<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Jul 2026 12:52:11 +0530</lastBuildDate>
        <atom:link href="https://kannada.asianetnews.com/rss/mysore" rel="self" type="application/rss+xml"/>
        <item>
            <title><![CDATA[ಗ್ಯಾಸ್‌ ಪೂರೈಕೆ ವೇಳೆ 5 ಕಿ.ಮೀ. ಮೇಲ್ಪಟ್ಟರೆ ಸೇವಾ ಶುಲ್ಕ ನೀಡಬೇಕು]]></title>
            <link>https://kannada.asianetnews.com/karnataka-districts/5-km-in-case-of-gas-supply-if-more-then-service-charge-should-be-paid-snr-rrdsdk</link>
            <guid isPermaLink="true">https://kannada.asianetnews.com/karnataka-districts/5-km-in-case-of-gas-supply-if-more-then-service-charge-should-be-paid-snr-rrdsdk</guid>
            <pubDate>Sun, 12 Mar 2023 05:38:08 +0530</pubDate>
            <description><![CDATA[&lt;p&gt;ಸರ್ಕಾರದ ಆದೇಶದಂತೆ 5 ಕಿ.ಮೀ. ಮೇಲೆ ಪ್ರತಿ ಕಿ.ಮೀ.ಗೆ 1.60 ರಂತೆ ಸೇವಾ ಶುಲ್ಕ ನೀಡಬೇಕು ಎಂದು ಹೈಕೋರ್ಚ್&zwnj; ಆದೇಶಿಸಿರುವುದಾಗಿ ಎಚ್&zwnj;ಪಿ ಗ್ಯಾಸ್&zwnj; ಸಂಚಾಲಕ ಮೆಹುಲ್&zwnj; ಜೆ. ಪಟೇಲ್&zwnj; ತಿಳಿಸಿದ್ದಾರೆ. 2006ರಲ್ಲಿ ಆಹಾರ ಸರಬರಾಜು ಇಲಾಖೆ ಆಯುಕ್ತರಿಂದ ಒಂದು ಆದೇಶವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gtjya8zarkphxg3jyvhfbcrd,imgname-gas-saving-tips.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು :&amp;nbsp; ಸರ್ಕಾರದ ಆದೇಶದಂತೆ 5 ಕಿ.ಮೀ. ಮೇಲೆ ಪ್ರತಿ ಕಿ.ಮೀ.ಗೆ 1.60 ರಂತೆ ಸೇವಾ ಶುಲ್ಕ ನೀಡಬೇಕು ಎಂದು ಹೈಕೋರ್ಚ್&zwnj; ಆದೇಶಿಸಿರುವುದಾಗಿ ಎಚ್&zwnj;ಪಿ ಗ್ಯಾಸ್&zwnj; ಸಂಚಾಲಕ ಮೆಹುಲ್&zwnj; ಜೆ. ಪಟೇಲ್&zwnj; ತಿಳಿಸಿದ್ದಾರೆ. 2006ರಲ್ಲಿ ಆಹಾರ ಸರಬರಾಜು ಇಲಾಖೆ ಆಯುಕ್ತರಿಂದ ಒಂದು ಆದೇಶವಾಗಿದೆ.&lt;/p&gt;&lt;p&gt;&amp;nbsp;5 ಕಿ.ಮೀ ಮೇಲೆ ಪ್ರತಿ ಕಿ.ಮೀ.ಗೆ 1.60 ಪೈಸೆಯಂತೆ ಕೊಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಈ ಎರಡು ದಾಖಲಾತಿಯ ನಕಲನ್ನು ಜಿಲ್ಲಾಧಿಕಾರಿಗೆ ಎಲ್ಲಾ ಗ್ಯಾಸ್&zwnj; ವಿತರಕರು ಸಹಿ ಮಾಡಿ ಮನವಿ ಪತ್ರ ಕೊಟ್ಟು ವಿಚಾರಣೆ ಮಾಡುವುದಕ್ಕೆ ಕೋರಿರುವುದಾಗಿ ಅವರು ತಿಳಿಸಿದ್ದಾರೆ.&lt;/p&gt;&lt;p&gt;ಸಗಣಿ&amp;nbsp; ಗ್ಯಾಸ್&zwnj;ನಿಂದ ಓಡಬಲ್ಲ ಕಾರು ನಿರ್ಮಾಣಕ್ಕೆ ಮಾರುತಿ ರೆಡಿ&lt;/p&gt;&lt;p&gt;&lt;strong&gt;ನವ​ದೆ​ಹ​ಲಿ (ಜನವರಿ 28, 2023):&lt;/strong&gt;&amp;nbsp;ಜಪಾನ್&zwnj; ಮೂಲದ ಖ್ಯಾತ ಕಾರು ತಯಾ​ರಕ ಕಂಪನಿ ಸುಜುಕಿ ಹಾಗೂ ಭಾರ​ತ​ದಲ್ಲಿ ಅದರ ಪೂರಕ ಸಂಸ್ಥೆ​ಯಾ​ಗಿ​ರುವ ಮಾರುತಿ, ಮಾಲಿನ್ಯ ನಿಯಂತ್ರ​ಣಕ್ಕೆ ಸಂಬಂಧಿ​ಸಿ​ದಂತೆ ಸಗ​ಣಿ​ಯಿಂದ ಬಿಡು​ಗ​ಡೆ​ಯಾ​ಗುವ ಜೈವಿಕ ಅನಿ​ಲ​ವನ್ನು ಇಂಧ​ನ​ವಾಗಿ ಬಳಕೆ ಮಾಡಲು ಒಲವು ತೋರಿವೆ. ಜಪಾನ್&zwnj;ನ ಸುಜುಕಿ ಮೋಟಾರ್ ಕಾರ್ಪೊರೇಷನ್ ಸರ್ಕಾರವು ನಿಗದಿಪಡಿಸಿದ ದಿನಾಂಕಕ್ಕೆ ಅನುಗುಣವಾಗಿ 2070 ರ ವೇಳೆಗೆ ಭಾರತದಲ್ಲಿ ಇಂಗಾಲದ ತಟಸ್ಥತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.&lt;/p&gt;&lt;p&gt;2030ರ ವೇಳೆಗೆ 6 ಹೊಸ ಎಲೆ​ಕ್ಟ್ರಿಕ್&zwnj; ವಾಹ​ನ​ಗ​ಳನ್ನು (Electric Vehicles) ಬಿಡು​ಗಡೆ ಮಾಡಲು ನಿರ್ಧ​ರಿ​ಸಿ​ರುವ ಮಾರುತಿ ಸುಜುಕಿ (Maruti Suzuki), ಮುಂದಿನ ದಶ​ಕ​ಗ​ಳಲ್ಲಿ ಮಾಲಿನ್ಯ ನಿಯಂತ್ರ​ಣಕ್ಕೆ (Pollution Control) ಸಂಬಂಧಿ​ಸಿ​ದಂತೆ ಸುಸ್ಥಿ​ರ​ವಾದ ಪರಿ​ಹಾ​ರ​ (Solution) ತರಲು ನೋಡು​ತ್ತಿದೆ. ಇದ​ರಲ್ಲಿ ಒಂದು ಯೋಜನೆ ಹಸು​ವಿನ ಸಗ​ಣಿಯಿಂದ ಉತ್ಪಾದಿಸುವ ಅನಿಲವನ್ನು (Cow Dung Gas) ಆಧರಿಸಿದ್ದಾಗಿದ್ದು, ಈ ಕುರಿತು ಕಂಪನಿ ಸಂಶೋ​ಧನೆ ಆರಂಭಿ​ಸಿದೆ. ಜೈವಿಕ ಅನಿ​ಲ ಮಾರು​ಕ​ಟ್ಟೆ​ಯ​ಲ್ಲಿ​ರುವ ಈ ಸವಾ​ಲನ್ನು ಮೊದ​ಲಿಗೆ ಸ್ವೀಕ​ರಿ​ಸಲು ಮುಂದಾ​ಗಿ​ರುವ ಸುಜುಕಿ, ತನ್ನ ಸಿಎ​ನ್&zwnj;ಜಿ ಮಾಡೆ​ಲ್&zwnj;ನ ವಾಹ​ನ​ಗ​ಳಲ್ಲಿ ಇದನ್ನು ಬಳಕೆ ಮಾಡಲು ನಿರ್ಧ​ರಿ​ಸಿದೆ. ಪ್ರಸ್ತುತ ಭಾರ​ತ​ದಲ್ಲಿ ಶೇ.70ರಷ್ಟು ಸಿಎ​ನ್&zwnj;ಜಿ ವಾಹ​ನ​ಗಳು ಮಾರುತಿ ಸುಜುಕಿ ಕಂಪ​ನಿಗೆ ಸೇರಿ​ದ​ವು​ಗ​ಳಾ​ಗಿವೆ. ಸಗಣಿ ಬಳ​ಕೆಯ ಕುರಿ​ತಾಗಿ ಜಾಗ​ತಿಕ ಮಟ್ಟ​ದಲ್ಲಿ ಕಂಪನಿ ಈಗಾ​ಗಲೇ ತನ್ನ ಪ್ರತಿ​ಪಾ​ದ​ನೆ​ಯನ್ನು ಮಂಡಿ​ಸಿದೆ.&lt;/p&gt;&lt;p&gt;ಇದನ್ನು ಓದಿ:&amp;nbsp;ಕಾರು ಪ್ರಿಯರಿಗೆ ಶಾಕಿಂಗ್ ನ್ಯೂಸ್&zwnj;: ಇಂದಿನಿಂದ ಮಾರುತಿ ಸುಜುಕಿಯ ಎಲ್ಲ ಮಾಡೆಲ್&zwnj; ಕಾರುಗಳ ಬೆಲೆ ಹೆಚ್ಚಳ..!&lt;/p&gt;&lt;p&gt;ಆಮ್ಲಜನಕರಹಿತ ಜೀರ್ಣಕ್ರಿಯೆ ಎಂಬ ಪ್ರಕ್ರಿಯೆಯ ಮೂಲಕ ಹಸುವಿನ ಗೊಬ್ಬರವನ್ನು ಕಾರಿನ ಇಂಧನವಾಗಿ ಪರಿವರ್ತಿಸಬಹುದು. ಈ ಪ್ರಕ್ರಿಯೆಯು ಆಮ್ಲಜನಕದ ಅನುಪಸ್ಥಿತಿಯಲ್ಲಿ ಗೊಬ್ಬರವನ್ನು ಬ್ರೇಕ್&zwnj; ಡೌನ್&zwnj; ಮಾಡುವುದನ್ನು ಒಳಗೊಂಡಿರುತ್ತದೆ. ಇದು ಜೈವಿಕ ಅನಿಲ, ಮೀಥೇನ್, ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಅನಿಲಗಳ ಪ್ರಮಾಣವನ್ನು ಉತ್ಪಾದಿಸುತ್ತದೆ. ನಂತರ ಜೈವಿಕ ಅನಿಲವನ್ನು ಸ್ವಚ್ಛಗೊಳಿಸಬಹುದು ಮತ್ತು ಸಂಸ್ಕರಿಸಬಹುದು ಹಾಗೂ ಕಲ್ಮಶಗಳನ್ನು ತೆಗೆದುಹಾಕಬಹುದು ಮತ್ತು ಮೀಥೇನ್ ಅಂಶವನ್ನು ಹೆಚ್ಚಿಸಬಹುದಾಗಿದೆ. ಇದನ್ನು ಮಾಡಿದ ನಂತರ, ಜೈವಿಕ ಅನಿಲವನ್ನು ಇಂಧನ ಮೂಲವಾಗಿ ಬಳಸಬಹುದು. ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಸುಟ್ಟು ಅಥವಾ ಸಂಕುಚಿತಗೊಳಿಸಿ ಮತ್ತು ವಾಹನಗಳಿಗೆ ನೈಸರ್ಗಿಕ ಅನಿಲದ ಬದಲಿಯಾಗಿ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಈ ಮಧ್ಯೆ, Fujisan Asagiri Biomas LLC ನಲ್ಲಿಯೂ ಹೂಡಿಕೆ ಮಾಡಿರುವುದಾಗಿ ಸುಜುಕಿ ಹೇಳಿಕೊಂಡಿದೆ. ಈ ಸಂಸ್ಥೆಯು ಸ್ಥಳೀಯ ರೈತರಿಂದ ಸಂಗ್ರಹಿಸಿದ ಹಸುವಿನ ಸಗಣಿಯನ್ನು ಶಕ್ತಿ ಉತ್ಪಾದನೆಗೆ ಜೈವಿಕ ಅನಿಲವಾಗಿ ಪರಿವರ್ತಿಸುತ್ತದೆ. ಭಾರತದಲ್ಲಿನ ಜೈವಿಕ ಅನಿಲ ವ್ಯವಹಾರವು ಇಂಗಾಲದ ತಟಸ್ಥತೆಗೆ ಕೊಡುಗೆ ನೀಡುವುದಲ್ಲದೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತದ ಸಮಾಜಕ್ಕೆ ಕೊಡುಗೆ ನೀಡುತ್ತದೆ ಎಂದು ನಾವು ನಂಬುತ್ತೇವೆ ಎಂದೂ ಸುಜುಕಿ ಮಾಹಿತಿ ನೀಡಿದೆ.&amp;nbsp;&lt;/p&gt;&lt;p&gt;ಇದನ್ನೂ ಓದಿ:&amp;nbsp;550 ಕಿ.ಮೀ ಮೈಲೇಜ್, ಗೇಮ್&zwnj;ಚೇಂಜರ್ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು ಅನಾವರಣ!&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/5-km-in-case-of-gas-supply-if-more-then-service-charge-should-be-paid-snr-rrdsdk"/>
        </item>
        <item>
            <title><![CDATA[KRS ಒಳಹರಿವಿನಲ್ಲಿ ಭಾರೀ ಕುಸಿತ, ರೈತರಲ್ಲಿ ಮನೆ ಮಾಡಿದ ಆತಂಕ..!]]></title>
            <link>https://kannada.asianetnews.com/mandya/big-shocking-news-for-karnataka-farmers-krs-dam-water-inflow-decreased-gkn/articleshow-483vzy4</link>
            <guid isPermaLink="true">https://kannada.asianetnews.com/mandya/big-shocking-news-for-karnataka-farmers-krs-dam-water-inflow-decreased-gkn/articleshow-483vzy4</guid>
            <pubDate>Tue, 14 Jul 2026 10:25:25 +0530</pubDate>
            <description><![CDATA[&lt;p&gt;ಕಳೆದ ಒಂದು ವಾರದ ಹಿಂದೆ ಆರ್ಭಟಿಸಿದ್ದ ಮಳೆರಾಯ ಮತ್ತೆ ರಾಜ್ಯದಲ್ಲಿ ಕಳೆದು ಹೋಗಿದ್ದಾನೆ. ಪರಿಣಾಮ ರಾಜ್ಯದ ಜಲಾಶಯಗಳಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆ ಆಗಿದೆ. ಕೆಆರ್&zwj;&zwnj;ಎಸ್ ಡ್ಯಾಂ ಕುರಿತ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hbymm9vm2rg5xb7bsw5ftwcw,imgname-ffbbffb.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ (KRS) ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದು ಕೇವಲ ಅನ್ನದಾತರ ಆತಂಕಕ್ಕೆ ಕಾರಣವಾಗಿರುವುದಲ್ಲದೆ, ಕಾವೇರಿ ನಂಬಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕುಡಿಯುವ ನೀರಿನ ಸಂಕಷ್ಟ ಎದುರಾಗುವ ಮುನ್ಸೂಚನೆ ನೀಡಿದೆ.&lt;/p&gt;&lt;h2&gt;&lt;strong&gt;ಒಳಹರಿವಿನಲ್ಲಿ ಕುಸಿತ&lt;/strong&gt;&lt;/h2&gt;&lt;p&gt;ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಕೆಆರ್&zwnj;ಎಸ್ ಡ್ಯಾಂಗೆ ಬರುವ ನೀರಿನ ಪ್ರಮಾಣ 12 ಸಾವಿರ ಕ್ಯೂಸೆಕ್ ದಾಟಿತ್ತು. ಈಗ ಮಳೆ ಬಿಡುವು ನೀಡಿರುವುದರಿಂದ ಒಳಹರಿವು ಗಣನೀಯವಾಗಿ ಕುಸಿದಿದೆ. ನಿನ್ನೆ 7500 ಕ್ಯೂಸೆಕ್ ಇದ್ದ ಒಳಹರಿವು ಇಂದು ಕೇವಲ 3685 ಕ್ಯೂಸೆಕ್ ಗೆ ಇಳಿಕೆಯಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಮುಂಗಾರು ಆರಂಭದಲ್ಲಿ ಸುರಿದ ಮಳೆ ನೋಡಿ ರೈತರು ಕೃಷಿ ಚಟುವಟಿಕೆಗಳಿಗೆ ಸಜ್ಜಾಗಿದ್ದರು. ಈಗ ಡ್ಯಾಂ ಒಳಹರಿವು ಕುಸಿದಿರುವುದು ರೈತರ ನಿದ್ದೆಗೆಡಿಸಿದೆ. ಬೆಳೆಗಳಿಗೆ ನೀರು ಸಿಗುತ್ತದೆಯೇ ಇಲ್ಲವೇ ಎಂಬ ಆತಂಕ ಮಂಡ್ಯ ಭಾಗದ ರೈತರಲ್ಲಿ ಮನೆಮಾಡಿದೆ.&lt;/p&gt;&lt;h3&gt;&lt;strong&gt;ಬೆಂಗಳೂರಿಗರಿಗೂ ತಪ್ಪದ ಸಂಕಷ್ಟ&lt;/strong&gt;&lt;/h3&gt;&lt;p&gt;ಕೆಆರ್&zwnj;ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ಬೆಂಗಳೂರು ನಗರದ ಪಾಲಿಗೆ ಕೆಟ್ಟ ಸುದ್ದಿಯಾಗಿದೆ. ಬೆಂಗಳೂರಿನ ಬಹುತೇಕ ಭಾಗಗಳಿಗೆ ಕುಡಿಯುವ ನೀರು ಪೂರೈಕೆಯಾಗುವುದು ಇದೇ ಕಾವೇರಿ ನದಿಯಿಂದ. ಸದ್ಯ ಕುಡಿಯುವ ಉದ್ದೇಶಕ್ಕಾಗಿ ಜಲಾಶಯದಿಂದ 623 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಂದು ವೇಳೆ ಮಳೆ ಮತ್ತೆ ಚುರುಕುಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ಜಲಾಶಯದ ಇಂದಿನ ಸ್ಥಿತಿಗತಿ:&lt;/strong&gt;&lt;/h3&gt;&lt;ul&gt; &lt;li&gt;ಗರಿಷ್ಠ ಮಟ್ಟ: 124.80 ಅಡಿ.&lt;/li&gt; &lt;li&gt;ಇಂದಿನ ಮಟ್ಟ: 92.54 ಅಡಿ.&lt;/li&gt; &lt;li&gt;ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ.&lt;/li&gt; &lt;li&gt;ಸದ್ಯದ ನೀರಿನ ಸಂಗ್ರಹ: 17.509 ಟಿಎಂಸಿ.&lt;/li&gt; &lt;li&gt;ಇಂದಿನ ಒಳಹರಿವು: 3685 ಕ್ಯೂಸೆಕ್.&lt;/li&gt; &lt;li&gt;ಇಂದಿನ ಹೊರಹರಿವು: 623 ಕ್ಯೂಸೆಕ್.&lt;/li&gt;&lt;/ul&gt;&lt;p&gt;ಒಟ್ಟಾರೆಯಾಗಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದು ಇತ್ತ ರೈತರಿಗೂ ಅತ್ತ ಕುಡಿಯುವ ನೀರು ಅವಲಂಬಿಸಿರುವ ಸಾರ್ವಜನಿಕರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜೂನ್ ತಿಂಗಳಲ್ಲಿ ಮಳೆ ಮತ್ತೆ ಚುರುಕಾಗದಿದ್ದರೆ ಸಂಕಷ್ಟ ಅನಿವಾರ್ಯ ಎಂಬಂತಾಗಿದೆ.&lt;/p&gt;]]></content:encoded>
            <category>mysore</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mandya/big-shocking-news-for-karnataka-farmers-krs-dam-water-inflow-decreased-gkn/articleshow-483vzy4"/>
        </item>
        <item>
            <title><![CDATA[ಎಸ್‌ ಜಾನಕಿ ಅಂತ್ಯಸಂಸ್ಕಾರಕ್ಕೆ ಉಚಿತ ನಿವೇಶನ, ಸ್ವಯಾರ್ಜಿತ ಸೈಟ್‌ ನೀಡುವುದಾಗಿ ಹೇಳಿದ ಸಾರಾ ಮಹೇಶ್‌]]></title>
            <link>https://kannada.asianetnews.com/mysore/s-janaki-funeral-updates-sa-ra-mahesh-free-site-yatheendra-siddaramaiah-meeting-san/articleshow-5dmn0qg</link>
            <guid isPermaLink="true">https://kannada.asianetnews.com/mysore/s-janaki-funeral-updates-sa-ra-mahesh-free-site-yatheendra-siddaramaiah-meeting-san/articleshow-5dmn0qg</guid>
            <pubDate>Sat, 11 Jul 2026 21:44:48 +0530</pubDate>
            <description><![CDATA[ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ನಂತರ, ಅವರ ಅಂತ್ಯಸಂಸ್ಕಾರಕ್ಕೆ ಮೈಸೂರಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಅವರು ಉಚಿತ ನಿವೇಶನ ನೀಡಲು ಮುಂದೆ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಅಂತಿಮ ನಿರ್ಧಾರಕ್ಕಾಗಿ ತುರ್ತು ಸಭೆ ನಡೆಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx8z94nhp08b1ytzje8a51yn,imgname-s-janaki-and-sara-mahesh-1783786410673.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜು.11): &lt;/strong&gt;ಪ್ರಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ಬೆನ್ನಲ್ಲೇ ಅವರ ಅಂತಿಮ ಸಂಸ್ಕಾರ ಮತ್ತು ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ವ್ಯವಸ್ಥೆಗಾಗಿ ಜಿಲ್ಲಾಡಳಿತ ತೀವ್ರ ಸಿದ್ಧತೆ ಕೈಗೊಂಡಿದೆ. ಈ ಮಧ್ಯೆ, ಎಸ್&zwnj;.ಜಾನಕಿ ಅವರ ಅಂತ್ಯಸಂಸ್ಕಾರಕ್ಕಾಗಿ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಅವರು ಮೈಸೂರಿನಲ್ಲಿ ಉಚಿತವಾಗಿ ನಿವೇಶನ ನೀಡಲು ಮುಂದೆ ಬಂದಿದ್ದಾರೆ.&lt;/p&gt;&lt;p&gt;ಎಸ್. ಜಾನಕಿ ಅವರ ಅಂತ್ಯಕ್ರಿಯೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿರುವ ಮಾಜಿ ಸಚಿವ ಸಾ.ರಾ. ಮಹೇಶ್, &quot;ಜಾನಕಿ ಅಮ್ಮ ಅವರ ಅಂತ್ಯಸಂಸ್ಕಾರವನ್ನು ಮೈಸೂರಿನಲ್ಲಿಯೇ ಮಾಡುವುದಾದರೆ, ನನ್ನ ಸ್ವಯಾರ್ಜಿತ ಆಸ್ತಿಯಾಗಿರುವ ಮೈಸೂರಿನ ಆರ್.ಟಿ. ನಗರದಲ್ಲಿನ 60*40 ಅಳತೆಯ ಒಂದು ನಿವೇಶನವನ್ನು ಉಚಿತವಾಗಿ ನೀಡಲು ನಾನು ಸಿದ್ಧನಿದ್ದೇನೆ. ಜಾನಕಿ ಅವರ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರೆ ಆ ಜಾಗವನ್ನು ಅವರ ಹೆಸರಿನ ಟ್ರಸ್ಟ್&zwnj;ಗೆ ಹಸ್ತಾಂತರಿಸಲಾಗುವುದು. ಈ ಕುರಿತು ಈಗಾಗಲೇ ಮೈಸೂರು ಜಿಲ್ಲಾಡಳಿತಕ್ಕೂ ಅಧಿಕೃತ ಮಾಹಿತಿ ನೀಡಿದ್ದೇನೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಆಸ್ಪತ್ರೆಯಲ್ಲೇ ಉಸ್ತುವಾರಿ ಸಚಿವ ಡಾ. ಯತೀಂದ್ರ ತುರ್ತು ಸಭೆ&lt;/strong&gt;&lt;/h2&gt;&lt;p&gt;ಇನ್ನೊಂದೆಡೆ, ಜಾನಕಿ ಅಮ್ಮ ಕೊನೆಯುಸಿರೆಳೆದ ಮೈಸೂರಿನ ಅಪೋಲೋ ಆಸ್ಪತ್ರೆಯ ಆವರಣದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ತುರ್ತು ಸಭೆ ಪ್ರಗತಿಯಲ್ಲಿದೆ. ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ (DC), ನಗರ ಪೊಲೀಸ್ ಆಯುಕ್ತರು (CP), ಸ್ಥಳೀಯ ಶಾಸಕರು ಹಾಗೂ ಎಸ್. ಜಾನಕಿ ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಕೆಲವೇ ಕ್ಷಣಗಳಲ್ಲಿ ಸ್ಥಳ, ಸಮಯ ಅಧಿಕೃತ ಪ್ರಕಟಣೆ&lt;/strong&gt;&lt;/h2&gt;&lt;p&gt;ಈ ಉನ್ನತ ಮಟ್ಟದ ಸಭೆಯಲ್ಲಿ ಜಾನಕಿ ಅಮ್ಮನವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ಮಾಡಬೇಕಾದ ಭದ್ರತಾ ವ್ಯವಸ್ಥೆ ಹಾಗೂ ಅಂತ್ಯಸಂಸ್ಕಾರವನ್ನು ಎಲ್ಲಿ ಮತ್ತು ಯಾವ ಸಮಯದಲ್ಲಿ ನೆರವೇರಿಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿದೆ. ಸಭೆ ಮುಗಿದ ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಾಧ್ಯಮಗಳ ಮೂಲಕ ಅಂತಿಮ ಸಂಸ್ಕಾರದ ಸ್ಥಳ ಮತ್ತು ನಿಖರ ಸಮಯದ ಅಧಿಕೃತ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/mysore/s-janaki-funeral-updates-sa-ra-mahesh-free-site-yatheendra-siddaramaiah-meeting-san/articleshow-5dmn0qg"/>
        </item>
        <item>
            <title><![CDATA[ಮಾದರಿಯಾದ ಸಚಿವ ಯತೀಂದ್ರ ನಡೆ.. ಚಾಮುಂಡಿ ಬೆಟ್ಟಕ್ಕೆ ಬಂದರೂ ದರ್ಶನ ಪಡೆಯಲಿಲ್ಲ! ಯಾಕೆ ಗೊತ್ತಾ?]]></title>
            <link>https://kannada.asianetnews.com/gallery/mysore/karnataka-minister-dr-yatindra-siddaramaiah-who-visited-chamundi-hills-did-not-get-the-darshan-of-god-gkn-5ubytn1</link>
            <guid isPermaLink="true">https://kannada.asianetnews.com/gallery/mysore/karnataka-minister-dr-yatindra-siddaramaiah-who-visited-chamundi-hills-did-not-get-the-darshan-of-god-gkn-5ubytn1</guid>
            <pubDate>Fri, 17 Jul 2026 12:18:26 +0530</pubDate>
            <description><![CDATA[&lt;p&gt;ಮೊದಲ ಆಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಗಣ್ಯರ ದರ್ಶನಕ್ಕೆ ನಿಗದಿತ ಸಮಯ ಮೀರಿದ್ದರಿಂದ ನಿಯಮ ಪಾಲಿಸಿ ದರ್ಶನ ಪಡೆಯದೆ ಹಿಂತಿರುಗಿದರು. ಜನಸಾಮಾನ್ಯರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ &amp;nbsp;ನಿರ್ಧಾರ ಕೈಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqchpcggpnzcwkjzrayq5my,imgname-dr-yatindra-siddaramaiah-1784270084496.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೊದಲ ಆಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಗಣ್ಯರ ದರ್ಶನಕ್ಕೆ ನಿಗದಿತ ಸಮಯ ಮೀರಿದ್ದರಿಂದ ನಿಯಮ ಪಾಲಿಸಿ ದರ್ಶನ ಪಡೆಯದೆ ಹಿಂತಿರುಗಿದರು. ಜನಸಾಮಾನ್ಯರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ &amp;nbsp;ನಿರ್ಧಾರ ಕೈಗೊಂಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಮೈಸೂರು: &lt;/strong&gt;ಸಾಂಸ್ಕೃತಿಕ ನಗರಿ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಇಂದು ಮೊದಲ ಆಷಾಢ ಶುಕ್ರವಾರದ ಸಂಭ್ರಮ ಮನೆಮಾಡಿದೆ. ಸಾವಿರಾರು ಭಕ್ತರು ಬೆಟ್ಟಕ್ಕೆ ಹರಿದು ಬರುತ್ತಿರುವ ಈ ಸಂದರ್ಭದಲ್ಲಿ, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನಿಯಮ ಪಾಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.&lt;/p&gt;&lt;p&gt;ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಯತೀಂದ್ರ ಸಿದ್ದರಾಮಯ್ಯ ಅವರು ದೇವರ ದರ್ಶನ ಪಡೆಯದೆ ವಾಪಸ್ ಬಂದಿದ್ದಾರೆ. ಹೌದು, ದೇವಸ್ಥಾನಕ್ಕೆ ಬಂದಿದ್ದರೂ ಅವರು ಗರ್ಭಗುಡಿಯತ್ತ ಹೋಗದೆ ಹೊರಗಿನಿಂದಲೇ ಮರಳಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಮಯದ ಮಿತಿ ಮತ್ತು ಜನಸಾಮಾನ್ಯರ ಹಿತ.&lt;/p&gt;&lt;img&gt;&lt;p&gt;ಆಷಾಢ ಶುಕ್ರವಾರದಂದು ಭಕ್ತರ ದಟ್ಟಣೆ ಹೆಚ್ಚಿರುವುದರಿಂದ ಜಿಲ್ಲಾಡಳಿತವು ಗಣ್ಯರ (VIP) ದರ್ಶನಕ್ಕೆ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಕಾಲಾವಕಾಶ ನೀಡಿತ್ತು. ಆದರೆ ಯತೀಂದ್ರ ಸಿದ್ದರಾಮಯ್ಯ ಅವರು ದೇವಸ್ಥಾನಕ್ಕೆ ತಲುಪುವಾಗ ನಿಗದಿತ ಸಮಯ ಮೀರಿತ್ತು. ನಿಯಮದ ಪ್ರಕಾರ 10 ಗಂಟೆಯ ನಂತರ ಗಣ್ಯರ ದರ್ಶನಕ್ಕೆ ಅವಕಾಶವಿರಲಿಲ್ಲ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಯತೀಂದ್ರ ಅವರು ತಮಗಾಗಿ ನಿಯಮ ಸಡಿಲಿಸಲು ಒಪ್ಪದೆ, ದರ್ಶನ ಪಡೆಯದೆ ಮರಳಲು ನಿರ್ಧರಿಸಿದರು.&lt;/p&gt;&lt;img&gt;&lt;p&gt;ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವೇ ನಿಯಮಗಳನ್ನು ಮಾಡಿ, ನಾವೇ ಅದನ್ನು ಉಲ್ಲಂಘಿಸುವುದು ಸರಿಯಲ್ಲ. ನಾನು ತಡವಾಗಿ ಬಂದ ಕಾರಣ ದರ್ಶನ ಮಾಡಲಿಲ್ಲ. ನಾವು ಮಧ್ಯದಲ್ಲಿ ದರ್ಶನಕ್ಕೆ ಹೋದರೆ ಸರತಿ ಸಾಲಿನಲ್ಲಿ ನಿಂತಿರುವ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಅವರ ಹಿತದೃಷ್ಟಿಯಿಂದ ನಾನು ದರ್ಶನ ಪಡೆಯದಿರಲು ತೀರ್ಮಾನಿಸಿದೆ ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಇದೇ ವೇಳೆ ಇತರ ಗಣ್ಯ ವ್ಯಕ್ತಿಗಳಿಗೂ ಮನವಿ ಮಾಡಿದ ಯತೀಂದ್ರ ಅವರು, ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10 ಗಂಟೆಯೊಳಗೆ ಬಂದರೆ ಯಾರಿಗೂ ತೊಂದರೆಯಾಗುವುದಿಲ್ಲ. ಜನಸಾಮಾನ್ಯರಿಗೆ ತೊಂದರೆ ಕೊಡದೆ ದರ್ಶನ ಪಡೆಯುವುದು ಎಲ್ಲರ ಕರ್ತವ್ಯ ಎಂದಿದ್ದಾರೆ.&lt;/p&gt;&lt;p&gt;ತಮ್ಮ ಅಧಿಕಾರ ಅಥವಾ ಪ್ರಭಾವವನ್ನು ಬಳಸದೆ, ಸಾಮಾನ್ಯ ಭಕ್ತರಂತೆ ನಿಯಮಕ್ಕೆ ತಲೆಬಾಗಿದ ಯತೀಂದ್ರ ಸಿದ್ದರಾಮಯ್ಯ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>mysore</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/mysore/karnataka-minister-dr-yatindra-siddaramaiah-who-visited-chamundi-hills-did-not-get-the-darshan-of-god-gkn-5ubytn1"/>
        </item>
        <item>
            <title><![CDATA[ಹಾವೇರಿ ಬೆಳಗಾವಿ ಬಳಿಕ ಮತ್ತೆರಡು ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಚಿಂತನೆ,  ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?]]></title>
            <link>https://kannada.asianetnews.com/state/cloud-seeding-considered-for-mysuru-and-mandya-due-to-rainfall-deficit-rav/articleshow-68idwc1</link>
            <guid isPermaLink="true">https://kannada.asianetnews.com/state/cloud-seeding-considered-for-mysuru-and-mandya-due-to-rainfall-deficit-rav/articleshow-68idwc1</guid>
            <pubDate>Mon, 13 Jul 2026 08:30:19 +0530</pubDate>
            <description><![CDATA[ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿದ್ದರಿಂದ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಈ ನೀರಿನ ಕೊರತೆಯನ್ನು ನೀಗಿಸಲು, ಮೈಸೂರು ಮತ್ತು ಮಂಡ್ಯ ಭಾಗದಲ್ಲಿ ಮೋಡ ಬಿತ್ತನೆ ಮೂಲಕ ಕೃತಕ ಮಳೆ ಸುರಿಸಲು ಸರ್ಕಾರ ತಜ್ಞರ ಅಭಿಪ್ರಾಯವನ್ನು ಕೋರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcpjsa78wx8bzvxzqp5tb2c,imgname-----------------------2026-07-13t082532.235-1783911507271.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13)&lt;/strong&gt;: ಕಳೆದ ಮೂರು ದಿನಗಳಿಂದ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸಿದ್ದು, ಜಲಾಶಯ ಭರ್ತಿಯಾಗಲು ಇನ್ನೂ 13 ಅಡಿಗಳಷ್ಟು ನೀರಿನ ಹರಿವು ಬರಬೇಕಾಗಿದೆ. ಹಾಗಾಗಿ ಮೈಸೂರು, ಮಂಡ್ಯ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.&lt;/p&gt;&lt;p&gt;ಅಲ್ಲದೆ, ಕಳೆದ ಎರಡು ದಿನಗಳಿಂದ ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಕಂಡು ಬಂದಿದೆ. ಹೀಗಾಗಿ, ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕೂಡ ಕುಸಿತವಾಗಿದೆ. ಇದರ ಪರಿಣಾಮವಾಗಿ ಹಾರಂಗಿ ಅಣೆಕಟ್ಟು ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಕೃಷಿ ಚಟುವಟಿಕೆ ನಡೆಸಲು ಕೊಳವೆಬಾವಿ ನೀರನ್ನು ಅವಲಂಬಿಸುವಂತಾಗಿದೆ.&lt;/p&gt;&lt;p&gt;ಪ್ರಸಕ್ತ ನೀರಿನ ಕೊರತೆ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ ಭಾಗದಲ್ಲಿ ಮೋಡ ಬಿತ್ತನೆ ಮೂಲಕ ಮಳೆ ಸುರಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ತಜ್ಞರ ಅಭಿಮತ ಕೋರಿದೆ ಎಂದು ಹಿರಿಯ ಭೂವಿಜ್ಞಾನಿ ಡಾ.ಎಚ್.ಎಸ್.ಎಂ ಪ್ರಕಾಶ್ ತಿಳಿಸಿದ್ದಾರೆ.&lt;/p&gt;&lt;h2&gt;ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ&lt;/h2&gt;&lt;ul&gt; &lt;li&gt;ಕಬಿನಿ 57% 2284 2268.93&lt;/li&gt; &lt;li&gt;ಹೇಮಾವತಿ 58% 2922 2902.85&lt;/li&gt; &lt;li&gt;ತುಂಗಭದ್ರಾ 20% 1633 1599.55&lt;/li&gt; &lt;li&gt;ಸೂಪಾ(ಮೀ.) 25% 564 529.25&lt;/li&gt; &lt;li&gt;ಕೆಆರ್&zwnj;ಎಸ್ 32% 124.80 86.80&lt;/li&gt; &lt;li&gt;ಘಟಪ್ರಭಾ 36% 2175 2123.15&lt;/li&gt; &lt;li&gt;ಲಿಂಗನಮಕ್ಕಿ 20% 1819.12 1762.70&lt;/li&gt; &lt;li&gt;ಭದ್ರಾ 44% 2158.00 2118.82&lt;/li&gt; &lt;li&gt;ಹಾರಂಗಿ 56% 2859 2844.95&lt;/li&gt; &lt;li&gt;ಆಲಮಟ್ಟಿ(ಮೀ.) 58% 519.60 515.85&lt;/li&gt; &lt;li&gt;ನಾರಾಯಣಪುರ(ಮೀ.) 59% 492.25 488.72&lt;/li&gt; &lt;li&gt;ಮಲಪ್ರಭಾ 32% 2079.50 2053.80&lt;/li&gt;&lt;/ul&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cloud-seeding-considered-for-mysuru-and-mandya-due-to-rainfall-deficit-rav/articleshow-68idwc1"/>
        </item>
        <item>
            <title><![CDATA[ಕಾಲು ನೋವು ತೋರಿಸಲು ಬಂದಿದ್ದ ಗಾಯಕಿ ಎಸ್‌ ಜಾನಕಿ ಸಾವು ಕಂಡಿದ್ದು ಹೇಗೆ? ಖಾಸಗಿ ಆಸ್ಪತ್ರೆ ಹೇಳಿದ್ದಿಷ್ಟು..]]></title>
            <link>https://kannada.asianetnews.com/mysore/s-janaki-death-reason-apollo-bgs-hospital-mysuru-press-release-cardiac-arrest-san/articleshow-6b0gr5h</link>
            <guid isPermaLink="true">https://kannada.asianetnews.com/mysore/s-janaki-death-reason-apollo-bgs-hospital-mysuru-press-release-cardiac-arrest-san/articleshow-6b0gr5h</guid>
            <pubDate>Sat, 11 Jul 2026 22:30:54 +0530</pubDate>
            <description><![CDATA[ಹಿರಿಯ ಗಾಯಕಿ ಎಸ್. ಜಾನಕಿ ಅವರ ಸಾವಿನ ಕಾರಣದ ಬಗ್ಗೆ ಇದ್ದ ಗೊಂದಲಕ್ಕೆ ತೆರೆಬಿದ್ದಿದೆ. ಕಾಲು ನೋವಿನ ಚಿಕಿತ್ಸೆಗೆಂದು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು, ತೀವ್ರ ಸೋಂಕಿನಿಂದ ಉಂಟಾದ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕೃತವಾಗಿ ದೃಢಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx91x6m3ajb6pqxvpgmpj8p3,imgname-s-janaki-death-mysuru-apollo-bgs-hospital-1783789165187.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜು.11): &lt;/strong&gt;ಪ್ರಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ಅವರ ಹಠಾತ್ ನಿಧನಕ್ಕೆ ಕಾರಣವೇನು ಎಂಬ ಗೊಂದಲಕ್ಕೆ ಈಗ ತೆರೆ ಬಿದ್ದಿದೆ. ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯು ಜಾನಕಿ avr ಆರೋಗ್ಯ ಸ್ಥಿತಿ ಹಾಗೂ ಸಾವಿನ ನಿಖರ ಕಾರಣದ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಇಂದು ಮಧ್ಯಾಹ್ನ ಕಾಲು ನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಗಾನಕೋಗಿಲೆ, ಸಂಜೆ ವೇಳೆಗೆ ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ದೃಢಪಡಿಸಿದೆ.&lt;/p&gt;&lt;p&gt;ಆಸ್ಪತ್ರೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಎಸ್. ಜಾನಕಿ ಅವರನ್ನು ಜುಲೈ 11ರಂದು ಮಧ್ಯಾಹ್ನ 12:49 ಕ್ಕೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ತಂದಾಗ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ಅವರನ್ನು ತಪಾಸಣೆಗೆ ಒಳಪಡಿಸಿ, ಹೆಚ್ಚಿನ ತುರ್ತು ನಿರ್ವಹಣೆಗಾಗಿ ತಕ್ಷಣವೇ ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಿದ್ದರು.&lt;/p&gt;&lt;p&gt;ಖಾಸಗಿ ಆಸ್ಪತ್ರೆಯ ಆಂತರಿಕ ಮೂಲಗಳ ಮಾಹಿತಿ ಪ್ರಕಾರ, ಜಾನಕಿ ಅವರಿಗೆ ಇಂದು ಮಧ್ಯಾಹ್ನ ನೋವು ತೀವ್ರವಾಗಿತ್ತು. ಕಾಲಿಗೆ ಆಗಿದ್ದ ಗಾಯ, ಗ್ಯಾಂಗ್ರೀನ್&zwnj; ಆಗಿ ಬದಲಾಗಿತ್ತು ಎನ್ನಲಾಗಿದೆ. ಇದಕ್ಕಾಗಿಯೇ ಆಸ್ಪತ್ರೆಗೆ ಬಂದಿದ್ದರು. ಅವರ ಕಾಲಿನಲ್ಲಿ ಇನ್ಫೆಕ್ಷನ್ (ಸೋಂಕು) ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದ ಕಾರಣ ಅವರಿಗೆ ತಕ್ಷಣವೇ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯನ್ನು ಆರಂಭಿಸಲಾಗಿತ್ತು.&lt;/p&gt;&lt;h2&gt;&lt;strong&gt;ಚಿಕಿತ್ಸೆ ವೇಳೆ ಹೃದಯ ಸ್ತಂಭನ (Cardiac Arrest)&lt;/strong&gt;&lt;/h2&gt;&lt;p&gt;ಅಪೋಲೋ ಆಸ್ಪತ್ರೆಯ ತಜ್ಞ ವೈದ್ಯರ ಬಹುಶಿಸ್ತೀಯ ತಂಡ (Multidisciplinary Team) ಅತ್ಯಂತ ಕಟ್ಟುನಿಟ್ಟಾದ ವೈದ್ಯಕೀಯ ಆರೈಕೆ ಮತ್ತು ನಿರಂತರ ಮೇಲ್ವಿಚಾರಣೆಯನ್ನು ಐಸಿಯುನಲ್ಲಿ ಕೈಗೊಂಡಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಪ್ರಗತಿಯಲ್ಲಿದ್ದಾಗಲೇ ಜಾನಕಿ ಅವರಿಗೆ ಹಠಾತ್ ಹೃದಯ ಸ್ತಂಭನ (Cardiac Arrest) ಉಂಟಾಗಿದೆ. ವೈದ್ಯರು ಅವರನ್ನು ಉಳಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸಿದರೂ ಸಹ, ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ 7:30 ಕ್ಕೆ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಮಂಡಳಿ ಅಧಿಕೃತವಾಗಿ ಘೋಷಿಸಿದೆ.&lt;/p&gt;&lt;p&gt;ಕಾಲಿನ ಇನ್ಫೆಕ್ಷನ್ ತೀವ್ರವಾಗಿ ಇಡೀ ದೇಹಕ್ಕೆ ಹರಡಿದ್ದರಿಂದ ಉಂಟಾದ ಆರೋಗ್ಯ ಏರುಪೇರು ಹಾಗೂ ಹಠಾತ್ ಹೃದಯಾಘಾತವೇ ಗಾನಕೋಗಿಲೆಯ ಸಾವಿಗೆ ಪ್ರಮುಖ ಕಾರಣ ಎಂದು ಆಸ್ಪತ್ರೆಯ ಪ್ರಕಟಣೆ ಸ್ಪಷ್ಟಪಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/mysore/s-janaki-death-reason-apollo-bgs-hospital-mysuru-press-release-cardiac-arrest-san/articleshow-6b0gr5h"/>
        </item>
        <item>
            <title><![CDATA[S Janaki amma: ಸರಸ್ವತಿಯೇ ಕಣ್ಮುಚ್ಚಿದರೆ ಸರಿಗಮ ಕೇಳುವುದೇ..?  - ಕೆ. ಕಲ್ಯಾಣ್]]></title>
            <link>https://kannada.asianetnews.com/state/legendary-playback-singer-s-janaki-passes-away-at-88-column-by-k-kalyan-rav/articleshow-6gslhul</link>
            <guid isPermaLink="true">https://kannada.asianetnews.com/state/legendary-playback-singer-s-janaki-passes-away-at-88-column-by-k-kalyan-rav/articleshow-6gslhul</guid>
            <pubDate>Sun, 12 Jul 2026 06:46:32 +0530</pubDate>
            <description><![CDATA[ಖ್ಯಾತ ಗೀತ ರಚನಕಾರ ಕೆ. ಕಲ್ಯಾಣ್ ಅವರು ಗಾಯಕಿ ಎಸ್. ಜಾನಕಿ ಅವರೊಂದಿಗಿನ ತಮ್ಮ ತಾಯಿ-ಮಗನ ಸಂಬಂಧವನ್ನು ನೆನೆದಿದ್ದಾರೆ. ಜಾನಕಿ ಅಮ್ಮನ ಸರಳತೆ, ವೃತ್ತಿಪರತೆ ಮತ್ತು ತಮ್ಮ ಮನೆಗೆ ಬಂದು ಕೈತುತ್ತು ನೀಡಿದ ಕ್ಷಣಗಳನ್ನು ಅವರು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx93rgpm22eb8rqmrykqscz0,imgname-s-janaki-5-1783791108820.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಕೆ. ಕಲ್ಯಾಣ್&zwnj;, ಖ್ಯಾತ ಗೀತ ರಚನಕಾರ/ಸಂಗೀತ ನಿರ್ದೇಶಕ&lt;/strong&gt;&lt;/p&gt;&lt;p&gt;ಜಾನಕಿ ಅಮ್ಮ(Janaki Amma) ಇಲ್ಲ ಅನ್ನುವ ಶಬ್ದ ನಮ್ಮ ಕಿವಿಗೆ ಭರಿಸಲಿಕ್ಕಾಗಲ್ಲ. ಅವರು ಇದ್ದಾರೆ ಅಂದುಕೊಂಡರಷ್ಟೇ ನಮಗೆ ಬದುಕು. ನನಗೆ ಸ್ವಂತ ತಾಯಿಗಿಂತ ಹೆಚ್ಚಾಗಿದ್ದವರು ಅವರು ಅನ್ನುವುದು ಅತಿಶಯೋಕ್ತಿ ಖಂಡಿತಾ ಅಲ್ಲ. ಅದುವೇ ವಾಸ್ತವ.&lt;/p&gt;&lt;p&gt;ಜಾನಕಿ ಅಮ್ಮ ತುಂಬಾ ಸಲ ನಮ್ಮ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಎಲ್ಲರ ಜೊತೆಗೆ ಸಮಯ ಕಳೆದಿದ್ದಾರೆ. ನಾವೂ ಅವರ ಮನೆಗೆ ಸಾಕಷ್ಟು ಬಾರಿ ಹೋಗಿದ್ದೆವು. ಅವರು ಖುಷಿಯಿಂದ ನಾನು ಬರೆದ ಹಾಡುಗಳನ್ನು ಹಾಡಿದ್ದಾರೆ. ನಾನು ಸಂಗೀತ ನಿರ್ದೇಶನ ಮಾಡಿರುವ ಹಾಡನ್ನೂ ಹಾಡಿದ್ದಾರೆ.&lt;/p&gt;&lt;p&gt;ಇದೆಲ್ಲದರ ಆಚೆ ಆಗಾಗ ನನ್ನ ಜೊತೆಗೆ ಫೋನ್&zwnj;ನಲ್ಲಿ ಮಾತನಾಡುತ್ತಿದ್ದರು. ಏನಾದರೂ ಅಂದುಕೊಂಡಾಗ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಮಾತುಕತೆಗೆ ಶಿಖರಸದೃಶವಾದ ಅವರ ಸಾಧನೆ ಎಲ್ಲೂ ಅಡ್ಡಿಯಾಗುತ್ತಿರಲಿಲ್ಲ. ಅಷ್ಟು ಸಹಜ, ಆತ್ಮೀಯ ಮಾತುಕತೆ ನಮ್ಮದು.&lt;/p&gt;&lt;p&gt;ಚಿತ್ರರಂಗದಲ್ಲಿ ಯಾರನ್ನಾದರೂ ಬಾಯ್ತುಂಬ ಅಮ್ಮಾ ಅಂತ ಕರೆಯೋದಾದರೆ ಅವರನ್ನು ಕರೆಯುತ್ತೇನೆ. ಅವರೂ ನನ್ನನ್ನು &lsquo;ಕಂದಾ&rsquo; ಅಂತಲೇ ಕರೆದು ಮಾತನಾಡುತ್ತಿದ್ದರು. ಮಗು ಥರ ಮನಸ್ಸಿದ್ದ ತಾಯಿ ಅವರು. ಅವರ ಹಾಡುಗಳ ಬಗ್ಗೆ ಜಗತ್ತೇ ಮಾತನಾಡುತ್ತೆ. ಜೊತೆಗೆ ಅವರ ಹಾಡುವ ಮೊದಲಿನ ಸಿದ್ಧತೆ, ಭಾಷಾ ಶುದ್ಧತೆ, ಕೆಲಸಕ್ಕಾಗಿನ ಬದ್ಧತೆಗೆ ಅವರೇ ಸಾಟಿ. ಅದೆಷ್ಟೋ ಸಲ ಕನ್ನಡ ಹಾಡಿನ ಸಾಹಿತ್ಯವನ್ನು ಅವರಿಗೆ ಡಿಕ್ಟೇಟ್&zwnj; ಮಾಡಿದ್ದೇನೆ. ಅವರು ಅದನ್ನು ತೆಲುಗಿನಲ್ಲಿ ಬರೆದುಕೊಳ್ಳುತ್ತಿದ್ದರು. ಎಲ್ಲಾದರೂ ಒಂದು ಪದದ ಉಚ್ಚಾರಣೆ ತಪ್ಪಾದರೆ ಅದು ಸರಿ ಬರುವತನಕ ಹಾಡುತ್ತಲೇ ಇದ್ದರು. ಎಷ್ಟು ಸಮಯವಾದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಂಥಾ ಬದ್ಧತೆ ಅವರದ್ದು. ಮನಸೋ ಪರಮಶುದ್ಧ.&lt;/p&gt;&lt;p&gt;ಹೈದರಾಬಾದ್&zwnj;ನಲ್ಲಿದ್ದ ಅವರ ಮನೆಗೆ ಮೊದಲ ಬಾರಿ ಹೋದ ಸಂದರ್ಭ. ಎಂದಿನ ಪ್ರೀತಿಯಿಂದ ಮನೆ ಪೂರ್ತಿ ಕರೆದುಕೊಂಡು ಹೋಗಿ ತೋರಿಸಿದರು. ಮನೆಗೆ ಕಾಲಿಟ್ಟಾಕ್ಷಣ ಮೊದಲು ಕಣ್ಣಿಗೆ ಬಿದ್ದದ್ದು ಕಲೈಮಾಮಣಿ ಪ್ರಶಸ್ತಿ. ಆಮೇಲೆ ಒಂದು ಭಾಷೆಗೆ ಸಿಕ್ಕ 16 ರಾಜ್ಯ ಪ್ರಶಸ್ತಿಗಳು, ಅಲ್ಲಿಂದ ಮುಂದೆ ಹೋದರೆ ಮತ್ಯಾವುದೋ ಭಾಷೆಯ 11 ರಾಜ್ಯ ಪ್ರಶಸ್ತಿಗಳು, ಮುಂದೆ ಮತ್ತೊಂದು ಭಾಷೆಯ 6 ರಾಜ್ಯ ಪ್ರಶಸ್ತಿಗಳು.. ಹೀಗೆ ಒಟ್ಟಾಗಿ ಲೆಕ್ಕ ಮಾಡಿದರೆ ಮೂವತ್ತೋ, ನಲವತ್ತೋ ರಾಜ್ಯ ಪ್ರಶಸ್ತಿಗಳು. ಆದರೆ ಕನ್ನಡದ ಪ್ರಶಸ್ತಿಗಳ್ಯಾವುವೂ ಕಾಣಲಿಲ್ಲ. ಬಹುಶಃ ಕನ್ನಡಿಗರು ಅವರಿಗೆ ಕೊಟ್ಟ ಪ್ರೀತಿ, ಅವರು ಕನ್ನಡಿಗರಿಗೆ ಕೊಟ್ಟ ಪ್ರೀತಿ ಇದೇ ಬಹುದೊಡ್ಡ ಪ್ರಶಸ್ತಿಯಾಗಿತ್ತು ಅನಿಸುತ್ತದೆ.&lt;/p&gt;&lt;p&gt;ಜಾನಕಿ ಅಮ್ಮ ಅಂದರೆ ಪ್ರೀತಿ. ಅವರ ಧ್ವನಿ ಕೇಳುವಾಗಲೇ ಮನಸ್ಸಿಗೆ ಹಿತ, ಆಹ್ಲಾದ, ನೆಮ್ಮದಿ. ಅವರ ಹತ್ರ ಮಾತನಾಡಿದರೆ ಮನಸ್ಸು ಯಾವ ಕಷ್ಟದ ಸ್ಥಿತಿಯಲ್ಲಿದ್ದರೂ ಹಗುರಾಗುತ್ತಿತ್ತು. ನೆಮ್ಮದಿ ತುಂಬಿಕೊಳ್ಳುತ್ತಿತ್ತು. ನಮ್ಮೆಲ್ಲ ವಿಚಾರಗಳನ್ನೂ ಅವರ ಬಳಿ ಮುಕ್ತವಾಗಿ ಹಂಚಿಕೊಳ್ಳಬಹುದಿತ್ತು, ಅವರ ಜೊತೆ ಮಾತನಾಡಿ ಎಲ್ಲವನ್ನು ಮರೆತು ಹಗುರಾಗಬಹುದಿತ್ತು. ಅವರ ವ್ಯಕ್ತಿತ್ವವೇ ಅಷ್ಟು ವಾತ್ಸಲ್ಯಪೂರಿತವಾಗಿತ್ತು.&lt;/p&gt;&lt;p&gt;ಜಾನಕಿ ಅಮ್ಮ ನಮ್ಮ ಮನೆಗೆ ಬಂದಿದ್ದಾಗ ನನಗೆ ಕೈತುತ್ತು ಕೊಟ್ಟಿದ್ದರು. ಆ ಹೊತ್ತು ಮನೆಯರೆಲ್ಲ ಜೊತೆಯಾಗಿ ಊಟಕ್ಕೆ ಕೂತಿದ್ದೆವು. ಅವರು ನನ್ನ ಪಕ್ಕ ಕುಳಿತಿದ್ದರು. ಆ ಹೊತ್ತು ನನಗೆ ಕೈತುತ್ತು ಕೊಟ್ಟರು. ನಾನೂ ಅವರಿಗೆ ಕೈತುತ್ತು ಕೊಟ್ಟಿದ್ದೆ. ನಮ್ಮ ಮನೆಯ ಅಷ್ಟೂ ಜನ ಅವರ ಜೊತೆಗೆ ಕೂತು ಊಟ ಮಾಡುತ್ತಾ, ಅವರ ಹಾಡುಗಳ ಬಗ್ಗೆ ಮಾತನಾಡುತ್ತಾ, ಸಿನಿಮಾಗಳ ಬಗ್ಗೆ ಚರ್ಚೆ ಮಾಡುತ್ತಾ ಬೇರೆಯದೇ ಲೋಕದಲ್ಲಿದ್ದೆವು. ಆಹ್, ಆ ಜಗತ್ತೇ ಬೇರೆ.&lt;/p&gt;&lt;p&gt;ಸರಳತೆಗೆ ಜಾನಕಿ ಅಮ್ಮ ಇನ್ನೊಂದು ಹೆಸರು. ಅವರಿಗೆ ತಮ್ಮ ಸಾಧನೆಯ ಬಗ್ಗೆ ಹಿರಿತನದ ಬಗ್ಗೆ ಒಂಚೂರೂ ತಿಳಿದೇ ಇಲ್ಲ ಅನ್ನುವ ಹಾಗಿರುತ್ತಿದ್ದರು. ತನಗೆ ಏನೂ ಗೊತ್ತಿಲ್ಲ ಅನ್ನುತ್ತಿದ್ದರು. ನಾವು ಹೇಳಿದ್ದೆಲ್ಲವನ್ನೂ ಶ್ರದ್ಧೆಯಿಂದ ಕೇಳುತ್ತಿದ್ದರು.&lt;/p&gt;&lt;p&gt;ಎಲ್ಲಿ ಪ್ರೀತಿ ವಾತ್ಸಲ್ಯ ಇರುತ್ತದೋ ಅಲ್ಲಿ ಜಾನಕಿಯಮ್ಮ ಇರುತ್ತಾರೆ. ಅವರು ಇರುವ ಕಡೆ ಪ್ರೀತಿ, ವಾತ್ಸಲ್ಯ ಇರುತ್ತದೆ. ಇವತ್ತು ಅವರು ಕಾಲವಾಗಿರುವ ಸುದ್ದಿ ನಂಬಲಾಗುತ್ತಿಲ್ಲ. ದುಃಖವೂ ಗೊತ್ತಾಗುವುದಿಲ್ಲ. ನಮ್ಮ ನಡುವೆ ಅಂಥಾ ದೊಡ್ಡವರು ಇರಬೇಕು. ಇದ್ದರೆ ನಮಗೆ ಬದುಕಲು ಅದೇ ದೊಡ್ಡ ಚೈತನ್ಯ.&lt;/p&gt;&lt;p&gt;ಜಾನಕಿ ಅಮ್ಮ ಸಂಗೀತ ಕ್ಷೇತ್ರದ ಸರಸ್ವತಿ. ಸರಸ್ವತಿಯೇ ಕಣ್ಮಚ್ಚಿದರೆ ಸರಿಗಮ ಕೇಳುತ್ತಾ? ಆ ಥರ ಆಗಿದೆ ನನ್ನ ಕಥೆ. ಗಾಬರಿ ಆಗುತ್ತದೆ, ಬೇಜಾರಾಗುತ್ತದೆ, ನೋವಾಗುತ್ತೆ. ಮರುಕ್ಷಣ ಅವರ ಮುಖ ಕಣ್ಣೆದುರು ಬಂದು ನಿಲ್ಲುತ್ತದೆ. ಅವರು ಯಾರನ್ನೂ ನೋಯಿಸಿದವರಲ್ಲ, ಯಾರನ್ನೂ ಬೇಜಾರು ಮಾಡಿದವರಲ್ಲ, ಅಷ್ಟು ಮುಗ್ಧತೆ, ಮಗುವಿನಂಥ ಶುದ್ಧ ಮನಸ್ಸು ಅವರದ್ದು. ಜಾನಕಿ ಅಮ್ಮನಿಗೆ ಸಮನಾಗಿ ಯಾರೂ ಕಾಣಲ್ಲ. ಅವರು ಹೆತ್ತಮ್ಮನಂತೆಯೇ ಇದ್ದರು. ನೆನೆಸಿಕೊಂಡರೆ ಕಣ್ಣೀರಾಗುತ್ತದೆ.&lt;/p&gt;&lt;p&gt;ನನಗೆ ಜನ್ಮಕೊಟ್ಟ ತಾಯಿ ಈಗ ನಮ್ಮೊಡನೆ ಇಲ್ಲ. ಅವರ ಹೋದಾಗ ಎಂಥಾ ಆಘಾತ, ನೋವು ಆಗಿತ್ತೂ, ಈಗಲೂ ಹಾಗೇ ಆಗುತ್ತಿದೆ. ನಮ್ಮ ಆಯುಷ್ಯವನ್ನಾದರೂ ಕೊಟ್ಟು ಅವರನ್ನು ಉಳಿಸಿಕೊಳ್ಳಬೇಕಿತ್ತು, ಅವರಿಲ್ಲದೆ ನಾವಿಲ್ಲ.. ಅಂತೆಲ್ಲ ನಾವು ಈ ಕ್ಷಣದಲ್ಲಿ ಮಾತನಾಡಬಹುದು. ಆದರೆ ಅವು ನಮ್ಮ ಆಂತರ್ಯದ ನುಡಿಗಳೇ ಆದರೂ ವಿಧಿಲೀಲೆ ಮುಂದೆ ನಮ್ಮ ಈ ಮಾತು ಪ್ರಯೋಜನಕ್ಕೆ ಬರುವುದಿಲ್ಲ. ಏನು ಮಾತನಾಡಲೂ ತೋಚುವುದಿಲ್ಲ.&lt;/p&gt;&lt;p&gt;ನಮ್ಮ ಜೊತೆಗೆ ಬಹಳ ಭಾವನಾತ್ಮಕವಾಗಿ ಇರುತ್ತಿದ್ದರು. ಕೆಲವು ಸಲ ಮನಸ್ಸಲ್ಲಿ ಏನೋ ಇದ್ದಾಗ ನನ್ನ ಬಳಿ ಬಂದು ಗಟ್ಟಿಯಾಗಿ ಕೈ ಹಿಡಿದುಕೊಂಡು ಕೂತು ಬಿಡುತ್ತಿದ್ದರು. ಎಷ್ಟೋ ಹೊತ್ತು ಹಾಗೇ ಕೂತಿರುತ್ತಿದ್ದರು. ನಮ್ಮ ನಡುವೆ ಮೌನ ಸಂವಹನ ನಡೆಯುತ್ತಿತ್ತು. ತಾಯಿಯೊಬ್ಬಳು ಮನಸ್ಸು ತುಂಬಿದಾಗ ಬಂದು ಮಗನ ಕೈಯನ್ನು ಸುಮ್ಮನೆ ಹಿಡಿದುಕೊಳ್ಳುವ ರೀತಿಯಲ್ಲಿ ಅವರ ಆ ನಡೆ ಇರುತ್ತಿತ್ತು. ಅದನ್ನೆಲ್ಲ ನೆನೆಸಿಕೊಂಡರೆ ಇದೆಲ್ಲ ನಿಜವಾ ಕನಸಾ ಇದೆಲ್ಲ ಏನೋ ಮಾಯೆ ಅಂತ ಅನಿಸುತ್ತದೆ.&lt;/p&gt;&lt;p&gt;ಎದೆಗೆ ಭಾರವಾದ ಕ್ಷಣವಿದು. ಅವರಿಗೆ ಶ್ರದ್ಧಾಂಜಲಿ ಹೇಳುವುದು ಇತ್ಯಾದಿಗಳೆಲ್ಲ ನನ್ನಂಥವರಿಗೆ ಊಹಿಸಲೂ ಸಾಧ್ಯವಾಗದ ಕ್ಷಣ. ಅವರ ಪಾದಗಳಲ್ಲಿ ನನ್ನ ಶಿರವನ್ನಿಟ್ಟು, ಪಾದಗಳನ್ನು ಕಣ್ಣಿಗೊತ್ತಿಕೊಂಡು ಅವರ ಆಶೀರ್ವಾದ ಬೇಡುವುದೊಂದೇ ಉಳಿದಿರುವುದು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/legendary-playback-singer-s-janaki-passes-away-at-88-column-by-k-kalyan-rav/articleshow-6gslhul"/>
        </item>
        <item>
            <title><![CDATA[Breaking: ಪ್ರಖ್ಯಾತ ಗಾಯಕಿ, ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ]]></title>
            <link>https://kannada.asianetnews.com/state/legendary-singer-s-janaki-passed-away-mysuru-apollo-hospital-legendary-playback-singer-san/articleshow-8euascl</link>
            <guid isPermaLink="true">https://kannada.asianetnews.com/state/legendary-singer-s-janaki-passed-away-mysuru-apollo-hospital-legendary-playback-singer-san/articleshow-8euascl</guid>
            <pubDate>Sat, 11 Jul 2026 20:23:27 +0530</pubDate>
            <description><![CDATA[ದಕ್ಷಿಣ ಭಾರತದ ಗಾನಕೋಗಿಲೆ, ಖ್ಯಾತ ಗಾಯಕಿ ಎಸ್. ಜಾನಕಿ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 88 ವರ್ಷ ವಯಸ್ಸಿನವರಾಗಿದ್ದ ಅವರು, 17 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿ, ಆರು ದಶಕಗಳ ಕಾಲ ಸಂಗೀತ ಲೋಕವನ್ನು ಆಳಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01da64zb1xpcv9a4dff5v7gwda,imgname-S-Janaki.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜು.11): &lt;/strong&gt;ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿದ್ದ ದಕ್ಷಿಣ ಭಾರತದ ಗಾನಕೋಗಿಲೆ, ದಂತಕಥೆ ಎಸ್. ಜಾನಕಿ (SS Janaki) ಇನ್ನಿಲ್ಲ. ತಮ್ಮ 88ನೇ ವಯಸ್ಸಿನಲ್ಲಿ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತಮ್ಮ ಮಾಧುರ್ಯಭರಿತ ಧ್ವನಿ, ಅದ್ಭುತ ಭಾವಾಭಿವ್ಯಕ್ತಿ ಹಾಗೂ ಸ್ವರ ಬದಲಾವಣೆಯ (Modulation) ಮೂಲಕ ಆರು ದಶಕಗಳ ಕಾಲ ಭಾರತೀಯ ಚಿತ್ರರಂಗವನ್ನು ಆಳಿದ ಸ್ವರ ಮಾಂತ್ರಿಕಿ ಜಾನಕಿ ಅಮ್ಮನ ಸಂಗೀತ ಸಾಮ್ರಾಜ್ಯದ ಒಂದು ಸುವರ್ಣ ಯುಗ ಅವರ ಸಾವಿನೊಂದಿಗೆ ಅಂತ್ಯವಾಗಿದೆ.&lt;/p&gt;&lt;p&gt;1938ರ ಏಪ್ರಿಲ್ 23 ರಂದು ಜನಿಸಿದ ಸಿಸ್ತ್ಲಾ ಶ್ರೀರಾಮಮೂರ್ತಿ ಜಾನಕಿ (Sistla Sreeramamurthy Janaki) ಅವರು ಕೇವಲ ಗಾಯಕಿಯಾಗಿರಲಿಲ್ಲ, ಬದಲಿಗೆ ಭಾರತೀಯ ಸಂಗೀತ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಧ್ವನಿಯಾಗಿದ್ದರು. ಹಾಡಿನ ಪ್ರತಿ ಸಾಲಿಗೂ ಜೀವ ತುಂಬುತ್ತಿದ್ದ ಇವರ ವಿಶಿಷ್ಟ ಶೈಲಿಗೆ ಜಗತ್ತೇ ಮಾರುಹೋಗಿತ್ತು. ಅದಕ್ಕಾಗಿಯೇ ಇವರನ್ನು ವಿಶ್ವದಾದ್ಯಂತ ಇರುವ ಅಭಿಮಾನಿಗಳು ಪ್ರೀತಿಯಿಂದ &quot;ಜಾನಕಿ ಅಮ್ಮ&quot; ಮತ್ತು &quot;ದಕ್ಷಿಣ ಭಾರತದ ಗಾನಕೋಗಿಲೆ&quot; ಎಂದೇ ಆರಾಧಿಸುತ್ತಿದ್ದರು.&lt;/p&gt;&lt;h2&gt;&lt;strong&gt;ಕಾಲು ಜಾರಿ ಬಿದ್ದಿದ್ದ ಎಸ್&zwnj;.ಜಾನಕಿ&lt;/strong&gt;&lt;/h2&gt;&lt;p&gt;ಬಹುಮುಖ ಪ್ರತಿಭೆಯ ಗಾಯಕಿಯಾಗಿ ವ್ಯಾಪಕವಾಗಿ ಅವರು ಮೆಚ್ಚುಗೆ ಪಡೆದಿದ್ದ ಎಸ್&zwnj;.ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಗೀತ ನಿರ್ದೇಶಕ ಇಳಯರಾಜ ಅವರೊಂದಿಗೆ ಆತ್ಮೀಯ ಒಡನಾಟ ಇರಿಸಿಕೊಂಡಿದ್ದರು. 1960, 1970 ಮತ್ತು 1980 ರ ದಶಕಗಳಲ್ಲಿ ಪಿ.ಬಿ. ಶ್ರೀನಿವಾಸ್ , ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಡಾ. ರಾಜ್&zwnj;ಕುಮಾರ್ ಜೊತೆಗೆ ಆಪ್ತ ಒಡನಾಟ ಹೊಂದಿದ್ದರು. ಹೆಚ್ಚೂಕಡಿಮೆ ಡಾ.ರಾಜ್&zwnj;ಕುಮಾರ್&zwnj; ಅವರ ಎಲ್ಲಾ ಚಿತ್ರಗಳಲ್ಲೂ ಎಸ್&zwnj;.ಜಾನಕಿ ಅವರ ದನಿ ಇರುತ್ತಿತ್ತು. ಇತ್ತೀಚೆಗೆ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಎಸ್&zwnj;.ಜಾನಕಿ, ವೀಲ್&zwnj;ಚೇರ್&zwnj;ನಲ್ಲಿ ಓಡಾಡುತ್ತಿದ್ದರು.&lt;/p&gt;&lt;h2&gt;&lt;strong&gt;20ಕ್ಕೂ ಹೆಚ್ಚು ಭಾಷೆ, 48,000ಕ್ಕೂ ಅಧಿಕ ಗೀತೆಗಳ ಗರಿಮೆ!&lt;/strong&gt;&lt;/h2&gt;&lt;p&gt;ಜಾನಕಿ ಅಮ್ಮನವರ ಕಂಠಸಿರಿಗೆ ಭಾಷೆಯ ಗೆರೆಗಳಿರಲಿಲ್ಲ. ಚಿತ್ರಗಳು, ಆಲ್ಬಮ್&zwnj;ಗಳು, ದೂರದರ್ಶನ ಮತ್ತು ರೇಡಿಯೋ ಸೇರಿದಂತೆ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಬರೊಬ್ಬರಿ 48,000ಕ್ಕೂ ಹೆಚ್ಚು ಹಾಡುಗಳನ್ನು ಅವರು ರೆಕಾರ್ಡ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಯಾ, ತುಳು, ಉರ್ದು, ಪಂಜಾಬಿ, ಬಡಗ, ಬೆಂಗಾಲಿ, ಕೊಂಕಣಿ ಸೇರಿದಂತೆ ಭಾರತದ 20 ಭಾಷೆಗಳಲ್ಲಿ ಇವರ ಸ್ವರ ಸಾರಥ್ಯವಿತ್ತು. ಅಷ್ಟೇ ಅಲ್ಲದೆ, ಇಂಗ್ಲಿಷ್, ಜಪಾನೀಸ್, ಜರ್ಮನ್ ಮತ್ತು ಸಿಂಹಳದಂತಹ ವಿದೇಶಿ ಭಾಷೆಗಳಿಗೂ ತಮ್ಮ ಧ್ವನಿಯಾಗುವ ಮೂಲಕ ಭಾರತದ ಅತ್ಯಂತ ಬಹುಮುಖ ಪ್ರತಿಭೆಯ (Versatile) ಗಾಯಕಿ ಎನಿಸಿಕೊಂಡಿದ್ದರು.&lt;/p&gt;&lt;h2&gt;&lt;strong&gt;ಕನ್ನಡವೇ ಜಾನಕಿ ಅಮ್ಮನ ಉಸಿರು&lt;/strong&gt;&lt;/h2&gt;&lt;p&gt;ಆಂಧ್ರ ಮೂಲದವರಾಗಿದ್ದರೂ ಜಾನಕಿ ಅಮ್ಮನವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗೀತೆಗಳನ್ನು ಹಾಡಿದ್ದು ನಮ್ಮ ಕನ್ನಡ ಭಾಷೆಯಲ್ಲಿ. ಕನ್ನಡದ ನಂತರದ ಸ್ಥಾನ ಮಲಯಾಳಂ ಭಾಷೆಯದ್ದಾಗಿದೆ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅವರ ಕಾಲದ ಸುವರ್ಣ ಯುಗದಿಂದ ಹಿಡಿದು ಇತ್ತೀಚಿನ ತಲೆಮಾರಿನವರೆಗೂ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಾಯಕಿಯ ಧ್ವನಿಯಾಗಿ ಜಾನಕಿ ಅಮ್ಮ ಮಿಂಚಿದ್ದರು.&lt;/p&gt;&lt;h2&gt;&lt;strong&gt;19ನೇ ವಯಸ್ಸಿಗೆ ಆರಂಭವಾದ ಸಂಗೀತ ಸವಾರಿ&lt;/strong&gt;&lt;/h2&gt;&lt;p&gt;1957 ರಲ್ಲಿ ತಮಿಳಿನ 'ವಿಧಿಹಿನ್ ವಿಲಾಯಟ್ಟು' ಚಿತ್ರದ ಮೂಲಕ ಕೇವಲ 19ನೇ ವಯಸ್ಸಿನಲ್ಲಿಯೇ ಹಿನ್ನೆಲೆ ಗಾಯಕಿಯಾಗಿ ಜಾನಕಿ ಅಮ್ಮ ಚಿತ್ರರಂಗ ಪ್ರವೇಶಿಸಿದರು. ಅಚ್ಚರಿಯೆಂದರೆ, ಅವರು ವೃತ್ತಿಜೀವನ ಆರಂಭಿಸಿದ ಮೊದಲ ವರ್ಷದಲ್ಲೇ ಆರು ವಿಭಿನ್ನ ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದರು. 2016 ರಲ್ಲಿ ಚಿತ್ರರಂಗ ಮತ್ತು ವೇದಿಕೆ ಕಾರ್ಯಕ್ರಮಗಳಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುವವರೆಗೆ ಸತತ 60 ವರ್ಷಗಳ ಕಾಲ ಅವರು ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ತದನಂತರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು 2018 ರ ತಮಿಳಿನ &lsquo;ಪನ್ನಾಡಿ&rsquo; ಚಿತ್ರಕ್ಕಾಗಿ ಮತ್ತೊಮ್ಮೆ ಹಾಡಿದ್ದರು.&lt;/p&gt;&lt;h2&gt;&lt;strong&gt;ಪ್ರಶಸ್ತಿಗಳೇ ಗೌರವಿಸಿದ ಮಹಾನ್ ಚೇತನ&lt;/strong&gt;&lt;/h2&gt;&lt;p&gt;ಎಸ್. ಜಾನಕಿ ಅವರ ಅಪಾರ ಪ್ರತಿಭೆಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು ಅಸಂಖ್ಯಾತ. 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ವಿವಿಧ ರಾಜ್ಯ ಸರ್ಕಾರಗಳಿಂದ ಬರೋಬ್ಬರಿ 33 ಚಲನಚಿತ್ರ ಪ್ರಶಸ್ತಿಗಳು ಇವರ ಮುಡಿಗೇರಿವೆ. ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ತಮಿಳುನಾಡು ಸರ್ಕಾರದ 'ಕಲೈಮಾಮಣಿ' ಮತ್ತು ಕರ್ನಾಟಕ ಸರ್ಕಾರದ ಅತ್ಯುನ್ನತ 'ರಾಜ್ಯೋತ್ಸವ ಪ್ರಶಸ್ತಿ' ನೀಡಿ ಇವರನ್ನು ಗೌರವಿಸಲಾಗಿತ್ತು.&lt;/p&gt;&lt;h2&gt;&lt;strong&gt;ಸ್ವಾಭಿಮಾನದ ಸಾಕಾರ ಮೂರ್ತಿ&lt;/strong&gt;&lt;/h2&gt;&lt;p&gt;2013 ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ &lsquo;ಪದ್ಮಭೂಷಣ&rsquo;ವನ್ನು ಜಾನಕಿ ಅಮ್ಮ ನಯವಾಗಿ ತಿರಸ್ಕರಿಸಿದ್ದರು. ಕಲೆಯ ಮೌಲ್ಯ ಮತ್ತು ದಕ್ಷಿಣ ಭಾರತದ ಕಲಾವಿದರನ್ನು ಗುರುತಿಸುವಲ್ಲಿ ಆಗುತ್ತಿರುವ ತಾರತಮ್ಯವನ್ನು ಪ್ರಶ್ನಿಸಿದ್ದ ಅವರು, &quot;ಆರು ದಶಕಗಳ ನನ್ನ ಸಂಗೀತ ಸೇವೆಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ &lsquo;ಭಾರತ ರತ್ನ&rsquo; ಸಿಗಬೇಕೇ ಹೊರತು ಪದ್ಮ ಪ್ರಶಸ್ತಿಗಳಲ್ಲ&quot; ಎಂದು ಹೆಮ್ಮೆಯಿಂದ ಸಾರಿದ ಸ್ವಾಭಿಮಾನಿ ಇವರು. ಇಂದು ಜಾನಕಿ ಅಮ್ಮನವರ ಭೌತಿಕ ಕಾಯ ನಮ್ಮನ್ನು ಅಗಲಿರಬಹುದು. ಆದರೆ, ಅವರು ಹಾಡಿರುವ ಆ 48 ಸಾವಿರಕ್ಕೂ ಹೆಚ್ಚು ಮಧುರ ಗೀತೆಗಳು, ಆ ಕೋಗಿಲೆಯ ಧ್ವನಿ ಜಗತ್ತು ಇರುವವರೆಗೂ ಪ್ರತಿಯೊಬ್ಬ ಸಂಗೀತ ಪ್ರೇಮಿಯ ಎದೆಯಾಳದಲ್ಲಿ ಸದಾ ಜೀವಂತವಾಗಿರುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/state/legendary-singer-s-janaki-passed-away-mysuru-apollo-hospital-legendary-playback-singer-san/articleshow-8euascl"/>
        </item>
        <item>
            <title><![CDATA[ಮೈಸೂರು ಚಾಮುಂಡಿ ದರ್ಶನ ಟಿಕೆಟ್‌ ದರ 6 ಪಟ್ಟು ಏರಿಕೆ! ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತೀವ್ರ ಅಸಮಾಧಾನ]]></title>
            <link>https://kannada.asianetnews.com/karnataka-districts/mysuru-chamundeshwari-temple-2000-ticket-sparks-row-royal-family-member-pramoda-devi-wadiyar-has-strongly-condemned-gdp/articleshow-9d2tiu5</link>
            <guid isPermaLink="true">https://kannada.asianetnews.com/karnataka-districts/mysuru-chamundeshwari-temple-2000-ticket-sparks-row-royal-family-member-pramoda-devi-wadiyar-has-strongly-condemned-gdp/articleshow-9d2tiu5</guid>
            <pubDate>Mon, 06 Jul 2026 11:17:41 +0530</pubDate>
            <description><![CDATA[ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ದರ್ಶನಕ್ಕೆ 2,000 ರೂ. ಟಿಕೆಟ್ ದರ ನಿಗದಿಪಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ದುಬಾರಿ ದರ ಏರಿಕೆಯನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಖಂಡಿಸಿದ್ದು, ಇದು ಸಾಮಾನ್ಯ ಭಕ್ತರಿಗೆ ಮಾಡುವ ಅನ್ಯಾಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j2nvv0vwr69yfqcveqjrgsm0,imgname-vdvd.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು:&lt;/strong&gt; ಸಾಂಸ್ಕೃತಿಕ ನಗರಿ ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಶುಕ್ರವಾರಗಳ ವಿಶೇಷ ಪೂಜೆ ಹಾಗೂ ದರ್ಶನಕ್ಕೆ ಜಿಲ್ಲಾಡಳಿತ ಮತ್ತು ಪ್ರಾಧಿಕಾರವು ಬರೋಬ್ಬರಿ 2,000 ರೂಪಾಯಿಗಳ ದುಬಾರಿ ಟಿಕೆಟ್ ದರ ನಿಗದಿಪಡಿಸಿರುವುದಕ್ಕೆ ಭಕ್ತ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ವಿವಾದಾತ್ಮಕ ನಿರ್ಧಾರದ ಕುರಿತು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಏಕಪಕ್ಷೀಯ ಧೋರಣೆಯನ್ನು ಖಂಡಿಸಿದ್ದಾರೆ.&lt;/p&gt;&lt;h2&gt;ಜನಸಾಮಾನ್ಯರ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ&lt;/h2&gt;&lt;p&gt;ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿ ವಿಶೇಷ ದರ್ಶನಕ್ಕೆ ಇಷ್ಟೊಂದು ದುಬಾರಿ ದರದ ಅಂದರೆ 2 ಸಾವಿರ ರೂ.ಗಳ ಟಿಕೆಟ್ ನಿಗದಿಪಡಿಸುವ ಯಾವುದೇ ಅವಶ್ಯಕತೆ ಇರಲಿಲ್ಲ. ಇಷ್ಟು ದುಬಾರಿ ದರವನ್ನು ಅಧಿಕಾರಿಗಳು ಯಾವ ಆಧಾರದ ಮೇಲೆ ನಿರ್ಧಾರ ಮಾಡಿದ್ದಾರೋ ತಿಳಿಯದು. ನನಗಿರುವ ಮಾಹಿತಿಯಂತೆ, ಈ ಬಗ್ಗೆ ಯಾವುದೇ ಪೂರ್ವಭಾವಿ ಸಭೆಗಳನ್ನು ಸರಿಯಾಗಿ ನಡೆಸಿಲ್ಲ. ಏಕಾಏಕಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನಸಾಮಾನ್ಯರ ಹಾಗೂ ಭಕ್ತಾದಿಗಳ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತೀವ್ರ ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;2,000 ರೂ.ಗಳ ಈ ವಿಶೇಷ ದರ್ಶನದ ಟಿಕೆಟ್&zwnj;ಗಳನ್ನು ಭಕ್ತರು ಆನ್&zwnj;ಲೈನ್ ಮೂಲಕ ಖರೀದಿಸಬೇಕೇ ಅಥವಾ ದೇವಸ್ಥಾನದ ಕೌಂಟರ್&zwnj;ನಲ್ಲೇ ನೇರವಾಗಿ ಪಡೆಯಬೇಕೇ ಎಂಬ ಬಗ್ಗೆ ಪ್ರಾಧಿಕಾರವಾಗಲಿ, ಅಧಿಕಾರಿಗಳಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಗೊಂದಲಕಾರಿ ನಿಯಮಗಳ ಬಗ್ಗೆ ಕಿಡಿಕಾರಿದರು.&lt;/p&gt;&lt;h2&gt;ಈ ಬಾರಿಯ ಆಷಾಢ ದರ್ಶನ ವ್ಯವಸ್ಥೆ ಹಾಗೂ ಬದಲಾವಣೆಗಳು:&lt;/h2&gt;&lt;p&gt;ಈ ಹಿಂದೆ ಇದ್ದ 300 ರೂಪಾಯಿ ಮುಖಬೆಲೆಯ ವಿಶೇಷ ದರ್ಶನದ ಟಿಕೆಟ್&zwnj;ಗಳನ್ನು ಈ ಬಾರಿ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅದರ ಜಾಗದಲ್ಲಿ ಕೇವಲ 2,000 ರೂಪಾಯಿಗಳ ಪ್ರೀಮಿಯಂ ಟಿಕೆಟ್ ಪಡೆದವರಿಗೆ ಮಾತ್ರ ನೇರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಆಷಾಢದ ದಿನಗಳಲ್ಲಿ ಸಾಮಾನ್ಯ ಭಕ್ತಾದಿಗಳಿಗೆ ಬೆಳಗ್ಗೆ 8 ಗಂಟೆಯಿಂದ ದರ್ಶನದ ವ್ಯವಸ್ಥೆ ಇರಲಿದೆ. ವಿಐಪಿ (VIP) ದರ್ಶನಕ್ಕೆ ಪ್ರತ್ಯೇಕವಾಗಿ ಬೆಳಗ್ಗೆ 5.30 ರಿಂದ 9.30 ರವರೆಗೆ ಮಾತ್ರ ಸಮಯ ನಿಗದಿಪಡಿಸಲಾಗಿದೆ. ಆಷಾಢದ ಪ್ರಮುಖ ದಿನಗಳಲ್ಲಿ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಲಲಿತ ಮಹಲ್ ಮೈದಾನದಿಂದ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಕೆಎಸ್&zwnj;ಆರ್&zwnj;ಟಿಸಿ (KSRTC) ವತಿಯಿಂದ ಉಚಿತ ಶಟಲ್ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.&lt;/p&gt;&lt;h2&gt;ಆಷಾಢ ಮಾಸದ ಪ್ರಮುಖ ದಿನಗಳ ವೇಳಾಪಟ್ಟಿ:&lt;/h2&gt;&lt;p&gt;ಜು.17ರಂದು ಮೊದಲ ಆಷಾಢ ಶುಕ್ರವಾರ, ಜು.24 ರಂದು 2ನೇ ಆಷಾಢ ಶುಕ್ರವಾರ, ಜು.31ರಂದು 3ನೇ ಆಷಾಢ ಶುಕ್ರವಾರ, ಆ.4ರಂದು ಅಮ್ಮನವರ ಜನ್ಮೋತ್ಸವ, ಆ.7 ರಂದು 4ನೇ ಆಷಾಢ ಶುಕ್ರವಾರ ನಡೆಯುತ್ತದೆ.&lt;/p&gt;&lt;p&gt;ತಾಯಿಯ ದರ್ಶನಕ್ಕೆ ಬರುವ ಶ್ರೀಮಂತರಿಗೆ ಮಾತ್ರ ಮಣೆ ಹಾಕಿ, ಬಡ ಹಾಗೂ ಮಧ್ಯಮ ವರ್ಗದ ಭಕ್ತರಿಗೆ ತಾರತಮ್ಯ ಎಸಗಲಾಗುತ್ತಿದೆ ಎಂಬ ಆಕ್ರೋಶದ ನಡುವೆ, ರಾಜವಂಶಸ್ಥರೇ ಈ ದರ ಏರಿಕೆಯ ವಿರುದ್ಧ ಧ್ವನಿ ಎತ್ತಿರುವುದು ಈಗ ಮೈಸೂರು ಜಿಲ್ಲಾಡಳಿತ ಉತ್ತರಿಸಬೇಕಾಗಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mysuru-chamundeshwari-temple-2000-ticket-sparks-row-royal-family-member-pramoda-devi-wadiyar-has-strongly-condemned-gdp/articleshow-9d2tiu5"/>
        </item>
        <item>
            <title><![CDATA[ಮೈಸೂರು ದಸರಾ-2026 ಸಂಭ್ರಮಕ್ಕೆ ದಿನಾಂಕ ಫಿಕ್ಸ್: ಅಕ್ಟೋಬರ್ 11ಕ್ಕೆ ಉದ್ಘಾಟನೆ, 21ಕ್ಕೆ ಜಂಬೂ ಸವಾರಿ!]]></title>
            <link>https://kannada.asianetnews.com/state/mysuru-dasara-2026-schedule-dates-inauguration-jamboo-savari-kambala-highlights/articleshow-d8g8byy</link>
            <guid isPermaLink="true">https://kannada.asianetnews.com/state/mysuru-dasara-2026-schedule-dates-inauguration-jamboo-savari-kambala-highlights/articleshow-d8g8byy</guid>
            <pubDate>Fri, 10 Jul 2026 16:34:23 +0530</pubDate>
            <description><![CDATA[ನಾಡಹಬ್ಬ ಮೈಸೂರು ದಸರಾ 2026 ಮಹೋತ್ಸವವು ಅಕ್ಟೋಬರ್ 11 ರಿಂದ 21ರವರೆಗೆ ನಡೆಯಲಿದ್ದು, ಜುಲೈ 26ರಿಂದ ಗಜಪಯಣ ಆರಂಭವಾಗಲಿದೆ. ಈ ಬಾರಿಯ ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆ 'ಕಂಬಳ'ವನ್ನು ಆಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx5v62gadz60re2bzbeg6gg9,imgname-mysuru-dasara-2026-1783681452554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಮೈಸೂರು (ಜು.10): ನಾ&lt;/strong&gt;ಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ರಾಜ್ಯ ಸರ್ಕಾರ ಕಾರ್ಯಕ್ರಮಗಳ ಅಧಿಕೃತ ದಿನಾಂಕಗಳನ್ನು ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ದಿನಾಂಕಗಳ ವಿವರ:&lt;/strong&gt;&lt;/h2&gt;&lt;ul&gt; &lt;li&gt;ಈ ವರ್ಷದ ದಸರಾ ಮಹೋತ್ಸವವು ಅಕ್ಟೋಬರ್ 11 ರಿಂದ ಅಕ್ಟೋಬರ್ 21 ರವರೆಗೆ ಜರುಗಲಿದೆ.&lt;/li&gt; &lt;li&gt;ಅಕ್ಟೋಬರ್ 11: ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಉದ್ಘಾಟಕರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.&lt;/li&gt; &lt;li&gt;ಅಕ್ಟೋಬರ್ 18: ಮಹಾ ನವಮಿ / ದುರ್ಗಾಷ್ಟಮಿ ಪೂಜೆಗಳು ನಡೆಯಲಿವೆ.&lt;/li&gt; &lt;li&gt;ಅಕ್ಟೋಬರ್ 19: ಆಯುಧ ಪೂಜೆ ಸಂಭ್ರಮ.&lt;/li&gt; &lt;li&gt;ಅಕ್ಟೋಬರ್ 21: ದಸರಾದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಅಥವಾ ಜಂಬೂ ಸವಾರಿ ನಡೆಯಲಿದೆ. ಅಂದು ಮಧ್ಯಾಹ್ನ 4:10ಕ್ಕೆ ಶುಭ 'ಮೀನಾ ಲಗ್ನ'ದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ನಂತರ ಚಿನ್ನದ ಅಂಬಾರಿಯಲ್ಲಿ ವಿರಾಜಮಾನನಾಗಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಾಗುವುದು.&lt;/li&gt;&lt;/ul&gt;&lt;h2&gt;&lt;strong&gt;ಜುಲೈ 26ರಿಂದಲೇ ಗಜಪಯಣ ಆರಂಭ:&lt;/strong&gt;&lt;/h2&gt;&lt;p&gt;ದಸರಾ ಆನೆಗಳ ಆಗಮನ ಅಥವಾ 'ಗಜಪಯಣ'ಕ್ಕೆ ಜುಲೈ 26 ರಂದು ಚಾಲನೆ ನೀಡಲು ನಿರ್ಧರಿಸಲಾಗಿದೆ. ಕಾಡಿನಿಂದ ನಾಡಿಗೆ ಬರುವ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರುವ ಮೂಲಕ ದಸರಾ ಚಟುವಟಿಕೆಗಳು ಅಧಿಕೃತವಾಗಿ ಮೈಸೂರಿನಲ್ಲಿ ಕಳೆಗಟ್ಟಲಿವೆ.&lt;/p&gt;&lt;h2&gt;&lt;strong&gt;ಮೈಸೂರು ದಸರಾದಲ್ಲಿ ಮೊದಲ ಬಾರಿಗೆ 'ಕಂಬಳ':&lt;/strong&gt;&lt;/h2&gt;&lt;p&gt;ಈ ಬಾರಿಯ ದಸರಾ ಮಹೋತ್ಸವಕ್ಕೆ ಕರಾವಳಿಯ ಸೊಗಡು ಸೇರ್ಪಡೆಯಾಗಲಿದೆ. ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಾನಪದ ಕ್ರೀಡೆಯಾದ 'ಕಂಬಳ'ವನ್ನು ಆಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ. ಇದು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಹೊಸ ಅನುಭವ ನೀಡಲಿದೆ.&lt;/p&gt;&lt;h2&gt;&lt;strong&gt;ಉನ್ನತ ಮಟ್ಟದ ಸಭೆ:&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮೈಸೂರು ಭಾಗದ ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ದಸರಾ ಸಂದರ್ಭದಲ್ಲಿ ನಗರದ ಭದ್ರತೆ, ಸ್ವಚ್ಛತೆ, ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ಈ ಬಾರಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.&lt;/p&gt;&lt;p&gt;ವಿದ್ಯುತ್ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಫಲಪುಷ್ಪ ಪ್ರದರ್ಶನ ಸೇರಿದಂತೆ ದಸರಾದ ಎಲ್ಲಾ ಅಂಗಗಳು ಈ ಬಾರಿ ಸಾರ್ವಜನಿಕರನ್ನು ಸಮ್ಮೋಹಗೊಳಿಸಲಿವೆ. ವಿಶ್ವದ ವಿವಿಧ ಮೂಲೆಗಳಿಂದ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಸಕಲ ವ್ಯವಸ್ಥೆ ಮಾಡಲು ಸರ್ಕಾರ ಬದ್ಧವಾಗಿದೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/mysuru-dasara-2026-schedule-dates-inauguration-jamboo-savari-kambala-highlights/articleshow-d8g8byy"/>
        </item>
        <item>
            <title><![CDATA[ಚನ್ನಪಟ್ಟಣದ ಪುರುಷ ತಹಸೀಲ್ದಾರರಿಗೆ ಅಸಹಜ ಲೈಂಗಿಕ ದೌರ್ಜನ್ಯ; ಮೈಸೂರಿನ ಮೂವರಿಂದ ನಡೆದೇಹೋಯ್ತು ವಿಕೃತಿ!]]></title>
            <link>https://kannada.asianetnews.com/karnataka-districts/bengaluru-south-district-channapatna-tahsildar-physical-harassment-life-threat-attempt-case-anush-arrest/articleshow-ex76evb</link>
            <guid isPermaLink="true">https://kannada.asianetnews.com/karnataka-districts/bengaluru-south-district-channapatna-tahsildar-physical-harassment-life-threat-attempt-case-anush-arrest/articleshow-ex76evb</guid>
            <pubDate>Tue, 07 Jul 2026 22:58:09 +0530</pubDate>
            <description><![CDATA[ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರ ಮೇಲೆ ಅವರ ಸರ್ಕಾರಿ ನಿವಾಸದಲ್ಲೇ ಲೈಂಗಿಕ ದೌರ್ಜನ್ಯ, ದರೋಡೆ ಮತ್ತು ಕೊಲೆ ಯತ್ನ ನಡೆದಿದೆ. ಫೇಸ್&zwnj;ಬುಕ್ ಮೂಲಕ ಪರಿಚಯವಾದ ವ್ಯಕ್ತಿಗಳು ಜ್ಯೂಸ್&zwnj;ನಲ್ಲಿ ಮಾತ್ರೆ ಬೆರೆಸಿ ಈ ಕೃತ್ಯ ಎಸಗಿದ್ದು, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwysw65hqw07ytprv13xhkqm,imgname-channapatna-tahsildar-1783445199025.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು ದಕ್ಷಿಣ/ರಾಮನಗರ (ಜು.07): ಜಿ&lt;/strong&gt;ಲ್ಲೆಯ ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರು ಲೈಂಗಿಕ ಕಿರುಕುಳ, ದರೋಡೆ ಹಾಗೂ ಕೊಲೆ ಯತ್ನಕ್ಕೆ ಒಳಗಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫೇಸ್&zwnj;ಬುಕ್ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ತಹಶೀಲ್ದಾರ್ ಅವರ ಸರ್ಕಾರಿ ನಿವಾಸದಲ್ಲೇ ಈ ವಿಕೃತಿ ಎಸೆಗಿದ್ದಾನೆ. ಈ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;&lt;h2&gt;&lt;strong&gt;ಪರಿಚಯವಾಗಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಮೈಸೂರು ಮೂಲದ ಅನುಶ್ ಎಂಬಾತನಿಗೆ ತಹಶೀಲ್ದಾರ್ ಗಿರೀಶ್ ಅವರ ಪರಿಚಯ ಫೇಸ್&zwnj;ಬುಕ್ ಮೂಲಕವಾಗಿತ್ತು. ಇದೇ ಸ್ನೇಹವನ್ನು ಬಳಸಿಕೊಂಡ ಅನುಶ್, ಕಳೆದ ಜೂನ್ 28ರಂದು ತನ್ನ ಸ್ನೇಹಿತರಾದ ಶೋಭರಾಜನ್ ಮತ್ತು ನವೀನ್ ಎಂಬುವವರ ಜೊತೆ ಚನ್ನಪಟ್ಟಣದಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ನಿವಾಸಕ್ಕೆ ಬಂದಿದ್ದನು.&lt;/p&gt;&lt;h2&gt;&lt;strong&gt;ಜೂಸ್&zwnj;ನಲ್ಲಿ ಮಾತ್ರೆ ಬೆರೆಸಿ ದೌರ್ಜನ್ಯ:&lt;/strong&gt;&lt;/h2&gt;&lt;p&gt;ದೂರಿನ ಪ್ರಕಾರ, ಅಂದು ರಾತ್ರಿ ತಹಶೀಲ್ದಾರ್ ನಿವಾಸದಲ್ಲೇ ಮದ್ಯಪಾನ ಮಾಡಿದ್ದ ಆರೋಪಿಗಳು, ನಂತರ ಗಿರೀಶ್ ಅವರಿಗೆ ನೀಡಿದ್ದ ಜೂಸ್&zwnj;ನಲ್ಲಿ ಮಂಕುಬೂದಿ ಅಥವಾ ಪ್ರಜ್ಞೆ ತಪ್ಪಿಸುವ ಮಾತ್ರೆಗಳನ್ನು ಬೆರೆಸಿದ್ದರು. ಜೂಸ್ ಕುಡಿದು ಗಿರೀಶ್ ಪ್ರಜ್ಞೆ ತಪ್ಪುತ್ತಿದ್ದಂತೆಯೇ, ಆರೋಪಿಗಳು ತಮ್ಮ ಅಸಲಿ ರೂಪ ತೋರಿಸಿದ್ದಾರೆ. ಗಿರೀಶ್ ಮೈಮೇಲಿದ್ದ ಬಟ್ಟೆಗಳನ್ನು ಬಿಚ್ಚಿ ವಿಕೃತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅಸಹಜ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.&lt;/p&gt;&lt;h2&gt;&lt;strong&gt;ಚಿನ್ನಾಭರಣ ದರೋಡೆ ಮತ್ತು 10 ಲಕ್ಷಕ್ಕೆ ಬೇಡಿಕೆ:&lt;/strong&gt;&lt;/h2&gt;&lt;p&gt;ಕಿಡಿಗೇಡಿಗಳು ತಹಶೀಲ್ದಾರ್ ಮೈಮೇಲಿದ್ದ ಚಿನ್ನದ ಸರ ಮತ್ತು ಉಂಗುರಗಳನ್ನು ಕಸಿದುಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲದ ಅವರು, 10 ಲಕ್ಷ ರೂಪಾಯಿ ಹಣ ನೀಡುವಂತೆ ತಹಶೀಲ್ದಾರ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಗಿರೀಶ್ ಹಣ ನೀಡಲು ನಿರಾಕರಿಸಿದಾಗ ಅವರನ್ನು ಕೊಲ್ಲಲು ಯತ್ನಿಸಿದ್ದಾರೆ ಎನ್ನಲಾಗಿದೆ. ಜೂನ್ 29ರಂದು ನಡೆದ ಈ ಕೃತ್ಯದಿಂದ ತಹಶೀಲ್ದಾರ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ಕ್ರಮ:&lt;/strong&gt;&lt;/h2&gt;&lt;p&gt;ಈ ಭೀಕರ ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಎ1 ಆರೋಪಿ ಅನುಶ್&zwnj;ನನ್ನು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಅವರ ನಿವಾಸದಲ್ಲೇ ಇಂತಹ ದೌರ್ಜನ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-south-district-channapatna-tahsildar-physical-harassment-life-threat-attempt-case-anush-arrest/articleshow-ex76evb"/>
        </item>
        <item>
            <title><![CDATA[ದೇಶದ್ರೋಹಿಗಳು ಎಂದರೆ ಯಾರು? ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಎಂಥಾ ಮಾತು ಹೇಳಿದ್ರು ನೋಡಿ!]]></title>
            <link>https://kannada.asianetnews.com/karnataka-districts/who-are-traitors-see-what-retired-justice-arali-nagaraj-said-rav/articleshow-g3bk95o</link>
            <guid isPermaLink="true">https://kannada.asianetnews.com/karnataka-districts/who-are-traitors-see-what-retired-justice-arali-nagaraj-said-rav/articleshow-g3bk95o</guid>
            <pubDate>Tue, 07 Jul 2026 09:19:23 +0530</pubDate>
            <description><![CDATA[&lt;p&gt;ಮೈಸೂರಿನಲ್ಲಿ ಶರಣು ವಿಶ್ವವಚನ ಫೌಂಡೇಶನ್&zwnj; ಹಮ್ಮಿಕೊಂಡಿದ್ದ 'ಶಾಲೆಗಳೆಡೆಗೆ ವಚನಗಳ ನಡಿಗೆ' ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಗಳಿಸಿದ ಜ್ಞಾನವನ್ನು ದೇಶಸೇವೆಗೆ ಬಳಸದಿದ್ದರೆ ಅವನೇ ದೇಶದ್ರೋಹಿ ಎಂದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxb0y0fvxdv5akw5gnz1yv6,imgname-----------------------2026-07-07t091732.851-1783396071439.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಮೈಸೂರು (ಜು.7): &lt;/strong&gt;ಗಳಿಸಿದ ಜ್ಞಾನವನ್ನು ದೇಶಸೇವೆಗೆ ಬಳಸದಿದ್ದರೆ ಅವನೇ ಪ್ರಥಮ ದೇಶದ್ರೋಹಿ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಹೇಳಿದರು.&lt;/p&gt;&lt;p&gt;ಶರಣು ವಿಶ್ವವಚನ ಫೌಂಡೇಶನ್&zwnj; ನಿಂದ ಬೋಗಾದಿಯ ದೀಪನಗರದ ದೀಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಹಾರನಹಳ್ಳಿ ಬಸವಣ್ಣ ಮತ್ತು ಗುರುಸಿದ್ಧಮ್ಮ ಅವರ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ 127ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.&lt;/p&gt;&lt;p&gt;ಶರಣರು ತಮ್ಮನ್ನು ಸಂಪೂರ್ಣವಾಗಿ ಸಮಾಜ ಉದ್ಧಾರಕ್ಕೆ ಬಳಸಿಕೊಂಡು ವಚನ ಸಾಹಿತ್ಯವನ್ನು ವಿಶ್ವಕ್ಕೆ ಕಾಣಿಕೆಯಾಗಿ ನೀಡಿದರು. ವಚನ ಸಾಹಿತ್ಯ ವಿದ್ಯಾರ್ಥಿಗಳಲ್ಲಿ ವೈಚಾರಿಕ ಚಿಂತನೆ ಬೆಳೆಸಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಾಧನೆಯ ಜ್ಯೋತಿಯನ್ನು ಬೆಳಗಿಸಲು ಜಗತ್ಪ್ರಸಿದ್ಧ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಅವರ ಜೀವನದ ಅದ್ಭುತ ಪ್ರಸಂಗ ಹೇಳಿದ ಅವರು ಬುದ್ಧಿಮಾಂದ್ಯ ಎಂದು ಶಾಲೆಯಿಂದ ಹೊರಹಾಕಲ್ಪಟ್ಟ ಎಡಿಎಸ್&zwnj; ಯನ್ನು ಜಗತ್ತಿಗೆ ಬೆಳಕು ನೀಡುವ ಮಹಾನ್ ವಿಜ್ಞಾನಿಯನ್ನಾಗಿ ಮಾಡಿದ್ದು, ಅವರ ತಾಯಿ. ತಾಯಿಯೇ ಮೊದಲ ಗುರುವಾಗಿ ನೀಡಿದ ಪ್ರೇರಣೆಯಿಂದಾಗಿ ಎಡಿಸನ್ ಇಡೀ ಜಗತ್ತನ್ನು ಬೆಳಗಲು ಸಾಧ್ಯವಾಯಿತು ಎಂದರು.&lt;/p&gt;&lt;p&gt;ನಿವೃತ್ತ ಪ್ರಾಂಶುಪಾಲ ಎಚ್.ಬಿ. ಓಂಕಾರಯ್ಯ ಅವರು ಸಮಾಜದಲ್ಲಿ ಸುಧಾರಕರು ಕೆಲವರಿದ್ದರೆ, ದಾರಿ ತಪ್ಪುತ್ತಿರುವವರು ಅನೇಕರಿದ್ದಾರೆ. ಇಂತಹ ಅನೇಕರನ್ನು ಸುಧಾರಣೆ ಮಾಡಲು ಬಸವಾದಿ ಶರಣರು ಈ ಭೂಮಿಯಲ್ಲಿ ಅವತರಿಸಿ, ವಚನಗಳ ಮೂಲಕವೇ ಕ್ರಾಂತಿಕಾರಿ ಸುಧಾರಣೆಯನ್ನು ತಂದರು&zwnj; ಎಂದು ತಿಳಿಸಿದರು.&lt;/p&gt;&lt;p&gt;ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಮಾತನಾಡಿ, ಬಸವಣ್ಣನವರ ಸಪ್ತ ಸೂತ್ರಗಳನ್ನು ಮಕ್ಕಳಿಗೆ ಸಾಮೂಹಿಕವಾಗಿ ಹೇಳಿಕೊಟ್ಟು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.&lt;/p&gt;&lt;p&gt;ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನಗಳನ್ನು&lt;/p&gt;&lt;p&gt;ಬದುಕಿಗೆ ದಾರಿ ತೋರುವ ದೀಪಸ್ತಂಭಕ್ಕೆ ಹೋಲಿಸಿ, ಏಕಾಗ್ರತೆಯನ್ನು ರೂಡಿಸಿಕೊಳ್ಳಲು ಶರಣರ ವಚನಗಳನ್ನುಅಭ್ಯಸಿಸಲು ತಿಳಿಸಿದರು.&lt;/p&gt;&lt;p&gt;ವಚನ ದೀವಿಗೆ ಪ್ರಮಾಣಪತ್ರ ಹಾಗೂ ವಚನ ಶಾಲೆ,&amp;nbsp;; ಪುಸ್ತಕವನ್ನು ವಿತರಿಸಲಾಯಿತು.&lt;/p&gt;&lt;p&gt;ಶಾಲೆಯ ಮುಖ್ಯ ಶಿಕ್ಷಕ ಬಾಬು ಅವರು ಸ್ವಾಗತಿಸಿದರು, ಶಿಕ್ಷಕಿ ಅಶ್ವಿನಿ ನಿರೂಪಿಸಿದರು. ಪೂರ್ಣಿಮಾ ವಂದಿಸಿದರು. ಪೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಶಿಕ್ಷಕರುಗಳಾದ ಜಿ. ಸರ್ವೇಶ್, ಮಹದೇವಯ್ಯ, ಉಮಾಮಹೇಶ್ವರಿ, ಚಂದ್ರಿಕಾ, ನೇತ್ರಾವತಿ, ಪ್ರತಿಭಾ, ರಾಧಿಕಾ, ಚೈತ್ರ, ಸೌಮ್ಯ ಇದ್ದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/who-are-traitors-see-what-retired-justice-arali-nagaraj-said-rav/articleshow-g3bk95o"/>
        </item>
        <item>
            <title><![CDATA[ಪಾಸ್‌ಪೋರ್ಟ್ ಇಲ್ಲದಿದ್ರೂ 55 ದಿನ ಮೈಸೂರಲ್ಲಿದ್ದ ಅಮೆರಿಕನ್!]]></title>
            <link>https://kannada.asianetnews.com/karnataka-districts/former-us-navy-man-jordan-brown-spent-55-days-in-mysuru-without-a-visa-rav/articleshow-g3x03fv</link>
            <guid isPermaLink="true">https://kannada.asianetnews.com/karnataka-districts/former-us-navy-man-jordan-brown-spent-55-days-in-mysuru-without-a-visa-rav/articleshow-g3x03fv</guid>
            <pubDate>Fri, 17 Jul 2026 06:39:04 +0530</pubDate>
            <description><![CDATA[&lt;p&gt;ಪಾಸ್&zwnj;ಪೋರ್ಟ್&zwnj; ಮತ್ತು ವೀಸಾ ಇಲ್ಲದೆ ಸಮುದ್ರ ಮಾರ್ಗವಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಅಮೆರಿಕದ ಪ್ರಜೆ ಜೋರ್ಡಾನ್ ಬ್ರೌನ್&zwnj;ನನ್ನು ಭಾರತ-ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ. ಗೋವಾ, ಮೈಸೂರು ಮತ್ತು ಬೆಂಗಳೂರಲ್ಲೂ ತಂಗಿದ್ದು, ಈತನ ನಿಗೂಢ ಪ್ರಯಾಣದ ಬಗ್ಗೆ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjt8mrtq49sr0c6v1yp7zec,imgname-us-citizen-arrested-indo-nepal-border-1784116695834.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಯಾವುದೇ ಪಾಸ್&zwnj;ಪೋರ್ಟ್&zwnj;, ವೀಸಾ ಇರಲಿಲ್ಲ । ಸಮುದ್ರ ಮಾರ್ಗದಲ್ಲಿ ಭಾರತ ಪ್ರವೇಶ&lt;/li&gt; &lt;li&gt;ಇತ್ತೀಚೆಗೆ ಉ.ಪ್ರ.-ನೇಪಾಳ ಗಡಿಯಲ್ಲಿ ನೇಪಾಳಕ್ಕೆ ಹೋಗಲು ಯತ್ನಿಸಿದಾಗ ಸೆರೆ&lt;/li&gt;&lt;/ul&gt;&lt;p&gt;&lt;strong&gt;ಬ್ರೌನ್&zwnj; ಹಾದಿ&lt;/strong&gt;&lt;/p&gt;&lt;p&gt;- 2025ರ ನ.2ರಂದು ಸಮುದ್ರ ಮಾರ್ಗದಲ್ಲಿ ಭಾರತ ಪ್ರವೇಶ. ಮೇ 7 ರವರೆಗೆ ಗೋವಾದಲ್ಲಿ ವಾಸ&lt;/p&gt;&lt;p&gt;- ಬಳಿಕ ಕರ್ನಾಟಕದ ಮೈಸೂರಿಗೆ ಪ್ರಯಾಣ ಅಲ್ಲಿ ಮೇ 14ರಿಂದ ಜುಲೈ 7ರವರೆಗೆ ವಾಸ್ತವ್ಯ&lt;/p&gt;&lt;p&gt;- ನಂತರ ಜುಲೈ 8ರಂದು ಬೆಂಗಳೂರಿಗೆ ಮತ್ತು ಜುಲೈ 9ರಂದು ಹೈದರಾಬಾದ್&zwnj;ಗೆ ಪ್ರಯಾಣ&lt;/p&gt;&lt;p&gt;- ಜುಲೈ 10 ರಂದು ಮಧ್ಯಪ್ರದೇಶದ ಮೂಲಕ ಉತ್ತರ ಪ್ರದೇಶದ ಪ್ರಯಾಗ್&zwnj;ರಾಜ್&zwnj;ಕ್ಕೆ ಆಗಮನ&lt;/p&gt;&lt;p&gt;- ನಂತರ ಉ.ಪ್ರ.ದ ಮಹಾರಾಜ್&zwnj;ಗಂಜ್&zwnj; ಜಿಲ್ಲೆಯ ನೇಪಾಳ ಗಡಿಗೆ । ಅಲ್ಲಿ ಬಂಧನ&lt;/p&gt;&lt;p&gt;&lt;strong&gt;ನವದೆಹಲಿ (ಜು.17):&lt;/strong&gt; ಭಾರತ-ನೇಪಾಳದ ಗಡಿಯಲ್ಲಿ ಮಾನ್ಯ ದಾಖಲೆಗಳಿಲ್ಲದೆ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆ ಜೋರ್ಡಾನ್&zwnj; ಬ್ರೌನ್&zwnj; (36) ಎಂಬಾತನನ್ನು ಇತ್ತೀಚೆಗೆ ಉತ್ತರ ಪ್ರದೇಶದ ಮಹಾರಾಜ್&zwnj; ಗಂಜ್&zwnj; ಪೊಲೀಸರು ಬಂಧಿಸಿದ್ದಾರೆ. ಈತನ ಬಳಿ ಯಾವುದೇ ಪಾಸ್&zwnj;ಪೋರ್ಟ್&zwnj; ಆಗಲಿ, ವೀಸಾ ಆಗಲಿ ಇರಲಿಲ್ಲ, ಸಮುದ್ರ ಮಾರ್ಗದಿಂದ ಭಾರತಕ್ಕೆ ಬಂದಿದ್ದ ಎಂಬ ಸ್ಫೋಟಕ ವಿಚಾರ ಆಗ ಗೊತ್ತಾಗಿತ್ತು. ಇದೀಗ ವಿಚಾರಣೆ ವೇಳೆ ಈತ ಬೆಂಗಳೂರು ಹಾಗೂ ಮೈಸೂರಿಗೂ ಆಗಮಿಸಿದ್ದ. ಬೆಂಗಳೂರಲ್ಲಿ 1 ದಿನ ಹಾಗೂ ಮೈಸೂರಲ್ಲಿ 55 ದಿನ ತಂಗಿದ್ದ ಎಂದು ಗೊತ್ತಾಗಿದೆ.&lt;/p&gt;&lt;p&gt;ತನ್ನನ್ನು ತಾನು ಅಮೆರಿಕ ನೌಕಾಪಡೆ ಹಾಗೂ ವಿಶೇಷ ಪಡೆಯ ಮಾಜಿ ಸಿಬ್ಬಂದಿ ಎಂದು ಹೇಳಿಕೊಂಡಿರುವ ಆತನ ಭಾರತ ಪ್ರವೇಶಿಸಿದ ರೀತಿಯೇ ತನಿಖಾ ಸಂಸ್ಥೆಗಳನ್ನು ದಂಗಾಗಿಸಿದೆ. ಆತ ತನ್ನ ಪ್ರಯಾಣದ ಬಗ್ಗೆ ವಿವರಿಸುತ್ತಾ, &lsquo;ನಾನು ಪ್ರವಾಸಿ ವೀಸಾದ ಮೇಲೆ ಥಾಯ್ಲೆಂಡ್&zwnj;ಗೆ ಹೋಗಿದ್ದೆ. ಅಲ್ಲಿ ನನ್ನ ಪಾಸ್&zwnj;ಪೋರ್ಟ್ ಕಳೆದುಹೋಯಿತು. ನಂತರ ಅಲ್ಲಿಂದ ಸಮುದ್ರ ಮಾರ್ಗವಾಗಿ ಶ್ರೀಲಂಕಾಕ್ಕೆ ತಲುಪಿ, ಅಲ್ಲಿಂದ 2025ರ ನವೆಂಬರ್ 2 ರಂದು ಸಮುದ್ರ ಮಾರ್ಗದ ಮೂಲಕವೇ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದೆ. ಬಳಿಕ ಗೋವಾದಲ್ಲಿದ್ದೆ&rsquo; ಎಂದು ತಿಳಿಸಿದ್ದಾನೆ.&lt;/p&gt;&lt;h2&gt;ಮೈಸೂರು, ಬೆಂಗಳೂರಲ್ಲೂ ವಾಸ:&lt;/h2&gt;&lt;p&gt;ಮೂಲಗಳ ಪ್ರಕಾರ, ಬ್ರೌನ್ 2025ರ ನ.2ರಂದು ಭಾರತ ಪ್ರವೇಶಿಸಿದ ಬಳಿಕ ಮೇ 7 ರವರೆಗೆ ಗೋವಾದ ಕಾಣಕೋಣದಲ್ಲಿ ಉಳಿದುಕೊಂಡಿದ್ದ. ಬಳಿಕ ಕರ್ನಾಟಕದ ಮೈಸೂರಿಗೆ ಪ್ರಯಾಣ ಬೆಳೆಸಿದ. ಅಲ್ಲಿ ಮೇ 14ರಿಂದ ಜುಲೈ 7ರವರೆಗೆ ಇದ್ದ. ನಂತರ ಜುಲೈ 8ರಂದು ಬೆಂಗಳೂರಿಗೆ ಮತ್ತು ಜುಲೈ 9ರಂದು ಹೈದರಾಬಾದ್&zwnj;ಗೆ ತೆರಳಿದ. ಜುಲೈ 10 ರಂದು ಮಧ್ಯಪ್ರದೇಶದ ಬಂದೋಲ್, ಸಿಯೋನಿ ಮೂಲಕ ಪ್ರಯಾಣಿಸಿ ನಂತರ ಉತ್ತರ ಪ್ರದೇಶದ ಪ್ರಯಾಗ್&zwnj;ರಾಜ್&zwnj; ತಲುಪಿದ. ನಂತರ ನೇಪಾಳ ಗಡಿಗೆ ಬಂದಿದ್ದ.&lt;/p&gt;&lt;h3&gt;ಸಿನಿಮೀಯ ಚೇಸ್&zwnj;, ಬಂಧನ:&lt;/h3&gt;&lt;p&gt;ಜುಲೈ 11 ರಂದು ಸೋನೌಲಿ ಗಡಿಯ ಮೂಲಕ ನೇಪಾಳಕ್ಕೆ ಹೋಗಲು ಯತ್ನಿಸುತ್ತಿದ್ದಾಗ, ನಿಯಮಿತ ತಪಾಸಣೆಯ ವೇಳೆ ಎಸ್&zwnj;ಎಸ್&zwnj;ಬಿ (ಸೀಮಾ ಸುರಕ್ಷಾ ಬಲ) ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಈ ವೇಳೆ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕಿಲೋಮೀಟರ್&zwnj;ಗಟ್ಟಲೆ ಚೇಸ್ ಬಳಿಕ ಪೊಲೀಸರು ಆತನನ್ನು ಸೆರೆಹಿಡಿದಿದ್ದಾರೆ. ಆತನ ಬಳಿ ಆಗ 31 ಸಾವಿರ ರು. ನಗದು ಸಿಕ್ಕಿದೆ. ಯಾವುದೇ ಪ್ರಯಾಣ ದಾಖಲೆ ಇರಲಿಲ್ಲ.&lt;/p&gt;&lt;p&gt;&lt;strong&gt;ಕಾನೂನು ಕ್ರಮ ಮತ್ತು ತನಿಖೆ:&lt;/strong&gt;&lt;/p&gt;&lt;p&gt;ಮಹಾರಾಜ್&zwnj;ಗಂಜ್&zwnj;ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಮಾತನಾಡಿ, &lsquo;ಜೋರ್ಡಾನ್ ಬ್ರೌನ್ ಬಳಿ ಯಾವುದೇ ಮಾನ್ಯವಾದ ವೀಸಾ ಅಥವಾ ಪ್ರಯಾಣ ದಾಖಲೆಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಕ್ರಮ ಪ್ರವೇಶ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಅಮೆರಿಕ ಪ್ರಜೆಯ ಹೇಳಿಕೆಗಳನ್ನು ಭದ್ರತಾ ಏಜೆನ್ಸಿಗಳು ಮತ್ತು ಗುಪ್ತಚರ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ&rsquo; ಎಂದಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/former-us-navy-man-jordan-brown-spent-55-days-in-mysuru-without-a-visa-rav/articleshow-g3x03fv"/>
        </item>
        <item>
            <title><![CDATA['ನನ್ನ ಒಡವೆ ತಗೊಳ್ಳಿ, ಪತಿಯನ್ನು ಬಿಟ್ಟುಬಿಡಿ': ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಿರಾತಕರ ಅಟ್ಟಹಾಸ!]]></title>
            <link>https://kannada.asianetnews.com/karnataka-districts/bengaluru-mysuru-expressway-road-rage-family-attacked-viral-video-arrests/articleshow-g9b0xtn</link>
            <guid isPermaLink="true">https://kannada.asianetnews.com/karnataka-districts/bengaluru-mysuru-expressway-road-rage-family-attacked-viral-video-arrests/articleshow-g9b0xtn</guid>
            <pubDate>Thu, 09 Jul 2026 16:48:58 +0530</pubDate>
            <description><![CDATA[ಮಂಡ್ಯದ ಮದ್ದೂರು ಬಳಿ ಬೆಂಗಳೂರು-ಮೈಸೂರು ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಸಣ್ಣ ಅಪಘಾತವೊಂದು ವಿಕೋಪಕ್ಕೆ ತಿರುಗಿದೆ. ದುಷ್ಕರ್ಮಿಗಳ ಗುಂಪೊಂದು 10 ತಿಂಗಳ ಮಗು ಸೇರಿದಂತೆ ಇಡೀ ಕುಟುಂಬದ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx39hsc1b7w6rhwq9z2xxypt,imgname-bengaluru-mysuru-expressway-1783595853184.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಮಂಡ್ಯ (ಜು.09): 'ನ&lt;/strong&gt;ನ್ನ ಚಿನ್ನದ ಒಡವೆಗಳನ್ನು ಬೇಕಾದರೆ ತೆಗೆದುಕೊಳ್ಳಿ, ಆದರೆ ನನ್ನ ಪತಿಯನ್ನು ಮಾತ್ರ ಬಿಟ್ಟುಬಿಡಿ...' - ಇದು ಮಂಡ್ಯ ಜಿಲ್ಲೆಯ ಮದ್ದೂರು ಬಳಿ ಬೆಂಗಳೂರು-ಮೈಸೂರು ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ದುಷ್ಕರ್ಮಿಗಳ ಕೈಗೆ ಸಿಲುಕಿ ನರಳುತ್ತಿದ್ದ ಮಹಿಳೆಯೊಬ್ಬರ ಆಕ್ರಂದನ. ಸಣ್ಣ ಕಾರು ಅಪಘಾತವೊಂದು ವಿಕೋಪಕ್ಕೆ ತಿರುಗಿ, ಇಡೀ ಕುಟುಂಬವನ್ನೇ ನಡುರಸ್ತೆಯಲ್ಲಿ ಅಮಾನವೀಯವಾಗಿ ಥಳಿಸಿದ ಘಟನೆ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಭಾನುವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಬೆಂಗಳೂರು ನಿವಾಸಿ ಸಾಗರ್ ಕುಮಾರ್ ಅವರು ತಮ್ಮ ಪತ್ನಿ, 10 ತಿಂಗಳ ಮಗು ಮತ್ತು ಹಿರಿಯ ಮಹಿಳೆಯೊಬ್ಬರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಭಾರಿ ಟ್ರಾಫಿಕ್ ಇದ್ದ ಕಾರಣ, ಸಾಗರ್ ಅವರ ಕಾರು ಮತ್ತೊಂದು ವಾಹನಕ್ಕೆ ಸ್ವಲ್ಪ ತಗುಲಿತ್ತು. ಇದೇ ವಿಚಾರಕ್ಕೆ ಗಲಾಟೆ ಆರಂಭಿಸಿದ ಸುಮಾರು 9 ಜನರ ಗುಂಪು, ಸಾಗರ್ ಅವರ ಕಾರನ್ನು ಅಡ್ಡಗಟ್ಟಿ ಅಟ್ಟಹಾಸ ಮೆರೆದಿದೆ.&lt;/p&gt;&lt;h2&gt;&lt;strong&gt;ವೈರಲ್ ವಿಡಿಯೋದಲ್ಲಿದೆ ಭೀಕರ ದೃಶ್ಯ:&lt;/strong&gt;&lt;/h2&gt;&lt;p&gt;ಹಿಂದಿನ ಕಾರಿನ ಡ್ಯಾಶ್&zwnj;ಕ್ಯಾಮ್&zwnj;ನಲ್ಲಿ ಈ ಇಡೀ ಘಟನೆ ಸೆರೆಯಾಗಿದೆ. ದುಷ್ಕರ್ಮಿಗಳು ಸಾಗರ್ ಅವರ ಕಾರನ್ನು ಸುತ್ತುವರಿದು, ಅವರನ್ನು ಬಲವಂತವಾಗಿ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಗರ್ ಪತ್ನಿ ಅಕ್ಷರಶಃ ಪ್ರಾಣಭಿಕ್ಷೆ ಕೇಳಿದ್ದಾರೆ. 'ನಮ್ಮ ಜೊತೆ ಮಗುವಿದೆ, ದಯವಿಟ್ಟು ಬಿಟ್ಟುಬಿಡಿ. ಬೇಕಿದ್ದರೆ ನನ್ನ ಮೈಮೇಲಿರುವ ಚಿನ್ನದ ಒಡವೆಗಳನ್ನು ಕಿತ್ತುಕೊಳ್ಳಿ, ಆದರೆ ಪತಿಯನ್ನು ಹೊಡೆಯಬೇಡಿ' ಎಂದು ಕಣ್ಣೀರಿಟ್ಟರೂ, ಆ ಪಾಪಿಗಳು ಮಾತ್ರ ಹಲ್ಲೆ ನಿಲ್ಲಿಸಲಿಲ್ಲ. ಹತ್ತು ತಿಂಗಳ ಹಸುಗೂಸಿನ ಮುಂದೆಯೇ ತಂದೆಯನ್ನು ಮನಬಂದಂತೆ ಥಳಿಸಲಾಗಿದೆ.&lt;/p&gt;&lt;h2&gt;&lt;strong&gt;ಸಾಗರ್ ಕುಮಾರ್ ಅವರ ಅಳಲು:&lt;/strong&gt;&lt;/h2&gt;&lt;p&gt;ಘಟನೆಯಿಂದ ತೀವ್ರವಾಗಿ ಗಾಯಗೊಂಡಿರುವ ಸಾಗರ್ ಎನ್&zwnj;ಡಿಟಿವಿಯೊಂದಿಗೆ ಮಾತನಾಡುತ್ತಾ, 'ಆ ರಾತ್ರಿ ನಾವು ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಸುಮಾರು 9 ಜನರು ನಮ್ಮ ಮೇಲೆ ಮುಗಿಬಿದ್ದರು. ನನ್ನ ಪತ್ನಿ ಕೈಮುಗಿದು ಬೇಡಿಕೊಂಡರೂ ಅವರು ಕರುಣೆ ತೋರಿಸಲಿಲ್ಲ. ಎಕ್ಸ್&zwnj;ಪ್ರೆಸ್&zwnj;ವೇನ ಅನೇಕ ಕಡೆ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಭದ್ರತೆಯೂ ಇಲ್ಲ. ಈ ವಿಡಿಯೋ ರೆಕಾರ್ಡ್ ಆಗಿದ್ದಕ್ಕೆ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಇಲ್ಲದಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು?' ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;&lt;strong&gt;ಪೊಲೀಸ್ ಕ್ರಮ:&lt;/strong&gt;&lt;/h3&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಂಡ್ಯ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ. ಹೆದ್ದಾರಿಗಳಲ್ಲಿ ಸಾರ್ವಜನಿಕರ ಸುರಕ್ಷತೆ ಎಲ್ಲಿದೆ ಎಂಬ ಪ್ರಶ್ನೆಯನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ಕುಟುಂಬ ಇಂದಿಗೂ ಆಘಾತದಿಂದ ಹೊರಬಂದಿಲ್ಲ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-mysuru-expressway-road-rage-family-attacked-viral-video-arrests/articleshow-g9b0xtn"/>
        </item>
        <item>
            <title><![CDATA[ಮೈಸೂರು ದಸರಾದಲ್ಲಿ ಕಂಬಳ ಯಾಕೆ ಬೇಡ? ಸ್ಪಷ್ಟಪಡಿಸಿದ ಸಂಸದ ಯದುವೀರ್ ಒಡೆಯರ್! ಹೇಳಿದ್ದೇನು?]]></title>
            <link>https://kannada.asianetnews.com/karnataka-districts/mysuru-mp-yaduveer-wadeyar-reacts-on-kambala-at-mysuru-dasara-2026-rav/articleshow-gosb8g6</link>
            <guid isPermaLink="true">https://kannada.asianetnews.com/karnataka-districts/mysuru-mp-yaduveer-wadeyar-reacts-on-kambala-at-mysuru-dasara-2026-rav/articleshow-gosb8g6</guid>
            <pubDate>Sun, 12 Jul 2026 09:47:25 +0530</pubDate>
            <description><![CDATA[&lt;p&gt;ದಸರಾ(Mysuru dasara 2026)ದಲ್ಲಿ ಕಂಬಳ&zwnj; ಬೇಡ ಎಂದು ದಸರಾ ಉನ್ನತಮಟ್ಟದ ಸಭೆಯಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxa8pevnmqh4gjzx5bt09n3b,imgname-----------------------2026-07-12t094210.530-1783829838709.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜು.12):&lt;/strong&gt; ದಸರಾ(Mysuru dasara 2026)ದಲ್ಲಿ ಕಂಬಳ&zwnj; ಬೇಡ ಎಂದು ದಸರಾ ಉನ್ನತಮಟ್ಟದ ಸಭೆಯಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ತಿಳಿಸಿದರು.&lt;/p&gt;&lt;p&gt;ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳ(Kambala) ವಿಚಾರದಲ್ಲಿ ಶಾಸಕ ಅಶೋಕ ರೈ ನನಗೆ ಯಾವ ವಿವರಣೆಯನ್ನೂ ನೀಡಿಲ್ಲ. ಆ ವಿಚಾರದಲ್ಲಿ ನನ್ನ ಜೊತೆ ಅವತ್ತು ಏನ್ನನೂ ಚರ್ಚೆ ಮಾಡಿಲ್ಲ. ಕಂಬಳದ ಬಗ್ಗೆ ನನಗೆ ಅಶೋಕ ರೈ ವಿವರಣೆ ಕೊಡುವ ಅಗತ್ಯ ಇಲ್ಲ ಎಂದರು.&lt;/p&gt;&lt;h2&gt;ದಸರಾ ಸಾಂಸ್ಕೃತಿಕ ಹಿನ್ನೆಲೆಯೇ ಬೇರೆ, ಕಂಬಳವೇ ಬೇರೆ.&lt;/h2&gt;&lt;p&gt;ದಸರಾ ಸಾಂಸ್ಕೃತಿಕ ಹಿನ್ನೆಲೆಯೇ ಬೇರೆ, ಕಂಬಳವೇ ಬೇರೆ. ಎಲ್ಲದಕ್ಕೂ ನೀವು ದಸರಾವನ್ನ ಜೋಡಿಸುವುದು ಸರಿಯಲ್ಲ. ಮೈಸೂರಿನ ಜನತ ಭಾವನೆ ಕೂಡ ಇದೇ ಆಗಿದೆ. ಸರ್ಕಾರ ಕಂಬಳ ಮಾಡಿದರೆ ಇದು ಮೈಸೂರು ಜನರ ವಿರುದ್ಧವಾಗಿ ಮಾಡಿದಂತೆ ಎಂದು ಹೇಳಿದರು.&lt;/p&gt;&lt;p&gt;ಈ ಸರ್ಕಾರ ಇದುವರೆಗೂ ಜನತ ಭಾವನೆ ವಿರುದ್ಧವಾಗಿ ಕೆಲಸ ಮಾಡಿದೆ. ಈಗ ಕಂಬಳವನ್ನ ಜನರ ಭಾವನೆ ವಿರುದ್ಧವಾಗಿಯೇ ಮಾಡುತ್ತಿದೆ. ನಾವು ಕಂಬಳಕ್ಕೆ ವಿರುದ್ಧ ಇಲ್ಲ. ದಸರಾ ವೇಳೆ ಕಂಬಳ ಬೇಡ ಎಂದಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಇರುವ ದಸರಾವನ್ನೇ ಅಚ್ಚುಕಟ್ಟಾಗಿ ಮಾಡಿ. ಕಳೆದ ಮೂರು ವರ್ಷಗಳಿಂದ ದಸರಾ ಯಶಸ್ವಿಯಾಗಿ ನಡೆದಿಲ್ಲ. ಈ ಬಾರಿಯಾದರೂ ಅಚ್ಚುಕಟ್ಟಾಗಿ ದಸರಾ ಮಾಡಲಿ. ಪ್ರತಿ ದಸರಾದಲ್ಲೂ ಒಂದಿಲ್ಲೊಂದು ವಿವಾದ ಸೃಷ್ಟಿ ಮಾಡುತ್ತಿದೆ. ವಿವಾದ ಹೋರಾಟದ ನಡುವೆ ದಸರಾ ನಡೆಯುವಂತೆ ಆಗಿದೆ. ಈ ಬಾರಿಯೂ ಅದು ಮುಂದುವರೆಯುತ್ತಿದೆ ಎಂದು ಅವರು ಕಿಡಿಕಾರಿದರು.&lt;/p&gt;&lt;h3&gt;ದಸರಾ ಪಾಸ್ ವ್ಯವಸ್ಥೆ ರದ್ದುಗೊಳಿಸಿ&lt;/h3&gt;&lt;p&gt;ದಸರಾದ ಪಾಸ್ ವ್ಯವಸ್ಥೆ ರದ್ದು ಮಾಡಿ. ಗ್ಲೋಬಲ್ ಟೆಂಡರ್ ಮೂಲಕ ದಸರಾ ಪಾಸ್ ಹಂಚಿ. ಸಿಎಂಗೆ ನಾನು ಈ ಸಲಹೆ ಕೊಟ್ಟಿದ್ದೇನೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.&lt;/p&gt;&lt;p&gt;ದಸರಾ ವೇಳೆ ಪಾಸ್ ಗಳದ್ದೇ ದೊಡ್ಡ ಗದ್ದಲ ನಡೆಯುತ್ತಿದೆ. ಮಾಡುವ ಕೆಲಸ ಬಿಟ್ಟು ಪಾಸ್ ಬಗ್ಗೆ ಜಟ್ಟಾಪಟ್ಟಿ ಇರುತ್ತದೆ. ಈ ಗೊಂದಲ ತಪ್ಪಬೇಕು. ಪಾಸ್ ವ್ಯವಸ್ಥೆಯನ್ನ ಸಂಪೂರ್ಣವಾಗಿ ರದ್ದು ಮಾಡಿ ಎಂದು ಹೇಳಿದ್ದೇನೆ. ಸರಳ ದಸರಾ ಎಂಬ ಹೆಸರು ಹಾಕಿದರೆ ಅದು ಮೈಸೂರಿನ ಪ್ರವಾಸೋದ್ಯಮಕ್ಕೆ ಧಕ್ಕೆ ಬರುತ್ತದೆ. ಹೀಗಾಗಿ, ಸರಳ ದಸರಾ ಎಂದು ಬೇಡ ಎಂದು ಹೇಳಿದ್ದೇನೆ ಎಂದರು.&lt;/p&gt;&lt;p&gt;&lt;strong&gt;ದಸರಾ ಕಮರ್ಷಿಯಲ್ ಆಗೋದು ಬೇಡ : ಟಿ.ಎಸ್. ಶ್ರೀವತ್ಸ&lt;/strong&gt;&lt;/p&gt;&lt;p&gt;&amp;nbsp;ಮೈಸೂರು: ದಸರಾ ಕಮರ್ಷಿಯಲ್ ಆಗೋದು ಬೇಡ. ದಸರಾ ಆಚರಣೆ ಸಾಂಸ್ಕೃತಿಕ ಹಬ್ಬವಾಗಿ ನಡೆಯಲಿ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.&lt;/p&gt;&lt;p&gt;ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾದಲ್ಲಿ ಕಂಬಳ ಬೇಡ ಎಂಬ ಸಂಸದ ಯದುವೀರ್ ಒಡೆಯರ್ ಅವರ ಹೇಳಿಕೆಗೆ ನನ್ನ ಸಹಮತವಿದೆ. ಕಂಬಳ ಬೇಡ ಎಂದು ಸಭೆಯಲ್ಲಿ ಹೇಳಿದ್ದೇವೆ. ಯತೀಂದ್ರ ಅವರು ಕೂಡ ವಿರೋಧ ವ್ಯಕ್ತವಾಗುವುದರ ಬಗ್ಗೆ ತಿಳಿಸಿದ್ದಾರೆ ಎಂದರು.&lt;/p&gt;&lt;p&gt;ದಸರಾ ಪಾಸ್ ಎಲ್ಲವನ್ನು ಟೆಂಡರ್ ಮೂಲಕವೇ ನೀಡಲಿ. ಪಾಸ್ ತೆಗೆದುಕೊಂಡರೆ ಗೊಂದಲ ಸೃಷ್ಟಿಯಾಗುತ್ತದೆ. ಗೋಲ್ಡ್ ಕಾರ್ಡ್ ವಿಚಾರದಲ್ಲೂ ಹೀಗೇ ಆಗಿದೆ. ಗೋಲ್ಡ್ ಕಾರ್ಡ್ ಪಡೆದವರು ಒಳಗೆ ಹೋದಾಗ, ಬೇರೆಯವರು ಕುಳಿತಿರುವ ಘಟನೆ ಕೂಡ ಆಗಿದೆ. ಹೀಗಾಗಿ, ಎಲ್ಲವನ್ನು ಟೆಂಡರ್ ಮೂಲಕವೇ ನೀಡಲಿ ಎಂದು ಅವರು ಆಗ್ರಹಿಸಿದರು.&lt;/p&gt;&lt;p&gt;ಯುವ ದಸರಾ ಬೇಕಾ? ಬೇಡವಾ? ಎಂಬ ವಿಚಾರ ಕೂಡ ಚರ್ಚೆ ಆಗಿತ್ತು. ಯತೀಂದ್ರ ಅವರು ಯುವಕರಿಗೋಸ್ಕರ ಯುವ ದಸರಾ ಇರಲಿ ಎಂದರು. ಈಗಿರುವ ಕಾರ್ಯಕ್ರಮವನ್ನು ಮುಂದುವರೆಸೋಣ. ಹೊಸ ಕಾರ್ಯಕ್ರಮ ಸಾಧ್ಯವಾದರೆ ಸೇರಿಸೋಣ ಎಂಬ ತೀರ್ಮಾನಕ್ಕೂ ಬರಲಾಗಿದೆ ಎಂದರು.&lt;/p&gt;&lt;p&gt;ದಸರಾ ಉದ್ಘಾಟಕರ ಆಯ್ಕೆ ವಿಚಾರವು ಸಿಎಂ ನೇತೃತ್ವದ ದಸರಾ ಸಭೆಯಲ್ಲಿ ಎಲ್ಲವೂ ಚರ್ಚೆ ಆಗಿದೆ. 25 ವರ್ಷದಿಂದ ಸುತ್ತೂರು ಸಂಸ್ಥಾನಕ್ಕೆ ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿಲ್ಲ. ಈ ಬಾರಿಯಾದರೂ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇನೆ. ಉದ್ಘಾಟಕರ ಆಯ್ಕೆ ವಿಚಾರವನ್ನು ಮುಖ್ಯಮಂತ್ರಿಗೆ ಬಿಟ್ಟಿದ್ದೇವೆ ಎಂದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mysuru-mp-yaduveer-wadeyar-reacts-on-kambala-at-mysuru-dasara-2026-rav/articleshow-gosb8g6"/>
        </item>
        <item>
            <title><![CDATA[ಎಸ್. ಜಾನಕಿ ಕೊನೆಯಾಸೆ & ಕೊನೆ ಕ್ಷಣ ಹೇಗಿತ್ತು? ಕೇರ್‌ಟೇಕರ್ ನವೀನ್ ಬಿಚ್ಚಿಟ್ಟ ರಹಸ್ಯ]]></title>
            <link>https://kannada.asianetnews.com/gallery/karnataka-districts/singer-s-janaki-s-last-wish-what-were-her-last-moments-like-caretaker-naveen-reveals-the-secret-mrq-hu5piw8</link>
            <guid isPermaLink="true">https://kannada.asianetnews.com/gallery/karnataka-districts/singer-s-janaki-s-last-wish-what-were-her-last-moments-like-caretaker-naveen-reveals-the-secret-mrq-hu5piw8</guid>
            <pubDate>Sun, 12 Jul 2026 07:53:31 +0530</pubDate>
            <description><![CDATA[ಗಾಯಕಿ ಎಸ್. ಜಾನಕಿ ಅವರ ಕೇರ್&zwnj;ಟೇಕರ್ ನವೀನ್, ಅವರ ಅಂತಿಮ ದಿನಗಳ ಬಗ್ಗೆ ಮಾತನಾಡಿದ್ದಾರೆ. ಜಾನಕಿಯವರಿಗೆ ಮೈಸೂರಿನಲ್ಲೇ ಪ್ರಾಣ ಬಿಡುವ ಆಸೆಯಿತ್ತು ಮತ್ತು ಆಸ್ಪತ್ರೆಗೆ ಹೋಗಲು ಭಯಪಡುತ್ತಿದ್ದರು ಎಂದು ನವೀನ್ ಬಹಿರಂಗಪಡಿಸಿದ್ದಾರೆ. ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxa1yxnbh6ypxk9tef1443wv,imgname-s-janaki-1783822775979.jpg" type="image/jpeg" height="390" width="690"/>
            <content:encoded><![CDATA[ಗಾಯಕಿ ಎಸ್. ಜಾನಕಿ ಅವರ ಕೇರ್&zwnj;ಟೇಕರ್ ನವೀನ್, ಅವರ ಅಂತಿಮ ದಿನಗಳ ಬಗ್ಗೆ ಮಾತನಾಡಿದ್ದಾರೆ. ಜಾನಕಿಯವರಿಗೆ ಮೈಸೂರಿನಲ್ಲೇ ಪ್ರಾಣ ಬಿಡುವ ಆಸೆಯಿತ್ತು ಮತ್ತು ಆಸ್ಪತ್ರೆಗೆ ಹೋಗಲು ಭಯಪಡುತ್ತಿದ್ದರು ಎಂದು ನವೀನ್ ಬಹಿರಂಗಪಡಿಸಿದ್ದಾರೆ. ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ.&lt;img&gt;&lt;p&gt;ಗಾಯಕಿ ಎಸ್&zwnj;.ಜಾನಕಿ ಅವರ ಕೇರ್&zwnj;ಟೇಕರ್ ಅಗಿದ್ದ ನವೀನ್ ಎಂಬವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಾಲಿಗೆ ಇನ್ಫೆಕ್ಷನ್ ಆಗಿದ್ದರಿಂದ, ಸ್ವಲ್ಪ ನೋವು ಇತ್ತು. ಅದನ್ನು ಹೊರತುಪಡಿಸಿದ್ರೆ ಚೆನ್ನಾಗಿಯೇ ಇದ್ದರು ಎಂದು ಹೇಳಿದರು.&lt;/p&gt;&lt;img&gt;&lt;p&gt;ನಾನು 12 ವರ್ಷದವನಿದ್ದಾಗಿನಿಂದ ಜಾನಕಿ ಅಮ್ಮ&zwnj;ನ ಹುಚ್ಚು ಅಭಿಮಾನಿ. ಮೊದಲು ಚೆನೈ ಅಭಿಮಾರಾಮಿಪುರದಲ್ಲಿ ಅವರನ್ನು ಭೇಟಿಯಾಗಿದ್ದೆ. 2008ರಿಂದ ಮೈಸೂರಲ್ಲೇ ಇರುತ್ತಿದ್ದರು. ಕಳೆದ 2 ವರ್ಷಗಳಿಂದ ನಮ್ಮ ಮನೆಯಲ್ಲಿದ್ದರು. ನಮ್ಮ ಮನೆಯಲ್ಲಿರುವ ವಿಷಯ ಅಕ್ಕಪಕ್ಕದ ನಿವಾಸಿಗಳಿಗೂ ಗೊತ್ತಿರಲಿಲ್ಲ. ಹೆಚ್ಚು ಜನರು ಸೇರಬಹುದು ಎಂದು ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ ಎಂದರು.&lt;/p&gt;&lt;img&gt;&lt;p&gt;ಭಾಗ್ಯ ಎನ್ನುವವರು ಜಾನಕಿ ಅಮ್ಮನನ್ನು ನೋಡಿಕೊಳ್ಳುತ್ತಿದ್ದರು. ಹಾಸ್ಪಿಟಲ್ ಅಂದ್ರೆ ಭಯ ಪಡ್ತಿದ್ರು. ಹಾಗಾಗಿ ಮನೆಗೆ ನರ್ಸ್ ಕರೆಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಎದ್ದು ಕುಳಿತುಕೊಳ್ಳಲು ಕಷ್ಟ ಪಡ್ತಿದ್ರು. ತಕ್ಷಣ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯ್ತು. ವೈದ್ಯರು 20-30% ಮಾತ್ರ ಗ್ಯಾರಂಟಿ ಕೊಡ್ತೀವಿ ಎಂದರು. ಮಧ್ಯಾಹ್ನ 3 ಗಂಟೆವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ.&lt;/p&gt;&lt;img&gt;&lt;p&gt;ಹೈದರಾಬಾದ್&zwnj;ನಲ್ಲಿ ಅವರ ಮನೆ ಪ್ಯಾಲೇಸ್&zwnj; &zwnj;ರೀತಿಯಲ್ಲಿದ್ದು, ಆದರೆ ನನ್ನ ಮೇಲಿನ ಪ್ರೀತಿಗೆ ಮೈಸೂರಿಗೆ ಬರುತ್ತಿದ್ದರು. ಮೈಸೂರಿನಲ್ಲೇ ಪ್ರಾಣ ಬಿಡುವುದು ನನ್ನ ಆಸೆ ಅಂತಿದ್ರು. 2018ನಲ್ಲಿ ಮೈಸೂರಿನಲ್ಲೇ ಕಡೆಯ ಕಾರ್ಯಕ್ರಮ ನೀಡಿದ್ರು. ನನಗಾಗಿ ಈ ಕಾರ್ಯಕ್ರಮ ಮಾಡ್ತಿದ್ದೀನಿ ಎಂದಿದ್ರು. ಆನಂತರ ಬಂದ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಿಲ್ಲ.&lt;/p&gt;&lt;img&gt;&lt;p&gt;ಅಮ್ಮ ಭೇಟಿಗೆ ಕೊಡುತ್ತಿದ್ದ ದಿನಾಂಕವನ್ನ ಲೆಕ್ಕ ಹಾಕಿಕೊಂಡು ಕಾಯ್ತಿದ್ದೆ. ನಮ್ಮ ಫಾರಂ ಹೌಸ್&zwnj;ನಲ್ಲೇ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು, ಮೊಮ್ಮಗಳು ಅಪ್ಸರಾ ಅಂತಿಮ ವಿಧಿವಿಧಾನಗಳನ್ನು ಪೂರೈಸಲಿದ್ದಾರೆ ಎಂದು ನವೀನ್ ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/singer-s-janaki-s-last-wish-what-were-her-last-moments-like-caretaker-naveen-reveals-the-secret-mrq-hu5piw8"/>
        </item>
        <item>
            <title><![CDATA[Mysuru: ಸರಗೂರು ಅಂಚೆ ಕಚೇರಿಯಲ್ಲಿ 1.3 ಕೋಟಿ ರೂಪಾಯಿ ಮಾಯ; CBIನಿಂದ ಇಬ್ಬರ ಬಂಧನ,]]></title>
            <link>https://kannada.asianetnews.com/karnataka-districts/mysuru-misappropriation-of-rs-1-point-3-crore-in-44-savings-accounts-at-saraguru-post-office-cbi-arrests-two-staff-mrq/articleshow-k973ebd</link>
            <guid isPermaLink="true">https://kannada.asianetnews.com/karnataka-districts/mysuru-misappropriation-of-rs-1-point-3-crore-in-44-savings-accounts-at-saraguru-post-office-cbi-arrests-two-staff-mrq/articleshow-k973ebd</guid>
            <pubDate>Thu, 09 Jul 2026 08:01:23 +0530</pubDate>
            <description><![CDATA[ಮೈಸೂರು ಜಿಲ್ಲೆಯ ಸರಗೂರು ಅಂಚೆ ಕಚೇರಿಯಲ್ಲಿ 44 ಉಳಿತಾಯ ಖಾತೆಗಳಿಂದ 1.3 ಕೋಟಿ ರು. ದುರ್ಬಳಕೆ ಮಾಡಿದ ಆರೋಪದ ಮೇಲೆ ಸಿಬಿಐ ಇಬ್ಬರು ನೌಕರರನ್ನು ಬಂಧಿಸಿದೆ. ಆರೋಪಿಗಳು ಗ್ರಾಹಕರ ಲಾಗಿನ್ ವಿವರಗಳನ್ನು ಬಳಸಿ ಹಣವನ್ನು ತಮ್ಮ ಮತ್ತು ಸಂಬಂಧಿಕರ ಖಾತೆಗಳಿಗೆ ವರ್ಗಾಯಿಸಿ ವಂಚನೆ ಎಸಗಿದ್ದಾರೆ. ಈ ಪ್ರಕರಣದ ಕುರಿತು ಸಿಬಿಐ ಹೆಚ್ಚಿನ ತನಿಖೆ ನಡೆಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx2b13g0b0nz1zw4sqddvbtj,imgname-post-office-1783563849216.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಅಂಚೆ ಕಚೇರಿಯಲ್ಲಿ 44 ಖಾತೆದಾರರ ಉಳಿತಾಯ ಖಾತೆಗಳ 1.3 ಕೋಟಿ ರು. ದುರ್ಬಳಕೆ ಮಾಡಿದ ಆರೋಪದಡಿ ಮೈಸೂರು ಜಿಲ್ಲೆಯ ಸರಗೂರು ಅಂಚೆ ಕಚೇರಿಯ ಇಬ್ಬರು ನೌಕರರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.ಅಂಚೆ ಕಚೇರಿ ಸಹಾಯಕ ಪೋಸ್ಟ್ ಮಾಸ್ಟರ್&zwnj; ಮತ್ತು ಪೋಸ್ಟ್ ಮ್ಯಾನ್&zwnj; ಬಂಧಿತರು. ಇಬ್ಬರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಗುರುತಿನ ಚೀಟಿಗಳು, ಪಾಸ್&zwnj; ವರ್ಡ್&zwnj; ದುರ್ಬಳಕೆ&lt;/strong&gt;&lt;/h2&gt;&lt;p&gt;ಈ ಇಬ್ಬರು ನೌಕರರು 2022-2025ರ ಅವಧಿಯಲ್ಲಿ ಅಂಚೆ ಕಚೇರಿಯ ಉಳಿತಾಯ ಖಾತೆದಾರರ ಲಾಗಿನ್&zwnj; ಗುರುತಿನ ಚೀಟಿಗಳು, ಪಾಸ್&zwnj; ವರ್ಡ್&zwnj;ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಗ್ರಾಹಕರ ಉಳಿತಾಯ ಖಾತೆಗಳ ಹಣವನ್ನು ಸ್ವಂತ ಖಾತೆಗಳು ಹಾಗೂ ತಮ್ಮ ಸಂಬಂಧಿಕರ ಖಾತೆಗಳಿಗೆ ಜಮೆ ಮಾಡಿಕೊಂಡು ವ್ಯವಸ್ಥಿತವಾಗಿ ವಂಚಿಸಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ಇತರೆ ಗ್ರಾಹಕರ ಖಾತೆಗಳ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆ ಇದ್ದು, ಹೆಚ್ಚಿನ ತನಿಖೆಯಿಂದ ಮತ್ತಷ್ಟು ವಿಚಾರಗಳು ಬಯಲಿಗೆ ಬರಲಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 'ನಿಮ್ಮನ್ನ ಸುಮ್ನೆ ಬಿಡೋಲ್ಲ..' ಮಂಡ್ಯ ಭ್ರಷ್ಟ ಪಿಡಿಒ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ!&lt;/strong&gt;&lt;/p&gt;&lt;h3&gt;&lt;strong&gt;ಇಬ್ಬರು ಆರೋಪಿಗಳ ಬಂಧನ&lt;/strong&gt;&lt;/h3&gt;&lt;p&gt;ಸರಗೂರು ಅಂಚೆ ಕಚೇರಿಯಲ್ಲಿ ಗ್ರಾಹಕರ ಹಣ ದುರ್ಬಳಕೆ ಸಂಬಂಧ ಕಳೆದ ಮಾರ್ಚ್&zwnj; 6ರಂದು ನೀಡಲಾದ ಲಿಖಿತ ದೂರಿನ ಮೇರೆಗೆ ವಂಚನೆ, ನಂಬಿಕೆ ದ್ರೋಹ, ಕ್ರಿಮಿನಲ್&zwnj; ಪಿತೂರಿ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru: 2ನೇ ವಿಮಾನ ನಿಲ್ದಾಣ ಎಲ್ಲಿ? ಕನಕಪುರ, ನೆಲಮಂಗಲ ರಸ್ತೆಯ ಈ ಗ್ರಾಮಗಳು ಶಾರ್ಟ್&zwnj;ಲಿಸ್ಟ್&zwnj;&lt;/strong&gt;&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mysuru-misappropriation-of-rs-1-point-3-crore-in-44-savings-accounts-at-saraguru-post-office-cbi-arrests-two-staff-mrq/articleshow-k973ebd"/>
        </item>
        <item>
            <title><![CDATA[ಎಸ್‌ ಜಾನಕಿ ಅವರ ಇಚ್ಛೆಯಂತೆ ಮೈಸೂರಿನಲ್ಲಿಯೇ ಗಾನಕೋಗಿಲೆಯ ಅಂತ್ಯಸಂಸ್ಕಾರ]]></title>
            <link>https://kannada.asianetnews.com/mysore/s-janaki-funeral-mysuru-maharaja-college-ground-state-honours-yatindra-siddaramaiah-san/articleshow-p5ff062</link>
            <guid isPermaLink="true">https://kannada.asianetnews.com/mysore/s-janaki-funeral-mysuru-maharaja-college-ground-state-honours-yatindra-siddaramaiah-san/articleshow-p5ff062</guid>
            <pubDate>Sat, 11 Jul 2026 22:09:09 +0530</pubDate>
            <description><![CDATA[&lt;p&gt;ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ನಂತರ, ಅವರ ಕೊನೆಯ ಇಚ್ಛೆಯಂತೆ ಮೈಸೂರಿನಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx90jr61s1xgnxmqx6m20avk,imgname-s-janaki-and-yatindra-siddaramaiah-1783787774145.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜು.11):&lt;/strong&gt; ಪ್ರಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ಬೆನ್ನಲ್ಲೇ ಅವರ ಕುಟುಂಬಸ್ಥರೊಂದಿಗೆ ನಡೆಸಿದ ಸುದೀರ್ಘ ಚರ್ಚೆಯ ನಂತರ, ಎಸ್&zwnj;.ಜಾನಕಿ ಅಂತ್ಯಸಂಸ್ಕಾರದ ಸ್ಥಳ ಹಾಗೂ ಸಮಯವನ್ನು ಜಿಲ್ಲಾಡಳಿತ ಅಧಿಕೃತವಾಗಿ ಪ್ರಕಟಿಸಿದೆ. ಎಸ್&zwnj;.ಜಾನಕಿ ಅವರ ಕೊನೆಯ ಇಚ್ಛೆಯಂತೆಯೇ ಮೈಸೂರಿನಲ್ಲಿಯೇ ಅವರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದ್ದು, ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಈ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.&lt;/p&gt;&lt;p&gt;ತಮ್ಮ ಅಂತ್ಯಸಂಸ್ಕಾರವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ನಡೆಯಬೇಕು ಎಂಬುದು ಸ್ವತಃ ಎಸ್. ಜಾನಕಿ ಅವರ ತೀವ್ರ ಆಕಾಂಕ್ಷೆಯಾಗಿತ್ತು. ಅವರ ಆ ಇಚ್ಛೆಯಂತೆಯೇ ಅವರ ಕುಟುಂಬ ಸದಸ್ಯರ ಒಪ್ಪಿಗೆಯ ಮೇರೆಗೆ ಮೈಸೂರಿನಲ್ಲಿಯೇ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಲಾಗಿದೆ. ಖುದ್ದು ಮುಖ್ಯಮಂತ್ರಿಗಳೇ ನನ್ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರವಾನ್ವಿತ ವಿದಾಯ ನೀಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಸಿಎಂ ಸೂಚನೆಯಂತೆಯೇ ಎಲ್ಲ ಸಿದ್ಧತೆಗಳು ನಡೆಯುತ್ತಿವೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರ.ೆ&lt;/p&gt;&lt;h2&gt;&lt;strong&gt;ನಾಳೆ ಬೆಳಗ್ಗೆ 8ರಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನ&lt;/strong&gt;&lt;/h2&gt;&lt;p&gt;ಎಸ್&zwnj;.ಜಾನಕಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ಹಾಗೂ ಅಭಿಮಾನಿಗಳ ಅಂತಿಮ ನಮನಕ್ಕಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ನಾಳೆ (ಭಾನುವಾರ) ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರು ಹಾಗೂ ಗಣ್ಯರು ಜಾನಕಿ ಅಮ್ಮನವರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;h2&gt;&lt;strong&gt;ಆಸ್ಪತ್ರೆ ಬಳಿ ಅಭಿಮಾನಿಗಳು ಬರಬೇಡಿ&mdash;ಸಚಿವರ ಮನವಿ&lt;/strong&gt;&lt;/h2&gt;&lt;p&gt;ಸದ್ಯ ಪಾರ್ಥಿವ ಶರೀರವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದ್ದು, ಯಾವುದೇ ಅಭಿಮಾನಿಗಳು ಅಥವಾ ಸಾರ್ವಜನಿಕರು ಆಸ್ಪತ್ರೆಯ ಆವರಣಕ್ಕೆ ಬಂದು ಗೊಂದಲ ಸೃಷ್ಟಿಸಬಾರದು. ಸಾರ್ವಜನಿಕ ದರ್ಶನಕ್ಕೆ ನಾಳೆ ಬೆಳಗ್ಗೆ 8 ಗಂಟೆಯ ನಂತರ ಮಹಾರಾಜ ಕಾಲೇಜು ಮೈದಾನದಲ್ಲೇ ವ್ಯವಸ್ಥೆ ಇರುವುದರಿಂದ ನೇರವಾಗಿ ಅಲ್ಲಿಗೇ ಬರಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಫಾರ್ಮ್&zwnj;ಹೌಸ್&zwnj;ನಲ್ಲಿ ಸಂಜೆ ಅಂತ್ಯಸಂಸ್ಕಾರ&lt;/strong&gt;&lt;/h2&gt;&lt;p&gt;ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನ ಪ್ರಕ್ರಿಯೆ ಮುಗಿದ ಬಳಿಕ, ನಾಳೆ ಸಂಜೆ ವೇಳೆಗೆ ಎಚ್&zwnj;.ಡಿ. ಕೋಟೆ ತಾಲೂಕಿನ ಬೋಗಾದಿರ ಕನಿಯನ ಹುಂಡಿಯಲ್ಲಿ ಸಾಕು ಮಗ ನವೀನ್&zwnj; ಅವರ 'ನವೀನ್ ಫಾರ್ಮ್ ಹೌಸ್'ನಲ್ಲಿ ಎಸ್. ಜಾನಕಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲು ಸ್ಥಳ ನಿಗದಿಪಡಿಸಲಾಗಿದೆ. ಅಲ್ಲಿ ಸಕಲ ಪೊಲೀಸ್ ಗೌರವಗಳು ಹಾಗೂ ಸತ್ಕಾರಗಳೊಂದಿಗೆ ಸಂಗೀತ ಲೋಕದ ಧ್ರುವತಾರೆಯನ್ನು ಮಣ್ಣು ಮಾಡಲಾಗುವುದು ಎಂದು ಜಿಲ್ಲಾಡಳಿತ ಖಚಿತಪಡಿಸಿದೆ.&lt;/p&gt;&lt;h2&gt;&lt;strong&gt;ಮೊಮ್ಮಗಳಿಂದ ಅತಂತ್ಯಸಂಸ್ಕಾರದ ಕಾರ್ಯ&lt;/strong&gt;&lt;/h2&gt;&lt;p&gt;ಎಸ್&zwnj; ಜಾನಕಿ ಅವರ ಮೊಮ್ಮಗಳು ಅಪ್ಸಾರ ಅವರಿಂದ ಅಂತ್ಯ ಸಂಸ್ಕಾರ ನೆರವೇರಲಿದೆ. ಅವರ ಏಕೈಕ ಪುತ್ರ ಈ ವರ್ಷದ ಜನವರಿಯಲ್ಲಿ ಸಾವು ಕಂಡಿದ್ದರು.ಹೀಗಾಗಿ ಮಗನ ಮಗಳಾದ ಅಪ್ಸಾರಳಿಂದ ಅಂತ್ಯ ಸಂಸ್ಕಾರ ನೆರವೇರಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/mysore/s-janaki-funeral-mysuru-maharaja-college-ground-state-honours-yatindra-siddaramaiah-san/articleshow-p5ff062"/>
        </item>
        <item>
            <title><![CDATA[Abhimanyu : ಮರದ ದಿಮ್ಮಿ ಸಾಗಿಸುವಾಗ ದಸರಾ ಆನೆ ಅಭಿಮನ್ಯು ದಂತ ಭಗ್ನ!]]></title>
            <link>https://kannada.asianetnews.com/karnataka-districts/dasara-elephant-abhimanyu-damage-a-tusk-while-transporting-a-log-rav/articleshow-rrq69e6</link>
            <guid isPermaLink="true">https://kannada.asianetnews.com/karnataka-districts/dasara-elephant-abhimanyu-damage-a-tusk-while-transporting-a-log-rav/articleshow-rrq69e6</guid>
            <pubDate>Sun, 05 Jul 2026 08:24:42 +0530</pubDate>
            <description><![CDATA[&lt;p&gt;ಮೈಸೂರು ದಸರಾದ ಅಂಬಾರಿ ಆನೆ ಅಭಿಮನ್ಯುವಿನ ದಂತ ಭಗ್ನವಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಆನೆ ಇತ್ತೀಚೆಗೆ ಮರದ ದಿಮ್ಮಿ ಸಾಗಿಸುವ ವೇಳೆ ಎಡ ಭಾಗದ ದಂತದ ತುದಿ ಭಾಗ ಮುರಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwr31tnq9q4z2hedcnfnsftg,imgname-----------------------2026-07-05t082204.612-1783219940022.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ (ಜು.5):&lt;/strong&gt; ಕೊಡಗಿನ ಕುವರ ಎಂದೇ ಕರೆಯಿಸಿಕೊಳ್ಳುವ ಮೈಸೂರು ದಸರಾದ ಅಂಬಾರಿ ಹೊತ್ತುಕೊಳ್ಳುವ ಆನೆ ಅಭಿಮನ್ಯುವಿನ ದಂತ ಭಗ್ನವಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಆನೆ ಇತ್ತೀಚೆಗೆ ಮರದ ದಿಮ್ಮಿ ಸಾಗಿಸುವ ವೇಳೆ ಎಡ ಭಾಗದ ದಂತದ ತುದಿ ಭಾಗ ಮುರಿದಿದೆ.&lt;/p&gt;&lt;h2&gt;ಅಭಿಮನ್ಯುವಿನ ದಂತ ಭಗ್ನಗೊಂಡಿದ್ದು ಹೇಗೆ?&lt;/h2&gt;&lt;p&gt;ಮರದ ದಿಮ್ಮಿ ಅಥವಾ ಕಠಿಣವಾದ ವಸ್ತುವಿಗೆ ಬಡಿದು ದಂತಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಪಶು ವೈದ್ಯರು ಆನೆಯ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಅಭಿಮನ್ಯು ಆರೋಗ್ಯವಾಗಿದ್ದು, ಯಾವುದೇ ಆತಂಕ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮತ್ತೆ ದಂತ ಬೆಳವಣಿಗೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಆನೆ ಇದೀಗ ಮೈಸೂರಿನ ಸರಗೂರಿನಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದೆ.&lt;/p&gt;&lt;p&gt;ಅರ್ಜುನ ಬಳಿಕ ನಾಡದೇವತೆ ಚಾಮುಂಡೇಶ್ವರಿಯನ್ನ ವಿಶ್ವದರ್ಶನ ಮಾಡಿಸುವ ಜವಾಬ್ದಾರಿ ಅಭಿಮನ್ಯು ಹೊತ್ತಿದ್ದಾನೆ.&lt;/p&gt;&lt;p&gt;ಅಭಿಮನ್ಯು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ನಂತರ ಮತ್ತಿಕೋಡು ಶಿಬಿರದಲ್ಲಿ ಪಳಗಿಸಲಾಯ್ತು. ಸದ್ಯ ಈಗ 60 ವರ್ಷದ ಹಿರಿಯ. ವಯಸ್ಸಾಗಿರುವುದರಿಂದ ಸಹಜವಾಗಿ ದಂತ ದುರ್ಬಲಗೊಂಡಿರುತ್ತವೆ. ಹೀಗಾಗಿ ದಂತ ಭಗ್ನವಾಗಿದೆ ಎನ್ನಲಾಗಿದೆ.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dasara-elephant-abhimanyu-damage-a-tusk-while-transporting-a-log-rav/articleshow-rrq69e6"/>
        </item>
        <item>
            <title><![CDATA[ಮೈಸೂರಲ್ಲಿ ಕೆಸರು ಗದ್ದೆಯೂ ಇಲ್ಲ, ಕೋಣಗಳೂ ಇಲ್ಲ: ದಸರಾದಲ್ಲಿ ಕಂಬಳ ಆಯೋಜನೆಗೆ ತೀವ್ರ ವಿರೋಧ!]]></title>
            <link>https://kannada.asianetnews.com/state/farmer-and-dalit-organizations-oppose-the-kambala-at-the-mysore-dasara-2026-rav/articleshow-smwevnt</link>
            <guid isPermaLink="true">https://kannada.asianetnews.com/state/farmer-and-dalit-organizations-oppose-the-kambala-at-the-mysore-dasara-2026-rav/articleshow-smwevnt</guid>
            <pubDate>Fri, 10 Jul 2026 08:04:03 +0530</pubDate>
            <description><![CDATA[&lt;p&gt;ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜನೆಗೆ ಮುಂದಾಗಿರುವುದನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ನ್ಯಾಯಾಲಯಕ್ಕೆ ದಾವೆ ಹೂಡಲು ಹಾಗೂ ಬೀದಿಗಿಳಿದು ಹೋರಾಟ ಮಾಡುವುದಾಗಿ ಪರಿಸರಕ್ಕಾಗಿ ನಾವು, ರೈತ ಸಂಘ ಮತ್ತು ದಲಿತ ಸಂಘಟನೆಗಳು ಘೋಷಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx4xrmsgs3rnm8qca5yttq6p,imgname-----------------------2026-07-10t075934.392-1783650603823.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜು.10):&lt;/strong&gt; ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜನೆಗೆ ಮುಂದಾಗಿರುವುದನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ನ್ಯಾಯಾಲಯಕ್ಕೆ ದಾವೆ ಹೂಡಲು ಹಾಗೂ ಬೀದಿಗಿಳಿದು ಹೋರಾಟ ಮಾಡುವುದಾಗಿ ಪರಿಸರಕ್ಕಾಗಿ ನಾವು, ರೈತ ಸಂಘ ಮತ್ತು ದಲಿತ ಸಂಘಟನೆಗಳು ಘೋಷಿಸಿವೆ.&lt;/p&gt;&lt;p&gt;ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ದಸರಾದಲ್ಲಿ ಕಂಬಳ ಆಯೋಜನೆ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದರು. ಹಿಂಪಡೆಯದಿದ್ದರೇ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.&lt;/p&gt;&lt;h2&gt;ಬಡಗಲಪುರ ನಾಗೇಂದ್ರ ಹೇಳಿದ್ದೇನು?&lt;/h2&gt;&lt;p&gt;ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ನಾವು ಕಂಬಳ ಕ್ರೀಡೆಯನ್ನು ವಿರೋಧಿಸುತ್ತಿಲ್ಲ. ಬಲತ್ಕಾರವಾಗಿ ಹೇರುವುದಕ್ಕೆ ವಿರೋಧ ಇದೆ. ಮೈಸೂರಲ್ಲಿ ಕೆಸರು ಗದ್ದೆಯೂ ಇಲ್ಲ. ಕೋಣಗಳೂ ಇಲ್ಲ. ದಸರಾದಲ್ಲಿ ಸ್ಥಳೀಯ ಕ್ರೀಡೆ, ಸಾಂಸ್ಕೃತಿಕ ಕಲೆಗಳಿಗೆ ಉತ್ತೇಜನ ಕೊಡಬೇಕು. ಜನರ ಭಾವನೆಯನ್ನು ಸರ್ಕಾರ ಗೌರವಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;ಜನರು ವಿರೋಧಿಸುವುದನ್ನೇ ಸರ್ಕಾರ ಹಠಕ್ಕೆ ಬಿದ್ದವರಂತೆ ಜಾರಿಗೆ ತರುತ್ತದೆ. ಸರ್ಕಾರ ವಾರದೊಳಗೆ ಸ್ಪಷ್ಟವಾದ ನಿರ್ಧಾರ ಕೈಗೊಳ್ಳದಿದ್ದರೆ ಬೀದಿಗಿಳಿದು ಅಹಿಂಸಾತ್ಮಕ ಹೋರಾಟದ ಜೊತೆಗೆ ಪ್ರತಿರೋಧ ಒಡ್ಡುತ್ತೇವೆ ಎಂದು ಅವರು ಹೇಳಿದರು.&lt;/p&gt;&lt;h3&gt;ಪ್ರವಾಸೋದ್ಯಮ ಹೆಸರಲ್ಲಿ ಜನಪದ ಕ್ರೀಡೆ?&lt;/h3&gt;&lt;p&gt;ಪಾರಂಪರಿಕ ತಜ್ಞ ಪ್ರೊ.ಎನ್.ಎಸ್. ರಂಗರಾಜು ಮಾತನಾಡಿ, ಪ್ರವಾಸೋದ್ಯಮದ ಹೆಸರಿನಲ್ಲಿ ಜನಪದ ಕ್ರೀಡೆ ತುರುಕುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಿ ಕ್ರೀಡೆ ಆಯೋಜಿಸಿ ದುಂದುವೆಚ್ಚ ಮಾಡುವುದು ಸರಿಯಲ್ಲ. ಮಂಗಳೂರು, ಮೂಡಬಿದರೆ ದಸರಾಗಳಲ್ಲಿ ಕಂಬಳ ಆಯೋಜಿಸಬೇಕು ಎಂದರು.&lt;/p&gt;&lt;p&gt;ಪರಿಸರಕ್ಕಾಗಿ ನಾವು ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ದಸರಾದಲ್ಲಿ ಕಂಬಳ ಆಯೋಜನೆಗೆ ಹಠಬೇಡ. ಕಂಬಳಕ್ಕೆ ಅದರದೇ ಆದ ವೈಶಿಷ್ಟ್ಯ, ಧಾರ್ಮಿಕತೆ ಇದೆ. ಮೈಸೂರಲ್ಲಿ ಕಂಬಳ ಆಯೋಜನೆಗೆ ತುಳುನಾಡಿನ ಜನರೇ ವಿರೋಧ ಮಾಡುತ್ತಿದ್ದಾರೆ. ದಸರಾದಲ್ಲಿ ಕಂಬಳ ವಿರೋಧಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.&lt;/p&gt;&lt;p&gt;ಮುಖಂಡರಾದ ಭಾನು ಮೋಹನ್, ಬೆಟ್ಟಯ್ಯ ಕೋಟೆ, ಮ.ಗು. ಸದಾನಂದಯ್ಯ, ಮನ್ಸೂರ್ ಅಹಮದ್, ಹೊರೆಯಾಲ ದೊರೆಸ್ವಾಮಿ, ಸಿಂಧುವಳ್ಳಿ ಅಕ್ಬರ್, ಶಂಭುಲಿಂಗಸ್ವಾಮಿ ಇದ್ದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/farmer-and-dalit-organizations-oppose-the-kambala-at-the-mysore-dasara-2026-rav/articleshow-smwevnt"/>
        </item>
        <item>
            <title><![CDATA[ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?]]></title>
            <link>https://kannada.asianetnews.com/state/mysuru-dasara-kambala-row-mp-yaduveer-wadiyar-opposes-event-gdp-videoshow-tsh744a</link>
            <guid isPermaLink="true">https://kannada.asianetnews.com/state/mysuru-dasara-kambala-row-mp-yaduveer-wadiyar-opposes-event-gdp-videoshow-tsh744a</guid>
            <pubDate>Tue, 07 Jul 2026 13:09:42 +0530</pubDate>
            <description><![CDATA[ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸಲು ಸಿದ್ಧತೆ ನಡೆದಿದ್ದು, ಇದಕ್ಕೆ 5 ಕೋಟಿ ರೂ. ವೆಚ್ಚದ ಅಂದಾಜಿದೆ. ಆದರೆ, ಇದು ಸಾಂಸ್ಕೃತಿಕವಾಗಿ ಸೂಕ್ತವಲ್ಲ, ದುಂದುವೆಚ್ಚ ಮತ್ತು ಬರಗಾಲದ ಸಮಯದಲ್ಲಿ ಅನಗತ್ಯ ಎಂದು ಸಂಸದ ಯದುವೀರ ಒಡೆಯರ್ ಸೇರಿದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xamd3pa" medium="video" height="768" width="1024"/>
            <content:encoded><![CDATA[&lt;p&gt;ಮೈಸೂರು ದಸರಾದಲ್ಲಿ ಕಂಬಳ ಬೇಕಾ ಬೇಡವಾ..? ದಸರಾ ಕಂಬಳ ವಿಚಾರದಲ್ಲಿ ಶುರುವಾಗಿದೆ ಹಗ್ಗ ಜಗ್ಗಾಟ. ದಸರಾದಲ್ಲಿ ಕಂಬಳ ಬೇಡ ಅಂತಿದ್ದಾರೆ ಮೈಸೂರಿಗರು. ಮಾಡ್ತೇವೆ ಎನ್ನುತ್ತಿದ್ದಾರೆ ಆಯೋಜಕರು. ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿ ಕಂಬಳಕ್ಕೆ ಸಿದ್ಧತೆ. 120 ಜೋಡಿ ಕೋಣಗಳು ಮೈಸೂರಿಗೆ ಆಗಮಿಸುವ ನಿರೀಕ್ಷೆ. ಆಯೋಜನೆಗೆ 5 ಕೋಟಿ ರೂ. ವೆಚ್ಚದ ಲೆಕ್ಕಾಚಾರ. 2 ದಿನಗಳ ಕಾಲ ಕಂಬಳ ನಡೆಸಲು ಸಮಾಲೋಚನೆ. 2 ಸಮಾನಾಂತರ ಸ್ಥಳದಲ್ಲಿ 16 ಸುತ್ತುಗಳಲ್ಲಿ ಆಯೋಜನೆಗೆ ಚಿಂತನೆ. 48 ಗಂಟೆ ನಿರಂತರವಾಗಿ ಬೆಳಕಿನ ವ್ಯವಸ್ಥೆಯಡಿ ಕಂಬಳ.&lt;/p&gt;&lt;p&gt;ಕಂಬಳಕ್ಕಾಗಿ ಎರಡು ಸ್ಥಳಗಳ ಪರಿಶೀಲನೆ. ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್&zwnj; ಬಂಕ್&zwnj; ಬಳಿ 15 ಎಕರೆ ಜಾಗ. ಸಾತಗಳ್ಳಿಯ VTU ಸಮೀಪದ 23 ಎಕರೆ ಜಾಗ ಅಂತಿಮ ಪಟ್ಟಿಗೆ. ದಸರಾದಲ್ಲಿ ಕಂಬಳ ಆಯೋಜನೆಗೆ ಮೈಸೂರು ಸಂಸದರಿಂದಲೇ ವಿರೋಧ. ಕಂಬಳಕ್ಕೆ ತನ್ನದೇ ಆದ ಸಂಪ್ರದಾಯ, ಗೌರವ ಇದೆ. ಕಂಬಳ ಮೈಸೂರು ದಸರಾಗೆ ಬೇಡ ಎಂದ ಯದುವೀರ ಒಡೆಯರ್ . ದಸರಾ ಧಾರ್ಮಿಕವಾದ ಆಚರಣೆ. ಅಲ್ಲಿನ ಸಂಸ್ಕೃತಿಗಳು ಅಲ್ಲಲ್ಲಿಯೇ ಆಚರಣೆ ಆಗಬೇಕು. ಇಲ್ಲಿಗೆ ಕಂಬಳವನ್ನು ಹೇರುವುದು ಬೇಡ ಎಂದ ಒಡೆಯರ್ .&lt;/p&gt;&lt;p&gt;ಕಂಬಳದಂತ ಜನಪದ ಕಲೆ ಆಯಾ ಪ್ರದೇಶಕ್ಕೆ ಸೀಮಿತವಾಗಿರಬೇಕು. ಅದನ್ನು ಬೇರೆಡೆಗೆ ತರುವಾಗ ಯೋಚನೆ ಮಾಡಬೇಕು. 5 -8 ಕೋಟಿ ಖರ್ಚು ಮಾಡಿ ದಸರಾದಲ್ಲಿ ಕಂಬಳ ಬೇಡ. ಕಂಬಳವನ್ನು ಅಲ್ಲೇ ಮಾಡಲಿ, ಇಲ್ಲಿ ಮಾಡಿದರೆ ದುಂದುವೆಚ್ಚ. ಕಂಬಳಕ್ಕಾಗಿ ಪ್ರತ್ಯೇಕ ಮೈದಾನ ಸಿದ್ಧ ಮಾಡಬೇಕು. ಕೋಟಿಗಟ್ಟಲೆ ಹಣ ಖರ್ಚು, ಮರಗಳನ್ನು ಕಡಿಯಬೇಕು. ಅಪಾರ ಪ್ರಮಾಣದ ನೀರನ್ನು ಬಳಸಿ ಕೆಸರು ಗದ್ದೆ ನಿರ್ಮಿಸಬೇಕು. ಬರಗಾಲದ ಸಂದರ್ಭದಲ್ಲಿ ಮೈಸೂರಲ್ಲಿ ಕಂಬಳ ಬೇಡ ಎಂದು ವಿರೋಧ&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/state/mysuru-dasara-kambala-row-mp-yaduveer-wadiyar-opposes-event-gdp-videoshow-tsh744a"/>
        </item>
    </channel>
</rss>
