<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 23 Jun 2026 22:52:32 +0530</lastBuildDate>
        <atom:link href="https://kannada.asianetnews.com/rss/news" rel="self" type="application/rss+xml"/>
        <item>
            <title><![CDATA[RSS: ಇಷ್ಟು ವರ್ಷ ಸಂಘದ ನೋಂದಣಿ ಏಕೆ ಪ್ರಶ್ನಿಸಲಿಲ್ಲ: ಪ್ರಿಯಾಂಕ್ ಖರ್ಗೆ ವಿರುದ್ಧ ಈಶ್ವರಪ್ಪ ವಾಗ್ದಾಳಿ]]></title>
            <link>https://kannada.asianetnews.com/karnataka-districts/rss-registration-row-ks-eshwarappa-slams-priyank-kharge-gvd/articleshow-bwlg8he</link>
            <guid isPermaLink="true">https://kannada.asianetnews.com/karnataka-districts/rss-registration-row-ks-eshwarappa-slams-priyank-kharge-gvd/articleshow-bwlg8he</guid>
            <pubDate>Tue, 23 Jun 2026 22:52:26 +0530</pubDate>
            <description><![CDATA[&lt;p&gt;RSS Registration Controversy: ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತವಾದ ಆರ್&zwnj;ಎಸ್&zwnj;ಎಸ್&zwnj; ಸಂಘದ ನೋಂದಣಿ ಬಗ್ಗೆ ಈಗ ಪ್ರಶ್ನಿಸುತ್ತಿರುವವರು ಇಷ್ಟು ವರ್ಷ ಏಕೆ ಸುಮ್ಮನಿದ್ದರು ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kms072ysmz8zjcb80ms8j7ye,imgname-ks-eshwarappa--1774660586457.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಜೂ.23): &lt;/strong&gt;ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತವಾದ ಆರ್&zwnj;ಎಸ್&zwnj;ಎಸ್&zwnj; ಸಂಘದ ನೋಂದಣಿ ಬಗ್ಗೆ ಈಗ ಪ್ರಶ್ನಿಸುತ್ತಿರುವವರು ಇಷ್ಟು ವರ್ಷ ಏಕೆ ಸುಮ್ಮನಿದ್ದರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದೇ ಪದೇ ಆರ್&zwnj;ಎಸ್&zwnj;ಎಸ್ ಬಗ್ಗೆ ಮಾತನಾಡುತ್ತಿರುವ ರಾಜ್ಯ ಗೃಹಮಂತ್ರಿ ಪ್ರಿಯಾಂಕ್ ಖರ್ಗೆಯವರಿಗೆ ಸಂವಿಧಾನದ ಬಗ್ಗೆ ಅರಿವೇ ಇಲ್ಲ. ಆರ್&zwnj;ಎಸ್&zwnj;ಎಸ್ ಸಂಘದ ನೋಂದಣಿ ವಿಷಯವಾಗಿ ಪ್ರಿಯಾಂಕ್ ಖರ್ಗೆ ಸಂಘದ ಸರಸಂಘ ಸಂಚಾಲಕ ಮೋಹನ್ ಭಾಗವತ್ ಅವರಿಗೆ ಬರೆದಿರುವ ಪತ್ರ ಮತ್ತು ಕೇಳಿರುವ ಪ್ರಶ್ನೆಗಳು ಪ್ರಿಯಾಂಕ್ ಖರ್ಗೆ ಅವರದ್ದೋ ಅಥವಾ ಕಾಂಗ್ರೆಸ್ ಪಕ್ಷದ್ದೋ ಎಂದು ಪ್ರಶ್ನಿಸಿದರು.&lt;/p&gt;&lt;p&gt;ಅಷ್ಟಕ್ಕೂ ಯಾವುದೇ ಸಂಘಗಳ ಅಥವಾ ಸಂಸ್ಥೆಗಳನ್ನು ನೋಂದಣಿ ಮಾಡಿಸುವುದು-ಬಿಡುವುದು ಆಯಾ ಸಂಸ್ಥೆಗೆ ಸೇರಿದ್ದಾಗಿದೆ. ಒಂದು ಸ್ವಯಂಪ್ರೇರಿತ ವ್ಯಕ್ತಿಗಳ ಸಮೂಹ ಸಂವಿಧಾನದ ಅನುಚ್ಛೇದ 19 (1) (ಸಿ) ಪ್ರಕಾರ ದೇಶದ ಯಾವುದೇ ವ್ಯಕ್ತಿ ಸಂಘ-ಸಂಸ್ಥೆಗಳನ್ನು ರಚಿಸುವ ಮೂಲಭೂತ ಹಕ್ಕನ್ನು ಹೊಂದಿರುತ್ತದೆ. ನೋಂದಣಿ ಮಾಡಿಸಲೇಬೇಕೆಂಬ ನಿಯಮವೂ ಇಲ್ಲ. 1982ರ ಸಂಘಗಳ ನೋಂದಣಿ ಕಾರ್ಯಕೂಡ ಇದನ್ನೇ ಹೇಳುತ್ತದೆ. ಸರ್ಕಾರದಿಂದ ಅನುದಾನ ಪಡೆಯಲು ಅಥವಾ ಪ್ರತ್ಯೇಕ ಕಾನೂನುಬದ್ಧ ಘಟಕವಾಗಿ ಕಾರ್ಯನಿರ್ವಹಿಸಲು ಬಯಸಿದಾಗ ಮಾತ್ರ ನೋಂದಣಿ ಬೇಕಾಗುತ್ತದೆ. ಆರ್&zwnj;ಎಸ್&zwnj;ಎಸ್ ವ್ಯಕ್ತಿಗಳ ಸಮೂಹವಾಗಿದ್ದು, ಅದು ಯಾವುದೇ ಆಸ್ತಿ ಅನುದಾನವನ್ನು ಬಯಸುವುದಿಲ್ಲ. ಆದ್ದರಿಂದ ಸಂಘದ ನೋಂದಣಿ ಕಡ್ಡಾಯವಲ್ಲ. ಇದು ಪ್ರಿಯಾಂಕ್ ಖರ್ಗೆಯವರಿಗೆ ಗೊತ್ತಿರಬೇಕು ಎಂದು ಟೀಕಿಸಿದರು.&lt;/p&gt;&lt;p&gt;ಈಗಾಗಲೇ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಕಾನೂನು ತಜ್ಞರು ಉತ್ತರ ನೀಡಿದ್ದಾರೆ. ಸುಪ್ರೀಂ ಕೋರ್ಟ್&zwnj;ನ ಹಿರಿಯ ವಕೀಲ, ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್&zwj;ಯ ಹೇಳಿಕೆ ನೀಡಿ, ಪ್ರಿಯಾಂಕ್&zwnj; ಖರ್ಗೆ ಅವರಿಗೆ ಸಂಘಕ್ಕೆ ಪತ್ರ ಅಥವಾ ನೋಟೀಸ್ ಕೊಡುವ ಯಾವ ಅಧಿಕಾರವೂ ಇಲ್ಲ ಎಂದಿದ್ದಾರೆ. ಹಾಗೆಯೇ ಹೈಕೋರ್ಟಿನ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು ಕೂಡ ಖರ್ಗೆಯವರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದಿದ್ದಾರೆ. ಇದನ್ನು ಪ್ರಿಯಾಂಕ್ ಖರ್ಗೆ ಅರ್ಥಮಾಡಿಕೊಳ್ಳಬೇಕು ಎಂದು ಕುಟುಕಿದರು.&lt;/p&gt;&lt;p&gt;ಅಲ್ಲದೆ, ವಕೀಲರು, ಮಾಜಿ ಅಡ್ವೋಕೇಟ್ ಜನರಲ್&zwnj;ಗಳು, ಸುಪ್ರೀಂಕೋರ್ಟ್ ನ್ಯಾಯಾಧೀಶರು, ನಿವೃತ್ತ ನ್ಯಾಯಮೂರ್ತಿಗಳು ತಮ್ಮ ಅರಿವಿನ ಮತ್ತು ಜ್ಞಾನದಿಂದ ನೀಡಿದ ಹೇಳಿಕೆಗಳನ್ನು ಪ್ರಿಯಾಂಕ್ ಖರ್ಗೆ ಧಿಕ್ಕರಿಸಿ ಇಂತಹ ವ್ಯಕ್ತಿಗಳನ್ನು ಗುಲಾಮರು ಎಂದು ಕರೆಯುವ ಮೂಲಕ ತಮ್ಮ ಸಂಸ್ಕೃತಿಯನ್ನು ಬಹಿರಂಗಪಡಿಸಿದ್ದಾರೆ. ಪ್ರಿಯಾಂಕ್&zwnj; ಅವರ ಹೇಳಿಕೆ ಅವರ ವಿದ್ಯೆ, ಜ್ಞಾನ ಮತ್ತು ಅರ್ಹತೆ ನಿರ್ಧರಿಸುತ್ತದೆ ಎಂದು ವ್ಯಂಗ್ಯವಾಡಿದರು. ಹೊಸದಾಗಿ ಅಧಿಕಾರದ ಸ್ವೀಕರಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಈ ಇಬ್ಬರು ಒಂದು ರೀತಿಯಲ್ಲಿ ಅರ್ಬನ್ ನಕ್ಸಲರು ಎಂದು ಜರಿದ ಅವರು, ಈ ಇಬ್ಬರೂ ಹಿರಣ್ಯ-ಕಶ್ಯಪು ಇದ್ದಂತೆ. ಇವರನ್ನು ನಾಶಮಾಡಲು ಭಕ್ತಪ್ರಹ್ಲಾದನ ರೀತಿಯಲ್ಲಿ ನಾವಿದ್ದೇವೆ ಎಂದು ಪೌರಾಣಿಕೆ ಹಿನ್ನಲೆಯೊಂದಿಗೆ ಟೀಕಿಸಿದರು.&lt;/p&gt;&lt;h2&gt;&lt;strong&gt;ಕವಡೆ ಕಾಸಿನ ಕಿಮ್ಮತ್ತಿಲ್ಲ&lt;/strong&gt;&lt;/h2&gt;&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆಣೆ-ಪ್ರಮಾಣದ ವಿರುದ್ಧ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಅವರು, ಕೋಟ್ಯಂತರ ಜನರ ಆರಾಧ್ಯ ದೈವವಾಗಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಭಕ್ತಿಯನ್ನು ವಿಜಯೇಂದ್ರ ಓರೆಗೆ ಹಚ್ಚಬಾರದು. ಮೊದಲು ಅವರು ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಅಡ್ಡ ಮತದಾನ ಮಾಡಿದವರು ಮಂಜುನಾಥನ ಮುಂದೆ ಆಣೆ ಮಾಡಿ, ಅಣ್ಣಪ್ಪ ಸ್ವಾಮಿ ಮುಂದೆ ಕ್ಷಮೆ ಕೇಳಿದರೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿರುವುದಿಲ್ಲ. ಹೀಗೆ ಶಿವಮೊಗ್ಗದ ವಾರ್ಡ್ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬ ಸಿಗಂದೂರು ಚೌಡೇಶ್ವರಿ ದೇವಿಯ ಫೋಟೊ ಹಾಗೂ 5 ರುಪಾಯಿ ಕೊಟ್ಟು ಆಣೆ ಮಾಡಿಸಿದ್ದ. ಮರುದಿನ ಮತ್ತೊಬ್ಬ ಅಭ್ಯರ್ಥಿ ಮಾರಮ್ಮನ ಫೋಟೊ ಜತೆ 10 ರೂಪಾಯಿ ಕೊಟ್ಟು ಆಣೆ ಮಾಡಿಸಿದ. ಕೊನೆಗೆ ಹತ್ತು ರುಪಾಯಿ ಕೊಟ್ಟವನೇ ಚುನಾವಣೆಯಲ್ಲಿ ಗೆದ್ದ ಎಂದು ಲೇವಡಿ ಮಾಡಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/rss-registration-row-ks-eshwarappa-slams-priyank-kharge-gvd/articleshow-bwlg8he"/>
        </item>
        <item>
            <title><![CDATA[ಮೋದಿ ಜೊತೆ ಪದ್ಮಭೂಷಣ ಪ್ರಶಸ್ತಿ ವಿಜೇತ ಮಮ್ಮೂಟ್ಟಿ ಹಾಗೂ ಕುಟುಂಬ, ಸುಂದರ ಕ್ಷಣ ಹಂಚಿಕೊಂಡ ಪ್ರಧಾನಿ]]></title>
            <link>https://kannada.asianetnews.com/gallery/india-news/pm-modi-shares-heartwarming-moments-with-padma-bhushan-awardee-mammootty-and-family-5z14c24</link>
            <guid isPermaLink="true">https://kannada.asianetnews.com/gallery/india-news/pm-modi-shares-heartwarming-moments-with-padma-bhushan-awardee-mammootty-and-family-5z14c24</guid>
            <pubDate>Tue, 23 Jun 2026 22:31:33 +0530</pubDate>
            <description><![CDATA[&lt;p&gt;ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇಂದು ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ನಡುವೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಮಮ್ಮೂಟ್ಟಿ ಹಾಗೂ ಕುಟುಂಬ ಪ್ರಧಾನಿ ಮೋದಿ ಜೊತೆ ಕೆಲ ಹೊತ್ತು ಕಳೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtpn6ewyvvd6nf26j72e60w,imgname-mammootty-family-meet-pm-modi--1782233864668.png" type="image/jpeg" height="390" width="690"/>
            <content:encoded><![CDATA[&lt;p&gt;ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇಂದು ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ನಡುವೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಮಮ್ಮೂಟ್ಟಿ ಹಾಗೂ ಕುಟುಂಬ ಪ್ರಧಾನಿ ಮೋದಿ ಜೊತೆ ಕೆಲ ಹೊತ್ತು ಕಳೆದಿದ್ದಾರೆ.&lt;/p&gt;&lt;img&gt;&lt;p&gt;2026ರ ಸಾಲಿನ ಪದ್ಮ ಪ್ರಶಸ್ತಿಯನ್ನು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಧಕರಿಗೆ ನೀಡಿ ಗೌರವಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಿಸಲಾಗಿದೆ. ವಿಶೇಷ ಅಂದರೆ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ನಟ ಮಮ್ಮೂಟ್ಟಿ ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಮಮ್ಮೂಟ್ಟಿ ಕುಟುಂಬ ಕೆಲ ಹೊತ್ತು ಮೋದಿ ಜೊತೆ ಚರ್ಚಿಸಿದ್ದಾರೆ.&lt;/p&gt;&lt;img&gt;&lt;p&gt;ಮಳೆಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಲೆ ವಿಭಾಗದಲ್ಲಿ ಮಮ್ಮೂಟಿ ಸಾಧನೆ, ಕೊಡುಗೆ ಪರಿಗಣಿಸಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದಕ್ಕೂ ಮೊದಲು ಮಮ್ಮೂಟ್ಟಿ ಮೋದಿ ಭೇಟಿಯಾಗಿದ್ದಾರೆ. ಮಮ್ಮೂಟ್ಟಿ ಜೊತೆ ಪತ್ನಿಯೂ ಜೊತೆಗಿದ್ದರು.&lt;/p&gt;&lt;img&gt;&lt;p&gt;ಮಮ್ಮೂಟ್ಟಿ ಸೂಪರ್ ಸ್ಟಾರ್ ಆಗಿದ್ದರೆ, ಪುತ್ರ ದುಲ್ಕರ್ ಸಲ್ಮಾನ್ ಕೂಡ ಮಳೆಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟನಾಗಿ ಮಿಂಚುತ್ತಿದ್ದಾರೆ. ಇಂದು ಮಮ್ಮೂಟ್ಟಿ ಜೊತೆ ದುಲ್ಕರ್ ಸಲ್ಮಾನ್ ಕೂಡ ಮೋದಿ ಭೇಟಿಯಾಗಿದ್ದಾರೆ. ಇದೇ ವೇಳೆ ದುಲ್ಕರ್ ಪತ್ನಿಯೂ ಜೊತೆಗಿದ್ದರು.&lt;/p&gt;&lt;img&gt;&lt;p&gt;ಮಮ್ಮೂಟ್ಟಿ ಜೊತೆಗೆ ಪದ್ಮಭೂಷಮ ಪ್ರಶಸ್ತಿಯನ್ನು ಗಾಯಕಿ ಅಲ್ಕಾ ಯಾಗ್ನಿಕ್ ಸ್ವೀಕರಿಸಿದ್ದಾರೆ. ಇಬ್ಬರು 2025ರ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸಾಧಕರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇತ್ತ ಮಮ್ಮೂಟ್ಟಿ ಮೋದಿ ಭೇಟಿಯೂ ಭಾರಿ ಸದ್ದು ಮಾಡುತ್ತಿದೆ .&lt;/p&gt;&lt;img&gt;&lt;p&gt;ಮಮ್ಮೂಟ್ಟಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರೆ, ನಟ ಮಗಂತಿ ಮರುಳಿ ಮೋಹನ್, ಜನಪದ ಕಲಾವಿದ ಗುರು ಸಂಗ್ಯುಸಂಗ್ ಪೊಂಗನೆರ್, ನಟ ರಾಜೇಂದ್ರ ಪ್ರಸಾದ್, ಆರ್ ಮಾಧವನ್, ಅನಿಲ್ ಕುಮಾರ್ ರಸಗೋಟಿ, ದಿವಗಂತ ನಟ ಸತೀಶ್ ಶಾ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/pm-modi-shares-heartwarming-moments-with-padma-bhushan-awardee-mammootty-and-family-5z14c24"/>
        </item>
        <item>
            <title><![CDATA[Japan Caste System: ಜಪಾನ್‌ನಲ್ಲಿ ಜಾತಿ ವ್ಯವಸ್ಥೆ ಇದೆಯೇ? ಯೂಟ್ಯೂಬರ್ ಹೇಳಿದ ಸತ್ಯಗಳಿವು!]]></title>
            <link>https://kannada.asianetnews.com/world-news/a-youtuber-reveals-the-truth-about-caste-and-equality-in-japan-gvd/articleshow-psx460l</link>
            <guid isPermaLink="true">https://kannada.asianetnews.com/world-news/a-youtuber-reveals-the-truth-about-caste-and-equality-in-japan-gvd/articleshow-psx460l</guid>
            <pubDate>Tue, 23 Jun 2026 22:26:54 +0530</pubDate>
            <description><![CDATA[&lt;p&gt;Japan Caste System: ಜಪಾನ್&zwnj;ನಲ್ಲಿ ಜಾತಿ ತಾರತಮ್ಯ ಇದೆಯೇ? ಬಡವರು-ಶ್ರೀಮಂತರ ನಡುವೆ ಸಂಬಂಧ ಹೇಗಿರುತ್ತೆ? ಅಲ್ಲಿ ಕಸ ಗುಡಿಸುವವರನ್ನು ಹೇಗೆ ನಡೆಸಿಕೊಳ್ತಾರೆ? ಜಪಾನ್&zwnj;ನಲ್ಲಿರುವ ಯುವತಿ ಬಿಚ್ಚಿಟ್ಟ ಸತ್ಯಗಳೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtpk1rjga6y388d8vwf9yxd,imgname-vjjv-1782233794322.png" type="image/jpeg" height="390" width="690"/>
            <content:encoded><![CDATA[&lt;p&gt;ಜಪಾನ್&zwnj;ನಲ್ಲಿ ಜಾತಿ ತಾರತಮ್ಯ ಇದೆಯೇ? ಬಡವರು-ಶ್ರೀಮಂತರ ನಡುವೆ ಸಂಬಂಧ ಹೇಗಿರುತ್ತೆ? ಅಲ್ಲಿ ಕಸ ಗುಡಿಸುವವರನ್ನು ಹೇಗೆ ನಡೆಸಿಕೊಳ್ತಾರೆ? ಜಪಾನ್&zwnj;ನಲ್ಲಿರುವ ತೆಲುಗು ಯುವತಿ ಬಿಚ್ಚಿಟ್ಟ ಸತ್ಯಗಳೇನು? ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಧರ್ಮ, ಜಾತಿ ಆಧಾರಿತ ತಾರತಮ್ಯ ಸಾಮಾನ್ಯ. ನಮ್ಮ ದೇಶದಲ್ಲಿ ಜಾತಿ ಭಾವನೆಯಿಂದ ಜನರನ್ನು ಕೀಳಾಗಿ ಕಾಣುವುದು ಎಲ್ಲರಿಗೂ ತಿಳಿದಿದೆ. ಕೆಲವು ದೇಶಗಳಲ್ಲಿ ಬಿಳಿ-ಕಪ್ಪು ಎಂದು ಜನಾಂಗೀಯ ತಾರತಮ್ಯ ಹೆಚ್ಚಾಗಿದೆ. ಆದರೆ, ಜಪಾನ್&zwnj;ನಲ್ಲಿ ಪರಿಸ್ಥಿತಿ ಹೇಗಿದೆ?&lt;/p&gt;&lt;p&gt;ಜಪಾನ್&zwnj;ನಲ್ಲಿ ಅನೇಕ ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಆಂಧ್ರಪ್ರದೇಶದಿಂದ ಉದ್ಯೋಗಕ್ಕಾಗಿ ಜಪಾನ್&zwnj;ಗೆ ತೆರಳಿದ ಝಾನ್ಸಿ ಕೂಡ ಒಬ್ಬರು. ಅವರು 'ಝಾನ್ಸಿ ಇನ್ ಜಪಾನ್' ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಜಪಾನ್ ಸಂಸ್ಕೃತಿ, ಜೀವನಶೈಲಿ ಮತ್ತು ಅಲ್ಲಿನ ನಿಯಮಗಳ ಬಗ್ಗೆ ವಿಡಿಯೋ ಮಾಡುತ್ತಾರೆ. ಇತ್ತೀಚೆಗೆ, ಫಾಲೋವರ್ ಒಬ್ಬರು ಜಪಾನ್&zwnj;ನಲ್ಲಿ ಜಾತಿ ತಾರತಮ್ಯ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಝಾನ್ಸಿ ವಿಡಿಯೋ ಮೂಲಕ ಉತ್ತರಿಸಿದ್ದಾರೆ.&lt;/p&gt;&lt;p&gt;ಈ ಪ್ರಶ್ನೆಗೆ ಝಾನ್ಸಿ, 'ಜಪಾನ್&zwnj;ನಲ್ಲಿ ಜಾತಿ-ಧರ್ಮದ ಹುಚ್ಚು ಇಲ್ಲ. ಎಲ್ಲರನ್ನೂ ಸಮಾನವಾಗಿ, ವಿನಯದಿಂದ ಕಾಣುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ಒಮ್ಮೆ ಒಂದು ಕಾರ್ಯಕ್ರಮದ ನಂತರ, ಕಸ ಗುಡಿಸುವವರಿಗೆ ಅಲ್ಲಿನ ಅಧಿಕಾರಿಗಳು ತಲೆಬಾಗಿ ನಮಸ್ಕರಿಸಿದ್ದನ್ನು ನಾನು ನೋಡಿದ್ದೇನೆ. ಇಲ್ಲಿ ಬಡವ-ಶ್ರೀಮಂತ ಎಂಬ ಭೇದವಿಲ್ಲ. ಇದೇ ಕಾರಣಕ್ಕೆ ಈ ದೇಶ ವೇಗವಾಗಿ ಬೆಳೆಯುತ್ತಿದೆ' ಎಂದು ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿ&lt;/strong&gt;&lt;/h2&gt;&lt;p&gt;ಒಂದು ದೇಶ ಅಭಿವೃದ್ಧಿ ಹೊಂದಲು ತಾರತಮ್ಯವಿಲ್ಲದ ಸಮಾಜ ಮುಖ್ಯ. ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಇದಕ್ಕೆ ಉತ್ತಮ ಉದಾಹರಣೆ. ಜಪಾನ್&zwnj;ನಲ್ಲಿ ಚಿಕ್ಕಂದಿನಿಂದಲೇ ಶಿಸ್ತು, ಸ್ವಾವಲಂಬನೆ ಮತ್ತು ಪರಸ್ಪರ ಗೌರವವನ್ನು ಕಲಿಸಲಾಗುತ್ತದೆ. ಶಾಲಾ ಹಂತದಿಂದಲೇ ಈ ಮೌಲ್ಯಗಳನ್ನು ಬಲವಾಗಿ ಕಲಿಸುವುದರಿಂದಲೇ ಜಪಾನ್ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/world-news/a-youtuber-reveals-the-truth-about-caste-and-equality-in-japan-gvd/articleshow-psx460l"/>
        </item>
        <item>
            <title><![CDATA[Loco Pilot: ಭಾರತೀಯ ರೈಲ್ವೆ ಲೋಕೋ ಪೈಲಟ್ ತಿಂಗಳ ಸಂಬಳ ಎಷ್ಟು? ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡ್ತಾರೆ?]]></title>
            <link>https://kannada.asianetnews.com/gallery/india-news/indian-railway-loco-pilot-salary-and-work-hours-explained-gvd-izxrydq</link>
            <guid isPermaLink="true">https://kannada.asianetnews.com/gallery/india-news/indian-railway-loco-pilot-salary-and-work-hours-explained-gvd-izxrydq</guid>
            <pubDate>Tue, 23 Jun 2026 21:51:39 +0530</pubDate>
            <description><![CDATA[&lt;p&gt;Loco Pilot: ಭಾರತದ ಅತಿದೊಡ್ಡ ಜಾಲ ಎಂದರೆ ಅದು ರೈಲ್ವೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲು ಸೇವೆಯನ್ನು ಬಳಸುತ್ತಾರೆ. ರೈಲುಗಳನ್ನು ಅವುಗಳ ಗಮ್ಯಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಲೋಕೋ ಪೈಲಟ್&zwnj;ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಯಾಣಿಕರ ಸುರಕ್ಷತೆ ಇವರ ಜವಾಬ್ದಾರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtmdgnj3dtebmajp44bmtk6,imgname-jvj-1782231515826.png" type="image/jpeg" height="390" width="690"/>
            <content:encoded><![CDATA[&lt;p&gt;Loco Pilot: ಭಾರತದ ಅತಿದೊಡ್ಡ ಜಾಲ ಎಂದರೆ ಅದು ರೈಲ್ವೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲು ಸೇವೆಯನ್ನು ಬಳಸುತ್ತಾರೆ. ರೈಲುಗಳನ್ನು ಅವುಗಳ ಗಮ್ಯಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಲೋಕೋ ಪೈಲಟ್&zwnj;ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಯಾಣಿಕರ ಸುರಕ್ಷತೆ ಇವರ ಜವಾಬ್ದಾರಿ.&lt;/p&gt;&lt;img&gt;&lt;p&gt;ಲೋಕೋ ಪೈಲಟ್ ಸಂಬಳವು ಅವರ ಹುದ್ದೆಯ ಮಟ್ಟ, ಅನುಭವ ಮತ್ತು ಕೆಲಸ ಮಾಡುವ ವಿಭಾಗವನ್ನು ಅವಲಂಬಿಸಿರುತ್ತದೆ. ಸಹಾಯಕ ಲೋಕೋ ಪೈಲಟ್ (ALP) ಆಗಿ ಸೇರಿದಾಗ, 7ನೇ ವೇತನ ಆಯೋಗದ ಪ್ರಕಾರ ಆರಂಭಿಕ ಮೂಲ ವೇತನ ಸುಮಾರು ₹19,900 ಇರುತ್ತದೆ. ಇದರ ಜೊತೆಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಸಾರಿಗೆ ಭತ್ಯೆಗಳು ಸೇರಿರುತ್ತವೆ.&lt;/p&gt;&lt;img&gt;&lt;p&gt;ಈ ಎಲ್ಲಾ ಭತ್ಯೆಗಳನ್ನು ಸೇರಿಸಿದರೆ, ಒಬ್ಬ ಸಹಾಯಕ ಲೋಕೋ ಪೈಲಟ್ ತಿಂಗಳಿಗೆ ಸುಮಾರು ₹35,000 ದಿಂದ ₹55,000 ಗಳಿಸಬಹುದು. ಅನುಭವ ಹೆಚ್ಚಾದಂತೆ ಬಡ್ತಿ ಸಿಗುತ್ತದೆ. ನಂತರ ಸೀನಿಯರ್ ಅಸಿಸ್ಟೆಂಟ್ ಲೋಕೋ ಪೈಲಟ್, ಲೋಕೋ ಪೈಲಟ್ ಮತ್ತು ಸೀನಿಯರ್ ಲೋಕೋ ಪೈಲಟ್&zwnj;ನಂತಹ ಉನ್ನತ ಹುದ್ದೆಗಳನ್ನು ತಲುಪಬಹುದು.&lt;/p&gt;&lt;img&gt;&lt;p&gt;ಪೂರ್ಣ ಪ್ರಮಾಣದ ಲೋಕೋ ಪೈಲಟ್&zwnj;ಗಳು ತಿಂಗಳಿಗೆ ₹60,000 ದಿಂದ ₹1 ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯಬಹುದು. ವಿಶೇಷ ಮಾರ್ಗಗಳು, ಹೆಚ್ಚುವರಿ ಕರ್ತವ್ಯ, ರಾತ್ರಿ ಪಾಳಿ ಮತ್ತು ಓವರ್&zwnj;ಟೈಮ್ ಕೆಲಸಗಳಿಂದ ಆದಾಯ ಮತ್ತಷ್ಟು ಹೆಚ್ಚಾಗುತ್ತದೆ. ಅನುಭವಿ ಸೀನಿಯರ್ ಲೋಕೋ ಪೈಲಟ್&zwnj;ಗಳ ಸಂಬಳವು ಕೆಲವು ಸಂದರ್ಭಗಳಲ್ಲಿ ಲಕ್ಷ ರೂಪಾಯಿ ದಾಟುತ್ತದೆ.&lt;/p&gt;&lt;img&gt;&lt;p&gt;ಲೋಕೋ ಪೈಲಟ್ ಆಗಲು ಪಿಯುಸಿ ನಂತರ ಸಂಬಂಧಿತ ಟೆಕ್ನಿಕಲ್ ಕೋರ್ಸ್&zwnj;ಗಳು ಅಥವಾ ಐಟಿಐ, ಡಿಪ್ಲೊಮಾ ಅರ್ಹತೆ ಇರಬೇಕು. ನಂತರ ರೈಲ್ವೆ ನೇಮಕಾತಿ ಮಂಡಳಿ (RRB) ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಲಿಖಿತ ಪರೀಕ್ಷೆ, ಸೈಕೋಮೆಟ್ರಿಕ್ ಟೆಸ್ಟ್ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರವೇ ಆಯ್ಕೆ ಮಾಡಲಾಗುತ್ತದೆ.&lt;/p&gt;&lt;img&gt;&lt;p&gt;ಈ ಕೆಲಸದಲ್ಲಿ ಸಂಬಳ ಹೆಚ್ಚಿದ್ದರೂ, ಇದು ಅತ್ಯಂತ ಜವಾಬ್ದಾರಿಯುತ ಹುದ್ದೆಯಾಗಿದೆ. ಗಂಟೆಗಟ್ಟಲೆ ಕ್ಯಾಬಿನ್&zwnj;ನಲ್ಲಿ ಪ್ರಯಾಣಿಸಬೇಕು. ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಬೇಕು. ನಿಗದಿತ ಸಮಯ ಪಾಲನೆ ಮಾಡಬೇಕು. ಆದರೂ, ಉತ್ತಮ ಸಂಬಳ, ಸರ್ಕಾರಿ ಉದ್ಯೋಗದ ಭದ್ರತೆ ಮತ್ತು ಬಡ್ತಿ ಅವಕಾಶಗಳಿಂದಾಗಿ ಲೋಕೋ ಪೈಲಟ್ ಹುದ್ದೆಗೆ ಯುವಕರಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ರೈಲ್ವೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಪ್ರತಿಷ್ಠಿತ ಅವಕಾಶವಾಗಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/india-news/indian-railway-loco-pilot-salary-and-work-hours-explained-gvd-izxrydq"/>
        </item>
        <item>
            <title><![CDATA[ಎಲಾನ್ ಮಸ್ಕ್‌ಗೆ ಆಗಿರುವ ನಷ್ಟ ಎಷ್ಟು ಗೊತ್ತಾ? ಭಾರತದ ಶ್ರೀಮಂತರಾದ ಅದಾನಿ, ಅಂಬಾನಿ 3 ಬಾರಿ ಬೀದಿಗೆ ಬರ್ತಿದ್ದರು!]]></title>
            <link>https://kannada.asianetnews.com/gallery/business/elon-musk-loses-trillions-as-spacex-stock-plummets-after-record-ipo-ambani-and-adani-3-time-property-slk260r</link>
            <guid isPermaLink="true">https://kannada.asianetnews.com/gallery/business/elon-musk-loses-trillions-as-spacex-stock-plummets-after-record-ipo-ambani-and-adani-3-time-property-slk260r</guid>
            <pubDate>Tue, 23 Jun 2026 21:48:38 +0530</pubDate>
            <description><![CDATA[&lt;p&gt;ಎಲಾನ್ ಮಸ್ಕ್ ಮಾಲೀಕತ್ವದ 'ಸ್ಪೇಸ್&zwnj;ಎಕ್ಸ್' ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಕೇವಲ ಮೂರು ದಿನಗಳಲ್ಲಿ $600 ಬಿಲಿಯನ್&zwnj;ಗಿಂತಲೂ ಹೆಚ್ಚು ನಷ್ಟ ಅನುಭವಿಸಿದೆ. ಈ ನಷ್ಟವು ಭಾರತದ ಅತ್ಯಂತ ಶ್ರೀಮಂತರಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅಂಥವರು 3 ಬಾರಿ ಬೀದಿಗೆ ಬರುತ್ತಿದ್ದರು. ಇಲ್ಲಿದೆ ಪೂರ್ಣ ವಿವರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtkntax75jq5d0gtg5z6g0t,imgname-elon-musk-stock-loss-ambani-and-adani-1782230739292.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಲಾನ್ ಮಸ್ಕ್ ಮಾಲೀಕತ್ವದ 'ಸ್ಪೇಸ್&zwnj;ಎಕ್ಸ್' ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಕೇವಲ ಮೂರು ದಿನಗಳಲ್ಲಿ $600 ಬಿಲಿಯನ್&zwnj;ಗಿಂತಲೂ ಹೆಚ್ಚು ನಷ್ಟ ಅನುಭವಿಸಿದೆ. ಈ ನಷ್ಟವು ಭಾರತದ ಅತ್ಯಂತ ಶ್ರೀಮಂತರಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅಂಥವರು 3 ಬಾರಿ ಬೀದಿಗೆ ಬರುತ್ತಿದ್ದರು. ಇಲ್ಲಿದೆ ಪೂರ್ಣ ವಿವರ.&lt;/p&gt;&lt;img&gt;&lt;p&gt;ವಿಶ್ವದ ಅತ್ಯಂತ ಮೌಲ್ಯಯುತ ಖಾಸಗಿ ಕಂಪನಿಗಳಲ್ಲಿ ಒಂದಾದ ಎಲಾನ್ ಮಸ್ಕ್ ಮಾಲೀಕತ್ವದ 'ಸ್ಪೇಸ್&zwnj;ಎಕ್ಸ್' (SpaceX) ಷೇರು ಮಾರುಕಟ್ಟೆಯಲ್ಲಿ ಭೀಕರ ಕುಸಿತ ಕಂಡಿದೆ. ಕೇವಲ ಮೂರು ವಹಿವಾಟು ದಿನಗಳಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು ಬರೋಬ್ಬರಿ $600 ಬಿಲಿಯನ್&zwnj;ಗಿಂತಲೂ ಹೆಚ್ಚು (ಸುಮಾರು ₹57 ಲಕ್ಷ ಕೋಟಿ) ಕುಸಿದಿದೆ. ಈ ನಷ್ಟದ ಪ್ರಮಾಣ ಎಷ್ಟಿದೆಯೆಂದರೆ, ಭಾರತದ ಇಬ್ಬರು ಅತಿದೊಡ್ಡ ಶ್ರೀಮಂತರಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರ ಒಟ್ಟು ಆಸ್ತಿಯ ಮೂರು ಪಟ್ಟು ಸಂಪತ್ತು ಕೇವಲ ಮೂರು ದಿನಗಳಲ್ಲಿ ಮಣ್ಣುಪಾಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಅಂಬಾನಿ-ಅದಾನಿ ಆಸ್ತಿಗಿಂತಲೂ ದೊಡ್ಡ ನಷ್ಟ!&lt;/strong&gt;&lt;/p&gt;&lt;p&gt;ಬ್ಲೂಮ್&zwnj;ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನೀಡಿರುವ ಅಂಕಿ-ಅಂಶಗಳ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಒಟ್ಟು ಆಸ್ತಿ $88.3 ಬಿಲಿಯನ್ ಆಗಿದ್ದರೆ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಆಸ್ತಿ $120 ಬಿಲಿಯನ್ ಆಗಿದೆ. ಇವರಿಬ್ಬರ ಒಟ್ಟು ಆಸ್ತಿಯನ್ನು ಒಗ್ಗೂಡಿಸಿದರೂ ಸ್ಪೇಸ್&zwnj;ಎಕ್ಸ್ ಅನುಭವಿಸಿದ ಮೂರು ದಿನಗಳ ನಷ್ಟದ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ. ಸೋಮವಾರ ಒಂದೇ ದಿನ ಸ್ಪೇಸ್&zwnj;ಎಕ್ಸ್ ಷೇರುಗಳು 16% ಕುಸಿತ ಕಂಡು $154.60 ಕ್ಕೆ ತಲುಪಿದವು. ಇದು ಕಂಪನಿ ಲಿಸ್ಟ್ ಆದ ನಂತರದ ಅತ್ಯಂತ ಕನಿಷ್ಠ ಬೆಲೆಯಾಗಿದೆ.&lt;/p&gt;&lt;img&gt;&lt;p&gt;&lt;strong&gt;ಕುಸಿತಕ್ಕೆ ಪ್ರಮುಖ ಕಾರಣಗಳೇನು?&lt;/strong&gt;&lt;/p&gt;&lt;p&gt;ದಾಖಲೆಯ $75 ಬಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದ್ದ ಸ್ಪೇಸ್&zwnj;ಎಕ್ಸ್&zwnj;ನ ಬಂಪರ್ ಐಪಿಒ (IPO) ನಂತರ ಈ ಕುಸಿತ ಸಂಭವಿಸಿದೆ. ಆರಂಭದಲ್ಲಿ ರಾಕೆಟ್ ಉಡಾವಣೆ, ಸ್ಯಾಟಲೈಟ್ ಸಂವಹನ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ ಮಸ್ಕ್ ಅವರ ಪ್ರಾಬಲ್ಯ ಕಂಡು ಹೂಡಿಕೆದಾರರು ಮುಗಿಬಿದ್ದು ಷೇರು ಖರೀದಿಸಿದ್ದರು. ಆದರೆ, ಬೆಲೆ ಗಗನಕ್ಕೇರುತ್ತಿದ್ದಂತೆಯೇ ಲಾಭ ಗಳಿಕೆಯ ಉದ್ದೇಶದಿಂದ (Profit Booking) ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಲು ಮುಂದಾದದ್ದು ಈ ಭಾರಿ ಕುಸಿತಕ್ಕೆ ದಾರಿ ಮಾಡಿಕೊಟ್ಟಿದೆ.&lt;/p&gt;&lt;img&gt;&lt;p&gt;&lt;strong&gt;ಎಐ ಹೂಡಿಕೆಯ ಆತಂಕ:&lt;/strong&gt;&lt;/p&gt;&lt;p&gt;ಸ್ಪೇಸ್&zwnj;ಎಕ್ಸ್ ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ ಬೃಹತ್ ಮಟ್ಟದ ಹೂಡಿಕೆಗೆ ಪ್ಲಾನ್ ಮಾಡಿದೆ. ಎಐ ಚಟುವಟಿಕೆಗಳಿಗಾಗಿ ಸುಮಾರು $20 ಬಿಲಿಯನ್ ಡಾಲರ್ ಸಂಗ್ರಹಿಸಲು ಕಂಪನಿ ಮುಂದಾಗಿರುವುದು ಮತ್ತು 'ರಿಫ್ಲೆಕ್ಷನ್ ಎಐ' ನಂತಹ ಸ್ಟಾರ್ಟ್&zwnj;ಅಪ್&zwnj;ಗಳ ಜೊತೆ ಕೋಟ್ಯಂತರ ಡಾಲರ್ ಒಪ್ಪಂದ ಮಾಡಿಕೊಳ್ಳುತ್ತಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಅತಿಯಾದ ಹೂಡಿಕೆ ಕಂಪನಿಯ ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಭಯ ಈ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ.&lt;/p&gt;&lt;img&gt;&lt;p&gt;ಇಷ್ಟೆಲ್ಲಾ ಕುಸಿತದ ನಡುವೆಯೂ, $2 ಟ್ರಿಲಿಯನ್&zwnj;ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯದೊಂದಿಗೆ ಸ್ಪೇಸ್&zwnj;ಎಕ್ಸ್ ಇಂದಿಗೂ ವಿಶ್ವದ ಪ್ರಭಾವಶಾಲಿ ಕಂಪನಿಗಳಲ್ಲಿ ಒಂದಾಗಿ ಉಳಿದಿದೆ. ಆದರೆ, ಚಿಲ್ಲರೆ ಹೂಡಿಕೆದಾರರ ಭಾರಿ ಆಸಕ್ತಿಯ ನಡುವೆಯೂ ಷೇರು ಮಾರುಕಟ್ಟೆಯ ಈ ಏರಿಳಿತ ಮಸ್ಕ್ ಸಾಮ್ರಾಜ್ಯಕ್ಕೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/business/elon-musk-loses-trillions-as-spacex-stock-plummets-after-record-ipo-ambani-and-adani-3-time-property-slk260r"/>
        </item>
        <item>
            <title><![CDATA[Google job Quit: ಗೂಗಲ್‌ ಕಂಪನಿಯ ಕೆಲಸ ಬಿಟ್ಟ 23ರ ಯುವತಿ, 'ಹಣಕಾಸು ಭದ್ರತೆ ಎನ್ನುವುದೇ ಟ್ರ್ಯಾಪ್' ಎಂದಿದ್ದೇಕೆ?]]></title>
            <link>https://kannada.asianetnews.com/viral/aashna-doshi-quits-google-job-23-year-old-indian-origin-techie-build-ai-startup/articleshow-hzxclpc</link>
            <guid isPermaLink="true">https://kannada.asianetnews.com/viral/aashna-doshi-quits-google-job-23-year-old-indian-origin-techie-build-ai-startup/articleshow-hzxclpc</guid>
            <pubDate>Tue, 23 Jun 2026 21:28:25 +0530</pubDate>
            <description><![CDATA[&lt;p&gt;23 ವರ್ಷದ ಭಾರತೀಯ ಮೂಲದ ಯುವತಿ ಆಶ್ನಾ ದೋಶಿ, ಗೂಗಲ್&zwnj;ನ ಕೈತುಂಬಾ ಸಂಬಳದ ಸಾಫ್ಟ್&zwnj;ವೇರ್ ಇಂಜಿನಿಯರ್ ಕೆಲಸವನ್ನು ತ್ಯಜಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ದೊಡ್ಡ ಕಂಪನಿಯಲ್ಲಿ ಸಣ್ಣ ಭಾಗವಾಗಿರುವುದಕ್ಕಿಂತ ಸ್ವಂತ ಉದ್ಯಮ ಕಟ್ಟುವ ಕನಸು ಕಾಣುತ್ತಿದ್ದ ಈಕೆಯ ಸಾಧನೆ ನೀವೇ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtjyzn027yxqhjh7p9ghmjj,imgname-aashna-doshi-quits-google-job-1782229991069.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಗೂಗಲ್&zwnj;ನಂತಹ ಜಾಗತಿಕ ಟೆಕ್ ದೈತ್ಯ ಕಂಪನಿಯಲ್ಲಿ ಸಾಫ್ಟ್&zwnj;ವೇರ್ ಇಂಜಿನಿಯರ್ ಆಗಿ ಕೆಲಸ ಸಿಗುವುದು ಲಕ್ಷಾಂತರ ಜನರ ಕನಸು. ಒಮ್ಮೆ ಅಂತಹ ಕೆಲಸ ಸಿಕ್ಕರೆ ಸಾಕು, ಜೀವನ ಸೆಟ್ ಆಯ್ತು ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ, 23 ವರ್ಷದ ಭಾರತೀಯ ಮೂಲದ ಯುವತಿ ಆಶ್ನಾ ದೋಶಿ ಮಾತ್ರ ಈ ಆರಾಮದಾಯಕ ಜೀವನಕ್ಕೆ ಗುಡ್&zwnj;ಬೈ ಹೇಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅಷ್ಟಕ್ಕೂ ಆಶ್ನಾ ಇಂತಹ ನಿರ್ಧಾರ ತಗೆದುಕೊಂಡಿದ್ದು ಏಕೆ? ಅವರ ಮುಂದಿನ ಪ್ಲಾನ್ ಏನು? ಇಲ್ಲಿದೆ ಸಂಪೂರ್ಣ ವಿವರ.&lt;/p&gt;&lt;h3&gt;&lt;strong&gt;ದೊಡ್ಡ ಯಂತ್ರದ ಸಣ್ಣ ಭಾಗವಾಗಿರಲು ಇಷ್ಟವಿರಲಿಲ್ಲ!&lt;/strong&gt;&lt;/h3&gt;&lt;p&gt;ಜಾರ್ಜಿಯಾ ಟೆಕ್&zwnj;ನಲ್ಲಿ ಪದವಿ ಮುಗಿಸಿದ ಆಶ್ನಾ ದೋಶಿ, ಫೆಬ್ರವರಿ 2024ರಲ್ಲಿ ಗೂಗಲ್ ಸೇರಿದ್ದರು. ನ್ಯೂಯಾರ್ಕ್ ನಗರದಲ್ಲಿ ಸಾಫ್ಟ್&zwnj;ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅವರು, ಅಲ್ಲಿನ ವೈವಿಧ್ಯಮಯ ವಾತಾವರಣವನ್ನು ಇಷ್ಟಪಟ್ಟಿದ್ದರು. ಆದರೆ, ಕೆಲಸ ಮಾಡುತ್ತಾ ಹೋದಂತೆ ಅವರಿಗೆ ಒಂದು ಅರಿವಾಯಿತು. 'ಬೃಹತ್ ಟೆಕ್ ಕಂಪನಿಯಲ್ಲಿ ನಾನು ಒಂದು ದೊಡ್ಡ ಯಂತ್ರದ ಅತ್ಯಂತ ಸಣ್ಣ ಭಾಗವಾಗಿದ್ದೆ. ನನ್ನ ಕೆಲಸದ ನೇರ ಪ್ರಭಾವ ಅಥವಾ ಇಂಪ್ಯಾಕ್ಟ್ ಏನು ಎಂಬುದು ತಿಳಿಯುತ್ತಿರಲಿಲ್ಲ' ಎಂದು ಆಶ್ನಾ ಹೇಳುತ್ತಾರೆ. ಅವರಿಗೆ ಕೋಡಿಂಗ್ ಹೊರತಾದ ಸೃಜನಶೀಲ ಹಾದಿಯಲ್ಲಿ ನಡೆಯುವ ತುಡಿತವಿತ್ತು.&lt;/p&gt;&lt;h2&gt;&lt;strong&gt;ಪಾಡ್&zwnj;ಕ್ಯಾಸ್ಟ್ ಮೂಲಕ ಬದಲಾದ ಹಾದಿ:&lt;/strong&gt;&lt;/h2&gt;&lt;p&gt;ಗೂಗಲ್&zwnj;ನಲ್ಲಿ ಕೆಲಸ ಮಾಡುತ್ತಿರುವಾಗಲೇ ಆಶ್ನಾ ಅವರು ತಮ್ಮ ಸಹೋದ್ಯೋಗಿಯೊಂದಿಗೆ ಸೇರಿ '0 ಟು 1' (0 to 1) ಎಂಬ ಪಾಡ್&zwnj;ಕ್ಯಾಸ್ಟ್ ಆರಂಭಿಸಿದರು. ಈ ಪಾಡ್&zwnj;ಕ್ಯಾಸ್ಟ್ ಮೂಲಕ ಅಮೆಜಾನ್, ಮೈಕ್ರೋಸಾಫ್ಟ್&zwnj;ನಂತಹ ದೊಡ್ಡ ಕಂಪನಿಗಳ ಮುಖ್ಯಸ್ಥರು, ಸ್ಟಾರ್ಟಪ್ ಸಂಸ್ಥಾಪಕರು ಮತ್ತು ಕ್ರಿಯೇಟರ್&zwnj;ಗಳನ್ನು ಸಂದರ್ಶಿಸಿದರು. ಕೇವಲ ಒಂದು ವರ್ಷದಲ್ಲಿ ಇವರ ಪಾಡ್&zwnj;ಕ್ಯಾಸ್ಟ್ ಯೂಟ್ಯೂಬ್&zwnj;ನಲ್ಲಿ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆಯಿತು. ಇದು ಅವರಲ್ಲಿ ಉದ್ಯಮಿಯಾಗುವ ಆತ್ಮವಿಶ್ವಾಸವನ್ನು ತುಂಬಿತು.&lt;/p&gt;&lt;h2&gt;&lt;strong&gt;ಹಣಕಾಸಿನ ಭದ್ರತೆ ಎಂಬುದು ಒಂದು ಬಲೆ!&lt;/strong&gt;&lt;/h2&gt;&lt;p&gt;ತಮ್ಮ ನಿರ್ಧಾರದ ಬಗ್ಗೆ ಮಾತನಾಡಿರುವ ಆಶ್ನಾ, 'ಹಣಕಾಸಿನ ಭದ್ರತೆ (Financial Security) ಎಂಬುದು ಆರಾಮದಾಯಕವಾಗಿರುತ್ತದೆ ನಿಜ, ಆದರೆ ಅದೊಂದು ರೀತಿಯ ಬಲೆ (Trap). ಅಲ್ಲಿಯೇ ಉಳಿದುಕೊಂಡರೆ ಜೀವನ ಪೂರ್ತಿ ನಮಗೆ ಬೇಕಾದ್ದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಗೂಗಲ್ ಬಿಡುವುದು ನನಗೆ ರಿಸ್ಕ್ ಅನಿಸಲಿಲ್ಲ. ಬದಲಾಗಿ ಅಲ್ಲಿಯೇ ಉಳಿದು ಮುಂದೆಂದೋ ಒಂದು ದಿನ 'ನಾನು ಆ ಕೆಲಸ ಮಾಡಿದ್ದರೆ ಏನಾಗುತ್ತಿತ್ತು?' ಎಂದು ಕೊರಗುತ್ತಾ ಕುಳಿತುಕೊಳ್ಳುವುದು ನನಗೆ ಹೆಚ್ಚು ಭಯಾನಕವೆಂದು ಅನಿಸಿತು' ಎನ್ನುತ್ತಾರೆ.&lt;/p&gt;&lt;h2&gt;&lt;strong&gt;ಬೌಂಟಿ (Bounty) ಎಐ ಸ್ಟಾರ್ಟಪ್ ಆರಂಭ:&lt;/strong&gt;&lt;/h2&gt;&lt;p&gt;ಮೇ ತಿಂಗಳಲ್ಲಿ ಗೂಗಲ್ ಕೆಲಸಕ್ಕೆ ಅಧಿಕೃತವಾಗಿ ರಾಜಿನಾಮೆ ನೀಡಿದ ಆಶ್ನಾ, ಈಗ 'ಬೌಂಟಿ' (Bounty) ಎಂಬ ಎಐ ಆಧಾರಿತ ಸ್ಟಾರ್ಟಪ್ ಮೇಲೆ ಗಮನ ಹರಿಸಿದ್ದಾರೆ. ಇದು ಕಂಪನಿಗಳು ತಮ್ಮ ಕೆಲಸಗಳನ್ನು ಮಾಡಿಕೊಡಲು ಟಾಸ್ಕ್&zwnj;ಗಳನ್ನು ನೀಡುವ ಮತ್ತು ಫಲಿತಾಂಶ ಬಂದ ನಂತರವಷ್ಟೇ ಹಣ ಪಾವತಿಸುವ ವಿಭಿನ್ನ ವೇದಿಕೆಯಾಗಿದೆ. ಸದ್ಯಕ್ಕೆ ಗೂಗಲ್&zwnj;ನಲ್ಲಿ ಪಡೆಯುತ್ತಿದ್ದ ಸಂಬಳದ ಒಂದು ಸಣ್ಣ ಭಾಗವನ್ನೂ ಇವರು ಗಳಿಸುತ್ತಿಲ್ಲ. ಆದರೂ, ಏನಾದರೂ ದೊಡ್ಡದನ್ನು ಸಾಧಿಸುವ ಹಂಬಲ ಇವರನ್ನು ಮುನ್ನಡೆಸುತ್ತಿದೆ. ಈಗಿರುವ ವ್ಯವಸ್ಥೆಯನ್ನು ಬಿಟ್ಟು ಹೊಸ ಸಾಹಸಕ್ಕೆ ಕೈಹಾಕಿರುವ 23ರ ಹರೆಯದ ಈ ಯುವತಿಯ ಧೈರ್ಯ ಈಗ ಟೆಕ್ ಜಗತ್ತಿನಲ್ಲಿ ಭಾರಿ ಚರ್ಚೆಗೆ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/aashna-doshi-quits-google-job-23-year-old-indian-origin-techie-build-ai-startup/articleshow-hzxclpc"/>
        </item>
        <item>
            <title><![CDATA[ಮದುವೆ ಬೇಡ ಎನ್ನಲಿಲ್ಲ ಬದಲಾಗಿ ಎರಡು ವಿಫಲ ಪ್ರಯ್ನತ ಬಳಿಕ 3ನೇ ಬಾರಿ ಹುಡುಗನ ಕೊಂದೇ ಬಿಟ್ಟಳು]]></title>
            <link>https://kannada.asianetnews.com/gallery/india-news/pune-groom-murder-case-bride-allegedly-killed-entrepreneur-son-on-third-attempt-x3gen99</link>
            <guid isPermaLink="true">https://kannada.asianetnews.com/gallery/india-news/pune-groom-murder-case-bride-allegedly-killed-entrepreneur-son-on-third-attempt-x3gen99</guid>
            <pubDate>Tue, 23 Jun 2026 21:23:56 +0530</pubDate>
            <description><![CDATA[&lt;p&gt;ನನಗೆ ಈ ಮದುವೆ ಬೇಡ ಎನ್ನಲಿಲ್ಲ, ಆಕೆ ತರುತ್ತಿದ್ದ ದುಬಾರಿ ಗಿಫ್ಟ್ ನಿರಾಕರಿಸಲಿಲ್ಲ. ಪಾರ್ಟಿ, ಬರ್ತ್&zwnj;ಡೆ ಸರ್ಪ್ರೈಸ್&zwnj;ನಲ್ಲಿ ಉತ್ತಮವಾಗಿ ನಟಿಸಿದ ಹುಡುಗಿ, ಸತತ 2 ಪ್ರಯತ್ನದ ಬಳಿಕ ಮೂರನೇ ಪ್ರಯತ್ನದಲ್ಲಿ ಹುಡುಗನ ಕೊಂದೇ ಬಿಟ್ಟಳು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt68a8c420rd3tszvcnednm,imgname-siya-goel-allegedly-failed-in-first-bid-to-kill-26-years-old-businessman-ketan-vishal-agarwal-231407983-16x9-0-1782216665356.jpg" type="image/jpeg" height="390" width="690"/>
            <content:encoded><![CDATA[&lt;p&gt;ನನಗೆ ಈ ಮದುವೆ ಬೇಡ ಎನ್ನಲಿಲ್ಲ, ಆಕೆ ತರುತ್ತಿದ್ದ ದುಬಾರಿ ಗಿಫ್ಟ್ ನಿರಾಕರಿಸಲಿಲ್ಲ. ಪಾರ್ಟಿ, ಬರ್ತ್&zwnj;ಡೆ ಸರ್ಪ್ರೈಸ್&zwnj;ನಲ್ಲಿ ಉತ್ತಮವಾಗಿ ನಟಿಸಿದ ಹುಡುಗಿ, ಸತತ 2 ಪ್ರಯತ್ನದ ಬಳಿಕ ಮೂರನೇ ಪ್ರಯತ್ನದಲ್ಲಿ ಹುಡುಗನ ಕೊಂದೇ ಬಿಟ್ಟಳು.&lt;/p&gt;&lt;img&gt;&lt;p&gt;ಪುಣೆ ಉದ್ಯಮಿ ವಿಶಾಲ್ ಅಗರ್ವಾಲ್ ಪುತ್ರ ಕೇತನ್ ಅಗರ್ವಾಲ್ ಸಾವಿನ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೇತನ್ ಅಗರ್ವಾಲ್ ಎಂಗೇಜ್&zwnj;ಮೆಂಟ್ ಸಿಯಾ ಗೊಯೆಲ್ ಜೊತೆ ನಡೆದಿತ್ತು. ನವೆಂಬರ್ 2026ರಲ್ಲಿ ಮಜುವೆ ನಿಗದಿಯಾಗಿತ್ತು. ಅಮಾಯಕ ಹುಡುಗ ತನ್ನ ಸಂಗಾತಿ ಕುರಿತು ಹಲವು ಕನಸು ಕಂಡಿದ್ದ. ಆದರೆ ಒಂದು ಸಣ್ಣ ಅನುಮಾನವೂ ಇರದೆ ಪ್ರೀತಿಸಿದ್ದ. ಆದರೆ ಹುಡುಗಿ ಹಾಗಲ್ಲ. ಆಕೆಗೆ ಮೊದಲೇ ಚೇತನ್ ಅನ್ನೋ ಯುವಕನ ಜೊತೆ ರಿಲೇಶನ್&zwnj;ಶಿಪ್&zwnj;ನಲ್ಲಿದ್ದಳು. ಒಂದೇ ಮಾತಿನಲ್ಲಿ ಮದುವೆ ಬೇಡ ಎಂದು ಹೇಳಬಹುದಿತ್ತು. ಇದರ ಬದಲಾಗಿ ನಿಶ್ಚಯಿಸಿದ ಹುಡುಗನ ಕೊಲ್ಲಲು ಪ್ಲಾನ್ ಮಾಡಿ ಯಶಸ್ವಿಯಾಗಿದ್ದಾಳೆ.&lt;/p&gt;&lt;img&gt;&lt;p&gt;ಕೇತನ್ ಹತ್ಯೆಗೆ ಸಿಯಾ ಗೊಯೆಲ್ ತನ್ನ ಗೆಳೆಯ ಚೇತನ್ ಜೊತೆ ಸಂಚು ರೂಪಿಸಿದ್ದಾಳೆ. ಆರಂಭಿಕ ಎರಡು ಪ್ರಯತ್ನಗಳು ವಿಫಲಗೊಂಡಿತ್ತು. ಆದರೆ ಮೂರನೇ ಪ್ರಯತ್ನದಲ್ಲಿ ಸಿಯಾ ಗೊಯೆಲ್ ಕಾರ್ಯಸಾಧಿಸಿದ್ದಳು. ಇದನ್ನು ಪೊಲೀಸರ ತನಿಖೆ ದಾರಿ ತಪ್ಪಿಸಲು ಎಲ್ಲಾ ಪ್ರಯತ್ನ ಮಾಡಿದ್ದಳು. ಆದರೆ ಕೊನೆಗೂ ಸತ್ಯ ಬಯಲಾಗಿದೆ.&lt;/p&gt;&lt;img&gt;&lt;p&gt;ಕೇತನ್ ಅಗರ್ವಾಲ್ ಸಾವು ಲೋಹಘಡ ಬೆಟ್ಟದಲ್ಲಿ ನಡೆದಿದೆ. ಲೋಹಘಡ ಬೆಟ್ಟದಿಂದ ತಳ್ಳಿ ಹಾಕಿ ಕೇತನ್ ಹತ್ಯೆ ಮಾಡಲಾಗಿದೆ. ಆದರೆ ಲೋಹಘಡಕ್ಕೆ ಟ್ರಕ್ಕಿಂಗ್ ಹೋಗಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು ಸಿಯಾ ಹಾಗೂ ಚೇತನ್ ಇಬ್ಬರು ಪ್ಲಾನ್ ಮಾಡಿ ಲೋಹಘಡ ಟ್ರಕ್ಕಿಂಗ್ ಯೋಜಿಸಿದ್ದರು. ಕೇತನ್ ಕರೆದುಕೊಂಡು ಬಂದ ಸಿಯಾ ಪ್ರಪಾತದ ಅಂಚಿನಲ್ಲಿ ಫೋಟೋ ತೆಗೆಯಲು ನಿಲ್ಲಿಸಿದ್ದಳು. ಈ ವೇಳೆ ಸಿಯಾ ಗೆಳೆಯ ಹಾವು ಹಾವು ಎಂದು ಬೆಚ್ಚಿಬೀಳಿಸುವ ಪ್ರಯತ್ನ ಮಾಡಿದ್ದರು. ಆದರೆ ಕೇತನ್ ಹೆಚ್ಚು ಬ್ಯಾಲೆನ್ಸ್ ಆಗಿದ್ದ ಕಾರಣ ಪ್ರಪಾತಕ್ಕೆ ಬೀಳಲಿಲ್ಲ. ಜೊತೆಗೆ ಇತರ ಪ್ರವಾಸಿಗರು ಹತ್ತಿರ ಬಂದ ಕಾರಣ ತಳ್ಳಿ ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲ ಪ್ರಯತ್ನ ವಿಫಲವಾಗಿತ್ತು.&lt;/p&gt;&lt;img&gt;&lt;p&gt;ಪ್ರೀ ವೆಡ್ಡಿಂಗ್ ಫೋಟೋ ಶೂಟ್&zwnj;ಗಾಗಿ ಕೇತನ್ ಬಾಲಿ ಲೊಕೇಶನ್ ಫಿಕ್ಸ್ ಮಾಡಿದ್ದರು. ಪೋಷಕರು ಸೇರಿ ಎಲ್ಲರು ವಿಮಾನ ನಿಲ್ದಾಣಕ್ಕೆ ತೆರಳಿದಾಗ ಕೇತನ್ ಪಾಸ್&zwnj;ಫೋರ್ಟ್&zwnj;ನ್ನು ಸಿಯಾ ಬಚ್ಚಿಟ್ಟಳು. ವಿಮಾನ ನಿಲ್ದಾಣದಲ್ಲಿ ಹೋಗಿ ನೋಡಿದಾಗ ಕೇತನ್ ಪಾಸ್&zwnj;ಪೋರ್ಟ್ ನಾಪತ್ತೆಯಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಪ್ರವಾಸ ರದ್ದ ಮಾಡಿ ಮರಳಿದ್ದರು. ಇದರ ಹಿಂದೆಯೂ ಹತ್ಯೆಯ ಸಂಚಿತ್ತು ಅನ್ನೋದು ಯಾರಿಗೂ ಗೊತ್ತಾಗಲೇ ಇಲ್ಲ.&lt;/p&gt;&lt;img&gt;&lt;p&gt;ಸಿಯಾ ಗೊಯೆಲ್ ಬಾಲಿ ಪ್ರವಾಸ ರದ್ದಾದ ಕಾರಣ ಅಸಮಾಧಾನಗೊಂಡಂತೆ ನಟಿಸಿದ್ದಳು. ಹೀಗಾಗಿ ಜೂನ್ 18 ರಂದು ಲೋಹಘಡ ಟ್ರಕ್ಕಿಂಗ್ ಪ್ರವಾಸ ಬರಲೇಬೇಕೆಂದು ಹಠ ಹಿಡಿದಳು. ಇತ್ತ ಸಿಯಾ ಗೆಳೆಯ ಚೇತನ್ ಅಲ್ಲೆ ಹೊಂಚು ಹಾಕಿ ಕುಳಿತಿದ್ದ. ಮತ್ತೆ ಕಂದಕ ಬಳಿ ಫೋಟೋಗೆ ನಿಲ್ಲಿಸಿದ ಬೆನ್ನಲ್ಲೇ ಚೇತನ್ ಹಾಗೂ ಆತನ ಗೆಳೆಯರು ಆಗಮಿಸಿ ಕೇತನ್ ಅಗರ್ವಾಲ್ ತಳ್ಳಿ ಹಾಕಿದ್ದಾರೆ.&lt;/p&gt;&lt;img&gt;&lt;p&gt;ಫೆಬ್ರವರಿಯಲ್ಲಿ ಕೇತನ್ ಅಗರ್ವಾಲ್ ಸಿಯಾ ಗೋಯೆಲ್ ನಿಶ್ಚಿತಾರ್ಥವಾಗಿತ್ತು. ನವೆಂಬರ್ ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಗೆ ಜೈಪುರದ ಅರಮನೆಯನ್ನು ಬರೋಬ್ಬರಿ 17 ಕೋಟಿ ರೂಪಾಯಿ ನೀಡಿ ಬುಕ್ ಮಾಡಿದ್ದರು. 20ಕೋಟಿಗೂ ಅದಿಕ ವೆಚ್ಚದಲ್ಲಿ ಮದುವೆ ತಯಾರಿ ನಡೆಯುತ್ತಿತ್ತು. ಅತಿಥಿಗಳಿಗೆ ಉದಯಪುರಕ್ಕೆ ತೆರಳಲು ಎರಡು ವಿಮಾನ ಬುಕ್ ಮಾಡಲಾಗಿತ್ತು. ಆದರೆ ತನ್ನ ಮಗನ ಸಾವು ಕಂಡ ಪೋಷಕರು ಕಂಗಾಲಾಗಿದ್ದಾರೆ&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/pune-groom-murder-case-bride-allegedly-killed-entrepreneur-son-on-third-attempt-x3gen99"/>
        </item>
        <item>
            <title><![CDATA[Viral Trisha Post: ಸಿಎಂ ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಸ್ಪೆಷಲ್ ವಿಶ್; ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ!]]></title>
            <link>https://kannada.asianetnews.com/entertainment/trisha-krishnan-shared-a-special-photo-on-the-birthday-of-tamil-nadu-chief-minister-vijay-joseph/articleshow-ysab8n2</link>
            <guid isPermaLink="true">https://kannada.asianetnews.com/entertainment/trisha-krishnan-shared-a-special-photo-on-the-birthday-of-tamil-nadu-chief-minister-vijay-joseph/articleshow-ysab8n2</guid>
            <pubDate>Tue, 23 Jun 2026 20:54:34 +0530</pubDate>
            <description><![CDATA[&lt;p&gt;ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಈ ಫೋಟೋ ಮತ್ತು ಅದರ ಕ್ಯಾಪ್ಶನ್ ಬಗ್ಗೆ ಬಗೆಬಗೆಯಾಗಿ ಚರ್ಚಿಸುತ್ತಿದ್ದಾರೆ. ಸದ್ಯ ಈ ಚಿತ್ರವು ಇಂಟರ್ನೆಟ್&zwnj;ನಲ್ಲಿ ಕಿಚ್ಚು ಹಚ್ಚಿದ್ದು, ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtg6ye44rka6cgz70wdbyjf,imgname-trisha-krishnan-thalapathy-vijay-1782227106244.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತ್ರಿಷಾ ಪೋಸ್ಟ್: ಬಗೆಬಗೆಯ ಚರ್ಚೆಗಳನ್ನು ಹುಟ್ಟುಹಾಕಿದ್ದು, ಇಂಟರ್ನೆಟ್&zwnj;ನಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ!&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ ದಳಪತಿ ವಿಜಯ್ (Thalapathy Vijay) ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ತ್ರಿಶಾ, ವಿಜಯ್ ಮತ್ತು ಹುಟ್ಟುಹಬ್ಬದ ಕೇಕ್ ಇದೆ. ಫೋಟೋದೊಂದಿಗೆ ತ್ರಿಶಾ ಅವರು, &quot;ಎಲ್ಲವನ್ನೂ ಸಾರ್ಥಕಗೊಳಿಸುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು (To the person who makes it all worth it), HBD ❤️&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಈ ಫೋಟೋ ಮತ್ತು ಅದರ ಕ್ಯಾಪ್ಶನ್ ಬಗ್ಗೆ ಬಗೆಬಗೆಯಾಗಿ ಚರ್ಚಿಸುತ್ತಿದ್ದಾರೆ. ಸದ್ಯ ಈ ಚಿತ್ರವು ಇಂಟರ್ನೆಟ್&zwnj;ನಲ್ಲಿ ಕಿಚ್ಚು ಹಚ್ಚಿದ್ದು, ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.&lt;/p&gt;&lt;p&gt;ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಈ ಫೋಟೋ ಮತ್ತು ಅದರ ಕ್ಯಾಪ್ಶನ್ ಬಗ್ಗೆ ಬಗೆಬಗೆಯಾಗಿ ಚರ್ಚಿಸುತ್ತಿದ್ದಾರೆ. ಸದ್ಯ ಈ ಚಿತ್ರವು ಇಂಟರ್ನೆಟ್&zwnj;ನಲ್ಲಿ ಕಿಚ್ಚು ಹಚ್ಚಿದ್ದು, ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ಹುಟ್ಟುಹಬ್ಬದ ಬೆನ್ನಲ್ಲೇ ಅನ್&zwnj;ಫಾಲೋ ಆಕ್ಷನ್!&lt;/strong&gt;&lt;/p&gt;&lt;p&gt;ನಟ ವಿಜಯ್ ನಿನ್ನೆಯಷ್ಟೇ (22 June) ತಮ್ಮ 52ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಸಂಭ್ರಮ ಮುಗಿದ ಕೇವಲ ಒಂದೇ ದಿನದ ಅಂತರದಲ್ಲಿ ನಟಿ ತ್ರಿಶಾ ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಜಯ್ ಅವರನ್ನು ಅನ್&zwnj;ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಆಾರಂಭಿಸಿದೆ. ಇದು ವಿಜಯ್ ಮತ್ತು ತ್ರಿಶಾ ಅವರ ಒಟ್ಟಾರೆ ಒಡನಾಟ ಹಾಗೂ ಸ್ನೇಹದ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಆದರೆ ಈ ಸುದ್ದಿಗೀಗ ಶಾಕಿಂಗ್ ಟ್ವಿಸ್ಟ್ ಸಿಕ್ಕಿದೆ.&lt;/p&gt;&lt;h2&gt;&lt;strong&gt;ಮುರಿದುಬಿತ್ತಾ ತ್ರಿಷಾ-ವಿಜಯ್ ಸ್ನೇಹ ಎಂಬ ಪ್ರಶ್ನೆಗೆ ಸಿಕ್ಕ ಉತ್ತರ ಇದೆನಾ?&lt;/strong&gt;&lt;/h2&gt;&lt;p&gt;ಪ್ರತಿ ವರ್ಷ ವಿಜಯ್ ಅವರ ಹುಟ್ಟುಹಬ್ಬದಂದು ಎಲ್ಲರಿಗಿಂತ ಮೊದಲು ವಿಶೇಷ ಪೋಸ್ಟ್ ಮಾಡುತ್ತಿದ್ದ ನಟಿ ತ್ರಿಶಾ ಈ ಬಾರಿ ವಿಶ್ ಮಾಡಿರಲಿಲ್ಲ. ಈ ವರ್ಷ ವಿಜಯ್ ಜನ್ಮದಿನದಂದು ತ್ರಿಷಾ ಅವರ ಖಾತೆಯಿಂದ ಯಾವುದೇ ಶುಭಾಶಯದ ಪೋಸ್ಟ್&zwnj;ಗಳು ಪ್ರಕಟವಾಗದೆ ಸಂಪೂರ್ಣ ಮೌನ ಆವರಿಸಿತ್ತು. ಇದು ಇವರಿಬ್ಬರ ನಡುವಿನ ಸಂಬಂಧದಲ್ಲಿ ದೊಡ್ಡ ಬದಲಾವಣೆ ಆಗಿದೆಯೇ ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಅನ್&zwnj;ಫಾಲೋ ಮಾಡುವ ಈ ಮೂಲಕ ತ್ರಿಶಾ ತಮ್ಮ ದೀರ್ಘಕಾಲದ ಸಂಬಂಧಕ್ಕೆ ಪೂರ್ಣವಿರಾಮ ಹಾಕುವುದರೊಂದಿಗೆ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗೆ ಪುಷ್ಠಿ ಸಿಕ್ಕಿದಂತಾಗಿತ್ತು. ಆದರೆ ಈಗ ಎಲ್ಲಾ ಸುದ್ದಿ ಉಲ್ಟಾ ಹೊಡೆದಿದೆ!&lt;/p&gt;&lt;h3&gt;ಬೆಳಿಗ್ಗೆಯಿಂದ ಹಬ್ಬಿದ್ದ ಬ್ರೇಕಪ್ ವದಂತಿಗೆ ಬ್ರೇಕ್!&lt;/h3&gt;&lt;p&gt;ಇದೀಗ, ನಟಿ ತ್ರಿಷಾ ಕೃಷ್ಣನ್ ಅವರು ಎಕ್ಸ್&zwnj; (ಟ್ವಿಟ್ಟರ್)ನಲ್ಲಿ ವಿಶೇ&zwj;ಷವಾದ ಕೇಕ್ ಇಟ್ಟುಕೊಂಡು ತಾವಿಬ್ಬರೂ ಜೊತೆಯಾಗಿರುವ ಫೋಟೋ ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ತುಂಬಾ ಸ್ಪೆಷಲ್ ಎಂಬಂತಹ ವಿಶ್ ಮಾಡಿದ್ದಾರೆ. ಈ ಮೂಲಕ ಇಂದು ಬೆಳಿಗ್ಗೆಯಿಂದ ಹಬ್ಬಿದ್ದ ಬ್ರೇಕಪ್ ವದಂತಿಯನ್ನು ಅವರು ಸ್ವತಃ ತಳ್ಳಿಹಾಕಿದಂತೆ ಆಗಿದೆ. ತ್ರಿಷಾ ಈಗ ಒಂದು ತಾಸಿನ ಮೊದಲು ಮಾಡರುವ ಟ್ವೀಟ್ (X) ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ಭಾರೀ ಸುದ್ದಿ ಹಾಗೂ ಸದ್ದು ಮಾಡುತ್ತಿದ್ದ ಬಹಳಷ್ಟು ಚರ್ಚೆ ಹುಟ್ಟುಹಾಕಿದೆ. ಸದ್ಯಕ್ಕೆ ವಿಜಯ್ ಹಾಗೂ ಪತ್ನಿ ನಡುವಿನ ಡಿವೋರ್ಸ್ ಪ್ರಕರಣದ ಮಧ್ಯೆ ಈ ಎಲ್ಲಾ ಬೆಳವಣಿಗೆ ತೀವ್ರ ಕುತೂಹಲ ಸೃಷ್ಟಿಸುತ್ತಿದೆ.&amp;nbsp;&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/trisha-krishnan-shared-a-special-photo-on-the-birthday-of-tamil-nadu-chief-minister-vijay-joseph/articleshow-ysab8n2"/>
        </item>
        <item>
            <title><![CDATA[ವ್ಯಾಟ್ಸಾಪ್, ಗೂಗಲ್ ಸೇರಿ 9 ಪ್ರತಿಷ್ಠಿತ ಗ್ಲೋಬಲ್ ಕಂಪನಿಗಳ ಮುಖ್ಯಸ್ಥರು ಭಾರತೀಯರು, ಇಲ್ಲಿದೆ ಲಿಸ್ಟ್]]></title>
            <link>https://kannada.asianetnews.com/gallery/india-news/whatsapp-to-google-9-global-tech-giants-led-by-indian-origin-ceos-check-list-fb12eg8</link>
            <guid isPermaLink="true">https://kannada.asianetnews.com/gallery/india-news/whatsapp-to-google-9-global-tech-giants-led-by-indian-origin-ceos-check-list-fb12eg8</guid>
            <pubDate>Tue, 23 Jun 2026 20:33:11 +0530</pubDate>
            <description><![CDATA[&lt;p&gt;ಕುನಾಲ್ ಶಾ ವ್ಯಾಟ್ಸಾಪ್ ಗ್ಲೋಬಲ್ ಸಿಇಒ ಆಗಿ ನೇಮಕಗೊಂಡ ಬೆನ್ನಲ್ಲೇ ಜಾಗತಿಕ ಕಂಪನಿಗಳನ್ನು ಮುನ್ನಡೆಸುತ್ತಿರುವ ಇತರ ಭಾರತೀಯ ಮೂಲದ ಸಾಧಕರ ಕುರಿತು ಭಾರಿ ಚರ್ಚೆಯಾಗುತ್ತಿದೆ. ವಿಶ್ವದೆಲ್ಲೆಡೆ ಪ್ರಮುಖ ಕಂಪನಿಗಳು ಇದೀಗ ಭಾರತೀಯರ ಕೈಯಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtfmf41vwjtgtr46n2v124j,imgname-global-companies-with-indian-ceos-1782226500737.png" type="image/jpeg" height="390" width="690"/>
            <content:encoded><![CDATA[&lt;p&gt;ಕುನಾಲ್ ಶಾ ವ್ಯಾಟ್ಸಾಪ್ ಗ್ಲೋಬಲ್ ಸಿಇಒ ಆಗಿ ನೇಮಕಗೊಂಡ ಬೆನ್ನಲ್ಲೇ ಜಾಗತಿಕ ಕಂಪನಿಗಳನ್ನು ಮುನ್ನಡೆಸುತ್ತಿರುವ ಇತರ ಭಾರತೀಯ ಮೂಲದ ಸಾಧಕರ ಕುರಿತು ಭಾರಿ ಚರ್ಚೆಯಾಗುತ್ತಿದೆ. ವಿಶ್ವದೆಲ್ಲೆಡೆ ಪ್ರಮುಖ ಕಂಪನಿಗಳು ಇದೀಗ ಭಾರತೀಯರ ಕೈಯಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ಇದೀಗ ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ಗ್ಲೋಬಲ್ ಸಿಇಒ ಆಗಿ ನೇಮಕಗೊಂಡಿದ್ದಾರೆ. ಜಾಗತಿಕ ಕಂಪನಿಯ ಮುಖ್ಯಸ್ಥನಾಗಿ ಕುನಾಲ್ ಶಾ ನೇಮಕಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ವಿಶೇಷ ಅಂದರೆ ಈ ರೀತಿ ಪ್ರತಿಷ್ಠಿತ ಗ್ಲೋಬಲ್ ಕಂಪನಿಗಳ ಮುಖ್ಯಸ್ಥರಾಗಿ 9 ಭಾರತೀಯ ಮೂಲದವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಆಲ್ಭಾಬೆಟ್ ಕಂಪನಿ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ. 2004ರಲ್ಲಿ ಗೂಗಲ್ ಸೇರಿದ ಸುಂದರ್ ಪಿಚೈ, 2015ರಲ್ಲಿ ಗೂಗಲ್ ಸಿಇಒ ಆಗಿ ನೇಮಕಗೊಂಡಿದ್ದರು. ಸದ್ಯ ಗೂಗಲ್ ಮಹತ್ತರ ಬೆಳವಣಿಗೆಯಲ್ಲಿ ಸುಂದರ್ ಪಿಚೈ ಕೊಡುಗೆ ನೀಡಿದ್ದಾರೆ. ಚೆನ್ನೈ ಮೂಲದ ಸುಂದರ್ ಪಿಚೈ ಅಮೆರಿಕದಲ್ಲಿ ನೆಲೆಸಿದ್ದಾರೆ.&lt;/p&gt;&lt;img&gt;&lt;p&gt;ಟೆಕ್ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ ಮುಖ್ಯಸ್ಥ ಭಾರತೀಯ ಮೂಲದ ಸತ್ಯ ನಾಡೆಲ್ಲ. 2014ರಲ್ಲಿ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕಗೊಂಡಿದ್ದರು. ಹೈದರಾಬಾದ್ ಮೂಲಕ ಸತ್ಯ ನಾಡೆಲ್ಲ ಸದ್ಯ ಅಮೆರಿಕದ ವಾಶಿಂಗ್ಟನ್&zwnj;ನಲ್ಲಿ ನೆಲೆಸಿದ್ದಾರೆ. ವಿಶೇಷ ಅಂದರೆ ಮಂಗಳೂರು ಯುನಿವರ್ಸಿಟಿಯಿಂದ ಎಲೆಕ್ಟ್ರಿಕ್ ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಐಬಿಎಂ ಕಂಪನಿಯ ಸಿಇಒ ಅರವಿಂದ್ ಕೃಷ್ಣ ಕಾನ್ಪುರ ಐಐಟಿಯಿಂದ ಪದವಿ ಪಡೆದಿದ್ದಾರೆ. 1990ರಲ್ಲಿ ಐಬಿಎಂ ಸೇರಿಕೊಂಡ ಅರವಿಂದ್ ಕೃಷ್ಣ ಇದೀಗ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೆಡೆಕ್ಸ್ ಕಾರ್ಪೋರೇಶನ್ ಮುಖ್ಯಸ್ಥರಾಗಿ ರಾಜ್ ಸುಬ್ರಮಣಿಯಂ ಕಾರ್ಯನಿರ್ವಹಿಸುತ್ತಿದ್ದಾರೆ. 2022ರಲ್ಲಿ ಸುಬ್ರಮಣಿಯಂ ಅಧಿಕಾರ ವಹಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪ್ರತಿಷ್ಠಿತ ನೆಟ್ ಆ್ಯಪ್ ಕಂಪನಿಗೆ 2011ರಲ್ಲಿ ಸೇರಿಕೊಂಡ ಭಾರತೀಯ ಮೂಲಕ ಜಾರ್ಜ್ ಕುರಿಯನ್ 2015ರಲ್ಲಿ ಸಿಇಒ ಆಗಿ ನೇಮಕಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಬಾರ್ಕ್ಲೆ ಕಂಪನಿಯ ಸಿಇಒ ಆಗಿ ಸಿಎಸ್ ವೆಂಕಟಕೃಷ್ಣನ್ ಕಾರ್ಯನಿರ್ವಹಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಯೂಟ್ಯೂಬ್ ಅತೀ ದೊಡ್ಡ ವಿಡಿಯೋ ಪ್ಲಾಟ್&zwnj;ಫಾರ್ಮ್ ಈ ಸಂಸ್ಥೆ ಮುನ್ನಡೆಸುತ್ತಿರುವುದು ಭಾರತದ ನೀಲ್ ಮೋಹನ್. ಇನ್ನು ಪ್ರೊಟೆಕ್ಟರ್ ಆ್ಯಂಡ್ ಗ್ಯಾಂಬಲ್ ಸಂಸ್ಥೆಯ ಸಿಇಒ ಆಗಿ ಭಾರತದ ಶೈಲೇಶ್ ಜೆಜುರಿಕರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಹನಿವೆಲ್ ಸಂಸ್ಥೆಯ ಸಿಇಒ ಆಗಿ ವಿಮಲ್ ಕಪೂರ್ ಸೇವೆ ಸಲ್ಲಿಸುತ್ತಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/whatsapp-to-google-9-global-tech-giants-led-by-indian-origin-ceos-check-list-fb12eg8"/>
        </item>
        <item>
            <title><![CDATA[ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!]]></title>
            <link>https://kannada.asianetnews.com/entertainment/prime-minister-modi-rahul-gandhi-extended-their-birthday-greetings-to-tamil-nadu-cm-vijay-joseph-videoshow-herag81</link>
            <guid isPermaLink="true">https://kannada.asianetnews.com/entertainment/prime-minister-modi-rahul-gandhi-extended-their-birthday-greetings-to-tamil-nadu-cm-vijay-joseph-videoshow-herag81</guid>
            <pubDate>Tue, 23 Jun 2026 20:06:40 +0530</pubDate>
            <description><![CDATA[&lt;p&gt;ದಳಪತಿ ವಿಜಯ್ ತಮಿಳುನಾಡಿನ ಸಿಎಂ ಆದ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 52ರ ಹರೆಯಕ್ಕೆ ಕಾಲಿಟ್ಟಿರೋ ವಿಜಯ್&zwnj;ಗೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರದ ಗಣ್ಯರಿಂದ ಶುಭಾಶಯ ಹರಿದುಬಂದಿದೆ. ಸದ್ಯ ವಿಜಯ್ ರಾಷ್ಟ್ರಮಟ್ಟದಲ್ಲಿ ಎಲ್ಲರಿಗೂ ಬೇಕಾದ ಲೀಡರ್ ಆಗಿಬಿಟ್ಟಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xai3hoa" medium="video" height="768" width="1024"/>
            <content:encoded><![CDATA[&lt;p&gt;ದಳಪತಿ ವಿಜಯ್ (Vijay Joseph) ತಮಿಳುನಾಡಿನ ಸಿಎಂ ಆದ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 52ರ ಹರೆಯಕ್ಕೆ ಕಾಲಿಟ್ಟಿರೋ ವಿಜಯ್&zwnj;ಗೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರದ ಗಣ್ಯರಿಂದ ಶುಭಾಶಯ ಹರಿದುಬಂದಿದೆ. ಸದ್ಯ ವಿಜಯ್ ರಾಷ್ಟ್ರಮಟ್ಟದಲ್ಲಿ ಎಲ್ಲರಿಗೂ ಬೇಕಾದ ಲೀಡರ್ ಆಗಿಬಿಟ್ಟಿದ್ದಾರೆ. ಇಷ್ಟು ದಿನ ಪ್ಯಾನ್ ಇಂಡಿಯಾ ಹೀರೋ ಆಗಿದ್ದವರು, ಈಗ ಪ್ಯಾನ್ ಇಂಡಿಯಾ ಲೀಡರ್ ಆಗಿದ್ದಾರೆ.&lt;/p&gt;&lt;p&gt;ತಮಿಳು ಸಿಎಂಗೆ ರಾಷ್ಟ್ರದ ಗಣ್ಯರಿಂದ ಶುಭ ಹಾರೈಕೆ..!ಹೌದು, ಸೋಮವಾರ, 22 ಜೂನ್ ದಳಪತಿ ವಿಜಯ್ ತಮ್ಮ 52ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮೊದಲೆಲ್ಲಾ ವಿಜಯ್ ನಟನಾಗಿದ್ದಾಗ, ಫ್ಯಾನ್ಸ್ ಅದ್ಧೂರಿಯಾಗಿ ಬರ್ತ್​ಡೇ ಸೆಲೆಬ್ರೇಟ್ ಮಾಡ್ತಾ ಇದ್ರು. ಈಗ ಸಿಎಂ ಆದ ಮೇಲೆ ಆ ಅದ್ದೂರಿತನ ಏನೂ ಕಮ್ಮಿ ಆಗಿಲ್ಲ. ಅಭಿಮಾನಿಗಳ ಸೆಲೆಬ್ರೇಷನ್ 10 ಪಟ್ಟು ಹೆಚ್ಚಾಗಿದೆ. ಆದರೆ, ಜೊತೆಗೆ ಮತ್ತಷ್ಟು ಎಲ್ಲವು ಜಾಸ್ತಿ ಆಗಿವೆ.&lt;/p&gt;&lt;p&gt;ಪ್ರತಿಸಾರಿ ವಿಜಯ್ ಬರ್ತ್​ಡೇಗೆ ಹೊಸ ಸಿನಿಮಾ ರಿಲೀಸ್ ಪ್ಲಾನ್ ಮಾಡಲಾಗ್ತಾ ಇತ್ತು. ಕೊನೆ ಪಕ್ಷ ವಿಜಯ್ ನಟಿಸಿದ ಯಾವುದಾದ್ರೂ ಸಿನಿಮಾ ರೀ-ರಿಲೀಸ್ ಆಗ್ತಾ ಇತ್ತು. &amp;nbsp;ಬರ್ತ್​ಡೇ ಜೊತೆಗೆ ಸಿನಿಮಾ ರಿಲೀಸ್ ಹಬ್ಬ ಕೂಡ ಸೇರಿ ಫ್ಯಾನ್ಸ್ ಸಂಭ್ರಮ ಡಬಲ್ ಆಗ್ತಾ ಇತ್ತು. ಈ ಸಾರಿ ಅದು ಮಾತ್ರ ಮಿಸ್ಸಿಂಗ್.&lt;/p&gt;&lt;p&gt;ಇನ್ನು, ವಿಜಯ್&zwnj;ಗೆ ಎಂದಿನಂತೆ ಸಿನಿತಾರೆಯರೆಲ್ಲಾ ವಿಶ್ ಮಾಡಿದ್ದಾರೆ. ಆದ್ರೆ ಈ ಸಾರಿ ರಾಜಕೀಯ ರಂಗದ ಗಣ್ಯರೆಲ್ಲಾ ದಳಪತಿಗೆ ವಿಶ್ ಮಾಡ್ತಾ ಇದ್ದಾರೆ. ಅದ್ರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿಜಯ್​ಗೆ ಸೋಷಿಯಲ್ ಮಿಡಿಯಾ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.'ತಮಿಳುನಾಡಿನ ಮುಖ್ಯಮಂತ್ರಿಗಳಾದ ತಿರು ಸಿ. ಜೋಸೆಫ್ ವಿಜಯ್ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ದೀರ್ಘಕಾಲ ಆರೋಗ್ಯ ಹಾಗೂ ಆಯುಷ್ಯದೊಂದಿಗೆ ಬಾಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. -ನರೇಂದ್ರ ಮೋದಿಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/prime-minister-modi-rahul-gandhi-extended-their-birthday-greetings-to-tamil-nadu-cm-vijay-joseph-videoshow-herag81"/>
        </item>
        <item>
            <title><![CDATA[ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ,  ಬೆಚ್ಚಿ ಬೀಳಿಸೋ ಘಟನೆ]]></title>
            <link>https://kannada.asianetnews.com/india-news/kashmiri-youth-mushtaq-journey-to-pakistan-to-join-militant-group-comes-under-spotlight-videoshow-hweiusi</link>
            <guid isPermaLink="true">https://kannada.asianetnews.com/india-news/kashmiri-youth-mushtaq-journey-to-pakistan-to-join-militant-group-comes-under-spotlight-videoshow-hweiusi</guid>
            <pubDate>Tue, 23 Jun 2026 19:50:48 +0530</pubDate>
            <description><![CDATA[&lt;p&gt;ನಿಮಗೊಂದು ಅಸಲಿ ದುರಂಧರ್​ ಸ್ಟೋರಿಯನ್ನ ತೋರಿಸ್ತಿವಿ.. ಕಣಿವೆಯ ಯುವಕನೊಬ್ಬ ಎಕೆ47 ಹಿಡ್ಕೊಂಡು ಉಗ್ರನಾಗೋದಕ್ಕೆ ಪಾಕಿಸ್ತಾನಕ್ಕೆ ಹೋಗ್ತಾನೆ.. ಆ ಬಳಿಕ ನಡೆದಿದ್ದೆಲಾ ಸಿನಿಮಿಯಾ ರೀತಿಯ ಘಟನೆ&lt;/p&gt;]]></description>
            <media:content url="https://geo.dailymotion.com/player/x1tbu.html?video=xai3dl6" medium="video" height="768" width="1024"/>
            <content:encoded><![CDATA[&lt;p&gt;ಕಾಶ್ಮೀರದ ಮುಷ್ತಾಕ್ ಅನ್ನೋ ಯುವಕ ಎಕೆ 47 ಗನ್ ಹಿಡಿದು ನೇರವಾಗಿ ಪಾಕಿಸ್ತಾನಕ್ಕೆ ಕಾಲಿಟ್ಟಿದ್ದ. ಈತ ಪಾಕಿಸ್ತಾನಕ್ಕೆ ಹೋಗಿದ್ದು ಉಗ್ರನಾಗಲು. ಆ ಬಳಿಕ ನಡೆಯೋದೆಲ್ಲವೂ ಸಿನಿಮೀಯಾ ಸ್ಟೈಲ್​​​.. ಒಂದೊಂದು ಘಟನೆಯೂ ರೋಚಕ.. ಒಂದೊಂದು ಕಥೆಯೂ ಭಯಾನಕ. &amp;nbsp;ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಉಗ್ರನೆಲೆಗಳು ಮುಷ್ತಾಕ್​​​ ಅಹಮದ್​​​ಗೆ ಮನಃಪರಿವರ್ತನೆಯನ್ನು ಮಾಡ್ತು. ಅಷ್ಟಕ್ಕೂ ಮುಷ್ತಾಕ್ ಅಲಸಿ ಧುರಂಧರ್ ಆಗಿದ್ದು ಹೇಗೆ?&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/kashmiri-youth-mushtaq-journey-to-pakistan-to-join-militant-group-comes-under-spotlight-videoshow-hweiusi"/>
        </item>
        <item>
            <title><![CDATA[Diamond Discovery: ಭಾರತಕ್ಕೆ ಸಿಕ್ತು ಹೊಸ ವಜ್ರದ ಗಣಿ; ಸರ್ವೇ ಕಾರ್ಯಕ್ಕೆ ಭೂಮಿ ಅಗೆಯುವಾಗ ಸಿಕ್ತು 5 ವಜ್ರಗಳು!]]></title>
            <link>https://kannada.asianetnews.com/gallery/india-news/india-s-good-news-diamonds-found-in-chhattisgarh-mahasamund-nmdc-survey-report-p2f8owi</link>
            <guid isPermaLink="true">https://kannada.asianetnews.com/gallery/india-news/india-s-good-news-diamonds-found-in-chhattisgarh-mahasamund-nmdc-survey-report-p2f8owi</guid>
            <pubDate>Tue, 23 Jun 2026 19:34:32 +0530</pubDate>
            <description><![CDATA[&lt;p&gt;ಛತ್ತೀಸ್&zwnj;ಗಢದ ಮಹಾಸಮುಂದ್ ಜಿಲ್ಲೆಯಲ್ಲಿ NMDC-CMDC ನಡೆಸಿದ ಸರ್ವೇಯಲ್ಲಿ 1.22 ಕ್ಯಾರೆಟ್ ತೂಕದ ಐದು ವಜ್ರದ ಹರಳುಗಳು ಪತ್ತೆಯಾಗಿವೆ. ಈ ಪೈಕಿ ಎರಡು ಉತ್ತಮ ಗುಣಮಟ್ಟದ್ದಾಗಿದ್ದು, ಈ ಸಂಶೋಧನೆಯು ರಾಜ್ಯದಲ್ಲಿ ವಜ್ರದ ನಿಕ್ಷೇಪವಿರುವುದನ್ನು ಖಚಿತಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtccx2aq43bn6hnd7p8fj55,imgname-diamonds-found-in-chhattisgarh--3--1782223107146.jpg" type="image/jpeg" height="390" width="690"/>
            <content:encoded><![CDATA[&lt;p&gt;ಛತ್ತೀಸ್&zwnj;ಗಢದ ಮಹಾಸಮುಂದ್ ಜಿಲ್ಲೆಯಲ್ಲಿ NMDC-CMDC ನಡೆಸಿದ ಸರ್ವೇಯಲ್ಲಿ 1.22 ಕ್ಯಾರೆಟ್ ತೂಕದ ಐದು ವಜ್ರದ ಹರಳುಗಳು ಪತ್ತೆಯಾಗಿವೆ. ಈ ಪೈಕಿ ಎರಡು ಉತ್ತಮ ಗುಣಮಟ್ಟದ್ದಾಗಿದ್ದು, ಈ ಸಂಶೋಧನೆಯು ರಾಜ್ಯದಲ್ಲಿ ವಜ್ರದ ನಿಕ್ಷೇಪವಿರುವುದನ್ನು ಖಚಿತಪಡಿಸಿದೆ.&lt;/p&gt;&lt;img&gt;&lt;p&gt;ಭಾರತ ದೇಶಕ್ಕೆ ಮತ್ತೊಂದು ಅದೃಷ್ಟ ಬಂದಿದೆ. ಛತ್ತೀಸ್&zwnj;ಗಢ ರಾಜ್ಯದ ಪಾಲಿಗೆ ಇದೊಂದು ಲಕ್ಕಿ ಲಾಟರಿ ಎಂದೇ ಹೇಳಬಹುದು. ಮಹಾಸಮುಂದ್ ಜಿಲ್ಲೆಯಲ್ಲಿ ನಡೆಸಲಾದ ಖನಿಜ ಸಂಪತ್ತು ಹುಡುಕಾಟದ ಸರ್ವೇಯ ವೇಳೆ ಬರೋಬ್ಬರಿ ಐದು ವಜ್ರದ ಹರಳುಗಳು ಪತ್ತೆಯಾಗಿವೆ. NMDC-CMDC ಲಿಮಿಟೆಡ್&zwnj;ನ ಅಧಿಕಾರಿಗಳು ಈ ಸಂಶೋಧನೆಯನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಎಲ್ಲಿ ಪತ್ತೆಯಾಯಿತು?:&lt;/strong&gt;&lt;/p&gt;&lt;p&gt;ಮಹಾಸಮುಂದ್ ಜಿಲ್ಲೆಯ ಸರಾಯ್&zwnj;ಪಾಲಿ ಪ್ರದೇಶದಲ್ಲಿರುವ 'ಬಲೋಡಾ-ಬೆಲ್ಮುಂಡಿ' ಎಂಬ ಡೈಮಂಡ್ ಬ್ಲಾಕ್&zwnj;ನಲ್ಲಿ ಈ ವಜ್ರಗಳು ಸಿಕ್ಕಿವೆ. ಈ ಪ್ರದೇಶದಲ್ಲಿ ವಜ್ರದ ನಿಕ್ಷೇಪಗಳಿರಬಹುದು ಎಂದು ಶಂಕಿಸಿ ಅಧಿಕಾರಿಗಳು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದರು. ಈಗ 1.22 ಕ್ಯಾರೆಟ್ ತೂಕದ ಒಟ್ಟು 5 ವಜ್ರದ ಹರಳುಗಳು ಸಂಗ್ರಹಿಸಿದ ಸ್ಯಾಂಪಲ್&zwnj;ಗಳಲ್ಲಿ ಪತ್ತೆಯಾಗಿವೆ. ಈ ಐದರಲ್ಲಿ ಎರಡು ಅತ್ಯಂತ ಉತ್ತಮ ಗುಣಮಟ್ಟದ (Gem-quality) ವಜ್ರಗಳಾಗಿದ್ದು, ಉಳಿದ ಮೂರು ಬೇರೆ ದರ್ಜೆಯದ್ದಾಗಿವೆ.&lt;/p&gt;&lt;img&gt;&lt;p&gt;&lt;strong&gt;ವೈಜ್ಞಾನಿಕ ಪರೀಕ್ಷೆ:&lt;/strong&gt;&lt;/p&gt;&lt;p&gt;ಈ ವಜ್ರಗಳನ್ನು ಪತ್ತೆಹಚ್ಚಲು ಸುಮಾರು 200 ಟನ್&zwnj;ಗಳಷ್ಟು ಖನಿಜಯುಕ್ತ ಮಣ್ಣು ಮತ್ತು ಕಲ್ಲುಗಳನ್ನು ಸಂಗ್ರಹಿಸಿ ಆಳವಾದ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜಿಯೋಫಿಸಿಕಲ್ ಸರ್ವೆ ಮತ್ತು ಡ್ರಿಲ್ಲಿಂಗ್ ಮೂಲಕ ವಜ್ರಗಳಿರುವ ಸಾಧ್ಯತೆಯ ಪ್ರದೇಶಗಳನ್ನು ಅಧಿಕಾರಿಗಳು ಮೊದಲೇ ಗುರುತಿಸಿದ್ದರು. ಇದೀಗ ಸಿಕ್ಕಿರುವ ಐದು ಹರಳುಗಳು ಆ ಪ್ರದೇಶದಲ್ಲಿ ವಜ್ರದ ನಿಕ್ಷೇಪ ಇರುವುದನ್ನು ಸಾಬೀತುಪಡಿಸಿವೆ. ಆದರೆ, ಇಲ್ಲಿ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಗಣಿಗಾರಿಕೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಇನ್ನಷ್ಟೇ ಸಂಶೋಧನೆಗಳು ನಡೆಯಬೇಕಿದೆ.&lt;/p&gt;&lt;img&gt;&lt;p&gt;&lt;strong&gt;ಸಿಎಂ ವಿಷ್ಣು ದೇವ್ ಸಾಯ್ ಸಂತಸ:&lt;/strong&gt;&lt;/p&gt;&lt;p&gt;ಈ ಮಹತ್ವದ ಪತ್ತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಛತ್ತೀಸ್&zwnj;ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯ್, 'ಇದು ರಾಜ್ಯದ ಗಣಿಗಾರಿಕೆ ಕ್ಷೇತ್ರಕ್ಕೆ ಲಭಿಸಿದ ಶುಭ ಸೂಚನೆ. ರಾಜ್ಯದ ಖನಿಜ ಸಂಪತ್ತನ್ನು ಹುಡುಕುವ ಇಂತಹ ವೈಜ್ಞಾನಿಕ ಪ್ರಯತ್ನಗಳಿಗೆ ನಮ್ಮ ಸರ್ಕಾರ ಸದಾ ಬೆಂಬಲ ನೀಡಲಿದೆ' ಎಂದು ತಿಳಿಸಿದ್ದಾರೆ. ಪತ್ತೆಯಾದ ವಜ್ರಗಳನ್ನು ಹೆಚ್ಚಿನ ಮೌಲ್ಯಮಾಪನಕ್ಕಾಗಿ ಮಧ್ಯಪ್ರದೇಶದ ಪನ್ನಾದಲ್ಲಿರುವ NMDC ಸುರಕ್ಷಿತ ಕೇಂದ್ರಕ್ಕೆ ಕಳುಹಿಸಲಾಗಿದೆ. ಒಂದು ವೇಳೆ ಇಲ್ಲಿ ಹೆಚ್ಚಿನ ನಿಕ್ಷೇಪ ಇರುವುದು ದೃಢಪಟ್ಟರೆ, ಛತ್ತೀಸ್&zwnj;ಗಢದ ಆರ್ಥಿಕತೆಗೆ ಇದು ದೊಡ್ಡ ಮಟ್ಟದ ಬಲ ನೀಡಲಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/india-news/india-s-good-news-diamonds-found-in-chhattisgarh-mahasamund-nmdc-survey-report-p2f8owi"/>
        </item>
        <item>
            <title><![CDATA[ಈ ಪ್ರಕಾಶ್​ ರಾಜ್​ ಅರೆಸ್ಟ್​ ಆದ್ರೆ, ಆ ಪ್ರಕಾಶ್​ ರಾಜ್​ ಓಡಿ ಬರ್ತಾರೆ; ನಾಲ್ಕು ಮಂದಿ ತಬ್ಬಿಕೊಳ್ತಾರೆ:  ಸೂಲಿಬೆಲೆ ವ್ಯಂಗ್ಯ]]></title>
            <link>https://kannada.asianetnews.com/gallery/sandalwood/chakravarthi-soolibele-about-prakash-rajs-arrest-warrant-suc-681d4z5</link>
            <guid isPermaLink="true">https://kannada.asianetnews.com/gallery/sandalwood/chakravarthi-soolibele-about-prakash-rajs-arrest-warrant-suc-681d4z5</guid>
            <pubDate>Tue, 23 Jun 2026 19:33:10 +0530</pubDate>
            <description><![CDATA[&lt;p&gt;ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್&zwnj;ಗಳನ್ನು ಹೊಂದಿರುವ ಆರೋಪದ ಮೇಲೆ ಬೆಂಗಳೂರು ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಎದುರಿಸುತ್ತಿದ್ದಾರೆ. &amp;nbsp;ಈ ಕುರಿತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtckgq77jvhw783gtyc51fe,imgname-soolibere-and-prakash-raj-1782223323879.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್&zwnj;ಗಳನ್ನು ಹೊಂದಿರುವ ಆರೋಪದ ಮೇಲೆ ಬೆಂಗಳೂರು ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಎದುರಿಸುತ್ತಿದ್ದಾರೆ. &amp;nbsp;ಈ ಕುರಿತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚಿಗಷ್ಟೇ &quot;ಧರ್ಮಸ್ಥಳ' ಕೇಸ್&zwnj;ಗೆ ಸಂಬಂಧಪಟ್ಟು ಸುದ್ದಿಯಾಗಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿರುವ ಆರೋಪದ ಅಡಿಯಲ್ಲಿ, ನಟ ಪ್ರಕಾಶ್​ರಾಜ್ (Prakash Raj) ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.&lt;/p&gt;&lt;img&gt;&lt;p&gt;ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್&zwnj;ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿದ್ದಾರೆ ಎಂದು ಆರೋಪಿಸಿ ದಿಲೀಪ್​ಕುಮಾರ್ ಕೇಸ್ ದಾಖಲು ಮಾಡಿದ್ದಾರೆ.&lt;/p&gt;&lt;img&gt;&lt;p&gt;ಆ ಬಳಿಕ, 48ನೇ ಎಸಿಜೆಎಂ ಕೋರ್ಟ್&zwnj;ನಿಂದ ಪ್ರಕಾಶ್​ ರಾಜ್ ವಿರುದ್ಧ NBW ಜಾರಿ ಹಾಗೂ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ನೀಡಲಾಗಿತ್ತು. 2 ಬಾರಿ ಸಮನ್ಸ್​ ಹಾಗೂ 2 ಬಾರಿ NBW ಜಾರಿ ಮಾಡಿದ್ರೂ ಪ್ರಕಾಶ್​ ರಾಜ್ ಹಾಜರಾಗದ ಹಿನ್ನೆಲೆಯಲ್ಲಿ, ಇದೀಗ 3ನೇ ಬಾರಿ ಪ್ರಕಾಶ್ ರಾಜ್ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.&lt;/p&gt;&lt;img&gt;&lt;p&gt;ಈ ಹಿನ್ನೆಲೆಯಲ್ಲಿ ವಾಗ್ಮಿ ಮತ್ತು ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಅವರು ಪ್ರಕಾಶ್&zwnj; ರಾಜ್&zwnj; ಅವರ ಕಾಲೆಳೆದು ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದು, ಅದೀಗ ಬಾರಿ ವೈರಲ್​ ಆಗಿದೆ.&lt;/p&gt;&lt;img&gt;&lt;p&gt;ಪ್ರಕಾಶ್ ರಾಜ್ ನಾಲ್ಕು ವೋಟರ್ ಐಡಿ ಹೊಂದಿರುವ ಅನ್ಯಾಯದ ವಿರುದ್ಧ ಪ್ರಕಾಶ್ ರಾಜ್ ಹೋರಾಟ ಮಾಡಲಿದ್ದಾರೆ. ಬೆಂಗಳೂರಿನಲ್ಲಿರುವ ಸೆಲೆಬ್ರಿಟಿ ಪ್ರಕಾಶ್ ರಾಜ್ ಗೆ ತಮಿಳುನಾಡಿನ ಪ್ರಕಾಶ್ ರಾಜ್ ಕರೆ ಮಾಡಿ ಹೋರಾಟಕ್ಕೆ ಬಂದರೆ ತಬ್ಬಿಕೊಳ್ಳುವೆ ಎನ್ನುತ್ತಾರೆ. ತೆಲಂಗಾಣದ ಪ್ರಕಾಶ್ ರಾಜ್ ಬೀದಿಗಿಳಿದು ಹೋರಾಟ ಮಾಡಿದರೆ ಕೇರಳದ ಪ್ರಕಾಶ್ ರಾಜ್ ಕೂಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಪ್ರಕಾಶ್ ರಾಜ್ ಅವರು ಕರ್ನಾಟಕ, ತಮಿಳುನಾಡು, ತೆಲಂಗಾಣ ಸೇರಿದಂತೆ, ಒಟ್ಟು 4 ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎನ್ನುವ ಆರೋಪ ಪ್ರಕಾಶ್​ ರಾಜ್​ ಅವರ ಮೇಲೆ ಇರುವ ಹಿನ್ನೆಲೆಯಲ್ಲಿ ಸೂಲಿಬೆಲೆ ಅವರು ಈ ರೀತಿ ವ್ಯಂಗ್ಯವಾಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/chakravarthi-soolibele-about-prakash-rajs-arrest-warrant-suc-681d4z5"/>
        </item>
        <item>
            <title><![CDATA[Cross Voting: ಧರ್ಮಸ್ಥಳ ಆಣೆ ಬೇಡ, ಬ್ರೇನ್ ಮ್ಯಾಪಿಂಗ್ ಮಾಡಿಸಿ: ವಿಜಯೇಂದ್ರ-ಅಶೋಕ್ ವಿರುದ್ಧ ಎಂ.ಲಕ್ಷ್ಮಣ್ ಕಿಡಿ]]></title>
            <link>https://kannada.asianetnews.com/karnataka-districts/m-lakshman-alleges-vijayendra-r-ashok-behind-cross-voting-gvd/articleshow-x8kxtsp</link>
            <guid isPermaLink="true">https://kannada.asianetnews.com/karnataka-districts/m-lakshman-alleges-vijayendra-r-ashok-behind-cross-voting-gvd/articleshow-x8kxtsp</guid>
            <pubDate>Tue, 23 Jun 2026 19:22:05 +0530</pubDate>
            <description><![CDATA[&lt;p&gt;Cross Voting: ಪರಿಷತ್ ಚುನಾವಣೆಯ ಕ್ರಾಸ್ ವೋಟಿಂಗ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ನೇರ ಹೊಣೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtbkc71b0xnaefz1jhzxzbv,imgname-xcghx-1782222270689.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜೂ.23):&lt;/strong&gt; ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವುದಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ನೇರ ಕಾರಣ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಅಡ್ಡ ಮತದಾನ ನಡೆಯುವ ಬಗ್ಗೆ ಅವರಿಬ್ಬರಿಗೆ ಎಲ್ಲವೂ ಗೊತ್ತಿತ್ತು. ಒಂದಷ್ಟು ಎಂಎಲ್ಎಗಳು ಹೊಟೇಲ್ ಒಂದರಲ್ಲಿ ಕುಳಿತು ಸಭೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸದಾನಂದಗೌಡ್ರಿಗೆ ಗೊತ್ತಾಗಿದೆ. ಗೊತ್ತಾಗಿಯೇ ವಿಜಯೇಂದ್ರ ಮತ್ತು ಆರ್ ಅಶೋಕ್ ಅವರಿಗೆ ಹೇಳಲು ಕರೆ ಮಾಡಿದ್ದಾರೆ.&lt;/p&gt;&lt;p&gt;ಆದರೆ ಅವರಿಬ್ಬರು ಕರೆ ಸ್ವೀಕರಿಸಿಲಿಲ್ಲ ಅಂತ ಸದಾನಂದಗೌಡರೇ ಹೇಳಿದ್ದಾರೆ. ಅಂದರೆ ಇದರ ಅರ್ಥ ಕ್ರಾಸ್ ಓಟಿಂಗ್ ವಿಷಯ ಇವರಿಗೆ ಗೊತ್ತಿತ್ತು. ಆದರೆ ಈಗ ವಿಜಯೇಂದ್ರ, ಸಿ ಟಿ ರವಿ ಮತ್ತು ಆರ್ ಅಶೋಕ್ ಇಬ್ಬರು ಬಂಬ್ಡಿ ಬಡಿದುಕೊಳ್ಳುತ್ತಿದ್ದಾರೆ. ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸುವುದಾಗಿ ಮುಂದಾಗಿದ್ದರೆ. ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡುವುದು ಬೇಡ. ಅದರ ಬದಲು ವಿಜಯೇಂದ್ರ ಮತ್ತು ಆರ್ ಅಶೋಕ್ ಇಬ್ಬರ ಬ್ರೈನ್ ಮ್ಯಾಪಿಂಗ್ ಮಾಡಲಿ. ಅವರಿಬ್ಬರ ಬ್ರೈನ್ ಮ್ಯಾಪಿಂಗ್ ಮಾಡಿದರೆ ಎಲ್ಲಾ ಸತ್ಯವೂ ಗೊತ್ತಾಗುತ್ತದೆ. ಇವರಿಬ್ಬರೇ ಹೇಳಿಕೊಟ್ಟು ಅಡ್ಡಮತದಾನ ಮಾಡಿಸಿದ್ದಾರೆ.&lt;/p&gt;&lt;p&gt;ವಿಜಯೇಂದ್ರ ಆರ್ ಅಶೋಕ್ ಇವರಿಬ್ಬರಿಗೂ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ. ಏನಾದರೂ ಮಾಡಿ ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆರ್. ಅಶೋಕ್ ಅವರಿಗಿದೆ. ಆರ್ ಅಶೋಕ್ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ಕೆಳಗಿಳಿಸಬೇಕು ಎಂದು ವಿಜಯೇಂದ್ರ ಅವರಿಗೆ ಇದೆ. ಇಬ್ಬರ ಗಲಾಟೆಯಿಂದ ಈ ವ್ಯವಸ್ಥೆ ಆಗಿದೆ. ಈಗ ಇಬ್ಬರು ನಾಟಕ ಮಾಡುತ್ತಿದ್ದಾರೆ. ನಾವು ಯಾವ ಆಪರೇಷನ್ ಮಾಡಿಲ್ಲ, ಯಾರಿಗೂ ಯಾವ ಹಣದ ಆಮಿಷವನ್ನೂ ಒಡ್ಡಿಲ್ಲ. ನಮಗೆ 138 ಶಾಸಕರ ಜೊತೆಗೆ 3 ಶಾಸಕರು ಸೇರಿ ಒಟ್ಟು 142 ಶಾಸಕರು ಇದ್ದಾರೆ.&lt;/p&gt;&lt;p&gt;ನಾವು ಆರಾಮಾಗಿ ನಾಲ್ಕು ಸ್ಥಾನ ಗೆಲ್ಲುತ್ತಿದ್ದೆವು. ಹೀಗಾಗಿ ನಾವು ಯಾರಿಗೂ ಹಣ ಕೊಟ್ಟಿಲ್ಲ, ಕೊಡುವ ಅಗತ್ಯವೂ ಇರಲಿಲ್ಲ. ಆದರೆ ಡಿ ಕೆ ಶಿವಕುಮಾರ್ ಅವರನ್ನು ಇಷ್ಟಪಟ್ಟು ಒಪ್ಪಿಕೊಂಡು 13 ಶಾಸಕರು ನಮಗೆ ಓಟ್ ಹಾಕಿದ್ದಾರೆ. ನಿಮ್ಮ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ನಿಮಗೆ ಆಗಲ್ಲ. ನಿಮಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ ಆರ್ ಅಶೋಕ್, ವಿಜಯೇಂದ್ರ ಇಬ್ಬರು ರಾಜೀನಾಮೆ ಕೊಡಿ. ನಿಮಗೆ ಪಕ್ಷದ ಮೇಲೆ ಹಿಡಿತವಿಲ್ಲ ಎಂದು ವಿಜಯೇಂದ್ರ, ಆರ್ ಅಶೋಕ್ ವಿರುದ್ಧ ಲಕ್ಷ್ಮಣ್ ವಾಗ್ದಾಳಿ ನಡೆಸಿದರು. ಕ್ರಾಸ್ ಓಟಿಂಗ್, ಆಪರೇಷನ್ ಕಮಲ ಇವೆಲ್ಲದರ ಬೀಜ ಬಿತ್ತಿದ್ದೆ ಬಿಜೆಪಿಯವರು. ಎಂಪಿಗಳನ್ನು ಬಿಡದೆ ಇವರು ಆಪರೇಷನ್ ಮಾಡುತ್ತಿದ್ದಾರೆ ಎಂದು ಮಡಿಕೇರಿಯಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಕೇಂದ್ರದ ಅನೀತಿಗಳೇ ಕಾರಣ&lt;/strong&gt;&lt;/h2&gt;&lt;p&gt;ಇನ್ನು ನೀಟ್ ಪರೀಕ್ಷೆ ಕುರಿತು ಮಾತನಾಡಿದ ಲಕ್ಷ್ಮಣ್ ಮೂರು ಸ್ಟುಡೆಂಟ್ ಗೆ ಹಾಲ್ ಟಿಕೆಟ್ ಕೊಡದೆ ಪರೀಕ್ಷೆ ಬರೆಯಲಾಗದಂತೆ ಮಾಡಿದ್ದು ಯಾರು. ಮೂವರು ವಿದ್ಯಾರ್ಥಿಗಳು ಪರೀಕ್ಷೆಯದೇ ಬರೆಯದೇ ಉಳಿದುಕೊಳ್ಳುವುದಕ್ಕೆ ಕೇಂದ್ರದ ಅನೀತಿಗಳೇ ಕಾರಣ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಮಡಿಕೇರಿಯಲ್ಲಿ ಹರಿಹಾಯ್ದರು. ಪರೀಕ್ಷಾ ಕೇಂದ್ರಕ್ಕೆ 20 ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಎಂಟ್ರಿ ಕೊಡಲಿಲ್ಲ. ಒಂದುವರೆ ಗಂಟೆ ಮೊದಲೇ ಗೇಟ್ ಮುಚ್ಚಿ ಎಕ್ಸಾಂಗೆ ಎಂಟ್ರಿ ಕೊಡಲಿಲ್ಲ.&lt;/p&gt;&lt;p&gt;ನಿಮ್ಮ ಈ ಮೂರ್ಖತನದ ಪರಮಾವಧಿಯ ಕಂಡೀಷನ್ಸ್ ಗಳು ಹೀಗೆ ಮಾಡಿವೆ ಎಂದರು. 2017 ರಲ್ಲಿ ನೀಟ್ ಪರೀಕ್ಷೆಯನ್ನು ಕೇಂದ್ರ ಜಾರಿಗೆ ತಂದಿತು. ಯಾವ ಉದ್ದೇಶಕ್ಕಾಗಿ ಜಾರಿಗೆ ತಂದಿತು. ಇದುವರೆಗೆ ಒಬ್ಬ ಹಳ್ಳಿಯ ಹುಡುಗ ನೀಟ್ ಪಾಸು ಮಾಡಿಕೊಂಡು ಡಾಕ್ಟರ್ ಓದಲು ಆಗಲಿಲ್ಲ. ಯಾವ ಕಾರಣಕ್ಕೂ ಬಡವರು, ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳು ನೀಟ್ ಬರೆಯುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಿಸಲಾಗಿದೆ. ಸಿಇಟಿಯಲ್ಲಿ ಜನಿವಾರ ತೆಗೆಸಿದ್ರು ಅಂತ ಇದೇ ತೇಜಸ್ವಿ ಸೂರ್ಯ ಬಾಯಿ ಬಡಿದುಕೊಂಡಿದ್ರು. ನಿನ್ನೆ ನೀಟ್ ಪರೀಕ್ಷೆಯಲ್ಲಿ ಎಲ್ಲಾ ಕಡೆ ಜನಿವಾರಗಳನ್ನು ಕಟ್ ಮಾಡಿ ಬಿಸಾಕಿದ್ದಾರೆ.&lt;/p&gt;&lt;p&gt;ಯಾರಾದರೂ ಒಬ್ಬ ಬಿಜೆಪಿಯವರು ಮಾತಾಡಿದ್ದಾರಾ. ಯಾಕೆ ಇದು ಕೇಂದ್ರದ ಎಕ್ಸಾಂ ಅಂತ ಸುಮ್ಮನಾಗಿದ್ದೀರಾ. ಅದೇ ರಾಜ್ಯದ ಪರೀಕ್ಷೆ ಆಗಿದ್ದರೆ ಉರುಳು ಸೇವೆ ಮಾಡಿರುತ್ತಿದ್ದಿರಿ. ನಿನ್ನೆ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳ ಕಿವಿಯಲ್ಲಿ ಓಲೆ, ಕೊರಳಿನಲ್ಲಿ ತಾಳಿ ಹಾಕಲು ಬಿಟ್ಟಿಲ್ಲ. ಹೆಣ್ಣುಮಕ್ಕಳು ರಬ್ಬರ್ ಬ್ಯಾಂಡ್ ಹಾಕಲು ಬಿಟ್ಟಿಲ್ಲ. ಪರೀಕ್ಷೆಯನ್ನು ಮುಂದೂಡಿ ಇಡೀ ದೇಶದಲ್ಲಿ 16 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಕೊಳ್ಳುವಂತೆ ಮಾಡಿದ್ರಿ, ಡೈಪರ್ ಸೂರ್ಯ ಇದುವರೆಗೆ ಒಂದು ಕ್ಷಮೆ ಕೇಳಲಿಲ್ಲ. ಪ್ರಧಾನಿ ಮೋದಿ ಅವರು ಒಂದೇ ಒಂದು ಸಂತಾಪ ಸೂಚಿಸಿ ಪೋಸ್ಟ್ ಮಾಡಲಿಲ್ಲ. ಇಂತಹ ಪರೀಕ್ಷೆಯಿಂದ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮಡಿಕೇರಿಯಲ್ಲಿ ವಾಗ್ದಾಳಿ ನಡೆಸಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/m-lakshman-alleges-vijayendra-r-ashok-behind-cross-voting-gvd/articleshow-x8kxtsp"/>
        </item>
        <item>
            <title><![CDATA[ಈ ಖ್ಯಾತ ಗಾಯಕಿಗೆ ಇದ್ದಕ್ಕಿದ್ದಂತೆ ಏನಾಯ್ತು? ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ಮತ್ತೊಬ್ಬರ ಸಹಾಯ ಪಡೆದು ಬಂದಿದ್ಯಾಕೆ?]]></title>
            <link>https://kannada.asianetnews.com/entertainment/eminent-playback-singer-alka-yagnik-conferred-with-padma-bhushan-by-president-droupadi-murmu/articleshow-xa79mab</link>
            <guid isPermaLink="true">https://kannada.asianetnews.com/entertainment/eminent-playback-singer-alka-yagnik-conferred-with-padma-bhushan-by-president-droupadi-murmu/articleshow-xa79mab</guid>
            <pubDate>Tue, 23 Jun 2026 18:50:03 +0530</pubDate>
            <description><![CDATA[&lt;p&gt;ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ವರ್ಣರಂಜಿತ ವೇದಿಕೆಯಲ್ಲಿ ಭಾರತದ ಈ ಪ್ರಖ್ಯಾತ ಹಿನ್ನೆಲೆ ಗಾಯಕಿಗೆ ರಾಷ್ಟ್ರಪತಿ &amp;nbsp;ದ್ರೌಪದಿ ಮುರ್ಮು ಅವರು ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಭೂಷಣ' ಪ್ರಶಸ್ತಿ ನೀಡಿ ಗೌರವಿಸಿದರು. ಯಾರು ಈ ಗಾಯಕಿ? ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvta1c279emy0qvrb0ys247z,imgname-alka-yagnik-1782220632135.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಾರತದ ಅಪ್ರತಿಮ ಗಾಯಕಿಗೆ ಅತ್ಯುನ್ನತ ಪ್ರಶಸ್ತಿಗಳಲ್ಲೊಂದು ನೋಡಿ ಗೌರವಾರ್ಪಣೆ&lt;/strong&gt;&lt;/p&gt;&lt;p&gt;ದೆಹಲಿ: ಮನುಷ್ಯನ ಜೀವನ ಅದೆಷ್ಟು ಅನಿರೀಕ್ಷಿತ ತಿರುವುಗಳಿಂದ ತುಂಬಿಕೊಂಡಿರುತ್ತದೆ! ಈ ಮಾತನ್ನು ಈಗ ಇಲ್ಲಿ ಹೇಳಲು ಕಾರಣವಿದೆ.. ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ಗಾಯಕಿ, ಇಂದು ಹಿನ್ನೆಲೆ ಗಾಯನದ ತಮ್ಮ ಅಮೋಘ ಸಾಧನೆಗೆ ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಲು ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಷ್ಟು ಕಷ್ಟದ ಸ್ಥಿತಿಯಲ್ಲಿ, ಅಂದರೆ ಬೇರೆಯವರ ಸಹಾಯ ಪಡೆದು 'ಪದ್ಮಭೂಷಣ' ಪ್ರಶಸ್ತಿಸ್ವೀಕರಿಸಲು ಬಂದಿದ್ದಾರೆ ಗಾಯಕಿ ಅಲ್ಕಾ ಯಾಗ್ನಿಕ್!&lt;/p&gt;&lt;p&gt;ಹೌದು, ಇಂದು (23 June 2026) ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ (Alka Yagnik) ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಪದ್ಮ ಭೂಷಣ ಪ್ರಶಸ್ತಿ ಪ್ರದಾನ ಮಾಡಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ವರ್ಣರಂಜಿತ ವೇದಿಕೆಯಲ್ಲಿ ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕಿ ಆಲ್ಕಾ ಯಾಗ್ನಿಕ್ ರಾಷ್ಟ್ರಪತಿಗಳಿಂದ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಭೂಷಣ' ಪ್ರಶಸ್ತಿ ಸ್ವೀಕರಿಸಿ ಧನ್ಯತೆ ಅನುಭವಿಸಿದರು.&lt;/p&gt;&lt;p&gt;&lt;img&gt;&lt;/p&gt;&lt;p&gt;ಆದರೆ, ಈ ಸಮಯದಲ್ಲಿ ಅವರು ವೇದಿಕೆಗೆ ಬರುವಾದ ಜೊತೆಗೆ ಮತ್ತೊಬ್ಬರ ಸಹಾಯ ಪಡೆದು ಬಂದಿರುವುದನ್ನು ನೋಡಿ ಹಲವರ ಕಣ್ಣಾಲಿಗಳು ತುಂಬಿ ಬಂದವು. ಕಾರಣ, ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಅವರು ಸದ್ಯಕ್ಕೆ ಸ್ವತಂತ್ರವಾಗಿ ಓಡಾಡಲೂ ಕೂಡ ಕಷ್ಟಪಡುತ್ತಿದ್ದಾರೆ. ಸುಮಾರು 6 ತಿಂಗಳುಗಳಿಗಿಂತಲೂ ಹೆಚ್ಚಿನ ಸಮಯದಿಂದ ಅವರಿಗೆ ಹಾಡಲಾಗುತ್ತಿಲ್ಲ, ಹೀಗಾಗಿ ಈ ಕೋಗಿಲೆ ಈಗ ಹಾಡುತ್ತಿಲ್ಲ.&lt;/p&gt;&lt;p&gt;&lt;img&gt;&lt;/p&gt;&lt;p&gt;ಹಾಗಿದ್ದರೆ ಈ ಅಪ್ರತಿಮ ಗಾಯಕಿಗೆ ಏನಾಗಿದೆ? ಇಲ್ಲಿದೆ ನೋಡಿ ನೋವಿನ ಮಾಹಿತಿ..&lt;/p&gt;&lt;h2&gt;ಗಾಯಕಿ ಅಲ್ಕಾ ಯಾಗ್ನಿಕ್ ಈಗ ಹಾಡುತ್ತಿಲ್ಲ!&lt;/h2&gt;&lt;p&gt;90ರ ದಶಕದ ಹೆಚ್ಚಿನ ಸೂಪರ್ ಹಿಟ್ ಹಾಡುಗಳಲ್ಲಿ ಮಿಂಚುತ್ತಿದ್ದ ಆ ಅದ್ಭುತ ಸ್ವರ ಈಗ ಮೌನಕ್ಕೆ ಶರಣಾಗಿದೆ. ಸುಮಾರು ಮೂರು ದಶಕಗಳ ಕಾಲ ಭಾರತೀಯ ಚಿತ್ರರಂಗದ 'ಮೆಲೋಡಿ ಕ್ವೀನ್' ಆಗಿ ಮೆರೆದಿದ್ದ ಅಲ್ಕಾ ಯಾಗ್ನಿಕ್ (Alka Yagnik) ಅವರು ಈಗ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅಪರೂಪದ ಶ್ರವಣ ದೋಷದಿಂದ (Hearing Disorder) ಬಳಲುತ್ತಿರುವ ಅವರು, ಕಳೆದ ಎರಡು ವರ್ಷಗಳಿಂದ ಹೊಸ ಹಾಡುಗಳನ್ನು ಹಾಡುತ್ತಿಲ್ಲ ಎಂಬ ವಿಷಯ ಸಂಗೀತ ಪ್ರೇಮಿಗಳಲ್ಲಿ ಭಾರಿ ಬೇಸರ ಮೂಡಿಸಿದೆ.&lt;/p&gt;&lt;p&gt;ಇತ್ತೀಚೆಗೆ ಭಾರೀ ನೋವು ತೋಡಿಕೊಂಡ ಗಾಯಕಿ:&lt;/p&gt;&lt;p&gt;ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿರುವ ಅಲ್ಕಾ ಯಾಗ್ನಿಕ್, &quot;ನಾನು ಇನ್ನೂ ಆ ಶ್ರವಣ ದೋಷದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸಂಗೀತ ನಿರ್ದೇಶಕರು ಪದೇ ಪದೇ ನನ್ನನ್ನು ಸಂಪರ್ಕಿಸುತ್ತಿದ್ದಾರೆ, ಹೊಸ ಹಾಡುಗಳ ಆಫರ್ ನೀಡುತ್ತಿದ್ದಾರೆ. ಆದರೆ ಹಾಡಲು ನನ್ನ ಆರೋಗ್ಯ ಸಹಕರಿಸುತ್ತಿಲ್ಲ. ಪ್ರಸ್ತುತ ಯಾವುದೇ ಹೊಸ ಪ್ರಾಜೆಕ್ಟ್&zwnj;ಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ&quot; ಎಂದು ಮರುಗಿದ್ದಾರೆ. ಇತ್ತೀಚೆಗಷ್ಟೇ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಕೂಡ ಧ್ವನಿಯ ಸಮಸ್ಯೆಯಿಂದ ಹಠಾತ್ ವಿರಾಮ ಘೋಷಿಸಿದ್ದರು. ಈಗ ಅಲ್ಕಾ ಅವರ ಈ ಮೌನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.&lt;/p&gt;&lt;p&gt;ಸಾಧನೆಯ ಶಿಖರ:&lt;/p&gt;&lt;p&gt;ಅಲ್ಕಾ ಯಾಗ್ನಿಕ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. 'ಟಿಪ್ ಟಿಪ್ ಬರ್ಸಾ ಪಾನಿ', 'ಏ ಮೇರೆ ಹಮ್ಸಾಫರ್', 'ಚಾಂದ್ ಚುಪಾ ಬಾದಲ್ ಮೇ' ಮತ್ತು 'ಅಗರ್ ತುಮ್ ಸಾಥ್ ಹೋ' ನಂತಹ ಸಾವಿರಾರು ಮಧುರ ಗೀತೆಗಳಿಗೆ ಇವರು ಜೀವ ತುಂಬಿದ್ದಾರೆ. ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು, ಪಂಜಾಬಿ ಮತ್ತು ಬೆಂಗಾಲಿ ಭಾಷೆಗಳಲ್ಲೂ ಇವರು ಮೋಡಿ ಮಾಡಿದ್ದಾರೆ. 2024 ರಲ್ಲಿ ತೆರೆಕಂಡ ಇಮ್ತಿಯಾಜ್ ಅಲಿ ಅವರ 'ಅಮರ್ ಸಿಂಗ್ ಚಮ್ಕಿಲಾ' ಸಿನಿಮಾದಲ್ಲಿ ಇವರು ಕೊನೆಯದಾಗಿ ಹಾಡಿದ್ದರು.&lt;/p&gt;&lt;h3&gt;ವೈಯಕ್ತಿಕ ಜೀವನದ ಏರಿಳಿತಗಳು:&lt;/h3&gt;&lt;p&gt;ಅಲ್ಕಾ ಅವರ ವೃತ್ತಿಜೀವನ ಎಷ್ಟು ಯಶಸ್ವಿಯಾಗಿದೆಯೋ, ಅವರ ವೈಯಕ್ತಿಕ ಜೀವನ ಅಷ್ಟೇ ಸವಾಲುಗಳಿಂದ ಕೂಡಿದೆ. ಗಾಯಕಿ ಅಲ್ಕಾ ತಮ್ಮ ಪತಿ ನೀರಜ್ ಕಪೂರ್ ಅವರಿಂದ ಕಳೆದ 36 ವರ್ಷಗಳಿಂದ ದೂರವೇ ಉಳಿದಿದ್ದಾರೆ. ಇಬ್ಬರ ನಡುವೆ ಯಾವುದೇ ದೊಡ್ಡ ಜಗಳವಿಲ್ಲದಿದ್ದರೂ, ವೃತ್ತಿಜೀವನದ ಕಾರಣಕ್ಕಾಗಿ ಇಬ್ಬರು ಪ್ರತ್ಯೇಕ ನಗರಗಳಲ್ಲಿ ನೆಲೆಸಿದ್ದಾರೆ. ಇವರ ಪ್ರೇಮಕಥೆ ಕೂಡ ರೋಚಕವಾಗಿದೆ. ಇವರಿಬ್ಬರು ಮೊದಲ ಬಾರಿ ಭೇಟಿಯಾಗಿದ್ದು ದೆಹಲಿಯ ರೈಲು ನಿಲ್ದಾಣದಲ್ಲಿ! ಶಿಲ್ಲಾಂಗ್ ಮೂಲದ ಉದ್ಯಮಿ ನೀರಜ್ ಅವರನ್ನು ಮೊದಲ ನೋಟದಲ್ಲೇ ಇಷ್ಟಪಟ್ಟಿದ್ದ ಅಲ್ಕಾ, ನಂತರ ಸ್ನೇಹ ಬೆಳೆಸಿ ಮದುವೆಯಾದರು.&lt;/p&gt;&lt;p&gt;ಸದ್ಯ ಅಲ್ಕಾ ಯಾಗ್ನಿಕ್ ಅವರು ಈ ಆರೋಗ್ಯ ಸಮಸ್ಯೆಯಿಂದ ಶೀಘ್ರವೇ ಚೇತರಿಸಿಕೊಂಡು, ಮತ್ತೆ ತಮ್ಮ ಮಧುರ ಧ್ವನಿಯ ಮೂಲಕ ಅಭಿಮಾನಿಗಳನ್ನು ರಂಜಿಸಲಿ ಎಂಬುದು ಎಲ್ಲರ ಆಶಯವಾಗಿದೆ. ಇಂದು ಅಲ್ಕಾ ಯಾಗ್ನಿಕ್ &amp;nbsp;ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ದೊರಕಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/eminent-playback-singer-alka-yagnik-conferred-with-padma-bhushan-by-president-droupadi-murmu/articleshow-xa79mab"/>
        </item>
        <item>
            <title><![CDATA[21 ಸಾವಿರ ಟೆಕ್ಕಿಗಳ ಮನೆಗೆ ಕಳಿಸಿದ ಒರಾಕಲ್​! ಬೆಂಗಳೂರು, ಹೈದರಾಬಾದ್​ನ 12 ಸಾವಿರ ವಜಾ- ಎಲ್ಲೆಲ್ಲಿ ಕಡಿತ]]></title>
            <link>https://kannada.asianetnews.com/gallery/it-jobs/oracle-cut-21000-jobs-in-12-months-amid-ai-adoption-suc-0kzgri4</link>
            <guid isPermaLink="true">https://kannada.asianetnews.com/gallery/it-jobs/oracle-cut-21000-jobs-in-12-months-amid-ai-adoption-suc-0kzgri4</guid>
            <pubDate>Tue, 23 Jun 2026 18:59:02 +0530</pubDate>
            <description><![CDATA[&lt;p&gt;ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆಯಿಂದಾಗಿ ಸಾಫ್ಟ್&zwnj;ವೇರ್ ಉದ್ಯಮದಲ್ಲಿ ಭಾರೀ ಉದ್ಯೋಗ ನಷ್ಟ ಉಂಟಾಗುತ್ತಿದೆ. ಕಳೆದ 12 ತಿಂಗಳಲ್ಲಿ ಒರಾಕಲ್ ಕಂಪನಿಯು ಜಾಗತಿಕವಾಗಿ 21,000 ಉದ್ಯೋಗಿಗಳ ವಜಾಗೊಳಿಸಿದ್ದು, ಬೆಂಗಳೂರು ಮತ್ತು ಹೈದರಾಬಾದ್&zwnj;ನಲ್ಲೇ 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtakxqm4brheq8vqreress1,imgname-oracle-1782221240052.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆಯಿಂದಾಗಿ ಸಾಫ್ಟ್&zwnj;ವೇರ್ ಉದ್ಯಮದಲ್ಲಿ ಭಾರೀ ಉದ್ಯೋಗ ನಷ್ಟ ಉಂಟಾಗುತ್ತಿದೆ. ಕಳೆದ 12 ತಿಂಗಳಲ್ಲಿ ಒರಾಕಲ್ ಕಂಪನಿಯು ಜಾಗತಿಕವಾಗಿ 21,000 ಉದ್ಯೋಗಿಗಳ ವಜಾಗೊಳಿಸಿದ್ದು, ಬೆಂಗಳೂರು ಮತ್ತು ಹೈದರಾಬಾದ್&zwnj;ನಲ್ಲೇ 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೃತಕ ಬುದ್ಧಿಮತ್ತೆ (AI) ಸಾಫ್ಟ್​ವೇರ್​ ಉದ್ಯಮಿಗಳಿಗೆ ಆಘಾತದ ಮೇಲೆ ಆಘಾತ ತರುತ್ತಿದೆ. ಇದಾಗಲೇ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಮೆರಿಕದ ಕನಸು ಹೊತ್ತು ಹೋದವರು ಅಲ್ಲಿಂದ ವಾಪಸಾಗುವ ಸ್ಥಿತಿ ಉಂಟಾಗಿದೆ. ಎಂಜಿನಿಯರಿಂಗ್​ಗೆ ಅದರಲ್ಲಿಯೂ ಕಂಪ್ಯೂಟರ್​ ಸೈನ್ಸ್​ಗೆ ಬಹಳ ಡಿಮಾಂಡ್​ ಇದೆ ಎನ್ನುವ ಕಾರಣಕ್ಕೆ ಎಲ್ಲರೂ ಅದನ್ನೇ ಆಯ್ಕೆ ಮಾಡಿಕೊಂಡು ಇದೀಗ ಉದ್ಯೋಗ ಇಲ್ಲದೇ ಅಥವಾ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವ ಸ್ಥಿತಿ ಉಂಟಾಗಿದೆ.&lt;/p&gt;&lt;img&gt;&lt;p&gt;ಗೂಗಲ್​ ಸೇರಿದಂತೆ ಇದಾಗಲೇ ಹಲವು ಕಂಪೆನಿಗಳು ಟೆಕ್ಕಿಗಳನ್ನು ಮನೆಗೆ ಕಳುಹಿಸಿದೆ. ಒರಾಕಲ್​ನಲ್ಲಿ ಉದ್ಯೋಗ ಕಡಿತ ಮತ್ತಷ್ಟು ಮುಂದುವರೆದಿದೆ. ಕಳೆದ 12 ತಿಂಗಳುಗಳಲ್ಲಿ ಒರಾಕಲ್ ಕಾರ್ಪ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 21 ಸಾವಿರದಷ್ಟು ಕಡಿಮೆ ಮಾಡಿದೆ. ಇದರ ಅರ್ಥ ಅಮೆರಿಕ ಸೇರಿದಂತೆ ಎಲ್ಲೆಲ್ಲಿ ಒರಾಕಲ್​ ಕಂಪೆನಿಗಳು ಇವೆಯೋ ಅಲ್ಲೆಲ್ಲವೂ ಒರಾಕಲ್​ ಕಂಪೆನಿಯ ಉದ್ಯೋಗಗಳು ಕೆಲಸ ಕಳೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಶಾಕಿಂಗ್​ ವಿಷ್ಯ ಎಂದರೆ, ಇವರ ಪೈಕಿ ಬೆಂಗಳೂರು ಮತ್ತು ಹೈದರಾಬಾದ್​ನಲ್ಲಿ ಇರುವ ಒರಾಕಲ್​ ಕಂಪೆನಿಯು ಒಟ್ಟು 12 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. &quot;ನಮ್ಮ ಕಾರ್ಯಾಚರಣೆಗಳಲ್ಲಿ AI ತಂತ್ರಜ್ಞಾನಗಳ ಅಳವಡಿಕೆ ಮತ್ತು ನಿಯೋಜನೆಯು ನಮ್ಮ ಉದ್ಯೋಗಿಗಳಲ್ಲಿ ಕಡಿತಕ್ಕೆ ಕಾರಣವಾಗಿದೆ ಮತ್ತು ಮುಂದುವರಿಯಬಹುದು&quot; ಎಂದು ಒರಾಕಲ್ ವಾರ್ಷಿಕ ಹಣಕಾಸು ನಿಯಂತ್ರಕ ಫೈಲಿಂಗ್&zwnj;ನಲ್ಲಿ ತಿಳಿಸಿದೆ.&lt;/p&gt;&lt;img&gt;&lt;p&gt;ಹಣಕಾಸು ವರ್ಷದ ಮೇ 31 ರ ಅಂತ್ಯದ ವೇಳೆಗೆ ಕಂಪೆನಿಯ ಜಾಗತಿಕ ಸಿಬ್ಬಂದಿ ಸಂಖ್ಯೆ 1 ಲಕ್ಷ 41 ಸಾವಿರಕ್ಕೆ ಕುಗ್ಗಿದೆ, ಇದು ಒಂದು ವರ್ಷದ ಹಿಂದಿನ 1 ಲಕ್ಷದ 62 ಸಾವಿರಕ್ಕೆ ಹೋಲಿಸಿದರೆ ಎಂದು ಒರಾಕಲ್ ಹೇಳಿದೆ. ಈ ಕಡಿತಗಳು ಪುನರ್ರಚನೆ ವೆಚ್ಚದಲ್ಲಿ ಸುಮಾರು $1.8 ಬಿಲಿಯನ್&zwnj;ಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಓಪನ್&zwnj; ಎಐನಂತಹ ಗ್ರಾಹಕರಿಗೆ AI ಡೇಟಾ ಕೇಂದ್ರಗಳ ದುಬಾರಿ ನಿರ್ಮಾಣದಿಂದಾಗಿ ಒರಾಕಲ್ ಆರ್ಥಿಕ ಒತ್ತಡದಲ್ಲಿದೆ. ಈ ವರ್ಷದ ಆರಂಭದಲ್ಲಿ, ಹಣವನ್ನು ಉಳಿಸುವ ಪ್ರಯತ್ನಗಳ ಭಾಗವಾಗಿ ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಲು ಪ್ರಾರಂಭಿಸಿದೆ ಎಂದು ಬ್ಲೂಮ್&zwnj;ಬರ್ಗ್ ವರದಿ ಮಾಡಿದೆ. ಕಡಿತದ ನಿಖರವಾದ ವ್ಯಾಪ್ತಿಯನ್ನು ಎಂದಿಗೂ ಔಪಚಾರಿಕವಾಗಿ ಬಹಿರಂಗಪಡಿಸಲಾಗಿಲ್ಲ.&lt;/p&gt;&lt;img&gt;&lt;p&gt;2022 ರಲ್ಲಿ ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ಸ್ ಕಂಪನಿ ಸೆರ್ನರ್ ಅನ್ನು ಖರೀದಿಸುವ ಮೊದಲು ಇದ್ದಕ್ಕಿಂತ ಕಂಪನಿಯ ಸಿಬ್ಬಂದಿ ಸಂಖ್ಯೆ ಈಗ ಸ್ವಲ್ಪ ಕಡಿಮೆಯಾಗಿದೆ. ಆ $28 ಬಿಲಿಯನ್ ಸ್ವಾಧೀನವು ಸಾವಿರಾರು ಉದ್ಯೋಗಿಗಳನ್ನು ಸೇರಿಸಿತು, ಅವರಲ್ಲಿ ಹಲವರು ಸೆರ್ನರ್&zwnj;ನ ಕಾನ್ಸಾಸ್ ಸಿಟಿ-ಪ್ರದೇಶದ ಪ್ರಧಾನ ಕಚೇರಿಯ ಬಳಿ ಕೇಂದ್ರೀಕೃತರಾಗಿದ್ದರು.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/it-jobs/oracle-cut-21000-jobs-in-12-months-amid-ai-adoption-suc-0kzgri4"/>
        </item>
        <item>
            <title><![CDATA[Bidadi Township: ವಿಧಾನಸೌಧಕ್ಕೆ ಬನ್ನಿ, ದಾಖಲೆ ತೋರಿಸುತ್ತೇವೆ: ಎಚ್‌ಡಿಕೆಗೆ ಎಂ.ಲಕ್ಷ್ಮಣ್ ಸವಾಲ್]]></title>
            <link>https://kannada.asianetnews.com/karnataka-districts/bidadi-township-row-m-lakshman-slams-hd-kumaraswamy-hit-and-run-politics-gvd/articleshow-g7k7qxo</link>
            <guid isPermaLink="true">https://kannada.asianetnews.com/karnataka-districts/bidadi-township-row-m-lakshman-slams-hd-kumaraswamy-hit-and-run-politics-gvd/articleshow-g7k7qxo</guid>
            <pubDate>Tue, 23 Jun 2026 18:56:13 +0530</pubDate>
            <description><![CDATA[&lt;p&gt;Bidadi Township ಯೋಜನೆ ವಿಚಾರವಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2006ರಲ್ಲಿ ಯೋಜನೆ ಆರಂಭಿಸಿದ್ದು ನೀವೇ ಎಂದು ಪ್ರಶ್ನಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvtahf70typwrqxdp6sj0b2d,imgname-ch-1782221159648.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜೂ.23):&lt;/strong&gt; ಬಿಡದಿ ಟೌನ್ ಶಿಪ್ ಅನ್ನು 2006 ರಲ್ಲಿ ಮೊದಲು ಆರಂಭಿಸಿದ್ದೇ ಇದೇ ಕುಮಾರಸ್ವಾಮಿ ಅವರು. ಇದನ್ನು ಕುರಿತು ಚರ್ಚಿಸಲು ಇದೇ 26 ಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಆದರೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರ್ ಸ್ವಾಮಿ ಅವರು 26 ಕ್ಕೆ ಯಾವುದೋ ಬೇರೆ ಕೆಲಸದ ನಿಮಿತ್ತ ಬ್ಯುಸಿಯಾಗಿದ್ದೇನೆ. ಆದ್ದರಿಂದ 27 ಕ್ಕೆ ಬಿಡದಿ ಸಮೀಪದ ಒಂದು ಹಳ್ಳಿಗೆ ಬನ್ನಿ ಎಂದಿದ್ದಾರೆ. ಇದರ ಅರ್ಥ ಹಿಟ್ ಅಂಡ್ ರನ್ ಕೆಲಸ ಎಂಬುದು ಸ್ಪಷ್ಟ.&lt;/p&gt;&lt;p&gt;ಕುಮಾರಸ್ವಾಮಿ ಅವರು ದೇಶದಲ್ಲಿ ಅತ್ಯಂತ ಪ್ರಸಿದ್ಧ ಹಿಟ್ ಅಂಡ್ ರನ್ ವ್ಯಕ್ತಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೆಚ್ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ. 2006 ರಲ್ಲಿ ನೀವು ಸಿಎಂ ಆಗಿದ್ದಾಗ 12 ಸಾವಿರ ಎಕರೆಯನ್ನು ನೋಟಿಫೈ ಮಾಡಿದ್ರಿ. ಬಳಿಕ ಅದನ್ನು ರೆಡ್ ಝೋನ್ ಎಂದು ಮಾಡಿ ಅದನ್ನು ಮಾರಲೂ ಸಾಧ್ಯವಾಗದಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದ ಕೀರ್ತಿ ನಿಮ್ಮದೇ. 2018 ರಲ್ಲಿ ನೀವು ಮತ್ತೆ ಸಿಎಂ ಆದಾಗಲಾದರೂ ರೈತರ ಭೂಮಿಯನ್ನು ತೆಗೆದುಕೊಳ್ಳಬಾರದು ಎನ್ನುವ ಮನೋಭಾವವಿದ್ದರೆ, ಆ ಭೂಮಿಯನ್ನು ಡಿನೋಟಿಫೈ ಮಾಡಬಹುದಿತ್ತಲ್ಲಾ.&lt;/p&gt;&lt;p&gt;ಯಾಕೆ ನೀವು ಮಾಡದೆ ಈಗ ಹೋರಾಟ ಎಂದು ರೈತರ ದಿಕ್ಕು ತಪ್ಪಿಸುತಿದ್ದೀರಾ ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಿಡದಿ ಟೌನ್ ಶಿಪ್ ತರುವುದಕ್ಕೆ ಕಾರಣವಾಗಿದ್ದೇ ಕುಮಾರಸ್ವಾಮಿ ಅವರು ಮತ್ತು ಬಿಜೆಪಿ ಸರ್ಕಾರ. ಯಡಿಯೂರಪ್ಪನವರು, ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡ್ರು ಇದ್ದಾಗ 912 ಎಕರೆ ವಶಕ್ಕೆ ಪಡೆದು ಈಗಾಗಲೇ ಹಂಚಲಾಗಿದೆ. ಆಗ ಅದು ಫಲವತ್ತಾದ ಭೂಮಿ ಅದನ್ನು ಕಿತ್ತುಕೊಳ್ಳಬಾರದು ಎನ್ನುವುದು ಗೊತ್ತಾಗಲಿಲ್ಲವೆ. ಈಗೇಕೆ ಈ ಕಳ್ಳಾಟವನ್ನು ಆಡುತ್ತಿದ್ದೀರಾ. ಡಿ.ಕೆ. ಶಿವಕುಮಾರ್ ಒಬ್ಬ ಒಕ್ಕಲಿಗ ಸಮುದಾಯದವರು ಸಿಎಂ ಆಗಿದ್ದಾರೆ ಎಂಬುದರಿಂದ ನೀವು ಈ ರೀತಿ ಮಾಡುತ್ತಿದ್ದೀರಿ.&lt;/p&gt;&lt;h2&gt;&lt;strong&gt;ನೋಟಿಫೈ ಮಾಡಿದ್ದೀರಾ&lt;/strong&gt;&lt;/h2&gt;&lt;p&gt;ಇದು ಈ ರಾಜ್ಯದ ದುರಂತ. ಇಲ್ಲವೆ ಒಕ್ಕಲಿಗ ಸಮುದಾಯ ದುರಂತ ಇರಬಹುದು ಎಂದಿದ್ದಾರೆ. ಒಟ್ಟು 7483 ಎಕರೆ ನೋಟಿಫೈ ಮಾಡಿದ್ದೀರಾ. ಅದರಲ್ಲಿ 6434 ರೈತರು ಇದ್ದಾರೆ. ಅವರಲ್ಲಿ ಬಿಎಂಆರ್ಡಿಎಲ್ ನವರು ನೋಟಿಸ್ ಕೊಟ್ಟಾಗ ನಾವು ಯಾವ ಕಾರಣಕ್ಕೂ ಭೂಮಿಯನ್ನು ಕೊಡಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟ ರೈತರ ಸಂಖ್ಯೆ 1347 ಅಷ್ಟೆ. 265 ರೈತರು ಈ ಬೆಲೆಗೆ ಕೊಡಲು ನಮಗೆ ಒಪ್ಪಿಗೆ ಇಲ್ಲ ಎಂದಿದ್ರು. 663 ಜನರು ರೈತರು ಮಾತ್ರ ಭೂಮಿ ಕೊಡುವುದೇ ಇಲ್ಲ ಎಂದಿದ್ದಾರೆ. ಈ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ನೀವು ವಿಧಾನಸೌಧಕ್ಕೆ ಬಂದ್ರೆ ಆ ಎಲ್ಲಾ ದಾಖಲೆಗಳನ್ನು ನಿಮಗೆ ಕೊಡುತ್ತೇವೆ.&lt;/p&gt;&lt;p&gt;ನೀವು ನಾಲ್ಕೈದು ಸುಪ್ರೀಂಕೋರ್ಟ್ ಲಾಯರ್ ಮೂಲಕವೇ ಬನ್ನಿ ಚರ್ಚಿಸಿ. ಆಮೇಲೆ ನೀವು ಕರೆದಲ್ಲಿಗೆ ನಾವು ಬರುತ್ತೇವೆ. ಸರ್ಕಾರ ಬರುತ್ತದೆ ಎಂದು ಎಂ. ಲಕ್ಷ್ಮಣ್ ಹೆಚ್.ಡಿ ಕೆಗೆ ಆಗ್ರಹಿಸಿದ್ದಾರೆ. ಬಿಎಂಆರ್ಡಿಎಲ್ ಅವರು ಈ ಭೂಮಿಯನ್ನು ತೆಗೆದುಕೊಂಡು ಕೈಗಾರಿಕೆಯವರಿಗೆ ಭೂಮಿ ಹಂಚಿದ್ದಾರೆ. ಜೊತೆಗೆ ಅಲ್ಲಿಯೇ ವಸತಿ ಯೋಜನೆಯನ್ನು ಮಾಡಲಿದ್ದಾರೆ. ಇಲ್ಲಿ ಯಾವುದೇ ರೀತಿಯಿಂದಲೂ ರಿಯಲ್ ಎಸ್ಟೇಟಿಗೆ ಅವಕಾಶವೇ ಇಲ್ಲ. ಹೀಗಿರುವಾಗ ಸುಳ್ಳು ಆರೋಪ ಮಾಡುವುದಕ್ಕೂ ಒಂದು ಅರ್ಥ ಇರಬೇಕಲ್ಲವೇ ಎಂದಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bidadi-township-row-m-lakshman-slams-hd-kumaraswamy-hit-and-run-politics-gvd/articleshow-g7k7qxo"/>
        </item>
        <item>
            <title><![CDATA[Gangavathi: ಮನೆಯ ಕಸ ಬೇರ್ಪಡಿಸಿ ಎಂದ ಸಿಬ್ಬಂದಿ ಮೇಲೆ ಹಲ್ಲೆ: ಆರೋಪಿಯ ಮನೆ ಮುಂದೆ ಕಸ ಸುರಿದು ಪ್ರತಿಭಟನೆ]]></title>
            <link>https://kannada.asianetnews.com/karnataka-districts/gangavathi-municipal-worker-assaulted-over-waste-segregation-protest-erupts-gvd/articleshow-hyghluk</link>
            <guid isPermaLink="true">https://kannada.asianetnews.com/karnataka-districts/gangavathi-municipal-worker-assaulted-over-waste-segregation-protest-erupts-gvd/articleshow-hyghluk</guid>
            <pubDate>Tue, 23 Jun 2026 18:45:27 +0530</pubDate>
            <description><![CDATA[&lt;p&gt;Gangavathi ಕಿಲ್ಲಾ ಏರಿಯಾದಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಹಾಕುವಂತೆ ಸೂಚಿಸಿದ ನಗರಸಭೆ ಸಿಬ್ಬಂದಿ ಅಬ್ದುಲ್ ನಬಿಸಾಬ್ ಮೇಲೆ ಹಲ್ಲೆ ನಡೆದಿದೆ. ಘಟನೆಯನ್ನು ಖಂಡಿಸಿ ನಗರಸಭೆ ಸಿಬ್ಬಂದಿಗಳು ಆರೋಪಿಯ ಮನೆ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt9xwwtjjd70sekb37apave,imgname-cch-1782220518298.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.23):&lt;/strong&gt; ಮನೆಯೊಳಗಿನ ಕಸ ಹಾಕುವ ವಿಚಾರವಾಗಿ ನಗರಸಭೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಘಟನೆ ನಗರದ ಕಿಲ್ಲಾ ಏರಿಯಾದ 6ನೇ ವಾರ್ಡಿನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ನಗರಸಭೆಯ ವಾಹನದಲ್ಲಿ ಕಸ ತುಂಬಿಕೊಂಡು ಹೋಗುವ ಸಿಬ್ಬಂದಿ ಅಬ್ದುಲ್ ನಬಿಸಾಬ ಎನ್ನುವಾತನ ಮೇಲೆ ಹಲ್ಲೆ ನಡೆದಿದೆ.&lt;/p&gt;&lt;p&gt;ಕಿಲ್ಲಾ ಏರಿಯಾದಲ್ಲಿ ಮನೆ ಮನೆಗೆ ತೆರಳಿ ಕಸ ತುಂಬಿಕೊಂಡು ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಸಿ ಕಸ ಮತ್ತು ಒಣ ಕಸ ಬೇರೆ ಬೇರೆ ಹಾಕಿರಿ ಎಂದು ಸಿಬ್ಬಂದಿ ಅಬ್ದುಲ್ ನಬಿ ಹೇಳಿತ್ತಿದ್ದಂತಯೇ ಕಿಲ್ಲಾ ಏರಿಯಾದ ನಿವಾಸಿ ಇಸಾಕ್ ಎನ್ನುವಾತ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾನೆ. ಇದಕ್ಕೆ ವಿರೋಧಿಸಿದ ನಗರಸಭೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹಲ್ಲೆಗೊಳಗಾದ ಸಿಬ್ಬಂದಿಗೆ ಬೆಂಬಲಿಸಿ ಇಸಾಕ್ ಮನೆಯ ಮುಂಭಾಗದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಸಿಬ್ಬಂದಿ ಅಬ್ದುಲ್ ನಬಿಸಾಬ ಅವರನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.&lt;/p&gt;&lt;p&gt;&lt;strong&gt;ಪ್ರತಿಭಟನೆ&lt;/strong&gt;&lt;/p&gt;&lt;p&gt;ಸಿಬ್ಬಂದಿ ಅಬ್ದುಲ್ ನಬಿಸಾಬ ಮೇಲೆ ಹಲ್ಲೆ ಮಾಡಿದ ಇಸಾಕ್ ನಿವಾಸದ ಮುಂದೆ ಕಸ ಹಾಕಿ ಪ್ರತಿಭಟನೆ ನಡೆಸಿದ ನಗರಸಭೆ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ಕಸದ ವಾಹನಗಳ ಮೂಲಕ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ಮಾಡಿದ ಇಸಾಕ್ ನನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು. ನಗರದ ಕಸ ಮತ್ತು ನಿವಾಸಿಗಳ ಮನೆಯ ಕಸವನ್ನು ವಿಲೇವಾರಿ ಮಾಡಿ ಹೊರ ಹಾಕುವ ಕೆಲಸ ಸಿಬ್ಬಂದಿಗಳು ಮಾಡುತ್ತಿದ್ದಾರೆ. ಇಂತಹ ಸಿಬ್ಬಂದಿಗಳ ಮೇಲೆ ಪದೆ ಪದೆ ಹಲ್ಲೆ ನಡೆಯುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ರಾಜಿ ಸಂಧಾನಕ್ಕೆ ಯತ್ನ&lt;/strong&gt;&lt;/h2&gt;&lt;p&gt;ನಗರಸಭೆಯ ಸಿಬ್ಬಂದಿ ಅಬ್ದುಲ್ ನಬಿಸಾಬ ಮೇಲೆ ಹಲ್ಲೆ ನಡೆಸಿದ ಇಸಾಕ್ ಸಂಬಂದಿಗಳು ನಗರ ಪೊಲೀಸ್ ಠಾಣೆಗೆ ಆಗಮಿಸಿ ರಾಜಿ ಸಂಧಾನ ಮಾಡುವಂತೆ ಕೋರಿದ್ದಾರೆ. ಆದರೆ ಸಿಬ್ಬಂದಿಗಳು ರಾಜಿಗೆ ಒಪ್ಪದೆ ಕ್ರಮ ಕೈಗೊಳ್ಳಬೇಕು ಮತ್ತು ಬಂಧಿಸಲೇಬೇಕೆಂದು ಜಿದ್ದು ಹಿಡಿದಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-municipal-worker-assaulted-over-waste-segregation-protest-erupts-gvd/articleshow-hyghluk"/>
        </item>
        <item>
            <title><![CDATA[ಕರ್ನಾಟಕದಲ್ಲಿ ಮಳೆಯಿಲ್ಲದಿದ್ರೂ ಕಾವೇರಿ ನೀರಿಗಾಗಿ ಕ್ಯಾತೆ; ಸಿಎಂ ಬದಲಾದ್ರೂ ಹಳೆ ಚಾಳಿ ಬಿಡದ ತಮಿಳುನಾಡು!]]></title>
            <link>https://kannada.asianetnews.com/gallery/state/cauvery-water-dispute-tamil-nadu-demands-31-tmc-july-quota-from-karnataka-gi7sf8b</link>
            <guid isPermaLink="true">https://kannada.asianetnews.com/gallery/state/cauvery-water-dispute-tamil-nadu-demands-31-tmc-july-quota-from-karnataka-gi7sf8b</guid>
            <pubDate>Tue, 23 Jun 2026 18:45:08 +0530</pubDate>
            <description><![CDATA[&lt;p&gt;ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ, ಜೂನ್ ತಿಂಗಳ ನೀರಿನ ಕೊರತೆ ಭರಿಸಲು ಮತ್ತು ಜುಲೈ ತಿಂಗಳ ಕೋಟಾ ಬಿಡುಗಡೆ ಮಾಡಲು ತಮಿಳುನಾಡು ಕರ್ನಾಟಕದ ಮೇಲೆ ತೀವ್ರ ಒತ್ತಡ ಹೇರಿದೆ. ಮಳೆ ಕೊರತೆ ಮತ್ತು ಜಲಾಶಯಗಳಲ್ಲಿ ಕಡಿಮೆ ನೀರಿನ ಮಟ್ಟದಿಂದಾಗಿ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt9hrmwq1bzcvejd0yp3455,imgname-cauvery-water-dispute-1782220120731.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ, ಜೂನ್ ತಿಂಗಳ ನೀರಿನ ಕೊರತೆ ಭರಿಸಲು ಮತ್ತು ಜುಲೈ ತಿಂಗಳ ಕೋಟಾ ಬಿಡುಗಡೆ ಮಾಡಲು ತಮಿಳುನಾಡು ಕರ್ನಾಟಕದ ಮೇಲೆ ತೀವ್ರ ಒತ್ತಡ ಹೇರಿದೆ. ಮಳೆ ಕೊರತೆ ಮತ್ತು ಜಲಾಶಯಗಳಲ್ಲಿ ಕಡಿಮೆ ನೀರಿನ ಮಟ್ಟದಿಂದಾಗಿ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿದೆ.&lt;/p&gt;&lt;img&gt;&lt;p&gt;&lt;strong&gt;ನವದೆಹಲಿ (ಜೂ.23): ಕಾ&lt;/strong&gt;ವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ನೆರೆರಾಜ್ಯ ತಮಿಳುನಾಡು ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಇತ್ತೀಚಿನ ಸಭೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಅಧಿಕಾರಿಗಳು, ಕರ್ನಾಟಕದಿಂದ ತಮಗೆ ಬರಬೇಕಾದ ನೀರಿನ ಕೋಟಾವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ತೀವ್ರ ಒತ್ತಡ ಹೇರಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಜೂನ್ ತಿಂಗಳ ನೀರಿನಲ್ಲಿ ಭಾರಿ ಕೊರತೆ:&lt;/strong&gt;&lt;/p&gt;&lt;p&gt;ಸಭೆಯಲ್ಲಿ ತನ್ನ ವಾದ ಮಂಡಿಸಿದ ತಮಿಳುನಾಡು ಸರ್ಕಾರ, 'ಜೂನ್ ತಿಂಗಳಿನಲ್ಲಿ ನಿಗದಿತ ವೇಳಾಪಟ್ಟಿಯಂತೆ ಕರ್ನಾಟಕವು 9.19 ಟಿಎಂಸಿ ನೀರನ್ನು ಹರಿಸಬೇಕಿತ್ತು. ಆದರೆ, ಈವರೆಗೆ ಕೇವಲ 2.6 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಂದರೆ ಸರಿಸುಮಾರು 6.5 ಟಿಎಂಸಿ ನೀರಿನ ಕೊರತೆಯಾಗಿದೆ' ಎಂದು ದೂರು ನೀಡಿದೆ. ಈ ಕೊರತೆಯನ್ನು ತಕ್ಷಣವೇ ಭರಿಸಬೇಕು ಎಂದು ಪ್ರಾಧಿಕಾರದ ಮುಂದೆ ಪಟ್ಟು ಹಿಡಿದಿದೆ.&lt;/p&gt;&lt;img&gt;&lt;p&gt;&lt;strong&gt;ಕರ್ನಾಟಕದ ವಾದ ತಳ್ಳಿಹಾಕಿದ ತಮಿಳುನಾಡು:&lt;/strong&gt;&lt;/p&gt;&lt;p&gt;ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಎಂಬ ಕರ್ನಾಟಕದ ವಾದವನ್ನು ತಮಿಳುನಾಡು ಸಾರಾಸಗಟಾಗಿ ತಳ್ಳಿಹಾಕಿದೆ. 'ಫೆಬ್ರವರಿಯಿಂದ ಮೇ ತಿಂಗಳವರೆಗೆ ಕರ್ನಾಟಕವು ತನ್ನ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಳಸಿಕೊಂಡಿದೆ. ಇದರಿಂದಾಗಿಯೇ ಈಗ ನೀರಿನ ಮಟ್ಟ ಕುಸಿದಿದೆ. ನಿಮ್ಮ ತಪ್ಪುಗಳಿಗೆ ನಾವು ಬೆಲೆ ತೆರಲು ಸಾಧ್ಯವಿಲ್ಲ' ಎಂದು ತಮಿಳುನಾಡು ಅಧಿಕಾರಿಗಳು ಆರೋಪಿಸಿದ್ದಾರೆ. ಜೂನ್ ತಿಂಗಳ ಬಾಕಿ ಉಳಿದಿರುವ ನೀರಿನ ಜೊತೆಗೆ, ಜುಲೈ ತಿಂಗಳ ಕೋಟಾ ಆದ 31.24 ಟಿಎಂಸಿ ನೀರನ್ನು ಹರಿಸಲು ಕರ್ನಾಟಕಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಪ್ರಾಧಿಕಾರವನ್ನು ಒತ್ತಾಯಿಸಿದೆ.&lt;/p&gt;&lt;img&gt;&lt;p&gt;&lt;strong&gt;ಸಂಕಷ್ಟದಲ್ಲಿ ಕರ್ನಾಟಕ:&lt;/strong&gt;&lt;/p&gt;&lt;p&gt;ಇನ್ನೊಂದೆಡೆ, ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಮಳೆಯ ಕೊರತೆಯಿಂದಾಗಿ ನೀರಿನ ಸಂಗ್ರಹದ ಮಟ್ಟ ಆಶಾದಾಯಕವಾಗಿಲ್ಲ. ಕುಡಿಯುವ ನೀರಿಗೇ ಆದ್ಯತೆ ನೀಡಬೇಕಾದ ಅನಿವಾರ್ಯತೆಯಲ್ಲಿ ಕರ್ನಾಟಕ ಸರ್ಕಾರವಿದೆ. ಹೀಗಿರುವಾಗ ತಮಿಳುನಾಡು ಒಟ್ಟು 31 ಟಿಎಂಸಿಗೂ ಅಧಿಕ ನೀರಿಗಾಗಿ ಪಟ್ಟು ಹಿಡಿದಿರುವುದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಾಧಿಕಾರವು ಮಳೆಯ ಪ್ರಮಾಣ ಮತ್ತು ಜಲಾಶಯಗಳ ಸ್ಥಿತಿಗತಿಯನ್ನು ಅವಲಂಬಿಸಿ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಈಗ ಕುತೂಹಲ ಕೆರಳಿಸಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/cauvery-water-dispute-tamil-nadu-demands-31-tmc-july-quota-from-karnataka-gi7sf8b"/>
        </item>
        <item>
            <title><![CDATA[ಎಲ್ಲರ ಕಣ್ಣು ತಪ್ಪಿಸಿ ಟಾಯ್ಲೆಟ್​ ಫ್ಲಷ್​ನಲ್ಲಿ ಮೊಬೈಲ್​ ಇಟ್ಟಿದ್ದ  NEET ವಿದ್ಯಾರ್ಥಿ: ಸಿಕ್ಕಿಬಿದ್ದಿದ್ದೇ ರೋಚಕ]]></title>
            <link>https://kannada.asianetnews.com/india-news/neet-aspirant-arrested-in-telangana-for-hiding-mobile-phone-in-exam-centre-flush-tank-suc/articleshow-zogwm01</link>
            <guid isPermaLink="true">https://kannada.asianetnews.com/india-news/neet-aspirant-arrested-in-telangana-for-hiding-mobile-phone-in-exam-centre-flush-tank-suc/articleshow-zogwm01</guid>
            <pubDate>Tue, 23 Jun 2026 18:10:25 +0530</pubDate>
            <description><![CDATA[ಜೂನ್ 21ರಂದು ನಡೆದ NEET ಮರುಪರೀಕ್ಷೆಯಲ್ಲಿ, ಹೈದರಾಬಾದ್&zwnj;ನ ವಿದ್ಯಾರ್ಥಿಯೊಬ್ಬ ಶೌಚಾಲಯದ ಫ್ಲಶ್ ಟ್ಯಾಂಕ್&zwnj;ನಲ್ಲಿ ಮೊಬೈಲ್ ಅಡಗಿಸಿಟ್ಟು ನಕಲು ಮಾಡಲು ಯತ್ನಿಸಿದ್ದ. ಹೊಟ್ಟೆನೋವಿನ ನೆಪದಲ್ಲಿ ಶೌಚಾಲಯಕ್ಕೆ ತೆರಳಿ ಫೋನ್ ಬಳಸುತ್ತಿದ್ದಾಗ, ದೀರ್ಘಕಾಲದ ಅನುಪಸ್ಥಿತಿಯಿಂದ ಅನುಮಾನಗೊಂಡ ಮೇಲ್ವಿಚಾರಕರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvt7xhfhy8cp47c0s458hv5z,imgname-neet-1782218409457.jpg" type="image/jpeg" height="390" width="690"/>
            <content:encoded><![CDATA[&lt;p&gt;ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆ NEET ನ ಮರು ಪರೀಕ್ಷೆಯು ಮೊನ್ನೆ ಜೂನ್ 21ರಂದು ನಡೆಯಿತು. 22 ಲಕ್ಷ ವಿದ್ಯಾರ್ಥಿಗಳು NEET UG ಮರುಪರೀಕ್ಷೆ ಬರೆದಿದ್ದರು. ದೇಶಾದ್ಯಂತ 5 ಸಾವಿರಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು, ವಿದೇಶದಲ್ಲಿ 14 ಕೇಂದ್ರಗಳಲ್ಲಿ ಮರು-NEET ಪರೀಕ್ಷೆಯನ್ನು ನಡೆಸಲಾಯಿತು. ಮೊದಲ ಪರೀಕ್ಷೆಯಲ್ಲಿ ನಡೆದಿರುವ ಪ್ರಶ್ನೆ ಪತ್ರಿಕೆ ಲೀಕ್​ ಪ್ರಕರಣದ ಹಿನ್ನೆಲೆಯಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ ವೈದ್ಯರಾಗುವ ಅಭಿಲಾಷೆಯಿಂದ ಬಂದಿರುವ ಕೆಲವು ವಿದ್ಯಾರ್ಥಿಗಳು ನಕಲಿ ಹೊಡೆಯುವಲ್ಲಿ ಹಿಂದೆ ಬಿದ್ದಿಲ್ಲ. 30ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಅರೆಸ್ಟ್​ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ಎಲ್ಲರನ್ನೂ ದಂಗು ಬಡಿಸಿದ ಘಟನೆ&lt;/strong&gt;&lt;/h3&gt;&lt;p&gt;ಆದರೆ ಅದರಲ್ಲಿ ನಡೆದಿರುವ ಘಟನೆಯೊಂದು ತನಿಖಾಧಿಕಾರಿಗಳನ್ನೂ ದಂಗು ಬಡಿಸಿದೆ. ತೆಲಂಗಾಣದ ಹೈದರಾಬಾದ್&zwnj;ನಲ್ಲಿ NEET ಮರುಪರೀಕ್ಷೆಗೆ ಹಾಜರಾಗಿದ್ದ 18 ವರ್ಷದ ವಿದ್ಯಾರ್ಥಿಯ ತಲೆಗೆ ಎಲ್ಲರೂ ಶಾಕ್​ ಆಗಿದ್ದಾರೆ. NEET ಪರೀಕ್ಷೆಯ ಸಮಯದಲ್ಲಿ ಈತ ತನ್ನ ಫೋನ್ ಅನ್ನು ಪರೀಕ್ಷಾ ಕೇಂದ್ರದ ವಾಷ್​ರೂಮ್&zwnj;ನ ಫ್ಲಶ್ ಟ್ಯಾಂಕ್&zwnj;ನಲ್ಲಿ ಅಡಗಿಸಿಟ್ಟಿದ್ದ. ವಾಷ್​ರೂಮ್​ಗೆ ಹೋಗುವ ನೆಪದಲ್ಲಿ, ಅಲ್ಲಿಂದ ತೆಗೆದು ನಕಲು ಮಾಡಲು ಪ್ರಯತ್ನಿಸಿದ್ದ. ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ ಫೋನ್ ಬಳಸಿ ಉತ್ತರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದ ವಿದ್ಯಾರ್ಥಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಚಂಪೇಟ್ ನಿವಾಸಿಯಾಗಿರುವ ವಿದ್ಯಾರ್ಥಿ, ಸರ್ಕಾರಿ ಶಾಲೆಯ ನೀಟ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯ ಸಮಯದಲ್ಲಿ ನಕಲು ಮಾಡಲು ಯತ್ನಿಸಿದ್ದ. ದಿಬಾಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಂಗುಡದ ZPHS ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪೊಲೀಸರು ಹಿಡಿದರು.&lt;/p&gt;&lt;p&gt;ಅಚಂಪೇಟ್ ನಿವಾಸಿಯಾಗಿರುವ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ಶಾಲಾ ಆವರಣದಲ್ಲಿ (NEET ಪರೀಕ್ಷಾ ಕೇಂದ್ರ) ಫೋನ್ ಅನ್ನು ಮರೆಮಾಡಿದ್ದಾನೆ ಎಂದು ಪೊಲೀಸರು ವರದಿ ಮಾಡಿದ್ದಾರೆ. ತನ್ನ ವಂಚನೆ ಯೋಜನೆಯ ಭಾಗವಾಗಿ, ವಿದ್ಯಾರ್ಥಿ ಬೆಳಿಗ್ಗೆ 7 ಗಂಟೆಗೆ ಆಗಮಿಸಿ ಮೊಬೈಲ್ ಫೋನ್ ಅನ್ನು ಶೌಚಾಲಯದ ವೆಂಟಿಲೇಟರ್&zwnj;ನಲ್ಲಿ ಇರಿಸಿದನು. ವೆಂಟಿಲೇಟರ್ ಶಾಲೆಯ ಹೊರ ಗೋಡೆಯ ಪಕ್ಕದಲ್ಲಿ ಇರುವುದರಿಂದ ವಿದ್ಯಾರ್ಥಿಗೆ ಪ್ರವೇಶ ಸಾಧ್ಯ ಎಂದು ವರದಿಯಾಗಿದೆ. ನಂತರ ವಿದ್ಯಾರ್ಥಿ ಬೆಳಿಗ್ಗೆ 11 ಗಂಟೆಗೆ ವಾಶ್&zwnj;ರೂಮ್&zwnj;ಗೆ ಹೋದನು, ಅಲ್ಲಿ ಫೋನ್ ಅನ್ನು ಜಿಪ್-ಲಾಕ್ ಕವರ್&zwnj;ನಲ್ಲಿ ಇರಿಸಿ ಶೌಚಾಲಯದ ಫ್ಲಶ್ ಟ್ಯಾಂಕ್&zwnj;ನಲ್ಲಿ ಮರೆಮಾಡಿದನು.&lt;/p&gt;&lt;h2&gt;&lt;strong&gt;ಆಗಿದ್ದೇನು?&lt;/strong&gt;&lt;/h2&gt;&lt;p&gt;ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ತಮ್ಮ ಭದ್ರತಾ ತಂಡಗಳು ಇಡೀ ಪ್ರದೇಶ ಮತ್ತು ಪರೀಕ್ಷಾ ಕೇಂದ್ರವನ್ನು ಸಂಪೂರ್ಣವಾಗಿ ಶೋಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವಾಗ ಅಭ್ಯರ್ಥಿಗಳನ್ನು ಸಹ ಸಂಪೂರ್ಣವಾಗಿ ಶೋಧಿಸಲಾಯಿತು. ಆದಾಗ್ಯೂ, ಫ್ಲಶ್ ಟ್ಯಾಂಕ್&zwnj;ನಲ್ಲಿ ಅಡಗಿಸಿಟ್ಟಿದ್ದ ಫೋನ್ ಆರಂಭಿಕ ತಪಾಸಣೆಯ ಸಮಯದಲ್ಲಿ ಪತ್ತೆಯಾಗಲಿಲ್ಲ. ಪರೀಕ್ಷೆಯ ಸಮಯದಲ್ಲಿ, ವಿದ್ಯಾರ್ಥಿ ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ್ದಾನೆ ಮತ್ತು ಶೌಚಾಲಯಕ್ಕೆ ಹೋಗುವಂತೆ ಕೇಳಿಕೊಂಡನು, ಅದು ಇಡೀ ಕೇಂದ್ರಕ್ಕೆ ಸಾಮಾನ್ಯ ಶೌಚಾಲಯವಾಗಿದ್ದು ಶಾಲಾ ಕಟ್ಟಡದಿಂದ ದೂರದಲ್ಲಿದೆ. ಅಲ್ಲಿಗೆ ಹೋದ ನಂತರ, ವಿದ್ಯಾರ್ಥಿ ತನ್ನ ಫೋನ್ ಅನ್ನು ಹೊರತೆಗೆದು ಉತ್ತರಗಳನ್ನು ಹುಡುಕಲು ಪ್ರಾರಂಭಿಸಿದನು.&lt;/p&gt;&lt;p&gt;ವಿದ್ಯಾರ್ಥಿಯು ತನ್ನ ಫೋನ್&zwnj;ನಲ್ಲಿ ಉತ್ತರಗಳನ್ನು ಹುಡುಕುತ್ತಿರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು. ಪರೀಕ್ಷಾ ಕೊಠಡಿಯಲ್ಲಿ ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಮತ್ತು ನಿರ್ವಹಿಸುತ್ತಿದ್ದ ಮೇಲ್ವಿಚಾರಕರು, ಒಬ್ಬ ವಿದ್ಯಾರ್ಥಿಯು ದೀರ್ಘಕಾಲದವರೆಗೆ ಶೌಚಾಲಯದಲ್ಲಿ ಇರುವುದನ್ನು ಗಮನಿಸಿದರು. ಕೆಲವು ಸಿಬ್ಬಂದಿ ಸದಸ್ಯರನ್ನು ಹೋಗಿ ತನಿಖೆ ಮಾಡಲು ಕೇಳಿದಾಗ, ವಿದ್ಯಾರ್ಥಿಯು ತನ್ನ ಫೋನ್&zwnj;ನಲ್ಲಿ ಉತ್ತರಗಳನ್ನು ಹುಡುಕುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದನು. ವಿದ್ಯಾರ್ಥಿಯ ಮೇಲೆ ವಂಚನೆ ಆರೋಪವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಯ ಫೋನ್ ಅನ್ನು ವಶಪಡಿಸಿಕೊಂಡರು ಮತ್ತು ಅವನು ಅದರೊಂದಿಗೆ ಏನು ಮಾಡುತ್ತಿದ್ದಾನೆ ಎಂಬುದನ್ನು ನಿರ್ಧರಿಸಲು ಸಾಧನವನ್ನು ಈಗ ಸಂಪೂರ್ಣವಾಗಿ ಪರಿಶೀಲಿಸಲಾಗುವುದು. ಪೊಲೀಸರು ಪ್ರಶ್ನಿಸಿದಾಗ ವಿದ್ಯಾರ್ಥಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.&lt;/p&gt;&lt;p&gt;ನೀಟ್ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಯೊಬ್ಬರು ಫೋನ್ ಅಥವಾ ಇತರ ಸಾಧನವನ್ನು ಬಳಸಿಕೊಂಡು ನಕಲು ಮಾಡುತ್ತಿರುವುದು ಕಂಡುಬಂದರೆ, ಆರೋಪಿ ವಿದ್ಯಾರ್ಥಿಯು ವಿವಿಧ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಮುಂದಿನ ಕೆಲವು ವರ್ಷಗಳವರೆಗೆ ವಿದ್ಯಾರ್ಥಿಯನ್ನು NTA ಪರೀಕ್ಷೆಗಳಿಂದ ನಿಷೇಧಿಸಬಹುದು. ಪ್ರಸ್ತುತ ನಿಯಮಗಳ ಅಡಿಯಲ್ಲಿ, ಪ್ರಕರಣದ ತೀವ್ರತೆಯನ್ನು ಅವಲಂಬಿಸಿ ಈ ಅವಧಿಯನ್ನು ಹಲವಾರು ವರ್ಷಗಳವರೆಗೆ ವಿಸ್ತರಿಸಬಹುದು.&lt;/p&gt;&lt;p&gt;ಆದಾಗ್ಯೂ, ಪ್ರಕರಣವು ಸಂಘಟಿತ ವಂಚನೆ, ಪತ್ರಿಕೆ ಸೋರಿಕೆ ಅಥವಾ ವಂಚನೆಯನ್ನು ಒಳಗೊಂಡಿರುವುದು ಕಂಡುಬಂದರೆ, ಪೊಲೀಸ್ ಪ್ರಕರಣ ಮತ್ತು ಕಾನೂನು ಕ್ರಮವನ್ನು ಸಹ ಪ್ರಾರಂಭಿಸಬಹುದು. ಅಂತಹ ಸಂದರ್ಭಗಳಲ್ಲಿ, ತನಿಖಾ ಸಂಸ್ಥೆಗಳು ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳನ್ನು ತಡೆಗಟ್ಟುವಿಕೆ) ಕಾಯ್ದೆ, 2024 ಮತ್ತು ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಬಹುದು. ಪ್ರಸ್ತುತ, ಆರೋಪಿ ವಿದ್ಯಾರ್ಥಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/neet-aspirant-arrested-in-telangana-for-hiding-mobile-phone-in-exam-centre-flush-tank-suc/articleshow-zogwm01"/>
        </item>
        <item>
            <title><![CDATA[ಚಿಕ್ಕ ಹುಡುಗ ಬೇಡಿಕೊಂಡರೂ ರೂಲ್ಸ್ ನೆಪದಲ್ಲಿ ನಿರ್ಜನ ಪ್ರದೇಶದಲ್ಲಿ ಇಳಿಸಿದ ಬಸ್! ಕಂಡಕ್ಟರ್ ಅಮಾನತಿಗೆ ಶಾಸಕ ಅಶೋಕ್ ರೈ ಆದೇಶ]]></title>
            <link>https://kannada.asianetnews.com/karnataka-districts/mangaluru-news-puttur-mla-ashok-kumar-rai-directs-ksrtc-conductor-suspended-for-dropping-schoolboy-miles-away-gdp/articleshow-n6wizi1</link>
            <guid isPermaLink="true">https://kannada.asianetnews.com/karnataka-districts/mangaluru-news-puttur-mla-ashok-kumar-rai-directs-ksrtc-conductor-suspended-for-dropping-schoolboy-miles-away-gdp/articleshow-n6wizi1</guid>
            <pubDate>Tue, 23 Jun 2026 18:07:34 +0530</pubDate>
            <description><![CDATA[ತಪ್ಪು ಬಸ್ ಹತ್ತಿದ ಆರನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಕೆಎಸ್&zwnj;ಆರ್&zwnj;ಟಿಸಿ ನಿರ್ವಾಹಕನು ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಬಾಲಕನ ವಿನಂತಿಯನ್ನು ತಿರಸ್ಕರಿಸಿ, ಆತನನ್ನು ದೂರದ ಅಪರಿಚಿತ ಸ್ಥಳದಲ್ಲಿ ಇಳಿಸಿ ಹೋಗಿದ್ದಾನೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ನಿರ್ವಾಹಕನನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvt7j6w8zv4wvfy3v2gde5s4,imgname-ashok-kumar-rai--1--1782218038152.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುತ್ತೂರು: &lt;/strong&gt;ನಿಯಮಗಳ ಪಾಲನೆಯ ನೆಪದಲ್ಲಿ ಪುಟ್ಟ ಬಾಲಕನೊಬ್ಬನಿಗೆ ತೊಂದರೆ ನೀಡಿ, ಅಮಾನವೀಯವಾಗಿ ನಡೆದುಕೊಂಡ ಕೆಎಸ್&zwnj;ಆರ್&zwnj;ಟಿಸಿ (KSRTC) ಬಸ್ ನಿರ್ವಾಹಕನೊಬ್ಬನ ವಿರುದ್ಧ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಾದ ಮಾರ್ಗದ ಬಸ್ ಹತ್ತಿದ್ದ ಆರನೇ ತರಗತಿಯ ಶಾಲಾ ವಿದ್ಯಾರ್ಥಿ ವಿನಂತಿಸಿಕೊಂಡರೂ ಬಸ್ ನಿಲ್ಲಿಸದೆ, ಆತನನ್ನು ನಿಗದಿತ ಸ್ಥಳಕ್ಕಿಂತ ಮೈಲುಗಳಷ್ಟು ದೂರ ಕರೆದೊಯ್ದು ಇಳಿಸಿದ ನಿರ್ವಾಹಕನನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸುವಂತೆ (Suspend) ಕೆಎಸ್&zwnj;ಆರ್&zwnj;ಟಿಸಿ ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿದ್ದಾರೆ.&lt;/p&gt;&lt;h2&gt;ತಪ್ಪು ಬಸ್ ಹತ್ತಿದ್ದ ಬಾಲಕ, ನಡೆದಿದ್ದೇನು?&lt;/h2&gt;&lt;p&gt;ವಿಟ್ಲ ಸಮೀಪದ ಕಂಬಳಬೆಟ್ಟು ಮಾಮೇಶ್ವರ ನಿವಾಸಿಯಾಗಿರುವ ಬಾಲಕನೊಬ್ಬ ವಿಟ್ಲದ ಶಾಲೆಯೊಂದರಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಪ್ರತಿದಿನದಂತೆ ಶಾಲೆ ಮುಗಿಸಿ ಮನೆಗೆ ಮರಳುವ ಅವಸರದಲ್ಲಿದ್ದ ಈ ಮಗು, ಪುತ್ತೂರಿಗೆ ತೆರಳುವ ಸಾಮಾನ್ಯ ಬಸ್ ಎಂದು ಭಾವಿಸಿ ವಿಟ್ಲ ನಿಲ್ದಾಣದಲ್ಲಿ ಕಾಸರಗೋಡು-ಧರ್ಮಸ್ಥಳ ಮಾರ್ಗದ ಎಕ್ಸ್&zwnj;ಪ್ರೆಸ್ (Express) ಬಸ್ ಹತ್ತಿದ್ದಾನೆ. ಬಸ್ ಹತ್ತಿದ ಬಳಿಕವಷ್ಟೇ ಅದು ಎಕ್ಸ್&zwnj;ಪ್ರೆಸ್ ಬಸ್ ಹಾಗೂ ತಾನು ಇಳಿಯಬೇಕಾದ ಕಂಬಳಬೆಟ್ಟು ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂಬ ವಿಷಯ ಮಗುವಿಗೆ ತಿಳಿದಿದೆ. ಇದರಿಂದ ಗಾಬರಿಗೊಂಡ ಬಾಲಕ, ತಕ್ಷಣವೇ ನಿರ್ವಾಹಕನ ಬಳಿ ಹೋಗಿ ತಾನು ತಪ್ಪು ಬಸ್ ಹತ್ತಿರುವುದಾಗಿ ತಿಳಿಸಿ, ಕಂಬಳಬೆಟ್ಟು ತಲುಪುತ್ತಿದ್ದಂತೆಯೇ ಬಸ್ ನಿಲ್ಲಿಸಿ ಇಳಿಸುವಂತೆ ಅತ್ಯಂತ ವಿನಮ್ರವಾಗಿ ವಿನಂತಿಸಿದ್ದಾನೆ.&lt;/p&gt;&lt;h2&gt;ರೂಲ್ಸ್ ನೆಪದಲ್ಲಿ ಮೆರೆದ ಅಮಾನವೀಯತೆ!&lt;/h2&gt;&lt;p&gt;ಬಸ್ ಕಂಬಳಬೆಟ್ಟು ನಿಲ್ದಾಣದ ಹತ್ತಿರ ಬರುತ್ತಿದ್ದಂತೆಯೇ ಬಾಲಕ ಮತ್ತೊಮ್ಮೆ ಬಸ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾನೆ. ಆದಾಗ್ಯೂ, ನಿರ್ವಾಹಕ ಮಾತ್ರ ಮಾನವೀಯತೆಯನ್ನು ಮರೆತು, ಇದು ಎಕ್ಸ್&zwnj;ಪ್ರೆಸ್ ಬಸ್ ಆಗಿರುವುದರಿಂದ ಇಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದಾನೆ. ಚಾಲಕನಿಗೆ ಬಸ್ ನಿಲ್ಲಿಸಲು ಸಿಗ್ನಲ್ ನೀಡದ ನಿರ್ವಾಹಕ, ಆ ಪುಟ್ಟ ಬಾಲಕನನ್ನು ಅಲ್ಲಿಂದ ಸುಮಾರು ದೂರವಿರುವ ಕಬಕ ಜಂಕ್ಷನ್ ತನಕ ಕರೆದೊಯ್ದು, ಅಲ್ಲಿ ಬಸ್&zwnj;ನಿಂದ ಕೆಳಗೆ ಇಳಿಸಿದ್ದಾನೆ. ಅಪರಿಚಿತ ಜಾಗದಲ್ಲಿ ಒಂಟಿಯಾಗಿ ಇಳಿದು ಕಂಗಾಲಾದ ಬಾಲಕ, ಹೇಗೋ ಮಾಡಿ ತಕ್ಷಣವೇ ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಕಬಕ ಜಂಕ್ಷನ್&zwnj;ಗೆ ಧಾವಿಸಿ, ರಸ್ತೆಯ ಬದಿಯಲ್ಲಿ ಅಸಹಾಯಕನಾಗಿ ನಿಂತಿದ್ದ ಮಗುವನ್ನು ಮನೆಗೆ ಕರೆದೊಯ್ದಿದ್ದಾರೆ.&lt;/p&gt;&lt;h2&gt;ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ, ಶಾಸಕರಿಂದ ಕಠಿಣ ಕ್ರಮ&lt;/h2&gt;&lt;p&gt;ಕೆಎಸ್&zwnj;ಆರ್&zwnj;ಟಿಸಿ ಸಿಬ್ಬಂದಿಯ ಈ ಬೇಜವಾಬ್ದಾರಿಯುತ ಹಾಗೂ ಕ್ರೂರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. &quot;ಅದು ಎಕ್ಸ್&zwnj;ಪ್ರೆಸ್ ಬಸ್ ಆಗಿದ್ದರೂ, ತಪ್ಪು ಹತ್ತಿರುವುದು ಒಬ್ಬ ಪುಟ್ಟ ಶಾಲಾ ಬಾಲಕ ಎಂಬ ಕನಿಷ್ಠ ಜ್ಞಾನ ನಿರ್ವಾಹಕನಿಗೆ ಇರಬೇಕಿತ್ತು. ಮಾನವೀಯತೆಯ ನೆಲೆಯಲ್ಲಾದರೂ ಬಸ್ ನಿಲ್ಲಿಸಿ ಮಗುವನ್ನು ಸುರಕ್ಷಿತವಾಗಿ ಇಳಿಸಬಹುದಿತ್ತು. ಒಂದು ವೇಳೆ ಮಗುವಿಗೆ ಏನಾದರೂ ಅನಾಹುತವಾಗಿದ್ದರೆ ಯಾರು ಹೊಣೆ? ಎಂದು ನೆಟ್ಟಿಗರು ಕಠಿಣವಾಗಿ ಖಂಡಿಸಿದ್ದರು.&lt;/p&gt;&lt;p&gt;ಈ ಗಂಭೀರ ವಿಷಯ ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ಬರುತ್ತಿದ್ದಂತೆಯೇ, ಅವರು ತಕ್ಷಣವೇ ಪುತ್ತೂರು ಕೆಎಸ್&zwnj;ಆರ್&zwnj;ಟಿಸಿ ಡಿಪೋ ಮ್ಯಾನೇಜರ್ (Depot Manager) ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿರುವ ಶಾಸಕರು, ಅಮಾನವೀಯತೆ ಮೆರೆದ ಆ ನಿರ್ವಾಹಕನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಒಳಪಡಿಸಬೇಕು ಎಂದು ಖಡಕ್ ಆದೇಶ ನೀಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-news-puttur-mla-ashok-kumar-rai-directs-ksrtc-conductor-suspended-for-dropping-schoolboy-miles-away-gdp/articleshow-n6wizi1"/>
        </item>
        <item>
            <title><![CDATA[Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?]]></title>
            <link>https://kannada.asianetnews.com/politics/bk-hariprasad-new-kpcc-president-karnataka-congress-2028-strategy-gvd-videoshow-pqfdz4u</link>
            <guid isPermaLink="true">https://kannada.asianetnews.com/politics/bk-hariprasad-new-kpcc-president-karnataka-congress-2028-strategy-gvd-videoshow-pqfdz4u</guid>
            <pubDate>Tue, 23 Jun 2026 17:24:18 +0530</pubDate>
            <description><![CDATA[&lt;p&gt;Karnataka Congress: ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ನೇಮಕವಾಗಿದ್ದು, ರಾಜ್ಯ ಕಾಂಗ್ರೆಸ್&zwnj;ನಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ವೇದಿಕೆ ಸಿದ್ಧವಾಗಿದೆ. 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್..&lt;/p&gt;]]></description>
            <media:content url="https://geo.dailymotion.com/player/x1tbu.html?video=xahwzsm" medium="video" height="768" width="1024"/>
            <content:encoded><![CDATA[&lt;p&gt;ಕೈ ಪಡೆಗೆ ನೂತನ ಸಾರಥಿ.. ರಾಜ್ಯ ಕಾಂಗ್ರೆಸ್​ನಲ್ಲಿ ಹೊಸ ಅಧ್ಯಾಯ..!,, ದಿಲ್ಲಿ ಮಟ್ಟದ ನಾಯಕನಿಗೆ ಗಲ್ಲಿ ರಾಜಕಾರಣದ ಜವಾಬ್ದಾರಿ ಸಿಕ್ಕಿದ್ದೇಗೆ..?,, ಸೇವಾದಳ to ಸಂಸತ್.. ಅಧ್ಯಕ್ಷರ​ ಮುಂದೆ ಸಾವಿರ ಸವಾಲು!,, 2028ರ ಕುರುಕ್ಷೇತ್ರಕ್ಕೆ ಮುನ್ನುಡಿ.. ಡಿಕೆ-ಬಿಕೆ ಬ್ರಹ್ಮಾಸ್ತ್ರ..! ಇದೇ ಇವತ್ತಿನ ಸುವರ್ಣ ಸ್ಪೆಷಲ್.. ಹರಿಪ್ರಸಾದ್ &lsquo;ಹಸ್ತ&rsquo;ಸಾರಥ್ಯ. ಇದುವರೆಗೆ ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಕುಳಿತು ದೇಶದ ವಿವಿಧ ರಾಜ್ಯಗಳ ಚುನಾವಣಾ ತಂತ್ರ ಹೆಣೆಯುತ್ತಿದ್ದ ಆ ರಾಜಕೀಯ ಚತುರ, ಈಗ ನೇರವಾಗಿ ಕರ್ನಾಟಕದ ಅಖಾಡಕ್ಕೆ ಧುಮುಕಿದ್ದಾರೆ.&lt;/p&gt;&lt;p&gt;ಮಾಜಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ಕೆಪಿಸಿಸಿ ಅಧ್ಯಕ್ಷಗಿರಿ &amp;nbsp; ಚುಕ್ಕಾಣಿ ಹಿಡಿದಿರುವ ಹರಿಪ್ರಸಾದ್ ನಡೆ ಹೇಗಿರಲಿದೆ? ಈ &quot;ದಿಲ್ಲಿ ಲೀಡರ್&quot;ಗೆ ಕರ್ನಾಟಕದ &quot;ಗಲ್ಲಿ ಪಾಲಿಟಿಕ್ಸ್&quot; ತಲೆನೋವಾಗುತ್ತಾ ಅಥವಾ ವಿಪಕ್ಷಗಳ ತಂತ್ರಕ್ಕೆ ಇವರೇ ಕೌಂಟರ್ ಕೊಡ್ತಾರಾ..? ಹರಿಪ್ರಸಾದ್ ಹಸ್ತಸಾರಥ್ಯ ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆ ತರಬಹುದು..? ಅಸಲಿಗೆ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಮಂತ್ರಿಮಂಡಳದಲ್ಲಿ ಬಿ.ಕೆ ಹರಿಪ್ರಸಾದ್​ಗೆ ಸ್ಥಾನ ಸಿಗಬೇಕಿತ್ತು. ಆದ್ರೆ ಸಿದ್ದರಾಮಯ್ಯ ಮಂತ್ರಿ ಮಂಡಳದಲ್ಲಿ ಬಿ.ಕೆಗೆ ಸ್ಥಾನ ಸಿಗಲಿಲ್ಲ.&lt;/p&gt;&lt;p&gt;ಈಗ ಡಿ.ಕೆ.ಶಿ ಸಿಎಂ ಆಗಿ ಹೊಸ ಮಂತ್ರಿಮಂಡಳ ಅಸ್ಥಿತ್ವಕ್ಕೆ ಬರುವ ಹೊತ್ತಲ್ಲಾದ್ರೂ ಹರಿಪ್ರಸಾದ್​ &amp;nbsp;ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ರು. ಆದ್ರೆ ಒಕ್ಷದ ಶಿಸ್ತಿನ ಸೇನಾನಿಗೆ ಸಿಕ್ಕಿದ್ದು ಕೆಪಿಸಿಸಿ ದಳಪತಿ ಪಟ್ಟ. ಟಾರ್ಗೆಟ್ 2028 ಕ್ಕೆ ಕೈ ಪಾಳಯದಲ್ಲಿ ಭರ್ಜರಿ ಲೀಡರ್&zwnj;ಶಿಪ್ ಬದಲಾವಣೆ ಗಾಳಿ ಬೀಸುತ್ತಿದೆ. ಕೆಪಿಸಿಸಿ ಗದ್ದುಗೆಗೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಎಂಟ್ರಿ ಕೊಟ್ಟಾಗಿದೆ. ಆದರೆ, ರಾಜ್ಯ ರಾಜಕೀಯದ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ ಅಂದ್ರೆ... ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/bk-hariprasad-new-kpcc-president-karnataka-congress-2028-strategy-gvd-videoshow-pqfdz4u"/>
        </item>
        <item>
            <title><![CDATA[Mangaluru: ಕಾಣೆಯಾದ ಚಿನ್ನು 3 ವಾರದ ಬಳಿಕ ಪತ್ತೆ, ಮನೆ ಮಗು ಹುಡುಕಿ ಕೊಟ್ಟವನಿಗೆ ಮಾಲೀಕನಿಂದ 50ಸಾವಿರ ನಗದು ಬಹುಮಾನ]]></title>
            <link>https://kannada.asianetnews.com/karnataka-districts/mangaluru-news-putturu-man-ganesh-kera-pays-rs50k-cash-reward-to-local-who-found-his-missing-pet-dog-chinnu-gdp/articleshow-2swcw6g</link>
            <guid isPermaLink="true">https://kannada.asianetnews.com/karnataka-districts/mangaluru-news-putturu-man-ganesh-kera-pays-rs50k-cash-reward-to-local-who-found-his-missing-pet-dog-chinnu-gdp/articleshow-2swcw6g</guid>
            <pubDate>Tue, 23 Jun 2026 17:23:13 +0530</pubDate>
            <description><![CDATA[ಪುತ್ತೂರಿನ ಶ್ವಾನ ಪ್ರೇಮಿ ಗಣೇಶ್ ಕೇರಾ ಅವರ ಕಾಣೆಯಾಗಿದ್ದ 'ಚಿನ್ನು' ಎಂಬ ಸಾಕುನಾಯಿ ಮೂರು ವಾರಗಳ ನಂತರ ಪತ್ತೆಯಾಗಿದೆ. ನಾಯಿಯನ್ನು ಹುಡುಕಿಕೊಟ್ಟವರಿಗೆ ₹50,000 ಬಹುಮಾನ ಘೋಷಿಸಿದ್ದ ಗಣೇಶ್, ಅದನ್ನು ಪತ್ತೆಹಚ್ಚಿದ ಸ್ಥಳೀಯ ನಿವಾಸಿ ಪುರಂದರ ಅವರಿಗೆ ವಾಗ್ದಾನದಂತೆ ನಗದು ಬಹುಮಾನವನ್ನು ಹಸ್ತಾಂತರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvt55c5gcdq18f3qeqryp736,imgname-puttur-missing-dog-chinnu-found-1782215520432.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುತ್ತೂರು: &lt;/strong&gt;ಸಾಕುಪ್ರಾಣಿಗಳ ಮೇಲಿನ ಪ್ರೀತಿ ಕೇವಲ ಮಾತಿಗೆ ಸೀಮಿತವಲ್ಲ ಎಂಬುದನ್ನು ಪುತ್ತೂರಿನ ಶ್ವಾನ ಪ್ರೇಮಿಯೊಬ್ಬರು ಸಾಬೀತುಪಡಿಸಿದ್ದಾರೆ. ತಾಲೂಕಿನ ಕಬಕ ಬಳಿಯ ಪೋಲ್ಯ ನಿವಾಸಿ ಗಣೇಶ್ ಕೇರಾ ಅವರ ಮನೆಯಿಂದ ಕಳೆದ ಮೂರು ವಾರಗಳ ಹಿಂದೆ ಕಾಣೆಯಾಗಿದ್ದ &quot;ಚಿನ್ನು&quot; ಎಂಬ ಹೆಸರಿನ ದೇಶಿಯ (ದೇಸಿ) ತಳಿಯ ಸಾಕುನಾಯಿ ಕೊನೆಗೂ ಪತ್ತೆಯಾಗಿದ್ದು, ತಾವು ಘೋಷಣೆ ಮಾಡಿದಂತೆ ಶ್ವಾನವನ್ನು ಹುಡುಕಿಕೊಟ್ಟ ಸ್ಥಳೀಯ ನಿವಾಸಿಗೆ ಭರವಸೆಯಿಟ್ಟಿದ್ದ ಭಾರಿ ಮೊತ್ತದ ನಗದು ಬಹುಮಾನವನ್ನು ಹಸ್ತಾಂತರಿಸಲಾಗಿದೆ.&lt;/p&gt;&lt;h2&gt;ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ 'ಚಿನ್ನು'&lt;/h2&gt;&lt;p&gt;ಗಣೇಶ್ ಕೇರಾ ಅವರು ಪ್ರಾಣಿ ದಯೆ ಹೊಂದಿರುವ ಅಪ್ಪಟ ಶ್ವಾನ ಪ್ರೇಮಿಯಾಗಿದ್ದು, ತಮ್ಮ ಮನೆಯಲ್ಲಿ ವಿವಿಧ ತಳಿಗಳಿಗೆ ಸೇರಿದ ಸುಮಾರು 30 ಕ್ಕೂ ಹೆಚ್ಚು ನಾಯಿಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹುತ್ತಿದ್ದಾರೆ. ಇವುಗಳ ಪೈಕಿ ದೇಸಿ ತಳಿಯ 'ಚಿನ್ನು' ಎನ್ನುವ ಶ್ವಾನ ಇತ್ತೀಚೆಗೆ 'ಫಿಟ್ಸ್' (ಮೂರ್ಛೆ ರೋಗ) ಕಾಯಿಲೆಗೆ ಒಳಗಾಗಿತ್ತು. ಈ ಕಾಯಿಲೆಯ ತೀವ್ರತೆಯಿಂದಾಗಿ ಚಿನ್ನು ತನ್ನ ಕಾಲುಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಓಡಾಡಲು ಕಷ್ಟಪಡುತ್ತಿತ್ತು. ಇಂತಹ ಪರಿಸ್ಥಿತಿಯಲ್ಲೇ ಸುಮಾರು ಮೂರು ವಾರಗಳ ಹಿಂದೆ ಅದು ಮನೆಯ ಆವರಣದಿಂದ ದಿಢೀರನೆ ನಾಪತ್ತೆಯಾಗಿತ್ತು.&lt;/p&gt;&lt;h2&gt;ನಗರದಾದ್ಯಂತ ಬ್ಯಾನರ್, ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ!&lt;/h2&gt;&lt;p&gt;ತಮ್ಮ ನೆಚ್ಚಿನ ಮೂಕಜೀವ ಕಾಣೆಯಾಗಿದ್ದರಿಂದ ತೀವ್ರ ಆತಂಕಕ್ಕೊಳಗಾದ ಗಣೇಶ್ ಕೇರಾ, ಅದನ್ನು ಹುಡುಕಲು ವ್ಯವಸ್ಥಿತ ಮತ್ತು ಸಂಘಟಿತ ಶೋಧ ಕಾರ್ಯವನ್ನು ಆರಂಭಿಸಿದರು. ಚಿನ್ನುವಿನ ಫೋಟೋ ಮತ್ತು ವಿವರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಾರ್ವಜನಿಕರ ಸಹಾಯ ಕೋರಿದರು. ಅಷ್ಟಕ್ಕೇ ನಿಲ್ಲದೆ, ಪುತ್ತೂರು ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ವಿವಿಧ ಭಾಗಗಳಲ್ಲಿ ನಾಯಿಯ ಮಾಹಿತಿ ಇರುವ ದೊಡ್ಡ ದೊಡ್ಡ ಬ್ಯಾನರ್&zwnj;ಗಳನ್ನು ಅಳವಡಿಸಿದರು.&lt;/p&gt;&lt;p&gt;ಯಾರಾದರೂ ಈ ನಾಯಿಯನ್ನು ಪತ್ತೆಹಚ್ಚಿ ತಂದುಕೊಟ್ಟರೆ ಅಥವಾ ಅದರ ಇರುವಿಕೆಯ ಬಗ್ಗೆ ನಿಖರ ಸುಳಿವು ನೀಡಿದರೆ ₹50,000 ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಸಾಕುನಾಯಿಗಾಗಿ ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ಘೋಷಿಸಿದ್ದು ಜಿಲ್ಲಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.&lt;/p&gt;&lt;h2&gt;ಬಂಪರ್ ಬಹುಮಾನ ಗೆದ್ದ ಪುರಂದರ!&lt;/h2&gt;&lt;p&gt;ಕಳೆದ ಮೂರು ವಾರಗಳಿಂದ ಎಲ್ಲೂ ಸಿಗದೆ ನಿರಾಸೆ ಮೂಡಿಸಿದ್ದ ಚಿನ್ನು, ಕೊನೆಗೂ ಪೋಲ್ಯ ಪ್ರದೇಶದ ನಿವಾಸಿಯಾದ ಪುರಂದರ ಅವರ ಕಣ್ಣಿಗೆ ಬಿದ್ದಿದೆ. ಬ್ಯಾನರ್ ಹಾಗೂ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿದ್ದ ಪುರಂದರ ಅವರು ತಕ್ಷಣವೇ ಆ ನಾಯಿಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು, ಮಾಲೀಕ ಗಣೇಶ್ ಕೇರಾ ಅವರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಚಿನ್ನು ಮರಳಿ ಸಿಕ್ಕ ತಕ್ಷಣ ಗಣೇಶ್ ಕೇರಾ ಅವರ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ತಮ್ಮ ಮಾತಿಗೆ ಬದ್ಧರಾದ ಗಣೇಶ್, ನಾಯಿಯನ್ನು ಸುರಕ್ಷಿತವಾಗಿ ತಲುಪಿಸಿದ ಪುರಂದರ ಅವರಿಗೆ ತಕ್ಷಣವೇ ಘೋಷಿತ ಬಹುಮಾನದ ಮೊತ್ತ ₹50,000 ನಗದನ್ನು ಹಸ್ತಾಂತರಿಸಿ ಕೃತಜ್ಞತೆ ಸಲ್ಲಿಸಿದರು.&lt;/p&gt;&lt;p&gt;ತಮ್ಮ ಸಂತೋಷವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಗಣೇಶ್ ಕೇರಾ, &quot;ನಮ್ಮ ಪ್ರೀತಿಯ ಚಿನ್ನು ಸುರಕ್ಷಿತವಾಗಿ ಮನೆಗೆ ಮರಳಿದ್ದಾನೆ. ಆತನನ್ನು ಪತ್ತೆಹಚ್ಚಿ ತಂದುಕೊಟ್ಟ ಪೋಲ್ಯದ ಪುರಂದರ ಅವರಿಗೆ ಭರವಸೆ ನೀಡಿದಂತೆ 50 ಸಾವಿರ ರೂಪಾಯಿ ಬಹುಮಾನವನ್ನು ನೀಡಿದ್ದೇವೆ. ಪ್ರಾರ್ಥಿಸಿದ ಮತ್ತು ಹುಡುಕಾಟಕ್ಕೆ ನೆರವಾದ ಎಲ್ಲರಿಗೂ ಧನ್ಯವಾದಗಳು&quot; ಎಂದು ಬರೆದುಕೊಂಡಿದ್ದಾರೆ. ಮೂಕಜೀವದ ಮೇಲಿನ ಈ ಅಪಾರ ಕಾಳಜಿ ಹಾಗೂ ಕೊಟ್ಟ ಮಾತಿನಂತೆ ಭಾರಿ ಬಹುಮಾನ ನೀಡಿದ ಗಣೇಶ್ ಕೇರಾ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-news-putturu-man-ganesh-kera-pays-rs50k-cash-reward-to-local-who-found-his-missing-pet-dog-chinnu-gdp/articleshow-2swcw6g"/>
        </item>
        <item>
            <title><![CDATA[2 ಲೈನ್​ ರಾಜೀನಾಮೆಗೆ ಮ್ಯಾನೇಜರ್​ 2 ಲೈನ್​ ಉತ್ತರ: ಒಂದೇ ದಿನದಲ್ಲಿ 13 ಲಕ್ಷ ಜನರಿಂದ ಶ್ಲಾಘನೆ- ಏನಿದೆ ಅಂಥದ್ದು]]></title>
            <link>https://kannada.asianetnews.com/india-news/employees-two-line-resignation-email-gets-unexpected-reply-from-manager-suc/articleshow-45dgvkf</link>
            <guid isPermaLink="true">https://kannada.asianetnews.com/india-news/employees-two-line-resignation-email-gets-unexpected-reply-from-manager-suc/articleshow-45dgvkf</guid>
            <pubDate>Tue, 23 Jun 2026 17:11:06 +0530</pubDate>
            <description><![CDATA[ಉದ್ಯೋಗಿಯೊಬ್ಬರು ಕಳುಹಿಸಿದ ಎರಡು ಸಾಲಿನ ರಾಜೀನಾಮೆ ಪತ್ರ ಮತ್ತು ಅದಕ್ಕೆ ಮ್ಯಾನೇಜರ್ ನೀಡಿದ ಅಷ್ಟೇ ಚುಟುಕಾದ, ಪ್ರೀತಿಯ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪತ್ರವು ಆರೋಗ್ಯಕರ ಕೆಲಸದ ವಾತಾವರಣ ಮತ್ತು ರಾಜೀನಾಮೆ ಪ್ರಕ್ರಿಯೆಗಳ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvt4h4b6tzsg4941wtzr9qj7,imgname-resignation-1782214857062.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಕಂಪೆನಿಯಲ್ಲಿ ಸುದೀರ್ಘ ಕೆಲಸ ಮಾಡಿದಾಗ, ಅವರು ಎಷ್ಟೇ ಚೆನ್ನಾಗಿ ಕೆಲಸ ಮಾಡಿದ್ದರೂ, ಹಗಲು ಇರುಳು ಶ್ರಮಿಸಿದರೂ, ಕುಟುಂಬವನ್ನೂ ಪಕ್ಕಕ್ಕಿಟ್ಟು ತಮ್ಮ ಸಂಸ್ಥೆಗಾಗಿ ದುಡಿದರೂ ಅವರು ರಾಜೀನಾಮೆ ಕೊಡುವ ಸಮಯದಲ್ಲಿ ಹಲವು ಕಂಪೆನಿಗಳು ಅವರನ್ನು ನಡೆಸಿಕೊಳ್ಳುವ ರೀತಿ ಇದಾಗಲೇ ಬಹಳಷ್ಟು ಮಂದಿಗೆ ಅನುಭವಕ್ಕೆ ಬಂದಿರಲಿಕ್ಕೆ ಸಾಕು. ಕಂಪೆನಿಗಾಗಿ ಜೀವ ಸವೆಸಿದ್ದರೂ, ಅವರು ರಾಜೀನಾಮೆ ಕೊಡುತ್ತಿದ್ದಾರೆ ಎಂದು ಗೊತ್ತಾದಾಗ ಅವರನ್ನು ಕನಿಷ್ಠ ಪ್ರೀತಿಯಿಂದ ಬೀಳ್ಕೊಡುವ ವ್ಯವಸ್ಥೆ ಬಹಳ ಕಡಿಮೆಯೇ ಎನ್ನಬಹುದು.&lt;/p&gt;&lt;h2&gt;&lt;strong&gt;ವೈರಲ್​ ರಾಜೀನಾಮೆ-ರಿಪ್ಲೈ&lt;/strong&gt;&lt;/h2&gt;&lt;p&gt;ಅದೇ ಇನ್ನೊಂದೆಡೆ ರಾಜೀನಾಮೆ ಸಲ್ಲಿಸುವಾಗಲೂ ಬಹುತೇಕ ಜನರು ಸುದೀರ್ಘ ಪತ್ರ, ಇ-ಮೇಲ್​ ಸಂದೇಶ ಕಳುಹಿಸುವುದು ಉಂಟು. ಇದೀಗ ಎರಡೇ ಎರಡು ಲೈನ್​ನ ರಾಜೀನಾಮೆ ಪತ್ರ ಹಾಗೂ ಅದಕ್ಕೆ ಅಷ್ಟೇ ಪ್ರೀತಿಯಿಂದ ಮ್ಯಾನೇಜರ್​ ಚುಟುಕಾಗಿ ಉತ್ತರಿಸಿದ ರೀತಿ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಇದು ವೈರಲ್​ ಆಗಿರುವ ಪರಿಯನ್ನು ನೋಡಿದ್ರೆ, ಎಷ್ಟು ಮಂದಿ ರಾಜೀನಾಮೆ ಕೊಟ್ಟಾಗ ಅನುಭವಿಸಿರುವ ನೋವು ತಿಳಿದುಬರುತ್ತದೆ. ಇದೇ ಕಾರಣಕ್ಕೆ ಈ ರಾಜೀನಾಮೆ ಪತ್ರ ಇಷ್ಟೊಂದು ಖುಷಿಯಿಂದ ಎಲ್ಲರೂ ಶೇರ್​ ಮಾಡುತ್ತಿದ್ದಾರೆ.&lt;/p&gt;&lt;p&gt;ಈ ವೈರಲ್​ ಪೋಸ್ಟ್ ಆರೋಗ್ಯಕರ ಕೆಲಸದ ಸಂಬಂಧಗಳ ಕುರಿತು ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಅನೇಕರು ಉದ್ಯೋಗಿಯ ನೇರ ಸಂದೇಶ ಮತ್ತು ವ್ಯವಸ್ಥಾಪಕರ ಬೆಚ್ಚಗಿನ ಪ್ರತಿಕ್ರಿಯೆ ಎರಡನ್ನೂ ಶ್ಲಾಘಿಸುತ್ತಿದ್ದಾರೆ. X ಬಳಕೆದಾರರು ಇಮೇಲ್ ವಿನಿಮಯದ ಸ್ಕ್ರೀನ್&zwnj;ಶಾಟ್ ಅನ್ನು ಹಂಚಿಕೊಂಡ ನಂತರ ಮತ್ತು &quot;ನಾನು ನೋಡಿದ ಅತ್ಯುತ್ತಮ ರಾಜೀನಾಮೆ&quot; ಎಂದು ಶೀರ್ಷಿಕೆ ನೀಡಿದ ನಂತರ ಚರ್ಚೆ ಪ್ರಾರಂಭವಾಗಿದೆ.&lt;/p&gt;&lt;h3&gt;&lt;strong&gt;ರಾಜೀನಾಮೆ ಪತ್ರದಲ್ಲಿ ಏನಿದೆ?&lt;/strong&gt;&lt;/h3&gt;&lt;p&gt;ಇಮೇಲ್&zwnj;ನಲ್ಲಿ, ಉದ್ಯೋಗಿ ಬರೆದಿದ್ದಾರೆ: &quot;ಪ್ರಿಯ ಸರ್, ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಎಲ್ಲದಕ್ಕೂ ಧನ್ಯವಾದಗಳು.&quot; (Dear Sir, I&rsquo;ve decided to resign. Thank you for everything) ಇಷ್ಟೇ ಇದೆ. ಇದಕ್ಕಿಂತಲೂ ಹೆಚ್ಚು ಗಮನ ಸೆಳೆದದ್ದು ಸೌರಭ್ ಗುಪ್ತಾ ಎಂದು ಗುರುತಿಸಲ್ಪಟ್ಟ ಮ್ಯಾನೇಜರ್ ಕಳುಹಿಸಿರುವ ರಿಪ್ಲೈ. &quot;ರಾಜೀನಾಮೆ ಸ್ವೀಕರಿಸಲಾಗಿದೆ. ಆದರೆ ನೆನಪಿಡಿ, ನೀವು ಹಿಂತಿರುಗಲು ಬಾಗಿಲು ಯಾವಾಗಲೂ ತೆರೆದಿರುತ್ತದೆ.&quot; (Resignation accepted. But remember, the door is always open for you to come back.&quot;). ಈ ಪೋಸ್ಟ್​ ಒಂದೇ ದಿನದಲ್ಲಿ 13 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ, ಬಳಕೆದಾರರು ಸಕಾರಾತ್ಮಕ ರಾಜೀನಾಮೆಗಳನ್ನು ಹೇಗೆ ಸಾಮಾನ್ಯಗೊಳಿಸಬೇಕು ಎಂಬುದನ್ನು ಚರ್ಚಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/employees-two-line-resignation-email-gets-unexpected-reply-from-manager-suc/articleshow-45dgvkf"/>
        </item>
        <item>
            <title><![CDATA[ಜೈಲಿಗೆ ಹೋಗ್ತಾರಾ Niveditha Gowda, Kishan? ಸೋಶಿಯಲ್‌ ಮೀಡಿಯಾ ನವಿಲುಗಳಿಗೆ ಈಗ ಬಂಧನ ಭೀತಿ]]></title>
            <link>https://kannada.asianetnews.com/tv-talk/niveditha-gowda-kishan-peacock-feather-dress-reels-controversy-forest-department-san/articleshow-mrx48by</link>
            <guid isPermaLink="true">https://kannada.asianetnews.com/tv-talk/niveditha-gowda-kishan-peacock-feather-dress-reels-controversy-forest-department-san/articleshow-mrx48by</guid>
            <pubDate>Tue, 23 Jun 2026 15:35:56 +0530</pubDate>
            <description><![CDATA[&lt;p&gt;ನಿವೇದಿತಾ ಗೌಡ ಮತ್ತು ಕಿಶನ್ ಬಿಳಗಲಿ ಅವರು ನೈಜ ನವಿಲುಗರಿ ಉಡುಪು ಧರಿಸಿದ ವಿಡಿಯೋ ಪ್ರದರ್ಶಿಸಿದ್ದಕ್ಕಾಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsywgtwa7hty97b96bhkkwt,imgname-niveditha-gowda-kishan-over-peacock-feather-dress-1782208938844.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.23): &lt;/strong&gt;ಕನ್ನಡ ರಿಯಾಲಿಟಿ ಶೋ 'ಬಿಗ್&zwnj;ಬಾಸ್' ಖ್ಯಾತಿಯ ನಿವೇದಿತಾ ಗೌಡ ಹಾಗೂ ಕಿಶನ್ ಬಿಳಗಲಿ ಅವರು ಈಗ ಹೊಸದೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೈಜ ನವಿಲುಗರಿಗಳಿಂದ ತಯಾರಿಸಲಾದ ಉಡುಪುಗಳನ್ನು ಧರಿಸಿ ಸೋಶಿಯಲ್&zwnj; ಮೀಡಿಯಾದಲ್ಲಿ ರೀಲ್ಸ್ ಹಾಗೂ ವಿಡಿಯೋ ಪ್ರದರ್ಶನ ಮಾಡಿರುವ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಅರಣ್ಯ ಇಲಾಖೆಗೆ ಅಧಿಕೃತ ದೂರು ದಾಖಲಾಗಿದೆ. ಖ್ಯಾತ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಈ ಸಂಬಂಧ ಬೆಂಗಳೂರು ಪ್ರಾದೇಶಿಕ ನಗರ ವಿಭಾಗದ ವ್ಯಾಪ್ತಿಯ ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದು, ತಕ್ಷಣವೇ ಇಬ್ಬರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಅಗ್ಗದ ಪ್ರಚಾರಕ್ಕಾಗಿ ವನ್ಯಜೀವಿ ಕಾಯ್ದೆ ಉಲ್ಲಂಘನೆ?&lt;/strong&gt;&lt;/h2&gt;&lt;p&gt;ಭಾರತದ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲು (Peacock), ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಸಂರಕ್ಷಿಸಲ್ಪಟ್ಟ ಪ್ರಭೇದವಾಗಿದೆ. ನವಿಲಿನ ಗರಿಗಳು, ಅಂಗಾಂಗಗಳು ಅಥವಾ ಅವುಗಳಿಂದ ತಯಾರಿಸಲಾದ ಯಾವುದೇ ವಸ್ತುಗಳ ಅನಧಿಕೃತ ಸಂಗ್ರಹಣೆ, ವಾಣಿಜ್ಯ ವ್ಯಾಪಾರ ಮತ್ತು ಪ್ರದರ್ಶನ ಮಾಡುವುದು ಕಾನೂನುಬಾಹಿರವಾಗಿದೆ.&lt;/p&gt;&lt;p&gt;&quot;ವಿಡಿಯೋದಲ್ಲಿ ಬಳಸಿರುವ ಉಡುಪುಗಳಲ್ಲಿ ಅಸಾಮಾನ್ಯ ಪ್ರಮಾಣದ ನವಿಲು ಗರಿಗಳು ಗೋಚರಿಸುತ್ತಿವೆ. ಇಷ್ಟು ದೊಡ್ಡ ಪ್ರಮಾಣದ ಗರಿಗಳು ಈ ನಟರಿಗೆ ಎಲ್ಲಿಂದ ಬಂದವು? ಅವುಗಳ ಮೂಲ ಯಾವುದು? ಯಾವುದೇ ಅನುಮತಿ ಪತ್ರ ಅಥವಾ ದಾಖಲೆಗಳಿವೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ&quot; ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಮಾಜಕ್ಕೆ ತಪ್ಪು ಸಂದೇಶ; ಕಳ್ಳಬೇಟೆಯ ಆತಂಕ&lt;/strong&gt;&lt;/h2&gt;&lt;p&gt;ಸೋಶಿಯಲ್&zwnj; ಮೀಡಿಯಾದಲ್ಲಿ ಲಕ್ಷಾಂತರ ಅನುಯಾಯಿಗಳನ್ನು (Followers) ಹೊಂದಿರುವ ಪ್ರಭಾವಿ ವ್ಯಕ್ತಿಗಳು ಇಂತಹ ವಸ್ತುಗಳನ್ನು ಪ್ರಚಾರಕ್ಕಾಗಿ ಬಳಸುವುದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸಾರ್ವಜನಿಕರಲ್ಲಿ ನವಿಲು ಗರಿಗಳ ಬಳಕೆ ಮಾಡುವುದು ಸುಲಭ ಎನ್ನುವಂತೆ ಮಾಡುತ್ತದೆ. ಇದರಿಂದಾಗಿ ನವಿಲುಗಳ ಮೇಲೆ ಅಕ್ರಮ ಬೇಟೆ ಹಾಗೂ ಕಳ್ಳಸಾಗಣೆ ಚಟುವಟಿಕೆಗಳು ಹೆಚ್ಚಾಗುವ ಆತಂಕವನ್ನು ದೂರುದಾರರು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ದೂರಿನಲ್ಲಿ ಹಲವು ನಿಯಮಗಳನ್ನೂ ಅವರು ಉಲ್ಲೇಖಿಸಿದ್ದಾರೆ. ತಕ್ಷಣವೇ ಇದರ ಪ್ರಕರಣ ದಾಖಲಿಸಿ, ವಿಡಿಯೋ ಹಾಗೂ ಛಾಯಾಚಿತ್ರಗಳ ತಾಂತ್ರಿಕ ಪರಿಶೀಲನೆ ನಡೆಸಬೇಕು. ಬಳಸಲಾದ ಗರಿಗಳು ನೈಜವಾಗಿವೆಯೇ ಅಥವಾ ಕೃತಕವಾಗಿವೆಯೇ ಎಂಬುದನ್ನು ವೈಜ್ಞಾನಿಕವಾಗಿ ದೃಢೀಕರಿಸಬೇಕು. ನೈಜ ನವಿಲುಗರಿಗಳಾಗಿದ್ದರೆ ಆ ಉಡುಪುಗಳನ್ನು ವಶಕ್ಕೆ ಪಡೆದು, ಇವುಗಳನ್ನು ಪೂರೈಸಿದ ಜಾಲದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.&lt;/p&gt;&lt;h2&gt;&lt;strong&gt;'ವರ್ತೂರು ಸಂತೋಷ್' ಹುಲಿ ಉಗುರು ವಿವಾದದ ಫ್ಲ್ಯಾಶ್&zwnj;ಬ್ಯಾಕ್!&lt;/strong&gt;&lt;/h2&gt;&lt;p&gt;ಈ ಹಿಂದೆ ಬಿಗ್&zwnj;ಬಾಸ್ ಮನೆಯ ಒಳಗಡೆಯೇ ಇದ್ದ ವರ್ತೂರು ಸಂತೋಷ್ ಅವರು ಕೊರಳಿಗೆ ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಫೋಟೋ ಮತ್ತು ವಿಡಿಯೋ ಭಾರಿ ವಿವಾದ ಸೃಷ್ಟಿಸಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ನೇರವಾಗಿ ಬಿಗ್&zwnj;ಬಾಸ್ ಸೆಟ್&zwnj;ಗೇ ಲಗ್ಗೆ ಇಟ್ಟು, ವರ್ತೂರು ಸಂತೋಷ್ ಅವರನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದರು. ಈ ಘಟನೆ ಇಡೀ ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿತ್ತು. ಅದರ ಬೆನ್ನಲ್ಲೇ ಹಲವು ಸಿನೆಮಾ ತಾರೆಯರು, ಪ್ರಭಾವಿ ವ್ಯಕ್ತಿಗಳ ಮನೆಗಳ ಮೇಲೆಯೂ ಅರಣ್ಯ ಇಲಾಖೆ ದಾಳಿ ನಡೆಸಿತ್ತು.&lt;/p&gt;&lt;p&gt;ಈಗ ಅದೇ ಬಿಗ್&zwnj;ಬಾಸ್ ವೇದಿಕೆಯಿಂದ ಪ್ರಸಿದ್ಧಿ ಪಡೆದ ನಿವೇದಿತಾ ಗೌಡ ಮತ್ತು ಕಿಶನ್ ಇಬ್ಬರೂ ನವಿಲುಗರಿ ಉಡುಪಿನ ವಿಚಾರವಾಗಿ ಅರಣ್ಯ ಇಲಾಖೆಯ ರಡಾರ್&zwnj;ಗೆ ಸಿಲುಕಿರುವುದು ಸ್ಯಾಂಡಲ್&zwnj;ವುಡ್ ವಲಯದಲ್ಲಿ ತಲ್ಲಣ ಮೂಡಿಸಿದೆ. ತನಿಖೆಯ ಅವಧಿಯಲ್ಲಿ ಯಾವುದೇ ಪ್ರಭಾವ ಅಥವಾ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಪಾರದರ್ಶಕ ಕ್ರಮ ಜರುಗಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬಂದಿದೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/niveditha-gowda-kishan-peacock-feather-dress-reels-controversy-forest-department-san/articleshow-mrx48by"/>
        </item>
        <item>
            <title><![CDATA[ಆರೇ ನಿಮಿಷದಲ್ಲಿ ಸೋಲ್ಡ್‌ ಔಟ್‌ ಆದ SUV, ಬುಕ್ಕಿಂಗ್‌ ಆರಂಭ ಆಗ್ತಿದ್ದಂತೆ ಮುಗಿಬಿದ್ದ ಗ್ರಾಹಕರು!]]></title>
            <link>https://kannada.asianetnews.com/car-news/skoda-kodiaq-rs-sold-out-in-6-minutes-india-booking-price-features-san/articleshow-cr7iawd</link>
            <guid isPermaLink="true">https://kannada.asianetnews.com/car-news/skoda-kodiaq-rs-sold-out-in-6-minutes-india-booking-price-features-san/articleshow-cr7iawd</guid>
            <pubDate>Tue, 23 Jun 2026 17:01:34 +0530</pubDate>
            <description><![CDATA[&lt;p&gt;ಭಾರತದಲ್ಲಿ ಬಿಡುಗಡೆಯಾದ ಸ್ಕೋಡಾದ ಶಕ್ತಿಶಾಲಿ 'ಕೋಡಿಯಾಕ್&zwnj; ಆರ್&zwnj;ಎಸ್&zwnj;' ಎಸ್&zwnj;ಯುವಿ, ಬುಕಿಂಗ್ ಆರಂಭವಾದ ಕೇವಲ 6 ನಿಮಿಷಗಳಲ್ಲಿ ಸಂಪೂರ್ಣವಾಗಿ ಮಾರಾಟವಾಗಿದೆ. 262 bhp ಪವರ್ ಹೊಂದಿರುವ ಈ 7-ಸೀಟರ್ ಕಾರು, ತನ್ನ ವೇಗ, ಪರ್ಫಾರ್ಮೆನ್ಸ್ ಮತ್ತು ಸ್ಪೋರ್ಟಿ ವಿನ್ಯಾಸದಿಂದಾಗಿ ದಾಖಲೆ ನಿರ್ಮಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt3r20mvmq90x4enb41v23n,imgname-skoda-kodiaq-rs-news-suv-1782214035476.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜೂ.23): &lt;/strong&gt;ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸದ್ಯ ಪರ್ಫಾರ್ಮೆನ್ಸ್ ಕಾರುಗಳು ಹಾಗೂ ಸ್ಪೋರ್ಟಿ ಎಸ್&zwnj;ಯುವಿಗಳ (SUV) ಕ್ರೇಜ್ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ, ಪ್ರೀಮಿಯಂ ಕಾರು ಉತ್ಪಾದನಾ ಸಂಸ್ಥೆ 'ಸ್ಕೋಡಾ' ಭಾರತದಲ್ಲಿ ಹೊಸದೊಂದು ದಾಖಲೆ ಬರೆದಿದೆ. ಕಂಪನಿಯು ತನ್ನ ಅತ್ಯಂತ ಶಕ್ತಿಶಾಲಿ 'ಸ್ಕೋಡಾ ಕೋಡಿಯಾಕ್&zwnj; ಆರ್&zwnj;ಎಸ್&zwnj;' (Skoda Kodiaq RS) ಎಸ್&zwnj;ಯುವಿಯ ಕೇವಲ 50 ಯುನಿಟ್&zwnj;ಗಳನ್ನು ಮಾತ್ರ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಿಸಿತ್ತು. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಬುಕಿಂಗ್ ಆರಂಭವಾದ ಕೇವಲ 6 ನಿಮಿಷಗಳ ಒಳಗೆ ಎಲ್ಲಾ ಕಾರುಗಳು ಸಂಪೂರ್ಣವಾಗಿ ಮಾರಾಟವಾಗಿವೆ.&lt;/p&gt;&lt;p&gt;ಸ್ಕೋಡಾ ಕಂಪನಿಗೆ ಭಾರತದಲ್ಲಿ ಇಂತಹ ದೊಡ್ಡ ಯಶಸ್ಸು ಸಿಗುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ 2025 ರಲ್ಲಿ ಬಿಡುಗಡೆಯಾಗಿದ್ದ 'ಆಕ್ಟೇವಿಯಾ ಆರ್&zwnj;ಎಸ್' (Octavia RS) ಕಾರು ಕೇವಲ 20 ನಿಮಿಷಗಳಲ್ಲಿ ಸಂಪೂರ್ಣ ಬುಕ್ ಆಗಿತ್ತು. ಈಗ ಕೋಡಿಯಾಕ್&zwnj; ಆರ್&zwnj;ಎಸ್ ಆ ದಾಖಲೆಯನ್ನೂ ಮುರಿದು ಕೇವಲ 6 ನಿಮಿಷಗಳಲ್ಲಿ ಇತಿಹಾಸ ನಿರ್ಮಿಸಿದೆ.&lt;/p&gt;&lt;h2&gt;&lt;strong&gt;51 ವರ್ಷಗಳ ಭವ್ಯ ಪರಂಪರೆ (Legacy)&lt;/strong&gt;&lt;/h2&gt;&lt;p&gt;ಸ್ಕೋಡಾ ಸಂಸ್ಥೆಯ ಪ್ರಕಾರ, ಜಾಗತಿಕವಾಗಿ 'RS' ಬ್ಯಾಜ್&zwnj; ಕಾರುಗಳಿಗೆ ಬರೋಬ್ಬರಿ 51 ವರ್ಷಗಳ ಇತಿಹಾಸವಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲೂ ಈ ಆರ್&zwnj;ಎಸ್ ಮಾಡೆಲ್&zwnj;ಗಳಿಗೆ 22 ವರ್ಷಗಳ ಸುದೀರ್ಘ ಇತಿಹಾಸವಿದೆ. ಭಾರತದಲ್ಲಿ ಮೊದಲ ಬಾರಿಗೆ ಆಕ್ಟೇವಿಯಾ ಆರ್&zwnj;ಎಸ್ ಮೂಲಕ ಈ ಪರ್ಫಾರ್ಮೆನ್ಸ್ ಬ್ರ್ಯಾಂಡ್ ಪರಿಚಯಿಸಲ್ಪಟ್ಟಿತ್ತು. ಅಂದಿನಿಂದಲೂ ಈ ಕಾರುಗಳಿಗೆ ಭಾರತದಲ್ಲಿ ಪ್ರತ್ಯೇಕ ಅಭಿಮಾನಿ ಬಳಗವಿದೆ.&lt;/p&gt;&lt;p&gt;ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಆಶೀಷ್ ಗುಪ್ತಾ ಮಾತನಾಡಿ, &quot;ಕೋಡಿಯಾಕ್&zwnj; ಆರ್&zwnj;ಎಸ್ ಕಾರಿನಲ್ಲಿ ಭರ್ಜರಿ ಪರ್ಫಾರ್ಮೆನ್ಸ್, 4&times;4 ಸಾಮರ್ಥ್ಯ, 7-ಸೀಟರ್ ಐಷಾರಾಮಿ ಸೌಕರ್ಯ ಹಾಗೂ ಮೋಟಾರ್ ಸ್ಪೋರ್ಟ್ಸ್ ಪರಂಪರೆಯ ಅದ್ಭುತ ಸಮ್ಮಿಲನವಿದೆ. ಇದೇ ಕಾರಣಕ್ಕೆ ಗ್ರಾಹಕರು ಇದನ್ನು ಕೈಗೆತ್ತಿಕೊಂಡಿದ್ದಾರೆ&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಎಂಜಿನ್ ಪವರ್ ಮತ್ತು ಪರ್ಫಾರ್ಮೆನ್ಸ್&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಎಂಜಿನ್: &lt;/strong&gt;ಈ ಕಾರಿನಲ್ಲಿ 2.0 ಲೀಟರ್ TSI ಟರ್ಬೋ ಪೆಟ್ರೋಲ್ ಎಂಜಿನ್ ನೀಡಲಾಗಿದೆ.&lt;/li&gt; &lt;li&gt;&lt;strong&gt;ಶಕ್ತಿ: &lt;/strong&gt;ಇದು 262 bhp ಪವರ್ ಮತ್ತು 400 Nm ಭರ್ಜರಿ ಟಾರ್ಕ್ ಉತ್ಪಾದಿಸುತ್ತದೆ.&lt;/li&gt; &lt;li&gt;&lt;strong&gt;ಗೇರ್&zwnj;ಬಾಕ್ಸ್: &lt;/strong&gt;ಇದರೊಂದಿಗೆ 7-ಸ್ಪೀಡ್ DSG ಆಟೊಮ್ಯಾಟಿಕ್ ಗೇರ್&zwnj;ಬಾಕ್ಸ್ ಲಭ್ಯವಿದ್ದು, ಇದು ಕಾರಿನ ನಾಲ್ಕೂ ಚಕ್ರಗಳಿಗೆ (4x4) ಸಮಾನವಾಗಿ ಪವರ್ ಸಪ್ಲೈ ಮಾಡುತ್ತದೆ.&lt;/li&gt;&lt;/ul&gt;&lt;p&gt;ವೇಗ: ಈ ಎಸ್&zwnj;ಯುವಿ ಕೇವಲ 6.3 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದರ ಟಾಪ್ ಸ್ಪೀಡ್ ಗಂಟೆಗೆ 231 ಕಿಮೀ ಆಗಿದ್ದು, ಇದು ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ವೇಗದ ಸ್ಕೋಡಾ ಕಾರು ಎನಿಸಿಕೊಂಡಿದೆ.&lt;/p&gt;&lt;h2&gt;&lt;strong&gt;ಡ್ರೈವಿಂಗ್ ಹ್ಯಾಂಡ್ಲಿಂಗ್ ಇದರ ಅಸಲಿ ತಾಕತ್ತು!&lt;/strong&gt;&lt;/h2&gt;&lt;p&gt;ಹೊಸ ಕೋಡಿಯಾಕ್&zwnj; ಆರ್&zwnj;ಎಸ್ ಕಾರಿನಲ್ಲಿ ಪ್ರೋಗ್ರೆಸ್ಸಿವ್ ಸ್ಟೀರಿಂಗ್ ಮತ್ತು 'ಡೈನಾಮಿಕ್ ಚಾಸಿಸ್ ಕಂಟ್ರೋಲ್ ಪ್ಲಸ್' (DCC Plus) ನಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ನೀಡಲಾಗಿದೆ. ಈ ಸಿಸ್ಟಮ್ ರಸ್ತೆ ಮತ್ತು ಚಾಲನೆಯ ಪರಿಸ್ಥಿತಿಗೆ ತಕ್ಕಂತೆ ಎಸ್&zwnj;ಯುವಿಯ ಸಸ್ಪೆನ್ಷನ್ ಅನ್ನು ಬದಲಾಯಿಸುತ್ತದೆ. ಇದರಲ್ಲಿ ವಿಭಿನ್ನ ಡ್ರೈವಿಂಗ್ ಮೋಡ್&zwnj;ಗಳೂ ಇವೆ. ಇದರೊಂದಿಗೆ 'ಡೈನಾಮಿಕ್ ಸೌಂಡ್ ಬೂಸ್ಟ್' ಫೀಚರ್ ನೀಡಲಾಗಿದ್ದು, ಇದು ಎಂಜಿನ್&zwnj;ನ ಶಬ್ದವನ್ನು ರೇಸಿಂಗ್ ಕಾರ್ ನಂತೆ ಮತ್ತಷ್ಟು ಸ್ಪೋರ್ಟಿಯಾಗಿ ಕೇಳಿಸುವಂತೆ ಮಾಡುತ್ತದೆ.&lt;/p&gt;&lt;h2&gt;&lt;strong&gt;ಲುಕ್&zwnj;ನಲ್ಲೂ ಇದು ಸೂಪರ್ ಸ್ಪೋರ್ಟಿ&lt;/strong&gt;&lt;/h2&gt;&lt;p&gt;ಸಾಮಾನ್ಯ ಕೋಡಿಯಾಕ್&zwnj; ಕಾರಿಗೆ ಹೋಲಿಸಿದರೆ ಕೋಡಿಯಾಕ್&zwnj; ಆರ್&zwnj;ಎಸ್ ಲುಕ್ ಸಂಪೂರ್ಣ ಭಿನ್ನವಾಗಿದೆ. ಇದರಲ್ಲಿ ಬ್ಲ್ಯಾಕ್ ಫಿನಿಶ್ ರೇಡಿಯೇಟರ್ ಗ್ರಿಲ್, ಕಪ್ಪು ಬಣ್ಣದ ರೇರ್ ವ್ಯೂ ಮಿರರ್ಸ್ (ORVMs), ಬ್ಲ್ಯಾಕ್ ರೂಫ್ ರೈಲ್ಸ್ ಸೇರಿದಂತೆ ಹಲವು ಡಾರ್ಕ್ ಎಲಿಮೆಂಟ್ಸ್ ನೀಡಲಾಗಿದೆ. ಇಂಟೀರಿಯರ್&zwnj;ನಲ್ಲಿ ಕೆಂಪು ಸ್ಟಿಚಿಂಗ್ (Red Stitching) ಹೊಂದಿರುವ ಬ್ಲ್ಯಾಕ್ ಲೆದರ್ ಸೀಟ್&zwnj;ಗಳಿದ್ದು, ಕ್ಯಾಬಿನ್&zwnj;ಗೆ ರೇಸಿಂಗ್ ಕಾರ್ ಫೀಲ್ ನೀಡುತ್ತದೆ. 7-ಸೀಟರ್ ಲೇಔಟ್ ಇರುವುದರಿಂದ ಇದು ಪ್ರೀಮಿಯಂ ಫ್ಯಾಮಿಲಿ ಬಳಕೆಗೆ ಸೂಕ್ತವಾಗಿದೆ. ಭಾರತೀಯ ಗ್ರಾಹಕರು ಈಗ ಕೇವಲ ಮೈಲೇಜ್ ಮಾತ್ರವಲ್ಲದೆ, ಪರ್ಫಾರ್ಮೆನ್ಸ್ ಹಾಗೂ ಪ್ರೀಮಿಯಂ ಅನುಭವಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂಬುದಕ್ಕೆ ಈ ಕಾರಿನ ರೆಕಾರ್ಡ್ ಬುಕಿಂಗೇ ಸಾಕ್ಷಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/car-news/skoda-kodiaq-rs-sold-out-in-6-minutes-india-booking-price-features-san/articleshow-cr7iawd"/>
        </item>
        <item>
            <title><![CDATA[Bidadi Township: ಬೈರಮಂಗಲ ಸರ್ಕಲ್‌ಗೆ ಬನ್ನಿ, ರೈತರ ಮುಂದೆ ಚರ್ಚೆ ಮಾಡೋಣ: ಡಿಕೆಶಿಗೆ ನಿಖಿಲ್ ಬಹಿರಂಗ ಸವಾಲ್]]></title>
            <link>https://kannada.asianetnews.com/politics/nikhil-kumaraswamy-challenges-dk-shivakumar-over-bidadi-township-project-gvd/articleshow-u4xowdu</link>
            <guid isPermaLink="true">https://kannada.asianetnews.com/politics/nikhil-kumaraswamy-challenges-dk-shivakumar-over-bidadi-township-project-gvd/articleshow-u4xowdu</guid>
            <pubDate>Tue, 23 Jun 2026 16:55:02 +0530</pubDate>
            <description><![CDATA[&lt;p&gt;Bidadi Township ಯೋಜನೆ ವಿಚಾರವಾಗಿ ಡಿ.ಕೆ.ಶಿವಕುಮಾರ್&zwnj;ಗೆ ನಿಖಿಲ್ ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ರೈತರ ಸಮ್ಮುಖದಲ್ಲೇ ಚರ್ಚೆ ನಡೆಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt3jgsv1cz3zv405ehqqevg,imgname-ch-1782213854011.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾರೋಹಳ್ಳಿ (ಜೂ.23): &lt;/strong&gt;ಬಿಡದಿ ಟೌನ್&zwnj;ಶಿಪ್ ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಅವರು, ರೈತರ ಸಮ್ಮುಖದಲ್ಲೇ ಚರ್ಚೆ ನಡೆಸುವಂತೆ ಸವಾಲು ಹಾಕಿದರು.&lt;/p&gt;&lt;p&gt;ಹಾರೋಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, &quot;ವಿಧಾನಸೌಧದ ಎಸಿ ಕೊಠಡಿಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ರೈತರ ಭೂಮಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಾರದು. ರೈತರೇ ಅಂತಿಮ ತೀರ್ಪುಗಾರರು. ಬಿಡದಿ ಟೌನ್&zwnj;ಶಿಪ್ ಯೋಜನೆ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ನಿರ್ಧಾರ ಮಾಡುವ ವಿಷಯವಲ್ಲ. ಇದು ಸಾವಿರಾರು ರೈತರ ಬದುಕಿಗೆ ಸಂಬಂಧಿಸಿದ ಪ್ರಶ್ನೆ&quot; ಎಂದು ಹೇಳಿದರು.&lt;/p&gt;&lt;p&gt;&quot;ಕುಮಾರಣ್ಣ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಚರ್ಚೆ ಮಾಡಬೇಕಾದರೆ ಬೈರಮಂಗಲ ಸರ್ಕಲ್&zwnj;ಗೆ ಬನ್ನಿ. ಬಾಧಿತ ರೈತರ ಸಮ್ಮುಖದಲ್ಲೇ ಬಹಿರಂಗವಾಗಿ ಚರ್ಚೆ ನಡೆಸೋಣ. ಈ ವಿವಾದಕ್ಕೆ ಅಂತ್ಯ ಹಾಡಬೇಕಾದರೆ ಮುಖ್ಯಮಂತ್ರಿ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಬೇಕು&quot; ಎಂದು ಆಗ್ರಹಿಸಿದರು. ಟೌನ್&zwnj;ಶಿಪ್ ಯೋಜನೆಗೆ ಸ್ಥಳೀಯ ರೈತರು ಒಪ್ಪಿಗೆ ನೀಡಿದರೆ ಸರ್ಕಾರ ಮುಂದುವರಿಯಲಿ. ಆದರೆ ರೈತರು ವಿರೋಧ ವ್ಯಕ್ತಪಡಿಸಿದರೆ, ಸರ್ಕಾರ ಜನರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ನಿಖಿಲ್ ಹೇಳಿದರು.&lt;/p&gt;&lt;p&gt;ಇಲ್ಲಿಯವರೆಗೆ ಯಾವುದೇ ಜನಪ್ರತಿನಿಧಿ ಅಥವಾ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿಲ್ಲ. ಸ್ಥಳೀಯ ರೈತರೊಂದಿಗೆ ಒಂದೇ ಒಂದು ಸುತ್ತಿನ ಚರ್ಚೆಯನ್ನೂ ನಡೆಸಿಲ್ಲ. ರೈತರನ್ನು ಸಂಪೂರ್ಣ ಕತ್ತಲಲ್ಲಿಟ್ಟು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.&lt;/p&gt;&lt;h2&gt;&lt;strong&gt;ಇದೇ ಮೊದಲು&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರ ರೈತರ ಒಗ್ಗಟ್ಟನ್ನು ಒಡೆಯಲು ವ್ಯವಸ್ಥಿತ ಸಂಚು ರೂಪಿಸಿದೆ ಎಂದು ಆರೋಪಿಸಿದ ನಿಖಿಲ್ ಕುಮಾರಸ್ವಾಮಿ, &quot;25 ಕೋಟಿ ರೂಪಾಯಿ ವೆಚ್ಚ ಮಾಡಿ, ಒಟ್ಟು 755 ಬಾಧಿತ ರೈತರ ಪೈಕಿ ಕೇವಲ 7 ಜನರ ಬೆಂಬಲ ಪಡೆದು ಇಡೀ ಟೌನ್&zwnj;ಶಿಪ್ ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ದೇಶದ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರುವುದು ಇದೇ ಮೊದಲು&quot; ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಡದಿ ಟೌನ್&zwnj;ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ಅಭಿಪ್ರಾಯಕ್ಕೆ ಗೌರವ ನೀಡಬೇಕು ಹಾಗೂ ಸರ್ಕಾರ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/nikhil-kumaraswamy-challenges-dk-shivakumar-over-bidadi-township-project-gvd/articleshow-u4xowdu"/>
        </item>
        <item>
            <title><![CDATA[ಭಾರೀ ಇಳಿಕೆಯ ಹಾದಿ ಹಿಡಿದ ಚಿನ್ನದ ಬೆಲೆ; ಬೆಂಗಳೂರಲ್ಲಿ ಇವತ್ತಿನ ಗೋಲ್ಡ್ ರೇಟ್ ಎಷ್ಟು?]]></title>
            <link>https://kannada.asianetnews.com/gallery/business/after-massive-surge-gold-prices-witness-sharp-fall-today-check-latest-rates-kvn-hkgwqld</link>
            <guid isPermaLink="true">https://kannada.asianetnews.com/gallery/business/after-massive-surge-gold-prices-witness-sharp-fall-today-check-latest-rates-kvn-hkgwqld</guid>
            <pubDate>Tue, 23 Jun 2026 16:51:59 +0530</pubDate>
            <description><![CDATA[&lt;p&gt;&lt;strong&gt;Gold Price Drops Sharply in Bengaluru Today:&lt;/strong&gt; ಕಳೆದ ಮೂರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇದೀಗ ಮಂಗಳವಾರವಾದ ಇಂದು ಭಾರೀ ಇಳಿಕೆ ಕಂಡಿದೆ. ಜೂನ್ 23ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krwtqcvx79vd7m3h1gwb4cee,imgname-chatgpt-image-may-18--2026--11-28-53-am-1779084014461.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Gold Price Drops Sharply in Bengaluru Today:&lt;/strong&gt; ಕಳೆದ ಮೂರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇದೀಗ ಮಂಗಳವಾರವಾದ ಇಂದು ಭಾರೀ ಇಳಿಕೆ ಕಂಡಿದೆ. ಜೂನ್ 23ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಇರಾನ್-ಅಮೆರಿಕ ಶಾಂತಿ ಒಪ್ಪಂದ ಬಳಿಕ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಮತ್ತೆ ಏರಿಕೆ ಕಂಡಿತ್ತು. ಜೂನ್ 22ರಂದು ಒಂದೇ ದಿನ 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1900 ರುಪಾಯಿ ಏರಿಕೆಯಾಗಿತ್ತು. ಆದರೆ ಜೂನ್ 23ರಂದು ಮತ್ತೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.&lt;/p&gt;&lt;img&gt;&lt;p&gt;ಹೌದು, 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಇಂದು ಒಂದೇ ದಿನ ಬರೋಬ್ಬರಿ 2070 ರುಪಾಯಿ ಇಳಿಕೆಯಾಗಿದೆ. ಈ ಮೂಲಕ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,591 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಇನ್ನು ಇದಷ್ಟೇ ಅಲ್ಲದೇ ಆಭರಣ ಚಿನ್ನವಾಗಿರುವ 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಇಂದು ಸುಮಾರು 1900 ರುಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 13,375 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಇಂದು ಕೊಂಚ ಇಳಿಕೆ ಕಂಡಿದೆ. ಇದೀಗ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 5000 ರುಪಾಯಿ ಇಳಿಕೆ ಕಂಡಿದ್ದು, ಜೂನ್ 23ರಂದು ಒಂದು ಕೆಜಿ ಬೆಳ್ಳಿ ಬೆಲೆ 2,45,000 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಒಂದೇ ದಿನ ಭಾರೀ ಇಳಿಕೆಯಾಗಿರುವುದು ಆಭರಣ ಖರೀದಿಸುವವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/after-massive-surge-gold-prices-witness-sharp-fall-today-check-latest-rates-kvn-hkgwqld"/>
        </item>
        <item>
            <title><![CDATA[Bengaluru: ಅಂಜನಾನಗರದಲ್ಲಿ ಅನುಮಾನಾಸ್ಪದ ಸಾವು: 3 ತಿಂಗಳ ಗರ್ಭಿಣಿ ವಿವಾಹಿತೆ ಮೃತದೇಹ ಪತ್ತೆ]]></title>
            <link>https://kannada.asianetnews.com/crime/anjananagar-pregnant-married-woman-tanuja-suspicious-death-bengaluru-gvd/articleshow-ody2dno</link>
            <guid isPermaLink="true">https://kannada.asianetnews.com/crime/anjananagar-pregnant-married-woman-tanuja-suspicious-death-bengaluru-gvd/articleshow-ody2dno</guid>
            <pubDate>Tue, 23 Jun 2026 16:36:38 +0530</pubDate>
            <description><![CDATA[&lt;p&gt;Bengaluru ಅಂಜನಾನಗರದಲ್ಲಿ ಮೂರು ತಿಂಗಳ ಗರ್ಭಿಣಿಯಾಗಿದ್ದ ವಿವಾಹಿತೆ ತನುಜಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt2j1jz484mharejb4dt088,imgname-vjv-1782212789855.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.23): &lt;/strong&gt;ಅನುಮಾನಾಸ್ಪದ ರೀತಿಯಲ್ಲಿ ವಿವಾಹಿತೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ನಗರದ ಅಂಜನಾನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ತನುಜಾ ಎಂದು ಗುರುತಿಸಲಾಗಿದೆ. ಮಾಗಡಿ ಮುಖ್ಯರಸ್ತೆಯ ಅಂಜನಾನಗರ ಸಮೀಪದ ನಿವಾಸದಲ್ಲಿ ಇಂದು ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ಮೇಲ್ನೋಟಕ್ಕೆ ತನುಜಾ ಅವರು ಫ್ಯಾನ್&zwnj;ಗೆ ನೇಣು ಬಿಗಿದುಕೊಂಡು ಆತ್ಮ*ಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ತನುಜಾ ಅವರು ನಾಲ್ಕು ವರ್ಷಗಳ ಹಿಂದೆ ನವೀನ್ ಎಂಬಾತನನ್ನು ವಿವಾಹವಾಗಿದ್ದರು. ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗು ಇದ್ದು, ತನುಜಾ ಅವರು ಸದ್ಯ ಮೂರು ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ವಿವಿಧ ಆಯಾಮಗಳಲ್ಲಿ ತನಿಖೆ&lt;/strong&gt;&lt;/h2&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ಹಿಂದೆ ಯಾವುದೇ ಅನುಮಾನಾಸ್ಪದ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/anjananagar-pregnant-married-woman-tanuja-suspicious-death-bengaluru-gvd/articleshow-ody2dno"/>
        </item>
        <item>
            <title><![CDATA[ಮಂಗಳೂರಿಂದ ಹೊರಡುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಹಲವು ಟ್ರೈನ್ ಸಂಚಾರ ಭಾಗಶಃ ರದ್ದು, ಮರು ವೇಳಾಪಟ್ಟಿ ಪ್ರಕಟ!]]></title>
            <link>https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk</link>
            <guid isPermaLink="true">https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk</guid>
            <pubDate>Tue, 23 Jun 2026 16:33:34 +0530</pubDate>
            <description><![CDATA[ಕೊಂಕಣ ರೈಲ್ವೆ ಮಾರ್ಗದಲ್ಲಿ ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಜೂನ್ 23 ರಿಂದ 28ರವರೆಗೆ ಹಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಮಯವನ್ನು ಮರುನಿಗದಿಪಡಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ವೇಳಾಪಟ್ಟಿಯನ್ನು ಪರಿಶೀಲಿಸಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf6fzpgk0wjxhndqarech1m,imgname-konkan-railways--4--1781847817936.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಕೊಂಕಣ ರೈಲ್ವೆ ಮಾರ್ಗದಲ್ಲಿ ಅತ್ಯಗತ್ಯವಾಗಿ ನಡೆಯಬೇಕಿರುವ ಹಳಿ ನಿರ್ವಹಣಾ ಕಾಮಗಾರಿಗಳ (Track Maintenance) ಕಾರಣದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ವಿವಿಧ ರೈಲು ಸೇವೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಜೂನ್ 23 ರಿಂದ ಜೂನ್ 28 ರವರೆಗಿನ ವಿವಿಧ ದಿನಾಂಕಗಳಲ್ಲಿ ಕೆಲವು ರೈಲುಗಳ ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದರೆ, ಇನ್ನು ಕೆಲವು ರೈಲುಗಳ ಸಂಚಾರದ ಸಮಯವನ್ನು ಮರುನಿಗದಿಪಡಿಸಲಾಗಿದೆ.&lt;/p&gt;&lt;h2&gt;ರೈಲುಗಳ ಭಾಗಶಃ ರದ್ದತಿ (Partial Cancellation)&lt;/h2&gt;&lt;p&gt;ಜೂನ್ 25, 2026 ರಂದು ಮಂಗಳೂರು ಸೆಂಟ್ರಲ್&zwnj;ನಿಂದ ಹೊರಡಬೇಕಿದ್ದ ರೈಲು ಸೇವೆಗಳಲ್ಲಿ ಭಾಗಶಃ ಕಡಿತ ಮಾಡಲಾಗಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56616 (ಮಂಗಳೂರು ಸೆಂಟ್ರಲ್ - ಮಡ್ಗಾಂವ್ ಜಂಕ್ಷನ್ ಪ್ಯಾಸೆಂಜರ್): &lt;/strong&gt;ಜೂನ್ 25 ರಂದು ಮಂಗಳೂರಿನಿಂದ ಹೊರಡುವ ಈ ರೈಲನ್ನು ಕಾರವಾರ ನಿಲ್ದಾಣದಲ್ಲೇ ಅಲ್ಪಾವಧಿಗೆ ಸ್ಥಗಿತಗೊಳಿಸಲಾಗುವುದು. ಹೀಗಾಗಿ, ಅಂದು ಕಾರವಾರ ಮತ್ತು ಮಡ್ಗಾಂವ್ ಜಂಕ್ಷನ್ ನಿಲ್ದಾಣಗಳ ನಡುವೆ ಈ ರೈಲಿನ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56615 (ಮಡ್ಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್):&lt;/strong&gt; ಜೂನ್ 25 ರಂದು ಮಧ್ಯಾಹ್ನ 2:15 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಬೇಕಿದ್ದ ಈ ರೈಲು, ಅಂದು ಮಡ್ಗಾಂವ್ ಬದಲಿಗೆ ಮಧ್ಯಾಹ್ನ 3:24 ಕ್ಕೆ ಕಾರವಾರ ನಿಲ್ದಾಣದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಪರಿಣಾಮವಾಗಿ, ಮಡ್ಗಾಂವ್ ಜಂಕ್ಷನ್ ಮತ್ತು ಕಾರವಾರ ನಡುವಿನ ರೈಲು ಸಂಚಾರ ರದ್ದಾಗಲಿದೆ.&lt;/p&gt;&lt;h2&gt;ಮರುನಿಗದಿತ ರೈಲು ಸೇವೆಗಳು (Rescheduled Services)&lt;/h2&gt;&lt;p&gt;ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಈ ಕೆಳಗಿನ ಪ್ರಮುಖ ರೈಲುಗಳ ಸಮಯವನ್ನು ಬದಲಾಯಿಸಲಾಗಿದ್ದು, ಇವು ತಡವಾಗಿ ಸಂಚರಿಸಲಿವೆ:&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56615 (ಮಡ್ಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್): &lt;/strong&gt;* ಜೂನ್ 23 ರಂದು: ಈ ರೈಲು ಮಧ್ಯಾಹ್ನ 2:15 ರ ನಿಗದಿತ ಸಮಯದ ಬದಲಾಗಿ ಸಂಜೆ 4:55 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಲಿದ್ದು, ಒಟ್ಟು 2 ಗಂಟೆ 40 ನಿಮಿಷ ವಿಳಂಬವಾಗಲಿದೆ.&lt;/p&gt;&lt;p&gt;ಜೂನ್ 26 ಮತ್ತು ಜೂನ್ 28 ರಂದು: ಇದೇ ರೈಲು ಮಧ್ಯಾಹ್ನ 2:15 ರ ಬದಲಿಗೆ ಮಧ್ಯಾಹ್ನ 3:45 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಲಿದ್ದು, 1 ಗಂಟೆ 30 ನಿಮಿಷ ತಡವಾಗಿ ಸಂಚರಿಸಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 22149 (ಎರ್ನಾಕುಲಂ ಜಂಕ್ಷನ್ - ಪುಣೆ ದ್ವೈವಾರ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್):&lt;/strong&gt; ಜೂನ್ 26 ರಂದು ಮುಂಜಾನೆ 2:15 ಕ್ಕೆ ಎರ್ನಾಕುಲಂನಿಂದ ಹೊರಡಬೇಕಿದ್ದ ಈ ರೈಲು, ಒಂದು ಗಂಟೆ ತಡವಾಗಿ ಅಂದರೆ ಮುಂಜಾನೆ 3:15 ಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 11097 (ಪುಣೆ ಜಂಕ್ಷನ್ - ಎರ್ನಾಕುಲಂ ಜಂಕ್ಷನ್ ಪೂರ್ಣ ಎಕ್ಸ್&zwnj;ಪ್ರೆಸ್): &lt;/strong&gt;ಜೂನ್ 28 ರಂದು ರಾತ್ರಿ 10:50 ಕ್ಕೆ ಪುಣೆಯಿಂದ ಹೊರಡಬೇಕಿದ್ದ ಈ ರೈಲು, 1 ಗಂಟೆ ವಿಳಂಬವಾಗಿ ರಾತ್ರಿ 11:50 ಕ್ಕೆ ಜರ್ನಿ ಆರಂಭಿಸಲಿದೆ.&lt;/p&gt;&lt;h2&gt;ರೈಲು ಸಂಚಾರ ನಿಯಂತ್ರಣ (Regulation of Train)&lt;/h2&gt;&lt;p&gt;&lt;strong&gt;ರೈಲು ಸಂಖ್ಯೆ 09057 (ಸೂರತ್ - ಮಂಗಳೂರು ಜಂಕ್ಷನ್ ದ್ವೈವಾರ ವಿಶೇಷ ಎಕ್ಸ್&zwnj;ಪ್ರೆಸ್): &lt;/strong&gt;ಜೂನ್ 24 ರಂದು ಸೂರತ್&zwnj;ನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುವ ಈ ವಿಶೇಷ ರೈಲನ್ನು, ಕೊಂಕಣ ಮಾರ್ಗದಲ್ಲಿ ನಡೆಯುವ ಕಾಮಗಾರಿಗಳ ಕಾರಣದಿಂದಾಗಿ ಮಾರ್ಗ ಮಧ್ಯೆ ಸುಮಾರು 25 ನಿಮಿಷಗಳ ಕಾಲ ನಿಯಂತ್ರಿಸಿ (ತಡೆಹಿಡಿದು) ಚಲಾಯಿಸಲು ತೀರ್ಮಾನಿಸಲಾಗಿದೆ.&lt;/p&gt;&lt;h2&gt;ರೈಲ್ವೆ ಇಲಾಖೆಯ ಪ್ರಮುಖ ಸೂಚನೆ&lt;/h2&gt;&lt;p&gt;ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಸಲು ಯೋಜಿಸಿರುವ ಸಾರ್ವಜನಿಕರು ಮತ್ತು ಪ್ರಯಾಣಿಕರು ತಮ್ಮ ನಿಲ್ದಾಣಗಳಿಗೆ ಹೊರಡುವ ಮುನ್ನ ಅಧಿಕೃತ ವೆಬ್&zwnj;ಸೈಟ್ ಅಥವಾ ಸಹಾಯವಾಣಿ ಮೂಲಕ ಇತ್ತೀಚಿನ ರೈಲು ವೇಳಾಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು. ಈ ತಾತ್ಕಾಲಿಕ ಬದಲಾವಣೆಗಳಿಗೆ ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಅಧಿಕಾರಿಗಳು ಕೋರಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk"/>
        </item>
        <item>
            <title><![CDATA[ಗೆಸ್ಟ್‌ಗೆ ವಿಮಾನ, ಹಾಲ್ ಸೇರಿ ₹17 ಕೋಟಿ ಖರ್ಚಿನ ಮದುವೆ ಟ್ವಿಸ್ಟ್ ಬಯಲು, ತಾಳಿ ಕಟ್ಟೊ ಮೊದಲೇ ವರ ಸಾವು]]></title>
            <link>https://kannada.asianetnews.com/relationship/pune-businessman-son-killed-before-rs-17-crore-udaipur-wedding-bride-arrest-by-police/articleshow-77pu4e8</link>
            <guid isPermaLink="true">https://kannada.asianetnews.com/relationship/pune-businessman-son-killed-before-rs-17-crore-udaipur-wedding-bride-arrest-by-police/articleshow-77pu4e8</guid>
            <pubDate>Tue, 23 Jun 2026 16:33:11 +0530</pubDate>
            <description><![CDATA[&lt;p&gt;ಉದಯಪುರದಲ್ಲಿ ಅತ್ಯಂತ ಐಷಾರಾಮಿ ಮದವೆಗೆ ಹಾಲ್ ಬುಕ್ ಆಗಿತ್ತು. ಅತಿಥಿಗಳಿಗೆ 2 ವಿಮಾನ. ಉಳಿದುಕೊಳ್ಳಲು 5 ಸ್ಟಾರ್ ಹೊಟೆಲ್. ಹೀಗೆ ಮದುವೆ ಅಂದಾಜು ಖರ್ಚು 17 ಕೋಟಿ ರೂಪಾಯಿ. ಆದರೆ ಮದುವೆಗೂ ಮೊದಲೇ ವರ ಮೃತಪಟ್ಟಿದ್ದ. ಸಾವಿನ ಹಿಂದಿನ ಸತ್ಯ ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt2b1jns341fxcp49s2e0fm,imgname-luxury-wedding-dream-turns-tragic-1782212560469.png" type="image/jpeg" height="390" width="690"/>
            <content:encoded><![CDATA[&lt;p&gt;ಪುಣೆ (ಜು.23) ಶ್ರೀಮಂತ ಉದ್ಯಮಿ ಪುತ್ರನ ವಿವಾಹ ನಿಶ್ಚಯವಾಗಿತ್ತು. ಪ್ರತಿ ದಿನ ಕೋಟಿ ಕೋಟಿ ಆದಾಯಗಳಿಸುವ ಉದ್ಯಮಿ ಪುತ್ರನೆಂದರೆ ಮದುವೆ ಹೇಗಿರಬೇಡ?. ಉದಯಪುರದಲ್ಲಿ ಮದುವೆಗೆ ಹಾಲ್ ಬುಕ್ ಮಾಡಲಾಗಿತ್ತು. ಆತಿಥಿಗಳು, ಸಂಬಂಧಿಕರಿಗೆ ತೆರಳಲು ಎರಡು ವಿಮಾನ ಬುಕ್ ಮಾಡಲಾಗಿತ್ತು. ಇನ್ನು 5 ಸ್ಟಾರ್ ಹೊಟೆಲ್, ಅತಿಥಿಗಳ ಭದ್ರತೆ ಸೇರಿದಂತೆ ಮದುವೆ ಅಂದಾಜು ಖರ್ಚು 17 ಕೋಟಿ ರೂಪಾಯಿ. ಮದುವೆ ದಿನಾಂಕ ಸಮೀಪಿಸಿತ್ತು. ಈವೆಂಟ್ ಮ್ಯಾನೇಜ್ಮೆಂಟ್ ಸೇರಿದಂತೆ ಕೈಗೊಬ್ಬ ಕಾಲಿಗೊಬ್ಬ ಆಳಿಗೆ ಕೆಲಸ ನಿರ್ವಹಿಸಲಾಗಿತ್ತು. ಇದರ ನಡುವೆ ವರ ಇದಕ್ಕಿದ್ದಂತೆ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ. ಮದುವೆಗೂ ಮೊದಲೇ ವರನ ಸಾವು ಉದ್ಯಮಿ ಕುಟುಂಬಕ್ಕೆ ದೊಡ್ಡ ಆಘಾತ ನೀಡಿತ್ತು. ಇತ್ತ ಪೊಲೀಸರು ತನಿಖೆ ಆರಂಭಿಸಿದ್ದರು. ಪುಣೆಯ ಪಿಂಪ್ರಿ ಚಿಂಚಿವಾಡ್ ಉದ್ಯಮಿ ವಿಶಾಲ್ ಅಗರ್ವಾಲ್ ಪುತ್ರ ಕೇತನ್ ಅಗರ್ವಾಲ್ ಸಾವಿನ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.&lt;/p&gt;&lt;h2&gt;ನಡು ನಡುವೆ ಭೇಟಿ&lt;/h2&gt;&lt;p&gt;ಕೇತನ್ ಅಗರ್ವಾಲ್ ವಿವಾಹ ಸಿಯಾ ಗೋಯಲ್ ಜೊತೆ ನಿಶ್ಚಯವಾಗಿತ್ತು. ಮದುವೆಗೆ ಜೈಪುರ್ ಅರಮನೆ ಬುಕ್ ಮಾಡಲಾಗಿತ್ತು. ಒಂದು ವಿವಾಹಕ್ಕೆ ಇಡೀ ಅರಮನೆ ಬುಕ್ ಮಾಡಲಾಗಿತ್ತು. ನವೆಂಬರ್&zwnj;ನಲ್ಲಿ ಮದುವೆ ನಿಗದಿಯಾಗಿತ್ತು. ಮದುವೆ ಖರ್ಚು 17 ಕೋಟಿ. ಇದು ವಿಶಾಲ್ ಅಗರ್ವಾಲ್&zwnj;ಗೆ ಜುಜುಬಿ ಮೊತ್ತ. ಆದರೆ ಮಗನ ಮದುವೆ ಅದ್ದೂರಿಯಾಗಿ, ಅತ್ಯಂತ ಸಂಭ್ರಮದಿಂದ ಆಯೋಜಿಸಬೇಕು ಅನ್ನೋದು ವಿಶಾಲ್ ಅಗರ್ವಾಲ್ ಕನಸಾಗಿತ್ತು. ಕೇತನ್ ಅಗರ್ವಾಲ್ ಕೂಡ ಅಪ್ಪನಂತೆ ಉದ್ಯಮದಲ್ಲಿ ಚತುರ. ಅಪ್ಪನ ಕೆಲ ಉದ್ಯಮಗಳನ್ನು ಕೇತನ್ ಅಗರ್ವಾಲ್ ನೋಡಿಕೊಳ್ಳುತ್ತಿದ್ದ. ಅತ್ಯಂತ ಶಿಸ್ತು ಮೈಗೂಡಿಸಿಕೊಂಡ ಕೇತನ್ ಅಗರ್ವಾಲ್ ಮದುವೆ ನಿಶ್ಚಯವಾಗಿದ್ದ ಸಿಯಾ ಗೊಯೆಲ್ ನಡ ನಡುವೆ ಭೇಟಿಯಾಗುತ್ತಿದ್ದರು.&lt;/p&gt;&lt;h2&gt;ಟ್ರಕ್ಕಿಂಗ್ ಪ್ಲಾನ್ ಮಾಡಿದ ಸಿಯಾ ಗೋಯಲ್&lt;/h2&gt;&lt;p&gt;ಭೇಟಿ ವೇಳೆ ಸಿಯಾ ಗೋಯೆಲ್ ಟ್ರಕ್ಕಿಂಗ್ ಪ್ಲಾನ್ ಮಾಡಿದ್ದಾಳೆ. ಪುಣೆಯ ಅತ್ಯಂತ ಸುಂದರ ತಾಣ ಲೋಹಘಡಕ್ಕೆ ಟ್ರಕ್ಕಿಂಗ್ ಪ್ಲಾನ್ ಮಾಡಿದ್ದಾಳೆ. ಔಟಿಂಗ್ ಹೇಳಿದಾಗ ಮಾಲ್ಡೀವ್ಸ್ ಸೇರಿದಂತೆ ಹಲವು ಪ್ರದೇಶಗಳಿಗೆ ಕೇತನ್ ಸಲಹೆ ನೀಡಿದರೂ ಅದ್ಯಾವುದು ಬೇಡ, ಲೋಹಘಡ ಹತ್ತಬೇಕು ಅನ್ನೋದು ನನ್ನ ಆಸೆ ಎಂದು ಆಕೆ ಹೇಳಿದ್ದಳು. ಸರಿ ಆಕೆಯ ಆಸೆಯಂತೆ ಜೂನ್ 18ರಂದು ಲೋಹಘಡಕ್ಕೆ ತೆರಳಿದ್ದಾರೆ.&lt;/p&gt;&lt;h2&gt;ಫೋಟೋ ತೆಗೆಯುವ ವೇಳೆ ಪ್ರಪಾತಕ್ಕೆ ಜಾರಿಬಿದ್ದ ಕೇತನ್ ಅಗರ್ವಾಲ್&lt;/h2&gt;&lt;p&gt;ಲೋಹಘಡ ಟ್ರಕ್ಕಿಂಗ್ ಮೇಲೆ ತೆರಳಿದ ಕೇತನ್ ಹಾಗೂ ಸಿಯಾ ಹಲವು ಫೋಟೋ ತೆಗೆದಿದ್ದಾರೆ. ಇದೇ ವೇಳೆ ಪ್ರಪಾತದ ಅಂಚಿನಲ್ಲಿ ಫೋಟೋ ತೆಗೆಯುವಾಗ ಕೇತನ್ ಅಗರ್ವಾಲ್ ಪ್ರಪಾತಕ್ಕೆ ಉರುಳಿ ಬಿದ್ದಿದ್ದರು. ಗಂಭೀರ ಗಾಯಗೊಂಡ ಕೇತನ್ ಅಗರ್ವಾಲ್ ಸ್ಥಳದಲ್ಲೆ ಮೃತಪತಪಟ್ಟಿದ್ದ. 3ಗಂಟೆಗೂ ಹೆಚ್ಚು ಕಾರ್ಯಾಚರಣೆ ನಡೆಸಿ ಪೊಲೀಸರು ಮೃತದೇಹ ಹೊರಕ್ಕೆ ತೆಗೆದಿದ್ದರು.&lt;/p&gt;&lt;h2&gt;ಪೊಲೀಸ್ ತನಿಖೆ ಚುರುಕು, ಫೋನ್ ಕಾಲ್ ಅನುಮಾನ&lt;/h2&gt;&lt;p&gt;ಮೇಲ್ನೋಟಕ್ಕೆ ಸೆಲ್ಫಿ ಕ್ರೇಜ್, ಫೋಟೋ ಕ್ರೇಜ್ ಹೆಚ್ಚಿರುವ ಈ ಕಾಲದಲ್ಲಿ ಕಾಲು ಜಾರಿ ಬಿದ್ದ ಹಲವು ಊದಾಹರಣೆಗಳಿವೆ. ಆದರೆ ಪೊಲೀಸರಿಗೆ ಕೆಲ ಅನುಮಾನಗಳು ಬಂದಿತ್ತು. ಕಾರಣ ಕೇತನ್ ಅಗರ್ವಾಲ್ ಫೋಟೋ ಕ್ರೇಜ್ ಇದ್ದ ಹುಡುಗನಲ್ಲ. ಸಿಕ್ಕ ಸಿಕ್ಕಲ್ಲಿ ಫೋಟೋ, ಸೆಲ್ಫಿ ಕ್ಲಿಕ್ಕಿಸುವ ವ್ಯಕ್ತಿಯೂ ಅಲ್ಲ. ಆದರೂ ಫೋಟೋ ತೆಗೆಯುವಾಗ ಬಿದ್ದ ಅನ್ನೋ ವಾದ ಪೊಲೀಸರಿಗೆ ಒಪ್ಪಲು ಸಾಧ್ಯವಾಗಲಿಲ್ಲ. ಕೇತನ್ ಹಾಗೂ ಸಿಯಾ ಗೋಯಲ್ ಫೋನ್ ಕಾಲ್ ಪರಿಶೀಲಿಸಿದ್ದಾರೆ. ಈ ವೇಳೆ ಕೇತನ್ ಫೋನ್&zwnj;ನಲ್ಲಿ ಯಾವುದೇ ಅನುಮಾನಸ್ಪದ ಕರೆಯಾಗಲಿ, ಮೆಸೇಜ್ ಪತ್ತೆಯಾಗಿಲ್ಲ. ಆದರೆ ಸಿಯಾ ಗೋಯಲ್ ಫೋನ್ ಕಾಲ್ ಅನುಮಾನ ಮೂಡಿಸಿತ್ತು. ಒಬ್ಬ ವ್ಯಕ್ತಿಗೆ ಹಲವು ಕರೆ ಮಾಡಿರುವುದು ಪತ್ತೆಯಾಗಿತ್ತು. ಅದೇ ವ್ಯಕ್ತಿ ಕೇತನ್ ಸಾವು ಸಂಭವಿಸಿದ ದಿನ ಲೋಹಘಡ ಟವರ್ ಲೋಕೋಶನ್ ತೋರಿಸಿತ್ತು. ಹೀಗಾಗಿ ಸಿಯಾ ಗೋಯಲ್ ಹಾಗೂ ಆಕೆಯ ಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.&lt;/p&gt;&lt;h2&gt;ಮದುವೆಯಾಗುವ ಹುಡುಗಿಯಿಂದಲೇ ಕೃತ್ಯ&lt;/h2&gt;&lt;p&gt;ಸಿಯಾ ಗೋಯಲ್&zwnj;ಗೆ ಕೇತನ್ ಮದುವೆಯಾಗಲು ಇಷ್ಟವಿರಲಿಲ್ಲ. ಕಾರಣ ಆಕೆಗೆ ಒಬ್ಬ ಬಾಯ್&zwnj;ಫ್ರೆಂಡ್ ಇದ್ದ. ಕೇತನ್ ಹೇಗಾದರು ಮಾಡಿ ಮುಗಿಸಲು ಸಿಯಾ ಹಾಗೂ ಆಕೆಯ ಬಾಯ್&zwnj;ಫ್ರೆಂಡ್ ಪ್ಲಾನ್ ಮಾಡಿದ್ದಳು. ಟ್ರಕ್ಕಿಂಗ್ ಹೋಗುವಾಗ ಈ ಬಾಯ್&zwnj;ಫ್ರೆಂಡ್ ಕೂಡ ಜೊತೆಗಿದ್ದ. ಕೇತನ್ ಅಗರ್ವಾಲ್&zwnj;ಗೆ ಇಲ್ಲೇ ಫೋಟೋ ತೆಗೆಸಿಕೊಳ್ಳೋಣ ಎಂದು ಹೇಳಿ ನಿಲ್ಲಿಸಿ ಬಳಿಕ ತಳ್ಳಿ ಹಾಕಿದ್ದಳು. ಪ್ರಪಾತಕ್ಕೆ ಬಿದ್ದ ಕೇತನ್ ಸಾವು ಕಂಡಿತ್ತು. ಇದೀಗ ಸಿಯಾ ಗೋಯಲ್ ಹಾಗೂ ಆಕೆಯ ಬಾಯ್&zwnj;ಫ್ರೆಂಡ್ ಅರೆಸ್ಟ್ ಆಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/relationship/pune-businessman-son-killed-before-rs-17-crore-udaipur-wedding-bride-arrest-by-police/articleshow-77pu4e8"/>
        </item>
        <item>
            <title><![CDATA[ಕಾಮಿಡಿ ಕಿಲಾಡಿ ಸಂಜು ಬಸಯ್ಯ ಮನೆಗೆ ಬಂತು ಪ್ರೀಮಿಯಂ ಲಕ್ಸುರಿ ಕಾರ್; 26 ಕಿಮೀ ಮೈಲೇಜ್‌ ನೀಡೋ ಈ ಕಾರಿನ ಬೆಲೆ ಎಷ್ಟು ಗೊತ್ತಾ?]]></title>
            <link>https://kannada.asianetnews.com/gallery/car-news/sanju-basayya-comedy-kiladigalu-buys-new-maruti-suzuki-xl6-car-price-features-san-mewgpcs</link>
            <guid isPermaLink="true">https://kannada.asianetnews.com/gallery/car-news/sanju-basayya-comedy-kiladigalu-buys-new-maruti-suzuki-xl6-car-price-features-san-mewgpcs</guid>
            <pubDate>Tue, 23 Jun 2026 16:12:41 +0530</pubDate>
            <description><![CDATA['ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ಸಂಜು ಬಸಯ್ಯ ತಮ್ಮ ಪರಿಶ್ರಮದಿಂದ ಯಶಸ್ಸು ಕಂಡಿದ್ದು, ಇತ್ತೀಚೆಗೆ ತಮ್ಮ ಬಹುಕಾಲದ ಕನಸಾಗಿದ್ದ 'ಮಾರುತಿ ಸುಜುಕಿ XL6' ಕಾರನ್ನು ಖರೀದಿಸಿದ್ದಾರೆ. ಅವರು ತಮ್ಮ ಪತ್ನಿ ಪಲ್ಲವಿ ಹಾಗೂ ಪೋಷಕರ ಸಮ್ಮುಖದಲ್ಲಿ ಈ ಸಂತಸದ ಕ್ಷಣವನ್ನು ಆಚರಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvt0zhpqvptk06cwzeqfvxwp,imgname-sanju-basayya-new-maruti-car--2--1782211135191.jpg" type="image/jpeg" height="390" width="690"/>
            <content:encoded><![CDATA['ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ಸಂಜು ಬಸಯ್ಯ ತಮ್ಮ ಪರಿಶ್ರಮದಿಂದ ಯಶಸ್ಸು ಕಂಡಿದ್ದು, ಇತ್ತೀಚೆಗೆ ತಮ್ಮ ಬಹುಕಾಲದ ಕನಸಾಗಿದ್ದ 'ಮಾರುತಿ ಸುಜುಕಿ XL6' ಕಾರನ್ನು ಖರೀದಿಸಿದ್ದಾರೆ. ಅವರು ತಮ್ಮ ಪತ್ನಿ ಪಲ್ಲವಿ ಹಾಗೂ ಪೋಷಕರ ಸಮ್ಮುಖದಲ್ಲಿ ಈ ಸಂತಸದ ಕ್ಷಣವನ್ನು ಆಚರಿಸಿಕೊಂಡಿದ್ದಾರೆ.&lt;img&gt;&lt;p&gt;ಯಾವುದೇ ಗಾಡ್&zwnj;ಫಾದರ್ ಇಲ್ಲದೆ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದಿಂದ ಬಂದು ಕೇವಲ ತಮ್ಮ ಪರಿಶ್ರಮದಿಂದಲೇ ಕನ್ನಡಿಗರ ಮನೆಮಾತಾದವರು ನಟ ಸಂಜು ಬಸಯ್ಯ. ಇವರ ಬದುಕಿಗೆ ದೊಡ್ಡ ತಿರುವು ನೀಡಿದ್ದು, 'ಜೀ ಕನ್ನಡ' ವಾಹಿನಿಯ ʻಕಾಮಿಡಿ ಕಿಲಾಡಿಗಳುʼ ರಿಯಾಲಿಟಿ ಶೋ. ತಮ್ಮ ದೈಹಿಕ ಸವಾಲುಗಳನ್ನು ಎಂದಿಗೂ ಕೀಳರಿಮೆಯಾಗಿ ನೋಡದೆ, ಅದನ್ನೇ ತಮ್ಮ ದೊಡ್ಡ ಶಕ್ತಿಯನ್ನಾಗಿ ಮಾಡಿಕೊಂಡ ಸಂಜು ಬಸಯ್ಯ, ಈಗ ಸಾಕಷ್ಟು ಬ್ಯುಸಿಯಾಗಿದ್ದಾರೆ. ತಮ್ಮ ಈ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿ ಇತ್ತೀಚೆಗೆ ಅವರು ದುಬಾರಿ ಬೆಲೆಯ ಹೊಸ ಕಾರೊಂದನ್ನು ಖರೀದಿಸಿ ತಮ್ಮ ಬದುಕಿನ ಮತ್ತೊಂದು ಕನಸನ್ನು ನನಸು ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸಂಜು ಬಸಯ್ಯ ಅವರ ವೃತ್ತಿಜೀವನದ ಯಶಸ್ಸಿನಷ್ಟೇ ಅವರ ಪ್ರೇಮಕಥೆಯೂ ರೋಚಕವಾಗಿದೆ. ತಮ್ಮ ಬಹುಕಾಲದ ಗೆಳತಿ ಪಲ್ಲವಿ ಅವರನ್ನು ಪ್ರೀತಿಸಿ ಮದುವೆಯಾದ ಅವರು, ಜೀ ಕನ್ನಡದ ʻಜೋಡಿ ನಂ 1 ಸೀಸನ್ 2ʼ ರಿಯಾಲಿಟಿ ಶೋ ಮೂಲಕ ಇಡೀ ಕರ್ನಾಟಕದ ನೆಚ್ಚಿನ ಜೋಡಿಯಾಗಿದ್ದರು. ಇತ್ತೀಚೆಗೆ ತಾವು ಖರೀದಿಸಿದ ಹೊಸ ಕಾರಿನ Delivery ಪಡೆಯುವ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಸಂಜು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಯಶಸ್ಸಿನ ಹಿಂದಿನ ಶಕ್ತಿಯಾಗಿರುವ ಪತ್ನಿ ಪಲ್ಲವಿ ಹಾಗೂ ತಂದೆ-ತಾಯಿಯೊಂದಿಗೆ ಹೊಸ ಕಾರಿನ ಎದುರು ನಿಂತು ಸಂಜು ಬಸಯ್ಯ ಸಂಭ್ರಮಿಸಿದ್ದಾರೆ.&lt;/p&gt;&lt;img&gt;&lt;p&gt;ದೊಡ್ಡ ಕುಟುಂಬಕ್ಕೆ ಸೂಕ್ತವಾದ, ಎಸ್&zwnj;ಯುವಿ ಲುಕ್ ನೀಡುವ ನೆಕ್ಸಾ (Nexa) ಶೋರೂಮ್&zwnj;ನ ಪ್ರೀಮಿಯಂ 6-ಸೀಟರ್ ಎಂಪಿವಿ ಕಾರಾದ 'ಮಾರುತಿ ಸುಜುಕಿ XL6' ಅನ್ನು ಸಂಜು ಬಸಯ್ಯ ಖರೀದಿಸಿದ್ದಾರೆ. ಈ ಕಾರು ಪವರ್&zwnj;ಫುಲ್ 1.5-ಲೀಟರ್ ಕೆ-ಸೀರೀಸ್ ಡ್ಯುಯಲ್ ಜೆಟ್ ಎಂಜಿನ್ ಹೊಂದಿದ್ದು, ಪೆಟ್ರೋಲ್&zwnj;ನಲ್ಲಿ 102 PS ಪವರ್ ಹಾಗೂ ಸಿಎನ್&zwnj;ಜಿ (CNG) ಆವೃತ್ತಿಯಲ್ಲಿ 87 PS ಪವರ್ ಉತ್ಪಾದಿಸುತ್ತದೆ. ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಈ ಕಾರು ಅತ್ಯಂತ ಸ್ಮೂತ್ ಚಾಲನಾ ಅನುಭವ ನೀಡುತ್ತದೆ.&lt;/p&gt;&lt;img&gt;&lt;p&gt;ಮಾರುತಿ XL6 ತನ್ನ ಕ್ಲಾಸ್ ಲಕ್ಸುರಿ ಫೀಚರ್ಸ್&zwnj;ಗೆ ಹೆಸರುವಾಸಿಯಾಗಿದೆ. ಕಾರಿನ ಸೆಕೆಂಡ್ ರೋನಲ್ಲಿ ಅತ್ಯಂತ ಕಂಫರ್ಟಬಲ್ ಆದ ಲೆದರೆಟ್ ಕ್ಯಾಪ್ಟನ್ ಸೀಟ್&zwnj;ಗಳಿದ್ದು, ಸ್ಲೈಡ್ ಮತ್ತು ರಿಕ್ಲೈನ್ ಮಾಡಿಕೊಳ್ಳಬಹುದು. ಇದರೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ವೆಂಟಿಲೇಟೆಡ್ ಫ್ರಂಟ್ ಸೀಟ್&zwnj;ಗಳು ಹಾಗೂ ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ. ಮನರಂಜನೆಗಾಗಿ 9-ಇಂಚಿನ ಸ್ಮಾರ್ಟ್&zwnj;ಪ್ಲೇ ಪ್ರೊ ಟಚ್&zwnj;ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್&zwnj;ಪ್ಲೇ ವ್ಯವಸ್ಥೆ ಇದೆ. ಇಷ್ಟೆಲ್ಲಾ ಸೌಕರ್ಯವಿದ್ದರೂ ಇದು ಪೆಟ್ರೋಲ್&zwnj;ನಲ್ಲಿ 20 km/l ಗಿಂತ ಹೆಚ್ಚು ಹಾಗೂ ಸಿಎನ್&zwnj;ಜಿಯಲ್ಲಿ ಬರೋಬ್ಬರಿ 26.32 km/kg ಮೈಲೇಜ್ ನೀಡುವ ಮೂಲಕ ಅತ್ಯಂತ ಆರ್ಥಿಕವಾಗಿದೆ.&lt;/p&gt;&lt;img&gt;&lt;p&gt;ಮಾರುತಿ ಸುಜುಕಿ ಸಂಸ್ಥೆಯು ಈ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಇದು ಹಾರ್ಟೆಕ್ಟ್ (Heartect) ಪ್ಲಾಟ್&zwnj;ಫಾರ್ಮ್ ಆಧಾರಿತವಾಗಿದ್ದು, ಅಪಘಾತದ ಸಮಯದಲ್ಲಿ ಪ್ರಯಾಣಿಕರನ್ನು ರಕ್ಷಿಸುತ್ತದೆ. ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್&zwnj;ಬ್ಯಾಗ್&zwnj;ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್, ಎಬಿಎಸ್ ವಿತ್ ಇಬಿಡಿ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಹಾಗೂ ಸುಲಭ ಪಾರ್ಕಿಂಗ್&zwnj;ಗಾಗಿ 360-ಡಿಗ್ರಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಮಾರುತಿ XL6 ಕಾರಿನ ಎಕ್ಸ್ ಶೋರೂಮ್ ಬೆಲೆ ₹11.52 ಲಕ್ಷದಿಂದ ಆರಂಭವಾಗಿ ಟಾಪ್ ಮಾಡೆಲ್&zwnj;ಗೆ ₹14.48 ಲಕ್ಷದವರೆಗೆ ಇರಲಿದ್ದು, ಸಂಜು ಬಸಯ್ಯ ಅವರ ದೊಡ್ಡ ಕುಟುಂಬದ ಪ್ರಯಾಣಕ್ಕೆ ಇದು ಅತ್ಯಂತ ಸುರಕ್ಷಿತ ಹಾಗೂ ಐಷಾರಾಮಿ ಕಾರಾಗಿದೆ.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/car-news/sanju-basayya-comedy-kiladigalu-buys-new-maruti-suzuki-xl6-car-price-features-san-mewgpcs"/>
        </item>
        <item>
            <title><![CDATA[ಗೃಹಲಕ್ಷ್ಮಿ ಯೋಜನೆ ಕಳ್ಳಾಟ ಬಿಚ್ಚಿಟ್ಟ ಸಿಎಜಿ ರಿಪೋರ್ಟ್; 19 ಸಾವಿರ ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ!]]></title>
            <link>https://kannada.asianetnews.com/gallery/state/karnataka-gruhalakshmi-scheme-cag-report-lapses-20000-irregularities-bank-accounts-b31an8q</link>
            <guid isPermaLink="true">https://kannada.asianetnews.com/gallery/state/karnataka-gruhalakshmi-scheme-cag-report-lapses-20000-irregularities-bank-accounts-b31an8q</guid>
            <pubDate>Tue, 23 Jun 2026 15:42:59 +0530</pubDate>
            <description><![CDATA[&lt;p&gt;ಕರ್ನಾಟಕದ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಭಾರೀ ತಾಂತ್ರಿಕ ಮತ್ತು ಆಡಳಿತಾತ್ಮಕ ಲೋಪಗಳಿರುವುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಜನರಿಗೆ ಹಣ ಸಂದಾಯ, ಖಾತೆಯೇ ಇಲ್ಲದವರಿಗೆ ಕೋಟಿಗಟ್ಟಲೆ ಜಮೆ, ಮತ್ತು ಪುನರಾವರ್ತಿತ ಪಾವತಿಗಳಂತಹ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv0cfxft0cs5ky24tcxa5nsf,imgname-gruhalakshmi-scheme-1781350790650.png" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಭಾರೀ ತಾಂತ್ರಿಕ ಮತ್ತು ಆಡಳಿತಾತ್ಮಕ ಲೋಪಗಳಿರುವುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಜನರಿಗೆ ಹಣ ಸಂದಾಯ, ಖಾತೆಯೇ ಇಲ್ಲದವರಿಗೆ ಕೋಟಿಗಟ್ಟಲೆ ಜಮೆ, ಮತ್ತು ಪುನರಾವರ್ತಿತ ಪಾವತಿಗಳಂತಹ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು (ಜೂ.23): ಕ&lt;/strong&gt;ರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಅತ್ಯಂತ ಜನಪ್ರಿಯ ಹಾಗೂ ದುಬಾರಿ ಯೋಜನೆಯಾದ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಭಾರೀ ಪ್ರಮಾಣದ ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪಗಳು ನಡೆದಿರುವುದು ಭಾರತೀಯ ಲೆಕ್ಕಪರಿಶೋಧಕರು ಮತ್ತು ತನಿಖಾಧಿಕಾರಿಗಳ (CAG) ವರದಿಯಿಂದ ಬೆಳಕಿಗೆ ಬಂದಿದೆ. ಇದುವರೆಗೆ ಸುಮಾರು 75,000 ಕೋಟಿ ರೂಪಾಯಿಗಳನ್ನು ವಿತರಿಸಿರುವ ಈ ಯೋಜನೆಯಲ್ಲಿ ಈಗ ಸಾವಿರಾರು ಕೋಟಿ ರೂಪಾಯಿಗಳ ವ್ಯತ್ಯಯ ಉಂಟಾಗಿರುವ ಆತಂಕ ಎದುರಾಗಿದೆ.&lt;/p&gt;&lt;img&gt;&lt;p&gt;&lt;strong&gt;ಸಿಎಜಿ ಆಡಿಟ್&zwnj;ನಲ್ಲಿ ಬಯಲಾದ ಸತ್ಯ:&lt;/strong&gt;&lt;/p&gt;&lt;p&gt;ಸಿಎಜಿಯ ಡೇಟಾ ಅನಾಲಿಟಿಕ್ಸ್ ವಿಭಾಗವು ನಡೆಸಿದ ವಿಶೇಷ ಆಡಿಟ್&zwnj;ನಲ್ಲಿ ದಂಗುಬಡಿಸುವ ಅಂಶಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಪ್ರಸ್ತುತ 1.30 ಕೋಟಿ ಫಲಾನುಭವಿಗಳಿದ್ದು, ಇವರಲ್ಲಿ ಸಾವಿರಾರು ಜನರಿಗೆ ನಿಯಮಬಾಹಿರವಾಗಿ ಹಣ ಸಂದಾಯವಾಗಿರುವುದು ಪತ್ತೆಯಾಗಿದೆ. ವರದಿಯ ಪ್ರಕಾರ, ಬರೋಬ್ಬರಿ 19,020 ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಯನ್ನು ಹಂಚಿಕೊಂಡಿದ್ದಾರೆ! ಸರ್ಕಾರದ ಡಿಬಿಟಿ (ನೇರ ನಗದು ವರ್ಗಾವಣೆ) ವ್ಯವಸ್ಥೆಯಲ್ಲಿ ಒಬ್ಬ ಫಲಾನುಭವಿಗೆ ಒಂದು ಪ್ರತ್ಯೇಕ ಖಾತೆ ಇರಬೇಕೆಂಬ ನಿಯಮವಿದ್ದರೂ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಒಂದೇ ಖಾತೆಗೆ ಹಣ ಹರಿದಿರುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.&lt;/p&gt;&lt;img&gt;&lt;p&gt;ಖಾತೆಯೇ ಇಲ್ಲದವರಿಗೂ ಕೋಟಿ ಕೋಟಿ ಹಣ ಜಮೆ!&lt;/p&gt;&lt;p&gt;ವರದಿಯಲ್ಲಿರುವ ಮತ್ತೊಂದು ಆಘಾತಕಾರಿ ಅಂಶವೆಂದರೆ, ಬ್ಯಾಂಕ್ ಖಾತೆಯೇ ಇಲ್ಲದ ಸುಮಾರು 23,262 ಫಲಾನುಭವಿಗಳಿಗೆ 46.52 ಕೋಟಿ ರೂಪಾಯಿ ಹಣ ಸಂದಾಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಸಲಿಗೆ ಬ್ಯಾಂಕ್ ಖಾತೆಯೇ ಇಲ್ಲದಿದ್ದಾಗ ಡಿಬಿಟಿ ಮೂಲಕ ಹಣ ವರ್ಗಾವಣೆ ಸಾಧ್ಯವೇ ಇಲ್ಲ. ಹೀಗಿದ್ದರೂ ಹಣ ಪಾವತಿಯಾಗಿರುವುದು ತಾಂತ್ರಿಕ ವಂಚನೆಯೋ ಅಥವಾ ವ್ಯವಸ್ಥಿತ ಭ್ರಷ್ಟಾಚಾರವೋ ಎಂಬ ಅನುಮಾನ ಮೂಡಿದೆ. ಇದರೊಂದಿಗೆ 8,995 ಖಾತೆಗಳಿಗೆ ಸುಮಾರು 1.80 ಕೋಟಿ ರೂಪಾಯಿಗಳನ್ನು ಪದೇ ಪದೇ (Repeatedly) ಜಮೆ ಮಾಡಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಇಲಾಖೆಯ ಕಳ್ಳಾಟ ಮತ್ತು ಮುಂದಿನ ಕ್ರಮ:&lt;/strong&gt;&lt;/p&gt;&lt;p&gt;ಈ ಗಂಭೀರ ಲೋಪಗಳ ಕುರಿತು ಮಾಹಿತಿ ಕೇಳಿದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸಿಎಜಿಗೆ ಸರಿಯಾದ ಮಾಹಿತಿ ನೀಡದೆ ಕಳ್ಳಾಟವಾಡುತ್ತಿದೆ ಎಂದು ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಸಿಎಜಿ ಕೇಳಿದ ದಾಖಲೆಗಳನ್ನು ನೀಡಲು ಇಲಾಖೆ ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.&lt;/p&gt;&lt;img&gt;&lt;p&gt;ಈಗಾಗಲೇ ಮುಖ್ಯಮಂತ್ರಿಗಳ ಸಭೆಯಲ್ಲೂ ಈ ಸಿಎಜಿ ವರದಿಯ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ಈ ವರದಿಯನ್ನು ಆಧರಿಸಿ ರಾಜ್ಯಾದ್ಯಂತ ಅನರ್ಹ ಫಲಾನುಭವಿಗಳ ಪತ್ತೆಗೆ ಬೃಹತ್ ಕಾರ್ಯಾಚರಣೆ ನಡೆಸಲು ಸರ್ಕಾರ ಮುಂದಾಗಿದೆ. ಬ್ಯಾಂಕ್ ಖಾತೆ ಬದಲಿಸಿದ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ವಿವರಗಳನ್ನು ಮರುಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಈ ಲೋಪದೋಷಗಳಿಂದಾಗಿ ಬೊಕ್ಕಸಕ್ಕೆ ಉಂಟಾಗಿರುವ ನಷ್ಟವನ್ನು ಹೇಗೆ ಸರಿದೂಗಿಸಲಾಗುತ್ತದೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಯಾವ ಕ್ರಮ ಜರುಗಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-gruhalakshmi-scheme-cag-report-lapses-20000-irregularities-bank-accounts-b31an8q"/>
        </item>
        <item>
            <title><![CDATA[ಪತ್ನಿ ಜೊತೆಗೆ ಪ್ಯಾಚಪ್, ತ್ರಿಶಾ-ವಿಜಯ್ ಬ್ರೇಕಪ್! ಬರ್ತಡೇಗೆ ವಿಶ್ ಬದಲು ಇನ್‌ಸ್ಟಾಗ್ರಾಮ್ ನಲ್ಲಿ ಅನ್‌ಫಾಲೋ!]]></title>
            <link>https://kannada.asianetnews.com/gallery/cine-world/trisha-krishnan-unfollows-tn-cm-vijay-on-instagram-amid-wife-sangeetha-reunion-buzz-gdp-3hrfi9p</link>
            <guid isPermaLink="true">https://kannada.asianetnews.com/gallery/cine-world/trisha-krishnan-unfollows-tn-cm-vijay-on-instagram-amid-wife-sangeetha-reunion-buzz-gdp-3hrfi9p</guid>
            <pubDate>Tue, 23 Jun 2026 15:19:56 +0530</pubDate>
            <description><![CDATA[&lt;p&gt;ತಮಿಳುನಾಡು ಸಿಎಂ ವಿಜಯ್ ತಮ್ಮ ಪತ್ನಿಯೊಂದಿಗೆ ಒಂದಾಗುತ್ತಾರೆ ಎಂಬ ವದಂತಿಯ ಬೆನ್ನಲ್ಲೇ, ನಟಿ ತ್ರಿಶಾ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಜಯ್ ಅವರನ್ನು ಅನ್&zwnj;ಫಾಲೋ ಮಾಡಿದ್ದಾರೆ. ಪ್ರತಿ ವರ್ಷ ವಿಜಯ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರುತ್ತಿದ್ದ ತ್ರಿಶಾ ಈ ಬಾರಿ ಮೌನವಾಗಿದ್ದು, &amp;nbsp;ಬ್ರೇಕಪ್ ಎನ್ನಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr8m77647bqx9r8k35t3zcb6,imgname-tamil-nadu-cm-vijay-swearing-ceremony-trisha-krishnan-wife-sangeeta-divya-jason-family-drama-affair-rumours-social-media-2-1778406104260.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಸಿಎಂ ವಿಜಯ್ ತಮ್ಮ ಪತ್ನಿಯೊಂದಿಗೆ ಒಂದಾಗುತ್ತಾರೆ ಎಂಬ ವದಂತಿಯ ಬೆನ್ನಲ್ಲೇ, ನಟಿ ತ್ರಿಶಾ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಜಯ್ ಅವರನ್ನು ಅನ್&zwnj;ಫಾಲೋ ಮಾಡಿದ್ದಾರೆ. ಪ್ರತಿ ವರ್ಷ ವಿಜಯ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರುತ್ತಿದ್ದ ತ್ರಿಶಾ ಈ ಬಾರಿ ಮೌನವಾಗಿದ್ದು, &amp;nbsp;ಬ್ರೇಕಪ್ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಚೆನ್ನೈ: ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ತ್ರಿಶಾ ಕೃಷ್ಣನ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಗೆಳೆಯ ತಮಿಳುನಾಡಿನ ಸಿಎಂ ವಿಜಯ್ ಜೋಸೆಫ್ ಅವರು ತಮ್ಮ ಪತ್ನಿ ಸಂಗೀತಾ ಜೊತೆಗೆ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿ ಹರಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ನಟಿ ತ್ರಿಷಾ ಹಾಗೂ ಮಾಜಿ ಸಹನಟ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರ ವೈಯಕ್ತಿಕ ಸಂಬಂಧದ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳ ನಡುವೆಯೇ ಈ ಹೊಸ ಬೆಳವಣಿಗೆ ಸಂಭವಿಸಿದ್ದು, ಅಭಿಮಾನಿಗಳು ಹದ್ದಿನ ಕಣ್ಣಿಟ್ಟು ಇಂಟರ್ನೆಟ್&zwnj;ನಲ್ಲಿ ತರಹೇವಾರಿ ಚರ್ಚೆಗಳನ್ನು ಆರಂಭಿಸಿದ್ದಾರೆ. ಪತ್ನಿ ಜೊತೆಗೆ ಒಂದಾಗುತ್ತಿರುವ ಸುದ್ದಿ ಬೆನ್ನಲ್ಲೇ, ತ್ರಿಶಾ ಮತ್ತು ವಿಜಯ್ ಸಂಬಂಧ ಮುರಿದುಬಿತ್ತು ಎಂಬ ವದಂತಿಗಳು ಈ ಭಾರೀ ಸುದ್ದಿಯಾಗಿವೆ.&lt;/p&gt;&lt;img&gt;&lt;p&gt;ನಟ ವಿಜಯ್ ಇತ್ತೀಚೆಗಷ್ಟೇ ತಮ್ಮ 52ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಈ ಸಂಭ್ರಮ ಮುಗಿದ ಕೇವಲ ಒಂದೇ ದಿನದ ಅಂತರದಲ್ಲಿ ನಟಿ ತ್ರಿಷಾ ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಜಯ್ ಅವರನ್ನು ಅನ್&zwnj;ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ. ಇದು ವಿಜಯ್ ಮತ್ತು ತ್ರಿಷಾ ಅವರ ಒಟ್ಟಾರೆ ಒಡನಾಟ ಹಾಗೂ ಸ್ನೇಹದ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ಪ್ರತಿ ವರ್ಷ ವಿಜಯ್ ಅವರ ಹುಟ್ಟುಹಬ್ಬದಂದು ಎಲ್ಲರಿಗಿಂತ ಮೊದಲು ವಿಶೇಷ ಪೋಸ್ಟ್ ಮಾಡುವ ನಟಿ ತ್ರಿಶಾ ಈ ಬಾರಿ ವಿಶ್ ಮಾಡಿಲ್ಲ. ವಿಜಯ್ ಅವರ ಸ್ನೇಹ ಮತ್ತು ವೃತ್ತಿಪರ ಸಂಬಂಧವನ್ನು ಆಚರಿಸುವ ಹೃದಯಸ್ಪರ್ಶಿ ಸಂದೇಶಗಳ ಜೊತೆಗೆ, ಶೂಟಿಂಗ್ ಸೆಟ್&zwnj;ನ ಅಪರೂಪದ ಹಾಗೂ ಇದುವರೆಗೆ ಯಾರೂ ಕಾಣದ ಫೋಟೋಗಳನ್ನು ಹಂಚಿಕೊಳ್ಳುವುದು ತ್ರಿಷಾ ಅವರ ವಾಡಿಕೆಯಾಗಿತ್ತು. ಆದರೆ, ಈ ವರ್ಷ ವಿಜಯ್ ಜನ್ಮದಿನದಂದು ತ್ರಿಷಾ ಅವರ ಖಾತೆಯಿಂದ ಯಾವುದೇ ಶುಭಾಶಯದ ಪೋಸ್ಟ್&zwnj;ಗಳು ಪ್ರಕಟವಾಗದೆ ಸಂಪೂರ್ಣ ಮೌನ ಆವರಿಸಿತ್ತು. ಇದು ಇವರಿಬ್ಬರ ನಡುವಿನ ಸಂಬಂಧದಲ್ಲಿ ದೊಡ್ಡ ಬದಲಾವಣೆ ಆಗಿದೆಯೇ ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಅನ್&zwnj;ಫಾಲೋ ಮಾಡುವ ಈ ಮೂಲಕ ತ್ರಿಶಾ ತಮ್ಮ ದೀರ್ಘಕಾಲದ ಸಂಬಂಧಕ್ಕೆ ಪೂರ್ಣವಿರಾಮ ಹಾಕುವುದರೊಂದಿಗೆ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗೆ ಪುಷ್ಠಿ ಸಿಕ್ಕಿದಂತಾಗಿದೆ.&lt;/p&gt;&lt;img&gt;&lt;p&gt;ತಮಿಳು ಚಿತ್ರರಂಗದಲ್ಲಿ ವಿಜಯ್ ಹಾಗೂ ತ್ರಿಷಾ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಆನ್-ಸ್ಕ್ರೀನ್ ಜೋಡಿ ಎನಿಸಿಕೊಂಡಿದ್ದಾರೆ. ಆರಂಭಿಕ ದಿನಗಳ ಬ್ಲಾಕ್&zwnj;ಬಸ್ಟರ್ ಸಿನಿಮಾ 'ಗಿಲ್ಲಿ' ಇಂದ ಹಿಡಿದು, ಇತ್ತೀಚಿನ ಸೂಪರ್ ಹಿಟ್ ಚಿತ್ರಗಳಾದ 'ಲಿಯೋ' ಮತ್ತು 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT) ವರೆಗೆ ಈ ಜೋಡಿಯ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಸದಾ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.&lt;/p&gt;&lt;p&gt;ವಿಶೇಷವಾಗಿ ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಅವರ ವೈಯಕ್ತಿಕ ಜೀವನದ ಏರುಪೇರುಗಳ ಕುರಿತ ವರದಿಗಳು ಬಿಡುಗಡೆಯಾದಾಗಿನಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಇವರಿಬ್ಬರ ಸಂಬಂಧದ ಸ್ವರೂಪದ ಬಗ್ಗೆ ಹತ್ತಾರು ವದಂತಿಗಳು ಹರಿದಾಡುತ್ತಿವೆ. ಆದರೆ, ಈ ಇಬ್ಬರೂ ತಾರೆಯರು ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡದೆ ಕಟ್ಟುನಿಟ್ಟಾದ ಮೌನ ಕಾಯ್ದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಟಿ ತ್ರಿಶಾ ಆರ್&zwnj;ಜೆ ಬಾಲಾಜಿ ನಿರ್ದೇಶನದ ಸೂರ್ಯ ಎದುರು ನಟಿಸಿದ 'ಕರುಪ್ಪು' ಚಿತ್ರದಲ್ಲಿ ತ್ರಿಷಾ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಲ್ಲದೆ ವಿಮರ್ಶಕರಿಂದಲೂ ಅಪಾರ ಮೆಚ್ಚುಗೆ ಗಳಿಸಿತ್ತು. ಆರ್&zwnj;ಜೆ ಬಾಲಾಜಿ, ಇಂದ್ರನ್ಸ್, ಅನಘಾ ಮಾಯಾ ರವಿ, ನಾಟಿ ಸುಬ್ರಮಣಿಯಂ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿತ್ತು.&lt;/p&gt;&lt;p&gt;ವಿಜಯ್ ಅವರು ಸದ್ಯ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದು, ತಮ್ಮ ರಾಜಕೀಯ ಜವಾಬ್ದಾರಿಗಳ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಲು ಸಕ್ರಿಯ ಸಿನಿಮಾರಂಗದಿಂದ ತಾತ್ಕಾಲಿಕ ವಿರಾಮ ಪಡೆದಿದ್ದಾರೆ. ಆದರೆ ನಾಯಕ ನಟನಾಗಿ ಅವರ ಕೊನೆಯ ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿರುವ 'ಜನ ನಾಯಗನ್' ಇನ್ನೂ ಸೆನ್ಸಾರ್ ಮಂಡಳಿಯ (CBFC) ಪ್ರಮಾಣೀಕರಣ ಪಡೆಯದೇ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;img&gt;&lt;p&gt;ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿರುವ ಈ ಅನ್&zwnj;ಫಾಲೋ ಚರ್ಚೆಯ ಕುರಿತು ತ್ರಿಷಾ ಅಥವಾ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಇಂಟರ್ನೆಟ್&zwnj;ನಲ್ಲಿ ಇವರಿಬ್ಬರ ಹೆಸರು ನಿರಂತರವಾಗಿ ಟ್ರೆಂಡ್ ಆಗುತ್ತಿರುವುದು ಇಬ್ಬರು ತಾರೆಯರ ಮೇಲಿರುವ ಸಾರ್ವಜನಿಕರ ಕ್ರೇಜ್ ಅನ್ನು ತೋರಿಸುತ್ತದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/cine-world/trisha-krishnan-unfollows-tn-cm-vijay-on-instagram-amid-wife-sangeetha-reunion-buzz-gdp-3hrfi9p"/>
        </item>
        <item>
            <title><![CDATA[ಬಿಕಿನಿ ಧರಿಸಿದ್ರೂ ಗೌರವಯುತವಾಗಿ ಕಾಣಬಹುದು, ಬಟ್ಟೆಯೊಂದೇ ಗ್ಲಾಮರ್ ಅಲ್ಲ; ಸಿನಿಮಾರಂಗದ ಕಹಿಸತ್ಯ ಬಿಚ್ಚಿಟ್ಟ ರಾಗಿಣಿ ದ್ವಿವೇದಿ!]]></title>
            <link>https://kannada.asianetnews.com/sandalwood/ragini-dwivedi-on-glamour-and-vulgarity-janhvi-kapoor-peddi-movie-r2-ips-san/articleshow-od8wz8u</link>
            <guid isPermaLink="true">https://kannada.asianetnews.com/sandalwood/ragini-dwivedi-on-glamour-and-vulgarity-janhvi-kapoor-peddi-movie-r2-ips-san/articleshow-od8wz8u</guid>
            <pubDate>Tue, 23 Jun 2026 15:10:30 +0530</pubDate>
            <description><![CDATA[&lt;p&gt;'ಪೆದ್ದಿ' ಚಿತ್ರದ ವಿವಾದದ ಬೆನ್ನಲ್ಲೇ, ನಟಿ ರಾಗಿಣಿ ದ್ವಿವೇದಿ ಸಿನಿಮಾದಲ್ಲಿನ ಗ್ಲಾಮರ್ ಮತ್ತು ಅಶ್ಲೀಲತೆಯ ನಡುವಿನ ಗೆರೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹೊಸ ಚಿತ್ರ 'R2' ಅನ್ನು ಘೋಷಿಸಿರುವ ಅವರು, ಮಹಿಳಾ ಪ್ರಾತಿನಿಧ್ಯ ಮತ್ತು ನಟಿಯರ ಆಯ್ಕೆಯ ಸ್ವಾತಂತ್ರ್ಯದ ಕುರಿತು ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsxdxsx329pzb88jpw5gb44,imgname-ragini-dwivedi-1782207412029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.23): &lt;/strong&gt;ಇತ್ತೀಚೆಗೆ ತೆರೆಕಂಡಿದ್ದ 'ಪೆದ್ದಿ' (Peddi) ಚಿತ್ರದ ಮೇಕರ್ಸ್, ನಟಿ ಜಾನ್ವಿ ಕಪೂರ್ ಅವರ ಪಾತ್ರವನ್ನು ಅತಿಯಾಗಿ ಲೈಂಗಿಕೀಕರಣಗೊಳಿಸಿದ್ದಾರೆ ಎಂಬ ತೀವ್ರ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಆ ದೃಶ್ಯಗಳನ್ನು ಕತ್ತರಿಸಿ ಚಿತ್ರವನ್ನು ಮರು-ಬಿಡುಗಡೆ (Re-release) ಮಾಡಿದೆ ಎಂದು ವರದಿಯಾಗಿದೆ. ಈ ಘಟನೆಯ ಬೆನ್ನಲ್ಲೇ, ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಗ್ಲಾಮರ್, ನಟಿಯರ ಚಿತ್ರೀಕರಣ ಮತ್ತು ಮಹಿಳಾ ಪ್ರಾತಿನಿಧ್ಯದ ಕುರಿತಾದ ಚರ್ಚೆಗಳು ಮತ್ತೊಮ್ಮೆ ಮುಂಚೂಣಿಗೆ ಬಂದಿವೆ.&lt;/p&gt;&lt;p&gt;ಈ ಕುರಿತು ಮಾತನಾಡಿರುವ ನಟಿ ರಾಗಿಣಿ ದ್ವಿವೇದಿ, 'ಈ ಇಡೀ ಚರ್ಚೆಯು ಕೇವಲ ಉಡುಪುಗಳು ಅಥವಾ ತೆರೆಯ ಮೇಲಿನ ನೋಟಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಾತಿನಿಧ್ಯ ಎನ್ನುವುದು ಅಂತಿಮವಾಗಿ ಸಿನಿಮಾ ಮಾಡುವವರ ಉದ್ದೇಶ, ಸಂದರ್ಭ ಮತ್ತು ನಟ-ನಟಿಯರ ವೈಯಕ್ತಿಕ ಆಯ್ಕೆಯ ಮೇಲೆ ನಿರ್ಧಾರವಾಗುತ್ತದೆ&quot; ಎಂದು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ 2014 ರ ಸೂಪರ್ ಹಿಟ್ ಸಿನಿಮಾ 'ರಾಗಿಣಿ ಐಪಿಎಸ್'ನ ಮುಂದುವರಿದ ಭಾಗ ಹಾಗೂ ಫ್ರಾಂಚೈಸಿಯ ವಿಸ್ತರಣೆಯಾಗಿ 'R2' ಚಿತ್ರವನ್ನು ಘೋಷಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಿಕಿನಿ ಧರಿಸಿದ್ರೂ ಗೌರವಯುತವಾಗಿ ಕಾಣಬಹುದು!&lt;/strong&gt;&lt;/h2&gt;&lt;p&gt;ವಾಣಿಜ್ಯ ಸಿನಿಮಾಗಳು ಹಾಗೂ ಅಭಿನಯ ಪ್ರಧಾನ ಪಾತ್ರಗಳೆರಡರಲ್ಲೂ ಒಂದು ದಶಕಕ್ಕೂ ಹೆಚ್ಚು ಕಾಲ ಸಮತೋಲನ ಕಾಯ್ದುಕೊಂಡು ಬಂದಿರುವ ರಾಗಿಣಿ ಗ್ಲಾಮರ್ ಕುರಿತು ಮಾತನಾಡುತ್ತಾ, &quot;ಗ್ಲಾಮರ್ ಮತ್ತು ಅಶ್ಲೀಲತೆಯ (Vulgarity) ನಡುವೆ ಅತ್ಯಂತ ಸಣ್ಣ ಗೆರೆಯಿದೆ. ನೀವು ತೆರೆಯ ಮೇಲೆ ಬಿಕಿನಿ ಧರಿಸಿಯೂ ಅತ್ಯಂತ ಗೌರವಯುತವಾಗಿ ಅಥವಾ ಆಕರ್ಷಕವಾಗಿ ಕಾಣಬಹುದು. ಅದೇ ಸಮಯದಲ್ಲಿ, ನೀವು ಸಂಪೂರ್ಣವಾಗಿ ಮೈತುಂಬಾ ಬಟ್ಟೆ ಧರಿಸಿಯೂ ಶೃಂಗಾರ ಭಾವವನ್ನು ಅಥವಾ ಮಾದಕತೆಯನ್ನು ಬಿಂಬಿಸಬಹುದು. ಹಾಗಾಗಿ ಇದು ಎಂದಿಗೂ ಕೇವಲ ಬಟ್ಟೆಗಳ ಬಗ್ಗೆ ಮಾತ್ರವಲ್ಲ.&quot;&lt;/p&gt;&lt;p&gt;&quot;ನಾನು ವೃತ್ತಿಜೀವನ ಆರಂಭಿಸಿದಾಗ ಗ್ಲಾಮರ್ ನಟಿ ಅಥವಾ ಅಭಿನಯ ಪ್ರಧಾನ ನಟಿ ಎಂದು ಸ್ಪಷ್ಟವಾದ ವಿಂಗಡಣೆ ಇರುತ್ತಿತ್ತು. ನಾನು ಕೂಡ ತೆರೆಯ ಮೇಲೆ ಅತ್ಯಂತ ಚಿಕ್ಕದಾದ ಮತ್ತು ಗ್ಲಾಮರಸ್ ಉಡುಪುಗಳನ್ನು ಧರಿಸಿದ್ದೇನೆ. ಆದರೆ ನನಗೆ ಎಲ್ಲಿ ಗೆರೆ ಎಳೆಯಬೇಕು ಎಂಬುದು ಯಾವಾಗಲೂ ತಿಳಿದಿತ್ತು. ಆ ನಿರ್ಧಾರವನ್ನು ಪ್ರತಿಯೊಬ್ಬ ನಟ-ನಟಿಯರು ತಾವೇ ತೆಗೆದುಕೊಳ್ಳಬೇಕು. ಯಾವುದನ್ನಾದರೂ ಬಲವಂತವಾಗಿ ಅಥವಾ ಅನಗತ್ಯವಾಗಿ ತೋರಿಸಿದಾಗ ಮಾತ್ರ ಸಮಸ್ಯೆ ಆರಂಭವಾಗುತ್ತದೆ&quot; ಎಂದಿದ್ದಾರೆ ರಾಗಿಣಿ.&lt;/p&gt;&lt;h2&gt;&lt;strong&gt;ಪ್ರಶ್ನಿಸುತ್ತಿದ್ದಾರೆ ಇಂದಿನ ಪ್ರೇಕ್ಷಕರು&lt;/strong&gt;&lt;/h2&gt;&lt;p&gt;&quot;ಹಿಂದೆ ಕೆಲವು ವಿಷಯಗಳನ್ನು ಜನರು ಯಾವುದೇ ಪ್ರಶ್ನೆಯಿಲ್ಲದೆ ಒಪ್ಪಿಕೊಳ್ಳುತ್ತಿದ್ದರು. ಆದರೆ ಇಂದು ಜನರು ಯಾವುದನ್ನಾದರೂ ತೋರಿಸುವಾಗ 'ಇದನ್ನು ಯಾಕೆ ತೋರಿಸಲಾಗುತ್ತಿದೆ? ಕಥೆಗೆ ಇದರ ಅಗತ್ಯವಿದೆಯೇ?' ಎಂದು ಪ್ರಶ್ನಿಸುತ್ತಾರೆ. ಒಂದು ಪಾತ್ರದ ನಿರ್ದಿಷ್ಟ ಮುಖವನ್ನು ತೋರಿಸಲು ಬಲವಾದ ಕಾರಣವಿರಬೇಕು. ಅದು ಕಥೆಗೆ ಅಗತ್ಯವಾಗಿದ್ದರೆ ಪ್ರೇಕ್ಷಕರು ಖಂಡಿತ ಒಪ್ಪಿಕೊಳ್ಳುತ್ತಾರೆ. ಕೇವಲ ಜನರ ಗಮನ ಸೆಳೆಯಲು ಮಾತ್ರ ಅದನ್ನು ಬಳಸಿಕೊಂಡರೆ, ಜನರು ಖಂಡಿತವಾಗಿಯೂ ಪ್ರಶ್ನಿಸುತ್ತಾರೆ&quot; ಎಂದು ರಾಗಿಣಿ ಇಂದಿನ ಪ್ರೇಕ್ಷಕರ ಮನಸ್ಥಿತಿಯನ್ನು ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;'ಇಲ್ಲ' ಎನ್ನುವುದು ಅತ್ಯಂತ ಶಕ್ತಿಶಾಲಿ ಪದ; ಓಟಿಟಿ (OTT) ತಂದ ಬದಲಾವಣೆ&lt;/strong&gt;&lt;/h2&gt;&lt;p&gt;ದೊಡ್ಡ ಮಟ್ಟದ ಕಮರ್ಷಿಯಲ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ನಟಿಯರು ಎದುರಿಸುವ ಒತ್ತಡಗಳ ಬಗ್ಗೆ ಮಾತನಾಡಿದ ರಾಗಿಣಿ, ಇಂದಿನ ಕಲಾವಿದರಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಹಕ್ಕಿದೆ ಎಂದಿದ್ದಾರೆ. &quot;'ಇಲ್ಲ' (No) ಎನ್ನುವುದು ಅತ್ಯಂತ ಶಕ್ತಿಶಾಲಿ ಪದ&quot; ಎಂದು ಅವರು ಪ್ರತಿಪಾದಿಸಿದ್ದಾರೆ.&lt;/p&gt;&lt;p&gt;ಅವರ ಪ್ರಕಾರ, ಓಟಿಟಿ ಪ್ಲಾಟ್&zwnj;ಫಾರ್ಮ್&zwnj;ಗಳು, ಸೋಶಿಯಲ್ ಮೀಡಿಯಾ ಮತ್ತು ಸ್ವತಂತ್ರ ಚಿತ್ರರಂಗದ (Independent Cinema) ಬೆಳವಣಿಗೆಯಿಂದಾಗಿ ಇಂದಿನ ಪೀಳಿಗೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿವೆ. &quot;ಒಂದು ಕಾಲದಲ್ಲಿ ಅವಕಾಶಗಳು ಸೀಮಿತವಾಗಿದ್ದವು. ಆದರೆ ಇಂದು ವಿಭಿನ್ನ ರೀತಿಯ ಕಂಟೆಂಟ್&zwnj;ಗಳು ಲಭ್ಯವಿವೆ. ನಿಮಗೆ ಯಾವುದೇ ದೃಶ್ಯ ಅಥವಾ ವಿಷಯದಲ್ಲಿ ಕಂಫರ್ಟಬಲ್ ಅನಿಸದಿದ್ದರೆ, ಅದನ್ನು ಮಾಡದಿರಲು ನೀವು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಒಂದು ಬಾರಿ ಒಪ್ಪಿಕೊಂಡ ಮೇಲೆ ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಸಂಪೂರ್ಣವಾಗಿ ಅರಿತು ಮಾಡಬೇಕು. ಇಂತಹ ಚರ್ಚೆಗಳು ಪ್ರಾಜೆಕ್ಟ್ ಆರಂಭವಾಗುವ ಮುನ್ನವೇ ನಡೆಯಬೇಕು&quot; ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ನಿರ್ಮಾಪಕಿಯಾಗಿ ರಾಗಿಣಿ ಹೊಸ ಇನಿಂಗ್ಸ್; 'R2' ಹೊಸ ಯುಗ:&lt;/strong&gt;&lt;/h2&gt;&lt;p&gt;ಮಹಿಳಾ ಪ್ರಾತಿನಿಧ್ಯದ ಈ ಚರ್ಚೆಗಳು ರಾಗಿಣಿ ಅವರು ಆಯ್ಕೆ ಮಾಡಿಕೊಳ್ಳುವ ಕಥೆಗಳ ಮೇಲೂ ಪ್ರಭಾವ ಬೀರುತ್ತಿವೆ. ಸದ್ಯ ಮಲಯಾಳಂ ಸೂಪರ್&zwnj;ಸ್ಟಾರ್ ಮೋಹನ್&zwnj;ಲಾಲ್ ಜೊತೆ 'ವೃಷಭ' (Vrushabha) ಚಿತ್ರದಲ್ಲಿ ಕಾಣಿಸಿಕೊಂಡಿರುವ ರಾಗಿಣಿ, ತಮ್ಮ ಐತಿಹಾಸಿಕ ಹಿನ್ನೆಲೆಯ 'ಮದನಿಕಾ' (Madanika) ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಅನೌನ್ಸ್ ಆಗಿರುವ 'R2' ಚಿತ್ರದ ಮೂಲಕ ಅವರು ಕೆ. ಮಂಜು ಅವರೊಂದಿಗೆ ಜಂಟಿಯಾಗಿ ನಿರ್ಮಾಪಕಿಯಾಗಿಯೂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.&lt;/p&gt;&lt;p&gt;&quot;R2 ಚಿತ್ರವು 'ರಾಗಿಣಿ ಐಪಿಎಸ್' ಸಿನಿಮಾದ ಮುಂದುವರಿದ ಭಾಗ ಹಾಗೂ ಒಂದು ಹೊಸ ಫ್ರಾಂಚೈಸಿ ಯುಗದ ಆರಂಭವಾಗಲಿದೆ. ಆ ಸಿನಿಮಾ ನನ್ನ ಜೀವನವನ್ನೇ ಬದಲಾಯಿಸಿತ್ತು, ಅದರ ಪರಂಪರೆಯನ್ನು ಮುಂದೆ ಕೊಂಡೊಯ್ಯುವುದು ಹೆಮ್ಮೆ ತಂದಿದೆ. ಇಂದು ನಟನೆಯಷ್ಟೇ ಅಲ್ಲದೆ, ಇಡೀ ಸೃಜನಾತ್ಮಕ ಪ್ರಯಾಣದ ಭಾಗವಾಗುವುದು ಮುಖ್ಯವಾಗಿದೆ. ಭಾರತದ ಬೇರೆ ಬೇರೆ ಚಿತ್ರರಂಗಗಳಲ್ಲಿ ಹೀರೊಗಳ ಹಲವು ಯಶಸ್ವಿ ಫ್ರಾಂಚೈಸಿಗಳನ್ನು ನಾವು ನೋಡಿದ್ದೇವೆ. ಆದರೆ ದಕ್ಷಿಣ ಭಾರತದಲ್ಲಿ ಮಹಿಳಾ ಪ್ರಧಾನ (Female-led) ಫ್ರಾಂಚೈಸಿಗಳ ಉದಾಹರಣೆಗಳು ತೀರಾ ವಿರಳ. ನಮ್ಮ ಚಿತ್ರರಂಗಕ್ಕೆ ಇಂತಹ ಮತ್ತಷ್ಟು ಸಿನಿಮಾಗಳ ಅಗತ್ಯವಿದೆ&quot; ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/sandalwood/ragini-dwivedi-on-glamour-and-vulgarity-janhvi-kapoor-peddi-movie-r2-ips-san/articleshow-od8wz8u"/>
        </item>
        <item>
            <title><![CDATA[ರಾಜ್ಯಕ್ಕೆ ನೈರುತ್ಯ ಮಾರುತಗಳ ಅಬ್ಬರ, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್; ನಿಮ್ಮ ಜಿಲ್ಲೆಯ ಮಳೆ ವಿವರ ಇಲ್ಲಿದೆ..]]></title>
            <link>https://kannada.asianetnews.com/gallery/state/karnataka-weather-update-heavy-rain-alert-for-coastal-districts-udupi-karwar-mangalore-fz0p93b</link>
            <guid isPermaLink="true">https://kannada.asianetnews.com/gallery/state/karnataka-weather-update-heavy-rain-alert-for-coastal-districts-udupi-karwar-mangalore-fz0p93b</guid>
            <pubDate>Tue, 23 Jun 2026 14:34:20 +0530</pubDate>
            <description><![CDATA[ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್/ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktgqqedqgydnprvbnmr8vpkv,imgname-karnataka-rain-red-alert--3--1780825700791.jpg" type="image/jpeg" height="390" width="690"/>
            <content:encoded><![CDATA[ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್/ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ.&lt;img&gt;&lt;p&gt;&lt;strong&gt;ಬೆಂಗಳೂರು (ಜೂ.23): ನೈ&lt;/strong&gt;ಋತ್ಯ ಮುಂಗಾರು ಮಾರುತಗಳು ಚುರುಕುಗೊಂಡಿದ್ದು, ಕರ್ನಾಟಕದಾದ್ಯಂತ ಮುಂದಿನ ಏಳು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಪ್ರಾದೇಶಿಕ ಹವಾಮಾನ ಕೇಂದ್ರ (IMD) ಮುನ್ಸೂಚನೆ ನೀಡಿದೆ. ಜೂನ್ 23 ರಿಂದ ಜೂನ್ 29 ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;&lt;strong&gt;ಮುಂಗಾರು ಪ್ರಗತಿ ಮತ್ತು ಹವಾಮಾನ ವೈಪರೀತ್ಯ:&lt;/strong&gt;&lt;/p&gt;&lt;p&gt;ನೈಋತ್ಯ ಮುಂಗಾರು ಈಗಾಗಲೇ ಮಹಾರಾಷ್ಟ್ರದ ಮುಂಬೈ ಸೇರಿದಂತೆ ತೆಲಂಗಾಣ, ಒಡಿಶಾ, ಛತ್ತೀಸ್&zwnj;ಗಢ, ಜಾರ್ಖಂಡ್ ಮತ್ತು ಬಿಹಾರದ ಕೆಲವು ಭಾಗಗಳಿಗೆ ವಿಸ್ತರಿಸಿದೆ. ಮುಂದಿನ 2-3 ದಿನಗಳಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶದತ್ತ ಮುಂಗಾರು ಮುನ್ನಡೆಯಲು ಪೂರಕ ವಾತಾವರಣವಿದೆ. ಲಕ್ಷದ್ವೀಪದ ಸಮೀಪ ಸಮುದ್ರ ಮಟ್ಟದಿಂದ 5.8 ಕಿಮೀ ಎತ್ತರದಲ್ಲಿ ಸುಳಿಗಾಳಿ ಉಂಟಾಗಿರುವುದರಿಂದ ಕರ್ನಾಟಕದ ಮೇಲೆ ಮಳೆಯ ಪ್ರಭಾವ ಹೆಚ್ಚಾಗಲಿದೆ.&lt;/p&gt;&lt;img&gt;&lt;p&gt;&lt;strong&gt;ಕರಾವಳಿ ಕರ್ನಾಟಕಕ್ಕೆ ರೆಡ್/ಆರೆಂಜ್ ಅಲರ್ಟ್:&lt;/strong&gt;&lt;/p&gt;&lt;p&gt;ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೂನ್ 23 ರಿಂದ ಜೂನ್ 26 ರವರೆಗೆ ಅತಿ ಭಾರೀ ಮಳೆಯಾಗುವ (Heavy to Very Heavy Rain) ಸಾಧ್ಯತೆಯಿದೆ. ಈ ಸಮಯದಲ್ಲಿ ಗಾಳಿಯ ವೇಗವು ಗಂಟೆಗೆ 30-40 ಕಿಮೀ ತಲುಪಬಹುದು. ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಜೂನ್ 27 ರಿಂದ 29 ರವರೆಗೆ ಈ ಭಾಗಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಮತ್ತು ದಕ್ಷಿಣ ಒಳನಾಡು:&lt;/strong&gt;&lt;/p&gt;&lt;p&gt;&lt;strong&gt;ಉತ್ತರ ಒಳನಾಡು: &lt;/strong&gt;ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಜೂನ್ 24 ರಿಂದ 26 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾವೇರಿ, ಗದಗ, ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.&lt;/p&gt;&lt;p&gt;&lt;strong&gt;ದಕ್ಷಿಣ ಒಳನಾಡು: &lt;/strong&gt;ಮಲೆನಾಡು ಭಾಗದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜೂನ್ 24 ರಿಂದ 29 ರವರೆಗೆ ಸತತವಾಗಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು ಹವಾಮಾನ:&lt;/strong&gt;&lt;/p&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣವಿರಲಿದ್ದು, ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.&lt;/p&gt;&lt;p&gt;&lt;strong&gt;ತಾಪಮಾನದ ಮಾಹಿತಿ:&lt;/strong&gt;&lt;/p&gt;&lt;p&gt;ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನವು ವಾಡಿಕೆಗಿಂತ 5 ಡಿಗ್ರಿ ಸೆಲ್ಸಿಯಸ್&zwnj;ವರೆಗೆ ಏರಿಕೆಯಾಗಿತ್ತು. ಆದರೆ, ಮಳೆಯ ಪ್ರಭಾವದಿಂದಾಗಿ ಮುಂದಿನ ಐದು ದಿನಗಳಲ್ಲಿ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-update-heavy-rain-alert-for-coastal-districts-udupi-karwar-mangalore-fz0p93b"/>
        </item>
        <item>
            <title><![CDATA[Renukaswamy Darshan Case: ದರ್ಶನ್ ಕೇಸ್‌ನಲ್ಲಿ ಬಿಗ್‌ ಅಪ್ಡೇಟ್, ಸುಪ್ರೀಂ ಕೋರ್ಟ್ ನಲ್ಲಿ ಹೀಗಂತ ಅರ್ಜಿ ಹಾಕೇಬಿಟ್ರು!]]></title>
            <link>https://kannada.asianetnews.com/state/renukaswamy-case-actor-darshan-moves-sc-seeking-bail-term-relaxation-gdp/articleshow-t92vevp</link>
            <guid isPermaLink="true">https://kannada.asianetnews.com/state/renukaswamy-case-actor-darshan-moves-sc-seeking-bail-term-relaxation-gdp/articleshow-t92vevp</guid>
            <pubDate>Tue, 23 Jun 2026 14:09:53 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ತಮ್ಮ ಕಾನೂನು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್ ವಿಧಿಸಿದ್ದ ಕಠಿಣ ಷರತ್ತುಗಳನ್ನು ಸಡಿಲಿಸುವಂತೆ ಕೋರಿ, ಅವರು ಮತ್ತೆ ಸುಪ್ರೀಂ ಕೋರ್ಟ್&zwnj;ಗೆ ವಿಶೇಷ ಮಾರ್ಪಾಡು ಅರ್ಜಿ ಸಲ್ಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvst3z4z28htqeyycnpj5fmv,imgname-darshan-new-1782203939999.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ, ಜೈಲಿನಿಂದ ಹೊರಬರಲು ತಮ್ಮ ಕಾನೂನು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಇದೀಗ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಹಿಂದೆ ಕೋರ್ಟ್ ನೀಡಿದ್ದ ಕಠಿಣ ಆದೇಶ ಹಾಗೂ ಷರತ್ತುಗಳನ್ನು ಮಾರ್ಪಾಡು ಮಾಡುವಂತೆ ಕೋರಿ ವಿಶೇಷ ಅರ್ಜಿ (Modification Petition) ಸಲ್ಲಿಸಿದ್ದಾರೆ.&lt;/p&gt;&lt;h2&gt;ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವೇನು? ದರ್ಶನ್ ಆಕ್ಷೇಪವೇನು?&lt;/h2&gt;&lt;p&gt;ಕಳೆದ ಮೇ 15ರಂದು ಸುಪ್ರೀಂ ಕೋರ್ಟ್ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಒಂದು ಮಹತ್ವದ ಆದೇಶ ನೀಡಿತ್ತು. ಆ ಆದೇಶದ ಪ್ರಕಾರ, ಪ್ರಕರಣದ ವಿಚಾರಣಾ ನ್ಯಾಯಾಲಯದಲ್ಲಿ ಕನಿಷ್ಠ ಒಂದು ವರ್ಷದ ಅವಧಿಯೊಳಗೆ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಈ ಒಂದು ವರ್ಷದ ಅವಧಿ ಮುಗಿಯುವವರೆಗೆ ನಟ ದರ್ಶನ್ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸುವಂತಿಲ್ಲ ಎಂಬ ಕಠಿಣ ಗಡುವನ್ನು ವಿಧಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್&zwnj;ನ ಈ ಆದೇಶದಿಂದಾಗಿ ತಮಗೆ ಸುದೀರ್ಘ ಕಾಲ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ, ದರ್ಶನ್ ಈಗ ಸುಪ್ರೀಂ ಕೋರ್ಟ್ ನೀಡಿದ್ದ ಮೇ 15ರ ಆದೇಶದ ಷರತ್ತುಗಳನ್ನು ಸಡಿಲಿಸುವಂತೆ ಮನವಿ ಮಾಡಿದ್ದಾರೆ.&lt;/p&gt;&lt;h2&gt;ಅರ್ಜಿಯಲ್ಲಿ ದರ್ಶನ್ ಕೋರಿರುವ ಪ್ರಮುಖ ಅಂಶಗಳು:&lt;/h2&gt;&lt;p&gt;ನಟ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್&zwnj;ನಲ್ಲಿ ಸಲ್ಲಿಸಿರುವ ಈ ಮಾರ್ಪಾಡು ಅರ್ಜಿಯಲ್ಲಿ ಪ್ರಮುಖವಾಗಿ ಎರಡು ರಿಯಾಯಿತಿಗಳನ್ನು ಕೋರಿದ್ದಾರೆ.&lt;/p&gt;&lt;p&gt;ಮರು ಜಾಮೀನು ಅರ್ಜಿ ಸಲ್ಲಿಸಲು ವಿಧಿಸಲಾಗಿರುವ ಒಂದು ವರ್ಷದ ಸುದೀರ್ಘ ಕಾಲಾವಕಾಶದ ಗಡುವನ್ನು ಗಣನೀಯವಾಗಿ ಕಡಿಮೆ ಮಾಡಬೇಕು.&lt;/p&gt;&lt;p&gt;ಒಂದು ವರ್ಷದಲ್ಲಿ 60 ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಆದರೆ ಇಷ್ಟು ದೊಡ್ಡ ಸಂಖ್ಯೆಯ ಸಾಕ್ಷಿಗಳ ವಿಚಾರಣೆ ವಿಳಂಬವಾಗುವುದರಿಂದ, ಈ ಸಾಕ್ಷಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.&lt;/p&gt;&lt;h2&gt;ಜಡ್ಜ್ ಕಚೇರಿಯಲ್ಲೇ ಇತ್ಯರ್ಥ ಸಾಧ್ಯತೆ?&lt;/h2&gt;&lt;p&gt;ನಟ ದರ್ಶನ್ ಸಲ್ಲಿಸಿರುವ ಈ ತಿದ್ದುಪಡಿ ಅರ್ಜಿಯ ವಿಚಾರಣೆಯ ಅಧಿಕೃತ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ, ಕಾನೂನು ತಜ್ಞರ ಪ್ರಕಾರ ಈ ಅರ್ಜಿಯು ಮುಕ್ತ ನ್ಯಾಯಾಲಯದ ಪೀಠದ (Open Court Bench) ಮುಂದೆ ವಿಚಾರಣೆಗೆ ಬರಬಹುದು ಅಥವಾ ನ್ಯಾಯಾಧೀಶರ ಕಚೇರಿಯಲ್ಲೇ (Chamber) ಇತ್ಯರ್ಥವಾಗುವ ಸಾಧ್ಯತೆಯೂ ದಟ್ಟವಾಗಿದೆ.&lt;/p&gt;&lt;p&gt;ಕೋರ್ಟ್&zwnj;ನಿಂದ ವಿಧಿಸಲಾದ ಕಠಿಣ ನಿಯಮಗಳ ನಡುವೆಯೇ ದರ್ಶನ್ ಸುಪ್ರೀಂ ಕೋರ್ಟ್&zwnj;ಗೆ ಈ ಅರ್ಜಿ ಸಲ್ಲಿಸಿರುವುದು, ಅವರ ಬಿಡುಗಡೆಯ ಹಾದಿಗಾಗಿ ತಂತ್ರಜ್ಞರು ನಡೆಸುತ್ತಿರುವ ಮತ್ತೊಂದು ಹಾದಿಯನ್ನು ತೋರಿಸುತ್ತಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/state/renukaswamy-case-actor-darshan-moves-sc-seeking-bail-term-relaxation-gdp/articleshow-t92vevp"/>
        </item>
        <item>
            <title><![CDATA[ಇಂಗ್ಲೆಂಡ್‌ನಲ್ಲಿ ಗುಜರಿಗೆ ಹಾಕಿದ್ದ 9 Jaguar ಯುದ್ಧವಿಮಾನ ಖರೀದಿಸಲು ಆಸಕ್ತಿ ತೋರಿದ ಭಾರತ, ಕಾರಣವೇನು?]]></title>
            <link>https://kannada.asianetnews.com/business/india-to-buy-9-retired-jaguar-fighter-jets-from-uk-for-spare-parts-iaf-san/articleshow-ykmzske</link>
            <guid isPermaLink="true">https://kannada.asianetnews.com/business/india-to-buy-9-retired-jaguar-fighter-jets-from-uk-for-spare-parts-iaf-san/articleshow-ykmzske</guid>
            <pubDate>Tue, 23 Jun 2026 14:09:30 +0530</pubDate>
            <description><![CDATA[&lt;p&gt;ವಾಯುಸೇನೆಯು ತನ್ನ 'ಶಂಶೇರ್' ಜಾಗ್ವಾರ್ ಯುದ್ಧ ವಿಮಾನಗಳ ಕಾರ್ಯಾಚರಣೆಯನ್ನು ಮುಂದುವರಿಸಲು, ಯುನೈಟೆಡ್ ಕಿಂಗ್&zwnj;ಡಮ್&zwnj;ನಿಂದ 9 ನಿವೃತ್ತ ಜಾಗ್ವಾರ್ ವಿಮಾನಗಳನ್ನು ಖರೀದಿಸುತ್ತಿದೆ. ಈ ವಿಮಾನಗಳನ್ನು ಬಿಡಿಭಾಗಗಳಿಗಾಗಿ ಬಳಸಿಕೊಂಡು, ಪ್ರಸ್ತುತ ಸ್ಕ್ವಾಡ್ರನ್&zwnj;ಗಳನ್ನು ಸಕ್ರಿಯವಾಗಿಡಲು ನಿರ್ಧರಿಸಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvssyd4kbn4fgqy377e7t0hd,imgname-india-is-buying-9-decommissioned-jaguar-fighter-jets-1782203757715.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜೂ.23): &lt;/strong&gt;ಭಾರತೀಯ ವಾಯುಸೇನೆಯಲ್ಲಿ (IAF) ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ, ಆದರೆ ಈಗ ವಯಸ್ಸಾಗುತ್ತಿರುವ 'ಜಾಗ್ವಾರ್' (Jaguar) ಯುದ್ಧ ವಿಮಾನಗಳ ಕಾರ್ಯಾಚರಣೆಯ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ಭಾರತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಯುನೈಟೆಡ್ ಕಿಂಗ್&zwnj;ಡಮ್ (UK) ದೇಶದಿಂದ ನಿವೃತ್ತಿಗೊಂಡಿರುವ 9 ಜಾಗ್ವಾರ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಮುಂದಾಗಿದೆ.&lt;/p&gt;&lt;p&gt;ಬ್ರಿಟನ್&zwnj;ನ ರಾಯಲ್ ಏರ್&zwnj;ಫೋರ್ಸ್&zwnj;ನಿಂದ ನಿವೃತ್ತಿಯಾಗಿರುವ ಈ 9 ಅವಳಿ ಇಂಜಿನ್ ಯುದ್ಧ ವಿಮಾನಗಳನ್ನು ತಂದು, ಅವುಗಳನ್ನು ಬಿಚ್ಚಿ (Dismantled) ಬಿಡಿಭಾಗಗಳಾಗಿ (Spare Parts) ಬಳಸಿಕೊಳ್ಳಲಾಗುತ್ತದೆ. ಭಾರತೀಯ ವಾಯುಸೇನೆಯಲ್ಲಿ ಪ್ರಸ್ತುತ ಸಕ್ರಿಯವಾಗಿರುವ 6 ಜಾಗ್ವಾರ್ ಸ್ಕ್ವಾಡ್ರನ್&zwnj;ಗಳ (Squadrons) ಹಾರಾಟವನ್ನು ಇನ್ನೂ ಕೆಲವು ವರ್ಷಗಳ ಕಾಲ ಮುಂದುವರಿಸಲು ಈ ಬಿಡಿಭಾಗಗಳು ನೆರವಾಗಲಿವೆ. ಈ ನಿವೃತ್ತ ವಿಮಾನಗಳಿಂದ ಅಡೋರ್ ಇಂಜಿನ್&zwnj;ಗಳು (Adour engines), ಏವಿಯಾನಿಕ್ಸ್ (Avionics), ಲ್ಯಾಂಡಿಂಗ್ ಗೇರ್ ಮತ್ತು ಹೈಡ್ರಾಲಿಕ್ಸ್&zwnj;ನಂತಹ ಪ್ರಮುಖ ಉಪ-ಭಾಗಗಳನ್ನು ಭಾರತ ಬಳಸಿಕೊಳ್ಳಲಿದೆ.&lt;/p&gt;&lt;h2&gt;&lt;strong&gt;ಭಾರತದ ಹೆಮ್ಮೆಯ 'ಶಂಶೇರ್'&lt;/strong&gt;&lt;/h2&gt;&lt;p&gt;ಭಾರತೀಯ ವಾಯುಸೇನೆಯು ಪ್ರಸ್ತುತ ಸರಿಸುಮಾರು 120 ಸಕ್ರಿಯ ಜಾಗ್ವಾರ್ ವಿಮಾನಗಳನ್ನು ಹೊಂದಿದ್ದು, ಇವುಗಳಿಗೆ ಸ್ಥಳೀಯವಾಗಿ 'ಶಂಶೇರ್' (ನ್ಯಾಯದ ಕತ್ತಿ) ಎಂದು ಹೆಸರಿಡಲಾಗಿದೆ. ಶತ್ರು ದೇಶಗಳ ರಡಾರ್ ಕಣ್ಣು ತಪ್ಪಿಸಿ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿ, ನಿಖರ ದಾಳಿ (Deep Precision Strikes) ನಡೆಸುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದೆ. ಜಾಗತಿಕವಾಗಿ ಈ ಬಲಿಷ್ಠ ಜಾಗ್ವಾರ್ ಯುದ್ಧ ವಿಮಾನಗಳನ್ನು ಬಳಸುತ್ತಿರುವ ಕೊನೆಯ ಪ್ರಮುಖ ದೇಶ ಭಾರತ ಮಾತ್ರ ಎಂಬುದು ವಿಶೇಷ.&lt;/p&gt;&lt;p&gt;ಶತ್ರುಗಳ ವಾಯು ರಕ್ಷಣಾ ವಲಯವನ್ನು ಭೇದಿಸಿ, ಅವರ ಗಡಿಯ ಹಿಂಭಾಗದಲ್ಲಿರುವ ಪ್ರಮುಖ ನೆಲೆಗಳ ಮೇಲೆ ದಾಳಿ ನಡೆಸಲು ಜಾಗ್ವಾರ್ ಸೂಕ್ತವಾಗಿದೆ. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಇದು ಸಾಬೀತಾಗಿತ್ತು. ಈ ವಿಮಾನಗಳು ಶಕ್ತಿಶಾಲಿ ಕ್ಯಾನನ್&zwnj;ಗಳು, ನಿಖರ ನಿರ್ದೇಶಿತ ಬಾಂಬ್&zwnj;ಗಳು, ಕ್ಷಿಪಣಿಗಳು ಮತ್ತು ವಿಶೇಷ ಆಂಟಿ-ಶಿಪ್ ಅಥವಾ ಕ್ಲಸ್ಟರ್ ಮದ್ದುಗುಂಡುಗಳನ್ನು ಹೊತ್ತೊಯ್ಯಬಲ್ಲವು. ಅಷ್ಟೇ ಅಲ್ಲದೆ, ಇವುಗಳನ್ನು ಪರಮಾಣು ಬಾಂಬ್ (Nuclear Bomb) ವಿತರಣೆಗೂ ಸಹ ಮಾರ್ಪಡಿಸಿ ಪ್ರಮಾಣೀಕರಿಸಲಾಗಿದೆ.&lt;/p&gt;&lt;h2&gt;&lt;strong&gt;ಹಳೆಯ ವಿಮಾನಗಳ ಮೇಲಿನ ಅವಲಂಬನೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಭಾರತೀಯ ವಾಯುಸೇನೆಯಲ್ಲಿ ಅನುಮೋದಿತ ಫೈಟರ್ ಸ್ಕ್ವಾಡ್ರನ್&zwnj;ಗಳ ಸಂಖ್ಯೆ 42 ಇರಬೇಕಿತ್ತು. ಆದರೆ, ಪ್ರಸ್ತುತ ಇದು ಆತಂಕಕಾರಿ ಮಟ್ಟಕ್ಕೆ ಅಂದರೆ 29 ಕ್ಕೆ ಕುಸಿದಿದೆ. ಹೀಗಾಗಿ ಜಾಗ್ವಾರ್ ಪಡೆಗಳನ್ನು ಸಕ್ರಿಯವಾಗಿಡುವುದು ವಾಯುಸೇನೆಗೆ ಅನಿವಾರ್ಯವಾಗಿದೆ.&lt;/p&gt;&lt;p&gt;ಮತ್ತೊಂದೆಡೆ, ಭಾರತೀಯ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮವಾದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಗೆ ವಾಯುಸೇನೆಯು 5ನೇ ತಲೆಮಾರಿನ ದೇಶೀಯ 'ತೇಜಸ್ ಮಾರ್ಕ್-1ಎ' (Tejas Mk-1A) ಯುದ್ಧ ವಿಮಾನಗಳಿಗಾಗಿ ಎರಡು ಬೃಹತ್ ಆರ್ಡರ್&zwnj;ಗಳನ್ನು ನೀಡಿದ್ದರೂ, ಎಚ್&zwnj;ಎಎಲ್&zwnj;ನಿಂದ ಇನ್ನೂ ಒಂದೇ ಒಂದು ವಿಮಾನವೂ ವಾಯುಸೇನೆಗೆ ಹಸ್ತಾಂತರವಾಗಿಲ್ಲ.&lt;/p&gt;&lt;p&gt;&lt;strong&gt;ತೇಜಸ್ ಒಪ್ಪಂದಗಳ ವಿವರ: &lt;/strong&gt;ಫೆಬ್ರವರಿ 2021: 83 ತೇಜಸ್ ಮಾರ್ಕ್-1ಎ ವಿಮಾನಗಳಿಗಾಗಿ ₹48,000 ಕೋಟಿ ಒಪ್ಪಂದವಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್&zwnj;ನಲ್ಲಿ ಮತ್ತೊಂದು ಒಪ್ಪಂದದಡಿ 97 ತೇಜಸ್ ವಿಮಾನಗಳಿಗಾಗಿ ₹62,370 ಕೋಟಿ ಡೀಲ್ ಮಾಡಿಕೊಳ್ಳಲಾಗಿತ್ತು.&lt;/p&gt;&lt;h2&gt;&lt;strong&gt;ಭವಿಷ್ಯದ ಯೋಜನೆಗಳು ಮತ್ತು ವಿಳಂಬ&lt;/strong&gt;&lt;/h2&gt;&lt;p&gt;ತೇಜಸ್ ವಿಮಾನಗಳಲ್ಲದೆ, ಭಾರತವು 5ನೇ ತಲೆಮಾರಿನ ಸುಧಾರಿತ ಮಲ್ಟಿರೋಲ್ ಯುದ್ಧ ವಿಮಾನ (AMCA) ಯೋಜನೆಯಲ್ಲಿಯೂ ಕೆಲಸ ಮಾಡುತ್ತಿದೆ. ಆದರೆ, ಮೊದಲ 'ಅಮ್ಕಾ' (AMCA) ಯುದ್ಧ ವಿಮಾನವು 2035 ಕ್ಕಿಂತ ಮುಂಚೆ ಹೊರಬರುವ ಸಾಧ್ಯತೆಯಿಲ್ಲ. ಇದರೊಂದಿಗೆ, ಫ್ರಾನ್ಸ್&zwnj;ನಿಂದ 114 ರಫೇಲ್ (Rafale) ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಯೋಜಿಸಿದೆ. ಈ ವರ್ಷವೇ ಈ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆಯಿದೆ. ಆದರೆ, ಒಪ್ಪಂದಕ್ಕೆ ಸಹಿ ಬಿದ್ದರೂ ಸಹ ಮೊದಲ ರಫೇಲ್ ವಿಮಾನ ಭಾರತಕ್ಕೆ ಬರಲು 2028 ರಿಂದ 2030 ರವರೆಗೆ ಸಮಯ ಬೇಕಾಗುತ್ತದೆ. ಹೀಗಾಗಿ ಅಲ್ಲಿಯವರೆಗೆ ವಾಯುಸೇನೆಯ ಸಾಮರ್ಥ್ಯ ಕುಗ್ಗದಂತೆ ನೋಡಿಕೊಳ್ಳಲು ಬ್ರಿಟನ್&zwnj;ನಿಂದ ಹಳೆಯ ಜಾಗ್ವಾರ್ ವಿಮಾನಗಳನ್ನು ತಂದು, ಬಿಡಿಭಾಗಗಳ ಕ್ರೋಢೀಕರಣಕ್ಕೆ ಭಾರತ ಮುಂದಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/business/india-to-buy-9-retired-jaguar-fighter-jets-from-uk-for-spare-parts-iaf-san/articleshow-ykmzske"/>
        </item>
        <item>
            <title><![CDATA[ನಟ ದರ್ಶನ್ ಪರ ವಕಾಲತ್ತಿಂದ ಅಧಿಕೃತವಾಗಿ ಹಿಂದೆ ಸರಿದ ವಕೀಲ ಸುನೀಲ್, ಕೋರ್ಟ್‌ಗೆ ಮೆಮೋ ಸಲ್ಲಿಕೆ! ಮತ್ತೊಬ್ಬನ ಎಂಟ್ರಿ]]></title>
            <link>https://kannada.asianetnews.com/karnataka-districts/renukaswamy-case-actor-darshan-advocate-sunil-kumar-officially-withdraws-from-case-hashmath-pasha-enters-gdp/articleshow-uzk336e</link>
            <guid isPermaLink="true">https://kannada.asianetnews.com/karnataka-districts/renukaswamy-case-actor-darshan-advocate-sunil-kumar-officially-withdraws-from-case-hashmath-pasha-enters-gdp/articleshow-uzk336e</guid>
            <pubDate>Tue, 23 Jun 2026 13:20:05 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರ ವಾದಿಸುತ್ತಿದ್ದ ವಕೀಲ ಸುನಿಲ್ ಕುಮಾರ್ ಅವರು ಅಧಿಕೃತವಾಗಿ ಹಿಂದೆ ಸರಿದಿದ್ದಾರೆ. ಅವರ ಸ್ಥಾನಕ್ಕೆ ಇದೀಗ ಹಿರಿಯ ವಕೀಲ ಹಶ್ಮತ್ ಪಾಷಾ ಪ್ರವೇಶಿಸಿದ್ದು, ಈ ಬದಲಾವಣೆಯು ಪ್ರಕರಣದಲ್ಲಿ ಹೊಸ ಸಂಚಲನ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsq57eyan6zrhsnbwje4rbp,imgname-darshan-advocate-sunil-1782200835550.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಟ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ಭಾಗಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ತೀವ್ರ ಕುತೂಹಲಕಾರಿ ತಿರುವು ಸಿಕ್ಕಿದೆ. ಪ್ರಕರಣದ ಆರಂಭದಿಂದಲೂ ಆರೋಪಿಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಪ್ರಮುಖ ವಕೀಲರಾದ ಸುನಿಲ್ ಕುಮಾರ್ ಅವರು ಈ ಹೈಪ್ರೊಫೈಲ್ ಕೇಸ್&zwnj;ನಿಂದ ಅಧಿಕೃತವಾಗಿ ಹಿಂದೆ ಸರಿದಿದ್ದಾರೆ. ಈ ಕುರಿತು ಅವರು ನ್ಯಾಯಾಲಯಕ್ಕೆ ಮೆಮೋ ಸಲ್ಲಿಕೆ ಮಾಡುವ ಮೂಲಕ ಪ್ರಕರಣದಿಂದ ನಿವೃತ್ತಿ ಘೋಷಿಸಿದ್ದಾರೆ.&lt;/p&gt;&lt;h2&gt;ಪ್ರಕರಣದಿಂದ ವಕೀಲ ಸುನಿಲ್ ಕುಮಾರ್ ಹಿಂದೆ ಸರಿದಿದ್ದೇಕೆ?&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ತನಿಖೆಯ (Trial) ಹಂತದಲ್ಲೂ ತಾವಿನ್ನು ಮುಂದುವರಿಯುವುದಿಲ್ಲ ಎಂದು ವಕೀಲ ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಹೈಕೋರ್ಟ್ ಮುಂದೆಯೇ ಕೇಸ್&zwnj;ನಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದ ಅವರು, ಈಗ ಬೆಂಗಳೂರಿನ 59ನೇ ಸಿಸಿಹೆಚ್ (ಸೆಷನ್ಸ್) ನ್ಯಾಯಾಲಯಕ್ಕೆ ಅಧಿಕೃತವಾಗಿ ಮೆಮೋ ಸಲ್ಲಿಕೆ ಮಾಡಿದ್ದಾರೆ.&lt;/p&gt;&lt;p&gt;ಸುನಿಲ್ ಕುಮಾರ್ ಅವರು ಈ ಪ್ರಕರಣದಲ್ಲಿ ಕೇವಲ ನಟ ದರ್ಶನ್ ಮಾತ್ರವಲ್ಲದೆ, ದರ್ಶನ್ ಆಪ್ತರಾದ ಲಕ್ಷ್ಮಣ್ ಹಾಗೂ ನಾಗರಾಜ್ ಪರವಾಗಿಯೂ ವಕಾಲತ್ತು ವಹಿಸಿದ್ದರು. ಈಗ ಈ ಮೂವರ ವಿಚಾರದಲ್ಲೂ ತಾವು ವಕಾಲತ್ತಿನಿಂದ ನಿವೃತ್ತಿ ಹೊಂದುತ್ತಿರುವುದಾಗಿ ತಿಳಿಸಿ, ತಮ್ಮ ಕಚೇರಿಯ ಕಿರಿಯ ವಕೀಲರ ಮೂಲಕ ಕೋರ್ಟ್&zwnj;ಗೆ ಮೆಮೋ ರವಾನಿಸಿದ್ದಾರೆ.&lt;/p&gt;&lt;h2&gt;ಹಿರಿಯ ವಕೀಲ ಹಶ್ಮತ್ ಪಾಷಾ ಎಂಟ್ರಿ!&lt;/h2&gt;&lt;p&gt;ವಕೀಲ ಸುನಿಲ್ ಕುಮಾರ್ ಹಿಂದೆ ಸರಿದ ಬೆನ್ನಲ್ಲೇ, ಪ್ರಕರಣಕ್ಕೆ ಹಿರಿಯ ವಕೀಲ ಹಶ್ಮತ್ ಪಾಷಾ ಅವರ ಪ್ರವೇಶವಾಗಿದೆ. ನಿಮ್ಮ ಪರವಾಗಿ ಹಿರಿಯ ವಕೀಲರಾದ ಹಶ್ಮತ್ ಪಾಷಾ ಅವರು ವಕಾಲತ್ತು ಹಾಕಿದ್ದಾರೆ ಎಂಬ ವಿಷಯವನ್ನು 59ನೇ ಸೆಷನ್ಸ್ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್ ಅವರ ಗಮನಕ್ಕೆ ತಂದಿತು. ನ್ಯಾಯಾಧೀಶರ ಮಾತುಗಳನ್ನು ಆಲಿಸಿದ ದರ್ಶನ್, ಓಕೆ , ನಾನೂ ಕೂಡ ಈ ಬಗ್ಗೆ ನನ್ನ ಕುಟುಂಬಸ್ಥರ ಬಳಿ ಮಾತನಾಡಿ ಮುಂದಿನ ನಿರ್ಧಾರವನ್ನು ಹೇಳುತ್ತೇನೆ ಎಂದು ಕೋರ್ಟ್&zwnj;ಗೆ ತಿಳಿಸಿದರು.&lt;/p&gt;&lt;h2&gt;ದಾಖಲೆಗಳ ಹಸ್ತಾಂತರಕ್ಕೆ ನ್ಯಾಯಾಲಯದ ಸೂಚನೆ&lt;/h2&gt;&lt;p&gt;ಇದೇ ವೇಳೆ ನ್ಯಾಯಾಲಯವು, ಈ ಹಿಂದಿನ ವಕೀಲರ ಬಳಿ ಇರುವ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಕಾನೂನು ದಾಖಲೆಗಳು ಹಾಗೂ ಚಾರ್ಜ್&zwnj;ಶೀಟ್ ಪ್ರತಿಗಳನ್ನು ನೂತನ ವಕೀಲರಿಗೆ ಹಸ್ತಾಂತರಿಸುವಂತೆ ಸೂಚನೆ ನೀಡಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಸುನಿಲ್ ಕುಮಾರ್ ಅವರ ಜೂನಿಯರ್ ವಕೀಲ ಶೋಬಿತ್, ನಾವು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ದಾಖಲೆಗಳನ್ನು ದರ್ಶನ್ ಕುಟುಂಬಸ್ಥರಿಗೆ ತಲುಪಿಸಿದ್ದೇವೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು. ಪ್ರಕರಣದ ವಿಚಾರಣೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ದರ್ಶನ್ ಪರ ಹಿರಿಯ ವಕೀಲ ಹಶ್ಮತ್ ಪಾಷಾ ವಕಾಲತ್ತು ವಹಿಸಿಕೊಂಡಿರುವುದು ಕಾನೂನು ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-actor-darshan-advocate-sunil-kumar-officially-withdraws-from-case-hashmath-pasha-enters-gdp/articleshow-uzk336e"/>
        </item>
        <item>
            <title><![CDATA[ಬೆಂಗಳೂರು VS ಹೈದರಾಬಾದ್: "ಕರೆಂಟ್ ಇಲ್ಲದಿದ್ರೆ ಸತ್ತೇ ಹೋಗ್ತಿದ್ದೆ" ಫೈನಲೀ ಈ ನಗರವೇ ಬೆಸ್ಟ್ ಎಂದ ವ್ಯಕ್ತಿ]]></title>
            <link>https://kannada.asianetnews.com/viral/hyderabad-vs-bengaluru-man-shares-detailed-comparison-after-5-months/articleshow-cco0fa8</link>
            <guid isPermaLink="true">https://kannada.asianetnews.com/viral/hyderabad-vs-bengaluru-man-shares-detailed-comparison-after-5-months/articleshow-cco0fa8</guid>
            <pubDate>Tue, 23 Jun 2026 13:09:25 +0530</pubDate>
            <description><![CDATA[&lt;p&gt;&lt;strong&gt;Hyderabad vs Bangalore:&lt;/strong&gt; ಐಟಿ ಹಬ್&zwnj;ಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆ ಜೀವನಶೈಲಿ ಹಾಗೂ ಮೂಲಸೌಕರ್ಯಗಳ ಕುರಿತು ಸದಾ ಚರ್ಚೆ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಬೆಂಗಳೂರಿನಿಂದ ಹೈದರಾಬಾದ್&zwnj;ಗೆ ವಲಸೆ ಹೋದ ವ್ಯಕ್ತಿಯೊಬ್ಬರು, ಕೇವಲ ಐದು ತಿಂಗಳ ತಮ್ಮ ಅನುಭವದ ಆಧಾರದ ಮೇಲೆ ಎರಡೂ ನಗರಗಳ ಸಾಧಕ-ಬಾಧಕಗಳನ್ನು ಹೋಲಿಸಿ ರೆಡ್ಡಿಟ್&zwnj;ನಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvspkz08zq8ppssg05rvjwa3,imgname-thumbnail--1--1782200269832.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂ&lt;/strong&gt;ಗಳೂರಿನಿಂದ ಹೈದರಾಬಾದ್&zwnj;ಗೆ ವಲಸೆ ಹೋಗಿ ಕೇವಲ ಐದು ತಿಂಗಳು ಕಳೆದ ವ್ಯಕ್ತಿಯೊಬ್ಬರು, ಎರಡೂ ನಗರಗಳ ನಡುವಿನ ವಿದ್ಯುತ್, ರಸ್ತೆ, ಹವಾಮಾನ, ಆಹಾರ, ಸಂಚಾರ (ಟ್ರಾಫಿಕ್), ಜನರು ಮತ್ತು ಉದ್ಯೋಗಾವಕಾಶಗಳ ಕುರಿತು ರೆಡ್ಡಿಟ್ (Reddit) ಜಾಲತಾಣದಲ್ಲಿ ಸುದೀರ್ಘವಾದ ಹೋಲಿಕೆಯನ್ನು ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್ ಸದ್ಯ ಇಂಟರ್ನೆಟ್&zwnj;ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h3&gt;&lt;strong&gt;ವಿದ್ಯುತ್ ಮತ್ತು ರಸ್ತೆ ಹೋಲಿಕೆ&lt;/strong&gt;&lt;/h3&gt;&lt;p&gt;ಆ ವ್ಯಕ್ತಿಯ ಪ್ರಕಾರ, ಹೈದರಾಬಾದ್&zwnj;ನ ಜೀವನವು ವಿದ್ಯುತ್ ಇಲ್ಲದೆ ಎಷ್ಟು ಕಷ್ಟಕರ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದೆ. ಬೇಸಿಗೆಯ ಸಮಯದಲ್ಲಿ ಇಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿದ್ದುದರಿಂದ, ತಮಗೆ ಸೆಖೆಯ ತಾಪಕ್ಕೆ ಕೋಣೆಯಲ್ಲೇ ಪ್ರಾಣ ಹೋಗುವಷ್ಟು ತೊಂದರೆಯಾಗುತ್ತಿತ್ತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇನ್ನು ರಸ್ತೆಗಳ ವಿಷಯಕ್ಕೆ ಬಂದರೆ, ಹೈದರಾಬಾದ್&zwnj;ನ ರಸ್ತೆಗಳಲ್ಲಿ ಗುಂಡಿಗಳಿಲ್ಲದಿದ್ದರೂ, ಸರಿಯಾಗಿ ಮುಚ್ಚದ ಅಪಾಯಕಾರಿ ಮ್ಯಾನ್&zwnj;ಹೋಲ್&zwnj;ಗಳು (ಮಲದ ಚರಂಡಿ ಮುಚ್ಚಳಗಳು) ಇವೆ. ರಸ್ತೆಯ ಕಡೆ ಸರಿಯಾಗಿ ಗಮನ ಹರಿಸದಿದ್ದರೆ ಇವುಗಳಿಂದಾಗಿ ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ಬರಬಹುದು. ಇದಕ್ಕೆ ಹೋಲಿಸಿದರೆ, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿದ್ದರೂ ಅವು ಯಾರನ್ನೂ ಆಸ್ಪತ್ರೆಗೆ ಕಳುಹಿಸುವಷ್ಟು ತೀವ್ರವಾದ ಅಪಾಯವನ್ನು ತಂದೊಡ್ಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಹವಾಮಾನ ಮತ್ತು ಆಹಾರ&lt;/strong&gt;&lt;/h3&gt;&lt;p&gt;ಹೈದರಾಬಾದ್&zwnj;ನ ಹವಾಮಾನವು ಹೊಸಬರಿಗೆ ಹೊಂದಿಕೊಳ್ಳಲು ತುಂಬಾ ಕಷ್ಟಕರವಾಗಿದ್ದು, ಬೇಸಿಗೆಯ ಬಿಸಿಲು ವಿಪರೀತವಾಗಿರುತ್ತದೆ. ಏರ್ ಕಂಡೀಷನರ್ (AC) ಇಲ್ಲದೆ ಕೊಠಡಿಗಳಲ್ಲಿ ಇರಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ಇರುತ್ತದೆ. ಆದರೆ, ಬೆಂಗಳೂರಿನ ಬೇಸಿಗೆ ಕಾಲವು ಹೈದರಾಬಾದ್&zwnj;ಗೆ ಹೋಲಿಸಿದರೆ ಹೆಚ್ಚು ಶಾಂತಿಯುತ, ತಂಪಾದ ಮತ್ತು ಆಹ್ಲಾದಕರವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಆಹಾರದ ವಿಷಯಕ್ಕೆ ಬಂದರೆ ಹೈದರಾಬಾದ್&zwnj;ಗೆ ಸಾಟಿಯಿಲ್ಲ ಮತ್ತು ಬೆಂಗಳೂರಿಗಿಂತ ಇದು ಎಷ್ಟೋ ಪಟ್ಟು ಉತ್ತಮವಾಗಿದೆ ಎಂದು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ ಇಲ್ಲಿನ ಆಹಾರ ಕೊಂಚ ಅತಿಯಾದ ಖಾರದಿಂದ ಕೂಡಿರುತ್ತದೆ ಎಂದೂ ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಟ್ರಾಫಿಕ್ ಮತ್ತು ಜನರ ನಡವಳಿಕೆ&lt;/strong&gt;&lt;/h2&gt;&lt;p&gt;ಹೈದರಾಬಾದ್&zwnj;ನ ಜನರು ಅತ್ಯಂತ ಸ್ನೇಹಪರರಾಗಿದ್ದು, ಇಲ್ಲಿ ಹಿಂದಿ ಭಾಷೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಬೆಂಗಳೂರಿಗೆ ಹೋಲಿಸಿದರೆ ಇಲ್ಲಿ ಇಂಗ್ಲಿಷ್ ಬಳಕೆ ಕೊಂಚ ಕಡಿಮೆ. ಬೆಂಗಳೂರಿಗಿಂತ ಹೈದರಾಬಾದ್&zwnj;ನಲ್ಲಿ ಟ್ರಾಫಿಕ್ ನಿರ್ವಹಣೆ ಉತ್ತಮವಾಗಿದೆ, ಆದರೂ ಪೀಕ್ ಅವರ್&zwnj;ಗಳಲ್ಲಿ ಸಂಚಾರಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ಹೈದರಾಬಾದ್&zwnj;ನಲ್ಲಿ ಬೆಂಗಳೂರಿಗಿಂತ ಹೆಚ್ಚು ಐಷಾರಾಮಿ ಮತ್ತು ಸೂಪರ್ ಕಾರುಗಳು ರಸ್ತೆಗಿಳಿಯುತ್ತವೆ. ಇದನ್ನು ನೋಡಿದರೆ ಇಲ್ಲಿನ ಜನರು ಬಹಳಷ್ಟು ಹಣ ಗಳಿಸುತ್ತಾರೆ ಎಂದು ಅನಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಹೀಗಿತ್ತು ನೆಟ್ಟಿಗರ ಪ್ರತಿಕ್ರಿಯೆ&lt;/strong&gt;&lt;/h3&gt;&lt;p&gt;ಈ ಪೋಸ್ಟ್&zwnj;ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೈದರಾಬಾದ್&zwnj;ನ ಒರ್ವ ಬಳಕೆದಾರರು, &quot;ನೀವು ಹೈದರಾಬಾದ್&zwnj;ಗೆ ತಪ್ಪು ಸಮಯದಲ್ಲಿ ಬಂದಿದ್ದೀರಿ, ಕಳೆದ 30 ವರ್ಷದಲ್ಲಿ ನಾನು ಇಂತಹ ಕೆಟ್ಟ ಬೇಸಿಗೆಯನ್ನು ನೋಡಿಲ್ಲ&quot; ಎಂದಿದ್ದಾರೆ. ಮತ್ತೆ ಕೆಲವರು, &quot;ನಗರದ ಒಟ್ಟಾರೆ ಅನುಭವವು ನಾವು ವಾಸಿಸುವ ಏರಿಯಾದ ಮೇಲೆ ಅವಲಂಬಿತವಾಗಿರುತ್ತದೆ&quot; ಎಂದು ಹೇಳಿದ್ದಾರೆ. ಹಾಗೆಯೇ &quot;ಹೈದರಾಬಾದ್ ಭಾರತದಲ್ಲೇ ವಾಸಿಸಲು ಅತ್ಯುತ್ತಮವಾದ ಸ್ಥಳವಾಗಿದೆ, ಆದರೆ ಇಲ್ಲಿ ಒಂಟಿತನ ಕಾಡುತ್ತದೆ&quot; &quot;ಭಾರತದ ಬಹುತೇಕ ಮೆಟ್ರೋ ನಗರಗಳಲ್ಲಿ ಜೀವನದ ಗುಣಮಟ್ಟ ಕುಸಿಯುತ್ತಿದೆ, ಆದರೆ ಹೈದರಾಬಾದ್ ತನ್ನ ಒಳ್ಳೆಯ ಜನರಿಂದಾಗಿ ಇಂದಿಗೂ ಉತ್ತಮವಾಗಿದೆ&quot; ಎಂದು ಕಾಮೆಂಟ್ ಮಾಡಿರುವುದನ್ನು ನೀವು ನೋಡಬಹುದು.&lt;/p&gt;&lt;p&gt;Posts from the hyderabadcommunity on Reddit&lt;/p&gt;]]></content:encoded>
            <category>news</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/hyderabad-vs-bengaluru-man-shares-detailed-comparison-after-5-months/articleshow-cco0fa8"/>
        </item>
        <item>
            <title><![CDATA[UT Khader: ಪ್ರವಾಸೋದ್ಯಮ ರಾಯಭಾರಿಯಾಗಿ ರಿಷಬ್ ಶೆಟ್ಟಿ ನೇಮಕಕ್ಕೆ ಕರಾವಳಿ  ಕಾಂಗ್ರೆಸ್ಸಿಗರ ವಿರೋಧ; ಸಚಿವ ಖಾದರ್ ಖಡಕ್ ತಿರುಗೇಟು!]]></title>
            <link>https://kannada.asianetnews.com/gallery/politics/health-minister-ut-khader-reacts-rishab-shetty-s-ambassador-to-coastal-tourism-at-mangaluru-66gbcwk</link>
            <guid isPermaLink="true">https://kannada.asianetnews.com/gallery/politics/health-minister-ut-khader-reacts-rishab-shetty-s-ambassador-to-coastal-tourism-at-mangaluru-66gbcwk</guid>
            <pubDate>Tue, 23 Jun 2026 10:54:44 +0530</pubDate>
            <description><![CDATA[&lt;p&gt;ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರನ್ನು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಕಾಂಗ್ರೆಸ್&zwnj;ನಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ. ಖಾದರ್, ಬಿಡದಿ ಟೌನ್&zwnj;ಶಿಪ್ ವಿವಾದ ಮತ್ತು ಮುಸ್ಲಿಂ ಸಚಿವ ಸ್ಥಾನದ ಬೇಡಿಕೆ ಕುರಿತು ಏನು ಹೇಳಿದ್ರು?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvse8evh17qp44nhqdsnkx9m,imgname----------------------61--1782191504240.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರನ್ನು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಕಾಂಗ್ರೆಸ್&zwnj;ನಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ. ಖಾದರ್, ಬಿಡದಿ ಟೌನ್&zwnj;ಶಿಪ್ ವಿವಾದ ಮತ್ತು ಮುಸ್ಲಿಂ ಸಚಿವ ಸ್ಥಾನದ ಬೇಡಿಕೆ ಕುರಿತು ಏನು ಹೇಳಿದ್ರು?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮದ ರಾಯಭಾರಿಯಾಗಿ ಕಾಂತಾರಾ ಖ್ಯಾತಿಯ ನಟ, ರಿಷಬ್ ಶೆಟ್ಟಿ(Rishab shetty) ಅವರನ್ನು ನೇಮಕ ಮಾಡುವ ಸರ್ಕಾರದ ತೀರ್ಮಾನದ ಕುರಿತು ಇದೀಗ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;ರಿಷಬ್ ರಾಯಭಾರಿಯಾಗಿ ಆಯ್ಕೆ ಮಾಡಿರುವ ವಿಚಾರವಾಗಿ ಕರಾವಳಿ ಕಾಂಗ್ರೆಸ್ಸಿಗರು ಸಾಮಾಜಿ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಈ ವಿಚಾರವಾಗಿ ಆರೋಗ್ಯ ಸಚಿವ ಯುಟಿ ಖಾದರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬರೆಯೋರಿಗೆಲ್ಲ ಉತ್ತರ ಕೊಡೋಕೆ ಆಗುತ್ತಾ? ಕರಾವಳಿ ಪ್ರವಾಸೋದ್ಯಮ ರಾಯಭಾರಿ ಯಾರು ಆಗಬೇಕು ಅನ್ನೋದು ಸಿಎಂ ನೋಡಿಕೊಳ್ಳುತ್ತಾರೆ. ಬೆಂಗಳೂರಿನ ಹೊರಗೆ ಸಂಪುಟ ಸಭೆ ನಡೆದ್ರೆ ಅದು ಮಂಗಳೂರಿನಲ್ಲಿ ಆಗ್ತದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲದಕ್ಕೂ ವಿರೋಧ ಆಗ್ತದೆ ಅದಕ್ಕೆ ಉತ್ತರ ಕೊಡೋಕೆ ಆಗೋಲ್ಲ ಎಂದರು.&lt;/p&gt;&lt;img&gt;&lt;p&gt;ಕರಾವಳಿ ಪ್ರವಾಸೋದ್ಯಮ ರಾಯಭಾರಿ(Coastal Tourism Ambassador) ಯಾರು ಆಗಬೇಕು ಅನ್ನೋದು ಸಿಎಂ ನೋಡಿಕೊಳ್ಳುತ್ತಾರೆ. ಬೆಂಗಳೂರಿನ ಹೊರಗೆ ಸಂಪುಟ ಸಭೆ ನಡೆದ್ರೆ ಅದು ಮಂಗಳೂರಿನಲ್ಲಿ ಆಗ್ತದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲದಕ್ಕೂ ವಿರೋಧ ಆಗ್ತದೆ ಅದಕ್ಕೆ ಉತ್ತರ ಕೊಡೋಕೆ ಆಗೋಲ್ಲ ಎಂದರು.&lt;/p&gt;&lt;img&gt;&lt;p&gt;ಇನ್ನು ಬಿಡದಿ ಟೌನ್&zwnj;ಶಿಪ್(Bidadi township) ವಿಚಾರದಲ್ಲಿ ಸಿಎಂ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ವಾಕ್ಸರ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅದೆಲ್ಲ ಮಾರ್ಗ ಮಧ್ಯೆ ಚರ್ಚೆ ಮಾಡೋಕೆ ಆಗುತ್ತಾ? ರಾಜ್ಯದ ಜನರ ಬಗ್ಗೆ ಚರ್ಚೆ ಮಾಡೋಕೆ ಅಂತಾನೆ ವಿಧಾನಸೌಧ ಇದೆ. ಅಲ್ಲಿ ಚರ್ಚೆ ಆಗಬೇಕು. ಮೊದಲು ಈ ಬಿಡದಿ ಟೌನ್&zwnj;ಶಿಪ್ ನೋಟಿಫಿಕೇಶನ್ ಮಾಡಿದ್ದು ಯಾರು ಅನ್ನೋದು ಜನರಿಗೆ ತಿಳಿಸಲಿ. ಅದು ಮಾಡಿದ್ದೇ ಇವರು(ಕುಮಾರಸ್ವಾಮಿ), ಆ ಸತ್ಯ ಜನರಿಗೆ ಗೊತ್ತಾಗಲಿ ಎಂದರು.&lt;/p&gt;&lt;img&gt;&lt;p&gt;ಕಾಂಗ್ರೆಸ್ ಪಕ್ಷ ಯಾವತ್ತೂ ರೈತರ ಪರವಾಗಿದೆ. ಈ ದೇಶದ ರೈತರು ವಿಶ್ವಕ್ಕೆ ಮಾದರಿ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದ್ದು ನೆಹರೂ ಅವರ 'ಹಸಿರು ಕ್ರಾಂತಿ' ಯೋಜನೆ. ಈ ದೇಶದ ರೈತರೊಂದಿಗೆ ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಇದೆ, ಮುಂದೆಯೂ ರೈತರ ಬಗ್ಗೆಯೇ ಆಲೋಚನೆ ಮಾಡುತ್ತೆ. ರೈತರಿಗೆ ತೊಂದರೆ ಆಗುವ ಯಾವ ಯೋಜನೆಯೂ ಸರ್ಕಾರ ಮಾಡಲ್ಲ ಅಂತಾ ಸಿಎಂ ಕೂಡ ಹೇಳಿದ್ದಾರೆ. ಬಿಡದಿ ಟೌನ್&zwnj;ಶಿಪ್ ರೈತರಿಗೆ, ಅವರ ಕುಟುಂಬಕ್ಕೆ ಈ ಯೋಜನೆ ಸಹಾಯವಾಗಲಿದೆ. ಆದರೆ ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ಬಿಟ್ಟು ಹೊರಗೆ ಬನ್ನಿ ಎಂದು ತಿರುಗೇಟು ನೀಡಿದರು.&lt;/p&gt;&lt;img&gt;&lt;p&gt;ಇನ್ನು ಮುಸ್ಲಿಮರಿಗೆ ಸಚಿವ ಸ್ಥಾನ ನೀಡಲು ಮಂಗಳೂರಿನಲ್ಲಿ ಮುಸ್ಲಿಂ ನಾಯಕರ ಸುದ್ಧಿಗೋಷ್ಠಿ ನಡೆಸಿದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಸಮಾನ ಮನಸ್ಕ ಮುಸ್ಲಿಂ ಮುಖಂಡರ ವಿರುದ್ಧವೇ ಸಚಿವರು ಗರಂ ಆದರು. ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್&zwnj;ಗಾಗಿ ಕೆಲಸ ಮಾಡಿದವರು ಪಕ್ಷದ ಬಗ್ಗೆ ಮಾತನಾಡೋದು ಬೇಡ. ಪಕ್ಷಕ್ಕೆ ವೋಟು ಹಾಕಿದವರು, ಪಕ್ಷಕ್ಕೆ ದುಡಿಯುವವರು ಮಾತ್ರ ಪಕ್ಷದ ಬಗ್ಗೆ ಮಾತನಾಡಲಿ. ಬೇರೆ ಬೇರೆ ಹೆಸರು ಇಟ್ಕೊಂಡು, ಸಮಾನ ಮನಸ್ಕರು ಅಂತಾ ಹೇಳಿಕೊಂಡು ಬರೋದು ಬೇಡ. ಕಾಂಗ್ರೆಸ್&zwnj;ಗೆ ಇವರು ಬುದ್ಧಿವಾದ ಹೇಳುವ ಅವಶ್ಯಕತೆ ಇಲ್ಲ. ಇವರ ಬುದ್ಧಿವಾದ ಪಕ್ಷ ತಗೊಳ್ಳಲ್ಲ. ಪಕ್ಷವನ್ನು ವಿರೋಧಿಸುವವರೆ ಇವತ್ತು ಕೂತು ಪಕ್ಷಕ್ಕೆ ನಿರ್ದೇಶನ ಕೋಡೋ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.&amp;nbsp;&lt;/p&gt;&lt;p&gt;ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಅಪಾರ ಕೊಡುಗೆ ನೀಡಿದೆ. ಕೇವಲ ಸಚಿವ ಸ್ಥಾನ ಮಾತ್ರವಲ್ಲದೇ ಎಲ್ಲವನ್ನೂ ಅಲ್ಪಸಂಖ್ಯಾತರಿಗೆ ಕೊಟ್ಟಿದೆ. ಜಮೀರ್ ಅಹ್ಮದ್, ನಾವು ಹಾಗೂ ಎಲ್ಲ ಮುಸ್ಲಿಮರು ಒಟ್ಟಿಗೆ ಇದ್ದರೆ ಪಕ್ಷದ ಅಧ್ಯಕ್ಷರು, ಸಿಎಂ ಎಲ್ಲರೂ ಸೇರಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಡ್ತಾರೆ. ಆದರೆ ರಾಜಕೀಯವಾಗಿ ಇದನ್ನು ಇನ್ನಷ್ಟು ಬಿಗಡಾಯಿಸಲು ಯತ್ನಿಸುವವರು, ಮತ ಹಾಕದವರ ಮಾತು ಕಾಂಗ್ರೆಸ್ ಪಕ್ಷ ಗಣನೆಗೆ ತೆಗೆದುಕೊಳ್ಳಲ್ಲ ಎಂದರು.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/politics/health-minister-ut-khader-reacts-rishab-shetty-s-ambassador-to-coastal-tourism-at-mangaluru-66gbcwk"/>
        </item>
        <item>
            <title><![CDATA[ಹುಬ್ಬಳ್ಳಿ Chennamma Circle ಫ್ಲೈಓವರ್ ಇಡೀ ಕಾಮಗಾರಿಯೇ ಕಳಪೆ: ಎಂಜಿನಿಯರ್‌ ತಂಡದಿಂದ ದೂರು]]></title>
            <link>https://kannada.asianetnews.com/karnataka-districts/hubballi-chennamma-circle-flyover-construction-quality-issues-ici-report-san/articleshow-4reuuii</link>
            <guid isPermaLink="true">https://kannada.asianetnews.com/karnataka-districts/hubballi-chennamma-circle-flyover-construction-quality-issues-ici-report-san/articleshow-4reuuii</guid>
            <pubDate>Tue, 23 Jun 2026 13:06:19 +0530</pubDate>
            <description><![CDATA[&lt;p&gt;ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಫ್ಲೈಓವರ್ ಕಾಮಗಾರಿಯಲ್ಲಿ ಗಂಭೀರ ತಾಂತ್ರಿಕ ಲೋಪಗಳನ್ನು 'ಇಂಡಿಯನ್ ಕಾಂಕ್ರೀಟ್ ಇನ್&zwnj;ಸ್ಟಿಟ್ಯೂಟ್' ತಜ್ಞರು ಪತ್ತೆಹಚ್ಚಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsp9xftxmdxqnsar8bchdfb,imgname-hubballi-chennamma-circle-flyover-1782199940602.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಜೂ.23): &lt;/strong&gt;ಇಲ್ಲಿನ ಪ್ರಮುಖ ಕೇಂದ್ರವಾಗಿರುವ ಕಿತ್ತೂರು ಚೆನ್ನಮ್ಮ ವೃತ್ತ (ರಾಣಿ ಚೆನ್ನಮ್ಮ ವೃತ್ತ) ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಫ್ಲೈಓವರ್ (ಮೇಲ್ಸೇತುವೆ) ಕಾಮಗಾರಿಯ ಗುಣಮಟ್ಟದ ಕುರಿತು ತಾಂತ್ರಿಕ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. 'ಇಂಡಿಯನ್ ಕಾಂಕ್ರೀಟ್ ಇನ್&zwnj;ಸ್ಟಿಟ್ಯೂಟ್' (ICI) ಹುಬ್ಬಳ್ಳಿ-ಧಾರವಾಡ ಕೇಂದ್ರದ ಸದಸ್ಯರು ಕಾಮಗಾರಿಯಲ್ಲಿ ಹಲವು ತಾಂತ್ರಿಕ ಲೋಪದೋಷಗಳನ್ನು ಪತ್ತೆಹಚ್ಚಿದ್ದಾರೆ.&lt;/p&gt;&lt;p&gt;ಸೋಮವಾರದಂದು ಫ್ಲೈಓವರ್ ನಿರ್ಮಾಣ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಂಜಿನಿಯರ್&zwnj;ಗಳ ತಂಡ, ಕಾಮಗಾರಿಯ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮತ್ತು ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸಕ್ಕೆ ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತು ತಾವು ಗುರುತಿಸಿರುವ ಲೋಪದೋಷಗಳ ಸವಿಸ್ತಾರ ವರದಿಯನ್ನು ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ತಜ್ಞರು ನಿರ್ಧರಿಸಿದ್ದಾರೆ.&lt;/p&gt;&lt;h2&gt;&lt;strong&gt;2 ವರ್ಷಗಳಿಂದ ತುಕ್ಕು ಹಿಡಿಯುತ್ತಿದೆ ಕಬ್ಬಿಣ!&lt;/strong&gt;&lt;/h2&gt;&lt;p&gt;ಐಸಿಐ ಹುಬ್ಬಳ್ಳಿ-ಧಾರವಾಡ ಕೇಂದ್ರದ ಅಧ್ಯಕ್ಷ ಸುರೇಶ್ ಕಿರೇಸೂರ್ ಹಾಗೂ ಹುಬ್ಬಳ್ಳಿ ಕೇಂದ್ರದ ಅಧ್ಯಕ್ಷ ಉಲಿವೆಪ್ಪ ಸುಣಗಾರ್ ನೇತೃತ್ವದಲ್ಲಿ ಎಂಜಿನಿಯರ್&zwnj;ಗಳು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ, ಫ್ಲೈಓವರ್ ನಿರ್ಮಾಣಕ್ಕೆ ಬಳಸಲಾಗಿರುವ ಕಬ್ಬಿಣದ ಸರಳುಗಳು ದೀರ್ಘಕಾಲದಿಂದ ಮಳೆ ಮತ್ತು ಗಾಳಿಗೆ ತೆರೆದುಕೊಂಡಿರುವುದರಿಂದ ಸಂಪೂರ್ಣವಾಗಿ ತುಕ್ಕು ಹಿಡಿದಿರುವುದನ್ನು ಕಂಡುಹಿಡಿದರು.&lt;/p&gt;&lt;p&gt;ಸಾಮಾನ್ಯವಾಗಿ ಯಾವುದೇ ನಿರ್ಮಾಣದ ಕಬ್ಬಿಣವನ್ನು ಎರಡು ತಿಂಗಳಿಗಿಂತ ಹೆಚ್ಚು ಕಾಲ ಮಳೆ-ಗಾಳಿಗೆ ಮುಕ್ತವಾಗಿ ಬಿಡಬಾರದು. ಹಾಗೆ ಬಿಟ್ಟರೆ ತುಕ್ಕು ಹಿಡಿದು ಅದು ತನ್ನ ನಿಜವಾದ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಕಬ್ಬಿಣದ ವ್ಯಾಪಾರಿಗಳು ಸಹ ಇವುಗಳನ್ನು 6 ತಿಂಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿ ಇಡುವುದಿಲ್ಲ. ಆದರೆ, ಈ ಫ್ಲೈಓವರ್&zwnj;ನ ಕೆಲವು ಭಾಗಗಳಲ್ಲಿ ಕಬ್ಬಿಣದ ಸಳುಗಳನ್ನು ಬರೋಬ್ಬರಿ ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಹಾಗೆಯೇ ಬಿಡಲಾಗಿದೆ! ಇದು ಇಡೀ ಫ್ಲೈಓವರ್&zwnj;ನ ಸ್ಥಿರತೆ ಮತ್ತು ಸುರಕ್ಷತೆಗೆ ದೊಡ್ಡ ಧಕ್ಕೆ ತರಬಹುದು. ಆದ್ದರಿಂದ ತಕ್ಷಣ ಇದರ ಗುಣಮಟ್ಟ ತಪಾಸಣೆ ನಡೆಸಲೇಬೇಕಿದೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರ ಜೀವಕ್ಕೆ ಗಂಡಾಂತರ; ಸುರಕ್ಷತಾ ಕ್ರಮಗಳೇ ಇಲ್ಲ&lt;/strong&gt;&lt;/h2&gt;&lt;p&gt;ಗುತ್ತಿಗೆದಾರರು ಮತ್ತು ನೋಡಲ್ ಏಜೆನ್ಸಿಯು ಕಾರ್ಮಿಕರ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವ ಬಗ್ಗೆ ತಜ್ಞರ ತಂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಿರ್ಮಾಣ ಪ್ರದೇಶಕ್ಕೆ ಜನರು ಅಥವಾ ವಾಹನಗಳು ನುಗ್ಗದಂತೆ ತಡೆಯಲು ಯಾವುದೇ ಗಟ್ಟಿಮುಟ್ಟಾದ ಬ್ಯಾರಿಕೇಡ್&zwnj;ಗಳನ್ನು ಹಾಕಲಾಗಿಲ್ಲ.&lt;/p&gt;&lt;p&gt;ಕಾಮಗಾರಿ ನಡೆಯುವ ಜಾಗದ ಸುತ್ತ ಅಳವಡಿಸಿರುವ ಸುರಕ್ಷತಾ ನೆಟ್&zwnj;ಗಳು (ಬಲೆಗಳು) ಸಮರ್ಪಕವಾಗಿಲ್ಲ. ಇದರಿಂದಾಗಿ ಸಾರ್ವಜನಿಕರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ನಿರ್ಮಾಣ ಹಂತದ ಸೇತುವೆಯ ಕೆಳಗಡೆಯೇ ಓಡಾಡುವಂತಾಗಿದೆ. ಸರಿಯಾದ ಟ್ರಾಫಿಕ್ ಡೈವರ್ಷನ್ (ಸಂಚಾರ ಮಾರ್ಗ ಬದಲಾವಣೆ) ಅಥವಾ ಎಚ್ಚರಿಕೆ ಫಲಕಗಳನ್ನು ಹಾಕದ ಕಾರಣ ಈಗಾಗಲೇ ಇಲ್ಲಿ ಒಂದೆರಡು ಅಪಘಾತಗಳು ಸಂಭವಿಸಿದ್ದು, ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ, ನಿರಂತರ ವಾಹನ ದಟ್ಟಣೆ ಇರುವ ಚೆನ್ನಮ್ಮ ವೃತ್ತದಲ್ಲಿ ತಕ್ಷಣವೇ ಬ್ಯಾರಿಕೇಡ್&zwnj;ಗಳನ್ನು ಅಳವಡಿಸಿ, ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಂಡ ಎಚ್ಚರಿಸಿದೆ.&lt;/p&gt;&lt;h2&gt;&lt;strong&gt;5 ವರ್ಷವಾದ್ರೂ ಮುಗಿಯದ ಕೆಲಸ; ಸರ್ಕಾರಕ್ಕೆ ದೂರು&lt;/strong&gt;&lt;/h2&gt;&lt;p&gt;ಐಸಿಐ ಹುಬ್ಬಳ್ಳಿ-ಧಾರವಾಡ ಕೇಂದ್ರದ ಅಧ್ಯಕ್ಷ ಸುರೇಶ್ ಕಿರೇಸೂರ್ ಮಾತನಾಡಿ, &quot;ಈ ಫ್ಲೈಓವರ್ ಕಾಮಗಾರಿ ಆರಂಭವಾಗಿದ್ದು 2021 ರಲ್ಲಿ. ಆದರೆ 5 ವರ್ಷ ಕಳೆದರೂ ಇನ್ನೂ ಕೆಲಸ ಮುಗಿದಿಲ್ಲ. ಗುತ್ತಿಗೆದಾರರು ಈಗಾಗಲೇ ಹಲವು ಡೆಡ್&zwnj;ಲೈನ್&zwnj;ಗಳನ್ನು ಮಿಸ್ ಮಾಡಿದ್ದಾರೆ. ಸದ್ಯ ಅವರೇ ಹಾಕಿಕೊಂಡಿರುವ ಡಿಸೆಂಬರ್ ಅವಧಿಯೊಳಗೂ ಈ ಕೆಲಸ ಮುಗಿಯುವ ಲಕ್ಷಣ ಕಾಣುತ್ತಿಲ್ಲ&quot; ಎಂದು ಬೇಸರ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ನಿಯಮಿತವಾಗಿ ಸ್ಥಳಕ್ಕೆ ಭೇಟಿ ನೀಡಿ ನಿಗಾ ವಹಿಸಬೇಕು ಎಂದಿದ್ದಾರೆ.&lt;/p&gt;&lt;p&gt;&quot;ನಾವು ಸಿದ್ಧಪಡಿಸಿರುವ ಈ ತಾಂತ್ರಿಕ ವರದಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶೀಘ್ರದಲ್ಲೇ ಕಳುಹಿಸಿಕೊಡಲಿದ್ದೇವೆ&quot; ಎಂದು ಸುರೇಶ್ ಕಿರೇಸೂರ್ ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/hubballi-chennamma-circle-flyover-construction-quality-issues-ici-report-san/articleshow-4reuuii"/>
        </item>
        <item>
            <title><![CDATA[ಗದಗ ಬೈಪಾಸ್ ಎಫೆಕ್ಟ್? ನಾವು ಹೋಗಬೇಕಲ್ವಾ ? ನಾವೇನು ಮಾಡೋದು? ರೈಲು ಪ್ರಯಾಣಿಕರ ಆಕ್ರೋಶ]]></title>
            <link>https://kannada.asianetnews.com/karnataka-districts/indian-railways-no-16535-16536-mysuru-pandharpur-gol-gumbaz-express-diverted-from-gadag-bypass-passengers-outraged-mrq/articleshow-p4uyygi</link>
            <guid isPermaLink="true">https://kannada.asianetnews.com/karnataka-districts/indian-railways-no-16535-16536-mysuru-pandharpur-gol-gumbaz-express-diverted-from-gadag-bypass-passengers-outraged-mrq/articleshow-p4uyygi</guid>
            <pubDate>Tue, 23 Jun 2026 13:02:06 +0530</pubDate>
            <description><![CDATA[ಮೈಸೂರು-ಪಂಢರಪುರ ಗೋಲ್ ಗುಂಬಜ್ ಎಕ್ಸ್&zwnj;ಪ್ರೆಸ್ ರೈಲನ್ನು ಗದಗ ಬೈಪಾಸ್ ಮೂಲಕ ಸಂಚರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ನಿರ್ಧಾರದಿಂದ ಪಂಢರಪುರಕ್ಕೆ ಹೋಗುವ ಭಕ್ತರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsp1aqyprych72hgbtv30zq,imgname-gadag-railway-station-1782199659262.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಕುಮಾರ ಕುಷ್ಟಗಿ&lt;/strong&gt;&lt;/p&gt;&lt;p&gt;&lt;strong&gt;ಗದಗ: &lt;/strong&gt;ವಿಜಯಪುರ, ಯಶವಂತಪುರ ನಂತರ ಈಗ ಮೈಸೂರು, ಪಂಢರಪುರ ಗೋಲ್ ಗುಂಬಜ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16535/36) ಸಂಚಾರವನ್ನೂ ಗದಗ ಮತ್ತು ಹುಬ್ಬಳ್ಳಿ ಬೈಪಾಸ್ ಮೂಲಕ ಕಾರ್ಯಾಚರಣೆ ನಡೆಸಲು ರೈಲ್ವೆ ಇಲಾಖೆ ಅಣಿಯಾಗುತ್ತಿದ್ದು, ಆ ಮೂಲಕ ಗದಗ ಜಿಲ್ಲೆಯ ಜನರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ.&lt;/p&gt;&lt;p&gt;ಪಂಢರಪುರದ ವಿಠ್ಠಲನ ದರ್ಶನಕ್ಕೆ ಹೋಗುವ ಸಾವಿರಾರು ಭಕ್ತರಿಗೆ ಈ ರೈಲು ಆಸರೆಯಾಗಿತ್ತು. ಆದರೆ, ಈಗ ತರಾತುರಿಯಲ್ಲಿ ಈ ರೈಲನ್ನು ಮುಖ್ಯ ನಿಲ್ದಾಣಗಳ ಬದಲಿಗೆ ಬೈಪಾಸ್ ಲೈನ್ ಮೂಲಕ ಓಡಿಸಲು ನಿರ್ಧರಿಸಿರುವುದು ಯಾವ ಉದ್ದೇಶಕ್ಕಾಗಿ ಮತ್ತು ಯಾರ ಹಿತಕ್ಕಾಗಿ ಎನ್ನುವುದನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ.&lt;/p&gt;&lt;p&gt;ಇತ್ತೀಚೆಗಷ್ಟೇ ಆರಂಭವಾದ ವಿಜಯಪುರ, ಯಶವಂತಪುರ ರೈಲು ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಸಂಚರಿಸುವಾಗ ಗದಗ ಬೈಪಾಸ್ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಅದನ್ನು ರದ್ದುಗೊಳಿಸಿದ್ದ ಇಲಾಖೆ ಈಗ ಪಂಢರಪುರ, ಮೈಸೂರು ರೈಲಿಗೆ ಗದಗ ಮತ್ತು ಹುಬ್ಬಳ್ಳಿ ಬೈಪಾಸ್ ನಲ್ಲಿ ಮಾತ್ರ ನಿಲುಗಡೆಗೆ ಅವಕಾಶ ನೀಡಿದೆ. ಆದರೆ, ಬೈಪಾಸ್ ರೈಲು ನಿಲ್ದಾಣಗಳಿಗೆ ತಲುಪಲು ಸಾರ್ವಜನಿಕರಿಗೆ ಸಾಧ್ಯವಾಗದ ಸ್ಥಿತಿ ಇದೆ. ಇದು ಇಲಾಖೆ ಅಧಿಕಾರಿಗಳಿಗೆ ಯಾಕೆ ಗೊತ್ತಾಗುತ್ತಿಲ್ಲ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ.&lt;/p&gt;&lt;h2&gt;&lt;strong&gt;ಕಿಂಚಿತ್ತು ಗಮನ ನೀಡದ ಸಂಸದರು&lt;/strong&gt;&lt;/h2&gt;&lt;p&gt;ಹಾವೇರಿ-ಗದಗ ಸಂಸದರಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ನಂತರ ರೈಲು ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ಸಿಗುತ್ತದೆ. ಇವರು ಮಾಜಿ ಸಿಎಂ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ಪ್ರಧಾನಿ ಮೋದಿ ಅವರೊಂದಿಗೆ ಬೊಮ್ಮಾಯಿ ಅತ್ಯಂತ ಆತ್ಮೀಯ ಸಂಪರ್ಕ ಹೊಂದಿದ್ದಾರೆ. ಇದನ್ನು ಬಳಕೆ ಮಾಡಿಕೊಂಡು ಗದಗ ಜಿಲ್ಲೆಯ ಜನತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದರು ಜಿಲ್ಲೆಯ ಜನತೆ. ಸಧ್ಯ ಸಂಸದರು ಜಿಲ್ಲೆಯ ರೈಲು ಬಳಕೆದಾರರ ಸಮಸ್ಯೆಗಳಿಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ ಎನ್ನುವ ಬೇಸರ ಜನ ವ್ಯಕ್ತಪಡಿಸುತ್ತಾರೆ.&lt;/p&gt;&lt;p&gt;ಗದಗ ಬೈಪಾಸ್ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕ ರೈಲುಗಳನ್ನು ನಿಲ್ಲಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಆರಂಭದಿಂದಲೂ ಜನರಿಗೆ ಭರವಸೆ ನೀಡುತ್ತ ಬಂದಿತ್ತು. ವಿಜಯಪುರ-ಯಶವಂತಪುರ ರೈಲು ಸಂಚಾರದ ವೇಳೆಯೂ ಇದೇ ಮಾತನ್ನು ಪುನರುಚ್ಚರಿಸಿತ್ತು. ಆದರೆ, ಕೊಟ್ಟ ಮಾತಿಗೆ ತಪ್ಪಿ ಕೆಲವೇ ದಿನಗಳಲ್ಲಿ ಹೊಸ ರೈಲನ್ನು ಇದೇ ಮಾರ್ಗದಲ್ಲಿ ಓಡಿಸುತ್ತಿದೆ. ಇದರಿಂದ ಕೇವಲ ಗದಗ ಜಿಲ್ಲೆ ಮಾತ್ರವಲ್ಲ ಅಕ್ಕ ಪಕ್ಕದ ಜಿಲ್ಲೆಯ ನಿತ್ಯವೂ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ರೈಲ್ವೆ ಹೋರಾಟಗಾರ ಗಣೇಶಸಿಂಗ್ ಬ್ಯಾಳಿ ಹೇಳಿದರು.&lt;/p&gt;&lt;p&gt;ಈ ಬಗ್ಗೆ ನೈಋತ್ಯ ರೈಲ್ವೆ ವಲಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರೈಲ್ವೆ ಮಂಡಳಿ ಆದೇಶ ಈಗಷ್ಟೆ ಬಂದಿದೆ ಎಂದು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ಪಿ.ಆರ್.ಓ. ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indian-railways-no-16535-16536-mysuru-pandharpur-gol-gumbaz-express-diverted-from-gadag-bypass-passengers-outraged-mrq/articleshow-p4uyygi"/>
        </item>
        <item>
            <title><![CDATA[ಬಳ್ಳಾರಿ RDPR ಎಇಇ ತಿಪ್ಪೇಸ್ವಾಮಿಗೆ ಲೋಕಾಯುಕ್ತ ಶಾಕ್! ನಗದು, ಚಿನ್ನಾಭರಣ, ಕೋಟ್ಯಂತರ ಮೌಲ್ಯದ ಸೈಟ್‌ಗಳು ಪತ್ತೆ!]]></title>
            <link>https://kannada.asianetnews.com/karnataka-districts/karnataka-news-lokayukta-raids-ballari-rdpr-engineer-aee-thippeswamy-gold-cash-and-sites-seized-gdp/articleshow-4i1yxvx</link>
            <guid isPermaLink="true">https://kannada.asianetnews.com/karnataka-districts/karnataka-news-lokayukta-raids-ballari-rdpr-engineer-aee-thippeswamy-gold-cash-and-sites-seized-gdp/articleshow-4i1yxvx</guid>
            <pubDate>Tue, 23 Jun 2026 12:23:47 +0530</pubDate>
            <description><![CDATA[ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇಸ್ವಾಮಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ನಡೆದ ಈ ಕಾರ್ಯಾಚರಣೆಯಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಆಸ್ತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvskzdds2r3fkjcj1zx6a270,imgname-lokayukta-raids-ballari-rdpr-aee-thippeswamy-1782197499321.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ:&lt;/strong&gt; ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆಯೇ ಭ್ರಷ್ಟ ಅಧಿಕಾರಿಯೊಬ್ಬರಿಗೆ ಬಿಸಿ ಮುಟ್ಟಿಸಿದ್ದಾರೆ. ಸಿರುಗುಪ್ಪದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ತಿಪ್ಪೇಸ್ವಾಮಿ ಅವರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.&lt;/p&gt;&lt;h2&gt;ಮೂರು ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ&lt;/h2&gt;&lt;p&gt;ಲೋಕಾಯುಕ್ತ ಎಸ್&zwnj;ಪಿ ವಾಸುದೇವ್ ಅವರ ಖುದ್ದು ನೇತೃತ್ವದಲ್ಲಿ ಇಡೀ ಕಾರ್ಯಾಚರಣೆ ನಡೆದಿದೆ. ಎಇಇ ತಿಪ್ಪೇಸ್ವಾಮಿ ಅಕ್ರಮವಾಗಿ ಕೋಟ್ಯಂತರ ಆಸ್ತಿ ಸಂಪಾದಿಸಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಅಧಿಕಾರಿಗಳು ಪ್ರತ್ಯೇಕ ಮೂರು ತಂಡಗಳನ್ನು ರಚಿಸಿಕೊಂಡು ದಾಳಿ ನಡೆಸಿದ್ದಾರೆ.&lt;/p&gt;&lt;p&gt;ಬಳ್ಳಾರಿಯ ಹನುಮಾನ್ ನಗರದಲ್ಲಿರುವ ತಿಪ್ಪೇಸ್ವಾಮಿ ಅವರ ಪ್ರಧಾನ ನಿವಾಸ, ಕುಡತಿನಿ ಪಟ್ಟಣದಲ್ಲಿರುವ ಅವರ ಮತ್ತೊಂದು ನಿವಾಸ, ಸಿರುಗುಪ್ಪದಲ್ಲಿರುವ ಅವರ ಅಧಿಕೃತ ಆರ್&zwnj;ಡಿಪಿಆರ್ ಕಚೇರಿ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಅಧಿಕಾರಿಗಳು ಏಕಕಾಲದಲ್ಲಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;ಮನೆಯಲ್ಲಿ ಸಿಕ್ಕ ಅಕ್ರಮ ಸಂಪತ್ತು ಎಷ್ಟು?&lt;/h2&gt;&lt;p&gt;ಬಳ್ಳಾರಿಯ ಹನುಮಾನ್ ನಗರದಲ್ಲಿರುವ ತಿಪ್ಪೇಸ್ವಾಮಿ ಅವರ ನಿವಾಸದ ಮೇಲೆ ನಡೆದ ದಾಳಿಯ ವೇಳೆ ಚಿನ್ನ, ಬೆಳ್ಳಿ ಹಾಗೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಪ್ರಾಥಮಿಕ ತಪಾಸಣೆಯ ಅವಧಿಯಲ್ಲೇ ಅಧಿಕಾರಿಗಳು ಈ ಕೆಳಗಿನ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡು ದಾಖಲೆ ಪರಿಶೀಲಿಸುತ್ತಿದ್ದಾರೆ.&lt;/p&gt;&lt;p&gt;ಸುಮಾರು 300 ಗ್ರಾಂ ತೂಕದ ಚಿನ್ನದ ಆಭರಣಗಳು, 800 ಗ್ರಾಂ ತೂಕದ ಬೆಳ್ಳಿ ಆಭರಣ ಹಾಗೂ ಸಾಮಗ್ರಿಗಳು, ಮನೆಯಲ್ಲಿ ಗಂಟು ಕಟ್ಟಿ ಇಡಲಾಗಿದ್ದ 1 ಲಕ್ಷ ರೂಪಾಯಿ ನಗದು ಹಣ. ವಿವಿಧೆಡೆ ಖರೀದಿಸಲಾಗಿರುವ ಬರೋಬ್ಬರಿ 6 ಸೈಟ್&zwnj;ಗಳಿಗೆ (ನಿವೇಶನ) ಸಂಬಂಧಿಸಿದ ಪ್ರಮುಖ ದಸ್ತಾವೇಜುಗಳು ಪತ್ತೆಯಾಗಿದೆ.&lt;/p&gt;&lt;h2&gt;ಬ್ಯಾಂಕ್ ಖಾತೆ ಸೀಜ್ ಮಾಡಿದ ಅಧಿಕಾರಿಗಳು&lt;/h2&gt;&lt;p&gt;ಕೇವಲ ಭೌತಿಕ ಆಸ್ತಿ ಮಾತ್ರವಲ್ಲದೆ ತಿಪ್ಪೇಸ್ವಾಮಿ ಅವರ ಬ್ಯಾಂಕ್ ವಹಿವಾಟುಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಪ್ರಾಥಮಿಕ ತನಿಖೆಯ ಭಾಗವಾಗಿ ತಿಪ್ಪೇಸ್ವಾಮಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂಪಾಯಿ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ತಕ್ಷಣವೇ ಜಪ್ತಿ (Freeze) ಮಾಡಿದ್ದಾರೆ. ಇವರ ಹೆಸರಿನಲ್ಲಿರುವ ಇತರೆ ಬ್ಯಾಂಕ್ ಲಾಕರ್&zwnj;ಗಳು ಹಾಗೂ ಹೂಡಿಕೆಗಳ ಬಗ್ಗೆಯೂ ತನಿಖೆ ಮುಂದುವರೆದಿದೆ.&lt;/p&gt;&lt;p&gt;ಸದ್ಯ ಹನುಮಾನ್ ನಗರದ ನಿವಾಸ ಹಾಗೂ ಇತರೆಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಸುದೀರ್ಘ ಪರಿಶೀಲನೆ ಮತ್ತು ದಾಖಲೆಗಳ ತಪಾಸಣೆ ಕಾರ್ಯ ಮುಂದುವರೆದಿದೆ. ಸರ್ಕಾರದ ಪ್ರಮುಖ ಇಲಾಖೆಯಲ್ಲಿದ್ದುಕೊಂಡು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡು ಆಸ್ತಿ ಗಳಿಸಿರುವ ಈ ಅಧಿಕಾರಿಯ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದಾಖಲೆಗಳ ಪರಿಶೀಲನೆ ಮುಂದುವರೆದಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-news-lokayukta-raids-ballari-rdpr-engineer-aee-thippeswamy-gold-cash-and-sites-seized-gdp/articleshow-4i1yxvx"/>
        </item>
        <item>
            <title><![CDATA[ಅಮ್ಮ, ಅಜ್ಜಿ ಇಬ್ಬರನ್ನೂ ಕಳೆದುಕೊಂಡೆ, ನನ್ನ ಹೃದಯದಲ್ಲಿ ಅವರೆಂದೂ ಇರುತ್ತಾರೆ: ವಿಜಯ್‌ ರಾಘವೇಂದ್ರ ಪುತ್ರನ ಭಾವುಕ ಪೋಸ್ಟ್‌]]></title>
            <link>https://kannada.asianetnews.com/tv-talk/vijay-raghavendra-son-shourya-emotional-post-mother-spandana-grandmother-jayamma-san/articleshow-3yvb08c</link>
            <guid isPermaLink="true">https://kannada.asianetnews.com/tv-talk/vijay-raghavendra-son-shourya-emotional-post-mother-spandana-grandmother-jayamma-san/articleshow-3yvb08c</guid>
            <pubDate>Tue, 23 Jun 2026 12:18:50 +0530</pubDate>
            <description><![CDATA[&lt;p&gt;ನಟ ವಿಜಯ್ ರಾಘವೇಂದ್ರ ಅವರ ಪುತ್ರ ಶೌರ್ಯ, ಇತ್ತೀಚೆಗೆ ನಿಧನರಾದ ಅಜ್ಜಿ ಜಯಮ್ಮ ಹಾಗೂ ಹಿಂದೆ ನಿಧನರಾದ ತಾಯಿ ಸ್ಪಂದನಾ ಅವರನ್ನು ನೆನೆದು ಇನ್ಸ್&zwnj;ಟಾಗ್ರಾಮ್&zwnj;ನಲ್ಲಿ ಭಾವುಕ ಪೋಸ್ಟ್&zwnj;ಗಳನ್ನು ಹಂಚಿಕೊಂಡಿದ್ದಾರೆ. 'ನನ್ನ ಹೃದಯದಿಂದ ಎಂದೂ ಹೋಗೋದಿಲ್ಲ' ಎಂದು ಬರೆದುಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvskhv22e8g2qcv1bdbmza28,imgname-shourya-vijay-raghavendra-1782197054530.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.23): &lt;/strong&gt;ಮೂರೇ ವರ್ಷಗಳ ಅಂತರದಲ್ಲಿ ಸ್ಯಾಂಡಲ್&zwnj;ವುಡ್&zwnj;ನ ಸ್ಟಾರ್&zwnj; ನಟ ವಿಜಯ್&zwnj; ರಾಘವೇಂದ್ರ ತಮ್ಮ ಪತ್ನಿ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಇದೇ ಜೂನ್&zwnj; 16 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ವಿಜಯ್&zwnj; ರಾಘವೇಂದ್ರ ಹಾಗೂ ಶ್ರೀ ಮುರಳಿ ಅವರ ತಾಯಿ ಜಯಮ್ಮ ಚಿನ್ನೇಗೌಡ ನಿಧನರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದರು.&lt;/p&gt;&lt;p&gt;ಸಾವಿನ ಬಳಿಕ ವಿಜಯ್&zwnj; ರಾಘವೇಂದ್ರ ಹಾಗೂ ಶ್ರೀಮುರಳಿ ಮುಂದೆ ನಿಂತು ತಾಯಿಯ ಅಂತ್ಯಸಂಸ್ಕಾರ ಕಾರ್ಯಕ್ರಮ ನೆರವೇರಿಸಿದ್ದರು. ಆದರೆ, ಇನ್ಸ್&zwnj;ಟಾಗ್ರಾಮ್&zwnj;ನಲ್ಲಿ ಅಜ್ಜಿಯ ಫೋಟೋಗಳನ್ನು ಹಾಕಿಕೊಂಡು ವಿಜಯ್&zwnj; ರಾಘವೇಂದ್ರ ಪುತ್ರ ಶೌರ್ಯ ಭಾವುಕ ಪೋಸ್ಟ್&zwnj; ಮಾಡಿದ್ದಾರೆ. ಆರು ದಿನಗಳ ಹಿಂದೆ ಅಜ್ಜಿಯ ಅಪರೂಪದ ಫೋಟೋಗಳನ್ನು ಹಂಚಿಕೊಂಡು 'ಲವ್&zwnj; ಯು ಅಮ್ಮಾ' ಎಂದು ಬರೆದುಕೊಂಡಿದ್ದರು. ಇದಕ್ಕೆ ಕಾಮೆಂಟ್&zwnj; ಮಾಡಿದ್ದ ವಿಜಯ್&zwnj; ರಾಘವೇಂದ್ರ,'ನನ್ನ ಪ್ರೀತಿಯ ಮಗನೇ, ಅವರಿಬ್ಬರು ನಿನ್ನನ್ನು ಮೇಲಿಂದ ಹೆಚ್ಚಾಗಿ ನೋಡ್ತಾ ಇರ್ತಾರೆ' ಎಂದು ಭಾವುಕರಾಗಿದ್ದರು. ಅದೇ ದಿನ ತಂದೆ-ತಾಯಿಯೊಂದಿಗೆ ಅಜ್ಜ-ಅಜ್ಜಿ ಇರುವ ಫೋಟೋವನ್ನು ಅವರು ಹಂಚಿಕೊಂಡಿದ್ದರು.&lt;/p&gt;&lt;p&gt;ಮೂರು ದಿನಗಳ ಹಿಂದೆ ಅಜ್ಜಿಯ ಅಪರೂಪದ ಫೋಟೋಗಳನ್ನು ಹಂಚಿಕೊಂಡು ಶೌರ್ಯ ನೆನಪಿಸಿಕೊಂಡಿದ್ದರು. ಎರಡು ದಿನಗಳ ಹಿಂದೆ ತಾಯಿ ಹಾಗೂ ಅಜ್ಜಿ ಜೊತೆಯಲ್ಲಿರುವ ಫೋಟೋ ಹಂಚಿಕೊಂಡಿದ್ದ ಶೌರ್ಯ, 'ಇವರ ಕಣ್ಣುಗಳಲ್ಲಿ ಸಂತೋಷ ತುಂಬಿತ್ತು' ಎಂದು ಬರೆದುಕೊಂಡಿದ್ದರು.&lt;/p&gt;&lt;p&gt;ಇಂದು ತಾಯಿ ಹಾಗೂ ಅಜ್ಜಿಯ ಫೋಟೋಗಳನ್ನು ಹಂಚಿಕೊಂಡಿರುವ ಶೌರ್ಯ, ನನ್ನ ತಾಯಿ ಹಾಗೂ ಅಜ್ಜಿ ನನ್ನ ಕಣ್ಣ ಎದುರು ಇಲ್ಲದೇ ಇರಬಹುದು. ಆದರೆ, ನನ್ನ ಹೃದಯದಿಂದ ಎಂದೂ ಹೋಗೋದಿಲ್ಲ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಶೌರ್ಯ ಅವರ ಪೋಸ್ಟ್&zwnj;ಗೆ ಹಲವರು ಕಾಮೆಂಟ್&zwnj; ಮಾಡಿದ್ದು, ಧೈರ್ಯದಿಂದ ಇರುವಂತೆ ಹೇಳಿದ್ದಾರೆ. ನಿನ್ನನ್ನು ಅವರು ಎಂದೂ ನೋಡುತ್ತಿರುತ್ತಾರೆ. ಅವರ ಹಾರೈಕೆಯಲ್ಲಿ ನೀನು ಯಾವಾಗಲೂ ಇರುತ್ತೀಯ ಎಂದು ಕಾಮೆಂಟ್&zwnj; ಮಾಡಿದ್ದಾರೆ. ಇನ್ನೂ ಕೆಲವರು ಮತ್ತಷ್ಟು ಭಾವುಕ ಪೋಸ್ಟ್&zwnj; ಮಾಡಿದ್ದು, 'ಅತ್ತೆ ಸೊಸೆ ಇಬ್ಬರಿಗೂ ಮುತ್ತೈದೆ ಸಾವೂ ಕೊಟ್ಟ ಭಗವಂತ ನೀವೇ ಪುಣ್ಯವಂತರು' ಎಂದು ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಮೂರು ವರ್ಷದ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ಶೌರ್ಯ&lt;/strong&gt;&lt;/h2&gt;&lt;p&gt;ವಿಜಯ್&zwnj; ರಾಘವೇಂದ್ರ ಹಾಗೂ ಸ್ಪಂದನಾ ವಿಜಯ್&zwnj; ಅವರ ಏಕೈಕ ಪುತ್ರನಾಗಿರುವ ಶೌರ್ಯ ಮೂರು ವರ್ಷದ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. 2008ರಲ್ಲಿ ಜನಿಸಿದ್ದ ಶೌರ್ಯ ಅವರ ತಾಯಿ ಸ್ಪಂದನಾ, 2023ರ ಅಗಸ್ಟ್&zwnj;ನಲ್ಲಿ ಬ್ಯಾಂಕಾಕ್&zwnj; ಪ್ರವಾಸಕ್ಕೆ ಹೋಗಿದ್ದಾಗ ಹೃದಯಾಘಾತದಿಂದಾಗಿ ಸಾವು ಕಂಡಿದ್ದರು. ಮನೆಗೆ ಎದುರಾದ ಈ ಆಘಾತದ ನಂತರ ವಿಜಯ್&zwnj; ರಾಘವೇಂದ್ರ ಅವರು ತಾಯಿಯ ಪಾತ್ರವನ್ನೂ ವಹಿಸಿಕೊಂಡು ಮಗನಿಗೆ ಆಸರೆಯಾಗಿ ನಿಂತಿದ್ದರು.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/vijay-raghavendra-son-shourya-emotional-post-mother-spandana-grandmother-jayamma-san/articleshow-3yvb08c"/>
        </item>
        <item>
            <title><![CDATA[NEET ವಿದ್ಯಾರ್ಥಿಗಳ ವಿಳಂಬಕ್ಕೆ ಟ್ರಾಫಿಕ್ ಕಾರಣ ಆರೋಪಕ್ಕೆ ಸಂಚಾರಿ ಪೊಲೀಸರ ಸ್ಪಷ್ಟನೆ]]></title>
            <link>https://kannada.asianetnews.com/gallery/karnataka-districts/bengaluru-traffic-police-clarifies-allegations-that-traffic-is-the-reason-for-neet-students-delay-mrq-fhw9mbg</link>
            <guid isPermaLink="true">https://kannada.asianetnews.com/gallery/karnataka-districts/bengaluru-traffic-police-clarifies-allegations-that-traffic-is-the-reason-for-neet-students-delay-mrq-fhw9mbg</guid>
            <pubDate>Tue, 23 Jun 2026 11:42:23 +0530</pubDate>
            <description><![CDATA[ನೀಟ್ ಪರೀಕ್ಷೆಗೆ ತಡವಾಗಿ ಬೆಂಗಳೂರು ಟ್ರಾಫಿಕ್ ಕಾರಣ ಎಂದು ರಾಜಕೀಯ ನಾಯಕರು ಆರೋಪಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಸಂಚಾರಿ ಪೊಲೀಸರು, ವಿದ್ಯಾರ್ಥಿಗಳು ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ತಪ್ಪು ಮಾರ್ಗವನ್ನು ಆಯ್ಕೆ ಮಾಡಿದ್ದೇ ವಿಳಂಬಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvshd6xejg8jw7grhybgeecy,imgname-bengaluru-neet--3--1782194805678.jpg" type="image/jpeg" height="390" width="690"/>
            <content:encoded><![CDATA[ನೀಟ್ ಪರೀಕ್ಷೆಗೆ ತಡವಾಗಿ ಬೆಂಗಳೂರು ಟ್ರಾಫಿಕ್ ಕಾರಣ ಎಂದು ರಾಜಕೀಯ ನಾಯಕರು ಆರೋಪಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಸಂಚಾರಿ ಪೊಲೀಸರು, ವಿದ್ಯಾರ್ಥಿಗಳು ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ತಪ್ಪು ಮಾರ್ಗವನ್ನು ಆಯ್ಕೆ ಮಾಡಿದ್ದೇ ವಿಳಂಬಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.&lt;img&gt;&lt;p&gt;ಭಾನುವಾರ ನಡೆದ ನೀಟ್ ಪರೀಕ್ಷಾ ಕೇಂದ್ರ ತಲುಪಲು ವಿಳಂಬವಾದ ಹಿನ್ನೆಲೆ ಮೂವರು ವಿದ್ಯಾರ್ಥಿಗಳು ವಂಚಿತರಾಗಿದ್ದರು. ಮೂವರು ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿಯಲು ಬೆಂಗಳೂರು ಟ್ರಾಫಿಕ್ ಕಾರಣ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಆರೋಪಿಸಿದ್ದರು.&lt;/p&gt;&lt;img&gt;&lt;p&gt;ಭಾನುವಾರ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರಿಂದ ಸಹಜವಾಗಿಯೇ ಹೆಬ್ಬಾಳ, ಮೇಕ್ರಿ ಸರ್ಕಲ್, ಗುಟ್ಟಹಳ್ಳಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಟ್ರಾಫಿಕ್&zwnj;ನಿಂದಲೇ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕೇಂದ್ರ ಸಚಿವ ಹೆಚ್&zwnj;ಡಿ ಕುಮಾರಸ್ವಾಮಿ ಹೇಳಿದ್ದರು.&lt;/p&gt;&lt;img&gt;&lt;p&gt;ಇದೀಗ ಈ ಎಲ್ಲಾ ಆರೋಪಗಳಿಗೆ ಬೆಂಗಳೂರು ಸಂಚಾರಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷೆಯಿಂದ ಹೊರಗುಳಿಯಲು ಟ್ರಾಫಿಕ್ ಕಾರಣ ಅಲ್ಲ ಎಂದು ಹೇಳಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ಪರೀಕ್ಷೆಗೆ ಹೊರಡುವ ಸಮಯದಲ್ಲಿ ಟ್ರಾಫಿಕ್ ಸಾಮನ್ಯವಾಗಿತ್ತು. ಪೊಲೀಸ್ ಸಿಬ್ಬಂದಿ ಅಗತ್ಯವಿರುವ ಕಡೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ಪರೀಕ್ಷಾ ಕೇಂದ್ರಕ್ಕೆ ಹೊರಡಲು ಆಯ್ಕೆ ಮಾಡಿಕೊಂಡ ಮಾರ್ಗದಿಂದ ವಿಳಂಬವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಸಿಸಿಟಿವಿ ದೃಶ್ಯಗಳ ಪ್ರಕಾರ, ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿ, 12:57 PMಕ್ಕೆ ಮನೆಯಿಂದ ಹೊರಟಿದ್ದಾರೆ. 1.30PMಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕಿತ್ತು. ಆದ್ರೆ ವಿದ್ಯಾರ್ಥಿ 1:33 PMಕ್ಕೆ ಪರೀಕ್ಷಾಕೇಂದ್ರ ತಲುಪಿದ್ದಾರೆ. ಆರ್&zwnj;ಟಿ ನಗರದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಶಾರ್ಟ್&zwnj;ಕಟ್ ಇದ್ರೂ, ವಿದ್ಯಾರ್ಥಿ ಲಾಂಗ್&zwnj;ರೂಟ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಜೂನ್ 21ರಂದು ವಿದ್ಯಾರ್ಥಿಗಳು ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಂಚಾರ ದಟ್ಟಣೆ ಕಾರಣವಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಬೆಂಗಳೂರು ಸಂಚಾರಿ ಪೊಲೀಸರು ನ್ಯಾಯೋಚಿತ, ಪಾರದರ್ಶಕ ಮತ್ತು ಪುರಾವೆ ಆಧಾರಿತ ಮೌಲ್ಯಮಾಪನಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bengaluru-traffic-police-clarifies-allegations-that-traffic-is-the-reason-for-neet-students-delay-mrq-fhw9mbg"/>
        </item>
        <item>
            <title><![CDATA[ಗೃಹಲಕ್ಷ್ಮಿಯರೇ ಮತ್ತೊಮ್ಮೆ ಅರ್ಜಿ ಹಾಕಲು ರೆಡಿಯಾಗಿ! ಇನ್ನೆರಡು ದಿನದಲ್ಲಿ ಪ್ರಕ್ರಿಯೆ ಆರಂಭ, ಈ ದಾಖಲೆಗಳು ರೆಡಿ ಇರಲಿ]]></title>
            <link>https://kannada.asianetnews.com/state/karnataka-news-gruha-lakshmi-scheme-re-registration-to-begin-in-two-days-gdp/articleshow-6b3txpy</link>
            <guid isPermaLink="true">https://kannada.asianetnews.com/state/karnataka-news-gruha-lakshmi-scheme-re-registration-to-begin-in-two-days-gdp/articleshow-6b3txpy</guid>
            <pubDate>Tue, 23 Jun 2026 11:21:40 +0530</pubDate>
            <description><![CDATA[ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮರು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಈ ಬಾರಿ ಅಂಗನವಾಡಿ ಕಾರ್ಯಕರ್ತೆಯರು ಮನೆ ಬಾಗಿಲಿಗೆ ಬಂದು ಅರ್ಜಿ ಸಲ್ಲಿಸಲು ಸಹಾಯ ಮಾಡಲಿದ್ದು, ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈ ಲೇಖನದಲ್ಲಿ ಹೊಸ ನಿಯಮಗಳು, ಬೇಕಾದ ದಾಖಲೆಗಳು ಮತ್ತು ಯಾರು ಅನರ್ಹರು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kgw2f5ve1ezwfjehqzp4tq0q,imgname-gruha-lakshmi-scheme-1770468644717.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲೊಂದಾದ 'ಗೃಹಲಕ್ಷ್ಮಿ' ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಮಹಿಳೆಯರಿಗೆ ಮಹತ್ವದ ಸುದ್ದಿಯೊಂದು ಸಿಕ್ಕಿದೆ. ಯೋಜನೆಯಡಿ ಮಾಸಿಕ 2,000 ರೂಪಾಯಿ ಆರ್ಥಿಕ ನೆರವು ಪಡೆಯುತ್ತಿರುವ ಹಾಗೂ ಹೊಸದಾಗಿ ಸೇರ್ಪಡೆಯಾಗಲು ಬಯಸುವ ಗೃಹಲಕ್ಷ್ಮಿಯರು ಮತ್ತೊಮ್ಮೆ ಅರ್ಜಿ ಸಲ್ಲಿಸಲು/ಮರು ಪರಿಶೀಲನೆಗೆ ಒಳಪಡಲು ವೇದಿಕೆ ಸಿದ್ಧವಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ಸಿಗಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊನೆಯ ಹಂತದ ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.&lt;/p&gt;&lt;h2&gt;ಮನೆ ಬಾಗಿಲಿಗೇ ಬರಲಿದ್ದಾರೆ ಸಹಾಯಕಿಯರು!&lt;/h2&gt;&lt;p&gt;ಕಳೆದ ಬಾರಿ ಅರ್ಜಿ ಸಲ್ಲಿಸುವಾಗ ಮಹಿಳೆಯರು ಗಂಟೆಗಟ್ಟಲೆ ಸೈಬರ್ ಸೆಂಟರ್ ಹಾಗೂ ಕಚೇರಿಗಳ ಮುಂದೆ ಸಾಲಿನಲ್ಲಿ ನಿಂತು ಅನುಭವಿಸಿದ ಕಷ್ಟವನ್ನು ಮನಗಂಡಿರುವ ಸರ್ಕಾರ, ಈ ಬಾರಿ ಮಹತ್ವದ ನಿರ್ಧಾರ ಕೈಗೊಂಡಿದೆ. ಸ್ವತಃ ಅರ್ಜಿ ಹಾಕಲು ತಿಳಿಯದ ಅನಕ್ಷರಸ್ಥರು ಹಾಗೂ ಗ್ರಾಮೀಣ ಭಾಗದ ಬಡ ಗೃಹಲಕ್ಷ್ಮಿಯರ ನೆರವಿಗಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಸಹಾಯಕರನ್ನಾಗಿ ಬಳಸಿಕೊಳ್ಳಲು ಇಲಾಖೆ ತೀರ್ಮಾನಿಸಿದೆ. ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಫೋನ್&zwnj;ಗಳಿಗೆ ವಿಶೇಷ ಆಪ್ (App) ಒಂದನ್ನು ಇನ್&zwnj;ಸ್ಟಾಲ್ ಮಾಡಲಾಗುತ್ತಿದ್ದು, ಅವರೇ ನೇರವಾಗಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಈ ಆಪ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಿದ್ದಾರೆ.&lt;/p&gt;&lt;p&gt;ಆದರೆ, ಅಂಗನವಾಡಿ ಕಾರ್ಯಕರ್ತೆಯರ ಫೋನ್&zwnj;ನಲ್ಲಿ ಥಂಬ್ (ಬಯೋಮೆಟ್ರಿಕ್) ಮಷಿನ್ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಈ ಮರು ಅರ್ಜಿಯಲ್ಲಿ ತಾಂತ್ರಿಕತೆಯನ್ನು ಹೆಚ್ಚಿಸಲು ಮುಖ ಗುರುತಿಸುವಿಕೆ (Face Recognition) ಅಥವಾ ಒಟಿಪಿ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ. ಇದರೊಂದಿಗೆ ಎಂದಿನಂತೆ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.&lt;/p&gt;&lt;h2&gt;ಮರು ಅರ್ಜಿಯಲ್ಲಿ ಏನೆಲ್ಲಾ ಮಾಹಿತಿ ಇರಬೇಕು?&lt;/h2&gt;&lt;p&gt;ಈ ಬಾರಿ ಸಲ್ಲಿಕೆಯಾಗುವ ಮರು ಅರ್ಜಿಯಲ್ಲಿ ಈ ಹಿಂದಿನ ಅರ್ಜಿಯಲ್ಲಿದ್ದ ಬಹುತೇಕ ಪ್ರಮುಖ ಅಂಶಗಳೇ ಇರಲಿವೆ. ಅವುಗಳ ಜೊತೆಗೆ ಈ ಕೆಳಗಿನ ಪ್ರಮುಖ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ:&lt;/p&gt;&lt;p&gt;&lt;strong&gt;ಮೂಲ ವಿವರಗಳು:&lt;/strong&gt; ಅರ್ಜಿದಾರರ ಹೆಸರು, ಪ್ರಸ್ತುತ ವಿಳಾಸ ಮತ್ತು ಆಧಾರ್ ಕಾರ್ಡ್ ವಿವರಗಳು.&lt;/p&gt;&lt;p&gt;&lt;strong&gt;ಬ್ಯಾಂಕ್ ಖಾತೆ ಮಾಹಿತಿ: &lt;/strong&gt;ನಮ್ಮ ರಾಜ್ಯದಲ್ಲೇ ಚಾಲ್ತಿಯಲ್ಲಿರುವ ಮತ್ತು ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ನಿಖರ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ.&lt;/p&gt;&lt;p&gt;&lt;strong&gt;ಮತದಾರರ ಗುರುತಿನ ಚೀಟಿ (Voter ID): &lt;/strong&gt;ನಕಲಿ ಫಲಾನುಭವಿಗಳನ್ನು ತಡೆಯಲು ವೋಟರ್ ಐಡಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.&lt;/p&gt;&lt;p&gt;&lt;strong&gt;ಸ್ವಘೋಷಿತ ಜಾತಿ ಮಾಹಿತಿ:&lt;/strong&gt; ಒಂದು ವೇಳೆ ಅರ್ಜಿದಾರರ ಬಳಿ ಸದ್ಯಕ್ಕೆ ಅಧಿಕೃತ ಜಾತಿ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದರೆ, ಅವರು 'ಸ್ವಘೋಷಿತ ಜಾತಿ ಮಾಹಿತಿ'ಯನ್ನು ನಮೂದಿಸಲು ಅವಕಾಶ ನೀಡಲಾಗಿದೆ.&lt;/p&gt;&lt;h2&gt;ಯಾರ್ಯಾರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ?&lt;/h2&gt;&lt;ul&gt; &lt;li&gt;ರಾಜ್ಯದ ಮತದಾರರಾಗಿದ್ದು, ಮನೆ ಯಜಮಾನಿ ಎನಿಸಿಕೊಂಡಿರುವ ಪ್ರತಿಯೊಬ್ಬ ಮಹಿಳೆ.&lt;/li&gt; &lt;li&gt;ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದು, ಈಗ ಮರು ಪರಿಶೀಲನೆಗೆ ಒಳಪಡಬೇಕಾದ ಹಾಲಿ ಫಲಾನುಭವಿಗಳು.&lt;/li&gt; &lt;li&gt;ಬಿಪಿಎಲ್ (BPL), ಅಂತ್ಯೋದಯ ಅಥವಾ ಎಪಿಎಲ್ (APL) ಪಡಿತರ ಚೀಟಿ ಹೊಂದಿದ್ದು, ಹೊಸದಾಗಿ ಯೋಜನೆಗೆ ಸೇರಲು ಬಯಸುವ ಮಹಿಳೆಯರು.&lt;/li&gt;&lt;/ul&gt;&lt;h2&gt;ಯಾರಿಗೆ ಅವಕಾಶವಿಲ್ಲ? (ಅನರ್ಹರು ಯಾರು?)&lt;/h2&gt;&lt;p&gt;ಯೋಜನೆಯಲ್ಲಿ ಆಗುತ್ತಿರುವ ಆರ್ಥಿಕ ಸೋರಿಕೆಯನ್ನು ತಡೆಯಲು ಸರ್ಕಾರ ಈ ಬಾರಿ ಕಠಿಣ ನಿಯಮ ರೂಪಿಸಿದೆ.&lt;/p&gt;&lt;p&gt;&lt;strong&gt;ಮೃತ ಫಲಾನುಭವಿಗಳು: &lt;/strong&gt;ಈಗಾಗಲೇ ಮರಣ ಹೊಂದಿರುವ ಗೃಹಲಕ್ಷ್ಮಿ ಫಲಾನುಭವಿಗಳ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಮರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. (ಆದರೆ ನಿಯಮಾವಳಿಗಳ ಪ್ರಕಾರ ಅದೇ ರೇಷನ್ ಕಾರ್ಡ್&zwnj;ನಲ್ಲಿರುವ ಅರ್ಹ ಸೊಸೆ ಅಥವಾ ಮಗಳಿಗೆ ಯೋಜನೆಯನ್ನು ವರ್ಗಾಯಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ).&lt;/p&gt;&lt;p&gt;&lt;strong&gt;ತೆರಿಗೆ ಪಾವತಿದಾರರು: &lt;/strong&gt;ಆದಾಯ ತೆರಿಗೆ (Income Tax) ಪಾವತಿಸುವವರು ಅಥವಾ ಜಿಎಸ್&zwnj;ಟಿ (GST) ಫೈಲ್ ಮಾಡುವ ಕುಟುಂಬದ ಮಹಿಳೆಯರಿಗೆ ಈ ಯೋಜನೆಯಡಿ ಯಾವುದೇ ಅವಕಾಶವಿರುವುದಿಲ್ಲ.&lt;/p&gt;&lt;p&gt;ಮೃತಪಟ್ಟವರ ಹಾಗೂ ಅನರ್ಹರ ಖಾತೆಗಳಿಗೆ ಹಣ ಹೋಗುವುದನ್ನು ತಡೆದು, ನೈಜ ಮತ್ತು ಅರ್ಹ ಬಡ ಮಹಿಳೆಯರಿಗೆ ತೊಂದರೆಯಾಗದಂತೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ತಲುಪಿಸುವ ಉದ್ದೇಶದಿಂದ ಈ &quot;ಕ್ಲೀನ್ ಅಪ್&quot; ಪ್ರಕ್ರಿಯೆಯನ್ನು ಸರ್ಕಾರ ಹಮ್ಮಿಕೊಂಡಿದೆ. ಆದ್ದರಿಂದ ಎಲ್ಲ ಗೃಹಲಕ್ಷ್ಮಿಯರು ಅಗತ್ಯ ದಾಖಲೆಗಳೊಂದಿಗೆ ಸಜ್ಜಾಗಿರಿ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-news-gruha-lakshmi-scheme-re-registration-to-begin-in-two-days-gdp/articleshow-6b3txpy"/>
        </item>
        <item>
            <title><![CDATA[ಒಂಟಿಯಾಗಿ ಇರ್ಬೇಡ, ಮತ್ತೊಂದ್‌ ಮದುವೆಯಾಗು.. ಅಮ್ಮನ ಆಸೆಯಂತೆ 'ಕಾನ್ಸ್‌ಟೇಬಲ್‌ ಸರೋಜ' ಮದುವೆಯಾದ ತ್ರಿಪುರ ಮಾಜಿ ಸಿಎಂ]]></title>
            <link>https://kannada.asianetnews.com/relationship/biplab-kumar-deb-marries-kannada-actress-triveni-rao-tagaru-constable-saroja-san/articleshow-aylky56</link>
            <guid isPermaLink="true">https://kannada.asianetnews.com/relationship/biplab-kumar-deb-marries-kannada-actress-triveni-rao-tagaru-constable-saroja-san/articleshow-aylky56</guid>
            <pubDate>Tue, 23 Jun 2026 11:15:37 +0530</pubDate>
            <description><![CDATA[&lt;p&gt;ತ್ರಿಪುರ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಬಿಪ್ಲಬ್&zwnj; ಕುಮಾರ್&zwnj; ದೇಬ್&zwnj;, 'ಟಗರು' ಖ್ಯಾತಿಯ ಕನ್ನಡ ನಟಿ ತ್ರಿವೇಣಿ ರಾವ್&zwnj; ಅವರನ್ನು ಗುಟ್ಟಾಗಿ ವಿವಾಹವಾಗಿದ್ದಾರೆ. ಇದು 54 ವರ್ಷದ ಬಿಪ್ಲಬ್&zwnj; ಅವರ ಎರಡನೇ ಮದುವೆಯಾಗಿದ್ದು, ತಾಯಿಯ ಒತ್ತಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsfx0zrqvgtknk7cw6hesy9,imgname-biplab-kumar-deb-marries-kannada-actress-triveni-rao-1782193226744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.23): &lt;/strong&gt;ತ್ರಿಪುರ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಬಿಪ್ಲಬ್&zwnj; ಕುಮಾರ್&zwnj; ದೇಬ್&zwnj;, ಕರ್ನಾಟಕದ ಅಳಿಯನಾಗಿದ್ದಾರೆ. ಜೂನ್&zwnj; 19 ರಂದು ಕರ್ನಾಟಕ ಮೂಲದ ನಟಿ ತ್ರಿವೇಣಿ ರಾವ್&zwnj; ಅವರನ್ನು ಗುಟ್ಟಾಗಿ ವಿವಾಹವಾಗಿದ್ದಾರೆ. ಟಗರು ಸಿನಿಮಾದಲ್ಲಿ ಕಾನ್ಸ್&zwnj;ಟೇಬಲ್&zwnj; ಸರೋಜ ಪಾತ್ರದಿಂದಲೇ ಜನಪ್ರಿಯವಾಗಿರುವ ತ್ರಿವೇಣಿ ರಾವ್&zwnj;, ಪುನೀತ್&zwnj; ಜೊತೆ ಯುವರತ್ನ ಸಿನಿಮಾದಲ್ಲೂ ನಟಿಸಿದ್ದರು. 54 ವರ್ಷದ ಬಿಪ್ಲಬ್&zwnj; ಕುಮಾರ್&zwnj;ಗೆ ಇದು 2ನೇ ಮದುವೆ. 2001ರಲ್ಲಿ ನೀತಿ ದೇಬ್&zwnj;ರನ್ನು ವಿವಾಹವಾಗಿದ್ದ ಬಿಪ್ಲಬ್&zwnj; ಕಳೆದ ವರ್ಷದ ಸೆಪ್ಟೆಂಬರ್&zwnj;ನಲ್ಲಿ ತಮ್ಮ ದೀರ್ಘಕಾಲದ ದಾಂಪತ್ಯವನ್ನು ವಿಚ್ಛೇದನದ ಮೂಲಕ ಕೊನೆ ಮಾಡಿದ್ದರು. ಈ ವಿವಾಹದಿಂದ ಆರ್ಯನ್&zwnj; ದೇಬ್&zwnj; ಹಾಗೂ ಶ್ರೇಯಾ ದೇಬ್&zwnj; ಹೆಸರಿನ ಮಕ್ಕಳನ್ನೂ ಬಿಪ್ಲಬ್&zwnj; ಹೊಂದಿದ್ದಾರೆ.&lt;/p&gt;&lt;p&gt;ಹಾಗಂತ ಇವರಿಬ್ಬರ ಸಂಸಾರ ಹಠಾತ್&zwnj; ಆಗಿ ಮುರಿದುಬಿದ್ದಿದ್ದಲ್ಲ. 2019ರ ಏಪ್ರಿಲ್&zwnj;ನಲ್ಲೇ ಬಿಪ್ಲಬ್&zwnj; ಕುಮಾರ್&zwnj; ವಿರುದ್ಧ ಕಿರುಕುಳದ ಆರೋಪವನ್ನೂ ನೀತಿ ಮಾಡಿದ್ದರು. ಇದರ ಬೆನ್ನಲ್ಲಿಯೇ ಆಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದೂ ಸುದ್ದಿಯಾಗಿತ್ತು. ಅಂದು ಈ ವೈರಲ್&zwnj; ನ್ಯೂಸ್&zwnj;ಅನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದ ನೀತಿ ದೇಬ್&zwnj;, 'ಗಾಸಿಪ್ ಅಥವಾ ವದಂತಿಗಳಿಗೆ ಸ್ವಂತ ಬಾಯಿ ಇರುವುದಿಲ್ಲ. ಕೇವಲ ಅಗ್ಗದ ಪ್ರಚಾರ ಮತ್ತು ಮೈಲೇಜ್ ಪಡೆಯುವುದಕ್ಕಾಗಿ ಕೆಲವೇ ಕೆಲವು ಕೊಳಕು, ವಿಕೃತ ಮತ್ತು ವಿಕಾರ ಮನಸ್ಸಿನ ಜನ ಇಂತಹ ವದಂತಿಗಳನ್ನು ಸೃಷ್ಟಿಸುತ್ತಾರೆ. ಅದರಲ್ಲೂ ಮುಖ್ಯವಾಗಿ, ಪ್ರಭಾವಿ ವ್ಯಕ್ತಿಗಳ ವಿರುದ್ಧ ರಾಜಕೀಯ ಲಾಭವನ್ನು ಪಡೆಯಲು ಮತ್ತು ಇಂತಹ ಗಲೀಜು ವದಂತಿಗಳನ್ನು ಹರಡಲು ದೊಡ್ಡ ಮಟ್ಟದ ಹಣವನ್ನು ಪಡೆದಾಗ ಇಂತಹ ಕೃತ್ಯವೆಸಗುತ್ತಾರೆ; ಇಲ್ಲದಿದ್ದರೆ ಇಂತಹ ಅಪರಾಧಿಗಳನ್ನು ಯಾರು ತಾನೇ ಫಾಲೋ ಮಾಡುತ್ತಾರೆ ಹೇಳಿ' ಎಂದು ಬರೆದುಕೊಂಡಿದ್ದರು.&lt;/p&gt;&lt;h2&gt;&lt;strong&gt;ತಾಯಿಯ ಆಸೆಯಂತೆ ಮತ್ತೊಂದು ಮದುವೆ&lt;/strong&gt;&lt;/h2&gt;&lt;p&gt;ಆಕೆ ಈ ವಿಚಾರವನ್ನೂ ಅಲ್ಲಗಳೆದಿದ್ದರು. ಇದಾದ 6 ವರ್ಷಕ್ಕೆ ಅವರು ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಇನ್ನು ಬಿಪ್ಲಬ್&zwnj; ಕುಮಾರ್&zwnj;ಗೆ ಮತ್ತೊಂದು ಮದುವೆಯಾಗುವ ಆಸೆಯೇ ಇರಲಿಲ್ಲ. ರಾಜಕೀಯ ಚಟುವಟಿಕೆಗಳಲ್ಲಿಯೇ ಅವರು ಬ್ಯುಸಿಾಗಿದ್ದರು. ಆದರೆ, ಕುಟುಂಬದವರು ಅದರಲ್ಲೂ ಬಿಪ್ಲಬ್&zwnj; ಅವರ ತಾಯಿ ಪದೇ ಪದೇ ಬಿಪ್ಲಬ್&zwnj;ಗೆ ಮತ್ತೊಂದು ಮದುವೆಯಾಗುವಂತೆ ಒತತಾಯ ಮಾಡುತ್ತಿದ್ದರು. ಅದಾದ ಬಳಿಕವೇ ತಾಯಿಯ ಆಸೆಗೆ ಗೌರವ ನೀಡಿ ಮತ್ತೊಂದು ಮದುವೆಗೆ ಒಕೆ ಎಂದಿದ್ದರು.&lt;/p&gt;&lt;p&gt;ತ್ರಿಪುರ ರಾಜಕೀಯದಲ್ಲಿ ಫೇಮಸ್&zwnj; ಹೆಸರಾಗಿರುವ ಬಿಪ್ಲಬ್&zwnj; ದೇಬ್&zwnj;, ತಮ್ಮ ಜೀವನದ ಬಹುಪಾಲು ಸಮಯವನ್ನು ದೆಹಲಿಯಲ್ಲಿ ಕಳೆದಿದ್ದರು. ರಾಜಕೀಯಕ್ಕೆ ಬರುವ ಮುನ್ನ ಅವರು ದೆಹಲಿಯಲ್ಲಿ ಜಿಮ್&zwnj; ಟ್ರೇನರ್&zwnj; ಆಗಿ ಕೆಲಸ ಮಾಡಿದ್ದರು. ಅಲ್ಲಿಯೇ ಅವರು ಮೊದಲ ಪತ್ನಿ ನೀತಿಯನ್ನು ಭೇಟಿಯಾಗಿದ್ದರು. ಆರಂಭದಲ್ಲಿ ಸ್ನೇಹಿತರಿಂತಿದ್ದ ಇವರು 2001ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.&lt;/p&gt;&lt;p&gt;ಇನ್ನು ತ್ರಿವೇಣಿ ರಾವ್&zwnj; ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರೂ, ಟಗರು ಸಿನಿಮಾದಲ್ಲಿ ಅವರು ಮಾಡಿದ ಕಾನ್ಸ್&zwnj;ಟೇಬಲ್&zwnj; ಸರೋಜ ಪಾತ್ರ ಸತ್&zwnj; ಫೇಮಸ್&zwnj; ಆಗಿತ್ತು.ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವ ಶಿವಣ್ಣನ ಜೊತೆಗೆ 'ಕಾನ್ಸ್ ಟೇಬಲ್ ಸರೋಜ' ಕೆಲಸ ಮಾಡುತ್ತಿರುತ್ತಾಳೆ. ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದರು ರೌಡಿ ಡಾಲಿಗೆ ಸಹಾಯ ಮಾಡುವ ಪಾತ್ರ ಇದಾಗಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/biplab-kumar-deb-marries-kannada-actress-triveni-rao-tagaru-constable-saroja-san/articleshow-aylky56"/>
        </item>
        <item>
            <title><![CDATA[ಕೊಡಗು ನ್ಯಾಯಾಲಯಕ್ಕೆ ಸಹನಾಳ ಈ ಮೇಲ್ ಬಾಂಬ್ ಬೆದರಿಕೆ: ಐಸಿಸ್ ದಾಳಿ ಎಚ್ಚರಿಕೆ, ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ!]]></title>
            <link>https://kannada.asianetnews.com/karnataka-districts/karnataka-news-kodagu-court-receives-cyanide-bomb-and-isis-threat-via-email-gdp/articleshow-79svkr0</link>
            <guid isPermaLink="true">https://kannada.asianetnews.com/karnataka-districts/karnataka-news-kodagu-court-receives-cyanide-bomb-and-isis-threat-via-email-gdp/articleshow-79svkr0</guid>
            <pubDate>Tue, 23 Jun 2026 10:54:38 +0530</pubDate>
            <description><![CDATA[ಮಡಿಕೇರಿ ಜಿಲ್ಲಾ ಪ್ರಧಾನ ನ್ಯಾಯಾಲಯಕ್ಕೆ 'ಸಹನಾ' ಎಂಬ ಹೆಸರಿನಿಂದ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಐಸಿಸ್ ಉಗ್ರರು ಸೈನೈಡ್ ಬಾಂಬ್ ಬಳಸಿ ದಾಳಿ ನಡೆಸುವುದಾಗಿ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳ ಸ್ಥಳದಲ್ಲಿ ತೀವ್ರ ತಪಾಸಣೆ ನಡೆಸುತ್ತಿವೆ. ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಸಿಬ್ಬಂದಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvseqec91c1b5nx9eve9dyre,imgname-kodagu-court-1782191995273.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ: &lt;/strong&gt;ಕೊಡಗು ಜಿಲ್ಲಾ ಪ್ರಧಾನ ನ್ಯಾಯಾಲಯ ಸಂಕೀರ್ಣಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇಂದು ಮಧ್ಯಾಹ್ನ 2 ಗಂಟೆಯ ವೇಳೆಗೆ ಸೈನೈಡ್ ಬಾಂಬ್ ಬಳಸಿ ನ್ಯಾಯಾಲಯವನ್ನು ಸ್ಫೋಟಿಸಲಾಗುವುದು ಹಾಗೂ ಐಸಿಸ್ (ISIS) ಉಗ್ರ ಸಂಘಟನೆಯ ಆತ್ಮ*ಹತ್ಯಾ ಬಾಂಬರ್&zwnj;ಗಳು ದಾಳಿ ನಡೆಸಲಿದ್ದಾರೆ ಎಂದು ಇ-ಮೇಲ್&zwnj;ನಲ್ಲಿ ಎಂದು ಬೆದರಿಕೆ ಹಾಕಲಾಗಿದೆ.&lt;/p&gt;&lt;h2&gt;ಬೆಳ್ಳಂಬೆಳಗ್ಗೆ ಬಂದ ಆಘಾತಕಾರಿ ಇ-ಮೇಲ್&lt;/h2&gt;&lt;p&gt;ಇಂದು ಮುಂಜಾನೆ ಸುಮಾರು 6 ಗಂಟೆಯ ವೇಳೆಗೆ ಕೊಡಗು ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್ ಐಡಿಗೆ ಸಂದೇಶವೊಂದು ಬಂದಿದೆ. 'ಸಹನಾ' ಎಂಬ ಹೆಸರಿನ ಐಡಿಯಿಂದ ಈ ಇ-ಮೇಲ್ ರವಾನೆಯಾಗಿದೆ. ಬೆಳಿಗ್ಗೆ ಕಚೇರಿಗೆ ಬಂದ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದಾಗ ಈ ಆಘಾತಕಾರಿ ಬಾಂಬ್ ಬೆದರಿಕೆ ವಿಷಯ ಬೆಳಕಿಗೆ ಬಂದಿದ್ದು, ತಕ್ಷಣವೇ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.&lt;/p&gt;&lt;h2&gt;ಇ-ಮೇಲ್&zwnj;ನಲ್ಲಿ ಏನಿದೆ?&lt;/h2&gt;&lt;p&gt;ಬಂದಿರುವ ಇ-ಮೇಲ್ ಅತ್ಯಂತ ಸಂವೇದನಾಶೀಲ ಮತ್ತು ಆಕ್ರೋಶದ ಭಾಷೆಯಿಂದ ಕೂಡಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;&lt;strong&gt;ಸೈನೈಡ್ ಬಾಂಬ್ ಸ್ಫೋಟ: &lt;/strong&gt;ಇಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಭೀಕರ 'ಸೈನೈಡ್ ಬಾಂಬ್' ಬಳಸಿ ನ್ಯಾಯಾಲಯವನ್ನು ಉಡಾಯಿಸುವುದಾಗಿ ಬೆದರಿಸಲಾಗಿದೆ.&lt;/p&gt;&lt;p&gt;&lt;strong&gt;ಐಸಿಸ್ ಸುಸೈಡ್ ಬಾಂಬರ್ಸ್: &lt;/strong&gt;ಸ್ಫೋಟದ ಜೊತೆಗೆ ಇಸ್ಲಾಮಿಕ್ ಸ್ಟೇಟ್ (ISIS) ಸಂಘಟನೆಯ ಆತ್ಮ*ಹತ್ಯಾ ಬಾಂಬರ್&zwnj;ಗಳು ದಾಳಿ ನಡೆಸಲು ಬರಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.&lt;/p&gt;&lt;p&gt;&lt;strong&gt;ಪ್ರವಾದಿ ನಿಂದನೆ ಮತ್ತು ಪೊಲೀಸ್ ದೌರ್ಜನ್ಯ:&lt;/strong&gt; ಮೊಹಮ್ಮದ್ ಪೈಗಂಬರ್ ಅವರನ್ನು ನಿಂದಿಸಲಾಗಿದೆ ಹಾಗೂ ಮುಸ್ಲಿಮರ ಮೇಲೆ ಪೊಲೀಸರ ದೌರ್ಜನ್ಯ ನಡೆಯುತ್ತಿದೆ ಎಂದು ಮೇಲ್&zwnj;ನಲ್ಲಿ ಆರೋಪಿಸಲಾಗಿದೆ.&lt;/p&gt;&lt;p&gt;&lt;strong&gt;ರಾಜಕಾರಣಿ ಉದಯನಿಧಿ ಹೆಸರು ಪ್ರಸ್ತಾಪ: &lt;/strong&gt;ತಮಿಳುನಾಡಿನ ಪ್ರಭಾವಿ ರಾಜಕಾರಣಿ ಉದಯನಿಧಿ ಸ್ಟಾಲಿನ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ಕೂಡ ಈ ಇ-ಮೇಲ್&zwnj;ನಲ್ಲಿ ಉಲ್ಲೇಖಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.&lt;/p&gt;&lt;h2&gt;ಸ್ಥಳಕ್ಕೆ ಧಾವಿಸಿದ ಬಾಂಬ್ ಪತ್ತೆ ದಳ; ಆತಂಕದಲ್ಲಿ ಸಿಬ್ಬಂದಿ&lt;/h2&gt;&lt;p&gt;ಬಾಂಬ್ ಬೆದರಿಕೆ ಸುದ್ದಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಕೊಡಗು ಜಿಲ್ಲಾ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಹಾಗೂ ಶ್ವಾನ ದಳ (Dog Squad) ಧಾವಿಸಿದ್ದು, ತಪಾಸಣೆ ತೀವ್ರಗೊಳಿಸಿವೆ. ನ್ಯಾಯಾಲಯದ ಕೊಠಡಿಗಳು, ದಾಖಲೆಗಳ ಕೊಠಡಿ, ಕಚೇರಿ ಆವರಣ ಹಾಗೂ ವಾಹನ ನಿಲ್ದಾಣ ಸೇರಿದಂತೆ ಸಂಕೀರ್ಣದ ಮೂಲೆ ಮೂಲೆಗಳಲ್ಲೂ ಕಟ್ಟುನಿಟ್ಟಿನ ಶೋಧ ಕಾರ್ಯ ನಡೆಸಲಾಗುತ್ತಿದೆ.&lt;/p&gt;&lt;p&gt;ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಒಳಗಿದ್ದ ನ್ಯಾಯಾಧೀಶರು, ವಕೀಲರು ಹಾಗೂ ಸಮಸ್ತ ನ್ಯಾಯಾಲಯದ ಸಿಬ್ಬಂದಿಯನ್ನು ತಕ್ಷಣವೇ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಸದ್ಯ ನ್ಯಾಯಾಧೀಶರು ಮತ್ತು ಸಿಬ್ಬಂದಿ ನ್ಯಾಯಾಲಯದ ಆವರಣದ ಹೊರಗಡೆ ಆತಂಕದಿಂದ ಕಾಯುತ್ತ ನಿಂತಿದ್ದು, ಇಡೀ ಕೋರ್ಟ್ ಸಂಕೀರ್ಣವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಮೇಲ್ ಕಳುಹಿಸಿದ 'ಸಹನಾ' ಯಾರು? ಇದರ ಹಿಂದೆ ಇರುವ ದುಷ್ಕರ್ಮಿಗಳ ಪತ್ತೆಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.&lt;/p&gt;&lt;h2&gt;ಸುದ್ದಿ ಅಪ್ಡೇಟ್&zwnj;&lt;/h2&gt;&lt;p&gt;ಇದೀಗ ಕೊಡಗು ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿದ್ದು ಹುಸಿ ಎಂದು ತಿಳಿದುಬಂದಿದೆ. ಬಾಂಬ್ ಪತ್ತೆ ದಳ ಹುಸಿ ಬಾಂಬ್ ಕರೆ ಎಂಬುದನ್ನು ಬಹಿರಂಗಗೊಳಿಸಿದೆ. ನ್ಯಾಯಾಲಯ ಸಂಕೀರ್ಣದ ಎಲ್ಲೆಡೆ ಶೋಧಿಸಿ ಹುಸಿ ಬಾಂಬ್ ಕರೆ ಎಂದು ಘೋಷಣೆ ಮಾಡಿದೆ. ಆ ಬಳಿಕ ನಿಟ್ಟುಸಿರು ಬಿಟ್ಟ ನ್ಯಾಯಾಧೀಶರು ಮತ್ತು ಸಿಬ್ಬಂದಿ ಮತ್ತು ವಕೀಲರು ಸದ್ಯ ನ್ಯಾಯಾಲಯದ ಕಾರ್ಯಕಲಾಪಕ್ಕೆ ತೆರಳಿದರು.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-news-kodagu-court-receives-cyanide-bomb-and-isis-threat-via-email-gdp/articleshow-79svkr0"/>
        </item>
        <item>
            <title><![CDATA[ಟೀಮ್‌ ಇಂಡಿಯಾ 'ಥ್ರೀ ಸ್ಟಾರ್‌' ಜೆರ್ಸಿ ವೈಭವ್‌ಗೆ ನೀಡಿದ ಕನ್ನಡಿಗ ರಘು, ಹೆಮ್ಮೆಯಿಂದ ಸಂಭ್ರಮಿಸಿದ ಸೂರ್ಯವಂಶಿ]]></title>
            <link>https://kannada.asianetnews.com/gallery/cricket-sports/cricketer-vaibhav-suryavanshi-receives-team-india-jersey-from-raghu-bcci-san-ecihs4t</link>
            <guid isPermaLink="true">https://kannada.asianetnews.com/gallery/cricket-sports/cricketer-vaibhav-suryavanshi-receives-team-india-jersey-from-raghu-bcci-san-ecihs4t</guid>
            <pubDate>Tue, 23 Jun 2026 10:25:43 +0530</pubDate>
            <description><![CDATA[ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಟೀಮ್ ಇಂಡಿಯಾ ಸೇರುವ ಕನಸು ನನಸಾಗಿದೆ. ಬಿಸಿಸಿಐನಿಂದ ಸರ್ಪ್ರೈಸ್ ಬಾಕ್ಸ್&zwnj;ನಲ್ಲಿ ತಮ್ಮ 'ಪ್ಲೇಯರ್ ನಂಬರ್ 532' ಮತ್ತು 'ಜೆರ್ಸಿ ನಂಬರ್ 3' ಇರುವ ನೀಲಿ ಜೆರ್ಸಿಯನ್ನು ಪಡೆದ ಅವರು, ಈ ಭಾವುಕ ಕ್ಷಣದ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsd3exjf5wn9htaqsax7f6c,imgname-vaibhav-suryavanshi--1--1782190291890.jpg" type="image/jpeg" height="390" width="690"/>
            <content:encoded><![CDATA[ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಟೀಮ್ ಇಂಡಿಯಾ ಸೇರುವ ಕನಸು ನನಸಾಗಿದೆ. ಬಿಸಿಸಿಐನಿಂದ ಸರ್ಪ್ರೈಸ್ ಬಾಕ್ಸ್&zwnj;ನಲ್ಲಿ ತಮ್ಮ 'ಪ್ಲೇಯರ್ ನಂಬರ್ 532' ಮತ್ತು 'ಜೆರ್ಸಿ ನಂಬರ್ 3' ಇರುವ ನೀಲಿ ಜೆರ್ಸಿಯನ್ನು ಪಡೆದ ಅವರು, ಈ ಭಾವುಕ ಕ್ಷಣದ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.&lt;img&gt;&lt;p&gt;ಮೊದಲ ದಿನದಿಂದಲೇ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನದಲ್ಲಿ ಕಷ್ಟಪಟ್ಟ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ದೊಡ್ಡ ಕನಸು ಕೊನೆಗೂ ನನಸಾಗಿದೆ. ಭಾರತ ತಂಡವನ್ನು ಪ್ರತಿನಿಧಿಸುವ ಅವರ ಸುದೀರ್ಘ ಜರ್ನಿಯ ಅತ್ಯಂತ ಪ್ರಮುಖ ಮೈಲಿಗಲ್ಲು ಇಂದು ಪೂರ್ಣಗೊಂಡಿದೆ.&lt;/p&gt;&lt;img&gt;&lt;p&gt;ಟೀಮ್ ಇಂಡಿಯಾದ 'ಥ್ರೀ ಸ್ಟಾರ್&zwnj;' ನೀಲಿ ಜೆರ್ಸಿಯನ್ನು ಪಡೆದ ನಂತರ ವೈಭವ್ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. &quot;ಈ ಫೀಲಿಂಗ್ ಅನ್ನು ನನ್ನಿಂದ ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ&quot; ಎಂದು ಅವರು ಅತ್ಯಂತ ಭಾವುಕರಾಗಿ ನುಡಿದಿದ್ದಾರೆ.&lt;/p&gt;&lt;img&gt;&lt;p&gt;ವೈಭವ್ ಸೂರ್ಯವಂಶಿ ಅವರಿಗೆ ಟೀಮ್ ಇಂಡಿಯಾದಲ್ಲಿ 'ಪ್ಲೇಯರ್ ನಂಬರ್ 532' (Player-532) ಎಂಬ ಅಧಿಕೃತ ಸ್ಥಾನ ಸಿಕ್ಕಿದೆ. ಇನ್ನು ಮೈದಾನದಲ್ಲಿ ಅವರು '3' (03) ಸಂಖ್ಯೆಯ ಜೆರ್ಸಿ ಧರಿಸಿ ಅಬ್ಬರಿಸಲಿದ್ದಾರೆ. ಜೆರ್ಸಿಯ ಹಿಂಭಾಗದಲ್ಲಿ ಅವರ ಹೆಸರನ್ನು ಮುದ್ರಿಸಲಾಗಿದೆ.&lt;/p&gt;&lt;img&gt;&lt;p&gt;ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ತೋರಿಸಿರುವಂತೆ, ಬಿಸಿಸಿಐ (BCCI) ಲೋಗೋ ಇರುವ ವಿಶೇಷ ಕಿಟ್ ಬಾಕ್ಸ್ ಅನ್ನು ಹೋಟೆಲ್ ಸಿಬ್ಬಂದಿ ಟ್ರಾಲಿಯ ಮೂಲಕ ವೈಭವ್ ಅವರ ರೂಮ್&zwnj;ಗೆ ತಲುಪಿಸುತ್ತಾರೆ. ಟೀಮ್&zwnj; ಇಂಡಿಯಾ ಸಿಬ್ಬಂದಿ ಆಗಿರುವ ಕರ್ನಾಟಕದ ಉತ್ತರ ಕನ್ನಡದ ಕುಮಟಾ ಮೂಲದ ರಘು ಅವರು ವೈಭವ್&zwnj; ಸೂರ್ಯವಂಶಿ ಅವರ ರೂಮ್&zwnj;ಗೆ ಜೆರ್ಸಿ ಇದ್ದ ಬಾಕ್ಸ್&zwnj;ಅನ್ನು ತಲುಪಿಸಿದ್ದಾರೆ. ಈ ಬಾಕ್ಸ್ ಅನ್ನು ತೆರೆಯುವಾಗ ವೈಭವ್ ಅವರ ಮುಖದಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು.&lt;/p&gt;&lt;img&gt;&lt;p&gt;ಬಾಕ್ಸ್ ಓಪನ್ ಮಾಡಿ ಇಂಡಿಯನ್ ಜೆರ್ಸಿಯನ್ನು ಕೈಗೆತ್ತಿಕೊಂಡ ತಕ್ಷಣ ವೈಭವ್ ಅವರ ಮುಖದಲ್ಲಿ ಹೆಮ್ಮೆಯ ನಗು ಮೂಡಿದೆ. &quot;ಈ ಟೀ ಶರ್ಟ್ ನೋಡಿದ ತಕ್ಷಣ ನನಗೆ ನಗು ತಡೆಯಲು ಸಾಧ್ಯವಾಗಲಿಲ್ಲ, ಅಷ್ಟೊಂದು ಖುಷಿಯಾಯಿತು. ಇದು ಕೇವಲ ಒಂದು ಕನಸಿನಂತೆ ಭಾಸವಾಗುತ್ತಿದೆ&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;&quot;ಕೆಲವೊಮ್ಮೆ ನಾವು ಎಂದಿಗೂ ಊಹಿಸದ ಅದ್ಭುತಗಳು ನಮ್ಮ ಜೀವನದಲ್ಲಿ ನಡೆದುಬಿಡುತ್ತವೆ. ಅದು ಸಂಭವಿಸಿದಾಗ ನಮಗೆ ಹೇಗೆ ರಿಯಾಕ್ಟ್ ಮಾಡಬೇಕೆಂದೇ ತಿಳಿಯುವುದಿಲ್ಲ. ನನ್ನ ಸ್ಥಿತಿಯೂ ಈಗ ಹಾಗೆಯೇ ಆಗಿದೆ&quot; ಎನ್ನುತ್ತಾ ವೈಭವ್ ಸೂರ್ಯವಂಶಿ ಭಾರತ ತಂಡದ 'ಥ್ರೀ ಸ್ಟಾರ್&zwnj;' ಜೆರ್ಸಿ ಮುಟ್ಟಿ ಆನಂದಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/cricket-sports/cricketer-vaibhav-suryavanshi-receives-team-india-jersey-from-raghu-bcci-san-ecihs4t"/>
        </item>
        <item>
            <title><![CDATA[ಪರಿಶುದ್ಧ ಗೋಧಿ ಹಿಟ್ಟು, 100% Pure Juice ಎಂದು ಮಾರಾಟಮಾಡ್ತಿದ್ದ 2 ಕಂಪೆನಿಗಳಿಗೆ ಭಾರಿ ದಂಡ]]></title>
            <link>https://kannada.asianetnews.com/india-news/ccpa-fines-storia-foods-english-oven-rs-1-lakh-each-for-misleading-100-percent-claims-suc/articleshow-7qlaoxo</link>
            <guid isPermaLink="true">https://kannada.asianetnews.com/india-news/ccpa-fines-storia-foods-english-oven-rs-1-lakh-each-for-misleading-100-percent-claims-suc/articleshow-7qlaoxo</guid>
            <pubDate>Mon, 22 Jun 2026 19:05:02 +0530</pubDate>
            <description><![CDATA[ಗ್ರಾಹಕರನ್ನು ದಾರಿ ತಪ್ಪಿಸುವ '100% ಪ್ಯೂರ್' ಜಾಹೀರಾತುಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಠಿಣ ಕ್ರಮ ಕೈಗೊಂಡಿದೆ. Storia Foods ಮತ್ತು Mrs. Bectors Food ಕಂಪನಿಗಳಿಗೆ ಕಲಬೆರಕೆ ಉತ್ಪನ್ನಗಳ ಮಾರಾಟಕ್ಕಾಗಿ ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ತೆಂಗಿನ ನೀರು, ಜ್ಯೂಸ್, ಗೋಧಿ ಹಿಟ್ಟಿನಂತಹ ಉತ್ಪನ್ನಗಳಲ್ಲಿ ಕಲಬೆರಕೆ ಪತ್ತೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqrmbxrfxk8e65me5ebcpbx,imgname-ccpa-1782135271352.jpg" type="image/jpeg" height="390" width="690"/>
            <content:encoded><![CDATA[&lt;p&gt;ನಮ್ಮ ಪ್ರಾಡಕ್ಟ್ಸ್​ಗಳೆಲ್ಲವೂ ಪರಿಶುದ್ಧ, 100 ಪರ್ಸೆಂಟ್​ ಪ್ಯೂರ್​ ಎಂದೆಲ್ಲಾ ಎಲ್ಲಾ ಕಂಪೆನಿಗಳು ಹೇಳಿಕೊಳ್ಳುವುದು ಮಾಮೂಲೆ. ಆದರೆ 90ಕ್ಕೂ ಅಧಿಕ ಉತ್ಪನ್ನಗಳಲ್ಲಿ ಕಲಬೆರಕೆಯೇ ಆಗುತ್ತಿದೆ. ಇದೇ ಕಾರಣಕ್ಕೆ ಇಂದು ಮಾರಣಾಂತಿಕ ರೋಗಗಳೂ ಬರುತ್ತಿವೆ. ಆದರೆ ಕೆಲವೊಂದು ಉತ್ಪನ್ನಗಳು ಭಾರಿ ಡೇಂಜರ್​ ಆದ ಬಳಿಕ ಅವು ಗಮನಕ್ಕೆ ಬರುತ್ತಿವೆ. ಇದಾಗಲೇ ಕೆಲವೊಂದು ಪದಾರ್ಥಗಳು, ಕೃತಕ ಬಣ್ಣಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರ ಹೊರತಾಗಿಯೂ ಉತ್ಪನ್ನಗಳ ಕಲಬೆರಕೆ ನಿಂತಿಲ್ಲ. ಇವುಗಳನ್ನು ಪ್ರಮೋಟ್​ ಮಾಡಲು ಕೋಟಿ ಕೋಟಿ ಹಣ ಕೊಟ್ಟು ಸಿನಿಮಾ ತಾರೆಯರನ್ನು ಜಾಹೀರಾತಿಗೆ ಬಳಸಿಕೊಳ್ಳುವ ಕಾರಣದಿಂದ ಅವರ ಅಂಧ ಅಭಿಮಾನಿಗಳು ಅವರನ್ನೇ ಫಾಲೋ ಮಾಡುವುದು ನಡೆದೇ ಇದೆ.&lt;/p&gt;&lt;h2&gt;&lt;strong&gt;ಯಾವೆಲ್ಲಾ ಕಂಪೆನಿಗಳಿಗೆ ದಂಡ?&lt;/strong&gt;&lt;/h2&gt;&lt;p&gt;ಇದೀಗ ಕೇಂದ್ರ ಸರ್ಕಾರವು, ಉತ್ಪನ್ನಗಳ ಪ್ಯಾಕೇಜಿಂಗ್&zwnj; ವೆಬ್&zwnj;ಸೈಟ್&zwnj; ಮತ್ತು ಡಿಜಿಟಲ್&zwnj; ವೇದಿಕೆಗಳಲ್ಲಿ ʼ100 ಪರ್ಸೆಂಟ್&zwnj;ʼ ಎಂದು ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿ ವಂಚಿಸುವ ಕಂಪನಿಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹1 ಲಕ್ಷ ದಂಡ ವಿಧಿಸುವಂಥ ಕಠಿಣ ಕ್ರಮ ಕೈಗೊಳ್ಳುತ್ತಿದೆ. Storia Foods &amp;amp; Beverages ಮತ್ತು Mrs. Bectors Food Specialties Ltd. ಮೇಲೆ CCPA ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ಅಲ್ಲದೇ, ಇಂಥ ಆಕ್ಷೇಪಾರ್ಹ ಜಾಹೀರಾತು, ವಹಿವಾಟು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಲಾಗಿದೆ. ಈ ಕುರಿತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಎಲ್ಲವೂ ಕಲಬೆರಕೆ&lt;/strong&gt;&lt;/h3&gt;&lt;p&gt;ಸ್ಟೋರಿಯಾ ಫುಡ್ಸ್ ಅಂಡ್ ಬೆವರೇಜಸ್ ಪ್ರೈ.ಲಿಮಿಟೆಡ್ ವಿರುದ್ಧ CCPA ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದೆ. ಈ ಕಂಪೆನಿ ಪರಿಶುದ್ಧದತೆ ಹೆಸರಿನಲ್ಲಿ ತೆಂಗಿನ ನೀರು, ದಾಳಿಂಬೆ ಜ್ಯೂಸ್ʼ, ಮಿಕ್ಸ್​​ಡ್ ಹಣ್ಣು ಜ್ಯೂಸ್ʼ, ಮಾವಿನ ಜ್ಯೂಸ್&zwnj;, ಪೇರಲ ಜ್ಯೂಸ್ ಎಂದೆಲ್ಲಾ ಮಾರಾಟ ಮಾಡುತ್ತಿದೆ. ಇದನ್ನು ನಂಬಿ ಹಲವರು ಇದನ್ನು ಖರೀದಿ ಮಾಡಿದ್ದಾರೆ. ಸ್ಟೋರಿಯಾದ ಅಧಿಕೃತ ವೆಬ್&zwnj;ಸೈಟ್ (shop.storiafoods.com), ಉತ್ಪನ್ನ ಪ್ಯಾಕೇಜಿಂಗ್&zwnj;ನಲ್ಲಿ ಮತ್ತು Amazon, Flipkart, BigBasket, Blinkit, JioMart ಮತ್ತು Zepto ಸೇರಿದಂತೆ ಇ-ಕಾಮರ್ಸ್ ವೇದಿಕೆಗಳಲ್ಲಿ ಸಹ ಹೀಗೆ ಜಾಹೀರಾತು ಇರುತ್ತಿತ್ತು.&lt;/p&gt;&lt;p&gt;&amp;nbsp;&lt;/p&gt;&lt;p&gt;ತೆಂಗಿನ ನೀರನ್ನು ಬೇರೆ ನೀರಿನೊಂದಿಗೆ ಬೆರೆಸಿ ತಯಾರಿಸಿರುತ್ತಿತ್ತು. ಆದರೆ, ಈ ಉತ್ಪನ್ನ ವರ್ಗ II ಸಂರಕ್ಷಕ INS 202 ಅನ್ನು ಸಹ ಒಳಗೊಂಡಿರುವುದು ತಿಳಿದುಬಂದಿದೆ. ಅದೇ ರೀತಿ ನೈಸರ್ಗಿಕ ಜ್ಯೂಸ್​ ಎಂದು ಹೇಳಿದ ಉತ್ಪನ್ನಗಳೆಲ್ಲಾ ಕಲಬೆರಕೆಯಿಂದ ಕೂಡಿರುವುದು ಪ್ರಯೋಗಾಲದಲ್ಲಿ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲದೇ ಗೋಧಿ ಹಿಟ್ಟನ್ನು ಬಳಸುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದನ್ನು ಬಂಡವಾಳ ಮಾಡಿಕೊಂಡಿರುವ ಈ ಕಂಪೆನಿ ಶುದ್ಧ ಗೋಧಿ ಹಿಟ್ಟು ಎಂದು ಹೇಳಿ ಮೋಸ ಮಾಡುತ್ತಿರುವುದು ತಿಳಿದಿದೆ. ಬ್ರೆಡ್​ನಲ್ಲಿಯೂ ಕಲಬೆರಕೆ ಕಂಡುಬಂದಿದೆ. ಆದ್ದರಿಂದ ಜನರು ಜಾಹೀರಾತುಗಳಿಗೆ ಮೋಸ ಹೋಗಿ ಖರೀದಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/ccpa-fines-storia-foods-english-oven-rs-1-lakh-each-for-misleading-100-percent-claims-suc/articleshow-7qlaoxo"/>
        </item>
        <item>
            <title><![CDATA[NEET ಮರು ಪರೀಕ್ಷೆಯಲ್ಲೂ ಅಕ್ರಮ! ಬಯೋಮೆಟ್ರಿಕ್​ ಸಿಬ್ಬಂದಿ ಜೊತೆಯೇ ಡೀಲ್​- 30 ಮಂದಿ ಅರೆಸ್ಟ್​]]></title>
            <link>https://kannada.asianetnews.com/india-news/9-impersonators-reach-bihar-centre-to-take-neet-re-test-arrested-suc/articleshow-1hh5x54</link>
            <guid isPermaLink="true">https://kannada.asianetnews.com/india-news/9-impersonators-reach-bihar-centre-to-take-neet-re-test-arrested-suc/articleshow-1hh5x54</guid>
            <pubDate>Mon, 22 Jun 2026 19:33:04 +0530</pubDate>
            <description><![CDATA[ನೀಟ್ ಯುಜಿ 2024ರ ಮರುಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳನ್ನು ಬಳಸಿಕೊಂಡ ಬೃಹತ್ ಜಾಲವೊಂದು ಬಿಹಾರದಲ್ಲಿ ಬಯಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮಾಸ್ಟರ್&zwnj;ಮೈಂಡ್, ಡಮ್ಮಿ ಅಭ್ಯರ್ಥಿಗಳು ಮತ್ತು ಬಯೋಮೆಟ್ರಿಕ್ ಸಿಬ್ಬಂದಿ ಸೇರಿದಂತೆ ಒಟ್ಟು 30 ಜನರನ್ನು ಬಂಧಿಸಿದ್ದಾರೆ. ಆರೋಪಿಗಳು ಅಭ್ಯರ್ಥಿಗಳಿಂದ 30 ರಿಂದ 40 ಲಕ್ಷ ರೂಪಾಯಿಗಳವರೆಗೆ ಹಣ ಪಡೆದು ಅಕ್ರಮ ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqt7tqk9gngd9dya7cxr96h,imgname-neet-exam-1782136957683.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್​ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನಿನ್ನೆ ಅರ್ಥಾತ್​ ಜೂನ್​ 21ರಂದು ಮರು ಪರೀಕ್ಷೆ ಮಾಡಲಾಗಿತ್ತು. ಆದರೆ ಶಾಕಿಂಗ್​ ವಿಷ್ಯ ಎಂದರೆ, ಬಿಹಾರದ ಲಖಿಸರೈ ಜಿಲ್ಲೆಯಲ್ಲಿ NEET UG 2026 ಮರುಪರೀಕ್ಷೆಗೆ ನಕಲಿ ಅಭ್ಯರ್ಥಿಗಳನ್ನು ಬಳಸಿಕೊಳ್ಳುವ ಪ್ರಮುಖ ಪಿತೂರಿ ಬಯಲಾಗಿದೆ. ಪೊಲೀಸರು ಇಲ್ಲಿಯವರೆಗೆ ಒಟ್ಟು 30 ಜನರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಒಂಬತ್ತು ಡಮ್ಮಿ ಅಭ್ಯರ್ಥಿಗಳು, ಒಬ್ಬ ಮೂಲ ಅಭ್ಯರ್ಥಿ, ಆರೋಪಿ ನೆಟ್&zwnj;ವರ್ಕ್ ಆಪರೇಟರ್ ಮತ್ತು ಬಯೋಮೆಟ್ರಿಕ್ ಪರಿಶೀಲನೆಯಲ್ಲಿ ತೊಡಗಿರುವ 18 ಉದ್ಯೋಗಿಗಳು ಸೇರಿದ್ದಾರೆ. ಸಾಲ್ವರ್ ಗ್ಯಾಂಗ್&zwnj;ನೊಂದಿಗೆ ₹30 ರಿಂದ 40 ಲಕ್ಷ ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನುವುದು ತಿಳಿದು ಬಂದಿದೆ! ಬಿಹಾರದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಸುಧಾಂಶು ಕುಮಾರ್ ಅವರ ಪ್ರಕಾರ, &quot;ಲಖಿಸರೈ ಜಿಲ್ಲೆಯ ಮೂರು ವಿಭಿನ್ನ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಶೋಧದ ಸಮಯದಲ್ಲಿ ಒಂಬತ್ತು ಡಮ್ಮಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಈ ವ್ಯಕ್ತಿಗಳು ಇತರ ಅಭ್ಯರ್ಥಿಗಳ ಬದಲಿಗೆ NEET UG ಮರುಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ಮಾಹಿತಿ ಪಡೆದ ನಂತರ ಪರೀಕ್ಷಾ ಕೇಂದ್ರಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿತ್ತು. ಬಳಿಕ ಇದು ಬೆಳಕಿಗೆ ಬಂದಿದೆ.&lt;/p&gt;&lt;h2&gt;&lt;strong&gt;ಮಾಸ್ಟರ್&zwnj;ಮೈಂಡ್&zwnj; ಬಂಧನ&lt;/strong&gt;&lt;/h2&gt;&lt;p&gt;ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂಲ ಅಭ್ಯರ್ಥಿ ಸಂಜೀತ್ ಕುಮಾರ್ ಅವರನ್ನು ಸಹ ಬಂಧಿಸಿದ್ದಾರೆ. ಏತನ್ಮಧ್ಯೆ, ಗಯಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಅರ್ಪಿತ್ ರಾಜ್ ಅವರನ್ನು ಈ ಜಾಲದ ಆರೋಪಿ ಸೆಟ್ಟರ್ ಮತ್ತು ಮಾಸ್ಟರ್ ಮೈಂಡ್ ಎಂದು ಬಂಧಿಸಲಾಗಿದೆ. ಅರ್ಪಿತ್ ರಾಜ್ ಡಮ್ಮಿ ಅಭ್ಯರ್ಥಿಗಳನ್ನು ವ್ಯವಸ್ಥೆ ಮಾಡುವುದು, ಅವರನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸುವುದು ಮತ್ತು ಜಾಲದೊಳಗೆ ಸಮನ್ವಯಗೊಳಿಸುವ ಜವಾಬ್ದಾರಿಯನ್ನು ಹೊಂದಿದ್ದರು ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಬಯೋಮೆಟ್ರಿಕ್ ಪರಿಶೀಲನೆ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಬಯೋಮೆಟ್ರಿಕ್ ಪರಿಶೀಲನೆಯಲ್ಲಿ ಭಾಗಿಯಾಗಿರುವ ಹದಿನೆಂಟು ಉದ್ಯೋಗಿಗಳನ್ನು ಬಂಧಿಸಲಾಗಿದೆ. ಅವರ ಪಾತ್ರ ನಿರ್ಲಕ್ಷ್ಯಕ್ಕೆ ಸೀಮಿತವಾಗಿದೆಯೇ ಅಥವಾ ಅವರು ಉದ್ದೇಶಪೂರ್ವಕವಾಗಿ ಆರೋಪಿ ಪರಿಹಾರಕ ಗ್ಯಾಂಗ್&zwnj;ಗೆ ಸಹಾಯ ಮಾಡಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಲಕ್ಷಾಂತರ ರೂಪಾಯಿ ಅಕ್ರಮ&lt;/strong&gt;&lt;/h3&gt;&lt;p&gt;ಈ ಜಾಲವು ಅಭ್ಯರ್ಥಿಗಳಿಂದ ದೊಡ್ಡ ಮೊತ್ತದ ಹಣವನ್ನು ಸ್ವೀಕರಿಸುವ ಮೂಲಕ ಅವರ ಬದಲಿಗೆ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದೆ ಎಂದು ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ. 10 ರಿಂದ 12 ಲಕ್ಷ ರೂಪಾಯಿಗಳಿಂದ 30 ರಿಂದ 40 ಲಕ್ಷ ರೂಪಾಯಿಗಳವರೆಗಿನ ವ್ಯವಹಾರಗಳು ವಿವಿಧ ಹಂತಗಳಲ್ಲಿ ವರದಿಯಾಗಿವೆ. ಆದಾಗ್ಯೂ, ಮೊತ್ತ ಮತ್ತು ಒಪ್ಪಂದಗಳ ಎಲ್ಲಾ ಅಂಶಗಳ ಬಗ್ಗೆ ತನಿಖೆ ಇನ್ನೂ ಮುಂದುವರೆದಿದೆ. ವಿಮ್ಸಾಸ್ ಪವಾಪುರಿಯ ವಿದ್ಯಾರ್ಥಿ ರವಿಶಂಕರ್ ಕುಮಾರ್ ಅವರ ಹೆಸರೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಪ್ರಕಾರ, ರವಿಶಂಕರ್ ಪರೀಕ್ಷೆಗೆ ಒಂದು ದಿನ ಮೊದಲು ಹಾಸ್ಟೆಲ್&zwnj;ನಿಂದ ಹೊರಬಂದರು ಮತ್ತು ತನಿಖೆಗೆ ಬಂದ ಪೊಲೀಸ್ ತಂಡಕ್ಕೆ ಅವರ ಕೋಣೆಯಲ್ಲಿ ಸಿಗಲಿಲ್ಲ.&lt;/p&gt;&lt;p&gt;ಮಾರ್ಚ್&zwnj;ನಲ್ಲಿ ನೀಟ್ ಯುಜಿ ಪರೀಕ್ಷೆಯ ಸಮಯದಲ್ಲಿ ಕತಿಹಾರ್&zwnj;ನಲ್ಲಿ ಸಿಕ್ಕಿಬಿದ್ದ ಆರೋಪದ ಸಾಲ್ವರ್ ಗ್ಯಾಂಗ್&zwnj;ನಲ್ಲಿ ಪವಾಪುರಿ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಕೆಲವು ವಿದ್ಯಾರ್ಥಿಗಳ ಹೆಸರುಗಳು ಸಹ ಕಾಣಿಸಿಕೊಂಡಿವೆ. ಆ ಪ್ರಕರಣದಲ್ಲಿ ಉಜ್ವಲ್ ಕುಮಾರ್ ಅಲಿಯಾಸ್ ರಾಜಾ ಬಾಬು ಮತ್ತು ಅವಧೇಶ್ ಕುಮಾರ್ ಕೂಡ ಸುದ್ದಿಯಲ್ಲಿದ್ದರು. ಈಗ, ಲಖಿಸರಾಯ್ ಮರುಪರೀಕ್ಷಾ ಪ್ರಕರಣದಲ್ಲಿ ರವಿಶಂಕರ್ ಕುಮಾರ್ ಹೆಸರು ಹೊರಹೊಮ್ಮುತ್ತಿರುವುದರಿಂದ, ತನಿಖೆಯ ವ್ಯಾಪ್ತಿ ವಿಸ್ತರಿಸಿದೆ. ಬಿಹಾರದ ಹೊರತಾಗಿ ಇತರ ರಾಜ್ಯಗಳ ವೈದ್ಯಕೀಯ ಸಂಸ್ಥೆಗಳೊಂದಿಗೆ ಜಾಲಕ್ಕೆ ಸಂಪರ್ಕವಿದೆಯೇ ಎಂದು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಬಂಧಿತ ಮತ್ತು ಶಂಕಿತ ವ್ಯಕ್ತಿಗಳಲ್ಲಿ ಕೆಲವು ವೈದ್ಯಕೀಯ ವಿದ್ಯಾರ್ಥಿಗಳು ಕಾಣಿಸಿಕೊಂಡಿದ್ದಾರೆ. ಪೊಲೀಸರು ಹಲವಾರು ಮೊಬೈಲ್ ಫೋನ್&zwnj;ಗಳು, ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅವರ ಬಗ್ಗೆ ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ.&lt;/p&gt;&lt;p&gt;ಕಾರ್ಯಾಚರಣೆಯ ಸಮಯದಲ್ಲಿ, ಸರ್ಕಾರಿ ಪ್ರೌಢಶಾಲೆ ಹಸನ್&zwnj;ಪುರ, ಕೇಂದ್ರೀಯ ವಿದ್ಯಾಲಯ ಲಖಿಸರೈ ಮತ್ತು ಇತರ ಪರೀಕ್ಷಾ ಕೇಂದ್ರಗಳಿಂದ ಶಂಕಿತರನ್ನು ಬಂಧಿಸಲಾಯಿತು. ಪೊಲೀಸರು ಹಲವಾರು ಮೊಬೈಲ್ ಫೋನ್&zwnj;ಗಳು, ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳನ್ನು ಸಹ ವಶಪಡಿಸಿಕೊಂಡರು. ವಿಚಾರಣೆಯಲ್ಲಿ ಈ ಜಾಲವು ಬಿಹಾರಕ್ಕೆ ಸೀಮಿತವಾಗಿಲ್ಲ, ಆದರೆ ಇತರ ರಾಜ್ಯಗಳ ವೈದ್ಯಕೀಯ ಸಂಸ್ಥೆಗಳಿಗೂ ವಿಸ್ತರಿಸಿದೆ ಎಂದು ತಿಳಿದುಬಂದಿದೆ. ಪೊಲೀಸ್ ತನಿಖೆಗಳ ಪ್ರಕಾರ, ಅರ್ಪಿತ್ ರಾಜ್ ಈ ಸಂಪೂರ್ಣ ಜಾಲದ ಮಾಸ್ಟರ್&zwnj;ಮೈಂಡ್ ಎಂದು ಆರೋಪಿಸಲ್ಪಟ್ಟಿದ್ದಾನೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ವಿವಾದಗಳಲ್ಲಿ ಅರ್ಪಿತ್ ರಾಜ್ ಈ ಹಿಂದೆ ಭಾಗಿಯಾಗಿದ್ದಾನೆ. ಮರು ಪರೀಕ್ಷೆಯ ಸಮಯದಲ್ಲಿ, ಭದ್ರತಾ ಸಂಸ್ಥೆಗಳು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದವು, ಇದು ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ಕಣ್ಗಾವಲು ಮತ್ತು ದಾಳಿಗಳನ್ನು ಹೆಚ್ಚಿಸಲಾಗಿತ್ತು.&lt;/p&gt;&lt;h2&gt;&lt;strong&gt;ಪ್ರಮುಖ ಪಾತ್ರ&lt;/strong&gt;&lt;/h2&gt;&lt;p&gt;ಬಂಧಿತರಲ್ಲಿ ಪಿಎಂಸಿಎಚ್&zwnj;ನ ಮಾಯಾಂಕ್ ಉಪಾಧ್ಯಾಯ ಅವರ ಹೆಸರು ಪ್ರಮುಖವಾಗಿ ಹೊರಹೊಮ್ಮಿದೆ. ಅವರು ಪಟ್ನಾದ ಪಿಎಂಸಿಎಚ್&zwnj;ನ ವಿದ್ಯಾರ್ಥಿ ಎಂದು ಹೇಳಲಾಗಿದೆ. ಅಭ್ಯರ್ಥಿಗಳು ಮತ್ತು ಪರಿಹಾರಕಾರರ ನಡುವೆ ಸಮನ್ವಯದಲ್ಲಿ ಮಾಯಾಂಕ್ ಪಾತ್ರ ವಹಿಸಿದ್ದಾರೆ ಎಂದು ತನಿಖಾ ಸಂಸ್ಥೆಗಳು ಹೇಳಿಕೊಂಡಿವೆ. ಬಯೋಮೆಟ್ರಿಕ್ ಮತ್ತು ಗುರುತಿನ ಪರಿಶೀಲನೆಗೆ ಸಂಬಂಧಿಸಿದ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೂನಂ ಕುಮಾರಿ ಅವರನ್ನು ಸಹ ಬಂಧಿಸಲಾಗಿದೆ. ರಾಯ್ ಬರೇಲಿ ಏಮ್ಸ್ ನ ವಿದ್ಯಾರ್ಥಿ ಎಂದು ಹೇಳಲಾಗುವ ಸೌರಭ್ ಎಸ್ ಎಂಬ ಯುವಕನನ್ನೂ ಪೊಲೀಸರು ಬಂಧಿಸಿದ್ದಾರೆ. ಇದರ ಜೊತೆಗೆ, ಉತ್ತರ ಪ್ರದೇಶ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಅಮನ್ ಅಗರ್ವಾಲ್ ನನ್ನು ಕೂಡ ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಕೆಲವು ವೈದ್ಯಕೀಯ ವಿದ್ಯಾರ್ಥಿಗಳನ್ನು ಪರೀಕ್ಷಾ ಮಾಫಿಯಾ ಪರಿಹಾರಕರಾಗಿ ಬಳಸಿಕೊಳ್ಳುತ್ತಿದೆ ಎಂದು ತನಿಖಾ ಸಂಸ್ಥೆಗಳು ನಂಬಿವೆ.&lt;/p&gt;&lt;p&gt;ಪೊಲೀಸ್ ಅಧಿಕಾರಿಗಳ ಪ್ರಕಾರ, ತನಿಖೆ ಮುಂದುವರೆದಿದ್ದು, ಭವಿಷ್ಯದಲ್ಲಿ ಹೆಚ್ಚಿನ ಜನರ ಪಾತ್ರ ಬಹಿರಂಗಗೊಳ್ಳಬಹುದು. ಎಲ್ಲಾ ಶಂಕಿತ ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರಗಳಲ್ಲಿನ ವ್ಯವಸ್ಥೆಗಳು, ಬಯೋಮೆಟ್ರಿಕ್ ಪ್ರಕ್ರಿಯೆ ಮತ್ತು ಜಾಲದಲ್ಲಿ ಭಾಗಿಯಾಗಿರುವವರ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಪರೀಕ್ಷೆಯ ಪಾರದರ್ಶಕತೆಗೆ ಧಕ್ಕೆ ತರುವ ಯಾರನ್ನೂ ಬಿಡಲಾಗುವುದಿಲ್ಲ ಎಂದು ಪೊಲೀಸರು ಹೇಳುತ್ತಾರೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/9-impersonators-reach-bihar-centre-to-take-neet-re-test-arrested-suc/articleshow-1hh5x54"/>
        </item>
        <item>
            <title><![CDATA[ನಿರ್ಮಾಪಕರಿಗೆ ಶಿಕ್ಷಣ ಅಗತ್ಯ: Actor Sathish Ninasam ಮಾತಿಗೆ ಕೆನಲಿ ಕೆಂಡವಾದ ನಿರ್ಮಾಪಕರು!]]></title>
            <link>https://kannada.asianetnews.com/sandalwood/actor-sathish-ninasam-producers-need-education-controversy-press-conference/articleshow-twsitgs</link>
            <guid isPermaLink="true">https://kannada.asianetnews.com/sandalwood/actor-sathish-ninasam-producers-need-education-controversy-press-conference/articleshow-twsitgs</guid>
            <pubDate>Mon, 22 Jun 2026 20:42:16 +0530</pubDate>
            <description><![CDATA[&lt;p&gt;Actor Sathish Ninasam Press Conference: ಇತ್ತೀಚೆಗೆ ಅಯೋಗ್ಯ 2 ಸಿನಿಮಾದ ಹಾಡಿನ ರಿಲೀಸ್&zwnj; ಆಗಿದೆ. ಆ ವೇಳೆ ಕನ್ನಡ ಸಿನಿಮಾಗಳ ಅಳಿವು ಉಳಿವಿನ ಬಗ್ಗೆ ಸತೀಶ್&zwnj; ನೀನಾಸಂ ಅವರು ಮಾತನಾಡುತ್ತ, ನಿರ್ಮಾಪಕರಿಗೆ ಎಜ್ಯುಕೇಶನ್&zwnj; ಬೇಕು ಎಂದಿದ್ದಾರೆ. ಈ ಬಗ್ಗೆ ದೊಡ್ಡ ಚರ್ಚೆ ಆಗಿದ್ದು,&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqy5bc00rr422wz6803gz2z,imgname-new-project---2026-06-22t203817.523-1782141070720.jpg" type="image/jpeg" height="390" width="690"/>
            <content:encoded><![CDATA[&lt;p&gt;Actor Sathish Ninasam Press Conference: &lsquo;ಅಯೋಗ್ಯ 2 ಚಿತ್ರದ ಆಡಿಯೋ ಕಾರ್ಯಕ್ರಮದಲ್ಲಿ &lsquo;ಸಿನಿಮಾ ಸೋಲುತ್ತದೆ ಎಂಬುದು ಗೊತ್ತಿದ್ದ ಮೇಲೂ ಯಾಕೆ ಸಿನಿಮಾ ಮಾಡಬೇಕು? ನಿರ್ಮಾಪಕರಿಗೆ ಶಿಕ್ಷಣದ ಅವಶ್ಯಕತೆ ಇದೆ&rsquo; ಎಂದು ನಟ ಸರೀಶ್&zwnj; ನೀನಾಸಂ ಅವರು ಹೇಳಿದ್ದರು. ಈ ಮಾತು ದೊಡ್ಡ ಚರ್ಚೆ ಆಯ್ತು.&lt;/p&gt;&lt;h2&gt;ವಿಡಿಯೋ ಮಾಡಿ ಕ್ಷಮೆ ಕೇಳಿದ್ರು!&amp;nbsp;&lt;/h2&gt;&lt;p&gt;ನಿರ್ಮಾಪಕರ ಬಗ್ಗೆ ತಾನು ಹೇಳಿದ ಮಾತಿಗೆ ನಟ ಸತೀಶ್&zwnj; ನೀನಾಸಂ ಅವರು ವಿಡಿಯೋ ಮಾಡಿ ಕ್ಷಮೆಯಾಚನೆ ಕೂಡ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಸತೀಶ್&zwnj; ನೀನಾಸಂ, &lsquo;ನಿರ್ಮಾಪಕರು ಶಿಕ್ಷಣ ಕಲಿತು ಚಿತ್ರರಂಗಕ್ಕೆ ಬರಲಿ ಎಂದು ಹೇಳಿದ ಮಾತಿನ ಅರ್ಥ ಶಾಲೆಯ ಶಿಕ್ಷಣವಲ್ಲ. ಬದಲಿಗೆ ಕತೆ, ನಿರ್ಮಾಣದ ಪ್ರಕ್ರಿಯೆ, ಹೂಡಿಕೆ ಇತ್ಯಾದಿಗಳ ಬಗ್ಗೆ ಚಿತ್ರರಂಗಕ್ಕೆ ಬರುತ್ತಿರುವ ಹೊಸ ನಿರ್ಮಾಪಕರಿಗೆ ತಿಳುವಳಿಕೆ ಅಗತ್ಯ ಎನ್ನುವ ಹಿನ್ನೆಲೆಯಲ್ಲಿ ನಾನು &lsquo;ಎಜುಕೇಷನ್&zwnj;&rsquo; ಎನ್ನುವ ಪದ ಬಳಸಿದ್ದೇನೆ. ಆದರೂ ನನ್ನ ಮಾತುಗಳಿಂದ ನಿರ್ಮಾಪಕರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತಿದ್ದೇನೆ&rsquo; ಎಂದಿದ್ದಾರೆ.&lt;/p&gt;&lt;p&gt;ಇನ್ನೂ ಸತೀಶ್&zwnj; ನೀನಾಸಂ ಅವರ ಹೇಳಿಕೆಯನ್ನು ಖಂಡಿಸಿ ಸೋಮವಾರ ನಿರ್ಮಾಪಕರ ಸಂಘ ಕೂಡ ಪತ್ರಿಕಾಗೋಷ್ಟಿ ಕರೆದಿತ್ತು. ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ ಹಾಗೂ ಪ್ರಮುಖರಾದ ಭಾ ಮ ಹರೀಶ್&zwnj;, ನಂದಿಹಾಳು, ಅವಿನಾಶ್&zwnj; ಶೆಟ್ಟಿ, ಟೇಶಿ ವೆಂಕಟೇಶ್&zwnj;, ಮಾಲತಿ ಗೌಡ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.&amp;nbsp;&lt;/p&gt;&lt;h2&gt;ಸುದ್ದಿಗೋಷ್ಠಿಯಲ್ಲಿ ಏನಾಯ್ತು?&lt;/h2&gt;&lt;p&gt;ಪತ್ರಿಕಾಗೋಷ್ಟಿಗೂ ಆಗಮಿಸಿದ್ದ ಸತೀಶ್&zwnj; ನೀನಾಸಂ, &lsquo;ಯಾರನ್ನೂ ನೋಯಿಸುವ ವ್ಯಕ್ತಿತ್ವ ನನ್ನದಲ್ಲ. ನಿರ್ಮಾಪಕರು ಇದ್ದರೆನೇ ಚಿತ್ರರಂಗ. ನಾನು ಕೂಡ ನಿರ್ಮಾಪಕನಾಗಿ ಸೋತವನು. ಆ ಸೋಲಿನಿಂದ ಕಲಿಯಲು ನನಗೇ ಸಾಕಷ್ಟು ಸಮಯ ಬೇಕಾಯಿತು. ಹೊಸ ನಿರ್ಮಾಪಕರುಗಳು ಚಿತ್ರರಂಗಕ್ಕೆ ಬಂದು ನಷ್ಟ ಅನುಭವಿಸಬಾರದು ಎಂಬ ಕಾಳಜಿಯಿಂದ ಆ ಮಾತು ಹೇಳಿದ್ದೇನೆ&rsquo; ಎಂದರು.&lt;/p&gt;&lt;h2&gt;ಪತ್ರಿಕಾಗೋಷ್ಠಿಯಲ್ಲಿ ಏನಾಯ್ತು?&lt;/h2&gt;&lt;p&gt;&ldquo;ಸತೀಶ್&zwnj; ನೀನಾಸಂ ಅವರ ಮಾತಿನಲ್ಲಿ ತಪ್ಪೇನಿದೆ&rsquo; ಎಂದು ಪತ್ರಕರ್ತರು ಪ್ರಶ್ನಿಸಿದ್ದರಿಂದ ನಿರ್ಮಾಪಕರ ಸಂಘದ ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕರಿಗೂ ಹಾಗೂ ಮಾಧ್ಯಮಗಳ ನಡುವೆ ಮಾತಿನ ಚಕಮಕಿ ನಡೆಯಿತು. &lsquo;ನಿರ್ಮಾಪಕರ ಮೇಲಿನ ಕಾ&zwj;ಳಜಿಯಿಂದ ಹೇಳಿರುವ ಮಾತುಗಳನ್ನು ಖಂಡಿಸುವ ನಿರ್ಮಾಪಕರ ಸಂಘ, ಚಿತ್ರರಂಗದ ಮನವಿ ಮೇರೆಗೆ ಏಕದರ ಟಿಕೆಟ್&zwnj; ರೇಟು ನಿಗದಿ ಮಾಡಿದ್ದರ ವಿರುದ್ಧ ಕೋರ್ಟ್&zwnj;ಗೆ ಹೋದ ನಿರ್ಮಾಣ ಸಂಸ್ಥೆಯ ಬಗ್ಗೆ ಮಾತನಾಡುವುದಿಲ್ಲ ಯಾಕೆ&rsquo; ಎನ್ನುವ ಮಾಧ್ಯಮಗಳ ಪ್ರಶ್ನೆ ತೀವ್ರ ಚರ್ಚೆಗೆ ಕಾರಣವಾಯಿತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/sandalwood/actor-sathish-ninasam-producers-need-education-controversy-press-conference/articleshow-twsitgs"/>
        </item>
        <item>
            <title><![CDATA[ಚಿಕ್ಕಮಗಳೂರು: ಆಶ್ರಮ ಶಾಲೆಯ ಸಿಬ್ಬಂದಿ ನಿರ್ಲಕ್ಷ್ಯ, ತಡರಾತ್ರಿ ಗಲಾಟೆಗೆ ಹೆದರಿ ಓಡಿಹೋದ 4 ಪುಟ್ಟ ಮಕ್ಕಳು!]]></title>
            <link>https://kannada.asianetnews.com/karnataka-districts/chikkamagaluru-4-hostel-kids-escape-after-midnight-clash-staff-negligence-blamed-gdp/articleshow-690le0t</link>
            <guid isPermaLink="true">https://kannada.asianetnews.com/karnataka-districts/chikkamagaluru-4-hostel-kids-escape-after-midnight-clash-staff-negligence-blamed-gdp/articleshow-690le0t</guid>
            <pubDate>Tue, 23 Jun 2026 10:01:04 +0530</pubDate>
            <description><![CDATA[ಚಿಕ್ಕಮಗಳೂರು ತಾಲೂಕಿನ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ, ಹಾಸ್ಟೆಲ್ ಗಲಾಟೆಯಿಂದ ಭಯಭೀತರಾದ ನಾಲ್ವರು ಮಕ್ಕಳು ತಡರಾತ್ರಿ ಪಲಾಯನ ಮಾಡಲು ಯತ್ನಿಸಿದ್ದಾರೆ. ಸುಮಾರು 2 ಕಿ.ಮೀ ನಡೆದ ಮಕ್ಕಳನ್ನು ಸ್ಥಳೀಯರು ರಕ್ಷಿಸಿ ಮರಳಿ ಶಾಲೆಗೆ ಒಪ್ಪಿಸಿದ್ದು, ಈ ಘಟನೆಯು ಶಾಲಾ ಸಿಬ್ಬಂದಿಯ ಘೋರ ನಿರ್ಲಕ್ಷ್ಯವನ್ನು ಬಯಲು ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsbt0qr9117ebpvq5cgn9vs,imgname-chikkamagaluru-ashram-school-incident-1782188933880.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಜಿಲ್ಲೆಯ ತಾಲೂಕಿನ ತುಡುಕೂರು ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಘೋರ ನಿರ್ಲಕ್ಷ್ಯ ಎದ್ದು ಕಾಣುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಯ ಆವರಣದಲ್ಲಿ ಪುಟ್ಟ ಮಕ್ಕಳು ತಡರಾತ್ರಿ ಎಸ್ಕೇಪ್ ಆಗಲು ಯತ್ನಿಸಿದ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.&lt;/p&gt;&lt;h2&gt;ತಡರಾತ್ರಿ ನಡೆದಿದ್ದೇನು?&lt;/h2&gt;&lt;p&gt;ಮೂಲಗಳ ಪ್ರಕಾರ, ನಿನ್ನೆ ತಡರಾತ್ರಿ ವಸತಿ ಶಾಲೆಯ ಹಾಸ್ಟೆಲ್&zwnj;ನಲ್ಲಿ ಮಕ್ಕಳ ನಡುವೆ ಸಣ್ಣದಾಗಿ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಈ ಗಲಾಟೆಯಿಂದ ತೀವ್ರವಾಗಿ ಭಯಗೊಂಡ ಉತ್ತರ ಕರ್ನಾಟಕ ಮೂಲದ ನಾಲ್ವರು ಪುಟ್ಟ ಮಕ್ಕಳು, ಆಶ್ರಮದಲ್ಲಿ ತಮಗೇನಾಗುತ್ತದೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ವಾರ್ಡನ್ ಹಾಗೂ ಅಲ್ಲಿನ ಸಿಬ್ಬಂದಿ ಮಕ್ಕಳ ನಡುವಿನ ಗಲಾಟೆಯನ್ನು ಶಾಂತಗೊಳಿಸುವಲ್ಲಿ ಅಥವಾ ಮಕ್ಕಳಿಗೆ ಧೈರ್ಯ ತುಂಬುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ, ಭಯಭೀತರಾದ ಮಕ್ಕಳು ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ತಮ್ಮ ಮನೆಗೆ ಸೇರಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.&lt;/p&gt;&lt;h2&gt;ಮುಂಜಾನೆ ರಸ್ತೆ ಹಿಡಿದ ಪುಟ್ಟ ಮಕ್ಕಳು&lt;/h2&gt;&lt;p&gt;ಭಯದ ನೆರಳಿನಲ್ಲೇ ರಾತ್ರಿ ಕಳೆದ ಮಕ್ಕಳು, ಇಂದು ಬೆಳ್ಳಂಬೆಳಗ್ಗೆಯೇ ಯಾರಿಗೂ ತಿಳಿಯದಂತೆ ವಸತಿ ಶಾಲೆಯಿಂದ ಹೊರಬಂದಿದ್ದಾರೆ. ಆಶ್ರಮದಿಂದ ನೇರವಾಗಿ ಚಿಕ್ಕಮಗಳೂರು ನಗರದ ಕಡೆಗೆ ಹೋಗುವ ರಸ್ತೆಯನ್ನು ಹಿಡಿದು ಹೆಜ್ಜೆ ಹಾಕಲಾರಂಭಿಸಿದ್ದಾರೆ. ಬೆಳಗಿನ ಚಳಿಯನ್ನೂ ಲೆಕ್ಕಿಸದೆ ಈ ಪುಟ್ಟ ಕಂದಮ್ಮಗಳು ವಸತಿ ಶಾಲೆಯಿಂದ ಸುಮಾರು 2 ಕಿಲೋಮೀಟರ್&zwnj;ನಷ್ಟು ದೂರದವರೆಗೆ ನಡೆದುಕೊಂಡೇ ಬಂದಿದ್ದಾರೆ.&lt;/p&gt;&lt;h2&gt;ರಕ್ಷಿಸಿದ ಸ್ಥಳೀಯರು ಮತ್ತು ಗ್ರಾಮಸ್ಥರು&lt;/h2&gt;&lt;p&gt;ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ತುಡುಕೂರು ಭಾಗದ ಸ್ಥಳೀಯ ಗ್ರಾಮಸ್ಥರಿಗೆ ಅನುಮಾನ ಮೂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಮಕ್ಕಳನ್ನು ತಡೆದು ಪ್ರೀತಿಯಿಂದ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಕ್ಕಳು ರಾತ್ರಿ ನಡೆದ ಗಲಾಟೆ ಮತ್ತು ತಮಗಾದ ಭಯದ ಬಗ್ಗೆ ಗ್ರಾಮಸ್ಥರ ಮುಂದೆ ತೋಡಿಕೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಗ್ರಾಮಸ್ಥರು, ಮಕ್ಕಳಿಗೆ ಧೈರ್ಯ ತುಂಬಿ ಸಮಾಧಾನಪಡಿಸಿದ್ದಾರೆ. ತದನಂತರ ಅತ್ಯಂತ ಜವಾಬ್ದಾರಿಯಿಂದ ಮಕ್ಕಳನ್ನು ಸುರಕ್ಷಿತವಾಗಿ ಮರಳಿ ಅದೇ ವಸತಿ ಶಾಲೆಗೆ ಕರೆತಂದು ಒಪ್ಪಿಸಿದ್ದಾರೆ.&lt;/p&gt;&lt;h2&gt;ಬಯಲಾಯ್ತು ಅಧಿಕಾರಿಗಳ, ವಾರ್ಡನ್ ನಿರ್ಲಕ್ಷ್ಯ&lt;/h2&gt;&lt;p&gt;ಈ ಘಟನೆಯಿಂದಾಗಿ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ವಸತಿ ಶಾಲೆಯ ಆಡಳಿತ ಮಂಡಳಿ, ವಾರ್ಡನ್ ಹಾಗೂ ಕಾವಲು ಕಾಯುವ ಸಿಬ್ಬಂದಿಯ ಬೇಜವಾಬ್ದಾರಿತನ ಸಂಪೂರ್ಣವಾಗಿ ಬಯಲಾಗಿದೆ. ರಾತ್ರಿ ಮಕ್ಕಳ ನಡುವೆ ಗಲಾಟೆಯಾಗುತ್ತಿದ್ದರೂ ವಾರ್ಡನ್ ಎಲ್ಲಿ ಹೋಗಿದ್ದರು? ಮುಂಜಾನೆ ನಾಲ್ಕು ಜನ ಪುಟ್ಟ ಮಕ್ಕಳು ಗೇಟ್ ದಾಟಿ ಅಷ್ಟು ದೂರ ಹೋದರೂ ಸಿಬ್ಬಂದಿಯ ಗಮನಕ್ಕೆ ಬರಲಿಲ್ಲವೇ? ಒಂದು ವೇಳೆ ಮಕ್ಕಳಿಗೆ ರಸ್ತೆಯಲ್ಲಿ ಏನಾದರೂ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ? ಎಂಬ ಹತ್ತಾರು ಪ್ರಶ್ನೆಗಳು ಈಗ ಸಾರ್ವಜನಿಕರನ್ನು ಕಾಡುತ್ತಿವೆ. ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಮಕ್ಕಳ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ವಹಿಸಿದ ವಾರ್ಡನ್ ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chikkamagaluru-4-hostel-kids-escape-after-midnight-clash-staff-negligence-blamed-gdp/articleshow-690le0t"/>
        </item>
        <item>
            <title><![CDATA[ಕೋಳಿ ಫಾರಂ ಅಲ್ಲ, ಇದು ಹಾವುಗಳ ಫಾರಂ! ಈ ಹಳ್ಳಿಯ ಆದಾಯ ಕೇಳಿದ್ರೆ ಬೆಚ್ಚಿಬೀಳ್ತೀರಿ!]]></title>
            <link>https://kannada.asianetnews.com/gallery/viral/vietnam-s-cobra-village-where-snake-farming-is-a-multi-million-dollar-business-mrq-ac3iz2c</link>
            <guid isPermaLink="true">https://kannada.asianetnews.com/gallery/viral/vietnam-s-cobra-village-where-snake-farming-is-a-multi-million-dollar-business-mrq-ac3iz2c</guid>
            <pubDate>Tue, 23 Jun 2026 09:53:46 +0530</pubDate>
            <description><![CDATA[ಒಂದೇ ಒಂದು ಹಾವು ಕಂಡರೂ ಸಾಕು, ನಮಗೆ ಮೈ ಜುಂ ಅನ್ನುತ್ತೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಸಾವಿರಾರು ನಾಗರಹಾವುಗಳನ್ನು ಸಾಕುತ್ತಾರೆ. ಆ ಹಾವುಗಳಿಂದ ಅವರು ಏನು ಮಾಡುತ್ತಾರೆ ಗೊತ್ತಾ? ಈ ವಿಚಿತ್ರ ಹಳ್ಳಿಯ ವಿಶೇಷತೆಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ತಿಳಿಯೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01kvhpmjrx9rmxpdwk8fe5t58y,imgname-77d58082-df30-4c9d-aa45-a17446748f45-1781931854621.jpg" type="image/jpeg" height="390" width="690"/>
            <content:encoded><![CDATA[ಒಂದೇ ಒಂದು ಹಾವು ಕಂಡರೂ ಸಾಕು, ನಮಗೆ ಮೈ ಜುಂ ಅನ್ನುತ್ತೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಸಾವಿರಾರು ನಾಗರಹಾವುಗಳನ್ನು ಸಾಕುತ್ತಾರೆ. ಆ ಹಾವುಗಳಿಂದ ಅವರು ಏನು ಮಾಡುತ್ತಾರೆ ಗೊತ್ತಾ? ಈ ವಿಚಿತ್ರ ಹಳ್ಳಿಯ ವಿಶೇಷತೆಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ತಿಳಿಯೋಣ.&lt;img&gt;&lt;p&gt;ವಿಯೆಟ್ನಾಂನ ವಿನ್ ಸನ್ ಗ್ರಾಮಕ್ಕೆ ಹೋದರೆ ಪ್ರತಿಯೊಂದು ಮನೆಯಲ್ಲೂ ಹಾವುಗಳ ಬಾಕ್ಸ್&zwnj;ಗಳು ಕಾಣಿಸುತ್ತವೆ. ಇಲ್ಲಿನ ಜನರು ಮನೆಗಳಲ್ಲಿ ಮಾತ್ರವಲ್ಲದೆ, ಹೊಲಗಳಲ್ಲೂ ವಿಶೇಷ ಶೆಡ್&zwnj;ಗಳನ್ನು ನಿರ್ಮಿಸಿ ಹಾವುಗಳನ್ನು ಸಾಕುತ್ತಾರೆ. ಈ ಗ್ರಾಮದ 600ಕ್ಕೂ ಹೆಚ್ಚು ಕುಟುಂಬಗಳು ನಾಗರಹಾವು ಸಾಕಾಣಿಕೆಯನ್ನೇ ತಮ್ಮ ಜೀವನೋಪಾಯವನ್ನಾಗಿಸಿಕೊಂಡಿವೆ.&lt;/p&gt;&lt;img&gt;&lt;p&gt;ಅನೇಕ ಮನೆಗಳಲ್ಲಿ 1,000 ದಿಂದ 5,000 ಹಾವುಗಳಿದ್ದರೆ, ಕೆಲವರು 10,000ಕ್ಕೂ ಹೆಚ್ಚು ಹಾವುಗಳನ್ನು ಸಾಕುತ್ತಾರೆ. ಕಳೆದ 200 ವರ್ಷಗಳಿಂದ ವಿನ್ ಸನ್ ಗ್ರಾಮಸ್ಥರು ಈ ವಿಚಿತ್ರ ಮತ್ತು ಅಪಾಯಕಾರಿ ವ್ಯಾಪಾರವನ್ನು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಈ ಊರಿಗೆ 'ಕೋಬ್ರಾ ವಿಲೇಜ್' ಎಂಬ ಹೆಸರು ಬಂದಿದೆ.&lt;/p&gt;&lt;img&gt;&lt;p&gt;ಕೋಬ್ರಾ ವಿಲೇಜ್ ಜನರಿಗೆ ಹಾವುಗಳೇ ಜೀವನಾಧಾರ. ತಲೆಮಾರುಗಳಿಂದ ಇವರು ನಾಗರಹಾವು ಸಾಕಾಣಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಹಾವುಗಳನ್ನು ಸಾಕುವ ಮೂಲಕ ಇವರು ಉದ್ಯೋಗ ಕಂಡುಕೊಂಡಿದ್ದಾರೆ. ಇಲ್ಲಿ ಮುಖ್ಯವಾಗಿ ಮಾಂಸಕ್ಕಾಗಿ ಹಾವುಗಳನ್ನು ಸಾಕುತ್ತಾರೆ. ನಾವು ಕೋಳಿ, ಮೇಕೆ ಮಾಂಸ ಖರೀದಿಸಿದಂತೆ, ಇಲ್ಲಿ ಹಾವು ಮಾಂಸಕ್ಕೆ ಭಾರಿ ಬೇಡಿಕೆಯಿದೆ. ಇದಕ್ಕಾಗಿಯೇ ಕೆಲವು ವ್ಯಾಪಾರಿಗಳು ಈ ಗ್ರಾಮಸ್ಥರಿಗೆ ಹಾವು ಸಾಕಲು ಪ್ರೋತ್ಸಾಹ ನೀಡಿ, ಸಾಲವನ್ನೂ ಕೊಡುತ್ತಾರೆ.&amp;nbsp;&lt;/p&gt;&lt;img&gt;&lt;p&gt;ವಿನ್ ಸನ್ ಗ್ರಾಮದಲ್ಲಿ ಸಾಕುವ ಹಾವುಗಳಿಂದ ಕೇವಲ ಮಾಂಸವಲ್ಲದೆ, ಚರ್ಮ, ಮೊಟ್ಟೆ, ವಿಷದಂತಹ ಇತರ ಉತ್ಪನ್ನಗಳೂ ಸಿಗುತ್ತವೆ. ಇವುಗಳನ್ನು ಮಾರಾಟ ಮಾಡಿ ಗ್ರಾಮಸ್ಥರು ಉತ್ತಮ ಆದಾಯ ಗಳಿಸುತ್ತಿದ್ದಾರೆ. 2024ರಲ್ಲಿ ವಿನ್ ಸನ್ ಗ್ರಾಮದ ಹಾವು ವ್ಯಾಪಾರದ ಮೌಲ್ಯ 100 ಬಿಲಿಯನ್ ವಿಯೆಟ್ನಾಮೀಸ್ ಡಾಂಗ್, ಅಂದರೆ ಸುಮಾರು 4 ಮಿಲಿಯನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ, ಸುಮಾರು 37.7 ಕೋಟಿ ರೂಪಾಯಿಗಳು.&lt;/p&gt;&lt;img&gt;&lt;p&gt;ಇಲ್ಲಿ ಪ್ರತಿ ವರ್ಷ ಲಕ್ಷಾಂತರ ನಾಗರಹಾವು ಮೊಟ್ಟೆಗಳನ್ನು ಉತ್ಪಾದಿಸಲಾಗುತ್ತದೆ. ಅವುಗಳಲ್ಲಿ ಹೆಚ್ಚಿನವು ದೇಶೀಯವಾಗಿ ಮತ್ತು ವಿದೇಶಗಳಲ್ಲಿ ಮಾರಾಟವಾಗುತ್ತವೆ. ಸ್ಥಳೀಯ ಆರ್ಥಿಕತೆಯ ಬಹುಪಾಲು ಈ ವ್ಯವಹಾರವನ್ನೇ ಅವಲಂಬಿಸಿದೆ. ಕಾಲಕ್ರಮೇಣ, ಇಲ್ಲಿನ ಜನರು ಹಾವು ಸಾಕುವ ಸಾಂಪ್ರದಾಯಿಕ ಜ್ಞಾನಕ್ಕೆ ಆಧುನಿಕ ತಂತ್ರಜ್ಞಾನವನ್ನು ಜೋಡಿಸಿದ್ದಾರೆ.&amp;nbsp;&lt;/p&gt;&lt;p&gt;ಒಂದು ಕಾಲದಲ್ಲಿ ಸಣ್ಣ ಪ್ರಮಾಣದಲ್ಲಿ ಹಾವುಗಳನ್ನು ಸಾಕುತ್ತಿದ್ದರು, ಆದರೆ ಈಗ ಅನೇಕ ಫಾರಂಗಳು ವಾಣಿಜ್ಯಿಕವಾಗಿ ನಡೆಯುತ್ತಿವೆ. ಈ ಗ್ರಾಮದಲ್ಲಿ ಹಾವು ಸಾಕಾಣಿಕೆಗಾಗಿಯೇ ವಿಶೇಷ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಿಂದೆ ಸಾವಿರಾರು ಹಾವುಗಳನ್ನು ಉತ್ಪಾದಿಸುತ್ತಿದ್ದ ಈ ಗ್ರಾಮ ಈಗ ಲಕ್ಷಗಟ್ಟಲೆ ಹಾವುಗಳನ್ನು ಉತ್ಪಾದಿಸುತ್ತಿದೆ.&lt;/p&gt;&lt;img&gt;&lt;p&gt;ಇವರು ಕಾಡಿನ ಹಾವುಗಳನ್ನು ಅವಲಂಬಿಸಿಲ್ಲ. ಫಾರಂಗಳಲ್ಲಿ ಸಾಕಿದ ಹಾವುಗಳಿಂದಲೇ ಮುಂದಿನ ಪೀಳಿಗೆಯನ್ನು ಉತ್ಪಾದಿಸುತ್ತಾರೆ. ಮೊದಲು ಆರೋಗ್ಯಕರ ಗಂಡು ಮತ್ತು ಹೆಣ್ಣು ನಾಗರಹಾವುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೆಣ್ಣು ನಾಗರಹಾವು ಇಟ್ಟ ಮೊಟ್ಟೆಗಳನ್ನು ಸುರಕ್ಷಿತ ತಾಪಮಾನ ಮತ್ತು ತೇವಾಂಶದಲ್ಲಿ ಇಡುತ್ತಾರೆ. ಮೊಟ್ಟೆಗಳಿಂದ ಮರಿಗಳು ಹೊರಬಂದ ನಂತರ, ಅವುಗಳನ್ನು ಪ್ರತ್ಯೇಕ ಪೆಟ್ಟಿಗೆಗಳಲ್ಲಿ ಅಥವಾ ಸುರಕ್ಷಿತ ಪಂಜರಗಳಲ್ಲಿ ಇರಿಸಲಾಗುತ್ತದೆ.&amp;nbsp;&lt;/p&gt;&lt;p&gt;ಹಿಂದೆ ಹಾವುಗಳಿಗೆ ಇಲಿ, ಕಪ್ಪೆಗಳನ್ನು ಆಹಾರವಾಗಿ ನೀಡುತ್ತಿದ್ದರು. ಆದರೆ ಈಗ ಕೋಳಿ ಕುತ್ತಿಗೆ ಮತ್ತು ಇತರ ಆಹಾರವನ್ನು ನೀಡುತ್ತಿದ್ದಾರೆ. ಹಾವುಗಳು ಬೇಗನೆ ಬೆಳೆಯಲು ಮತ್ತು ಆರೋಗ್ಯವಾಗಿರಲು, ಅವುಗಳ ಆಹಾರದಲ್ಲಿ ಮಿನರಲ್ ಸಪ್ಲಿಮೆಂಟ್&zwnj;ಗಳನ್ನು ಕೂಡ ಬೆರೆಸುತ್ತಾರೆ. ಹಾವುಗಳಿಗೆ ಪ್ರತಿದಿನ ಆಹಾರ ನೀಡದೆ, ಪ್ರತಿ 3-4 ದಿನಗಳಿಗೊಮ್ಮೆ ಆಹಾರ ನೀಡುತ್ತಾರೆ.&lt;/p&gt;&lt;img&gt;ನಾಗರಹಾವು ಸಾಕಾಣಿಕೆ ಲಾಭದಾಯಕವಾಗಿದ್ದರೂ, ಇದರಲ್ಲಿ ಕೆಲವು ರಿಸ್ಕ್&zwnj;ಗಳೂ ಇವೆ. ವಿಷಕಾರಿ ಹಾವುಗಳೊಂದಿಗೆ ಕೆಲಸ ಮಾಡುವುದು ತುಂಬಾ ಅಪಾಯಕಾರಿ. ಕೆಲವೊಮ್ಮೆ ಹಾವು ಕಡಿತದಿಂದ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದಲ್ಲದೆ, ಹಾವುಗಳಿಂದ ರೋಗಗಳು ಹರಡುವ ಅಪಾಯವು ರೈತರಿಗೆ ದೊಡ್ಡ ಚಿಂತೆಯಾಗಿದೆ. ಒಂದು ಫಾರಂನಲ್ಲಿ ಸೋಂಕು ಹರಡಿದರೆ, ಹೆಚ್ಚಿನ ಸಂಖ್ಯೆಯ ಹಾವುಗಳು ಸಾಯಬಹುದು. ಇದು ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/viral/vietnam-s-cobra-village-where-snake-farming-is-a-multi-million-dollar-business-mrq-ac3iz2c"/>
        </item>
        <item>
            <title><![CDATA[ಸರ್ಕಾರದ ಕಿಕ್ ಏರಿಸಿದ ಮದ್ಯಪ್ರಿಯರು; ಹೊಸ ಅಬಕಾರಿ ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ ಹರಿದು ಬಂತು ಕೋಟಿ ಕೋಟಿ ಆದಾಯ]]></title>
            <link>https://kannada.asianetnews.com/karnataka-districts/karnataka-new-excise-policy-liquor-beer-sales-record-revenue-collection-san/articleshow-38gayor</link>
            <guid isPermaLink="true">https://kannada.asianetnews.com/karnataka-districts/karnataka-new-excise-policy-liquor-beer-sales-record-revenue-collection-san/articleshow-38gayor</guid>
            <pubDate>Tue, 23 Jun 2026 09:52:14 +0530</pubDate>
            <description><![CDATA[&lt;p&gt;ರಾಜ್ಯದ ಹೊಸ ಅಬಕಾರಿ ನೀತಿಯು ಸರ್ಕಾರದ ಬೊಕ್ಕಸಕ್ಕೆ ಭಾರಿ ಲಾಭ ತಂದುಕೊಟ್ಟಿದೆ. ಬಿಯರ್ ದರ ಇಳಿಕೆಯಿಂದಾಗಿ ಅದರ ಮಾರಾಟ ಗಣನೀಯವಾಗಿ ಏರಿಕೆಯಾಗಿದ್ದರೆ, ಐಎಂಎಲ್ ದರ ಹೆಚ್ಚಳದ ನಡುವೆಯೂ ಅದರ ವಹಿವಾಟು ಕುಗ್ಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcs5ryh85zd85tm3574mrhs,imgname-whatsapp-image-2026-04-29-at-7.38.27-pm-1777471775696.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.23): &lt;/strong&gt;ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ಬಂದ ಬೆನ್ನಲ್ಲೇ ಮದ್ಯದ ವಹಿವಾಟು ಸಾರ್ವಕಾಲಿಕ ದಾಖಲೆ ಬರೆದಿದೆ. ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಗ್ಯಾರಂಟಿ ಸರ್ಕಾರಕ್ಕೆ ಈ ಬಾರಿ ಮದ್ಯಪ್ರಿಯರು ಭರ್ಜರಿ ಕಿಕ್ ನೀಡಿದ್ದು, ಸರ್ಕಾರದ ಬೊಕ್ಕಸ ತುಂಬಿ ತುಳುಕುವಂತೆ ಮಾಡಿದ್ದಾರೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಅಬಕಾರಿ ಇಲಾಖೆಯ ಆದಾಯದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದೆ.&lt;/p&gt;&lt;h2&gt;&lt;strong&gt;ಬಿಯರ್ ಮಾರಾಟ ಗಣನೀಯವಾಗಿ ಜಿಗಿತ!&lt;/strong&gt;&lt;/h2&gt;&lt;p&gt;ಹೊಸ ಅಬಕಾರಿ ನೀತಿಯ ಅನ್ವಯ ಬಿಯರ್ ದರ ಇಳಿಕೆಯಾಗಿದ್ದೇ ತಡ, ರಾಜ್ಯದಲ್ಲಿ ಬಿಯರ್ ಮಾರಾಟ ಗಣನೀಯವಾಗಿ ಜಿಗಿತ ಕಂಡಿದೆ. ಪ್ರೀಮಿಯಂ ಮತ್ತು ವಿದೇಶಿ ಮದ್ಯ ಹಾಗೂ ಬಿಯರ್ ಬೆಲೆಯಲ್ಲಿ ಶೇಕಡಾ 16 ರಿಂದ 20 ರಷ್ಟು ಇಳಿಕೆ ಮಾಡಲಾಗಿತ್ತು. ಇದರ ನೇರ ಲಾಭ ಪಡೆದಿರುವ ಮದ್ಯಪ್ರಿಯರು ಕೇವಲ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 51.68 ಲಕ್ಷ ಬಾಕ್ಸ್ ಬಿಯರ್ ಅನ್ನು ಸ್ವಾಹಾ ಮಾಡಿದ್ದಾರೆ!&lt;/p&gt;&lt;h2&gt;&lt;strong&gt;ದೇಶಿ ಮದ್ಯದ ದರ ಏರಿಕೆಯಾದ್ರೂ ಕುಗ್ಗದ ಕ್ರೇಜ್&lt;/strong&gt;&lt;/h2&gt;&lt;p&gt;ಮತ್ತೊಂದೆಡೆ ಹೊಸ ನೀತಿಯಲ್ಲಿ ವಿಸ್ಕಿ, ರಮ್, ಬ್ರಾಂಡಿ ಹಾಗೂ ವೋಡ್ಕಾದಂತಹ ಭಾರತೀಯ ತಯಾರಿಕೆಯ ವಿದೇಶಿ ಮದ್ಯದ (IML) ಬೆಲೆ ಶೇಕಡಾ 20 ರಿಂದ 30 ರಷ್ಟು ಹೆಚ್ಚಳವಾಗಿತ್ತು. ಇಷ್ಟಾದರೂ ಮದ್ಯದ ಮೇಲಿನ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ದರ ಹೆಚ್ಚಳದ ನಡುವೆಯೂ ಒಂದೇ ತಿಂಗಳಲ್ಲಿ 51.33 ಲಕ್ಷ ಬಾಕ್ಸ್ ಐಎಂಎಲ್ (IML) ಮಾರಾಟವಾಗುವ ಮೂಲಕ ಮದ್ಯದ ಮಾರುಕಟ್ಟೆಯಲ್ಲಿ ಜಿಗಿತ ಕಂಡಿದೆ.&lt;/p&gt;&lt;h2&gt;&lt;strong&gt;ಲಾಭ ತಂದುಕೊಟ್ಟ ಸ್ಲ್ಯಾಬ್&zwnj;ಗಳ ಕಡಿತ; ಆದಾಯದ ಕಂಪ್ಲೀಟ್ ಡಿಟೇಲ್ಸ್&lt;/strong&gt;&lt;/h2&gt;&lt;p&gt;ಅಬಕಾರಿ ಇಲಾಖೆಯ ಪ್ರಕಾರ, ಹೊಸ ಅಬಕಾರಿ ನೀತಿಯಲ್ಲಿ ಮದ್ಯದ ಮೇಲಿನ ತೆರಿಗೆ ಸ್ಲ್ಯಾಬ್&zwnj;ಗಳ (Slabs) ಸಂಖ್ಯೆಯನ್ನು 16 ರಿಂದ 8 ಕ್ಕೆ ಇಳಿಸಲಾಗಿತ್ತು. ಈ ತಾಂತ್ರಿಕ ಬದಲಾವಣೆ ಮತ್ತು ದರ ಪರಿಷ್ಕರಣೆ ಸರ್ಕಾರಕ್ಕೆ ಅದೃಷ್ಟ ತಂದಿದೆ.&lt;/p&gt;&lt;ul&gt; &lt;li&gt;&lt;strong&gt;ಕಳೆದ ವರ್ಷದ ಆದಾಯ (ಇದೇ ಅವಧಿ): &lt;/strong&gt;3,022 ಕೋಟಿ ರೂಪಾಯಿ&lt;/li&gt; &lt;li&gt;&lt;strong&gt;ಹೊಸ ನೀತಿ ಜಾರಿ ಬಳಿಕದ ಆದಾಯ:&lt;/strong&gt; 3,509 ಕೋಟಿ ರೂಪಾಯಿ&lt;/li&gt; &lt;li&gt;&lt;strong&gt;ಹೆಚ್ಚುವರಿ ಆದಾಯ: &lt;/strong&gt;ಬರೋಬ್ಬರಿ 486 ಕೋಟಿ ರೂಪಾಯಿ&lt;/li&gt;&lt;/ul&gt;&lt;p&gt;ಹೊಸ ಅಬಕಾರಿ ನೀತಿಯು ಜಾರಿಗೆ ಬಂದ ಮೊದಲ ತಿಂಗಳಿನಲ್ಲೇ ಇಲಾಖೆಗೆ ನಿರೀಕ್ಷೆಗೂ ಮೀರಿದ ಯಶಸ್ಸು ತಂದುಕೊಟ್ಟಿದೆ ಎಂದು ಅಬಕಾರಿ ಇಲಾಖೆ ಹರ್ಷ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆ, ಇತ್ತ ಹೊಸ ಅಬಕಾರಿ ನೀತಿಯು ಸರ್ಕಾರದ ಖಜಾನೆಯನ್ನು ಯಶಸ್ವಿಯಾಗಿ ತುಂಬಿಸುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-new-excise-policy-liquor-beer-sales-record-revenue-collection-san/articleshow-38gayor"/>
        </item>
        <item>
            <title><![CDATA[ಇಂದಿನಿಂದ 3 ದಿನ ರಾಜ್ಯದಲ್ಲಿ ಉತ್ತಮ ಮಳೆಯ ಮುನ್ಸೂಚನೆ; ಎರಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್]]></title>
            <link>https://kannada.asianetnews.com/gallery/state/karnataka-weather-forecast-update-good-rains-forecast-in-state-for-3-days-from-today-orange-alert-for-two-districts-mrq-xgl4532</link>
            <guid isPermaLink="true">https://kannada.asianetnews.com/gallery/state/karnataka-weather-forecast-update-good-rains-forecast-in-state-for-3-days-from-today-orange-alert-for-two-districts-mrq-xgl4532</guid>
            <pubDate>Tue, 23 Jun 2026 09:14:05 +0530</pubDate>
            <description><![CDATA[ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಈ ನಡುವೆ, ಹವಾಮಾನ ಇಲಾಖೆಯು ಮೂರು ದಿನಗಳ ಕಾಲ ಬಹುತೇಕ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಮತ್ತು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvs90qk719q3pt0r3td5b32t,imgname-rain--3--1782186008167.jpg" type="image/jpeg" height="390" width="690"/>
            <content:encoded><![CDATA[ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಈ ನಡುವೆ, ಹವಾಮಾನ ಇಲಾಖೆಯು ಮೂರು ದಿನಗಳ ಕಾಲ ಬಹುತೇಕ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಮತ್ತು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ.&lt;img&gt;&lt;p&gt;ರಾಜ್ಯದೆಲ್ಲೆಡೆ ಮುಂಗಾರು ಮಳೆಯ ತೀವ್ರ ಕೊರತೆಯಿದೆ. ಈ ನಡುವೆ ಮೂರು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯ &lsquo;ಯೆಲ್ಲೋ ಅಲರ್ಟ್&rsquo; ಅನ್ನು ಹವಾಮಾನ ಇಲಾಖೆ ನೀಡಿದೆ. ಇಂದು ಬೆಳಗ್ಗೆ ಬೆಂಗಳೂರಿನ ಹಲವು ಭಾಗಗಳಲ್ಲಿ ತುಂತುರು ಮಳೆಯಾಗುತ್ತಿದೆ.&lt;/p&gt;&lt;img&gt;&lt;p&gt;ಜೂ.23ರಿಂದ ಜೂ.25ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜೂ.27ರಂದು ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ.&lt;/p&gt;&lt;img&gt;&lt;p&gt;ಜೂ.22ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಸಾಮಾನ್ಯವಾಗಿದೆ. ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ಕರಾವಳಿಯ ಬಹುತೇಕ ಪ್ರದೇಶಗಳು, ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಒಂದೆರೆಡು ಕಡೆ ಮಾತ್ರ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಗರಿಷ್ಠ 8 ಸೆಂ.ಮೀ. ಮಳೆಯಾಗಿದೆ. ಮತ್ತೊಂದೆಡೆ ಮಳೆಗಾಲದಲ್ಲೂ ಕಲಬುರಗಿಯಲ್ಲಿ ಬೇಸಿಗೆ ಕಾಲದಂತೆ ಗರಿಷ್ಠ 39.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮತ್ತೊಂದೆಡೆ ಮಳೆ ಇಲ್ಲದೇ ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/karnataka-weather-forecast-update-good-rains-forecast-in-state-for-3-days-from-today-orange-alert-for-two-districts-mrq-xgl4532"/>
        </item>
        <item>
            <title><![CDATA[ವರ್ಷಧಾರೆ ಕೊರತೆಗೆ ಸೊರಗಿದ ಲಿಂಗನಮಕ್ಕಿ ಜಲಾಶಯ; ಶರಾವತಿ ಜಲಾನಯನದಲ್ಲಿ ಮಳೆ ಅಭಾವ]]></title>
            <link>https://kannada.asianetnews.com/karnataka-districts/water-level-in-the-linganamakki-reservoir-on-sharavathi-river-is-decreasing-day-by-day-due-to-lack-of-inflow-mrq/articleshow-0zv3pfn</link>
            <guid isPermaLink="true">https://kannada.asianetnews.com/karnataka-districts/water-level-in-the-linganamakki-reservoir-on-sharavathi-river-is-decreasing-day-by-day-due-to-lack-of-inflow-mrq/articleshow-0zv3pfn</guid>
            <pubDate>Tue, 23 Jun 2026 08:50:23 +0530</pubDate>
            <description><![CDATA[ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ, ರಾಜ್ಯದ ಪ್ರಮುಖ ವಿದ್ಯುತ್ ಮೂಲವಾದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಆತಂಕಕಾರಿಯಾಗಿ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಳಹರಿವು ತೀವ್ರವಾಗಿ ಕಡಿಮೆಯಾಗಿದ್ದು, ಇದು ವಿದ್ಯುತ್ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರಿದೆ. ಮಳೆ ಬಾರದೆ ಹೋದರೆ ರಾಜ್ಯವು ಗಂಭೀರ ವಿದ್ಯುತ್ ಸಂಕಷ್ಟವನ್ನು ಎದುರಿಸುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvs7fjjvdewb3gka533ss616,imgname-linganamakki-1782184397403.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಗಾರು ಲಕ್ಷ್ಮೀನಾರಾಯಣ ಹೆಗಡೆ&lt;/strong&gt;&lt;/p&gt;&lt;p&gt;&lt;strong&gt;ಶಿವಮೊಗ್ಗ: &lt;/strong&gt;ಹವಾಮಾನ ವೈಪರೀತ್ಯದಿಂದ ಜೂನ್ ತಿಂಗಳು ಗತಿಸುತ್ತಿದ್ದರೂ ಮಳೆಗಾಲ ಪ್ರಾರಂಭವಾಗಿಲ್ಲ. ಇದರಿಂದ ಮಳೆಯನ್ನೇ ಅವಲಂಬಿಸಿದ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಇಲ್ಲದೆ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದೆ.&lt;/p&gt;&lt;p&gt;ನಾಡಿನ ಬೆಳ್ಳಿ ಬೆಳಕಿನ ಮೂಲ ಸೆಲೆ ಲಿಂಗನಮಕ್ಕಿ ಜಲಾಶಯ. ಶಕ್ತಿ ನದಿ ಶರಾವತಿಗೆ ಲಿಂಗನಮಕ್ಕಿ ಎಂಬ ಸ್ಥಳದಲ್ಲಿ 9020 ಅಡಿ (2750 ಮೀಟರ್)ಉದ್ದ ಹಾಗೂ ನದಿ ಪಾತಳಿಯಿಂದ 181 ಅಡಿ (55 ಮೀಟರ್) ಎತ್ತರದ ಅಣೆಕಟ್ಟೆ ಕಟ್ಟಿ ಈ ಜಲಾಶಯ ನಿರ್ಮಿಸಲಾಗಿದೆ. 2000 ಚದುರ ಕಿಮಿ ಜಲಾಯನ ಪ್ರದೇಶ ಹೊಂದಿರುವ ಲಿಂಗನಮಕ್ಕಿ ಜಲಾಶಯವು ಮಾನವ ನಿರ್ಮಿತವಾಗಿದೆ.&lt;/p&gt;&lt;p&gt;ನಿರ್ಮಾಣ ಕಾಲದಲ್ಲಿ ಏಷಿಯಾ ಖಂಡದಲ್ಲಿ ಬೃಹತ್ ಎನಿಸಿಕೊಂಡಿದ್ದ ಲಿಂಗನಮಕ್ಕಿ ಜಲಾಶಯದಲ್ಲಿ 1963 ರಿಂದ ನೀರು ಸಂಗ್ರಹಣೆ ಪ್ರಾರಂಭಗೊಂಡಿದೆ. 156 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಜಲಾಶಯಕ್ಕಿದ್ದು, 326 ಚದುರ ಕಿಮೀ ಪ್ರದೇಶ ವ್ಯಾಪ್ತಿಯ ಹಿನ್ನೀರು ಹೊಂದಿದೆ.&lt;/p&gt;&lt;h2&gt;&lt;strong&gt;ವಿದ್ಯುತ್ ಉತ್ಪಾದನಾ ಸಾಮರ್ಥ್ಯ&lt;/strong&gt;&lt;/h2&gt;&lt;p&gt;ಶರಾವತಿ ಕಣಿವೆಯ ಜಲವಿದ್ಯುತ್ ಯೋಜನೆಗೆ ಲಿಂಗನಮಕ್ಕಿ ಜಲಾಶಯವೇ ಮೂಲಾಧಾರ. ಈ ಜಲಾಶಯವನ್ನು ಅವಲಂಬಿಸಿ 1035 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶರಾವತಿ ಜಲ ವಿದ್ಯುದಾಗರ, 139 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ಮಹಾತ್ಮಾಗಾಂಧಿ ವಿದ್ಯುದಾಗರ, 55 ಮೆಗಾವಾಟ್ ಉತ್ಪಾದನಾ ಸಾಮಥ್ರ್ಯದ ಲಿಂಗನಮಕ್ಕಿ ವಿದ್ಯುದಾಗರ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದ ವಿದ್ಯುತ್ ಬಳಕೆಯ ಶೇ 30 ರಷ್ಟು ಶರಾವತಿ ಕಣಿವೆಯ ಜಲ ವಿದ್ಯುದೋಜನೆಯಿಂದಲೇ ಲಭ್ಯವಾಗುತ್ತದೆ.&lt;/p&gt;&lt;p&gt;ಈ ವರ್ಷದ ಮಳೆಗಾಲದ ಹಂಗಾಮಿನಲ್ಲಿ ಜಲಾನಯನ ಪ್ರದೇಶದಲ್ಲಿ ಕೇವಲ ಒಂಬತ್ತು ಸೆಂಟಿಮೀಟರ್ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 72 ಸೆ.ಮೀ ನಷ್ಟು ಮಳೆ ಆಗಿತ್ತು. ಪ್ರಸ್ತುತ ಜಲಾಶಯದಲ್ಲಿ 1746.00 ಅಡಿ ನೀರು ಮಾತ್ರವಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1772.80 ಅಡಿ ನೀರಿತ್ತು. ಸದ್ಯ ಇರುವ ನೀರಲ್ಲಿ ಸುಮಾರು 473 .85 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದ್ದು, ಬೇಡಿಕೆಗೆ ಅನುಗುಣವಾಗಿ ವಿದ್ಯುದುತ್ಪಾದನೆಗೆ ಬಳಸಲಾಗುತ್ತಿದೆ ಎನ್ನುತ್ತಾರೆ ಕೆಪಿಸಿಯ ಅಧಿಕಾರಿಗಳು.&lt;/p&gt;&lt;h3&gt;&lt;strong&gt;ನೀರಿನ ಅಭಾವದಿಂದ ಸ್ಥಗಿತಗೊಂಡ ಜನರೇಟರ್&lt;/strong&gt;&lt;/h3&gt;&lt;p&gt;ರಾಜ್ಯದಲ್ಲಿ ಕೆಲವೆಡೆ ಮಳೆ ಆಗುತ್ತಿರುವುದರಿಂದ ವಿದ್ಯತ್ ಬೇಡಿಕೆ ಕುಸಿದಿದೆ. ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಒಟ್ಟು ಹತ್ತು ಜನರೇಟರ್&zwj;ಗಳು ಕಾರ್ಯನಿರ್ವಹಿಸುತ್ತಿದ್ದು, ಈಗ ಕೇವಲ ಏಳು ಜನರೇಟರ್&zwnj;ಗಳನ್ನು ಮಾತ್ರ ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಒಟ್ಟು ಎಂಟು ಜನರೇಟರ್&zwnj;ಗಳು ಇದ್ದು ಒಂದು ದುರಸ್ತಿಯಲ್ಲಿದೆ. ಇನ್ನು 7 ಕಾರ್ಯನಿರ್ವಹಿಸುತ್ತಿದೆ. ಮಾಡಲಾಗುತ್ತಿದೆ. ಲಿಂಗನಮಕ್ಕಿ ಪವರ್ ಹೌಸ್&zwj;ನಲ್ಲಿ ಒಂದು ಜನರೇಟರ್ ಕಾರ್ಯ ನಿರ್ವಹಿಸುತ್ತಿದೆ. ನೀರಿನ ಅಭಾವದಿಂದ ಸ್ಥಗಿತಗೊಂಡಿದೆ. ಮಳೆಬಾರದೆ ಹೋದರೆ ಪರಿಸ್ಥಿತಿ ಇನ್ನಷ್ಟು ಗಂಭೀರ ಸ್ವರೂಪ ಪಡೆಯಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; &lsquo;ವಾಡಿಕೆ ಮಳೆಯ ಆಸೆನೇ ಬಿಟ್ಟುಬಿಡಿ!&rsquo;: ದೇಶಾದ್ಯಂತ ಶೇ. 42 ರಷ್ಟು ಮುಂಗಾರು ಕೊರತೆ, ಹವಾಮಾನ ಇಲಾಖೆಯಿಂದ ಶಾಕಿಂಗ್ ನ್ಯೂಸ್!&lt;/strong&gt;&lt;/p&gt;&lt;p&gt;&lt;strong&gt;ಮಳೆ ನಿರೀಕ್ಷೆ&lt;/strong&gt;&lt;/p&gt;&lt;p&gt;ಶರಾವತಿ ಜಲಾನಯನ ಪ್ರದೇಶದಲ್ಲಿ ಈವರೆಗೂ ಮಳೆಬಾರದೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಆದರೆ ರಾಜ್ಯದ ಹಲವಡೆ ಮಳೆ ಆಗುತ್ತಿರುವುದರಿಂದ ವಿದ್ಯುತ್ ಬೇಡಿಕೆ ಕುಸಿತವಾಗಿದೆ. ಸದ್ಯ ನಾವು ಸಹ ವಿದ್ಯುತ್ ಉತ್ಪಾದನೆಯನ್ನು ಕಡಿತಗೊಳಿಸಿದ್ದು ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆ ನಿರೀಕ್ಷೆಯಲ್ಲಿ ಇದ್ದೇವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;3 ದಶಕಗಳ ಬಳಿಕ ಮೊದಲ ಬಾರಿಗೆ ಬರಿದಾದ ಭದ್ರೆಯ ಒಡಲು; ಬರದ ಛಾಯೆ, ಸ್ಥಳೀಯರಲ್ಲಿ ಆತಂಕ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/water-level-in-the-linganamakki-reservoir-on-sharavathi-river-is-decreasing-day-by-day-due-to-lack-of-inflow-mrq/articleshow-0zv3pfn"/>
        </item>
        <item>
            <title><![CDATA[60 ದಿನದಲ್ಲಿ ಅಂತಿಮ ಡೀಲ್‌ಗೆ ಇರಾನ್ & ಅಮೆರಿಕ ಒಪ್ಪಿಗೆ; ಪಾಕ್-ಕತಾರ್ ಮಧ್ಯಸ್ಥಿಕೆ]]></title>
            <link>https://kannada.asianetnews.com/world-news/us-iran-talks-it-has-been-agreed-to-formulate-a-framework-for-a-final-agreement-within-60-days-mrq/articleshow-a2l6x7h</link>
            <guid isPermaLink="true">https://kannada.asianetnews.com/world-news/us-iran-talks-it-has-been-agreed-to-formulate-a-framework-for-a-final-agreement-within-60-days-mrq/articleshow-a2l6x7h</guid>
            <pubDate>Tue, 23 Jun 2026 08:31:20 +0530</pubDate>
            <description><![CDATA[ಸ್ವಿಜರ್ಲೆಂಡ್&zwnj;ನಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್ ಮಾತುಕತೆಯಲ್ಲಿ, 60 ದಿನಗಳಲ್ಲಿ ಅಂತಿಮ ಒಪ್ಪಂದಕ್ಕೆ ಚೌಕಟ್ಟು ರೂಪಿಸಲು ಒಪ್ಪಿಗೆ ನೀಡಲಾಗಿದೆ. ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆ ವಹಿಸಿದ್ದು, ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಯ ಹಿನ್ನೆಲೆಯಲ್ಲಿ ಇರಾನ್ ನಿಯೋಗವು ಸಭಾತ್ಯಾಗ ಮಾಡಿದ ಘಟನೆಯೂ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvpn66z80yp4kegk8n7rze9k,imgname-iran-us-talks-walkout-jd-vance-shahbaz-sharif-switzerland-trump-threat-photo-op-crisis0-1782098107368.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಒಬ್ಬರ್ಗೆನ್ (ಸ್ವಿಜರ್ಲೆಂಡ್&zwnj;): &lt;/strong&gt;ಅಮೆರಿಕ ಮತ್ತು ಇರಾನ್&zwnj; ನಡುವಿನ ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡುವ ಉದ್ದೇಶದಿಂದ ಇಲ್ಲಿ ನಡೆಯುತ್ತಿರುವ ಮಾತುಕತೆ 2ನೇ ದಿನವನ್ನು ಪೂರೈಸಿದೆ. ಈ ವೇಳೆ, 60 ದಿನಗಳಲ್ಲಿ ಅಂತಿಮ ಒಪ್ಪಂದ ಮಾಡಿಕೊಳ್ಳುವುದಕ್ಕೆ ಪೂರಕವಾದ ಚೌಕಟ್ಟಿಗೆ ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಮತ್ತು ಕತಾರ್&zwnj; ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.&lt;/p&gt;&lt;p&gt;ಇಸ್ಲಾಮಾಬಾದ್&zwnj; ತಿಳುವಳಿಕೆ ಒಪ್ಪಂದದಡಿಯಲ್ಲಿ ಭಾನುವಾರದಿಂದ ನಡೆಯುತ್ತಿರುವ ಮಾತುಕತೆಯಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್&zwnj; ನೇತೃತ್ವದಲ್ಲಿ ಅಮೆರಿಕದ ನಿಯೋಗ ಮತ್ತು ಸಂಸತ್&zwnj; ಸ್ಪೀಕರ್&zwnj; ಮೊಹಮ್ಮದ್&zwnj; ಬಘೇರ್&zwnj; ಘಾಲಿಬಾಫ್&zwnj; ನೇತೃತ್ವದ ಇರಾನ್&zwnj; ನಿಯೋಗ ಭಾಗವಹಿಸಿದೆ. ಪಾಕ್&zwnj; ಪ್ರಧಾನಿ ಶೆಹಬಾಜ್&zwnj; ಷರೀಫ್&zwnj; ಮತ್ತು ಕತಾರ್&zwnj; ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಮಧ್ಯಸ್ಥಿಕೆದಾರರಾಗಿದ್ದರು.&lt;/p&gt;&lt;p&gt;ಜಂಟಿ ಹೇಳಿಕೆಯಲ್ಲಿ, ಲೆಬನಾನ್&zwnj; ಮೇಲಿನ ದಾಳಿಗೆ ಸಂಬಂಧಿಸಿದಂತೆ &lsquo;ಸಂಘರ್ಷ ನಿವಾರಣೆ ಸೆಲ್&zwnj;&rsquo; ಸ್ಥಾಪಿಸಲಾಗಿದೆ. ಮಧ್ಯಸ್ಥಿಕೆಯ ಮೇಲೆ ರಾಜಕೀಯ ಮೇಲ್ವಿಚಾರಣೆಗಾಗಿಯೂ ಉನ್ನತ ಮಟ್ಟದ ಸಮಿತಿ ರಚನೆಗೆ ಒಪ್ಪಿಗೆ ದೊರಕಿದೆ. ಇದು, ಮಧ್ಯಸ್ಥಿಕೆದಾರರಿಂದ ನಿಯಮಿತ ವರದಿಗಳನ್ನು ಪಡೆಯುತ್ತಿರುತ್ತದೆ. ಅಣ್ವಸ್ತ್ರ, ಆರ್ಥಿಕ ನಿರ್ಬಂಧ, ಇತರೆ ವಿವಾದ ಪರಿಹರಿಸುವ ಜವಾಬ್ದಾರಿ ಹೊತ್ತಿರುವ ಗುಂಪುಗಳ ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಐತಿಹಾಸಿಕ ಸಭೆ-ವ್ಯಾನ್ಸ್&zwnj;&lt;/strong&gt;&lt;/h2&gt;&lt;p&gt;ಸ್ವಿಜರ್ಲೆಂಡ್&zwnj;ನಲ್ಲಿ ನಡೆಯುತ್ತಿರುವ ಮಾತುಕತೆಯನ್ನು ಜೆಡಿ ವ್ಯಾನ್ಸ್&zwnj; ಐತಿಹಾಸಿಕ ಸಭೆ ಎಂದು ವರ್ಣಿಸಿದ್ದಾರೆ. &lsquo;ಈ ಸಭೆಯಲ್ಲಿ ಎಲ್ಲಾ ಸಮಸ್ಯೆಗಳಿಗೆ ನಿವಾರಣೆ ಕಂಡುಕೊಳ್ಳಲಾಗದಿದ್ದರೂ, ಒಂದು ತಂಡವಾಗಿ ಕುಳಿತು ಮಾತುಕತೆ ನಡೆಸಲು ಸಿಕ್ಕಿರುವ ಐತಿಹಾಸಿಕ ಅವಕಾಶವಾಗಿದೆ. ಇರಾನ್&zwnj;ನಿಂದಾಗಿ ಪ್ರಾದೇಶಿಕ ಅಸ್ಥಿರತೆ ಸೃಷ್ಟಿಯಾಗಿರುವ ಹೊರತಾಗಿಯೂ, ಶಾಂತಿ ಮತ್ತು ಸಮೃದ್ಧಿ ಸ್ಥಾಪನೆಗೆ ಕೆಲಸ ಮಾಡಬಹುದು&rsquo; ಎಂದು ಅವರು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಇರಾನ್&zwnj; ಸಭಾತ್ಯಾಗ:&lt;/strong&gt;&lt;/h3&gt;&lt;p&gt;ಮಾತುಕತೆ ನಡೆಯುತ್ತಿದ್ದ ಹೊತ್ತಿನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಮತ್ತೆ ದಾಳಿ ಮಾಡುವ ಬೆದರಿಕೆ ಹಾಕಿದ ಕಾರಣ, ಮಾತುಕತೆ ಸ್ಥಗಿತವಾಯಿತು ಎಂದು ಇರಾನ್&zwnj; ಮಾಧ್ಯಮಗಳು ವರದಿ ಮಾಡಿವೆ. ಇರಾನ್&zwnj; ನಿಯೋಗವು ಕತಾರ್&zwnj; ಮಧ್ಯಸ್ಥಿಕೆದಾರರನ್ನು ಭೇಟಿ ಆಗಿ ಹೊರಟಿತು ಎನ್ನಲಾಗಿದೆ. ಆದರೆ ಅಮೆರಿಕದ ರಾಯಭಾರಿ ಮಾತ್ರ, ಇರಾನ್&zwnj; ನಿಯೋಗದ ಜತೆ ಮಾತುಕತೆ ಪ್ರಗತಿಯಲ್ಲಿದೆ ಎಂದಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಂಧಾನದ ಮಧ್ಯೆ ಇರಾನ್&zwnj;ಗೆ ಟ್ರಂಪ್&zwnj; ಡಬಲ್ ವಾರ್ನಿಂಗ್! ಇಸ್ರೇಲ್ ಪ್ರಧಾನಿಗೆ ಮುಜುಗರ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/us-iran-talks-it-has-been-agreed-to-formulate-a-framework-for-a-final-agreement-within-60-days-mrq/articleshow-a2l6x7h"/>
        </item>
        <item>
            <title><![CDATA[ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಂತೆ ಮನವಿ; ರೈತ ಸಂಘದ ಆತಂಕ ಏನು?]]></title>
            <link>https://kannada.asianetnews.com/karnataka-districts/appeal-not-to-sign-india-us-free-trade-agreement-what-are-the-concerns-of-the-haveri-farmers-association-mrq/articleshow-po3kex2</link>
            <guid isPermaLink="true">https://kannada.asianetnews.com/karnataka-districts/appeal-not-to-sign-india-us-free-trade-agreement-what-are-the-concerns-of-the-haveri-farmers-association-mrq/articleshow-po3kex2</guid>
            <pubDate>Tue, 23 Jun 2026 08:20:21 +0530</pubDate>
            <description><![CDATA[ಮುಂಬರಲಿರುವ ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದವು ದೇಶದ ಕೃಷಿ ವಲಯಕ್ಕೆ ಮಾರಕವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆತಂಕ ವ್ಯಕ್ತಪಡಿಸಿದೆ. ಆಮದು ಸುಂಕ ಕಡಿತ ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಧಕ್ಕೆಯಾಗುವ ಸಾಧ್ಯತೆಯಿಂದಾಗಿ, ಈ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ರೈತ ಮುಖಂಡರು ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvs5y8y4880dkbygqep5a7dm,imgname-haveri-farmer--1--1782182781892.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ&lt;/strong&gt;: ಮುಂಬರಲಿರುವ ಭಾರತ-ಅಮೆರಿಕ ಮಧ್ಯಂತರ ಮುಕ್ತ ವ್ಯಾಪಾರ ಒಪ್ಪಂದದಿಂದ ದೇಶದ ಕೃಷಿ ವಲಯಕ್ಕೆ ಭಾರಿ ಪೆಟ್ಟು ಬೀಳಲಿದ್ದು, ಯಾವುದೇ ಕಾರಣಕ್ಕೂ ರೈತರ ಹಿತಾಸಕ್ತಿ ಬಲಿಗೊಡುವ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಮೋದಿಯವರಿಗೆ ತುರ್ತು ಮನವಿ ಸಲ್ಲಿಸಿದರು.&lt;/p&gt;&lt;p&gt;ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ರೈತ ಮುಖಂಡರು, ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಜೂ. 23, 24ರಂದು ನವದೆಹಲಿಗೆ ಭೇಟಿ ನೀಡಲಿದ್ದು, ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ. ಇದರಿಂದ ರೈತ ಸಮುದಾಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಸ್ಥಳೀಯ ಮಾರುಕಟ್ಟೆ ನಾಶದ ಆತಂಕ&lt;/strong&gt;&lt;/h2&gt;&lt;p&gt;ಹತ್ತಿ, ಜೋಳ, ಸೋಯಾಬೀನ್ ಎಣ್ಣೆ ಹಾಗೂ ಸಂಸ್ಕರಿಸಿದ ಹಣ್ಣುಗಳ ಮೇಲಿನ ಆಮದು ಸುಂಕ ಕಡಿತಗೊಳಿಸಿದರೆ, ಅಮೆರಿಕದ ಸಬ್ಸಿಡಿಯುಕ್ತ ಉತ್ಪನ್ನಗಳ ಎದುರು ನಮ್ಮ ರೈತರು ಸ್ಪರ್ಧಿಸಲು ಸಾಧ್ಯವಿಲ್ಲ. ತಾಂತ್ರಿಕ ಅಡೆತಡೆಗಳ ನಿವಾರಣೆಯಿಂದ ವಿದೇಶಿ ಹಾಲು, ಮಾಂಸ, ಜೋಳ ಭಾರತದ ಮಾರುಕಟ್ಟೆ ಪ್ರವೇಶಿಸಿ ಸ್ಥಳೀಯ ಮಾರುಕಟ್ಟೆ ನಾಶವಾಗಲಿದೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಅಮೆರಿಕವು ಭಾರತದ ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ತರಲು ಒತ್ತಡ ಹೇರುತ್ತಿದೆ. ಈಗಾಗಲೇ ಸೂಪರ್ ಎಲ್-ನಿನೋ ಮುಂಗಾರು ಭೀತಿಯಿರುವಾಗ, ಎಂ.ಎಸ್.ಪಿಗೆ ಧಕ್ಕೆಯಾದರೆ ಭತ್ತ ಮತ್ತು ಗೋಧಿ ಬೆಳೆಯುವ ಕೋಟ್ಯಂತರ ರೈತರು ಬೀದಿಪಾಲಾಗಲಿದ್ದಾರೆ. ಯಾವುದೇ ಕಾರಣಕ್ಕೂ ಕೃಷಿಕರು, ಹಾಲು ಉತ್ಪಾದಕರು ಹಾಗೂ ಮೀನುಗಾರರನ್ನು ಸಂಕಷ್ಟಕ್ಕೆ ತಳ್ಳುವ ಈ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಹಾಕಬಾರದು ಎಂದು ಒತ್ತಾಯಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೈಕೊಟ್ಟ ಮಳೆ: 11 ಎಕ್ರೆ ಗೋವಿನಜೋಳದ ಬೆಳೆ ಟ್ರ&zwj;್ಯಾಕ್ಟರ್&zwnj;ನಿಂದ ನಾಶ ಮಾಡಿದ ಹಾವೇರಿ ರೈತ&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಶಿವಯೋಗಿ ಹೊಸಗೌಡ್ರ, ಜಾನ್ ಪುನಿತ್, ಸುಭಾಸ ಬನ್ನಿಹಟ್ಟಿ, ರಾಜು ತರ್ಲಗಟ್ಟ ಇತರರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 17 ಲಕ್ಷಕ್ಕೆ ಕೋಟ್ಯಂತರ ಮೌಲ್ಯದ 5 ಎಕರೆ ಕೃಷಿಭೂಮಿ ಕಬಳಿಕೆ? ದೂರು ದಾಖಲಿಸಿದ ನೊಂದ ರೈತ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/appeal-not-to-sign-india-us-free-trade-agreement-what-are-the-concerns-of-the-haveri-farmers-association-mrq/articleshow-po3kex2"/>
        </item>
        <item>
            <title><![CDATA[17 ಲಕ್ಷಕ್ಕೆ ಕೋಟ್ಯಂತರ ಮೌಲ್ಯದ 5 ಎಕರೆ ಕೃಷಿಭೂಮಿ ಕಬಳಿಕೆ? ದೂರು ದಾಖಲಿಸಿದ ನೊಂದ ರೈತ]]></title>
            <link>https://kannada.asianetnews.com/karnataka-districts/gadag-farmer-accused-of-grabbing-5-acres-of-agricultural-land-worth-crores-for-rs-17-lakhs-mrq/articleshow-7i48i8t</link>
            <guid isPermaLink="true">https://kannada.asianetnews.com/karnataka-districts/gadag-farmer-accused-of-grabbing-5-acres-of-agricultural-land-worth-crores-for-rs-17-lakhs-mrq/articleshow-7i48i8t</guid>
            <pubDate>Tue, 23 Jun 2026 08:11:55 +0530</pubDate>
            <description><![CDATA[&lt;p&gt;17 ಲಕ್ಷ ಸಾಲ ಪಡೆದ ರೈತನಿಗೆ ವಂಚಿಸಿ ಕೋಟ್ಯಂತರ ಮೌಲ್ಯದ 5 ಎಕರೆ ಜಮೀನನ್ನು ಬಡ್ಡಿ ದಂಧೆಕೋರರು ಕಬಳಿಸಿದ್ದಾರೆ. ಅಡಮಾನ ಪತ್ರದ ಬದಲು ಖರೀದಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಈ ಮೋಸ ಎಸಗಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs5c41phfdm780q6w04jgw2,imgname-agriculture-1782182187062.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ:&lt;/strong&gt; 17 ಲಕ್ಷ ಸಾಲ ಪಡೆದ ರೈತನ 5 ಎಕರೆ ಜಮೀನನ್ನೇ ಕಬಳಿಸಿದ ಘಟನೆಯೊಂದು ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹೊಸ ಮುಖ ಇದಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.&lt;/p&gt;&lt;p&gt;ಬೆಳಹೋಡ ಗ್ರಾಮದ ರೈತ ಮಹ್ಮದ್ ರಫೀಕ್ ದೊಡ್ಡಮನಿ ಹಾಗೂ ಅವರ ಸಹೋದರರು ಆರ್ಥಿಕ ಸಂಕಷ್ಟದ ಹಿನ್ನೆಲೆ ಖಾಸಗಿ ಬಡ್ಡಿ ದಂಧೆಕೋರರಲ್ಲಿ ₹17 ಲಕ್ಷ ಸಾಲ ಕೇಳಿದ್ದರು. ಅದಕ್ಕೆ ಒಪ್ಪಿದ ಅವರು ಮುಂಗಡವಾಗಿಯೇ ₹5 ಲಕ್ಷ ಬಡ್ಡಿ ಕಡಿತ ಮಾಡಿಕೊಂಡು ಕೇವಲ ₹12 ಲಕ್ಷ ಮಾತ್ರ ನೀಡಿದ್ದಾರೆ.&lt;/p&gt;&lt;p&gt;ಸಾಲದ ಭದ್ರತೆಯಾಗಿ ರೈತನ 5 ಎಕರೆ ಜಮೀನಿನ ದಾಖಲೆಗಳನ್ನು ಪಡೆದುಕೊಂಡ ಆರೋಪಿಗಳು, ಅಡಮಾನ ನೋಂದಣಿ ಮಾಡಿಕೊಳ್ಳುವುದಾಗಿ ನಂಬಿಸಿ, ಅಡಮಾನ ಪತ್ರದ ಬದಲಿಗೆ ಖರೀದಿ ಪತ್ರ ಸಿದ್ಧಪಡಿಸಿ, ಶೇಷಗಿರಿಸಾ ಬಾಕಳೆ ಹೆಸರಿಗೆ ಜಮೀನಿನ ಖರೀದಿ ಪತ್ರ ಮಾಡಿಸಲಾಗಿದೆ. ಈ ಬಡ್ಡಿ ದಂದೆಕೋರರು ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.&lt;/p&gt;&lt;p&gt;ಕೋಟ್ಯಂತರ ಮೌಲ್ಯದ 5 ಎಕರೆ ಜಮೀನನ್ನು ಕಳೆದುಕೊಂಡ ರೈತ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಸಂಪರ್ಕಿಸಿ ದೂರು ಸಲ್ಲಿಸಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಎಸ್&zwnj;ಪಿ ತಕ್ಷಣ ತನಿಖೆಗೆ ಸೂಚನೆ ನೀಡಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;&lt;strong&gt;ರೌಡಿಶೀಟರ್ &amp;nbsp;ಬಂಧನ&lt;/strong&gt;&lt;/h2&gt;&lt;p&gt;ಈ ವಂಚನೆಯ ಹಿಂದೆ ಬೆಟಗೇರಿ ಮೂಲದ ರೌಡಿಶೀಟರ್ ಹಾಗೂ ಬಡ್ಡಿ ದಂಧೆಕೋರ ಯುವರಾಜ ಕೊರವರನ ಕೈವಾಡವಿದೆ ಎಂದು ರೈತ ಕುಟುಂಬ ಆರೋಪಿಸಿದ ಹಿನ್ನೆಲೆಯಲ್ಲಿ ಪೊಲೀಸರು ರೌಡಿಶೀಟರ್ ಯುವರಾಜ ಕೊರವರ ಹಾಗೂ ರವಿ ಕೌಜಗೇರಿ ಅವರನ್ನು ಬಂಧಿಸಿದ್ದಾರೆ. ಇನ್ನುಳಿದ ಬಸನಗೌಡ ಕರಮುಡಿ, ಶೇಷಗೀರಿಸಾ ಬಾಕಳೆ ಹಾಗೂ ಜಗದೀಶ ಅಯ್ಯನಗೌಡ ಎಂಬವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.&lt;/p&gt;&lt;h3&gt;&lt;strong&gt;ಹೆಚ್ಚುತ್ತಿದೆ ಅಕ್ರಮ ಬಡ್ಡಿ ದಂಧೆ&lt;/strong&gt;&lt;/h3&gt;&lt;p&gt;ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆ ಹಾಗೂ ಜಮೀನು ಕಬಳಿಕೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಾರದ ಹಿಂದಷ್ಟೇ ಬಡ್ಡಿ ಹಣಕ್ಕಾಗಿ ಮನೆಯ ಕಾಂಪೌಂಡ್ ಧ್ವಂಸಗೊಳಿಸಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ರೈತನ ಜಮೀನನ್ನೇ ಕಬಳಿಸಿರುವ ಆರೋಪ ಬೆಳಕಿಗೆ ಬಂದಿರುವುದು ಬಡ್ಡಿ ದಂಧೆಕೋರರ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;ಅಪರಾಧ ಹಿನ್ನೆಲೆ&lt;/strong&gt;&lt;/p&gt;&lt;p&gt;ಈ ಪ್ರಕರಣದಲ್ಲಿ ತೊಂದರೆಗೊಳಗಾದ ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ತಮ್ಮ ಅಳಲನ್ನು ತೋಡಿಕೊಂಡು, ಆರೋಪಿತರು ನಮಗೆ ನಂಬಿಸಿ ಮೋಸ ಮಾಡಿ ಜಮೀನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. ನಂತರ ಪರಿಶೀಲನೆ ಮಾಡಿದಾಗ ಆ ವ್ಯಕ್ತಿ ಅಪರಾಧ ಹಿನ್ನೆಲೆ ತಿಳಿದು ಬಂದಿದೆ. ಅದಕ್ಕಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; 1600 ಕಾನ್ಸ್&zwnj;ಟಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೊನೆ ದಿನಾಂಕ, ಅರ್ಹತೆ, ವಯೋಮಿತಿ ಎಷ್ಟಿರಬೇಕು?&lt;/strong&gt;&lt;/p&gt;&lt;h3&gt;&lt;strong&gt;ನ್ಯಾಯ ಬೇಕು&lt;/strong&gt;&lt;/h3&gt;&lt;p&gt;ನಮಗೆ ಅಡಚಣೆ ಇತ್ತು. ಅದಕ್ಕಾಗಿ ಹಣವನ್ನು ಪಡೆದಿರುತ್ತೇವೆ. ಆದರೆ ನಂಬಿಸಿ ಮೋಸ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಅತ್ಯಂತ ಬೆಲೆಬಾಳುವ ಜಮೀನು ಕಿತ್ತುಕೊಂಡು ನಮ್ಮನ್ನು ಬೀದಿಪಾಲು ಮಾಡಿದ್ದಾರೆ ಎಂದು ಮಹ್ಮದ್ ರಫೀಕ್ ದೊಡ್ಡಮನಿ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅನ್ನಭಾಗ್ಯ ಯೋಜನೆಗೂ &lsquo;ಸರ್ಜರಿ&rsquo;: 14 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದು? ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-farmer-accused-of-grabbing-5-acres-of-agricultural-land-worth-crores-for-rs-17-lakhs-mrq/articleshow-7i48i8t"/>
        </item>
        <item>
            <title><![CDATA[ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; 1600 ಕಾನ್ಸ್‌ಟಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೊನೆ ದಿನಾಂಕ, ಅರ್ಹತೆ, ವಯೋಮಿತಿ ಎಷ್ಟಿರಬೇಕು?]]></title>
            <link>https://kannada.asianetnews.com/gallery/state/karnataka-police-department-recruitment-for-1600-post-what-last-date-age-rav-qaiad8u</link>
            <guid isPermaLink="true">https://kannada.asianetnews.com/gallery/state/karnataka-police-department-recruitment-for-1600-post-what-last-date-age-rav-qaiad8u</guid>
            <pubDate>Tue, 23 Jun 2026 07:56:25 +0530</pubDate>
            <description><![CDATA[&lt;p&gt;ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್&zwnj;ಪಿ) ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಹಯೋಗದೊಂದಿಗೆ 2026ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್&zwnj;ಟೇಬಲ್ (ಸಿಎಆರ್&zwnj;/ಡಿಎಆರ್&zwnj;) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs3bpwng3zhqyns36wrznf7,imgname----------------------59--1782180076437.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್&zwnj;ಪಿ) ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಹಯೋಗದೊಂದಿಗೆ 2026ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್&zwnj;ಟೇಬಲ್ (ಸಿಎಆರ್&zwnj;/ಡಿಎಆರ್&zwnj;) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕರ್ನಾಟಕ ರಾಜ್ಯ ಪೊಲೀಸ್ (KSP) ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಹಯೋಗದೊಂದಿಗೆ 2026ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್&zwnj;ಟೇಬಲ್ (ಸಿಎಆರ್&zwnj;/ಡಿಎಆರ್&zwnj;) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳಿಗೆ ಆನ್&zwnj;ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.&lt;/p&gt;&lt;img&gt;&lt;p&gt;ಕಾನ್&zwnj;ಸ್ಟೇಬಲ್&zwnj; (ಸಿಎರ್ಆ/ ಡಿಎಆರ್) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಜುಲೈ 22 ಕೊನೆ ದಿನವಾಗಿದೆ.&lt;/p&gt;&lt;img&gt;&lt;p&gt;ಮಿಕ್ಕುಳಿದ ವೃಂದದ 1,421 ಹಾಗೂ ಸ್ಥಳೀಯ ವೃಂದದ 179 ಹುದ್ದೆಗಳಿಗೆ ಪ್ರತ್ಯೇಕವಾದ ಅರ್ಜಿ ಆಹ್ವಾನಿಸಲಾಗಿದೆ. ಸೆ.6ರಂದು ಪ್ರತ್ಯೇಕವಾಗಿಯೇ ಲಿಖಿತಪರೀಕ್ಷೆ ನಡೆಸಲಾಗುವುದು ಎಂದುಎಂದುಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಋಣಾತ್ಮಕ ಮೌಲ್ಯಮಾಪನ ಇರುತ್ತದೆ. ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ವೃತ್ತವನ್ನು ಶೇಡ್ ಮಾಡುವುದು ಕಡ್ಡಾಯ. ಇದಕ್ಕೆ ಹೆಚ್ಚುವರಿಯಾಗಿ ಐದು ನಿಮಿಷ ಸಮಯ ನೀಡಲಾಗುತ್ತದೆ. ಒಂದು ವೇಳೆ ಐದನೇ ವೃತ್ತವನ್ನು ಶೇಡ್&zwnj; ಮಾಡದೇ ಇದ್ದಲ್ಲಿ ಪ್ರತಿ ಪ್ರಶ್ನೆಗೆ 0.25 ಅಂಕ ಕಡಿತಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಅರ್ಜಿ ಸಲ್ಲಿಸುವ ವಿಧಾನ&lt;/strong&gt;&lt;/p&gt;&lt;p&gt;ಅಧಿಕೃತ ವೆಬ್&zwnj;ಸೈಟ್ https://cetonline.karnataka.gov.in/kea/ ಭೇಟಿ ನೀಡಿ. ನಿಮ್ಮ ಆದ್ಯತೆಗೆ ಅನುಗುಣವಾಗಿ KK ಅಥವಾ RPC ವಲಯದ ಸಕ್ರಿಯ ಲಿಂಕ್ ಅನ್ನು ಆಯ್ಕೆ ಮಾಡಿ. ಅಧಿಕೃತ ಪಿಡಿಎಫ್ (PDF) ಅಧಿಸೂಚನೆ ಡೌನ್&zwnj;ಲೋಡ್ ಮಾಡಿ, ನಿಮ್ಮ ಅರ್ಹತೆಯನ್ನು ಸಂಪೂರ್ಣವಾಗಿ ಓದಿ ಖಚಿತಪಡಿಸಿಕೊಳ್ಳಿ.&lt;/p&gt;&lt;p&gt;'Apply Online' ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.&lt;/p&gt;&lt;p&gt;ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್&zwnj;ಲೋಡ್ ಮಾಡಿ.&lt;/p&gt;&lt;p&gt;ನಿಮ್ಮ ಪ್ರವರ್ಗಕ್ಕೆ ಅನುಗುಣವಾಗಿ ಆನ್&zwnj;ಲೈನ್ ಪೇಮೆಂಟ್ ಗೇಟ್&zwnj;ವೇ ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಿ.&lt;/p&gt;&lt;p&gt;ಫಾರ್ಮ್ ಅನ್ನು ಸಬ್ಮಿಟ್ ಮಾಡುವ ಮುನ್ನ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ನಂತರ ಪ್ರಿಂಟೌಟ್ ಪಡೆದು ಇಟ್ಟುಕೊಳ್ಳಿ.&lt;/p&gt;&lt;p&gt;ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 22-06-2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-07-2026&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/karnataka-police-department-recruitment-for-1600-post-what-last-date-age-rav-qaiad8u"/>
        </item>
        <item>
            <title><![CDATA[Hubballi To Dharwad: ದಣಿದ ಚಿಗರಿಗಳಿಗೆ ಪ್ರತ್ಯೇಕ ಬಿಆರ್‌ಟಿಎಸ್‌ ಕಾರಿಡಾರ್‌ ಏಕೆ?]]></title>
            <link>https://kannada.asianetnews.com/karnataka-districts/hubballi-dharwad-bus-service-public-demands-to-eliminate-traffic-congestion-by-canceling-the-brts-corridor-mrq/articleshow-yrsg624</link>
            <guid isPermaLink="true">https://kannada.asianetnews.com/karnataka-districts/hubballi-dharwad-bus-service-public-demands-to-eliminate-traffic-congestion-by-canceling-the-brts-corridor-mrq/articleshow-yrsg624</guid>
            <pubDate>Tue, 23 Jun 2026 07:53:24 +0530</pubDate>
            <description><![CDATA[ಹುಬ್ಬಳ್ಳಿ-ಧಾರವಾಡದ ಬಿಆರ್&zwnj;ಟಿಎಸ್&zwnj; ಪ್ರತ್ಯೇಕ ಕಾರಿಡಾರ್&zwnj;ನಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದ್ದು, ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಹದಗೆಟ್ಟಿರುವ ಚಿಗರಿ ಬಸ್&zwnj;ಗಳು ಮತ್ತು ಕೆಲವು ಭಾಗಗಳಲ್ಲಿ ಈಗಾಗಲೇ ಮಿಶ್ರಪಥದಲ್ಲಿ ಸಂಚರಿಸುತ್ತಿರುವುದರಿಂದ, ಕಾರಿಡಾರ್ ರದ್ದುಪಡಿಸಿ ಸಂಚಾರ ದಟ್ಟಣೆ ನಿವಾರಿಸಬೇಕೆಂಬುದು ಸಾರ್ವಜನಿಕರ ಪ್ರಬಲ ಒತ್ತಾಯವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvs4gj4hcq4d3c8bae2h9hps,imgname-brts-1782181283985.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಾನಂದ ಗೊಂಬಿ&lt;/strong&gt;&lt;/p&gt;&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ದನಿದ ಚಿಗರಿಗಳಿಗೆ ಬಿಆರ್&zwnj;ಟಿಎಸ್&zwnj; ಕಾರಿಡಾರ್&zwnj; ಏಕೆ? ಬಿಆರ್&zwnj;ಟಿಎಸ್&zwnj; ಕಾರಿಡಾರ್&zwnj;ನ್ನೆಲ್ಲ ರದ್ದುಪಡಿಸಿ ಎಲ್ಲ ವಾಹನಗಳಿಗೆ ಅವಕಾಶ ಮಾಡಿಕೊಟ್ಟು ಪುಣ್ಯಕಟ್ಕೊಳ್ಳಿ..!&lt;/p&gt;&lt;p&gt;ಇದು ಹುಬ್ಬಳ್ಳಿ-ಧಾರವಾಡ ಮಹಾನಗರದ ಜನತೆ ಒತ್ತಾಯಿಸುತ್ತಿರುವ ಪರಿ. ಇದಕ್ಕೆ ಕಾರಣವೂ ಇಲ್ಲದಿಲ್ಲ. 2018ರಿಂದ ಆರಂಭವಾಗಿರುವ ಬಿಆರ್&zwnj;ಟಿಎಸ್&zwnj;ಗಾಗಿ ಪ್ರತ್ಯೇಕ ಕಾರಿಡಾರ್&zwnj; ಮಾಡಲಾಗಿದೆ. ಸರಿಸುಮಾರು 100 ಬಸ್&zwnj;ಗಳು ಓಡಾಡುತ್ತಿದ್ದವು. ಅವಳಿ ನಗರದ ಮಧ್ಯೆ ಸಂಚರಿಸುವ ಜನತೆಗೆ ಹೆಚ್ಚಿನ ಹವಾನಿಯಂತ್ರಿತ ಬಸ್&zwnj;ಗಳಲ್ಲಿ ಸಂಚರಿಸುವಂತಾಗಲಿ. ಜತೆಗೆ ತ್ವರಿತಗತಿಯಲ್ಲಿ ಪ್ರಯಾಣಿಸುವಂತಾಗಲಿ ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗುತ್ತಿದೆ. ಮಿಶ್ರಪಥ ಯಾವಾಗಲೂ ಬರೀ ಟ್ರಾಫಿಕ್&zwnj;ನಿಂದ ಕೂಡಿರುತ್ತಿತ್ತು.&lt;/p&gt;&lt;h2&gt;&lt;strong&gt;ಬಿಆರ್&zwnj;ಟಿಎಸ್&zwnj;ಗೆ ಪರ್ಯಾಯವಾಗಿ ಎಲ್&zwnj;ಆರ್&zwnj;ಟಿ ಚಿಂತನೆ&lt;/strong&gt;&lt;/h2&gt;&lt;p&gt;ಕಾರಿಡಾರ್&zwnj;ನಲ್ಲಿ ಸಾರ್ವಜನಿಕ ವಾಹನಗಳಿಗೂ ಅವಕಾಶ ನೀಡಬೇಕು. ಇಲ್ಲವೇ ಬಿಆರ್&zwnj;ಟಿಎಸ್&zwnj; ಬಸ್&zwnj;ಗಳನ್ನೇ ರದ್ದುಪಡಿಸಿ ಎಂಬ ಬೇಡಿಕೆಯನ್ನಿಟ್ಟುಕೊಂಡು ರಸ್ತೆ ತಡೆ, ರ್&zwj;ಯಾಲಿ ಹೀಗೆ ಎಲ್ಲ ಬಗೆಯ ಹೋರಾಟಗಳು ನಡೆದಿವೆ. ಇವುಗಳ ನಡುವೆಯೇ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬಿಆರ್&zwnj;ಟಿಎಸ್&zwnj;ಗೆ ಪರ್ಯಾಯವಾಗಿ ಎಲ್&zwnj;ಆರ್&zwnj;ಟಿ (ಲೈಟ್&zwnj; ಟ್ರಾನ್ಸಿಟ್&zwnj; ರೈಲ್&zwnj;) ಜಾರಿಗೊಳಿಸುವ ನಿಟ್ಟಿನಲ್ಲೂ ಸಮೀಕ್ಷೆ ನಡೆಸಿದ್ದರು. ಹಿಸ್ಸಾ ಎಂಬ ಕಂಪನಿ ಸಮೀಕ್ಷೆ ನಡೆಸಿ ಎಲ್&zwnj;ಆರ್&zwnj;ಟಿ ಜಾರಿಗೊಳಿಸುವುದು ಉತ್ತಮ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿತ್ತು. ಅದಾದ ಬಳಿಕ ಸರ್ಕಾರವೂ ಬದಲಾಯಿತು. ಸಚಿವರಾಗಿದ್ದ ಲಾಡ್&zwnj; ಕೂಡ ಮಾಜಿ ಆದರು. ಸದ್ಯ ಯಾರೂ ಸಚಿವರು ಇಲ್ಲದ ಜಿಲ್ಲೆಯಾಗಿದೆ.&lt;/p&gt;&lt;h3&gt;&lt;strong&gt;ಈಗೇನು ಸಮಸ್ಯೆ?&lt;/strong&gt;&lt;/h3&gt;&lt;p&gt;ಈಗಿರುವ ಸಮಸ್ಯೆಯೆಂದರೆ ಫ್ಲೈಓವರ್&zwnj; ಕಾಮಗಾರಿಯಿಂದಾಗಿ ಬಿಆರ್&zwnj;ಟಿಎಸ್&zwnj;ನ ಕಾರಿಡಾರ್&zwnj; ಅರ್ಧಕ್ಕಿಂತ ಕಡಿಮೆಯಾಗಿದೆ. ಮಹಿಳಾ ವಿದ್ಯಾಪೀಠದಿಂದಷ್ಟೇ ಕಾರಿಡಾರ್&zwnj; ಪ್ರತ್ಯೇಕವಾಗಿದೆ. ಉಳಿದಂತೆ ಹಳೇ ಬಸ್&zwnj; ನಿಲ್ದಾಣ, ಕಾರ್ಪೋರೇಷನ್&zwnj;, ರೈಲ್ವೆ ನಿಲ್ದಾಣ, ಸಿಬಿಟಿ ವರೆಗೂ ಈ ಚಿಗರಿ ಬಸ್&zwnj;ಗಳು ಮಿಶ್ರ ಪಥದಲ್ಲೇ ಸಂಚರಿಸುತ್ತಿವೆ. ಯಾವುದೇ ಸಮಸ್ಯೆಯಾಗುತ್ತಿಲ್ಲ. ಹಾಗಾದರೆ ಮಹಿಳಾ ವಿದ್ಯಾಪೀಠದಿಂದಾದರೂ ಏಕೆ ಪ್ರತ್ಯೇಕ ಕಾರಿಡಾರ್&zwnj; ಎಂಬ ಪ್ರಶ್ನೆ ಇದೀಗ ಸಾರ್ವಜನಿಕರದ್ದು. ಅಲ್ಲಿ ಮಿಶ್ರಪಥದಲ್ಲಿ ಸಂಚರಿಸಬಹುದಾದರೆ ಇಲ್ಲಿಂದ ಧಾರವಾಡ ವರೆಗೂ ಮಿಶ್ರಪಥದಲ್ಲೇ ಸಂಚರಿಸಲಿ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಡಕೋಟಾ ಬಸ್&zwnj;ಗಳಿಗೇಕೆ ಕಾರಿಡಾರ್&zwnj;?&lt;/strong&gt;&lt;/h3&gt;&lt;p&gt;ಪೂರ್ಣವಾಗಿ ಮಹಿಳಾ ವಿದ್ಯಾಪೀಠದಿಂದ ಧಾರವಾಡ ವರೆಗೂ ಪ್ರತ್ಯೇಕ ಕಾರಿಡಾರ್&zwnj; ತೆರವುಗೊಳಿಸಿ, ಮಧ್ಯೆ ಬ್ಯಾರಿಕೇಡ್&zwnj; ಅಳವಡಿಸಬೇಕು. ಎರಡು ಬದಿಯಲ್ಲಿ ಏಕಮುಖ ಸಂಚಾರ ಮಾಡಿ ಎಲ್ಲ ವಾಹನಗಳಿಗೂ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಟ್ರಾಫಿಕ್&zwnj; ಕಿರಿಕಿರಿಯೇ ಇರುವುದಿಲ್ಲ.&lt;/p&gt;&lt;p&gt;ಬಿಆರ್&zwnj;ಟಿಎಸ್&zwnj; ಬಸ್&zwnj;ಗಳು ಇದೀಗ ಮೊದಲಿನಂತೆ ಹೈಟೆಕ್&zwnj; ಬಸ್&zwnj;ಗಳಾಗಿ ಉಳಿದಿಲ್ಲ. ಹವಾನಿಯಂತ್ರಿತ ವ್ಯವಸ್ಥೆ ಹಾಳಾಗಿದೆ. ಮುಂದಿನ ನಿಲ್ದಾಣದ ಮಾಹಿತಿ ನೀಡುವ ಧ್ವನಿಮುದ್ರಿಕೆ (ಜಿಂಗಲ್&zwnj;) ಮೌನವಾಗಿದೆ. ಮಳೆ ಬಂದರೆ ಸೋರುತ್ತವೆ. ಅಲ್ಲಲ್ಲಿ ಜಿರಳೆ ಕಾಣಸಿವೆ.&lt;/p&gt;&lt;p&gt;ಈಗಾಗಲೇ ಬೈಕ್&zwnj;, ಕಾರು, ಬಸ್&zwnj;ಗಳು ಸಹ ಕಾರಿಡಾರ್&zwnj;ನಲ್ಲೇ ಓಡಾಡುತ್ತವೆ. ಹೀಗಾಗಿ ಪ್ರತ್ಯೇಕ ಕಾರಿಡಾರ್&zwnj; ಮಾಡುವ ಅಗತ್ಯವಾದರೂ ಏನು? ಕಾರಿಡಾರ್&zwnj; ತೆರೆದು ಮಧ್ಯೆ ಬ್ಯಾರಿಕೇಡ್&zwnj; ಹಾಕಿ. ಟ್ರಾಫಿಕ್&zwnj; ಜಾಮ್&zwnj;ನಿಂದ ಮುಕ್ತವಾಗುತ್ತದೆ. ಜತೆಗೆ ಎಲ್&zwnj;ಆರ್&zwnj;ಟಿ ಸೇರಿದಂತೆ ಯಾವುದೇ ಯೋಜನೆಯೂ ಅಗತ್ಯವೇ ಬೀಳಲ್ಲ ಎಂಬ ಅಂಬೋಣ ಸಾರ್ವಜನಿಕರದ್ದು.&lt;/p&gt;&lt;p&gt;ಕಾರಿಡಾರ್&zwnj;ನಲ್ಲಿ ಎಲ್ಲ ವಾಹನಗಳು ಓಡಾಡುತ್ತಿವೆ. ಪ್ರತ್ಯೇಕ ಕಾರಿಡಾರ್&zwnj; ಎನ್ನುವುದಕ್ಕೆ ಅರ್ಥವೇ ಉಳಿದಿಲ್ಲ. ಬಸ್&zwnj;ಗಳ ಪರಿಸ್ಥಿತಿಯೂ ಸರಿ ಇಲ್ಲ. ಪ್ರತ್ಯೇಕ ಕಾರಿಡಾರ್&zwnj;ನ್ನು ತೆರವುಗೊಳಿಸಿ ಮಧ್ಯೆ ಬ್ಯಾರಿಕೇಡ್&zwnj; ಅಳವಡಿಸಿ ಟ್ರಾಫಿಕ್&zwnj; ಕಿರಿಕಿರಿ ತಗ್ಗಿಸಬೇಕು ಎಂದು ಈರೇಶ್ ಜಗಜಂಪಿ &amp;nbsp;ಎಂಬವರು ಹೇಳುತ್ತಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hubballi-dharwad-bus-service-public-demands-to-eliminate-traffic-congestion-by-canceling-the-brts-corridor-mrq/articleshow-yrsg624"/>
        </item>
        <item>
            <title><![CDATA[ಕೈಕೊಟ್ಟ ಮಳೆ: 11 ಎಕ್ರೆ ಗೋವಿನಜೋಳದ ಬೆಳೆ ಟ್ರ‍್ಯಾಕ್ಟರ್‌ನಿಂದ ನಾಶ ಮಾಡಿದ ಹಾವೇರಿ ರೈತ]]></title>
            <link>https://kannada.asianetnews.com/karnataka-districts/haveri-bydadgi-lack-of-monsoon-rains-shidenoor-village-farmer-destroys-11-acres-of-crop-with-tractor-mrq/articleshow-5br2og5</link>
            <guid isPermaLink="true">https://kannada.asianetnews.com/karnataka-districts/haveri-bydadgi-lack-of-monsoon-rains-shidenoor-village-farmer-destroys-11-acres-of-crop-with-tractor-mrq/articleshow-5br2og5</guid>
            <pubDate>Tue, 23 Jun 2026 07:27:17 +0530</pubDate>
            <description><![CDATA[&lt;p&gt;ರೈತರೊಬ್ಬರು, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹತಾಶರಾಗಿ, ತಾವು ಬೆಳೆದಿದ್ದ 11 ಎಕರೆ ಗೋವಿನಜೋಳದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ನಷ್ಟ ಅನುಭವಿಸಿರುವ ಅವರು, ಸರ್ಕಾರದ ನೆರವಿಗಾಗಿ ಒತ್ತಾಯಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs2tdpwfrrpjhj8h4m0cs8t,imgname-haveri-farmer-1782179509980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕಂಗಾಲಾದ ರೈತನೊಬ್ಬ ಅಪಾರ ವೆಚ್ಚದಲ್ಲಿ ಬೆಳೆಸಿದ್ದ 11 ಎಕರೆ ಗೋವಿನ ಜೋಳ ಬೆಳೆಯನ್ನು ಟ್ರ&zwj;್ಯಾಕ್ಟರ್ ಕುಂಟೆ ಮೂಲಕ ಹರಗಿ ನಾಶಪಡಿಸಿದ ಘಟನೆ ತಾಲೂಕಿನ ಶಿಡೇನೂರ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಶಿಡೇನೂರ ಗ್ರಾಮದ ರೈತ ಕಿರಣಕುಮಾರ ಗಡಿಗೋಳ ಬೆಳೆ ನಾಶಪಡಿಸಿದ ರೈತ. ಎಷ್ಟೇ ಕಾದರೂ ಮಳೆ ಬಾರದೆ ಬೆಳೆ ಒಣಗಿ ಹೋಗುತ್ತಿರುವುದನ್ನು ನೋಡಿ ಕಂಗಾಲಾಗಿ ಬೆಳೆ ನಾಶ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;11 ಎಕರೆ ಲಾವಣಿ ಹೊಲ ನಾಶ&lt;/strong&gt;&lt;/h2&gt;&lt;p&gt;ಕಿರಣಕುಮಾರ ಗಡಿಗೋಳ ತಮ್ಮ ಸ್ವಂತ ಜಮೀನಿನ ಜೊತೆಗೆ ಲಾವಣಿ ಪಡೆದ ಜಮೀನು ಸೇರಿ ಒಟ್ಟು 11 ಎಕರೆ ಪ್ರದೇಶದಲ್ಲಿ ಗೋವಿನ ಜೋಳ ಬೆಳೆ ಬೆಳೆದಿದ್ದರು, ಪೂರ್ವ ಮುಂಗಾರು ಉತ್ತಮವಾಗಿದ್ದ ಹಿನ್ನೆಲೆಯಲ್ಲಿ ಉತ್ತಮ ಬೆಳೆ ನಿರೀಕ್ಷೆ ಹೊಂದಿದ್ದರು. ಆದರೆ ಕಳೆದ ಒಂದು ತಿಂಗಳಿಂದ ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದು ಇದರಿಂದ ಬೇಸತ್ತು ಬೆಳೆ ನಾಶದ ನಿರ್ಧಾರ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;₹2 ಲಕ್ಷ ನಷ್ಟ&lt;/strong&gt;&lt;/h3&gt;&lt;p&gt;ಸುಮಾರು 2 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿ ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ಹಣ ಹೂಡಿಕೆ ಮಾಡಿದ್ದರು. ಆದರೆ, ಬಿತ್ತನೆ ಬಳಿಕ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಬೆಳೆ ಒಣಗಿ ಹೋಗಿದ್ದು, ಹೂಡಿಕೆ ಮಾಡಿದ ಹಣವೂ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ತೀವ್ರ ನಿರಾಶೆಗೊಂಡ ರೈತ ಕಿರಣಕುಮಾರ ಗಡಿಗೋಳ ಟ್ರ&zwj;್ಯಾಕ್ಟರ್&zwnj;ನಿಂದ ಕುಂಟೆ ಹೊಡೆಸಿ ಸಂಪೂರ್ಣ ಬೆಳೆ ನಾಶಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೊನ್ನಾಳಿ-ದಾವಣಗೆರೆಗೆ ಬಸವಾಪಟ್ಟಣ ಮೂಲಕ ಹೊಸ ಬಸ್ ಆರಂಭ; ಮಾರ್ಗ, ಸಮಯ ಈ ರೀತಿಯಾಗಿದೆ&lt;/strong&gt;&lt;/p&gt;&lt;p&gt;ಪ್ರಸ್ತುತ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆ ಅಭಾವ ಮುಂದುವರಿದರೆ ಕೃಷಿ ಆಧಾರಿತ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆಯಿದೆ. ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ, ಸಾಲ ಮರುಪಾವತಿ ಅವಧಿ ವಿಸ್ತರಣೆ ಹಾಗೂ ಅಗತ್ಯ ನೆರವು ನೀಡುವಂತೆ ರೈತರಾದ ಶಿವಪ್ಪ ತೆವರಿ, ಪ್ರಭು ಬಿದರಿ, ಗಣೇಶ ಯೋಗಿಕೊಪ್ಪ, ಶಂಭು ಭಾವಿಕಟ್ಟಿ, ಮಲ್ಲಿಕಾರ್ಜುನ ದುರ್ಗದ, ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಕೃಷಿಗೆ ಮಾಡಿದ ಎಲ್ಲ ಹೂಡಿಕೆ ಮಣ್ಣಾಯಿತು. ಸಾಲ ಮಾಡಿ ಕೃಷಿ ಮಾಡಿದ್ದೇವೆ. ಮಳೆ ಕೈಕೊಟ್ಟಿದ್ದರಿಂದ ಬದುಕೇ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ರೈತರಿಗೆ ನೆರವಾಗಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಜೊತೆಗೆ ಹಸಿರು ಬರಗಾಲ ಎಂದು ಘೋಷಿಸಿ ಜಿಲ್ಲೆಯ ರೈತರಿಗೆ ವಿಶೇಷ ನೆರವು ನೀಡಬೇಕು ಎಂದು ಶಿಡೆನೂರ ರೈತ ಕಿರಣಕುಮಾರ ಗಡಿಗೋಳ ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Haveri: ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ; ಎತ್ತುಗಳ ಖರೀದಿಗಿಲ್ಲ ಹಣ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-bydadgi-lack-of-monsoon-rains-shidenoor-village-farmer-destroys-11-acres-of-crop-with-tractor-mrq/articleshow-5br2og5"/>
        </item>
        <item>
            <title><![CDATA[ಹೊನ್ನಾಳಿ-ದಾವಣಗೆರೆಗೆ ಬಸವಾಪಟ್ಟಣ ಮೂಲಕ ಹೊಸ ಬಸ್ ಆರಂಭ; ಮಾರ್ಗ, ಸಮಯ ಈ ರೀತಿಯಾಗಿದೆ]]></title>
            <link>https://kannada.asianetnews.com/karnataka-districts/new-bus-service-starts-from-honnali-to-davanagere-via-basavapattana-timing-details-mrq/articleshow-6ikw7gm</link>
            <guid isPermaLink="true">https://kannada.asianetnews.com/karnataka-districts/new-bus-service-starts-from-honnali-to-davanagere-via-basavapattana-timing-details-mrq/articleshow-6ikw7gm</guid>
            <pubDate>Tue, 23 Jun 2026 07:12:45 +0530</pubDate>
            <description><![CDATA[&lt;p&gt;ಶಾಸಕ ಡಿ.ಜಿ. ಶಾಂತನಗೌಡಅವರು ಹೊನ್ನಾಳಿಯಿಂದ ದಾವಣಗೆರೆಗೆ ಬಸವಾಪಟ್ಟಣ ಮಾರ್ಗವಾಗಿ ನೂತನ ಕೆಎಸ್&zwnj;ಆರ್&zwnj;ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ಹೊಸ ಸೇವೆಯು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಹೊನ್ನಾಳಿಯ ಜನತೆಗೆ ಅನುಕೂಲವಾಗಲಿದ್ದು, ಇದರ ಸದುಪಯೋಗ ಪಡೆಯುವಂತೆ ಜನತೆಗೆ ಕರೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs205n0ng9jb07z9wag9rcw,imgname-honnali-bus-1782178649760.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ದೇಶದಲ್ಲಿಯೇ ಕರ್ನಾಟಕ ಸರ್ಕಾರ ಬಡವರಿಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಆ ಮೂಲಕ ದೇಶದಲ್ಲಿನ ಇತರೆ ರಾಜ್ಯಗಳಿಗೂ ಕೂಡ ಮಾದರಿಯಾಗಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿದ್ದು ಸಂತಸದ ಸಂಗತಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.&lt;/p&gt;&lt;p&gt;ಸೋಮವಾರ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಲಾದ ಹೊನ್ನಾಳಿ- ಬೆನಕನಹಳ್ಳಿ- ಕೈಮರ- ದಾಗಿನಕಟ್ಟೆ- ಕತ್ತಲಗೆರೆ ಬಸವಾಪಟ್ಟಣ ಮಾರ್ಗ ಮೂಲಕ ದಾವಣಗೆರೆಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.&lt;/p&gt;&lt;h2&gt;&lt;strong&gt;ಬಸ್ ಸಮಯ ಈ ರೀತಿಯಾಗಿದೆ&lt;/strong&gt;&lt;/h2&gt;&lt;p&gt;ಬೆಳಗ್ಗೆ ಹೊನ್ನಾಳಿಯಿಂದ ಈ ಮಾರ್ಗವಾಗಿ ದಾವಣಗೆರೆಗೆ 4 ಸಿಂಗಲ್ ಟ್ರಿಪ್ ಮಾಡಿ ನಂತರ ಸಂಜೆ 6 ಗಂಟೆಗೆ ಹೊನ್ನಾಳಿಯಿಂದ ಶಿವಮೊಗ್ಗ ತಲುಪಿ, ಸಂಜೆ 7 ಗಂಟೆಗೆ ಶಿವಮೊಗ್ಗದಿಂದ ಹೊನ್ನಾಳಿಗೆ ರಾತ್ರಿ 8 ಗಂಟೆಗೆ ಬಂದು ತಲುಪಲಿದೆ. ಜನತೆ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇ&zwj;ಳಿದರು.&lt;/p&gt;&lt;p&gt;ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ಹೊನ್ನಾಳಿ ಅತ್ಯಂತ ಆಯಕಟ್ಟಿನ ಭೌಗೋಳಿಕ ಪ್ರದೇಶದಲ್ಲಿದೆ. ಇದು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸಂಪರ್ಕ ಕೊಂಡಿಯಂತಿದೆ. ಪ್ರತಿ ದಿನ 250ಕ್ಕೂ ಹೆಚ್ಚು ಬಸ್&zwnj;ಗಳನ್ನು ಹೊನ್ನಾಳಿ ಮಾರ್ಗದ ಮೂಲಕ ಹಾದುಹೋಗುತ್ತಿವೆ. ಪ್ರಸ್ತುತ ಹೊನ್ನಾಳಿ ಡಿಪೋದಲ್ಲಿ ಸುಮಾರು 62 ಬಸ್&zwnj;ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದರು.&lt;/p&gt;&lt;p&gt;ಈ ಸಂದರ್ಭ ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಕಾಂಗ್ರೆಸ್ ಹೊನ್ನಾಳಿ ಬ್ಲಾಕ್ ಅಧಕ್ಷ್ಯ ಸಣ್ಣಕ್ಕಿ ಬಸವನಗೌಡ, ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷ ಆರ್.ನಾಗಪ್ಪ, ಕೆಎಸ್&zwnj;ಆರ್&zwnj;ಟಿಸಿ ಡಿಪೋ ವ್ವವಸ್ಥಾಪಕ ರಾಮಚಂದ್ರಪ್ಪ, ಮೇಲ್ವಿಚಾರಕ ಮಂಜುನಾಥ ಸೇರಿದಂತೆ ಕೆಎಸ್&zwnj;ಆರ್&zwnj;ಟಿಸಿ ಸಿಬ್ಬಂದಿ ಇದ್ದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/new-bus-service-starts-from-honnali-to-davanagere-via-basavapattana-timing-details-mrq/articleshow-6ikw7gm"/>
        </item>
        <item>
            <title><![CDATA[ಪ್ರಯಾಣಿಕರಿಗೆ ಗುಡ್‌ನ್ಯೂಸ್: ದೂರದ ಊರುಗಳಿಗೆ ಪ್ರಯಾಣಿಸಲು ಬಿಎಂಟಿಸಿ ವಿಸ್ತಾರ ಪಾಸ್; ಪಾಸಿನ ಬೆಲೆ ಎಷ್ಟು? ಇಲ್ಲಿದೆ ಡಿಟೇಲ್ಸ್]]></title>
            <link>https://kannada.asianetnews.com/gallery/state/bmtc-visatra-pass-for-distant-towns-how-much-does-the-pass-cost-here-are-the-details-rav-3l5tx5l</link>
            <guid isPermaLink="true">https://kannada.asianetnews.com/gallery/state/bmtc-visatra-pass-for-distant-towns-how-much-does-the-pass-cost-here-are-the-details-rav-3l5tx5l</guid>
            <pubDate>Tue, 23 Jun 2026 07:03:41 +0530</pubDate>
            <description><![CDATA[&lt;p&gt;BMTC Vistar Pass: ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಬಿಎಂಟಿಸಿ ವಿಶೇಷ &lsquo;ವಿಸ್ತಾರ ಪಾಸ್&rsquo; ಪರಿಚಯಿಸಿದೆ. ಬೆಂಗಳೂರಿನಿಂದ ಎಷ್ಟು ದೂರ ವ್ಯಾಪ್ತಿಯವರೆಗೆ ಪ್ರಯಾಣಿಸಬಹುದು, ಟಿಕೆಟ್ ಬೆಲೆ ಎಷ್ಟು ಎಲ್ಲ ವಿವರಗಳಿಗೆ ಪೂರ್ತಿ ಓದಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs19q6nrdgcc06hhwsm2dd5,imgname----------------------58--1782177914069.jpg" type="image/jpeg" height="390" width="690"/>
            <content:encoded><![CDATA[&lt;p&gt;BMTC Vistar Pass: ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಬಿಎಂಟಿಸಿ ವಿಶೇಷ &lsquo;ವಿಸ್ತಾರ ಪಾಸ್&rsquo; ಪರಿಚಯಿಸಿದೆ. ಬೆಂಗಳೂರಿನಿಂದ ಎಷ್ಟು ದೂರ ವ್ಯಾಪ್ತಿಯವರೆಗೆ ಪ್ರಯಾಣಿಸಬಹುದು, ಟಿಕೆಟ್ ಬೆಲೆ ಎಷ್ಟು ಎಲ್ಲ ವಿವರಗಳಿಗೆ ಪೂರ್ತಿ ಓದಿ&lt;/p&gt;&lt;img&gt;&lt;p&gt;ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸಿನ ದರದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಆದರೆ, ಬಿಎಂಟಿಸಿಯ ದೂರದ ಮಾರ್ಗಗಳ ಪ್ರಯಾಣಿಕರ ಅನುಕೂಲಕ್ಕಾಗಿ ಸಾಮಾನ್ಯ &lsquo;ವಿಸ್ತಾರ ಪಾಸು&rsquo;ಗಳನ್ನು ಪರಿಚಯಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.&lt;/p&gt;&lt;img&gt;&lt;p&gt;ಬಿಎಂಟಿಸಿ ಸಂಸ್ಥೆಯ ಕಾರ್ಯಾಚರಣೆ ವ್ಯಾಪ್ತಿಯನ್ನು 65ರಿಂದ 70 ಕಿಮೀವರೆಗೆ ವಿಸ್ತರಿಸಲಾಗಿದೆ. ಅದರಿಂದ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ಮಾಲೂರು ಸೇರಿದಂತೆ ಬೆಂಗಳೂರು ನಗರ ಸುತ್ತಮುತ್ತಲಿನ ಪ್ರಮುಖ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಬಿಎಂಟಿಸಿ ಬಸ್&zwnj; ಸೇವೆ ನೀಡುತ್ತಿದೆ. ಹೊಸ ಕಾರ್ಯಾಚರಣೆ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಗರದ ಕೇಂದ್ರಭಾಗದಿಂದ 40 ಕಿಮೀ ವರೆಗಿನ ಪ್ರದೇಶವನ್ನು ಸೀಮಿತ ವ್ಯಾಪ್ತಿಯಲ್ಲಿ ಅದರಾಚೆಗಿನ ಪ್ರದೇಶವನ್ನು &lsquo;ವಿಸ್ತಾರ ವ್ಯಾಪ್ತಿ&rsquo; ಎಂದು ವರ್ಗೀಕರಿಸಲಾಗಿದೆ.&lt;/p&gt;&lt;img&gt;&lt;p&gt;ವಿಸ್ತಾರ ವ್ಯಾಪ್ತಿಯ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಜೂ. 2ರಿಂದ ಸಾಮಾನ್ಯ ವಿಸ್ತಾರ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್&zwnj;ಗಳನ್ನು ಪರಿಚಯಿಸಲಾಗಿದೆ. ಪ್ರಸ್ತುತ 1819 ಮಾರ್ಗಗಳಲ್ಲಿ 6295 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಅವುಗಳಲ್ಲಿ 96 ಮಾರ್ಗಗಳ 216 ಅನುಸೂಚಿಗಳು ವಿಸ್ತಾರ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿವೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.&amp;nbsp;&lt;/p&gt;&lt;p&gt;ಈ ಸಾಮಾನ್ಯ ವಿಸ್ತಾರ ದೈನಿಕ ಪಾಸುಗಳ ಬೆಲೆ 120 ರು., ಸಾಮಾನ್ಯ ವಿಸ್ತಾರ ಮಾಸಿಕ ಪಾಸು ದರ 550 ರು., ಸಾಮಾನ್ಯ ಮಾಸಿಕ ಪಾಸು 1200 ಹಾಗೂ ಸಾಮಾನ್ಯ ವಿಸ್ತಾರ ಮಾಸಿಕ ಪಾಸು 1500 ರು. ನಿಗದಿ ಮಾಡಲಾಗಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/bmtc-visatra-pass-for-distant-towns-how-much-does-the-pass-cost-here-are-the-details-rav-3l5tx5l"/>
        </item>
        <item>
            <title><![CDATA[₹3,000 ಕೋಟಿ ಮೆಗಾ ಯೋಜನೆ: ನಗರದ 450 ಕಿ.ಮೀ ರಸ್ತೆಗಳು ವೈಟ್‌ ಟಾಪಿಂಗ್‌,  ಸಚಿವ ಕೃಷ್ಣ ಬೈರೇಗೌಡ ಮಹತ್ವದ ಘೋಷಣೆ]]></title>
            <link>https://kannada.asianetnews.com/state/rs-3000-crore-mega-project-450-km-of-city-roads-white-topping-minister-krishna-byre-gowda-announcement-rav/articleshow-3s83xuq</link>
            <guid isPermaLink="true">https://kannada.asianetnews.com/state/rs-3000-crore-mega-project-450-km-of-city-roads-white-topping-minister-krishna-byre-gowda-announcement-rav/articleshow-3s83xuq</guid>
            <pubDate>Tue, 23 Jun 2026 06:31:12 +0530</pubDate>
            <description><![CDATA[&lt;p&gt;ಇನ್ನು ಬೆಂಗಳೂರಿನ ರಸ್ತೆಗಳಿಗೆ ಹೊಸ ಕಳೆ ಬರಲಿದೆ. ನಗರದಲ್ಲಿ ಹೊಸದಾಗಿ 450 ಕಿ.ಮೀ ರಸ್ತೆಗಳ ವೈಟ್ ಟಾಪಿಂಗ್&zwnj; ಮಾಡಲು ಮೆಗಾ ಯೋಜನೆ ಸಿದ್ಧವಾಗಿದ್ದು ಸದ್ಯದಲ್ಲೇ ಟೆಂಡರ್ ಕರೆದು ಕಾಮಗಾರಿ ನದೆಸಲು ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k25bb4vdd0fgkcwtw03afz68,imgname-krishna-byregowda-1754673812328.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.23) &lt;/strong&gt;: ಬೆಂಗಳೂರು ನಗರದ ವಿವಿಧೆಡೆ ಹೊಸದಾಗಿ 450 ಕಿ.ಮೀ ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಸಮಗ್ರ ಯೋಜನಾ ವರದಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.&lt;/p&gt;&lt;p&gt;ಬೆಂಗಳೂರು ಸ್ಮಾರ್ಟ್&zwnj; ಇನ್&zwnj;ಪ್ರಾಸ್ಟ್ರಕ್ಚರ್ ಲಿಮಿಟೆಡ್&zwnj; (ಬಿ ಸ್ಮೈಲ್) ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಟ್ ಟಾಪಿಂಗ್ ಮಾಡಲು ನಗರದ ಅನೇಕ ರಸ್ತೆಗಳನ್ನು ಆಯ್ಕೆಮಾಡಿ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ ಎಂದರು.&lt;/p&gt;&lt;p&gt;ಈ ಹಿಂದೆ ಕೈಗೆತ್ತಿಕೊಂಡಿದ್ದ 196 ಕಿ.ಮೀ ರಸ್ತೆಗಳ ವೈಟ್ ಟಾಪಿಂಗ್ ಯೋಜನೆ ಪೂರ್ಣಗೊಂಡಿದೆ. ಹೊಸದಾಗಿ 126 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದ್ದು, ಅದರಲ್ಲಿ 58 ಕಿ.ಮೀ. ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳಿಗೆ ವೇಗ ನೀಡಿ ಮುಂದಿನ 6 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದೇನೆ ಎಂದರು.&lt;/p&gt;&lt;h2&gt;ಸುರಕ್ಷತಾ ಕ್ರಮಗಳನ್ನು ಪಾಲಿಸಿ:&lt;/h2&gt;&lt;p&gt;ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ಎಲ್ಲ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕಾಮಗಾರಿ ನಡೆಯುವ ಪ್ರದೇಶಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ರಸ್ತೆ ಬದಿಯಲ್ಲಿ ಸಾಮಗ್ರಿಗಳನ್ನು ರಾಶಿ ಮಾಡುವುದು, ಜೆಲ್ಲಿ ಹಾಕಿ ಹಾಗೆಯೇ ಬಿಡುವುದು ಹಾಗೂ ರಸ್ತೆ ಅಗೆದು ನಿರ್ಲಕ್ಷ್ಯ ವಹಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ನಾಗರಿಕರು, ಸವಾರರಿಗೆ ತೊಂದರೆ ಆಗುತ್ತದೆ. ಕಾಲ ಮಿತಿಯಲ್ಲಿ ಕೆಲಸ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.&lt;/p&gt;&lt;h3&gt;ಹೊರ ವರ್ತುಲ ರಸ್ತೆ ಮರುವಿನ್ಯಾಸ:&lt;/h3&gt;&lt;p&gt;ಹೊರ ವರ್ತುಲ ರಸ್ತೆಯ ಮರುವಿನ್ಯಾಸಕ್ಕಾಗಿ 450 ಕೋಟಿ ರು. ವೆಚ್ಚದ ಸಮಗ್ರ ಯೋಜನೆ ರೂಪಿಸಲಾಗಿದೆ. ಮೆಟ್ರೋ ಕಾಮಗಾರಿಯೊಂದಿಗೆ ಈ ಯೋಜನೆಯನ್ನು ಏಕಕಾಲದಲ್ಲಿ ಆರಂಭಿಸಿದರೆ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಚಾರಿ ಪೊಲೀಸರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬಿಸ್ಮೈಲ್ ತಾಂತ್ರಿಕ ನಿರ್ದೇಶಕ ಪ್ರಹ್ಲಾದ್ ಹಾಜರಿದ್ದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rs-3000-crore-mega-project-450-km-of-city-roads-white-topping-minister-krishna-byre-gowda-announcement-rav/articleshow-3s83xuq"/>
        </item>
        <item>
            <title><![CDATA[Boss Scam: ಒಂದು ಮೆಸೇಜ್‌, ಒಂದು ಕಾಲ್‌... ಲಕ್ಷಾಂತರ ರೂ. ನಷ್ಟ! ನಿಮ್ಮ ಕಂಪನಿ ರಕ್ಷಿಸಿಕೊಳ್ಳುವುದು ಹೇಗೆ?]]></title>
            <link>https://kannada.asianetnews.com/india-news/i4c-warns-of-malware-driven-boss-scam-targeting-top-corporate-ceo-rav/articleshow-qxsk4bm</link>
            <guid isPermaLink="true">https://kannada.asianetnews.com/india-news/i4c-warns-of-malware-driven-boss-scam-targeting-top-corporate-ceo-rav/articleshow-qxsk4bm</guid>
            <pubDate>Tue, 23 Jun 2026 06:04:49 +0530</pubDate>
            <description><![CDATA[&lt;p&gt;ಕಾರ್ಪೊರೆಟ್&zwnj; ಕಂಪನಿಗಳ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ನಡೆಯುತ್ತಿರುವ 'ಬಾಸ್&zwnj; ಸ್ಕ್ಯಾಮ್&zwnj;' ಎಂಬ ಹೊಸ ಸೈಬರ್ ವಂಚನೆ ಬಗ್ಗೆ ಭಾರತೀಯ ಸೈಬರ್ ಕ್ರೈಮ್ ಸಂಯೋಜನಾ ಕೇಂದ್ರ (ಐ4ಸಿ) ಎಚ್ಚರಿಕೆ ನೀಡಿದೆ. ವಂಚಕರು ಅಧಿಕಾರಿಗಳ ವಾಟ್ಸಾಪ್ ಹ್ಯಾಕ್ ಮಾಡಿ, ಹಣಕಾಸು ವಿಭಾಗಕ್ಕೆ ಹಣ ವರ್ಗಾಯಿಸಲು ಸಂದೇಶ ಕಳುಹಿ ವಂಚನೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvry1cg3nzy2rckfve0btakm,imgname----------------------54--1782174495235.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜೂ.23): &amp;nbsp;&amp;nbsp;&lt;/strong&gt;ಕಾರ್ಪೊರೆಟ್&zwnj; ಕಂಪನಿಗಳ ಸಿಇಒ, ಎಂಡಿ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ &lsquo;ಬಾಸ್&zwnj; ಸ್ಕ್ಯಾಮ್&zwnj;&rsquo; ವಂಚನೆ ಜಾಲದ ಕುರಿತು ಎಚ್ಚರಿಕೆಯಿಂದಿರುವಂತೆ ಭಾರತೀಯ ಸೈಬರ್ ಕ್ರೈಮ್ ಸಂಯೋಜನಾ ಕೇಂದ್ರ (ಐ4ಸಿ) ಎಚ್ಚರಿಕೆ ನೀಡಿದೆ.&lt;/p&gt;&lt;h2&gt;ಏನಿದು ಬಾಸ್&zwnj; ಸ್ಕ್ಯಾಮ್&zwnj;?:&lt;/h2&gt;&lt;p&gt;ಸೈಬರ್&zwnj; ವಂಚಕರು ಕಂಪನಿಯ ಉನ್ನತ ಅಧಿಕಾರಿಗಳನ್ನು ಇಮೇಲ್ ಅಥವಾ ವಾಟ್ಸಾಪ್&zwnj;ನಲ್ಲಿ ಸಂಪರ್ಕಿಸುತ್ತಾರೆ. ಆರ್&zwnj;ಬಿಐ ಅಧಿಕಾರಿಗಳಂತೆ ನಟಿಸಿ, ಅಧಿಕಾರಿಗಳ ಫೋನ್/ಕಂಪ್ಯೂಟರ್&zwnj;ಗೆ ಮಾಲ್&zwnj;ವೇರ್ (ವಂಚನೆ ಸಾಫ್ಟ್&zwnj;ವೇರ್) ಕಳಿಸುತ್ತಾರೆ. ಅಧಿಕಾರಿ ಫೈಲ್ ತೆರೆದ ತಕ್ಷಣ ಮಾಲ್&zwnj;ವೇರ್ ಅವರ ವಾಟ್ಸಾಪ್ ಅನ್ನು ಹ್ಯಾಕ್ ಮಾಡುತ್ತದೆ.&lt;/p&gt;&lt;p&gt;ನಂತರ ಆ ಅಧಿಕಾರಿಯ ನಿಜವಾದ ವಾಟ್ಸಾಪ್&zwnj;ನಿಂದಲೇ ಆಕೌಂಟ್ಸ್ / ಫೈನಾನ್ಸ್ ವಿಭಾಗದವರಿಗೆ ಸಂದೇಶ ಕಳಿಸಿ, ನಿರ್ದಿಷ್ಟ ಖಾತೆಗೆ ತುರ್ತಾಗಿ ಹಣ ವರ್ಗಾವಣೆ ಮಾಡುವಂತೆ ಆದೇಶಿಸುತ್ತಾರೆ. ಹೀಗೆ ಆ ಹಣ ವಂಚಕರ ಕೈಸೇರುತ್ತದೆ.&lt;/p&gt;&lt;h3&gt;ಐ4ಸಿ ಎಚ್ಚರಿಕೆ:&lt;/h3&gt;&lt;p&gt;ವಾಟ್ಸಾಪ್ ಅಥವಾ ಇಮೇಲ್&zwnj;ನಲ್ಲಿ ಬಂದ ತುರ್ತು ಹಣ ವರ್ಗಾವಣೆ ಆದೇಶಗಳನ್ನು ನಂಬಬೇಡಿ. ಫೋನ್ ಮಾಡಿ ಅಥವಾ ನೇರವಾಗಿ ಖಚಿತಪಡಿಸಿಕೊಳ್ಳಿ. ಅಪರಿಚಿತ ಫೈಲ್&zwnj;ಗಳನ್ನು ತೆರೆಯಬೇಡಿ. ಆರ್&zwnj;ಬಿಐ ಎಂದಿಗೂ ವಾಟ್ಸಾಪ್&zwnj;ನಲ್ಲಿ ಲಿಂಕ್ ಅಥವಾ ಫೈಲ್ ಕಳುಹಿಸುವುದಿಲ್ಲ. ಕಂಪನಿಗಳು ಈ ಬಗ್ಗೆ ತಮ್ಮ ಉದ್ಯೋಗಿಗಳಿಗೆ ತರಬೇತಿ ನೀಡಬೇಕು. ಕಂಪ್ಯೂಟರ್&zwnj;ನಲ್ಲಿ ಅಪರಿಚಿತ ಫೈಲ್&zwnj;ಗಳು (ವಿಶೇಷವಾಗಿ .exe ಮತ್ತು .dll) ತಾನಾಗಿಯೇ ತೆರೆಯದಂತೆ ಐಟಿ ತಂಡವು ಬಲವಾದ ನಿಯಮಗಳನ್ನು ತರಬೇಕು. ಇದು ಬಾಸ್ ಸ್ಕ್ಯಾಮ್&zwnj;ನಂತಹ ಮೋಸಗಳಿಂದ ರಕ್ಷಣೆ ನೀಡುತ್ತದೆ ಎಂದು ಮನವಿ ಮಾಡಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/i4c-warns-of-malware-driven-boss-scam-targeting-top-corporate-ceo-rav/articleshow-qxsk4bm"/>
        </item>
        <item>
            <title><![CDATA[ಕೈ ಸಮಾವೇಶದಿಂದ ಹಲವು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಮಿಸ್ ಮತ್ತೊಂದು ರಾಜಕೀಯ ವಾಕ್ಸಮರಕ್ಕೆ ಕಾರಣವಾಯ್ತು!]]></title>
            <link>https://kannada.asianetnews.com/politics/many-students-could-not-attend-neet-exam-due-to-congress-rally-mp-tejaswi-surya-outraged-rav/articleshow-5vs1wvk</link>
            <guid isPermaLink="true">https://kannada.asianetnews.com/politics/many-students-could-not-attend-neet-exam-due-to-congress-rally-mp-tejaswi-surya-outraged-rav/articleshow-5vs1wvk</guid>
            <pubDate>Tue, 23 Jun 2026 05:27:42 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮಾರಂಭದಿಂದಾಗಿ ಉಂಟಾದ ಟ್ರಾಫಿಕ್ ಜಾಮ್&zwnj;ನಿಂದಾಗಿ ಹಲವು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. &amp;nbsp;ನೀಟ್ ವಿದ್ಯಾರ್ಥಿಗಳ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಕಿಡಿಕಾರಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvrvvw2r9ck6sbeajeb7c2q4,imgname----------------------53--1782172217432.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜೂ.23)&lt;/strong&gt;: ಕಾಂಗ್ರೆಸ್&zwnj; ಸಮಾರಂಭದಿಂದಾಗಿ ಭಾನುವಾರ ನಗರದಲ್ಲಿ ಟ್ರಾಫಿಕ್&zwnj; ಜಾಮ್&zwnj; ಉಂಟಾಗಿ ಹಲವು ವಿದ್ಯಾರ್ಥಿಗಳು ನೀಟ್&zwnj;(NEET) ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ(MP Tejasvi Surya) ಆರೋಪಿಸಿದ್ದಾರೆ.&lt;/p&gt;&lt;p&gt;ಭಾನುವಾರ ದೇಶಾದ್ಯಂತ ನೀಟ್&zwnj; ಪರೀಕ್ಷೆ ಆಯೋಜಿಸಲಾಗಿತ್ತು. ಹೀಗಿದ್ದರೂ ಕೆಪಿಸಿಸಿ ಅಧ್ಯಕ್ಷ(KPCC President)ರಾಗಿ ಹರಿಪ್ರಸಾದ್&zwnj;(BK Hariprasad) ಅಧಿಕಾರ ಸ್ವೀಕಾರ ಸಮಾರಂಭವನ್ನು ಆಯೋಜಿಸಿ ಕಾಂಗ್ರೆಸ್&zwnj;ನವರು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹಲವು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗದೇ ನೀಟ್&zwnj; ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;ಕಾಂಗ್ರೆಸ್ ಸಮಾವೇಶದಿಂದ ಟ್ರಾಫಿಕ್ ಜಾಮ್&lt;/h2&gt;&lt;p&gt;ಟ್ರಾಫಿಕ್&zwnj; ಜಾಮ್&zwnj;ನಿಂದಾಗಿ ಪರೀಕ್ಷೆಯಿಂದ ವಂಚಿತರಾದ ಮಕ್ಕಳು ಅಳುವುದು, ಅಂಗಾಲಾಚುವುದು ಕಂಡುಬಂದಿದೆ. ಮಕ್ಕಳು ಪರೀಕ್ಷೆಗೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ಒಂದು ಸಲ ಪರೀಕ್ಷೆ ಮುಂದೂಡಲಾಗಿತ್ತು. ಆದ್ದರಿಂದ ಕಾಂಗ್ರೆಸ್&zwnj; ಕಾರ್ಯಕ್ರಮವನ್ನು ಒಂದು ದಿವಸ ಮುಂದೂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;Watch the anxious parent narrate the ordeal of reaching late to the NEET exam hall because of Congress rally in Bengaluru. pic.twitter.com/TByuI1zfb1&lt;/p&gt;&lt;p&gt;&mdash; Tejasvi Surya (@Tejasvi_Surya) June 21, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಕಾಂಗ್ರೆಸ್&zwnj;ನವರು ಢೋಂಗಿ ರಾಜಕಾರಣ ಮಾಡುತ್ತಿದ್ದಾರೆ. ಯಾವಾಗ ಪರೀಕ್ಷೆ ಇರುತ್ತದೆಯೋ ಆಗ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಬಾರದು. ಮುಖಂಡರ ಹುಟ್ಟುಹಬ್ಬ, ದೇವಸ್ಥಾನ-ಮಸೀದಿಗಳ ಉದ್ಘಾಟನೆ, ಕಾರ್ಯಕ್ರಮ ಎಂದು ರಸ್ತೆ ಬಂದ್&zwnj; ಮಾಡುತ್ತಾರೆ. ಇದೆಲ್ಲಾ ಇನ್ನೂ ಎಷ್ಟು ದಿವಸ ನಡೆಯಬೇಕು. ವಿಐಪಿ ಸಂಸ್ಕೃತಿ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/many-students-could-not-attend-neet-exam-due-to-congress-rally-mp-tejaswi-surya-outraged-rav/articleshow-5vs1wvk"/>
        </item>
        <item>
            <title><![CDATA[ಸ್ಥಾಪಿಸಿದ ಪಕ್ಷದಿಂದಲೇ ಮಮತಾ ಬ್ಯಾನರ್ಜಿ ಔಟ್, ಅರೂಪ್‌ಗೆ ಟಿಎಂಸಿ ನಾಯಕತ್ವ ನೀಡಿದ ಬಂಡಾಯ ಗುಂಪು]]></title>
            <link>https://kannada.asianetnews.com/india-news/mamata-banerjee-removed-by-rebel-faction-arup-roy-named-new-tmc-chairperson/articleshow-es8md3n</link>
            <guid isPermaLink="true">https://kannada.asianetnews.com/india-news/mamata-banerjee-removed-by-rebel-faction-arup-roy-named-new-tmc-chairperson/articleshow-es8md3n</guid>
            <pubDate>Mon, 22 Jun 2026 22:30:06 +0530</pubDate>
            <description><![CDATA[&lt;p&gt;ಮಮತಾ ಬ್ಯಾನರ್ಜಿ ಸ್ಥಾಪಿಸಿದ ಟಿಎಂಸಿ ಪಕ್ಷ ಒಡೆದು ಹೋಳಾಗಿದೆ. ಇದೀಗ ಬಂಡಾಯ ಗುಂಪು ಕಾರ್ಯಕಾರಿ ಸಮಿತಿ ರಚಿಸಿದೆ. ವಿಶೇಷ ಅಂದರೆ ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ಕಿತ್ತೆಸೆದಿದೆ. ಇತ್ತ ಅಭಿಷೇಕ್ ಬ್ಯಾನರ್ಜಿಯನ್ನು ಅಮಾನತು ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv38qr3cc90e2na0qh79s5hs,imgname-chatgpt-image-jun-14--2026--08-01-35-pm-1781447516268.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ (ಜೂ.22)&lt;/strong&gt; ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಪಕ್ಷದ ಪರಿಸ್ಥಿತಿ ಶೋಚನೀಯವಾಗಿದೆ. ಮಮತಾ ಬ್ಯಾನರ್ಜಿ ಸ್ಥಾಪಿಸಿದ ತೃಣಮೂಲಕ ಕಾಂಗ್ರೆಸ್ ಪಕ್ಷ ಒಡೆದು ಹೋಳಾಗಿದೆ. ಬಂಡಾಯ ಗುಂಪು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಈ ಬಂಡಾಯ ಗುಂಪು ಇದೀಗ ಅಸಲಿ ಟಿಎಂಸಿ ಪಕ್ಷ ಎಂದು ತಮ್ಮನ್ನು ತಾವು ಕರೆದುಕೊಂಡಿದ್ದು ಮಾತ್ರವಲ್ಲ, ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ಕಿತ್ತೆಸೆದು ಶಾಸಕ ಅರೂಪ್ ರಾಯ್&zwnj;ಗೆ ಪಟ್ಟ ಕಟ್ಟಿದೆ. ಇಷ್ಟೇ ಅಲ್ಲ ಮಮತಾ ಬ್ಯಾನರ್ಜಿ ಆಪ್ತ ಸಂಬಂಧಿ ಅಭಿಷೇಕ್ ಬ್ಯಾನರ್ಜಿಯನ್ನು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಮಾಡಿದೆ. ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಬಂಡಾಯ ಗುಂಪು ರಚಿಸಿ ಮಮತಾ ಬ್ಯಾನರ್ಜಿಗೆ ಶಾಕ್ ಮೇಲೆ ಶಾಕ್ ನೀಡಿದೆ.&lt;/p&gt;&lt;h2&gt;ಋತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ&lt;/h2&gt;&lt;p&gt;ಪಶ್ಚಿಮ ಬಂಗಾಳ ವಿಧಾನಸಭಾ ವಿರೋಧ ಪಕ್ಷದ ನಾಯಕ ಋತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಇಂದು ಕೋಲ್ಕತಾದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಟಿಎಂಸಿಯ 60ಕ್ಕೂ ಹೆಚ್ಚು ಶಾಸಕರು, ಕೋಲ್ಕತಾ ಪಾಲಿಕೆಯ 70ಕ್ಕೂ ಹೆಚ್ಚು ಕಾರ್ಪೋರೇಟರ್&zwnj;ಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಒಕ್ಕೊರಲಿನಿಂದ ಶಾಸಕ ಅರೂಪ್ ರಾಯ್ ಅವರನ್ನು ಟಿಎಂಸಿ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದೇ ವೇಳೆ ಮಮತಾ ಬ್ಯಾನರ್ಜಿಯನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.&lt;/p&gt;&lt;p&gt;ಪ್ರತಿ ಮೂರು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ ಮಾಡುವುದು ಟಿಎಂಸಿ ಪಕ್ಷದ ನಿಯಮವಾಗಿದೆ. ಈ ನಿಯಮದಂತೆ ಅತೀ ಹೆಚ್ಚು ಶಾಸಕರು, ಸಂಸದರು ಹಾಗೂ ನಾಯಕರನ್ನು ಹೊಂದಿರುವ ಅಸಲಿ ಟಿಎಂಸಿ ಪಕ್ಷ ಹೊಸ ಸಮಿತಿ ರಚಿಸಿದೆ.&lt;/p&gt;&lt;h2&gt;ಮೂರು ಬಣಗಳಾಗಿ ಟಿಎಂಸಿ ಚೂರು ಚೂರು&lt;/h2&gt;&lt;p&gt;ಟಿಎಂಸಿ ಪಕ್ಷ ಮೂರು ಬಣಗಳಾಗಿ ಒಡೆದು ಹೋಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಮೂಲ ಟಿಎಂಸಿ ಬಣ. ಈ ಬಣದಲ್ಲಿ ಆಪ್ತ ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಕಲ್ಯಾಣ್ ಬ್ಯಾನರ್ಜಿ ಸೇರಿದಂತೆ ಕೆಲ ನಾಯಕರಿದ್ದಾರೆ. ಇನ್ನು ಅನೂಪ್ ರಾಯ್, ಋತಬ್ರತ ಬ್ಯಾನರ್ಜಿ ನೇತೃತ್ವದ ಅಸಲಿ ಟಿಎಂಸಿ ಬಣ. ಮತ್ತೊಂದು ಬಣ 20 ಸಂಸದರು ಟಿಎಂಸಿಯಿಂದ ಹೊರಬಂದು ಈಗಾಗಲೇ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾಗೆ ಬೆಂಬಲ ನೀಡಿದ್ದಾರೆ. ಇದೀಗ ಮೂರು ಬಣಗಳಿಂದ ಪಕ್ಷದ ಆಸ್ತಿ, ಖಾತೆಯಲ್ಲಿರುವ ಹಣ, ಲೋಗೋಗಾಗಿ ಕಿತ್ತಾಟ ಶುರುವಾಗಿದೆ. ಕಾನೂನು ಹೋರಾಟಗಳು ತೀವ್ರಗೊಳ್ಳುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/mamata-banerjee-removed-by-rebel-faction-arup-roy-named-new-tmc-chairperson/articleshow-es8md3n"/>
        </item>
        <item>
            <title><![CDATA[Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?]]></title>
            <link>https://kannada.asianetnews.com/world-news/global-natural-disasters-earthquakes-floods-wildfires-gvd-videoshow-4t87tbm</link>
            <guid isPermaLink="true">https://kannada.asianetnews.com/world-news/global-natural-disasters-earthquakes-floods-wildfires-gvd-videoshow-4t87tbm</guid>
            <pubDate>Mon, 22 Jun 2026 21:54:33 +0530</pubDate>
            <description><![CDATA[&lt;p&gt;Natural Disasters: ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ.. ಭೂಕಂಪ.. ಜಲ ಪ್ರಳಯ..! ಮಕ್ಕಳ ರೋದನ.. ರೈತರ ಕಣ್ಣೀರು.. ವಿಲಕ್ಷಣ ರೋಗ ! - ಯುದ್ಧದ ಬೆಂಕಿ.. ಸೂರ್ಯನ ಕಾಳ್ಗಿಚ್ಚು.. ಮೋಡವೇ ಇಲ್ಲದ ಭಾರತ.&lt;/p&gt;]]></description>
            <media:content url="https://geo.dailymotion.com/player/x1tbu.html?video=xahwzp2" medium="video" height="768" width="1024"/>
            <content:encoded><![CDATA[&lt;p&gt;ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ.. ಭೂಕಂಪ.. ಜಲ ಪ್ರಳಯ..! ಮಕ್ಕಳ ರೋದನ.. ರೈತರ ಕಣ್ಣೀರು.. ವಿಲಕ್ಷಣ ರೋಗ ! - ಯುದ್ಧದ ಬೆಂಕಿ.. ಸೂರ್ಯನ ಕಾಳ್ಗಿಚ್ಚು.. ಮೋಡವೇ ಇಲ್ಲದ ಭಾರತ ! - ಅಂತಿಮ ಎಚ್ಚರಿಕೆ ಗಂಟೆ ಪ್ರಕೃತಿ ಗದಾಪ್ರಹಾರ.. ಸರ್ವನಾಶ ನಿಶ್ಚಿತ. ಇದೇ ಈ ಹೊತ್ತಿನ ವಿಶೇಷ, ಕಂಟಕ ಖಚಿತ ಸರ್ವನಾಶ ನಿಶ್ಚಿತ. ಜಗತ್ತು ಯುದ್ಧದ ಕಾರ್ಮೋಡದಿಂದ ಸರಿಯುತ್ತಿದೆ ಅನ್ನೋವಾಗಲೇ ಪ್ರಕೃತಿಯ ವಿಕೋಪಗಳು ಶುರುವಾಗಿದೆ. ಕಳೆದೊಂದು ತಿಂಗಳಿಂದ ಜಗತ್ತಿನಲ್ಲಿ ನಡೆಯಬಾರದ ಅನಾಹುತಗಳೆಲ್ಲವೂ ನಡೆದುಹೋಗುತ್ತಿವೆ. ಒಂದಾದ ಮೇಲೆ ಒಂದು ಪ್ರಕೃತಿಯ ಗದಾಪ್ರಹಾರಗಳು ಮನುಷ್ಯನ ಮೇಲಾಗ್ತಿದೆ.&lt;/p&gt;&lt;p&gt;ಭೂಕಂಪಗಳು, ಜಲಪ್ರಳಯ, ಕಾಳ್ಗಿಚ್ಚು ಹೀಗೆ ಎಲ್ಲವೂ ಸರ್ವನಾಶವನ್ನು ಮಾಡುವಂತಹವೇ. ಕಳೆದೊಂದು ತಿಂಗಳಲ್ಲಿ ಜಗತ್ತು ಸಾಕಷ್ಟು ಪ್ರಕೃತಿ ವಿಕೋಪಗಳನ್ನು ನೋಡಿದೆ.. ಅದ್ರಲ್ಲಿ ಬೆಂಕಿಯ ರುದ್ರನರ್ತನವು ಒಂದು.. ಬೀಕರ ಬಿಸಿಲಿನಿಂದಾಗಿ ಕ್ಯಾಲಿಫೋರ್ನಿಯಾದಲ್ಲಿ &amp;nbsp;ಹೊತ್ತಿಕೊಂಡ ಕಾಳ್ಗಿಚ್ಚು ವಾರಾನುಗಟ್ಟಲೇ ಉರಿಯಿತು. ಆ ರೌರವತೆ ಹಾಗೂ ಭಾರತದ ಬೀಕರ ಬರಗಾಲದ ಮುನ್ಸೂಚನೆಯ? ಭಾರತಕ್ಕೆ ಮೋಡಗಳೇ ಇಲ್ಲದ ಬರಗಾಲ ಇನ್ನು ಏನೇನು ಅನಾಹುತಗಳನ್ನು ತಂದೊಡ್ಡಲಿದೆಯೋ ಯಾರಿಗೆ ಗೊತ್ತು. ಜಗತ್ತಿನಲ್ಲಿ ಕಳೆದೊಂದು ತಿಂಗಳಿಂದ ಪ್ರಕೃತಿಯ ವಿಕೋಪಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತಲೆ ಇದೆ.. ಹಾಗಾದ್ರೆ, ಈ ಪ್ರಕೃತಿಯ ಗದಾಪ್ರಹಾರಗಳು ನೀಡುತ್ತಿರುವ ಮುನ್ಸೂಚನೆ ಏನು ? ಮುಂದೆ ಜಗತ್ತಿನಲ್ಲಿ ಏನಾಗುತ್ತದೆ ಅನ್ನೋದನ್ನ ನೋಡೋಣ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/world-news/global-natural-disasters-earthquakes-floods-wildfires-gvd-videoshow-4t87tbm"/>
        </item>
        <item>
            <title><![CDATA[HDK vs DKS: 'ವಿಧಾನಸೌಧಕ್ಕೆ ಅಲ್ಲ, ಬಿಡದಿಗೆ ಬನ್ನಿ': ಸಿಎಂ ಡಿಕೆಶಿಗೆ ಎಚ್‌ಡಿಕೆ ತಿರುಗೇಟು]]></title>
            <link>https://kannada.asianetnews.com/politics/hd-kumaraswamy-challenges-dk-shivakumar-over-bidadi-township-gvd/articleshow-gtdl5f3</link>
            <guid isPermaLink="true">https://kannada.asianetnews.com/politics/hd-kumaraswamy-challenges-dk-shivakumar-over-bidadi-township-gvd/articleshow-gtdl5f3</guid>
            <pubDate>Mon, 22 Jun 2026 21:45:35 +0530</pubDate>
            <description><![CDATA[&lt;p&gt;Bidadi Township Project: ವಿಧಾನಸೌಧಕ್ಕೆ ಬರುವ ಬದಲು, ಯೋಜನೆಯಿಂದ ನೇರವಾಗಿ ಪರಿಣಾಮಕ್ಕೆ ಒಳಗಾಗುತ್ತಿರುವ ಜನರ ಮಧ್ಯೆ ಚರ್ಚೆ ನಡೆಸೋಣ ಎಂದು ಡಿಕೆಶಿಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvr1ka172p14j4k2jrh7qnpp,imgname-vj-1782144673831.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.22): &lt;/strong&gt;ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಬಿಡದಿ ಟೌನ್&zwnj;ಶಿಪ್ ಯೋಜನೆ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಯೋಜನೆ ಕುರಿತು ವಿಧಾನಸೌಧದಲ್ಲಿ ಮುಖಾಮುಖಿ ಚರ್ಚೆಗೆ ಆಹ್ವಾನ ನೀಡಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ವಿಧಾನಸೌಧಕ್ಕೆ ಬರುವ ಬದಲು, ಯೋಜನೆಯಿಂದ ನೇರವಾಗಿ ಪರಿಣಾಮಕ್ಕೆ ಒಳಗಾಗುತ್ತಿರುವ ಜನರ ಮಧ್ಯೆ ಚರ್ಚೆ ನಡೆಸೋಣ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.&lt;/p&gt;&lt;p&gt;ಸಿಎಂ ಡಿಕೆ ಶಿವಕುಮಾರ್ ಕಳುಹಿಸಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಬಿಡದಿ ಅಥವಾ ಭೈರಮಂಗಲದಲ್ಲಿ ಸಾರ್ವಜನಿಕ ಸಭೆ ಆಯೋಜಿಸಿ, ರೈತರು, ಗ್ರಾಮಸ್ಥರು ಮತ್ತು ಯೋಜನೆಯಿಂದ ಬಾಧಿತರಾಗಿರುವ ಎಲ್ಲರ ಸಮ್ಮುಖದಲ್ಲಿ ಮುಕ್ತ ಚರ್ಚೆ ನಡೆಸೋಣ ಎಂದು ಪ್ರಸ್ತಾಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಪತ್ರದಲ್ಲೇನಿದೆ?&lt;/strong&gt;&lt;/h2&gt;&lt;p&gt;ತಮ್ಮ ಪತ್ರದಲ್ಲಿ, ಬಿಡದಿ ಸಮಗ್ರ ಉಪನಗರ ಯೋಜನೆಯಿಂದ ರಾಮನಗರ ಜಿಲ್ಲೆಯ ಹಲವು ಗ್ರಾಮಗಳ ರೈತರು ಮತ್ತು ಸ್ಥಳೀಯ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಪರಿಸರದ ಮೇಲೂ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಉಲ್ಲೇಖಿಸಿದ್ದಾರೆ. ಈ ಕಾರಣದಿಂದಲೇ ವಿಧಾನಸೌಧದ ನಾಲ್ಕು ಗೋಡೆಗಳ ಮಧ್ಯೆ ಅಲ್ಲ, ಜನರ ನಡುವೆ ಚರ್ಚೆ ನಡೆದರೆ ಮಾತ್ರ ಸತ್ಯ ಹೊರಬರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕುಮಾರಸ್ವಾಮಿ, &quot;ಈ ಯೋಜನೆಯಲ್ಲಿ ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ&quot; ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರೈತರು ಮತ್ತು ಬಾಧಿತರನ್ನು ಹೊರಗಿಟ್ಟು ನಡೆಸುವ ಯಾವುದೇ ಸಭೆ ಫಲಪ್ರದವಾಗುವುದಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ನಿಲುವಿನ ಮೇಲೂ ಪ್ರಶ್ನೆ ಎತ್ತಿದ್ದಾರೆ. ಜೂನ್ 26ರಂದು ತಮಗೆ ಪೂರ್ವನಿಗದಿತ ಕಾರ್ಯಕ್ರಮಗಳಿರುವುದರಿಂದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿರುವ ಅವರು, ಜೂನ್ 27ರಂದು ಬಿಡದಿ ಅಥವಾ ಭೈರಮಂಗಲದಲ್ಲಿ ಬಾಧಿತ ಜನರ ಸಮ್ಮುಖದಲ್ಲಿ ಸಭೆ ನಡೆಸಲು ಸಿದ್ಧ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಈ ಮೂಲಕ ಬಿಡದಿ ಟೌನ್&zwnj;ಶಿಪ್ ವಿವಾದ ಇದೀಗ ಕೇವಲ ರಾಜಕೀಯ ನಾಯಕರ ನಡುವಿನ ವಾಕ್ಸಮರವಾಗಿರದೆ, ರೈತರು, ಪರಿಸರ ಮತ್ತು ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಯಾಗಿ ರೂಪಾಂತರಗೊಂಡಿದೆ. ಇದೀಗ ಕುಮಾರಸ್ವಾಮಿ ನೀಡಿರುವ ಸಾರ್ವಜನಿಕ ಚರ್ಚೆಯ ಆಹ್ವಾನವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ವೀಕರಿಸುತ್ತಾರೆಯೇ ಎಂಬುದರತ್ತ ರಾಜ್ಯ ರಾಜಕೀಯದ ಚಿತ್ತ ನೆಟ್ಟಿದೆ.&lt;img&gt;&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/hd-kumaraswamy-challenges-dk-shivakumar-over-bidadi-township-gvd/articleshow-gtdl5f3"/>
        </item>
        <item>
            <title><![CDATA[Bidadi Township Row: ಮುಖಾಮುಖಿ ಚರ್ಚೆಗೆ ಬನ್ನಿ: ಎಚ್‌ಡಿಕೆಗೆ ಸಿಎಂ ಡಿಕೆಶಿ ಪಂಥಾಹ್ವಾನ!]]></title>
            <link>https://kannada.asianetnews.com/politics/dk-shivakumar-invites-hd-kumaraswamy-for-bidadi-township-discussion-gvd/articleshow-bg4kkdg</link>
            <guid isPermaLink="true">https://kannada.asianetnews.com/politics/dk-shivakumar-invites-hd-kumaraswamy-for-bidadi-township-discussion-gvd/articleshow-bg4kkdg</guid>
            <pubDate>Mon, 22 Jun 2026 21:45:19 +0530</pubDate>
            <description><![CDATA[&lt;p&gt;Bidadi Township Row: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಟೌನ್&zwnj;ಶಿಪ್ ಯೋಜನೆ ಇದೀಗ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಯೋಜನೆ ಕುರಿತು ನಡೆಯುತ್ತಿರುವ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hxw11ea8hm2cw1sg8n20q3qp,imgname-hdk.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.22):&lt;/strong&gt; ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಟೌನ್&zwnj;ಶಿಪ್ ಯೋಜನೆ ಇದೀಗ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಯೋಜನೆ ಕುರಿತು ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳ ನಡುವೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಮುಖಾಮುಖಿ ಚರ್ಚೆಗೆ ಆಹ್ವಾನ ನೀಡಿದ್ದಾರೆ.&lt;/p&gt;&lt;p&gt;ಈ ಸಂಬಂಧ ಮುಖ್ಯಮಂತ್ರಿ ಕಚೇರಿಯಿಂದ ಪತ್ರವೊಂದನ್ನು ಕಳುಹಿಸಲಾಗಿದ್ದು, ಜೂನ್ 26ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸುವಂತೆ ಕೋರಲಾಗಿದೆ. ಅಲ್ಲದೆ, ಕುಮಾರಸ್ವಾಮಿ ಅವರು ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿತ್ತು. ಯೋಜನೆಯ ಅನುಷ್ಠಾನ, ಭೂಸ್ವಾಧೀನ ಹಾಗೂ ರಾಜಕೀಯ ಆರೋಪಗಳ ಕುರಿತು ಎರಡೂ ಕಡೆಯಿಂದ ನಿರಂತರ ಹೇಳಿಕೆಗಳು ಕೇಳಿಬರುತ್ತಿದ್ದವು. ಈ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೇರ ಚರ್ಚೆಯ ಪ್ರಸ್ತಾಪ ಮುಂದಿಟ್ಟಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಪತ್ರದಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ತಾವು ಪ್ರಾರಂಭಿಸಿದ ಬಿಡದಿ ಟೌನ್&zwnj;ಶಿಪ್ ಯೋಜನೆಗೆ ಸಂಬಂಧಿಸಿದಂತೆ, ತಮ್ಮ ಜೊತೆ ನಾನು ಚರ್ಚಿಸಲು ಉತ್ಸುಕನಾಗಿದ್ದು, ದಿನಾಂಕ: 26.06.2026 ರಂದು ಬೆಳಗ್ಗೆ 11.00 ಗಂಟೆಗೆ ವಿಧಾನಸೌಧಕ್ಕೆ ತಾವು ಮತ್ತು ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ನನ್ನ ಕಚೇರಿಗೆ ಆಗಮಿಸುವಂತೆ ತಮ್ಮನ್ನು ಕೋರುತ್ತೇನೆ.&lt;img&gt;&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/dk-shivakumar-invites-hd-kumaraswamy-for-bidadi-township-discussion-gvd/articleshow-bg4kkdg"/>
        </item>
        <item>
            <title><![CDATA[ವ್ಯಾಟ್ಸಾಪ್‌ಗೂ ಭಾರತೀಯನ ಸಾರಥ್ಯ, ದ್ರಾವಿಡ್ ಬಾಯಲ್ಲಿ ಇಂದಿರಾನಗರ ಗೂಂಡಾ ಹೇಳಿಸಿದ ವ್ಯಕ್ತಿಗೆ ಜಾಗತಿಕ CEO ಪಟ್ಟ]]></title>
            <link>https://kannada.asianetnews.com/business/cred-founder-kunal-shah-appointed-whatsapp-chief-backed-by-rs-8550-crore-investment/articleshow-uhu6tco</link>
            <guid isPermaLink="true">https://kannada.asianetnews.com/business/cred-founder-kunal-shah-appointed-whatsapp-chief-backed-by-rs-8550-crore-investment/articleshow-uhu6tco</guid>
            <pubDate>Mon, 22 Jun 2026 19:51:06 +0530</pubDate>
            <description><![CDATA[&lt;p&gt;ಮೆಟಾ ಮಾಲೀಕತ್ವದ ಅತೀದೊಡ್ಡ ಮೆಸೇಜಿಂಗ್ ಪ್ಲಾಟ್&zwnj;ಫಾರ್ಮ್ ವ್ಯಾಟ್ಸಾಪ್ ಮುಖ್ಯಸ್ಥ ಸ್ಥಾನದಿಂದ ವಿಲ್ ಕ್ಯಾಥಕಾರ್ಟ್ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ ಕ್ರೆಡ್ ಸಂಸ್ಥೆ ಸಂಸ್ಥಾಪಕ ಕುನಾಲ್ ಶಾ ನೇಮಕಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqv9bt7d2j8002qkth2stab,imgname-kunal-shah-takes-charge-as-whatsapp-head-1782138056518.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜೂ.22) &lt;/strong&gt;ಮಾರ್ಕ್ ಜುಕರ್&zwnj;ಬರ್ಗ್ ನೇತೃತ್ವ ಮೆಟಾ ಕಂಪನಿಯ ಹಲವು ತಾಣಗಳ ಪೈಕಿ ಅತೀ ದೊಡ್ಡ ಮೆಸೇಜಿಂಗ್ ಪ್ಲಾಟ್&zwnj;ಫಾರ್ಮ್ ವ್ಯಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥಕಾರ್ಟ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಸ್ಥಾನಕ್ಕೆ ಭಾರತದ ಫಿನ್ ಟೆಕ್ ಆ್ಯಪ್ ಕ್ರೆಡ್ (CRED) ಕಂಪನಿ ಸಂಸ್ಥಾಪಕ ಕುನಾಲ್ ಶಾ ನೇಮಕಗೊಂಡಿದ್ದಾರೆ. ವಿಶೇಷ ಅಂದರೆ ಕ್ರೆಡ್ ಸಂಸ್ಥೆ ಇದೀಗ ವ್ಯಾಟ್ಸಾಪ್&zwnj;ನಲ್ಲಿ ಬರೋಬ್ಬರಿ 8550 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಕ್ರೆಡ್ ಸಂಸ್ಥೆಯ ಜಾಹೀರಾತು ಭಾರಿ ವೈರಲ್ ಆಗಿತ್ತು. ಜಾಹೀರಾತಿನಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ನಾನು ಇಂದಿರಾನಗರ ಗೂಂಡಾ ಎಂದಿದ್ದರು. ಈ ಭಿನ್ನ ಯೋಚನೆ ಹಿಂದಿದ್ದ ಕ್ರೆಡ್ ಸಂಸ್ಥೆ ಸಂಸ್ಥಾಪಕ ಕುನಾಲ್ ಶಾ ಇದೀಗ ವ್ಯಾಟ್ಸಾಪ್ ಸಿಇಒ ಆಗಿ ನೇಮಕಗೊಂಡಿದ್ದಾರೆ.&amp;nbsp;&lt;/p&gt;&lt;h2&gt;ಭಾರತದಲ್ಲಿ ವ್ಯಾಟ್ಸಾಪ್ ವಿಸ್ತರಣೆ&lt;/h2&gt;&lt;p&gt;ಕುನಾಲ್ ಶಾ ವ್ಯಾಟ್ಸಾಪ್ ಮುಖ್ಯಸ್ಥರಾಗಿ ನೇಮಕ ಹಾಗೂ ಕ್ರೆಡ್ ಕಂಪನಿಯಿಂದ ಬರೋಬ್ಬರಿ 8550 ಕೋಟಿ ರೂಪಾಯಿ ಹೂಡಿಕೆ ಹಿಂದೆ ವ್ಯಾಟ್ಸಾಪ್ ಕಾರ್ಯವ್ಯಾಪ್ತಿ ವಿಸ್ತರಣೆ ಯೋಜನೆ ಅಡಗಿದೆ. ಭಾರತದಲ್ಲಿ ವ್ಯಾಟ್ಸಾಪ್ ಕೇವಲ ಮೆಸೇದಿಂಗ್ ಪ್ಲಾಟ್&zwnj;ಫಾರ್ಮ್ ಆಗಿ ಉಳಿದಿಲ್ಲ. ಇದು ಡಿಜಿಟಲ್ ಪೇಮೆಂಟ್, ಇ ಕಾಮರ್ಸ್ ಸೇರಿದಂತೆ ವ್ಯಾಪಾರ ಮತ್ತು ಆರ್ಥಿಕ ವಹಿವಾಟಿನ ಅತೀ ದೊಡ್ಡ ಕೇಂದ್ರವಾಗಿ ಬದಲಾಗಲಿದೆ.&lt;/p&gt;&lt;p&gt;ಕುನಾಲ್ ಶಾ ಕ್ರೆಡ್ ಸಿಇಒ ಜವಾಬ್ದಾರಿ ಜೊತೆ ವ್ಯಾಟ್ಸಾಪ್ ಮುಖ್ಯಸ್ಥರಾಗಿ ಜಾಗತಿಕ ಕಾರ್ಯತಂತ್ರ ಹಾಗೂ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸಲಿದ್ದಾರೆ. ಕ್ರೆಡ್ ಹಾಗೂ ವ್ಯಾಟ್ಸಾಪ್ ಇನ್ಮುಂದೆ ಜಂಟಿಯಾಗಿ ಕಾರ್ಯನಿರ್ವಹಿಸಲಿದೆ. ಭಾರತೀಯ ಗ್ರಾಹಕರ ಹಣಕಾಸು ನಡವಳಿಕೆ ಸೇರಿದಂತೆ ಭಾರತೀಯ ಗ್ರಾಹಕರು, ಬಳಕೆದಾರರ ಸಂಪೂರ್ಣ ಜ್ಞಾನವಿರುವ ಕುನಾಲ್ ಶಾ ಇದೀಗ ವ್ಯಾಟ್ಸಾಪ್ ಮುಖ್ಯಸ್ಥರಾಗಿ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ವ್ಯಾಟ್ಸಾಪ್ ವಿಸ್ತರಿಸಲು ಮಹತ್ವದ ಪ್ಲಾನ್ ರೂಪಿಸಿದ್ದಾರೆ.&lt;/p&gt;&lt;h2&gt;ಯಾರು ಈ ಕುನಾಲ್ ಶಾ?&lt;/h2&gt;&lt;p&gt;ಭಾರತದ ಉದ್ಯಮಿಗಳ ಪಟ್ಟಿಯಲ್ಲಿ ಪ್ರಮುಖ ಹೆಸರು ಕುನಾಲ್ ಶಾ. ತಂತ್ರಜ್ಞಾನ ಬಳಸಿಕೊಂಡು, ಸದ್ಯದ ಪರಿಸ್ಥಿತಿಗೆ ತಕ್ಕಂತೆ ಉದ್ಯಮ ಕಟ್ಟುವ ಜ್ಞಾನ, ತಂತ್ರಜ್ಞಾನದ ಅರಿವು ಕುನಾಲ್ ಶಾಗೆ ಇದೆ. ಫ್ರೀಚಾರ್ಜ್ ಉದ್ಯಮ ಕಟ್ಟಿ ಭಾರಿ ಯಶಸ್ಸು ಕಂಡಿರುವ ಕುನಾಲ್ ಶಾ, ಬಳಿಕ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕ್ರೆಡ್ ಸಂಸ್ಥೆ ಸ್ಥಾಪಿಸಿ ಯಶಸ್ಸು ಸಾಧಿಸಿದ್ದಾರೆ. ಇದೀಗ ವ್ಯಾಟ್ಸಾಪ್ ವಿಶ್ವದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಈ ಸಂಸ್ಥೆಯ ಹೊಣೆಯನ್ನು ಭಾರತದ ಉದ್ಯಮಿಗೆ ನೀಡಿರುವುದು ಭಾರತದ ಸ್ಟಾರ್ಟ್ಅಪ್&zwnj;ಗೆ ಸಿಕ್ಕ ಗೌರವವಾಗಿದೆ. ವ್ಯಾಟ್ಸಾಪ್ ಜೊತೆ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿರುವ ಕ್ರೆಡ್ ಉದ್ಯಮದ ಮೌಲ್ಯ ಗಣನೀಯವಾಗಿ ಏರಿಕೆಯಾಗಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/business/cred-founder-kunal-shah-appointed-whatsapp-chief-backed-by-rs-8550-crore-investment/articleshow-uhu6tco"/>
        </item>
        <item>
            <title><![CDATA[ಅಪ್ಪ ಹೇಗಾದರೂ ಕಾಪಾಡು, ಕೋಚಿಂಗ್ ಸೆಂಟರ್ ಅಗ್ನಿಅವಘಡದಲ್ಲಿ ಸಿಲುಕಿದ ವಿದ್ಯಾರ್ಥಿಯ ಕೊನೆ ಕಾಲ್]]></title>
            <link>https://kannada.asianetnews.com/india-news/heartbreaking-last-call-from-student-trapped-in-lucknow-coaching-centre-blaze/articleshow-6gph8qy</link>
            <guid isPermaLink="true">https://kannada.asianetnews.com/india-news/heartbreaking-last-call-from-student-trapped-in-lucknow-coaching-centre-blaze/articleshow-6gph8qy</guid>
            <pubDate>Mon, 22 Jun 2026 20:38:12 +0530</pubDate>
            <description><![CDATA[&lt;p&gt;ಅಪ್ಪಾ ಹೇಗಾದರೂ ಮಾಡಿ ಕಾಪಾಡು. ಇದು ಲಖನೌ ಕೋಚಿಂಗ್ ಸೆಂಟರ್ ಅಗ್ನಿಅವಘಡದಲ್ಲಿ ಸಜೀವ ದಹನವಾದ ವಿದ್ಯಾರ್ಥಿಯ ಕೊನೆಯ ಕರೆ. ತಂದೆ ಸ್ಥಳಕ್ಕೆ ಆಗಮಿಸುವಷ್ಟರಲ್ಲೇ ಮಗ ಸುಟ್ಟು ಕರಕಲಾಗಿದ್ದ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqqsccqtr9472v97wv3xfct,imgname-lucknow-fire-accident-1782134387095.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಖನೌ (ಜೂ.22) &lt;/strong&gt;ಕೋಚಿಂಗ್ ಸೆಂಟರ್&zwnj;ನಲ್ಲಿ ಕಾಣಿಸಿಕೊಂಡ ಅಗ್ನಿಅವಘಡದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ. ಇದೀಗ ಘಟನೆಯಲ್ಲಿ ಸಜೀವ ದಹನವಾದ ವಿದ್ಯಾರ್ಥಿಗಳ ಕಣ್ಣೀರ ಕತೆ ಒಂದೊಂದಾಗಿ ಹೊರಬರುತ್ತಿದೆ. ಈ ಪೈಕಿ 23 ವರ್ಷದ ಸುಖಮಣಿ ಸಿಂಗ್ ಕೊನೆಯ ಕರೆ ಕುರಿತು ತಂದೆ ಕಣ್ಣೀರಿಟ್ಟು ವಿವರಿಸಿದ್ದಾರೆ.&lt;/p&gt;&lt;h2&gt;ಭಯದಿಂದ ತಂದೆಗೆ ಕರೆ ಮಾಡಿದ ಸುಖಮಣಿ&lt;/h2&gt;&lt;p&gt;ಸುಖಮಣಿ ಸಿಂಗ್ ಲಖನೌ ಕೋಚಿಂಗ್ ಸೆಂಟರ್&zwnj;ಗೆ ಹಾಜರಾಗಿ ಅಧ್ಯಯನ ಮಾಡುತ್ತಿದ್ದ. ಇದೇ ರೀತಿ ಹಲವು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಇಂದು ಮಧ್ಯಾಹ್ನ ಕೋಚಿಂಗ್ ಸೆಂಟರ್&zwnj;ನಲ್ಲಿ ಏಕಾಏಕಿ ಅಗ್ನಿಅವಘಡ ಸಂಭವಿಸಿದೆ. ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್&zwnj;ನಲ್ಲಿ ಸಿಲುಕಿದ್ದರು. ಬೆಂಕಿಯ ಕೆನ್ನಾಲಗೆ ಆವರಿಸಿಕೊಂಡಿತ್ತು. ಈ ವೇಳೆ ಭಯದಿಂದ ಸುಖಮಣಿ ಸಿಂಗ್ ತನ್ನ ತಂದೆ ಪ್ರಭಜೋತ್ ಸಿಂಗ್&zwnj;ಕರೆ ಕೆರೆ ಮಾಡಿದ್ದಾನೆ. ಅಪ್ಪಾ ಹೇಗಾದರು ಮಾಡಿ ನನ್ನ ಕಾಪಾಡು. ಸುತ್ತಲೂ ಬೆಂಕಿ ಕಾಣಿಸಿಕೊಂಡಿದೆ. ಹೊರಗೆ ಬರಲು ಯಾವುದೇ ದಾರಿ ಇಲ್ಲ. ಎಲ್ಲಾ ಕಡೆ ಬೆಂಕಿ ಆವರಿಸಿದೆ. ನಾನು ಸೇರಿದಂತೆ ಹಲವರು ಸಿಲುಕಿಕೊಂಡಿದ್ದೇವೆ. ಅಳುತ್ತಲೇ ತಂದೆಗೆ ಕರೆ ಮಾಡಿದ್ದಾನೆ.&lt;/p&gt;&lt;h2&gt;ಮಗನ ಶವದ ಮುಂದೆ ಕಣ್ಣೀರಿಟ್ಟ ತಂದೆ&lt;/h2&gt;&lt;p&gt;ಮಗನಿಗೆ ಧೈರ್ಯ ನೀಡುವ ಮೊದಲೇ ಬೆಂಕಿಯ ಜ್ವಾಲೆ ಆವರಿಸಿಕೊಂಡಿದೆ. ತಂದೆ ಹಲೋ ಹಲೋಎಂದರೂ ಅತ್ತ ಸದ್ದಿಲ್ಲ. ಆತಂಕದಿಂದಲೇ ಪ್ರಭಜೋತ್ ಸಿಂಗ್ ಕೋಚಿಂಗ್ ಸೆಂಟರ್&zwnj;ನತ್ತ ಧಾವಿಸಿದ್ದಾರೆ. ಅಷ್ಟರಲ್ಲೇ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿ 13 ಮಂದಿಯ ಮೃತದೇಹ ಹೊರಕ್ಕೆ ತೆಗೆದಿತ್ತು. ಈ ಮೃತದೇಹಳನ್ನು ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿಗೆ ಸಾಗಿಸಲಾಗಿತ್ತು. ಶವಾಗಾರ ಹೊರಗಡೆ ನಿಂತು ಗೋಳಾಡುತ್ತಿದ್ದ ಪ್ರಭಜೋತ್ ಸಿಂಗ್, ನನ್ನ ಮಗ ಕೊನೆಯ ಕರೆ ಮಾಡಿದ್ದ. ಆತನ ಉಳಿಸಲು ಸಾಧ್ಯವಾಗಲಿಲ್ಲ. ಅಳುತ್ತಲೇ ಕಾಪಾಡಲು ಗೋಗರೆದಿದ್ದ. ಅಸಹಾಯಕನಾದೇ ಎಂದು ಪ್ರಭಜೋತ್ ಸಿಂಗ್ ಕಣ್ಣೀರಿಟ್ಟಿದ್ದಾರೆ.&lt;/p&gt;&lt;h2&gt;ರಕ್ಷಣಾ ಕಾರ್ಯಾಚರಣೆ ವಿಳಂಬ?&lt;/h2&gt;&lt;p&gt;ಸಂತ್ರಸ್ತ್ರ ಕುಟುಂಬಗಳು ರಕ್ಷಣಾ ಕಾರ್ಯಾಚರಣೆ ವಿಳಂಬ ಕುರಿತು ಆರೋಪ ಮಾಡಿದ್ದಾರೆ. ಘಟನೆಯಲ್ಲಿ ಸಜೀವ ದಹನವಾದ ಜೋಯ್ನಿಲ್ ಚಕ್ರವರ್ತಿ ಸಂಬಂಧಿ ವಿಶ್ವಜಿತ್ ಈ ಕುರಿತು ಆರೋಪಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ನಾನು ಸ್ಥಳಕ್ಕೆ ಧಾವಿಸಿದೆ. ಜೋಯ್ನಿಲ್ ನನ್ನ ಜೊತೆ ಫೋನ್&zwnj;ನಲ್ಲೇ ಇದ್ದ. ಕಾಪಾಡಲು ಬೇಡಿಕೊಂಡಿದ್ದ. ಆದರೆ ರಕ್ಷಣಾ ಸಿಬ್ಬಂದಿಗಳು ಗೋಡೆ ಒಡೆಯುವ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡಿದರು. ಗೋಡೆ ಒಡೆದು ಒಳಪ್ರವೇಶಿಸುವಾಗ ಎಲ್ಲವೂ ಮುಗಿದಿತ್ತು ಎಂದು ವಿಶ್ವಜಿತ್ ಆರೋಪಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/heartbreaking-last-call-from-student-trapped-in-lucknow-coaching-centre-blaze/articleshow-6gph8qy"/>
        </item>
        <item>
            <title><![CDATA[CM Vijay Birthday- Big Secret: ಎಲೆಕ್ಷನ್ ಗೆದ್ದ ಬಳಿಕ ಮನೆಗೆ ಬಂದ ವಿಜಯ್ ಹೇಳಿದ್ದೇನು? ಆ 'ಬಿಗ್ ಸೀಕ್ರೆಟ್' ರಿವೀಲ್ ಮಾಡಿದ ದಳಪತಿ ಅಮ್ಮ ಶೋಭಾ!]]></title>
            <link>https://kannada.asianetnews.com/entertainment/thalapathy-vijay-mother-shobha-reveals-that-what-vijay-said-upon-returning-home-after-winning-the-election/articleshow-y2h7ezt</link>
            <guid isPermaLink="true">https://kannada.asianetnews.com/entertainment/thalapathy-vijay-mother-shobha-reveals-that-what-vijay-said-upon-returning-home-after-winning-the-election/articleshow-y2h7ezt</guid>
            <pubDate>Mon, 22 Jun 2026 19:35:39 +0530</pubDate>
            <description><![CDATA[&lt;p&gt;ಈ ಬಾರಿಯ ವಿಜಯ್ ಹುಟ್ಟುಹಬ್ಬ ಹಿಂದೆಂದಿಗಿಂತಲೂ ಸ್ಪೆಷಲ್. ಯಾಕೆಂದರೆ, ಇದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ. ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ವಿಜಯ್&zwnj;ಗೆ ಶುಭ ಕೋರುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqtbmqnpfzbg290de3x1981,imgname-thalapathy-vijay--1--1782137082613.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚುವಾವಣೆ ಗೆದ್ದ ದಿನ ವಿಜಯ್ ಮನೆಗೆ ಬಂದು ಹೇಳಿದ್ದೇನು? ತಾಯಿ ಶೋಭಾ ಬಿಚ್ಚಿಟ್ಟ ಆ 'ಬಿಗ್ ಸೀಕ್ರೆಟ್' ಇಲ್ಲಿದೆ!&lt;/strong&gt;&lt;/p&gt;&lt;p&gt;ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗಿದೆ. ಬೆಳ್ಳಿತೆರೆಯ ಮೇಲೆ 'ದಳಪತಿ'ಯಾಗಿ ಅಬ್ಬರಿಸುತ್ತಿದ್ದ ವಿಜಯ್ (Thalapathy Vijay), ಈಗ ತಮಿಳುನಾಡಿನ ಅಧಿಪತಿಯಾಗಿ ರಾಜ್ಯವನ್ನೇ ಆಳುತ್ತಿದ್ದಾರೆ. ಇಂದು ಈ ಜನನಾಯಕನ 52ನೇ ಹುಟ್ಟುಹಬ್ಬ! ಇಡೀ ತಮಿಳುನಾಡು ಹಬ್ಬದಂತೆ ಈ ದಿನವನ್ನು ಆಚರಿಸುತ್ತಿದೆ. ಆದರೆ, ಈ ಸಂಭ್ರಮದ ನಡುವೆ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಬಿಚ್ಚಿಟ್ಟಿರುವ ಒಂದು ಸೀಕ್ರೆಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.&lt;/p&gt;&lt;p&gt;ಗೆದ್ದ ದಿನ ಮನೆಗೆ ಬಂದು ಅಪ್ಪನಿಗೆ ಹೇಳಿದ್ದೇನು?&lt;/p&gt;&lt;p&gt;ಸಿನಿಮಾಗಳಲ್ಲಿ ಸ್ಟೈಲಿಶ್ ಆಗಿ ಡೈಲಾಗ್ ಹೊಡೆಯುವ ವಿಜಯ್, ನಿಜ ಜೀವನದಲ್ಲಿ ತುಂಬಾ ಸರಳ ಮತ್ತು ಮಿತಭಾಷಿ. ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ, ಇಡೀ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ದಿನ ವಿಜಯ್ ಮನೆಗೆ ಬಂದಾಗ ನಡೆದ ಘಟನೆಯನ್ನು ಅವರ ತಾಯಿ ನೆನಪಿಸಿಕೊಂಡಿದ್ದಾರೆ. &quot;ವಿಜಯ್ ಮನೆಗೆ ಬಂದವನೇ ತನ್ನ ತಂದೆ ಎಸ್.ಎ. ಚಂದ್ರಶೇಖರ್ ಬಳಿ ಹೋಗಿ, 'ಅಪ್ಪಾ, ನಿಮ್ಮ ಆಸೆ ಈಡೇರಿದೆ' ಎಂದು ಹೇಳಿದನು. ಆ ಒಂದು ಮಾತು ಕೇಳಿದಾಗ ನಮ್ಮ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು&quot; ಎಂದು ಶೋಭಾ ಭಾವನಾತ್ಮಕವಾಗಿ ನುಡಿದಿದ್ದಾರೆ. ವಿಜಯ್ ಅವರ ಈ ಯಶಸ್ಸು ಕೇವಲ ಒಬ್ಬ ರಾಜಕಾರಣಿಯ ಗೆಲುವಲ್ಲ, ಅದು ಒಂದು ಕುಟುಂಬದ ದಶಕಗಳ ಕಾಲದ ಕನಸಿನ ಸಾಕಾರ!&lt;/p&gt;&lt;h2&gt;ತಾಯಿಯ ವಿಶೇಷ ಉಡುಗೊರೆ:&lt;/h2&gt;&lt;p&gt;ಮಗ ಮುಖ್ಯಮಂತ್ರಿಯಾದ ಖುಷಿಗೆ ತಾಯಿ ಶೋಭಾ ಏನು ಉಡುಗೊರೆ ನೀಡಿದ್ದಾರೆ ಗೊತ್ತಾ? ಅವರು ವಿಜಯ್&zwnj;ಗೆ ಒಂದು ವಿಶೇಷವಾದ ಬಳೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. &quot;ಮಗ ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿಗೆ ಆತ ಮಗನೇ. ಆತನ ಈ ಗೆಲುವು ನಮ್ಮ ಇಡೀ ಕುಟುಂಬಕ್ಕೆ ಹೆಮ್ಮೆ ತಂದಿದೆ&quot; ಎನ್ನುತ್ತಾರೆ ಅವರು.&lt;/p&gt;&lt;p&gt;ಯಶಸ್ಸಿನ ಹಿಂದೆ ತಂದೆಯ 'ಮಾಸ್ಟರ್ ಪ್ಲಾನ್':&lt;/p&gt;&lt;p&gt;ವಿಜಯ್ ಇಂದು ಮುಖ್ಯಮಂತ್ರಿ ಸ್ಥಾನಕ್ಕೇರಲು ಅವರ ತಂದೆ ಎಸ್.ಎ. ಚಂದ್ರಶೇಖರ್ (SAC) ಅವರ ಪಾತ್ರ ಬಹಳ ದೊಡ್ಡದಿದೆ. ವಿಜಯ್ ಕೇವಲ ನಟನಾಗಿ ಉಳಿಯಬಾರದು, ಜನರ ಸೇವಕನಾಗಬೇಕು ಎಂದು ಹದಿನೈದು ವರ್ಷಗಳ ಹಿಂದೆಯೇ ಕನಸು ಕಂಡವರು SAC. ವಿಜಯ್ ಅವರ ಅಭಿಮಾನಿ ಸಂಘಗಳನ್ನು ಒಂದು ವ್ಯವಸ್ಥಿತ ಜನಾಂದೋಲನವಾಗಿ ರೂಪಿಸಿದ್ದು ಇದೇ ತಂದೆ. ಸಿನಿಮಾಗಳ ಮೂಲಕ ಸಾಮಾಜಿಕ ಸಂದೇಶಗಳನ್ನು ನೀಡುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ವಿಜಯ್ ಅವರಲ್ಲಿ ಬೆಳೆಸಿದ್ದೇ ಅವರ ತಂದೆ ಎನ್ನುವುದನ್ನು ಶೋಭಾ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.&lt;/p&gt;&lt;h3&gt;ಮೊದಲ ಬಾರಿಗೆ 'ಸಿಎಂ' ಆಗಿ ಬರ್ತ್&zwnj;ಡೇ ಸೆಲೆಬ್ರೇಷನ್:&lt;/h3&gt;&lt;p&gt;ಈ ಬಾರಿಯ ವಿಜಯ್ ಹುಟ್ಟುಹಬ್ಬ ಹಿಂದೆಂದಿಗಿಂತಲೂ ಸ್ಪೆಷಲ್. ಯಾಕೆಂದರೆ, ಇದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ. ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ವಿಜಯ್&zwnj;ಗೆ ಶುಭ ಕೋರುತ್ತಿದ್ದಾರೆ. ಟಿವಿಕೆ (TVK) ಕಾರ್ಯಕರ್ತರು ರಾಜ್ಯಾದ್ಯಂತ ಅನ್ನದಾನ, ರಕ್ತದಾನ ಶಿಬಿರಗಳನ್ನು ಆಯೋಜಿಸಿ ತಮ್ಮ ನಾಯಕನ ಮೇಲಿನ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಸಿಲ್ವರ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡುತ್ತಿದ್ದ ವಿಜಯ್, ಈಗ ರಾಜಕೀಯದ ಅಖಾಡದಲ್ಲೂ ಮ್ಯಾಜಿಕ್ ಮಾಡಿ ತೋರಿಸಿದ್ದಾರೆ. ತಾಯಿಯ ಪ್ರೀತಿ, ತಂದೆಯ ಮಾರ್ಗದರ್ಶನ ಮತ್ತು ಕೋಟ್ಯಂತರ ಅಭಿಮಾನಿಗಳ ಹಾರೈಕೆಯೇ ಇಂದು ವಿಜಯ್ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ.&lt;/p&gt;&lt;p&gt;ತಮಿಳುನಾಡು ಸಿಎಂ, ನಟ ದಳಪತಿ ವಿಜಯ್ ಅವರಿಗೆ ಜಗತ್ತಿನಾದ್ಯಂತ ಇರುವ ಅಭಿಮಾನಿಗಳಿಂದ 'ಹ್ಯಾಪಿ ಬರ್ತ್&zwnj;ಡೇ ಸಿಎಂ ವಿಜಯ್' ಎಂದ ಶುಭಾಶಯಗಳು ಹರಿದುಬರುತ್ತಿವೆ..&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/thalapathy-vijay-mother-shobha-reveals-that-what-vijay-said-upon-returning-home-after-winning-the-election/articleshow-y2h7ezt"/>
        </item>
        <item>
            <title><![CDATA[Kodagu: 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಉಸಿರಾಟ ಇರಲ್ಲ: ಸಿದ್ದರಾಮಯ್ಯ ವಿರುದ್ಧ ಯದುವೀರ್ ವಾಗ್ದಾಳಿ]]></title>
            <link>https://kannada.asianetnews.com/karnataka-districts/mp-yaduveer-wadiyar-slams-congress-over-siddaramaiah-remarks-gvd/articleshow-9ubagz9</link>
            <guid isPermaLink="true">https://kannada.asianetnews.com/karnataka-districts/mp-yaduveer-wadiyar-slams-congress-over-siddaramaiah-remarks-gvd/articleshow-9ubagz9</guid>
            <pubDate>Mon, 22 Jun 2026 19:22:09 +0530</pubDate>
            <description><![CDATA[&lt;p&gt;Yaduveer Wadiyar: ಕಾಂಗ್ರೆಸ್ ಗೆ ಉಸಿರಾಡುವುದಕ್ಕೆ ದೇಶದಲ್ಲಿ ಇರುವುದು ಇದೊಂದೇ ರಾಜ್ಯ. 28 ರಲ್ಲಿ ಚುನಾವಣೆಯಲ್ಲಿ ಅದು ಕೂಡ ಇಲ್ಲದಂತೆ ಆಗುವ ಆತಂಕ ಅವರಿಗೆ ಇದೆ. ಆ ಮಾಹಿತಿ ಅವರಿಗೆ ಈಗಾಗಲೇ ಗೊತ್ತಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqsm9mg9t0f2hzbk4nrsmaq,imgname-j-1782136317584.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜೂ.22): &lt;/strong&gt;ಕಾಂಗ್ರೆಸ್ ಗೆ ಉಸಿರಾಡುವುದಕ್ಕೆ ದೇಶದಲ್ಲಿ ಇರುವುದು ಇದೊಂದೇ ರಾಜ್ಯ. 28 ರಲ್ಲಿ ಚುನಾವಣೆಯಲ್ಲಿ ಅದು ಕೂಡ ಇಲ್ಲದಂತೆ ಆಗುವ ಆತಂಕ ಅವರಿಗೆ ಇದೆ. ಆ ಮಾಹಿತಿ ಅವರಿಗೆ ಈಗಾಗಲೇ ಗೊತ್ತಾಗಿದೆ. ಆದ್ದರಿಂದಲೇ ಅವರು ಹೀಗೆ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಿಂದೂ ರಾಷ್ಟ್ರ ಮಾಡುವ ಉದ್ದೇಶ ಹೊಂದಿದೆ.&lt;/p&gt;&lt;p&gt;ಹಿಂದೂ ರಾಷ್ಟ್ರ ಮಾಡುವುದಕ್ಕೆ ಕೈಕಾರ್ಯಕರ್ತರು ಬಿಡಬಾರದು ಎಂದು ಸಿದ್ದರಾಮಯ್ಯ ಹೇಳಿರುವ ವಿಚಾರ ಮಡಿಕೇರಿಯಲ್ಲಿ ಮಾತನಾಡಿದ ಯದುವೀರ್ ಇದು ಅನಿರೀಕ್ಷಿತ ಹೇಳಿಕೆ ಏನು ಅಲ್ಲ, ಹಿಂದಿನಿಂದಲೂ ಅವರ ಮನೋಭಾವವೇ ಹಾಗೆ ಇದೆ. ಕಾಂಗ್ರೆಸ್ ನ ನಡವಳಿಕೆಯೇ ಯಾವಾಗಲೂ ಅಪಪ್ರಚಾರ ಮಾಡುವುದು ಎನ್ನುವುದು ನಮಗೂ ಗೊತ್ತಿದೆ. ಆದರೆ ಭಾರತೀಯ ಜನತಾ ಪಕ್ಷ ಸುರಕ್ಷಿತ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕೆಲಸ ಮಾಡುತ್ತಿದೆ.&lt;/p&gt;&lt;p&gt;ಪ್ರಧಾನಿ ಮೋದಿಯವರನ್ನು ದೇಶದ ಜನ ಒಪ್ಪಿದ್ದಾರೆ. ಹೀಗಾಗಿಯೇ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ. ನಮ್ಮ ಪಕ್ಷ ಎಲ್ಲಾ ಜನಾಂಗಗಳನ್ನು ಒಳಗೊಂಡು ಕೆಲಸ ಮಾಡುತ್ತಿದೆ. ಇಂದು ಹೆದ್ದಾರಿ, ರೈಲ್ವೇ ಹಾಗೂ ವಿಮಾನಯಾನ ಅಭಿವೃದ್ಧಿ ಆಗಿದೆ. ಇದನ್ನೆಲ್ಲ ಕೇವಲ ಹಿಂದುಗಳು ಮಾತ್ರವೇ ಬಳಕೆ ಮಾಡುತ್ತಾರೆಯೇ.? ಇವುಗಳಲ್ಲಿ ಹಿಂದೂಗಳು ಮಾತ್ರ ಓಡಾಡುತ್ತಾರೆಯೇ ಎಂದು ಪ್ರಶ್ನಿಸಿದ ಯದುವೀರ್ ಇವುಗಳಲ್ಲಿ ಎಲ್ಲಾ ಧರ್ಮಗಳ ಜನರು ಓಡಾಡುತ್ತಾರೆ. ಆದರೆ ಕಾಂಗ್ರೆಸ್ ಮಾತ್ರ ಕೇವಲ ಅಪಪ್ರಚಾರ ಮಾಡುತ್ತದೆ ಅಷ್ಟೇ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರ ನಿಮ್ಮದೇ ನಿರ್ಧಾರ ಕೈಗೊಳ್ಳಿ&lt;/strong&gt;&lt;/h2&gt;&lt;p&gt;ಬಿಡದಿ ಟೌನ್ ಶಿಪ್ ನಿರ್ಮಾಣ ಕೆಲಸ ಯಾರ ಸಮಯದಲ್ಲಿ ಆಯ್ತು ಎನ್ನುವುದು ಮುಖ್ಯವಲ್ಲ. ನಿಮ್ಮ ಸರ್ಕಾರವಿದೆ, ನೀವೆ ನಿರ್ಧಾರ ಮಾಡಿ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ. ಬಿಡದಿ ಟೌನ್ ಶಿಪ್ ಆರಂಭವಾಗಿದ್ದೇ ಎಚ್ ಡಿಕೆ ಕಾಲದಲ್ಲಿ ಎಂದು ಸಿಎಂ ಡಿಕೆಶಿ ಹೇಳಿಕೆ ವಿಚಾರಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಅವರು ಜನರ ಅಭಿಪ್ರಾಯ ವ್ಯಕ್ತವಾಗುತ್ತಿರುವ ಹಾಗೆ ನೀವು ನಿರ್ಧಾರ ಮಾಡಿ.&lt;/p&gt;&lt;p&gt;ಹಿಂದೆ ಇದ್ದವರು, ಮುಂದೆ ಬರುವವರ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಸರ್ಕಾರ, ಆಡಳಿತ ಅವರದ್ದೇ ಇದೆ. ಇಂದು ಜನರ ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ, ಆ ಅಭಿಪ್ರಾಯದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ. ಯಾರು ಹಿಂದೆ ಏನು ಮಾಡಿದರು ಮುಂದೆ ಏನ್ ಮಾಡ್ತಾರೆ ಎನ್ನುವ ಚರ್ಚೆ ಅವಶ್ಯಕತೆ ಇಲ್ಲ. ಆಡಳಿತ ಅವರ ಕೈಯಲ್ಲಿ ಇದೆ ಅವರು ನಿರ್ಧಾರ ತೆಗೆದುಕೊಳ್ಳಲಿ ಎಂದು ಮಡಿಕೇರಿಯಲ್ಲಿ ಸಿಎಂ ಡಿಕೆಶಿಗೆ ಸಂಸದಯ ಯದುವೀರ್ ಒಡೆಯರ್ ತಿರುಗೇಟು ನೀಡಿದರು.&lt;/p&gt;&lt;p&gt;ಇನ್ನು ಪರಿಷತ್ ಚುನಾವಣೆ ವೇಳೆಯಲ್ಲಿ ಅಡ್ಡ ಮತದಾನ ಮಾಡಿರುವವರಿಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯದುವೀರ್ ಪಕ್ಷ ಶಿಸ್ತುಕ್ರಮ ಕೈಗೊಳ್ಳುತ್ತದೆ. ಅದರ ವರದಿಗಾಗಿ ಈಗಾಗಲೇ ಸತ್ಯ ಶೋಧನೆ ಸಮಿತಿಯನ್ನು ರಚಿಸಲಾಗಿದೆ. ಸಿ ಟಿ ರವಿ ಅವರ ನೇತೃತ್ವದಲ್ಲಿ ಸಮಿತಿ ತನಿಖೆ ಮಾಡುತ್ತಿದೆ ಎಂದರು. ಅಡ್ಡಮತದಾನ ನಡೆದಿರುವುದು ಇದೇನು ಮೊದಲಲ್ಲ. ಬೇರೆ ಪಕ್ಷಗಳಲ್ಲೂ ಅಡ್ಡಮತದಾನ ನಡೆದಿವೆ.&lt;/p&gt;&lt;p&gt;ಈಗ ನಮ್ಮ ಪಕ್ಷದಲ್ಲೂ ಅಡ್ಡ ಮತದಾನ ನಡೆದಿದೆ. ನಾವು ಕ್ರಮ ತೆಗೆದುಕೊಳ್ಳಬೇಕಾಗಿದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ಆಣೆ ಪ್ರಮಾಣಕ್ಕೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಅದು ಪಕ್ಷದ ಆಂತರಿಕ ವಿಚಾರವಾಗಿದ್ದು, ಏನು ಮಾಡಬೇಕು ಮಾಡಬಾರದು ಅಂತ ಪಕ್ಷ ನಿರ್ಧಾರ ಮಾಡುತ್ತದೆ. ಅದನ್ನೆಲ್ಲ ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಯದುವೀರ್ ಒಡೆಯರ್ ಹೇಳಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-yaduveer-wadiyar-slams-congress-over-siddaramaiah-remarks-gvd/articleshow-9ubagz9"/>
        </item>
        <item>
            <title><![CDATA[ಸೈಬೀರಿಯಾದ ಸಮಾಧಿ ತೆರೆದ ಭಯಾನಕ ರಹಸ್ಯ! ಇತಿಹಾಸದ ಅತ್ಯಂತ 5500 ವರ್ಷಗಳಷ್ಟು ಹಳೆಯ ರೋಗದ ಸತ್ಯ ಬಯಲು!]]></title>
            <link>https://kannada.asianetnews.com/science/oldest-5500-year-plague-outbreak-ever-discovered-stuns-scientists-in-new-siberia-gdp/articleshow-0edggyi</link>
            <guid isPermaLink="true">https://kannada.asianetnews.com/science/oldest-5500-year-plague-outbreak-ever-discovered-stuns-scientists-in-new-siberia-gdp/articleshow-0edggyi</guid>
            <pubDate>Mon, 22 Jun 2026 19:04:17 +0530</pubDate>
            <description><![CDATA[ಸೈಬೀರಿಯಾದ ಬೈಕಲ್ ಸರೋವರದ ಬಳಿ ಪತ್ತೆಯಾದ 46 ಪುರಾತನ ಅಸ್ಥಿಪಂಜರಗಳ ಡಿಎನ್&zwnj;ಎ ವಿಶ್ಲೇಷಣೆಯು, ಇದುವರೆಗಿನ ಅತ್ಯಂತ ಹಳೆಯ ಪ್ಲೇಗ್ ರೋಗವನ್ನು ಬೆಳಕಿಗೆ ತಂದಿದೆ. ಈ ಶೋಧನೆಯು ಪ್ಲೇಗ್&zwnj;ನ ಇತಿಹಾಸವನ್ನು 200 ವರ್ಷಗಳಷ್ಟು ಹಿಂದಕ್ಕೆ ತಳ್ಳಿದ್ದು, ನಾಗರಿಕತೆಗೂ ಮುನ್ನ ಬೇಟೆಗಾರ-ಸಂಗ್ರಹಕಾರ ಸಮುದಾಯಗಳಲ್ಲೇ ಈ ರೋಗವು ಭೀಕರವಾಗಿ ಹರಡಿತ್ತು ಎಂಬ ಸತ್ಯವನ್ನು ಸಾಬೀತುಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01es0t6h15xq0th9x5jz68tcb5,imgname-gettyimages-2642041-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನುಷ್ಯ ನಾಗರಿಕನಾಗಿ ಬದುಕಲು ಕಲಿತ ದಿನದಿಂದಲೂ ಸಾಂಕ್ರಾಮಿಕ ರೋಗಗಳು ಅವನನ್ನು ಕಾಡುತ್ತಲೇ ಇವೆ. ಆದರೆ, ಇತಿಹಾಸದ ಪುಟಗಳು ಹೇಳುವುದಕ್ಕಿಂತಲೂ ನೂರಾರು ವರ್ಷಗಳ ಹಿಂದೆಯೇ ಭೀಕರ 'ಪ್ಲೇಗ್' ರೋಗ ಮನುಷ್ಯರನ್ನು ಕಟುವಾಗಿ ಕೊಂದಿತ್ತು ಎಂಬ ಆಘಾತಕಾರಿ ಸತ್ಯವೊಂದು ಈಗ ಬೆಳಕಿಗೆ ಬಂದಿದೆ.&lt;/p&gt;&lt;p&gt;ಪ್ರಸಿದ್ಧ ವಿಜ್ಞಾನ ಪತ್ರಿಕೆ 'ನೇಚರ್' (Nature) ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಸೈಬೀರಿಯಾದ ಬೇಟೆಗಾರ-ಸಂಗ್ರಹಕಾರ (Hunter-Gatherer) ಸಮುದಾಯಗಳನ್ನು ಕಾಡಿದ ಪ್ಲೇಗ್ ಸಾಂಕ್ರಾಮಿಕವೇ, ಇದುವರೆಗೆ ಪತ್ತೆಯಾದ ಅತ್ಯಂತ ಹಳೆಯ ಪ್ಲೇಗ್ ರೋಗ ಎಂದು ಗುರುತಿಸಲ್ಪಟ್ಟಿದೆ. ಈ ಶೋಧನೆಯು ಪ್ಲೇಗ್&zwnj;ನ ಅಧಿಕೃತ ಇತಿಹಾಸವನ್ನು ಸುಮಾರು 200 ವರ್ಷಗಳಷ್ಟು ಹಿಂದಕ್ಕೆ ತಳ್ಳಿದ್ದು, ಮನುಕುಲದ ಅತ್ಯಂತ ಮಾರಕ ಕಾಯಿಲೆಯ ಉಗಮ ಮತ್ತು ವಿಕಾಸದ ಬಗ್ಗೆ ಹೊಸ ಒಳನೋಟಗಳನ್ನು ನೀಡಿದೆ.&lt;/p&gt;&lt;h2&gt;46 ಅಸ್ಥಿಪಂಜರಗಳ DNA ನೀಡಿದ ಆಧಾರ&lt;/h2&gt;&lt;p&gt;ಆಗ್ನೇಯ ಸೈಬೀರಿಯಾದ ಪ್ರಸಿದ್ಧ 'ಬೈಕಲ್ ಸರೋವರ'ದ ಬಳಿ ಸಿಕ್ಕ ನಾಲ್ಕು ಪುರಾತನ ಸಮಾಧಿ ಸ್ಥಳಗಳಿಂದ ಸಂಶೋಧಕರು 46 ಮಾನವ ಅವಶೇಷಗಳನ್ನು (ಅಸ್ಥಿಪಂಜರಗಳು) ಹೊರತೆಗೆದಿದ್ದರು. ಇವುಗಳ ಪ್ರಾಚೀನ ಡಿಎನ್&zwnj;ಎ (Ancient DNA) ಅನ್ನು ವಿಶ್ಲೇಷಿಸಿದಾಗ, 18 ವ್ಯಕ್ತಿಗಳ ದೇಹದಲ್ಲಿ ಪ್ಲೇಗ್ ಸೋಂಕಿನ ಭೀಕರ ಕುರುಹುಗಳು ಪತ್ತೆಯಾಗಿವೆ. ವಿಶೇಷವೆಂದರೆ, ಸೋಂಕಿಗೆ ಬಲಿಯಾದವರಲ್ಲಿ ಬಹುತೇಕರು ಮಕ್ಕಳು ಮತ್ತು ಹದಿಹರೆಯದವರಾಗಿದ್ದರು.&lt;/p&gt;&lt;h2&gt;ಹಳೆಯ ನಂಬಿಕೆಯನ್ನು ಸುಳ್ಳಾಗಿಸಿದ ಹೊಸ ಶೋಧನೆ&lt;/h2&gt;&lt;p&gt;ಇಲ್ಲಿಯವರೆಗೆ ವಿಜ್ಞಾನ ಲೋಕದಲ್ಲಿ ಒಂದು ಬಲವಾದ ನಂಬಿಕೆಯಿತ್ತು. ಮಾನವನು ಕೃಷಿಯನ್ನು ಅಳವಡಿಸಿಕೊಂಡು, ಒಂದೆಡೆ ಗುಂಪುಗಳಾಗಿ ಜನನಿಬಿಡ ವಸಾಹತುಗಳಲ್ಲಿ ವಾಸಿಸಲು ಪ್ರಾರಂಭಿಸಿದ ಮೇಲಷ್ಟೇ ಪ್ಲೇಗ್&zwnj;ನಂತಹ ದೊಡ್ಡ ಪ್ರಮಾಣದ ಸಾಂಕ್ರಾಮಿಕ ರೋಗಗಳು ಹರಡಲು ಆರಂಭವಾಯ್ತೆಂದು. ಆದರೆ ಈ ಹೊಸ ಸಂಶೋಧನೆ ಆ ನಂಬಿಕೆಯನ್ನು ಸಂಪೂರ್ಣವಾಗಿ ತಲೆಕೆಳಗಾಗಿಸಿದೆ. ನಾಗರಿಕತೆ ಬೆಳೆಯುವ ಮುನ್ನ, ಅಲೆಮಾರಿಗಳಾಗಿ ಕೇವಲ ಬೇಟೆಯಾಡಿಕೊಂಡು ಬದುಕುತ್ತಿದ್ದ ಸಣ್ಣ ಸಮುದಾಯಗಳಲ್ಲೇ ಈ ರೋಗವು ಅತ್ಯಂತ ವಿನಾಶಕಾರಿ ಸಾಂಕ್ರಾಮಿಕವನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿತ್ತು ಎಂಬುದನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಸಮಾಧಿಗಳಲ್ಲಿ ಒಂದೇ ಕಡೆ ಇಷ್ಟೊಂದು ದೊಡ್ಡ ಸಂಖ್ಯೆಯ ಸೋಂಕಿತ ಶವಗಳು ಪತ್ತೆಯಾಗಿರುವುದು ಅಂದಿನ ಸ್ಥಳೀಯ ಜನಸಂಖ್ಯೆಯ ಮೇಲೆ ಈ ರೋಗ ಬೀರಿದ ಭೀಕರತೆಗೆ ಸಾಕ್ಷಿಯಾಗಿದೆ.&lt;/p&gt;&lt;h2&gt;ಚಿಕ್ಕ ವಯಸ್ಸಿನವರೇ ಪ್ಲೇಗ್&zwnj;ಗೆ ಸಾಫ್ಟ್ ಟಾರ್ಗೆಟ್!&lt;/h2&gt;&lt;p&gt;ಈ ಅಧ್ಯಯನವು ಮತ್ತೊಂದು ಪ್ರಮುಖ ವಿಷಯವನ್ನು ಬಹಿರಂಗಪಡಿಸಿದೆ. ಅಂದಿನ ಕಾಲದಲ್ಲಿ ಮಕ್ಕಳು ಮತ್ತು ಯುವಕರು ಈ ಕಾಯಿಲೆಗೆ ಅತಿ ಬೇಗನೆ ತುತ್ತಾಗುತ್ತಿದ್ದರು. ಇದಕ್ಕೆ ಕಾರಣವನ್ನು ವಿಜ್ಞಾನಿಗಳು ಬ್ಯಾಕ್ಟೀರಿಯಾದ ಪ್ರಾಚೀನ ತಳಿಯಲ್ಲಿದ್ದ ವಿಶಿಷ್ಟ ಆನುವಂಶಿಕ (Genetic) ಗುಣಲಕ್ಷಣಗಳಿಗೆ ಜೋಡಿಸಿದ್ದಾರೆ. ಈ ಬ್ಯಾಕ್ಟೀರಿಯಾವು ಕಿರಿಯ ವಯಸ್ಸಿನವರ ದೇಹದಲ್ಲಿ ತೀವ್ರವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು (Hyper-immune response) ಪ್ರಚೋದಿಸುತ್ತಿತ್ತು, ಇದು ಕೊನೆಗೆ ಅವರ ಸಾವಿಗೆ ಕಾರಣವಾಗುತ್ತಿತ್ತು.&lt;/p&gt;&lt;h2&gt;ಅಂದು ಪ್ಲೇಗ್ ಹರಡಿದ್ದು ಹೇಗೆ?&lt;/h2&gt;&lt;p&gt;'ಯೆರ್ಸಿನಿಯಾ ಪೆಸ್ಟಿಸ್' (Yersinia pestis) ಎಂಬ ಬ್ಯಾಕ್ಟೀರಿಯಂನಿಂದ ಉಂಟಾಗುವ ಈ ಕಾಯಿಲೆಯು 14ನೇ ಶತಮಾನದಲ್ಲಿ ಯುರೋಪನ್ನು ನಡುಗಿಸಿದ 'ಬ್ಲ್ಯಾಕ್ ಡೆತ್' (Black Death) ನಂತಹ ಜಾಗತಿಕ ದುರಂತಗಳಿಗೆ ಕಾರಣವಾಗಿತ್ತು. ಸಾಮಾನ್ಯವಾಗಿ ಸೋಂಕಿತ ದಂಶಕಗಳ (ಇಲಿ, ಅಳಿಲು ಇತ್ಯಾದಿ) ಮೇಲಿರುವ ಚಿಗಟಗಳ (Fleas) ಮೂಲಕ ಇದು ಹರಡುತ್ತದೆ.&lt;/p&gt;&lt;p&gt;ಆದರೆ, 5,500 ವರ್ಷಗಳ ಹಿಂದಿನ ಈ ಆರಂಭಿಕ ಬ್ಯಾಕ್ಟೀರಿಯಾ ತಳಿಗಳು ಇನ್ನು ಸಂಪೂರ್ಣವಾಗಿ ವಿಕಸನಗೊಂಡಿರಲಿಲ್ಲ. ಅಂದರೆ, ಚಿಗಟಗಳ ಮೂಲಕ ವೇಗವಾಗಿ ಹರಡುವಂತಹ ಆನುವಂಶಿಕ ರೂಪಾಂತರವನ್ನು (Mutation) ಅವು ಆಗಿನ್ನೂ ಪಡೆದುಕೊಂಡಿರಲಿಲ್ಲ. ಹಾಗಿದ್ದರೂ ಅದು ಇಷ್ಟೊಂದು ಜನರನ್ನು ಕೊಂದಿದ್ದು ಹೇಗೆ ಎಂಬ ಪ್ರಶ್ನೆಗೆ ವಿಜ್ಞಾನಿಗಳು ಈ ಕೆಳಗಿನ ಸಾಧ್ಯತೆಯನ್ನು ಮುಂದಿಟ್ಟಿದ್ದಾರೆ.&lt;/p&gt;&lt;p&gt;ಈ ಪ್ರದೇಶದಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿದ್ದ ಮತ್ತು ಮನುಷ್ಯರು ಬೇಟೆಯಾಡುತ್ತಿದ್ದ 'ಮಾರ್ಮೋಟ್' (Marmots - ಒಂದು ದೊಡ್ಡ ಜಾತಿಯ ದಂಶಕ) ಎಂಬ ಪ್ರಾಣಿಗಳಲ್ಲಿ ಮೊದಲು ಈ ರೋಗಕಾರಕ ಹುಟ್ಟಿಕೊಂಡಿರಬಹುದು. ಬೇಟೆಯಾಡುವಾಗ ಪ್ರಾಣಿಗಳಿಂದ ಮನುಷ್ಯರಿಗೆ ದಾಟಿದ ಈ ರೋಗ, ನಂತರ ಜನರ ನಡುವೆ ಉಸಿರಾಟದ (ಕೆಮ್ಮು, ಸೀನುಗಳ ಹನಿಗಳ) ಮೂಲಕ ಅತ್ಯಂತ ವೇಗವಾಗಿ ಹರಡಿರಬಹುದು.&lt;/p&gt;&lt;p&gt;ಈ ಹೊಸ ಆವಿಷ್ಕಾರವು, ಮನುಷ್ಯ ತನ್ನ ಇತಿಹಾಸದುದ್ದಕ್ಕೂ ಈ ರೋಗದೊಂದಿಗೆ ಎಷ್ಟು ದೀರ್ಘಕಾಲದ ಮತ್ತು ನಿರಂತರವಾದ ಹೋರಾಟ ನಡೆಸಿದ್ದಾನೆ ಎಂಬುದನ್ನು ತೋರಿಸುತ್ತದೆ. ಸಹಸ್ರಾರು ವರ್ಷಗಳಿಂದ ಮಾನವ ಇತಿಹಾಸದ ಏಳುಬೀಳುಗಳನ್ನು ನಿರ್ಧರಿಸುವಲ್ಲಿ ಈ ಪುಟ್ಟ ಬ್ಯಾಕ್ಟೀರಿಯಾ ಎಷ್ಟು ಪ್ರಮುಖ ಪಾತ್ರ ವಹಿಸಿದೆ ಎಂಬುದಕ್ಕೆ ಈ ಸೈಬೀರಿಯಾದ ಒಣಭೂಮಿ ಈಗ ಜೀವಂತ ಸಾಕ್ಷಿ ನುಡಿದಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/science/oldest-5500-year-plague-outbreak-ever-discovered-stuns-scientists-in-new-siberia-gdp/articleshow-0edggyi"/>
        </item>
        <item>
            <title><![CDATA[ಮುಂಗಾರು ಮಾಯವಾಗಿ ಜೂನ್ ನಲ್ಲಿ ದಾಖಲೆಯ ಮಳೆ ಕೊರತೆ, ಇದು 146 ವರ್ಷಗಳಲ್ಲೇ ಅತ್ಯಂತ ಒಣ ತಿಂಗಳು!]]></title>
            <link>https://kannada.asianetnews.com/gallery/india-news/india-monsoon-deficit-2026-june-driest-in-146-years-rainfall-record-gdp-fgi7i82</link>
            <guid isPermaLink="true">https://kannada.asianetnews.com/gallery/india-news/india-monsoon-deficit-2026-june-driest-in-146-years-rainfall-record-gdp-fgi7i82</guid>
            <pubDate>Mon, 22 Jun 2026 18:26:30 +0530</pubDate>
            <description><![CDATA[&lt;p&gt;ಭಾರತದಲ್ಲಿ 146 ವರ್ಷಗಳಲ್ಲೇ ಅತ್ಯಂತ ಒಣ ಜೂನ್ ತಿಂಗಳು ದಾಖಲಾಗಿದ್ದು, ದೇಶಾದ್ಯಂತ ಶೇ. 46ರಷ್ಟು ಮಳೆ ಕೊರತೆ ಉಂಟಾಗಿದೆ. 'ಎಲ್ ನಿನೋ' ಪ್ರಭಾವದಿಂದಾಗಿ ಮುಂಗಾರು ವಿಳಂಬವಾಗಿದ್ದು, ಮಹಾರಾಷ್ಟ್ರದಂತಹ ರಾಜ್ಯಗಳು ತೀವ್ರ ಬರಗಾಲವನ್ನು ಎದುರಿಸುತ್ತಿವೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqnfrbh1vj76x9v8j51cm0n,imgname-monsoon--1--1782131974513.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ 146 ವರ್ಷಗಳಲ್ಲೇ ಅತ್ಯಂತ ಒಣ ಜೂನ್ ತಿಂಗಳು ದಾಖಲಾಗಿದ್ದು, ದೇಶಾದ್ಯಂತ ಶೇ. 46ರಷ್ಟು ಮಳೆ ಕೊರತೆ ಉಂಟಾಗಿದೆ. 'ಎಲ್ ನಿನೋ' ಪ್ರಭಾವದಿಂದಾಗಿ ಮುಂಗಾರು ವಿಳಂಬವಾಗಿದ್ದು, ಮಹಾರಾಷ್ಟ್ರದಂತಹ ರಾಜ್ಯಗಳು ತೀವ್ರ ಬರಗಾಲವನ್ನು ಎದುರಿಸುತ್ತಿವೆ. &amp;nbsp;&lt;/p&gt;&lt;img&gt;&lt;p&gt;ಸುಮಾರು ಎರಡು ವಾರಗಳ ಸುದೀರ್ಘ ಬಿಡುವಿನ ನಂತರ, ಭಾರತದ ನೈಋತ್ಯ ಮುಂಗಾರು ಕೊನೆಗೂ ಚುರುಕಾಗುವ ಲಕ್ಷಣಗಳನ್ನು ಗೋಚರಿಸುತ್ತಿದೆ. ಅರೇಬಿಯನ್ ಸಮುದ್ರದಿಂದ ಬೀಸುತ್ತಿರುವ ತೇವಾಂಶಭರಿತ ಗಾಳಿಯು ಮುಂಬೈ, ಅದರ ಉಪನಗರಗಳು ಹಾಗೂ ಆಗ್ನೇಯ ಗುಜರಾತ್&zwnj;ನ ಕೆಲವು ಭಾಗಗಳಿಗೆ ಪ್ರವೇಶಿಸುತ್ತಿದ್ದು, ಮಳೆಯ ಬಗ್ಗೆ ಧನಾತ್ಮಕ ಭರವಸೆಯನ್ನು ಮೂಡಿಸಿದೆ. ಆದಾಗ್ಯೂ, ಜೂನ್ ತಿಂಗಳ ಆರಂಭದಲ್ಲಿ ಉಂಟಾದ ಹಿನ್ನಡೆಯಿಂದಾಗಿ ಆಗಿರುವ ಹಾನಿ ಅಲ್ಪವೇನಲ್ಲ. ಹವಾಮಾನ ತಜ್ಞರ ಪ್ರಕಾರ, ಈ 2026ರ ಜೂನ್ ತಿಂಗಳು ಕಳೆದ ಒಂದು ಶತಮಾನದಲ್ಲೇ ಅತ್ಯಂತ ಒಣ ಹವಾಮಾನದ ತಿಂಗಳುಗಳಲ್ಲಿ ಒಂದಾಗಿ ದಾಖಲಾಗುವ ಸಾಧ್ಯತೆಯಿದೆ. ಜೂನ್ ತಿಂಗಳಲ್ಲಿ ಶೇ. 46ರಷ್ಟು ಮಳೆ ಕೊರತೆ ಆಗಿದ್ದು ಇದು ಕಳೆದ 146 ವರ್ಷಗಳಲ್ಲಿ ದಾಖಲೆಯಾಗಿದೆ.&lt;/p&gt;&lt;img&gt;&lt;p&gt;ಭಾರತೀಯ ಬರ ನಿಗಾ ಸಂಸ್ಥೆಯ (India Drought Monitor) ವರದಿಯ ಪ್ರಕಾರ, ಜೂನ್ 17ರ ವೇಳೆಗೆ ದೇಶದ ಸುಮಾರು ಶೇ. 24.8ರಷ್ಟು ಭೂಭಾಗ ತೀವ್ರ ಶುಷ್ಕತೆ ಅಥವಾ ಬರಗಾಲದ ಸನ್ನಿವೇಶಕ್ಕೆ ಸಿಲುಕಿದೆ. ಇದು ಕೇವಲ ಒಂದೇ ವಾರದಲ್ಲಿ ಶೇ. 6.3 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ (ಶೇ. 15.2) ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಪಶ್ಚಿಮ ಡೆಕ್ಕನ್ ಮತ್ತು ಈಶಾನ್ಯ ಭಾರತದಲ್ಲಿ ಮಣ್ಣಿನ ತೇವಾಂಶ ತಳಮುಟ್ಟಿದೆ.&lt;/p&gt;&lt;p&gt;ಭಾರತೀಯ ಹವಾಮಾನ ಇಲಾಖೆಯ (IMD) ಜೂನ್ 4 ರಿಂದ 22 ರವರೆಗಿನ ಮಾಹಿತಿಯಂತೆ, ದೇಶದಲ್ಲಿ ಆಗಬೇಕಿದ್ದ ವಾಡಿಕೆ ಮಳೆ 97.6 ಮಿ.ಮೀ.ಗೆ ಬದಲಾಗಿ ಕೇವಲ 53.1 ಮಿ.ಮೀ. ಮಳೆಯಾಗಿದೆ. ಇದರ ಮುಖಾಂತರ ದೇಶದಲ್ಲಿ ಒಟ್ಟಾರೆ ಶೇ. 46 ರಷ್ಟು ಮಳೆ ಕೊರತೆ ದಾಖಲಾಗಿದೆ. ಉತ್ತರ, ಮಧ್ಯ ಮತ್ತು ಪರ್ಯಾಯ ದ್ವೀಪದ ಬಹುತೇಕ ಭಾಗಗಳು ಇನ್ನೂ ಮಳೆ ಕೊರತೆ ರೆಡ್&zwnj; ಝೋನ್&zwnj; ವಲಯದಲ್ಲೇ ಇವೆ.&lt;/p&gt;&lt;img&gt;&lt;ul&gt; &lt;li&gt;ಮಹಾರಾಷ್ಟ್ರ ಶೇ. 85&lt;/li&gt; &lt;li&gt;ಗುಜರಾತ್ ಶೇ. 84&lt;/li&gt; &lt;li&gt;ಮೇಘಾಲಯ ಶೇ. 81&lt;/li&gt; &lt;li&gt;ಛತ್ತೀಸ್&zwnj;ಗಢ ಶೇ. 71&lt;/li&gt; &lt;li&gt;ಜಾರ್ಖಂಡ್ ಶೇ. 71&lt;/li&gt; &lt;li&gt;ಮಧ್ಯಪ್ರದೇಶ ಶೇ. 58&lt;/li&gt; &lt;li&gt;ಕರ್ನಾಟಕ ಶೇ.35&lt;/li&gt;&lt;/ul&gt;&lt;h2&gt;ಮುಂಗಾರು ವಿಳಂಬಕ್ಕೆ ಕಾರಣವೇನು?&lt;/h2&gt;&lt;p&gt;ಜೂನ್ 22 ರಂದು ಐಎಂಡಿ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳ ಪ್ರಕಾರ, ಬಂಗಾಳ ಕೊಲ್ಲಿ, ಪೂರ್ವ ಭಾರತ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಮಾತ್ರ ಮೋಡಗಳು ದಟ್ಟವಾಗಿದ್ದವು. ಆದರೆ ಮಧ್ಯ ಮತ್ತು ಪಶ್ಚಿಮ ಭಾರತದ ವಿಶಾಲ ಪ್ರದೇಶಗಳು ಮೋಡಗಳಿಲ್ಲದೆ ಸಂಪೂರ್ಣ ಒಣಗಿದ್ದವು. ಇದರ ಹಿಂದೆ ಪೆಸಿಫಿಕ್ ಮಹಾಸಾಗರದ 'ಎಲ್ ನಿನೋ' (El Nino) ವಿದ್ಯಮಾನದ ಪ್ರಭಾವವಿದೆ. 2026ರಲ್ಲಿ ಸಮಭಾಜಕ ವೃತ್ತದ ಉಷ್ಣವಲಯದ ಪೆಸಿಫಿಕ್ ಸಮುದ್ರದ ಮೇಲ್ಮೈ ತಾಪಮಾನವು ತೀವ್ರವಾಗಿ ಏರಿಕೆಯಾಗಿದ್ದು, ಅಮೆರಿಕದ NOAA ಸಂಸ್ಥೆಯು ಎಲ್ ನಿನೋ ಎಚ್ಚರಿಕೆಯನ್ನು ನೀಡಿದೆ. ಇದರ ಪರಿಣಾಮವಾಗಿಯೇ ಭಾರತದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ (ದೀರ್ಘಾವಧಿ ಸರಾಸರಿಯ ಶೇ. 90 ರಷ್ಟು ಮಾತ್ರ) ಮಳೆಯಾಗಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿತ್ತು.&lt;/p&gt;&lt;img&gt;&lt;p&gt;ಭಾರತದ ಮಾನ್ಸೂನ್ ಕೇಂದ್ರ ವಲಯದ ಹೃದಯಭಾಗವಾದ ಮಧ್ಯಪ್ರದೇಶವು ಶೇ. 58 ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿದ್ದರೆ, ಮಹಾರಾಷ್ಟ್ರವು ಶೇ. 85 ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ದೊಡ್ಡ ರಾಜ್ಯಗಳ ಪೈಕಿ ಮಹಾರಾಷ್ಟ್ರದ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ರಾಜ್ಯದ ಶೇ. 61.7 ರಷ್ಟು ಪ್ರದೇಶವು ಅಸಹಜ ಶುಷ್ಕತೆ ಅಥವಾ ಬರಗಾಲವನ್ನು ಎದುರಿಸುತ್ತಿದೆ.&lt;/p&gt;&lt;h2&gt;ಜಿಲ್ಲಾವಾರು ಗಂಭೀರ ಸ್ಥಿತಿ:&lt;/h2&gt;&lt;p&gt;&lt;strong&gt;ಸತಾರಾ:&lt;/strong&gt; ರಾಜ್ಯದಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿ ಇಲ್ಲಿದ್ದು, ಸಂಪೂರ್ಣ ಜಿಲ್ಲೆ ತೀವ್ರ ಅಥವಾ ಅಸಾಧಾರಣ ಬರಗಾಲದ ಹಿಡಿತದಲ್ಲಿದೆ.&lt;/p&gt;&lt;p&gt;&lt;strong&gt;ರತ್ನಗಿರಿ:&lt;/strong&gt; ಸಂಪೂರ್ಣ ಒಣಗಿದ್ದು, ಐದನೇ ನಾಲ್ಕರಷ್ಟು ಭಾಗ ತೀವ್ರ ಬರದಲ್ಲಿದೆ.&lt;/p&gt;&lt;p&gt;&lt;strong&gt;ಸಾಂಗ್ಲಿ ಮತ್ತು ಸೋಲಾಪುರ&lt;/strong&gt;: ಸಾಂಗ್ಲಿಯಲ್ಲಿ ಶೇ. 83 ಮತ್ತು ಸೋಲಾಪುರದಲ್ಲಿ ಶೇ. 95 ರಷ್ಟು ಭಾಗ ಬರಪೀಡಿತವಾಗಿದೆ.&lt;/p&gt;&lt;p&gt;&lt;strong&gt;ಕೊಂಕಣ ಕರಾವಳಿ: &lt;/strong&gt;ಸಿಂಧುದುರ್ಗ, ರಾಯಗಢ, ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳು ಬಹುತೇಕ ತೇವಾಂಶ ರಹಿತವಾಗಿವೆ.&lt;/p&gt;&lt;img&gt;&lt;p&gt;ಈ ವಿಳಂಬವು ಮುಂಗಾರು (ಖಾರಿಫ್) ಬಿತ್ತನೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶದ ಪ್ರಮುಖ ಸೋಯಾಬೀನ್, ದ್ವಿದಳ ಧಾನ್ಯ ಹಾಗೂ ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ನಾಟಿ ಕಾರ್ಯ ವಿಳಂಬವಾಗುತ್ತಿದೆ. ಜಲಾಶಯಗಳ ಮಟ್ಟ ಕುಸಿದಿರುವುದರಿಂದ ಕುಡಿಯುವ ನೀರಿಗೂ ಆತಂಕ ಶುರುವಾಗಿದೆ.&lt;/p&gt;&lt;p&gt;ಈ ಅಪಾಯವನ್ನು ಮನಗಂಡು, ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ (ICRISAT), ಐಸಿಎಆರ್ (ICAR) ಮತ್ತು ಸರ್ಕಾರದ ಪಾಲುದಾರರು ಜಂಟಿಯಾಗಿ ಮಹಾರಾಷ್ಟ್ರಕ್ಕಾಗಿ ತುರ್ತು ಕ್ರಿಯಾ ಯೋಜನೆಯನ್ನು ರೂಪಿಸಿದ್ದಾರೆ. ರಾಜ್ಯದ 353 ಕೃಷಿ ಬ್ಲಾಕ್&zwnj;ಗಳ ಪೈಕಿ 181 ಬ್ಲಾಕ್&zwnj;ಗಳು ಬರಗಾಲಕ್ಕೆ ತುತ್ತಾಗುವ ಅಪಾಯದಲ್ಲಿದ್ದು, ಹತ್ತಿ, ಮೆಕ್ಕೆಜೋಳ ಮತ್ತು ಸೋಯಾಬೀನ್ ಬೆಳೆಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಲಿವೆ. ಆದ್ದರಿಂದ ರೈತರಿಗೆ ರಾಗಿ ಮತ್ತು ದ್ವಿದಳ ಧಾನ್ಯಗಳಂತಹ ಪರ್ಯಾಯ ಬೆಳೆಗಳಿಗೆ ಬದಲಾಗಲು ಹಾಗೂ ಜುಲೈ ಮೂರನೇ ವಾರದ ನಂತರ ಹತ್ತಿ ಬಿತ್ತನೆ ಮಾಡದಂತೆ ಕೃಷಿ ವಿಶ್ವವಿದ್ಯಾಲಯಗಳು ಸಲಹೆ ನೀಡಿವೆ.&lt;/p&gt;&lt;img&gt;&lt;p&gt;ಹವಾಮಾನ ಸೂಚ್ಯಂಕಗಳ ಪ್ರಕಾರ, ಮಣ್ಣಿನ ತೇವಾಂಶ ಮತ್ತು ನದಿಯ ಹರಿವು ಸುಧಾರಿಸಲು ಕೇವಲ ಒಂದು ದಿನದ ಮಳೆ ಸಾಕಾಗುವುದಿಲ್ಲ; ಅದಕ್ಕೆ ನಿರಂತರ ಮಳೆಯ ಅಗತ್ಯವಿದೆ. ಜೂನ್ ಅಂತ್ಯದಲ್ಲಿ ಬೀಳುವ ಮಳೆಯ ಸಕಾರಾತ್ಮಕ ಪರಿಣಾಮಗಳು ಜುಲೈ ತಿಂಗಳ ನಕ್ಷೆಯಲ್ಲಷ್ಟೇ ಗೋಚರಿಸಲಿವೆ. ಮುಂದಿನ 24 ರಿಂದ 48 ಗಂಟೆಗಳಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯ ಭಾರತದಲ್ಲಿ ಮುಂಗಾರು ಚುರುಕಾಗುವ ಮುನ್ಸೂಚನೆ ಇರುವುದಾದರೂ, ಆರಂಭಿಕ ದಿನಗಳಲ್ಲಿ ಉಂಟಾಗಿರುವ ಭಾರಿ ಕೊರತೆಯನ್ನು ಸರಿದೂಗಿಸುವುದು ಮುಂಬರುವ ಮಳೆಗೆ ಇರುವ ಅತಿ ದೊಡ್ಡ ಸವಾಲಾಗಿದೆ.&lt;/p&gt;&lt;p&gt;https://newsable.asianetnews.com/weather/bengaluru&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/india-news/india-monsoon-deficit-2026-june-driest-in-146-years-rainfall-record-gdp-fgi7i82"/>
        </item>
        <item>
            <title><![CDATA[Chikkamagaluru: ಪೊಲೀಸ್ ವಿಚಾರಣೆ, ತಾಯಿಗೆ ಸಂದೇಶ, ನಂತರ ಆತ್ಮ*ಹ*ತ್ಯೆ: ಚಂದನ್ ಸಾವಿಗೆ ಕಾರಣವೇನು?]]></title>
            <link>https://kannada.asianetnews.com/crime/chikkamagaluru-youth-death-case-under-investigation-gvd/articleshow-0x9g0qr</link>
            <guid isPermaLink="true">https://kannada.asianetnews.com/crime/chikkamagaluru-youth-death-case-under-investigation-gvd/articleshow-0x9g0qr</guid>
            <pubDate>Mon, 22 Jun 2026 18:08:29 +0530</pubDate>
            <description><![CDATA[&lt;p&gt;Breaking News Karnataka: &amp;nbsp;ಪೊಲೀಸ್ ವಿಚಾರಣೆಯ ನಂತರ ಯುವಕನೊಬ್ಬ ಆತ್ಮ*ಹ*ತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುಡ್ಲೂರು &amp;nbsp;ಗ್ರಾಮದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqndepwrehbtp7pnesm5a2n,imgname-vjj-1782131899100.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜೂ.22): &lt;/strong&gt;ಪೊಲೀಸ್ ವಿಚಾರಣೆಯ ನಂತರ ಯುವಕನೊಬ್ಬ ಆತ್ಮ*ಹ*ತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ನಡೆದಿದೆ. 20 ವರ್ಷದ ಚಂದನ್ ಮೃತ ದುರ್ದೈವಿ. ಮಾಹಿತಿಯ ಪ್ರಕಾರ, ಕುಡ್ಲೂರು ಗ್ರಾಮದ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ತೆರಳಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಬೀರೂರು ಪೊಲೀಸರು, ಆಕೆಯ ಮೊಬೈಲ್&zwnj;ನಲ್ಲಿ ಚಂದನ್&zwnj;ನ ಸಂಪರ್ಕ ವಿವರಗಳು ಮತ್ತು ದೂರವಾಣಿ ಸಂಖ್ಯೆಯನ್ನು ಪತ್ತೆಹಚ್ಚಿದ್ದರು.&lt;/p&gt;&lt;p&gt;ಈ ಹಿನ್ನೆಲೆ ಚಂದನ್&zwnj;ನನ್ನು ವಿಚಾರಣೆಗೆ ಕರೆಸಿ ಹಲವು ಬಾರಿ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ನಿನ್ನೆ ಸಹ ವಿಚಾರಣೆಗೆ ಹಾಜರಾಗಿದ್ದ ಚಂದನ್&zwnj;ನನ್ನು ಬಳಿಕ ಪೊಲೀಸರು ಮನೆಗೆ ಕಳುಹಿಸಿದ್ದರು. ಆದರೆ ಸಂಜೆ ವೇಳೆಗೆ ಮನೆಗೆ ತೆರಳಿದ ಯುವಕ ಆತ್ಮ*ಹ*ತ್ಯೆಗೆ ಶರಣಾಗಿರುವುದು ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ.&lt;/p&gt;&lt;p&gt;ಸ್ಥಳೀಯರ ಪ್ರಕಾರ, ಯುವತಿ ಮನೆ ಬಿಟ್ಟು ಹೋಗಿದ್ದ ಪ್ರಕರಣಕ್ಕೆ ಚಂದನ್ ಕಾರಣ ಎನ್ನುವ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದುದು ಆತನ ಮನಸ್ಸಿನ ಮೇಲೆ ಪರಿಣಾಮ ಬೀರಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆತ್ಮ*ಹ*ತ್ಯೆಗೆ ಮುನ್ನ ಚಂದನ್ ತನ್ನ ತಾಯಿಗೆ ಸಂದೇಶವೊಂದನ್ನು ಕಳುಹಿಸಿದ್ದಾನೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಆದರೆ ಚಂದನ್ ಆತ್ಮ*ಹ*ತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸ್ ವಿಚಾರಣೆಯ ಒತ್ತಡವೇ ಕಾರಣವೋ, ಅಥವಾ ಬೇರೆ ಯಾವುದೇ ವೈಯಕ್ತಿಕ ಕಾರಣಗಳಿವೆಯೋ ಎಂಬುದು ತನಿಖೆಯಿಂದಲೇ ತಿಳಿದುಬರಬೇಕಿದೆ. ಘಟನೆ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಯುವಕನ ಸಾವಿನ ಹಿಂದಿನ ನಿಜವಾದ ಕಾರಣ ಏನು ಎಂಬುದು ತನಿಖೆ ಪೂರ್ಣಗೊಂಡ ಬಳಿಕವೇ ಬಹಿರಂಗವಾಗಬೇಕಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/chikkamagaluru-youth-death-case-under-investigation-gvd/articleshow-0x9g0qr"/>
        </item>
        <item>
            <title><![CDATA[ಬೇರೆ ಊರಿಗೆ ಶಿಫ್ಟ್ ಆಗ್ತಿದ್ದೀರಾ; ಟ್ರೈನ್ ಮೂಲಕ ನಿಮ್ಮ ಕಾರು ಕಳುಹಿಸಲು ಎಷ್ಟು ಖರ್ಚಾಗುತ್ತೆ? ಇಲ್ಲಿದೆ ಡಿಟೇಲ್ಸ್‌]]></title>
            <link>https://kannada.asianetnews.com/car-news/how-to-parcel-car-by-train-indian-railways-booking-rules-charges-guide-san/articleshow-i5myn63</link>
            <guid isPermaLink="true">https://kannada.asianetnews.com/car-news/how-to-parcel-car-by-train-indian-railways-booking-rules-charges-guide-san/articleshow-i5myn63</guid>
            <pubDate>Mon, 22 Jun 2026 18:03:27 +0530</pubDate>
            <description><![CDATA[ದೂರದ ನಗರಕ್ಕೆ ಶಿಫ್ಟ್ ಆಗುವಾಗ ನಿಮ್ಮ ಕಾರನ್ನು ಭಾರತೀಯ ರೈಲ್ವೆಯ ಕಾರ್ ಪಾರ್ಸಲ್ ಸೇವೆ ಮೂಲಕ ಸುರಕ್ಷಿತವಾಗಿ ಮತ್ತು ಅಗ್ಗವಾಗಿ ಸಾಗಿಸಬಹುದು. ಈ ಸೇವೆಗೆ ಬೇಕಾದ ದಾಖಲೆಗಳು, ಬುಕ್ಕಿಂಗ್ ಪ್ರಕ್ರಿಯೆ, ಅಂದಾಜು ವೆಚ್ಚ ಮತ್ತು ಪಾಲಿಸಬೇಕಾದ ನಿಯಮಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqmy0qd5e0wz466be6nh8vw,imgname-how-to-parcel-car-by-train-1782131393261.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.22):&lt;/strong&gt; ನೀವು ಉದ್ಯೋಗ ವರ್ಗಾವಣೆ, ಉನ್ನತ ಶಿಕ್ಷಣ ಅಥವಾ ಬೇರಾವುದೇ ಕಾರಣಗಳಿಗಾಗಿ ದೂರದ ಹೊಸ ನಗರಕ್ಕೆ ಶಿಫ್ಟ್ ಆಗುತ್ತಿದ್ದೀರಾ? ನಿಮ್ಮ ಪ್ರೀತಿಯ ಕಾರನ್ನು ಅಷ್ಟೊಂದು ದೂರ ಸ್ವತಃ ಚಲಾಯಿಸಿಕೊಂಡು ಹೋಗುವುದು ದಣಿವಿನ ಜೊತೆಗೆ ದುಬಾರಿಯಾಗಬಹುದು. ಇಂತಹ ಸಂದರ್ಭದಲ್ಲಿ ಭಾರತೀಯ ರೈಲ್ವೆಯ (Indian Railways) 'ಕಾರ್ ಪಾರ್ಸಲ್ ಸೇವೆ' ಅತ್ಯಂತ ಸುರಕ್ಷಿತ, ಅಗ್ಗದ ಮತ್ತು ಜನಪ್ರಿಯ ಆಯ್ಕೆಯಾಗಿದೆ. ಈ ಸೇವೆಯ ಮೂಲಕ ಕಾರನ್ನು ಕಳುಹಿಸುವುದರಿಂದ ಇಂಧನ ಉಳಿತಾಯವಾಗುವುದಲ್ಲದೆ, ನಿಮ್ಮ ಕಾರು ಅನಗತ್ಯವಾಗಿ ಹೆಚ್ಚು ಕಿಲೋಮೀಟರ್ ಓಡುವುದೂ ತಪ್ಪುತ್ತದೆ.&lt;/p&gt;&lt;p&gt;ರೈಲ್ವೆಯ ಈ ವಿಶೇಷ ಪಾರ್ಸಲ್ ಸೇವೆಯಡಿ ನಿಮ್ಮ ಕಾರನ್ನು ಸುರಕ್ಷಿತವಾಗಿ ಪಾರ್ಸಲ್ ವ್ಯಾನ್ ಅಥವಾ ಲಗೇಜ್ ಕೋಚ್&zwnj;ಗಳಲ್ಲಿ ಇಟ್ಟು, ನೀವು ತಲುಪಬೇಕಾದ ನಿಲ್ದಾಣಕ್ಕೆ ತಲುಪಿಸಲಾಗುತ್ತದೆ. ಈ ಸೇವೆಗೆ ಸಂಬಂಧಿಸಿದ ಸಂಪೂರ್ಣ ನಿಯಮಗಳು ಹಾಗೂ ಪ್ರಕ್ರಿಯೆ ಇಲ್ಲಿದೆ:&lt;/p&gt;&lt;h2&gt;&lt;strong&gt;ಕಾರ್ ಪಾರ್ಸಲ್ ಮಾಡಲು ಬೇಕಾಗುವ ಪ್ರಮುಖ ದಾಖಲೆಗಳು (Documents Required)&lt;/strong&gt;&lt;/h2&gt;&lt;p&gt;ನಿಮ್ಮ ಕಾರನ್ನು ರೈಲಿನಲ್ಲಿ ಬುಕ್ ಮಾಡುವ ಮುನ್ನ ನೀವು ರೈಲ್ವೆ ನಿಲ್ದಾಣದ ಪಾರ್ಸಲ್ ಕಚೇರಿಗೆ (Parcel Office) ಭೇಟಿ ನೀಡಬೇಕು. ಅಲ್ಲಿ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ:&lt;/p&gt;&lt;ul&gt; &lt;li&gt;ಕಾರಿನ ಆರ್&zwnj;ಸಿ ಬುಕ್ (RC Book)&lt;/li&gt; &lt;li&gt;ಮಾಲೀಕರ ಗುರುತಿನ ಚೀಟಿ (ಆಧಾರ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ)&lt;/li&gt; &lt;li&gt;ಇತರ ಅಗತ್ಯ ದಾಖಲೆ ಪತ್ರಗಳು, ಕಾರಿನ ವಿಮೆ, ಪಿಯುಸಿ ಸರ್ಟಿಫಿಕೇಟ್&zwnj; ಇತ್ಯಾದಿ.&lt;/li&gt;&lt;/ul&gt;&lt;p&gt;ಈ ದಾಖಲೆಗಳನ್ನು ಪರಿಶೀಲಿಸಿದ ನಂತರ, ರೈಲ್ವೆ ಅಧಿಕಾರಿಗಳು ಕಾರಿನ ಸ್ಥಿತಿಗತಿ (Condition) ಹೇಗಿದೆ ಮತ್ತು ಅದನ್ನು ರೈಲಿನಲ್ಲಿ ಸಾಗಿಸಲು ಯೋಗ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಾಹನ ತಪಾಸಣೆ ನಡೆಸುತ್ತಾರೆ. ತಪಾಸಣೆ ಮುಗಿದ ಬಳಿಕ ಬುಕ್ಕಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.&lt;/p&gt;&lt;h2&gt;&lt;strong&gt;ಸುರಕ್ಷಿತ ಪ್ಯಾಕಿಂಗ್ ಅತ್ಯಗತ್ಯ&lt;/strong&gt;&lt;/h2&gt;&lt;p&gt;ಕಾರನ್ನು ರೈಲಿಗೆ ಹತ್ತಿಸುವ ಮುನ್ನ ಅದನ್ನು ಅತ್ಯಂತ ಸುರಕ್ಷಿತವಾಗಿ ಪ್ಯಾಕ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಕಾರಿನ ಗ್ಲಾಸ್&zwnj;ಗಳು, ಹೆಡ್&zwnj;ಲೈಟ್&zwnj;ಗಳು ಮತ್ತು ಕಾರಿನ ಹೊರಭಾಗಕ್ಕೆ ಯಾವುದೇ ಹಾನಿಯಾಗದಂತೆ ವಿಶೇಷ ಕವರ್&zwnj;ಗಳಿಂದ ಪ್ಯಾಕ್ ಮಾಡಲಾಗುತ್ತದೆ. ಇದರಿಂದ ಪ್ರಯಾಣದ ಸಮಯದಲ್ಲಿ ಕಾರಿನ ಮೇಲೆ ಯಾವುದೇ ರೀತಿಯ ಗೀರುಗಳು (Scratches) ಬೀಳುವ ಅಥವಾ ಹಾನಿಯಾಗುವ ಸಾಧ್ಯತೆ ಇರುವುದಿಲ್ಲ.&lt;/p&gt;&lt;h2&gt;&lt;strong&gt;ಕಾರು ಪ್ರಕಾರದ ಅಂದಾಜು ವೆಚ್ಚ&lt;/strong&gt;&lt;/h2&gt;&lt;ul&gt; &lt;li&gt;ಸಣ್ಣ ಹ್ಯಾಚ್&zwnj;ಬ್ಯಾಕ್&zwnj;ಗಳು (ಉದಾ. ಆಲ್ಟೊ, ಸ್ವಿಫ್ಟ್): ₹5,000 &ndash; ₹11,000&lt;/li&gt; &lt;li&gt;ಸೆಡಾನ್&zwnj;ಗಳು (ಉದಾ. ಹೋಂಡಾ ಸಿಟಿ, ಡಿಜೈರ್): ₹6,000 &ndash; ₹12,000&lt;/li&gt; &lt;li&gt;ಎಸ್&zwnj;ಯುವಿಗಳು (ಉದಾ. ಕ್ರೆಟಾ, ಸ್ಕಾರ್ಪಿಯೋ): ₹7,000 &ndash; ₹13,000&lt;/li&gt; &lt;li&gt;ಐಷಾರಾಮಿ ಕಾರುಗಳು (ಉದಾ. ಬಿಎಂಡಬ್ಲ್ಯು, ಆಡಿ): ₹10,000 &ndash; ₹18,000+&lt;/li&gt;&lt;/ul&gt;&lt;h2&gt;&lt;strong&gt;ದೂರದ ಲೆಕ್ಕಾಚಾರದ ಅಂದಾಜು ವೆಚ್ಚ&lt;/strong&gt;&lt;/h2&gt;&lt;ul&gt; &lt;li&gt;500 ಕಿ.ಮೀ ವರೆಗೆ: ₹3,000 &ndash; ₹8,000&lt;/li&gt; &lt;li&gt;500 ರಿಂದ 1,000 ಕಿ.ಮೀ: ₹7,000 &ndash; ₹12,000&lt;/li&gt; &lt;li&gt;1,000 ರಿಂದ 2,000 ಕಿ.ಮೀ: ₹10,000 &ndash; ₹16,000&lt;/li&gt; &lt;li&gt;2,000 ಕಿ.ಮೀ+: ₹15,000 &ndash; ₹25,000&lt;/li&gt;&lt;/ul&gt;&lt;h2&gt;&lt;strong&gt;ಪಾರ್ಸಲ್ ನಿಯಮಗಳು&lt;/strong&gt;&lt;/h2&gt;&lt;p&gt;&lt;strong&gt;ವೆಚ್ಚದ ಲೆಕ್ಕಾಚಾರ: &lt;/strong&gt;ಕಾರನ್ನು ರೈಲಿನಲ್ಲಿ ಕಳುಹಿಸಲು ತಗಲುವ ಒಟ್ಟು ವೆಚ್ಚವು ನೀವು ಕಳುಹಿಸುವ ಪ್ರಯಾಣದ ದೂರ (Distance) ಮತ್ತು ಕಾರಿನ ಗಾತ್ರವನ್ನು (Size of the Car) ಅವಲಂಬಿಸಿರುತ್ತದೆ. ದೂರ ಹೆಚ್ಚಾದಂತೆಲ್ಲಾ ಶುಲ್ಕವೂ ಹೆಚ್ಚಾಗುತ್ತದೆ. ಆದರೆ, ಪೆಟ್ರೋಲ್-ಡೀಸೆಲ್ ವೆಚ್ಚ, ಟೋಲ್ ಟ್ಯಾಕ್ಸ್ ಮತ್ತು ರಸ್ತೆ ಪ್ರಯಾಣದ ಸುದೀರ್ಘ ದಣಿವನ್ನು ಲೆಕ್ಕ ಹಾಕಿದರೆ ರೈಲ್ವೆ ಸೇವೆ ಹೆಚ್ಚು ಲಾಭದಾಯಕ ಮತ್ತು ಆರಾಮದಾಯಕವಾಗಿದೆ.&lt;/p&gt;&lt;p&gt;&lt;strong&gt;ಇಂಧನದ ನಿಯಮ (Fuel Rule):&lt;/strong&gt; ಸುರಕ್ಷತೆಯ ದೃಷ್ಟಿಯಿಂದ ಕಾರಿನ ಟ್ಯಾಂಕ್&zwnj;ನಲ್ಲಿ ಅತಿ ಹೆಚ್ಚು ಇಂಧನ (ಪೆಟ್ರೋಲ್/ಡೀಸೆಲ್) ಇರಲು ರೈಲ್ವೆ ನಿಯಮಗಳಲ್ಲಿ ಅನುಮತಿಯಿಲ್ಲ. ಇಂಧನ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರಬೇಕು. ಬುಕ್ಕಿಂಗ್ ಸಮಯದಲ್ಲಿ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ತಿಳಿಸುತ್ತಾರೆ.&lt;/p&gt;&lt;h2&gt;&lt;strong&gt;ಟ್ರಾನ್ಸ್&zwnj;ಪೋರ್ಟ್&zwnj; ಮಾದರಿ&lt;/strong&gt;&lt;/h2&gt;&lt;p&gt;&lt;strong&gt;ಲಗೇಜ್&zwnj; ಮೋಡ್&zwnj;: &lt;/strong&gt;ಇಲ್ಲಿ ನಿಮ್ಮ ಕಾರನ್ನು ವೈಯಕ್ತಿಕ ಲಗೇಜ್&zwnj; ಆಗಿ ಬುಕ್&zwnj; ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಮಾದರಿ ಅಗ್ಗ. ಆದರೆ, ನೀವು ವಾಹನೊಂದಿಗೆ ಅದೇ ರೈಲಿನಲ್ಲಿ ಪ್ರಯಾಣಿಸಬೇಕಾಗುತ್ತದೆ.&lt;/p&gt;&lt;p&gt;&lt;strong&gt;ಪಾರ್ಸೆಲ್ ಮೋಡ್: &lt;/strong&gt;ಕಾರನ್ನು ನಿಗದಿತ ನಿಲ್ದಾಣಕ್ಕೆ ಪ್ರತ್ಯೇಕವಾಗಿ ಪಾರ್ಸೆಲ್ ಆಗಿ ಕಳುಹಿಸಲಾಗುತ್ತದೆ. ನೀವು ರೈಲಿನಲ್ಲಿ ಇರಬೇಕಾಗಿಲ್ಲ, ಆದರೆ ಮೂಲ ದರಗಳು ಸಾಮಾನ್ಯವಾಗಿ ಸ್ವಲ್ಪ ಹೆಚ್ಚಿರುತ್ತವೆ.&lt;/p&gt;&lt;h2&gt;&lt;strong&gt;ಕಾರನ್ನು ರಿಸೀವ್ ಮಾಡುವುದು ಹೇಗೆ?&lt;/strong&gt;&lt;/h2&gt;&lt;p&gt;ನಿಮ್ಮ ಕಾರು ನಿಗದಿತ ರೈಲ್ವೆ ನಿಲ್ದಾಣಕ್ಕೆ ತಲುಪಿದ ತಕ್ಷಣ, ಕಾರ್ ಮಾಲೀಕರು ತಮ್ಮ ಅಸಲಿ ದಾಖಲೆಗಳನ್ನು (Original Documents) ತೋರಿಸಿ ಕಾರನ್ನು ಡೆಲಿವರಿ ಪಡೆಯಬಹುದು. ಕಾರನ್ನು ಸ್ವೀಕರಿಸುವ ಮುನ್ನ ಅದರ ಸ್ಥಿತಿಯನ್ನು ಮತ್ತೊಮ್ಮೆ ಸರಿಯಾಗಿ ಪರಿಶೀಲಿಸಲು ಸಲಹೆ ನೀಡಲಾಗುತ್ತದೆ. ಸಾಗಣೆಯ ಸಮಯದಲ್ಲಿ ಏನಾದರೂ ಹಾನಿಯಾಗಿದ್ದರೆ ಅಥವಾ ಸಮಸ್ಯೆ ಕಂಡುಬಂದರೆ ತಕ್ಷಣವೇ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಲು ಅವಕಾಶವಿರುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/car-news/how-to-parcel-car-by-train-indian-railways-booking-rules-charges-guide-san/articleshow-i5myn63"/>
        </item>
        <item>
            <title><![CDATA[ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ ಅವಘಡದಲ್ಲಿ 13 ಸಾವು, ಪ್ರಾಣ ಉಳಿಸಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳು]]></title>
            <link>https://kannada.asianetnews.com/india-news/students-leap-from-building-as-massive-fire-engulfs-lucknow-coaching-institute/articleshow-709a5tt</link>
            <guid isPermaLink="true">https://kannada.asianetnews.com/india-news/students-leap-from-building-as-massive-fire-engulfs-lucknow-coaching-institute/articleshow-709a5tt</guid>
            <pubDate>Mon, 22 Jun 2026 17:53:56 +0530</pubDate>
            <description><![CDATA[&lt;p&gt;ಕೋಚಿಂಗ್ ಸೆಂಟರ್&zwnj;ನಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಹೊತ್ತಿ ಉರಿದಿದೆ. ಪರಿಣಾಮ 13 ಮಂದಿ ಮೃತಪಟ್ಟರೆ, ಪ್ರಾಣ ಉಳಿಸಿಕೊಳ್ಳಲು ಕೆಲ ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಜಿಗಿದ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqc9wk06knvjmttvjzh0ykr,imgname-lucknow-purnia-area-fire-news-students-trapped-in-coaching-center-shop-fire-rescue-operation-1782122345056.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಖನೌ (ಜೂ.22) &lt;/strong&gt;ವಾಣಿಜ್ಯ ಕಟ್ಟಡದಲ್ಲಿ ನಡೆಯುತ್ತಿದ್ದ ಕೋಚಿಂಗ್ ಸೆಂಟರ್ ಅಗ್ನಿ ಅವಘಡ ಸಂಭವಿಸಿದೆ. ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆ ಅವರಿಸಿ ಎಲ್ಲವೂ ಭಸ್ಮವಾಗಿದೆ. ಬೆಂಕಿ ಅವಘಡದಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಹಲವು ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದ ಘಟನೆ ಉತ್ತರ ಪದೇಶದ ಲಖನೌದಲ್ಲಿ ನಡೆದಿದೆ. ಇತ್ತ ಸುಟ್ಟ ಗಾಯ, ಜಿಗಿತದಿಂದ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆ ದಾಖಲಿಸಲಾಗಿದೆ.ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಇದೇ ವೇಳೆ 13 ಮೃತೇದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ.&lt;/p&gt;&lt;h2&gt;ಪ್ರಾಣ ಉಳಿಸಿಕೊಳ್ಳಲು ವಿದ್ಯಾರ್ಥಿಗಳ ಪರದಾಟ&lt;/h2&gt;&lt;p&gt;ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಕಾರ್ಯನಿರ್ವಹಿಸುತ್ತಿತ್ತು. ಇದೇ ಕಟ್ಟದಲ್ಲಿ ಇತರ ಸ್ಟೋರ್, ಶಾಪ್&zwnj;ಗಳು ಕಾರ್ಯನಿರ್ವಹಿಸುತ್ತಿತ್ತು. ಒಂದೇ ಸಮನೆ ಬೆಂಕಿ ಜ್ವಾಲೆ ಇಡೀ ಮೊದಲ ಮಹಡಿಗೆ ಹರಡಿದೆ. ಹೀಗಾಗಿ ವಿದ್ಯಾರ್ಥಿಗಳು ತಕ್ಷಣಕ್ಕೆ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಲವರು ಕಿಟಕಿಯಿಂದ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಲಭ್ಯವಾಗಿದೆ. ಪ್ರಾಣ ಉಳಿಸಿಕೊಳ್ಳಲು ಪ್ರಯತ್ನದ ನಡುವೆ ಬೆಂಕಿಯ ಕೆನ್ನಾಲಗೆಯಿಂದ ಹಲವರು ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾರೆ.&lt;/p&gt;&lt;p&gt;ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಇದೇ ವೇಳೆ ರಕ್ಷಣಾ ಕಾರ್ಯಾಚರಣೆಗಳು ನಡೆದಿದೆ. ಗಾಯಗೊಂಡ ಹಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 13 ಮಂದಿ ಸ್ಥಳದಲ್ಲೆ ಸುಟ್ಟು ಕರಕಲಾಗಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.&lt;/p&gt;&lt;h2&gt;ಉಪಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ&lt;/h2&gt;&lt;p&gt;ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಗಾಯಾಳುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಪೊಲೀಸರ ಜೊತೆ ಚರ್ಚಿಸುವ ಬ್ರಿಜೇಶ್ ಪಾಠಕ್, ತನಿಖೆಗೆ ತೀವ್ರಗತಿಯಲ್ಲಿ ನಡೆಸುವಂತೆ ಸೂಚಿಸಿದ್ದಾರೆ. ಘಟನೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಬ್ರಿಜೇಶ್ ಪಾಠಕ್, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಇದೇ ವೇಳೆ ಮೃತರ ಕುಟುಂಬದ ಜೊತೆ ಉತ್ತರ ಪ್ರದೇಶ ಸರ್ಕಾರ ನಿಲ್ಲಲಿದೆ ಎಂದಿದ್ದಾರೆ.&lt;/p&gt;&lt;p&gt;ಮೂರು ಮಹಡಿಗಳ ಕಟ್ಟಡ ಇದಾಗಿದೆ. ಟಾಪ್ ಫ್ಲೋರ್&zwnj;ನಲ್ಲಿ ಕಾಣಿಸಿಕೊಂಡ ಬೆಂಕಿ ಎಲ್ಲೆಡೆ ಹರಡಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ತಕ್ಷಣ ಪ್ರಾಣ ಉಳಿಸಿಕೊಳ್ಳಳು ಸಾಧ್ಯವಾಗಲಿಲ್ಲ. ಇತ್ತ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಮಾಹಿತಿ ತರಿಸಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬದ ಜೊತೆ ಮಾತನಾಡಿ ಎಲ್ಲಾ ಸಹಕಾರ ನೀಡಲು ಸೂಚಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/students-leap-from-building-as-massive-fire-engulfs-lucknow-coaching-institute/articleshow-709a5tt"/>
        </item>
        <item>
            <title><![CDATA[Anekal: ಸಿನಿಮಾ ಸ್ಟೈಲ್‌ನಲ್ಲಿ ಲಾರಿ ದರೋಡೆ: 24 ಗಂಟೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?]]></title>
            <link>https://kannada.asianetnews.com/crime/anekal-lorry-robbery-gang-arrested-in-24-hours-gvd/articleshow-c4lfmsg</link>
            <guid isPermaLink="true">https://kannada.asianetnews.com/crime/anekal-lorry-robbery-gang-arrested-in-24-hours-gvd/articleshow-c4lfmsg</guid>
            <pubDate>Mon, 22 Jun 2026 17:53:07 +0530</pubDate>
            <description><![CDATA[&lt;p&gt;Anekal: ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದ ರಾಬರಿ ದೃಶ್ಯವೊಂದು ಇದೀಗ ನಿಜ ಜೀವನದಲ್ಲೂ ನಡೆದಿದ್ದು, ಲಾರಿಯನ್ನು ಅಡ್ಡಗಟ್ಟಿ ದರೋಡೆ ನಡೆಸಿದ ಗ್ಯಾಂಗ್&zwnj;ನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳಲ್ಲೇ ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqmhas6mv7rd7j0s2f2t7e4,imgname-vhvh-1782130977574.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆನೇಕಲ್ (ಜೂ.22):&lt;/strong&gt; ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದ ರಾಬರಿ ದೃಶ್ಯವೊಂದು ಇದೀಗ ನಿಜ ಜೀವನದಲ್ಲೂ ನಡೆದಿದ್ದು, ಲಾರಿಯನ್ನು ಅಡ್ಡಗಟ್ಟಿ ದರೋಡೆ ನಡೆಸಿದ ಗ್ಯಾಂಗ್&zwnj;ನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳಲ್ಲೇ ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಉಪವಿಭಾಗದ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಾದ ಶರತ್ ಕುಮಾರ್ (23), ರೂಪೇಶ್ (26) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಬಂಧಿತರಲ್ಲಿ ಶರತ್ ಕುಮಾರ್ ಸರ್ಜಾಪುರದ ಸೋಂಪುರ ನಿವಾಸಿಯಾಗಿದ್ದು, ರೂಪೇಶ್ ಆನೇಕಲ್ ತಾಲ್ಲೂಕಿನ ಕರ್ಪೂರು ಗ್ರಾಮದವನಾಗಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, ಕಂಠಪೂರ್ತಿ ಮದ್ಯ ಸೇವಿಸಿದ್ದ ಆರೋಪಿಗಳು ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ರಾಬರಿಗೆ ಸಂಚು ರೂಪಿಸಿದ್ದರು. ಚಂದಾಪುರ-ಆನೇಕಲ್ ಮುಖ್ಯರಸ್ತೆಯ ಮರಸೂರು ಸಮೀಪ ರಾತ್ರಿ ವೇಳೆ ಸಾಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಆರೋಪಿಗಳು, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.&lt;/p&gt;&lt;p&gt;ಜೀವಭಯದಿಂದ ಚಾಲಕ ಸ್ಥಳದಿಂದ ಓಡಿ ಹೋಗುತ್ತಿದ್ದಂತೆ ಲಾರಿಯನ್ನು ಕೊಂಡೊಯ್ದಿದ್ದಾರೆ. ಇದರ ಹಿಂದೆ ಮತ್ತೊಂದು ಕುತಂತ್ರವೂ ಇತ್ತು. ಲಾರಿಯಲ್ಲಿ ಅಳವಡಿಸಲಾಗಿದ್ದ ಜಿಪಿಆರ್&zwnj;ಎಸ್ ಮೂಲಕ ಮಾಲೀಕರು ಅಥವಾ ಚಾಲಕರು ವಾಹನವನ್ನು ಹುಡುಕಿಕೊಂಡು ಬರುತ್ತಾರೆ ಎಂಬುದು ಆರೋಪಿಗಳಿಗೆ ಗೊತ್ತಿತ್ತು. ನಂತರ ವಾಹನ ಹಿಂತಿರುಗಿಸಬೇಕಾದರೆ ಹಣ ನೀಡಬೇಕು ಎಂದು ಬೇಡಿಕೆ ಇಡುವ ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಕ್ಷಿಪ್ರ ಕಾರ್ಯಾಚರಣೆ&lt;/strong&gt;&lt;/h2&gt;&lt;p&gt;ಘಟನೆ ಸಂಬಂಧ ಲಾರಿ ಚಾಲಕ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್&zwnj;ಪೆಕ್ಟರ್ ಚಂದ್ರಪ್ಪ ನೇತೃತ್ವದ ತಂಡ ತಕ್ಷಣ ಕಾರ್ಯಾಚರಣೆ ಆರಂಭಿಸಿತು. ತನಿಖೆ ವೇಳೆ ಲಾರಿ ಸರ್ಜಾಪುರದ ಸೋಂಪುರ ಪ್ರದೇಶದಲ್ಲಿರುವ ಮಾಹಿತಿ ದೊರೆತಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;p&gt;ಬಂಧಿತ ಪ್ರಮುಖ ಆರೋಪಿ ಶರತ್ ಕುಮಾರ್ ಈ ಹಿಂದೆಯೂ ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೂರ್ಯನಗರ ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/anekal-lorry-robbery-gang-arrested-in-24-hours-gvd/articleshow-c4lfmsg"/>
        </item>
        <item>
            <title><![CDATA[ಕಾಗದದ ಮೇಲಷ್ಟೇ ಉಳಿದ ಯೋಜನೆಗಳು: ಸಣ್ಣ ಜಲವಿದ್ಯುತ್ ವಲಯದಲ್ಲಿ ಕರ್ನಾಟಕ ನಂ.1 ಆಗಿದ್ದರೂ ನೂರಾರು ಪ್ರಾಜೆಕ್ಟ್ ರದ್ದು!]]></title>
            <link>https://kannada.asianetnews.com/state/karnataka-small-hydropower-projects-leads-india-but-despite-386-cancelled-projects-gdp/articleshow-qqdtzfg</link>
            <guid isPermaLink="true">https://kannada.asianetnews.com/state/karnataka-small-hydropower-projects-leads-india-but-despite-386-cancelled-projects-gdp/articleshow-qqdtzfg</guid>
            <pubDate>Mon, 22 Jun 2026 17:40:25 +0530</pubDate>
            <description><![CDATA[ನವೀಕರಿಸಬಹುದಾದ ಇಂಧನದಲ್ಲಿ, ವಿಶೇಷವಾಗಿ ಸಣ್ಣ ಜಲವಿದ್ಯುತ್ ಯೋಜನೆಗಳ ಸ್ಥಾಪನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೂ, ನೂರಾರು ಯೋಜನೆಗಳು ರದ್ದಾಗಿವೆ. ಖಾಸಗಿ ಸಂಸ್ಥೆಗಳಿಗೆ ಹಂಚಿಕೆಯಾಗಿದ್ದ ಈ ಯೋಜನೆಗಳು, ಶಾಸನಬದ್ಧ ಅನುಮತಿ ಪಡೆಯಲು ವಿಫಲವಾದ ಕಾರಣ ಮತ್ತು ರಾಜಕೀಯ ನಂಟಿನ ಆರೋಪಗಳ ನಡುವೆ ಕಾಗದದ ಮೇಲಷ್ಟೇ ಉಳಿದು, ಸರ್ಕಾರದ ಕ್ರಮಕ್ಕೆ ಗುರಿಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqkmc2t1pnxjpkprqz85s9a,imgname-hydro-power-projects--1--1782130028634.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನವೀಕರಿಸಬಹುದಾದ ಇಂಧನ ವಲಯದಲ್ಲಿ, ಅದರಲ್ಲೂ ವಿಶೇಷವಾಗಿ ಸಣ್ಣ ಜಲವಿದ್ಯುತ್ ಯೋಜನೆಗಳ (Small Hydro Power - SHP) ಸ್ಥಾಪನೆಯಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಆದರೆ, ಈ ಹೆಮ್ಮೆಯ ಸಾಧನೆಯ ಹಿಂದೊಂದು ಕಹಿ ಸತ್ಯವೂ ಅಡಗಿದೆ. ರಾಜ್ಯದಲ್ಲಿ ನೂರಾರು ಯೋಜನೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದ್ದರೂ, ಅವುಗಳನ್ನು ಕಾರ್ಯಾರಂಭ (Commission) ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸರ್ಕಾರವು ಆ ಹಂಚಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ರದ್ದುಗೊಳಿಸಿದೆ.&lt;/p&gt;&lt;h2&gt;ಕಹಿ ವಾಸ್ತವ, ಅಂಕಿ-ಅಂಶಗಳ ದರ್ಶನ&lt;/h2&gt;&lt;p&gt;ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿ (KREDL) ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 1 ರಿಂದ 25 ಮೆಗಾವ್ಯಾಟ್ ಸಾಮರ್ಥ್ಯದ ವಲಯದಲ್ಲಿ ಒಟ್ಟು 2,045 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು 519 ಸಣ್ಣ ಜಲವಿದ್ಯುತ್ ಯೋಜನೆಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಇವುಗಳ ಪೈಕಿ 386 ಯೋಜನೆಗಳು ಎಂದಿಗೂ ಅನುಷ್ಠಾನಕ್ಕೆ ಬರಲೇ ಇಲ್ಲ. ಈ ಯೋಜನೆಗಳನ್ನು ಪ್ರಮುಖವಾಗಿ 2009-10 ಮತ್ತು 2014-15 ರ ಅವಧಿಯಲ್ಲಿ, ಸರ್ಕಾರ ಸಣ್ಣ ಜಲವಿದ್ಯುತ್ ಸ್ಥಾವರಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದ ಸಮಯದಲ್ಲಿ ಹಂಚಿಕೆ ಮಾಡಲಾಗಿತ್ತು.&lt;/p&gt;&lt;h2&gt;ಕೆಆರ್&zwnj;ಇಡಿಎಲ್&zwnj;ನ ಸಮಗ್ರ ದತ್ತಾಂಶಗಳ ಸತ್ಯ&lt;/h2&gt;&lt;p&gt;ಒಟ್ಟು ಯೋಜಿತ ಗುರಿ: 519 ಯೋಜನೆಗಳ ಮೂಲಕ 3,198 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ.&lt;/p&gt;&lt;p&gt;ಕಾರ್ಯಾರಂಭಗೊಂಡ ಯೋಜನೆಗಳು: ಕೇವಲ 108 ಯೋಜನೆಗಳು ಮಾತ್ರ ಯಶಸ್ವಿಯಾಗಿ ಪ್ರಾರಂಭವಾಗಿದ್ದು, ಇವುಗಳಿಂದ 943 ಮೆಗಾವ್ಯಾಟ್ ವಿದ್ಯುತ್ ಸಿಗುತ್ತಿದೆ.&lt;/p&gt;&lt;p&gt;ಸ್ಥಾಪಿತ ಸಾಮರ್ಥ್ಯದ ಸ್ಥಿತಿ: ಪ್ರಸ್ತುತ 133 ಯೋಜನೆಗಳಿಂದ ಲಭ್ಯವಿರುವ ನಿಜವಾದ ಸ್ಥಾಪಿತ ಸಾಮರ್ಥ್ಯ ಕೇವಲ 1,284 ಮೆಗಾವ್ಯಾಟ್ ಮಾತ್ರ ಆಗಿದೆ.&lt;/p&gt;&lt;p&gt;ವಿಶೇಷವಾಗಿ, 2022-23ರ ಅವಧಿಯಲ್ಲಿ 1,123 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯೊಂದಿಗೆ ಅತಿ ಹೆಚ್ಚು ಅಂದರೆ 225 ಯೋಜನೆಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ದುರದೃಷ್ಟವಶಾತ್ ಇವುಗಳಲ್ಲಿ 220 ಯೋಜನೆಗಳನ್ನು ರದ್ದುಗೊಳಿಸಲಾಯಿತು. ಕೇವಲ 42 ಮೆಗಾವ್ಯಾಟ್ ಸಾಮರ್ಥ್ಯದ 5 ಯೋಜನೆಗಳು ಮಾತ್ರ ವಾಸ್ತವವಾಗಿ ಕಾರ್ಯರೂಪಕ್ಕೆ ಬಂದವು.&lt;/p&gt;&lt;h2&gt;ಯೋಜನೆಗಳು ರದ್ದಾಗಲು ಕಾರಣವೇನು?&lt;/h2&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಕೆಆರ್&zwnj;ಇಡಿಎಲ್&zwnj;ನ ಹಿರಿಯ ಅಧಿಕಾರಿಯೊಬ್ಬರು, &quot;ಬಹುತೇಕ ಯೋಜನೆಗಳು ಅರಣ್ಯ ಇಲಾಖೆ ಮತ್ತು ಸ್ಥಳೀಯ ಪಂಚಾಯತ್&zwnj;ಗಳಿಂದ ಶಾಸನಬದ್ಧ ಅನುಮತಿಗಳನ್ನು (Clearances) ಪಡೆಯಲು ವಿಫಲವಾದ ಕಾರಣ ರದ್ದಾಗಿವೆ. 2014 ರಲ್ಲಿ ಕೇಂದ್ರ ಸರ್ಕಾರವು ಪ್ರತಿ ಸಣ್ಣ ಜಲವಿದ್ಯುತ್ ಸ್ಥಾವರಕ್ಕೆ 5 ಕೋಟಿ ರೂ.ಗಳ ಕೇಂದ್ರ ಹಣಕಾಸು ನೆರವು (CFA) ಘೋಷಿಸಿದಾಗ ಹಲವಾರು ಖಾಸಗಿ ಸಂಸ್ಥೆಗಳು ಉತ್ಸಾಹದಿಂದ ಮುಂದೆ ಬಂದವು. ಆದರೆ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಮೊದಲು ಯೋಜನೆಯನ್ನು ನಿಯೋಜಿಸಿ ಪ್ರಗತಿ ತೋರಿಸಬೇಕಿತ್ತು. ಈ ಪ್ರಕ್ರಿಯೆಯಲ್ಲಿ ವಿಫಲವಾದ್ದರಿಂದ ಅವರಿಗೆ ಸಹಾಯಧನವೂ ಸಿಗಲಿಲ್ಲ, ಯೋಜನೆಯೂ ಕೈಗೂಡಲಿಲ್ಲ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಸಾಮಾನ್ಯವಾಗಿ 25 ಮೆಗಾವ್ಯಾಟ್&zwnj;ಗಿಂತ ಕಡಿಮೆ ಇರುವ ಇಂತಹ ಸಣ್ಣ ಯೋಜನೆಗಳನ್ನು ಅರಣ್ಯ ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳ ಹರಿಯುವ ತೊರೆಗಳ ಆಧಾರದ ಮೇಲೆ ವಿನ್ಯಾಸಗೊಳಿಸಲಾಗುತ್ತದೆ. ಆದರೆ, ಅರಣ್ಯ ತೆರವು, ಪರಿಸರ ಸಂರಕ್ಷಣಾ ಮಂಡಳಿ ಅನುಮತಿ, ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ತೀರುವಳಿ ಹಾಗೂ ಪರಿಸರ ಸಾಗಿಸುವ ಸಾಮರ್ಥ್ಯದ ಅಧ್ಯಯನಗಳ (Carrying Capacity Studies) ಕಠಿಣ ನಿಯಮಗಳು ಈ ಯೋಜನೆಗಳಿಗೆ ಅಡ್ಡಿಯಾಗಿ ಪರಿಣಮಿಸಿದವು. ಕಂಪನಿಗಳಿಗೆ ನೀಡಲಾಗಿದ್ದ 3 ವರ್ಷಗಳ ಗಡುವು ಹಾಗೂ ವಿಸ್ತರಿತ ಅವಧಿ ಮುಗಿದರೂ ಯಾವುದೇ ಪ್ರಗತಿ ಕಾಣದಿದ್ದಾಗ ಸರ್ಕಾರ ಹಂಚಿಕೆಗಳನ್ನು ರದ್ದುಗೊಳಿಸಿತು.&lt;/p&gt;&lt;h2&gt;ವಿಘ್ನೇಶ್ ಶಿಶಿರ್ ಕಂಪನಿಗಳು ಮತ್ತು ರಾಜಕೀಯ ನಂಟು&lt;/h2&gt;&lt;p&gt;ಯೋಜನೆಗಳನ್ನು ಪಡೆದು ಯಾವುದೇ ಪ್ರಗತಿ ತೋರದೆ ಡೀಫಾಲ್ಟ್ ಆದ ಪ್ರಮುಖ ಖಾಸಗಿ ಸಂಸ್ಥೆಗಳಲ್ಲಿ ಬೆಂಗಳೂರಿನ ಉದ್ಯಮಿ ಹಾಗೂ ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಅವರಿಗೆ ಸಂಬಂಧಿಸಿದ ಸಂಸ್ಥೆಗಳು ಸೇರಿವೆ. (ವಿಘ್ನೇಶ್ ಶಿಶಿರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದ್ವಿಪೌರತ್ವದ ತನಿಖೆಗೆ ನ್ಯಾಯಾಲಯಗಳ ಮೊರೆ ಹೋಗಿದ್ದ ವಿಚಾರದಲ್ಲಿ ಸುದ್ದಿಯಾಗಿದ್ದವರು ಮತ್ತು ಕೆಲವು ವಂಚನೆ ಪ್ರಕರಣಗಳಲ್ಲೂ ಆರೋಪಿಯಾಗಿದ್ದಾರೆ).&lt;/p&gt;&lt;p&gt;ಕೆಆರ್&zwnj;ಇಡಿಎಲ್ ದತ್ತಾಂಶದ ಪ್ರಕಾರ, ಇವರ ಕುಟುಂಬ ನಿರ್ದೇಶಕರಾಗಿರುವ ಪರ್ಪಿಕಲಾ ಪವರ್, ಪುಷ್ಪಗಿರಿ ಪವರ್, ದಕ್ಷಿಣ ಕನ್ನಡ ಪವರ್, ಜಿಸಿಐ ಪವರ್, ಕೊಡಗು ಪವರ್, ಏಷ್ಯಾ ಪೆಸಿಫಿಕ್ ಇಂಡಸ್ಟ್ರೀಸ್, ಕಲ್ಟ್ರಾನಿಕ್ಸ್ ಆಟೊಮೇಷನ್ ಮತ್ತು ದಾವಣಗೆರೆ ಪವರ್ ಸೇರಿದಂತೆ 9 ಸಂಸ್ಥೆಗಳಿಗೆ 84 ಮೆಗಾವ್ಯಾಟ್ ಸಾಮರ್ಥ್ಯದ 11 ಯೋಜನೆಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಇವು ಕಾಗದದ ಮೇಲಷ್ಟೇ ಉಳಿದಿದ್ದರಿಂದ 2014-2018ರ ಅವಧಿಯಲ್ಲಿ ಇವುಗಳನ್ನು ರದ್ದುಗೊಳಿಸಲಾಯಿತು. ಈ ಕಂಪನಿಗಳು ಕೇವಲ ಖಾಸಗಿ ಸಂಸ್ಥೆಗಳಿಂದ ದುರುಪಯೋಗಪಡಿಸಿಕೊಂಡ ಹಣವನ್ನು ಅಕ್ರಮವಾಗಿ ವರ್ಗಾಯಿಸುವ (Money Laundering) ಜಾಲಗಳಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದು, ಪ್ರಸ್ತುತ ಪೊಲೀಸ್ ತನಿಖೆಯ ಕೇಂದ್ರಬಿಂದುವಾಗಿವೆ.&lt;/p&gt;&lt;p&gt;ಇವರಷ್ಟೇ ಅಲ್ಲದೆ, ಮತ್ತೊಂದು ಪ್ರಮುಖ ಸಂಸ್ಥೆಯಾದ 'ಭೋರುಕಾ ಪವರ್ ಕಾರ್ಪೊರೇಷನ್'ಗೆ ಹಂಚಿಕೆ ಮಾಡಲಾಗಿದ್ದ 75 ಮೆಗಾವ್ಯಾಟ್ ಸಾಮರ್ಥ್ಯದ 11 ಯೋಜನೆಗಳನ್ನು ಸಹ ಇದೇ ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ಹಂಚಿಕೆಗಳು ರದ್ದಾಗಿದ್ದು 2007-2008ರ ಅವಧಿಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಎಂಬುದು ಗಮನಾರ್ಹ.&lt;/p&gt;&lt;h2&gt;ರಾಜಕೀಯ ಸಂಪರ್ಕಗಳ ಕ್ಲಸ್ಟರ್:&lt;/h2&gt;&lt;p&gt;ಹಿಂದೆ ನಡೆದ ಮಾಧ್ಯಮ ವಿಶ್ಲೇಷಣೆಯೊಂದರ ಪ್ರಕಾರ, 2011-2016ರ ಅವಧಿಯಲ್ಲಿ ಹಂಚಿಕೆಯಾದ 1,718 ಮೆಗಾವ್ಯಾಟ್&zwnj;ನ 298 ಯೋಜನೆಗಳ ಪೈಕಿ, ಕನಿಷ್ಠ 880 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗಳು ಕೇವಲ 14 ಪ್ರಭಾವಿ ಸಂಸ್ಥೆಗಳ ಗುಂಪಿಗೆ ಹೋಗಿದ್ದವು. ಇವು 64 ವಿಭಿನ್ನ ಹೆಸರುಗಳೊಂದಿಗೆ, ರಾಜಕೀಯ ಸಂಪರ್ಕ ಹೊಂದಿರುವ ನಿರ್ದೇಶಕರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಆ ಕಾಲದಲ್ಲಿ ಪ್ರತಿ ಯೋಜನೆಗೆ 5 ಕೋಟಿ ರೂ. ಸಬ್ಸಿಡಿ, ಭೂಮಿಯ ಮೇಲೆ 30 ವರ್ಷಗಳ ಗುತ್ತಿಗೆ ಮತ್ತು ಯೂನಿಟ್&zwnj;ಗೆ 2.30 ರೂ. ದರದಲ್ಲಿ ವಿದ್ಯುತ್ ಖರೀದಿಯ ಗ್ಯಾರಂಟಿ ಇದ್ದಿದ್ದರಿಂದ ಇವುಗಳನ್ನು ಕೇವಲ ಲಾಭದಾಯಕ ವ್ಯವಹಾರವಾಗಿ ಬಳಸಿಕೊಳ್ಳಲಾಗಿತ್ತು.&lt;/p&gt;&lt;h2&gt;ಕೇಂದ್ರ ಸರ್ಕಾರದ ಹೊಸ ಪ್ರೋತ್ಸಾಹ ಧನ ಮತ್ತು ಕಠಿಣ ಷರತ್ತುಗಳು&lt;/h2&gt;&lt;p&gt;ಪಶ್ಚಿಮ ಏಷ್ಯಾದಿಂದ ಉಂಟಾಗಿರುವ ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಇತ್ತೀಚೆಗಷ್ಟೇ ಕೇಂದ್ರ ಸಚಿವ ಸಂಪುಟವು ಸಣ್ಣ ಜಲವಿದ್ಯುತ್ ವಲಯದಲ್ಲಿ ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು 2,584.60 ಕೋಟಿ ರೂ.ಗಳ ಹೊಸ ಅನುದಾನವನ್ನು ಅನುಮೋದಿಸಿದೆ. ಇದರ ಮೂಲಕ ದೇಶಾದ್ಯಂತ 1,500 ಮೆಗಾವ್ಯಾಟ್ ಪರ್ಯಾಯ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.&lt;/p&gt;&lt;p&gt;ಆದರೆ ಈ ಬಾರಿ ಕೇಂದ್ರ ಸರ್ಕಾರ ಕಠಿಣ ನಿಯಮವನ್ನು ತಂದಿದೆ. ಹೊಸ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಬೇಕಾದರೆ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ಮೊದಲೇ ಆಯಾ ರಾಜ್ಯ ಸರ್ಕಾರಗಳೊಂದಿಗೆ ಇಂಧನ ಖರೀದಿ ಒಪ್ಪಂದವನ್ನು (PPA) ಮಾಡಿಕೊಂಡಿರಬೇಕು.&lt;/p&gt;&lt;p&gt;ಈಶಾನ್ಯ ರಾಜ್ಯಗಳು ಮತ್ತು ಗಡಿ ಜಿಲ್ಲೆಗಳು: ಪ್ರತಿ ಮೆಗಾವ್ಯಾಟ್&zwnj;ಗೆ 3.6 ಕೋಟಿ ರೂ. ಅಥವಾ ಒಟ್ಟು ಯೋಜನಾ ವೆಚ್ಚದ ಶೇ. 30ರಷ್ಟು (ಗರಿಷ್ಠ 30 ಕೋಟಿ ರೂ. ಮಿತಿ) ಸಹಾಯಧನ.&lt;/p&gt;&lt;p&gt;ಇತರ ರಾಜ್ಯಗಳು (ಕರ್ನಾಟಕ ಸೇರಿ): ಪ್ರತಿ ಮೆಗಾವ್ಯಾಟ್&zwnj;ಗೆ 2.4 ಕೋಟಿ ರೂ. ಅಥವಾ ಯೋಜನಾ ವೆಚ್ಚದ ಶೇ. 20ರಷ್ಟು (ಗರಿಷ್ಠ 20 ಕೋಟಿ ರೂ. ಮಿತಿ) ನೆರವು.&lt;/p&gt;&lt;p&gt;ಈ ಯೋಜನೆಯಡಿ ಒಟ್ಟು 15,000 ಕೋಟಿ ರೂ.ಗಳ ಖಾಸಗಿ ಹೂಡಿಕೆಯನ್ನು ನಿರೀಕ್ಷಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಹಾಗೂ 'ಆತ್ಮನಿರ್ಭರ ಭಾರತ'ದ ಅಡಿಯಲ್ಲಿ 100% ಸ್ಥಳೀಯ ಯಂತ್ರೋಪಕರಣಗಳನ್ನು ಬಳಸುವ ಉದ್ದೇಶವನ್ನು ಹೊಂದಲಾಗಿದೆ.&lt;/p&gt;&lt;h2&gt;ಹಿನ್ನಡೆಯ ನಡುವೆಯೂ ಭಾರತದಲ್ಲೇ ಕರ್ನಾಟಕಕ್ಕೆ ಅಗ್ರಸ್ಥಾನ!&lt;/h2&gt;&lt;p&gt;ಇಷ್ಟೆಲ್ಲಾ ಯೋಜನೆಗಳು ರದ್ದಾಗಿದ್ದರೂ, ಭಾರತದ ಒಟ್ಟಾರೆ ಸಣ್ಣ ಜಲವಿದ್ಯುತ್ (SHP) ಉತ್ಪಾದನೆಯಲ್ಲಿ ಕರ್ನಾಟಕವೇ ಇಂದಿಗೂ ನಂಬರ್ ಒನ್ ಸ್ಥಾನದಲ್ಲಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಭಾರತದ ಒಟ್ಟು 5,179.36 ಮೆಗಾವ್ಯಾಟ್ ಸಣ್ಣ ಜಲವಿದ್ಯುತ್ ಸಾಮರ್ಥ್ಯದಲ್ಲಿ ಕರ್ನಾಟಕವು ಅತ್ಯಧಿಕ ಸ್ಥಾಪಿತ ಸಾಮರ್ಥ್ಯದೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನುಳಿದಂತೆ 1,013.46 ಮೆಗಾವ್ಯಾಟ್ ಸಾಮರ್ಥ್ಯದೊಂದಿಗೆ ಹಿಮಾಚಲ ಪ್ರದೇಶ ಎರಡನೇ ಸ್ಥಾನದಲ್ಲಿದೆ.&lt;/p&gt;&lt;h2&gt;ಬಳಕೆಯಾಗದ ಅಪಾರ ಸಂಪನ್ಮೂಲಗಳು: ತಜ್ಞರ ಕಳವಳ&lt;/h2&gt;&lt;p&gt;ಭಾರತದ ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯವು (ಸೌರ, ಪವನ, ಜೈವಿಕ ಇಂಧನ ಸೇರಿದಂತೆ) 2,82,745.08 ಮೆಗಾವ್ಯಾಟ್ ತಲುಪಿದ್ದು, ಇದರಲ್ಲಿ 1,57,046.44 ಮೆಗಾವ್ಯಾಟ್&zwnj; ಕೊಡುಗೆಯೊಂದಿಗೆ ಸೌರಶಕ್ತಿ ಸಿಂಹಪಾಲು ಹೊಂದಿದೆ. ಆದರೆ ಸಣ್ಣ ಜಲವಿದ್ಯುತ್&zwnj;ನ ಪಾಲು ಕೇವಲ ಶೇ. 2.6 ರಷ್ಟಿದೆ.&lt;/p&gt;&lt;p&gt;NCAER ಪ್ರಕಟಿಸಿರುವ &lsquo;ಸಣ್ಣ ಜಲವಿದ್ಯುತ್ ಸ್ಥಾವರಗಳು: ರಾಜ್ಯ ಸಾಮರ್ಥ್ಯಕ್ಕೆ ಮಾತ್ರ ಅಗತ್ಯವಿದೆ, ನಿಧಿಗಳಲ್ಲ&rsquo; ಎಂಬ ಇತ್ತೀಚಿನ ಪ್ರಬಂಧದಲ್ಲಿ ಸಂಶೋಧಕರಾದ ಚೇತನಾ ಚೌಧರಿ ಮತ್ತು ಉಜಲಾ ಕುಮಾರಿ ಅವರು ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ:&lt;/p&gt;&lt;p&gt;&quot;ಭಾರತದ ಅಂದಾಜು ಸಣ್ಣ ಜಲವಿದ್ಯುತ್ ಸಾಮರ್ಥ್ಯವು 7,133 ತಾಣಗಳಲ್ಲಿ ಒಟ್ಟು 21,133 ಮೆಗಾವ್ಯಾಟ್ ಆಗಿದೆ. ಆದರೆ ಅದರ ಒಂದು ಸಣ್ಣ ಭಾಗವನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಇಲ್ಲಿ ಸಮಸ್ಯೆ ಸಂಪನ್ಮೂಲಗಳ ಕೊರತೆಯಲ್ಲ, ಬದಲಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ಕಾರ್ಯಸಾಧ್ಯ ಯೋಜನೆಗಳಾಗಿ ಪರಿವರ್ತಿಸುವಲ್ಲಿನ ನಮ್ಮ ಆಡಳಿತಾತ್ಮಕ ಅಸಮರ್ಥತೆಯಾಗಿದೆ.&quot;&lt;/p&gt;&lt;p&gt;ಪಶ್ಚಿಮ ಘಟ್ಟಗಳು ಮತ್ತು ಹಿಮಾಲಯದ ಕಡಿದಾದ ಇಳಿಜಾರುಗಳನ್ನು ಹೊಂದಿರುವ ಕರ್ನಾಟಕವು ತನ್ನ ಒಟ್ಟು ಸಾಮರ್ಥ್ಯದ ಕೇವಲ ಶೇ. 34 ರಷ್ಟನ್ನು ಮಾತ್ರ ಬಳಸಿಕೊಂಡಿದೆ. ಹಿಮಾಚಲ ಪ್ರದೇಶ ಶೇ. 29, ಉತ್ತರಾಖಂಡ ಶೇ. 14 ಮತ್ತು ಅರುಣಾಚಲ ಪ್ರದೇಶ ಕೇವಲ ಶೇ. 7 ರಷ್ಟು ಬಳಸಿಕೊಂಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ಭೌಗೋಳಿಕ ಮಿತಿಗಳಿದ್ದರೂ ತೆಲಂಗಾಣ ಶೇ. 89, ಹರಿಯಾಣ ಶೇ. 68 ಮತ್ತು ಗುಜರಾತ್ ಶೇ. 56 ರಷ್ಟು ಜಲವಿದ್ಯುತ್ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.&lt;/p&gt;&lt;p&gt;ಇದು ಸ್ಪಷ್ಟಪಡಿಸುವುದೇನೆಂದರೆ, ತಂತ್ರಜ್ಞಾನ ಅಥವಾ ಹಣದ ಕೊರತೆಯಿಂದ ಸಣ್ಣ ಜಲವಿದ್ಯುತ್ ಯೋಜನೆಗಳು ವಿಫಲವಾಗುತ್ತಿಲ್ಲ; ಬದಲಿಗೆ ರಾಜ್ಯ ಸರ್ಕಾರಗಳ ಕಟ್ಟುನಿಟ್ಟಾದ ಅನುಷ್ಠಾನದ ಸಾಮರ್ಥ್ಯ ಮತ್ತು ಖಾಸಗಿ ಸಂಸ್ಥೆಗಳ ಬದ್ಧತೆಯ ಕೊರತೆಯಿಂದಾಗಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಕರ್ನಾಟಕವು ಮುಂದಿನ ದಿನಗಳಲ್ಲಾದರೂ ಕಾಗದದ ಮೇಲಿನ ಯೋಜನೆಗಳನ್ನು ವಾಸ್ತವಕ್ಕೆ ತರಬೇಕಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-small-hydropower-projects-leads-india-but-despite-386-cancelled-projects-gdp/articleshow-qqdtzfg"/>
        </item>
        <item>
            <title><![CDATA[Indian Railway fine: ರೈಲಿನ ಮಹಿಳಾ ಬೋಗಿಯಲ್ಲಿ ಪುರುಷರ ಪ್ರಯಾಣ; ಟ್ರಾಫಿಕ್ ಫೈನ್‌ಗಿಂತ ಹೆಚ್ಚಾಯ್ತು ದಂಡದ ಮೊತ್ತ!]]></title>
            <link>https://kannada.asianetnews.com/gallery/travel/indian-railways-hikes-fine-fivefold-for-men-entering-womens-coaches-zqrnxqh</link>
            <guid isPermaLink="true">https://kannada.asianetnews.com/gallery/travel/indian-railways-hikes-fine-fivefold-for-men-entering-womens-coaches-zqrnxqh</guid>
            <pubDate>Mon, 22 Jun 2026 16:56:45 +0530</pubDate>
            <description><![CDATA[ಭಾರತೀಯ ರೈಲ್ವೆಯು 'ಜನ್ ವಿಶ್ವಾಸ್ ಕಾಯ್ದೆ, 2026' ಅಡಿಯಲ್ಲಿ, ಮಹಿಳಾ ಬೋಗಿಗಳಿಗೆ ಅಕ್ರಮವಾಗಿ ಪ್ರವೇಶಿಸುವ ಪುರುಷರಿಗೆ ವಿಧಿಸುವ ದಂಡವನ್ನು ₹2,500ಕ್ಕೆ ಹೆಚ್ಚಿಸಿದೆ. ಈ ಕಠಿಣ ಕ್ರಮವು ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01cwbth2csay6qbwhyz0c82g08,imgname-Ladies-Coach.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ರೈಲ್ವೆಯು 'ಜನ್ ವಿಶ್ವಾಸ್ ಕಾಯ್ದೆ, 2026' ಅಡಿಯಲ್ಲಿ, ಮಹಿಳಾ ಬೋಗಿಗಳಿಗೆ ಅಕ್ರಮವಾಗಿ ಪ್ರವೇಶಿಸುವ ಪುರುಷರಿಗೆ ವಿಧಿಸುವ ದಂಡವನ್ನು ₹2,500ಕ್ಕೆ ಹೆಚ್ಚಿಸಿದೆ. ಈ ಕಠಿಣ ಕ್ರಮವು ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.&lt;img&gt;&lt;p&gt;ರೈಲಿನಲ್ಲಿ ಮಹಿಳೆಯರಿಗಾಗಿಯೇ ಮೀಸಲಿಟ್ಟಿರುವ ಕೋಚ್&zwnj; ಮತ್ತು ಸೀಟ್&zwnj;ಗಳಿಗೆ ಅಕ್ರಮವಾಗಿ ನುಗ್ಗುವ ಪುರುಷ ಪ್ರಯಾಣಿಕರ ವಿರುದ್ಧ ಭಾರತೀಯ ರೈಲ್ವೆ ಕಠಿಣ ಕ್ರಮಕ್ಕೆ ಮುಂದಾಗಿದೆ. 'ಜನ್ ವಿಶ್ವಾಸ್ ಕಾಯ್ದೆ, 2026'ರ ಅಡಿಯಲ್ಲಿ, ಮಹಿಳಾ ಬೋಗಿಗೆ ಅತಿಕ್ರಮ ಪ್ರವೇಶ ಮಾಡುವವರಿಗೆ ವಿಧಿಸುವ ದಂಡವನ್ನು 500 ರೂಪಾಯಿಯಿಂದ 2,500 ರೂಪಾಯಿಗೆ ಏರಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.&lt;/p&gt;&lt;img&gt;&lt;p&gt;ರೈಲ್ವೆ ಅಧಿಕಾರಿಗಳ ಪ್ರಕಾರ, ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶ ಇರುತ್ತದೆ. ಹೀಗಿರುವಾಗ ಪುರುಷರು ಮಹಿಳೆಯರ ಕೋಚ್ ಅಥವಾ ಸೀಟ್&zwnj;ಗಳನ್ನು ಆಕ್ರಮಿಸಿಕೊಳ್ಳುವ ಅಗತ್ಯವೇ ಇಲ್ಲ. ಆದರೂ ಇಂತಹ ನಿಯಮ ಉಲ್ಲಂಘನೆಗಳು ಪದೇ ಪದೇ ನಡೆಯುತ್ತಿರುವುದರಿಂದ ದಂಡದ ಮೊತ್ತವನ್ನು భారీಯಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;2026ರ ಜೂನ್ 19ರಂದು ಭಾರತೀಯ ಗೆಜೆಟ್&zwnj;ನಲ್ಲಿ ರೈಲ್ವೆ ಸಚಿವಾಲಯ ಒಂದು ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ಯಾವುದೇ ಪುರುಷ ಪ್ರಯಾಣಿಕ ಉದ್ದೇಶಪೂರ್ವಕವಾಗಿ ಮಹಿಳಾ ಬೋಗಿ ಪ್ರವೇಶಿಸಿದರೆ, ಅಥವಾ ಮಹಿಳೆಯರ ಸೀಟಿನಲ್ಲಿ ಕುಳಿತು ಪ್ರಯಾಣ ಮುಂದುವರಿಸಿದರೆ, ಅದನ್ನು ಕಾನೂನು ಪ್ರಕಾರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದು ರೈಲ್ವೆ ಕಾಯ್ದೆಯ ಸೆಕ್ಷನ್ 162ರ ಉಲ್ಲಂಘನೆಯಾಗುತ್ತದೆ.&lt;/p&gt;&lt;img&gt;&lt;p&gt;ನಿಯಮ ಮುರಿದ ಪ್ರಯಾಣಿಕನಿಗೆ 2,500 ರೂ. ದಂಡ ವಿಧಿಸುವುದಲ್ಲದೆ, ಅವರ ಟಿಕೆಟ್ ರದ್ದುಪಡಿಸಬಹುದು ಅಥವಾ ಮುಟ್ಟುಗೋಲು ಹಾಕಿಕೊಳ್ಳಬಹುದು. ಅಷ್ಟೇ ಅಲ್ಲ, ಆ ಪ್ರಯಾಣಿಕನನ್ನು ರೈಲಿನಿಂದ ಕೆಳಗಿಳಿಸುವಂತೆ ಸೂಚಿಸುವ ಅಧಿಕಾರ ರೈಲ್ವೆ ಸಿಬ್ಬಂದಿಗೆ ಇರುತ್ತದೆ. ಒಂದು ವೇಳೆ ಪ್ರಯಾಣಿಕ ದಂಡ ಕಟ್ಟಲು ನಿರಾಕರಿಸಿದರೆ, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆಗ ದಂಡದ ಮೊತ್ತ 5,000 ರೂಪಾಯಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಸೂಚನೆಯಲ್ಲಿ ಎಚ್ಚರಿಸಲಾಗಿದೆ.&lt;/p&gt;&lt;img&gt;&lt;p&gt;ಈ ಅಪರಾಧಕ್ಕೆ ಕನಿಷ್ಠ 2,500 ರೂ. ದಂಡ ವಿಧಿಸಬೇಕೆಂದು ಕಾನೂನು ಹೇಳುತ್ತದೆ. ಒಂದು ವೇಳೆ ವಿಶೇಷ ಸಂದರ್ಭಗಳಲ್ಲಿ ಇದಕ್ಕಿಂತ ಕಡಿಮೆ ದಂಡ ವಿಧಿಸುವುದಾದರೆ, ಅದಕ್ಕೆ ಸೂಕ್ತ ಕಾರಣವನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಆದರೆ, ಈ ನಿಯಮವು ತೃತೀಯಲಿಂಗಿಗಳಿಗೆ ಅನ್ವಯಿಸುವುದಿಲ್ಲ. 'ತೃತೀಯಲಿಂಗಿ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣಾ ಕಾಯ್ದೆ'ಯ ಅಡಿ ಬರುವ ವ್ಯಕ್ತಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.&lt;/p&gt;&lt;img&gt;&lt;p&gt;ಮಹಿಳೆಯರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಈ ಹೊಸ ಕ್ರಮ ಕೈಗೊಂಡಿದೆ. ಮಹಿಳಾ ಬೋಗಿಗಳ ದುರ್ಬಳಕೆ ತಡೆಯುವುದು ಮತ್ತು ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಈ ಕಠಿಣ ನಿಯಮದ ಮುಖ್ಯ ಉದ್ದೇಶವಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/indian-railways-hikes-fine-fivefold-for-men-entering-womens-coaches-zqrnxqh"/>
        </item>
        <item>
            <title><![CDATA[ಹಿಜಾಬ್​ ಧರಿಸದೇ ಹಾಡಿದ ಖ್ಯಾತ ಗಾಯಕಿಗೆ ಛಡಿಯೇಟಿನ ಕ್ರೂರ ಶಿಕ್ಷೆ: 2 ವರ್ಷ ಗಾಯನ ಬ್ಯಾನ್​]]></title>
            <link>https://kannada.asianetnews.com/world-news/iranian-star-parastoo-ahmadi-reportedly-sentenced-to-74-lashes-for-singing-without-hijab-suc/articleshow-ycsllmy</link>
            <guid isPermaLink="true">https://kannada.asianetnews.com/world-news/iranian-star-parastoo-ahmadi-reportedly-sentenced-to-74-lashes-for-singing-without-hijab-suc/articleshow-ycsllmy</guid>
            <pubDate>Mon, 22 Jun 2026 16:43:58 +0530</pubDate>
            <description><![CDATA[ಇರಾನ್​ನಲ್ಲಿ ಹಿಜಾಬ್​ ಧರಿಸದೆ ದೇಶಭಕ್ತಿ ಗೀತೆಯನ್ನು ಹಾಡಿದ ಗಾಯಕಿ ಪರಸ್ತೂ ಅಹ್ಮದಿಗೆ ಅಲ್ಲಿನ ನ್ಯಾಯಾಲಯವು 74 ಛಡಿಯೇಟು ಹಾಗೂ ಎರಡು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿದೆ. ಈ ಪ್ರದರ್ಶನವನ್ನು ಅಶ್ಲೀಲ ಮತ್ತು ಅನೈತಿಕ ಎಂದು ಪರಿಗಣಿಸಿದ್ದು, ಈ ತೀರ್ಪು ಮಾನವ ಹಕ್ಕುಗಳ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqgfgv93p7p0m74jmenyedb,imgname-parastoo-ahmadi-1782126723945.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೆಹ್ರಾನ್​ (ಇರಾನ್​): ಅತ್ಯಂತ ಕ್ರೂರ ಎನ್ನುವ ಘಟನೆಯೊಂದರಲ್ಲಿ ಹಿಜಾಬ್​ ಧರಿಸದೇ ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಿದ ಖ್ಯಾತ ಗಾಯಕಿಯೊಬ್ಬರಿಗೆ 74 ಛಡಿಯೇಟು ನೀಡುವ ಕ್ರೂರ ಶಿಕ್ಷೆಯನ್ನು ವಿಧಿಸಲಾಗಿದೆ. ಜೊತೆಗೆ, ಎರಡು ವರ್ಷ ಸಂಗೀತ ಪ್ರದರ್ಶನ ಬ್ಯಾನ್ ಮಾಡಲಾಗಿದೆ. 29 ವರ್ಷದ ಇರಾನಿ ಗಾಯಕಿ ಪರಸ್ತೂ ಅಹ್ಮದಿಗೆ ಅಲ್ಲಿಯ ಕೋರ್ಟ್​ ಇಂಥದ್ದೊಂದು ಕ್ರೂರ ಶಿಕ್ಷೆಯನ್ನು ನೀಡಿದೆ. ಜೊತೆಗೆ ಹೆಣ್ಣಿನ ಹಾಡಿನ ದನಿ ಕೇಳುವುದು ಪುರುಷರ ಕಾಮೋದ್ರೇಕವನ್ನು ಉತ್ತೇಜಿಸುವುದಕ್ಕೆ ಕಾರಣವಾಗುತ್ತದೆ. ಇದು ನಿಷಿದ್ಧ ಎಂದೂ ಹೇಳಲಾಗಿದೆ!&lt;/p&gt;&lt;p&gt;ಅಷ್ಟಕ್ಕೂ ಈ ಕಾರ್ಯಕ್ರಮ ನಡೆದದ್ದು 2024ರ ಡಿಸೆಂಬರ್​​ನಲ್ಲಿ. ಖ್ಯಾತ ಗಾಯಕಿಯಾಗಿರುವ ಪರಸ್ತೂ ಅಹ್ಮದಿ ಇದಾಗಲೇ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಂದು ಸಂಗೀತ ಕಾರ್ಯಕ್ರಮವೊಂದರಲ್ಲಿ ಪರಸ್ತೂ ಅಹ್ಮದಿ ಹಿಜಾಬ್ ಧರಿಸದೆ ದೇಶಭಕ್ತಿ ಗೀತೆಯಾದ ಅಜ್ ಖೂನೆ ಜವಾನನೆ ವತನ್ ಹಾಡನ್ನು ಹಾಡಿದ್ದರು. ಬಳಿಕ ಅದನ್ನು ಯ್ಯೂಟೂಬ್​ ಚಾನಲ್​ನಲ್ಲಿ ಪ್ರಸಾರ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.&lt;/p&gt;&lt;h2&gt;&lt;strong&gt;ಅಶ್ಲೀಲ ಮತ್ತು ಅನೈತಿಕ ಎಂದ ಕೋರ್ಟ್​&lt;/strong&gt;&lt;/h2&gt;&lt;p&gt;ಬಳಿಕ ಇಸ್ಲಾಮಿಕ್ ರಾಷ್ಟ್ರವಾದ ಇರಾನ್​ನಲ್ಲಿ ಹಿಜಾಬ್ ಧರಿಸದೇ ಪ್ರದರ್ಶನ ನೀಡಿದ ಹಿನ್ನೆಲೆ ಅಧಿಕಾರಿಗಳು ಅವರ ವಿರುದ್ಧ ಅಶ್ಲೀಲ ಮತ್ತು ಅನೈತಿಕ ಹಾಗೂ ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸುವ ಎಂದು ಆರೋಪದ ಮೇಲೆ ಅಹ್ಮದಿ ಮತ್ತು ಹಲವಾರು ಸಂಗೀತಗಾರರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ವಿಚಾರಣೆ ನಡೆಸಿದ ಇರಾನ್ ನ್ಯಾಯಾಲಯವು ಅಂತಿಮ ತೀರ್ಪು ನೀಡಿದ್ದು, ಸಂಗೀತಗಾರರು ಸೇರಿದಂತೆ ಕಾನ್ಸರ್ಟ್​ ನಡೆಸಿದ ತಂಡದ ಎಂಟು ಸದಸ್ಯರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಮತ್ತು 74 ಛಡಿಯೇಟುಗಳು ಶಿಕ್ಷೆ ನೀಡಿದ್ದು, ಇರಾನ್&zwnj;ನಿಂದ ಹೊರಹೋಗದಂತೆ ಎರಡು ವರ್ಷಗಳ ನಿಷೇಧ ಮತ್ತು ಕಲಾತ್ಮಕ ಚಟುವಟಿಕೆಗಳ ಮೇಲೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿದೆ.&lt;/p&gt;&lt;h3&gt;&lt;strong&gt;ಟೀಕೆಗೆ ಗುರಿಯಾದ ಶಿಕ್ಷೆ&lt;/strong&gt;&lt;/h3&gt;&lt;p&gt;ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್&zwnj;ನಲ್ಲಿರುವ ಅಮೆರಿಕ ಮೂಲದ ಮಾನವ ಹಕ್ಕುಗಳ ಕೇಂದ್ರದ ವಕಾಲತ್ತು ನಿರ್ದೇಶಕ ಬಹಾರ್ ಘಂಡೆಹರಿ, ಇರಾನ್ ಅಧಿಕಾರಿಗಳ ಯುದ್ಧಕಾಲದ ಪ್ರಚಾರ ಅಭಿಯಾನದ ಹೊರತಾಗಿಯೂ, ಇರಾನ್&zwnj;ನಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಗಳು ಬದಲಾಗಿಲ್ಲ ಎಂಬುದನ್ನು ಇದು ನೆನಪಿಸುತ್ತದೆ ಎಂದು ಕಿಡಿಕಾರಿದ್ದಾರೆ.&lt;/p&gt;&lt;p&gt;ಇನ್ನೂ ಈ ತೀರ್ಪು ಇರಾನಿನ ಕಲಾ ಸಮುದಾಯದ ಪ್ರಮುಖ ವ್ಯಕ್ತಿಗಳಿಂದ ಟೀಕೆಗೆ ಗುರಿಯಾಗಿದೆ. ಮಾನವ ಹಕ್ಕುಗಳ ವಕೀಲ ಮೊಯಿನ್ ಖಜೇಲಿ ಕೂಡ ತೀರ್ಪಿನ ಕಾನೂನು ಆಧಾರವನ್ನು ಪ್ರಶ್ನಿಸಿದ್ದಾರೆ. ಇರಾನಿನ ಕ್ರಿಮಿನಲ್ ಕಾನೂನಿನಡಿಯಲ್ಲಿ ಮಹಿಳೆಯರು ಹಾಡುವುದು, ಸಂಗೀತ ಪ್ರದರ್ಶಿಸುವುದು ಮತ್ತು ಸಂಗೀತ ಕೃತಿಗಳನ್ನು ನಿರ್ಮಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧವಲ್ಲ. ಅಂತಹ ಚಟುವಟಿಕೆಗಳನ್ನು ಅಶ್ಲೀಲ ವಿಷಯದ ಉತ್ಪಾದನೆ, ವಿತರಣೆ ಅಥವಾ ಪ್ರಕಟಣೆ ಎಂದು ಅರ್ಥೈಸಲಾಗಲ್ಲ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/world-news/iranian-star-parastoo-ahmadi-reportedly-sentenced-to-74-lashes-for-singing-without-hijab-suc/articleshow-ycsllmy"/>
        </item>
        <item>
            <title><![CDATA[ಅನ್ನಭಾಗ್ಯ ಯೋಜನೆಗೂ ‘ಸರ್ಜರಿ’: 14 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದು? ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆ]]></title>
            <link>https://kannada.asianetnews.com/gallery/state/karnataka-anna-bhagya-scheme-revision-14-lakh-ineligible-bpl-cards-to-be-removed-gl42c10</link>
            <guid isPermaLink="true">https://kannada.asianetnews.com/gallery/state/karnataka-anna-bhagya-scheme-revision-14-lakh-ineligible-bpl-cards-to-be-removed-gl42c10</guid>
            <pubDate>Mon, 22 Jun 2026 16:42:48 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಸಚಿವ ಕೆ.ಎಚ್. ಮುನಿಯಪ್ಪ ಅವರ ಪ್ರಕಾರ, ಸುಮಾರು 13-14 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್&zwnj;ಗಳನ್ನು ರದ್ದುಪಡಿಸಿ, ಯೋಜನೆಯನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jn144c6ppa68wqg4244qnfhc,imgname-untitled-design--70-.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಸಚಿವ ಕೆ.ಎಚ್. ಮುನಿಯಪ್ಪ ಅವರ ಪ್ರಕಾರ, ಸುಮಾರು 13-14 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್&zwnj;ಗಳನ್ನು ರದ್ದುಪಡಿಸಿ, ಯೋಜನೆಯನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು (ಜೂ.22): ರಾ&lt;/strong&gt;ಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಮರುಪರಿಷ್ಕರಣೆಯ ಬೆನ್ನಲ್ಲೇ, ಈಗ 'ಅನ್ನಭಾಗ್ಯ' ಯೋಜನೆಗೂ ಕತ್ತರಿ ಬೀಳುವ ಲಕ್ಷಣಗಳು ದಟ್ಟವಾಗಿವೆ. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಅನ್ನಭಾಗ್ಯ ಯೋಜನೆಯಲ್ಲಿ ಆಗಲಿರುವ ಮಹತ್ವದ ಬದಲಾವಣೆಗಳ ಕುರಿತು ಸುಳಿವು ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಅನರ್ಹರ ಪತ್ತೆ ಮತ್ತು ಬಿಪಿಎಲ್ ಕಾರ್ಡ್ ರದ್ದು:&lt;/strong&gt;&lt;/p&gt;&lt;p&gt;ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, 'ಅನ್ನಭಾಗ್ಯ ಯೋಜನೆಯನ್ನು ನಿಜವಾದ ಬಡವರಿಗೆ ತಲುಪಿಸುವುದು ನಮ್ಮ ಗುರಿ. ಆದರೆ, ಪ್ರಸ್ತುತ ಸುಮಾರು 13 ರಿಂದ 14 ಲಕ್ಷ ಜನರು ಅನರ್ಹರಾಗಿದ್ದರೂ ಬಿಪಿಎಲ್ (BPL) ಕಾರ್ಡ್&zwnj;ಗಳನ್ನು ಹೊಂದಿದ್ದಾರೆ. ಅಂತಹ ಅನರ್ಹರನ್ನು ಪತ್ತೆ ಹಚ್ಚಿ ಅವರನ್ನು ಪಟ್ಟಿಯಿಂದ ಕೈಬಿಡುವ ಕೆಲಸವನ್ನು ನಾವು ಶೀಘ್ರದಲ್ಲೇ ಮಾಡಲಿದ್ದೇವೆ' ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಅನರ್ಹರು ಸ್ವಯಂಪ್ರೇರಿತರಾಗಿ ತಮ್ಮ ಕಾರ್ಡ್&zwnj;ಗಳನ್ನು ಎಪಿಎಲ್ (APL) ಗೆ ವರ್ಗಾಯಿಸಿಕೊಳ್ಳಬೇಕು ಎಂದು ಈ ಹಿಂದೆಯೇ ಮನವಿ ಮಾಡಲಾಗಿತ್ತು. ಈಗ ಸರ್ಕಾರವು ಈಗಾಗಲೇ ಅನರ್ಹರ ಪಟ್ಟಿಯ ವರದಿಯನ್ನು ತರಿಸಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗುವುದಲ್ಲದೆ, ಅರ್ಹ ಬಡವರಿಗೆ ಹೆಚ್ಚಿನ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂಬುದು ಸರ್ಕಾರದ ಆಶಯವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಕ್ಯಾಬಿನೆಟ್ ಸಬ್ ಕಮಿಟಿ ಸಭೆ ಮತ್ತು ಗೊಂದಲ:&lt;/strong&gt;&lt;/p&gt;&lt;p&gt;ಇದೇ ಸಂದರ್ಭದಲ್ಲಿ ಇಂದು ನಡೆದ ಸಂಪುಟ ಉಪಸಮಿತಿ ಸಭೆಯ ಬಗ್ಗೆ ಮಾತನಾಡಿದ ಸಚಿವರು, 'ಸಭೆಯನ್ನು ಯಾವ ಉದ್ದೇಶಕ್ಕೆ ಕರೆಯಲಾಗಿದೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಲ್ಲಿ ಚರ್ಚೆಯಾಗುವ ಸಾಧ್ಯತೆ ಕಡಿಮೆ. ಆಹಾರ ಇಲಾಖೆಗೆ ಸಂಬಂಧಿಸಿದ ವಿಷಯಗಳಿದ್ದರೆ ನಾನೇ ಪ್ರತ್ಯೇಕವಾಗಿ ಸಭೆ ಕರೆದು ಚರ್ಚಿಸುತ್ತೇನೆ. ಸದ್ಯಕ್ಕೆ ಅನ್ನಭಾಗ್ಯದ ಪರಿಷ್ಕರಣೆ ಮಾತ್ರ ನಮ್ಮ ಮುಂದಿರುವ ಪ್ರಮುಖ ವಿಷಯ' ಎಂದರು.&lt;/p&gt;&lt;img&gt;&lt;p&gt;&lt;strong&gt;ಜುಲೈನಲ್ಲಿ ಸಂಪುಟ ಸರ್ಜರಿ? ದೆಹಲಿಗೆ ಸಿಎಂ-ಡಿಕೆಶಿ:&lt;/strong&gt;&lt;/p&gt;&lt;p&gt;ಇನ್ನೊಂದೆಡೆ, ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆಯ ಮಾತುಗಳು ಕೇಳಿಬರುತ್ತಿವೆ. ಜುಲೈ ಮೊದಲ ವಾರದೊಳಗೆ ಸಂಪುಟ ಸರ್ಜರಿ ಪ್ರಕ್ರಿಯೆ ಮುಗಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸವು ತೀವ್ರ ಕುತೂಹಲ ಕೆರಳಿಸಿದೆ. ಸಚಿವರ ಕಾರ್ಯಕ್ಷಮತೆ ಮತ್ತು ಲೋಕಸಭಾ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಕೆಲವರಿಗೆ ಕೋಕ್ ನೀಡಿ, ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.&lt;/p&gt;&lt;p&gt;ಒಟ್ಟಾರೆಯಾಗಿ, ಒಂದೆಡೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಮತ್ತು ಇನ್ನೊಂದೆಡೆ ರಾಜಕೀಯ ಸಂಪುಟ ಬದಲಾವಣೆಯ ಬೆಳವಣಿಗೆಗಳು ರಾಜ್ಯ ಸರ್ಕಾರದಲ್ಲಿ ಸಂಚಲನ ಮೂಡಿಸಿವೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-anna-bhagya-scheme-revision-14-lakh-ineligible-bpl-cards-to-be-removed-gl42c10"/>
        </item>
        <item>
            <title><![CDATA[ಹಣವಂತರಿಗೆ ಗಾಳ ಹಾಕ್ತಿದ್ದ ಕಿರುತೆರೆ ನಟಿ ಅರೆಸ್ಟ್; ಆಭರಣ ಬಿಡಿಸೋ ನೆಪದಲ್ಲಿ ಲಕ್ಷ ಲಕ್ಷ ವಂಚಿಸುತ್ತಿದ್ದ ‘ಕಿಲಾಡಿ’ ವನಿತಾ]]></title>
            <link>https://kannada.asianetnews.com/bengaluru-urban/kannada-tv-actress-vanitha-arrested-bengaluru-social-media-cheating-case-san/articleshow-4iydg78</link>
            <guid isPermaLink="true">https://kannada.asianetnews.com/bengaluru-urban/kannada-tv-actress-vanitha-arrested-bengaluru-social-media-cheating-case-san/articleshow-4iydg78</guid>
            <pubDate>Mon, 22 Jun 2026 16:35:39 +0530</pubDate>
            <description><![CDATA[&lt;p&gt;ಕಿರುತೆರೆ ನಟಿ ಎಂದು ಪರಿಚಯಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಣವಂತರನ್ನು ವಂಚಿಸುತ್ತಿದ್ದ ವನಿತಾ ಎಂಬಾಕೆಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ತನ್ನ ಆಭರಣ ಅಡವಿಟ್ಟಿದ್ದು, ಬಿಡಿಸಿಕೊಳ್ಳಲು ಹಣ ಬೇಕೆಂದು ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ಈಕೆ ಪರಾರಿಯಾಗುತ್ತಿದ್ದಳು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqftd31p3t9pr5dghtpc41r,imgname-vanita-serial-actress-1782126031969.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.22): &lt;/strong&gt;ತಾನೊಬ್ಬಳು ಕಿರುತೆರೆ ನಟಿ ಎಂದು ಪರಿಚಯಿಸಿಕೊಂಡು, ಸಾಮಾಜಿಕ ಜಾಲತಾಣಗಳ ಮೂಲಕ ಹಣವಂತರನ್ನು ಸಂಪರ್ಕಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಟಿಯ ಮಾತುಗಳನ್ನು ನಂಬಿ ಮೋಸಹೋದ ಯುವಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದೆ.&lt;/p&gt;&lt;h2&gt;&lt;strong&gt;ಹಣ ಪೀಕಲು &lsquo;ಆಭರಣ&rsquo;ದ ರಹಸ್ಯ ನಾಟಕ!&lt;/strong&gt;&lt;/h2&gt;&lt;p&gt;ಬಂಧಿತ ನಟಿ ವನಿತಾಳ ವಂಚನೆಯ ಜಾಲ ಅತ್ಯಂತ ಚಾಣಾಕ್ಷತನದಿಂದ ಕೂಡಿರುತ್ತಿತ್ತು. ಮೊದಲಿಗೆ ತಾನು ಸೀರಿಯಲ್ ನಟಿ ಎಂದು ಶ್ರೀಮಂತರಿಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ ಈಕೆ, ಬಳಿಕ ನಿರಂತರವಾಗಿ ಮಾತನಾಡಿ ನಯವಾಗಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದಳು. ಸಂಪೂರ್ಣ ನಂಬಿಕೆ ಬಂದ ಮೇಲೆ ತನ್ನ ಕಷ್ಟದ ಕಥೆಗಳನ್ನು ಹೇಳಲು ಆರಂಭಿಸುತ್ತಿದ್ದಳು. 'ನನ್ನ ಚಿನ್ನದ ಆಭರಣಗಳನ್ನು ಅಡವಿಟ್ಟಿದ್ದೇನೆ, ಅದನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣದ ಅಗತ್ಯವಿದೆ. ಕೇವಲ ಎರಡರಿಂದ ಮೂರು ದಿನಗಳಲ್ಲಿ ಸಾಲದ ಹಣವನ್ನು ವಾಪಸ್ ಕೊಡುತ್ತೇನೆ' ಎಂದು ನಂಬಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು.&lt;/p&gt;&lt;h2&gt;&lt;strong&gt;ಕ್ಯಾಮೆರಾ ಇಲ್ಲದ ಜಾಗದಲ್ಲೇ ಡೀಲಿಂಗ್, ಆಮೇಲೆ ನೋ ರೆಸ್ಪಾನ್ಸ್!&lt;/strong&gt;&lt;/h2&gt;&lt;p&gt;ಈ ಕಿಲಾಡಿ ನಟಿಯ ಅಸಲಿ ಆಟ ಶುರುವಾಗುತ್ತಿದ್ದುದೇ ಹಣ ಪಡೆಯುವಾಗ! ಸಿಸಿಟಿವಿ (CCTV) ಕ್ಯಾಮೆರಾಗಳು ಇಲ್ಲದ ಡಿಜಿಟಲ್ ಪುರಾವೆ ಸಿಗದಂತಹ ರಹಸ್ಯ ಜಾಗಗಳನ್ನು ಹುಡುಕಿ, ಅಲ್ಲಿಗೆ ದೂರುದಾರರನ್ನು ಕರೆಸಿಕೊಂಡು ಕೈಯಾರೆ ನಗದು ಹಣವನ್ನು ಪಡೆದು ಎಸ್ಕೇಪ್ ಆಗುತ್ತಿದ್ದಳು. ಒಮ್ಮೆ ಹಣ ಕೈ ಸೇರಿದ ಮೇಲೆ ನಟಿಯ ಅಸಲಿ ಮುಖ ಬಯಲಾಗುತ್ತಿತ್ತು. ಹಣ ನೀಡಿದವರು ವಾಪಸ್ ಕೇಳಲು ಕರೆ ಮಾಡಿದರೆ ಯಾವುದೇ ರೆಸ್ಪಾನ್ಸ್ ನೀಡುತ್ತಿರಲಿಲ್ಲ, ಮೆಸೇಜ್ ಮಾಡಿದರೆ ರಿಪ್ಲೈ ಕೂಡ ಮಾಡುತ್ತಿರಲಿಲ್ಲ.&lt;/p&gt;&lt;h2&gt;&lt;strong&gt;ಮೂರು ಠಾಣೆಗಳಲ್ಲಿ ದೂರು; ಕೊನೆಗೂ ಪೊಲೀಸ್ ಅತಿಥಿ!&lt;/strong&gt;&lt;/h2&gt;&lt;p&gt;ಇದೇ ರೀತಿ ಈ ನಟಿಯನ್ನು ನಂಬಿ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಯುವಕನೊಬ್ಬ ಬರೋಬ್ಬರಿ 1 ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೊಳಗಾಗಿದ್ದಾನೆ. ತನಗೆ ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಆತ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ನಟಿ ವನಿತಾ ವಿರುದ್ಧ ದೂರು ದಾಖಲಿಸಿದ್ದಾನೆ.&lt;/p&gt;&lt;p&gt;ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಈಕೆಯ ವಿರುದ್ಧ ಕೇವಲ ಒಂದು ದೂರು ಮಾತ್ರವಲ್ಲ, ನಗರದ ಗೋವಿಂದರಾಜನಗರ ಮತ್ತು ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲಿಯೂ ಇದೇ ಮಾದರಿಯ ವಂಚನೆಯ ದೂರುಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕಿರುತೆರೆ ನಟಿ ವನಿತಾಳನ್ನು ಬಂಧಿಸಿದ್ದು, ಈಕೆ ಇನ್ನೂ ಎಷ್ಟು ಜನರಿಗೆ ಸೋಷಿಯಲ್ ಮೀಡಿಯಾ ಮೂಲಕ ಗಾಳ ಹಾಕಿ ವಂಚಿಸಿದ್ದಾಳೆ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/kannada-tv-actress-vanitha-arrested-bengaluru-social-media-cheating-case-san/articleshow-4iydg78"/>
        </item>
        <item>
            <title><![CDATA[ನನ್ನದು ಒಂದೇ ಒಂದು ಆಸೆ...... ಭಾವನಾತ್ಮಕ ಪತ್ರ ಬರೆದು ತುಮಕೂರಿನಲ್ಲಿ ದಾವಣಗೆರೆ ಮೂಲದ ವಿದ್ಯಾರ್ಥಿ ಸಾವು!]]></title>
            <link>https://kannada.asianetnews.com/karnataka-districts/karnataka-news-tumakuru-shocker-sit-engineering-student-from-davanagere-self-death-in-hostel-gdp/articleshow-lfgrgq8</link>
            <guid isPermaLink="true">https://kannada.asianetnews.com/karnataka-districts/karnataka-news-tumakuru-shocker-sit-engineering-student-from-davanagere-self-death-in-hostel-gdp/articleshow-lfgrgq8</guid>
            <pubDate>Mon, 22 Jun 2026 16:28:49 +0530</pubDate>
            <description><![CDATA[ತುಮಕೂರಿನ ಎಸ್&zwnj;ಐಟಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ವೆಂಕಟೇಶ್, ಬಿಸಿಎಂ ಹಾಸ್ಟೆಲ್&zwnj;ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್&zwnj;ನಲ್ಲಿ, ತನ್ನ ಕುಟುಂಬದ ಐದು ಮಂದಿ ಸದಾ ಒಟ್ಟಾಗಿರಬೇಕೆಂಬ ಕೊನೆಯಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುಟುಂಬ ಕಲಹದ ಶಂಕೆಯನ್ನು ಹುಟ್ಟುಹಾಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqf7vp6ncxxcexkq6806njw,imgname-davanagere-1782125424326.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ವಿದ್ಯಾ ನಗರಿ ತುಮಕೂರಿನಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ನಗರದ ಪ್ರಸಿದ್ಧ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹಿಂದುಳಿದ ವರ್ಗಗಳ (BCM) ವಸತಿ ನಿಲಯದಲ್ಲಿ ಸಾವಿಗೆ ಶರಣಾಗಿದ್ದಾನೆ. ಅದಕ್ಕೂ ಮುನ್ನ ಆತ ಪೋಷಕರಿಗೆ ಬರೆದಿಟ್ಟಿರುವ ಡೆತ್ ನೋಟ್ ಮಾತ್ರ ಎಂತವರನ್ನೂ ಕಣೀರಲ್ಲಿ ಮುಳುಗುವಂತೆ ಮಾಡಬಹುದು.&lt;/p&gt;&lt;h2&gt;ಕೊಠಡಿಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣು&lt;/h2&gt;&lt;p&gt;ಮೃತರನ್ನು ಮೂಲತಃ ದಾವಣಗೆರೆ ಜಿಲ್ಲೆಯ ದೊಣ್ಣೆಹಳ್ಳಿ ಗ್ರಾಮದ ಜಿ. ಇ ವೆಂಕಟೇಶ್ (25) ಎಂದು ಗುರುತಿಸಲಾಗಿದೆ. ವೆಂಕಟೇಶ್ ತುಮಕೂರು ನಗರದ ಪ್ರಖ್ಯಾತ ಎಸ್&zwnj;ಐಟಿ (SIT) ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ನಗರದ ಉಪ್ಪಾರಹಳ್ಳಿಯಲ್ಲಿರುವ ಬಿಸಿಎಂ (BCM) ಹಾಸ್ಟೆಲ್&zwnj;ನಲ್ಲಿ ಉಳಿದುಕೊಂಡಿದ್ದ ಅವರು, ಕೊಠಡಿಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ನೇಣು ಬಿಗಿದುಕೊಂಡಿದ್ದಾನೆ. ಇಂದು (ಸೋಮವಾರ) ಬೆಳಿಗ್ಗೆ ಸಹಪಾಠಿಗಳು ಕೊಠಡಿಗೆ ಬಂದು ನೋಡಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h2&gt;ನೀವು ಐದು ಜನ ಒಟ್ಟಿಗೆ ಇರಬೇಕು, ಮನ ಕಲಕುವ ಕೊನೆಯ ಆಸೆ!&lt;/h2&gt;&lt;p&gt;ವಿದ್ಯಾರ್ಥಿ ವೆಂಕಟೇಶ್ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ಸಾವಿಗೂ ಮುನ್ನ ಅವರು ತಮ್ಮ ಹೆತ್ತ ಪೋಷಕರು ಹಾಗೂ ಕುಟುಂಬಸ್ಥರನ್ನು ಉದ್ದೇಶಿಸಿ ಭಾವನಾತ್ಮಕ ಡೆತ್ ನೋಟ್ (Death Note) ಒಂದನ್ನು ಬರೆದಿಟ್ಟಿದ್ದಾರೆ.&lt;/p&gt;&lt;h2&gt;ಡೆತ್ ನೋಟ್&zwnj;ನಲ್ಲಿ ಏನಿದೆ?&lt;/h2&gt;&lt;p&gt;ನನ್ನದು ಒಂದೇ ಒಂದು ಆಸೆ. ನೀವು ಐದು ಜನ ಯಾವಾಗಲೂ ಒಟ್ಟಿಗೆ ಇರಬೇಕೆಂಬುದೇ ನನ್ನ ಕೊನೆಯ ಆಸೆ. ಒಬ್ಬರನ್ನೊಬ್ಬರು ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡಿ, ಯಾರೂ ಬೇರೆಯಾಗಬೇಡಿ. ಸದಾ ಹೀಗೆಯೇ ಒಗ್ಗಟ್ಟಿನಿಂದ ಇರಬೇಕು ಎನ್ನುವುದೇ ನನ್ನ ಕೊನೆಯ ಹಾರೈಕೆ... ಇಂತಿ ನಿಮ್ಮ ಪ್ರೀತಿಯ ಮಗ.&lt;/p&gt;&lt;p&gt;&mdash; ಮೃತ ವಿದ್ಯಾರ್ಥಿ ವೆಂಕಟೇಶ್ ಬರೆದಿರುವ ನೋಟ್&lt;/p&gt;&lt;p&gt;ಕುಟುಂಬದಲ್ಲಿ ಎಲ್ಲರೂ ಒಟ್ಟಾಗಿ ಇರಬೇಕೆಂದು ಮಗ ಕೊನೆಯದಾಗಿ ಕೇಳಿಕೊಂಡಿರುವ ಈ ಮಾತುಗಳು ಇಡೀ ಕುಟುಂಬವನ್ನು ಕಣ್ಣೀರಿನ ಕಡಲಲ್ಲಿ ಮುಳುಗಿಸಿದೆ. ಕುಟುಂಬದ ಆಂತರಿಕ ಕಲಹ ಅಥವಾ ಮತ್ಯಾವುದೋ ಗೊಂದಲಗಳು ವಿದ್ಯಾರ್ಥಿಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದ್ದವೇ ಎಂಬ ಅನುಮಾನಗಳು ಈ ಡೆತ್ ನೋಟ್&zwnj;ನಿಂದ ಮೂಡುತ್ತಿವೆ.&lt;/p&gt;&lt;h2&gt;ಸ್ಥಳಕ್ಕೆ ಜಯನಗರ ಪೊಲೀಸರ ಭೇಟಿ&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಿಗುತ್ತಿದ್ದಂತೆಯೇ ತುಮಕೂರಿನ ಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ದಾವಣಗೆರೆಯಲ್ಲಿರುವ ಮೃತನ ಪೋಷಕರಿಗೆ ಅಧಿಕೃತ ಮಾಹಿತಿ ನೀಡಿದ್ದು, ಕಣ್ಣೀರು ಹಾಕುತ್ತಲೇ ಪೋಷಕರು ತುಮಕೂರಿನತ್ತ ಧಾವಿಸುತ್ತಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯ ಸಾವಿನ ಹಿಂದಿರುವ ನೈಜ ಕಾರಣವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-news-tumakuru-shocker-sit-engineering-student-from-davanagere-self-death-in-hostel-gdp/articleshow-lfgrgq8"/>
        </item>
        <item>
            <title><![CDATA[ಶಿಶುಗಳಿಗೆ ಟ್ಯಾಗ್​ ಹಾಕಿ ಮಾರಾಟ: ಬೆಚ್ಚಿ ಬೀಳಿಸೋ 'ಬೇಬಿ ಬಜಾರ್'​ ಮಾರುಕಟ್ಟೆ ಬಯಲಿಗೆ- ಗಂಡಿಗೆ 8, ಹೆಣ್ಣಿಗೆ 4 ಲಕ್ಷ]]></title>
            <link>https://kannada.asianetnews.com/crime/delhis-dark-baby-bazaar-baby-boys-sold-for-rs-8-lakh-girls-half-the-price-suc/articleshow-pfpns3s</link>
            <guid isPermaLink="true">https://kannada.asianetnews.com/crime/delhis-dark-baby-bazaar-baby-boys-sold-for-rs-8-lakh-girls-half-the-price-suc/articleshow-pfpns3s</guid>
            <pubDate>Mon, 22 Jun 2026 15:38:42 +0530</pubDate>
            <description><![CDATA[ದೆಹಲಿಯಲ್ಲಿ ಅಕ್ರಮವಾಗಿ ಮಕ್ಕಳನ್ನು ಮಾರಾಟ ಮಾಡುವ 'ಬೇಬಿ ಬಜಾರ್' ಎಂಬ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಇಲ್ಲಿ ಸ್ವಂತ ಮಕ್ಕಳನ್ನು ಹಾಗೂ ಕದ್ದ ತಂದ ಶಿಶುಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಪೊಲೀಸ್ ಕಾರ್ಯಾಚರಣೆಯ ಮೂಲಕ ಈ ಬಹು-ರಾಜ್ಯ ದಂಧೆಯನ್ನು ಭೇದಿಸಿ, ಹಲವರನ್ನು ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqcsz7rccavdqrfr052jynd,imgname-baby-bazaar-1782122872056.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾವು ನೋಡುತ್ತಿರುವ ಪ್ರಪಂಚವೇ ಬೇರೆ. ಒಳಗಡೆ ನಡೆಯುತ್ತಿರುವ ಪ್ರಪಂಚವೇ ಬೇರೆ ಎನ್ನುವುದು ಎಷ್ಟೋ ಬಾರಿ ಸಾಬೀತಾಗುತ್ತಲೇ ಇರುತ್ತದೆ. ಅದರಲ್ಲಿಯೂ ಅಕ್ರಮ ದಂಧೆಯ ಕರಾಳ ಪ್ರಪಂಚವನ್ನು ಅಗೆದು ಬಗೆದಷ್ಟೂ ವಿಚಿತ್ರವೇ ಆಗಿರುತ್ತದೆ. ಅಂಥವುಗಳಲ್ಲಿ ಒಂದು ಬೇಬಿ ಬಜಾರ್​. ಸಾಮಾನ್ಯವಾಗಿ ಈ ಹೆಸರು ಕೇಳಿದರೆ, ಚಿಕ್ಕ ಮಕ್ಕಳಿಗಾಗಿ ಇರುವ ಮಾರುಕಟ್ಟೆ ಎನ್ನಿಸಬಹುದು. ಬಟ್ಟೆ, ಆಟಿಕೆ ಇನ್ನು ಏನೇನೋ ಸಿಗುವ ಮಾರುಕಟ್ಟೆ ಎನ್ನಿಸುವುದು ಉಂಟು. ಆದರೆ ಈ ಮಾರುಕಟ್ಟೆ ಅಂಥದ್ದಲ್ಲ. ಇದು ಬೆಚ್ಚಿಬೀಳುವ ಸ್ಟೋರಿ. ಏಕೆಂದರೆ ಇದು ಮಕ್ಕಳನ್ನು ಮಾರಾಟ ಮಾಡುವ ಮಾರುಕಟ್ಟೆ. ಅದೂ ಸ್ವಂತ ಮಕ್ಕಳನ್ನೇ ಮಾರುವ ಮಾರುಕಟ್ಟೆಯೂ ಹೌದು!&lt;/p&gt;&lt;p&gt;ದೆಹಲಿಯಲ್ಲಿ ಇರುವ ಈ ಮಾರುಕಟ್ಟೆ ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಇದೀಗ ಅದು ಬಯಲಿಗೆ ಬಂದಿದೆ. ಇಲ್ಲಿ ಹಣದ ಆಸೆಗೆ ಸ್ವಂತ ಮಕ್ಕಳನ್ನೇ ಮಾರಾಟ ಮಾಡುವ ಜಾಲವಾಗಿದೆ. ಕೆಲವೊಂದು ಮಕ್ಕಳನ್ನು ಬೇರೆ ಕಡೆಗಳಿಂದ ಕದ್ದು ತಂದಿದ್ದರೆ, ಮತ್ತೆ ಹಲವರು ಮಕ್ಕಳು ಹೆರವುದನ್ನೇ ದಂಧೆ ಮಾಡಿಕೊಂಡಿದ್ದು, ಅದನ್ನು ಇಲ್ಲಿ ಮಾರಾಟ ಮಾಡುತ್ತಾರೆ. ಗಂಡು ಮಕ್ಕಳನ್ನು 8 ಲಕ್ಷಕ್ಕೆ, ಹೆಣ್ಣು ಮಕ್ಕಳನ್ನು ನಾಲ್ಕು ಲಕ್ಷಕ್ಕೆ ಮಾರಾಟ ಮಾಡುತ್ತಾರೆ.&lt;/p&gt;&lt;h2&gt;&lt;strong&gt;ಮಕ್ಕಳಿಲ್ಲದವರಿಗೆ ಮಾರಾಟ&lt;/strong&gt;&lt;/h2&gt;&lt;p&gt;ಎಷ್ಟೋ ಜನರು ಮಕ್ಕಳಿಲ್ಲದೇ ಕೊರಗುವುದು ಇದೆ. ಆದರೆ, ಕಾನೂನುಬದ್ಧವಾಗಿ ಮಕ್ಕಳನ್ನು ಪಡೆಯುವುದಕ್ಕೆ ವರ್ಷಗಟ್ಟಲೆ ಹೋಗುತ್ತದೆ. ಅಂಥವರು ಇಲ್ಲಿ ಮಕ್ಕಳನ್ನು ಖರೀದಿ ಮಾಡುವುದು ಇದ್ದರೆ, ಹೆಣ್ಣು ಮಕ್ಕಳನ್ನು ಬೇರೆಯ ಉದ್ದೇಶಕ್ಕೇ ಖರೀದಿ ಮಾಡುವ ಆತಂಕಕಾರಿ ಘಟನೆಯೂ ಇಲ್ಲಿ ನಡೆಯುತ್ತದೆ. ಈಚೆಗೆ ನಡೆದ ಘಟನೆಯೊಂದರಿಂದ ಇದು ಬೆಳಕಿಗೆ ಬಂದಿದೆ. ರಾಜಸ್ಥಾನದಲ್ಲಿ ಜನಿಸಿದ ಮಗುವನ್ನು ದೆಹಲಿಗೆ ಕಳ್ಳಸಾಗಣೆ ಮಾಡಿ ಹರಿಯಾಣದ ಇನ್ನೊಂದು ದಂಪತಿಗೆ ಕೆಲವು ಲಕ್ಷಗಳಿಗೆ ಮಾರಾಟ ಮಾಡುವುದನ್ನು ಕಲ್ಪಿಸಿಕೊಳ್ಳಿ. ಅಂಥದ್ದೊಂದು ಘಟನೆ ನಡೆದ ಹಿನ್ನೆಲೆಯಲ್ಲಿ, ಇದೀಗ ಬೇಬಿ ಬಜಾರ್​ನ ಕರಾಳ ಮಾರುಕಟ್ಟೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ಇಷ್ಟು ವರ್ಷಗಳವರೆಗೆ ತಣ್ಣಗೆ ನಡೆದುಕೊಂಡು ಹೋಗುತ್ತಿದ್ದ ಈ ದಂಧೆಯನ್ನು ಪೊಲೀಸರು ಈಗ ಪತ್ತೆ ಹಚ್ಚಿದ್ದಾರೆ. ಮಕ್ಕಳಿಲ್ಲದ ದಂಪತಿಗಳಿಗೆ ಕೆಲವು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ ಕಳ್ಳಸಾಗಣೆದಾರರ ಗುಂಪನ್ನು ಪತ್ತೆಹಚ್ಚಿದ್ದಾರೆ. ಮಕ್ಕಳು ಇಲ್ಲದವರು ಪಡೆದುಕೊಳ್ಳುವುದು ಒಂದೆಡೆಯಾದರೆ, ಹೆಣ್ಣು ಮಕ್ಕಳನ್ನು ಖರೀದಿ ಮಾಡುವವರು ಅವರನ್ನು ಬೇರೆಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದೂ ಪತ್ತೆಯಾಗಿದೆ. ಶಿಶುಗಳ ಬೆಲೆ ಟ್ಯಾಗ್ ಹಾಕಿ ಮಾರಾಟ ಮಾಡುತ್ತಿರುವುದು ಕಂಡು ಪೊಲೀಸರು ದಂಗಾಗಿ ಹೋಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ದರೋಡೆಕೋರರನ್ನು ಹೇಗೆ ಬಂಧಿಸಲಾಯಿತು&lt;/strong&gt;&lt;/h3&gt;&lt;p&gt;ಮಧ್ಯ ದೆಹಲಿಯ ಪಹರ್&zwnj;ಗಂಜ್ ನಿವಾಸಿಯೊಬ್ಬರು ನೀಡಿದ ಸುಳಿವು, ಆ ಪ್ರದೇಶದಲ್ಲಿ ನಿಯಮಿತವಾಗಿ ವಿಭಿನ್ನ ಶಿಶುಗಳೊಂದಿಗೆ ಕಾಣಿಸಿಕೊಂಡ ಮಹಿಳೆಯ ಬಗ್ಗೆ ದೆಹಲಿಯ ಪೊಲೀಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪೊಲೀಸರು ಆ ಪ್ರದೇಶದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದರು ಮತ್ತು ಮಾನವ ಗುಪ್ತಚರವನ್ನು ಸಕ್ರಿಯಗೊಳಿಸಿದರು. ದಿನಗಟ್ಟಲೆ ಬೆನ್ನಟ್ಟಿದ ನಂತರ, ಪೊಲೀಸರು ಆ ಮಹಿಳೆಯನ್ನು ಪತ್ತೆ ಹಚ್ಚಿ, ಪ್ರಕರಣ ಭೇದಿಸಲು ಶುರು ಮಾಡಿದರು. ಪೊಲೀಸ್ ಗುಪ್ತಚರ ಮಾಹಿತಿಯಿಂದ ಜ್ಯೋತಿ ಅಲಿಯಾಸ್ ಕಮಲೇಶ್ ಎಂಬ ಮಹಿಳೆ ಮಕ್ಕಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾಳೆಂದು ಸ್ಪಷ್ಟವಾಯಿತು.&lt;/p&gt;&lt;h3&gt;&lt;strong&gt;ವಂಚನೆ ಒಪ್ಪಂದ&lt;/strong&gt;&lt;/h3&gt;&lt;p&gt;ಒಪ್ಪಂದದ ನೆಪದಲ್ಲಿ ಪೊಲೀಸರು ಕಮಲೇಶ್ ಜೊತೆ ಸಂಪರ್ಕ ಸಾಧಿಸಿದರು. ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಮಗುವನ್ನು ಖರೀದಿಸಲು ಹುಡುಕುತ್ತಿರುವ ವಂಚನೆ ಗ್ರಾಹಕನಂತೆ ನಟಿಸಿದರು. ಸಭೆಯನ್ನು ನಿಗದಿಪಡಿಸಲಾಯಿತು ಮತ್ತು ಮಗುವಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. 20,000 ರೂ.ಗಳ ಟೋಕನ್ ಮೊತ್ತವನ್ನು ಒಪ್ಪಿಕೊಳ್ಳಲಾಯಿತು. ಕಮಲೇಶ್ ಪೊಲೀಸ್ ವಂಚನೆಗೆ ಮಗುವನ್ನು ತಲುಪಿಸಿದರು, ಮತ್ತು ಜೂನ್ 5 ರಂದು ಸ್ಥಳದಲ್ಲೇ ಬಂಧಿಸಲಾಯಿತು. ಆಕೆಯ ವಿಚಾರಣೆಯು ಪೊಲೀಸರನ್ನು ದಿಗ್ಭ್ರಮೆಗೊಳಿಸಿತು ಮತ್ತು ತನಿಖೆಗೆ ಅವಕಾಶ ಮಾಡಿಕೊಟ್ಟಿತು, ಇದು ರಾಜಸ್ಥಾನ ಮತ್ತು ಗುಜರಾತ್&zwnj;ನ ಬಡ ದಂಪತಿಗಳಿಂದ ಶಿಶುಗಳನ್ನು ಖರೀದಿಸಿ/ಕದ್ದೊಯ್ದು ಮಧ್ಯಪ್ರದೇಶ ಮತ್ತು ಹರಿಯಾಣದಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡಲಾಗುತ್ತಿದ್ದ ಬಹು-ರಾಜ್ಯ ದಂಧೆಯನ್ನು ಬಯಲು ಮಾಡಿತು.&lt;/p&gt;&lt;p&gt;ಕಮಲೇಶ್&zwnj;ನ ನಿರಂತರ ವಿಚಾರಣೆಯ ನಂತರ ಪೊಲೀಸರು ಆಕೆಯ ಇಬ್ಬರು ಸಹಚರರಾದ ಶಾಲು ಮತ್ತು ಲಲಿತ್ ಅವರನ್ನು ಪತ್ತೆಹಚ್ಚಿದರು, ಮತ್ತು ನಂತರ ಶಿಶುಗಳ ಖರೀದಿ ಮತ್ತು ಮಾರಾಟಕ್ಕಾಗಿ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ಭಾಗಿಯಾಗಿದ್ದ ಪ್ರತಿಭಾ ಮತ್ತು ವಿಪಿನ್&zwnj;ರನ್ನು ಪತ್ತೆಹಚ್ಚಿದರು. ಪ್ರತಿಭಾ ಮತ್ತು ವಿಪಿನ್ ಮಾರುಕಟ್ಟೆಯಲ್ಲಿ ಇಡಲು ಶಿಶುಗಳನ್ನು ಖರೀದಿಸಿದ ವ್ಯಕ್ತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಗ ಸಿಕ್ಕಿಬಿದ್ದರು. ಪ್ರತಿಭಾ ಮತ್ತು ವಿಪಿನ್ ಅವರ ಬಳಿ ಪೊಲೀಸರು ಸುಮಾರು 3 ಲಕ್ಷ ರೂಪಾಯಿಗಳನ್ನು ಪತ್ತೆಹಚ್ಚಿದರು. ಎರಡು ವಾರಗಳ ನಂತರ ನಿರಂತರ ವಿಚಾರಣೆಯ ನಂತರ, ಪೊಲೀಸರು ಒಂದು ತಿಂಗಳೊಳಗಿನ 5 ಶಿಶುಗಳನ್ನು ವಶಪಡಿಸಿಕೊಂಡರು.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/delhis-dark-baby-bazaar-baby-boys-sold-for-rs-8-lakh-girls-half-the-price-suc/articleshow-pfpns3s"/>
        </item>
        <item>
            <title><![CDATA[PNG vs LPG: ಭಾರತದಂತೆ ಅಮೆರಿಕದಲ್ಲಿ ಜನ ಗ್ಯಾಸ್ ಸಿಲಿಂಡರ್ ಬಳಸಲ್ಲ! ಅಡುಗೆಗೆ ಏನ್‌ ಮಾಡ್ತಾರೆ?]]></title>
            <link>https://kannada.asianetnews.com/gallery/world-news/how-americans-get-cooking-gas-without-cylinders-why-oh8x91p</link>
            <guid isPermaLink="true">https://kannada.asianetnews.com/gallery/world-news/how-americans-get-cooking-gas-without-cylinders-why-oh8x91p</guid>
            <pubDate>Mon, 22 Jun 2026 15:47:42 +0530</pubDate>
            <description><![CDATA[&lt;p&gt;Cooking gas in USA: ಭಾರತದಲ್ಲಿರುವಂತೆ ಅಮೆರಿಕದ ಜನರು ಗ್ಯಾಸ್ ಸಿಲಿಂಡರ್&zwnj;ಗಳನ್ನು ಖರೀದಿಸುವುದಿಲ್ಲ. ಹಾಗಾದರೆ ಅವರಿಗೆ ಅಡುಗೆ ಅನಿಲ ಹೇಗೆ ಸಿಗುತ್ತದೆ ಗೊತ್ತಾ? ಈ ಕುತೂಹಲಕಾರಿ ವಿಷಯದ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krbgzsbe3bz7nb38b1637ez5,imgname-piped-natural-gas-1778503378286.jpg" type="image/jpeg" height="390" width="690"/>
            <content:encoded><![CDATA[&lt;p&gt;Cooking gas in USA: ಭಾರತದಲ್ಲಿರುವಂತೆ ಅಮೆರಿಕದ ಜನರು ಗ್ಯಾಸ್ ಸಿಲಿಂಡರ್&zwnj;ಗಳನ್ನು ಖರೀದಿಸುವುದಿಲ್ಲ. ಹಾಗಾದರೆ ಅವರಿಗೆ ಅಡುಗೆ ಅನಿಲ ಹೇಗೆ ಸಿಗುತ್ತದೆ ಗೊತ್ತಾ? ಈ ಕುತೂಹಲಕಾರಿ ವಿಷಯದ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.&lt;/p&gt;&lt;img&gt;&lt;p&gt;ವಿಶ್ವದ ಹಲವೆಡೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಭಾರತದಲ್ಲಿ ಗ್ಯಾಸ್ ಕೊರತೆ ಉಂಟಾಗಿದೆ. ಜನರು ಖಾಲಿ ಸಿಲಿಂಡರ್&zwnj;ಗಳನ್ನು ಹೊತ್ತು ಗ್ಯಾಸ್ ಏಜೆನ್ಸಿಗಳತ್ತ ಓಡುತ್ತಾರೆ. ಆದರೆ ಅಮೆರಿಕದಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿನ ಮನೆಗಳಿಗೆ ಅಡುಗೆ ಅನಿಲವು ವಿಭಿನ್ನ ಮತ್ತು ಸರಳ ರೀತಿಯಲ್ಲಿ ಪೂರೈಕೆಯಾಗುತ್ತದೆ. ಅಮೆರಿಕದಲ್ಲಿ ಅಡುಗೆ ಅನಿಲವನ್ನು ಹೇಗೆ ವಿತರಿಸಲಾಗುತ್ತದೆ ಎಂಬುದನ್ನು ಇಲ್ಲಿ ನೋಡೋಣ.&lt;/p&gt;&lt;img&gt;ಅಮೆರಿಕದ ನಗರಗಳಲ್ಲಿನ ಶೇ. 90ಕ್ಕಿಂತ ಹೆಚ್ಚು ಮನೆಗಳಿಗೆ ಪೈಪ್&zwnj;ಲೈನ್&zwnj;ಗಳ ಮೂಲಕ ನೇರವಾಗಿ ನೈಸರ್ಗಿಕ ಅನಿಲವನ್ನು ಪೂರೈಸಲಾಗುತ್ತದೆ. ನಮ್ಮಲ್ಲಿ ನೀರಿನ ಪೈಪ್&zwnj;ಗಳಂತೆ, ಅಲ್ಲಿ ರಸ್ತೆಗಳ ಕೆಳಗೆ ಗ್ಯಾಸ್ ಸಾಗಿಸುವ ಮುಖ್ಯ ಪೈಪ್&zwnj;ಗಳನ್ನು ಅಳವಡಿಸಿರುತ್ತಾರೆ. ಅಲ್ಲಿಂದ ಪ್ರತಿ ಮನೆಗೆ ಪ್ರತ್ಯೇಕ ಸಂಪರ್ಕ ನೀಡಿ, ನೇರವಾಗಿ ಅಡುಗೆಮನೆಯ ಸ್ಟೌವ್&zwnj;ಗೆ ಜೋಡಿಸಲಾಗಿರುತ್ತದೆ. ಮನೆಯ ಹೊರಗೆ ಅಳವಡಿಸಿರುವ ಮೀಟರ್, ನೀವು ಬಳಸಿದ ಗ್ಯಾಸ್ ಪ್ರಮಾಣವನ್ನು ನಿಖರವಾಗಿ ಅಳೆಯುತ್ತದೆ. ತಿಂಗಳ ಕೊನೆಯಲ್ಲಿ ವಿದ್ಯುತ್ ಬಿಲ್&zwnj;ನಂತೆ ಆನ್&zwnj;ಲೈನ್&zwnj;ನಲ್ಲಿ ಹಣ ಪಾವತಿಸಿದರೆ ಸಾಕು. ಗ್ಯಾಸ್ ಖಾಲಿಯಾಗುವ ಚಿಂತೆಯೇ ಅಮೆರಿಕದ ಜನರಿಗೆ ಇರುವುದಿಲ್ಲ.&lt;img&gt;ನಗರಗಳನ್ನು ಹೊರತುಪಡಿಸಿ, ಪೈಪ್&zwnj;ಲೈನ್ ಸಂಪರ್ಕವಿಲ್ಲದ ಹಳ್ಳಿಗಳು ಅಥವಾ ಫಾರ್ಮ್&zwnj;ಹೌಸ್&zwnj;ಗಳಲ್ಲಿ ನಮ್ಮಲ್ಲಿ ಸಿಗುವಂತೆ ಎಲ್&zwnj;ಪಿಜಿ ಸಿಲಿಂಡರ್&zwnj;ಗಳು ಲಭ್ಯ. ಆದರೆ, ಅವರು ಸಣ್ಣ ಸಿಲಿಂಡರ್&zwnj;ಗಳನ್ನು ಬಳಸುವುದಿಲ್ಲ. ಬದಲಿಗೆ, ಮನೆಯ ಹಿತ್ತಲಿನಲ್ಲಿ ಅಥವಾ ತೋಟದಲ್ಲಿ 100 ರಿಂದ 500 ಗ್ಯಾಲನ್ (ಸುಮಾರು 400 ರಿಂದ 2000 ಲೀಟರ್) ಸಾಮರ್ಥ್ಯದ ದೊಡ್ಡ ಗ್ಯಾಸ್ ಟ್ಯಾಂಕ್ ಇರುತ್ತದೆ. ಖಾಸಗಿ ಗ್ಯಾಸ್ ಕಂಪನಿಗಳು ಕೆಲವು ತಿಂಗಳಿಗೊಮ್ಮೆ ದೊಡ್ಡ ಲಾರಿಗಳಲ್ಲಿ ಬಂದು ಈ ಟ್ಯಾಂಕ್&zwnj;ಗಳನ್ನು ತುಂಬಿಸಿ ಹೋಗುತ್ತಾರೆ. ಹಲವು ಮನೆಗಳಲ್ಲಿರುವ ಸ್ಮಾರ್ಟ್ ಮೀಟರ್, ಗ್ಯಾಸ್ ಕಡಿಮೆಯಾದಾಗ ತಾನಾಗಿಯೇ ಕಂಪನಿಗೆ ಮಾಹಿತಿ ನೀಡುತ್ತದೆ.&lt;img&gt;&lt;p&gt;ಅಮೆರಿಕದ ಅನೇಕ ಮನೆಗಳಲ್ಲಿ ಗ್ಯಾಸ್&zwnj;ಗೆ ಬದಲಾಗಿ ಎಲೆಕ್ಟ್ರಿಕ್ ಸ್ಟೌವ್&zwnj;ಗಳನ್ನೇ ಬಳಸಿ ಅಡುಗೆ ಮಾಡುತ್ತಾರೆ. ವಿಶೇಷವಾಗಿ ಅಪಾರ್ಟ್&zwnj;ಮೆಂಟ್&zwnj;ಗಳಲ್ಲಿ ಸುರಕ್ಷತೆ ಮತ್ತು ಪರಿಸರ ನಿಯಮಗಳ ಕಾರಣ, ಗ್ಯಾಸ್ ಸಂಪರ್ಕದ ಬದಲು ಸಂಪೂರ್ಣವಾಗಿ ಇಂಡಕ್ಷನ್ ಸ್ಟೌವ್&zwnj;ಗಳನ್ನೇ ಬಳಸಲಾಗುತ್ತದೆ.&amp;nbsp;&lt;/p&gt;&lt;p&gt;ಅಮೆರಿಕನ್ನರು ಬಾರ್ಬೆಕ್ಯೂ ಗ್ರಿಲ್ ಚಿಕನ್ ಮಾಡಲು ಮತ್ತು ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಡಲು ಬಳಸುವ ಔಟ್&zwnj;ಡೋರ್ ಹೀಟರ್&zwnj;ಗಳಿಗಾಗಿ ಸಣ್ಣ ಪ್ರೊಪೇನ್ ಸಿಲಿಂಡರ್&zwnj;ಗಳನ್ನು ಬಳಸುತ್ತಾರೆ. ಇವು ಖಾಲಿಯಾದಾಗ, ಹತ್ತಿರದ ಸೂಪರ್&zwnj;ಮಾರ್ಕೆಟ್ ಅಥವಾ ಪೆಟ್ರೋಲ್ ಬಂಕ್&zwnj;ಗಳಲ್ಲಿ ಕೊಟ್ಟು ಹೊಸ ಸಿಲಿಂಡರ್&zwnj;ಗಳನ್ನು ಖರೀದಿಸುತ್ತಾರೆ.&lt;/p&gt;&lt;img&gt;&lt;p&gt;ಅತ್ಯುತ್ತಮ ಮೂಲಸೌಕರ್ಯ ಮತ್ತು ಸುಧಾರಿತ ತಂತ್ರಜ್ಞಾನದಿಂದಾಗಿ ಅಮೆರಿಕದ ಜನರು ಸಿಲಿಂಡರ್ ಬುಕ್ ಮಾಡದೆಯೇ 24 ಗಂಟೆಯೂ ಅಡುಗೆ ಅನಿಲವನ್ನು ಪಡೆಯುತ್ತಿದ್ದಾರೆ. ಇದೀಗ ಭಾರತದ ಚೆನ್ನೈ, ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿಯೂ PNG (Piped Natural Gas) ವ್ಯವಸ್ಥೆ ವೇಗವಾಗಿ ಪರಿಚಯಿಸಲಾಗುತ್ತಿದೆ.&amp;nbsp;&lt;/p&gt;&lt;p&gt;ಈ ಪದ್ಧತಿಯಲ್ಲಿ ಭೂಗತ ಪೈಪ್&zwnj;ಲೈನ್&zwnj;ಗಳ ಮೂಲಕ ಮನೆಗಳಿಗೆ ನೈಸರ್ಗಿಕ ಅನಿಲವನ್ನು ಪೂರೈಸಲಾಗುತ್ತದೆ. ಈ ಯೋಜನೆ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ, ಭಾರತೀಯರೂ ಕೂಡ 24 ಗಂಟೆಗಳ ಕಾಲ ಅಡೆತಡೆಯಿಲ್ಲದೆ ಅಡುಗೆ ಅನಿಲವನ್ನು ಪಡೆಯಬಹುದು.&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/world-news/how-americans-get-cooking-gas-without-cylinders-why-oh8x91p"/>
        </item>
        <item>
            <title><![CDATA[ಬೆಂಗಳೂರು ಸಬರ್ಬನ್ ರೈಲಿಗೆ ಯುರೋಪಿಯನ್ ತಂತ್ರಜ್ಞಾನದ ಸ್ಪರ್ಶ; ಮೆಟ್ರೋ ಮಾದರಿ ಕೈಬಿಟ್ಟು ‘ETCS’ ಸಿಗ್ನಲಿಂಗ್‌ಗೆ ಸಜ್ಜಾದ ಕೆ-ರೈಡ್‌]]></title>
            <link>https://kannada.asianetnews.com/bengaluru-urban/bengaluru-suburban-railway-k-ride-to-adopt-etcs-european-signalling-system-san/articleshow-84u1vwp</link>
            <guid isPermaLink="true">https://kannada.asianetnews.com/bengaluru-urban/bengaluru-suburban-railway-k-ride-to-adopt-etcs-european-signalling-system-san/articleshow-84u1vwp</guid>
            <pubDate>Mon, 22 Jun 2026 16:16:24 +0530</pubDate>
            <description><![CDATA[&lt;p&gt;ಬೆಂಗಳೂರಿನ 148 ಕಿ.ಮೀ. ಉಪನಗರ ರೈಲು ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಸಿಬಿಟಿಸಿ ಸಿಗ್ನಲಿಂಗ್ ಬದಲು ಅತ್ಯಾಧುನಿಕ ಯುರೋಪಿಯನ್ ಟ್ರೈನ್ ಕಂಟ್ರೋಲ್ ಸಿಸ್ಟಮ್ (ETCS) ಅಳವಡಿಸಲಾಗುತ್ತಿದೆ. ಭವಿಷ್ಯದಲ್ಲಿ ಹೈ-ಸ್ಪೀಡ್ ಕಾರಿಡಾರ್&zwnj;ಗಳಾಗಿ ವಿಸ್ತರಿಸುವ ದೃಷ್ಟಿಯಿಂದ ಕೆ-ರೈಡ್ ಈ ನಿರ್ಧಾರ ಕೈಗೊಂಡಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqev8r9f1e9m51p1hfvr3dr,imgname-bengaluru-suburban-railway--1782125011721.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.22):&lt;/strong&gt; ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ 148 ಕಿಲೋಮೀಟರ್ ಉದ್ದದ 'ಬೆಂಗಳೂರು ಉಪನಗರ ರೈಲು ಯೋಜನೆ'ಯಲ್ಲಿ (Bengaluru Suburban Rail Project) ಮಹತ್ವದ ತಾಂತ್ರಿಕ ಬದಲಾವಣೆಯಾಗುತ್ತಿದೆ. ಯೋಜನೆಯ ವಿವರವಾದ ಯೋಜನಾ ವರದಿಯಲ್ಲಿ (DPR) ಮೊದಲು ಪ್ರಸ್ತಾಪಿಸಲಾಗಿದ್ದ ಮೆಟ್ರೋ ಮಾದರಿಯ &lsquo;ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್&rsquo; (CBTC) ಸಿಗ್ನಲಿಂಗ್ ವ್ಯವಸ್ಥೆಯ ಬದಲಿಗೆ, ಈಗ ಅತ್ಯಾಧುನಿಕ ಯುರೋಪಿಯನ್ ಟ್ರೈನ್ ಕಂಟ್ರೋಲ್ ಸಿಸ್ಟಮ್ (ETCS) ಅನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಯೋಜನೆಯನ್ನು ಜಾರಿಗೊಳಿಸುತ್ತಿರುವ &lsquo;ಕರ್ನಾಟಕ ರೈಲ್ ಇನ್&zwnj;ಫ್ರಾಸ್ಟ್ರಕ್ಚರ್ ಡೆವಲಪ್&zwnj;ಮೆಂಟ್ ಕಂಪನಿ&rsquo; (K-RIDE), ಭವಿಷ್ಯದಲ್ಲಿ ಉಪನಗರ ರೈಲು ಜಾಲವು ಬೆಂಗಳೂರಿನ ನಗರ ಮಿತಿಗಳನ್ನು ಮೀರಿ ನೆರೆಯ ಜಿಲ್ಲೆಗಳಿಗೆ ವಿಸ್ತರಣೆಯಾಗುವುದನ್ನು ಮತ್ತು ಅತಿ ವೇಗದ ರೈಲು ಕಾರಿಡಾರ್&zwnj;ಗಳ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಈ ಇಟಿಸಿಎಸ್ (ETCS) ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ.&lt;/p&gt;&lt;h2&gt;&lt;strong&gt;ವೇಗ ಮತ್ತು ಇಂಟರ್-ಆಪರೇಬಿಲಿಟಿಗೆ ಯುರೋಪಿಯನ್ ಸಿಸ್ಟಮ್ ಬೆಸ್ಟ್!&lt;/strong&gt;&lt;/h2&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರು, &quot;ನಾವು ಈಗ ಉಪನಗರ ರೈಲಿನ ಎಲ್ಲಾ ನಾಲ್ಕು ಕಾರಿಡಾರ್&zwnj;ಗಳಿಗೂ ಇಟಿಸಿಎಸ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದೇವೆ. ಇದು ಹೆಚ್ಚಿನ ವೇಗದ ರೈಲು ಕಾರಿಡಾರ್&zwnj;ಗಳ ಕಾರ್ಯಾಚರಣೆಗೆ ಅತ್ಯಂತ ಸೂಕ್ತವಾಗಿದೆ. ನೆಟ್&zwnj;ವರ್ಕ್ ದೀರ್ಘಾವಧಿಯ ಹಾಗೂ ಹೈ-ಸ್ಪೀಡ್ ಕಾರಿಡಾರ್&zwnj;ಗಳಾಗಿ ವಿಸ್ತರಣೆಯಾಗುವಾಗ ಸಿಬಿಟಿಸಿ (CBTC) ವ್ಯವಸ್ಥೆ ಅಷ್ಟಾಗಿ ಹೊಂದಿಕೆಯಾಗುವುದಿಲ್ಲ. ಅಲ್ಲದೆ, ಒಂದು ದೊಡ್ಡ ಜಾಲದಲ್ಲಿ ಬಹು ಕಾರಿಡಾರ್&zwnj;ಗಳ ನಡುವೆ ರೈಲುಗಳು ಯಾವುದೇ ತಡೆ ಇಲ್ಲದೆ ಸಂಚರಿಸುವ ಇಂಟರ್-ಆಪರೇಬಿಲಿಟಿ (Interoperability) ಪ್ರಕ್ರಿಯೆಗೂ ಸಿಬಿಟಿಸಿ ಸೂಕ್ತವಲ್ಲ. ಆದರೆ, ನಮ್ಮ ಇಟಿಸಿಎಸ್ ಆಧಾರಿತ ಸಿಗ್ನಲಿಂಗ್ ವ್ಯವಸ್ಥೆಯು ಗಂಟೆಗೆ 200 ರಿಂದ 250 ಕಿಲೋಮೀಟರ್ ವೇಗವನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಈ ಹಿಂದೆ ಡಿಪಿಆರ್&zwnj;ನಲ್ಲಿ ನಮ್ಮ ನಮ್ಮ ನಮ್ಮ ಮೆಟ್ರೋದ ಹಳದಿ ಲೈನ್ ಹಾಗೂ ಮುಂಬರುವ ಪಿಂಕ್ ಮತ್ತು ಬ್ಲೂ ಲೈನ್&zwnj;ಗಳಲ್ಲಿ ಬಳಸಲಾಗುವ ಸಿಬಿಟಿಸಿ ವ್ಯವಸ್ಥೆಯನ್ನೇ ಪ್ರಸ್ತಾಪಿಸಲಾಗಿತ್ತು. ಆದರೆ ಮೆಟ್ರೋ ರೈಲುಗಳು ನಗರದೊಳಗೆ ಪ್ರತಿ 1 ಅಥವಾ 2 ಕಿಲೋಮೀಟರ್&zwnj;ಗೆ ನಿಲ್ಲುವುದರಿಂದ ಅಲ್ಲಿ ಹೆಚ್ಚಿನ ವೇಗದ ಅಗತ್ಯವಿರುವುದಿಲ್ಲ. ಆದರೆ ಉಪನಗರ ರೈಲು ನಗರದ ಹೊರವಲಯ ಹಾಗೂ ನೆರೆಯ ಜಿಲ್ಲೆಗಳಿಗೆ ವಿಸ್ತರಣೆಯಾದಾಗ ವೇಗ ಅತ್ಯಂತ ಮುಖ್ಯವಾಗುತ್ತದೆ. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ಈ ತಂತ್ರಜ್ಞಾನವನ್ನು ಅಪ್&zwnj;ಗ್ರೇಡ್ ಮಾಡಲಾಗುತ್ತಿದೆ.&lt;/p&gt;&lt;p&gt;ಪ್ರಸ್ತುತ, ಈ ಇಟಿಸಿಎಸ್ ಲೆವೆಲ್-2 (ETCS Level 2) ಸಿಗ್ನಲಿಂಗ್ ವ್ಯವಸ್ಥೆಯು ದೆಹಲಿ-ಘಾಜಿಯಾಬಾದ್-ಮೀರತ್ ನಡುವಿನ 82 ಕಿಮೀ ಉದ್ದದ &lsquo;ನಮೋ ಭಾರತ್&rsquo; (Namo Bharat) ಕಾರಿಡಾರ್&zwnj;ನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ 508 ಕಿಮೀ ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಗೂ ಇದೇ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಗಿದೆ.&lt;/p&gt;&lt;h2&gt;&lt;strong&gt;ನಾಲ್ಕು ಕಾರಿಡಾರ್&zwnj;ಗಳ ವಿವರ ಇಲ್ಲಿದೆ&lt;/strong&gt;&lt;/h2&gt;&lt;p&gt;ಒಟ್ಟು 148 ಕಿಲೋಮೀಟರ್ ಉದ್ದದ ಉಪನಗರ ರೈಲು ಯೋಜನೆ ಪ್ರಮುಖವಾಗಿ ನಾಲ್ಕು ಕಾರಿಡಾರ್&zwnj;ಗಳನ್ನು ಒಳಗೊಂಡಿದೆ. ಸಂಪಿಗೆ ಲೈನ್ (41.4 ಕಿಮೀ) ಕೆಎಸ್&zwnj;ಆರ್ ಬೆಂಗಳೂರು ಸಿಟಿಯಿಂದ ಬೆಂಗಳೂರು ವಿಮಾನ ನಿಲ್ದಾಣ ಮತ್ತು ದೇವನಹಳ್ಳಿಗೆ ಸಂಪರ್ಕ ಕಲ್ಪಿಸಲಿದೆ. ಮಲ್ಲಿಗೆ ಲೈನ್ (25 ಕಿಮೀ) ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರ, ಪಾರಿಜಾತ ಲೈನ್ (35.5 ಕಿಮೀ) ಕೆಂಗೇರಿಯಿಂದ ವೈಟ್&zwnj;ಫೀಲ್ಡ್ ಹಾಗೂ ಕನಕ ಲೈನ್ (46.25 ಕಿಮೀ): ಹೀಲಲಿಗೆಯಿಂದ ರಾಜಾನುಕುಂಟೆವರೆಗೆ ಇರಲಿದೆ.&lt;/p&gt;&lt;h2&gt;&lt;strong&gt;ಭವಿಷ್ಯದ ವಿಸ್ತರಣೆ ಮತ್ತು ಆರ್&zwnj;ಆರ್&zwnj;ಟಿಎಸ್ (RRTS) ಕಾರಿಡಾರ್&zwnj;ಗಳು&lt;/strong&gt;&lt;/h2&gt;&lt;p&gt;ಕೆ-ರೈಡ್ ಸಂಸ್ಥೆಯು ಈ ಹಿಂದೆ ಪ್ರಸ್ತಾಪಿಸಿದ್ದ ಹೆಚ್ಚುವರಿ 146 ಕಿಮೀ ವಿಸ್ತರಣಾ ಯೋಜನೆಗಳನ್ನು (ದೇವನಹಳ್ಳಿ-ಚಿಕ್ಕಬಳ್ಳಾಪುರ, ಚಿಕ್ಕಬಾಣಾವರ-ಕುಣಿಗಲ್ ಸೇರಿದಂತೆ ಆರು ಮಾರ್ಗಗಳು) ನೈಋತ್ಯ ರೈಲ್ವೆಯು ತಿರಸ್ಕರಿಸಿತ್ತು. ಆದರೆ, ಕರ್ನಾಟಕ ಸರ್ಕಾರವು ಈಗ ದೆಹಲಿ ಮಾದರಿಯಲ್ಲೇ ಬೆಂಗಳೂರನ್ನು ನೆರೆಯ ನಗರಗಳಿಗೆ ಸಂಪರ್ಕಿಸುವ 5 ಸೆಮಿ-ಹೈಸ್ಪೀಡ್ &lsquo;ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ&rsquo; (RRTS) ಕಾರಿಡಾರ್&zwnj;ಗಳಿಗೆ ಕೇಂದ್ರದ ಅನುಮತಿ ಕೋರಿದೆ. ಇವು ಬೆಂಗಳೂರನ್ನು ಮೈಸೂರು (ಬಿಡದಿ ಮಾರ್ಗ), ಕನಕಪುರ (ಹೇರೋಹಳ್ಳಿ ಮಾರ್ಗ), ತುಮಕೂರು (ನೆಲಮಂಗಲ ಮಾರ್ಗ), ಚಿಕ್ಕಬಳ್ಳಾಪುರ (ಏರ್&zwnj;ಪೋರ್ಟ್ ಮಾರ್ಗ) ಮತ್ತು ಕೋಲಾರ (ಹೊಸಕೋಟೆ ಮಾರ್ಗ) ನಗರಗಳಿಗೆ ಸಂಪರ್ಕಿಸಲಿವೆ.&lt;/p&gt;&lt;p&gt;ಇದು ಗಂಟೆಗೆ 160 ಕಿಮೀ ವೇಗವನ್ನು ಹೊಂದಿರಲಿದ್ದು, ಈ ಯೋಜನೆಯನ್ನು ಕೆ-ರೈಡ್ ಜಾರಿಗೊಳಿಸುತ್ತದೆಯೇ ಅಥವಾ ಬಿಎಂಆರ್&zwnj;ಸಿಎಲ್ ಮಾಡುತ್ತದೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಕೆ-ರೈಡ್&zwnj;ನ ಮೂಲಸೌಕರ್ಯ ಮತ್ತು ಇಟಿಸಿಎಸ್ ಸಿಗ್ನಲಿಂಗ್ ವಿನ್ಯಾಸವು ಇಂತಹ ಹೈ-ಸ್ಪೀಡ್ ಆರ್&zwnj;ಆರ್&zwnj;ಟಿಎಸ್ ಯೋಜನೆಗಳಿಗೆ ಪೂರಕವಾಗಿರುವುದರಿಂದ, ಸರ್ಕಾರ ಜವಾಬ್ದಾರಿ ನೀಡಿದರೆ ತಾವು ಇದನ್ನು ಯಶಸ್ವಿಯಾಗಿ ಜಾರಿಗೊಳಿಸುವುದಾಗಿ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಡಿಸೆಂಬರ್ 2028 ರ ಗಡುವಿನ ಮೇಲೆ ಸಂಪೂರ್ಣ ಗಮನ&lt;/strong&gt;&lt;/h2&gt;&lt;p&gt;2020 ರಲ್ಲಿ ಅನುಮೋದನೆ ಪಡೆದು, ಮೂಲತಃ ಅಕ್ಟೋಬರ್ 2026 ಕ್ಕೆ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ ಈಗ ಮಾರ್ಚ್ 2030 ಕ್ಕೆ ಮುಂದೂಡಲ್ಪಟ್ಟಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ &lsquo;ಪ್ರಗತಿ&rsquo; (PRAGATI) ಪರಿಶೀಲನಾ ಸಭೆಯಲ್ಲಿ ಕೆ-ರೈಡ್ ಸಲ್ಲಿಸಿದ ಪರಿಷ್ಕೃತ ಗಡುವಿನ ಪ್ರಕಾರ, ಮಲ್ಲಿಗೆ ಲೈನ್ ಡಿಸೆಂಬರ್ 2028, ಕನಕ ಲೈನ್ ಜೂನ್ 2029, ಸಂಪಿಗೆ ಮತ್ತು ಪಾರಿಜಾತ ಲೈನ್ ಮಾರ್ಚ್ 2030ಕ್ಕೆ ಮುಕ್ತಾಯಗೊಳ್ಳಬೇಕಿದೆ.&lt;/p&gt;&lt;p&gt;ಪ್ರಧಾನಮಂತ್ರಿಯವರಿಗೆ ನೀಡಿರುವ ಭರವಸೆಯಂತೆ ಡಿಸೆಂಬರ್ 2028 ರ ಒಳಗೆ ಮಲ್ಲಿಗೆ ಲೈನ್&zwnj;ನ ಸಂಪೂರ್ಣ ಕಾಮಗಾರಿ ಮುಗಿಸಲು ಕೆ-ರೈಡ್ ಶ್ರಮಿಸುತ್ತಿದೆ. ಒಂದು ವೇಳೆ ಇಡೀ ಮಾರ್ಗ ಸಾಧ್ಯವಾಗದಿದ್ದರೂ, ಆದ್ಯತೆಯ ಮೇರೆಗೆ ಯಶವಂತಪುರ ಮತ್ತು ಚಿಕ್ಕಬಾಣಾವರ ನಡುವಿನ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯನ್ನು ಖಂಡಿತವಾಗಿಯೂ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಯಶವಂತಪುರವು ಭಾರತೀಯ ರೈಲ್ವೆ, ನಮ್ಮ ಮೆಟ್ರೋ, ಉಪನಗರ ರೈಲು ಮತ್ತು ಬಿಎಂಟಿಸಿ ಸೇವೆಗಳನ್ನು ಒಳಗೊಂಡ ಬೆಂಗಳೂರಿನ ಪ್ರಮುಖ ಮಲ್ಟಿಮೋಡಲ್ ಸಾರಿಗೆ ಹಬ್ ಆಗಿ ಹೊರಹೊಮ್ಮುತ್ತಿರುವುದು ಈ ಯೋಜನೆಗೆ ಮತ್ತಷ್ಟು ಬಲ ತಂದಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-suburban-railway-k-ride-to-adopt-etcs-european-signalling-system-san/articleshow-84u1vwp"/>
        </item>
        <item>
            <title><![CDATA[Shocking - Allu Arjun: : ಅಲ್ಲು ಅರ್ಜುನ್‌ಗೆ ಬಿಗ್ ಶಾಕ್ ನೀಡಿದ ಕೋರ್ಟ್! ಕಾನೂನು ಸಂಕಷ್ಟದ ಸರಪಳಿಯಲ್ಲಿ 'ಪುಷ್ಪ'ರಾಜ್!]]></title>
            <link>https://kannada.asianetnews.com/news-entertainment/the-court-has-warned-actor-allu-arjun-who-is-an-accused-in-the-stampede-case-that-he-must-not-miss-the-next-hearing/articleshow-52dgxwk</link>
            <guid isPermaLink="true">https://kannada.asianetnews.com/news-entertainment/the-court-has-warned-actor-allu-arjun-who-is-an-accused-in-the-stampede-case-that-he-must-not-miss-the-next-hearing/articleshow-52dgxwk</guid>
            <pubDate>Mon, 22 Jun 2026 15:38:20 +0530</pubDate>
            <description><![CDATA[&lt;p&gt;ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ಅಲ್ಲು ಅವರಿಗೆ ನ್ಯಾಯಾಲಯವು ಶಾಕ್ ಕೊಟ್ಟಿದೆ. &quot;ಇಲ್ಲಿ ಸಿನಿಮಾ ಡೈಲಾಗ್ ನಡೆಯಲ್ಲ, ಕಾನೂನು ಎಲ್ಲರಿಗೂ ಒಂದೇ. ಪ್ರಕರಣದ ಗಂಭೀರತೆ ನಮಗೊತ್ತು, ನೀವು ಖುದ್ದಾಗಿ ನ್ಯಾಯಾಲಯಕ್ಕೆ ಬರಲೇಬೇಕು&quot; ಎಂದು ಖಡಕ್ ಆಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkndgbnxgbw9qmfvz5f571d,imgname-allu-arjun-atlee-upcoming-film-aa22xa6-title-1775555232117.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುಷ್ಪಾ ನಟ ಅಲ್ಲು ಅರ್ಜುನ್&zwnj;ಗೆ ಶಾಕ್ ಕೊಟ್ಟ ಕೋರ್ಟ್!&lt;/strong&gt;&lt;/p&gt;&lt;p&gt;ತೆಲುಗು ಚಿತ್ರರಂಗದ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ (Allu Arjun) ಅವರಿಗೆ ಸದ್ಯ ಕಾಲ ಅಷ್ಟೇನೂ ಚೆನ್ನಾಗಿಲ್ಲ ಅನ್ನಿಸುತ್ತಿದೆ. ಒಂದೆಡೆ 'ಪುಷ್ಪ 2' ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಧೂಳೆಬ್ಬಿಸುತ್ತಿದ್ದರೆ, ಇನ್ನೊಂದೆಡೆ ನಿಜ ಜೀವನದಲ್ಲಿ 'ಬನ್ನಿ' ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ಹೈದರಾಬಾದ್&zwnj;ನ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರಿಗೆ ಈಗ ಸುಪ್ರೀಂ ಶಾಕ್ ಸಿಕ್ಕಿದೆ!&lt;/p&gt;&lt;p&gt;ಏನಿದು 'ಪುಷ್ಪ'ನಿಗೆ ಎದುರಾದ ವಿಘ್ನ?&lt;/p&gt;&lt;p&gt;2024ರ ಡಿಸೆಂಬರ್ 4ರಂದು ಹೈದರಾಬಾದ್&zwnj;ನ ಆರ್&zwnj;ಟಿಸಿ ಕ್ರಾಸ್ ರಸ್ತೆಯ ಸಂಧ್ಯಾ ಥಿಯೇಟರ್&zwnj;ನಲ್ಲಿ 'ಪುಷ್ಪ 2' ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ನೂಕುನುಗ್ಗಲಿನಲ್ಲಿ ರೇವತಿ ಎಂಬ 39 ವರ್ಷದ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿದರೆ, ಅವರ ಎಂಟು ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿದ್ದನು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪೊಲೀಸರು ತನಿಖೆ ನಡೆಸಿ ಅಲ್ಲು ಅರ್ಜುನ್ ಅವರನ್ನು ಎ-11 (A11) ಆರೋಪಿಯನ್ನಾಗಿ ಮಾಡಿ ಚಾರ್ಜ್&zwnj;ಶೀಟ್ ಸಲ್ಲಿಸಿದ್ದರು.&lt;/p&gt;&lt;h2&gt;ಕೋರ್ಟ್&zwnj;ನಲ್ಲಿ ನಡೆದಿದ್ದೇನು?&lt;/h2&gt;&lt;p&gt;ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಹೈದರಾಬಾದ್&zwnj;ನ ನಾಂಪಲ್ಲಿ ನ್ಯಾಯಾಲಯವು ಅಲ್ಲು ಅರ್ಜುನ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ಸ್ಟಾರ್ ನಟ ಅಲ್ಲು ಅರ್ಜುನ್ ಅವರು ಸದ್ಯ ಮುಂಬೈನಲ್ಲಿ ನಿರ್ದೇಶಕ ಅಟ್ಲಿ ಅವರ 'ರಾಕಾ' ಎಂಬ ಹೊಸ ಚಿತ್ರದ ಶೂಟಿಂಗ್&zwnj;ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ, ಅವರ ಪರ ವಕೀಲರು &quot;ಶೂಟಿಂಗ್ ಇರುವುದರಿಂದ ಕೋರ್ಟ್&zwnj;ಗೆ ಬರಲು ಸಾಧ್ಯವಾಗುತ್ತಿಲ್ಲ, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅನುಮತಿ ನೀಡಿ&quot; ಎಂದು ಮನವಿ ಮಾಡಿದ್ದರು.&lt;/p&gt;&lt;p&gt;ಆದರೆ, ನ್ಯಾಯಾಧೀಶರು ಈ ಮನವಿಯನ್ನು ಕಡ್ಡಿ ಮುರಿದಂತೆ ತಿರಸ್ಕರಿಸಿದ್ದಾರೆ! &quot;ಇಲ್ಲಿ ಸಿನಿಮಾ ಡೈಲಾಗ್ ನಡೆಯಲ್ಲ, ಕಾನೂನು ಎಲ್ಲರಿಗೂ ಒಂದೇ. ಪ್ರಕರಣದ ಗಂಭೀರತೆ ನಮಗೊತ್ತು, ನೀವು ಖುದ್ದಾಗಿ ನ್ಯಾಯಾಲಯಕ್ಕೆ ಬರಲೇಬೇಕು&quot; ಎಂದು ಖಡಕ್ ಆಗಿ ಹೇಳಿದ್ದಾರೆ. ಇದು ನಟ ಅಲ್ಲು ಅರ್ಜುನ್ ಮತ್ತು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ತಂದಿದೆ.&lt;/p&gt;&lt;h3&gt;ಜುಲೈ 6ಕ್ಕೆ ಡೇಟ್ ಫಿಕ್ಸ್!&lt;/h3&gt;&lt;p&gt;ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದೆ. ಅಂದು ಅಲ್ಲು ಅರ್ಜುನ್ ಯಾವುದೇ ಕಾರಣಕ್ಕೂ ಗೈರಾಗುವಂತಿಲ್ಲ. ಶೂಟಿಂಗ್ ಎಷ್ಟೇ ಇರಲಿ, ಅದನ್ನು ಬದಿಗಿಟ್ಟು ಕೋರ್ಟ್ ಮೆಟ್ಟಿಲು ಏರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯಲ್ಲಿ ಸರಿಯಾದ ಭದ್ರತೆ ಇಲ್ಲದಿರುವುದು ಮತ್ತು ಪೊಲೀಸ್ ಎಚ್ಚರಿಕೆಗಳನ್ನು ನಿರ್ಲಕ್ಷಿಸಿರುವುದು ಅಲ್ಲು ಅರ್ಜುನ್ ಅವರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;ಒಟ್ಟಿನಲ್ಲಿ, &quot;ಪುಷ್ಪಾ ಅಂದ್ರೆ ಫ್ಲವರ್ ಅನ್ಕೊಂಡ್ರಾ.. ಫೈಯರ್&quot; ಅಂತ ಡೈಲಾಗ್ ಹೊಡೆಯುತ್ತಿದ್ದ ನಟನಿಗೆ ಈಗ ಕಾನೂನಿನ ಕಿಚ್ಚು ತಗುಲಿದೆ. ಜುಲೈ 6ರಂದು ಅಲ್ಲು ಅರ್ಜುನ್ ಕೋರ್ಟ್&zwnj;ನಲ್ಲಿ ಏನು ಹೇಳಲಿದ್ದಾರೆ? ಈ ಕೇಸ್&zwnj;ನಿಂದ ಅವರು ಪಾರಾಗ್ತಾರಾ? ಕಾದು ನೋಡಬೇಕು.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/the-court-has-warned-actor-allu-arjun-who-is-an-accused-in-the-stampede-case-that-he-must-not-miss-the-next-hearing/articleshow-52dgxwk"/>
        </item>
        <item>
            <title><![CDATA[ಕೊಪ್ಪಳದ ಅಂಜನಾದ್ರಿ: ಹನುಮನ ಜನ್ಮಭೂಮಿ ವಿವಾದ, ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ]]></title>
            <link>https://kannada.asianetnews.com/gallery/state/hanuman-janmabhoomi-supreme-court-refuses-urgent-hearing-anjanadri-gdp-cw4gnzc</link>
            <guid isPermaLink="true">https://kannada.asianetnews.com/gallery/state/hanuman-janmabhoomi-supreme-court-refuses-urgent-hearing-anjanadri-gdp-cw4gnzc</guid>
            <pubDate>Mon, 22 Jun 2026 14:42:37 +0530</pubDate>
            <description><![CDATA[&lt;p&gt;ಹನುಮಂತನ ಜನ್ಮಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಿರಾಕರಿಸಿದ್ದು, ಪ್ರಕರಣವನ್ನು ಮತ್ತೆ ಕರ್ನಾಟಕ ಹೈಕೋರ್ಟ್&zwnj;ಗೆ ಹಿಂತಿರುಗಿಸಿದೆ. ಕರ್ನಾಟಕದ ಕಿಷ್ಕಿಂಧೆ, ಆಂಧ್ರದ ತಿರುಮಲ ಮತ್ತು ಕರ್ನಾಟಕದ ಗೋಕರ್ಣದ ನಡುವೆ ಹನುಮನ ನಿಜವಾದ ಜನ್ಮಸ್ಥಳ ಯಾವುದು&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksbkt4k5b1tst2cqf7b8mjsv,imgname-----------------------2026-05-24t045804.337-1779580080741.jpg" type="image/jpeg" height="390" width="690"/>
            <content:encoded><![CDATA[&lt;p&gt;ಹನುಮಂತನ ಜನ್ಮಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಿರಾಕರಿಸಿದ್ದು, ಪ್ರಕರಣವನ್ನು ಮತ್ತೆ ಕರ್ನಾಟಕ ಹೈಕೋರ್ಟ್&zwnj;ಗೆ ಹಿಂತಿರುಗಿಸಿದೆ. ಕರ್ನಾಟಕದ ಕಿಷ್ಕಿಂಧೆ, ಆಂಧ್ರದ ತಿರುಮಲ ಮತ್ತು ಕರ್ನಾಟಕದ ಗೋಕರ್ಣದ ನಡುವೆ ಹನುಮನ ನಿಜವಾದ ಜನ್ಮಸ್ಥಳ ಯಾವುದು&amp;nbsp;&lt;/p&gt;&lt;img&gt;&lt;p&gt;ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಭಗವಾನ್ ಹನುಮಂತನ ನಿಜವಾದ ಜನ್ಮಸ್ಥಳ ಯಾವುದು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಸುಪ್ರೀಂ ಕೋರ್ಟ್ ಸೋಮವಾರ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದ ನಂತರ ಪ್ರಕರಣವನ್ನು ಮರು ವಿಚಾರಣೆಗೆ ಒಳಪಡಿಸಿರುವ ನಿರ್ಧಾರದ ಬಗ್ಗೆ ಅರ್ಜಿದಾರರು ತೀವ್ರ ಕಳವಳ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ಸರ್ವೋಚ್ಚ ನ್ಯಾಯಾಲಯ ಒಲವು ತೋರಲಿಲ್ಲ.&lt;/p&gt;&lt;p&gt;ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ದ್ವಿಪೀಠದ ಮುಂದೆ ಈ ವಿಷಯವನ್ನು ಸಾಮಾನ್ಯ ಕಾರಣ ಪಟ್ಟಿಯ ಹೊರಗೆ (Out of Turn) ಮೌಖಿಕವಾಗಿ ಪ್ರಸ್ತಾಪಿಸಲಾಯಿತು. ಆದರೆ, ಈ ಹಂತದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಪೀಠವು, &quot;ಕರ್ನಾಟಕ ಹೈಕೋರ್ಟ್ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಲು ಸಮರ್ಥವಾಗಿದೆ&quot; ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತು.&lt;/p&gt;&lt;img&gt;&lt;p&gt;ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲರು, ಕರ್ನಾಟಕ ಹೈಕೋರ್ಟ್ ಮುಂದೆ ಅತ್ಯಂತ ಅಸಾಮಾನ್ಯ ಮತ್ತು ವಿಚಿತ್ರ ಕಾರ್ಯವಿಧಾನದ ಪರಿಸ್ಥಿತಿ ಉದ್ಭವಿಸಿದೆ ಎಂದು ವಾದಿಸಿದರು.&lt;/p&gt;&lt;h2&gt;ವಕೀಲರ ಪ್ರಮುಖ ವಾದಗಳು:&lt;/h2&gt;&lt;ul&gt; &lt;li&gt;ಹೈಕೋರ್ಟ್ ಈಗಾಗಲೇ ಈ ವಿವಾದದ ಸುದೀರ್ಘ ವಿಚಾರಣೆ ನಡೆಸಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.&lt;/li&gt; &lt;li&gt;ನಂತರ ಮುಕ್ತ ನ್ಯಾಯಾಲಯದಲ್ಲಿ (Open Court) ತೀರ್ಪನ್ನು ಪ್ರಕಟಿಸಿ, ಆದೇಶದ ಪ್ರತಿಯನ್ನು ಘೋಷಿಸಿ ಸಹಿ ಕೂಡ ಮಾಡಲಾಗಿತ್ತು.&lt;/li&gt; &lt;li&gt;ಆದರೆ, ತೀರ್ಪು ಪ್ರಕಟವಾದ ಬೆನ್ನಲ್ಲೇ, ಈ ಪ್ರಕರಣವನ್ನು ಇದ್ದಕ್ಕಿದ್ದಂತೆ ಮರುದಿನವೇ ಮತ್ತೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.&lt;/li&gt;&lt;/ul&gt;&lt;p&gt;ಕಾನೂನಿನ ಪ್ರಕಾರ, ಒಮ್ಮೆ ನ್ಯಾಯಾಲಯವು ತೀರ್ಪು ಪ್ರಕಟಿಸಿ ಸಹಿ ಮಾಡಿದ ನಂತರ, ಆ ವಿಷಯದ ಮೇಲೆ ನ್ಯಾಯಾಲಯದ ನ್ಯಾಯವ್ಯಾಪ್ತಿ ಮುಕ್ತಾಯಗೊಳ್ಳುತ್ತದೆ. ಇದನ್ನು ಕಾನೂನು ಪರಿಭಾಷೆಯಲ್ಲಿ &lsquo;ಫಂಕ್ಟಸ್ ಅಫಿಷಿಯೋ&rsquo; (Functus Officio) ಎನ್ನಲಾಗುತ್ತದೆ. ನಿರ್ದಿಷ್ಟ ಕಾನೂನು ವಿನಾಯಿತಿಗಳನ್ನು ಹೊರತುಪಡಿಸಿ ಅದೇ ಪ್ರಕರಣವನ್ನು ಮತ್ತೆ ವಿಚಾರಣೆ ಮಾಡಲು ಸಾಧ್ಯವಿಲ್ಲ. ತೀರ್ಪು ಬಂದ ನಂತರವೂ ಮರುಪರಿಶೀಲನೆಗೆ ಒಳಪಡಿಸಿರುವುದು ಗಂಭೀರ ಕಾರ್ಯವಿಧಾನದ ಲೋಪ ಎಂದು ವಕೀಲರು ತಕ್ಷಣದ ಹಸ್ತಕ್ಷೇಪ ಕೋರಿದರು.&lt;/p&gt;&lt;img&gt;&lt;p&gt;ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಕರ್ನಾಟಕ ಹೈಕೋರ್ಟ್&zwnj;ನ ಕಾರ್ಯವೈಖರಿ ಮತ್ತು ಪದ್ಧತಿಯನ್ನು ಸಮರ್ಥಿಸಿಕೊಂಡರು.&lt;/p&gt;&lt;p&gt;ಕರ್ನಾಟಕ ಹೈಕೋರ್ಟ್ ತನ್ನದೇ ಆದ ವಿಶೇಷ ಕಾರ್ಯವಿಧಾನವನ್ನು ಹೊಂದಿದೆ. ಅಗತ್ಯವಿದ್ದಲ್ಲಿ ಆದೇಶದ ಕೆಲವು ಅಂಶಗಳನ್ನು ಸ್ಪಷ್ಟಪಡಿಸುವ, ತಿದ್ದುಪಡಿ ಮಾಡುವ ಅಥವಾ ಸರಿಪಡಿಸುವ ಪ್ರಕ್ರಿಯೆಯನ್ನು ಹೈಕೋರ್ಟ್ ಚಲಾಯಿಸಬಹುದು. ಹೈಕೋರ್ಟ್ ಈ ಸಮಸ್ಯೆಯನ್ನು ಸ್ವತಃ ನಿಭಾಯಿಸಲಿ ಎಂದು ನ್ಯಾಯಮೂರ್ತಿ ನಾಗರತ್ನ ಅವರು ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿದರು. ತಾಂತ್ರಿಕ ಅಥವಾ ಕಾನೂನು ಆಕ್ಷೇಪಣೆಗಳಿದ್ದರೆ ಹೈಕೋರ್ಟ್ ಮೊದಲು ಅವುಗಳನ್ನು ಪರಿಗಣಿಸಲಿ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಯಾವುದೇ ತಕ್ಷಣದ ಪರಿಹಾರ ನೀಡಲು ನಿರಾಕರಿಸಿತು.&amp;nbsp;&lt;/p&gt;&lt;img&gt;&lt;p&gt;ವಿಶೇಷವೆಂದರೆ, ಈ ಹನುಮಾನ್ ಜನ್ಮಭೂಮಿ ವಿವಾದವು ಎರಡು ವಿಭಿನ್ನ ಧರ್ಮಗಳ ನಡುವಿನದ್ದಲ್ಲ. ಬದಲಾಗಿ, ಇಬ್ಬರು ಹಿಂದೂ ಧಾರ್ಮಿಕ ಸಂಸ್ಥೆಗಳ ನಡುವೆ ನಡೆಯುತ್ತಿರುವ ಐತಿಹಾಸಿಕ ಮತ್ತು ಧಾರ್ಮಿಕ ಹಕ್ಕುಗಳ ಪೈಪೋಟಿಯಾಗಿದೆ. 2021 ರಲ್ಲಿ ಆರಂಭವಾದ ಈ ವಿವಾದದಲ್ಲಿ ಪ್ರಮುಖವಾಗಿ ಮೂರು ವಾದಗಳು ಮುಂಚೂಣಿಯಲ್ಲಿವೆ.&lt;/p&gt;&lt;h2&gt;ಆಂಧ್ರಪ್ರದೇಶದ ತಿರುಮಲ (TTD ಹಕ್ಕು)&lt;/h2&gt;&lt;p&gt;ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಗಳು (TTD), ತನ್ನ ವ್ಯಾಪ್ತಿಯ ತಿರುಮಲ ಬೆಟ್ಟಗಳಲ್ಲಿರುವ ಅಂಜನಾದ್ರಿ ಪರ್ವತವೇ ಹನುಮಂತನ ನಿಜವಾದ ಜನ್ಮಸ್ಥಳ ಎಂದು ಪ್ರತಿಪಾದಿಸಿದೆ. ತನ್ನ ನಿಲುವನ್ನು ಬೆಂಬಲಿಸಲು ಟಿಟಿಡಿ ಎಂಟು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿತ್ತು. ಪುರಾಣ ಸಾಹಿತ್ಯ, ಪ್ರಾಚೀನ ತಾಮ್ರ ಫಲಕಗಳು, ಶಾಸನಗಳು ಮತ್ತು ಭೌಗೋಳಿಕ ಪುರಾವೆಗಳನ್ನು ಆಧರಿಸಿ ಸಮಿತಿಯು ವರದಿ ನೀಡಿದ್ದು, ಅದರಂತೆ ಟಿಟಿಡಿ ಒಂದು ಕಿರುಪುಸ್ತಕವನ್ನೂ ಪ್ರಕಟಿಸಿದೆ. ಅಲ್ಲದೆ, ರಾಮ ನವಮಿಯಂದು ಆ ಸ್ಥಳವನ್ನು ಹನುಮನ ಜನ್ಮಸ್ಥಳವೆಂದು ಔಪಚಾರಿಕವಾಗಿ ಪವಿತ್ರೀಕರಿಸಿ, ಅಲ್ಲಿ ಪ್ರವಾಸೋದ್ಯಮ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ.&lt;/p&gt;&lt;img&gt;&lt;p&gt;ಕರ್ನಾಟಕದ ಯುನೆಸ್ಕೋ ಮಾನ್ಯತೆ ಪಡೆದ ಪಾರಂಪರಿಕ ಪ್ರದೇಶವಾದ ಹಂಪಿಯ ಬಳಿಯಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟವೇ ಹನುಮಂತನ ನಿಜವಾದ ಜನ್ಮಸ್ಥಳ ಎಂದು &lsquo;ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್&rsquo; ಮತ್ತು ಅದರ ಸಂಸ್ಥಾಪಕ ಸ್ವಾಮಿ ಗೋವಿಂದಾನಂದ ಸರಸ್ವತಿ ಪ್ರತಿಪಾದಿಸಿದ್ದಾರೆ. ವಾಲ್ಮೀಕಿ ರಾಮಾಯಣ, ಸ್ಕಂದ ಪುರಾಣ, ವರಾಹ ಪುರಾಣ ಮತ್ತು ಬ್ರಹ್ಮಾಂಡ ಪುರಾಣದಂತಹ ಪಠ್ಯಗಳನ್ನು ಆಧರಿಸಿ ವೈದಿಕ ವಿದ್ವಾಂಸರು ಹಾಗೂ ಇತಿಹಾಸಕಾರರ ಸಮಿತಿ ಈ ತೀರ್ಮಾನಕ್ಕೆ ಬಂದಿದೆ. ಇಂದಿನ ಹಂಪಿ ಮತ್ತು ತುಂಗಭದ್ರಾ ನದಿಯ ಸುತ್ತಲಿನ ಕಿಷ್ಕಿಂಧಾ ಪ್ರದೇಶದ ಅಂಜನಹಳ್ಳಿಯೇ ಹನುಮನ ಜನ್ಮಭೂಮಿ ಎಂಬುದು ಇವರ ವಾದ. ಈ ಕುರಿತು ಇತ್ತಂಡಗಳ ನಡುವೆ ಸುದೀರ್ಘ ಚರ್ಚೆ ನಡೆದಿದ್ದರೂ ಒಮ್ಮತ ಮೂಡಿಲ್ಲ.&lt;/p&gt;&lt;img&gt;&lt;p&gt;ಇವೆರಡರ ನಡುವೆ, ಕರ್ನಾಟಕದ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಗೋಕರ್ಣವು ಹನುಮಂತನ ನಿಜವಾದ ಜನ್ಮಸ್ಥಳ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ರಾಮಚಂದ್ರಾಪುರ ಮಠವು ಮೂರನೇ ವಾದವನ್ನು ಮಂಡಿಸಿದೆ. ವಾಲ್ಮೀಕಿ ರಾಮಾಯಣದ ಉಲ್ಲೇಖಗಳ ಪ್ರಕಾರ, ಹನುಮಂತ ಗೋಕರ್ಣದಲ್ಲಿ ಜನಿಸಿದನು. ಆದರೆ ಕಿಷ್ಕಿಂಧೆಯ ಅಂಜನಾದ್ರಿಯು ಅವನ ನಂತರದ ಚಟುವಟಿಕೆಗಳ ಕೇಂದ್ರವಾಗಿದ್ದರಿಂದ, ಅದು ಹನುಮಂತನ &lsquo;ಕರ್ಮಭೂಮಿ&rsquo;ಯೇ ಹೊರತು ಜನ್ಮಭೂಮಿಯಲ್ಲ ಎನ್ನುವುದು ಮಠದ ವ್ಯಾಖ್ಯಾನವಾಗಿದೆ.&lt;/p&gt;&lt;img&gt;&lt;p&gt;ಸುಪ್ರೀಂ ಕೋರ್ಟ್ ಸದ್ಯಕ್ಕೆ ಮಧ್ಯಪ್ರವೇಶಿಸಲು ನಿರಾಕರಿಸಿರುವುದರಿಂದ, ಈ ಜಟಲ ಧಾರ್ಮಿಕ ವಿವಾದದ ಕಾನೂನು ಹೋರಾಟ ಈಗ ಮತ್ತೆ ಕರ್ನಾಟಕ ಹೈಕೋರ್ಟ್&zwnj;ನಲ್ಲೇ ಮುಂದುವರಿಯಲಿದೆ. ಹೈಕೋರ್ಟ್ ತನ್ನ ಮರು ವಿಚಾರಣೆಯ ಸಂದರ್ಭದಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದೆ ಹಾಗೂ ತೀರ್ಪಿನ ಗೊಂದಲಗಳನ್ನು ಹೇಗೆ ಬಗೆಹರಿಸಲಿದೆ ಎಂಬುದರ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ. ಹನುಮಂತನ ಜನ್ಮಸ್ಥಳದ ಕುರಿತಾದ ಈ ಚರ್ಚೆ ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/hanuman-janmabhoomi-supreme-court-refuses-urgent-hearing-anjanadri-gdp-cw4gnzc"/>
        </item>
        <item>
            <title><![CDATA[ಒಂದಂಗಡಿಯಲ್ಲಿ ಅಕ್ಕಿ, ಇನ್ನೊಂದಗಡಿಯಲ್ಲಿ ಗೋಧಿ - ರೇಷನ್‌ಕಾರ್ಡ್‌ದಾರರಿಗೆ ಖುಷಿ ಸುದ್ದಿ]]></title>
            <link>https://kannada.asianetnews.com/india-news/one-nation-one-ration-new-rules-ration-from-any-shop-india/articleshow-ftl9v3b</link>
            <guid isPermaLink="true">https://kannada.asianetnews.com/india-news/one-nation-one-ration-new-rules-ration-from-any-shop-india/articleshow-ftl9v3b</guid>
            <pubDate>Mon, 22 Jun 2026 13:38:26 +0530</pubDate>
            <description><![CDATA[&lt;p&gt;one nation one ration : ರೇಷನ್ ಕಾರ್ಡ್&zwnj;ದಾರರಿಗೆ ಸರ್ಕಾರ ಖುಷಿ ಸುದ್ದಿ ನೀಡಿದೆ. ಧಾನ್ಯ ಖರೀದಿ ವ್ಯವಸ್ಥೆಯನ್ನು ಬದಲಾಯಿಸ್ತಿದೆ. ಇನ್ಮುಂದೆ ಒಂದೇ ಪಡಿತರ ಅಂಗಡಿಯಲ್ಲಿ ನೀವು ಗಂಟೆಗಟ್ಟಲೆ ನಿಲ್ಬೇಕಾಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvq5vtz7vqe9d237s5q727m5,imgname-ration-card-1782115593191.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದ ಪಡಿತರ ವ್ಯವಸ್ಥೆಯನ್ನು ಸರ್ಕಾರ ಸರಳಗೊಳಿಸ್ತಿದೆ. ಜನರಿಗೆ ಸುಲಭವಾಗಿ ರೇಷನ್ ಸಿಗಲು ಒನ್ ನೇಷನ್ ಒನ್ ರೇಷನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಡಿಜಿಟಲ್ ಸೌಲಭ್ಯಗಳನ್ನು ಸುಲಭಗೊಳಿಸಲು ಸರ್ಕಾರ ನಿರಂತರ ಕೆಲ್ಸ ಮಾಡ್ತಿದೆ. ಇನ್ಮುಂದೆ ನೀವು ಒಂದೇ ರೇಷನ್ ಅಂಗಡಿಯಲ್ಲಿ ಎಲ್ಲ ರೇಷನ್ ಖರೀದಿ ಮಾಡುವ ಅಗತ್ಯವಿಲ್ಲ. ನೀವು ಪಡಿತರ ಅಂಗಡಿ ಬದಲಿಸಬಹುದು. ಅಂದ್ರೆ ಒಂದು ಅಂಗಡಿಯಲ್ಲಿ ಗೋಧಿ, ಇನ್ನೊಂದು ಅಂಗಡಿಯಲ್ಲಿ ಅಕ್ಕಿ ಖರೀದಿ ಮಾಡ್ಬಹುದು.&lt;/p&gt;&lt;h2&gt;ರೇಷನ್ ಪಡೆಯೋದು ಮತ್ತಷ್ಟು ಸುಲಭ&amp;nbsp;&lt;/h2&gt;&lt;p&gt;ಈ ಬದಲಾವಣೆಯಿಂದ ಜನಸಾಮಾನ್ಯರ ಕೆಲಸ ಸುಲಭವಾಗಲಿದೆ. ನೀವು ರೇಷನ್ ಸಂಗ್ರಹಿಸಲು ಒಂದೇ ಅಂಗಡಿಯಲ್ಲಿ ಗಂಟೆಗಟ್ಟಲೆ ಕಾಯಬೇಕಾಗೋದಿಲ್ಲ. ಯಾವುದಾದ್ರೂ ತಾಂತ್ರಿಕ ದೋಷವಾದಾಗ ರೇಷನ್ ಪಡೆಯದೆ ಹಿಂದೆ ಹೋಗುವ ಪರಿಸ್ಥಿತಿ ಬರೋದಿಲ್ಲ. ಅಂಗಡಿಯಲ್ಲಿ ಧಾನ್ಯದ ಕೊರತೆಯಂತ ಸಮಸ್ಯೆ ಇದ್ರೂ ಅದು ಜನಸಾಮಾನ್ಯರ ಮೇಲೆ ಪರಿಣಾಮ ಬೀರೋದಿಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಅಂಗಡಿ ಬದಲಿಸಬಹುದು. ಒಂದು ರೇನಷ್ ಅಂಗಡಿಯಲ್ಲಿ ಗೋಧಿ ಖರೀದಿ ಮಾಡಿ ಇನ್ನೊಂದರಲ್ಲಿ ಅಕ್ಕಿ ಪಡೆಯಬಹುದು. ಈ ಬಗ್ಗೆ ಕೇಂದ್ರ ರಾಜ್ಯ ಸಚಿವ ಬಿ.ಎಲ್. ವರ್ಮಾ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಕಡಿಮೆ ಬೆಲೆಗೆ, ಸಖತ್&zwnj; ಸೇಫ್ಟಿ ಕಾರ್&zwnj;ಗಳ್&zwnj; ಸಿಕ್ಕಾಪಟ್ಟೆ ಆಪ್ಶನ್&zwnj; ಕೊಟ್ಟ Mahindra Cars! ಎಲೆಕ್ಟ್ರಿಕ್&zwnj;&lt;/p&gt;&lt;h3&gt;ಒಂದು ರಾಷ್ಟ್ರ ಒಂದು ಪಡಿತರ ಚೀಟಿ&amp;nbsp;&lt;/h3&gt;&lt;p&gt;ಕೇಂದ್ರ ರಾಜ್ಯ ಸಚಿವ ಬಿ.ಎಲ್. ವರ್ಮಾ ತಮ್ಮ ಪೋಸ್ಟ್ನಲ್ಲಿ, ಸರ್ಕಾರವು ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ONORC) ಯೋಜನೆಯಡಿ ಪಡಿತರ ವಿತರಣೆಯನ್ನು ಸರಳಗೊಳಿಸುವ ಕೆಲಸ ಮಾಡ್ತಿದೆ ಎಂದಿದ್ದಾರೆ. ಪಡಿತರ ಚೀಟಿ ಹೊಂದಿರುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ಸ್ಥಳಗಳಿಂದ ತಮ್ಮ ಪಡಿತರವನ್ನು ಪಡೆಯಬಹುದು. ನೀವು ದೇಶದ ಯಾವುದೇ ಭಾಗದಿಂದ ಈ ಸೌಲಭ್ಯವನ್ನು ಪಡೆಯಬಹುದು ಎಂದಿದ್ದಾರೆ.&lt;/p&gt;&lt;p&gt;Aprilia SR 175: ಇಂಡಿಯನ್&zwnj; ಮಿಲಿಟರಿಯನ್ನು ಗೌರವಿಸೋ ಏಪ್ರಿಲಿಯಾ S&lt;/p&gt;&lt;p&gt;ಈ ಸೌಲಭ್ಯ ಎಟಿಎಂನಂತೆ ಕೆಲಸ ಮಾಡಲಿದೆ. ನೀವು ಎಲ್ಲಿ ಬೇಕಾದ್ರೂ ರೇಷನ್ ಪಡೆಯಬಹುದಾಗಿದೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಿಂದ ವಲಸೆ ಕಾರ್ಮಿಕರ ಕುಟುಂಬಗಳಿಗೆ ದೊಡ್ಡ ಲಾಭವಾಗಿದೆ. ಅವರು ರೇಷನ್ ಪಡೆಯಲು ದೂರದ ತಮ್ಮ ಹಳ್ಳಿಗೆ ಹೋಗ್ಬೇಕಾಗಿಲ್ಲ. ತಾವು ಸದ್ಯ ವಾಸವಾಗಿರುವ ಪ್ರದೇಶದಲ್ಲಿಯೇ ರೇಷನ್ ಪಡೆಯಬಹುದು. ಆಧಾರ್ ಮತ್ತು ಬಯೋಮೆಟ್ರಿಕ್ಸ್ ಮೂಲಕ ದೇಶದ ಜನರ ಕೆಲಸವನ್ನು ಸುಲಭಗೊಳಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Roopa Hegde</dc:creator>
            <atom:link href="https://kannada.asianetnews.com/india-news/one-nation-one-ration-new-rules-ration-from-any-shop-india/articleshow-ftl9v3b"/>
        </item>
        <item>
            <title><![CDATA[Western Ghats ಸಂರಕ್ಷಣೆಗೆ ಕೇಂದ್ರದ ಬಿಗ್ ಪ್ಲಾನ್; ಶೀಘ್ರದಲ್ಲೇ ಅಂತಿಮ ESA ಜಾರಿ: ಕರ್ನಾಟಕ, ಕೇರಳಕ್ಕೆ ತಪ್ಪದ ಇಕ್ಕಟ್ಟು!]]></title>
            <link>https://kannada.asianetnews.com/india-news/centre-final-notification-western-ghats-esa-karnataka-kerala-phased-manner-san/articleshow-psigizv</link>
            <guid isPermaLink="true">https://kannada.asianetnews.com/india-news/centre-final-notification-western-ghats-esa-karnataka-kerala-phased-manner-san/articleshow-psigizv</guid>
            <pubDate>Mon, 22 Jun 2026 13:39:25 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರವು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ (ESA) ಅಂತಿಮ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ. ಗುಜರಾತ್, ಮಹಾರಾಷ್ಟ್ರದಂತಹ ರಾಜ್ಯಗಳು ಒಪ್ಪಿಗೆಯ ಅಂಚಿನಲ್ಲಿದ್ದರೆ, ಕರ್ನಾಟಕ ಮತ್ತು ಕೇರಳದ ವಿರೋಧ ಮುಂದುವರಿದಿದ್ದು, ಹಂತ-ಹಂತದ ಜಾರಿಗೆ ಕೇಂದ್ರ ಚಿಂತನೆ ನಡೆಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvq5nvn2panrt9ehn2w9hd64,imgname-western-ghats-esa-1782115397282.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜೂ.22): &lt;/strong&gt;ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಪ್ರಕ್ರಿಯೆ ಆರಂಭವಾಗಿ ಹತ್ತು ವರ್ಷಗಳೇ ಕಳೆದರೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಕೇಂದ್ರ ಪರಿಸರ ಸಚಿವಾಲಯವು ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶಗಳ (ESA - Ecologically Sensitive Areas) ಅಂತಿಮ ಅಧಿಸೂಚನೆಯನ್ನು ಹೊರಡಿಸಲು ಭರದಿಂದ ಸಿದ್ಧತೆ ನಡೆಸುತ್ತಿದೆ. ಈ ಕ್ರಮವು ಭಾರತದ ಅತ್ಯಂತ ಶ್ರೀಮಂತ ಜೀವವೈವಿಧ್ಯತೆ ಮತ್ತು ಪರಿಸರ ಸೂಕ್ಷ್ಮ ವಲಯಕ್ಕೆ ಬಲವಾದ ಕಾನೂನು ರಕ್ಷಣೆಯನ್ನು ನೀಡಲಿದೆಯಾದರೂ, ಇತ್ತ ಅಭಿವೃದ್ಧಿ ಮತ್ತು ಅತ್ತ ಪರಿಸರ ಸಂರಕ್ಷಣೆಯ ನಡುವಿನ ಹಳೆಯ ವಿವಾದವನ್ನು ಮತ್ತೊಮ್ಮೆ ಮುಂಚೂಣಿಗೆ ತಂದಿದೆ.&lt;/p&gt;&lt;p&gt;ಇಂಡಿಯನ್ ಎಕ್ಸ್&zwnj;ಪ್ರೆಸ್ ವರದಿಯ ಪ್ರಕಾರ, ಕೇಂದ್ರ ಸರ್ಕಾರವು ಈ ಹಿಂದೆ ಎಲ್ಲಾ ಆರು ರಾಜ್ಯಗಳಲ್ಲಿ ಏಕಕಾಲಕ್ಕೆ ಇಎಸ್&zwnj;ಎ ಜಾರಿಗೊಳಿಸಲು ಪ್ರಯತ್ನಿಸಿ ವಿಫಲವಾಗಿತ್ತು. ಆದರೆ ಈ ಬಾರಿ ತನ್ನ ಹಳೇ ಹಠವನ್ನು ಕೈಬಿಟ್ಟಿದ್ದು, ಯಾವ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯಗಳು ಬಹುತೇಕ ಬಗೆಹರಿದಿವೆಯೋ ಅಲ್ಲಿ ಮೊದಲ ಹಂತದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲು ಮುಂದಾಗಿದೆ.&lt;/p&gt;&lt;p&gt;ಅಧಿಕಾರಿಗಳ ಮಾಹಿತಿಯ ಪ್ರಕಾರ, ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಕೇಂದ್ರದೊಂದಿಗೆ ಒಮ್ಮತಕ್ಕೆ ತೀರಾ ಹತ್ತಿರದಲ್ಲಿವೆ. ತಮಿಳುನಾಡು ಕೇವಲ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಮಾತ್ರ ಹೊಂದಿದೆ. ಆದರೆ, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾದ ಭೂಮಿಯ ವ್ಯಾಪ್ತಿ ಮತ್ತು ಅದರ ನಂತರ ಜಾರಿಯಾಗಲಿರುವ ಕಠಿಣ ನಿರ್ಬಂಧಗಳ ಬಗ್ಗೆ ತಮ್ಮ ತೀವ್ರ ವಿರೋಧವನ್ನು ಮುಂದುವರಿಸಿವೆ.&lt;/p&gt;&lt;h2&gt;&lt;strong&gt;ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದರೇನು?&lt;/strong&gt;&lt;/h2&gt;&lt;p&gt;1986 ರ ಪರಿಸರ (ಸಂರಕ್ಷಣೆ) ಕಾಯ್ದೆಯಡಿ ವಿಶೇಷ ಪರಿಸರ ರಕ್ಷಣೆಗಾಗಿ ಗುರುತಿಸಲಾದ ಪ್ರದೇಶಗಳನ್ನು &lsquo;ಪರಿಸರ ಸೂಕ್ಷ್ಮ ಪ್ರದೇಶ&rsquo; (ಇಎಸ್&zwnj;ಎ) ಎನ್ನಲಾಗುತ್ತದೆ. ಇದರ ಉದ್ದೇಶ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದಲ್ಲ. ಬದಲಿಗೆ, ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿ ಮಾಡುವ ನಿರ್ದಿಷ್ಟ ಚಟುವಟಿಕೆಗಳನ್ನು ನಿಯಂತ್ರಿಸುವುದಾಗಿದೆ. ಒಮ್ಮೆ ಈ ಅಧಿಸೂಚನೆ ಜಾರಿಯಾದರೆ, ಕೆಲವು ಕೈಗಾರಿಕೆಗಳು ಮತ್ತು ಯೋಜನೆಗಳು ಕಠಿಣ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ.&lt;/p&gt;&lt;h2&gt;&lt;strong&gt;ಪಶ್ಚಿಮ ಘಟ್ಟಗಳು ಏಕೆ ಅಷ್ಟು ಮುಖ್ಯ?&lt;/strong&gt;&lt;/h2&gt;&lt;p&gt;ಭಾರತದ ಪಶ್ಚಿಮ ಕರಾವಳಿಯುದ್ದಕ್ಕೂ ಸುಮಾರು 1,600 ಕಿಲೋಮೀಟರ್&zwnj;ಗಳಷ್ಟು ಉದ್ದಕ್ಕೆ ಹರಡಿರುವ ಪಶ್ಚಿಮ ಘಟ್ಟಗಳು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹರಡಿಕೊಂಡಿವೆ. ಇದು ವಿಶ್ವದ ಎಂಟು ಅತ್ಯಂತ ಶ್ರೀಮಂತ ಜೀವವೈವಿಧ್ಯತೆಯ ತಾಣಗಳಲ್ಲಿ (Hottest Biodiversity Hotspots) ಒಂದಾಗಿದೆ ಮತ್ತು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನೂರಾರು ಅಪರೂಪದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆವಾಸಸ್ಥಾನವಾಗಿದೆ. ಭಾರತದ ಮಾನ್ಸೂನ್ (ಮಳೆ) ವ್ಯವಸ್ಥೆಯ ಮೇಲೆ ಇದು ಭಾರಿ ಪ್ರಭಾವ ಬೀರುತ್ತದೆ. ದಕ್ಷಿಣ ಭಾರತದ ಪ್ರಮುಖ ನದಿಗಳಾದ ಕೃಷ್ಣಾ, ಗೋದಾವರಿ, ಕಾವೇರಿ, ಪೆರಿಯಾರ್, ಮಾಂಡೋವಿ ಮತ್ತು ಶರಾವತಿ ನದಿಗಳ ಉಗಮ ಸ್ಥಾನ ಇದಾಗಿದ್ದು, ಇದನ್ನು ದಕ್ಷಿಣ ಭಾರತದ &lsquo;ವಾಟರ್ ಟವರ್&rsquo; (ನೀರಿನ ತೊಟ್ಟಿ) ಎಂದೂ ಕರೆಯಲಾಗುತ್ತದೆ.&lt;/p&gt;&lt;h2&gt;&lt;strong&gt;ಎಷ್ಟು ಪ್ರದೇಶವನ್ನು ಘೋಷಿಸಲು ಪ್ರಸ್ತಾಪಿಸಲಾಗಿದೆ?&lt;/strong&gt;&lt;/h2&gt;&lt;p&gt;ಜುಲೈ 2024 ರಲ್ಲಿ ಹೊರಡಿಸಲಾದ ಕೊನೆಯ ಕರಡು ಅಧಿಸೂಚನೆಯಲ್ಲಿ, ಆರು ರಾಜ್ಯಗಳ ಒಟ್ಟು 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಇಎಸ್&zwnj;ಎ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದೆ. ಇದು 2013 ರ ಕಸ್ತೂರಿರಂಗನ್ ಸಮಿತಿಯು ಶಿಫಾರಸು ಮಾಡಿದ್ದ ಸುಮಾರು 60,000 ಚದರ ಕಿಲೋಮೀಟರ್&zwnj;ಗಿಂತ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, 2011 ರಲ್ಲಿ ಮಾಧವ್ ಗಾಡ್ಗೀಳ್ ಸಮಿತಿಯು ರಕ್ಷಣೆಗಾಗಿ ಪ್ರಸ್ತಾಪಿಸಿದ್ದ ಬೃಹತ್ 1,29,037 ಚದರ ಕಿಲೋಮೀಟರ್ ಪ್ರದೇಶಕ್ಕಿಂತ ಅತ್ಯಂತ ಕಡಿಮೆಯಾಗಿದೆ.&lt;/p&gt;&lt;h2&gt;&lt;strong&gt;ಯಾವ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ?&lt;/strong&gt;&lt;/h2&gt;&lt;p&gt;ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡುವ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಅಥವಾ ಕಟ್ಟುನಿಟ್ಟಾಗಿ ನಿಯಂತ್ರಿಸಲು ಪ್ರಸ್ತಾಪಿಸಲಾಗಿದೆ. ಹೊಸ ಗಣಿಗಾರಿಕೆ (Mining) ಮತ್ತು ಕಲ್ಲು ಗಣಿಗಾರಿಕೆ (Quarrying) ಯೋಜನೆಗಳು, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು (Thermal Power Plants), ಪ್ರಸ್ತುತ ಚಾಲ್ತಿಯಲ್ಲಿರುವ ಗಣಿಗಾರಿಕೆಗಳ ವಿಸ್ತರಣೆ, ತೀವ್ರ ಮಾಲಿನ್ಯಕಾರಕ &lsquo;ರೆಡ್-ಕ್ಯಾಟಗರಿ&rsquo; (Red-Category) ಕೈಗಾರಿಕೆಗಳು ಹಾಗೂ 20,000 ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ದೊಡ್ಡ ನಿರ್ಮಾಣ ಮತ್ತು ಟೌನ್&zwnj;ಶಿಪ್ ಯೋಜನೆಗಳನ್ನ ನಿಯಂತ್ರಿಸಲಾಗುತ್ತದೆ,&lt;/p&gt;&lt;p&gt;ಪರಿಸರವಾದಿಗಳ ಪ್ರಕಾರ, ಈ ಭಾಗದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕುಸಿತ, ಅರಣ್ಯ ನಾಶ ಮತ್ತು ನೀರಿನ ಅಭಾವವನ್ನು ತಡೆಯಲು ಈ ಕಠಿಣ ನಿಯಮಗಳು ಅತ್ಯಗತ್ಯವಾಗಿವೆ.&lt;/p&gt;&lt;h2&gt;&lt;strong&gt;ಇಷ್ಟು ವರ್ಷಗಳ ವಿಳಂಬಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಸ್ಥಳೀಯ ಸಮುದಾಯಗಳು, ತೋಟಗಳ ಮಾಲೀಕರು, ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಈ ಇಎಸ್&zwnj;ಎ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿವೆ. ಇದರಿಂದ ತಮ್ಮ ಜೀವನೋಪಾಯ, ಮೂಲಸೌಕರ್ಯ ಯೋಜನೆಗಳು ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ ಎಂಬುದು ಅವರ ಆತಂಕವಾಗಿದೆ.&lt;/p&gt;&lt;p&gt;&lt;strong&gt;ಗಾಡ್ಗೀಳ್ ವರದಿ (2010):&lt;/strong&gt; ಪ್ರಸಿದ್ಧ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು ಇಡೀ ಪಶ್ಚಿಮ ಘಟ್ಟ ಪ್ರದೇಶವನ್ನೇ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಶಿಫಾರಸು ಮಾಡಿತ್ತು. ಆದರೆ ರಾಜ್ಯಗಳು ಇದನ್ನು ತೀವ್ರವಾಗಿ ವಿರೋಧಿಸಿದವು.&lt;/p&gt;&lt;p&gt;&lt;strong&gt;ಕಸ್ತೂರಿರಂಗನ್ ವರದಿ (2012): &lt;/strong&gt;ವಿರೋಧದ ಬೆನ್ನಲ್ಲೇ ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಲಾಯಿತು. ಈ ಸಮಿತಿಯು ಮಧ್ಯಮ ಮಾರ್ಗವನ್ನು ಅನುಸರಿಸಿತು. ಇಡೀ ಪಶ್ಚಿಮ ಘಟ್ಟಗಳ ಬದಲಿಗೆ, ಕೇವಲ ದಟ್ಟ ಅರಣ್ಯ ಮತ್ತು ನೈಸರ್ಗಿಕ ಪ್ರದೇಶಗಳನ್ನು ಮಾತ್ರ (Natural Landscapes) ರಕ್ಷಿಸಲು ಮತ್ತು ಮಾನವ ವಸಾಹತು, ಕೃಷಿ ಭೂಮಿಯನ್ನು (Cultural Landscapes) ಇದರಿಂದ ಹೊರಗಿಡಲು ಶಿಫಾರಸು ಮಾಡಿತು. ಆದರೆ, ಈ ಪರಿಷ್ಕೃತ ವರದಿಗೂ ವಿರೋಧ ವ್ಯಕ್ತವಾದ ಕಾರಣ 2014 ರಿಂದೀಚೆಗೆ ಕೇಂದ್ರ ಸರ್ಕಾರ ಆರು ಬಾರಿ ಕರಡು ಅಧಿಸೂಚನೆಗಳನ್ನು ಹೊರಡಿಸಬೇಕಾಯಿತು.&lt;/p&gt;&lt;h2&gt;&lt;strong&gt;ಯಾವ ರಾಜ್ಯಗಳ ಆಕ್ಷೇಪಣೆ ಏನು?&lt;/strong&gt;&lt;/h2&gt;&lt;p&gt;&lt;strong&gt;ಕರ್ನಾಟಕ: &lt;/strong&gt;ಕಸ್ತೂರಿರಂಗನ್ ವರದಿಯನ್ನು ಪ್ರಸ್ತುತ ರೂಪದಲ್ಲಿ ಜಾರಿಗೊಳಿಸುವುದನ್ನು ಕರ್ನಾಟಕ ಮೊದಲಿನಿಂದಲೂ ಅತ್ಯಂತ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ಒಂದು ವೇಳೆ ಈ ಶಿಫಾರಸುಗಳಿಗೆ ಒಪ್ಪಿಗೆ ಇಲ್ಲದಿದ್ದರೆ, ಪರಿಸರ ರಕ್ಷಣೆಗೆ ಪರ್ಯಾಯ ಮಾದರಿಯನ್ನು (Alternative Framework) ಪ್ರಸ್ತಾಪಿಸುವಂತೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಸೂಚಿಸಿದೆ ಎಂದು ವರದಿಯಾಗಿದೆ.&lt;/p&gt;&lt;p&gt;&lt;strong&gt;ಕೇರಳ: &lt;/strong&gt;ತನ್ನ ವ್ಯಾಪ್ತಿಯ ಇಎಸ್&zwnj;ಎ ಪ್ರದೇಶವನ್ನು ಮತ್ತಷ್ಟು ಕಡಿಮೆ ಮಾಡಲು ಕೇರಳ ಒತ್ತಾಯಿಸುತ್ತಿದೆ. 2024 ರ ಕರಡಿನಲ್ಲಿ 9,993.7 ಚದರ ಕಿಲೋಮೀಟರ್ ಪ್ರಸ್ತಾಪಿಸಲಾಗಿದ್ದರೂ, ಇಡುಕ್ಕಿ ಮತ್ತು ವಯನಾಡು ಜಿಲ್ಲೆಗಳ ಸುಮಾರು 31 ಹಳ್ಳಿಗಳನ್ನು ಹೊರಗಿಟ್ಟು, ಇದನ್ನು 8,805 ಚದರ ಕಿಲೋಮೀಟರ್&zwnj;ಗೆ ಇಳಿಸಬೇಕು ಎಂದು ಕೇರಳ ಕೋರಿದೆ. ಆದರೆ ಕೇಂದ್ರದ ತಜ್ಞರ ಸಮಿತಿ ಇದನ್ನು ಒಪ್ಪಿಲ್ಲ.&lt;/p&gt;&lt;p&gt;&lt;strong&gt;ಗೋವಾ: &lt;/strong&gt;ಸತ್ತರಿ ತಾಲೂಕಿನ 21 ಹಳ್ಳಿಗಳನ್ನು ಇಎಸ್&zwnj;ಎ ಪಟ್ಟಿಯಿಂದ ಕೈಬಿಡಬೇಕು ಎಂದು ಗೋವಾ ಸರ್ಕಾರ ಕೇಳಿದೆ.&lt;/p&gt;&lt;h2&gt;&lt;strong&gt;ಯಾವ ರಾಜ್ಯಗಳು ಒಪ್ಪಿಗೆಯ ಅಂಚಿನಲ್ಲಿವೆ?&lt;/strong&gt;&lt;/h2&gt;&lt;p&gt;&lt;strong&gt;ಗುಜರಾತ್:&lt;/strong&gt; ಸಣ್ಣ ಖನಿಜಗಳ ಗಣಿಗಾರಿಕೆ ಮತ್ತು ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಧಕ್ಕೆಯಾಗದಂತೆ ಕೆಲವು ಷರತ್ತುಗಳೊಂದಿಗೆ ತನ್ನ ಅಂತಿಮ ಒಪ್ಪಿಗೆಯನ್ನು ನೀಡಿದೆ.&lt;/p&gt;&lt;p&gt;&lt;strong&gt;ಮಹಾರಾಷ್ಟ್ರ ಮತ್ತು ಗೋವಾ: &lt;/strong&gt;ಕೇಂದ್ರದೊಂದಿಗಿನ ಬಹುತೇಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿವೆ.&lt;/p&gt;&lt;p&gt;&lt;strong&gt;ತಮಿಳುನಾಡು: &lt;/strong&gt;ಕೇವಲ ಕೆಲವು ಸಣ್ಣ ಸಮಸ್ಯೆಗಳನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ.&lt;/p&gt;&lt;h2&gt;&lt;strong&gt;ಮುಂದಿನ ಹಾದಿ ಏನು?&lt;/strong&gt;&lt;/h2&gt;&lt;p&gt;ಸದ್ಯ ಜಾರಿಯಲ್ಲಿರುವ ಕರಡು ಅಧಿಸೂಚನೆಯ ಅವಧಿ ಮತ್ತು ಕೇಂದ್ರದ ತಜ್ಞರ ಸಮಿತಿಯ ಅವಧಿಯು ಈ ಜುಲೈ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದೆ. ಕರ್ನಾಟಕ ಮತ್ತು ಕೇರಳದೊಂದಿಗೆ ಮಾತುಕತೆ ಇನ್ನೂ ಮುಂದುವರಿದಿರುವುದರಿಂದ, ಕೇಂದ್ರ ಸರ್ಕಾರವು ಹಂತ-ಹಂತವಾಗಿ (Phased Approach) ಇದನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಅಂದರೆ, ಒಮ್ಮತ ಮೂಡಿರುವ ರಾಜ್ಯಗಳಲ್ಲಿ ಮೊದಲು ಇಎಸ್&zwnj;ಎ ಜಾರಿಗೊಳಿಸಿ ಅಂತಿಮ ಅಧಿಸೂಚನೆ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಇದು ಜಾರಿಯಾದರೆ ಭಾರತದ ಅತ್ಯಂತ ದೀರ್ಘಾವಧಿಯ ಪರಿಸರ ವಿವಾದವೊಂದು ಅಂತಿಮ ತಾರ್ಕಿಕ ಅಂತ್ಯ ಕಾಣಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/centre-final-notification-western-ghats-esa-karnataka-kerala-phased-manner-san/articleshow-psigizv"/>
        </item>
        <item>
            <title><![CDATA[Nandini Milk: ಕನ್ನಡಿಗರ ಹೆಮ್ಮೆ ಕೆಎಂಎಫ್‌ನ 'ನಂದಿನಿ ಉತ್ಪನ್ನ ಹಾನಿಕಾರಕ' ಎಂದಿದ್ದ ವೈದ್ಯೆಗೆ ಹೈಕೋರ್ಟ್ ತರಾಟೆ!]]></title>
            <link>https://kannada.asianetnews.com/state/karnataka-high-court-refuses-to-stay-fir-against-doctor-sharanya-padma-nandini-milk-reel/articleshow-qx6uti7</link>
            <guid isPermaLink="true">https://kannada.asianetnews.com/state/karnataka-high-court-refuses-to-stay-fir-against-doctor-sharanya-padma-nandini-milk-reel/articleshow-qx6uti7</guid>
            <pubDate>Mon, 22 Jun 2026 13:37:31 +0530</pubDate>
            <description><![CDATA[&lt;p&gt;ನಂದಿನಿ ಸುವಾಸಿತ ಹಾಲಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ವಿಡಿಯೋ ಮಾಡಿದ್ದ ವೈದ್ಯೆ ಡಾ. ಶರಣ್ಯ ಪದ್ಮಾ ಅವರ ವಿರುದ್ಧದ ಎಫ್&zwnj;ಐಆರ್ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ಆತಂಕ ಸೃಷ್ಟಿಸುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khv8bsvak6y6pr2dvqgqvsz6,imgname-kmf-and-doctor-sharanya-padma-1771515012970.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.22): ಕ&lt;/strong&gt;ರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್-KMF) ಉತ್ಪನ್ನವಾದ 'ನಂದಿನಿ ಸುವಾಸಿತ ಹಾಲು' (Nandini Flavoured Milk) ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕವಾಗಿ ವಿಡಿಯೋ ಮಾಡಿ ವೈರಲ್ ಮಾಡಿದ್ದ ವೈದ್ಯೆ ಡಾ. ಶರಣ್ಯ ಪದ್ಮಾ ಅವರಿಗೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್&zwnj;ಐಆರ್ (FIR) ರದ್ದುಗೊಳಿಸಬೇಕು ಅಥವಾ ತಡೆ ನೀಡಬೇಕು ಎಂಬ ವೈದ್ಯೆಯ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸದೇ, ತನಿಖೆ ಮುಂದುವರೆಸಲು ಹಸಿರುನಿಶಾನೆ ತೋರಿದೆ.&lt;/p&gt;&lt;h3&gt;&lt;strong&gt;ಪ್ರಕರಣವೇನು?:&lt;/strong&gt;&lt;/h3&gt;&lt;p&gt;ಕೆಲವು ದಿನಗಳ ಹಿಂದೆ ಡಾ. ಶರಣ್ಯ ಪದ್ಮಾ ಅವರು ಇನ್&zwnj;ಸ್ಟಾಗ್ರಾಂನಲ್ಲಿ ರೀಲ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ನಂದಿನಿ ಸುವಾಸಿತ ಹಾಲು ಆರೋಗ್ಯಕ್ಕೆ ಸರಿಯಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ ಮತ್ತು ನಂದಿನಿ ಬ್ರ್ಯಾಂಡ್ ಹೆಸರಿಗೆ ಧಕ್ಕೆ ತಂದ ಆರೋಪದಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.&lt;/p&gt;&lt;h2&gt;&lt;strong&gt;ನ್ಯಾಯಾಲಯದ ಖಡಕ್ ಮಾತುಗಳು:&lt;/strong&gt;&lt;/h2&gt;&lt;p&gt;ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ವೈದ್ಯೆಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು. 'ಇನ್&zwnj;ಸ್ಟಾಗ್ರಾಂ ರೀಲ್ಸ್ ಮಾಡುವುದು ಜನರಲ್ಲಿ ಆತಂಕ ಮೂಡಿಸುವುದಕ್ಕಲ್ಲ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವೈದ್ಯರು ಈ ರೀತಿ ವರ್ತಿಸುವುದು ಸರಿಯಲ್ಲ' ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. 'ನೀವು ಆ ಹಾಲನ್ನು ಯಾವುದಾದರೂ ಲ್ಯಾಬ್&zwnj;ನಲ್ಲಿ ಟೆಸ್ಟ್ ಮಾಡಿಸಿದ್ದೀರಾ? ಸರ್ಕಾರದ ಗಮನಕ್ಕೆ ಏನಾದರೂ ತಂದಿದ್ದೀರಾ? ಯಾವ ಆಧಾರದ ಮೇಲೆ ಅದು ಸರಿಯಿಲ್ಲ ಎಂದು ಹೇಳುತ್ತಿದ್ದೀರಿ? ನಿಮಗೆ ಆ ಹಾಲು ಇಷ್ಟವಿಲ್ಲದಿದ್ದರೆ ಅದನ್ನು ಕುಡಿಯಬೇಡಿ, ಆದರೆ ಈ ರೀತಿ ಸಾರ್ವಜನಿಕವಾಗಿ ಆತಂಕ ಸೃಷ್ಟಿಸಬೇಡಿ' ಎಂದು ಹೈಕೋರ್ಟ್ ವೈದ್ಯೆಯನ್ನು ಪ್ರಶ್ನಿಸಿದೆ.&lt;/p&gt;&lt;h2&gt;&lt;strong&gt;ತಡೆ ನೀಡಲು ನಿರಾಕರಣೆ:&lt;/strong&gt;&lt;/h2&gt;&lt;p&gt;ವೈದ್ಯೆಯ ಪರ ವಕೀಲರು ಎಫ್&zwnj;ಐಆರ್&zwnj;ಗೆ ತಡೆ ನೀಡುವಂತೆ ಕೋರಿದರು. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ತನಿಖೆಯ ಅಗತ್ಯವಿರುವುದರಿಂದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಗಾಗಿ ಅಥವಾ ವೈಯಕ್ತಿಕ ಅಭಿಪ್ರಾಯಗಳನ್ನು ಜನರ ಮೇಲೆ ಹೇರುವ ಸಲುವಾಗಿ ಮಾಡುವ ಪೋಸ್ಟ್&zwnj;ಗಳು ಕಾನೂನಿನ ಸಂಕಷ್ಟಕ್ಕೆ ಗುರಿಯಾಗಬಹುದು ಎಂಬ ಎಚ್ಚರಿಕೆಯನ್ನು ಈ ಆದೇಶ ನೀಡಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-high-court-refuses-to-stay-fir-against-doctor-sharanya-padma-nandini-milk-reel/articleshow-qx6uti7"/>
        </item>
        <item>
            <title><![CDATA[Mahindra: SUV ಮಾರುಕಟ್ಟೆಯಲ್ಲಿ ಮಹೀಂದ್ರಾ ಸುನಾಮಿ! ಥಾರ್ ನ್ಯೂ ವರ್ಷನ್ ಸೇರಿ 8 ಹೊಸ ಕಾರುಗಳ ಎಂಟ್ರಿ]]></title>
            <link>https://kannada.asianetnews.com/gallery/automobile/car-thars-mahindra-ice-and-electric-and-hybrid-suvs-lined-up-for-launch-india-8gcpfor</link>
            <guid isPermaLink="true">https://kannada.asianetnews.com/gallery/automobile/car-thars-mahindra-ice-and-electric-and-hybrid-suvs-lined-up-for-launch-india-8gcpfor</guid>
            <pubDate>Mon, 22 Jun 2026 12:44:35 +0530</pubDate>
            <description><![CDATA[&lt;p&gt;Mahindra New Cars 2026 List Photo: ಮಹೀಂದ್ರಾ ಪ್ರಿಯರಿಗೆ ಭರ್ಜರಿ ಸುದ್ದಿ ಇಲ್ಲಿದೆ! ಮುಂಬರುವ ದಿನಗಳಲ್ಲಿ ಮಹೀಂದ್ರಾ ಆಟೋಮೋಟಿವ್ ಸಂಸ್ಥೆಯು ಸದ್ದಿಲ್ಲದೆ ಬರೋಬ್ಬರಿ 15ಕ್ಕೂ ಹೆಚ್ಚು ಹೊಸ ಎಸ್&zwnj;ಯುವಿಗಳನ್ನು (SUV) ಸಿದ್ಧಪಡಿಸುತ್ತಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jh294cvf88jqr28vz1bz9tzx,imgname-whatsapp-image-2025-01-08-at-11.42.28.jpeg" type="image/jpeg" height="390" width="690"/>
            <content:encoded><![CDATA[&lt;p&gt;Mahindra New Cars 2026 List Photo: ಮಹೀಂದ್ರಾ ಪ್ರಿಯರಿಗೆ ಭರ್ಜರಿ ಸುದ್ದಿ ಇಲ್ಲಿದೆ! ಮುಂಬರುವ ದಿನಗಳಲ್ಲಿ ಮಹೀಂದ್ರಾ ಆಟೋಮೋಟಿವ್ ಸಂಸ್ಥೆಯು ಸದ್ದಿಲ್ಲದೆ ಬರೋಬ್ಬರಿ 15ಕ್ಕೂ ಹೆಚ್ಚು ಹೊಸ ಎಸ್&zwnj;ಯುವಿಗಳನ್ನು (SUV) ಸಿದ್ಧಪಡಿಸುತ್ತಿದೆ.&amp;nbsp;&lt;/p&gt;&lt;img&gt;&lt;p&gt;ಇದರಲ್ಲಿ ಇಂಟರ್ನಲ್ ಕಂಬಶ್ಚನ್ ಇಂಜಿನ್ (ICE), ಸಂಪೂರ್ಣ ಎಲೆಕ್ಟ್ರಿಕ್ (EV) ಮತ್ತು ಹೈಬ್ರಿಡ್ ತಂತ್ರಜ್ಞಾನದ ಕಾರುಗಳು ಇವೆಯಂತೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ತನ್ನ ಹಳೆಯ ಮಾಡೆಲ್&zwnj;ಗಳಿಗೆ ಮಹೀಂದ್ರಾ ಹೊಸ ಲುಕ್ ಮತ್ತು ಹೈಟೆಕ್ ಫೀಚರ್&zwnj;ಗಳನ್ನು ನೀಡುತ್ತಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಭಾರೀ ಕ್ರೇಜ್ ಹೊಂದಿರುವ ಈ 7-ಸೀಟರ್ ಎಸ್&zwnj;ಯುವಿ ಈಗ ಮತ್ತಷ್ಟು ಬಲಿಷ್ಠವಾಗಿ ಬರಲಿದೆ. ಹೊಸ ಮುಂಭಾಗದ ಗ್ರಿಲ್, ಎಲ್&zwnj;ಇಡಿ ಹೆಡ್&zwnj;ಲ್ಯಾಂಪ್, ಹೊಸ ಅಲಾಯ್ ವೀಲ್&zwnj;ಗಳು ಇದರ ಹೊರಭಾಗದ ಉತ್ತಮ ಆಕರ್ಷಣೆ ಆಗಿರಲಿದೆ. ಒಳಾಂಗಣದಲ್ಲಿ 10.25-ಇಂಚಿನ ಟಚ್&zwnj;ಸ್ಕ್ರೀನ್, ಪನೋರಮಿಕ್ ಸನ್&zwnj;ರೂಫ್, 360-ಡಿಗ್ರಿ ಕ್ಯಾಮೆರಾ, ಲೆವೆಲ್ 2 ADAS ಸುರಕ್ಷತೆ ಇರಲಿದೆ. 2.0L ಪೆಟ್ರೋಲ್ ಮತ್ತು 2.2L ಡೀಸೆಲ್ ಇಂಜಿನ್ ಹೊಂದಿರುವ ಈ ಕಾರು ಆಗಸ್ಟ್ ಆಸುಪಾಸಿನಲ್ಲಿ ಬಿಡುಗಡೆಯಾಗಲಿದೆ.&lt;/p&gt;&lt;img&gt;&lt;p&gt;ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ನವೀಕರಿಸಲಾಗುತ್ತಿದೆ. ಹೊಸ ಗ್ರಿಲ್, ಬಂಪರ್, ದೊಡ್ಡ ಇನ್ಫೋಟೈನ್&zwnj;ಮೆಂಟ್ ಸಿಸ್ಟಮ್ ಹೊಂದಿರಲಿದ್ದು, 2.2-ಲೀಟರ್ mHawk ಡೀಸೆಲ್ ಇಂಜಿನ್, ಮ್ಯಾನುವಲ್ ಗೇರ್&zwnj;ಬಾಕ್ ಇರಲಿದೆ.&lt;/p&gt;&lt;img&gt;&lt;p&gt;ಆಫ್-ರೋಡ್ ಪ್ರೇಮಿಗಳ ನೆಚ್ಚಿನ ಥಾರ್ 3-ಡೋರ್ ಆವೃತ್ತಿ ಈಗ ಥಾರ್ ರಾಕ್ಸ್ (Thar ROXX) ಮಾದರಿಯಿಂದ ಪ್ರೇರಿತವಾದ ಸಿ-ಆಕಾರದ (C-shaped) ಎಲ್&zwnj;ಇಡಿ ಹೆಡ್&zwnj;ಲೈಟ್&zwnj;ಗಳು, LED ಡಿಆರ್&zwnj;ಎಲ್&zwnj;ಗಳು, ಹೊಸ ಬಂಪರ್ ಪಡೆಯಲಿದೆ. ತಾಂತ್ರಿಕವಾಗಿಯೂ ಇದು ಅಪ್&zwnj;ಗ್ರೇಡ್ ಆಗಲಿದೆ.&lt;/p&gt;&lt;p&gt;&lt;strong&gt;'ಥಾರ್ ರಾಕ್ಸ್'&lt;/strong&gt;&lt;/p&gt;&lt;p&gt;5-ಡೋರ್ ಥಾರ್ ರಾಕ್ಸ್ ಕಾರ್&zwnj; ಕಡಿಮೆ ಬೆಲೆಗೆ ಸಿಗಲು ಮಹೀಂದ್ರಾ ಮಾಸ್ಟರ್ ಪ್ಲಾನ್ ಮಾಡಿದೆ. ಇದರಲ್ಲಿ 3-ಡೋರ್ ಥಾರ್&zwnj;ನಲ್ಲಿರುವ ಸಣ್ಣದಾದ 1.5-ಲೀಟರ್ ಡೀಸೆಲ್ ಇಂಜಿನ್ ಅಳವಡಿಸಲಾಗುತ್ತಿದೆ. ಇದರಿಂದ ಕಾರಿನ ಆರಂಭಿಕ ಬೆಲೆ ಗಣನೀಯವಾಗಿ ಕಡಿಮೆಯಾಗಲಿದ್ದು, ಬಜೆಟ್&zwnj;ನಲ್ಲಿ ಕೊಳ್ಳುವವರಿಗೆ ಇದು ಬೆಸ್ಟ್ ಆಪ್ಷನ್.&lt;/p&gt;&lt;img&gt;&lt;p&gt;ಇದು ಸ್ಕಾರ್ಪಿಯೋ-ಎನ್&zwnj;ಗಿಂತ ಕೆಳಗಿನ ಶ್ರೇಣಿಯಲ್ಲಿರಲಿದ್ದು, ಫೋರ್ಡ್ ಬ್ರಾಂಕೋ, ಲ್ಯಾಂಡ್ ರೋವರ್ ಡಿಫೆಂಡರ್ ಕಾರುಗಳಂತೆ ಕಠಿಣವಾದ, ಬಾಕ್ಸಿ (ಬಾಕ್ಸ್ ಆಕಾರದ) ವಿನ್ಯಾಸ ಇರಲಿದೆ. ಪೆಟ್ರೋಲ್, ಡೀಸೆಲ್, ಹೈಬ್ರಿಡ್, ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಬರಲಿರುವ ಇದು ಟಾಟಾ ಸಿಯೆರಾ ಹಾಗೂ ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲಿದೆ.&lt;/p&gt;&lt;p&gt;&lt;strong&gt;ಮಹೀಂದ್ರಾ ವಿಷನ್ ಎಕ್ಸ್ (Vision X)&lt;/strong&gt;&lt;/p&gt;&lt;p&gt;ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್&zwnj;ಯುವಿ 3ಎಕ್ಸ್&zwnj;ಒ (XUV 3XO) ಬದಲಾಗಿ ಈ ಅತ್ಯಂತ ಸುಧಾರಿತ, ಫ್ಯೂಚರಿಸ್ಟಿಕ್ ವಿನ್ಯಾಸದ ಕಾರು ರೆಡಿಯಾಗುತ್ತಿದೆ.&lt;/p&gt;&lt;p&gt;&lt;strong&gt;ಮಹೀಂದ್ರಾ ವಿಷನ್ ಟಿ (Vision T)&lt;/strong&gt;&lt;/p&gt;&lt;p&gt;ಪ್ರಬಲವಾದ ಆಫ್-ರೋಡಿಂಗ್ ಸಾಮರ್ಥ್ಯ ಹೊಂದಿರುವ ಲೈಫ್&zwnj;ಸ್ಟೈಲ್ ಎಸ್&zwnj;ಯುವಿ ಇದಾಗಿದ್ದು, 2027-28ರ ವೇಳೆಗೆ ಸಿಇ, ಎಲೆಕ್ಟ್ರಿಕ್ ಎರಡೂ ಸಿಗಲಿದೆ.&lt;/p&gt;&lt;p&gt;&lt;strong&gt;ಮಹೀಂದ್ರಾ ವಿಷನ್ ಎಸ್&zwnj;ಎಕ್ಸ್&zwnj;ಟಿ (Vision SXT)&lt;/strong&gt;&lt;/p&gt;&lt;p&gt;ಲೈಫ್&zwnj;ಸ್ಟೈಲ್ ಪಿಕಪ್ ಟ್ರಕ್ ಮಾರುಕಟ್ಟೆಯಲ್ಲಿ ಟೊಯೋಟಾ ಹಿಲಕ್ಸ್, ಇಸುಜು ವಿ-ಕ್ರಾಸ್ ಕಾರುಗಳಿಗೆ ಟಕ್ಕರ್ ಕೊಡಲು ಇದು ಸಿದ್ಧವಾಗುತ್ತಿದೆ. ಆಧುನಿಕ ವಿನ್ಯಾಸ, ಆಲ್-ವೀಲ್ ಡ್ರೈವ್ (AWD) ಸಿಸ್ಟಮ್ ಹಾಗೂ ಮಲ್ಟಿಪಲ್ ಪವರ್&zwnj;ಟ್ರೇನ್ ಆಯ್ಕೆಗಳೊಂದಿಗೆ ಇದು 2027-28 ರ ವೇಳೆಗೆ ಬರಬಹುದು.&lt;/p&gt;&lt;img&gt;&lt;p&gt;&lt;strong&gt;ಮಹೀಂದ್ರಾ ಬಿಇ 07 (BE 07)&lt;/strong&gt;&lt;/p&gt;&lt;p&gt;ಕಂಪನಿಯ 'ಬಾರ್ನ್ ಎಲೆಕ್ಟ್ರಿಕ್' ಸರಣಿಯ ಈ ಕಾರಿನ ರಸ್ತೆ ಪರೀಕ್ಷೆ ಈಗಾಗಲೇ ನಡೆಯುತ್ತಿದೆ. INGLO ಆರ್ಕಿಟೆಕ್ಚರ್ ಆಧಾರಿತ ಈ ಕಾರಿನಲ್ಲಿ 59 kWh ನಿಂದ 79 kWh ವರೆಗಿನ ಬ್ಯಾಟರಿ ಪ್ಯಾಕ್ ಇರಲಿದ್ದು, ಸಿಂಗಲ್ ಚಾರ್ಜ್&zwnj;ನಲ್ಲಿ ಬರೋಬ್ಬರಿ 500 ಕಿಮೀ ಮೈಲೇಜ್ (ರೇಂಜ್) ನೀಡುವ ನಿರೀಕ್ಷೆಯಿದೆ. ಇದು ಹ್ಯುಂಡೈ ಕ್ರೆಟಾ ಇವಿ ಮತ್ತು ಟಾಟಾ ಹ್ಯಾರಿಯರ್ ಇವಿಗೆ ಸ್ಪರ್ಧೆ ಒಡ್ಡಲಿದೆ.&lt;/p&gt;&lt;p&gt;&lt;strong&gt;ಮಹೀಂದ್ರಾ ಥಾರ್ ಇ (Thar.e)&lt;/strong&gt;&lt;/p&gt;&lt;p&gt;ಆಫ್-ರೋಡ್ ಪ್ರಿಯರು ಕಾತರದಿಂದ ಕಾಯುತ್ತಿರುವ ಸಂಪೂರ್ಣ ಎಲೆಕ್ಟ್ರಿಕ್ ಥಾರ್ ಇದಾಗಿದೆ. INGLO P1 ಪ್ಲಾಟ್&zwnj;ಫಾರ್ಮ್ ಆಧಾರಿತ ಈ 5-ಡೋರ್ ಎಲೆಕ್ಟ್ರಿಕ್ ಎಸ್&zwnj;ಯುವಿ 2028ರ ವೇಳೆಗೆ ಭಾರತೀಯ ರಸ್ತೆಗಿಳಿಯುವ ನಿರೀಕ್ಷೆಯಿದೆ.&lt;/p&gt;&lt;p&gt;ಬೊಲೆರೊ (Bolero)ವನ್ನು ಮಾತ್ರ ಮಹೀಂದ್ರಾ ಕೈಬಿಡುತ್ತಿಲ್ಲ. ಮುಂದಿನ ಪೀಳಿಗೆಯ (Next-Gen) ಬೊಲೆರೊ, ನವೀಕರಿಸಿದ ಬೊಲೆರೊ ನಿಯೋ (Bolero Neo) ಕಾರುಗಳು ಹೊಸ ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ಬರಲಿವೆ.&lt;/p&gt;]]></content:encoded>
            <category>news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/automobile/car-thars-mahindra-ice-and-electric-and-hybrid-suvs-lined-up-for-launch-india-8gcpfor"/>
        </item>
        <item>
            <title><![CDATA[ಬಿಜೆಪಿ ಧರ್ಮಸ್ಥಳ ಸಭೆಗೆ ಹಿರಿಯರ ವಿರೋಧ, ಕುದುರೆ ವ್ಯಾಪಾರ ಮಾಡಿದವರು ಬಂದು ಪ್ರಮಾಣ ಮಾಡ್ಲಿ ಎಂದ ಆರ್ ಅಶೋಕ್]]></title>
            <link>https://kannada.asianetnews.com/politics/karnataka-bjp-internal-rift-widens-over-dharmasthala-oath-proposal-r-ashoka-rushes-to-delhi-over-mlc-cross-voting-gdp/articleshow-ih9g876</link>
            <guid isPermaLink="true">https://kannada.asianetnews.com/politics/karnataka-bjp-internal-rift-widens-over-dharmasthala-oath-proposal-r-ashoka-rushes-to-delhi-over-mlc-cross-voting-gdp/articleshow-ih9g876</guid>
            <pubDate>Mon, 22 Jun 2026 13:28:15 +0530</pubDate>
            <description><![CDATA[ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನವು ಬಿಜೆಪಿಯಲ್ಲಿ ತೀವ್ರ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವ ನಿರ್ಧಾರಕ್ಕೆ ಪಕ್ಷದ ಹಿರಿಯ ನಾಯಕರೇ ವಿರೋಧ ವ್ಯಕ್ತಪಡಿಸಿದ್ದು, ಈ ವಿವಾದ ಇದೀಗ ದೆಹಲಿ ಹೈಕಮಾಂಡ್ ಅಂಗಳ ತಲುಪಿದೆ. ಈ ಬೆಳವಣಿಗೆಗಳ ಬಗ್ಗೆ ಮೈತ್ರಿಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kdt0y1e62wjg4d74b6ksacg2,imgname-r-ashoka-1767178700230.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನ (Cross Voting) ಹಾಗೂ ಇದಕ್ಕೆ ತನಿಖೆ ನಡೆಸಲು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಆಣೆ-ಪ್ರಮಾಣ ಮಾಡಿಸಲು ಮುಂದಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿರ್ಧಾರಕ್ಕೆ ಸ್ವಪಕ್ಷದಲ್ಲೇ ತೀವ್ರ ಅಪಸ್ವರ ಕೇಳಿಬಂದಿದೆ. ಈ ಸೂಕ್ಷ್ಮ ವಿಚಾರ ಈಗ ದಿಲ್ಲಿ ಅಂಗಳ ತಲುಪಿದ್ದು, ವಿರೋಧ ಪಕ್ಷದ ನಾಯಕ ಆರ್&zwnj; ಅಶೋಕ್ ಹೈಕಮಾಂಡ್ ನಾಯಕರ ಭೇಟಿಗೆ ಸಜ್ಜಾಗಿದ್ದಾರೆ. ಮತ್ತೊಂದೆಡೆ, ಮೈತ್ರಿ ಪಕ್ಷದ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;h2&gt;1. ಧರ್ಮಸ್ಥಳ ಆಣೆ-ಪ್ರಮಾಣ ಬೇಡ: &amp;nbsp;ಆರ್&zwnj; ಅಶೋಕ್&amp;nbsp;&lt;/h2&gt;&lt;p&gt;ಧರ್ಮಸ್ಥಳದಲ್ಲಿ ಶಾಸಕರಿಂದ ಪ್ರಮಾಣ ಮಾಡಿಸುವ ವಿಚಾರದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್&zwnj; ಅಶೋಕ್, ಹಿರಿಯರ ಸಲಹೆಯಂತೆ ನಡೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&quot;ನಮ್ಮ ಪಕ್ಷದ ಹಿರಿಯ ನಾಯಕರಾದ ಸುರೇಶ್ ಕುಮಾರ್, ಡಿ.ವಿ. ಸದಾನಂದಗೌಡ ಸೇರಿದಂತೆ ಹಲವರು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿರಿಯರ ಈ ನಡೆ ಮತ್ತು ಒಟ್ಟಾರೆ ಜನಾಭಿಪ್ರಾಯದಂತೆಯೇ ನಾವು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ&quot; ಎಂದು ಅಶೋಕ್ ಹೇಳಿದರು.&lt;/p&gt;&lt;h3&gt;'ಆಪರೇಷನ್ ಹಸ್ತ'ದ ವಿರುದ್ಧ ಆಕ್ರೋಶ&lt;/h3&gt;&lt;p&gt;ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಶೋಕ್, &quot;ನಾವು ಅಧಿಕಾರದಲ್ಲಿದ್ದಾಗ ಶಾಸಕರನ್ನು ಸೆಳೆದಿದ್ದಕ್ಕೆ ಅದನ್ನು 'ಆಪರೇಷನ್ ಕಮಲ' ಎಂದು ಟೀಕಿಸುತ್ತಿದ್ದೀರಿ. ಆದರೆ ಈಗ ನೀವು ಮಾಡುತ್ತಿರುವ ಇಂತಹ ಹಲ್ಕಾ ಕೆಲಸಕ್ಕೆ 'ಆಪರೇಷನ್ ಹಸ್ತ' ಅನ್ನಬೇಕಾ? ಕುದುರೆ ವ್ಯಾಪಾರ ಮಾಡಿ, ಹಣ ನೀಡಿ ಅಡ್ಡಮತದಾನ ಮಾಡಿಸಿರುವವರೇ ಬಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ. ಅಧಿಕಾರ ಇದೆ ಎಂದು ನೀವು ಮಾಡುತ್ತಿರುವ ಇಂತಹ ರಾಜಕೀಯ ಎಲ್ಲಿಗೂ ಹೋಗುವುದಿಲ್ಲ, ನಾಳೆ ತಿರುಗಿಸಿ ವಾಪಸ್ ನಿಮಗೇ ಸುತ್ತಿಕೊಳ್ಳುತ್ತದೆ&quot; ಎಂದು ಎಚ್ಚರಿಸಿದರು.&lt;/p&gt;&lt;h2&gt;2. ಕ್ರಾಸ್ ವೋಟಿಂಗ್ ಸುಳಿವು ಸಿಕ್ಕಿದೆ: ನಾಳೆ ಹೈಕಮಾಂಡ್ ಭೇಟಿ&lt;/h2&gt;&lt;p&gt;ಅಡ್ಡಮತದಾನದ ಹಿನ್ನೆಲೆಯಲ್ಲಿ ಹೈಕಮಾಂಡ್ ಗರಂ ಆಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಆರ್&zwnj; ಅಶೋಕ್, ನಾವೇ ಸ್ವತಃ ರಾಷ್ಟ್ರೀಯ ನಾಯಕರ ಭೇಟಿಗೆ ಸಮಯ ಕೇಳಿದ್ದೆವು ಎಂದು ಸ್ಪಷ್ಟಪಡಿಸಿದರು. &quot;ನಾಳೆ (ಮಂಗಳವಾರ) ಮಧ್ಯಾಹ್ನ 12 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಪಾಯಿಂಟ್&zwnj;ಮೆಂಟ್ ಸಿಕ್ಕಿದೆ. ದೆಹಲಿಗೆ ತೆರಳಿ ಕ್ರಾಸ್ ವೋಟಿಂಗ್ ನಡೆದಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಯಾರು ಅಡ್ಡಮತದಾನ ಮಾಡಿದ್ದಾರೆ ಎಂಬ ಬಗ್ಗೆ ಈಗಾಗಲೇ ಸ್ಪಷ್ಟವಾದ ಸುಳಿವು ಸಿಕ್ಕಿದೆ. ಇದರ ತನಿಖೆಗೆ ಸಮಿತಿ ರಚಿಸಲಾಗಿದ್ದು, ಇವತ್ತು ಅಥವಾ ನಾಳೆ ವರದಿ ಕೈಸೇರಲಿದೆ. ಕೆಲವು ಶಾಸಕರ ಮೇಲೆ ತೀವ್ರ ಅನುಮಾನಗಳಿದ್ದು, ಅವರು ಹಣ ಪಡೆದೇ ಮತ ಹಾಕಿದ್ದಾರೆ&quot; ಎಂದು ಗಂಭೀರ ಆರೋಪ ಮಾಡಿದರು.&lt;/p&gt;&lt;p&gt;&quot;ಕ್ಷೇತ್ರದ ಅಭಿವೃದ್ಧಿಗಾಗಿ ಅಂತ ಯಾರೋ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಕ್ಷೇತ್ರದ ಅಭಿವೃದ್ಧಿಗಾಗಿ ಮಾಡಿದ್ದಲ್ಲ, ಕೇವಲ ತಮ್ಮ ಸ್ವಂತ ಅಭಿವೃದ್ಧಿಗಾಗಿ (ಹಣಕ್ಕಾಗಿ) ಮಾಡಿರುವ ಕೆಲಸ&quot;&lt;/p&gt;&lt;p&gt;&mdash; ಆರ್&zwnj;. ಅಶೋಕ್, ವಿರೋಧ ಪಕ್ಷದ ನಾಯಕ&lt;/p&gt;&lt;h2&gt;3. ವಿಜಯೇಂದ್ರ ತೀರ್ಮಾನಕ್ಕೆ ಸ್ವಪಕ್ಷೀಯರೇ ರೆಡ್ ಸಿಗ್ನಲ್!&lt;/h2&gt;&lt;p&gt;ವಿಧಾನ ಪರಿಷತ್&zwnj; ಚುನಾವಣೆಯ ಅಡ್ಡಮತದಾನದ ಸತ್ಯಾಸತ್ಯತೆ ಹೊರತರಲು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿರ್ಧಾರಕ್ಕೆ ಪಕ್ಷದ ಒಳಗಡೆಯೇ ಭಾರಿ ವಿರೋಧ ವ್ಯಕ್ತವಾಗಿದೆ.&lt;/p&gt;&lt;p&gt;ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ: ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದಲ್ಲಿ ರಾಜಕೀಯ ಸಭೆ ನಡೆಸುವುದು ಹಾಗೂ ಆಣೆ-ಪ್ರಮಾಣ ಮಾಡಿಸುವ ನಿರ್ಧಾರವನ್ನು ಕೈಬಿಡುವಂತೆ ರಾಜ್ಯಾಧ್ಯಕ್ಷರಿಗೆ ಬಹಿರಂಗವಾಗಿಯೇ ಸಲಹೆ ನೀಡಿದ್ದಾರೆ.&lt;/p&gt;&lt;p&gt;ಮಾಜಿ ಸಿಎಂ ಡಿ.ವಿ. ಸದಾನಂದಗೌಡ ತೀವ್ರ ಅಸಮಾಧಾನ: &quot;ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ನನ್ನ ವಿರೋಧ ತಿಳಿಸಿದ್ದೇನೆ. ಯಾವುದೇ ಕಾರಣಕ್ಕೂ ಪವಿತ್ರ ಧರ್ಮ ಕ್ಷೇತ್ರಕ್ಕೆ ರಾಜಕೀಯವನ್ನು ಎಳೆದು ತರಬೇಡಿ. ದೇವರ ಹತ್ತಿರವೂ ರಾಜಕೀಯ ಮಾಡುವುದಾದರೆ, ಎಲ್ಲವನ್ನೂ ದೇವರಿಗೇ ಬಿಟ್ಟುಬಿಡಿ. ನಮ್ಮಿಂದ ರಾಜಕೀಯ ಮಾಡಲು ಸಾಧ್ಯವಾಗದಿದ್ದರೆ ದೇವರೇ ರಾಜಕೀಯ ಮಾಡಲಿ&quot; ಎಂದು ಮಾರ್ಮಿಕವಾಗಿ ಕಿಡಿಕಾರಿದ್ದಾರೆ.&lt;/p&gt;&lt;p&gt;ಶಾಸಕ ಎಸ್. ಸುರೇಶ್ ಕುಮಾರ್: ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಸಭೆ ಕರೆಯುವ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;4. 'ರಾಜ್ಯದಲ್ಲಿ ಬ್ಲ್ಯಾಕ್ ಮೇಲ್ ಸರ್ಕಾರ ನಡೆಯುತ್ತಿದೆ': ಹೆಚ್.ಡಿ. ಕುಮಾರಸ್ವಾಮಿ ಟೀಕೆ&lt;/h2&gt;&lt;p&gt;ಧರ್ಮಸ್ಥಳದಲ್ಲಿ ಬಿಜೆಪಿ ಸಭೆ ಕರೆಯುವ ವಿಚಾರವಾಗಿ ಮೈತ್ರಿ ಪಕ್ಷದ ನಾಯಕ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಗೆ ಬೆಂಬಲ ನೀಡುತ್ತಲೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಧರ್ಮಸ್ಥಳಕ್ಕೆ ಶಾಸಕರನ್ನು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಂಪೂರ್ಣವಾಗಿ 'ಬ್ಲ್ಯಾಕ್ ಮೇಲ್' ತಂತ್ರ ನಡೆಯುತ್ತಿದೆ. ಕ್ರಾಸ್ ಓಟಿಂಗ್ ರಾಜಕೀಯಕ್ಕೆ ಹೊಸದೇನಲ್ಲ, ಇತ್ತೀಚೆಗಷ್ಟೇ ಜಾರ್ಖಂಡ್&zwnj;ನಲ್ಲಿ ಕಾಂಗ್ರೆಸ್&zwnj;ನದ್ದೇ ಶಾಸಕರು ಕ್ರಾಸ್ ಓಟ್ ಮಾಡಿದ್ದರು. ಹಣದ ಬಲ (Man power) ಮತ್ತು ತೋಳ್ಬಲ (Muscle power) ಬಳಸಿ ಇಂತಹ ಕೆಲಸಗಳನ್ನು ಮಾಡಿಸುತ್ತಾರೆ. ನಮ್ಮ ಬಿಜೆಪಿ ಸ್ನೇಹಿತರು ಇದಕ್ಕೆ ಹೆದರಬೇಕಾದ ಅಗತ್ಯವಿಲ್ಲ ಎಂದರು.&lt;/p&gt;&lt;h2&gt;2028 ಕ್ಕೆ ಈ ಕೆಟ್ಟ ಸರ್ಕಾರ ತೊಲಗಲಿ&lt;/h2&gt;&lt;p&gt;&quot;ನಮ್ಮ ಜೆಡಿಎಸ್ ಪಕ್ಷದ 17 ಶಾಸಕರನ್ನು ಕರೆದು ನಾನು ಶಿಸ್ತಿನಿಂದ ಚರ್ಚೆ ನಡೆಸಿದ್ದೇನೆ. ಪ್ರಸ್ತುತ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಆದರೆ ಈಗಿನ ಮುಖ್ಯಮಂತ್ರಿಗಳು ಬಹಳ 'ದಾರಾಳ'ವಾಗಿದ್ದಾರೆ! ನಿಮ್ಮ ಕ್ಷೇತ್ರಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಕೊಡುವುದಾಗಿ ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ಹಾಗಾಗಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಹೆಸರಲ್ಲಿ ಕ್ರಾಸ್ ವೋಟ್ ಮಾಡಿರಬಹುದು. ಈ ವಿಚಾರವನ್ನು ಇಲ್ಲಿಗೆ ಬಿಟ್ಟು, ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಕೆಟ್ಟ ಸರ್ಕಾರ ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದೇ ನಮ್ಮ ಮುಂದಿರುವ ಗುರಿ&quot; ಎಂದು ಹೆಚ್&zwnj;ಡಿಕೆ ಕರೆ ನೀಡಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಪರಿಷತ್ ಚುನಾವಣೆಯ ಅಡ್ಡಮತದಾನದ ಕಿಡಿ ಈಗ ಬಿಜೆಪಿಯಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದ್ದು, ಧರ್ಮಸ್ಥಳದ ಆಣೆ-ಪ್ರಮಾಣದ ಹಠಕ್ಕೆ ಹಿರಿಯ ನಾಯಕರು ಬ್ರೇಕ್ ಹಾಕಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಈ ಶಾಸಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>news</category>
            <dc:creator>Gowthami K</dc:creator>
            <atom:link href="https://kannada.asianetnews.com/politics/karnataka-bjp-internal-rift-widens-over-dharmasthala-oath-proposal-r-ashoka-rushes-to-delhi-over-mlc-cross-voting-gdp/articleshow-ih9g876"/>
        </item>
        <item>
            <title><![CDATA[ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲ ಕಾಮೆಂಟ್ ಕೇಸ್: ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್]]></title>
            <link>https://kannada.asianetnews.com/state/karnataka-hc-rejects-bail-for-accused-in-vijayalakshmi-darshan-obscene-comment-case/articleshow-7ng9a84</link>
            <guid isPermaLink="true">https://kannada.asianetnews.com/state/karnataka-hc-rejects-bail-for-accused-in-vijayalakshmi-darshan-obscene-comment-case/articleshow-7ng9a84</guid>
            <pubDate>Mon, 22 Jun 2026 13:11:47 +0530</pubDate>
            <description><![CDATA[&lt;p&gt;ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಮಹಿಳೆಯರ ವಿರುದ್ಧದ ಇಂತಹ ಅಪರಾಧ ಗಂಭೀರವಾದುದು ಎಂದು ಪರಿಗಣಿಸಿ ಪೀಠವು ಈ ಆದೇಶ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj2qb4sjrha0w3xr56r8q1d5,imgname-darshan-and-vijayalakshmi-1771765601074.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.22): ಕ&lt;/strong&gt;ನ್ನಡ ಚಲನಚಿತ್ರ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಮೂವರು ಆರೋಪಿಗಳ ಅರ್ಜಿಯನ್ನು ಹೈಕೋರ್ಟ್&zwnj;ನ ಏಕಸದಸ್ಯ ಪೀಠವು ವಜಾಗೊಳಿಸಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ:&lt;/strong&gt;&lt;/h2&gt;&lt;p&gt;ದರ್ಶನ್ ಅಭಿನಯದ ಬಹುನಿರೀಕ್ಷಿತ 'ಡೆವಿಲ್' ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಜಯಲಕ್ಷ್ಮಿ ಅವರ ಬಗ್ಗೆ ಅತ್ಯಂತ ಅಸಭ್ಯ ಮತ್ತು ಅಶ್ಲೀಲವಾಗಿ ಕಾಮೆಂಟ್ ಮಾಡಲಾಗಿತ್ತು. ಈ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ವಿಜಯಲಕ್ಷ್ಮಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಖುದ್ದಾಗಿ ಆಗಮಿಸಿ ದೂರು ನೀಡಿದ್ದರು. ಅವರ ದೂರಿನನ್ವಯ ನಗರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.&lt;/p&gt;&lt;h2&gt;&lt;strong&gt;ಆರೋಪಿಗಳು ಯಾರು?:&lt;/strong&gt;&lt;/h2&gt;&lt;p&gt;ಈ ಪ್ರಕರಣದಲ್ಲಿ ಪ್ರಶಾಂತ್ ತಲ್ವಾರ್, ಚಂದ್ರಶೇಖರ್ ಮತ್ತು ನಿಂಗರಾಜ್ ಗುಲಾಪ್ಪ ತಲ್ವಾರ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಮೂವರು ಆರೋಪಿಗಳು ಈ ಹಿಂದೆ ಸೆಷನ್ಸ್ ಕೋರ್ಟ್&zwnj;ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಆರೋಪದ ಗಂಭೀರತೆಯನ್ನು ಪರಿಗಣಿಸಿದ್ದ ಸೆಷನ್ಸ್ ಕೋರ್ಟ್ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.&lt;/p&gt;&lt;h2&gt;&lt;strong&gt;ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗಳು:&lt;/strong&gt;&lt;/h2&gt;&lt;p&gt;ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮತ್ತು ತಮಗೆ ಜಾಮೀನು ನೀಡುವಂತೆ ಕೋರಿ ಈ ಮೂವರು ಆರೋಪಿಗಳು ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠವು, ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅಶ್ಲೀಲ ಕಾಮೆಂಟ್ ಮಾಡುವುದು ಕಾನೂನುಬಾಹಿರ ಮತ್ತು ಗಂಭೀರ ಅಪರಾಧ ಎಂದು ಪರಿಗಣಿಸಿ, ಜಾಮೀನು ನೀಡಲು ನಿರಾಕರಿಸಿದೆ. ಈ ಮೂಲಕ ಅಶ್ಲೀಲ ಕಾಮೆಂಟ್ ಮಾಡಿದ ಕಿಡಿಗೇಡಿಗಳಿಗೆ ಕಾನೂನಿನ ಬಿಸಿ ಮುಟ್ಟಿಸಿದಂತಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-hc-rejects-bail-for-accused-in-vijayalakshmi-darshan-obscene-comment-case/articleshow-7ng9a84"/>
        </item>
    </channel>
</rss>
