<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 26 Jun 2026 18:55:17 +0530</lastBuildDate>
        <atom:link href="https://kannada.asianetnews.com/rss/mysore" rel="self" type="application/rss+xml"/>
        <item>
            <title><![CDATA[Mysuru: ಅಕ್ರಮ ಬಾಂಗ್ಲರೆಂದು ಪ್ರಯಾಣಿಕರನ್ನು ಪರಿಶೀಲಿಸಿದ  6 ಮಂದಿ ವಿರುದ್ಧ ಕೇಸ್‌]]></title>
            <link>https://kannada.asianetnews.com/karnataka-districts/mysuru-case-filed-against-hindu-jagarana-vedike-s-6-people-who-checked-passengers-for-illegal-bengalis-mrq/articleshow-0ilhrs2</link>
            <guid isPermaLink="true">https://kannada.asianetnews.com/karnataka-districts/mysuru-case-filed-against-hindu-jagarana-vedike-s-6-people-who-checked-passengers-for-illegal-bengalis-mrq/articleshow-0ilhrs2</guid>
            <pubDate>Mon, 22 Jun 2026 06:41:02 +0530</pubDate>
            <description><![CDATA[ಮೈಸೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಶಂಕೆಯ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೈಲು ಪ್ರಯಾಣಿಕರನ್ನು ತಡೆದು ಪರಿಶೀಲಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ, ಪ್ರಯಾಣಿಕರು ಅಕ್ರಮ ವಲಸಿಗರಲ್ಲ ಎಂದು ಖಚಿತಪಡಿಸಿದ ನಂತರ, ಪರಿಶೀಲನೆ ನಡೆಸಿದ 6 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvpdwcq050n4099dh4tetyfv,imgname-mysuru-1782090445536.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಅಕ್ರಮವಾಗಿ ಬಾಂಗ್ಲಾ ವಲಸಿಗರು ಮೈಸೂರಿಗೆ ಬಂದಿದ್ದಾರೆ ಎಂದು ಆರೋಪಿಸಿ ರೈಲು ಪ್ರಯಾಣಿಕರ ಬ್ಯಾಗ್&zwnj; ಹಾಗೂ ದಾಖಲೆ ಪರಿಶೀಲಿಸಿದ ಹಿಂದೂ ಜಾಗರಣ ವೇದಿಕೆಯ 6 ಕಾರ್ಯಕರ್ತರ ವಿರುದ್ಧ ಮೈಸೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.&lt;/p&gt;&lt;h2&gt;&lt;strong&gt;ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಿಂದ ಪರಿಶೀಲನೆ&lt;/strong&gt;&lt;/h2&gt;&lt;p&gt;ಪಶ್ಚಿಮ ಬಂಗಾಳದಿಂದ ಔರಾ ಎಕ್ಸ್&zwnj;ಪ್ರೆಸ್&zwnj; ರೈಲು ಭಾನುವಾರ ಬೆಳಗ್ಗೆ ಮೈಸೂರಿಗೆ ತಲುಪಿತು. ಅದರಲ್ಲಿದ್ದ 36 ಪ್ರಯಾಣಿಕರನ್ನು ರೈಲ್ವೆ ಪ್ರವೇಶ ದ್ವಾರದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಅಡ್ಡಗಟ್ಟಿ ವಿಚಾರಿಸಿದರು. ಈ ರೈಲಿನ 3 ಬೋಗಿಯಲ್ಲಿ 150 ಹೆಚ್ಚು ಮಂದಿ ಬಾಂಗ್ಲಾ ವಲಸಿಗರು ಅಕ್ರಮವಾಗಿ ಬಂದಿದ್ದಾರೆ ಎಂಬ ಮಾಹಿತಿ ಇದೆ ಎಂದು ತಿಳಿಸಿ, ಅವರ ದಾಖಲೆ ಹಾಗೂ ಬ್ಯಾಗ್&zwnj; ಪರಿಶೀಲಿಸಿದರು.&amp;nbsp;&lt;/p&gt;&lt;h3&gt;&lt;strong&gt;6 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು&lt;/strong&gt;&lt;/h3&gt;&lt;p&gt;ಪೊಲೀಸರು ಬಂದು 36 ಮಂದಿ ಶಂಕಿತ ಪ್ರಯಾಣಿಕರ ದಾಖಲಾತಿ ಪರಿಶೀಲಿಸಿ, ಅವರೆಲ್ಲಾ ಬಾಂಗ್ಲಾದೇಶದರಲ್ಲ ಎಂದು ಖಚಿತ ಪಡಿಸಿ ಕಳುಹಿಸಿದರು. ಪ್ರಯಾಣಿಕರನ್ನು ಪರಿಶೀಲಿಸಿದ ಹಿಂದೂ ಜಾಗರಣ ವೇದಿಕೆಯ 6 ಕಾರ್ಯಕರ್ತರ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.&lt;/p&gt;&lt;p&gt;ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪ್ರತಿ ಭಾನುವಾರ ಪಶ್ಚಿಮ ಬಂಗಾಳದಿಂದ ಬಾಂಗ್ಲಾ ವಲಸಿಗರು ಆಗಮಿಸಿ ಗೌಸಿಯನಗರ, ಪಿರಿಯಾಪಟ್ಟಣ, ಕೊಡಗು ಭಾಗಕ್ಕೆ ತೆರಳುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮ ವಲಸಿಗರು ಮೈಸೂರಿಗೆ ಬರುತ್ತಿದ್ದಾರೆ ಎಂದು ದೂರಿದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mysuru-case-filed-against-hindu-jagarana-vedike-s-6-people-who-checked-passengers-for-illegal-bengalis-mrq/articleshow-0ilhrs2"/>
        </item>
        <item>
            <title><![CDATA[Nanjanagudu turtle rescue: ಜೆಸಿಬಿಯಿಂದ ಒಡೆದಿದ್ದ ಆಮೆಯ ಚಿಪ್ಪು; ವೈದ್ಯರು ಕೈಚೆಲ್ಲಿದಾಗ ಎಂ-ಸೀಲ್ ಹಾಕಿ  ಜೀವ ಉಳಿಸಿದ ಯುವಕರು!]]></title>
            <link>https://kannada.asianetnews.com/karnataka-districts/nanjangud-youths-revive-broken-turtle-s-shell-using-m-sil-rav/articleshow-15lsh3d</link>
            <guid isPermaLink="true">https://kannada.asianetnews.com/karnataka-districts/nanjangud-youths-revive-broken-turtle-s-shell-using-m-sil-rav/articleshow-15lsh3d</guid>
            <pubDate>Wed, 17 Jun 2026 06:05:07 +0530</pubDate>
            <description><![CDATA[ನಂಜನಗೂಡಿನಲ್ಲಿ ಜೆಸಿಬಿಯಿಂದ ಗಾಯಗೊಂಡು ಚಿಪ್ಪು ಒಡೆದಿದ್ದ ಆಮೆಯೊಂದನ್ನು ಯುವಕರು ರಕ್ಷಿಸಿದ್ದಾರೆ. ಪಶುವೈದ್ಯರು ಕೈಚೆಲ್ಲಿದಾಗ, ಯುವಕರೇ ಎಂ-ಸೀಲ್ ಮತ್ತು ತಂತಿ ಬಳಸಿ ಚಿಪ್ಪನ್ನು ದುರಸ್ತಿ ಮಾಡಿ, ಆರೈಕೆ ಮಾಡಿ ಕಪಿಲಾ ನದಿಗೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv9fq8veghbnj3hr7wwm8rd2,imgname-----------------------2026-06-17t054346.849-1781656167278.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಂಜನಗೂಡು (ಜೂ.17): &lt;/strong&gt;ಜಮೀನೊಂದರ ಕಾಲುವೆಯ ಕಾಮಗಾರಿ ವೇಳೆ ಜೆಸಿಬಿಯ ಕಬ್ಬಿಣದ ಬಕೆಟ್ ಹಲ್ಲುಗಳಿಗೆ ಆಮೆಯೊಂದು ಸಿಲುಕಿ ಅದರ ಮೇಲ್ಭಾಗದ ಕವಚ ಸಂಪೂರ್ಣವಾಗಿ ಒಡೆದು ಚೂರುಚೂರಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆಮೆಯನ್ನು ಯುವಕರು ಎಂ.ಸೀಲ್&zwnj; ಹಾಕಿ, ಚಿಕಿತ್ಸೆ ನೀಡಿ ಮತ್ತೆ ಪ್ರಕೃತಿಯ ಮಡಿಲಿಗೆ ಸೇರಿಸಿದ್ದಾರೆ.ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಲ್ಲಿಪುರ ಗ್ರಾಮದ ಬಳಿ ಕಳೆದ ವಾರ ಆಮೆಯ ಕವಚ ಚೂರಾಗಿತ್ತು. ಇದನ್ನು ಗಮನಿಸಿದ ಯುವ ಬ್ರಿಗೇಡ್&zwnj;ನ ರವಿಶಾಸ್ತ್ರಿ, ಸ್ನೇಹಿತ ಚಂದ್ರಶೇಖರ್&zwnj; ನೆರವು ಕೋರಿದರು.&lt;/p&gt;&lt;p&gt;ಆಮೆಯನ್ನು ನಂಜನಗೂಡಿಗೆ ತಂದು, ಪಶುವೈದ್ಯರನ್ನು ಸಂಪರ್ಕಿಸಿದಾಗ ಅವರು ಕೈಚೆಲ್ಲಿದರು. ಪ್ರಯತ್ನ ಮಾಡೋಣ ಎಂದು ಚಂದ್ರಶೇಖರ್, ಒಡೆದಿದ್ದ ಕವಚದ ಎರಡೂ ಬದಿಗಳಲ್ಲಿ ಸಣ್ಣ ಡ್ರಿಲ್ಲಿಂಗ್ ಯಂತ್ರದ ಮೂಲಕ ರಂಧ್ರ ಮಾಡಿ, ತುಕ್ಕು ನಿರೋಧಕ ತಂತಿ ಜೋಡಿಸಿದರು. ಮೇಲ್ಭಾಗದಲ್ಲಿ ಚೂರು ಚೂರಾಗಿದ್ದ ಭಾಗಗಳಿಗೂ ಸೂಕ್ಷ್ಮ ರಂಧ್ರಗಳನ್ನು ಮಾಡಿ ತಂತಿಯಿಂದ ಮೆಶ್ ಹೆಣೆದು ಎಂ.ಸೀಲ್ ಬಳಸಿ ಕವಚ ಮೇಲ್ಭಾಗವನ್ನು ಮುಚ್ಚಿದರು.&lt;/p&gt;&lt;p&gt;ಚಿಕಿತ್ಸೆ ಬಳಿಕ 5 ದಿನ ಆಮೆಯನ್ನು ನೀರಿನ ತೊಟ್ಟಿಯಲ್ಲಿ ಇರಿಸಿ, ಚಲನವಲನದ ಮೇಲೆ ನಿಗಾ ವಹಿಸಿದರು. ಆಮೆ ಚೇತರಿಸಿಕೊಂಡು ಈಜಲು, ಆಹಾರ ಸೇವಿಸಲು ಆರಂಭಿಸಿತು. ಸಂಪೂರ್ಣ ಚೇತರಿಕೆಯ ಲಕ್ಷಣಗಳು ಕಂಡು ಬಂದ ಬಳಿಕ ಆಮೆಯನ್ನು ಕಪಿಲಾ ನದಿಯಲ್ಲಿ ಬಿಟ್ಟರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/nanjangud-youths-revive-broken-turtle-s-shell-using-m-sil-rav/articleshow-15lsh3d"/>
        </item>
        <item>
            <title><![CDATA[ಪ್ರಯಾಣಿಕರೇ ಗಮನಿಸಿ; ಜೂನ್ 18, 23 ರಂದು ಮೈಸೂರು-ಅರಸೀಕೆರೆ-ತಾಳಗುಪ್ಪ ಮಾರ್ಗದ ಪ್ರಮುಖ ರೈಲುಗಳ ಸಂಚಾರ ರದ್ದು!]]></title>
            <link>https://kannada.asianetnews.com/gallery/karnataka-districts/mysore-arasikere-talaguppa-train-passengers-alert-major-trains-cancelled-on-june-18-23-2bm8mub</link>
            <guid isPermaLink="true">https://kannada.asianetnews.com/gallery/karnataka-districts/mysore-arasikere-talaguppa-train-passengers-alert-major-trains-cancelled-on-june-18-23-2bm8mub</guid>
            <pubDate>Mon, 15 Jun 2026 20:53:50 +0530</pubDate>
            <description><![CDATA[&lt;p&gt;ಹೊಳೆನರಸೀಪುರ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ಅತ್ಯಗತ್ಯವಾಗಿ ನಡೆಯಬೇಕಾಗಿರುವ ರಸ್ತೆ ಕೆಳಸೇತುವೆ (ಆರ್&zwnj;ಯುಬಿ) ಕಾಮಗಾರಿಯ ಹಿನ್ನೆಲೆಯಲ್ಲಿ ಜೂನ್ 18 ಮತ್ತು 23 ರಂದು ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksphq7ck9atjhr7p4x09t11k,imgname-shivamogga-railway-station-1779946986898.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೊಳೆನರಸೀಪುರ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ಅತ್ಯಗತ್ಯವಾಗಿ ನಡೆಯಬೇಕಾಗಿರುವ ರಸ್ತೆ ಕೆಳಸೇತುವೆ (ಆರ್&zwnj;ಯುಬಿ) ಕಾಮಗಾರಿಯ ಹಿನ್ನೆಲೆಯಲ್ಲಿ ಜೂನ್ 18 ಮತ್ತು 23 ರಂದು ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.&lt;/p&gt;&lt;img&gt;&lt;p&gt;&lt;strong&gt;ಭಾಗಶಃ ರದ್ದು ಹಾಗೂ ನಿಯಂತ್ರಣ&lt;/strong&gt;ಹೊಳೆನರಸೀಪುರ ಮತ್ತು ಮಾವಿನಕೆರೆ ರೈಲ್ವೆ ನಿಲ್ದಾಣಗಳ ನಡುವೆ ರಸ್ತೆ ಕೆಳಸೇತುವೆ (ಆರ್&zwnj;ಯುಬಿ) ಕಾಮಗಾರಿ ನಡೆಯುತ್ತಿರುವುದರಿಂದ ಜೂನ್ 18 ಮತ್ತು 23 ರಂದು ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ಈ ದಿನಗಳಲ್ಲಿ ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದರೆ, ಇನ್ನು ಕೆಲವು ರೈಲುಗಳನ್ನು ಭಾಗಶಃ ರದ್ದು ಹಾಗೂ ನಿಯಂತ್ರಣ (ವಿಳಂಬ) ಮಾಡಲಾಗುತ್ತಿದೆ. ಆ ವಿವರಗಳು ಹೀಗಿವೆ..&lt;/p&gt;&lt;img&gt;&lt;p&gt;&lt;strong&gt;ಸಂಪೂರ್ಣವಾಗಿ ರದ್ದಾಗಿರುವ ರೈಲುಗಳು (ಜೂನ್ 18 ಮತ್ತು 23)&lt;/strong&gt;ಕೆಳಕಂಡ ದೈನಂದಿನ ರೈಲುಗಳ ಸಂಚಾರವನ್ನು ಈ ಎರಡು ದಿನಗಳ ಕಾಲ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆಅರಸೀಕೆರೆ&ndash;ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ: 56267)ಮೈಸೂರು&ndash;ತಾಳಗುಪ್ಪ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16206)ತಾಳಗುಪ್ಪ&ndash;ಮೈಸೂರು ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16205)&lt;/p&gt;&lt;img&gt;&lt;p&gt;&lt;strong&gt;ಭಾಗಶಃ ರದ್ದಾಗಿರುವ ರೈಲುಗಳು&lt;/strong&gt;ಮೈಸೂರು&ndash;ಶಿವಮೊಗ್ಗ ಟೌನ್ ದೈನಂದಿನ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16225): ಜೂನ್ 18 ಮತ್ತು 23 ರಂದು ಈ ರೈಲನ್ನು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಹೀಗಾಗಿ, ಈ ರೈಲು ಮೈಸೂರಿನಿಂದ ಹೊರಡುವ ಬದಲು ಅರಸೀಕೆರೆಯಿಂದಲೇ ತನ್ನ ನಿಗದಿತ ಸಮಯಕ್ಕೆ ಶಿವಮೊಗ್ಗದ ಕಡೆಗೆ ಪ್ರಯಾಣ ಬೆಳೆಸಲಿದೆ.&lt;/p&gt;&lt;img&gt;&lt;p&gt;&lt;strong&gt;ತಡವಾಗಿ ಓಡಲಿರುವ ರೈಲುಗಳು (ನಿಯಂತ್ರಣ)&lt;/strong&gt;ಮೈಸೂರು&ndash;ಯಶವಂತಪುರ ದೈನಂದಿನ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16208): ಜೂನ್ 18 ಮತ್ತು 23 ರಂದು ಹೊರಡುವ ಈ ರೈಲಿನ ಸಂಚಾರವನ್ನು ಮಾರ್ಗಮಧ್ಯೆ ನಿಯಂತ್ರಿಸಲಾಗುತ್ತದೆ. ಜೂನ್ 18 ರಂದು 30 ನಿಮಿಷ ಹಾಗೂ ಜೂನ್ 23 ರಂದು 120 ನಿಮಿಷ (2 ಗಂಟೆ) ಕಾಲ ಈ ರೈಲು ತಡವಾಗಿ ಸಂಚರಿಸಲಿದೆ.&lt;/p&gt;]]></content:encoded>
            <category>mysore</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/karnataka-districts/mysore-arasikere-talaguppa-train-passengers-alert-major-trains-cancelled-on-june-18-23-2bm8mub"/>
        </item>
        <item>
            <title><![CDATA[Mysuru: ನಾಳೆ ಮದುವೆ, ಇಂದು ಮದುಮಗಳು-ತಂದೆ-ತಾಯಿ ಮೂವರೂ ಸಾವು! ಡ್ರೈವರ್ ಕಿರುಕುಳಕ್ಕೆ ಕುಟುಂಬವೇ ಸರ್ವನಾಶ!]]></title>
            <link>https://kannada.asianetnews.com/gallery/karnataka-districts/mysuru-family-death-case-t-narasipura-ullash-gowda-harassment-bride-parents-dead-sat-2ppczbc</link>
            <guid isPermaLink="true">https://kannada.asianetnews.com/gallery/karnataka-districts/mysuru-family-death-case-t-narasipura-ullash-gowda-harassment-bride-parents-dead-sat-2ppczbc</guid>
            <pubDate>Mon, 22 Jun 2026 18:15:21 +0530</pubDate>
            <description><![CDATA[&lt;p&gt;ಮೈಸೂರಿನ ಟಿ.ನರಸೀಪುರದಲ್ಲಿ, ಮದುವೆಗೆ ಸಿದ್ಧವಾಗಿದ್ದ ಯುವತಿ ಮತ್ತು ಆಕೆಯ ಪೋಷಕರು ಆ*ತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪರಿಚಯಸ್ಥ ಯುವಕನೊಬ್ಬನ ನಿರಂತರ ಕಿರುಕುಳ ಮತ್ತು ಮಾನಹಾನಿಯಿಂದ ನೊಂದು ಈ ಕುಟುಂಬ ಸಾವಿಗೆ ಶರಣಾಗಿದ್ದು, ಈ ಘಟನೆಯು ಗ್ರಾಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqmyrb5x9ssrhja3n0jgth1,imgname-mysuru-marriage-family-death--1--1782131417444.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರಿನ ಟಿ.ನರಸೀಪುರದಲ್ಲಿ, ಮದುವೆಗೆ ಸಿದ್ಧವಾಗಿದ್ದ ಯುವತಿ ಮತ್ತು ಆಕೆಯ ಪೋಷಕರು ಆ*ತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪರಿಚಯಸ್ಥ ಯುವಕನೊಬ್ಬನ ನಿರಂತರ ಕಿರುಕುಳ ಮತ್ತು ಮಾನಹಾನಿಯಿಂದ ನೊಂದು ಈ ಕುಟುಂಬ ಸಾವಿಗೆ ಶರಣಾಗಿದ್ದು, ಈ ಘಟನೆಯು ಗ್ರಾಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಮೈಸೂರು (ಜೂ.22): ಸಂ&lt;/strong&gt;ಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲಿ ಇಂದು ಸ್ಮಶಾನ ಮೌನ ಆವರಿಸಿದೆ. ನಾಳೆ ಹಸೆಮಣೆ ಏರಬೇಕಿದ್ದ ಮದುಮಗಳು ಮತ್ತು ಆಕೆಯ ತಂದೆ-ತಾಯಿ ಶವವಾಗಿ ಬಿದ್ದಿದ್ದಾರೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದ ಈ ದಾರುಣ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಪರಿಚಯಸ್ಥ ಯುವಕನೊಬ್ಬನ ಅತಿಯಾದ ಕಿರುಕುಳ ಮತ್ತು ಮಾನಸಿಕ ಹಿಂಸೆಗೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.&lt;/p&gt;&lt;img&gt;&lt;p&gt;ಘಟನೆಯ ವಿವರ:&lt;/p&gt;&lt;p&gt;ಗ್ರಾಮದ ನಿವಾಸಿಗಳಾದ ಶಿವಣ್ಣ (54), ನಾಗರತ್ನ (44) ಮತ್ತು ಅವರ ಪುತ್ರಿ ರಕ್ಷಿತಾ (21) ಆ*ತ್ಮ*ಹತ್ಯೆ ಮಾಡಿಕೊಂಡ ದುರ್ದೈವಿಗಳು. ಇವರ ಸಾವಿಗೆ ಇದೇ ಗ್ರಾಮದ ಉಲ್ಲಾಸ್ ಗೌಡ ಎಂಬ ಯುವಕ ನೀಡಿದ ಮಾನಸಿಕ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ರಕ್ಷಿತಾಗೆ ಮೂರು ತಿಂಗಳ ಹಿಂದೆಯಷ್ಟೇ ಮದುವೆ ನಿಶ್ಚಯವಾಗಿತ್ತು. ಜೂನ್ 23 ಮತ್ತು 24 ರಂದು ಮದುವೆ ಸಮಾರಂಭ ನಡೆಯಬೇಕಿತ್ತು. ಮದುವೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು.&lt;/p&gt;&lt;img&gt;&lt;p&gt;&lt;strong&gt;ಕಿರಾತಕನ ಕಿರುಕುಳ:&lt;/strong&gt;&lt;/p&gt;&lt;p&gt;ಆರೋಪಿ ಉಲ್ಲಾಸ್ ಗೌಡ ಮೃತ ಶಿವಣ್ಣ ಅವರ ಬಳಿ ಟ್ರ್ಯಾಕ್ಟರ್ ಓಡಿಸುತ್ತಿದ್ದು, ಕುಟುಂಬದವರೊಂದಿಗೆ ಒಡನಾಟ ಹೊಂದಿದ್ದ. ಆದರೆ ಕಳೆದ ಒಂದು ವಾರದಿಂದ ರಕ್ಷಿತಾಳನ್ನು ತನಗೆ ಮದುವೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದ. 'ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ, ಅವಳನ್ನು ನನಗೇ ಕೊಡಬೇಕು' ಎಂದು ನೇರವಾಗಿ ತಂದೆಯನ್ನೇ ಕೇಳಿದ್ದ. ಇದಕ್ಕೆ ಶಿವಣ್ಣ ಅವರು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೂ ಕೇಳದ ಉಲ್ಲಾಸ್, ಮದುವೆ ನಿಶ್ಚಯವಾಗಿದ್ದ ಹುಡುಗನಿಗೆ ರಕ್ಷಿತಾಳ ಫೋಟೋ ಮತ್ತು ಮೆಸೇಜ್&zwnj;ಗಳನ್ನು ಕಳುಹಿಸಿ ವಿಕೃತಿ ಮೆರೆದಿದ್ದಾನೆ.&lt;/p&gt;&lt;img&gt;&lt;p&gt;&lt;strong&gt;ಪಂಚಾಯತಿ ಆದರೂ ಬಿಡದ ಹಠ:&lt;/strong&gt;&lt;/p&gt;&lt;p&gt;ಈ ವಿಚಾರವಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ಕೂಡ ನಡೆದಿತ್ತು. ಪಂಚಾಯತಿಯಲ್ಲಿ ಉಲ್ಲಾಸ್ ಬಳಿ ಇದ್ದ ಫೋಟೋಗಳನ್ನು ವಾಪಸ್ ಪಡೆದುಕೊಳ್ಳಲಾಗಿತ್ತು. ಆದರೆ, ತನ್ನ ಹಠ ಬಿಡದ ಉಲ್ಲಾಸ್, ಮದುವೆ ಆಗಲಿರುವ ಹುಡುಗನಿಗೆ ನೇರವಾಗಿ ಮಾಹಿತಿ ನೀಡಿ ಮಾನಹಾನಿ ಮಾಡಿದ್ದನು. ಇದರಿಂದ ತೀವ್ರ ನೊಂದ ಕುಟುಂಬ, ಬಾಳೆಹಣ್ಣಿನಲ್ಲಿ ವಿಷದ ಟ್ಯೂಬ್ ಬೆರೆಸಿ ಸೇವಿಸಿ ಸಾವಿಗೆ ಶರಣಾಗಿದೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಉಲ್ಲಾಸ್ ಹೆಸರನ್ನು ಉಲ್ಲೇಖಿಸಲಾಗಿದೆ.&lt;/p&gt;&lt;img&gt;&lt;p&gt;ರೊಚ್ಚಿಗೆದ್ದ ಗ್ರಾಮಸ್ಥರು - ಪೊಲೀಸ್ ಜೊತೆ ಸಂಘರ್ಷ:&lt;/p&gt;&lt;p&gt;ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ಸಂಬಂಧಿಕರು ರೊಚ್ಚಿಗೆದ್ದಿದ್ದಾರೆ. ಆರೋಪಿ ಉಲ್ಲಾಸ್ ಗೌಡನನ್ನು ಬಂಧಿಸುವವರೆಗೂ ಮೃತದೇಹಗಳನ್ನು ಸ್ಥಳದಿಂದ ಸರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರು ಮೃತದೇಹಗಳನ್ನು ಆಂಬ್ಯುಲೆನ್ಸ್&zwnj;ಗೆ ಶಿಫ್ಟ್ ಮಾಡಲು ಯತ್ನಿಸಿದಾಗ ಗ್ರಾಮಸ್ಥರು ಮುತ್ತಿಗೆ ಹಾಕಿ ತಡೆದರು. ರಾಜಕೀಯ ಮುಖಂಡ ಸಿ.ಟಿ. ಕುಮಾರ್ ಸ್ಥಳಕ್ಕೆ ಆಗಮಿಸಿ ಮನವೊಲಿಸಲು ಯತ್ನಿಸಿದರೂ ಗ್ರಾಮಸ್ಥರು ಕಿಂಚಿತ್ತೂ ಬಗ್ಗಲಿಲ್ಲ. ಆಕ್ರೋಶ ಹೆಚ್ಚಾದ ಕಾರಣ ಪೊಲೀಸರು ಕಳುಹಿಸಿದ್ದ ಆಂಬ್ಯುಲೆನ್ಸ್&zwnj;ಅನ್ನು ಅರ್ಧ ದಾರಿಯಿಂದಲೇ ವಾಪಸ್ ಕರೆಸಬೇಕಾಯಿತು.&lt;/p&gt;&lt;img&gt;&lt;p&gt;ಅಜ್ಜಿಯ ಕಣ್ಣೀರು:&lt;/p&gt;&lt;p&gt;'ನನ್ನ ಮೊಮ್ಮಗಳು ಮದುವೆಗೆ ಸಿದ್ಧವಾಗಿದ್ದಳು. ಆದರೆ ಆ ಕಿರಾತಕ ಅವಳ ಮಾನ ತೆಗೆದಿದ್ದಾನೆ. ನನ್ನ ಅಳಿಯನ ಜೊತೆಯೇ ಇದ್ದು ಬೆನ್ನಿಗೆ ಚೂರಿ ಹಾಕಿದ್ದಾನೆ. ಅವನಿಗಾದ ಕಿರುಕುಳಕ್ಕೆ ಈ ಮೂವರು ಬಲಿಯಾಗಿದ್ದಾರೆ, ಅವನಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಮೃತಳ ಅಜ್ಜಿ ಚಿನ್ನಮ್ಮ ಕಣ್ಣೀರು ಹಾಕಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/mysuru-family-death-case-t-narasipura-ullash-gowda-harassment-bride-parents-dead-sat-2ppczbc"/>
        </item>
        <item>
            <title><![CDATA[ಅರಣ್ಯ ಇಲಾಖೆ ಜಾಣ ಕುರುಡು: ಆನೆ ಹಿಂಡು ಇರೋ ಜಾಗದಲ್ಲಿ ಬಿರಿಯಾನಿ, ಕಸದ ರಾಶಿ: ಪಿಕ್‌ನಿಕ್‌ ಸ್ಪಾಟ್‌ ಆದ Kabini Backwaters!]]></title>
            <link>https://kannada.asianetnews.com/karnataka-districts/kabini-backwaters-littering-cooking-tourists-picnic-spot-forest-department-san/articleshow-3f6mizs</link>
            <guid isPermaLink="true">https://kannada.asianetnews.com/karnataka-districts/kabini-backwaters-littering-cooking-tourists-picnic-spot-forest-department-san/articleshow-3f6mizs</guid>
            <pubDate>Mon, 22 Jun 2026 12:54:34 +0530</pubDate>
            <description><![CDATA[&lt;p&gt;ಒಂದು ಕಾಲದಲ್ಲಿ ವನ್ಯಜೀವಿಗಳ ಸ್ವರ್ಗವಾಗಿದ್ದ ಕಬಿನಿ ಹಿನ್ನೀರು, ಇಂದು ಬೇಜವಾಬ್ದಾರಿ ಪ್ರವಾಸಿಗರಿಂದ ಕಸದ ತೊಟ್ಟಿಯಾಗುತ್ತಿದೆ. ಪ್ರವಾಸಿಗರು ಕಾಡಂಚಿನಲ್ಲಿ ಅಡುಗೆ ಮಾಡಿ, ಮೋಜು-ಮಸ್ತಿ ಮಾಡುತ್ತಿರುವುದು ಪರಿಸರ ವ್ಯವಸ್ಥೆಗೆ ಹಾನಿ ಉಂಟುಮಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvq37wj72zqva738xbpraedx,imgname-kabini-backwaters-news-1782112842311.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜೂ.22): &lt;/strong&gt;ಒಂದು ಕಾಲದಲ್ಲಿ ತನ್ನ ನಿಷ್ಕಲ್ಮಶ ನೈಸರ್ಗಿಕ ಸೌಂದರ್ಯ ಮತ್ತು ವನ್ಯಜೀವಿಗಳ ನೆಮ್ಮದಿಯ ತಾಣವಾಗಿ ಜಗತ್ಪ್ರಸಿದ್ಧಿಯಾಗಿದ್ದ ಕರ್ನಾಟಕದ ಹೆಮ್ಮೆಯ ಕಬಿನಿ ಹಿನ್ನೀರು (Kabini Backwaters), ಇತ್ತೀಚಿನ ದಿನಗಳಲ್ಲಿ ಕೇವಲ ನಗರದ ಜನನಿಬಿಡ ಪಿಕ್ನಿಕ್ ಸ್ಪಾಟ್&zwnj;ನಂತೆ ಬದಲಾಗುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ತೀವ್ರ ಕಳವಳ ಮೂಡಿಸಿದೆ. ಪ್ರವಾಸಿಗರು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಮರೆತು, ಕಾಡಿನ ಅಂಚಿನಲ್ಲಿ ರಾಜಾರೋಷವಾಗಿ ಒಲೆ ಹೂಡಿ ಬಿರಿಯಾನಿ ಹಾಗೂ ಮನೆ ಅಡುಗೆಯನ್ನು ಮಾಡುತ್ತಾ ಮೋಜು-ಮಸ್ತಿ ಮಾಡುತ್ತಿರುವ ವರದಿಗಳು ಪರಿಸರ ವ್ಯವಸ್ಥೆಗೆ ದೊಡ್ಡ ದಕ್ಕೆಯನ್ನು ತಂದಿಟ್ಟಿವೆ.&lt;/p&gt;&lt;p&gt;ಕಬಿನಿ ಹಿನ್ನೀರು ವನ್ಯಜೀವಿಗಳು ಮತ್ತು ಪ್ರಕೃತಿಗೆ ಸ್ವರ್ಗವಾಗಬೇಕೇ ಹೊರತು, ಸಾರ್ವಜನಿಕರ ಮನರಂಜನೆಯ ತ್ಯಾಜ್ಯದ ತೊಟ್ಟಿಯಾಗಬಾರದು. ಈ ಸೂಕ್ಷ್ಮ ವಲಯದಲ್ಲಿ ನಡೆಯುತ್ತಿರುವ ಅನಿಯಂತ್ರಿತ ಚಟುವಟಿಕೆಗಳು ಪ್ರಾಣಿಗಳ ಆವಾಸಸ್ಥಾನವನ್ನು ಧ್ವಂಸಗೊಳಿಸುತ್ತಿವೆ. ಈ ಕಹಿ ಸತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಠಿಣ ಪದಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಅರಣ್ಯ ಇಲಾಖೆ ಎಲ್ಲಿದೆ?: ಜನರ ನೇರ ಪ್ರಶ್ನೆ&lt;/strong&gt;&lt;/h2&gt;&lt;p&gt;ಈ ಪರಿಸರ ನಾಶದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಕಮೆಂಟ್&zwnj;ಗಳು ಬರುತ್ತಿದ್ದು, ಅರಣ್ಯ ಇಲಾಖೆಯನ್ನು ಟ್ಯಾಗ್ ಮಾಡಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ನೆಟ್ಟಿಗರೊಬ್ಬರು ಬೇಸರದಿಂದ, &quot;ಅರಣ್ಯ ಇಲಾಖೆ ಇಂತಹ ಚಟುವಟಿಕೆಗಳನ್ನು ಏಕೆ ಕಣ್ಣಿಟ್ಟು ನೋಡುತ್ತಿಲ್ಲ? ಮನುಷ್ಯರೇ.. ಕನಿಷ್ಠ ವನ್ಯಜೀವಿಗಳ ಜಾಗವನ್ನಾದರೂ ಬಿಟ್ಟುಬಿಡಿ,&quot; ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಯೂಸರ್&zwnj;ಗಳು, &quot;ಇದು ನಿಜಕ್ಕೂ ನಾಚಿಕೆಗೇಡಿನ ನಡವಳಿಕೆ ಮತ್ತು ಪ್ರಕೃತಿಯ ಮೇಲಿನ ಹಸ್ತಕ್ಷೇಪ. ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?&quot; ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಕೆಲವರು ಇನ್ನೂ ಸಿಟ್ಟಿನಿಂದ ಮಾತನಾಡಿದ್ದು, &quot;ಅಲ್ಲಿಗೂ ಹೋಗಿ ಶೋಕಿ ಮಾಡಿ, ಪ್ರಾಣಿಗಳು ದಾಳಿ ಮಾಡಿ ಸಾಯಿಸಿದರೆ ಕೊನೆಗೆ ಪ್ರಾಣಿಗಳನ್ನೇ ದೂರುತ್ತಾರೆ. ಕೆಲವರು ಕಬಿನಿಯನ್ನು ಅತ್ತೆ ಮನೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ಹೋಗಿ ಎಂಜಾಯ್ ಮಾಡಿ ಕಸವನ್ನೆಲ್ಲಾ ಎಸೆದು ಬರುತ್ತಾರೆ,&quot; ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಇನ್&zwnj;ಫ್ಲುಯೆನ್ಸರ್ ಮತ್ತು ವ್ಲಾಗರ್&zwnj;ಗಳ ಕಾಟ!&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮತ್ತು ವ್ಯೂಸ್&zwnj;ಗಳಿಗಾಗಿ ಕಬಿನಿಯಂತಹ ಸೂಕ್ಷ್ಮ ತಾಣಗಳನ್ನು ಜಿಯೋಟ್ಯಾಗ್ ಮಾಡಿ ಜನಪ್ರಿಯಗೊಳಿಸುತ್ತಿರುವ ವ್ಲಾಗರ್&zwnj;ಗಳ ವಿರುದ್ಧವೂ ಭಾರಿ ಆಕ್ರೋಶ ವ್ಯಕ್ತವಾಗಿದೆ. &quot;ಒಬ್ಬ ಇನ್&zwnj;ಫ್ಲುಯೆನ್ಸರ್ ಒಂದು ಜಾಗಕ್ಕೆ ಕಾಲಿಟ್ಟರೆ ಆ ಜಾಗ ಮುಗಿಯಿತು ಎಂದೇ ಅರ್ಥ. ಕೇವಲ ವ್ಯೂಸ್&zwnj;ಗಾಗಿ ಇಂತಹ ಸೂಕ್ಷ್ಮ ಪರಿಸರವನ್ನು ಬಲಿ ಕೊಡುತ್ತಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಇವು ಕಸದ ರಾಶಿಯ ಪಿಕ್ನಿಕ್ ಜೋನ್&zwnj;ಗಳಾಗಿ ಬದಲಾಗುತ್ತವೆ. ಪ್ರಕೃತಿಯ ಮೇಲೆ ನಿಜವಾದ ಕಾಳಜಿ ಇದ್ದರೆ ದಯವಿಟ್ಟು ಕಂಟೆಂಟ್&zwnj;ಗಾಗಿ ಇವುಗಳನ್ನು ಬಳಸಬೇಡಿ, ಅವುಗಳನ್ನು ವನ್ಯಜೀವಿಗಳಿಗಾಗಿಯೇ ಬಿಡಿ,&quot; ಎಂಬ ಕಮೆಂಟ್&zwnj;ಗಳು ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತವೆ.&lt;/p&gt;&lt;p&gt;ಇದೇ ವೇಳೆ ಕೇವಲ 'ಬಿರಿಯಾನಿ'ಯಂತಹ ನಿರ್ದಿಷ್ಟ ಪದ ಬಳಸಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಬೇಡಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಪ್ರಕೃತಿಯನ್ನು ರಕ್ಷಿಸುವುದು ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಕರ್ನಾಟಕವು ತನ್ನ ಮುಂದಿನ ಪೀಳಿಗೆಗಾಗಿ ಎಲ್ಲವನ್ನೂ ಉಳಿಸಲು ಹೋರಾಡುತ್ತಿದ್ದರೆ, ಜವಾಬ್ದಾರಿಯಿಲ್ಲದ ಪ್ರವಾಸೋದ್ಯಮ ಎಲ್ಲವನ್ನೂ ನಾಶಪಡಿಸುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ಈಗಲಾದರೂ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಂಡು, ಕಬಿನಿಯ ನೈಸರ್ಗಿಕ ಪರಂಪರೆಯನ್ನು ಉಳಿಸಬೇಕಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Karnataka wildlif &reg;️ (@karnataka_wildlife_)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/kabini-backwaters-littering-cooking-tourists-picnic-spot-forest-department-san/articleshow-3f6mizs"/>
        </item>
        <item>
            <title><![CDATA[Heart attack:  ಕಾಲೇಜಲ್ಲಿ ಎರಡು ಬಾರಿ ಕುಸಿದುಬಿದ್ದ ಪಿಯು ವಿದ್ಯಾರ್ಥಿ ಹೃದಯಾಘಾತದಿಂದ ಸಾವು!]]></title>
            <link>https://kannada.asianetnews.com/karnataka-districts/mysore-pu-student-collapses-dies-of-heart-attack-rav/articleshow-3l56hcr</link>
            <guid isPermaLink="true">https://kannada.asianetnews.com/karnataka-districts/mysore-pu-student-collapses-dies-of-heart-attack-rav/articleshow-3l56hcr</guid>
            <pubDate>Fri, 19 Jun 2026 04:10:41 +0530</pubDate>
            <description><![CDATA[&lt;p&gt;ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗೆ ಕಾಲೇಜಿನ ಆವರಣದಲ್ಲೇ ಹೃದಯಾಘಾತ(heart attack) ಸಂಭವಿಸಿ ಎರಡು ಬಾರಿ ಕುಸಿದು ಬಿದ್ದು, ನಂತರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxff01q4yzdjny1p57yr1ya,imgname-right-hand-can-also-hurt-1779105759287.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಮೈಸೂರು (ಜೂ.19)&lt;/strong&gt;: ನಗರದ ಮರಿಮಲ್ಲಪ್ಪ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗೆ ಕಾಲೇಜಿನ ಆವರಣದಲ್ಲೇ ಹೃದಯಾಘಾತ(heart attack) ಸಂಭವಿಸಿ ಎರಡು ಬಾರಿ ಕುಸಿದು ಬಿದ್ದು, ನಂತರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.&lt;/p&gt;&lt;h2&gt;ಕಾಲೇಜಿನಲ್ಲೇ 2 ಬಾರಿ ಕುಸಿದು ಬಿದ್ದ ವಿದ್ಯಾರ್ಥಿ&lt;/h2&gt;&lt;p&gt;ಮೂಲತಃ ಮದ್ದೂರು ತಾಲೂಕು ಯರಗನಹಳ್ಳಿಯ ವೈ.ಕೆ.ಮಾದೇಶ್&zwnj;(YK Madesh) ಮೃತಪಟ್ಟ ವಿದ್ಯಾರ್ಥಿ. ಈತ ಮೈಸೂರಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಕ್ಕನ ಜೊತೆ ಮನೆ ಮಾಡಿಕೊಂಡು ಓದುತ್ತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ತರಗತಿಯಿಂದ ಹೊರಬಂದ ಮಾದೇಶ್&zwnj; 2.05ಕ್ಕೆ ಕಾಲೇಜು ಆವರಣದಲ್ಲಿಯೇ ಕುಸಿದು ಬಿದ್ದರು. ಹಿಂದಿನಿಂದ ಬರುತ್ತಿದ್ದ ವಿದ್ಯಾರ್ಥಿಗಳು ಆತನನ್ನು ಮೇಲೆತ್ತಿದ್ದರು. ಒಂದೆರಡು ಹೆಜ್ಜೆ ಹಾಕಿದ ಮಾದೇಶ್&zwnj; ಮತ್ತೆ ಕುಸಿದು ಬಿದ್ದರು.&lt;/p&gt;&lt;p&gt;&lt;strong&gt;ಚಿಕ್ಕ ವಯಸ್ಸಿನಲ್ಲೇ ಹೃದಯದಲ್ಲಿ ರಂದ್ರ ಪತ್ತೆ&lt;/strong&gt;&lt;/p&gt;&lt;p&gt;ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೋಷಕರಿಗೂ ಸಹ ಕರೆ ಮಾಡಿದ್ದಾರೆ. ವೈದ್ಯರ ಪ್ರಯತ್ನದ ಬಳಿಕವೂ ಮಾದೇಶ್&zwnj; ಬದುಕುಳಿಯಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಹೃದಯದಲ್ಲಿ ರಂದ್ರ ಪತ್ತೆಯಾಗಿತ್ತು. ಅದಕ್ಕೆ ಪೋಷಕರು ಚಿಕಿತ್ಸೆ ಕೊಡಿಸಿದ್ದರು ಎಂದು ತಿಳಿದುಬಂದಿದೆ. ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ವೈ.ಕೆ.ಮಾದೇಶ್&zwnj; ಎಸ್ಸೆಸ್ಸೆಲ್ಸಿ ಪೂರೈಸಿ 609 ಅಂಕಗಳಿಸಿದ್ದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mysore-pu-student-collapses-dies-of-heart-attack-rav/articleshow-3l56hcr"/>
        </item>
        <item>
            <title><![CDATA[ಗ್ಯಾರಂಟಿ ಪರಿಷ್ಕರಣೆ ಮಧ್ಯೆ ರಾಜ್ಯದ 16 ಲಕ್ಷ ಜನರ ಪಿಂಚಣಿ ಸ್ಥಗಿತ! ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ವೃದ್ಧರು!]]></title>
            <link>https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr</link>
            <guid isPermaLink="true">https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr</guid>
            <pubDate>Wed, 17 Jun 2026 12:41:12 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಪರಿಶೀಲನೆಯ ನೆಪದಲ್ಲಿ ಸುಮಾರು 16 ಲಕ್ಷ ಫಲಾನುಭವಿಗಳ ಮಾಸಿಕ ಪಿಂಚಣಿಯನ್ನು ಸ್ಥಗಿತಗೊಳಿಸಿದೆ. ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರಂತಹ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಕಳೆದ ಮೂರು ತಿಂಗಳಿಂದ ನಿಂತುಹೋಗಿದ್ದು, ಬಡವರು ಮತ್ತು ಅಸಹಾಯಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k38860vgzn4ast8mffce4zr2,imgname-welfare-pension-1755844903792.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ನೀಡುತ್ತಿದ್ದ ಮಾಸಿಕ ಪಿಂಚಣಿಯನ್ನು (ಮಾಸಾಶನ) ದಿಢೀರನೆ ಸ್ಥಗಿತಗೊಳಿಸಿರುವುದು ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಂತಹ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ನಡುವೆಯೇ, ಬಡವರು ಹಾಗೂ ಅಸಹಾಯಕರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಕಳೆದ ಮೂರು ತಿಂಗಳಿಂದ ರಾಜ್ಯದ ಸುಮಾರು 16 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ಹಣ ತಲುಪುತ್ತಿಲ್ಲ. ರಾಜ್ಯದಲ್ಲಿನ ಈ ಪಿಂಚಣಿ ಸ್ಥಗಿತದ ಸಂಪೂರ್ಣ ವಿವರ, ಕಾರಣಗಳು ಮತ್ತು ಇದರಿಂದ ಜನಸಾಮಾನ್ಯರ ಮೇಲಾಗಿರುವ ಪರಿಣಾಮಗಳ ಕುರಿತಾದ ಸಮಗ್ರ ವರದಿ ಇಲ್ಲಿದೆ.&lt;/p&gt;&lt;h2&gt;16 ಲಕ್ಷ ಜನರಿಗೆ ಬಿಗ್ ಶಾಕ್: ಯಾರೆಲ್ಲ ಸಂಕಷ್ಟದಲ್ಲಿದ್ದಾರೆ?&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 82.71 ಲಕ್ಷ ಪಿಂಚಣಿ ಫಲಾನುಭವಿಗಳಿದ್ದಾರೆ. ಇವರಲ್ಲಿ ಅರ್ಹರಲ್ಲದವರನ್ನು ಪತ್ತೆಹಚ್ಚುವ ನೆಪದಲ್ಲಿ ಸರ್ಕಾರವು ಬರೋಬ್ಬರಿ 16 ಲಕ್ಷ ಜನರನ್ನು ಪಿಂಚಣಿ ಪಟ್ಟಿಯಿಂದ ಕೈಬಿಟ್ಟಿದೆ. ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ಕೆಳಗಿನ ಯೋಜನೆಗಳ ಆಶ್ರಯ ಪಡೆದಿದ್ದವರು ಬೀದಿಗೆ ಬೀಳುವಂತಾಗಿದೆ.&lt;/p&gt;&lt;ul&gt; &lt;li&gt;ವೃದ್ಧಾಪ್ಯ ವೇತನ (ಹಿರಿಯ ನಾಗರಿಕರು)&lt;/li&gt; &lt;li&gt;ವಿಧವಾ ಪಿಂಚಣಿ (ಪತಿಯನ್ನು ಕಳೆದುಕೊಂಡ ಮಹಿಳೆಯರು)&lt;/li&gt; &lt;li&gt;ಸಂಧ್ಯಾ ಸುರಕ್ಷಾ ಯೋಜನೆ&lt;/li&gt; &lt;li&gt;ವಿಕಲಾಂಗರ ಪಿಂಚಣಿ&lt;/li&gt;&lt;/ul&gt;&lt;p&gt;ಪ್ರತಿ ತಿಂಗಳು ಈ 82 ಲಕ್ಷ ಫಲಾನುಭವಿಗಳ ಪಿಂಚಣಿಗಾಗಿ ಸರ್ಕಾರ ಸುಮಾರು 400 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿತ್ತು. ಆದರೆ, ಈಗ 16 ಲಕ್ಷ ಜನರಿಗೆ ಕೊಕ್ ನೀಡಿರುವುದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 150 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಉಳಿತಾಯವಾಗುತ್ತಿದೆ.&lt;/p&gt;&lt;h2&gt;ಪಿಂಚಣಿ ಸ್ಥಗಿತಗೊಳ್ಳಲು ಮುಖ್ಯ ಕಾರಣಗಳೇನು?&lt;/h2&gt;&lt;p&gt;ಸರ್ಕಾರದ ವತಿಯಿಂದ ನಡೆಸಲಾದ ಇಲಾಖಾ ಪರಿಶೀಲನೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಈ ಪಿಂಚಣಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಮುಖ್ಯ ಕಾರಣಗಳು ಕೂಡ ನೀಡಲಾಗಿದೆ.&lt;/p&gt;&lt;p&gt;&lt;strong&gt;ವಿಳಾಸ ಬದಲಾವಣೆ: &lt;/strong&gt;ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ನೀಡಿದ್ದ ವಿಳಾಸದಲ್ಲಿ ಸದ್ಯಕ್ಕೆ ವಾಸವಿಲ್ಲದ ಕಾರಣಕ್ಕಾಗಿ 2.21 ಲಕ್ಷ ಜನರ ಪಿಂಚಣಿ ರದ್ದಾಗಿದೆ.&lt;/p&gt;&lt;p&gt;&lt;strong&gt;ಆದಾಯ ಪ್ರಮಾಣ ಪತ್ರದ ಕೊರತೆ: &lt;/strong&gt;ಕಾಲಮಿತಿಯೊಳಗೆ ಹೊಸ ಆದಾಯ ಪ್ರಮಾಣ ಪತ್ರವನ್ನು (Income Certificate) ಸಲ್ಲಿಸದ ಕಾರಣಕ್ಕೆ 45,853 ಜನರಿಗೆ ಪಿಂಚಣಿ ನಿಲ್ಲಿಸಲಾಗಿದೆ.&lt;/p&gt;&lt;p&gt;&lt;strong&gt;ದಾಖಲೆಗಳ ಕೊರತೆ: &lt;/strong&gt;ಭೌತಿಕ ಪರಿಶೀಲನೆ (Physical Verification) ನಡೆಸುವಾಗ ಸೂಕ್ತ ಮತ್ತು ನಿಖರವಾದ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಅಂದರೆ 13,23,932 ಜನರ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ.&lt;/p&gt;&lt;h2&gt;ಜಿಲ್ಲಾವಾರು ಸ್ಥಗಿತಗೊಂಡ ಪಿಂಚಣಿದಾರರ ವಿವರ&lt;/h2&gt;&lt;p&gt;ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಪಿಂಚಣಿ ಕಳೆದುಕೊಂಡವರ ಸಂಖ್ಯೆ ಅತ್ಯಂತ ಹೆಚ್ಚಾಗಿದ್ದು, ಆ ವಿವರಗಳು ಹೀಗಿವೆ:&lt;/p&gt;&lt;p&gt;ಜಿಲ್ಲೆ ಪಿಂಚಣಿ ಕಳೆದುಕೊಂಡವರ ಸಂಖ್ಯೆ&lt;/p&gt;&lt;ul&gt; &lt;li&gt;ಬೆಳಗಾವಿ 1,38,215 ಜನರು&lt;/li&gt; &lt;li&gt;ಮೈಸೂರು 1,06,305 ಜನರು&lt;/li&gt; &lt;li&gt;ದಾವಣಗೆರೆ 95,297 ಜನರು&lt;/li&gt; &lt;li&gt;ರಾಯಚೂರು 90,995 ಜನರು&lt;/li&gt;&lt;/ul&gt;&lt;h2&gt;ಪ್ರಸ್ತುತ ಪಿಂಚಣಿ ದರಗಳು (ಯಾರಿಗೆ ಎಷ್ಟು ಸಿಗುತ್ತಿತ್ತು?)&lt;/h2&gt;&lt;p&gt;ಸರ್ಕಾರವು ವಿವಿಧ ವರ್ಗದ ಜನರಿಗೆ ನೀಡುತ್ತಿದ್ದ ಮಾಸಿಕ ಆರ್ಥಿಕ ನೆರವಿನ ವಿವರ ಹೀಗಿದೆ.&lt;/p&gt;&lt;p&gt;&lt;strong&gt;ವಿಧವಾ ವೇತನ:&lt;/strong&gt; ಪ್ರತಿ ತಿಂಗಳು 800 ರೂಪಾಯಿಗಳು.&lt;/p&gt;&lt;p&gt;&lt;strong&gt;ವೃದ್ಧಾಪ್ಯ ಪಿಂಚಣಿ:&lt;/strong&gt; 60 ರಿಂದ 65 ವರ್ಷದೊಳಗಿನವರಿಗೆ 800 ರೂಪಾಯಿ ಹಾಗೂ 65 ವರ್ಷ ಮೇಲ್ಪಟ್ಟವರಿಗೆ 1,200 ರೂಪಾಯಿಗಳು.&lt;/p&gt;&lt;p&gt;&lt;strong&gt;ವಿಕಲಾಂಗರ ಪಿಂಚಣಿ:&lt;/strong&gt;&lt;/p&gt;&lt;p&gt;25% ವಿಕಲಾಂಗ ಹೊಂದಿರುವವರಿಗೆ: 800 ರೂಪಾಯಿಗಳು.&lt;/p&gt;&lt;p&gt;50% ವಿಕಲಾಂಗ ಹೊಂದಿರುವವರಿಗೆ: 1,200 ರೂಪಾಯಿಗಳು.&lt;/p&gt;&lt;p&gt;75% ಕಿಂತ ಹೆಚ್ಚು ವಿಕಲಾಂಗ ಹೊಂದಿರುವವರಿಗೆ: 2,000 ರೂಪಾಯಿಗಳು.&lt;/p&gt;&lt;h2&gt;ಕಚೇರಿಗಳಿಗೆ ಅಲೆಯುತ್ತಿರುವ ವೃದ್ಧರು!&lt;/h2&gt;&lt;p&gt;ಮೂರು ತಿಂಗಳಾಯಿತು ಸರ್, ಕೈಗೆ ಒಂದು ರೂಪಾಯಿ ಪಿಂಚಣಿ ಹಣ ಬಂದಿಲ್ಲ. ನೆಮ್ಮದಿ ಕೇಂದ್ರ, ತಹಶೀಲ್ದಾರ್ ಕಚೇರಿ ಅಂತ ಕೇಳಿದ್ರೆ 'ಆ ಆಫೀಸ್&zwnj;ಗೆ ಹೋಗಿ, ಈ ಆಫೀಸ್&zwnj;ಗೆ ಹೋಗಿ' ಅಂತ ಅಲೆದಾಡಿಸುತ್ತಿದ್ದಾರೆ. ವಯಸ್ಸಾದ ಕಾಲದಲ್ಲಿ ನಮಗೆ ನಡೆದಾಡಲು ಶಕ್ತಿಯಿಲ್ಲ. ಬದುಕು ಸಾಗಿಸುವುದು ತುಂಬಾ ಕಷ್ಟವಾಗಿದೆ. ಎಂದು ಪಿಂಚಣಿ ಕಳೆದುಕೊಂಡ ಹಿರಿಯ ನಾಗರಿಕರ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ದೈನಂದಿನ ಮನೆ ಖರ್ಚಿಗೆ, ಕೈಗೊಂದು ಮಾತ್ರೆ-ಔಷಧಿ ಖರೀದಿಸಲು ಈ ಪಿಂಚಣಿ ಹಣವನ್ನೇ ನಂಬಿಕೊಂಡಿದ್ದ ಅಸಹಾಯಕ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಸರ್ಕಾರದ ಈ ಕ್ರಮದಿಂದ ಕಂಗಾಲಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗ್ಯಾರಂಟಿ ಯೋಜನೆಗಳ ಹೊಂದಾಣಿಕೆಗಾಗಿ ಬಡವರ ಪಿಂಚಣಿಗೆ ಕತ್ತರಿ ಹಾಕಲಾಗಿದೆಯೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣವೇ ಪಿಂಚಣಿ ಬಿಡುಗಡೆ ಮಾಡಬೇಕೆಂಬುದು ಸಂತ್ರಸ್ತರ ತೀವ್ರ ಒತ್ತಾಯವಾಗಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr"/>
        </item>
        <item>
            <title><![CDATA[ಆರ್‌ಎಸ್‌ಎಸ್‌ನ ಎಲ್ಲ ವ್ಯವಹಾರ ಪರಿಶೀಲನೆ ಆಗ್ಬೇಕಿದೆ: ಪ್ರಿಯಾಂಕ್ ಹೇಳಿಕೆ ಸಮರ್ಥಿಸಿದ ಯತೀಂದ್ರ]]></title>
            <link>https://kannada.asianetnews.com/politics/yathindra-siddaramaiah-defends-priyank-kharge-s-statement-that-rss-should-be-registered-rav/articleshow-43kretv</link>
            <guid isPermaLink="true">https://kannada.asianetnews.com/politics/yathindra-siddaramaiah-defends-priyank-kharge-s-statement-that-rss-should-be-registered-rav/articleshow-43kretv</guid>
            <pubDate>Wed, 17 Jun 2026 06:55:28 +0530</pubDate>
            <description><![CDATA[&lt;p&gt;ಆರ್&zwnj;ಎಸ್&zwnj;ಎಸ್&zwnj; ನೋಂದಣಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಒತ್ತಾಯವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಆರ್&zwnj;ಎಸ್&zwnj;ಎಸ್&zwnj;ಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದ್ದು, ಅದರ ವ್ಯವಹಾರಗಳ ಪರಿಶೀಲನೆಗೆ ನೋಂದಣಿ ಅಗತ್ಯ ಎಂದಿದ್ದಾರೆ. ಇದಕ್ಕೆ ಬಿಜೆಪಿ ನಾಯಕರಾದ ಏನು ಹೇಳಿದ್ರು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv9jdm3nbvjb9hg8cvg05v0j,imgname-----------------------2026-06-17t064605.701-1781658996853.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜೂ.17): &lt;/strong&gt;ಆರ್&zwnj;ಎಸ್&zwnj;ಎಸ್&zwnj;(RSS)ನ ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಹೀಗಾಗಿ, ಅದು ನೋಂದಣಿ(Registration) ಆಗಬೇಕು. ಗೃಹ ಸಚಿವ, ಪ್ರಿಯಾಂಕ್&zwnj; ಖರ್ಗೆ(Priyank kharge)ಯವರು ಆರ್&zwnj;ಎಸ್ಎಸ್ ನೋಂದಣಿಗೆ ಒತ್ತಾಯ ಮಾಡ್ತಾ ಇರೋದು ಸರಿ ಇದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಪಾದಿಸಿದರು.&lt;/p&gt;&lt;p&gt;ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಆರ್ ಎಸ್ಎಸ್ ನೋಂದಣಿಯಾಗದ ವಿಚಾರ ಕುರಿತು ಪ್ರತಿಕ್ರಿಯಿಸಿ, ದೇಶದ ಎಲ್ಲಾ ಕಡೆ ಆರ್ ಎಸ್ಎಸ್ ಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಅವರಿಗೆ ಕೋಟ್ಯಂತರ ರೂಪಾಯಿ ಹಣವೂ ಬರುತ್ತಿದೆ. ಇದರ ಲೆಕ್ಕವನ್ನು ಅವರು ಕೊಡಬೇಕು ತಾನೆ?. ಅವರ ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಹೀಗಾಗಿ, ಅದು ನೋಂದಣಿ ಆಗಬೇಕು. ಗೃಹ ಸಚಿವರು, ಆರ್ ಎಸ್ಎಸ್ ನೋಂದಣಿಗೆ ಒತ್ತಾಯ ಮಾಡ್ತಾ ಇರೋದು ಸರಿ ಇದೆ ಎಂದು ಅವರು ಸಮರ್ಥಿಸಿಕೊಂಡರು.&lt;/p&gt;&lt;p&gt;ಧರ್ಮದ ಹೆಸರಿನಲ್ಲಿ ಏನೂ ಬೇಕಾದರೂ ಮಾಡುತ್ತೇವೆ ಎಂಬುದು ನಡೆಯೋದಿಲ್ಲ. ದೇಶದ ಕಾನೂನಿಗಿಂತ ಯಾವ ಸಂಘಟನೆಯೂ ದೊಡ್ಡದಲ್ಲ. ಆರ್ ಎಸ್ಎಸ್ ಕೇವಲ ಸಾಂಸ್ಕೃತಿಕ ಸಂಘಟನೆ ಅಲ್ಲ, ಅದು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ. ಆರ್ ಎಸ್ಎಸ್ ನವರು ಹಿಂದುಗಳೇ ಅಲ್ಲ. ಅವರು ಕೇವಲ ಹಿಂದುತ್ವವಾದಿಗಳು ಅಷ್ಟೇ ಎಂದರು&lt;/p&gt;&lt;p&gt;ದೇಶದ್ರೋಹಿಗಳ ರಕ್ಷಕರಿಗೆ, ದೇಶ ವಿಭಜಕರ ಮಿತ್ರರಿಗೆ ಆರ್&zwnj;ಎಸ್&zwnj;ಎಸ್ ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ? ದೆಹಲಿ ನಕಲಿ ಗಾಂಧಿ ಹೈಕಮಾಂಡ್&zwnj;ನ ಓಲೈಸಿ ತಾನೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬ ದುರಾಸೆಯಿಂದ ಪ್ರಿಯಾಂಕ್ ಖರ್ಗೆ ಅವರು ಆರ್&zwnj;ಎಸ್&zwnj;ಎಸ್&zwnj; ಅನ್ನು ಬೆದರುಬೊಂಬೆ ಮಾಡಿಕೊಳ್ಳಲು ಹೊರಟಿದ್ದಾರೆ. ಸಮಾಜದಲ್ಲಿ ಸೈದ್ಧಾಂತಿಕ ವಿವಾದ ಸೃಷ್ಟಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಿಯಾಂಕ್ ನಡೆಸುತ್ತಿರುವ ಕುತಂತ್ರ ಕನ್ನಡಿಗರಿಗೆ ಅರ್ಥವಾಗುವಷ್ಟು ರಹಸ್ಯವಾಗಿ ಉಳಿದಿಲ್ಲ.&lt;/p&gt;&lt;p&gt;&lt;strong&gt;-ಆರ್.ಅಶೋಕ್&zwnj;, ಪ್ರತಿಪಕ್ಷದ ನಾಯಕ&amp;nbsp;&lt;/strong&gt;&lt;/p&gt;&lt;p&gt;&lt;strong&gt;ರಾಷ್ಟ್ರದ್ರೋಹಿ ಸಂಸ್ಥೆ ಕುರಿತು ಪ್ರಶ್ನೆ ಏಕಿಲ್ಲ&lt;/strong&gt;&lt;/p&gt;&lt;p&gt;ಆರ್&zwnj;ಎಸ್&zwnj;ಎಸ್ ಮದರಸಾ ರೀತಿ ಗುಪ್ತವಾಗಿ ಕಾರ್ಯ ನಿರ್ವಹಿಸಲ್ಲ. ಅಕ್ರಮ ವಿದೇಶಿ ದೇಣಿಗೆ ಪಡೆದು ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವ ಮಾಹಿತಿ ನಿಮ್ಮ ಗೃಹ ಇಲಾಖೆ ಬಳಿಯೇ ಇದೆ. ಈ ಬಗ್ಗೆ ಪತ್ರ ಬರೆದು ಆ ಸಂಸ್ಥೆಗಳಿಂದ ಯಾಕೆ ವಿವರ ಕೇಳುವುದಿಲ್ಲ?&lt;/p&gt;&lt;p&gt;-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/yathindra-siddaramaiah-defends-priyank-kharge-s-statement-that-rss-should-be-registered-rav/articleshow-43kretv"/>
        </item>
        <item>
            <title><![CDATA[Mysuru: ವೈದ್ಯರಿಲ್ಲದೆ ಒಂದೇ ದಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು, ಸಾರ್ವಜನಿಕರ ಆರೋಪ]]></title>
            <link>https://kannada.asianetnews.com/gallery/karnataka-districts/mysuru-jayadeva-hospital-11-patients-death-dr-sadananda-clarification-san-6duhp3z</link>
            <guid isPermaLink="true">https://kannada.asianetnews.com/gallery/karnataka-districts/mysuru-jayadeva-hospital-11-patients-death-dr-sadananda-clarification-san-6duhp3z</guid>
            <pubDate>Wed, 17 Jun 2026 12:25:02 +0530</pubDate>
            <description><![CDATA[&lt;p&gt;ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿ ಗಲಾಟೆ ಮಾಡಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva4t9mh1fchpx8thm23aaq3,imgname-mysuru-jayadeva-hospital--4--1781678286481.jpeg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿ ಗಲಾಟೆ ಮಾಡಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದಾರೆ.&lt;/p&gt;&lt;img&gt;&lt;p&gt;ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಿನೇ ದಿನೆ ರೋಗಿಗಳ ಸಾವು ಹೆಚ್ಚಾಗುತ್ತಿದ್ದು, ಮಂಗಳವಾರ ಒಂದೇ ದಿನ ಬರೋಬ್ಬರಿ 11 ರೋಗಿಗಳು ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ರೋಗಿಗಳ ಸಂಬಂಧಿಕರು ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮತ್ತು ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಸಂಬಂಧಿಕರು ವೈದ್ಯರನ್ನು ತಕ್ಷಣ ಕರೆಸುವಂತೆ ಗಲಾಟೆ ಮಾಡಿದ್ದಲ್ಲದೆ, &quot;ಇಷ್ಟೊಂದು ದೊಡ್ಡ ಆಸ್ಪತ್ರೆಯಲ್ಲಿ ಒಬ್ಬರೂ ಡಾಕ್ಟರ್ ಇಲ್ವಾ?&quot; ಎಂದು ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.&lt;/p&gt;&lt;img&gt;&lt;p&gt;ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂಬ ಸಾರ್ವಜನಿಕರ ಆರೋಪದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ಗೆ ಜಯದೇವ ಆಸ್ಪತ್ರೆಯ ಅಧೀಕ್ಷಕರಾದ ಡಾ. ಸದಾನಂದ ಅವರು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. &quot;ವೈದ್ಯರ ನಿರ್ಲಕ್ಷ್ಯದಿಂದ ಸಾವುಗಳಾಗಿವೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ನಿಜ, ಆದರೆ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಿಲ್ಲ&quot; ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಆಸ್ಪತ್ರೆಯ ಸ್ಥಿತಿಗತಿಯ ಬಗ್ಗೆ ವಿವರಿಸಿದ ಡಾ. ಸದಾನಂದ, &quot;ನಮ್ಮ ಆಸ್ಪತ್ರೆಗೆ ಕೇವಲ ಮೈಸೂರಷ್ಟೇ ಅಲ್ಲದೆ ಸುತ್ತಮುತ್ತಲಿನ ಐದು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಸಾಮಾನ್ಯ ಹೃದ್ರೋಗ ಪ್ರಕರಣಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತದೆ. ಆದರೆ, ಪರಿಸ್ಥಿತಿ ಅತ್ಯಂತ ಗಂಭೀರವಾದಾಗ ಮಾತ್ರ ರೋಗಿಗಳನ್ನು ನಮ್ಮ ಆಸ್ಪತ್ರೆಗೆ ಕರೆತರಲಾಗುತ್ತದೆ. ನಿನ್ನೆ ಮೃತಪಟ್ಟ 11 ರೋಗಿಗಳು ಕೂಡ ಆಸ್ಪತ್ರೆಗೆ ದಾಖಲಾಗುವ ವೇಳೆಯಲ್ಲೇ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದರು&quot; ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಬುಧವಾರ ಬೆಳಿಗ್ಗೆ 8 ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ 11 ಮಂದಿ ಮೃತಪಟ್ಟಿರುವುದು ನಿಜ ಎಂದು ಒಪ್ಪಿಕೊಂಡಿರುವ ಅಧೀಕ್ಷಕರು, ಸಾವಿಗೆ ನಿಖರ ಕಾರಣ ಬಿಚ್ಚಿಟ್ಟಿದ್ದಾರೆ. &quot;ಮೃತಪಟ್ಟವರೆಲ್ಲರೂ ತೀವ್ರ ಹೃದಯಾಘಾತ (Severe Heart Attack), ಹೃದಯ ವೈಫಲ್ಯ (Heart Failure) ಹಾಗೂ ವಯೋಸಹಜ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರಾಗಿದ್ದಾರೆ&quot; ಎಂದು ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಅಧೀಕ್ಷಕರು, &quot;ನಿನ್ನೆ ಇಡೀ 24 ಗಂಟೆಯೂ ವೈದ್ಯರು ನಿರಂತರವಾಗಿ ಕೆಲಸ ಮಾಡಿದ್ದಾರೆ. ಇಬ್ಬರು ಡಿಎಎಂ (DM) ವೈದ್ಯರು ಕರ್ತವ್ಯದಲ್ಲಿದ್ದು, ರೋಗಿಗಳ ಸಂಬಂಧಿಕರ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದರು. ವೈದ್ಯರು ಸತತ ಕೆಲಸದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದಾಗ ಸಂಬಂಧಿಕರು ಅದನ್ನು ಚಿತ್ರೀಕರಿಸಿ ವಿಡಿಯೋ ಹರಿಬಿಟ್ಟಿದ್ದಾರೆ. ಸತ್ಯ ತಿಳಿಯಲು ಬೇಕಿದ್ದರೆ ಆಸ್ಪತ್ರೆಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಬಹುದು&quot; ಎಂದು ಸವಾಲು ಹಾಕಿದ್ದಾರೆ.&lt;/p&gt;&lt;img&gt;&lt;p&gt;ನಿನ್ನೆ ಒಂದೇ ದಿನ 11 ಮಂದಿ ರೋಗಿಗಳ ಸಾವಿನೊಂದಿಗೆ ಜಯದೇವ ಆಸ್ಪತ್ರೆಯಲ್ಲಿ ಕಳೆದ 17 ದಿನದಲ್ಲಿ ನಿಧನರಾದ ಹೃದ್ರೋಗಿಗಳ ಸಂಖ್ಯೆ 64ಕ್ಕೆ ಏರಿದೆ. ಜೂನ್&zwnj; ತಿಂಗಳ ಅಂಕಿ ಅಂಶವನ್ನು ಸ್ವತಃ ಆಸ್ಪತ್ರೆ ಬಿಡುಗಡೆ ಮಾಡಿದೆ. ಮಂಗಳವಾರ ಆಸ್ಪತ್ರೆಗೆ ಒಟ್ಟು 77 ಒಳರೋಗಿಗಳು ದಾಖಲಾಗಿದ್ದರು. ಇದೇ ತಿಂಗಳು 9ರಂದು 65 ಒಳ ರೋಗಿಗಳ ಪೈಕಿ 8 ರೋಗಿಗಳ ಸಾವು. ಆಸ್ಪತ್ರೆಯ ನಿತ್ಯದ ಮಾರ್ಟಾಲಿಟಿ ರೇಟ್ 6ರಿಂದ7. ನಿನ್ನೆ ಹೆಚ್ಚು ಪ್ರಮಾಣ ರೋಗಿಗಳ ಸಾವು ದಾಖಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದು ವರ್ಷದಲ್ಲಿ 1245 ರೋಗಿಗಳು ಸಾವು ಕಂಡಿದ್ದಾರೆ. 2025ರಲ್ಲಿ ಆಸ್ಪತ್ರೆಗೆ 21,577 ರೋಗಿಗಳು ದಾಖಲಾಗಿದ್ದು, ಇದರಲ್ಲಿ 1,245 ಮಂದಿ ಸಾವು ಕಂಡಿದ್ದಾರೆ. ಒಂದು ವರ್ಷದಲ್ಲಿ ಸಾವಿಗೀಡಾದ ರೋಗಿಗಳ ಶೇಕಡಾವಾರು ಸಂಖ್ಯೆ 5.77 ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/mysuru-jayadeva-hospital-11-patients-death-dr-sadananda-clarification-san-6duhp3z"/>
        </item>
        <item>
            <title><![CDATA[Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!]]></title>
            <link>https://kannada.asianetnews.com/karnataka-districts/marriage-home-turns-into-graveyard-family-death-due-to-ullas-gowda-harassment-videoshow-8kmpzcc</link>
            <guid isPermaLink="true">https://kannada.asianetnews.com/karnataka-districts/marriage-home-turns-into-graveyard-family-death-due-to-ullas-gowda-harassment-videoshow-8kmpzcc</guid>
            <pubDate>Tue, 23 Jun 2026 21:12:23 +0530</pubDate>
            <description><![CDATA[&lt;p&gt;ಮದುವೆಗೆ ಕೆಲವೇ ಗಂಟೆಗಳಿರುವಾಗ, ಯುವಕನೊಬ್ಬನ ಮಾನಸಿಕ ಕಿರುಕುಳಕ್ಕೆ ಬೇಸತ್ತು ವಧು ರಕ್ಷಿತಾ ಹಾಗೂ ಆಕೆಯ ಹೆತ್ತವರು ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಸಾಯುವ ಮುನ್ನ ಬರೆದ ಡೆತ್&zwnj;ನೋಟ್&zwnj;ನಲ್ಲಿ ಉಲ್ಲಾಸ್ ಗೌಡ ಎಂಬಾತನ ಹೆಸರನ್ನು ಉಲ್ಲೇಖಿಸಿದ್ದು, ಆತನೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xai3drq" medium="video" height="768" width="1024"/>
            <content:encoded><![CDATA[&lt;p&gt;ಅದೊಂದು ಸಾಧಾರಣ ಹಾಗೂ ನೆಮ್ಮದಿಯ ಪುಟ್ಟ ಕುಟುಂಬ. ತಂದೆ, ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು. ದೊಡ್ಡ ಮಗಳಿಗೆ ಎರಡು ವರ್ಷಗಳ ಹಿಂದೆಯೇ ವಿವಾಹವಾಗಿ ಗಂಡನ ಮನೆ ಸೇರಿದ್ದಾಳೆ. ಇನ್ನುಳಿದಿದ್ದ ಎರಡನೇ ಮಗಳು ರಕ್ಷಿತಾಳಿಗೆ ನಾಳೆ ಅದ್ಧೂರಿಯಾಗಿ ಮದುವೆ ನಡೆಯಬೇಕಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆ ಮನೆಯ ಮುಂದೆ ಮದುವೆ ಚಪ್ಪರ ಇರಬೇಕಿತ್ತು, ಮದುಮಗಳ ನಗುವಿನ ಸದ್ದು ಕೇಳಿಸಬೇಕಿತ್ತು. ಆದರೆ, ವಿಧಿಯ ಆಟ ಮತ್ತು ನರರಾಕ್ಷಸನೊಬ್ಬನ ಕಾಟದಿಂದಾಗಿ ಇಂದು ಆ ಮನೆಯ ಮುಂದೆ ಚಟ್ಟಗಳು ನಿಂತಿವೆ! ಹಸೆಮಣೆ ಏರಬೇಕಿದ್ದ ಮಗಳು ಹೆತ್ತವರೊಂದಿಗೆ ಸ್ಮಶಾನದ ಹಾದಿ ಹಿಡಿದಿದ್ದಾಳೆ.&lt;/p&gt;&lt;p&gt;ಹೌದು, ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಇಡೀ ಕುಟುಂಬವೇ ವಿಷ ಸೇವಿಸಿ ಸಾಮೂಹಿಕವಾಗಿ ಆ*ತ್ಮ*ಹತ್ಯೆ ಮಾಡಿಕೊಂಡಿರುವ ಭೀಕರ ದುರಂತ ನಡೆದಿದೆ. ಈ ಇಡೀ ಸಾವಿನ ಹಿಂದಿರುವುದು ಉಲ್ಲಾಸ್ ಗೌಡ ಎಂಬಾತನ ಕ್ರೌರ್ಯ. ಸಾಯುವ ಮುನ್ನ ಬರೆದಿಟ್ಟಿರುವ ಡೆತ್&zwnj;ನೋಟ್&zwnj;ನಲ್ಲಿ ಆತನೊಬ್ಬನ ಹೆಸರೇ ಪ್ರಮುಖವಾಗಿ ಉಲ್ಲೇಖವಾಗಿದೆ.&lt;/p&gt;&lt;p&gt;&lt;strong&gt;ಅನ್ನ ಹಾಕಿದ ಮನೆಗೇ ದ್ರೋಹ ಬಗೆದ ಪಾಪಿ:&lt;/strong&gt;&lt;/p&gt;&lt;p&gt;ಸ್ಥಳೀಯರ ಪ್ರಕಾರ, ಉಲ್ಲಾಸ್ ಗೌಡ ಆ ಕುಟುಂಬಕ್ಕೆ ಅತ್ಯಂತ ಆಪ್ತನಾಗಿದ್ದ, ಮನೆಯ ಮಗನಂತಿದ್ದವನು. ಅದೇ ಮನೆಯಲ್ಲಿ ಎಷ್ಟೋ ದಿನ ಅನ್ನ ತಿಂದಿದ್ದ. ಆದರೆ ರಕ್ಷಿತಾ ಮದುವೆ ನಿಶ್ಚಯವಾದ ಮೇಲೆ ಆತನ ಕಣ್ಣು ಕೆಂಪಾಗಿದೆ. 'ರಕ್ಷಿತಾಳನ್ನು ನನಗೇ ಕೊಟ್ಟು ಮದುವೆ ಮಾಡಿ' ಎಂದು ಆಕೆಯ ತಂದೆಯ ಬಳಿ ಹಠ ಹಿಡಿದಿದ್ದಾನೆ. ಆದರೆ ಅದಕ್ಕೆ ತಂದೆ ಒಪ್ಪದಿದ್ದಾಗ ವಿಕೃತ ರೂಪ ತಳೆದಿದ್ದಾನೆ.&lt;/p&gt;&lt;p&gt;&lt;strong&gt;ಮದುವೆ ಗಂಡಿಗೆ ಸಂದೇಶ, ಫೋಟೋ ರವಾನೆ:&lt;/strong&gt;&lt;/p&gt;&lt;p&gt;ರಕ್ಷಿತಾ ಯಾರನ್ನು ಮದುವೆಯಾಗಬೇಕಿತ್ತೋ, ಆ ಹುಡುಗನಿಗೆ ಉಲ್ಲಾಸ್ ಗೌಡ ಮೆಸೇಜ್ ಮಾಡಿದ್ದಾನೆ. 'ನಾನು ಮತ್ತು ರಕ್ಷಿತಾ ಪ್ರೀತಿಸುತ್ತಿದ್ದೇವೆ, ಅವಳನ್ನು ನೀನು ಮದುವೆಯಾಗಬೇಡ' ಎಂದು ಹೇಳಿ ಒಂದೆರಡು ಫೋಟೋಗಳನ್ನೂ ಕಳುಹಿಸಿ ಮದುವೆ ಮುರಿಯಲು ಯತ್ನಿಸಿದ್ದಾನೆ. ಆದರೆ, ಈ ಸಮಯದಲ್ಲಿ ಮದುವೆಯಾಗಬೇಕಿದ್ದ ಹುಡುಗ, ಹುಡುಗಿಯ ಮನೆಗೆ ಬಂದು 'ಏನೇ ಆದರೂ ನಿಮ್ಮ ಮಗಳನ್ನೇ ನಾನು ಮದುವೆಯಾಗುತ್ತೇನೆ' ಎಂದು ಧೈರ್ಯ ತುಂಬಿ ಹೋಗಿದ್ದಾನೆ. ಆದರೂ, ಸಮಾಜದಲ್ಲಿ ಆಗಬಹುದಾದ ಅಪಮಾನ ಹಾಗೂ ಉಲ್ಲಾಸ್ ನೀಡುತ್ತಿದ್ದ ಮಾನಸಿಕ ಕಿರುಕುಳಕ್ಕೆ ಹೆದರಿದ ಅಪ್ಪ, ಅಮ್ಮ ಮತ್ತು ಮಗಳು ಮೂವರೂ ವಿಷ ಸೇವಿಸಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.&lt;/p&gt;&lt;p&gt;ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಅನ್ನ ಹಾಕಿದ ಮನೆಗೇ ಕೊಳ್ಳಿ ಇಟ್ಟ ಉಲ್ಲಾಸ್ ಗೌಡನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆತನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/marriage-home-turns-into-graveyard-family-death-due-to-ullas-gowda-harassment-videoshow-8kmpzcc"/>
        </item>
        <item>
            <title><![CDATA[ಮೈಸೂರು ರೆಸ್ಟೋ ಪಬ್‌ನಲ್ಲಿ  ಸಿಲಿಂಡರ್ ಬ್ಲಾಸ್ಟ್, ಮೈ ಪೂರ್ತಿ ಸುಟ್ಟ ಗಾಯದಿಂದ ಆಸ್ಪತ್ರೆ ಸೇರಿದ ಸ್ಯಾಂಡಲ್‌ವುಡ್‌ ಹಿರೋ!]]></title>
            <link>https://kannada.asianetnews.com/gallery/karnataka-districts/mysuru-resto-pub-fire-updates-owner-sandalwood-actor-preetham-and-many-injured-in-fox-den-cylinder-blast-gdp-9znttxz</link>
            <guid isPermaLink="true">https://kannada.asianetnews.com/gallery/karnataka-districts/mysuru-resto-pub-fire-updates-owner-sandalwood-actor-preetham-and-many-injured-in-fox-den-cylinder-blast-gdp-9znttxz</guid>
            <pubDate>Mon, 15 Jun 2026 18:55:44 +0530</pubDate>
            <description><![CDATA[ಮೈಸೂರಿನ ದಟ್ಟಗಳ್ಳಿ ಬಳಿಯ ನಟ ಪ್ರೀತಂ ಪುಮೀತ್ ಮಾಲೀಕತ್ವದ 'ಫಾಕ್ಸ್ ಡೆನ್' ಪಬ್&zwnj;ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಮೃತಪಟ್ಟು, ನಟ ಪ್ರೀತಂ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv5pe0pa37vbv513zb1fhexy,imgname-mysuru-resto-bar-fire--6--1781528986313.jpg" type="image/jpeg" height="390" width="690"/>
            <content:encoded><![CDATA[ಮೈಸೂರಿನ ದಟ್ಟಗಳ್ಳಿ ಬಳಿಯ ನಟ ಪ್ರೀತಂ ಪುಮೀತ್ ಮಾಲೀಕತ್ವದ 'ಫಾಕ್ಸ್ ಡೆನ್' ಪಬ್&zwnj;ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಮೃತಪಟ್ಟು, ನಟ ಪ್ರೀತಂ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.&lt;img&gt;&lt;p&gt;ಮೈಸೂರು ನಗರದ ಹೊರವಲಯದಲ್ಲಿ ಆರ್.ಟಿ.ನಗರದ ದಟ್ಟಗಳ್ಳಿ ಸಮೀಪವಿರುವ ಪ್ರಖ್ಯಾತ ರೆಸ್ಟೋ ಪಬ್&zwnj;ನಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದ ಬೆಂಕಿ ಅವಘಡಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಆ ಪಬ್ ಮಾಲೀಕ ಸ್ಯಾಂಡಲ್&zwnj;ವುಡ್&zwnj; ಚಿತ್ರನಟ ಎಂದು ತಿಳಿದುಬಂದಿದ್ದು, ನಟನೂ ಸೇರಿದಂತೆ ಐವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಈ ರೆಸ್ಟೋ ಪಬ್&zwnj; ಗೆ ಭೇಟಿ ನೀಡಿದ್ದಾರೆ. ಇದರ ಸಂಪೂರ್ಣ ವಿವರಣೆ ಇಲ್ಲಿದೆ.&lt;/p&gt;&lt;img&gt;&lt;p&gt;ಕನ್ನಡದ &lsquo;ಬ್ರಹ್ಮ ವಿಷ್ಣು ಮಹೇಶ್ವರ&rsquo; ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದ ಪ್ರೀತಂ ಪುಮೀತ್, ಮೈಸೂರು ನಗರದ ಆರ್.ಟಿ.ನಗರದ ದಟ್ಟಗಳ್ಳಿ ಸಮೀಪ 'ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್&zwnj;' (Fox Den Liquor Garage) ಹೆಸರಿನ ರೆಸ್ಟೋ ಪಬ್ ನಡೆಸುತ್ತಿದ್ದರು. ಈ ಹಿಂದೆ ಶ್ರೀರಂಗಪಟ್ಟಣದ ಬಳಿ 'ರಿವರ್ ರಾಂಚ್' ರೆಸಾರ್ಟ್ ನಡೆಸುತ್ತಿದ್ದ ಇವರು, ಇತ್ತೀಚೆಗೆ ದಕ್ಷಿಣ ಆಫ್ರಿಕಾದ ವಿಶಿಷ್ಟ 'ಮಾರಾ' (Mara) ಬುಡಕಟ್ಟು ಜನಾಂಗದ ಶೈಲಿಯಲ್ಲಿ ಈ ಹೊಸ ರೆಸ್ಟೋ ಬಾರ್ ಅನ್ನು ವಿನ್ಯಾಸಗೊಳಿಸಿ ಆರಂಭಿಸಿದ್ದರು.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ವಾರದ ಮೊದಲ ದಿನವಾದ ಸೋಮವಾರದಂದು ಪಬ್&zwnj;ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇರುತ್ತದೆ. ಹೀಗಾಗಿ, ಗ್ರಾಹಕರನ್ನು ಆಕರ್ಷಿಸಲು ಮಾಲೀಕ ಪ್ರೀತಂ ಇಂದು ವಿಶೇಷ ಆಫರ್ ಒಂದನ್ನು ಘೋಷಿಸಿದ್ದರು. ರೆಸ್ಟೋ ಪಬ್&zwnj;ನಲ್ಲಿ ಗ್ರಾಹಕರು ಯಾವುದೇ ಆಹಾರ ಪದಾರ್ಥ (Food Item) ಆರ್ಡರ್ ಮಾಡಿದರೂ ಕೇವಲ 175 ರೂಪಾಯಿ ಮಾತ್ರ ಎಂದು ನಿಗದಿಪಡಿಸಲಾಗಿತ್ತು.&lt;/p&gt;&lt;p&gt;ಈ ಆಕರ್ಷಕ ಆಫರ್&zwnj;ನಿಂದಾಗಿ ಸೋಮವಾರವಾಗಿದ್ದರೂ ಸಹ ಪಬ್&zwnj;ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದರು. ಗ್ರಾಹಕರು ಆಹಾರ ಮತ್ತು ಪಾನೀಯದ ಮಜಾ ಸವಿಯುತ್ತಿದ್ದಾಗಲೇ ಕಿಚನ್ ಭಾಗದಲ್ಲಿ ಹಠಾತ್ತನೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಇಡೀ ರೆಸ್ಟೋ ಪಬ್ ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.&lt;/p&gt;&lt;img&gt;&lt;p&gt;ಬೆಂಕಿ ಅವಘಡ ಸಂಭವಿಸಿದಾಗ ಮಾಲೀಕರಾದ ನಟ ಪ್ರೀತಂ ಹಾಗೂ ಅವರ ಆಪ್ತ ಸ್ನೇಹಿತ ಅವಿನಾಶ್ ಸ್ಥಳದಲ್ಲೇ ಇದ್ದರು. ಗಿಜಿಗುಡುತ್ತಿದ್ದ ಪಬ್&zwnj;ನಲ್ಲಿ ಏಕಾಏಕಿ ಬೆಂಕಿ ಆವರಿಸಿದ್ದರಿಂದ ಸಾರ್ವಜನಿಕರು ಮತ್ತು ಸಿಬ್ಬಂದಿ ಹೊರಗೆ ಓಡಲು ಯತ್ನಿಸಿದ್ದಾರೆ. ಆದರೆ, ಬೆಂಕಿಯ ತೀವ್ರತೆಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಜೀವಂತವಾಗಿ ದಹನವಾಗಿದ್ದಾರೆ.&lt;/p&gt;&lt;h3&gt;ಮೃತರ ವಿವರ:&lt;/h3&gt;&lt;ul&gt; &lt;li&gt;ಸಾಹಿನ್ (26 ವರ್ಷ) - ಮೂಲತಃ ಡಾರ್ಜಿಲಿಂಗ್&zwnj;&lt;/li&gt; &lt;li&gt;ಪ್ರಕಾಶ್ (24 ವರ್ಷ) - ಮೂಲತಃ ನೇಪಾಳ&lt;/li&gt;&lt;/ul&gt;&lt;img&gt;&lt;p&gt;ಘಟನೆಯಲ್ಲಿ ಪಬ್ ಮಾಲೀಕ ಪ್ರೀತಂ ಮತ್ತು ಅವರ ಸ್ನೇಹಿತ ಅವಿನಾಶ್ ಸೇರಿದಂತೆ ಐವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ಪ್ರೀತಂ ಕೈ ಹಾಗೂ ಮುಖದ ಭಾಗಕ್ಕೆ ಗಂಭೀರ ಸುಟ್ಟ ಗಾಯಗಳಾಗಿವೆ. ಗೆಳೆಯ ಅವಿನಾಶ್ (27 ವರ್ಷ) ತಲೆಯ ಭಾಗಕ್ಕೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ. ಇನ್ನು ಪಬ್&zwnj;ಗೆ ಬಂದಿದ್ದ ಸೋನು (25 ವರ್ಷ), ರಮೇಶ್ (25 ವರ್ಷ), ಮಹದೇವಪ್ರಸಾದ್ (32 ವರ್ಷ), ಮತ್ತು ಪ್ರಜ್ವಲ್ (26 ವರ್ಷ) ಎಂಬುವವರಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;img&gt;&lt;p&gt;ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಲಿಂಡರ್ ಸೋರಿಕೆಯೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೈಸೂರಿನ ದಟ್ಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಸಿದ್ಧ ನಟನ ಪಬ್&zwnj;ನಲ್ಲೇ ಈ ಘಟನೆ ನಡೆದಿರುವುದು ಮೈಸೂರು ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.&amp;nbsp;&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/mysuru-resto-pub-fire-updates-owner-sandalwood-actor-preetham-and-many-injured-in-fox-den-cylinder-blast-gdp-9znttxz"/>
        </item>
        <item>
            <title><![CDATA[ಅಬಕಾರಿ ಅಧಿಕಾರಿಯ ಅಕ್ರಮ ಸಾಮ್ರಾಜ್ಯಕ್ಕೆ ಇಡಿ ಶಾಕ್, ಜಾರಕಿಹೊಳಿ ಭಾವ ಮಂಜುನಾಥ್ ವಶಕ್ಕೆ, ಲೆಕ್ಕವಿಲ್ಲದ ಬೇನಾಮಿ ಬಾರ್ ಲೈಸೆನ್ಸ್!]]></title>
            <link>https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt</link>
            <guid isPermaLink="true">https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt</guid>
            <pubDate>Wed, 24 Jun 2026 14:44:49 +0530</pubDate>
            <description><![CDATA[ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲೆ ಅಕ್ರಮ ಆಸ್ತಿ ಮತ್ತು ಹವಾಲಾ ಆರೋಪದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ನಡೆದ ಶೋಧಕಾರ್ಯದಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್&zwnj;ಗಳು ಪತ್ತೆಯಾಗಿದ್ದು, ಅಧಿಕಾರಿ ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವು ರಾಜ್ಯ ಅಬಕಾರಿ ಇಲಾಖೆಯಲ್ಲಿ ದೊಡ್ಡ ಹಗರಣವನ್ನು ಬಯಲುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvwebjrzd71hqnf1qes1avxc,imgname-karnataka-excise-scam-y-manjunath-1782292269854.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು / ಬೆಳಗಾವಿ: &lt;/strong&gt;ರಾಜ್ಯ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಹಗರಣವೊಂದು ಬೆಳಕಿಗೆ ಬಂದಿದ್ದು, ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ (Additional Commissioner) ವೈ. ಮಂಜುನಾಥ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿ ಪತಿ ಹಾಗೂ ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ. ಮಂಜುನಾಥ್ ಅವರನ್ನು ಕೊನೆಗೂ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ವಿದೇಶಿ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ಲಿಂಕ್ ಹಾಗೂ ಅಕ್ರಮ ಆಸ್ತಿ ಸಂಪಾದನೆ (Disproportionate Assets) ಆರೋಪದ ಹಿನ್ನೆಲೆಯಲ್ಲಿ ಈ ಜಂಟಿ ಕಾರ್ಯಾಚರಣೆ ನಡೆದಿದೆ. ಕರ್ನಾಟಕ, ಗೋವಾ ಮತ್ತು ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಭಾಗಗಳ ಇಡಿ ಅಧಿಕಾರಿಗಳನ್ನೊಳಗೊಂಡ ಜಂಟಿ ಪಡೆಗಳು, 10ಕ್ಕೂ ಹೆಚ್ಚು ಅರೆಸೇನಾ ಪಡೆ (CRPF) ಸಿಬ್ಬಂದಿಗಳ ಬಿಗಿ ಭದ್ರತೆಯಲ್ಲಿ ಈ ದಾಳಿ ನಡೆಸಿವೆ.&lt;/p&gt;&lt;h2&gt;ರಾಜ್ಯದ 6 ಪ್ರಮುಖ ಕೇಂದ್ರಗಳಲ್ಲಿ ಏಕಕಾಲಕ್ಕೆ ಇಡಿ ರೇಡ್!&lt;/h2&gt;&lt;p&gt;ಬೆಳ್ಳಂಬೆಳಗ್ಗೆ 5:30ರ ಸುಮಾರಿಗೆ ಇಡಿ ಅಧಿಕಾರಿಗಳು ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿ ವೈ. ಮಂಜುನಾಥ್ ಹಾಗೂ ಅವರ ಆಪ್ತ ಜಾಲವನ್ನು ಗುರಿಯಾಗಿಸಿಕೊಂಡು ಬೆಂಗಳೂರು, ಬೆಳಗಾವಿ, ಮೈಸೂರು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಮತ್ತು ಅಥಣಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರು:&lt;/strong&gt; ರೇಸ್&zwnj;ಕೋರ್ಸ್ ರಸ್ತೆಯ (ಸ್ಯಾಂಕಿ ರಸ್ತೆ) ಪ್ರತಿಷ್ಠಿತ 'ದಿ ಸಮ್ಮಿಟ್' ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಮಂಜುನಾಥ್ ಅವರ ಐಷಾರಾಮಿ ಫ್ಲಾಟ್ ಮೇಲೆ ಮಹಿಳಾ ಇಡಿ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ, ಅಲ್ಲಿಯೇ ಇದ್ದ ಮಂಜುನಾಥ್ ಅವರನ್ನು ಸುದೀರ್ಘ ವಿಚಾರಣೆಯ ಬಳಿಕ ವಶಕ್ಕೆ ಪಡೆದಿದೆ.&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ಮಂಜುನಾಥ್ ಅವರ ಮುಖ್ಯ ನಿವಾಸದ ಮೇಲೆ ದಾಳಿ ನಡೆದಿದೆ. ಮಹತ್ವದ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಡಿ ಡಿವೈಎಸ್&zwnj;ಪಿ (DySP) ದರ್ಜೆಯ ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ದೌಡಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ವಿಜಯನಗರ (ಅರಸೀಕೆರೆ):&lt;/strong&gt; ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಮಂಜುನಾಥ್ ಅವರಿಗೆ ಸೇರಿದ ಎರಡು ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.&lt;/p&gt;&lt;p&gt;&lt;strong&gt;ಮೈಸೂರು:&lt;/strong&gt; ದಟ್ಟಗಳ್ಳಿ 3ನೇ ಹಂತದ 5ನೇ ಕ್ರಾಸ್&zwnj;ನಲ್ಲಿರುವ #3638 'ಸ್ವಯಂಭು' ನಿವಾಸದ ಮೇಲೆ ದಾಳಿ ನಡೆದಿದೆ. ಇದು ಕೂಡ ಮಂಜುನಾಥ್ ಅವರ ಆಸ್ತಿಯಾಗಿದ್ದು, ಇಲ್ಲಿ ಅವರ ಆತ್ಮೀಯ ಸ್ನೇಹಿತೆ ಹಾಗೂ ಪ್ರಸ್ತುತ ಅಬಕಾರಿ ಇಲಾಖೆ ಇನ್ಸ್&zwnj;ಪೆಕ್ಟರ್ ಆಗಿರುವ ಯಮುನಾ ಮತ್ತು ಅವರ ತಾಯಿ ಸುಲೋಚನಾ ವಾಸವಾಗಿದ್ದರು. ಇಡಿ ಅಧಿಕಾರಿಗಳು ತೀವ್ರ ದಾಖಲೆ ಪರಿಶೀಲನೆ ನಡೆಸಿ, ಹೆಚ್ಚಿನ ವಿಚಾರಣೆಗಾಗಿ ಯಮುನಾ ಅವರನ್ನು ಮುಖ ಮುಚ್ಚಿಕೊಂಡು ವಾಹನದಲ್ಲಿ ಕರೆದೊಯ್ದಿದ್ದಾರೆ.&lt;/p&gt;&lt;h2&gt;ಮಂಜುನಾಥ್ ಆಪ್ತ ಅಧಿಕಾರಿಗಳಿಗೂ ಇಡಿ ಶಾಕ್!&lt;/h2&gt;&lt;p&gt;ವೈ. ಮಂಜುನಾಥ್ ಅವರ ಅಕ್ರಮ ಜಾಲದಲ್ಲಿ ಶಾಮೀಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಅವರ ಆಪ್ತ ವಲಯದ ಇತರ ಅಧಿಕಾರಿಗಳ ಮೇಲೂ ಇಡಿ ಅಧಿಕಾರಿಗಳು ಮುಗಿಬಿದ್ದಿದ್ದಾರೆ:&lt;/p&gt;&lt;p&gt;ಸತೀಶ್ ಶಿವಶಂಕರ ಕಾಗಲೆ (ಎಸ್ಪಿ, ತುಮಕೂರು ಅಬಕಾರಿ ಇಲಾಖೆ): ಮಂಜುನಾಥ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರ ಬೆಳಗಾವಿಯ ಶ್ರೀನಗರದಲ್ಲಿರುವ ಅಪಾರ್ಟ್&zwnj;ಮೆಂಟ್ ಹಾಗೂ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಐದಾರು ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.&lt;/p&gt;&lt;p&gt;ವಿಶ್ವನಾಥ್ ಗಾಣಿಗೇರ (ಡಿವೈಎಸ್ಪಿ, ಚಿಕ್ಕೋಡಿ ಅಬಕಾರಿ ಇಲಾಖೆ): ಬೆಳಗಾವಿ ನಗರದ ಬಸವ ಕಾಲೋನಿಯಲ್ಲಿರುವ ಇವರ ನಿವಾಸದ ಮೇಲೂ ದಾಳಿ ನಡೆದಿದ್ದು, ಇವರೂ ಸಹ ಅಕ್ರಮ ವ್ಯವಹಾರಕ್ಕೆ ಸಾಥ್ ನೀಡಿದ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;h2&gt;ದಾಳಿ ವೇಳೆ ಪತ್ತೆಯಾದವು ನೂರಾರು 'ಬೇನಾಮಿ ಬಾರ್ ಲೈಸೆನ್ಸ್'ಗಳು!&lt;/h2&gt;&lt;p&gt;ಇಡಿ ನಡೆಸಿದ ಸುದೀರ್ಘ ಪರಿಶೀಲನೆಯ ವೇಳೆ ಮಂಜುನಾಥ್ ಅವರ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ನಿವಾಸಗಳಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್&zwnj;ಗಳು ಹಾಗೂ ಅವುಗಳ ಅಗ್ರಿಮೆಂಟ್&zwnj; ಬಾಂಡ್&zwnj;ಗಳು ಪತ್ತೆಯಾಗಿವೆ.&lt;/p&gt;&lt;p&gt;ಅಕ್ರಮದ ನೆಟ್&zwnj;ವರ್ಕ್: ಮಂಜುನಾಥ್ ಅವರು ಬೆಳಗಾವಿ, ದಾವಣಗೆರೆ, ಬಳ್ಳಾರಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬೇನಾಮಿ ಹೆಸರಿನಲ್ಲಿ ದೊಡ್ಡ ಪ್ರಮಾಣದ ಬಾರ್ ಮತ್ತು ರೆಸ್ಟೋರೆಂಟ್&zwnj;ಗಳನ್ನು ಸ್ಥಾಪಿಸಿದ್ದರು. ಈ ಬೇನಾಮಿ ಬಾರ್&zwnj;ಗಳಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಇವರು ವಿದೇಶಗಳಿಗೆ ಅಕ್ರಮವಾಗಿ ವರ್ಗಾವಣೆ (ಹವಾಲಾ ದಂಧೆ) ಮಾಡಿ, ಅಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;2013ರ ಲೋಕಾಯುಕ್ತ ಕೇಸ್; ಪ್ರಭಾವ ಬಳಸಿ ಹುದ್ದೆ ಸೃಷ್ಟಿ!&lt;/h2&gt;&lt;p&gt;ವೈ. ಮಂಜುನಾಥ್ ಅವರ ಅಕ್ರಮಗಳ ಇತಿಹಾಸ ಇಂದಿನದ್ದಲ್ಲ. ಈ ಹಿಂದೆ 2013ರಲ್ಲಿ ಮೈಸೂರು ಅಬಕಾರಿ ಡಿಸಿ (DC) ಆಗಿದ್ದಾಗ ಇವರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಬಾರ್ ಲೈಸೆನ್ಸ್ ನವೀಕರಣದಲ್ಲಿ (Renewal) ಕೋಟ್ಯಂತರ ರೂಪಾಯಿ ಲಂಚ ಹಾಗೂ ಸಂಬಳಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ (Disproportionate Assets) ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಲಾಖಾ ತನಿಖೆ (DE) ನಡೆದು ಪ್ರಸ್ತುತ ಅದು ಮುಚ್ಚಲ್ಪಟ್ಟಿತ್ತಾದರೂ, ಲೋಕಾಯುಕ್ತದ ಅದೇ ಅಕ್ರಮ ಆಸ್ತಿ ಗಳಿಕೆಯ ಮೂಲ ಕೇಸ್ ಅನ್ನು ಆಧರಿಸಿ ಈಗ ಇಡಿ ಅಖಾಡಕ್ಕಿಳಿದಿದೆ.&lt;/p&gt;&lt;h2&gt;ರಾಜಕೀಯ ಪ್ರಭಾವದ ಆರೋಪ:&amp;nbsp;&lt;/h2&gt;&lt;p&gt;ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ಕೇವಲ ಬೆಂಗಳೂರು ರೇಂಜ್ ಮಾತ್ರ ಇತ್ತು. ಆದರೆ ಮಂಜುನಾಥ್ ಅವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ವಿಶೇಷವಾಗಿ 'ಬೆಳಗಾವಿ ಅಬಕಾರಿ ರೇಂಜ್' ಅನ್ನು ಸೃಷ್ಟಿಸಿಕೊಂಡಿದ್ದರು. ಇದರ ಮೂಲಕ ರಾಜ್ಯದ ಅರ್ಧದಷ್ಟು ಜಿಲ್ಲೆಗಳ ಅಬಕಾರಿ ನಿಯಂತ್ರಣದ ಸರ್ವಾಧಿಕಾರವನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡು, ಕರಾವಳಿ ಮತ್ತು ಗಡಿ ಭಾಗದಲ್ಲಿ ವ್ಯಾಪಕ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಸದ್ಯ ಇಡಿ ಅಧಿಕಾರಿಗಳ ವಶದಲ್ಲಿರುವ ವೈ. ಮಂಜುನಾಥ್ ಹಾಗೂ ವಶಪಡಿಸಿಕೊಳ್ಳಲಾದ ಲೈಸೆನ್ಸ್ ದಾಖಲೆಗಳಿಂದ ಇಲಾಖೆಯ ಇನ್ನೂ ಹಲವು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt"/>
        </item>
        <item>
            <title><![CDATA[ಮೈಸೂರು: ಲಿಕ್ಕರ್ ಗ್ಯಾರೇಜ್ ಪಬ್ ನಲ್ಲಿ ಸಿಲಿಂಡರ್ ಸ್ಫೋಟ,  ಹೊರ ರಾಜ್ಯದ ಇಬ್ಬರು ಬಲಿ, ಹಲವರು ಗಂಭೀರ!]]></title>
            <link>https://kannada.asianetnews.com/karnataka-districts/karnataka-news-cylinder-blast-at-fox-den-liquor-garage-pub-in-mysuru-gdp/articleshow-kqx8yca</link>
            <guid isPermaLink="true">https://kannada.asianetnews.com/karnataka-districts/karnataka-news-cylinder-blast-at-fox-den-liquor-garage-pub-in-mysuru-gdp/articleshow-kqx8yca</guid>
            <pubDate>Mon, 15 Jun 2026 16:49:10 +0530</pubDate>
            <description><![CDATA[ಮೈಸೂರಿನ 'ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್' ಪಬ್&zwnj;ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಯುವಕರು ಮೃತಪಟ್ಟು, ಹಲವರು ಗಾಯಗೊಂಡಿದ್ದು, ಪ್ರಾಣ ಉಳಿಸಿಕೊಳ್ಳಲು ಜನರು ಕಟ್ಟಡದಿಂದ ಜಿಗಿದಿದ್ದಾರೆ. ಸದ್ಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv5fzyecmdtar28mcmbhyxdx,imgname-cylinder-blast-at-pub-in-mysuru-1781522233803.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ನಗರದ ಆರ್.ಟಿ.ನಗರದ ದಟ್ಟಗಳ್ಳಿ ಸಮೀಪವಿರುವ ಪ್ರಸಿದ್ಧ &lsquo;ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್&rsquo; (Fox Den Liquor Garage) ಪಬ್&zwnj;ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಪಬ್&zwnj;ನಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಪಾರ್ಟಿಗೆ ಬಂದಿದ್ದ ಹಲವು ಗ್ರಾಹಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ಅಗ್ನಿ ದುರಂತದಲ್ಲಿ ಡಾರ್ಜಲಿಂಗ್ ಮೂಲದ ಸಾಹಿನ್ (26) ಮತ್ತು ನೇಪಾಳ ಮೂಲದ ಪ್ರಕಾಶ್ (24) ಎಂಬ ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ಪಾರ್ಟಿಯಲ್ಲಿದ್ದ ಹಲವರಿಗೆ ಗಾಯವಾಗಿದೆ.&lt;/p&gt;&lt;h2&gt;ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ: ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಜನ!&lt;/h2&gt;&lt;p&gt;ಪಬ್&zwnj;ನ ಅಡುಗೆ ಕೋಣೆಯಲ್ಲಿ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಸ್ಫೋಟದ ಭೀಕರತೆಗೆ ಪಬ್&zwnj;ನ ಒಳಗಡೆ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ವ್ಯಾಪಿಸಿದ್ದು, ಇಡೀ ಕಟ್ಟಡವನ್ನು ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿತ್ತು. ಏಕಾಏಕಿ ಸಂಭವಿಸಿದ ಈ ಘಟನೆಯಿಂದ ಪಬ್&zwnj;ನಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ದಿಕ್ಕುತೋಚದೆ ಕಂಗಾಲಾಗಿದ್ದಾರೆ. ಕಟ್ಟಡದ ಒಳಗೆ ಹೊಗೆ ತುಂಬಿಕೊಂಡು ಉಸಿರಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾದಾಗ, ಒಳಗಿದ್ದ ಕೆಲವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪಬ್&zwnj;ನ ಮೇಲಂತಸ್ತಿನಿಂದ ಕೆಳಗೆ ಜಿಗಿದು ಪಾರಾಗಲು ಯತ್ನಿಸಿದ್ದಾರೆ. ಈ ವೇಳೆ ಕೆಲವರಿಗೆ ಮೂಳೆ ಮುರಿತ ಹಾಗೂ ಗಂಭೀರ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ: ಗಾಯಾಳುಗಳು ಆಸ್ಪತ್ರೆಗೆ ದಾಖಲು&lt;/h2&gt;&lt;p&gt;ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹಲವಾರು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಇಡೀ ಕಟ್ಟಡವನ್ನು ಆವರಿಸಿದ್ದ ಭಾರಿ ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದ್ದು, ಕಟ್ಟಡದ ಒಳಗಿದ್ದವರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.&lt;/p&gt;&lt;h2&gt;ಗಾಯಾಳುಗಳ ಸ್ಥಿತಿ:&lt;/h2&gt;&lt;p&gt;ಸಿಲಿಂಡರ್ ಸ್ಫೋಟದಿಂದಾಗಿ ದೇಹದ ವಿವಿಧ ಭಾಗಗಳಲ್ಲಿ ಸುಟ್ಟಗಾಯಗಳಾಗಿದ್ದ ಪಬ್&zwnj;ನ ಸಿಬ್ಬಂದಿ ಮತ್ತು ಗ್ರಾಹಕರನ್ನು ತಕ್ಷಣವೇ ಸ್ಥಳೀಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ದುರಂತ ಸಂಭವಿಸಿದ ಸ್ಥಳಕ್ಕೆ ಮೈಸೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಬ್&zwnj;ನಲ್ಲಿ ನಿಯಮಾನುಸಾರ ಅಗ್ನಿ ಸುರಕ್ಷತಾ ಕ್ರಮಗಳನ್ನು (Fire Safety Measures) ಕೈಗೊಳ್ಳಲಾಗಿತ್ತೇ? ವಾಣಿಜ್ಯ ಬಳಕೆಯ ಸಿಲಿಂಡರ್&zwnj;ಗಳನ್ನು ಸುರಕ್ಷಿತವಾಗಿ ಇಡಲಾಗಿತ್ತೇ? ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಪ್ರಕರಣ ದಾಖಲಾಗಿದ್ದು, ಮೃತರ ಕುಟುಂಬದವರಿಗೆ ಮಾಹಿತಿ ರವಾನಿಸಲಾಗಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-news-cylinder-blast-at-fox-den-liquor-garage-pub-in-mysuru-gdp/articleshow-kqx8yca"/>
        </item>
        <item>
            <title><![CDATA[ಮೂರು ವರ್ಷದಿಂದ ಬತ್ತಿದ್ದ ಸೋಮನಹಳ್ಳಿ, ಮರದೂರು ಭಾಗದ ಕೆರೆಗಳಿಗೆ ಜೀವ ಕಳೆ; ಶಾಸಕರೇ ಇಲ್ಲಿ ಭಗೀರಥ]]></title>
            <link>https://kannada.asianetnews.com/karnataka-districts/mysuru-fill-dried-up-lakes-in-somanahalli-maradur-of-hunasuru-at-a-cost-of-rs-5-45-crore-has-been-initiated-mrq/articleshow-mdmy5gu</link>
            <guid isPermaLink="true">https://kannada.asianetnews.com/karnataka-districts/mysuru-fill-dried-up-lakes-in-somanahalli-maradur-of-hunasuru-at-a-cost-of-rs-5-45-crore-has-been-initiated-mrq/articleshow-mdmy5gu</guid>
            <pubDate>Wed, 10 Jun 2026 10:47:20 +0530</pubDate>
            <description><![CDATA[&lt;p&gt;ಹುಣಸೂರಿನ ಸೋಮನಹಳ್ಳಿ ಮತ್ತು ಮರದೂರು ಭಾಗದ ಬತ್ತಿದ್ದ ಕೆರೆಗಳಿಗೆ ನೀರು ತುಂಬಿಸಲು ₹5.45 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಮೂರು ವರ್ಷಗಳಿಂದ ನೀರಿಲ್ಲದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದವು, ಈ ಯೋಜನೆಯು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktqz94e9148nmvy8msh77cqg,imgname-lake-1781068501449.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಮೂರು ವರ್ಷಗಳಿಂದ ಮಳೆಗಾಲ ಬಂದರೂ ನೀರು ಕಾಣದೆ ಬತ್ತಿ ನಿಂತಿದ್ದ ಸೋಮನಹಳ್ಳಿ ಹಾಗೂ ಮರದೂರು ಭಾಗದ ಕೆರೆಗಳು ಮತ್ತೆ ಜೀವ ಪಡೆಯುವ ಹಂತಕ್ಕೆ ಬಂದಿವೆ. ನೀರಿಗಾಗಿ ಪರದಾಡುತ್ತಿದ್ದ ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಶಾಸಕ ಜಿ.ಡಿ. ಹರೀಶ್&zwnj;ಗೌಡ ಅವರು ಮೂರು ಕೋಟಿ ವೆಚ್ಚದ ಪೈಪ್&zwnj;ಲೈನ್&zwnj;ಕಾಮಗಾರಿಗೆ ಚಾಲನೆ ನೀಡುವ ಮೂಲಕ ಕೆರೆಗಳಿಗೆ ನೀರು ಹರಿಸುವ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈಗ ಒಟ್ಟು 5.45 ಕೋಟಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.&lt;/p&gt;&lt;p&gt;ಕೆರೆಗಳಲ್ಲಿ ನೀರು ಇಲ್ಲದ ಪರಿಣಾಮ ಈ ಭಾಗದ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿದ್ದವು. ಅಂತರ್ಜಲ ಮಟ್ಟ ಕುಸಿದ ಪರಿಣಾಮ ರೈತರು, ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದರು. ಈ ಸಂದರ್ಭದಲ್ಲಿ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ದೊರೆತಿರುವುದು ಈ ಭಾಗದ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಸೋಮನಹಳ್ಳಿ ಸೇರಿದಂತೆ ನಾಲ್ಕು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಈ ಹಿಂದೆಯೇ ರೂಪಿಸಲಾಗಿತ್ತು. ಆದರೆ ಮೊದಲು ಅಳವಡಿಸಲಾಗಿದ್ದ ಪೈಪ್&zwnj;ಲೈನ್&zwnj;ಪದೇ ಪದೆ ಹಾಳಾಗುತ್ತಿದ್ದ ಕಾರಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಆಗಿರಲಿಲ್ಲ. ಪರಿಣಾಮವಾಗಿ ಕಳೆದ ಮೂರು ವರ್ಷಗಳಿಂದ ಕೆರೆಗಳು ನೀರಿಲ್ಲದೆ ಬತ್ತಿ ನಿಂತಿದ್ದವು.&lt;/p&gt;&lt;h2&gt;&lt;strong&gt;ಸರ್ಕಾರದಿಂದ ಮೂರು ಕೋಟಿ ರು. ಅನುದಾನ ಮಂಜೂರು&lt;/strong&gt;&lt;/h2&gt;&lt;p&gt;ಈ ನಡುವೆ ಸಮಸ್ಯೆಯ ಗಂಭೀರತೆಯನ್ನು ಅರಿತ ಜಿ.ಡಿ. ಹರೀಶ್&zwnj;ಗೌಡ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಶಾಶ್ವತ ಪರಿಹಾರಕ್ಕೆ ಮುಂದಾದರು. ಸುಮಾರು 2.5 ಕಿ.ಮೀ. ಉದ್ದದ ಎಂಎಸ್&zwnj;ಪೈಪ್&zwnj;ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಿ ಸರ್ಕಾರದಿಂದ ಮೂರು ಕೋಟಿ ರು. ಅನುದಾನ ಮಂಜೂರು ಮಾಡಿಸಿಕೊಂಡರು. ಇದೀಗ ಕಾಮಗಾರಿ ಆರಂಭವಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಕೆರೆಗಳಿಗೆ ನಿರಂತರವಾಗಿ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.&lt;/p&gt;&lt;p&gt;ಶಾಸಕ ಜಿ.ಡಿ. ಹರೀಶ್&zwnj;ಗೌಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೆರೆಗಳು ತುಂಬಿದರೆ ರೈತರ ಬದುಕು ಹಸನಾಗುತ್ತದೆ. ಸುತ್ತಮುತ್ತಲಿನ ಹಳ್ಳಿಗಳ ಜಲಮಟ್ಟ ಹೆಚ್ಚಾಗುತ್ತದೆ. ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿರುವುದರಿಂದ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ. ಹಲವು ವರ್ಷಗಳ ನಿರೀಕ್ಷೆ ಸಾಕಾರಗೊಳ್ಳುತ್ತಿರುವುದರಿಂದ ಈ ಭಾಗದ ರೈತರು, ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಕೆರೆಗಳು ಕೇವಲ ನೀರಿನ ಸಂಗ್ರಹಣಾ ತಾಣಗಳಲ್ಲ, ಗ್ರಾಮೀಣ ಬದುಕಿನ ಜೀವನಾಡಿಗಳಾಗಿವೆ. ಅಂತಹ ಜೀವನಾಡಿಗಳಿಗೆ ಮತ್ತೆ ನೀರು ಹರಿಸುವ ಪ್ರಯತ್ನಕ್ಕೆ ಚಾಲನೆ ದೊರೆತಿರುವುದು ಸೋಮನಹಳ್ಳಿ ಮತ್ತು ಮರದೂರು ಭಾಗದ ಜನರಿಗೆ ಹೊಸ ಭರವಸೆಯ ಬೆಳಕಾಗಿ ಪರಿಣಮಿಸಿದೆ ಎಂದು ಹೇಳಿದರು.&lt;/p&gt;&lt;p&gt;ಎಇಇ ರೇಣುಕಾಸ್ವಾಮಿ, ಪಿಡಿಒ ಮಹದೇವಸ್ವಾಮಿ, ಮುಖಂಡರಾದ ಕೆಂಗಯ್ಯ, ಶಿವಕುಮಾರ್, ಗೋವಿಂದೇಗೌಡ, ದಿನೇಶ್, ಗವಿನಾಯಕ, ರಾಜೇಶ್, ಲಿಂಗೇಗೌಡ ಇದ್ದರು.&lt;/p&gt;&lt;p&gt;&lt;/p&gt;&lt;h3&gt;&lt;strong&gt;ವಿವಿಧ ಕಾಮಗಾರಿಗಳಿಗೆ ಚಾಲನೆ&lt;/strong&gt;&lt;/h3&gt;&lt;p&gt;ತಾಲೂಕಿನ ವಿವಿಧೆಡೆ ಹಲವು ಕಾಮಗಾರಿಗಳಿಗೆ ಶಾಸಕ ಜಿ.ಡಿ. ಹರೀಶ್&zwnj;ಗೌಡ ಅವರು ಚಾಲನೆ ನೀಡಿದರು. ಪ್ರಮುಖವಾಗಿ ಬನ್ನಿಕುಪ್ಪೆ ಅಂಗನವಾಡಿ ಕೇಂದ್ರ, ಡ್ಡೇಗೌಡನ ಕೊಪ್ಪಲಿನ ಮುಖ್ಯರಸ್ತೆಯ ಚರಂಡಿ ನಿರ್ಮಾಣಕ್ಕೆ 25 ಲಕ್ಷ ಹಾಗೂ ಇದೇ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ 15 ಲಕ್ಷ ರು. ಮರಳಯ್ಯನ ಕೊಪ್ಪಲಿನ ಸಿಸಿ ರಸ್ತೆಗೆ 30 ಲಕ್ಷ, ಮಾದಳ್ಳಿ ಸಿಸಿ ರಸ್ತೆಗೆ 25 ಲಕ್ಷ, ಮೂಡಲಕೊಪ್ಪಲು ಸಿಸಿ ರಸ್ತೆಗೆ 30 ಲಕ್ಷ ರು. ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.&lt;/p&gt;&lt;p&gt;ಮೂಡಲಕೊಪ್ಪಲು ಗ್ರಾಮದಲ್ಲಿ ಒಕ್ಕಲಿಗ ಸಮುದಾಯದ ಭವನ ನಿರ್ಮಾಣ ಮಾಡಲು ಒಂದು ಕೋಟಿ ರು. ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಮಾಡುವುದಷ್ಟೇ ನನಗೆ ಮುಖ್ಯವಾಗಿದ್ದು, ಇದರಲ್ಲಿ ರಾಜಕೀಯ ಮಾಡುವ ಯಾವ ಅಗತ್ಯವೂ ನನಗಿಲ್ಲ ಮತ್ತು ಅದನ್ನು ಮಾಡುವುದೂ ಇಲ್ಲ. ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ ಎಂದರು.&lt;/p&gt;&lt;p&gt;ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅನುದಾನದ ಕೊರತೆ ಉಂಟಾಗಿದ್ದು, 224 ಶಾಸಕರಿಗೆ ಅನುದಾನ ಬಾರದ ಪರಿಸ್ಥಿತಿ ಉಂಟಾಗಿದೆ. ಕಾಂಗ್ರೆಸ್&zwnj;ನಿಂದ 5 ರಿಂದ 6 ಬಾರಿ ಗೆದ್ದಿರುವ ಶಾಸಕರು ಕೂಡ ಅನುದಾನ ಬಿಡುಗಡೆ ಆಗದ ಬಗ್ಗೆ ಬೇಸರ ಹೊಂದಿದ್ದಾರೆ. ಆದರೆ ಇದೀಗ ಹೊಸ ಸರ್ಕಾರ ರಚನೆಯಾಗಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ಸಚಿವರನ್ನು ಮತ್ತೊಮ್ಮೆ ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಮನವಿ ಶಾಸಕ ಜಿ.ಡಿ.ಹರೀಶ್ ಗೌಡ ಮನವಿ ಮಾಡಿಕೊಂಡರು.&lt;/p&gt;]]></content:encoded>
            <category>mysore</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/mysuru-fill-dried-up-lakes-in-somanahalli-maradur-of-hunasuru-at-a-cost-of-rs-5-45-crore-has-been-initiated-mrq/articleshow-mdmy5gu"/>
        </item>
        <item>
            <title><![CDATA[ಅಯೋಧ್ಯೆ ಶ್ರೀರಾಮ ಮಂದಿರ ದೇಣಿಗೆಯಲ್ಲಿ ಅಕ್ರಮ ಆರೋಪ: ಮೌನ ಮುರಿದ ಶಿಲ್ಪಿ ಅರುಣ್ ಯೋಗಿರಾಜ್!]]></title>
            <link>https://kannada.asianetnews.com/gallery/karnataka-districts/ram-lalla-statue-sculptor-arun-yogiraj-on-ayodhya-ram-mandir-donation-corruption-allegations-oyovxpv</link>
            <guid isPermaLink="true">https://kannada.asianetnews.com/gallery/karnataka-districts/ram-lalla-statue-sculptor-arun-yogiraj-on-ayodhya-ram-mandir-donation-corruption-allegations-oyovxpv</guid>
            <pubDate>Fri, 26 Jun 2026 18:55:12 +0530</pubDate>
            <description><![CDATA[&lt;p&gt;ಅಯೋಧ್ಯೆ ರಾಮ ಮಂದಿರದ ದೇಣಿಗೆ ಭ್ರಷ್ಟಾಚಾರ ಆರೋಪಗಳ ಬಗ್ಗೆ ಶಿಲ್ಪಿ ಅರುಣ್ ಯೋಗಿರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಟ್ರಸ್ಟ್&zwnj;ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸರಳತೆಯನ್ನು ಶ್ಲಾಘಿಸಿದ ಅವರು, ಈ ಗೊಂದಲದ ಬಗ್ಗೆ ತನಿಖೆ ಕುರಿತಾಗಿ ಸುವರ್ಣ ನ್ಯೂಸ್&zwnj;ನೊಂದಿಗೆ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw21ayq9jztddjajkpdjmjb4,imgname-mysuru-arun-yogiraj-ayodya-case-reaction-1782479944424.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಯೋಧ್ಯೆ ರಾಮ ಮಂದಿರದ ದೇಣಿಗೆ ಭ್ರಷ್ಟಾಚಾರ ಆರೋಪಗಳ ಬಗ್ಗೆ ಶಿಲ್ಪಿ ಅರುಣ್ ಯೋಗಿರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಟ್ರಸ್ಟ್&zwnj;ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸರಳತೆಯನ್ನು ಶ್ಲಾಘಿಸಿದ ಅವರು, ಈ ಗೊಂದಲದ ಬಗ್ಗೆ ತನಿಖೆ ಕುರಿತಾಗಿ ಸುವರ್ಣ ನ್ಯೂಸ್&zwnj;ನೊಂದಿಗೆ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಮೈಸೂರು (ಜೂ.26): ಅ&lt;/strong&gt;ಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿರುವ ರಾಮಲಲ್ಲಾ ಮೂರ್ತಿ ಕೆತ್ತನೆಯ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಇತ್ತೀಚೆಗೆ ದೇವಸ್ಥಾನದ ದೇಣಿಗೆ ವಿಚಾರದಲ್ಲಿ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳು ಕೋಟ್ಯಂತರ ಭಕ್ತರ ನಂಬಿಕೆಗೆ ಮತ್ತು ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕಣ್ಣಾರೆ ಕಂಡಿದ್ದ ದೃಶ್ಯಗಳನ್ನು ನೆನಪಿಸಿಕೊಂಡ ಶಿಲ್ಪಿ:&lt;/strong&gt;&lt;/p&gt;&lt;p&gt;ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಅರುಣ್ ಯೋಗಿರಾಜ್, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಸಮಯದಲ್ಲಿ ತಾವು ಕಂಡ ದೃಶ್ಯಗಳನ್ನು ಹಂಚಿಕೊಂಡರು. 'ದೇವಸ್ಥಾನಕ್ಕೆ ದೇಣಿಗೆ ನೀಡುವವರ ಸಂಖ್ಯೆ ಅಪಾರವಾಗಿತ್ತು. ಕೇವಲ ಸಾಮಾನ್ಯ ಜನರಲ್ಲ, ದೊಡ್ಡ ಉದ್ಯಮಿಗಳು, ರಾಜಕಾರಣಿಗಳು ಮತ್ತು ವಿಐಪಿಗಳು ಚೆಕ್ ಹಿಡಿದು ಸಾಲಿನಲ್ಲಿ ನಿಂತು ದೇಣಿಗೆ ನೀಡುತ್ತಿದ್ದರು. ಅಂತಹ ಭಕ್ತಿ ಮತ್ತು ಸಮರ್ಪಣಾ ಮನೋಭಾವವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈಗ ಇಂತಹ ಆರೋಪಗಳು ಕೇಳಿಬರುತ್ತಿರುವುದು ನಿಜಕ್ಕೂ ದುರದೃಷ್ಟಕರ' ಎಂದು ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;&lt;strong&gt;ಚಂಪತ್ ರಾಯ್ ಸರಳತೆ ಮತ್ತು ಪಾರದರ್ಶಕತೆ:&lt;/strong&gt;&lt;/p&gt;&lt;p&gt;ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್&zwnj;ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಬಗ್ಗೆ ಮಾತನಾಡಿದ ಯೋಗಿರಾಜ್, 'ಅವರು ಅತ್ಯಂತ ಸರಳ ವ್ಯಕ್ತಿ. ಅಯೋಧ್ಯೆಯ ಒಂದು ಪುಟ್ಟ ಕೋಣೆಯಲ್ಲಿ, ಎಸಿ ಕೂಡ ಇಲ್ಲದೆ ಕೇವಲ ಫ್ಯಾನ್ ಹಾಕಿಕೊಂಡು ದಿವಾನ್ ಮಂಚದ ಮೇಲೆ ಮಲಗುತ್ತಿದ್ದರು. ಅವರ ನಡವಳಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇತ್ತು. ಯಾವುದೇ ವಿಐಪಿಗಳು ರಹಸ್ಯವಾಗಿ ಮಾತನಾಡಲು ಬಂದರೆ ಅವರು ಒಪ್ಪುತ್ತಿರಲಿಲ್ಲ. ಏನೇ ಇದ್ದರೂ ಎಲ್ಲರ ಮುಂದೆ ಓಪನ್ ಆಗಿ ಮಾತನಾಡಿ ಎನ್ನುತ್ತಿದ್ದರು. ಪ್ರತಿಯೊಂದು ನಿರ್ಧಾರವನ್ನೂ ಎಲ್ಲರನ್ನೂ ಒಟ್ಟಿಗೆ ಕೂರಿಸಿಯೇ ತೆಗೆದುಕೊಳ್ಳುತ್ತಿದ್ದರು' ಎಂದು ಅವರ ಪರವಾಗಿ ಮಾತನಾಡಿದರು.&lt;/p&gt;&lt;img&gt;&lt;p&gt;&lt;strong&gt;ತಂತ್ರಜ್ಞಾನದ ಬಳಕೆ ಮತ್ತು ಅಕ್ರಮದ ಸಂಶಯ:&lt;/strong&gt;&lt;/p&gt;&lt;p&gt;ದೇಣಿಗೆ ಸಂಗ್ರಹದಲ್ಲಿ ಹೈದರಾಬಾದ್ ಮೂಲದ ತಂತ್ರಜ್ಞಾನ ಕಂಪನಿಯು ಪ್ರತಿಯೊಂದು ರೂಪಾಯಿಯನ್ನೂ ಆನ್&zwnj;ಲೈನ್ ಮೂಲಕ ಟ್ರ್ಯಾಕ್ ಮಾಡುತ್ತಿತ್ತು. ಹತ್ತು ರೂಪಾಯಿ ದೇಣಿಗೆ ನೀಡಿದರೂ ಕೂಡಲೇ ಡಿಜಿಟಲ್ ರಶೀದಿ ಮೊಬೈಲ್&zwnj;ಗೆ ಬರುತ್ತಿತ್ತು. ಆದರೆ, ಟ್ರಸ್ಟ್ ಬೆಳೆಯುತ್ತಿದ್ದಂತೆ ಕೆಲವು ಹಂತಗಳಲ್ಲಿ ನಿಯಂತ್ರಣ ತಪ್ಪಿರಬಹುದು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿಗಳು ಹಣ ದುರುಪಯೋಗ ಮಾಡಿಕೊಂಡಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;&lt;strong&gt;ತನಿಖೆಗೆ ಆಗ್ರಹ ಮತ್ತು ಎಫ್&zwnj;ಐಆರ್:&lt;/strong&gt;&lt;/p&gt;&lt;p&gt;ಹಣದ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸಲು ಸ್ವತಃ ಚಂಪತ್ ರಾಯ್ ಅವರೇ ಎಸ್&zwnj;ಐಟಿ (SIT) ತನಿಖೆಗೆ ಮನವಿ ಮಾಡಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರ ಮೇಲೆ ಎಫ್&zwnj;ಐಆರ್ ದಾಖಲಾಗಿದೆ. 'ಈ ಆರೋಪಗಳು ಗಿಡಕ್ಕೆ ಬಂದ ರೋಗದಂತೆ, ತನಿಖೆಯ ಮೂಲಕ ಈ ರೋಗ ವಾಸಿಯಾಗಬೇಕು. ಭಕ್ತರಿಗೆ ಸತ್ಯಾಂಶ ಏನೆಂದು ತಿಳಿಯಬೇಕು' ಎಂದು ಅರುಣ್ ಯೋಗಿರಾಜ್ ಒತ್ತಾಯಿಸಿದರು.&lt;/p&gt;&lt;img&gt;&lt;p&gt;ಕೊನೆಯದಾಗಿ, 'ಹಣದ ವಿಷಯದಲ್ಲಿ ದೇವರನ್ನು ಅಳೆಯಬಾರದು. ನಾವು ನೀಡುವ ಹಣದಲ್ಲಿ ಭಕ್ತಿ ಇರುವುದಿಲ್ಲ, ಅದು ಕೇವಲ ವ್ಯವಸ್ಥೆಯ ಭಾಗ. ಒಬ್ಬ ಶಿಲ್ಪಿ ತನ್ನ ಜೀವನೋಪಾಯಕ್ಕಾಗಿ ಸಂಸಾರಸ್ಥನಾಗಿ ಹಣ ಪಡೆಯುತ್ತಾನೆಯೇ ಹೊರತು, ಯಾರೂ ಹಣ ಕೊಟ್ಟು ದೇವರನ್ನು ಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳಿಂದ ರಾಮನ ಮೇಲಿರುವ ನನ್ನ ಭಕ್ತಿ ಎಂದಿಗೂ ಕಮ್ಮಿಯಾಗುವುದಿಲ್ಲ' ಎಂದು ಹೇಳಿದರು.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/ram-lalla-statue-sculptor-arun-yogiraj-on-ayodhya-ram-mandir-donation-corruption-allegations-oyovxpv"/>
        </item>
        <item>
            <title><![CDATA[ಒಣಗಿದ ಗಿಡಕ್ಕೂ ಜೀವ ಬಂತು, ಆಸೆ ಬಿಟ್ಟಿದ್ದ ಗಿಡಗಳಲ್ಲಿ ತರಕಾರಿ ತುಂಬಿತು: ಹುಣಸೂರ ಮಹಿಳೆ ಯಶೋಗಾಥೆ]]></title>
            <link>https://kannada.asianetnews.com/women/dried-plant-came-to-life-filled-with-vegetables-hunsur-womans-panchagavya-success-story/articleshow-qke389t</link>
            <guid isPermaLink="true">https://kannada.asianetnews.com/women/dried-plant-came-to-life-filled-with-vegetables-hunsur-womans-panchagavya-success-story/articleshow-qke389t</guid>
            <pubDate>Wed, 10 Jun 2026 13:07:18 +0530</pubDate>
            <description><![CDATA[ಮೈಸೂರಿನ ಕೃಷಿ ಪದವೀಧರೆ ಸುಧಾ ಸಂದೀಪ್ ಅವರು ಪಂಚಗವ್ಯ ಬಳಸಿ ತಮ್ಮ ಒಣಗಿದ ತೋಟಕ್ಕೆ ಮರುಜೀವ ನೀಡಿದ್ದಾರೆ. ರಾಸಾಯನಿಕ ಮುಕ್ತವಾದ ಈ ಸಾಂಪ್ರದಾಯಿಕ ವಿಧಾನದಿಂದಾಗಿ, ಅವರ ತೋಟದಲ್ಲಿ ತರಕಾರಿಗಳು ಸಮೃದ್ಧವಾಗಿ ಬೆಳೆಯುತ್ತಿದ್ದು, ಇದು ಇತರ ಕೃಷಿಕರಿಗೆ ಸ್ಫೂರ್ತಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktr7d99xtyxe7v0rjzx3zgan,imgname-agriculture-1781077026109.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಸಿಲಿನ ತಾಪಕ್ಕೆ ಒಣಗಿದ ಗಿಡಗಳೂ ಈಗ ಜೀವ ಪಡೆದಿವೆ. ತೋಟದ ತುಂಬಾ ತರಕಾರಿಗಳು ನಳನಳಿಸುತ್ತಿವೆ. ರಾಸಾಯನಿಕದ ಸೋಂಕು ಇಲ್ಲದೇ ಭೂತಾಯಿ ನೆಮ್ಮದಿಯಿಂದ ಫಲ ನೀಡುತ್ತಿದ್ದಾಳೆ. ಮೈಸೂರು ಜಿಲ್ಲೆಯ ಹುಣಸೂರಿನ ಎಂಎಸ್ಸಿ ಕೃಷಿ ಪದವೀಧರೆ ಸುಧಾ ಸಂದೀಪ್ ಅವರ ತೋಟ ಇದೀಗ ರಾಜ್ಯದ ಮೂಲೆ ಮೂಲೆಗಳ ಕೃಷಿಕರನ್ನು ಆಕರ್ಷಿಸುತ್ತಿದೆ. ಐಟಿ-ಬಿಟಿ ಕಂಪೆನಿಗಳನ್ನು ಬಿಟ್ಟು ಕೃಷಿಯತ್ತ ವಾಲುತ್ತಿರುವ ಅಸಂಖ್ಯ ಉದ್ಯೋಗಿಗಳಿಗೆ ಸುಧಾ ಅವರ ಈ ಕೃಷಿ ಒಂದು ಪಾಠವೂ ಆಗಲಿದೆ. ಕೃಷಿಯನ್ನು ಮಾಡುವ ಆಸೆ ಹೊತ್ತು, ಆ ಕ್ಷಣದ ಲಾಭಕ್ಕಾಗಿ ಕಾಯದೇ, ಭವಿಷ್ಯದ ಬಗ್ಗೆಯೂ ಯೋಚನೆ ಮಾಡಿದರೆ, ಒಣಗಿನ ಭೂಮಿಯಲ್ಲಿಯೂ ಹಸಿರು ಚಿಮ್ಮಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಸುಧಾ ಸಂದೀಪ್​.&lt;/p&gt;&lt;p&gt;ಅಷ್ಟಕ್ಕೂ ರಾಸಾಯನಿಕ ಮುಕ್ತವಾಗಿರುವ ಇವರ ತೋಟದಲ್ಲಿ ಇಂಥದ್ದೊಂದು ಕಮಾಲ್​ಗೆ ಕಾರಣವಾಗಿರುವುದು ಪಂಚಗವ್ಯ. ಬಿಸಿಲಿನ ತಾಪಕ್ಕೆ ತೋಟದ ಗಿಡಗಳು ಒಣಗಿದಾಗಲೂ ಅವರ ನೆರವಿಗೆ ಬಂದದ್ದು ಇದೇ ಪಂಚಗವ್ಯ ಎನ್ನುತ್ತಾರೆ ಸುಧಾ. ಗೋವನ್ನು ಮಾತೆ ಎಂದು ಹಿಂದೂಗಳು ಪೂಜಿಸುವುದು ಕೂಡ ಇದೇ ಕಾರಣಕ್ಕೆ. ಇದ್ದರೂ, ಸತ್ತರೂ ಗೋವಿನಿಂದ ಆಗುವ ಪ್ರಯೋಜನಗಳು ಅಷ್ಟಿಷ್ಟಲ್ಲ. ಪಂಚಗವ್ಯ ಎನ್ನುವುದು ಕೂಡ ಗೋಮಾತೆ ಕೃಷಿಕರಿಗೆ ನೀಡುತ್ತಿರುವ ಜೀವನಾಮೃತವೇ ಆಗಿದೆ. ಹಸುವಿನಿಂದ ದೊರೆಯುವ ಐದು ಪ್ರಮುಖ ಉತ್ಪನ್ನಗಳನ್ನು (ಸಗಣಿ, ಗಂಜಲ, ಹಾಲು, ಮೊಸರು ಮತ್ತು ತುಪ್ಪ) ಬಳಸಿ ತಯಾರಿಸುವ ಸಾಂಪ್ರದಾಯಿಕವಾಗಿ ತಯಾರಿಸುವುದೇ ಪಂಚಗವ್ಯ.&lt;/p&gt;&lt;p&gt;ಫಲವೇ ನೀಡುವುದಿಲ್ಲ ಎಂದುಕೊಂಡಿದ್ದ ಬೆಂಡೇಕಾಯಿ ಗಿಡ, ಪ್ರತಿ ಎರಡು ಮೂರು ದಿನಗಳಿಗೊಮ್ಮೆ 500&ndash;750 ಗ್ರಾಂ ಬೆಂಡೆಕಾಯಿಯನ್ನು ನೀಡುತ್ತಿದೆ. ಯಾವುದೇ ರೋಗ ಅಥವಾ ಕೀಟಗಳ ದಾಳಿಯಿಲ್ಲದೆ ಸಸ್ಯಗಳು ಅಭಿವೃದ್ಧಿ ಹೊಂದುತ್ತಿವೆ. ಸುಧಾ ಅವರ ಸಸ್ಯಗಳು ಪ್ರಮುಖ ರೋಗ ಅಥವಾ ಕೀಟ ಸಮಸ್ಯೆಗಳಿಲ್ಲದೆ ಚೆನ್ನಾಗಿ ಬೆಳೆದಿವೆ.&lt;/p&gt;&lt;h2&gt;&lt;strong&gt;ಅಭೂತಪೂರ್ವ ಸಾಧನೆ&lt;/strong&gt;&lt;/h2&gt;&lt;p&gt;ಇದಾಗಲೇ ಸಾವಯವ, ನೈಸರ್ಗಿಕ ಕೃಷಿಯತ್ತ ವಾಲಿ ಕೃಷಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಕೃಷಿಕರು ಕೆಲವರು ಇದ್ದಾರೆ. ಭೂಮಿ ತಾಯಿಗೆ ರಾಸಾಯನಿಕ ಸೋಕಿಸಬೇಡಿ, ಆ ಕ್ಷಣದಲ್ಲಿ ಬೆಳೆ ಬಂದರೂ ಅದು ವಿಷಯುಕ್ತವಾಗಿರುತ್ತದೆ. ಆದರೆ ಅದರ ಆಯಸ್ಸು ಕೆಲವೇ ವರ್ಷ ಎಂದು ಸಾವಯವ ಕೃಷಿಕರು ಹೇಳುತ್ತಿದ್ದರೂ, ಕ್ಷಣಿಕ ಲಾಭಕ್ಕಾಗಿ ರಾಸಾಯನಿಕಗಳನ್ನು ಸಿಂಪಡಿಸುವವರು ಧಾರಾಳವಾಗಿ ಕಾಣಿಸುತ್ತಾರೆ. ಆದರೆ ಅದರ ನಡುವೆಯೂ, ಅಲ್ಲಲ್ಲಿ ಕೆಲವು ಕೃಷಿಕರು, ಹೀಗೆ ಸಾಧನೆ ಮಾಡಿ, ರಾಸಾಯನಿಕ ಮುಕ್ತ ಕೃಷಿಯಲ್ಲಿ ಕಾರ್ಯನಿರತರಾಗಿದ್ದಾರೆ. ಮನೆಯಲ್ಲಿ ತಯಾರಿಸಿದ ದ್ರಾವಣಗಳೇ ಈ ಸಸ್ಯಗಳಿಗೆ ಅಮೃತವಾಗಿದೆ. ಪಂಚಗವ್ಯಗಳ ಜೊತೆ, ಬೆಲ್ಲ, ತೆಂಗಿನ ನೀರು, ಬಾಳೆಹಣ್ಣು ಮತ್ತು ನೀರು ಕೂಡ ಸೇರಿಸಿ ಜೈವಿಕ ಗೊಬ್ಬರ ತಯಾರಿಸಲಾಗುತ್ತದೆ.&lt;/p&gt;&lt;h3&gt;&lt;strong&gt;ತಯಾರಿಸುವುದು ಹೇಗೆ?&lt;/strong&gt;&lt;/h3&gt;&lt;p&gt;ಕೃಷಿ ವಿಶ್ವವಿದ್ಯಾಲಯಗಳು ಕೂಡ ಇದರ ಬಗ್ಗೆ ಮಾಹಿತಿ ನೀಡಿವೆ. ಪಂಚಾಮೃತ, ಜೈವಿಕ ಗೊಬ್ಬರ ಮಾಡುವ ವಿಧಾನವನ್ನೂ ತಿಳಿಸುತ್ತಿದ್ದು, ಕೃಷಿಕರನ್ನು ಉತ್ತೇಜಿಸುತ್ತಲೇ ಬಂದಿವೆ. ಹಸುವಿನ ಸಗಣಿ ಮತ್ತು ತುಪ್ಪವನ್ನು ಮೊದಲು ಹುದುಗಿಸಲಾಗುತ್ತದೆ, ನಂತರ ಹಸುವಿನ ಮೂತ್ರ ಮತ್ತು ನೀರು, ಮತ್ತು ನಂತರ ಹಾಲು, ಮೊಸರು, ತೆಂಗಿನ ನೀರು, ಬೆಲ್ಲ ಮತ್ತು ಬಾಳೆಹಣ್ಣು ಮುಂತಾದವುಗಳನ್ನು ಸೇರಿಸಲಾಗುತ್ತದೆ. ಸಂಪೂರ್ಣ ತಯಾರಿಕೆಯ ಪ್ರಕ್ರಿಯೆಯು ಬಳಕೆಗೆ ಸಿದ್ಧವಾಗುವ ಮೊದಲು ಸುಮಾರು 30 ದಿನಗಳನ್ನು ತೆಗೆದುಕೊಳ್ಳುತ್ತದೆ. ಪಂಚಗವ್ಯವನ್ನು ಲೋಹದ ಪಾತ್ರೆಗಳಲ್ಲಿ ತಯಾರಿಸಬಾರದು. ಪ್ಲಾಸ್ಟಿಕ್, ಜೇಡಿಮಣ್ಣಿನ ಅಥವಾ ಕಾಂಕ್ರೀಟ್ ಪಾತ್ರೆಗಳನ್ನು ಶಿಫಾರಸು ಮಾಡಲಾಗಿದೆ. ಮಿಶ್ರಣವನ್ನು ನೆರಳಿನಲ್ಲಿ ಸಂಗ್ರಹಿಸಬೇಕು ಮತ್ತು ಎರಡೂ ದಿಕ್ಕುಗಳಲ್ಲಿ ನಿಯಮಿತವಾಗಿ ಬೆರೆಸಬೇಕು. ಸರಿಯಾಗಿ ನಿರ್ವಹಿಸಿದರೆ ಇದನ್ನು ಆರು ತಿಂಗಳವರೆಗೆ ಸಂಗ್ರಹಿಸಬಹುದು ಮತ್ತು ಪರಿಣಾಮಕಾರಿಯಾಗಿ ಬಳಸಬಹುದು.&lt;/p&gt;&lt;p&gt;ಸಾಮಾನ್ಯವಾಗಿ, 2-3 ಲೀಟರ್ ಪಂಚಗವ್ಯವನ್ನು 100 ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಲಾಗುತ್ತದೆ. ಇದನ್ನು ಸಸ್ಯಗಳ ಬುಡದಲ್ಲಿಯೂ ಅನ್ವಯಿಸಬಹುದು. ಇದನ್ನು ಸಾಮಾನ್ಯವಾಗಿ ಪ್ರತಿ 15 ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಬಳಸಲಾಗುತ್ತದೆ ಮತ್ತು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಹೂವುಗಳು ಮತ್ತು ಇತರ ಬೆಳೆಗಳಿಗೆ ಸೂಕ್ತವಾಗಿದೆ. ಪಂಚಗವ್ಯವು ಉಪಯುಕ್ತ ಸೂಕ್ಷ್ಮಜೀವಿಗಳನ್ನು ಹೆಚ್ಚಿಸುವ ಮೂಲಕ ಮತ್ತು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಬಲವಾದ ಬೇರುಗಳು, ಉತ್ತಮ ಎಲೆಗಳ ಬೆಳವಣಿಗೆ, ಸುಧಾರಿತ ಹೂಬಿಡುವಿಕೆಯನ್ನು ಬೆಂಬಲಿಸುತ್ತದೆ ಮತ್ತು ಸಸ್ಯಗಳು ಶಾಖ ಮತ್ತು ಶುಷ್ಕತೆಯಂತಹ ಪರಿಸರ ಒತ್ತಡವನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Suchethana D</dc:creator>
            <atom:link href="https://kannada.asianetnews.com/women/dried-plant-came-to-life-filled-with-vegetables-hunsur-womans-panchagavya-success-story/articleshow-qke389t"/>
        </item>
        <item>
            <title><![CDATA[ಶಿವಮೊಗ್ಗ ಜನಶತಾಬ್ದಿ, ಮೈಸೂರು – ತಾಳಗುಪ್ಪ ರೈಲು ಸಂಚಾರದಲ್ಲಿ ಬದಲಾವಣೆ; ಯಾವ್ಯಾವ ದಿನ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್]]></title>
            <link>https://kannada.asianetnews.com/gallery/karnataka-districts/train-alert-shivamogga-janshatabdi-and-talaguppa-express-cancelled-diverted-on-these-dates-u40gg60</link>
            <guid isPermaLink="true">https://kannada.asianetnews.com/gallery/karnataka-districts/train-alert-shivamogga-janshatabdi-and-talaguppa-express-cancelled-diverted-on-these-dates-u40gg60</guid>
            <pubDate>Sun, 14 Jun 2026 19:55:39 +0530</pubDate>
            <description><![CDATA[&lt;p&gt;&lt;strong&gt;South Western Railway train status: &lt;/strong&gt;ನೈಋತ್ಯ ರೈಲ್ವೆಯು ಶಿವಮೊಗ್ಗ, ತಾಳಗುಪ್ಪ ಮತ್ತು ಮೈಸೂರು ಮಾರ್ಗವಾಗಿ ಸಂಚರಿಸುವ ಪ್ರಮುಖ ಜನಶತಾಬ್ದಿ ಹಾಗೂ ಎಕ್ಸ್&zwnj;ಪ್ರೆಸ್ ರೈಲುಗಳ ಸೇವೆಯಲ್ಲಿ ಭಾರಿ ಬದಲಾವಣೆ ಮಾಡಿದೆ. ಕೆಲವು ರೈಲುಗಳು ಸಂಪೂರ್ಣವಾಗಿ ರದ್ದಾಗಿದ್ದರೆ, ಇನ್ನು ಕೆಲವು ಮಾರ್ಗ ಬದಲಾಯಿಸಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krz89gnr90c53b77bdjb73pz,imgname-4-1779165348536.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;South Western Railway train status: &lt;/strong&gt;ನೈಋತ್ಯ ರೈಲ್ವೆಯು ಶಿವಮೊಗ್ಗ, ತಾಳಗುಪ್ಪ ಮತ್ತು ಮೈಸೂರು ಮಾರ್ಗವಾಗಿ ಸಂಚರಿಸುವ ಪ್ರಮುಖ ಜನಶತಾಬ್ದಿ ಹಾಗೂ ಎಕ್ಸ್&zwnj;ಪ್ರೆಸ್ ರೈಲುಗಳ ಸೇವೆಯಲ್ಲಿ ಭಾರಿ ಬದಲಾವಣೆ ಮಾಡಿದೆ. ಕೆಲವು ರೈಲುಗಳು ಸಂಪೂರ್ಣವಾಗಿ ರದ್ದಾಗಿದ್ದರೆ, ಇನ್ನು ಕೆಲವು ಮಾರ್ಗ ಬದಲಾಯಿಸಲಾಗಿದೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಈ ಕೆಳಗಿನ ವಿವರಗಳನ್ನು ಗಮನಿಸಿ&lt;/strong&gt;ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಸಿಟಿ ರೈಲು ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಹಾಗೂ ಪ್ರಮುಖ ಸುರಕ್ಷತಾ ಮೇಲ್ದರ್ಜೆ ಕಾಮಗಾರಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಶಿವಮೊಗ್ಗ ಮತ್ತು ತಾಳಗುಪ್ಪ ಮಾರ್ಗವಾಗಿ ಸಂಚರಿಸುವ ಹಲವು ಪ್ರಮುಖ ರೈಲುಗಳ ಸೇವೆಯನ್ನು ರದ್ದು ಹಾಗೂ ಮಾರ್ಗ ಬದಲಾವಣೆ ಮಾಡಿದೆ. ಆಗಸ್ಟ್ ತಿಂಗಳಲ್ಲಿ ಪ್ರಯಾಣಿಸುವವರು ಈ ಕೆಳಗಿನ ವಿವರಗಳನ್ನು ಗಮನಿಸುವುದು ಅಗತ್ಯ.&lt;/p&gt;&lt;img&gt;&lt;p&gt;&lt;strong&gt;ಸಂಪೂರ್ಣ ರದ್ದಾಗಿರುವ ರೈಲುಗಳು (ಆಗಸ್ಟ್ 4)&lt;/strong&gt;&lt;strong&gt;ಯಶವಂತಪುರ&ndash;ಶಿವಮೊಗ್ಗ ಟೌನ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16581): &lt;/strong&gt;2026ರ ಆಗಸ್ಟ್ 4ರಂದು ಈ ರೈಲಿನ ಸಂಚಾರ ಇರುವುದಿಲ್ಲ.&lt;strong&gt;ಶಿವಮೊಗ್ಗ ಟೌನ್&ndash;ಯಶವಂತಪುರ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16582):&lt;/strong&gt; 2026ರ ಆಗಸ್ಟ್ 4ರಂದು ಈ ರೈಲಿನ ಸೇವೆಯನ್ನೂ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಭಾಗಶಃ ರದ್ದಾಗಿರುವ ರೈಲುಗಳು (ಆಗಸ್ಟ್ 1 ರಿಂದ ಆಗಸ್ಟ್ 3)&lt;/strong&gt;&lt;strong&gt;ತಾಳಗುಪ್ಪ&ndash;ಬೆಂಗಳೂರು ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 20652): &lt;/strong&gt;ಆಗಸ್ಟ್ 1ರಿಂದ 3ರವರೆಗೆ ಈ ರೈಲು ಅರಸೀಕೆರೆ ಮತ್ತು ಬೆಂಗಳೂರು ನಡುವೆ ಸಂಚರಿಸುವುದಿಲ್ಲ. ಇದು ಅರಸೀಕೆರೆ ನಿಲ್ದಾಣದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.&lt;strong&gt;ಶಿವಮೊಗ್ಗ ಟೌನ್&ndash;ಬೆಂಗಳೂರು ಜನಶತಾಬ್ದಿ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 12090): &lt;/strong&gt;ಆಗಸ್ಟ್ 1ರಿಂದ 3ರವರೆಗೆ ಈ ರೈಲು ಅರಸೀಕೆರೆ ಮತ್ತು ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲೇ ನಿಲ್ಲಲಿದೆ.&lt;strong&gt;ಬೆಂಗಳೂರು&ndash;ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 12089): &lt;/strong&gt;ಆಗಸ್ಟ್ 1ರಿಂದ 3ರವರೆಗೆ ಈ ರೈಲು ಬೆಂಗಳೂರಿನ ಬದಲಾಗಿ ಅರಸೀಕೆರೆ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.&lt;/p&gt;&lt;img&gt;&lt;p&gt;&lt;strong&gt;ಮಾರ್ಗ ಬದಲಾವಣೆ ಆಗಿರುವ ರೈಲುಗಳು (ಆಗಸ್ಟ್ 3)&lt;/strong&gt;ಬೆಂಗಳೂರು ನಿಲ್ದಾಣದ ಕಾಮಗಾರಿ ಹಿನ್ನೆಲೆಯಲ್ಲಿ ಕೆಳಗಿನ ರೈಲುಗಳು ಬೆಂಗಳೂರು, ಯಶವಂತಪುರ ಮತ್ತು ತುಮಕೂರು ನಿಲ್ದಾಣಗಳಿಗೆ ಬರುವುದಿಲ್ಲ. ಬದಲಾಗಿ ಪರ್ಯಾಯ ಮಾರ್ಗದಲ್ಲಿ ಚಲಿಸಲಿವೆ:&lt;strong&gt;ತಾಳಗುಪ್ಪ&ndash;ಮೈಸೂರು ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16228): &lt;/strong&gt;ಆಗಸ್ಟ್ 3ರಂದು ತಾಳಗುಪ್ಪದಿಂದ ಹೊರಡುವ ಈ ರೈಲು ಅರಸೀಕೆರೆ, ಹಾಸನ ಮತ್ತು ಕೃಷ್ಣರಾಜನಗರ ಮಾರ್ಗವಾಗಿ ಮೈಸೂರು ತಲುಪಲಿದೆ.&lt;strong&gt;ಮೈಸೂರು&ndash;ತಾಳಗುಪ್ಪ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16227): &lt;/strong&gt;ಆಗಸ್ಟ್ 3ರಂದು ಮೈಸೂರಿನಿಂದ ಹೊರಡುವ ಈ ರೈಲು ಕೃಷ್ಣರಾಜನಗರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಚಲಿಸಲಿದೆ.&lt;/p&gt;&lt;img&gt;&lt;p&gt;&lt;strong&gt;ಗಮನಿಸಿ: &lt;/strong&gt;ಮಾರ್ಗ ಬದಲಾಗಿರುವ ಕಾರಣ ಈ ಎರಡೂ ರೈಲುಗಳಿಗೆ ತುಮಕೂರು, ಯಶವಂತಪುರ ಮತ್ತು ಕೆಎಸ್&zwnj;ಆರ್&zwnj; ಬೆಂಗಳೂರು ನಿಲ್ದಾಣಗಳ ನಿಲುಗಡೆಯನ್ನು ಕೈಬಿಡಲಾಗಿದೆ. ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ಸೂಚನೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಲು ಕೋರಲಾಗಿದೆ.&lt;/p&gt;]]></content:encoded>
            <category>mysore</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/karnataka-districts/train-alert-shivamogga-janshatabdi-and-talaguppa-express-cancelled-diverted-on-these-dates-u40gg60"/>
        </item>
        <item>
            <title><![CDATA[ಮುಡಾ ಹಗರಣ: ಸಿದ್ದರಾಮಯ್ಯ ಮೇಲ್ಮನವಿ, ಹೈಕೋರ್ಟ್ ಖಡಕ್ ನುಡಿ, ವಿಚಾರಣೆ ಜುಲೈಗೆ ಮುಂದೂಡಿಕೆ]]></title>
            <link>https://kannada.asianetnews.com/karnataka-districts/muda-scam-case-karnataka-high-court-postpones-siddaramaiah-appeal-hearing-to-july-gdp/articleshow-vg4snqs</link>
            <guid isPermaLink="true">https://kannada.asianetnews.com/karnataka-districts/muda-scam-case-karnataka-high-court-postpones-siddaramaiah-appeal-hearing-to-july-gdp/articleshow-vg4snqs</guid>
            <pubDate>Mon, 08 Jun 2026 17:14:35 +0530</pubDate>
            <description><![CDATA[ಮುಡಾ ಭೂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜುಲೈ ಮೂರನೇ ವಾರಕ್ಕೆ ಮುಂದೂಡಿದೆ. ವಿಚಾರಣೆಯನ್ನು ಮತ್ತಷ್ಟು ಮುಂದೂಡುವಂತೆ ಸಿದ್ದರಾಮಯ್ಯ ಪರ ವಕೀಲರು ಕೋರಿದಾಗ, ನ್ಯಾಯಪೀಠವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kmph3sdj0fzmsxmjqqvf767r,imgname----------------------53--1774577640882.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಭೂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ತನಿಖೆಗೆ ರಾಜ್ಯಪಾಲ ಥಾವರ್&zwnj;ಚಂದ್ ಗೆಹ್ಲೋಟ್ ಅವರು ನೀಡಿದ್ದ ಪೂರ್ವಾನುಮತಿಯನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರು ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜುಲೈ ಮೂರನೇ ವಾರಕ್ಕೆ ಮುಂದೂಡಿದೆ.&lt;/p&gt;&lt;p&gt;ಸೋಮವಾರ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರನ್ನೊಳಗೊಂಡ ಹೈಕೋರ್ಟ್&zwnj;ನ ದ್ವಿಸದಸ್ಯ ವಿಭಾಗೀಯ ಪೀಠವು ಈ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪರ ಕಾನೂನು ತಂಡವು, ಆಗಸ್ಟ್&zwnj;ನಲ್ಲಿ ನಿಗದಿಯಾಗಿದ್ದ ವಿಚಾರಣೆಯನ್ನು ಮತ್ತಷ್ಟು ಮುಂದೂಡುವಂತೆ ನ್ಯಾಯಾಲಯಕ್ಕೆ ವಿನಂತಿಸಿತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪೀಠವು, ನಾವು ಈ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಬೇಕೇ? ಎಂದು ಪ್ರಶ್ನಿಸಿತು.&lt;/p&gt;&lt;p&gt;ಈ ಹಂತದಲ್ಲಿ ಪ್ರಕರಣದ ಪ್ರಮುಖ ಭೂಮಾಲೀಕರಾದ ಜೆ. ದೇವರಾಜು ಅವರ ಪರವಾಗಿ ಹಾಜರಾಗಿದ್ದ ವಕೀಲ ಆದಿತ್ಯ ನಾರಾಯಣನ್ ಅವರು, ವಿಚಾರಣೆಯನ್ನು ಜುಲೈ ಮೂರನೇ ವಾರಕ್ಕೆ ಮರು ನಿಗದಿಪಡಿಸುವಂತೆ ನ್ಯಾಯಪೀಠಕ್ಕೆ ಸಲಹೆ ನೀಡಿದರು. ಈ ಪ್ರಸ್ತಾವನೆಯನ್ನು ಪುರಸ್ಕರಿಸಿದ ಹೈಕೋರ್ಟ್ ವಿಭಾಗೀಯ ಪೀಠವು, ಅದಕ್ಕೆ ಅನುಗುಣವಾಗಿ ಜುಲೈ ತಿಂಗಳ ಮೂರನೇ ವಾರಕ್ಕೆ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿತು.&lt;/p&gt;&lt;h2&gt;ಹಗರಣದ ಹಿನ್ನೆಲೆ ಮತ್ತು ಆರೋಪಗಳೇನು?&lt;/h2&gt;&lt;p&gt;ಮೈಸೂರಿನ ಅತ್ಯಂತ ಪ್ರಮುಖ ತನಿಖಾ ವಿಷಯವಾಗಿ ಮಾರ್ಪಟ್ಟಿರುವ ಮುಡಾ ಹಗರಣದ ಮೂಲ ಹಿನ್ನೆಲೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಮುಖ ವಿದ್ಯಮಾನಗಳು ಹೀಗಿವೆ.&lt;/p&gt;&lt;h2&gt;ಭೂಮಿಯ ವಿವರ ಮತ್ತು ಮೌಲ್ಯ&lt;/h2&gt;&lt;p&gt;ಮೈಸೂರಿನ ಕೆಸಾರೆ ಗ್ರಾಮದಲ್ಲಿರುವ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಅತ್ಯಂತ ಪ್ರಮುಖ ಬಡಾವಣೆಯಲ್ಲಿ ಸುಮಾರು 56 ಕೋಟಿ ರೂಪಾಯಿ ಮೌಲ್ಯದ 14 ಪರ್ಯಾಯ ನಿವೇಶನಗಳನ್ನು (ಪ್ಲಾಟ್&zwnj;ಗಳನ್ನು) ಹಂಚಿಕೆ ಮಾಡಲಾಗಿತ್ತು.&lt;/p&gt;&lt;h2&gt;ಅಧಿಕಾರ ದುರುಪಯೋಗದ ಆರೋಪ&lt;/h2&gt;&lt;p&gt;ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪ್ರಭಾವ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಈ ಅಕ್ರಮ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ನಡೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಜುಲೈ 3, 2024 ರಂದು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ಕೋರಿ ಅಧಿಕೃತ ದೂರು ಸಲ್ಲಿಸಿದ್ದರು.&lt;/p&gt;&lt;h2&gt;ರಾಜ್ಯಪಾಲರ ಅನುಮೋದನೆ ಮತ್ತು ಕಾನೂನು ಸಮರ&lt;/h2&gt;&lt;p&gt;ದೂರು ದಾಖಲಾದ ಬೆನ್ನಲ್ಲೇ ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮುಖ್ಯಮಂತ್ರಿಗಳ ವಿರುದ್ಧ ತನಿಖೆ ನಡೆಸಲು ದೂರುದಾರ ಸ್ನೇಹಮಯಿ ಕೃಷ್ಣ ಅವರು ಜೂನ್-ಜುಲೈ 2024 ರ ಅವಧಿಯಲ್ಲಿ ರಾಜ್ಯಪಾಲರ ಒಪ್ಪಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ಪರಿಶೀಲನೆಯ ನಂತರ, ರಾಜ್ಯಪಾಲ ಥಾವರ್&zwnj;ಚಂದ್ ಗೆಹ್ಲೋಟ್ ಅವರು ಆಗಸ್ಟ್ 17 ರಂದು ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಅಧಿಕೃತವಾಗಿ ಅನುಮೋದನೆ ನೀಡಿದರು.&lt;/p&gt;&lt;p&gt;ರಾಜ್ಯಪಾಲರ ಈ ನಿರ್ಧಾರವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಏಕಸದಸ್ಯ ಪೀಠದ ಮೊರೆ ಹೋಗಿದ್ದರಾದರೂ, ಆಗಸ್ಟ್ 19 ರಂದು ಅವರ ಮಧ್ಯಂತರ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು. ತದನಂತರ ಸೆಪ್ಟೆಂಬರ್ 24, 2024 ರಂದು ಹೈಕೋರ್ಟ್ ಏಕಸದಸ್ಯ ಪೀಠವು ರಾಜ್ಯಪಾಲರ ಕ್ರಮ ಕಾನೂನುಬದ್ಧವಾಗಿದೆ ಎಂದು ಎತ್ತಿಹಿಡಿದು, ಕಡ್ಡಾಯ ಪೊಲೀಸ್ ತನಿಖೆಗೆ ಆದೇಶಿಸಿತು.&lt;/p&gt;&lt;p&gt;ಆದಾಗ್ಯೂ, ಈ ದೂರಿನ ಆಧಾರದ ಮೇಲೆ ಸಮಗ್ರ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಅಕ್ರಮ ಸಾಬೀತಾಗಿಲ್ಲ ಎಂದು ಉಲ್ಲೇಖಿಸಿ ನ್ಯಾಯಾಲಯಕ್ಕೆ 'ಬಿ' ವರದಿಯನ್ನು (B-Report) ಸಲ್ಲಿಸಿದ್ದರು. ಈ ತನಿಖಾ ವರದಿಯನ್ನು ತದನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪುರಸ್ಕರಿಸಿ, ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಕ್ಲೀನ್ ಚೀಟ್ ನೀಡಿತ್ತು. ಆದರೂ, ರಾಜ್ಯಪಾಲರ ಅಂದಿನ ಆದೇಶವನ್ನು ಪ್ರಶ್ನಿಸಿರುವ ಕಾನೂನು ಹೋರಾಟದ ಪ್ರಕ್ರಿಯೆಗಳು ಈಗ ಹೈಕೋರ್ಟ್&zwnj;ನ ವಿಭಾಗೀಯ ಪೀಠದ ಮುಂದೆ ಮುಂದುವರಿದಿವೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/muda-scam-case-karnataka-high-court-postpones-siddaramaiah-appeal-hearing-to-july-gdp/articleshow-vg4snqs"/>
        </item>
        <item>
            <title><![CDATA[ಕೆಆರ್‌ಎಸ್‌ ನೀರಿನ ಮಟ್ಟ ಕುಸಿತಕ್ಕೆ ಅತ್ತ ರೈತರಲ್ಲಿ ಆತಂಕ, ಇತ್ತ ಪ್ರವಾಸಿಗರು ಖುಷ್‌ ಆಗಿರೋದ್ಯಾಕೆ ಗೊತ್ತಾ?]]></title>
            <link>https://kannada.asianetnews.com/karnataka-districts/sri-lakshmi-narayanaswamy-temple-visible-after-three-years-of-krs-backwater-rav/articleshow-wuli781</link>
            <guid isPermaLink="true">https://kannada.asianetnews.com/karnataka-districts/sri-lakshmi-narayanaswamy-temple-visible-after-three-years-of-krs-backwater-rav/articleshow-wuli781</guid>
            <pubDate>Wed, 17 Jun 2026 13:46:30 +0530</pubDate>
            <description><![CDATA[&lt;p&gt;ಕೆಆರ್&zwnj;ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿದಿದ್ದರಿಂದ ಮೂರು ವರ್ಷಗಳ ನಂತರ ಮುಳುಗಡೆಯಾಗಿದ್ದ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ ಗೋಚರಿಸಿದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೆ, ದುರ್ಬಲ ಮುಂಗಾರಿನಿಂದಾಗಿ ರೈತರು ಬೆಳೆ ನಷ್ಟ ಮತ್ತು ನೀರಿನ ಕೊರತೆಯ ಆತಂಕದಲ್ಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvaab8eqn0dbqpyg0rykv22b,imgname-----------------------2026-06-17t131738.885-1781684085206.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಲ್.ವಿ.ನವೀನ್ ಕುಮಾರ್&lt;/strong&gt;&lt;/p&gt;&lt;p&gt;ಶ್ರೀರಂಗಪಟ್ಟಣ: ಕೆಆರ್&zwnj;ಎಸ್ ಅಣೆಕಟ್ಟೆ(KRS Dam)ಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ಮೂರು ವರ್ಷಗಳ ನಂತರ ಹಿನ್ನೀರಿನಲ್ಲಿ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ(Sri Lakshmi Narayanaswamy Temple) ಗೋಚರಗೊಂಡಿದೆ. ಈ ವಿಚಾರ ತಿಳಿದು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಪ್ರವಾಸಿಗರು ಕೆಆರ್&zwnj;ಎಸ್ ಹಿನ್ನೀರಿಗೆ ಆಗಮಿಸಿ ಐತಿಹಾಸಿಕ ದೇವಾಲಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ.&lt;/p&gt;&lt;p&gt;ಇತ್ತ ಮುಂಗಾರು(Monsoon) ಪ್ರಾರಂಭವಾದರೂ ನಿರೀಕ್ಷೆಯಂತೆ ಮಳೆಯಾಗದ ಕಾರಣ ಅಣೆಕಟ್ಟೆಯಲ್ಲಿ ದಿನೇ ದಿನ ನೀರಿನ ಸಂಗ್ರಹ ಗಣನೀಯವಾಗಿ ಕುಸಿಯುತ್ತಿದ್ದು, ರೈತರು ತಾವು ಬೆಳೆದಿರುವ ಬೆಳೆಗಳನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಆತಂಕದಲ್ಲಿದ್ದಾರೆ.&lt;/p&gt;&lt;h2&gt;ಪ್ರವಾಸಿಗರ ಆಕರ್ಷಣೆ ದೇಗುಲ:&lt;/h2&gt;&lt;p&gt;ಕೆಆರ್&zwnj;ಎಸ್ ಹಿನ್ನೀರಿನಲ್ಲಿ ಗೋಚರಗೊಂಡಿರುವ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ ಇದೀಗ ಪ್ರವಾಸಿಗ ಆಕರ್ಷಣೀಯ ಕೇಂದ್ರ ಬಿಂದುವಾಗಿ ರೂಪುಗೊಂಡಿದೆ. ಪ್ರತಿದಿನ ಸಹಸ್ರಾರು ಮಂದಿ ದೇವಾಲಯ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಅಲ್ಲದೇ, ಪ್ರಿ-ವೆಡ್ಡಿಂಗ್ ಫೋಟೋಶೂಟ್, ಭರತನಾಟ್ಯ ಚಿತ್ರೀಕರಣ, ಕಿರುಚಿತ್ರ ಹಾಗೂ ಸಾಮಾಜಿಕ ಜಾಲತಾಣಗಳ ವೀಡಿಯೋ ನಿರ್ಮಾಣಗಳಿಗೂ ಈ ಪ್ರದೇಶ ನೆಚ್ಚಿನ ತಾಣವಾಗಿ ಮಾರ್ಣಟ್ಟಿದೆ. ದೇವಾಲಯದ ಹಿನ್ನೆಲೆ ಹಾಗೂ ವಿಶಾಲ ಜಲಾಶಯದ ದೃಶ್ಯಗಳು ಛಾಯಾಗ್ರಾಹಕರನ್ನು ಸೆಳೆಯುತ್ತಿದೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಕೆಆರ್&zwnj;ಎಸ್ ಹಿನ್ನೀರಿನಲ್ಲಿ ಮತ್ತಷ್ಟು ಹೆಚ್ಚಾಗುತ್ತಿದ್ದಾರೆ.&lt;/p&gt;&lt;h3&gt;ತ್ಯಾಜ್ಯ ವಸ್ತುಗಳಿಂದ ಅನೈರ್ಮಲ್ಯ ತಾಂಡವ:&lt;/h3&gt;&lt;p&gt;ದೇವಾಲಯ ವೀಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಪ್ರವಾಸಿಗರು ತಾವು ತಂದಿರುವ ಪ್ಲಾಸ್ಟಿಕ್ ಬಾಟಲ್, ಆಹಾರ ತಿನಿಸುಗಳು ಸೇರಿದಂತೆ ಇತರೆ ತ್ಯಾಜ್ಯ ವಸ್ತುಗಳನ್ನು ಎಲ್ಲಂದರಲ್ಲಿ ಬಿಸಾಡು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಲ್ಲದೇ, ಮದ್ಯ ಪ್ರಿಯರು ಸಹ ಖಾಲಿ ಬಾಟಲಿಗಳು ಹಾಗೂ ತ್ಯಾಜ್ಯ ವಸ್ತುಗಳನ್ನು ಎಲ್ಲೆದರಲ್ಲಿ ಬಿಸಾಡಿ ಕಾವೇರಿ ನೀರು ಹಾಗೂ ಪರಿಸರ ಮತ್ತಷ್ಟು ಹಾಳು ಮಾಡುತ್ತಿದ್ದಾರೆ.&lt;/p&gt;&lt;p&gt;ಮುಂದಿನ ದಿನಗಳಲ್ಲಿ ಅಣೆಕಟ್ಟೆಗೆ ಹೆಚ್ಚಿನ ನೀರು ಹರಿದು ಬಂದು ನೀರಿನ ಸಂಗ್ರಹ ಹೆಚ್ಚಾದರೆ ಪ್ರವಾಸಿಗರು ಬಿಸಾಡಿರುವ ಪ್ಲಾಸ್ಟಿಕ್ ವಸ್ತುಗಳೆಲ್ಲ ಮತ್ತೆ ಕಾವೇರಿ ನೀರಿಗೆ ಸೇರ್ಪಡೆಯಾಗಿ ಕಲುಷಿತಗೊಳ್ಳಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಕೆಆರ್&zwnj;ಎಸ್ ಹಿನ್ನೀರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಪ್ರವಾಸಿಗರ ಸುರಕ್ಷತೆ, ನೈರ್ಮಲ್ಯ ಕಾಪಾಡುವುದು, ಐತಿಹಾಸಿಕ ತಾಣದ ರಕ್ಷಣೆಗಾಗಿ ಪೊಲೀಸ್ ಗಸ್ತು, ಎಚ್ಚರಿಕೆ ಫಲಕಗಳು ಹಾಗೂ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಕಲ್ಪಿಸಲು ತಾಲೂಕು ಹಾಗೂ ಜಿಲ್ಲಾಡಳಿತ ಕ್ರಮವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ಕೈಕೊಟ್ಟ ಮುಂಗಾರು, ರೈತರಲ್ಲಿ ಆತಂಕ:&lt;/strong&gt;&lt;/p&gt;&lt;p&gt;ಕೆಆರ್&zwnj;ಎಸ್ ಹಿನ್ನೀರಿನಲ್ಲಿ ದೇಗುಲ ಗೋಚರಗೊಂಡು ಪ್ರವಾಸಿಗರಿಗೆ ಸಂಭ್ರಮ ತಂದರೆ, ಇತ್ತ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆಯಾಗದೆ ಬೇಸಿಗೆ ಬಿಸಿಲಿಗೆ ಕೆಆರ್&zwnj;ಎಸ್ ಜಲಾಶಯದ ಒಳ ಹರಿವಿನ ಪ್ರಮಾಣ ದಿನೇ ದಿನೇ ಕಡಿಮೆಯಾಗಿ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.&lt;/p&gt;&lt;p&gt;ಮುಂಗಾರು ಮಳೆಗಾಗಿ ರೈತರ ಮೊಗದಲ್ಲಿ ಆಶಾ ಭಾವನೆ ಕಂಡು ಬಂದರೂ ಜೂನ್ ಎರಡನೇ ವಾರ ಕಳೆಯುತ್ತಿದ್ದರೂ ನಿರೀಕ್ಷಿತ ಪ್ರಮಾಣದ ಮಳೆ ಬೀಳದೆ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಆರ್&zwnj;ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ರೈತರಲ್ಲಿ ಆತಂಕ ಹೆಚ್ಚು ಮಾಡಿದೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿದ್ದರೆ ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಇದರಿಂದ ರೈತರ ಕೃಷಿ ಚಟುವಟಿಕೆ ಜೊತೆಗೆ ಕುಡಿಯುವ ನೀರಿಗೆ ತೊಂದರೆಯಾಗುವ ಕಳವಳವನ್ನು ವ್ಯಕ್ತಪಡಿಸಿದ್ದಾರೆ.ಅಣೆಕಟ್ಟೆಯಲ್ಲಿ 81.35 ಅಡಿ ನೀರು ಸಂಗ್ರಹ&lt;/p&gt;&lt;p&gt;124.80 ಗರಿಷ್ಠ ಮಟ್ಟದ ಕೆಆರ್ ಎಸ್ ಜಲಾಶಯದಲ್ಲಿ ಜೂ.16ರ ಬೆಳಗ್ಗೆ 8 ಗಂಟೆ ವೇಳೆಗೆ 81.35 ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಯಲ್ಲಿ ಕೇವಲ 11.394 ಟಿಎಂಸಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ 581 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನದಿ, ಕಾಲುವೆಗಳು ಹಾಗೂ ಕುಡಿಯುವ ನೀರಿನ ಸರಬರಾಜು ಸೇರಿದಂತೆ ಒಟ್ಟು 436 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.&lt;/p&gt;&lt;p&gt;ಅಣೆಕಟ್ಟೆಯನ್ನು ರೈತರ ವ್ಯವಸಾಯಕ್ಕಾಗಿ ನಿರ್ಮಿಸಲಾಗಿದೆ. ಆದರೆ, ಪ್ರಸ್ತುತ ರಾಜಕಾರಣಿಗಳು ಕುಡಿಯುವ ನೀರಿಗಾಗಿ ಅಲ್ಲಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸದೇ ಕೇವಲ ಹಣ ಮಾಡುವ ಉದ್ದೇಶದಿಂದ ಅಣೆಕಟ್ಟೆ ಡೆಡ್ ಸ್ಟೋರೆಜ್ ನೀರನ್ನು ಬೆಂಗಳೂರು- ಮೈಸೂರಿನಂತ ನಗರಗಳಿಗೆ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಅಣೆಕಟ್ಟೆ ಸಂಪೂರ್ಣ ಖಾಲಿಯಾದರೆ ಬಿರುಕು ಬಿಡುವ ಸಾಧ್ಯತೆ ಇದೆ. ಅಣೆಕಟ್ಟೆಯಲ್ಲಿನ ಕನಿಷ್ಠ 60 ರಿಂದ 70 ಅಡಿ ನೀರು ಹೊರ ಹೋಗದಂತೆ ನಿರ್ಮಾಣ ಮಾಡಲಾಗಿದೆ. ಆದರೆ, ಇದೀಗ ನೂರಾರು ಅಡಿ ಗುಂಡಿ ತೋಡಿ ನೀರನ್ನು ಹೊರ ತೆಗೆದು ಅಣೆಕಟ್ಟೆಗೆ ಅಪಯಾವನ್ನುಂಟು ಮಾಡುತ್ತಿದ್ದಾರೆ.&lt;/p&gt;&lt;p&gt;&lt;strong&gt;- ಕೆ.ಎಸ್. ನಂಜುಂಡೇಗೌಡ, ರೈತ ಹೋರಾಟಗಾರ&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/sri-lakshmi-narayanaswamy-temple-visible-after-three-years-of-krs-backwater-rav/articleshow-wuli781"/>
        </item>
        <item>
            <title><![CDATA[ಮೈಸೂರಲ್ಲೊಂದು Love story: ಎಸ್ಸೆಸ್ಸೆಲ್ಸಿವರೆಗೆ ಸಹಪಾಠಿಗಳು: ನಾಲ್ಕು ವರ್ಷದಿಂದ ಪ್ರೇಮಿಗಳು- ಈಗ ಮಂತ್ರ ಮಾಂಗಲ್ಯ ಮದುವೆ!]]></title>
            <link>https://kannada.asianetnews.com/karnataka-districts/a-love-story-in-mysore-subramani-weds-soumya-mantra-mangalya-rav/articleshow-yf46n6v</link>
            <guid isPermaLink="true">https://kannada.asianetnews.com/karnataka-districts/a-love-story-in-mysore-subramani-weds-soumya-mantra-mangalya-rav/articleshow-yf46n6v</guid>
            <pubDate>Sun, 21 Jun 2026 13:51:03 +0530</pubDate>
            <description><![CDATA[ಮೈಸೂರಿನಲ್ಲಿ, ಬಾಲ್ಯದ ಸಹಪಾಠಿಗಳಾಗಿದ್ದ ಬೇರೆ ಬೇರೆ ಸಮಾಜದ ಜಿ.ಸುಬ್ರಮಣಿ ಮತ್ತು ಎಂ.ಸೌಮ್ಯಾ ಅವರು ನಾಲ್ಕು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಕುವೆಂಪು ಅವರ ಮಂತ್ರಮಾಂಗಲ್ಯದಂತೆ, ಮಾನವ ಮಂಟಪದಲ್ಲಿ ನಡೆದ ಈ ಸರಳ ವಿವಾಹಕ್ಕೆ ಎರಡೂ ಕುಟುಂಬಗಳ ಒಪ್ಪಿಗೆಯೂ ಇತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kvmkv6m7nzxxyyntf9mzxa6w,imgname----------------------51--1782029589127.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು: ಪ್ರೇಮಿಗಳಾದ ಸವಿತಾ ಸಮಾಜದ ಜಿ.ಸುಬ್ರಮಣಿ ಹಾಗೂ ಉಪ್ಪಾರ ಸಮಾಜದ ಎಂ.ಸೌಮ್ಯಾ ಅವರು ನಗರದಲ್ಲಿ ಶುಕ್ರವಾರ ಕುವೆಂಪು ಅವರ ಮಂತ್ರಮಾಂಗಲ್ಯದಂತೆ ಮದುವೆಯಾದರು.&lt;/p&gt;&lt;p&gt;ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆಯ ಸುಬ್ರಮಣಿ ಹಾಗೂ ಸೌಮ್ಯಾ ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಸಹಪಾಠಿಗಳಾಗಿದ್ದರು. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರು ನಗರದ ಜಾತ್ಯತೀತ ಒಲವಿನ ವೇದಿಕೆಯಾದ ಮಾನವ ಮಂಟಪ ಆಯೋಜಿಸಿದ್ದ ಸಮಾರಂಭದಲ್ಲಿ ಸರಳ ವಿವಾಹವಾದರು.&lt;/p&gt;&lt;p&gt;ಎಸ್ಎಸ್&zwnj;ಎಲ್&zwnj;ಸಿ ನಂತರ ನಗರದ ಬೋಗಾದಿಯಲ್ಲಿ ಕ್ಷೌರಿಕ ವೃತ್ತಿ ಕೈಗೊಂಡಿರುವ ಸುಬ್ರಮಣಿ ಅವರು ಪ್ರೊಫೆಷನಲ್ ಕೋಸ್೯ ಇನ್ ಗ್ರೂಮಿಂಗ್ ಪಡೆದಿದ್ದಾರೆ. ಸೌಮ್ಯಾ ಅವರು ಎಂ.ಕಾಂ ನಂತರ ಎಂಬಿಎ ಪದವಿ ಪಡೆದಿದ್ದಾರೆ. ಅವರ ಮದುವೆಗೆ ದರಸಗುಪ್ಪೆ ಗ್ರಾಮದ ಆಪ್ತ ಬಂಧುಗಳು, ಸಹಪಾಠಿಗಳು ಇದ್ದರು.&lt;/p&gt;&lt;p&gt;ಅಲ್ಲದೇ, ಸುಬ್ರಮಣಿ ತಾಯಿ ಶೋಭಾ ಹಾಗೂ ಸೌಮ್ಯಾ ಅವರ ಹೆತ್ತವರಾದ ವಸಂತಿ ಮತ್ತು ಚಾಲಕರಾದ ಮಹದೇವು ಒಪ್ಪಿದ್ದಲ್ಲದೆ ಮದುವೆಗೂ ಸಾಕ್ಷಿಯಾದರು. ಸುಬ್ರಮಣಿ ತಂದೆ ಗಣೇಶ್ ನಿಧನರಾಗಿದ್ದಾರೆ.&lt;/p&gt;&lt;p&gt;ಮಾನವ ಮಂಟಪದ ಸಂಚಾಲಕ ಧನಂಜಯ್ ಎಲಿಯೂರು ಮಾತನಾಡಿ, ಕುವೆಂಪು ಅವರು ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ಹಾಗೂ ರಾಜೇಶ್ವರಿ ಅವರ ಮದುವೆಯನ್ನು ಮಂತ್ರ ಮಾಂಗಲ್ಯ ಮೂಲಕ ನೆರವೇರಿಸಿದರು. ಮದುವೆ ದಿನವೇ ತಮ್ಮ ಆಪ್ತರಿಗೆ ಬಿಡುವಾದಾಗ ಬಂದು ಆಶೀರ್ವದಿಸಿರೆಂದು ಪತ್ರ ಬರೆದರು. ಈ ಮೂಲಕ ಸರಳ ಮದುವೆಗೆ ನಾಂದಿಯಾದರು ಎಂದರು.&lt;/p&gt;&lt;p&gt;ಮಾನವ ಮಂಟಪದ ಮತ್ತೋರ್ವ ಸಂಚಾಲಕ ಪ್ರೊ.ಕಾಳಚನ್ನೇಗೌಡ ಅವರು ಮಂತ್ರ ಮಾಂಗಲ್ಯದ ಪ್ರಮಾಣ ವಚನ ಬೋಧಿಸಿದರು. ನಂತರ ಮಾತನಾಡಿ, ನಮ್ಮ ದೇಶದಲ್ಲಿ 2600ಕ್ಕೂ ಅಧಿಕ ಮುಖ್ಯ ಜಾತಿಗಳಿವೆ ಜೊತೆಗೆ ಅಸಂಖ್ಯ ಉಪ ಜಾತಿಗಳಿವೆ. ಆದರೆ ಸ್ವಜಾತಿಯಲ್ಲಿ ನಡೆದ ಅನೇಕ ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.&lt;/p&gt;&lt;p&gt;ಟಿವಿ ಧಾರಾವಾಹಿಗಳನ್ನು ನೋಡಿ ಪ್ರಭಾವಿತರಾದ ಗ್ರಾಮೀಣರೂ ಅರಿಸಿನ ಶಾಸ್ತ್ರ, ಮೆಹಂದಿಶಾಸ್ತ್ರವೆಂದು ಸಾಲ ಮಾಡಿಯಾದರೂ ಅದ್ಧೂರಿಯಾಗಿ ಮದುವೆ ಮಾಡುತ್ತಿದ್ದಾರೆ. ಶಾಸ್ತ್ರಕ್ಕಿಂತ ಚೆನ್ನಾಗಿ ಬದುಕುವುದು ಮುಖ್ಯ. ಆದರೆ ಸರಳವಾದ ಮದುವೆಗಳು ಕಳಪೆಯಲ್ಲ. ಹೀಗಾಗಿ ಸರಳ ಮದುವೆಗಳಿಗೆ ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.&lt;/p&gt;&lt;p&gt;ಉಗ್ರನರಸಿಂಹೇಗೌಡ ಅವರು ವಿವಾಹ ಸಂಹಿತೆ ಬೋಧಿಸಿ ಮಾತನಾಡಿ, ಅದ್ಧೂರಿ ಮದುವೆಗಳಲ್ಲಿ ವ್ಯಾಪಾರ, ವಹಿವಾಟು ಹೆಚ್ಚಿರುತ್ತದೆ. ಅಲ್ಲದೆ ಪ್ರತಿಷ್ಠೆಗಾಗಿ ಅದ್ಧೂರಿ ಮದುವೆಗಳಾಗುತ್ತಿವೆ. ಆದರೆ ಸರಳವಾದ ಮದುವೆಗಳು ಆದರ್ಶ ಹಾಗೂ ಮೌಲ್ಯಯುತವಾದವು ಎಂದರು.&lt;/p&gt;&lt;p&gt;ಮದುವೆಯಾದ ಸುಬ್ರಮಣಿ ಮಾತನಾಡಿ, ಆಸ್ತಿ ಅಂತಸ್ತು ನೋಡಿ ಮದುವೆಯಾಗುವ ಕಾಲವಿದು. ಮದುವೆ ಶ್ರೀಮಂತವಾಗಬಾರದು. ನಮ್ಮ ಬದುಕು ಶ್ರೀಮಂತವಾಗಬೇಕು ಎಂದರು. ಅವರ ಪತ್ನಿ ಸೌಮ್ಯಾ ಮಾತನಾಡಿ, ನಾವಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿದ್ದು ಅರ್ಥಪೂರ್ಣವಾಗಿ ಬದುಕುತ್ತೇವೆ ಎಂದರು.&lt;/p&gt;&lt;p&gt;ರಂಗಕರ್ಮಿ ದೀಪಕ್ ಮೈಸೂರು, ಸುಬ್ರಮಣಿ ಸಹಪಾಠಿ ಮಂಜುನಾಥ್ ಮಾತನಾಡಿದರು&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/a-love-story-in-mysore-subramani-weds-soumya-mantra-mangalya-rav/articleshow-yf46n6v"/>
        </item>
    </channel>
</rss>
