<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 09 Aug 2026 11:17:01 +0530</lastBuildDate>
        <atom:link href="https://kannada.asianetnews.com/rss/news" rel="self" type="application/rss+xml"/>
        <item>
            <title><![CDATA[BPL Card Holders: ಬಿಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್, 14 ಸಾವಿರ ಕಾರ್ಡ್‌ಗಳಿಗೆ ಕೋಕ್!]]></title>
            <link>https://kannada.asianetnews.com/news/major-shock-from-karnataka-government-for-bpl-cardholders-tumakuru-14000-ineligible-cards-cancelled-sns/articleshow-ik824b2</link>
            <guid isPermaLink="true">https://kannada.asianetnews.com/news/major-shock-from-karnataka-government-for-bpl-cardholders-tumakuru-14000-ineligible-cards-cancelled-sns/articleshow-ik824b2</guid>
            <pubDate>Sun, 09 Aug 2026 11:16:57 +0530</pubDate>
            <description><![CDATA[&lt;p&gt;ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ರಾಜ್ಯ ಸರ್ಕಾರವು ತುಮಕೂರು ಜಿಲ್ಲೆಯೊಂದರಲ್ಲೇ 14,000 ಬಿಪಿಎಲ್ ಕಾರ್ಡ್&zwnj;ಗಳನ್ನು ಎಪಿಎಲ್&zwnj;ಗೆ ಪರಿವರ್ತಿಸಿದೆ. ಆದರೆ ಅರ್ಹರು ಬಿಪಿಎಲ್ ಕಾರ್ಡ್&zwnj;ನಿಂದ ವಂಚಿತರಾಗದಂತೆ ತಡೆಯಲು ಮತ್ತೊಂದು ಅವಕಾಶವನ್ನು ನೀಡಿದ್ದು, ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು ಅಂತ ತಿಳಿದುಕೊಳ್ಳಲು ಈ ಸುದ್ದಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjgwwrhc1y56d9ppwsk8zrv,imgname-bpl-card-1786254357265.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಪರೀಕ್ಷಣೆಯನ್ನು ಕೈಗೆತ್ತಿಕೊಂಡಿತ್ತು. ಇದರ ನಡುವೆಯೇ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್ ಕೊಟ್ಟಿದೆ. ಇದರಂತೆ ಬರೋಬ್ಬರಿ 14 ಸಾವಿರ ಕಾರ್ಡ್&zwnj;ಗಳಿಗೆ ಸರ್ಕಾರ ಕೋಕ್ ಕೊಟ್ಟಿದೆ.&lt;/p&gt;&lt;h2&gt;ತುಮಕೂರಿನಲ್ಲಿ 6 ಲಕ್ಷ ಪಡಿತರ ಚೀಟಿ&lt;/h2&gt;&lt;p&gt;ತುಮಕೂರು ಜಿಲ್ಲೆಯೊಂದರಲ್ಲೇ ಮೇಜರ್ ಸರ್ಜರಿ ನಡೆದಿದ್ದು, 14 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ಆಹಾರ ಇಲಾಖೆ ಎಪಿಎಲ್ ಕಾರ್ಡ್&zwnj;ಗೆ ಕನ್ವರ್ಟ್ ಮಾಡಿದೆ. ಗ್ಯಾರಂಟಿ ಹೊರೆ ತಗ್ಗಿಸಲು ಸರ್ಕಾರದಿಂದ ಮೇಜರ್ ಸರ್ಜರಿಗೆ ಮುಂದಾಗಿದ್ದು, ಐಟಿ ರಿಟರ್ನ್ ಸಲ್ಲಿಸಿರುವ, ಕಾರು ಹೊಂದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ಗಳನ್ನು ಅಪ್&zwnj;ಗ್ರೇಡ್ ಮಾಡಲಾಗಿದೆ.&lt;/p&gt;&lt;p&gt;ತುಮಕೂರು ಜಿಲ್ಲೆಯಲ್ಲಿ 6 ಲಕ್ಷ ಪಡಿತರ ಚೀಟಿದಾರರು ಇದ್ದು, ಈ ಪೈಕಿ 14 ಸಾವಿರ ಬಿಪಿಎಲ್ ಕಾರ್ಡ್&zwnj;ದಾರರನ್ನು ಹೊರಗೆ ಕಳುಹಿಸಲಾಗಿದೆ. ಬಡತನ ರೇಖೆಗಿಂತ ಹೆಚ್ಚಿನ ಆದಾಯ ಹೊಂದಿದ್ದ ನಕಲಿ ಕಾರ್ಡ್&zwnj;ದಾರರನ್ನು ಪತ್ತೆ ಮಾಡಿರುವ ಆಹಾರ ಇಲಾಖೆ, ಕೇಂದ್ರ ಆದಾಯ ತೆರಿಗೆ ಇಲಾಖೆಯಿಂದ ಲಭ್ಯವಾದ ಮಾಹಿತಿ ಆಧಾರದ ಮೇಲೆ ಕಾರ್ಡ್ ಗಳ ವಜಾ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದೇನು?&lt;/h2&gt;&lt;p&gt;ಈ ಬಗ್ಗೆ ನ್ಯೂಸ್&zwnj;18 ಕನ್ನಡದೊಂದಿಗೆ ಮಾತನಾಡಿರುವ ಆಹಾರ ಇಲಾಖೆ ಡಿಡಿ ಅರುಣ್ ಕುಮಾರ್ ಸಂಗಾವಿ, ಈಗ ನಮ್ಮ ಪ್ರಸ್ತುತ ಈ ಆಗಸ್ಟ್ ತಿಂಗಳಿನಲ್ಲಿ ನಮ್ಮ ಜಿಲ್ಲೆಯಲ್ಲಿ ಒಟ್ಟು 6 ಲಕ್ಷದ 40 ಸಾವಿರ ಪಡಿತರ ಚೀಟಿಗಳು ಇದೆ. ಈಗಾಗಲೇ ನಾವು ಹೇಳಿದಂತೆ, ಆಯುಕ್ತರ ಕಚೇರಿಯಿಂದ ನಮಗೆ 32 ಸಾವಿರ ಕಾರ್ಡ್&zwnj;ಗಳ ಪಟ್ಟು ಬಂದಿತ್ತು. ಅವುಗಳನ್ನು ಪರಿಶೀಲನೆ ನಡೆಸಿ ಸಂದರ್ಭದಲ್ಲಿ ನಮಗೆ ಸುಮಾರು 14 ಸಾವಿರ ಕಾರ್ಡ್ ಗಳು ಅನರ್ಹ ಎಂದು ಕಂಡು ಬಂದಿದೆ. ಆದ್ದರಿಂದ ನಾವು ಅವುಗಳನ್ನು ಕನ್ವರ್ಟ್ ಮಾಡಿದ್ದೇವೆ. ಈ 14 ಸಾವಿರ ಕಾರ್ಡ್&zwnj;ದಾರರಲ್ಲಿ ನಾವು ಯಾರಾದರೂ ಬಿಪಿಎಲ್ ಕಾರ್ಡ್&zwnj;ಗಳಿಗೆ ಅರ್ಹರಿದ್ದೇವೆ ಎಂದು ಹೇಳಿದರೆ ಅವುಗಳ ಮರುಪರಿಶೀಲನೆಗೂ ಅವಕಾಶ ಇದೆ.&lt;/p&gt;&lt;p&gt;&lt;strong&gt;ಮತ್ತೆ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಏನು ಮಾಡಬೇಕು?&lt;/strong&gt;&lt;/p&gt;&lt;p&gt;ಅರ್ಹರು ಅಗತ್ಯ ದಾಖಲೆಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಮನವಿಯನ್ನು ಸಲ್ಲಿಕೆ ಮಾಡಬಹುದು. ಅಂತಹ ಅರ್ಜಿಗಳನ್ನು ಸ್ವೀಕಾರ ಮಾಡಿ ನಮ್ ಆಹಾರ ನಿರೀಕ್ಷಕರು, ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆ ನಡೆಸಿ ನಮಗೆ ವರದಿಯನ್ನು ನೀಡುತ್ತಾರೆ. ಅಂತಹ ಅರ್ಹತೆಗಳು ಕಂಡು ಬಂದರೆ ಮತ್ತೆ ಕಾರ್ಡ್&zwnj;ಗಳನ್ನ ಮರುಸ್ಥಾಪನೆ ಮಾಡುವ ಅವಕಾಶವಿದೆ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಕೆಲವರು ಇನ್ಕಮ್ ಟ್ಯಾಕ್ಸ್ ಪೇ ಮಾಡಿರುತ್ತಾರೆ. ಅವರು ಆದಾಯ ತೆರಿಗೆ ಪಾವತಿ ಮಾಡಿರುವವರ ಮಾಹಿತಿಯನ್ನು ಆಯುಕ್ತರು ನಮಗೆ ನೀಡ್ತಾರೆ. ಸ್ವತಃ ನಾಲ್ಕು ಚಕ್ರದ ವಾಹನ ಹೊಂದಿದ್ದರೆ. ಜೊತೆಗೆ ಯಾರಾದರೂ ಏಳೂವರೆ ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದ್ದರೆ, ಇಂತಹ ಅವರನ್ನು ಪಟ್ಟಿಯಲ್ಲಿ ಗುರುತಿಸಿ ಅವರ ಕಾರ್ಡ್&zwnj;ಗಳನ್ನು ನಾವು ಕನ್ವರ್ಟ್ ಮಾಡಿದ್ದೇವೆ ಎಂದು ಆಹಾರ ಇಲಾಖೆ ಡಿಡಿ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Sumanth SN</dc:creator>
            <atom:link href="https://kannada.asianetnews.com/news/major-shock-from-karnataka-government-for-bpl-cardholders-tumakuru-14000-ineligible-cards-cancelled-sns/articleshow-ik824b2"/>
        </item>
        <item>
            <title><![CDATA[ಸಿಂಧೂ ನದಿಯಲ್ಲಿ ಸಿಕ್ಕಿತು ಚಿನ್ನದ ನಿಧಿ, ಪಾಕಿಸ್ತಾನದಲ್ಲಿ ಭಾರೀ ಯಂತ್ರಗಳೊಂದಿಗೆ ನಡೆಯುತ್ತಿದೆ ಗಣಿಗಾರಿಕೆ]]></title>
            <link>https://kannada.asianetnews.com/viral/gold-found-in-indus-river-in-pakistan-heavy-machines-deployed-in-this-region-suh/articleshow-ef6mqti</link>
            <guid isPermaLink="true">https://kannada.asianetnews.com/viral/gold-found-in-indus-river-in-pakistan-heavy-machines-deployed-in-this-region-suh/articleshow-ef6mqti</guid>
            <pubDate>Sun, 09 Aug 2026 10:51:34 +0530</pubDate>
            <description><![CDATA[&lt;p&gt;ನದಿಯಲ್ಲಿ ನೀರು ಹರಿಯುವುದನ್ನು ನೋಡಿದ್ದೇವೆ, ಆದರೆ ನದಿಯ ತಳದಲ್ಲೇ ಚಿನ್ನದ ಕಣಗಳು ಸಿಗುತ್ತವೆ ಎಂದರೆ ಅಚ್ಚರಿಯಾಗದೇ ಇರದು. ಪಾಕಿಸ್ತಾನದ ಸಿಂಧೂ ನದಿ ಇದೀಗ ಇದೇ ಕಾರಣಕ್ಕೆ ಸುದ್ದಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjf9ygx0g3rq69af992ybr0,imgname-gold-found-in-indus-river-in-pakistan-heavy-machines-deployed-in-this-region-1786252687901.jpg" type="image/jpeg" height="390" width="690"/>
            <content:encoded><![CDATA[&lt;p&gt;ನದಿಯಲ್ಲಿ ನೀರು ಹರಿಯುವುದನ್ನು ನೋಡಿದ್ದೇವೆ, ಆದರೆ ನದಿಯ ತಳದಲ್ಲೇ ಚಿನ್ನದ ಕಣಗಳು ಸಿಗುತ್ತವೆ ಎಂದರೆ ಅಚ್ಚರಿಯಾಗದೇ ಇರದು. ಪಾಕಿಸ್ತಾನದ ಸಿಂಧೂ ನದಿ ಇದೀಗ ಇದೇ ಕಾರಣಕ್ಕೆ ಸುದ್ದಿಯಲ್ಲಿದೆ. ನದಿಯ ತಳದಿಂದ ಚಿನ್ನವನ್ನು ಹೊರತೆಗೆಯಲು ಭಾರೀ ಯಂತ್ರಗಳನ್ನು ಬಳಸಲಾಗುತ್ತಿದ್ದು, ಈ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ಚಟುವಟಿಕೆಗಳು ಹೆಚ್ಚಾಗಿವೆ.&lt;/p&gt;&lt;h2&gt;&lt;strong&gt;ಸಿಂಧೂ ನದಿಯಲ್ಲಿ ಚಿನ್ನದ ಗಣಿಗಾರಿಕೆ&lt;/strong&gt;&lt;/h2&gt;&lt;p&gt;ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಸಿಂಧೂ ನದಿಯ ತಳದಿಂದ ಚಿನ್ನ ತೆಗೆಯುವ ಚಟುವಟಿಕೆ ನಡೆಯುತ್ತಿದೆ. ವರದಿಯ ಪ್ರಕಾರ, ಚಿನ್ನದ ಗಣಿಗಾರಿಕೆಗಾಗಿ 77 ಗುತ್ತಿಗೆ ಒಪ್ಪಂದಗಳನ್ನು ನೀಡಲಾಗಿದೆ. ಈ ಪೈಕಿ ಐದು ಒಪ್ಪಂದಗಳನ್ನು ವಿದೇಶಿ ಕಂಪನಿಗಳಿಗೆ ನೀಡಲಾಗಿದೆ ಎನ್ನಲಾಗಿದೆ. ಕಾನೂನುಬದ್ಧ ಗಣಿಗಾರಿಕೆಯ ಜೊತೆಗೆ ಅಕ್ರಮ ಗಣಿಗಾರಿಕೆಯೂ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಇದರಿಂದ ಕೆಲವರಿಗೆ ಆದಾಯ ಸಿಗುತ್ತಿದ್ದರೂ, ಸ್ಥಳೀಯ ರೈತರು ಹಾಗೂ ನಿವಾಸಿಗಳು ನದಿ ತೀರದ ಸವೆತ ಮತ್ತು ಪರಿಸರ ಹಾನಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;₹600 ಬಿಲಿಯನ್ ಮೌಲ್ಯದ ಚಿನ್ನ?&lt;/strong&gt;&lt;/h2&gt;&lt;p&gt;ಸಿಂಧೂ ನದಿಯ ವಿವಿಧ ಭಾಗಗಳಲ್ಲಿ ಗಮನಾರ್ಹ ಪ್ರಮಾಣದ ಚಿನ್ನದ ನಿಕ್ಷೇಪಗಳಿವೆ ಎಂದು ಪಾಕಿಸ್ತಾನ ಸರ್ಕಾರ ಈ ಹಿಂದೆ ಹೇಳಿತ್ತು. ಅಟ್ಟಾಕ್ ಸಮೀಪದ ಪ್ರದೇಶದಲ್ಲಿರುವ ಚಿನ್ನದ ನಿಕ್ಷೇಪಗಳ ಮೌಲ್ಯ ಸುಮಾರು 600 ಬಿಲಿಯನ್ ಪಾಕಿಸ್ತಾನಿ ರೂಪಾಯಿ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ನದಿಗೆ ಚಿನ್ನ ಹೇಗೆ ಬಂತು?&lt;/strong&gt;&lt;/h2&gt;&lt;p&gt;ಇಲ್ಲಿರುವ ಪ್ರಮುಖ ಪ್ರಶ್ನೆಯೇ ಇದು. ನದಿಯ ತಳದಲ್ಲಿ ಚಿನ್ನ ಹೇಗೆ ಸಂಗ್ರಹವಾಯಿತು? ವರದಿಯ ಪ್ರಕಾರ, ಸಿಂಧೂ ನದಿಯಲ್ಲಿರುವ ಚಿನ್ನ ಪರ್ವತ ಪ್ರದೇಶಗಳಿಂದ ಬಂದಿದೆ. ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯ ಟೆಕ್ಟೋನಿಕ್ ಪ್ಲೇಟ್&zwnj;ಗಳ ಚಲನೆಯಿಂದ ಪರ್ವತಗಳು ರೂಪುಗೊಂಡವು. ನಂತರ ನಡೆದ ನೈಸರ್ಗಿಕ ಸವೆತದಿಂದ ಪರ್ವತಗಳಲ್ಲಿದ್ದ ಚಿನ್ನದ ಸಣ್ಣ ಕಣಗಳು ನದಿಗೆ ಸೇರಿವೆ. ಸಿಂಧೂ ನದಿಯ ವೇಗದ ನೀರಿನೊಂದಿಗೆ ಈ ಚಿನ್ನದ ಕಣಗಳು ಕೆಳಭಾಗಕ್ಕೆ ಸಾಗುತ್ತವೆ. ಬಳಿಕ ನದಿಯ ತಳದಲ್ಲಿ ಅವು ಸಂಗ್ರಹವಾಗುತ್ತವೆ. ಹೀಗಾಗಿ ನದಿಯ ತಳದಲ್ಲಿ ಚಿನ್ನದ ಕಣಗಳು ಸಿಗುತ್ತಿವೆ ಎಂದು ವರದಿ ವಿವರಿಸಿದೆ.&lt;/p&gt;&lt;h2&gt;&lt;strong&gt;ಗಣಿಗಾರಿಕೆಯಿಂದ ಪರಿಸರಕ್ಕೆ ಅಪಾಯ?&lt;/strong&gt;&lt;/h2&gt;&lt;p&gt;ಚಿನ್ನದ ಗಣಿಗಾರಿಕೆಯಿಂದ ಕೆಲವರಿಗೆ ಆರ್ಥಿಕ ಲಾಭವಾಗುತ್ತಿದ್ದರೂ, ಭಾರೀ ಯಂತ್ರಗಳ ಬಳಕೆ ಹಾಗೂ ನದಿ ತೀರದ ಗಣಿಗಾರಿಕೆಯಿಂದ ಪರಿಸರದ ಮೇಲೆ ಪರಿಣಾಮ ಬೀರುವ ಆತಂಕವೂ ಇದೆ. ನದಿ ತೀರದ ಸವೆತದಿಂದ ರೈತರು ಮತ್ತು ಸ್ಥಳೀಯ ಸಮುದಾಯಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಂಧೂ ನದಿಯಲ್ಲಿನ ಚಿನ್ನದ ನಿಕ್ಷೇಪ ಇದೀಗ ಪಾಕಿಸ್ತಾನಕ್ಕೆ ಆರ್ಥಿಕ ಅವಕಾಶದ ಜೊತೆಗೆ ಪರಿಸರ ಸವಾಲನ್ನೂ ತಂದಿದೆ.&lt;/p&gt;]]></content:encoded>
            <category>news</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/gold-found-in-indus-river-in-pakistan-heavy-machines-deployed-in-this-region-suh/articleshow-ef6mqti"/>
        </item>
        <item>
            <title><![CDATA[ಆರೆಸ್ಸೆಸ್‌ ಅನ್ನು ಕಾನೂನು ಚೌಕಟ್ಟಿನೊಳಗೆ ತರ್ತೀವಿ: ಪ್ರಿಯಾಂಕ್ ಖರ್ಗೆ | ನೂರು ವರ್ಷಗಳ ಇತಿಹಾಸ ಅಧ್ಯಯನಕ್ಕೆ ಮುಂದಾದ ಗೃಹಸಚಿವ!]]></title>
            <link>https://kannada.asianetnews.com/state/minister-priyank-kharge-said-we-will-bring-rss-within-the-legal-framework-rav/articleshow-ivdw1r4</link>
            <guid isPermaLink="true">https://kannada.asianetnews.com/state/minister-priyank-kharge-said-we-will-bring-rss-within-the-legal-framework-rav/articleshow-ivdw1r4</guid>
            <pubDate>Sun, 09 Aug 2026 10:45:15 +0530</pubDate>
            <description><![CDATA[&lt;p&gt;ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಅವರು, ಕಾನೂನು ಚೌಕಟ್ಟಿನಿಂದ ಹೊರಗಿರುವ ಆರ್&zwnj;ಎಸ್&zwnj;ಎಸ್&zwnj; ಅನ್ನು ಕಾನೂನಿನ ವ್ಯಾಪ್ತಿಗೆ ತರುವುದಾಗಿ ಹೇಳಿದ್ದಾರೆ. ನೋಂದಣಿಯಾಗದ ಸಂಸ್ಥೆಯು ದೇಶಭಕ್ತಿಯ ಪ್ರಮಾಣಪತ್ರ ನೀಡುವುದನ್ನು ಪ್ರಶ್ನಿಸಿ, ಆರ್&zwnj;ಎಸ್&zwnj;ಎಸ್&zwnj;ಗೆ ಅಚ್ಚರಿಯಾಗುವಂತಹ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjf0eyt60aqej8x0yv5atd2,imgname-----------------------2026-08-09t104237.479-1786252377050.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಆ.9): &lt;/strong&gt;ಕಾನೂನು ಚೌಕಟ್ಟಿನಿಂದ ಹೊರಗಿರುವ ಆರ್&zwnj;ಎಸ್&zwnj;ಎಸ್&zwnj; ಅನ್ನು ಕಾನೂನಿನ ಒಳಗೆ ತರುತ್ತೇನೆ. ಎಲ್ಲದರ ಬಗ್ಗೆಯೂ ಈಗ ಬಹಿರಂಗಗೊಳಿಸಲಾಗದು ಎಂದು ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಹೇಳಿದರು.&lt;/p&gt;&lt;h3&gt;ಆರೆಸ್ಸೆಸ್ ಇತಿಹಾಸದ ಬಗ್ಗೆ ಪ್ರಿಯಾಂಕ್ ಖರ್ಗೆ ಅಧ್ಯಯನ&lt;/h3&gt;&lt;p&gt;ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್&zwnj; ಖರ್ಗೆ, ಆರ್&zwnj;ಎಸ್&zwnj;ಎಸ್&zwnj; ನೋಂದಣಿ ಕುರಿತಂತೆ ಈ ಹಿಂದೆ ಬರೆಯಲಾಗಿದ್ದ ಪತ್ರಕ್ಕೆ ನಿರೀಕ್ಷೆಯಂತೆ ಯಾವುದೇ ಬಂದಿಲ್ಲ. ಸದ್ಯ ಆರ್&zwnj;ಎಸ್&zwnj;ಎಸ್&zwnj; ಕಾನೂನು ಚೌಕಟ್ಟಿನಿಂದ ಹೊರಗಿದೆ. ಅದನ್ನು ಕಾನೂನಿನ ಒಳಗೆ ತರಲಾಗುವುದು. ನಾನು ಗೃಹ ಖಾತೆ ವಹಿಸಿಕೊಂಡು ಒಂದೂವರೆ ತಿಂಗಳಾಗಿದ್ದು, 100 ವರ್ಷಗಳ ಇತಿಹಾಸದ ಸಂಸ್ಥೆಯ ಬಗ್ಗೆ ಅಧ್ಯಯನ ಮಾಡಿ ತಿಳಿದುಕೊಳ್ಳುತ್ತೇನೆ. ಎಲ್ಲವನ್ನೂ ಕಾನೂನಾತ್ಮಕವಾಗಿಯೇ ಮಾಡುತ್ತೇನೆ ಎಂದರು.&lt;/p&gt;&lt;h3&gt;ಆರೆಸ್ಸೆಸ್ ಕಾನೂನು ಪ್ರಕಾರ ನೋಂದಣಿಯಾಗಿಲ್ಲ&lt;/h3&gt;&lt;p&gt;ಆರ್&zwnj;ಎಸ್&zwnj;ಎಸ್&zwnj; ಸಂಸ್ಥೆಯೇ ಕಾನೂನು ಪ್ರಕಾರ ನೋಂದಣಿಯಾಗಿಲ್ಲ. ಆದರೆ, ದೇಶದಲ್ಲಿ ದೇಶ ದ್ರೋಹಿ-ದೇಶ ಭಕ್ತಿಯ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಹೀಗೆ ಪ್ರಮಾಣಪತ್ರ ನೀಡಲು ಅವರು ಯಾರು ಎಂಬುದನ್ನು ಹೇಳಬೇಕು. ಮುಂದೆ ಏನು ಮಾಡುತ್ತೇವೆ ಎಂಬುದನ್ನು ಈಗಲೇ ಬಹಿರಂಗವಾಗಿ ಹೇಳುವುದಿಲ್ಲ. ಬಹಿರಂಗಗೊಳಿಸಿದರೆ ನಾವು ತೆಗೆದುಕೊಳ್ಳುವ ಕ್ರಮದಿಂದ ಆರ್&zwnj;ಎಸ್&zwnj;ಎಸ್&zwnj;ಗೆ ಅಚ್ಚರಿಯಾಗುವುದಿಲ್ಲ. ಅವರಿಗೆ ಅಚ್ಚರಿಯಾಗುವಂತಹ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/minister-priyank-kharge-said-we-will-bring-rss-within-the-legal-framework-rav/articleshow-ivdw1r4"/>
        </item>
        <item>
            <title><![CDATA[ಪ್ರಧಾನಿ ಮೋದಿ ಮಾದರಿಯಲ್ಲೇ ವಿಡಿಯೋ ಹರಿಬಿಟ್ಟ ಸಿಎಂ ಡಿಕೆ ಶಿವಕುಮಾರ್.. ಏನು ವಿಚಾರ..?]]></title>
            <link>https://kannada.asianetnews.com/politics/following-pm-modis-model-cm-dk-shivakumar-releases-video-gkn/articleshow-cim1qor</link>
            <guid isPermaLink="true">https://kannada.asianetnews.com/politics/following-pm-modis-model-cm-dk-shivakumar-releases-video-gkn/articleshow-cim1qor</guid>
            <pubDate>Sun, 09 Aug 2026 10:42:31 +0530</pubDate>
            <description><![CDATA[&lt;p&gt;ಬಿಡದಿ ಟೌನ್&zwnj;ಶಿಪ್ ವಿರೋಧಿಸಿ ಜೆಡಿಎಸ್ ಹಾಗೂ ಬಿಜೆಪಿ ಇವತ್ತು ಪಾದಯಾತ್ರೆ ಮಾಡ್ತಿವೆ. ಅದರ ರೂವಾರಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರ ಆರ್ಶೀವಾದವನ್ನೂ ಪಡೆದಿದ್ದಾರೆ. ಬೆನ್ನಲ್ಲೇ ಬಿಜೆಪಿ, ಜೆಡಿಎಸ್ ತಂತ್ರದ ಪ್ರತಿಯಾಗಿ ಸಿಎಂ ಡಿಕೆ ಶಿವಕುಮಾರ್ ವಿಡಿಯೋ ಒಂದನ್ನ ಹರಿಬಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzje9xd74p4p286s48jpev33,imgname-dk-shivakumar-and-pm-modi-1786251638183.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ರಾಮನಗರ: &lt;/strong&gt;ರಾಜಕೀಯದಲ್ಲಿ ಸಮಯಪ್ರಜ್ಞೆ ಮತ್ತು ತಂತ್ರಗಾರಿಕೆ ಬಹಳ ಮುಖ್ಯ ಎಂಬ ಮಾತೊಂದು ಇದೆ. ಈ ಹಿಂದೆ ದೆಹಲಿಯಲ್ಲಿ 'ನೀಟ್' ಅಕ್ರಮದ ವಿರುದ್ಧ ಜೆನ್&zwnj;ಜಿ (Gen-Z) ಯುವಜನತೆ ಹೋರಾಟಕ್ಕಿಳಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಸಂಚಲನ ಮೂಡಿಸಿದ್ದರು. ಈಗ ಅದೇ ಮಾದರಿಯ ತಂತ್ರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಸರಿಸಿದ್ದಾರೆ ಎಂಬ ಅನುಮಾನ ಮೂಡಿದೆ.&lt;/p&gt;&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಯನ್ನು ವಿರೋಧಿಸಿ ಇಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಪಡೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಎಚ್ಚೆತ್ತ ಡಿ.ಕೆ. ಶಿವಕುಮಾರ್, ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ ಸಂದೇಶವೊಂದನ್ನು ಹರಿಬಿಡುವ ಮೂಲಕ ಪ್ರತಿಪಕ್ಷಗಳ ಅಸ್ತ್ರವನ್ನ ಕುಗ್ಗಿಸಲು ಪ್ರಯತ್ನಿಸಿದ್ದಾರೆ.&lt;/p&gt;&lt;p&gt;&lt;strong&gt;ವಿಡಿಯೋದಲ್ಲಿ ಏನಿದೆ? ಸರ್ಕಾರದ ಸ್ಪಷ್ಟನೆ ಇಲ್ಲಿದೆ&lt;/strong&gt;&lt;/p&gt;&lt;h2&gt;&lt;strong&gt;ಬಿಡದಿ ಟೌನ್&zwnj;ಶಿಪ್ ಎಂದರೆ ಕೇವಲ ಬಡಾವಣೆಯಲ್ಲ, ಅದು 'ಎಐ ಸಿಟಿ'&lt;/strong&gt;&lt;/h2&gt;&lt;p&gt;ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್&zwnj;ಶಿಪ್&zwnj; ಯೋಜನೆಗೆ ಮರುಜೀವ ನೀಡಲಾಗುತ್ತಿದೆ. ಇದು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ 'ಅತ್ಯಾಧುನಿಕ ಎಐ ಸಿಟಿ' (AI City) ಆಗಿ ಅಭಿವೃದ್ಧಿ ಹೊಂದಲಿದೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;₹25 ಲಕ್ಷದ ಬದಲಿಗೆ ₹3 ಕೋಟಿ ಪರಿಹಾರ&lt;/strong&gt;!&lt;/h2&gt;&lt;p&gt;ರೈತರ ಹಿತರಕ್ಷಣೆಯೇ ನಮ್ಮ ಆದ್ಯತೆ ಎಂದಿರುವ ಡಿ.ಕೆ.ಎಸ್, ಪರಿಹಾರದ ಮೊತ್ತದ ಮೂಲಕ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿತ್ತು. ಆದರೆ ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ಹೇಳುವ ಮೂಲಕ ರೈತರ ಗಮನ ಸೆಳೆದಿದ್ದಾರೆ.&lt;/p&gt;&lt;h2&gt;&lt;strong&gt;ಹಣ ಬೇಡ ಎನ್ನುವವರಿಗೆ 50:50 ಅವಕಾಶ&lt;/strong&gt;&lt;/h2&gt;&lt;p&gt;ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ ಶೇ. 50ರಷ್ಟು ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಮೂಲಕ ರೈತರು ಯೋಜನೆಯ ಪಾಲುದಾರರಾಗಬಹುದು ಎಂಬ ಆಫರ್ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಯಾರ ಮೇಲೂ ಒತ್ತಾಯವಿಲ್ಲ, ಇದು ಐಚ್ಛಿಕ&lt;/strong&gt;&lt;/h2&gt;&lt;p&gt;ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ವಿರೋಧ ಪಕ್ಷಗಳ 'ಬಲವಂತದ ಭೂಸ್ವಾಧೀನ' ಎಂಬ ಆರೋಪಕ್ಕೆ ಆರಂಭದಲ್ಲೇ ತಣ್ಣೀರೆರಚಿದ್ದಾರೆ.&lt;/p&gt;&lt;h2&gt;&lt;strong&gt;ದಕ್ಷಿಣ ಬೆಂಗಳೂರಿನ ಚಿತ್ರಣ ಬದಲಿಸುವ ಗ್ರೇಟರ್ ಬೆಂಗಳೂರು ಪ್ಲಾನ್&lt;/strong&gt;&lt;/h2&gt;&lt;p&gt;ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆಯು ಬೆಂಗಳೂರು ದಕ್ಷಿಣ ಜಿಲ್ಲೆಯ ಆರ್ಥಿಕ ಚಿತ್ರಣವನ್ನೇ ಬದಲಿಸಲಿದೆ. ಯುವಜನತೆಗೆ ಸಾವಿರಾರು ಉದ್ಯೋಗಾವಕಾಶ ಸೃಷ್ಟಿಸುವುದು ಮತ್ತು ಅನ್ನದಾತರಿಗೆ ಗೌರವಯುತ ಜೀವನ ಒದಗಿಸುವುದು ನಮ್ಮ ಗುರಿ ಎಂದು ಹೇಳಿರುವ ಡಿ.ಕೆ. ಶಿವಕುಮಾರ್, ಈ ಅಭಿವೃದ್ಧಿ ಕಾರ್ಯಕ್ಕೆ ಜನರ ಸಹಕಾರ ಕೋರಿದ್ದಾರೆ. ಒಟ್ಟಿನಲ್ಲಿ, ಪ್ರತಿಪಕ್ಷಗಳ ಪಾದಯಾತ್ರೆಗೆ ಕೌಂಟರ್ ನೀಡಲು ಡಿ.ಕೆ.ಶಿವಕುಮಾರ್ ಅವರು ಮೋದಿ ಮಾದರಿಯಲ್ಲೇ ಡಿಜಿಟಲ್ ಅಸ್ತ್ರ ಪ್ರಯೋಗಿಸಿದ್ದು ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/following-pm-modis-model-cm-dk-shivakumar-releases-video-gkn/articleshow-cim1qor"/>
        </item>
        <item>
            <title><![CDATA[Ahimsa Chetan: ರಾಜ್ಯ ರಾಜಕೀಯಕ್ಕೆ ಅಹಿಂಸಾ ಚೇತನ್ ಎಂಟ್ರಿ; ಸಮ-ಸಮಾಜ ನಿರ್ಮಾಣಕ್ಕೆ ಹೊಸ ರಾಜಕೀಯ ಪಕ್ಷದ ಘೋಷಣೆ!]]></title>
            <link>https://kannada.asianetnews.com/state/social-activist-actor-ahimsa-chetan-announces-new-party-rav/articleshow-6vniiqg</link>
            <guid isPermaLink="true">https://kannada.asianetnews.com/state/social-activist-actor-ahimsa-chetan-announces-new-party-rav/articleshow-6vniiqg</guid>
            <pubDate>Sun, 09 Aug 2026 08:06:48 +0530</pubDate>
            <description><![CDATA[&lt;p&gt;ಹೋರಾಟಗಾರ ಅಹಿಂಸಾ ಚೇತನ್&zwnj; ಅವರು ಕರ್ನಾಟಕದಲ್ಲಿ ಸಮ ಸಮಾಜ ನಿರ್ಮಾಣಕ್ಕಾಗಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದ ಅವರು, ಬಿಡದಿ ಟೌನ್&zwnj;ಶಿಪ್&zwnj; ಮತ್ತು ನೀಟ್&zwnj; ವ್ಯವಸ್ಥೆ ಬಗ್ಗೆ ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzj5x3k4t4q2wdd69h5qz5n1,imgname-----------------------2026-08-09t075519.153-1786242829924.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಮಂಗಳೂರು (ಆ.9): &lt;/strong&gt;ಜನಪರ ಹೋರಾಟಗಾರರು, ಸಂಘಟನೆಗಾರರು, ಚಳವಳಿಗಾರರ ಜೊತೆ ಸೇರಿ ಅಖಂಡ ಕರ್ನಾಟಕಕ್ಕೆ ಸಮ ಸಮಾಜ ಕಟ್ಟಬೇಕು ಎಂಬ ಉದ್ದೇಶದಿಂದ ಉತ್ತಮ ರಾಷ್ಟ್ರ ಕಟ್ಟುವುದಕ್ಕಾಗಿ ರಾಜಕೀಯ ಪಕ್ಷ ಕಟ್ಟುತ್ತೇವೆ ಎಂದು ಹೋರಾಟಗಾರ, ಅಹಿಂಸಾ ಚೇತನ್&zwnj; ಘೋಷಿಸಿದ್ದಾರೆ.&lt;/p&gt;&lt;p&gt;ಅವರು ಶನಿವಾರ ಮಂಗಳೂರು ಭೇಟಿ ವೇಳೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಸ್ತುತ ರಾಜಕೀಯವಾಗಿ ನಡೆಯುತ್ತಿರುವ ಬೆಳವಣಿಗೆ, ಸರ್ಕಾರದ ನಿರ್ಲಕ್ಷ್ಯತನವನ್ನು ವಿರೋಧಿಸಲು ಜನಪರ ಆಡಳಿತಕ್ಕಾಗಿ ರಾಜಕೀಯ ಪಕ್ಷದ ಮೂಲಕವೇ ಪರಿಹಾರವಿದೆ. ತಮ್ಮ ಕುರ್ಚಿ ಅಲುಗಾಡುತ್ತದೆ ಎಂದ ಕೂಡಲೇ ಕಿವುಡ, ಕುರುಡ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ. ಕರ್ನಾಟಕಕ್ಕೆ ಪರಿಹಾರ, ಪರ್ಯಾಯ ಬೇಕು. ಅದಕ್ಕಾಗಿ ಸಮಾನತೆ, ಸಂವಿಧಾನದಂತೆ ನಡೆಯುವ ಪಕ್ಷ ಬೇಕು. ಅದಕ್ಕಾಗಿ ಪ್ರಾದೇಶಿಕ ಪಕ್ಷ ಕಟ್ಟಿ ರಾಜ್ಯವನ್ನು ಬಲಿಷ್ಠ ಮಾಡಲು ಕೆಲಸ ಮಾಡಲಾಗುವುದು. ನಮ್ಮ ಸಿದ್ಧಾಂತದಂತೆ ನಡೆಯುವ, ಸಮಸಮಾಜ, ಸಮಾನತೆ, ನ್ಯಾಯ, ಸಂವಿಧಾನದಂತೆ ನಡೆಯುವ ಉದ್ದೇಶದಂತೆ ಪಕ್ಷಕ್ಕೆ ಹೆಸರಿಡಲಾಗುವುದು, ಅದರ ನೋಂದಾಣಿ ಪ್ರಕ್ರಿಯೆ ನಡೆಯುತ್ತಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್&zwnj; ಸಮಾವೇಶ ನಡೆಸಿ, ರಾಜಕೀಯ ಪಕ್ಷ ಲೋಕಾರ್ಪಣೆ ಮಾಡುವ ಬಗ್ಗೆ ತಯಾರಿ ನಡೆಯುತ್ತಿದೆ ಎಂದರು. ಅದಕ್ಕಾಗಿ ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ರಾಜ್ಯದಲ್ಲಿ ಸಂಚರಿಸಿ ಸಭೆ ನಡೆಸಲಾಗುತ್ತಿದೆ ಎಂದರು.&lt;/p&gt;&lt;h2&gt;ಬಿಡದಿ ಟೌನ್&zwnj;ಶಿಪ್&zwnj; ಆಗಬಾರದು:&lt;/h2&gt;&lt;p&gt;ಬಿಡದಿ ಟೌನ್&zwnj;ಶಿಪ್&zwnj; ಆಗಬಾರದು, ರೈತರು ಭೂಮಿ ಕೈತಪ್ಪಬಾರದು ಎಂಬುದು ನನ್ನ ಆಗ್ರಹ. ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಸಿದು ಕಟ್ಟಡ ಕಟ್ಟಿ, ಲ್ಯಾಂಡ್&zwnj; ಮಾಫಿಯಾ ಲಾಭಿಗಳು ಒಳ್ಳೆಯದಲ್ಲ. ಆ ಯೋಜನೆಯೇ ತಪ್ಪು. ಬೆಂಗಳೂರನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡಲಾಗುತ್ತದೆ ಹೊರತು, ದಕ್ಷಿಣ ಕನ್ನಡ, ಕರಾವಳಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಭಾಗಗಳನ್ನು ನಿರ್ಲಕ್ಷ್ಯ ಮಾಡಿದರೆ ಒಳ್ಳೆಯದಲ್ಲ. ದೆಹಲಿ ಪಕ್ಷಗಳ ಉದ್ದೇಶವೇ ಅಧಿಕಾರ ಲಾಭಕ್ಕಾಗಿ ಅಧಿಕಾರ ವಿಸ್ತರಣೆ, ಸ್ವಂತ ಲಾಭ ಮಾಡಿಕೊಳ್ಳುವುದು ಆಗಿದೆ ಎಂದು ಅವರು ಆರೋಪಿಸಿದರು.&lt;/p&gt;&lt;h3&gt;ಮಹಿಳಾ ಮೀಸಲು ಒಳ್ಳೆಯದು:&lt;/h3&gt;&lt;p&gt;ಕೇಂದ್ರ ಸರ್ಕಾರ ಎಫ್&zwnj;ಸಿಆರ್&zwnj;ಎ (ಭಾರತದಲ್ಲಿ ವಿದೇಶಿ ದೇಣಿಗೆ ಮತ್ತು ಹಣಕಾಸಿನ ನೆರವನ್ನು ಸ್ವೀಕರಿಸುವ ಸಂಸ್ಥೆಗಳ ನಿಂಯಂತ್ರಿಸುವ ಕಾನೂನು) ಬಿಲ್&zwnj; ತರಲು ಹೊರಟಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಾನು ಅಧ್ಯಯನ ಮಾಡಬೇಕಿದೆ. ಬಳಿಕ ಉತ್ತರಿಸುತ್ತೇನೆ. ನಾನು ಕೇಂದ್ರ-ರಾಜ್ಯ ಸರ್ಕಾರ ಮಾಡಿದೆಲ್ಲ ತಪ್ಪು, ಮಾಡಿದೆಲ್ಲ ಸರಿ ಎಂದು ಹೇಳಲ್ಲ ಎಂದರು.&lt;/p&gt;&lt;h3&gt;ನೀಟ್&zwnj; ವ್ಯವಸ್ಥೆಯೇ ಸರಿ ಇಲ್ಲ:&lt;/h3&gt;&lt;p&gt;ಸಂವಿಧಾನಾತ್ಮಕ ಹೋರಾಟಗಳು ಸಮಾಜಕ್ಕೆ ಬೇಕು. ಆದರೆ ಹೋರಾಟ ಓರ್ವ ಸಚಿವರನ್ನು ಗುರಿಯಾಗಿಸಿ, ಅವರನ್ನು ಬದಲಾಯಿಸಲು ಮಾತ್ರ ಇರಬಾರದು, ಒಬ್ಬ ಸಚಿವ ಕೆಳಗಿಳಿದರೆ ಮತ್ತೊಬ್ಬ ಬರುತ್ತಾನೆ. ಆದರೆ ವ್ಯವಸ್ಥೆ ಅದೇ ರೀತಿ ಇರುತ್ತದೆ. ನೀಟ್&zwnj; ಪ್ರಶ್ನೆ ಪತ್ರಿಕೆ ಸೋರಿಕೆ ಮಾತ್ರ ಸಮಸ್ಯೆ ಅಲ್ಲ. ನೀಟ್&zwnj; ವ್ಯವಸ್ತೆಯೇ ಸರಿ ಇಲ್ಲ. ಇದನ್ನು ಸರಿಪಡಿಸಲು ಉತ್ತರ ಭಾರತದ ಉದ್ದೇಶ ನೋಡದೇ, ಇಡೀ ಒಕ್ಕೂಟದಂತೆ ನೋಡಿ ಸಿಇಟಿ ತರಹ ನಮಗೆ ನಮ್ಮ ರಾಜ್ಯದಲ್ಲೇ ಆದ್ಯತೆ ನೀಡುವಂತಹ ವ್ಯವಸ್ಥೆ ಮಾಡಬೇಕು ಎಂದರು.&lt;/p&gt;&lt;p&gt;------&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/social-activist-actor-ahimsa-chetan-announces-new-party-rav/articleshow-6vniiqg"/>
        </item>
        <item>
            <title><![CDATA[Nagarbhavi schoking: ಬಿರಿಯಾನಿಗೆ ಚಟ್ನಿ ಕೊಡದಿದ್ದಕ್ಕೆ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಪುಂಡರು!]]></title>
            <link>https://kannada.asianetnews.com/crime/shocking-incident-in-nagarbhavi-thugs-brutally-beat-up-hotel-staff-for-not-providing-chutney-with-biryani-rav/articleshow-k697cuo</link>
            <guid isPermaLink="true">https://kannada.asianetnews.com/crime/shocking-incident-in-nagarbhavi-thugs-brutally-beat-up-hotel-staff-for-not-providing-chutney-with-biryani-rav/articleshow-k697cuo</guid>
            <pubDate>Sun, 09 Aug 2026 09:59:54 +0530</pubDate>
            <description><![CDATA[ಬೆಂಗಳೂರಿನ ಚಂದ್ರಲೇಔಟ್&zwnj;ನಲ್ಲಿ ಮಷ್ರೂಮ್ ಬಿರಿಯಾನಿಗೆ ಚಟ್ನಿ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳ ಗುಂಪೊಂದು ಹೋಟೆಲ್ ಧ್ವಂಸ ಮಾಡಿದೆ. ಈ ವೇಳೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕ್ಯಾಶ್ ಕೌಂಟರ್ ಜಖಂಗೊಳಿಸಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzjc5gg639drh57zwa5bg1ck,imgname-----------------------2026-08-09t095046.353-1786249396742.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.9): &lt;/strong&gt;ಮಷ್ರೂಮ್ ಬಿರಿಯಾನಿಗೆ ಚಟ್ನಿ ಕೊಟ್ಟಿಲ್ಲವೆಂಬ ಕ್ಷುಲ್ಲಕ್ಕ ಕಾರಣಕ್ಕೆ ಕಿಡಿಗೇಡಿಗಳು ಹೋಟೆಲ್&zwnj; ಧ್ವಂಸ ಮಾಡಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಂದ್ರಲೇಔಟ್&zwnj; ಪೊಲೀಸ್&zwnj; ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಘಟನೆಯ ಸಂಬಂಧ ಹೊಟೇಲ್&zwnj; ಸಿಬ್ಬಂದಿ ರಂಜಿತ್ ಎಂಬುವರು ನೀಡಿದ ದೂರಿನನ್ವಯ ಅರುಣ್&zwnj; ಎಂಬಾತನ ವಿರುದ್ಧ ಗಂಭೀರವಲ್ಲದ ಪ್ರಕರಣ (ಎನ್&zwnj;ಸಿಆರ್&zwnj;) ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಹೋಟೆಲ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿತ&lt;/h2&gt;&lt;p&gt;ಆ.4 ರ ರಾತ್ರಿ ಅಪ್ಪು ಮಷ್ರೂಮ್ ದಮ್ ಬಿರಿಯಾನಿ ಹೋಟೆಲ್&zwnj;ಗೆ ಕಿಡಿಗೇಡಿಗಳ ತಂಡ ಬಂದಿತ್ತು. ಈ ವೇಳೆ ಬಿರಿಯಾನಿಗೆ ಚಟ್ನಿ ಯಾಕೆ ಕೊಟ್ಟಿಲ್ಲವೆಂದು ಸಿಬ್ಬಂದಿ ರಂಜಿತ್ ಎಂಬಾತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಹೋಟೆಲ್&zwnj; ಮುಂದೆ ಇದ್ದ ಟೆಂಟ್, ಕ್ಯಾಶ್ ಕೌಂಟರ್ ಧ್ವಂಸಗೊಳಿಸಿದ್ದಾರೆ. ಅಂಗಡಿಯಲ್ಲಿದ್ದ ಸಿಬ್ಬಂದಿ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಆರಂಭದಲ್ಲಿ ಪೊಲೀಸರು ನಿರಾಕರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಕಿಡಿಗೇಡಿಗಳು ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/shocking-incident-in-nagarbhavi-thugs-brutally-beat-up-hotel-staff-for-not-providing-chutney-with-biryani-rav/articleshow-k697cuo"/>
        </item>
        <item>
            <title><![CDATA[Jaswant Singh Khalra true story: ಸಟ್ಲುಜ್‌- ಕಾಣೆಯಾದವರ ಹುಡುಕಹೊರಟವರೇ ನಾಪತ್ತೆಯಾದರು!]]></title>
            <link>https://kannada.asianetnews.com/cine-world/jaswant-singh-khalra-true-story-why-satluj-movie-was-removed-ott-on-punjab-insurgency-killings-rav/articleshow-d4hl33t</link>
            <guid isPermaLink="true">https://kannada.asianetnews.com/cine-world/jaswant-singh-khalra-true-story-why-satluj-movie-was-removed-ott-on-punjab-insurgency-killings-rav/articleshow-d4hl33t</guid>
            <pubDate>Sun, 09 Aug 2026 09:42:16 +0530</pubDate>
            <description><![CDATA[&lt;p&gt;ಸಾಮಾನ್ಯ ಬ್ಯಾಂಕ್ ಉದ್ಯೋಗಿ ಜಸ್ವಂತ್ ಸಿಂಗ್ ಖಾಲ್ರಾ, ಪಂಜಾಬ್&zwnj;ನಲ್ಲಿ ಪೊಲೀಸರಿಂದ ನಡೆದ 25,000 ಅಮಾಯಕರ ಹತ್ಯಾಕಾಂಡವನ್ನು ಬಯಲಿಗೆಳೆದರು. ಸತ್ಯಕ್ಕಾಗಿ ಹೋರಾಡಿ ತಾವೇ ಬಲಿಯಾದ ಅವರ ಈ ನೈಜ ಕಥೆಯನ್ನಾಧರಿಸಿದ 'ಸಟ್ಲುಜ್' ಸಿನಿಮಾವು ಬಿಡುಗಡೆಯಾದ 48 ಗಂಟೆಗಳಲ್ಲೇ ಓಟಿಟಿಯಿಂದ ಡಿಲೀಟ್ ಆಗಿದ್ದೇಕೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjbdx6hwp0295hm4yv657xh,imgname-----------------------2026-08-09t093712.474-1786248623313.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ನಚಿಕೇತನ್&zwnj;. ಎನ್&zwnj;&lt;/strong&gt;&lt;/p&gt;&lt;p&gt;ಸಟ್ಲುಜ್&zwnj; ಪಂಜಾಬ್&zwnj;ನಲ್ಲಿ ಹರಿಯುವ ಪಂಚನದಿಗಳಲ್ಲೊಂದು. ಇದೇ ಹೆಸರಿನ ಸಿನಿಮಾವೊಂದು ಇತ್ತೀಚೆಗೆ ಓಟಿಟಿಯಲ್ಲಿ ರಿಲೀಸ್&zwnj; ಆಗಿ 24 ಗಂಟೆಗಳ ಮೊದಲೇ ಡಿಲೀಟ್&zwnj; ಆಯ್ತು. ಆ ಸಿನಿಮಾದಲ್ಲಿದ್ದ ನೈಜ ಕಥನದ ಹಿನ್ನೆಲೆ ಬೆಚ್ಚಿಬೀಳಿಸುವಂಥಾದ್ದು. ಜಸ್ವಂತ್ ಸಿಂಗ್ ಖಾಲ್ರಾ ಎಂಬ ಸಾಮಾನ್ಯ ಬ್ಯಾಂಕ್ ಉದ್ಯೋಗಿಯೊಬ್ಬ 25000 ಅಮಾಯಕರ ಹತ್ಯಾಕಾಂಡವನ್ನು ಬಯಲಿಗೆಳೆದು ಕೊನೆಗೆ ತಾನೇ ಬಲಿಯಾದ ಕಥೆಯದು.&lt;/p&gt;&lt;h2&gt;ಯಾರು ಜಸ್ವಂತ್ ಸಿಂಗ್ ಖಾಲ್ರಾ?&lt;/h2&gt;&lt;p&gt;1984 ಜೂನ್&zwnj;ನಲ್ಲಿ ನಡೆದ ಆಪರೇಷನ್&zwnj; ಬ್ಲೂ ಸ್ಟಾರ್&zwnj;(Operation Blue Star) ಕಾರ್ಯಾಚರಣೆ ಹಾಗೂ ಇಂದಿರಾ ಗಾಂಧಿ ಹತ್ಯೆ(Assassination of Indira Gandhi)ಯ ನಂತರ ಪಂಜಾಬ್&zwnj;ನಲ್ಲಿ ಉಗ್ರವಾದ ಮತ್ತು ಉಗ್ರ ವಿರೋಧಿ ಕಾರ್ಯಾಚರಣೆಗಳು ಹೆಚ್ಚಾದವು. 1988ರಲ್ಲಿ ಡಿಜಿಪಿಯಾಗಿದ್ದ ಕೆಪಿಎಸ್&zwnj; ಒಬ್ಬ ಉಗ್ರನನ್ನು ಕೊಂದರೆ ಪೊಲೀಸರಿಗೆ 50 ಸಾವಿರ ರು. ಬಹುಮಾನ ಎಂದು ಘೋಷಣೆ ಮಾಡಿದರು. ಇದರ ಆಸೆಗೆ ಪೊಲೀಸರು ಬೇಟೆಗಾರರಾಗಿ ಅಮಾಯಕ ಯುವಕರಿಗೆ ಉಗ್ರರ ಹಣೆಪಟ್ಟೆ ಕಟ್ಟಿ ಎನ್&zwnj;ಕೌಂಟರ್&zwnj; ಮಾಡತೊಡಗಿದರು ಎನ್ನಲಾಗಿದೆ. ಈ ಮಾಹಿತಿ ತಿಳಿದು ಅದರ ಬೆನ್ನತ್ತಿ ತನಿಖೆ ನಡೆಸಲು ಹೊರಟವನೇ ಜಸ್ವಂತ್ ಸಿಂಗ್ ಖಾಲ್ರಾ.&lt;/p&gt;&lt;h3&gt;ಮಿತ್ರನನ್ನು ಹುಡುಕಹೋದವನಿಗೆ ಸಿಕ್ಕಿದ್ದು 25000 ಶವಗಳು&lt;/h3&gt;&lt;p&gt;1952ರಲ್ಲಿ ಪಂಜಾಬ್&zwnj;ನ ಖಾಲ್ರಾ ಜಿಲ್ಲೆಯಲ್ಲಿ ಜನಿಸಿದ ಜಸ್ವಂತ್ ಸಿಂಗ್ ಖಾಲ್ರಾ, ಬ್ಯಾಂಕ್&zwnj; ಉದ್ಯೋಗಿ. ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದ. ಪಂಜಾಬ್&zwnj;ನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅವನಿಗೆ ಅರಿವೇ ಇರಲಿಲ್ಲ. ಈ ಮಧ್ಯೆ ಒಂದು ದಿನ ಇದ್ದಕ್ಕಿದ್ದಂತೆ ಅವನ ಗೆಳೆಯ ಹಾಗೂ ಗೆಳೆಯನ ತಾಯಿ ಕಾಣೆಯಾದರು. ಗೊಂದಲಕ್ಕೆ ಬಿದ್ದ ಖಾಲ್ರಾ ಗೆಳೆಯನ ತಾಯಿಯ ಫೋಟೋ ಹಿಡಿದು ಪೊಲೀಸ್&zwnj; ಠಾಣೆಗೆ ಅಲೆಯುತ್ತಾನೆ. ಪೊಲೀಸರು ಇವರು ಭಯೋತ್ಪಾದಕನ ತಾಯಿ, ಇವರ ಬಗ್ಗೆ ನಮಗೆ ಗೊತ್ತಿಲ್ಲ ಎಂದು ದೂರು ತೆಗೆದುಕೊಳ್ಳದೇ ವಾಪಸ್&zwnj; ಕಳಿಸುತ್ತಾರೆ. ಬಳಿಕ ಖಾಲ್ರಾ ಅಮೃತಸರ ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೂ ತೆರಳಿ ಫೋಟೋ ತೋರಿಸಿ ವಿಚಾರಿಸುತ್ತಾನೆ. ಅಲ್ಲೂ ಸ್ನೇಹಿತನ ತಾಯಿಯ ಸುಳಿವು ಸಿಗುವುದಿಲ್ಲ. ಬದಲಿಗೆ ಹೆಣಗಳ ರಾಶಿ ಕಾಣಸಿಗುತ್ತದೆ. ಮೂರು ಸ್ಮಶಾನಗಳಲ್ಲಿ 2500ಕ್ಕೂ ಹೆಚ್ಚು ಅಕ್ರಮ ಶವಗಳ ವಿವರಗಳೂ ಲಭ್ಯವಾಗುತ್ತವೆ. ಮೂರು ಸ್ಮಶಾನಗಳಲ್ಲೇ ಇಷ್ಟೊಂದು ಅಕ್ರಮ ಶವಗಳಿದ್ದರೆ, ಪಂಜಾಬ್&zwnj; ಪೂರ್ತಿ ಹುಡುಕಿದರೆ ಅದೆಷ್ಟು ಅಮಾಯಕರ ಮೃತದೇಹಗಳು ಸಿಗಬಹುದು ಎಂದೆನಿಸಿ ಇಡೀ ಪಂಜಾಬ್&zwnj;ನ ಮೂಲೆ ಮೂಲೆ ಅಲೆದು ಮಾಹಿತಿ ಸಂಗ್ರಹಿಸಲು ಶುರು ಮಾಡುತ್ತಾನೆ. ಪುರಸಭೆ ಹಾಗೂ ಸ್ಮಶಾನಗಳಲ್ಲಿ ಶವಸಂಸ್ಕಾರದ ದಾಖಲೆಗಳು, ಶವಗಳನ್ನು ದಹನ ಮಾಡಲು ಕಟ್ಟಿಗೆ ಖರೀದಿಸಿದ ಬಗ್ಗೆ ಹಾಗೂ ಅನೇಕ ಸರ್ಕಾರಿ ದಾಖಲೆಗಳನ್ನು ಸಂಗ್ರಹಿಸುತ್ತಾನೆ. ಇವರ ಹುಡುಕಾಟದಿಂದ ಸರಿಸುಮಾರು 25,000 ಗುರುತು ಸಿಗದ ಶವಗಳನ್ನು ಯಾವುದೇ ಕಾನೂನು ಪ್ರಕ್ರಿಯೆ ಇಲ್ಲದೆ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬುದು ದಾಖಲೆ ಸಮೇತ ಬಹಿರಂಗವಾಗುತ್ತದೆ.&lt;/p&gt;&lt;h3&gt;ಕಾಣೆಯಾದವರನ್ನು ಹುಡುಕಿ ಹೊರಟವನೇ ಕಾಣೆಯಾದ&lt;/h3&gt;&lt;p&gt;ಖಾಲ್ರಾ ಮಾನವ ಹಕ್ಕುಗಳ ಪ್ರಮುಖ ಹೋರಾಟಗಾರನಾಗಿ, ಕಾಣೆಯಾಗಿದ್ದ ಯುವಕರ ಕುಟುಂಬಗಳ ಬಳಿ ತೆರಳಿ ಅವರ ಬಳಿ ತಾನು ಸಂಗ್ರಹಿಸಿದ್ದ ಮಹತ್ವದ ದಾಖಲೆಗಳನ್ನು ತೋರಿಸಿ ಸತ್ಯಾಂಶ ತಿಳಿಸಿ ಇದರ ವಿರುದ್ಧ ಹೋರಾಟ ನಡೆಸಲು ಪ್ರೇರೇಪಿಸಿದ. ಸತ್ಯದ ಅರಿವಾಗಿ ಅಲ್ಲಿನ ನಾಗರಿಕರು ಖಾಲ್ರಾ ಹೋರಾಟಕ್ಕೆ ಬೆಂಬಲ ನೀಡಿದರು. ಈ ವಿಚಾರ ದೇಶ ಮತ್ತು ವಿದೇಶಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಈ ನಡುವೆಯೇ ಖಾಲ್ರಾಗೆ ಕೆನಡಾಕ್ಕೆ ತೆರಳುವ ಅವಕಾಶವೂ ಒದಗಿ ಬಂದಿತು. ಕೆನಡಾದ ಸಂಸತ್&zwnj;ನಲ್ಲಿ ಪಂಜಾಬ್&zwnj;ನ ದುರಂತದ ಬಗ್ಗೆ ಅಲ್ಲಿದ್ದ ಸಿಖ್&zwnj; ಹಾಗೂ ಇತರರಿಗೆ ಖಾಲ್ರಾ ತಿಳಿಸಿದ. ನಂತರ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಈ ಘಟನೆಯ ಬಗ್ಗೆ ಹೋರಾಟಗಳು ಶುರುವಾದವು. ಪತ್ರಿಕೆಗಳಲ್ಲಿ ದೊಡ್ಡ ದೊಡ್ಡದಾಗಿ ಸುದ್ದಿಗಳು ಪ್ರಕಟಗೊಂಡವು. ಹತ್ಯೆಯ ಬಗ್ಗೆ ಹೊಸ ಸಂಚಲನವೇ ಸೃಷ್ಟಿಯಾಯಿತು. ಇದೆಲ್ಲ ನಡೆಯುತ್ತಿರುವಾಗಲೇ ಖಾಲ್ರಾಗೆ ಸಹಾಯ ಮಾಡಿದ್ದ ಕೆಲವರನ್ನು ಹುಡುಕಿ ಪೊಲೀಸರು ಎನ್&zwnj;ಕೌಂಟರ್&zwnj; ಮಾಡಿದ್ದರು. ಇನ್ನೇನು ಈ ಎಲ್ಲಾ ದಾಖಲೆಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಿ ಅಮಾಯಕರ ಪ್ರಾಣವನ್ನು ಬಲಿಪಡೆದ ಪೊಲೀಸರಿಗೆ ಶಿಕ್ಷೆ ಕೊಡಿಸಬೇಕು ಎನ್ನುವಷ್ಟರಲ್ಲಿ ಖಾಲ್ರಾನೇ ನಾಪತ್ತೆಯಾದ!&lt;/p&gt;&lt;p&gt;&lt;strong&gt;ಸಿಬಿಐ ಬರುವವರೆಗೂ ಖಾಲ್ರಾ ಸುಳಿವೇ ಇಲ್ಲ!&lt;/strong&gt;&lt;/p&gt;&lt;p&gt;1995ರ ಸೆ.6ರಂದು ಮನೆಯ ಬಳಿ ಕಾರು ತೊಳೆಯುತ್ತಿದ್ದ ಖಾಲ್ರಾನನ್ನು ಐದಾರು ಮಂದಿ ಕಾರಲ್ಲಿ ಬಂದು ಅಪಹರಿಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಆತನ ಗೆಳೆಯ ಹಾಗೂ ಖಾಲ್ರಾ ಪತ್ನಿ ಪರಮಜಿತ್ ಕೌರ್&zwnj; ಅವರು ಪತಿ ಕಾಣೆಯಾದುದರ ಬಗ್ಗೆ ದೂರು ನೀಡಲು ಹೋದರು. ಪೊಲೀಸರು ನಿರ್ಲಕ್ಷಿಸಿದರು. ಪರಮಜಿತ್&zwnj; ಕೌರ್&zwnj; ಪತಿಗಾಗಿ ಬೀದಿಗಿಳಿದು ಹೋರಾಡಲಾರಂಭಿಸಿದರು. ದಿನ ಕಳೆದಂತೆ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯತೊಡಗಿತು.&lt;/p&gt;&lt;p&gt;2.5 ತಿಂಗಳು ಕಳೆದರೂ ಖಾಲ್ರಾ ಸುಳಿವು ಸಿಗಲೇ ಇಲ್ಲ. ನಂತರ ಪಂಜಾಬ್&zwnj; ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐ ಹೆಗಲಿಗೆ ನೀಡಿತು. ಸಿಬಿಐ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಖಾಲ್ರಾ ಬಗ್ಗೆ ತನಿಖೆ ಆರಂಭಿಸಿದರು. ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿಯು ಅವರಿಗೆ ದೊರಕಿತು. ಕೊನೆಗೆ ಖಾಲ್ರಾ ನಾಪತ್ತೆ ಹಿಂದೆ ಎಸ್&zwnj;ಎಸ್&zwnj;ಪಿ ಸುರ್ಜಿತ್ ಸಿಂಗ್ ಸುಗ್ಗಾ ಹಾಗೂ ಪೊಲೀಸ್&zwnj; ಇಲಾಖೆಯ ಕೆಲವು ಅಧಿಕಾರಿಗಳ ಕೈವಾಡವಿದೆ ಎಂದು ತಿಳಿಯಿತು. ಈ ಎಲ್ಲಾ ಮಾಹಿತಿಯನ್ನು ಕಲೆಹಾಕಿ ಸಿಬಿಐ ಸುಪ್ರೀಂ ಕೋರ್ಟ್&zwnj; ಮೆಟ್ಟಿಲೇರಿತು. ವಿಚಾರಣೆ ಆರಂಭಿಸಿದ ನ್ಯಾಯಾಲಯ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಅಧಿಕಾರಿಗಳನ್ನು ಮುಂದಿನ ವಿಚಾರಣೆ ಬರುವವರೆಗೂ ಅಮಾನತು ಮಾಡಿ ಆದೇಶಿಸಿತು. ಈ ಮಧ್ಯೆ ಸಿಬಿಐಗೆ ದೊರೆತಿದ್ದ ಪ್ರತ್ಯಕ್ಷ ಸಾಕ್ಷಿಗಳ ಪೈಕಿ ಪೊಲೀಸರು ಒಬ್ಬರನ್ನು ಅದಾಗಲೇ ಉಗ್ರ ಎಂದು ಪಟ್ಟ ಕಟ್ಟಿ ಎನ್&zwnj;ಕೌಂಟರ್&zwnj; ಮಾಡಿದ್ದರು. ಎಲ್ಲವನ್ನು ತನಿಖೆ ನಡೆಸಿದ್ದ ಸಿಬಿಐಗೆ ಖಾಲ್ರಾ ನಾಪತ್ತೆಯಾದ ಬಳಿಕ ಏನಾದ ಎಂಬ ಸಣ್ಣ ಕುರುಹು ಸಹ ದೊರೆತಿರಲಿಲ್ಲ. ಅದು ನಿಗೂಢವಾಗಿಯೇ ಉಳಿದಿತ್ತು.&lt;/p&gt;&lt;p&gt;&lt;strong&gt;ರಕ್ಷಿಸಬೇಕಾದ ಪೊಲೀಸರೇ ಭಕ್ಷಕರಾದರು!&lt;/strong&gt;&lt;/p&gt;&lt;p&gt;ದಿನಕಳೆದಂತೆ ಸಿಬಿಐ ತನಿಖೆ ಇನ್ನು ಚುರುಕಾಯಿತು. ಸುರ್ಜಿತ್ ಸಿಂಗ್ ಸುಗ್ಗಾ ಅವರ ಕೈಕೆಳಗೆ ಕೆಲಸದಲ್ಲಿದ್ದ ಒಬ್ಬ ಸಾಮಾನ್ಯ ಅಧಿಕಾರಿ ಮೇಲೆ ಸಂಶಯ ಮೂಡಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಖಾಲ್ರಾ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ದೊರೆಯಲು ಶುರುವಾಯಿತು. ಖಾಲ್ರಾನನ್ನು ಯಾರು ಹೇಗೆ ಅಪಹರಿಸಿದರು, ಬಳಿಕ ಅವನನ್ನು ಎಲ್ಲಿಗೆ ಕರೆದುಕೊಂಡು ಹೋಗಲಾಯಿತು, ನಂತರ ನಡೆದಿದ್ದೇನು ಎಂಬ ಮಾಹಿತಿಯನ್ನು ಸಿಬಿಐ ಆತನಿಂದ ಕಲೆಹಾಕಿತು. ಆದರೆ ಆ ಸಾಕ್ಷಿದಾರನನ್ನು ಸುಪ್ರೀಂ ಕೋರ್ಟ್&zwnj;ನ ಕಟಕಟೆಯಲ್ಲಿ ನಿಲ್ಲಿಸಿ ನ್ಯಾಯಾಧೀಶರ ಮುಂದೆ ಸತ್ಯ ಹೇಳಿಸುವಲ್ಲಿ ಸಿಬಿಐ ವಿಫಲವಾಯಿತು. ಸಾಕ್ಷಿದಾರ ಪೊಲೀಸರ ಬೆದರಿಕೆಗೆ ಹೆದರಿ ಸುಳ್ಳು ಸಾಕ್ಷಿ ನುಡಿಯಬೇಕಾಯಿತು. ಮತ್ತೆ ಸಿಬಿಐ ಅದೇ ಸಾಕ್ಷಿದಾರನಿಂದ ಸತ್ಯ ಹೇಳಿಸಲು ನ್ಯಾಯಾಧೀಶರ ಮುಂದೆ ಹಾಜರುಪಡಿಸಿತು. ಅಲ್ಲಿ ಖಾಲ್ರಾ ಬಗ್ಗೆ ಆ ಸಾಕ್ಷಿದಾರ ನುಡಿದ ಸತ್ಯದ ಬಗ್ಗೆ ಕೇಳಿ ಕೋರ್ಟ್&zwnj;ನಲ್ಲಿ ನೆರೆದಿದ್ದವರೆಲ್ಲ ಬೆಚ್ಚಿಬಿದ್ದರು.&lt;/p&gt;&lt;p&gt;&lt;strong&gt;ಕೋರ್ಟ್&zwnj;ನಲ್ಲಿ ಜಡ್ಜ್&zwnj; ಮುಂದೆ ಸಾಕ್ಷಿದಾರ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಖಾಲ್ರಾನನ್ನು ಎಸ್&zwnj;ಎಸ್&zwnj;ಪಿ ಸುರ್ಜಿತ್ ಸಿಂಗ್ ಸುಗ್ಗಾ ಹಾಗೂ ಇತರ ಪೊಲೀಸ್&zwnj; ಅಧಿಕಾರಿಗಳು ಅಪಹರಿಸಿ ಪೊಲೀಸ್&zwnj; ಠಾಣೆಗೆ ಕರೆದುಕೊಂಡು ಹೋಗಿ ತೀವ್ರವಾಗಿ ಚಿತ್ರಹಿಂಸೆ ನೀಡಿದರು. ಬಳಿಕ ಭೀಕರವಾಗಿ ಹಲ್ಲೆ ನಡೆಸಿ ಎನ್&zwnj;ಕೌಂಟರ್&zwnj; ಮಾಡಿ ಸಾಯಿಸಿದರು. ಅವನ ಮೃತದೇಹವನ್ನು ಸಟ್ಲುಜ್&zwnj; ಹಾಗೂ ಬಿಯಾಸ್ ನದಿ ಸಂಗಮವಾಗುವ ಹರಿಕೆ ಎಂಬಲ್ಲಿ ಬಿಸಾಕಿದ್ದರು. ಪಂಜಾಬ್ ಪೊಲೀಸ್ ಇಲಾಖೆಯ ಸಬ್&zwnj; ಇನ್ಸ್&zwnj;ಪೆಕ್ಟರ್&zwnj;ಗಳಾದ ಸತ್ನಮ್&zwnj; ಸಿಂಗ್&zwnj;, ಸುರೇಂದರ್&zwnj; ಪಾಲ್&zwnj; ಸಿಂಗ್, ಜಸ್&zwnj;ಬೀರ್&zwnj; ಸಿಂಗ್&zwnj; ಹಾಗೂ ಹೆಡ್&zwnj; ಕಾನ್ಸ್&zwnj;ಸ್ಟೇಬಲ್&zwnj;ಗಳಾದ ಪ್ರೀತಿಪಾಲ್&zwnj; ಸಿಂಗ್&zwnj; ಹಾಗೂ ಮೆಹ್ತಾಬ್&zwnj; ಸಿಂಗ್&zwnj; ಅವರು ಜಸ್ವಂತ್&zwnj; ಸಿಂಗ್&zwnj; ಖಾಲ್ರಾ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ದೋಷಿಗಳೆಂದು ಮನಗಂಡ ನ್ಯಾಯಾಲಯ 2005-07ರ ವೇಳೆಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಮಾಹಿತಿ ಪ್ರಕಾರ ಈವರೆಗೂ ಜಸ್ವಂತ್&zwnj; ಸಿಂಗ್&zwnj; ಖಾಲ್ರಾ ಮೃತದೇಹ ಪತ್ತೆಯಾಗಿಲ್ಲ. ಪಂಜಾಬ್&zwnj;ನಲ್ಲಿ ಬಲಿಯಾದ ಅಮಾಯಕರ ಸಾವಿನ ಬಗ್ಗೆ ಇಂದಿಗೂ ಹೋರಾಟಗಳು ನಡೆಯುತ್ತಲೇ ಇವೆ.&lt;/p&gt;&lt;p&gt;ಈ ಸತ್ಯವನ್ನು ಜಗತ್ತಿಗೆ ತಿಳಿಸಲು ಸೆಟ್ಟೇರಿದ ಚಿತ್ರವೇ ಸಟ್ಲುಜ್&zwnj;. ಅಂದು ಪಂಜಾಬ್&zwnj;ನಲ್ಲಿ ನಡೆದಿದ್ದ ಅಮಾಯಕರ ಹತ್ಯೆ ಬಗ್ಗೆ ಸತ್ಯ ಹೇಳಲು ಹೊರಟ ಖಾಲ್ರಾ ನಾಪತ್ತೆಯಾದ. ಇಂದು ಖಾಲ್ರಾ ಬಗ್ಗೆ ಜನರಿಗೆ ತಿಳಿಸಲು ಬಂದ ಸಟ್ಲುಜ್&zwnj; ಕೂಡ ನಾಪತ್ತೆಯಾಯಿತು!&lt;/p&gt;&lt;p&gt;&lt;strong&gt;ಜು.3ರಂದು ರಿಲೀಸ್&zwnj;, ಆದ್ರೆ 48 ಗಂಟೆಯಲ್ಲೇ ಬ್ಯಾನ್&zwnj;!&lt;/strong&gt;&lt;/p&gt;&lt;p&gt;ಸಟ್ಲುಜ್&zwnj; ಸಿನಿಮಾ ಬಿಡುಗಡೆಯಲ್ಲೇ ಹಲವಾರು ವಿಘ್ನಗಳನ್ನು ಎದುರಿಸಬೇಕಾಯಿತು. ಪ್ರಾರಂಭದಲ್ಲಿ &lsquo;ಘಲ್ಲುಘೋರ&rsquo; ಎಂದು ಹೆಸರಿದ್ದ ಸಿನಿಮಾ ಕಾಲಕ್ರಮೇಣ &lsquo;ಪಂಜಾಬ್&zwnj; 95&rsquo; ಎಂದು ಬದಲಾಯಿತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ 2023ರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್&zwnj; ಮಂಡಳಿ 125ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡಲು ಚಿತ್ರತಂಡಕ್ಕೆ ಸೂಚಿಸಿತ್ತು. ಆದರೆ ಚಿತ್ರತಂಡ ಆ ತಿದ್ದುಪಡಿಗಳನ್ನು ಒಪ್ಪದ ಕಾರಣ ಹಲವು ವರ್ಷಗಳ ಕಾಲ ಸಿನಿಮಾ ಬಿಡುಗಡೆಯಾಗಲಿಲ್ಲ. ಕೊನೆಗೂ ಸಟ್ಲುಜ್&zwnj; ಹೆಸರಿನಲ್ಲಿ 2026ರ ಜು.3ರಂದು ಜೀ5ನಲ್ಲಿ ಬಿಡುಗಡೆಯಾಯಿತು. ಆದರೆ ರಿಲೀಸ್&zwnj; ಆದ 48 ಗಂಟೆಗಳಲ್ಲೇ ಅದು ಒಟಿಟಿಯಿಂದ ಮಾಯವಾಯಿತು! ಈ ಚಿತ್ರವನ್ನು ಒಟಿಟಿಯಿಂದ ತೆಗೆದುಹಾಕಲ್ಪಟ್ಟ ಕಾರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಯಿತು. ಈ ವಿವಾದದಿಂದ ಚಿತ್ರ ಮತ್ತು ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನದ ಕುರಿತು ಸಾರ್ವಜನಿಕರಲ್ಲಿ ಮತ್ತಷ್ಟು ಆಸಕ್ತಿ ಮೂಡಿತು.&lt;/p&gt;&lt;p&gt;&lt;strong&gt;ಒಟಿಟಿಯಿಂದ ತೆಗೆಯಲು ಕಾರಣವೇನು?&lt;/strong&gt;&lt;/p&gt;&lt;p&gt;ಸರ್ಕಾರದ ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ಕೆಲವು ಅಂಶಗಳನ್ನು ಭಾರತ ವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ತೆಗೆದುಹಾಕಲಾಯಿತು ಎಂದು ಹೇಳಲಾಗುತ್ತದೆ. ಮತ್ತೊಂದೆಡೆ ಸಿಬಿಎಫ್&zwnj;ಸಿ ಹೇಳಿದ ತಿದ್ದುಪಡಿಗಳನ್ನು ಚಿತ್ರತಂಡ ಅಳವಡಿಕೆ ಮಾಡಿಕೊಳ್ಳಲಿಲ್ಲ. ಹಾಗಾಗಿ ಚಿತ್ರ ಬಿಡುಗಡೆಯಾದ ಬಳಿಕ ಅದನ್ನು ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಖ್ಯಾತ ಗಾಯಕ ದಿಲ್ಜಿತ್&zwnj; ದೋಸಾಂಜ್&zwnj;, ಜಸ್ವಂತ್&zwnj; ಸಿಂಗ್&zwnj; ಖಾಲ್ರಾ ಪಾತ್ರದಲ್ಲಿ ಅಭಿನಯಿಸಿದ್ದು, ಅರ್ಜುನ್&zwnj; ರಾಂಪಲ್&zwnj; ಸೇರಿ ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿದ್ದಾರೆ. ಹನಿ ಟ್ರೆಹಾನ್ ನಿರ್ದೇಶಕರು. ಚಿತ್ರದಲ್ಲಿ ಮಾನವ ಹಕ್ಕುಗಳು, ನ್ಯಾಯ, ಧೈರ್ಯ ಮತ್ತು ಸತ್ಯದ ಮಹತ್ವವನ್ನು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.&lt;/p&gt;&lt;p&gt;ಸಟ್ಲುಜ್&zwnj; ಕೇವಲ ಒಂದು ಸಿನಿಮಾ ಅಲ್ಲ, ಸತ್ಯಕ್ಕಾಗಿ ಹೋರಾಡಿದ ವ್ಯಕ್ತಿಯ ಧೈರ್ಯ ಮತ್ತು ನ್ಯಾಯದ ಮಹತ್ವವನ್ನು ನೆನಪಿಸುವ ನೈಜ ಕಥನ. ಸಮಾಜದಲ್ಲಿ ಸತ್ಯವನ್ನು ಹೇಳುವ ಧೈರ್ಯ ಎಷ್ಟು ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂಬುದನ್ನು ಈ ಚಿತ್ರ ಮನಮುಟ್ಟುವ ರೀತಿಯಲ್ಲಿ ತೋರಿಸುತ್ತದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cine-world/jaswant-singh-khalra-true-story-why-satluj-movie-was-removed-ott-on-punjab-insurgency-killings-rav/articleshow-d4hl33t"/>
        </item>
        <item>
            <title><![CDATA[ಭಾರತದ ಜತೆ ರೈಲ್ವೆ ಸಂಪರ್ಕ: ರಷ್ಯಾ ಪ್ರಸ್ತಾಪ; ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಜಾಲ]]></title>
            <link>https://kannada.asianetnews.com/world-news/russia-is-looking-for-an-alternative-land-route-to-connect-with-india-mrq/articleshow-go8m2r5</link>
            <guid isPermaLink="true">https://kannada.asianetnews.com/world-news/russia-is-looking-for-an-alternative-land-route-to-connect-with-india-mrq/articleshow-go8m2r5</guid>
            <pubDate>Sun, 09 Aug 2026 09:39:22 +0530</pubDate>
            <description><![CDATA[ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಹೋರ್ಮುಜ್ ಜಲಸಂಧಿಯಲ್ಲಿನ ಭದ್ರತಾ ಭೀತಿಯಿಂದಾಗಿ, ರಷ್ಯಾವು ಭಾರತದೊಂದಿಗೆ ಸಂಪರ್ಕ ಸಾಧಿಸಲು ಪರ್ಯಾಯ ಭೂಮಾರ್ಗವನ್ನು ಹುಡುಕುತ್ತಿದೆ. ಈ ನಿಟ್ಟಿನಲ್ಲಿ, ತುರ್ಕ್ಮೆನಿಸ್ತಾನ್, ಇರಾನ್, ಅಫ್ಘಾನಿಸ್ತಾನ್ ಮೂಲಕ ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಸಂಪರ್ಕ ಜಾಲ ನಿರ್ಮಿಸುವ ಪ್ರಸ್ತಾಪವನ್ನು ರಷ್ಯಾ ಮುಂದಿಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzjb8cxmawkedf4jwszqhbz5,imgname-russia-india-1786248442804.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಾಸ್ಕೋ:&lt;/strong&gt; ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಜಲಸಂಧಿಗಳಲ್ಲಿನ ಭದ್ರತಾ ಭೀತಿಯ ಹಿನ್ನೆಲೆಯಲ್ಲಿ, ರಷ್ಯಾದಿಂದ ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಸಂಪರ್ಕ ಜಾಲವನ್ನು ನಿರ್ಮಿಸುವ ಅಗತ್ಯವಿದೆ ಎಂದು ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲ್ಲಿನ್ ಪ್ರತಿಪಾದಿಸಿದ್ದಾರೆ.&lt;/p&gt;&lt;p&gt;ಟಾಸ್ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, &lsquo;ಬಾಸ್ಫರಸ್ ಮತ್ತು ಹೋರ್ಮುಜ್ ಜಲಸಂಧಿಗಳ ಮೂಲಕ ನಡೆಯುವ ಸರಕು ಸಾಗಣೆಯಲ್ಲಿ ಅಪಾಯಗಳು ಹೆಚ್ಚುತ್ತಿವೆ. ಹೀಗಾಗಿ ರಷ್ಯಾಕ್ಕೆ ಪರ್ಯಾಯ ಮತ್ತು ಸುರಕ್ಷಿತ ಭೂಸಾರಿಗೆ ಮಾರ್ಗಗಳ ತುರ್ತು ಅಗತ್ಯವಿದೆ. ಹೊಸ ರೈಲ್ವೆ ಯೋಜನೆಯ ಭಾಗವಾಗಿ ವಿವಿಧ ದೇಶಗಳ ಮೂಲಕ ಹಾದುಹೋಗುವ ಮಾರ್ಗಗಳನ್ನು ರಷ್ಯಾ ಪರಿಶೀಲಿಸುತ್ತಿದೆ.&lt;/p&gt;&lt;h2&gt;&lt;strong&gt;ಭಾರತದ ಜೊತೆ ಸಂಪರ್ಕ&lt;/strong&gt;&lt;/h2&gt;&lt;p&gt;ತುರ್ಕ್ಮೆನಿಸ್ತಾನ್, ಇರಾನ್, ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದ ಮೂಲಕ ಭೂಮಾರ್ಗವಾಗಿ ರೈಲು ಜಾಲ ವಿಸ್ತರಿಸುವ ಪ್ರಸ್ತಾಪಗಳು ಸಕ್ರಿಯವಾಗಿವೆ. ಭಾರತಕ್ಕೆ ಪ್ರವೇಶವನ್ನು ಒದಗಿಸುವ ಯಾವುದೇ ಆಯ್ಕೆಗಳು ಸ್ವೀಕಾರಾರ್ಹ&rsquo; ಎಂದು ತಿಳಿಸಿದರು.&lt;/p&gt;&lt;p&gt;ಮಧ್ಯಪ್ರಾಚ್ಯ ಸಂಘರ್ಷವು ಹೋರ್ಮುಜ್ ಮೂಲಕ ಹಡಗು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಜಾಗತಿಕ ತೈಲ ವ್ಯಾಪಾರದ ಶೇ.25ರಷ್ಟು ಈ ಜಲಸಂಧಿಯ ಮುಖಾಂತರವೇ ಸಾಗಬೇಕಿದೆ. ಹೀಗಾಗಿ ರಷ್ಯಾಕ್ಕೆ ದಕ್ಷಿಣ ಏಷ್ಯಾ ಮತ್ತು ಭಾರತೀಯ ಮಾರುಕಟ್ಟೆಯನ್ನು ತಲುಪಲು ಹೊಸ ದಾರಿ ಹುಡುಕುವುದು ಅನಿವಾರ್ಯವಾಗಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/russia-is-looking-for-an-alternative-land-route-to-connect-with-india-mrq/articleshow-go8m2r5"/>
        </item>
        <item>
            <title><![CDATA[ನೀನು ಕೊಲ್ಲದಿದ್ರೆ ಗಂಡನ ನಾನೇ ಹ*ತ್ಯೆ ಮಾಡ್ತೀನಿ: ಲವರ್‌ಗೆ ಮೆಸೇಜ್‌ ಕಳುಹಿಸಿದ ಮಹಿಳೆ]]></title>
            <link>https://kannada.asianetnews.com/relationship/illicit-relationship-telangana-woman-conspires-with-lover-to-kill-husband-instagram-message-reveals-mrq/articleshow-rlgp93p</link>
            <guid isPermaLink="true">https://kannada.asianetnews.com/relationship/illicit-relationship-telangana-woman-conspires-with-lover-to-kill-husband-instagram-message-reveals-mrq/articleshow-rlgp93p</guid>
            <pubDate>Sun, 09 Aug 2026 09:30:02 +0530</pubDate>
            <description><![CDATA[&lt;p&gt;ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ. ಪತ್ನಿಯ ಇನ್&zwnj;ಸ್ಟಾಗ್ರಾಂ ಸಂದೇಶಗಳನ್ನು ನೋಡಿದ ಪತಿ, ಈ ಕೊಲೆ ಸಂಚನ್ನು ಪತ್ತೆಹಚ್ಚಿ ಪೊಲೀಸರಿಗೆ ದೂರು ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjamky70r8ryjb0b8mhy9q6,imgname-message-1786247794630.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್&zwnj;: &lt;/strong&gt;ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ರಸ್ತೆ ಅಪಘಾತದಲ್ಲಿ ಪತಿಯನ್ನು ಕೊಲ್ಲಲು ಸಂಚು ಹೂಡಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಪತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆತನೇ ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.&lt;/p&gt;&lt;h2&gt;&lt;strong&gt;ಇಲ್ಲದಿದ್ದರೆ ನಾನೇ ಕೊಲ್ಲುತ್ತೇನೆ&lt;/strong&gt;&lt;/h2&gt;&lt;p&gt;ಮಹಬೂಬಾಬಾದ್ ಜಿಲ್ಲೆಯ ಚಿಲಕೋಡು ಗ್ರಾಮದ ಗಾಡೆ ರಾಜೇಶ್ವರ ರಾವ್ ಎಂಬುವವರು ತಮ್ಮ ಪತ್ನಿ ಭವಾನಿಯ ಮೊಬೈಲ್ ಪರೀಕ್ಷಿಸಿದಾಗ ಈ ಭೀಕರ ಸಂಚು ಬಯಲಾಗಿದೆ. ಪತ್ನಿ ಕೋರಿಯರ್ ಡೆಲಿವರ್ ಏಜೆಂಟ್&zwnj; ಆಗಿರುವ ತನ್ನ ಪ್ರಿಯಕರ ಸೈದುಲು ಎಂಬಾತನಿಗೆ &lsquo;ನನ್ನ ಗಂಡನನ್ನು ಕೊಲ್ಲು. ಇಲ್ಲದಿದ್ದರೆ ನಾನೇ ಕೊಲ್ಲುತ್ತೇನೆ&rsquo; ಎಂದು ಇನ್&zwnj;ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ಕೊಲೆ ನಂತರ ಇಬ್ಬರೂ ಇದನ್ನು ಅಪಘಾತ ಎಂದು ಬಿಂಬಿಸಲು ಯೋಜಿಸಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಳೆದ ವರ್ಷ ಗರ್ಭಿಣಿಯಾಗಿದ್ದಾಗಲೇ ಅಕ್ರಮ ಸಂಬಂಧ ಇಟ್ಕೊಂಡು ಸಿಕ್ಕಿಬಿದ್ದ ಗಂಡ: ಒಂದೇ ವರ್ಷದಲ್ಲಿ ಸಾಧಿಸಿದ ನ&lt;/strong&gt;&lt;strong&gt;ಟಿ&lt;/strong&gt;&lt;/p&gt;&lt;h3&gt;&lt;strong&gt;ರಕ್ಷಣೆ ಕೇಳಿದ ಗಂಡ&amp;nbsp;&lt;/strong&gt;&lt;/h3&gt;&lt;p&gt;ಸಂಚು ತಿಳಿಯುತ್ತಿದ್ದಂತೆಯೇ ರಾಜೇಶ್ವರ ರಾವ್ ಪೊಲೀಸರನ್ನು ಸಂಪರ್ಕಿಸಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಕೊ*ಲೆ ಯತ್ನ ಹಾಗೂ ಸಂಚಿನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪತ್ನಿಯ ಓದಿಗಾಗಿ ಕೂಲಿಯನ್ನೂ ಮಾಡಿದ, ಜಮೀನೂ ಮಾರಿದ: ಕೆಲಸ ಸಿಕ್ಕ ಮೇಲೆ ಸತಿ ಶಿರೋಮಣಿ ಮಾಡಿದ್ದೇನು?&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/relationship/illicit-relationship-telangana-woman-conspires-with-lover-to-kill-husband-instagram-message-reveals-mrq/articleshow-rlgp93p"/>
        </item>
        <item>
            <title><![CDATA[ಬೆಂಗಳೂರು ವಿಮಾನ ನಿಲ್ದಾಣದಿಂದ ದ. ಕೊಡಗಿಗೆ ಫ್ಲೈಬಸ್ ಸೇವೆ; ವೇಳಾಪಟ್ಟಿ ಇಲ್ಲಿದೆ ನೋಡಿ]]></title>
            <link>https://kannada.asianetnews.com/karnataka-districts/ksrtc-flybus-service-from-bengaluru-airport-to-south-kodagu-check-the-schedule-here-mrq/articleshow-p8z3xul</link>
            <guid isPermaLink="true">https://kannada.asianetnews.com/karnataka-districts/ksrtc-flybus-service-from-bengaluru-airport-to-south-kodagu-check-the-schedule-here-mrq/articleshow-p8z3xul</guid>
            <pubDate>Sun, 09 Aug 2026 09:13:54 +0530</pubDate>
            <description><![CDATA[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಆಗಸ್ಟ್ 15 ರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಲ್ಲಿಕೋಟೆಗೆ ಹೊಸ ಫ್ಲೈಬಸ್ ಸೇವೆಯನ್ನು ಆರಂಭಿಸುತ್ತಿದೆ. ಈ ಬಸ್ ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಪೊನ್ನಂಪೇಟೆ, ಮತ್ತು ಕುಟ್ಟ ಮಾರ್ಗವಾಗಿ ಸಂಚರಿಸಲಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj9sn1d394y1kt5ma5ypqhh,imgname-ksrtc-flybus-1786246911021.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪೊನ್ನಂಪೇಟೆ:&lt;/strong&gt; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೂತನವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳದ ಕಲ್ಲಿಕೋಟೆಗೆ ಫ್ಲೈ ಬಸ್ ಸೇವೆ ಆರಂಭಿಸಲಿದ್ದು, ಇದು ದಕ್ಷಿಣ ಕೊಡಗಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಆ. 15ರಿಂದ ಈ ನೂತನ ಬಸ್ ಸೇವೆ ಪ್ರಾರಂಭವಾಗಲಿದೆ.&lt;/p&gt;&lt;h2&gt;&lt;strong&gt;ಬಸ್ ಸಮಯ ಈ ರೀತಿಯಾಗಿದೆ&lt;/strong&gt;&lt;/h2&gt;&lt;p&gt;ರಾತ್ರಿ 10.40 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಈ ಬಸ್ಸು ಮೈಸೂರು, ಹುಣಸೂರು ಮಾರ್ಗವಾಗಿ ಬೆಳಗಿನ ಜಾವ 4:15 ಗಂಟೆಗೆ ಗೋಣಿಕೊಪ್ಪಲು, 4:20 ಗಂಟೆಗೆ ಪೊನ್ನಂಪೇಟೆ ಮತ್ತು 4:50 ಗಂಟೆಗೆ ಕುಟ್ಟ ತಲುಪಲಿದೆ. ನಂತರ ಮಾನಂದವಾಡಿ- ಕಲ್ಪೆಟ್ಟ ಮಾರ್ಗವಾಗಿ ಬೆಳಗ್ಗೆ 7:15 ಗಂಟೆಗೆ ಕಲ್ಲಿಕೋಟೆ ತಲುಪಲಿದೆ.&lt;/p&gt;&lt;p&gt;ಅದೇ ರೀತಿ ರಾತ್ರಿ 7:30 ಗಂಟೆಗೆ ಕಲ್ಲಿಕೋಟೆಯಿಂದ ಹೊರಡುವ ಈ ಬಸ್ಸು, ಕಲ್ಪೆಟ್ಟ-ಮಾನದವಾಡಿ ಮಾರ್ಗವಾಗಿ ರಾತ್ರಿ 10:15 ಗಂಟೆಗೆ ಕುಟ್ಟ ತಲುಪಲಿದೆ. ಅಲ್ಲಿಂದ ರಾತ್ರಿ 10:45ಕ್ಕೆ ಪೊನ್ನಂಪೇಟೆಯಿಂದ, 10:50ಕ್ಕೆ ಗೋಣಿಕೊಪ್ಪದಿಂದ ಹೊರಡುವ ಬಸ್ಸು ಹುಣಸೂರು-ಮೈಸೂರು ಮಾರ್ಗದಲ್ಲಿ ಸಂಚರಿಸಿ ಬೆಳಗಿನ ಜಾವ 4:15 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.&lt;/p&gt;&lt;h3&gt;&lt;strong&gt;ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ&lt;/strong&gt;&lt;/h3&gt;&lt;p&gt;ದಕ್ಷಿಣ ಕೊಡಗಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯ ಒದಗಿಸಲು ಸಾಕಷ್ಟು ಬಾರಿ ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದೀಗ ನೂತನ ಈ ಫ್ಲೈ ಬಸ್ ಸೇವೆಯಿಂದಾಗಿ ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇನ್ನು ದ. ಕೊಡಗಿನ ವಿಮಾನ ಯಾತ್ರಿಗಳು ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಭಾಗಗಳಿಂದ ನೇರವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬಹುದಾಗಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ksrtc-flybus-service-from-bengaluru-airport-to-south-kodagu-check-the-schedule-here-mrq/articleshow-p8z3xul"/>
        </item>
        <item>
            <title><![CDATA[ಬೆಂಗಳೂರಲ್ಲಿ ಪಾಪಿ ಪತಿಯಿಂದ ಪೈಶಾಚಿಕ ಕೃತ್ಯ.. ಪತ್ನಿಯ ಜೀವ ತೆಗೆದು ಮೋರಿಗೆ ಎಸೆದ! ಕಾರಣ?]]></title>
            <link>https://kannada.asianetnews.com/bengaluru-urban/in-bengaluru-husband-and-wife-clash-after-died-wife-gkn/articleshow-gzwspg1</link>
            <guid isPermaLink="true">https://kannada.asianetnews.com/bengaluru-urban/in-bengaluru-husband-and-wife-clash-after-died-wife-gkn/articleshow-gzwspg1</guid>
            <pubDate>Sun, 09 Aug 2026 09:05:56 +0530</pubDate>
            <description><![CDATA[&lt;p&gt;ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಪಾಪಿ ಪತಿ ಪತ್ನಿಯನ್ನ ಬರ್ಬರವಾಗಿ ಸಾಯಿಸಿ ಮೋರಿಗೆ ಎಸೆದಿದ್ದಾನೆ. ಅಷ್ಟಕ್ಕೂ ಇಬ್ಬರ ಮಧ್ಯೆ ಆಗಿದ್ದೇನು? ಈ ಸ್ಟೋರಿ ಓದಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzj9ehvngpz4341sagy5eqj8,imgname-bengaluru-husband-and-wife-1786246547317.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಪತಿಯೇ ತನ್ನ ಪತ್ನಿಯನ್ನು ಕುತ್ತಿಗೆ ಹಿಸುಕಿ ಹತ್ಯೆ ಮಾಡಿ, ಮೃತದೇಹವನ್ನು ಕಸದ ಮೋರಿಗೆ ಎಸೆದಿರುವ ಅಮಾನವೀಯ ಘಟನೆ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಗೀತಾ (48) ಕೊಲೆಯಾದ ದುರ್ದೈವಿ. ಈಕೆಯ ಪತಿ ಆಂಟೋನಿ (63) ಎಂಬಾತನೇ ಕೊಲೆ ಮಾಡಿದ ಆರೋಪಿ. ದಂಪತಿಗಳ ನಡುವೆ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆರೋಪಿ ಆಂಟೋನಿ ಕುಡಿತದ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದ್ದು, ಘಟನೆ ನಡೆದ ದಿನವೂ ಸಹ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಈ ವೇಳೆ ಪತ್ನಿ ಗೀತಾ ಅವರೊಂದಿಗೆ ಗಲಾಟೆ ಆರಂಭಿಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ಆಂಟೋನಿ, ಗೀತಾ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಮನೆಯ ಸಮೀಪದ ಕಸದ ಮೋರಿಗೆ ಎಸೆದಿದ್ದಾನೆ.&lt;/p&gt;&lt;h2&gt;&lt;strong&gt;ರಕ್ತದ ಗಾಯಗಳು ಪತ್ತೆ&lt;/strong&gt;&lt;/h2&gt;&lt;p&gt;ಮೃತದೇಹ ಪತ್ತೆಯಾದಾಗ ಗೀತಾ ಅವರ ದೇಹದ ಮೇಲೆ ಹಲವು ರಕ್ತದ ಗಾಯಗಳು ಕಂಡುಬಂದಿವೆ. ಇದು ಕೊಲೆ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ವಿವೇಕನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿವೇಕನಗರ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿ ಪತಿ ಆಂಟೋನಿಯನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಕೊಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/in-bengaluru-husband-and-wife-clash-after-died-wife-gkn/articleshow-gzwspg1"/>
        </item>
        <item>
            <title><![CDATA[ಕೆಐಒಸಿಎಲ್‌-ಎನ್‌ಎಂಡಿಸಿ ವಿಲೀನಕ್ಕೆ ಕಾರ್ಮಿಕ ನಿಯೋಗ ಕೇಂದ್ರಕ್ಕೆ ಮನವಿ]]></title>
            <link>https://kannada.asianetnews.com/karnataka-districts/labor-delegation-appeals-to-centre-for-kiocl-nmdc-merger-mrq/articleshow-n9gagle</link>
            <guid isPermaLink="true">https://kannada.asianetnews.com/karnataka-districts/labor-delegation-appeals-to-centre-for-kiocl-nmdc-merger-mrq/articleshow-n9gagle</guid>
            <pubDate>Sun, 09 Aug 2026 09:00:11 +0530</pubDate>
            <description><![CDATA[ಕುದುರೆಮುಖ ಶ್ರಮಶಕ್ತಿ ಸಂಘಟನೆಯ ಕಾರ್ಮಿಕರ ನಿಯೋಗವು ಕೇಂದ್ರ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಕೆಐಒಸಿಎಲ್ ಅನ್ನು ಎನ್&zwnj;ಎಂಡಿಸಿ ಜೊತೆ ವಿಲೀನಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಮನವಿ ಸಲ್ಲಿಸಿತು. ಕಾರ್ಮಿಕರ ಬೇಡಿಕೆಗಳನ್ನು ಆಲಿಸಿದ ಸಚಿವರು, ಕಂಪನಿಯ ಉಳಿವಿಗಾಗಿ ಅಗತ್ಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kzj8z8jmqnbvgse2f3aghs8r,imgname-kiocl-nmdc--1786246046292.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಕುದುರೆಮುಖ ಶ್ರಮಶಕ್ತಿ ಸಂಘಟನೆಯ 40ಕ್ಕೂ ಹೆಚ್ಚು ಕಾರ್ಮಿಕರ ನಿಯೋಗ ಕೇಂದ್ರ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕೆಐಒಸಿಎಲ್(ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ) ಭವಿಷ್ಯದ ಹಿತದೃಷ್ಟಿಯಿಂದ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಿತು.&lt;/p&gt;&lt;h2&gt;&lt;strong&gt;ಕಾರ್ಮಿಕರ ಬೇಡಿಕೆಗಳನ್ನು ಆಲಿಸಿದ ಹೆಚ್&zwnj;ಡಿಕೆ&lt;/strong&gt;&lt;/h2&gt;&lt;p&gt;ಮುಖ್ಯವಾಗಿ ಕೆಐಒಸಿಎಲ್ ಅನ್ನು ಎನ್ಎಂಡಿಸಿ(ನ್ಯಾಷನಲ್&zwnj; ಮಿನರಲ್&zwnj; ಡೆವಲಪ್&zwnj;ಮೆಂಟ್&zwnj; ಕಾರ್ಪೊರೇಷನ್&zwnj;) ಜೊತೆ ವಿಲೀನಗೊಳಿಸಬೇಕು, ಕಾರ್ಮಿಕರ ವೇತನ ಪರಿಷ್ಕರಣೆ ಮಾಡಬೇಕು ಹಾಗೂ ವಿವಿಧ ಕಾರಣಗಳಿಂದ ಅನ್ಯ ರಾಜ್ಯಗಳಿಗೆ ವರ್ಗಾವಣೆಗೊಂಡಿರುವ ಕಾರ್ಮಿಕರನ್ನು ಮರಳಿ ಕರೆಸಿಕೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಕಾರ್ಮಿಕರ ಬೇಡಿಕೆಗಳನ್ನು ಆಲಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಕಂಪನಿಯ ಉಳಿವು ಹಾಗೂ ಅಭಿವೃದ್ಧಿಗಾಗಿ ಅಗತ್ಯವಾದ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ. ರಾಜೇಂದ್ರನ್, ಸಂಘಟನೆಯ ಅಸಿಸ್ಟೆಂಟ್ ಜನರಲ್ ಸೆಕ್ರೆಟರಿ ರಾಜ್ ಗುರು, ಚನ್ನಕೇಶವ, ಬಾಲಕೃಷ್ಣ, ಸಂಜೀವ, ಪ್ರಶಾಂತ್, ಶಿವರಾಜ್, ಮೊಕಾ ಬಸವರಾಜ, ಮುನಿರಾಜು ಸೇರಿದಂತೆ ಸಂಘಟನೆಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಗೌರವ ಸಲಹೆಗಾರರು ಹಾಗೂ ಸಕ್ರಿಯ ಸದಸ್ಯರು ಇದ್ದರು.&lt;/p&gt;&lt;p&gt;ಕಂಪನಿ ಉಳಿವು, ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಕಂಪನಿಯ ಪುನಶ್ಚೇತನಕ್ಕಾಗಿ ಸಂಘಟನೆಯ ಹೋರಾಟ ಮುಂದುವರಿಯಲಿದೆ ಎಂದು ಸಂಘಟನೆ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/labor-delegation-appeals-to-centre-for-kiocl-nmdc-merger-mrq/articleshow-n9gagle"/>
        </item>
        <item>
            <title><![CDATA[ದಶಕದಿಂದ ಉದ್ಘಾಟೆನೆಗೆ ಕಾಯುತ್ತಿರುವ ರೈಲ್ವೆ ನಿಲ್ದಾಣ; ಬೆಂಗಳೂರಿಗೆ ಪ್ರಯಾಣಿಸುವ ಅನಾನೂಕೂಲ]]></title>
            <link>https://kannada.asianetnews.com/karnataka-districts/kolar-hudukula-railway-station-near-bangarpet-has-not-been-inaugurated-even-after-a-decade-mrq/articleshow-bi5bkik</link>
            <guid isPermaLink="true">https://kannada.asianetnews.com/karnataka-districts/kolar-hudukula-railway-station-near-bangarpet-has-not-been-inaugurated-even-after-a-decade-mrq/articleshow-bi5bkik</guid>
            <pubDate>Sun, 09 Aug 2026 08:51:54 +0530</pubDate>
            <description><![CDATA[ಬಂಗಾರಪೇಟೆ ಬಳಿಯ ಹುದುಕುಳ ರೈಲ್ವೆ ನಿಲ್ದಾಣವು ದಶಕ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಬೆಂಗಳೂರಿಗೆ ಪ್ರಯಾಣಿಸುವ ಸಾವಿರಾರು ಜನರಿಗೆ ಅನುಕೂಲವಾಗಬೇಕಿದ್ದ ಈ ನಿಲ್ದಾಣ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಂದು ಪಾಳುಬಿದ್ದು ಅನಾಥವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj8d2bfrr016rgsy60a2nn3,imgname-hudukala-railway-station-1786245450095.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಮೇಶ್ ಕೆ. ಬಂಗಾರಪೇಟೆ&lt;/strong&gt;&lt;/p&gt;&lt;p&gt;&lt;strong&gt;ಕೋಲಾರ:&lt;/strong&gt; ಉದ್ಯೋಗಕ್ಕಾಗಿ ನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಶಂಕುಸ್ಥಾನೆಯಾದ ಹುದುಕುಳ ರೈಲ್ವೆ ನಿಲ್ದಾಣ ಕಾಮಗಾರಿ ದಶಕವಾದರೂ ಉದ್ಘಾಟನೆಯಾಗದೆ ಇರುವುದು ಚುನಾಯಿತ ಪ್ರತಿನಿಧಿಗಳ ಇಚ್ಚಾಶಕ್ತಿಗೆ ಹಿಡಿದ ಕೈಕನ್ನಡಿಯಾಗಿದೆ.&lt;/p&gt;&lt;p&gt;ಯಾವುದೇ ಕಾರ್ಖಾನೆಗಳಿಲ್ಲದ ಬಂಗಾರಪೇಟೆ ಕ್ಷೇತ್ರದಲ್ಲಿ ಮೂರೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ನಿತ್ಯ 20 ಸಾವಿರಕ್ಕೂ ಹೆಚ್ಚಿನ ಜನರು ರೈಲುಗಳ ಮೂಲಕ ಬೆಂಗಳೂರಿಗೆ ಹೋಗಿ ಸಂಜೆ ವಾಪಸ್ ಬರುವರು. ಅಂತೆಯೇ ಕಸಬಾ ಹೋಬಳಿಯ ಜನರೂ ಸಹ ಅಧಿಕ ಸಂಖ್ಯೆಯಲ್ಲಿ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವುದರಿಂದ ಈ ಹೋಬಳಿಯ ಜನರು ಮುಂಜಾನೆ 4 ಗಂಟೆಯಿಂದಲೇ ದ್ವಿಚಕ್ರ ವಾಹನಗಳಲ್ಲಿ ನಗರಕ್ಕೆ ಬಂದು ರೈಲು ಹತ್ತಬೇಕಿತ್ತು. ಕೋಲಾರ ಮೂಲಕ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಹುದುಕುಳ ಗ್ರಾಮದಲ್ಲಿ ಈ ಹಿಂದೆ ಬ್ರಿಟೀಷರ ಕಾಲದಲ್ಲಿ ರೈಲ್ವೆ ನಿಲ್ದಾಣವಿತ್ತು. ನಂತರ ಆ ನಿಲ್ದಾಣವನ್ನು ಮುಚ್ಚಲಾಗಿತ್ತು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಹುದುಕುಳ ಗ್ರಾಮದಲ್ಲಿ ಮುಚ್ಚಿರುವ ರೈಲ್ವೆ ನಿಲ್ದಾಣವನ್ನು ಪುನರಾಂಭಿಸುವ ಮೂಲಕ ಈ ವ್ಯಾಪ್ತಿಯಲ್ಲಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಅಂದಿನ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ರೈಲ್ವೆ ಸಚಿವರಾಗಿದ್ದಾಗ ಪ್ರಯಾಣಿಕರು ಮನವಿ ಸಲ್ಲಿಸಿದರು. ಅಂತೆಯೇ ಚಿನ್ನಕೋಟೆ ಗ್ರಾಮದಲ್ಲಿಯೂ ಸಹ ಹಾಲ್ಟ್ ಸ್ಟೇಷನ್ ಆರಂಭಿಸುವಂತೆ ಒತ್ತಾಯಕ್ಕೆ ಮಣಿದು ಎರಡೂ ಕಡೆ ಹೊಸ ನಿಲ್ದಾಣಕ್ಕೆ ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ನೀಡಿತು.&lt;/p&gt;&lt;h2&gt;&lt;strong&gt;ಗ್ರಾಮಸ್ಥರಿಗೆ ನಿರಾಶೆ&lt;/strong&gt;&lt;/h2&gt;&lt;p&gt;ಅಂದುಕೊಂಡ ಸಮಯದಲ್ಲಿ ಚಿನ್ನಕೋಟೆ ಗ್ರಾಮದಲ್ಲಿ ಮಾತ್ರ ಹಾಲ್ಟ್ ಸ್ಟೇಷನ್ ನಿರ್ಮಾಣವಾಗಿ ಉದ್ಘಾಟನೆಯಾಗಿದೆ. ಆದರೆ ಹುದುಕುಳ ಗ್ರಾಮದಲ್ಲಿನ ಹೊಸ ನಿಲ್ದಾಣ ಕಾಮಗಾರಿಗೆ ಗ್ರಹಣ ಹಿಡಿಯಿತು. 10 ವರ್ಷಗಳೇ ಕಳೆದರೂ ಕಟ್ಟಡವೇನೋ ತಲೆ ಎತ್ತಿದೆ, ಮುಂದಿನ ಚಟುವಟಿಕೆಗಳು ಮಾತ್ರ ಸಾಗಲೇ ಇಲ್ಲ. ಈ ಗ್ರಾಮದ ಸುತ್ತಮುತ್ತಲಿನ ಪ್ರಯಾಣಿಕರು ಇಂದೋ ನಾಳೆನೋ ರೈಲು ಗ್ರಾಮದಲ್ಲಿ ಬಂದು ನಿಲ್ಲಲಿದೆ ಎಂದು ಭಾವಿಸಿದ್ದವರಿಗೆ ನಿರಾಶೆ ಮೂಡಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೋಲಾರದಲ್ಲಿ ಹೃದಯ ವಿದ್ರಾವಕ ಘಟನೆ.. ತಾಯಿ, ಮಗಳು, ಮಗ ದುರಂತ ಅಂತ್ಯ.. ಅಸಲಿಗೆ ಆಗಿದ್ದೇನು?&lt;/strong&gt;&lt;/p&gt;&lt;p&gt;ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಇಲಾಖೆ ಮತ್ತೆ ದುರಸ್ಥಿಗೊಳಿಸಿ ಹೆಸರು ಸಹ ಬರೆದು ಬಣ್ಣ ಬಳಿಯಲಾಗಿದೆ. ಪ್ರಯಾಣಿಕರು ನಿಲ್ಲಲು ಪ್ಲಾಟ್ ಫಾರಂ ನಿರ್ಮಾಣಕ್ಕೆ ಮಣ್ಣು ಹಾಕಿ ಬಿಟ್ಟಿರುವುದರಿಂದ ಮಳೆ ಬಂದರೆ ಅದು ಕೆಸರು ಗದ್ದೆಯಾಗುವುದು. ಕಟ್ಟಡಕ್ಕೆ ಸಮರ್ಪಕ ರೀತಿ ಬಾಗಿಲು, ಕಿಟಕಿ ಅಳವಡಿಸದೆ ಹಾಗೆ ಬಿಟ್ಟಿರುವುದರಿಂದ ಮತ್ತೆ ರಾತ್ರಿಯ ವೇಳೆ ಕಾನೂನು ಬಾಹಿರ ಅಡ್ಡವಾಗಿ ಪರಿವರ್ತನೆಯಾಗಿದೆ.&lt;/p&gt;&lt;p&gt;ಕೆ.ಹೆಚ್.ಮುನಿಯಪ್ಪ ಮಾಜಿಯಾದರೂ ಅವರ ಜಾಗಕ್ಕೆ ಬಂದ ಸಂಸದ ಎಸ್.ಮುನಿಸ್ವಾಮಿ ಸಹ ಈ ನಿಲ್ದಾಣದ ಬಗ್ಗೆ ಗಮನಹರಿಸಿಲ್ಲ. ಈಗ ಮಲ್ಲೇಶಬಾಬು ಸಂಸದರಾಗಿ ಎರಡು ವರ್ಷಗಳಾಗಿದೆ ಅವರೂ ಯಾಕೋ ಈ ನಿಲ್ದಾಣದ ಕಡೆ ಆಸಕ್ತಿ ತೋರದೆ ಕಾರಣ ನಿಲ್ದಾಣ ಅನಾಥವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೋಲಾರ ಮಹಿಳಾ ಉದ್ಯಮಿಯ ಸಾಧನೆ: ಮಾಲ್ಡೀವ್ಸ್&zwnj;ಗೆ ಮೊದಲ ಬಾರಿಗೆ ಕರ್ನಾಟಕದಿಂದ ಮಾವು ರಫ್ತು, ರೈತರಿಗೆ ಅಶ್ವಿನಿ ಸಾಥ್!&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kolar-hudukula-railway-station-near-bangarpet-has-not-been-inaugurated-even-after-a-decade-mrq/articleshow-bi5bkik"/>
        </item>
        <item>
            <title><![CDATA[ಕಾವೇರಿ ನೀರು ಬರದಿದ್ರೂ ತಮಿಳುನಾಡಿನ ಈ ನದಿ ಬತ್ತಲ್ಲ! 365 ದಿನ ಹರಿಯೋ ರಹಸ್ಯವೇನು?]]></title>
            <link>https://kannada.asianetnews.com/gallery/india-news/science-behind-thamirabarani-rivers-perennial-flow-in-tamil-nadu-mrq-87kert6</link>
            <guid isPermaLink="true">https://kannada.asianetnews.com/gallery/india-news/science-behind-thamirabarani-rivers-perennial-flow-in-tamil-nadu-mrq-87kert6</guid>
            <pubDate>Sun, 09 Aug 2026 07:53:59 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ವರ್ಷದ 365 ದಿನವೂ ಹರಿಯುವ ಏಕೈಕ ಜೀವ ನದಿ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ನದಿಯು, ತನ್ನ ನೀರಿನಲ್ಲಿನ ತಾಮ್ರದ ಅಂಶದಿಂದ ಹೆಸರುವಾಸಿಯಾಗಿದ್ದು, ಹಲವು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzj50t5hsvw7phejpsykrt33,imgname-thamirabarani-river--2--1786241902769.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡಿನಲ್ಲಿ ವರ್ಷದ 365 ದಿನವೂ ಹರಿಯುವ ಏಕೈಕ ಜೀವ ನದಿ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ನದಿಯು, ತನ್ನ ನೀರಿನಲ್ಲಿನ ತಾಮ್ರದ ಅಂಶದಿಂದ ಹೆಸರುವಾಸಿಯಾಗಿದ್ದು, ಹಲವು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ.&lt;/p&gt;&lt;img&gt;&lt;p&gt;ತಮಿಳುನಾಡಿನ ಪ್ರಮುಖ ನದಿಗಳಲ್ಲಿ ಒಂದಾದ ಕಾವೇರಿ ಸಹ ಒಂದಾಗಿದೆ. ಕರ್ನಾಟಕದಿಂದ ಬರುವ ಕಾವೇರಿಗಾಗಿ ತಮಿಳುನಾಡು ಕಾಯುತ್ತಿರುತ್ತದೆ. ಆದ್ರೆ ಈ ಬಾರಿ ಮಳೆಯ ಕೊರತೆ ಹಿನ್ನೆಲೆ ರಾಜ್ಯ ಸರ್ಕಾರ ಸಮಯೋಚಿತವಾಗಿ ನೀರು ಬಿಡುಗಡೆ ಮಾಡುತ್ತಿದೆ. ಆದರೆ ತಮಿಳುನಾಡಿನಲ್ಲಿ ವರ್ಷವಿಡೀ ಹರಿಯುವ ಒಂದು ಜೀವ ನದಿಯೂ ಇದೆ. ಈ ನದಿ 365 ದಿನಗಳಲ್ಲಿ ಹರಿಯುತ್ತದೆ.&lt;/p&gt;&lt;img&gt;&lt;p&gt;ತಮಿಳುನಾಡಿನಲ್ಲಿ 365 ದಿನವೂ ಒಂದು ನದಿ ಹರಿಯುತ್ತದೆಯೇ? ಎಂದು ನಿಮಗೆ ಆಶ್ಚರ್ಯವಾಗಬಹುದು. ಹೌದು, ತಮಿಳುನಾಡಿನಲ್ಲಿ ವರ್ಷಪೂರ್ತಿ ಹರಿಯುವ ಏಕೈಕ ವತ್ತದ ಜೀವ ನದಿ ತಾಮಿರಬರಣಿ. ಬೇರೆ ನದಿಗಳು ನೀರಿಗಾಗಿ ನೆರೆ ರಾಜ್ಯಗಳನ್ನು ಅವಲಂಬಿಸಿದ್ದರೆ, ತಾಮಿರಬರಣಿ ಯಾರ ಸಹಾಯವೂ ಇಲ್ಲದೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಬೇಸಿಗೆಯಲ್ಲಿ ಬೇರೆ ನದಿಗಳು ಬತ್ತಿ ಹೋದರೆ, ತಾಮಿರಬರಣಿ ನದಿ ಹರಿಯುತ್ತಿರುತ್ತದೆ.&lt;/p&gt;&lt;img&gt;&lt;p&gt;ಈ ನದಿ ಹರಿಯುವ ಪೊಟ್ಟಿಗೈ ಮಲೆ ಪ್ರದೇಶವು ನೈಋತ್ಯ ಮುಂಗಾರು (ಜೂನ್-ಸೆಪ್ಟೆಂಬರ್) ಮತ್ತು ಈಶಾನ್ಯ ಮುಂಗಾರು ಎರಡರ ಮಳೆಯನ್ನೂ ನೇರವಾಗಿ ಪಡೆಯುತ್ತದೆ. ಅಲ್ಲದೆ, ತಾಮಿರಬರಣಿ ಹುಟ್ಟುವ ಸ್ಥಳದಲ್ಲಿರುವ ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳು ನೀರನ್ನು ಹಿಡಿದಿಟ್ಟುಕೊಂಡು, ಮಳೆ ಇಲ್ಲದಿದ್ದಾಗಲೂ ಸಣ್ಣ ಸಣ್ಣ ಬುಗ್ಗೆಗಳ ಮೂಲಕ ವರ್ಷಪೂರ್ತಿ ನದಿಗೆ ನೀರು ಬಿಡುತ್ತವೆ. ಈ ನದಿ ಪಶ್ಚಿಮ ಘಟ್ಟಗಳ ಪೊಟ್ಟಿಗೈ ಮಲೆಯಲ್ಲಿ (ಅಗಸ್ತ್ಯ ಕೂಟ) ಸುಮಾರು 1,725 ಮೀಟರ್ ಎತ್ತರದಲ್ಲಿ ಹುಟ್ಟುತ್ತದೆ.&lt;/p&gt;&lt;img&gt;&lt;p&gt;ಪೊಟ್ಟಿಗೈ ಬೆಟ್ಟದಲ್ಲಿ ತನ್ನ ಪಯಣ ಆರಂಭಿಸುವ ತಾಮಿರಬರಣಿ, ಸುಮಾರು 128 ಕಿ.ಮೀ ಹರಿದು ತೂತುಕುಡಿ ಜಿಲ್ಲೆಯ ಪುನ್ನಕ್ಕಾಯಲ್ ಬಳಿ ಮನ್ನಾರ್ ಖಾರಿಯಲ್ಲಿ ಸಮುದ್ರ ಸೇರುತ್ತದೆ. ಈ ನದಿಯ ನೀರಿನಲ್ಲಿ ತಾಮ್ರದ (Copper) ಅಂಶ ಹೆಚ್ಚಾಗಿರುವುದರಿಂದ, ನೀರು ತಾಮ್ರದ ಬಣ್ಣದಲ್ಲಿ ಕಾಣುತ್ತದೆ. ಇದೇ ಕಾರಣಕ್ಕೆ 'ತಾಮಿರಂ' + 'ಪರಣಿ' ಸೇರಿ 'ತಾಮಿರಬರಣಿ' ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಕಾರೈಯಾರ್, ಸರ್ವಲಾರ್, ಮಣಿಮುತ್ತಾರು, ಕಡನಾನದಿ, ಪಚ್ಚೈಯಾರ್ ಮತ್ತು ಚಿತ್ತಾರ್ ಇದರ ಪ್ರಮುಖ ಉಪನದಿಗಳು. ಇದರ ನದಿಗೆ ಪಾಪನಾಸಂ ಅಣೆಕಟ್ಟು, ಮಣಿಮುತ್ತಾರು ಅಣೆಕಟ್ಟು, ಸರ್ವಲಾರ್ ಅಣೆಕಟ್ಟು ಮತ್ತು ಕಡನಾನದಿ ಅಣೆಕಟ್ಟು ಸೇರಿದಂತೆ ಹಲವು ಪ್ರಮುಖ ಅಣೆಕಟ್ಟುಗಳಿವೆ.&lt;/p&gt;&lt;img&gt;&lt;p&gt;ವರ್ಷಪೂರ್ತಿ ಹರಿಯುವ ತಾಮಿರಬರಣಿ ಮತ್ತು ಅದರ ಉಪನದಿಗಳಿಂದ ತಿರುನಲ್ವೇಲಿ, ತೂತುಕುಡಿ ಮತ್ತು ತೆಂಕಾಸಿ ಜಿಲ್ಲೆಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ನೇರವಾಗಿ ನೀರಾವರಿ ಸೌಲಭ್ಯ ಸಿಗುತ್ತದೆ. ತಾಮಿರಬರಣಿ ಕುಡಿಯುವ ನೀರಿನ ಯೋಜನೆಗಳ ಮೂಲಕ ತಿರುನಲ್ವೇಲಿ, ತೂತುಕುಡಿ, ತೆಂಕಾಸಿ, ವಿರುದುನಗರ್ ಮತ್ತು ರಾಮನಾಥಪುರಂ ಸೇರಿ 5 ದಕ್ಷಿಣ ಜಿಲ್ಲೆಗಳ ಜನರ ದಾಹವನ್ನು ಈ ನದಿ ನೀಗಿಸುತ್ತಿದೆ.&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/india-news/science-behind-thamirabarani-rivers-perennial-flow-in-tamil-nadu-mrq-87kert6"/>
        </item>
        <item>
            <title><![CDATA['ಇದು ಟ್ರೇಲರ್, ದೇಶವನ್ನೇ ಬಂದ್ ಮಾಡ್ತೀವಿ..' ಬೆಲೆ ಏರಿಕೆ ವಿರೋಧಿಸಿ ಪಾಕಿಸ್ತಾನ ಸರ್ಕಾರದ ವಿರುದ್ಧ ಜನರ ದಂಗೆ]]></title>
            <link>https://kannada.asianetnews.com/world-news/pakistan-protests-escalate-over-rising-prices-public-warns-of-nationwide-uprising-rav/articleshow-wkql33t</link>
            <guid isPermaLink="true">https://kannada.asianetnews.com/world-news/pakistan-protests-escalate-over-rising-prices-public-warns-of-nationwide-uprising-rav/articleshow-wkql33t</guid>
            <pubDate>Sun, 09 Aug 2026 07:50:33 +0530</pubDate>
            <description><![CDATA[&lt;p&gt;ಪಾಕಿಸ್ತಾನದಲ್ಲಿ ತೀವ್ರಗೊಂಡಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಐಎಂಎಫ್ ಷರತ್ತುಗಳ ಭಾಗವಾಗಿ ಸರ್ಕಾರ ಇಂಧನದ ಮೇಲೆ ತೆರಿಗೆ ಹೆಚ್ಚಿಸಿದೆ. ಇದನ್ನು ವಿರೋಧಿಸಿ ಜಮಾತ್-ಎ-ಇಸ್ಲಾಮಿ ಪಕ್ಷದ ನೇತೃತ್ವದಲ್ಲಿ ಇಸ್ಲಾಮಾಬಾದ್, ಕರಾಚಿಯಂತಹ ಪ್ರಮುಖ ನಗರಗಳಲ್ಲಿ ಸಾವಿರಾರು ಜನರು ಬೃಹತ್ ಪ್ರತಿಭಟನೆ ಭುಗಿಲೆದ್ದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzj4v9zex2gq2dvxga5849fc,imgname-----------------------2026-08-09t074451.032-1786241722350.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಸ್ಲಾಮಾಬಾದ್&zwnj;: &lt;/strong&gt;ಅಮೆರಿಕ-ಇರಾನ್&zwnj; ಶಾಂತಿ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸಿ ಜಾಗತಿಕ ಮಟ್ಟದಲ್ಲಿ ಹೀರೋ ಆಗಲು ಮುಂದಾಗಿದ್ದ ಪಾಕಿಸ್ತಾನಕ್ಕೆ ಆಂತರಿಕ ಗಲಭೆಗಳೇ ಹೈರಾಣಾಗಿಸಿವೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದ್ದು, ಇಂಧನದ ಮೇಲಿನ ತೆರಿಗೆ ಹಾಗೂ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸಾವಿರಾರು ಜನರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಆರ್ಥಿಕವಾಗಿ ನಲುಗಿರುವ ಪಾಕಿಸ್ತಾನವು ಐಎಂಎಫ್&zwnj;ನಿಂದ ಸಾಲ ಪಡೆಯಲು ಅದರ ಕಠಿಣ ಷರತ್ತುಗಳಿಗೆ ಒಪ್ಪಿಕೊಂಡಿದೆ. ಇದರ ಭಾಗವಾಗಿ ಪೆಟ್ರೋಲ್&zwnj;, ಡೀಸೆಲ್&zwnj; ಮೇಲಿನ ತೆರಿಗೆಯನ್ನು ಸರ್ಕಾರ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದನ್ನು ಖಂಡಿಸಿ ಪ್ರಮುಖ ಧಾರ್ಮಿಕ-ರಾಜಕೀಯ ಪಕ್ಷವಾದ ಜಮಾತ್-ಎ-ಇಸ್ಲಾಮಿ ಪ್ರತಿಭಟನೆಗೆ ಕರೆ ನೀಡಿದೆ. ಪ್ರತಿಭಟನಾಕಾರರು &lsquo;ಐಎಂಎಫ್&zwnj;ಗೆ ಧಿಕ್ಕಾರ&rsquo; ಎಂಬ ಘೋಷಣೆಗಳೊಂದಿಗೆ ಇಸ್ಲಾಮಾಬಾದ್, ಕರಾಚಿ, ಲಾಹೋರ್, ಪೇಶಾವರ ಮತ್ತು ಕ್ವೆಟ್ಟಾ ನಗರಗಳ ಪ್ರಮುಖ ಹೆದ್ದಾರಿಗಳನ್ನು ತಡೆದು ಧರಣಿ ನಡೆಸಿದ್ದಾರೆ.&lt;/p&gt;&lt;h2&gt;ಜಮಾತ್ ಖಡಕ್ ಎಚ್ಚರಿಕೆ:&lt;/h2&gt;&lt;p&gt;ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಮಾತ್-ಎ-ಇಸ್ಲಾಮಿ ಮುಖ್ಯಸ್ಥ ಹಫೀಜ್ ನಯೀಮ್ ಉರ್ ರೆಹಮಾನ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಹಾಗೂ ಅವರ ಸಂಪುಟಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. &lsquo;ನೀವು ಐಎಂಎಫ್ ನೆಪ ಹೇಳಿ ಜನರ ಜೇಬಿಗೆ ಕನ್ನ ಹಾಕುವುದನ್ನು ಸಹಿಸುವುದಿಲ್ಲ. ಇಂಧನ ಮೇಲಿನ ಹೆಚ್ಚುವರಿ ತೆರಿಗೆಯನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಶುಕ್ರವಾರ ನಡೆದ ಈ ಪ್ರತಿಭಟನೆಗಳು ಬರಿ ಟ್ರೇಲರ್ ಅಷ್ಟೇ, ಸರ್ಕಾರ ಸರಿದಾರಿಗೆ ಬಾರದಿದ್ದರೆ ಇಡೀ ದೇಶವನ್ನು ಬಂದ್ ಮಾಡಬೇಕಾಗುತ್ತದೆ&rsquo; ಎಂದು ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/pakistan-protests-escalate-over-rising-prices-public-warns-of-nationwide-uprising-rav/articleshow-wkql33t"/>
        </item>
        <item>
            <title><![CDATA[B Nagendra: ಕೋರ್ಟ್‌ ಷರತ್ತು ಮೀರಿ ನಾಗೇಂದ್ರ ದಿಲ್ಲಿ ಭೇಟಿ: ಇಡಿ ತನಿಖೆ, ಸಾಕ್ಷ್ಯ ಸಿಕ್ಕರೆ ಏನಾಗುತ್ತೆ?]]></title>
            <link>https://kannada.asianetnews.com/state/b-nagendra-vsits-delhi-in-violation-of-court-conditions-what-happens-if-the-ed-finds-evidence-rav/articleshow-nqczag4</link>
            <guid isPermaLink="true">https://kannada.asianetnews.com/state/b-nagendra-vsits-delhi-in-violation-of-court-conditions-what-happens-if-the-ed-finds-evidence-rav/articleshow-nqczag4</guid>
            <pubDate>Sun, 09 Aug 2026 07:35:11 +0530</pubDate>
            <description><![CDATA[&lt;p&gt;ವಾಲ್ಮೀಕಿ ನಿಗಮ ಹಗರಣದಲ್ಲಿ ಜಾಮೀನು ಪಡೆದಿರುವ ಸಚಿವ ನಾಗೇಂದ್ರ, ಕೋರ್ಟ್ ಅನುಮತಿ ಇಲ್ಲದೆ ದೆಹಲಿಗೆ ಪ್ರವಾಸ ಕೈಗೊಂಡ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿದ್ದು, ಷರತ್ತು ಉಲ್ಲಂಘನೆ ಸಾಬೀತಾದರೆ ಅವರ ಜಾಮೀನು ರದ್ದಾಗುವ, ಸಚಿವ ಸ್ಥಾನಕ್ಕೆ ಕುತ್ತು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzj40vg3wdthzdehnhpss9kg,imgname-----------------------2026-08-09t072738.708-1786240855555.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಏನಿದು ಆರೋಪ?&lt;/strong&gt;&lt;/p&gt;&lt;ul&gt; &lt;li&gt;ವಾಲ್ಮೀಕಿ ನಿಗಮದ ಹಗರಣ ಸಂಬಂಧ 2024ರ ಅ.14ರಂದು ನಾಗೇಂದ್ರಗೆ ಕೋರ್ಟ್&zwnj; ಜಾಮೀನು ನೀಡಿತ್ತು&lt;/li&gt; &lt;li&gt;ರಾಜ್ಯದಿಂದ ಹೊರಗೆ ಹೋಗುವುದಾದರೆ ಸಮ್ಮತಿ ಪಡೆಯಬೇಕೆಂಬುದು ಸೇರಿ ಹಲವು ಷರತ್ತು ವಿಧಿಸಿತ್ತು&lt;/li&gt; &lt;li&gt;2026ರ ಏ.26ರಿಂದ ಜೂ.2 ಜೂ.11ರಿಂದ ಜು.7, ಜು.16ರಿಂದ ಜು.25ರವರೆಗೆ ಅನುಮತಿ ಪಡೆದಿದ್ದ ನಾಗೇಂದ್ರ&lt;/li&gt; &lt;li&gt;ಆದರೆ ಅನುಮತಿಯನ್ನೇ ಪಡೆಯದೆ ಜು.15 ಹಾಗೂ ಜು.26ರಂದು ದೆಹಲಿಗೆ ಭೇಟಿ ನೀಡಿದ್ದ ಹಾಲಿ ಸಚಿವ&lt;/li&gt; &lt;li&gt;ಈ ಭೇಟಿಯ ಬಗ್ಗೆ ಇ.ಡಿ.ಗೆ ಮಾಹಿತಿ. ಏರ್&zwnj;ಪೋರ್ಟ್&zwnj; ಸಿಸಿಟೀವಿ ದೃಶ್ಯ, ರಿಜಿಸ್ಟರ್&zwnj; ಪರಿಶೀಲನೆಗೆ ಇಳಿದಿದೆ ಇ.ಡಿ.&lt;/li&gt;&lt;/ul&gt;&lt;p&gt;--&lt;/p&gt;&lt;p&gt;--&lt;/p&gt;&lt;p&gt;&lt;strong&gt;ಎಚ್.ಎಸ್. ಅವಿನಾಶ್&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಆ.9): &lt;/strong&gt;ಖಾತೆ ಸಿಗುವ ಮುನ್ನವೇ ಸಚಿವ ನಾಗೇಂದ್ರ ಅವರ ಮಂತ್ರಿ ಕುರ್ಚಿ ಅಲುಗಾಡತೊಡಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಜಾಮೀನು ನೀಡುವಾಗ ಕೋರ್ಟ್&zwnj; ವಿಧಿಸಿದ್ದ ಷರತ್ತು ಉಲ್ಲಂಘಿಸಿ, ಅನುಮತಿಯನ್ನೇ ಪಡೆಯದೆ ನಾಗೇಂದ್ರ ದೆಹಲಿ ಪ್ರವಾಸ ಮಾಡಿದ್ದಾರೆ ಎಂಬ ಆರೋಪ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.) ಸಾಕ್ಷ್ಯ ಸಂಗ್ರಹಕ್ಕೆ ಇಳಿದಿದೆ. ಸರಿಯಾದ ದಾಖಲೆ ಸಿಕ್ಕಿಬಿಟ್ಟರೆ ಸಚಿವ ನಾಗೇಂದ್ರ ಅವರ ಜಾಮೀನು ರದ್ದತಿ ಕೋರಿ ಇ.ಡಿ.ಯು ಕೋರ್ಟ್ ಮೆಟ್ಟಿಲೇರುವುದು ಖಚಿತ ಎನ್ನಲಾಗಿದೆ.&lt;/p&gt;&lt;p&gt;ಕರ್ನಾಟಕದಿಂದ ಹೊರಗೆ ಹೋಗುವುದಾದರೆ ಕೋರ್ಟ್&zwnj;ನಿಂದ ಲಿಖಿತ ಅನುಮತಿ ಪಡೆಯಬೇಕು ಎಂಬುದೂ ಸೇರಿದಂತೆ ಹಲವು ಷರತ್ತುಗಳೊಂದಿಗೆ ಜನಪ್ರತಿನಿಧಿಗಳ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ನಾಗೇಂದ್ರ ಅವರಿಗೆ ಜಾಮೀನು ನೀಡಿತ್ತು. ಆದರೆ, ಜಾಮೀನು ಷರತ್ತು ನಿಯಮ ಉಲ್ಲಂಘಿಸಿ ಇದೇ ಜುಲೈ 15 ಮತ್ತು ಜುಲೈ 26ರಂದು ಸಚಿವ ನಾಗೇಂದ್ರ ಅವರು ದೆಹಲಿ ಪ್ರವಾಸ ಕೈಗೊಂಡಿದ್ದರು ಎನ್ನುವ ಮಾಹಿತಿಯ ಬೆನ್ನತ್ತಿದ್ದಾರೆ ಇ.ಡಿ. ಅಧಿಕಾರಿಗಳು.&lt;/p&gt;&lt;p&gt;ಜುಲೈ 15ರ ಸಂಜೆ 6.15ರ ಇಂಡಿಗೋ ವಿಮಾನ (ಸಂಖ್ಯೆ- 6ಇ6034) ಹಾಗೂ ಜುಲೈ 26ರ ಮಧ್ಯಾಹ್ನ 1.55ರ ಇಂಡಿಗೋ ವಿಮಾನದ (ಸಂಖ್ಯೆ - 6ಇ840) ಮೂಲಕ ಸಚಿವ ನಾಗೇಂದ್ರ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನುವ ಮಾಹಿತಿ ಜಾರಿ ನಿರ್ದೇಶನಾಲಯಕ್ಕೆ ಸಿಕ್ಕಿದೆ. ಈ ಮಾಹಿತಿ ಹಿಡಿದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ, ಶಿಷ್ಟಾಚಾರ ವಿಭಾಗದ ರಿಜಿಸ್ಟರ್&zwnj;ಗಳು ಹಾಗೂ ವಿಮಾನಯಾನದ ದಾಖಲಾತಿಗಳ ಹುಡುಕಾಟವನ್ನು ಇ.ಡಿ. ಆರಂಭಿಸಿದೆ.&lt;/p&gt;&lt;p&gt;ಸಚಿವ ನಾಗೇಂದ್ರ ಅವರು ಸಚಿವಗಿರಿಗಾಗಿ ಲಾಬಿ ನಡೆಸಲು ದೆಹಲಿ ಪ್ರವಾಸ ನಡೆಸಿದ್ದು ಹೌದಾದರೂ ಅಲ್ಲೆಲ್ಲೂ ಮಾಧ್ಯಮ ಪ್ರತಿನಿಧಿಗಳಿಗೆ ಮುಖಾಮುಖಿ ಆಗಲಿಲ್ಲ. ಯಾವುದೇ ಸಂದರ್ಶನ ನೀಡಿಲ್ಲ. ಜುಲೈ 17ರಂದು ಮಾತ್ರ ಎಐಸಿಸಿ ಕೇಂದ್ರ ಕಚೇರಿ ಆವರಣದಲ್ಲಿ ವಿಜಯಾನಂದ ಕಾಶಪ್ಪನವರ್, ಅಜಯ್&zwnj; ಸಿಂಗ್&zwnj;, ಶಾಸಕರಾದ ಎ.ಎಸ್. ಪೊನ್ನಣ್ಣ, ಎನ್.ಎಚ್. ಕೋನರೆಡ್ಡಿ ಅವರ ಜೊತೆ ಇರುವುದು ಮಾತ್ರ ಕೆಲವು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಆದರೆ, ಆ ದಿನ ಅವರ ದೆಹಲಿ ಪ್ರವಾಸಕ್ಕೆ ಕೋರ್ಟ್ ಅನುಮತಿ ಇದೆ.&lt;/p&gt;&lt;h2&gt;ಯಾವಾಗೆಲ್ಲ ಅನುಮತಿ?:&lt;/h2&gt;&lt;p&gt;ಸಚಿವ ನಾಗೇಂದ್ರ ಅವರು ಕರ್ನಾಟಕದ ಹೊರಗಡೆ ಪ್ರವಾಸ ಮಾಡಲು ಮೂರು ಬಾರಿ ಕೋರ್ಟ್ ಅನುಮತಿ ನೀಡಿದೆ. 2026ರ ಏಪ್ರಿಲ್ 26 ರಿಂದ 2026ರ ಜೂನ್ 2ರವರೆಗೆ ಹಾಗೂ ಜೂನ್ 11 ರಿಂದ ಜುಲೈ 7ರವರೆಗೆ ಹಾಗೂ ಜುಲೈ 16ರಿಂದ ಜುಲೈ 25ರವರೆಗೆ ಕರ್ನಾಟಕದ ಹೊರಗೆ ನಾಗೇಂದ್ರ ಅವರ ಪ್ರವಾಸಕ್ಕೆ ನ್ಯಾಯಾಲಯವು ಅನುಮತಿ ನೀಡಿತ್ತು. ಆದರೆ ನಾಗೇಂದ್ರ ಜು.15 ಹಾಗೂ ಜು.26ರಂದೂ ದೆಹಲಿ ಪ್ರವಾಸ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಇ.ಡಿ.ಗೆ ಲಭಿಸಿದೆ.&lt;/p&gt;&lt;p&gt;ಈ ನಡುವೆ, ಜುಲೈ 26 ರಿಂದ ಆಗಸ್ಟ್ 10ರವರೆಗೆ ರಾಜ್ಯದಿಂದ ಹೊರಕ್ಕೆ ಹೋಗಲು ಅನುಮತಿ ಕೋರಿ ನ್ಯಾಯಾಲಯಕ್ಕೆ ನಾಗೇಂದ್ರ ಅವರು ಜುಲೈ 23ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ಜಾರಿ ನಿರ್ದೇಶನಾಲಯವು ಅನುಮತಿ ನೀಡುವುದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿತು.&lt;/p&gt;&lt;p&gt;ತನಿಖೆ ವಿಳಂಬ ಮಾಡಲೆಂದೇ ಪದೇ ಪದೇ ಪ್ರವಾಸಕ್ಕೆ ಆರೋಪಿ ನಾಗೇಂದ್ರ ಅನುಮತಿ ಕೇಳುತ್ತಿದ್ದಾರೆ. ಕೋರ್ಟ್ ನೀಡುವ ಸ್ವಾತಂತ್ರ್ಯ ದುರ್ಬಳಕೆ ಮಾಡುತ್ತಿದ್ದಾರೆ. ಇ.ಡಿ. ನೀಡಿದ ಸಮನ್ಸ್&zwnj;ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಜೊತೆಗೆ, ಈಗ ದೆಹಲಿ ಪ್ರವಾಸಕ್ಕೆ ನಿರ್ದಿಷ್ಟ ಕಾರಣ, ಪ್ರಮುಖರ ಆಹ್ವಾನದ ಯಾವ ದಾಖಲಾತಿಯನ್ನೂ ಸಲ್ಲಿಸಿಲ್ಲ. ಹೀಗಾಗಿ ಪ್ರವಾಸಕ್ಕೆ ಅನುಮತಿ ನೀಡಬಾರದು ಎಂದು ಕೋರ್ಟ್ ಮುಂದೆ ಇ.ಡಿ. ವಾದಿಸಿತ್ತು. ಈ ವಾದ ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯವು ಸಚಿವ ನಾಗೇಂದ್ರ ಅವರು ದೆಹಲಿ ಪ್ರವಾಸಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಆಗಸ್ಟ್ 4ರಂದು ಅರ್ಜಿಯನ್ನು ತಿರಸ್ಕರಿಸಿದೆ.&lt;/p&gt;&lt;p&gt;ನ್ಯಾಯಾಲಯದ ಷರತ್ತು ಉಲ್ಲಂಘಿಸುವ ಮೂಲಕ ನಾಗೇಂದ್ರ ಅವರು ದೆಹಲಿ ಪ್ರವಾಸ ಮುಗಿಸಿ, ಸಚಿವರು ಆಗಿಬಿಟ್ಟಿದ್ದಾರೆ ಎಂಬ ಅನುಮಾನಕ್ಕೆ ಉತ್ತರ ಕಂಡುಕೊಳ್ಳುವ ಕೆಲಸವನ್ನು ಬಿರುಸುಗೊಳಿಸಿದೆ ಜಾರಿ ನಿರ್ದೇಶನಾಲಯ. ಇದಕ್ಕೆ ಪೂರಕ ಸಾಕ್ಷ್ಯಗಳು ಸಿಕ್ಕಿದಲ್ಲಿ ನಾಗೇಂದ್ರ ಅವರ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಲು ಇ.ಡಿ. ಸಿದ್ಧತೆ ಕೈಗೊಂಡಿದೆ. ಈ ನಡುವೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಸದ್ಯದಲ್ಲೇ ಶುರುವಾಗಲಿರುವ ವಿಧಾನಮಂಡಲ ಅಧಿವೇಶನದ ಹೊರಗೆ ಮತ್ತು ಒಳಗೆ ತೀವ್ರ ಸ್ವರೂಪದ ಹೋರಾಟ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.&lt;/p&gt;&lt;p&gt;&lt;strong&gt;ಸಾಕ್ಷ್ಯ ಸಿಕ್ಕರೆ ಏನಾಗುತ್ತೆ?&lt;/strong&gt;&lt;/p&gt;&lt;p&gt;- ಈಗ ಸಿಕ್ಕಿರುವ ಮಾಹಿತಿಗಳನ್ನು ಖಚಿತಪಡಿಸುವ ಸಾಕ್ಷ್ಯಗಳು ಸಿಕ್ಕರೆ ಇ.ಡಿ. ಕೋರ್ಟ್ ಮೆಟ್ಟಿಲೇರಲಿದೆ&lt;/p&gt;&lt;p&gt;- ಷರತ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ನಾಗೇಂದ್ರ ಜಾಮೀನು ರದ್ದುಪಡಿಸುವಂತೆ ಕೋರ್ಟ್&zwnj;ನಲ್ಲಿ ವಾದಿಸಲಿದೆ&lt;/p&gt;&lt;p&gt;- ಒಂದು ವೇಳೆ ಕೋರ್ಟ್&zwnj; ಏನಾದರೂ ಜಾಮೀನು ರದ್ದುಪಡಿಸಿದರೆ ಮತ್ತೆ ಜೈಲಿಗೆ ಹೋಗಬೇಕಾಗುತ್ತೆ ಸಚಿವ&lt;/p&gt;&lt;p&gt;- ಹಾಗಾದಾಗ ಸಂಪುಟದಲ್ಲಿ ಮುಂದುವರಿಸಲು ಸರ್ಕಾರಕ್ಕೆ ಕಷ್ಟವಾಗಲಿದೆ. ವಿಪಕ್ಷಗಳು ಕೂಡ ಗದ್ದಲವೆಬ್ಬಿಸಲಿವೆ&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/b-nagendra-vsits-delhi-in-violation-of-court-conditions-what-happens-if-the-ed-finds-evidence-rav/articleshow-nqczag4"/>
        </item>
        <item>
            <title><![CDATA[ಒತ್ತುವರಿದಾರರಿಗೆ ಬಿಗ್ ಶಾಕ್: 165 ಎಕರೆ ಭೂಮಿಯನ್ನು ವಶಕ್ಕೆ ಪಡೆದುಕೊಂಡ ಬಿಎಂಟಿಸಿ]]></title>
            <link>https://kannada.asianetnews.com/bengaluru-urban/big-shock-for-squatters-bmtc-takes-possession-of-165-acres-of-land-encroachment-clearance-mrq/articleshow-67gwgdc</link>
            <guid isPermaLink="true">https://kannada.asianetnews.com/bengaluru-urban/big-shock-for-squatters-bmtc-takes-possession-of-165-acres-of-land-encroachment-clearance-mrq/articleshow-67gwgdc</guid>
            <pubDate>Sun, 09 Aug 2026 07:33:46 +0530</pubDate>
            <description><![CDATA[ಕಳೆದ ಎರಡು ವರ್ಷಗಳಲ್ಲಿ, ಬಿಎಂಟಿಸಿ ವಿಶೇಷ ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ 165 ಎಕರೆ ಭೂಮಿಯನ್ನು ಮರುವಶಕ್ಕೆ ಪಡೆದಿದೆ. ಪೊಲೀಸ್ ಮತ್ತು ಕಂದಾಯ ಇಲಾಖೆಗಳ ಸಹಕಾರದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಮುಂದೆಯೂ ಈ ಕ್ರಮ ಮುಂದುವರಿಯಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj44xmkv6nkass0kphjr54z,imgname-encroachment-clearance-1786240988819.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕಳೆದೆರಡು ವರ್ಷಗಳಲ್ಲಿ ಬಿಎಂಟಿಸಿಯು ವಿಶೇಷ ಕಾರ್ಯಾಚರಣೆ ನಡೆಸಿ ನಿಗಮಕ್ಕೆ ಸೇರಿದ 165 ಎಕರೆ ಭೂಮಿಯನ್ನು ಒತ್ತುವರಿದಾರರಿಂದ ತೆರವು ಮಾಡಿ ಮರುವಶಕ್ಕೆ ಪಡೆದಿದೆ. ಬಿಎಂಟಿಸಿಯು ತನ್ನ ಅಧೀನದಲ್ಲಿರುವ ಸ್ಥಿರಾಸ್ತಿಗಳನ್ನು ಸಂರಕ್ಷಿಸಲು ಮತ್ತು ಅಕ್ರಮ ಒತ್ತುವರಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಕಳೆದೆರಡು ವರ್ಷಗಳಲ್ಲಿ ಪೊಲೀಸ್&zwnj; ಮತ್ತು ಕಂದಾಯ ಇಲಾಖೆ ಸಹಕಾರದೊಂದಿಗೆ ಬಿಎಂಟಿಸಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ 165 ಎಕರೆ ಭೂಮಿಯನ್ನು ಮರುವಶಕ್ಕೆ ಪಡೆದಿದೆ.&lt;/p&gt;&lt;h2&gt;&lt;strong&gt;40 ಜನರ ವಿರುದ್ಧ ಕಾನೂನು ಕ್ರಮ&lt;/strong&gt;&lt;/h2&gt;&lt;p&gt;ನಿಗಮಕ್ಕೆ ಸೇರಿದ ದಾಖಲೆಗಳು, ಕಂದಾಯ ದಾಖಲೆಗಳು ಮತ್ತು ಸ್ಥಳ ಪರಿಶೀಲನೆ ಆಧಾರದಲ್ಲಿ ಒತ್ತುವರಿ ಗುರುತಿಸಿ ಕಾನೂನುಬದ್ಧವಾಗಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲದೆ, ನಿಗಮದ ಭೂಮಿ ಒತ್ತುವರಿ ಮಾಡಿಕೊಂಡಿದ್ದಕ್ಕೆ ಒಟ್ಟು 10 ಪ್ರಕರಣಗಳನ್ನು ದಾಖಲಿಸಲಾಗಿದ್ದು, 40 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಡಿಕೆ ಶಿವಕುಮಾರ್ ಸರ್ಕಾರಕ್ಕೆ ಸುನಿಲ್ ಜೋಶಿ ಶಹಬ್ಬಾಶ್.. ಬೆಂಗಳೂರಿನ 233 ಅಂಗಡಿಗಳ ತೆರವಿಗೆ ಜೈ ಎಂದ ಮಾಜಿ ಕ್ರಿಕೆಟಿಗ&lt;/strong&gt;&lt;/p&gt;&lt;h3&gt;&lt;strong&gt;ಎಲ್ಲೆಲ್ಲಿ ಭೂಮಿ ವಶಕ್ಕೆ?&lt;/strong&gt;&lt;/h3&gt;&lt;p&gt;ಮಂಡೂರು ಬಳಿಯ ಹಂಚರಹಳ್ಳಿ, ದಾಸನಪುರದ ಹುಚ್ಚನಪಾಳ್ಯ, ಹೊಸಕೋಟೆಯ ಹಿರಂಡಹಳ್ಳಿ, ಹೆಸರಘಟ್ಟದ ತೋಟಗೆರೆ, ಭೈರತಿ ಹಾಗೂ ಕಣ್ಣೂರು ಸೇರಿದಂತೆ ಇನ್ನಿತರ ಕಡೆಗಳಲ್ಲಾಗಿದ್ದ ಬಿಎಂಟಿಸಿ ಆಸ್ತಿಯ ಒತ್ತುವರಿ ತೆರವು ಮಾಡಲಾಗಿದೆ. ಮುಂದೆಯೂ ಬಿಎಂಟಿಸಿ ಆಸ್ತಿ ಒತ್ತುವರಿ ತಡೆಗೆ ಹಾಗೂ ಈಗಾಗಲೇ ಆಗಿರುವ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಳ್ಳಲು ನಿಗಮ ಮುಂದಾಗಿದೆ ಎಂದು ನಿಗಮ ತಿಳಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;HAL: ದೇಶದಲ್ಲೇ ಮೊದಲು, ಎಚ್&zwnj;ಎಎಲ್&zwnj;ನಲ್ಲಿ ಉಪಗ್ರಹ ಬಳಸಿ ಹೆಲಿಕಾಪ್ಟರ್&zwnj; ಲ್ಯಾಂಡ್&zwnj;&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/big-shock-for-squatters-bmtc-takes-possession-of-165-acres-of-land-encroachment-clearance-mrq/articleshow-67gwgdc"/>
        </item>
        <item>
            <title><![CDATA[ರಷ್ಯಾದಿಂದ ತೈಲ ಖರೀದಿಸುವ ಭಾರತಕ್ಕೆ 100% ತೆರಿಗೆ? ಅಮೆರಿಕ ಸೆನೆಟ್‌ನಲ್ಲಿ ಬಿಲ್ ಪಾಸ್!]]></title>
            <link>https://kannada.asianetnews.com/world-news/lindsey-graham-act-2026-100-percent-tax-on-india-china-buying-oil-from-russia-bill-passed-in-us-senate-mrq/articleshow-rvvs62q</link>
            <guid isPermaLink="true">https://kannada.asianetnews.com/world-news/lindsey-graham-act-2026-100-percent-tax-on-india-china-buying-oil-from-russia-bill-passed-in-us-senate-mrq/articleshow-rvvs62q</guid>
            <pubDate>Sun, 09 Aug 2026 07:18:57 +0530</pubDate>
            <description><![CDATA[ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಲು ಅಮೆರಿಕದ ಸೆನೆಟ್&zwnj;ನಲ್ಲಿ ವಿಧೇಯಕ ಅಂಗೀಕಾರವಾಗಿದೆ. ಈ ಕಾಯ್ದೆಯು ಜಾರಿಯಾದರೆ, ಜಾಗತಿಕ ತೈಲ ದರ ಏರಿಕೆ ಮತ್ತು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv0scbr52hkyecwydcrmf5bt,imgname-modi-trump-g7-france-meeting-india-us-relations-trade-security-h1b-energy-diplomacy-2026-news-3-1781364305669.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj;: &lt;/strong&gt;ಭಾರತ, ಚೀನಾ ಸೇರಿ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ, ತೈಲೋತ್ಪನ್ನಗಳನ್ನು ಖರೀದಿಸುವ ರಾಷ್ಟ್ರಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಲು ಅವಕಾಶ ನೀಡುವ ವಿಧೇಯಕಕ್ಕೆ ಅಮೆರಿಕದ ಸೆನೆಟ್&zwnj; (ಮೇಲ್ಮನೆ) ಒಪ್ಪಿಗೆ ನೀಡಿದೆ.&lt;/p&gt;&lt;p&gt;ರಷ್ಯಾದಿಂದ ಭಾರೀ ಪ್ರಮಾಣದಲ್ಲಿ ತೈಲ ಮತ್ತು ತೈಲೋತ್ಪನ್ನಗಳ ಖರೀದಿಸುವುದರಿಂದ ಉಕ್ರೇನ್&zwnj; ಯುದ್ಧಕ್ಕೆ ನೆರವು ಸಿಗುತ್ತಿದೆ ಎಂದು ಹೇಳಿ ಈ ವಿಧೇಯಕ ಮಂಡಿಸಲಾಗಿದೆ. ಈ ರಷ್ಯಾ ಮತ್ತು ಇರಾನ್&zwnj; ಮೇಲೆ ನಿರ್ಬಂಧ ಹೇರುವ ಲಿಂಡ್ಸೆ ಒ ಗ್ರಹಾಂ ಕಾಯ್ದೆ-2026&rsquo; ಅನ್ನು ಸೆನೆಟ್&zwnj; 86-11 ಮತಗಳ ಅಂತರದಿಂದ ಅಂಗೀಕರಿಸಿದ್ದು, ಆ.31ರಂದು ಅಮೆರಿಕದ ಕೆಳಮನೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.&lt;/p&gt;&lt;p&gt;ಈ ಕಾಯ್ದೆ ಅಧ್ಯಕ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಅವರಿಗೆ ರಷ್ಯಾದಿಂದ ತೈಲ, ಗ್ಯಾಸ್&zwnj; ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ಐದು ರಾಷ್ಟ್ರಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಲು ಅವಕಾಶ ಮಾಡಿಕೊಡುತ್ತದೆ. ಸದ್ಯ ಚೀನಾ, ಭಾರತ, ಅಜರ್&zwnj;ಬೈಜಾನ್&zwnj;, ಹಂಗೆರಿ ಮತ್ತು ಸ್ಲೊವಾಕಿಯಾವು ರಷ್ಯಾದಿಂದ ತೈಲ ಮತ್ತು ಗ್ಯಾಸ್ ಅನ್ನು ಆಮದು ಮಾಡಿಕೊಳ್ಳುತ್ತಿರುವ ಟಾಪ್&zwnj; 5 ರಾಷ್ಟ್ರಗಳಾಗಿವೆ.&lt;/p&gt;&lt;h2&gt;&lt;strong&gt;ಮತ್ತೆ ತೈಲ ದರ ಏರಿಕೆ ಆತಂಕ&lt;/strong&gt;&lt;/h2&gt;&lt;p&gt;ಒಂದು ವೇಳೆ ಅಮೆರಿಕವು ಭಾರತ, ಚೀನಾ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಿದರೆ ಅದರ ಪರಿಣಾಮ ಸ್ವತಃ ಅಮೆರಿಕ ಹಾಗೂ ಇಡೀ ವಿಶ್ವ ಆರ್ಥಿಕತೆಯ ಮೇಲೂ ಬೀಳಲಿದೆ. ಇದರ ಜತೆಗೆ ಮಧ್ಯಪ್ರಾಚ್ಯ ಸಂಘರ್ಷದ ಈ ಹೊತ್ತಿನಲ್ಲಿ ಭಾರತ, ಚೀನಾದಂಥ ಅತಿದೊಡ್ಡ ತೈಲ ಆಮದು ರಾಷ್ಟ್ರಗಳು ರಷ್ಯಾ ಬದಲು ಇತರೆ ದೇಶಗಳಿಂದ ತೈಲ ಖರೀದಿ ಆರಂಭಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ, ಇದರ ಪರಿಣಾಮ ಹಲವು ದೇಶಗಳ ಆರ್ಥಿಕತೆ ಮೇಲೆ ಬೀಳುವ ಸಾಧ್ಯತೆ ಇದೆ. ಇನ್ನು ಅಮೆರಿಕದ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತ, ಚೀನಾದ ರಫ್ತು ಉದ್ಯಮಗಳು ಅಡ್ಡಪರಿಣಾಮ ಎದುರಿಸುವ ಆತಂಕವೂ ಇದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/lindsey-graham-act-2026-100-percent-tax-on-india-china-buying-oil-from-russia-bill-passed-in-us-senate-mrq/articleshow-rvvs62q"/>
        </item>
        <item>
            <title><![CDATA[ಕೃತಕ ಬುದ್ಧಿಮತ್ತೆ (AI) ಬಳಸಿ ವೈರಸ್‌ಗಳನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿ]]></title>
            <link>https://kannada.asianetnews.com/science/scientists-have-succeeded-in-creating-viruses-using-artificial-intelligence-mrq/articleshow-fym66gk</link>
            <guid isPermaLink="true">https://kannada.asianetnews.com/science/scientists-have-succeeded-in-creating-viruses-using-artificial-intelligence-mrq/articleshow-fym66gk</guid>
            <pubDate>Sun, 09 Aug 2026 07:09:02 +0530</pubDate>
            <description><![CDATA[ಕೃತಕ ಬುದ್ಧಿಮತ್ತೆ (ಎಐ) ಬಳಸಿ ವಿಜ್ಞಾನಿಗಳು ವೈರಸ್&zwnj;ಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ವೈರಸ್&zwnj;ಗಳು ಬ್ಯಾಕ್ಟೀರಿಯಾಗಳನ್ನು ಮಾತ್ರ ನಾಶಪಡಿಸುತ್ತವೆಯಾದರೂ, ಭವಿಷ್ಯದಲ್ಲಿ ಇದು ಮಾನವರಿಗೆ ಮಾರಕವಾಗಬಲ್ಲ ವೈರಸ್&zwnj;ಗಳ ಸೃಷ್ಟಿಗೆ ಕಾರಣವಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj2m3qwym3xv5vx08mmp5jq,imgname-ai-virus-1786239389436.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಇಷ್ಟು ದಿನ ಫೋಟೋ, ವಿಡಿಯೋ, ಆ್ಯಪ್&zwnj;ಗಳ ಸೃಷ್ಟಿಗೆ ಬಳಕೆಯಾಗುತ್ತಿದ್ದ ಕೃತಕ ಬುದ್ಧಿಮತ್ತೆ ಇದೀಗ ವೈರಸ್&zwnj; ಅನ್ನು ಸೃಷ್ಟಿಸಲೂ ಶಕ್ತವಾಗಿದೆ. ಸೈನ್ಸ್&zwnj; ನಿಯತಕಾಲಿಕದಲ್ಲಿ ಈ ಸಂಶೋಧನೆಯ ವರದಿ ಪ್ರಕಟವಾಗಿದ್ದು, ಇದು ಮನುಕುಲಕ್ಕೆ ವರವೇ? ಶಾಪವೇ? ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಸದ್ಯ ಸೃಷ್ಟಿಸಲಾಗಿರುವ ವೈರಸ್&zwnj;, ಬ್ಯಾಕ್ಟೀರಿಯಾಗಳ ಮೇಲಷ್ಟೇ ಪರಿಣಾಮ ಬೀರುವ ಕಾರಣ ಮಾನವರು, ಪ್ರಾಣಿಗಳು ಅಥವಾ ಗಿಡಗಳಿಗೆ ಯಾವುದೇ ಹಾನಿ ಮಾಡುವ ಅಪಾಯ ಇಲ್ಲ.&lt;/p&gt;&lt;p&gt;ಸ್ಟ್ಯಾನ್&zwnj;ಫೋರ್ಡ್ ವಿಶ್ವವಿದ್ಯಾಲಯದ ಡಾ. ಬ್ರಿಯಾನ್ ಹೈ ಅವರ ತಂಡ ಎಐ ಬಳಸಿಕೊಂಡು ಫೇಜ್&zwnj;ಗಳನ್ನು (ಬ್ಯಾಕ್ಟೀರಿಯಾಗೆ ಸೋಂಕು ತಗುಲಿಸಿ, ಅದರೊಳಗೆ ಸೇರಿಕೊಂಡು ಗುಣಿಸಿ ಕೊಲ್ಲುವ ವೈರಸ್&zwnj;ನ ಒಂದು ವಿಧ) ಸೃಷ್ಟಿಸಿದೆ. ಈ ಪ್ರಕ್ರಿಯೆಗೆ ಬಳಸಲಾದ ಇವಿಒ1 ಮತ್ತು 2 ಮಾಡೆಲ್&zwnj;ಗಳು 20 ಲಕ್ಷ ಫೇಜ್&zwnj;ಗಳ ಅಧ್ಯಯನದ ಬಳಿಕ ಈ ಸಾಧನೆ ಮಾಡಿವೆ. ಬಳಿಕ ಎಐ ಸೃಷ್ಟಿತ ಜೆನೆಟಿಕ್ ಸೀಕ್ವೆನ್ಸಿಂಗ್&zwnj; ಮೂಲಕ ಇವುಗಳ ಕ್ಷಮತೆಯನ್ನು ಪರೀಕ್ಷಿಸಲಾಗಿದ್ದು, ಹಲವು ಬ್ಯಾಕ್ಟೀರಿಯಾಗಳಿಗೆ ಸೋಂಕು ತಗುಲಿಸುವಲ್ಲಿ ಅವು ಯಶಸ್ವಿಯಾಗಿವೆ.&lt;/p&gt;&lt;h2&gt;&lt;strong&gt;ವರವೇಕೆ?&lt;/strong&gt;&lt;/h2&gt;&lt;p&gt;ಎಐ ಸೃಷ್ಟಿತ ವೈರಸ್&zwnj;ಗಳನ್ನು ಬಳಸಿಕೊಂಡು, ಸದ್ಯ ಲಭ್ಯವಿರುವ ಔಷಧಿ ಅಥವಾ ಚಿಕಿತ್ಸೆಗಳಿಗೆ ಬಗ್ಗದ ಬ್ಯಾಕ್ಟೀರಿಯಾಗಳನ್ನು ಬಗ್ಗುಬಡಿಯಬಹುದು. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಎಐ ವೈರಸ್&zwnj;ಗಳ ಸೃಷ್ಟಿಯನ್ನು ತ್ವರಿತವಾಗಿ ಹಾಗೂ ಅಪಾರ ಪ್ರಮಾಣದಲ್ಲಿ ಮಾಡಬಹುದು.&lt;/p&gt;&lt;h3&gt;&lt;strong&gt;ಆತಂಕವೇಕೆ?&lt;/strong&gt;&lt;/h3&gt;&lt;p&gt;ಸದ್ಯ ಸೃಷ್ಟಿಸಲಾಗಿರುವುದು ಸೋಂಕುಗಳಿಗೆ ಮಾರಕವಾದ ಬ್ಯಾಕ್ಟೀರಿಯಾಗಳನ್ನು ಮಾತ್ರ. ಆದರೆ ಮುಂದಿನ ದಿನಗಳಲ್ಲಿ ಸಂಶೋಧನೆಗಳು ತೀವ್ರಗೊಂಡು ಇವುಗಳ ವ್ಯಾಪ್ತಿ ವಿಸ್ತರಿಸುವ ಸಾಧ್ಯತೆ ಇದ್ದೇ ಇದೆ. ಈ ಪ್ರಕ್ರಿಯೆಯಲ್ಲಿ, ಮಾನವರು ಅಥವಾ ಪ್ರಾಣಿಗಳಿಗೆ ಹಾನಿಯುಂಟುಮಾಡಬಲ್ಲ ವೈರಸ್&zwnj; ಸೃಷ್ಟಿಯಾಗಬಹುದು. ಇವುಗಳನ್ನು ಸರಿಯಾಗಿ ನಿಯಂತ್ರಿಸದಿದ್ದಲ್ಲಿ ಅಥವಾ ದುಷ್ಟರ ಕೈಗೆ ಸಿಕ್ಕಲ್ಲಿ (ಕೊರೋನಾ ರೀತಿ) ಮಹಾಮಾರಿ ಸೃಷ್ಟಿಯಾಗುವುದು ಖಚಿತ. ಸರ್ವವ್ಯಾಪಿಯಾಗಿ ಸುಮಾರು 3 ವರ್ಷ ವಿಶ್ವವನ್ನು ಕಾಡಿದ್ದ ಕೋವಿಡ್&zwnj;-19 ವೈರಸ್&zwnj; ಸೃಷ್ಟಿಯಾಗಿದ್ದು ಚೀನಾದ ಒಂದು ಪ್ರಯೋಗಾಲಯದಲ್ಲಿ ಎಂಬುದನ್ನು ಮರೆಯುವಂತಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru: ಹೆಸರಘಟ್ಟದಲ್ಲಿ ಭಾರತದ ಮೊದಲ ಕ್ವಾಂಟಮ್ ಸಿಟಿ ನಿರ್ಮಾಣ: ಸಿಎಂ ಡಿಕೆ ಶಿವಕುಮಾರ್&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭಾರತ ವಿಶ್ವದ AI ಬಳಕೆಯ ರಾಜಧಾನಿಯಾಗಲಿದೆ, ದೊಡ್ಡ ಕಂಪನಿಗಳಲ್ಲಿ ಲೇ ಆಫ್, ಸಣ್ಣ ಉದ್ಯಮಗಳಿಗೆ ವರ: ನಂದನ್ ನಿಲೇಕಣಿ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/science/scientists-have-succeeded-in-creating-viruses-using-artificial-intelligence-mrq/articleshow-fym66gk"/>
        </item>
        <item>
            <title><![CDATA[Rahul gandhi Next PM: 2029ಕ್ಕೆ ರಾಹುಲ್ ಗಾಂಧಿ ಪ್ರಧಾನಿ ಮಾಡಲು ಪಣ, ಕಾರ್ಯಕರ್ತರಿಗೆ ನೂತನ ಸಚಿವ ಪಿಎಂ ನರೇಂದ್ರಸ್ವಾಮಿ ಕರೆ!]]></title>
            <link>https://kannada.asianetnews.com/politics/mandya-new-cabinet-minister-pm-narendraswamy-calls-rahul-gandhi-prime-minister-2029-rav/articleshow-glo4qrd</link>
            <guid isPermaLink="true">https://kannada.asianetnews.com/politics/mandya-new-cabinet-minister-pm-narendraswamy-calls-rahul-gandhi-prime-minister-2029-rav/articleshow-glo4qrd</guid>
            <pubDate>Sun, 09 Aug 2026 06:15:45 +0530</pubDate>
            <description><![CDATA[&lt;p&gt;2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು 2029ರಲ್ಲಿ ರಾಹುಲ್ ಗಾಂಧಿ(Rahul gandhi)ಅವರನ್ನು ದೇಶದ ಪ್ರಧಾನ ಮಂತ್ರಿ ಮಾಡಲು ಎಲ್ಲರೂ ಪಣ ತೊಡಬೇಕು ಎಂದು ನೂತನ ಸಚಿವ ಪಿ.ಎಂ.ನರೇಂದ್ರಸ್ವಾಮಿ(PM Narendraswamy) ಕಾರ್ಯಕರ್ತರಿಗೆ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzhzm1cm2bzbg2garvn935e1,imgname-----------------------2026-08-09t061342.014-1786236241300.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.9): 2028&lt;/strong&gt;ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು 2029ರಲ್ಲಿ ರಾಹುಲ್ ಗಾಂಧಿ(Rahul gandhi)ಅವರನ್ನು ದೇಶದ ಪ್ರಧಾನ ಮಂತ್ರಿ ಮಾಡಲು ಎಲ್ಲರೂ ಪಣ ತೊಡಬೇಕು ಎಂದು ನೂತನ ಸಚಿವ ಪಿ.ಎಂ.ನರೇಂದ್ರಸ್ವಾಮಿ(PM Narendraswamy) ಕಾರ್ಯಕರ್ತರಿಗೆ ಹೇಳಿದರು.&lt;/p&gt;&lt;h2&gt;ಯಾರನ್ನೂ ಟೀಕೆ ಮಾಡಲ್ಲ&lt;/h2&gt;&lt;p&gt;ಸಿಲ್ವರ್ ಜ್ಯೂಬಿಲಿ ಪಾರ್ಕ್&zwnj;ನಲ್ಲಿ ಆಯೋಜಿಸಿದ್ದ ನೂತನ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಯಾರನ್ನೂ ಟೀಕೆ ಮಾಡುವುದಿಲ್ಲ. ಪ್ರಚೋದನೆಗೂ ಒಳಗಾಗುವುದಿಲ್ಲ. ಜನರ ಸೇವೆ ಮಾಡುವುದಷ್ಟೇ ನಮ್ಮ ಕೆಲಸ ಎಂದು ಶಪಥ ಮಾಡಿದರು.&lt;/p&gt;&lt;h3&gt;2029ಕ್ಕೆ ರಾಹುಲ್ ಗಾಂಧಿ ಪ್ರಧಾನಿ ಮಾಡಲು ಪಣ&lt;/h3&gt;&lt;p&gt;ನಾವು ನೆಪಮಾತ್ರಕ್ಕಷ್ಟೇ ಮಂತ್ರಿಗಳು. ನಿಮ್ಮಂತೆಯೇ ನಾವೂ ಕಾರ್ಯಕರ್ತರೇ. ಜಿಲ್ಲೆಯ ಅಭಿವೃದ್ಧಿ ಮಾಡುವುದಕ್ಕಷ್ಟೇ ನಮ್ಮ ಆದ್ಯತೆ. ವೀರಾವೇಷದ ಮಾತುಗಳ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ೨೦೨೮ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ತರಲು ಮತ್ತು ೨೦೨೯ಕ್ಕೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಒಟ್ಟಾಗಿ ಶ್ರಮಿಸೋಣ ಎಂದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/mandya-new-cabinet-minister-pm-narendraswamy-calls-rahul-gandhi-prime-minister-2029-rav/articleshow-glo4qrd"/>
        </item>
        <item>
            <title><![CDATA[ಕೊನೆಗೂ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ ಶುರು; ರಾಜ್ಯ ಸರ್ಕಾರ ಮಹತ್ವದ ಆದೇಶ!]]></title>
            <link>https://kannada.asianetnews.com/education/karnataka-govt-schools-introduce-english-medium-for-class-8-in-278-schools-30000-students-to-benefit-rav/articleshow-fdx9bas</link>
            <guid isPermaLink="true">https://kannada.asianetnews.com/education/karnataka-govt-schools-introduce-english-medium-for-class-8-in-278-schools-30000-students-to-benefit-rav/articleshow-fdx9bas</guid>
            <pubDate>Sun, 09 Aug 2026 06:35:49 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರವು 278 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ, 8ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಲು ಅನುಮತಿ ನೀಡಿದೆ. ಇದರಿಂದ 7ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಓದಿ ಅತಂತ್ರರಾಗಿದ್ದ ಸುಮಾರು 30,000 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jrcdtz28y0dd6s8vfgcdfer0,imgname-whatsapp-image-2025-04-09-at-09.57.09.jpeg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;8ನೇ ತರಗತಿಗೆ ಇಂಗ್ಲಿಷ್&zwnj; ಮೀಡಿಯಂ ಮಂಜೂರಾತಿ&lt;/li&gt; &lt;li&gt;278 ಶಾಲೇಲಿ ಆರಂಭ । 30,000 ಮಕ್ಕಳು ನಿರಾಳ&lt;/li&gt;&lt;/ul&gt;&lt;p&gt;----&lt;/p&gt;&lt;p&gt;&lt;strong&gt;ಕನ್ನಡ ಪ್ರಭ ವರದಿ ಫಲಶೃತಿ&lt;/strong&gt;&lt;/p&gt;&lt;p&gt;&lsquo;7ನೇ ಕ್ಲಾಸ್&zwnj; ವರೆಗೆ ಇಂಗ್ಲಿಷ್&zwnj;, 8ನೇ ತರಗತಿಯಿಂದ ಕನ್ನಡ ಮಾಧ್ಯಮ&lsquo;, &lsquo;ಸರ್ಕಾರಿ ಶಾಲೇಲಿ ಕಲಿತ 30 ಸಾವಿರ ಮಕ್ಕಳು ಅತಂತ್ರ&rsquo; ಎಂಬ ಸರಣಿ ವರದಿಗಳನ್ನು &lsquo;ಕನ್ನಡಪ್ರಭ&rsquo; ಜೂ,14 ಹಾಗೂ ಜು.17ರಂದು ಪ್ರಕಟಿಸಿ ಗಮನ ಸೆಳೆದಿತ್ತು,&lt;/p&gt;&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ಹೂವಿನಹಡಗಲಿ (ಆ.9)&lt;/strong&gt;&lt;/p&gt;&lt;p&gt;ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ರಾಜ್ಯ ಸರ್ಕಾರ, ಕೊನೆಗೂ ಇದೇ ಶೈಕ್ಷಣಿಕ ವರ್ಷದಿಂದ ಅನ್ವಯ ಆಗುವಂತೆ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆರಂಭಿಸಿದೆ. ಅರ್ಥಾತ್&zwnj;, ಅವರಿಗೆ 8ನೇ ಕ್ಲಾಸ್&zwnj;ನಲ್ಲೂ ಆಂಗ್ಲ ಮಾಧ್ಯಮದಲ್ಲೇ ಮುಂದುವರಿಯಲು ಮೊದಲ ಬಾರಿ ಅವಕಾಶ ನೀಡಿದೆ.&lt;/p&gt;&lt;p&gt;2019-20ನೇ ಸಾಲಿನಿಂದ ರಾಜ್ಯದ ಒಂದು ಸಾವಿರ ಶಾಲೆಗಳಲ್ಲಿ ಕನ್ನಡ ಮಾಧ್ಯಮದೊಂದಿಗೆ 1ನೇ ತರಗತಿಯಿಂದಲೇ, ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಪ್ರಾರಂಭಿಸಲಾಗಿತ್ತು. ಹೀಗಾಗಿ, ಆಂಗ್ಲ ಮಾಧ್ಯಮದಲ್ಲಿ 7ನೇ ತರಗತಿ ಪಾಸ್&zwnj; ಮಾಡಿರುವ 30 ಸಾವಿರ ಮಕ್ಕಳು, 8ನೇ ತರಗತಿಯಿಂದ ಆಂಗ್ಲ ಮಾಧ್ಯಮ ಇಲ್ಲದೆ ಅತಂತ್ರವಾಗಿದ್ದರು. ಈಗ ಆಗಸ್ಟ್&zwnj; 1ರಂದು ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದ್ದು, ರಾಜ್ಯದ 278 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ, ಆಂಗ್ಲ ಮಾಧ್ಯಮದಲ್ಲಿ 8ನೇ ತರಗತಿ ಆರಂಭಿಸಿದೆ.&lt;/p&gt;&lt;p&gt;ಈ ಕುರಿತು &lsquo;ಕನ್ನಡಪ್ರಭ&rsquo;ವು &lsquo;ಸರ್ಕಾರಿ ಶಾಲೇಲಿ ಕಲಿತ 30 ಸಾವಿರ ಮಕ್ಕಳು ಅತಂತ್ರ&rsquo;, &lsquo;ಖಾಸಗಿ ಶಾಲೆಗಳತ್ತ ಸರ್ಕಾರಿ ಶಾಲೆಯ 30 ಸಾವಿರ ಮಕ್ಕಳು.!&rsquo;, &lsquo;7ನೇ ಕ್ಲಾಸ್&zwnj; ವರೆಗೆ ಇಂಗ್ಲಿಷ್&zwnj;, 8ನೇ ತರಗತಿಯಿಂದ ಕನ್ನಡ ಮಾಧ್ಯಮ.!&rsquo; ಹೀಗೆ ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.&lt;/p&gt;&lt;h2&gt;8ನೇ ತರಗತಿಗೆ ಉನ್ನತೀಕರಣ:&lt;/h2&gt;&lt;p&gt;ರಾಜ್ಯದ ಒಟ್ಟು 1 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಪೈಕಿ, 278 ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಗೆ ಉನ್ನತೀಕರಿಸಿ ಆಂಗ್ಲ ಮಾಧ್ಯಮ ಶಾಲೆಗೆ ಮಂಜೂರಾತಿ ನೀಡಲಾಗಿದೆ. ತರಗತಿವಾರು, ಮಕ್ಕಳ ದಾಖಲಾತಿ ಮತ್ತು ಕರ್ತವ್ಯದಲ್ಲಿ ಇರುವ ಶಿಕ್ಷಕರ ಸಂಖ್ಯೆ ಹಾಗೂ ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಈ ಶಾಲೆಗಳನ್ನು ಉನ್ನತೀಕರಿಸಲಾಗಿದ್ದು, 2026-27ನೇ ಶೈಕ್ಷಣಿಕ ಸಾಲಿನಿಂದಲೇ ಇದು ಜಾರಿಗೆ ಬರಲಿದೆ.&lt;/p&gt;&lt;p&gt;ಕನ್ನಡ ಮಾಧ್ಯಮ ಶಾಲೆಯಲ್ಲೇ 8ನೇ ತರಗತಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಸರ್ಕಾರ ಆದೇಶ ನೀಡಿದೆ. ಅದರಂತೆ ಕ್ರಮಕ್ಕೆ ಮುಂದಾಗುತ್ತೇವೆ.&lt;/p&gt;&lt;p&gt;&lt;strong&gt;- ಕೆ.ಮಂಗಳಾ, ಕ್ಷೇತ್ರ ಶಿಕ್ಷಣಾಧಿಕಾರಿ, ಹೂವಿನಹಡಗಲಿ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/karnataka-govt-schools-introduce-english-medium-for-class-8-in-278-schools-30000-students-to-benefit-rav/articleshow-fdx9bas"/>
        </item>
        <item>
            <title><![CDATA[ತಾಯಿಯ ಪ್ರೀತಿಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ಮರಿಗಳನ್ನು ರಕ್ಷಿಸಲು ಗೋಡೆ ಏರಿದ ಬೆಕ್ಕು; ಆಮೇಲೆನಾಯ್ತು?]]></title>
            <link>https://kannada.asianetnews.com/viral/mother-cat-risks-her-life-to-save-kittens-emotional-video-goes-viral-gvd/articleshow-mn6xid3</link>
            <guid isPermaLink="true">https://kannada.asianetnews.com/viral/mother-cat-risks-her-life-to-save-kittens-emotional-video-goes-viral-gvd/articleshow-mn6xid3</guid>
            <pubDate>Sat, 08 Aug 2026 23:24:11 +0530</pubDate>
            <description><![CDATA[&lt;p&gt;ಎತ್ತರದ ಗೋಡೆಯೊಂದರ ಸಣ್ಣ ರಂಧ್ರ ಅಥವಾ ಸಂದಿಯಲ್ಲಿ ಬೆಕ್ಕಿನ ಮರಿಗಳು ಸಿಲುಕಿಕೊಂಡಿರುವುದು ಕಾಣಿಸುತ್ತದೆ. ಕೆಳಗೆ ಇಳಿಯಲೂ ಸಾಧ್ಯವಾಗದೆ, ಮೇಲಕ್ಕೂ ಹೋಗಲಾಗದೆ ಅವು ಅಸಹಾಯಕವಾಗಿ ಕೂಗುತ್ತಿರುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzh6t39fnh3edbwrf8pj41eq,imgname-kk-1786210225455.png" type="image/jpeg" height="390" width="690"/>
            <content:encoded><![CDATA[&lt;p&gt;ತಾಯಿಯ ಪ್ರೀತಿಗೆ ಯಾವುದೇ ಗಡಿ, ಮಿತಿ ಇರುವುದಿಲ್ಲ ಎಂಬುದನ್ನು ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ಆಗಾಗ ಸಾಬೀತುಪಡಿಸುತ್ತವೆ. ತನ್ನ ಮರಿಗಳಿಗೆ ಸಣ್ಣ ಅಪಾಯ ಎದುರಾದರೂ ಪ್ರಾಣವನ್ನೇ ಲೆಕ್ಕಿಸದೆ ಅವುಗಳನ್ನು ರಕ್ಷಿಸಲು ಹೋರಾಡುವ ತಾಯಿಯ ಮಮತೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇದೀಗ ಇಂತಹದ್ದೇ ಒಂದು ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ.&lt;/p&gt;&lt;p&gt;ಚೀನಾದಲ್ಲಿ ನಡೆದಿರುವ ಎನ್ನಲಾದ ಈ ಘಟನೆಯಲ್ಲಿ ತಾಯಿ ಬೆಕ್ಕೊಂದು ತನ್ನ ಮರಿಗಳನ್ನು ರಕ್ಷಿಸಲು ಮಾಡಿದ ಸಾಹಸ ಎಲ್ಲರನ್ನೂ ಬೆರಗುಗೊಳಿಸಿದೆ. ಎತ್ತರದ, ಸಂಪೂರ್ಣ ಲಂಬವಾಗಿರುವ ಗೋಡೆಯೊಂದರ ಸಣ್ಣ ಜಾಗದಲ್ಲಿ ಬೆಕ್ಕಿನ ಮರಿಗಳು ಸಿಲುಕಿಕೊಂಡಿದ್ದವು. ಅವುಗಳ ಕೂಗು ಕೇಳಿದ ತಾಯಿ ಬೆಕ್ಕು ಕ್ಷಣವೂ ಯೋಚಿಸದೆ ಅವುಗಳನ್ನು ರಕ್ಷಿಸಲು ಮುಂದಾಗಿದೆ.&lt;/p&gt;&lt;p&gt;&lt;strong&gt;ಲಂಬ ಗೋಡೆ ಏರಿ ಕಂದಮ್ಮಗಳ ರಕ್ಷಣೆಗೆ ಧಾವಿಸಿದ ತಾಯಿ!&lt;/strong&gt;&lt;/p&gt;&lt;p&gt;ವೈರಲ್ ಆಗಿರುವ ವಿಡಿಯೋದಲ್ಲಿ, ಎತ್ತರದ ಗೋಡೆಯೊಂದರ ಸಣ್ಣ ರಂಧ್ರ ಅಥವಾ ಸಂದಿಯಲ್ಲಿ ಬೆಕ್ಕಿನ ಮರಿಗಳು ಸಿಲುಕಿಕೊಂಡಿರುವುದು ಕಾಣಿಸುತ್ತದೆ. ಕೆಳಗೆ ಇಳಿಯಲೂ ಸಾಧ್ಯವಾಗದೆ, ಮೇಲಕ್ಕೂ ಹೋಗಲಾಗದೆ ಅವು ಅಸಹಾಯಕವಾಗಿ ಕೂಗುತ್ತಿರುತ್ತವೆ. ಮರಿಗಳ ಕೂಗು ಕೇಳುತ್ತಿದ್ದಂತೆ ತಾಯಿ ಬೆಕ್ಕು ಅವುಗಳ ಬಳಿಗೆ ಹೋಗಲು ಪ್ರಯತ್ನಿಸುತ್ತದೆ. ಆದರೆ ಗೋಡೆ ಸಂಪೂರ್ಣ ಲಂಬವಾಗಿದ್ದು, ಹಿಡಿದುಕೊಳ್ಳಲು ಯಾವುದೇ ಸರಿಯಾದ ಆಧಾರವೂ ಇಲ್ಲ.&lt;/p&gt;&lt;p&gt;ಸಣ್ಣ ಎಡವಟ್ಟಾದರೂ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಳ್ಳುವ ಅಪಾಯವಿತ್ತು. ಆದರೂ ತನ್ನ ಮರಿಗಳಿಗಾಗಿ ತಾಯಿ ಬೆಕ್ಕು ಹಿಂದೇಟು ಹಾಕಿಲ್ಲ. ತನ್ನ ಉಗುರುಗಳ ಸಹಾಯದಿಂದ ಗೋಡೆಯನ್ನು ಬಿಗಿಯಾಗಿ ಹಿಡಿದುಕೊಂಡು, ಅತ್ಯಂತ ಎಚ್ಚರಿಕೆಯಿಂದ ಮೇಲಕ್ಕೆ ಏರಲು ಆರಂಭಿಸಿದೆ. ಅಪಾಯಕಾರಿ ಗೋಡೆಯನ್ನು ನಿಧಾನವಾಗಿ ಏರುತ್ತಾ ಕೊನೆಗೂ ಮರಿಗಳಿದ್ದ ಜಾಗವನ್ನು ತಲುಪಿದೆ.&lt;/p&gt;&lt;p&gt;&lt;strong&gt;ಮರಿಗಳನ್ನು ಸುರಕ್ಷಿತವಾಗಿ ಸೇರಿಸಿಕೊಂಡ ತಾಯಿ ಬೆಕ್ಕು!&lt;/strong&gt;&lt;/p&gt;&lt;p&gt;ಗೋಡೆಯ ಮೇಲ್ಭಾಗವನ್ನು ತಲುಪಿದ ಬಳಿಕ ತಾಯಿ ಬೆಕ್ಕು ತನ್ನ ಮರಿಗಳ ಬಳಿಗೆ ತೆರಳಿ ಅವುಗಳನ್ನು ಸುರಕ್ಷಿತವಾಗಿ ತನ್ನೊಂದಿಗೆ ಸೇರಿಸಿಕೊಂಡಿದೆ. ತನ್ನ ಕಂದಮ್ಮಗಳಿಗೆ ಅಪಾಯ ಎದುರಾದಾಗ ತನ್ನ ಪ್ರಾಣದ ಬಗ್ಗೆಯೇ ಯೋಚಿಸದೆ ತಾಯಿ ಬೆಕ್ಕು ತೋರಿದ ಧೈರ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲಿದ್ದವರು ಈ ಸಂಪೂರ್ಣ ದೃಶ್ಯವನ್ನು ತಮ್ಮ ಮೊಬೈಲ್&zwnj;ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, ಇದೀಗ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ.&lt;/p&gt;&lt;h2&gt;&lt;strong&gt;&lsquo;ತಾಯಿ ಪ್ರೀತಿಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?&rsquo;&lt;/strong&gt;&lt;/h2&gt;&lt;p&gt;ವಿಡಿಯೋ ನೋಡಿದ ನೆಟ್ಟಿಗರು ತಾಯಿ ಬೆಕ್ಕಿನ ಸಾಹಸಕ್ಕೆ ಭಾವುಕರಾಗಿದ್ದಾರೆ. ಮನುಷ್ಯರಾಗಿರಲಿ, ಪ್ರಾಣಿಗಳಾಗಿರಲಿ, ತಾಯಿಯ ಮಮತೆ ಒಂದೇ ರೀತಿಯದ್ದು ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. &lsquo;ತನ್ನ ಮಕ್ಕಳಿಗಾಗಿ ತಾಯಿ ಏನು ಬೇಕಾದರೂ ಮಾಡುತ್ತಾಳೆ&rsquo;, &lsquo;ಅಮ್ಮನ ಪ್ರೀತಿಗೆ ನಿಜಕ್ಕೂ ಮಿತಿಯಿಲ್ಲ&rsquo;, &lsquo;ಪ್ರಾಣಿಗಳಲ್ಲಿರುವ ಮಾತೃತ್ವವೂ ಎಷ್ಟು ಅದ್ಭುತ&rsquo; ಎಂಬಂತಹ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ. ಒಟ್ಟಿನಲ್ಲಿ, ತನ್ನ ಮರಿಗಳನ್ನು ರಕ್ಷಿಸಲು ಜೀವದ ಹಂಗನ್ನೇ ತೊರೆದು ಲಂಬ ಗೋಡೆಯನ್ನೇ ಏರಿದ ಈ ತಾಯಿ ಬೆಕ್ಕಿನ ಸಾಹಸ, &lsquo;ತಾಯಿಯ ಪ್ರೀತಿಗೆ ಸರಿಸಾಟಿಯೇ ಇಲ್ಲ&rsquo; ಎಂಬ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/viral/mother-cat-risks-her-life-to-save-kittens-emotional-video-goes-viral-gvd/articleshow-mn6xid3"/>
        </item>
        <item>
            <title><![CDATA[ಬೆಂಗಳೂರಿನಿಂದ ಕೆಲವೇ ಗಂಟೆ ಪ್ರಯಾಣ: ಶಿಖರ, ನದಿ, ದಟ್ಟಕಾಡು, ಮಳೆ, ಮಂಜಿನ ಸ್ವರ್ಗ; ಇಲ್ಲಿವೆ 5 ಮಾಂತ್ರಿಕ ಲೋಕ]]></title>
            <link>https://kannada.asianetnews.com/travel/top-5-kerala-tourist-places-near-bengaluru-road-trip-nature-getaway-budget-friendly-trips/articleshow-rxzau3s</link>
            <guid isPermaLink="true">https://kannada.asianetnews.com/travel/top-5-kerala-tourist-places-near-bengaluru-road-trip-nature-getaway-budget-friendly-trips/articleshow-rxzau3s</guid>
            <pubDate>Sat, 08 Aug 2026 22:39:10 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ಕೇವಲ 4-5 ಗಂಟೆಗಳ ಪ್ರಯಾಣದಲ್ಲಿ ತಲುಪಬಹುದಾದ ಕೇರಳದ ಐದು ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ಸ್ಥಳಗಳು ಚಾರಣ, ಜಂಗಲ್ ಸಫಾರಿ, ಪ್ಯಾರಾಗ್ಲೈಡಿಂಗ್ ಮತ್ತು ಹೌಸ್&zwnj;ಬೋಟ್ ವಿಹಾರದಂತಹ ಸಾಹಸಮಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಪ್ರಕೃತಿ ಪ್ರೇಮಿಗಳಿಗೆ ಮರೆಯಲಾಗದ ಅನುಭವ ನೀಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kd03f5es6atk2t1g4w86jekg,imgname-munnar-1766308943321.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಿಂದ ಕೇವಲ 4 ರಿಂದ 5 ಗಂಟೆಗಳ ದೂರದಲ್ಲಿರುವ ನೈಸರ್ಗಿಕ ರಮಣೀಯ ತಾಣಗಳಿಗೆ ಪ್ರಕೃತಿ ಪ್ರೇಮಿಗಳೊಮ್ಮೆ ಭೇಟಿ ಕೊಡಲೇಬೇಕು. ಸ್ವಂತ ಕಾರಿದ್ದವರಿಗೆ ಇದು ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಅದರಲ್ಲಿಯೂ ಕಡಿಮೆ ಬಜೆಟ್&zwnj;ನಲ್ಲಿ ಹನಿಮೂನ್ ಮಾಡಿಕೊಳ್ಳೋರಿಗೆ ಹಾಗೂ ಜಡಿ ಮಳೆ, ಮುಗಿಲೇ ಕವಚಿ ಭೂಮಿಗೆ ಬಿದ್ದಂತೆ ಕಾಣುವ ಮಂಜಿನ ತೋಟದ ಅನುಭವ ನೀಡುವ ಈ ಪ್ರವಾಸಿ ತಾಣಗಳನ್ನು ನೀವು ಮಿಸ್ ಮಾಡಿಕೊಳ್ಳಲೇಬೇಡಿ. ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ 5 ಪ್ರವಾಸಿ ತಾಣಗಳು ಇಲ್ಲಿವೆ.&lt;/p&gt;&lt;p&gt;ಪಶ್ಚಿಮ ಘಟ್ಟ ಪ್ರದೇಶದಲ್ಲಿ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಮಾಡಲಾಗದ ಸ್ಥಿತಿಂದಾಗಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುವ ಕೇರಳಿಗರ ಸ್ವಂತ ನಾಡು ಹೇಗಿದೆ ಗೊತ್ತಾ? ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ 5 ಪ್ರವಾಸಿ ತಾಣಗಳು ಇಲ್ಲಿವೆ.&lt;/p&gt;&lt;h2&gt;&lt;strong&gt;1. ಮುನ್ನಾರ್&lt;/strong&gt;&lt;/h2&gt;&lt;p&gt;ಪಶ್ಚಿಮ ಘಟ್ಟಗಳಲ್ಲಿರುವ ಮುನ್ನಾರ್, ಚಾರಣ ಪ್ರಿಯರಿಗೆ ಸ್ವರ್ಗವಾಗಿದೆ. ಮಂಜಿನಿಂದ ಆವೃತವಾಗಿರುವ ಇಲ್ಲಿನ ವಿಶಾಲವಾದ ಚಹಾ ತೋಟಗಳು, ಬೆಟ್ಟಗಳು, ಪರ್ವತಗಳು ಟ್ರಕ್ಕಿಂಗ್ ಅನುಭವವನ್ನು ಮೆಮೊರೆಬಲ್ ಆಗಿಸುತ್ತದೆ. ಮುನ್ನಾರ್&zwnj;ನಲ್ಲಿರುವ ಕೆಲವು ಜನಪ್ರಿಯ ಟ್ರೆಕ್ಕಿಂಗ್ ಟ್ರೇಲ್&zwnj;ಗಳೆಂದರೆ ಅನಮುಡಿ ಶಿಖರ, ಮೀಸಪುಲಿಮಲ ಮತ್ತು ಚೋಕ್ರಮುಡಿ. ಪಶ್ಚಿಮ ಘಟ್ಟಗಳ ಸುಂದರವಾದ (Beautiful) ಸೊಬಗು, ಹಚ್ಚ ಹಸಿರಾದ ಪರ್ವತ ಆಹ್ಲಾದಕರ ಅನುಭವವನ್ನು ನೀಡುತ್ತದೆ.&lt;/p&gt;&lt;h2&gt;&lt;strong&gt;2. ವಯನಾಡ್&lt;/strong&gt;&lt;/h2&gt;&lt;p&gt;ವಯನಾಡ್ ತನ್ನ ದಟ್ಟವಾದ ಕಾಡುಗಳು (Forest) ಮತ್ತು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ, ಇದು ಸಾಹಸ ಪ್ರಿಯರಿಗೆ ಸ್ವರ್ಗವಾಗಿದೆ. ಪ್ರವಾಸಿಗರು ಇಲ್ಲಿ ರೋಮಾಂಚಕ ಜಂಗಲ್ ಸಫಾರಿಗಳನ್ನು ಮಾಡಬಹುದು, ಗುಪ್ತ ಗುಹೆಗಳನ್ನು ಅನ್ವೇಷಿಸಬಹುದು ಮತ್ತು ದಟ್ಟವಾದ ಕಾಡುಗಳ ಮೂಲಕ ಚಾರಣ (Trekking) ಮಾಡಬಹುದು. ಚೆಂಬ್ರಾ ಶಿಖರವು ಅಡ್ವೆಂಚರ್ ಇಷ್ಟಪಡುವವರಿಗೆ ಉತ್ತಮ ತಾಣವಾಗಿದೆ.&lt;/p&gt;&lt;h2&gt;&lt;strong&gt;3. ವಾಗಮೋನ್&lt;/strong&gt;&lt;/h2&gt;&lt;p&gt;ಕೇರಳದಲ್ಲಿ ಹೆಚ್ಚು ಪ್ರಸಿದ್ಧವಾಗಿಲ್ಲದ ಸ್ಥಳ ವಾಗಮೋನ್. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ಈ ಸ್ಥಳದ ಬಗ್ಗೆ ತಿಳಿದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಾಹಸ ಉತ್ಸಾಹಿಗಳಲ್ಲಿ, ವಿಶೇಷವಾಗಿ ಪ್ಯಾರಾಗ್ಲೈಡಿಂಗ್ ಅಭಿಮಾನಿಗಳಲ್ಲಿ ಇದು ಜನಪ್ರಿಯತೆಯನ್ನು ಗಳಿಸುತ್ತಿದೆ. ಹಚ್ಚ ಹಸಿರಿನ ಹುಲ್ಲುಗಾವಲುಗಳು, ರೋಲಿಂಗ್ ಬೆಟ್ಟಗಳು ಮತ್ತು ಅನುಕೂಲಕರವಾದ ಗಾಳಿಯ ಪರಿಸ್ಥಿತಿಗಳು ವಾಗಮೋನ್&zwnj;ನ್ನು ಪ್ಯಾರಾಗ್ಲೈಡಿಂಗ್&zwnj;ಗೆ ಸೂಕ್ತವಾದ ತಾಣವನ್ನಾಗಿ ಮಾಡುತ್ತದೆ.&lt;/p&gt;&lt;h2&gt;&lt;strong&gt;4. ತೇಕ್ಕಡಿ&lt;/strong&gt;&lt;/h2&gt;&lt;p&gt;ತೇಕ್ಕಡಿ, ವನ್ಯಜೀವಿಗಳನ್ನು ಇಷ್ಟಪಡುವವರು ಭೇಟಿ ನೀಡಲೇಬೇಕಾದ ತಾಣವಾಗಿದೆ. ಪೆರಿಯಾರ್ ವನ್ಯಜೀವಿ ಅಭಯಾರಣ್ಯವು ದಟ್ಟವಾದ ಕಾಡುಗಳು ಮತ್ತು ಸುಂದರವಾದ ಸರೋವರಗಳ ನಡುವೆ ನೆಲೆಸಿದೆ. ಜಂಗಲ್ ಸಫಾರಿಗಳು, ಬಿದಿರಿನ ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್&zwnj;ನಂತಹ ಅತ್ಯಾಕರ್ಷಕ ಚಟುವಟಿಕೆಗಳಿಗೆ ಅವಕಾಶ ಒದಗಿಸುತ್ತದೆ. ಆನೆಗಳು, ಹುಲಿಗಳು ಮತ್ತು ಹಲವಾರು ಇತರ ಪ್ರಾಣಿಗಳನ್ನು ಇಲ್ಲಿ ನೋಡಬಹುದು.&lt;/p&gt;&lt;h2&gt;&lt;strong&gt;5. ಅಲೆಪ್ಪಿ&lt;/strong&gt;&lt;/h2&gt;&lt;p&gt;ಕೇರಳದ ಹಿನ್ನೀರಿನ ಈ ಪ್ರದೇಶವು ಪ್ರಶಾಂತವಾದ ಹೌಸ್&zwnj;ಬೋಟ್ ವಿಹಾರಕ್ಕೆ ಪ್ರಸಿದ್ಧವಾಗಿದೆ, ಅಲೆಪ್ಪಿ ರೋಮಾಂಚಕ ಕಯಾಕಿಂಗ್ ಸಾಹಸಗಳನ್ನು ಮಾಡಲು ಸಹ ಅವಕಾಶ ಒದಗಿಸುತ್ತದೆ. ಶಾಂತವಾದ ಹಿನ್ನೀರು, ಅಂಕುಡೊಂಕಾದ ಕಾಲುವೆಗಳು ಮತ್ತು ಸೊಂಪಾದ ಗದ್ದೆಗಳ ಮೂಲಕ ಪ್ರಯಾಣಿಸಬಹುದು.&lt;/p&gt;&lt;p&gt;ಹಚ್ಚ ಹಸಿರಿನ ಭೂದೃಶ್ಯಗಳು, ಹಿನ್ನೀರು ಮತ್ತು ರೋಮಾಂಚಕ ಸಾಹಸಕ್ರೀಡೆಗಳಿಗೆ ಪ್ರಸಿದ್ಧಿಯಾಗಿದೆ. ಕೇರಳಕ್ಕೆ ಪ್ರವಾಸ ಎಂದ ತಕ್ಷಣ ಬರೀ ಮುನ್ನಾರ್&zwnj;, ಅತಿರಪಳ್ಳಿ ಫಾಲ್ಸ್ ಎಂದೇ ಅಂದುಕೊಳ್ಳಬೇಕಾಗಿಲ್ಲ. ಇದಲ್ಲದೆ, ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ ಐದು ಪ್ರವಾಸಿ ತಾಣಗಳು ಇಲ್ಲಿವೆ. ನೀವು ದಿನನಿತ್ಯದ ರೊಟೀನ್ ಜೀವನದಿಂದ ವಿಶ್ರಾಂತಿ ಬಯಸುತ್ತಿದ್ದಲ್ಲಿ ಕೇರಳದ ಈ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಈ ಗಮ್ಯಸ್ಥಾನಗಳು ಸಾಹಸಕ್ರೀಡೆಗಳಿಗೆ ಅವಕಾಶ ನೀಡುವುದರ ಜೊತೆಗೆ ಆಹ್ಲಾದಕರ ಅನುಭವ ನೀಡುತ್ತದೆ. ಸುಂದರ ಪರಿಸದರಲ್ಲಿ ಮನಸ್ಸು ಸಹ ಉಲ್ಲಸಿತಗೊಳ್ಳುತ್ತದೆ. ಆದರೆ ಈ ಎಲ್ಲಾ ಸ್ಥಳಗಳಿಗೆ ಪ್ರಯಾಣಿಸುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/travel/top-5-kerala-tourist-places-near-bengaluru-road-trip-nature-getaway-budget-friendly-trips/articleshow-rxzau3s"/>
        </item>
        <item>
            <title><![CDATA[Viral: ಮಕ್ಕಳಿಗೆ ಏನ್ ತಿನ್ನಿಸಲಿ? ಇಡೀ ದಿನದ ಕಷ್ಟದ ಹಣ ಕಳುವಾಗಿ ಕಣ್ಣೀರಿಟ್ಟ ಐಸ್‌ಕ್ರೀಂ ವ್ಯಾಪಾರಿ, ಆಮೇಲೆ ಆಗಿದ್ದೇ ಪವಾಡ!]]></title>
            <link>https://kannada.asianetnews.com/viral/ice-cream-vendor-miracle-lost-money-kids-food-bmk/articleshow-sgis56w</link>
            <guid isPermaLink="true">https://kannada.asianetnews.com/viral/ice-cream-vendor-miracle-lost-money-kids-food-bmk/articleshow-sgis56w</guid>
            <pubDate>Sat, 08 Aug 2026 22:29:01 +0530</pubDate>
            <description><![CDATA[ಅಸ್ಸಾಂನಲ್ಲಿ, ದಿನದ ಗಳಿಕೆ ಕಳೆದುಕೊಂಡು ಮಕ್ಕಳ ಊಟದ ಚಿಂತೆಯಲ್ಲಿ ಕಣ್ಣೀರಿಡುತ್ತಿದ್ದ ಐಸ್&zwnj;ಕ್ರೀಂ ವ್ಯಾಪಾರಿಗೆ ಅಪರಿಚಿತರೊಬ್ಬರು ಸಹಾಯ ಮಾಡಿದ್ದಾರೆ. ಆತನಿಗೆ ಊಟ ಕೊಡಿಸಿ, ಮನೆಗೆ ಬೇಕಾದ ದಿನಸಿ ವಸ್ತುಗಳನ್ನು ಖರೀದಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzh4ywr35j0jq5djtdjymhw2,imgname-viral-news-1786208285400.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಸ್ಸಾಂನಲ್ಲಿ ನಡೆದ ಮಾನವೀಯತೆಯನ್ನು ಬಿಂಬಿಸುವ ಭಾವುಕ ಘಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಸುಡುಬಿಸಿಲಿನಲ್ಲಿ ತನ್ನ ಕುಟುಂಬದ ಹೊಟ್ಟೆ ತುಂಬಿಸಲು ರಸ್ತೆಯಿಡೀ ಅಲೆದಾಡಿ ದುಡಿಯುತ್ತಿದ್ದ ಬಡ ಐಸ್&zwnj;ಕ್ರೀಂ ಮಾರಾಟಗಾರನೊಬ್ಬ, ಕಷ್ಟಪಟ್ಟು ಸಂಪಾದಿಸಿದ ದಿನದ ಗಳಿಕೆಯನ್ನೆಲ್ಲಾ ಕಳೆದುಕೊಂಡು ಬೀದಿಯಲ್ಲಿ ಕಣ್ಣೀರಿಡುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ದೇವದೂತನಂತೆ ಬಂದು ನೆರವಾದ ಅಪರೂಪದ ಘಟನೆ ಇದಾಗಿದೆ.&lt;/p&gt;&lt;h2&gt;&lt;strong&gt;ವರದಿಗಳು ಹೇಳುವುದೇನು?&lt;/strong&gt;&lt;/h2&gt;&lt;p&gt;ವರದಿಗಳ ಪ್ರಕಾರ, ಆ ಐಸ್&zwnj;ಕ್ರೀಂ ವ್ಯಾಪಾರಿ ಎಂದಿನಂತೆ ತೀವ್ರವಾದ ಬೇಸಿಗೆಯ ಶಾಖದಲ್ಲೂ ದಿನವಿಡೀ ಕಷ್ಟಪಟ್ಟು ವ್ಯಾಪಾರ ಮಾಡುತ್ತಿದ್ದ. ಆದರೆ, ದಿಢೀರನೆ ಆತನಿಗೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತು. ನೋವಿನ ತೀವ್ರತೆ ಎಷ್ಟಿತ್ತೆಂದರೆ, ಆತನಿಗೆ ತಡೆಯಲಾಗದೆ ತನ್ನ ಐಸ್&zwnj;ಕ್ರೀಂ ಬಂಡಿಯ ಪಕ್ಕದಲ್ಲೇ ನೆಲದ ಮೇಲೆ ಕುಸಿದುಬಿದ್ದು ಪ್ರಜ್ಞೆ ಕಳೆದುಕೊಂಡನು. ಆದರೆ, ಸ್ವಲ್ಪ ಸಮಯದ ನಂತರ ಆತನಿಗೆ ಪ್ರಜ್ಞೆ ಬಂದಾಗ ಆತನಿಗೆ ಕಾಯುತ್ತಿತ್ತು ಭಾರಿ ಶಾಕ್. ಅಲ್ಲಿ ಯಾರೋ ಅಪರಿಚಿತರು ಆತನ ಬಂಡಿಯಲ್ಲಿದ್ದ ಐಸ್&zwnj;ಕ್ರೀಂಗಳನ್ನು ಹಾಗೂ ಆತ ದಿನವಿಡೀ ಕಷ್ಟಪಟ್ಟು ಸಂಪಾದಿಸಿದ್ದ ಸುಮಾರು ₹500 ನಗದನ್ನು ಕದ್ದು ಪರಾರಿಯಾಗಿದ್ದರು.&lt;/p&gt;&lt;h3&gt;&lt;strong&gt;ಮಕ್ಕಳಿಗೆ ಊಟಕ್ಕೆ ಏನು ಕೊಡಲಿ!&lt;/strong&gt;&lt;/h3&gt;&lt;p&gt;ಸಾಮಾನ್ಯ ದಿನಗೂಲಿ ವ್ಯಾಪಾರಿಗೆ ₹500 ಎನ್ನುವುದು ಕೇವಲ ಹಣವಲ್ಲ, ಅದು ಆತನ ಕುಟುಂಬದ ಅಂದಿನ ಆಹಾರದ ಮೂಲವಾಗಿತ್ತು. ಆ ಹಣದಿಂದಲೇ ಆತ ಅಂದಿನ ದಿನಸಿ ಹಾಗೂ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಬೇಕಿತ್ತು. ಕಷ್ಟಪಟ್ಟು ದುಡಿದ ಹಣ ಹಾಗೂ ಐಸ್&zwnj;ಕ್ರೀಂ ಕಳುವಾಗಿರುವುದನ್ನು ಕಂಡು ಆತ ತೀವ್ರ ಆಘಾತಕ್ಕೊಳಗಾದನು. ಈಗ ನನ್ನ ಮಕ್ಕಳಿಗೆ ಊಟಕ್ಕೆ ಏನು ಕೊಡಲಿ? ಎಂದು ಆಲೋಚಿಸುತ್ತಾ ತನ್ನ ಬಂಡಿಯ ಪಕ್ಕದಲ್ಲೇ ಕುಳಿತು ರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದನು. ಈ ಭಾವುಕ ಸನ್ನಿವೇಶವನ್ನು ಆ ಹಾದಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಗಮನಿಸಿದರು. ತಕ್ಷಣವೇ ವ್ಯಾಪಾರಿಯ ಬಳಿಗೆ ಬಂದು ಆತನ ಸಂಕಟಕ್ಕೆ ಕಾರಣವೇನೆಂದು ವಿಚಾರಿಸಿದರು. ಕಣ್ಣೀರಿಡುತ್ತಲೇ ಆ ವ್ಯಾಪಾರಿ ತನಗೆ ನಡೆದ ಇಡೀ ದುರಂತವನ್ನು ವಿವರಿಸಿದನು. &quot;ನನಗೆ ಐಸ್&zwnj;ಕ್ರೀಂ ಕಳುವಾಗಿದ್ದಕ್ಕಿಂತಲೂ, ಇಂದು ಮನೆಗೆ ಹೋದರೆ ನನ್ನ ಮಕ್ಕಳಿಗೆ ಊಟ ಹಾಕಲು ಹಣವಿಲ್ಲವಲ್ಲ ಎಂಬ ಚಿಂತೆ ಕಾಡುತ್ತಿದೆ&quot; ಎಂದು ಆತ ಕಣ್ಣೀರು ಹಾಕಿದನು.&lt;/p&gt;&lt;h3&gt;&lt;strong&gt;ಭಾವುಕರಾದ ದಾರಿಹೋಕ!&lt;/strong&gt;&lt;/h3&gt;&lt;p&gt;ವ್ಯಾಪಾರಿಯ ಮಾತುಗಳನ್ನು ಕೇಳಿ ಭಾವುಕರಾದ ಆ ದಾರಿಹೋಕ, ತಕ್ಷಣವೇ ಆತನಿಗೆ ಸಹಾಯ ಮಾಡಲು ನಿರ್ಧರಿಸಿದರು. ಮೊದಲು ಆ ಬಡ ವ್ಯಾಪಾರಿಗೆ ಹೊಟ್ಟೆತುಂಬ ಊಟ ಕೊಡಿಸಿದರು. ನಂತರ ಆತನನ್ನು ಹತ್ತಿರದ ದಿನಸಿ ಅಂಗಡಿಗೆ ಕರೆದೊಯ್ದು, ಆತನ ಕುಟುಂಬದ ನಿರ್ವಹಣೆಗೆ ಬೇಕಾದ ಅಕ್ಕಿ, ಹಾಲು, ಬಿಸ್ಕತ್ತುಗಳು ಹಾಗೂ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಸ್ವಂತ ಹಣದಿಂದ ಖರೀದಿಸಿಕೊಟ್ಟರು. ಅಪರಿಚಿತ ವ್ಯಕ್ತಿಯ ಈ ಅನಿರೀಕ್ಷಿತ ಔದಾರ್ಯ ಮತ್ತು ಕಾಳಜಿಯನ್ನು ಕಂಡು ಐಸ್&zwnj;ಕ್ರೀಂ ವ್ಯಾಪಾರಿಯ ಕಣ್ಣಲ್ಲಿ ಕೃತಜ್ಞತೆಯ ಕಣ್ಣೀರು ಜಾರಿತು.&lt;/p&gt;&lt;h3&gt;&lt;strong&gt;ಜಾಲತಾಣದಲ್ಲಿ ಫುಲ್&zwnj; ವೈರಲ್!&lt;/strong&gt;&lt;/h3&gt;&lt;p&gt;ಈ ಸಂಪೂರ್ಣ ಮಾನವೀಯ ಘಟನೆಯ ವಿಡಿಯೋವನ್ನು ಆ ವ್ಯಕ್ತಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಸಮಾಜದಲ್ಲಿ ಕಷ್ಟದಲ್ಲಿರುವವರ ಬಗ್ಗೆ ಪ್ರತಿಯೊಬ್ಬರೂ ಸಹಾನುಭೂತಿ ಹಾಗೂ ಮಾನವೀಯತೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ. ಪ್ರಸ್ತುತ ಈ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರು ಆ ಅಪರಿಚಿತ ವ್ಯಕ್ತಿಯ ಔದಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಕಷ್ಟಪಟ್ಟು ದುಡಿಯುವ ಬಡವರ ಸಣ್ಣ ಆದಾಯವೂ ಅವರ ಇಡೀ ಕುಟುಂಬಕ್ಕೆ ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಜಗತ್ತಿಗೆ ಮತ್ತೊಮ್ಮೆ ನೆನಪಿಸಿಕೊಟ್ಟಿದೆ.&lt;/p&gt;]]></content:encoded>
            <category>news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/ice-cream-vendor-miracle-lost-money-kids-food-bmk/articleshow-sgis56w"/>
        </item>
        <item>
            <title><![CDATA[Viral Video: ಗ್ಲಾಸ್ ಒಡೆದು ಹೋಗಲಿ , ಆದ್ರೆ ನಿಮ್ಮ ಜೀವ ಮುಖ್ಯ! ಕೆಲಸಗಾರನ ಮೇಲೆ ಸಿಟ್ಟಾಗದ ಮನೆ ಮಾಲೀಕನಿಗೆ ಸಲಾಂ]]></title>
            <link>https://kannada.asianetnews.com/viral/kind-customer-helps-handyman-after-glass-shatters-in-viral-video/articleshow-f6pyv92</link>
            <guid isPermaLink="true">https://kannada.asianetnews.com/viral/kind-customer-helps-handyman-after-glass-shatters-in-viral-video/articleshow-f6pyv92</guid>
            <pubDate>Sat, 08 Aug 2026 22:25:10 +0530</pubDate>
            <description><![CDATA[ಮನೆಯೊಂದರಲ್ಲಿ ಬಾತ್&zwnj;ರೂಂ ಗ್ಲಾಸ್ ಪ್ಯಾನೆಲ್ ಅಳವಡಿಸುವಾಗ ಆಕಸ್ಮಿಕವಾಗಿ ಒಡೆದುಹೋಗಿದೆ. ಈ ವೇಳೆ ಮನೆ ಮಾಲೀಕರು, ಕೆಲಸಗಾರನ ಸುರಕ್ಷತೆಯ ಬಗ್ಗೆ ಮೊದಲು ವಿಚಾರಿಸಿ, ಒಡೆದ ಗಾಜನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿದ್ದಾರೆ. ಅವರ ಈ ಮಾನವೀಯತೆಗೆ ಆನ್&zwnj;ಲೈನ್&zwnj;ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzh28njrwwdmpwj2r32y7pv9,imgname-bathroom-glass-shatters-1786205460056.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆ ರಿಪೇರಿ ಕೆಲಸದ ವೇಳೆ ನಡೆದ ಒಂದು ಅನಿರೀಕ್ಷಿತ ಘಟನೆ ಮತ್ತು ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಈಗ ವೈರಲ್ ವಿಡಿಯೋ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಾತ್&zwnj;ರೂಂಗೆ ಹಾಕಬೇಕಿದ್ದ ದುಬಾರಿ ಗ್ಲಾಸ್ ಒಡೆದುಹೋಗಿದೆ. ಆದರೆ ಮನೆ ಮಾಲೀಕರು ಕೆಲಸಗಾರನ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಕೆಲಸಗಾರನೊಬ್ಬ ಭಾರವಾದ ಗ್ಲಾಸ್ ಪ್ಯಾನೆಲ್ ಅನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾಗ, ಅದು ಆಕಸ್ಮಿಕವಾಗಿ ಒಡೆದು ನೂರಾರು ಚೂರುಗಳಾಗಿ ಬಾತ್&zwnj;ರೂಂ ತುಂಬಾ ಹರಡಿಕೊಂಡಿದೆ.&lt;/p&gt;&lt;p&gt;ಈ ವೇಳೆ ಮನೆ ಮಾಲೀಕ ಕೋಪಗೊಳ್ಳುವ ಬದಲು ಮೊದಲು ಆ ಕೆಲಸಗಾರನಿಗೆ ಏನಾದರೂ ಗಾಯವಾಯಿತೇ ಎಂದು ವಿಚಾರಿಸಿದ್ದಾರೆ. ಒಡೆದ ಗ್ಲಾಸ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಮೊದಲು ನಿಮಗೆ ಗಾಯವಾಗಿಲ್ಲ ತಾನೇ? ನೀವು ಸುರಕ್ಷಿತವಾಗಿರೋದು ಮುಖ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಒಡೆದ ಗಾಜಿನ ಚೂರುಗಳನ್ನು ಸ್ವಚ್ಛಗೊಳಿಸಲು ಅವರೂ ಕೈಜೋಡಿಸಿದ್ದಾರೆ. ಇದರಿಂದ ಒಂದು ಪ್ರಮಾದ, ಕೆಟ್ಟ ಪರಿಸ್ಥಿತಿ, ಮಾನವೀಯತೆ ಮತ್ತು ಸಹಾನುಭೂತಿಯ ಸ್ಪರ್ಶದೊಂದಿಗೆ ಸುಖಾಂತ್ಯ ಕಂಡಿದೆ. ಯೋಚಿಸಿ ಮನೆ ಮಾಲೀಕರು ಬೇರೆಯವರಾಗಿದ್ದರೆ ಹೇಗೆ ವರ್ತಿಸುತ್ತಿದ್ದರು?&lt;/p&gt;&lt;h2&gt;ವೈರಲ್ ಆದ ವಿಡಿಯೋದಲ್ಲೇನಿದೆ?&lt;/h2&gt;&lt;p&gt;ಈ ಘಟನೆಯ ವಿಡಿಯೋವನ್ನು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಒಬ್ಬ ಹ್ಯಾಂಡಿಮ್ಯಾನ್ (ಕೆಲಸಗಾರ) ಗ್ರಾಹಕರೊಬ್ಬರ ಬಾತ್&zwnj;ರೂಂನಲ್ಲಿ ದೊಡ್ಡ ಗ್ಲಾಸ್ ಪ್ಯಾನೆಲ್ ಅಳವಡಿಸುತ್ತಿರುವುದು ಕಾಣಿಸುತ್ತದೆ. ಆಗ ಇದ್ದಕ್ಕಿದ್ದಂತೆ ಆ ಗ್ಲಾಸ್ ಪ್ಯಾನೆಲ್ ಪುಡಿಪುಡಿಯಾಗಿ ಒಡೆದುಹೋಗುತ್ತದೆ. ಒಡೆದ ಗಾಜಿನ ಚೂರುಗಳು ನೆಲದ ಮೇಲೆಲ್ಲಾ ಹರಡಿಕೊಂಡು ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಯಿತು. ಆದರೂ ಮನೆ ಮಾಲೀಕ ಶಾಂತವಾಗಿ ಕೆಲಸಗಾರನಿಗೆ ಏನಾದರೂ ಆಯಿತೇ ಎಂದು ವಿಚಾರಿಸುತ್ತಿದ್ದರು. ಆಗಿರುವ ನಷ್ಟದ ಬಗ್ಗೆ ಪ್ರಶ್ನಿಸುವ ಬದಲು ಮನೆ ಮಾಲೀಕರು ಆ ಕೆಲಸಗಾರನಿಗೆ ಗಾಯವಾಗಿದೆಯೇ ಎಂದು ಕೇಳಿದರು. ಒಡೆದ ಗಾಜಿನ ಬಗ್ಗೆ ಚಿಂತಿಸುವ ಮೊದಲು, ತನಗೆ ಯಾವುದೇ ಗಾಯಗಳಾಗಿಲ್ಲವೇ ಎಂದು ಪರೀಕ್ಷಿಸಿಕೊಳ್ಳುವಂತೆ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.&lt;/p&gt;ಇನ್&zwnj;ಸ್ಟಾಗ್ರಾಂನಲ್ಲಿ ಈ ಪೋಸ್ಟ್ ನೋಡಿ&lt;p&gt;Handyman | NJ/NY (@pmr_handyman.nj) ಅವರಿಂದ ಹಂಚಿಕೊಳ್ಳಲಾದ ಪೋಸ್ಟ್&lt;/p&gt;&lt;p&gt;&lt;/p&gt;&lt;h3&gt;ಮನೆ ಮಾಲೀಕನ ಮನಸು ಎಷ್ಟು ಒಳ್ಳೆಯದು!&lt;/h3&gt;&lt;p&gt;ದುಬಾರಿ ಬೆಲೆಯ ಗಾಜು ಒಡೆದಾಗ ಮನೆ ಮಾಲೀಕ ಕೆಲಸಗಾರ ಮೇಲೆ ರೇಗಾಡಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ, ಕೆಲಸಗಾರನಿಗೆ ಏನಾದ್ರೂ ಆಯ್ತೇ ಎಂದು ವಿಚಾರಿಸುವುದರ ಜೊತೆಗೆ ಒಡೆದ ಗಾಜಿನ ಚೂರುಗಳನ್ನು ಸಂಗ್ರಹಿಸಲು ಮತ್ತು ಬಾತ್&zwnj;ರೂಂ ಸ್ವಚ್ಛಗೊಳಿಸಲು ಕೂಡ ಸಹಾಯ ಮಾಡಿದರು. ಅವರ ಈ ಶಾಂತ ಮತ್ತು ಸಹಾನುಭೂತಿಯ ವರ್ತನೆ ಕೆಲಸಗಾರನಿಗೆ ಬಹಳ ಖುಷಿ ಕೊಟ್ಟಿದೆ. ನಂತರ ಆ ಕೆಲಸಗಾರ ಮನೆ ಮಾಲೀಕನ ದೊಡ್ಡ ಗುಣಕ್ಕೆ ಅವರ ಕುಟುಂಬದೊಂದಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.&lt;/p&gt;&lt;p&gt;ಈ ವಿಡಿಯೋ ಆನ್&zwnj;ಲೈನ್&zwnj;ನಲ್ಲಿ ಎಲ್ಲರ ಗಮನ ಸೆಳೆದಿದ್ದು, ದುಬಾರಿ ನಷ್ಟವಾದರೂ ಕೋಪಗೊಳ್ಳದೆ ಮಾನವೀಯತೆ ತೋರಿದ ಮನೆ ಮಾಲೀಕರಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/viral/kind-customer-helps-handyman-after-glass-shatters-in-viral-video/articleshow-f6pyv92"/>
        </item>
        <item>
            <title><![CDATA[9ನೇ ತರಗತಿ ಫೇಲಾಗಿದ್ದ ಟ್ಯಾಕ್ಸಿ ಡ್ರೈವರ್‌ಗೆ ಕೆಲಸ ಕೊಟ್ಟ ಸ್ಟಾರ್ಟ್‌ಅಪ್ ಮಾಲೀಕ: ಈಗ ಕಂಪನಿಯ ಇಂಡಿಯಾ ಹೆಡ್!]]></title>
            <link>https://kannada.asianetnews.com/viral/hyderabad-startup-adonmo-9th-fail-sravanth-gajula-taxi-driver-promoted-head-of-procurement/articleshow-aeh7cge</link>
            <guid isPermaLink="true">https://kannada.asianetnews.com/viral/hyderabad-startup-adonmo-9th-fail-sravanth-gajula-taxi-driver-promoted-head-of-procurement/articleshow-aeh7cge</guid>
            <pubDate>Sat, 08 Aug 2026 22:05:49 +0530</pubDate>
            <description><![CDATA[&lt;p&gt;10 ವರ್ಷಗಳ ಹಿಂದೆ 9ನೇ ತರಗತಿ ಓದಿದ್ದ ಟ್ಯಾಕ್ಸಿ ಡ್ರೈವರ್ ಒಬ್ಬರನ್ನು ತಮ್ಮ ಕಂಪನಿಯ ಮೊದಲ ಉದ್ಯೋಗಿಯಾಗಿ ನೇಮಿಸಿಕೊಂಡಿದ್ದ 'ಅಡೋನ್&zwnj;ಮೋ' ಸಹ-ಸಂಸ್ಥಾಪಕ ಶ್ರಾವಂತ್ ಗಜುಲಾ, ಇಂದು ಆ ವ್ಯಕ್ತಿ ಭಾರತದಾದ್ಯಂತ ಕಂಪನಿಯ 'ಪ್ರೊಕ್ಯೂರ್&zwnj;ಮೆಂಟ್ ಹೆಡ್' ಆಗಿ ಬೆಳೆದ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzedevtw194pa8jppt5ss079,imgname-new-project---2026-08-07t205634.908-1786116534107.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಕಾರ್ಪೊರೇಟ್ ಕಂಪನಿಗಳು (Corporate Companies) ಕೆಲಸಕ್ಕೆ ಆಳುಗಳನ್ನು ನೇಮಿಸಿಕೊಳ್ಳುವಾಗ (Recruitment) ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ (Educational Qualification), ಇಂಗ್ಲಿಷ್ ಸಂವಹನ ಕೌಶಲ್ಯ (English Communication) ಮತ್ತು ಅನುಭವವನ್ನು ನೋಡುತ್ತವೆ. ಆದರೆ, ಹೈದರಾಬಾದ್ ಮೂಲದ ಪ್ರಸಿದ್ಧ ಸ್ಟಾರ್ಟ್&zwnj;ಅಪ್ (Startup) 'ಅಡೋನ್&zwnj;ಮೋ' (Adonmo) ಸಹ-ಸಂಸ್ಥಾಪಕ ಹಾಗೂ ಮೈಕ್ರೋಸಾಫ್ಟ್&zwnj;ನ (Microsoft) ಮಾಜಿ ಉದ್ಯೋಗಿ ಶ್ರಾವಂತ್ ಗಜುಲಾ (Sravanth Gajula) ಅವರು ಮಾಡಿದ್ದು ಸಂಪೂರ್ಣ ಭಿನ್ನವಾದ ಕಾರ್ಯ!&lt;/p&gt;&lt;p&gt;ಹತ್ತು ವರ್ಷಗಳ ಹಿಂದೆ ಅವರು ತಮ್ಮ ಕಂಪನಿಯನ್ನು ಪ್ರಾರಂಭಿಸಿದಾಗ, ಮೊದಲ ಉದ್ಯೋಗಿಯಾಗಿ (First Employee) ಒಬ್ಬ ಟ್ಯಾಕ್ಸಿ ಡ್ರೈವರ್&zwnj; ಅನ್ನು ನೇಮಿಸಿಕೊಂಡಿದ್ದರು. ಇಂದು ಆ ನಿರ್ಧಾರದ ಫಲವಾಗಿ, ಆ ವ್ಯಕ್ತಿ ಕಂಪನಿಯ ಅತ್ಯುನ್ನತ ಹುದ್ದೆಗೆ ಬೆಳೆದು ನಿಂತಿದ್ದಾರೆ! ಶ್ರಾವಂತ್ ಗಜುಲಾ ಅವರು ಸೋಶಿಯಲ್ ಮೀಡಿಯಾ ಪ್ಲಾಟ್&zwnj;ಫಾರ್ಮ್ ಲಿಂಕ್ಡ್&zwnj;ಇನ್&zwnj;ನಲ್ಲಿ (LinkedIn) ಹಂಚಿಕೊಂಡಿರುವ ಈ ಸ್ಪೂರ್ತಿದಾಯಕ ಕಥೆ (Inspirational Story) ಈಗ ಇಂಟರ್&zwnj;ನೆಟ್&zwnj;ನಲ್ಲಿ ವೈರಲ್ ಆಗಿದೆ.&lt;/p&gt;&lt;h2&gt;&lt;strong&gt;ಕೇವಲ 9ನೇ ತರಗತಿ ಓದಿದ್ದ ಟ್ಯಾಕ್ಸಿ ಡ್ರೈವರ್!&lt;/strong&gt;&lt;/h2&gt;&lt;p&gt;ಹತ್ತು ವರ್ಷಗಳ ಹಿಂದೆ ಶ್ರಾವಂತ್ ಅವರು ನೇಮಿಸಿಕೊಂಡ ವ್ಯಕ್ತಿ ಕೇವಲ 9ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದರು. ಅವರಿಗೆ ಯಾವುದೇ ಕಾರ್ಪೊರೇಟ್ ಅನುಭವವಿರಲಿಲ್ಲ ಮತ್ತು ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. ಯಾವುದೇ ಕಂಪನಿಯೂ ಇಂತಹ ವ್ಯಕ್ತಿಯನ್ನು ಕೆಲಸಕ್ಕೆ ತಗೆದುಕೊಳ್ಳಲು ಸಿದ್ಧವಿರಲಿಲ್ಲ. ಆದರೆ, ಶ್ರಾವಂತ್ ಅವರು ಆ ಟ್ಯಾಕ್ಸಿ ಡ್ರೈವರ್&zwnj;ನಲ್ಲಿದ್ದ ಕಲಿಯುವ ಅದಮ್ಯ ಆಸೆ ಮತ್ತು ಪ್ರಾಮಾಣಿಕತೆಯನ್ನು (Honesty &amp;amp; Dedication) ಕಂಡು ಅವರಿಗೆ ಕೆಲಸ ನೀಡಿದ್ದರು.&lt;/p&gt;&lt;h2&gt;&lt;strong&gt;ಕಂಪನಿಯಿಂದ ತರಬೇತಿ ಮತ್ತು ಸಂಪೂರ್ಣ ನಂಬಿಕೆ:&lt;/strong&gt;&lt;/h2&gt;&lt;p&gt;ಕೆಲಸಕ್ಕೆ ಸೇರಿಸಿಕೊಂಡ ನಂತರ ಕಂಪನಿಯೇ ಅವರಿಗೆ ಸ್ಪೋಕನ್ ಇಂಗ್ಲಿಷ್ (Spoken English) ತರಬೇತಿ ಕೊಡಿಸಿತು. ಮೆಲ್ಲನೆ ಕಂಪನಿಯ ಪ್ರಮುಖ ಕಾರ್ಯಾಚರಣೆಗಳ ಜವಾಬ್ದಾರಿಯನ್ನು ಅವರ ಹೆಗಲಿಗೆ ನೀಡಲಾಯಿತು. ಶ್ರಾವಂತ್ ಅವರು ತಮ್ಮ ಉದ್ಯೋಗಿಯ ಮೇಲೆ ಇಟ್ಟಿದ್ದ ಸಂಪೂರ್ಣ ನಂಬಿಕೆಗೆ ತಕ್ಕಂತೆ, ಆ ವ್ಯಕ್ತಿಯೂ ಹಗಲಿರುಳು ಶ್ರಮಿಸಿ ಕಂಪನಿಯ ಬೆಳವಣಿಗೆಗೆ ಶ್ರಮಿಸಿದರು.&lt;/p&gt;&lt;h2&gt;&lt;strong&gt;10 ವರ್ಷಗಳ ನಂತರ ಸಿಕ್ಕ ಬಂಪರ್ ಬಡ್ತಿ!&lt;/strong&gt;&lt;/h2&gt;&lt;p&gt;ಶ್ರಾವಂತ್ ಅವರ ನಂಬಿಕೆ ಮತ್ತು ಉದ್ಯೋಗಿಯ ಕಠಿಣ ಪರಿಶ್ರಮದ ಫಲವಾಗಿ, ಹತ್ತು ವರ್ಷಗಳ ನಂತರ ಇಂದು ಅವರು 'ಅಡೋನ್&zwnj;ಮೋ' ಕಂಪನಿಯ ಭಾರತದಾದ್ಯಂತದ ವಿಭಾಗದ 'ಪ್ರೊಕ್ಯೂರ್&zwnj;ಮೆಂಟ್ ಹೆಡ್' (Head of Procurement - India) ಆಗಿ ಬಡ್ತಿ (Promotion) ಪಡೆದಿದ್ದಾರೆ! ಇಂದು ಅವರು ದೇಶಾದ್ಯಂತ ಕಂಪನಿಯ ಸರಬರಾಜು ಮತ್ತು ನಿರ್ವಹಣೆಯ ದೊಡ್ಡ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಜನರ ಮೆಚ್ಚುಗೆ ಹಾಗೂ ನಾಯಕತ್ವದ ಪಾಠ:&lt;/strong&gt;&lt;/h2&gt;&lt;p&gt;&lsquo;ಬೇರೆಯವರು ತಿರಸ್ಕರಿಸಿದವರನ್ನು ಕೆಲಸಕ್ಕೆ ನೇಮಿಸಿಕೊಂಡು, ಅವರ ಮೇಲಿನ ನಂಬಿಕೆಯಿಂದ ಕೌಶಲ್ಯಗಳನ್ನು ಬೆಳೆಸುವುದೇ ನಿಜವಾದ ಕಂಪನಿ ಸಂಸ್ಕೃತಿ (Company Culture). ಉದ್ಯೋಗಿಗಳ ಮೇಲೆ ನಂಬಿಕೆ ಇಟ್ಟರೆ, ಅವರು ನಮ್ಮ ನಿರೀಕ್ಷೆಗೂ ಮೀರಿ ಬೆಳೆಯುತ್ತಾರೆ,&rsquo; ಎಂದು ಶ್ರಾವಂತ್ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಈ ಪೋಸ್ಟ್&zwnj;ಗೆ ಸಾವಿರಾರು ಜನರು ಕಾಮೆಂಟ್ ಮಾಡಿದ್ದು, &lsquo;ಕೌಶಲ್ಯಗಳನ್ನು ತರಬೇತಿ ಮೂಲಕ ಕಲಿಸಬಹುದು, ಆದರೆ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಕಲಿಸಲು ಸಾಧ್ಯವಿಲ್ಲ. ನಿಜವಾದ ನಾಯಕತ್ವ (Leadership) ಎಂದರೆ ಕಂಪನಿಯನ್ನು ಮಾತ್ರವಲ್ಲ, ಜನರ ಬದುಕನ್ನೂ ಬೆಳೆಸುವುದು&rsquo; ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/hyderabad-startup-adonmo-9th-fail-sravanth-gajula-taxi-driver-promoted-head-of-procurement/articleshow-aeh7cge"/>
        </item>
        <item>
            <title><![CDATA[ಸಾವರ್ಕರ್ ಬಗ್ಗೆ ಶಾಲಾ ರಸಪ್ರಶ್ನೆಯಲ್ಲಿ ಕೇಳಿದ್ದೇ ತಪ್ಪಾಯ್ತಾ? ಕೇರಳದಲ್ಲಿ ಭುಗಿಲೆದ್ದ ವಿವಾದ, ವಿವಾದಕ್ಕೆ VHP ಎಂಟ್ರಿ]]></title>
            <link>https://kannada.asianetnews.com/politics/kerala-school-quiz-on-savarkar-sparks-political-firestorm-vhp-hits-back/articleshow-uwavvye</link>
            <guid isPermaLink="true">https://kannada.asianetnews.com/politics/kerala-school-quiz-on-savarkar-sparks-political-firestorm-vhp-hits-back/articleshow-uwavvye</guid>
            <pubDate>Sat, 08 Aug 2026 22:01:42 +0530</pubDate>
            <description><![CDATA[ಕೇರಳದ ಶಾಲೆಯೊಂದರ ರಸಪ್ರಶ್ನೆಯಲ್ಲಿ ಸಾವರ್ಕರ್ ಕುರಿತ ಪ್ರಶ್ನೆ ಕೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಎಡಪಂಥೀಯ ಸಂಘಟನೆಗಳು ಇದನ್ನು ವಿರೋಧಿಸಿದರೆ, ವಿಎಚ್&zwnj;ಪಿ ನಾಯಕ ವಿನೋದ್ ಬನ್ಸಲ್, 'ರಾಷ್ಟ್ರ ನಾಯಕರ ಬಗ್ಗೆ ಪ್ರಶ್ನೆ ಕೇಳಿದರೆ ಯಾಕಿಷ್ಟು ವಿರೋಧ?' ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-f1653a92-cac6-4bef-b14c-924e7def55b1.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದ ಶಾಲೆಯೊಂದರ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೇಳಲಾದ ಒಂದು ಪ್ರಶ್ನೆ ಈಗ ರಾಜ್ಯದಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ವಿವಾದದ ಬೆನ್ನಲ್ಲೇ, ಹಿಂದುತ್ವ ಸಿದ್ಧಾಂತ ಪ್ರತಿಪಾದಕ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಪರವಾಗಿ ವಿಶ್ವ ಹಿಂದೂ ಪರಿಷತ್ (VHP) ನಿಂತಿದೆ. ವಿಎಚ್&zwnj;ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ್ ಅವರು ಶನಿವಾರ ಸಾವರ್ಕರ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;h2&gt;ಏನಿದು ವಿವಾದ?&lt;/h2&gt;&lt;p&gt;ಕಾಸರಗೋಡು, ಕುಂಬಳ ಮತ್ತು ಮಂಜೇಶ್ವರ ಉಪ-ಜಿಲ್ಲೆಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 'ಸ್ವಾತಂತ್ರ್ಯ ರಸಪ್ರಶ್ನೆ' (Freedom Quiz) ಅಂತ ಒಂದು ಸ್ಪರ್ಧೆ ನಡೆಸಲಾಗಿತ್ತು. ಇದಕ್ಕೆ ಇಲಾಖೆಯ ಅನುಮತಿ ಇರಲಿಲ್ಲ. ಇದರಲ್ಲಿ ಟೈ-ಬ್ರೇಕರ್ ಪ್ರಶ್ನೆಯಾಗಿ, 'ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಹೋರಾಟಗಾರ ಯಾರು?' ಎಂದು ಕೇಳಲಾಗಿತ್ತು. ಇದಕ್ಕೆ ಸಾವರ್ಕರ್ ಅನ್ನೋದು ಉತ್ತರವಾಗಿತ್ತು. ಈ ಪ್ರಶ್ನೆಯೇ ವಿವಾದಕ್ಕೆ ಕಾರಣವಾಗಿದ್ದು, ಶಾಲಾ ಪಠ್ಯಕ್ರಮದಲ್ಲಿ ಪಕ್ಷಪಾತದ ನಿರೂಪಣೆಗಳನ್ನು ಸೇರಿಸುವ ಪ್ರಯತ್ನ ಇದು ಅಂತ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮತ್ತು ರಾಜಕೀಯ ವಿಮರ್ಶಕರು ತೀವ್ರವಾಗಿ ಖಂಡಿಸಿದ್ದಾರೆ. ಆದರೆ, ಬನ್ಸಲ್ ಅವರು ಈ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.&lt;/p&gt;&lt;h3&gt;ಸಾವರ್ಕರ್ ಪರ ನಿಂತ ವಿಎಚ್&zwnj;ಪಿ, ಟೀಕಾಕಾರರಿಗೆ ಸವಾಲು&lt;/h3&gt;&lt;p&gt;'ಕೇರಳದ ಕಾಸರಗೋಡಿನಲ್ಲಿ ವಿದ್ಯಾರ್ಥಿಗಳಿಗೆ ಕೇಳಿದ ಪ್ರಶ್ನೆಯನ್ನು ನೋಡಿ. 'ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರಿಂದ ಸುದೀರ್ಘ ಮತ್ತು ಕಠಿಣ ಶಿಕ್ಷೆ ಪಡೆದವರು ಯಾರು?' ಅಂತ ಕೇಳಲಾಗಿದೆ. ಇದಕ್ಕೆ ಉತ್ತರ ಇನ್ನೂ ಅಧಿಕೃತವಾಗಿ ಬಂದಿಲ್ಲವಾದರೂ, ಅದು ಏನಿರಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ,&quot; ಎಂದು ಬನ್ಸಲ್ ಎಎನ್&zwnj;ಐಗೆ ತಿಳಿಸಿದ್ದಾರೆ.&lt;/p&gt;&lt;p&gt;ಈ ಪ್ರಶ್ನೆಗೆ ತಕ್ಷಣವೇ ಬಂದ ಸೈದ್ಧಾಂತಿಕ ವಿರೋಧವನ್ನು ಟೀಕಿಸಿದ ಬನ್ಸಲ್, ಸಾವರ್ಕರ್ ಅವರ ಹೆಸರು ಕೇಳಿದ ತಕ್ಷಣ ರಾಜಕೀಯ ವಿರೋಧಿಗಳಲ್ಲಿ ಅನಗತ್ಯ ಆತಂಕ ಶುರುವಾಗುತ್ತದೆ ಎಂದು ಹೇಳಿದ್ದಾರೆ. 'ಉತ್ತರ ಬರುವುದಕ್ಕೂ ಮೊದಲೇ, ಈ ಪ್ರಶ್ನೆಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ ಕಾಂಗ್ರೆಸ್, ಕಮ್ಯುನಿಸ್ಟರು, ಜಿಹಾದಿಗಳು ಮತ್ತು ದೇಶದ ಹೀರೋಗಳನ್ನು, ಮಹಾನ್ ವ್ಯಕ್ತಿಗಳನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸತತವಾಗಿ ಅವಮಾನಿಸುತ್ತಾ ಬಂದಿರುವ ಮುಸ್ಲಿಂ ಸಂಘಟನೆಗಳ ಮನಸ್ಸಲ್ಲಿ ಈ ಪ್ರಶ್ನೆಗಳು ಮೂಡಿವೆ. ಮೊದಲನೆಯದಾಗಿ ಈ ಪ್ರಶ್ನೆಯನ್ನು ವಿದ್ಯಾರ್ಥಿಗಳಿಗೆ ಯಾಕೆ ಕೇಳಲಾಯಿತು ಎಂಬುದೇ ನನಗೆ ಅರ್ಥವಾಗುತ್ತಿಲ್ಲ... ಇದನ್ನು ಅನುಮಾನ ವ್ಯಕ್ತಪಡಿಸುತ್ತಿರುವ ರಾಜಕಾರಣಿಗಳಿಗೇ ಕೇಳಬೇಕು' ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಇತಿಹಾಸದ ತ್ಯಾಗ-ಬಲಿದಾನಗಳ ಬಗ್ಗೆ ಮಾತನಾಡುವ ಟೀಕಾಕಾರರಿಗೆ ಸವಾಲು ಹಾಕಿದ ಬನ್ಸಲ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕುಖ್ಯಾತ ಸೆಲ್ಯುಲಾರ್ ಜೈಲಿನಲ್ಲಿ ಸಾವರ್ಕರ್ ಅನುಭವಿಸಿದ ಕಠಿಣ ಶಿಕ್ಷೆಯನ್ನು ಉಲ್ಲೇಖಿಸಿದ್ದಾರೆ. 'ಎರಡು ಜೀವಾವಧಿ ಶಿಕ್ಷೆ, ಸೆಲ್ಯುಲಾರ್ ಜೈಲಿನ ಕ್ರೂರ ಪರಿಸ್ಥಿತಿಗಳು ಮತ್ತು ಸುದೀರ್ಘ ಕಾಲದ ಸೆರೆವಾಸ ಹಾಗೂ ಕಿರುಕುಳವನ್ನು ಅನುಭವಿಸಿದ ಒಬ್ಬನೇ ಒಬ್ಬ ಕಾಂಗ್ರೆಸ್ಸಿಗ, ಕಮ್ಯುನಿಸ್ಟ್ ಅಥವಾ ಮುಸ್ಲಿಂ ವ್ಯಕ್ತಿಯ ಹೆಸರನ್ನು ಯಾರಾದರೂ ಹೇಳಿ ನೋಡೋಣ' ಎಂದು ಬನ್ಸಲ್ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಕೇರಳದ ಶಿಕ್ಷಣ ಸಚಿವರಿಗೆ ನೇರವಾಗಿ ಮನವಿ ಮಾಡಿದ ಬನ್ಸಲ್, 'ಮಕ್ಕಳ ಮೇಲೆ ರಾಜಕೀಯ ಪೂರ್ವಾಗ್ರಹಗಳನ್ನು ಹೇರುವುದನ್ನು ಅಥವಾ ದ್ವೇಷದ ಮನಸ್ಥಿತಿಯಿಂದ ಅವರ ಜೀವನವನ್ನು ಹಾಳು ಮಾಡುವುದನ್ನು ಬಿಟ್ಟು, ಅವರಿಗೆ ಸತ್ಯ ಮತ್ತು ವಾಸ್ತವಾಂಶಗಳನ್ನು ತಿಳಿಸಿಕೊಡಿ&quot; ಎಂದು ಆಗ್ರಹಿಸಿದ್ದಾರೆ.&lt;/p&gt;&lt;h3&gt;ಪ್ರತಿಭಟನೆ ಬೆನ್ನಲ್ಲೇ ಶಿಕ್ಷಣ ಇಲಾಖೆಯಿಂದ ತನಿಖೆಗೆ ಆದೇಶ&lt;/h3&gt;&lt;p&gt;ಈ ನಡುವೆ, ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅವರು ತಕ್ಷಣವೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.&lt;/p&gt;&lt;p&gt;ಎಸ್&zwnj;ಎಫ್&zwnj;ಐ ಮತ್ತು ಡಿವೈಎಫ್&zwnj;ಐ ಸೇರಿದಂತೆ ಎಡಪಂಥೀಯ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಈ ಘಟನೆ ವಿರುದ್ಧ ಪ್ರತಿಭಟನೆ ನಡೆಸಿವೆ. ಸಂಘ ಪರಿವಾರಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ವೈಭವೀಕರಿಸಲು ಮತ್ತು ಶಾಲಾ ಪಠ್ಯಕ್ರಮದಲ್ಲಿ ಪಕ್ಷಪಾತದ ಅಜೆಂಡಾವನ್ನು ತುರುಕಲು ಯತ್ನಿಸಲಾಗುತ್ತಿದೆ ಎಂದು ಈ ಸಂಘಟನೆಗಳು ಆರೋಪಿಸಿವೆ. ಈ ವಿವಾದದಿಂದಾಗಿ ತರಗತಿಗಳಲ್ಲಿ ಐತಿಹಾಸಿಕ ನಿಖರತೆ ಮತ್ತು ಸೈದ್ಧಾಂತಿಕ ವಿಷಯಗಳ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.&lt;/p&gt;&lt;h3&gt;ಅನಧಿಕೃತ ರಸಪ್ರಶ್ನೆ ಅಂತರ ಕಾಯ್ದುಕೊಂಡ ಇಲಾಖೆ&lt;/h3&gt;&lt;p&gt;ಕಾಸರಗೋಡಿನ ವಿವಾದಾತ್ಮಕ 'ಫ್ರೀಡಂ ಕ್ವಿಜ್'ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇರಳ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಈ ಕಾರ್ಯಕ್ರಮವು ಇಲಾಖೆಯ ಅಥವಾ ಸೋಷಿಯಲ್ ಸೈನ್ಸ್ ಕ್ಲಬ್&zwnj;ನ ಅಧಿಕೃತ ಕ್ಯಾಲೆಂಡರ್&zwnj;ನಲ್ಲಿ ಇರಲಿಲ್ಲ. ಪ್ರಶ್ನೆಗಳನ್ನು ರೂಪಿಸಲು ಅಥವಾ ಅದನ್ನು ನಡೆಸಲು ಯಾರಿಗೂ ಅಧಿಕಾರ ನೀಡಿರಲಿಲ್ಲ ಎಂದು ಸಚಿವರ ಕಚೇರಿ ತಿಳಿಸಿದೆ.&lt;/p&gt;&lt;p&gt;ಸೋಷಿಯಲ್ ಸೈನ್ಸ್ ಕ್ಲಬ್ ಅಸೋಸಿಯೇಷನ್&zwnj;ಗೆ ಸೇರಿದ ಸ್ಥಳೀಯ ಶಿಕ್ಷಕರೇ ಈ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿನ ಪದಬಳಕೆಗೆ AI (ಕೃತಕ ಬುದ್ಧಿಮತ್ತೆ) ಪ್ರಭಾವವಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಿಷಯವು 'ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳನ್ನು' ಮತ್ತು ವಾಸ್ತವ ದೋಷಗಳನ್ನು ಹೊಂದಿದೆ ಎಂದು ಹೇಳಿರುವ ಸಚಿವ ಎನ್. ಶಂಸುದ್ದೀನ್ ಅವರ ಕಚೇರಿ, ತನಿಖಾ ವರದಿ ಬಂದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಚಿತಪಡಿಸಿದೆ. (ಎಎನ್&zwnj;ಐ)&lt;/p&gt;&lt;p&gt;(ಈ ವರದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಇದನ್ನು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/kerala-school-quiz-on-savarkar-sparks-political-firestorm-vhp-hits-back/articleshow-uwavvye"/>
        </item>
        <item>
            <title><![CDATA[ಬರೋಬ್ಬರಿ 100 ಹಾರ್ನ್, ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಬೈಕ್ ಸೀಜ್ ಮಾಡಿದ ಪೊಲೀಸ್]]></title>
            <link>https://kannada.asianetnews.com/bike-news/bike-with-100-horns-seized-by-uttarakhand-police-after-going-viral-on-social-media/articleshow-g3vdw29</link>
            <guid isPermaLink="true">https://kannada.asianetnews.com/bike-news/bike-with-100-horns-seized-by-uttarakhand-police-after-going-viral-on-social-media/articleshow-g3vdw29</guid>
            <pubDate>Sat, 08 Aug 2026 21:48:47 +0530</pubDate>
            <description><![CDATA[&lt;p&gt;ವಾಹನಗಳಲ್ಲಿ ಒಂದು ಹಾರ್ನ್ ಕಡ್ಡಾಯ. ಆದರೆ ಇಲ್ಲೊಬ್ಬ ಬೈಕ್&zwnj;ಗೆ 100 ಹಾರ್ನ್ ಫಿಕ್ಸ್ ಮಾಡಿದ್ದಾನೆ. ಇದಕ್ಕಾಗಿ ಬೈಕ್ ಮಾಡಿಫೈ ಮಾಡಿದ್ದಾನೆ. ಭಾರಿ ವೈರಲ್ ಆದ ಈ ಬೈಕ್&zwnj;ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzh2pmvdr0rgvm04hf912n8x,imgname-bike-fitted-with-100-horns-1786205918059.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡೆಹ್ರಡೂನ್ (ಆ.8) &lt;/strong&gt;ಬೈಕ್ ಸೇರಿದಂತೆ ಯಾವುದೇ ಮಾಹನ ಮಾಡಿಫಿಕೇಶನ್ ಮೋಟಾರು ವಾಹನ ಕಾಯ್ಡೆ ಪ್ರಕಾರ ನಿಯಮ ಬಾಹಿರವಾಗಿದೆ. ಇದರ ನಡುವೆ ಹಲವರು ಕಂಪನಿ ನೀಡಿದ ಆಕ್ಸಸರಿ ಬದಲಾಯಿಸಿ ವಾಹನಗ ಲುಕ್ ಹೆಚ್ಚಿಸುತ್ತಾರೆ. ಹಾರ್ನ್ ಬದಲಿಸುತ್ತಾರೆ. ಹಾರ್ನ್ ವಿಚಾರದಲ್ಲಿ ಕಟ್ಟು ನಿಟ್ಟಿನ ನಿಯಮಗಳಿವೆ. ಕರ್ಕಷ ಹಾರ್ನ್ ಬಳಸುವಂತಿಲ್ಲ. ಆದರೆ ಇಲ್ಲೊಬ್ಬ ಒಂದಲ್ಲ, ಬರೋಬ್ಬರಿ 100 ಹಾರ್ನ್ ಬಳಸಿದ್ದಾನೆ. ಬೈಕ್&zwnj;ಗಿಂತ ಹಾರ್ನ್ ದೊಡ್ಡಾಗಿ ಕಾಣುತ್ತಿದೆ. ಈ ಬೈಕ್&zwnj;ನ್ನು ಪೊಲೀಸರು ಸೀಝ್ ಮಾಡಿದ್ದಾರೆ.&lt;/p&gt;&lt;h2&gt;ಕನ್ವರ್ ಯಾತ್ರೆಯ ಬೈಕ್ ಸೀಝ್&lt;/h2&gt;&lt;p&gt;ಉತ್ತರಖಂಡದ ಕನ್ವರ್ ಯಾತ್ರೆಯಲ್ಲಿ ಪ್ರತ್ಯಕ್ಷವಾದ ಈ ಬೈಕ್&zwnj;ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕನ್ವರ್ ಯಾತ್ರೆ ವೇಳೆ ಮುಂಭಾಗಗಲ್ಲಿ ಹಾರ್ನ್ ಸೌಂಡ್ ಮಾಡುತ್ತಾ ಬೈಕ್ ಮೂಲಕ ತೆರಳಿ ದಾರಿ ಮಾಡುವುದು ಮಾತ್ರವಲ್ಲ, ಯಾತ್ರೆ ಮೂಲಕ ಗಮನಸೆಳೆಯಲು ಈ ಕಸರತ್ತು ಮಾಡಲಾಗಿತ್ತು. ಇದಕ್ಕಾಗಿ ಬೈಕ್ ಮಾಡಿಫೈ ಮಾಡಿ ಸುತ್ತಲೂ 100 ಹಾರ್ನ್ ಹಾಸಲಾಗಿದೆ. ಹಾರ್ನ್ ಬಟನ್ ಪ್ರೆಸ್ ಮಾಡಿದರೆ 100 ಶಬ್ದಗಳು ಒಂದರ ಹಿಂದೆ ಒಂದರಂತೆ ಕೇಳಲಿದೆ. ಈ ಮೂಲಕ ಇಡೀ ಪ್ರದೇಶಕ್ಕೆ ಹಾರ್ನ್ ಶಬ್ದ ಕೇಳಿಸಲಿದೆ.&lt;/p&gt;&lt;p&gt;100 ಹಾರ್ನ್ ಫಿಕ್ಸ್ ಮಾಡಲು ಬೈಕ್ ಸುತ್ತಲೂ ಮಾಡಿಫಿಕೇಶನ್ ಮಾಡಲಾಗಿದೆ. ಕನಿಷ್ಠ ಆಟೋದಷ್ಟು ಸ್ಥಳವನ್ನು ಈ ಬೈಕ್ ಆಕ್ರಮಿಸಿಕೊಳ್ಳುತ್ತಿದೆ. ಮುಂಭಾಗದಲ್ಲಿ ಧ್ವಜ ಇಡಲಾಗಿದೆ. ಈ ಬೈಕ್ ರಸ್ತೆಯಲ್ಲಿ ಚಲಿಸುತ್ತಿದ್ದಂತೆ ಎಲ್ಲರೂ ಒಂದು ಕಣ್ಣು ಹಾಯಿಸುತ್ತಾರೆ. ಹಲವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯದಲ್ಲಿ ಪೋಸ್ಟ್ ಮಾಡಿದ್ದರು. ಇತ್ತ ಉತ್ತರಖಂಡ ಪೊಲೀಸರ ಗಮನಕ್ಕೂ ಬಂದಿದೆ. ಕನ್ವರ್ ಯಾತ್ರೆ ವೇಳೆ ಈ ಬೈಕ್&zwnj;ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆಯಿಂದ ಸದ್ಯ ಬೈಕ್ ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿ ಇಡಲಾಗಿದೆ. ನಿಯಮ ಉಲ್ಲಂಘನೆಗೆ ದಂಡ ಕಟ್ಟುವುದು ಮಾತ್ರವಲ್ಲ, ಸಂಪೂರ್ಣ ಹಾರ್ನ್ ತೆಗೆದು ಹಾಕಬೇಕು. ಕೇವಲ ಮಾಡಿಫಿಕೇಶನ್ ಮಾತ್ರವಲ್ಲ, ಮಾಡಿಫಿಕೇಶನ್&zwnj;ನಲ್ಲಿ ಇತರರ ಸವಾರರ ಸುರಕ್ಷತೆಗೂ ಅಡ್ಡಿಯಾದ ಕುರಿತು ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/bike-news/bike-with-100-horns-seized-by-uttarakhand-police-after-going-viral-on-social-media/articleshow-g3vdw29"/>
        </item>
        <item>
            <title><![CDATA[Praggnanandhaa: ಪ್ರಜ್ಞಾನಂದನಿಗೆ ಮತ್ತೊಂದು ಚಾಂಪಿಯನ್ ಪಟ್ಟ! ಸೇಂಟ್ ಲೂಯಿಸ್‌ನಲ್ಲೂ ಭಾರತೀಯನದ್ದೇ ಮೇಲುಗೈ]]></title>
            <link>https://kannada.asianetnews.com/sports/praggnanandhaa-dominates-st-louis-rapid-and-blitz-securing-maiden-title/articleshow-it7a7mi</link>
            <guid isPermaLink="true">https://kannada.asianetnews.com/sports/praggnanandhaa-dominates-st-louis-rapid-and-blitz-securing-maiden-title/articleshow-it7a7mi</guid>
            <pubDate>Sat, 08 Aug 2026 21:48:02 +0530</pubDate>
            <description><![CDATA[ಸೇಂಟ್ ಲೂಯಿಸ್ ರಾಪಿಡ್ ಮತ್ತು ಬ್ಲಿಟ್ಜ್ ಟೂರ್ನಿಯಲ್ಲಿ ಭಾರತದ ಯುವ ಗ್ರ್ಯಾಂಡ್&zwnj;ಮಾಸ್ಟರ್ ಆರ್. ಪ್ರಜ್ಞಾನಂದ ಚಾಂಪಿಯನ್ ಆಗಿದ್ದಾರೆ. ಅವರ ಈ ಸಾಧನೆಗೆ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅಭಿನಂದನೆ ಸಲ್ಲಿಸಿದ್ದಾರೆ. 20 ವರ್ಷದ ಪ್ರಜ್ಞಾನಂದ 23/35 ಅಂಕಗಳೊಂದಿಗೆ ಈ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-d1cf2e49-3bf9-471c-88b1-91165f8f2e77.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಯುವ ಚೆಸ್ ಗ್ರ್ಯಾಂಡ್&zwnj;ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಶುಕ್ರವಾರ 'ಗ್ರ್ಯಾಂಡ್ ಚೆಸ್ ಟೂರ್ ಸೇಂಟ್ ಲೂಯಿಸ್ ರಾಪಿಡ್ ಮತ್ತು ಬ್ಲಿಟ್ಜ್' ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಶನಿವಾರ ಪ್ರಜ್ಞಾನಂದ ಅವರನ್ನು ಅಭಿನಂದಿಸಿದ್ದಾರೆ. 20 ವರ್ಷದ ಪ್ರಜ್ಞಾನಂದ, ಅಂತಿಮ ಸುತ್ತಿನ ಹಿಂದಿನ ಪಂದ್ಯದಲ್ಲಿ ಜಾವೋಖಿರ್ ಸಿಂದಾರೋವ್ ವಿರುದ್ಧ ಡ್ರಾ ಸಾಧಿಸಿದರು. ಇದರೊಂದಿಗೆ ಒಟ್ಟು 23/35 ಅಂಕಗಳನ್ನು ಗಳಿಸಿ, ಉಳಿದ ಸ್ಪರ್ಧಿಗಳಿಗಿಂತ 1.5 ಅಂಕಗಳ ಮುನ್ನಡೆಯೊಂದಿಗೆ ಟೂರ್ನಿಯನ್ನು ತಮ್ಮದಾಗಿಸಿಕೊಂಡರು.&lt;/p&gt;&lt;p&gt;ಈ ಬಗ್ಗೆ 'X' (ಹಿಂದಿನ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ ಮಾಂಡವೀಯ, ಪ್ರಜ್ಞಾನಂದ ಅವರ ಮೊದಲ ಸೇಂಟ್ ಲೂಯಿಸ್ ರಾಪಿಡ್ ಮತ್ತು ಬ್ಲಿಟ್ಜ್ ಪ್ರಶಸ್ತಿ ಗೆಲುವಿಗೆ ಶುಭ ಕೋರಿದ್ದಾರೆ. &quot;ನಿಮ್ಮ ಅದ್ಭುತ ಆಟ ಮತ್ತು ಸಮರ್ಪಣೆ ಇಡೀ ದೇಶಕ್ಕೆ ಹೆಮ್ಮೆ ಮತ್ತು ಸ್ಫೂರ್ತಿಯ ಮೂಲವಾಗಿದೆ&quot; ಎಂದು ಅವರು ಶ್ಲಾಘಿಸಿದ್ದಾರೆ.&lt;/p&gt;&lt;p&gt;Congratulations to Grandmaster R. Praggnanandhaa on winning his maiden Saint Louis Rapid &amp;amp; Blitz title. His brilliant gameplay and dedication are a tremendous source of pride and inspiration for the entire country. pic.twitter.com/vSjwsu8PXC &mdash; Dr Mansukh Mandaviya (@mansukhmandviya) August 8, 2026&lt;/p&gt;&lt;h2&gt;ನಾರ್ವೆ ಚೆಸ್ 2026 ಕಿರೀಟ&lt;/h2&gt;&lt;p&gt;ಕಳೆದ ಜೂನ್ ತಿಂಗಳಲ್ಲಿ, ಪ್ರಜ್ಞಾನಂದ ನಾರ್ವೆ ಚೆಸ್ 2026 ಟೂರ್ನಿಯಲ್ಲೂ ಇತಿಹಾಸ ಬರೆದಿದ್ದರು. ಓಸ್ಲೋದಲ್ಲಿ ನಡೆದ ಫೈನಲ್ ಪಂದ್ಯದ ಹತ್ತನೇ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಈ ಗೆಲುವಿನೊಂದಿಗೆ, ಸತತ ನಾಲ್ಕು ಕ್ಲಾಸಿಕಲ್ ಪಂದ್ಯಗಳನ್ನು ಗೆದ್ದು, ತಮ್ಮ ವೃತ್ತಿಜೀವನದ ಅತಿದೊಡ್ಡ ಪ್ರಶಸ್ತಿಗಳಲ್ಲಿ ಒಂದನ್ನು ತಮ್ಮದಾಗಿಸಿಕೊಂಡಿದ್ದರು.&lt;/p&gt;&lt;h3&gt;ತಮಿಳುನಾಡು ಸಿಎಂರಿಂದ ಸನ್ಮಾನ&lt;/h3&gt;&lt;p&gt;ಈ ಸಾಧನೆಯ ಬೆನ್ನಲ್ಲೇ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ಪ್ರಜ್ಞಾನಂದ ಅವರನ್ನು ಸನ್ಮಾನಿಸಿದರು. ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಅವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಿದರು. ಚೆನ್ನೈನಲ್ಲಿರುವ ಮುಖ್ಯ ಸಚಿವಾಲಯದಲ್ಲಿ ಈ ಸನ್ಮಾನ ಸಮಾರಂಭ ನಡೆಯಿತು. ಇದೇ ವೇಳೆ, ಮುಖ್ಯಮಂತ್ರಿಯವರು 20 ವರ್ಷದ ಈ ಯುವ ಗ್ರ್ಯಾಂಡ್&zwnj;ಮಾಸ್ಟರ್ ಜೊತೆ ಒಂದು ಸುತ್ತಿನ ಚೆಸ್ ಆಟವನ್ನೂ ಆಡಿದರು. (ANI)&lt;/p&gt;&lt;p&gt;(ಶೀರ್ಷಿಕೆ ಹೊರತುಪಡಿಸಿ, ಈ ಸುದ್ದಿಯನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/sports/praggnanandhaa-dominates-st-louis-rapid-and-blitz-securing-maiden-title/articleshow-it7a7mi"/>
        </item>
        <item>
            <title><![CDATA[ಸೀರಿಯಲ್‌‌ನಲ್ಲಿ ನಟಿಸೋ ಆಸೆಯಿಂದ 900 ಕಿ.ಮೀ ಪ್ರಯಾಣಿಸಿದ ಅಪ್ರಾಪ್ತ, ಮಿಸ್ಸಿಂಗ್ ಹುಡುಗ ಏನಾದ?]]></title>
            <link>https://kannada.asianetnews.com/tv-talk/minor-travels-900-km-dreaming-of-acting-in-tv-serial-what-happened-to-missing-boy/articleshow-nsid1he</link>
            <guid isPermaLink="true">https://kannada.asianetnews.com/tv-talk/minor-travels-900-km-dreaming-of-acting-in-tv-serial-what-happened-to-missing-boy/articleshow-nsid1he</guid>
            <pubDate>Sat, 08 Aug 2026 20:50:26 +0530</pubDate>
            <description><![CDATA[&lt;p&gt;ಶಾಲೆಗೆಂದು ತೆರಳಿದ ಹುಡುಗ ಕ್ಲಾಸ್ ರೂಂನಲ್ಲಿ ಇರಲಿಲ್ಲ. ಬರೋಬ್ಬರಿ 900 ಕಿ.ಮಿ ಪ್ರಯಾಣ ಬೆಳೆಸಿದ್ದ. ದಾರವಾಹಿಯಲ್ಲಿ ನಟಿಸೋ ಆಸೆಯಿಂದ ಯಾರೊಬ್ಬರು ಗೊತ್ತಿಲ್ಲದ ಊರಿಗೆ ತೆರಳಿದ್ದ. ಇತ್ತ ಪೋಷಕರು ಬಾಲಕನ ನಾಪ್ತತೆ ಕೇಸ್ ದಾಖಲಿಸಿದ್ದರು. ಮುಂದೇನಾಯ್ತು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0ehqbwex92je8njdt35qd6g,imgname-taarak-mehta-ka-ooltah-chashmah-spoiler-2-1752835010446.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ (ಆ.08) ಪೋಷಕರು ತಮ್ಮ ಆಸಕ್ತಿಯ ಸೀರಿಯಲ್ ನೋಡುತ್ತಿದ್ದ ವೇಳೆ ಶಾಲೆಗೆ ತೆರಳುತ್ತಿದ್ದ ಬಾಲಕನೂ ಅದೇ ದಾರವಾಹಿ ನೋಡುತ್ತಾ ಆಸಕ್ತಿ ಬೆಳೆಸಿಕೊಂಡ. ತಾನು ದಾರವಾಹಿಯಲ್ಲಿ ನಟಿಸಬೇಕು ಎಂದು ದೃಢ ನಿರ್ಧಾರ ಮಾಡಿದ್ದ. ತನ್ನ ಪೋಷಕರ ಟಿವಿ ಮುಂದೆ ಕುಳಿತು ನೋಡುವಾಗ ನಾನು ಕೂಡ ಅದೇ ದಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಅನ್ನೋ ಹಂಬಲ ಹೆಚ್ಚಾಯಿತು. ಎಂದಿನಂತೆ ಶಾಲೆಗೆ ತೆರಳಿದ ಈ ಹುಡುಗ ಕ್ಲಾಸ್&zwnj;ಗೆ ಹಾಜರಾಗಲಿಲ್ಲ, ಯಾರಿಗೂ ಹೇಳದೆ ರೈಲು ಹತ್ತಿದ್ದ. ಊರು ಗೊತ್ತಿಲ್ಲ, ಯಾರೂ ಪರಿಚಯವಿಲ್ಲದ ನಾಡಿಗೆ ಬಂದಿದ್ದ. ಬರೋಬ್ಬರಿ 900 ಕಿಲೋಮೀಟರ್ ದೂರದ ಮುಂಬೈ ಮಹಾನಗರಿಗೆ ಬಂದ ಬಾಲಕ ಫಿಲ್ಮ್ ಸಿಟಿ ತಲುಪಿದ್ದ. ಇತ್ತ ಮನೆಗೆ ಮಗ ಮರಳದ ಕಾರಣ ಪೋಷಕರು ಆತಂಕಗೊಂಡು ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ.&lt;/p&gt;&lt;h2&gt;ಏನಿದು 16 ವರ್ಷದ ಬಾಲಕನ ಘಟನೆ?&lt;/h2&gt;&lt;p&gt;ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಪರಸ್ ಅನ್ನೋ 16 ವರ್ಷದ ಬಾಲಕನಿಗೆ ತಾರಕ್ ಮೆಹ್ತಾ ಕಾ ಓಲ್ಟಾ ಚಷ್ಮಾ ದಾರವಾಹಿಯಲ್ಲಿ ನಟಿಸಬೇಕು ಅನ್ನೋ ಆಸೆ. ಆಗಸ್ಟ್ 6 ರಂದು ಪರಸ್ ಮನೆಯಿಂದ ಬೆಳಗ್ಗೆ ಶಾಲೆಗೆ ತೆರಳಿದ್ದ. ಆದರೆ ಶಾಲೆಗೆ ಹೋದು ಬದಲು ಛಿಂದ್ವಾರ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಛಿಂದ್ವಾರದಿಂದ ನೇರವಾಗಿ ನಾಗ್ಪುರಕ್ಕೆ ರೈಲಿನ ಮೂಲಕ ಪ್ರಯಾಣಿಸಿದ್ದಾನೆ. ನಾಗ್ಪುರದಿಂದ ಆಗಸ್ಟ್ 7ರ ಬೆಗ್ಗೆ ಮುಂಬೈಗೆ ಬಂದಿಳಿದಿದ್ದಾನೆ.&lt;/p&gt;&lt;p&gt;ಕೊನೆಗೆ ಮುಂಬೈನ ಗೋರೇಗಾಂವ್&zwnj;ನಲ್ಲಿರುವ ಫಿಲ್ಮಿ ಸಿಟಿಗೆ ತಲುಪಿದ್ದಾನೆ. ಅಲ್ಲಿ ಯಾರೂ ಗೊತ್ತಿಲ್ಲ. ಯಾರ ಪರಿಚಯವೂ ಇಲ್ಲ. ಅತ್ತ ಇತ್ತ ಅಲೆದಾಡಲು ಆರಂಭಿಸಿದ್ದಾನೆ. ಏನು ಮಾಡಬೇಕು, ಯಾರಲ್ಲಿ ಕೇಳಬೇಕು ಅನ್ನೋದು ಗೊತ್ತಿಲ್ಲ. ಭಯ ಆವರಿಸತೊಡಗಿದೆ. ಯಾರನ್ನು ಕೇಳಿದರೆ ಎತ್ತ, ಎನು ಎಂಬ ಪ್ರಶ್ನೆಗಳು ಬಂದರೆ ಸಮಸ್ಯೆ ಹೆಚ್ಚಾಗಲಿದೆ ಎಂದು ದಿಕ್ಕು ತೋಚದೆ ಫಿಲ್ಮಿ ಸಿಟಿ ಪಕ್ಕದಲ್ಲಿ ಕುಳಿತುಬಿಟ್ಟ.&lt;/p&gt;&lt;h2&gt;ನಾಪತ್ತೆ ಪ್ರಕರಣ ದಾಖಲಿಸಿದ ಪೋಷಕರು&lt;/h2&gt;&lt;p&gt;ಬೆಳಗ್ಗೆ ಶಾಲೆಗೆ ಹೋದ ಬಾಲಕ ಮರಳಿ ಮನೆಗೆ ಬರದ ಕಾರಣ ಪೋಷಕರು ಆತಂಕಗೊಂಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇತ್ತ ಪೊಲಿಸರು ಮಧ್ಯಪ್ರದೇಶದ ಇತರ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿತ್ತು. ಪೋಷಕರು ಆತಂಕ ಕ್ಷಣಕ್ಷಣಕ್ಕೂ ಹೆಚ್ಚಾಗಿತ್ತು.&lt;/p&gt;&lt;p&gt;ಗೊರೇಗಾಂವ್ ಫಿಲ್ಮಿ ಸಿಟಿ ಮುಂದೆ ದಿಕ್ಕು ತೋಚದೆ ಅಲೆದಾಡುತ್ತಿದ್ದ ಬಾಲಕನ ಕಂಡು ಸ್ಥಳೀಯರು ಅನುಮಾನಗೊಂಡಿದ್ದಾರೆ. ಶಾಲಾ ಸಮವಸ್ತ್ರದಲ್ಲಿರುವ ಹುಡುಗನ ನಿಲ್ಲಿಸಿ ಪ್ರಶ್ನಿಸಿದ್ದಾರೆ. ಆತ ಭಯಗೊಂಡಿದ್ದಾನೆ. ಈ ವೇಳೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಬಾಲಕನ ಪ್ರಶ್ನಿಸಿದಾಗ ನಡೆದ ಘಟನೆ ಹೇಳಿದ್ದಾನೆ. ಬಾಲಕನಿಂದ ಮಾಹಿತಿ ಪಡೆದು ಛಿಂದ್ವಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಬಳಿಕ ಬಾಲಕನ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಇದೀಗ ಬಾಲಕ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾನೆ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/tv-talk/minor-travels-900-km-dreaming-of-acting-in-tv-serial-what-happened-to-missing-boy/articleshow-nsid1he"/>
        </item>
        <item>
            <title><![CDATA[UPI ಪಾವತಿಗಳ ಮೇಲೆ ಚಾರ್ಜ್? ಕೇಂದ್ರ ಸರ್ಕಾರದಿಂದ ಬಿಗ್ ಅಪ್‌ಡೇಟ್!]]></title>
            <link>https://kannada.asianetnews.com/economy-money/upi-payment-charges-government-update-2026-bmk/articleshow-hs7cuiv</link>
            <guid isPermaLink="true">https://kannada.asianetnews.com/economy-money/upi-payment-charges-government-update-2026-bmk/articleshow-hs7cuiv</guid>
            <pubDate>Sat, 08 Aug 2026 20:50:12 +0530</pubDate>
            <description><![CDATA[&lt;p&gt;ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ಗೊಂದಲಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಸಾಮಾನ್ಯ ಬಳಕೆದಾರರು ಮತ್ತು ಸಣ್ಣ ವ್ಯಾಪಾರಿಗಳಿಗೆ ಯುಪಿಐ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzddcj569ez6erj34x3n6nsp,imgname-upi-mdr-charges-1786082904229.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (UPI) ಬಳಸುವ ಲಕ್ಷಾಂತರ ನಾಗರಿಕರಿಗೆ ಭಾರತ ಸರ್ಕಾರ ಬಿಗ್ ಅಪ್&zwnj;ಡೇಟ್ ನೀಡಿದೆ. ಯುಪಿಐ ಮೂಲಕ ಪಾವತಿಗಳನ್ನು ಮಾಡಲು ಸಾಮಾನ್ಯ ಬಳಕೆದಾರರು ಯಾವುದೇ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ. ಆದರೆ, ಭವಿಷ್ಯದಲ್ಲಿ ತಂತ್ರಜ್ಞಾನದ ಸುಸ್ಥಿರತೆಗಾಗಿ ನಿರ್ದಿಷ್ಟ ದೊಡ್ಡ ಮಟ್ಟದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಸಣ್ಣ ಪ್ರಮಾಣದ 'ವ್ಯಾಪಾರಿ ರಿಯಾಯಿತಿ ದರ' (MDR) ಅನ್ನು ಜಾರಿಗೆ ತರುವ ಸಕ್ರಿಯಗೊಳಿಸುವ ನಿಬಂಧನೆಯನ್ನು ತರಲಾಗಿದೆ. ಇತ್ತೀಚೆಗೆ ಲೋಕಸಭೆಯು 'ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಕಾಯ್ದೆ 2007'ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಅಂಗೀಕರಿಸಿದ ನಂತರ, 'ಯುಪಿಐ ಪಾವತಿಗಳು ಇನ್ಮುಂದೆ ಉಚಿತವಾಗಿರುವುದಿಲ್ಲ' ಎಂಬ ಗೊಂದಲಗಳು ಉಂಟಾಗಿದ್ದವು. ಇದಕ್ಕೆ ಹಣಕಾಸು ಸಚಿವಾಲಯ ತೆರೆ ಎಳೆದಿದೆ.&lt;/p&gt;&lt;h2&gt;&lt;strong&gt;ಸರ್ಕಾರದ ಸ್ಪಷ್ಟನೆ ಏನು?&lt;/strong&gt;&lt;/h2&gt;&lt;p&gt;ಸಾಮಾನ್ಯ ಜನರಿಗೆ ಸಂಪೂರ್ಣ ಉಚಿತ; ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಎಲ್ಲಾ ಯುಪಿಐ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿ ಮುಂದುವರಿಯಲಿವೆ. ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ; ಬೀದಿ ವ್ಯಾಪಾರಿಗಳು, ಕಿರಾಣಿ ಅಂಗಡಿಗಳು ಮತ್ತು ಹೆಚ್ಚಿನ ಸಣ್ಣ ವ್ಯಾಪಾರಿ ವಹಿವಾಟುಗಳಿಗೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ. ದೊಡ್ಡ ವಹಿವಾಟುಗಳಿಗೆ ಮಾತ್ರ MDR;ಭವಿಷ್ಯದಲ್ಲಿ MDR ಶುಲ್ಕ ಪರಿಚಯಿಸಿದರೂ, ಅದು ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಶುಲ್ಕವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್&zwnj;ಗಳ ಶುಲ್ಕಕ್ಕಿಂತ ಬಹಳ ಕಡಿಮೆಯಿರಲಿದೆ.&lt;/p&gt;&lt;h3&gt;&lt;strong&gt;ಕಾನೂನು ತಿದ್ದುಪಡಿಗೆ ಕಾರಣವೇನು?&lt;/strong&gt;&lt;/h3&gt;&lt;p&gt;ಸರ್ಕಾರದ ಪ್ರಕಾರ, ಈ ತಿದ್ದುಪಡಿಯು ಯುಪಿಐ ವ್ಯವಸ್ಥೆಯನ್ನು ಸುಸ್ಥಿರವಾಗಿ ಮತ್ತು ಭವಿಷ್ಯಕ್ಕೆ ಸಿದ್ಧವಾಗಿಡಲು ತೆಗೆದುಕೊಂಡ ಮುನ್ನೆಚ್ಚರಿಕೆಯ ಕ್ರಮವಾಗಿದೆ. ಸುರಕ್ಷತೆ ಮತ್ತು ಮೂಲಸೌಕರ್ಯ; ದಿನದಿಂದ ದಿನಕ್ಕೆ ಯುಪಿಐ ಬಳಕೆಯ ಪ್ರಮಾಣ ಘಾತೀಯವಾಗಿ ಬೆಳೆಯುತ್ತಿದ್ದು, ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ ಮತ್ತು ತಾಂತ್ರಿಕ ಮೂಲಸೌಕರ್ಯಗಳನ್ನು ನಿರಂತರವಾಗಿ ನವೀಕರಿಸಲು ಭಾರಿ ಹೂಡಿಕೆಯ ಅಗತ್ಯವಿದೆ. ಸಬ್ಸಿಡಿ ಮೇಲಿನ ಅವಲಂಬನೆ ಕಡಿತ; ಯುಪಿಐ ಬೆಳವಣಿಗೆಯ ಮುಂದಿನ ಹಂತಕ್ಕೆ ಕೇವಲ ಸರ್ಕಾರದ ಸಬ್ಸಿಡಿಗಳನ್ನು ನಂಬಿಕೊಂಡಿರುವುದು ಸಾಧ್ಯವಿಲ್ಲ. ಸ್ವಾವಲಂಬಿ ಆದಾಯ ಮಾದರಿಯನ್ನು ಸೃಷ್ಟಿಸುವುದು ಅಗತ್ಯವಾಗಿದೆ.&lt;/p&gt;&lt;h3&gt;&lt;strong&gt;ವಿಪಕ್ಷ ಕಾಂಗ್ರೆಸ್ ಆರೋಪವೇನು?&lt;/strong&gt;&lt;/h3&gt;&lt;p&gt;ಈ ತಿದ್ದುಪಡಿಯ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡುತ್ತಿರುವ ಭರವಸೆಗಳು ದಾರಿತಪ್ಪಿಸುವಂತಿವೆ ಎಂದು ಆರೋಪಿಸಿದ್ದಾರೆ. ವ್ಯಾಪಾರಿಗಳಿಗೆ MDR ಶುಲ್ಕ ವಿಧಿಸಿದರೆ, ಅವರು ಆ ವೆಚ್ಚವನ್ನು ಅಂತಿಮವಾಗಿ ವಸ್ತುಗಳ ಬೆಲೆ ಏರಿಸುವ ಮೂಲಕ ಗ್ರಾಹಕರ ಮೇಲೆಯೇ ವರ್ಗಾಯಿಸುತ್ತಾರೆ. ಅಲ್ಲದೆ, ಮಧ್ಯಮ ಮತ್ತು ಸಣ್ಣ ವ್ಯಾಪಾರಿಗಳು ಯುಪಿಐ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಅವರಿಗೆ ಇದರಿಂದ ತೊಂದರೆಯಾಗಲಿದೆ ಎಂದು ಜೈರಾಮ್ ರಮೇಶ್ ವಾದಿಸಿದ್ದಾರೆ.&lt;/p&gt;&lt;h3&gt;&lt;strong&gt;ಬಾಹ್ಯ ಪ್ರಭಾವದ ಆರೋಪ ನಿರಾಕರಣೆ!&lt;/strong&gt;&lt;/h3&gt;&lt;p&gt;ಯಾವುದೋ ಬಾಹ್ಯ ಒತ್ತಡ ಅಥವಾ ಪ್ರಭಾವದಿಂದ ಸರ್ಕಾರ ಈ ನೀತಿ ಬದಲಾವಣೆಗೆ ಮುಂದಾಗಿದೆ ಎಂಬ ವರದಿಗಳನ್ನು ಹಣಕಾಸು ಸಚಿವಾಲಯ ಸಂಪೂರ್ಣವಾಗಿ ತಳ್ಳಿಹಾಕಿದೆ. ಅಂತಹ ಹಕ್ಕುಗಳು &quot;ಆಧಾರರಹಿತ ಮತ್ತು ಸಂಪೂರ್ಣ ಸುಳ್ಳು&quot; ಎಂದು ಸರ್ಕಾರ ಹೇಳಿದೆ. ಒಂದು ವೇಳೆ ಬಾಹ್ಯ ಒತ್ತಡವೇ ಕಾರಣವಾಗಿದ್ದರೆ, 2016 ರಲ್ಲಿ ಯುಪಿಐ ಅನ್ನು ಪರಿಚಯಿಸುತ್ತಿರಲಿಲ್ಲ ಅಥವಾ ಜನವರಿ 2020 ರಿಂದ ಸಾರ್ವಜನಿಕರಿಗೆ ಅದನ್ನು ಉಚಿತವಾಗಿ ನೀಡುತ್ತಿರಲಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಯುಪಿಐ ಭಾರತದ ಸ್ವಂತ ನಾವೀನ್ಯತೆಯಾಗಿದ್ದು, ನಾಗರಿಕರಿಗೆ ಉಚಿತ ಸೇವೆಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದೆ.&lt;/p&gt;]]></content:encoded>
            <category>news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/economy-money/upi-payment-charges-government-update-2026-bmk/articleshow-hs7cuiv"/>
        </item>
        <item>
            <title><![CDATA[ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?]]></title>
            <link>https://kannada.asianetnews.com/politics/siddaramaiah-unhappy-whats-behind-the-fresh-karnataka-cabinet-change-buzz-gvd-videoshow-2xp7wzm</link>
            <guid isPermaLink="true">https://kannada.asianetnews.com/politics/siddaramaiah-unhappy-whats-behind-the-fresh-karnataka-cabinet-change-buzz-gvd-videoshow-2xp7wzm</guid>
            <pubDate>Sat, 08 Aug 2026 20:43:34 +0530</pubDate>
            <description><![CDATA[&lt;p&gt;&lsquo;ಮಂತ್ರಿ ಆಗ್ಬೇಕು ಅಷ್ಟೇ..&rsquo; ಕೃಷ್ಣಪ್ಪ ಖಂಡತುಂಡ.! &lsquo;ಕೃಷ್ಣ&rsquo; ಕೆಂಡ ಕೆಂಡ.. ತ್ಯಾಗಕ್ಕೆ ರೆಡಿ ಎಂದ ಬಾಲಕೃಷ್ಣ.! ಮಹಿಳಾ ಕಗ್ಗಂಟು ಬಿಡಿಸಲು ಅಸ್ತ್ರವಾಗ್ತಾರಾ ಅಪ್ಪ-ಮಗಳು.? ಅಂದರ್-ಬಾಹರ್ ಆಟ.. ಏನದು ಕೃಷ್ಣ ಗಾರುಡಿ ರಹಸ್ಯ.?&lt;/p&gt;]]></description>
            <media:content url="https://geo.dailymotion.com/player/x1tbu.html?video=xavzfji" medium="video" height="768" width="1024"/>
            <content:encoded><![CDATA[&lt;p&gt;&lsquo;ಮಂತ್ರಿ ಆಗ್ಬೇಕು ಅಷ್ಟೇ..&rsquo; ಕೃಷ್ಣಪ್ಪ ಖಂಡತುಂಡ.! &lsquo;ಕೃಷ್ಣ&rsquo; ಕೆಂಡ ಕೆಂಡ.. ತ್ಯಾಗಕ್ಕೆ ರೆಡಿ ಎಂದ ಬಾಲಕೃಷ್ಣ.! ಮಹಿಳಾ ಕಗ್ಗಂಟು ಬಿಡಿಸಲು ಅಸ್ತ್ರವಾಗ್ತಾರಾ ಅಪ್ಪ-ಮಗಳು.? ಅಂದರ್-ಬಾಹರ್ ಆಟ.. ಏನದು ಕೃಷ್ಣ ಗಾರುಡಿ ರಹಸ್ಯ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅದಲು-ಬದಲು ಆಟ. ಸಂಪುಟ ವಿಸ್ತರಣೆಯಾಗಿ ಸಚಿವರ ಪ್ರಮಾಣವಚನವೂ ಆಗಿದೆ.. ಖಾತೆ ಹಂಚಿಕೆ ಕಗ್ಗಂಟು ಇನ್ನೂ ಹಾಗೇ ಇದೆ. ಈ ಹಂತದಲ್ಲಿ ಸಂಪುಟದಲ್ಲೇನಾದ್ರೂ ಅದಲು-ಬದಲಾಗುತ್ತಾ.? ಯಾರಾದ್ರೂ ರಾಜೀನಾಮೆ ಕೊಡ್ತಾರಾ..? ಅಥವಾ ಹೈಕಮಾಂಡೇ ಕೊಡಿಸ್ತಾರಾ..? ಅವರ ಬದಲಾಗಿ ಹೊಸಬರು ಸಂಪುಟ ಸೇರ್ತಾರಾ..?&lt;/p&gt;&lt;p&gt;ಈ ರೀತಿಯ ಚರ್ಚೆ ಕೈ ಕೋಟೆಯಲ್ಲಿ ಜೋರಾಗಿದೆ. ಹಾಗಿದ್ರೆ ಇಂಥಹ ಚರ್ಚೆಗಳು ಶುರುವಾಗಿರೋದು ಯಾಕೆ..? ಅದಕ್ಕೆ ಕಾರಣಗಳೇನು..? ಇದಿಷ್ಟು ಎರಡು ಅದಲು-ಬದಲಿನ ಸಾಧ್ಯತೆಯ ಕುರಿತಾದ ಚರ್ಚೆಯಾಯ್ತು. ಇಷ್ಟೇ ಅಲ್ಲದೇ ಮತ್ತೆರಡು ಸಾಧ್ಯತೆಗಳು ಇವೆ. ಹಾಗಿದ್ರೆ ಆ ಸಾಧ್ಯತೆಗಳೇನು..? ಅವು ಕಾರ್ಯಸಾಧುವಾಗುವಂತಹ ಸಾಧ್ಯತೆಗಳೇ..? ಹೊಸತಾಗಿ ರಚನೆಯಾಗಿರೋ ಸಂಪುಟದಲ್ಲಿ ಮತ್ತೆ ಏನಾದ್ರೂ ಬದಲಾವಣೆ ಆಗುತ್ತಾ..? ಅಂತಹ ಸಾಧ್ಯಾಸಾಧ್ಯತೆಗಳೇನಾದ್ರೂ ಇವ್ಯಾ..? ಮಹಿಳಾ ಕೋಟವೂ ಫಿಲ್ ಆಗ್ಬೇಕು.&lt;/p&gt;&lt;p&gt;ಸಿದ್ದರಾಮಯ್ಯನವರ ಅಸಮಾಧಾನ ಕೂಡ ತಣ್ಣಗಾಗಬೇಕು ಅಂದ್ರೆ, ಅದ್ಯಕ್ಕಿನ್ಯಾವ ದಾರಿಗಳು ಉಳಿದುಕೊಂಡಿವೆ. ಇಷ್ಟೆಲ್ಲಾ ನೋಡಿದ್ಮೇಲೆ ನಿಮಗೊಂದು ಪ್ರಶ್ನೆ ಕಾಡುತ್ತೆ.. ಸಂಪುಟದಲ್ಲಿ ಬದಲಾವಣೆ ಮಾಡಲೇ ಬೇಕಾ..? ಆ ಮಟ್ಟಿಗಿನ ಒತ್ತಡಕ್ಕೆ ಸರ್ಕಾರ ಹಾಗೂ ಹೈಕಮಾಂಡ್ ಸಿಲುಕಿದ್ಯಾ..? ಸಂಪುಟ ವಿಸ್ತರಣೆಯಾಗಿ ಇನ್ನೂ ಒಂದು ವಾರ ಕಳೆದಿಲ್ಲ.. ಖಾತೆ ಹಂಚಿಕೆಯೂ ಆಗಿಲ್ಲ ಅಷ್ಟರಲ್ಲಿಯೇ ಸಂಪುಟದಲ್ಲಿ ಬದಲಾವಣೆ ಮಾಡಲೇಬೇಕಾ..? ಆ ಮಟ್ಟಿಗಿನ ಒತ್ತಡಕ್ಕೆ ಸರ್ಕಾರ ಹಾಗೂ ಹೈಕಮಾಂಡ್ ಸಿಲುಕಿದ್ಯಾ..? ಒಂದು ವೇಳೆ ಸಿಲುಕಿದ್ದೇ ಆದಲ್ಲಿ ಅದಕ್ಕೆ ಕಾರಣಗಳು ಏನೇನು..?&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/siddaramaiah-unhappy-whats-behind-the-fresh-karnataka-cabinet-change-buzz-gvd-videoshow-2xp7wzm"/>
        </item>
        <item>
            <title><![CDATA[Yash Toxic Trailer Launch: ಯಶ್ 'ಟಾಕ್ಸಿಕ್' ಟ್ರೇಲರ್; 'ಇಟ್ಸ್ ಟೈಮ್- ಐ ಆಮ್ ಕಮಿಂಗ್; ಅಪ್ಪ-ಮಗನ ಆಟ ಶುರು!]]></title>
            <link>https://kannada.asianetnews.com/entertainment/sandalwood-rocking-star-yash-toxic-trailer-launched-and-it-is-time-i-am-coming-dailogue-becomes-viral/articleshow-in1hzx8</link>
            <guid isPermaLink="true">https://kannada.asianetnews.com/entertainment/sandalwood-rocking-star-yash-toxic-trailer-launched-and-it-is-time-i-am-coming-dailogue-becomes-viral/articleshow-in1hzx8</guid>
            <pubDate>Sat, 08 Aug 2026 19:52:53 +0530</pubDate>
            <description><![CDATA[&lt;p&gt;ಬಹುನಿರೀಕ್ಷಿತ ಟಾಕ್ಸಿಕ್ ಟ್ರೇಲರ್ ಇಂದು, 8 ಆಗಸ್ಟ್ 2026ರಂದು ಇದೀಗ ಬಿಡುಗಡೆ ಆಗಿದೆ. ಇದು ಜಗತ್ತಿನಾದ್ಯಂತ ಸಖತ್ ಸೌಂಡ್ ಮಾಡುತ್ತಿದ್ದು, ಈ ಟ್ರೇಲರ್ ಹೊಸ ದಾಖಲೆ ಬರೆದರೂ ಅಚ್ಚರಿಯಲ್ಲ! ಅಂದಹಾಗೆ, ಇದೇ ತಿಂಗಳು ಅಂದರೆ 26 ಆಗಷ್ಟ್ 2026ರಂದು ಯಶ್ ನಟನೆಯ ಈ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgw12ychqg6whc0282z6m1h,imgname-whatsapp-image-2026-08-07-at-4.37.55-pm--4--1786198920140.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Trailer Released- Toxic Movie Dialogue-It is Time I am Coming-Yash Dialogue became Viral: ಯಶ್ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ; 'ಇಟ್ಸ್ ಟೈಮ್- ಐ ಆಮ್ ಕಮಿಂಗ್' ಎನ್ನುವ ಡೈಲಾಗ್ ಭಾರೀ ವೈರಲ್!&lt;/strong&gt;&lt;/p&gt;&lt;p&gt;ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಆಗಿದ್ದು, 4 ನಿಮಿಷ 38 ಸೆಕೆಂಡ್ ಅವಧಿಯದ್ದಾಗಿದೆ. ಈ ಟ್ರೇಲರ್&zwnj;ನಲ್ಲಿ ತಂದೆ-ಮಗನ ಸೆಂಟಿಮೆಂಟ್ಸ್ ಇದೆ, ಐವರು ನಾಯಕಿಯರ ವಿಭಿನ್ನ ಪಾತ್ರವಿದೆ, ಕಥೆಯ ತಿರಳು ತಿಳಿಯಲಾಗದಿದ್ದರೂ ಎಲ್ಲೋ ಒಮದು ಕಡೆ ಇದು ಪ್ರೀತಿ ಹಾಗೂ ಮೋಸದ ಬಲೆಯ ಕಥೆ ಎಂಬ ಸಂದೇಹಕ್ಕೆ ದಾರಿ ಮಾಡಿಕೊಟ್ಟಿದೆ. ಟ್ರೇಲರ್&zwnj;ನಲ್ಲಿ ನಾಯಕ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಲುಕ್ ಹಾಗೂ ಮ್ಯಾನರಿಸಂ ಮೂಲಕ ಇಡೀ ಟ್ರೇಲರ್ ಅವರಿಸಿರುವುದು ಅರ್ಥವಾಗುವಂತಿದೆ.&lt;/p&gt;&lt;p&gt;ನಾಯಕಿಯರ ಪಾತ್ರಗಳು ವಿಭಿನ್ನವಾಗಿವೆ ಎಂಬ ಹಿಂಟ್ ಸಿಗುತ್ತದೆ. ತಾರಾ ಸುತಾರಿಯಾ ಹಾಗೂ ಕಿಯಾರಾ ಅಡ್ವಾನಿ ಇಬ್ಬರ ಪಾತ್ರಗಳೂ ರೊಮ್ಯಾಂಟಿಕ್ ಮೂಡ್ ಹಾಗೂ ಗ್ಲಾಮರಸ್ ಸೃಷ್ಟಿಸಿದ್ದರೆ ನಯನತಾರಾ ಹಾಗೂ ರುಕ್ಮಿಣಿ ವಸಂತ್ ಈ ಇಬ್ಬರ ಪಾತ್ರಗಳೂ ಅದಕ್ಕೆ ತದ್ವಿರುದ್ಧ ಎಂಬಂತೆ ಯಶ್ ಪಾತ್ರಕ್ಕೇ ಉಪದೇಶ ಮಾಡುವಂತೆ ಕಂಡುಬರುತ್ತಿವೆ. ಯಶ್ ಒಂದು ಹಂತದಲ್ಲಿ ಹೇಳುವ 'ಇಟ್ಸ್ ಟೈಂ ಐ ಆಮ್ ಕಮಿಂಗ್ (It's Time I'm Coming) ಡೈಲಾಗ್, ಹಿಂಸೆ ಮಿತಿಮೀರಿದಾಗ 'ಅವತಾರ ಎತ್ತುವಂತೆ' ಎನ್ನಿಸುತ್ತದೆ.&lt;/p&gt;&lt;p&gt;ಇಡೀ ಕಥೆಯಲ್ಲಿ ಹಿಂಸೆ ಕ್ರೌರ್ಯ ಹಾಗೂ ಸೆಂಟಿಮೆಂಟ್ ಒದಕ್ಕೊಂದು ಬೆಸೆದುಕೊಂಡಿದೆ ಎಂಬಂತೆ ಟ್ರೇಲರ್ ಫೀಲ್ ಕೊಡುತ್ತಿದೆ. ಅಪ್ಪ-ಮಗನ ಬಾಂಧವ್ಯವೇ ಒಂದು ಹಂತದಲ್ಲಿ ದ್ವೇಷಕ್ಕೆ ದಳ್ಳುರಿಗೆ ದಾರಿ ಆಗಿರುವಂತೆ ಎನ್ನಿಸುತ್ತಿದೆ. ನಾಯಕನ ಮುಖಕ್ಕೇ ಉಗಿಯುವ ನಾಯಕಿ, 'ಅನಾಗರೀಕ'ನ ಜೊತೆ ಮಾತನಾಡಲ್ಲ ಎನ್ನುವ ಇನ್ನೊಬ್ಬ ನಾಯಕಿ ಹೀಗೆ ಇಡೀ ಟ್ರೇಲರ್&zwnj;ನಲ್ಲಿ ಕಥೆ ವಿಭಿನ್ನವಾಗಿವೆ ಎನ್ನುವ ಊಹೆಗೆ ಪಕ್ಕಾ ಆಸ್ಪದ ಕೊಟ್ಟಿದೆ. ಮಿಕ್ಕಂತೆ, ಟ್ರೇಲರ್ ನೋಡಿ ಪಕ್ಕಾ ಕಥೆ ಊಹೆ ಮಾಡುವುದು ಕಷ್ಟ ಎನ್ನುವುದರ ಜೊತೆಗೆ, ಊಹೆ ಮಾಡಲೂಬಾರದು ಎನ್ನುವುದೇ ಸರಿ.&lt;/p&gt;&lt;p&gt;ಒಟ್ಟಿನಲ್ಲಿ, ಬಹುನಿರೀಕ್ಷಿತ ಟಾಕ್ಸಿಕ್ ಟ್ರೇಲರ್ ಇಂದು, ಇದೀಗ ಬಿಡುಗಡೆ ಆಗಿದೆ. ಇದು ಜಗತ್ತಿನಾದ್ಯಂತ ಸಖತ್ ಸೌಂಡ್ ಮಾಡುತ್ತಿದ್ದು, ಈ ಟ್ರೇಲರ್ ಹೊಸ ದಾಖಲೆ ಬರೆದರೂ ಅಚ್ಚರಿಯಲ್ಲ! ಅಂದಹಾಗೆ, ಇದೇ ತಿಂಗಳು ಅಂದರೆ 26 ಆಗಷ್ಟ್ 2026ರಂದು ಯಶ್ ನಟನೆಯ ಈ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ. ಇಡೀ ಜಗತ್ತೇ ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದೆ.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/sandalwood-rocking-star-yash-toxic-trailer-launched-and-it-is-time-i-am-coming-dailogue-becomes-viral/articleshow-in1hzx8"/>
        </item>
        <item>
            <title><![CDATA[ಬಾಗಲಕೋಟೆ: ಹೃದಯಾಘಾತದ ಮುನ್ನ ಇತರರ ಜೀವ ಉಳಿಸಿ ಪ್ರಾಣ ಬಿಟ್ಟ ಲಾರಿ ಡ್ರೈವರ್]]></title>
            <link>https://kannada.asianetnews.com/karnataka-districts/driver-saves-lives-dies-on-duty-heartbreaking-incident-in-ilkal/articleshow-ohygk9h</link>
            <guid isPermaLink="true">https://kannada.asianetnews.com/karnataka-districts/driver-saves-lives-dies-on-duty-heartbreaking-incident-in-ilkal/articleshow-ohygk9h</guid>
            <pubDate>Sat, 08 Aug 2026 19:50:02 +0530</pubDate>
            <description><![CDATA[&lt;p&gt;&lt;strong&gt;Lorry driver heart attack: &lt;/strong&gt;ಬಾಗಲಕೋಟೆ ಜಿಲ್ಲೆಯ ಇಳಕಲ್ ಹೆದ್ದಾರಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಜಮ್ಮು ಕಾಶ್ಮೀರದ ಲಾರಿ ಚಾಲಕ ಇನ್ಸಾರ್ ಅಹ್ಮದ್ ಚಾಲನೆ ವೇಳೆ ಹೃದಯಾಘಾತಕ್ಕೊಳಗಾದರೂ, ಯಾವುದೇ ವಾಹನಕ್ಕೆ ಅಪಘಾತವಾಗದ ಹಾಗೆ ಲಾರಿಯನ್ನು ಸುರಕ್ಷಿತವಾಗಿ ಪಕ್ಕಕ್ಕೆ ನಿಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgvqabk35v8h3pp1ht5c1x2,imgname-thumbnail---2026-08-08t193219.362-1786198600051.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಚಾಲನೆ ಮಾಡುವಾಗಲೇ ಹೃದಯಾಘಾತ ಸಂಭವಿಸಿದರೂ, ತನ್ನ ಪ್ರಾಣ ಹೋಗುವ ಕಡೆಯ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ ಲಾರಿ ಚಾಲಕರೊಬ್ಬರು ದೊಡ್ಡ ಅನಾಹುತವನ್ನು ತಪ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಇಳಕಲ್ ನಗರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಮೃತ ಚಾಲಕನನ್ನು ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಬಸೋಳಿ ಪಟ್ಟಣದ ನಿವಾಸಿ ಇನ್ಸಾರ್ ಅಹ್ಮದ್ (60) ಎಂದು ಗುರುತಿಸಲಾಗಿದೆ. ಇವರು ತಮ್ಮ ಲಾರಿಯೊಂದಿಗೆ ಕುಷ್ಟಗಿ ಮಾರ್ಗದತ್ತ ಪ್ರಯಾಣಿಸುತ್ತಿದ್ದರು. ಇಳಕಲ್ ನಗರದ ಹತ್ತಿರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಇನ್ಸಾರ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತ ಸಂಭವಿಸಿದೆ.&lt;/p&gt;&lt;h2&gt;&lt;strong&gt;ಸಮಯಪ್ರಜ್ಞೆ ಮೆರೆದ ಚಾಲಕ&lt;/strong&gt;&lt;/h2&gt;&lt;p&gt;ಹೃದಯಾಘಾತದ ತೀವ್ರ ನೋವು ಕಾಣಿಸಿಕೊಂಡ ತಕ್ಷಣ, ಚಾಲಕ ಇನ್ಸಾರ್ ಅಹ್ಮದ್ ಗಾಬರಿಯಾಗದೆ ಅದ್ಭುತ ಸಮಯಪ್ರಜ್ಞೆ ಮೆರೆದಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿಯಾದರೆ ದೊಡ್ಡ ಪ್ರಾಣಾಪಾಯ ಸಂಭವಿಸಬಹುದು ಎಂದು ಅರಿತ ಅವರು, ನೋವಿನ ನಡುವೆಯೂ ಲಾರಿಯನ್ನು ಸುರಕ್ಷಿತವಾಗಿ ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಲಾರಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಅವರು ಸ್ಟೇರಿಂಗ್ ಮೇಲೆಯೇ ಮಲಗಿ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ತಾನು ಸಾಯುವ ಮುನ್ನ ರಸ್ತೆಯಲ್ಲಿದ್ದ ಜನರ ಜೀವ ಉಳಿಸಿದ ಚಾಲಕನ ಈ ಕಾರ್ಯಕ್ಕೆ ಸಾರ್ವಜನಿಕರು ಭಾವುಕರಾಗಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ಇಳಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Ashwini HR</dc:creator>
            <atom:link href="https://kannada.asianetnews.com/karnataka-districts/driver-saves-lives-dies-on-duty-heartbreaking-incident-in-ilkal/articleshow-ohygk9h"/>
        </item>
        <item>
            <title><![CDATA[Iran: ಮೊಜ್ತಬಾ ಸ್ಥಿತಿ ಗಂಭೀರ! ಇರಾನ್‌ನ ಆಡಳಿತ ಯಾರ ಕೈಗೆ? ಅಧಿಕಾರದ ಪೈಪೋಟಿಯಲ್ಲಿರುವ ಪ್ರಮುಖರ ಪಟ್ಟಿ ಇಲ್ಲಿದೆ!]]></title>
            <link>https://kannada.asianetnews.com/world-news/iran-leadership-crisis-khamenei-health-succession-list-bmk/articleshow-q9oxh4x</link>
            <guid isPermaLink="true">https://kannada.asianetnews.com/world-news/iran-leadership-crisis-khamenei-health-succession-list-bmk/articleshow-q9oxh4x</guid>
            <pubDate>Sat, 08 Aug 2026 19:47:52 +0530</pubDate>
            <description><![CDATA[ಇರಾನ್&zwnj;ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವರದಿಗಳ ನಂತರ, ಮುಂದಿನ ನಾಯಕ ಯಾರು ಎಂಬ ಚರ್ಚೆ ಶುರುವಾಗಿದೆ. ಸಂವಿಧಾನದ ಪ್ರಕಾರ, 'ತಜ್ಞರ ಸಭೆ'ಯು ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದು, ಈ ರೇಸ್&zwnj;ನಲ್ಲಿ ಹಲವು ಪ್ರಮುಖರಿದ್ದಾರೆ. ಈ ರಾಜಕೀಯ ಅಸ್ಥಿರತೆಯಲ್ಲಿ ಸೇನಾಪಡೆ IRGCಯ ಪಾತ್ರವೂ ನಿರ್ಣಾಯಕವಾಗುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx917ce3r63vxgy97p245j7s,imgname-----------------------2026-07-11t221447.740-1783788450243.jpg" type="image/jpeg" height="390" width="690"/>
            <content:encoded><![CDATA[&lt;p&gt;ಇರಾನ್&zwnj;ನ ಸರ್ವೋಚ್ಚ ನಾಯಕ (Supreme Leader) ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬ ವರದಿಗಳು ಹೊರಬಿದ್ದಿದ್ದು, ಪಶ್ಚಿಮ ಏಷ್ಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ, ಮೊಜ್ತಬಾ ಇರಾನ್&zwnj;ನ ನಾಯಕತ್ವ ವಹಿಸಿಕೊಂಡಿದ್ದರು. ಆದರೆ, ಅಧಿಕಾರಕ್ಕೆ ಬಂದಾಗಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇಸ್ರೇಲಿ ಮಾಧ್ಯಮ ಚಾನೆಲ್ 14 ವರದಿ ಪ್ರಕಾರ ಅವರ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಸಾವು ಸನ್ನಿಹಿತವಾಗಿದೆ ಎಂದೂ ಹೇಳಲಾಗುತ್ತಿದೆ. ಆದಾಗ್ಯೂ, ಈ ವರದಿಗಳನ್ನು ಇರಾನ್ ಸರ್ಕಾರ ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ. ಒಂದು ವೇಳೆ ಮೊಜ್ತಬಾ ಖಮೇನಿ ಅವರು ನಿಧನರಾದರೆ ಅಥವಾ ನಾಯಕತ್ವ ವಹಿಸಲು ಅಸಮರ್ಥರಾದರೆ ಇರಾನ್ ಆಡಳಿತ ಯಾರ ಕೈಗೆ ಹೋಗುತ್ತದೆ? ಹೊಸ ನಾಯಕನನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.&lt;/p&gt;&lt;h2&gt;&lt;strong&gt;ಸಾಂವಿಧಾನಿಕ ಪ್ರಕ್ರಿಯೆ!&lt;/strong&gt;&lt;/h2&gt;&lt;p&gt;ಇರಾನ್ ಸಂವಿಧಾನದ ವಿಧಿ 111 ರ ಪ್ರಕಾರ, ಸರ್ವೋಚ್ಚ ನಾಯಕ ನಿಧನರಾದರೆ, ರಾಜೀನಾಮೆ ನೀಡಿದರೆ ಅಥವಾ ಹುದ್ದೆಯಿಂದ ವಜಾಗೊಂಡರೆ ತಕ್ಷಣವೇ ಮೂವರು ಸದಸ್ಯರನ್ನೊಳಗೊಂಡ 'ಮಧ್ಯಂತರ ನಾಯಕತ್ವ ಮಂಡಳಿ' ಅಧಿಕಾರಕ್ಕೆ ಬರುತ್ತದೆ. ನೂತನ ನಾಯಕನ ಆಯ್ಕೆಯಾಗುವವರೆಗೆ ಈ ಮಂಡಳಿಯೇ ದೇಶದ ಆಡಳಿತ ಮತ್ತು ನಿರ್ಧಾರಗಳನ್ನು ನೋಡಿಕೊಳ್ಳುತ್ತದೆ.&lt;/p&gt;&lt;h3&gt;&lt;strong&gt;ಈ ತಾತ್ಕಾಲಿಕ ಮಂಡಳಿ;&lt;/strong&gt;&lt;/h3&gt;&lt;p&gt;1. ಇರಾನ್ ದೇಶದ ಅಧ್ಯಕ್ಷರು (ಪ್ರಸ್ತುತ ಮಸೌದ್ ಪೆಜೆಶ್ಕಿಯಾನ್).&lt;/p&gt;&lt;p&gt;2. ದೇಶದ ನ್ಯಾಯಾಂಗ ವಿಭಾಗದ ಮುಖ್ಯಸ್ಥರು (ಪ್ರಸ್ತುತ ಘೋಲಮ್-ಹೊಸೇನ್ ಮೊಹ್ಸೆನಿ-ಎಜೆಯ್).&lt;/p&gt;&lt;p&gt;3. 'ಗಾರ್ಡಿಯನ್ ಕೌನ್ಸಿಲ್' ನಿಂದ ಆಯ್ಕೆಯಾದ ಹಿರಿಯ ಧಾರ್ಮಿಕ ನ್ಯಾಯಶಾಸ್ತ್ರಜ್ಞ ಇರುತ್ತಾರೆ.&lt;/p&gt;&lt;h3&gt;&lt;strong&gt;ಮುಂದಿನ ಸರ್ವೋಚ್ಚ ನಾಯಕನನ್ನು ಯಾರು ಆಯ್ಕೆ ಮಾಡುತ್ತಾರೆ?&lt;/strong&gt;&lt;/h3&gt;&lt;p&gt;ಇರಾನ್&zwnj;ನಲ್ಲಿ ನೂತನ ಸುಪ್ರೀಂ ಲೀಡರ್ ಅನ್ನು ಆಯ್ಕೆ ಮಾಡುವ ಪೂರ್ಣ ಅಧಿಕಾರ 88 ಸದಸ್ಯರ 'ತಜ್ಞರ ಸಭೆ'ಗೆ ಇರುತ್ತದೆ. ಈ ಸಭೆಯು ಸಭೆ ಸೇರಿ, ಅರ್ಹ ಧಾರ್ಮಿಕ ನಾಯಕನನ್ನು ಆರಿಸಬೇಕಾಗುತ್ತದೆ. ಇರಾನ್&zwnj;ನ ಮಿಲಿಟರಿ, ವಿದೇಶಾಂಗ ನೀತಿ ಮತ್ತು ನ್ಯಾಯಾಂಗದ ಮೇಲೆ ಸರ್ವೋಚ್ಚ ನಾಯಕನಿಗೆ ಸಂಪೂರ್ಣ ಅಧಿಕಾರವಿರುವುದರಿಂದ ಈ ಆಯ್ಕೆಯು ದೇಶದ ಭವಿಷ್ಯಕ್ಕೆ ಅತ್ಯಂತ ನಿರ್ಣಾಯಕವಾಗಿದೆ.&lt;/p&gt;&lt;h3&gt;&lt;strong&gt;ಸುಪ್ರೀಂ ಲೀಡರ್ ರೇಸ್&zwnj;ನಲ್ಲಿರುವ ಪ್ರಮುಖ ನಾಯಕರು!&lt;/strong&gt;&lt;/h3&gt;&lt;p&gt;&lt;strong&gt;1. ಅಯತೊಲ್ಲಾ ಅಲಿರೆಜಾ ಅರಾಫಿ;&lt;/strong&gt; ಇವರು ಗಾರ್ಡಿಯನ್ ಕೌನ್ಸಿಲ್&zwnj;ನ ಸದಸ್ಯ ಹಾಗೂ ಹಿರಿಯ ಧರ್ಮಗುರು. ಅಲಿ ಖಮೇನಿ ನಿಧನದ ನಂತರ ಮಧ್ಯಂತರ ನಾಯಕತ್ವದಲ್ಲೂ ಪ್ರಮುಖ ಪಾತ್ರ ವಹಿಸಿದ ಅನುಭವ ಹೊಂದಿದ್ದಾರೆ.&lt;/p&gt;&lt;p&gt;&lt;strong&gt;2. ಅಯತೊಲ್ಲಾ ಹಶೀಮ್ ಹೊಸೇನಿ ಬುಶೆಹ್ರಿ;&lt;/strong&gt; ಧಾರ್ಮಿಕ ಕೇಂದ್ರವಾದ 'ಕೋಮ್' ಜೊತೆ ಬಲವಾದ ನಂಟು ಹೊಂದಿರುವ ಇವರು, ತಜ್ಞರ ಸಭೆಯಲ್ಲಿ ಭಾರಿ ಪ್ರಭಾವ ಹೊಂದಿದ್ದಾರೆ.&lt;/p&gt;&lt;p&gt;&lt;strong&gt;3. ಘೋಲಮ್-ಹೊಸೇನ್ ಮೊಹ್ಸೇನಿ-ಎಜೆಯ್;&lt;/strong&gt; ಪ್ರಸ್ತುತ ನ್ಯಾಯಾಂಗ ಮುಖ್ಯಸ್ಥರಾಗಿರುವ ಇವರು, ಕಠಿಣ ನಿಲುವಿನ ಭದ್ರತಾ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;4. ಹಸನ್ ಖೊಮೇನಿ;&lt;/strong&gt; ಇರಾನ್ ದೇಶದ ಸಂಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖೊಮೇನಿಯವರ ಮೊಮ್ಮಗ. ಆದರೆ, ಇವರ ಸಾಫ್ಟ್ ಅಥವಾ ಉದಾರವಾದಿ ರಾಜಕೀಯ ನಿಲುವು ಕಠಿಣ ನಿರ್ಧಾರದ ಧರ್ಮಗುರುಗಳಿಗೆ ಇಷ್ಟವಿಲ್ಲದಿರಬಹುದು.&lt;/p&gt;&lt;p&gt;&lt;strong&gt;ಸಾಮೂಹಿಕ ನಾಯಕತ್ವ ಮತ್ತು IRGC ಮಿಲಿಟರಿ ಪ್ರಭಾವ!&lt;/strong&gt;&lt;/p&gt;&lt;p&gt;ಒಂದೊಮ್ಮೆ ತಜ್ಞರ ಸಭೆಗೆ ಒಬ್ಬ ನಿರ್ದಿಷ್ಟ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದಿದ್ದರೆ, 'ಸಾಮೂಹಿಕ ನಾಯಕತ್ವ ಮಂಡಳಿ' ರಚನೆಯಾಗುವ ಸಾಧ್ಯತೆಯಿದೆ. ಅಂದರೆ, ಒಬ್ಬ ವ್ಯಕ್ತಿಯ ಬದಲಿಗೆ ನಾಯಕರ ಗುಂಪೊಂದು ದೇಶವನ್ನು ಆಳಲಿದೆ. ಇದು ಇರಾನ್ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇನ್ನೊಂದೆಡೆ, ಈ ರಾಜಕೀಯ ಅಸ್ಥಿರತೆಯ ಲಾಭವನ್ನು ಇರಾನ್&zwnj;ನ ಅತ್ಯಂತ ಶಕ್ತಿಶಾಲಿ ಸೇನಾ ಪಡೆ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (IRGC) ಪಡೆದುಕೊಳ್ಳಬಹುದು. ದೇಶದ ಆರ್ಥಿಕತೆ ಮತ್ತು ಭದ್ರತೆಯ ಮೇಲೆ ಭಾರಿ ಹಿಡಿತ ಹೊಂದಿರುವ IRGC, ತಮಗೆ ಅನುಕೂಲವಾಗುವಂತಹ ನಾಯಕನನ್ನು ಪೀಠದ ಮೇಲೆ ಕುಳ್ಳಿರಿಸಲು ತನ್ನ ಸಂಪೂರ್ಣ ಶಕ್ತಿಯನ್ನು ಬಳಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/world-news/iran-leadership-crisis-khamenei-health-succession-list-bmk/articleshow-q9oxh4x"/>
        </item>
        <item>
            <title><![CDATA[ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!]]></title>
            <link>https://kannada.asianetnews.com/crime/hassan-couple-death-missing-wife-found-dead-a-week-after-husbands-su-icide-gvd-videoshow-xng2hdz</link>
            <guid isPermaLink="true">https://kannada.asianetnews.com/crime/hassan-couple-death-missing-wife-found-dead-a-week-after-husbands-su-icide-gvd-videoshow-xng2hdz</guid>
            <pubDate>Sat, 08 Aug 2026 19:31:22 +0530</pubDate>
            <description><![CDATA[&lt;p&gt;ಮೊನ್ನೆ ಹಾಸನದ ಒಂದು ಸ್ಟೋರಿ ಹೇಳಿದ್ವಿ. ಬೇಕರಿ ಇಟ್ಟುಕೊಂಡಿದ್ದ ಕೋಟ್ಯಾಧೀಶ ಸೂಸೈಡ್​ ಮಾಡಿಕೊಂಡ ಅಂತ. ಆವತ್ತು ಆತ ಒಂದು ಸೆಲ್ಫಿ ವಿಡಿಯೋ ಮಾಡಿಟ್ಟು ತನ್ನದೇ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದ.&lt;/p&gt;]]></description>
            <media:content url="https://geo.dailymotion.com/player/x1tbu.html?video=xavze02" medium="video" height="768" width="1024"/>
            <content:encoded><![CDATA[&lt;p&gt;ಮೊನ್ನೆ ಹಾಸನದ ಒಂದು ಸ್ಟೋರಿ ಹೇಳಿದ್ವಿ. ಬೇಕರಿ ಇಟ್ಟುಕೊಂಡಿದ್ದ ಕೋಟ್ಯಾಧೀಶ ಸೂಸೈಡ್​ ಮಾಡಿಕೊಂಡ ಅಂತ. ಆವತ್ತು ಆತ ಒಂದು ಸೆಲ್ಫಿ ವಿಡಿಯೋ ಮಾಡಿಟ್ಟು ತನ್ನದೇ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದ. ಆತ ಸತ್ತ ನಂತರ ಹೆಂಡತಿಯೂ ನಾಪತ್ತೆಯಾಗಿದ್ದಳು. ಇನ್ನೂ ಕೊನೆ ವಿಡಿಯೋದಲ್ಲಿ ಆತ ತನ್ನ ಹೆಂಡತಿಯನ್ನ ಹುಡುಕಬೇಡಿ ಅಂತಲೂ ಹೇಳಿದ್ದ. ಆದ್ರೆ ಇವತ್ತು ಆ ಕೇಸ್​ಗೆ ಮತ್ತೊಂದು ಟ್ವಿಸ್ಟ್​​ ಸಿಕ್ಕಿದೆ. ಆವತ್ತು ನಾಪತ್ತೆಯಾಗಿದ್ದ ಹೆಂಡತಿ ಇವತ್ತು ಸಿಕ್ಕಿದ್ದಾಳೆ. ಅದೂ ಕೂಡ ಹೆಣವಾಗಿ. ಅಷ್ಟಕ್ಕೂ ಆ ಗಂಡ ಹೆಂಡತಿ ಇಬ್ಬರಿಗೂ ಏನಾಗಿತ್ತು.? ಆ ರಾತ್ರಿ ಹಾಸನದಲ್ಲಿ ನಡೆದಿದ್ದೇನು.?&lt;/p&gt;&lt;p&gt;ಒಂದು ಮುದ್ದು ಸಂಸಾರದ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್​.ಐ.ಆರ್​​. ರಘು ಯಾರ ಬಳಿಯೂ ತನ್ನ ಫ್ಯಾಮಿಲಿ ಮ್ಯಾಟರ್​ ಅನ್ನ ಹೆಳಿಕೊಂಡಿರಲಿಲ್ಲ. ಆದ್ರೆ ತನ್ನ ಕೊನೆಯ ವಿಡಿಯೋದಲ್ಲಿ ತನ್ನ ಹೆಂಡತಿಯ ಇಂಚಿಂಚು ಮಾಹಿತಿಯನ್ನೂ ಕೊಟ್ಟಿದ್ದ. ಇನ್ನೂ ಪೊಲೀಸರು ಈತ ಸತ್ತ ಮೇಲೆ ಆಕೆಯನ್ನ ಹುಡುಕಾಡಿದ್ರು. ಬಟ್​​ ಆಕೆ ಎಲ್ಲೂ ಸಿಗೋದಿಲ್ಲ. ಆದ್ರೆ ಒಂದು ವಾರದ ನಂತರ ಇವತ್ತು ಆಕೆಯ ಮೃತದೇಹ ಸಿಕ್ಕಿದೆ. ಹಾಗಾದ್ರೆ ರಘುನೇ ಆಕೆಯನ್ನ ಕೊಂದುಬಿಟ್ಟನಾ.?&lt;/p&gt;&lt;p&gt;ಆವತ್ತು ಮಧ್ಯರಾತ್ರಿಯಲ್ಲಿ ನಡುರಸ್ತೆಯಲ್ಲಿ ನಡೆದಿದ್ದೇನು.? ಊರಿಗೆ ಹೋಗಿ ಬರೋಣ ಅಂತ ಕರೆದುಕೊಂಡು ಹೋದ ಗಂಡ ಮಾರ್ಗ ಮಧ್ಯೆಯೇ ಅವಳ ಕತ್ತು ಹಿಸುಕಿದ ನಂತರ ತನ್ನ ಊರಿಗೆ ತಗೆದುಕೊಂಡು ಬಂದು ಹೆಣವನ್ನ ಎಸೆದು ಅಪ್ಪನಿಗೆ ಕಾಲ್​ ಮಾಡಿದ. ಬಳಿಕ ವಿಡಿಯೋ ಮಾಡಿ ವರ್ಷಗಳಿಂದ ಬಚ್ಚಿಟ್ಟಿದ್ದ ಎಲ್ಲಾ ಕಹಿ ಸತ್ಯವನ್ನ ರೆಕಾರ್ಡ್​ ಮಾಡಿದ. ಬಳಿಕ ತನ್ನದೇ ಜಮೀನಿಗೆ ಹೋಗಿ ನೇಣಿಗೆ ಶರಣಾಗಿಬಿಟ್ಟ. ಹೆತ್ತವರು ಮಗಳು ಹಾಗಲ್ಲ ಅಂತಿದ್ದಾರೆ. ಗಂಡ ತನ್ನ ಹೆಂಡತಿ ಸರಿ ಇರಲಿಲ್ಲ ಅಂತ ನೇಣು ಹಾಕಿಕೊಂಡಿದ್ದಾನೆ. ಆದ್ರೆ ಒಂದು ಸಂಸಾರದಲ್ಲಿ ಮೂರನೇ ವ್ಯಕ್ತಿ ಎಂಟ್ರಿ ಆದ್ರೆ ಏನಾಗುತ್ತೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/hassan-couple-death-missing-wife-found-dead-a-week-after-husbands-su-icide-gvd-videoshow-xng2hdz"/>
        </item>
        <item>
            <title><![CDATA[Yash Toxic Trailer Launch: 'ಟಾಕ್ಸಿಕ್' ಟ್ರೇಲರ್; ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'.. ಹಾಲಿವುಡ್ ರೇಂಜ್ ಮೇಕಿಂಗ್!]]></title>
            <link>https://kannada.asianetnews.com/entertainment/the-toxic-trailer-launch-made-whole-world-to-talk-about-king-yash-and-the-movie-spectacular-production-quality/articleshow-4lhrqpg</link>
            <guid isPermaLink="true">https://kannada.asianetnews.com/entertainment/the-toxic-trailer-launch-made-whole-world-to-talk-about-king-yash-and-the-movie-spectacular-production-quality/articleshow-4lhrqpg</guid>
            <pubDate>Sat, 08 Aug 2026 19:10:07 +0530</pubDate>
            <description><![CDATA[&lt;p&gt;ಇಂದು ಬೆಂಗಳೂರಿನಲ್ಲಿ ನಡೆದ ಟಾಕ್ಸಿಕ್ ಈವೆಂಟ್&zwnj;ನ ಕೇಂದ್ರಬಿಂದುವಾಗಿ ರಾಕಿಂಗ್ ಸ್ಟಾರ್ ಯಶ್ 'ಕಿಂಗ್' ಆಗಿ ಮಿಂಚಿದ್ದಾರೆ. ಇಡೀ ಟಾಕ್ಸಿಕ್ ಟೀಮ್ ಅವರಿಗೆ ಸಾಥ್ ಕೊಟ್ಟಿದೆ. ಟ್ರೇಲರ್ ರಿಲೀಸ್ ಬಳಿಕ 'ಟಾಕ್ಸಿಕ್' ಸಿನಿಮಾ ಮತ್ತಷ್ಟು ಅಪಾರ ನಿರೀಕ್ಷೆ ಸೃಷ್ಟಿಸಿದೆ. ಟಾಕ್ಸಿಕ್ ಚಿತ್ರವು 08 ಆಗಸ್ಟ್ 2026ರಂದು ಇಡೀ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgpj8mr1eh3f5qmy3p71bg6,imgname-whatsapp-image-2026-08-07-at-4.37.54-pm--1--1786193191576.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Trailer Launch-Rocking Star Yash Toxic Movie Trailre Sound-Toxic Movie Global Reaction to Know here. ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಜಗತ್ತೇ ನಿಬ್ಬೆರಗಾಗಿದೆ!&lt;/strong&gt;&lt;/p&gt;&lt;p&gt;ಇಂದು, ಅಂದರೆ 08 ಆಗಸ್ಟ್ 2026ರಂದು ಇದೀಗ ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Yash) ನಟನೆಯ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ (Toxic Trailre Launch) ಬಿಡುಗಡೆ ಆಗಿದೆ. ಈ ಮಹಾನ್ ಈವೆಂಟ್&zwnj;ಗೆ ಮುಖ್ಯ ಅತಿಥಿಯಾಗಿ ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಡಾ. ಶಿವರಾಜ್&zwnj;ಕುಮಾರ್ ಆಗಮಿಸಿದ್ದರು. ಸಾಯಂಕಾಲ 7 ಗಂಟೆ 1 ನಿಮಿಷಕ್ಕೆ ಬೆಂಗಳೂರಿನ ಎಎಂಬಿ ಮಾಲ್&zwnj;ನಲ್ಲಿ ಟಾಕ್ಸಿಕ್ ಟ್ರೇಲರ್ ಲಾಂಚ್ ಆಗಿದೆ. ಟಾಕ್ಸಿಕ್ ಚಿತ್ರದ ನಾಯಕನಟ ಯಶ್, ನಿರ್ದೇಶಕಿ ಗೀತೂ ಮೋಹನ್&zwnj;ದಾಸ್, ನಟಿಯರಾದ ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾನಿ ಹಾಗೂ ನಟರಾದ ವಿವೇಕ್ ಒಬೆರಾಯ್, ಸುದೇವ್ ನಾಯರ್ ಸೇರಿದಂತೆ ಇಡೀ ಟಾಕ್ಸಿಕ್ ಟೀಮ್ ಅಲ್ಲಿ ಹಾಜರಾಗಿದ್ದಾರೆ.&lt;/p&gt;&lt;h2&gt;ಟ್ರೇಲರ್&zwnj;ನಲ್ಲಿ ಏನಿದೆ?&lt;/h2&gt;&lt;p&gt;ಯಶ್ ನಟನೆ, ಗೀತೂ ಮೋಹನ್&zwnj;ದಾಸ್ ನಿರ್ದೇಶನದ ಟಾಕ್ಸಿಕ್ ಟ್ರೇಲರ್ ಅತ್ಯದ್ಭುತ ಎನ್ನುವಂತಿದೆ. ರಿಚ್ ಮೇಕಿಂಗ್, ಹಾಲಿವುಡ್ ಟಚ್ ಹೊಂದಿರುವ ಕನ್ನಡದ ಸಿನಿಮಾ ಟಾಕ್ಸಿಕ್, ಬಿಗ್ ಬಜೆಟ್ ಹಾಗೂ ಬಹುತಾರಾಗಣದ ಮೂಲಕ ಗಮನ ಸೆಳೆಯುತ್ತಿದೆ. ನಮ್ಮ ಕನ್ನಡದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಇಡೀ ಟ್ರೇಲರ್&zwnj;ನಲ್ಲಿ ನಿರೀಕ್ಷೆ ಮೀರಿ ಹೈಲೈಟ್ ಆಗಿದ್ದಾರೆ. ಜೊತೆಗೆ, ಇಡೀ ಟ್ರೇಲರ್&zwnj;ನಲ್ಲಿ ಮಿಂಚಿದ್ದಾರೆ.&lt;/p&gt;&lt;p&gt;ಟ್ರೇಲರ್ ಸಂಗೀತ, ದೃಶ್ಯಗಳು 'ವಾರೆವ್ಹಾ' ಎನ್ನುವಂತಿವೆ. ನೇಚರ್, ಮರುಭೂಮಿ, ಗಗನಚುಂಬಿ ಕಟ್ಟಡಗಳು ಹೀಗೆ ಎಲ್ಲವೂ ಇರುವ ಟ್ರೇಲರ್&zwnj; ಭಾರೀ ಹೈಪರ್ ಆಗಿದೆ. ಯಶ್ ಅವರ ದ್ವಿಪಾತ್ರದ ಲುಕ್ ಹಾಗೂ ಅಟಿಟ್ಯೂಡ್ ಎಲ್ಲವನ್ನೂ ಕಟ್ಟಿಕೊಟ್ಟಿದೆ. ಕನ್ನಡದ ನಟ ಈ ಮಟ್ಟಿಗೆ ಜಾಗತಿಕವಾಗಿ ಮಿಂಚಲು ಸಾಧ್ಯ, ಮಿಂಚುತ್ತಿದ್ದಾರೆ ಎಂಬುದನ್ನು ಟಾಕ್ಸಿಕ್ ಟ್ರೇಲರ್ ಮೂಲಕ ಕನ್ನಡದ ಕುವರ ಯಶ್ ವಿಶ್ವಕ್ಕೇ ತೋರಿಸಿಕೊಟ್ಟಿದ್ದಾರೆ. ಸಿನಿಮಾ ಟ್ರೇಲರ್ ಮೇಕಿಂಗ್ ಈ ಚಿತ್ರದ ಬಿಗ್ ಬಜೆಟ್ ಹಾಗೂ ರಿಚ್&zwnj;ನೆಸ್ ಬಗ್ಗೆ ಹೇಳುವುದು ಮಾತ್ರವಲ್ಲ, ಇಡೀ ಸಿನಿಮಾಗೆ ಯಶ್ ಅವರೇ ಕಿಂಗ್ ಎನ್ನುವುದನ್ನು ಗ್ಯಾರಂಟಿ ಕಾರ್ಡ್ ಸಮೇತ ಎನ್ನುವಂತೆ ಹೇಳುತ್ತಿದೆ.&lt;/p&gt;&lt;h3&gt;ಯಶ್ ಕನಸಿನ ಬಿಗ್ ಬಜೆಟ್ ಸಿನಿಮಾ &lsquo;ಟಾಕ್ಸಿಕ್&rsquo;&lt;/h3&gt;&lt;p&gt;ಕನ್ನಡಿಗ ನಟ, ರಾಕಿಂಗ್ ಸ್ಟಾರ್ ಯಶ್ ಅವರ ಕನಸಿನ ಬಿಗ್ ಬಜೆಟ್ ಸಿನಿಮಾ 'ಟಾಕ್ಸಿಕ್'. ಈ ಸಿನಿಮಾದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಬಹಳಷ್ಟು ಸೌಂಡ್ ಮಾಡಿವೆ. ಇಂದು ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ಭಾರೀ ಸೌಂಡ್ ಮಾಡತೊಡಗಿದೆ. ಈ ಟ್ರೇಲರ್ ನೋಡಿದರೆ ಸಿನಿಮಾ ಮೇಕಿಂಗ್ ಹಾಗೂ ರಿಚ್&zwnj;ನೆಸ್&zwnj; ಬಗ್ಗೆ ಯಾರೇ ಆದರೂ ಊಹೆ ಮಾಡಬಹುದು. ಟ್ರೇಲರ್&zwnj;ನಲ್ಲಿ ಯಶ್ ಅವರ ಲುಕ್ ಹಾಗೂ ನಟನೆ ಸಿನಿಮಾದ ಕಥೆ ಪೂರ್ತಿಯಾಗಿ ಹೇಳದಿದ್ದರೂ, ಕಥೆಯಲ್ಲಿ ಗಟ್ಟಿತನ ಇದೆ, ಸಾಕಷ್ಟು ಸಸ್ಪೆನ್ಸ್ ಇದೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿವೆ. ಐದು ನಟಿಯರ ಕಾದಾಟ, ಲವ್ ಸೆಂಟಿಮೆಂಟ್ಸ್&zwnj; ಜೊತೆಗೆ ಅನೇಕ ನಟರ ಕೈಚಳಕ ಕೂಡ ಟ್ರೇಲರ್&zwnj;ನಲ್ಲಿ ಬಂದುಹೋಗಿದೆ. ಈ ಎಲ್ಲಾ ಅಂಶಗಳನ್ನು ನೋಡಿದ ಸಿನಿರಸಿಕರಿಗೆ ಸಿನಿಮಾ ನೋಡಲೇಬೇಕು ಎಂಬ ಕುತೂಹಲ ಸಾವಿರಪಟ್ಟು ಹೆಚ್ಚಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಕನ್ನಡದ ನಟ ಯಶ್ ಅವರು ತಾವು ದೊಡ್ಡ ಕನಸು ಕಂಡಿರುವಂತೆ, 'ಕೆಜಿಎಫ್' ಸಿನಿಮಾ ಬಳಿಕ ಇಡೀ ಜಗತ್ತು 'ಟಾಕ್ಸಿಕ್' ಚಿತ್ರದ ಮೂಲಕ ಜಗತ್ತು ಮತ್ತೆ ಕನ್ನಡ ಸಿನಿಮಾ ಬಗ್ಗೆ ಮಾತನ್ನಾಡುವಂತೆ ಮಾಡಿದ್ದಾರೆ. ಜೊತೆಗೆ, ಇದೀಗ ಟಾಕ್ಸಿಕ್ ಎಂಬ ಪ್ಯಾನ್ ವರ್ಲ್ಡ್ ಸಿನಿಮಾಗೆ ನಾಯಕರಾಗಿ ಇಡೀ ಕನ್ನಡನಾಡಿನ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಟಾಕ್ಸಿಕ್ ಈವೆಂಟ್&zwnj;ನ ಕೇಂದ್ರಬಿಂದುವಾಗಿ ರಾಕಿಂಗ್ ಸ್ಟಾರ್ ಯಶ್ 'ಕಿಂಗ್' ಆಗಿ ಮಿಂಚಿದ್ದಾರೆ. ಇಡೀ ಟಾಕ್ಸಿಕ್ ಟೀಮ್ ಅವರಿಗೆ ಸಾಥ್ ಕೊಟ್ಟಿದೆ.&lt;/p&gt;&lt;p&gt;ಟ್ರೇಲರ್ ರಿಲೀಸ್ ಬಳಿಕ 'ಟಾಕ್ಸಿಕ್' ಸಿನಿಮಾ ಮತ್ತಷ್ಟು ಅಪಾರ ನಿರೀಕ್ಷೆ ಸೃಷ್ಟಿಸಿದೆ. ಟಾಕ್ಸಿಕ್ ಚಿತ್ರವು 08 ಆಗಸ್ಟ್ 2026ರಂದು ಇಡೀ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಟಾಕ್ಸಿಕ್ ಚಿತ್ರದ ಯಶ್ ನಟನೆಯ 'ರಾಮಾಯಣ' ಕೂಡ ಬಿಡುಗಡೆ ಆಗಲಿದೆ. ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಟ್ರೇಲರ್ ನೋಡಿ.. ಎಂಜಾಯ್ ಮಾಡಿ..&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/the-toxic-trailer-launch-made-whole-world-to-talk-about-king-yash-and-the-movie-spectacular-production-quality/articleshow-4lhrqpg"/>
        </item>
        <item>
            <title><![CDATA[Success Story: ಐಐಟಿ ಇಲ್ಲ, ಕ್ಯಾಂಪಸ್ ಪ್ಲೇಸ್‌ಮೆಂಟ್ ಇಲ್ಲ! ಆದರೂ ಫ್ರೆಶರ್ ಆಗಿ ಬರೋಬ್ಬರಿ ₹38 ಲಕ್ಷದ ಪ್ಯಾಕೇಜ್ ಪಡೆದ ಪ್ರತಿಭೆ!]]></title>
            <link>https://kannada.asianetnews.com/viral/fresher-38-lakh-package-without-iit-campus-placement-bmk/articleshow-xrb04l2</link>
            <guid isPermaLink="true">https://kannada.asianetnews.com/viral/fresher-38-lakh-package-without-iit-campus-placement-bmk/articleshow-xrb04l2</guid>
            <pubDate>Sat, 08 Aug 2026 19:15:20 +0530</pubDate>
            <description><![CDATA[ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯ ಪದವಿ ಅಥವಾ ಕ್ಯಾಂಪಸ್ ನೇಮಕಾತಿ ಇಲ್ಲದೆ, ಯುವತಿಯೊಬ್ಬಳು ಫ್ರೆಶರ್ ಆಗಿ ₹38 ಲಕ್ಷ ವಾರ್ಷಿಕ ವೇತನದ ಉದ್ಯೋಗ ಪಡೆದಿದ್ದಾಳೆ. ಇಂಟರ್ನ್&zwnj;ಶಿಪ್&zwnj;ಗಳು ಮತ್ತು ಸ್ವಂತ ಪರಿಶ್ರಮದಿಂದ ಯಶಸ್ಸು ಸಾಧಿಸಿದ ಆಕೆಯ ಕಥೆಯು, ಕೌಶಲ್ಯದ ಮಹತ್ವವನ್ನು ಸಾರುತ್ತಾ ಅನೇಕರಿಗೆ ಸ್ಫೂರ್ತಿ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzgsx9jyxv7m3k492j17cjw9,imgname-success-story-1786196698717.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾವುದೇ ಉನ್ನತ ದರ್ಜೆಯ ಸಂಸ್ಥೆಯಲ್ಲಿ ಪದವಿ ಪಡೆಯದಿದ್ದರೂ ಹಾಗೂ ಕ್ಯಾಂಪಸ್ ನೇಮಕಾತಿಯ ಬೆಂಬಲವಿಲ್ಲದಿದ್ದರೂ, ಕೇವಲ ಸ್ವಂತ ಪರಿಶ್ರಮ ಮತ್ತು ಕೌಶಲ್ಯದ ಆಧಾರದ ಮೇಲೆ ಪ್ರಸ್ತುತ ದಿನಗಳಲ್ಲಿ ಯಶಸ್ಸು ಸಾಧಿಸುವುದು ಸಾಧ್ಯ ಎಂಬುದನ್ನು ಯುವತಿಯೊಬ್ಬಳು ನಿರೂಪಿಸಿ ತೋರಿಸಿದ್ದಾಳೆ. ಯಾವುದೇ ಫ್ಯಾನ್ಸಿ ಕಾಲೇಜು ಟ್ಯಾಗ್ ಇಲ್ಲದೆ, ಕೇವಲ ಇಂಟರ್ನ್&zwnj;ಶಿಪ್&zwnj;ಗಳು ಮತ್ತು ನಿರಂತರ ಕಲಿಕೆಯ ಮೂಲಕ ಈ ಯುವತಿಯು ಫ್ರೆಶರ್ ಆಗಿ ಬರೋಬ್ಬರಿ ₹38 ಲಕ್ಷ (LPA) ವಾರ್ಷಿಕ ವೇತನದ ಉದ್ಯೋಗ ಗಿಟ್ಟಿಸಿಕೊಂಡಿದ್ದು, ಆಕೆಯ ವೃತ್ತಿಜೀವನದ ಈ ಸಾಹಸಗಾಥೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಭಾರೀ ಸ್ಫೂರ್ತಿ ನೀಡುತ್ತಿದೆ.&lt;/p&gt;&lt;h2&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಗೆಳತಿ!&lt;/strong&gt;&lt;/h2&gt;&lt;p&gt;ಸಾಮಾಜಿಕ ಮಾಧ್ಯಮ ವೇದಿಕೆಯಾದ 'X' ನಲ್ಲಿ (ಟ್ವಿಟರ್) ನಿಶಾ ಆನಂದಾನಿ ಎಂಬುವವರು ತಮ್ಮ ರೂಮ್&zwnj;ಮೇಟ್&zwnj; ಸಾಧಿಸಿದ ಈ ಹೆಮ್ಮೆಯ ವಿಷಯವನ್ನು ಹಂಚಿಕೊಂಡಿದ್ದಾರೆ. ಕಾಲೇಜು ಹೆಸರಿಗಿಂತಲೂ ವ್ಯಕ್ತಿಯಲ್ಲಿರುವ ಕೌಶಲ್ಯ ಹಾಗೂ ಸತತ ಪ್ರಯತ್ನಗಳು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಒತ್ತಿಹೇಳುತ್ತದೆ. ಆನಂದಾನಿ ತಮ್ಮ ಪೋಸ್ಟ್&zwnj;ನಲ್ಲಿ, &quot;ನನ್ನ ರೂಮ್&zwnj;ಮೇಟ್&zwnj;ಗೆ ಫ್ರೆಶರ್ ಆಗಿ ಬರೋಬ್ಬರಿ ₹38 LPA ಪ್ಯಾಕೇಜ್ ದೊರೆತಿದೆ. ಆಕೆಯು ಯಾವುದೇ ಐಐಟಿ (IIT) ಅಥವಾ ದೇಶದ ಗಣ್ಯ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದವಳಲ್ಲ. ಅಲ್ಲದೆ, ಆಕೆಗೆ ಕಾಲೇಜಿನಲ್ಲಿ ಯಾವುದೇ ರೀತಿಯ ಕ್ಯಾಂಪಸ್ ಪ್ಲೇಸ್&zwnj;ಮೆಂಟ್ ಅವಕಾಶಗಳು ಸಹ ಸಿಗಲಿಲ್ಲ. ಆದರೆ, ಆಕೆಯು ದೃತಿಗೆಡದೆ ತನ್ನ ಸ್ವಂತ ಶ್ರಮದಿಂದಲೇ ಈ ಎತ್ತರಕ್ಕೆ ಬೆಳೆದಿದ್ದಾಳೆ&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಹೈದರಾಬಾದನಲ್ಲಿ ಇಂಟರನ್&zwnj;ಶಿಪ್!&lt;/strong&gt;&lt;/h3&gt;&lt;p&gt;ಕ್ಯಾಂಪಸ್ ಪ್ಲೇಸ್&zwnj;ಮೆಂಟ್ ಸಿಗದಿದ್ದಾಗ ನಿರಾಶರಾಗುವ ಬದಲು, ಆ ಯುವತಿಯು ಪ್ರಾಯೋಗಿಕ ಅನುಭವವನ್ನು ಗಳಿಸಲು ನಿರ್ಧರಿಸಿದಳು. ಆಕೆಯ ಪ್ರೊಫೈಲ್ ನಿರ್ಮಾಣದ ಪ್ರಯಾಣವು ಇಂಟರ್ನ್&zwnj;ಶಿಪ್&zwnj;ಗಳ ಮೂಲಕವೇ ಆರಂಭವಾಯಿತು. ಮೊದಲು ಹೈದರಾಬಾದ್&zwnj;ನಲ್ಲಿ ಇಂಟರ್ನ್&zwnj;ಶಿಪ್ ಪೂರ್ಣಗೊಳಿಸಿದ ಆಕೆ, ನಂತರ ತನ್ನ ಕೌಶಲ್ಯಗಳನ್ನು ಮತ್ತಷ್ಟು ಚುರುಕುಗೊಳಿಸಲು ಬೆಂಗಳೂರಿನಲ್ಲಿ ಇನ್ನೊಂದು ಇಂಟರ್ನ್&zwnj;ಶಿಪ್&zwnj;ಗೆ ಸೇರಿಕೊಂಡಳು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವಾಗ ಆಕೆಯು ತೋರಿದ ಅತ್ಯುತ್ತಮ ಕಾರ್ಯಕ್ಷಮತೆ, ಸಮರ್ಪಣೆ ಮತ್ತು ನಿಷ್ಠೆಯನ್ನು ಗಮನಿಸಿದ ಸಂಸ್ಥೆಯು, ಆಕೆಗೆ ಅಂತಿಮವಾಗಿ ₹38 ಲಕ್ಷ ಮೌಲ್ಯದ 'ಪ್ರಿ-ಪ್ಲೇಸ್&zwnj;ಮೆಂಟ್ ಆಫರ್' (PPO) ನೀಡಲು ಮುಂದಾಯಿತು.&lt;/p&gt;&lt;h3&gt;&lt;strong&gt;ಕಷ್ಟದ ಆ ದಿನಗಳು!&lt;/strong&gt;&lt;/h3&gt;&lt;p&gt;ತನ್ನ ರೂಮ್&zwnj;ಮೇಟ್&zwnj; ಹೊಂದಿದ್ದ ಕೆಲಸದ ಶೈಲಿ ಮತ್ತು ದೃಢ ಮನಸ್ಥಿತಿಯ ಬಗ್ಗೆ ವಿವರಿಸಿದ ಆನಂದಾನಿ, &quot;ಆಕೆಯು ತನ್ನ ವೃತ್ತಿಬದುಕಿನ ಪ್ರಯಾಣವನ್ನು ಅಥವಾ ಬೆಳವಣಿಗೆಯನ್ನು ಎಂದಿಗೂ ಇತರರೊಂದಿಗೆ ಹೋಲಿಸಿಕೊಳ್ಳುತ್ತಿರಲಿಲ್ಲ. ಪ್ರತಿದಿನವೂ ನಿಯಮಿತವಾಗಿ ಕಷ್ಟಪಟ್ಟು ಕೆಲಸ ಮಾಡುವುದನ್ನು ಆಕೆ ಎಂದಿಗೂ ನಿಲ್ಲಿಸಲಿಲ್ಲ. ಇಲ್ಲಿ ಯಾವುದೇ ಶಾರ್ಟ್&zwnj;ಕಟ್&zwnj;ಗಳಿರಲಿಲ್ಲ, ಯಾವುದೇ ಫ್ಯಾನ್ಸಿ ಕಾಲೇಜಿನ ಹೆಸರಿರಲಿಲ್ಲ. ಅಲ್ಲಿ ಇದ್ದದ್ದು ಕೇವಲ ನಿರಂತರತೆ, ಕೌಶಲ್ಯ ಮತ್ತು ಅಪಾರವಾದ ತಾಳ್ಮೆ ಮಾತ್ರ&quot; ಎಂದು ಶ್ಲಾಘಿಸಿದ್ದಾರೆ.&lt;/p&gt;&lt;h3&gt;&lt;strong&gt;ಸೊಶಿಯಲ್&zwnj; ಮಿಡಿಯಾದಲ್ಲಿ ವೈರಲ್!&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ನಗರಗಳ ಕಾಲೇಜುಗಳಲ್ಲಿ ಅಥವಾ ಸಣ್ಣ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ, 'ದೊಡ್ಡ ಕಾಲೇಜಿನ ಟ್ಯಾಗ್ ಇಲ್ಲದಿರುವುದರಿಂದ ನಮಗೆ ಉತ್ತಮ ವೃತ್ತಿಜೀವನ ಸಿಗುವುದಿಲ್ಲವೇನೋ' ಎಂಬ ಆತಂಕ ಹಾಗೂ ಕೀಳರಿಮೆ ಕಾಡುವುದು ಸಹಜ. ಆದರೆ, ಈ ಯುವತಿಯ ಯಶಸ್ಸಿನ ಕಥೆಯು ಇಂತಹ ಸಾವಿರಾರು ಯುವ ಜನತೆಯಲ್ಲಿದ್ದ ಗೊಂದಲ ಮತ್ತು ಆತಂಕಗಳನ್ನು ದೂರ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆಕೆಯ ದೃಢನಿಶ್ಚಯ ಮತ್ತು ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಪದವಿ ಪಡೆದ ಕಾಲೇಜಿನ ಹೆಸರು ಯಶಸ್ಸನ್ನು ನಿರ್ಧರಿಸುವುದಿಲ್ಲ, ಬದಲಿಗೆ ನಿರಂತರ ಕಲಿಕೆ, ಪ್ರಾಯೋಗಿಕ ಅನುಭವ ಹಾಗೂ ಸ್ವಂತವಾಗಿ ಬೆಳೆಯುವ ಛಲವಿದ್ದರೆ ಉದ್ಯೋಗ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ಈ ಯುವತಿಯ ಕಥೆಯೇ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/fresher-38-lakh-package-without-iit-campus-placement-bmk/articleshow-xrb04l2"/>
        </item>
        <item>
            <title><![CDATA[ಭಾರತಕ್ಕೂ ಬಂತು ಹಾರುವ ಕಾರು: ಪೆಟ್ರೋಲ್​, ಡೀಸೆಲ್​, ಎಥೆನಾಲ್​ ಬೇಡ್ವೇ ಬೇಡ- ಯಶಸ್ವಿ ಪರೀಕ್ಷೆ]]></title>
            <link>https://kannada.asianetnews.com/technology/no-ethanol-needed-young-innovator-from-uttarakhands-almora-tests-flying-car-suc/articleshow-v5v8bql</link>
            <guid isPermaLink="true">https://kannada.asianetnews.com/technology/no-ethanol-needed-young-innovator-from-uttarakhands-almora-tests-flying-car-suc/articleshow-v5v8bql</guid>
            <pubDate>Sat, 08 Aug 2026 19:11:23 +0530</pubDate>
            <description><![CDATA[ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರವಿ ತಮ್ತಾ ಎಂಬ ಯುವಕ ಎಲೆಕ್ಟ್ರಿಕ್ ಹಾರುವ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಸಂಪೂರ್ಣವಾಗಿ ವಿದ್ಯುತ್ ಚಾಲಿತ ಮತ್ತು ಪರಿಸರ ಸ್ನೇಹಿಯಾಗಿರುವ ಈ ವಾಹನವು, ನಗರ ಸಾರಿಗೆ, ವಿಪತ್ತು ನಿರ್ವಹಣೆ ಮತ್ತು ಪ್ರವಾಸೋದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzgsn1wjb3yck3fafs4znz13,imgname-flying-car-1786196428690.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರಾಖಂಡ: ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಯುವಕನೊಬ್ಬ ಎಲೆಕ್ಟ್ರಿಕ್ ಹಾರುವ ಕಾರನ್ನು ಕಂಡು ಹಿಡಿದಿದ್ದಾರೆ. ಇದರ ಮೂಲಮಾದರಿಯನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಭವಿಷ್ಯದ ಕಡೆಗೆ ಮಹತ್ವದ ಹೆಜ್ಜೆ ಇಡಲಾಗಿದೆ. ಇದು ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿದ್ದು, ಇದಕ್ಕೆ ಪೆಟ್ರೋಲ್​, ಡೀಸೆಲ್​, ಎಥೆನಾಲ್​ ಏನೂ ಬೇಡವೇ ಬೇಡ. ಮಾತ್ರವಲ್ಲದೇ ಜನ ದಟ್ಟಣೆಯ ಸಮಸ್ಯೆಯೂ ಇಲ್ಲವೇ ಇಲ್ಲ. ರಸ್ತೆಯ ಮೇಲೆ ಹೋಗುವ ಬದಲು ಆಕಾಶದಲ್ಲಿಯೇ ಹಾರಿ ಹಾರಿ ಹೋಗುವುದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅಂದುಕೊಂಡವರಿಗೆ ಇದು ದೊಡ್ಡ ವರದಾನವಾಗಲಿದೆ.&lt;/p&gt;&lt;p&gt;ಪ್ರಸಿದ್ಧ ಜಾಗೇಶ್ವರ ಧಾಮ್ ಬಳಿಯ ಕಾಫ್ಲಿಖಾನ್ ಗ್ರಾಮದ ರವಿ ತಮ್ತಾ, ತಮ್ಮ ಸ್ಟಾರ್ಟ್ಅಪ್, ಹಪಿಡಾ ಸ್ಕೈ ಪ್ರೈವೇಟ್ ಲಿಮಿಟೆಡ್ ಮೂಲಕ ಹಪಿಡಾ ಸ್ಕೈನೆಕ್ಸ್ ಎಂಬ ವಿದ್ಯುತ್ ವೈಯಕ್ತಿಕ ಹಾರುವ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ. ಯಶಸ್ವಿ ಮೂಲಮಾದರಿಯ ಹಾರಾಟವು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ನಂತರದ ಮೊದಲ ಪ್ರಮುಖ ಮೈಲಿಗಲ್ಲನ್ನು ಗುರುತಿಸಿದೆ.&lt;/p&gt;&lt;h2&gt;&lt;strong&gt;ಸಂಪೂರ್ಣ ಪರಿಸರ ಸ್ನೇಹಿ&lt;/strong&gt;&lt;/h2&gt;&lt;p&gt;ವಾಯುಯಾನ ಇಂಧನ ಅಥವಾ ಎಥೆನಾಲ್ ಆಧರಿತ ಪ್ರೊಪಲ್ಷನ್ ಅನ್ನು ಅನ್ವೇಷಿಸುವ ಪ್ರಾಯೋಗಿಕ ವಾಹನಗಳನ್ನು ಅವಲಂಬಿಸಿರುವ ಸಾಂಪ್ರದಾಯಿಕ ಹಾರುವ ಯಂತ್ರಗಳಿಗಿಂತ ಭಿನ್ನವಾಗಿ, HAPIDA SKYNeX ಅನ್ನು ಸಂಪೂರ್ಣವಾಗಿ ವಿದ್ಯುತ್​ಚಾಲಿತ ಮಾಡಿರುವ ಹಿನ್ನೆಲೆಯಲ್ಲಿ, ಇದು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದೆ. ಈ ಯೋಜನೆಯು ಭಾರತದಲ್ಲಿ ಸುರಕ್ಷಿತ, ಕೈಗೆಟುಕುವ ಮತ್ತು ಸುಸ್ಥಿರ ವೈಯಕ್ತಿಕ ವಾಯು ಸಾರಿಗೆಯನ್ನು ಪ್ರವೇಶಿಸುವಂತೆ ಮಾಡುವ ಗುರಿಯನ್ನು ಹೊಂದಿದೆ. ಈ ಯಶಸ್ವಿ ಪ್ರದರ್ಶನವು ಸುಧಾರಿತ ಚಲನಶೀಲ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತೀಯ ನವೋದ್ಯಮಗಳ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಎತ್ತಿ ತೋರಿಸುತ್ತದೆ.&lt;/p&gt;&lt;p&gt;ಈ ಸಾಧನೆಯು ಉತ್ತರಾಖಂಡದ ಉದಯೋನ್ಮುಖ ನಾವೀನ್ಯತೆ ಪರಿಸರ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದೆ. ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆ, ವಿದ್ಯುತ್ ವೈಯಕ್ತಿಕ ಹಾರುವ ವಾಹನಗಳು ನಗರ ಸಾರಿಗೆಯನ್ನು ಮೀರುವ ನಿರೀಕ್ಷೆಯಿದೆ. ಅವು ದೂರದ ಹಿಮಾಲಯನ್ ಹಳ್ಳಿಗಳಲ್ಲಿ ಸಂಪರ್ಕವನ್ನು ಸುಧಾರಿಸಬಹುದು, ಭೂಕುಸಿತಗಳು ಮತ್ತು ಪ್ರವಾಹಗಳ ಸಮಯದಲ್ಲಿ ವಿಪತ್ತು ಪರಿಹಾರ ಮತ್ತು ತುರ್ತು ಪ್ರತಿಕ್ರಿಯೆಯನ್ನು ಬೆಂಬಲಿಸಬಹುದು ಮತ್ತು ರಸ್ತೆ ಮೂಲಸೌಕರ್ಯ ಸೀಮಿತವಾಗಿರುವ ಪ್ರತ್ಯೇಕ ಪ್ರದೇಶಗಳಿಗೆ ವೇಗವಾದ ಪ್ರವೇಶವನ್ನು ಒದಗಿಸಬಹುದು.&lt;/p&gt;&lt;h3&gt;&lt;strong&gt;ಪ್ರವಾಸೋದ್ಯಮಕ್ಕೂ ಉತ್ತೇಜನ&lt;/strong&gt;&lt;/h3&gt;&lt;p&gt;ಈ ತಂತ್ರಜ್ಞಾನವು ರಾಜ್ಯದ ಪರ್ವತ ಭೂದೃಶ್ಯಗಳಲ್ಲಿ ಹೊಸ ಪ್ರಯಾಣ ವಿಧಾನಗಳನ್ನು ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಹುದು. ಈ ಯಶಸ್ವಿ ಮೂಲಮಾದರಿಯ ಹಾರಾಟವು ರವಿ ತಮ್ತಾ ಮತ್ತು ಅವರ ತಂಡದ ವರ್ಷಗಳ ಸಮರ್ಪಿತ ಸಂಶೋಧನೆಯನ್ನು ಪ್ರತಿನಿಧಿಸುತ್ತದೆ. ಈ ವಾಹನವು ಇನ್ನೂ ಮೂಲಮಾದರಿಯ ಹಂತದಲ್ಲಿದ್ದು, ವಾಣಿಜ್ಯಿಕವಾಗಿ ನಿಯೋಜಿಸುವ ಮೊದಲು ಹೆಚ್ಚಿನ ಪರೀಕ್ಷೆ ಮತ್ತು ನಿಯಂತ್ರಕ ಅನುಮೋದನೆಗಳು ಬೇಕಾಗುತ್ತವೆ, ಆದರೆ ಈ ಪ್ರದರ್ಶನವು ಮುಂದುವರಿದ ವಾಯು ಚಲನಶೀಲತೆಯ ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಗಳನ್ನು ಸೂಚಿಸುತ್ತದೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/technology/no-ethanol-needed-young-innovator-from-uttarakhands-almora-tests-flying-car-suc/articleshow-v5v8bql"/>
        </item>
        <item>
            <title><![CDATA[ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್]]></title>
            <link>https://kannada.asianetnews.com/world-news/mojtaba-khamenei-spotted-in-a-car-after-disappearing-major-twist-in-iran-war-videoshow-benp4ff</link>
            <guid isPermaLink="true">https://kannada.asianetnews.com/world-news/mojtaba-khamenei-spotted-in-a-car-after-disappearing-major-twist-in-iran-war-videoshow-benp4ff</guid>
            <pubDate>Sat, 08 Aug 2026 19:08:56 +0530</pubDate>
            <description><![CDATA[&lt;p&gt;ಜಗತ್ತೇ ಹುಡುಕುತ್ತಿರುವ ವ್ಯಕ್ತಿ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಎಲ್ಲಿ? ರಹಸ್ಯ ಬಂಕರ್&zwnj;ನಲ್ಲಿ ಮೊಜ್ತಬಾ ಇದ್ದಾರಾ,ಹಾಗಾದರೆ ಕಾರಲ್ಲಿ ಕಂಡಿದ್ಯಾರು? ಇರಾನ್ ಆಡಳಿತ ಯಾರ ಕೈಲಿ? ಅಧ್ಯಕ್ಷ ತೆರೆದಿಟ್ಟ ಗುಟ್ಟು!&lt;/p&gt;]]></description>
            <media:content url="https://geo.dailymotion.com/player/x1tbu.html?video=xavzf32" medium="video" height="768" width="1024"/>
            <content:encoded><![CDATA[&lt;p&gt;ಅಮೆರಿಕಾ ಇಸ್ರೇಲಿಗೂ ಎದೆಯೊಡ್ಡಿ ನಿಂತಿದೆ ಇರಾನ್.. ಆದ್ರೆ ಈ ಟೈಮಲ್ಲಿ ಮುಖ್ಯವಾಗಿ, ದೇಶದ ಸಂಕೇತವಾಗಿ, ಭದ್ರಕೋಟೆಯಾಗಿ ನಿಲ್ಲಬೇಕಿದ್ದ ಸುಪ್ರೀಂ ಲೀಡರೇ ನಾಪತ್ತೆಯಾಗಿದ್ದರು. ಇಷ್ಟೂ ಕಾಲ ಮಾಯವಾಗಿದ್ದ ಖಮೇನಿ ಈಗ ದಿಢೀರ್ ಪ್ರತ್ಯಕ್ಷವಾದ್ರಾ? ಅಮೆರಿಕ-ಇಸ್ರೇಲ್ ವ್ಯೂಹವೇ ಇರಾನಿನ ಮುಂದೆ ಮಂಕಾದ ಹಾಗೆ ಕಾಣುತ್ತಿದೆ. ಏನಿದು ಹೊಸ ಟ್ವಿಸ್ಟ್&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/mojtaba-khamenei-spotted-in-a-car-after-disappearing-major-twist-in-iran-war-videoshow-benp4ff"/>
        </item>
        <item>
            <title><![CDATA[ದೆವ್ವ, ಆತ್ಮ, ನಿಗೂಢ ಶಬ್ದಗಳು.. ಹೈದರಾಬಾದ್‌ನ ಈ 7 ಜಾಗಗಳ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಿ!]]></title>
            <link>https://kannada.asianetnews.com/life/hyderabad-haunted-places-7-spooky-spots-with-mysterious-stories-gvd/articleshow-37ggdg2</link>
            <guid isPermaLink="true">https://kannada.asianetnews.com/life/hyderabad-haunted-places-7-spooky-spots-with-mysterious-stories-gvd/articleshow-37ggdg2</guid>
            <pubDate>Sat, 08 Aug 2026 19:00:50 +0530</pubDate>
            <description><![CDATA[&lt;p&gt;Hyderabad Haunted Places: ಕೋಟ್ಯಂತರ ಜನಸಂಖ್ಯೆ, ಸದಾ ಗಿಜಿಗುಡುವ ರಸ್ತೆಗಳು, ಐತಿಹಾಸಿಕ ಕಟ್ಟಡಗಳು ಹಾಗೂ ಆಧುನಿಕ ಗಗನಚುಂಬಿ ಕಟ್ಟಡಗಳಿಂದ ಕೂಡಿರುವ ಹೈದರಾಬಾದ್&zwnj; ನಗರಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgrxexd97az3kbry9hxc8w6,imgname-nkb-1786195655597.png" type="image/jpeg" height="390" width="690"/>
            <content:encoded><![CDATA[&lt;p&gt;ಕೋಟ್ಯಂತರ ಜನಸಂಖ್ಯೆ, ಸದಾ ಗಿಜಿಗುಡುವ ರಸ್ತೆಗಳು, ಐತಿಹಾಸಿಕ ಕಟ್ಟಡಗಳು ಹಾಗೂ ಆಧುನಿಕ ಗಗನಚುಂಬಿ ಕಟ್ಟಡಗಳಿಂದ ಕೂಡಿರುವ ಹೈದರಾಬಾದ್&zwnj; ನಗರಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಆದರೆ ಪ್ರತಿಯೊಂದು ನಗರಕ್ಕೂ ಒಂದು ಕತ್ತಲೆಯ ಮುಖ ಇರುವಂತೆ, ಭಾಗ್ಯನಗರಕ್ಕೂ ಕೆಲವು ಜಾಗಗಳಿವೆ. ಈ ಪ್ರದೇಶಗಳ ಸುತ್ತ ಹಲವು ವರ್ಷಗಳಿಂದ ಭೂತ, ಆತ್ಮ, ನಿಗೂಢ ಘಟನೆಗಳು ಹಾಗೂ ಭಯಾನಕ ಅನುಭವಗಳ ಕಥೆಗಳು ಹರಿದಾಡುತ್ತಿವೆ. ಹಾಗಾದರೆ ಹೈದರಾಬಾದ್&zwnj;ನ &lsquo;ಹಾಂಟೆಡ್&zwnj; ಪ್ಲೇಸಸ್&zwnj;&rsquo; ಎಂದು ಹೇಳಲಾಗುವ ಆ ಜಾಗಗಳು ಯಾವುವು? ಅವುಗಳ ಬಗ್ಗೆ ಸ್ಥಳೀಯವಾಗಿ ಕೇಳಿಬರುವ ಕಥೆಗಳೇನು? ಇದರ ಹಿಂದೆ ನಿಜಕ್ಕೂ ಏನಾದರೂ ರಹಸ್ಯವಿದೆಯೇ? ನೋಡೋಣ.&lt;/p&gt;&lt;p&gt;&lt;strong&gt;ಗೋಲ್ಕೊಂಡ ಕೋಟೆ: ಕತ್ತಲಾಗುತ್ತಿದ್ದಂತೆ ಭಯಾನಕವಾಗುವ ಕೋಟೆ!&lt;/strong&gt;&lt;/p&gt;&lt;p&gt;ಹೈದರಾಬಾದ್&zwnj; ಎಂದಾಕ್ಷಣ ನೆನಪಾಗುವ ಐತಿಹಾಸಿಕ ತಾಣಗಳಲ್ಲಿ ಗೋಲ್ಕೊಂಡ ಕೋಟೆಯೂ ಒಂದು. ಹಗಲಿನಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುವ ಈ ಕೋಟೆ, ಕತ್ತಲಾಗುತ್ತಿದ್ದಂತೆ ಭಯಾನಕ ವಾತಾವರಣ ಪಡೆದುಕೊಳ್ಳುತ್ತದೆ ಎಂಬ ಮಾತು ಸ್ಥಳೀಯವಾಗಿ ಚಾಲ್ತಿಯಲ್ಲಿದೆ. ಕಾಕತೀಯರು ಹಾಗೂ ಕುತುಬ್&zwnj;ಶಾಹಿಗಳ ಕಾಲದ ಈ ಕೋಟೆಯಲ್ಲಿ ರಾಜರ ಕಾಲದಲ್ಲಿ ಅನ್ಯಾಯವಾಗಿ ಸಾವನ್ನಪ್ಪಿದವರ ಆತ್ಮಗಳು ಅಲೆದಾಡುತ್ತವೆ ಎಂಬ ನಂಬಿಕೆಯಿದೆ. ವಿಶೇಷವಾಗಿ ತಾರಾಮತಿ ಎಂಬ ನೃತ್ಯಗಾರ್ತಿಯ ಆತ್ಮ ರಾತ್ರಿ ವೇಳೆ ಕೋಟೆಯಲ್ಲಿ ನೃತ್ಯ ಮಾಡುತ್ತದೆ, ಕೋಟೆಯ ಸುತ್ತ ವಿಚಿತ್ರ ಶಬ್ದಗಳು ಕೇಳಿಸುತ್ತವೆ ಎಂಬ ಕಥೆಗಳೂ ಇವೆ. ಇದೇ ಕಾರಣಕ್ಕೆ ಸಂಜೆ ಬಳಿಕ ಕೋಟೆಯೊಳಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ ಎಂಬ ಮಾತು ಕೂಡ ಕೇಳಿಬರುತ್ತದೆ. ಆದರೆ ಈ ಭಯಾನಕ ಕಥೆಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಗಮನಿಸಬೇಕು.&lt;/p&gt;&lt;p&gt;&lt;strong&gt;ಕುಂದನ್&zwnj;ಬಾಗ್&zwnj; ಹಾಂಟೆಡ್&zwnj; ಹೌಸ್&zwnj;: ರಾತ್ರಿ ಕಾಣಿಸುವ ನಿಗೂಢ ಬೆಳಕು!&lt;/strong&gt;&lt;/p&gt;&lt;p&gt;ಬಂಜಾರಾ ಹಿಲ್ಸ್&zwnj;ನ ಕುಂದನ್&zwnj;ಬಾಗ್&zwnj; ಪ್ರದೇಶದಲ್ಲಿರುವ ಹಳೆಯ ಮನೆಯೊಂದರ ಸುತ್ತಲೂ ಹಲವು ವರ್ಷಗಳಿಂದ ಭಯಾನಕ ಕಥೆಗಳು ಹರಿದಾಡುತ್ತಿವೆ.ಒಂದು ಕಾಲದಲ್ಲಿ ಈ ಮನೆಯಲ್ಲಿ ಮೂವರು ಮಹಿಳೆಯರು ವಿಚಿತ್ರವಾಗಿ ವರ್ತಿಸುತ್ತಿದ್ದರು ಹಾಗೂ ವಾಮಾಚಾರ ಮಾಡುತ್ತಿದ್ದರು ಎಂಬ ಪ್ರಚಾರವಿತ್ತು. ಅವರು ಮೃತಪಟ್ಟ ಬಳಿಕವೂ ರಾತ್ರಿ ವೇಳೆ ಮನೆಯೊಳಗೆ ಯಾರೋ ಮೇಣದಬತ್ತಿ ಹಿಡಿದು ಓಡಾಡುತ್ತಿರುವಂತೆ ಬೆಳಕು ಕಾಣಿಸುತ್ತಿತ್ತು ಎಂದು ಸುತ್ತಮುತ್ತಲಿನವರು ಹೇಳುತ್ತಿದ್ದರೆಂಬ ಕಥೆಗಳಿವೆ. ಇಂತಹ ವದಂತಿಗಳಿಂದಾಗಿ ಈ ಮನೆ ಹೈದರಾಬಾದ್&zwnj;ನ ಪ್ರಸಿದ್ಧ &lsquo;ಹಾಂಟೆಡ್&zwnj; ಹೌಸ್&zwnj;&rsquo;ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.&lt;/p&gt;&lt;p&gt;&lt;strong&gt;ಖೈರತಾಬಾದ್&zwnj;ನ ಹಳೆಯ ಸೈನ್ಸ್&zwnj; ಕಾಲೇಜು&lt;/strong&gt;&lt;/p&gt;&lt;p&gt;ಖೈರತಾಬಾದ್&zwnj;ನ ಹಳೆಯ ಸೈನ್ಸ್&zwnj; ಕಾಲೇಜು ಕಟ್ಟಡದ ಸುತ್ತಲೂ ಕೂಡ ಹಲವು ನಿಗೂಢ ಕಥೆಗಳು ಚಾಲ್ತಿಯಲ್ಲಿವೆ. ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ನಂತರ, ಅಲ್ಲಿನ ಪ್ರಯೋಗಾಲಯದಲ್ಲಿ ಇಡಲಾಗಿದ್ದ ಅಸ್ಥಿಪಂಜರಗಳು ಹಾಗೂ ಮಾನವ ದೇಹದ ಭಾಗಗಳು ರಾತ್ರಿ ವೇಳೆ ಚಲಿಸುತ್ತವೆ ಎಂಬ ವದಂತಿ ಹರಡಿತ್ತು. ಅಲ್ಲದೆ, ಅಲ್ಲಿ ಕಾವಲು ಕಾಯುತ್ತಿದ್ದ ಭದ್ರತಾ ಸಿಬ್ಬಂದಿ ವಿಚಿತ್ರ ಘಟನೆಗಳಿಂದ ಸಾವನ್ನಪ್ಪಿದ್ದಾರೆ ಎಂಬ ಕಥೆಗಳೂ ಕೇಳಿಬರುತ್ತವೆ. ಈ ಘಟನೆಗಳಿಗೆ ಅಧಿಕೃತ ಅಥವಾ ವೈಜ್ಞಾನಿಕ ಸಾಕ್ಷ್ಯಗಳಿಲ್ಲದಿದ್ದರೂ, ಸ್ಥಳೀಯವಾಗಿ ಈ ಕಟ್ಟಡದ ಬಗ್ಗೆ ಭಯದ ವಾತಾವರಣವಿದೆ ಎಂಬ ಮಾತುಗಳಿವೆ.&lt;/p&gt;&lt;p&gt;&lt;strong&gt;ರಾಮೋಜಿ ಫಿಲ್ಮ್&zwnj; ಸಿಟಿ: ಶೂಟಿಂಗ್&zwnj; ವೇಳೆ ನಿಗೂಢ ಘಟನೆಗಳಂತೆ!&lt;/strong&gt;&lt;/p&gt;&lt;p&gt;ಹೈದರಾಬಾದ್&zwnj;ನ ಮತ್ತೊಂದು ಪ್ರಮುಖ ಪ್ರವಾಸಿ ತಾಣ ರಾಮೋಜಿ ಫಿಲ್ಮ್&zwnj; ಸಿಟಿ. ಸಾವಿರಾರು ಸಿನಿಮಾಗಳ ಶೂಟಿಂಗ್&zwnj;ಗೆ ಸಾಕ್ಷಿಯಾಗಿರುವ ಈ ವಿಶಾಲ ಪ್ರದೇಶದ ಕೆಲವು ಹೋಟೆಲ್&zwnj;ಗಳು ಮತ್ತು ಶೂಟಿಂಗ್&zwnj; ಸ್ಥಳಗಳ ಬಗ್ಗೆಯೂ ಭಯಾನಕ ಕಥೆಗಳು ಹರಿದಾಡುತ್ತವೆ. ಈ ಪ್ರದೇಶ ಹಿಂದೆ ನಿಜಾಮರ ಕಾಲದ ಯುದ್ಧಭೂಮಿಯಾಗಿತ್ತು ಎಂಬ ಹಿನ್ನೆಲೆಯೊಂದಿಗೆ, ಶೂಟಿಂಗ್&zwnj; ವೇಳೆ ಏಕಾಏಕಿ ಲೈಟ್&zwnj;ಗಳು ಬಿದ್ದುಹೋಗುವುದು, ಕನ್ನಡಿಗಳ ಮೇಲೆ ವಿಚಿತ್ರ ಅಕ್ಷರಗಳು ಕಾಣಿಸಿಕೊಳ್ಳುವುದು ಸೇರಿದಂತೆ ಕೆಲವು ನಿಗೂಢ ಘಟನೆಗಳು ನಡೆದಿವೆ ಎಂದು ಕೆಲವರು ಹೇಳುತ್ತಾರೆ. ಇವುಗಳಿಗೂ ಅಧಿಕೃತ ದೃಢೀಕರಣವಿಲ್ಲ.&lt;/p&gt;&lt;p&gt;&lt;strong&gt;ರವೀಂದ್ರನಗರ: ಆತ್ಮಹತ್ಯೆಗಳ ಸರಣಿಯ ಹಿಂದೆ ಭೂತದ ಕಥೆ?&lt;/strong&gt;&lt;/p&gt;&lt;p&gt;2012ರಲ್ಲಿ ರವೀಂದ್ರನಗರದಲ್ಲಿ ನಡೆದ ಆತ್ಮಹತ್ಯೆಗಳ ಸರಣಿಯ ಬಳಿಕ ಈ ಪ್ರದೇಶವೂ ಹೈದರಾಬಾದ್&zwnj;ನ ಭಯಾನಕ ಸ್ಥಳಗಳ ಪಟ್ಟಿಯಲ್ಲಿ ಸೇರಿಕೊಂಡಿತು ಎಂಬ ಪ್ರಚಾರವಿದೆ. ಸತತವಾಗಿ ಸಂಭವಿಸಿದ ಕೆಲವು ಆತ್ಮಹತ್ಯೆಗಳ ಹಿಂದೆ ಯಾವುದೋ ಆತ್ಮದ ಕೈವಾಡವಿದೆ ಎಂದು ಸ್ಥಳೀಯರು ನಂಬಿದ್ದರು ಎನ್ನಲಾಗುತ್ತದೆ. ಭಯದಿಂದ ಕೆಲವು ನಿವಾಸಿಗಳು ರಾತ್ರಿ ವೇಳೆ ಮನೆಗಳ ಹೊರಗೆ ಕಾವಲು ಕಾಯುತ್ತಿದ್ದರೆಂಬ ಮಾತುಗಳೂ ಇವೆ. ಈ ಭೀತಿಯ ಕಾರಣದಿಂದ ಹಲವು ಕುಟುಂಬಗಳು ಆ ಪ್ರದೇಶವನ್ನು ತೊರೆದು ಹೋಗಿದ್ದವು ಎಂಬ ಕಥೆಗಳು ಹರಿದಾಡಿವೆ. ಆ ಸಂದರ್ಭದಲ್ಲಿ &lsquo;ಭೂತ&rsquo;ವನ್ನು ಕೇಂದ್ರವಾಗಿಟ್ಟುಕೊಂಡು ಕೆಲವು ಮಾಧ್ಯಮ ವರದಿಗಳೂ ಪ್ರಕಟವಾಗಿದ್ದವು ಎನ್ನಲಾಗುತ್ತದೆ. ಇಂದಿಗೂ ರಾತ್ರಿ ವೇಳೆ ಈ ಪ್ರದೇಶ ನಿರ್ಜನವಾಗಿರುತ್ತದೆ ಎಂಬ ಮಾತು ಕೇಳಿಬರುತ್ತದೆ. ಕೆಲವು ಮನೆಗಳ ಮೇಲೆ ಕೆಂಪು ಬಣ್ಣದಲ್ಲಿ &lsquo;ಜೈ ಶ್ರೀರಾಮ್&zwnj;&rsquo; ಎಂದು ಬರೆಯಲಾಗಿರುವುದು ಕಾಣಿಸುತ್ತದೆ ಎಂಬ ಉಲ್ಲೇಖಗಳೂ ಇವೆ.&lt;/p&gt;&lt;p&gt;&lt;strong&gt;&lsquo;ದೇಡ್&zwnj; ಲಖ್&zwnj; ಕಾ ಘರ್&zwnj;&rsquo;: ಒಂದು ಮನೆಯ ಸುತ್ತ ಸುತ್ತುವ ಭಯಾನಕ ಕಥೆ&lt;/strong&gt;&lt;/p&gt;&lt;p&gt;ಹೈದರಾಬಾದ್&zwnj;ನಲ್ಲಿ &lsquo;ದೇಡ್&zwnj; ಲಖ್&zwnj; ಕಾ ಘರ್&zwnj;&rsquo; ಎಂದೇ ಕರೆಯಲಾಗುವ ಮತ್ತೊಂದು ಮನೆಯ ಬಗ್ಗೆಯೂ ನಿಗೂಢ ಕಥೆಯೊಂದು ಪ್ರಚಲಿತದಲ್ಲಿದೆ. ಲಕ್ಷ್ಮಣ್&zwnj; ಎಂಬ ವ್ಯಕ್ತಿ ಸುಮಾರು 1.5 ಲಕ್ಷ ರೂಪಾಯಿ ಖರ್ಚು ಮಾಡಿ ಈ ಭವ್ಯ ಮನೆಯನ್ನು ನಿರ್ಮಿಸಿದ್ದರು ಎಂಬುದು ಸ್ಥಳೀಯವಾಗಿ ಕೇಳಿಬರುವ ಕಥೆ. ಆದರೆ ಮನೆ ನಿರ್ಮಾಣವಾದ ಬಳಿಕ ಅವರ ಪತ್ನಿ ಹೃದಯಾಘಾತದಿಂದ ಮೃತಪಟ್ಟರು ಎನ್ನಲಾಗುತ್ತದೆ. ಮನೆಯೊಳಗೆ ಏನೋ ಸರಿಯಿಲ್ಲ ಎಂಬ ಭಾವನೆಯಿಂದ ಲಕ್ಷ್ಮಣ್&zwnj; ಮತ್ತೆ ಅಲ್ಲಿಗೆ ವಾಪಸ್&zwnj; ಬರಲಿಲ್ಲ ಎಂಬ ಮಾತಿದೆ. ನಂತರ ಈ ಮನೆಯನ್ನು ಒಬ್ಬ ವಿದ್ಯಾರ್ಥಿಗೆ ಬಾಡಿಗೆಗೆ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂಬ ಕಥೆಯೂ ಇದೆ. ಇದಾದ ಬಳಿಕ ಆ ಮನೆಯಲ್ಲಿ ವಾಸಿಸಿದ ಕುಟುಂಬಗಳಿಗೂ ಇದೇ ರೀತಿಯ ದುರಂತಗಳು ಸಂಭವಿಸಿದವು ಎಂಬ ವದಂತಿಗಳು ಹರಡಿದವು. ವಿಶೇಷವಾಗಿ ಮನೆಯೊಳಗಿಂದ ಮಹಿಳೆಯೊಬ್ಬಳು ಅಳುತ್ತಿರುವಂತೆ ವಿಚಿತ್ರ ಶಬ್ದಗಳು ಕೇಳಿಸುತ್ತಿದ್ದವು ಎಂದು ಸ್ಥಳೀಯರು ಹೇಳುತ್ತಾರೆ.&lt;/p&gt;&lt;p&gt;&lt;strong&gt;ಬಂಜಾರಾ ಹಿಲ್ಸ್&zwnj;ನ ಸ್ಮಶಾನ: ಮಧ್ಯರಾತ್ರಿ ಹೋಗಲು ಜನರು ಹೆದರುವ ಜಾಗ!&lt;/strong&gt;&lt;/p&gt;&lt;p&gt;ಬಂಜಾರಾ ಹಿಲ್ಸ್&zwnj;ನ 2ನೇ ರಸ್ತೆಯಲ್ಲಿರುವ ಸ್ಮಶಾನದ ಸುತ್ತಲೂ ಕೂಡ ಹಲವು ಭಯಾನಕ ಕಥೆಗಳಿವೆ. ರಾತ್ರಿ ವೇಳೆ ಯಾವುದೇ ಕಾರಣವಿಲ್ಲದೆ ಬೀದಿ ದೀಪಗಳು ಮಿನುಗುವುದು, ಏಕಾಏಕಿ ತಾಪಮಾನ ಕಡಿಮೆಯಾಗುವುದು, ಮಧ್ಯರಾತ್ರಿ ಆ ಮಾರ್ಗದಲ್ಲಿ ಸಾಗುವ ವಾಹನಗಳು ಕೆಟ್ಟು ನಿಲ್ಲುವುದು ಸೇರಿದಂತೆ ವಿಚಿತ್ರ ಅನುಭವಗಳು ಎದುರಾಗುತ್ತವೆ ಎಂದು ಕೆಲವರು ಹೇಳುತ್ತಾರೆ. ಹೀಗಾಗಿ ಮಧ್ಯರಾತ್ರಿಯಲ್ಲಿ ಈ ಪ್ರದೇಶದ ಬಳಿ ಓಡಾಡಲು ಜನರು ಹಿಂದೇಟು ಹಾಕುತ್ತಾರೆ ಎಂಬ ಮಾತಿದೆ.&lt;/p&gt;&lt;p&gt;&lt;strong&gt;ಶಂಷಾಬಾದ್&zwnj; ವಿಮಾನ ನಿಲ್ದಾಣದ ಬಗ್ಗೆಯೂ ನಿಗೂಢ ಕಥೆಗಳಿವೆಯಂತೆ!&lt;/strong&gt;&lt;/p&gt;&lt;p&gt;ಶಂಷಾಬಾದ್&zwnj; ಸಮೀಪದಲ್ಲಿರುವ ರಾಜೀವ್&zwnj; ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇಂತಹ ಕಥೆಗಳಿಂದ ಹೊರತಾಗಿಲ್ಲ. ವಿಮಾನ ನಿಲ್ದಾಣ ನಿರ್ಮಾಣದ ಹಿಂದೆ ಹಲವು ವಿವಾದಗಳು ಹಾಗೂ ಸಾವುಗಳು ಸಂಭವಿಸಿದ್ದವು ಎಂಬ ಮಾತುಗಳು ಕೇಳಿಬರುತ್ತವೆ. ಆ ಘಟನೆಗಳಲ್ಲಿ ಮೃತಪಟ್ಟವರ ಮೃತದೇಹಗಳನ್ನು ವಿಮಾನ ನಿಲ್ದಾಣದ ಕೆಳಗೆ ಹೂಳಲಾಗಿದೆ ಮತ್ತು ಅವರ ಆತ್ಮಗಳು ಇಂದಿಗೂ ಅಲ್ಲೇ ಅಲೆದಾಡುತ್ತಿವೆ ಎಂಬ ನಂಬಿಕೆಯೂ ಕೆಲವರಲ್ಲಿದೆ. ಆದರೆ ಇಂತಹ ಹೇಳಿಕೆಗಳಿಗೆ ಯಾವುದೇ ದೃಢವಾದ ಪುರಾವೆಗಳಿಲ್ಲ.&lt;/p&gt;&lt;h2&gt;&lt;strong&gt;ನಿಜಕ್ಕೂ ಈ ಜಾಗಗಳಲ್ಲಿ ದೆವ್ವಗಳಿವೆಯೇ?&lt;/strong&gt;&lt;/h2&gt;&lt;p&gt;ಹೈದರಾಬಾದ್&zwnj;ನ ಈ ಸ್ಥಳಗಳ ಸುತ್ತಲೂ ವರ್ಷಗಳಿಂದ ಭಯಾನಕ ಕಥೆಗಳು, ವದಂತಿಗಳು ಮತ್ತು ನಿಗೂಢ ಘಟನೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೆ ಇವುಗಳಲ್ಲಿ ಬಹುತೇಕ ಘಟನೆಗಳಿಗೆ ವೈಜ್ಞಾನಿಕ ಅಥವಾ ಅಧಿಕೃತ ಸಾಕ್ಷ್ಯಗಳಿಲ್ಲ. ಕತ್ತಲಿನ ವಾತಾವರಣ, ಹಳೆಯ ಕಟ್ಟಡಗಳು, ಐತಿಹಾಸಿಕ ಹಿನ್ನೆಲೆ ಹಾಗೂ ಜನರ ಕಲ್ಪನೆಗಳು ಸೇರಿ ಇಂತಹ ಕಥೆಗಳಿಗೆ ಮತ್ತಷ್ಟು ಬಣ್ಣ ತುಂಬಿರಬಹುದು. ಆದರೂ ಭಯ ಮತ್ತು ರಹಸ್ಯಗಳನ್ನು ಇಷ್ಟಪಡುವವರಿಗೆ ಹೈದರಾಬಾದ್&zwnj;ನ ಈ ಸ್ಥಳಗಳು ಇಂದಿಗೂ ಕುತೂಹಲದ ಕೇಂದ್ರಗಳಾಗಿವೆ. ನಿಜಕ್ಕೂ ಇಲ್ಲಿ ಏನಾದರೂ ಅತೀಂದ್ರಿಯ ಶಕ್ತಿ ಇದೆಯೇ? ಅಥವಾ ಇವೆಲ್ಲವೂ ಕಾಲಕ್ರಮೇಣ ಹುಟ್ಟಿಕೊಂಡ ಕಥೆಗಳೇ? ಉತ್ತರ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/life/hyderabad-haunted-places-7-spooky-spots-with-mysterious-stories-gvd/articleshow-37ggdg2"/>
        </item>
        <item>
            <title><![CDATA[ಚಳಿ, ಹಿಮ, ಗಡ್ಡೆಗಟ್ಟುವ ಸಮುದ್ರ.. ಆದರೂ ಪೆಂಗ್ವಿನ್‌ಗಳಿಗೆ ಏನೂ ಆಗಲ್ಲ: ಏನಿದರ ರಹಸ್ಯ?]]></title>
            <link>https://kannada.asianetnews.com/life/why-don-t-penguins-freeze-in-antarctica-the-amazing-secret-of-their-bodies-gvd/articleshow-11cvavq</link>
            <guid isPermaLink="true">https://kannada.asianetnews.com/life/why-don-t-penguins-freeze-in-antarctica-the-amazing-secret-of-their-bodies-gvd/articleshow-11cvavq</guid>
            <pubDate>Sat, 08 Aug 2026 18:35:47 +0530</pubDate>
            <description><![CDATA[&lt;p&gt;ಅಂಟಾರ್ಕ್ಟಿಕಾ ಎಂದರೆ ನೆನಪಾಗುವುದೇ ಹಿಮ, ಕೊರೆಯುವ ಚಳಿ ಮತ್ತು ಗಡ್ಡೆಗಟ್ಟಿಸುವ ಗಾಳಿ. ಇದು ವಿಶ್ವದ ಅತ್ಯಂತ ಶೀತ ಪ್ರದೇಶಗಳಲ್ಲಿ ಒಂದಾಗಿದ್ದು, ಚಳಿಗಾಲದಲ್ಲಿ ಇಲ್ಲಿನ ತಾಪಮಾನ ಮೈನಸ್&zwnj; 50 ಡಿಗ್ರಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgqn02aa6fz1jnnd47e0qgt,imgname-vjv-1786194329674.png" type="image/jpeg" height="390" width="690"/>
            <content:encoded><![CDATA[&lt;p&gt;ಅಂಟಾರ್ಕ್ಟಿಕಾ ಎಂದರೆ ನೆನಪಾಗುವುದೇ ಹಿಮ, ಕೊರೆಯುವ ಚಳಿ ಮತ್ತು ಗಡ್ಡೆಗಟ್ಟಿಸುವ ಗಾಳಿ. ಇದು ವಿಶ್ವದ ಅತ್ಯಂತ ಶೀತ ಪ್ರದೇಶಗಳಲ್ಲಿ ಒಂದಾಗಿದ್ದು, ಚಳಿಗಾಲದಲ್ಲಿ ಇಲ್ಲಿನ ತಾಪಮಾನ ಮೈನಸ್&zwnj; 50 ಡಿಗ್ರಿ ಸೆಲ್ಸಿಯಸ್&zwnj;ಗಿಂತಲೂ ಕೆಳಗೆ ಇಳಿಯುತ್ತದೆ. ಹಿಮಪಾತ, ಹಿಮ ಬಿರುಗಾಳಿ ಹಾಗೂ ತಿಂಗಳುಗಟ್ಟಲೆ ಆವರಿಸುವ ಹಿಮದಿಂದಾಗಿ, ಸೂಕ್ತ ರಕ್ಷಣಾ ಉಡುಪುಗಳಿಲ್ಲದೆ ಮನುಷ್ಯರು ಇಲ್ಲಿ ಹೆಚ್ಚು ಹೊತ್ತು ಬದುಕುವುದು ಅಸಾಧ್ಯ.&lt;/p&gt;&lt;p&gt;ಆದರೆ ಇದೇ ಪರಿಸರದಲ್ಲಿ ಪೆಂಗ್ವಿನ್&zwnj;ಗಳು ಮಾತ್ರ ಯಾವುದೇ ಭಯವಿಲ್ಲದೆ ಬದುಕುತ್ತವೆ. ಹಿಮದ ಮೇಲೆ ಬರಿಗಾಲಿನಲ್ಲಿ ನಡೆಯುವುದು, ಗಡ್ಡೆಗಟ್ಟುವಷ್ಟು ತಣ್ಣನೆಯ ಸಮುದ್ರದಲ್ಲಿ ಈಜುವುದು, ಗಂಟೆಗಟ್ಟಲೆ ಹಿಮದ ನಡುವೆ ನಿಂತಿರುವುದು ಅವುಗಳಿಗೆ ಸಾಮಾನ್ಯ. ಹಾಗಾದರೆ ಇಷ್ಟೊಂದು ಚಳಿಯಲ್ಲೂ ಅವುಗಳ ದೇಹ ಗಡ್ಡೆಗಟ್ಟುವುದಿಲ್ಲವೇಕೆ? ಇದರ ಹಿಂದೆ ಪ್ರಕೃತಿ ರೂಪಿಸಿರುವ ಅದ್ಭುತ ದೇಹ ವ್ಯವಸ್ಥೆಯಿದೆ.&lt;/p&gt;&lt;p&gt;&lt;strong&gt;ಪೆಂಗ್ವಿನ್&zwnj;ಗಳ ದೇಹವೇ ಒಂದು ನೈಸರ್ಗಿಕ ಜಾಕೆಟ್&zwnj;!&lt;/strong&gt;&lt;/p&gt;&lt;p&gt;ಪೆಂಗ್ವಿನ್&zwnj;ಗಳ ದೇಹದ ಮೇಲೆ ದಟ್ಟವಾಗಿರುವ ಈಕಗಳು ಕೇವಲ ಅವುಗಳನ್ನು ಸುಂದರವಾಗಿ ಕಾಣಿಸುವುದಕ್ಕಷ್ಟೇ ಅಲ್ಲ. ಅವುಗಳ ದೇಹವನ್ನು ತೀವ್ರ ಚಳಿಯಿಂದ ರಕ್ಷಿಸುವ ಪ್ರಮುಖ ಕವಚವೂ ಹೌದು. ನೀರು ಒಳನುಗ್ಗದಂತೆ ಇರುವ ಈ ದಟ್ಟ ಈಕಗಳು ಚರ್ಮದ ಸಮೀಪ ಬೆಚ್ಚಗಿನ ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತವೆ. ಹೀಗಾಗಿ ಅವುಗಳಿಗೆ ನೈಸರ್ಗಿಕ ಜಾಕೆಟ್&zwnj;ನಂತೆ ಕೆಲಸ ಮಾಡುತ್ತವೆ. ಇದರ ಕೆಳಭಾಗದಲ್ಲಿ ದಪ್ಪವಾದ ಕೊಬ್ಬಿನ ಪದರ ಇರುತ್ತದೆ. ಇದನ್ನು ಬ್ಲಬ್ಬರ್&zwnj; ಎಂದು ಕರೆಯಲಾಗುತ್ತದೆ. ಈ ಕೊಬ್ಬಿನ ಪದರವು ಹೊರಗಿನ ಚಳಿಯನ್ನು ದೇಹದೊಳಗೆ ಪ್ರವೇಶಿಸದಂತೆ ತಡೆಯುತ್ತದೆ. ಈಕಗಳು ಮತ್ತು ಬ್ಲಬ್ಬರ್&zwnj;-ಈ ಎರಡು ಪದರಗಳು ಸೇರಿ ದೇಹದ ಉಷ್ಣತೆ ಹೊರಗೆ ಹೋಗದಂತೆ ಕಾಪಾಡುತ್ತವೆ.&lt;/p&gt;&lt;p&gt;&lt;strong&gt;ಅಸಲಿ ರಹಸ್ಯ ಇರುವುದು ಪಾದಗಳಲ್ಲಿ!&lt;/strong&gt;&lt;/p&gt;&lt;p&gt;ಪೆಂಗ್ವಿನ್&zwnj;ಗಳ ದೇಹದ ಮತ್ತೊಂದು ಅಚ್ಚರಿಯ ವೈಶಿಷ್ಟ್ಯ ಅವುಗಳ ಪಾದಗಳಲ್ಲಿ ಅಡಗಿದೆ. ಪಾದಗಳಿಗೆ ಈಕಗಳಿರುವುದಿಲ್ಲ. ಆದರೂ ಹಿಮದ ಮೇಲೆ ಗಂಟೆಗಟ್ಟಲೆ ನಡೆದಾಡಿದರೂ ಅವುಗಳ ಪಾದಗಳು ಗಡ್ಡೆಗಟ್ಟುವುದಿಲ್ಲ.&lt;/p&gt;&lt;p&gt;&lt;strong&gt;ಇದಕ್ಕೆ ಕಾರಣ ಅವುಗಳಲ್ಲಿರುವ ವಿಶೇಷ ರಕ್ತ ಪರಿಚಲನಾ ವ್ಯವಸ್ಥೆ.&lt;/strong&gt;&lt;/p&gt;&lt;p&gt;ಹೃದಯದಿಂದ ಬರುವ ಬೆಚ್ಚಗಿನ ರಕ್ತ ಮತ್ತು ಪಾದಗಳಿಂದ ದೇಹದತ್ತ ಹಿಂದಿರುಗುವ ತಣ್ಣನೆಯ ರಕ್ತ ಒಂದಕ್ಕೊಂದು ಅತ್ಯಂತ ಸಮೀಪದಲ್ಲಿ ಹರಿಯುತ್ತದೆ. ಈ ಸಂದರ್ಭದಲ್ಲಿ ಬೆಚ್ಚಗಿನ ರಕ್ತದಲ್ಲಿರುವ ಉಷ್ಣತೆ ತಣ್ಣನೆಯ ರಕ್ತಕ್ಕೆ ವರ್ಗಾವಣೆಯಾಗುತ್ತದೆ. ಹೀಗಾಗಿ ಪಾದಗಳಿಗೆ ತಲುಪುವ ರಕ್ತದ ಉಷ್ಣತೆ ಸ್ವಲ್ಪ ಕಡಿಮೆಯಾಗಿರುತ್ತದೆ. ಇದರಿಂದ ದೇಹದ ಅಮೂಲ್ಯವಾದ ಉಷ್ಣತೆ ಪಾದಗಳ ಮೂಲಕ ಹೊರಗೆ ಅನಗತ್ಯವಾಗಿ ನಷ್ಟವಾಗುವುದಿಲ್ಲ. ಅದೇ ಸಮಯದಲ್ಲಿ ಪಾದಗಳಿಂದ ಮೇಲಕ್ಕೆ ಹಿಂದಿರುಗುವ ರಕ್ತವೂ ದೇಹಕ್ಕೆ ತಲುಪುವ ಮುನ್ನವೇ ಬೆಚ್ಚಗಾಗುತ್ತದೆ. ಈ ಅದ್ಭುತ ವ್ಯವಸ್ಥೆಯನ್ನು ವಿಜ್ಞಾನಿಗಳು &lsquo;ಕೌಂಟರ್&zwnj;-ಕರೆಂಟ್&zwnj; ಹೀಟ್&zwnj; ಎಕ್ಸ್&zwnj;ಚೇಂಜ್&zwnj; ಸಿಸ್ಟಮ್&zwnj;&rsquo; ಎಂದು ಕರೆಯುತ್ತಾರೆ.&lt;/p&gt;&lt;p&gt;&lt;strong&gt;ಪಾದಗಳು ಗಡ್ಡೆಗಟ್ಟದಿರುವುದಕ್ಕೆ ಇದೇ ಕಾರಣ!&lt;/strong&gt;&lt;/p&gt;&lt;p&gt;ಈ ವ್ಯವಸ್ಥೆಯ ಪರಿಣಾಮವಾಗಿ ಪೆಂಗ್ವಿನ್&zwnj;ಗಳ ಪಾದಗಳ ಉಷ್ಣತೆ ಗಡ್ಡೆಗಟ್ಟುವ ಮಟ್ಟಕ್ಕಿಂತ ಕೆಲವೇ ಡಿಗ್ರಿಗಳಷ್ಟು ಹೆಚ್ಚಿರುತ್ತದೆ. ದೇಹದ ಅಂಗಾಂಶಗಳಿಗೆ ಹಾನಿಯಾಗದಿರಲು ಬೇಕಾದಷ್ಟು ಉಷ್ಣತೆ ಅಲ್ಲಿ ಇರುತ್ತದೆ. ಆದರೆ ದೇಹದ ಉಳಿದ ಭಾಗದಲ್ಲಿರುವ ಅಮೂಲ್ಯವಾದ ಉಷ್ಣತೆ ವ್ಯರ್ಥವಾಗಿ ಹೊರಗೆ ಹೋಗುವುದಿಲ್ಲ. ಹೀಗಾಗಿ ಪೆಂಗ್ವಿನ್&zwnj;ಗಳು ಹಿಮದ ಮೇಲೆ ನಿಂತಿದ್ದರೂ ಫ್ರಾಸ್ಟ್&zwnj;ಬೈಟ್&zwnj;ನಂತಹ ಸಮಸ್ಯೆಗಳಿಂದ ರಕ್ಷಿಸಲ್ಪಡುತ್ತವೆ.&lt;/p&gt;&lt;p&gt;&lt;strong&gt;ಎಲ್ಲಾ ಪೆಂಗ್ವಿನ್&zwnj;ಗಳಿಗೂ ಒಂದೇ ರೀತಿಯ ವ್ಯವಸ್ಥೆಯೇ?&lt;/strong&gt;&lt;/p&gt;&lt;p&gt;ಇಲ್ಲ. ಪೆಂಗ್ವಿನ್&zwnj;ಗಳು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ಅವುಗಳ ದೇಹದ ರಚನೆಯಲ್ಲೂ ವ್ಯತ್ಯಾಸವಿರುತ್ತದೆ. ಅಂಟಾರ್ಕ್ಟಿಕಾದಂತಹ ಅತ್ಯಂತ ಚಳಿ ಪ್ರದೇಶಗಳಲ್ಲಿ ವಾಸಿಸುವ ಪೆಂಗ್ವಿನ್&zwnj;ಗಳಿಗೆ ದೇಹದ ಉಷ್ಣತೆ ಉಳಿಸಿಕೊಳ್ಳುವ ವ್ಯವಸ್ಥೆಗಳು ಹೆಚ್ಚು ಅಗತ್ಯ. ಆದರೆ ದಕ್ಷಿಣ ಆಫ್ರಿಕಾದಂತಹ ತುಸು ಬೆಚ್ಚಗಿನ ಪ್ರದೇಶಗಳಲ್ಲಿ ವಾಸಿಸುವ ಪೆಂಗ್ವಿನ್&zwnj;ಗಳಿಗೆ ಹೆಚ್ಚುವರಿ ಉಷ್ಣತೆಯನ್ನು ಹೊರಹಾಕುವ ವ್ಯವಸ್ಥೆ ಬೇಕಾಗುತ್ತದೆ. ಅಂತಹ ಪೆಂಗ್ವಿನ್&zwnj;ಗಳಲ್ಲಿ ದೊಡ್ಡ ಫ್ಲಿಪ್ಪರ್&zwnj;ಗಳು ಮತ್ತು ಮುಖದ ಕೆಲವು ಭಾಗಗಳಲ್ಲಿ ಈಕಗಳಿಲ್ಲದ ಚರ್ಮ ಕಾಣಿಸಿಕೊಳ್ಳುತ್ತದೆ. ಇವು ದೇಹದಲ್ಲಿರುವ ಹೆಚ್ಚುವರಿ ಉಷ್ಣತೆಯನ್ನು ಹೊರಗೆ ಕಳುಹಿಸಲು ಸಹಾಯ ಮಾಡುತ್ತವೆ. ಅಂದರೆ, ಯಾವ ಪ್ರದೇಶದಲ್ಲಿ ಯಾವ ರೀತಿಯ ಹವಾಮಾನವಿದೆಯೋ, ಅದಕ್ಕೆ ತಕ್ಕಂತೆ ಪ್ರಕೃತಿ ಪ್ರತಿಯೊಂದು ಜೀವಿಯ ದೇಹವನ್ನೂ ರೂಪಿಸಿದೆ.&lt;/p&gt;&lt;h2&gt;&lt;strong&gt;ಪೆಂಗ್ವಿನ್&zwnj;ಗಳಿಂದ ಇಂಜಿನಿಯರ್&zwnj;ಗಳಿಗೂ ಸ್ಫೂರ್ತಿ!&lt;/strong&gt;&lt;/h2&gt;&lt;p&gt;ಪೆಂಗ್ವಿನ್&zwnj;ಗಳ ದೇಹದ ಈ ಅದ್ಭುತ ವ್ಯವಸ್ಥೆ ಕೇವಲ ವಿಜ್ಞಾನಿಗಳಿಗೆ ಮಾತ್ರ ಕುತೂಹಲದ ವಿಷಯವಲ್ಲ. ಇಂಜಿನಿಯರ್&zwnj;ಗಳಿಗೂ ಇದು ಸ್ಫೂರ್ತಿಯಾಗಿದೆ. ಕಟ್ಟಡಗಳು, ವಾಹನಗಳು ಮತ್ತು ಕೈಗಾರಿಕೆಗಳಲ್ಲಿ ಬಳಸುವ ಆಧುನಿಕ ಹೀಟ್&zwnj; ಎಕ್ಸ್&zwnj;ಚೇಂಜರ್&zwnj; ತಂತ್ರಜ್ಞಾನದಲ್ಲೂ ಇದೇ ರೀತಿಯ ತತ್ವವನ್ನು ಬಳಸಲಾಗುತ್ತದೆ. ಉಷ್ಣತೆಯ ನಷ್ಟವನ್ನು ಕಡಿಮೆ ಮಾಡುವುದು ಮತ್ತು ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಇದರ ಪ್ರಮುಖ ಉದ್ದೇಶ. ಲಕ್ಷಾಂತರ ವರ್ಷಗಳ ವಿಕಾಸದ ಮೂಲಕ ಪ್ರಕೃತಿ ರೂಪಿಸಿರುವ ಈ ಅದ್ಭುತ ದೇಹ ವ್ಯವಸ್ಥೆಯಿಂದಾಗಿ, ಭೂಮಿಯ ಅತ್ಯಂತ ಕಠಿಣ ಚಳಿಯಲ್ಲೂ ಪೆಂಗ್ವಿನ್&zwnj;ಗಳು ಸುಲಭವಾಗಿ ಬದುಕುಳಿಯುತ್ತಿವೆ. ಮಂಜಿನ ನಡುವೆ ಅವುಗಳ ಬದುಕಿನ ರಹಸ್ಯವೇನು ಎಂಬ ಪ್ರಶ್ನೆಗೆ ಪ್ರಕೃತಿಯ ಉತ್ತರ ಒಂದೇ&mdash;ಅದ್ಭುತ ದೇಹ ವಿನ್ಯಾಸ ಮತ್ತು ಅಷ್ಟೇ ಅದ್ಭುತವಾದ ಉಷ್ಣ ನಿಯಂತ್ರಣ ವ್ಯವಸ್ಥೆ!&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/life/why-don-t-penguins-freeze-in-antarctica-the-amazing-secret-of-their-bodies-gvd/articleshow-11cvavq"/>
        </item>
        <item>
            <title><![CDATA[ಬೆಳಗಿನ ಜಾವ 3 ಗಂಟೆಗೆ ಆಟೋ ಓಡಿಸುವ ಮಹಿಳೆ.. ಕಾರಣ ಏನೆಂದು ಗೊತ್ತಾದ್ರೆ ಸಲಾಂ ಅಂತೀರಾ]]></title>
            <link>https://kannada.asianetnews.com/viral/hats-off-to-the-brave-woman-driving-an-auto-at-3-am-for-a-heroic-reason/articleshow-n75wm0n</link>
            <guid isPermaLink="true">https://kannada.asianetnews.com/viral/hats-off-to-the-brave-woman-driving-an-auto-at-3-am-for-a-heroic-reason/articleshow-n75wm0n</guid>
            <pubDate>Sat, 08 Aug 2026 18:31:57 +0530</pubDate>
            <description><![CDATA[&lt;p&gt;&lt;strong&gt;Woman auto driver: &lt;/strong&gt;ಮುಂಜಾನೆ 3 ಗಂಟೆಗೆ ಜನರು ನಿದ್ರಿಸುತ್ತಿದ್ದರೆ, ಈ ಮಹಿಳೆ ಆಟೋ ಓಡಿಸುತ್ತಾ ರಸ್ತೆಯಲ್ಲಿರುತ್ತಾರೆ. ಆದರೆ ಹಣಕ್ಕಾಗಿ ಅಲ್ಲ, ಅಂದಹಾಗೆ ವಡೋದರಾದ ಈ ಮಹಿಳೆಯ ಸ್ಫೂರ್ತಿದಾಯಕ ಕಥೆ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgq5chrqw2r598b0cknawcj,imgname-thumbnail---2026-08-08t182602.130-1786193818167.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಾ&lt;/strong&gt;ಮಾನ್ಯವಾಗಿ ಮುಂಜಾನೆ 3 ಗಂಟೆಯ ಸಮಯವೆಂದರೆ ಇಡೀ ದೇಶವೇ ಗಾಢ ನಿದ್ರೆಯಲ್ಲಿರುತ್ತದೆ. ರಸ್ತೆಗಳು ನಿರ್ಜನವಾಗಿರುತ್ತವೆ. ಅಂತಹ ಸಮಯದಲ್ಲಿ ಒರ್ವ ಮಹಿಳೆ ಆಟೋರಿಕ್ಷಾ ಓಡಿಸುತ್ತಿರುವುದು ಕಂಡರೆ ಎಂಥವರು ಕೂಡ ಒಂದು ಕ್ಷಣ ಅಚ್ಚರಿಯಿಂದ ನೋಡುವುದು ಸಹಜ. ಇದೀಗ ಇನ್&zwnj;ಸ್ಟಾಗ್ರಾಂ ಬಳಕೆದಾರರಾದ ಸನ್ಯಮ್ ಗಾರ್ಗ್ ಎಂಬುವವರಿಗೂ ಇತ್ತೀಚೆಗೆ ಇಂತಹದ್ದೇ ಒಂದು ಅನುಭವವಾಗಿದೆ. ಅವರು ಮುಂಜಾನೆ 3 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದಾಗ ಒರ್ವ ಮಹಿಳೆ ತನ್ನ ಪತಿಯೊಂದಿಗೆ ಆಟೋ ಓಡಿಸುತ್ತಿರುವುದು ಕಂಡುಬಂದಿದೆ. ಕುತೂಹಲದಿಂದ ಸನ್ಯಮ್ ಅವರು ಆಕೆಯನ್ನು ಮಾತನಾಡಿಸಿದಾಗ ತಿಳಿದ ವಿಷಯಗಳು ಆಕೆಗೆ ಎಂಥವರು ಒಮ್ಮೆ ಸಲಾಂ ಹೊಡೆಯುವಂತಿದೆ.&lt;/p&gt;&lt;h2&gt;&lt;strong&gt;ಹಣಕ್ಕಾಗಿ ಮಾತ್ರ ಆಟೋ ಓಡಿಸುತ್ತಿಲ್ಲ&lt;/strong&gt;&lt;/h2&gt;&lt;p&gt;ಗುಜರಾತ್&zwnj;ನ ವಡೋದರಾ ನಗರದ ಈ ಮಹಿಳೆ ಮಾನವೀಯತೆಯ ಪ್ರತಿರೂಪದಂತೆ ಇದ್ದಾರೆ. ಈಕೆಯ ಪತಿ ಕೂಡ ಒಬ್ಬ ಆಟೋ ಚಾಲಕ. ತನ್ನ ಪತ್ನಿ ಆರ್ಥಿಕವಾಗಿ ಯಾರ ಮೇಲೂ ಅವಲಂಬಿತಳಾಗಬಾರದು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ಉದ್ದೇಶದಿಂದ ಪತಿಯೇ ಆಕೆಗೆ ಆಟೋ ಡ್ರೈವಿಂಗ್ ಕಲಿಸಿದ್ದಾರೆ. ಈಗ ಈ ದಂಪತಿ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಾ ತಮ್ಮ ಇಬ್ಬರು ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಆದರೆ, ಇವರು ಕೇವಲ ಹಣಕ್ಕಾಗಿ ಮಾತ್ರ ಆಟೋ ಓಡಿಸುತ್ತಿಲ್ಲ.&lt;/p&gt;&lt;h2&gt;&lt;strong&gt;ಗರ್ಭಿಣಿಯರು, ರೋಗಿಗಳು, ಒಬ್ಬಂಟಿ ಮಹಿಳೆಯರಿಂದ ದುಡ್ಡು ಕೇಳಲ್ಲ&lt;/strong&gt;&lt;/h2&gt;&lt;p&gt;ನಗರಗಳಲ್ಲಿ ಹಗಲಿನಲ್ಲಿ ವಾಹನಗಳು ಸುಲಭವಾಗಿ ಸಿಗುತ್ತವೆ. ಆದರೆ ಅರ್ಧರಾತ್ರಿಯ ಸಮಯದಲ್ಲಿ ಮಹಿಳೆಯರು, ಮಕ್ಕಳು ಅಥವಾ ವೃದ್ಧರಿಗೆ ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ಆಸ್ಪತ್ರೆಗೆ ಹೋಗಲು ವಾಹನ ಸಿಗದೆ ಪರದಾಡುತ್ತಾರೆ. ಈ ಕಷ್ಟವನ್ನು ಅರ್ಥಮಾಡಿಕೊಂಡಿರುವ ಈ ಮಹಿಳಾ ಆಟೋ ಚಾಲಕಿ, ರಾತ್ರಿ 3 ಗಂಟೆಯಾದರೂ ಸರಿ, ಯಾರಾದರೂ ಆಪತ್ತಿನಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕರೆ ತಕ್ಷಣ ಅಲ್ಲಿಗೆ ಧಾವಿಸುತ್ತಾರೆ. ವಿಶೇಷವೆಂದರೆ, ಆಸ್ಪತ್ರೆಗೆ ಹೋಗಬೇಕಾದ ಗರ್ಭಿಣಿಯರು, ರೋಗಿಗಳು ಅಥವಾ ಒಬ್ಬಂಟಿ ಮಹಿಳೆಯರಿಂದ ಈಕೆ ಒಂದು ರೂಪಾಯಿಯನ್ನೂ ಪಡೆಯದೆ ಉಚಿತವಾಗಿ ಸೇವೆಯನ್ನು ಒದಗಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹಣ ಪಡೆಯಲು ನಿರಾಕರಣೆ&lt;/strong&gt;&lt;/h2&gt;&lt;p&gt;&quot;ಕೇವಲ ಹಣ ಸಂಪಾದಿಸುವುದಷ್ಟೇ ನನ್ನ ಗುರಿಯಲ್ಲ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಮಹಿಳೆಯರಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುವುದು ನನ್ನ ಜೀವನದ ಉದ್ದೇಶ&quot; ಎಂದು ಈ ಧೀರೆ ಹೆಮ್ಮೆಯಿಂದ ಹೇಳುತ್ತಾರೆ. ಎಷ್ಟೋ ಬಾರಿ ಪ್ರಯಾಣಿಕರು ಹಣ ಕೊಡಲು ಮುಂದಾದರೂ, ತುರ್ತು ಪರಿಸ್ಥಿತಿಯಲ್ಲಿದ್ದವರಿಂದ ಹಣ ಪಡೆಯಲು ಈಕೆ ನಿರಾಕರಿಸುತ್ತಾರೆ.&lt;/p&gt;&lt;h2&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆ&lt;/strong&gt;&lt;/h2&gt;&lt;p&gt;ಸನ್ಯಮ್ ಗಾರ್ಗ್ ಅವರು ಹಂಚಿಕೊಂಡ ಈ ವಿಡಿಯೋ ಇಂಟರ್ನೆಟ್&zwnj;ನಲ್ಲಿ ಸಖತ್ ವೈರಲ್ ಆಗಿದೆ. ಲಕ್ಷಾಂತರ ಜನರು ಈ ಮಹಿಳೆಯ ಸೇವಾ ಮನೋಭಾವಕ್ಕೆ ಮಾರುಹೋಗಿದ್ದಾರೆ. &quot;ಇಂದಿನ ಸ್ವಾರ್ಥಿ ಜಗತ್ತಿನಲ್ಲಿ ಇಂತಹವರು ದೇವರಿಗಿಂತ ಕಡಿಮೆ ಇಲ್ಲ&quot; ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ವಡೋದರಾದ ಈ ಮಹಿಳೆ ನೂರಾರು ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.&lt;/p&gt;&lt;p&gt;&lt;strong&gt;ಇಲ್ಲಿದೆ ನೋಡಿ ವಿಡಿಯೋ&amp;nbsp;&lt;/strong&gt;&lt;/p&gt;View this post on Instagram&lt;p&gt;A post shared by Sanyam Garg | Online Coach (@sanyam_shiftstrong)&lt;/p&gt;]]></content:encoded>
            <category>news</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/hats-off-to-the-brave-woman-driving-an-auto-at-3-am-for-a-heroic-reason/articleshow-n75wm0n"/>
        </item>
        <item>
            <title><![CDATA[ವಿಶ್ವದ ಹಳೆಯ ದೈತ್ಯ ಆಮೆಗೀಗ 195 ವರ್ಷ: ಪ್ರಧಾನಿ ಮೋದಿಗೂ ಇದೆ ಕುತೂಹಲ ಲಿಂಕ್​- ಏನಿದು ವಿಷ್ಯ]]></title>
            <link>https://kannada.asianetnews.com/gallery/life/worlds-oldest-known-tortoise-still-alive-as-reports-of-death-revealed-as-hoax-suc-2b3ptwd</link>
            <guid isPermaLink="true">https://kannada.asianetnews.com/gallery/life/worlds-oldest-known-tortoise-still-alive-as-reports-of-death-revealed-as-hoax-suc-2b3ptwd</guid>
            <pubDate>Sat, 08 Aug 2026 17:54:38 +0530</pubDate>
            <description><![CDATA[&lt;p&gt;ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎನಿಸಿರುವ ಜೊನಾಥನ್ ಆಮೆಗೆ ಸುಮಾರು 195 ವರ್ಷ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸೀಶೆಲ್ಸ್ ಪ್ರವಾಸದ ವೇಳೆ ಇಂತಹದ್ದೇ ಆಮೆಯೊಂದನ್ನು ಭೇಟಿಯಾಗಿ ಆಹಾರ ನೀಡಿದ್ದರು. ಈ ಮೂಲಕ ವಿಶ್ವದ ಹಿರಿಯ ಆಮೆ ಮತ್ತು ಭಾರತದ ಪ್ರಧಾನಿ ನಡುವೆ ವಿಶೇಷ ನಂಟು ಬೆಸೆದುಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgmsp9wrfa2ye4nm335b9p4,imgname-tortise-1786191337788.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎನಿಸಿರುವ ಜೊನಾಥನ್ ಆಮೆಗೆ ಸುಮಾರು 195 ವರ್ಷ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸೀಶೆಲ್ಸ್ ಪ್ರವಾಸದ ವೇಳೆ ಇಂತಹದ್ದೇ ಆಮೆಯೊಂದನ್ನು ಭೇಟಿಯಾಗಿ ಆಹಾರ ನೀಡಿದ್ದರು. ಈ ಮೂಲಕ ವಿಶ್ವದ ಹಿರಿಯ ಆಮೆ ಮತ್ತು ಭಾರತದ ಪ್ರಧಾನಿ ನಡುವೆ ವಿಶೇಷ ನಂಟು ಬೆಸೆದುಕೊಂಡಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಆಮೆಗಳು 80 ರಿಂದ ಅಬ್ಬಬ್ಬಾ ಎಂದರೆ 150 ವರ್ಷಗಳು ಬದುಕುತ್ತವೆ. ಆದರೆ ವಿಶ್ವದ ಅತ್ಯಂತ ಹಿರಿಯ ಆಮೆಗೆ ಈಗ 195 ವರ್ಷ ವಯಸ್ಸಾಗಿದ್ದು, ಇದಿನ್ನೂ ಜೀವಂತವಾಗಿದೆ. ಕುತೂಹಲದ ವಿಷಯ ಏನೆಂದರೆ, ಈ ಆಮೆಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಒಂದು ಲಿಂಕ್​ ಇದೆ.&lt;/p&gt;&lt;img&gt;&lt;p&gt;ಹೌದು. ಈ ಆಮೆಯ ಹೆಸರು. ಜೊನಾಥನ್ (Jonathan). ಇದನ್ನು ವಿಶ್ವದ ಅತ್ಯಂತ ಹಳೆಯ ಜೀವಂತ ಭೂಪ್ರಾಣಿ ಎಂದು ಪರಿಗಣಿಸಲ್ಪಟ್ಟಿರುವ ದೈತ್ಯ ಆಮೆಯಾಗಿದೆ. 1832ರಲ್ಲಿ ಜನಿಸಿದೆ ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ಇದರ ವಯಸ್ಸು ಸುಮಾರು 195 ವರ್ಷಗಳು. ಇದು ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಸೇಂಟ್ ಹೆಲೆನಾ ದ್ವೀಪದ ಗವರ್ನರ್ ಅಧಿಕೃತ ನಿವಾಸದಲ್ಲಿ ವಾಸಿಸುತ್ತಿದೆ.&lt;/p&gt;&lt;img&gt;&lt;p&gt;ಇದನ್ನು ಕೆಲ ತಿಂಗಳ ಹಿಂದೆ ಸೀಶೆಲ್ಸ್&zwnj; ಪ್ರವಾಸದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿದ್ದರು. ಅಲ್ಲಿನ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಜತೆ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದರು. ಆಮೆಗೆ ಆಹಾರ ನೀಡಿದ್ದರು. ಇದೇ ವೇಳೆ ಭೇಟಿಯ ನೆನಪಿಗಾಗಿ ಸಸಿಯೊಂದನ್ನು ನೆಟ್ಟಿದ್ದರು.&lt;/p&gt;&lt;img&gt;&lt;p&gt;ಭಾರತ ಮತ್ತು ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಶೆಲ್ಸ್&zwnj; ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದರು. ಈ ವೇಳೆ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಜೋನಾಥನ್&zwnj; ಆಮೆ ಭೇಟಿ ಮಾಡಿ ಗಮನ ಸೆಳೆದಿದ್ದರು.&lt;/p&gt;&lt;img&gt;&lt;p&gt;ಈ ಆಮೆಯ ವಿಶೇಷತೆ ಎಂದರೆ ಇದನ್ನು 1882ರಲ್ಲಿ ಸೀಶೆಲ್ಸ್&zwnj;ನಿಂದ ಸೇಂಟ್ ಹೆಲೆನಾ ದ್ವೀಪಕ್ಕೆ ತರಲಾಯಿತು. ಆ ಹೊತ್ತಿಗೆ ಅದಕ್ಕೆ ಸುಮಾರು 50 ವರ್ಷ ವಯಸ್ಸಾಗಿತ್ತು. ಇದು ಬ್ರಿಟಿಷ್ ಸಾಮ್ರಾಜ್ಯದ ಅನೇಕ ರಾಜಮನೆತನದವರನ್ನು ಮತ್ತು ಪ್ರಮುಖ ವ್ಯಕ್ತಿಗಳನ್ನು ಕಂಡಿದೆ. ವಯಸ್ಸಾಗಿದ್ದರೂ ಇದು ಈಗಲೂ ಆರೋಗ್ಯವಾಗಿದ್ದು, ಹುಲ್ಲು ತಿನ್ನುವುದು ಮತ್ತು ಬಿಸಿಲಿನಲ್ಲಿ ಓಡಾಡುವುದನ್ನು ಆನಂದಿಸುತ್ತದೆ.&lt;/p&gt;&lt;img&gt;&lt;p&gt;ಈ ಹಿಂದೆ ಜೊನಾಥನ್&zwnj; ಆಮೆಯನ್ನು ಪಶುವೈದ್ಯ ಜೋ ಹಾಲಿನ್ಸ್&zwnj; ಅವರು ನೋಡಿಕೊಳ್ಳುತ್ತಿದ್ದರು. ಅವರ ಖಾತೆಯಿಂದ ಕಳೆದ ವರ್ಷ ಈ ಆಮೆ ಸಾವನ್ನಪ್ಪಿದೆ ಎನ್ನುವ ಸುದ್ದಿ ಸದ್ದು ಮಾಡಿದ್ದು, ಭಾರಿ ಕೋಲಾಹಲಕ್ಕೂ ಕಾರಣವಾಗಿತ್ತು. ಈ ವರದಿಯನ್ನು BBC, USA Today ಮತ್ತು Daily Mail ಸೇರಿದಂತೆ ಮಾಧ್ಯಮಗಳಲ್ಲಿ ಪ್ರಸಾರ ಕೂಡ ಆಗಿಬಿಟ್ಟಿತ್ತು. ಕೊನೆಗೆ ಹಾಲಿನ್ಸ್​ ಅವರು, ಇದು ಸುಳ್ಳು ಸುದ್ದಿ. ಆಮೆ ಜೀವಂತವಾಗಿದೆ, ಯಾರೋ ಕಿಡಿಗೇಡಿಗಳು ಈ ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದಿದ್ದರು.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/worlds-oldest-known-tortoise-still-alive-as-reports-of-death-revealed-as-hoax-suc-2b3ptwd"/>
        </item>
        <item>
            <title><![CDATA[1917ರಲ್ಲಿ ಬ್ರಿಟಿಷರಿಗೆ 35 ಸಾವಿರ ಸಾಲ: ಈಗ ಸಿಕ್ಕಿತು ದಾಖಲೆ- ಹಣ ವಾಪಸಿಗೆ ಮನವಿ; ಮುಂದಾಗಿದ್ದೇ ರೋಚಕ]]></title>
            <link>https://kannada.asianetnews.com/india-news/british-borrowed-rs-35000-over-100-years-ago-indian-family-demands-it-back-suc/articleshow-p7l98gb</link>
            <guid isPermaLink="true">https://kannada.asianetnews.com/india-news/british-borrowed-rs-35000-over-100-years-ago-indian-family-demands-it-back-suc/articleshow-p7l98gb</guid>
            <pubDate>Sat, 08 Aug 2026 17:29:48 +0530</pubDate>
            <description><![CDATA[ಮಧ್ಯಪ್ರದೇಶದ ಸೆಹೋರ್&zwnj;ನ ನಾಗರ್ ಸೇಠ್ ಕುಟುಂಬವು 109 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ದಾಖಲೆಯನ್ನು ಪತ್ತೆಹಚ್ಚಿದೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ ತಮ್ಮ ಪೂರ್ವಜರು ಬ್ರಿಟಿಷ್ ಸರ್ಕಾರಕ್ಕೆ ನೀಡಿದ್ದ 35,000 ರೂ. ಯುದ್ಧ ಸಾಲವನ್ನು ಮರುಪಾವತಿಸುವಂತೆ ಈ ದಾಖಲೆಯ ಆಧಾರದ ಮೇಲೆ ಕುಟುಂಬವು ಬ್ರಿಟಿಷರಲ್ಲಿ ಮನವಿ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzgkv4t64djr9e6h06vp6tg1,imgname-british-1786190336838.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೆಹೋರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಪ್ರಸಿದ್ಧ ನಾಗರ್ ಸೇಠ್ ಕುಟುಂಬಕ್ಕೆ ಸಂಬಂಧಿಸಿದ 109 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ ತಮ್ಮ ಪೂರ್ವಜರು ಬ್ರಿಟಿಷ್ ಸರ್ಕಾರಕ್ಕೆ 35,000 ರೂಪಾಯಿಗಳ ಯುದ್ಧ ಸಾಲವನ್ನು ನೀಡಿದ್ದರು ಎಂದು ಕುಟುಂಬ ಹೇಳಿಕೊಂಡಿದೆ. ಅದರ ದಾಖಲೆ ಈಗ ಸಿಕ್ಕಿರುವ ಹಿನ್ನೆಲೆಯಲ್ಲಿ, ಆ ಹಣವನ್ನು ವಾಪಸ್​ ನೀಡುವಂತೆ ಕುಟುಂಬವು ಬ್ರಿಟಿಷರಲ್ಲಿ ಮನವಿ ಸಲ್ಲಿಸಿದೆ!&lt;/p&gt;&lt;p&gt;ವಾಸ್ತವವಾಗಿ, ಕುಟುಂಬವು ಹಳೆಯ ದಾಖಲೆಗಳನ್ನು ಪರಿಶೀಲಿಸುವಾಗ, ವಿವೇಕ್ ರುಥಿಯಾ ಎನ್ನುವವರು 1917 ರ ಹಿಂದಿನ ಪ್ರಮುಖ ದಾಖಲೆಗಳನ್ನು ಕಂಡುಕೊಂಡರು. ಆ ಸಮಯದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ನೀಡಲಾದ ಯುದ್ಧ ಸಾಲವನ್ನು ಈ ದಾಖಲೆಗಳು ಉಲ್ಲೇಖಿಸುತ್ತವೆ. ಈ ದಾಖಲೆಗಳು ತಮ್ಮ ಹಕ್ಕನ್ನು ಬಲಪಡಿಸುತ್ತವೆ ಎಂದು ಕುಟುಂಬ ಹೇಳಿದೆ. ಮಾಹಿತಿಯ ಪ್ರಕಾರ, 1917 ರಲ್ಲಿ ಮೊದಲನೇ ಮಹಾಯುದ್ಧ ನಡೆಯುತ್ತಿತ್ತು. ಆ ಸಮಯದಲ್ಲಿ ಭಾರತ ಬ್ರಿಟಿಷ್ ಆಳ್ವಿಕೆಯಲ್ಲಿತ್ತು ಮತ್ತು ಹೆಚ್ಚಿನ ಸಂಖ್ಯೆಯ ಭಾರತೀಯ ಸೈನಿಕರು ಬ್ರಿಟಿಷ್ ಸೈನ್ಯದ ಜೊತೆಗೆ ಹೋರಾಡುತ್ತಿದ್ದರು. ಯುದ್ಧದ ಸಮಯದಲ್ಲಿ, ಸೈನಿಕರಿಗೆ ಆಹಾರ, ಶಸ್ತ್ರಾಸ್ತ್ರಗಳು, ಸಾರಿಗೆ ಮತ್ತು ಇತರ ವೆಚ್ಚಗಳನ್ನು ಒದಗಿಸಲು ಬ್ರಿಟಿಷ್ ಸರ್ಕಾರಕ್ಕೆ ದೊಡ್ಡ ಮೊತ್ತದ ಹಣದ ಅಗತ್ಯವಿತ್ತು. ಈ ಕಾರಣಕ್ಕಾಗಿ, ಸರ್ಕಾರವು ಭಾರತೀಯ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ಶ್ರೀಮಂತ ಕುಟುಂಬಗಳಿಂದ ಆರ್ಥಿಕ ಸಹಾಯವನ್ನು ಕೋರಿತು.&lt;/p&gt;&lt;h2&gt;&lt;strong&gt;ಸಕಾರಾತ್ಮಕ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;ರುಥಿಯಾ ಕುಟುಂಬದ ಪ್ರಕಾರ, ಅವರ ಪೂರ್ವಜ ಸೇಥ್ ಜುಮ್ಮಲಾಲ್ ಬ್ರಿಟಿಷ್ ಸರ್ಕಾರಕ್ಕೆ 35,000 ರೂಪಾಯಿಗಳನ್ನು ಯುದ್ಧ ಸಾಲವಾಗಿ ನೀಡಿದರು. ಆ ಸಮಯದಲ್ಲಿ ಈ ಮೊತ್ತವನ್ನು ಗಮನಾರ್ಹ ಮೊತ್ತವೆಂದು ಪರಿಗಣಿಸಲಾಗಿತ್ತು. ಇದು ಕೇವಲ ಆರ್ಥಿಕ ಸಹಾಯವಲ್ಲ, ಆದರೆ ಚಾಲ್ತಿಯಲ್ಲಿರುವ ಸಂದರ್ಭಗಳಲ್ಲಿ ಸರ್ಕಾರಕ್ಕೆ ನೀಡಲಾದ ಅಧಿಕೃತ ಸಾಲ ಎಂದು ಕುಟುಂಬವು ಹೇಳುತ್ತದೆ.&lt;/p&gt;&lt;p&gt;ದಾಖಲೆಗಳನ್ನು ಸ್ವೀಕರಿಸಿದ ನಂತರ, ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಸರ್ಕಾರವನ್ನು ಸಂಪರ್ಕಿಸಲಾಯಿತು ಎಂದು ಕುಟುಂಬದ ವಿನಯ್ ರುಥಿಯಾ ಹೇಳಿದ್ದಾರೆ. ಕುಟುಂಬದ ಪ್ರಕಾರ, ಬ್ರಿಟಿಷರು ಇದರ ಬಗ್ಗೆ ಯಾವುದೇ ಚಕಾರ ಎತ್ತಲಿಲ್ಲ, ಬದಲಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಿ, ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಬ್ರಿಟಿಷ್​ ಸರ್ಕಾರ ತಿಳಿಸಿರುವುದಾಗಿ ಕುಟುಂಬಸ್ಥರು ಹೇಳಿದ್ದು, ಇದು ಈ ಐತಿಹಾಸಿಕ ಪ್ರಕರಣದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬಹುದು ಎಂಬ ಭರವಸೆ ತಂದಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಈ ಪ್ರಕರಣ ಹೇಗೆ ಬೆಳಕಿಗೆ ಬಂದದ್ದು ಹೇಗೆ?&lt;/strong&gt;&lt;/h3&gt;&lt;p&gt;ವಿವೇಕ್ ರುಥಿಯಾ ಅವರ ಪ್ರಕಾರ, ಅವರ ಪೂರ್ವಜ ಸೇಥ್ ಜುಮ್ಮಲಾಲ್ 1937 ರಲ್ಲಿ ನಿಧನರಾದರು. ಅವರ ಮರಣದ ನಂತರ, ಬ್ರಿಟಿಷ್ ಸರ್ಕಾರಕ್ಕೆ ನೀಡಲಾದ ಯುದ್ಧ ಸಾಲಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಅವರ ಮಗ ಸೇಥ್ ಮನಕ್ ಚಂದ್ರ ರುಥಿಯಾ ಅವರೊಂದಿಗೆ ಸುರಕ್ಷಿತವಾಗಿ ಇವೆ. 2013 ರಲ್ಲಿ ಮನಕ್ ಚಂದ್ರ ರುಥಿಯಾ ಅವರ ಮರಣದ ನಂತರ ವಿವೇಕ್ ರುಥಿಯಾ ಈ ದಾಖಲೆಗಳನ್ನು ಕಂಡುಕೊಂಡರು. ಅವುಗಳನ್ನು ಹಲವು ವರ್ಷಗಳ ಕಾಲ ಮನೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಇತ್ತೀಚೆಗೆ, ಹಳೆಯ ವಿಷಯಗಳ ಬಗ್ಗೆ ಕುಟುಂಬ ಚರ್ಚೆಯ ಸಮಯದಲ್ಲಿ, ಈ ದಾಖಲೆಗಳನ್ನು ಮರುಪರಿಶೀಲಿಸಲಾಯಿತು, ಮತ್ತು ಈ ಐತಿಹಾಸಿಕ ವಿಷಯವು ಬೆಳಕಿಗೆ ಬಂದಿತು ಮತ್ತು ಬ್ರಿಟಿಷ್ ಸರ್ಕಾರವನ್ನು ಸಂಪರ್ಕಿಸಲಾಯಿತು.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/british-borrowed-rs-35000-over-100-years-ago-indian-family-demands-it-back-suc/articleshow-p7l98gb"/>
        </item>
        <item>
            <title><![CDATA[ಟಿಂಡರ್‍‌ನಲ್ಲಿ ಸ್ನೇಹ, ಬೆಡ್‌ರೂಮ್‌ನಲ್ಲಿ ವಿಡಿಯೋ.. 6 ಕೋಟಿ ರೂಪಾಯಿ ಲೂಟಿ ಹೊಡೆದ ಕಿಲಾಡಿ ಲೇಡಿ]]></title>
            <link>https://kannada.asianetnews.com/viral/up-woman-duped-men-of-rs-6-crore-in-honeytrap-case-gkn/articleshow-bhxvp5m</link>
            <guid isPermaLink="true">https://kannada.asianetnews.com/viral/up-woman-duped-men-of-rs-6-crore-in-honeytrap-case-gkn/articleshow-bhxvp5m</guid>
            <pubDate>Sat, 08 Aug 2026 17:05:44 +0530</pubDate>
            <description><![CDATA[ಪ್ರಯಾಗ್&zwnj;ರಾಜ್&zwnj;ನಲ್ಲಿ ಪಲ್ಲವಿ ಸಿಂಗ್ ರಜಪೂತ್ ನೇತೃತ್ವದ ಹನಿಟ್ರ್ಯಾಪ್ ಜಾಲವೊಂದು ಡೇಟಿಂಗ್ ಆ್ಯಪ್&zwnj;ಗಳ ಮೂಲಕ ಪುರುಷರನ್ನು ಬಲೆಗೆ ಬೀಳಿಸಿ, 6 ಕೋಟಿ ರೂ.ಗೂ ಅಧಿಕ ಹಣ ಲೂಟಿ ಮಾಡಿದೆ. ಹೈಕೋರ್ಟ್ ವಕೀಲರೊಬ್ಬರು ದೂರು ನೀಡಿದ ನಂತರ ಈ ಬ್ಲ್ಯಾಕ್&zwnj;ಮೇಲ್ ದಂಧೆ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzgj7svtcmvxteemgpg1hjg8,imgname-up-woman-duped-men-of-rs-6-crore-1786188654458.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರಯಾಗ್&zwnj;ರಾಜ್ (ಉತ್ತರ ಪ್ರದೇಶ): &lt;/strong&gt;ಡೇಟಿಂಗ್ ಆ್ಯಪ್&zwnj;ಗಳ ಮೂಲಕ ಪುರುಷರನ್ನು ಬಲೆಗೆ ಬೀಳಿಸಿ, ಅವರಿಂದ ಬರೋಬ್ಬರಿ 6 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಲೂಟಿ ಮಾಡಿರುವ ಭೀಕರ ಹನಿಟ್ರ್ಯಾಪ್ ಜಾಲವೊಂದು ಉತ್ತರ ಪ್ರದೇಶದ ಪ್ರಯಾಗ್&zwnj;ರಾಜ್&zwnj;ನಲ್ಲಿ ಬೆಳಕಿಗೆ ಬಂದಿದೆ. ಹೈಕೋರ್ಟ್ ವಕೀಲರೊಬ್ಬರು ಈ ಸಂಬಂಧ ದೂರು ನೀಡಿದ ನಂತರ ಈ ದಂಧೆಯ ಕರಾಳ ಮುಖ ಅನಾವರಣಗೊಂಡಿದೆ.&lt;/p&gt;&lt;p&gt;ಈ ಹನಿಟ್ರ್ಯಾಪ್ ಜಾಲದ ಮುಖ್ಯಸ್ಥೆಯನ್ನು ಪಲ್ಲವಿ ಸಿಂಗ್ ರಜಪೂತ್ ಎಂದು ಗುರುತಿಸಲಾಗಿದೆ. ಈಕೆ 'ಸ್ವೀಟಿ ತಿವಾರಿ' ಸೇರಿದಂತೆ ವಿವಿಧ ಹೆಸರುಗಳಲ್ಲಿ ಸೋಶಿಯಲ್ ಮೀಡಿಯಾ ಮತ್ತು ಟೀಂಡರ್ (Tinder) ಡೇಟಿಂಗ್ ಆ್ಯಪ್&zwnj;ನಲ್ಲಿ ಸಕ್ರಿಯಳಾಗಿದ್ದಳು. ಈಕೆಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸಾಥ್ ನೀಡುತ್ತಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ದಂಧೆಯ ಹಾದಿ ಹೀಗಿತ್ತು.&lt;/strong&gt;.&lt;/h2&gt;&lt;p&gt;ಮೊದಲು ಟೀಂಡರ್ ಅಥವಾ ಫೇಸ್&zwnj;ಬುಕ್ ಮೂಲಕ ಶ್ರೀಮಂತ ಪುರುಷರ ಜೊತೆ ಸ್ನೇಹ ಬೆಳೆಸುತ್ತಿದ್ದಳು. ಸ್ನೇಹ ಗಾಢವಾದ ನಂತರ ಅವರನ್ನು ಭೇಟಿಯಾಗುತ್ತಿದ್ದಳು. ಆ ಸಂದರ್ಭದಲ್ಲಿ ಪುರುಷರ ಜೊತೆಗಿನ ಆಪ್ತ ಕ್ಷಣಗಳನ್ನು ರಹಸ್ಯವಾಗಿ ಫೋಟೋ ಅಥವಾ ವಿಡಿಯೋ ಮಾಡಿಕೊಳ್ಳುತ್ತಿದ್ದಳು. ಈ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಪುರುಷರನ್ನು ಬ್ಲ್ಯಾಕ್&zwnj;ಮೇಲ್ ಮಾಡಲು ಶುರು ಮಾಡುತ್ತಿದ್ದಳು. ಒಂದು ವೇಳೆ ಹಣ ನೀಡದಿದ್ದರೆ ಅತ್ಯಾ*ರ ಅಥವಾ ಕೊಲೆ ಯತ್ನದಂತಹ ಗಂಭೀರ ಕೇಸ್&zwnj; ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು.&lt;/p&gt;&lt;h2&gt;&lt;strong&gt;5 ಮಂದಿ ಜೈಲು ಪಾಲು!&lt;/strong&gt;&lt;/h2&gt;&lt;p&gt;ದೂರಿನ ಪ್ರಕಾರ ಈಕೆಯ ಮಾತು ಕೇಳದ ಐವರು ಪುರುಷರು ಈಗಾಗಲೇ ಜೈಲು ಸೇರಿದ್ದಾರೆ. ಈಕೆ ನೀಡಿದ ಸುಳ್ಳು ದೂರಿನ ಆಧಾರದ ಮೇಲೆ ಪೊಲೀಸರು ಅವರನ್ನು ಬಂಧಿಸಿದ್ದರು. ಸಮಾಜದಲ್ಲಿ ಮರ್ಯಾದೆ ಹೋಗುತ್ತದೆ ಮತ್ತು ಜೈಲು ಶಿಕ್ಷೆಯಾಗುತ್ತದೆ ಎಂಬ ಭಯದಿಂದ ಅನೇಕರು ಈಕೆಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ. ಹೀಗೆ ಈಕೆ ಇದುವರೆಗೆ ಸುಮಾರು 6 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಸೂಲಿ ಮಾಡಿದ್ದಾಳೆ ಎನ್ನಲಾಗಿದೆ.&lt;/p&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ವೈರಲ್ ಆಗಿವೆ. ಒಂದು ಫೋಟೋದಲ್ಲಿ ಮಹಿಳೆಯೊಬ್ಬಳು ಬೆಡ್ ಮೇಲೆ ಹರಡಿರುವ ನೋಟಿನ ಕಂತೆಗಳ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಇನ್ನೊಂದು ಫೋಟೋದಲ್ಲಿ ಈಕೆ ಶಸ್ತ್ರಾಸ್ತ್ರ ಹಿಡಿದು ಪೋಸ್ ನೀಡಿದ್ದಾಳೆ. ಈ ಫೋಟೋಗಳು ತನಿಖೆಯ ಪ್ರಮುಖ ಸಾಕ್ಷ್ಯಗಳಾಗುವ ಸಾಧ್ಯತೆ ಇದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪಲ್ಲವಿ ಸಿಂಗ್ ಮತ್ತು ಆಕೆಯ ತಂಡದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆನ್&zwnj;ಲೈನ್ ಡೇಟಿಂಗ್ ಆ್ಯಪ್&zwnj;ಗಳನ್ನು ಬಳಸುವವರು ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/up-woman-duped-men-of-rs-6-crore-in-honeytrap-case-gkn/articleshow-bhxvp5m"/>
        </item>
        <item>
            <title><![CDATA[ಬೆಂಗಳೂರು-ಮೆಜೆಸ್ಟಿಕ್ ಬಳಿ ಯಶ್ ಹವಾ; ರಾಕಿಂಗ್ ಸ್ಟಾರ್ ನೋಡಲು ನೂರಾರು ಜನ ಫ್ಯಾನ್ಸ್ ಆಗಮನ!]]></title>
            <link>https://kannada.asianetnews.com/sandalwood/many-fans-arrived-near-bengaluru-mejestic-near-at-amb-mall-near-to-see-kannada-pan-india-star-yash/articleshow-xpe0bct</link>
            <guid isPermaLink="true">https://kannada.asianetnews.com/sandalwood/many-fans-arrived-near-bengaluru-mejestic-near-at-amb-mall-near-to-see-kannada-pan-india-star-yash/articleshow-xpe0bct</guid>
            <pubDate>Sat, 08 Aug 2026 16:50:13 +0530</pubDate>
            <description><![CDATA[&lt;p&gt;ಯಶ್ ಬರುತ್ತಿರೋ ಹಿನ್ನೆಲೆ ಮಾಲ್ ಹೊರಗಡೆ ಸೇರಿರೋ ಅಭಿಮಾನಿಗಳು 'ಯಶ್&zwnj;.. ಯಶ್&zwnj; ಎಂದು ಕನವರಿಸುತ್ತಿದ್ದಾರೆ. ಇನ್ನೇನು ಕೆಲವೇ ನಿಮಿಷದಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಕನ್ನಡದ ಸ್ಟಾರ್ ನಟ, ಕನ್ನಡ ಭಾಷೆಯ ಪ್ಯಾನ್ ವರ್ಲ್ಡ್&zwnj; ಸಿನಿಮಾ ಟಾಕ್ಸಿಕ್&zwnj;ನ ಟ್ರೇಲರ್ ಲಾಂಚ್&zwnj;ಗೆ ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಎಎಂಬಿ ಮಾಲ್ ಸಾಕ್ಷಿಯಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzghjeac903qt0gn22ef9k46,imgname-whatsapp-image-2026-08-07-at-4.37.54-pm--2--1786187954508.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Trailer Event-AMB Mall Bengaluru-Yash Fans Gathering Majestic: ಮೆಜೆಸ್ಟಿಕ್ ನ ಎಎಂಬಿ ಸಿನಿಮಾಸ್ ನಲ್ಲಿ ಸಿನಿಮಾ ಟ್ರೈಲರ್ ಲಾಂಚ್; ಬೆಂಗಳೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಹವಾ!&lt;/strong&gt;&lt;/p&gt;&lt;p&gt;ಹೌದು, ಕನ್ನಡದ ಮಣ್ಣಿನ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನೋಡಲು ಬೆಮಗಳೂರಿನ ಮೆಜೆಸ್ಟಿಕ್ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಕಾರಣ, ಇಂದು ಸಂಜೆ ಬೆಂಗಳೂರು-ಮೆಜೆಸ್ಟಿಕ್ ಬಳಿಯಲ್ಲಿರುವ ಎಎಂಬಿ ಮಾಲ್&zwnj;ನಲ್ಲಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆ ಈವೆಂಟ್ ನಡೆಯಲಿದೆ. ಸಾಯಂಕಾಲ 7 ಗಂಟೆ 1 ನಿಮಿಷಕ್ಕೆ ಈ ಬಿಗ್ ಈವೆಂಟ್ ನಡೆಯಲಿದೆ. ರಸ್ತೆ ಬದಿಯಲ್ಲಿ ಯಶ್&zwnj; ಅವರನ್ನು ನೋಡಲು ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದಾರೆ. ಈ ದೃಶ್ಯವನ್ನು ಯಶ್ ಅಭಿಮಾನಿಗಳು ಸೇರಿದಂತೆ ಕನ್ನಡಿಗರು ಸಂಭ್ರಮಿಸುತ್ತಿದ್ದಾರೆ.&lt;/p&gt;&lt;p&gt;ಟಾಕ್ಸಿಕ್ ಟ್ರೈಲರ್ ಲಾಂಚ್ ಈವೆಂಟ್&zwnj;ನಲ್ಲಿ ಇಡೀ 'ಟಾಕ್ಸಿಕ್' ಸಿನಿಮಾದ ತಂಡ ಭಾಗಿಯಾಗಲಿದೆ. ನಟ ಯಶ್, ನಿರ್ದೇಶಕಿ ಗೀತೂ ಮೋಹನ್&zwnj;ದಾಸ್, ನಟಿಯರಾದ ಕಿಯಾರ ಅಡ್ವಾನಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತಾ, ಹುಮಾ ಖುರೇಷಿ, ರುರ್ಮಿಣಿ ವಸಂತ್ ಹಾಗೂ ನಟರಾದ ವಿವೇಕ್ ಒಬೆರಾಯ್, ಸುದೇವ್ ನಾಯರ್ ಸೇರಿದಂತೆ ಹಲವು ಕಲಾವಿದರು ಹಾಗೂ ಟಾಕ್ಸಿಕ್ ಸಿನಿಮಾದ ನಿರ್ಮಾಣ, ನಿರ್ದೇಶನ ಸೇರಿದಂತೆ ಎಲ್ಲಾ ತಂತ್ರಜ್ಞರ ಟೀಮ್ ಭಾಗಿಯಾಗಲಿದೆ.&lt;/p&gt;&lt;p&gt;ಇಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭ ಆಗಲಿದೆ. 7 ಗಂಟೆಗೆ ಟ್ರೇಲರ್ ಲಾಂಚ್. ಈ ಬಹುಮುಖ್ಯ ಹಾಗೂ ಬಿಗ್ ಈವೆಂಟ್&zwnj;ಗೆ ಕನ್ನಡದ ಹಿರಿಯ ನಟ ಡಾ ಶಿವರಾಜ್&zwnj;ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಟಾಕ್ಸಿಕ್&zwnj; ಟ್ರೇಲರ್&zwnj; ಲಾಂಚ್&zwnj; ಈವೆಂಟ್&zwnj;ನ ಇಡೀ ಕಾರ್ಯಕ್ರಮವನ್ನು ಡ್ಯಾನಿಶ್ ಸೇಟ್ ನಿರೂಪಣೆ ಮಾಡಲಿದ್ದಾರೆ.&lt;/p&gt;&lt;p&gt;ಯಶ್ ಬರುತ್ತಿರೋ ಹಿನ್ನೆಲೆ ಮಾಲ್ ಹೊರಗಡೆ ಸೇರಿರೋ ಅಭಿಮಾನಿಗಳು 'ಯಶ್&zwnj;.. ಯಶ್&zwnj; ಎಂದು ಕನವರಿಸುತ್ತಿದ್ದಾರೆ. ಇನ್ನೇನು ಕೆಲವೇ ನಿಮಿಷದಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಕನ್ನಡದ ಸ್ಟಾರ್ ನಟ, ಕನ್ನಡ ಭಾಷೆಯ ಪ್ಯಾನ್ ವರ್ಲ್ಡ್&zwnj; ಸಿನಿಮಾ ಟಾಕ್ಸಿಕ್&zwnj;ನ ಟ್ರೇಲರ್ ಲಾಂಚ್&zwnj;ಗೆ ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಎಎಂಬಿ ಮಾಲ್ ಸಾಕ್ಷಿಯಾಗಲಿದೆ. ಇದು ಕನ್ನಡಿಗರ ಕನಸು, ಇದು ನನಸಾಗುತ್ತಿರುವ ಕನಸು ಎಂದು ಎಲ್ಲರ ಹೃದಯ ಹೇಳುತ್ತಿದೆ!&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/many-fans-arrived-near-bengaluru-mejestic-near-at-amb-mall-near-to-see-kannada-pan-india-star-yash/articleshow-xpe0bct"/>
        </item>
        <item>
            <title><![CDATA[ಇದು Gen Z ಡೇಟಿಂಗ್ ನಿಘಂಟು: ಪ್ರೀತಿಯ ಹೊಸ ಟ್ರೆಡಿಂಗ್ ಭಾಷೆ ನಿಮಗೆ ಗೊತ್ತೇ?]]></title>
            <link>https://kannada.asianetnews.com/gallery/viral/zen-g-dating-dictionary-do-you-know-zen-g-dating-words-meanings-gkn-xt9895c</link>
            <guid isPermaLink="true">https://kannada.asianetnews.com/gallery/viral/zen-g-dating-dictionary-do-you-know-zen-g-dating-words-meanings-gkn-xt9895c</guid>
            <pubDate>Sat, 08 Aug 2026 16:39:11 +0530</pubDate>
            <description><![CDATA[ಇಂದಿನ ಜೆನ್ ಜಿ ಕಾಲದಲ್ಲಿ ಪ್ರೀತಿ ಮತ್ತು ಸಂಬಂಧಗಳಿಗೆ 'ಸಿಚುವೇಷನ್&zwnj;ಶಿಪ್', 'ಘೋಸ್ಟಿಂಗ್' ಮುಂತಾದ ಹೊಸ ಪದಗಳು ಬಂದಿವೆ. ಈ ಲೇಖನವು ಇಂತಹ ಆಧುನಿಕ ಡೇಟಿಂಗ್ ಪದಗಳ ಅರ್ಥವನ್ನು ವಿವರಿಸುತ್ತದೆ ಮತ್ತು ಯಾವುದೇ ಸಂಬಂಧದಲ್ಲಿ ನಂಬಿಕೆ ಮತ್ತು ಗೌರವದ ಮಹತ್ವವನ್ನು ಒತ್ತಿಹೇಳುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzgg06fvmx5ge22hsm7jwx5e,imgname-zen-g-dating-dictionary-1786186308091.png" type="image/jpeg" height="390" width="690"/>
            <content:encoded><![CDATA[ಇಂದಿನ ಜೆನ್ ಜಿ ಕಾಲದಲ್ಲಿ ಪ್ರೀತಿ ಮತ್ತು ಸಂಬಂಧಗಳಿಗೆ 'ಸಿಚುವೇಷನ್&zwnj;ಶಿಪ್', 'ಘೋಸ್ಟಿಂಗ್' ಮುಂತಾದ ಹೊಸ ಪದಗಳು ಬಂದಿವೆ. ಈ ಲೇಖನವು ಇಂತಹ ಆಧುನಿಕ ಡೇಟಿಂಗ್ ಪದಗಳ ಅರ್ಥವನ್ನು ವಿವರಿಸುತ್ತದೆ ಮತ್ತು ಯಾವುದೇ ಸಂಬಂಧದಲ್ಲಿ ನಂಬಿಕೆ ಮತ್ತು ಗೌರವದ ಮಹತ್ವವನ್ನು ಒತ್ತಿಹೇಳುತ್ತದೆ.&lt;img&gt;&lt;p&gt;ಕಾಲ ಬದಲಾದಂತೆ ಪ್ರೀತಿ ಮಾಡುವ ರೀತಿ, ಅದನ್ನು ವ್ಯಕ್ತಪಡಿಸುವ ಶೈಲಿ ಎಲ್ಲವೂ ಬದಲಾಗಿದೆ. ಒಂದು ಕಾಲದಲ್ಲಿ ಪ್ರೀತಿ ಅಂದರೆ ಪತ್ರಗಳು, ಕಣ್ಣಲ್ಲೇ ಮಾತನಾಡುವುದು ಅಥವಾ ಮನೆಯವರ ಒಪ್ಪಿಗೆಗಾಗಿ ಕಾಯುವುದು ಇತ್ತು. ಆದರೆ ಇಂದಿನ 'ಜೆನ್ ಜಿ' (Gen Z) ಕಾಲದಲ್ಲಿ ಡೇಟಿಂಗ್ ಎಂಬುದು ದೊಡ್ಡ ಡಿಕ್ಷನರಿಯನ್ನೇ ಸೃಷ್ಟಿಸಿದೆ. ಸೋಶಿಯಲ್ ಮೀಡಿಯಾ ಮತ್ತು ಡೇಟಿಂಗ್ ಆ್ಯಪ್&zwnj;ಗಳ ಹಾವಳಿಯಿಂದಾಗಿ ಪ್ರೀತಿ ಮತ್ತು ಸಂಬಂಧಗಳಿಗೆ ಹೊಸ ಹೊಸ ಹೆಸರುಗಳು ಬಂದಿವೆ.&lt;/p&gt;&lt;p&gt;ನಿಮ್ಮ ಲೈಫ್&zwnj;ನಲ್ಲಿ ಯಾರಾದರೂ ಇದ್ದಾರೆಯೇ? ಅಥವಾ ನೀವು ಯಾರನ್ನಾದರೂ ಇಷ್ಟಪಡುತ್ತಿದ್ದೀರಾ? ಹಾಗಿದ್ದರೆ ಈ ಡೇಟಿಂಗ್ ಪದಗಳ ಅರ್ಥ ಮತ್ತು ಅವುಗಳ ಹಿಂದಿನ ಗುಟ್ಟು ನಿಮಗೆ ತಿಳಿದಿರಲೇಬೇಕು.&lt;/p&gt;&lt;img&gt;&lt;p&gt;ಇಬ್ಬರು ವ್ಯಕ್ತಿಗಳು ಡೇಟಿಂಗ್ ಮಾಡುತ್ತಿರುತ್ತಾರೆ. ಒಟ್ಟಿಗೆ ಸುತ್ತುತ್ತಾರೆ. ಆದರೆ ನಾವಿಬ್ಬರು ಪ್ರಿಯಕರ-ಪ್ರಿಯತಮೆಯೇ? ಎಂದು ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲ! ಇಂತಹ ಯಾವುದೇ ಕಮಿಟ್&zwnj;ಮೆಂಟ್ ಇಲ್ಲದ ಸ್ಪಷ್ಟತೆ ಇಲ್ಲದ ಸಂಬಂಧವನ್ನು 'ಸಿಚುವೇಷನ್&zwnj;ಶಿಪ್' ಎನ್ನಲಾಗುತ್ತದೆ. ಇದು ಸ್ನೇಹಕ್ಕಿಂತ ಹೆಚ್ಚು ಆದರೆ ಪ್ರೀತಿಗಿಂತ ಕಡಿಮೆ ಎನ್ನಬಹುದು.&lt;/p&gt;&lt;img&gt;&lt;p&gt;ಕ್ರೀಡೆಯಲ್ಲಿ ಹೇಗೆ ಆಟಗಾರರನ್ನು 'ಬೆಂಚ್' ಮೇಲೆ ಕುರಿಸುತ್ತಾರೋ ಹಾಗೆಯೇ ಡೇಟಿಂಗ್&zwnj;ನಲ್ಲಿ ಕೂಡ! ಒಬ್ಬ ವ್ಯಕ್ತಿಗೆ ನಿಮ್ಮ ಮೇಲೆ ಅಷ್ಟಾಗಿ ಆಸಕ್ತಿ ಇರುವುದಿಲ್ಲ, ಆದರೆ ನಿಮ್ಮನ್ನು ಬಿಟ್ಟು ಕೊಡಲು ಇಷ್ಟವಿರುವುದಿಲ್ಲ. ಅವರು ಬೇರೆ ಯಾರನ್ನಾದರೂ ಹುಡುಕುತ್ತಿರುತ್ತಾರೆ, ಅಲ್ಲಿಯವರೆಗೆ ನಿಮ್ಮನ್ನು 'ಬ್ಯಾಕಪ್' ಆಗಿ ಇಟ್ಟುಕೊಳ್ಳುವುದೇ 'ಬೆಂಚಿಂಗ್'.&lt;/p&gt;&lt;img&gt;&lt;p&gt;ಬ್ರೆಡ್ ತುಣುಕುಗಳನ್ನು ಹಾಕಿ ಪಕ್ಷಿಗಳನ್ನು ಸೆಳೆಯುವಂತೆ, ಇಲ್ಲಿ ಕೇವಲ ಅಲ್ಪ ಅಟೆನ್ಷನ್ ನೀಡಲಾಗುತ್ತದೆ. ಆಗೊಮ್ಮೆ ಈಗೊಮ್ಮೆ ಹಾಯ್ ಎನ್ನುವುದು, ಸ್ಟೋರಿಗೆ ರಿಯಾಕ್ಟ್ ಮಾಡುವುದು ಆದರೆ ಡೇಟಿಂಗ್ ಅಥವಾ ಕಮಿಟ್&zwnj;ಮೆಂಟ್ ಬಗ್ಗೆ ಎಂದಿಗೂ ಮಾತನಾಡದಿರುವುದಕ್ಕೆ 'ಬ್ರೆಡ್&zwnj;ಕ್ರಂಬಿಂಗ್' ಎನ್ನುತ್ತಾರೆ.&lt;/p&gt;&lt;img&gt;&lt;p&gt;ಇದು ಇಂದಿನ ಡೇಟಿಂಗ್ ಜಗತ್ತಿನಲ್ಲಿ ಅತ್ಯಂತ ಸಾಮಾನ್ಯ ಮತ್ತು ನೋವಿನ ಸಂಗತಿ. ನಿನ್ನೆವರೆಗೂ ಚೆನ್ನಾಗಿ ಮಾತನಾಡುತ್ತಿದ್ದವರು, ಇಂದು ಫೋನ್ ಇಲ್ಲ, ಮೆಸೇಜ್ ಇಲ್ಲ, ಬ್ಲಾಕ್ ಕೂಡ ಮಾಡಿರಲ್ಲ ಆದರೆ ಯಾವುದೇ ರಿಪ್ಲೈ ಕೊಡಲ್ಲ. ಹೀಗೆ ಯಾವುದೇ ವಿವರಣೆ ನೀಡದೆ ಸಂಬಂಧದಿಂದ ಹಠಾತ್ತನೆ ಮರೆಯಾಗುವುದೇ 'ಘೋಸ್ಟಿಂಗ್'.&lt;/p&gt;&lt;img&gt;&lt;p&gt;ಸಂಬಂಧದ ಆರಂಭದಲ್ಲೇ ಅತಿಯಾದ ಪ್ರಶಂಸೆ, ಗಂಟೆಗಟ್ಟಲೆ ಮಾತು, ದುಬಾರಿ ಉಡುಗೊರೆಗಳನ್ನು ನೀಡಿ ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕುವುದನ್ನು ಲವ್ ಬಾಂಬಿಂಗ್ ಎನ್ನಲಾಗುತ್ತದೆ. ಇದು ಕೆಲವೊಮ್ಮೆ ಪ್ರೀತಿಯಂತೆ ಕಂಡರೂ, ವಾಸ್ತವದಲ್ಲಿ ಎದುರಿಗಿರುವ ವ್ಯಕ್ತಿಯನ್ನು ಕಂಟ್ರೋಲ್ ಮಾಡಲು ಬಳಸುವ ತಂತ್ರವೂ ಆಗಿರಬಹುದು.&lt;/p&gt;&lt;img&gt;&lt;ul&gt; &lt;li&gt;ಸಾಫ್ಟ್ ಲಾಂಚ್: ನಿಮ್ಮ ಪಾರ್ಟ್&zwnj;ನರ್ ಫೋಟೋ ಹಾಕುವಾಗ ಅವರ ಮುಖ ತೋರಿಸದೆ ಕೇವಲ ಕೈಗಳು, ಕಾಫಿ ಕಪ್&zwnj; ಅಥವಾ ಅವರ ನೆರಳು ತೋರಿಸಿ &quot;ಯಾರೋ ವಿಶೇಷ ವ್ಯಕ್ತಿ ಇದ್ದಾರೆ&quot; ಎಂಬ ಸುಳಿವು ನೀಡುವುದು.&lt;/li&gt; &lt;li&gt;ಹಾರ್ಡ್ ಲಾಂಚ್: ಪಾರ್ಟ್&zwnj;ನರ್ ಜೊತೆಗಿನ ಫೋಟೋ ಹಾಕಿ ಅಧಿಕೃತವಾಗಿ ಪ್ರೀತಿಯನ್ನು ಅನೌನ್ಸ್ ಮಾಡುವುದು.&lt;/li&gt;&lt;/ul&gt;&lt;img&gt;&lt;p&gt;ನಿಮ್ಮನ್ನು ಘೋಸ್ಟ್ ಮಾಡಿ (ಮಾಯವಾಗಿ) ಹೋದ ವ್ಯಕ್ತಿ ಹಲವು ತಿಂಗಳುಗಳ ನಂತರ ಏನೂ ತಿಳಿಯದವನಂತೆ ಅಕಸ್ಮಾತ್ತಾಗಿ &quot;ಹಾಯ್, ಹೇಗಿದ್ದೀಯಾ?&quot; ಎಂದು ಮೆಸೇಜ್ ಮಾಡಿದರೆ ಅದನ್ನು 'ಜಾಂಬೀಯಿಂಗ್' ಎನ್ನಲಾಗುತ್ತದೆ. ಸತ್ತವನು ಎದ್ದು ಬಂದಂತೆ ಎಂದರ್ಥ!&lt;/p&gt;&lt;img&gt;&lt;p&gt;ಪಾರ್ಟ್&zwnj;ನರ್ ನಿಮ್ಮನ್ನು ಪ್ರೀತಿಸುತ್ತಾರೆ. ಆದರೆ ತನ್ನ ಫ್ರೆಂಡ್ಸ್&zwnj;ಗೆ ತೋರಿಸಲ್ಲ, ಫ್ಯಾಮಿಲಿಗೆ ಹೇಳಲ್ಲ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಕೂಡ ಎಲ್ಲಿಯೂ ನಿಮ್ಮ ಬಗ್ಗೆ ಹೇಳಿಕೊಳ್ಳಲ್ಲ. ನಿಮ್ಮನ್ನು ತನ್ನ ಪ್ರಪಂಚದಿಂದ ಸೀಕ್ರೆಟ್ ಆಗಿ ಇಡುವುದೇ 'ಪಾಕೆಟಿಂಗ್'.&lt;/p&gt;&lt;img&gt;&lt;ul&gt; &lt;li&gt;ರೆಡ್ ಫ್ಲ್ಯಾಗ್ಸ್ (ಅಪಾಯದ ಸಂಕೇತಗಳು): ಅತಿಯಾದ ಅನುಮಾನ, ನಿಮ್ಮ ಮೇಲೆ ನಿಯಂತ್ರಣ ಹೇರುವುದು, ಸುಳ್ಳು ಹೇಳುವುದು, ನಿಮ್ಮ ವೈಯಕ್ತಿಕ ಸ್ಪೇಸ್ ನೀಡದಿರುವುದು.&lt;/li&gt; &lt;li&gt;ಗ್ರೀನ್ ಫ್ಲ್ಯಾಗ್ಸ್ (ಒಳ್ಳೆಯ ಸಂಕೇತಗಳು): ಪರಸ್ಪರ ಗೌರವ, ನೇರವಾದ ಮಾತುಕತೆ (Communication), ನಂಬಿಕೆ, ಮತ್ತು ನಿಮ್ಮ ಯಶಸ್ಸನ್ನು ಕಂಡು ಸಂತೋಷ ಪಡುವುದು.&lt;/li&gt;&lt;/ul&gt;&lt;img&gt;&lt;p&gt;ಹೆಸರುಗಳು ಹೊಸದಾಗಿರಬಹುದು, ಟ್ರೆಂಡ್&zwnj;ಗಳು ಬದಲಾಗಬಹುದು. ಆದರೆ ಪ್ರೀತಿ ಎಂಬ ಸುಂದರ ಬಾಂಧವ್ಯಕ್ಕೆ ಎಂದಿಗೂ ಅಡಿಪಾಯವಾಗಿರುವುದು ನಂಬಿಕೆ! ಗೌರವ ಮತ್ತು ಪ್ರಾಮಾಣಿಕತೆ ಮಾತ್ರ. ಸೋಶಿಯಲ್ ಮೀಡಿಯಾದಲ್ಲಿ ತೋರಿಸುವ ಸುಳ್ಳು ಪ್ರೀತಿಗಿಂತ, ನಿಜ ಜೀವನದಲ್ಲಿ ಇಬ್ಬರೂ ಎಷ್ಟು ಪರಸ್ಪರ ಗೌರವಿಸುತ್ತೀರಿ ಎಂಬುದೇ ಮುಖ್ಯ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/viral/zen-g-dating-dictionary-do-you-know-zen-g-dating-words-meanings-gkn-xt9895c"/>
        </item>
        <item>
            <title><![CDATA[ಬೆಂಗಳೂರಿನ 29 ಸ್ಥಗಳಲ್ಲಿದ್ದ ಅಕ್ರಮ ಬಾಂಗ್ಲಾದೇಶಿಗಳ ಮೇಲೆ ಪೊಲೀಸ್ ದಾಳಿ, 1909 ಮಂದಿ ವಶ]]></title>
            <link>https://kannada.asianetnews.com/state/bengaluru-police-crack-down-on-illegal-bangladeshi-nationals-1909-detained/articleshow-9vayp24</link>
            <guid isPermaLink="true">https://kannada.asianetnews.com/state/bengaluru-police-crack-down-on-illegal-bangladeshi-nationals-1909-detained/articleshow-9vayp24</guid>
            <pubDate>Sat, 08 Aug 2026 16:23:28 +0530</pubDate>
            <description><![CDATA[&lt;p&gt;ಬೆಂಗಳೂರಿನ 29 ಕಡೆ ನೆಲೆಸಿದ್ದ ಅಕ್ರಮ ಬಾಂಗ್ಲಾದೇಶಿಗಳ ವಿರುದ್ದ ಪೊಲೀಸರು ದಾಳಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಬಳಿ ಈ ದಾಳಿ ನಡೆದಿದ್ದು ಬರೋಬ್ಬರಿ 1909 ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgg2dd8bzx3j526p35y17xt,imgname-illegal-bangladeshi-1786186380711.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಆ.08) ಪಶ್ಚಿಮ ಬಂಗಾಳ, ಅಸ್ಸಾಂ ಗಡಿಗಳಲ್ಲಿ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆ ಇದೀಗ ಅಕ್ರಮ ಬಾಂಗ್ಲಾದೇಶಿಗಳು ದಕ್ಷಿಣ ಭಾರತದತ್ತ ಮುಖ ಮಾಡುತ್ತಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಅಕ್ರಮ ಬಾಂಗ್ಲಾದೇಶಿಗಳು ನೆಲೆಸಿದ್ದಾರೆ ಅನ್ನೋ ಆರೋಪಗಳು ಹಲವು ಬಾರಿ ಸಾಬೀತಾಗಿದೆ. ಇದೀಗ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 23 ವಿಶೇಷ ಪೊಲೀಸ್ ತಂಡಗಳು 29 ಕಡೆ ದಾಳಿ ಮಾಡಿದೆ. ಈ ವೇಳೆ ಬರೋಬ್ಬರಿ 1909 ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;ಮುಂಜಾನೆ ನಾಲ್ಕು ಗಂಟೆಗೆ ಪೊಲೀಸ್ ದಾಳಿ&lt;/h2&gt;&lt;p&gt;ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾದೇಶ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹೈಕೋರ್ಟ್ ಕೂಡ ಈ ಕುರಿತು ಸರ್ಕಾರವನ್ನು ಪ್ರಶ್ನಿಸಿದೆ. ಇದರ ಬೆನ್ನಲ್ಲೇ ಎಲೆಕ್ಟ್ರಾನಿಕ್ ಸಿಟಿ ಉವ ವಿಭಾಗದ ಡಿಸಿಪಿ ಎಮ್.ನಾರಾಯಣ್ ನೇತೃತ್ವದಲ್ಲಿ ವಲಸಿಗರ ಕಾರ್ಯಪಡೆ ರಚನೆ ಮಾಡಲಾಗಿತ್ತು. 23 ವಿಶೇಷ ಪೊಲೀಸ್ ತಂಡಗಳು ಅಕ್ರಮ ಬಾಂಗ್ಲಾ ವಲಸಿಗರ ವಿರುದ್ದಕಾರ್ಯಾಚರಣೆ ನಡೆಸಲಾಗಿದೆ. ಇಂದು ಮುಂಜಾನೆ 4 ಗಂಟಗೆ ಏಕಕಾಲದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.&lt;/p&gt;&lt;p&gt;29 ಸ್ಥಳಗಳಲ್ಲಿದ್ದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ 295 ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಮೂಲಕ 1909 ಅಕ್ರಮ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ 15 ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಎಂದು ದೃಢವಾಗಿದೆ.&lt;/p&gt;&lt;h2&gt;ಬಂಗಾಳ, ಅಸ್ಸಾಂ ಮೂಲದ ನಕಲಿ ಆಧಾರ್ ಕಾರ್ಡ್&lt;/h2&gt;&lt;p&gt;ಅಕ್ರಮ ವಲಸಿಗರ ಕೈಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ವಿಳಾಸದ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿಗಳು ಪತ್ತೆಯಾಗಿದೆ. ಹೀಗಾಗಿ ಪೊಲೀಸರು 1894 ಅಕ್ರಮ ವಲಸಿಗರ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತರ ವೀಸಾ, ಪಾಸ್ ಪೋರ್ಟ್, ಮತ್ತು ರಾಷ್ಟೀಯತೆ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ದೃಢಪಟ್ಟಿರುವ 15 ಮಂದಿ ಬಾಂಗ್ಲಾ ದೇಶದ ಬಾಗೇರಹತ್ ನ ಖುಲ್ನಾ ಜಿಲ್ಲೆಯವರು. ಇವರು ಅಕ್ರಮವಾಗಿ ಭಾರತ ಗಡಿ ನುಸುಳಿ ಬಂದು ಇಲ್ಲಿನ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಭಾರತದಲ್ಲಿ ಕೆಲ ಸ್ಥಳೀಯರು ಇವರಿಗೆ ನೆರವು ನೀಡಿರುವ ಕುರಿತು ತನಿಖೆ ನಡೆಯುತ್ತಿದೆ.&lt;/p&gt;&lt;p&gt;ಕೆಲವರು ನೈತಿಕ ಪೊಲೀಸ್&zwnj;ಗಿರಿ ಮಾಡುತ್ತಾರೆ. ಬಾಂಗ್ಲಾ ದೇಶಿಯರ ಶೇಡ್ ಮೇಲೆ ದಾಳಿ ಮಾಡುತ್ತಾರೆ. ಅವರನ್ನ ಹೆದರಿಸಿ ಬೆದರಿಸಿ ಕೆಲವರು ಹಣ ಹಾಕಿಸಿಕೊಳ್ತಾರೆ.ಸುಲಿಗೆ ಮಾಡುತ್ತಿದ್ದಾರೆ. ನಿಮಗೆ ಬಾಂಗ್ಲಾ ದೇಶಿಯರು ಅಂತ ತಿಳಿದರೆತಕ್ಷಣವೇ ಪೊಲೀರಿಗೆ ಮಾಹಿತಿ ನೀಡಬೇಕು. ನೈತಿಕ ಪೊಲೀಸ್ ಗಿರಿ ನಡೆಸಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹೇಳಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/bengaluru-police-crack-down-on-illegal-bangladeshi-nationals-1909-detained/articleshow-9vayp24"/>
        </item>
        <item>
            <title><![CDATA[Bengaluru: ಹೆಂಡಿತಿ ರೀಲ್ಸ್ ನೋಡುತ್ತಾಳೆ ಅಂತ ಕೊಲೆಗೈದು ಮೂಟೆ ಕಟ್ಟಿದ ಗಂಡ; ಆರೋಪಿ ಸಿಕ್ಕಿದ್ದೇ ರೋಚಕ!]]></title>
            <link>https://kannada.asianetnews.com/news/husband-murders-wife-and-stuffs-her-body-in-bedsheet-because-she-kept-watching-reels-in-bengaluru-at-kumbalgodu-sns/articleshow-5ligmny</link>
            <guid isPermaLink="true">https://kannada.asianetnews.com/news/husband-murders-wife-and-stuffs-her-body-in-bedsheet-because-she-kept-watching-reels-in-bengaluru-at-kumbalgodu-sns/articleshow-5ligmny</guid>
            <pubDate>Sat, 08 Aug 2026 16:13:58 +0530</pubDate>
            <description><![CDATA[&lt;p&gt;ತನಿಖೆ ಸಂದರ್ಭದಲ್ಲಿ ಆರೋಪಿ ಕೊಲೆಯ ಹಿಂದಿನ ಕಾರಣ ರಿವೀಲ್ ಮಾಡಿದ್ದು, 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದನಂತೆ. ಆದರೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಬಳಿಕ ಆಕೆ ಗಂಡನ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಳು ಅಂತ ಹೇಳಿದ್ದನಂತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgfcc6gbdgjrrgbjtj8wj5x,imgname-bengaluru-police-1786185658576.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಪತಿಯೇ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆಗೈದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕುಂಬಳಗೋಡು ಪೊಲೀಸರು ಆರೋಪಿ ಧೀರಜ್ ಕುಮಾರ್&zwnj;ನನ್ನು ಬಂಧಿಸಿದ್ದು, ತನಿಖೆಯ ಸಂದರ್ಭದಲ್ಲಿ ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿದೆ. ಬಿಹಾರದ ಮೂಲಕ 20 ವರ್ಷದ ರೀಮಾ ಕುಮಾರಿ ಮೃತ ದುರ್ದೈವಿಯಾಗಿದ್ದು, ಆಕೆಯ ಮೃತದೇಹ ಜುಲೈ 29ರಂದು ಬೆಡ್ ಶೀಟ್ ನಲ್ಲಿ ಮೂಟೆಕಟ್ಟಿದ ಸ್ಥಿತಿಯಲ್ಲಿ ಮನೆಯ ಬಾತ್&zwnj;ರೂಮ್&zwnj;ನಲ್ಲಿ ಪತ್ತೆಯಾಗಿತ್ತು.&lt;/p&gt;&lt;h2&gt;ಪ್ರೀತಿ ಮದುವೆಯಾಗಿದ್ದ ದಂಪತಿ&lt;/h2&gt;&lt;p&gt;ಈ ಬಗ್ಗೆ ಮಾತನಾಡಿರುವ ನೈಋತ್ಯ ವಿಭಾಗ ಡಿಸಿಪಿ ಅನಿತಾ ಹದ್ದಣ್ಣವರ್, ಕುಂಬಳಗೋಡು ಗೇರುಪಾಳ್ಯದಲ್ಲಿ 29ರಂದು ಮಹಿಳೆ ಮೃತದೇಹ ಸಿಕ್ಕಿತ್ತು. ಮನೆಯೊಂದ ನಾಲ್ಕನೇ ಮಹಡಿಯಲ್ಲಿ ದಂಪತಿ ವಾಸವಿದ್ದರು. ಪತ್ನಿ ಕೊಂದು ಪತಿ ಎಸ್ಕೇಪ್ ಆಗಿದ್ದ. ಧೀರಜ್ ಮತ್ತು ರೀಮಾ 10 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬಿಹಾರದಿಂದ ಪ್ರೀತಿಸಿ ಬೆಂಗಳೂರಿಗೆ ಬಂದು ಮದುವೆ ಮಾಡಿಕೊಂಡು ವಾಸವಿದ್ದರು. ಧೀರಜ್ ಕೂಲಿ ಕೆಲಸ ಮಾಡಿಕೊಂಡಿದ್ದ, ಆಕೆ ಕೂಡ ಕೂಲಿ ಕೆಲಸ ಮಾಡುತ್ತಿದ್ದರು. ಗಂಡನೇ ಹೆಂಡತಿಯನ್ನು ಕೊಲೆ ಮಾಡಿ ಪರಾರಿ ಆಗಿದ್ದ. ಒಂದು ತಂಡ ರಚನೆ ಮಾಡಿ ಬಿಹಾರಕ್ಕೆ ಕಳುಹಿಸಿಕೊಡಲಾಗಿತ್ತು. ಮದುವೆ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು. ಕೊಲೆ ದಿನ ಕೂಡ ಗಲಾಟೆ ಆಗಿದೆ, ಈ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದರು.&lt;/p&gt;&lt;p&gt;&lt;img&gt;&lt;/p&gt;&lt;h2&gt;ಆರೋಪಿ ಬಂಧಿಸಿದ್ದೇ ರೋಚಕ!&lt;/h2&gt;&lt;p&gt;ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ತೆರಳಿದ್ದ ಪೊಲೀಸರಿಗೆ ದೊಡ್ಡ ಸವಾಲು ಎದುರಾಗಿತ್ತು. ಆರೋಪಿ ಬಿಹಾರದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಅವಿತು ಕೊಂಡಿದ್ದನಂತೆ. ಅಲ್ಲಿಗೆ ನೇರ ನೇರ ಪೊಲೀಸರು ಹೋಗೋದಕ್ಕೆ ಸಾಧ್ಯವಾಗುತ್ತಿರಲಿಲ್ಲವಂತೆ. ಪೊಲೀಸರು ನೇರ ತೆರಳಿ ಕಾರ್ಯಾಚರಣೆ ನಡೆಸಲು ನಕ್ಸಲರು ದಾಳಿ ಮಾಡುವ ಸಾಧ್ಯತೆ ಇತ್ತಂತೆ. ಹೀಗಾಗಿ ಬಿಹಾರ ಪೊಲೀಸರ ಸಹಾಯ ಪಡೆದುಕೊಂಡಿದ್ದ ಬೆಂಗಳೂರು ಕುಂಬಳಗೋಡು ಪೊಲೀಸರು, ಬಿಹಾರದ ನಕ್ಸಲ್ ಪೀಡಿತ ಪ್ರದೇಶ ಕೊಥಿಯ ಎಂಬ ಪ್ರದೇಶದಲ್ಲಿ ಪೂರ್ತಿ ವೆಪನ್ ಗಳ ಸಮೇತ ತೆರಳಿ ಆರೋಪಿಯನ್ನು ಬಂಧಿಸಿದ್ದರಂತೆ.&lt;/p&gt;&lt;h2&gt;ಜಗಳ ಶುರುವಾಗಿದ್ದು ಎಲ್ಲಿ?&lt;/h2&gt;&lt;p&gt;ಪ್ರೀತಿ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದ ದಂಪತಿ ಕೆಲಸ ಸಮಯ ಸಂತೋಷದಿಂದಲೇ ಸಂಸಾರ ನಡೆಸಿದ್ದರಂತೆ. ಆದರೆ ಕೆಲವು ದಿನಗಳ ಬಳಿಕ ರೀಮಾ ಬಿಡುವಿನ ಸಮಯ ಸಿಕ್ಕರೆ ಸಾಕು ರೀಲ್ಸ್ ನೋಡಿಕೊಂಡು ಕಾಲ ಕಳೆಯುತ್ತಿದ್ದಳಂತೆ. ಆ ಬಳಿಕ ಮನೆಯಲ್ಲಿ ಸರಿಯಾದ ಸಮಯಕ್ಕೆ ಅಡುಗೆ ಮಾಡದಿರೋದು, ಮನೆಯ ಎಲ್ಲಾ ಕೆಲಸ ಬಾಕಿ ಉಳಿಯುತಿತ್ತಂತೆ. ಇದರೊಂದಿಗೆ ದಂಪತಿ ನಡುವೆ ಜಗಳ ಶುರುವಾಗಿತ್ತಂತೆ. ರೀಲ್ಸ್ ನೋಡುದು ಕಡಿಮೆ ಮಾಡಿ ಕೆಲಸ ಕಡೆ ಗಮನಕೊಡಲು ಧೀರಜ್ ಹೇಳ್ತಿದ್ದನಂತೆ. ಆದರೆ ರೀಮಾ ವರ್ತನೆಯಲ್ಲಿ ಯಾವುದೇ ಬದಲಾವಣೆ ಬಂದಿರಲಿಲ್ಲವಂತೆ. ಡೆಕ್ಕನ್ ಹೆರಾಲ್ಡ್ ವರದಿ ಮಾಡಿರುವಂತೆ, ಕೊಲೆ ನಡೆದ ಜುಲೈ 25ರಂದು ಕೂಡ, ಕೆಲಸಕ್ಕೆ ಹೋಗಿ ವಾಪಸ್ ಬಂದಿದ್ದ ಧೀರಜ್ ಮನೆಯಲ್ಲಿ ಅಡುಗೆ ಮಾಡದಿರೋದನ್ನು ನೋಡಿ, ರೀಮಾ ಜೊತೆ ಜಗಳ ಶುರು ಮಾಡಿದ್ದನಂತೆ. ಈ ವೇಳೆ ಕೋಪದಲ್ಲಿ ಆರೋಪಿ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಆ ಬಳಿಕ ಮೃತದೇಹವನ್ನು ಮನೆಯಲ್ಲಿದ್ದ ಹಾಸಿಗೆಯಲ್ಲಿ ಮೂಟೆ ಕಟ್ಟಿ, ಮನೆಗೆ ಬೀಗ ಹಾಕಿ ಬಿಹಾರಕ್ಕೆ ಎಸ್ಕೇಪ್ ಆಗಿದ್ದ ಎಂದು ಆರೋಪಿಸಲಾಗಿದೆ.&lt;/p&gt;]]></content:encoded>
            <category>news</category>
            <dc:creator>Sumanth SN</dc:creator>
            <atom:link href="https://kannada.asianetnews.com/news/husband-murders-wife-and-stuffs-her-body-in-bedsheet-because-she-kept-watching-reels-in-bengaluru-at-kumbalgodu-sns/articleshow-5ligmny"/>
        </item>
        <item>
            <title><![CDATA[ಉದ್ಯೋಗಿಗಳಿಗೆ Unhappy Leave ಘೋಷಣೆ.. IT ಕಂಪನಿಗಳಲ್ಲಿ ಹೊಸ ಸಂಚಲನ..!]]></title>
            <link>https://kannada.asianetnews.com/viral/unhappy-leave-announced-in-china-good-news-for-it-employee-gkn/articleshow-sv7lvh7</link>
            <guid isPermaLink="true">https://kannada.asianetnews.com/viral/unhappy-leave-announced-in-china-good-news-for-it-employee-gkn/articleshow-sv7lvh7</guid>
            <pubDate>Sat, 08 Aug 2026 15:52:08 +0530</pubDate>
            <description><![CDATA[&lt;p&gt;ಚೀನಾದ ಈ ಪಾಲಿಸಿಯನ್ನು ಭಾರತೀಯ ಕಂಪನಿಗಳಲ್ಲಿ ಅಳವಡಿಸಲು ಸಾಧ್ಯವೇ? ಉದ್ಯೋಗಿಗಳು ಬೇಸರಗೊಂಡ ನಂತರ ರಜೆ ನೀಡುವುದಕ್ಕಿಂತ, ಅವರು ಬೇಸರಗೊಳ್ಳದಂತಹ (Burnout) ಉತ್ತಮ ಕೆಲಸದ ವಾತಾವರಣ ನಿರ್ಮಿಸುವುದು ಹೆಚ್ಚು ಮುಖ್ಯವಲ್ಲವೇ? ಎಂದು ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಪ್ರಶ್ನೆ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzge9qakr9et4mp108sbdh80,imgname-unhappy-leave-1786184523091.png" type="image/jpeg" height="390" width="690"/>
            <content:encoded><![CDATA[&lt;p&gt;ಉದ್ಯೋಗಿಗಳ ಕೆಲಸದ ಒತ್ತಡ, ಮಾನಸಿಕ ಆರೋಗ್ಯ ಮತ್ತು ವರ್ಕ್-ಲೈಫ್ ಬ್ಯಾಲೆನ್ಸ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಚೀನಾದ ರೀಟೇಲ್ ಕಂಪನಿಯೊಂದು ಜಾರಿಗೆ ತಂದಿರುವ ವಿಚಿತ್ರ ಹಾಗೂ ವಿಶಿಷ್ಟ ರಜೆ ಪಾಲಿಸಿಯೊಂದು ಇಡೀ ಜಗತ್ತಿನ ಗಮನ ಸೆಳೆದಿದೆ. ಆ ಕಂಪನಿ ನೀಡುತ್ತಿರುವುದು 'ಅನ್&zwnj;ಹ್ಯಾಪಿ ಲೀವ್' (Unhappy Leave)! ಹೌದು, ಉದ್ಯೋಗಿಗಳಿಗೆ ಮಾನಸಿಕವಾಗಿ ಕೆಲಸ ಮಾಡಲು ಮೂಡ್ ಇಲ್ಲದ ದಿನ ಅಥವಾ ಬೇಸರದಲ್ಲಿದ್ದಾಗ ಈ ರಜೆಯನ್ನು ಬಳಸಿಕೊಳ್ಳಬಹುದು.&lt;/p&gt;&lt;h2&gt;&lt;strong&gt;ಏನಿದು 'ಅನ್&zwnj;ಹ್ಯಾಪಿ ಲೀವ್' ಪಾಲಿಸಿ?&lt;/strong&gt;&lt;/h2&gt;&lt;p&gt;ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಪಾಂಗ್ ಡಾಂಗ್ ಲೈ (Pang Dong Lai) ಎಂಬ ರೀಟೇಲ್ ಸಂಸ್ಥೆ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಉದ್ಯೋಗಿಗಳು ವರ್ಷಕ್ಕೆ 10 ದಿನಗಳವರೆಗೆ ಈ 'ಅನ್&zwnj;ಹ್ಯಾಪಿ ಲೀವ್' ಪಡೆಯಬಹುದು. ಉದ್ಯೋಗಿಗೆ ಆ ದಿನ ಕೆಲಸಕ್ಕೆ ಬರಲು ಮನಸ್ಸಿಲ್ಲದಿದ್ದರೆ ಅಥವಾ ಮನಸ್ಸು ಸರಿ ಇಲ್ಲದಿದ್ದರೆ ರಜೆ ಹಾಕಬಹುದು. ವಿಶೇಷವೆಂದರೆ ಉದ್ಯೋಗಿ ಕೇಳುವ ಈ ರಜೆಯನ್ನು ಮ್ಯಾನೇಜರ್&zwnj;ಗಳು ಅಥವಾ ಬಾಸ್&zwnj;ಗಳು ತಿರಸ್ಕರಿಸುವಂತಿಲ್ಲ. ರಜೆ ನಿರಾಕರಿಸುವುದು ಆ ಕಂಪನಿಯಲ್ಲಿ ಶಿಕ್ಷಾರ್ಹ ಅಪರಾಧ!&lt;/p&gt;&lt;h2&gt;&lt;strong&gt;ಹರ್ಷ್ ಗೋಯೆಂಕಾ ಪೋಸ್ಟ್ ವೈರಲ್&lt;/strong&gt;&lt;/h2&gt;&lt;p&gt;ಭಾರತದ ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಅವರು ಸಾಮಾಜಿಕ ಜಾಲತಾಣ 'X' ನಲ್ಲಿ ಈ ಬಗ್ಗೆ ಪೋಸ್ಟ್ ಹಾಕುವ ಮೂಲಕ ಚರ್ಚೆಯನ್ನು ಮತ್ತಷ್ಟು ಕಾವೇರಿಸಿದ್ದಾರೆ. ಈ ಪಾಲಿಸಿಯನ್ನು ಉಲ್ಲೇಖಿಸಿರುವ ಅವರು ಎರಡು ಮುಖ್ಯ ಪ್ರಶ್ನೆಗಳನ್ನು ಕೇಳಿದ್ದಾರೆ. ಭಾರತದಲ್ಲಿ ಇದು ಸಾಧ್ಯವೇ? ಚೀನಾದ ಈ ಪಾಲಿಸಿಯನ್ನು ಭಾರತೀಯ ಕಂಪನಿಗಳಲ್ಲಿ ಅಳವಡಿಸಲು ಸಾಧ್ಯವೇ? ಉದ್ಯೋಗಿಗಳು ಬೇಸರಗೊಂಡ ನಂತರ ರಜೆ ನೀಡುವುದಕ್ಕಿಂತ, ಅವರು ಬೇಸರಗೊಳ್ಳದಂತಹ (Burnout) ಉತ್ತಮ ಕೆಲಸದ ವಾತಾವರಣ ನಿರ್ಮಿಸುವುದು ಹೆಚ್ಚು ಮುಖ್ಯವಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?&lt;/strong&gt;&lt;/h2&gt;&lt;p&gt;ಗೋಯೆಂಕಾ ಅವರ ಪೋಸ್ಟ್&zwnj;ಗೆ ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದು ಅತ್ಯುತ್ತಮ ನಿರ್ಧಾರ, ಭಾರತದ ಐಟಿ ಕಂಪನಿಗಳಲ್ಲೂ ಇಂತಹ ನಿಯಮ ಬರಬೇಕು ಎನ್ನುತ್ತಿದ್ದರೆ, ಇನ್ನು ಕೆಲವರು ರಜೆ ನೀಡುವುದಕ್ಕಿಂತ ಮೊದಲು ಕೆಲಸದ ಅವಧಿ (Working Hours) ಕಡಿಮೆ ಮಾಡಿ ಮತ್ತು ಸಂಬಳ ಹೆಚ್ಚಿಸಿ, ಆಗ ಯಾರೂ ಅನ್&zwnj;ಹ್ಯಾಪಿ ಆಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಕಂಪನಿಯ ಹಿನ್ನೆಲೆ&lt;/strong&gt;&lt;/h2&gt;&lt;p&gt;1995ರಲ್ಲಿ ಯು ಡಾಂಗ್ಲಾಯ್ ಎಂಬುವವರಿಂದ ಸ್ಥಾಪಿಸಲ್ಪಟ್ಟ 'ಪಾಂಗ್ ಡಾಂಗ್ ಲೈ' ಸಂಸ್ಥೆಯು ಉದ್ಯೋಗಿ ಸ್ನೇಹಿ ನಿಯಮಗಳಿಗೆ ಹೆಸರುವಾಸಿ. ಉದ್ಯೋಗಿಗಳು ಕೆಲಸದ ಜೊತೆಗೆ ಜೀವನವನ್ನು ಎಂಜಾಯ್ ಮಾಡಬೇಕು ಎಂಬುದು ಈ ಸಂಸ್ಥೆಯ ಮೂಲ ಮಂತ್ರವಾಗಿದೆ. ಒಟ್ಟಿನಲ್ಲಿ 'ಅನ್&zwnj;ಹ್ಯಾಪಿ ಲೀವ್' ಎಂಬ ಪರಿಕಲ್ಪನೆಯು ಕೇವಲ ರಜೆಯ ಬಗ್ಗೆ ಅಲ್ಲದೆ, ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗಿಗಳ ಭಾವನೆಗಳಿಗೆ ಮತ್ತು ಮಾನಸಿಕ ಆರೋಗ್ಯಕ್ಕೆ ಎಷ್ಟು ಮಹತ್ವ ನೀಡಲಾಗುತ್ತಿದೆ ಎಂಬ ಹೊಸ ದೃಷ್ಟಿಕೋನವನ್ನು ತೆರೆದಿಟ್ಟಿದೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/unhappy-leave-announced-in-china-good-news-for-it-employee-gkn/articleshow-sv7lvh7"/>
        </item>
        <item>
            <title><![CDATA[ಮಧ್ಯಾಹ್ನ 30 ನಿಮಿಷ ನಿದ್ದೆ ಬೇಕು, ಸಂದರ್ಶನದಲ್ಲಿ Gen-Z ಬೇಡಿಕೆ ಕೇಳಿ ಕಂಪನಿ ಸಿಇಒ ಮಾಡಿದ್ದೇನು?]]></title>
            <link>https://kannada.asianetnews.com/viral/gen-z-demands-30-minute-afternoon-nap-during-interview-founder-takes-big-step/articleshow-mt679eu</link>
            <guid isPermaLink="true">https://kannada.asianetnews.com/viral/gen-z-demands-30-minute-afternoon-nap-during-interview-founder-takes-big-step/articleshow-mt679eu</guid>
            <pubDate>Sat, 08 Aug 2026 15:50:44 +0530</pubDate>
            <description><![CDATA[&lt;p&gt;ಕಂಪನಿ ಸಂಸ್ಥಾಪಕ ಸಂದರ್ಶನ ನಡೆಸಿದ್ದರು. ಈ ವೇಳೆ ಜೆನ್&zwnj;ಝೀ ಅಭ್ಯರ್ಥಿಯ ಡಿಮ್ಯಾಂಡ್ ಮೋಡಿ ಸಂಸ್ಥಾಪಕನೇ ಬೆಚ್ಚಿ ಬಿದ್ದಿದ್ದಾರೆ. ಸಂದರ್ಶನದಲ್ಲಿ ಆಯ್ಕೆಯಾಗುತ್ತಿದ್ದಂತೆ ಜೆನ್&zwnj;ಝಿ ಮುಂದಿಟ್ಟ ಡಿಮ್ಯಾಂಡ್ ಏನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzge70x8g4y63w51zs4m6p1b,imgname-gen-z-wants-30-minute-afternoon-nap-at-work-1786184434600.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.08) &lt;/strong&gt;ಜೆನ್&zwnj;ಜಿ ಯುವ ಸಮೂಹಗ ವರ್ಕಿಂಗ್ ಸ್ಟೈಲ್, ಅವರ ಗುರಿ, ಆಯ್ಕೆಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ವಿಶೇಷವಾಗಿ ಕಂಪನಿಗಳಲ್ಲಿ ಜೆನ್&zwnj;ಝಿ ಉದ್ಯೋಗ ನಿರ್ವಹಿಸುತ್ತಿರುವ ರೀತಿಗಳ ಕುರಿತು ಚರ್ಚೆಯಾಗುತ್ತಿದೆ. ಇದರ ನಡುವೆ ಕಂಪನಿ ಸಂಸ್ಥಾಪಕ ತನ್ನ ಕಂಪನಿಗೆ ನಡೆದ ಉದ್ಯೋಗ ನೇಮಕಾತಿ ಸಂದರ್ಶನದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನದಲ್ಲಿ ಜೆನ್&zwnj;ಝಿ ಮುಂದಿಟ್ಟ ಡಿಮ್ಯಾಂಡ್ ನೋಡಿ ಸಂಸ್ಥಾಪಕನೆ ಬೆಚ್ಚಿ ಬಿದಿದ್ದಾರೆ. ಸಂದರ್ಶನದಲ್ಲಿ ಬಹುತೇಕ ಆಯ್ಕೆ ಖಚಿತ ಎಂದಾಗಲೇ ಜೆನ್&zwnj;ಝಿ ಪ್ರಮುಖ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾನೆ.&lt;/p&gt;&lt;h2&gt;ನನಗೆ 30 ನಿಮಿಷ ಕಡ್ಡಾಯ...&lt;/h2&gt;&lt;p&gt;ಖಾಸಗಿ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ನಿತಿನ್ ವರ್ಮಾ ತಮ್ಮ ಕಂಪನಿ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಸೋಶಿಯಲ್ ಮೀಡಿಯಾ ಸೇರಿದಂತೆ ಕೆಲ ಸೈಟ್ ಮೂಲಕವೂ ಹೇಳಿಕೊಂಡಿದ್ದರು. ಸಂದರ್ಶನ ದಿನ ಅನುಭವಿಗಳು, ಫ್ರೆಶರ್ಸ್ ಸೇರಿದಂತೆ ಹಲವರು ಆಗಮಿಸಿದ್ದರು. ನೇಮಕಾತಿಗೆ ಸಂದರ್ಶನ ನಡೆದಿತ್ತು. ಒಂದೆರಡು ಸುತ್ತಿನ ಸಂದರ್ಶನ ಇದಾಗಿತ್ತು. ಅಂತಿಮ ಹಂತದಲ್ಲಿ ಕಂಪನಿ ಸಂಸ್ಥಾಪಕ ಹಾಗೂ ಸಿಇಒ ನಿತಿನ್ ವರ್ಮಾ ಕುಳಿತಿದ್ದರು. ಆರಂಭಿಕ ಸುತ್ತು ಪಾಸ್ ಆದ ಬಳಿಕ ನಿತಿನ್ ವರ್ಮಾ ಜೊತೆಗೆ ಅಂತಿಮ ಹಂತದ ಸಂದರ್ಶನವಿತ್ತು. ಈ ವೇಳೆ ಜೆನ್&zwnj;ಜಿ ಯುವಕನೊಬ್ಬ ತನಗೆ ಪ್ರತಿ ದಿನ ಊಟದ ಬಳಿಕ 30 ನಿಮಿಷ ನಿದ್ದೆ ಮಾಡಬೇಕು. ಇದು ಕಡ್ಡಾಯ. ಎಂದಿದ್ದಾನೆ.&lt;/p&gt;&lt;h2&gt;ಉತ್ತಮ ಕೆಲಸಕ್ಕೆ ನಿದ್ದೆ ಅನಿವಾರ್ಯ&lt;/h2&gt;&lt;p&gt;ನನ್ನ ಕೆಲಸ ಉತ್ತಮಪಡಿಸಲು, ಪ್ರಾಡಕ್ಟಿವಿಟಿ ಹೆಚ್ಚಿಸಲು ಪ್ರತಿ ದಿನ ಮಧ್ಯಾಹ್ನ ಬಳಿಕ 30 ನಿಮಿಷ ನಿದ್ದೆ ಮಾಡಬೇಕು. ಇದರಿಂದ ನಾನು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನನ್ನ ಉತ್ಸಾಹ ಹೆಚ್ಚಿರುತ್ತದೆ ಎಂದಿದ್ದಾನೆ.&lt;/p&gt;&lt;h2&gt;ಸಂಸ್ಥಾಪಕ ಮಾಡಿದ್ದೇನು?&lt;/h2&gt;&lt;p&gt;ಇದು ಜೋಕ್ ಅಲ್ಲ, ಜೆನ್&zwnj;ಝಿ ಯುವಕನ ಬೇಡಿಕೆ ಎಂದು ನಿತಿನ್ ವರ್ಮಾ ಹೇಳಿಕೊಂಡಿದ್ದಾರೆ. ಆತನ ಬೇಡಿಕೆ ನನ್ನನ್ನು ಗಂಭೀರವಾಗಿ ಯೋಚಿಸಲು ಪ್ರೇರೇಪಿಸಿತು. ಯುವಕನ ಬೇಡಿಕೆಯಲ್ಲಿ ತಪ್ಪೇನಿದೆ? ಕಾರ್ಪೋರೇಟ್ ಜಗತ್ತಿನ ಮಧ್ಯಾಹ್ನ 3 ಗಂಟೆಯ ಮೀಟಿಂಗ್&zwnj;ನಲ್ಲಿ ಬಹುತೇಕರು ತೂಕಡಿಸುತ್ತಲೇ ಇರುತ್ತಾರೆ. ಹಲವರು ಮರೆಮಾಚುತ್ತಾರೆ. ನಿದ್ದೆಗಣ್ಣಿನಲ್ಲೇ ಮೀಟಿಂಗ್ ಕೇಳಿಸಿಕೊಳ್ಳುತ್ತಾರೆ. ಆದರೆ ಜೆನ್&zwnj;ಜಡಿ ಯುವಕ ಧೈರ್ಯವಾಗಿ, ಪ್ರಮಾಣಿಕತೆಯಿಂದ ಹೇಳಿಕೊಂಡಿದ್ದ. ಆತನ ಪ್ರಮಾಣಿಕತೆಯನ್ನು ನಾನು ಗೌರವಿಸಿದೆ ಎಂದು ನಿತಿನ್ ವರ್ಮಾ ಹೇಳಿದ್ದಾನೆ.&lt;/p&gt;&lt;h2&gt;ತಕ್ಕ ಸಮಯಕ್ಕೆ ಯಾವುದೇ ಸಮಸ್ಯ ಇಲ್ಲದೆ ಕೆಲಸ ಮುಗಿದರೆ ಸಾಕು&lt;/h2&gt;&lt;p&gt;ಮಧ್ಯಾಹ್ನ ಸ್ವಲ್ಪ ಹೊತ್ತು ನಿದ್ದೆ ದೇಹಕ್ಕೆ ಹಾಗೂ ಮನಸ್ಸಿಗೆ ಉತ್ತಮ. ಆತನಿಗೆ, ನೀನು ನಿದ್ದೆ ಮಾಡು, ಹೇಗೆ ಬೇಕಾದರು ಕೆಲಸ ಮಾಡು, ನನಗೆ ಡೆಡ್&zwnj;ಲೈನ್ ಒಳಗೆ ಕೆಲಸ ಮುಗಿಯಬೇಕು. ಮಾಡಿದ ಕೆಲಸದಲ್ಲಿ ತಪ್ಪುಗಳು, ಸಮಸ್ಸೆಗಳು ಇರಬಾರದು. ನಿರೀಕ್ಷಿತ ಫಲಿತಾಂಶ ನೀಡಿದರೆ ನೀನು ಎಷ್ಟು ಗಂಟೆ ಕೆಲಸ ಮಾಡುತ್ತಿದ್ದಿಯಾ ಅನ್ನೋದು ನಾನು ಲೆಕ್ಕ ಹಾಕುವುದಿಲ್ಲ. ಒಂದು ವೇಳೆ ಕೆಲಸ ಮುಗಿಯದಿದ್ದರೆ, ಆಗದಿದ್ದರೆ, ಜಗತ್ತಿನ ಯಾವ ನಿದ್ದೆಯೂ ನಿನ್ನನ್ನು ಉಳಿಸುವುದಿಲ್ಲ ಎಂದು ಸ್ಪಷ್ಟವಾಗಿ ಆತನಿಗೆ ಹೇಳಿದೆ ಎಂದು ನಿತಿನ್ ವರ್ಮಾ ಹೇಳಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/gen-z-demands-30-minute-afternoon-nap-during-interview-founder-takes-big-step/articleshow-mt679eu"/>
        </item>
        <item>
            <title><![CDATA[BMW ಬೈಕ್‌ನಲ್ಲಿ ಬಂದ Gen-Z ಉಬರ್ ರೈಡರ್.. ಲಕ್ಷಾಂತರ ಬೆಲೆಯ ಬೈಕ್‌ನಲ್ಲಿ ಟ್ಯಾಕ್ಸಿ ಓಡಿಸಲು ಕೊಟ್ಟ ಕಾರಣ ಅಚ್ಚರಿಯಾಗಿದೆ..]]></title>
            <link>https://kannada.asianetnews.com/viral/uber-rider-arrives-on-a-bmw-bike-reason-is-here-gkn/articleshow-ykr7i5g</link>
            <guid isPermaLink="true">https://kannada.asianetnews.com/viral/uber-rider-arrives-on-a-bmw-bike-reason-is-here-gkn/articleshow-ykr7i5g</guid>
            <pubDate>Sat, 08 Aug 2026 15:06:42 +0530</pubDate>
            <description><![CDATA[&lt;p&gt;ಜೀವನದ ದೊಡ್ಡ ಪಾಠಗಳು ಅಥವಾ ಸಂದೇಶಗಳು ಯಾವಾಗಲೂ ದಪ್ಪ ದಪ್ಪ ಪುಸ್ತಕಗಳಿಂದ ಅಥವಾ ಮೋಟಿವೇಷನಲ್ ಸ್ಪೀಕರ್&zwnj;ಗಳಿಂದಲೇ ಬರಬೇಕೆಂದಿಲ್ಲ. ಕೆಲವೊಮ್ಮೆ ನಾವು ಅನಿರೀಕ್ಷಿತವಾಗಿ ಭೇಟಿಯಾಗುವ ಅಪರಿಚಿತ ವ್ಯಕ್ತಿಗಳು ಕೂಡ ಪಾಠ ಕಲಿಸುತ್ತಾರೆ. ಮುಂಬೈನ ಉದ್ಯಮಿ ಆಶಿಶ್ ಜೈನ್ ಅವರಿಗೆ ಇತ್ತೀಚೆಗೆ ಇಂತಹದ್ದೇ ಒಂದು ಅಪರೂಪದ ಅನುಭವವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgbj4vsymqk3wqjry2x939r,imgname-bmw-bike-uber-1786181653369.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಮಹಾರಾಷ್ಟ್ರ): &lt;/strong&gt;ಜೀವನದ ದೊಡ್ಡ ಪಾಠಗಳು ಅಥವಾ ಸಂದೇಶಗಳು ಯಾವಾಗಲೂ ದಪ್ಪ ದಪ್ಪ ಪುಸ್ತಕಗಳಿಂದ ಅಥವಾ ಮೋಟಿವೇಷನಲ್ ಸ್ಪೀಕರ್&zwnj;ಗಳಿಂದಲೇ ಬರಬೇಕೆಂದಿಲ್ಲ. ಕೆಲವೊಮ್ಮೆ ಅನಿರೀಕ್ಷಿತವಾಗಿ ಭೇಟಿಯಾಗುವ ಅಪರಿಚಿತ ವ್ಯಕ್ತಿಗಳು ಕೂಡ ಅದ್ಭುತ ಪಾಠವನ್ನು ಕಲಿಸುತ್ತಾರೆ. ಮುಂಬೈನ ಉದ್ಯಮಿ ಆಶಿಶ್ ಜೈನ್ ಅವರಿಗೆ ಇತ್ತೀಚೆಗೆ ಇಂತಹದ್ದೇ ಒಂದು ಅಪರೂಪದ ಅನುಭವವಾಗಿದೆ.&lt;/p&gt;&lt;h2&gt;&lt;strong&gt;ಸ್ಟೋರಿ ಏನು?&lt;/strong&gt;&lt;/h2&gt;&lt;p&gt;ಪ್ರಖ್ಯಾತ ಉದ್ಯಮಿ ಮತ್ತು ಸ್ಟಾರ್ಟ್&zwnj;ಅಪ್ ಸಂಸ್ಥಾಪಕ ಆಶಿಶ್ ಜೈನ್ ಅವರು ರಾತ್ರಿ 8:25ರ ಸುಮಾರಿಗೆ ತಮ್ಮ ಕಚೇರಿಯಿಂದ ಗೆಸ್ಟ್ ಹೌಸ್&zwnj;ಗೆ ಹೋಗಲು ಉಬರ್ ಬೈಕ್ ಬುಕ್ ಮಾಡಿದ್ದರು. ರೈಡ್ ಕನ್ಫರ್ಮ್ ಆಗಿ ಚಾಲಕ ಸ್ಥಳಕ್ಕೆ ಬಂದಾಗ ಆಶಿಶ್ ಅವರಿಗೆ ತಮ್ಮ ಕಣ್ಣನ್ನೇ ನಂಬಲು ಸಾಧ್ಯವಾಗಲಿಲ್ಲ. ಏಕೆಂದರೆ ಆ ಯುವಕ ಸಾಮಾನ್ಯ ಬೈಕ್&zwnj;ನಲ್ಲಿ ಬಂದಿರಲಿಲ್ಲ, ಬದಲಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಐಷಾರಾಮಿ&lt;/p&gt;&lt;h2&gt;&lt;strong&gt;ಕುತೂಹಲದಿಂದ ಪ್ರಶ್ನೆ&lt;/strong&gt;&lt;/h2&gt;&lt;p&gt;ಇಷ್ಟು ದುಬಾರಿ ಬೈಕ್&zwnj;ನಲ್ಲಿ ಉಬರ್ ಓಡಿಸುತ್ತಿರುವುದನ್ನು ಕಂಡ ಆಶಿಶ್ ಅವರ ಕುತೂಹಲ ಹೆಚ್ಚಾಯಿತು. ಅವರು ಆ ಯುವಕನ ಬಳಿ, ಭಾಯ್, ಇಷ್ಟು ದುಬಾರಿ ಬೈಕ್ ಇಟ್ಟುಕೊಂಡು ನೀನು ಉಬರ್ ಯಾಕೆ ಓಡಿಸುತ್ತಿದ್ದೀಯಾ? ಎಂದು ಕೇಳಿದರು. ಆಗ ಆ ಯುವಕ ಹೆಲ್ಮೆಟ್ ತೆಗೆದು ನಗುತ್ತಾ ನೀಡಿದ ಉತ್ತರ ಆಶಿಶ್ ಅವರಿಗೆ ಮಾತ್ರವಲ್ಲ, ಇಡೀ ಇಂಟರ್ನೆಟ್ ಲೋಕಕ್ಕೆ ಸ್ಫೂರ್ತಿಯಾಗಿದೆ. ಆ ಯುವಕ ಇಂಜಿನಿಯರಿಂಗ್ ಪದವೀಧರ. ಆತ ಈಗಾಗಲೇ ಕೆಲವು ಸ್ವಂತ ಉದ್ಯಮಗಳನ್ನು (Businesses) ನಡೆಸುತ್ತಿದ್ದಾನೆ. ಕೆಲವು ಉದ್ಯಮಗಳಲ್ಲಿ ಲಾಭ ಗಳಿಸಿದರೆ, ಇನ್ನು ಕೆಲವು ವಿಫಲವಾಗಿ ಅನುಭವ ನೀಡಿದ್ದವು. ಆ ಸಂಭಾವನೆಯಿಂದಲೇ ಆತ ಈ ಬಿಎಂಡಬ್ಲ್ಯು ಬೈಕ್ ಖರೀದಿಸಿದ್ದಾನೆ. ಸದ್ಯದಲ್ಲೇ ಉನ್ನತ ವ್ಯಾಸಂಗಕ್ಕಾಗಿ (Masters) ಹೋಗಲು ಸಿದ್ಧತೆ ನಡೆಸುತ್ತಿರುವ ಆತನಿಗೆ ಇದು ಮೊದಲ ಉಬರ್ ರೈಡ್ ಆಗಿತ್ತು.&lt;/p&gt;&lt;p&gt;ಆ ಯುವಕ ಉಬರ್ ಓಡಿಸಲು ಕಾರಣ ಹಣದ ಕೊರತೆಯಲ್ಲ! ಬದಲಾಗಿ ಸಮಾಜದ ವಿವಿಧ ವರ್ಗದ ಜನರನ್ನು ಭೇಟಿಯಾಗುವುದು, ಅವರ ಜೊತೆ ಮಾತನಾಡುವುದು ಮತ್ತು ಜನರ ವಿಭಿನ್ನ ಆಲೋಚನಾ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದು ಆತನ ಮುಖ್ಯ ಗುರಿಯಾಗಿತ್ತು. ಈ ಅನುಭವವನ್ನು ಆಶಿಶ್ ಜೈನ್ ಅವರು ಲಿಂಕ್ಡ್&zwnj;ಇನ್ (LinkedIn) ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರಯಾಣದಲ್ಲಿ ನನ್ನನ್ನು ಆಕರ್ಷಿಸಿದ್ದು ಆ ಐಷಾರಾಮಿ ಬೈಕ್ ಅಲ್ಲ, ಬದಲಾಗಿ ಹೆಲ್ಮೆಟ್ ಹಿಂದಿದ್ದ ಆ ಯುವಕನ ಅದ್ಭುತ ಆಲೋಚನೆ ಮತ್ತು ಕಲಿಯುವ ಹಂಬಲ. ಜೀವನದಲ್ಲಿ ದೊಡ್ಡ ಕನಸು ಕಾಣಲು ಹಣಕ್ಕಿಂತ ಹೆಚ್ಚಾಗಿ ಧೈರ್ಯ ಮತ್ತು ಆಸಕ್ತಿ ಇರಬೇಕು ಎಂಬುದಕ್ಕೆ ಈತನೇ ಸಾಕ್ಷಿ ಎಂದು ಆಶಿಶ್ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಪ್ರಸ್ತುತ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಯುವಕನ ಪಾಸಿಟಿವ್ ಆಟಿಟ್ಯೂಡ್ ಮತ್ತು ಜೀವನವನ್ನು ನೋಡುವ ದೃಷ್ಟಿಕೋನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.&lt;/p&gt;View this post on Instagram&lt;p&gt;A post shared by Startupro (@startupro_official)&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/uber-rider-arrives-on-a-bmw-bike-reason-is-here-gkn/articleshow-ykr7i5g"/>
        </item>
        <item>
            <title><![CDATA[ಯಶ್ ಟಾಕ್ಸಿಕ್ ಟ್ರೇಲರ್ ಲಾಂಚ್‌ಗೆ ಮುಖ್ಯ ಅತಿಥಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್!]]></title>
            <link>https://kannada.asianetnews.com/sandalwood/dr-shivarajkumar-to-be-the-chief-guest-at-the-toxic-trailer-launch-happening-today/articleshow-lh36um4</link>
            <guid isPermaLink="true">https://kannada.asianetnews.com/sandalwood/dr-shivarajkumar-to-be-the-chief-guest-at-the-toxic-trailer-launch-happening-today/articleshow-lh36um4</guid>
            <pubDate>Sat, 08 Aug 2026 14:01:59 +0530</pubDate>
            <description><![CDATA[&lt;p&gt;ಕನ್ನಡದ ನಟ ಯಶ್ ಅವರು ಕೆಜೆಎಫ್ ಬಳಿಕ ಇಡೀ ಜಗತ್ತು ಕನ್ನಡ ಸಿನಿಮಾ ಬಗ್ಗೆ ಮಾತನ್ನಾಡುವಂತೆ ಮಾಡಿದ್ದಾರೆ. ಜೊತೆಗೆ, ಇದೀಗ &lsquo;ಟಾಕ್ಸಿಕ್&rsquo; ಪ್ಯಾನ್ ವರ್ಲ್ಡ್ ಸಿನಿಮಾ ಮೂಲಕ ಕನ್ನಡನಾಡಿನ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸುತ್ತಿದ್ದಾರೆ. ಇಂದಿನ ಟ್ರೇಲರ್&zwnj; ಲಾಂಚ್&zwnj; ಮುಖ್ಯ ಅತಿಥಿ ಕನ್ನಡದ ಹಿರಿಯ ನಟ ಶಿವರಾಜ್&zwnj;ಕುಮಾರ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg7x5vghfvvkrmsbs29dcah,imgname-yash-toxic-shivarajkumar-1786177820528.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Trailer Launch Event-Shivarajkumar as Chief Guest: ಕನ್ನಡದ ನಟ ಯಶ್ ಟಾಕ್ಸಿಕ್ ಟ್ರೇಲರ್ ಲಾಂಚ್&zwnj; ಈವೆಂಟ್&zwnj; ಮುಖ್ಯ ಅತಿಥಿಯಾಗಿ ಕನ್ನಡದ ಹಿರಿಯ ನಟ ಶಿವರಾಜ್&zwnj;ಕುಮಾರ್ ಆಗಮನ!&lt;/strong&gt;&lt;/p&gt;&lt;p&gt;ಇಂದು, ಅಂದರೆ 08 ಆಗಸ್ಟ್ 2026ರಂದು ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ ಆಗಲಿದೆ ಅನ್ನೋದು ಬಹುತೇಕರಿಗೆ ಗೊತ್ತು . ಈ ಬಿಗ್ ಈವೆಂಟ್&zwnj;ಗೆ ಮುಖ್ಯ ಅತಿಥಿಯಾಗಿ ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಡಾ. ಶಿವರಾಜ್&zwnj;ಕುಮಾರ್ ಅವರು ಆಗಮಿಸಲಿದ್ದಾರೆ. ಸಾಯಂಕಾಲ 7 ಗಂಟೆ 1 ನಿಮಿಷಕ್ಕೆ ಬೆಂಗಳೂರಿನ ಎಎಂಬಿ ಮಾಲ್&zwnj;ನಲ್ಲಿ ಟಾಕ್ಸಿಕ್ ಟ್ರೇಲರ್ ಲಾಂಚ್ ಈವೆಂಟ್ ಆಯೋಜನೆ ಆಗಿದೆ.&lt;/p&gt;&lt;p&gt;ಕನ್ನಡಿಗ ನಟ ಯಶ್ ಅವರ ಕನಸಿನ ಬಿಗ್ ಬಜೆಟ್ ಸಿನಿಮಾ 'ಟಾಕ್ಸಿಕ್'. ಈ ಸಿನಿಮಾದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಬಹಳಷ್ಟು ಸೌಂಡ್ ಮಾಡಿವೆ. ಇಂದು ಟ್ರೇಲರ್ ರಿಲೀಸ್ ಆಗಲಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್&zwnj;ಕುಮಾರ್ ಮಗ ಹಾಗೂ ಹಿರಿಯ ನಟ ಶಿವರಾಜ್&zwnj;ಕುಮಾರ್ ಆಗಮಿಸಲಿರುವುದು ಕನ್ನಡಿಗರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;p&gt;ಕನ್ನಡನಾಡಿನಲ್ಲಿ, ಕನ್ನಡದ ಸ್ಟಾರ್ ನಟ ಯಶ್ ಅವರ ಹಾಲಿವುಡ್ ರೇಂಜ್&zwnj;ನ ಸಿನಿಮಾ 'ಟಾಕ್ಸಿಕ್' ಟ್ರೇಲರ್ ರಿಲೀಸ್ ಆಗುತ್ತಿರುವದೇ ಒಂದು ದೊಡ್ಡ ಹೆಮ್ಮೆ. ಈ ಈವೆಂಟ್&zwnj;ಗೆ ಕನ್ನಡದ ಹಿರಿಯ ನಟ ಶಿವಣ್ಣ ಆಗಮಿಸುವ ಮೂಲಕ ಇದು ಕನ್ನಡಿಗರ ಹಬ್ಬ ಆಗಲಿದೆ ಎನ್ನಬಹುದು. ಯಶ್ ನಟನೆಯ 'ಕೆಜಿಎಫ್' ಸಿನಿಮಾದ ಟ್ರೇಲರ್&zwnj; ಬಿಡುಗಡೆಗೆ ಅಂದು ಕನ್ನಡದ ರೆಬೆಲ್ ಸ್ಟಾರ್ ಅಂಬರೀಷ್ ಅವರು ಬಂದಿದ್ದರು. ಆದರೆ, ಅವರು ಇಂದು ನಮ್ಮೊಂದಿಗಿಲ್ಲ, ದಿವಂಗತರಾಗಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಕನ್ನಡದ ನಟ ಯಶ್ ಅವರು ತಾವು ಕನಸು ಕಂಡಿರುವಂತೆ, ಕೆಜೆಎಫ್ ಬಳಿಕ ಇಡೀ ಜಗತ್ತು ಕನ್ನಡ ಸಿನಿಮಾ ಬಗ್ಗೆ ಮಾತನ್ನಾಡುವಂತೆ ಮಾಡಿದ್ದಾರೆ. ಜೊತೆಗೆ, ಇದೀಗ ಟಾಕ್ಸಿಕ್ ಹೆಸರಿನಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾಗೆ ನಾಯಕರಾಗಿ ಇಡೀ ಕನ್ನಡನಾಡಿನ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಟಾಕ್ಸಿಕ್ ಈವೆಂಟ್&zwnj;ಗೆ ಇಡೀ ಚಿತ್ರದ ನಟನಟಿಯರು, ಕಲಾವಿದರು ಸೇರಿದಂತೆ ಇಡೀ ಟೀಮ್ ಹಾಜರಾಗಲಿದೆ.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/dr-shivarajkumar-to-be-the-chief-guest-at-the-toxic-trailer-launch-happening-today/articleshow-lh36um4"/>
        </item>
        <item>
            <title><![CDATA[ಡಿಕೆ ಶಿವಕುಮಾರ್ ಸರ್ಕಾರಕ್ಕೆ ಸುನಿಲ್ ಜೋಶಿ ಶಹಬ್ಬಾಶ್.. ಬೆಂಗಳೂರಿನ 233 ಅಂಗಡಿಗಳ ತೆರವಿಗೆ ಜೈ ಎಂದ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/bengaluru-urban/former-indian-cricketer-sunil-joshi-strongly-supported-the-bengaluru-footpath-encroachment-removal-drive-gkn/articleshow-4ub0i6b</link>
            <guid isPermaLink="true">https://kannada.asianetnews.com/bengaluru-urban/former-indian-cricketer-sunil-joshi-strongly-supported-the-bengaluru-footpath-encroachment-removal-drive-gkn/articleshow-4ub0i6b</guid>
            <pubDate>Sat, 08 Aug 2026 13:25:27 +0530</pubDate>
            <description><![CDATA[&lt;p&gt;ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಮತ್ತು ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೃಹತ್ ಕಾರ್ಯಾಚರಣೆಯನ್ನು ಕಂಡು ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ಏನಂದ್ರು ಜೋಶಿ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg5whee3wt17dvkydw95krg,imgname-cricketer-sunil-joshi-on-bengaluru-encroachment-removal-1786175702478.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿಯ ಅತ್ಯಂತ ಜನದಟ್ಟಣೆಯ ಪ್ರದೇಶಗಳಾದ ಕೆ.ಆರ್.ಮಾರುಕಟ್ಟೆ ಮತ್ತು ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೃಹತ್ ಕಾರ್ಯಾಚರಣೆಯನ್ನು ಕಂಡು ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸಂತಸ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರ ಧೈರ್ಯದ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.&lt;/p&gt;&lt;h2&gt;&lt;strong&gt;ಸುನಿಲ್ ಜೋಶಿ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಟ್ವೀಟ್ ಮಾಡಿರುವ ಸುನಿಲ್ ಜೋಶಿ, ಬೆಂಗಳೂರಿನ ಐತಿಹಾಸಿಕ ಕೋಟೆಯ ದೃಶ್ಯಾವಳಿ ಮತ್ತು ಪರಂಪರೆಯನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಪಾದಚಾರಿಗಳ ಸುರಕ್ಷತೆಗಾಗಿ ಫುಟ್&zwnj;ಪಾತ್&zwnj;ಗಳನ್ನು ಮರಳಿ ಪಡೆಯುವುದು ಅಷ್ಟೇ ಪ್ರಮುಖವಾಗಿದೆ. ಈ ಅತಿ ಅಗತ್ಯವಾದ ಕ್ರಮಕ್ಕಾಗಿ ಧನ್ಯವಾದಗಳು. ಇಂತಹ ಕಠಿಣ ಕ್ರಮಗಳು ನಿಜಕ್ಕೂ ಪ್ರಶಂಸನೀಯ ಎಂದು ಬರೆದುಕೊಂಡಿದ್ದಾರೆ. ಅವರು ತಮ್ಮ ಟ್ವೀಟ್&zwnj;ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಅವರನ್ನು ಟ್ಯಾಗ್ ಮಾಡುವ ಮೂಲಕ ಸರ್ಕಾರದ ಇಚ್ಛಾಶಕ್ತಿಯನ್ನು ಸ್ವಾಗತಿಸಿದ್ದಾರೆ.&lt;/p&gt;&lt;h2&gt;&lt;strong&gt;ಕಾರ್ಯಾಚರಣೆಯ ಹಿನ್ನೆಲೆ&lt;/strong&gt;&lt;/h2&gt;&lt;p&gt;ಬೆಂಗಳೂರು ಫೋರ್ಟ್ (ಕೋಟೆ), ವಿಕ್ಟೋರಿಯಾ ಆಸ್ಪತ್ರೆ ಮತ್ತು ಕೆ.ಆರ್. ಮಾರುಕಟ್ಟೆಯ ನಡುವಿನ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಸುಮಾರು 233 ಅಕ್ರಮ ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಈ ಅಂಗಡಿಗಳ ಮಾಲೀಕರು ಹೊಂದಿದ್ದ ದಾಖಲೆಗಳು ನಕಲಿ ಎಂದು ಹೈಕೋರ್ಟ್ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. 15 ದಿನಗಳೊಳಗೆ ಜಾಗ ಖಾಲಿ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೂ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ 20 ದಿನಗಳ ಕಾಲ ಕಾಯ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ತೆರವು ಕಾರ್ಯಾಚರಣೆ ನಡೆಸಿದೆ.&lt;/p&gt;&lt;h2&gt;&lt;strong&gt;ಸಾಮಾನ್ಯ ಜನರಿಗೆ ಸಿಕ್ಕ ಗೆಲುವು&lt;/strong&gt;&lt;/h2&gt;&lt;p&gt;ಈ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಬೈರೇಗೌಡ, ಪ್ರತಿದಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಕೆ.ಆರ್. ಮಾರುಕಟ್ಟೆಯನ್ನು ಬಳಸುವ ಲಕ್ಷಾಂತರ ಜನ ಸಾಮಾನ್ಯರಿಗೆ ಸಿಕ್ಕ ದೊಡ್ಡ ಗೆಲುವು ಇದು. ಸಾರ್ವಜನಿಕ ಜಾಗವನ್ನು ಕಾನೂನಾತ್ಮಕವಾಗಿ ಮರಳಿ ಪಡೆದ ನಮ್ಮ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಪಾದಚಾರಿಗಳಿಗೆ ಹಕ್ಕು ಕಲ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಅದಕ್ಕೆ ಸುನಿಲ್ ಜೋಶಿ ಅವರಂತಹ ಗಣ್ಯರ ಬೆಂಬಲ ಸಿಕ್ಕಿರುವುದು ಸರ್ಕಾರದ ಉತ್ಸಾಹವನ್ನು ಹೆಚ್ಚಿಸಿದೆ. ಈ ಕಾರ್ಯಾಚರಣೆಯಿಂದಾಗಿ ಈಗ ಐತಿಹಾಸಿಕ ಬೆಂಗಳೂರು ಕೋಟೆಯ ಅಂದ ಕೂಡ ಹೆಚ್ಚಾಗಿದ್ದು ರಸ್ತೆಗಳು ವಿಶಾಲವಾಗಿ ಕಾಣುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.&lt;/p&gt;&lt;p&gt;Thank you Sir @KrishnaByreGowda for this excellent &amp;amp; much-needed initiative.  &amp;nbsp;Clearing these encroachments and reclaiming our footpaths for pedestrians is a significant step towards a safer, cleaner &amp;amp; more accessible Bengaluru. Protecting the visibility and heritage of the&hellip; https://t.co/LMNVf07wLt&lt;/p&gt;&lt;p&gt;&mdash; Sunil Joshi |  ಸುನಿಲ್ ಜೋಶಿ (@SunilJoshi_Spin) August 8, 2026&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/former-indian-cricketer-sunil-joshi-strongly-supported-the-bengaluru-footpath-encroachment-removal-drive-gkn/articleshow-4ub0i6b"/>
        </item>
        <item>
            <title><![CDATA[ಸ್ಟ್ರೆಸ್ ರಿಲೀಫ್‌ಗಾಗಿ ₹258 ಕೋಟಿ ಶಾಪಿಂಗ್… ಬಳಿಕ ಆರ್ಡರ್ ಕ್ಯಾನ್ಸಲ್, ನಂತರ ನಡೆದಿದ್ದು ಮಾತ್ರ ಶಾಕಿಂಗ್!]]></title>
            <link>https://kannada.asianetnews.com/viral/woman-jailed-for-canceling-258-crore-online-order-to-relieve-stress/articleshow-q5u685y</link>
            <guid isPermaLink="true">https://kannada.asianetnews.com/viral/woman-jailed-for-canceling-258-crore-online-order-to-relieve-stress/articleshow-q5u685y</guid>
            <pubDate>Sat, 08 Aug 2026 13:15:51 +0530</pubDate>
            <description><![CDATA[&lt;p&gt;Viral News: ಜಪಾನಿನ ಮಹಿಳೆಯೊಬ್ಬರು, ತಮ್ಮ ಒತ್ತಡವನ್ನು ನಿವಾರಿಸಲು ಬರೋಬ್ಬರಿ ₹258 ಕೋಟಿ ಆನ್ ಲೈನ್ ಶಾಪಿಂಗ್ ಮಾಡಿ, ಅದು ಮನೆ ಬಾಗಿಲಿಗೆ ಬರುತ್ತಿದ್ದಂತೆ ಕ್ಯಾನ್ಸರ್ ಮಾಡುತ್ತಿದ್ದು, ಮೂರು ವರ್ಷಗಳಿಂದ ಇದನ್ನೆ ಮಾಡಿಕೊಂಡು ಬಂದಿದ್ದ ಮಹಿಳೆ, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg5b60nekc1ce2arwemncn6,imgname-online-shopping-news-1786175133716.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸ್ಟ್ರೆಸ್ ರಿಲೀಫ್&zwnj;ಗಾಗಿ ₹258 ಕೋಟಿ ಶಾಪಿಂಗ್&lt;/strong&gt;&lt;/h2&gt;&lt;p&gt;ಜಪಾನ್&zwnj;ನ ಒಂದು ರೆಸ್ಟೋರೆಂಟ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಯೋಶಿದಾ ಎಂಬ ಮಹಿಳೆಯೊಬ್ಬರು ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಬರೋಬ್ಬರಿ 258 ಕೋಟಿ ರೂಪಾಯಿ ಮೌಲ್ಯದ ಆನ್&zwnj;ಲೈನ್ ಶಾಪಿಂಗ್ ಮಾಡಿದ್ದಾರೆ. ಆದರೆ ಅವರು ಆರ್ಡರ್ ಮಾಡಿದ್ದ ಯಾವುದೇ ಉತ್ಪನ್ನವೂ ಅವರ ಕೈ ಸೇರಲಿಲ್ಲ. ಡೆಲಿವರಿ ಬಾಯ್ ಆರ್ಡರ್&zwnj;ಗಳನ್ನು ತಂದು ನೀಡುತ್ತಿದ್ದುದು ಮಾತ್ರ ಬೇರೆ ಬೇರೆ ಮನೆಗಳಿಗೆ. ಇದಕ್ಕೆ ಕಾರಣ, ಮಹಿಳೆ ತನ್ನ ನಿಜವಾದ ವಿಳಾಸ ನೀಡುವ ಬದಲು ನಕಲಿ ವಿಳಾಸ ನೀಡುತ್ತಿದ್ದರು. ಹೀಗಾಗಿ ಆರ್ಡರ್ ಆಟೋಮ್ಯಾಟಿಕ್ ಆಗಿ ರದ್ದಾಗುತ್ತಿತ್ತು. ಇದರಿಂದಾಗಿ ಇದೀಗ ಮಹಿಳೆ ಜೈಲು ಸೇರಿದ್ದಾರೆ.&lt;/p&gt;&lt;h3&gt;&lt;strong&gt;ಡೆಲಿವರಿಗಾಗಿ 45 ಲಕ್ಷ ರೂಪಾಯಿ ವೆಚ್ಚ&lt;/strong&gt;&lt;/h3&gt;&lt;p&gt;ಯೋಶಿದಾ ಸುಮಾರು ಎರಡು ವರ್ಷಗಳ ಕಾಲ ಆನ್ ಲೈನ್ ಶಾಪಿಂಗ್ ಮಾಡಿ, ಕ್ಯಾನ್ಸಲ್ ಮಾಡುತ್ತಿದ್ದರು. ಈ ಅವಧಿಯಲ್ಲಿ ಮಹಿಳೆ 2000ಕ್ಕೂ ಹೆಚ್ಚು ಆರ್ಡರ್&zwnj;ಗಳನ್ನು ವಿವಿಧ ರೀತಿಯಲ್ಲಿ ಕ್ಯಾನ್ಸಲ್ ಮಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಆನ್&zwnj;ಲೈನ್ ಪಾರ್ಸೆಲ್ ಪಾವತಿಗಾಗಿ ಕನ್ವೀನಿಯನ್ಸ್ ಸ್ಟೋರ್ ಆಯ್ಕೆಯನ್ನು ಆರಿಸಿಕೊಂಡರೂ, ನಿಗದಿತ ಸಮಯದೊಳಗೆ ಹಣ ಪಾವತಿಸಿರಲಿಲ್ಲ. ಇನ್ನು ಕೆಲವು ಸಂದರ್ಭಗಳಲ್ಲಿ ಕ್ಯಾಶ್ ಆನ್ ಡೆಲಿವರಿ ವೇಳೆ ಪಾರ್ಸೆಲ್ ನೇರವಾಗಿ ಸ್ವೀಕರಿಸಲು ನಿರಾಕರಿಸುತ್ತಿದ್ದರು. ಜಪಾನಿನ ಪ್ರಸಾರ ಸಂಸ್ಥೆ FNN ಪ್ರೈಮ್ ಆನ್&zwnj;ಲೈನ್ ಪ್ರಕಾರ, ಪದೇಪದೇ ಆರ್ಡರ್&zwnj;ಗಳು ರದ್ದಾಗಿದ್ದರಿಂದ ಶುಯೇಷಾ ಸಂಸ್ಥೆಯ ಜಂಪ್ ಕ್ಯಾರೆಕ್ಟರ್ಸ್ ಸ್ಟೋರ್&zwnj;ಗೆ ಡೆಲಿವರಿ ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚಗಳಲ್ಲಿ ಸುಮಾರು 75 ಲಕ್ಷ ಯೆನ್, ಅಂದರೆ ಸುಮಾರು 45 ಲಕ್ಷ ರೂಪಾಯಿ ನಷ್ಟವಾಗಿದೆ.&lt;/p&gt;&lt;h3&gt;&lt;strong&gt;&lsquo;ನನಗೆ ತುಂಬಾ ನೆಮ್ಮದಿ ಸಿಗುತ್ತಿತ್ತು ಎಂದ ಮಹಿಳೆ&lt;/strong&gt;&lt;/h3&gt;&lt;p&gt;ವರದಿಯ ಪ್ರಕಾರ, 32 ವರ್ಷದ ಯೋಶಿದಾ ತನಿಖಾ ಸಂಸ್ಥೆಗೆ, &lsquo;ಆನ್&zwnj;ಲೈನ್ ಶಾಪ್&zwnj;ನಲ್ಲಿ ಅನಿಮೆ ಪಾತ್ರಗಳ ವಸ್ತುಗಳನ್ನು ನೋಡುವುದು ನನಗೆ ತುಂಬಾ ಇಷ್ಟವಾಗುತ್ತಿತ್ತು. ದೈನಂದಿನ ಜೀವನದಲ್ಲಿ ಸಾಕಷ್ಟು ಒತ್ತಡವಿತ್ತು. ಯಾವುದೇ ವಸ್ತು ಲಭ್ಯವಾಗುವ ಮುನ್ನವೇ ಅದನ್ನು ಆರ್ಡರ್ ಮಾಡಿದಾಗ ನನಗೆ ವಿಚಿತ್ರವಾದ ತೃಪ್ತಿ ಸಿಗುತ್ತಿತ್ತು ಮತ್ತು ನನ್ನ ಎಲ್ಲಾ ಒತ್ತಡವೂ ದೂರವಾಗುತ್ತಿತ್ತು. ಆ ಕಂಪನಿಯ ವಿರುದ್ಧ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಾನು ಇದನ್ನೆಲ್ಲ ನನಗಾಗಿ ಮಾಡುತ್ತಿದ್ದೆ&rsquo; ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;238 ನಕಲಿ ಖಾತೆಗಳನ್ನು ಬಳಸಿದ್ದ ಮಹಿಳೆ&lt;/strong&gt;&lt;/p&gt;&lt;p&gt;FNN ವರದಿ ಪ್ರಕಾರ, ಯೋಶಿದಾ ಸುಮಾರು ಆರು ವರ್ಷಗಳ ಹಿಂದೆ ಈ ಆನ್&zwnj;ಲೈನ್ ಸ್ಟೋರ್&zwnj;ನಲ್ಲಿ ಶಾಪಿಂಗ್ ಆರಂಭಿಸಿದ್ದರು. ಆರಂಭದಲ್ಲಿ ಅವರು ಆರ್ಡರ್ ಮಾಡುತ್ತಿದ್ದ ವಸ್ತುಗಳನ್ನು ನಿಜವಾಗಿಯೂ ಪಡೆದುಕೊಳ್ಳುತ್ತಿದ್ದರು. ಆದರೆ ವಸ್ತುಗಳನ್ನು ಆರ್ಡರ್ ಮಾಡಿ ತಕ್ಷಣವೇ ಕ್ಯಾನ್ಸಲ್ ಮಾಡುವ ಸೀರೀಸ್ ಮಾತ್ರ 2023ರ ಅಕ್ಟೋಬರ್ ವೇಳೆಗೆ ಆರಂಭವಾಗಿ ಸುಮಾರು ಎರಡು ವರ್ಷಗಳ ಕಾಲ ಮುಂದುವರಿಯಿತು. ಈ ಅವಧಿಯಲ್ಲಿ ಶಾಪಿಂಗ್ ಮಾಡಲು ಅವರು 238 ವಿವಿಧ ಖಾತೆಗಳನ್ನು ಬಳಸಿದ್ದರು.&lt;/p&gt;&lt;p&gt;&lt;strong&gt;ಕಠಿಣ ಕ್ರಮಕ್ಕೆ ಕಂಪನಿ ಆಗ್ರಹ&lt;/strong&gt;&lt;/p&gt;&lt;p&gt;ಮಹಿಳೆಯ ಈ ಕೃತ್ಯದಿಂದ ನಿಜವಾಗಿಯೂ ಉತ್ಪನ್ನಗಳನ್ನು ಖರೀದಿಸಲು ಬಯಸಿದ್ದ ಗ್ರಾಹಕರಿಗೆ ದೀರ್ಘಕಾಲದವರೆಗೆ ತೊಂದರೆಯಾಗಿದೆ ಮತ್ತು ಅವರಿಗೆ ವಸ್ತುಗಳ ಖರೀದಿಗೆ ಅವಕಾಶ ಸಿಗಲಿಲ್ಲ ಎಂದು ಶುಯೇಷಾ ಕಂಪನಿ ಹೇಳಿದೆ. ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಕಂಪನಿ ಪೊಲೀಸರಿಗೆ ಮನವಿ ಮಾಡಿದೆ. ವರದಿಗಳ ಪ್ರಕಾರ, ಯೋಶಿದಾ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಜಪಾನ್ ಕಾನೂನಿನ ಪ್ರಕಾರ, ವಂಚನೆಯ ಮೂಲಕ ವ್ಯವಹಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅವರ ವಿರುದ್ಧ ಇದೀಗ ಕ್ರಮ ಕೈಗೊಳ್ಳಲಾಗುತ್ತಿದೆ.&lt;/p&gt;]]></content:encoded>
            <category>news</category>
            <dc:creator>Pavna Das</dc:creator>
            <atom:link href="https://kannada.asianetnews.com/viral/woman-jailed-for-canceling-258-crore-online-order-to-relieve-stress/articleshow-q5u685y"/>
        </item>
        <item>
            <title><![CDATA[ಯಶ್ 'ಟಾಕ್ಸಿಕ್' ಟ್ರೇಲರ್ ಲಾಂಚ್ ಮುಹೂರ್ತ 7:01 PM; ಈ ಟೈಮ್ ಹಿಂದಿರೋ ಸೀಕ್ರೆಟ್ ಏನ್ ಗೊತ್ತಾ?]]></title>
            <link>https://kannada.asianetnews.com/entertainment/yash-starrer-toxic-trailer-launch-scheduled-for-7-01-pm-and-you-have-to-know-the-secret-behind-this-timing-here/articleshow-tt84sqv</link>
            <guid isPermaLink="true">https://kannada.asianetnews.com/entertainment/yash-starrer-toxic-trailer-launch-scheduled-for-7-01-pm-and-you-have-to-know-the-secret-behind-this-timing-here/articleshow-tt84sqv</guid>
            <pubDate>Sat, 08 Aug 2026 13:05:53 +0530</pubDate>
            <description><![CDATA[&lt;p&gt;ಇಂದು ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಸಾಕಷ್ಟು ಕುತೂಹಲದ ಜೊತೆಜೊತೆಗೆ ಬಹಳಷ್ಟು ನಿರೀಕ್ಷೆಯನ್ನೂ ಜಗತ್ತಿನಾದ್ಯಂತ ಹುಟ್ಟುಹಾಕಿದೆ. ಜೊತೆಗೆ, ಟೈಮಿಂಗ್ಸ್- 7:01 ಸೀಕ್ರೆಟ್ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg4npvzyqwqx6kyezvk5k6m,imgname-yash-toxic-movie-1786174430079.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Toxic Trailer Launch 7:01 PM- Know the Secret behind this time Here: ಯಶ್ ನಟನೆಯ ಟಾಕ್ಸಿಕ್ ಟ್ರೇಲರ್ ಲಾಂಚ್ ಮಹೂರ್ತ 7:01ರ ಹಿಂದಿನ ಸೀಕ್ರೆಟ್ ಇಲ್ಲಿದೆ ನೋಡಿ!&lt;/strong&gt;&lt;/p&gt;&lt;p&gt;ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತೂ ಮೋಹನ್&zwnj;ದಾಸ್ ನಿರ್ದೇಶನದ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಇಂದು ಬೆಂಗಳೂರಿನ ಎಎಂಬಿ ಮಾಲ್&zwnj;ನಲ್ಲಿ ನಡೆಯಲಿದೆ ಅಂತ ಬಹಳಷ್ಟು ಜನರಿಗೆ ಗೊತ್ತಿದೆ. ಯಶ್ ಅವರ ಕನಸಿನ ಕೂಸು ಟಾಕ್ಸಿಕ್ ಚಿತ್ರವು ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಹೊಂದಿರುವ ಪ್ಯಾನ್ ವರ್ಲ್ಡ್ ಸಿನಿಮಾ. ಈ ಕಾರಣಕ್ಕೆ ಜಗತ್ತೇ ಈ ಸಿನಿಮಾ ಬಗ್ಗೆ ತೀವ್ರ ಕುತೂಹಲ ಹಾಗೂ ನಿರೀಕ್ಷೆ ಇಟ್ಟುಕೊಂಡಿದೆ. ಟಾಕ್ಸಿಕ್ ಟ್ರೇಲರ್ ಇಂದು ಸಾಯಂಕಾಲ 7:01 ಕ್ಕೆ ಬಿಡುಗಡೆ ಆಗಲಿದೆ. ಹಾಗಿದ್ದರೆ ಈ ಟೈಂ ವಿಶೇಷತೆ ಏನು?&lt;/p&gt;&lt;p&gt;ಹೌದು, ಯಶ್ ನಟನೆಯ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಆಗೋದು 7 ಗಂಟೆ 01 ನಿಮಿಷಕ್ಕೆ. ನಟ ಯಶ್ ಅವರ ಬರ್ತ್&zwnj;ಡೇ 8ರ ದಿನಾಂಕದಂದು. ಯಶ್ ಅವರ ಲಕ್ಕಿ ನಂಬರ್ 8. ಇದೇ ಕಾರಣಕ್ಕೆ ಯಶ್ ಅವರು ತಮ್ಮ ಟಾಕ್ಸಿಕ್ ಟ್ರೇಲರ್ ಲಾಂಚ್ ಟೈಂ ಅನ್ನು (7+1=8) ಕ್ಕೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. '8 ಗಂಟೆಗೇ ಇಟ್ಟುಕೊಳ್ಳಬಹುದಿತ್ತು ಅಲ್ವಾ?' ಅಂತ ಕೆಲವರು ಕೇಳಬಹುದು. ಆದರೆ, 8 ಗಂಟೆಗೆ ಇಟ್ಟರೆ ಅದು ಬಂದು ಹೋಗುವವರಿಗೆ ತುಂಬಾ ಲೇಟ್ ಆಗಿಬಿಡುತ್ತೆ ಎಂಬ ಕಾರಣ ಇರಬಹುದು ಅಲ್ವಾ?&lt;/p&gt;&lt;p&gt;ಇನ್ನು, 8 ಅಂದ್ರೆ ಇನ್ಫಿನಿಟಿ ಅಂತ ಸನಾತನ ಧರ್ಮ, ಯೋಗ-ಆಧ್ಯಾತ್ಮ ಶಾಸ್ತ್ರ ಹೇಳುತ್ತೆ.. ಇಂಗ್ಲಿಷ್&zwnj;ನಲ್ಲಿ &quot;Infinity&quot; ಎಂದರೆ ಕನ್ನಡದಲ್ಲಿ &quot;ಅನಂತ&quot; (Anantha) ಅಥವಾ &quot;ಅನಂತತೆ&quot; (Ananthate) ಎಂದು ಅರ್ಥ. ಇದರ ಅರ್ಥ 'ಕೊನೆಯಿಲ್ಲದ' ಅಥವಾ 'ಮಿತಿಯಿಲ್ಲದ' ಎಂದಾಗುತ್ತದೆ. ಅಂದರೆ, 'ಅಂತ್ಯವಿಲ್ಲದ' ಎಂದರ್ಥ. ಇದೇ ಕಾರಣಕ್ಕೆ ಯಶ್ ಅವರು ಈ ಟೈಂ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಾತಿನಲ್ಲಿ ಒಳ್ಳೆಯ ಲಾಜಿಕ್ ಅಂತೂ ಇದೆ.&lt;/p&gt;&lt;p&gt;ಹೌದು, ಯಶ್ ಅವರು ಏನನ್ನೇ ಮಾಡುವಾಗಲೀ ಸಮಗ್ರತೆ ಬಗ್ಗೆ ಯೋಚಿಸುತ್ತಾರೆ, ಪ್ಲಾನ್ ಮಾಡುತ್ತಾರೆ ಎಂಬ ಮಾತಿಗೆ. ಅವರು ಮಾಡುವ ಪ್ರತಿಯೊಂದು ಪ್ರಾಜೆಕ್ಟ್ ಹಿಂದೆ ಸಾಕಷ್ಟು ಲೆಕ್ಕಾಚಾರ ಅಡಗಿರುತ್ತದೆ. ಅದು ಸಿನಿಮಾದ ಮುಹೂರ್ತ ಇರಬಹುದು ಅಥವಾ ಟೀಸರ್, ಟ್ರೇಲರ್ ಹಾಗು ಸಾಂಗ್ ರಿಲೀಸ್ ಇರಬಹುದು. ಅವರು ಯುನಿಕ್ಯೂ ಡೇಟ್ ಹಾಗೂ ಟೈಂ ಸೆಲೆಕ್ಟ್ ಮಾಡೋದಂತೂ ಖಂಡಿತ. ಈ ಕಾರಣಕ್ಕೇ ನಟ ಯಶ್ ಅವರು ವಿಭಿನ್ನ ಹಾಗೂ ವಿಶೇಷ ಆಗಿದ್ದಾರೆ ಎನ್ನಲೂಬಹುದು! ಏನಂತೀರಾ?&lt;/p&gt;&lt;p&gt;ಒಟ್ಟಿನಲ್ಲಿ, ಇಂದು ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಸಾಕಷ್ಟು ಕುತೂಹಲದ ಜೊತೆಜೊತೆಗೆ ಬಹಳಷ್ಟು ನಿರೀಕ್ಷೆಯನ್ನೂ ಜಗತ್ತಿನಾದ್ಯಂತ ಹುಟ್ಟುಹಾಕಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಆಗಲಿದೆ. ಅದನ್ನು ಇಡೀ ಜಗತ್ತು ವೀಕ್ಷಿಸಲಿದೆ. ಯಶ್ ಇಷ್ಟಪಟ್ಟಿರುವ ಟೈಂನಲ್ಲಿ, ಯಶ್ ತಾಯ್ನೆಲದಲ್ಲೇ ಈ ಟ್ರೇಲರ್ ಬಿಡುಗಡೆ ಆಗುತ್ತಿರುವುದು ಇನ್ನೂ ವಿಶೇಷ ಎನ್ನಲೇಬೇಕು.&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/yash-starrer-toxic-trailer-launch-scheduled-for-7-01-pm-and-you-have-to-know-the-secret-behind-this-timing-here/articleshow-tt84sqv"/>
        </item>
        <item>
            <title><![CDATA[Bengaluru Crime News: ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ; ಡುಪ್ಲೆಕ್ಸ್ ಮನೆಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ, ವರ್ಷದ ಹಿಂದೆ ಸಾವನ್ನಪ್ಪಿರುವ ಶಂಕೆ]]></title>
            <link>https://kannada.asianetnews.com/news/shocking-incident-in-bengaluru-woman-s-skeleton-found-in-a-duplex-house-bagalagunte-sns/articleshow-0zgkal0</link>
            <guid isPermaLink="true">https://kannada.asianetnews.com/news/shocking-incident-in-bengaluru-woman-s-skeleton-found-in-a-duplex-house-bagalagunte-sns/articleshow-0zgkal0</guid>
            <pubDate>Sat, 08 Aug 2026 12:58:40 +0530</pubDate>
            <description><![CDATA[&lt;p&gt;ಬೆಂಗಳೂರಿನ ಬಾಗಲಕುಂಟೆಯಲ್ಲಿ, ಒಂಟಿಯಾಗಿ ವಾಸಿಸುತ್ತಿದ್ದ 57 ವರ್ಷದ ಮಹಿಳೆಯ ಅಸ್ಥಿಪಂಜರ ಅವರ ಮನೆಯಲ್ಲಿ ಪತ್ತೆಯಾಗಿದೆ. ಸುಮಾರು ಒಂದು ವರ್ಷದ ಹಿಂದೆ ಅವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jrj8nt9txnv2cdkjz5m62y5r,imgname-fotojet--47-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿ ಬೆಂಗಳೂರಿನ ಬಾಗಲಕುಂಟೆಯ ಮನೆಯೊಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದ್ದು, ಒಂದು ವರ್ಷದ ಹಿಂದೆಯೇ ಆಕೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತಮಹಿಳೆಯನ್ನು 57 ವರ್ಷದ ದಾಕ್ಷಾಯಿಣಿ ಎಂದು ಗುರುತಿಸಲಾಗಿದ್ದು, ಪೊಲೀಸರು ನೀಡಿರುವ ಮಾಹಿತಿಯ ಅನ್ವಯ ಮೃತರು ಒಂಟಿಯಾಗಿ ಡುಪ್ಲೆಕ್ಸ್ ಮನೆಯಲ್ಲಿ ವಾಸ ಮಾಡುತ್ತಿದ್ದರಂತೆ.&lt;/p&gt;&lt;h2&gt;&lt;strong&gt;ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಪೊಲೀಸರು ನೀಡಿರುವ ಮಾಹಿತಿಯ ಅನ್ವಯ, ಸ್ಥಳೀಯರು ಘಟನೆಯ ಬಗ್ಗೆ ಶುಕ್ರವಾರ ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಮನೆಯಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಅನುಮಾನಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು, ಮನೆಯ ಒಳಹೋಗಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಂಪೂರ್ಣವಾಗಿ ಕೊಳೆತು ಹೋಗಿದ್ದ ಅಸ್ಥಿಪಂಜರ ಕಂಡು ಬಂದಿತ್ತು.&lt;/p&gt;&lt;p&gt;ಮನೆಯೂ ಹಲವು ವರ್ಷಗಳಿಂದ ಕ್ಲೋಸ್ ಆಗಿತ್ತು. ಸ್ಥಳೀಯರು, ಮನೆ ಬ್ರೋಕರ್&zwnj;ಗಳು ಮನೆ ಬಾಡಿಗೆಗೆ ಸಿಗುತ್ತಾ ಎಂದು ಪರಿಶೀಲನೆ ನಡೆಸಲು ಮನೆಯ ಬಳಿ ಹೋಗಿದ್ದರು. ಆದರೆ ಮನೆಯಲ್ಲಿ ಹಲವು ದಿನಗಳಿಂದ ಯಾವುದೇ ಚಟುವಟಿಕೆಗಳು ನಡೆದಂತೆ ಕಂಡಬಾರದ ಕಾರಣ ಅನುಮಾನಗೊಂಡು ಮಾಹಿತಿ ನೀಡಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.&lt;/p&gt;&lt;p&gt;ಬಾಗಲಕುಂಟೆ ಪೊಲೀಸರ ತಂಡದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ದಾಕ್ಷಾಯಣಿ ಅವರ ಅಸ್ಥಿಪಂಜರ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ಸಂದರ್ಭದಲ್ಲಿ ಮಹಿಳೆ ಒಂದು ವರ್ಷದ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;2005ರಲ್ಲಿ ಪುತ್ರ ಸಾವು&lt;/strong&gt;&lt;/h2&gt;&lt;p&gt;ಮಹಿಳೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲವು ವರ್ಷಗಳಿಂದ ಮನೆಯಲ್ಲಿ ಒಬ್ಬರೇ ವಾಸ ಮಾಡುತ್ತಿದ್ದರು. ಮೃತರ ಪುತ್ರ 2005ರಲ್ಲಿ ಕ್ಯಾನ್ಸರ್ನಿಂದ ಮೃತಪಟ್ಟಿದ್ದ. ಆ ಬಳಿಕ ತೀವ್ರವಾಗಿ ನೊಂದಿದ್ದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆ ಬಳಿಕ ಅವರ ಕುಟುಂಸ್ಥರು ಅವರಿಗೆ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರು. ಆದರೆ 2017ರಲ್ಲಿ ಅವರ ಪತಿ ಉಮೇಶ್ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದರೊಂದಿಗೆ ಹವನೂರ್ ಲೇಔಟ್ ನಲ್ಲಿರುವ ಮನೆಯಲ್ಲಿ ಮಹಿಳೆ ಒಬ್ಬರೇ ವಾಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ತನಿಖೆ ಮುಂದುವರಿಸಿದ ಪೊಲೀಸರು&lt;/strong&gt;&lt;/h2&gt;&lt;p&gt;ಮೃತಮಹಿಳೆಯ ಸಹೋದರ 50 ವರ್ಷದ ಮಹೇಶ್ ಅವರು ನೀಡಿರುವ ಮಾಹಿತಿಯ ಅನ್ವಯ, ಕಳೆದ ಎರಡು ವರ್ಷಗಳಿಂದ ಅವರಿಗೆ ಸಹೋದರಿಯೊಂದಿಗೆ ಸಂಪರ್ಕ ಇರಲಿಲ್ಲವಂತೆ. ಸದ್ಯ ಕುಟುಂಬಸ್ಥರು ಅವರ ಸಾವಿನ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಇದರೊಂದಿಗೆ ಪೊಲೀಸರು, ಅನುಮಾನಸ್ಪದ ಸಾವಿನ ಅಡಿ ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ, ನಾವು ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಇದು ಮಹಿಳೆ ಯಾವ ಸಮಯದಲ್ಲಿ ಸಾವನ್ನಪ್ಪಿದ್ದರು ಅಂತ ಖಚಿತಪಡಿಸಲು ಮುಂದಾಗಿದ್ದೇವೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Sumanth SN</dc:creator>
            <atom:link href="https://kannada.asianetnews.com/news/shocking-incident-in-bengaluru-woman-s-skeleton-found-in-a-duplex-house-bagalagunte-sns/articleshow-0zgkal0"/>
        </item>
        <item>
            <title><![CDATA[ಪೊಲೀಸರಿಗೇ ಚಾಲೆಂಜ್ ಹಾಕಿದ ಭೂಪ​: 25 ಬಾಂಗ್ಲಾದವರ ಕಳಿಸಿದ್ದೇನೆ, ಪತ್ತೆ ಹಚ್ಚಿ ಎಂದು ವಿಡಿಯೋ- ಬಳಿಕ ಏನಾಯ್ತು]]></title>
            <link>https://kannada.asianetnews.com/crime/man-challenges-police-by-saying-that-he-sent-25-bangladeshis-to-bangaluru-and-find-them-was-arrested-suc/articleshow-h1yqf2f</link>
            <guid isPermaLink="true">https://kannada.asianetnews.com/crime/man-challenges-police-by-saying-that-he-sent-25-bangladeshis-to-bangaluru-and-find-them-was-arrested-suc/articleshow-h1yqf2f</guid>
            <pubDate>Sat, 08 Aug 2026 12:52:58 +0530</pubDate>
            <description><![CDATA[&lt;p&gt;ವ್ಯಕ್ತಿಯೊಬ್ಬ, 25 ಬಾಂಗ್ಲಾದೇಶಿಯರನ್ನು ಬೆಂಗಳೂರಿಗೆ ಕಳುಹಿಸಿದ್ದು, ಅವರು ಪೊಲೀಸರು ಮತ್ತು ರಾಜಕಾರಣಿಗಳನ್ನು ಟಾರ್ಗೆಟ್ ಮಾಡುತ್ತಾರೆ ಎಂದು ವಿಡಿಯೋ ಮೂಲಕ ಪೊಲೀಸರಿಗೆ ಸವಾಲು ಹಾಕಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಿಸಿಬಿ ಪೊಲೀಸರು ಆತನನ್ನು ಮಂಡ್ಯದ ಸಂತೋಷ್ ಕುಮಾರ್ ಎಂದು ಗುರುತಿಸಿದ್ದು, ಆತ ನಂತರ ಕ್ಷಮೆಯಾಚಿಸಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg3v2mv1j327d13ej97370v,imgname-karnataka-police-1786173557402.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಇದಾಗಲೇ ಬಂಗ್ಲಾದೇಶಿಗಳು ಅಕ್ರಮವಾಗಿ ಕರ್ನಾಟಕ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲಿ ಬೀಡುಬಿಟ್ಟಿದ್ದಾರೆ. ಇವರನ್ನು ಗುರುತು ಹಿಡಿಯುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ, ಎಲ್ಲಾ ಸೌಲಭ್ಯಗಳನ್ನೂ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯ ಗುರುತಿನ ಚೀಟಿಯನ್ನು ಅವರಿಗೆ ಮಾಡಿಕೊಡುವ ಗ್ಯಾಂಗೇ ಇದೆ. ಇದಾಗಲೇ ವಿವಿಧ ರಾಜ್ಯಗಳಲ್ಲಿ ಇದಕ್ಕಾಗಿಯೇ SIR ಕೂಡ ಮಾಡಲಾಗುತ್ತಿದ್ದರೂ, ಅವರನ್ನು ಒಂದು ಹಂತದಲ್ಲಿ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವೇ ಆಗಿಬಿಟ್ಟಿದೆ. ಇಂಥ ಸಂದರ್ಭದಲ್ಲಿ, ವ್ಯಕ್ತಿಯೊಬ್ಬ ಇದೀಗ ಬೆಂಗಳೂರಿನ ಪೊಲೀಸರಿಗೆ ಚಾಲೆಂಜ್​ ಹಾಕಿದ್ದಾನೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.&lt;/p&gt;&lt;p&gt;ಸಾಮಾಜಿಕ ಮಾಧ್ಯಮದಲ್ಲಿ ಅಪ್&zwnj;ಲೋಡ್ ಆಗಿರುವ ಈ ಪ್ರಚೋದನಕಾರಿ ವಿಡಿಯೋದಲ್ಲಿ, ಆತ ಕನ್ನಡದಲ್ಲಿಯೇ 'ನಾನು 25 ಬಾಂಗ್ಲಾದೇಶಿಯರನ್ನು ಬೆಂಗಳೂರಿಗೆ ಕಳುಹಿಸಿದ್ದೇನೆ. ನಿಮ್ಮ ಕೈಯಲ್ಲಿ ಅವರನ್ನು ಹಿಡಿಯಲು ಆಗುವುದಿಲ್ಲ ಎಂದು ನನಗೆ ಗೊತ್ತು. ಏಕೆಂದ್ರೆ ಇಲ್ಲಿಯವರೆಗೆ ನೀವ್ಯಾರು ಅವರನ್ನು ಹಿಡಿಯಲಿಲ್ಲ ಎಂದಿದ್ದಾನೆ. ನಾನು ಇವರನ್ನು ಯಾವ ಕೆಲಸಕ್ಕೆ ಕಳುಹಿಸಿದ್ದೇನೆ ಗೊತ್ತಾ?, ನಾನು ಕೇವಲ ಪೊಲೀಸರನ್ನು ಮತ್ತು ರಾಜಕಾರಣಿಗಳನ್ನು ಟಾರ್ಗೆಟ್​ ಮಾಡಿದ್ದೇನೆ ಎಂದಿದ್ದಾನೆ.&lt;/p&gt;&lt;h2&gt;&lt;strong&gt;ಪೊಲೀಸರು-ರಾಜಕಾರಣಿಗಳೇ ಟಾರ್ಗೆಟ್​&lt;/strong&gt;&lt;/h2&gt;&lt;p&gt;ಈ ಬಾಂಗ್ಲಾದೇಶಿಗಳು ನಿಮ್ಮ ಮನೆಗೆ ನುಗ್ಗುತ್ತಾರೆ. ಮಾಡಬಾರದು ಮಾಡುತ್ತಾರೆ. ರಾಜಕಾರಣಿ ಮನೆಗೂ ಹೋಗಿ ಏನು ಮಾಡಬೇಕು ಎಂದು ಹೇಳಿದ್ದೇನೆ. ಅದನ್ನು ಅವರು ಮಾಡುತ್ತಾರೆ. ಅವರಿಗೆ ಐಡಿ ಕಾರ್ಡ್​ ಇಲ್ಲ. ಅವರ ಅಡ್ರೆಸ್​ ಇಲ್ಲ. ಎಲ್ಲವನ್ನೂ ಯೋಚನೆ ಮಾಡಿದ್ದೇನೆ. ನಿಮಗೆ ದಮ್​ ಇದ್ದರೆ ಅವರನ್ನು ಕಂಡುಹಿಡಿಯಿರಿ ಎಂದಿರೋ ವ್ಯಕ್ತಿ, ನನ್ನ ಅಡ್ರೆಸ್​ ಅನ್ನೂ ನಿಮಗೆ ಕೊಡ್ತೀನಿ. ನೆನಪಿರಲಿ ಬೆಂಗಳೂರು ಪೊಲೀಸರೇ ಎಂದು ಚಾಲೆಂಜ್​ ಹಾಕಿದ್ದಾನೆ. ಇದರ ವಿಡಿಯೋ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ.&lt;/p&gt;&lt;p&gt;ಈ ವಿಡಿಯೋ ವೈರಲ್​ ಆಗುತ್ತಲೇ, ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸೈಬರ್ ಅಪರಾಧ ಪೊಲೀಸರು ಆ ವ್ಯಕ್ತಿಯನ್ನು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ಕಿಕ್ಕೇರಿಯ ಸಂತೋಷ್ ಕುಮಾರ್ ಎಂದು ಗುರುತಿಸಿದ್ದಾರೆ. ಕುಮಾರ್ ದುಬೈನ ಹೋಟೆಲ್&zwnj;ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಪೊಲೀಸರು ಆತನನ್ನು ಸಂಪರ್ಕಿಸಿದ ಕೂಡಲೇ, ಕುಮಾರ್ ವಿಡಿಯೋ ಅಳಿಸಿಹಾಕಿ, ಪೊಲೀಸರಿಗೆ ಕ್ಷಮೆಯಾಚಿಸುವ ಮತ್ತೊಂದು ವೀಡಿಯೊವನ್ನು ಅಪ್&zwnj;ಲೋಡ್ ಮಾಡಿದ್ದಾನೆ.&lt;/p&gt;&lt;h3&gt;&lt;strong&gt;ಕ್ಷಮೆಯಲ್ಲಿ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಮೊದಲಿನ ವಿಡಿಯೋದಲ್ಲಿ, &quot;ಕರ್ನಾಟಕ ಪೊಲೀಸರೇ, ನೀವು ಪುರುಷರಾಗಿದ್ದರೆ, ಇದನ್ನು ಹುಡುಕಿ...' ಎಂದಿದ್ದ ಈತ, ಕೊನೆಗೆ ಕ್ಷಮೆ ಕೋರಿ, ಬೆಂಗಳೂರಿಗೆ ಬಹಳಷ್ಟು ಬಾಂಗ್ಲಾದೇಶಿಗಳು ಬರುತ್ತಿರುವುದರಿಂದ ನನಗೆ ಅಸಮಾಧಾನವಾಯಿತು ಮತ್ತು ಅವರ ವಿರುದ್ಧ ಅಥವಾ ಅವರ ದೇಶಕ್ಕೆ ವಾಪಸ್ ಕಳುಹಿಸಲು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಆದ್ದರಿಂದ ನಾನು ತಪ್ಪು ರೀತಿಯಲ್ಲಿ ಮಾತನಾಡಿದ್ದೇನೆ ಎಂದಿದ್ದಾನೆ. ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಈತನನ್ನು ಗಡೀಪಾರು ಮಾಡಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/man-challenges-police-by-saying-that-he-sent-25-bangladeshis-to-bangaluru-and-find-them-was-arrested-suc/articleshow-h1yqf2f"/>
        </item>
        <item>
            <title><![CDATA[ಸಿಎಂ ವಿಜಯ್ ಪತ್ನಿ ಡಿವೋರ್ಸ್‌ ಅರ್ಜಿ ವಾಪಸ್ ಪಡೆದಿದ್ದೇಕೆ..? ಮೂರು ಕಾರಣಗಳು ರಿವೀಲ್..!]]></title>
            <link>https://kannada.asianetnews.com/entertainment/why-did-cm-vijays-wife-withdraw-her-divorce-petition-three-reasons-revealed-trisha-krishnan-gkn/articleshow-rszhpi6</link>
            <guid isPermaLink="true">https://kannada.asianetnews.com/entertainment/why-did-cm-vijays-wife-withdraw-her-divorce-petition-three-reasons-revealed-trisha-krishnan-gkn/articleshow-rszhpi6</guid>
            <pubDate>Sat, 08 Aug 2026 12:39:10 +0530</pubDate>
            <description><![CDATA[&lt;p&gt;ದಳಪತಿ ವಿಜಯ್ ಸಂಸಾರದಲ್ಲಿ ಬಿರುಗಾಳಿ ತಣ್ಣಗಾಯಿತೇ? ವಿಚ್ಛೇದನ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತಾ! ಅಸಲಿ ಕಾರಣವೇನು? ಈ ಸ್ಟೋರಿ ಓದಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg36wsf2yhbbrrwkkmsnd27,imgname-why-vijays-wife-sangeetha-withdraw-her-divorce-petition-1786172896047.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ತಮಿಳುನಾಡು): &lt;/strong&gt;ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ವೈಯಕ್ತಿಕ ಬದುಕು ಮತ್ತೆ ಸುದ್ದಿಯಲ್ಲಿದೆ. ಕೆಲವು ತಿಂಗಳುಗಳಿಂದ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈಗ ಸಂಗೀತಾ ತಾವು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.&lt;/p&gt;&lt;p&gt;ಆರು ತಿಂಗಳ ಹಿಂದೆ ಸದ್ದಿಲ್ಲದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸಂಗೀತಾ, ಈಗ ಅದನ್ನು ವಾಪಸ್ ಪಡೆಯಲು ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.&lt;/p&gt;&lt;h2&gt;&lt;strong&gt;ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಏಕೆ?&lt;/strong&gt;&lt;/h2&gt;&lt;p&gt;2026ರ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿತ್ತು. ಆ ಅರ್ಜಿಯಲ್ಲಿ ಸಂಗೀತಾ ಅವರು ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ವಿಜಯ್ ಅವರು ಬೇರೊಬ್ಬ ನಟಿಯ ಜೊತೆ ಸಂಬಂಧ ಹೊಂದಿದ್ದಾರೆ ಮತ್ತು ಈ ವಿಷಯ ತಮಗೆ 2021ರಲ್ಲಿಯೇ ತಿಳಿಯಿತು ಎಂದು ಆರೋಪಿಸಿದ್ದರು. ಅಲ್ಲದೇ ದಾಂಪತ್ಯ ಜೀವನದಲ್ಲಿ ವಿಜಯ್ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಂದ ತಮ್ಮನ್ನು ದೂರವಿಡುತ್ತಿದ್ದಾರೆ ಎಂಬುದು ಸಂಗೀತಾರ ದೂರಾಗಿತ್ತು.ಬೆನ್ನಲ್ಲೇ ಸ್ಟಾರ್ ಜೋಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿತ್ತು.&lt;/p&gt;&lt;h2&gt;&lt;strong&gt;ನಟಿ ತ್ರಿಷಾ ಕೃಷ್ಣನ್ ಹೆಸರು ತಳಕು..&lt;/strong&gt;&lt;/h2&gt;&lt;p&gt;ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ನಟಿ ತ್ರಿಷಾ ಕೃಷ್ಣನ್ ಅವರ ಹೆಸರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ವಿಜಯ್ ಮತ್ತು ತ್ರಿಷಾ ಹಲವು ಹಿಟ್ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಅವರ ಸ್ನೇಹ ವಿವಾಹೇತರ ಸಂಬಂಧಕ್ಕೆ ತಿರುಗಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಸಂಗೀತಾ ತಮ್ಮ ಅರ್ಜಿಯಲ್ಲಿ ಯಾವುದೇ ನಟಿಯ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ. ವಿಜಯ್ ಅಥವಾ ತ್ರಿಷಾ ಕೂಡ ಈ ವದಂತಿಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ತ್ರಿಷಾ ಅವರ ಹೆಸರು ಕೇವಲ ಊಹಾಪೋಹವಾಗಿ ಉಳಿದಿದೆ.&lt;/p&gt;&lt;h2&gt;&lt;strong&gt;ಅರ್ಜಿ ವಾಪಸ್ ಪಡೆದಿದ್ದಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಆಗಸ್ಟ್ 7 ರಂದು ಸಂಗೀತಾ ಅವರು ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ. ಇದಕ್ಕೆ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲವಾದರೂ, ಮೂರು ಪ್ರಮುಖ ಸಾಧ್ಯತೆಗಳನ್ನು ಚರ್ಚಿಸಲಾಗುತ್ತಿದೆ...&lt;/p&gt;&lt;ol&gt; &lt;li&gt;&lt;strong&gt;ರಾಜಿ ಸಂಧಾನ&lt;/strong&gt;: ಕುಟುಂಬದ ಹಿರಿಯರು ಅಥವಾ ಸ್ನೇಹಿತರ ಮಧ್ಯಸ್ಥಿಕೆಯಲ್ಲಿ ದಂಪತಿ ನಡುವಿನ ಭಿನ್ನಾಭಿಪ್ರಾಯ ಬಗೆಹರಿದಿರಬಹುದು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಬ್ಬರೂ ಮತ್ತೆ ಒಂದಾಗಲು ನಿರ್ಧರಿಸಿರುವ ಸಾಧ್ಯತೆ ಇದೆ.&lt;/li&gt; &lt;li&gt;&lt;strong&gt;ರಾಜಕೀಯ ಪ್ರತಿಷ್ಠೆ&lt;/strong&gt;: ಮೇ 2026ರಲ್ಲಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಂತಹ ಉನ್ನತ ಸ್ಥಾನದಲ್ಲಿರುವಾಗ ವೈಯಕ್ತಿಕ ಬದುಕಿನ ವಿವಾದಗಳು ರಾಜಕೀಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರಬಹುದು.&lt;/li&gt; &lt;li&gt;&lt;strong&gt;ಹೊಸ ಕಾನೂನು ತಂತ್ರ&lt;/strong&gt;: ವಿಚ್ಛೇದನಕ್ಕಾಗಿ ಪರಸ್ಪರ ಕಿತ್ತಾಡುವ ಬದಲು (Contested Divorce), ಇಬ್ಬರೂ ಒಪ್ಪಿಗೆಯ ಮೇರೆಗೆ (Mutual Divorce) ಪ್ರತ್ಯೇಕವಾಗಲು ನಿರ್ಧರಿಸಿರಬಹುದು. ಅದಕ್ಕಾಗಿ ಹಳೆಯ ಅರ್ಜಿಯನ್ನು ವಾಪಸ್ ಪಡೆದಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ವಿಜಯ್ ಮತ್ತು ಸಂಗೀತಾ ಅವರ ಸುದೀರ್ಘ ದಾಂಪತ್ಯ ಜೀವನ ಮತ್ತೆ ಹಳಿಗೆ ಮರಳುತ್ತದೆಯೇ ಅಥವಾ ಇದು ಕೇವಲ ಕಾನೂನು ಪ್ರಕ್ರಿಯೆಯ ಬದಲಾವಣೆಯೇ ಎಂಬುದು ಕಾಲವೇ ಉತ್ತರಿಸಬೇಕಿದೆ.&lt;/li&gt;&lt;/ol&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/entertainment/why-did-cm-vijays-wife-withdraw-her-divorce-petition-three-reasons-revealed-trisha-krishnan-gkn/articleshow-rszhpi6"/>
        </item>
        <item>
            <title><![CDATA[Satish Jarkiholi: ದೆಹಲಿ ಭೇಟಿ ಬಳಿಕ ಜಾರಕಿಹೊಳಿ ಮಹತ್ವದ ಹೇಳಿಕೆ! ಹೊರಟ್ಟಿಗೆ ಬೆದರಿಕೆ ಹಾಕಲಾಯ್ತೇ?]]></title>
            <link>https://kannada.asianetnews.com/politics/former-minister-satish-jarkiholi-reacts-on-basavaraj-horatti-resignation-rav/articleshow-g30vbxr</link>
            <guid isPermaLink="true">https://kannada.asianetnews.com/politics/former-minister-satish-jarkiholi-reacts-on-basavaraj-horatti-resignation-rav/articleshow-g30vbxr</guid>
            <pubDate>Sat, 08 Aug 2026 12:23:04 +0530</pubDate>
            <description><![CDATA[&lt;p&gt;ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ದೆಹಲಿ ಭೇಟಿ ಸಹಜ ಎಂದಿದ್ದು, ಸೋಮವಾರದೊಳಗೆ ಸಚಿವರಿಗೆ ಖಾತೆ ಹಂಚಿಕೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಸಚಿವ ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯಗೆ ಒತ್ತಾಯಿಸಿದರು. ಸಭಾಪತಿ ಹೊರಟ್ಟಿಯವರಿಗೆ ಬೆದರಿಕೆ ಆರೋಪ ತಳ್ಳಿಹಾಕಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg2488vth3cv961ydqagyd4,imgname-----------------------2026-08-08t121854.359-1786171760923.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.8):&lt;/strong&gt; ದೆಹಲಿ ಭೇಟಿ ಸಹಜವಾದದ್ದು ಇದರಲ್ಲಿ ವಿಶೇಷ ಏನೂ ಇಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ದೆಹಲಿ ಭೇಟಿ ವಿಚಾರವಾಗಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.&lt;/p&gt;&lt;h2&gt;ಡಿಸಿಎಂ ವಿಚಾರ ಸದ್ಯಕ್ಕೆ ಚರ್ಚೆ ಇಲ್ಲ&lt;/h2&gt;&lt;p&gt;ಡಿಸಿಎಂ ಹುದ್ದೆ ವಿಚಾರವಾಗಿ ಸದ್ಯಕ್ಕೆ ಯಾವುದೇ ಚರ್ಚೆ ನಡೆದಿಲ್ಲ. ಮುಂದೆ ಅವಕಾಶ ಬಂದಾಗ ಅದರ ಬಗ್ಗೆ ಚರ್ಚೆ ಮಾಡೋಣ ಎಂದರು. ಇದೇ ವೇಳೆ ಸಚಿವರಿಗೆ ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು 'ಇವತ್ತು ಅಥವಾ ನಾಳೆ ಸಿಎಂ ಅವರು ಖಾತೆ ಹಂಚಿಕೆ ಮಾಡಬಹುದು. ಸಿಎಂ ಅವರು ಇಂದು ದೆಹಲಿಗೆ ಹೋಗುತ್ತಿದ್ದಾರೆ. ಬಹುಶಃ ಸೋಮವಾರದವರೆಗೆ ಪ್ರಕ್ರಿಯೆ ನಡೆಯಬಹುದು. ಸೋಮವಾರದೊಳಗೆ ಅಂತಿಮಗೊಳಿಸುವ ನಿರೀಕ್ಷೆ ಇದೆ. ಸಂಪುಟದಲ್ಲಿ ಹಳಬರು ಹಾಗೂ ಅನುಭವ ಇರುವವರು ಇದ್ದಾರೆ. ಹೀಗಾಗಿ ಖಾತೆ ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;h3&gt;ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ&lt;/h3&gt;&lt;p&gt;ಸಂಪುಟದಲ್ಲಿ ಬದಲಾವಣೆ ಮಾಡುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈಗಾಗಲೇ ಎಲ್ಲರೂ ಈ ಬಗ್ಗೆ ಮಾತನಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಮಾತನಾಡಿದ್ದಾರೆ. ಸಿಎಂ ಖುದ್ದಾಗಿ ದೆಹಲಿಗೆ ತೆರಳಿ ಚರ್ಚಿಸಿದ್ದಾರೆ. ಪಕ್ಷದ ಅಧ್ಯಕ್ಷರು ಹಾಗೂ ಇತರ ಸಚಿವರೂ ಮಾತುಕತೆ ನಡೆಸಿದ್ದಾರೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.&lt;/p&gt;&lt;p&gt;ಉತ್ತರ ಕರ್ನಾಟಕದಲ್ಲಿ ಒಬ್ಬರು ಕುರುಬರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಪಟ್ಟು&zwnj; ಹಿಡಿದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆ ಬಗ್ಗೆ ಗೊಂದಲ ಇದೆ ಅದನ್ನು ಸರಿಪಡಿಸುವ ಪ್ರಯತ್ನ ನಮ್ಮ ವರಿಷ್ಠರು ಮಾಡುತ್ತಾರೆ ಎಲ್ಲನೂ ಸರಿ ಆಗುತ್ತೆ. ಎಲ್ಲದಕ್ಕೂ ಕಾಲ ಬೇಕು ಅಷ್ಟೇ ಎಂದರು.&lt;/p&gt;&lt;p&gt;&lt;strong&gt;ಸಂಪುಟದಲ್ಲಿ ಮಹಿಳೆಗೆ ಅವಕಾಶ ಬೇಕು&lt;/strong&gt;&lt;/p&gt;&lt;p&gt;ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯ ನೀಡಲೇಬೇಕು ಎಂದ ಸತೀಶ್ ಜಾರಕಿಹೊಳಿ ಅವರು, ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆ ಬೇಕೇ ಬೇಕು. ಈಗ 19 ಮಂದಿ ಇದ್ದಾರೆ, ಇನ್ನೊಂದು ಅವಕಾಶ ಇದೆ. ಯಾವುದೇ ಸರ್ಕಾರವಾಗಿರಲಿ ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಹೇಳಿದರು.&lt;/p&gt;&lt;p&gt;&lt;strong&gt;ಹೊರಟ್ಟಿ ರಾಜೀನಾಮೆಗೆ ಬೆದರಿಕೆ ಆರೋಪ ತಳ್ಳಿಹಾಕಿದ ಸತೀಶ್&lt;/strong&gt;&lt;/p&gt;&lt;p&gt;ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬೆದರಿಕೆ ಹಾಕಿ ರಾಜೀನಾಮೆ ಪಡೆದಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಹೊರಟ್ಟಿಯವರೇ ರಾಜೀನಾಮೆ ನೀಡಿದ್ದಾರೆ. ಅವರು ಅತ್ಯಂತ ಹಿರಿಯ ಶಾಸಕರು. ಅವರೇ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ. ನಾನು ಪತ್ರಿಕೆಯಲ್ಲಿ ನೋಡಿದ್ದೇನೆ ಎಂದರು.&lt;/p&gt;&lt;p&gt;ಸಭಾಪತಿ ಹೊರಟ್ಟಿ ರಾಜೀನಾಮೆ ವಿಚಾರಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅದು ಈಗ ಮುಗಿದು ಹೋಗಿದೆ. ಈಗಾಗಲೇ ರಾಜೀನಾಮೆ ನೀಡಲಾಗಿದ್ದು, ಅದನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು ಮುಂದುವರಿದು ಬೆದರಿಕೆ ಹಾಕುವಂತಹ ಕಾಲ ಇದಲ್ಲ. ಅವರು ಹಿರಿಯ ರಾಜಕಾರಣಿ, ಸಭಾಪತಿ. ಅವರಿಗೆ ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/former-minister-satish-jarkiholi-reacts-on-basavaraj-horatti-resignation-rav/articleshow-g30vbxr"/>
        </item>
        <item>
            <title><![CDATA[Namma Metro: ಬೆಂಗಳೂರಿನ ವಾಹನ ಸವಾರರಿಗೆ ಗುಡ್‌ನ್ಯೂಸ್; ಈ ಮಾರ್ಗದಲ್ಲಿ ಟ್ರಾಫಿಕ್ ತಲೆನೋವಿಗೆ ಶೀಘ್ರವೇ ಪರಿಹಾರ!]]></title>
            <link>https://kannada.asianetnews.com/news/good-news-for-bengaluru-s-motorists-from-namma-metro-construction-work-of-blue-line-project-is-70-percent-complete-sns/articleshow-e95uyro</link>
            <guid isPermaLink="true">https://kannada.asianetnews.com/news/good-news-for-bengaluru-s-motorists-from-namma-metro-construction-work-of-blue-line-project-is-70-percent-complete-sns/articleshow-e95uyro</guid>
            <pubDate>Sat, 08 Aug 2026 12:03:28 +0530</pubDate>
            <description><![CDATA[&lt;p&gt;ನಮ್ಮ ಮೆಟ್ರೋದ ನೀಲಿ ಮಾರ್ಗವೂ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಕೆಆರ್ ಪುರ, ಹೆಬ್ಬಾಳ ಮತ್ತು ಯಲಹಂಕ ಮಾರ್ಗದಲ್ಲಿ ಮೆಟ್ರೋ ಸಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg0zvfnm8nj7n5hbxnvmczk,imgname-hebbal-flyover-1786170568181.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಮ್ಮ ಮೆಟ್ರೋದಿಂದ ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಮ್ಮ ಮೆಟ್ರೋದ ನೀಲಿ ಮಾರ್ಗದ ಯೋಜನೆಯ ನಿರ್ಮಾಣ ಕೆಲಸ ಶೇಕಡಾ 70ರಷ್ಟು ಮುಕ್ತಾಯವಾಗಿದ್ದು, 58.19 ಕಿಲೋಮೀಟರ್ ಉದ್ದದ ಈ ಮಾರ್ಗವನ್ನು 14,788 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 2027ರ ಅಂತ್ಯದ ವೇಳೆ ಸಂಪೂರ್ಣ ಮಾರ್ಗದ ಕಾಮಗಾರಿ ಮುಕ್ತಾಯ ಮಾಡುವ ಗುರಿಯನ್ನು ಹೊಂದಿದೆ.&lt;/p&gt;&lt;h2&gt;&lt;strong&gt;58 ಕಿಲೋ ಮೀಟರ್ ಉದ್ದದ ಕಾರಿಡಾರ್&lt;/strong&gt;&lt;/h2&gt;&lt;p&gt;ನಮ್ಮ ಮೆಟ್ರೋದ ನೀಲಿ ಮಾರ್ಗವೂ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಕೆಆರ್ ಪುರ, ಹೆಬ್ಬಾಳ ಮತ್ತು ಯಲಹಂಕ ಮಾರ್ಗದಲ್ಲಿ ಮೆಟ್ರೋ ಸಾಗುತ್ತದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕ ಬಳಕೆಗೆ ಲಭ್ಯವಾದರೆ ನಿತ್ಯ ಕಚೇರಿಗೆ ತೆರಳುವ ವಾಹನ ಸವಾರರಿಗೆ, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಬಿಗ್ ರಿಲೀಫ್ ಸಿಗಲಿದೆ.&lt;/p&gt;&lt;h2&gt;&lt;strong&gt;ನಮ್ಮ ಮೆಟ್ರೋ ಫೇಸ್ 2ಎ ಮತ್ತು 2ಬಿ&lt;/strong&gt;&lt;/h2&gt;&lt;p&gt;ನಮ್ಮ ಮೆಟ್ರೋದ ಫೇಸ್ 2ಎ- ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆಆರ್ ಪುರ ನಡುವೆ 19.75 ಕಿಲೋ ಮೀಟರ್. ಫೇಸ್ 2ಬಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೆಆರ್ ಪುರಂ ವರೆಗೂ ಹೆಬ್ಬಾಳ, ಯಲಹಂಕ ಮೂಲಕ 38.44 ಕಿಲೋ ಮೀಟರ್ ಮಾರ್ಗವನ್ನು ಹೊಂದಿದೆ. ಎರಡು ಕಾರಿಡಾರ್ ಒಟ್ಟು ಮಾರ್ಗ 58.19 ಕಿಲೋ ಮೀಟರ್ ಇದ್ದು, 30 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿರುತ್ತದೆ.&lt;/p&gt;&lt;p&gt;ಬಿಎಂಆರ್ಸಿಎಲ್ ಮೂಲಗಳ ಅನ್ವಯ, ಸಿವಿಲ್ ವರ್ಕ್, ಟ್ರ್ಯಾಕ್ ನಿರ್ಮಾಣ, ಸಿಗ್ನಲ್ ಅಳವಡಿಕೆ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಉಳಿದ ಕಾಮಗಾರಿಯನ್ನು 2027ರ ಅಂತ್ಯದ ವೇಳೆ ಪೂರ್ಣಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಈ ಯೋಜನೆಯೂ ಆರಂಭದಿಂದಲೂ ಹಲವು ಸವಾಲುಗಳನ್ನು ಎದುರಿಸಿತ್ತು. ಭೂಮಿ ಒತ್ತುವರಿ, ಮರಗಳ ತೆರವು, ಟ್ರಾಫಿಕ್, ಔಟರ್ ರಿಂಗ್ ರೋಡ್, ಕಾರ್ಮಿಕರ ಸಮಸ್ಯೆ ಮತ್ತು ಸುರಕ್ಷತೆಯ ಸಮಸ್ಯೆಗಳು ಕಾಮಗಾರಿಯ ವೇಳೆ ಎದುರಾಗಿತ್ತು. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಯೋಜನೆಯನ್ನು 2027ರ ಅಂತ್ಯದ ವೇಳೆ ಮುಕ್ತಾಯಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ನೀಲಿ ಮಾರ್ಗವೂ ಕಾರ್ಯಾಚರಣೆಯನ್ನು ಆರಂಭ ಮಾಡಿದರೆ ಬೆಂಗಳೂರಿನ ಐಟಿ ಕಾರಿಡಾರ್ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ನೇರ ಸಂಪರ್ಕ ಸಾಧ್ಯವಾಗುತ್ತದೆ. ನಿತ್ಯ 6.15 ಲಕ್ಷ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರ ಮಾಡುವ ನಿರೀಕ್ಷೆ ಇದೆ. ಅದರಲ್ಲೂ ನಿತ್ಯ ಕಚೇರಿಗಳಿಗೆ ತೆರಳುವ ಹಾಗೂ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ರಸ್ತೆ ಮಾರ್ಗಕ್ಕೆ ಗುಡ್ ಬೈ ಹೇಳಿ ಮೆಟ್ರೋವನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲೂ ಔಟರ್ ರಿಂಗ್ ರೋಡ್ ನಲ್ಲಿ ಪ್ರಯಾಣಿಸುವ ವಾಹನ ಸವಾರರು ಖಾಸಗಿ ವಾಹನಗಳ ಬಳಕೆ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಮಾರ್ಗದಲ್ಲಿ ಸಂಚಾರ ಆರಂಭವಾದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವುದು ಮಾತ್ರವಲ್ಲದೆ, ಪ್ರಯಾಣ ಸಮಯ ಕಡಿತ, ವಾಹನ ಕಾರ್ಬನ್ ಬಿಡುಗಡೆ ಪ್ರಮಾಣ ಕಡಿಮೆಯಾಗಿ, ಸುರಕ್ಷಿತ ಸಂಚಾರ ಲಭ್ಯವಾಗಲಿದೆ.&lt;/p&gt;&lt;p&gt;ಸದ್ಯ ಶೇಕಡಾ 72 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ನೀಲಿ ಮಾರ್ಗದ ನಿರ್ಮಾಣದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಬಹುದು. ಅಲ್ಲದೇ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಿಗ್ ಬೂಸ್ಟ್ ಸಿಗಲಿದೆ. ಕೆಆರ್ ಪುರ, ಹೆಬ್ಬಾಳ, ಯಲಹಂಕ ಮತ್ತು ಉತ್ತರ ಬೆಂಗಳೂರಿನ ಪ್ರದೇಶಗಳ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ.&lt;/p&gt;]]></content:encoded>
            <category>news</category>
            <dc:creator>Sumanth SN</dc:creator>
            <atom:link href="https://kannada.asianetnews.com/news/good-news-for-bengaluru-s-motorists-from-namma-metro-construction-work-of-blue-line-project-is-70-percent-complete-sns/articleshow-e95uyro"/>
        </item>
        <item>
            <title><![CDATA[ಶವಗಾರದಲ್ಲಿ 50ಕ್ಕೂ ಹೆಚ್ಚು ಕೊಳೆತ ಮೃತದೇಹ ಬಚ್ಚಿಟ್ಟ ಸಿಬ್ಬಂದಿ.. ಇಲಿ, ಹುಳುಗಳ ಮಧ್ಯೆ ರಾಶಿರಾಶಿ ಬಾಡಿಗಳು]]></title>
            <link>https://kannada.asianetnews.com/viral/chicago-funeral-home-hide-more-then-50-decomposing-bodies-for-month-gkn/articleshow-ut6k7dv</link>
            <guid isPermaLink="true">https://kannada.asianetnews.com/viral/chicago-funeral-home-hide-more-then-50-decomposing-bodies-for-month-gkn/articleshow-ut6k7dv</guid>
            <pubDate>Sat, 08 Aug 2026 11:45:40 +0530</pubDate>
            <description><![CDATA[&lt;p&gt;ಕಳೆದ ಹಲವು ತಿಂಗಳುಗಳಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡುತ್ತಿದ್ದರು. ಅಧಿಕಾರಿಗಳು ದಾಳಿ ನಡೆಸಿದಾಗ ಅಲ್ಲಿನ ದೃಶ್ಯ ಕಂಡು ಹೌಹಾರಿದ್ದಾರೆ. ಸರಿಯಾದ Refrigeration ವ್ಯವಸ್ಥೆಯಿಲ್ಲದ ಕೊಠಡಿಗಳಲ್ಲಿ ಮೃತದೇಹಗಳನ್ನು ರಾಶಿ ಹಾಕಲಾಗಿತ್ತು. ಏನಿದು ಕೇಸ್?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfzxnn69q7tgejrh4rp1nd3,imgname-funeral-home-1786169448100.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಅಮೆರಿಕಾದ ಚಿಕಾಗೋದಲ್ಲಿ ನಡೆದಿದೆ. ಇಲ್ಲಿನ ಅಂತ್ಯಕ್ರಿಯೆ ನಡೆಸುವ ಸಂಸ್ಥೆಯೊಂದರಲ್ಲಿ (Funeral Home) ಕನಿಷ್ಠ 50ಕ್ಕೂ ಹೆಚ್ಚು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಘಟನೆಯು ಇಡೀ ನಗರವನ್ನೇ ಬೆಚ್ಚಿಬೀಳಿಸಿದ್ದು, ಮೃತದೇಹಗಳ ಬಗ್ಗೆ ತೋರಿರುವ ನಿರ್ಲಕ್ಷ್ಯ ಅಮಾನವೀಯತೆಯ ಪರಮಾವಧಿ ಎಂದು ಬಣ್ಣಿಸಲಾಗುತ್ತಿದೆ...&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಚಿಕಾಗೋದ 'ಸೌತ್ ಚಿಕಾಗೋ ಚಾಪೆಲ್' ಎಂಬ ಅಂತ್ಯಕ್ರಿಯೆ ಸಂಸ್ಥೆಯಿಂದ ಕಳೆದ ಹಲವು ತಿಂಗಳುಗಳಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡುತ್ತಿದ್ದರು. ಅಧಿಕಾರಿಗಳು ದಾಳಿ ನಡೆಸಿದಾಗ ಅಲ್ಲಿನ ದೃಶ್ಯ ಕಂಡು ಹೌಹಾರಿದ್ದಾರೆ. ಸರಿಯಾದ Refrigeration ವ್ಯವಸ್ಥೆಯಿಲ್ಲದ ಕೊಠಡಿಗಳಲ್ಲಿ ಮೃತದೇಹಗಳನ್ನು ರಾಶಿ ಹಾಕಲಾಗಿತ್ತು. ಆ ಮೃತದೇಹಗಳು ಕೊಳೆತು ನಾರುತ್ತಿದ್ದವು. ಅವುಗಳ ಮೇಲೆ ಇಲಿಗಳು ಮತ್ತು ಹುಳುಗಳು ಹರಿದಾಡುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ದಂಪತಿ ಕೈಚಳಕ&lt;/strong&gt;&lt;/h2&gt;&lt;p&gt;ಈ ಸಂಸ್ಥೆಯನ್ನು ಜೊಹಾನ್ನಾ ಮಾರ್ಗನ್ ಮತ್ತು ಆಕೆಯ ಪತಿ ಕ್ಲಾರ್ಕ್ ಮಾರ್ಗನ್ ಎಂಬ ದಂಪತಿ ನಡೆಸುತ್ತಿದ್ದಾರೆ. ಈ ದಂಪತಿಗೆ ಇಂತಹ ಕೆಲಸ ಹೊಸದೇನಲ್ಲ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಕಳೆದ ವರ್ಷವಷ್ಟೇ ಇವರ ಒಡೆತನದ ಮತ್ತೊಂದು ಸಂಸ್ಥೆಯ ಪರವಾನಗಿಯನ್ನು ಸರ್ಕಾರ ರದ್ದುಗೊಳಿಸಿತ್ತು. ಅಲ್ಲಿಯೂ ಸಹ ಮೃತದೇಹಗಳನ್ನು ಅಸಮರ್ಪಕವಾಗಿ ಸಂಗ್ರಹಿಸಿಡಲಾಗಿತ್ತು ಮತ್ತು ನೂರಾರು ಕುಟುಂಬಗಳಿಗೆ ಚಿತಾಭಸ್ಮವನ್ನೇ ನೀಡಿರಲಿಲ್ಲ. ಈಗಿನ ಪ್ರಕರಣ ಬೆಳಕಿಗೆ ಬರುವ ಒಂದು ದಿನ ಮೊದಷ್ಟೇ ಜೊಹಾನ್ನಾ ಅವರ ಪರವಾನಗಿಯನ್ನು ಅಮಾನತುಗೊಳಿಸಲಾಗಿತ್ತು. ಆದರೂ ಈ ದಂಪತಿ ತಮ್ಮ ದಂಧೆಯನ್ನು ಮುಂದುವರಿಸಿದ್ದರು.&lt;/p&gt;&lt;h2&gt;&lt;strong&gt;ಮೃತ ಕುಟುಂಬಸ್ಥರ ಆಕ್ರೋಶ&lt;/strong&gt;&lt;/h2&gt;&lt;p&gt;ಸುದ್ದಿ ತಿಳಿಯುತ್ತಿದ್ದಂತೆಯೇ ಶವಾಗಾರದ ಮುಂದೆ ಕುಟುಂಬಸ್ಥರು ಜಮಾಯಿಸಿದ್ದಾರೆ. 55 ವರ್ಷದ ಲತಾಶಾ ಜಾನ್ಸನ್ ಎಂಬುವವರು ಕಣ್ಣೀರು ಹಾಕುತ್ತಾ, ನಾನು ನನ್ನ ತಾಯಿಯ ಅಂತ್ಯಕ್ರಿಯೆಯನ್ನು ನಿನ್ನೆಯಷ್ಟೇ ಇಲ್ಲೇ ಮಾಡಿದ್ದೆ. ಈಗ ಅವರ ಮೃತದೇಹವನ್ನು ಮತ್ತೆ ಪತ್ತೆಹಚ್ಚಿ ಮರಣೋತ್ತರ ಪರೀಕ್ಷೆ ಮಾಡಬೇಕಿದೆ ಎನ್ನುತ್ತಿದ್ದಾರೆ. ನನ್ನ ಹೃದಯವೇ ಒಡೆದುಹೋದಂತಾಗಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಇದು ಕೇವಲ ಚಿಕಾಗೋದ ಕಥೆಯಲ್ಲ. ಕಳೆದ ಮೂರು ವರ್ಷಗಳಲ್ಲಿ ಅಮೆರಿಕಾದ ವಿವಿಧ ಭಾಗಗಳಲ್ಲಿ ಇಂತಹ ಹಲವು ಘಟನೆಗಳು ವರದಿಯಾಗಿವೆ. ಕಳೆದ ತಿಂಗಳು ಕೊಲೊರಾಡೋದಲ್ಲಿ 24 ಕೊಳೆತ ಮೃತದೇಹಗಳು ಪತ್ತೆಯಾಗಿದ್ದವು. 2024ರಲ್ಲಿ ಜಾರ್ಜಿಯಾದಲ್ಲಿ 18 ಮೃತದೇಹಗಳು ಪತ್ತೆಯಾಗಿದ್ದವು. 2023ರಲ್ಲಿ ಇಂಡಿಯಾನಾದಲ್ಲಿ 31 ಮತ್ತು ಕೊಲೊರಾಡೋದಲ್ಲಿ ಬರೊಬ್ಬರಿ 200 ಮೃತದೇಹಗಳು ಇಂತಹದ್ದೇ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಮೃತದೇಹಗಳನ್ನು ಗುರುತಿಸಿ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ತಪ್ಪಿತಸ್ಥ ದಂಪತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/chicago-funeral-home-hide-more-then-50-decomposing-bodies-for-month-gkn/articleshow-ut6k7dv"/>
        </item>
        <item>
            <title><![CDATA[ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ CM ಶುಭೇಂದು ಅಧಿಕಾರಿ]]></title>
            <link>https://kannada.asianetnews.com/cine-world/mithun-chakraborty-undergoes-surgery-cm-suvendu-adhikari-visits-hospital-and-shares-health-update/articleshow-pmrrgfu</link>
            <guid isPermaLink="true">https://kannada.asianetnews.com/cine-world/mithun-chakraborty-undergoes-surgery-cm-suvendu-adhikari-visits-hospital-and-shares-health-update/articleshow-pmrrgfu</guid>
            <pubDate>Sat, 08 Aug 2026 11:22:42 +0530</pubDate>
            <description><![CDATA[&lt;p&gt;ಹಿರಿಯ ಬಾಲಿವುಡ್ ನಟ ಮತ್ತು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರ ಸ್ಥಿತಿ ಹಠಾತ್ತನೆ ಹದಗೆಟ್ಟಿದೆ. ಅವರಿಗೆ ನಿನ್ನೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅವರು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzdhdww5rz7hc3pt78da6gq2,imgname-asianet-bangla-thump---2026-08-07t124836.517-1786087142277.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಬಾಲಿವುಡ್&zwnj;ನ &lsquo;ಡಿಸ್ಕೋ ಡ್ಯಾನ್ಸರ್&rsquo; ಖ್ಯಾತಿಯ ಮಿಥುನ್ ಚಕ್ರವರ್ತಿ ಆಸ್ಪತ್ರೆಗೆ ದಾಖಲು&lt;/strong&gt;&lt;/h2&gt;&lt;p&gt;ಬಾಲಿವುಡ್&zwnj;ನ &lsquo;ಡಿಸ್ಕೋ ಡ್ಯಾನ್ಸರ್&rsquo; ಖ್ಯಾತಿಯ ಮಿಥುನ್ ಚಕ್ರವರ್ತಿ ಅವರಿಗೆ ಗುರುವಾರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರ ದೇಹದಲ್ಲಿ ಈ ಹಿಂದೆ ಅಳವಡಿಸಲಾಗಿದ್ದ ಮೆಟಲ್ ಪ್ಲೇಟ್&zwnj;ನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ. ಈ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಆಸ್ಪತ್ರೆಗೆ ತೆರಳಿ ಮಿಥುನ್ ಚಕ್ರವರ್ತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಮಿಥುನ್ ಚಕ್ರವರ್ತಿಗೆ ಶಸ್ತ್ರಚಿಕಿತ್ಸೆ&lt;/strong&gt;&lt;/h3&gt;&lt;p&gt;ಮಿಥುನ್ ಚಕ್ರವರ್ತಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ರಾತ್ರಿ ಅವರಿಗೆ ಆಸ್ಪತ್ರೆಯಲ್ಲಿ ಸಣ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವೈದ್ಯರ ಪ್ರಕಾರ, ಇದು ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಯಾಗಿದ್ದು, ಅವರ ದೇಹದಲ್ಲಿ ಈ ಹಿಂದೆ ಅಳವಡಿಸಲಾಗಿದ್ದ ಮೆಟಲ್ ಪ್ಲೇಟ್&zwnj;ನ್ನು ತೆಗೆದುಹಾಕಲಾಗಿದೆ. ಸದ್ಯ ಮಿಥುನ್ ಚಕ್ರವರ್ತಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;h3&gt;&lt;strong&gt;ಸಿಎಂ ಶುಭೇಂದು ಅಧಿಕಾರಿ ಆಸ್ಪತ್ರೆಗೆ ಭೇಟಿ&lt;/strong&gt;&lt;/h3&gt;&lt;p&gt;ಶುಕ್ರವಾರ ಬೆಳಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಮಿಥುನ್ ಚಕ್ರವರ್ತಿ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದರು. ನಟನನ್ನು ಭೇಟಿಯಾಗಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಅವರು, ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡದೊಂದಿಗೂ ಮಾತುಕತೆ ನಡೆಸಿ ಆರೋಗ್ಯದ ಮಾಹಿತಿ ಪಡೆದರು.&lt;/p&gt;&lt;p&gt;&lt;strong&gt;ಮಿಥುನ್ ಆರೋಗ್ಯದ ಬಗ್ಗೆ ಶುಭೇಂದು ಅಧಿಕಾರಿ ಅಪ್&zwnj;ಡೇಟ್&lt;/strong&gt;&lt;/p&gt;&lt;p&gt;ಮಿಥುನ್ ಚಕ್ರವರ್ತಿ ಅವರನ್ನು ಭೇಟಿಯಾದ ಬಳಿಕ ಶುಭೇಂದು ಅಧಿಕಾರಿ ಅವರ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಿಥುನ್ ಚಕ್ರವರ್ತಿ ದೈಹಿಕ ಅನಾರೋಗ್ಯದ ಕಾರಣ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಭೇಟಿ ಮಾಡಿ ಮಾತನಾಡಿದ್ದು, ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಮಿಥುನ್ ಚಕ್ರವರ್ತಿ ಅವರ ಆರೋಗ್ಯ ಇದೀಗ ಸಾಮಾನ್ಯ ಸ್ಥಿತಿಯಲ್ಲಿದೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ನಿರೀಕ್ಷೆಯಿದೆ ಎಂದು ಶುಭೇಂದು ಅಧಿಕಾರಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;2024ರಲ್ಲೂ ಆಸ್ಪತ್ರೆಗೆ ದಾಖಲಾಗಿದ್ದರು&lt;/strong&gt;&lt;/p&gt;&lt;p&gt;ಮಿಥುನ್ ಚಕ್ರವರ್ತಿ ಆಸ್ಪತ್ರೆಗೆ ದಾಖಲಾಗಿರುವುದು ಇದೇ ಮೊದಲ ಬಾರಿಯಲ್ಲ. 2024ರ ಫೆಬ್ರವರಿಯಲ್ಲಿ ಮೆದುಳಿನ ಪಾರ್ಶ್ವವಾಯು ಹಾಗೂ ಎದೆನೋವಿನ ಸಮಸ್ಯೆಯಿಂದ ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೂ ಶುಭೇಂದು ಅಧಿಕಾರಿ ಆಸ್ಪತ್ರೆಗೆ ತೆರಳಿ ಮಿಥುನ್ ಚಕ್ರವರ್ತಿ ಅವರ ಆರೋಗ್ಯ ವಿಚಾರಿಸಿದ್ದರು.&lt;/p&gt;&lt;p&gt;&lt;strong&gt;ನಿಟ್ಟುಸಿರು ಬಿಟ್ಟ ಅಭಿಮಾನಿಗಳು&lt;/strong&gt;&lt;/p&gt;&lt;p&gt;ಮಿಥುನ್ ಚಕ್ರವರ್ತಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹೊರಬಂದ ಬಳಿಕ ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಆದರೆ ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಹೊರಬಂದಿರುವುದು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.&lt;/p&gt;]]></content:encoded>
            <category>news</category>
            <dc:creator>Pavna Das</dc:creator>
            <atom:link href="https://kannada.asianetnews.com/cine-world/mithun-chakraborty-undergoes-surgery-cm-suvendu-adhikari-visits-hospital-and-shares-health-update/articleshow-pmrrgfu"/>
        </item>
        <item>
            <title><![CDATA[ದೆಹಲಿ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ, ಜಾರ್ಖಂಡ್ ಹೋರಾಟಕ್ಕೆ ಮೌನವೇಕೆ? ಕಾಂಗ್ರೆಸ್‌ನ ಡಬಲ್ ಸ್ಟ್ಯಾಂಡರ್ಡ್‌ಗೆ ಬಿಜೆಪಿ ಕಿಡಿ]]></title>
            <link>https://kannada.asianetnews.com/politics/congress-leader-rahul-gandhi-double-standard-policy-in-delhi-and-jharkhand-student-protests-sparks-bjp/articleshow-4o4m8oo</link>
            <guid isPermaLink="true">https://kannada.asianetnews.com/politics/congress-leader-rahul-gandhi-double-standard-policy-in-delhi-and-jharkhand-student-protests-sparks-bjp/articleshow-4o4m8oo</guid>
            <pubDate>Sat, 08 Aug 2026 11:15:42 +0530</pubDate>
            <description><![CDATA[&lt;p&gt;ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ನೀಡಿ, ಜಾರ್ಖಂಡ್&zwnj;ನಲ್ಲಿ ನಡೆಯುತ್ತಿರುವ ಸರ್ಕಾರಿ ನೌಕರಿ ನೇಮಕಾತಿ ವಿರೋಧಿ ಹೋರಾಟವನ್ನು ಕಡೆಗಣಿಸಿರುವ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಇದು ಕಾಂಗ್ರೆಸ್&zwnj;ನ ಡಬಲ್ ಸ್ಟ್ಯಾಂಡರ್ಡ್ಎಂದು ಕಟು ಟೀಕೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfy5tgqwg50vk1371qvwqd4,imgname-----------------------2026-08-08t111003.267-1786167618071.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಹೋರಾಟಕ್ಕೆ ತೋರಿಸಿದ ಆಸಕ್ತಿ ಜಾರ್ಖಂಡ್&zwnj;ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಏಕಿಲ್ಲ? ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.&lt;/p&gt;&lt;p&gt;ಜಾರ್ಖಂಡ್&zwnj;ನಲ್ಲಿ ಸರ್ಕಾರಿ ನೌಕರಿಗಳ ಮಾರಾಟ ವಿರೋಧಿಸಿ ನಡೆಸುತ್ತಿರುವ ವಿದ್ಯಾರ್ಥಿಗಳ ಹೋರಾಟ ಸಂಬಂಧ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ತೆಲಂಗಾಣ ಬಿಜೆಪಿ ಅಧ್ಯಕ್ಷ ರಾಮಚಂದರ್ ರಾವ್, 'ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;h2&gt;ಡಬಲ್ ಸ್ಟ್ಯಾಂಡರ್ಡ್, ಬೂಟಾಟಿಕೆ:&lt;/h2&gt;&lt;p&gt;ದೆಹಲಿಯಲ್ಲಿ ಕಾಕ್ರೋಚ್ ಪಾರ್ಟಿ ನಡೆಸಿದ ಹೋರಾಟಕ್ಕೆ ಎಲ್ಲಿಲ್ಲದ ಮಹತ್ವದ ಕೊಟ್ಟು, ತಾವೂ ಪ್ರತಿಭಟನೆಯಲ್ಲಿ ಭಾಗಿಯಾಗಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆಹಾಕಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಕೇಜ್ರಿವಾಲ ಸೇರಿದಂತೆ ಎಲ್ಲ ಇಂಡಿ ಒಕ್ಕೂಟ ದೆಹಲಿ ಪ್ರತಿಭಟನೆಗೆ ಪ್ರತಿಕ್ರಿಯಿಸಿತು. ಆದರೆ ಇದೇ ಜಾರ್ಖಂಡ್&zwnj;ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಆಗಲಿ ಇಂಡಿಯಾ ಒಕ್ಕೂಟದ ಇತರೆ ನಾಯಕರಾಗಲಿ ಪ್ರತಿಕ್ರಿಯಿಸಿಲ್ಲ, ಬೆಂಬಲಿಸದಿರುವುದು ಇವರ ಡಬಲ್ ಸ್ಟ್ರ್ಯಾಂಡರ್ಡ್ ನಡೆ ತೋರಿಸುತ್ತದೆ ಎಂದು ಹರಿಯಾಯ್ದರು.&lt;/p&gt;&lt;p&gt;ವಿದ್ಯಾರ್ಥಿಗಳನ್ನು ಕೇವಲ ರಾಜಕೀಯ ಉದ್ದೇಶಗಳ ಲಾಭಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್, ಇಂಡಿ ಒಕ್ಕೂಟ ಯತ್ನಿಸುತ್ತಿವೆ. ಕೇರಳದಲ್ಲೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರಾಹುಲ್ ಗಾಂಧಿಗೆ ಇದೆಲ್ಲ ಕಣ್ಣಿಗೆ ಕಾಣುತ್ತಿಲ್ಲ. ವಿದ್ಯಾರ್ಥಿಗಳ ಹಕ್ಕಿನ ಮಾತನಾಡುವ ಇವರು, ಜಾರ್ಖಂಡ್ ವಿದ್ಯಾರ್ಥಿಗಳ ಬಗ್ಗೆ ಪ್ರತಿಕ್ರಿಯಿಸುವುದು, ಏಕೆಂದರೆ ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟದಿಂದ ಇವರ ರಾಜಕೀಯ ಬೇಳೆ ಬೇಯುವುದಿಲ್ಲ. ದೆಹಲಿಯಲ್ಲಿನ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ. ಇದರಿಂದ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದೆ. ಇವರಿಗೆ ವಿದ್ಯಾರ್ಥಿಗಳ ಸಮಸ್ಯೆ, ಭವಿಷ್ಯದ ಬಗ್ಗೆ ನೈಜ ಕಾಳಜಿ ಇಲ್ಲ. ದೇಶದಲ್ಲಿ ಅರಾಜಕತೆ ಸೃಷ್ಟಿಸಿಯಾದರೂ ಅಧಿಕಾರ ಹಿಡಿಯಬೇಕು ಎಂಬುದೊಂದೇ ಉದ್ದೇಶವಾಗಿದೆಎಂದು ಕಿಡಿಕಾರಿದರು.&lt;/p&gt;&lt;p&gt;14ನೇ ಜಾರ್ಖಂಡ್ ಲೋಕಸೇವಾ ಆಯೋಗದ (JPSC) ಪರೀಕ್ಷೆಯ ಪ್ರಾಥಮಿಕ ಪರೀಕ್ಷೆಯನ್ನು (PT) ರದ್ದುಗೊಳಿಸಬೇಕು ಮತ್ತು TDPL ಏಜೆನ್ಸಿಗಳ ಮೂಲಕ ನಡೆಸಿದ ಪರೀಕ್ಷೆಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿ ಜಾರ್ಖಂಡ್&zwnj;ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ರಾಮಚಂದರ್ ರಾವ್ ಈ ಹೇಳಿಕೆ ನೀಡಿದ್ದಾರೆ.&lt;/p&gt;&lt;h3&gt;FCRA ತಿದ್ದುಪಡಿ ಮಸೂದೆಗೆ ಟೀಕೆ&lt;/h3&gt;&lt;p&gt;ಇದೇ ವೇಳೆ, ಉದ್ದೇಶಿತ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಅಥವಾ ಎಫ್&zwnj;ಸಿಆರ್&zwnj;ಎ ಮಸೂದೆ ಬಗ್ಗೆ ಅಮೆರಿಕ ಆಕ್ಷೇಪ ವಿಚಾರ ಪ್ರಸ್ತಾಪಿಸಿ, 'ಇದು ದೇಶದ ಸಾರ್ವಭೌಮತ್ವವನ್ನೇ ಪ್ರಶ್ನಿಸುತ್ತದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;FCRA ಇದು ಭಾರತದ ಆಂತರಿಕ ವಿಚಾರ. ಇದರಲ್ಲಿ ಅಮೆರಿಕದಂತಹ ಬೇರೆ ದೇಶಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇದು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಿದಂತೆ' ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಏನಿದು FCRA?&lt;/p&gt;&lt;p&gt;ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026ರ ಪ್ರಕಾರ ಒಂದು ಸಂಸ್ಥೆಯ ಎಫ್&zwnj;ಸಿಆರ್&zwnj;ಎ ನೋಂದಣಿ ರದ್ದಾದರೆ. ಹಿಂಪಡೆದರೆ ಅಥವಾ ಅವಧಿ ಮುಗಿದರೆ, ಅಂತಹ ಬಂಡವಾಳದ ಮೂಲಕ ಪಡೆದ ವಿದೇಶಿ ದೇಣಿಗೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ನಡೆಸಲು 'ನಿಯೋಜಿತ ಪ್ರಾಧಿಕಾರ'ವನ್ನು ಸ್ಥಾಪಿಸಲು ಈ ಮಸೂದೆ ಪ್ರಸ್ತಾಪಿಸಿದೆ.&lt;/p&gt;&lt;p&gt;ಒಂದು ವೇಳೆ ಅಂತಹ ಆಸ್ತಿಗಳು ಪೂಜಾ ಸ್ಥಳವಾಗಿದ್ದರೆ, ಅದರ ಧಾರ್ಮಿಕ ಸ್ವರೂಪವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಈ ಪ್ರಾಧಿಕಾರಕ್ಕೆ ಮಸೂದೆಯು ಸ್ಪಷ್ಟವಾಗಿ ಸೂಚಿಸುತ್ತದೆ. ಇದಲ್ಲದೆ, ಶಾಸನಬದ್ಧ ಉಲ್ಲಂಘನೆಗಳಿಗೆ ವಿಧಿಸುವ ಗರಿಷ್ಠ ಶಿಕ್ಷೆಯನ್ನು ಐದು ವರ್ಷಗಳ ಜೈಲು ಶಿಕ್ಷೆಯಿಂದ ಒಂದು ವರ್ಷಕ್ಕೆ ಇಳಿಸಲು ಸಹ ಈ ಮಸೂದೆ ಪ್ರಸ್ತಾಪಿಸುತ್ತದೆ.&lt;/p&gt;&lt;p&gt;(ಈ ವರದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದಂತೆ ಸುದ್ದಿ ಸಂಸ್ಥೆಯಿಂದ ಬಂದಂತೆ ಪ್ರಕಟಿಸಲಾಗಿದೆ. ಏಷ್ಯಾನೆಟ್ ನ್ಯೂಸೇಬಲ್ ಇಂಗ್ಲಿಷ್ ತಂಡದಿಂದ ಯಾವುದೇ ಬದಲಾವಣೆ ಮಾಡಲಾಗಿಲ್ಲ.)&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/congress-leader-rahul-gandhi-double-standard-policy-in-delhi-and-jharkhand-student-protests-sparks-bjp/articleshow-4o4m8oo"/>
        </item>
        <item>
            <title><![CDATA[ತಪ್ಪೇ ಮಾಡಿರಲಿಲ್ಲ ಆದರೂ 14 ವರ್ಷ ಜೈಲಲ್ಲಿ ಕಳೆದರು.. ಯಾರದ್ದೋ FSL ನೋಡಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದ ಕೋರ್ಟ್‌!]]></title>
            <link>https://kannada.asianetnews.com/india-news/14-years-spent-in-prison-mp-high-court-overturns-murder-conviction-based-on-wrong-fsl-report-gkn/articleshow-rl0hg07</link>
            <guid isPermaLink="true">https://kannada.asianetnews.com/india-news/14-years-spent-in-prison-mp-high-court-overturns-murder-conviction-based-on-wrong-fsl-report-gkn/articleshow-rl0hg07</guid>
            <pubDate>Sat, 08 Aug 2026 11:02:44 +0530</pubDate>
            <description><![CDATA[&lt;p&gt;ಇಲ್ಲಿ ಇಬ್ಬರು ನಿರಾಪರಾಧಿಗಳ ಬದುಕು ಕಿತ್ತುಕೊಂಡಿದ್ದ ಪ್ರಕರಣಕ್ಕೆ ಕೊನೆಗೂ ಹೈಕೋರ್ಟ್&zwnj; ನ್ಯಾಯ ನೀಡಿದೆ. ಆದರೆ 14 ವರ್ಷಗಳ ಕಾಲ ತಪ್ಪೇ ಮಾಡದೇ ಶಿಕ್ಷೆ ಅನುಭವಿಸಿ ಅಮೂಲ್ಯ ಬದುಕು ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ? ಎಲ್ಲಿ ನಡೆದಿರೋದು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfxqnh9p3a396mg022r5d65,imgname-madhya-pradesh-high-court-1786167154214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಬಲ್ಪುರ (ಮಧ್ಯಪ್ರದೇಶ):&lt;/strong&gt; ನ್ಯಾಯದೇವತೆ ಕುರುಡಿ ಎನ್ನುತ್ತಾಳೆ.. ಆದರೆ ಇಲ್ಲಿ ವ್ಯವಸ್ಥೆಯ ನಿರ್ಲಕ್ಷ್ಯ ಇಬ್ಬರು ವ್ಯಕ್ತಿಗಳ ಬದುಕಿನ ಅಮೂಲ್ಯ 14 ವರ್ಷಗಳು ಕಳೆದುಹೋಗಿದೆ. ಕೊಲೆ ಪ್ರಕರಣ ಒಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷ ಜೈಲಿನಲ್ಲಿ ಕಳೆದಿದ್ದ ಇಬ್ಬರು ವ್ಯಕ್ತಿಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಖುಲಾಸೆಗೊಳಿಸಿದೆ.&lt;/p&gt;&lt;p&gt;ವಿಚಾರಣಾ ನ್ಯಾಯಾಲಯವು ಈ ಇಬ್ಬರಿಗೆ ಶಿಕ್ಷೆ ವಿಧಿಸುವಾಗ ಈ ಕೇಸಿಗೆ ಸಂಬಂಧವೇ ಇಲ್ಲದ, ಬೇರೊಂದು ಕೊಲೆ ಪ್ರಕರಣದ ಫೊರೆನ್ಸಿಕ್ (FSL) ವರದಿಯನ್ನು ಆಧರಿಸಿ ತೀರ್ಪು ನೀಡಿತ್ತು!&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;2009ರ ಆಗಸ್ಟ್ 25ರಂದು ದಮೋಹ್ ಜಿಲ್ಲೆಯಲ್ಲಿ ಪ್ಯಾರೇಲಾಲ್ ಗಡರಿಯಾ ಎಂಬುವವರ ಮೇಲೆ ಹಲ್ಲೆ ನಡೆದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಈ ಸಂಬಂಧ ತುಳಸಿರಾಮ್ ರಾಜ್&zwnj;ಪಾಲ್ ಮತ್ತು ಹರಪ್ರಸಾದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. 2012ರಲ್ಲಿ ದಮೋಹ್&zwnj;ನ ವಿಶೇಷ ಸೆಷನ್ಸ್ ನ್ಯಾಯಾಲಯವು ಇವರಿಬ್ಬರೂ ದೋಷಿಗಳು ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಂದಿನಿಂದ ಇಂದಿನವರೆಗೆ ಅಂದರೆ ಕಳೆದ 14 ವರ್ಷಗಳಿಂದ ಇವರು ಜೈಲಿನಲ್ಲೇ ಇದ್ದರು.&lt;/p&gt;&lt;h2&gt;&lt;strong&gt;ಹೈಕೋರ್ಟ್ ಪತ್ತೆಹಚ್ಚಿದ ತಪ್ಪುಗಳು&lt;/strong&gt;&lt;/h2&gt;&lt;p&gt;ಈ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಕುಮಾರ್ ಸಿಂಗ್ ಅವರಿದ್ದ ಪೀಠವು ತನಿಖಾ ಸಂಸ್ಥೆ ಮತ್ತು ಕೆಳಹಂತದ ನ್ಯಾಯಾಲಯದ ಗಂಭೀರ ಲೋಪಗಳನ್ನು ಪಟ್ಟಿ ಮಾಡಿದೆ. ವಿಚಾರಣಾ ನ್ಯಾಯಾಲಯವು ತೀರ್ಪು ನೀಡುವಾಗ ಬಳಸಿದ FSL ವರದಿಯು ಈ ಪ್ರಕರಣದ್ದೇ ಆಗಿರಲಿಲ್ಲ. ಅದರಲ್ಲಿ ಉಲ್ಲೇಖವಾಗಿದ್ದ ಆರೋಪಿಗಳು, ಆಯುಧಗಳು ಮತ್ತು ಗಾಯಾಳುಗಳು ಎಲ್ಲವೂ ಬೇರೆಯೇ ಆಗಿದ್ದವು. ಇಂತಹ ದೊಡ್ಡ ನಿರ್ಲಕ್ಷ್ಯ ಹೇಗೆ ನಡೆಯಿತು ಎಂಬುದು ಆಶ್ಚರ್ಯ ತಂದಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.&lt;/p&gt;&lt;h2&gt;&lt;strong&gt;ಸತ್ತ ವ್ಯಕ್ತಿ ದೂರು ನೀಡಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಪೊಲೀಸರ ಪ್ರಕಾರ ಮೃತ ಪ್ಯಾರೇಲಾಲ್ ಸಾವನ್ನಪ್ಪುವ ಮೊದಲು ಎಫ್&zwnj;ಐಆರ್ ದಾಖಲಿಸಿದ್ದರು. ಆದರೆ ವೈದ್ಯರ ವರದಿಯ ಪ್ರಕಾರ ಪ್ಯಾರೇಲಾಲ್ ಅವರನ್ನು ಆಸ್ಪತ್ರೆಗೆ ತರುವ ಮೊದಲೇ ಮೃತಪಟ್ಟಿದ್ದರು. ಹಾಗಿದ್ದಲ್ಲಿ ಎಫ್&zwnj;ಐಆರ್ ಮೇಲೆ ಅವರ ಹೆಬ್ಬೆಟ್ಟಿನ ಗುರುತು ಬಂದಿದ್ದು ಹೇಗೆ? ಅದನ್ನು ಬರೆದವರು ಯಾರು? ಎಂಬ ಪ್ರಶ್ನೆಗೆ ಸಾರಿಗೆ ಇಲಾಖೆಯ ಬಳಿ ಉತ್ತರವಿಲ್ಲ. ಎಫ್&zwnj;ಐಆರ್ ಬರೆದ ಪೊಲೀಸ್ ಅಧಿಕಾರಿ ಯಾರು ಎಂಬುದನ್ನು ಗುರುತಿಸಲು ತನಿಖಾಧಿಕಾರಿಗೆ ಸಾಧ್ಯವಾಗಲಿಲ್ಲ. ಇದು ಇಡೀ ತನಿಖೆಯೇ ಸಂಶಯಾಸ್ಪದವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಕೋರ್ಟ್ ಹೇಳಿದೆ.&lt;/p&gt;&lt;h2&gt;&lt;strong&gt;14 ವರ್ಷಗಳ ನಂತರ ಸಿಕ್ಕ ನ್ಯಾಯ&lt;/strong&gt;&lt;/h2&gt;&lt;p&gt;ತನಿಖೆಯಲ್ಲಿನ ಗಂಭೀರ ಲೋಪಗಳು ಮತ್ತು ಪ್ರಾಸಿಕ್ಯೂಷನ್ ಸಾಕ್ಷ್ಯಗಳ ಕೊರತೆಯಿಂದಾಗಿ ಈ ಶಿಕ್ಷೆಯನ್ನು ಎತ್ತಿಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ ಹೈಕೋರ್ಟ್, ತಕ್ಷಣವೇ ಇಬ್ಬರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಕಾನೂನು ಹೋರಾಟದಲ್ಲಿ ಕೊನೆಗೂ ಜಯ ಸಿಕ್ಕಿದೆಯಾದರೂ, ಮಾಡದ ತಪ್ಪಿಗೆ ಯೌವನದ 14 ವರ್ಷಗಳನ್ನು ಜೈಲಿನ ಕತ್ತಲಲ್ಲಿ ಕಳೆದ ಈ ಇಬ್ಬರು ವ್ಯಕ್ತಿಗಳ ನಷ್ಟವನ್ನು ತುಂಬಿಕೊಡುವವರು ಯಾರು ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/14-years-spent-in-prison-mp-high-court-overturns-murder-conviction-based-on-wrong-fsl-report-gkn/articleshow-rl0hg07"/>
        </item>
        <item>
            <title><![CDATA[ಕೂದಲು, ನಿಂಬೆ, ಮೇಕೆ ತಲೆ, ಚಿನ್ನದ ತಾಳಿ..! ತುಮಕೂರಿನ ಬನವಾಸಿ ಆಂಜನೇಯ ದೇಗುಲದ ಬಳಿ ವಾಮಾಚಾರಕ್ಕೆ ಬೆಚ್ಚಿಬಿದ್ದ ಸ್ಥಳೀಯರು]]></title>
            <link>https://kannada.asianetnews.com/gallery/crime/miscreants-black-magic-near-banavasi-anjaneya-temple-in-vaddarahalli-tumakuru-district-rav-3flg3yg</link>
            <guid isPermaLink="true">https://kannada.asianetnews.com/gallery/crime/miscreants-black-magic-near-banavasi-anjaneya-temple-in-vaddarahalli-tumakuru-district-rav-3flg3yg</guid>
            <pubDate>Sat, 08 Aug 2026 10:29:33 +0530</pubDate>
            <description><![CDATA[&lt;p&gt;ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfvq94v6dfrgja4e45b526n,imgname-----------------------2026-08-08t102646.342-1786165044379.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಬನವಾಸಿ ಆಂಜನೇಯ ದೇವಸ್ಥಾನದ ಬಳಿಯೇ ವಾಮಾಚಾರ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳದಲ್ಲಿ ಮೇಕೆಯ ತಲೆ, ಮಣ್ಣಿನ ಕುಡಿಕೆಯೊಳಗೆ ಬೇವಿನ ಸೊಪ್ಪು, ಕೂದಲು, ನಿಂಬೆ, ಸೇರಿದಂತೆ ವಾಮಾಚಾರಕ್ಕೆ ಬಳಸುವ ಹಲವು ವಸ್ತಗಳು ಕಂಡುಬಂದಿವೆ.&lt;/p&gt;&lt;img&gt;&lt;p&gt;ದುಷ್ಕರ್ಮಿಗಳು ನಿಧಿ ಆಸೆಗೆ ವಾಮಾಚಾರ ಮಾಡಿದ್ದಾರಾ? ಅಥವಾ ಶತ್ರು ಸಂಹಾರ ಪೂಜೆಯಾ? ಸ್ಥಳದಲ್ಲಿ ಪತ್ತೆಯಾದ ಕೂದಲು ಯಾರದ್ದು? ಇನ್ನು ಬೆಚ್ಚಿಬಿಳಿಸುವ ವಿಷಯ ಎಂದರೆ ಮೇಕೆ ಬಲಿ ಕೊಡುವ ಮುನ್ನ ಸಿಂಗರಿಸಿ ಚಿನ್ನದ ತಾಳಿ ಕಟ್ಟಿ ಪೂಜೆ ಮಾಡಲಾಗಿದೆ. ಮಹಿಳೆಯರ ಬಟ್ಟೆಗಳು ಸಹ ಚೆಲ್ಲಪಿಲ್ಲಿ ಬಿದ್ದಿದ್ದು ವಾಮಾಚಾರ ಮುಗಿದ ಬಳಿಕ ಎಲ್ಲ ವಸ್ತುಗಳನ್ನು ಅಲ್ಲಿಯೇ ಬಿಟ್ಟು ತೆರಳಿರುವ ದುಷ್ಮರ್ಮಿಗಳು. ಇದೆಲ್ಲ ಗಮನಿಸಿದರೆ ದುಷ್ಕರ್ಮಿಗಳು ಹೆಣ್ಣಿನ ವಶೀಕರಣ ಪೂಜೆ ನಡೆದಿದೆಯೇನೋ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅನುಮಾನಗಳಿಗೆ ಇಂಬು ಕೊಡುವಂತೆ ಮಹಿಳೆಯ ಬಟ್ಟೆ, ಚಿನ್ನದ ತಾಳಿ, ಕೂದಲು ಸ್ಥಳದಲ್ಲಿ ಕಂಡು ಬಂದಿವೆ&lt;/p&gt;&lt;img&gt;&lt;p&gt;ಎಂದಿನಂತೆ ಜನ ಇಂದು ದೇವಸ್ಥಾನದ ಬಳಿ ಹೋದಾಗ ಅಲ್ಲಿ ಕಂಡುಬಂದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಬಂದ ಜನರು. ಕೆಲವರು ನಿಧಿ ಆಸೆಗಾಗಿ ಕಳ್ಳರ ಕೆಲಸ ಇದು ಎಂದರೆ, ಇನ್ನು ಕೆಲವರು ಸ್ತ್ರೀವಶೀಕರಣ ಪೂಜೆ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಈ ರೀತಿ ವಾಮಾಚಾರ ಮಾಡುವುದರ ಹಿಂದೆ ಏನು ಉದ್ದೇಶವಿತ್ತು ಅನ್ನೊದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/crime/miscreants-black-magic-near-banavasi-anjaneya-temple-in-vaddarahalli-tumakuru-district-rav-3flg3yg"/>
        </item>
        <item>
            <title><![CDATA[Swiggy, Zomato, Zepto ಸೇವೆಗೆ ಎಲೆಕ್ಟ್ರಿಕ್ ವಾಹನ ಕಡ್ಡಾಯ -ಡೆಲಿವರಿ ಬಾಯ್ಸ್‌ಗೆ ಸರ್ಕಾರದಿಂದ ಗುಡ್‌ನ್ಯೂಸ್]]></title>
            <link>https://kannada.asianetnews.com/india-news/electric-vehicles-made-mandatory-for-swiggy-zomato-and-zepto-services-gkn/articleshow-e1laaaf</link>
            <guid isPermaLink="true">https://kannada.asianetnews.com/india-news/electric-vehicles-made-mandatory-for-swiggy-zomato-and-zepto-services-gkn/articleshow-e1laaaf</guid>
            <pubDate>Sat, 08 Aug 2026 10:21:24 +0530</pubDate>
            <description><![CDATA[&lt;p&gt;ಪ್ರಸ್ತುತ ಸ್ವಿಗ್ಗಿ, ಜೊಮ್ಯಾಟೋ ಅಂತಹ ಕಂಪನಿಗಳು ಕೇಂದ್ರ ಸರ್ಕಾರದ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿವೆ. ಆದರೆ ರಾಜ್ಯದಲ್ಲಿ ಇವುಗಳ ಮೇಲೆ ಯಾವುದೇ ಪ್ರತ್ಯೇಕ ನಿಯಂತ್ರಣ ಇರಲಿಲ್ಲ. ಈಗ ಮಹಾರಾಷ್ಟ್ರ ಸರ್ಕಾರ ಇವುಗಳನ್ನು ರಾಜ್ಯ ಸಾರಿಗೆ ನಿಯಮಗಳ ಅಡಿಯಲ್ಲಿ ತರುತ್ತಿರುವುದರಿಂದ, ಚಾಲಕರ ದೂರುಗಳು ಅಥವಾ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಸಿಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx667dz2ksdrtzfzgmgn6fc5,imgname-zomato-delivery-boy-1783693031394.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ:&lt;/strong&gt; ಫುಡ್ ಡೆಲಿವರಿ ಮತ್ತು ಇ-ಕಾಮರ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಡೆಲಿವರಿ ಪಾರ್ಟ್&zwnj;ನರ್&zwnj;ಗಳ ಹಿತದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಇನ್ಮುಂದೆ ಸ್ವಿಗ್ಗಿ (Swiggy), ಜೊಮ್ಯಾಟೋ (Zomato) ಮತ್ತು ಝೆಪ್ಟೋ (Zepto) ಅಂತಹ ಕಂಪನಿಗಳನ್ನು ರಾಜ್ಯದ 'ಬೈಕ್ ಟ್ಯಾಕ್ಸಿ' ನಿಯಮಗಳ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿದೆ.&lt;/p&gt;&lt;p&gt;ಇದರಿಂದಾಗಿ ಈ ಕಂಪನಿಗಳು ತಮ್ಮ ಡೆಲಿವರಿ ಜಾಲದಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು (EV) ಬಳಸಬೇಕು ಮತ್ತು ಪ್ರತಿಯೊಂದು ಆರ್ಡರ್&zwnj;ನ ಹಣದಲ್ಲಿ ಶೇಕಡಾ 2 ರಷ್ಟು ಮೊತ್ತವನ್ನು 'ಚಾಲಕರ ಕಲ್ಯಾಣ ನಿಧಿ'ಗೆ ನೀಡಬೇಕಾಗುತ್ತದೆ.&lt;/p&gt;&lt;h2&gt;&lt;strong&gt;ಹೊಸ ಪ್ರಸ್ತಾವನೆಯಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ನೇತೃತ್ವದ ಸಾರಿಗೆ ಇಲಾಖೆಯು 'ಮಹಾರಾಷ್ಟ್ರ ಬೈಕ್-ಟ್ಯಾಕ್ಸಿ ನಿಯಮಗಳು 2025'ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಈ ಹೊಸ ನಿಯಮಗಳು ಜಾರಿಗೆ ಬಂದರೆ ಕೆಳಗಿನ ಬದಲಾವಣೆಗಳು ಉಂಟಾಗಲಿವೆ.&lt;/p&gt;&lt;ul&gt; &lt;li&gt;&lt;strong&gt;ಎಲೆಕ್ಟ್ರಿಕ್ ವಾಹನ ಕಡ್ಡಾಯ (EV Fleet):&lt;/strong&gt; ಪರಿಸರ ಮಾಲಿನ್ಯ ತಡೆಗಟ್ಟಲು ಈ ಕಂಪನಿಗಳು ಕಡ್ಡಾಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರಬೇಕು.&lt;/li&gt; &lt;li&gt;&lt;strong&gt;ಚಾಲಕರ ಕಲ್ಯಾಣ ನಿಧಿ (Welfare Fund): &lt;/strong&gt;ಪ್ರತಿ ರೈಡ್ ಅಥವಾ ಆರ್ಡರ್&zwnj;ನ ಒಟ್ಟು ದರದ ಶೇ. 2 ರಷ್ಟು ಹಣವನ್ನು ಸರ್ಕಾರ ಸ್ಥಾಪಿಸುವ ಚಾಲಕರ ಕಲ್ಯಾಣ ನಿಧಿಗೆ ಈ ಕಂಪನಿಗಳು ಪಾವತಿಸಬೇಕು. ಈ ಹಣವನ್ನು ಡೆಲಿವರಿ ಮಾಡುವವರ ಪಿಂಚಣಿ, ಅಪಘಾತ ವಿಮೆ, ಇವಿ ವಾಹನ ಖರೀದಿಸಲು ಸಾಲ ಮತ್ತು ಅವರ ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುತ್ತದೆ.&lt;/li&gt; &lt;li&gt;&lt;strong&gt;ಜಿಪಿಎಸ್ ಮತ್ತು ಸುರಕ್ಷತೆ: &lt;/strong&gt;ಎಲ್ಲಾ ಡೆಲಿವರಿ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಕಡ್ಡಾಯವಾಗಲಿದ್ದು, ಗ್ರಾಹಕರು ಮತ್ತು ಚಾಲಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ.&lt;/li&gt; &lt;li&gt;&lt;strong&gt;ಸ್ಥಳೀಯರಿಗೆ ಆದ್ಯತೆ&lt;/strong&gt;: ಬೈಕ್ ಟ್ಯಾಕ್ಸಿ ಅಥವಾ ಡೆಲಿವರಿ ಕೆಲಸ ಮಾಡುವ ಚಾಲಕರು ಕಡ್ಡಾಯವಾಗಿ 'ವಾಸಸ್ಥಳ ಪ್ರಮಾಣಪತ್ರ' (Domicile Certificate) ಮತ್ತು ಸಾರಿಗೆ ಇಲಾಖೆ ನೀಡುವ ವಿಶೇಷ ಬ್ಯಾಡ್ಜ್ ಹೊಂದಿರಬೇಕು. ಇದು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡಲು ಸಹಕಾರಿಯಾಗಲಿದೆ.&lt;/li&gt;&lt;/ul&gt;&lt;h2&gt;&lt;strong&gt;ಸಚಿವರ ಹೇಳಿಕೆ ಏನು?&lt;/strong&gt;&lt;/h2&gt;&lt;p&gt;ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಪ್ರತಾಪ್ ಸರ್ನಾಯಕ್, 15 ಕಿಲೋಮೀಟರ್&zwnj;ಗಿಂತ ಕಡಿಮೆ ದೂರದ ಸಂಚಾರಕ್ಕೆ ಬಳಸುವ ಎಲ್ಲಾ ಬೈಕ್&zwnj;ಗಳನ್ನು ಈ ನಿಯಮದ ವ್ಯಾಪ್ತಿಗೆ ತರಲಾಗುತ್ತದೆ. ಕಂಪನಿಗಳು ತಮ್ಮ ವ್ಯವಹಾರದ ಲಾಭದ ಒಂದು ಭಾಗವನ್ನು ಚಾಲಕರ ಹಿತಕ್ಕೆ ಬಳಸಬೇಕು ಎನ್ನುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಪ್ರಸ್ತುತ ಸ್ವಿಗ್ಗಿ, ಜೊಮ್ಯಾಟೋ ಅಂತಹ ಕಂಪನಿಗಳು ಕೇಂದ್ರ ಸರ್ಕಾರದ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿವೆ. ಆದರೆ ರಾಜ್ಯದಲ್ಲಿ ಇವುಗಳ ಮೇಲೆ ಯಾವುದೇ ಪ್ರತ್ಯೇಕ ನಿಯಂತ್ರಣ ಇರಲಿಲ್ಲ. ಈಗ ಮಹಾರಾಷ್ಟ್ರ ಸರ್ಕಾರ ಇವುಗಳನ್ನು ರಾಜ್ಯ ಸಾರಿಗೆ ನಿಯಮಗಳ ಅಡಿಯಲ್ಲಿ ತರುತ್ತಿರುವುದರಿಂದ, ಚಾಲಕರ ದೂರುಗಳು ಅಥವಾ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಸಿಗಲಿದೆ.&lt;/p&gt;&lt;p&gt;ದೆಹಲಿ ಮತ್ತು ಹರಿಯಾಣ ರಾಜ್ಯಗಳಲ್ಲೂ ಕೂಡ ಹಂತ ಹಂತವಾಗಿ ಡೆಲಿವರಿ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಬದಲಿಸಲು ಈಗಾಗಲೇ ನಿಯಮಗಳನ್ನು ರೂಪಿಸಲಾಗಿದೆ. ಆದರೆ ಚಾಲಕರ ಕಲ್ಯಾಣಕ್ಕಾಗಿ ಪ್ರತ್ಯೇಕ ನಿಧಿ ಸಂಗ್ರಹಿಸುವ ಮಹಾರಾಷ್ಟ್ರದ ಈ ಮಾದರಿ ದೇಶದಲ್ಲೇ ವಿಶೇಷ ಎನ್ನಲಾಗಿದೆ. ಈ ತಿದ್ದುಪಡಿ ಪ್ರಸ್ತಾವನೆಯನ್ನು ಸದ್ಯ ಕಾನೂನು ಇಲಾಖೆಯ ಪರಿಶೀಲನೆಗೆ ಕಳುಹಿಸಲಾಗಿದ್ದು ಶೀಘ್ರದಲ್ಲೇ ಅಧಿಕೃತವಾಗಿ ಜಾರಿಗೆ ಬರುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/electric-vehicles-made-mandatory-for-swiggy-zomato-and-zepto-services-gkn/articleshow-e1laaaf"/>
        </item>
        <item>
            <title><![CDATA[Kerala Bus crash: ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ಭೀಕರ ಅಪಘಾತ: ಶೈನಿಂಗ್ ಬೋರ್ಡ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ!]]></title>
            <link>https://kannada.asianetnews.com/gallery/state/kerala-bus-accident-on-bengaluru-mysuru-highway-one-dead-several-injured-1voypbx</link>
            <guid isPermaLink="true">https://kannada.asianetnews.com/gallery/state/kerala-bus-accident-on-bengaluru-mysuru-highway-one-dead-several-injured-1voypbx</guid>
            <pubDate>Sat, 08 Aug 2026 08:48:50 +0530</pubDate>
            <description><![CDATA[&lt;p&gt;Kerala Bus crash in bengaluru ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೇರಳಕ್ಕೆ ಸೇರಿದ ಸಾರಿಗೆ ಬಸ್ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಪ್ರಯಾಣಿಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಅವರಗೆರೆ ಬ್ರಿಡ್ಜ್ ಬಳಿ ಸಂಭವಿಸಿದೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfp56cmsgr0f9n55h1svjzg,imgname-----------------------2026-08-08t084944.465-1786159208852.jpg" type="image/jpeg" height="390" width="690"/>
            <content:encoded><![CDATA[&lt;p&gt;Kerala Bus crash in bengaluru ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೇರಳಕ್ಕೆ ಸೇರಿದ ಸಾರಿಗೆ ಬಸ್ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಪ್ರಯಾಣಿಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಅವರಗೆರೆ ಬ್ರಿಡ್ಜ್ ಬಳಿ ಸಂಭವಿಸಿದೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೇರಳಕ್ಕೆ ಸೇರಿದ ಸಾರಿಗೆ ಬಸ್ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಪ್ರಯಾಣಿಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಅವರಗೆರೆ ಬ್ರಿಡ್ಜ್ ಬಳಿ ಸಂಭವಿಸಿದೆ.&lt;/p&gt;&lt;img&gt;&lt;p&gt;ಕೇರಳದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೇರಳ ರಾಜ್ಯದ ಬಸ್. ಅವರಗೆರೆ ಬ್ರಿಡ್ಜ್ ಬಳಿ ಬರುತ್ತಿದ್ದಂತೆ ಹೆದ್ದಾರಿಯಲ್ಲಿ ಹಾಕಲಾಗಿದ್ದ ಶೈನಿಂಗ್ ಬೋರ್ಡ್&zwnj;ಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿ ಹೊಡೆದು ರಸ್ತೆಗೆ ಬಿದ್ದಿದೆ. ಈ ವೇಳೆ ಸ್ಥಳದಲ್ಲೇ ಒರ್ವ ಪ್ರಯಾಣಿಕ ಮೃತನಾಗಿದ್ದರೆ ಹಲವು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಬಸ್&zwnj;ನಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ತಿಳಿದುಬಂದಿಲ್ಲ. ಆದರೆ ಬಸ್ ಪಲ್ಟಿ ಹೊಡೆದಿದ್ದರಿಂದ ನಿದ್ದೆಯಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಪೆಟ್ಟಾಗಿವೆ ಗಾಯಾಳು ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;img&gt;&lt;p&gt;ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿದ್ದು ಅಪಘಾತ ನಡೆದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಕಾರಣ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/kerala-bus-accident-on-bengaluru-mysuru-highway-one-dead-several-injured-1voypbx"/>
        </item>
        <item>
            <title><![CDATA[ಮಳೆಯಿಲ್ಲದಿದ್ದರೂ ತುಂಬಿ ಹರಿಯುತ್ತಿರುವ ನದಿಗಳು; ಕೋಡಿ ಬಿದ್ದ ಮದಗ–ಮಾಸೂರು ಕೆರೆ]]></title>
            <link>https://kannada.asianetnews.com/karnataka-districts/monsoon-rain-varada-tungabhadra-dharma-and-kumadwati-rivers-are-in-full-flow-in-haveri-district-mrq/articleshow-oprxlbd</link>
            <guid isPermaLink="true">https://kannada.asianetnews.com/karnataka-districts/monsoon-rain-varada-tungabhadra-dharma-and-kumadwati-rivers-are-in-full-flow-in-haveri-district-mrq/articleshow-oprxlbd</guid>
            <pubDate>Sat, 08 Aug 2026 09:18:19 +0530</pubDate>
            <description><![CDATA[ಹಾವೇರಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಮಳೆ ಕೊರತೆ ಇದ್ದರೂ, ಮೇಲ್ಭಾಗದ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ತುಂಬಿ ಹರಿಯುತ್ತಿವೆ. ಈ ಬೆಳವಣಿಗೆಯು ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದು, ರಟ್ಟಿಹಳ್ಳಿ ತಾಲೂಕಿನ ಮದಗ-ಮಾಸೂರು ಕೆರೆಯೂ ಕೋಡಿ ಬಿದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfqjtwnd8zy8g7yrf309bh4,imgname-tungabhadra-river-1786160704405.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಗಣನೀಯ ಮಳೆಯಾಗದಿದ್ದರೂ ಜಿಲ್ಲೆಯ ಪ್ರಮುಖ ನದಿಗಳಾದ ವರದಾ, ತುಂಗಭದ್ರಾ, ಧರ್ಮಾ ಹಾಗೂ ಕುಮದ್ವತಿ ನದಿಗಳು ತುಂಬಿ ಹರಿಯುತ್ತಿರುವ ದೃಶ್ಯ ಜನರಲ್ಲಿ ಸಂತಸ ಮೂಡಿಸಿದೆ.&lt;/p&gt;&lt;p&gt;ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿದ್ದರೂ, ನದಿಗಳ ಮೇಲ್ಭಾಗದ ಪ್ರದೇಶಗಳಲ್ಲಿ ಸುರಿದ ಮಳೆಯ ಪರಿಣಾಮವಾಗಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶ ಹಾಗೂ ಶಿವಮೊಗ್ಗ, ದಾವಣಗೆರೆ ಭಾಗಗಳಲ್ಲಿ ಸುರಿದ ನಿರಂತರ ಮಳೆ ನದಿಗಳಿಗೆ ಜೀವ ತುಂಬಿದೆ. ಅದರ ಪರಿಣಾಮವಾಗಿ ಜಿಲ್ಲೆಯ ಮೂಲಕ ಹರಿಯುವ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ನದಿ ತೀರದ ಗ್ರಾಮಗಳಲ್ಲಿ ಹಲವು ತಿಂಗಳ ಬಳಿಕ ಮತ್ತೆ ಜಲಧಾರೆ ಕಂಡು ರೈತರಲ್ಲಿ ಹೊಸ ಭರವಸೆ ಮೂಡಿದೆ.&lt;/p&gt;&lt;h2&gt;&lt;strong&gt;ಮುಳುಗಡೆಯಾದ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ&lt;/strong&gt;&lt;/h2&gt;&lt;p&gt;ಮುಂಗಾರು ಹಂಗಾಮಿನಲ್ಲಿ ಮಳೆಯಿಲ್ಲದೇ ಬೆಳೆ ಒಣಗುವ ಸ್ಥಿತಿಯಿಂದ ಕಂಗೆಟ್ಟಿದ್ದ ರೈತರಿಗೆ ಈ ಬೆಳವಣಿಗೆ ಆಶಾದಾಯಕವಾಗಿದೆ. ನದಿಗಳ ಹರಿವು ಹೆಚ್ಚಿದರೆ ಅಂತರ್ಜಲ ಮಟ್ಟ ಏರಿಕೆಯಾಗುವುದರ ಜೊತೆಗೆ ಕೆರೆ-ಕಟ್ಟೆಗಳಿಗೂ ನೀರು ಸೇರುವ ಸಾಧ್ಯತೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಜಲಾವೃತಗೊಂಡಿದ್ದ ಕಳಸೂರು ಸೇತುವೆ ಗುರುವಾರ ಸಂಚಾರಕ್ಕೆ ತೆರವಾಗಿದೆ. ತುಂಗಭದ್ರಾ ನದಿಯ ನೀರಿನ ಮಟ್ಟ ಏರಿದ್ದರಿಂದ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಮುಳುಗಿದೆ. ಇದು ಜಿಲ್ಲೆಯಲ್ಲಿ ಬರಿದಾಗಿರುವ ಕೆರೆಗಳನ್ನು ಭರ್ತಿ ಮಾಡಲು ಸಕಾಲವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕಿದೆ.&lt;/p&gt;&lt;p&gt;ವರದಾ, ತುಂಗಭದ್ರಾ, ಧರ್ಮಾ ಹಾಗೂ ಕುಮದ್ವತಿ ನದಿಗಳ ಉಕ್ಕಿ ಹರಿಯುವ ದೃಶ್ಯವನ್ನು ವೀಕ್ಷಿಸಲು ಜನರು ಸೇತುವೆಗಳು ಮತ್ತು ನದಿ ತೀರಗಳಿಗೆ ಆಗಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿವೆ.&lt;/p&gt;&lt;p&gt;ಆದರೆ ನದಿಗಳಲ್ಲಿ ಹರಿವು ಹೆಚ್ಚಿರುವ ಕಾರಣ ಜನರು ಅನಗತ್ಯವಾಗಿ ನೀರಿಗೆ ಇಳಿಯದಂತೆ ಹಾಗೂ ಸೇತುವೆಗಳ ಮೇಲೆ ಅಪಾಯಕಾರಿಯಾಗಿ ನಿಂತು ಛಾಯಾಚಿತ್ರ ಅಥವಾ ಸೆಲ್ಫಿ ತೆಗೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಪೋಷಕರು ಮಕ್ಕಳ ಮೇಲೆ ವಿಶೇಷ ನಿಗಾ ವಹಿಸುವ ಅಗತ್ಯವೂ ಇದೆ.&lt;/p&gt;&lt;h3&gt;&lt;strong&gt;ಕೋಡಿ ಬಿದ್ದ ಮದಗ&ndash;ಮಾಸೂರು ಕೆರೆ&lt;/strong&gt;&lt;/h3&gt;&lt;p&gt;ಇತ್ತೀಚಿನ ಮಳೆಯ ಪರಿಣಾಮ ರಟ್ಟಿಹಳ್ಳಿ ತಾಲೂಕಿನ ಪ್ರಮುಖ ಜಲಮೂಲವಾಗಿರುವ ಮದಗ&ndash;ಮಾಸೂರು ಕೆರೆ ತುಂಬಿ ಕೋಡಿ ಬಿದ್ದಿದೆ. ಕೆರೆಯ ಕೋಡಿ ಮೂಲಕ ನೀರು ಭೋರ್ಗರೆಯುತ್ತ ಹರಿಯುತ್ತಿರುವ ದೃಶ್ಯ ಮನಮೋಹಕವಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.&lt;/p&gt;&lt;p&gt;ಕಳೆದ ಕೆಲ ದಿನಗಳಿಂದ ಸುರಿದ ಮಳೆ ಹಾಗೂ ಕೆರೆ ವ್ಯಾಪ್ತಿಯಲ್ಲಿ ಹರಿದು ಬಂದ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೆರೆ ಸಂಪೂರ್ಣ ಭರ್ತಿಯಾದ ಬಳಿಕ ಹೆಚ್ಚುವರಿ ನೀರು ಕೋಡಿ ಮೂಲಕ ಹೊರಹರಿಯುತ್ತಿದೆ. ನೀರು ರಭಸವಾಗಿ ಹರಿಯುವ ಜಲವೈಭವದ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/monsoon-rain-varada-tungabhadra-dharma-and-kumadwati-rivers-are-in-full-flow-in-haveri-district-mrq/articleshow-oprxlbd"/>
        </item>
        <item>
            <title><![CDATA[Bengaluru: ಹೆಸರಘಟ್ಟದಲ್ಲಿ ಭಾರತದ ಮೊದಲ ಕ್ವಾಂಟಮ್ ಸಿಟಿ ನಿರ್ಮಾಣ: ಡಿಕೆ ಶಿವಕುಮಾರ್]]></title>
            <link>https://kannada.asianetnews.com/bengaluru-urban/bengaluru-india-s-first-quantum-city-to-be-built-in-hesarghatta-cm-dk-shivakumar-mrq/articleshow-z8vt0a7</link>
            <guid isPermaLink="true">https://kannada.asianetnews.com/bengaluru-urban/bengaluru-india-s-first-quantum-city-to-be-built-in-hesarghatta-cm-dk-shivakumar-mrq/articleshow-z8vt0a7</guid>
            <pubDate>Sat, 08 Aug 2026 08:57:08 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದ ಅಮೆರಿಕ ಕಾನ್ಸುಲೇಟ್ ಸ್ಥಾಪನೆಗೆ ಮನವಿ ಮಾಡಿದ್ದಾರೆ. ಹೆಸರಘಟ್ಟದಲ್ಲಿ ಭಾರತದ ಮೊದಲ 'ಕ್ವಾಂಟಮ್ ಸಿಟಿ' ನಿರ್ಮಾಣವಾಗುತ್ತಿದ್ದು, ಈ ಮೂಲಕ ಕರ್ನಾಟಕವು ಕ್ವಾಂಟಮ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಲು ಸಜ್ಜಾಗಿದೆ ಎಂದು ಅವರು 'ಕ್ವಾಂಟಮ್' ಪ್ರದರ್ಶನ ಉದ್ಘಾಟಿಸಿ ತಿಳಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kzfpfq15jshnkcck7fyyp84j,imgname-dk-shivakumar-1786159553573.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಭಾರತ-ಅಮರಿಕ ನಡುವೆ ಐಟಿ ಮತ್ತಿತರ ವಲಯಗಳಲ್ಲಿ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಪೂರ್ಣ ಪ್ರಮಾಣದ ಅಮೆರಿಕ ಕಾನ್ಸುಲೇಟ್ ಸ್ಥಾಪನೆಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.&lt;/p&gt;&lt;p&gt;ಶುಕ್ರವಾರ ನಗರದ ಸೈನ್ಸ್ ಗ್ಯಾಲರಿಯಲ್ಲಿ &lsquo;ಕ್ವಾಂಟಮ್&rsquo; ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ 700ಕ್ಕೂ ಹೆಚ್ಚು ಅಮೆರಿಕದ ಕಂಪನಿಗಳು, 10 ಸಾವಿರಕ್ಕೂ ಹೆಚ್ಚು ಸ್ಟಾರ್ಟ್&zwnj;ಅಪ್&zwnj;ಗಳು ಹಾಗೂ 10 ಲಕ್ಷಕ್ಕೂ ಹೆಚ್ಚು ತಂತ್ರಜ್ಞಾನ ಉದ್ಯೋಗಿಗಳಿದ್ದಾರೆ. ಭಾರತದಲ್ಲಿ ಅಮೆರಿಕದ ಅತಿ ದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪಾಲುದಾರ ನಗರವಾಗಿರುವ ಬೆಂಗಳೂರಿಗೆ ಪೂರ್ಣ ಪ್ರಮಾಣದ ಕಾನ್ಸುಲೇಟ್ ಅಗತ್ಯವಿದೆ ಎಂದರು.&lt;/p&gt;&lt;h2&gt;&lt;strong&gt;ಕರ್ನಾಟಕ ಸರ್ಕಾರದಿಂದ ಅಗತ್ಯ ಅನುಮತಿ&lt;/strong&gt;&lt;/h2&gt;&lt;p&gt;ನಾವು ಕೇವಲ ವ್ಯಾಪಾರ ಕಚೇರಿಯನ್ನು ಕೇಳುತ್ತಿಲ್ಲ. ಶಾಶ್ವತ ರಾಜತಾಂತ್ರಿಕ ಕಚೇರಿ ಇಲ್ಲಿ ಸ್ಥಾಪನೆಯಾಗಬೇಕು. ಇದರಿಂದ ತಂತ್ರಜ್ಞಾನ, ನಾವೀನ್ಯತೆ, ಸಂಶೋಧನೆ, ರಕ್ಷಣೆ, ಬಾಹ್ಯಾಕಾಶ ಮತ್ತು ವಿಮಾನಯಾನ ಕ್ಷೇತ್ರಗಳಲ್ಲಿ ಸಹಕಾರ ಮತ್ತಷ್ಟು ವಿಸ್ತರಣೆ ಸಾಧ್ಯವಾಗಲಿದೆ. ಕಾನ್ಸುಲೇಟ್ ಸ್ಥಾಪನೆಗೆ ಅಗತ್ಯವಿರುವ ರಾಜ್ಯಮಟ್ಟದ ಎಲ್ಲ ಅನುಮತಿಗಳನ್ನು ತ್ವರಿತವಾಗಿ ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ. ಅಮೆರಿಕದ ರಾಯಭಾರ ಕಚೇರಿ ಮತ್ತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ಸರ್ಕಾರ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.&lt;/p&gt;&lt;p&gt;ಅಮೆರಿಕದ ಪ್ರಮುಖ ಶೈಕ್ಷಣಿಕ ಹಾಗೂ ನಾವೀನ್ಯತಾ ಕೇಂದ್ರಗಳೊಂದಿಗೆ ತರಬೇತಿ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಲ್ಲಿ ಪಾಲುದಾರಿಕೆ ಬೆಳೆಸಲು ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಅವರ ನೆರವನ್ನು ಮುಖ್ಯಮಂತ್ರಿ ಕೋರಿದರು.&lt;/p&gt;&lt;p&gt;ಕ್ವಾಂಟಮ್ ವಿಜ್ಞಾನವು ಕಂಪ್ಯೂಟಿಂಗ್, ಸಂವಹನ, ಆರೋಗ್ಯ ಮತ್ತು ಆಧುನಿಕ ಉತ್ಪಾದನಾ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತದೆ. ಈ ಕ್ಷೇತ್ರದಲ್ಲಿ ನಮ್ಮ ಯುವಕರು ತೊಡಗಿಸಿಕೊಳ್ಳುವುದನ್ನು ಖಾತರಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.&lt;/p&gt;&lt;p&gt;ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಾರಿಗೆ ಸಚಿವ ಬೈರತಿ ಸುರೇಶ್, ಉದ್ಯಮಿ ಕಿರಣ್ ಮಜುಂದಾರ್ ಶಾ ಉಪಸ್ಥಿತರಿದ್ದರು.&lt;/p&gt;&lt;h3&gt;&lt;strong&gt;ಹೆಸರಘಟ್ಟದಲ್ಲಿ &lsquo;ಕ್ವಾಂಟಮ್ ಸಿಟಿ&rsquo; ಸ್ಥಾಪನೆ&lt;/strong&gt;&lt;/h3&gt;&lt;p&gt;ನಗರದ ಹೆಸರಘಟ್ಟದಲ್ಲಿ ಭಾರತದ ಮೊದಲ &lsquo;ಕ್ವಾಂಟಮ್ ಸಿಟಿ&rsquo; ನಿರ್ಮಾಣವಾಗುತ್ತಿದ್ದು, ಸಂಶೋಧನಾ ಪ್ರಯೋಗಾಲಯಗಳ ಪ್ರಮುಖ ಕೇಂದ್ರವಾಗಲಿದೆ. ನಮ್ಮ ಬದ್ಧತೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ''ಲೋಕಲ್ ಎಕಾನಮಿ ಆಕ್ಸಿಲರೇಟರ್ ಪ್ರೋಗ್ರಾಂ'' ಅಡಿಯಲ್ಲಿ, ಧಾರವಾಡದ ಐಐಐಟಿಯಲ್ಲಿ ಕ್ವಾಂಟಮ್ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟಿಂಗ್ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಾಗಿದೆ.&lsquo;ಕ್ವಾಂಟಮ್&rsquo; ಪ್ರದರ್ಶನವನ್ನು ಎಲ್ಲರಿಗಾಗಿ ಮುಕ್ತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.&lt;/p&gt;&lt;p&gt;Science has always moved humanity forward by encouraging us to ask questions, challenge assumptions and imagine new possibilities.&amp;nbsp;It was a pleasure to inaugurate QUANTUM at Science Gallery Bengaluru. Mr. Sergio Gor, Ambassador of the United States to India, Shri Priyank&hellip; pic.twitter.com/rPZ6WG1Twn&lt;/p&gt;&lt;p&gt;&mdash; DK Shivakumar (@DKShivakumar) August 7, 2026&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-india-s-first-quantum-city-to-be-built-in-hesarghatta-cm-dk-shivakumar-mrq/articleshow-z8vt0a7"/>
        </item>
        <item>
            <title><![CDATA[ಕಂಠೀರವ ಸ್ಟುಡಿಯೋ To ಬಿಇಎಲ್ ವೃತ್ತದವರೆಗಿನ 4.5 km ಉದ್ದದ  6 ಲೇನ್‌ ಸುರಂಗ ಮಾರ್ಗ]]></title>
            <link>https://kannada.asianetnews.com/bengaluru-urban/bengaluru-proposal-for-a-4-point-5-km-long-6-lane-tunnel-from-kanteerava-studio-underpass-to-bel-circle-mrq/articleshow-vd6k0l4</link>
            <guid isPermaLink="true">https://kannada.asianetnews.com/bengaluru-urban/bengaluru-proposal-for-a-4-point-5-km-long-6-lane-tunnel-from-kanteerava-studio-underpass-to-bel-circle-mrq/articleshow-vd6k0l4</guid>
            <pubDate>Sat, 08 Aug 2026 08:42:20 +0530</pubDate>
            <description><![CDATA[ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಂಠೀರವ ಸ್ಟುಡಿಯೋ ಅಂಡರ್&zwnj;ಪಾಸ್&zwnj;ನಿಂದ ಗೊರಗುಂಟೆಪಾಳ್ಯ ಮೂಲಕ ಬಿಇಎಲ್ ವೃತ್ತದವರೆಗೆ 4.5 ಕಿ.ಮೀ ಉದ್ದದ 6 ಲೇನ್&zwnj;ಗಳ ಸುರಂಗ ಮಾರ್ಗ ನಿರ್ಮಿಸಲು ಪ್ರಸ್ತಾಪಿಸಿದೆ. ಈ ಯೋಜನೆಗಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್&zwnj;) ಸಿದ್ಧಪಡಿಸಲು ಬಿಡಿಎ ಅರ್ಹ ಗುತ್ತಿಗೆದಾರರಿಂದ ಟೆಂಡರ್ ಆಹ್ವಾನಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfnj4d6afftr9msxt3g4br7,imgname-tunnel-1786158584230.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಂಠೀರವ ಸ್ಟುಡಿಯೋ ಅಂಡರ್&zwnj;ಪಾಸ್&zwnj;ನಿಂದ (ಡಾ.ರಾಜ್&zwnj;ಕುಮಾರ್ ಸ್ಮಾರಕದ ಬಳಿ) ಗೊರಗುಂಟೆಪಾಳ್ಯ ಮೂಲಕ ಬಿಇಎಲ್ ವೃತ್ತದವರೆಗೆ 4.5 ಕಿ.ಮೀ ಉದ್ದದ 6 ಲೇನ್&zwnj;ಗಳ ಸುರಂಗ ಮಾರ್ಗ ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಿದ್ದು, ವಿಸ್ತೃತ ಯೋಜನಾ ವರದಿಗೆ (ಡಿಪಿಆರ್&zwnj;) ಟೆಂಡರ್ ಆಹ್ವಾನಿಸಲಾಗಿದೆ.&lt;/p&gt;&lt;h2&gt;&lt;strong&gt;1ನೇ ದರ್ಜೆಯ ಗುತ್ತಿಗೆದಾರರಿಂದ ಅಲ್ಫಾವಧಿ ಟೆಂಡರ್&zwnj;&lt;/strong&gt;&lt;/h2&gt;&lt;p&gt;ಬಿಡಿಎ ಪೂರ್ವ ವಿಭಾಗದ ಕನೆಕ್ಟಿಂಗ್&zwnj; ಲೂಪ್&zwnj;ಗಳೊಂದಿಗೆ ಕಂಠೀರವ ಸ್ಟುಡಿಯೋ ಅಂಡರ್&zwnj;ಪಾಸ್&zwnj;ನಿಂದ ಗೊರಗುಂಟೆಪಾಳ್ಯ ಜಂಕ್ಷನ್&zwnj; ಮೂಲಕ ಬಿಇಎಲ್&zwnj; ವೃತ್ತದವರೆಗೆ ಸುರಂಗ ಮಾರ್ಗದ ನಿರ್ಮಾಣಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್&zwnj;) ಅನ್ನು ಸಿದ್ಧಪಡಿಸುವ ಕಾಮಗಾರಿಗೆ ಕೆಪಿಸಿ ಪೋರ್ಟಲ್&zwnj; ಮೂಲಕ ಅರ್ಹ 1ನೇ ದರ್ಜೆಯ ಗುತ್ತಿಗೆದಾರರಿಂದ ಅಲ್ಫಾವಧಿ ಟೆಂಡರ್&zwnj; ಕರೆಯಲಾಗಿದೆ. ಬಿಡ್&zwnj; ಸಲ್ಲಿಸಲು ಆಗಸ್ಟ್&zwnj; 12 ಕೊನೆಯ ದಿನವಾಗಿದೆ. ತಾಂತ್ರಿಕ ಬಿಡ್&zwnj;ಗಳನ್ನು ಆಗಸ್ಟ್&zwnj; 13ರಂದು ಸಂಜೆ 5ಕ್ಕೆ ತೆರೆಯಲಾಗುವುದು.&lt;/p&gt;&lt;p&gt;ಹೆಚ್ಚಿನ ವಿವರಗಳಿಗೆ https://kppp/karnataka.gov.in ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಇ-ಪ್ರೊಕ್ಯೂರ್&zwnj;ಮೆಂಟ್&zwnj;ಗೆ ಸಂಬಂಧಿಸಿದ ಸಹಾಯಕ್ಕಾಗಿ ದೂರವಾಣಿ:080-22230960 ಮತ್ತು ಬಿಡಿಎ ಸಹಾಯವಾಣಿ 9483166622 ಸಂಪರ್ಕಿಸುವಂತೆ ಕೋರಲಾಗಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-proposal-for-a-4-point-5-km-long-6-lane-tunnel-from-kanteerava-studio-underpass-to-bel-circle-mrq/articleshow-vd6k0l4"/>
        </item>
        <item>
            <title><![CDATA[ಗಜೇಂದ್ರಗಡದ 23 ವಾರ್ಡ್‌ಗಳಿಂದ ಪ್ರತಿದಿನ 11 ಟನ್ ಕಸ ಉತ್ಪಾದನೆ;  ಸ್ವಚ್ಛತೆಗೆ ಸಿಗದ ಆದ್ಯತೆ]]></title>
            <link>https://kannada.asianetnews.com/karnataka-districts/11-tons-of-garbage-generated-daily-from-23-wards-of-gajendragad-city-cleanliness-not-given-priority-mrq/articleshow-guvo4v3</link>
            <guid isPermaLink="true">https://kannada.asianetnews.com/karnataka-districts/11-tons-of-garbage-generated-daily-from-23-wards-of-gajendragad-city-cleanliness-not-given-priority-mrq/articleshow-guvo4v3</guid>
            <pubDate>Sat, 08 Aug 2026 08:27:48 +0530</pubDate>
            <description><![CDATA[ಗಜೇಂದ್ರಗಡ ಪಟ್ಟಣದಲ್ಲಿ ಪುರಸಭೆಯು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ ಎಂದರೂ, ಹಲವೆಡೆ ಹೂಳು ತುಂಬಿದ ಚರಂಡಿಗಳು ಮತ್ತು ಕಸದ ರಾಶಿಗಳು ಗಬ್ಬೆದ್ದು ನಾರುತ್ತಿವೆ. ಪೌರಕಾರ್ಮಿಕರ ಕೊರತೆ ಮತ್ತು ಸಮರ್ಪಕ ತ್ಯಾಜ್ಯ ವಿಲೇವಾರಿಯ ಅಭಾವದಿಂದಾಗಿ ಪಟ್ಟಣದ ಸ್ವಚ್ಛತೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfms6vqtm3ndtyqnp5394cy,imgname--gajendragad--1786157767543.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಸ್.ಎಂ. ಸೈಯದ್&lt;/strong&gt;&lt;/p&gt;&lt;p&gt;&lt;strong&gt;ಗಜೇಂದ್ರಗಡ:&lt;/strong&gt; ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಪುರಸಭೆಯವರು ಹೇಳುತ್ತಿದ್ದರೂ ಪಟ್ಟಣದ ಹಲವೆಡೆ ಕಣ್ಣಿಗೆ ಕಸದ ರಾಶಿ ರಾಚುತ್ತಿವೆ. ಬಹುತೇಕ ಚರಂಡಿಗಳು ಹೂಳು ತುಂಬಿದ್ದು, ಗಬ್ಬೆದ್ದು ನಾರುತ್ತಿವೆ.&lt;/p&gt;&lt;p&gt;ಪಟ್ಟಣದ 23 ವಾರ್ಡ್&zwnj;ಗಳಿಂದ ಪ್ರತಿದಿನ 11 ಟನ್ ಕಸ ಉತ್ಪಾದನೆ ಆಗುತ್ತಿದೆ. ನಿತ್ಯ ಪುರಸಭೆಯಿಂದ ಅಂದಾಜು 9 ಟನ್ ಕಸ ವಿಲೇವಾರಿ ಆಗುತ್ತಿದೆ. ಇನ್ನುಳಿದ 2 ಟನ್ ಕಸದಲ್ಲಿ ಚರಂಡಿಯಿಂದ ಹಾಗೂ ರಸ್ತೆಯಲ್ಲಿ ಬಿಸಾಕುವ ಕಸವಾಗಿದೆ. ಈ ಕಸ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.&lt;/p&gt;&lt;p&gt;ಪಟ್ಟಣದ ಬಹುತೇಕ ವಾರ್ಡಗಳಲ್ಲಿ ಕಸ ಸಂಗ್ರಹಣೆಗೆ ವಾಹನಗಳು ತೆರಳಿದರೂ ರಸ್ತೆ ಪಕ್ಕದಲ್ಲಿ ಕಸ ಎಸೆಯುವುದು ನಿಲ್ಲುತ್ತಿಲ್ಲ. ಪರಿಣಾಮ ಪಟ್ಟಣದ ಕೆಲ ಬಡಾವಣೆ ಹಾಗೂ ಜೋಡುರಸ್ತೆಯಲ್ಲಿ ಸಂಜೆ ಹಾಗೂ ಬೆಳಗ್ಗೆ ಕಸ ರಾಶಿಗಳು ಕಾಣುವುದು ಸಾಮಾನ್ಯ.&lt;/p&gt;&lt;h2&gt;&lt;strong&gt;ಪಟ್ಟಣದಲ್ಲಿ ಯಥೇಚ್ಛವಾಗಿ ಪ್ಲಾಸ್ಟಿಕ್ ಬಳಕೆ&lt;/strong&gt;&lt;/h2&gt;&lt;p&gt;ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಪಟ್ಟಣದಲ್ಲಿ ಸ್ವಚ್ಛತೆಗೆ ಪುರಸಭೆ ಜಾಗೃತಿ ಜತೆಗೆ ಆದ್ಯತೆ ನೀಡುತ್ತಿದೆ. ಆದರೆ ಪ್ಲಾಸ್ಟಿಕ್ ಬಳಕೆ ಯಥೇಚ್ಛವಾಗಿ ನಡೆಯುತ್ತಿದೆ. ಇತ್ತ ಜೋಡುರಸ್ತೆ ಸೇರಿ ಕೊಳ್ಳಿಯವರ ಕತ್ರಿಯಲ್ಲಿ ನಡೆಯುವ ಬೀದಿಬದಿ ವ್ಯಾಪಾರ ಬಳಿಕ ಉಳಿದ ಕಸವನ್ನು ರಸ್ತೆಯಲ್ಲಿ ಎಸೆಯುವುದರಿಂದ ಚರಂಡಿಗಳಲ್ಲಿ ವ್ಯಾಪಕ ಪ್ರಮಾಣದ ಪ್ಲಾಸ್ಟಿಕ್ ಚೀಲ, ಬಾಟಲಿ ಸೇರಿ ಇತರ ತ್ಯಾಜ್ಯ ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಾಡಾಗಿದೆ. ಮಳೆಗಾಲದಲ್ಲಿ ಚರಂಡಿಯಲ್ಲಿನ ಕೊಳಚೆ ನೀರು ರಸ್ತೆ ಮೇಲೆ ಹರಿದು ಗಬ್ಬುವಾಸನೆ ಬೀರುತ್ತದೆ.&lt;/p&gt;&lt;p&gt;ಪಟ್ಟಣದ 23 ವಾರ್ಡಗಳಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಣೆ ವಿಲೇವಾರಿಗೆ 7 ಟಾಟಾ ಎಸ್&zwnj;, 3 ಟ್ರ್ಯಾಕ್ಟರ್, 1 ಡೋಜರ್, 1 ಸ್ವೀಪಿಂಗ್ ಮಷಿನ್, 1 ಟಿಪ್ಪರ್ ಸೇರಿ 17 ವಾಹನಗಳಿದ್ದು,7೭ ಜನ ವಾಹನ ಚಾಲಕರಿದ್ದಾರೆ. ಅಲ್ಲದೆ ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ 56 ಪೌರಕಾರ್ಮಿಕರ ಅಗತ್ಯವಿದೆ. ಆದರೆ 38 ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮ ಕಾರ್ಮಿಕರು ಹಾಗೂ ವಾಹನ ಚಾಲಕರ ಕೊರತೆ ಮೇಲ್ನೋಟಕ್ಕೆ ಕಾಣುತ್ತಿದೆ.&lt;/p&gt;&lt;p&gt;ಅಮೃತ್ 2.0 ಯೋಜನೆ ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ಮನಸೋ ಇಚ್ಛೆ ರಸ್ತೆಗಳನ್ನು ಒಡೆದಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಆದರೆ ಪಟ್ಟಣದಲ್ಲಿ ಪೂರ್ಣ ಪ್ರಮಾಣದ ಸ್ವಚ್ಛತೆಗೆ ಪುರಸಭೆ ಪರದಾಡುತ್ತಿದೆ. ಘನತ್ಯಾಜ್ಯ ಘಟಕದಲ್ಲಿ ಸಂಗ್ರಹಿಸಿದ ಕಸದಿಂದ ಉತ್ಪಾದನೆಯಾದ ಎರೆಹುಳು ಗೊಬ್ಬರ 18 ಟನ್ ಮಾರಾಟಕ್ಕೆ ಸಿದ್ಧವಾಗಿದೆ.&lt;/p&gt;&lt;p&gt;ಸ್ವಚ್ಛತೆಗೆ ಕೈಜೋಡಿಸಿ&lt;/p&gt;&lt;p&gt;ಪಟ್ಟಣದ 23 ವಾರ್ಡಗಳಲ್ಲಿ ಪುರಸಭೆಯ ಕಸದ ವಾಹನಗಳು ತೆರಳಿ ಕಸ ಸಂಗ್ರಹಣೆ ಮಾಡುತ್ತಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಕಸದ ವಾಹನಗಳಲ್ಲಿ ಕಸ ಹಾಕುವ ಮೂಲಕ ಪುರಸಭೆಗೆ ಸಹಕಾರ ನೀಡಿ ಸುಂದರ ಪಟ್ಟಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಶಿವಕುಮಾರ ಇಲಾಳ ತಿಳಿಸಿದರು.&lt;/p&gt;&lt;p&gt;ಸ್ವಚ್ಛ ಪಟ್ಟಣ&lt;/p&gt;&lt;p&gt;ಪುರಸಭೆಯವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಆದರೆ ಸಚಿವರು ಸೇರಿ ಗಣ್ಯರು ಆಗಮಿಸುವ ವೇಳೆ ಸ್ವಚ್ಛತೆಗಾಗಿ ಆದ್ಯತೆಯನ್ನು ನೀಡುತ್ತಾರೆ. ಉಳಿದ ಸಮಯದಲ್ಲಿ ಅದೇ ರಾಗ, ಅದೇ ತಾಳ ಎನ್ನುವಂಥ ಧೋರಣೆ ಕೈಬಿಟ್ಟರೆ ಸ್ವಚ್ಛ ಪಟ್ಟಣವಾಗುವುದರಲ್ಲಿ ಸಂದೇಹವಿಲ್ಲ ಎಂದು ನಿವಾಸಿಗಳು ತಿಳಿಸಿದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/11-tons-of-garbage-generated-daily-from-23-wards-of-gajendragad-city-cleanliness-not-given-priority-mrq/articleshow-guvo4v3"/>
        </item>
        <item>
            <title><![CDATA[Bengaluru Namma Metro ನಿರ್ಲಕ್ಷ್ಯ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ!]]></title>
            <link>https://kannada.asianetnews.com/bengaluru-urban/a-major-disaster-was-averted-when-an-iron-sheet-from-the-marathahalli-sarjapura-metro-project-fell-on-a-bus-mrq/articleshow-bkugbnh</link>
            <guid isPermaLink="true">https://kannada.asianetnews.com/bengaluru-urban/a-major-disaster-was-averted-when-an-iron-sheet-from-the-marathahalli-sarjapura-metro-project-fell-on-a-bus-mrq/articleshow-bkugbnh</guid>
            <pubDate>Sat, 08 Aug 2026 07:56:39 +0530</pubDate>
            <description><![CDATA[ಮಾರತಹಳ್ಳಿ-ಸರ್ಜಾಪುರ ಮೆಟ್ರೋ ಕಾಮಗಾರಿಯ ಕಬ್ಬಿಣದ ಶೀಟ್ ಬಸ್ ಮೇಲೆ ಬಿದ್ದು ಭಾರೀ ಅನಾಹುತ ತಪ್ಪಿದೆ. ಈ ಘಟನೆಯು ಮೆಟ್ರೋ ಸಿಬ್ಬಂದಿಯ ನಿರ್ಲಕ್ಷ್ಯವನ್ನು ತೋರಿಸಿದ್ದು, 2023ರಲ್ಲಿ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದ ದುರಂತವನ್ನು ನೆನಪಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfjtfds49vrqvp185wggw2g,imgname-bmtc-1786155711929.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಮಾರತಹಳ್ಳಿ ಮತ್ತು ಸರ್ಜಾಪುರ ನಡುವೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಗೆ ಅಳವಡಿಸಿದ್ದ ಕಬ್ಬಿಣದ ಶೀಟ್ ಹತ್ತಾರು ಮೀಟರ್ ಎತ್ತರದಿಂದ ಕಳಚಿ ನೆಲಕ್ಕೆ ಬಿದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೆಟ್ರೋ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಬ್ಬಿಣದ ಶೀಟ್ ಬಿಎಂಟಿಸಿ ಬಸ್ ಮೇಲೆ ಬಿದ್ದಿದೆ. ಒಂದು ವೇಳೆ ರಸ್ತೆ ಮೇಲೆ ಬಿಎಂಟಿಸಿ ಬಸ್ ಬದಲು ಬೈಕ್ ಸವಾರ ಇದ್ದಿದ್ದರೆ ದೊಡ್ಡ ಅನಾಹುತ ನಡೆಯುವುದು ಖಚಿತವಾಗಿತ್ತು. 2023ರಲ್ಲಿ ಮೆಟ್ರೋ ಪಿಲ್ಲರ್ ಕುಸಿತದಿಂದ ತಾಯಿ ಮತ್ತು ಮಗು ಸಾವನ್ನಪ್ಪಿದ್ದರು. ನಿರ್ಮಾಣಹಂತದ ಮೆಟ್ರೋ ಪಿಲ್ಲರ್ ಕುಸಿತದ ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.&lt;/p&gt;&lt;h2&gt;&lt;strong&gt;ತಾಯಿ ಮತ್ತು ಮಗುವನ್ನು ಬಲಿ ಪಡೆದಿತ್ತು ಮೆಟ್ರೋ ಪಿಲ್ಲರ್&lt;/strong&gt;&lt;/h2&gt;&lt;p&gt;2023 ರ ಜನವರಿ 10 ರಂದು ನಾಗವಾರ ಬಳಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಬಿದ್ದು ಬೈಕ್&zwnj;ನಲ್ಲಿ ಪ್ರಯಾಣಿಸುತ್ತಿದ್ದ ಅರ್ಜಿದಾರರ ಪತ್ನಿ ತೇಜಸ್ವಿನಿ ಎಲ್ ಸುಲಾಖೆ (26) ಮತ್ತು ಅವರ ಎರಡೂವರೆ ವರ್ಷದ ಮಗ ವಿಹಾನ್ ಸಾವನ್ನಪ್ಪಿದರು. ಮೃತ ತೇಜಸ್ವಿನಿ ಸಾಫ್ಟ್&zwnj;ವೇರ್ ಇಂಜಿನೀಯರ್ ಅಗಿ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;&lt;/p&gt;&lt;p&gt;ಇದೇ ಫೆಬ್ರವರಿಯಲ್ಲಿ (2026) ಮುಂಬೈ ಮೆಟ್ರೋ ಕಾಮಗಾರಿ ವೇಳೆ ನಿರ್ಮಾಣ ಹಂತದ ಪಿಲ್ಲರ್ ಆಟೋ ಮತ್ತು ಕಾರ್ ಮೇಲೆ ಕುಸಿದಿತ್ತು. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನಷ್ಟದ ಸುಳಿಯಲ್ಲಿ ನಮ್ಮ ಮೆಟ್ರೋ? ನಿತ್ಯ 11 ಲಕ್ಷ ಪ್ರಯಾಣಿಕರೂ ಓಡಾಡಿದ್ರೂ ಕೋಟಿ ಕೋಟಿ ನಷ್ಟ?&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು: ಭಾನುವಾರ ಬೈಯಪ್ಪನಹಳ್ಳಿ - ಎಂ.ಜಿ. ರಸ್ತೆ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ!&lt;/strong&gt;&lt;/p&gt;]]></content:encoded>
            <category>news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/bengaluru-urban/a-major-disaster-was-averted-when-an-iron-sheet-from-the-marathahalli-sarjapura-metro-project-fell-on-a-bus-mrq/articleshow-bkugbnh"/>
        </item>
        <item>
            <title><![CDATA[ಕೈಕೊಟ್ಟ ಮುಂಗಾರು ಮಳೆ; 5 ಎಕರೆಯಲ್ಲಿ ಬೆಳೆದಿದ್ದ ಮೆಕ್ಕಜೋಳ ಬೆಳೆ ನಾಶಪಡಿಸಿದ ರೈತ]]></title>
            <link>https://kannada.asianetnews.com/karnataka-districts/ballari-lack-of-monsoon-rains-h-veerapur-village-s-farmer-destroys-5-acres-of-maize-crop-in-kurugodu-taluk-mrq/articleshow-xo9ycx8</link>
            <guid isPermaLink="true">https://kannada.asianetnews.com/karnataka-districts/ballari-lack-of-monsoon-rains-h-veerapur-village-s-farmer-destroys-5-acres-of-maize-crop-in-kurugodu-taluk-mrq/articleshow-xo9ycx8</guid>
            <pubDate>Sat, 08 Aug 2026 08:16:51 +0530</pubDate>
            <description><![CDATA[ಕುರುಗೋಡು ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲವಾದ ಕಾರಣ, ಎಚ್.ವೀರಾಪುರ ಗ್ರಾಮದ ರೈತರೊಬ್ಬರು ತಮ್ಮ ಐದು ಎಕರೆ ಮೆಕ್ಕೆಜೋಳ ಬೆಳೆಯನ್ನು ಟ್ರ್ಯಾಕ್ಟರ್ ಬಳಸಿ ನಾಶಪಡಿಸಿದ್ದಾರೆ. ಕೊಳವೆಬಾವಿ ಇದ್ದರೂ, ಅನಿಯಮಿತ ವಿದ್ಯುತ್ ಕಡಿತ ಮತ್ತು ಅಂತರ್ಜಲ ಕುಸಿತದಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೆ, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfkyg0jjhayg5xzxxab74cv,imgname-farmer-1786156892178.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ: &lt;/strong&gt;ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಎಚ್.ವೀರಾಪುರ ಗ್ರಾಮದ ರೈತ ರಾಜಾಸಾಬ್ ಐದು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ಗುರುವಾರ ಟ್ರ್ಯಾಕ್ಟರ್ ಬಳಸಿ ನಾಶಪಡಿಸಿದರು.&lt;/p&gt;&lt;p&gt;ಮುಂಗಾರು ಪೂರ್ವ ಮಳೆಯಿಂದ ಪುಳಕಿತರಾಗಿದ್ದ ರೈತ ರಾಜಾಸಾಬ್ ಮೂರು ಎಕರೆ ಕೊಳವೆಬಾವಿ ಆಶ್ರಿತ ಭೂಮಿ ಮತ್ತು ಎರಡು ಎಕರೆ ಮಳೆಯಾಶ್ರಿತ ಭೂಮಿ ಸೇರಿ ಒಟ್ಟು ಐದು ಎಕರೆಯಲ್ಲಿ ಮೆಕ್ಕಜೋಳ ಬೆಳೆಯುವ ಪ್ರಯತ್ನ ಮಾಡಿದ್ದರು. ನಂತರ ದಿನಗಳಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಬೆಳೆಯನ್ನು ಉಳಿಸಿಕೊಳ್ಳಲು ಕೊಳವೆ ಬಾವಿಯ ನೀರು ಹರಿಸಲು ಪ್ರಯತ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕುಸಿತ&lt;/strong&gt;&lt;/h2&gt;&lt;p&gt;ಅನಿಯಮಿತ ವಿದ್ಯುತ್ ಕಡಿತ ಮತ್ತು ಅಂತರ್ಜಲ ಕೃಷಿಯಿಂದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೈಗೆಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆ ಉಳಿಸಿಕೊಳ್ಳಲು ದಾರಿ ಕಾಣದೆ ಬೆಳೆಯನ್ನು ಟ್ರ್ಯಾಕ್ಟರ್ ಸಹಾಯ ದಿಂದ ನಾಶ ಮಾಡಿದ್ದಾರೆ.15 ದಿನಗಳ ಹಿಂದೆ ಮಳೆ ಬಂದಿದ್ದರೆ ಫಸಲು ಸಮೃದ್ಧವಾಗಿ ಬೆಳೆದು ಆಗಸ್ಟ್ ತಿಂಗಳ ಅಂತ್ಯದಲ್ಲಿ ಕಟಾವಿಗೆ ಬರುತ್ತಿತ್ತು.&lt;/p&gt;&lt;p&gt;ಎಕರೆಗೆ 50 ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗಿತ್ತು. ಕನಿಷ್ಠ ₹5 ಲಕ್ಷ ಮೌಲ್ಯದ ಮೆಕ್ಕೆಜೋಳ ದೊರೆಯುತ್ತಿತ್ತು. ಮಳೆ ಬಾರದ ಪರಿಣಾಮ ವೆಚ್ಚ ಮಾಡಿದ ₹2 ಲಕ್ಷದ ಜತೆಗೆ ಸಮಯ ಮತ್ತು ಶ್ರಮ ವ್ಯರ್ಥವಾಗಿದೆ ಎನ್ನುತ್ತಾರೆ ರೈತ ರಾಜಾ ಸಾಬ್.&lt;/p&gt;&lt;h3&gt;&lt;strong&gt;ರೈತರಿಗೆ ಕೃಷಿ ನಿರ್ದೇಶಕರ ಸಲಹೆ&lt;/strong&gt;&lt;/h3&gt;&lt;p&gt;ಬೆಳೆ ಆ್ಯಪ್&zwnj;ನಲ್ಲಿ ರೈತರು ಸ್ವಯಂ ಬೆಳೆ ಸಮೀಕ್ಷೆ ಮಾಡಿಕೊಂಡರೆ ಮಾತ್ರ, ಅದರ ಆದಾರದಲ್ಲಿ ಬೆಳೆನಷ್ಟ ಪರಿಹಾರ ದೊರೆಯುತ್ತದೆ. ರೈತರು ಬೆಳೆನಾಶ ಮಾಡುವ ಮೊದಲು ಬೆಳೆ ಆ್ಯಪ್&zwnj;ನಲ್ಲಿ ಸ್ವಯಂ ಸಮೀಕ್ಷೆ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಗರ್ಜೆಪ್ಪ ಸಲಹೆ ನೀಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ballari-lack-of-monsoon-rains-h-veerapur-village-s-farmer-destroys-5-acres-of-maize-crop-in-kurugodu-taluk-mrq/articleshow-xo9ycx8"/>
        </item>
        <item>
            <title><![CDATA[ಇ20 ಇಂಧನ ರಹಸ್ಯ: ನಿಮ್ಮ ವಾಹನಕ್ಕೆ ಕಾದಿದೆಯೇ ಅಪಾಯ? ರಾಹುಲ್ ಗಾಂಧಿ ಹೇಳಿದ್ದೇನು?]]></title>
            <link>https://kannada.asianetnews.com/gallery/india-news/e20-fuel-mystery-is-there-danger-waiting-for-your-vehicle-what-did-lop-rahul-gandhi-say-video-viral-mrq-i17g2p9</link>
            <guid isPermaLink="true">https://kannada.asianetnews.com/gallery/india-news/e20-fuel-mystery-is-there-danger-waiting-for-your-vehicle-what-did-lop-rahul-gandhi-say-video-viral-mrq-i17g2p9</guid>
            <pubDate>Sat, 08 Aug 2026 07:35:58 +0530</pubDate>
            <description><![CDATA[&lt;p&gt;ರಾಹುಲ್ ಗಾಂಧಿ, ಇ20 (ಎಥನಾಲ್&zwnj;) ಇಂಧನ ಮಿಶ್ರಣ ನೀತಿಯು ಒಂದು ದೊಡ್ಡ ಹಗರಣವಾಗಿದ್ದು, ಜನರ ವಾಹನಗಳನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಭ್ರಷ್ಟಾಚಾರದಿಂದ ಸಾರ್ವಜನಿಕರಿಗೆ ನೇರ ನಷ್ಟವಾಗುತ್ತಿದೆ ಎಂದ ಅವರು, ತೈಲ ಕಂಪನಿಗಳು ಇಂಧನ ಮಾಲಿನ್ಯದ ವರದಿಗಳನ್ನು ತಳ್ಳಿಹಾಕಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypkcz2mmxc4568pkt70fwv6,imgname-1-1785317456980.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಹುಲ್ ಗಾಂಧಿ, ಇ20 (ಎಥನಾಲ್&zwnj;) ಇಂಧನ ಮಿಶ್ರಣ ನೀತಿಯು ಒಂದು ದೊಡ್ಡ ಹಗರಣವಾಗಿದ್ದು, ಜನರ ವಾಹನಗಳನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಭ್ರಷ್ಟಾಚಾರದಿಂದ ಸಾರ್ವಜನಿಕರಿಗೆ ನೇರ ನಷ್ಟವಾಗುತ್ತಿದೆ ಎಂದ ಅವರು, ತೈಲ ಕಂಪನಿಗಳು ಇಂಧನ ಮಾಲಿನ್ಯದ ವರದಿಗಳನ್ನು ತಳ್ಳಿಹಾಕಿವೆ.&lt;/p&gt;&lt;img&gt;&lt;p&gt;&lsquo;ಇ20 (ಎಥನಾಲ್&zwnj;) ಇಂಧನ ಮಿಶ್ರಣ ನೀತಿಯು ಒಂದು ಬೃಹತ್ ಸಮಸ್ಯೆಯಾಗಿದ್ದು, ಇದು ಜನರನ್ನು ವಂಚಿಸುತ್ತಿದೆ ಮತ್ತು ಅವರ ವಾಹನಗಳನ್ನು ಹಾಳುಮಾಡುತ್ತಿದೆ&rsquo; ಎಂದು, ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಎಕ್ಸ್&zwnj;ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಮಾತನಾಡಿರುವ ಅವರು, &lsquo;ದೇಶದಲ್ಲಿ ಎಲ್ಲೆಡೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸಾಮಾನ್ಯವಾಗಿ ನಾವು &lsquo;ಬೇಳೆಯಲ್ಲಿ ಏನೋ ಕಪ್ಪು ಇದೆ&rsquo; ಎನ್ನುತ್ತೇವೆ, ಆದರೆ ಇ20 ವಿಷಯದಲ್ಲಿ ಇಡೀ ಬೇಳೆಯೇ ಕಪ್ಪಾಗಿದೆ (ಸಂಪೂರ್ಣ ವ್ಯವಸ್ಥೆಯೇ ಭ್ರಷ್ಟವಾಗಿದೆ)&rsquo; ಎಂದು ಟೀಕಿಸಿದ್ದಾರೆ.&lt;/p&gt;&lt;img&gt;&lt;p&gt;&lsquo;ನಮ್ಮ ಹೋರಾಟಗಳಲ್ಲಿ ವಿಷಯಗಳನ್ನು ಯಾವ ಕ್ರಮದಲ್ಲಿ ಕೈಗೆತ್ತಿಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ. ಏಕೆಂದರೆ ಅಷ್ಟೊಂದು ಭ್ರಷ್ಟಾಚಾರದ ವಿಚಾರಗಳು ಸಾಲುಗಟ್ಟಿ ನಿಂತಿವೆ. ಈ ವಿಷಯವನ್ನು ಕಾಂಗ್ರೆಸ್ ಪಕ್ಷವು ಅತ್ಯಂತ ಪ್ರಮುಖವಾಗಿ ಕೈಗೆತ್ತಿಕೊಳ್ಳಲಿದೆ. ಇ20ಯಿಂದಾಗಿ ಜನರ ವಾಹನಗಳು ಬಹುಬೇಗ ಹಾಳಾಗುತ್ತಿದ್ದು, ಸಾರ್ವಜನಿಕರ ಜೇಬಿಗೆ ಮತ್ತು ಜೀವನಕ್ಕೆ ನೇರ ನಷ್ಟ ಉಂಟಾಗುತ್ತಿದೆ&rsquo; ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಇ20 ಇಂಧನದಲ್ಲಿ ತೇವಾಂಶ ಮತ್ತು ಕ್ಲೋರೈಡ್ ಇದೆ. ಅದು ಮಾಲಿನ್ಯಕಾರಕ ಎಂಬ ಮಾಧ್ಯಮ ವರದಿಗಳನ್ನು ತೈಲ ಕಂಪನಿಗಳು ತಳ್ಳಿಹಾಕಿವೆ. ಇಂಧನವು ನಿಗದಿತ ಮಾನದಂಡಗಳ ಅನುಸಾರ ಇದೆ ಎಂದಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಓದಿದ್ದಕ್ಕೂ ಬರೆದಿದ್ದಕ್ಕೂ ಸಂಬಂಧವೇ ಇಲ್ಲ; ರಾಹುಲ್ ಗಾಂಧಿಗೆ ಟಾಂಗ್ ಕೊಡಲು ಹೋಗಿ ಮುಖಭಂಗ! ವಿಡಿಯೋ ವೈರಲ್&zwnj;!&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/india-news/e20-fuel-mystery-is-there-danger-waiting-for-your-vehicle-what-did-lop-rahul-gandhi-say-video-viral-mrq-i17g2p9"/>
        </item>
        <item>
            <title><![CDATA[ಅಂದು ಗಟಾರ್-ಕೊಳಕು; ಇಂದು ದೇಶದ ಸಾಂಸ್ಕೃತಿಕ ರಾಯಭಾರಿ; ಉಲ್ಟಾ ಹೊಡೆದ ಕಂಗನಾ ರಣಾವತ್]]></title>
            <link>https://kannada.asianetnews.com/gallery/india-news/gen-z-is-india-s-biggest-force-and-ambassadors-of-the-country-s-culture-and-identity-bjp-mp-kangana-ranaut-mrq-bfu0wp3</link>
            <guid isPermaLink="true">https://kannada.asianetnews.com/gallery/india-news/gen-z-is-india-s-biggest-force-and-ambassadors-of-the-country-s-culture-and-identity-bjp-mp-kangana-ranaut-mrq-bfu0wp3</guid>
            <pubDate>Sat, 08 Aug 2026 07:26:34 +0530</pubDate>
            <description><![CDATA[ನೀಟ್&zwnj; ಪ್ರತಿಭಟನಾಕಾರರನ್ನು 'ಗಟಾರ ಜನರೇಶನ್&zwnj;' ಎಂದು ಕರೆದು ವಿವಾದ ಸೃಷ್ಟಿಸಿದ್ದ ಬಿಜೆಪಿ ಸಂಸದೆ ಕಂಗನಾ ರಣಾವತ್, ಇದೀಗ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಆರ್&zwnj;ಎಸ್&zwnj;ಎಸ್ ಮುಖ್ಯಸ್ಥರ ಹೇಳಿಕೆ ಬಳಿಕ, ಜೆನ್&zwnj; ಝೀ ಯುವಜನರೇ ದೇಶದ ದೊಡ್ಡ ಶಕ್ತಿ ಮತ್ತು ಸಾಂಸ್ಕೃತಿಕ ರಾಯಭಾರಿಗಳು ಎಂದು ಹೊಗಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kze6eq9axasczepkyv85nw0n,imgname-kangana-ranaut-generation-gutter-controversy-1786109189418.jpg" type="image/jpeg" height="390" width="690"/>
            <content:encoded><![CDATA[ನೀಟ್&zwnj; ಪ್ರತಿಭಟನಾಕಾರರನ್ನು 'ಗಟಾರ ಜನರೇಶನ್&zwnj;' ಎಂದು ಕರೆದು ವಿವಾದ ಸೃಷ್ಟಿಸಿದ್ದ ಬಿಜೆಪಿ ಸಂಸದೆ ಕಂಗನಾ ರಣಾವತ್, ಇದೀಗ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಆರ್&zwnj;ಎಸ್&zwnj;ಎಸ್ ಮುಖ್ಯಸ್ಥರ ಹೇಳಿಕೆ ಬಳಿಕ, ಜೆನ್&zwnj; ಝೀ ಯುವಜನರೇ ದೇಶದ ದೊಡ್ಡ ಶಕ್ತಿ ಮತ್ತು ಸಾಂಸ್ಕೃತಿಕ ರಾಯಭಾರಿಗಳು ಎಂದು ಹೊಗಳಿದ್ದಾರೆ.&lt;img&gt;&lt;p&gt;ನವದೆಹಲಿ: ಜಿರಳೆ ಪಕ್ಷದ ಜೆನ್&zwnj; ಝೀ (ಯುವ) ಪ್ರತಿಭಟನಾಕಾರರನ್ನು &lsquo;ಗಟಾರ ಜನರೇಶನ್&zwnj;&rsquo; ಎಂದು ಕರೆದು ದೊಡ್ಡ ವಿವಾದ ಸೃಷ್ಟಿಸಿದ ನಟಿ-ಬಿಜೆಪಿ ಸಂಸದೆ ಕಂಗನಾ ರಾಣಾವತ್ ಈಗ ಉಲ್ಡಾ ಹೊಡೆದಿದ್ದು, &lsquo;ಅವರು ಭಾರತದ ಅತಿದೊಡ್ಡ ಶಕ್ತಿ ಮತ್ತು ದೇಶದ ಸಂಸ್ಕೃತಿ ಮತ್ತು ಗುರುತಿನ ರಾಯಭಾರಿಗಳು&rsquo; ಎಂದು ಹೊಗಳಿದರು.&lt;/p&gt;&lt;img&gt;&lt;p&gt;ಜನರಲ್ ಝೀಗಳು ರಾಷ್ಟ್ರವಿರೋಧಿಯಲ್ಲ ಎಂದು ಆರ್&zwnj;ಎಸ್&zwnj;ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ ಮರುದಿನ ಸಂಸದೆ ಕಂಗನಾ ರಣಾವತ್ ಈ ಹೇಳಿಕೆ ನೀಡಿದರು. ಸುದ್ದಿಗಾರರ ಜತೆ ಅವರು ಮಾತನಾಡಿ, &lsquo;ಜೆನ್&zwnj; ಝೀಗಳು ನಮ್ಮ ದೇಶದ ಶಕ್ತಿ ಮತ್ತು ಒಂದು ರೀತಿಯಲ್ಲಿ ನಮ್ಮ ರಾಷ್ಟ್ರಕ್ಕೆ ದೊಡ್ಡ ಆಸ್ತಿ. ನಮ್ಮ ಯುವಜನರು ನಮ್ಮ ಸಂಸ್ಕೃತಿ ಮತ್ತು ಅದರ ಗುರುತಿನ ರಾಯಭಾರಿಗಳಾಗಿ ಹೊರಹೊಮ್ಮುತ್ತಿರುವುದು ನಮಗೆ ತುಂಬಾ ಸಂತೋಷ ತಂದಿದೆ&rsquo; ಎಂದರು.&lt;/p&gt;&lt;img&gt;&lt;p&gt;ನೀಟ್&zwnj; ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಕೆಲ ವಿಡಿಯೋಗಳಿಗೆ ಆಕ್ಷೇಪಿಸಿರುವ ಕಂಗನಾ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. &lsquo;ಒಂದೇ ಸ್ಥಳದಲ್ಲಿ ಇಷ್ಟೊಂದು ಮಟ್ಟಿಗಿನ ಕೊಳಕನ್ನು ನನ್ನ ಜೀವನದಲ್ಲಿ ಇದುವರೆಗೆ ನೋಡಿಲ್ಲ. ಅವರು ಮಾತಾಡುವ ರೀತಿ, ಅವರು ಬಳಸುತ್ತಿರುವ ಭಾಷೆ ಎಲ್ಲವೂ ಪ್ರತಿಯೊಂದು ಫ್ರೇಮ್&zwnj;ನಲ್ಲಿಯೂ ಅಸಹ್ಯಕರವಾಗಿದೆ. ಛೇ ಯಾರು ಇವರಿಗೆ ಜನ್ಮ ನೀಡಿ ಬೆಳೆಸುತ್ತಿದ್ದಾರೆ?&rsquo; ಎಂದು ಪಶ್ನಿಸಿದ್ದಾರೆ.&lt;/p&gt;&lt;img&gt;&lt;p&gt;&lsquo;ನೀವು ನಿಮ್ಮನ್ನು ಜಿರಳೆಗಳು ಎಂದು ಕರೆದುಕೊಳ್ಳುತ್ತೀರಿ ಮತ್ತು ಅವುಗಳಂತೆಯೇ ಕಾಣುತ್ತೀರಿ, ಹಾಗೆಯೇ ವರ್ತಿಸುತ್ತೀರಿ. ಅಲ್ಲಿ ಯಾವುದೇ ವಿರೋಧಾಭಾಸ ಅಥವಾ ಹೋಲಿಕೆ ಇಲ್ಲ, ಕೇವಲ ನಿಮ್ಮ ಕೊಳಕು, ಕಸವನ್ನು ಜಗತ್ತಿಗೆ ಹರಡುತ್ತಿದ್ದೀರಿ&rsquo; ಎಂದು ಹೇಳಿದ್ದರು.&lt;/p&gt;&lt;img&gt;&lt;p&gt;ನಿಮಗಿಂತ ಜೆನ್&zwnj;ಝೀಗಳು ದೇಶಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆ. ನೀವೇನು ಕೊಡುಗೆ ನೀಡಿದ್ದೀರಿ ಎಂಬುದು ನೀವು ಸಂಸದರಾಗಿರುವ ಹಿಮಾಚಲ ಪ್ರದೇಶದ ಜನರಿಗೆ ಗೊತ್ತಿದೆ&rsquo; ಎಂದು ಕಂಗನಾರನ್ನು ಒಮ್ಮೆ ಜನ ತರಾಟೆಗೆ ತೆಗೆದುಕೊಂಡ ಪ್ರಸಂಗ ಉಲ್ಲೇಖಿಸಿ ಸೌರವ್ ದಾಸ್ ಚಾಟಿ ಬೀಸಿದ್ದರು.&lt;/p&gt;&lt;img&gt;&lt;p&gt;ಸೌರವ್&zwnj; ದಾಸ್&zwnj;, &lsquo;ನೀನು ಹೃತಿಕ್&zwnj;ನಂತೆ ಕಾಣುತ್ತಿರುವೆ. ಹೀಗಾಗಿ ಕಂಗನಾ ನಿನ್ನನ್ನು ನಿಂದಿಸಿರಬೇಕು ಎಂದು ನನ್ನ ಸ್ನೇಹಿತರು ನನಗೆ ಹೇಳಿದ್ದರು&rsquo; ಎಂದು ನಟಿಗೆ ಟಾಂಗ್&zwnj; ನೀಡಿದ್ದರು. ಇದಾದ ಬಳಿಕ ಜಾಲತಾಣದಲ್ಲಿ &lsquo;ಹೃತಿಕ್ ರೋಷನ್ ಅವರಿಗೆ ಜಗತ್ತು ಕ್ಷಮೆಯಾಚಿಸಬೇಕು&rsquo; ಎನ್ನುವ ವಿಷಯ ಟ್ರೆಂಡ್&zwnj; ಆರಂಭವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಹೃತಿಕ್&zwnj;, &lsquo;ಸಂದರ್ಭ ಸರಿಯಿದ್ದಾಗ ಸತ್ಯಗಳಿಗೆ ಕಾಯುತ್ತೇನೆ. ಅದು ನ್ಯಾಯಯುತವಾಗಿರುತ್ತದೆ&rsquo; ಎಂದು ಪ್ರತಿಕ್ರಿಯಿಸಿದ್ದರು&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/india-news/gen-z-is-india-s-biggest-force-and-ambassadors-of-the-country-s-culture-and-identity-bjp-mp-kangana-ranaut-mrq-bfu0wp3"/>
        </item>
        <item>
            <title><![CDATA[Expressway Repair: ₹4,200 ಕೋಟಿ ವೆಚ್ಚದ ರಸ್ತೆ 2 ವಾರಕ್ಕೇ ಕಿತ್ತು ಬಂತು! ಟಾರ್ ಒಣಗಿಸಲು ಫ್ಯಾನ್ ಇಟ್ಟ ಭೂಪರು!]]></title>
            <link>https://kannada.asianetnews.com/india-news/fans-used-to-dry-lucknow-kanpur-expressway-after-rain-damage-sparks-outrage/articleshow-q6n6yzg</link>
            <guid isPermaLink="true">https://kannada.asianetnews.com/india-news/fans-used-to-dry-lucknow-kanpur-expressway-after-rain-damage-sparks-outrage/articleshow-q6n6yzg</guid>
            <pubDate>Sat, 08 Aug 2026 07:25:37 +0530</pubDate>
            <description><![CDATA[ಉದ್ಘಾಟನೆಯಾದ ಎರಡೇ ವಾರದಲ್ಲಿ ಲಖನೌ-ಕಾನ್ಪುರ ಎಕ್ಸ್&zwnj;ಪ್ರೆಸ್&zwnj;ವೇ ಮಳೆಗೆ ಹಾಳಾಗಿದೆ. ರಸ್ತೆ ಒಣಗಿಸಿ, ದುರಸ್ತಿ ಮಾಡಲು ಎಲೆಕ್ಟ್ರಿಕ್ ಫ್ಯಾನ್&zwnj;ಗಳನ್ನು ಬಳಸಿದ ವಿಡಿಯೋ ವೈರಲ್ ಆಗಿದ್ದು, ಕಾಮಗಾರಿ ಗುಣಮಟ್ಟ ಮತ್ತು ವಿಚಿತ್ರ ದುರಸ್ತಿ ವಿಧಾನದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzdk00vfkwd56vs51eh4fty6,imgname-kanpur-lucknow-expressway-1786088784751.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಖನೌ:&lt;/strong&gt; ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ಲಖನೌ-ಕಾನ್ಪುರ ಎಕ್ಸ್&zwnj;ಪ್ರೆಸ್&zwnj;ವೇ, ಮಳೆಗಾಲದ ಮೊದಲ ಮಳೆಗೆ ಅಲ್ಲಲ್ಲಿ ಕಿತ್ತು ಹೋಗಿದೆ. ಇದರ ದುರಸ್ತಿ ವೇಳೆ, ಹೊಸದಾಗಿ ಹಾಕಿದ ಟಾರ್ ಬೇಗ ಒಣಗಲಿ ಅಂತ ಅಧಿಕಾರಿಗಳು ಎಲೆಕ್ಟ್ರಿಕ್ ಫ್ಯಾನ್&zwnj;ಗಳನ್ನು ಬಳಸಿದ್ದಾರೆ. ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಮಳೆಯಿಂದಾಗಿ ರಸ್ತೆಯ ಒಂದು ಭಾಗ ಹಾಳಾದ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ಶುರುಮಾಡಲಾಗಿತ್ತು. ಹೊಸದಾಗಿ ಮುಚ್ಚಿದ ಗುಂಡಿಗಳು ಬೇಗ ಒಣಗಲಿ ಎಂಬ ಕಾರಣಕ್ಕೆ ಫ್ಯಾನ್&zwnj;ಗಳನ್ನು ಇಡಲಾಗಿತ್ತು ಎಂದು ವರದಿಗಳು ಹೇಳಿವೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಭಾರತದ ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಮತ್ತು ಈ ವಿಚಿತ್ರ ದುರಸ್ತಿ ವಿಧಾನದ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ರಾಹುಲ್ ಗಾಂಧಿಯ ಫೇವರಿಟ್ ರಾಜಕಾರಣಿ ಕಾಂಗ್ರೆಸ್ ನಾಯಕರಲ್ಲ, ಬಿಜೆಪಿಯ ಈ ಲೀಡರ್!&lt;/p&gt;&lt;h2&gt;&lt;strong&gt;ಮಳೆಯಲ್ಲಿ ಹಾಕಿದ ಟಾರ್ ಒಣಗಿಸಲು ಫ್ಯಾನ್!&lt;/strong&gt;&lt;/h2&gt;&lt;p&gt;ಸುಮಾರು 4,200 ಕೋಟಿಯಿಂದ 4,700 ಕೋಟಿ ರೂಪಾಯಿ ವೆಚ್ಚದಲ್ಲಿ ಲಖನೌ-ಕಾನ್ಪುರ ಎಕ್ಸ್&zwnj;ಪ್ರೆಸ್&zwnj;ವೇಯನ್ನು ನಿರ್ಮಿಸಲಾಗಿದೆ. ಜುಲೈ 13 ರಂದು ಈ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ, ಕೇವಲ ಎರಡು ವಾರ ಕಳೆಯುವುದರೊಳಗೆ ಸುರಿದ ಮಳೆಗೆ ರಸ್ತೆ ಹಾಳಾಗಿ, ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಹೀಗಾಗಿ, ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.&lt;/p&gt;&lt;p&gt;ವೈರಲ್ ಆಗಿರುವ ವಿಡಿಯೋದಲ್ಲಿ, ರಸ್ತೆಯ ಹಾಳಾದ ಭಾಗದ ಬಳಿ ಸಾಲಾಗಿ ಎಲೆಕ್ಟ್ರಿಕ್ ಫ್ಯಾನ್&zwnj;ಗಳನ್ನು ಇಟ್ಟು, ದುರಸ್ತಿ ಕೆಲಸ ಮಾಡುವುದನ್ನು ಕಾಣಬಹುದು. ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ರಸ್ತೆ ಹಾಳಾಗಿದ್ದಲ್ಲದೆ, ಅದನ್ನು ಸರಿಪಡಿಸಲು ಅನುಸರಿಸಿದ ಈ ವಿಚಿತ್ರ ವಿಧಾನವನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರಶ್ನಿಸಿದ್ದಾರೆ. &quot;ಟಾರ್ ಹಾಕಿದ ರಸ್ತೆ ಒಣಗಿಸಲು ಫ್ಯಾನ್ ಬಳಸೋದು ಯಾವಾಗ ಶುರುವಾಯ್ತು?&quot; ಎಂದು ಒಬ್ಬರು ಪ್ರಶ್ನಿಸಿದರೆ, &quot;ದೇಶ ತಾಂತ್ರಿಕವಾಗಿ ಮುಂದೆ ಹೋಗುತ್ತಿದೆಯೋ ಅಥವಾ ಹಿಂದಕ್ಕೋ?&quot;, &quot;ನಾವು ಶಿಲಾಯುಗಕ್ಕೆ ವಾಪಸ್ ಹೋಗುತ್ತಿದ್ದೇವೆಯೇ?&quot; ಎಂಬಂತಹ ವ್ಯಂಗ್ಯಭರಿತ ಟೀಕೆಗಳು ಹರಿದಾಡಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Centre Warns Meta: ಡೀಪ್&zwnj;ಫೇಕ್&zwnj;, ಅಪಪ್ರಚಾರ ತಡೆಗೆ ಅಲ್ಗಾರಿದಂ ಸೆಟ್&zwnj; ಮಾಡಿ; 'ಮೆಟಾ'ಗೆ ಕೇಂದ್ರ ಖಡಕ್ ಎಚ್ಚರಿಕೆ!&lt;/p&gt;&lt;p&gt;Pedestal fans being used to dry the patch work after the multiple portions of the Lucknow-kanpur expressway was damaged barely a forthnight after inauguration. https://t.co/MuYnS6A4jL pic.twitter.com/n8PNElhnsS&lt;/p&gt;&lt;p&gt;&mdash; Piyush Rai (@Benarasiyaa) ಆಗಸ್ಟ್ 6, 2026&lt;/p&gt;&lt;p&gt;&lt;/p&gt;&lt;p&gt;&ndash; ₹4700 cr of investment didn't even last 18 days.Becomes the first Highway where Fans are used to dry the patch work to cover Corruption..NHAI has awarded 2 more projects worth ₹3483 crores to the same PNC infratech pic.twitter.com/v36bKlpVos&lt;/p&gt;&lt;p&gt;&mdash; D (@Deb_livnletliv) ಆಗಸ್ಟ್ 6, 2026&lt;/p&gt;&lt;p&gt;&lt;/p&gt;&lt;p&gt;4700 करोड़ का एक्सप्रेसवे&amp;nbsp;47 दिन भी नहीं चल सकाये वीडियो उत्तर प्रदेश का लखनऊ&ndash;कानपुर एक्सप्रेसवे है. 4700 करोड़ की लागत से बना ये एक्सप्रेसवे, 47 दिन भी ठीक नहीं नहीं टिक सका और खस्ता हाल हो गया. रक्षा मंत्री राजनाथ सिंह ने 13 जुलाई को इस एक्सप्रेसवे का उद्घाटन किया था. समारोह&hellip; pic.twitter.com/rcljRjbEyh&lt;/p&gt;&lt;p&gt;&mdash; News Pinch (@TheNewspinch) ಆಗಸ್ಟ್ 6, 2026&lt;/p&gt;&lt;p&gt;&lt;/p&gt;&lt;p&gt;&lt;strong&gt;ವ್ಯಂಗ್ಯ, ವಿವಾದ&lt;/strong&gt;&lt;/p&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ವಿವಾದ ಭುಗಿಲೇಳುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 'ದುರಸ್ತಿಗಾಗಿ ಬಳಸಿದ ಸಾಮಗ್ರಿ ಬೇಗನೆ ಒಣಗಲಿ ಮತ್ತು ಮಳೆಯಿಂದ ಉಂಟಾದ ತೇವಾಂಶವನ್ನು ಕಡಿಮೆ ಮಾಡಲು ಫ್ಯಾನ್&zwnj;ಗಳನ್ನು ಬಳಸಲಾಗಿದೆ. ಇದು ಕೇವಲ ತಾತ್ಕಾಲಿಕ ತಾಂತ್ರಿಕ ಕ್ರಮ' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಯಾದ ನಂತರ ಫ್ಯಾನ್&zwnj;ಗಳನ್ನು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.&lt;/p&gt;&lt;p&gt;ಈ ಘಟನೆ ಉತ್ತರ ಪ್ರದೇಶದಲ್ಲಿ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಎಕ್ಸ್&zwnj;ಪ್ರೆಸ್&zwnj;ವೇಯ ನಿರ್ಮಾಣದ ಗುಣಮಟ್ಟದ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸಿದರೆ, ರಸ್ತೆಯ ಹಾನಿಯನ್ನು ಸರಿಪಡಿಸುವ ಕ್ರಮಗಳು ವೇಗವಾಗಿ ನಡೆಯುತ್ತಿವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ವೈರಲ್ ವಿಡಿಯೋ ಭಾರತದಲ್ಲಿನ ಮೂಲಸೌಕರ್ಯ ಯೋಜನೆಗಳ ಗುಣಮಟ್ಟ ಮತ್ತು ಮೇಲ್ವಿಚಾರಣೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.&lt;/p&gt;]]></content:encoded>
            <category>news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/fans-used-to-dry-lucknow-kanpur-expressway-after-rain-damage-sparks-outrage/articleshow-q6n6yzg"/>
        </item>
        <item>
            <title><![CDATA[Inside Bengaluru Star hotel: ಸ್ಟಾರ್‌ ಹೋಟೆಲಲ್ಲಿ ಕೊಳೆತ ತರಕಾರಿ, ಹಳತಾದ ಮಾಂಸ!  26 ಹೋಟೆಲ್‌ ಮೇಲೆ ಆಹಾರ ಇಲಾಖೆ ದಾಳಿ!]]></title>
            <link>https://kannada.asianetnews.com/state/rotten-veggies-stale-meat-at-star-hotel-food-safety-department-raids-26-hotels-in-bengaluru-rav/articleshow-nea5p0t</link>
            <guid isPermaLink="true">https://kannada.asianetnews.com/state/rotten-veggies-stale-meat-at-star-hotel-food-safety-department-raids-26-hotels-in-bengaluru-rav/articleshow-nea5p0t</guid>
            <pubDate>Sat, 08 Aug 2026 06:14:57 +0530</pubDate>
            <description><![CDATA[&lt;p&gt;ಬೆಂಗಳೂರಿನ 26 ತ್ರಿತಾರಾ ಮತ್ತು ಪಂಚತಾರಾ ಹೋಟೆಲ್&zwnj;ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿದ್ದು, ಅವಧಿ ಮೀರಿದ ಮಾಂಸ, ಕೊಳೆತ ತರಕಾರಿಗಳು ಮತ್ತು ಗಂಭೀರ ಅನೈರ್ಮಲ್ಯವನ್ನು ಪತ್ತೆಹಚ್ಚಿದೆ. ದಿ ಲಲಿತ್ ಅಶೋಕ್&zwnj;, ತಾಜ್&zwnj;ನಂತಹ ಪ್ರತಿಷ್ಠಿತ ಹೋಟೆಲ್&zwnj;ಗಳಿಂದಲೂ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfd113jzy751tnje42r3wmz,imgname-----------------------2026-08-08t061022.325-1786149635186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.8): &lt;/strong&gt;ಬೆಂಗಳೂರು ವ್ಯಾಪ್ತಿಯ ತ್ರಿತಾರಾ(3 Star Hotels) ಹಾಗೂ ಪಂಚತಾರಾ ಹೋಟೆಲ್&zwnj;(Five star) ಸೇರಿ 26 ತಾರಾ ಹೋಟೆಲ್&zwnj;ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ(Food Safety Department Raids) ನಡೆಸಿದ್ದು, ಅವಧಿ ಮೀರಿದ ಮಾಂಸ, ಕೊಳೆತ ತರಕಾರಿ ಪತ್ತೆಯಾಗಿದೆ.&lt;/p&gt;&lt;p&gt;ಆಹಾರ ಸುರಕ್ಷತೆ ನಿಯಮ ಉಲ್ಲಂಘನೆ, ಮಾಂಸಾಹಾರಿ ಹಾಗೂ ಸಸ್ಯಾಹಾರಿ ಆಹಾರ ಪ್ರತ್ಯೇಕಿಸದೆ ಒಟ್ಟಾಗಿ ಸಂಗ್ರಹಿಸಿರುವುದು, ಅವಧಿ ಮೀರಿದ ಆಹಾರ, ಅನೈರ್ಮಲ್ಯ, ಲೇಬಲ್&zwnj; ಇಲ್ಲದಿರುವ ಬ್ರಾಂಡ್ ಬಳಕೆ, ತರಕಾರಿಗಳ ಮೇಲೆ ಫಂಗಸ್&zwnj; ಬೆಳೆದಿರುವುದು ಸೇರಿ ಗಂಭೀರ ಲೋಪಗಳು ಪತ್ತೆಯಾಗಿವೆ. ಹೀಗಾಗಿ ಸಂಬಂಧಪಟ್ಟ ಹೋಟೆಲ್&zwnj;ಗಳಿಗೆ ನೋಟಿಸ್&zwnj; ಜಾರಿ ಮಾಡಿದ್ದು, ನ್ಯಾಯ ನಿರ್ಣಾಯಕ ಅಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h2&gt;ಹೋಟೆಲ್&zwnj; ಆಹಾರ ಜಪ್ತಿ:&lt;/h2&gt;&lt;p&gt;ತಪಾಸಣೆಯ ವೇಳೆ ದಿ ಲಲಿತ್ ಅಶೋಕ್&zwnj; ಹೋಟೆಲ್&zwnj;ನಿಂದ 76 ಕೆ.ಜಿ. ಮಾಂಸ, 200 ಕೆ.ಜಿ. ತರಕಾರಿ ಜಪ್ತಿ ಮಾಡಲಾಗಿದೆ. ಜತೆಗೆ 32 ಲೀಟರ್&zwnj; ಅವಧಿ ಮೀರಿದ ಹಾಲು ವಶಪಡಿಸಿಕೊಂಡು ನಾಶಪಡಿಸಲಾಗಿದೆ.&lt;/p&gt;&lt;p&gt;ಶಾಂಗ್ರಿ-ಲಾ ಹೋಟೆಲ್&zwnj;ನಲ್ಲಿ 15 ಕೆ.ಜಿ. ಮಾಂಸ, ಫೋರ್&zwnj; ಸೀಸನ್ಸ್&zwnj; ಹೋಟೆಲ್&zwnj;ನಲ್ಲಿ 19 ಕೆ.ಜಿ. ಮಾಂಸ, ತಾಜ್ ವಿವಾಂತ- ವೈಟ್&zwnj;ಫೀಲ್ಡ್&zwnj;ನಲ್ಲಿ 3 ಕೆ.ಜಿ. ಅವಧಿ ಮೀರಿದ ಬೇಕರಿ ಉತ್ಪನ್ನ ಜಪ್ತಿ ಮಾಡಲಾಗಿದೆ.&lt;/p&gt;&lt;p&gt;ಜತೆಗೆ ಯಶವಂತಪುರದ ತಾಜ್&zwnj; ಹೋಟೆಲ್&zwnj;ನಲ್ಲಿ 72 ಕೆ.ಜಿ. ಮಾಂಸ ಹಾಗೂ ಸಾಲಮನ್&zwnj; ಮೀನು, ಏಟ್ರಿಯಾ ಹೋಟೆಲ್&zwnj;ನಲ್ಲಿ 105 ಕೆ.ಜಿ. ಅವಧಿ ಮೀರಿದ ಆಹಾರ ಪದಾರ್ಥ ಜಪ್ತಿ ಮಾಡಲಾಗಿದೆ. ಇದರಲ್ಲಿ 50 ಕೆ.ಜಿ. ಕೋಳಿ ಮಾಂಸ, 25 ಕೆ.ಜಿ. ಮಾಂಸ, 23 ಕೆ.ಜಿ.ಮೀನು ಹಾಗೂ 7 ಕೆ.ಜಿ. ತರಕಾರಿ ಸೇರಿದೆ. ಇವುಗಳನ್ನು ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;ಸುರಕ್ಷತೆ ಉಲ್ಲಂಘನೆ:&lt;/h3&gt;&lt;p&gt;ಅಡುಗೆ ಮನೆ, ಆಹಾರ ಸಂಗ್ರಹಣೆ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಎಫ್ಎಸ್&zwnj;ಎಸ್&zwnj;ಎಐ ನಿಯಮಗಳಿಗೆ ಅನುಗುಣವಾಗಿರುವ ಮಾಂಸ ಉತ್ಪನ್ನಗಳ ಲೇಬಲಿಂಗ್&zwnj; ಇಲ್ಲದಿರುವುದು, ಅವಧಿ ಮೀರಿದ ಹಾಲಿನ ಉತ್ಪನ್ನಗಳು, ಬೇಕರಿ ಉತ್ಪನ್ನ, ಕೋಳಿ ಮಾಂಸ, ಮೀನು, ಮಾಂಸ ಹಾಗೂ ತರಕಾರಿ ಸಂಗ್ರಹ ಪತ್ತೆಯಾಗಿದೆ. ತರಕಾರಿ ಹಾಗೂ ಆಹಾರ ಪದಾರ್ಥಗಳಲ್ಲಿ ಶಿಲೀಂಧ್ರವೂ ಪತ್ತೆಯಾಗಿದೆ.&lt;/p&gt;&lt;p&gt;ಈ ಬಗ್ಗೆ ಪತ್ರಿಕ್ರಿಯಿಸಿರುವ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಮಾಹಿತಿ ನೀಡಿ, ತಾರಾ ಹೋಟೆಲ್&zwnj;ಗಳ ಮೇಲೆ ದಾಳಿ ಮಾಡಿ ಸ್ವಚ್ಛತೆ ಮತ್ತು ಗುಣಮಟ್ಟ ಪರಿಶೀಲಿಸಿದ್ದೇವೆ. ಲೋಪಗಳು ಪತ್ತೆಯಾಗಿರುವ ಹೋಟೆಲ್&zwnj;ಗಳಿಗೆ ನೋಟಿಸ್&zwnj; ಜಾರಿ ಮಾಡಿ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.&lt;/p&gt;&lt;p&gt;ಸಸ್ಯಾಹಾರಿ, ಮಾಂಸಾಹಾರಿ ಆಹಾರಗಳನ್ನು ಹೇಗೆ ಸಂಗ್ರಹಿಸಲಾಗಿದೆ ಎಂದು ಪರಿಶೀಲಿಸಲಾಗಿದೆ. ಗಂಭೀರ ಲೋಪ ಕಂಡುಬಂದರೆ ಪರವಾನಗಿ ರದ್ದು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;h3&gt;ಜನರಿಗೆ ಸತ್ಯ ತಿಳಿಯಬೇಕು&lt;/h3&gt;&lt;p&gt;ಹೋಟೆಲ್&zwnj;ಗಳಲ್ಲಿ ಗುಣಮಟ್ಟ ಚೆನ್ನಾಗಿರುತ್ತದೆ ಎಂದು ಜನರು ಹೋಗುತ್ತಾರೆ. ಜನರಿಗೆ ವಾಸ್ತವ ತಿಳಿಸುವ ಕೆಲಸ ಮಾಡುತ್ತೇವೆ. ಬಳಿಕ ಜನರೇ ನಿರ್ಧಾರ ಮಾಡುತ್ತಾರೆ. ಒಟ್ಟಾರೆ ಜನರ ಆರೋಗ್ಯ ರಕ್ಷಣೆ ನಮ್ಮ ಉದ್ದೇಶ.&lt;/p&gt;&lt;p&gt;&lt;strong&gt;-ಯು.ಟಿ. ಖಾದರ್, ಆರೋಗ್ಯ ಸಚಿವ&lt;/strong&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rotten-veggies-stale-meat-at-star-hotel-food-safety-department-raids-26-hotels-in-bengaluru-rav/articleshow-nea5p0t"/>
        </item>
        <item>
            <title><![CDATA[Mecca Joint Defence Agreement: ಪಾಕಿಸ್ತಾನ ಮೇಲೆ ದಾಳಿ ಆದರೆ ಬೆಂಬಲಕ್ಕೆ ಇನ್ನು ಸೌದಿ, ಟರ್ಕಿ! ಏನಿದು ಮೆಕ್ಕಾ ಒಪ್ಪಂದ?]]></title>
            <link>https://kannada.asianetnews.com/world-news/mecca-joint-defence-agreement-regional-powers-welcome-saudi-turkey-pakistan-defense-pact-rav/articleshow-dggiwf5</link>
            <guid isPermaLink="true">https://kannada.asianetnews.com/world-news/mecca-joint-defence-agreement-regional-powers-welcome-saudi-turkey-pakistan-defense-pact-rav/articleshow-dggiwf5</guid>
            <pubDate>Sat, 08 Aug 2026 06:40:04 +0530</pubDate>
            <description><![CDATA[&lt;p&gt;ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳು 'ಮೆಕ್ಕಾ ರಕ್ಷಣಾ ಒಪ್ಪಂದ'ಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಒಂದು ದೇಶದ ಮೇಲಿನ ದಾಳಿಯನ್ನು ಎಲ್ಲರ ಮೇಲಿನ ದಾಳಿ ಎಂದು ಪರಿಗಣಿಸಲಾಗುವುದು. 'ಇಸ್ಲಾಮಿಕ್ ನ್ಯಾಟೋ' ಎಂದು ವಿಶ್ಲೇಷಿಸಲಾಗುತ್ತಿದೆ ಇದು ಭಾರತಕ್ಕೆ ಅಪಾಯಕಾರಿಯೇ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfempbwh3x2wekx3w4s0k8d,imgname-----------------------2026-08-08t062717.355-1786151328124.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಏನಿದು ಒಪ್ಪಂದ?&lt;/strong&gt;&lt;/p&gt;&lt;ul&gt; &lt;li&gt;ಸೌದಿ ಅರೇಬಿಯಾ, ಪಾಕಿಸ್ತಾನ ನಡುವೆ 2025ರಲ್ಲೇ ಜಂಟಿ ಮಿಲಿಟರಿ ಒಪ್ಪಂದ ಏರ್ಪಟ್ಟಿತ್ತು&lt;/li&gt; &lt;li&gt;ಅದರ ಭಾಗವಾಗಲು ಟರ್ಕಿ ಕೂಡ ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಇದೀಗ ಹೊಸ ಡೀಲ್&zwnj;ಗೆ ಸಹಿ&lt;/li&gt; &lt;li&gt;ಆ ಪ್ರಕಾರ, 3 ದೇಶಗಳ ಪೈಕಿ ಯಾವುದಾದರೂ ಒಂದರ ಮೇಲೆ ದಾಳಿ ಆದರೆ ಒಗ್ಗಟ್ಟು ಪ್ರದರ್ಶನ&lt;/li&gt; &lt;li&gt;ಅದು ತಮ್ಮ ಮೇಲೆಯೇ ನಡೆದ ದಾಳಿ ಎಂದು ಭಾವಿಸಿ ಉಳಿದ ಎರಡೂ ದೇಶಗಳಿಂದ ಪ್ರತಿದಾಳಿ&lt;/li&gt; &lt;li&gt;ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಪಾಕ್&zwnj; ಪ್ರಧಾನಿ, ಸೌದಿ ದೊರೆ, ಟರ್ಕಿ ಅಧ್ಯಕ್ಷರಿಂದ ಒಪ್ಪಂದ&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ಪಿಟಿಐ ಇಸ್ಲಾಮಾಬಾದ್&zwnj;/ಮೆಕ್ಕಾ: &lt;/strong&gt;ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಸೌದಿ ಅರೇಬಿಯಾ, ಪಾಕಿಸ್ತಾನ ಹಾಗೂ ಟರ್ಕಿ ದೇಶಗಳು ಮಹತ್ವದ &lsquo;ಮೆಕ್ಕಾ ರಕ್ಷಣಾ ಒಪ್ಪಂದ&rsquo;ಕ್ಕೆ ಶುಕ್ರವಾರ ಸಹಿಹಾಕಿವೆ. ಈ ಒಪ್ಪಂದದಂತೆ ಇನ್ನು ಮುಂದೆ ಈ ಮೂರು ರಾಷ್ಟ್ರಗಳಲ್ಲಿ ಯಾವುದೇ ಒಂದರ ಮೇಲೆ ದಾಳಿ ನಡೆದರೂ ಅದನ್ನು ಉಳಿದೆರಡು ದೇಶಗಳ ಮೇಲೂ ನಡೆದ ದಾಳಿ ಎಂದೇ ಭಾವಿಸಲಾಗುತ್ತದೆ. ಅಂದರೆ &lsquo;ಒಂದು ದೇಶ ದಾಳಿಗೊಳಗಾದರೆ ಅದರ ನೆರವಿಗೆ ಉಳಿದೆರಡು ದೇಶಗಳು ಬರಲಿವೆ&rsquo; ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.&lt;/p&gt;&lt;p&gt;ಪಾಕಿಸ್ತಾನದ ಪ್ರಧಾನಿ ಶೆಹಬಾಜ್&zwnj; ಷರೀಫ್&zwnj;, ಸೌದಿ ದೊರೆ ಪ್ರಿನ್ಸ್&zwnj; ಮೊಹಮ್ಮದ್&zwnj; ಬಿನ್&zwnj; ಸಲ್ಮಾನ್&zwnj; ಮತ್ತು ಟರ್ಕಿ ಅಧ್ಯಕ್ಷ ರೆಸೆಪ್&zwnj; ತಯ್ಯಿಪ್&zwnj; ಎರ್ಡೋಗನ್&zwnj; ಅವರು ಈ ಒಪ್ಪಂದಕ್ಕೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆದ ಮಕ್ಕಾ ಅಲ್&zwnj;-ಮಕರ್ರಮ್&zwnj; ಸಮ್ಮೇಳನದಲ್ಲಿ ಸಹಿ ಹಾಕಿದ್ದಾರೆ.&lt;/p&gt;&lt;p&gt;&lsquo;ಇದು ಮೂರೂ ರಾಷ್ಟ್ರಗಳ ಭದ್ರತೆಯನ್ನು ಬಲಪಡಿಸುವುದಷ್ಟೇ ಅಲ್ಲದೆ, ಪರಸ್ಪರ ರಕ್ಷಣಾ ಸಹಕಾರವನ್ನೂ ಹೆಚ್ಚಿಸುತ್ತದೆ&rsquo; ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.&lt;/p&gt;&lt;p&gt;ಈ ಒಪ್ಪಂದವು &lsquo;ಇಸ್ಲಾಮಿಕ್&zwnj; ನ್ಯಾಟೋ&rsquo; ರಚನೆಗೆ ನಾಂದಿ ಎನ್ನಲಾಗುತ್ತಿದೆ. ಪಾಕಿಸ್ತಾನಕ್ಕೆ ಭಾರತ ವೈರಿ ದೇಶ ಆಗಿರುವ ಕಾರಣ ಈ ಒಪ್ಪಂದ ಭಾರತಕ್ಕೂ ಎಚ್ಚರಿಕೆ ಗಂಟೆಯಾಗಿದೆ. ಇನ್ನು ಮಧ್ಯಪ್ರಾಚ್ಯದಲ್ಲಿ ಇಸ್ಲಾಮಿಕ್&zwnj; ದೇಶಗಳ ಮೇಲೆ ಮುಗಿಬೀಳುವ ಇಸ್ರೇಲ್&zwnj;ಗೂ ಇದು ಎಚ್ಚರಿಕೆ ಗಂಟೆ. ಇದರ ಬೆನ್ನಲ್ಲೇ ಈ ಒಪ್ಪಂದವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್&zwnj; ಜೈಸ್ವಾಲ್&zwnj; ತಿಳಿಸಿದ್ದಾರೆ. ಒಪ್ಪಂದಕ್ಕೆ ಇರಾನ್&zwnj; ಆಕ್ರೋಶ ವ್ಯಕ್ತಪಡಿಸಿದೆ.&lt;/p&gt;&lt;h2&gt;ಮೆಕ್ಕಾ ರಕ್ಷಣಾ ಒಪ್ಪಂದದಲ್ಲೇನಿದೆ?:&lt;/h2&gt;&lt;p&gt;ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನವು 2025ರಲ್ಲೇ ಜಂಟಿ ಮಿಲಿಟರಿ ಒಪ್ಪಂದ ಮಾಡಿಕೊಂಡಿದ್ದು, ಆ ಬಳಿಕ ಟರ್ಕಿ ಕೂಡ ಇದರ ಭಾಗವಾಗುವ ಆಸಕ್ತಿ ತೋರಿತ್ತು. ಆ ಕುರಿತ ಚರ್ಚೆಗಳನ್ನು ಪೂರ್ಣಗೊಳಿಸಿರುವ ಮೂರೂ ರಾಷ್ಟ್ರಗಳು ಈಗ ಜಂಟಿ ಮಿಲಿಟರಿ ಒಪ್ಪಂದಕ್ಕೆ ಸಹಿಹಾಕಿವೆ.&lt;/p&gt;&lt;p&gt;ಒಪ್ಪಂದದ ಅಂಶಗಳನ್ನು ಅವು ಪೂರ್ತಿ ಬಹಿರಂಗಪಡಿಸಿಲ್ಲ. ಆದರೆ ಈ ಒಪ್ಪಂದವು ಒಟ್ಟಾರೆಯಾಗಿ ಮೂರೂ ದೇಶಗಳ ಜಂಟಿ ಮಿಲಿಟರಿ ಕಾರ್ಯಾಚರಣೆ ಮತ್ತು ತರಬೇತಿ, ತಂತ್ರಜ್ಞಾನ ವರ್ಗಾವಣೆ ಮತ್ತು ಗುಪ್ತಚರ ಹಂಚಿಕೆಗೆ ಅವಕಾಶ ನೀಡುವ ಸಾಧ್ಯತೆಯಿದೆ.&lt;/p&gt;&lt;h3&gt;ಒಪ್ಪಂದ ಏಕೆ ಮಹತ್ವದ್ದು?:&lt;/h3&gt;&lt;p&gt;ಇದೀಗ ಮಧ್ಯ ಪ್ರಾಚ್ಯ ಸಂಘರ್ಷದ ನಡುವೆಯೇ ಮೂರೂ ರಾಷ್ಟ್ರಗಳು ಈ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿರುವುದು ಕುತೂಹಲ ಮೂಡಿಸಿದೆ.&lt;/p&gt;&lt;p&gt;ಇರಾನ್-ಅಮೆರಿಕ ಸಮರದ ವೇಳೆ ಸೌದಿ ಅರೇಬಿಯಾ ನಲುಗಿದೆ. ಅದು ಇರಾನ್&zwnj;, ಅದರ ಬೆಂಬಲಿತ ಯೆಮೆನ್&zwnj;ನ ಹೌತಿ ಉಗ್ರರು ಹಾಗೂ ಇರಾಕಿ ಉಗ್ರರಿಂದ ದಾಳಿಗೆ ಒಳಗಾಗಿದೆ. ಹೀಗಾಗಿ ತನ್ನ ರಕ್ಷಣಾ ಪಾಲುದಾರಿಕೆಯನ್ನು ವೃದ್ಧಿಸಲು ಎದುರು ನೋಡುತ್ತಿತ್ತು. ಟರ್ಕಿ ಕೂಡ ಈ ದಾಳಿಯಿಂದ ನಲುಗಿತ್ತು. ಇಂಥ ಉದ್ವಿಗ್ನ ಸಂದರ್ಭದಲ್ಲಿ ತೈಲ ಸಮೃದ್ಧ ಸೌದಿ ಅರೇಬಿಯಾ, ಪರಮಾಣು ಸಜ್ಜಿತ ಪಾಕಿಸ್ತಾನ ಹಾಗೂ ನ್ಯಾಟೋದ ಎರಡನೇ ಅತಿದೊಡ್ಡ ಸೇನೆ ಟರ್ಕಿಯನ್ನು ಈ ಒಪ್ಪಂದ ಒಟ್ಟುಗೂಡಿಸುತ್ತಿದೆ.&lt;/p&gt;&lt;p&gt;ಸೌದಿ ಅರೇಬಿಯಾವು ಗಲ್ಫ್&zwnj; ಭಾಗದ ಪ್ರಭಾವಿ ಹಾಗೂ ಶ್ರೀಮಂತ ಮುಸ್ಲಿಂ ರಾಷ್ಟ್ರವಾಗಿದ್ದು, ಪಾಕಿಸ್ತಾನವು ಭಾರತದ ಪ್ರಮುಖ ವೈರಿ ದೇಶವಾಗಿದೆ. ಇನ್ನು ನ್ಯಾಟೋದ ಭಾಗವಾಗಿರುವ ಟರ್ಕಿಯು ಬಲಿಷ್ಠ ಸೇನೆಯನ್ನು ಹೊಂದಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/mecca-joint-defence-agreement-regional-powers-welcome-saudi-turkey-pakistan-defense-pact-rav/articleshow-dggiwf5"/>
        </item>
        <item>
            <title><![CDATA[Centre Warns Meta: ಡೀಪ್‌ಫೇಕ್‌, ಅಪಪ್ರಚಾರ ತಡೆಗೆ ಅಲ್ಗಾರಿದಂ ಸೆಟ್‌ ಮಾಡಿ; 'ಮೆಟಾ'ಗೆ ಕೇಂದ್ರ ಖಡಕ್ ಎಚ್ಚರಿಕೆ!]]></title>
            <link>https://kannada.asianetnews.com/india-news/centre-govt-asks-meta-for-algorithm-changes-to-curb-deepfakes-propaganda-rav/articleshow-ogqtrus</link>
            <guid isPermaLink="true">https://kannada.asianetnews.com/india-news/centre-govt-asks-meta-for-algorithm-changes-to-curb-deepfakes-propaganda-rav/articleshow-ogqtrus</guid>
            <pubDate>Sat, 08 Aug 2026 07:07:08 +0530</pubDate>
            <description><![CDATA[&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪಪ್ರಚಾರ ಮತ್ತು ಕಾನೂನುಬಾಹಿರ ವಿಷಯಗಳನ್ನು ತಡೆಯಲು ಕೇಂದ್ರ ಸರ್ಕಾರವು ಮೆಟಾ ಸಂಸ್ಥೆಗೆ ಖಡಕ್ ಸೂಚನೆ ನೀಡಿದೆ. ಅಲ್ಗಾರಿದಂಗಳಲ್ಲಿ ಸೂಕ್ತ ಬದಲಾವಣೆ ಮಾಡಿ, ಭಾರತೀಯ ಕಾನೂನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಡಿಜಿಟಲ್ ವೇದಿಕೆಗಳನ್ನು ಸುರಕ್ಷಿತವಾಗಿರಿಸಲು ಸರ್ಕಾರ ತಾಕೀತು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzffj0aen888w3s2rv2cskcp,imgname-----------------------2026-08-08t065433.989-1786152288590.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.8): &lt;/strong&gt;ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪಪ್ರಚಾರ ಹಾಗೂ ಕಾನೂನುಬಾಹಿರ ವಿಷಯಗಳನ್ನು ತಡೆಯಲು ಅಲ್ಗಾರಿದಂಗಳಲ್ಲಿ ಸೂಕ್ತ ಬದಲಾವಣೆ ಮಾಡುವ ಮೂಲಕ ಸ್ಪಷ್ಟವಾದ ಕ್ರಿಯಾ ಯೋಜನೆಯನ್ನು (ರೋಡ್&zwnj;ಮ್ಯಾಪ್&zwnj;) ಸಲ್ಲಿಸುವಂತೆ ಕೇಂದ್ರ ಸರ್ಕಾರವು ಮೆಟಾ ಸಂಸ್ಥೆಗೆ ಸೂಚನೆ ನೀಡಿದೆ.&lt;/p&gt;&lt;h2&gt;ಭಾರತದ ಕಾನೂನಿನ್ವಯ ಕೆಲಸ ಮಾಡಲು ತಾಕೀತು&lt;/h2&gt;&lt;p&gt;ದೇಶದಲ್ಲಿ ಮೆಟಾ ಒಡೆತನದ ವೇದಿಕೆಗಳಾದ ಫೇಸ್ಬುಕ್, ಇನ್&zwnj;ಸ್ಟಾಗ್ರಾಂ, ವಾಟ್ಸಾಪ್&zwnj;ಗಳ ಮೂಲಕ ಹರಡುತ್ತಿರುವ ಡೀಪ್&zwnj;ಫೇಕ್&zwnj;ಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಗಳು ಮತ್ತು ನಕಲಿ ಖಾತೆಗಳ ಹಾವಳಿಯಂತಹ ಗಂಭೀರ ಸಮಸ್ಯೆಗಳ ಕುರಿತು ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಮೆರಿಕದ ಕಾನೂನುಗಳ ಆಧಾರದ ಮೇಲೆ ಭಾರತದಲ್ಲಿ ಜಾಲತಾಣಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ಇಲ್ಲಿನ ಕಾನೂನುಗಳು ಮತ್ತು ಸಾರ್ವಜನಿಕ ಸುರಕ್ಷತೆಗೆ ಎಲ್ಲಾ ಪ್ಲಾಟ್&zwnj;ಫಾರ್ಮ್&zwnj;ಗಳು ಬದ್ಧವಾಗಿರಬೇಕು ಎಂದು ಒತ್ತಾಯಿಸಿದೆ.&lt;/p&gt;&lt;h3&gt;ಡಿಜಿಟಲ್&zwnj; ವೇದಿಕೆಗಳ ಸುರಕ್ಷತೆ ಬಗ್ಗೆ ಕೇಂದ್ರ ಕಳವಳ&lt;/h3&gt;&lt;p&gt;ಕಂಟೆಂಟ್ ಮಾಡರೇಷನ್, ನಿಯಮಗಳ ಪಾಲನಾ ವ್ಯವಸ್ಥೆಗಳು ಮತ್ತು ಬಳಕೆದಾರರ ಸುರಕ್ಷತಾ ಕ್ರಮಗಳ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಮೆಟಾ ಕಂಪನಿಗೆ ನಿರ್ದೇಶಿಸಲಾಗಿದೆ. ಭಾರತೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಡಿಜಿಟಲ್ ವೇದಿಕೆಗಳನ್ನು ಸುರಕ್ಷಿತವಾಗಿರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/centre-govt-asks-meta-for-algorithm-changes-to-curb-deepfakes-propaganda-rav/articleshow-ogqtrus"/>
        </item>
        <item>
            <title><![CDATA[HAL: ದೇಶದಲ್ಲೇ ಮೊದಲು, ಎಚ್‌ಎಎಲ್‌ನಲ್ಲಿ ಉಪಗ್ರಹ ಬಳಸಿ ಹೆಲಿಕಾಪ್ಟರ್‌ ಲ್ಯಾಂಡ್‌]]></title>
            <link>https://kannada.asianetnews.com/bengaluru-urban/hal-airport-in-bengaluru-is-the-first-airport-in-country-to-adopt-a-satellite-based-landing-system-for-helicopters-mrq/articleshow-pylqc9y</link>
            <guid isPermaLink="true">https://kannada.asianetnews.com/bengaluru-urban/hal-airport-in-bengaluru-is-the-first-airport-in-country-to-adopt-a-satellite-based-landing-system-for-helicopters-mrq/articleshow-pylqc9y</guid>
            <pubDate>Sat, 08 Aug 2026 07:11:20 +0530</pubDate>
            <description><![CDATA[ಬೆಂಗಳೂರಿನ ಎಚ್&zwnj;ಎಎಲ್ ಏರ್ಪೋರ್ಟ್, ಹೆಲಿಕಾಪ್ಟರ್&zwnj;ಗಳಿಗಾಗಿ ಉಪಗ್ರಹ ಆಧಾರಿತ ಲ್ಯಾಂಡಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಈ ನೂತನ ತಂತ್ರಜ್ಞಾನವು ಲ್ಯಾಂಡಿಂಗ್ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದಲ್ಲದೆ, ಪ್ರತಿಕೂಲ ಹವಾಮಾನದಲ್ಲೂ ಸುರಕ್ಷಿತ ಲ್ಯಾಂಡಿಂಗ್&zwnj;ಗೆ ಸಹಕರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfgdxdv3rycvvxbpa19d5yq,imgname-hal-1786153203131.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಹೆಲಿಕಾಪ್ಟರ್&zwnj;ಗಳಿಗೆ ಉಪಗ್ರಹ ಆಧಾರಿತ ಲ್ಯಾಂಡಿಂಗ್ ವ್ಯವಸ್ಥೆಯನ್ನು ಎಚ್&zwnj;ಎಎಲ್ ಏರ್ಪೋರ್ಟ್&zwnj;ನಲ್ಲಿ ಜಾರಿಗೆ ತರಲಾಗಿದೆ. ಇಂಥ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಏರ್ಪೋರ್ಟ್ ಎಂಬ ಹೆಗ್ಗಳಿಕೆಗೆ ಎಚ್&zwnj;ಎಎಲ್ ಏರ್ಪೋರ್ಟ್&zwnj; ಪಾತ್ರವಾಗಿದೆ.&lt;/p&gt;&lt;p&gt;ರಿಕ್ವೈರ್ಡ್ ನೇವಿಗೇಷನ್ ಪರ್ಫಾರ್ಮೆನ್ಸ್-ಕೆಟಗೆರಿ ಎಚ್ (ಆರ್&zwnj;ಎನ್&zwnj;ಪಿ-ಕೆಟಗೆರಿ ಎಚ್) ವ್ಯವಸ್ಥೆಯಿಂದ ಹೆಲಿಕಾಪ್ಟರ್&zwnj;ಗಳ ಲ್ಯಾಂಡಿಂಗ್ ಸಮಯ ಸರಾಸರಿ 12 ನಿಮಿಷಗಳಿಂದ 4 ನಿಮಿಷಕ್ಕೆ ಕಡಿಮೆಯಾಗಲಿದೆ.&lt;/p&gt;&lt;p&gt;ಹೆಲಿಕಾಪ್ಟರ್&zwnj;ಗಳ ಲ್ಯಾಂಡಿಂಗ್&zwnj;ಗಾಗಿ ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಅಭಿವೃದ್ಧಿಪಡಿಸಿದೆ. ಎಚ್&zwnj;ಎಎಲ್&zwnj;ನ ಪರೀಕ್ಷಾ ಪೈಲಟ್&zwnj;ಗಳು ಹಲವು ಹಂತಗಳಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಪರೀಕ್ಷೆ ಮೂಲಕ ನೂತನ ತಂತ್ರಜ್ಞಾನ ಬಳಕೆಗೆ ಯೋಗ್ಯವೆಂದು ಧೃಡೀಕರಿಸಿದ್ದಾರೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದಕ್ಕೆ ಅಂತಿಮ ಅನುಮೋದನೆ ನೀಡಿದೆ.&lt;/p&gt;&lt;h2&gt;&lt;strong&gt;ಸಮಯ ಉಳಿತಾಯ:&lt;/strong&gt;&lt;/h2&gt;&lt;p&gt;ನೂತನ ವ್ಯವಸ್ಥೆಯು ನಗರ ಪ್ರದೇಶಗಳಲ್ಲಿನ ಏರ್ಪೋರ್ಟ್&zwnj;ಗಳಿಗೆ ಹೆಚ್ಚು ಅನುಕೂಲವಾಗಲಿದೆ. ಎತ್ತರದ ಕಟ್ಟಡಗಳು ಮತ್ತಿತರ ಅಡೆತಡೆಗಳು ಇರುವ ಕಾರಣ ಹೆಲಿಕಾಪ್ಟರ್&zwnj; ಅನ್ನು ನಿಖರವಾಗಿ ಲ್ಯಾಂಡಿಂಗ್ ಮಾಡಲು ಪೈಲಟ್&zwnj;ಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಆದರೆ, ನೂತನ ಉಪಗ್ರಹ ಆಧಾರಿತ ನ್ಯಾವಿಗೇಷನ್&zwnj;ನಿಂದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲೂ ನಿಖರವಾಗಿ ಮತ್ತು ಸುರಕ್ಷಿತವಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಬಹುದು ಎಂದು ಎಚ್&zwnj;ಎಎಲ್ ಹೇಳಿದೆ.&lt;/p&gt;&lt;p&gt;ಈ ಕುರಿತು ಪ್ರತಿಕ್ರಿಯಿಸಿರುವ ಎಚ್&zwnj;ಎಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ರವಿ, ಭಾರತದ ಮೊದಲ ಉಪಗ್ರಹ ಆಧಾರಿತ ಲ್ಯಾಂಡಿಂಗ್ ವ್ಯವಸ್ಥೆಯನ್ನು ಎಚ್&zwnj;ಎಎಲ್&zwnj;ನಲ್ಲಿ ಪರಿಚಯಿಸಿರುವುದು ದೇಶದ ವಿಮಾನಯಾನ ವಲಯಕ್ಕೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ನೂತನ ವ್ಯವಸ್ಥೆಯನ್ನು ದೇಶದ ಇತರ ವಿಮಾನ ನಿಲ್ದಾಣಗಳಿಗೂ ಪರಿಚಯಿಸಬಹುದಾಗಿದೆ ಎಂದರು.&lt;/p&gt;&lt;p&gt;ಎಚ್&zwnj;ಎಎಲ್&zwnj;ನಲ್ಲಿ ಪ್ರತಿದಿನ ಸುಮಾರು 50 ಹೆಲಿಕಾಪ್ಟರ್&zwnj;ಗಳು ಲ್ಯಾಂಡಿಂಗ್ ಆಗುತ್ತವೆ. ಇಲ್ಲಿ ಈ ತಂತ್ರಜ್ಞಾನವು ಬಹುದಿನಗಳ ಕೊರತೆ ನೀಗಿಸಿದೆ. ಇದು ಏರ್ ಅಂಬ್ಯುಲೆನ್ಸ್ ಹಾಗೂ ತುರ್ತು ರಕ್ಷಣಾ ಕಾರ್ಯಾಚರಣೆಗಳಿಗೆ ತ್ವರಿತ ಮತ್ತು ಸುರಕ್ಷಿತ ಮಾರ್ಗ ಒದಗಿಸುವ ಜೊತೆಗೆ ಶಬ್ದ ಮಾಲಿನ್ಯ ಮತ್ತು ಇಂಧನ ಬಳಕೆ ತಗ್ಗಿಸಲು ನೆರವಾಗಲಿದೆ ಎಂದು ಕೆ.ರವಿ ಹೇಳಿದ್ದಾರೆ.&lt;/p&gt;&lt;p&gt;HAL Airport, Bengaluru, has become the first airport in India to operationalise the Required Navigation Performance &ndash; Category H (RNP CAT H) helicopter approach procedure, a satellite-guided precision navigation system designed exclusively for helicopters. The procedure reduces&hellip; pic.twitter.com/nWJxjffOW4&lt;/p&gt;&lt;p&gt;&mdash; HAL (@HALHQBLR) August 7, 2026&lt;/p&gt;&lt;p&gt;&lt;/p&gt;&lt;p&gt;Mr. Ravi K, CMD, HAL, says, &ldquo;The operationalisation of India's first RNP CAT H helicopter approach is a significant milestone for the country's aviation ecosystem. This capability enhances the safety, efficiency and accessibility of helicopter operations and establishes a&hellip;&lt;/p&gt;&lt;p&gt;&mdash; HAL (@HALHQBLR) August 7, 2026&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/hal-airport-in-bengaluru-is-the-first-airport-in-country-to-adopt-a-satellite-based-landing-system-for-helicopters-mrq/articleshow-pylqc9y"/>
        </item>
        <item>
            <title><![CDATA[ರಾಹುಲ್ ಗಾಂಧಿಯ ಫೇವರಿಟ್ ರಾಜಕಾರಣಿ ಕಾಂಗ್ರೆಸ್ ನಾಯಕರಲ್ಲ, ಬಿಜೆಪಿಯ ಈ ಲೀಡರ್!]]></title>
            <link>https://kannada.asianetnews.com/politics/rahul-gandhi-named-capt-amarinder-singh-as-his-favorite-politician-in-bjp-party-rav/articleshow-sexlgym</link>
            <guid isPermaLink="true">https://kannada.asianetnews.com/politics/rahul-gandhi-named-capt-amarinder-singh-as-his-favorite-politician-in-bjp-party-rav/articleshow-sexlgym</guid>
            <pubDate>Sat, 08 Aug 2026 05:50:33 +0530</pubDate>
            <description><![CDATA[&lt;p&gt;Rahul gandhi's Favorite Politician: &lsquo;ಬಿಜೆಪಿಯಲ್ಲಿ ಪಂಜಾಬ್&zwnj;ನ ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ನನ್ನಿಷ್ಟದ ನಾಯಕ&rsquo; ಎಂದು ಕಾಂಗ್ರೆಸ್&zwnj; ನಾಯಕ ರಾಹುಲ್ ಗಾಂಧಿ ಶುಕ್ರವಾರ ಬಣ್ಣಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfb9vzzf5shf0w3f6mxsc6j,imgname-----------------------2026-08-08t053645.177-1786147827711.jpg" type="image/jpeg" height="390" width="690"/>
            <content:encoded><![CDATA[&lt;p&gt;-ಜೆನ್&zwnj; ಝೀಗಳ ಜತೆ ವಿಡಿಯೋ ಸಂವಾದದಲ್ಲಿ ನುಡಿ&lt;/p&gt;&lt;p&gt;&lt;strong&gt;ನವದೆಹಲಿ (ಆ.8)&lt;/strong&gt; &lsquo;ಬಿಜೆಪಿಯಲ್ಲಿ ಪಂಜಾಬ್&zwnj;ನ ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ನನ್ನಿಷ್ಟದ ನಾಯಕ&rsquo; ಎಂದು ಕಾಂಗ್ರೆಸ್&zwnj; ನಾಯಕ ರಾಹುಲ್ ಗಾಂಧಿ ಶುಕ್ರವಾರ ಬಣ್ಣಿಸಿದ್ದಾರೆ.&lt;/p&gt;&lt;p&gt;ಇನ್&zwnj;ಸ್ಟಾಗ್ರಾಂ(Instagram)ನಲ್ಲಿ ಯುವಜನತೆಗಾಗಿ ಆಯೋಜಿಸಿದ್ದ &lsquo;ಆಸ್ಕ್&zwnj; ಮಿ ಎನಿಥಿಂಗ್&rsquo;(Ask me Anything) ಸಂವಾದದಲ್ಲಿ, ಅಮರೀಂದರ್ ಸಿಂಗ್(Amarindar Singh) ಅವರೊಂದಿಗಿನ ಒಡನಾಟದ ಕುರಿತು ಮಾತನಾಡಿದ ರಾಹುಲ್&zwnj;, &lsquo;ನನಗೆ ಅವರೊಂದಿಗೆ ಉತ್ತಮ ಒಡನಾಟವಿದೆ, ಅವರು ತುಂಬಾ ಕೂಲ್ ಆಗಿರುತ್ತಾರೆ. ಅವರು ಮಿಲಿಟರಿ ಇತಿಹಾಸದ ತಜ್ಞರು. ಹಲೋ, ಅಂಕಲ್ ಅಮರೀಂದರ್&rsquo; ಎಂದು ಸ್ನೇಹಪೂರ್ವಕವಾಗಿ ನುಡಿದಿದ್ದಾರೆ.&lt;/p&gt;&lt;p&gt;ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಂಗ್, &lsquo;ರಾಹುಲ್ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು ಸಂತೋಷ ತಂದಿದೆ. ಅವರು ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಜತೆ ನನ್ನ ಬಾಂಧವ್ಯ ಎಂದೆಂದಿಗೂ ಮುಂದುವರಿಯಲಿದೆ. ಆದರೆ ರಾಜಕೀಯವಾಗಿ ನಾನೆಂದಿಗೂ ಬಿಜೆಪಿಗೆ ಬದ್ಧ&rsquo; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಅಮರೀಂದರ್ ಮೂಲತಃ ಕಾಂಗ್ರೆಸ್&zwnj; ನಾಯಕರು. ಕೆಲ ವರ್ಷ ಹಿಂದೆ ಬಿಜೆಪಿ ಸೇರಿದ್ದರು.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/rahul-gandhi-named-capt-amarinder-singh-as-his-favorite-politician-in-bjp-party-rav/articleshow-sexlgym"/>
        </item>
        <item>
            <title><![CDATA[ನೀಟ್ ಪೇಪರ್ ಲೀಕ್‌ಗೆ ಶಿಕ್ಷಕರೇ ‘ಮಾಸ್ಟರ್‌ಮೈಂಡ್’! ರಫ್‌ಶೀಟ್ ಬಳಸಿ ನಡೆದ ಕಳ್ಳಾಟದ ಟಾಪ್-ಲಿಂಕ್ CBI ಚಾರ್ಜ್‌ಶೀಟ್‌ನಲ್ಲಿ ಬಯಲು!]]></title>
            <link>https://kannada.asianetnews.com/india-news/neet-ug-2026-case-cbi-files-chargesheet-in-delhi-court-exposes-top-link-of-teachers-using-rough-sheets-rav/articleshow-sh0h6ti</link>
            <guid isPermaLink="true">https://kannada.asianetnews.com/india-news/neet-ug-2026-case-cbi-files-chargesheet-in-delhi-court-exposes-top-link-of-teachers-using-rough-sheets-rav/articleshow-sh0h6ti</guid>
            <pubDate>Sat, 08 Aug 2026 05:26:37 +0530</pubDate>
            <description><![CDATA[&lt;p&gt;ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ಎನ್&zwnj;ಟಿಎ ಒಳಗಿನವರೇ ನಡೆಸಿದ ಪೂರ್ವಯೋಜಿತ ಪಿತೂರಿ ಎಂದು ಸಿಬಿಐ ಚಾರ್ಜ್&zwnj;ಶೀಟ್ ಸಲ್ಲಿಸಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹಂತದಲ್ಲೇ ಮೂವರು ತಜ್ಞರು ಪ್ರಶ್ನೆಗಳನ್ನು ಸೋರಿಕೆ ಮಾಡಿ, ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳಿಗೆ ಭಾರಿ ಮೊತ್ತಕ್ಕೆ ಮಾರಾಟ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzf9sp21k9aevjbsfekgskdd,imgname-----------------------2026-08-08t051246.270-1786146248769.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲೀಕ್&zwnj; ಆಗಿದ್ದು ಹೇಗೆ?&lt;/strong&gt;&lt;/p&gt;&lt;ul&gt; &lt;li&gt;ಪ್ರಶ್ನೆಪತ್ರಿಕೆಯ ಸಿದ್ಧತೆ, ತರ್ಜುಮೆಗಾಗಿ ವಿಷಯ ತಜ್ಞರನ್ನು ಪರೀಕ್ಷಾ ಸಂಸ್ಥೆ ನೇಮಿಸಿಕೊಂಡಿತ್ತು&lt;/li&gt; &lt;li&gt;ಈ ತಜ್ಞರ ಅನುಕೂಲಕ್ಕೆ ರಫ್&zwnj; ವರ್ಕ್&zwnj;ಗಾಗಿ ಖಾಲಿ ಹಾಳೆಗಳನ್ನು ಸಂಸ್ಥೆಯಿಂದ ಕೊಡಲಾಗಿತ್ತು&lt;/li&gt; &lt;li&gt;ಪ್ರಶ್ನೆ ಅಂತಿಮವಾದ ಬಳಿಕ ಅದರ ಚುಟುಕು ಮಾಹಿತಿಯನ್ನು ರಫ್&zwnj;ಶೀಟ್&zwnj;ನಲ್ಲಿ ಬರೆದುಕೊಳ್ಳುತ್ತಿದ್ದರು&lt;/li&gt; &lt;li&gt;ಹೋಟೆಲ್&zwnj;ಗೆ ಮರಳಿದ ಬಳಿಕ ಆ ಪ್ರಶ್ನೆಯನ್ನು ವಿಸ್ತರಿಸಿ ಪೂರ್ಣ ಪ್ರಮಾಣದ ಪತ್ರಿಕೆ ತಯಾರಿಸುತ್ತಿದ್ದರು&lt;/li&gt; &lt;li&gt;ಮಧ್ಯವರ್ತಿಗಳಿಗೆ ಪೂರ್ಣ ಪ್ರಶ್ನೆಪತ್ರಿಕೆಯನ್ನು ಕೊಟ್ಟು ಭಾರಿ ಮೊತ್ತದ ಹಣಕ್ಕೆ ಮಾರಿಕೊಳ್ಳುತ್ತಿದ್ದರು&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ಪಿಟಿಐ ನವದೆಹಲಿ (ಆ.8) &lt;/strong&gt;ದೇಶಾದ್ಯಂತ ಸಂಚಲನ ಮೂಡಿಸಿದ ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆಯು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್&zwnj;ಟಿಎ) ಒಳಗಿನವರೇ ನಡೆಸಿದ ಪೂರ್ವಯೋಜಿತ, ಬಹುರಾಜ್ಯ ಕ್ರಿಮಿನಲ್ ಪಿತೂರಿ ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಚಾರ್ಜ್&zwnj;ಶೀಟ್&zwnj; ಸಲ್ಲಿಸಿದೆ.&lt;/p&gt;&lt;p&gt;&lsquo;3 ಎನ್&zwnj;ಟಿಎ ಅಧಿಕೃತ ತಜ್ಞರು ಪ್ರಶ್ನೆಪತ್ರಿಕೆಯ ಸಿದ್ಧತಾ ಹಂತದಲ್ಲೇ ಪ್ರಶ್ನೆಗಳನ್ನು ತಮಗೆ ರಫ್&zwnj; ವರ್ಕ್&zwnj;ಗೆ ಎಂದು ನೀಡಲಾಗಿದ್ದ ಕಾಗದದಲ್ಲಿ ಚುಟುಕಾಗಿ ಬರೆದುಕೊಂಡರು. ಕೆಲಸ ಮುಗಿದ ನಂತರ ಹೋಟೆಲ್ ರೂಂನಲ್ಲಿ ಪೂರ್ಣ ರೂಪದಲ್ಲಿ ನೆನಪು ಮಾಡಿಕೊಂಡು ಪ್ರಶ್ನೆ ಬರೆಯುತ್ತಿದ್ದರು. ಸಿದ್ಧವಾದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ, ಮಧ್ಯವರ್ತಿಗಳ ಜಾಲದ ಮೂಲಕ ದೊಡ್ಡ ಮೊತ್ತದ ಹಣಕ್ಕೆ ಅಭ್ಯರ್ಥಿಗಳಿಗೆ ತಲುಪಿಸಿದ್ದರು&rsquo; ಎಂದು ಸಿಬಿಐ ಆರೋಪಿಸಿದೆ. 3 ಎನ್&zwnj;ಟಿಎ ತಜ್ಞರು ಸೇರಿ 13 ಆರೋಪಿಗಳ ಹೆಸರನ್ನು ಉಲ್ಲೇಖಿಸಿದೆ. ದೆಹಲಿಯ ರೋಸ್ ಅವೆನ್ಯೂ ವಿಶೇಷ ಸಿಬಿಐ ಕೋರ್ಟ್&zwnj;ಗೆ ಸಿಬಿಐ, ಈ ಆರೋಪಪಟ್ಟಿ ಸಲ್ಲಿಸಿದೆ.&lt;/p&gt;&lt;h2&gt;ಎನ್&zwnj;ಟಿಎ ತಜ್ಞರ ಸಂಚು:&lt;/h2&gt;&lt;p&gt;ಈ ತನಿಖಾ ವರದಿಯಲ್ಲಿ ಎನ್&zwnj;ಟಿಎ ನೇಮಕ ಮಾಡಿದ್ದ ಮೂವರು ವಿವಿಧ ವಿಷಯಗಳ ತಜ್ಞರು ಸೇರಿದಂತೆ ಒಟ್ಟು 13 ಆರೋಪಿಗಳನ್ನು ಹೆಸರಿಸಲಾಗಿದೆ. ಸಸ್ಯಶಾಸ್ತ್ರ ತಜ್ಞೆ ಮನೀಷಾ ಗುರುನಾಥ್ ಮಂಧರೆ, ರಸಾಯನಶಾಸ್ತ್ರ ತಜ್ಞ ಪ್ರಹ್ಲಾದ್ ವಿಠ್ಠಲರಾವ್ ಕುಲಕರ್ಣಿ ಮತ್ತು ಭೌತಶಾಸ್ತ್ರ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಂಡಿದ್ದರು ಎಂದು ಸಿಬಿಐ ಆರೋಪಿಸಿದೆ.&lt;/p&gt;&lt;h3&gt;ಅನುವಾದ ಮಾಡುವಾಗಲೇ ಲೀಕ್:&lt;/h3&gt;&lt;p&gt;ಪ್ರಶ್ನೆಪತ್ರಿಕೆಗಳ ಅನುವಾದ ಸಂದರ್ಭದಲ್ಲಿ, ಗೌಪ್ಯ ವಿಭಾಗದೊಳಗೆ ಈ ಮೂವರು ತಜ್ಞರಿಗೆ ಕರಡು ಕೆಲಸಕ್ಕಾಗಿ ಖಾಲಿ ಹಾಳೆಗಳನ್ನು ನೀಡಲಾಗಿತ್ತು. ಪ್ರಮುಖ ಆರೋಪಿ ಕುಲಕರ್ಣಿ ಈ ಹಾಳೆಗಳನ್ನು ಬಳಸಿಕೊಂಡು ರಸಾಯನಶಾಸ್ತ್ರದ ಎಲ್ಲಾ 135 ಪ್ರಶ್ನೆಗಳು ಹಾಗೂ ಅವುಗಳ ಉತ್ತರ ಆಯ್ಕೆಗಳನ್ನು ಸಣ್ಣ ಚೀಟಿಗಳಲ್ಲಿ ಸಂಕ್ಷಿಪ್ತವಾಗಿ ಬರೆದುಕೊಂಡಿದ್ದ ಹಾಗೂ ಅವುಗಳನ್ನು ಗುಪ್ತವಾಗಿ ಹೊರಗೆ ಕೊಂಡೊಯ್ದಿದ್ದ.&lt;/p&gt;&lt;p&gt;ಇನ್ನಿಬ್ಬರು ಆರೋಪಿಗಳಾದ ಸಸ್ಯಶಾಸ್ತ್ರ ತಜ್ಞೆ ಮನೀಷಾ ಗುರುನಾಥ್ ಮಂಧರೆ (ಇಂಗ್ಲಿಷ್&zwnj;ನಿಂದ ಮರಾಠಿಗೆ ಭಾಷಾಂತರ ಕೆಲಸ) ತಾವು ಸಿದ್ಧತಾ ಹಂತದಲ್ಲಿ ಗಮನಿಸಿದ್ದ ಪ್ರಶ್ನೆಗಳ ಗಮನಿಸುತ್ತಿದ್ದರು. ಬಳಿಕ ಹೋಟೆಲ್&zwnj; ರೂಂಗೆ ಮರಳಿ ಅವನ್ನು ಪಠ್ಯಪುಸ್ತಕದಲ್ಲಿ ಗುರುತು ಹಾಕಿಕೊಳ್ಳುತ್ತಿದ್ದರು. ಇವರಿಗೆ ಸಾಕಷ್ಟು ಕೆಲಸದ ಅನುಭವ ಇದ್ದ ಕಾರಣ ಪ್ರಶ್ನೆ ಹಾಗೂ ಉತ್ತರಗಳನ್ನು ತಾಳೆ ಹಾಕುತ್ತಿದ್ದರು. ಇನ್ನು ಭೌತಶಾಸ್ತ್ರ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ (ಭೌತಶಾಸ್ತ್ರ ಭಾಷಾಂತರ ಕೆಲಸ) ತಮಗೆ ದಿಲ್ಲಿಯಲ್ಲಿ ತಮಗೆ ನೀಡಲಾದ ರೂಂನಲ್ಲಿ ಪ್ರಶ್ನೆಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು&rsquo; ಎಂದು ಆರೋಪಪಟ್ಟಿ ಹೇಳಿದೆ.&lt;/p&gt;&lt;p&gt;&lsquo;ಎನ್&zwnj;ಟಿಎಯ ಗೌಪ್ಯ ವಿಭಾಗಕ್ಕೆ ಪ್ರವೇಶಿಸುವಾಗ ಅಥವಾ ಅಲ್ಲಿಂದ ಹೊರಬರುವಾಗ ತಜ್ಞರನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿರಲಿಲ್ಲ&rsquo; ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;ಬೃಹತ್ ಜಾಲ ಬೆಳಕಿಗೆ:&lt;/h3&gt;&lt;p&gt;ಪ್ರಶ್ನೆಪತ್ರಿಕೆಯು ಎನ್&zwnj;ಟಿಎ ತಜ್ಞರಿಂದ ಹಿಡಿದು ಖಾಸಗಿ ಕೋಚಿಂಗ್&zwnj; ಸೆಂಟರ್&zwnj; ಆಪರೇಟರ್&zwnj;ಗಳು, ಬ್ರೋಕರ್&zwnj;ಗಳ ಮೂಲಕ ಅಭ್ಯರ್ಥಿಗಳನ್ನು ತಲುಪಿದ ಸಂಪೂರ್ಣ ಜಾಲವನ್ನು ಸಿಬಿಐ ಬಹಿರಂಗಪಡಿಸಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್&zwnj;ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ವಿಧಿವಿಜ್ಞಾನ ಪರೀಕ್ಷೆಯಲ್ಲಿ ವಾಟ್ಸಾಪ್, ಟೆಲಿಗ್ರಾಂ ಹಾಗೂ ಇತರೆ ಮೆಸೇಜಿಂಗ್ ಆ್ಯಪ್&zwnj;ಗಳ ಮೂಲಕ ಹಂಚಿಕೊಳ್ಳಲಾದ ಪಿಡಿಎಫ್ ಮತ್ತು ಇಮೇಜ್ ಫೈಲ್&zwnj;ಗಳು ಪತ್ತೆಯಾಗಿವೆ. ಮುಂಗಡವಾಗಿ ಹಣ ಹಾಗೂ ಭದ್ರತೆಗಾಗಿ ಮೂಲ 10 ಮತ್ತು 12ನೇ ತರಗತಿಯ ಪ್ರಮಾಣಪತ್ರಗಳು ಹಾಗೂ ಸಹಿ ಮಾಡಿದ ಖಾಲಿ ಚೆಕ್&zwnj;ಗಳನ್ನು ಪಡೆದಿರುವುದು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಚಾರ್ಜ್&zwnj;ಶೀಟ್&zwnj;ನಲ್ಲಿ ಹೆಸರಿಸಲಾಗಿರುವ ಎಲ್ಲಾ 13 ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಸಿಬಿಐ ತನ್ನ ತನಿಖೆಯನ್ನು ಮುಂದುವರಿಸಿದೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಆಡಿಯೋ ರೆಕಾರ್ಡಿಂಗ್&zwnj;ಗಳಲ್ಲಿ, ಪಿಡಿಎಫ್ ಅಥವಾ ಹಾರ್ಡ್-ಕಾಪಿ ರೂಪದ ಪ್ರಶ್ನೆಪತ್ರಿಕೆ ಬೆಲೆಯನ್ನು 10 ಲಕ್ಷ ರು.ನಿಂದ 12 ಲಕ್ಷ ರು.ಗೆ ಏರಿಸುವ ಕುರಿತು ಮಾತುಕತೆ ನಡೆಸಿರುವುದು ತಿಳಿದುಬಂದಿದೆ.&lt;/p&gt;&lt;h3&gt;ಜೀವಾವಧಿ ಶಿಕ್ಷೆ, ₹1 ಕೋಟಿ ದಂಡ!:&lt;/h3&gt;&lt;p&gt;ಆರೋಪ ಸಾಬೀತಾದರೆ, ಅಪರಾಧಿಗಳಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು 1 ಕೋಟಿ ರು.ವರೆಗೆ ದಂಡ ವಿಧಿಸುವ ಸಾಧ್ಯತೆಯಿದೆ. ಸಾರ್ವಜನಿಕ ಸೇವಕರಾಗಿ ನಂಬಿಕೆದ್ರೋಹ ಎಸಗಿದ ಆರೋಪದಡಿ ಬಿಎನ್&zwnj;ಎಸ್&zwnj; ಸೆಕ್ಷನ್ 316(5)ರ ಅಡಿಯಲ್ಲಿ ಗರಿಷ್ಠ ಜೀವಾವಧಿ ಶಿಕ್ಷೆ ಎದುರಾಗಲಿದೆ. ಇದರೊಂದಿಗೆ, ಸಾರ್ವಜನಿಕ ಪರೀಕ್ಷೆಗಳ (ಅನುಚಿತ ವಿಧಾನಗಳ ತಡೆ) ಕಾಯ್ದೆಯಡಿ ಕನಿಷ್ಠ 5ರಿಂದ 10 ವರ್ಷಗಳ ಜೈಲುಶಿಕ್ಷೆ ಹಾಗೂ 1 ಕೋಟಿ ರು.ಗಳಿಗೂ ಕಡಿಮೆ ಇಲ್ಲದ ದಂಡ, ಭ್ರಷ್ಟಾಚಾರ ತಡೆ ಕಾಯ್ದೆಯಡಿ 10 ವರ್ಷಗಳವರೆಗೆ ಜೈಲುಶಿಕ್ಷೆಯಾಗುವ ಸಾಧ್ಯತೆಯೂ ಇದೆ.&lt;/p&gt;]]></content:encoded>
            <category>news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/neet-ug-2026-case-cbi-files-chargesheet-in-delhi-court-exposes-top-link-of-teachers-using-rough-sheets-rav/articleshow-sh0h6ti"/>
        </item>
        <item>
            <title><![CDATA[Wow.. ಕರ್ನಾಟಕದಲ್ಲೇ ಇಂತಹ ಜಲಪಾತಗಳಿವೆಯಾ? ಈ 6 ತಾಣಗಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ!]]></title>
            <link>https://kannada.asianetnews.com/travel/6-hidden-waterfalls-in-karnataka-you-must-visit-this-monsoon-gvd/articleshow-2o9hs7f</link>
            <guid isPermaLink="true">https://kannada.asianetnews.com/travel/6-hidden-waterfalls-in-karnataka-you-must-visit-this-monsoon-gvd/articleshow-2o9hs7f</guid>
            <pubDate>Fri, 07 Aug 2026 23:29:15 +0530</pubDate>
            <description><![CDATA[&lt;p&gt;ಕರ್ನಾಟಕ ಎಂದರೆ ಕೇವಲ ಪ್ರಸಿದ್ಧ ಪ್ರವಾಸಿ ತಾಣಗಳು ಮಾತ್ರವಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದ ಕಾಡು, ಬೆಟ್ಟ ಹಾಗೂ ಕಣಿವೆಗಳ ನಡುವೆ ಹಲವು ಅಪರೂಪದ ಜಲಪಾತಗಳು ಜೀವ ಪಡೆದುಕೊಳ್ಳುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzekjmxqjqvzyy7znm1xv0pn,imgname-5-1786122949559.png" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಎಂದರೆ ಕೇವಲ ಪ್ರಸಿದ್ಧ ಪ್ರವಾಸಿ ತಾಣಗಳು ಮಾತ್ರವಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದ ಕಾಡು, ಬೆಟ್ಟ ಹಾಗೂ ಕಣಿವೆಗಳ ನಡುವೆ ಹಲವು ಅಪರೂಪದ ಜಲಪಾತಗಳು ಜೀವ ಪಡೆದುಕೊಳ್ಳುತ್ತವೆ. ಪ್ರವಾಸಿಗರ ದಟ್ಟಣೆಯಿಂದ ದೂರವಿದ್ದು, ಪ್ರಕೃತಿಯ ಸೌಂದರ್ಯವನ್ನು ಶಾಂತವಾಗಿ ಸವಿಯಲು ಬಯಸುವವರಿಗೆ ಇಂತಹ ಜಲಪಾತಗಳು ಬೆಸ್ಟ್ ಡೆಸ್ಟಿನೇಷನ್. ದಟ್ಟ ಕಾಡಿನ ನಡುವೆ ಧುಮ್ಮಿಕ್ಕುವ ನೀರು, ಮಂಜಿನಿಂದ ಆವೃತವಾದ ಬೆಟ್ಟಗಳು ಹಾಗೂ ಹಸಿರಿನಿಂದ ಕಂಗೊಳಿಸುವ ಸುತ್ತಮುತ್ತಲಿನ ಪರಿಸರ ಮಳೆಗಾಲದ ಪ್ರವಾಸಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಅಂತಹ ಕರ್ನಾಟಕದ ಹೆಚ್ಚು ಜನರಿಗೆ ತಿಳಿದಿರದ, ಆದರೆ ಅದ್ಭುತ ಅನುಭವ ನೀಡುವ 6 ಜಲಪಾತಗಳಿವು.&lt;/p&gt;&lt;p&gt;&lt;strong&gt;ಹನುಮಾನ್ ಗುಂಡಿ ಜಲಪಾತ&lt;/strong&gt;&lt;/p&gt;&lt;p&gt;ಕುಡ್ರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಹನುಮಾನ್ ಗುಂಡಿ ಜಲಪಾತ ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ದಟ್ಟ ಕಾಡಿನ ನಡುವೆ ಇರುವ ಈ ಜಲಪಾತಕ್ಕೆ ಕಲ್ಲಿನ ಮೆಟ್ಟಿಲುಗಳ ಮೂಲಕ ಸ್ವಲ್ಪ ದೂರ ನಡೆದು ತಲುಪಬೇಕು. ಮಳೆಗಾಲದಲ್ಲಿ ಸುತ್ತಮುತ್ತಲಿನ ಹಸಿರು ಮತ್ತಷ್ಟು ಕಂಗೊಳಿಸುವುದರಿಂದ ಹನುಮಾನ್ ಗುಂಡಿ ಪ್ರಕೃತಿ ಪ್ರಿಯರಿಗೆ ಅದ್ಭುತ ಅನುಭವ ನೀಡುತ್ತದೆ. ಪ್ರವಾಸಿಗರ ಗದ್ದಲದಿಂದ ದೂರವಾಗಿ ಪ್ರಕೃತಿಯ ನಡುವೆ ಸಮಯ ಕಳೆಯಲು ಬಯಸುವವರಿಗೆ ಇದು ಉತ್ತಮ ಆಯ್ಕೆ.&lt;img&gt;&lt;/p&gt;&lt;p&gt;&lt;strong&gt;ಬರ್ಕಣ ಜಲಪಾತ&lt;/strong&gt;&lt;/p&gt;&lt;p&gt;ಅಗುಂಬೆಯ ದಟ್ಟ ಕಾಡುಗಳ ನಡುವೆ ಅಡಗಿರುವ ಬರ್ಕಣ ಜಲಪಾತ ಕರ್ನಾಟಕದ ಅದ್ಭುತ ನೈಸರ್ಗಿಕ ತಾಣಗಳಲ್ಲಿ ಒಂದು. ಭಾರತದ ಎತ್ತರದ ಜಲಪಾತಗಳ ಪೈಕಿ ಒಂದಾಗಿರುವ ಬರ್ಕಣ, ತನ್ನ ಭರ್ಜರಿ ಜಲಧಾರೆ, ಮಂಜಿನಿಂದ ಕೂಡಿದ ವಾತಾವರಣ ಹಾಗೂ ವಿಶಾಲ ನೋಟದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ವಿಶೇಷವಾಗಿ ಫೋಟೋಗ್ರಫಿ ಮತ್ತು ಪ್ರಕೃತಿ ಸೌಂದರ್ಯವನ್ನು ಇಷ್ಟಪಡುವವರಿಗೆ ಬರ್ಕಣ ಜಲಪಾತದ ಅನುಭವ ಮತ್ತಷ್ಟು ವಿಶೇಷ. ಮಳೆಗಾಲದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ.&lt;img&gt;&lt;/p&gt;&lt;p&gt;&lt;strong&gt;ಹಿಡ್ಲುಮನೆ ಜಲಪಾತ&lt;/strong&gt;&lt;/p&gt;&lt;p&gt;ಕೊಡಚಾದ್ರಿ ಟ್ರೆಕ್ಕಿಂಗ್ ಮಾರ್ಗದಲ್ಲಿರುವ ಹಿಡ್ಲುಮನೆ ಜಲಪಾತ ಹಲವು ಕಲ್ಲಿನ ಹಂತಗಳ ಮೂಲಕ ಹರಿದು ಬರುವ ವಿಶಿಷ್ಟ ಜಲಪಾತ. ಸುತ್ತಲೂ ಹರಡಿರುವ ನಿತ್ಯಹರಿದ್ವರ್ಣ ಕಾಡು ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಹಿಡ್ಲುಮನೆ ಜಲಪಾತದ ನೋಟ ಮತ್ತಷ್ಟು ರುದ್ರರಮಣೀಯವಾಗುತ್ತದೆ. ಟ್ರೆಕ್ಕಿಂಗ್ ಮತ್ತು ಪ್ರಕೃತಿ ಸಾಹಸವನ್ನು ಇಷ್ಟಪಡುವವರಿಗೆ ಇದು ಖಂಡಿತವಾಗಿಯೂ ಆಕರ್ಷಕ ತಾಣ.&lt;img&gt;&lt;/p&gt;&lt;p&gt;&lt;strong&gt;ಎರ್ಮಾಯಿ ಜಲಪಾತ&lt;/strong&gt;&lt;/p&gt;&lt;p&gt;ಕೊಡಗು ಭಾಗದ ಹಸಿರು ಪರಿಸರದ ನಡುವೆ ಇರುವ ಎರ್ಮಾಯಿ ಜಲಪಾತ ಹೆಚ್ಚು ಪ್ರಚಾರ ಪಡೆಯದ ಪ್ರಕೃತಿ ತಾಣಗಳಲ್ಲಿ ಒಂದು. ಕಾಫಿ ತೋಟಗಳು ಮತ್ತು ದಟ್ಟ ಹಸಿರಿನ ನಡುವೆ ಇರುವ ಈ ಜಲಪಾತದ ಸುತ್ತಮುತ್ತಲಿನ ವಾತಾವರಣವೇ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ. ಪ್ರವಾಸಿಗರ ದಟ್ಟಣೆಯಿಂದ ದೂರವಾಗಿ, ನೆಮ್ಮದಿಯ ವಾತಾವರಣದಲ್ಲಿ ಪ್ರಕೃತಿಯನ್ನು ಆನಂದಿಸಲು ಬಯಸುವವರಿಗೆ ಎರ್ಮಾಯಿ ಜಲಪಾತ ಉತ್ತಮ ಆಯ್ಕೆ. ಮಳೆಗಾಲದಲ್ಲಿ ಇಲ್ಲಿನ ಹಸಿರು ಸೌಂದರ್ಯ ಮತ್ತಷ್ಟು ಮನಮೋಹಕವಾಗಿರುತ್ತದೆ.&lt;img&gt;&lt;/p&gt;&lt;p&gt;&lt;strong&gt;ಅರ್ಬಿ ಜಲಪಾತ&lt;/strong&gt;&lt;/p&gt;&lt;p&gt;ಕೊಡಗಿನ ಹೆಚ್ಚು ಜನರಿಗೆ ತಿಳಿದಿರದ ನೈಸರ್ಗಿಕ ತಾಣಗಳಲ್ಲಿ ಅರ್ಬಿ ಜಲಪಾತವೂ ಒಂದು. ದಟ್ಟ ಕಾಡಿನ ನಡುವೆ ಇರುವ ಈ ಋತುಮಾನ ಜಲಪಾತ, ಮಳೆಗಾಲದಲ್ಲಿ ತನ್ನ ಸಂಪೂರ್ಣ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ತಂಪಾದ ವಾತಾವರಣ, ಸುತ್ತಲಿನ ಹಸಿರು ಹಾಗೂ ಶಾಂತ ಪರಿಸರ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತದೆ. ಸಾಮಾನ್ಯ ಪ್ರವಾಸಿ ತಾಣಗಳಿಗಿಂತ ಆಫ್&zwnj;ಬೀಟ್ ಸ್ಥಳಗಳನ್ನು ಅನ್ವೇಷಿಸಲು ಬಯಸುವವರಿಗೆ ಅರ್ಬಿ ಜಲಪಾತ ಸೂಕ್ತ.&lt;img&gt;&lt;/p&gt;&lt;p&gt;&lt;strong&gt;ಒನಕೆ ಅಬ್ಬಿ ಜಲಪಾತ&lt;/strong&gt;&lt;/p&gt;&lt;p&gt;ಅಗುಂಬೆ ಸಮೀಪದ ಸುಂದರ ಟ್ರೆಕ್ಕಿಂಗ್ ಮಾರ್ಗದ ಮೂಲಕ ತಲುಪಬಹುದಾದ ಒನಕೆ ಅಬ್ಬಿ ಜಲಪಾತ ಸಾಹಸ ಪ್ರಿಯರ ಗಮನ ಸೆಳೆಯುವ ತಾಣ. ಕಲ್ಲಿನ ಬಂಡೆಗಳ ಮೇಲಿನಿಂದ ಕೆಳಗಿನ ನೈಸರ್ಗಿಕ ಕೊಳಕ್ಕೆ ಧುಮ್ಮಿಕ್ಕುವ ಜಲಧಾರೆ ಇಲ್ಲಿನ ಪ್ರಮುಖ ಆಕರ್ಷಣೆ. ಜಲಪಾತವನ್ನು ತಲುಪುವ ಟ್ರೆಕ್ಕಿಂಗ್ ಹಾದಿ ಹಾಗೂ ಸುತ್ತಲಿನ ಬಹುತೇಕ ಅಸ್ಪರ್ಶಿತ ಪ್ರಕೃತಿ ಈ ಪ್ರವಾಸವನ್ನು ಮತ್ತಷ್ಟು ರೋಚಕವಾಗಿಸುತ್ತದೆ. ಮಳೆಗಾಲದಲ್ಲಿ ಒನಕೆ ಅಬ್ಬಿಯ ನೋಟ ಅದ್ಭುತವಾಗಿದ್ದು, ಸಾಹಸ ಮತ್ತು ಪ್ರಕೃತಿ ಎರಡನ್ನೂ ಇಷ್ಟಪಡುವವರಿಗೆ ಇದು ಉತ್ತಮ ಅನುಭವ ನೀಡುತ್ತದೆ.&lt;/p&gt;&lt;h2&gt;&lt;strong&gt;ಮಳೆಗಾಲದ ಪ್ರವಾಸಕ್ಕೆ ಇವು ಯಾಕೆ ಬೆಸ್ಟ್?&lt;/strong&gt;&lt;/h2&gt;&lt;p&gt;ಕರ್ನಾಟಕದ ಈ ಜಲಪಾತಗಳು ಸಾಮಾನ್ಯ ಪ್ರವಾಸಿ ತಾಣಗಳಿಗಿಂತ ವಿಭಿನ್ನ ಅನುಭವ ನೀಡುತ್ತವೆ. ದಟ್ಟ ಕಾಡು, ಹಸಿರು ಬೆಟ್ಟಗಳು, ಮಂಜಿನ ವಾತಾವರಣ ಮತ್ತು ಧುಮ್ಮಿಕ್ಕುವ ಜಲಧಾರೆಗಳು ಮಳೆಗಾಲದ ಪ್ರವಾಸಕ್ಕೆ ವಿಶೇಷ ಮೆರುಗು ನೀಡುತ್ತವೆ. ಆದರೆ ಕೆಲವು ಜಲಪಾತಗಳು ಕಾಡು ಪ್ರದೇಶ ಹಾಗೂ ಟ್ರೆಕ್ಕಿಂಗ್ ಮಾರ್ಗದಲ್ಲಿರುವುದರಿಂದ ಪ್ರಯಾಣಿಸುವ ಮುನ್ನ ಸ್ಥಳೀಯ ಮಾರ್ಗಸೂಚಿಗಳು, ಪ್ರವೇಶ ನಿಯಮಗಳು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಪರಿಶೀಲಿಸುವುದು ಮುಖ್ಯ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಸ ಮಾಡಿದರೆ, ಈ ಅಪರೂಪದ ಜಲಪಾತಗಳು ಮಳೆಗಾಲದ ನಿಮ್ಮ ಟ್ರಿಪ್&zwnj;ಗೆ ಮರೆಯಲಾಗದ ಅನುಭವ ನೀಡಬಹುದು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/travel/6-hidden-waterfalls-in-karnataka-you-must-visit-this-monsoon-gvd/articleshow-2o9hs7f"/>
        </item>
        <item>
            <title><![CDATA[Atiq Ahmed: ಗ್ಯಾಂಗಸ್ಟಾರ್ ಅತೀಕ್ ಅಹ್ಮದ್ ಮಗನ ಕಾರು ಶೋಧನೆಯಲ್ಲಿ ಪೊಲೀಸರಿಗೆ ಶಾಕ್! ಸಿಕ್ಕ ಆ ಎರಡು ಪುಸ್ತಕಗಳ ಹಿಂದೆ ಅಡಗಿದ ಕಥೆಯೇನು?]]></title>
            <link>https://kannada.asianetnews.com/india-news/gangster-atiq-ahmed-son-car-search-shocks-police-two-books-found-mystery-bmk/articleshow-2zddnty</link>
            <guid isPermaLink="true">https://kannada.asianetnews.com/india-news/gangster-atiq-ahmed-son-car-search-shocks-police-two-books-found-mystery-bmk/articleshow-2zddnty</guid>
            <pubDate>Fri, 07 Aug 2026 22:55:37 +0530</pubDate>
            <description><![CDATA[&lt;p&gt;ಮಾಫಿಯಾ ಡಾನ್ ಅತೀಕ್ ಅಹ್ಮದ್ ಅವರ ಪುತ್ರ ಅಬಾನ್ ಅಹ್ಮದ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಕಾರಿನಲ್ಲಿ ಎರಡು ಇಂಗ್ಲಿಷ್ ಕಾದಂಬರಿಗಳು ಪತ್ತೆಯಾಗಿದ್ದು, ಈ ಪುಸ್ತಕಗಳು ಜೈಲಿನಲ್ಲಿರುವ ಸಹೋದರನಿಗಾಗಿ ಇರಬಹುದೇ ಎಂಬ ಅನುಮಾನದೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzem2k53x44dq9t4ndq3bw3h,imgname-atik-ahmed-son-1786123472034.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಫಿಯಾ ಡಾನ್ ದಿವಂಗತ ಅತೀಕ್ ಅಹ್ಮದ್ ಅವರ ಕಿರಿಯ ಪುತ್ರ 21 ವರ್ಷದ ಅಬಾನ್ ಅಹ್ಮದ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಕರಣ ಹೊಸ ಚರ್ಚೆಗೆ ಕಾರಣವಾಗಿದೆ. ಅಪಘಾತದ ನಂತರ ಪೊಲೀಸರು ಮತ್ತು ವಿಧಿವಿಜ್ಞಾನ (ಫೊರೆನ್ಸಿಕ್) ತಂಡ ಕಾರನ್ನು ಪರಿಶೀಲಿಸಿದಾಗ ಎರಡು ಇಂಗ್ಲಿಷ್ ಕಾದಂಬರಿಗಳು ಸೇರಿದಂತೆ ಹಲವು ವೈಯಕ್ತಿಕ ವಸ್ತುಗಳು ಪತ್ತೆಯಾಗಿವೆ. ಈ ಪುಸ್ತಕಗಳು ಯಾವ ಕಾರಣಕ್ಕಾಗಿ ಕಾರಿನಲ್ಲಿದ್ದವು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಸಹೋದರನ್ನು ನೋಡಲು ಹೊರಟಾಗ ಶಾಕ್!&lt;/strong&gt;&lt;/h2&gt;&lt;p&gt;ಅಬಾನ್ ಅಹ್ಮದ್ ತನ್ನ ಸಹೋದರ ಅಲಿ ಅಹ್ಮದ್ ಅವರನ್ನು ಭೇಟಿ ಮಾಡಲು ಝಾನ್ಸಿ ಜೈಲಿಗೆ ಹುಂಡೈ ಕ್ರೆಟಾ ಎಸ್&zwnj;ಯುವಿಯಲ್ಲಿ ತೆರಳುತ್ತಿದ್ದರು. ಅವರೊಂದಿಗೆ ಸ್ನೇಹಿತ ಮೊಹಮ್ಮದ್ ಶಕೀರ್ ಅಲಿಯಾಸ್ ಸೋನು ಹಾಗೂ ಇನ್ನಿತರರು ಇದ್ದರು. ಕಾನ್ಪುರ&ndash;ಝಾನ್ಸಿ ಹೆದ್ದಾರಿಯಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಬಾನ್ ಮತ್ತು ಸೋನು ಸ್ಥಳದಲ್ಲೇ ಮೃತಪಟ್ಟರು. ಉಳಿದ ಮೂವರು ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಕಾರನ್ನು ಪರಿಶೀಲಿಸಿದ ಪೊಲೀಸರು ಸಿಗ್ನೇಚರ್ ಗುಟ್ಕಾ ಪ್ಯಾಕೆಟ್, ಕ್ಲಾಸಿಕ್ ಸಿಗರೇಟ್ ಪ್ಯಾಕ್, ಶೂಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡರು. ಆದರೆ ಎಲ್ಲರ ಗಮನ ಸೆಳೆದಿದ್ದು ಎರಡು ಇಂಗ್ಲಿಷ್ ಪುಸ್ತಕಗಳು. ಅವು &quot;ದಿ ಸ್ಟೇಷನರಿ ಶಾಪ್ ಆಪ್ ಟೆಹ್ರಾನ್&quot; ಮತ್ತು &quot;ದಿ ಇಡಿಯಟ್&quot;. ಎರಡೂ ಪುಸ್ತಕಗಳು ಹೊಸದಾಗಿದ್ದವು.&lt;/p&gt;&lt;h3&gt;&lt;strong&gt;ಕಾಡುತ್ತಿರುವ ಪ್ರಶ್ನೆ ಏನು?&lt;/strong&gt;&lt;/h3&gt;&lt;p&gt;ಈ ಪುಸ್ತಕಗಳನ್ನು ಅಬಾನ್ ಸ್ವತಃ ಓದುತ್ತಿದ್ದರೋ ಅಥವಾ ಝಾನ್ಸಿ ಜೈಲಿನಲ್ಲಿರುವ ತನ್ನ ಸಹೋದರ ಅಲಿ ಅಹ್ಮದ್&zwnj;ಗೆ ನೀಡಲು ತೆಗೆದುಕೊಂಡು ಹೋಗುತ್ತಿದ್ದರೋ ಎಂಬ ಪ್ರಶ್ನೆ ಮೂಡಿದೆ. ಆರಂಭಿಕ ತನಿಖೆಯ ಪ್ರಕಾರ, ಈ ಪುಸ್ತಕಗಳನ್ನು ಅಲಿ ಅಹ್ಮದ್&zwnj;ಗಾಗಿ ತರಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಇದನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.&lt;/p&gt;&lt;h3&gt;&lt;strong&gt;'ದಿ ಸ್ಟೇಷನರಿ ಶಾಪ್ ಆಫ್ ಟೆಹ್ರಾನ್' ಪುಸ್ತಕದ ವಿಶೇಷತೆ ಏನು?&lt;/strong&gt;&lt;/h3&gt;&lt;p&gt;ಈ ಕಾದಂಬರಿಯನ್ನು ಇರಾನ್ ಮೂಲದ ಲೇಖಕಿ ಮಾರ್ಜನ್ ಕಮಲಿ ಬರೆದಿದ್ದಾರೆ. ಇದು ಕೇವಲ ಪ್ರೇಮಕಥೆಯಲ್ಲ; ಪ್ರೀತಿ, ನಷ್ಟ, ಕುಟುಂಬ, ರಾಜಕೀಯ ಮತ್ತು ಮಾನವ ಸಂಬಂಧಗಳ ಭಾವನಾತ್ಮಕ ಕಥೆಯಾಗಿದೆ. ಕಥೆ 1953ರ ಇರಾನ್&zwnj;ನ ಟೆಹ್ರಾನ್ ನಗರದಲ್ಲಿ ಆರಂಭವಾಗುತ್ತದೆ. ಪುಸ್ತಕಗಳ ಅಂಗಡಿಯಲ್ಲಿ ರೋಯಾ ಎಂಬ ಯುವತಿ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಕನಸು ಕಾಣುವ ಬಹ್ಮನ್ ಎಂಬ ಯುವಕ ಭೇಟಿಯಾಗುತ್ತಾರೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಾರೆ. ಆದರೆ ಆ ಸಮಯದಲ್ಲಿ ಇರಾನ್&zwnj;ನಲ್ಲಿ ನಡೆದ ರಾಜಕೀಯ ಅಶಾಂತಿಯಿಂದ ಅವರ ಜೀವನವೇ ಬದಲಾಗುತ್ತದೆ. ಇಬ್ಬರೂ ಬೇರ್ಪಡುತ್ತಾರೆ. ಹಲವು ವರ್ಷಗಳ ಬಳಿಕ ಮತ್ತೆ ಭೇಟಿಯಾಗುವಾಗ ಅವರ ಪ್ರೀತಿಯ ಹಿಂದೆ ಅಡಗಿದ್ದ ನಿಜವಾದ ಕಥೆ ಹೊರಬರುತ್ತದೆ. ಈ ಕಾದಂಬರಿ ಮೊದಲ ಪ್ರೀತಿ, ವಿಯೋಗ ಮತ್ತು ಜೀವನದ ಭಾವನೆಗಳನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸುತ್ತದೆ.&lt;/p&gt;&lt;h3&gt;&lt;strong&gt;'ದಿ ಈಡಿಯಟ್' ಏಕೆ ವಿಶೇಷ?&lt;/strong&gt;&lt;/h3&gt;&lt;p&gt;ಅಬಾನ್ ಅವರ ಕಾರಿನಲ್ಲಿ ಪತ್ತೆಯಾದ ಮತ್ತೊಂದು ಪುಸ್ತಕ ದಿ ಇಡಿಯಟ್ ಇದನ್ನು ರಷ್ಯಾದ ಖ್ಯಾತ ಲೇಖಕ ಫ್ಯೋಡರ್ ದೋಸ್ಟೋವ್ಸ್ಕಿ ಬರೆದಿದ್ದು, ವಿಶ್ವದ ಶ್ರೇಷ್ಠ ಕ್ಲಾಸಿಕ್ ಕಾದಂಬರಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಕಥೆಯ ನಾಯಕ ಪ್ರಿನ್ಸ್ ಲೆವ್ ಮಿಶ್ಕಿನ್. ಆತ ತುಂಬಾ ಪ್ರಾಮಾಣಿಕ, ದಯಾಳು ಮತ್ತು ಮುಗ್ಧ ವ್ಯಕ್ತಿ. ಆದರೆ ಸಮಾಜ ಅವನ ಒಳ್ಳೆಯತನವನ್ನು ಅರ್ಥಮಾಡಿಕೊಳ್ಳದೆ ಅವನನ್ನು &quot;ಮೂರ್ಖ&quot; ಎಂದು ಕರೆಯುತ್ತದೆ. ಕಥೆ ಮುಂದುವರಿದಂತೆ ಪ್ರೀತಿ, ಅಸೂಯೆ, ಸ್ವಾರ್ಥ, ಮಾನವ ಸಂಬಂಧಗಳು ಮತ್ತು ನೈತಿಕ ಮೌಲ್ಯಗಳ ಬಗ್ಗೆ ಆಳವಾದ ಚರ್ಚೆ ನಡೆಸುತ್ತದೆ. ಒಳ್ಳೆಯ ಮನಸ್ಸಿನ ವ್ಯಕ್ತಿಯನ್ನು ಸಮಾಜ ಹೇಗೆ ತಪ್ಪಾಗಿ ಅರ್ಥಮಾಡಿಕೊಳ್ಳುತ್ತದೆ ಎಂಬುದನ್ನು ಈ ಕಾದಂಬರಿ ಮನಮುಟ್ಟುವ ರೀತಿಯಲ್ಲಿ ಹೇಳುತ್ತದೆ.&lt;/p&gt;&lt;h3&gt;&lt;strong&gt;ಹೊಸ ಆಯಾಮ ನೀಡಿದ ಪುಸ್ತಕ!&lt;/strong&gt;&lt;/h3&gt;&lt;p&gt;ಅಬಾನ್ ಅಹ್ಮದ್ ಅವರ ಕಾರಿನಲ್ಲಿ ಈ ಎರಡು ಪ್ರಸಿದ್ಧ ಪುಸ್ತಕಗಳು ಪತ್ತೆಯಾಗಿರುವುದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ಅವುಗಳನ್ನು ಅವರು ಓದಲು ತೆಗೆದುಕೊಂಡಿದ್ದರೋ ಅಥವಾ ತಮ್ಮ ಸಹೋದರನಿಗೆ ನೀಡಲು ಕೊಂಡೊಯ್ಯುತ್ತಿದ್ದರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಅಧಿಕೃತ ಮಾಹಿತಿ ಹೊರಬರುವವರೆಗೆ ಪೊಲೀಸರು ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.&lt;/p&gt;]]></content:encoded>
            <category>news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/india-news/gangster-atiq-ahmed-son-car-search-shocks-police-two-books-found-mystery-bmk/articleshow-2zddnty"/>
        </item>
        <item>
            <title><![CDATA[70 ವರ್ಷಗಳಿಂದ ‘Old Monk’ ಇಷ್ಟು ಫೇಮಸ್ ಆಗಿದ್ದು ಹೇಗೆ? ಭಾರತದ ಐಕಾನಿಕ್ ರಮ್ ಕಥೆ ಗೊತ್ತಾ?]]></title>
            <link>https://kannada.asianetnews.com/life/old-monk-rum-how-indias-iconic-brand-became-a-cultural-phenomenon-gvd/articleshow-prclh7l</link>
            <guid isPermaLink="true">https://kannada.asianetnews.com/life/old-monk-rum-how-indias-iconic-brand-became-a-cultural-phenomenon-gvd/articleshow-prclh7l</guid>
            <pubDate>Fri, 07 Aug 2026 22:33:48 +0530</pubDate>
            <description><![CDATA[&lt;p&gt;ಭಾರತದಲ್ಲಿ ರಮ್ ಎಂದಾಕ್ಷಣ ಅನೇಕರಿಗೆ ಮೊದಲು ನೆನಪಾಗುವ ಹೆಸರು &lsquo;ಓಲ್ಡ್ ಮಾಂಕ್&rsquo;. ಏಳು ದಶಕಗಳಿಗೂ ಹೆಚ್ಚು ಕಾಲ ಭಾರತೀಯರೊಂದಿಗೆ ಬೆಸೆದುಕೊಂಡಿರುವ ಈ ಡಾರ್ಕ್ ರಮ್, ಕೇವಲ ಮದ್ಯದ ಬ್ರ್ಯಾಂಡ್ ಆಗಿ ಉಳಿದಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzejd7ejdp9112tv9x10kt2r,imgname-vj-1786121723346.png" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ರಮ್ ಎಂದಾಕ್ಷಣ ಅನೇಕರಿಗೆ ಮೊದಲು ನೆನಪಾಗುವ ಹೆಸರು &lsquo;ಓಲ್ಡ್ ಮಾಂಕ್&rsquo;. ಏಳು ದಶಕಗಳಿಗೂ ಹೆಚ್ಚು ಕಾಲ ಭಾರತೀಯರೊಂದಿಗೆ ಬೆಸೆದುಕೊಂಡಿರುವ ಈ ಡಾರ್ಕ್ ರಮ್, ಕೇವಲ ಮದ್ಯದ ಬ್ರ್ಯಾಂಡ್ ಆಗಿ ಉಳಿದಿಲ್ಲ. ಚಳಿಗಾಲದ ಸಂಜೆಗಳು, ಕಾಲೇಜು ದಿನಗಳ ನೆನಪುಗಳು, ಹಾಸ್ಟೆಲ್ ಜೀವನ, ಸ್ನೇಹಿತರೊಂದಿಗಿನ ಮಾತುಕತೆ ಸೇರಿದಂತೆ ಹಲವು ನೆನಪುಗಳೊಂದಿಗೆ &lsquo;ಓಲ್ಡ್ ಮಾಂಕ್&rsquo; ಹೆಸರು ಬೆಸೆದುಕೊಂಡಿದೆ.&lt;/p&gt;&lt;p&gt;ಇದೀಗ &lsquo;ಓಲ್ಡ್ ಮಾಂಕ್&rsquo; ಮತ್ತೆ ಸುದ್ದಿಯಲ್ಲಿದೆ. ಮಹಾರಾಷ್ಟ್ರದ ಘಟಕದಲ್ಲಿ ತಯಾರಿಸಲಾಗಿದ್ದ ಈ ರಮ್&zwnj;ನ ಮೂರು ವೇರಿಯಂಟ್&zwnj;ಗಳ ಮಾರಾಟವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸ್ಥಗಿತಗೊಳಿಸಿದೆ. ಕೃತಕ ಅಥವಾ ನ್ಯಾಚರ್-ಐಡೆಂಟಿಕಲ್ ರಮ್ ಫ್ಲೇವರಿಂಗ್ ಬಳಸಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ಕ್ರಮದ ವ್ಯಾಪ್ತಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಮತ್ತು ಇನ್&zwnj;ಬ್ರೂ ಬೆವರೇಜಸ್ ತಯಾರಿಸುವ ಕೆಲವು ವಿಸ್ಕಿ ಹಾಗೂ ರಮ್ ವೇರಿಯಂಟ್&zwnj;ಗಳೂ ಸೇರಿವೆ.&lt;/p&gt;&lt;p&gt;&lt;strong&gt;ಏಳು ದಶಕಗಳ ಹಿಂದೆಯೇ ಆರಂಭವಾದ &lsquo;ಓಲ್ಡ್ ಮಾಂಕ್&rsquo; ಪಯಣ&lt;/strong&gt;&lt;/p&gt;&lt;p&gt;&lsquo;ಓಲ್ಡ್ ಮಾಂಕ್&rsquo; ಬ್ರ್ಯಾಂಡ್ ಅನ್ನು ಮೋಹನ್ ಮೀಕಿನ್ 1954ರ ಡಿಸೆಂಬರ್&zwnj;ನಲ್ಲಿ ಪರಿಚಯಿಸಿತು. ಆ ಬಳಿಕ ಈ ಡಾರ್ಕ್ ರಮ್ ನಿಧಾನವಾಗಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿತು. ವರ್ಷಗಳು ಕಳೆದಂತೆ ಮದ್ಯ ಮಾರುಕಟ್ಟೆಯಲ್ಲಿ ಹಲವು ಹೊಸ ಬ್ರ್ಯಾಂಡ್&zwnj;ಗಳು ಬಂದವು. ಗ್ರಾಹಕರ ಆಯ್ಕೆಯಲ್ಲೂ ಸಾಕಷ್ಟು ಬದಲಾವಣೆಗಳಾದವು. ಆದರೆ &lsquo;ಓಲ್ಡ್ ಮಾಂಕ್&rsquo; ಮಾತ್ರ ತನ್ನದೇ ಆದ ಅಭಿಮಾನಿ ಬಳಗವನ್ನು ಉಳಿಸಿಕೊಂಡಿತು. ದಶಕಗಳ ಬಳಿಕವೂ ಈ ಬ್ರ್ಯಾಂಡ್ ಭಾರತದ ಅತ್ಯಂತ ಪರಿಚಿತ ರಮ್ ಹೆಸರುಗಳಲ್ಲಿ ಒಂದಾಗಿ ಮುಂದುವರಿದಿದೆ.&lt;/p&gt;&lt;p&gt;&lt;strong&gt;&lsquo;ಓಲ್ಡ್ ಮಾಂಕ್&rsquo; ಎಂಬ ಹೆಸರು ಬಂದಿದ್ದು ಹೇಗೆ?&lt;/strong&gt;&lt;/p&gt;&lt;p&gt;ಈ ಬ್ರ್ಯಾಂಡ್&zwnj;ನ ಹೆಸರಿನ ಹಿಂದೆಯೂ ಒಂದು ಕುತೂಹಲಕಾರಿ ಕಥೆಯಿದೆ. &lsquo;ಓಲ್ಡ್ ಮಾಂಕ್&rsquo; ಹೆಸರಿನ ಕಲ್ಪನೆ ಅದರ ಸೃಷ್ಟಿಕರ್ತ ಹಾಗೂ ನಿವೃತ್ತ ಸೇನಾ ಅಧಿಕಾರಿ ವೇದ್ ರತನ್ ಮೋಹನ್ ಅವರಿಗೆ ಬಂದಿತು ಎನ್ನಲಾಗಿದೆ. ಯುರೋಪ್ ಪ್ರವಾಸದ ವೇಳೆ ಅವರು ಬೆನೆಡಿಕ್ಟೈನ್ ಸನ್ಯಾಸಿಗಳನ್ನು ಭೇಟಿಯಾಗಿದ್ದರು. ಅವರ ಸರಳ ಜೀವನಶೈಲಿ ಮತ್ತು ಸಾಂಪ್ರದಾಯಿಕ ಲಿಕ್ಕರ್ ತಯಾರಿಸುವ ಪರಂಪರೆ ವೇದ್ ರತನ್ ಮೋಹನ್ ಅವರ ಮೇಲೆ ಪ್ರಭಾವ ಬೀರಿತ್ತು ಎನ್ನಲಾಗುತ್ತದೆ. ಇದೇ ಅನುಭವ &lsquo;ಓಲ್ಡ್ ಮಾಂಕ್&rsquo; ಎಂಬ ಹೆಸರು ಹಾಗೂ ಅದರ ಗುರುತಿನ ರೂಪುಗೊಳ್ಳುವಿಕೆಗೆ ಪ್ರೇರಣೆಯಾಯಿತು ಎಂದು ವರದಿಗಳು ಹೇಳುತ್ತವೆ.&lt;/p&gt;&lt;p&gt;&lt;strong&gt;ಕ್ಯಾಪಿಲ್ ಮೋಹನ್ ಕೊಡುಗೆ ಮರೆಯುವಂತಿಲ್ಲ&lt;/strong&gt;&lt;/p&gt;&lt;p&gt;&lsquo;ಓಲ್ಡ್ ಮಾಂಕ್&rsquo; ಅನ್ನು ಭಾರತದ ಮನೆಮಾತಾಗಿಸಿದವರಲ್ಲಿ ಮೋಹನ್ ಮೀಕಿನ್&zwnj;ನ ದೀರ್ಘಕಾಲದ ಅಧ್ಯಕ್ಷರಾಗಿದ್ದ ದಿವಂಗತ ಕ್ಯಾಪಿಲ್ ಮೋಹನ್ ಅವರ ಪಾತ್ರವೂ ಮಹತ್ವದ್ದಾಗಿದೆ. ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದ ಕ್ಯಾಪಿಲ್ ಮೋಹನ್, ಹಲವು ವರ್ಷಗಳ ಕಾಲ ಬ್ರ್ಯಾಂಡ್&zwnj;ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಾಯಕತ್ವದಲ್ಲಿ &lsquo;ಓಲ್ಡ್ ಮಾಂಕ್&rsquo; ದೇಶದ ಅತ್ಯಂತ ಗುರುತಿಸಲ್ಪಡುವ ರಮ್ ಬ್ರ್ಯಾಂಡ್&zwnj;ಗಳಲ್ಲಿ ಒಂದಾಯಿತು. ವಿಶೇಷವೆಂದರೆ, ದೊಡ್ಡ ಮಟ್ಟದ ಜಾಹೀರಾತು ಪ್ರಚಾರದ ಮೊರೆ ಹೋಗದೆ &lsquo;ಓಲ್ಡ್ ಮಾಂಕ್&rsquo; ಜನಪ್ರಿಯತೆ ಗಳಿಸಿತು. ಗ್ರಾಹಕರ ನಂಬಿಕೆ, ಉತ್ಪನ್ನದ ಮೇಲಿನ ಅಭಿಮಾನ ಮತ್ತು ಒಬ್ಬರಿಂದ ಮತ್ತೊಬ್ಬರಿಗೆ ಹರಡಿದ ಮಾತಿನ ಪ್ರಚಾರವೇ ಬ್ರ್ಯಾಂಡ್&zwnj;ನ ಯಶಸ್ಸಿನ ಪ್ರಮುಖ ಕಾರಣಗಳಾಗಿದ್ದವು.&lt;/p&gt;&lt;p&gt;&lt;strong&gt;ಜಾಹೀರಾತಿಗಿಂತ ನೆನಪುಗಳೇ &lsquo;ಓಲ್ಡ್ ಮಾಂಕ್&rsquo;ನ ಶಕ್ತಿ!&lt;/strong&gt;&lt;/p&gt;&lt;p&gt;ಭಾರತೀಯ ಮಾರುಕಟ್ಟೆಯಲ್ಲಿ &lsquo;ಓಲ್ಡ್ ಮಾಂಕ್&rsquo;ಗೆ ಸಿಕ್ಕಿರುವ ಜನಪ್ರಿಯತೆ ಕೇವಲ ವ್ಯಾಪಾರಿಕ ಯಶಸ್ಸಿಗೆ ಸೀಮಿತವಾಗಿಲ್ಲ. ಈ ಬ್ರ್ಯಾಂಡ್ ಭಾರತೀಯ ಜನಪ್ರಿಯ ಸಂಸ್ಕೃತಿಯ ಭಾಗವಾಗಿಯೂ ಗುರುತಿಸಿಕೊಂಡಿದೆ. ಹಾಸ್ಟೆಲ್ ಜೀವನ, ಕಾಲೇಜು ದಿನಗಳು, ರೋಡ್ ಟ್ರಿಪ್&zwnj;ಗಳು, ಚಳಿಗಾಲದ ಬಾನ್&zwnj;ಫೈರ್&zwnj;ಗಳು ಹಾಗೂ ಸ್ನೇಹಿತರೊಂದಿಗೆ ಕಳೆಯುವ ಸಮಯದೊಂದಿಗೆ &lsquo;ಓಲ್ಡ್ ಮಾಂಕ್&rsquo; ಹೆಸರು ಹಲವು ತಲೆಮಾರುಗಳ ನೆನಪುಗಳಲ್ಲಿ ಸ್ಥಾನ ಪಡೆದಿದೆ. ಇತರ ಮದ್ಯದ ಬ್ರ್ಯಾಂಡ್&zwnj;ಗಳಂತೆ ನಿರಂತರವಾಗಿ ದೊಡ್ಡ ಮಟ್ಟದ ಜಾಹೀರಾತು ಪ್ರಚಾರ ನಡೆಸದಿದ್ದರೂ, ತನ್ನದೇ ಆದ ಗ್ರಾಹಕರನ್ನು ಸೃಷ್ಟಿಸಿಕೊಂಡಿರುವುದು &lsquo;ಓಲ್ಡ್ ಮಾಂಕ್&rsquo;ನ ವಿಶೇಷತೆ. ಮಾರುಕಟ್ಟೆ ಬದಲಾಗುತ್ತಾ ಬಂದರೂ, ದಶಕಗಳ ಹಿಂದಿನ ತನ್ನ ಜನಪ್ರಿಯತೆಯನ್ನು ಈ ಬ್ರ್ಯಾಂಡ್ ಇನ್ನೂ ಉಳಿಸಿಕೊಂಡಿದೆ.&lt;/p&gt;&lt;h2&gt;&lt;strong&gt;ಮತ್ತೆ ಸುದ್ದಿಯಲ್ಲಿ &lsquo;ಓಲ್ಡ್ ಮಾಂಕ್&rsquo;&lt;/strong&gt;&lt;/h2&gt;&lt;p&gt;ಇದೀಗ FSSAI ಕ್ರಮದಿಂದಾಗಿ &lsquo;ಓಲ್ಡ್ ಮಾಂಕ್&rsquo; ಮತ್ತೊಮ್ಮೆ ಸುದ್ದಿಯ ಕೇಂದ್ರದಲ್ಲಿದೆ. ರಾಯಿಟರ್ಸ್ ವರದಿ ಪ್ರಕಾರ, ಮಹಾರಾಷ್ಟ್ರದ ಮೋಹನ್ ರಾಕಿ ಸ್ಪ್ರಿಂಗ್&zwnj;ವಾಟರ್ ಘಟಕದಲ್ಲಿ ತಯಾರಿಸಲಾಗಿದ್ದ ಮೂರು ವೇರಿಯಂಟ್&zwnj;ಗಳ ಮಾರಾಟವನ್ನು ನಿಯಂತ್ರಕರು ಸ್ಥಗಿತಗೊಳಿಸಿದ್ದಾರೆ. ನೈಸರ್ಗಿಕ ಪದಾರ್ಥಗಳು ಹಾಗೂ ಏಜಿಂಗ್ ಮೂಲಕ ರುಚಿ ಅಭಿವೃದ್ಧಿಯಾಗಬೇಕಾದ ಉತ್ಪನ್ನಗಳಲ್ಲಿ ಕೃತಕ ಅಥವಾ ನ್ಯಾಚರ್-ಐಡೆಂಟಿಕಲ್ ರಮ್ ಫ್ಲೇವರಿಂಗ್ ಬಳಸಲಾಗಿದೆ ಎಂಬುದು ಆರೋಪವಾಗಿದೆ. ಈ ಕ್ರಮವು &lsquo;ಓಲ್ಡ್ ಮಾಂಕ್&rsquo;ಗೆ ಮಾತ್ರ ಸೀಮಿತವಾಗಿಲ್ಲ.&lt;/p&gt;&lt;p&gt;ಯುನೈಟೆಡ್ ಸ್ಪಿರಿಟ್ಸ್ ಮತ್ತು ಇನ್&zwnj;ಬ್ರೂ ಬೆವರೇಜಸ್ ತಯಾರಿಸುವ ಕೆಲವು ವಿಸ್ಕಿ ಹಾಗೂ ರಮ್ ವೇರಿಯಂಟ್&zwnj;ಗಳ ಮೇಲೂ ಇದೇ ಕ್ರಮದ ವ್ಯಾಪ್ತಿ ಇದೆ ಎಂದು ವರದಿಯಾಗಿದೆ. ಆದರೆ ಏಳು ದಶಕಗಳಿಗೂ ಹೆಚ್ಚು ಕಾಲ ಭಾರತೀಯರ ನೆನಪುಗಳಲ್ಲಿ ಸ್ಥಾನ ಪಡೆದಿರುವ &lsquo;ಓಲ್ಡ್ ಮಾಂಕ್&rsquo;ನ ಕಥೆ ಮಾತ್ರ ಇಷ್ಟಕ್ಕೇ ಮುಗಿಯುವುದಿಲ್ಲ. ಒಂದು ಕಾಲದ ಕಾಲೇಜು ನೆನಪುಗಳಿಂದ ಇಂದಿನ ತಲೆಮಾರಿನವರೆಗೆ ತನ್ನದೇ ಆದ ಗುರುತನ್ನು ಉಳಿಸಿಕೊಂಡಿರುವ ಈ ಬ್ರ್ಯಾಂಡ್, ಭಾರತದ ಅತ್ಯಂತ ಐಕಾನಿಕ್ ರಮ್ ಹೆಸರುಗಳಲ್ಲಿ ಒಂದಾಗಿ ಮುಂದುವರಿದಿದೆ.&lt;/p&gt;&lt;p&gt;&lt;strong&gt;ಸೂಚನೆ: &lt;/strong&gt;ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಕಾನೂನುಬದ್ಧ ವಯಸ್ಸು ತಲುಪಿದವರು ಮಾತ್ರ ಜವಾಬ್ದಾರಿಯುತವಾಗಿ ಸೇವಿಸಬೇಕು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/life/old-monk-rum-how-indias-iconic-brand-became-a-cultural-phenomenon-gvd/articleshow-prclh7l"/>
        </item>
        <item>
            <title><![CDATA[E-20: ನಿಮ್ಮ ಕಾರು-ಬೈಕ್‌ಗೆ ಇ-20 ಪೆಟ್ರೋಲ್ ಸುರಕ್ಷಿತವೇ? 90,000 ಬಂಕ್‌ಗಳ ಪರಿಶೀಲನೆ ಬಳಿಕ ತೈಲ ಸಂಸ್ಥೆಗಳು ಹೇಳಿದ್ದೇನು?  ಇಲ್ಲಿದೆ ಅಂತಿಮ ತೀರ್ಪು!]]></title>
            <link>https://kannada.asianetnews.com/my-money-money/is-e20-petrol-safe-for-car-bike-oil-companies-final-verdict-after-90000-bunks-check-bmk/articleshow-eeslm9b</link>
            <guid isPermaLink="true">https://kannada.asianetnews.com/my-money-money/is-e20-petrol-safe-for-car-bike-oil-companies-final-verdict-after-90000-bunks-check-bmk/articleshow-eeslm9b</guid>
            <pubDate>Fri, 07 Aug 2026 22:27:49 +0530</pubDate>
            <description><![CDATA[&lt;p&gt;ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಬಂಕ್&zwnj;ಗಳಲ್ಲಿ ನಡೆಸಿದ ವ್ಯಾಪಕ ತಪಾಸಣೆಯ ನಂತರ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇ-20 ಪೆಟ್ರೋಲ್&zwnj; ಕುರಿತು ತಾವು ನೀಡಿದ ತಪಾಸಣೆಯ ಫಲಿತಾಂಶ ಪ್ರಕಟಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzejg17y9tgnxnwwfsty5nxp,imgname-e-20-1786121815294.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಕೆಲವು ದಿನಗಳಿಂದ ಮೋದಿ ಸರ್ಕಾರದ 12 ವರ್ಷಗಳ ಅವಧಿಯಲ್ಲಿ ಸರ್ಕಾರದ ಇ-20 ಪೆಟ್ರೋಲ್ ಬಗ್ಗೆ ಬೇರೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ಎಥೆನಾಲ್ ನೊಂದಿಗೆ ಬೆರೆಸಿದ ಪೆಟ್ರೋಲ್ ಮಾರಾಟ ಆರಂಭವಾದಾಗಿನಿಂದ, ದೇಶಾದ್ಯಂತ ವಿವಿಧ ರೀತಿಯ ಚರ್ಚೆಗಳು ಮತ್ತು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸರ್ಕಾರ, ತಜ್ಞರು ಮತ್ತು ಇತರ ಪ್ರತಿಯೊಂದು ಸಂಸ್ಥೆಯು ಅದರ ಪರವಾಗಿ ತಮ್ಮ ವಾದಗಳನ್ನು ಮಂಡಿಸಿವೆ. ಈಗ, ತೈಲವನ್ನು ವಿತರಿಸುವ ಜವಾಬ್ದಾರಿಯುತ ಪೆಟ್ರೋಲಿಯಂ ಕಂಪನಿಗಳು ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸಿವೆ. ಈ ನಿರ್ಧಾರಕ್ಕೆ ಮುನ್ನ, ಕಂಪನಿಗಳು ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಪಂಪ್&zwnj;ಗಳಲ್ಲಿ ತೈಲವನ್ನು ಪರೀಕ್ಷಿಸಿವೆ. ಅವು ನಿಡಿದ ಅಪ್ಡೇಟ್&zwnj; ಏನು? ಎನ್ನುವುದರ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಕಂಪನಿಗಳು ಹೇಳಿದ್ದೇನು?&lt;/strong&gt;&lt;/h2&gt;&lt;p&gt;ರಾಷ್ಟ್ರವ್ಯಾಪಿ ಸಮೀಕ್ಷೆ ಮತ್ತು ತನಿಖೆ ಪೂರ್ಣಗೊಳಿಸಿದ ನಂತರ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು, ದೇಶಾದ್ಯಂತ ವ್ಯಾಪಕವಾದ ಪರೀಕ್ಷೆಯು E-20 ಪೆಟ್ರೋಲ್&zwnj;ನಲ್ಲಿ ತೇವಾಂಶ ಅಥವಾ ಕ್ಲೋರೈಡ್ ಮಾಲಿನ್ಯದ ಅಂಶಗಳನ್ನು ದೃಢಪಡಿಸಿಲ್ಲ. ಅಲ್ಲದೇ ಇಂಧನ ಗುಣಮಟ್ಟವು ನಿಗದಿತ ಮಾನದಂಡಗಳಲ್ಲಿದೆ ಎನ್ನುವುದು ಕಂಡುಬಂದಿದೆ ಎಂದು ಹೇಳಿವೆ. 20 ಪ್ರತಿಶತ ಎಥೆನಾಲ್ ಹೊಂದಿರುವ E-20 ಪೆಟ್ರೋಲ್&zwnj;ನಲ್ಲಿ ತೇವಾಂಶ ಮತ್ತು ಕ್ಲೋರೈಡ್ ಇರುವುದು ಕಂಡುಬಂದಿದೆ ಎಂಬ ಇತ್ತೀಚಿನ ಮಾಧ್ಯಮ ವರದಿಗಳ ನಂತರ ಈ ತನಿಖೆಯನ್ನು ತೀವ್ರಗೊಳಿಸಲಾಗಿದೆ. ತೈಲದಲ್ಲಿ ಯಾವುದೇ ಮಾಲಿನ್ಯ ಕಂಡುಬಂದಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್&zwnj;ಪಿಸಿಎಲ್) ಜಂಟಿ ಹೇಳಿಕೆಯಲ್ಲಿ ತಿಳಿಸಿವೆ, ಪೂರೈಕೆ ಸರಪಳಿಯಾದ್ಯಂತ ನಡೆಸಿದ ತಪಾಸಣೆಗಳು ಇಂಧನ ಗುಣಮಟ್ಟವು ನಿಗದಿತ ಮಾನದಂಡಗಳಲ್ಲಿ ಸ್ಥಿರವಾಗಿ ಉಳಿದಿದೆ ಎಂದು ದೃಢಪಡಿಸಿದೆ. ತೈಲ ಕಂಪನಿಗಳು ತಪಾಸಣೆಗಳು ಯಾವುದೇ ಮಾಲಿನ್ಯದ ಬಗ್ಗೆ ಯಾವುದೇ ನಿರ್ದಿಷ್ಟ ಪುರಾವೆಗಳನ್ನು ಬಹಿರಂಗಪಡಿಸಿಲ್ಲ ಎಂದು ಸ್ಪಷ್ಟಪಡಿಸಿವೆ. ಈ ತನಿಖೆಯ ನಂತರ, ಇ-20 ಪೆಟ್ರೋಲ್ ಯಾವುದೇ ಕಲಬೆರಕೆಯಿಂದ ಮುಕ್ತವಾಗಿದೆ ಎಂದು ನಿರ್ಧರಿಸಲಾಗಿದೆ.&lt;/p&gt;&lt;h3&gt;&lt;strong&gt;12 ಬಾರಿ ಪರೀಕ್ಷೆ!&lt;/strong&gt;&lt;/h3&gt;&lt;p&gt;ಇ-20 ಪೆಟ್ರೋಲ್&zwnj;ನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ತೈಲ ಕಂಪನಿಗಳು ಸಂಸ್ಕರಣಾಗಾರದಿಂದ ಪೆಟ್ರೋಲ್ ಬಂಕ್&zwnj;ವರೆಗೆ ನಿರಂತರ ಪರೀಕ್ಷೆ ನಡೆಸುತ್ತಿವೆ. ಪೆಟ್ರೋಲ್ ಬಂಕ್&zwnj;ಗಳಲ್ಲಿ ಪ್ರತಿದಿನ 8ರಿಂದ 12 ಬಾರಿ ನೀರಿನ ಕಲಬೆರಕೆ ಮತ್ತು ಸಾಂದ್ರತೆಯನ್ನು ಪರಿಶೀಲಿಸಲಾಗುತ್ತದೆ. ಜೊತೆಗೆ, ಮೊಬೈಲ್ ಪ್ರಯೋಗಾಲಯಗಳ ಮೂಲಕವೂ ಮಾದರಿಗಳನ್ನು ಪರೀಕ್ಷಿಸಲಾಗುತ್ತದೆ. 100ಕ್ಕೂ ಹೆಚ್ಚು ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ಕ್ಲೋರೈಡ್ ಪ್ರಮಾಣ 1 ppm ಅಥವಾ ಅದಕ್ಕಿಂತ ಕಡಿಮೆ ಕಂಡುಬಂದಿದ್ದು, ಡಿಸ್ಟಿಲರಿ ಮತ್ತು ಚಿಲ್ಲರೆ ಮಟ್ಟದ ಮಾದರಿಗಳಲ್ಲಿಯೂ ಅದು 3 ppmಗಿಂತ ಕಡಿಮೆಯೇ ಇತ್ತು. ಇದರಿಂದ ಇಂಧನದ ಗುಣಮಟ್ಟ ಸುರಕ್ಷಿತವಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಇ-20 ಸುಕ್ಷಿತವೇ?&lt;/strong&gt;&lt;/h3&gt;&lt;p&gt;ಪರೀಕ್ಷೆಯ ವೇಳೆ ಕೇವಲ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾತ್ರ ಕ್ಲೋರೈಡ್ ಪ್ರಮಾಣ ಹೆಚ್ಚಿರುವುದು ಕಂಡುಬಂದಿದ್ದು, ತಕ್ಷಣವೇ ಆ ಇಂಧನದ ಪೂರೈಕೆಯನ್ನು ಸ್ಥಗಿತಗೊಳಿಸಿ ಹೆಚ್ಚಿನ ಪರೀಕ್ಷೆ ನಡೆಸಲಾಯಿತು. ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಬಂಕ್&zwnj;ಗಳ ಟ್ಯಾಂಕ್&zwnj;ಗಳನ್ನು ಪರಿಶೀಲಿಸಿದರೂ ನೀರಿನ ಕಲಬೆರಕೆಯ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಇ-20 ಪೆಟ್ರೋಲ್ ಸುರಕ್ಷಿತವಾಗಿದ್ದು, ಅದರ ಬಗ್ಗೆ ಹರಿದಾಡುತ್ತಿರುವ ಕೆಲವು ಹೇಳಿಕೆಗಳು ಉತ್ಪ್ರೇಕ್ಷೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಸರ್ಕಾರಿ ತೈಲ ಕಂಪನಿಗಳು ಸ್ಪಷ್ಟಪಡಿಸಿವೆ. ಗ್ರಾಹಕರು ಯಾವುದೇ ಆತಂಕವಿಲ್ಲದೆ ಇ-20 ಪೆಟ್ರೋಲ್ ಬಳಸಬಹುದು ಎಂದು ಅವರು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/my-money-money/is-e20-petrol-safe-for-car-bike-oil-companies-final-verdict-after-90000-bunks-check-bmk/articleshow-eeslm9b"/>
        </item>
        <item>
            <title><![CDATA[ಸಿಜೆಪಿ ಕಾರ್ಯಕರ್ತನಿಂದಲೇ ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಬಂಡಾಯ! ದೀಪ್ಕೆ ತವರಲ್ಲಿ ಅಹಮದಾಬಾದ್ ಯುವಕನ ಉಪವಾಸ ಸತ್ಯಾಗ್ರಹ!]]></title>
            <link>https://kannada.asianetnews.com/india-news/rebellion-against-party-ahmedabad-youth-hunger-strike-in-deep-hometown-bmk/articleshow-cc3zhvk</link>
            <guid isPermaLink="true">https://kannada.asianetnews.com/india-news/rebellion-against-party-ahmedabad-youth-hunger-strike-in-deep-hometown-bmk/articleshow-cc3zhvk</guid>
            <pubDate>Fri, 07 Aug 2026 21:53:56 +0530</pubDate>
            <description><![CDATA[ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆಯಲ್ಲಿ ಪಕ್ಷಪಾತ ನಡೆದಿದೆ ಎಂದು ಆರೋಪಿಸಿ ಅಹಮದಾಬಾದ್&zwnj;ನ ಯುವಕ ಮನೀಶ್ ಬ್ರಹ್ಮಭಟ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ತಮ್ಮ ಆಪ್ತರಿಗೆ ಮಾತ್ರ ಹುದ್ದೆಗಳನ್ನು ನೀಡಿದ್ದು, ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzegk8f22096s36akf7fqqq0,imgname-cjp-1786119823842.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದ ನಂತರ ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿ ಅಹಮದಾಬಾದ್&zwnj;ನ ಯುವಕನೊಬ್ಬ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾನೆ. ಜಂತರ್ ಮಂತರ್ ವಿದ್ಯಾರ್ಥಿ ಚಳವಳಿಯೊಂದಿಗೆ ಗುರುತಿಸಿಕೊಂಡಿದ್ದಾಗಿ ಹೇಳಿಕೊಳ್ಳುವ ಮನೀಶ್ ಬ್ರಹ್ಮಭಟ್, ಅಭಿಯಾನದಲ್ಲಿ ಕೆಲಸ ಮಾಡಿದ ಹಲವಾರು ಸ್ವಯಂಸೇವಕರು ಮತ್ತು ಸಂಯೋಜಕರನ್ನು ಕಡೆಗಣಿಸಲಾಗಿದೆ. ಅಲ್ಲದೇ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಆಪ್ತರಿಗೆ ಮಾತ್ರ ನಾಯಕತ್ವ ಸ್ಥಾನಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಅಷ್ಟಕ್ಕೂ ಆಗಿದ್ದೇನು?&lt;/strong&gt;&lt;/h2&gt;&lt;p&gt;ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಬ್ರಹ್ಮಭಟ್, ತಾನು ಮತ್ತು ಇತರ ಸ್ವಯಂಸೇವಕರು ಸಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದೆವು ಆದರೆ, ನಮ್ಮನ್ನು ಒಳಗೂ ಕರೆಯಲಿಲ್ಲ. ನಾವು ದಿನವಿಡೀ ಅಲ್ಲೇ ಇದ್ದರೂ ಯಾರೂ ನಮ್ಮನ್ನು ಒಳಗೆ ಕರೆಯಲು ಮನಸು ಮಾಡಿಲ್ಲ ಎಂದು ಹೇಳಿದ್ದಾರೆ. ಆರಂಭದಲ್ಲಿ, ಅವರು ಸ್ಥಳಕ್ಕೆ ತಲುಪಿಲ್ಲ ಎಂದು ವಾಟ್ಸಾಪ್&zwnj;ನಲ್ಲಿ ನಮಗೆ ತಿಳಿಸಲಾಗಿತ್ತು. ನಂತರ, ನಾವು ಅಶುತೋಷ್ ಅವರೊಂದಿಗೆ ಮಾತನಾಡಿದೆವು, ಆದರೆ ನಮಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸಭೆಯ ಸಮಯದಲ್ಲಿ ಎಲ್ಲರ ಫೋನ್&zwnj;ಗಳನ್ನು ಹೊರಗೆ ಇಡಲಾಗಿತ್ತು, ಆದ್ದರಿಂದ, ಹೊರಗೆ ಇದ್ದವರ ಕುರಿತು ಯಾರಿಗೂ ತಿಳಿದಿರಲಿಲ್ಲ ಎಂದು ಒಳಗಿದ್ದ ಕೆಲವರು ನಂತರ ನಮಗೆ ತಿಳಿಸಿದರು ಎಂದು ಅವರು ಹೇಳಿದ್ದಾರೆ&lt;/p&gt;&lt;h3&gt;&lt;strong&gt;ಮನೀಶ್ ಆರೋಪವೇನು?&lt;/strong&gt;&lt;/h3&gt;&lt;p&gt;ಬ್ರಹ್ಮಭಟ್ ಅವರ ಆರೋಪದ ಪ್ರಕಾರ, ಸ್ವಯಂಸೇವಕರಿಗೆ ಮರುದಿನ ಬೆಳಗ್ಗೆ ಮತ್ತೆ ಬರಲು ತಿಳಿಸಲಾಗಿತ್ತು. ಇದೇ ವೇಳೆ ಅವರು &quot;ಏಕ್ ರೀಲ್ ದೇಶ್ ಕೆ ನಾಮ್&quot; ಎಂಬ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕ ಅಭಿಯಾನವನ್ನು ಪ್ರಸ್ತಾಪಿಸಿದ್ದರು. ಈ ಅಭಿಯಾನದ ಮೂಲಕ ನಾಗರಿಕರು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸಬಹುದಿತ್ತು. ಆದರೆ ನಂತರ ಸಿಜೆಪಿ ಇದೇ ಕಲ್ಪನೆಯನ್ನು &quot;ಕ್ಯಾ ಬೋಲ್ಟಿ ಪಬ್ಲಿಕ್&quot; ಹೆಸರಿನಲ್ಲಿ, ಅದರ ಮೂಲ ಕಲ್ಪನೆಗೆ ಯಾವುದೇ ಮನ್ನಣೆ ನೀಡದೆ ಆರಂಭಿಸಿತು ಎಂದು ಬ್ರಹ್ಮಭಟ್ ಆರೋಪಿಸಿದ್ದಾರೆ. ಜಂತರ್ ಮಂತರ್ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಂಯೋಜಕರಿಗೆ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿ ಬ್ರಹ್ಮಭಟ್, ಮತ್ತೊಬ್ಬ ಸಿಜೆಪಿ ಸ್ವಯಂಸೇವಕನೊಂದಿಗೆ ಗುರುವಾರ ದಿಪ್ಕೆ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ಛತ್ರಪತಿ ಸಂಭಾಜಿನಗರದಲ್ಲಿರುವ ದೀಪ್ಕೆ ಅವರ ನಿವಾಸದಲ್ಲಿ ನಡೆದ ಎರಡು ದಿನಗಳ ಕೋರ್ ಕಮಿಟಿ ಸಭೆಯಲ್ಲಿ ಸಿಜೆಪಿ ತನ್ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆಯನ್ನು ಘೋಷಿಸಿದ ಒಂದು ದಿನದ ನಂತರ ಈ ಪ್ರತಿಭಟನೆ ನಡೆದಿದೆ.&lt;/p&gt;&lt;h3&gt;&lt;strong&gt;ಯಾರಿಗೆ ಯಾವ ಸ್ಥಾನ?&lt;/strong&gt;&lt;/h3&gt;&lt;p&gt;ಸಂಘಟನೆಯು ಸಂಸ್ಥಾಪಕ ಅಭಿಜಿತ್ ದೀಪ್ಕೆ (30) ಅವರನ್ನು ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಿಸಿತು, ಮುಖ್ಯ ವಕ್ತಾರ ಸೌರವ್ ದಾಸ್ (27) ಮತ್ತು ವಕ್ತಾರ ಅಶುತೋಷ್ ರಂಕಾ (30) ಅವರನ್ನು ಸಹ-ಸಂಚಾಲಕರನ್ನಾಗಿ ನೇಮಿಸಲಾಯಿತು. ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಿಜೆಪಿ ನಾಯಕರು, ಸಂಘಟನೆಯು ತಳಮಟ್ಟದ ಚಳುವಳಿಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಮತ್ತು ಶೀಘ್ರದಲ್ಲೇ ರಾಜಕೀಯ ಪಕ್ಷವಾಗಿ ರೂಪಾಂತರಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.ಅಧಿಕೃತ ಹೇಳಿಕೆಯಲ್ಲಿ, ಸಿಜೆಪಿ ತನ್ನ ಚೊಚ್ಚಲ ರಾಷ್ಟ್ರೀಯ ನಾಯಕತ್ವ ತಂಡವನ್ನು ಅನುಮೋದಿಸಿದ್ದು, ಮುಂದಿನ ಆರು ತಿಂಗಳು ದೇಶಾದ್ಯಂತ ಲೋಕಸಭೆ ಮತ್ತು ನಗರ ಮಟ್ಟದ ಘಟಕಗಳೊಂದಿಗೆ ರಾಜ್ಯ ಸಮನ್ವಯ ಸಮಿತಿಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಅಧಿಕೃತವಾಗಿ ಘೋಷಿಸಲ್ಪಟ್ಟವರನ್ನು ಹೊರತುಪಡಿಸಿ ಬೇರೆ ಯಾವುದೇ ಪದಾಧಿಕಾರಿಗಳನ್ನು ನೇಮಿಸಲಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;&lt;strong&gt;ಪ್ರತಿಕ್ರಿಯೆ ನೀಡದ ಸಿಜೆಪಿ!&lt;/strong&gt;&lt;/h3&gt;&lt;p&gt;ಹೊಸದಾಗಿ ರಚನೆಯಾದ ನಾಯಕತ್ವದಲ್ಲಿ ರಾಷ್ಟ್ರೀಯ ಸಂಸ್ಥೆಯ ಉಸ್ತುವಾರಿಯಾಗಿ ಅಜಿಂಕ್ಯ ಶಿಂಧೆ, ಸಂಘಟನಾ ಸಹ-ಪ್ರಭಾರಿಯಾಗಿ ದೀಪಕ್ ಬಲಿಯಾನ್, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಫ್ರೀನ್ ನವಾಜ್, ಮಾಧ್ಯಮ ನಾಯಕಿಯಾಗಿ ವಿಜಯ್ ರೆಡ್ಡಿ ಮಲ್ಲಂಗಿ, ಕಾನೂನು ವ್ಯವಹಾರಗಳ ನಾಯಕಿಯಾಗಿ ರತ್ನ ಸಿಂಗ್, ಸಂಶೋಧನೆ ಮತ್ತು ನೀತಿ ನಾಯಕಿಯಾಗಿ ವೈಷ್ಣವಿ ಗೌರ್, ತಂತ್ರಜ್ಞಾನ ನಾಯಕಿಯಾಗಿ ರೋಹನ್ ದೇಶಪಾಂಡೆ ಮತ್ತು ಹಣಕಾಸು ನಾಯಕಿಯಾಗಿ ಯೋಗೇಶ್ ಇಂಗಳೆ ಇದ್ದಾರೆ. ಸಂಸ್ಥೆಯು ತನ್ನ ಉತ್ತರ, ದಕ್ಷಿಣ, ಪೂರ್ವ, ಈಶಾನ್ಯ ಮತ್ತು ಪಶ್ಚಿಮ ವಲಯಗಳಲ್ಲಿ ನಾಯಕತ್ವದ ಜವಾಬ್ದಾರಿಗಳನ್ನು ಸಹ ವಹಿಸಿದೆ. ಪ್ರಕಟಣೆಯ ಸಮಯದಲ್ಲಿ ಬ್ರಹ್ಮಭಟ್ ಅವರ ಪಕ್ಷಪಾತದ ಆರೋಪಗಳಿಗೆ ಸಿಜೆಪಿ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/india-news/rebellion-against-party-ahmedabad-youth-hunger-strike-in-deep-hometown-bmk/articleshow-cc3zhvk"/>
        </item>
        <item>
            <title><![CDATA[ಎಲ್ಲಿಂದ ಎಲ್ಲಿಗೆ ಲಿಂಕ್? 'ಕೇಸರಿ ಬಣ್ಣ'ದ ಉಡುಪು ಧರಿಸಿದ್ದಕ್ಕೆ ವಿಚಿತ್ರ ಪ್ರಶ್ನೆ, 'ಕಣ್ಸನ್ನೆ' ಬೆಡಗಿಯ ಸಖತ್ ರಿಪ್ಲೈ ವೈರಲ್!]]></title>
            <link>https://kannada.asianetnews.com/entertainment/in-a-promotional-event-in-kerala-as-chief-guest-priya-varrier-faced-a-question-about-wearing-a-saffron-colored-dress/articleshow-2lu7g2i</link>
            <guid isPermaLink="true">https://kannada.asianetnews.com/entertainment/in-a-promotional-event-in-kerala-as-chief-guest-priya-varrier-faced-a-question-about-wearing-a-saffron-colored-dress/articleshow-2lu7g2i</guid>
            <pubDate>Fri, 07 Aug 2026 21:26:28 +0530</pubDate>
            <description><![CDATA[&lt;p&gt;'ಪ್ರಿಯಾ ಅವರೇ, ನೀವು ಇಂದು ಕೇಸರಿ ಬಣ್ಣದ ಉಡುಪನ್ನೇ ಏಕೆ ಧರಿಸಿದ್ದೀರಿ? ಇದಕ್ಕೆ ಯಾವುದಾದರೂ ವಿಶೇಷ ಕಾರಣವಿದೆಯೇ? ಕೇರಳದಲ್ಲಿ ಸದ್ಯ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದೆ, ಅದಕ್ಕೇನಾ?' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ ಮರೆಯಲಾಗದ ಉತ್ತರ ಕೊಟ್ಟಿದ್ದಾರೆ, ನೋಡಿ..!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzeeg0pp7cy4jkch09sbfrpw,imgname-priya-prakash-varrier-1786117620438.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Priya Varrier Faced starnge question for wearing a saffron dress and she gave witty and intelligent response. ಕೇಸರಿ ಬಣ್ಣದ ಬಟ್ಟೆ ತೊಟ್ಟಿದ್ದಕ್ಕೆ ಕೇಳಿದ ವಿಚಿತ್ರ ಪ್ರಶ್ನೆ, ಸಖತ್ ಬ್ರಲಿಯಂಟ್ ಉತ್ತರ ಕೊಟ್ಟ 'ಕಣ್ಸನ್ನೆ' ನಟಿ ಪ್ರಿಯಾ ವಾರಿಯರ್!&lt;/strong&gt;&lt;/p&gt;&lt;p&gt;ಒಂದು ಕಾಲದಲ್ಲಿ ಕಣ್ಣು ಹೊಡೆದು ಇಡೀ ದೇಶದ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಕೇರಳದ ಕುಟ್ಟಿ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಮತ್ತೆ ಸುದ್ದಿಯಲ್ಲಿದ್ದಾರೆ! ಈ ಬಾರಿ ಅವರು ಕಣ್ಣು ಹೊಡೆದಿದ್ದಕ್ಕೆ ಸುದ್ದಿಯಾಗಿಲ್ಲ, ಬದಲಾಗಿ ಅವರು ಧರಿಸಿದ್ದ 'ಕೇಸರಿ' ಬಣ್ಣದ ಉಡುಪಿನ ಬಗ್ಗೆ ಎದ್ದಿರುವ ಕುತೂಹಲಕಾರಿ ಚರ್ಚೆಗೆ ಸಖತ್ ಸುದ್ದಿಯಾಗುತ್ತಿದ್ದಾರೆ.&lt;/p&gt;&lt;p&gt;ಏನಿದು ಘಟನೆ?&lt;/p&gt;&lt;p&gt;ಇತ್ತೀಚೆಗೆ ಕೇರಳದಲ್ಲಿ ನಡೆದ 'ಕ್ಯೂಟಿಕ್ಯೂರಾ' ಟಾಲ್ಕಂ ಪೌಡರ್&zwnj;ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪ್ರಿಯಾ ವಾರಿಯರ್ ಮುಖ್ಯ ಅತಿಥಿಯಾಗಿ ಮಿಂಚುತ್ತಿದ್ದರು. ಅಂದು ಅವರು ಧರಿಸಿದ್ದು ಅಪ್ಪಟ ಕೇಸರಿ (Orange) ಬಣ್ಣದ ಸುಂದರವಾದ ಉಡುಪು. ನಟಿ ವೇದಿಕೆಯ ಮೇಲೆ ಬರುತ್ತಿದ್ದಂತೆ ಕ್ಯಾಮೆರಾಗಳು ಫ್ಲ್ಯಾಶ್ ಆಗತೊಡಗಿದವು. ಆದರೆ, ಅಲ್ಲಿ ನೆರೆದಿದ್ದ ಪತ್ರಕರ್ತರೊಬ್ಬರಿಗೆ ನಟಿಯ ಅಂದಕ್ಕಿಂತ ಹೆಚ್ಚಾಗಿ ಆಕೆಯ ಬಣ್ಣದ ಆಯ್ಕೆಯ ಮೇಲೆ ಕಣ್ಣು ಬಿದ್ದಿತ್ತು!&lt;/p&gt;&lt;h2&gt;ಪತ್ರಕರ್ತನ ಆ ಒಂದು ಪ್ರಶ್ನೆ...&lt;/h2&gt;&lt;p&gt;ಮೈಕ್ ಹಿಡಿದ ಪತ್ರಕರ್ತರೊಬ್ಬರು ನೇರವಾಗಿ ಪ್ರಶ್ನೆ ಎಸೆದರು: &quot;ಪ್ರಿಯಾ ಅವರೇ, ನೀವು ಇಂದು ಕೇಸರಿ ಬಣ್ಣದ ಉಡುಪನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ? ಇದಕ್ಕೆ ಯಾವುದಾದರೂ ವಿಶೇಷ ಕಾರಣವಿದೆಯೇ? ಕೇರಳದಲ್ಲಿ ಸದ್ಯ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' (Orange Alert) ಘೋಷಿಸಿರುವುದರಿಂದಲೇ ನೀವು ಈ ಬಣ್ಣವನ್ನು ಸೆಲೆಕ್ಟ್ ಮಾಡಿದ್ರಾ?&quot; ಎಂದು ಕೇಳಿದರು. ಭಾರತದಲ್ಲಿ ಬಣ್ಣಗಳಿಗೂ ರಾಜಕೀಯ ಅಥವಾ ಸೈದ್ಧಾಂತಿಕ ಬಣ್ಣ ಹಚ್ಚುವ ಕಾಲ ಇದಾಗಿರುವುದರಿಂದ, ಈ ಪ್ರಶ್ನೆ ಕೇಳಿದಾಗ ಅಲ್ಲಿ ಕೆಲ ಕಾಲ ಮೌನ ಆವರಿಸಿತು. ಎಲ್ಲರೂ ಪ್ರಿಯಾ ಏನು ಹೇಳಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದರು.&lt;/p&gt;&lt;p&gt;ಪ್ರಿಯಾ ಕೊಟ್ಟ 'ಸ್ಮಾರ್ಟ್' ಉತ್ತರ!&lt;/p&gt;&lt;p&gt;ಆದರೆ, ನಮ್ಮ 'ವಿಂಕ್ ಗರ್ಲ್' ಸ್ವಲ್ಪವೂ ಗಾಬರಿಯಾಗಲಿಲ್ಲ ಅಥವಾ ಕೋಪಗೊಳ್ಳಲಿಲ್ಲ. ಮುಖದ ಮೇಲೊಂದು ಮುಗ್ಧ ನಗು ತಂದುಕೊಂಡು, &quot;ನನ್ನ ಪ್ರಿಯ ಸಹೋದರ, ಇದಕ್ಕೆ ಯಾವುದೇ ಗುಪ್ತ ಅಜೆಂಡಾ ಇಲ್ಲ&quot; ಎಂದು ಉತ್ತರಿಸಿದರು. ಮುಂದುವರಿದು, &quot;ನೋಡಿ, ಇದು ಕ್ಯೂಟಿಕ್ಯೂರಾ ಬ್ರ್ಯಾಂಡ್&zwnj;ನ ಪ್ರಚಾರ. ಈ ಕಂಪನಿಯ ಲೋಗೋ ಮತ್ತು ಥೀಮ್ ಬಣ್ಣ ಕೇಸರಿಯಲ್ಲಿದೆ. ಹಾಗಾಗಿ, ಬ್ರ್ಯಾಂಡ್ ಪ್ರಚಾರಕ್ಕೆ ಬಂದಾಗ ಅದಕ್ಕೆ ಮ್ಯಾಚ್ ಆಗಲಿ ಎಂದು ಈ ಉಡುಪು ಧರಿಸಿದ್ದೇನೆ. ನಾನೊಬ್ಬ ಕಲಾವಿದೆ, ನನಗೆ ಎಲ್ಲ ಬಣ್ಣಗಳೂ ಪ್ರಿಯವೇ. ನಾನು ಎಲ್ಲ ಬಣ್ಣದ ಬಟ್ಟೆಗಳನ್ನೂ ಧರಿಸುತ್ತೇನೆ&quot; ಎಂದು ಬಹಳ ಡಿಪ್ಲೊಮ್ಯಾಟಿಕ್ ಆಗಿ ವಿಷಯಕ್ಕೆ ಮಂಗಳ ಹಾಡಿದರು.&lt;/p&gt;&lt;h3&gt;ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!&lt;/h3&gt;&lt;p&gt;ಪ್ರಿಯಾ ವಾರಿಯರ್ ನೀಡಿದ ಈ ಕೂಲ್ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿವಾದ ಸೃಷ್ಟಿಯಾಗಬಹುದಾದ ಪ್ರಶ್ನೆಯನ್ನು ಎಷ್ಟು ಸಲೀಸಾಗಿ ಮತ್ತು ಗಾಂಭೀರ್ಯದಿಂದ ಹ್ಯಾಂಡಲ್ ಮಾಡಿದ್ದಕ್ಕೆ ನೆಟ್ಟಿಗರು 'ವಾಹ್' ಎನ್ನುತ್ತಿದ್ದಾರೆ. ಬಟ್ಟೆಯ ಬಣ್ಣಕ್ಕೂ ವಿಶೇಷ ಅರ್ಥ ಹುಡುಕುವವರಿಗೆ ಪ್ರಿಯಾ ತಮ್ಮ ಮಾತಿನ ಮೂಲಕವೇ ನಯವಾಗಿ ಟಾಂಗ್ ಕೊಟ್ಟಿದ್ದಾರೆ.&lt;/p&gt;&lt;p&gt;ಅಭಿಮಾನಿಗಳಂತೂ, &quot;ನಟಿಯರು ಯಾವ ಬಣ್ಣದ ಬಟ್ಟೆ ಧರಿಸಬೇಕು ಎಂಬುದು ಅವರ ವೈಯಕ್ತಿಕ ವಿಚಾರ, ಅದಕ್ಕೂ ಕೇರಳದ ಹವಾಮಾನಕ್ಕೂ ಅಥವಾ ರಾಜಕೀಯಕ್ಕೂ ಲಿಂಕ್ ಕಲ್ಪಿಸುವುದು ಸರಿಯಲ್ಲ&quot; ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಪ್ರಿಯಾ ವಾರಿಯರ್ ಈಗ ಕೇವಲ ಅಂದದಿಂದ ಮಾತ್ರವಲ್ಲ, ತಮ್ಮ ಸಮಯಪ್ರಜ್ಞೆ ಮತ್ತು ಬುದ್ಧಿವಂತಿಕೆಯಿಂದಲೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ! ಇದು ಬರೀ ಕೇಸರಿ ಬಣ್ಣದ ಕಥೆಯಲ್ಲ, ವಿವಾದವನ್ನು ನಗುವಿನಲ್ಲೇ ಗೆಲ್ಲುವ ಕಲೆ!&lt;/p&gt;]]></content:encoded>
            <category>news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/in-a-promotional-event-in-kerala-as-chief-guest-priya-varrier-faced-a-question-about-wearing-a-saffron-colored-dress/articleshow-2lu7g2i"/>
        </item>
        <item>
            <title><![CDATA[ಕಡಿಮೆ ಹೂಡಿಕೆ, ಲಕ್ಷಾಂತರ ಲಾಭ! ರೈತರನ್ನು 'ರಾಜ'ನನ್ನಾಗಿ ಮಾಡುವ 5 ಬೆಳೆಗಳು ಇಲ್ಲಿವೆ ನೋಡಿ..!]]></title>
            <link>https://kannada.asianetnews.com/gallery/business/low-investment-high-profit-crops-farmers-friendly-and-coriander-farming-profit-gkn-olrbpi1</link>
            <guid isPermaLink="true">https://kannada.asianetnews.com/gallery/business/low-investment-high-profit-crops-farmers-friendly-and-coriander-farming-profit-gkn-olrbpi1</guid>
            <pubDate>Fri, 07 Aug 2026 21:08:07 +0530</pubDate>
            <description><![CDATA[&lt;p&gt;ಸಾಂಪ್ರದಾಯಿಕ ಕೃಷಿಯಲ್ಲಿನ ಸವಾಲುಗಳನ್ನು ಮೆಟ್ಟಿನಿಲ್ಲಲು, ಕಡಿಮೆ ಅವಧಿ ಮತ್ತು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ತರುವ 5 ಪ್ರಮುಖ ಬೆಳೆಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಕೊತ್ತಂಬರಿ, ಮೆಂತ್ಯ, ತುಳಸಿ, ಚೆಂಡು ಹೂವು ಮತ್ತು ಮೆಣಸಿನಕಾಯಿಯಂತಹ ಬೆಳೆಗಳನ್ನು ಬೆಳೆದು ಅಧಿಕ ಲಾಭ ಗಳಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzdka61m8hsw0m7tm0vs43s4,imgname-farmer-1786089117748.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಂಪ್ರದಾಯಿಕ ಕೃಷಿಯಲ್ಲಿನ ಸವಾಲುಗಳನ್ನು ಮೆಟ್ಟಿನಿಲ್ಲಲು, ಕಡಿಮೆ ಅವಧಿ ಮತ್ತು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ತರುವ 5 ಪ್ರಮುಖ ಬೆಳೆಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಕೊತ್ತಂಬರಿ, ಮೆಂತ್ಯ, ತುಳಸಿ, ಚೆಂಡು ಹೂವು ಮತ್ತು ಮೆಣಸಿನಕಾಯಿಯಂತಹ ಬೆಳೆಗಳನ್ನು ಬೆಳೆದು ಅಧಿಕ ಲಾಭ ಗಳಿಸಬಹುದು.&lt;/p&gt;&lt;img&gt;&lt;p&gt;ಇಂದಿನ ಕಾಲದಲ್ಲಿ ಕೃಷಿ ಮಾಡುವುದು ಒಂದು ಸವಾಲಿನ ಕೆಲಸ. ಹೆಚ್ಚುತ್ತಿರುವ ಗೊಬ್ಬರ, ಬಿತ್ತನೆ ಬೀಜದ ಬೆಲೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಸಾಂಪ್ರದಾಯಿಕ ಬೆಳೆಗಳನ್ನು ನಂಬಿ ಕುಳಿತ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಜಾಣ್ಮೆಯ ಕೃಷಿ ಮಾಡುವ ರೈತರಿಗೆ ಎಂದಿಗೂ ಸೋಲಿಲ್ಲ. ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಬೆಳೆದು ಕೈತುಂಬಾ ಹಣ ತರುವ ಕೆಲವು ಬೆಳೆಗಳ ಬಗ್ಗೆ ಕೃಷಿ ತಜ್ಞರು ಮಾಹಿತಿ ನೀಡಿದ್ದಾರೆ. ಅಂತಹ ಟಾಪ್ 5 ಬೆಳೆಗಳು ಯಾವುವು? ಅವುಗಳನ್ನು ಎಲ್ಲಿ ಮಾರಾಟ ಮಾಡಬಹುದು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಪ್ರತಿ ಮನೆಯ ಅಡುಗೆಮನೆಯಲ್ಲಿ ಕೊತ್ತಂಬರಿ ಸೊಪ್ಪಿಗೆ ಭಾರೀ ಬೇಡಿಕೆಯಿದೆ. ಇದನ್ನು ಬೆಳೆಯಲು ಹೆಚ್ಚಿನ ಜಾಗ ಬೇಕಿಲ್ಲ, ಅಂತರ ಬೆಳೆಯಾಗಿಯೂ ಬೆಳೆಯಬಹುದು.&lt;/p&gt;&lt;ul&gt; &lt;li&gt;ಅವಧಿ: 30 ರಿಂದ 45 ದಿನಗಳು.&lt;/li&gt; &lt;li&gt;ಲಾಭ: ಇದನ್ನು ಹೋಟೆಲ್&zwnj;ಗಳು, ರೆಸ್ಟೋರೆಂಟ್&zwnj;ಗಳು ಮತ್ತು ಸ್ಥಳೀಯ ಮಾರುಕಟ್ಟೆಗಳಿಗೆ ನೇರವಾಗಿ ಪೂರೈಸಿ ತ್ವರಿತವಾಗಿ ಹಣ ಗಳಿಸಬಹುದು.&lt;/li&gt;&lt;/ul&gt;&lt;img&gt;&lt;p&gt;ಆರೋಗ್ಯದ ದೃಷ್ಟಿಯಿಂದ ಮೆಂತ್ಯ ಸೊಪ್ಪಿಗೆ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆಯಿದೆ.&lt;/p&gt;&lt;ul&gt; &lt;li&gt;&lt;strong&gt;ವಿಶೇಷತೆ:&lt;/strong&gt; ಇದಕ್ಕೆ ನೀರು ತುಂಬಾ ಕಡಿಮೆ ಬೇಕು ಮತ್ತು ಕೀಟಗಳ ಬಾಧೆಯೂ ಕಡಿಮೆ.&lt;/li&gt; &lt;li&gt;&lt;strong&gt;ಮಾರುಕಟ್ಟೆ:&lt;/strong&gt; ಸಾವಯವ ಅಂಗಡಿಗಳು ಮತ್ತು ಇ-ಕಾಮರ್ಸ್ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಇದಕ್ಕೆ ಉತ್ತಮ ಬೆಲೆಯಿದೆ. ನೈಸರ್ಗಿಕ ಕೃಷಿ ಮಾಡುವವರಿಗೆ ಇದು ಹೇಳಿ ಮಾಡಿಸಿದ ಬೆಳೆ.&lt;/li&gt;&lt;/ul&gt;&lt;img&gt;&lt;p&gt;ಗಿಡಮೂಲಿಕೆ ಮತ್ತು ಆಯುರ್ವೇದ ಉತ್ಪನ್ನಗಳ ತಯಾರಿಕೆಯಲ್ಲಿ ತುಳಸಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.&lt;/p&gt;&lt;ul&gt; &lt;li&gt;ನಿರ್ವಹಣೆ: ನೆಟ್ಟ 3-4 ತಿಂಗಳ ನಂತರ ಇಳುವರಿ ಆರಂಭವಾಗುತ್ತದೆ. ಇದಕ್ಕೆ ನಿರ್ವಹಣಾ ವೆಚ್ಚ ಅತ್ಯಂತ ಕಡಿಮೆ.&lt;/li&gt; &lt;li&gt;ಒಪ್ಪಂದ ಕೃಷಿ: ಅನೇಕ ಆಯುರ್ವೇದ ಕಂಪನಿಗಳು ರೈತರೊಂದಿಗೆ ನೇರ ಒಪ್ಪಂದ ಮಾಡಿಕೊಂಡು ತುಳಸಿಯನ್ನು ಖರೀದಿಸುತ್ತವೆ, ಇದರಿಂದ ರೈತರಿಗೆ ಮಾರಾಟದ ಚಿಂತೆ ಇರುವುದಿಲ್ಲ&lt;/li&gt;&lt;/ul&gt;&lt;img&gt;&lt;p&gt;ದೇವಸ್ಥಾನಗಳು, ಮದುವೆ ಹಾಗೂ ಹಬ್ಬ ಹರಿದಿನಗಳಲ್ಲಿ ಚೆಂಡು ಹೂವಿಗೆ ಭಾರಿ ಡಿಮ್ಯಾಂಡ್ ಇರುತ್ತದೆ.&lt;/p&gt;&lt;ul&gt; &lt;li&gt;ಲಾಭ: ಪ್ರತಿ ವಾರ ಹೂವುಗಳನ್ನು ಕೀಳುವ ಮೂಲಕ ನಿರಂತರ ಆದಾಯ ಪಡೆಯಬಹುದು.&lt;/li&gt; &lt;li&gt;ಸೀಸನ್: ದಸರಾ, ದೀಪಾವಳಿ ಮತ್ತು ಸಂಕ್ರಾಂತಿ ಸಮಯದಲ್ಲಿ ಬೆಲೆ ಗಗನಕ್ಕೇರುತ್ತದೆ. ವಿವಾಹ ಯೋಜಕರು ಮತ್ತು ಇವೆಂಟ್ ಮ್ಯಾನೇಜ್&zwnj;ಮೆಂಟ್ ಕಂಪನಿಗಳೊಂದಿಗೆ ಸಂಪರ್ಕ ಹೊಂದಿದ್ದರೆ ಹೆಚ್ಚಿನ ಲಾಭ ಗ್ಯಾರಂಟಿ.&lt;/li&gt;&lt;/ul&gt;&lt;img&gt;&lt;p&gt;ಮೆಣಸಿನಕಾಯಿ ಒಂದು ಪ್ರಮುಖ ನಗದು ಬೆಳೆಯಾಗಿದ್ದು, ದೀರ್ಘಾವಧಿಯ ಲಾಭ ನೀಡುತ್ತದೆ.&lt;/p&gt;&lt;ul&gt; &lt;li&gt;ರಫ್ತು: ಭಾರತೀಯ ಮೆಣಸಿನಕಾಯಿಗೆ ವಿದೇಶಿ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆಯಿದೆ.&lt;/li&gt; &lt;li&gt;ರೂಪ: ಹಸಿ ಮೆಣಸಿನಕಾಯಿ ಅಥವಾ ಒಣ ಮೆಣಸಿನಕಾಯಿಯಾಗಿ ಎರಡೂ ರೂಪದಲ್ಲಿ ಮಾರಾಟ ಮಾಡಬಹುದು. ಮಸಾಲೆ ಕಂಪನಿಗಳು ರೈತರಿಂದ ಇದನ್ನು ನೇರವಾಗಿ ಖರೀದಿಸುತ್ತವೆ.&lt;/li&gt;&lt;/ul&gt;&lt;p&gt;ರೋಗಗಳು ಬರುವ ಮೊದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಔಷಧಗಳ ಮೇಲಿನ ಖರ್ಚು ಉಳಿಸಬಹುದು. ಬೆಳೆ ಬೆಳೆಯುವ ಮೊದಲೇ ಮಾರುಕಟ್ಟೆಯಲ್ಲಿನ ಬೇಡಿಕೆ ತಿಳಿಯಿರಿ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಪ್ರಯತ್ನಿಸಿ.&lt;/p&gt;]]></content:encoded>
            <category>news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/business/low-investment-high-profit-crops-farmers-friendly-and-coriander-farming-profit-gkn-olrbpi1"/>
        </item>
        <item>
            <title><![CDATA[‘ನೂಲಿನಲ್ಲಿ ನಮ್ಮ ಇತಿಹಾಸ... ಜವಳಿಯಲ್ಲಿ ನಮ್ಮ ಭವಿಷ್ಯ’: ಕೈಮಗ್ಗಕ್ಕೆ ಸರ್ಕಾರದ ಬಿಗ್ ಪ್ಲ್ಯಾನ್]]></title>
            <link>https://kannada.asianetnews.com/karnataka-districts/karnataka-handloom-sector-to-get-special-grant-under-new-textile-policy-gvd/articleshow-e22sm0q</link>
            <guid isPermaLink="true">https://kannada.asianetnews.com/karnataka-districts/karnataka-handloom-sector-to-get-special-grant-under-new-textile-policy-gvd/articleshow-e22sm0q</guid>
            <pubDate>Fri, 07 Aug 2026 20:33:04 +0530</pubDate>
            <description><![CDATA[&lt;p&gt;Karnataka Handloom: ರಾಜ್ಯದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಜೀವನೋಪಾಯವನ್ನು ಬಲಪಡಿಸುವ ಜೊತೆಗೆ ಕರ್ನಾಟಕದ ಕೈಮಗ್ಗ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzebyyysxf8b3d9mrhvewq6p,imgname-m--1786114964423.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.07): &lt;/strong&gt;ರಾಜ್ಯದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಜೀವನೋಪಾಯವನ್ನು ಬಲಪಡಿಸುವ ಜೊತೆಗೆ ಕರ್ನಾಟಕದ ಕೈಮಗ್ಗ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಗುರುತನ್ನು ಸೃಷ್ಟಿಸುವ ಉದ್ದೇಶದಿಂದ, ರಾಜ್ಯ ಸರ್ಕಾರದ ಮುಂಬರುವ ಕರ್ನಾಟಕ ಜವಳಿ ಮತ್ತು ಉಡುಪು ನೀತಿಯಲ್ಲಿ ಕೈಮಗ್ಗ ಕ್ಷೇತ್ರದ ಪ್ರಚಾರಕ್ಕೆ ವಿಶೇಷ ಅನುದಾನ ಮೀಸಲಿಡಲಾಗಿದೆ ಎಂದು ಎಂ ಎಸ್ ಎಂ ಇ, ಗಣಿ ಮತ್ತು ಜವಳಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದರು.&lt;/p&gt;&lt;p&gt;ಇಂದು 12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ರಾಜ್ಯದ ಕೈಮಗ್ಗ ಪರಂಪರೆ ಕೇವಲ ಸಾಂಸ್ಕೃತಿಕ ಪರಂಪರೆಯಲ್ಲ; ಸಾವಿರಾರು ನೇಕಾರರ ಜೀವನಾಧಾರವೂ ಹೌದು. ಈ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ ಆಧುನಿಕ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಳಿಸಿ, ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಅವರು ಹೇಳಿದರು.&lt;/p&gt;&lt;p&gt;ವಿಶೇಷ ಅನುದಾನದ ಮೂಲಕ ಕೈಮಗ್ಗ ಕ್ಷೇತ್ರದಲ್ಲಿ ವಿನ್ಯಾಸ ಅಭಿವೃದ್ಧಿ, ಉತ್ಪನ್ನ ಮೌಲ್ಯವರ್ಧನೆ, ಬ್ರ್ಯಾಂಡಿಂಗ್, ಡಿಜಿಟಲ್ ಮಾರುಕಟ್ಟೆ, ಇ-ಕಾಮರ್ಸ್, ಮಾರುಕಟ್ಟೆ ವಿಸ್ತರಣೆ ಹಾಗೂ ನೇಕಾರರ ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ರೋಹಿಣಿ ಸಿಂಧೂರಿ ಉದ್ಘಾಟಿಸಿದರು.&lt;/p&gt;&lt;p&gt;ಜವಳಿ ಅಭಿವೃದ್ಧಿ ಆಯುಕ್ತರಾದ ಎ.ಬಿ. ಬಸವರಾಜು ಮಾತನಾಡಿ, ಕರ್ನಾಟಕದ ಕೈಮಗ್ಗ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಸ್ಪರ್ಧಾತ್ಮಕವಾಗಿ ಪರಿಚಯಿಸುವ ಗುರಿಯೊಂದಿಗೆ ಹೊಸ ಜವಳಿ ನೀತಿ ರೂಪಿಸಲಾಗುತ್ತಿದೆ ಎಂದರು. &quot;ಕರ್ನಾಟಕದ ಕೈಮಗ್ಗ ಕ್ಷೇತ್ರವು ನಮ್ಮ ಸಂಸ್ಕೃತಿ ಮತ್ತು ಆರ್ಥಿಕತೆಯ ಅಮೂಲ್ಯ ಆಸ್ತಿ. ಹೊಸ ಜವಳಿ ನೀತಿ ಹಾಗೂ ಸಾಮಾಜಿಕ ಜಾಲತಾಣ ಅಭಿಯಾನದ ಮೂಲಕ ರಾಜ್ಯದ ಕೈಮಗ್ಗ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ,&quot; ಎಂದು ಹೇಳಿದರು.&lt;/p&gt;&lt;p&gt;ಅಲ್ಲದೆ, &quot;ನಮ್ಮ ನೇಕಾರರ ಕೌಶಲ್ಯಕ್ಕೆ ಜಾಗತಿಕ ಮನ್ನಣೆ ದೊರಕುವಂತೆ ವಿನ್ಯಾಸ, ತಂತ್ರಜ್ಞಾನ, ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ಸಂಪರ್ಕಕ್ಕೆ ಇಲಾಖೆ ವಿಶೇಷ ಆದ್ಯತೆ ನೀಡುತ್ತಿದೆ,&quot; ಎಂದು ತಿಳಿಸಿದರು. ಮಾಜಿ ಸಚಿವೆ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ, &quot;ಕೈಮಗ್ಗವು ಕೇವಲ ಒಂದು ವೃತ್ತಿಯಲ್ಲ; ಅದು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ನೇಕಾರರ ಕೈಚಳಕವನ್ನು ಗೌರವಿಸುವುದು ನಮ್ಮ ಪರಂಪರೆಯನ್ನು ಉಳಿಸುವುದಕ್ಕೆ ಸಮಾನ,&quot; ಎಂದು ಹೇಳಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳದ ಅಧ್ಯಕ್ಷ ಬಿ.ಜೆ. ಗಣೇಶ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ಸಾರ್, ಕಾವೇರಿ ಹ್ಯಾಂಡ್&zwnj;ಲೂಮ್ಸ್&zwnj;ನ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ, ಜವಳಿ ಇಲಾಖೆಯ ಅಪರ ನಿರ್ದೇಶಕರಾದ ಸಿಎಸ್&zwnj; ಯೋಗೀಶ್&zwnj;, ಶ್ರೀಧರ್&zwnj; ನಾಯರ್&zwnj; ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು, ನೇಕಾರರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ಉಪಸ್ಥಿತರಿದ್ದರು.&lt;/p&gt;&lt;h2&gt;&lt;strong&gt;ವಿಶೇಷ ಕೈಮಗ್ಗ ಪ್ಯಾಕೇಜ್&zwnj;ನ ಪ್ರಮುಖ ಅಂಶಗಳು&lt;/strong&gt;&lt;/h2&gt;&lt;p&gt;- ಕೈಮಗ್ಗ ಕ್ಷೇತ್ರಕ್ಕೆ ವಿಶೇಷ ಅನುದಾನ&lt;/p&gt;&lt;p&gt;- ನೇಕಾರರ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಒತ್ತು&lt;/p&gt;&lt;p&gt;- ವಿನ್ಯಾಸ ಅಭಿವೃದ್ಧಿ ಮತ್ತು ಉತ್ಪನ್ನ ಮೌಲ್ಯವರ್ಧನೆ&lt;/p&gt;&lt;p&gt;- ಡಿಜಿಟಲ್ ಪ್ರಚಾರ ಮತ್ತು ಇ-ಕಾಮರ್ಸ್ ಉತ್ತೇಜನ&lt;/p&gt;&lt;p&gt;- ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕರ್ನಾಟಕ ಕೈಮಗ್ಗಕ್ಕೆ ಹೊಸ ಗುರುತು&lt;/p&gt;&lt;p&gt;- &quot;ನೂಲಿನಲ್ಲಿ ನಮ್ಮ ಇತಿಹಾಸ... ಜವಳಿಯಲ್ಲಿ ನಮ್ಮ ಭವಿಷ್ಯ&quot; ರಾಜ್ಯವ್ಯಾಪಿ ಸಾಮಾಜಿಕ ಜಾಲತಾಣ ಅಭಿಯಾನ ಆರಂಭ&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/karnataka-handloom-sector-to-get-special-grant-under-new-textile-policy-gvd/articleshow-e22sm0q"/>
        </item>
        <item>
            <title><![CDATA[ಬೆಂಗಳೂರು: ಭಾನುವಾರ ಬೈಯಪ್ಪನಹಳ್ಳಿ - ಎಂ.ಜಿ. ರಸ್ತೆ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ!]]></title>
            <link>https://kannada.asianetnews.com/bengaluru-urban/bengaluru-namma-metro-purple-line-service-suspended-baiyappanahalli-mg-road-august-9-sunday/articleshow-fplr11g</link>
            <guid isPermaLink="true">https://kannada.asianetnews.com/bengaluru-urban/bengaluru-namma-metro-purple-line-service-suspended-baiyappanahalli-mg-road-august-9-sunday/articleshow-fplr11g</guid>
            <pubDate>Fri, 07 Aug 2026 20:13:42 +0530</pubDate>
            <description><![CDATA[&lt;p&gt;ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯ ಕಾರಣದಿಂದ, ಆಗಸ್ಟ್ 9ರ ಭಾನುವಾರ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ಇತರೆ ಮಾರ್ಗಗಳಲ್ಲಿ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ. ಬೆಳಿಗ್ಗೆ 9 ಗಂಟೆಯ ನಂತರ ಸಂಪೂರ್ಣ ನೇರಳೆ ಮಾರ್ಗದಲ್ಲಿ ಸಂಚಾರ ಪುನರಾರಂಭಗೊಳ್ಳಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jw0nrs9yemb0pvhnqveh2ev4,imgname-bengaluru-metro-1748074521918.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.07): ಬೆಂ&lt;/strong&gt;ಗಳೂರಿನ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ (Purple Line) ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ, ಆಗಸ್ಟ್ 9ರ ಭಾನುವಾರ ಬೆಳಿಗ್ಗೆ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬಿಎಂಆರ್&zwnj;ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹೊರಡಿಸಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ, ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ (Swami Vivekananda Road) ಮತ್ತು ಇಂದಿರಾನಗರ (Indiranagar) ಮೆಟ್ರೋ ನಿಲ್ದಾಣಗಳ ನಡುವೆ ತುರ್ತು ನಿರ್ವಹಣಾ ಕಾಮಗಾರಿಯನ್ನು (Maintenance Work) ಆಯೋಜಿಸಲಾಗಿದೆ. ಈ ಕಾರಣಕ್ಕಾಗಿ ಆಗಸ್ಟ್ 9ರ ಭಾನುವಾರ ಬೆಳಿಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ (ಎರಡು ಗಂಟೆಗಳ ಕಾಲ) &lt;strong&gt;ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ&lt;/strong&gt; ನಡುವೆ ಮೆಟ್ರೋ ಸೇವೆ ಲಭ್ಯವಿರುವುದಿಲ್ಲ.&lt;/p&gt;&lt;h2&gt;&lt;strong&gt;ಬೆಳಿಗ್ಗೆ 7:00 ರಿಂದ 9:00 ರವರೆಗೆ ಯಾವ ಮಾರ್ಗಗಳಲ್ಲಿ ಮೆಟ್ರೋ ಸಿಗಲಿದೆ?&lt;/strong&gt;&lt;/h2&gt;&lt;p&gt;ಸೇವೆ ಸ್ಥಗಿತಗೊಳ್ಳುವ ಎರಡು ಗಂಟೆಗಳ ಅವಧಿಯಲ್ಲಿ ನಗರದ ಇತರೆ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಎಂದಿನಂತೆ ನಿಯಮಿತ ವೇಳಾಪಟ್ಟಿಯಂತೆ (Regular Timetable) ಸಂಚರಿಸಲಿವೆ:&lt;/p&gt;&lt;ul&gt; &lt;li&gt;ಚಲ್ಲಘಟ್ಟದಿಂದ ಎಂ.ಜಿ. ರಸ್ತೆ (Challaghatta to MG Road)&lt;/li&gt; &lt;li&gt;ಬೈಯಪ್ಪನಹಳ್ಳಿಯಿಂದ ವೈಟ್&zwnj;ಫೀಲ್ಡ್ - ಕಾಡುಗೋಡಿ (Baiyappanahalli to Whitefield - Kadugodi)&lt;/li&gt; &lt;li&gt;ಮಾದಾವರದಿಂದ ಸಿಲ್ಕ್ ಇನ್&zwnj;ಸ್ಟಿಟ್ಯೂಟ್ (Madavara to Silk Institute - ಹಸಿರು ಮಾರ್ಗ)&lt;/li&gt; &lt;li&gt;ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ (R.V. Road to Bommasandra - ಹಸಿರು/ಹಳದಿ ಸಂಪರ್ಕ ಮಾರ್ಗ)&lt;/li&gt;&lt;/ul&gt;&lt;h2&gt;&lt;strong&gt;ಬೆಳಿಗ್ಗೆ 9 ಗಂಟೆಯ ನಂತರ ಎಂದಿನಂತೆ ಸಂಚಾರ:&lt;/strong&gt;&lt;/h2&gt;&lt;p&gt;ಬೆಳಿಗ್ಗೆ 9:00 ಗಂಟೆಗೆ ನಿರ್ವಹಣಾ ಕಾಮಗಾರಿ ಪೂರ್ಣಗೊಂಡ ತಕ್ಷಣ, ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ಮಾರ್ಗವೂ ಸೇರಿದಂತೆ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಪುನರಾರಂಭಗೊಳ್ಳಲಿವೆ ಎಂದು ಬಿಎಮ್&zwnj;ಆರ್&zwnj;ಸಿಎಲ್ ತಿಳಿಸಿದೆ.&lt;/p&gt;&lt;p&gt;ಆಗಸ್ಟ್ 9ರ ಭಾನುವಾರ ಬೆಳಿಗ್ಗೆ ಮೆಟ್ರೋದಲ್ಲಿ ಪ್ರಯಾಣಿಸಲು ಯೋಜಿಸುತ್ತಿರುವ ಪ್ರಯಾಣಿಕರು ಈ ಸಮಯದ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕಾಗಿ ಬಿಎಂಆರ್&zwnj;ಸಿಎಲ್ ಸಿಬ್ಬಂದಿ ಕೋರಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/bengaluru-namma-metro-purple-line-service-suspended-baiyappanahalli-mg-road-august-9-sunday/articleshow-fplr11g"/>
        </item>
        <item>
            <title><![CDATA[ಕರ್ನಾಟಕ ಮತದಾರರ ಪಟ್ಟಿ 'ವಿಶೇಷ ಸಮಗ್ರ ಪರಿಷ್ಕರಣೆ' 2026: ಹೊಸ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ!]]></title>
            <link>https://kannada.asianetnews.com/state/karnataka-voter-list-special-intensive-revision-sir-2026-revised-schedule/articleshow-r2agx3b</link>
            <guid isPermaLink="true">https://kannada.asianetnews.com/state/karnataka-voter-list-special-intensive-revision-sir-2026-revised-schedule/articleshow-r2agx3b</guid>
            <pubDate>Fri, 07 Aug 2026 19:23:31 +0530</pubDate>
            <description><![CDATA[ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಭಾರತೀಯ ಚುನಾವಣಾ ಆಯೋಗವು 'ವಿಶೇಷ ಸಮಗ್ರ ಪರಿಷ್ಕರಣೆ'ಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 01.10.2026 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ, ಮನೆ ಮನೆ ಭೇಟಿ, ಕರಡು ಪಟ್ಟಿ ಪ್ರಕಟಣೆ ಹಾಗೂ ಅಂತಿಮ ಪಟ್ಟಿ ಪ್ರಕಟಣೆಯ ಹೊಸ ದಿನಾಂಕಗಳನ್ನು ಪ್ರಕಟಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kze7kdkzm4zxq77pv5s5g5jp,imgname-karnataka-sir-date-revised-1786110391935.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.07): ಕ&lt;/strong&gt;ರ್ನಾಟಕದಲ್ಲಿ ಮತದಾರರ ಪಟ್ಟಿಯನ್ನು (Electoral Roll) ನವೀಕರಿಸಲು ಭಾರತೀಯ ಚುನಾವಣಾ ಆಯೋಗವು (Election Commission of India - ECI) ಕೈಗೊಂಡಿರುವ 'ವಿಶೇಷ ಸಮಗ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಷ್ಕೃತ ವೇಳಾಪಟ್ಟಿಯನ್ನು (Revised Schedule) ಬಿಡುಗಡೆ ಮಾಡಲಾಗಿದೆ.&lt;/p&gt;&lt;p&gt;01.10.2026 ಅನ್ನು ಅರ್ಹತಾ ದಿನಾಂಕವಾಗಿ (Qualifying Date) ಪರಿಗಣಿಸಿ ಈ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು (Office of the Chief Electoral Officer, Karnataka) ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ (Press Note) ಹೊರಡಿಸಿದೆ.&lt;/p&gt;&lt;p&gt;ಹೊಸ ವೇಳಾಪಟ್ಟಿಯ ಪ್ರಕಾರ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮತಗಟ್ಟೆಗಳ ಪುನರ್ರಚನೆ ಪ್ರಕ್ರಿಯೆಗಳ ಪ್ರಮುಖ ದಿನಾಂಕಗಳ ವಿವರ ಈ ಕೆಳಗಿನಂತಿದೆ:&lt;/p&gt;&lt;h2&gt;&lt;strong&gt;ವಿಶೇಷ ಸಮಗ್ರ ಪರಿಷ್ಕರಣೆಯ (SIR) ಪರಿಷ್ಕೃತ ವೇಳಾಪಟ್ಟಿ:&lt;/strong&gt;&lt;/h2&gt;&lt;p&gt;&lt;strong&gt;1. ಮನೆ ಮನೆ ಭೇಟಿ (House to House Visits by BLOs):&lt;/strong&gt;&lt;/p&gt;&lt;p&gt;ಮತಗಟ್ಟೆ ಮಟ್ಟದ ಅಧಿಕಾರಿಗಳು (Booth Level Officers - BLO) ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪರಿಶೀಲಿಸುವ ಪ್ರಕ್ರಿಯೆಯು 30.06.2026 ರಿಂದ 17.08.2026 ರವರೆಗೆ ನಡೆಯಲಿದೆ.&lt;/p&gt;&lt;p&gt;&lt;strong&gt;2. ಮತಗಟ್ಟೆಗಳ ಪುನರ್ರಚನೆ (Rationalization of Polling Stations):&lt;/strong&gt;&lt;/p&gt;&lt;p&gt;ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ ಮತ್ತು ಮರುಜೋಡಣೆ ಪ್ರಕ್ರಿಯೆಯನ್ನು 17.08.2026 ರಂದು ಪೂರ್ಣಗೊಳಿಸಲಾಗುತ್ತದೆ.&lt;/p&gt;&lt;p&gt;&lt;strong&gt;3. ಕರಡು ಮತದಾರರ ಪಟ್ಟಿ ಪ್ರಕಟಣೆ (Draft Publication):&lt;/strong&gt;&lt;/p&gt;&lt;p&gt;ಸಾರ್ವಜನಿಕರ ಪರಿಶೀಲನೆಗಾಗಿ ಕರಡು ಮತದಾರರ ಪಟ್ಟಿಯನ್ನು (Draft Electoral Roll) 24.08.2026 ರಂದು ಪ್ರಕಟಿಸಲಾಗುವುದು.&lt;/p&gt;&lt;p&gt;&lt;strong&gt;4. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ (Claims &amp;amp; Objections):&lt;/strong&gt;&lt;/p&gt;&lt;p&gt;ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ, ತಿದ್ದುಪಡಿಗಳಿದ್ದರೆ ಅಥವಾ ಆಕ್ಷೇಪಣೆಗಳಿದ್ದರೆ ಸಲ್ಲಿಸಲು 24.08.2026 ರಿಂದ 23.09.2026 ರವರೆಗೆ ಕಾಲಾವಕಾಶ ನೀಡಲಾಗಿದೆ.&lt;/p&gt;&lt;p&gt;&lt;strong&gt;5. ಆಕ್ಷೇಪಣೆಗಳ ವಿಲೇವಾರಿ (Disposal of Claims &amp;amp; Objections):&lt;/strong&gt;&lt;/p&gt;&lt;p&gt;ಸಲ್ಲಿಕೆಯಾದ ಹಕ್ಕು ಹಾಗೂ ಆಕ್ಷೇಪಣೆಗಳ ನೋಟೀಸ್ ಹಂತ ಮತ್ತು ವಿಲೇವಾರಿ ಪ್ರಕ್ರಿಯೆಯು 24.08.2026 ರಿಂದ 22.10.2026 ರವರೆಗೆ ನಡೆಯಲಿದೆ.&lt;/p&gt;&lt;p&gt;&lt;strong&gt;6. ಅಂತಿಮ ಮತದಾರರ ಪಟ್ಟಿ ಪ್ರಕಟಣೆ (Final Publication):&lt;/strong&gt;&lt;/p&gt;&lt;p&gt;ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಮತದಾರರ ಪಟ್ಟಿಯನ್ನು (Final Electoral Roll) 27.10.2026 ರಂದು ಅಧಿಕೃತವಾಗಿ ಪ್ರಕಟಿಸಲಾಗುವುದು.&lt;/p&gt;&lt;h2&gt;&lt;strong&gt;ಆಯೋಗದ ಸೂಚನೆ:&lt;/strong&gt;&lt;/h2&gt;&lt;p&gt;ಈ ಪರಿಷ್ಕೃತ ವೇಳಾಪಟ್ಟಿಯ ಕುರಿತು ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲು ಮತ್ತು ವಿವಿಧ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಲು ಚುನಾವಣಾ ಆಯೋಗ ಸೂಚಿಸಿದೆ. ಜೊತೆಗೆ, ಮಾನ್ಯತೆ ಪಡೆದ ಎಲ್ಲಾ ರಾಜಕೀಯ ಪಕ್ಷಗಳಿಗೂ (Political Parties) ಈ ವೇಳಾಪಟ್ಟಿಯ ಪ್ರತಿಯನ್ನು ನೀಡಲಾಗುತ್ತಿದೆ.&lt;/p&gt;&lt;p&gt;ಅರ್ಹ ನಾಗರಿಕರು ಮತ್ತು 01.10.2026 ಕ್ಕೆ 18 ವರ್ಷ ಪೂರೈಸುವ ಯುವ ಮತದಾರರು ಕರಡು ಪಟ್ಟಿ ಪ್ರಕಟವಾದಾಗ ತಮ್ಮ ಹೆಸರು ಸೇರ್ಪಡೆಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಕೋರಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-voter-list-special-intensive-revision-sir-2026-revised-schedule/articleshow-r2agx3b"/>
        </item>
        <item>
            <title><![CDATA[ನೇಣಿಗೆ ಕೊರಳೊಡ್ಡಿದ ಉಡುಪಿಯ ಖ್ಯಾತ ಮಾಡೆಲ್​: ಜೀವ ಕೊನೆಗಾಣಿಸಿದ್ಯಾಕೆ ಕೃತಿ ಬಂಗೇರಾ]]></title>
            <link>https://kannada.asianetnews.com/gallery/entertainment/famous-udupi-model-kruthi-bangera-hangs-herself-reason-unknown-suc-ecpkz9r</link>
            <guid isPermaLink="true">https://kannada.asianetnews.com/gallery/entertainment/famous-udupi-model-kruthi-bangera-hangs-herself-reason-unknown-suc-ecpkz9r</guid>
            <pubDate>Fri, 07 Aug 2026 19:03:42 +0530</pubDate>
            <description><![CDATA[ಉಡುಪಿಯ ಮಾಡೆಲ್ ಕೃತಿ ಬಂಗೇರಾ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kze6kvrf08x85n3pb2xaeb8r,imgname-kruthi-bangera-01-1786109357839.jpg" type="image/jpeg" height="390" width="690"/>
            <content:encoded><![CDATA[ಉಡುಪಿಯ ಮಾಡೆಲ್ ಕೃತಿ ಬಂಗೇರಾ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.&lt;img&gt;&lt;p&gt;ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಹಾಗೂ ಹೋಟೆಲ್​ ಒಂದರಲ್ಲಿ ಉದ್ಯೋಗಿಯಾಗಿದ್ದ ಉಡುಪಿಯ ಕಲ್ಮಾಡಿಯ ಕೃತಿ ಬಂಗೇರಾ ಇಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಾಕಿಂಗ್​ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;27 ವರ್ಷದ ಕೃತಿ ಅವರು ತಮ್ಮ ಬೆಡ್&zwnj;ರೂಮ್&zwnj;ನಲ್ಲಿ ಫ್ಯಾನ್&zwnj;ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದು ಬರದಿದ್ದರೂ, ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕೃತಿ ಬಂಗೇರಾ (Kurthi Bangera) ಅವರು, ಕಡಿಯಾಳಿಯಲ್ಲಿರುವ ಹೋಟೆಲೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ ಐದು ತಿಂಗಳುಗಳಿಂದ ಕೆಲಸಕ್ಕೆ ಅವರು ಹೋಗುತ್ತಿರಲಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಕೂಡ ಸರಿಯಾಗಿ ತಿಳಿದಿಲ್ಲ. ಮನೆಯಲ್ಲಿಯೇ ಇದ್ದ ಅವರು, ನಿನ್ನೆ ಅರ್ಥಾತ್​ ಆಗಸ್ಟ್​ 6ರಂದು ತಾಯಿ ಹೊರಗೆ ಹೋದ ಸಂದರ್ಭದಲ್ಲಿ ಸಾವಿಗೆ ಶರಣಾಗಿದ್ದಾರೆ.&lt;/p&gt;&lt;img&gt;&lt;p&gt;ಅಮ್ಮ ರತ್ನಾ ಅವರು ಮನೆಗೆ ಹಿಂತಿರುಗಿದಾಗ ವಿಷಯ ಬೆಳಕಿಗೆ ಬಂದಿದೆ. ಮಗಳ ಕೋಣೆಯಿಂದ ಎಷ್ಟು ಹೊತ್ತಾದರೂ ರೆಸ್​ಪಾನ್ಸ್​ ಬರದಾಗ ಗಾಬರಿಗೊಂಡಿರುವ ರತ್ನಾ ಅವರು, ತಕ್ಷಣವೇ ತಮ್ಮ ಸಹೋದರನಿಗೆ ಕಾಲ್​ ಮಾಡಿದ್ದಾರೆ. ಬಳಿಕ ಬಾಗಿಲನ್ನು ಒಡೆದು ಪ್ರವೇಶಿಸುವ ಹೊತ್ತಿನಲ್ಲಿಯೇ ಕೃತಿ ಕೊನೆಯುಸಿರು ಎಳೆದು ಆಗಿತ್ತು.&lt;/p&gt;&lt;img&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ಮುಂದುವರೆಸಿದ್ದಾರೆ.&lt;/p&gt;]]></content:encoded>
            <category>news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/famous-udupi-model-kruthi-bangera-hangs-herself-reason-unknown-suc-ecpkz9r"/>
        </item>
        <item>
            <title><![CDATA[7 ದಿನಗಳಲ್ಲಿ ಮಳಿಗೆ ಖಾಲಿ ಮಾಡಿ! ಗಂಗಾವತಿಯಲ್ಲಿ 11 ಮಾಲೀಕರಿಗೆ ನಗರಸಭೆ ನೋಟಿಸ್]]></title>
            <link>https://kannada.asianetnews.com/karnataka-districts/11-shops-in-gangavathi-face-eviction-municipality-gives-7-days-gvd/articleshow-gu96n8q</link>
            <guid isPermaLink="true">https://kannada.asianetnews.com/karnataka-districts/11-shops-in-gangavathi-face-eviction-municipality-gives-7-days-gvd/articleshow-gu96n8q</guid>
            <pubDate>Fri, 07 Aug 2026 18:43:38 +0530</pubDate>
            <description><![CDATA[&lt;p&gt;Gangavathi News: ನಗರದ ಪಬ್ಲಿಕ್ ಕ್ಲಬ್ ನಗರಸಭೆ ಆಸ್ತಿಯಾಗಿದ್ದು, ಇದರ ಮುಂಭಾಗದಲ್ಲಿ ನಿರ್ಮಿಸಲಾಗಿರುವ 11 ಮಳಿಗೆಗಳು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರಿಂದ ಕೂಡಲೆ ನೋಟಿಸ್ ನೀಡಿದ 7 ದಿನಗಳ ಒಳಗಾಗಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kze5pr6gmwtw21wxnyqsjejt,imgname-hvhj-1786108403920.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಆ.07): &lt;/strong&gt;ನಗರದ ಪಬ್ಲಿಕ್ ಕ್ಲಬ್ ನಗರಸಭೆ ಆಸ್ತಿಯಾಗಿದ್ದು, ಇದರ ಮುಂಭಾಗದಲ್ಲಿ ನಿರ್ಮಿಸಲಾಗಿರುವ 11 ಮಳಿಗೆಗಳು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರಿಂದ ಕೂಡಲೆ ನೋಟಿಸ್ ನೀಡಿದ 7 ದಿನಗಳ ಒಳಗಾಗಿ ತೆರವುಗೊಳಿಸಿಕೊಳ್ಳಬೇಕೆಂದು ನಗರಸಭೆಯ ಪೌರಾಯುಕ್ತರು ಮಳಿಗೆಗಳ ಮಾಲೀಕರಿಗೆ ಸೂಚನೆ ಮೂಲಕ ಗಡುವು ನೀಡಿದ್ದಾರೆ. ಪ್ರಾದೇಶಿಕ ಆಯುಕ್ತರ ಆದೇಶದ ಮೇರೆಗೆ ಪೌರಾಯುಕ್ತರು ಕ್ಲಬ್ ನ ಆವರಣದಲ್ಲಿರುವ ಸಂಗೀತ ಶಾಲೆ, ಪ್ರಾಥಮಿಕ ಶಾಲೆ, ರಂಗ ಮಂದಿರ ಸೇರಿದಂತೆ ಕ್ರೀಡೆ ಮತ್ತು 11 ವಾಣಿಜ್ಯ ಮಳಿಗೆಗಳಿದ್ದವು.&lt;/p&gt;&lt;p&gt;ಈ ಜಾಗದ ಬಗ್ಗೆ ನಗರಸಭೆಯಿಂದ ಅನಧಿಕೃತವಾಗಿ ಫಾರಂ 3 ಪಡೆದಿದ್ದರು. ಈ ಪ್ರದೇಶ ನಗರಸಭೆಗೆ ಸಂಬಂಧಿಸಿದ್ದರಿಂದ ಕೂಡಲೆ ನಗರಸಭೆಯ ವ್ಯಾಪ್ತಿಗೆ ಪಡೆಯಬೇಕೆಂದು ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದರು. ಈ ಆದೇಶದ ಮೇರೆಗೆ ಕ್ಲಬ್ ಗೆ ಬೀಗ ಹಾಕಿದ ದಿನವೇ ಇದರ ವ್ಯಾಪ್ತಿಯಲ್ಲಿರುವ 11 ಮಳಿಗೆಗಳ ಮಾಲೀಕರಿಗೆ ತೆರವುಗೊಳಿಸುವಂತೆ ಪೌರಾಯುಕ್ತರು ನೋಟಿಸ್ ನೀಡಿದ್ದಾರೆ.&lt;/p&gt;&lt;p&gt;&lt;strong&gt;7 ದಿನಗಳಲ್ಲಿ ತೆರವು&lt;/strong&gt;&lt;/p&gt;&lt;p&gt;ನಗರಸಭೆಗೆ ಸಂಬಂಧಿಸಿದ ಪಬ್ಲಿಕ್ ಕ್ಲಬ್ ಸೀಜ್ ಮಾಡಿದ ದಿನವೇ ಪೌರಾಯುಕ್ತರು ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಿ 7 ದಿನಗಳಲ್ಲಿ ತೆರವುಗೊಳಿಸಬೇಕೆಂದು ಸೂಚನೆ ನೀಡಿದ್ದಾರೆ. ನಗರದ 19 ನೇ ವಾರ್ಡಿನಲ್ಲಿ ಪಬ್ಲಿಕ್ ಕ್ಲಬ್ (ವಿಸ್ತೀರ್ಣ 54411.7855 ಚದುರ ಮೀಟರ್) ಆಸ್ತಿ ಇದ್ದು, ಇದು ನಗರಸಭೆಗೆ ಸಂಬಂಧಿಸಿರುತ್ತದೆ. ಈಗಾಗಲೇ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು ಆದೇಶ ನೀಡಿ ಪಬ್ಲಿಕ್ ಕ್ಲಬ್ ನವರು ಇರುವ ಆಸ್ತಿ ನಗರಸಭೆಗೆ ಸಂಬಂಧಿಸಿದ್ದು, ಕೂಡಲೆ ನಗರಸಭೆಗೆ ಸ್ವಾಧೀನಪಡಿಸಿಕೊಳ್ಳುವಂತೆ ಆದೇಶ ನೀಡಿದ್ದಾರೆ. ಈ ಆಸ್ತಿಯಲ್ಲಿ ಅಕ್ರಮವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದೀರಿ. ಕಾರಣ ನೋಟಿಸ್ ನೀಡಿದ 7 ದಿನಗಳಲ್ಲಿ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಯುಕ್ತ ವಿರೂಪಾಕ್ಷಮೂರ್ತಿ ಅವರು ನೀಡಿದ ನೋಟಿಸ್ ನಲ್ಲಿ ಪ್ರಸ್ತಾಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಮುಂಗಡ ಹಣ ಪಾವತಿಸಿದವರ ಪರದಾಟ&lt;/strong&gt;&lt;/h2&gt;&lt;p&gt;ಮಳಿಗೆಗಳನ್ನು ನಿರ್ಮಿಸಿಕೊಂಡು ಲಕ್ಷಾಂತರ ರುಪಾಯಿ ಮುಂಗಡ ನೀಡಿದ ಅಂಗಡಿಗಳ ಮಾಲೀಕರು ಈಗ ಪರದಾಡುತ್ತಿದ್ದಾರೆ. ಮಳಿಗೆಗಳನ್ನು ನಿರ್ಮಿಸಿಕೊಂಡವರು ಕ್ಲಬ್ ಗೆ ಮುಂಗಡ ಹಣ ಪಾವತಿಸಿದ್ದರು. ಈಗ ಮಳಿಗೆಗಳನ್ನು ಖಾಲಿ ಮಾಡಿದರೆ ನಾವು ಪಾವತಿಸಿದ ಹಣ ಯಾರ ಜವಬ್ದಾರಿ ಎಂದು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೌರಾಯುಕ್ತ ವಿರೂಪಾಕ್ಷಮೂರ್ತಿ ಪ್ರತಿಕ್ರಿಯಿಸಿ ಮುಂಗಡ ಹಣಕ್ಕೆ ನಗರಸಭೆ ಜವಾಬ್ದಾರಿ ಅಲ್ಲ. ನಾವು ನೀಡಿದ 7 ದಿನಗಳೊಳಗಾಗಿ ಮಳಿಗೆಗಳನ್ನು ಖಾಲಿ ಮಾಡಬೇಕೆಂದು ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.&lt;/p&gt;]]></content:encoded>
            <category>news</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/11-shops-in-gangavathi-face-eviction-municipality-gives-7-days-gvd/articleshow-gu96n8q"/>
        </item>
        <item>
            <title><![CDATA[ಬಟ್ಟೆ ಕಂಡರೆ ನಿಮಗೇನು? ಬಾತ್‌ರೂಂನಿಂದಲೇ ಮೀಟಿಂಗ್ ಹಾಜರಾದ ಜನಪ್ರತಿನಿಧಿ ಪ್ರಶ್ನೆಗೆ ಎಲ್ಲರೂ ದಂಗು]]></title>
            <link>https://kannada.asianetnews.com/viral/new-zealand-politician-attends-official-meeting-from-bathroom-sparks-massive-row/articleshow-rio8lfu</link>
            <guid isPermaLink="true">https://kannada.asianetnews.com/viral/new-zealand-politician-attends-official-meeting-from-bathroom-sparks-massive-row/articleshow-rio8lfu</guid>
            <pubDate>Fri, 07 Aug 2026 18:42:19 +0530</pubDate>
            <description><![CDATA[&lt;p&gt;ಒಣಗಲು ಹಾಕಿದ ಒಳಉಡುಪಗಳು ಕಂಡರೆ ಏನ್ರಿ? ನಾನು ಕಾಣಿಸುತ್ತಿದ್ದೇನಾ, ನನ್ನ ನೋಡಿ ಎಂದು ಜನಪ್ರತಿನಿಧಿ ಆನ್&zwnj;ಲೈನ್ ಮೀಟಿಂಗ್&zwnj;ನಲ್ಲಿ ಖಡಕ್ ಆಗಿ ಹೇಳಿದ ಘಟನೆ ನಡೆದಿದೆ. ಕೌನ್ಸಿಲ್ ಮೀಟಿಂಗ್ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kze5m7mygr4smj375bdr6xeb,imgname-virtual-meeting-from-bathroom-1786108321437.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವೆಲ್ಲಿಂಗ್ಟನ್ (ಆ.07)&lt;/strong&gt; ಆನ್&zwnj;ಲೈನ್ ಮೀಟಿಂಗ್ ವೇಳೆ ನಡೆದ ಹಲವು ಎಡವಟ್ಟುಗಳು, ಕೆಲ ವಿಡಿಯೋಗಳು ಭಾರಿ ಸಂಚಲನ ಸೃಷ್ಟಿಸಿದೆ. ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಕೌನ್ಸಿಲ್ ಮೀಟಿಂಗ್&zwnj;ನಲ್ಲಿ ಜನಪ್ರತಿನಿಧಿ ಬಾತ್&zwnj;ರೂಂನಿಂದ ವರ್ಚುವಲ್ ಆಗಿ ಜಾಯಿನ್ ಆಗಿದ್ದಾರೆ. ಹಿಂಭಾಗದಲ್ಲಿ ಒಣಗಲು ಹಾಕಿದ್ದ ಒಳಉಡುಪುಗಳ ಕಂಡ ಮೇಯರ್ ಸೇರಿದಂತೆ ಇತರರು ದಂಗಾಗಿದ್ದಾರೆ. ಇತ್ತ ಮೇಯರ್ ನಿಮ್ಮ ಕ್ಯಾಮೆರಾ ಸ್ವಲ್ಪ ಸರಿಸಿ ಹಿಂಬದಿಯಲ್ಲ ನಿಮ್ಮ ಒಳಉಡುಪುಗಳು ಕಾಣುತ್ತಿದೆ ಎಂದು ಮುಜುಗರದಿಂದಲೇ ಮನವಿ ಮಾಡಿದ್ದಾರೆ. ಆದರೆ ಮಹಿಳಾ ಜನಪ್ರತಿನಿಧಿ, ನಾನು ಕಾಣುತ್ತಿದ್ದೇನಾ, ಅಕ್ಕ ಪಕ್ಕ ಏನೇ ಇರಲಿ ಎಂದು ಮಾತು ಮುಂದುವರಿಸಿದ ಘಟನೆ ನಡೆದಿದೆ.&lt;/p&gt;&lt;h2&gt;ಆನ್&zwnj;ಲೈನ್ ಮೀಟಿಂಗ್&zwnj;ನಲ್ಲಿ&lt;/h2&gt;&lt;p&gt;ನ್ಯೂಜಿಲೆಂಡ್ ನಗರ ಸಭೆಯ ಕೌನ್ಸಿಲ್ ಮೀಟಿಂಗ್&zwnj;ನ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಡ್ಯುನೆಡಿನ್ ಸಿಟಿಯ ಕೌನ್ಸಿಲ್ ಸಭೆಯಲ್ಲಿ ಈ ಘಟನೆ ನಡೆದಿದೆ. ಡ್ಯುನೆಡಿನ್ ನಗರ ಸಭೆಯ ಎಲ್ಲಾ ಜನಪ್ರತಿನಿಧಿಗಳು, ಮೇಯರ್, ಅಧಿಕಾರಿಗಳು ಕಚೇರಿಯಲ್ಲಿ ಹಾಜರಾಗಿದ್ದಾರೆ. ಆದರೆ ಮಹಿಳಾ ಕೌನ್ಸಿಲರ್ ಜೋ ಗೇಲರ್ ಆನ್&zwnj;ಲೈನ್ ಮೂಲಕ ಹಾಜರಾಗಿದ್ದಾರೆ. ಜೋ ಗೇಲರ್ ಬಾತ್&zwnj;ರೂಂನಲ್ಲಿದ್ದುಕೊಂಡು ಮೀಟಿಂಗ್&zwnj;ಗೆ ಹಾಜರಾಗಿ ಮೊದಲ ಎಡವಟ್ಟು ಮಾಡಿದ್ದಾರೆ. ಬಾತ್&zwnj;ರೂಂನಿಂದ ಮೀಟಿಂಗ್ ಹಾಜರಾದರೆ ತಪ್ಪೇನು ಇಲ್ಲ. ಆದರೆ ಜೋ ಗೇಲರ್ ಹಿಂಭಾಗದಲ್ಲಿ ಅವರ ಒಳಉಡುಪುಗಳು ಒಣಗಲು ಹಾಕಿರುವುದು ಕ್ಯಾಮೆರಾದಲ್ಲಿ ಕಾಣುತ್ತಿತ್ತು.&lt;/p&gt;&lt;h2&gt;ಕ್ಯಾಮೆರಾ ಸ್ವಲ್ಪ ಸರಿಸಿ ಎಂದ ಮೇಯರ್&lt;/h2&gt;&lt;p&gt;ಮಹಿಳಾ ಜನಪ್ರತಿನಿಧಿ ಬಾತ್&zwnj;ರೂಂ ಆನ್&zwnj;ಲೈನ್ ಮೀಟಿಂಗ್&zwnj;ನಲ್ಲಿ ಜಗಜ್ಜಾಹೀರಾಗಿತ್ತು. ಮೇಯರ್ ಸೋಫಿ ಬಾರ್ಕರ್ ಸೇರಿದಂತೆ ಎಲ್ಲರು ಮುಜುಗರಗೊಂಡಿದ್ದಾರೆ. ಕೆಲವರು ನಕ್ಕಿದ್ದಾರೆ. ಯಾಕೆ ಏನಾಯಿತು ಎಂದು ಗೇಲರ್ ಪ್ರಶ್ನಿಸಿದ್ದಾರೆ. ತಕ್ಷಣವೇ ಮೇಯರ್ , ನಿಮ್ಮ ಕ್ಯಾಮೆರಾ ಸರಿಸಿ, ಹಿಂಭಾಗದ ಒಳ ಉಡುಪುಗಳು ಕಾಣುತ್ತಿದೆ ಎಂದು ಸೂಚಿಸಿದ್ದಾರೆ.&lt;/p&gt;&lt;h2&gt;ಏನು ಸಮಸ್ಯೆ, ನಾನು ಕಾಣಿಸುತ್ತಿದ್ದೇನಾ?&lt;/h2&gt;&lt;p&gt;ನನ್ನ ಬಟ್ಟೆ ಕಂಡರೆ ಏನು ಸಮಸ್ಯೆ, ನಾನು ಕಾಣಿಸುತ್ತಿದ್ದೇನಾ, ನನ್ನ ಧ್ವನಿ ಕೇಳಿಸುತ್ತಿದೆಯಾ ಎಂದು ಗೇಲರ್ ಕೂಲ್ ಆಗಿ ಪರಿಸ್ಥಿತಿಯನ್ನು ಹ್ಯಾಂಡಲ್ ಮಾಡಿದ್ದಾರೆ. ಇಷ್ಟೇ ಅಲ್ಲ ಬಟ್ಟೆ ಕಾಣುವುದು ಉತ್ತಮ ವಿಷಯ. ಯಾಕೆಂದರೆ ಈ ಮೀಟಿಂಗ್&zwnj;ನಲ್ಲಿ ನೀವು ಬಟ್ಟೆಯನ್ನು ನೋಡಬಹುದು, ನನ್ನನ್ನೂ ಕಾಣಬಹದು. ಇದರಲ್ಲಿ ನನಗೆ ಸಮಸ್ಯೆ ಎಂದು ಅನಿಸುತ್ತಿಲ್ಲ. ನನಗೆ ಯಾವುದೇ ಸಮಸ್ಯೆ ಇಲ್ಲ ಎಂದ ಮೇಲೆ ನಿಮಗೇನು ಎಂದು ಗೇಲರ್ ಪ್ರಶ್ನಿಸಿದ್ದಾರೆ. ಈ ಮೂಲಕ ಸಭೆ ಮುಂದುವರಿದಿದೆ. ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗುತ್ತಿದ್ದಂತೆ ಸಮಸ್ಯೆ ತೀವ್ರಗೊಂಡಿದೆ.&lt;/p&gt;&lt;h2&gt;ಬಾತ್ ರೂಂ ಒಳಗೆ ಯಾರಿದ್ದಾರೆ, ಪತಿಯೋ ಅಥವಾ ಇನ್ಯಾರೋ?&lt;/h2&gt;&lt;p&gt;ಬಾತ್ ರೂಂ ವೀಡಿಯೋ ಕಾಲ್ ಮೀಟಿಂಗ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರಮುಖ ವಿಷಯ ಗಮನಿಸಿದ್ದಾರೆ. ಮೀಟಿಂಗ್ ನಡುವೆ ಬಾತ್ ರೂಂ ಗಾಜಿನ ಹಿಂಭಾಗದಲ್ಲಿ ವ್ಯಕ್ತಿಯೊಬ್ಬರು ಚಲಿಸುತ್ತಿರುವುದು ಗೋಚರಿಸುತ್ತಿದೆ. ಬಾತ್ ರೂಂನಲ್ಲಿ ನಿಮ್ಮ ಪತಿಯೋ ಅಥವಾ ಇನ್ಯಾರಾದರೂ ಇದ್ದಾರೋ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>news</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/new-zealand-politician-attends-official-meeting-from-bathroom-sparks-massive-row/articleshow-rio8lfu"/>
        </item>
        <item>
            <title><![CDATA[ಬರ್ತಡೇ ಕೇಕ್ ಆರ್ಡರ್ ಮಾಡಿದರೆ, ಡೆತ್ ಡೇ ಕೇಕ್ ಕೊಟ್ಟ ರೆಸಾರ್ಟ್; ಕೀಟ, ಬೂಸ್ಟ್ ಕಟ್ಟಿದ ಕೇಕ್ ತಿಂದವರು ಹರೋಹರ!]]></title>
            <link>https://kannada.asianetnews.com/viral/ghaziabad-resort-given-birthday-cake-inside-insects-family-food-poisoning-hospital-admitted/articleshow-7g6e0yr</link>
            <guid isPermaLink="true">https://kannada.asianetnews.com/viral/ghaziabad-resort-given-birthday-cake-inside-insects-family-food-poisoning-hospital-admitted/articleshow-7g6e0yr</guid>
            <pubDate>Fri, 07 Aug 2026 18:35:27 +0530</pubDate>
            <description><![CDATA[&lt;p&gt;ರೆಸಾರ್ಟ್&zwnj; ಒಂದರಲ್ಲಿ ಹುಟ್ಟುಹಬ್ಬ ಆಚರಿಸಲು ತೆರಳಿದ್ದ ಮೂಲದ ಕುಟುಂಬಕ್ಕೆ ಭಾರಿ ಆಘಾತ ಎದುರಾಗಿದೆ. ಹುಟ್ಟುಹಬ್ಬದ ಕೇಕ್&zwnj;ನಲ್ಲಿ ಬೂಷ್ಟು ಮತ್ತು ಕ್ರಿಮಿ-ಕೀಟಗಳು ಪತ್ತೆಯಾಗಿದ್ದು, ಅದನ್ನು ತಿಂದ ಮಕ್ಕಳು ಸೇರಿದಂತೆ ಕುಟುಂಬದ ಬಹುತೇಕ ಸದಸ್ಯರು ಅಲ್ಲಿಯೇ ಅಸ್ವಸ್ಥಗೊಂಡು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂದೇನಾಯ್ತು ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kze520bxphp3qp4f2dyw2as4,imgname-birthday-cake-insect-1786107724156.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂತೋಷದಿಂದ ಹುಟ್ಟುಹಬ್ಬದ ಪಾರ್ಟಿ (Birthday Party) ಆಚರಿಸಲು ತೆರಳಿದ್ದ ಕುಟುಂಬವೊಂದಕ್ಕೆ ವಿಷಾಹಾರವಾಗಿ (Food Poisoning) ಮೆಡಿಕಲ್ ಎಮರ್ಜೆನ್ಸಿ (Medical Emergency) ಎದುರಾದ ಭೀಕರ ಘಟನೆಯೊಂದು ನಡೆದಿದೆ. ಪ್ರಸಿದ್ಧ ರೆಸಾರ್ಟ್ ಒಂದರಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಕೇಕ್ ತಿಂದ ತಕ್ಷಣವೇ ಸಣ್ಣ ಮಕ್ಕಳು ಸೇರಿದಂತೆ ಕುಟುಂಬದ ಹಲವು ಸದಸ್ಯರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಉತ್ತರ ಪ್ರದೇಶದ ಗಾಜಿಯಾಬಾದ್ (Ghaziabad) ಮೂಲದ ಕುಟುಂಬವೊಂದು ಹುಟ್ಟುಹಬ್ಬ ಆಚರಿಸಲು ಉತ್ತರಾಖಂಡದ ಧಿಕುಲಿಯಲ್ಲಿರುವ ರೆಸಾರ್ಟ್&zwnj;ಗೆ (Resort) ಆಗಮಿಸಿತ್ತು. ಸಂಜೆ ಕೇಕ್ ಕತ್ತರಿಸಿ ಆಚರಣೆ ನಡೆಸಿದ ಕೆಲವೇ ಕ್ಷಣಗಳಲ್ಲಿ, ಕೇಕ್ ಸೇವಿಸಿದ ಪ್ರತಿಯೊಬ್ಬರಿಗೂ ತೀವ್ರ ಹೊಟ್ಟೆನೋವು ಹಾಗೂ ವಾಂತಿ (Vomiting) ಶುರುವಾಗಿದೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಜಾಗರೂಕರಾಗಿ ಕೇಕ್ ಅನ್ನು ಪರಿಶೀಲಿಸಿದಾಗ, ಅದರಲ್ಲಿ ಬೂಷ್ಟು (Mould) ಬೆಳೆದಿರುವುದು ಮತ್ತು ಸಣ್ಣ ಸಣ್ಣ ಕ್ರಿಮಿ-ಕೀಟಗಳು (Insects) ಇರುವುದು ಪತ್ತೆಯಾಗಿದೆ.&lt;/p&gt;&lt;h2&gt;&lt;strong&gt;ಪೋಲಿಸ್ ಲೈನ್ ಬ್ಯುಸಿ, ಲಿಖಿತ ದೂರು ಸಲ್ಲಿಕೆ:&lt;/strong&gt;&lt;/h2&gt;&lt;p&gt;ಬಾಧಿತ ಕುಟುಂಬದವರು ನೀಡಿದ ಮಾಹಿತಿಯಂತೆ, ರಾತ್ರಿ ಘಟನೆ ಸಂಭವಿಸಿದ ತಕ್ಷಣವೇ ಅವರು ಪೋಲಿಸ್ ಎಮರ್ಜೆನ್ಸಿ ಸಹಾಯವಾಣಿ 112 ಗೆ (Police Emergency Helpline 112) ಎರಡು ಬಾರಿ ಕರೆ ಮಾಡಿದ್ದರು. ಆದರೆ, ರಾತ್ರಿ ಸಮಯದಲ್ಲಿ ಯಾವುದೇ ಪೊಲೀಸ್ ತಂಡ ಸ್ಥಳಕ್ಕೆ ತಲುಪಲಿಲ್ಲ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆ ಬಳಿಕ ಬೆಳಿಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ರೆಸಾರ್ಟ್ ಆಡಳಿತ ಮಂಡಳಿ ವಿರುದ್ಧ ಲಿಖಿತ ದೂರು (Written Complaint) ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಆಹಾರ ಸುರಕ್ಷತಾ ಇಲಾಖೆಯಿಂದ ದಾಳಿ:&lt;/strong&gt;&lt;/h2&gt;&lt;p&gt;ಘಟನೆಯ ಗಂಭೀರತೆಯನ್ನು ಅರಿತ ಆಹಾರ ಸುರಕ್ಷತಾ ಇಲಾಖೆಯ (Food Safety Department) ಅಧಿಕಾರಿಗಳು ತಕ್ಷಣವೇ ರೆಸಾರ್ಟ್&zwnj;ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರಂತಕ್ಕೆ ಕಾರಣವಾದ ಬರ್ತ್&zwnj;ಡೇ ಕೇಕ್ ಹಾಗೂ ಪಾರ್ಟಿಯಲ್ಲಿ ಬಡಿಸಲಾಗಿದ್ದ ಇತರ ಆಹಾರ ಪದಾರ್ಥಗಳ ಸ್ಯಾಂಪಲ್&zwnj;ಗಳನ್ನು (Food Samples) ವಶಕ್ಕೆ ಪಡೆದಿದ್ದಾರೆ. ಈ ಮಾದರಿಗಳನ್ನು ರಸಾಯನಿಕ ವಿಶ್ಲೇಷಣೆಗಾಗಿ ಲ್ಯಾಬೊರೇಟರಿಗೆ (Laboratory Analysis) ಕಳುಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ರೆಸಾರ್ಟ್ ಆಡಳಿತ ಮಂಡಳಿ ನೀಡಿದ ಸ್ಪಷ್ಟನೆ:&lt;/strong&gt;&lt;/h2&gt;&lt;p&gt;ಇನ್ನೊಂದೆಡೆ, ಈ ಆರೋಪಗಳನ್ನು ರೆಸಾರ್ಟ್ ಆಡಳಿತ ಮಂಡಳಿ ನಿರಾಕರಿಸಿದೆ. 'ನಾವು ಈ ಕೇಕ್ ಅನ್ನು ನಮ್ಮ ರೆಸಾರ್ಟ್&zwnj;ನಲ್ಲಿ ತಯಾರಿಸಿಲ್ಲ. ಹೊರಗಿನ ವೆಂಡರ್&zwnj; (External Vendor) ಒಬ್ಬರಿಂದ ಇದನ್ನು ಆರ್ಡರ್ ಮಾಡಿ ತರಿಸಲಾಗಿತ್ತು' ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ಪ್ರಕರಣದ ತನಿಖೆಗೆ ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ.&lt;/p&gt;&lt;h2&gt;&lt;strong&gt;ಹಳೆಯ ದುರಂತದ ನೆನಪು:&lt;/strong&gt;&lt;/h2&gt;&lt;p&gt;ಉತ್ತರಾಖಂಡದಲ್ಲಿ ಇಂತಹ ಆಹಾರ ವಿಷಪ್ರಾಶನ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಜೂನ್ ತಿಂಗಳಿನಲ್ಲಿ ಪಂತ್ ನಗರದ (Pant Nagar) ಗೋವಿಂದ ವಲ್ಲಭ ಪಂತ್ ಕೃಷಿ ವಿಶ್ವವಿದ್ಯಾಲಯದ (GB Pant University) ಹಾಸ್ಟೆಲ್ ಮೆಸ್&zwnj;ನಲ್ಲಿ ಪನ್ನೀರ್ ಹಾಗೂ ಬಟರ್ ಚಿಕನ್ ತಿಂದ ಸುಮಾರು 150 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಮತ್ತೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ (Food Quality and Safety) ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.&lt;/p&gt;]]></content:encoded>
            <category>news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/ghaziabad-resort-given-birthday-cake-inside-insects-family-food-poisoning-hospital-admitted/articleshow-7g6e0yr"/>
        </item>
        <item>
            <title><![CDATA[ಇಡೀ ದೇಶ ಆಗಸ್ಟ್ 15ಕ್ಕೆ ಸ್ವತಂತ್ರ ದಿನಾಚರಣೆ ಆಚರಿಸಿದರೆ, ಈ ಊರಿಲ್ಲಿ ಆಗಸ್ಟ್ 16ಕ್ಕೆ ಆಚರಿಸುತ್ತಾರೆ, ಗೊತ್ತಾ?]]></title>
            <link>https://kannada.asianetnews.com/viral/why-this-bihar-town-celebrates-independence-day-on-august-16-every-year-suh/articleshow-nwablr7</link>
            <guid isPermaLink="true">https://kannada.asianetnews.com/viral/why-this-bihar-town-celebrates-independence-day-on-august-16-every-year-suh/articleshow-nwablr7</guid>
            <pubDate>Fri, 07 Aug 2026 18:21:22 +0530</pubDate>
            <description><![CDATA[&lt;p&gt;ದೇಶಾದ್ಯಂತ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಬಿಹಾರದ ಈ ಪಟ್ಟಣದಲ್ಲಿ ಆಗಸ್ಟ್ 16ಕ್ಕೂ ಸ್ವಾತಂತ್ರ್ಯ ದಿನದಷ್ಟೇ ಮಹತ್ವವಿದೆ. ಪ್ರತಿವರ್ಷ ಆಗಸ್ಟ್ 16ರಂದು ಇಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j57y1xxxztyy4aa3h8p0tpzh,imgname-asianet-news---2024-08-14t132319.103.png" type="image/jpeg" height="390" width="690"/>
            <content:encoded><![CDATA[&lt;p&gt;ದೇಶಾದ್ಯಂತ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಬಿಹಾರದ ಈ ಪಟ್ಟಣದಲ್ಲಿ ಆಗಸ್ಟ್ 16ಕ್ಕೂ ಸ್ವಾತಂತ್ರ್ಯ ದಿನದಷ್ಟೇ ಮಹತ್ವವಿದೆ. ಪ್ರತಿವರ್ಷ ಆಗಸ್ಟ್ 16ರಂದು ಇಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಇದರ ಹಿಂದೆ ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸವಿದೆ.&lt;/p&gt;&lt;p&gt;ಬಿಹಾರದ ಬಕ್ಸರ್ ಜಿಲ್ಲೆಯ ಡುಮ್ರಾವ್ ಪಟ್ಟಣದಲ್ಲಿ ಆಗಸ್ಟ್ 15ರ ಜೊತೆಗೆ ಆಗಸ್ಟ್ 16ರಂದು ಕೂಡ ಸ್ವಾತಂತ್ರ್ಯ ದಿನದ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇದಕ್ಕೆ ಕಾರಣ 1942ರ ಆಗಸ್ಟ್ 16ರಂದು ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ.&lt;/p&gt;&lt;h2&gt;1942ರಲ್ಲಿ ಏನಾಗಿತ್ತು?&lt;/h2&gt;&lt;p&gt;ಮಹಾತ್ಮ ಗಾಂಧೀಜಿ 1942ರ ಆಗಸ್ಟ್ 8ರಂದು ಮುಂಬೈನಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ &ldquo;ಮಾಡು ಇಲ್ಲವೇ ಮಡಿ&rdquo; ಎಂಬ ಕರೆ ನೀಡಿದ್ದರು. ಈ ಕರೆ ಬಿಹಾರದಲ್ಲೂ ಭಾರೀ ಪರಿಣಾಮ ಬೀರಿತ್ತು. ಸುಮಾರು 5,000 ಜನರ ಮೆರವಣಿಗೆ ಡುಮ್ರಾವ್ ಪೊಲೀಸ್ ಠಾಣೆ ಸೇರಿದಂತೆ ಬ್ರಿಟಿಷರ ನಿಯಂತ್ರಣದಲ್ಲಿದ್ದ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಮುಂದಾಯಿತು.&lt;/p&gt;&lt;h2&gt;ತ್ರಿವರ್ಣ ಹಾರಿಸಲು ಹೋದವರಿಗೆ ಗುಂಡಿನ ದಾಳಿ&lt;/h2&gt;&lt;p&gt;ಮೆರವಣಿಗೆಯನ್ನು ಯುವ ಹೋರಾಟಗಾರ ಕಪಿಲ್ ಮುನಿ ಮುನ್ನಡೆಸಿದ್ದರು. ಡುಮ್ರಾವ್ ಪೊಲೀಸ್ ಠಾಣೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಬಳಿಕ ಬ್ರಿಟಿಷ್ ಪೊಲೀಸರು ಗುಂಡಿನ ದಾಳಿ ನಡೆಸಿದರು. ಈ ಘಟನೆಯಲ್ಲಿ ಕಪಿಲ್ ಮುನಿ ಸೇರಿದಂತೆ ನಾಲ್ವರು ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಮತ್ತಷ್ಟು ಮಂದಿ ಗಾಯಗೊಂಡಿದ್ದರು.&lt;/p&gt;&lt;h2&gt;ಅಂದಿನಿಂದ ಆಗಸ್ಟ್ 16 ವಿಶೇಷ ದಿನ&lt;/h2&gt;&lt;p&gt;ಈ ಹುತಾತ್ಮರ ಸ್ಮರಣಾರ್ಥ ಡುಮ್ರಾವ್&zwnj;ನಲ್ಲಿ 1943ರಿಂದಲೇ ಆಗಸ್ಟ್ 16ರಂದು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಬಂದ ಬಳಿಕ ಗುಂಡಿನ ದಾಳಿ ನಡೆದ ಪೊಲೀಸ್ ಠಾಣೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಲಾಯಿತು. 2015ರಲ್ಲಿ ಬಿಹಾರ ಸರ್ಕಾರವೂ ಆಗಸ್ಟ್ 16ರ ಈ ಆಚರಣೆಗೆ ಅಧಿಕೃತ ಮಾನ್ಯತೆ ನೀಡಿತು. ನಂತರ ಹುತಾತ್ಮರ ಪ್ರತಿಮೆಗಳನ್ನು ಕೂಡ ಸ್ಮಾರಕದಲ್ಲಿ ಸ್ಥಾಪಿಸಲಾಯಿತು.&lt;/p&gt;&lt;h2&gt;ಎರಡು ದಿನಗಳ ಸ್ವಾತಂತ್ರ್ಯ ಸಂಭ್ರಮ&lt;/h2&gt;&lt;p&gt;ಹೀಗಾಗಿ ಡುಮ್ರಾವ್ ಜನರಿಗೆ ಆಗಸ್ಟ್ 15 ದೇಶದ ಸ್ವಾತಂತ್ರ್ಯದ ಸಂಭ್ರಮವಾದರೆ, ಆಗಸ್ಟ್ 16 ತಮ್ಮ ನೆಲದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ದಿನ. ಅಂದರೆ, ಭಾರತಕ್ಕೆ ಆಗಸ್ಟ್ 15 ಸ್ವಾತಂತ್ರ್ಯ ದಿನವಾದರೆ, ಡುಮ್ರಾವ್&zwnj;ಗೆ ಆಗಸ್ಟ್ 16 ಕೂಡ ಅಷ್ಟೇ ಭಾವನಾತ್ಮಕ ಮತ್ತು ಐತಿಹಾಸಿಕ ದಿನ&lt;/p&gt;]]></content:encoded>
            <category>news</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/why-this-bihar-town-celebrates-independence-day-on-august-16-every-year-suh/articleshow-nwablr7"/>
        </item>
        <item>
            <title><![CDATA[Politics: ಅದಲು ಬದಲಾಗುತ್ತಾ ಡಿಕೆ ಸಂಪುಟ? ಇವರೇನಾ ಹೊಸ ಸಚಿವರು; ಯಾರು ಇನ್‌ ಯಾರು ಔಟ್; ಬಂಡಾಯ ಶಮನಕ್ಕೆ ಬಂಡೆ ರಣತಂತ್ರ!]]></title>
            <link>https://kannada.asianetnews.com/state/karnataka-cabinet-reshuffle-dk-shivakumar-new-ministers-list-in-and-out-bmk/articleshow-iagrbt9</link>
            <guid isPermaLink="true">https://kannada.asianetnews.com/state/karnataka-cabinet-reshuffle-dk-shivakumar-new-ministers-list-in-and-out-bmk/articleshow-iagrbt9</guid>
            <pubDate>Fri, 07 Aug 2026 17:57:23 +0530</pubDate>
            <description><![CDATA[&lt;p&gt;ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ಅಸಮಾಧಾನ ಭುಗಿಲೆದ್ದಿದ್ದು, ಮಹಿಳಾ ಕೋಟಾ ಭರ್ತಿ ಹಾಗೂ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಸಂಪುಟ ಪುನಾರಚನೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯಾರು ಸಚಿವರಾಗುತ್ತಾರೆ ಮತ್ತು ಯಾರು ಸ್ಥಾನ ಕಳೆದುಕೊಳ್ಳುತ್ತಾರೆ? ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz3272cqtt3q0wv733npp4w7,imgname-dk-shivakumar-1785735645591.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೌದು ಇದೀಗ ರಾಜ್ಯರಾಜಕಾರಣದಲ್ಲಿ ಕೂತುಹಲಕರ ಬೆಳವಣಿಗೆಯೊಂದು ಸೃಷ್ಟಿಯಾಗಿದೆ. ಮಂತ್ರಿ ಸ್ಥಾನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಅಸಮಾಧಾನ, ಭರ್ತಿಯಾಗಬೇಕಾದ ಮಹಿಳಾ ಕೋಟಾ, ಇದರ ನಡುವೆ ಹೆಚ್ಚಾದ ಅತೃಪ್ತರ ಅಸಮಾಧಾನ ಇವೆಲ್ಲವೂ ಈಗ ಕಾಂಗ್ರೆಸ್&zwnj; ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿವೆ. ಈ ಹಿನ್ನೆಲೆಯಲ್ಲಿ ಅದಲು ಬದಲಾಗುತ್ತಾ ಡಿಕೆ ನೂತನ ಸಂಪುಟ, ಯಾರು ಇನ್&zwnj; ಯಾರು ಔಟ್&zwnj;? ಬಂಡಾಯ ಶಮನಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆ ಮಾಸ್ಟರ್&zwnj; ಪ್ಲಾನ್&zwnj; ಏನು? ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಕೈಯಲ್ಲಿ ಹೆಚ್ಚಿದ ಅಸಮಾಧಾನ!&lt;/strong&gt;&lt;/h2&gt;&lt;p&gt;ಹೌದು ನೂತನ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಹಲವಾರು ಶಾಸಕರು, ಈ ಹಿಂದೆ ಸಚಿವರಾಗಿದ್ದವರು ಅಸಮಾಧಾನ ವ್ಯಕ್ತಪಡಿಸಿದ್ದರು, ಅದರ ಜತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಅದರಲ್ಲಿ ಕೆಲವರ ಅಸಮಾಧಾನ ಶಮನವಾದರೂ, ಇನ್ನು ಕೆಲವರು ಸಚಿವ ಸ್ಥಾನ ಬೇಕೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಸಾಲಿನಲ್ಲಿ ಎಂ.ಕೃಷ್ಣಪ್ಪ ಅಂತೂ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಅಲ್ಲದೇ ಶಾಸಕ ಬಸವರಾಜ್&zwnj; ಶಿವಣ್ಣವರಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಸಿದ್ದು ಸಿಟ್ಟು ಹೆಚ್ಚಾಗಿದೆ. ಅಲ್ಲದೇ ಮಹಿಳಾ ಕೋಟಾ ಭರ್ತಿಗೂ ಡಿಕೆ ತಾಲೀಮು ನಡೆಸಬೇಕಿದೆ ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಯಾರು ಇನ್&zwnj;, ಯಾರಿಗೆ ಗೇಟ್&zwnj; ಪಾಸ್&zwnj;!&lt;/strong&gt;&lt;/h3&gt;&lt;p&gt;ಎಂ ಕೃಷ್ಣಪ್ಪಗೆ ಒಕ್ಕಲಿಗ ನಾಯಕರಾಗಿರುವುದರಿಂದ, ಅವರಿಗೆ ಸ್ಥಾನ ನೀಡಬೇಕಾದರೆ, ಅಲ್ಲಿ ಒಕ್ಕಲಿಗ ನಾಯಕರೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ಸಾಲಿನಲ್ಲಿ ಮಾಗಡಿ ಬಾಲಕೃಷ್ಣ ಹಾಗೂ ನರೇಂದ್ರ ಸ್ವಾಮಿ, ಚೆಲುವರಾಯಸ್ವಾಮಿ ಇದ್ದಾರೆ. ಇನ್ನು ಮಹಿಳಾ ಕೋಟಾದಲ್ಲಿ ಖನೀಜಾ ಫಾತೀಮಾ, ರೂಪಾ ಶಶಿಶಧರ್ ಹಾಗೂ ಅನ್ನಪೂರ್ಣ ತುಕಾರಾಂಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಖನಿಜಾ ಅವರಿಗೆ ಮಂತ್ರಿ ಸ್ಥಾನ ಸಿಕ್ಕರೆ, ಸಚಿವ ಜಮೀರ್&zwnj; ಹಾಗೂ ರಿಜ್ವಾನ್&zwnj; ಇಬ್ಬರಲ್ಲಿ ಒಬ್ಬರ ಸ್ಥಾನಕ್ಕೆ ಕೋಕ್&zwnj; ಸಿಗಲಿದೆ. ಅದರಂತೆ ಅನ್ನಪೂರ್ಣ ತುಕಾರಾಂಗೆ ಸ್ಥಾನ ಸಿಕ್ಕರೆ, ಸಚಿವ ನಾಗೇಂದ್ರ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಇನ್ನು ರೂಪಾ ಶಶಿಧರ್ ಮಂತ್ರಯಾದರೆ, ಅವರ ತಂದೆ ಮುನಿಯಪ್ಪ ಅವರ ಸ್ಥಾನ ತ್ಯಾಗ ಮಾಡಬೇಕಿದೆ.&lt;/p&gt;&lt;h3&gt;&lt;strong&gt;ಕೈಗೆ ಕಗ್ಗಂಟಾದ ಅತೃಪ್ತರು!&lt;/strong&gt;&lt;/h3&gt;&lt;p&gt;ಹೌದು ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಸಮಾಧಾನ, ಮಹಿಳಾ ಕೋಟಾ ಭರ್ತಿ ಜತೆ, ಎಂ ಕೃಷ್ಣಪ್ಪ ಪಟ್ಟು, ನೀಡದಿದ್ದರೆ, ರಾಜೀನಾಮೆಗೆ ಮುಂದಾಗುತ್ತಿರುವ ಶಾಸಕರೂ, ನಿಜಕ್ಕೂ ಇದು ಕೈಗೆ ಕಗ್ಗಂಟಾಗಿ ಮಾರ್ಪಟ್ಟಿದೆ. ಆದರೆ, ಅಂತಿಮವಾಗಿ ಈ ಗೊಂದಲಕ್ಕೆ ಹೈ ಕಮಾಂಡ ತಿರ್ಮಾಣದೊಂದಿಗೆ ತೆರ ಬೀಳಲಿದೆ ಎನ್ನವುದಂತು ಖಚಿತ. ಈಗ ಎಲ್ಲರ ಗಮನ ಕೈ ಹೈ ಕಮಾಂಡ್&zwnj; ಮೇಲಿದೆ.&lt;/p&gt;]]></content:encoded>
            <category>news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/karnataka-cabinet-reshuffle-dk-shivakumar-new-ministers-list-in-and-out-bmk/articleshow-iagrbt9"/>
        </item>
    </channel>
</rss>
