
        </item>
        <item>
            <title><![CDATA[ಪೆನ್ಷನ್ ಹಣಕ್ಕಾಗಿ ಹೋದ ವೃದ್ಧನಿಗೆ ಕಾದಿತ್ತು ಶಾಕ್.. ತನ್ನ ಖಾತೆಯಲ್ಲಿ RS 759 ಕೋಟಿ ಕಂಡು ಹೌಹಾರಿದ ಅಜ್ಜ]]></title>
            <link>https://kannada.asianetnews.com/india-news/pensioner-bank-balance-rs-759-crore-in-bihar-muzaffarpur-gkn/articleshow-brmrdr1</link>
            <guid isPermaLink="true">https://kannada.asianetnews.com/india-news/pensioner-bank-balance-rs-759-crore-in-bihar-muzaffarpur-gkn/articleshow-brmrdr1</guid>
            <pubDate>Mon, 13 Jul 2026 10:29:48 +0530</pubDate>
            <description><![CDATA[ಬಿಹಾರದ ಮುಜಾಫರ್&zwnj;ಪುರದಲ್ಲಿ, ವೃದ್ಧಾಪ್ಯ ವೇತನ ಪಡೆಯಲು ಹೋದ 82 ವರ್ಷದ ವೃದ್ಧರೊಬ್ಬರ ಬ್ಯಾಂಕ್ ಖಾತೆಯಲ್ಲಿ 759 ಕೋಟಿ ರೂ. ಪತ್ತೆಯಾಗಿದೆ. ಅವರ ಮಗನ ಖಾತೆಯಲ್ಲೂ ಇದೇ ರೀತಿ ದೊಡ್ಡ ಮೊತ್ತ ಕಂಡುಬಂದಿದ್ದು, ಇದು ಬ್ಯಾಂಕಿನ ತಾಂತ್ರಿಕ ದೋಷದಿಂದ ಆಗಿರಬಹುದೆಂದು ಶಂಕಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcx9v2nypnaty739hrdts0v,imgname-bihar-man-bank-balance-1783918554197.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಜಾಫರ್&zwnj;ಪುರ (ಬಿಹಾರ): &lt;/strong&gt;ಬ್ಯಾಂಕ್ ಖಾತೆಗೆ ಸಾವಿರಾರು ರೂಪಾಯಿ ಜಮಾ ಆದರೇ ಸಂಭ್ರಮಿಸುತ್ತೇವೆ. ಆದರೆ ಬಿಹಾರದ ವೃದ್ಧರೊಬ್ಬರಿಗೆ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಸಂಭ್ರಮಕ್ಕಿಂತ ಹೆಚ್ಚಾಗಿ ಆತಂಕ ಉಂಟಾಗಿದೆ. ವೃದ್ಧಾಪ್ಯ ವೇತನ (Pension) ಪಡೆಯಲು ಹೋದ 82 ವರ್ಷದ ವೃದ್ಧನ ಖಾತೆಯಲ್ಲಿ ಬರೋಬ್ಬರಿ 759 ಕೋಟಿ ರೂಪಾಯಿ ಹಣ ಪತ್ತೆಯಾದ ಘಟನೆ ಬಿಹಾರದ ಮುಜಾಫರ್&zwnj;ಪುರ ಜಿಲ್ಲೆಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಜಿಲ್ಲೆಯ ನಿವಾಸಿ ಕವಿ ಕಾಮೇಶ್ವರ್ ಮಿಶ್ರಾ ಅವರು ಭಾನುವಾರ ತಮ್ಮ ವೃದ್ಧಾಪ್ಯ ವೇತನವನ್ನು ಹಿಂಪಡೆಯಲು ಸ್ಥಳೀಯ ಕಾಮನ್ ಸರ್ವಿಸ್ ಸೆಂಟರ್&zwnj;ಗೆ (CSC) ಹೋಗಿದ್ದರು. ಅವರ ಜೊತೆಗೆ ವಿಕಲಚೇತನ ಮಗ ಕೂಡ ಹೋಗಿದ್ದ. ಮಗನಿಗೆ ಸಿಗುವ ವಿಕಲಚೇತನ ವೇತನದ ಹಣವನ್ನು ಅಲ್ಲಿ ಪಡೆಯಲಾಯಿತು.&lt;/p&gt;&lt;p&gt;ಹಣ ಪಡೆದ ನಂತರ ಕಾಮೇಶ್ವರ್ ಮಿಶ್ರಾ ಅವರು ಕುತೂಹಲಕ್ಕೆ ತಮ್ಮ ಖಾತೆಯ ಬ್ಯಾಲೆನ್ಸ್ ಎಷ್ಟಿದೆ ಎಂದು ಪರೀಕ್ಷಿಸಿದ್ದಾರೆ. ಆಗ ಕಂಪ್ಯೂಟರ್ ಪರದೆಯ ಮೇಲೆ ಮೂಡಿದ ಅಂಕಿಗಳನ್ನು ಕಂಡು ಅವರು ದಂಗಾಗಿದ್ದಾರೆ. ಅವರ ಖಾತೆಯಲ್ಲಿ ಬರೋಬ್ಬರಿ 759,69,51,951 ರೂಪಾಯಿ (ಸುಮಾರು 759 ಕೋಟಿ) ಬ್ಯಾಲೆನ್ಸ್ ತೋರಿಸುತ್ತಿತ್ತು!&lt;/p&gt;&lt;h3&gt;&lt;strong&gt;ಮಗನ ಖಾತೆಯಲ್ಲೂ ಕೋಟಿ ಕೋಟಿ!&lt;/strong&gt;&lt;/h3&gt;&lt;p&gt;ಅಚ್ಚರಿಯ ವಿಷಯವೆಂದರೆ ಕಾಮೇಶ್ವರ್ ಅವರ ಮಗನ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲೂ ಇಷ್ಟೇ ದೊಡ್ಡ ಮೊತ್ತದ ಹಣ ಇರುವುದು ಕಂಡುಬಂದಿದೆ. ಕುಟುಂಬಸ್ಥರ ಪ್ರಕಾರ, ತಂದೆ-ಮಗ ಇಬ್ಬರ ಖಾತೆ ಸೇರಿ ಒಟ್ಟು 1,500 ಕೋಟಿ ರೂಪಾಯಿಗೂ ಅಧಿಕ ಹಣ ಜಮೆಯಾದಂತೆ ತೋರಿಸುತ್ತಿದೆ.&lt;/p&gt;&lt;h3&gt;&lt;strong&gt;ತಾಂತ್ರಿಕ ದೋಷದ ಶಂಕೆ&lt;/strong&gt;&lt;/h3&gt;&lt;p&gt;ಈ ಅನಿರೀಕ್ಷಿತ ಅಂಕಿಗಳನ್ನು ಕಂಡು ವೃದ್ಧ ಕಾಮೇಶ್ವರ್ ಮಿಶ್ರಾ ಮತ್ತು ಸಿಎಸ್&zwnj;ಸಿ ಕೇಂದ್ರದ ಸಿಬ್ಬಂದಿ ಇಬ್ಬರೂ ಬೆಚ್ಚಿಬಿದ್ದಿದ್ದಾರೆ. ಇದು ಬ್ಯಾಂಕ್ ಸರ್ವರ್&zwnj;ನಲ್ಲಿ ಉಂಟಾದ ಯಾವುದಾದರೂ ತಾಂತ್ರಿಕ ದೋಷ (Technical Glitch) ಇರಬಹುದು ಎಂದು ಶಂಕಿಸಲಾಗಿದೆ. ನನ್ನ ಖಾತೆಗೆ ಇಷ್ಟೊಂದು ಹಣ ಹೇಗೆ ಬಂತು ಎಂದು ನನಗೂ ತಿಳಿಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕು. ಯಾವುದೇ ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸಲಿ ಎಂದು ನಾನು ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇನೆ ಎಂದು ಕಾಮೇಶ್ವರ್ ಮಿಶ್ರಾ ಹೇಳಿದ್ದಾರೆ.&lt;/p&gt;&lt;p&gt;ಈ ಸುದ್ದಿ ಬಿಹಾರದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅಧಿಕೃತ ಸ್ಪಷ್ಟನೆಗಾಗಿ ಕಾಯಲಾಗುತ್ತಿದೆ. ಈ ಹಿಂದೆಯೂ ಬಿಹಾರದ ಹಲವು ಕಡೆಗಳಲ್ಲಿ ತಾಂತ್ರಿಕ ದೋಷದಿಂದಾಗಿ ಜನ ಸಾಮಾನ್ಯರ ಖಾತೆಗೆ ಕೋಟಿ ಕೋಟಿ ಹಣ ಜಮೆಯಾದ ಘಟನೆಗಳು ನಡೆದಿದ್ದವು.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/pensioner-bank-balance-rs-759-crore-in-bihar-muzaffarpur-gkn/articleshow-brmrdr1"/>
        </item>
        <item>
            <title><![CDATA[ಇಸ್ರೋದಿಂದ ಗಗನಯಾನದ 3 ಸಿದ್ಧತಾ ಪರೀಕ್ಷೆ ಯಶಸ್ವಿ]]></title>
            <link>https://kannada.asianetnews.com/gallery/science/isro-gaganyaan-crew-module-tests-successful-astronauts-space-mission-san-07k1ln7</link>
            <guid isPermaLink="true">https://kannada.asianetnews.com/gallery/science/isro-gaganyaan-crew-module-tests-successful-astronauts-space-mission-san-07k1ln7</guid>
            <pubDate>Mon, 13 Jul 2026 10:20:54 +0530</pubDate>
            <description><![CDATA[&lt;p&gt;ಇಸ್ರೋ ತನ್ನ ಮಹತ್ವಾಕಾಂಕ್ಷಿ &lsquo;ಗಗನಯಾನ&rsquo; ಯೋಜನೆಗಾಗಿ ಕ್ರೂ ಮಾಡ್ಯೂಲ್&zwnj;ನ ಮೂರು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಪರೀಕ್ಷೆಗಳು ಬಾಹ್ಯಾಕಾಶದಿಂದ ಮರಳುವಾಗ ಮಾಡ್ಯೂಲ್ ನೀರಿನಲ್ಲಿ ತೇಲುವ ಪರೀಕ್ಷೆಯನ್ನು ಒಳಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxbqz5332xr7g5cb9v469dfb,imgname-gaganyaan-1783879406691.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಸ್ರೋ ತನ್ನ ಮಹತ್ವಾಕಾಂಕ್ಷಿ &lsquo;ಗಗನಯಾನ&rsquo; ಯೋಜನೆಗಾಗಿ ಕ್ರೂ ಮಾಡ್ಯೂಲ್&zwnj;ನ ಮೂರು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಪರೀಕ್ಷೆಗಳು ಬಾಹ್ಯಾಕಾಶದಿಂದ ಮರಳುವಾಗ ಮಾಡ್ಯೂಲ್ ನೀರಿನಲ್ಲಿ ತೇಲುವ ಪರೀಕ್ಷೆಯನ್ನು ಒಳಗೊಂಡಿದೆ.&lt;/p&gt;&lt;img&gt;&lt;p&gt;ಭಾರತದ ಮಹತ್ವಾಕಾಂಕ್ಷಿ &lsquo;ಗಗನಯಾನ&rsquo; ಯೋಜನೆಯತ್ತ ಇಸ್ರೋ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಕ್ರೂ (ಸಿಬ್ಬಂದಿ) ಮಾಡ್ಯೂಲ್&zwnj; ವ್ಯವಸ್ಥೆಗೆ ಸಂಬಂಧಿಸಿದ 3 ಪರೀಕ್ಷೆಗಳನ್ನು ಭಾನುವಾರ ಯಶಸ್ವಿಯಾಗಿ ನಡೆಸಿದೆ.&lt;/p&gt;&lt;img&gt;&lt;p&gt;ಬಾಹ್ಯಾಕಾಶದಿಂದ ವಾಪಸ್&zwnj; ಬಂದ ನಂತರ ಸಮುದ್ರಕ್ಕೆ ಜಿಗಿದ ಮಾಡ್ಯೂಲ್&zwnj; ನೀರಿನ ಮೇಲೆ ತೇಲಬೇಕು. ಇದಕ್ಕಾಗಿ ಗ್ಯಾಸ್ ಬಳಸುವ ಹೊಸ ವ್ಯವಸ್ಥೆಯನ್ನು ಮಾಡಿ ಪರೀಕ್ಷಿಸಲಾಯಿತು. ಇದು ಗಗನಯಾತ್ರಿಗಳ ಸುರಕ್ಷತೆಗೆ ತುಂಬಾ ಮುಖ್ಯ. ಈ ಮೊದಲ ಪರೀಕ್ಷೆ ಯಶಸ್ವಿಯಾಯಿತು.&lt;/p&gt;&lt;img&gt;&lt;p&gt;2ನೆಯದಾಗಿ, ಕ್ಯಾಪ್ಸೂಲ್ ಭೂಮಿಗೆ ಮರಳುವಾಗ ಕ್ರೂ ಮಾಡ್ಯೂಲ್&zwnj; ಮತ್ತು ವಿದ್ಯುತ್&zwnj;, ಪ್ರೊಪಲ್ಷನ್&zwnj; ಒದಗಿಸುವ ಭಾಗವನ್ನು ಜೋಡಿಸುವ ಕೇಬಲ್&zwnj;ಗಳು ಬೇರ್ಪಡಬೇಕು. ಹೀಗಾಗಿ ಅದರ ಸಿಎಸ್&zwnj;ಯು-1 ಮತ್ತು ಸಿಎಸ್&zwnj;ಯು-2 ಎಂಬ 2 ಭಾಗಗಳನ್ನು ಟೆಸ್ಟ್ ಮಾಡಲಾಯಿತು. ಎರಡೂ ಸರಿಯಾಗಿ ಬೇರ್ಪಟ್ಟವು.&lt;/p&gt;&lt;img&gt;&lt;p&gt;ಕ್ಯಾಪ್ಸೂಲ್&zwnj;ನ ಮೇಲಿರುವ ಕವರ್ ಪ್ಯಾರಾಚೂಟ್&zwnj;ಗಳನ್ನು ರಕ್ಷಿಸುತ್ತದೆ. ಪ್ಯಾರಾಚೂಟ್ ಬಿಡುವ ಮೊದಲು ಈ ಕವರ್ ಬೇರೆಯಾಗಬೇಕು. ಈ ಸಮಯದಲ್ಲಿ ಕ್ಯಾಪ್ಸೂಲ್&zwnj;ಗೆ ಯಾವುದೇ ಹಾನಿಯಾಗುವುದಿಲ್ಲ ಎಂದು 3ನೇ ಪರೀಕ್ಷೆಯಲ್ಲಿ ದೃಢಪಟ್ಟಿದೆ.&lt;/p&gt;&lt;img&gt;&lt;p&gt;ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯು ಮೂವರು ಭಾರತೀಯ ಗಗನಯಾತ್ರಿಗಳನ್ನು ಭೂಮಿಯಿಂದ 400 ಕಿ.ಮೀ. ಎತ್ತರದ ಕಕ್ಷೆಗೆ ಕಳಿಸಿ, 3 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಪ್ರಯೋಗಗಳನ್ನು ನಡೆಸಿ ಸುರಕ್ಷಿತವಾಗಿ ಭೂಮಿಗೆ ಕರೆತರುವ ಗುರಿ ಹೊಂದಿದೆ. ಇದನ್ನು 2027ರ ವೇಳೆಗೆ ಉಡಾವಣೆ ಮಾಡಲು ಸಿದ್ಧತೆ ನಡೆಸುತ್ತಿದೆ.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/science/isro-gaganyaan-crew-module-tests-successful-astronauts-space-mission-san-07k1ln7"/>
        </item>
        <item>
            <title><![CDATA[ಮನೆಯಲ್ಲಿ ಹಿಂದು, ಹೊರಗೆ ಜಾತ್ಯಾತೀತ; ಧರ್ಮ ಪ್ರದರ್ಶನದ ಅಗತ್ಯ ನನಗಿಲ್ಲ ಎಂದ ಅಣ್ಣಾಮಲೈ]]></title>
            <link>https://kannada.asianetnews.com/gallery/india-news/k-annamalai-secular-outside-home-hindu-we-the-leaders-conference-tamil-nadu-san-6an0uyw</link>
            <guid isPermaLink="true">https://kannada.asianetnews.com/gallery/india-news/k-annamalai-secular-outside-home-hindu-we-the-leaders-conference-tamil-nadu-san-6an0uyw</guid>
            <pubDate>Mon, 13 Jul 2026 10:05:47 +0530</pubDate>
            <description><![CDATA[ಇತ್ತೀಚೆಗೆ ಬಿಜೆಪಿ ತೊರೆದ ಕೆ. ಅಣ್ಣಾಮಲೈ, ನಿಜವಾದ ಹಿಂದೂ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಪೊಲ್ಲಾಚಿಯಲ್ಲಿ ನಡೆದ ಸಮಾವೇಶದಲ್ಲಿ, ಯುವಕರ ಮೂಲಕ ರಾಜಕೀಯ ಬದಲಾವಣೆ ತಂದು ಅಧಿಕಾರಕ್ಕೇರುವ ಪರೋಕ್ಷ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcvx7prxkd51ybny38bb6mf,imgname-k-annamalai-1783917092568.jpg" type="image/jpeg" height="390" width="690"/>
            <content:encoded><![CDATA[ಇತ್ತೀಚೆಗೆ ಬಿಜೆಪಿ ತೊರೆದ ಕೆ. ಅಣ್ಣಾಮಲೈ, ನಿಜವಾದ ಹಿಂದೂ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಪೊಲ್ಲಾಚಿಯಲ್ಲಿ ನಡೆದ ಸಮಾವೇಶದಲ್ಲಿ, ಯುವಕರ ಮೂಲಕ ರಾಜಕೀಯ ಬದಲಾವಣೆ ತಂದು ಅಧಿಕಾರಕ್ಕೇರುವ ಪರೋಕ್ಷ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.&lt;img&gt;&lt;p&gt;ನಿಜವಾದ ಹಿಂದೂ ಆಗಿರುವವನು ಎಲ್ಲರನ್ನೂ ಸಮನಾಗಿ ಕಾಣುತ್ತಾನೆ ಹಾಗೂ ಶ್ರೇಷ್ಠ, ಕನಿಷ್ಠವೆಂಬ ತಾರತಮ್ಯ ಮಾಡುವುದಿಲ್ಲ ಎಂದು ಇತ್ತೀಚೆಗಷ್ಟೇ ಬಿಜೆಪಿ ತೊರೆದಿದ್ದ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾನುವಾರ ಪೊಲ್ಲಾಚಿಯಲ್ಲಿ ನಡೆದ ತಮ್ಮ ಸಂಸ್ಥೆಯ ನಶಾಮುಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, &lsquo;ನಾನು ಹೆಮ್ಮೆಯ ರಾಷ್ಟ್ರವಾದಿ ಮತ್ತು ಭಾರತೀಯ. ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ಜಾತಿ, ಧರ್ಮವನ್ನು ಮುಚ್ಚಿಡುತ್ತೇನೆ. ಯಾವಾಗಲೂ ಅವುಗಳನ್ನು ಪ್ರದರ್ಶಿಸುವ ಅಗತ್ಯ ಇಲ್ಲ&rsquo; ಎಂದು ಅಭಿಪ್ರಾಯಪಟ್ಟರು.&lt;/p&gt;&lt;img&gt;&lt;p&gt;ಇದೇ ವೇಳೆ, ಏಪ್ರಿಲ್&zwnj;ನಲ್ಲಿ ನಡೆದ ವಿಧಾನಸಭೆ ಚುನಾವಣೆಯನ್ನು ಉಲ್ಲೇಖಿಸುತ್ತಾ, &lsquo;39 ವರ್ಷಕ್ಕಿಂತ ಕೆಳಗಿನವರು ಅಧಿಕಾರ ಬದಲಾವಣೆ ಮಾಡಿದರು. 2031ರ ಚುನಾವಣೆಯಲ್ಲೂ ಹೀಗೇ ಆಗಲಿದೆ&rsquo; ಎಂಬ ಅಭಿಲಾಷೆ ವ್ಯಕ್ತಪಡಿಸಿದರು. ಈ ಮೂಲಕ ತಾವೂ ಅಧಿಕಾರಕ್ಕೆ ಬರುವ ಪರೋಕ್ಷ ಆಸೆ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಅಣ್ಣಾಮಲೈ ಸಂಘಟನೆಯನ್ನು ಪ್ರಾರಂಭಿಸಿದ ನಂತರ 'We the Leaders' ಆಯೋಜಿಸುತ್ತಿರುವ ಮೊದಲ ಪ್ರಮುಖ ಸಮ್ಮೇಳನ ಇದಾಗಿದೆ. ಕಳೆದ ತಿಂಗಳು ಅವರು ಭಾರತೀಯ ಜನತಾ ಪಕ್ಷದಿಂದ ಹೊರಬಂದು ತಮ್ಮದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಯೋಜನೆಯನ್ನು ಪ್ರಕಟಿಸಿದರು. ತಮ್ಮ ರಾಜೀನಾಮೆಯ ನಂತರ, ಅಣ್ಣಾಮಲೈ ಹೊಸ ರಾಜಕೀಯ ಚಳುವಳಿಯನ್ನು ಘೋಷಿಸಿದ್ದರು, ಅದು ನಂತರ ಐದು ವರ್ಷಗಳಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷವಾಗಿ ವಿಕಸನಗೊಳ್ಳಲಿದೆ.&lt;/p&gt;&lt;img&gt;&lt;p&gt;ಭಾನುವಾರ ತಮ್ಮ ಭಾಷಣದಲ್ಲಿ ಅಣ್ಣಾಮಲೈ, 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 39 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಡಳಿತ ಬದಲಾವಣೆಯನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು. ಈ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ತನ್ನ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿದೆ.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/k-annamalai-secular-outside-home-hindu-we-the-leaders-conference-tamil-nadu-san-6an0uyw"/>
        </item>
        <item>
            <title><![CDATA[ದಾಖಲೆಗಾಗಿ 6 ವರ್ಷದ ಮೊಮ್ಮಗಳಿಗೆ ಕಾರ್‌ ಕೊಟ್ಟ ಪೊಲೀಸ್‌, ಭಾರೀ ಜನಾಕ್ರೋಶ!]]></title>
            <link>https://kannada.asianetnews.com/india-news/hyderabad-cop-allows-6-year-old-granddaughter-drive-car-guinness-record-fir-san/articleshow-7p10gwo</link>
            <guid isPermaLink="true">https://kannada.asianetnews.com/india-news/hyderabad-cop-allows-6-year-old-granddaughter-drive-car-guinness-record-fir-san/articleshow-7p10gwo</guid>
            <pubDate>Mon, 13 Jul 2026 09:48:14 +0530</pubDate>
            <description><![CDATA[ಗಿನ್ನೆಸ್&zwnj; ದಾಖಲೆ ನಿರ್ಮಿಸುವ ಉದ್ದೇಶದಿಂದ ಹೈದರಾಬಾದ್&zwnj;ನ ಪೊಲೀಸ್ ಉಪ-ನಿರೀಕ್ಷಕರೊಬ್ಬರು ತಮ್ಮ 6 ವರ್ಷದ ಮೊಮ್ಮಗಳಿಗೆ ವಾಹನದಟ್ಟಣೆಯ ರಸ್ತೆಯಲ್ಲಿ ಕಾರು ಚಲಾಯಿಸಲು ಬಿಟ್ಟಿದ್ದಾರೆ. ಈ ಹುಚ್ಚಾಟಕ್ಕಾಗಿ ಅವರ ವಿರುದ್ಧ ಇತರರ ಜೀವಕ್ಕೆ ಅಪಾಯವನ್ನುಂಟುಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcv26stfg308nnbrg9pf10f,imgname-hydrabad-year-old-car-1783916206906.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್&zwnj; (ಜು.13):&lt;/strong&gt; ತಮ್ಮ 6 ವರ್ಷದ ಮೊಮ್ಮಗಳನ್ನು ಚಾಲಕರ ಸೀಟಿನಲ್ಲಿ ಕೂರಿಸಿದ ಪೊಲೀಸ್&zwnj; ಒಬ್ಬರು, ವಾಹನದಟ್ಟಣೆ ಇರುವ ನರಸಿಂಗಿಯಲ್ಲಿ ಗಂಧಮಗೂಡ&ndash;ಬೈರಗಿಗುಡ್ಡ ರಸ್ತೆಯಲ್ಲಿ ಡ್ರೈವ್&zwnj; ಮಾಡಲು ಬಿಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ವಿಚಾರಿಸಿದಾಗ, &lsquo;ವಿಶ್ವದ ಅತಿ ಕಿರಿಯ ಡ್ರೈವರ್&zwnj;&rsquo; ಎಂಬ ಗಿನ್ನೆಸ್&zwnj; ದಾಖಲೆ ನಿರ್ಮಿಸುವ ಉದ್ದೇಶದಿಂದ ಆಕೆಗೆ ತರಬೇತಿ ಕೊಡುತ್ತಿದ್ದುದಾಗಿ ಹೇಳಿದ್ದಾರೆ. ಅವರ ವಿರುದ್ಧ ದೂರು ದಾಖಲಾಗಿದೆ.&lt;/p&gt;&lt;p&gt;ಅಪ್ರಾಪ್ತ ಮೊಮ್ಮಗಳ ಕೈಗೆ ಸ್ಟೇರಿಂಗ್ ಕೊಟ್ಟು, ಆಕೆಯ ಪಕ್ಕದಲ್ಲಿ ಹೈದರಾಬಾದ್&zwnj;ನ ಉಪ-ನಿರೀಕ್ಷಕ ಪೂಜಾರಿ ತಿರುಪತಿ ಕುಳಿತು ಸಾಗುತ್ತಿದ್ದ ವಿಡಿಯೋ ಬೆಳಕಿಗೆ ಬಂದಿತ್ತು. ಅವರ ಈ ಹುಚ್ಚಾಟದ ಪರಿಣಾಮ ಕಾರಿನ ಹಿಂದಿದ್ದ ವಾಹನಗಳು ಸಾಗಲಾರದೆ ಒದ್ದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, &lsquo;ಇದು ಸ್ವಯಂಚಾಲಿತ ಕಾರು. ನನ್ನ ನಿಯಂತ್ರಣದಲ್ಲೇ ಇದೆ. ದಾಖಲೆ ನಿರ್ಮಿಸಲು ಆಕೆಗೆ ತರಬೇತಿ ನೀಡುತ್ತಿರುವೆ&rsquo; ಎಂದು ತಿರುಪತಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್&zwnj; 125(ಇತರರ ಜೀವಕ್ಕೆ ಅಪಾಯವನ್ನುಂಟುಮಾಡುವುದು)ಸೇರಿದಂತೆ ಹಲವು ಸೆಕ್ಷನ್&zwnj;ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;p&gt;ತಿರುಪತಿ ಅವರ ಹೆಸರಲ್ಲಿ ನೋಂದಣಿಯಾಗಿರುವ ಈ ಕಾರು 6 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು, ಇದರ ಮೇಲೆ 3,800 ರು. ದಂಡ ಬಾಕಿ ಇದೆ ಎನ್ನಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/hyderabad-cop-allows-6-year-old-granddaughter-drive-car-guinness-record-fir-san/articleshow-7p10gwo"/>
        </item>
        <item>
            <title><![CDATA[ಭಾರತ ರಕ್ತದ ಹಣ ಸಂಪಾದಿಸುತ್ತಿದೆ, ನಾವು ಶೇ.500ರಷ್ಟು ತೆರಿಗೆ ಹಾಕಬೇಕು ಎಂದಿದ್ದ ಟ್ರಂಪ್‌ ಆಪ್ತ ಲಿಂಡ್ಸೆ ಗ್ರಹಾಂ ನಿಧನ]]></title>
            <link>https://kannada.asianetnews.com/world-news/us-senator-lindsey-graham-passes-away-donald-trump-close-aide-obituary-san/articleshow-gwcqgmc</link>
            <guid isPermaLink="true">https://kannada.asianetnews.com/world-news/us-senator-lindsey-graham-passes-away-donald-trump-close-aide-obituary-san/articleshow-gwcqgmc</guid>
            <pubDate>Mon, 13 Jul 2026 09:36:07 +0530</pubDate>
            <description><![CDATA[ಅಮೆರಿಕದ ರಿಪಬ್ಲಿಕ್&zwnj; ಪಕ್ಷದ ಪ್ರಭಾವಿ ಸೆನೆಟರ್&zwnj; ಹಾಗೂ ಡೊನಾಲ್ಡ್&zwnj; ಟ್ರಂಪ್&zwnj; ಅವರ ಆಪ್ತರಾಗಿದ್ದ ಲಿಂಡ್ಸೆ ಗ್ರಹಾಂ ಅವರು ಹಠಾತ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆ ಭಾರತವನ್ನು ತೀವ್ರವಾಗಿ ಟೀಕಿಸಿದ್ದ ಗ್ರಹಾಂ, ಉಕ್ರೇನ್ ಮತ್ತು ಇಸ್ರೇಲ್&zwnj;ನ ಪ್ರಬಲ ಬೆಂಬಲಿಗರಾಗಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kxb3trn47pkph2qdbctpn6k2,imgname-lindsey-graham--1--1783858291364.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj; (ಜು.13): &lt;/strong&gt;ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿಸಿ ಭಾರತಲವು &lsquo;ರಕ್ತದ ಹಣ&rsquo; ಸಂಪಾದಿಸುತ್ತದೆ ಎಂದು ಆರೋಪಿಸಿದ್ದ ಹಾಗೂ ಇದಕ್ಕಾಗಿ ಭಾರತ, ಚೀನಾ ಮೇಲೆ ಶೇ.500ರಷ್ಟು ತೆರಿಗೆ ವಿಧಿಸಬೇಕೆಂದು ಪ್ರತಿಪಾದಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಅವರ ಆಪ್ತ, ರಿಪಬ್ಲಿಕ್&zwnj; ಪಕ್ಷದ ಸೆನೆಟರ್&zwnj; ಸೆನೆಟರ್&zwnj; ಲಿಂಡ್ಸೆ ಗ್ರಹಾಂ (71) ಅವರು ಭಾನುವಾರ ದಿಢೀರ್&zwnj; ಅನಾರೋಗ್ಯದಿಂದಾಗಿ ಅಸುನೀಗಿದ್ದಾರೆ.&lt;/p&gt;&lt;p&gt;ಬಲಪಂಥೀಯ ರಿಪಬ್ಲಿಕನ್&zwnj; ಪಕ್ಷದ ಪ್ರಭಾವಿ ನಾಯಕರಾಗಿದ್ದ ಗ್ರಹಾಂ ಅ&zwj;ವರು ರಷ್ಯಾ ವಿರುದ್ಧದ ಸಂಘರ್ಷದಲ್ಲಿ ಉಕ್ರೇನ್&zwnj; ಪರ ಗಟ್ಟಿ ಧ್ವನಿಯಾಗಿ ನಿಂತಿದ್ದರು. ಇರಾನ್&zwnj; ವಿರುದ್ಧ ಅಮೆರಿಕ ದಾಳಿ ಮಾಡಬೇಕೆಂದು ಹಿಂದಿನಿಂದಲೂ ವಾದಿಸುತ್ತಾ ಬಂದಿದ್ದರು. ಹಿಂದಿನ ಸರ್ಕಾರಾವಧಿಯಲ್ಲಿ ನಡೆದಿದ್ದ ಇರಾನ್&zwnj;-ಅಮೆರಿಕ ಪರಮಾಣು ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿದವರು ಗ್ರಹಾಂ.&lt;/p&gt;&lt;p&gt;ಗಾಜಾ ಸಂಘರ್ಷದ ವಿಚಾರದಲ್ಲಿ ಇಸ್ರೇಲ್&zwnj;ಗೆ ಅಚಲ ಬೆಂಬಲ ವ್ಯಕ್ತಪಡಿಸುತ್ತಲೇ ಬಂದಿದ್ದ ಗ್ರಹಾಂ ಅವರು, 2016ರಲ್ಲಿ ರಿಪಬ್ಲಿಕ್&zwnj; ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಪ್ರಚಾರದ ವೇಳೆ ವಿರುದ್ಧವಾಗಿ ನಿಂತಿದ್ದರೂ ಮುಂದೆ ಟ್ರಂಪ್&zwnj; ಅವರ ಆತ್ಮೀಯ ವಲಯದಲ್ಲಿ ಸೇರಿಕೊಂಡಿದ್ದರು.&lt;/p&gt;&lt;h2&gt;&lt;strong&gt;ಟ್ರಂಪ್ ಶೋಕ&lt;/strong&gt;&lt;/h2&gt;&lt;p&gt;ಗ್ರಹಾಂ ನಿಧನಕ್ಕೆ ಟ್ರಂಪ್&zwnj; ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ನಿಜವಾದ ದೇಶಭಕ್ತ. ನಾನು ಕಂಡ ಶ್ರೇಷ್ಠ ವ್ಯಕ್ತಿ, ಸೆನೆಟರ್&zwnj; ಆಗಿದ್ದರು ಎಂದು ಟ್ರಂಪ್&zwnj; ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/us-senator-lindsey-graham-passes-away-donald-trump-close-aide-obituary-san/articleshow-gwcqgmc"/>
        </item>
        <item>
            <title><![CDATA[ಕ್ಷಿಪಣಿ ನಿರ್ಮಾಣಕ್ಕೆ ಶೀಘ್ರ ಖಾಸಗಿ ಕಂಪನಿಗಳಿಗೂ ಅವಕಾಶ?]]></title>
            <link>https://kannada.asianetnews.com/business/india-opens-missile-manufacturing-private-companies-drdo-astra-mark-2-san/articleshow-tx2ch1i</link>
            <guid isPermaLink="true">https://kannada.asianetnews.com/business/india-opens-missile-manufacturing-private-companies-drdo-astra-mark-2-san/articleshow-tx2ch1i</guid>
            <pubDate>Mon, 13 Jul 2026 09:25:17 +0530</pubDate>
            <description><![CDATA[&lt;p&gt;ಭಾರತ ಸರ್ಕಾರವು ತನ್ನ ರಕ್ಷಣಾ ಉತ್ಪಾದನಾ ನೀತಿಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಖಾಸಗಿ ಕಂಪನಿಗಳಿಗೂ ಕ್ಷಿಪಣಿಗಳನ್ನು ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ನೀಡಲು ಸಿದ್ಧತೆ ನಡೆಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0ykb90m1yb41nphr6syvzg,imgname-astra-air-missile--6--1783517261088.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.13):&lt;/strong&gt; ದೇಶದ ರಕ್ಷಣಾ ಉತ್ಪಾದನೆ ನೀತಿಯಲ್ಲಿ ಸರ್ಕಾರ ಮಹತ್ವದ ಬದಲಾವಣೆಗೆ ಮುಂದಾಗಿದ್ದು, ಭಾರತೀಯ ಖಾಸಗಿ ಕಂಪನಿಗಳಿಗೂ ಕ್ಷಿಪಣಿಗಳನ್ನು ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ನೀಡಲು ಸಿದ್ಧತೆ ನಡೆಸಿದೆ. ಹೀಗಾಗಿ ಇದುವರೆಗೆ ಕೇವಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದ ಅವಕಾಶ ಇನ್ನು ಖಾಸಗಿ ಸಂಸ್ಥೆಗಳಿಗೂ ತೆರೆಯಲಿದೆ.&lt;/p&gt;&lt;p&gt;ಈಗಾಗಲೇ ವಿಮಾನ, ಡ್ರೋನ್&zwnj;, ಫಿರಂಗಿ, ನೌಕಾ ಫ್ಲಾಟ್&zwnj;ಫಾರ್ಮ್&zwnj;ಗಳು ಸೇರಿದಂತೆ ಹಲವಾರು ರಕ್ಷಣಾ ಉತ್ಪನ್ನಗಳ ನಿರ್ಮಾಣಕ್ಕೆ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದೀಗ ಕ್ಷಿಪಣಿ ಉತ್ಪಾದನೆಯನ್ನೂ ಖಾಸಗಿಗೆ ಮುಕ್ತಗೊಳಿಸುತ್ತಿರುವುದು ದೇಶದ ರಕ್ಷಣಾ ಉತ್ಪಾದನೆಯಲ್ಲಿ ಅತಿದೊಡ್ಡ ಸುಧಾರಣೆಗಳಲ್ಲಿ ಒಂದಾಗಲಿದೆ.&lt;/p&gt;&lt;p&gt;ಇಂಡೋನೇಷ್ಯಾವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್&zwnj;ಡಿಒ) ಅಸ್ತ್ರ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದೆ. ಇತರ ದೇಶಗಳಿಂದಲೂ ಭಾರತದ ಕ್ಷಿಪಣಿಗಳಿಗೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ದೇಶೀಯವಾಗಿ ಉತ್ಪಾದನೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ.&lt;/p&gt;&lt;h2&gt;&lt;strong&gt;ಮೊದಲಿಗೆ ಅಸ್ತ್ರ ನಿರ್ಮಾಣ?&lt;/strong&gt;&lt;/h2&gt;&lt;p&gt;180-200 ಕಿ.ಮೀ. ಗುರಿ ಭೇದಿಸುವ ಸಾಮರ್ಥ್ಯವುಳ್ಳ ಅಸ್ತ್ರ ಮಾರ್ಕ್ 2 ಕ್ಷಿಪಣಿಯನ್ನು ಇದುವರೆಗೆ ಡಿಆರ್&zwnj;ಡಿಒ ತಯಾರಿಸುತ್ತಿದೆ. ರಕ್ಷಣಾ ಸಚಿವಾಲಯವು ಶೀಘ್ರದಲ್ಲೇ ಈ ಕ್ಷಿಪಣಿ ತಯಾರಿಸಲು ಖಾಸಗಿ ಕಂಪನಿಗಳನ್ನು ಆಹ್ವಾನಿಸುವ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರಲ್ಲಿ ಐಸಿಒಎಂಎಂ, ಅದಾನಿ, ಭಾರತ್ ಫೋರ್ಜ್, ಟಾಟಾ ಗ್ರುಪ್ ಮತ್ತು ಮಹೀಂದ್ರಾ ಗ್ರುಪ್ ಭಾಗವಹಿಸುವ ನಿರೀಕ್ಷೆಯಿದೆ. ಮುಂದಿನ ಹಂತದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ನಿರ್ಮಾಣಕ್ಕೂ ಅವಕಾಶ ನೀಡಲಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/business/india-opens-missile-manufacturing-private-companies-drdo-astra-mark-2-san/articleshow-tx2ch1i"/>
        </item>
        <item>
            <title><![CDATA[ಹಾವೇರಿ ಬೆಳಗಾವಿ ಬಳಿಕ ಮತ್ತೆರಡು ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಚಿಂತನೆ,  ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?]]></title>
            <link>https://kannada.asianetnews.com/state/cloud-seeding-considered-for-mysuru-and-mandya-due-to-rainfall-deficit-rav/articleshow-68idwc1</link>
            <guid isPermaLink="true">https://kannada.asianetnews.com/state/cloud-seeding-considered-for-mysuru-and-mandya-due-to-rainfall-deficit-rav/articleshow-68idwc1</guid>
            <pubDate>Mon, 13 Jul 2026 08:30:19 +0530</pubDate>
            <description><![CDATA[ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿದ್ದರಿಂದ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಈ ನೀರಿನ ಕೊರತೆಯನ್ನು ನೀಗಿಸಲು, ಮೈಸೂರು ಮತ್ತು ಮಂಡ್ಯ ಭಾಗದಲ್ಲಿ ಮೋಡ ಬಿತ್ತನೆ ಮೂಲಕ ಕೃತಕ ಮಳೆ ಸುರಿಸಲು ಸರ್ಕಾರ ತಜ್ಞರ ಅಭಿಪ್ರಾಯವನ್ನು ಕೋರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcpjsa78wx8bzvxzqp5tb2c,imgname-----------------------2026-07-13t082532.235-1783911507271.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13)&lt;/strong&gt;: ಕಳೆದ ಮೂರು ದಿನಗಳಿಂದ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸಿದ್ದು, ಜಲಾಶಯ ಭರ್ತಿಯಾಗಲು ಇನ್ನೂ 13 ಅಡಿಗಳಷ್ಟು ನೀರಿನ ಹರಿವು ಬರಬೇಕಾಗಿದೆ. ಹಾಗಾಗಿ ಮೈಸೂರು, ಮಂಡ್ಯ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.&lt;/p&gt;&lt;p&gt;ಅಲ್ಲದೆ, ಕಳೆದ ಎರಡು ದಿನಗಳಿಂದ ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಕಂಡು ಬಂದಿದೆ. ಹೀಗಾಗಿ, ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕೂಡ ಕುಸಿತವಾಗಿದೆ. ಇದರ ಪರಿಣಾಮವಾಗಿ ಹಾರಂಗಿ ಅಣೆಕಟ್ಟು ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಕೃಷಿ ಚಟುವಟಿಕೆ ನಡೆಸಲು ಕೊಳವೆಬಾವಿ ನೀರನ್ನು ಅವಲಂಬಿಸುವಂತಾಗಿದೆ.&lt;/p&gt;&lt;p&gt;ಪ್ರಸಕ್ತ ನೀರಿನ ಕೊರತೆ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ ಭಾಗದಲ್ಲಿ ಮೋಡ ಬಿತ್ತನೆ ಮೂಲಕ ಮಳೆ ಸುರಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ತಜ್ಞರ ಅಭಿಮತ ಕೋರಿದೆ ಎಂದು ಹಿರಿಯ ಭೂವಿಜ್ಞಾನಿ ಡಾ.ಎಚ್.ಎಸ್.ಎಂ ಪ್ರಕಾಶ್ ತಿಳಿಸಿದ್ದಾರೆ.&lt;/p&gt;&lt;h2&gt;ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ&lt;/h2&gt;&lt;ul&gt; &lt;li&gt;ಕಬಿನಿ 57% 2284 2268.93&lt;/li&gt; &lt;li&gt;ಹೇಮಾವತಿ 58% 2922 2902.85&lt;/li&gt; &lt;li&gt;ತುಂಗಭದ್ರಾ 20% 1633 1599.55&lt;/li&gt; &lt;li&gt;ಸೂಪಾ(ಮೀ.) 25% 564 529.25&lt;/li&gt; &lt;li&gt;ಕೆಆರ್&zwnj;ಎಸ್ 32% 124.80 86.80&lt;/li&gt; &lt;li&gt;ಘಟಪ್ರಭಾ 36% 2175 2123.15&lt;/li&gt; &lt;li&gt;ಲಿಂಗನಮಕ್ಕಿ 20% 1819.12 1762.70&lt;/li&gt; &lt;li&gt;ಭದ್ರಾ 44% 2158.00 2118.82&lt;/li&gt; &lt;li&gt;ಹಾರಂಗಿ 56% 2859 2844.95&lt;/li&gt; &lt;li&gt;ಆಲಮಟ್ಟಿ(ಮೀ.) 58% 519.60 515.85&lt;/li&gt; &lt;li&gt;ನಾರಾಯಣಪುರ(ಮೀ.) 59% 492.25 488.72&lt;/li&gt; &lt;li&gt;ಮಲಪ್ರಭಾ 32% 2079.50 2053.80&lt;/li&gt;&lt;/ul&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cloud-seeding-considered-for-mysuru-and-mandya-due-to-rainfall-deficit-rav/articleshow-68idwc1"/>
        </item>
        <item>
            <title><![CDATA[ಅಮೆರಿಕ-ಇರಾನ್‌ ನಡುವೆ ಮತ್ತೊಂದು ಸುತ್ತಿನ ಭೀಕರ ಕದನ, ಹೋರ್ಮುಜ್‌ ಮತ್ತೆ ಬಂದ್‌]]></title>
            <link>https://kannada.asianetnews.com/world-news/us-iran-war-strait-of-hormuz-closed-ship-attack-oil-crisis-updates-san/articleshow-p7gb5dm</link>
            <guid isPermaLink="true">https://kannada.asianetnews.com/world-news/us-iran-war-strait-of-hormuz-closed-ship-attack-oil-crisis-updates-san/articleshow-p7gb5dm</guid>
            <pubDate>Mon, 13 Jul 2026 08:02:08 +0530</pubDate>
            <description><![CDATA[&lt;p&gt;ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಇರಾನ್ ದಾಳಿ ಮಾಡಿ ಜಲಸಂಧಿಯನ್ನು ಮುಚ್ಚಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್&zwnj;ನ 140 ನೆಲೆಗಳ ಮೇಲೆ ದಾಳಿ ನಡೆಸಿದ್ದು, ನಂತರ ಇರಾನ್ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್&zwnj; ದಾಳಿ ನಡೆಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxakhrft4kbza228ty1rqgf1,imgname-iran-hormuz-attack-indian-crew-missing-mea-container-ship-us-iran-tensions-1783841219066.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದುಬೈ (ಜು.13): &lt;/strong&gt;ಅಮೆರಿಕ-ಇರಾನ್&zwnj; ನಡುವೆ ಶಾಂತಿ ಸಂಧಾನ ಯತ್ನದ ಹೊರತಾಗಿಯೂ ಎರಡೂ ದೇಶಗಳು ಭಾನುವಾರ ಹೊಸ ಸುತ್ತಿನ ಕಾದಾಟ ನಡೆಸಿದ್ದು ಪರಸ್ಪರ ತೀವ್ರ ದಾಳಿ-ಪ್ರತಿದಾಳಿ ನಡೆಸಿವೆ. ಇದು ಹೋರ್ಮುಜ್ ಜಲಸಂಧಿ ಮುಚ್ಚಲು ನಾಂದಿ ಹಾಡಿದ್ದು, ಕದನ ವಿರಾಮದಿಂದ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದ ಜಾಗತಿಕ ವ್ಯಾಪಾರ ವಹಿವಾಟಿಗೆ ಮತ್ತೆ ಪೆಟ್ಟು ನೀಡುವ ಆತಂಕ ಸೃಷ್ಟಿಸಿದೆ.&lt;/p&gt;&lt;p&gt;ಅನಧಿಕೃತ ಸಂಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಭಾನುವಾರ ಬೆಳಗ್ಗೆ 11 ಭಾರತೀಯ ಸಿಬ್ಬಂದಿ ಇದ್ದ ಹಡಗೊಂದರ ಮೇಲೆ ಇರಾನ್&zwnj; ದಾಳಿ ಮಾಡಿ, ವಿಶ್ವದ ತೈಲ ಪೂರೈಕೆಯ ಪ್ರಮುಖ ಕೊಂಡಿ ಆಗಿರುವ ಹೋರ್ಮುಜ್&zwnj; ಜಲಸಂಧಿಯನ್ನು ಮುಚ್ಚಿದೆ. ಇದರಿಂದ ಕ್ರುದ್ಧಗೊಂಡ ಅಮೆರಿಕ, ಇರಾನ್&zwnj;ನ 140 ನೆಲೆಗಳ ಮೇಲೆ ಭೀಕರ ದಾಳಿ ನಡೆಸಿ, &lsquo;ನಮ್ಮ ಉದ್ದೇಶ ಈಡೇರಿದೆ. ಹೊಸ ಸುತ್ತಿನ ದಾಳಿ ಅಂತ್ಯಗೊಳಿಸಿದ್ದೇವೆ&rsquo; ಎಂದಿದೆ. ಇದಾದ ನಂತರ ಬಹ್ರೈನ್&zwnj;, ಕುವೈತ್, ಕತಾರ್&zwnj; ಮತ್ತು ಒಮಾನ್&zwnj; ಮೇಲೆ ಇರಾನ್&zwnj; ಭೀಕರ ಕ್ಷಿಪಣಿ ಮತ್ತು ಡ್ರೋನ್&zwnj; ದಾಳಿ ನಡೆಸಿದೆ.&lt;/p&gt;&lt;h2&gt;&lt;strong&gt;ನೌಕೆ ಮೇಲೆ ಇರಾನ್&zwnj; ಎಚ್ಚರಿಕೆಯ ದಾಳಿ&lt;/strong&gt;&lt;/h2&gt;&lt;p&gt;ಹೋರ್ಮುಜ್&zwnj; ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ಮಾರ್ಗವೊಂದನ್ನು ಅನುಮೋದಿಸಿತ್ತು. ಆದರೆ ಹಲವು ಹಡಗುಗಳು ಅದರ ಎಚ್ಚರಿಕೆ ಮತ್ತು ಸೂಚನೆಗಳನ್ನು ನಿರ್ಲಕ್ಷ್ಯಿಸಿ ಬೇರೆ ಮಾರ್ಗದಲ್ಲಿ ಸಂಚರಿಸಿವೆ. ಹೀಗಾಗಿ ಸೈಪ್ರಸ್&zwnj; ಧ್ವಜ ಹೊತ್ತ 11 ಭಾರತೀಯ ಸಿಬ್ಬಂದಿ ಇದ್ದ ಕಂಟೈನರ್&zwnj; ಹಡಗೊಂದರ ಮೇಲೆ ಇರಾನ್&zwnj; ಪಡೆಗಳು ಭಾನುವಾರ ನಸುಕಿನಲ್ಲಿ ಎಚ್ಚರಿಕೆಯ ದಾಳಿ ನಡೆಸಿವೆ. ಈ ವೇಳೆ ಹಡಗಿನ ಎಂಜಿನ್&zwnj; ರೂಂಗೆ ತೀವ್ರ ಹಾನಿಯಾಗಿದ್ದು, ಬೆಂಕಿ ಹೊತ್ತಿಕೊಂಡಿದೆ.&lt;/p&gt;&lt;h2&gt;&lt;strong&gt;ಇರಾನ್&zwnj;ನ 140 ನೆಲೆಗಳು ಉಡೀಸ್&zwnj;&lt;/strong&gt;&lt;/h2&gt;&lt;p&gt;ಹಡಗಿನ ಮೇಲೆ ಇರಾನ್&zwnj; ದಾಳಿ ಬೆನ್ನಲ್ಲೇ ಅಮೆರಿಕ ಇರಾನ್&zwnj;ನ ಸುಮಾರು 140 ನೆಲೆಗಳ ಮೇಲೆ ಭೀಕರ ವಾಯುದಾಳಿ ನಡೆಸಿದೆ. ಇದರಲ್ಲಿ ಕ್ಷಿಪಣಿ ಮತ್ತು ಡ್ರೋನ್&zwnj; ಲಾಂಚ್&zwnj; ಸೈಟ್&zwnj;ಗಳು, ಗನ್&zwnj;ಪೌಡರ್&zwnj; ಡಂಪ್&zwnj;ಗಳು, ಸಂವಹನ ಕೇಂದ್ರಗಳು ಹಾಗೂ ಇತರ ಸೇನಾ ನೆಲೆಗಳು ಸೇರಿವೆ. ಹೋರ್ಮುಜ್&zwnj;ನಲ್ಲಿ ನಾಗರಿಕ ಹಡಗುಗಳು ಮತ್ತು ವಾಣಿಜ್ಯ ನೌಕೆಗಳ ಮೇಲೆ ಇರಾನ್&zwnj;ನ ದಾಳಿಯ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಉದ್ದೇಶದಿಂದ ಈ ದಾಳಿ ನಡೆಸಿದ್ದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ. ಇದು ಈ ವಾರದಲ್ಲಿ ಇರಾನ್&zwnj; ಮೇಲಿನ ಅಮೆರಿಕದ 3ನೇ ಸುತ್ತಿನ ದಾಳಿ.&lt;/p&gt;&lt;h2&gt;&lt;strong&gt;ಅಮೆರಿಕ ಮಿತ್ರರಾಷ್ಟ್ರಗಳಿಗೆ ಇರಾನ್&zwnj; ಬಾಂಬ್&lt;/strong&gt;&lt;/h2&gt;&lt;p&gt;ಅಮೆರಿಕದ ದಾಳಿಗೆ ಪ್ರತಿಯಾಗಿ, ಅದರ ಕೊಲ್ಲಿ ಮಿತ್ರರಾಷ್ಟ್ರಗಳಾದ ಬಹ್ರೈನ್&zwnj;, ಕುವೈತ್, ಕತಾರ್&zwnj; ಮತ್ತು ಒಮಾನ್&zwnj; ಮೇಲೆ ಇರಾನ್&zwnj; ಭೀಕರ ಕ್ಷಿಪಣಿ ಮತ್ತು ಡ್ರೋನ್&zwnj; ದಾಳಿ ನಡೆಸಿದೆ. ಕುವೈತ್&zwnj; ಮೇಲೆ ಇರಾನ್&zwnj; ಗುಂಡಿನ ಮಳೆಗರೆಯುತ್ತಿದ್ದು, ಅವುಗಳನ್ನು ಹೊಡೆದುರುಳಿಸುತ್ತಿರುವುದಾಗಿ ಕುವೈತ್&zwnj; ಸೇನೆ ತಿಳಿಸಿದೆ. ಕತಾರ್&zwnj;ನ ಹಲವೆಡೆ ಸ್ಫೋಟಗಳಾಗಿವೆ. ಯುಎಇನಲ್ಲಿ ಸೈರನ್&zwnj;ಗಳು ಮೊಳಗಿವೆ. ಆದರೆ ಶತ್ರು ಕ್ಷಿಪಣಿಗಳು ಗಡಿ ದಾಟಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಇರಾನ್ ಡ್ರೋನ್&zwnj;ಗಳು ಹೋರ್ಮುಜ್&zwnj; ಪ್ರದೇಶದ ಈಶಾನ್ಯ ಒಮಾನ್&zwnj;ನಲ್ಲಿ ಮೇಲೆ ದಾಳಿ ಮಾಡಿವೆ ಎಂದು ಒಮಾನ್&zwnj;ನ ಸರ್ಕಾರಿ ಸುದ್ದಿ ಸಂಸ್ಥೆಯೂ ವರದಿ ಮಾಡಿದೆ.&lt;/p&gt;&lt;h2&gt;&lt;strong&gt;ಹೋರ್ಮುಜ್&zwnj; ಬಂದ್&zwnj;ನಿಂದ ಮತ್ತೆ ಆತಂಕ&lt;/strong&gt;&lt;/h2&gt;&lt;p&gt;ಹೋರ್ಮುಜ್&zwnj; ಜಲಸಂಧಿ ಜಾಗತಿಕ ವ್ಯಾಪಾರ ವಹಿವಾಟಿಗೆ ಬಹುಮುಖ್ಯವಾದ ಮಾರ್ಗ. ವಿಶ್ವ ತೈಲ ವ್ಯಾಪಾರದ ಸುಮಾರು ಶೇ.20 ಮತ್ತು ನೈಸರ್ಗಿಕ ಅನಿಲದ ಶೇ.25ರಷ್ಟು ಹೋರ್ಮುಜ್&zwnj; ಮೂಲಕವೇ ಸಾಗುತ್ತದೆ. ಪ್ರತಿದಿನ ಸರಾಸರಿ 2 ಕೋಟಿ ಬ್ಯಾರೆಲ್ ತೈಲ ಇಲ್ಲಿಂದ ಹಾದುಹೋಗುತ್ತದೆ. ಭಾರತ ತನ್ನ ಶೇ.80-85 ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಸೌದಿ ಅರೇಬಿಯಾ, ಯುಎಇ, ಕುವೈತ್, ಕತಾರ್, ಇರಾಕ್, ಇರಾನ್&zwnj;ನ ತೈಲ ರಫ್ತು ಹೋರ್ಮುಜ್&zwnj; ಮೇಲೆಯೇ ಅವಲಂಬಿತವಾಗಿದೆ.&lt;/p&gt;&lt;p&gt;ಈ ಹಿಂದೆ ಹೋರ್ಮುಜ್&zwnj; ಜಲಸಂಧಿ ಬಂದ್&zwnj; ಆಗಿದ್ದಾಗ ವಿಶ್ವ ತೈಲ ಪೂರೈಕೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಯುದ್ಧದ ಸಮಯದಲ್ಲಿ ಬ್ಯಾರೆಲ್&zwnj;ಗೆ 120 ಡಾಲರ್&zwnj;ವರೆಗೂ ಕಚ್ಚಾತೈಲದ ಬೆಲೆ ಏರಿತ್ತು. ಆದರೆ ಕದನ ವಿರಾಮದ ಬಳಿಕ ಬೆಲೆ ಕಡಿಮೆಯಾಗಿತ್ತು. ಈಗ ಪುನಃ ಹೋರ್ಮುಜ್&zwnj; ಬಂದ್&zwnj; ಆಗಿರುವುದರಿಂದ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಮೂಲಕ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಅಸ್ಥಿರತೆ, ತೈಲ ಬಿಕ್ಕಟ್ಟು ಮತ್ತು ಆರ್ಥಿಕ ಸಂಕಷ್ಟ ಎದುರಾಗುವ ಆತಂಕ ಎದುರಾಗಿದೆ.&lt;/p&gt;&lt;p&gt;&lsquo;ಇರಾನ್&zwnj; ಕೆಟ್ಟ ಆಯ್ಕೆಯನ್ನು ಮಾಡಿಕೊಂಡಿದೆ. ಈಗ ಅವರು ಬೆಲೆ ತೆರಲಿದ್ದಾರೆ&rsquo; ಎಂದು ಅಮೆರಿಕ ರಕ್ಷಣಾ ಸಚಿವ ಪೀಟ್&zwnj; ಹೆಗ್ಸೆತ್&zwnj; ಗುಡುಗಿದರೆ, &lsquo;ಏಕಪಕ್ಷೀಯ ಒಪ್ಪಂದಗಳ ಯುಗ ಮುಗಿದಿದೆ. ನಿಮ್ಮ ಮಾತನ್ನು ಉಳಿಸಿಕೊಳ್ಳಿ ಅಥವಾ ಪರಿಣಾಮವನ್ನು ಎದುರಿಸಿ ಎಂದು ನಾವು ನಿಮಗೆ ಮೊದಲೇ ಹೇಳಿದ್ದೆವು. ಈಗ ವಾಸ್ತವವು ಬಾಗಿಲು ಬಡಿಯುತ್ತಿದೆ&rsquo; ಎಂದು ಇರಾನ್&zwnj; ಸಂಸತ್ತಿನ ಸ್ಪೀಕರ್&zwnj; ಮೊಹಮ್ಮದ್&zwnj; ಬಘೇರ್&zwnj; ಘಾಲಿಬಾಫ್&zwnj; ಕಟು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ, ಇರಾನ್&zwnj; ಹಾಗೂ ಅಮೆರಿಕ ಸಂಯಮ ವಹಿಸಿ ಕದನ ನಿಲ್ಲಿಸಬೇಕು ಎಂದು ಹಿಂದಿನ ಕದನವಿರಾಮದ ಮಧ್ಯವರ್ತಿ ದೇಶಗಳು ಇರಾನ್&zwnj; ಹಾಗೂ ಅಮೆರಿಕ ಆಗ್ರಹಿಸಿವೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/us-iran-war-strait-of-hormuz-closed-ship-attack-oil-crisis-updates-san/articleshow-p7gb5dm"/>
        </item>
        <item>
            <title><![CDATA[Karnataka Cabinet expansion: ವಿದೇಶದಿಂದ ರಾಹುಲ್ ಗಾಂಧಿ ವಾಪಸ್; ಸಂಪುಟ ವಿಸ್ತರಣೆ ಚರ್ಚೆಗೆ ಡಿಕೆ, ಬಿಕೆ,  ಸಿದ್ದು ನಾಳೆ ದಿಲ್ಲಿಗೆ?]]></title>
            <link>https://kannada.asianetnews.com/state/karnataka-cabinet-expansion-rahul-gandhi-likely-to-summon-cm-dk-shivakumar-siddaramaiah-delhi-rav/articleshow-4t48s46</link>
            <guid isPermaLink="true">https://kannada.asianetnews.com/state/karnataka-cabinet-expansion-rahul-gandhi-likely-to-summon-cm-dk-shivakumar-siddaramaiah-delhi-rav/articleshow-4t48s46</guid>
            <pubDate>Mon, 13 Jul 2026 07:57:19 +0530</pubDate>
            <description><![CDATA[&lt;p&gt;ವಿದೇಶ ಪ್ರವಾಸದಿಂದ ರಾಹುಲ್ ಗಾಂಧಿ ಹಿಂತಿರುಗಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್&zwnj;ನಲ್ಲಿ ಸಂಪುಟ ವಿಸ್ತರಣೆ ಚಟುವಟಿಕೆಗಳು ಗರಿಗೆದರಿವೆ. ಸಿಎಂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಲವು ನಾಯಕರು ಹೈಕಮಾಂಡ್ ಅನುಮೋದನೆಗೆ ದೆಹಲಿಗೆ ತೆರಳಲು ಸಜ್ಜು, ಜುಲೈ 15ರೊಳಗೆ ವಿಸ್ತರಣೆ ನಡೆಯುವ ಸಾಧ್ಯತೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jynqqb01yce3fqm1s5av16p9,imgname-----------------------2025-06-26t143417.509-1750928698369.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ವಿದೇಶ ಪ್ರವಾಸಕ್ಕೆ ತೆರಳಿದ್ದ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಭಾನುವಾರ ದೆಹಲಿಗೆ ವಾಪಸ್&zwnj;&lt;/li&gt; &lt;li&gt;ಈ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್&zwnj; ಪಾಳಯದಲ್ಲಿ ಮತ್ತೆ ಗರಿಗೆದರಿದ ಸಂಪುಟ ವಿಸ್ತರಣೆ ಕಸರತ್ತು&lt;/li&gt; &lt;li&gt;ಸಂಪುಟ ವಿಸ್ತರಣೆ ಮಾತುಕತೆ ನಡೆಸಲು ರಾಹುಲ್&zwnj; ಬಳಿ ಸಮಯ ಕೋರಿದ ರಾಜ್ಯ ನಾಯಕರು&lt;/li&gt; &lt;li&gt;ಸಂಭಾವ್ಯ ಸಚಿವರ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್&zwnj;ಗೆ ನೀಡಲು ಸಜ್ಜಾಗಿರುವ ರಾಜ್ಯ ನಾಯಕತ್ವ&lt;/li&gt; &lt;li&gt;ಸಮಯ ಸಿಕ್ಕರೆ ಮಂಗಳವಾರ ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದು, ಕೆಪಿಸಿಸಿ ಅಧ್ಯಕ್ಷ ಹರಿ ದಿಲ್ಲಿಗೆ&lt;/li&gt; &lt;li&gt;ವಿಸ್ತರಣೆಗೆ ಹೈಕಮಾಂಡ್&zwnj; ಗ್ನೀನ್&zwnj;ಸಿಗ್ನಲ್&zwnj; ನೀಡಿದರೆ ಜು.15ಕ್ಕೆ ಮೊದಲೇ ವಿಸ್ತರಣೆ ಬಹುತೇಕ ಖಚಿತ&lt;/li&gt; &lt;li&gt;ರಾಹುಲ್&zwnj; ಭೇಟಿಗೆ ಅವಕಾಶ ಸಿಗದೇ ಹೋದಲ್ಲಿ ಆಷಾಡ ಮಾಸ ಮುಗಿಯುವವರೆಗೆ ವಿಸ್ತರಣೆ ಡೌಟ್&zwnj;&lt;/li&gt;&lt;/ul&gt;&lt;p&gt;&lt;strong&gt;&amp;nbsp;ಬೆಂಗಳೂರು (ಜು.13): &lt;/strong&gt;ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್&zwnj; ಜತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;, ಸಿಡಬ್ಲ್ಯುಸಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್&zwnj; ಅವರು ಮಂಗಳವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ.&lt;/p&gt;&lt;p&gt;ವಿದೇಶ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್&zwnj; ಗಾಂಧಿ ಅವರು ಭಾನುವಾರ ತಡ ರಾತ್ರಿ ದೆಹಲಿಗೆ ವಾಪಸಾಗಿದ್ದಾರೆ. ಸಹಜವಾಗಿ ಸೋಮವಾರ ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ನಂತರ ರಾಜ್ಯ ನಾಯಕರಿಗೆ ಲಭ್ಯವಾಗಲಿದ್ದಾರೆ. ಹಾಗಾಗಿ ಮೂವರೂ ರಾಜ್ಯ ನಾಯಕರು ಹೈಕಮಾಂಡ್&zwnj; ನಾಯಕರ ಭೇಟಿಗಾಗಿ ಒಟ್ಟಿಗೆ ಮಂಗಳವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.&lt;/p&gt;&lt;p&gt;ಈಗಾಗಲೇ ಸಂಪುಟ ವಿಸ್ತರಣೆಗೆ ಸಂಭಾವ್ಯ ಸಚಿವರ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ರಾಹುಲ್&zwnj;ಗಾಂಧಿ ಅವರು ವಿದೇಶದಿಂದ ವಾಪಸ್&zwnj; ಬರುವುದನ್ನು ರಾಜ್ಯ ನಾಯಕರು ಕಾಯುತ್ತಿದ್ದರು. ಇದೀಗ ಭಾನುವಾರ ರಾತ್ರಿ ಅವರ ವಾಪಸಾತಿ ಖಚಿತವಾದ ಬೆನ್ನಲ್ಲೇ ಭೇಟಿಗೆ ಅವಕಾಶ ಕೋರಲಾಗಿದೆ. ಅವಕಾಶ ನೀಡಿದರೆ ರಾಹುಲ್&zwnj; ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್&zwnj; ಸೇರಿ ವರಿಷ್ಠರೊಂದಿಗೆ ಚರ್ಚಿಸಿ ಒಂದೆರಡು ದಿನದಲ್ಲಿ ಪಟ್ಟಿಗೆ ಅನುಮೋದನೆ ಪಡೆಯಬಹುದು. ಹೈಕಮಾಂಡ್&zwnj; ಗ್ರೀನ್&zwnj; ಸಿಗ್ನಲ್&zwnj; ನೀಡಿದರೆ ಆಷಾಢ ಆರಂಭಕ್ಕೂ ಮೊದಲೇ ಅಂದರೆ ಜು.15ರ ಒಳಗಾಗಿಯೇ ಸಂಪುಟ ವಿಸ್ತರಣೆ ಆಗಬಹುದು ಎಂದು ಮೂಲಗಳು ಹೇಳುತ್ತಿವೆ.&lt;/p&gt;&lt;p&gt;ಒಂದು ವೇಳೆ ರಾಹುಲ್&zwnj; ಭೇಟಿ ವಿಳಂಬವಾದರೆ ಆಷಾಢ ಮಾಸದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಒಂದು ತಿಂಗಳು ಮುಂದೂಡಲಾಗುತ್ತದೆಯೇ? ಎಂಬ ಚರ್ಚೆ ಶುರುವಾಗಿದೆ. ಈ ಮಧ್ಯೆ, ಗ್ರೇಟರ್&zwnj; ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಎಲ್ಲ ಐದು ನಗರ ಪಾಲಿಕೆಗಳ ಚುನಾವಣೆಗೆ ಮುಂದೂಡಿಕೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಸೋಮವಾರ ಸುಪ್ರೀಂಕೋರ್ಟ್&zwnj;ನಲ್ಲಿ ವಿಚಾರಣೆಗೆ ಬರಲಿದೆ. ಒಂದು ವೇಳೆ ನ್ಯಾಯಾಲಯ ಅರ್ಜಿ ಮುಂದೂಡಿಕೆಗೆ ನಿರಾಕರಿಸಿದರೆ, ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಲಿದೆ. ಹಾಗಾದರೆ ಸಂಪುಟ ವಿಸ್ತರಣೆ ನಿರ್ಧಾರದಲ್ಲಿ ಬದಲಾವಣೆಗಳು ಆಗಬಹುದಾ? ಎಂಬ ಚರ್ಚೆಯೂ ನಡೆದಿದೆ. ಆದರೆ, ಆಕಾಂಕ್ಷಿಗಳ ಒತ್ತಡ ಹೆಚ್ಚುತ್ತಿರುವುದರಿಂದ ಪಕ್ಷ ಯಾವ ತೀರ್ಮಾನ ಕೈಗೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-cabinet-expansion-rahul-gandhi-likely-to-summon-cm-dk-shivakumar-siddaramaiah-delhi-rav/articleshow-4t48s46"/>
        </item>
        <item>
            <title><![CDATA[ಬದರೀನಾಥ ದೇಗುಲದಲ್ಲೂ ಹುಂಡಿ ಕಳವು ನಿಜ: ಎಸ್‌ಐಟಿ]]></title>
            <link>https://kannada.asianetnews.com/gallery/india-news/badrinath-temple-donation-theft-sit-investigation-report-pramod-nautiyal-bktc-san-w10sbyg</link>
            <guid isPermaLink="true">https://kannada.asianetnews.com/gallery/india-news/badrinath-temple-donation-theft-sit-investigation-report-pramod-nautiyal-bktc-san-w10sbyg</guid>
            <pubDate>Mon, 13 Jul 2026 07:46:56 +0530</pubDate>
            <description><![CDATA[&lt;p&gt;ಉತ್ತರಾಖಂಡದ ಬದರೀನಾಥ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಹುಂಡಿ ಕಳವು ಪ್ರಕರಣವನ್ನು ವಿಶೇಷ ತನಿಖಾ ತಂಡ (SIT) ದೃಢಪಡಿಸಿದೆ. ತನಿಖಾ ವರದಿಯನ್ನು ದೇವಾಲಯ ಸಮಿತಿಗೆ ಸಲ್ಲಿಸಲಾಗಿದ್ದು, ಆರೋಪಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpszjh7c95xvy5t0zh4mq83n,imgname-char-dham-yatra-2026-badrinath-temple-opening-date-registration-history-timings-travel-guide-uttarakhand-6-1776840951020.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರಾಖಂಡದ ಬದರೀನಾಥ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಹುಂಡಿ ಕಳವು ಪ್ರಕರಣವನ್ನು ವಿಶೇಷ ತನಿಖಾ ತಂಡ (SIT) ದೃಢಪಡಿಸಿದೆ. ತನಿಖಾ ವರದಿಯನ್ನು ದೇವಾಲಯ ಸಮಿತಿಗೆ ಸಲ್ಲಿಸಲಾಗಿದ್ದು, ಆರೋಪಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚಿಸಿದೆ.&lt;/p&gt;&lt;img&gt;&lt;p&gt;ಉತ್ತರಾಖಂಡದ ಪ್ರಸಿದ್ಧ ಬದರೀನಾಥ ದೇವಾಲಯದಲ್ಲೂ ಹುಂಡಿ ಕಳವು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್&zwnj;ಐಟಿ), ಅಕ್ರಮ ನಡೆದಿರುವುದು ನಿಜ ಎಂದು ಬಹಿರಂಗಪಡಿಸಿದೆ.&lt;/p&gt;&lt;img&gt;&lt;p&gt;ಇದಕ್ಕೆ ಸಂಬಂಧಿಸಿದ 18 ಪುಟಗಳ ವರದಿಯನ್ನು ಬದರೀನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಸಿಇಒಗೆ ಸಲ್ಲಿಸಿದೆ. ಉತ್ತರಾಖಂಡ ಸರ್ಕಾರವು ಬಿಕೆಟಿಸಿಯ ಸಿಇಒಗೆ ತನಿಖಾ ವರದಿಯಲ್ಲಿ ಹೆಸರಿಸಲಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ.&lt;/p&gt;&lt;img&gt;&lt;p&gt;ಬದರೀನಾಥ ಮಂದಿರದ ದೇಣಿಗೆಯನ್ನು ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ, ದೇವಾಲಯ ಸಮಿತಿ 4 ಸದಸ್ಯರನ್ನುಳ್ಳ ತನಿಖಾ ತಂಡವನ್ನು ರಚನೆ ಮಾಡಿತ್ತು. ಪ್ರಮುಖ ಆರೋಪಿಯಾದ, ಸಮಿತಿ ಅಧ್ಯಕ್ಷರ ಕಚೇರಿಯ ವೈಯಕ್ತಿಕ ಸಹಾಯಕ ಪ್ರಮೋದ್ ನೌಟಿಯಾಲ್&zwnj;ನನ್ನು ಜು.7ರಂದು ತಕ್ಷಣ ಅಮಾನತುಗೊಳಿಸಲಾಗಿತ್ತು.&lt;/p&gt;&lt;img&gt;&lt;p&gt;ಇದೀಗ ಎಸ್ಐಟಿ ತನಿಖೆ ಪೂರ್ಣಗೊಳಿಸಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಆರೋಪಿಯು ಹಣವನ್ನು ಅನುಮಾನಾಸ್ಪದವಾಗಿ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಭಕ್ತರ ಕಾಣಿಕೆ ಹಣ ಮತ್ತು ಇತರ ವಸ್ತುಗಳ ಕಳ್ಳತನ ಒಂದು ಬಾರಿ ಅಲ್ಲ, ಹಲವು ಬಾರಿ ನಡೆದಿದೆ ಎಂದು ಆರೋಪಿಸಿದೆ.&lt;/p&gt;&lt;img&gt;&lt;p&gt;ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಎಸ್&zwnj;ಐಟಿ ಹಲವು ಸಲಹೆಗಳನ್ನು ನೀಡಿದೆ. ಕಾಣಿಕೆ ಎಣಿಕೆ ಕೊಠಡಿಯಲ್ಲಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ದೇವಾಲಯದ ಪ್ರದಕ್ಷಿಣಾ ಮಾರ್ಗದಲ್ಲಿನ ಎಲ್ಲಾ ಮರೆಯ ಜಾಗಗಳನ್ನು ಸಿಸಿಟಿವಿ ವ್ಯಾಪ್ತಿಯಲ್ಲಿ ತರಬೇಕು ಎಂದು ಶಿಫಾರಸು ಮಾಡಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/india-news/badrinath-temple-donation-theft-sit-investigation-report-pramod-nautiyal-bktc-san-w10sbyg"/>
        </item>
        <item>
            <title><![CDATA[ದಾನದ ಫೋಟೋ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದೇ ಅಕ್ರಮ ಆಸ್ತಿ ಕೇಸಲ್ಲಿ ಜಮೀರ್‌ಗೆ ಕುತ್ತು!]]></title>
            <link>https://kannada.asianetnews.com/state/lokayukta-shock-zameer-ahmed-khan-s-disproportionate-assets-case-what-next-if-prosecution-is-sanctioned-rav/articleshow-gt6mbsx</link>
            <guid isPermaLink="true">https://kannada.asianetnews.com/state/lokayukta-shock-zameer-ahmed-khan-s-disproportionate-assets-case-what-next-if-prosecution-is-sanctioned-rav/articleshow-gt6mbsx</guid>
            <pubDate>Mon, 13 Jul 2026 07:33:08 +0530</pubDate>
            <description><![CDATA[&lt;p&gt;ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ, ಅವರೇ ಫೇಸ್&zwnj;ಬುಕ್&zwnj;ನಲ್ಲಿ ಹಂಚಿಕೊಂಡ ದಾನ-ಧರ್ಮದ ಫೋಟೋಗಳು, ದಾಖಲೆ ಪುಸ್ತಕಗಳು ಪ್ರಮುಖ ಸಾಕ್ಷಿಯಾಗಿವೆ. ಕೋವಿಡ್ ಸಮಯದಲ್ಲಿ ಆದಾಯವಿಲ್ಲದಿದ್ದರೂ ಕೋಟ್ಯಂತರ ರೂಪಾಯಿ ದಾನ ಮಾಡಿದ್ದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxck300fhew7nstympbvqbh9,imgname-----------------------2026-07-13t071835.474-1783907844111.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ದಾನ-ಧರ್ಮದ ಫೋಟೋ ಫೇಸ್&zwnj;ಬುಕ್&zwnj;ನಲ್ಲಿ ಶೇರ್&zwnj; ಮಾಡಿದ್ದೇ ಅಕ್ರಮ ಆಸ್ತಿ ಕೇಸಲ್ಲಿ ಜಮೀರ್&zwnj;ಗೆ ಟ್ರಬಲ್&zwnj;!&lt;/li&gt; &lt;li&gt;ಕೋವಿಡ್&zwnj; ವೇಳೆ ಆದಾಯ ಕಮ್ಮಿ ಇದ್ದರೂ ಉದಾರವಾಗಿ ದಾನ ಮಾಡಿದ್ದ ಮಾಜಿ ಸಚಿವ&lt;/li&gt; &lt;li&gt;&amp;nbsp;ಫೇಸ್&zwnj;ಬುಕ್&zwnj; ಫೋಟೋ, ದಾನದ ಪುಸ್ತಕವೇ ಲೋಕಾಯುಕ್ತ ಪೊಲೀಸರಿಗೆ ಪ್ರಮುಖ ಸಾಕ್ಷ್ಯ&lt;/li&gt;&lt;/ul&gt;&lt;p&gt;&lt;strong&gt;ಆದಾಯವೇ ಇಲ್ಲದೆ ಇದ್ದರೂ ದಾನ!&lt;/strong&gt;&lt;/p&gt;&lt;ul&gt; &lt;li&gt;&amp;nbsp;ಶಾಸಕ, ಸಚಿವರಾಗಿ ಪಡೆಯುವ ಸಂಬಳ ಬಿಟ್ಟರೆ ತಮ್ಮ ಸಾರಿಗೆ ಉದ್ಯಮವೇ ಆದಾಯ ಮೂಲ ಎಂದಿದ್ದ ಜಮೀರ್&lt;/li&gt; &lt;li&gt;&amp;nbsp;ಈ ಬಗ್ಗೆ ಚುನಾವಣಾ ಅಫಿಡವಿಟ್&zwnj;ನಲ್ಲೂ ಘೋಷಣೆ. ಅದರ ಪ್ರಕಾರ ಜಮೀರ್&zwnj; ಅವರ ವಾರ್ಷಿಕ ಆದಾಯ 15 ಲಕ್ಷ ರು.&lt;/li&gt; &lt;li&gt;&amp;nbsp;ಕೋವಿಡ್&zwnj; ವೇಳೆ ಸಾರಿಗೆ ಉದ್ಯಮ ಸ್ತಬ್ಧವಾಗಿ ಆದಾಯ ಬಂದ್&zwnj; ಆಗಿದ್ದರೂ ಭರ್ಜರಿ ದಾನ ಮಾಡಿದ್ದ ಮಾಜಿ ಸಚಿವರು&lt;/li&gt; &lt;li&gt;ಜಮೀರ್&zwnj;ರಿಂದ ಆದಾಯ ಮೀರಿ ₹26 ಕೋಟಿ ಗಳಿಕೆ. ಲೋಕಾಯುಕ್ತ ತನಿಖೆಯಲ್ಲಿ ಪತ್ತೆ. ಹೀಗಾಗಿ ಪ್ರಾಸಿಕ್ಯೂಷನ್&zwnj;ಗೆ ಮೊರೆ&lt;/li&gt;&lt;/ul&gt;&lt;p&gt;-------&lt;/p&gt;&lt;ul&gt; &lt;li&gt;&lt;strong&gt;ಗಿರೀಶ್ ಮಾದೇನಹಳ್ಳಿ&lt;/strong&gt;&lt;/li&gt;&lt;/ul&gt;&lt;p&gt;ಕೈ ಬಿಚ್ಚಿ ಮಾಡಿದ ದಾನ, ಧರ್ಮದ ಫೋಟೋಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದು ಹಾಗೂ ನೆರವು ಪಡೆದವರ ಬಗ್ಗೆ ನೋಂದಣಿ ಪುಸಕ್ತಗಳಲ್ಲಿ ಬರೆದಿಟ್ಟಿದ್ದು ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್&zwnj; ಅವರಿಗೆ ಈಗ ಮುಳುವಾಗಿವೆ ಎಂಬ ಕುತೂಹಲಕಾರಿ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಮಾಜಿ ಸಚಿವರ ವಿರುದ್ಧ ಅವರು ಫೇಸ್&zwnj;ಬುಕ್&zwnj;ನಲ್ಲಿ ಹಂಚಿಕೊಂಡ ಫೋಟೋಗಳೇ ಪ್ರಬಲ ಸಾಕ್ಷ್ಯಗಳಾಗಿವೆ. ಅಲ್ಲದೆ, ಚಾಮರಾಜಪೇಟೆಯ ಗೃಹ ಕಚೇರಿಯಲ್ಲಿ ಸಿಕ್ಕಿದ ನೋಂದಣಿ ಪುಸಕ್ತಗಳಲ್ಲಿ ನೆರವು ಪಡೆದವರ ಹೆಸರು ಒಳಗೊಂಡಂತೆ ಇದ್ದ ಸ್ವವಿವರವು ಜಮೀರ್ ಅವರಿಗೆ ಕಾನೂನಿನ ಕುಣಿಕೆ ಬಿಗಿಗೊಳಿಸಿವೆ. ಮಾಜಿ ಸಚಿವರ ಆದಾಯ ಹಾಗೂ ಅವರ ದಾನ-ಧರ್ಮದ ವಿವರವನ್ನು ಪೊಲೀಸರು ತಾಳೆ ಹಾಕಿದಾಗ ಅಕ್ರಮ ಸಂಪತ್ತಿನ ಗಳಿಕೆ ಗೊತ್ತಾಯಿತು ಎಂದು ತಿಳಿದು ಬಂದಿದೆ.&lt;/p&gt;&lt;p&gt;ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಕೆಗೆ ಪ್ರಾಸಿಕ್ಯೂಷನ್&zwnj; ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ವೇಳೆ ಮಾಜಿ ಸಚಿವರ ಸಂಪತ್ತು ಶೋಧನಾ ಕಾರ್ಯ ಕುರಿತು ಕುತೂಹಲಕಾರಿ ಸಂಗತಿಗಳು ಬಯಲಾಗಿವೆ.&lt;/p&gt;&lt;h2&gt;₹15 ಲಕ್ಷ ಆದಾಯ, ಖರ್ಚು ಕೋಟಿ ಕೋಟಿ:&lt;/h2&gt;&lt;p&gt;ಚುನಾವಣಾ ಅಫಿಡವಿಟ್&zwnj;ನಲ್ಲಿ ತಮ್ಮ ಸಾರಿಗೆ (ಟ್ರಾವೆಲ್ಸ್ ಬಸ್&zwnj;ಗಳು) ಉದ್ಯಮದ ಬಗ್ಗೆ ಜಮೀರ್ ಉಲ್ಲೇಖಿಸಿದ್ದಾರೆ. ಇನ್ನು ಶಾಸಕ ಹಾಗೂ ಸಚಿವರಾಗಿ ಪಡೆದಿರುವ ಸಂಬಳ ಹೊರತುಪಡಿಸಿ ತಮ್ಮ ಆದಾಯದ ಮೂಲ ಟ್ರಾವೆಲ್ಸ್ ವ್ಯವಹಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಅವರ ವಾರ್ಷಿಕ 15 ಲಕ್ಷ ರು. ಆದಾಯ. ಆದರೆ, ಅ&zwj;ವರ ಖರ್ಚು-ವೆಚ್ಚಗಳು ವಾರ್ಷಿಕ ಆದಾಯಕ್ಕಿಂತ ಹೆಚ್ಚಾಗಿದೆ. ಆದಾಯಕ್ಕಿಂತ ಒಟ್ಟಾರೆ 26 ಕೋಟಿ ರು.ಗಳನ್ನು ಕಾನೂನುಬಾಹಿರವಾಗಿ ಮಾಜಿ ಸಚಿವರು ಸಂಪಾದಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿರುವುದಾಗಿ ಸರ್ಕಾರದ ಮೂಲಗಳು &lsquo;ಕನ್ನಡಪ್ರಭ&rsquo;ಕ್ಕೆ ಮಾಹಿತಿ ನೀಡಿವೆ.&lt;/p&gt;&lt;p&gt;ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಹಲವು ಜನರಿಗೆ ಜಮೀರ್ ಧಾರಾಳಿಯಾಗಿ ನೆರವು ನೀಡಿದ್ದಾರೆ. ತಾವು ಆರ್ಥಿಕ ಸಹಾಯ ಮಾಡಿದ ಜನರ ಜತೆ ಫೋಟೋ ತೆಗೆಸಿಕೊಂಡು ಅವುಗಳನ್ನು ಫೇಸ್&zwnj;ಬುಕ್&zwnj;ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ನೆರವು ಪಡೆದವರ ಸ್ವವಿವರನ್ನು ಮಾಜಿ ಸಚಿವರ ಸಿಬ್ಬಂದಿ ಪುಸ್ತಕದಲ್ಲಿ ಬರೆದಿಟ್ಟಿದ್ದರು. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಮಾಜಿ ಸಚಿವರ ಫೇಸ್&zwnj;ಬುಕ್ ಖಾತೆಯಲ್ಲಿನ ಫೋಟೋಗಳನ್ನೂ ಲೋಕಾಯುಕ್ತ ಪೊಲೀಸರು ಜಾಲಾಡಿದ್ದಾರೆ. ಅದೇ ರೀತಿ ಜಮೀರ್ ಅವರ ಕಚೇರಿ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ್ದ ನೋಂದಣಿ ಪುಸಕ್ತಗಳನ್ನು ಶೋಧಿಸಿದ ವೇಳೆ ದಾನ-ಧರ್ಮದ ಸುಮಾರು 2 ಕೋಟಿ ರು. &lsquo;ಲೆಕ್ಕ&rsquo; ಲಭಿಸಿದೆ ಎಂದು ತಿಳಿದು ಬಂದಿದೆ.&lt;/p&gt;&lt;h3&gt;ಕೊರೋನಾ ಕಾಲದಲ್ಲೂ ದಾನ ಧರ್ಮ:&lt;/h3&gt;&lt;p&gt;ಕೊರೋನಾ ದುರಿತ ಕಾಲದಲ್ಲಿ ಮೂರು ವರ್ಷಗಳ ಕಾಲ ಸಾರಿಗೆ ಉದ್ಯಮ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ತಮ್ಮ ಆದಾಯದ ಮೂಲವಾಗಿದ್ದ ಉದ್ಯಮವೇ ಭಾರೀ ಆರ್ಥಿಕ ಸಂಕಷ್ಟಕ್ಕೀಡಾದ ಸಂದರ್ಭದಲ್ಲೂ ಜಮೀರ್ ಅವರು &lsquo;ದಾನಿ&rsquo; ಆಗಿದ್ದರು. ಇದು ಲೋಕಾಯುಕ್ತ ಪೊಲೀಸರಿಗೆ ಮಾಜಿ ಸಚಿವರ ಹಿಂದಿರುವ ಆರ್ಥಿಕ &lsquo;ಶಕ್ತಿ&rsquo; ಬಗ್ಗೆ ಪ್ರಶ್ನೆ ಮೂಡಿಸಿತ್ತು. ಆಗ ಅವರ ಹಣಕಾಸು ವಿವರ ಪರಿಶೀಲಿಸಿದಾಗ ಆದಾಯಕ್ಕೂ ಮೀರಿದ ಸಂಪತ್ತು ಗಳಿಕೆಗೆ ಪುರಾವೆಗಳು ಸಿಕ್ಕಿವೆ ಎಂದು ಮೂಲಗಳು ಹೇಳಿವೆ.&lt;/p&gt;&lt;p&gt;ಶಾಸಕರಾಗುವ ಮುನ್ನ ಬೆಂಗಳೂರಿನ ಸದಾಶಿವನಗರದ ಅಪಾರ್ಟ್&zwnj;ಮೆಂಟ್&zwnj;ನಲ್ಲಿ ಫ್ಲ್ಯಾಟ್&zwnj;, ಮೈಸೂರಿನಲ್ಲಿ ನಿವೇಶನ ಹಾಗೂ ಲಕ್ಷದ ಲೆಕ್ಕದಲ್ಲಿ ಖಾತೆಯಲ್ಲಿ ಹಣವಿತ್ತು. ಶಾಸಕರಾದ ನಂತರ ಶಿವಾಜಿನಗರದಲ್ಲಿ 20 ಕೋಟಿ ರು.ಗೂ ಅಧಿಕ ಮೌಲ್ಯದ ವೈಭೋಪೇತ ಬಂಗಲೆ ಕಟ್ಟಿದ್ದಾರೆ. ಅದೇ ರೀತಿ ಸುಮಾರು 4 ಕೋಟಿ ರು. ವಿನಿಯೋಗಿಸಿ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ವಿದೇಶ ಪ್ರವಾಸಕ್ಕೆ ಕೋಟ್ಯಂತರ ರು. ಖರ್ಚು ಮಾಡಿದ್ದಾರೆ. ಈ ಎಲ್ಲವುಗಳ ಗುಣಕಾರ-ಭಾಗಾಕಾರ ಮಾಡಿದಾಗ ಆದಾಯಕ್ಕೂ ಮೀರಿದ ಖರ್ಚು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.&lt;/p&gt;&lt;h3&gt;10 ಸಾವಿರ ಖಾತೆಗಳ ವಿವರ&lt;/h3&gt;&lt;p&gt;ಆದಾಯಕ್ಕಿಂತ ಆಸ್ತಿ ಸಂಪಾದನೆ ಸಂಬಂಧ ಸುಮಾರು 10,000ಕ್ಕೂ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಪೊಲೀಸರು ಜಾಲಾಡಿದ್ದಾರೆ. ಮಾಜಿ ಸಚಿವರ ಖಾತೆಗಳಿಂದ ಹಣ ವರ್ಗಾವಣೆ ಹಾಗೂ ಅವರಿಂದ ಆರ್ಥಿಕ ನೆರವು ಪಡೆದವರ ವಿವರ ಕಲೆ ಹಾಕಲು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/lokayukta-shock-zameer-ahmed-khan-s-disproportionate-assets-case-what-next-if-prosecution-is-sanctioned-rav/articleshow-gt6mbsx"/>
        </item>
        <item>
            <title><![CDATA[ಮೈಸೂರಿನ ತಂತ್ರ ಅಸ್ಸಾಂನಲ್ಲೂ ಪ್ರಯೋಗ: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡಿದ್ರೆ LED Screen ಮೇಲೆ ಪ್ರದರ್ಶನ!]]></title>
            <link>https://kannada.asianetnews.com/india-news/tinsukia-hall-of-shame-campaign-urinating-in-a-public-place-leads-to-display-on-an-led-screen-rav/articleshow-mn478s1</link>
            <guid isPermaLink="true">https://kannada.asianetnews.com/india-news/tinsukia-hall-of-shame-campaign-urinating-in-a-public-place-leads-to-display-on-an-led-screen-rav/articleshow-mn478s1</guid>
            <pubDate>Mon, 13 Jul 2026 07:10:19 +0530</pubDate>
            <description><![CDATA[&lt;p&gt;ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಮೈಸೂರಿನ ಕನ್ನಡಿ ತಂತ್ರದಂತೆ, ಅಸ್ಸಾಂನ ಟಿನ್ಸುಕಿಯಾ ಪುರಸಭೆಯು 'ಹಾಲ್&zwnj; ಆಫ್&zwnj; ಶೇಮ್&zwnj;' ಅಭಿಯಾನ ಆರಂಭಿಸಿದೆ. ಈ ಅಭಿಯಾನದಡಿ, ನಿಯಮ ಉಲ್ಲಂಘಿಸುವವರ ದೃಶ್ಯವನ್ನು ಸಿಸಿಟಿವಿಯಲ್ಲಿ ಸೆರೆಹಿಡಿದು, ಬೃಹತ್ ಎಲ್&zwnj;ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxchzvssskq83v350j2xyzm6,imgname-----------------------2026-07-13t070757.337-1783906692921.jpg" type="image/jpeg" height="390" width="690"/>
            <content:encoded><![CDATA[&lt;h2&gt;-ಮೈಸೂರಿನಲ್ಲಿ ಕನ್ನಡಿ ಅಳವಡಿಸಿದಂತೆ ಅಸ್ಸಾಂನಲ್ಲೂ ತಂತ್ರ&lt;/h2&gt;&lt;p&gt;&lt;strong&gt;ಗುವಾಹಟಿ (ಜು.13): &lt;/strong&gt;ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಮೈಸೂರಿನಲ್ಲಿ ಕನ್ನಡಿ ಅಳವಡಿಸುವ ವಿನೂತನ ಪ್ರಯತ್ನ ಮಾಡಲಾಗಿತ್ತು. ಇದೀಗ ಅಸ್ಸಾಂನಲ್ಲೂ ಇಂಥದ್ದೇ ತಂತ್ರದ ಮೊರೆ ಹೋಗಲಾಗಿದೆ&amp;nbsp;&lt;/p&gt;&lt;h3&gt;ಹಾಲ್ ಆಫ್ ಶೇಮ್ ಅಭಿಯಾನ.&lt;/h3&gt;&lt;p&gt;ಅಸ್ಸಾಂನ ಟಿನ್ಸುಕಿಯಾ ಪುರಸಭೆಯು &lsquo;ಹಾಲ್&zwnj; ಆಫ್&zwnj; ಶೇಮ್&zwnj;&rsquo; ಎಂಬ ವಿಶಿಷ್ಟ ಅಭಿಯಾನವನ್ನು ಆರಂಭಿಸಿದೆ. ಇದರ ಮೂಲಕ, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟೀವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾರಾದರೂ ರಸ್ತೆ ಬದಿ ಅಥವಾ ಇತರ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ, ಕಸ ಚೆಲ್ಲಿದರೆ ಆ ದೃಶ್ಯಗಳನ್ನು ಸಿಸಿಟೀವಿ ಸೆರೆಹಿಡಿಯುತ್ತದೆ. ನಂತರ ಅದನ್ನು ಬೀದಿಯಲ್ಲಿ ಅಳವಡಿಸಿದ ಬೃಹತ್&zwnj; ಎಲ್&zwnj;ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಪರದೆ ಮೇಲೆ ಅನಾವರಣವಾಗುವ ಭಯಕ್ಕಾದರೂ ಜನ ಇಂಥ ಕೆಲಸಗಳನ್ನು ಬಿಡಬಹುದು ಎಂಬುದು ಆಡಳಿತದ ಚಿಂತನೆ.&lt;/p&gt;&lt;p&gt;ಆದರೆ ಈ ಕ್ರಮಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕ ನಿಯಮಗಳನ್ನು ಉಲ್ಲಂಘಿಸುವವರಿಗೆ ಸೂಕ್ತ ಶಿಕ್ಷೆ ವಿಧಿಸುವ ಬದಲು ಈ ರೀತಿ ಮಾನ ಕಳೆಯುವುದು ಸರಿಯಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/tinsukia-hall-of-shame-campaign-urinating-in-a-public-place-leads-to-display-on-an-led-screen-rav/articleshow-mn478s1"/>
        </item>
        <item>
            <title><![CDATA['ಸಣ್ಣ ಮೀನುಗಳನ್ನು ಹಿಡಿದರೆ ಪ್ರಯೋಜನವಿಲ್ಲ..'  ಲೋಕಾಯುಕ್ತಕ್ಕೆ ಹೈಕೋರ್ಟ್ ಮಾರ್ಮಿಕ ಮಾತು, ಏನಿದು ಪ್ರಕರಣ?]]></title>
            <link>https://kannada.asianetnews.com/state/karnataka-hc-to-lokayukta-no-use-targeting-small-fish-in-corruption-cases-rav/articleshow-wbnk8g8</link>
            <guid isPermaLink="true">https://kannada.asianetnews.com/state/karnataka-hc-to-lokayukta-no-use-targeting-small-fish-in-corruption-cases-rav/articleshow-wbnk8g8</guid>
            <pubDate>Mon, 13 Jul 2026 06:22:11 +0530</pubDate>
            <description><![CDATA[&lt;p&gt;ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆ ತಪ್ಪು ಮಾಡಿದ ದೊಡ್ಡ ಮೀನುಗಳನ್ನು ಬಿಟ್ಟು, ಸಣ್ಣ ಮೀನುಗಳನ್ನು ಹಿಡಿದರೆ ಪ್ರಯೋಜನವಿಲ್ಲ ಎಂದಿರುವ ಹೈಕೋರ್ಟ್ ದೊಡ್ಡ ಮೀನುಗಳನ್ನು ಕೈಬಿಟ್ಟರೆ, ಸಣ್ಣ ಮೀನುಗಳು ನರಳುವುದಕ್ಕೆ ಹೈಕೋರ್ಟ್ ಅನುಮತಿಸುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktn8g40cfn90np10t5g1zgyr,imgname-----------------------2026-06-09t090917.634-1780977504268.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಕೇಸ್&zwnj; ವರ್ಕರ್&zwnj;ಗಳ ಮೇಲೆ ದಾಖಲೆ ತಿದ್ದಿದ ಆರೋಪ&lt;/li&gt; &lt;li&gt;ಲೋಕಾಯುಕ್ತ ಪೊಲೀಸರಿಂದ ದಾಖಲಾಗಿದ್ದ ಕೇಸ್&zwnj;&lt;/li&gt; &lt;li&gt;&amp;nbsp;ಈ ಬಗ್ಗೆ ಲೋಕಾ ಕೋರ್ಟಲ್ಲಿ 2017ರಿಂದ ವಿಚಾರಣೆ&lt;/li&gt; &lt;li&gt;&amp;nbsp;ಈ ವಿಚಾರಣೆ ರದ್ದತಿಗೆ ಕೋರಿ ಹೈಕೋರ್ಟ್&zwnj;ಗೆ ಅರ್ಜಿ&lt;/li&gt; &lt;li&gt;- ಅರ್ಜಿ ವಿಚಾರಣೆ ವೇಳೆ ಕೋರ್ಟ್ ಮಾರ್ಮಿಕ ಮಾತು&lt;/li&gt;&lt;/ul&gt;&lt;p&gt;&lt;strong&gt;ವೆಂಕಟೇಶ್&zwnj; ಕಲಿಪಿ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಜು.13): &lt;/strong&gt;ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆ ತಪ್ಪು ಮಾಡಿದ ದೊಡ್ಡ ಮೀನುಗಳನ್ನು ಬಿಟ್ಟು, ಸಣ್ಣ ಮೀನುಗಳನ್ನು ಹಿಡಿದರೆ ಪ್ರಯೋಜನವಿಲ್ಲ ಎಂದಿರುವ ಹೈಕೋರ್ಟ್ ದೊಡ್ಡ ಮೀನುಗಳನ್ನು ಕೈಬಿಟ್ಟರೆ, ಸಣ್ಣ ಮೀನುಗಳು ನರಳುವುದಕ್ಕೆ ಹೈಕೋರ್ಟ್ ಅನುಮತಿಸುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದೆ.&lt;/p&gt;&lt;p&gt;60ರ ದಶಕದಲ್ಲಿ ಸರ್ಕಾರ ಕೆಲ ವ್ಯಕ್ತಿಗಳಿಗೆ ಮಂಜೂರು ಮಾಡಿದ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತಿದ್ದಿದ ಆರೋಪದ ಮೇಲೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ 2017ರಿಂದ ತಮ್ಮ ವಿರುದ್ಧ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಮಾಗಡಿಯ ಕೇಸ್ ವರ್ಕರ್&zwnj;ಗಳಾದ ರಮೇಶ್ ಮತ್ತು ಸುಮಿತ್ರಾ ಎಂಬುವವರು ಹೈಕೋರ್ಟ್&zwnj;ಗೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಹೀಗೆ ನುಡಿದಿದೆ.&lt;/p&gt;&lt;p&gt;ಪ್ರಕರಣದಲ್ಲಿ ದೊಡ್ಡ ಮೀನುಗಳಾದ ತಹಸೀಲ್ದಾರ್, ಡಿಡಿಎಲ್ಆರ್ ಮತ್ತು ಸರ್ವೇಯರ್ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸುವ ಬಗ್ಗೆ ಲೋಕಾಯುಕ್ತ ಸಂಸ್ಥೆಯಿಂದ ಸೂಚನೆಗಳನ್ನು ಪಡೆದು ತಿಳಿಸಿ ಎಂದು ಸೂಚಿಸಿ, ವಿಚಾರಣೆಯನ್ನು ಜು.15ಕ್ಕೆ ವಿಚಾರಣೆ ಮುಂದೂಡಿತು.&lt;/p&gt;&lt;p&gt;ಹಾಗೆಯೇ, ಅರ್ಜಿದಾರರ ವಿರುದ್ಧದ ಲೋಕಾಯುಕ್ತ ಕೋರ್ಟ್ ವಿಚಾರಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿದೆ.&lt;/p&gt;&lt;h2&gt;ಕರದು ದೋಷಾರೋಪ ಪಟ್ಟಿ ಸಿದ್ಧವಾಗಿದೆ:&lt;/h2&gt;&lt;p&gt;ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ಹಾಜರಾಗಿ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 1987ರ ಸೆಕ್ಷನ್ 13ರಡಿ ಅರ್ಜಿದಾರರ ವಿರುದ್ಧ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಆರೋಪಿಗಳು ಈ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು. ಅದಕ್ಕೆ ಲೋಕಾಯುಕ್ತ ಪರ ವಕೀಲರು, ಕರಡು ದೋಷಾರೋಪ ಪಟ್ಟಿ ಸಿದ್ಧವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.&lt;/p&gt;&lt;p&gt;ಆಗ ಅರ್ಜಿದಾರರ ಪರ ವಕೀಲರು, ಕಂದಾಯ ತಿದ್ದುಪಡಿಗಳನ್ನು ರದ್ದುಪಡಿಸಲು ಸರ್ಕಾರ ಆದೇಶಿಸಿತ್ತು. ಆ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದ್ದು, ಮೂಲ ಮಂಜೂರುದಾರರ ಹೆಸರಿಗೆ ಭೂಮಿ ಮಂಜೂರು ಮಾಡಿದ ಆದೇಶ ಎತ್ತಿಹಿಡಿಯಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ಸರ್ಕಾರವೇ ಹಿಂಪಡೆದಿದೆ. ಈ ಇಬ್ಬರು ಅರ್ಜಿದಾರರು ಕೇವಲ ಕೇಸ್ ವರ್ಕರ್. ಇತರೆ ತಹಸೀಲ್ದಾರ್, ಡಿಡಿಎಲ್ಆರ್ ಇತರೆ ದೊಡ್ಡ ಅಧಿಕಾರಿಗಳ ಮೇಲಿನ ಪ್ರಕರಣ ಹಿಂಪಡೆಯಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.&lt;/p&gt;&lt;p&gt;ಈ ಎಲ್ಲ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸುತ್ತೀರಾ ಎಂದು ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಲೋಕಾಯುಕ್ತ ಪರ ವಕೀಲರು ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ. ಹೆಚ್ಚಿನ ತನಿಖೆ ಅಗತ್ಯವಿದ್ದರೆ ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದರು. ಆಗ ನ್ಯಾಯಪೀಠ, ನೀವು ಬಯಸಿದರೆ ತಹಸೀಲ್ದಾರ್, ಡಿಡಿಎಲ್ಆರ್ ಮತ್ತು ಸರ್ವೇಯರ್ ಮೇಲೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ಎಂದು ಹೇಳಿತು.&lt;/p&gt;&lt;h3&gt;ಪ್ರಮಾಣ ಪತ್ರ ಸಲ್ಲಿಸಿ:&lt;/h3&gt;&lt;p&gt;ನ್ಯಾಯಾಲಯ ಈ ಅರ್ಜಿದಾರರನ್ನು (ಕೇಸ್ ವರ್ಕರ್ಗಳನ್ನು) ಬಿಡಬಾರದು. ತಹಸೀಲ್ದಾರ್, ಡಿಡಿಎಲ್ಆರ್ ಮತ್ತು ಸರ್ವೇಯರ್ ಮೇಲೆ ಪ್ರತ್ಯೇಕ ಎಫ್ಐಆರ್ ದಾಖಲಿಸುತ್ತೇವೆ ಎಂಬುದಾಗಿ ತಿಳಿಸಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ ಎಂದು ಲೋಕಾಯುಕ್ತ ಪೊಲೀಸರಿಗೆ ಮೌಖಿಕವಾಗಿ ಸೂಚಿಸಿತು.&lt;/p&gt;&lt;p&gt;ಮೊದಲಿಗೆ ನಾವು ಯಾವ ಮೀನು ತಪ್ಪು ಮಾಡಿರುವುದಾಗಿ ತಿಳಿಯಬೇಕಿದೆ, ಯಾವೆಲ್ಲಾ ದೊಡ್ಡ ಮೀನು ತಪ್ಪು ಮಾಡಿವೆ ಎಂಬುದಾಗಿ ದಾಖಲೆಗಳು ಇದೆಯಲ್ಲವೇ? ಅದು ನ್ಯಾಯಾಲಯ ಆದೇಶದಲ್ಲೇ ಉಲ್ಲೇಖವಾಗಿದೆಯಲ್ಲವೇ? ದೊಡ್ಡ ಮೀನು ಯಾರು ಎಂಬುದು ನಿಮಗೆ ಗೊತ್ತಿದೆ. ತಹಸೀಲ್ದಾರ್, ಡಿಡಿಎಲ್ಆರ್ ಮತ್ತು ಸರ್ವೇಯರ್ ದೊಡ್ಡ ಮೀನುಗಳು. ಅವರನ್ನು ಪ್ರಕರಣದಿಂದ ಕೈ ಬಿಟ್ಟೀದ್ದೀರಿ. ಕೇಸ್ ವರ್ಕರ್ (ಸಣ್ಣ ಮೀನು) ಅವರನ್ನು ಹಿಡಿದುಕೊಂಡು ಕೊಂಡು ಆಟವಾಡಿಸುತ್ತಿದ್ದೀರಿ ಎಂದು ಪೀಠ ಮಾರ್ಮಿಕವಾಗಿ ನುಡಿಯಿತು.&lt;/p&gt;&lt;p&gt;ಅದಕ್ಕೆ ಲೋಕಾಯುಕ್ತ ಪರ ವಕೀಲರು, ನ್ಯಾಯಪೀಠದ ಅಭಿಪ್ರಾಯದ ಬಗ್ಗೆ ಲೋಕಾಯುಕ್ತ ತನಿಖಾಧಿಕಾರಿಗಳಿಂದ ಅಗತ್ಯ ಸಲಹೆ-ಸೂಚನೆ ಪಡೆದು ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.&lt;/p&gt;&lt;p&gt;ಅಂತಿಮವಾಗಿ ನ್ಯಾಯಪೀಠ, ಅರ್ಜಿಯನ್ನು ಮುಂದಿನ ವಿಚಾರಣೆ ವೇಳೆ ಮುಕ್ತಾಯಗೊಳಿಸೋಣ ಎಂದು ತಿಳಿಸಿ ವಿಚಾರಣೆ ಮುಂದೂಡಿತು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-hc-to-lokayukta-no-use-targeting-small-fish-in-corruption-cases-rav/articleshow-wbnk8g8"/>
        </item>
        <item>
            <title><![CDATA[Operation entebbe: ಎಂಟೆದೆಯ ಎಂಟೆಬ್ಬೆಗೆ ಈಗ 50! ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಇಸ್ರೇಲ್‌ ಕಾರ್ಯಾಚರಣೆ!]]></title>
            <link>https://kannada.asianetnews.com/world-news/today-marks-50-years-since-operation-entebbe-one-of-the-boldest-rescue-missions-in-idf-history-rav/articleshow-rt2n7w2</link>
            <guid isPermaLink="true">https://kannada.asianetnews.com/world-news/today-marks-50-years-since-operation-entebbe-one-of-the-boldest-rescue-missions-in-idf-history-rav/articleshow-rt2n7w2</guid>
            <pubDate>Mon, 13 Jul 2026 05:28:27 +0530</pubDate>
            <description><![CDATA[&lt;p&gt;1976ರಲ್ಲಿ ಪ್ಯಾಲೆಸ್ತೀನ್&zwnj; ಮತ್ತು ಜರ್ಮನ್&zwnj; ಉಗ್ರರು ಏರ್&zwnj; ಫ್ರಾನ್ಸ್&zwnj; ವಿಮಾನವನ್ನು ಅಪಹರಿಸಿ, ಇಸ್ರೇಲಿ ಪ್ರಯಾಣಿಕರನ್ನು ಉಗಾಂಡದ ಎಂಟೆಬ್ಬೆಯಲ್ಲಿ ಒತ್ತೆಯಾಳಾಗಿರಿಸಿಸಿದರು ಇಸ್ರೇಲ್&zwnj; ಸೇನೆ 'ಆಪರೇಷನ್&zwnj; ಎಂಟೆಬ್ಬೆ' ಎಂಬ ರಣರೋಚಕ ಕಾರ್ಯಾಚರಣೆ ನಡೆಸಿ, ಎಲ್ಲಾ ಸವಾಲುಗಳನ್ನು ರಕ್ಷಿಸಿದ ರಣರೋಚಕ ಕತೆಯಿದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxcc4t4zatr6dy13zejgmabc,imgname-----------------------2026-07-13t052257.247-1783900563615.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಚಿಕೇತನ್&zwnj; ಎನ್&zwnj;&lt;/strong&gt;&lt;/p&gt;&lt;p&gt;ಟೆಲ್&zwnj; ಅವೀವ್&zwnj;ನಿಂದ ಪ್ಯಾರಿಸ್&zwnj;ಗೆ ತೆರಳುತ್ತಿದ್ದ ವಿಮಾನವನ್ನು ಅಪಹರಿಸಿ ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ 7 ಪ್ಯಾಲೆಸ್ತೀನ್&zwnj;, ಜರ್ಮನ್&zwnj; ಉಗ್ರರನ್ನು ಸದೆಬಡಿದ ಇಸ್ರೇಲ್&zwnj;ನ ಅತ್ಯಂತ ರಣರೋಚಕ ಕಾರ್ಯಾಚರಣೆಯೇ &lsquo;ಆಷರೇಷನ್&zwnj; ಎಂಟೆಬ್ಬೆ.&rsquo; ಇಸ್ರೇಲ್&zwnj;ನ ಧೈರ್ಯ, ನಿಖರ ಯೋಜನೆ, ಗುಪ್ತಚರ ಸಾಮರ್ಥ್ಯ ಮತ್ತು ಮಾನವ ಜೀವ ರಕ್ಷಣೆಗೆ ನೀಡಿದ ಆದ್ಯತೆಯ ಪ್ರತೀಕ ಈ ಆಪರೇಷನ್&zwnj;. 1976ರ ಜುಲೈ 3- 4ರಂದು ನಡೆದ &lsquo;ಆಪರೇಷನ್&zwnj; ಎಂಟೆಬ್ಬೆ&rsquo;ಗೆ 50 ವರ್ಷ ತುಂಬಿದೆ. ವಿಶ್ವವನ್ನೇ ನಿಬ್ಬೆರಗಾಗಿಸಿದ ಈ ಸಾಹಸ ಕಾರ್ಯಾಚರಣೆ ಹೇಗೆ ನಡೆಯಿತು? ಇಸ್ರೇಲ್&zwnj; ಹೇಗೆ ತನ್ನ ಪ್ರಜೆಗಳನ್ನು ರಕ್ಷಣೆ ಮಾಡಿತು? ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;h2&gt;ವಿಮಾನದ ಒಳಗೇ ಇದ್ದರು ಅಪಹರಣಕಾರರು&lt;/h2&gt;&lt;p&gt;1976ರ ಜೂ. 27ರಂದು 248 ಪ್ರಯಾಣಿಕರು, 12 ಸಿಬ್ಬಂದಿ ಸೇರಿ 260 ಜನರನ್ನು ಹೊತ್ತು ಇಸ್ರೇಲ್&zwnj;ನ ಟೆಲ್&zwnj; ಅವೀವ್&zwnj;ನಿಂದ ಫ್ರಾನ್ಸ್&zwnj;ನತ್ತ \Bಏರ್&zwnj; ಫ್ರಾನ್ಸ್&zwnj; ವಿಮಾನ ಟೇಕಾಫ್&zwnj; ಆಗಿತ್ತು. \Bಗ್ರೀಸ್&zwnj;ನ ಅಥೆನ್ಸ್&zwnj; ಹೊರಟ ಬಳಿಕ ವಿಮಾನದ ಒಳಗೇ ಇದ್ದ ನಾಲ್ವರು ಉಗ್ರರು ಅದನ್ನು ಅಪಹರಿಸಿದರು. ಅದರಲ್ಲಿ ಇಬ್ಬರು ಪ್ಯಾಲೆಸ್ತೀನ್&zwnj; ಉಗ್ರ ಸಂಘಟನೆಯ ಸದಸ್ಯರಾಗಿದ್ದು, ಉಳಿದಿಬ್ಬರು ಜರ್ಮನ್ ಉಗ್ರ ಸಂಘಟನೆಯ ಸದಸ್ಯರಾಗಿದ್ದರು. ಉಗ್ರರು ಮೊದಲು ವಿಮಾನವನ್ನು ಲಿಬಿಯಾದ ಬೆಂಗಾಜಿ ಏರ್&zwnj;ಪೋರ್ಟ್&zwnj;ಗೆ ಒಯ್ದರು. ಅಲ್ಲಿ ವಿಮಾನಕ್ಕೆ ಇಂಧನ ತುಂಬಿಸಿ ಜೂ.28ರಂದು ಉಗಾಂಡದ ಎಂಟೆಬ್ಬೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದರು. ಅಲ್ಲಿ ಮತ್ತೆ 3 ಉಗ್ರರು ಅವರನ್ನು ಸೇರಿಕೊಂಡರು. ಉಗಾಂಡದ ಅಂದಿನ ಸರ್ವಾಧಿಕಾರಿ ಇದಿ ಅಮೀನ್&zwnj; ಹಾಗೂ ಉಗಾಂಡ ಸೇನೆಯ ಬೆಂಬಲ ಉಗ್ರರಿಗೆ ಬಲ ತುಂಬಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಉಗ್ರರು ವಿಮಾನ ನಿಲ್ದಾಣದ ಲಾಂಜ್&zwnj;ಗೆ ಸ್ಥಳಾಂತರಿಸಿ ಒತ್ತೆಯಾಳಾಗಿಸಿಕೊಂಡರು.&lt;/p&gt;&lt;h3&gt;ದಿನಕ್ಕೊಬ್ಬರನ್ನು ಕೊಲ್ಲುವ ಬೆದರಿಕೆ&lt;/h3&gt;&lt;p&gt;ಇಸ್ರೇಲ್&zwnj; ಸೇರಿ ವಿಶ್ವದ ವಿವಿಧ ಜೈಲಿನಲ್ಲಿರುವ 53 ಮಂದಿ ಪ್ಯಾಲೆಸ್ತೀನ್&zwnj; ಉಗ್ರರನ್ನು ವಾರದೊಳಗೆ ಬಿಡುಗಡೆ ಮಾಡಬೇಕು. ಜೊತೆಗೆ 5 ಮಿಲಿಯನ್&zwnj; ಡಾಲರ್&zwnj;ಗಳನ್ನು ನೀಡಬೇಕು. ಒಪ್ಪದಿದ್ದರೆ, ದಿನಕ್ಕೆ ಒಬ್ಬೊಬ್ಬ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಇಸ್ರೇಲ್&zwnj;ಗೆ ಅಪಹರಣಕಾರರು ಎಚ್ಚರಿಕೆ ನೀಡಿದರು. ವಿಮಾನ ಹೈಜಾಕ್&zwnj; ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಇಸ್ರೇಲ್&zwnj; ಪ್ರಧಾನಿ ಯಿಟ್&zwnj;ಸಾಕ್ ರಾಬಿನ್ ಸಭೆ ಮೇಲೆ ಸಭೆ ನಡೆಸಿದರು. ಉಗಾಂಡದ ಸರ್ವಾಧಿಕಾರಿ ಇದಿ ಅಮೀನ್&zwnj; ಜೊತೆ ಇಸ್ರೇಲ್&zwnj;ನ ತಂಡ ಚರ್ಚೆ ನಡೆಸಿತು. ಉಗ್ರರು ಬೇರೆ ಬೇರೆ ದೇಶದ ಜನರನ್ನೂ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ, ಅವರಿಗೆ ಏನಾದರೂ ಹೆಚ್ಚು ಕಮ್ಮಿ ಆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇದಿ ಅಮೀನ್&zwnj;ಗೆ ಮನವರಿಕೆ ಮಾಡಿಕೊಟ್ಟಿತು. ಇದಿ ಅಮೀನ್&zwnj; ಸೂಚನೆ ಮೇರೆಗೆ ಬೇರೆ ದೇಶಗಳಿಗೆ ಸೇರಿದ ಯಹೂದಿಯೇತರ 147 ಒತ್ತೆಯಾಳುಗಳನ್ನು ಉಗ್ರರನ್ನು ಬಿಡುಗಡೆ ಮಾಡಿದರು. ಆದರೆ ಇಸ್ರೇಲ್&zwnj;ನ 106 ಜನರನ್ನು ಮಾತ್ರ ವಶದಲ್ಲಿಟ್ಟುಕೊಂಡರು.&lt;/p&gt;&lt;h3&gt;ಕಾರ್ಯಾಚರಣೆಗೆ ಮೊಸಳೆ ಅಡ್ಡಿ!&lt;/h3&gt;&lt;p&gt;ಈಜಿಪ್ಟ್&zwnj;, ಪ್ಯಾಲೆಸ್ತೀನ್&zwnj; ನಾಯಕರಿಂದ ಮನವೊಲಿಕೆ ಪ್ರಯತ್ನವನ್ನು ಇಸ್ರೇಲ್&zwnj; ನಡೆಸಿತಾದರೂ ಪ್ರಯೋಜನವಾಗಲಿಲ್ಲ. ಇಸ್ರೇಲ್&zwnj; ಮುಂದೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ಸೇನಾ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿತು. ಆದರೆ ಅದು ಸುಲಭ ಆಗಿರಲಿಲ್ಲ. ಇಸ್ರೇಲ್&zwnj;ನಿಂದ ಉಗಾಂಡಕ್ಕೆ ಬರೋಬ್ಬರಿ 3500 ಕಿ.ಮೀ. ದೂರ. ವಿಮಾನಕ್ಕೆ ಒಂದೇ ಸಲ ಇಂಧನ ಭರ್ತಿ ಮಾಡಿಸಿಕೊಂಡು ಅಷ್ಟು ದೂರ ಹೋಗಿ ಬರುವುದು ಆಗದ ಮಾತಾಗಿತ್ತು. ಹೀಗಾಗಿ ಎಂಟೆಬ್ಬೆ ಬಳಿಯ ವಿಕ್ಟೋರಿಯಾ ಸರೋವರದಲ್ಲಿ ಇಸ್ರೇಲಿ ಕಮಾಂಡೋ ಪಡೆಗಳನ್ನು ಇಳಿಸಿ ಅಲ್ಲಿಂದ ಬೋಟ್&zwnj; ಮುಖಾಂತರ ಎಂಟೆಬ್ಬೆಗೆ ಹೋಗುವ ಯೋಜನೆಯನ್ನು ರೂಪಿಸಲಾಯಿತು. ಆದರೆ ಆ ಸರೋವರದಲ್ಲಿ ಮೊಸಳೆ ಇದ್ದವು. ಕಮಾಂಡೋಗಳಿಗೆ ತೊಂದರೆ ಆಗುತ್ತೆಂದು ಆ ಯೋಜನೆಯನ್ನೇ ಇಸ್ರೇಲ್&zwnj; ಕೈ ಬಿಟ್ಟಿತು.&lt;/p&gt;&lt;p&gt;&lt;strong&gt;ಉಗಾಂಡ ರೀತಿಯ ಕಾರು ತಂದರು&amp;nbsp;&lt;/strong&gt;&lt;/p&gt;&lt;p&gt;ಇಸ್ರೇಲ್&zwnj; ಸೇನೆ ಬೇರೆ ಯೋಜನೆ ಸಿದ್ಧಪಡಿಸುಷ್ಟರಲ್ಲಿ ಉಗ್ರರು ನೀಡಿದ್ದ ಒಂದು ವಾರದ ಗಡುವು ಮುಗಿಯಲು ಕೇವಲ ಒಂದೇ ದಿನ ಬಾಕಿ ಇತ್ತು. ಉಗಾಂಡ ತಲುಪುವ ಮೊದಲು ಲಿಬಿಯಾದ ಬೆಂಗಾಜಿ ವಿಮಾನ ನಿಲ್ದಾಣದಲ್ಲಿ ಉಗ್ರರು ಗರ್ಭಿಣಿಯೊಬ್ಬರನ್ನು ಇಳಿಸಿ ಹೋಗಿದ್ದರು. ಆಕೆ ಹಾಗೂ ಉಗ್ರರಿಂದ ಬಿಡುಗಡೆಯಾದ ಯಹೂದಿಯೇತರ ಪ್ರಯಾಣಿಕರನ್ನು ಸಂಪರ್ಕಿಸಿದ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್&zwnj;, ಉಗ್ರರ ಸಂಖ್ಯೆ ಹಾಗೂ ಅವರ ಬಳಿ ಇರುವ ಶಸ್ತ್ರಾಸ್ತ್ರಗಳ ವಿವರ ಸಂಗ್ರಹಿಸಿತು. ಉಗಾಂಡ ಏರ್&zwnj;ಪೋರ್ಟ್&zwnj; ನಿರ್ಮಾಣ ಕಂಪನಿಯ ಜತೆಗೂ ಚರ್ಚಿಸಿ, ಅಲ್ಲಿನ ವಿನ್ಯಾಸದ ಮಾಹಿತಿ ಪಡೆಯಿತು. ಉಗಾಂಡ ಸೇನೆ ಹಾಗೂ ಉಗ್ರರ ಕಣ್ತಪ್ಪಿಸಿ ಕಾರ್ಯಾಚರಣೆ ನಡೆಸುವ ಪ್ಲಾನ್&zwnj; ಸಿದ್ಧವಾಯಿತು. ಇದಿ ಅಮೀನ್&zwnj; ಕಪ್ಪು ಬಣ್ಣದ ಮರ್ಸಿಡಿಸ್&zwnj; ಬೆಂಜ್&zwnj; ಕಾರು ಬಳಸುತ್ತಿದ್ದ. ಆತನ ಬೆಂಗಾವಲು ಪಡೆ ಲ್ಯಾಂಡ್&zwnj; ರೋವರ್&zwnj;ನಲ್ಲಿ ಓಡಾಡುತ್ತಿತ್ತು. ಅದೇ ಮಾದರಿಯ ಕಾರುಗಳನ್ನು ಖರೀದಿಸಿದ ಇಸ್ರೇಲ್&zwnj;, ತನ್ನ ದೇಶದ ಏರ್&zwnj;ಪೋರ್ಟ್&zwnj;ನಲ್ಲಿ ತಾಲೀಮು ಆರಂಭಿಸಿತು. ಅಷ್ಟರಲ್ಲಿ ಇಸ್ರೇಲ್&zwnj; ವಿಮಾನಗಳಿಗೆ ಇಂಧನ ತುಂಬಿಸಿಕೊಳ್ಳಲು ತನ್ನ ವಿಮಾನ ನಿಲ್ದಾಣದಲ್ಲಿ ಅವಕಾಶ ಕೊಡುವುದಾಗಿ ಆಫ್ರಿಕಾದ ಕೀನ್ಯಾ ಮುಂದೆ ಬಂತು. ಇಸ್ರೇಲ್&zwnj; ಕೊಂಚ ನಿರಾಳವಾಯಿತು.&lt;/p&gt;&lt;p&gt;&lt;strong&gt;ಈಗಿನ ಇಸ್ರೇಲ್&zwnj; ಪಿಎಂ ಅಣ್ಣನೇ ಲೀಡರ್&zwnj;&lt;/strong&gt;&lt;/p&gt;&lt;p&gt;ಕಾರ್ಯಾಚರಣೆ ನಡೆಸಲು ಇಸ್ರೇಲ್&zwnj;ನ 100 ವಿಶೇಷ ಕಮಾಂಡೋಗಳ ಪಡೆ ಸಜ್ಜಾಯಿತು. \Bಈ ಪೈಕಿ 29 ಮಂದಿಯನ್ನು ಒಳಗೊಂಡ &lsquo;ಅಸಾಲ್ಟ್&zwnj; ತಂಡ&rsquo; ಕಪ್ಪು ಬಣ್ಣದ ಬೆಂಜ್&zwnj; ಹಾಗೂ ಲ್ಯಾಂಡ್&zwnj; ರೋವರ್&zwnj; ಕಾರನ್ನು ಬಳಸಿ ಉಗಾಂಡದ ಸೈನಿಕರನ್ನು ತಡೆದು ಎಂಟೆಬ್ಬೆ ವಿಮಾನ ನಿಲ್ದಾಣಕ್ಕೆ ನುಗ್ಗಿ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಈ ತಂಡದ ನೇತೃತ್ವವನ್ನು ಇಂದಿನ ಇಸ್ರೇಲ್&zwnj; ಪ್ರಧಾನಿ ಬೆಂಜಮಿನ್&zwnj; ನೆತನ್ಯಾಹು ಅವರ ಅಣ್ಣ ಲೆಫ್ಟಿನೆಂಟ್&zwnj; ಕರ್ನಲ್&zwnj; ಯೋನತನ್ ನೆತನ್ಯಾಹು ಅವರು ವಹಿಸಿದ್ದರು. ಮತ್ತೊಂದು ತಂಡ ಇಸ್ರೇಲ್&zwnj; ವಿಮಾನಗಳ ರಕ್ಷಣೆ ಹಾಗೂ ಒತ್ತೆಯಾಳುಗಳನ್ನು ವಿಮಾನಕ್ಕೆ ಹತ್ತಿಸಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಂಡಿತ್ತು.&lt;/p&gt;&lt;p&gt;&lt;strong&gt;ತೀರಾ ಕೆಳಮಟ್ಟದಲ್ಲಿ ವಿಮಾನ ಹಾರಾಟ&lt;/strong&gt;&lt;/p&gt;&lt;p&gt;ಈಜಿಪ್ಟ್&zwnj;ನ ಶರ್ಮ್&zwnj; ಎಲ್&zwnj; ಶೇಕ್&zwnj; ಪ್ರದೇಶದಿಂದ ಇಸ್ರೇಲಿ ಕಮಾಂಡೋಗಳು ಆಪರೇಷನ್&zwnj; ಆರಂಭಿಸಿದರು. ಬೇರೆ ದೇಶದ ರಾಡಾರ್&zwnj;ಗಳಿಗೆ ಕಾಣಬಾರದು ಎಂದು ಕೆಂಪು ಸಮುದ್ರದ ಮೇಲೆ ಕೇವಲ 100 ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸಿ, ಅಲ್ಲಿಂದ ಕೀನ್ಯಾದ ನೈರೋಬಿ ವಿಮಾನ ನಿಲ್ದಾಣಕ್ಕೆ ತಲುಪಿದರು. ಅಲ್ಲಿ ಸಿ-130 ಹರ್ಕ್ಯುಲಸ್ ಮಾದರಿಯ 4 (ಕಾರು, ಯೋಧರನ್ನು ತುಂಬಿದ್ದ) ವಿಮಾನಗಳಿಗೆ ಇಂಧನವನ್ನು ತುಂಬಿಸಿಕೊಳ್ಳಲಾಯಿತು. ಜು.4ರ ರಾತ್ರಿ ಇಸ್ರೇಲ್&zwnj;ನ ಮೊದಲ ವಿಮಾನ ಉಗಾಂಡ ಗಡಿ ದಾಟಿ ರಾತ್ರಿ 11 ಗಂಟೆಗೆ ಎಂಟೆಬ್ಬೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಯೋನತನ್ ನೆತನ್ಯಾಹು ನೇತೃತ್ವದ ತಂಡ ಉಗಾಂಡ ಸೇನೆಯ ರೀತಿ ವೇಷ ತೊಟ್ಟು ಇದಿ ಅಮೀನ್&zwnj; ಬಳಸುತ್ತಿದ್ದ ಕಪ್ಪು ಬಣ್ಣದ ಬೆಂಜ್&zwnj; ಕಾರಲ್ಲಿ ಕೆಳಗೆ ಇಳಿಯಿತು. ಆದರೆ ಅವರಿಗೆ ಅಲ್ಲಿ ಒಂದು ಶಾಕ್&zwnj; ಕಾದಿತ್ತು.&lt;/p&gt;&lt;p&gt;&lt;strong&gt;ಗುಂಡಿನ ದಾಳಿ- ಪ್ರತಿದಾಳಿ&lt;/strong&gt;&lt;/p&gt;&lt;p&gt;ಇದಿ ಅಮೀನ್&zwnj; ಕೆಲ ದಿನಗಳ ಹಿಂದೆ ತಮ್ಮ ಕಪ್ಪು ಬಣ್ಣದ ಕಾರನ್ನು ಬದಲಿಸಿ ಅದೇ ಮಾದರಿಯ ಬಿಳಿ ಬಣ್ಣದ ಕಾರನ್ನು ಖರೀದಿಸಿದ್ದರು. ಈ ವಿಚಾರ ಇಸ್ರೇಲ್&zwnj; ಕಮಾಂಡೋಗಳಿಗೆ ತಿಳಿದಿರಲಿಲ್ಲ. ಏಮಾರಿದ್ದರು! ಪರಿಣಾಮವಾಗಿ ಉಗಾಂಡದ ಸೈನಿಕರು ಇಸ್ರೇಲ್&zwnj; ಸೈನಿಕರ ಕಾರನ್ನು ತಡೆದರು. ಆಗ ಇಸ್ರೇಲಿ ಸೈನಿಕರು ಹಾಗೂ ಉಗಾಂಡದ ಸೈನಿಕರ ಮಧ್ಯೆ ಗುಂಡಿನ ಚಕಮಕಿ ನಡೆಯಿತು. ಅಷ್ಟರಲ್ಲಿ ಇಸ್ರೇಲ್&zwnj;ನ 3 ವಿಮಾನಗಳು ಎಂಟೆಬ್ಬೆ ವಿಮಾನ ನಿಲ್ದಾಣಕ್ಕೆ ಇಳಿದವು. ಇಸ್ರೇಲಿ ಕಮಾಂಡೋಗಳು ಮತ್ತು ಉಗಾಂಡ ಸೈನಿಕರ ಮಧ್ಯೆ ಮತ್ತಷ್ಟು ಸಂಘರ್ಷ ಏರ್ಪಟ್ಟಿತು. ಆ ವೇಳೆ ಲೆಫ್ಟಿನೆಂಟ್&zwnj; ಕರ್ನಲ್&zwnj; ನೆತನ್ಯಾಹು ಅವರು ಇದಿ ಅಮೀನ್&zwnj;ನ ಮಗ ಜಾಫರ್ ಅಮೀನ್&zwnj;ನ ಗುಂಡೇಟಿಗೆ ತಮ್ಮ ಪ್ರಾಣವನ್ನು ಅರ್ಪಿಸಬೇಕಾಯಿತು.&lt;/p&gt;&lt;p&gt;ಇನ್ನುಳಿದ ಕಮಾಂಡೋಗಳು ಎಂಟೆಬ್ಬೆ ವಿಮಾನ ನಿಲ್ದಾಣದ ಲಾಂಜ್&zwnj;ಗೆ ನುಗ್ಗಿ ಅಪಹರಣಕಾರರ ಮೇಲೆ ದಾಳಿ ಶುರು ಮಾಡಿದರು. ಈ ಘರ್ಷಣೆಯಲ್ಲಿ ಇಸ್ರೇಲಿ ಕಮಾಂಡೋಗಳ ಗುಂಡಿಗೆ ಇಬ್ಬರು ಒತ್ತೆಯಾಳುಗಳು ಹಾಗೂ ಉಗ್ರರ ಗುಂಡೇಟಿಗೆ ಓರ್ವ ಒತ್ತೆಯಾಳು ಬಲಿಯಾದರು. ಇಸ್ರೇಲಿ ಕಮಾಂಡೋಗಳು 7 ಉಗ್ರರನ್ನು ಸದೆ ಬಡಿದು ಎಲ್ಲಾ ಒತ್ತೆಯಾಳುಗಳನ್ನು ರಕ್ಷಿಸಿ ವಿಮಾನದಲ್ಲಿ ಕೂರಿಸಿ ಇಸ್ರೇಲ್&zwnj;ಗೆ ಸುರಕ್ಷಿತವಾಗಿ ತಲುಪಿದರು. 106 ಒತ್ತೆಯಾಳುಗಳ ಪೈಕಿ 4 ಜನ ಹತ್ಯೆಯಾಗಿದ್ದರು. ಆಪರೇಷನ್&zwnj; ಎಂಟೆಬ್ಬೆ ಯಶಸ್ವಿಯಾಯಿತು. ಇಸ್ರೇಲ್&zwnj;ನ ಈ ಸಾಹಸ ಕಾರ್ಯಾಚರಣೆಗೆ ಇಡೀ ವಿಶ್ವವೇ ಆ ದೇಶವನ್ನು ಕೊಂಡಾಡಿತು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/today-marks-50-years-since-operation-entebbe-one-of-the-boldest-rescue-missions-in-idf-history-rav/articleshow-rt2n7w2"/>
        </item>
        <item>
            <title><![CDATA[Vijayapur: 'ನೋಣಗಳಲ್ಲಿ ಎರಡು ರೀತಿ..' RSS ಟೀಕಿಸಿದ ಖರ್ಗೆ, ಬಿಕೆ ಹರಿಪ್ರಸಾದ್ ವಿರುದ್ಧ ಕನ್ಹೇರಿ ಶ್ರೀ ಕಿಡಿ]]></title>
            <link>https://kannada.asianetnews.com/politics/kanheri-swamiji-slams-priyank-karge-and-bk-hariprasad-over-statement-s-on-rss/articleshow-hefdk8z</link>
            <guid isPermaLink="true">https://kannada.asianetnews.com/politics/kanheri-swamiji-slams-priyank-karge-and-bk-hariprasad-over-statement-s-on-rss/articleshow-hefdk8z</guid>
            <pubDate>Sun, 12 Jul 2026 14:51:17 +0530</pubDate>
            <description><![CDATA[&lt;p&gt;ಆರ್&zwnj;ಎಸ್&zwnj;ಎಸ್&zwnj; ಕುರಿತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಹೇಳಿಕೆಗಳಿಗೆ ಕನ್ಹೇರಿ ಶ್ರೀಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್&zwnj;ಎಸ್&zwnj;ಎಸ್&zwnj; ಒಂದು ರಾಷ್ಟ್ರಭಕ್ತಿ ಸಂಘಟನೆ, ಪ್ರಚಾರಕ್ಕಾಗಿ ಕೆಲವರು ಅದರ ವಿರುದ್ಧ ಮಾತನಾಡುತ್ತಾರೆ ಎಂದು ಕಿಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxaspxv570zszbscyvjrv3yw,imgname-----------------------2026-07-12t143551.251-1783847679845.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಜು.12)&lt;/strong&gt;: ಆರ್&zwnj;ಎಸ್&zwnj;ಎಸ್&zwnj; ಅದೊಂದು ದೇಶದಲ್ಲಿ ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ಸಂಘಟನೆ, ಕೆಲವರು ಪ್ರಚಾರಕ್ಕಾಗಿ ಆರೆಸ್ಸೆಸ್ ವಿರುದ್ಧ ಮಾತನಾಡ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕನ್ಹೇರಿ ಶ್ರೀಗಳು ಕಿಡಿಕಾರಿದರು.&lt;/p&gt;&lt;h2&gt;ದೊಡ್ಡವರಿಗೆ ಬೈದ್ರೆ ಪುಕ್ಸಟ್ಟೆ ಪ್ರಚಾರ ಸಿಗುತ್ತೆ ಅನ್ನೋ ಟೆಕ್ನಿಕ್&lt;/h2&gt;&lt;p&gt;ಅರ್&zwnj;ಎಸ್&zwnj;ಎಸ್&zwnj; ಮೆರವಣಿಗೆಗೆ ಅನುಮತಿ ಪಡೆಯಬೇಕೆಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಪ್ರಿಯಾಂಕ್ ಖರ್ಗೆಯವರು ಮೇಲಿಂದ ಮೇಲೆ ಬರೀ ಆರೆಸ್ಸೆಸ್ ಬಿಟ್ರೆ ಬೇರೇನೂ ಮಾತಾಡ್ತಿಲ್ಲ. ಅದು ಏನಾಗುತ್ತೆ ಅಂದ್ರೆ ಕೆಲವರಿಗೆ ಪ್ರಚಾರ ಯಾವುದರಿಂದ ಸಿಗುತ್ತೆ ಅಂತ ಗೊತ್ತಾಗಿಬಿಟ್ಟಿದೆ. ಕೆಲವು ಜನರು ಏನು ಮಾಡ್ತಾರಂದ್ರೆ ದೊಡ್ಡವರಿಗೆ ಬೈದು ಬಿಟ್ರೆ ತಮಗೆ ಸುಲಭವಾಗಿ ಪ್ರಚಾರ ಸಿಗುತ್ತೆ ಅನ್ನೋ ಟೆಕ್ನಿಕ್ ಗೊತ್ತಾಗಿದೆ ಹೀಗಾಗಿ ಅವರು ಬೆಳಗಾದ್ರೆ ಮಾಡೋ ಕೆಲಸ ಬಿಟ್ಟು ಆರೆಸ್ಸೆಸ್ ಬಗ್ಗೆ ಮಾತನಾಡ್ತಾರೆ ಎಂದು ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;h3&gt;ಆರ್&zwnj;ಎಸ್&zwnj;ಎಸ್&zwnj; ಬಗ್ಗೆ ಟೀಕಿಸೋದು ಒಂದು ರೀತಿ ಮಾನಸಿಕ ಕಾಯಿಲೆ&lt;/h3&gt;&lt;p&gt;ನನಗನಿಸುತ್ತೆ ಈ ರೀತಿ ಮಾಡ್ತಾ ಹೋದ್ರೆ ಅಂದ್ರೆ ತಮ್ಮ ಅವನತಿ ಬೇಗ ಕಂಡುಕೊಳ್ತಾರೆ ಅಂತ ಅನ್ಸುತ್ತೆ. ಅದೇನೋ ಒಂದೊಂದ್ಸಲ ಹುಚ್ಚರಂತೆ ಮಾತನಾಡೋದು ಕೆಲವರ ಸ್ವಭಾವ ಆಗಿಬಿಟ್ಟಿದೆ. ಈ ರೀತಿ ಒಂದು ಏನಾದರೂ ಕಾಯಿಲೆ ಇರಬಹುದು ಅಂತಾ ನನಗೆ ಅನ್ಸುತ್ತೆ. ಆರೆಸ್ಸೆಸ್ ಪರ್ಮಿಷನ್ ತಗೊಬೇಕು ಅಂತಾರೆ. ಅವರು ನಾಳೆ ಊಟ ಮಾಡಲಿಕ್ಕೂ ಪರ್ಮಿಷನ್ ತಗೊಬೇಕು ಅಂತಾರೆ. ಆರೆಸ್ಸೆಸ್&zwnj;ನವರು ಯಾರದೇ ಮನೆಯಲ್ಲಿ ಊಟಕ್ಕೆ ಹೋದ್ರೂ ಪರ್ಮಿಷನ್ ತಗೊಬೇಕು ಅಂತಾರೆ, ಈ ಊರಿನಿಂದ ಆ ಊರಿಗೆ ಎಲ್ಲಾದರೂ ಪ್ರವಾಸ ಮಾಡಬೇಕಾಗಿತ್ತು ಅಂದರೆ ಅದಕ್ಕೂ ಪರ್ಮಿಷನ್ ಕೇಳು ಅಂತ ಹೇಳ್ತಾರೆ ಆಗ ಏನು ಮಾಡೋದು? ಎಂದು ಪ್ರಶ್ನಿಸಿದರು.&lt;/p&gt;&lt;h3&gt;ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಬಗ್ಗೆ ಮಾತನಾಡಿದ್ರೆ ಸರ್ಕಾರ, ಪಕ್ಷಕ್ಕೆ ಡ್ಯಾಮೇಜ್?&lt;/h3&gt;&lt;p&gt;ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಬಗ್ಗೆ ಮಾತನಾಡೋದ್ರಿಂದ ಅದು ಸರ್ಕಾರ, ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಹಾ ಆಗುತ್ತೆ. ಅದು ಒಂದೊಂದಸಲ ದೇವರ ಈ ರೀತಿ ಮಾಡಿಸ್ತಾನೋ ಏನೋ.. ವಿನಾಶಕಾಲೇ ವಿಪರೀತಿ ಬುದ್ಧಿ ಅಂತಾರಲ್ಲ ಹಾಗೆ. ಅದು ಆ ಪುಣ್ಯಾತ್ಮರ ನೋಡಿನೇ ಹೇಳಿರಬೇಕು ಅನಿಸುತ್ತೆ. ಆರೆಸ್ಸೆಸ್ ಬಗ್ಗೆ ಮನ್ಸಿಗೆ ಬಂದಂಗ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರ ತಂದೆಯಾದ್ರೂ ಕರೆದು ಬುದ್ಧಿ ಹೇಳಬೇಕಿತ್ತು. ಹೀಗೆಲ್ಲ ಮಾಡಬಾರದು ಅಂತಾ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು, ಅನುಭವಸ್ಥರು ಇದ್ದಾರೆ. ಆದರೆ ಅವರೂ ಹೇಳ್ತಾ ಇಲ್ಲ ಯಾಕೋ ಏನೋ. ಅಥವಾ ತಂದೆ ಮಾತು ಕೇಳದಷ್ಟು ತಂದೆಗಿಂತ ಎರಡು ಹೆಜ್ಜೆ ಮುಂದೆ ಹೋಗ್ತಿದ್ದಾರೇನೋ ಗೊತ್ತಿಲ್ಲ, ಹಾಗೆ ಆಗುತ್ತಿರಬಹುದು ಅಂತಾ ನನಗನಿಸುತ್ತೆ ಎಂದರು.&lt;/p&gt;&lt;p&gt;ನೋಣಗಳಲ್ಲಿ ಎರಡು ರೀತಿ&hellip; ಬಿಕೆ ವಿರುದ್ಧ ಕನ್ಹೇರಿ ಶ್ರೀ ಕಿಡಿ&lt;/p&gt;&lt;p&gt;ಇನ್ನು ಆರ್&zwnj;ಎಸ್&zwnj; ಕುರಿತು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ 'ಅರ್&zwnj;ಎಸ್&zwnj;ಎಸ್&zwnj; ಎಲ್ಲೆಲ್ಲೆ ಸಭೆ ಮಾಡುತ್ತೋ ಅಲ್ಲೆಲ್ಲ ಏನಾದರೂ ಒಂದು ಅನಾಹುತ ಆಗುತ್ತೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಶ್ರೀಗಳು, ​ಅದೇ ಕಾಮಾಲೆಯಾದವರಿಗೆಲ್ಲ ವಿಶ್ವನೇ ಹಳದಿ ಕಾಣಿಸ್ತೈತೆ ಅಂತಾರಲ್ಲ ಆ ರೀತಿ ಕಾಣುತ್ತಿರಬಹುದು. ಆರೆಸ್ಸೆಸ್ ಒಂದು ದೇಶಭಕ್ತರ ಸಂಘಟನೆ. ಅದನ್ನ ಅವರು ಯಾವ ದೃಷ್ಟಿಯಿಂದ ನೋಡ್ತಾರೋ ಹಾಗೆ ಕಾಣುತ್ತೆ. ಯಾರು ಯಾವ ಚಷ್ಮಾ ಹಾಕೊಂಡು ನೋಡ್ತಾರೋ ಅವರಿಗೆ ಹಂಗೆ ಕಾಣಿಸ್ತದೆ ಅದರಲ್ಲಿ ಏನಿದೆ. ಅನುಭವಸ್ಥರು ಹೇಳ್ತಿರ್ತಾರೆ ನೋಣಗಳಲ್ಲಿ ಎರಡು ರೀತಿ ನೋಣಗಳು ಇರ್ತಾವೆ. ಒಂದು ಹೊಲಸಿನ ಮೇಲೆ ಕೂಡೋ ನೋಣಗಳು, ಇನ್ನೊಂದು ಜೇನ್ನೋಣ. ಯಾವ್ಯಾವ ನೋಣ ಎಲ್ಲೆಲ್ಲಿ ಹಾರಾಡಬೇಕೋ, ಎಲ್ಲೆಲ್ಲಿ ಕೂಡಬೇಕು ಅಲ್ಲಲ್ಲಿ ಕೂಡುತವೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿಕೆಗೆ ತೀಕ್ಷ್ನವಾಗಿ ಪ್ರತಿಕ್ರಿಯಿಸಿದರು.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/kanheri-swamiji-slams-priyank-karge-and-bk-hariprasad-over-statement-s-on-rss/articleshow-hefdk8z"/>
        </item>
        <item>
            <title><![CDATA[ಭಾರತದ ಮೊದಲ ಬುಲೆಟ್ ರೈಲಿನ ಮಹತ್ವದ ಅಪ್‌ಡೇಟ್ ನೀಡಿದ ಸಚಿವ, ಯಾವಾಗ ಸೇವೆ ಆರಂಭ?]]></title>
            <link>https://kannada.asianetnews.com/india-news/india-first-bullet-train-minister-shares-major-update-on-launch-timeline/articleshow-gkbu5u7</link>
            <guid isPermaLink="true">https://kannada.asianetnews.com/india-news/india-first-bullet-train-minister-shares-major-update-on-launch-timeline/articleshow-gkbu5u7</guid>
            <pubDate>Sun, 12 Jul 2026 21:57:35 +0530</pubDate>
            <description><![CDATA[&lt;p&gt;ಬಹುನಿರೀಕ್ಷಿತ ಹಾಗೂ ಭಾರತದ ಮೊದಲ ಬುಲೆಟ್ ರೈಲು ಓಡಾಟಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ಇದರ ನಡುವೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಅಪ್&zwnj;ಡೇಟ್ ನೀಡಿದ್ದಾರೆ. ಬುಲೆಟ್ ರೈಲು ಓಡಾಟ ಯಾವಾಗ ಸೇರಿದಂತೆ ಹಲವು ಮಾಹಿತಿ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kc8qaa77vwy91xb5hdwbhxrj,imgname-image-3fceee58-ab68-4b9f-831f-1c3b0e26f6f5-1765524449510.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್ (ಜು.12) &lt;/strong&gt;ಭಾರತದ ಬಹುನಿರೀಕ್ಷಿತ ಬುಲೆಟ್ ರೈಲು ಸದ್ದು ಮಾಡುತ್ತಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇದೀಗ ಭಾರತದ ಮೊದಲ ಬುಲೆಟ್ ರೈಲಿನ ಕುರಿತು ಹಲವು ಮಾಹಿತಿ ನೀಡಿದ್ದಾರೆ. ಬುಲೆಟ್ ರೈಲು ಓಡಾಟಕ್ಕೆ ಕಾಮಗಾರಿಗಳು ಭರದಿಂದ ಸಾಗಿದೆ. ಹಂತ ಹಂತವಾಗಿ ಬುಲೆಟ್ ರೈಲು ಕಾರ್ಯಾರಂಭಗೊಳ್ಳಲಿದೆ. ವಿಶೇಷ ಅಂದರೆ ಮುಂದಿನ ವರ್ಷವೇ ಅಂದರೆ 2027ರಲ್ಲಿ ಬುಲೆಟ್ ರೈಲು ಭಾರತದಲ್ಲಿ ಓಡಾಟ ಆರಂಭಿಸಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.&lt;/p&gt;&lt;h2&gt;ಮೊದಲ ಹಂತದಲ್ಲಿ ಸೂರತ್ ಬಿಲ್ಮೋರ ಬುಲೆಟ್ ರೈಲು&lt;/h2&gt;&lt;p&gt;ಹೈದರಾಬಾದ್&zwnj;ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರೈಲ್ವೇ ಸಚಿವ, ಮುಂಬೈ-ಅಹಮ್ಮದಾಬಾದ್ ನಡುವಿನ ದೇಶದ ಮೊದಲ ಬುಲೆಟ್ ರೈಲಿನ ಕಾಮಗಾರಿ ನಡೆಯುತ್ತಿದೆ. ರೈಲ್ವೇ ಟ್ರಾಕ್, ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿದೆ. ಕೆಲ ಹಂತದಲ್ಲಿ ಬುಲೆಟ್ ರೈಲಿನ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ವರ್ಷದ ವೇಳೆ ಸೂರತ್-ಬಿಲ್ಮೋರ್ ಸೆಕ್ಷನ್ ಕಾಮಗಾರಿ ಪೂರ್ಣಗೊಂಡು ಬುಲೆಟ್ ರೈಲು ಓಡಾಟ ಆರಂಭಿಸಲಿದೆ. ಹಂತ ಹಂತದ ಕಾಮಾಗಾರಿ ಪೂರ್ಣಗೊಂಡಂತೆ ಬುಲೆಟ್ ರೈಲು ಸೇವೆ ವಿಸ್ತರಣೆಯಾಗುತ್ತಾ ಸಾಗಲಿದೆ. ಈ ಮೂಲಕ ಮುಂಬೈ-ಅಹಮ್ಮಬಾದ್ ಬುಲೆಟ್ ರೈಲು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ.&lt;/p&gt;&lt;h2&gt;ಹಲವು ಭಾಗದಲ್ಲಿ ಬುಲೆಟ್ ರೈಲು&lt;/h2&gt;&lt;p&gt;ದೇಶದಲ್ಲಿ ಬುಲೆಟ್ ರೈಲು ಕೇವಲ ಮುಂಬೈ-ಅಹಮ್ಮದಾಬಾದ್ ಮಾತ್ರವಲ್ಲ, ಇತರ ಭಾಗಗಳಿಗೂ ವಿಸ್ತರಣೆಯಾಗಲಿದೆ ಎಂದಿದ್ದಾರೆ. ಮೊದಲ ಬುಲೆಟ್ ರೈಲು ಯೋಜನೆಯ ಮೊದಲ ಹಂತ ಉದ್ಘಾಟನೆಗೊಳ್ಳುತ್ತಿದ್ದಂತೆ ಹೈದರಾಬಾದ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಬುಲೆಟ್ ರೈಲು ಹಾಗೂ ರೈಲು ಸಂಪರ್ಕ ಯೋಜನೆಗಳು ವೇಗ ಪಡೆದುಕೊಳ್ಳಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.&lt;/p&gt;&lt;p&gt;ರೈಲ್ವೇ ಸೇವೆಗಳನ್ನು ನಿರಂತರವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ರೈಲು ನಿಲ್ದಾಣ, ರೈಲು ಕೋಚ್, ಟಿಕೆಟ್ ಬುಕಿಂಗ್, ಪ್ರಯಾಣ ಸೇರಿದಂತೆ ಪ್ರಯಾಣಿಕರಿಗೆ ನೀಡುವ ಒಟ್ಟಾರೆ ಸೇವೆಗಳ ಉನ್ನತೀಕರಣ ನಡೆಯುತ್ತಿದೆ. ಕೆಲವೇ ವರ್ಷಗಳಲ್ಲಿ ಭಾರತೀಯ ರೈಲು ಮಹತ್ತರ ಬದಲಾವಣೆಯಾಗಲಿದೆ. ಈಗಾಗಲೇ ಗಣನೀಯ ಪ್ರಮಾಣದ ಬದಲಾವಣೆಗಳು ಆಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.&lt;/p&gt;&lt;h2&gt;ಮೂರು ಬುಲೆಟ್ ರೈಲು ಯೋಜನೆ&lt;/h2&gt;&lt;p&gt;ಇದೇ ವೇಳೆ ಮೂರು ಬುಲೆಟ್ ರೈಲು ಯೋಜನೆ ಕುರಿತು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಹೈದರಾಬಾದ್ ಬೆಂಗಳೂರು, ಪುಣೆ-ಹೈದರಾಬಾದ್ ಹಾಗೂ ಹೈದರಾಬಾದ್ ಚೆನ್ನೈ ಬುಲೆಟ್ ರೈಲು ಯೋಜನೆ ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/india-first-bullet-train-minister-shares-major-update-on-launch-timeline/articleshow-gkbu5u7"/>
        </item>
        <item>
            <title><![CDATA[S Janaki - Trisha: ನಟಿ ತ್ರಿಷಾ ಜೊತೆ ಎಸ್ ಜಾನಕಿಗೆ ಸ್ಪೆಷಲ್ ನಂಟು; ಆ '96'ರಲ್ಲಿದೆ ಅಪರೂಪದ ನೆನಪು!]]></title>
            <link>https://kannada.asianetnews.com/cine-world/s-janaki-acted-in-c-premkumar-directional-trisha-krishanan-and-vijay-sethupathi-starreer-movie-96/articleshow-tc6yw1d</link>
            <guid isPermaLink="true">https://kannada.asianetnews.com/cine-world/s-janaki-acted-in-c-premkumar-directional-trisha-krishanan-and-vijay-sethupathi-starreer-movie-96/articleshow-tc6yw1d</guid>
            <pubDate>Sun, 12 Jul 2026 21:09:43 +0530</pubDate>
            <description><![CDATA[&lt;p&gt;ಜಾನಕಮ್ಮನ ಧ್ವನಿ ಹೇಗೆ ಭಾಷೆಯ ಗಡಿ ದಾಟಿದೆಯೋ, ಹಾಗೆಯೇ ಅವರ ಆ ಒಂದು ಅಪರೂಪದ ನಟನೆಯ ದೃಶ್ಯವು ಕೂಡ ಅವರ ಅಭಿಮಾನಿಗಳ ಪಾಲಿಗೆ ಎಂದಿಗೂ ಮರೆಯಲಾಗದ &lsquo;ಮಾಸ್ಟರ್ ಪೀಸ್&rsquo;. ಜಾನಕಮ್ಮ, ನೀವು ಹಾಡಿನ ಮೂಲಕ ಸದಾ ನಮ್ಮ ಜೊತೆ ಇರುತ್ತೀರಿ. ಆ ಚಿತ್ರದ ಆ ದೃಶ್ಯದ ಮೂಲಕವೂ ಕೂಡ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxbfgay3xs7vpxjkxfqajedy,imgname-s-janaki-trisha-krishanan-1783870532547.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಾನಕಮ್ಮನ ನಟನೆಯ ಆ ಒಂದು &lsquo;ಅಪರೂಪದ ಸೀನ್&rsquo;:&lt;/strong&gt;&lt;/p&gt;&lt;p&gt;ಭಾರತೀಯ ಸಂಗೀತ ಲೋಕದ ಎವರ್ ಗ್ರೀನ್ ಗಾನ ಕೋಗಿಲೆ, ಸ್ವರ ಸಾಮ್ರಾಜ್ಞಿ ಎಸ್&zwnj; ಜಾನಕಿ (S. Janaki) ಅಮ್ಮ ಎಂದರೆ ನೆನಪಾಗುವುದು ಆ ಮಧುರ ಕಂಠ, ಸಾವಿರಾರು ಮೆಲೋಡಿ ಹಾಡುಗಳು. ಸುಮಾರು ಆರು ದಶಕಗಳ ಕಾಲ ಮೈಕ್ ಮುಂದೆ ನಿಂತು 48 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಜೀವ ತುಂಬಿದ ಈ ದಂತಕಥೆ, ಕ್ಯಾಮೆರಾ ಮುಂದೆ ನಟಿಸಲು ಮಾತ್ರ ಯಾವತ್ತೂ ಒಪ್ಪಿರಲಿಲ್ಲ. ಆದರೆ, ಯಾರೂ ಊಹಿಸದ ಒಂದು ಅದ್ಭುತ 2018ರಲ್ಲಿ ಸಂಭವಿಸಿತ್ತು. ಅದುವೇ ತಮಿಳಿನ ಬ್ಲಾಕ್&zwnj;ಬಸ್ಟರ್ ಸಿನಿಮಾ &lsquo;96&rsquo; ಚಿತ್ರದಲ್ಲಿ ಅವರು ಮಾಡಿದ ಅತಿಥಿ ಪಾತ್ರ!&lt;/p&gt;&lt;p&gt;ನಟನೆಗೆ ಜಾನಕಮ್ಮ &lsquo;ನೋ&rsquo; ಅಂದಿದ್ದೇಕೆ?&lt;/p&gt;&lt;p&gt;ಜಾನಕಮ್ಮನವರ ವೃತ್ತಿಜೀವನದುದ್ದಕ್ಕೂ ನಟನೆಯ ಅನೇಕ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಆದರೆ, &quot;ನಾನು ಹಾಡಲಿಕ್ಕಾಗಿಯೇ ಹುಟ್ಟಿದವಳು, ನಟನೆ ನನಗಲ್ಲ&quot; ಎಂದು ಸವಿನಯವಾಗಿ ನಿರಾಕರಿಸುತ್ತಿದ್ದರು. ಆದರೆ ನಿರ್ದೇಶಕ ಸಿ. ಪ್ರೇಮ್ ಕುಮಾರ್ ಅವರಿಗೆ ತಮ್ಮ &lsquo;96&rsquo; ಚಿತ್ರದಲ್ಲಿ ಜಾನಕಿ ಅಮ್ಮನನ್ನು ತೋರಿಸಲೇಬೇಕು ಎಂಬ ಹಠವಿತ್ತು. ಅದಕ್ಕೆ ಕಾರಣವೂ ಇತ್ತು. ಚಿತ್ರದಲ್ಲಿ ನಟಿ ತ್ರಿಶಾ ಅವರ ಪಾತ್ರದ ಹೆಸರೇ &lsquo;ಎಸ್. ಜಾನಕಿ ದೇವಿ&rsquo; (ಜಾನು). ಆ ಪಾತ್ರವು ಜಾನಕಮ್ಮನವರ ಪರಮ ಭಕ್ತೆ, ಅಭಿಮಾನಿಯಾಗಿರುತ್ತದೆ ಮತ್ತು ಕೇವಲ ಜಾನಕಮ್ಮನ ಹಾಡುಗಳನ್ನು ಮಾತ್ರ ಹಾಡುತ್ತಿರುತ್ತದೆ.&lt;/p&gt;&lt;h2&gt;ಅಂದು ನಡೆದ ಆ &lsquo;ಸರ್ಪ್ರೈಸ್&rsquo; ಶೂಟಿಂಗ್:&lt;/h2&gt;&lt;p&gt;ಸಿನಿಮಾದ ಕಥೆಯ ಪ್ರಕಾರ, ರಾಮ್ (ವಿಜಯ್ ಸೇತುಪತಿ) ಮತ್ತು ಜಾನು (ತ್ರಿಶಾ) ಇಬ್ಬರೂ ಎಸ್. ಜಾನಕಿ ಅವರ ಮನೆಯ ಮುಂದೆ ನಿಂತು ಫೋಟೋ ತೆಗೆದುಕೊಳ್ಳುತ್ತಿರುತ್ತಾರೆ. ಅಷ್ಟರಲ್ಲಿ ಜಾನಕಿ ಅಮ್ಮ ಕಾರಿನಲ್ಲಿ ಅಲ್ಲಿಗೆ ಆಗಮಿಸುತ್ತಾರೆ. ಜಾನು ತನ್ನ ದೊಡ್ಡ ಅಭಿಮಾನಿ ಎಂದು ತಿಳಿದಾಗ, ಜಾನಕಮ್ಮ ಅತ್ಯಂತ ಪ್ರೀತಿಯಿಂದ ಅವರಿಬ್ಬರನ್ನು ತಮ್ಮ ಮನೆಗೆ ಕರೆಯುತ್ತಾರೆ. ಮನೆಯೊಳಗೆ ರಾಮ್ ಮತ್ತು ಜಾನು ಜೊತೆ ಜಾನಕಮ್ಮ ಕುಳಿತು ಹರಟೆ ಹೊಡೆಯುವ, ನಗುನಗುತ್ತಾ ಸಮಯ ಕಳೆಯುವ ಈ ದೃಶ್ಯ ಚಿತ್ರದ ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು.&lt;/p&gt;&lt;p&gt;&lsquo;96&rsquo; ಚಿತ್ರದಲ್ಲಿ ಮಿಸ್ ಆಯ್ತು, ಯೂಟ್ಯೂಬ್&zwnj;ನಲ್ಲಿ ಹಿಟ್ ಆಯ್ತು!&lt;/p&gt;&lt;p&gt;ಚಿತ್ರದ ಪ್ರಮುಖ ಆಕರ್ಷಣೆಯಾಗಬೇಕಿದ್ದ ಈ ದೃಶ್ಯವನ್ನು ಅಂತಿಮ ಎಡಿಟಿಂಗ್ ಸಮಯದಲ್ಲಿ &lsquo;ಸಿನಿಮಾದ ವೇಗ&rsquo;ಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಕತ್ತರಿಸಲಾಗಿತ್ತು. ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳು ಈ ದೃಶ್ಯವನ್ನು ನೋಡಲಾಗದೆ ನಿರಾಸೆ ಅನುಭವಿಸಿದ್ದರು, ಚಿತ್ರತಂಡವನ್ನು ತರಾಟೆಗೆ ತೆಗದುಕೊಂಡಿದ್ದರು. ಆದರೆ, ನಂತರ ಚಿತ್ರತಂಡ ಈ &lsquo;ಡಿಲೀಟೆಡ್ ಸೀನ್&rsquo; (Deleted Scene) ಅನ್ನು ಯೂಟ್ಯೂಬ್&zwnj;ನಲ್ಲಿ ಬಿಡುಗಡೆ ಮಾಡಿತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದು ವೈರಲ್ ಆಯಿತು. ಬೆಳ್ಳಿತೆರೆಯ ಮೇಲೆ ಮೊದಲ ಬಾರಿಗೆ ಜಾನಕಿ ಅಮ್ಮನವರನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದ್ದರು.&lt;/p&gt;&lt;h3&gt;ಸಂಗೀತದ ಧ್ರುವತಾರೆ ಅಮರ:&lt;/h3&gt;&lt;p&gt;2017ರಲ್ಲಿ ಹಿನ್ನೆಲೆ ಗಾಯನಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದ ಜಾನಕಮ್ಮ, ನಂತರದ ದಿನಗಳಲ್ಲಿ ಮೈಸೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇತ್ತೀಚೆಗೆ ಅವರು ನಮ್ಮನ್ನಗಲಿದ್ದರೂ, &lsquo;96&rsquo; ಸಿನಿಮಾದ ಆ ಒಂದು ಕಿರು ದೃಶ್ಯದಲ್ಲಿ ಅವರು ನೀಡಿದ ನಗು ಮತ್ತು ಅವರು ಹಾಡಿದ ಸಾವಿರಾರು ಹಾಡುಗಳು ಎಂದಿಗೂ ಮಾಸದ ನೆನಪುಗಳು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಟಿಸದೆಯೇ &lsquo;ನಟಿ&rsquo;ಯಾಗಿಯೂ ಮಿಂಚಿದ ಏಕೈಕ ಗಾಯಕಿ ಎಂದರೆ ಅದು ನಮ್ಮ ಜಾನಕಿ ಅಮ್ಮ ಮಾತ್ರ.&lt;/p&gt;&lt;p&gt;ಜಾನಕಮ್ಮನ ಧ್ವನಿ ಹೇಗೆ ಭಾಷೆಯ ಗಡಿ ದಾಟಿದೆಯೋ, ಹಾಗೆಯೇ ಅವರ ಆ ಒಂದು ಅಪರೂಪದ ನಟನೆಯ ದೃಶ್ಯವು ಕೂಡ ಅವರ ಅಭಿಮಾನಿಗಳ ಪಾಲಿಗೆ ಎಂದಿಗೂ ಮರೆಯಲಾಗದ &lsquo;ಮಾಸ್ಟರ್ ಪೀಸ್&rsquo;. ಜಾನಕಮ್ಮ, ನೀವು ಹಾಡಿನ ಮೂಲಕ ಸದಾ ನಮ್ಮ ಜೊತೆ ಇರುತ್ತೀರಿ. ಆ ಚಿತ್ರದ ಆ ದೃಶ್ಯದ ಮೂಲಕವೂ ಕೂಡ ಯಾವತ್ತೂ ಜೀವಂತವಾಗಿ ಇರುತ್ತೀರಿ!&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/s-janaki-acted-in-c-premkumar-directional-trisha-krishanan-and-vijay-sethupathi-starreer-movie-96/articleshow-tc6yw1d"/>
        </item>
        <item>
            <title><![CDATA[S Janaki: ಅಜ್ಜಿ ಎಸ್ ಜಾನಕಿಗೆ ಮೊಮ್ಮಗಳು ಅಪ್ಸರಾ ಹೇಳಿದ ಕೊನೆಯ ವಿದಾಯ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು]]></title>
            <link>https://kannada.asianetnews.com/cine-world/granddaughter-apsara-lit-the-funeral-pyre-of-late-s-janaki-after-paying-her-final-respects-with-a-kiss-on-the-forehead/articleshow-qvi8017</link>
            <guid isPermaLink="true">https://kannada.asianetnews.com/cine-world/granddaughter-apsara-lit-the-funeral-pyre-of-late-s-janaki-after-paying-her-final-respects-with-a-kiss-on-the-forehead/articleshow-qvi8017</guid>
            <pubDate>Sun, 12 Jul 2026 20:15:01 +0530</pubDate>
            <description><![CDATA[&lt;p&gt;ದೇಹಕ್ಕೆ ಸಾವಿರಬಹುದು, ಆದರೆ ದೈವದತ್ತವಾದ ಆ ಧ್ವನಿಗೆ ಸಾವಿಲ್ಲ. ಕಣಿಯನಹುಂಡಿಯ ಮಣ್ಣಿನಲ್ಲಿ ಜಾನಕಮ್ಮ ಲೀನವಾಗಿದ್ದರೂ, ಅವರು ಹಾಡಿದ &lsquo;ಬಾನಿಗೊಂದು ಎಲ್ಲೆ ಎಲ್ಲಿದೆ&rsquo;, &lsquo;ಗಗನವು ಎಲ್ಲೋ ಭೂಮಿಯು ಎಲ್ಲೋ&rsquo; ಸೇರಿದಂತೆ ಸಾವಿರಾರು ಹಾಡುಗಳು ಗಾಳಿಯಲ್ಲಿ ತೇಲಿಬರುತ್ತಲೇ ಇರುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxbc0jk8dbs2m1sawtgvs7s4,imgname-janaki-last-moments-1783866870376.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಾನ ಕೋಗಿಲೆಯ ಮೌನ ಪಯಣ: ಮೊಮ್ಮಗಳ ಪ್ರೀತಿಯ ಮುತ್ತು, ಮೈಸೂರಿನ ಮಣ್ಣಿನಲ್ಲಿ ಲೀನವಾದ &lsquo;ಸ್ವರ ಸರಸ್ವತಿ&rsquo;!&lt;/strong&gt;&lt;/p&gt;&lt;p&gt;ಸಂಗೀತದ ಆಕಾಶದಲ್ಲಿ ಏಳು ದಶಕಗಳ ಕಾಲ ಧ್ರುವತಾರೆಯಂತೆ ಹೊಳೆದು, ಕೋಟ್ಯಂತರ ಹೃದಯಗಳನ್ನು ತನ್ನ ಕಂಠಸಿರಿಯಿಂದ ತಣಿಸಿದ್ದ &lsquo;ಗಾನ ಕೋಗಿಲೆ&rsquo; ಎಸ್&zwnj; ಜಾನಕಿ (S Janaki) ಅಮ್ಮ ಇನ್ನು ನೆನಪು ಮಾತ್ರ. 88 ವರ್ಷಗಳ ಸುದೀರ್ಘ ಮತ್ತು ಸಾರ್ಥಕ ಬದುಕನ್ನು ನಡೆಸಿದ ಈ ಸ್ವರ ಸಾಮ್ರಾಜ್ಞಿ, ಜುಲೈ 11ರಂದು ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿಯೊಂದಿಗೆ ಭಾರತೀಯ ಸಂಗೀತ ಲೋಕದ ಒಂದು ಸುವರ್ಣ ಯುಗ ಅಂತ್ಯಗೊಂಡಿದೆ.&lt;/p&gt;&lt;p&gt;ಕಣ್ಣೀರು ತರಿಸಿದ ಮೊಮ್ಮಗಳ ಅಂತಿಮ ವಿದಾಯ:&lt;/p&gt;&lt;p&gt;ಜಾನಕಮ್ಮನವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಕಂಡುಬಂದ ಒಂದು ದೃಶ್ಯ ಮಾತ್ರ ಕಲ್ಲೆದೆಯವರನ್ನೂ ಕರಗಿಸುವಂತಿತ್ತು. ಮೈಸೂರಿನ ಕಣಿಯನಹುಂಡಿ ತೋಟದಲ್ಲಿ ನಡೆದ ವಿಧಿವಿಧಾನಗಳ ವೇಳೆ, ಜಾನಕಿ ಅವರ ಪ್ರೀತಿಯ ಮೊಮ್ಮಗಳು ಅಪ್ಸರಾ (Apsara) ತನ್ನ ಅಜ್ಜಿಯ ಹಣೆಗೆ ಮುತ್ತಿಟ್ಟು, ಬಿಕ್ಕಿ ಬಿಕ್ಕಿ ಅಳುತ್ತಾ ಬೀಳ್ಕೊಟ್ಟ ಕ್ಷಣ ಅಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. &quot;ಅಜ್ಜಿ ನೀವು ಹಾಡಿನ ಮೂಲಕ ಸದಾ ನನ್ನ ಜೊತೆ ಇರುತ್ತೀರಿ&quot; ಎಂಬಂತೆ ಅಪ್ಸರಾ ನೀಡಿದ ಆ ಅಂತಿಮ ಚುಂಬನ, ಅಜ್ಜಿ-ಮೊಮ್ಮಗಳ ನಡುವಿನ ಅಪಾರ ಪ್ರೀತಿಗೆ ಸಾಕ್ಷಿಯಾಗಿತ್ತು. ಇನ್ನೊಬ್ಬರು ಮಗಳು ವರ್ಷಾ ಸಹ ಹಾಜರಿದ್ದು ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.&lt;/p&gt;&lt;h2&gt;ಸ್ವಂತ ತೋಟದಲ್ಲೇ ಅಂತ್ಯಕ್ರಿಯೆ: ನೆರವೇರಿದ ಕೊನೆಯ ಆಸೆ&lt;/h2&gt;&lt;p&gt;ಜಾನಕಮ್ಮನವರಿಗೆ ಮೈಸೂರು ಮತ್ತು ಕನ್ನಡ ನಾಡಿನ ಮೇಲೆ ಎಲ್ಲಿಲ್ಲದ ಪ್ರೀತಿ. ನಾಲ್ಕು ವರ್ಷಗಳ ಹಿಂದೆ ಅವರು ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ರಸ್ತೆಯ ಕಣಿಯನಹುಂಡಿ ಬಳಿ ಒಂದು ಸುಂದರವಾದ ತೋಟದ ಜಮೀನನ್ನು ಖರೀದಿಸಿದ್ದರು. &quot;ನಾನು ಮಣ್ಣಾಗುವುದಿದ್ದರೆ ಇದೇ ಜಾಗದಲ್ಲಿ ಮಣ್ಣಾಗಬೇಕು&quot; ಎಂಬುದು ಅವರ ಕೊನೆಯ ಆಸೆಯಾಗಿತ್ತು. ಅವರ ಇಚ್ಛೆಯಂತೆಯೇ, ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಸಕಲ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕರ್ನಾಟಕ ಸರ್ಕಾರದ ಪರವಾಗಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಮಹಾನ್ ಚೇತನ ಎಸ್ ಜಾನಕಿಯವರಿಗೆ ವಿದಾಯ ಹೇಳಿದರು.&lt;/p&gt;&lt;p&gt;ಕನ್ನಡದ ಮೇಲಿನ ಆ &lsquo;ಅನನ್ಯ&rsquo; ಪ್ರೀತಿ:&lt;/p&gt;&lt;p&gt;ಭಾರತದ ಸುಮಾರು 22ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಿನ್ನಿಸ್ ದಾಖಲೆ ಬರೆದಿದ್ದರೂ, ಜಾನಕಮ್ಮನವರಿಗೆ ಕನ್ನಡ ಚಿತ್ರರಂಗದ ಮೇಲೆ ವಿಶೇಷ ಮಮಕಾರವಿತ್ತು. ಅವರು ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದು ನಮ್ಮ ಹೆಮ್ಮೆಯ ಕನ್ನಡ ಭಾಷೆಯಲ್ಲೇ ಎಂಬುದು ವಿಶೇಷ. ಡಾ. ರಾಜ್&zwnj;ಕುಮಾರ್ ಜೊತೆಗಿನ ಅವರ ಜುಗಲ್ಬಂದಿ ಇಂದಿಗೂ ಕನ್ನಡಿಗರ ಮನೆಮನಗಳಲ್ಲಿ ಹಸಿರಾಗಿದೆ. ಎಸ್&zwnj;ಪಿಬಿ-ಎಸ್&zwnj; ಜಾನಕಿ ಅವರಿಬ್ಬರ ಜೋಡಿಯ ಹಾಡಂತೂ ಸಂಗೀತ ಪ್ರೇಮಿಗಳಿಗೆ ಹಬ್ಬ.&lt;/p&gt;&lt;h3&gt;ಹರಿದುಬಂದ ಅಭಿಮಾನಿ ಸಾಗರ:&lt;/h3&gt;&lt;p&gt;ಜಾನಕಮ್ಮ ಕೇವಲ ಒಬ್ಬ ಗಾಯಕಿಯಾಗಿರಲಿಲ್ಲ, ಚಿತ್ರರಂಗದ ಪ್ರತಿಯೊಬ್ಬರಿಗೂ ಅವರು &lsquo;ಅಮ್ಮ&rsquo;ನಾಗಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕಣಿಯನಹುಂಡಿ ಫಾರ್ಮ್ ಹೌಸ್&zwnj;ನತ್ತ ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಚಿತ್ರರಂಗದ ಖ್ಯಾತ ನಟ-ನಟಿಯರು, ಗಾಯಕರು ಮತ್ತು ರಾಜಕೀಯ ಗಣ್ಯರು ಸರತಿ ಸಾಲಿನಲ್ಲಿ ನಿಂತು ಅಗಲಿರುವ ತಮ್ಮ ಅಚ್ಚುಮೆಚ್ಚಿನ ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು.&lt;/p&gt;&lt;p&gt;ದೇಹಕ್ಕೆ ಸಾವಿರಬಹುದು, ಆದರೆ ದೈವದತ್ತವಾದ ಆ ಧ್ವನಿಗೆ ಸಾವಿಲ್ಲ. ಕಣಿಯನಹುಂಡಿಯ ಮಣ್ಣಿನಲ್ಲಿ ಜಾನಕಮ್ಮ ಲೀನವಾಗಿದ್ದರೂ, ಅವರು ಹಾಡಿದ &lsquo;ಬಾನಿಗೊಂದು ಎಲ್ಲೆ ಎಲ್ಲಿದೆ&rsquo;, &lsquo;ಗಗನವು ಎಲ್ಲೋ ಭೂಮಿಯು ಎಲ್ಲೋ&rsquo; ಸೇರಿದಂತೆ ಸಾವಿರಾರು ಹಾಡುಗಳು ಗಾಳಿಯಲ್ಲಿ ತೇಲಿಬರುತ್ತಲೇ ಇರುತ್ತವೆ. ಈ ಜಗತ್ತು ಇರುವವರೆಗೂ ಎಸ್ ಜಾನಕಿ ಹಾಡುಗಳ ಮೂಲಕ ನಮ್ಮೆಲ್ಲರ ನಡುವೆಯೇ ಇರುತ್ತಾರೆ. ಸ್ವರ ಲೋಕದ ಈ ಧ್ರುವತಾರೆಗೆ ಕೋಟ್ಯಾಂತರ ಅಭಿಮಾನಿಗಳಿಂದ ಕೋಟಿ ಕೋಟಿ ನಮನಗಳು ಸಲ್ಲುತ್ತಿವೆ.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/granddaughter-apsara-lit-the-funeral-pyre-of-late-s-janaki-after-paying-her-final-respects-with-a-kiss-on-the-forehead/articleshow-qvi8017"/>
        </item>
        <item>
            <title><![CDATA[1 ಮದುವೆ ಮಾಡೋದೇ ಕಷ್ಟ; ಒಂದೇ ದಿನ ತನ್ನ 14 ಗಂಡು ಮಕ್ಕಳ ಮದುವೆ ಮಾಡಿದ ರೈತ; Video Viral]]></title>
            <link>https://kannada.asianetnews.com/life/a-farmer-from-satna-madhya-pradesh-arrange-14-sons-wedding-in-same-day/articleshow-0c6ody9</link>
            <guid isPermaLink="true">https://kannada.asianetnews.com/life/a-farmer-from-satna-madhya-pradesh-arrange-14-sons-wedding-in-same-day/articleshow-0c6ody9</guid>
            <pubDate>Sun, 12 Jul 2026 18:56:46 +0530</pubDate>
            <description><![CDATA[&lt;p&gt;Madhya Pradesh farmer 14 sons marriage: ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಲಕ್ಷಾಂತರ ರೂಪಾಯಿ ಖರ್ಚು ಬೇಡುವ ಒಂದು ದುಬಾರಿ ಸಂಭ್ರಮವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರೈತರೊಬ್ಬರು ಕೈಗೊಂಡ ನಿರ್ಧಾರ ಇಡೀ ದೇಶದ ಗಮನ ಸೆಳೆದಿದೆ. ತಮ್ಮ ಎಲ್ಲಾ 14 ಗಂಡು ಮಕ್ಕಳ ಮದುವೆಯನ್ನು ಒಂದೇ ಮುಹೂರ್ತದಲ್ಲಿ, ಒಂದೇ ವೇದಿಕೆಯಲ್ಲಿ ನೆರವೇರಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxb834dzn9gvxfnc195vhvp6,imgname-new-project--24--1783862759858.jpg" type="image/jpeg" height="390" width="690"/>
            <content:encoded><![CDATA[&lt;p&gt;ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮದುವೆ ವೆಚ್ಚಗಳಿಗೆ ಹೆದರಿ, ಆರ್ಥಿಕವಾಗಿ ಬುದ್ಧಿವಂತಿಕೆಯ ನಿರ್ಧಾರ ಕೈಗೊಂಡಿರುವುದಾಗಿ ಈ ರೈತ ಹೇಳಿಕೊಂಡಿದ್ದಾರೆ. ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ಅದ್ಧೂರಿಯಾಗಿ ಹೊರಟ ಈ ವಿಶಿಷ್ಟ ವರರ ಮೆರವಣಿಗೆಯ ವಿಡಿಯೋಗಳು ನೆಟ್ಟಿಗರನ್ನು ಬೆರಗುಗೊಳಿಸಿವೆ.&lt;/p&gt;&lt;h2&gt;ರೈತನ ಲೆಕ್ಕಾಚಾರ: ಇದು ಮಾದರಿ ಆರ್ಥಿಕ ಜಾಣ್ಮೆ!&lt;/h2&gt;&lt;p&gt;ಹೆಚ್ಚುತ್ತಿರುವ ಹಣದುಬ್ಬರ ಮತ್ತು ಮದುವೆ ಆಡಂಬರಗಳ ನಡುವೆ ಈ ರೈತನ ನಡೆ ಹಲವರಿಗೆ ಸ್ಫೂರ್ತಿಯಾಗಿದೆ. ಈ ನಿರ್ಧಾರದ ಪರವಾಗಿ ಸಾರ್ವಜನಿಕರು ಹಲವು ಸಕಾರಾತ್ಮಕ ಅಂಶಗಳನ್ನು ಗುರುತಿಸಿದ್ದಾರೆ:&lt;/p&gt;&lt;h2&gt;ಬೃಹತ್ ಉಳಿತಾಯ&lt;/h2&gt;&lt;p&gt;ಪ್ರತಿ ಮದುವೆಗೆ ಪ್ರತ್ಯೇಕವಾಗಿ ಮಂಟಪ, ಊಟದ ವ್ಯವಸ್ಥೆ, ಬ್ಯಾಂಡ್ ಮತ್ತು ಸಾರಿಗೆಗೆ ಖರ್ಚು ಮಾಡಿದ್ದರೆ ಈ ಕುಟುಂಬ ಸಾಲದ ಸುಳಿಗೆ ಸಿಲುಕುತ್ತಿತ್ತು. ಒಂದೇ ಬಾರಿಗೆ ಎಲ್ಲವನ್ನೂ ಮುಗಿಸಿರುವುದರಿಂದ ಲಕ್ಷಾಂತರ ರೂಪಾಯಿ ಉಳಿತಾಯವಾಗಿದೆ.&lt;/p&gt;&lt;p&gt;ಸಮಯ ಮತ್ತು ಶ್ರಮದ ಉಳಿತಾಯ: 14 ಪ್ರತ್ಯೇಕ ಮದುವೆಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ. ಕುಟುಂಬಸ್ಥರು ಪದೇ ಪದೇ ರಜೆ ಹಾಕಿ, ಸಂಬಂಧಿಕರನ್ನು ಆಹ್ವಾನಿಸುವ ದೊಡ್ಡ ಕಸರತ್ತಿನಿಂದ ಪಾರಾಗಿದ್ದಾರೆ.&lt;/p&gt;&lt;h2&gt;ಆಡಂಬರಕ್ಕೆ ಬ್ರೇಕ್: ಇಂದಿನ ದಿನಗಳಲ್ಲಿ ಮದುವೆ ಕೇವಲ ಪ್ರತಿಷ್ಠೆಯ ಪ್ರದರ್ಶನವಾಗಿದೆ. ಆದರೆ, ಅತ್ಯಂತ ಪ್ರಾಯೋಗಿಕವಾಗಿ ಯೋಚಿಸಿ ಈ ಮದುವೆ ಮಾಡಿರುವುದು ಮಧ್ಯಮ ವರ್ಗದವರಿಗೆ ಒಂದು ಉತ್ತಮ ಸಂದೇಶ.&lt;/h2&gt;&lt;h2&gt;ನೆಟ್ಟಿಗರ ಚರ್ಚೆ: ಇದು ನಿಜಕ್ಕೂ ನಂಬಲರ್ಹವೇ?&lt;/h2&gt;&lt;p&gt;ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ದೊಡ್ಡ ಚರ್ಚೆಯೇ ಶುರುವಾಗಿದೆ. ಕೆಲವರು ಇದೊಂದು &quot;ಅದ್ಭುತ ಐಡಿಯಾ&quot; ಎಂದು ಕೊಂಡಾಡಿದರೆ, ಇನ್ನು ಕೆಲವರು ಇದನ್ನು ನಂಬಲು ಹಿಂಜರಿಯುತ್ತಿದ್ದಾರೆ:&lt;/p&gt;&lt;p&gt;&quot;ಒಂದೇ ಕುಟುಂಬದಲ್ಲಿ 14 ಗಂಡು ಮಕ್ಕಳಿರಲು ಹೇಗೆ ಸಾಧ್ಯ? ಇದು ಕೇವಲ ಸೋದರಸಂಬಂಧಿಗಳ (Cousins) ಜಂಟಿ ಮದುವೆಯಾಗಿರಬಹುದು, ಸುದ್ದಿಗಾಗಿ ಹೀಗೆ ಬಿಂಬಿಸಲಾಗಿದೆ,&quot; ಎಂದು ಹಲವರು ಕಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಮತ್ತೆ ಕೆಲವರು, &quot;ಪ್ರತಿಯೊಬ್ಬ ಮಗನಿಗೂ ತನ್ನದೇ ಆದ ಮದುವೆಯ ದಿನದ ಕನಸುಗಳಿರುತ್ತವೆ. ಹೀಗೆ ಸಾಮೂಹಿಕವಾಗಿ ಮದುವೆ ಮಾಡುವುದರಿಂದ ವೈಯಕ್ತಿಕ ಸಂಭ್ರಮ ಮಾಯವಾಗುತ್ತದೆ,&quot; ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ ಹೇಳುವುದಾದರೆ, ಕೇವಲ ಸಮಾಜದ ಮೆಚ್ಚುಗೆಗಾಗಿ ಅಥವಾ ಪ್ರತಿಷ್ಠೆಗಾಗಿ ಸಾಲ ಮಾಡಿ ಅದ್ಧೂರಿ ಮದುವೆ ಮಾಡಿಕೊಳ್ಳುವ ಇಂದಿನ ಯುವ ಪೀಳಿಗೆಗೆ ಈ ಸತ್ನಾದ ರೈತ ಒಂದು ಕನ್ನಡಿ ಹಿಡಿದಿದ್ದಾರೆ. 14 ಮಕ್ಕಳು ಒಂದೇ ತಾಯಿಯವರೇ ಅಥವಾ ಇಡೀ ಅವಿಭಕ್ತ ಕುಟುಂಬದ ಮಕ್ಕಳೇ ಎಂಬ ಗೊಂದಲ ಏನೇ ಇದ್ದರೂ, &quot;ಸಾಮೂಹಿಕ ವಿವಾಹ&quot;ದ ಮೂಲಕ ಹಣ ಉಳಿಸುವ ಅವರ ಆಲೋಚನೆ ಮಾತ್ರ ನಿಜಕ್ಕೂ ಶ್ಲಾಘನೀಯ.&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/life/a-farmer-from-satna-madhya-pradesh-arrange-14-sons-wedding-in-same-day/articleshow-0c6ody9"/>
        </item>
        <item>
            <title><![CDATA[S Janaki: 48,000 ಹಾಡು ಹಾಡಿರೋ ಎಸ್ ಜಾನಕಿ ಅದೊಂದು ಹಾಡಿಗೆ ಮಾತ್ರ 14 ರೀಟೇಕ್ ತೆಗೆದುಕೊಂಡ್ರಂತೆ!]]></title>
            <link>https://kannada.asianetnews.com/cine-world/legendary-playback-singer-s-janaki-takes-14-retakes-for-only-that-song-for-perfection/articleshow-b4lsftc</link>
            <guid isPermaLink="true">https://kannada.asianetnews.com/cine-world/legendary-playback-singer-s-janaki-takes-14-retakes-for-only-that-song-for-perfection/articleshow-b4lsftc</guid>
            <pubDate>Sun, 12 Jul 2026 17:12:54 +0530</pubDate>
            <description><![CDATA[&lt;p&gt;ಮೈಸೂರಿನಲ್ಲಿ ತಮ್ಮ ಕೊನೆಯುಸಿರೆಳೆದ ಜಾನಕಿ ಅಮ್ಮ ಅವರು, ಎಸ್&zwnj;ಪಿಬಿ ನಂತರ ಸಂಗೀತ ಲೋಕದ ಮತ್ತೊಂದು ದೊಡ್ಡ ಕಂಬವನ್ನು ಉರುಳಿಸಿದಂತಾಗಿದೆ. ರಾಜಶೇಖರನ್ ಮತ್ತು ರೋಹಿಣಿ ಅಭಿನಯದ ಸಿನಿಮಾದ ಆ ಹಾಡು ಹೇಗೆ ಇತಿಹಾಸ ಸೃಷ್ಟಿಸಿತೋ, ಹಾಗೆಯೇ ಜಾನಕಮ್ಮನವರ ಜೀವನ ಕೂಡ ಒಂದು ಸುದೀರ್ಘ ಇತಿಹಾಸ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxb1qb7b4e6085086k17tfrf,imgname-ilaiyaraaja-s-janaki-1783856082155.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅದೊಂದು ಹಾಡಿಗೆ 14 ಟೇಕ್!&lt;/strong&gt;&lt;/p&gt;&lt;p&gt;ಸಂಗೀತ ಲೋಕದಲ್ಲಿ 'ಅಮ್ಮ' ಎಂದೇ ಕರೆಯಲ್ಪಡುತ್ತಿದ್ದ ದಕ್ಷಿಣ ಭಾರತದ ಗಾನ ಕೋಗಿಲೆ ಎಸ್&zwnj; ಜಾನಕಿ (S Janaki) ಅವರು ಇಂದು ದೈಹಿಕವಾಗಿ ನಮ್ಮನ್ನಗಲಿದ್ದಾರೆ. ಆದರೆ, ಅವರು ಉಳಿಸಿ ಹೋಗಿರುವ 48,000 ಹಾಡುಗಳ ಮಹಾ ಭಂಡಾರ ಎಂದಿಗೂ ಅಜರಾಮರ. ಒಬ್ಬ ಗಾಯಕಿ 22 ಭಾಷೆಗಳಲ್ಲಿ ಹಾಡುವುದು ಎಂದರೆ ಅದು ಕೇವಲ ಪ್ರತಿಭೆಯಲ್ಲ, ಅದೊಂದು ದೈವದತ್ತ ವರ. ಆದರೆ, ಇಂತಹ ಮೇರು ಗಾಯಕಿಯ ಯಶಸ್ಸಿನ ಹಿಂದೆ ಅಪ್ರತಿಮ ಪರಿಶ್ರಮವಿತ್ತು ಎಂಬುದಕ್ಕೆ ಒಂದು ಸಣ್ಣ ಉದಾಹರಣೆಯೇ ಈ '14 ರೀಟೇಕ್&zwnj;'ಗಳ ಕಥೆ!&lt;/p&gt;&lt;h2&gt;ಸಂಗೀತ ಮಾಂತ್ರಿಕನೇ ಬೆರಗಾದ ಆ ಕ್ಷಣ:&lt;/h2&gt;&lt;p&gt;ಅದು 1980ರ ಸಮಯ. ತಮಿಳಿನ 'ನಿಜಲಗಳು' (Nizhalgal) ಎಂಬ ಸಿನಿಮಾ ಸಿದ್ಧವಾಗುತ್ತಿತ್ತು. ಅದಕ್ಕೆ ಸಂಗೀತ ನೀಡುತ್ತಿದ್ದವರು ಮ್ಯೂಸಿಕ್ ಮೇಸ್ಟ್ರೋ ಇಳಯರಾಜ. ಆ ಚಿತ್ರದಲ್ಲಿ 'ದೂರತಿಲ್ ನಾನ್ ಕಂಡ ಮುಗಂ' (Doorthil Naan Kanda Mugam) ಎಂಬ ಅತ್ಯಂತ ಕ್ಲಿಷ್ಟಕರವಾದ ಹಾಡೊಂದಿತ್ತು. ಈ ಹಾಡಿನ ವಿಶೇಷತೆಯೆಂದರೆ, ಅದರ ಅಂತ್ಯವು ಅತ್ಯಂತ ಹೈ-ಪಿಚ್ (High Pitch) ನಲ್ಲಿ ಕೊನೆಗೊಳ್ಳಬೇಕಿತ್ತು.&lt;/p&gt;&lt;p&gt;ಜಾನಕಿ ಅಮ್ಮ ಮೈಕ್ ಮುಂದೆ ನಿಂತು ಹಾಡಲು ಶುರು ಮಾಡಿದರು. ಇಳಯರಾಜ ಅವರಿಗೆ ಮೊದಲ ಅಥವಾ ಎರಡನೇ ಟೇಕ್&zwnj;ನಲ್ಲೇ ಹಾಡು ಇಷ್ಟವಾಯಿತು. &quot;ಜಾನಕಮ್ಮ, ಸಾಂಗ್ ಅದ್ಭುತವಾಗಿ ಬಂದಿದೆ, ಓಕೆ ಮಾಡೋಣ&quot; ಎಂದರು ಇಳಯರಾಜ. ಆದರೆ ಜಾನಕಮ್ಮನಿಗೆ ಮಾತ್ರ ಸಮಾಧಾನವಾಗಲಿಲ್ಲ!&lt;/p&gt;&lt;p&gt;ಛಲ ಬಿಡದ ಗಾನ ಕೋಗಿಲೆ:&lt;/p&gt;&lt;p&gt;&quot;ಇಲ್ಲ ರಾಜಾ, ಆ ಹೈ-ಪಿಚ್ ಸ್ವರ ಇನ್ನೂ ಸ್ಪಷ್ಟವಾಗಿ ಬರಬೇಕು, ಮತ್ತೊಮ್ಮೆ ಪ್ರಯತ್ನಿಸುತ್ತೇನೆ&quot; ಎಂದು ಜಾನಕಿ ಅಮ್ಮ ಪಟ್ಟು ಹಿಡಿದರು. ಒಮ್ಮೆ ಅಲ್ಲ, ಎರಡಲ್ಲ.. ಬರೋಬ್ಬರಿ 14 ಬಾರಿ ಆ ಹಾಡನ್ನು ಹಾಡಿದರು! ಪ್ರತಿ ಬಾರಿ ಹಾಡಿದಾಗಲೂ ಅವರು ಶ್ರೇಷ್ಠತೆಗಾಗಿ ಹುಡುಕಾಡುತ್ತಿದ್ದರು. ಇಳಯರಾಜ ಅವರೇ ಈ ಬಗ್ಗೆ ನೆನಪಿಸಿಕೊಂಡು, &quot;ಅವರು ಪ್ರತಿಯೊಂದು ಟೇಕ್&zwnj;ನಲ್ಲೂ ಹೊಸತನ್ನು ಹುಡುಕುತ್ತಿದ್ದರು. ಅವರ ಆತುರವಿಲ್ಲದ, ಪರಿಪೂರ್ಣತೆಯ ಹಸಿವು ನನ್ನನ್ನೇ ಬೆರಗುಗೊಳಿಸಿತ್ತು&quot; ಎಂದು ಹೇಳಿಕೊಂಡಿದ್ದರು. ಕೊನೆಗೆ 14ನೇ ಟೇಕ್&zwnj;ನಲ್ಲಿ ಬಂದ ಆ ಸ್ವರ ಸಿನಿಮಾದಲ್ಲಿ ಬಳಕೆಯಾಗಿ, ಇಂದಿಗೂ ಅದು ಸಂಗೀತ ಪ್ರೇಮಿಗಳ ಕಿವಿಯಲ್ಲಿ ಜೇನಿನಂತೆ ಸವಿಯಾಗಿದೆ.&lt;/p&gt;&lt;h3&gt;ದಾಖಲೆಗಳ ಸರದಾರಿಣಿ&lt;/h3&gt;&lt;p&gt;ಜಾನಕಿ ಅಮ್ಮ ಎಂದರೆ ಕೇವಲ ಸಂಖ್ಯೆಯಲ್ಲ. ಅವರು 4 ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ವಿವಿಧ ರಾಜ್ಯಗಳಿಂದ 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು. ತಮ್ಮ ಪಾಲಿಗೆ ಬಂದ ಪದ್ಮಭೂಷಣ ಪ್ರಶಸ್ತಿಯನ್ನು ನಯವಾಗಿಯೇ ನಿರಾಕರಿಸಿ 'ದಕ್ಷಿಣ ಭಾರತದ ಗಾಯಕರಿಗೂ ಉತ್ತರ ಭಾರತೀಯರಂತೆ ಮನ್ನಣೆ ನೀಡಬೇಕು' ಎಂದು ವಿನಯದಿಂದಲೇ ಆಗ್ರಹಿಸಿದವರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮಾತ್ರವಲ್ಲದೆ ಹಿಂದಿ, ಒಡಿಯಾ, ಬಂಗಾಳಿ, ಮರಾಠಿ, ತುಳು ಮತ್ತು ಕೊಂಕಣಿ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ ಅವರು ಧ್ವನಿಯಾಗಿದ್ದಾರೆ. ಗಾಯನದಲ್ಲಿ ಮೂರು ಗಂಟೆಗಳ ಕಾಲ ಸತತವಾಗಿ ಅಭ್ಯಾಸ ಮಾಡುತ್ತಿದ್ದ ಅವರ ಶಿಸ್ತು ಇಂದಿನ ಯುವ ಗಾಯಕರಿಗೆ ಮಾದರಿ.&lt;/p&gt;&lt;p&gt;ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ:&lt;/p&gt;&lt;p&gt;ಮೈಸೂರಿನಲ್ಲಿ ತಮ್ಮ ಕೊನೆಯುಸಿರೆಳೆದ ಜಾನಕಿ ಅಮ್ಮ ಅವರು, ಎಸ್&zwnj;ಪಿಬಿ ನಂತರ ಸಂಗೀತ ಲೋಕದ ಮತ್ತೊಂದು ದೊಡ್ಡ ಕಂಬವನ್ನು ಉರುಳಿಸಿದಂತಾಗಿದೆ. ರಾಜಶೇಖರನ್ ಮತ್ತು ರೋಹಿಣಿ ಅಭಿನಯದ ಸಿನಿಮಾದ ಆ ಹಾಡು ಹೇಗೆ ಇತಿಹಾಸ ಸೃಷ್ಟಿಸಿತೋ, ಹಾಗೆಯೇ ಜಾನಕಮ್ಮನವರ ಜೀವನ ಕೂಡ ಒಂದು ಸುದೀರ್ಘ ಇತಿಹಾಸ. ಅವರು ಹಾಡಿದ ಪ್ರತಿ ಹಾಡು ಕೂಡ ನಮಗೆ ಪಾಠ. ಅವರ ಛಲ, ಪರಿಶ್ರಮ ಮತ್ತು ಆ ಮಧುರ ಧ್ವನಿ ಸದಾ ಕಾಲ ಭಾರತೀಯ ಚಿತ್ರರಂಗದ ಅಂತರಾಳದಲ್ಲಿ ಮೊಳಗುತ್ತಲೇ ಇರುತ್ತದೆ.&lt;/p&gt;&lt;p&gt;ಶತಮಾನಕ್ಕೊಬ್ಬರು ಹುಟ್ಟಿಬರುವ ಇಂತಹ ಮಹಾನ್ ಚೇತನಕ್ಕೆ ಕನ್ನಡಿಗರ ಪರವಾಗಿ ಕೋಟಿ ಕೋಟಿ ನಮನಗಳು. ಜಾನಕಿ ಅಮ್ಮ, ನಿಮ್ಮ ಹಾಡುಗಳ ಮೂಲಕ ನೀವು ಸದಾ ಕಾಲ ನಮ್ಮೊಂದಿಗಿರುತ್ತೀರಿ.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/legendary-playback-singer-s-janaki-takes-14-retakes-for-only-that-song-for-perfection/articleshow-b4lsftc"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ಕುಟುಂಬ ಕಲಹ: ಎರಡು ತೊಲೆ ಬಂಗಾರಕ್ಕಾಗಿ ಅತ್ತೆಯ ಜೀವ ತೆಗೆದ ಅಳಿಯ]]></title>
            <link>https://kannada.asianetnews.com/crime/son-in-law-kills-mother-in-law-over-gold-at-bengaluru-gvd/articleshow-2zmeg8k</link>
            <guid isPermaLink="true">https://kannada.asianetnews.com/crime/son-in-law-kills-mother-in-law-over-gold-at-bengaluru-gvd/articleshow-2zmeg8k</guid>
            <pubDate>Sun, 12 Jul 2026 19:13:36 +0530</pubDate>
            <description><![CDATA[&lt;p&gt;Bengaluru Family Dispute: ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಿ ಅಗ್ರಹಾರದಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxb91s6xe6chaehkd9r2n481,imgname-jbjv-1783863764189.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.12): &lt;/strong&gt;ಸಿಲಿಕಾನ್ ಸಿಟಿಯ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಿ ಅಗ್ರಹಾರದಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಕೇವಲ ಎರಡು ತೊಲೆ ಬಂಗಾರಕ್ಕಾಗಿ ಅಳಿಯನೇ ತನ್ನ ಅತ್ತೆಯ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅತ್ತೆ ಮೃತಪಟ್ಟಿದ್ದಾರೆ. ಮೃತರನ್ನು ರೋಶನಬಿ (45) ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಆರೋಪಿಯಾಗಿರುವ ಅಳಿಯ ಅಕ್ಬರ್, ಮೂರು ತಿಂಗಳ ಹಿಂದೆ ಜನಿಸಿದ ತನ್ನ ಗಂಡು ಮಗುವಿನ ಸಂದರ್ಭದಲ್ಲಿ ಅತ್ತೆ ಎರಡು ತೊಲೆ ಚಿನ್ನದ ಉಡುಗೊರೆ ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಆದರೆ, ಹಲವು ದಿನಗಳಾದರೂ ಚಿನ್ನ ನೀಡದಿದ್ದ ಕಾರಣ ಅಕ್ಬರ್ ಅತ್ತೆಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.&lt;/p&gt;&lt;p&gt;ಜುಲೈ 10ರಂದು, ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಅಕ್ಬರ್ ಕೊಡಲಿಯಿಂದ ರೋಶನಬಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಮೂಲತಃ ಏಳು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದ ಈ ಕುಟುಂಬದಲ್ಲಿ ನಡೆದ ಈ ದಾರುಣ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.&lt;/p&gt;&lt;h2&gt;&lt;strong&gt;ಕೊಲೆ ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ರೋಶನಬಿ ಅವರ ಸಾವಿನ ಬಳಿಕ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಳಿಯ ಅಕ್ಬರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಸದ್ಯ ಕುಟುಂಬದೊಳಗಿನ ಸಣ್ಣ ವಿವಾದವೇ ಭೀಕರ ಹ*ತ್ಯೆಗೆ ಕಾರಣವಾಗಿರುವ ಈ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಕುಟುಂಬ ಸಂಬಂಧಗಳ ನಡುವಿನ ಹಿಂಸಾಚಾರದ ಗಂಭೀರತೆಯನ್ನು ಎತ್ತಿ ತೋರಿಸಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/son-in-law-kills-mother-in-law-over-gold-at-bengaluru-gvd/articleshow-2zmeg8k"/>
        </item>
        <item>
            <title><![CDATA[Viral News: ಆಫರ್ ಲೆಟರ್‌ನಲ್ಲಿ ₹10 ಸಾವಿರ, ಖಾತೆಗೆ ₹5 ಸಾವಿರ! ಕಂಪನಿಗೆ ಪ್ರಶ್ನೆಗಳ ಸುರಿಮಳೆ]]></title>
            <link>https://kannada.asianetnews.com/viral/promised-one-salary-received-another-viral-internship-reddit-story-raises-questions/articleshow-dl2uw5h</link>
            <guid isPermaLink="true">https://kannada.asianetnews.com/viral/promised-one-salary-received-another-viral-internship-reddit-story-raises-questions/articleshow-dl2uw5h</guid>
            <pubDate>Sun, 12 Jul 2026 13:59:51 +0530</pubDate>
            <description><![CDATA[&lt;p&gt;ಒಬ್ಬ ಮಾರ್ಕೆಟಿಂಗ್ ಇಂಟರ್ನ್, ತನಗೆ ಮಾತುಕೊಟ್ಟಂತೆ 10,000 ರೂಪಾಯಿ ಸ್ಟೈಪೆಂಡ್ ನೀಡದೆ, ಕೇವಲ 5,000 ರೂಪಾಯಿ ನೀಡಿ, ನಿಗದಿಗಿಂತ ಹೆಚ್ಚು ಗಂಟೆಗಳ ಕಾಲ ದುಡಿಸಿಕೊಂಡು ಶೋಷಣೆ ಮಾಡಲಾಗಿದೆ ಎಂದು ರೆಡ್ಡಿಟ್&zwnj;ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇಂತಹ ಶೋಷಣೆಯುಳ್ಳ ಕೆಲಸವನ್ನು ತಕ್ಷಣವೇ ಬಿಟ್ಟುಬಿಡುವಂತೆ ಬಳಕೆದಾರರು ವಿದ್ಯಾರ್ಥಿಗೆ ಸಲಹೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxapxwhdm0sertps8e95sj9c,imgname-overworked-intern-faces-brutal-choice-to-quit-or-stay-1783844762157.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಬ್ಬ ಮಾರ್ಕೆಟಿಂಗ್ ಇಂಟರ್ನ್ ರೆಡ್ಡಿಟ್-ನಲ್ಲಿ ಹಾಕಿರೋ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತನಗೆ ಮಾತು ಕೊಟ್ಟಂತೆ ಸ್ಟೈಪೆಂಡ್ ನೀಡಿಲ್ಲ, ಬದಲಾಗಿ ಅರ್ಧದಷ್ಟು ಮಾತ್ರ ನೀಡಿ, ನಿಗದಿಗಿಂತ ಹೆಚ್ಚು ದುಡಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದು, ಆನ್&zwnj;ಲೈನ್&zwnj;ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. &quot;ಇಂಟರ್ನ್&zwnj;ಶಿಪ್&zwnj;ಗೆ 10 ಸಾವಿರ ಕೊಡ್ತೀವಿ ಅಂದ್ರು, 5 ಸಾವಿರ ಕೊಟ್ಟರು, ಕೆಲಸದಲ್ಲಿ ಇರಬೇಕಾ? ಬಿಡಬೇಕಾ?&quot; ಎಂಬ ಶೀರ್ಷಿಕೆಯ ಈ ಪೋಸ್ಟ್&zwnj;ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ಇಂತಹ ಶೋಷಣೆಯ ಕೆಲಸವನ್ನು ತಕ್ಷಣ ಬಿಟ್ಟುಬಿಡು ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ನಾಲ್ಕನೇ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ಇವರು, ಕಳೆದ ತಿಂಗಳು ಈ ಇಂಟರ್ನ್&zwnj;ಶಿಪ್&zwnj;ಗೆ ಸೇರಿದ್ದರು. ವಾರಕ್ಕೆ ಮೂರು ದಿನ ಮಾತ್ರ ಕೆಲಸ, ತಿಂಗಳಿಗೆ 10,000 ರೂಪಾಯಿ ಸ್ಟೈಪೆಂಡ್ ನೀಡುವುದಾಗಿ ಕಂಪನಿ ಭರವಸೆ ನೀಡಿತ್ತು. ಆದರೆ, ಕೆಲಸಕ್ಕೆ ಸೇರಿದ ಮೇಲೆ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು.&lt;/p&gt;&lt;p&gt;&quot;ಮೊದಲ ದಿನದಿಂದಲೇ ನಾನು ಪ್ರತಿದಿನ ಕೆಲಸ ಮಾಡಿದ್ದೇನೆ, ಕೆಲವೊಮ್ಮೆ ಭಾನುವಾರ ಕೂಡಾ ಕೆಲಸ ಮಾಡಿದ್ದೇನೆ. ರಿಮೋಟ್ ಆಗಿ ಕೂಡಾ ಟಾಸ್ಕ್ ಕೊಟ್ಟಿದ್ದಾರೆ. ಆಫೀಸ್ ಸಮಯ ಬೆಳಗ್ಗೆ 10:30 ರಿಂದ ಸಂಜೆ 6 ಗಂಟೆ ತನಕ ಅಂತ ಹೇಳಿದ್ದರು. ಆದರೆ ನಾನು ರಾತ್ರಿ 7:30-9 ಗಂಟೆಯವರೆಗೂ ಇರಬೇಕಾಗಿತ್ತು. ಮನೆಗೆ ಬಂದ ಮೇಲೂ ಕೆಲಸದ ಬಗ್ಗೆ ಮೆಸೇಜ್ ಬರುತ್ತಿತ್ತು. ನನ್ನ ಜವಾಬ್ದಾರಿಗಳಲ್ಲದ ಹೆಚ್ಚುವರಿ ಕೆಲಸಗಳನ್ನೂ ನನ್ನ ಮೇಲೆ ಹೇರಿದ್ದರು,&quot; ಎಂದು ಆ ಇಂಟರ್ನ್ ರೆಡ್ಡಿಟ್ ಪೋಸ್ಟ್&zwnj;ನಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಇಷ್ಟೆಲ್ಲಾ ಹೆಚ್ಚು ಗಂಟೆಗಳ ಕಾಲ ದುಡಿದು, ಹೆಚ್ಚುವರಿ ಜವಾಬ್ದಾರಿಗಳನ್ನು ಹೊತ್ತರೂ, ತಿಂಗಳ ಕೊನೆಗೆ ಕೇವಲ 5,000 ರೂಪಾಯಿ ಮಾತ್ರ ಸಿಕ್ಕಿದೆ ಎಂದು ಇಂಟರ್ನ್ ಹೇಳಿದ್ದಾರೆ. ಸರಿಯಾಗಿ ಆಫೀಸ್&zwnj;ಗೆ ಬಂದಿಲ್ಲ ಎಂಬ ಕಾರಣ ನೀಡಿ ಮ್ಯಾನೇಜ್&zwnj;ಮೆಂಟ್ ಉಳಿದ ಹಣವನ್ನು ತಡೆಹಿಡಿದಿದೆ ಎಂದು ಪೋಸ್ಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;&quot;ಜುಲೈ 5 ರಂದು ನನ್ನ ಖಾತೆಗೆ ಕೇವಲ 5,000 ರೂಪಾಯಿ ಜಮಾ ಆಗಿದೆ. ಮ್ಯಾನೇಜರ್ ಹೇಳುವ ಪ್ರಕಾರ, ನಾನು ನಿಯಮಿತವಾಗಿ ಆಫೀಸ್&zwnj;ಗೆ ಬಂದಿಲ್ಲವಂತೆ. ಆದರೆ ನಾನು ಪ್ರತಿದಿನ ಕೆಲಸ ಮಾಡಿದ್ದೇನೆ. ಅವರ ಲೆಕ್ಕಾಚಾರದ ಪ್ರಕಾರ, ನನಗೆ ಕನಿಷ್ಠ 7,500 ರೂಪಾಯಿ ಬರಬೇಕಿತ್ತು. ಪ್ರತಿದಿನ 30 ಕಿ.ಮೀ. ಪ್ರಯಾಣಕ್ಕೆ ಮೂರು ಗಂಟೆ ಸಮಯ ಬೇಕು.&quot;&lt;/p&gt;&lt;p&gt;&ldquo;ನಾನು ಜುಲೈ 9 ರಂದು ಈ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದೇನೆ. ಅವರು 2,000 ರೂಪಾಯಿ ಹೆಚ್ಚಿಸಿದರೆ, ನಾನು ಕೆಲಸದಲ್ಲಿ ಮುಂದುವರಿಯಬಹುದು. ಇಲ್ಲದಿದ್ದರೆ, ನಾನು ಕೆಲಸ ಬಿಡುತ್ತೇನೆ. ಆದರೆ, ಇಲ್ಲಿನ ರಿಕ್ರೂಟರ್ (ತುಂಬಾ ಪ್ರಭಾವಿ ವ್ಯಕ್ತಿ) ನನ್ನ ಮುಂದಿನ ಪ್ಲೇಸ್&zwnj;ಮೆಂಟ್&zwnj; ಮೇಲೆ ಪರಿಣಾಮ ಬೀರಬಹುದೇ ಎಂಬ ಚಿಂತೆ ಕಾಡುತ್ತಿದೆ. ಇಲ್ಲಿಯವರೆಗೆ, ನಾನು ಯಾವುದೇ ಕೌಶಲ್ಯವನ್ನು ಕಲಿತಿಲ್ಲ, ಬರೀ ಸುಸ್ತಾಗಿದ್ದಷ್ಟೇ,&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;Internship promised ₹10k, paid ₹5k, stay or quit?by u/Thookudurai_Mamey in IndianWorkplace&lt;/p&gt;&lt;p&gt;&amp;nbsp;&lt;/p&gt;&lt;p&gt;ಈ ಪೋಸ್ಟ್ ವೇಗವಾಗಿ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮುಂದುವರಿಸುವ ಬದಲು ರಾಜೀನಾಮೆ ನೀಡುವುದೇ ಉತ್ತಮ ಎಂದು ಹಲವರು ಸಲಹೆ ನೀಡಿದ್ದಾರೆ.&lt;/p&gt;&lt;p&gt;&quot;10 ಸಾವಿರದ ಭರವಸೆ ಕೊಟ್ಟು 5 ಸಾವಿರ ಕೊಟ್ಟಿದ್ದಾರೆ. ಇದು ದೊಡ್ಡ 'ರೆಡ್ ಫ್ಲ್ಯಾಗ್'. ತಕ್ಷಣ ನಿನ್ನ ರಾಜೀನಾಮೆ ಕಳಿಸು,&quot; ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.&lt;/p&gt;&lt;p&gt;ಇನ್ನೊಬ್ಬರು, &quot;ತಕ್ಷಣ ಕೆಲಸ ಬಿಡು. ಆ ಸ್ಟಾರ್ಟಪ್ ನಿನಗೆ ಮೋಸ ಮಾಡಿದೆ. ಇದು ಅವರ ನಿಜವಾದ ಬಣ್ಣವನ್ನು ತೋರಿಸುತ್ತದೆ. ಅವರು ತಮ್ಮೆಲ್ಲಾ ಉದ್ಯೋಗಿಗಳನ್ನು ಹೀಗೆಯೇ ನಡೆಸಿಕೊಳ್ಳುತ್ತಾರೆ,&quot; ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಮೂರನೇ ಬಳಕೆದಾರರು, &quot;ಈ ಕಂಪನಿ ಎಷ್ಟು ದೊಡ್ಡದು? 10 ಜನರಿಗಿಂತ ಕಡಿಮೆ ಸಿಬ್ಬಂದಿ ಇದ್ದರೆ, ಖಂಡಿತ ಕೆಲಸ ಬಿಡು. ಆ ರಿಕ್ರೂಟರ್ ಏನೂ ಮಾಡಲು ಸಾಧ್ಯವಿಲ್ಲ. ಅವರು ಕಾಲೇಜಿನ ಬೇರೆ ಪ್ಲೇಸ್&zwnj;ಮೆಂಟ್ ಡ್ರೈವ್&zwnj;ಗಳಲ್ಲಿ ನಿನ್ನನ್ನು ತಡೆಯಬಹುದು ಅಷ್ಟೇ. ಅವರೊಂದಿಗೆ ಮಾತನಾಡಿ, ನೀನೂ ಸ್ವಂತವಾಗಿ ಕೆಲಸ ಹುಡುಕಲು ಪ್ರಾರಂಭಿಸು,&quot; ಎಂದು ಹೇಳಿದ್ದಾರೆ.&lt;/p&gt;&lt;p&gt;ನಾಲ್ಕನೆಯವರು, &quot;ಕೆಲಸ ಬಿಟ್ಟುಬಿಡು. ಉಳಿದ ಹಣಕ್ಕಾಗಿ ಜಗಳವಾಡುತ್ತಾ ಕೂರಬೇಡ, ಅವರು ಕೊಡಲ್ಲ. ಯಾವ ರಿಕ್ರೂಟರ್ ಕೂಡ ನಿನ್ನ ಪ್ಲೇಸ್&zwnj;ಮೆಂಟ್&zwnj;ಗಳನ್ನು ಹಾಳು ಮಾಡಲು ಸಾಧ್ಯವಿಲ್ಲ. ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ. ಎಲ್ಲವೂ ಸರಿ ಹೋಗುತ್ತದೆ. ನಿನಗೆ ಹೀಗಾಗಿದ್ದು ಬೇಸರದ ಸಂಗತಿ, ಆದರೆ ಈ ಸ್ಟಾರ್ಟಪ್&zwnj;ಗಳು ಅಸಹ್ಯ ಹುಟ್ಟಿಸುತ್ತವೆ,&quot; ಎಂದು ಸೇರಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/promised-one-salary-received-another-viral-internship-reddit-story-raises-questions/articleshow-dl2uw5h"/>
        </item>
        <item>
            <title><![CDATA[ಹುಲಿ vs ಕಿಂಗ್ ಕೋಬ್ರಾ.. ಇಬ್ಬರು ಅಪ್ರತಿಮ ಶಿಕಾರಿಗಳು, ಫೈಟ್ ನಡೆದ್ರೆ  ಗೆಲ್ಲೋದು ಯಾರು?]]></title>
            <link>https://kannada.asianetnews.com/gallery/life/tiger-vs-king-cobra-if-a-fight-happens-who-will-win-gkn-nk85vc1</link>
            <guid isPermaLink="true">https://kannada.asianetnews.com/gallery/life/tiger-vs-king-cobra-if-a-fight-happens-who-will-win-gkn-nk85vc1</guid>
            <pubDate>Sun, 12 Jul 2026 16:45:19 +0530</pubDate>
            <description><![CDATA[&lt;p&gt;ಕಾಡಿನ ಬಲಿಷ್ಠ ಪ್ರಾಣಿ ಹುಲಿ ಮತ್ತು ಪ್ರಾಣಾಂತಿಕ ವಿಷದ ರಾಜನಾಗರ ಮುಖಾಮುಖಿಯಾದರೆ ಏನಾಗಬಹುದು? ಹುಲಿಯ ಪಂಜಿನ ಹೊಡೆತಕ್ಕೆ ಹಾವು ಸತ್ತರೆ, ಹಾವಿನ ಒಂದು ಕಡಿತಕ್ಕೆ ಹುಲಿಯ ಸಾವು ನಿಶ್ಚಿತ. ಈ ಇಬ್ಬರು ಅಪಾಯಕಾರಿ ಶಿಕಾರಿಗಳ ನಡುವಿನ ಹೋರಾಟದ ಫಲಿತಾಂಶವು ಯಾರು ಮೊದಲು ದಾಳಿ ಮಾಡುತ್ತಾರೆ ಅನ್ನೋದು ಮುಖ್ಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxazzdawbmycw23hgwh4kgjg,imgname-tiger-vs-cobra--5--1783854249308.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಡಿನ ಬಲಿಷ್ಠ ಪ್ರಾಣಿ ಹುಲಿ ಮತ್ತು ಪ್ರಾಣಾಂತಿಕ ವಿಷದ ರಾಜನಾಗರ ಮುಖಾಮುಖಿಯಾದರೆ ಏನಾಗಬಹುದು? ಹುಲಿಯ ಪಂಜಿನ ಹೊಡೆತಕ್ಕೆ ಹಾವು ಸತ್ತರೆ, ಹಾವಿನ ಒಂದು ಕಡಿತಕ್ಕೆ ಹುಲಿಯ ಸಾವು ನಿಶ್ಚಿತ. ಈ ಇಬ್ಬರು ಅಪಾಯಕಾರಿ ಶಿಕಾರಿಗಳ ನಡುವಿನ ಹೋರಾಟದ ಫಲಿತಾಂಶವು ಯಾರು ಮೊದಲು ದಾಳಿ ಮಾಡುತ್ತಾರೆ ಅನ್ನೋದು ಮುಖ್ಯ.&lt;/p&gt;&lt;img&gt;&lt;p&gt;ಜಂಗಲ್ ಲೋಕದಲ್ಲಿ ಹುಲಿ ಮತ್ತು ರಾಜನಾಗರ (ಕಿಂಗ್ ಕೋಬ್ರಾ) ಎರಡೂ ಅತ್ಯಂತ ಅಪಾಯಕಾರಿ ಶಿಕಾರಿಗಳು. ಒಂದು ಕಡೆ ಹುಲಿ ತನ್ನ ಅಪಾರ ಶಕ್ತಿ, ವೇಗ ಮತ್ತು ಚೂಪಾದ ಪಂಜುಗಳಿಂದ ಕಾಡಿನ ರಾಜನಂತೆ ಮೆರೆದರೆ, ಇನ್ನೊಂದು ಕಡೆ ಕಿಂಗ್ ಕೋಬ್ರಾ ತನ್ನ ಪ್ರಾಣಾಂತಿಕ ವಿಷ ಮತ್ತು ಮಿಂಚಿನ ವೇಗದ ದಾಳಿಗೆ ಹೆಸರಾಗಿದೆ. ಇಬ್ಬರೂ ತಮ್ಮ ತಮ್ಮ ಇಲಾಖೆಯ 'ಡಾನ್'ಗಳೇ. ಒಂದು ವೇಳೆ ಇವರಿಬ್ಬರು ಮುಖಾಮುಖಿಯಾದರೆ ಏನಾಗಬಹುದು? ಯಾರ ಪಲ್ಟಾ ಮೇಲಿರುತ್ತದೆ? ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದರ ವಿಶ್ಲೇಷಣೆ ಇಲ್ಲಿದೆ.&lt;/p&gt;&lt;img&gt;&lt;p&gt;ಹುಲಿ ಕಾಡಿನ ಅತ್ಯಂತ ಬಲಿಷ್ಠ ಭೂಚರ ಪ್ರಾಣಿ. ಸುಮಾರು 200 ರಿಂದ 300 ಕೆಜಿ ತೂಕವಿರುವ ಹುಲಿಗೆ ಒಂದೇ ಪಂಜಿನ ಹೊಡೆತಕ್ಕೆ ಎಂತಹ ದೊಡ್ಡ ಪ್ರಾಣಿಯನ್ನಾದರೂ ಹಣ್ಣುಗಾಯಿ ಮಾಡುವ ಶಕ್ತಿಯಿದೆ. ಹುಲಿಯ ವೇಗ, ಅದರ ಜಿಗಿತ ಮತ್ತು ಬುದ್ಧಿವಂತಿಕೆ ಅದಕ್ಕೆ ಶಿಕಾರಿಯಲ್ಲಿ ಮೇಲುಗೈ ತಂದುಕೊಡುತ್ತದೆ. ಸಾಮಾನ್ಯವಾಗಿ ಹುಲಿಗಳು ಹಾವುಗಳಂತಹ ವಿಷಜಂತುಗಳಿಂದ ದೂರವಿರಲು ಪ್ರಯತ್ನಿಸುತ್ತವೆ. ಆದರೆ ಅನಿವಾರ್ಯವಾದರೆ ಅವು ಅತಿ ವೇಗವಾಗಿ ದಾಳಿ ಮಾಡಬಲ್ಲವು.&lt;/p&gt;&lt;img&gt;&lt;p&gt;ಕಿಂಗ್ ಕೋಬ್ರಾ ವಿಶ್ವದ ಅತಿ ಉದ್ದದ ವಿಷಪೂರಿತ ಹಾವು. ಇದರ ವಿಷ ಎಷ್ಟು ಅಪಾಯಕಾರಿ ಎಂದರೆ, ಒಂದು ಬಾರಿ ಕಚ್ಚಿದರೆ ಸುಮಾರು 20 ಜನ ಮನುಷ್ಯರನ್ನು ಅಥವಾ ಒಂದು ಬೃಹತ್ ಆನೆಯನ್ನೇ ಕೊಲ್ಲುವಷ್ಟು ವಿಷವನ್ನು ಇದು ಹೊರಹಾಕಬಲ್ಲದು. ಕಿಂಗ್ ಕೋಬ್ರಾ ಕೇವಲ ಕಚ್ಚುವುದಷ್ಟೇ ಅಲ್ಲ, ತನ್ನ ಶರೀರದ ಮೂರನೇ ಒಂದು ಭಾಗದಷ್ಟು ಎತ್ತರಕ್ಕೆ ಎದ್ದು ನಿಂತು ಶತ್ರುವನ್ನು ಹೆದರಿಸಬಲ್ಲದು. ಇದರ ದಾಳಿ ಕಣ್ಣಿನ ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ಮುಗಿದುಹೋಗಿರುತ್ತದೆ.&lt;/p&gt;&lt;img&gt;&lt;p&gt;ವನ್ಯಜೀವಿ ತಜ್ಞರ ಪ್ರಕಾರ, ಈ ಇಬ್ಬರ ನಡುವೆ ಹೋರಾಟ ನಡೆದರೆ ಫಲಿತಾಂಶವು ಯಾರು ಮೊದಲು ದಾಳಿ ಮಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.&lt;/p&gt;&lt;p&gt;&lt;strong&gt;ಹುಲಿಯ ಮೇಲುಗೈ: &lt;/strong&gt;ಹುಲಿ ತನ್ನ ಚಾಕಚಕ್ಯತೆಯಿಂದ ಹಾವಿನ ತಲೆಯನ್ನೇ ಗುರಿಯಾಗಿಸಿಕೊಂಡು ಒಂದೇ ಪಂಜಿನ ಹೊಡೆತ ನೀಡಿದರೆ, ಕಿಂಗ್ ಕೋಬ್ರಾ ಅಲ್ಲಿಗೆ ಅಂತ್ಯವಾಗುತ್ತದೆ. ಹುಲಿಯ ವೇಗ ಮತ್ತು ಶಕ್ತಿ ಹಾವಿಗಿಂತ ಎಷ್ಟೋ ಪಟ್ಟು ಹೆಚ್ಚು.&lt;/p&gt;&lt;img&gt;&lt;p&gt;ಒಂದು ವೇಳೆ ಹುಲಿ ದಾಳಿ ಮಾಡುವ ಮೊದಲೇ ಕಿಂಗ್ ಕೋಬ್ರಾ ಹುಲಿಗೆ ಕಚ್ಚಿದರೆ, ಹುಲಿಯ ಸಾವು ಬಹುತೇಕ ಖಚಿತ. ಕಿಂಗ್ ಕೋಬ್ರಾದ 'ನ್ಯೂರೋಟಾಕ್ಸಿಕ್' ವಿಷವು ಹುಲಿಯ ನರಮಂಡಲವನ್ನು ಕೆಲವೇ ನಿಮಿಷಗಳಲ್ಲಿ ಸ್ಥಗಿತಗೊಳಿಸುತ್ತದೆ. ಹುಲಿಯಂತಹ ದೊಡ್ಡ ಪ್ರಾಣಿಯಾದರೂ ವಿಷದ ಮುಂದೆ ಅದರ ಶಕ್ತಿ ನಡೆಯುವುದಿಲ್ಲ. ಆದರೂ, ವಿಷವು ಹುಲಿಯ ದೇಹದ ಮೇಲಿನ ಪರಿಣಾಮ ಬೀರಲು ಪ್ರಾರಂಭಿಸಬಹುದು. ಅದರ ಶಕ್ತಿ ಮತ್ತು ವೇಗದ ಮೇಲೆ ನಿರ್ಧಾರವಾಗಲಿದೆ. ಅದರ ಪೂರ್ಣ ವಿಷ ಪರಿಣಾಮ ಬೀರುವವರೆಗೆ ನಾಗರ ಹಾವನ್ನು ಕೊಲ್ಲಲು ಸಮಯ ಮತ್ತು ಶಕ್ತಿ ಇದೆ.&lt;/p&gt;&lt;img&gt;&lt;p&gt;ನಿಸರ್ಗದಲ್ಲಿ ಈ ಇಬ್ಬರು ಶಿಕಾರಿಗಳು ಪರಸ್ಪರ ಘರ್ಷಣೆಯನ್ನು ತಪ್ಪಿಸುತ್ತಾರೆ. ಹುಲಿಗೆ ಹಾವಿನ ವಿಷದ ಬಗ್ಗೆ ತಿಳಿದಿದ್ದರೆ, ಹಾವಿಗೆ ಹುಲಿಯ ಪಂಜಿನ ಶಕ್ತಿಯ ಬಗ್ಗೆ ಅರಿವಿರುತ್ತದೆ. ಆದ್ದರಿಂದ ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸಿ ದೂರ ಉಳಿಯುವುದೇ ಹೆಚ್ಚು. ಒಂದು ವೇಳೆ ಕಾಳಗ ನಡೆದರೆ, ಅದು 'ಜೀವನ್ಮರಣ'ದ ಹೋರಾಟವಾಗಿದ್ದು, ಇಬ್ಬರೂ ಸಾಯುವ ಸಾಧ್ಯತೆಯೇ ಹೆಚ್ಚಿರುತ್ತದೆ. ಏಕೆಂದರೆ ಹಾವು ಸತ್ತರೂ, ಅದು ಕಚ್ಚಿದ್ದರೆ ಹುಲಿ ಕೂಡ ಹೆಚ್ಚು ಹೊತ್ತು ಬದುಕಲಾರದು.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/life/tiger-vs-king-cobra-if-a-fight-happens-who-will-win-gkn-nk85vc1"/>
        </item>
        <item>
            <title><![CDATA[ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದಿದ್ದ ದ್ವಾರಕನಾಥ್ ಗುರೂಜಿಯಿಂದ ಮತ್ತೊಂದು ಭವಿಷ್ಯ]]></title>
            <link>https://kannada.asianetnews.com/state/predicted-dk-shivakumar-would-become-cm-years-ago-dwarakanath-guruji-gets-emotional/articleshow-fk77837</link>
            <guid isPermaLink="true">https://kannada.asianetnews.com/state/predicted-dk-shivakumar-would-become-cm-years-ago-dwarakanath-guruji-gets-emotional/articleshow-fk77837</guid>
            <pubDate>Sun, 12 Jul 2026 15:48:35 +0530</pubDate>
            <description><![CDATA[&lt;p&gt;ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ವರ್ಷಗಳ ಮೊದಲೇ ಹೇಳಿದ್ದ ದ್ವಾರಕನಾಥ ಗುರೂಜಿ ಇದೀಗ ಸಿಎಂ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ. ಮಾತುಗಳ ನಡುವೆ ದ್ವಾರಕನಾಥ್ ಗುರೂಜಿ ಭಾವುಕರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxax86d61avezq01rytt18gz,imgname-dwarakanath-guruji-reiterates-dk-shivakumar-cm-prediction-1783851391398.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.12 )&lt;/strong&gt; ಬೆಂಗಳೂರಿನ ಲಿಂಗಧೀರನಹಳ್ಳಿಯಲ್ಲಿ ಸುಬ್ರಮಣ್ಯ ದೇವಾಲಯದ ಭೂಮಿಪೂಜೆ ಕಾರ್ಯಕ್ರಮ ಅದ್ಧೂರಿಯಾಗಿ ನೇರವೇರಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಮಾತನಾಡಿದ ರಾಜಗುರು ದ್ವಾರಕನಾಥ್ ಡಿಕೆ ಶಿವಕುಮಾರ್ ದೂರದೃಷ್ಟಿ ಇರುವ ರಾಜಕಾರಣಿ ಎಂದಿದ್ದಾರೆ. ಕೆಲ ವರ್ಷಗಳ ಮೊದಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ರಾಜಗುರು ದ್ವಾರಕನಾಥ್ ಇದೀಗ ಸಿಎಂ ಕುರಿತು ಕೆಲ ಮಾತುಗಳನ್ನಾಡಿದ್ದಾರೆ.&lt;/p&gt;&lt;h2&gt;ನಾನು ಸಾಮಾನ್ಯ ಮನುಷ್ಯ, ದೇವರು ನಡೆಸಿಕೊಳ್ಳುತ್ತಾನೆ&lt;/h2&gt;&lt;p&gt;ನಾನು ಸಾಮಾನ್ಯ ಮನುಷ್ಯ, ದೇವರು ನಡೆಸಿಕೊಳ್ಳುತ್ತಾನೆ ಎಂದು ರಾಜಗುರು ದ್ವಾರಕನಾಥ್ ಹೇಳಿದ್ದಾರೆ. ಮೊದಲೇ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದೆ. ಡಿಕೆ ಶಿವಕುಮಾರ್ ಸಿಎಂ ಆಗಿದ್ದಾರೆ. ರಾಮ ಅಯೋಧ್ಯೆಯನ್ನೇ ಸಂಪಾದನೆ ಮಾಡಿದ್ದ, ಹಾಗೇ ಶಿವಕುಮಾರ್ ಕಷ್ಟಪಟ್ಟು ಕರ್ನಾಟಕವನ್ನು ಸಂಪಾದಿಸಿದ್ದಾರೆ. ಅನೇಕ ಕಾಲ ಡಿಕೆ ಶಿವಕುಮಾರ್ ಸಿಎಂ ಆಗಿದ್ದು ಜನಸೇವೆ ಮಾಡಲಿ ಎಂದು ರಾಜಗುರು ದ್ವಾರಕನಾಥ್ ಹಾರೈಸಿದ್ದಾರೆ.&lt;/p&gt;&lt;h2&gt;ಐದು ವರ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ&lt;/h2&gt;&lt;p&gt;ಸುಬ್ರಹ್ಮಣ್ಯ ದೇವರೇ ಡಿಕೆ ಶಿವಕುಮಾರ್ ಹೆಸರಲ್ಲಿ ಬಂದು ಈ ಜಾಗ ಕೊಡಿಸಿದ್ದಾನೆ. ಐದು ವರ್ಷ ಪೂರ್ತಿ ಡಿಕೆ ಶಿವಕುಮಾರ್ ಸಿಎಂ ಆಗಿರಲಿ. ದೇವರಾಜ್ ಅರಸು ಎಲ್ಲರನ್ನು ಒಳಗೊಂಡು ಸೇವೆ ಮಾಡಿದ್ದರು. ಈಗ ಡಿಕೆ ಶಿವಕುಮಾರ್ ಎಲ್ಲರನ್ನೂ ಆದರದಿಂದ ನೋಡಿ ಸೇವೆ ಮಾಡುತ್ತದ್ದಾರೆ ಎಂದು ರಾಜಗುರು ದ್ವಾರಕನಾಥ್ ಹೇಳಿದ್ದಾರೆ. ದೇವರನ್ನು ಬಿಟ್ಟರೇ ನನಗೇನು ಇಲ್ಲ ಎಂದು ರಾಜಗುರು ದ್ವಾರಕನಾಥ್ ಭಾವುಕರಾಗಿದ್ದಾರೆ.&lt;/p&gt;&lt;h2&gt;ಮಂತ್ರಿಯಾಗುತ್ತಿಯಾ ಎಂದಿದ್ದ ದ್ವಾರಕನಾಥ್&lt;/h2&gt;&lt;p&gt;ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, 5-6 ವರ್ಷದಿಂದ ನಮ್ಮ ಮನೆ ದೇವರು ತಿರುಪತಿಗೆ ಹೋಗಿರಲಿಲ್ಲ. ತಿರುಪತಿಗೆ ಹೋಗಿ ಬಾ ಅಂತ ಹೇಳಿದ್ದರು. ನೀನು ಮಂತ್ರಿ ಆಗುತ್ತಿಯಾ ಎಂದು ದ್ಪಾರಕನಾಥ್ ನನಗೆ ಬಹಳ ವರ್ಷಗಳ ಹಿಂದೆ ಹೇಳಿದ್ದರು. 35 ವರ್ಷದ ಹಿಂದೆಯೇ ಮಾರ್ಗದರ್ಶನ ಕೊಟ್ಟಿದ್ದರು. ಅವರು ಮಾರ್ಗದರ್ಶನ ಕೊಟ್ಟಿರುವ ಸನ್ನಿವೇಶ ಹೇಳಿದ್ರೆ ದೊಡ್ಡ ಪುಸ್ತಕ ಬರೆಯಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.&lt;/p&gt;&lt;p&gt;ಹಲವು ಬಾರಿ ಮಾಧ್ಯಮಗಳು ದ್ವಾರಕಾನಾಥ್ ಗುರುಜಿ ಪ್ರಶ್ನಿಸಿತ್ತು. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದೀರಿ. ಆಗಿಲ್ಲ ಎಂದು ಪ್ರಶ್ನಿಸಿದ್ದರು. ಗುರೂಜಿ ಸಾಕಷ್ಟು ಧಮ್ಕಿ ಎದುರಿಸಿದ್ದಾರೆ. ಆದರೆ ಯಾವುದಕ್ಕೂ ಹೆದರಿಲ್ಲ. ದೇವರಾಜ ಅರಸು, ಎಸ್. ಎಂ ಕೃಷ್ಣ ,ವಿಲಾಶರಾವ್ ದೇಶಮುಖ್ ಅವರ ಕಾಲದಿಂದ ಅನೇಕ&zwnj; ಮಾರ್ಗದರ್ಶನ ಮಾಡಿದ್ದಾರೆ.ದ್ವಾರಕನಾಥ್ ಅವರು ಜ್ಞಾನದಲ್ಲಿ ಶ್ರೀಮಂತರು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/predicted-dk-shivakumar-would-become-cm-years-ago-dwarakanath-guruji-gets-emotional/articleshow-fk77837"/>
        </item>
        <item>
            <title><![CDATA[S Janaki - Modi : ಮೇರು ಗಾಯಕಿ ಎಸ್ ಜಾನಕಿ ಅಗಲಿಕೆಗೆ ದೇಶಾದ್ಯಂತ ಕಂಬನಿ; ಪ್ರಧಾನಿ ಮೋದಿ ನುಡಿ ನಮನ]]></title>
            <link>https://kannada.asianetnews.com/cine-world/prime-minister-narendra-modi-emotional-post-on-x-about-legendary-singer-s-janaki-demise/articleshow-vrau99p</link>
            <guid isPermaLink="true">https://kannada.asianetnews.com/cine-world/prime-minister-narendra-modi-emotional-post-on-x-about-legendary-singer-s-janaki-demise/articleshow-vrau99p</guid>
            <pubDate>Sun, 12 Jul 2026 15:10:11 +0530</pubDate>
            <description><![CDATA[&lt;p&gt;ಆಂಧ್ರದ ಗುಂಟೂರಿನಲ್ಲಿ ಜನಿಸಿದ ಜಾನಕಮ್ಮ, 1957ರಲ್ಲಿ ಬೆಳ್ಳಿತೆರೆಯ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅಪ್ಪಾಜಿ ಡಾ. ರಾಜ್&zwnj;ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರ ಸಿನಿಮಾಗಳಿಗೆ ಇವರದ್ದೇ ಧ್ವನಿ. 2016ರಲ್ಲಿ ಅವರು ಹಾಡಿದ ಮಲಯಾಳಂನ &lsquo;ಅಮ್ಮಪೂವಿನುಮ್&rsquo; ಹಾಡು ಅವರ ವೃತ್ತಿಜೀವನದ ಕೊನೆಯ ಗೀತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxav3k11hs1p1fsfv8j3tsyj,imgname-narendra-modi-s-janaki-1783849143329.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಾನ ಕೋಗಿಲೆಯ ಮೌನ: ಸಂಗೀತದ ಒಂದು &lsquo;ಅಪೂರ್ವ ಯುಗ&rsquo;ದ ಅಂತ್ಯಕ್ಕೆ ಸಾಕ್ಷಿಯಾದ ಮೈಸೂರು!&lt;/strong&gt;&lt;/p&gt;&lt;p&gt;ಸಂಗೀತ ಲೋಕದ ಅರಮನೆಯಲ್ಲಿ ಇಂದು ನೀರವ ಮೌನ. ಆರು ದಶಕಗಳ ಕಾಲ ತನ್ನ ಕಂಠಸಿರಿಯಿಂದ ಕೋಟ್ಯಂತರ ಹೃದಯಗಳನ್ನು ಮಂತ್ರಮುಗ್ಧಗೊಳಿಸಿದ್ದ 'ಗಾನ ಕೋಗಿಲೆ' ಎಸ್&zwnj; ಜಾನಕಿ (S Janaki) ಅಮ್ಮ ಇನ್ನಿಲ್ಲ. 88 ವರ್ಷಗಳ ಕಾಲ ಸಂಗೀತದ ಮೂಲಕವೇ ಉಸಿರಾಡಿದ್ದ ಈ ದಂತಕಥೆ, ಮೈಸೂರಿನ ಮಣ್ಣಿನ ಮಡಿಲಿನಲ್ಲಿ ಶನಿವಾರ ಶಾಶ್ವತ ನಿದ್ರೆಗೆ ಜಾರಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜಾನಕಮ್ಮನವರ ನಿರ್ಗಮನದೊಂದಿಗೆ ಭಾರತೀಯ ಚಿತ್ರರಂಗದ ಸಂಗೀತಲೋಕದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಿದೆ.&lt;/p&gt;&lt;p&gt;ಪ್ರಧಾನಿ ಮೋದಿಯವರ ಭಾವುಕ ನಮನ:&lt;/p&gt;&lt;p&gt;ಜಾನಕಿ ಅಮ್ಮನ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ (X) ದಲ್ಲಿ ಅತ್ಯಂತ ಭಾವುಕವಾಗಿ ಸಂತಾಪ ಸೂಚಿಸಿದ್ದಾರೆ. &quot;ಜಾನಕಿ ಅಮ್ಮನವರ ಧ್ವನಿ ಕೇವಲ ಹಾಡಲ್ಲ, ಅದು ಸಂಸ್ಕೃತಿಯ ಪ್ರತಿಬಿಂಬ. ಪ್ರತಿ ಭಾವನೆಗೂ ಅವರು ಅಪ್ರತಿಮ ಶೈಲಿಯಲ್ಲಿ ಜೀವ ತುಂಬುತ್ತಿದ್ದರು. ಅವರ ನಿಧನ ಸಂಗೀತ ಜಗತ್ತಿಗೆ ತುಂಬಲಾರದ ನಷ್ಟ&quot; ಎಂದು ಪ್ರಧಾನಿ ಸ್ಮರಿಸಿದ್ದಾರೆ.&lt;/p&gt;&lt;h2&gt;ಮೋದಿಯವರು ಪೋಸ್ಟ್&zwnj;ನಲ್ಲಿ ಏನು ಬರೆದಿದ್ದಾರೆ?&lt;/h2&gt;&lt;p&gt;ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್&zwnj; ಜಾನಕಿ ಅಮ್ಮ ಅವರ ನಿಧನವು ಸಂಗೀತ ಮತ್ತು ಸಂಸ್ಕೃತಿ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ವಿವಿಧ ಭಾಷೆಗಳಲ್ಲಿನ ಅವರ ಹಾಡುಗಳು ತಲೆಮಾರುಗಳಿಂದಲೂ ಜನಪ್ರಿಯವಾಗಿವೆ. ಅವರು ಪ್ರತಿ ಭಾವನೆಗೂ ಅಪ್ರತಿಮ ಸೊಬಗು ಮತ್ತು ಬಹುಮುಖತೆಯೊಂದಿಗೆ ಧ್ವನಿ ನೀಡಿದರು. ಅವರ ಮಧುರ ಗೀತೆಗಳು ಮುಂಬರುವ ವರ್ಷಗಳಲ್ಲಿ ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತಲೇ ಇರುತ್ತವೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬಸ್ಥರಿಗೆ, ಅಸಂಖ್ಯಾತ ಅಭಿಮಾನಿಗಳಿಗೆ ಮತ್ತು ಇಡೀ ಸಂಗೀತ ಲೋಕಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ.&quot; ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಸಂಗೀತ ಸಾಮ್ರಾಜ್ಯದ &lsquo;ಜಾನಕಿ-ಬಾಲು&rsquo; ಮ್ಯಾಜಿಕ್:&lt;/p&gt;&lt;p&gt;ಜಾನಕಿ ಅಮ್ಮನ ಹೆಸರು ಕೇಳಿದ ಕೂಡಲೇ ನೆನಪಿಗೆ ಬರುವುದು ದಿವಂಗತ ಎಸ್&zwnj;.ಪಿ. ಬಾಲಸುಬ್ರಹ್ಮಣ್ಯಂ. ಎಸ್&zwnj;ಪಿಬಿ ನಿರ್ಗಮಿಸಿ ಆರು ವರ್ಷಗಳಾದ ಬೆನ್ನಲ್ಲೇ ಈಗ ಜಾನಕಮ್ಮ ಕೂಡ ಹೊರಟು ನಿಂತಿರುವುದು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಈ ಜೋಡಿ ಸೃಷ್ಟಿಸಿದ ಯುಗಳ ಗೀತೆಗಳ ಮೋಡಿ ಅನನ್ಯ. ಭಾಷೆಯ ಗಡಿ ದಾಟಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಇವರು ಹಾಡಿದ ಸುಮಾರು 45 ಸಾವಿರಕ್ಕೂ ಹೆಚ್ಚು ಹಾಡುಗಳು ಇಂದಿಗೂ ಎವರ್&zwnj;ಗ್ರೀನ್. ಸಿನಿಮಾ ಗೀತೆಗಳು ಮಾತ್ರವಲ್ಲ, ಹಲವಾರು ಭಕ್ತಿಗೀತೆಗಳಿಗೂ ಎಸ್ ಜಾನಕಿಯವರು ಧ್ವನಿಯಾಗಿದ್ದಾರೆ. 'ಗಜಮುಖನೆ ಗಣಪತಿಯೆ ನಿನಗೆ ವಂದನೆ' ಎಂಬ ಹಾಡು ಅಂದು-ಇಂದು ಕೂಡ ಎಲ್ಲರ ಮನೆಗಳಲ್ಲಿ, ಅದರಲ್ಲೂ ಮುಖ್ಯವಾಗಿ 'ಗಣೇಶ ಚತುರ್ಥಿ' ಹಬ್ಬದ ಸಾರ್ವಜನಿಕ ವೇದಿಕೆಗಳಲ್ಲಿ ಕೇಳಿಬರುತ್ತಲೇ ಇರುತ್ತದೆ.&lt;/p&gt;&lt;h3&gt;ಮೈಸೂರಿನ ತೋಟದ ಮನೆಯಲ್ಲಿ ಅಂತಿಮಯಾತ್ರೆ:&lt;/h3&gt;&lt;p&gt;ಮೈಸೂರಿನ ಬೋಗಾದಿ ಮನೆಯಲ್ಲಿ ಪ್ರಸ್ತುತ ಜಾನಕಿ ಅಮ್ಮನವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಮೈಸೂರಿನ ಕಣಿಯನಹುಂಡಿಯ ತೋಟದ ಮನೆಯಲ್ಲಿ ಇಂದು ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನಗಳು ನೆರವೇರಲಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕಿಯನ್ನು ಕೊನೆಯ ಬಾರಿ ನೋಡಲು ಮೈಸೂರಿಗೆ ಆಗಮಿಸುತ್ತಿದ್ದಾರೆ. 'ದಕ್ಷಿಣ ಭಾರತದ ಗಾನ ಕೋಗಿಲೆ' ಎಸ್ ಜಾನಕಿಯವರು ತಮ್ಮ ಕೊನೆಯ ಆಸೆಯಂತೆ ಮೈಸೂರಿನಲ್ಲೆ ಪ್ರಾನ ತ್ಯಜಿಸಿ, ಅಲ್ಲೇ ಮಣ್ಣಾಗುತ್ತಿದ್ದಾರೆ.&lt;/p&gt;&lt;p&gt;60 ವರ್ಷಗಳ ಸುದೀರ್ಘ ಪಯಣ:&lt;/p&gt;&lt;p&gt;ಆಂಧ್ರದ ಗುಂಟೂರಿನಲ್ಲಿ ಜನಿಸಿದ ಜಾನಕಮ್ಮ, 1950ರ ದಶಕದಲ್ಲಿಯೇ ಬೆಳ್ಳಿತೆರೆಯ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅಪ್ಪಾಜಿ ಡಾ. ರಾಜ್&zwnj;ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರ ಸಿನಿಮಾಗಳಿಗೆ ಇವರದ್ದೇ ಧ್ವನಿ. 2016ರಲ್ಲಿ ಅವರು ಹಾಡಿದ ಮಲಯಾಳಂನ &lsquo;ಅಮ್ಮಪೂವಿನುಮ್&rsquo; ಹಾಡು ಅವರ ವೃತ್ತಿಜೀವನದ ಕೊನೆಯ ಗೀತೆಯಾಗಿತ್ತು.&lt;/p&gt;&lt;p&gt;ಇಂದು ಜಾನಕಿ ಅಮ್ಮ ದೈಹಿಕವಾಗಿ ನಮ್ಮನ್ನು ಅಗಲಿರಬಹುದು, ಆದರೆ ಅವರ &lsquo;ಗಗನವು ಎಲ್ಲೋ&rsquo;, &lsquo;ಬಾನಿಗೊಂದು ಎಲ್ಲೆ ಎಲ್ಲಿದೆ&rsquo;, 'ಬಿಸಿಲಾದರೇನು ಮಳೆಯಾದರೇನು?' ಎಂಬಂತಹ ಸಾವಿರಾರು ಅಮರ ಗೀತೆಗಳ ಮೂಲಕ ಅವರು ಸದಾ ನಮ್ಮ ನಡುವೆಯೇ ಜೀವಂತವಾಗಿರುತ್ತಾರೆ. ಕರ್ನಾಟಕದ ಮನೆಮಗಳಾಗಿ, ಮೈಸೂರಿನ ಮಣ್ಣಿನಲ್ಲಿ ಲೀನವಾಗುತ್ತಿರುವ ಈ ಗಾನ ಮಾಂತ್ರಿಕೆಗೆ ಚಿತ್ರರಂಗದ ಗಣ್ಯರು ಹಾಗೂ ಸಿನಿರಸಿಕರು ಕಣ್ಣೀರಿನ ವಿದಾಯ ಹೇಳುತ್ತಿದ್ದಾರೆ.&lt;/p&gt;&lt;p&gt;ಚಿರಕಾಲ ಉಳಿಯಲಿದೆ ಜಾನಕಮ್ಮನವರ ಮಧುರ ಧ್ವನಿ ಹಾಗೂ ನೆನಪು!&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/prime-minister-narendra-modi-emotional-post-on-x-about-legendary-singer-s-janaki-demise/articleshow-vrau99p"/>
        </item>
        <item>
            <title><![CDATA[ಮೋದಿ ಭಾಷಣ ಲಿಪ್‌ಸಿಂಕ್ ಮಾಡಿದ ಆಸ್ಟ್ರೇಲಿಯಾ ಕಂಟೆಂಟ್ ಕ್ರಿಯೇಟರ್, ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ]]></title>
            <link>https://kannada.asianetnews.com/viral/australian-content-creator-pm-modi-lip-sync-video-takes-social-media-by-storm/articleshow-0cbovrd</link>
            <guid isPermaLink="true">https://kannada.asianetnews.com/viral/australian-content-creator-pm-modi-lip-sync-video-takes-social-media-by-storm/articleshow-0cbovrd</guid>
            <pubDate>Sun, 12 Jul 2026 14:34:31 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಆಸ್ಟ್ರೇಲಿಯಾ ಭೇಟಿ ವೇಳೆ ಭಾರತೀಯ ಸಮುದಾಯವನ್ನುದ್ದೇಶಿ ಭಾಷಣ ಮಾಡಿದ್ದರು. ಈ ಭಾಷಣದ ತುಣುಕನ್ನು ಆಸಿಸ್ ಕಂಟೆಂಟ್ ಕ್ರಿಯೇಟರ್ ಲಿಪ್ ಸಿಂಕ್ ಮಾಡಿ ಪ್ರಸ್ತುತ ಪಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxarxchwdz1wf22bbqztfsfp,imgname-australian-influencer-lip-sync-of-pm-modi-speech-1783846842939.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿಡ್ನಿ (ಜು.12) &lt;/strong&gt;ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶಕ್ಕೆ ತೆರಳಿದರೂ ಅಲ್ಲಿಯ ಭಾರತೀಯ ಸಮುದಾಯವನ್ನು ಭೇಟಿಯಾಗುತ್ತಾರೆ. ಅವರ ಜೊತೆ ಕೆಲ ಹೊತ್ತು ಕಳೆಯುತ್ತಾರೆ. ಈ ಮೂಲಕ ದೇಶ ವಿದೇಶಗಳಲ್ಲಿ ಭಾರತೀಯರ ಜೊತೆ ಮೋದಿ ಉತ್ತಮ ಸಂಬಂಧ ಬೆಸೆಯುತ್ತಾರೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸ ಇದಕ್ಕೆ ಹೊರತಾಗಿಲ್ಲ. ವಿಶೇಷ ಅಂದರೆ ಪ್ರಧಾನಿ ಮೋದಿ ಕುರಿತು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಅಷ್ಟೇ ಕ್ರೇಝ್ ಇದೆ. ಭಾರತದಲ್ಲಿ ಮೋದಿ ಭಾಷಣ, ವಿಡಿಯೋಗಳು ವೈರಲ್ ಆಗುವುದು ಮಾತ್ರವಲ್ಲ, ಇದೀಗ ಆಸ್ಟ್ರೇಲಿಯಾದ ಕಂಟೆಂಟ್ ಕ್ರಿಯೇಟರ್ ಮೋದಿ ಭಾಷಣಕ್ಕೆ ಲಿಪ್ ಸಿಂಕ್ ಮಾಡಿದ ವಿಡಿಯೋ ಭಾರಿ ವೈರಲ್ ಆಗಿದೆ.&lt;/p&gt;&lt;h2&gt;ಮೋದಿ ವಾಯ್ಸ್&zwnj;ಗೆ ಲಿಪ್ ಸಿಂಕ್&lt;/h2&gt;&lt;p&gt;ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೋದಿ ಮಾಡಿದ ಭಾಷಣದ ತುಣುಕು ತೆಗೆದು ವಾಯ್ಸ್&zwnj;ಗೆ ಆಸ್ಟ್ರೇಲಿಯಾ ಕಂಟೆಂಟ್ ಕ್ರಿಯೇಟರ್ ಲಿಪ್ ಸಿಂಕ್ ಮಾಡಿದ್ದಾರೆ. ಮೋದಿ ತಮ್ಮ ಭಾಷಣದಲ್ಲಿ ಆಸ್ಟ್ರೇಲಿಯಾದಲ್ಲಿ ಮನೆಗಳಲ್ಲಿ ಇಲ್ಲಿನ ಸ್ಥಳೀಯ ಹಾಲು ಬಳಸುತ್ತಾರೆ. ಆದರೆ ಅದರಿಂದ ಚಹಾ ಮಾಡಿದಾಗ ಭಾರತೀಯ ಟಚ್ ಸಿಗಲಿದೆ. ಆಸ್ಟ್ರೇಲಿಯಾ ಹಲವು ತರಕಾರಿ ಸೇರಿದಂತೆ ಇತರ ವಸ್ತುಗಳಿಗೆ ಭಾರತೀಯ ಮಸಾಲೆ ಸೇರಿದಾಗ ತಡ್ಕಾ ಸ್ವಾದ ಬರಲಿದೆ ಎಂದು ಮೋದಿ ಭಾಷಣದಲ್ಲಿ ಹೇಳಿದ್ದರು. ಮೋದಿಯ ಧ್ವನಿಯನ್ನು ತೆಗೆದುಕೊಂಡ ಆಸ್ಟ್ರೇಲಿಯಾ ಜೋಸ್ಪೀಕ್&zwnj;ಹಿಂದೆ ಖಾತೆ ನಿರ್ವಹಿಸುತ್ತಿರುವ ಕಂಟೆಂಟ್ ಕ್ರಿಯೇಟರ್ ತಾನು ಅದೇ ರೀತಿ ಲಿಪ್ ಸಿಂಕ್ ಮಾಡಿ ವಿವರಣೆ ನೀಡಿದ್ದಾರೆ.&lt;/p&gt;&lt;p&gt;ಸೂಪರ್ ಮಾರ್ಕೆಟ್&zwnj;ನಲ್ಲಿ ನಿಂತು ಆಸ್ಟ್ರೇಲಿಯಾದ ಸ್ಥಳೀಯ ಹಾಲನ್ನು ಹಿಡಿದು ಮೋದಿ ಮಾತುಗಳನ್ನು ಅದೇ ರೀತಿ ಲಿಪ್ ಸಿಂಕ್ ಮಾಡಿ ಹೇಳಿದ್ದಾನೆ. ಇನ್ನು ತರಕಾರಿ, ಭಾರತೀಯ ಮಸಾಲೆ, ತಡ್ಕಾ ಎಲ್ಲವನ್ನು ಲಿಪ್ ಸಿಂಕ್ ಮಾಡಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಆಸೀಸ್ ಕೆಂಟೆಂಟ್ ಕ್ರಿಯೇಟರ್ ವಿಡಿಯೋ ಭಾರತದಲ್ಲಿ ಭಾರಿ ವೈರಲ್ ಆಗಿದೆ.&lt;/p&gt;&lt;h2&gt;ಭಾರತದ ರೇಷನ್ ಕಾರ್ಡ್&zwnj;ಗೆ ಸಾಹಸ&lt;/h2&gt;&lt;p&gt;ಈ ವಿಡಿಯೋ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಸ್ಟ್ರೇಲಿಯಾದ ಕಂಟೆಂಟ್ ಕ್ರಿಯೇಟರ್ ಭಾರತದ ರೇಷನ್ ಕಾರ್ಡ್&zwnj;ಗಾಗಿ ಕಸರತ್ತು ಮಾಡುತ್ತಿದ್ದಾನೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಹಲವರು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಂಚಾಯತ್ ಸೀರಿಸ್&zwnj;ನ ಜನಪ್ರಿಯ ಡೈಲಾಗ್ ಸುನ್ತೆ ಹೋ ನಾ ಬಿನೋದ್ ವಿಡಿಯೋ ಕ್ಲಿಪಿಂಗ್ ಪ್ರತಿಕ್ರಿಯೆ ರೂಪದಲ್ಲಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;p&gt;ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ 6 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಈ ವಿಡಿಯೋ ಮಿಲಿಯನ್ ವೀವ್ಸ್ ದಾಟಿದೆ. ಆಸಿಸ್ ಕಂಟೆಂಟ್ ಕ್ರಿಯೇಟರ್ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Joe Speaks Hindi (@joespeakshindi)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/australian-content-creator-pm-modi-lip-sync-video-takes-social-media-by-storm/articleshow-0cbovrd"/>
        </item>
        <item>
            <title><![CDATA[3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ದಪ್ಪ ಮತ್ತು ಉದ್ದ ಏಕೆ ಇರುತ್ತದೆ..? ಇಲ್ಲಿದೆ ರೋಚಕ ವಿಜ್ಞಾನ..!]]></title>
            <link>https://kannada.asianetnews.com/gallery/science/why-is-one-pin-in-a-3-pin-plug-thicker-and-longer-here-is-the-interesting-science-gkn-27u6c1w</link>
            <guid isPermaLink="true">https://kannada.asianetnews.com/gallery/science/why-is-one-pin-in-a-3-pin-plug-thicker-and-longer-here-is-the-interesting-science-gkn-27u6c1w</guid>
            <pubDate>Sun, 12 Jul 2026 14:34:30 +0530</pubDate>
            <description><![CDATA[&lt;p&gt;ನಾವು ದಿನ ನಿತ್ಯ ಬಳಸುವ ಅನೇಕ ಸಣ್ಣ ಪುಟ್ಟ ವಸ್ತುಗಳಲ್ಲಿ ರೋಚಕ ವಿಜ್ಞಾನ ಅಡಗಿರುತ್ತದೆ. ಅದರಲ್ಲಿ ಮೂರು ಪಿನ್ ಹೊಂದಿರುವ ಪ್ಲಗ್ ಕೂಡ ಹೌದು. ನಿಮಗೆ ಗೊತ್ತಾ ಕೆಲವು ಪ್ಲಗ್&zwnj;ಗಳಲ್ಲಿ ಯಾಕೆ ಮೂರು ಪಿನ್ ಇರುತ್ತದೆ ಎಂದು? ಈ ಕುರಿತ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ...&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxarnjb8g9m2cnt7mbrpwj7r,imgname-3-pin-plug--3--1783846586728.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾವು ದಿನ ನಿತ್ಯ ಬಳಸುವ ಅನೇಕ ಸಣ್ಣ ಪುಟ್ಟ ವಸ್ತುಗಳಲ್ಲಿ ರೋಚಕ ವಿಜ್ಞಾನ ಅಡಗಿರುತ್ತದೆ. ಅದರಲ್ಲಿ ಮೂರು ಪಿನ್ ಹೊಂದಿರುವ ಪ್ಲಗ್ ಕೂಡ ಹೌದು. ನಿಮಗೆ ಗೊತ್ತಾ ಕೆಲವು ಪ್ಲಗ್&zwnj;ಗಳಲ್ಲಿ ಯಾಕೆ ಮೂರು ಪಿನ್ ಇರುತ್ತದೆ ಎಂದು? ಈ ಕುರಿತ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ...&lt;/p&gt;&lt;img&gt;&lt;p&gt;ನಿತ್ಯ ಜೀವನದಲ್ಲಿ ನಾವು ಅನೇಕ ವಿದ್ಯುತ್ ಉಪಕರಣಗಳನ್ನು ಬಳಸುತ್ತೇವೆ. ನೀವು ಗಮನಿಸಿರಬಹುದು! ಕೆಲವು ಪ್ಲಗ್&zwnj;ಗಳಿಗೆ ಎರಡು ಪಿನ್&zwnj;ಗಳಿದ್ದರೆ, ಇನ್ನು ಕೆಲವುಗಳಿಗೆ ಮೂರು ಪಿನ್&zwnj;ಗಳಿರುತ್ತವೆ. ಈ 3-ಪಿನ್ ಪ್ಲಗ್&zwnj;ಗಳಲ್ಲಿ ಎರಡು ಪಿನ್&zwnj;ಗಳು ಚಿಕ್ಕದಾಗಿದ್ದು, ಮೇಲ್ಭಾಗದ ಒಂದು ಪಿನ್ ಮಾತ್ರ ಉದ್ದ ಮತ್ತು ದಪ್ಪವಾಗಿರುತ್ತದೆ. ಇದು ಕೇವಲ ವಿನ್ಯಾಸಕ್ಕಾಗಿ ಮಾಡಿದ್ದಲ್ಲ, ಇದರ ಹಿಂದೆ ಪ್ರಮುಖವಾದ ಸುರಕ್ಷತಾ ಕಾರಣವಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಫ್ರಿಜ್, ಎಸಿ, ಮೈಕ್ರೋವೇವ್ ಓವನ್ ಮತ್ತು ಗೀಸರ್&zwnj;ನಂತಹ ದೊಡ್ಡ ವಿದ್ಯುತ್ ಉಪಕರಣಗಳಿಗೆ 3-ಪಿನ್ ಪ್ಲಗ್ ಬಳಸಲಾಗುತ್ತದೆ. ಈ ಸಾಧನಗಳ ಹೊರಭಾಗವು ಹೆಚ್ಚಾಗಿ ಲೋಹದಿಂದ (Metal body) ಮಾಡಲ್ಪಟ್ಟಿರುತ್ತದೆ. ಒಂದು ವೇಳೆ ವೈರ್&zwnj;ಗಳು ಸವೆದು ಲೋಹದ ಬಾಡಿಗೆ ತಗುಲಿದರೆ ಅಥವಾ ಶಾರ್ಟ್ ಸರ್ಕ್ಯೂಟ್ ಸಂಭವಿಸಿದರೆ ಆ ಸಾಧನವನ್ನು ಮುಟ್ಟಿದವರಿಗೆ ಜೋರಾದ ಎಲೆಕ್ಟ್ರಿಕ್ ಶಾಕ್ ಹೊಡೆಯುವ ಅಪಾಯವಿರುತ್ತದೆ. ಈ ಅಪಾಯ ತಪ್ಪಿಸಲು 3-ಪಿನ್ ಪ್ಲಗ್ ಅಗತ್ಯ.&lt;/p&gt;&lt;img&gt;&lt;p&gt;ನಮ್ಮ ಮೊಬೈಲ್ ಚಾರ್ಜರ್, ಟಿವಿ ಅಥವಾ ಟ್ರಿಮ್ಮರ್&zwnj;ಗಳಂತಹ ಸಾಧನಗಳಿಗೆ 2-ಪಿನ್ ಪ್ಲಗ್ ಇರುತ್ತದೆ. ಇವುಗಳ ಹೊರಭಾಗವು ಪ್ಲಾಸ್ಟಿಕ್&zwnj;ನಿಂದ ಮಾಡಲ್ಪಟ್ಟಿರುವುದರಿಂದ ಮತ್ತು ಇವು ಕಡಿಮೆ ವಿದ್ಯುತ್ ಬಳಸುವುದರಿಂದ ಇವುಗಳಿಗೆ ಅರ್ಥಿಂಗ್ ಅವಶ್ಯಕತೆ ಇರುವುದಿಲ್ಲ.&lt;/p&gt;&lt;img&gt;&lt;p&gt;3-ಪಿನ್ ಪ್ಲಗ್&zwnj;ನಲ್ಲಿರುವ ಉದ್ದವಾದ ಪಿನ್ ಅನ್ನು 'ಅರ್ಥ್ ಪಿನ್' (Earth Pin) ಎಂದು ಕರೆಯಲಾಗುತ್ತದೆ. ನೀವು ಪ್ಲಗ್ ಅನ್ನು ಸಾಕೆಟ್&zwnj;ಗೆ ಹಾಕಿದಾಗ, ಉದ್ದವಿರುವ ಅರ್ಥ್ ಪಿನ್ ಎಲ್ಲಕ್ಕಿಂತ ಮೊದಲು ಒಳಗೆ ಹೋಗುತ್ತದೆ. ವಿದ್ಯುತ್ ಹರಿಯುವ ಪಿನ್&zwnj;ಗಳಾದ 'ಫೇಸ್' ಮತ್ತು 'ನ್ಯೂಟ್ರಲ್' ಸಂಪರ್ಕ ಹೊಂದುವ ಮೊದಲೇ ಸಾಧನಕ್ಕೆ ಅರ್ಥಿಂಗ್ ಸಂಪರ್ಕ ಸಿಗುತ್ತದೆ.&lt;/p&gt;&lt;p&gt;ಒಂದು ವೇಳೆ ಆ ಉಪಕರಣದಲ್ಲಿ ಮೊದಲೇ ವಿದ್ಯುತ್ ಸೋರಿಕೆ (Current leakage) ಇದ್ದರೆ, ನೀವು ಅದನ್ನು ಮುಟ್ಟುವ ಮೊದಲೇ ಆ ಹೆಚ್ಚುವರಿ ವಿದ್ಯುತ್ ಸುರಕ್ಷಿತವಾಗಿ ಭೂಮಿಗೆ ಸೇರುತ್ತದೆ. ಇದರಿಂದ ನಮಗೆ ಶಾಕ್ ಹೊಡೆಯುವುದು ತಪ್ಪುತ್ತದೆ.&lt;/p&gt;&lt;img&gt;&lt;p&gt;ಪಿನ್ ದಪ್ಪವಾಗಿದ್ದರೆ ಅದನ್ನು ನಾವು ತಿಳಿಯದೇ ಸಾಕೆಟ್&zwnj;ನ 'ಲೈವ್' ಅಥವಾ 'ನ್ಯೂಟ್ರಲ್' ಸ್ಲಾಟ್&zwnj;ಗಳಿಗೆ ಹಾಕಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅದು ಸಣ್ಣದಾಗಿದ್ದರೆ, ತಪ್ಪಾಗಿ ಹಾಕುವ ಸಾಧ್ಯತೆ ಇರುತ್ತದೆ, ಇದರಿಂದ ಸಾಧನ ಹಾಳಾಗಬಹುದು. ವಿಜ್ಞಾನದ ನಿಯಮದಂತೆ, ವೈರ್ ಅಥವಾ ಪಿನ್ ಎಷ್ಟು ದಪ್ಪವಾಗಿರುತ್ತದೆಯೋ ಅದರ ವಿದ್ಯುತ್ ಪ್ರತಿರೋಧ ಅಷ್ಟು ಕಡಿಮೆಯಿರುತ್ತದೆ. ಪ್ರತಿರೋಧ ಕಡಿಮೆಯಿದ್ದಷ್ಟೂ ವಿದ್ಯುತ್ ವೇಗವಾಗಿ ಪ್ರವಹಿಸುತ್ತದೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್ ಆದಾಗ ಸೋರಿಕೆಯಾದ ವಿದ್ಯುತ್ ಯಾವುದೇ ಅಡೆತಡೆಯಿಲ್ಲದೆ, ಕ್ಷಣಾರ್ಧದಲ್ಲಿ ಭೂಮಿಗೆ ಸೇರಿ ಅಪಘಾತಗಳನ್ನು ತಪ್ಪಿಸುತ್ತದೆ. ಹೀಗೆ ನಮಗೆ ಸಣ್ಣದಾಗಿ ಕಾಣುವ ಪ್ಲಗ್ ವಿನ್ಯಾಸವು ನಮ್ಮ ಮನೆಯಲ್ಲಿ ವಿದ್ಯುತ್ ಅಪಘಾತಗಳು ಸಂಭವಿಸದಂತೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/science/why-is-one-pin-in-a-3-pin-plug-thicker-and-longer-here-is-the-interesting-science-gkn-27u6c1w"/>
        </item>
        <item>
            <title><![CDATA[ಒಂದು ಪಾನಿಪುರಿಗಾಗಿ 12 ವರ್ಷಗಳಿಂದ ಕೋರ್ಟ್‌ ಅಲೆದಾಟ.. ರೋಚಕ ಕಾನೂನು ಸಮರ..!]]></title>
            <link>https://kannada.asianetnews.com/india-news/rohtak-district-of-hariyana-a-fight-over-one-pani-puri-has-been-going-on-for-12-years-pani-puri-controversy-gkn/articleshow-5ss51em</link>
            <guid isPermaLink="true">https://kannada.asianetnews.com/india-news/rohtak-district-of-hariyana-a-fight-over-one-pani-puri-has-been-going-on-for-12-years-pani-puri-controversy-gkn/articleshow-5ss51em</guid>
            <pubDate>Sun, 12 Jul 2026 12:54:38 +0530</pubDate>
            <description><![CDATA[&lt;p&gt;ಇದು ಒಂದು ಪಾನಿಪುರಿಗಾಗಿ ನಡೆಯುತ್ತಿರುವ ಹೋರಾಟ. ಅದು ಕೂಡ ಬರೋಬ್ಬರಿ 12 ವರ್ಷಗಳಿಂದ. ಈ ಕಾನೂನು ಸಮರ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣ್ತಿಲ್ಲ. ರೋಚಕ ಕಾನೂನು ಹೋರಾಟದ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxak8tzm2jrd8t3d746hkgpa,imgname-pani-puri-1783840926708.jpg" type="image/jpeg" height="390" width="690"/>
            <content:encoded><![CDATA[&lt;p&gt;ರೋಹ್ಟಕ್ (ಹರಿಯಾಣ): ಆಸ್ತಿ ವಿವಾದ, ಹಣದ ವ್ಯವಹಾರ ಅಥವಾ ಗಂಭೀರ ಅಪರಾಧಗಳಿಗಾಗಿ ಜನ ವರ್ಷಗಟ್ಟಲೆ ಕೋರ್ಟ್ ಮೆಟ್ಟಿಲೇರೋದನ್ನ ನೋಡಿದ್ದೇವೆ. ಹರಿಯಾಣದಲ್ಲಿ ಕೇವಲ ಒಂದೇ ಒಂದು ಪಾನಿಪುರಿಗಾಗಿ ಇಬ್ಬರು ವ್ಯಕ್ತಿಗಳು ಬರೋಬ್ಬರಿ 12 ವರ್ಷಗಳ ಕಾಲ ನ್ಯಾಯಾಲಯದ ಸುತ್ತ ಅಲೆದಾಡಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ವಿಲಕ್ಷಣ ಪ್ರಕರಣ ಆರಂಭವಾಗಿದ್ದು 2013ರ ಮೇ 21ರಂದು. ಹರಿಯಾಣದ ಮಹಂ ಪಟ್ಟಣದ ರಾಜೀವ್ ಚೌಕ್&zwnj;ನಲ್ಲಿ ಅನಿಲ್ ಎಂಬ ಯುವಕ ಸುಬೇ ಸಿಂಗ್ ಎಂಬುವವರ ಪಾನಿಪುರಿ ಗಾಡಿಯ ಬಳಿ ಹೋಗಿದ್ದ. ಎಲ್ಲರೂ 5 ರೂಪಾಯಿಗೆ 5 ಪಾನಿಪುರಿ ನೀಡುತ್ತಿದ್ದರೆ, ಸುಬೇ ಸಿಂಗ್ ಮಾತ್ರ ಕೇವಲ 4 ರೂಪಾಯಿಗೆ ಪಾನಿಪುರಿ ನೀಡುತ್ತಿದ್ದ.&lt;/p&gt;&lt;p&gt;ಇದನ್ನು ಪ್ರಶ್ನಿಸಿದ ಅನಿಲ್, ಎಲ್ಲರೂ ಐದು ಕೊಡುತ್ತಿದ್ದರೆ ನೀನು ಯಾಕೆ ನಾಲ್ಕು ನೀಡುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಸುಬೇ ಸಿಂಗ್, ಇದು ನನ್ನ ವ್ಯಾಪಾರ, ನನ್ನ ಇಷ್ಟ. ಇಷ್ಟವಿದ್ದರೆ ತಿನ್ನು ಇಲ್ಲದಿದ್ದರೆ ಹೋಗು ಎಂದು ಗದರಿಸಿದ್ದಾನೆ. ಈ ಸಣ್ಣ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಅಂತಿಮವಾಗಿ ಇಬ್ಬರೂ ಒಬ್ಬರ ಮೇಲೆ ಒಬ್ಬರು ಪೊಲೀಸ್ ಕೇಸ್ ದಾಖಲಿಸಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;12 ವರ್ಷಗಳ ಸುದೀರ್ಘ ಕಾನೂನು ಸಮರ&lt;/strong&gt;&lt;/h3&gt;&lt;p&gt;ಈ ಪ್ರಕರಣದ ವಿಚಾರಣೆಯು ಮಹಂ ನ್ಯಾಯಾಲಯದಲ್ಲಿ ಆರಂಭವಾಯಿತು. ಆರಂಭದಲ್ಲಿ ಅನಿಲ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅನಿಲ್&zwnj;ಗೆ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅನಿಲ್ ತಂದೆ ಸತ್ಯವಾನ್ ಅವರು ಸೆಷನ್ಸ್ ನ್ಯಾಯಾಲಯದ ಮೊರೆ ಹೋದರು. ಅಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಅನಿಲ್&zwnj;ನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತು. ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ! ಅನಿಲ್ ತಂದೆ ಸತ್ಯವಾನ್ ಅವರು ಪಾನಿಪುರಿ ವ್ಯಾಪಾರಿ ಮತ್ತು ಆಗಿನ ಪೊಲೀಸ್ ಅಧಿಕಾರಿಗಳ (SHO, ಚೌಕಿ ಇನ್-ಚಾರ್ಜ್ ಮತ್ತು ASI) ವಿರುದ್ಧವೇ ಪ್ರತಿ ದೂರು ದಾಖಲಿಸಿದರು. ತನ್ನ ಮಗನ ಮೇಲೆ ಇವರೆಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.&lt;/p&gt;&lt;h3&gt;&lt;strong&gt;ಪೊಲೀಸ್ ಅಧಿಕಾರಿಗಳಿಗೂ ಸಂಕಷ್ಟ&lt;/strong&gt;&lt;/h3&gt;&lt;p&gt;ಈ 12 ವರ್ಷಗಳ ಸುದೀರ್ಘ ವಿಚಾರಣೆಯ ಅವಧಿಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಪೊಲೀಸ್ ಅಧಿಕಾರಿಗಳು ನಿವೃತ್ತರಾಗಿದ್ದಾರೆ ಅಥವಾ ವರ್ಗಾವಣೆಗೊಂಡಿದ್ದಾರೆ. ನ್ಯಾಯಾಲಯವು ಈ ಅವಧಿಯಲ್ಲಿ ಒಟ್ಟು 15 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಸುದೀರ್ಘ ವಿಚಾರಣೆಯ ನಂತರ ಇತ್ತೀಚೆಗೆ ಮಹಂ ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. ಎರಡೂ ಕಡೆಯವರು ನೀಡಿದ ಸಾಕ್ಷ್ಯಗಳಲ್ಲಿ ಬಲವಾದ ಆಧಾರಗಳಿಲ್ಲದ ಕಾರಣ, ಪ್ರಕರಣದಲ್ಲಿದ್ದ ಒಟ್ಟು 9 ಜನ ಆರೋಪಿಗಳನ್ನು (ಪೊಲೀಸರು ಸೇರಿದಂತೆ) ನ್ಯಾಯಾಲಯವು ನಿರ್ದೋಷಿಗಳೆಂದು ಘೋಷಿಸಿ ಖುಲಾಸೆಗೊಳಿಸಿದೆ.&lt;/p&gt;&lt;h3&gt;&lt;strong&gt;ಇನ್ನೂ ಮುಗಿಯದ ಪಾನಿಪುರಿ ಪುರಾಣ!&lt;/strong&gt;&lt;/h3&gt;&lt;p&gt;ನ್ಯಾಯಾಲಯದ ತೀರ್ಪಿನಿಂದ ಸತ್ಯವಾನ್ ಅವರು ತೃಪ್ತರಾಗಿಲ್ಲ. ನನ್ನ ಮಗನಿಗೆ ಅನ್ಯಾಯವಾಗಿದೆ, ನಾವು ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ, ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ, ಒಂದು ಪಾನಿಪುರಿಗಾಗಿ ಆರಂಭವಾದ ಈ ಹೋರಾಟ 12 ವರ್ಷ ಕಳೆದರೂ ಮುಗಿದಿಲ್ಲ, ಮುಂದಿನ ದಿನಗಳಲ್ಲಿ ಇದು ಹೈಕೋರ್ಟ್ ಅಂಗಳ ತಲುಪಲಿದೆ! ಒಟ್ಟಿನಲ್ಲಿ, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಜೀವನದ ಅಮೂಲ್ಯ ಸಮಯ ಮತ್ತು ಹಣವನ್ನು ಹೇಗೆ ವ್ಯರ್ಥ ಮಾಡುತ್ತದೆ ಎಂಬುದಕ್ಕೆ ಈ ಪಾನಿಪುರಿ ಪ್ರಕರಣ ಒಂದು ಸಾಕ್ಷಿಯಾಗಿದೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/rohtak-district-of-hariyana-a-fight-over-one-pani-puri-has-been-going-on-for-12-years-pani-puri-controversy-gkn/articleshow-5ss51em"/>
        </item>
        <item>
            <title><![CDATA[ಇವರು ಯಾರು ಅಂತ ಗೊತ್ತಾಯ್ತಾ? ಮದುವೆ, ಹೆಂಡ್ತಿ ಬಗ್ಗೆ ಅಜ್ಜನ ಹೃದಯ ಸ್ಪರ್ಶಿ ಮಾತು]]></title>
            <link>https://kannada.asianetnews.com/gallery/bengaluru-urban/viral-video-do-you-know-who-this-is-bengaluru-68-year-old-man-heart-warming-words-about-marriage-and-wife-daughter-mrq-trd27vr</link>
            <guid isPermaLink="true">https://kannada.asianetnews.com/gallery/bengaluru-urban/viral-video-do-you-know-who-this-is-bengaluru-68-year-old-man-heart-warming-words-about-marriage-and-wife-daughter-mrq-trd27vr</guid>
            <pubDate>Sun, 12 Jul 2026 12:35:04 +0530</pubDate>
            <description><![CDATA[&lt;p&gt;ಬೆಂಗಳೂರಿನ 68 ವರ್ಷದ ಮೆಕ್ಯಾನಿಕಲ್ ಇಂಜಿನಿಯರ್, ಭಾರತೀಯ ರೈಲ್ವೆಯ ಮಾಜಿ ಉದ್ಯೋಗಿಯಾಗಿದ್ದು, ಸದ್ಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ರಿಪೇರಿ ಮಾಡುತ್ತಾ ಸರಳ ಜೀವನ ನಡೆಸುತ್ತಿದ್ದಾರೆ. ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇವರ ಹೃದಯಸ್ಪರ್ಶಿ ಕಥೆ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxahrb4nbz1321zaceez4wsa,imgname-bengaluru-old-man-1783839337621.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ 68 ವರ್ಷದ ಮೆಕ್ಯಾನಿಕಲ್ ಇಂಜಿನಿಯರ್, ಭಾರತೀಯ ರೈಲ್ವೆಯ ಮಾಜಿ ಉದ್ಯೋಗಿಯಾಗಿದ್ದು, ಸದ್ಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ರಿಪೇರಿ ಮಾಡುತ್ತಾ ಸರಳ ಜೀವನ ನಡೆಸುತ್ತಿದ್ದಾರೆ. ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇವರ ಹೃದಯಸ್ಪರ್ಶಿ ಕಥೆ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಮತ್ತಿಕೆರೆ ಮತ್ತು ಔಡೇಶ್ವರಿ ಭಾಗದಲ್ಲಿ ಈ ವ್ಯಕ್ತಿಯನ್ನು ನೋಡಿರುತ್ತೀರಿ. ಸುಮಾರು 68 ವರ್ಷದ ಈ ವ್ಯಕ್ತಿ ಸದ್ಯ ಹಳೆಯ ಪ್ರಿಡ್ಜ್, ವಾಷಿಂಗ್ ಮಷೀನ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ರಿಪೇರಿ ಮಾಡುವ ಕೆಲಸ ಮಾಡುತ್ತಿರುತ್ತಾರೆ. ಸದ್ಯ 89-90 ವರ್ಷದ ತಾಯಿ ಜೊತೆಯಲ್ಲಿ ವಾಸವಾಗಿದ್ದಾರೆ. ಇಲ್ಲವೂ ಇದ್ದು, ಏನು ಇಲ್ಲದಂತೆ ಸರಳ ಜೀವನವನ್ನು ಮೈಗೂಡಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವೈರಲ್ ವಿಡಿಯೋದಲ್ಲಿ ವ್ಯಕ್ತಿಯ ಹೆಸರು ಏನು ಎಂಬುದನ್ನು ಬಹಿರಂಗಪಡಿಸಿಲ್ಲ. ಆದ್ರೆ ಎಲ್ಲಿಯೂ ನಾನು ಬಡವ ಸಹಾಯ ಮಾಡಿ ಎಂದು ಈ ವ್ಯಕ್ತಿ ಹೇಳಿಕೊಂಡಿಲ್ಲ. ಬೆಂಗಳೂರಿನ ನಿವಾಸಿಯಾಗಿರುವ ಇವರು ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನೀಯರಿಂಗ್ ಪದವಿ ಪಡೆದುಕೊಂಡು ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಿವೃತ್ತಿ ಬಳಿಕ ಬಂದ ಹಣದಿಂದ ನಾಲ್ಕು ಅಂತಸ್ತಿನ ಕಟ್ಟಡ ತೆಗೆದುಕೊಂಡಿದ್ದೇನೆ. ಅಲ್ಲಿ ನನ್ನ ಸೋದರ ವಾಸವಾಗಿದ್ದಾನೆ. ತಾಯಿಯೊಂದಿಗೆ ನಾನು ಚಿಕ್ಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ನನಗೆ ಬೇಕಿರೋದು ಒಂದು ಹಾಲ್ ಮತ್ತು ಕಿಚನ್. ಸ್ವಂತ ಮನೆಯಿಂದ ಇಲ್ಲಿಗೆ ಬರಲು ಆಗಲ್ಲ. ನಾನೋರ್ವ ಅಂಗವಿಕಲನಾಗಿದ್ದರಿಂದ ಬಾಡಿಗೆ ಮನೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ರಿಪೇರಿ ಮಾಡಲು 1000 ರೂಪಾಯಿ ಚಾರ್ಜ್ ಮಾಡುತ್ತೇನೆ. ಇದನ್ನೇ ರಿಪೇರಿ ಮಾಡೋದಾಗಿ ಹೇಳಿ ಜನರು 1800 ರೂ. ತೆಗೆದುಕೊಳ್ಳುತ್ತಾರೆ. ನನ್ನಿಂದ ರಿಪೇರಿ ಮಾಡಿಸಿ, ನನಗೆ ಸಾವಿರ ರೂ. ಕೊಟ್ರೆ, ಇನ್ನುಳಿದ 800 ರೂಪಾಯಿ ತಾವು ತೆಗೆದುಕೊಳ್ಳುತ್ತಾರೆ ಎಂಬ ವಿಷಯವನ್ನು ಹಂಚಿಕೊಂಡರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಳೆಯ ಮೊಬೈಲ್ ಫೋನ್&zwnj;ಗಳ ಹಿಂದೆ ಅಡಗಿದೆ ಭಾರಿ ಮೌಲ್ಯ; ಖರೀದಿದಾರರು ಇವುಗಳನ್ನು ಏನು ಮಾಡ್ತಾರೆ ಗೊತ್ತಾ?&lt;/strong&gt;&lt;/p&gt;&lt;img&gt;&lt;p&gt;ನಿಮಗೆ ಮಕ್ಕಳಿಲ್ಲವಾ ಎಂದು ವ್ಲಾಗರ್ ಕೇಳಿದಾಗ, ಈ ವ್ಯಕ್ತಿ ಹೇಳೋ ಒಂದೊಂದು ಮಾತು ಸಹ ಹೃದಯಕ್ಕೆ ಹತ್ತಿರವಾಗುತ್ತದೆ. ಮೊದಲ ಹೆರಿಗೆಯಲ್ಲಿ ನನ್ನ ಮಗಳು ಮತ್ತು ಹೆಂಡತಿ ಸಾವನ್ನಪ್ಪಿದರು. ಆನಂತರ ನಾನು ಎರಡನೇ ಮದುವೆ ಆಗಲಿಲ್ಲ ಅಂತಾರೆ. ಆ ಸಮಯದಲ್ಲಿ 2ನೇ ಮದುವೆ ಆಗಬಹುದಿತ್ತು ಅಲ್ಲವಾ ಎಂದು ಮರುಪ್ರಶ್ನೆ ಮಾಡಿದಾಗ, ಒಬ್ಬರಿಗೆ ಮಾತ್ರ ಒಮ್ಮೆ ಹೃದಯ ಕೊಡಲು ಸಾಧ್ಯ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 5 ಲಕ್ಷ ಕೊಟ್ಟರು ನೆಮ್ಮದಿ ಇಲ್ಲ! ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಇಂಟರ್ನ್ಯಾಷನಲ್ ಶಾಲೆಯ ವಿರುದ್ಧ ಪೋಷಕರ ಗಂಭೀರ ಆರೋಪ&lt;/strong&gt;&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/bengaluru-urban/viral-video-do-you-know-who-this-is-bengaluru-68-year-old-man-heart-warming-words-about-marriage-and-wife-daughter-mrq-trd27vr"/>
        </item>
        <item>
            <title><![CDATA[ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ; ಇಂದು ಅಂತ್ಯಕ್ರಿಯೆ]]></title>
            <link>https://kannada.asianetnews.com/gallery/karnataka-districts/former-congress-mla-from-raichur-city-constituency-syed-yasin-passes-away-today-mrq-qp3a1xp</link>
            <guid isPermaLink="true">https://kannada.asianetnews.com/gallery/karnataka-districts/former-congress-mla-from-raichur-city-constituency-syed-yasin-passes-away-today-mrq-qp3a1xp</guid>
            <pubDate>Sun, 12 Jul 2026 11:27:23 +0530</pubDate>
            <description><![CDATA[&lt;p&gt;ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ (74) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯರಾಗಿದ್ದ ಯಾಸೀನ್ ಅವರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxae51vac7g49m594a3hwe7d,imgname-yaseen--3--1783835559786.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ (74) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯರಾಗಿದ್ದ ಯಾಸೀನ್ ಅವರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.&lt;/p&gt;&lt;img&gt;&lt;p&gt;ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್&zwnj;ನ ಮಾಜಿ ಶಾಸಕರಾದ ಸೈಯದ್ ಯಾಸೀನ್ ಅವರು ಇಂದು ಮುಂಜಾನೆ 8:45 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸೈಯದ್ ಯಾಸೀನ್ ಅವರಿಗೆ 74 ವರ್ಷ ವಯಸ್ಸು ಆಗಿತ್ತು.&lt;/p&gt;&lt;img&gt;&lt;p&gt;ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೈಯದ್ ಯಾಸೀನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಮಾಜಿ ಶಾಸಕರು ಪತ್ನಿ ಹಾಗೂ ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿದ್ದಾರೆ. ಇವರು ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯನಾಗಿದ್ದರು.&lt;/p&gt;&lt;img&gt;&lt;p&gt;ರಾಯಚೂರು ಜಿಲ್ಲಾ ಕಾಂಗ್ರೆಸ್&zwnj;ನ ಪ್ರಭಾವಿ ರಾಜಕಾರಣಿಯಾಗಿದ್ದ ಸೈಯದ್ ಯಾಸೀನ್ ಅವರು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಒಟ್ಟು ಆರು ಬಾರಿ ಸ್ಪರ್ಧಿಸಿದ್ದರು. ಈ ಪೈಕಿ 1999 ಮತ್ತು 2008 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.&lt;/p&gt;&lt;img&gt;&lt;p&gt;ಸೈಯದ್ ಯಾಸೀನ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮತ್ತು ಕೆಪಿಸಿಸಿಯ (KPCC) ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.&lt;/p&gt;&lt;img&gt;&lt;p&gt;ಸದ್ಯ ಸೈಯದ್ ಯಾಸೀನ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ರಾಯಚೂರಿಗೆ ರವಾನಿಸಲಾಗುತ್ತಿದ್ದು, ಇಂದು ಸಂಜೆ ರಾಯಚೂರು ನಗರದ ಕಮಲಿವಾಲೆ ಬಾಬಾ ಕಬರಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/former-congress-mla-from-raichur-city-constituency-syed-yasin-passes-away-today-mrq-qp3a1xp"/>
        </item>
        <item>
            <title><![CDATA[30-Year-Old Debt: 30 ವರ್ಷಗಳ ಹಳೆಯ ಸಾಲ ತೀರಿಸಲು 1200 ಕಿ.ಮೀ. ಪ್ರಯಾಣ! ಕೊಟ್ಟ ಮಾತು ಉಳಿಸಿಕೊಂಡ ಸ್ನೇಹಿತ]]></title>
            <link>https://kannada.asianetnews.com/viral/kerala-man-travels-1200-km-to-repay-30-year-old-debt-to-friend-rav/articleshow-o4knlec</link>
            <guid isPermaLink="true">https://kannada.asianetnews.com/viral/kerala-man-travels-1200-km-to-repay-30-year-old-debt-to-friend-rav/articleshow-o4knlec</guid>
            <pubDate>Sun, 12 Jul 2026 10:50:45 +0530</pubDate>
            <description><![CDATA[ಕೇರಳದ ವ್ಯಕ್ತಿಯೊಬ್ಬರು ಸುಮಾರು 30 ವರ್ಷಗಳ ಹಿಂದೆ ಸ್ನೇಹಿತನಿಂದ ಪಡೆದಿದ್ದ ಸಾಲವನ್ನು ಮರುಪಾವತಿಸಲು 1200 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಈ ಘಟನೆ ಈಗ ಸ್ನೇಹದ ಮೌಲ್ಯವನ್ನು ಸಾರುವ ಅಪರೂಪದ ಕಥೆಯಾಗಿ ಗಮನ ಸೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxabwzmx9y64jmdzp7vv4w26,imgname-----------------------2026-07-12t102640.936-1783833198237.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದ ವ್ಯಕ್ತಿಯೊಬ್ಬರು 30 ವರ್ಷಗಳ ಹಿಂದಿನ ಹಳೆಯ ಸಾಲವೊಂದನ್ನು ತೀರಿಸಲು ಬರೋಬ್ಬರಿ 1200 ಕಿಲೋಮೀಟರ್&zwnj;ಗಳಷ್ಟು ದೂರ ಪ್ರಯಾಣಿಸಿ ಸಾಲ ತೀರಿಸಿ ಬಂದಿದ್ದಾರೆ! ನಂಬೋಕೆ ಆಗ್ತಿಲ್ಲವೇ? ಹೌದು ಇದು, ನಿಜ. ಸಾಲ ಕೊಟ್ಟು. ದಶಕಗಳೇ ಕಳೆದರೂ ಸ್ನೇಹಿತ ಕೊಟ್ಟ ಮಾತನ್ನು ಮರೆಯದೆ, ಋಣ ತೀರಿಸಿದ ಅಪರೂಪದ ಘಟನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.&lt;/p&gt;&lt;p&gt;ಇದು ಕೇವಲ ಹಣದ ವಿಷಯವಲ್ಲ, ಬದಲಿಗೆ ಸ್ನೇಹ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದೆ. ಈ ಘಟನೆ ನಡೆದಿರುವುದು ಕೇರಳದಲ್ಲಿ. ಸುಮಾರು ಮೂವತ್ತು ವರ್ಷಗಳ ಹಿಂದೆ, ಈ ವ್ಯಕ್ತಿ ತನ್ನ ಸ್ನೇಹಿತನಿಂದ ಹಣವನ್ನು ಸಾಲವಾಗಿ ಪಡೆದಿದ್ದರು. ಆದರೆ, ಕಾಲಾನಂತರದಲ್ಲಿ ಇಬ್ಬರೂ ಬೇರೆ ಬೇರೆ ಕಡೆ ನೆಲೆಸಬೇಕಾಗಿ ಬಂದಿದ್ದರಿಂದ ಇಬ್ಬರ ನಡುವೆಯೂ ಸಂಪರ್ಕ ಕಳೆದುಹೋಗಿತ್ತು.&lt;/p&gt;&lt;h2&gt;ಮರೆಯಲಾಗದ ಮಾತು, ಮುಗಿಯದ ಸ್ನೇಹ&lt;/h2&gt;&lt;p&gt;ನೋಡಿ ಸಾಮಾನ್ಯವಾಗಿ ನೀವು ಯಾರಿಗಾದ್ರೂ ನೂರೋ ಸಾವಿರೋ ಸಾಲ ಕೊಟ್ಟರೆ ಪಡೆದವರು ಮರೆತೇ ಬಿಡ್ತಾರೆ, ನೀವಾಗಿ ಕೇಳಿದ್ರೂ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ತಾರೆ, ಕೊನೆ ಸಂಪರ್ಕ ಕಡಿದುಕೊಳ್ತಾರೆ, ದೊಡ್ಡ ಮೊತ್ತ ಇದ್ದರೆ ಸಂಬಂಧ ಕಡಿದುಕೊಂಡರೂ ಸಾಲ ವಾಪಸ್ ಕೊಡೋದಿಲ್ಲ, ಕೆಲವು ಸಂದರ್ಭಗಳಂತೂ ಸಾಲ ಕೇಳಲು ಹೋದವರನ್ನೇ ಕೊಂದು ಹಾಕಿದ ಘಟನೆ ಸಾಕಷ್ಟಿವೆ ಅಲ್ಲವೇ? ಆದರೆ ಕೇರಳದ ಈ ವ್ಯಕ್ತಿ ಎಷ್ಟೊಂದು ಪ್ರಾಮಾಣಿಕ ಸ್ನೇಹಿತ ಅಂದ್ರೆ ಸ್ನೇಹಿತನಿಂದ ಸಾಲ ಪಡೆದು ಬರೋಬ್ಬರು ಮೂವತ್ತು ವರ್ಷಗಳೇ ಕಳೆದಿವೆ. ಆದ್ರೂ ಸಾಲ ಪಡೆದಿದ್ದ ವಿಚಾರ ಮರೆತಿಲ್ಲ. ಸಾಲ ಕೊಡೋಣ ಅಂದ್ರೆ ಸ್ನೇಹಿತ ಎಲ್ಲಿದ್ದಾನೆಂದೇ ತಿಳಿದಿಲ್ಲ. ಆದ್ರೂ ಹೇಗಾದರೂ ಮಾಡಿ ಸ್ನೇಹಿತನನ್ನು ಪತ್ತೆಹಚ್ಚಬೇಕುನ ಅಂದು ಪಡೆದಿದ್ದ ಸಾಲ ವಾಪಸ್ ಕೊಟ್ಟು ಮಾತು ಉಳಿಸಿಕೊಳ್ಳಬೇಕೆಂಬ ದೃಢ ಸಂಕಲ್ಪ ಅವರಲ್ಲಿತ್ತು.&lt;/p&gt;&lt;h3&gt;ಸಾಲ ಕೊಟ್ಟ ಗೆಳೆಯನ ಪತ್ತೆ ಹಚ್ಚಿದ್ದು ಹೇಗೆ?&lt;/h3&gt;&lt;p&gt;ಇದೇ ಕಾರಣಕ್ಕೆ ಕೇರಳದ ಈ ವ್ಯಕ್ತಿ ತನ್ನ ಗೆಳೆಯ ಎಲ್ಲಿ ಇರಬಹುದು ಎಂಬ ಮಾಹಿತಿ ಕಲೆಹಾಕಿ, ಹುಡುಕಿಕೊಂಡು ನೂರಾರು ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾರೆ.&lt;/p&gt;&lt;p&gt;ಕೊನೆಗೂ ತಮ್ಮ ಸ್ನೇಹಿತನನ್ನು ಪತ್ತೆಹಚ್ಚಿ, 30 ವರ್ಷಗಳ ಹಿಂದಿನ ಸಾಲವನ್ನು ಮರುಪಾವತಿಸುವ ಮೂಲಕ ಮಾತು ಉಳಿಸಿಕೊಂಡಿದ್ದಾರೆ. ಈ ಇಬ್ಬರು ಸ್ನೇಹಿತರ ನಡುವಿನ ಬಾಂಧವ್ಯ ಎಂಥದ್ದು ಮತ್ತು ಕೊಟ್ಟ ಮಾತಿಗೆ ಇರುವ ಬೆಲೆ ಏನು ಎಂಬುದಕ್ಕೆ ಈ ಘಟನೆಯೇ ದೊಡ್ಡ ಸಾಕ್ಷಿಯಾಗಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಗಳು ಹಾಳಾಗುವ ಇಂದಿನ ದಿನಗಳಲ್ಲಿ, ಮೂರು ದಶಕಗಳ ನಂತರವೂ ಸಾಲ ತೀರಿಸಲು ಇಷ್ಟು ದೂರ ಪ್ರಯಾಣಿಸಿದ್ದು ನಿಜಕ್ಕೂ ಅಪರೂಪವೇ ಸರಿ. ಈ ಕಥೆ ನಿಜವಾದ ಸ್ನೇಹಕ್ಕೆ ಯಾವುದೇ ಕಾಲಮಿತಿ ಅಥವಾ ದೂರದ ಅಂತರ ಅಡ್ಡಿಯಾಗುವುದಿಲ್ಲ ಎಂಬುದನ್ನು ನಿರೂಪಿಸಿದೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/viral/kerala-man-travels-1200-km-to-repay-30-year-old-debt-to-friend-rav/articleshow-o4knlec"/>
        </item>
        <item>
            <title><![CDATA[Gaur Gopal Das Quote: ಪ್ರತಿ ದಿನವೂ ಒಂದೇ ರೀತಿ ಇರಲ್ಲ; ಕೆಟ್ಟ ದಿನಗಳ ದಾಟಿ ಮುನ್ನಡೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್]]></title>
            <link>https://kannada.asianetnews.com/gallery/life/gaur-gopal-das-on-how-to-handle-bad-days-and-find-balance-rav-gfcvu0n</link>
            <guid isPermaLink="true">https://kannada.asianetnews.com/gallery/life/gaur-gopal-das-on-how-to-handle-bad-days-and-find-balance-rav-gfcvu0n</guid>
            <pubDate>Sun, 12 Jul 2026 10:16:48 +0530</pubDate>
            <description><![CDATA[&lt;p&gt;ಆಧ್ಯಾತ್ಮಿಕ ಗುರು ಗೌರ್ ಗೋಪಾಲ್ ದಾಸ್(Gaur Gopal Das) ಅವರ ಬದುಕಿನ ಪಾಠ. ಪ್ರತಿ ದಿನವೂ ಒಂದೇ ರೀತಿ ಇರುವುದಿಲ್ಲ, ಕೆಟ್ಟ ದಿನಗಳು ಬಂದಾಗ ಕುಗ್ಗದೆ ಮುನ್ನಡೆಯುವುದು ಹೇಗೆ ಎಂಬುದರ ಕುರಿತು ಅವರು ಸರಳ ಸಲಹೆ ನೀಡಿದ್ದಾರೆ. ಲೈಫ್ ಬ್ಯಾಲೆನ್ಸ್ ಮಾಡಲು ನಿಮಗೂ ಸಹಕಾರಿ ಆಗಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hcm07hvrgbrmv37sm3wtjvtg,imgname-gaur-gopal-das-ty.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಧ್ಯಾತ್ಮಿಕ ಗುರು ಗೌರ್ ಗೋಪಾಲ್ ದಾಸ್(Gaur Gopal Das) ಅವರ ಬದುಕಿನ ಪಾಠ. ಪ್ರತಿ ದಿನವೂ ಒಂದೇ ರೀತಿ ಇರುವುದಿಲ್ಲ, ಕೆಟ್ಟ ದಿನಗಳು ಬಂದಾಗ ಕುಗ್ಗದೆ ಮುನ್ನಡೆಯುವುದು ಹೇಗೆ ಎಂಬುದರ ಕುರಿತು ಅವರು ಸರಳ ಸಲಹೆ ನೀಡಿದ್ದಾರೆ. ಲೈಫ್ ಬ್ಯಾಲೆನ್ಸ್ ಮಾಡಲು ನಿಮಗೂ ಸಹಕಾರಿ ಆಗಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕೆಲವು ದಿನ ಬೆಳಗ್ಗೆ ಎದ್ದ ತಕ್ಷಣ ಜಗತ್ತನ್ನೇ ಗೆಲ್ಲುವಷ್ಟು ಹುರುಪು, ಉತ್ಸಾಹ ನಮ್ಮಲ್ಲಿರುತ್ತದೆ. ಆದರೆ, ಅದೇ ಹುರುಪು ಕೆಲವು ದಿನಗಳ ಬಳಿಕ ಇರೋದಿಲ್ಲ. ಯಾವುದೇ ಕಾರಣವಿಲ್ಲದೆ ಮನಸ್ಸು ಭಾರವಾಗಿರುತ್ತದೆ, ಏನೂ ಮಾಡಲು ತೋಚುವುದಿಲ್ಲ. ಇಂತಹ ಸಂದರ್ಭದಲ್ಲಿ 'ನನಗೆ ಮಾತ್ರ ಯಾಕೆ ಹೀಗಾಗುತ್ತದೆ' ಎಂದು ಕೊರಗುವವರೇ ಹೆಚ್ಚು. ಆದರೆ, ಇದು ಕೇವಲ ನಿಮ್ಮೊಬ್ಬರ ಕಥೆಯಲ್ಲ, ಎಲ್ಲರ ಬದುಕಿನಲ್ಲೂ ಇದು ಸಾಮಾನ್ಯ ಎನ್ನುತ್ತಾರೆ ಆಧ್ಯಾತ್ಮಿಕ ಚಿಂತಕ ಗೌರ್ ಗೋಪಾಲ್ ದಾಸ್.&lt;/p&gt;&lt;img&gt;&lt;p&gt;ಪ್ರತಿಯೊಂದು ದಿನವೂ ಒಂದೇ ರೀತಿ ಇರಬೇಕು ಎಂದು ನಿರೀಕ್ಷಿಸುವುದೇ ತಪ್ಪು ಎಂಬುದು ಅವರ ಅಭಿಪ್ರಾಯ. ಜೀವನವೆಂದರೆ ಏರಿಳಿತಗಳ ಸಂಗಮ. ಹೀಗಿರುವಾಗ, ಪ್ರತಿದಿನವೂ ಸಂತೋಷದಿಂದ, ಉತ್ಸಾಹದಿಂದ ಇರಲು ಸಾಧ್ಯವೇ? ಖಂಡಿತಾ ಇಲ್ಲ. ಈ ಸತ್ಯವನ್ನು ಅರಿತುಕೊಳ್ಳುವುದೇ ಮಾನಸಿಕ ನೆಮ್ಮದಿಯ ಮೊದಲ ಹೆಜ್ಜೆ ಎನ್ನುವುದು ಅವರ ಮಾತಿನ ಸಾರಾಂಶ.&lt;/p&gt;&lt;img&gt;&lt;p&gt;ಒಂದು ದಿನ ಚೆನ್ನಾಗಿಲ್ಲ ಎಂದ ಮಾತ್ರಕ್ಕೆ ಜೀವನವೇ ಮುಗಿದುಹೋಯಿತು ಎಂದರ್ಥವಲ್ಲ. ಅಂತಹ ದಿನಗಳಲ್ಲಿ ನಮ್ಮ ಮೇಲೆ ನಾವು ಕರುಣೆ ತೋರಬೇಕು ಎನ್ನುತ್ತಾರೆ ಗೌರ್ ಗೋಪಾಲ್ ದಾಸ್. ಮನಸ್ಸಿಗೆ ಬೇಸರವಾದಾಗ ಅದನ್ನು ಒಪ್ಪಿಕೊಂಡು, ಆ ದಿನವನ್ನು ನಿಧಾನವಾಗಿ ಕಳೆಯಬೇಕು. ಬಲವಂತವಾಗಿ ಖುಷಿಯಾಗಿರಲು ಪ್ರಯತ್ನಿಸುವುದು ಮತ್ತಷ್ಟು ಒತ್ತಡಕ್ಕೆ ಕಾರಣವಾಗುತ್ತದೆ. ಬದಲಾಗಿ, ಆ ಕೆಟ್ಟ ಸಮಯವನ್ನು ಅಥವಾ ಭಾವನೆಯನ್ನು ದಾಟಿ ಮುಂದೆ ಸಾಗುವುದನ್ನು ಕಲಿಯಬೇಕು. ಇಂದಿನ ದಿನ ಹೀಗಿದೆ, ನಾಳೆ ಎಲ್ಲವೂ ಸರಿಹೋಗಬಹುದು ಎಂಬ ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಮುಖ್ಯ. ಇದೇ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳುವ ದಾರಿ.&lt;/p&gt;&lt;img&gt;&lt;p&gt;ಇಂದಿನ ಒತ್ತಡದ ಬದುಕಿಗೆ ಅವರ ಈ ಮಾತುಗಳು ಕನ್ನಡಿ ಹಿಡಿದಂತಿವೆ. ಒಟ್ಟಿನಲ್ಲಿ, ಒಳ್ಳೆಯ ದಿನ ಬಂದಾಗ ಹಿಗ್ಗದೆ, ಕೆಟ್ಟ ದಿನ ಬಂದಾಗ ಕುಗ್ಗದೆ ಇರುವುದೇ ಸಮರ್ಥ ಜೀವನ. ಗೌರ್ ಗೋಪಾಲ್ ದಾಸ್ ಅವರ ಈ ಸರಳ ತತ್ವವು ನಿತ್ಯ ಜೀವನದ ಸವಾಲುಗಳನ್ನು ಎದುರಿಸಲು ದೊಡ್ಡ ಸ್ಫೂರ್ತಿಯನ್ನು ನೀಡುತ್ತದೆ. ನಿಮ್ಮ ಮನಸ್ಸಿಗೂ ಬೇಸರವಾದಾಗ ಈ ಮಾತುಗಳನ್ನು ಒಮ್ಮೆ ನೆನಪಿಸಿಕೊಳ್ಳಿ, ಮನಸ್ಸು ಹಗುರವಾಗಬಹುದು.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/life/gaur-gopal-das-on-how-to-handle-bad-days-and-find-balance-rav-gfcvu0n"/>
        </item>
        <item>
            <title><![CDATA[Rahul Gandhi Missing: ರಾಹುಲ್ ಗಾಂಧಿ ನಾಪತ್ತೆಯಾಗಿರೋಕೆ ಸಂಪುಟ ವಿಸ್ತರಣೆ ವಿಳಂಭ? ಪ್ರಲ್ಹಾದ್ ಜೋಶಿ ಹೇಳಿಕೆ ವೈರಲ್]]></title>
            <link>https://kannada.asianetnews.com/politics/karnataka-govt-cabinet-expansion-delayed-due-to-rahul-missing-pralhad-joshi-criticizes-rav/articleshow-bgtxke4</link>
            <guid isPermaLink="true">https://kannada.asianetnews.com/politics/karnataka-govt-cabinet-expansion-delayed-due-to-rahul-missing-pralhad-joshi-criticizes-rav/articleshow-bgtxke4</guid>
            <pubDate>Sun, 12 Jul 2026 05:25:46 +0530</pubDate>
            <description><![CDATA[ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ರಾಹುಲ್ ಗಾಂಧಿ 40 ದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾರಣ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮತದಾರರ ಪರಿಷ್ಕರಣೆ ಮತ್ತು ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಸರ್ಕಾರದ ಕ್ರಮವನ್ನು ಅವರು ಟೀಕಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knhhjx5p4f2zsycpnn9zjadz,imgname-pralhad-joshi-1775484105909.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜು.12) : &lt;/strong&gt;ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul gandhi) ಕಳೆದ 40 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಕಾಣೆ ಆಗಿದ್ದರಿಂದಲೇ ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಆದರೆ, ರಾಜ್ಯ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲೇ ಮಗ್ನರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.&lt;/p&gt;&lt;h2&gt;SIR ಗೆ ಕರ್ನಾಟಕ ಸರ್ಕಾರ ಅನಗತ್ಯ ಗೊಂದಲ&lt;/h2&gt;&lt;p&gt;ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಮತದಾರರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ರಾಜ್ಯ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಕಷ್ಟದ ಪರಿಸ್ಥಿತಿಯಲ್ಲೂ ಬಿಎಲ್&zwnj;ಒಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಮತದಾರರ ನೋಂದಣಿ ನಮೂನೆಗಳು ಮನೆ ಮನೆಗೆ ತಲುಪುವಂತೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದರು.&lt;/p&gt;&lt;h3&gt;ಶಾಶ್ವತ ನಿವಾಸ ಪ್ರಮಾಣಪತ್ರ ಕಾನೂನು ಬಾಹಿರ&lt;/h3&gt;&lt;p&gt;ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದೆ. ನುಸುಳುಕೋರರಿಗೆ ಮತದಾರರ ಗುರುತಿನ ಚೀಟಿ ದೊರಕಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಮಾಣಪತ್ರ ನೀಡಲು ಸರ್ಕಾರ ವಿಧಿಸಿರುವ 11 ಷರತ್ತುಗಳೂ ಸಮಂಜಸವಾಗಿಲ್ಲ ಎಂದು ಜೋಶಿ ಆಕ್ಷೇಪ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-govt-cabinet-expansion-delayed-due-to-rahul-missing-pralhad-joshi-criticizes-rav/articleshow-bgtxke4"/>
        </item>
        <item>
            <title><![CDATA[MP V MLA Pension: ನಿವೃತ್ತಿಯ ನಂತರ ಒಬ್ಬ ಸಂಸದನಿಗೆ ಎಷ್ಟು ಪಿಂಚಣಿ ಸಿಗುತ್ತೆ?]]></title>
            <link>https://kannada.asianetnews.com/politics/how-much-pension-does-a-member-of-parliament-receive-after-retirement-rav/articleshow-uicdugo</link>
            <guid isPermaLink="true">https://kannada.asianetnews.com/politics/how-much-pension-does-a-member-of-parliament-receive-after-retirement-rav/articleshow-uicdugo</guid>
            <pubDate>Sun, 12 Jul 2026 08:18:44 +0530</pubDate>
            <description><![CDATA[&lt;p&gt;ನಿವೃತ್ತ ಸಂಸದರು ಮಾಸಿಕ ₹31,000 ಪಿಂಚಣಿ ಹಾಗೂ ಹೆಚ್ಚುವರಿ ಸೇವೆಗೆ ಹೆಚ್ಚಿನ ಮೊತ್ತವನ್ನು ಪಡೆಯುತ್ತಾರೆ. ಆದರೆ, ಶಾಸಕರ ಪಿಂಚಣಿಯು ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿದ್ದು, ಕೆಲವೊಮ್ಮೆ ಸಂಸದರಿಗಿಂತ ಹೆಚ್ಚಿರಬಹುದು. ಒಬ್ಬ ವ್ಯಕ್ತಿಯು ಸಂಸದ, ಶಾಸಕರಾಗಿ ಎರಡೂ ಪಿಂಚಣಿ ಪಡೆಯುವ ಬಗ್ಗೆಯೂ ವಿವಾದಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwpsdg1heeqnd602wa67kp3k,imgname-parliament-monsoon-session-1783176282161.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಸಂಸದರು, ಶಾಸಕರ ಸಂಬಳ ಮತ್ತು ಪಿಂಚಣಿಗಳ ವಿಷಯವು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಸಾಮಾನ್ಯ ಸರ್ಕಾರಿ ನೌಕರನ ಪಿಂಚಣಿ ಬದಲಾಗಿದೆ ಅದೇ ರೀತಿ ಸಂಸದರು, ಶಾಸಕರಿಗೂ ಪಿಂಚಣಿ ವ್ಯವಸ್ಥೆ ಇದೆಯೇ? ಕಾಲ ಕಾಲಕ್ಕೆ ಬದಲಾಗುತ್ತದೆಯೇ? ಸರ್ಕಾರಿ ನೌಕರರ ನಿಯಮಗಳೇ ಇಲ್ಲೂ ಅನ್ವಯಿಸುತ್ತವೆಯೇ? ಅಥವಾ ಬೇರೆಯದ್ದೇ ವ್ಯವಸ್ಥೆ ಇದೆಯೇ? ಈ ರೀತಿ ಆಗಾಗ್ಗೆ ಪ್ರಶ್ನೆ ಉದ್ಭವಿಸುತ್ತದೆ.&lt;/p&gt;&lt;p&gt;ನಿವೃತ್ತಿಯ ನಂತರ ಸಂಸದರು ಎಷ್ಟು ಪಿಂಚಣಿ ಪಡೆಯುತ್ತಾರೆ? ಅವರು ಶಾಸಕರಿಗಿಂತ ಹೆಚ್ಚಿನ ಸೌಲಭ್ಯ ಪಡೆಯುತ್ತಾರೆ. ಪಿಂಚಣಿಯಲ್ಲೂ ಸಂಸದರು ಶಾಸಕರಿಗಿಂತ ಹೆಚ್ಚು ಪಡೆಯುತ್ತಾರೆಯೇ ಅಥವಾ ಕಡಿಮೆ?&lt;/p&gt;&lt;h2&gt;ನಿವೃತ್ತ ಸಂಸದರಿಗೆ ಸಿಗುವ ಪಿಂಚಣಿ ಎಷ್ಟು?&lt;/h2&gt;&lt;p&gt;ಅಧಿಕೃತ ಸಂಸದೀಯ ನಿಯಮಗಳ ಪ್ರಕಾರ, ಮಾಜಿ ಸಂಸದರು ನಿವೃತ್ತಿಯ ನಂತರ ಮಾಸಿಕ ₹31,000 ಪಿಂಚಣಿ ಪಡೆಯುತ್ತಾರೆ. ಈ ಹೆಚ್ಚಿನ ಪಿಂಚಣಿಯನ್ನು ಏಪ್ರಿಲ್ 1, 2023 ರಂದು ಜಾರಿಗೆ ತರಲಾಯಿತು. ಹಿಂದೆ, ಮಾಜಿ ಸಂಸದರು ಮಾಸಿಕ ₹25,000 ಪಿಂಚಣಿ ಪಡೆಯುತ್ತಿದ್ದರು. ಸಂಸದರು ಐದು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದರೆ, ಅವರು ಹೆಚ್ಚುವರಿ ಸೇವಾ ಅವಧಿಗೆ ಪಿಂಚಣಿಯನ್ನು ಸಹ ಪಡೆಯುತ್ತಾರೆ. ಐದು ವರ್ಷಗಳ ನಂತರ ಪ್ರತಿ ಹೆಚ್ಚುವರಿ ವರ್ಷಕ್ಕೆ, ತಿಂಗಳಿಗೆ ₹2,500 ಹೆಚ್ಚುವರಿಯಾಗಿ ನೀಡಲಾಗುತ್ತದೆ.&lt;/p&gt;&lt;h3&gt;ಹೆಚ್ಚುವರಿ ಅವಧಿಯಲ್ಲಿ ಪಿಂಚಣಿ ಹೇಗೆ ಹೆಚ್ಚಾಗುತ್ತೆ?&lt;/h3&gt;&lt;p&gt;ಒಬ್ಬ ಸಂಸದರು ಒಂದಕ್ಕಿಂತ ಹೆಚ್ಚು ಅವಧಿಗೆ ಸಂಸತ್ತಿನಲ್ಲಿ ಸೇವೆ ಸಲ್ಲಿಸಿದ್ದರೆ, ಅವರ ಪಿಂಚಣಿ ಹೆಚ್ಚಾಗುತ್ತದೆ. ಉದಾಹರಣೆಗೆ, ಒಬ್ಬ ಸಂಸದರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ, ಅವರು ₹31,000 ಜೊತೆಗೆ ಎರಡು ಹೆಚ್ಚುವರಿ ವರ್ಷಗಳವರೆಗೆ ₹5,000 ಪಡೆಯುತ್ತಾರೆ. ಅಂದರೆ ಅವರ ಒಟ್ಟು ಮಾಸಿಕ ಪಿಂಚಣಿಯನ್ನು ₹36,000 ಬರುತ್ತೆ. ಅದೇ ರೀತಿ, ಒಬ್ಬ ಸಂಸದರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ, ಅವರು ₹31,000 ಜೊತೆಗೆ ₹7,500 ಹೆಚ್ಚುವರಿ ಮೂರು ವರ್ಷಗಳವರೆಗೆ ಪಡೆಯುತ್ತಾರೆ. ಇದು ಅವರ ಒಟ್ಟು ಮಾಸಿಕ ಪಿಂಚಣಿಯನ್ನು ₹38,500 ಕ್ಕೆ ಏರುತ್ತೆ. ನಿಯಮಗಳ ಪ್ರಕಾರ, ಒಬ್ಬ ಸಂಸದರು ಹೆಚ್ಚುವರಿ ವರ್ಷದಲ್ಲಿ ಕನಿಷ್ಠ ಒಂಬತ್ತು ತಿಂಗಳು ಸೇವೆ ಸಲ್ಲಿಸಿದ್ದರೆ, ಅದನ್ನು ಪೂರ್ಣ ವರ್ಷವೆಂದು ಪರಿಗಣಿಸಲಾಗುತ್ತದೆ ಮತ್ತು ಅವರಿಗೆ ಹೆಚ್ಚುವರಿ ಪಿಂಚಣಿ ನೀಡಲಾಗುತ್ತದೆ.&lt;/p&gt;&lt;p&gt;&lt;strong&gt;ಶಾಸಕರು ಪಿಂಚಣಿ ಹೇಗಿದೆ?&lt;/strong&gt;&lt;/p&gt;&lt;p&gt;ದೇಶಾದ್ಯಂತ ಶಾಸಕರ ಪಿಂಚಣಿ ಒಂದೇ ರೀತಿ ಇಲ್ಲ. ಪ್ರತಿಯೊಂದು ರಾಜ್ಯ ವಿಧಾನಸಭೆಯು ತನ್ನ ಶಾಸಕರ ಸಂಬಳ ಮತ್ತು ಪಿಂಚಣಿಗಳಿಗೆ ತನ್ನದೇ ಆದ ನಿಯಮಗಳನ್ನು ನಿಗದಿಪಡಿಸುತ್ತದೆ. ಪರಿಣಾಮವಾಗಿ, ಪಿಂಚಣಿ ಮೊತ್ತವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಅನೇಕ ರಾಜ್ಯಗಳಲ್ಲಿ, ಶಾಸಕರ ಮಾಸಿಕ ಪಿಂಚಣಿ ಸಂಸದರಿಗಿಂತ ಹೆಚ್ಚಾಗಿರುತ್ತದೆ, ಆದರೆ ಇತರ ರಾಜ್ಯಗಳಲ್ಲಿ ಇದು ಕಡಿಮೆ ಇರುತ್ತದೆ. ಪಿಂಚಣಿ ಮೊತ್ತವು ರಾಜ್ಯ ಸರ್ಕಾರವು ಸ್ಥಾಪಿಸಿದ ನಿಯಮಗಳು ಮತ್ತು ಕಾಲಕಾಲಕ್ಕೆ ಮಾಡಿದ ತಿದ್ದುಪಡಿಗಳನ್ನು ಅವಲಂಬಿಸಿರುತ್ತದೆ.&lt;/p&gt;&lt;h3&gt;ಸಂಸದ ಮತ್ತು ಶಾಸಕರಿಬ್ಬರಿಗೂ ಪಿಂಚಣಿ ಸಿಗಬಹುದೇ?&lt;/h3&gt;&lt;p&gt;ಕೆಲವು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಯು ಹಿಂದೆ ಶಾಸಕರಾಗಿ ಸೇವೆ ಸಲ್ಲಿಸಿ ನಂತರ ಸಂಸದರಾಗಿದ್ದರೆ, ಅವರು ಎರಡೂ ಹುದ್ದೆಗಳಿಗೆ ಪಿಂಚಣಿ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಈ ಬಗ್ಗೆ ವಿವಾದವೂ ಇದೆ. ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳು ಡ್ಯುಯಲ್ ಪಿಂಚಣಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುವ ಬಗ್ಗೆ ಪರಿಗಣಿಸಿವೆ&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/how-much-pension-does-a-member-of-parliament-receive-after-retirement-rav/articleshow-uicdugo"/>
        </item>
        <item>
            <title><![CDATA[ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ, ದಾಬಸ್ ಪೇಟೆ-ಮಧುಗಿರಿ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ]]></title>
            <link>https://kannada.asianetnews.com/karnataka-districts/tumakur-rayadurga-new-railway-line-request-to-declare-dabaspet-madhugiri-bellary-national-highway-mrq/articleshow-6agp6me</link>
            <guid isPermaLink="true">https://kannada.asianetnews.com/karnataka-districts/tumakur-rayadurga-new-railway-line-request-to-declare-dabaspet-madhugiri-bellary-national-highway-mrq/articleshow-6agp6me</guid>
            <pubDate>Sun, 12 Jul 2026 09:00:11 +0530</pubDate>
            <description><![CDATA[ಕೇಂದ್ರ ಸಚಿವ ವಿ.ಸೋಮಣ್ಣ ಅವರು ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ದಾಬಸ್ ಪೇಟೆ-ಮಧುಗಿರಿ-ಬಳ್ಳಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಲು ಮನವಿ ಮಾಡಿದ್ದಾರೆ. ಇದರೊಂದಿಗೆ ಶಿರಾ-ಮಧುಗಿರಿ ಚತುಷ್ಪಥ ರಸ್ತೆ ಕಾಮಗಾರಿ ಮತ್ತು ಮಧುಗಿರಿಯಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪಿಸುವ ಯೋಜನೆಗಳನ್ನು ಘೋಷಿಸಿದ್ದು, ಈ ಭಾಗದ ಆರ್ಥಿಕತೆಗೆ ಉತ್ತೇಜನ ನೀಡುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxa5v4vdrty4x7vszkr3793r,imgname-train-highway-1783826846573.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು: ದಾಬಸ್ ಪೇಟೆಯಿಂದ -ಮಧುಗಿರಿ-ಪಾವಗಡ ಮೂಲಕ ಬಳ್ಳಾರಿ ಸಂಪರ್ಕಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.&lt;/p&gt;&lt;p&gt;ಪಟ್ಟಣದ ಹೊರ ವಲಯದಲ್ಲಿ ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಹೊಸ ಹೆದ್ದಾರಿ ನಿರ್ಮಾಣದಿಂದ ಈ ಭಾಗದ ರೈತರ ,ಸಂಚಾರ ವ್ಯಪಾರ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.&lt;/p&gt;&lt;p&gt;ಮಧುಗಿರಿ ರೈಲು ನಿಲ್ದಾಣಕ್ಕೆ ಮಧುಗಿರಿ ಎಂದೇ ನಾಮಕರಣ ಮಾಡಲಾಗುವುದು ಎಂದು ಘೋಷಿಸಿದ ಅವರು, ಮುಂದಿನ 15 ದಿನಗಳ ಒಳಗಾಗಿ 180 ಕೋಟಿ ರು.ವೆಚ್ಚದ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. 2027ರ ಡಿಸೆಂಬರ್ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಧುಗಿರಿ ರೈಲು ನಿಲ್ದಾಣವನ್ನು ಉದ್ಘಾಟಿಸುವ ಗುರಿ ಹೊಂದಿದ್ದು, ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮಧುಗಿರಿಯಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪಿಸುವುದಾಗಿ ತಿಳಿಸಿ ಇದರಿಂದ ರೈತರು, ಕೂಲಿಕಾರ್ಮಿಕರು ವ್ಯಾಪಾರಿಗಳು ಕೈಗಾರಿಕೆಗಳಿಗೆ ಸರಕು ಸಾಗಾಣೆ ಸುಲಭವಾಗಿ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಠು ಉತ್ತೇಜನ ದೊರೆಯಲಿದೆ ಎಂದರು.&lt;/p&gt;&lt;p&gt;ಶಿರಾ ನಗರದಿಂದ ಬಡವನಹಳ್ಳಿ-ಮಧುಗಿರಿ ಮೂಲಕ ಭೈರೇನಹಳ್ಳಿ ಸಂಪರ್ಕಿಸುವ ರಾಷ್ಟ್ರಿಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 675 ಕೋಟಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದರು.&lt;/p&gt;&lt;p&gt;ಶಾಸಕ ಕೆ.ಎನ್.ರಾಜಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, 2012ರಲ್ಲಿಯೇ 24 ಎಕರೆ ಭೂಮಿಯನ್ನು ರೈಲು ಮಾರ್ಗ ನಿರ್ಮಾಣಕ್ಕೆ ರೈತರು ಜಮೀನು ಬಿಟ್ಟು ಕೊಟ್ಟಿದ್ದು ಇದೀಗ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿರುವುದು ಸಂತಸದ ವಿಚಾರ. ಭೂಮಿ ನೀಡಿದ ಎಲ್ಲಾ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ನೀರಾವರಿ ಅಭಿವೃದ್ಧಿಗೆ 120 ಕೋಟಿ ಅನುದಾನ ಮಂಜೂರಾಗಿದ್ದು, ಈ ಯೋಜನೆಗಳಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಇದರ ಕೀರ್ತಿ ಸೋಮಣ್ಣಗೆ ಸಲ್ಲಬೇಕು ಎಂದರು.&lt;/p&gt;&lt;p&gt;ಮಧುಗಿರಿಯನ್ನು ಜಿಲ್ಲೆಯಾಗಿಸುವ ಎಲ್ಲ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದ ಅವರು, ಕೊರಟಗೆರೆ, ಶಿರಾ, ಪಾವಗಡ ಹಾಗೂ ಮಧುಗಿರಿ ಈ ನಾಲ್ಕೂ ತಾಲೂಕುಗಳನ್ನು ಸೇರಿಸಿ ಮಧುಗಿರಿ ಜಿಲ್ಲೆಯನ್ನಾಗಿಸಬೇಕಿದೆ. ಅದೇ ರೀತಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಹಾಗೂ ಅರಸೀಕೆರೆ ಸೇರಿ ಜಿಲ್ಲೆಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಎಸಿ ಗೋಟೂರು ಶಿವ್ಪಪ್ಪ , ತಹಸೀಲ್ದಾರ್ ನಂದಿನಿ, ಪ್ರಸಾದ್, ಸೂರಜ್, ವಿಜಯ ಕುಮಾರ್, ಶ್ರೀನಿವಾಸ್, ರಾಜ್ ಗೋಪಾಲ್, ಜಿ.ಜೆ.ರಾಜಣ್ಣ, ಹನುಮಂತರೆಡ್ಡಿ, ಕೆ.ಎಸ್.ಪಾಂಡುರಂಗಾರೆಡ್ಡಿ, ಡಾ.ಎಂ.ಜಿ.ಶ್ರೀನಿವಾಕಸಮೂರ್ತಿ, ಎಲ್&zwnj;.ಸಿ.ನಾಗರಾಜು,ತುಂಗೋಟಿ ರಾಮಣ್ಣ, ಎಂ.ಕೆ.ನಂಜುಂಡರಾಜು, ಲಾಲಪೇಟೆ ಮಂಜುನಾಥ್, ಲಕ್ಷ್ಮೀಪತಿ ಸೇರಿದಂತೆ ಅನೇಕರಿದ್ದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/tumakur-rayadurga-new-railway-line-request-to-declare-dabaspet-madhugiri-bellary-national-highway-mrq/articleshow-6agp6me"/>
        </item>
        <item>
            <title><![CDATA[S Janaki amma: ಸರಸ್ವತಿಯೇ ಕಣ್ಮುಚ್ಚಿದರೆ ಸರಿಗಮ ಕೇಳುವುದೇ..?  - ಕೆ. ಕಲ್ಯಾಣ್]]></title>
            <link>https://kannada.asianetnews.com/state/legendary-playback-singer-s-janaki-passes-away-at-88-column-by-k-kalyan-rav/articleshow-6gslhul</link>
            <guid isPermaLink="true">https://kannada.asianetnews.com/state/legendary-playback-singer-s-janaki-passes-away-at-88-column-by-k-kalyan-rav/articleshow-6gslhul</guid>
            <pubDate>Sun, 12 Jul 2026 06:46:32 +0530</pubDate>
            <description><![CDATA[ಖ್ಯಾತ ಗೀತ ರಚನಕಾರ ಕೆ. ಕಲ್ಯಾಣ್ ಅವರು ಗಾಯಕಿ ಎಸ್. ಜಾನಕಿ ಅವರೊಂದಿಗಿನ ತಮ್ಮ ತಾಯಿ-ಮಗನ ಸಂಬಂಧವನ್ನು ನೆನೆದಿದ್ದಾರೆ. ಜಾನಕಿ ಅಮ್ಮನ ಸರಳತೆ, ವೃತ್ತಿಪರತೆ ಮತ್ತು ತಮ್ಮ ಮನೆಗೆ ಬಂದು ಕೈತುತ್ತು ನೀಡಿದ ಕ್ಷಣಗಳನ್ನು ಅವರು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx93rgpm22eb8rqmrykqscz0,imgname-s-janaki-5-1783791108820.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಕೆ. ಕಲ್ಯಾಣ್&zwnj;, ಖ್ಯಾತ ಗೀತ ರಚನಕಾರ/ಸಂಗೀತ ನಿರ್ದೇಶಕ&lt;/strong&gt;&lt;/p&gt;&lt;p&gt;ಜಾನಕಿ ಅಮ್ಮ(Janaki Amma) ಇಲ್ಲ ಅನ್ನುವ ಶಬ್ದ ನಮ್ಮ ಕಿವಿಗೆ ಭರಿಸಲಿಕ್ಕಾಗಲ್ಲ. ಅವರು ಇದ್ದಾರೆ ಅಂದುಕೊಂಡರಷ್ಟೇ ನಮಗೆ ಬದುಕು. ನನಗೆ ಸ್ವಂತ ತಾಯಿಗಿಂತ ಹೆಚ್ಚಾಗಿದ್ದವರು ಅವರು ಅನ್ನುವುದು ಅತಿಶಯೋಕ್ತಿ ಖಂಡಿತಾ ಅಲ್ಲ. ಅದುವೇ ವಾಸ್ತವ.&lt;/p&gt;&lt;p&gt;ಜಾನಕಿ ಅಮ್ಮ ತುಂಬಾ ಸಲ ನಮ್ಮ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಎಲ್ಲರ ಜೊತೆಗೆ ಸಮಯ ಕಳೆದಿದ್ದಾರೆ. ನಾವೂ ಅವರ ಮನೆಗೆ ಸಾಕಷ್ಟು ಬಾರಿ ಹೋಗಿದ್ದೆವು. ಅವರು ಖುಷಿಯಿಂದ ನಾನು ಬರೆದ ಹಾಡುಗಳನ್ನು ಹಾಡಿದ್ದಾರೆ. ನಾನು ಸಂಗೀತ ನಿರ್ದೇಶನ ಮಾಡಿರುವ ಹಾಡನ್ನೂ ಹಾಡಿದ್ದಾರೆ.&lt;/p&gt;&lt;p&gt;ಇದೆಲ್ಲದರ ಆಚೆ ಆಗಾಗ ನನ್ನ ಜೊತೆಗೆ ಫೋನ್&zwnj;ನಲ್ಲಿ ಮಾತನಾಡುತ್ತಿದ್ದರು. ಏನಾದರೂ ಅಂದುಕೊಂಡಾಗ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಮಾತುಕತೆಗೆ ಶಿಖರಸದೃಶವಾದ ಅವರ ಸಾಧನೆ ಎಲ್ಲೂ ಅಡ್ಡಿಯಾಗುತ್ತಿರಲಿಲ್ಲ. ಅಷ್ಟು ಸಹಜ, ಆತ್ಮೀಯ ಮಾತುಕತೆ ನಮ್ಮದು.&lt;/p&gt;&lt;p&gt;ಚಿತ್ರರಂಗದಲ್ಲಿ ಯಾರನ್ನಾದರೂ ಬಾಯ್ತುಂಬ ಅಮ್ಮಾ ಅಂತ ಕರೆಯೋದಾದರೆ ಅವರನ್ನು ಕರೆಯುತ್ತೇನೆ. ಅವರೂ ನನ್ನನ್ನು &lsquo;ಕಂದಾ&rsquo; ಅಂತಲೇ ಕರೆದು ಮಾತನಾಡುತ್ತಿದ್ದರು. ಮಗು ಥರ ಮನಸ್ಸಿದ್ದ ತಾಯಿ ಅವರು. ಅವರ ಹಾಡುಗಳ ಬಗ್ಗೆ ಜಗತ್ತೇ ಮಾತನಾಡುತ್ತೆ. ಜೊತೆಗೆ ಅವರ ಹಾಡುವ ಮೊದಲಿನ ಸಿದ್ಧತೆ, ಭಾಷಾ ಶುದ್ಧತೆ, ಕೆಲಸಕ್ಕಾಗಿನ ಬದ್ಧತೆಗೆ ಅವರೇ ಸಾಟಿ. ಅದೆಷ್ಟೋ ಸಲ ಕನ್ನಡ ಹಾಡಿನ ಸಾಹಿತ್ಯವನ್ನು ಅವರಿಗೆ ಡಿಕ್ಟೇಟ್&zwnj; ಮಾಡಿದ್ದೇನೆ. ಅವರು ಅದನ್ನು ತೆಲುಗಿನಲ್ಲಿ ಬರೆದುಕೊಳ್ಳುತ್ತಿದ್ದರು. ಎಲ್ಲಾದರೂ ಒಂದು ಪದದ ಉಚ್ಚಾರಣೆ ತಪ್ಪಾದರೆ ಅದು ಸರಿ ಬರುವತನಕ ಹಾಡುತ್ತಲೇ ಇದ್ದರು. ಎಷ್ಟು ಸಮಯವಾದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಂಥಾ ಬದ್ಧತೆ ಅವರದ್ದು. ಮನಸೋ ಪರಮಶುದ್ಧ.&lt;/p&gt;&lt;p&gt;ಹೈದರಾಬಾದ್&zwnj;ನಲ್ಲಿದ್ದ ಅವರ ಮನೆಗೆ ಮೊದಲ ಬಾರಿ ಹೋದ ಸಂದರ್ಭ. ಎಂದಿನ ಪ್ರೀತಿಯಿಂದ ಮನೆ ಪೂರ್ತಿ ಕರೆದುಕೊಂಡು ಹೋಗಿ ತೋರಿಸಿದರು. ಮನೆಗೆ ಕಾಲಿಟ್ಟಾಕ್ಷಣ ಮೊದಲು ಕಣ್ಣಿಗೆ ಬಿದ್ದದ್ದು ಕಲೈಮಾಮಣಿ ಪ್ರಶಸ್ತಿ. ಆಮೇಲೆ ಒಂದು ಭಾಷೆಗೆ ಸಿಕ್ಕ 16 ರಾಜ್ಯ ಪ್ರಶಸ್ತಿಗಳು, ಅಲ್ಲಿಂದ ಮುಂದೆ ಹೋದರೆ ಮತ್ಯಾವುದೋ ಭಾಷೆಯ 11 ರಾಜ್ಯ ಪ್ರಶಸ್ತಿಗಳು, ಮುಂದೆ ಮತ್ತೊಂದು ಭಾಷೆಯ 6 ರಾಜ್ಯ ಪ್ರಶಸ್ತಿಗಳು.. ಹೀಗೆ ಒಟ್ಟಾಗಿ ಲೆಕ್ಕ ಮಾಡಿದರೆ ಮೂವತ್ತೋ, ನಲವತ್ತೋ ರಾಜ್ಯ ಪ್ರಶಸ್ತಿಗಳು. ಆದರೆ ಕನ್ನಡದ ಪ್ರಶಸ್ತಿಗಳ್ಯಾವುವೂ ಕಾಣಲಿಲ್ಲ. ಬಹುಶಃ ಕನ್ನಡಿಗರು ಅವರಿಗೆ ಕೊಟ್ಟ ಪ್ರೀತಿ, ಅವರು ಕನ್ನಡಿಗರಿಗೆ ಕೊಟ್ಟ ಪ್ರೀತಿ ಇದೇ ಬಹುದೊಡ್ಡ ಪ್ರಶಸ್ತಿಯಾಗಿತ್ತು ಅನಿಸುತ್ತದೆ.&lt;/p&gt;&lt;p&gt;ಜಾನಕಿ ಅಮ್ಮ ಅಂದರೆ ಪ್ರೀತಿ. ಅವರ ಧ್ವನಿ ಕೇಳುವಾಗಲೇ ಮನಸ್ಸಿಗೆ ಹಿತ, ಆಹ್ಲಾದ, ನೆಮ್ಮದಿ. ಅವರ ಹತ್ರ ಮಾತನಾಡಿದರೆ ಮನಸ್ಸು ಯಾವ ಕಷ್ಟದ ಸ್ಥಿತಿಯಲ್ಲಿದ್ದರೂ ಹಗುರಾಗುತ್ತಿತ್ತು. ನೆಮ್ಮದಿ ತುಂಬಿಕೊಳ್ಳುತ್ತಿತ್ತು. ನಮ್ಮೆಲ್ಲ ವಿಚಾರಗಳನ್ನೂ ಅವರ ಬಳಿ ಮುಕ್ತವಾಗಿ ಹಂಚಿಕೊಳ್ಳಬಹುದಿತ್ತು, ಅವರ ಜೊತೆ ಮಾತನಾಡಿ ಎಲ್ಲವನ್ನು ಮರೆತು ಹಗುರಾಗಬಹುದಿತ್ತು. ಅವರ ವ್ಯಕ್ತಿತ್ವವೇ ಅಷ್ಟು ವಾತ್ಸಲ್ಯಪೂರಿತವಾಗಿತ್ತು.&lt;/p&gt;&lt;p&gt;ಜಾನಕಿ ಅಮ್ಮ ನಮ್ಮ ಮನೆಗೆ ಬಂದಿದ್ದಾಗ ನನಗೆ ಕೈತುತ್ತು ಕೊಟ್ಟಿದ್ದರು. ಆ ಹೊತ್ತು ಮನೆಯರೆಲ್ಲ ಜೊತೆಯಾಗಿ ಊಟಕ್ಕೆ ಕೂತಿದ್ದೆವು. ಅವರು ನನ್ನ ಪಕ್ಕ ಕುಳಿತಿದ್ದರು. ಆ ಹೊತ್ತು ನನಗೆ ಕೈತುತ್ತು ಕೊಟ್ಟರು. ನಾನೂ ಅವರಿಗೆ ಕೈತುತ್ತು ಕೊಟ್ಟಿದ್ದೆ. ನಮ್ಮ ಮನೆಯ ಅಷ್ಟೂ ಜನ ಅವರ ಜೊತೆಗೆ ಕೂತು ಊಟ ಮಾಡುತ್ತಾ, ಅವರ ಹಾಡುಗಳ ಬಗ್ಗೆ ಮಾತನಾಡುತ್ತಾ, ಸಿನಿಮಾಗಳ ಬಗ್ಗೆ ಚರ್ಚೆ ಮಾಡುತ್ತಾ ಬೇರೆಯದೇ ಲೋಕದಲ್ಲಿದ್ದೆವು. ಆಹ್, ಆ ಜಗತ್ತೇ ಬೇರೆ.&lt;/p&gt;&lt;p&gt;ಸರಳತೆಗೆ ಜಾನಕಿ ಅಮ್ಮ ಇನ್ನೊಂದು ಹೆಸರು. ಅವರಿಗೆ ತಮ್ಮ ಸಾಧನೆಯ ಬಗ್ಗೆ ಹಿರಿತನದ ಬಗ್ಗೆ ಒಂಚೂರೂ ತಿಳಿದೇ ಇಲ್ಲ ಅನ್ನುವ ಹಾಗಿರುತ್ತಿದ್ದರು. ತನಗೆ ಏನೂ ಗೊತ್ತಿಲ್ಲ ಅನ್ನುತ್ತಿದ್ದರು. ನಾವು ಹೇಳಿದ್ದೆಲ್ಲವನ್ನೂ ಶ್ರದ್ಧೆಯಿಂದ ಕೇಳುತ್ತಿದ್ದರು.&lt;/p&gt;&lt;p&gt;ಎಲ್ಲಿ ಪ್ರೀತಿ ವಾತ್ಸಲ್ಯ ಇರುತ್ತದೋ ಅಲ್ಲಿ ಜಾನಕಿಯಮ್ಮ ಇರುತ್ತಾರೆ. ಅವರು ಇರುವ ಕಡೆ ಪ್ರೀತಿ, ವಾತ್ಸಲ್ಯ ಇರುತ್ತದೆ. ಇವತ್ತು ಅವರು ಕಾಲವಾಗಿರುವ ಸುದ್ದಿ ನಂಬಲಾಗುತ್ತಿಲ್ಲ. ದುಃಖವೂ ಗೊತ್ತಾಗುವುದಿಲ್ಲ. ನಮ್ಮ ನಡುವೆ ಅಂಥಾ ದೊಡ್ಡವರು ಇರಬೇಕು. ಇದ್ದರೆ ನಮಗೆ ಬದುಕಲು ಅದೇ ದೊಡ್ಡ ಚೈತನ್ಯ.&lt;/p&gt;&lt;p&gt;ಜಾನಕಿ ಅಮ್ಮ ಸಂಗೀತ ಕ್ಷೇತ್ರದ ಸರಸ್ವತಿ. ಸರಸ್ವತಿಯೇ ಕಣ್ಮಚ್ಚಿದರೆ ಸರಿಗಮ ಕೇಳುತ್ತಾ? ಆ ಥರ ಆಗಿದೆ ನನ್ನ ಕಥೆ. ಗಾಬರಿ ಆಗುತ್ತದೆ, ಬೇಜಾರಾಗುತ್ತದೆ, ನೋವಾಗುತ್ತೆ. ಮರುಕ್ಷಣ ಅವರ ಮುಖ ಕಣ್ಣೆದುರು ಬಂದು ನಿಲ್ಲುತ್ತದೆ. ಅವರು ಯಾರನ್ನೂ ನೋಯಿಸಿದವರಲ್ಲ, ಯಾರನ್ನೂ ಬೇಜಾರು ಮಾಡಿದವರಲ್ಲ, ಅಷ್ಟು ಮುಗ್ಧತೆ, ಮಗುವಿನಂಥ ಶುದ್ಧ ಮನಸ್ಸು ಅವರದ್ದು. ಜಾನಕಿ ಅಮ್ಮನಿಗೆ ಸಮನಾಗಿ ಯಾರೂ ಕಾಣಲ್ಲ. ಅವರು ಹೆತ್ತಮ್ಮನಂತೆಯೇ ಇದ್ದರು. ನೆನೆಸಿಕೊಂಡರೆ ಕಣ್ಣೀರಾಗುತ್ತದೆ.&lt;/p&gt;&lt;p&gt;ನನಗೆ ಜನ್ಮಕೊಟ್ಟ ತಾಯಿ ಈಗ ನಮ್ಮೊಡನೆ ಇಲ್ಲ. ಅವರ ಹೋದಾಗ ಎಂಥಾ ಆಘಾತ, ನೋವು ಆಗಿತ್ತೂ, ಈಗಲೂ ಹಾಗೇ ಆಗುತ್ತಿದೆ. ನಮ್ಮ ಆಯುಷ್ಯವನ್ನಾದರೂ ಕೊಟ್ಟು ಅವರನ್ನು ಉಳಿಸಿಕೊಳ್ಳಬೇಕಿತ್ತು, ಅವರಿಲ್ಲದೆ ನಾವಿಲ್ಲ.. ಅಂತೆಲ್ಲ ನಾವು ಈ ಕ್ಷಣದಲ್ಲಿ ಮಾತನಾಡಬಹುದು. ಆದರೆ ಅವು ನಮ್ಮ ಆಂತರ್ಯದ ನುಡಿಗಳೇ ಆದರೂ ವಿಧಿಲೀಲೆ ಮುಂದೆ ನಮ್ಮ ಈ ಮಾತು ಪ್ರಯೋಜನಕ್ಕೆ ಬರುವುದಿಲ್ಲ. ಏನು ಮಾತನಾಡಲೂ ತೋಚುವುದಿಲ್ಲ.&lt;/p&gt;&lt;p&gt;ನಮ್ಮ ಜೊತೆಗೆ ಬಹಳ ಭಾವನಾತ್ಮಕವಾಗಿ ಇರುತ್ತಿದ್ದರು. ಕೆಲವು ಸಲ ಮನಸ್ಸಲ್ಲಿ ಏನೋ ಇದ್ದಾಗ ನನ್ನ ಬಳಿ ಬಂದು ಗಟ್ಟಿಯಾಗಿ ಕೈ ಹಿಡಿದುಕೊಂಡು ಕೂತು ಬಿಡುತ್ತಿದ್ದರು. ಎಷ್ಟೋ ಹೊತ್ತು ಹಾಗೇ ಕೂತಿರುತ್ತಿದ್ದರು. ನಮ್ಮ ನಡುವೆ ಮೌನ ಸಂವಹನ ನಡೆಯುತ್ತಿತ್ತು. ತಾಯಿಯೊಬ್ಬಳು ಮನಸ್ಸು ತುಂಬಿದಾಗ ಬಂದು ಮಗನ ಕೈಯನ್ನು ಸುಮ್ಮನೆ ಹಿಡಿದುಕೊಳ್ಳುವ ರೀತಿಯಲ್ಲಿ ಅವರ ಆ ನಡೆ ಇರುತ್ತಿತ್ತು. ಅದನ್ನೆಲ್ಲ ನೆನೆಸಿಕೊಂಡರೆ ಇದೆಲ್ಲ ನಿಜವಾ ಕನಸಾ ಇದೆಲ್ಲ ಏನೋ ಮಾಯೆ ಅಂತ ಅನಿಸುತ್ತದೆ.&lt;/p&gt;&lt;p&gt;ಎದೆಗೆ ಭಾರವಾದ ಕ್ಷಣವಿದು. ಅವರಿಗೆ ಶ್ರದ್ಧಾಂಜಲಿ ಹೇಳುವುದು ಇತ್ಯಾದಿಗಳೆಲ್ಲ ನನ್ನಂಥವರಿಗೆ ಊಹಿಸಲೂ ಸಾಧ್ಯವಾಗದ ಕ್ಷಣ. ಅವರ ಪಾದಗಳಲ್ಲಿ ನನ್ನ ಶಿರವನ್ನಿಟ್ಟು, ಪಾದಗಳನ್ನು ಕಣ್ಣಿಗೊತ್ತಿಕೊಂಡು ಅವರ ಆಶೀರ್ವಾದ ಬೇಡುವುದೊಂದೇ ಉಳಿದಿರುವುದು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/legendary-playback-singer-s-janaki-passes-away-at-88-column-by-k-kalyan-rav/articleshow-6gslhul"/>
        </item>
        <item>
            <title><![CDATA[ಜಾನಕಿಯಂತಹ ಗಾಯಕಿ ಬೇರೊಬ್ಬರು ಇಲ್ಲ.. ಅವರ ಹಾಡು ಕೇಳುವ ಕಾಲದಲ್ಲಿ ನಾವಿದ್ದೇವು ಅನ್ನುವುದೇ ಅದೃಷ್ಟ: - ಅನಂತನಾಗ್]]></title>
            <link>https://kannada.asianetnews.com/state/veteran-actor-anant-nag-has-reminisced-about-playback-singer-s-janaki-amma-rav/articleshow-awopr5y</link>
            <guid isPermaLink="true">https://kannada.asianetnews.com/state/veteran-actor-anant-nag-has-reminisced-about-playback-singer-s-janaki-amma-rav/articleshow-awopr5y</guid>
            <pubDate>Sun, 12 Jul 2026 07:42:56 +0530</pubDate>
            <description><![CDATA[&lt;p&gt;ಹಿರಿಯ ನಟ ಅನಂತನಾಗ್ ಅವರು ಗಾಯಕಿ ಎಸ್. ಜಾನಕಿ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. 'ಬಯಲುದಾರಿ' ಚಿತ್ರದಿಂದ ಆರಂಭವಾದ ತಮ್ಮ ಪಯಣ, ತಮ್ಮ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಜಾನಕಿ ಹಾಡಿರುವುದನ್ನು ನೆನೆದಿದ್ದಾರೆ. ಅವರ ದೈವಿಕ ವ್ಯಕ್ತಿತ್ವ, ಮಂತ್ರಮುಗ್ಧಗೊಳಿಸುವ ಗಾಯನ ಕೊಂಡಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx95bvrb9z329a3h91pcvyer,imgname-s-janaki-1783792791307.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅನಂತನಾಗ್&zwnj;, ಹಿರಿಯ ನಟ&lt;/strong&gt;&lt;/p&gt;&lt;p&gt;ನಾನು ಅ&zwj;ವರನ್ನು ಮೊದಲು ಭೇಟಿ ಮಾಡಿದ್ದು &lsquo;ಬಯಲುದಾರಿ&rsquo; ಚಿತ್ರದ ಸಂದರ್ಭದಲ್ಲಿ. ಎಂಥಾ ಗಾಯಕಿ, ಎಂಥಾ ವ್ಯಕ್ತಿತ್ವ. ಅವರು ನನ್ನ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡಿದ್ದಾರೆ. ಅದರಲ್ಲಿ ಬಹುತೇಕ ಹಾಡುಗಳು ಸೂಪರ್&zwnj;ಹಿಟ್&zwnj; ಆಗಿವೆ. ಅವರನ್ನು ನೋಡುವ, ಭೇಟಿ ಮಾಡುವ, ಅವರ ಹಾಡು ಕೇಳುವ ಕಾಲದಲ್ಲಿ ನಾವಿದ್ದೆವು ಅನ್ನುವುದೇ ನಮ್ಮ ಅದೃಷ್ಟ. ಅವರ ಹಾಡುಗಳ ಜೊತೆ ಬದುಕುವ ಅವಕಾಶ ಸಿಕ್ಕಿದ್ದೇ ನಮ್ಮ ಸಾರ್ಥಕತೆ.&lt;/p&gt;&lt;h2&gt;ಜಾನಕಿಯಂತಹ ಗಾಯಕಿ ಬೇರೊಬ್ಬರು ಇಲ್ಲ&lt;/h2&gt;&lt;p&gt;ಅಂಥಾ ಅದ್ಭುತ ಗಾಯಕಿ ಅವರು. ಅವರಂಥಾ ಗಾಯಕಿಯನ್ನು ನಾನು ಬೇರೆ ಕೇಳಿಲ್ಲ, ನೋಡಿಲ್ಲ. ಗೀತಪ್ರಿಯ ಬರೆದ, ರಾಜನ್ ನಾಗೇಂದ್ರ ಸಂಗೀತ ಸಂಯೋಜಿಸಿದ್ದ &lsquo;ಹೂವಿಂದ ಹೂವಿಗೆ ಹಾರುವ ದುಂಬಿ&rsquo; ಎಂಬ ಹಾಡು ನನ್ನ ಅತ್ಯಂತ ಇಷ್ಟ ಗೀತೆಗಳಲ್ಲಿ ಒಂದಾಗಿತ್ತು. &lsquo;ಮುದುಡಿದ ತಾವರೆ ಅರಳಿದೆ&rsquo; ಹಾಡನ್ನು ಎಷ್ಟು ಸೊಗಸಾಗಿ ಹಾಡಿದ್ದರು. ಅವರಿಗೆ ಯಾವುದೇ ಹಾಡು ಕೊಟ್ಟರೂ ಅದನ್ನು ಮಂತ್ರಮುಗ್ಧಗೊಳಿಸುವಂತೆ ಹಾಡುವ ಕಲೆ ಅವರಿಗಿತ್ತು. ಅವರನ್ನು ಯಾರ ಜೊತೆಗೂ ಹೋಲಿಸುವುದು ಸಾಧ್ಯವೇ ಇರಲಿಲ್ಲ.&lt;/p&gt;&lt;h3&gt;ಎಸ್&zwnj; ಜಾನಕಿ ಅವರದ್ದು ದೈವಿಕ ವ್ಯಕ್ತಿತ್ವ&lt;/h3&gt;&lt;p&gt;ಅವರು ಹಾಡುವಾಗ ಸುಮ್ಮನೆ ಕೇಳುತ್ತಾ, ಎವೆಯಿಕ್ಕದೆ ನೋಡುತ್ತಾ ನಿಂತುಕೊಳ್ಳಬೇಕು ಅನ್ನಿಸುತ್ತದೆ. ಹಾಡು ಮುಗಿದಾಗ ಮುಗಿದೇಹೋಯಿತು ಎಂದು ಬೇಸರವಾಗುವಂತಹ ಹಾಡುಗಾರಿಕೆ. ಇನ್ನು ಎಂಥಾ ಅದ್ಭುತ ವ್ಯಕ್ತಿತ್ವ ಅವರದು. ಬಿಳಿ ಸೀರೆ, ದೊಡ್ಡ ಕುಂಕುಮ, ದೈವಿಕ ವ್ಯಕ್ತಿತ್ವ. ಅಂಥಾ ಪ್ರತಿಭೆಗೆ ಕಾಲು ಮುಟ್ಟಿ ನಮಸ್ಕರಿಸುವ ಒಂದು ದಿವ್ಯ ಅವಕಾಶ ನನಗೆ ಸಿಕ್ಕಿತ್ತು ಅನ್ನುವುದೇ ನನ್ನ ಪುಣ್ಯ.&lt;/p&gt;&lt;p&gt;ಯಾರಿಗೇ ಆದರೂ ಕಾಲು ಮುಟ್ಟಿ ನಮಸ್ಕರಿಸಬೇಕು ಅಂತನ್ನಿಸುವ ವ್ಯಕ್ತಿತ್ವ ಅವರದು. ಇತ್ತೀಚೆಗೆ ಅವರ ಆರೋಗ್ಯ ಸರಿ ಇಲ್ಲದೇ ಇರುವ ಮಾಹಿತಿ ನನ್ನ ಕಿವಿಗೆ ಬಿದ್ದಿತ್ತು. ಆದರೆ ಅಂಥಾ ಆಲೋಚನೆಯೇ ಬೇಡವೆಂದುಕೊಳ್ಳುತ್ತಿದ್ದೆ.&lt;/p&gt;&lt;p&gt;ಅಂತಿಮವಾಗಿ ಅವರು ನಮ್ಮನ್ನು ಅಗಲಿದ್ದಾರೆ. ಅವರ ಹಾಡು ಮುಗಿದ ಕ್ಷಣದ ನೀರವ ಮೌನವೊಂದು ಕಾಡುತ್ತಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/veteran-actor-anant-nag-has-reminisced-about-playback-singer-s-janaki-amma-rav/articleshow-awopr5y"/>
        </item>
        <item>
            <title><![CDATA[1400 ರೈತರಿಗೆ ಹಸು ಖರೀದಿಸಲು 2 ಲಕ್ಷ ರು. ಸಾಲ; ಹಾಲು ಒಕ್ಕೂಟದಿಂದ ಬ್ಯಾಂಕ್‌ಗೆ ಮನವಿ]]></title>
            <link>https://kannada.asianetnews.com/karnataka-districts/1400-farmers-to-get-rs-2-lakh-loan-to-buy-cows-tumakuru-milk-union-appeals-to-canara-bank-mrq/articleshow-d3vcbkx</link>
            <guid isPermaLink="true">https://kannada.asianetnews.com/karnataka-districts/1400-farmers-to-get-rs-2-lakh-loan-to-buy-cows-tumakuru-milk-union-appeals-to-canara-bank-mrq/articleshow-d3vcbkx</guid>
            <pubDate>Sun, 12 Jul 2026 07:42:40 +0530</pubDate>
            <description><![CDATA[&lt;p&gt;ಸುಮಾರು 1400 ಹೈನುಗಾರರಿಗೆ ಹಸುಗಳನ್ನು ಖರೀದಿಸಲು ತಲಾ 2 ಲಕ್ಷ ರು. ಸಾಲ ನೀಡುವಂತೆ ತುಮಕೂರು ಹಾಲು ಒಕ್ಕೂಟವು ಕೆನರಾ ಬ್ಯಾಂಕ್&zwnj;ಗೆ ಮನವಿ ಮಾಡಿದೆ. ಈ ಸಾಲವನ್ನು ಸದ್ಬಳಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಮರುಪಾವತಿ ಮಾಡುವುದರ ಮಹತ್ವವನ್ನು ತಿಳಿಸಲಾಗಿದ್ದು, ಇದರಿಂದ ರೈತರ ಅಭಿವೃದ್ಧಿ ಸಾಧ್ಯ ಎಂದು ಒತ್ತಿಹೇಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxa17k4da2j9rbnk3skb6avg,imgname-shira--1--1783822011533.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು:&lt;/strong&gt; ಶಿರಾನೂರು ಹೈನುಗಾರರಿಗೆ ಹಸುಗಳನ್ನು ಖರೀದಿಸಲು ಸುಮಾರು 14 ರೈತರಿಗೆ ಕನಿಷ್ಠ 2 ಲಕ್ಷ ರು. ಸಾಲ ನೀಡುವಂತೆ ಕೆನರಾ ಬ್ಯಾಂಕ್&zwnj;ಗೆ ಬೇಡಿಕೆ ಇಡಲಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.&lt;/p&gt;&lt;p&gt;ಅವರು ನಗರದ ನಂದಿನಿ ಕ್ಷೀರ ಭವನದಲ್ಲಿ ತುಮಕೂರು ಹಾಲು ಒಕ್ಕೂಟ, ಕೆನರಾ ಬ್ಯಾಂಕ್ ಜೊತೆ ರೈತರಿಗೆ ಸಾಲ ವಿತರಣೆಗೆ ರೈತ ಸಂಪರ್ಕ ಸಭೆ ಉದ್ಘಾಟಿಸಿದರು. ಪ್ರಸ್ತುತ ಬ್ಯಾಂಕ್ ಪ್ರತಿ ಸಂಘಕ್ಕೆ 10 ರಿಂದ 15 ಲಕ್ಷ ರು.ಗಳ ಸಾಲವನ್ನು ನೀಡಲು ತಯಾರಿವೆ. ಇಂದು ಉತ್ತಮ ಹಸುವಿನ ಬೆಲೆ 70 ಸಾವಿರದಿಂದ 1 ಲಕ್ಷದವರೆಗೆ ಇರುತ್ತದೆ. ಈ ಸಾಲದ ಮೊತ್ತದಲ್ಲಿ ಎರಡು ಹಸುಗಳನ್ನು ಖರೀದಿಸಲು ರೈತರಿಗೆ ಅನುಕೂಲ ಮಾಡಲು ಈ ಕಾರ್ಯಕ್ರಮ ರೂಪಿಸಲಾಗಿದೆ.&amp;nbsp;&lt;/p&gt;&lt;h2&gt;&lt;strong&gt;ಪ್ರಾಮಾಣಿಕ ಮರುಪಾವತಿ&lt;/strong&gt;&lt;/h2&gt;&lt;p&gt;ಕೆಲವು ರೈತರು ಸಾಲ ಮಂಜೂರಾದ ತಕ್ಷಣ, ಹೊಸ ಹಸು ಖರೀದಿಸುವ ಬದಲು ಮನೆಯಲ್ಲಿರುವ ಹಳೆಯ ಹಸುಗಳನ್ನೇ ತೋರಿಸಿ ವಿಮೆ ಮಾಡಿಸಿ, ಬಂದ ಹಣವನ್ನು ಮಗಳ ಮದುವೆ, ಶಿಕ್ಷಣ ಅಥವಾ ಇತರ ವೈಯಕ್ತಿಕ ಖರ್ಚುಗಳಿಗೆ ಬಳಸುವ ಪ್ರವೃತ್ತಿ ಇದೆ. ಇದು ಅತ್ಯಂತ ತಪ್ಪು. ಇದರಿಂದ ಸಾಲ ತೀರಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹತ್ತು ಜನ ಸೇರಿ ಈ ರೀತಿ ಮಾಡಿದರೆ, ಸೊಸೈಟಿಯ ಮೇಲಿನ ನಂಬಿಕೆ ಕಳೆದುಹೋಗಿ ಭವಿಷ್ಯದಲ್ಲಿ ನಿಜವಾದ ಅರ್ಹ ರೈತನಿಗೂ ಸಾಲ ಸಿಗದಂತಾಗುತ್ತದೆ. ಈ ಬ್ಯಾಂಕ್ ಸಾಲದ ಸದುಪಯೋಗ ಹಾಗೂ ಪ್ರಾಮಾಣಿಕ ಮರುಪಾವತಿಯಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯವಾಗಿದೆ.&lt;/p&gt;&lt;p&gt;ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಗಂಗೇಶ್ ಗುಂಜನ್ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ), ಹೈನುಗಾರಿಕೆ, ಹಾಗೂ ಸ್ವಸಹಾಯ ಸಂಘಗಳ ಮೂಲಕ ವಿವಿಧ ಕೃಷಿ ಸಾಲ ಯೋಜನೆಗಳನ್ನು ಜಾಮೀನು ರಹಿತವಾಗಿ ಬ್ಯಾಂಕ್ ಒದಗಿಸುತ್ತಿದೆ ಎಂದರು.&lt;/p&gt;&lt;p&gt;ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗಿರೀಶ್ ಮಾತನಾಡಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವಲಯ ಮ್ಯಾನೇಜರ್ ಅಭಿನವ್, ಸೀನಿಯರ್ ಮ್ಯಾನೇಜರ್ ರಮಾನಾಥ್ ರಾಮನ್, ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಹರೀಶ್ ಕುಮಾರ್, ಗಿರೀಶ್, ಬಾಲಾಜಿ, ಪುಷ್ಪಲಕ್ಷ್ಮೀ, ಸುಬೇಂದ್ರ ,ಪ್ರವೀಣ್, ಬಾಬಾ ಫಕೃದ್ಧಿನ್ ಪಿ. ಎಂ., ಹನುಮಂತರಾಯ ಇತರರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನವೀಕರಣಗೊಂಡ ರಾಜ್ಯದ 4 ರೈಲು ನಿಲ್ದಾಣಗಳು ಜುಲೈ 17ರಂದು ಲೋಕಾರ್ಪಣೆ; ಅತ್ಯಾಧುನಿಕ ಸೌಲಭ್ಯ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/1400-farmers-to-get-rs-2-lakh-loan-to-buy-cows-tumakuru-milk-union-appeals-to-canara-bank-mrq/articleshow-d3vcbkx"/>
        </item>
        <item>
            <title><![CDATA[ನವೀಕರಣಗೊಂಡ ರಾಜ್ಯದ 4 ರೈಲು ನಿಲ್ದಾಣಗಳು ಜುಲೈ 17ರಂದು ಲೋಕಾರ್ಪಣೆ; ಅತ್ಯಾಧುನಿಕ ಸೌಲಭ್ಯ]]></title>
            <link>https://kannada.asianetnews.com/karnataka-districts/4-renovated-indian-railway-stations-in-the-state-to-be-inaugurated-on-july-17-mrq/articleshow-tdrsz0h</link>
            <guid isPermaLink="true">https://kannada.asianetnews.com/karnataka-districts/4-renovated-indian-railway-stations-in-the-state-to-be-inaugurated-on-july-17-mrq/articleshow-tdrsz0h</guid>
            <pubDate>Sun, 12 Jul 2026 07:30:46 +0530</pubDate>
            <description><![CDATA[ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡ ಕೊಪ್ಪಳ, ಬಾದಾಮಿ, ಅಳ್ನಾವರ ಮತ್ತು ಬಂಟ್ವಾಳ ರೈಲು ನಿಲ್ದಾಣಗಳು ಜುಲೈ 17 ರಂದು ಲೋಕಾರ್ಪಣೆಗೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಳ್ಳಲಿರುವ ಈ ನಿಲ್ದಾಣಗಳು, ಎಸ್ಕಲೇಟರ್, ಲಿಫ್ಟ್, ಮತ್ತು ವಿಸ್ತರಿತ ಪ್ಲಾಟ್&zwnj;ಫಾರ್ಮ್&zwnj;ಗಳಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxa0mjjxzy40ytb421gmz1h9,imgname-badami-1783821388381.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಹೇಶ ಅರಳಿ&lt;/strong&gt;&lt;/p&gt;&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ: ಅ&lt;/strong&gt;ಮೃತ ಭಾರತ ಯೋಜನೆಯಡಿ ನವೀಕರಣಗೊಂಡಿರುವ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ರಾಜ್ಯದ ಕೊಪ್ಪಳ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರೈಲ್ವೆ ನಿಲ್ದಾಣಗಳು ಜು. 17ರಂದು ಲೋಕಾರ್ಪಣೆಯಾಗಲಿವೆ.&lt;/p&gt;&lt;p&gt;ಕೊಪ್ಪಳದ ರೈಲ್ವೆ ನಿಲ್ದಾಣವನ್ನು ₹21.1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. 580 ಮೀಟರ್ ಉದ್ದದ ಪ್ಲಾಟಫಾರ್ಮ್ ನಿರ್ಮಿಸಲಾಗಿದೆ. ಮುಖ್ಯವಾಗಿ ಎಸ್ಕಲೇಟರ್, ಲಿಫ್ಟ್ ಸೌಕರ್ಯ ಕಲ್ಪಿಸಲಾಗಿದ್ದು, ವಯಸ್ಸಾದವರು, ಅಂಗವಿಕಲರಿಗೆ ಅನುಕೂಲವಾಗಲಿದೆ. ಒಂದು ಪ್ಲಾಟಫಾರ್ಮನಿಂದ ಇನ್ನೊಂದು ಬದಿಗೆ ಹೋಗಲು ಫುಟ್ ಒವರ್ ಬ್ರಿಡ್ಜ್ ಅನ್ನು ನಿರ್ಮಿಸಲಾಗಿದೆ. ಅಲ್ಲದೆ ಪ್ರಯಾಣಿಕರ ವಿಶ್ರಾಂತಿ ಗೃಹಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿ ಸುಸಜ್ಜಿತಗೊಳಿಸಲಾಗಿದೆ.&lt;/p&gt;&lt;h2&gt;&lt;strong&gt;ಬಾದಾಮಿ ನಿಲ್ದಾಣ&lt;/strong&gt;&lt;/h2&gt;&lt;p&gt;ಬಾಗಲಕೋಟೆ ಜಿಲ್ಲೆಯ ಬಾದಾಮಿ ರೈಲ್ವೆ ನಿಲ್ದಾಣವನ್ನು ₹15.1 ಕೋಟಿ ವೆಚ್ಚದಲ್ಲಿ ಮರುನಿರ್ಮಿಸಲಾಗಿದೆ. ವಿಶಾಲವಾದ ಪ್ಲಾಟಫಾರ್ಮ್ ನಿರ್ಮಿಸಲಾಗಿದ್ದು, ಪ್ರವಾಸಿ ತಾಣವಾದ ಬಾದಾಮಿ ಪಟ್ಟಣವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಇದರ ಪ್ರವೇಶ ದ್ವಾರವನ್ನು ದೇಗುಲ ಮಾದರಿಯಲ್ಲಿ ಕಟ್ಟಲಾಗಿದ್ದು, ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಮಳೆನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. 2 ಲಿಫ್ಟ್ ಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಸ್ಕಲೇಟರ್ ಸೌಲಭ್ಯ ಕಲ್ಪಿಸಲಾಗುವುದು ಎಂದು ನೈಋತ್ಯ ರೈಲ್ವೆಯ ಬಾದಾಮಿ ಸೆಕ್ಷನ್ ಎಂಜಿನಿಯರ್ ದಿನೇಶಮಣಿ ತ್ರಿಪಾಠಿ ತಿಳಿಸಿದರು.&lt;/p&gt;&lt;h3&gt;&lt;strong&gt;ಅಳ್ನಾವರ ರೈಲ್ವೆ ನಿಲ್ದಾಣ&lt;/strong&gt;&lt;/h3&gt;&lt;p&gt;ಧಾರವಾಡ ಜಿಲ್ಲೆಯ ಅಳ್ನಾವರದ ರೈಲ್ವೆ ನಿಲ್ದಾಣವನ್ನು ₹17.20 ಕೋಟಿ ವೆಚ್ಚದಲ್ಲಿ ಆಧುನಿಕರಣಗೊಳಿಸಲಾಗಿದೆ. 4500 ಚದರ ಮೀ. ಪ್ರದೇಶದಲ್ಲಿ ಸುಸಜ್ಜಿತ ಪ್ಲಾಟಫಾರ್ಮ್ ಹೊಂದಿದೆ. ಪಾದಚಾರಿಗಳು ರೈಲ್ವೆ ಹಳಿ ದಾಟಲು ಮೇಲ್ಸೇತುವೆ ನಿರ್ಮಿಸಲಾಗಿದೆ. 2 ಲಿಫ್ಟ್ ಸುಸಜ್ಜಿತ ಟಿಕೆಟ್ ಕೌಂಟರ್, ವಿಶ್ರಾಂತಿಗೃಹಗಳು ಪ್ರಯಾಣಿಕರನ್ನು ಆಕರ್ಷಿಸುತ್ತಿವೆ.&lt;/p&gt;&lt;h3&gt;&lt;strong&gt;ಬಂಟ್ವಾಳ ನಿಲ್ದಾಣ:&lt;/strong&gt;&lt;/h3&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರೈಲ್ವೆ ನಿಲ್ದಾಣವನ್ನು ₹26.18 ಕೋಟಿ ವೆಚ್ಚದಲ್ಲಿ ಮರುನಿರ್ಮಾಣಗೊಂಡಿದ್ದು, ನಿರೀಕ್ಷಣಾ ಮಂದಿರ, ಟಿಕೆಟ್ ಕೌಂಟರಗಳನ್ನು ನವೀಕರಿಸಲಾಗಿದೆ. ಪ್ರಯಾಣಿಕರು ಓಡಾಡಲು ಪ್ಲಾಟಫಾರ್ಮ್ ಅನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದೆ.&lt;/p&gt;&lt;p&gt;ಜು. 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಅಮೃತ ಭಾರತ ಯೋಜನೆಯಡಿ ಮರು ನಿರ್ಮಾಣಗೊಂಡ ದೇಶದ 75 ರೈಲ್ವೆ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡುವರು. ಅದರಲ್ಲಿ ನೈಋತ್ಯ ರೈಲ್ವೆ ವಲಯದಲ್ಲಿ ಅಭಿವೃದ್ಧಿಗೊಂಡ ರಾಜ್ಯದ 4 ರೈಲ್ವೆ ನಿಲ್ದಾಣಗಳೂ ಸೇರಿವೆ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕ ವಿಭಾಗದ ನಿರೀಕ್ಷಕ ಪವನ್ ತಿಳಿಸಿದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/4-renovated-indian-railway-stations-in-the-state-to-be-inaugurated-on-july-17-mrq/articleshow-tdrsz0h"/>
        </item>
        <item>
            <title><![CDATA[ಚಿಲ್ಲರೆ ನೀಡದ್ದಕ್ಕೆ ಸಾರಿಗೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಸಿದ ಕಂಡಕ್ಟರ್! ಮುಂದೇನಾಯ್ತು ನೋಡಿ]]></title>
            <link>https://kannada.asianetnews.com/state/minister-byrathi-suresh-conducts-reality-check-on-bmtc-bus-hebbal-incident-rav/articleshow-rtd0pby</link>
            <guid isPermaLink="true">https://kannada.asianetnews.com/state/minister-byrathi-suresh-conducts-reality-check-on-bmtc-bus-hebbal-incident-rav/articleshow-rtd0pby</guid>
            <pubDate>Sun, 12 Jul 2026 07:11:16 +0530</pubDate>
            <description><![CDATA[&lt;p&gt;ಸಾರಿಗೆ ಸಚಿವ ಬೈರತಿ ಸುರೇಶ್&zwnj;, ಗುರುತು ಸಿಗದಂತೆ ಮಾಸ್ಕ್&zwnj; ಧರಿಸಿ ಬಿಎಂಟಿಸಿ ಬಸ್&zwnj;ನಲ್ಲಿ &amp;nbsp;ರಿಯಾಲಿಟಿ ಚೆಕ್&zwnj; ನಡೆಸಿದರು. ಈ ವೇಳೆ, ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕನೊಬ್ಬ ಸಚಿವರನ್ನೇ ಬಸ್&zwnj;ನಿಂದ ಕೆಳಗಿಳಿಸಲು ಯತ್ನ, ಪ್ರಯಾಣಿಕರ ಇತರ ಸಮಸ್ಯೆ ಗಮನಿಸಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx9zf3wv4xnssbwy8j5t0ppn,imgname-----------------------2026-07-12t065833.944-1783820160923.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.12): &lt;/strong&gt;ಬಿಎಂಟಿಸಿ(BMTC) ವ್ಯವಸ್ಥೆ ಕುರಿತಂತೆ ಸ್ವಂತ ಅನುಭವದೊಂದಿಗೆ ತಿಳಿಯುವ ಸಲುವಾಗಿ ಸಾರಿಗೆ ಸಚಿವ ಬೈರತಿ ಸುರೇಶ್&zwnj; ಶನಿವಾರ ಮಾಸ್ಕ್&zwnj; ಧರಿಸಿ ಬಿಎಂಟಿಸಿ ಬಸ್&zwnj;ಗಳಲ್ಲಿ ಪ್ರಯಾಣಿಸುವ ಮೂಲಕ ರಿಯಾಲಿಟಿ ಚೆಕ್&zwnj; ನಡೆಸಿದರು. ಈ ವೇಳೆ ಚಾಲಕ-ನಿರ್ವಾಹಕರ ನಿರ್ಲಕ್ಷ್ಯ ಪತ್ತೆ ಮಾಡಿ ಅವರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.&lt;/p&gt;&lt;h2&gt;ಮಾಸ್ಕ್ ಧರಿಸಿ ಗುರುತು ಸಿಗದಂತೆ ಬಿಎಂಟಿಸಿ ಬಸ್&zwnj;ನಲ್ಲಿ ಸಾರಿಗೆ ಸಚಿವ ಪ್ರಯಾಣ!&lt;/h2&gt;&lt;p&gt;ಅಧಿಕಾರಿಗಳಿಗೂ ಮಾಹಿತಿ ನೀಡದೆ ಬೈರತಿ ಸುರೇಶ್&zwnj; ಅವರು ಶನಿವಾರ ಮಾಸ್ಕ್&zwnj; ಧರಿಸಿ ಗುರುತು ಸಿಗದಂತೆ ಬಿಎಂಟಿಸಿ ಬಸ್&zwnj;ಗಳಲ್ಲಿ ಪ್ರಯಾಣಿಸಿದ್ದಾರೆ. ಜಯಮಹಲ್&zwnj;, ಹೆಣ್ಣೂರು ಡಿಪೋ ವ್ಯಾಪ್ತಿಯ ಬಸ್&zwnj;ಗಳಲ್ಲಿ ಪ್ರಯಾಣಿಸಿದ ಬೈರತಿ ಸುರೇಶ್&zwnj; ಸಾಮಾನ್ಯ ಪ್ರಯಾಣಿಕರಂತೆ ರಶ್&zwnj;ನಲ್ಲಿಯೇ ನಿಂತುಕೊಂಡು ಪ್ರಯಾಣಿಸಿದರು. ಈ ವೇಳೆ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ನಿರ್ಲಕ್ಷ್ಯದಿಂದ ವರ್ತಿಸುತ್ತಿರುವುದು ಬೈರತಿ ಸುರೇಶ್ ಗಮನಕ್ಕೆ ಬಂದಿದೆ. ನಂತರ ಪ್ರಯಾಣಿಕರೊಂದಿಗೂ ಮಾತುಕತೆ ನಡೆಸಿ ಅವರ ಸಮಸ್ಯೆಯನ್ನು ಆಲಿಸಿದರು.&lt;/p&gt;&lt;h3&gt;ಚಿಲ್ಲರೆ ನೀಡದ್ದಕ್ಕೆ ಸಾರಿಗೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್!&lt;/h3&gt;&lt;p&gt;ರಿಯಾಲಿಟಿ ಚೆಕ್&zwnj; ವೇಳೆ ಭೂಪಸಂದ್ರದಿಂದ ಹೆಬ್ಬಾಳಕ್ಕೆ ಬಸ್&zwnj;ವೊಂದರಲ್ಲಿ ಸಂಚರಿಸುತ್ತಿದ್ದಾಗ 2 ಟಿಕೆಟ್&zwnj; ನೀಡುವಂತೆ ನಿರ್ವಾಹಕರಿಗೆ 100 ರು. ನೀಡಿದ್ದಾರೆ. ಆದರೆ, ನಿರ್ವಾಹಕ 12 ರು. ಚಿಲ್ಲರೆ ನೀಡುವಂತೆ ಸೂಚಿಸಿದ್ದಾರೆ. ಸಚಿವರು ಮಾಸ್ಕ್&zwnj; ಧರಿಸಿದ್ದರಿಂದ ನಿರ್ವಾಹಕರಿಗೆ ಅವರ ಗುರುತು ಸಿಗಲಿಲ್ಲ. ನಿರ್ವಾಹಕರಿಗೆ ತಮ್ಮ ಬಳಿ ಚಿಲ್ಲರೆಯಿಲ್ಲ ಎಂದು ತಿಳಿಸುತ್ತಿದ್ದಂತೆ, ಹಾಗಾದರೆ ಬಸ್&zwnj;ನಿಂದ ಕೆಳಗಿಳಿಯುವಂತೆ ನಿರ್ವಾಹಕರು ತಾಕೀತು ಮಾಡಿದ್ದಾರೆ.&lt;/p&gt;&lt;h3&gt;ನಿರ್ವಾಹಕನ ವಿರುದ್ಧ ಕ್ರಮಕ್ಕೆ ಸೂಚನೆ&lt;/h3&gt;&lt;p&gt;ಕೊನೆಗೆ ಸಚಿವರು ಎಂದು ತಿಳಿದ ನಿರ್ವಾಹಕ ಕ್ಷಮೆ ಕೇಳಿದ್ದಾರೆ. ತಮಗಾದ ರೀತಿಯಲ್ಲಿಯೇ ಚಿಲ್ಲರೆಗಾಗಿ ಪ್ರಯಾಣಿಕರನ್ನು ಬಸ್&zwnj;ನಿಂದ ಕೆಳಗಿಳಿಸಲಾಗುತ್ತಿದೆ ಎಂಬುದು ಅರಿತ ಬೈರತಿ ಸುರೇಶ್&zwnj;, ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.&lt;/p&gt;&lt;p&gt;ಉಳಿದಂತೆ ಬಸ್&zwnj;ಗಳನ್ನು ವೇಗವಾಗಿ ಚಾಲನೆ ಮಾಡುವುದು, ನಿಲುಗಡೆ ಸ್ಥಳಕ್ಕಿಂತ ಬೇರೆಡೆ ಬಸ್&zwnj;ಗಳನ್ನು ನಿಲ್ಲಿಸುತ್ತಿದ್ದದ್ದು, ಪ್ರಯಾಣಿಕರೊಂದಿಗೆ ನಿರ್ವಾಹಕರು ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಿದ್ದ ರೀತಿ, ಪ್ರಯಾಣಿಕರಿಗೆ ಟಿಕೆಟ್&zwnj; ನೀಡುವಾಗಲೇ ಚಿಲ್ಲರೆ ನೀಡದೆ ಇದ್ದದ್ದು ಹೀಗೆ ಹಲವು ಸಮಸ್ಯೆಗಳು ಸಚಿವರ ಗಮನಕ್ಕೆ ಬಂದಿದೆ. ಪ್ರಯಾಣಿಕರೊಂದಿಗೆ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದ ಚಾಲಕರು ಮತ್ತು ನಿರ್ವಾಹಕರ ಅಮಾನತಿಗೆ ಸ್ಥಳದಲ್ಲೇ ನಿರ್ದೇಶಿಸಿದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/minister-byrathi-suresh-conducts-reality-check-on-bmtc-bus-hebbal-incident-rav/articleshow-rtd0pby"/>
        </item>
        <item>
            <title><![CDATA[ಆಕಾಶಕ್ಕೆ ಕನ್ನಡಿ ಹಾಕಿ ಭೂಮಿಗೆ ಟಾರ್ಚ್‌ ಹಿಡಿಯುವ ಪ್ರಯೋಗಕ್ಕೆ ಅಮೆರಿಕಾ ಒಪ್ಪಿಗೆ]]></title>
            <link>https://kannada.asianetnews.com/science/reflect-orbital-plans-to-deploy-giant-mirrors-in-space-to-reflect-sunlight-back-to-earth-mrq/articleshow-z82el2f</link>
            <guid isPermaLink="true">https://kannada.asianetnews.com/science/reflect-orbital-plans-to-deploy-giant-mirrors-in-space-to-reflect-sunlight-back-to-earth-mrq/articleshow-z82el2f</guid>
            <pubDate>Sun, 12 Jul 2026 07:04:30 +0530</pubDate>
            <description><![CDATA[ರಿಫ್ಲೆಕ್ಟ್&zwnj; ಆರ್ಬಿಟಲ್&zwnj; ಕಂಪನಿಯು ಬಾಹ್ಯಾಕಾಶದಲ್ಲಿ ಬೃಹತ್ ಕನ್ನಡಿಗಳನ್ನು ಅಳವಡಿಸಿ, ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಯೋಜನೆಗೆ ಅನುಮತಿ ಪಡೆದಿದೆ. ಈ ತಂತ್ರಜ್ಞಾನವು ಕೃಷಿ ಮತ್ತು ತುರ್ತು ಸಂದರ್ಭಗಳಲ್ಲಿ ನೆರವಾಗುವ ಗುರಿ ಹೊಂದಿದ್ದರೂ, ಖಗೋಳ ತಜ್ಞರು ಇದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx9z8kx8qtmq0b9z0v28v2s4,imgname-reflect-orbital-plans-1783819947944.jpg" type="image/jpeg" height="390" width="690"/>
            <content:encoded><![CDATA[&lt;p&gt;ವ್ಯಾಂಕೋವರ್&zwnj;: ಖಗೋಳ ತಜ್ಞರು, ಸಾರ್ವಜನಿಕರ ವಿರೋಧದ ನಡುವೆಯೂ ರಿಫ್ಲೆಕ್ಟ್&zwnj; ಆರ್ಬಿಟಲ್&zwnj; ಕಂಪನಿಯ ಬಾಹ್ಯಾಕಾಶದಲ್ಲಿ ಬೃಹತ್&zwnj; ಕನ್ನಡಿಯನ್ನೊಳಗೊಂಡ ಉಪಗ್ರಹದ ಮೂಲಕ ಬೆಳಕನ್ನು ಪ್ರತಿಫಲಿಸುವ ಪ್ರಯೋಗಕ್ಕೆ ಅಮೆರಿಕದ ಸಂವಹನ ಆಯೋಗವು ಒಪ್ಪಿಗೆ ನೀಡಿದೆ.&lt;/p&gt;&lt;p&gt;ರಿಫ್ಲೆಕ್ಟ್&zwnj; ಆರ್ಬಿಟಲ್&zwnj; ಕಂಪನಿಯು ಮೊದಲಿಗೆ ಒಂದು ಎರಾಂಡಿಲ್&zwnj;-1 ಉಪಗ್ರಹದ ಮೂಲಕ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಪ್ರಯೋಗ ನಡೆಸಲು ಅವಕಾಶ ಪಡೆದಿದೆ. ಈ ಮೂಲಕ ಕತ್ತಲೆಯಲ್ಲೂ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಪ್ರಯೋಗ ನಡೆಸಲಾಗುತ್ತದೆ. ಈ ಬೆಳಕು ಸುಮಾರು 5 ಕಿ.ಮೀ. ವ್ಯಾಪ್ತಿ ಹೊಂದಿರಲಿದ್ದು, ಪ್ರತಿ ನಾಲ್ಕು ನಿಮಿಷಗಳಿಗೆ ಬೆಳಕನ್ನು ಮರು ನಿರ್ದೇಶನ ಮಾಡಬೇಕಾಗುತ್ತದೆ.&lt;/p&gt;&lt;h2&gt;&lt;strong&gt;50 ಸಾವಿರ ಉಪಗ್ರಹ&lt;/strong&gt;&lt;/h2&gt;&lt;p&gt;ಇದು ಆರಂಭ ಅಷ್ಟೆ, ರಿಫ್ಟೆಕ್ಟ್&zwnj; ಆರ್ಬಿಟಲ್&zwnj; ಇಂಥ 50 ಸಾವಿರ ಉಪಗ್ರಹಗಳನ್ನು 2035ರ ಹೊತ್ತಿಗೆ ಬಾಹ್ಯಾಕಾಶಕ್ಕೆ ಕಳುಹಿಸಲು ಉದ್ದೇಶಿಸಿದೆ. ಈ ಉಪಗ್ರಹಗಳು 60 ಅಡಿ ಉದ್ದ 60 ಅಡಿ ಅಗಲದ ಕನ್ನಡಿಯನ್ನು ಹೊಂದಿರಲಿವೆ. ಇವು ಬಾಹ್ಯಾಕಾಶದಿಂದ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸಲಿವೆ. ಕೃಷಿ, ನೈಸರ್ಗಿಕ ವಿಕೋಪದಂಥ ತುರ್ತು ಸಂದರ್ಭ ಹಾಗೂ ಉದ್ಯಮ ಕ್ಷೇತ್ರಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಬೇಡಿಕೆ ಇಟ್ಟರೆ ರಾತ್ರಿ ಹೊತ್ತಿನಲ್ಲೂ ನಿರ್ದಿಷ್ಟ ಪ್ರದೇಶಕ್ಕೆ ಬೆಳಕಿನ ವ್ಯವಸ್ಥೆ ಮಾಡುವ ಉದ್ದೇಶ ಕಂಪನಿಯದ್ದಾಗಿದೆ.&lt;/p&gt;&lt;p&gt;ಆದರೆ, ಈ ಪ್ರಯೋಗದಿಂದ ಮಾನವನ ಆರೋಗ್ಯ, ಸುರಕ್ಷತೆ, ಖಗೋಳ ಮತ್ತು ಕೆಳ ಭೂವಾತಾವರಣದ ಮೇಲೆ ಅನೇಕ ಅಡ್ಡಪರಿಣಾಮಗಳೂ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;&lt;p&gt;ಕನ್ನಡಿಯ ಪ್ರತಿಫಲನವು ಪೈಲಟ್&zwnj;ಗಳು ಹಾಗೂ ಚಾಲಕರಿಗೆ ಕಿರಿಕಿರಿ ಉಂಟು ಮಾಡಬಹುದು. ಸಸ್ಯಗಳು, ಪ್ರಾಣಿಗಳ ದೇಹದ ನೈಸರ್ಗಿಕ ಗಡಿಯಾರದಲ್ಲಿ ಬದಲಾವಣೆಗೆ ಕಾರಣವಾಗಬಹುದು. ಇತರೆ ಉಪಗ್ರಹಗಳಿಗೂ ಸಮಸ್ಯೆ ತಂದಿಡಬಹುದು ಎಂದು ಹೇಳಲಾಗಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/science/reflect-orbital-plans-to-deploy-giant-mirrors-in-space-to-reflect-sunlight-back-to-earth-mrq/articleshow-z82el2f"/>
        </item>
        <item>
            <title><![CDATA[ಗಾನಕೋಗಿಲೆ ಎಸ್. ಜಾನಕಿ ಅಗಲಿಕೆ: ಸಂಗೀತ ಲೋಕದ ಧ್ರುವತಾರೆಗೆ ಡಿಕೆಶಿ-ಸಿದ್ದರಾಮಯ್ಯ ಭಾವುಕ ನಮನ]]></title>
            <link>https://kannada.asianetnews.com/state/s-janaki-death-cm-dk-shivakumar-siddaramaiah-condolence-gvd/articleshow-cdui2qy</link>
            <guid isPermaLink="true">https://kannada.asianetnews.com/state/s-janaki-death-cm-dk-shivakumar-siddaramaiah-condolence-gvd/articleshow-cdui2qy</guid>
            <pubDate>Sat, 11 Jul 2026 23:17:17 +0530</pubDate>
            <description><![CDATA[&lt;p&gt;ಎಸ್. ಜಾನಕಿ ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx8yfsnyd7n19wzjrhat1vtw,imgname-gxg-1783785580221.png" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಇಂದು (ಜುಲೈ 11) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಅವರು ಹಾಡಿದ್ದರು. ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.&lt;/p&gt;&lt;p&gt;&lt;strong&gt;ಡಿ.ಕೆ ಶಿವಕುಮಾರ್ ಸಂತಾಪ&lt;/strong&gt;&lt;/p&gt;&lt;p&gt;ಹಾಡು ನಿಲ್ಲಿಸಿದ ʻಕೋಗಿಲೆʼ... ಪ್ರಖ್ಯಾತ ಗಾಯಕಿ, 'ಗಾನ ಕೋಗಿಲೆ' ಎಸ್. ಜಾನಕಿ ಅಮ್ಮ ಅವರ ನಿಧನವಾರ್ತೆ ತಿಳಿದು, ದುಃಖಿತನಾಗಿದ್ದೇನೆ. 17 ಭಾಷೆಗಳಲ್ಲಿ ತಮ್ಮ ಇಂಪಾದ ಕಂಠದ ಮೂಲಕ ಸಾವಿರಾರು ಹಾಡುಗಳನ್ನು ಹಾಡಿದ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಗಾಯನವನ್ನೇ ಉಸಿರಾಗಿಸಿಕೊಂಡಿದ್ದ ಜಾನಕಮ್ಮನವರು, ಅವರ ಹಾಡುಗಳ ಮೂಲಕ ಸದಾ ಸಂಗೀತಪ್ರಿಯರ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ. ಅವರ ಅಸಂಖ್ಯಾತ ಅಭಿಮಾನಿಗಳು, ಆಪ್ತರು, ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ. ಓಂ ಶಾಂತಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಸಂಗೀತಶಾರದೆಯ ವರಪುತ್ರಿ&lt;/strong&gt;&lt;/p&gt;&lt;p&gt;ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಕನ್ನಡ ಭಾಷೆಯೂ ಸೇರಿದಂತೆ 20 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ, 6 ದಶಕಗಳ ಕಾಲ&zwnj; ತಮ್ಮ ಕಂಠಸಿರಿಯ ಮೂಲಕ ಸಂಗೀತ ಸೇವೆಗೈದ ಮೇರು ಪ್ರತಿಭೆಯೊಂದು ನಮ್ಮನ್ನಗಲಿರುವುದು ಕಲಾ ಜಗತ್ತಿಗಾಗಿರುವ ತುಂಬಲಾರದ ನಷ್ಟ. ಜಾನಕಿಯಮ್ಮನವರ ಧ್ವನಿಯಿಲ್ಲದ ಚಿತ್ರಗಳೇ ಅಪರೂಪ ಎನ್ನುವ ಕಾಲವೊಂದಿತ್ತು, ಆ ಮಟ್ಟಿನ ಬೇಡಿಕೆಯನ್ನು ತಮ್ಮ ಅನನ್ಯ ಕಂಠದ ಮೂಲಕ ಸೃಷ್ಟಿಸಿದ್ದ ಸಂಗೀತಶಾರದೆಯ ವರಪುತ್ರಿ ಅವರು. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗ ಮತ್ತು ಕೋಟ್ಯಂತರ ಸಂಗೀತ ಪ್ರಿಯರಿಗೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಜಿ.ಟಿ.ದೇವೇಗೌಡ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಮಾಜಿ ಸಚಿವ ಜಿ.ಟಿ.ದೇವೇಗೌಡ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು ಪ್ರಶಸ್ತಿಗಳು ಬೇರೆ ಬೇರೆ ರಾಜ್ಯದಿಂದ ಅವರನ್ನು ಹುಡುಕಿಕೊಂಡು ಬಂದಿವೆ. ಭಾರತ ದೇಶದ ಅತ್ಯುನ್ನತ ಹಿನ್ನೆಲೆ ಗಾಯಕಿ ಗಾಯಕಿಯಾಗಿದ್ದರು. ಎಸ್​.ಪಿ.ಬಾಲಸುಬ್ರಮಣ್ಯಂ ಹಾಗೂ ಎಸ್​ ಜಾನಕಿ ಅವರನ್ನು ನಾವು ಯಾರೂ ಮರೆಯುವಂತಿಲ್ಲ. ಅವರ ಆತ್ಮಕ್ಕೆ ದೇವರು ಶಾಂತಿಯನ್ನು ಕೊಡಲಿ. ನಟಿ-ನಟಿಯರಿಗೆ, ಅಭಿಮಾನಿಗಳು ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.&lt;strong&gt;ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ&lt;/strong&gt;&lt;/p&gt;&lt;p&gt;ಭಾರತೀಯ ಸಂಗೀತ ಲೋಕದ ದಿಗ್ಗಜರು, ತಮ್ಮ ಅಮೋಘ ಕಂಠಸಿರಿಯ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ ಖ್ಯಾತ ಗಾಯಕಿ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ. ಭಾಷೆಗಳ ಗಡಿಗಳನ್ನು ಮೀರಿ ಅವರ ಗಾಯನ ತಲೆಮಾರುಗಳನ್ನು ಬೆಸೆಯಿತು. ಅವರ ಅಪೂರ್ವ ಧ್ವನಿ, ಭಾವಪೂರ್ಣ ಗಾಯನ ಮತ್ತು ಸಂಗೀತಕ್ಕೆ ನೀಡಿದ ಅಪಾರ ಕೊಡುಗೆ ಸದಾ ಅಮರವಾಗಿರುತ್ತದೆ. ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದವರು, ಅಭಿಮಾನಿಗಳು ಹಾಗೂ ಸಂಗೀತಾಸಕ್ತರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಂತಾಪ ಸೂಚಿಸಿದ್ದಾರೆ.&lt;strong&gt;ರಾಜ್ಯಪಾಲರ ಸಂತಾಪ&lt;/strong&gt;&lt;/p&gt;&lt;p&gt;ಕರ್ನಾಟಕ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಸಂತಾಪ ಸಂದೇಶದಲ್ಲಿ ರಾಜ್ಯಪಾಲರು, &quot;ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ತಮ್ಮ ಗಾಯನದ ಮೂಲಕ ಕೋಟ್ಯಂತರ ಜನರ ಮನಗೆದ್ದ ಅವರು, ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ&quot; ಎಂದು ಪ್ರಾರ್ಥಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/state/s-janaki-death-cm-dk-shivakumar-siddaramaiah-condolence-gvd/articleshow-cdui2qy"/>
        </item>
    </channel>
</rss>
