<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 26 Apr 2026 20:51:54 +0530</lastBuildDate>
        <atom:link href="https://kannada.asianetnews.com/rss/mysore" rel="self" type="application/rss+xml"/>
        <item>
            <title><![CDATA[ಮೈಸೂರು ಚೆಲುವಾಂಬ ಆಸ್ಪತ್ರೆ 'ಐಸಿಯು'ನಲ್ಲಿಟ್ಟ ಮಗು ಇರುವೆಗಳು ಕಚ್ಚಿ ಸಾವು? ವೈದ್ಯರಿಂದ ಬಂತು ಭಿನ್ನ ಸ್ಪಷ್ಟನೆ!]]></title>
            <link>https://kannada.asianetnews.com/karnataka-districts/mysuru-cheluvamba-hospital-newborn-death-ant-bite-allegations-vs-doctor-clarification-sat/articleshow-33kpx66</link>
            <guid isPermaLink="true">https://kannada.asianetnews.com/karnataka-districts/mysuru-cheluvamba-hospital-newborn-death-ant-bite-allegations-vs-doctor-clarification-sat/articleshow-33kpx66</guid>
            <pubDate>Thu, 23 Apr 2026 19:27:56 +0530</pubDate>
            <description><![CDATA[&lt;p&gt;ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಮೃತಪಟ್ಟಿದ್ದು, ಐಸಿಯುನಲ್ಲಿದ್ದ ಇರುವೆಗಳು ಕಚ್ಚಿದ್ದರಿಂದಲೇ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ, ಮಗು ಅವಧಿ ಪೂರ್ವ ಜನಿಸಿದ್ದರಿಂದ ಹಾಗೂ ಚಿಕಿತ್ಸೆಯ ಕಾರಣಗಳಿಂದ ಮೃತಪಟ್ಟಿದೆ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpx9z7eq6g77gfk2qp8fyy31,imgname-mysuru-cheluvamba-hospital-baby-death-1776952516055.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.23): ಸಾಂ&lt;/strong&gt;ಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಚೆಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಸಾವನ್ನಪ್ಪಿದ್ದು, ಈ ಘಟನೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಐಸಿಯು (ICU) ನಲ್ಲಿದ್ದ ಮಗುವಿಗೆ ಇರುವೆಗಳು ಕಚ್ಚಿದ್ದರಿಂದಲೇ ಸಾವು ಸಂಭವಿಸಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಆಸ್ಪತ್ರೆ ಮಂಡಳಿಯು ಈ ಆರೋಪವನ್ನು ತಳ್ಳಿಹಾಕಿದ್ದು, ಸಾವಿಗೆ ವೈದ್ಯಕೀಯ ಕಾರಣಗಳನ್ನು ನೀಡಿದೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಕಳೆದ ಏಪ್ರಿಲ್ 15 ರಂದು ಜನಿಸಿದ್ದ ಗಂಡು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆಲುವಾಂಬ ಆಸ್ಪತ್ರೆಯ ಐಸಿಯು ವಿಭಾಗಕ್ಕೆ ದಾಖಲಿಸಲಾಗಿತ್ತು. ಮಗು ಏಳು ತಿಂಗಳಿಗೇ (ಅವಧಿ ಪೂರ್ವ) ಜನಿಸಿದ್ದರಿಂದ ಅದರ ತೂಕ ಕೇವಲ 1 ಕೆಜಿ 40 ಗ್ರಾಂ ಇತ್ತು. ತೀವ್ರ ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.&lt;/p&gt;&lt;h2&gt;&lt;strong&gt;ಪೋಷಕರ ಆಕ್ರೋಶ ಮತ್ತು ಆರೋಪ:&lt;/strong&gt;&lt;/h2&gt;&lt;p&gt;ಮಗು ಸಾವನ್ನಪ್ಪುತ್ತಿದ್ದಂತೆಯೇ ಪೋಷಕರು ಆಸ್ಪತ್ರೆಯ ಆವರಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಐಸಿಯು ನಲ್ಲಿ ಇರುವೆಗಳ ಕಾಟ ವಿಪರೀತವಾಗಿತ್ತು. ಮಗುವಿನ ದೇಹದ ಮೇಲೆ ಇರುವೆಗಳು ಓಡಾಡುತ್ತಿವೆ ಎಂದು ನಾವು ಸಿಬ್ಬಂದಿಗೆ ಮೊದಲೇ ತಿಳಿಸಿದ್ದೆವು. ಆದರೆ ಅವರು 'ಸಿಹಿ ಇರುವುದರಿಂದ ಒಂದೆರಡು ಇರುವೆಗಳು ಬಂದಿರಬಹುದು' ಎಂದು ಹಾರಿಕೆ ಉತ್ತರ ನೀಡಿದರು. ಈಗ ಮಗುವಿನ ಮುಖ ಮತ್ತು ಎದೆಯ ಮೇಲೆ ಗಾಯದ ಗುರುತುಗಳಿವೆ, ಇರುವೆ ಕಚ್ಚಿದ್ದರಿಂದಲೇ ನಮ್ಮ ಮಗು ಸತ್ತಿದೆ' ಎಂದು ಪೋಷಕರು ಕಣ್ಣೀರು ಹಾಕುತ್ತಾ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ.&lt;/p&gt;&lt;h3&gt;&lt;strong&gt;ಆಸ್ಪತ್ರೆ ಅಧಿಕಾರಿಗಳ ಸ್ಪಷ್ಟನೆ:&lt;/strong&gt;&lt;/h3&gt;&lt;p&gt;ಪೋಷಕರ ಆರೋಪಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲಕ್ಷ್ಮಿಕಾಂತ್ ಮತ್ತು ಮಕ್ಕಳ ವೈದ್ಯ ಡಾ. ಪ್ರದೀಪ್ ಸ್ಪಷ್ಟನೆ ನೀಡಿದ್ದಾರೆ. ಮಗುವಿನ ಸಾವಿಗೆ ಇರುವೆ ಕಚ್ಚಿರುವುದು ಕಾರಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ವೈದ್ಯರು ನೀಡಿರುವ ಪ್ರಮುಖ ಅಂಶಗಳು ಹೀಗಿವೆ:&lt;/strong&gt;&lt;/h2&gt;&lt;p&gt;&lt;strong&gt;ಅವಧಿ ಪೂರ್ವ ಜನನ: &lt;/strong&gt;ಮಗು ಕೇವಲ 7 ತಿಂಗಳಿಗೆ ಜನಿಸಿದ್ದು, ತೂಕ ಬಹಳ ಕಡಿಮೆ ಇತ್ತು. ಇಂತಹ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಮತ್ತು ಬದುಕುಳಿಯುವ ಸಾಧ್ಯತೆ ಕಡಿಮೆ ಇರುತ್ತದೆ.&lt;/p&gt;&lt;p&gt;&lt;strong&gt;ಗಾಯದ ಗುರುತುಗಳ ರಹಸ್ಯ: &lt;/strong&gt;ಮಗುವಿನ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಅಳವಡಿಸಲಾಗಿತ್ತು. ಅದರ ಒತ್ತಡದಿಂದಾಗಿ ಮುಖದ ಮೇಲೆ ಕೆಲವು ಗುರುತುಗಳಾಗಿವೆ. ಅಲ್ಲದೆ, ಮಗುವಿನ ಹೃದಯ ಬಡಿತ ಕಡಿಮೆಯಾದಾಗ ಪುನಶ್ಚೇತನಗೊಳಿಸಲು (CPR) ಎದೆಯನ್ನು ಒತ್ತಲಾಗಿತ್ತು. ಆ ಗುರುತುಗಳು ಎದೆಯ ಮೇಲಿವೆ. ಇವು ಇರುವೆ ಕಚ್ಚಿದ ಗುರುತುಗಳಲ್ಲ.&lt;/p&gt;&lt;p&gt;&lt;strong&gt;ಇರುವೆ ಇರುವುದು ಸತ್ಯವೇ?:&lt;/strong&gt; ಗ್ಲೂಕೋಸ್ ಬಾಟಲಿಯ ಬಳಿ ಒಂದೇ ಒಂದು ಇರುವೆ ಇತ್ತು. ಅದನ್ನು ನೋಡಿದ ಪೋಷಕರು ಇಡೀ ಘಟನೆಗೆ ಇರುವೆಗಳೇ ಕಾರಣ ಎನ್ನುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು.&lt;/p&gt;&lt;h2&gt;&lt;strong&gt;ಪ್ರಸ್ತುತ ಸ್ಥಿತಿ:&lt;/strong&gt;&lt;/h2&gt;&lt;p&gt;ಸದ್ಯ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೋಷಕರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆಸ್ಪತ್ರೆ ಮಂಡಳಿಯು ಪೋಷಕರ ದುಃಖವನ್ನು ಅರ್ಥ ಮಾಡಿಕೊಳ್ಳುತ್ತೇವೆ, ಆದರೆ ವೈದ್ಯಕೀಯವಾಗಿ ಇರುವೆ ಕಚ್ಚಿ ಸಾವು ಸಂಭವಿಸುವುದು ಅಸಾಧ್ಯ ಎಂದು ಹೇಳಿದೆ. ಈ ಪ್ರಕರಣವು ಈಗ ತನಿಖೆಯ ಹಂತದಲ್ಲಿದ್ದು, ಮೇಲಾಧಿಕಾರಿಗಳ ವರದಿಗಾಗಿ ಕಾಯಲಾಗುತ್ತಿದೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mysuru-cheluvamba-hospital-newborn-death-ant-bite-allegations-vs-doctor-clarification-sat/articleshow-33kpx66"/>
        </item>
        <item>
            <title><![CDATA[ಮೈಸೂರು: ಮನೆಗೆ ನುಗ್ಗಿದ ಚಿರತೆ ಎರಡು ಗಂಟೆ ಕಾಲ ಅಜ್ಜಿ ಮಲಗಿದ್ದ ಮಂಚದ ಕೆಳಗೆ ವಿಶ್ರಾಂತಿ!]]></title>
            <link>https://kannada.asianetnews.com/karnataka-districts/a-leopard-that-entered-a-house-in-mysuru-took-a-rest-under-the-couch-rav/articleshow-3ktgpl2</link>
            <guid isPermaLink="true">https://kannada.asianetnews.com/karnataka-districts/a-leopard-that-entered-a-house-in-mysuru-took-a-rest-under-the-couch-rav/articleshow-3ktgpl2</guid>
            <pubDate>Sat, 18 Apr 2026 05:08:54 +0530</pubDate>
            <description><![CDATA[&lt;p&gt;Leopard enters house in Mysuru ಮೈಸೂರಿನ ಸಿದ್ದಾರ್ಥನಗರದ ಮನೆಯೊಂದಕ್ಕೆ ನುಗ್ಗಿದ ಚಿರತೆಯು, ವೃದ್ಧೆಯೊಬ್ಬರು ಮಲಗಿದ್ದ ಮಂಚದ ಕೆಳಗೆ ಎರಡು ಗಂಟೆಗಳ ಕಾಲ ಅವಿತುಕೊಂಡಿತ್ತು. ಯಾರಿಗೂ ಯಾವುದೇ ಹಾನಿ ಮಾಡದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpewbk6y4z8vbagr3bg4r1bc,imgname-----------------------2026-04-18t045226.605-1776468479197.jpg" type="image/jpeg" height="390" width="690"/>
            <content:encoded><![CDATA[&lt;p&gt;- 2 ಗಂಟೆ ಮನೆಯೊಳಗೇ ಇದ್ದರೂ ಮಂಚದ ಮೇಲೆ ಮಲಗಿದ್ದ ವೃದ್ಧೆಗೆ ಏನೂ ಮಾಡದ ಚಿರತೆ&lt;/p&gt;&lt;p&gt;ಮೈಸೂರು (ಏ.18): ಯಾವುದೇ ಸದ್ದು ಗದ್ದಲ ಇಲ್ಲದೇ ಮನೆಗೆ ನುಗ್ಗಿ, ಮಂಚದ ಕೆಳಗೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಲಗಿದ್ದ 4 ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ, ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜಿಯೊಬ್ಬರು ಮಲಗಿದ್ದ ಮಂಚದ ಕೆಳಗೆ ಚಿರತೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುಮ್ಮನೆ ಮಲಗಿತ್ತು. ಅಜ್ಜಿಯ ಆರೈಕೆಗಾಗಿ ಮತ್ತಿಬ್ಬರು ಕೋಣೆಗೆ ಬಂದು ಹೋದರೂ, ಯಾರಿಗೂ ಏನೂ ಮಾಡಿಲ್ಲ.&lt;/p&gt;&lt;p&gt;ಮೈಸೂರಿನ ಸಿದ್ದಾರ್ಥನಗರದ ವಿನಯಮಾರ್ಗದಲ್ಲಿರುವ ನಗರಪಾಲಿಕೆ ನಿವೃತ್ತ ಎಂಜಿನಿಯರ್ ಸುರೇಶ್ ಎಂಬುವರ ಮನೆಗೆ ಚಿರತೆ ನುಗ್ಗಿತ್ತು. ಬೆಳಗ್ಗೆ 9.30ರ ವೇಳೆಗೆ ಸದ್ದಿಲ್ಲದೆ ಮನೆ ಪ್ರವೇಶಿಸಿದ ಚಿರತೆ, ಗಾಬರಿಯಿಂದ ಮಂಚದ ಕೆಳಗೆ ಅವಿತುಕೊಂಡಿದೆ.&lt;/p&gt;&lt;p&gt;11.30ರ ಸುಮಾರಿಗೆ ಮನೆ ಕೆಲಸದಾಕೆ ಕಸ ಗುಡಿಸಲು ರೂಮಿಗೆ ಬಂದಿದ್ದು, ಕಸ ಗುಡಿಸುತ್ತಿದ್ದಾಗ ಚಿರತೆ ಇರುವುದು ಗೊತ್ತಾಗಿ ಹೌಹಾರಿದ್ದಾರೆ. ಆಗ ತಕ್ಷಣ ಮಂಚದ ಮೇಲೆ ಮಲಗಿದ್ದ ಶೈಲಜಾರನ್ನು ತಬ್ಬಿ ಎತ್ತಿಕೊಂಡು ಹೊರಗೆ ಕರೆ ತರಲಾಗಿದೆ. ಬಳಿಕ ರೂಂನ ಬಾಗಿಲು ಹಾಕಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ, ಅರವಳಿಕೆ ಚುಚ್ಚುಮದ್ದು ನೀಡಿ, ಚಿರತೆಯನ್ನು ಸೆರೆ ಹಿಡಿದು ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರು.&lt;/p&gt;&lt;p&gt;ಸುರೇಶ್ ಅವರ ತಾಯಿ ಶೈಲಜಾ, ವಯೋಸಹಜ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿದ್ದು, ಎಂದಿನಂತೆ ಬೆಳಗ್ಗೆ ಉಪಾಹಾರ ಸೇವಿಸಿ ರೂಮಿನಲ್ಲಿ ಮಂಚದ ಮೇಲೆ ಮಲಗಿದ್ದರು. ಚಿರತೆ ರೂಮಿನಲ್ಲಿರುವಾಗಲೇ ಸುರೇಶ್&zwnj; ಅವರ ಪತ್ನಿ ಸುಜಾತ ಅವರು ರೂಮಿಗೆ ಬಂದು ಅತ್ತೆಯನ್ನು 2- 3 ಬಾರಿ ಮಾತಾಡಿಸಿ ಹೋಗಿದ್ದಾರೆ. ಆದರೂ ಚಿರತೆಯ ಇರುವಿಕೆ ಗೊತ್ತಾಗಿಲ್ಲ.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/a-leopard-that-entered-a-house-in-mysuru-took-a-rest-under-the-couch-rav/articleshow-3ktgpl2"/>
        </item>
        <item>
            <title><![CDATA[ಪ್ರಧಾನಿ ಹೇಳಿದ ಗುಟ್ಟು ರಟ್ಟು ಮಾಡಿದ ಸಿಎಂ: ಮೋದಿ ಸಿದ್ದು ಕಿವಿಯಲ್ಲಿ ಹೇಳಿದ್ದೇನು?]]></title>
            <link>https://kannada.asianetnews.com/politics/cm-siddaramaiah-reveals-what-pm-whispers-with-him-when-his-state-visit/articleshow-7fw0i0f</link>
            <guid isPermaLink="true">https://kannada.asianetnews.com/politics/cm-siddaramaiah-reveals-what-pm-whispers-with-him-when-his-state-visit/articleshow-7fw0i0f</guid>
            <pubDate>Mon, 20 Apr 2026 14:46:31 +0530</pubDate>
            <description><![CDATA[&lt;p&gt;ಪ್ರಧಾನಿ ಮೋದಿ ಕಳೆದ ಬುಧವಾರ ರಾಜ್ಯಕ್ಕೆ ಆಗಮಿಸಿದ್ದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಸಿಎಂ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಏನೋ ಗುಟ್ಟು ಹೇಳುತ್ತಿರುವಂತಹ ಫೋಟೋಗಳು ವೀಡಿಯೋಗಳು ಭಾರಿ ವೈರಲ್ ಆಗಿದ್ದವು. ಆದರೆ ಈಗ ಪಿಎಂ ತಮ್ಮ ಕಿವಿಯಲ್ಲಿ ಹೇಳಿದ್ದೇನು ಎಂಬುದನ್ನು ಸಿಎಂ ರಿವೀಲ್ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpn29b8fzxcab69j8yy8wqnr,imgname-cm-siddaramaiah-reveals-pm-secreat-1776676023567.jpeg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮೋದಿ ಹೇಳಿದ ಗುಟ್ಟು ರಟ್ಟು ಮಾಡಿದ ಸಿಎಂ&lt;/strong&gt;&lt;/h2&gt;&lt;p&gt;ಮೈಸೂರು: ಪ್ರಧಾನಿ ಮೋದಿ ಕಳೆದ ಬುಧವಾರ ಅಂದರೆ ಏಪ್ರಿಲ್ 16ರಂದು ರಾಜ್ಯಕ್ಕೆ ಆಗಮಿಸಿದ್ದರು. ಆದಿಚುಂಚನಗಿರಿ ಮಠದ ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟನೆಗಾಗಿ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನಗರದ ಎಚ್&zwnj;ಎಎಲ್&zwnj; ವಿಮಾನ ನಿಲ್ದಾಣದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಸಿಎಂ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಏನೋ ಗುಟ್ಟು ಹೇಳುತ್ತಿರುವಂತಹ ಫೋಟೋಗಳು ವೀಡಿಯೋಗಳು ಭಾರಿ ವೈರಲ್ ಆಗಿದ್ದವು. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ಬಳಿ ಇಷ್ಟು ಗುಟ್ಟಾಗಿ ಏನು ಹೇಳಿರಬಹುದು ಎಂಬ ಕುತೂಹಲ ಅನೇಕರಲ್ಲಿ ಇತ್ತು. ಆದರೆ ಈಗ ಸಿಎಂ ಸಿದ್ದರಾಮಯ್ಯ ಜನರ ಕುತೂಹಲವನ್ನು ತಣಿಸಿದ್ದಾರೆ. ಮೋದಿ ತಮ್ಮ ಕಿವಿಯಲ್ಲಿ ರಹಸ್ಯವಾಗಿ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.&lt;/p&gt;&lt;p&gt;ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೋದಿಯವರು ಮಹಿಳಾ ಮೀಸಲಾತಿ ವಿಚಾರದಲ್ಲಿ ನಿಮ್ಮ ನಿಲುವು ಏನು ಎಂದು ನನ್ನ ಕಿವಿಯಲ್ಲಿ ಕೇಳಿದರು ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಎಂದು ಹೇಳಿದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಹೇಳಿದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;ಇದೇ ವೇಳೆ ಬೆಂಗಳೂರಿನಲ್ಲಿ ಶಾಸಕ ಹ್ಯಾರಿಸ್ ನಿವಾಸವೂ ಸೇರಿದಂತೆ 17 ಕಡೆಗಳಲ್ಲಿ ಇಡಿ ದಾಳಿಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಈ ವಿಚಾರ ನನಗೆ ಗೊತ್ತಿಲ್ಲ ಎಂದರು. ಪಂಚರಾಜ್ಯ ಚುನಾವಣೆ ವಿಚಾರ&zwnj; ನಾನು ತಮಿಳುನಾಡಿಗೆ ಪ್ರಚಾರಕ್ಕೆ ಹೋಗುವುದಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಗೆಲ್ಲಬಹುದು. ಬಿಜೆಪಿಯವರು ಪಂಚರಾಜ್ಯ ಚುನಾವಣೆಯಲ್ಲಿ ನಮ್ಮ ಗ್ಯಾರೆಂಟಿಗಳನ್ನ ನಕಲು ಮಾಡಿಕೊಂಡಿದ್ದಾರೆ. ನಮ್ಮ ಗ್ಯಾರೆಂಟಿಗಳನ್ನ ಮೊದಲು ಬಿಜೆಪಿ ವಿರೋಧ ಮಾಡುತ್ತಿತ್ತು. ಈಗ ಅದನ್ನ ಅವರೇ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸತ್ತ ಮೇಲೆ ಸಿಕ್ಕಿಬಿದ್ದ ಕಿಲಾಡಿ ಪ್ರೇಮಿ: ಶವಸಂಸ್ಕಾರದ ವೇಳೆ ಇಬ್ಬರು ಪ್ರೇಯಸಿಯರ ಮಧ್ಯೆ 'ಗ್ರೇಟ್ ಫೈಟ್'&lt;/strong&gt;&lt;/p&gt;&lt;p&gt;ಮಹಿಳಾ&zwnj; ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರುದ್ಧ ಇಲ್ಲ. ಆದರೆ ಕ್ಷೇತ್ರ ಪುನರ್&zwnj;ವಿಂಗಡಣೆ ವಿಚಾರವಾಗಿ ಮಾತ್ರ ನಮ್ಮ ತಕರಾರು ಇದೆ. ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಮೀಸಲಾತಿ ಜಾರಿಯ ಬದ್ಧತೆ ಬಿಜೆಪಿಗೆ ಇಲ್ಲ. ವಿಧೇಯಕದ ವಿಚಾರದಲ್ಲಿ ಸುಳ್ಳು ಹೇಳುತ್ತಾ ರಾಜಕಾರಣ ಮಾಡುತ್ತಿದೆ. 2023ರಲ್ಲಿ ಈ ಮೀಸಲಾತಿ ವಿಧೇಯಕ ಇತ್ತು. ಅದನ್ನು ಅವತ್ತೇ ಯಾಕೆ ಜಾರಿ ಮಾಡಬಾರದಿತ್ತು. ಈಗ ಕ್ಷೇತ್ರ ಪುನರ್ ವಿಗಂಡಣೆ ವಿಚಾರದಲ್ಲಿ ಯಾಕೆ ಅದನ್ನುನ್ನ ತಳಕು ಹಾಕಿದ್ರು. ಹೊಸ ಜನಗಣತಿ ಪ್ರಕಾರ ಕ್ಷೇತ್ರ ಪುನರವಿಂಗಡಣೆಯಾಗಬೇಕು. ಭೌಗೋಳಿಕ ವ್ಯಾಪ್ತಿ ಮತ್ತು ಜನಸಂಖ್ಯೆ ಕ್ಷೇತ್ರ ಪುನರವಿಂಗಡಣೆಗೆ ಮುಖ್ಯ. ಹಳೇಯ ಜನಗಣತಿ ಪ್ರಕಾರ ಆದ್ರೆ ಕರ್ನಾಟಕಕ್ಕೆ ಅನ್ಯಾಯ ಆಗುತ್ತದೆ. ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡಿಯೇ ಇಲ್ಲ. ನಾವು ಇಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಿದ್ದೇವೆ. ನಮಗೆ ಇಲ್ಲಿ ಇದರಿಂದ ಅನ್ಯಾಯ ಆಗಬಾರದು ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;&lt;strong&gt;ವಿದ್ಯುತ್ ತಂತಿ ತಗುಲಿ ಚಲಿಸುತ್ತಿದ್ದ ಬೊಲೆರೊಗೆ ಬೆಂಕಿ: ನಡುರಸ್ತೆಯಲ್ಲಿ ಬೊಲೆರೋ ಧಗಧಗ&lt;/strong&gt;&lt;/p&gt;]]></content:encoded>
            <category>mysore</category>
            <dc:creator>Anusha Kb</dc:creator>
            <atom:link href="https://kannada.asianetnews.com/politics/cm-siddaramaiah-reveals-what-pm-whispers-with-him-when-his-state-visit/articleshow-7fw0i0f"/>
        </item>
        <item>
            <title><![CDATA[ಸಿಎಂ ಈಗ ಕಾಂಪ್ರಮೈಸ್ ರಾಜಕಾರಣ ಮಾಡುತ್ತಿದ್ದಾರೆ: ಸಿದ್ದರಾಮಯ್ಯರ ರಾಜಕೀಯದ ಅನಿವಾರ್ಯತೆ ಬಗ್ಗೆ ಜಾರಕಿಹೊಳಿ ಹೇಳಿದ್ದೇನು?]]></title>
            <link>https://kannada.asianetnews.com/politics/cm-compromise-politics-what-did-jarkiholi-say-about-siddaramaiah-rav/articleshow-9bfzmdl</link>
            <guid isPermaLink="true">https://kannada.asianetnews.com/politics/cm-compromise-politics-what-did-jarkiholi-say-about-siddaramaiah-rav/articleshow-9bfzmdl</guid>
            <pubDate>Wed, 22 Apr 2026 06:48:11 +0530</pubDate>
            <description><![CDATA[ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯನವರ ಕಾಂಪ್ರಮೈಸ್ ರಾಜಕಾರಣವನ್ನು ಸಮರ್ಥಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಕೆಲವೊಮ್ಮೆ ಹೊಂದಾಣಿಕೆ ಅನಿವಾರ್ಯ ಎಂದಿರುವ ಅವರು, ಜಬ್ಬಾರ್ ಅಮಾನತು, ಅಲ್ಪಸಂಖ್ಯಾತರ ಮುನಿಸು ಹಾಗೂ ಸಂಪುಟ ಪುನಾರಚನೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jh24v737ythcv968s6vfgs95,imgname-373728547bdr9-179.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು/ಚಾಮರಾಜನಗರ: ಸಿಎಂ ಸಿದ್ದರಾಮಯ್ಯನವರು ಈಗ ಕಾಂಪ್ರಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಕಾಂಪ್ರಮೈಸ್ ಪಾಲಿಟಿಕ್ಸ್ ಈಗ ಅನಿವಾರ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ.&lt;/p&gt;&lt;p&gt;ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲ ಟೈಮ್&zwnj;ನಲ್ಲೂ ಒಂದೇ ರೀತಿ ಬಿಗಿಯಾಗಿ ರಾಜಕಾರಣ ಮಾಡಲು ಆಗಲ್ಲ. ಕಾಂಪ್ರಮೈಸ್ ಅನಿವಾರ್ಯ ಎಂದರು.&lt;/p&gt;&lt;p&gt;ಬೆಂಬಲಿಗರನ್ನು ಕಾಪಾಡುವ ವಿಚಾರದಲ್ಲಿ ಸಿದ್ದರಾಮಯ್ಯ ವೀಕ್ ಆಗಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಹಾಗೆ ಅನ್ನಿಸುವುದಿಲ್ಲ, ರಾಜಕೀಯದಲ್ಲಿ ಕೆಲವೊಮ್ಮೆ ವೀಕ್ ಆಗಿರಬೇಕಾಗುತ್ತದೆ, ಮತ್ತೆ ಕೆಲವೊಮ್ಮೆ ಸ್ಟ್ರಾಂಗ್ ಕೂಡ ಆಗಬೇಕಾಗುತ್ತದೆ. ಎಲ್ಲವೂ ಸಮಯ-ಸಂದರ್ಭಕ್ಕೆ ತಕ್ಕಂತೆ ಇರಬೇಕು ಎಂದರು.&lt;/p&gt;&lt;p&gt;ಜಬ್ಬಾರ್&zwnj; ಅಮಾನತು ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಬಹಳಷ್ಟು ಜನ ಸಸ್ಪೆಂಡ್ ಆದವರು ಮತ್ತೆ ವಾಪಸ್ ಬಂದಿದ್ದಾರೆ. ಜಬ್ಬಾರ್ ಕೂಡ ವಾಪಸ್ ಬರುತ್ತಾರೆ ಎಂದು ಹೇಳುವ ಮೂಲಕ ವಿಧಾನಪರಿಷತ್ ಸದಸ್ಯ ಜಬ್ಬಾರ್ ಅಮಾನತು ತೆರುವಾಗುವ ಸುಳಿವು ನೀಡಿದರು.&lt;/p&gt;&lt;p&gt;ಕಾಂಗ್ರೆಸ್&zwnj; ವಿರುದ್ಧ ಅಲ್ಪಸಂಖ್ಯಾತರು ಮುನಿಸಿಕೊಂಡಿರುವುದರ ಬಗ್ಗೆ ಮಾತನಾಡಿ, ಇದನ್ನು ಸರಿಪಡಿಸುತ್ತೇವೆ, ಇದು ರಾಜ್ಯದ ಸಮಸ್ಯೆಯಲ್ಲ, ದಾವಣಗೆರೆಯಲ್ಲಿ ಮಾತ್ರ ಆಗಿರುವುದು ಎಂದರು.&lt;/p&gt;&lt;p&gt;ದಾವಣಗೆರೆ ಉಪ ಚುನಾವಣೆ ಸಂಬಂಧ ಮುಸ್ಲಿಂ ನಾಯಕರಿಗೆ ನೋಟಿಸ್ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಫಲಿತಾಂಶ ಬರುವವರೆಗೂ ಕಾಯಬೇಕು. ಅಷ್ಟರಲ್ಲೇ ನೋಟಿಸ್ ಕೊಡುವುದು, ಸಸ್ಪೆಂಡ್ ಮಾಡುವುದು ಸರಿಯಲ್ಲ. ಇದು ಮುಸ್ಲಿಂ ಮತಬ್ಯಾಂಕ್ ಮೇಲೆ ಪರಿಣಾಮ ಬೀರಲಿದೆ. ಮೊದಲು ಫಲಿತಾಂಶ ಬರಲಿ. ಯಾರದ್ದಾದರೂ ತಪ್ಪಾಗಿದ್ದರೆ ಆಮೇಲೆ ಕ್ರಮ ಕೈಗೊಳ್ಳೋಣ. ಈಗಲೇ ಈ ಕ್ರಮಗಳು ಸರಿಯಲ್ಲ ಎಂದು ಪಕ್ಷದ ನಾಯಕರಿಗೆ ಹೇಳಿದ್ದೇನೆ. ಯಾರ್ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದರು, ಯಾವ ರೀತಿ ಮಾಡಿದರು ಎಂಬ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಮೊದಲು ಫಲಿತಾಂಶ ಬರಲಿ ಎಂದರು.&lt;/p&gt;&lt;p&gt;ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿ, ಹೈಕಮಾಂಡ್ ಒಪ್ಪಿದ ಬಳಿಕವೇ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಆಗಲಿದೆ. ಆದರೆ, ಯಾವಾಗ ಎಂಬುದು ಗೊತ್ತಿಲ್ಲ. ಹೈಕಮಾಂಡ್ ಸಿಗ್ನಲ್ ಕೊಟ್ಟ ಬಳಿಕ ಸೀನಿಯರ್-ಜೂನಿಯರ್ ಮಿಕ್ಸ್ ಆಗಲಿದೆ ಎಂದು ಹೇಳಿದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/cm-compromise-politics-what-did-jarkiholi-say-about-siddaramaiah-rav/articleshow-9bfzmdl"/>
        </item>
        <item>
            <title><![CDATA[37 ವರ್ಷದ ಮಹಿಳೆ 22ರ ಯುವಕನ ಪ್ರೀತಿಸಿ ಮದುವೆ,  14 ವರ್ಷದ ಮಗನನ್ನು ಬಿಟ್ಟು ಬಂದವಳಿಗೆ ಜೀವ ಬೆದರಿಕೆ, ಪೊಲೀಸ್ ರಕ್ಷಣೆ ಕೋರಿದ ಜೋಡಿ!]]></title>
            <link>https://kannada.asianetnews.com/karnataka-districts/bengaluru-37-year-old-woman-marries-22-year-old-youth-couple-seeks-police-protection-over-life-threats-rav/articleshow-bl7mzlo</link>
            <guid isPermaLink="true">https://kannada.asianetnews.com/karnataka-districts/bengaluru-37-year-old-woman-marries-22-year-old-youth-couple-seeks-police-protection-over-life-threats-rav/articleshow-bl7mzlo</guid>
            <pubDate>Wed, 22 Apr 2026 04:51:13 +0530</pubDate>
            <description><![CDATA[37 ವರ್ಷದ ವಿಧವೆ ಕವಿತಾ, 22 ವರ್ಷದ ಯುವಕ ಭಾಸ್ಕರ್&zwnj;ನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇದಕ್ಕಾಗಿ ತನ್ನ 14 ವರ್ಷದ ಮಗನನ್ನು ತೊರೆದು ಬಂದಿದ್ದು, ಕುಟುಂಬದಿಂದ ವಿರೋಧ ಮತ್ತು ಜೀವ ಬೆದರಿಕೆ ಎದುರಾದ ಕಾರಣ, ಈ ಜೋಡಿ ಮೈಸೂರಿನಲ್ಲಿ ಪೊಲೀಸ್ ರಕ್ಷಣೆ ಕೋರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kps5hkgndxznnre5hv3e24y8,imgname-----------------------2026-04-22t045021.065-1776813657621.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು: 37 ವರ್ಷದ ಮಹಿಳೆಯ ಮೇಲೆ 22 ವರ್ಷದ ಯುವಕನಿಗೆ ಪ್ರೇಮಾಂಕುರವಾಗಿದೆ. 1 ವರ್ಷದ ಪ್ರೀತಿಗಾಗಿ 14 ವರ್ಷದ ಮಗನ ಬಿಟ್ಟು ಬಂದ ಮಹಿಳೆಯು 22 ವರ್ಷದ ಯುವಕನನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಪೋಷಕರಿಂದ ವಿರೋಧ ವ್ಯಕ್ತ ಆಗುತ್ತಿದ್ದಂತೆ ರಕ್ಷಣೆ ಕೋರಿ ಮೈಸೂರು ಎಸ್ಪಿ ಕಚೇರಿಗೆ ಈ ಜೋಡಿ ಮಂಗಳವಾರ ಭೇಟಿ ನೀಡಿದೆ.&lt;/p&gt;&lt;p&gt;ಬೆಂಗಳೂರಿನ ಚಳ್ಳಘಟ್ಟ ನಿವಾಸಿ 37 ವರ್ಷದ ಕವಿತಾ ಮತ್ತು ಮೈಸೂರಿನ ರಮ್ಮನಹಳ್ಳಿ ನಿವಾಸಿ ಭಾಸ್ಕರ್ ಮದುವೆಯಾದವರು. ಬೆಂಗಳೂರಿನಲ್ಲಿ ಟಿಟಿ, ಆಟೋ ಓಡಿಸುತ್ತಾ ದೊಡ್ಡಮ್ಮನ ಮನೆಯಲ್ಲಿದ್ದ ಭಾಸ್ಕರ್, ಬಂಡೆ ಮಕಾಳಮ್ಮ ದೇವಸ್ಥಾನಕ್ಕೆ ಕವಿತಾ ಬಂದಾಗ ಪರಿಚಯವಾಗಿ ಪ್ರೀತಿಸಿದ್ದಾರೆ. 8 ವರ್ಷಗಳ ಹಿಂದೆ ಕವಿತಾ ಪತಿ ನಿಧನ&zwnj;ರಾಗಿದ್ದು, ಇವರಿಗೆ 14 ವರ್ಷದ ಮಗ ಇದ್ದಾನೆ. ಈ ನಡುವೆ ಬೆಂಗಳೂರಿನ ಕುಂಬಳಗೋಡು ಪೊಲೀಸರಿಗೆ ಕವಿತಾ ತಂದೆ, ಮಗಳನ್ನು ಕಿಡ್ನಾಪ್ ಮಾಡಿರುವುದಾಗಿ ದೂರು ನೀಡಿದ್ದಾರೆ.&lt;/p&gt;&lt;p&gt;ಪ್ರೀತಿಯಲ್ಲಿ ಬಿದ್ದಿದ್ದ ಕವಿತಾ, ಭಾಸ್ಕರ್ ಜೊತೆಗೆ ಮನೆ ಬಿಟ್ಟು ಬಂದು, ಮೈಸೂರಿನ ಒಂಟಿಕೊಪ್ಪಲು ವೆಂಕಟೇಶ್ವರ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಅಲ್ಲದೆ, ಕವಿತಾ ಮಾವನ ಮಗ ಜೀವ ಬೆದರಿಕೆ ಹಾಕಿರುವ ಆರೋಪ ಸಹ ಕೇಳಿ ಬಂದಿದೆ. ಹೀಗಾಗಿ, ಈ ಜೋಡಿ ಜೀವ ಭಯದಿಂದಾಗಿ ಬೆಂಗಳೂರು ಬಿಟ್ಟು ಮೈಸೂರಿನ ರಮ್ಮನಹಳ್ಳಿಗೆ ಬಂದಿದ್ದು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.&lt;/p&gt;&lt;p&gt;ಹೌಸ್ ಕೀಪಿಂಗ್ ಕೆಲಸ ಮಾಡುತ್ತಾ ತಂದೆ ಮನೆಯಲ್ಲಿದ್ದ ಕವಿತಾ ಅವರಿಗೆ, ಬೇರೊಬ್ಬನ ಜೊತೆ ಮದುವೆ ಮಾಡಲು ಕುಟುಂಬಸ್ಥರು ಯೋಜಿಸಿದ್ದರು. ಆದರೆ,&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bengaluru-37-year-old-woman-marries-22-year-old-youth-couple-seeks-police-protection-over-life-threats-rav/articleshow-bl7mzlo"/>
        </item>
        <item>
            <title><![CDATA[ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲು ಸಿಎಂ ಸಿದ್ದರಾಮಯ್ಯಗೆ ಭಯ: ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪ]]></title>
            <link>https://kannada.asianetnews.com/karnataka-districts/sa-ra-mahesh-slams-siddaramaiah-local-body-elections-gvd/articleshow-e1wxahm</link>
            <guid isPermaLink="true">https://kannada.asianetnews.com/karnataka-districts/sa-ra-mahesh-slams-siddaramaiah-local-body-elections-gvd/articleshow-e1wxahm</guid>
            <pubDate>Sat, 18 Apr 2026 00:25:17 +0530</pubDate>
            <description><![CDATA[&lt;p&gt;ಯತೀಂದ್ರ ಮಾತ್ರ ಅಧಿಕಾರದಲ್ಲಿ ಇರಬೇಕಾ? ದಯಮಾಡಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ ಚುನಾವಣೆ ಮಾಡಿ ಸ್ವಾಮಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆಗ್ರಹಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx23zkyrhj97744pd9qdhcmx,imgname-----------------------2025-06-06t132816.715-1749196722135.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.18): &lt;/strong&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಮತ್ತು ನಿಮ್ಮ ಮಗ ಯತೀಂದ್ರ ಮಾತ್ರ ಅಧಿಕಾರದಲ್ಲಿ ಇರಬೇಕಾ? ದಯಮಾಡಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ ಚುನಾವಣೆ ಮಾಡಿ ಸ್ವಾಮಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆಗ್ರಹಿಸಿದರು. ಐದು ವರ್ಷವೂ ನಮ್ಮ ತಂದೆಯೇ ಸಿಎಂ ಎಂದು ಯತೀಂದ್ರ ಹೇಳಿದ್ದಾರೆ. ಅದು ಅವರ ಪಕ್ಷದ ವಿಚಾರ. ನೀವು ಎಷ್ಟು ವರ್ಷವಾದರೂ ಅಧಿಕಾರದಲ್ಲಿರಿ. ನಿಮ್ಮ ಅಧಿಕಾರದ ಅವಧಿಯಲ್ಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಾಲಿಕೆ, ಗ್ರಾಮ ಪಂಚಾಯಿತಿ ಚುನಾವಣೆ ಮಾಡಿ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.&lt;/p&gt;&lt;p&gt;ಸಮಾಜವಾದಿ ಎಂದು ಹೇಳಿಕೊಳ್ಳುವ ನೀವು, ನಿಮ್ಮ ಮಗನೇ ಅಧಿಕಾರದಲ್ಲಿದ್ದರೆ ಹೇಗೆ? ಪಕ್ಷಕ್ಕಾಗಿ ದುಡಿದಿರುವ ಇತರರಿಗೂ ಅಧಿಕಾರ ಕೊಡಿ. ಯಾವುದೇ ಪಕ್ಷದ ಕಾರ್ಯಕರ್ತನಾಗಿರಲಿ ಅವರು ಜಿಪಂ, ತಾಪಂ, ನಗರ ಪಾಲಿಕೆ ಸದಸ್ಯನಾಗಲು ಚುನಾವಣೆ ನಡೆಸಬೇಕು. ನಮಗೆ ಅಧಿಕಾರಿ ಸಿಗುವುದಿಲ್ಲ ಎಂಬ ಭಯದಿಂದ ಚುನಾವಣೆ ಮಾಡದೇ ಇದ್ದರೆ ಅದು ಪ್ರಜಾಪ್ರಭುತ್ವದ ಕಗ್ಗೊಲೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಎಂಬ ಬದ್ಧತೆ ಇದ್ದರೆ ಕೂಡಲೇ ಚುನಾವಣೆ ಮಾಡಿ ಎಂದು ಅವರು ಆಗ್ರಹಿಸಿದರು.&lt;/p&gt;&lt;p&gt;ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಈಗ ಚುನಾವಣೆ ನಡೆಸಿದರೆ ಎನ್ ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುತ್ತದೆ ಎಂಬ ಭಯ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಇದೇ ಕಾರಣದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸ್ಥಳೀಯ ಸಂಸ್ಥೆ ಚುನಾವಣೆಗೆ ಮೈತ್ರಿ ಮುಂದುವರೆಯುವುದರ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಜೊತೆ ಚರ್ಚೆ ಆಗಿದೆ. ಮೈಸೂರು ಜಿಲ್ಲೆಯಲ್ಲಿ ಎರಡು ಪಕ್ಷಗಳು ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು.&lt;/p&gt;&lt;h2&gt;&lt;strong&gt;ಜೆಡಿಎಸ್ ಪಕ್ಷವೇ ಕುಟುಂಬ&lt;/strong&gt;&lt;/h2&gt;&lt;p&gt;ನಮ್ಮದು ಕುಟುಂಬ ರಾಜಕಾರಣವಲ್ಲ ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾ.ರಾ. ಮಹೇಶ್ ಅವರು, ಆಶ್ರಯ ಸಮಿತಿ ಸದಸ್ಯ ಯಾರು? ಎಂಎಲ್ಸಿ ಯಾರು? ಬಿಡಿಎ ಸದಸ್ಯನಾಗಲು ಮೈಸೂರಿನ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಸಿ, ಬೆಂಗಳೂರಿನಲ್ಲಿ ಸೇರಿಸಿದ್ದು ಯಾಕೆ? ನಿಮ್ಮ ಯಾರೂ ನಿಷ್ಠಾವಂತ ಕಾರ್ಯಕರ್ತ ಇರಲಿಲ್ಲವೇ? ಇದರಲ್ಲಿ ಯಾರದು ಕುಟುಂಬ ರಾಜಕಾರಣ ಎಂದು ಪ್ರಶ್ನಿಸಿದರು. ನಮ್ಮದು ಸಣ್ಣ ಪಕ್ಷ. ನಿಮ್ಮಂತೆ ರಾಷ್ಟ್ರೀಯ ಪಕ್ಷವಲ್ಲ. ನಮಗೆ ಪಕ್ಷವೇ ಕುಟುಂಬ. ಕುಮಾರಸ್ವಾಮಿ ಅವರು ಎಲ್ಲವನ್ನೂ ಬಿಟ್ಟು ಎಲ್ಲಿದ್ದವರನ್ನೋ ಕರೆದುಕೊಂಡು ಬಂದು ಅಧಿಕಾರ ಕೊಡುತ್ತಾರೆ. ಅವರು ಕೈಕೊಟ್ಟು ಹೋಗುತ್ತಾರೆ. ಅದಕ್ಕೆ ಅವರಿಂದ ಬೈಸಿಕೊಳ್ಳುವ ಬದಲು ಕುಟುಂಬದವರಿಗೆ ಕೊಡುತ್ತೇವೆ ಎಂದು ಅವರು ಹೇಳಿದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sa-ra-mahesh-slams-siddaramaiah-local-body-elections-gvd/articleshow-e1wxahm"/>
        </item>
        <item>
            <title><![CDATA[Mysuru: ವೀಕೆಂಡ್ ಪಾರ್ಟಿಯಲ್ಲಿ ಗಲಾಟೆ; ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಟೆಕ್ಕಿ]]></title>
            <link>https://kannada.asianetnews.com/gallery/karnataka-districts/mysuru-32-year-old-software-engineer-dies-in-brawl-over-trivial-matter-mrq-e33zpso</link>
            <guid isPermaLink="true">https://kannada.asianetnews.com/gallery/karnataka-districts/mysuru-32-year-old-software-engineer-dies-in-brawl-over-trivial-matter-mrq-e33zpso</guid>
            <pubDate>Sun, 19 Apr 2026 15:00:14 +0530</pubDate>
            <description><![CDATA[ಮೈಸೂರಿನ ಪಬ್&zwnj;ನಲ್ಲಿ ವೀಕೆಂಡ್ ಪಾರ್ಟಿ ಮುಗಿಸಿ ಹೊರಬರುವಾಗ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ 32 ವರ್ಷದ ಸಾಫ್ಟ್&zwnj;ವೇರ್ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಪಬ್&zwnj;ನ ಎರಡನೇ ಮಹಡಿಯಿಂದ ತಳ್ಳಲ್ಪಟ್ಟ ಪರಿಣಾಮವಾಗಿ, ನಿಶಾಂತ್ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpjggv0r90828z151m82tgza,imgname-mysuru-murder--1--1776590285848.jpg" type="image/jpeg" height="390" width="690"/>
            <content:encoded><![CDATA[ಮೈಸೂರಿನ ಪಬ್&zwnj;ನಲ್ಲಿ ವೀಕೆಂಡ್ ಪಾರ್ಟಿ ಮುಗಿಸಿ ಹೊರಬರುವಾಗ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ 32 ವರ್ಷದ ಸಾಫ್ಟ್&zwnj;ವೇರ್ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಪಬ್&zwnj;ನ ಎರಡನೇ ಮಹಡಿಯಿಂದ ತಳ್ಳಲ್ಪಟ್ಟ ಪರಿಣಾಮವಾಗಿ, ನಿಶಾಂತ್ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.&lt;img&gt;&lt;p&gt;ವೀಕೆಂಡ್ ಪಾರ್ಟಿ ಅಂತ ಸ್ನೇಹಿತರ ಜೊತೆ ಪಬ್&zwnj;ಗೆ ಹೋಗಿದ್ದ 32 ವರ್ಷದ ಟೆಕ್ಕಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಕುಡಿದು ಬಿಲ್ ಕಟ್ಟಿ ಹೊರ ಬರುವ ವೇಳೆ ಯುವಕರ ಗುಂಪಿನಲ್ಲಿ ಗಲಾಟೆಯಾಗಿದೆ. ಈ ಗಲಾಟೆ ಸಾವಿನಲ್ಲಿ ಅಂತ್ಯವಾಗಿದೆ.&lt;/p&gt;&lt;img&gt;&lt;p&gt;ಕ್ಷುಲ್ಲಕ ಕಾರಣಕ್ಕೆ ಯುವಕರ ಎರಡು ಗುಂಪಿನ ನಡುವೆ ನಡೆದ ಗಲಾಟೆ ಯುವಕನ ಸಾವಿನಲ್ಲಿ ಅಂತ್ಯವಾದ ಘಟನೆ ಮೈಸೂರಿನ ವಿಜಯನಗರ ಎರಡನೇ ಹಂತದ ಪರ್ಪಲ್ ಹೆಜ್ ರೆಸ್ಟೋರೆಂಟ್&zwnj;ನಲ್ಲಿ ನಡೆದಿದೆ. ಗೋಕುಲಂ ನಿವಾಸಿ ನಿಶಾಂತ್ (32) ಕೊಲೆಯಾದ ದುರ್ದೈವಿ. ವಿಜಯ ನಗರ ನಿವಾಸಿ ಟ್ಯಾಂಕ್ ರಾಕಿ ಸಹಚರರಿಂದ ನಿಶಾಂತ್ ಕೊ*ಲೆ ಆಗಿರುವ ಆರೋಪ ಕೇಳಿ ಬಂದಿದೆ.&lt;/p&gt;&lt;img&gt;&lt;p&gt;ಪಬ್ ನಲ್ಲಿ ಪಾರ್ಟಿ ಮುಗಿಸಿ ಹೊರಬರುವಾಗ ಕೈ ತಾಕಿದ ವಿಚಾರಕ್ಕೆ ಗಲಾಟೆ ನಡೆದಿದೆ. ಮೃತ ನಿಶಾಂತ್, ಸಂದೀಪ್, ದೀಕ್ಷಿತ್ ಮೂವರು ಸ್ನೇಹಿತರಿಂದ ಪಬ್ ನಲ್ಲಿ ಪಾರ್ಟಿ ಮಾಡಿ ಹೊರ ಬರುವ ವೇಳೆ ಟ್ಯಾಂಕ್ ರಾಕಿ ಸಹಚರರು ಎದುರಾಗಿದ್ದರು. ಆಗ ಕ್ಷುಲ್ಲಕ ವಿಚಾರಕ್ಕೆ ನಿಶಾಂತ್ ಸ್ನೇಹಿತರು ಟ್ಯಾಂಕ್ ರಾಕಿ ಸಹಚರರ ನಡುವೆ ಗಲಾಟೆಯಾಗಿದೆ. ಈ ವೇಳೆ ಪಬ್ ನ ಎರಡನೇ ಮಹಡಿಯಿಂದ ನಿಶಾಂತ್ ತಳ್ಳಿದ್ದಾರೆ. ಕೆಳಗೆ ಬಿದ್ದ ನಿಶಾಂತ್ ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿ ಸಾಫ್ಟ್&zwnj;ವೇರ್ ಇಂಜಿನೀಯರ್ ಆಗಿದ್ದ ಮೃತ ನಿಶಾಂತ್, ಮೈಸೂರಿನ ಗೋಕುಲಂ&zwnj;ನಲ್ಲಿ ವಾಸವಿದ್ದು, ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ. ರಾತ್ರಿ 9.30ರ ಸುಮಾರಿಗೆ ಊಟ ಮಾಡಿ, ಹೊರ ಬಂದ ನೀಶಾಂತ್ ಸ್ನೇಹಿತರ ಕರೆ ಬಂತು ಅಂತ ಪಬ್&zwnj;ಗೆ ಹೋಗಿದ್ದ. ತಡ ರಾತ್ರಿ ಮನೆಯವರಿವೆ ವಿಷಯ ತಿಳಿದಿದ್ದು, ಬರುವಷ್ಟರಲ್ಲಿ ಮಗನ ಪ್ರಾಣ ಹಾರಿ ಹೋಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;6 ನಿಮಿಷದ ಸೀನ್&zwnj;ಗಾಗಿ 90 ಕೋಟಿ ಖರ್ಚು ಮಾಡಿದ್ರು; ಕೊನೆಗೆ ಸಿನಿಮಾದಿಂದಲೇ ಡಿಲೀಟ್ ಆಯ್ತು ದೃಶ್ಯ&lt;/strong&gt;&lt;/p&gt;&lt;img&gt;&lt;p&gt;ಕೈ ತುಂಬಾ ಸಂಬಳ ಬರುವ ಒಳ್ಳೆ ಉದ್ಯೋಗ, ಸುಖ ಸಂಸಾರ ಎಲ್ಲವೂ ಇದ್ದ ಯುವಕ&zwnj; ಪಾರ್ಟಿ ಗುಂಗಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಎಸ್ಕೇಪ್ ಆಗಿರೋ ಆರೋಪಿಗಳಿಗಾಗಿ ವಿಜಯನಗರ ಪೊಲೀಸರಿಂದ ಶೋಧ ಕಾರ್ಯ ಮುಂದುವರೆಸಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಜಪ್ತಿ ಮಾಡಿದ್ದ ಟ್ರಕ್ ರಿಲೀಸ್&zwnj;ಗೆ 55 ಲಕ್ಷಕ್ಕೆ ಬೇಡಿಕೆ : 10 ಲಕ್ಷ ಲಂಚ ಸ್ವೀಕರಿಸುತ್ತಿದ್ದ GST ಅಧಿಕಾರಿಗಳು ಎಸಿಬಿ ಬಲೆಗೆ&lt;/strong&gt;&lt;/p&gt;]]></content:encoded>
            <category>mysore</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/mysuru-32-year-old-software-engineer-dies-in-brawl-over-trivial-matter-mrq-e33zpso"/>
        </item>
        <item>
            <title><![CDATA[ಮೈಸೂರು: ಚಿರತೆಯಿಂದ ಅತ್ತೆಯನ್ನ ರಕ್ಷಿಸಿದ ಸೊಸೆಗೆ ಕಿತ್ತೂರು ಚೆನ್ನಮ್ಮ ಸಾಹಸ ಪ್ರಶಸ್ತಿ?]]></title>
            <link>https://kannada.asianetnews.com/karnataka-districts/mysuru-kittur-chennamma-bravery-award-for-daughter-in-law-who-saved-mother-in-law-from-a-leopard-rav/articleshow-e5fqkbv</link>
            <guid isPermaLink="true">https://kannada.asianetnews.com/karnataka-districts/mysuru-kittur-chennamma-bravery-award-for-daughter-in-law-who-saved-mother-in-law-from-a-leopard-rav/articleshow-e5fqkbv</guid>
            <pubDate>Sun, 19 Apr 2026 04:33:20 +0530</pubDate>
            <description><![CDATA[&lt;p&gt;ಮೈಸೂರಿನ ಸಿದ್ಧಾರ್ಥನಗರದಲ್ಲಿ ಮಂಚದಡಿ ಚಿರತೆ ಅಡಗಿದ್ದಾಗ, ಸೊಸೆ ಸುಜಾತಾ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನ ರಕ್ಷಿಸಿದ ಈ ಸಾಹಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್&zwnj; ಮೆಚ್ಚುಗೆ ವ್ಯಕ್ತಪಡಿಸಿ, ಸುಜಾತಾ ಅವರ ಹೆಸರನ್ನು ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿಗೆ ಪರಿಗಣಿಸಲು ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kphd3e579thmsdpsv3s0p16q,imgname-----------------------2026-04-19t042316.308-1776553146535.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.19)&lt;/strong&gt;: ನಗರದ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಮಂಚದಡಿ ಚಿರತೆ ಅಡಗಿದ್ದ ವೇಳೆ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆ ತಂದ ಸೊಸೆ ಸುಜಾತಾ ಅವರ ಸಾಹಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್&zwnj; ಪ್ರಶಂಸೆ ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;&lt;p&gt;ಈ ಘಟನೆ ಆಕಸ್ಮಿಕವಾದರೂ, ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ. ಮಂಚದಡಿ ಚಿರತೆ ಅಡಗಿರುವುದು ತಿಳಿಯುತ್ತಿದ್ದಂತೆಯೇ, ಪ್ರಾಣದ ಹಂಗು ತೊರೆದು ಕೊಠಡಿಗೆ ನುಗ್ಗಿ, ವಯಸ್ಸಾದ ಅತ್ತೆಯನ್ನು ಅಪ್ಪಿಕೊಂಡು ಸುರಕ್ಷಿತವಾಗಿ ಹೊರಗೆ ಕರೆತಂದ ಸುಜಾತಾ ಅವರ ಸಾಹಸ ನಿಜಕ್ಕೂ ರೋಮಾಂಚನಕಾರಿ ಎಂದು ಅವರು ಬಣ್ಣಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt; ಮೈಸೂರು: ಮನೆಗೆ ನುಗ್ಗಿದ ಚಿರತೆ ಎರಡು ಗಂಟೆ ಕಾಲ ಅಜ್ಜಿ ಮಲಗಿದ್ದ ಮಂಚದ ಕೆಳಗೆ ವಿಶ್ರಾಂತಿ!&lt;/p&gt;&lt;p&gt;ಅತ್ತೆ- ಸೊಸೆಯ ಸಂಬಂಧದ ಬಗ್ಗೆ ಸಮಾಜದಲ್ಲಿರುವ ಹಳೆಯ ಕಲ್ಪನೆಗಳನ್ನು ಅಳಿಸಿ, ಸುಜಾತಾ ಅವರು ಇಂದು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಸುಜಾತಾ ಅವರ ಈ ಅಸಾಧಾರಣ ಶೌರ್ಯ, ಸಾಹಸವನ್ನು ಗೌರವಿಸಲು ಮುಂದಿನ ವರ್ಷದ ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸಲು ನಮ್ಮ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mysuru-kittur-chennamma-bravery-award-for-daughter-in-law-who-saved-mother-in-law-from-a-leopard-rav/articleshow-e5fqkbv"/>
        </item>
        <item>
            <title><![CDATA[ಮೈಸೂರಿನ ಮನೆಯೊಳಗೆ ನುಗ್ಗಿದ ಚಿರತೆ: ವೃದ್ಧ ಅಮ್ಮನ ಹೊರಗೆಳೆದು, ಕೋಣೆಯೊಳಗೆ ಕೂಡಿಹಾಕಿದ ಮಗಳು!]]></title>
            <link>https://kannada.asianetnews.com/karnataka-districts/leopard-enters-house-siddhartha-layout-mysuru-woman-rescues-mother-courageous-act-sat/articleshow-gqqlpy7</link>
            <guid isPermaLink="true">https://kannada.asianetnews.com/karnataka-districts/leopard-enters-house-siddhartha-layout-mysuru-woman-rescues-mother-courageous-act-sat/articleshow-gqqlpy7</guid>
            <pubDate>Fri, 17 Apr 2026 15:58:36 +0530</pubDate>
            <description><![CDATA[&lt;p&gt;ಮೈಸೂರಿನ ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ಚಿರತೆ ನುಗ್ಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮನೆಯಲ್ಲಿದ್ದ ಸುಜಾತಾ ಎಂಬ ಮಹಿಳೆ ಸಮಯಪ್ರಜ್ಞೆ ಮೆರೆದು, ಚಿರತೆ ಇದ್ದ ಕೊಠಡಿಯಿಂದ ತನ್ನ ತಾಯಿಯನ್ನು ರಕ್ಷಿಸಿ ಬಾಗಿಲು ಹಾಕಿದ್ದಾರೆ. &amp;nbsp;ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdfjbk0zgac8djj8aqzb9fv,imgname-leopard-trapped-in-mysuru-house-1776421514848.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.17): ಸಾಂ&lt;/strong&gt;ಸ್ಕೃತಿಕ ನಗರಿ ಮೈಸೂರಿನಲ್ಲಿ ಚಿರತೆಗಳ ಆತಂಕ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಾಡಿನ ಅಂಚಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ನೇರವಾಗಿ ಜನರ ಮನೆಗೇ ನುಗ್ಗುತ್ತಿವೆ. ಇಂದು ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ಇಂತಹದ್ದೇ ಒಂದು ಮೈ ನಡುಗಿಸುವ ಘಟನೆ ನಡೆದಿದೆ. ಮನೆಯ ಕೊಠಡಿಯೊಳಗೆ ನುಗ್ಗಿದ ಚಿರತೆಯನ್ನು ಕಂಡು ಬೆಚ್ಚಿಬಿದ್ದ ಕುಟುಂಬವೊಂದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಸಿದ್ದಾರ್ಥ ಬಡಾವಣೆಯ ನಿವಾಸಿ ಸುರೇಶ್ ಎಂಬುವವರ ಮನೆಗೆ ಇಂದು ಬೆಳ್ಳಂಬೆಳಿಗ್ಗೆ ಚಿರತೆಯೊಂದು ನುಗ್ಗಿದೆ. ಮನೆಯ ಮುಂಭಾಗದ ಬಾಗಿಲು ತೆರೆದಿದ್ದನ್ನು ಕಂಡ ಚಿರತೆ, ಯಾರಿಗೂ ತಿಳಿಯದಂತೆ ನೇರವಾಗಿ ಒಳಗಿನ ಕೊಠಡಿಯೊಂದಕ್ಕೆ ನುಗ್ಗಿದೆ. ಈ ಸಮಯದಲ್ಲಿ ಮನೆಯಲ್ಲಿ ಸುರೇಶ್ ಅವರ ಪತ್ನಿ ಸುಜಾತ ಮತ್ತು ಅವರ ತಾಯಿ ಶೈಲಜಾ ಮಾತ್ರ ಇದ್ದರು.&lt;/p&gt;&lt;h2&gt;&lt;strong&gt;ಅಮ್ಮನನ್ನು ರಕ್ಷಿಸಿದ ಮಗಳ ಸಮಯಪ್ರಜ್ಞೆ:&lt;/strong&gt;&lt;/h2&gt;&lt;p&gt;ಚಿರತೆ ನೇರವಾಗಿ ಅಜ್ಜಿ ಶೈಲಜಾ ಅವರು ಇದ್ದ ಕೊಠಡಿಯೊಳಗೆ ನುಗ್ಗಿದೆ. ಕಣ್ಣೆದುರೇ ಕಾಡುಪ್ರಾಣಿಯನ್ನು ಕಂಡ ಶೈಲಜಾ ಆಘಾತಕ್ಕೊಳಗಾಗಿದ್ದಾರೆ. ಆದರೆ, ತಕ್ಷಣವೇ ಕಾರ್ಯಪ್ರವೃತ್ತರಾದ ಸುರೇಶ್ ಅವರ ಪತ್ನಿ ಸುಜಾತ, ಪ್ರಾಣದ ಹಂಗು ತೊರೆದು ಅದ್ಭುತ ಧೈರ್ಯ ತೋರಿದ್ದಾರೆ. ಚಿರತೆ ದಾಳಿ ಮಾಡುವ ಮೊದಲೇ ತನ್ನ ತಾಯಿಯನ್ನು ಚಾಣಾಕ್ಷತನದಿಂದ ಕೊಠಡಿಯಿಂದ ಹೊರಕ್ಕೆ ಎಳೆದು ತಂದು, ಹೊರಗಿನಿಂದ ಕೊಠಡಿಯ ಬಾಗಿಲನ್ನು ಲಾಕ್ ಮಾಡಿದ್ದಾರೆ. ಸುಜಾತ ಅವರ ಈ ಸಮಯಪ್ರಜ್ಞೆ ಮತ್ತು ಅಪ್ರತಿಮ ಧೈರ್ಯದಿಂದಾಗಿ ಇಂದು ಒಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ.&lt;/p&gt;&lt;h3&gt;&lt;strong&gt;ಅರಣ್ಯ ಇಲಾಖೆ ಕಾರ್ಯಾಚರಣೆ:&lt;/strong&gt;&lt;/h3&gt;&lt;p&gt;ಮನೆಯೊಳಗೆ ಚಿರತೆ ಇರುವುದನ್ನು ಖಚಿತಪಡಿಸಿಕೊಂಡ ಕುಟುಂಬಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಚಿರತೆಯು ಸದ್ಯ ಮನೆಯ ಒಂದು ಕೊಠಡಿಯಲ್ಲೇ ಬಂಧಿಯಾಗಿದ್ದು, ಅದನ್ನು ಅರಿವಳಿಕೆ ಮದ್ದು ನೀಡಿ ಸೆರೆಹಿಡಿಯಲು ಅಥವಾ ಬಲೆ ಬಳಸಿ ಹಿಡಿಯಲು ಸಿದ್ಧತೆ ನಡೆಸಲಾಗಿದೆ.&lt;/p&gt;&lt;h3&gt;&lt;strong&gt;ಬಡಾವಣೆಯಲ್ಲಿ ಆತಂಕ:&lt;/strong&gt;&lt;/h3&gt;&lt;p&gt;ನಗರದ ಮಧ್ಯಭಾಗದಲ್ಲಿರುವ ಸಿದ್ದಾರ್ಥ ಬಡಾವಣೆಯೊಳಗೆ ಚಿರತೆ ಬಂದಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಸುದ್ದಿ ಹರಡುತ್ತಿದ್ದಂತೆ ನೂರಾರು ಜನರು ಸುರೇಶ್ ಅವರ ಮನೆಯ ಬಳಿ ಜಮಾಯಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮೈಸೂರು ನಗರದ ಸುತ್ತಮುತ್ತಲಿನ ಬೆಟ್ಟ ಮತ್ತು ಪೊದೆಗಳಿಂದ ಚಿರತೆಗಳು ನಗರಕ್ಕೆ ಲಗ್ಗೆ ಇಡುತ್ತಿರುವುದು ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಮ್ಮನನ್ನು ರಕ್ಷಿಸಿದ ಸುಜಾತ ಅವರ ಸಾಹಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅರಣ್ಯ ಇಲಾಖೆಯ ಕಾರ್ಯಾಚರಣೆ ಮುಂದುವರಿದಿದ್ದು, ಚಿರತೆ ಸುರಕ್ಷಿತವಾಗಿ ಸೆರೆಯಾಗುವವರೆಗೂ ಬಡಾವಣೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/leopard-enters-house-siddhartha-layout-mysuru-woman-rescues-mother-courageous-act-sat/articleshow-gqqlpy7"/>
        </item>
        <item>
            <title><![CDATA[ನಾನೇ ಸಿಎಂ ಎಂದುಕೊಂಡೇ 3 ವರ್ಷ ಕಾಲಹರಣ ಮಾಡಿದರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ]]></title>
            <link>https://kannada.asianetnews.com/karnataka-districts/hd-kumaraswamy-slams-karnataka-government-development-debt-gvd/articleshow-h6pza3g</link>
            <guid isPermaLink="true">https://kannada.asianetnews.com/karnataka-districts/hd-kumaraswamy-slams-karnataka-government-development-debt-gvd/articleshow-h6pza3g</guid>
            <pubDate>Sat, 25 Apr 2026 18:08:28 +0530</pubDate>
            <description><![CDATA[&lt;p&gt;ಈಗಿನ ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೇ ನಾನೇ ಸಿಎಂ ಎಂದುಕೊಂಡೇ ಮೂರು ವರ್ಷಗಳು ಕಾಲಹರಣ ಮಾಡಿದರು ಎಂದು ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250604213323,imgname-image-b24b5e1c-b034-435b-adba-6fac14b3e366.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೇರ್ಯ (ಏ.25): &lt;/strong&gt;ಈಗಿನ ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೇ ನಾನೇ ಸಿಎಂ ಎಂದುಕೊಂಡೇ ಮೂರು ವರ್ಷಗಳು ಕಾಲಹರಣ ಮಾಡಿದರು ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಕೆ.ಆರ್. ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಕುರ್ಜು ಉದ್ಘಾಟನೆ ನೆರವೇರಿಸಿದ ಬಳಿಕ ಬಸವೇಶ್ವರ ಸ್ವಾಮಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.&lt;/p&gt;&lt;p&gt;ದಿನ ಬೆಳಗಾದರೇ ನುಡಿದಂತೆ ನಡೆದಿದ್ದೇವೆ ಎಂದು ಬೊಬ್ಬೆ ಹೊಡೆಯುವ ಇವರು ಪಂಚ ಗ್ಯಾರಂಟಿ ಕೊಟ್ಟಿದ್ದೇವೆ, ಮಹಿಳೆಯರಿಗೆ ಎರಡು ಸಾವಿರ, ಬಸ್ ಫ್ರೀ ಎಂದು ಒಂದೂವರೆ ಲಕ್ಷ ಕೋಟಿ ಹಣ ಒದಗಿಸಲು ಏಳೂವರೆ ಲಕ್ಷ ಕೋಟಿ ಸಾಲ ಮಾಡಿ ರಾಜ್ಯದ ಜನತೆಯ ಮೇಲೆ ತಲಾ ಒಂದು ಲಕ್ಷ ಸಾಲದ ಹೊರೆ ಹೊರಸಿದ್ದಾರೆ ಎಂದು ಗುಡುಗಿದರು.&lt;/p&gt;&lt;p&gt;&lt;strong&gt;ಗ್ರಾಮ ಸ್ವರಾಜ್ ನನಸು ಮಾಡಲು ಸಾಧ್ಯವಾಗಿಲ್ಲ:&lt;/strong&gt; ಗಾಂಧಿಜೀ ಅವರು ಕಂಡ ಗ್ರಾಮ ಸ್ವರಾಜ್ ಕನಸು ನನಸು ಮಾಡಲು ಸಾಧ್ಯವಾಗಿಲ್ಲ, ಸ್ವಾತಂತ್ರ್ಯ ಬಂದು 78 ವರ್ಷ ಕಳೆದಿದೆ ಇನ್ನೂ ಬಡವರು, ಕೂಲಿ ಕಾರ್ಮಿಕರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ, ಅವರು ಜನ ಸಾಮಾನ್ಯರ ದಿನ ಬಳಕೆ ವಸ್ತುಗಳ ಮೇಲೆ ವಿಪರೀತ ತೆರಿಗೆ ಏರಿಸಿದ ರಾಜ್ಯ ಸರ್ಕಾರ, ಅಬಕಾರಿ ಸುಂಕ ಸೇರಿದಂತೆ ಪ್ರತಿ ಯೂನಿಟ್ ಗೆ 50 ಪೈಸೆ ಏರಿಸಿದ್ದು, ಇವರ ಸಾಧನೆ ಎಂದು ಸರ್ಕಾರದ ವಿರುದ್ದ ಗುಡುಗಿದರು.&lt;/p&gt;&lt;p&gt;ನಾನು ಸಿಎಂ ಆಗಿದ್ದ ವೇಳೆ ನೀವು ಕಟ್ಟುವ ತೆರಿಗೆ ಹಣದಿಂದ ರೈತರ ಸಾಲ ಮನ್ನಾ ಮಾಡಿದ್ದು ಎಂದರಲ್ಲದೆ, ಕೆ.ಆರ್. ನಗರ ಕ್ಷೇತ್ರದ ಮಂಡಿಗನಹಳ್ಳಿ ಭಾಗದ ಕೆರೆ ಕಟ್ಟೆಗಳನ್ನು ತುಂಬಿಸಲು 25 ಕೋಟಿ ಅನುದಾನ ಹಣವನ್ನು ನೀಡಿದ್ದೆ ಆದರೆ, ಈಗಿನ ಶಾಸಕರು ಮೂರು ವರ್ಷಗಳ ಕಳೆದರೂ ಕೆರೆಕಟ್ಟೆಗಳನ್ನು ತುಂಬಿಸದೇ ದುರುಪಯೋಗ ಪಡಿಸಿಕೊಂಡಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಆರೋಪಿಸಿದರು.&lt;/p&gt;&lt;h2&gt;&lt;strong&gt;ಸಾಲ ಮಾಡಿ ರಾಜ್ಯದ ಆಸ್ತಿ ಆಡವಿಟ್ಟಿಲ್ಲ&lt;/strong&gt;&lt;/h2&gt;&lt;p&gt;ಮಾತ್ತೇತ್ತಿದ್ದರೆ ಕೇಂದ್ರ ಸರ್ಕಾರ ಸಾಲ ಮಾಡಿಲ್ವ ಎನ್ನುವ ಕಾಂಗ್ರೆಸ್ ಮುಖಂಡರು, ಕೇಂದ್ರ ಸರ್ಕಾರ ಸಾಲ ಮಾಡಿರುವುದು ರೇಲ್ವೆ, ವಿಮಾನ ನಿಲ್ದಾಣ ಇಂತಹ ಯೋಜನೆಗಳನ್ನು ಮಾಡಿ ದೇಶದ ಆಸ್ತಿಯನ್ನು ವೃದ್ದಿ ಮಾಡಲು, ಆದರೆ ನಿಮ್ಮತರ ಅನಗತ್ಯವಾಗಿ ಸಾಲ ಮಾಡಿ ರಾಜ್ಯದ ಆಸ್ತಿ ಆಡವಿಟ್ಟಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತೀರುಗೇಟು ನೀಡಿದರು. ಆನ್ ಲೈನ್ ಗೇಮ್, ಬೆಡ್ಡಿಂಗ್ ನಿಂದ ಸಾಲ ಮಾಡಿ ಕೊಂಡು ಯುವಕರು ಮನೆ ಜಮೀನು ಕಳೆದು ಕೊಂಡು ಬೀದಿ ಬಂದಿದ್ದಾರೆ.&lt;/p&gt;&lt;p&gt;ಇನ್ನೂ ಕೆಲವರು ಸಾಲ ತೀರಿಸಲು ಸಾದ್ಯವಾಗದೇ ಆತ್ಮ*ಹತ್ಯೆ ಮಾಡಿ ಕೊಳುತ್ತಿದ್ದಾರೆ. ಇದರ ಚರ್ಚೆ ಮಾಡದ ಇವರು ಪ್ರತಿ ನಿತ್ಯಾ ನಾನು ಸಿಎಂ, ನಾನು ಸಿಎಂ, ಕೊನೆಗೆ ನಮ್ಮಪ್ಪ ಐದು ವರ್ಷ ಸಿಎಂ ಇದೇ ಆಯಿತು, ಇನ್ನೆಲ್ಲಿ ರಾಜ್ಯ ಅಭಿವೃದ್ಧಿ ಮಾಡಲು ಸಾಧ್ಯ ಹಾಗಾಗಿ ಮುಂದೆ ಒಳ್ಳೆಯ ಸರ್ಕಾರ ತರಲು ನನ್ನೊಂದಿಗೆ ಜನರು ಕೈ ಜೊಡಿಸ ಬೇಕು ಎಂದರು. ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಹೊಸ ಅಗ್ರಹಾರ ಗ್ರಾಮದ ಎಲ್ಲ ಸಮುದಾಯದ ಸೇರಿ ದೇವಸ್ಥಾನದ ಕುರ್ಜು ನಿರ್ಮಾಣ ಮಾಡಿ ಇಂದು ಲೋಕಾರ್ಪಣೆ ಮಾಡಿದ್ದೀರಿ, ಇದು ಧಾರ್ಮಿಕ ಕಾರ್ಯಕ್ರಮ, ನಾನು ರಾಜಕೀಯ ಮಾತನಾಡಲ್ಲ ಎಂದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/hd-kumaraswamy-slams-karnataka-government-development-debt-gvd/articleshow-h6pza3g"/>
        </item>
        <item>
            <title><![CDATA[ವಿಶ್ವಮಾನವ ಎಕ್ಸ್ ಪ್ರೆಸ್ ಗೆ ಎಲ್ಎಚ್ ಬಿ ಬೋಗಿಗಳ ಅಳವಡಿಕೆ, ಪ್ರಯಾಣಿಕರ ಹೊಸ ಪಯಣದ ರಹಸ್ಯ!]]></title>
            <link>https://kannada.asianetnews.com/karnataka-districts/indian-railways-mysuru-belagavi-vishwamanava-express-upgraded-with-modern-lhb-coaches-from-april-26-gdp/articleshow-hk8bisv</link>
            <guid isPermaLink="true">https://kannada.asianetnews.com/karnataka-districts/indian-railways-mysuru-belagavi-vishwamanava-express-upgraded-with-modern-lhb-coaches-from-april-26-gdp/articleshow-hk8bisv</guid>
            <pubDate>Sat, 18 Apr 2026 17:18:38 +0530</pubDate>
            <description><![CDATA[ಮೈಸೂರು-ಬೆಳಗಾವಿ ವಿಶ್ವಮಾನವ ಸೂಪರ್ ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲಿನ ಹಳೆಯ ಐಸಿಎಫ್ ಬೋಗಿಗಳನ್ನು ಆಧುನಿಕ, ಹೆಚ್ಚು ಸುರಕ್ಷಿತವಾದ ಎಲ್ಎಚ್&zwnj;ಬಿ ಬೋಗಿಗಳಾಗಿ ಬದಲಾಯಿಸಲಾಗುತ್ತಿದೆ. ಏಪ್ರಿಲ್ 26 ರಿಂದ ಜಾರಿಗೆ ಬರುವ ಈ ಹೊಸ ವ್ಯವಸ್ಥೆಯು 20 ಬೋಗಿಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುಧಾರಿತ ಪ್ರಯಾಣದ ಅನುಭವವನ್ನು ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kg1azs2nd8c37cnyeb1p0x7y,imgname-indian-railways--3--1769571607637.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ದಕ್ಷಿಣ ಪಶ್ಚಿಮ ರೈಲ್ವೆ ವತಿಯಿಂದ ಮೈಸೂರು&ndash;ಬೆಳಗಾವಿ&ndash;ಮೈಸೂರು ವಿಶ್ವಮಾನವ ಸೂಪರ್ ಫಾಸ್ಟ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ 20676/20675) ರೈಲಿನಲ್ಲಿ ಮಹತ್ವದ ಪರಿಷ್ಕರಣೆ ಕೈಗೊಳ್ಳಲಾಗಿದೆ. ಪ್ರಸ್ತುತ ಬಳಸಲಾಗುತ್ತಿದ್ದ ಹಳೆಯ ಐಸಿಎಫ್ (ICF) ಬೋಗಿಗಳನ್ನು ಹಂತ ಹಂತವಾಗಿ ಆಧುನಿಕ ಎಲ್ಎಚ್&zwnj;ಬಿ (LHB) ಬೋಗಿಗಳಾಗಿ ಬದಲಾಯಿಸುವ ಕಾರ್ಯ ಪ್ರಾರಂಭವಾಗಿದ್ದು, ಈ ಹೊಸ ವ್ಯವಸ್ಥೆ ಮೈಸೂರಿನಿಂದ ಏಪ್ರಿಲ್ 26ರಿಂದ ಹಾಗೂ ಬೆಳಗಾವಿಯಿಂದ ಏಪ್ರಿಲ್ 27ರಿಂದ ಜಾರಿಗೆ ಬರಲಿದೆ.&lt;/p&gt;&lt;h2&gt;21 ಬೋಗಿಗಳನ್ನು ಹೊಂದಿದ್ದ ಈ ರೈಲು&lt;/h2&gt;&lt;p&gt;ಇದುವರೆಗೆ 21 ಬೋಗಿಗಳನ್ನು ಹೊಂದಿದ್ದ ಈ ರೈಲು, ಇನ್ನು ಮುಂದೆ ಒಟ್ಟು 20 ಎಲ್ಎಚ್&zwnj;ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಹೊಸ ವ್ಯವಸ್ಥೆಯಡಿ ರೈಲಿನಲ್ಲಿ 1 ಎಸಿ ಚೇರ್ ಕಾರ್, 12 ಸಾಮಾನ್ಯ ದರ್ಜೆಯ ಬೋಗಿಗಳು, 5 ದ್ವಿತೀಯ ದರ್ಜೆ ಸಿಟಿಂಗ್ ಚೇರ್ ಕಾರ್ ಬೋಗಿಗಳು, 1 ಜನರೇಟರ್ ಕಾರ್ ಹಾಗೂ ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಹೊಂದಿರುವ 1 ಬ್ರೇಕ್ ವ್ಯಾನ್ ಒಳಗೊಂಡಿರಲಿದೆ.&lt;/p&gt;&lt;p&gt;ಎಲ್ಎಚ್&zwnj;ಬಿ ಬೋಗಿಗಳು ಐಸಿಎಫ್ ಬೋಗಿಗಳಿಗಿಂತ ಹೆಚ್ಚಿನ ಸುರಕ್ಷತೆ ಮತ್ತು ಆಧುನಿಕ ತಂತ್ರಜ್ಞಾನ ಹೊಂದಿದ್ದು, ವೇಗ ಮತ್ತು ಸ್ಥಿರತೆಯಲ್ಲಿ ಉತ್ತಮ ಅನುಭವವನ್ನು ನೀಡುತ್ತವೆ. ವಿಶೇಷವಾಗಿ ಅಪಘಾತಗಳ ಸಂದರ್ಭಗಳಲ್ಲಿ ಹಾನಿ ಕಡಿಮೆ ಆಗುವಂತೆ ವಿನ್ಯಾಸಗೊಳಿಸಿರುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ. ಜೊತೆಗೆ ಪ್ರಯಾಣಿಕರಿಗೆ ಆರಾಮದಾಯಕ ಆಸನ ವ್ಯವಸ್ಥೆ, ಸುಧಾರಿತ ಬ್ರೇಕಿಂಗ್ ಸಿಸ್ಟಂ ಹಾಗೂ ಶಬ್ದ ಮತ್ತು ಕಂಪನ ಕಡಿಮೆ ಇರುವ ಪ್ರಯಾಣ ಅನುಭವವನ್ನು ಈ ಬೋಗಿಗಳು ಒದಗಿಸುತ್ತವೆ.&lt;/p&gt;&lt;h2&gt;ಮೈಸೂರು ಮತ್ತು ಬೆಳಗಾವಿ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ&lt;/h2&gt;&lt;p&gt;ಈ ಬದಲಾವಣೆಯಿಂದ ಮೈಸೂರು ಮತ್ತು ಬೆಳಗಾವಿ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ, ಸುಲಭ ಮತ್ತು ಆರಾಮದಾಯಕ ಪ್ರಯಾಣ ಸಾಧ್ಯವಾಗಲಿದ್ದು, ದಕ್ಷಿಣ ಪಶ್ಚಿಮ ರೈಲ್ವೆಯು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಕೈಗೊಂಡಿರುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿ ಇದು ಪರಿಗಣಿಸಲಾಗಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/indian-railways-mysuru-belagavi-vishwamanava-express-upgraded-with-modern-lhb-coaches-from-april-26-gdp/articleshow-hk8bisv"/>
        </item>
        <item>
            <title><![CDATA[ಢಂ ಎಂದ ಟೈರ್, ಸುಂಯ್ ಅಂತ ಜಾರಿದ ಬೈಕ್; ಅಪ್ಪ-ಅಮ್ಮನ ಮಡಿಲಲ್ಲೇ ಪ್ರಾಣ ಬಿಟ್ಟ ಮಗಳು]]></title>
            <link>https://kannada.asianetnews.com/gallery/karnataka-districts/bike-tire-blast-causes-accident-16-year-old-girl-dies-three-injured-nanjanagud-in-mysuru-district-mrq-itmovmc</link>
            <guid isPermaLink="true">https://kannada.asianetnews.com/gallery/karnataka-districts/bike-tire-blast-causes-accident-16-year-old-girl-dies-three-injured-nanjanagud-in-mysuru-district-mrq-itmovmc</guid>
            <pubDate>Mon, 20 Apr 2026 12:41:44 +0530</pubDate>
            <description><![CDATA[ಮೈಸೂರು ಜಿಲ್ಲೆಯ ನಂಜನಗೂಡು ಬಳಿ ಬೈಕ್ ಟಯರ್ ಬ್ಲಾಸ್ಟ್ ಆಗಿ ಸಂಭವಿಸಿದ ಅಪಘಾತದಲ್ಲಿ 16 ವರ್ಷದ ವಿದ್ಯಾರ್ಥಿನಿ ಸಿಂಚನಾ ಸಾವನ್ನಪ್ಪಿದ್ದಾಳೆ. ಒಂದೇ ಬೈಕ್&zwnj;ನಲ್ಲಿ ಹೆಲ್ಮೆಟ್ ಧರಿಸದೆ ನಾಲ್ವರು ಪ್ರಯಾಣಿಸುತ್ತಿದ್ದು, ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpmttpsf61jjnwsy2k8t0frw,imgname-mysuru-accident--4--1776668203823.jpg" type="image/jpeg" height="390" width="690"/>
            <content:encoded><![CDATA[ಮೈಸೂರು ಜಿಲ್ಲೆಯ ನಂಜನಗೂಡು ಬಳಿ ಬೈಕ್ ಟಯರ್ ಬ್ಲಾಸ್ಟ್ ಆಗಿ ಸಂಭವಿಸಿದ ಅಪಘಾತದಲ್ಲಿ 16 ವರ್ಷದ ವಿದ್ಯಾರ್ಥಿನಿ ಸಿಂಚನಾ ಸಾವನ್ನಪ್ಪಿದ್ದಾಳೆ. ಒಂದೇ ಬೈಕ್&zwnj;ನಲ್ಲಿ ಹೆಲ್ಮೆಟ್ ಧರಿಸದೆ ನಾಲ್ವರು ಪ್ರಯಾಣಿಸುತ್ತಿದ್ದು, ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.&lt;img&gt;&lt;p&gt;ಚಲಿಸುತ್ತಿದ್ದಾಗಲೇ ಟಯರ್ ಬ್ಲಾಸ್ಟ್ ಆಗಿದ್ದರಿಂದ ಬೈಕ್ ಸ್ಕಿಡ್ ಆಗಿದ್ದು, 16 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಗಣೇಶಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.&lt;/p&gt;&lt;img&gt;&lt;p&gt;ಮೃತ ವಿದ್ಯಾರ್ಥಿನಿಯನ್ನು ಸಿಂಚನಾ ಎಂದು ಗುರುತಿಸಲಾಗಿದೆ. ಸಿಂಚನಾ ನಂಜನಗೂಡು ತಾಲೂಕಿನ ಮಡುವಿನಹಳ್ಳಿಯ ಮಹದೇವಸ್ವಾಮಿ ಅವರ ಪುತ್ರಿಯಾಗಿದ್ದು, ತಂದೆಯೊಂದಿಗೆ ಬೈಕ್&zwnj;ನಲ್ಲಿ ಬರುತ್ತಿದ್ದಳು. ಬೈಕ್&zwnj;ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಯಾರೂ ಸಹ ಹೆಲ್ಮೆಟ್&zwnj; ಸಹ ಧರಿಸಿರಲಿಲ್ಲ.&lt;/p&gt;&lt;img&gt;&lt;p&gt;ಮಹದೇವಸ್ವಾಮಿ ಪತ್ನಿ, ಮಗ ಮತ್ತು ಮಗಳೊಂದಿಗೆ ಬೇಲದಕುಪ್ಪೆ ಮಹದೇಶ್ವರ ಸ್ವಾಮಿಯ ದೇವಾಲಯಕ್ಕೆ ತೆರಳಿ ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಬೈಕ್ ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಟೈಯರ್ ಬ್ಲಾಸ್ಟ್ ಆಗಿದೆ. ಇದರಿಂದ ಬೈಕ್ ರಸ್ತೆ ಮೇಲೆ ವೇಗವಾಗಿ ಜಾರಿದ್ದು, ನಾಲ್ವರು ಕೆಳಗೆ ಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ನಾಲ್ವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಸಿಂಚನಾ ಉಸಿರು ಚೆಲ್ಲಿದ್ದಾಳೆ. ಸದ್ಯ ಮೂವರಿಗೆ ನಂಜನಗೂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಗುತ್ತಿದೆ. ಅಪಘಾತದ ದೃಶ್ಯಗಳು ರಸ್ತೆಬದಿಯ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Bidar: ಬಿಸಿಲಾಘಾತಕ್ಕೆ ಕುಸಿದು ಸಾವನ್ನಪ್ಪಿದ 20 ವರ್ಷದ ಯುವಕ; ರಸ್ತೆಬದಿ ಪತ್ತೆಯಾದ ಶವ&lt;/strong&gt;&lt;/p&gt;&lt;img&gt;&lt;p&gt;ಸಿಂಚನಾ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಳು. ಟ್ರಾಫಿಕ್ ನಿಯಮ ಉಲ್ಲಂಘಿಸಿ ಒಂದೇ ಬೈಕ್&zwnj;ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಒಂದು ವೇಳೆ ಹೆಲ್ಮೆಟ್ ಧರಿಸಿದ್ರೆ ಸಿಂಚನಾ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಗಳಿದ್ದವು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸರಗೂರು ಕೊ*ಲೆಯ ರಹಸ್ಯ ಬಿಚ್ಚಿಟ್ರು ಎಸ್&zwnj;ಪಿ; ಅಮೃತಾ-ಸಿದ್ದೇಶ್ ಪ್ಲಾನ್ ಏನಾಗಿತ್ತು?&lt;/strong&gt;&lt;/p&gt;]]></content:encoded>
            <category>mysore</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bike-tire-blast-causes-accident-16-year-old-girl-dies-three-injured-nanjanagud-in-mysuru-district-mrq-itmovmc"/>
        </item>
        <item>
            <title><![CDATA[ಸರಗೂರು ಕೊ*ಲೆಯ ರಹಸ್ಯ ಬಿಚ್ಚಿಟ್ರು ಎಸ್‌ಪಿ;  ಅಮೃತಾ-ಸಿದ್ದೇಶ್ ಪ್ಲಾನ್ ಏನಾಗಿತ್ತು?]]></title>
            <link>https://kannada.asianetnews.com/gallery/karnataka-districts/mysuru-illicit-relationship-woman-police-arrested-the-accused-within-24-hours-of-incident-how-conspiracy-unfolded-mrq-kd4f0x9</link>
            <guid isPermaLink="true">https://kannada.asianetnews.com/gallery/karnataka-districts/mysuru-illicit-relationship-woman-police-arrested-the-accused-within-24-hours-of-incident-how-conspiracy-unfolded-mrq-kd4f0x9</guid>
            <pubDate>Sun, 19 Apr 2026 17:19:37 +0530</pubDate>
            <description><![CDATA[&lt;p&gt;ಜವರಪ್ಪ ಎಂಬುವವರ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಲಾಗಿತ್ತು. 24 ಗಂಟೆಯೊಳಗೆ ಪ್ರಕರಣ ಭೇದಿಸಿದ ಪೊಲೀಸರು, ಮೃತನ ಪತ್ನಿ ಅಮೃತಾ ಹಾಗೂ ಆಕೆಯ ಪ್ರಿಯಕರ ಸಿದ್ದೇಶ್ ಈ ಕೃತ್ಯದ ಹಿಂದಿದ್ದಾರೆ ಎಂದು ಪತ್ತೆಹಚ್ಚಿದ್ದಾರೆ. ಆರೋಪಿ ಸಿದ್ದೇಶ್&zwnj;ನನ್ನು ಬಂಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpjrtcv92rp77vybax8qfng1,imgname-mysuru-murder-1776598987625.jpg" type="image/jpeg" height="390" width="690"/>
            <content:encoded><![CDATA[&lt;p&gt;ಜವರಪ್ಪ ಎಂಬುವವರ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಲಾಗಿತ್ತು. 24 ಗಂಟೆಯೊಳಗೆ ಪ್ರಕರಣ ಭೇದಿಸಿದ ಪೊಲೀಸರು, ಮೃತನ ಪತ್ನಿ ಅಮೃತಾ ಹಾಗೂ ಆಕೆಯ ಪ್ರಿಯಕರ ಸಿದ್ದೇಶ್ ಈ ಕೃತ್ಯದ ಹಿಂದಿದ್ದಾರೆ ಎಂದು ಪತ್ತೆಹಚ್ಚಿದ್ದಾರೆ. ಆರೋಪಿ ಸಿದ್ದೇಶ್&zwnj;ನನ್ನು ಬಂಧಿಸಲಾಗಿದೆ.&lt;/p&gt;&lt;img&gt;&lt;p&gt;ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೆಗಾಲ ಗ್ರಾಮದ ನಿವಾಸಿ ಜವರಪ್ಪ ಎಂಬವರ ಕೊಲೆ ಪ್ರಕರಣದ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಪ್ರಕರಣ ನಡೆದ 24 ಗಂಟೆಯಲ್ಲಿ ಆರೋಪಿ ಸಿದ್ದೇಶ್ ಎಂಬಾತನನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಆರೋಪಿ ಸಿದ್ದೇಶ್ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ. ಕೊಲೆಯಾದ ಜವರಪ್ಪ ಕೂಲಿ ಕೆಲಸ ಮಾಡಿಕೊಂಡಿದ್ದರು. ಒಂದು ದಿನ ಆರೋಪಿ ಸಿದ್ದೇಶ್ ನನ್ನು ಜವರಪ್ಪ ತನ್ನ ಮನೆಗೆ ಕರೆದುಕೊಂಡು ಹೋಗಿದ್ದನು.ಈ ವೇಳೆ ಜವರಪ್ಪನ ಹೆಂಡತಿ ಅಮೃತಾಳ ಪರಿಚಯ ಸಿದ್ದೇಶ್&zwnj;ಗೆ ಆಗುತ್ತದೆ. ಈ ಭೇಟಿ ಬಳಿಕ ಇಬ್ಬರು ಫೋನ್ ನಂಬರ್ ಎಕ್ಸ್&zwnj;ಚೇಂಜ್ ಮಾಡಿಕೊಂಡು ಮಾತನಾಡಲು ಆರಂಭಿಸಿದ್ದರು.&lt;/p&gt;&lt;img&gt;&lt;p&gt;ಮೊಬೈಲ್&zwnj;ನಲ್ಲಿ ಹೆಚ್ಚು ಮಾತನಾಡುವ ವಿಷಯವಾಗಿಯೇ ಅಮೃತಾ ಮತ್ತು ಜವರಪ್ಪ ನಡುವೆ ಜಗಳ ನಡೆಯುತ್ತಿತ್ತು. ಏಪ್ರಿಲ್ 14ರಂದು ಅಮೃತಾ ಮಕ್ಕಳೊಂದಿಗೆ ತವರಿಗೆ ಹೋಗಿದ್ದಳು. ಈ ವೇಳೆ ಮಕ್ಕಳನ್ನು ನೋಡಲು ಬರುತ್ತೇನೆ ಎಂದು ಅಮೃತಾಳಿಗೆ ಜವರಪ್ಪ ತಿಳಿಸಿದ್ದರು. ಇತ್ತ ಸಿದ್ದೇಶ್&zwnj;ಗೆ ಗಂಡನ ಚಲನವಲನದ ಮಾಹಿತಿಯನ್ನು ಅಮೃತಾ ನೀಡುತ್ತಿದ್ದಳು. ಜವರಪ್ಪ ಇದ್ರೆ ನಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗ್ತಾನೆ ಎಂದು ಇಬ್ಬರು ಸೇರಿ ಜವರಪ್ಪನ ಕೊಲೆಗೆ ಪ್ಲಾನ್ ಮಾಡಿದ್ದರು ಎಂದು ಎಸ್&zwnj;ಪಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮಕ್ಕಳನ್ನು ನೋಡಲು ಹೊರಟಿದ್ದ ಜವರಪ್ಪ ಅವರಿಗೆ ಮಾರ್ಗಮಧ್ಯೆ ಭೇಟಿಯಾದ ಸಿದ್ದೇಶ್, ತನ್ನ ಕಾರಿನಲ್ಲಿ ಬಾರ್&zwnj;ಗೆ ಕರೆದುಕೊಂಡು ಹೋಗಿದ್ದಾನೆ. ಕಂಠ ಪೂರ್ತಿ ಕುಡಿಸಿ ಮನೆಗೆ ಬಿಡುವುದಾಗಿ ಹೇಳಿ ಮಾರ್ಗಮಧ್ಯೆ ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮೃತ ದೇಹವನ್ನು ರಸ್ತೆಯಲ್ಲಿ ಬಿಸಾಡಿ ಅಪಘಾತ ಎಂದು ಬಿಂಬಿಸಲು ಮುಂದಾಗುತ್ತಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ದೇಹದ ಮೇಲಿನ ಗಾಯದ ಗುರುತನ್ನ ಗಮನಿಸಿ ಕೊಲೆ ಶಂಕೆ ವ್ಯಕ್ತಪಡಿಸುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪತಿಯ ಅಕ್ರಮ ಸಂಬಂಧ ಪತ್ತೆ ಮಾಡಿದ್ದ ಪತ್ನಿ ನಿಗೂಢ ಸಾವು: ಪೋಷಕರಿಂದ ಕೊಲೆ ಆರೋಪ&lt;/strong&gt;&lt;/p&gt;&lt;img&gt;&lt;p&gt;ಕೊಲೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ತನಿಖೆಹೆ ಎರಡು ತಂಡ ರಚಿಸಲಾಗಿತ್ತು. ಘಟನೆ ನಡೆದ 24 ಗಂಟೆ ಅವಧಿಯಲ್ಲಿ ಕೊಲೆಯ ರಹಸ್ಯ ಬಯಲಾಗಿದೆ. ಆರೋಪಿ ಸಿದ್ದೇಶ್ ನನ್ನ ಬಂದಿಸಲಾಗಿದೆ. ಈ ಕೊಲೆಯ ಸಂಚಿನಲ್ಲಿ ಅಮೃತಾಳ ಕೈವಾಡವು ಇದೆ ಎಂದು ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ. ಇತ್ತ ಜವರಪ್ಪ ಸೋದರ ರವಿ ಸಹ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮುದ್ದಾದ ಮೂರು ಮಕ್ಕಳ ಜೊತೆಗೆ ವಿದೇಶಕ್ಕೆ ಹೋಗಿ ಅಲ್ಲೇ ಸೆಟಲ್ ಆದ ಪತ್ನಿ; ಏಕಾಂಗಿಯಾದ ಕಿರುತೆರೆ ನಟ&lt;/strong&gt;&lt;/p&gt;]]></content:encoded>
            <category>mysore</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/mysuru-illicit-relationship-woman-police-arrested-the-accused-within-24-hours-of-incident-how-conspiracy-unfolded-mrq-kd4f0x9"/>
        </item>
        <item>
            <title><![CDATA[ಮೈಸೂರಲ್ಲಿ ಬಿಸಿಲಿನ ತಾಪಕ್ಕೆ ಶ್ವಾನ ಬಲಿ: ಶ್ವಾನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಗೋಲ್ಡನ್ ರಿಟ್ರೈವರ್ 'ರೋನಿ' ಸಾವು!]]></title>
            <link>https://kannada.asianetnews.com/karnataka-districts/mysuru-tragedy-7-year-old-golden-retriever-ronnie-dies-of-heatstroke-after-dog-show-sat/articleshow-lzr7ehh</link>
            <guid isPermaLink="true">https://kannada.asianetnews.com/karnataka-districts/mysuru-tragedy-7-year-old-golden-retriever-ronnie-dies-of-heatstroke-after-dog-show-sat/articleshow-lzr7ehh</guid>
            <pubDate>Sun, 26 Apr 2026 20:51:49 +0530</pubDate>
            <description><![CDATA[&lt;p&gt;ಮೈಸೂರಿನಲ್ಲಿ ನಡೆದ ಶ್ವಾನ ಪ್ರದರ್ಶನವೊಂದರಲ್ಲಿ ಭಾಗವಹಿಸಿದ್ದ 'ರೋನಿ' ಎಂಬ ಗೋಲ್ಡನ್ ರಿಟ್ರೈವರ್ ಶ್ವಾನವು ತೀವ್ರ ಬಿಸಿಲಿನಿಂದ ಉಂಟಾದ ಹೀಟ್ ಸ್ಟ್ರೋಕ್&zwnj;ನಿಂದಾಗಿ ಸಾವನ್ನಪ್ಪಿದೆ. ಬಿಸಿಲಿನಿಂದ ರಕ್ಷಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq562qtfjvvfy2p7ydbxtj8n,imgname-mysuru-dog-death-1777216872271.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.26): ಸಾಂ&lt;/strong&gt;ಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ ಬಿಸಿಲಿನ ಬೇಗೆ ಮಿತಿಮೀರಿದೆ. ಸುಡುವ ಬಿಸಿಲಿನಿಂದಾಗಿ ಜನಸಾಮಾನ್ಯರು ಕಂಗೆಟ್ಟಿದ್ದರೆ, ಇತ್ತ ಪ್ರಾಣಿಗಳೂ ಸಹ 'ಹೀಟ್ ಸ್ಟ್ರೋಕ್' (Heat Stroke) ಅಥವಾ ಬಿಸಿಲಿನ ಆಘಾತಕ್ಕೆ ಬಲಿಯಾಗುತ್ತಿವೆ. ಮೈಸೂರಿನ ವಿಜಯನಗರದ ನಿವಾಸಿ ತೇಜಸ್ ಎಂಬುವವರಿಗೆ ಸೇರಿದ 7 ವರ್ಷದ 'ರೋನಿ' ಹೆಸರಿನ ಗೋಲ್ಡನ್ ರಿಟ್ರೈವರ್ ತಳಿಯ ಶ್ವಾನವೊಂದು ಹೀಟ್ ಸ್ಟ್ರೋಕ್&zwnj;ನಿಂದ ಮೃತಪಟ್ಟಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ವಿಜಯನಗರ ನಿವಾಸಿ ತೇಜಸ್ ಅವರು ತಮ್ಮ ಪ್ರೀತಿಯ ಶ್ವಾನ ರೋನಿಯನ್ನು ಮೈಸೂರಿನ ಖಾಸಗಿ ಕಾಲೇಜೊಂದರಲ್ಲಿ ಶನಿವಾರ ಆಯೋಜಿಸಿದ್ದ ಶ್ವಾನ ಸ್ಪರ್ಧೆಗೆ ಕರೆದುಕೊಂಡು ಹೋಗಿದ್ದರು. ಅತ್ಯಂತ ಲವಲವಿಕೆಯಿಂದಿದ್ದ ರೋನಿ, ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿತ್ತು. ಆದರೆ, ಶ್ವಾನ ಪ್ರದರ್ಶನ ಮುಗಿದ ಸ್ವಲ್ಪ ಸಮಯದ ಬಳಿಕ ರೋನಿ ಹಠಾತ್ ಅಸ್ವಸ್ಥಗೊಂಡಿದೆ.&lt;/p&gt;&lt;h2&gt;&lt;strong&gt;ಬಿಸಿಲಿನ ಆಘಾತಕ್ಕೆ ಕುಸಿದ ರೋನಿ:&lt;/strong&gt;&lt;/h2&gt;&lt;p&gt;ಬಿಸಿಲಿನ ತೀವ್ರತೆ ಹೆಚ್ಚಿದ್ದ ಕಾರಣ ರೋನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಮಾಲೀಕರು ಪೆಟ್ ಆ್ಯಂಬುಲೆನ್ಸ್ (Pet Ambulance) ಮೂಲಕ ಮೈಸೂರಿನ 'ಶ್ರೀ ಪೆಟ್ ಆಸ್ಪತ್ರೆ'ಗೆ ದಾಖಲಿಸಿದ್ದಾರೆ. ವೈದ್ಯರು ತಕ್ಷಣವೇ ಚಿಕಿತ್ಸೆ ಆರಂಭಿಸಿದರೂ, ರೋನಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ. ತಜ್ಞ ವೈದ್ಯರ ಪ್ರಕಾರ, ಅತಿಯಾದ ಬಿಸಿಲಿನಿಂದ ಉಂಟಾದ 'ಹೀಟ್ ಸ್ಟ್ರೋಕ್' ಶ್ವಾನದ ಸಾವಿಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಪ್ರಾಣಿಗಳ ಮೇಲೂ ಬಿಸಿಲಿನ ಪ್ರಭಾವ:&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಗೋಲ್ಡನ್ ರಿಟ್ರೈವರ್&zwnj;ನಂತಹ ದಟ್ಟವಾದ ತುಪ್ಪಳ ಹೊಂದಿರುವ ಶ್ವಾನಗಳಿಗೆ ಹೆಚ್ಚಿನ ತಂಪು ವಾತಾವರಣದ ಅವಶ್ಯಕತೆ ಇರುತ್ತದೆ. ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದೆ. ಶ್ವಾನ ಸ್ಪರ್ಧೆಯಂತಹ ಕಿಕ್ಕಿರಿದು ತುಂಬಿದ ಮತ್ತು ಬಿಸಿಲು ಹೆಚ್ಚಿರುವ ಜಾಗದಲ್ಲಿ ಪ್ರಾಣಿಗಳನ್ನು ಕರೆದುಕೊಂಡು ಹೋದಾಗ ಅವುಗಳಿಗೆ ನಿರ್ಜಲೀಕರಣ (Dehydration) ಮತ್ತು ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.&lt;/p&gt;&lt;h3&gt;&lt;strong&gt;ಶ್ವಾನ ಪ್ರಿಯರ ಆಕ್ರೋಶ ಮತ್ತು ಬೇಸರ:&lt;/strong&gt;&lt;/h3&gt;&lt;p&gt;ತನ್ನ ಪ್ರೀತಿಯ ರೋನಿಯನ್ನು ಕಳೆದುಕೊಂಡ ಮಾಲೀಕ ತೇಜಸ್ ಅವರ ದುಃಖ ಮುಗಿಲುಮುಟ್ಟಿದೆ. ಇತ್ತ ಶ್ವಾನ ಪ್ರಿಯರು ಇಂತಹ ಸುಡುವ ಬಿಸಿಲಿನಲ್ಲಿ ಶ್ವಾನ ಸ್ಪರ್ಧೆಗಳನ್ನು ಆಯೋಜಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಸಿಗೆಯ ಸಮಯದಲ್ಲಿ ಪ್ರಾಣಿಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಸಾಕುಪ್ರಾಣಿಗಳ ಮಾಲೀಕರಿಗೆ ಸಲಹೆಗಳು:&lt;/strong&gt;&lt;/h3&gt;&lt;p&gt;ಮಧ್ಯಾಹ್ನದ ಸಮಯದಲ್ಲಿ ಸಾಕುಪ್ರಾಣಿಗಳನ್ನು ಹೊರಗೆ ಕರೆದೊಯ್ಯಬೇಡಿ.&lt;/p&gt;&lt;p&gt;ಪ್ರಾಣಿಗಳಿಗೆ ಸದಾ ಶುದ್ಧ ಮತ್ತು ತಂಪಾದ ಕುಡಿಯುವ ನೀರನ್ನು ಒದಗಿಸಿ.&lt;/p&gt;&lt;p&gt;ಶ್ವಾನಗಳನ್ನು ತಂಪಾದ ಮತ್ತು ಗಾಳಿಯಾಡುವ ಜಾಗದಲ್ಲಿ ಇರಿಸಿ.&lt;/p&gt;&lt;p&gt;ಅತಿಯಾದ ಏದುಸಿರು ಬಿಡುವುದು ಅಥವಾ ಅಸ್ವಸ್ಥತೆಯ ಲಕ್ಷಣ ಕಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mysuru-tragedy-7-year-old-golden-retriever-ronnie-dies-of-heatstroke-after-dog-show-sat/articleshow-lzr7ehh"/>
        </item>
        <item>
            <title><![CDATA[ನಾರಿಶಕ್ತಿ ಅವಮಾನಿಸಿದವರ ಪಾಪದ ಕೊಡ ತುಂಬಿದೆ: ಕೇಂದ್ರ ಸಚಿವ ವಿ.ಸೋಮಣ್ಣ]]></title>
            <link>https://kannada.asianetnews.com/karnataka-districts/v-somanna-slams-congress-womens-reservation-bill-karnataka-gvd/articleshow-ni7gscz</link>
            <guid isPermaLink="true">https://kannada.asianetnews.com/karnataka-districts/v-somanna-slams-congress-womens-reservation-bill-karnataka-gvd/articleshow-ni7gscz</guid>
            <pubDate>Thu, 23 Apr 2026 23:51:18 +0530</pubDate>
            <description><![CDATA[&lt;p&gt;ನಾರಿ ಶಕ್ತಿಯನ್ನು ಅವಮಾನಿಸಿದವರ ಪಾಪದ ಕೊಡ ತುಂಬುತ್ತಾ ಬಂದಿದೆ. ಮಹಿಳೆಯರೇ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕಾಂಗ್ರೆಸ್&zwnj; ವಿರುದ್ಧ ಕಿಡಿಕಾರಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j5gb3zf73mwatd96b1h76c0c,imgname-1.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.23): &lt;/strong&gt;ನಾರಿ ಶಕ್ತಿಯನ್ನು ಅವಮಾನಿಸಿದವರ ಪಾಪದ ಕೊಡ ತುಂಬುತ್ತಾ ಬಂದಿದೆ. ಮಹಿಳೆಯರೇ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕಾಂಗ್ರೆಸ್&zwnj; ವಿರುದ್ಧ ಕಿಡಿಕಾರಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ 2047 ಗುರಿಯೊಂದಿಗೆ ಭಾರತವನ್ನು ವಿಶ್ವದ ಭೂಪಟದಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಸಂಕಲ್ಪದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಮಹಿಳಾ ಮೀಸಲಾತಿ ಕಾಯ್ದೆ ಒಂದು ಐತಿಹಾಸಿಕ ತೀರ್ಮಾನ. ಆದರೆ ಕಾಂಗ್ರೆಸ್&zwnj;, ಡಿಎಂಕೆ ಸೇರಿದಂತೆ ಇತರೆ ಪಕ್ಷಗಳು ನಡೆದುಕೊಂಡ ರೀತಿ ಸರಿಯಲ್ಲ ಎಂದರು.&lt;/p&gt;&lt;p&gt;ಈ ಪವಿತ್ರ ಕಾರ್ಯಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿರುವುದು ಮಹಿಳಾ ಕುಲಕ್ಕೆ ಮಾಡುತ್ತಿರುವ ದ್ರೋಹ, ಪಾಪದ ಕೃತ್ಯ. ಮಹಿಳಾ ಮೀಸಲಾತಿ ಬಿಲ್ ಸೋಲಿಸಲು ವಿರೋಧ ಪಕ್ಷಗಳು ನಡೆಸಿರುವ ಕುತಂತ್ರ ಇದು. ಮಹಿಳೆಯರು ಮುಖ್ಯವಾಹಿನಿಗೆ ಬರಬಾರದು ಎನ್ನುವ ಕೆಟ್ಟ ಚಾಳಿಯನ್ನು ಹೊಂದಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ ಹಾಗೂ ಡಿಎಂಕೆ ಪಕ್ಷಗಳು ಒಟ್ಟಾಗಿ ಈ ಐತಿಹಾಸಿಕ ನಡೆಯನ್ನು ವಿರೋಧಿಸಿವೆ. ಇದು ದೇಶದ ಸಾಮಾನ್ಯ ಮಹಿಳೆಯರಿಗೆ ಮಾಡುತ್ತಿರುವ ಅಪಚಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಧರ್ಮಾಧಾರಿತ ಮೀಸಲಾತಿ ಎಂಬ ಷಡ್ಯಂತ್ರ&lt;/strong&gt;&lt;/h2&gt;&lt;p&gt;ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿ ಸ್ಪಷ್ಟವಾಗಿ ವಿರೋಧಿಸಿದ್ದರು. ಆದರೆ, ಇಂದಿನ ವಿರೋಧ ಪಕ್ಷಗಳು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂಬ ಹೊಸ ವರಸೆ ತೆಗೆಯುವ ಮೂಲಕ ಸಮಾಜದಲ್ಲಿ ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು. ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿಯನ್ನು ಗೌರವಿಸುವ ಎನ್&zwnj;.ಡಿ.ಎ ಸರ್ಕಾರ ಅಂಬೇಡ್ಕರ್ ಅವರ ಆಶಯದಂತೆ ನಡೆಯುತ್ತಿದೆ.&lt;/p&gt;&lt;p&gt;ಈ ಹೊಸ ಮೀಸಲಾತಿಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗುವುದಿಲ್ಲ. ಕ್ಷೇತ್ರ ಪುನರ್ವಿಂಗಡಣೆಯ ಕುರಿತು ಹಬ್ಬಿಸುತ್ತಿರುವುದು ಸುಳ್ಳು ಸುದ್ದಿ. 1976 ರಲ್ಲಿ 54 ಕೋಟಿ ಇದ್ದ ಜನಸಂಖ್ಯೆ ಇಂದು 140 ಕೋಟಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್&zwnj; ವಿಂಗಡಣೆ ಅನಿವಾರ್ಯ ಎಂದರು. ಮೀಸಲಾತಿ ಜಾರಿಯಾದಲ್ಲಿ ಕರ್ನಾಟಕದ ಲೋಕಸಭಾ ಸ್ಥಾನಗಳ ಸಂಖ್ಯೆ 28 ರಿಂದ 42 ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ. ದಕ್ಷಿಣ ರಾಜ್ಯಗಳಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ 169ಕ್ಕೂ ಹೆಚ್ಚು ಏರಿಕೆಯಾಗಲಿದ್ದು, ಇದು ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಪೂರಕವಾಗಲಿದೆ ಎಂದು ಅವರು ವಿವರಿಸಿದರು.&lt;/p&gt;&lt;p&gt;ಮೋದಿ ಸರ್ಕಾರದ 11 ವರ್ಷಗಳ ಮಹಿಳಾ ಪರ ಸಾಧನೆ ಅನನ್ಯ. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಕೇವಲ ಕಾಲಹರಣ ಮಾಡುತ್ತಾ ಬಂದಿದ್ದರೆ, ಮೋದಿ ಸರ್ಕಾರ ಕಳೆದ ಒಂದು ದಶಕದಲ್ಲಿ ಮಹಿಳೆಯರಿಗಾಗಿ ಕ್ರಾಂತಿಕಾರಿ ಯೋಜನೆ ಜಾರಿಗೆ ತಂದಿದೆ. 12 ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ. ಉಜ್ವಲ ಯೋಜನೆ ಮತ್ತು ಮಾತೃ ವಂದನಾ ಯೋಜನೆ, ಮುದ್ರಾ ಸಾಲ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೊಳಿಸಿದೆ. 5 ಕೋಟಿ ಮುಸ್ಲಿಂ ಮಹಿಳೆಯರಿಗೆ ಮುಕ್ತಿ ನೀಡಿದ ತ್ರಿವಳಿ ತಲಾಕ್ ನಿಷೇಧ ಮಾಡಿದ್ದು ಬಿಜೆಪಿ ಸರ್ಕಾರ ಎಂದರು.&lt;/p&gt;&lt;p&gt;ನಾರಿ ಶಕ್ತಿಯನ್ನು ಅವಮಾನಿಸಿದವರಿಗೆ ಉಳಿಗಾಲ ಇಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಮತ್ತು ಮೈಸೂರಿನ ಮಹಾರಾಣಿ ವಾಣಿ ವಿಲಾಸ ಕೆಂಪನಂಜಮ್ಮಣ್ಣಿ ಅವರಂತಹ ಮಹಾನ್ ಮಹಿಳೆಯರು ನಮಗೆ ಪ್ರೇರಣೆ. ಅಂತಹ ಪರಂಪರೆಯನ್ನು ಗೌರವಿಸುವುದು ನಮ್ಮ ಆದ್ಯತೆ ಎಂದು ತಿಳಿಸಿದರು. ಮಹಿಳಾ ಸಬಲೀಕರಣದ ಮೂಲಕ ಸಶಕ್ತ ಭಾರತ ನಿರ್ಮಾಣಕ್ಕೆ ಭಾರತೀಯ ಜನತಾ ಪಕ್ಷ ಮತ್ತು ಎನ್&zwnj;.ಡಿ.ಎ ಮೈತ್ರಿಕೂಟ ಬದ್ಧವಾಗಿದ್ದು, ವಿರೋಧ ಪಕ್ಷಗಳ ನಾಟಕಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಪಾಪದ ಹೊರೆಯನ್ನು ವಿಪಕ್ಷಗಳು ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.&lt;/p&gt;&lt;p&gt;ನಾರಿ ಶಕ್ತಿಯನ್ನು ಕೆಣಕಿದವರಿಗೆ ಉಳಿಗಾಲವಿಲ್ಲ ಎಂಬುದಕ್ಕೆ ಇತಿಹಾಸದ ಪುಟಗಳು ಸಾಕ್ಷಿಯಾಗಿವೆ. ಮಹಾಭಾರತದಲ್ಲಿ ದ್ರೌಪದಿಯನ್ನು ಕೆಣಕಿದ ಕೌರವರ ಸ್ಥಿತಿ ಏನಾಯಿತು? ಸೀತೆಯನ್ನು ಅಪಹರಿಸಿದ ರಾವಣನ ಸ್ಥಿತಿ ಏನಾಯಿತು? ಪೆಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಕೊಲೆಗೈದ ಉಗ್ರರ ಸ್ಥಿತಿ ಏನಾಯಿತು? ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮಹಿಳಾ ಮೀಸಲಾತಿ ಬಿಲ್ ವಿರೋಧಿಸಿದ ಕಾಂಗ್ರೆಸ್ ಪಕ್ಷದ ಪಾಪದ&zwnj; ಕೊಡ ತುಂಬಿದೆ. ಮುಂಬರುವ ದಿನಗಳಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗುವ ವಿಶ್ವಾಸವಿದೆ ಎಂದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/v-somanna-slams-congress-womens-reservation-bill-karnataka-gvd/articleshow-ni7gscz"/>
        </item>
        <item>
            <title><![CDATA[ಮೈಸೂರಲ್ಲಿ ಮನೆಯೊಳಗೆ ನುಗ್ಗಿದ ಚಿರತೆಯೊಂದಿಗೆ 2 ಗಂಟೆ ಕಳೆದ 90ರ ಅಜ್ಜಿ; ಸಾವಿನ ಮನೆ ಕದ ತಟ್ಟಿಬಂದ ತಾಯಿ-ಮಗಳು!]]></title>
            <link>https://kannada.asianetnews.com/gallery/karnataka-districts/mysuru-leopard-operation-successful-siddhartha-layout-brave-family-90-year-old-grandmother-safe-sat-ntgcrll</link>
            <guid isPermaLink="true">https://kannada.asianetnews.com/gallery/karnataka-districts/mysuru-leopard-operation-successful-siddhartha-layout-brave-family-90-year-old-grandmother-safe-sat-ntgcrll</guid>
            <pubDate>Fri, 17 Apr 2026 20:48:48 +0530</pubDate>
            <description><![CDATA[&lt;p&gt;ಮೈಸೂರಿನ ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಚಿರತೆಯೊಂದು, ಸುಮಾರು ಎರಡೂವರೆ ಗಂಟೆಗಳ ಕಾಲ 90 ವರ್ಷದ ವೃದ್ಧೆಯ ಮಂಚದ ಕೆಳಗೆ ಅವಿತುಕೊಂಡಿತ್ತು. ಅಚ್ಚರಿಯೆಂದರೆ, ಯಾರಿಗೂ ಯಾವುದೇ ಹಾನಿ ಮಾಡದ ಈ ಚಿರತೆಯನ್ನು ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆಹಿಡಿದು, ಎಲ್ಲರನ್ನೂ ಅಪಾಯದಿಂದ ಪಾರುಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe07z1mcywc93rqycd4ysr4,imgname-mysuru-leapard-enter-in-house-1776439000116.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರಿನ ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಚಿರತೆಯೊಂದು, ಸುಮಾರು ಎರಡೂವರೆ ಗಂಟೆಗಳ ಕಾಲ 90 ವರ್ಷದ ವೃದ್ಧೆಯ ಮಂಚದ ಕೆಳಗೆ ಅವಿತುಕೊಂಡಿತ್ತು. ಅಚ್ಚರಿಯೆಂದರೆ, ಯಾರಿಗೂ ಯಾವುದೇ ಹಾನಿ ಮಾಡದ ಈ ಚಿರತೆಯನ್ನು ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆಹಿಡಿದು, ಎಲ್ಲರನ್ನೂ ಅಪಾಯದಿಂದ ಪಾರುಮಾಡಿದೆ.&lt;/p&gt;&lt;img&gt;&lt;p&gt;ಮೈಸೂರು (ಏ.17): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಉಸಿರು ಬಿಗಿಹಿಡಿಯುವಂತಹ ಘಟನೆಯೊಂದು ನಡೆದಿದೆ. ಸಿದ್ದಾರ್ಥ ಬಡಾವಣೆಯ ಸುರೇಶ್ ಎಂಬುವವರ ಮನೆಯೊಳಗೆ ನುಗ್ಗಿದ್ದ ಚಿರತೆ, ಸುಮಾರು ಎರಡೂವರೆ ಗಂಟೆಗಳ ಕಾಲ ಅಕ್ಷರಶಃ ಮನೆಯವರ ಜೊತೆಯಲ್ಲೇ ಕಾಲ ಕಳೆದಿದೆ! ಅಚ್ಚರಿಯೆಂದರೆ, ಈ ಎರಡೂವರೆ ಗಂಟೆಗಳ ಕಾಲ ಚಿರತೆ ಮನುಷ್ಯರ ಜೊತೆಗಿದ್ದರೂ ಯಾರಿಗೂ ಕಿಂಚಿತ್ತೂ ತೊಂದರೆ ನೀಡದೆ ಶಾಂತವಾಗಿ ಮಲಗಿದ್ದು ಈಗ ಪವಾಡದಂತೆ ಭಾಸವಾಗುತ್ತಿದೆ. ಇನ್ನು ಸಾವಿನ ಮನೆ ಕದ ತಟ್ಟಿಬಂದಂತಾಗಿದೆ.&lt;/p&gt;&lt;img&gt;&lt;p&gt;ಈ ಘಟನೆಯ ಅತ್ಯಂತ ರೋಚಕ ಮತ್ತು ಭಯಾನಕ ಕ್ಷಣವೆಂದರೆ ಅದು ಮನೆಯ ವೃದ್ಧೆ ಶೈಲಜಾ ಅವರ ಕೊಠಡಿಯಲ್ಲಿದ್ದ ದೃಶ್ಯ. 90 ವರ್ಷದ ವಯಸ್ಸಾದ ವೃದ್ಧೆ ಶೈಲಜಾ ಅವರು ಹಾಸಿಗೆ ಹಿಡಿದಿದ್ದು, ಅವರಿಗೆ ನಡೆದಾಡಲು ಸಾಧ್ಯವಿಲ್ಲ. ಚಿರತೆ ಮನೆಯೊಳಗೆ ನುಗ್ಗಿದಾಗ ನೇರವಾಗಿ ಈ ಅಜ್ಜಿಯ ರೂಮಿಗೆ ಹೋಗಿ ಮಂಚದ ಕೆಳಗೆ ಮಲಗಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಅಜ್ಜಿ ಮಂಚದ ಮೇಲೆ ಮಲಗಿದ್ದರೆ, ಮಂಚದ ಕೆಳಗೆ ಕ್ರೂರ ಮೃಗ ಚಿರತೆ ಮೌನವಾಗಿ ಕುಳಿತಿತ್ತು.&lt;/p&gt;&lt;img&gt;&lt;p&gt;ಮನೆ ಮಾಲೀಕ ಸುರೇಶ್ ಅವರ ಪತ್ನಿ ಸುಜಾತ ಮತ್ತು ಕೆಲಸದ ಮಹಿಳೆ ಅದೇ ಕೊಠಡಿಗೆ ಬಂದು ಅಜ್ಜಿಗೆ ಔಷಧಿ ಹಚ್ಚಿದ್ದಾರೆ, ಆರೈಕೆ ಮಾಡಿದ್ದಾರೆ. ಆದರೆ ಅಚ್ಚರಿಯೆಂದರೆ ಅವರಿಬ್ಬರಿಗೂ ಮಂಚದ ಕೆಳಗೆ ಚಿರತೆ ಇರುವುದು ಗೊತ್ತೇ ಆಗಿಲ್ಲ! ಅಷ್ಟರಮಟ್ಟಿಗೆ ಆ ಚಿರತೆ ಅಂದು ಸೌಮ್ಯವಾಗಿ ವರ್ತಿಸಿತ್ತು. ಬಳಿಕ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮಂಚದ ಕೆಳಗೆ ನೋಡಿದಾಗ ಬೆಳ್ಳಂಬೆಳ್ಳಗೆ ಚಿರತೆ ಕಂಡಿದೆ. ತಕ್ಷಣವೇ ಅವರೆಲ್ಲರೂ ಭಯದಿಂದ ನಡುಗಿದರೂ, ಧೈರ್ಯ ತಂದುಕೊಂಡು ಅಜ್ಜಿಯನ್ನು ಹೊರಕ್ಕೆ ಎತ್ತಿಕೊಂಡು ಬಂದು ರೂಮಿನ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;&lsquo;ಬೆಳಗ್ಗೆ ನಮ್ಮ ರಸ್ತೆಯಲ್ಲಿ ಚಿರತೆ ಓಡಾಡುತ್ತಿದೆ ಎಂದು ಅರಣ್ಯ ಇಲಾಖೆಯವರು ಎಚ್ಚರಿಕೆ ನೀಡಿದ್ದರು. ನಾವು ಮನೆ ಬಾಗಿಲು ಹಾಕಿಕೊಂಡೇ ಇದ್ದೆವು. ಆದರೆ ಕೇವಲ 5 ರಿಂದ 10 ನಿಮಿಷ ಮಾತ್ರ ಮೇನ್ ಡೋರ್ ತೆರೆದಿದ್ದೆವು. ಆ ಸಮಯದಲ್ಲಿ ಅದು ಯಾರಿಗೂ ಕಾಣದಂತೆ ನುಗ್ಗಿ ರೂಮಿನ ಒಳಗೆ ಕುಳಿತಿದೆ. ದೇವರ ದಯೆಯಿಂದ ನಮ್ಮ ಪ್ರಾಣ ಉಳಿದಿದೆ&rsquo; ಎಂದು ಸುಜಾತ ಆತಂಕದಿಂದಲೇ ಹೇಳಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಿರತೆ ಕಾರ್ಯಪಡೆ (Leopard Task Force), ಎಸಿಎಫ್ ರವೀಂದ್ರ ಮತ್ತು ಮೃಗಾಲಯದ ಪಶುವೈದ್ಯಾಧಿಕಾರಿ ಡಾ. ಶಶಿಕುಮಾರ್ ಅವರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿದರು. ಚಿರತೆಗೆ ಎರಡು ಬಾರಿ ಅರವಳಿಕೆ ಮದ್ದು ನೀಡುವ ಮೂಲಕ ಅದನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು. ಸುಮಾರು ಎರಡೂವರೆ ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಸದ್ಯ ಅದನ್ನು ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.&lt;/p&gt;&lt;img&gt;&lt;p&gt;ಈ ಇಡೀ ಘಟನೆಯು ಮೈಸೂರು ಜನತೆಯಲ್ಲಿ ಒಂದು ಕಡೆ ಆತಂಕ ಮೂಡಿಸಿದ್ದರೆ, ಮತ್ತೊಂದು ಕಡೆ 90 ವರ್ಷದ ವೃದ್ಧೆಯ ಪ್ರಾಣ ಉಳಿದಿದ್ದನ್ನು ಕಂಡು ಜನ &lsquo;ದೈವಬಲ&rsquo; ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಅಜ್ಜಿ ಮತ್ತು ಮಗಳು ಸಾವಿನ ಮನೆಯ ಕದ ತಟ್ಟಿ ವಾಪಸ್ ಜೀವಂತವಾಗಿ ಬಮದಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/mysuru-leopard-operation-successful-siddhartha-layout-brave-family-90-year-old-grandmother-safe-sat-ntgcrll"/>
        </item>
        <item>
            <title><![CDATA[ಕೆ.ಆರ್. ನಗರ ಉರುಸ್ ಸಂಭ್ರಮದ ನಡುವೆ ಕಾವೇರಿ ನದಿಯಲ್ಲಿ ದುರಂತ; ಒಂದೇ ಕುಟುಂಬದ ಆರು ಮಂದಿ ನೀರುಪಾಲು!]]></title>
            <link>https://kannada.asianetnews.com/karnataka-districts/mysuru-kr-nagar-kaveri-river-drowning-six-dead-arkeshwara-temple-urus-tragedy-sat/articleshow-po0zu9u</link>
            <guid isPermaLink="true">https://kannada.asianetnews.com/karnataka-districts/mysuru-kr-nagar-kaveri-river-drowning-six-dead-arkeshwara-temple-urus-tragedy-sat/articleshow-po0zu9u</guid>
            <pubDate>Sun, 19 Apr 2026 20:17:02 +0530</pubDate>
            <description><![CDATA[ಮೈಸೂರಿನ ಕೆ.ಆರ್. ನಗರದಲ್ಲಿ ನಡೆದ ಹಜರತ್ ಖಾದರ್ ಲಿಂಗವಲ್ಲಿ ಉರುಸ್ ಆಚರಣೆಗೆ ಬಂದಿದ್ದ ಒಂದೇ ಕುಟುಂಬದ ಆರು ಮಂದಿ ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpk36r84c0n7ym17cckryty9,imgname-kr-nagar-6-death-1776609878275.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.19): ಸಂ&lt;/strong&gt;ಭ್ರಮದ ಉರುಸ್ ಆಚರಣೆಗೆ ಬಂದಿದ್ದ ಕುಟುಂಬಗಳಲ್ಲಿ ಈಗ ನೀರವ ಮೌನ ಆವರಿಸಿದೆ. ಮೈಸೂರು ಜಿಲ್ಲೆಯ ಕೃಷ್ಣರಾಜನಗರ (ಕೆ.ಆರ್. ನಗರ) ತಾಲೂಕಿನಲ್ಲಿ ಇಂದು ಭೀಕರ ದುರಂತವೊಂದು ಸಂಭವಿಸಿದ್ದು, ಕಾವೇರಿ ನದಿಯಲ್ಲಿ ಈಜಲು ಹೋದ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹಜರತ್ ಖಾದರ್ ಲಿಂಗವಲ್ಲಿ ಉರುಸ್ ವೀಕ್ಷಿಸಲು ಬಂದಿದ್ದ ಸಂಬಂಧಿಕರು ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆ ಹಿನ್ನೆಲೆ:&lt;/strong&gt;&lt;/h2&gt;&lt;p&gt;ಕೆ.ಆರ್. ನಗರ ಪಟ್ಟಣದ ಹೊರವಲಯದ ಹಳೆ ಎಡತೊರೆ ಅಥವಾ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಈ ದುರ್ಘಟನೆ ನಡೆದಿದೆ. ಇಲ್ಲಿ ನಡೆಯುತ್ತಿದ್ದ ಹಜರತ್ ಖಾದರ್ ಲಿಂಗವಲ್ಲಿ ಉರುಸ್ ಅನ್ನು ವೀಕ್ಷಿಸಲು ಬೆಂಗಳೂರು, ಮೈಸೂರು ಮತ್ತು ತಮಿಳುನಾಡಿನ ಊಟಿಯಿಂದ ಸಂಬಂಧಿಕರು ಆಗಮಿಸಿದ್ದರು. ಇಂದು ಮಧ್ಯಾಹ್ನ ಸುಮಾರು ಎಂಟು ಮಂದಿ ದೇವಸ್ಥಾನದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಈಜಲು ಮತ್ತು ಆಟವಾಡಲು ಇಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಒಬ್ಬರು ಮುಳುಗಲಾರಂಭಿಸಿದ್ದು, ಅವರನ್ನು ರಕ್ಷಿಸಲು ಹೋದ ಉಳಿದವರು ಕೂಡ ಒಬ್ಬೊಬ್ಬರಾಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಮೃತರ ವಿವರ:&lt;/strong&gt;&lt;/h2&gt;&lt;p&gt;ಮೃತಪಟ್ಟ ಆರು ಮಂದಿಯೂ ಹತ್ತಿರದ ಸಂಬಂಧಿಕರಾಗಿದ್ದಾರೆ. ಮೃತರ ಹೆಸರು ಮತ್ತು ವಿಳಾಸ ಈ ಕೆಳಗಿನಂತಿದೆ:&lt;/p&gt;&lt;p&gt;&lt;strong&gt;ಫಾತಿಮಾ (42):&lt;/strong&gt; ಇಸ್ಮಾಯಿಲ್ ಅವರ ಪತ್ನಿ, ಮೂಲತಃ ಮೈಸೂರಿನ ಉದಯಗಿರಿಯವರು, ಪ್ರಸ್ತುತ ಊಟಿಯಲ್ಲಿ ವಾಸವಾಗಿದ್ದರು.&lt;/p&gt;&lt;p&gt;&lt;strong&gt;ಮಹಮ್ಮದ್ ಯಾಸೀನ್ (23):&lt;/strong&gt; ಬೆಂಗಳೂರಿನ ಎಸ್ ಬಿ ಆರ್ ಲೇಔಟ್ ನಿವಾಸಿ, ಆಟೋ ಚಾಲಕ.&lt;/p&gt;&lt;p&gt;&lt;strong&gt;ನೇಹಾ ಕೌಸರ್ (19):&lt;/strong&gt; ಮಹಮ್ಮದ್ ಯಾಸೀನ್ ಅವರ ಪತ್ನಿ, ಬೆಂಗಳೂರು.&lt;/p&gt;&lt;p&gt;&lt;strong&gt;ಎಮ್ಮೆ ಐಮಾನ್ (13): &lt;/strong&gt;ಆರೀಫ್ ಅವರ ಮಗಳು, ಕಾಡಗೌಡನಹಳ್ಳಿ, ಬೆಂಗಳೂರು.&lt;/p&gt;&lt;p&gt;&lt;strong&gt;ಅಫೀಫ್ ಅಹಮದ್ (13):&lt;/strong&gt; ರಿಯಾಜ್ ಪಾಷಾ ಅವರ ಮಗ, 7ನೇ ತರಗತಿ ವಿದ್ಯಾರ್ಥಿ, ಕೆ.ಆರ್. ನಗರ.&lt;/p&gt;&lt;p&gt;&lt;strong&gt;ಉಜೇರ್ (5):&lt;/strong&gt; ಸಾಧಿಕ್ ಅವರ ಮಗ, ಉದಯಗಿರಿ, ಮೈಸೂರು.&lt;/p&gt;&lt;h3&gt;&lt;strong&gt;ಪೊಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆ:&lt;/strong&gt;&lt;/h3&gt;&lt;p&gt;ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಲ್ಲಿಕಾರ್ಜುನ ಬಾಲದಂಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, &quot;ಎಂಟು ಮಂದಿ ಈಜಲು ನದಿಗೆ ಇಳಿದಿದ್ದರು. ಈ ವೇಳೆ ಆರು ಮಂದಿ ಮೃತಪಟ್ಟಿದ್ದು, ಇಬ್ಬರನ್ನು ಸ್ಥಳೀಯರು ಸಮಯಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನದಿಯ ದಂಡೆಗಳಲ್ಲಿ ಎಚ್ಚರಿಕೆ ಫಲಕ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೂವರ ಸ್ಥಿತಿ ಗಂಭೀರ:&lt;/strong&gt;&lt;/h2&gt;&lt;p&gt;ನದಿಯಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಸಲ್ಮಾ ಬಾನು (50), ಆಸೀಯಾ (20) ಮತ್ತು ಜುಬೇದಾ (40) ಅವರನ್ನು ಕೂಡಲೇ ಮೈಸೂರಿನ ಕೆ.ಆರ್. ಆಸ್ಪತ್ರೆ ಮತ್ತು ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮೃತದೇಹಗಳನ್ನು ಕೆ.ಆರ್. ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪಟ್ಟಣದಲ್ಲಿ ಶೋಕದ ಛಾಯೆ ಆವರಿಸಿದೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mysuru-kr-nagar-kaveri-river-drowning-six-dead-arkeshwara-temple-urus-tragedy-sat/articleshow-po0zu9u"/>
        </item>
        <item>
            <title><![CDATA[Mysuru: ಅವನನ್ನ ಕೊಂದು ಬಿಡು, ಇಬ್ಬರು  ಚೆನ್ನಾಗಿರೋಣ; ಗಂಡನ ಉಸಿರು ನಿಲ್ಲಿಸಿ ಜೈಲು ಸೇರಿದ ಪತ್ನಿ]]></title>
            <link>https://kannada.asianetnews.com/gallery/karnataka-districts/wife-and-lover-kill-husband-who-obstructed-their-illicit-affair-saraguru-mysuru-mrq-tmmihqg</link>
            <guid isPermaLink="true">https://kannada.asianetnews.com/gallery/karnataka-districts/wife-and-lover-kill-husband-who-obstructed-their-illicit-affair-saraguru-mysuru-mrq-tmmihqg</guid>
            <pubDate>Sun, 19 Apr 2026 11:09:18 +0530</pubDate>
            <description><![CDATA[ಮೈಸೂರಿನ ಸರಗೂರು ತಾಲೂಕಿನಲ್ಲಿ ನಡೆದ ಜವರಪ್ಪ ಕೊಲೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದಾರೆ. ಪತ್ನಿ ಅಮೃತಾ ತನ್ನ ಪ್ರಿಯಕರ ಸಿದ್ದೇಶ್ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಹತ್ಯೆಗೈದಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpj3hj7kfz2rwgzekeczx1g1,imgname-mysuru-murder--2--1776576678131.jpg" type="image/jpeg" height="390" width="690"/>
            <content:encoded><![CDATA[ಮೈಸೂರಿನ ಸರಗೂರು ತಾಲೂಕಿನಲ್ಲಿ ನಡೆದ ಜವರಪ್ಪ ಕೊಲೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದಾರೆ. ಪತ್ನಿ ಅಮೃತಾ ತನ್ನ ಪ್ರಿಯಕರ ಸಿದ್ದೇಶ್ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಹತ್ಯೆಗೈದಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.&lt;img&gt;&lt;p&gt;ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನು ಕೊ*ಲೆಗೈದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ಈ ಕೊ*ಲೆ ನಡೆದಿತ್ತು.&lt;/p&gt;&lt;img&gt;&lt;p&gt;ಕುರ್ಣೇಗಾಲದ ನಿವಾಸಿ ಜವರಪ್ಪ ಕೊಲೆಯಾಗಿದ ದುರ್ದೈವಿ. ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32), ಜವರಪ್ಪನ ಪತ್ನಿ ಅಮೃತಾ(26) ಬಂಧಿತ ಆರೋಪಿಗಳು. ಕುರ್ಣೇಗಾಲ ಗ್ರಾಮದ ಹೊರವಲಯದಲ್ಲಿ ಅನುಮಾನಾಸ್ಪದವವಾಗಿ ಜವರಪ್ಪ ಶವ ಪತ್ತೆಯಾಗಿತ್ತು.&lt;/p&gt;&lt;p&gt;&amp;nbsp;ಈ ಸಂಬಂಧ ಅನುಮಾನ ವ್ಯಕ್ತಪಡಿಸಿ ಜವರಪ್ಪ ಅವರ ಸೋದರ ರವಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದರು.&lt;/p&gt;&lt;img&gt;&lt;p&gt;ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ ಎಂಬಾತನೊಂದಿಗೆ ಅಮೃತಾ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರು ಮಕ್ಕಳಿದ್ರೂ ಸಿದ್ದೇಶ್ ಜೊತೆ ಅಮೃತಾ ವಿವಾಹೇತರ ಸಂಬಂಧದಲ್ಲಿದ್ದಳು. ಆದ್ರೆ ಇವರಿಬ್ಬರ ಸಂಬಂಧಕ್ಕೆ ಗಂಡ ಜವರಪ್ಪ ಅಡ್ಡಿಯಾಗಿದ್ದನು. ಇತ್ತೀಚೆಗೆ ಅಮೃತಾ ಮತ್ತು ಜವರಪ್ಪ ನಡುವೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ನಡೆಯುತ್ತಿತ್ತು.&lt;/p&gt;&lt;img&gt;&lt;p&gt;12 ದಿನಗಳ ಹಿಂದೆ ಹಬ್ಬಕ್ಕಾಗಿ ಮಕ್ಕಳೊಂದಿಗೆ ಅಮೃತಾ ತವರು ಸೇರಿದ್ದಳು. ಏಪ್ರಿಲ್ 16ರಂದು ಪತ್ನಿಯ ಊರಿಗೆ ಹೋಗುತ್ತಿರುವ ವಿಷಯವನ್ನು ಸೋದರ ರವಿ ಮುಂದೆ ಜವರಪ್ಪ ಹೇಳಿಕೊಂಡಿದ್ದರು. ಪತ್ನಿ ಊರಿಗೆ ಹೋಗಿದ್ದ ಜವರಪ್ಪ ಅಂದು ಗ್ರಾಮಕ್ಕೆ ಹಿಂದಿರುಗಿ ಬಂದಿರಲಿಲ್ಲ. ಮರುದಿನ ಬೆಳಗ್ಗೆ ಸುಮಾರು 6.30ರ ವೇಳೆಗೆ ಜವರಪ್ಪ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೇಳಿದ್ದೆಲ್ಲವನ್ನೂ ಕೊಡ್ತಿದ್ದ 57ರ ಸರ್ಕಾರಿ ಶಾಲಾ ಶಿಕ್ಷಕಿಯ 27ರ ಹರೆಯದ ಪ್ರೇಮಿ: ಏಕಾಏಕಿ ಸುಟ್ಟು ಹಾಕಿದ್ದೇಕೆ?&lt;/strong&gt;&lt;/p&gt;&lt;img&gt;&lt;p&gt;ಯಾರೋ ಕೊ*ಲೆ ಮಾಡಿದ್ದಾರೆಂದು ಎಂದು ಅನುಮಾನಿಸಿ ರವಿ ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಸರಗೂರು ಠಾಣೆಯ ಪೊಲೀಸರು ತನಿಖೆಗೆ ಮೂರು ತಂಡಗಳನ್ನು ರಚನೆ ಮಾಡಿದ್ದರು. ಈ ವೇಳೆ ಜವರಪ್ಪ ಕೊ*ಲೆಗೆ ಪತ್ನಿಯ ಅಕ್ರಮ ಸಂಬಂಧವೇ ಕಾರಣ ಎಂದು ಗೊತ್ತಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅಮೃತಾಳ ಕುಮ್ಮಕ್ಕಿನಿಂದಲೇ ಸಿದ್ದೇಶ್ ಕೊಲೆ ಮಾಡಿರೋದು ತನಿಖೆಯಲ್ಲಿ ತಿಳಿದು ಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪೊಲೀಸರಿಗೆ ದಾರಿ ತೋರಿದ ಹೆಂಡದ ಬಾಟಲ್​! ಕಗ್ಗಂಟಾಗಿದ್ದ ಕೊ*ಲೆ ಕೇಸ್ ಸಾಲ್ವ್​​: ಸಿಕ್ಕಿಬಿದ್ದ ಪತ್ನಿ&lt;/strong&gt;&lt;/p&gt;]]></content:encoded>
            <category>mysore</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/wife-and-lover-kill-husband-who-obstructed-their-illicit-affair-saraguru-mysuru-mrq-tmmihqg"/>
        </item>
        <item>
            <title><![CDATA[ಕೆ.ಆರ್.ನಗರ ಉರುಸ್‌ಗೆ ಬಂದ 6 ಮಂದಿ ಮುಳುಗಿದ್ದರ ಹಿಂದಿದೆ ಟ್ವಿಸ್ಟ್: ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಣೆ]]></title>
            <link>https://kannada.asianetnews.com/karnataka-districts/mysuru-k-r-nagar-kaveri-river-six-drowning-rs-5-lakh-compensation-cm-siddaramaiah-ravishankar-sat/articleshow-vdl2hal</link>
            <guid isPermaLink="true">https://kannada.asianetnews.com/karnataka-districts/mysuru-k-r-nagar-kaveri-river-six-drowning-rs-5-lakh-compensation-cm-siddaramaiah-ravishankar-sat/articleshow-vdl2hal</guid>
            <pubDate>Sun, 19 Apr 2026 21:51:09 +0530</pubDate>
            <description><![CDATA[&lt;p&gt;ಕೆ.ಆರ್. ನಗರಕ್ಕೆ ಉರುಸ್ ಆಚರಣೆಗೆ ಬಂದಿದ್ದ ವೇಲೆ ಈಜಲು ಹೋದಾಗ ಕಾವೇರಿ ನದಿಯಲ್ಲಿ ಒಂದೇ ಕುಟುಂಬದ ಆರು ಮಂದಿ ಜಲಸಮಾಧಿಯಾಗಿದ್ದಾರೆ. ಆದರೆ, ಒಂದೇ ಕುಟುಂಬದ 6 ಜನರು ಮುಳುವುದಕ್ಕೆ ಕಾರಣವೇನೆಂದು ರಿವೀಲ್ ಆಗಿದೆ. ಇದೀಗ ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpk8m0yfn8m5yqj6wf6nj5tr,imgname-kr-nagar-kaveri-river-tragedy--1--1776615556046.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.19): ಕೆ&lt;/strong&gt;.ಆರ್. ನಗರ ತಾಲೂಕಿನ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಭಾರಿ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಪ್ರತಿಯೊಂದು ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಘೋಷಿಸಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಮಗುವನ್ನು ಉಳಿಸಲು ಹೋಗಿ ಜಲಸಮಾಧಿಯಾದ ಆರು ಜೀವಗಳು!&lt;/strong&gt;&lt;/h3&gt;&lt;p&gt;ಘಟನೆಯ ಬಗ್ಗೆ ಮಾಹಿತಿ ನೀಡಿದ ಕೆ.ಆರ್. ನಗರ ಶಾಸಕ ರವಿಶಂಕರ್, 'ಹಜರತ್ ಖಾದರ್ ಲಿಂಗವಲ್ಲಿ ಉರುಸ್ ಆಚರಣೆಗಾಗಿ ಸಂಬಂಧಿಕರು ಬೆಂಗಳೂರು, ಮೈಸೂರು ಮತ್ತು ಊಟಿಯಿಂದ ಬಂದಿದ್ದರು. ಮಧ್ಯಾಹ್ನ ಅರ್ಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದಾರೆ. ಈ ವೇಳೆ ಸಣ್ಣ ಮಗುವೊಂದು ನೀರಿನಲ್ಲಿ ಮುಳುಗುವುದನ್ನು ಕಂಡು, ಅದನ್ನು ರಕ್ಷಿಸಲು ಹೋದ ಎಂಟು ಮಂದಿ ನೀರಿನ ಆಳ ತಿಳಿಯದೆ ಒಬ್ಬರ ಹಿಂದೆ ಒಬ್ಬರಂತೆ ಮುಳುಗಿದ್ದಾರೆ. ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಉಳಿದ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ' ಎಂದು ಘಟನೆಯ ಕರಾಳತೆಯನ್ನು ವಿವರಿಸಿದರು.&lt;/p&gt;&lt;h2&gt;&lt;strong&gt;ಕಾಮಗಾರಿ ಗುಂಡಿಯೇ ಅನಾಹುತಕ್ಕೆ ಕಾರಣ?&lt;/strong&gt;&lt;/h2&gt;&lt;p&gt;ನದಿಯ ಮಧ್ಯಭಾಗದಲ್ಲಿ ಕಾಮಗಾರಿಗಾಗಿ ಗುಂಡಿಗಳನ್ನು ತೆಗೆಯಲಾಗಿತ್ತು. ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದರಿಂದ ಅವರು ಅತ್ತ ಸುಳಿಯುವುದಿಲ್ಲ. ಆದರೆ ಹೊರಗಿನಿಂದ ಬಂದ ಪ್ರವಾಸಿಗರಿಗೆ ಈ ಬಗ್ಗೆ ಅರಿವಿಲ್ಲದೆ ಗುಂಡಿಯತ್ತ ಹೋದ ಕಾರಣ ಈ ಅಚಾತುರ್ಯ ಸಂಭವಿಸಿದೆ ಎಂದು ಶಾಸಕರು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ ಶಾಸಕರು, ತಕ್ಷಣವೇ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಶಾಸಕ ರವಿಶಂಕರ್ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಪ್ರತಿಯೊಬ್ಬ ಮೃತರ ಕುಟುಂಬಕ್ಕೆ 50 ಸಾವಿರ ರೂಪಾಯಿಗಳ ನೆರವು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಕಣ್ಣೀರಿನ ಮಡುವಿನಲ್ಲಿ ಮೃತದೇಹಗಳ ಹಸ್ತಾಂತರ&lt;/strong&gt;&lt;/h2&gt;&lt;p&gt;ಕೆ.ಆರ್. ನಗರ ತಾಲೂಕು ಆಸ್ಪತ್ರೆಯಲ್ಲಿ ಆರು ಮಂದಿಯ ಮರಣೋತ್ತರ ಪರೀಕ್ಷೆ ಇಂದು ಯಶಸ್ವಿಯಾಗಿ ಪೂರ್ಣಗೊಂಡಿತು. ಪರೀಕ್ಷೆಯ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸುವಾಗ ಆಸ್ಪತ್ರೆಯ ಆವರಣದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಸಕ ರವಿಶಂಕರ್ ಅವರು ಮೃತದೇಹಗಳಿಗೆ ಹೂವಿನ ಹಾರ ಹಾಕಿ ಅಂತಿಮ ನಮನ ಸಲ್ಲಿಸಿ, ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು.&lt;/p&gt;&lt;h2&gt;&lt;strong&gt;ಮೃತರ ವಿವರಗಳು:&lt;/strong&gt;&lt;/h2&gt;&lt;ol&gt; &lt;li&gt;ಫಾತಿಮಾ (42): ಊಟಿ, ತಮಿಳುನಾಡು.&lt;/li&gt; &lt;li&gt;ಮಹಮ್ಮದ್ ಯಾಸೀನ್ (23): ಬೆಂಗಳೂರು.&lt;/li&gt; &lt;li&gt;ನೇಹಾ ಕೌಸರ್ (19): ಬೆಂಗಳೂರು.&lt;/li&gt; &lt;li&gt;ಉಜೇರ್ (5): ಮೈಸೂರು.&lt;/li&gt; &lt;li&gt;ಎಮ್ಮೆ ಐಮಾನ್ (13): ಬೆಂಗಳೂರು.&lt;/li&gt; &lt;li&gt;ಅಫೀಫ್ ಅಹಮದ್ (13): ಕೆ.ಆರ್. ನಗರ.&lt;/li&gt;&lt;/ol&gt;&lt;p&gt;ಮೈಸೂರಿನ ಕೆ.ಆರ್. ಆಸ್ಪತ್ರೆ ಮತ್ತು ಜಯದೇವ ಆಸ್ಪತ್ರೆಯಲ್ಲಿ ಅಸ್ವಸ್ಥಗೊಂಡು ದಾಖಲಾಗಿರುವ ಮೂವರು ಮಹಿಳೆಯರಿಗೆ ಉಚಿತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ನದಿ ತೀರದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mysuru-k-r-nagar-kaveri-river-six-drowning-rs-5-lakh-compensation-cm-siddaramaiah-ravishankar-sat/articleshow-vdl2hal"/>
        </item>
        <item>
            <title><![CDATA[ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲ ಅಂತ ಫಸ್ಟ್ ಕ್ಲಾಸಲ್ಲಿ ಪಾಸಾದ ಬಾಲಕಿ ಸಾವಿಗೆ ಶರಣು: ಚಿತ್ರದುರ್ಗದಲ್ಲೇ ಫೇಲಾಗಿದ್ದಕ್ಕೆ ಬಾಲಕ ಸಾವು]]></title>
            <link>https://kannada.asianetnews.com/state/sslc-student-died-after-failing-to-get-expected-marks-despite-passing-first-class/articleshow-zpg85if</link>
            <guid isPermaLink="true">https://kannada.asianetnews.com/state/sslc-student-died-after-failing-to-get-expected-marks-despite-passing-first-class/articleshow-zpg85if</guid>
            <pubDate>Thu, 23 Apr 2026 18:47:56 +0530</pubDate>
            <description><![CDATA[&lt;p&gt;ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದ ಕಾರಣಕ್ಕೆ ಮೈಸೂರಿನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿನಿ ಹಾಗೂ ಚಿತ್ರದುರ್ಗದಲ್ಲಿ ಒಂದು ಅಂಕದಿಂದ ಫೇಲಾದ ವಿದ್ಯಾರ್ಥಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpx79kex7271e8ctgkjwwny0,imgname-student-suicide-1776949710301.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮೈಸೂರಲ್ಲಿ ಫಸ್ಟ್ ಕ್ಲಾಸಲ್ಲಿ ಪಾಸಾದ್ರೂ ಬಾಲಕಿ ಸಾವಿಗೆ ಶರಣು&lt;/strong&gt;&lt;/h2&gt;&lt;p&gt;ಮೈಸೂರು: ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ನಿರೀಕ್ಷೆ ಮಾಡಿದಷ್ಟು ಅಂಕ ಬಂದಿಲ್ಲ ಅಂತ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾದಂತಹ ಬೇಸರದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರಿನ ನಂಜನಗೂಡು ನಗರದಲ್ಲಿರುವ ಶ್ರೀ ಗುರುಮಲ್ಲೇಶ್ವರ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ16 ವರ್ಷದ ತ್ರಿಶಾಲ ಸಾವಿಗೆ ಶರಣಾದ ವಿದ್ಯಾರ್ಥಿನಿ. ತ್ರಿಶಾಲಾಗೆ ಎಸ್&zwnj;ಎಸ್&zwnj;ಎಲ್&zwnj;ಸಿಯಲ್ಲಿ ನಿರೀಕ್ಷೆ ಮಾಡಿದಷ್ಟು ಅಂಕ ಬಾರದೇ ಹೋದರೂ ಕೂಡ ಆಕೆ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಳು. ಆದರೆ ಹೆಚ್ಚು ಅಂಕ ಬರಲಿಲ್ಲವೆಂದು ದುಡುಕಿದ ಬಾಲಕಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾಳೆ.&lt;/p&gt;&lt;p&gt;ತ್ರಿಶಾಲಾ ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಮಂಜು ಹಾಗೂ ಸವಿತಾ ದಂಪತಿಯ ಪುತ್ರಿಯಾಗಿದ್ದು, ಒಟ್ಟು 440 ಅಂಕಗಳನ್ನು ಗಳಿಸಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಳು. ಆದರೆ ಬಾಲಕಿ ಡಿಸ್ಟಿಂಕ್ಷನ್&zwnj;ನಲ್ಲಿ ಪಾಸಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಳು. ಆದರೆ ಕೇವಲ ಫಸ್ಟ್&zwnj;ಕ್ಲಾಸ್ ಮಾರ್ಕ್&zwnj; ಅಷ್ಟೇ ಬಂದಿದೆ ಎಂದು ಆಕೆ ಸಾವಿಗೆ ಶರಣಾಗಿದ್ದಾಳೆ. ಪರೀಕ್ಷೆಯನ್ನು ಡಿಸ್ಟಿಂಕ್ಷನ್ ಬರುವ ಮಟ್ಟಕ್ಕೆ ಬರೆದಿದ್ದೇನೆ ಎಂದು ಹೇಳಿದ್ದಳು. ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಆಕೆ ಸಾವಿಗೆ ಶರಣಾಗಿದ್ದಾಳೆ.&lt;/p&gt;&lt;p&gt;&lt;strong&gt;ಚಿತ್ರದುರ್ಗದಲ್ಲಿ ಬಾಲಕ ಸಾವು&lt;/strong&gt;&lt;/p&gt;&lt;p&gt;ಮತ್ತೊಂದೆಡೆ ಚಿತ್ರದುರ್ಗದಲ್ಲಿ ಎಸ್&zwnj;ಎಸ್&zwnj;ಎಲ್&zwnj; ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ವಿದ್ಯಾರ್ಥಿ ಸಾವಿಗೆ ಶರಣಾದಂತಹ ದುಃಖದ ಘಟನೆ ನಡೆದಿದೆ. ಚಿತ್ರದುರ್ಗದ ಹೊರಪೇಟೆಯಲ್ಲಿ ವಾಸವಾಗಿರುವ ಬಾಲಕ ಅಯಾನ್ ಬೇಗ್&zwnj; ಮನೆಯಲ್ಲಿಯೇ ಸಾವಿಗೆ ಶರಣಾಗಿದ್ದಾನೆ. ಚಿತ್ರದುರ್ಗ ನಗರದ ಹೊರಪೇಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬಾಲಕ ಆಯಾನ್ ಇಲ್ಲಿನ ಡಾನ್ ಬೊಸ್ಕೊ ಶಾಲೆಯಲ್ಲಿ ಓದುತ್ತಿದ್ದ. ಆದರೆ ಕೇವಲ ಒಂದೇ ಒಂದು ಅಂಕದಿಂದ ಕನ್ನಡದಲ್ಲಿ ಬಾಲಕ ಫೇಲ್ ಆಗಿದ್ದ ಇದರಿಂದ ನೊಂದು ಬಾಲಕ ಸಾವಿಗೆ ಶರಣಾಗಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಸಾಲಬಾಧೆ: ಮುದ್ದಿನ ಶ್ವಾನಕ್ಕೆ ವಿಷನೀಡಿ ತಾನು ಸಾವಿಗೆ ಶರಣಾದ 33 ವರ್ಷದ ಪ್ರಾಪರ್ಟಿ ಡೀಲರ್&lt;/p&gt;&lt;p&gt;&lt;strong&gt;ಮಕ್ಕಳೇ ಪರೀಕ್ಷೆಯ ಜೀವನವಲ್ಲ: ಸಾವಿಗೆ ಶರಣಾಗದಿರಿ&lt;/strong&gt;&lt;/p&gt;&lt;p&gt;ಕೇವಲ ಪರೀಕ್ಷೆ ಫೇಲಾದವೆಂದು ಮಕ್ಕಳು ಸಾವಿನ ದಾರಿ ಹಿಡಿಯುತ್ತಿರುವುದು ಬೇಸರ ಮೂಡಿಸಿದೆ. ಪರೀಕ್ಷೆ ಜೀವನದ ಒಂದು ಭಾಗವಷ್ಟೇ ಪರೀಕ್ಷೆಯೇ ಜೀವನವಲ್ಲ, ಹಿಂದೆ ಪರೀಕ್ಷೆಯಲ್ಲಿ ಫೇಲಾದ ಅನೇಕರು ಜೀವನದಲ್ಲಿ ಮುಂದೆ ಯಶಸ್ವಿ ವ್ಯಕ್ತಿಗಳಾದ ಹಲವು ನಿದರ್ಶನಗಳಿವೆ. ಹೀಗಾಗಿ ಮಕ್ಕಳೇ ಪರೀಕ್ಷೆಯಲ್ಲಿ ಫೇಲಾಗಿದ್ದೇನೆ, ಕಡಿಮೆ ಅಂಕ ಬಂದಿದೆ ಎಂದು ಸಾವಿಗೆ ಶರಣಾಗದಿರಿ. ನಿಮ್ಮನ್ನು ನಂಬಿ ಬದುಕುವ, ಪೋಷಕರಿಗೆ ನೀವೇ ಪ್ರಪಂಚ. ಅವರನ್ನು ಜೀವನಪೂರ್ತಿ ಕೊರಗುವಂತೆ ಮಾಡದಿರಿ. ಪೋಷಕರು ಅಷ್ಟೇ ಕಡಿಮೆ ಅಂಕ ಬಂತು ಅಥವಾ ಫೇಲಾದರು ಅಂತ ಮಕ್ಕಳಿಗೆ ಹೀಯಾಳಿಸದಿರಿ, ಬೇರೆಯವರೊಂದಿಗೆ ಹೋಲಿಕೆ ಮಾಡದಿರಿ. ಡಿಸ್ಟಿಂಕ್ಷನ್&zwnj;ನಲ್ಲಿ ಪಾಸಾದವರೆಲ್ಲ ಜೀವನದಲ್ಲಿ ಯಶಸ್ವಿಯಾಗಿಲ್ಲ. ಹಾಗೆಯೇ ಫೇಲಾದವರೆಲ್ಲಾ ಬದುಕಿನಲ್ಲಿ ಫೇಲಾಗಿಲ್ಲ, ಮಕ್ಕಳಿಗೆ ಧೈರ್ಯ ಹೇಳಿ&hellip;&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 2ನೇ ಮದುವೆಗೂ ನನಗೆ 'ಕನ್ಯೆ'ಯೇ ಬೇಕು ಎಂದ ವಿಚ್ಛೇದಿತ ಐಐಟಿ ಪದವೀಧರನ ಬೇಡಿಕೆಗೆ ಮ್ಯಾಚ್&zwnj; ಮೇಕರ್ ಗರಂ&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Anusha Kb</dc:creator>
            <atom:link href="https://kannada.asianetnews.com/state/sslc-student-died-after-failing-to-get-expected-marks-despite-passing-first-class/articleshow-zpg85if"/>
        </item>
    </channel>
</rss>
