<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 26 Aug 2026 20:15:11 +0530</lastBuildDate>
        <atom:link href="https://kannada.asianetnews.com/rss/mysore" rel="self" type="application/rss+xml"/>
        <item>
            <title><![CDATA[ದಕ್ಷಿಣದ  ಜೀವಗಂಗೆ ದಾಹದಲ್ಲಿ ಅನ್ನದಾತ; ಖಾಲಿಯಾದ ಕಾವೇರಿ ಒಡಲು,  ನೀರು ಬಿಡದಿದ್ದರೆ ಸಂಕಷ್ಟ ಫಿಕ್ಸ್‌!]]></title>
            <link>https://kannada.asianetnews.com/karnataka-districts/cauvery-water-crisis-karnataka-farmers-cauvery-basin-drought-paddy-crop-loss-water-shortage-cauvery-water-dispute-bmk/articleshow-3ta6nhl</link>
            <guid isPermaLink="true">https://kannada.asianetnews.com/karnataka-districts/cauvery-water-crisis-karnataka-farmers-cauvery-basin-drought-paddy-crop-loss-water-shortage-cauvery-water-dispute-bmk/articleshow-3ta6nhl</guid>
            <pubDate>Sat, 22 Aug 2026 17:40:20 +0530</pubDate>
            <description><![CDATA[ಕಾವೇರಿ ನದಿ ನೀರಿಲ್ಲದೆ ಬತ್ತಿ ಹೋಗುತ್ತಿದ್ದು, ಜಲಾಶಯಗಳು ಖಾಲಿಯಾಗಿವೆ. ಇದರಿಂದಾಗಿ, ಕಾವೇರಿ ಕೊಳ್ಳದ ರೈತರು ಬೆಳೆ ನಷ್ಟದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಸುಳಿಯಲ್ಲಿ ಬಳಲುತ್ತಿದ್ದಾರೆ. ರಾಜಕೀಯ ಹೋರಾಟಗಳ ನಡುವೆ ಅನ್ನದಾತನ ಬದುಕು ಅತಂತ್ರವಾಗಿದ್ದು, ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0mp1shdp4bc6hqvnn2aqw4k,imgname-cauvery-crisis-1787400611372.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾವೇರಿ ಎಂಬುದು ಕೇವಲ ನದಿಯಲ್ಲ, ದಕ್ಷಿಣ ಭಾರತದ ಕೋಟ್ಯಂತರ ಜೀವಗಳ ಹಸಿವು ನೀಗಿಸುವ ಜಲದೇವತೆ, ಅನ್ನದಾತನ ಪಾಲಿನ ಸಾಕ್ಷಾತ್ ಜೀವಗಂಗೆ. ಆದರೆ ಇಂದು ಅದೇ ಜೀವಗಂಗೆಯ ಒಡಲು ಬತ್ತಿಹೋಗುತ್ತಿದೆ. ಮಳೆರಾಯ ಕೈಕೊಟ್ಟಿದ್ದಾನೆ, ಜಲಾಶಯಗಳು ಖಾಲಿಯಾಗುತ್ತಿವೆ. ಇತ್ತ ನದಿಯ ನೀರಿಗಾಗಿ ರಾಜ್ಯಗಳ ನಡುವೆ ಹಗ್ಗಜಗ್ಗಾಟ ತೀವ್ರಗೊಳ್ಳುತ್ತಿದ್ದರೆ, ಅತ್ತ ನದಿಯನ್ನೇ ನಂಬಿ ಬದುಕುತ್ತಿರುವ ಕಾವೇರಿ ಕೊಳ್ಳದ ರೈತನ ಕಣ್ಣುಗಳಲ್ಲಿ ಕಣ್ಣೀರು ಒಣಗದಂತಾಗಿದೆ. ಪ್ರತಿ ವರ್ಷ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಇಂದು ನೀರಿಲ್ಲದೆ ಬಿರುಕು ಬಿಡುತ್ತಿವೆ. ಕಾವೇರಿಯ ಉಭಯ ದಂಡೆಗಳಲ್ಲೂ ಇಂದು ಕೇಳಿಸುತ್ತಿರುವುದು ಕೇವಲ ಅನ್ನದಾತನ ಆಕ್ರಂದನ ಮತ್ತು ಅಸಹಾಯಕತೆ ಮಾತ್ರ.&lt;/p&gt;&lt;h2&gt;&lt;strong&gt;ಅನಿಶ್ಚಿತತೆಯಲ್ಲಿ ಅನ್ನದಾತ!&lt;/strong&gt;&lt;/h2&gt;&lt;p&gt;ರೈತನ ಬದುಕು ಸದಾ ಅನಿಶ್ಚಿತತೆಯ ಮೇಲೆ ನಿಂತಿರುತ್ತದೆ. ಈ ವರ್ಷವೂ ಮುಂಗಾರು ಮಳೆ ಕೈಕೊಟ್ಟರೂ, 'ಜೀವಗಂಗೆ' ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆಯಿಂದ ರೈತ ಸಾಲಸೋಲ ಮಾಡಿ ಗದ್ದೆಗೆ ಇಳಿದಿದ್ದ. ಹಗಲಿರುಳು ಕಷ್ಟಪಟ್ಟು ಭೂಮಿ ಹದಮಾಡಿ, ಭತ್ತದ ಸಸಿಗಳನ್ನು ನೆಟ್ಟು ಹಸಿರು ಕನಸು ಕಂಡಿದ್ದ. ಆದರೆ ಕಾವೇರಿ ಕೊಳ್ಳದಲ್ಲಿ ಒಂದು ಎಕರೆ ಭತ್ತದ ಕೃಷಿ ಮಾಡುವುದು ಇಂದು ಸಾಮಾನ್ಯ ಮಾತಲ್ಲ.&lt;/p&gt;&lt;h3&gt;&lt;strong&gt;ದೊಡ್ಡ ವೆಚ್ಚದ ಹೊರೆ!&lt;/strong&gt;&lt;/h3&gt;&lt;p&gt;ಆರಂಭಿಕ ಹಂತದಲ್ಲೇ ರೈತನಿಗೆ ದೊಡ್ಡ ವೆಚ್ಚದ ಹೊರೆ ಬೀಳುತ್ತದೆ. ಕೆಲ ವರದಿಗಳ ಅಂಕಿ-ಅಂಶಗಳ ಪ್ರಕಾರ, ಎರಡೂವರೆ ಎಕರೆ ಜಮೀನಿನ ನಾಟಿಗೆ ರೈತರು ಈಗಾಗಲೇ ₹8,000 ಹಣವನ್ನು ಖರ್ಚು ಮಾಡಿದ್ದಾರೆ. ಇದನ್ನು ಸರಾಸರಿ ಲೆಕ್ಕ ಹಾಕಿದರೆ, ಪ್ರತಿ 1 ಎಕರೆ ಜಮೀನಿಗೆ ಕೇವಲ ಆರಂಭಿಕ ನರ್ಸರಿ ಸಿದ್ಧತೆ ಮತ್ತು ಸಸಿ ನಾಟಿಗೇ ಕನಿಷ್ಠ ₹3,200 ವೆಚ್ಚವಾಗುತ್ತದೆ. ಬಡ ರೈತನಿಗೆ ಆ ಮೂರು ಸಾವಿರ ರೂಪಾಯಿ ಕೇವಲ ಹಣವಲ್ಲ, ಅದು ಅವನ ರಕ್ತ, ಬೆವರು ಮತ್ತು ಇಡೀ ವರ್ಷದ ಬದುಕಿನ ಬಂಡವಾಳ.&lt;/p&gt;&lt;h3&gt;&lt;strong&gt;ತೆಲೆಕೆಳಗಾದ ಪರಿಸ್ಥಿತಿ!&lt;/strong&gt;&lt;/h3&gt;&lt;p&gt;ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತಲೆಕೆಳಗಾಗಿದೆ. ಜಲಾಶಯಗಳಿಂದ ಸರಿಯಾಗಿ ನೀರು ಬಿಡದ ಕಾರಣ, ನಾಟಿ ಮಾಡಿದ ಸಸಿಗಳು ಕಣ್ಣಮುಂದೆಯೇ ಒಣಗಿ ಕಪ್ಪಾಗುತ್ತಿವೆ. ಇನ್ನು ಕೇವಲ ಹತ್ತು ದಿನಗಳ ಒಳಗೆ ಗದ್ದೆಗಳಿಗೆ ನೀರು ಹರಿಯದಿದ್ದರೆ, ರೈತ ತಾನು ಕೇವಲ ಈ ಆರಂಭಿಕ ಬಂಡವಾಳವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಮುಂದೆ ಉಳುಮೆ, ಗೊಬ್ಬರ, ಕಳೆ ಕೀಳುವಿಕೆ ಸೇರಿದಂತೆ ಒಂದು ಎಕರೆಗೆ ತಗುಲುವ ಒಟ್ಟು ₹15,000 ದಿಂದ ₹20,000 ವರೆಗಿನ ಕೃಷಿ ಹೂಡಿಕೆಯ ಕನಸೆಲ್ಲಾ ಕಮರಿ ಹೋಗುತ್ತದೆ.&lt;/p&gt;&lt;h3&gt;&lt;strong&gt;ಬರಬೇಕಾದ ಆದಾಯವೂ ಮಣ್ಣುಪಾಲು!&lt;/strong&gt;&lt;/h3&gt;&lt;p&gt;ಬೆಳೆ ಕೈಗೆ ಬರದಿದ್ದರೆ ಮುಂದೆ ಬರಬೇಕಾದ ತಲಾ ಎಕರೆಗೆ ಸುಮಾರು ₹40,000 ದಷ್ಟು ನಿವ್ವಳ ಆದಾಯವೂ ಮಣ್ಣುಪಾಲಾಗಿ, ಇಡೀ ವರ್ಷದ ಬೆಳೆಯನ್ನೇ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ. ಕಾವೇರಿ ಕೊಳ್ಳದ ಹಳ್ಳಿಗಳಲ್ಲಿ ಇಂದು ಹೋದ ಕಡೆಯಲ್ಲೆಲ್ಲಾ ಇದೇ ಆತಂಕ ಮನೆಮಾಡಿದೆ. ಸಾಲದ ಸುಳಿಗೆ ಸಿಲುಕಿರುವ ಅನ್ನದಾತನಿಗೆ ಮುಂದೆ ಭವಿಷ್ಯವೇ ಕಾಣದಂತಾಗಿದೆ. ಖಾಸಗಿ ಲೇವಾದೇವಿದಾರರಿಂದ ಮತ್ತು ಸಹಕಾರ ಬ್ಯಾಂಕುಗಳಿಂದ ತಂದ ಸಾಲ ಹೇಗೆ ತೀರಿಸಲಿ? ಮುಂದಿನ ದಿನಗಳಲ್ಲಿ ಕುಟುಂಬವನ್ನು ಹೇಗೆ ಸಾಕಲಿ? ಎಂಬ ಪ್ರಶ್ನೆ ಪ್ರತಿ ರೈತನನ್ನೂ ಭೀತಿಯಿಂದ ಕಾಡುತ್ತಿದೆ.&lt;/p&gt;&lt;h3&gt;&lt;strong&gt;ಕುಡಿಯುವ ನೀರಿನ ಅಭಾವ!&lt;/strong&gt;&lt;/h3&gt;&lt;p&gt;ಇತ್ತ ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಕೋಟ್ಯಂತರ ಜನರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ. ಕಾವೇರಿ ನೀರು ಕುಡಿಯುವ ಜನರಿಗೆ ಆಸರೆಯಾಗಬೇಕೋ ಅಥವಾ ಬೆಳೆ ಒಣಗುತ್ತಿರುವ ರೈತನಿಗೆ ಜೀವ ನೀಡಬೇಕೋ ಎಂಬ ಧರ್ಮಸಂಕಟ ಸೃಷ್ಟಿಯಾಗಿದೆ. ಕಾವೇರಿ ವಿವಾದದ ರಾಜಕೀಯ ಹೋರಾಟಗಳು, ಕೋರ್ಟು-ಕಚೇರಿಗಳ ಆದೇಶಗಳು ವರ್ಷಗಳಿಂದ ನಡೆಯುತ್ತಲೇ ಇವೆ. ಆದರೆ ಈ ಎಲ್ಲಾ ಹೋರಾಟಗಳ ನಡುವೆ ನಲುಗಿ ಹೋಗುತ್ತಿರುವುದು ಮಾತ್ರ ಕಾವೇರಿ ಮಡಿಲ ಅನ್ನದಾತ. ನೀರಿಗಾಗಿ ಕಾಯುತ್ತಾ ಒಣಗುತ್ತಿರುವ ಗದ್ದೆಯ ಬದಿಯಲ್ಲಿ ನಿಂತು ಆಕಾಶದ ಕಡೆಗೆ ಮುಖಮಾಡಿ ಕಣ್ಣೀರಿಡುತ್ತಿರುವ ರೈತನಿಗೆ ಸಾಂತ್ವನ ಹೇಳುವವರೇ ಇಲ್ಲದಂತಾಗಿದೆ. ಕಾವೇರಿ ಕೊಳ್ಳದ ಈ ಜಲಕ್ಷಾಮ ಕೇವಲ ಬೆಳೆಯ ನಾಶವಲ್ಲ, ಅದು ದೇಶಕ್ಕೆ ಅನ್ನ ನೀಡುವ ಜಗತ್ತಿನ ಅತ್ಯಂತ ದೊಡ್ಡ ಶ್ರಮಿಕನ ಬದುಕಿನ ನಾಶ.&lt;/p&gt;&lt;h3&gt;&lt;strong&gt;ಅನ್ನದಾತನನ್ನು ನೋಡಿ!&lt;/strong&gt;&lt;/h3&gt;&lt;p&gt;ಚುನಾವಣೆ ಬಂದಾಗ ಕಾವೇರಿ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಾಡುವ ನಮ್ಮ ನಾಯಕರು, ಸಂಕಷ್ಟದ ಸಮಯದಲ್ಲಿ ರೈತ ತಲೆಮೇಲೆ ಕೈಹೊತ್ತು ಕುಳಿತಾಗ ಎಲ್ಲಿ ಮಾಯವಾಗುತ್ತಾರೆ? ಎಸಿ ರೂಮಿನಲ್ಲಿ ಕುಳಿತು ಹೇಳಿಕೆ ನೀಡುವುದನ್ನು ಬಿಟ್ಟು, ನಾಲೆಯ ಕೊನೆಯ ಭಾಗದವರೆಗೂ ನೀರು ತಲುಪಿಸುವ ಶಾಶ್ವತ ಯೋಜನೆಗಳನ್ನು ಜಾರಿಗೆ ತರಬೇಕು. ಇನ್ನಾದರೂ ರಾಜಕಾರಣಿಗಳು ಹಠಮಾರಿ ರಾಜಕೀಯ ಬಿಟ್ಟು, ಕಣ್ಮುಂದೆಯೇ ಒಣಗುತ್ತಿರುವ ಬೆಳೆಗಳನ್ನು ಮತ್ತು ಸಾಲದ ಸುಳಿಗೆ ಸಿಲುಕುತ್ತಿರುವ ಅನ್ನದಾತನನ್ನು ಉಳಿಸಬೇಕಿದೆ. ರೈತನಿಗೆ ನಿಮ್ಮ ಭರವಸೆಗಳಿಗಿಂತ ಗದ್ದೆಗೆ ಹರಿಯುವ ಜೀವಜಲ ಮುಖ್ಯ. ಇಲ್ಲದಿದ್ದರೆ, ದೇಶಕ್ಕೆ ಅನ್ನ ನೀಡುವ ರೈತನೇ ಇಲ್ಲದಂತಾಗಿ ಕಾವೇರಿ ಮಡಿಲು ಕೇವಲ ಕಣ್ಣೀರಿನ ಕೊಳ್ಳವಾಗುವುದು ಫಿಕ್ಸ್.&lt;/p&gt;]]></content:encoded>
            <category>mysore</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/cauvery-water-crisis-karnataka-farmers-cauvery-basin-drought-paddy-crop-loss-water-shortage-cauvery-water-dispute-bmk/articleshow-3ta6nhl"/>
        </item>
        <item>
            <title><![CDATA[Dasara Elephant 2026: ಭೀಮನ ಅಭಿಮಾನಿಗಳಿಗೆ ನಿರಾಸೆ; ಅಭಿಮನ್ಯು ಯುಗಾಂತ್ಯ, ಅಂಬಾರಿ ರೇಸ್‌ನಲ್ಲಿರುವ 4 ಪ್ರಮುಖ ಆನೆಗಳು]]></title>
            <link>https://kannada.asianetnews.com/karnataka-districts/elephant-bheema-will-not-participate-in-2026-mysuru-dasara-list-of-4-key-elephants-in-race-to-carry-golden-howdah-sns/articleshow-4rr65k2</link>
            <guid isPermaLink="true">https://kannada.asianetnews.com/karnataka-districts/elephant-bheema-will-not-participate-in-2026-mysuru-dasara-list-of-4-key-elephants-in-race-to-carry-golden-howdah-sns/articleshow-4rr65k2</guid>
            <pubDate>Wed, 19 Aug 2026 14:59:58 +0530</pubDate>
            <description><![CDATA[ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ 6 ವರ್ಷ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅಭಿಮನ್ಯುಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿವೃತ್ತಿ ನೀಡಲಾಗಿದೆ. ಅಭಿಮನ್ಯು ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಧನಂಜಯ, ಮಹೇಂದ್ರ, ಪ್ರಶಾಂತ ಹಾಗೂ ಏಕಲವ್ಯ ಆನೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಅಂತಿಮವಾಗಿ ಅಂಬಾರಿ ಹೊರಲಿರುವ ಆನೆಯನ್ನು ತಾಲೀಮಿನ ನಂತರ ಘೋಷಿಸಲಾಗುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01jafw12r7gsncvqg00kpn0dqf,imgname-mysuru-dasara-bheema-elephant.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: ​&lt;/strong&gt;ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆನೆಗಳ ಆಯ್ಕೆಯಾಗಿದೆ. ಅರಮನೆ ನಗರಿಗೆ ಹೆಜ್ಜೆ ಹಾಕಲು ಗಜಪಡೆ ಸಜ್ಜಾಗಿದೆ. ಆದರೆ ಈ ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಪ್ರಿಯರಿಗೆ ತೀವ್ರ ನಿರಾಸೆ ಎದುರಾಗಿದೆ. ಸತತ 6 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಅತ್ಯಂತ ಗಂಭೀರವಾಗಿ ಹೊತ್ತು ಸಾಗಿದ್ದ ಕ್ಯಾಪ್ಟನ್ ಅಭಿಮನ್ಯು ಈ ಬಾರಿಯ ದಸರಾ ಪಟ್ಟಿಯಿಂದ ಹೊರಬಿದ್ದಿದ್ದಾನೆ. ಅಭಿಮನ್ಯುನನ್ನು ಕೈಬಿಟ್ಟಿದ್ದೇಕೆ? ಮುಂದಿನ ಅಂಬಾರಿ ಆನೆ ಯಾರು? ಇಲ್ಲಿದೆ ಈ ಕುರಿತ ಕಂಪ್ಲೀಟ್ ರಿಪೋರ್ಟ್.&lt;/p&gt;&lt;h2&gt;ದಸರಾ ಅಂಬಾರಿ: ಅಭಿಮನ್ಯು ಯುಗಾಂತ್ಯ, ಹೊಸ ನಾಯಕನ ಹುಡುಕಾಟ&lt;/h2&gt;&lt;p&gt;60ರ ಹೊಸ್ತಿಲಿನಲ್ಲಿ ನಿಂತು ನಿವೃತ್ತಿ ಪಡೆದ ಕಾಂಬಿಂಗ್ ಸ್ಪೆಷಲಿಸ್ಟ್ ಈ ಬಾರಿ ಮೈಸೂರಿಗೆ ಬರ್ತಿಲ್ಲ. ಹಾಗಾಗಿ ನಾಡಹಬ್ಬ ಮೈಸೂರು ದಸರಾದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯ ಹೀರೋ ಅಭಿಮನ್ಯುವಿನ ಗಜ ಗಾಂಭೀರ್ಯದ ನಡಿಗೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಕಳೆದ ಏಪ್ರಿಲ್ ತಿಂಗಳಿಗೆ ಅಭಿಮನ್ಯುಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಕಠಿಣ ನಿಯಮಾವಳಿಗಳ ಅನ್ವಯ ಆತನಿಗೆ ದಸರಾ ಹೊಣೆಗಾರಿಕೆಯಿಂದ ವಿಶ್ರಾಂತಿ ನೀಡಲಾಗಿದೆ. ಇದಕ್ಕೆ ದಂತ ಮುರಿದಿರುವುದು ಕಾರಣವಲ್ಲ, ಕೇವಲ ವಯೋಮಿತಿಯ ಆಧಾರದಲ್ಲೇ ಆತನನ್ನು ಗೌರವಯುತವಾಗಿ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ ಎಂಬುದನ್ನು. ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಅಂಬಾರಿ ರೇಸ್&zwnj;ನಲ್ಲಿರುವ 4 ಪ್ರಮುಖ ಆನೆಗಳು&lt;/h2&gt;&lt;p&gt;​ಅಭಿಮನ್ಯು ನಿವೃತ್ತಿ ಬೆನ್ನಲ್ಲೇ ಈಗ ಮುಂದಿನ ಕ್ಯಾಪ್ಟನ್ ಯಾರು? ಎಂಬ ಕುತೂಹಲ ಗರಿಗೆದರಿದೆ. ಸದ್ಯ 4 ಬಲಿಷ್ಠ ಆನೆಗಳು ಅಂಬಾರಿ ರೇಸ್&zwnj;ನಲ್ಲಿ ಮುಂಚೂಣಿಯಲ್ಲಿವೆ. ​ಧನಂಜಯ, ​ಮಹೇಂದ್ರ, ​ಪ್ರಶಾಂತ ಹಾಗೂ ​ಏಕಲವ್ಯ ಆನೆಗಳು ಚಿನ್ನದ ಅಂಬಾರಿ ಹೊರಬಲ್ಲ ಸಾಮರ್ಥ್ಯ ಹೊಂದಿದ್ದು, ಅರಮನೆ ಆವರಣದಲ್ಲಿ ನಡೆಯುವ ತಾಲೀಮಿನ ಅಂತಿಮ ವಾರದಲ್ಲಿ ಅಧಿಕೃತವಾಗಿ ಅಂಬಾರಿ ಹೊರಲಿರುವ ಆನೆಯ ಹೆಸರನ್ನು ಘೋಷಿಸಲಾಗುತ್ತದೆ ಎಂದು ಮೈಸೂರು ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದ್ದಾರೆ.&lt;/p&gt;&lt;p&gt;ಆಗಸ್ಟ್ 26ಕ್ಕೆ ಗಜಪಯಣ ದಿನಾಂಕ ನಿಗಧಿಯಾಗಿದ್ದು, ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮಿ, ಕಾವೇರಿ. ನಾಡಿನತ್ತ ಹೆಜ್ಜೆ ಹಾಕಲಿವೆ. ​ಎರಡನೇ ಹಂತದಲ್ಲಿ ರೂಪ, ಚೈತ್ರ, ಶ್ರೀಕಂಠ ಆನೆಗಳು ಬರಲಿದ್ದು, ​ಮೀಸಲು ಆನೆಗಳಾಗಿ ಭೀಮ ಹಾಗೂ ಹರ್ಷ ಆನೆಯನ್ನು ಕಾಯ್ದಿರಿಸಿದ್ದಾರೆ.&lt;/p&gt;&lt;h2&gt;ಭೀಮನ ಅಭಿಮಾನಿಗಳಿಗೆ ನಿರಾಸೆ&lt;/h2&gt;&lt;p&gt;ಅಪಾರ ಅಭಿಮಾನಿ ಬಳಗ ಹೊಂದಿರುವ ಭೀಮ ಆನೆಗೆ ಪ್ರಸ್ತುತ ಮದ ಏರಿರುವುದರಿಂದ ಸದ್ಯಕ್ಕೆ ಮೀಸಲು ಪಟ್ಟಿಯಲ್ಲಿಡಲಾಗಿದೆ. ಮಸ್ತು ಇಳಿದರೆ ಮಾತ್ರ ದಸರಾ ಕ್ಯಾಂಪ್&zwnj;ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ​ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹೇಳಿದ್ದಾರೆ.&lt;/p&gt;&lt;p&gt;ಒಟ್ಟಾರೆ ಅಭಿಮನ್ಯು ಆನೆಗೆ 60 ವರ್ಷ ಪೂರ್ಣಗೊಂಡಿರುವ ಕಾರಣ ನಿಯಮಾವಳಿ ಪ್ರಕಾರ ವಿಶ್ರಾಂತಿ ನೀಡಲಾಗಿದೆ. ಆತನ ಸ್ಥಾನ ತುಂಬಲು ನಾಲ್ಕು ಆನೆಗಳ ನಡುವೆ ಸ್ಪರ್ಧೆ ಏರ್ಪಡಲಿದ್ದು, ಅಂತಿಮವಾಗಿ ಯಾರಾಗ್ತಾರೆ ಈ ಬಾರಿ ಗಜಪಡೆ ಕ್ಯಾಪ್ಟನ್ ಎಂಬ ಕೂತೂಹಲ ಹೆಚ್ಚಾಗಿದೆ. &lt;strong&gt;(ವರದಿ: ಮಧು ಎಂ ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)&amp;nbsp;&lt;/strong&gt;&lt;/p&gt;]]></content:encoded>
            <category>mysore</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/elephant-bheema-will-not-participate-in-2026-mysuru-dasara-list-of-4-key-elephants-in-race-to-carry-golden-howdah-sns/articleshow-4rr65k2"/>
        </item>
        <item>
            <title><![CDATA[ಮೈಸೂರಿನಿಂದ ಉಡುಗೊರೆಯಾಗಿ ಹೋದ ಆನೆ ಶ್ರೀಲಂಕಾದ ‘ರಾಜ’ನಾದದ್ದು ಹೇಗೆ?]]></title>
            <link>https://kannada.asianetnews.com/mysore/mysuru-royal-gift-how-nadungamuwa-raja-became-a-sri-lankan-legend-suh/articleshow-ath7vx4</link>
            <guid isPermaLink="true">https://kannada.asianetnews.com/mysore/mysuru-royal-gift-how-nadungamuwa-raja-became-a-sri-lankan-legend-suh/articleshow-ath7vx4</guid>
            <pubDate>Mon, 17 Aug 2026 17:06:09 +0530</pubDate>
            <description><![CDATA[&lt;p&gt;ಮೈಸೂರಿನಲ್ಲಿ ಜನಿಸಿ ಶ್ರೀಲಂಕಾಕ್ಕೆ ಉಡುಗೊರೆಯಾಗಿ ತೆರಳಿದ ನಡುಂಗಮುವ ರಾಜಾ, ಕ್ಯಾಂಡಿ ಪೆರಹೆರಾದಲ್ಲಿ ಪವಿತ್ರ ದಂತಧಾತುವಿನ ಪೆಟ್ಟಿಗೆ ಹೊತ್ತು ಅಲ್ಲಿನ ಅತ್ಯಂತ ಗೌರವಾನ್ವಿತ ಗಜರಾಜನಾಗಿ ಗುರುತಿಸಿಕೊಂಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07r3a1w92txtptpzxap802y,imgname-mysuru-royal-gift-how-nadungamuwa-raja-became-a-sri-lankan-legend-1786966550587.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು ಎಂದಾಕ್ಷಣ ಅರಮನೆ, ದಸರಾ ಮತ್ತು ಆನೆಗಳ ನೆನಪು ಬರುತ್ತದೆ. ಆದರೆ ಮೈಸೂರಿನಿಂದ ಶ್ರೀಲಂಕಾಕ್ಕೆ ತೆರಳಿ ಅಲ್ಲಿನ ಜನರ ಪಾಲಿಗೆ ಅತ್ಯಂತ ಗೌರವಾನ್ವಿತ ಗಜರಾಜನಾಗಿ, ರಾಷ್ಟ್ರೀಯ ಸಂಪತ್ತಾಗಿ ಗುರುತಿಸಿಕೊಂಡ ಆನೆಯೊಂದರ ಕಥೆ ನಿಜಕ್ಕೂ ಕುತೂಹಲ ಮೂಡಿಸುತ್ತದೆ. ಆ ಆನೆಯೇ ನಡುಂಗಮುವ ರಾಜ (Nadungamuwa Raja).&lt;/p&gt;&lt;p&gt;1953ರಲ್ಲಿ ಮೈಸೂರಿನಲ್ಲಿ ಜನಿಸಿದ್ದ ರಾಜಾ, ಬಳಿಕ ಶ್ರೀಲಂಕಾಕ್ಕೆ ತೆರಳಿ ಹಲವು ದಶಕಗಳ ಕಾಲ ಅಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಪ್ರಮುಖ ಭಾಗವಾಗಿದ್ದ. 2022ರಲ್ಲಿ 68ನೇ ವಯಸ್ಸಿನಲ್ಲಿ ನಿಧನರಾದ ಈ ಗಜರಾಜನಿಗೆ ಶ್ರೀಲಂಕಾ ಸರ್ಕಾರ &lsquo;ರಾಷ್ಟ್ರೀಯ ಸಂಪತ್ತು&rsquo; ಎಂಬ ಗೌರವ ನೀಡಿತ್ತು.&lt;/p&gt;&lt;h2&gt;ಮೈಸೂರಿನಿಂದ ಶ್ರೀಲಂಕಾಕ್ಕೆ ಹೇಗೆ ಹೋದ?&lt;/h2&gt;&lt;p&gt;ವರದಿಗಳ ಪ್ರಕಾರ, ರಾಜಾ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಅಧೀನದಲ್ಲಿದ್ದ ಆನೆ ಮರಿಗಳಲ್ಲಿ ಒಂದಾಗಿತ್ತು. ಮಹಾರಾಜರ ಕುಟುಂಬದ ಸದಸ್ಯರೊಬ್ಬರ ದೀರ್ಘಕಾಲದ ಅನಾರೋಗ್ಯವನ್ನು ಶ್ರೀಲಂಕಾದ ವೈದ್ಯ-ಸನ್ಯಾಸಿಯೊಬ್ಬರು ಗುಣಪಡಿಸಿದ ಹಿನ್ನೆಲೆಯಲ್ಲಿ, ಕೃತಜ್ಞತೆಯ ಸಂಕೇತವಾಗಿ ಎರಡು ಆನೆ ಮರಿಗಳನ್ನು ಉಡುಗೊರೆಯಾಗಿ ನೀಡಲಾಯಿತು. ಅವುಗಳಲ್ಲಿ ಒಂದೇ ಮುಂದೆ ನಡುಂಗಮುವ ರಾಜನಾಗಿ ಪ್ರಸಿದ್ಧಿಯಾಯಿತು.&lt;/p&gt;&lt;h2&gt;₹75 ಸಾವಿರಕ್ಕೆ ಖರೀದಿಯಾಗಿದ್ದ ಗಜರಾಜ&lt;/h2&gt;&lt;p&gt;ಶ್ರೀಲಂಕಾಕ್ಕೆ ತೆರಳಿದ ಬಳಿಕ ರಾಜಾ ಹಲವು ವರ್ಷಗಳ ಕಾಲ ವಿವಿಧ ಮಾಲೀಕರ ಬಳಿ ಇತ್ತು. 1978ರಲ್ಲಿ ಆಯುರ್ವೇದ ವೈದ್ಯ ಧರ್ಮವಿಜಯ ವೇದ ರಾಳಹಾಮಿ ಅವರು ರಾಜಾನನ್ನು ಸುಮಾರು ₹75,000ಕ್ಕೆ ಖರೀದಿಸಿದರು. ನಂತರ ಅವರ ಪುತ್ರ ಹರ್ಷ ಧರ್ಮವಿಜಯ ರಾಜಾನನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಿಂದಲೇ ಆನೆಗೆ ನಡುಂಗಮುವ ರಾಜಾ ಎಂಬ ಹೆಸರು ಮತ್ತಷ್ಟು ಪ್ರಸಿದ್ಧಿಯಾಯಿತು.&lt;/p&gt;&lt;h2&gt;10 ಅಡಿ ಎತ್ತರದ ಭವ್ಯ ಗಜರಾಜ&lt;/h2&gt;&lt;p&gt;ರಾಜಾ ಶ್ರೀಲಂಕಾದ ಅತ್ಯಂತ ಎತ್ತರದ ಪಳಗಿದ ಆನೆಗಳಲ್ಲಿ ಒಂದಾಗಿತ್ತು. ಸುಮಾರು 10.5 ಅಡಿ ಎತ್ತರ ಹೊಂದಿದ್ದ ಈ ಗಜರಾಜ ಜನರ ಪ್ರಮುಖ ಆಕರ್ಷಣೆಯಾಗಿತ್ತು. ಕ್ಯಾಂಡಿಯ ಎಸಲ ಪೆರಹೆರಾ ಸೇರಿದಂತೆ ಹಲವು ಧಾರ್ಮಿಕ ಮೆರವಣಿಗೆಗಳಲ್ಲಿ ರಾಜಾ ಪ್ರಮುಖ ಪಾತ್ರ ವಹಿಸಿತ್ತು.&lt;/p&gt;&lt;h2&gt;ಪವಿತ್ರ ದಂತಧಾತುವಿನ ಪೆಟ್ಟಿಗೆ ಹೊತ್ತ ಆನೆ&lt;/h2&gt;&lt;p&gt;ರಾಜನಿಗೆ ದೊರೆತ ಅತ್ಯಂತ ದೊಡ್ಡ ಗೌರವವೆಂದರೆ ಕ್ಯಾಂಡಿ ಎಸಲ ಪೆರಹೆರಾದಲ್ಲಿ ಬುದ್ಧನ ಪವಿತ್ರ ದಂತಧಾತುವಿನ ಪೆಟ್ಟಿಗೆಯನ್ನು ಹೊರುವ ಜವಾಬ್ದಾರಿ. 2005ರಿಂದ 2021ರವರೆಗೆ ರಾಜಾ ಒಟ್ಟು 13 ಬಾರಿ ಈ ಪವಿತ್ರ ಪೆಟ್ಟಿಗೆಯನ್ನು ಹೊತ್ತಿತ್ತು ಎಂದು ಶ್ರೀಲಂಕಾ ಸರ್ಕಾರದ ದಾಖಲೆಗಳು ತಿಳಿಸುತ್ತವೆ. ಈ ಸೇವೆಯ ಕಾರಣದಿಂದಲೇ ರಾಜಾ ಶ್ರೀಲಂಕಾದ ಬೌದ್ಧ ಸಮುದಾಯದಲ್ಲಿ ಅಪಾರ ಗೌರವ ಗಳಿಸಿತ್ತು.&lt;/p&gt;&lt;h2&gt;90 ಕಿ.ಮೀ ಕಾಲ್ನಡಿಗೆಯ ಪ್ರಯಾಣ&lt;/h2&gt;&lt;p&gt;ಕ್ಯಾಂಡಿ ಪೆರಹೆರಾದಲ್ಲಿ ಭಾಗವಹಿಸಲು ರಾಜಾ ಹಲವು ಬಾರಿ ಸುಮಾರು 90 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿತ್ತು. ಜನಸಂದಣಿ ಇರುವ ರಸ್ತೆಗಳ ಮೂಲಕ ಸಾಗುವಾಗ ಅದರ ಸುರಕ್ಷತೆಗಾಗಿ ವಿಶೇಷ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತಿತ್ತು. ಇದರಿಂದ ರಾಜಾ ಸಾಮಾನ್ಯ ಆನೆಯಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಶ್ರೀಲಂಕಾದಲ್ಲಿ ಅದಕ್ಕೆ ಸಿಕ್ಕಿದ್ದ ಸ್ಥಾನಮಾನ ಎಷ್ಟೊಂದು ವಿಶೇಷವಾಗಿತ್ತು ಎಂಬುದಕ್ಕೆ ಇದೇ ಸಾಕ್ಷಿ.&lt;/p&gt;&lt;h2&gt;2022ರಲ್ಲಿ ನಿಧನ, ರಾಷ್ಟ್ರೀಯ ಸಂಪತ್ತಿನ ಗೌರವ&lt;/h2&gt;&lt;p&gt;2022ರ ಮಾರ್ಚ್ 7ರಂದು ನಡುಂಗಮುವ ರಾಜಾ ನಿಧನ ಹೊಂದಿತು. ಅದರ ನಿಧನದ ಬಳಿಕ ಶ್ರೀಲಂಕಾದಾದ್ಯಂತ ಜನರು ದುಃಖ ವ್ಯಕ್ತಪಡಿಸಿದರು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಶ್ರೀಲಂಕಾ ಸಚಿವ ಸಂಪುಟವು ರಾಜಾನನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿತು.&lt;/p&gt;&lt;h2&gt;ಈಗಲೂ ಜೀವಂತವಾಗಿರುವಂತೆ ಕಾಣುತ್ತಿದೆ&lt;/h2&gt;&lt;p&gt;ರಾಜನ ನೆನಪನ್ನು ಮುಂದಿನ ಪೀಳಿಗೆಗೂ ಉಳಿಸಲು ಅದರ ದೇಹವನ್ನು ಸಂರಕ್ಷಿಸುವ ಕಾರ್ಯ ಕೈಗೊಳ್ಳಲಾಯಿತು. 2026ರಲ್ಲಿ ಅದರ ಸಂರಕ್ಷಿತ ಪುನರ್&zwnj;ನಿರ್ಮಿತ ರೂಪವನ್ನು ಶ್ರೀಲಂಕಾದ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಈ ಸಂರಕ್ಷಣಾ ಯೋಜನೆಗೆ ಸುಮಾರು ₹2.6 ಕೋಟಿ ಶ್ರೀಲಂಕಾ ರೂಪಾಯಿ ವೆಚ್ಚವಾಗಿದೆ ಎಂದು ವರದಿ ತಿಳಿಸಿದೆ. ಹೀಗೆ ಮೈಸೂರಿನಲ್ಲಿ ಜನಿಸಿ, ಶ್ರೀಲಂಕಾದಲ್ಲಿ ಬೆಳೆದು, ಪವಿತ್ರ ದಂತಧಾತುವನ್ನು ಹೊತ್ತು, ಅಲ್ಲಿನ ಜನರ ಹೃದಯದಲ್ಲಿ ಸ್ಥಾನ ಪಡೆದ ನಡುಂಗಮುವ ರಾಜನ ಕಥೆ ಭಾರತ-ಶ್ರೀಲಂಕಾ ನಡುವಿನ ಒಂದು ಅಪರೂಪದ ಸಾಂಸ್ಕೃತಿಕ ಸಂಪರ್ಕದ ಕಥೆಯಾಗಿ ಉಳಿದಿದೆ.&lt;/p&gt;]]></content:encoded>
            <category>mysore</category>
            <dc:creator>Sushma Hegde</dc:creator>
            <atom:link href="https://kannada.asianetnews.com/mysore/mysuru-royal-gift-how-nadungamuwa-raja-became-a-sri-lankan-legend-suh/articleshow-ath7vx4"/>
        </item>
        <item>
            <title><![CDATA[ಮೈಸೂರಲ್ಲಿ ಹಂಚಿಕೆಯಾಗಿದ್ದ 1100 ಮುಡಾ ಸೈಟ್‌ ರದ್ದು: ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/yathindra-siddaramaiah-said-cancellation-of-1100-muda-sites-allotted-in-mysuru-rav/articleshow-ban46ax</link>
            <guid isPermaLink="true">https://kannada.asianetnews.com/karnataka-districts/yathindra-siddaramaiah-said-cancellation-of-1100-muda-sites-allotted-in-mysuru-rav/articleshow-ban46ax</guid>
            <pubDate>Thu, 20 Aug 2026 08:08:39 +0530</pubDate>
            <description><![CDATA[&lt;p&gt;ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ಮುಡಾದಲ್ಲಿ ನಿಯಮ ಉಲ್ಲಂಘಿಸಿ ಹಂಚಲಾಗಿದ್ದ 50:50 ಬದಲಿ ನಿವೇಶನಗಳನ್ನು ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ. ವಿಚಾರಣಾ ಆಯೋಗದ ಶಿಫಾರಸಿನಂತೆ, ಸುಮಾರು ₹2000 ಕೋಟಿ ಮೌಲ್ಯದ 1100 ನಿವೇಶನಗಳ ಹಂಚಿಕೆಯನ್ನು ರದ್ದುಗೊಳಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0eg66qgq65mb6r2r8b95rt8,imgname-----------------------2026-08-20t080151.538-1787193137904.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಆ.20): &lt;/strong&gt;ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿಯಮಗಳನ್ನು ಉಲ್ಲಂಘಿಸಿ ಮಾಡಲಾದ 50:50 ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿ ವರದಿಯನ್ವಯ 2023ರ ಮಾ.14ರ ನಿರ್ದೇಶನವನ್ನು ಉಲ್ಲಂಘಿಸಿ ಮಾಡಲಾದ ಎಲ್ಲಾ ನಿವೇಶನಗಳ ಹಂಚಿಕೆ ರದ್ದುಪಡಿಸಿ ಆದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.&lt;/p&gt;&lt;h2&gt;2023ರ ಮಾ.14ರ ನಿರ್ದೇಶನಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡಲಾಗಿತ್ತು&lt;/h2&gt;&lt;p&gt;2023ರ ಮಾ.14ರ ನಿರ್ದೇಶನಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ, ಮುಡಾ ಅಧ್ಯಕ್ಷರು/ ಜಿಲ್ಲಾಧಿಕಾರಿಗಳು, ಆಯುಕ್ತರು ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರವು ಪ್ರಮುಖ ನಿರ್ದೇಶನಗಳನ್ನು ನೀಡಿದೆ.&lt;/p&gt;&lt;h3&gt;ನಿಯಮ ಉಲ್ಲಂಘಿಸಿ 50:50 ಬದಲಿ ನಿವೇಶನ&lt;/h3&gt;&lt;p&gt;ನಿಯಮ ಉಲ್ಲಂಘಿಸಿ 50:50 ಬದಲಿ ನಿವೇಶನಗಳ ಹಂಚಿಕೆ ರದ್ದತಿಗೆ 2026 ಆ.19ರಂದು ನೀಡಿರುವ ನಿರ್ದೇಶನದನ್ವಯ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 1100, 50:50 ಬದಲಿ ನಿವೇಶನಗಳನ್ನು ರದ್ದುಪಡಿಸಲು ಸರ್ಕಾರ ನಿರ್ದೇಶನ ನೀಡಿದೆ. ಇದರ ಮೌಲ್ಯ ಸುಮಾರು ₹2000 ಕೋಟಿ ಎಂದು ಅಂದಾಜಿಸಬಹುದಾಗಿದೆ.&lt;/p&gt;&lt;p&gt;ಮೊದಲ ಹಂತದಲ್ಲಿ 2023ರ ಮಾ.14ರ ನಂತರ ನಿಯಮ ಉಲ್ಲಂಘಿಸಿ ಮಾಡಲಾದ ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಎರಡನೇ ಹಂತದಲ್ಲಿ 2023ರ ಮಾ.14ಕ್ಕೂ ಮೊದಲೂ ಹಂಚಿಕೆ ಮಾಡಲಾಗಿರುವ ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆಯನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಕ್ರಮ ಕಂಡು ಬಂದಲ್ಲಿ ಅವುಗಳ&zwnj; ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/yathindra-siddaramaiah-said-cancellation-of-1100-muda-sites-allotted-in-mysuru-rav/articleshow-ban46ax"/>
        </item>
        <item>
            <title><![CDATA[ಮೈಸೂರು ದಸರಾ 2026: ಗಜಪಯಣಕ್ಕೆ ಸಜ್ಜಾದ ಗಜಪಡೆ, ಕಳೆದ ವರ್ಷ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ಕೊಕ್‌]]></title>
            <link>https://kannada.asianetnews.com/karnataka-districts/mysuru-dasara-2026-gajapayana-12-elephants-abhimanyu-retires-san/articleshow-cl43h1o</link>
            <guid isPermaLink="true">https://kannada.asianetnews.com/karnataka-districts/mysuru-dasara-2026-gajapayana-12-elephants-abhimanyu-retires-san/articleshow-cl43h1o</guid>
            <pubDate>Tue, 18 Aug 2026 16:00:37 +0530</pubDate>
            <description><![CDATA[2026ರ ಮೈಸೂರು ದಸರಾ ಮಹೋತ್ಸವಕ್ಕಾಗಿ 12 ಆನೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. 60 ವರ್ಷ ತುಂಬಿದ ಕಾರಣ, ಈ ಹಿಂದೆ ಅಂಬಾರಿ ಹೊತ್ತಿದ್ದ ಪ್ರಸಿದ್ಧ ಆನೆ ಅಭಿಮನ್ಯುವಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಮೊದಲ ತಂಡದ ಗಜಪಡೆಯು ಆಗಸ್ಟ್ 26 ರಂದು ಮೈಸೂರಿನತ್ತ 'ಗಜಪಯಣ' ಆರಂಭಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0a6pceqw19d8qvygz2d70kd,imgname-mysuru-dasara-2026-1787048964567.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಆ.18): &lt;/strong&gt;ವಿಶ್ವಪ್ರಸಿದ್ಧ 2026ರ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ದತೆ ಆರಂಭಗೊಂಡಿದ್ದು, ರಾಜಬೀದಿಯಲ್ಲಿ ಗಜಗಾಂಭೀರ್ಯದ ಹೆಜ್ಜೆ ಹಾಕಲು ಗಜಪಡೆ ಸಂಪೂರ್ಣವಾಗಿ ಸಜ್ಜಾಗಿದೆ. ರಾಜ್ಯದ ವಿವಿಧ ಆನೆ ಶಿಬಿರಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿರುವ ಆನೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಬಾರಿ ಒಟ್ಟು 12 ಆನೆಗಳು ಸಾಂಸ್ಕೃತಿಕ ನಗರಿಯಲ್ಲಿ ವೈಭವದ ದಸರಾಗೆ ಮೆರುಗು ನೀಡಲಿವೆ. ಇದೇ ತಿಂಗಳ 26 ರಂದು ಮೊದಲ ತಂಡದ ಗಜಪಡೆ ಮೈಸೂರಿನತ್ತ ತನ್ನ 'ಗಜಪಯಣ' ಬೆಳೆಸಲಿದೆ.&lt;/p&gt;&lt;h2&gt;&lt;strong&gt;ಅಭಿಮನ್ಯುಗೆ ನಿವೃತ್ತಿ: 60 ವರ್ಷ ತುಂಬಿದ ಹಿನ್ನೆಲೆ ಕಾರ್ಯಚಟುವಟಿಕೆಯಿಂದ ದೂರ!&lt;/strong&gt;&lt;/h2&gt;&lt;p&gt;ಈ ಬಾರಿಯ ದಸರಾ ಮಹೋತ್ಸವದ ಅತ್ಯಂತ ಪ್ರಮುಖ ಹಾಗೂ ಭಾವುಕ ವಿಚಾರವೆಂದರೆ, ಕಳೆದ ಸಾಲಿನಲ್ಲಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ 'ಕಾಡಿನ ಕಾವಲುಗಾರ' ಎಂದೇ ಖ್ಯಾತನಾದ ಅಭಿಮನ್ಯು ಆನೆಗೆ ಈ ಬಾರಿ ವಿಶ್ರಾಂತಿ ನೀಡಲಾಗಿದೆ. ಸತತ 6 ಬಾರಿ ಚಿನ್ನದ ಅಂಬಾರಿಯನ್ನು ಅತ್ಯಂತ ಗಾಂಭೀರ್ಯದಿಂದ ಹೊತ್ತು ರಾಜಬೀದಿಯಲ್ಲಿ ಹೆಜ್ಜೆ ಹಾಕಿದ್ದ ಅಭಿಮನ್ಯುಗೆ ಈ ವರ್ಷದ ಏಪ್ರಿಲ್ ತಿಂಗಳಿಗೆ 60 ವರ್ಷ ತುಂಬಿದೆ. ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ 60 ವರ್ಷ ಮೇಲ್ಪಟ್ಟ ಆನೆಗಳನ್ನು ಭಾರವಾದ ದಸರಾ ಕಾರ್ಯಚಟುವಟಿಕೆಗಳಿಂದ ದೂರವಿಡಬೇಕಾಗಿರುವುದರಿಂದ, ಅಧಿಕಾರಿಗಳು ಅಭಿಮನ್ಯುಗೆ ವಿಶ್ರಾಂತಿ ನೀಡಲು ನಿರ್ಧರಿಸಿದ್ದಾರೆ. ಕಾರ್ಯಾಚರಣೆಗಳಲ್ಲಿ 'ಕಾಂಬಿಂಗ್ ಸ್ಪೆಷಲಿಸ್ಟ್' (Combing Specialist) ಎಂದೇ ಹೆಸರುವಾಸಿಯಾಗಿದ್ದ ಅಭಿಮನ್ಯುವಿನ ಸೇವೆ ದಸರಾ ಪ್ರಿಯರ ನೆನಪಿನಲ್ಲಿ ಸದಾ ಹಸನಾಗಿರಲಿದೆ.&lt;/p&gt;&lt;h2&gt;&lt;strong&gt;2026ರ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ 12 ಆನೆಗಳ ಪಟ್ಟಿ&lt;/strong&gt;&lt;/h2&gt;&lt;p&gt;ಈ ಬಾರಿ ಸಾಂಸ್ಕೃತಿಕ ವೈಭವವನ್ನು ಕಣ್ಣುಂಬಿಸಲಲಿರುವ 12 ಪ್ರಮುಖ ಆನೆಗಳ ಪಟ್ಟಿ ಇಲ್ಲಿದೆ. ಧನಂಜಯ, ಏಕಲವ್ಯ, ಮಹೇಂದ್ರ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮಿ, ಕಾವೇರಿ, ರೂಪ, ಚೈತ್ರ ಹಾಗೂ ಶ್ರೀಕಂಠ. ತುರ್ತು ಸಂದರ್ಭಗಳಿಗಾಗಿ ಅರಣ್ಯ ಇಲಾಖೆಯು ಇಬ್ಬರು ಬಲಶಾಲಿ ಆನೆಗಳಾದ ಭೀಮ ಹಾಗೂ ಹರ್ಷನನ್ನು ಮೀಸಲು ಪಡೆಯಾಗಿ ಆಯ್ಕೆ ಮಾಡಿದೆ:&lt;/p&gt;&lt;p&gt;ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಲಿರುವ ಈ ಗಜಪಡೆಗೆ ಅರಣ್ಯ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಅರಮನೆ ನಗರಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/mysuru-dasara-2026-gajapayana-12-elephants-abhimanyu-retires-san/articleshow-cl43h1o"/>
        </item>
        <item>
            <title><![CDATA[ಹನೂರು ಶೂಟೌಟ್ ಪ್ರಕರಣ ಬೆನ್ನಲ್ಲೇ; ಬಂಡೀಪುರದ ಹೋ ಸ್ಟೇನಲ್ಲಿ 46 ಜಿಂಕೆ ಕೊಂಬು, ನವಿಲುಗರಿ, ಕೋವಿಗಳು ಪತ್ತೆ]]></title>
            <link>https://kannada.asianetnews.com/karnataka-districts/bandipur-46-deer-antlers-peacock-feathersand-guns-found-at-a-homestay-rav/articleshow-fwm5s9n</link>
            <guid isPermaLink="true">https://kannada.asianetnews.com/karnataka-districts/bandipur-46-deer-antlers-peacock-feathersand-guns-found-at-a-homestay-rav/articleshow-fwm5s9n</guid>
            <pubDate>Wed, 19 Aug 2026 08:30:35 +0530</pubDate>
            <description><![CDATA[ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ಖಾಸಗಿ ಹೋಂ ಸ್ಟೇ ಒಂದರಲ್ಲಿ ರೈತ ಸಂಘದ ಮುಖಂಡರು ಅಪಾರ ಪ್ರಮಾಣದ ವನ್ಯಜೀವಿಗಳ ಚರ್ಮ, ಕೊಂಬು ಹಾಗೂ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದ್ದಾರೆ. ಈ ವಸ್ತುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಘಟನೆಯ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0bzc9rmsa5y3c0k7z4h5zjv,imgname-----------------------2026-08-19t081417.552-1787108402964.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗುಂಡ್ಲುಪೇಟೆ (ಆ.19)&lt;/strong&gt; ಚಾಮರಾಜನಗರ ಜಿಲ್ಲೆ(Chamarajanagar) ಹನೂರು(Hanuru) ಅರಣ್ಯ ಪ್ರದೇಶದಲ್ಲಿ ಮೂವರು ಬೇಟೆಗಾರರ ಮೇಲೆ ಎನ್&zwnj;ಕೌಂಟರ್&zwnj; ಪ್ರಕರಣ ಬೆನ್ನಲ್ಲೇ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಖಾಸಗಿ ಹೋಂ ಸ್ಟೇನಲ್ಲಿ ವನ್ಯಜೀವಿಗಳ ಚರ್ಮ, ಕೊಂಬು, ಗನ್&zwnj;, ರಿವಾಲ್ವರ್&zwnj; ಹಾಗೂ ಏರ್&zwnj;ಸ್ಪೇಸ್&zwnj; ಪಿಸ್ತೂಲ್&zwnj;ಗಳನ್ನು ರೈತ ಸಂಘ ಮುಖಂಡರು ಪತ್ತೆ ಹಚ್ಚಿದ್ದು, ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.&lt;/p&gt;&lt;p&gt;&lt;strong&gt;ಎಲ್ಲಿ ಪತ್ತೆಯಾಗಿದ್ದು?&lt;/strong&gt;&lt;/p&gt;&lt;p&gt;ರೈತ ಸಂಘದ ಕಾರ್ಯಕರ್ತರು ಕೆಬ್ಬೇಪುರ ಗ್ರಾಮದ ಸ.ನಂ.೧೧೬ರಲ್ಲಿ ನಿವೃತ್ತ ಸೇನಾಧಿಕಾರಿ ಜೇಕಬ್&zwnj; ಎನ್ನುವವರ ಮಗಳ ಹೆಸರಿನ ಜಮೀನಿನಲ್ಲಿರುವ ಹೋಂ ಸ್ಟೇನಲ್ಲಿ, 48 ಜಿಂಕೆ ಕೊಂಬು, ನವಿಲುಗರಿಗಳು, ಪ್ರಾಣಿ ಚರ್ಮ, 4 ಗನ್&zwnj;, 1 ರಿವಾಲ್ವರ್&zwnj;, ಎರ್&zwnj;ಸ್ಪೇಸ್&zwnj; ಪಿಸ್ತೂಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಕಾರ್ಯಕರ್ತರ ಮಾಹಿತಿ ಮೇರೆಗೆ ಬಂಡೀಪುರ ಪ್ರಭಾರ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪತ್ತೆ ಹಚ್ಚಿದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ನಿರ್ಲಕ್ಷ್ಯ:&lt;/strong&gt;&lt;/h2&gt;&lt;p&gt;ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಇಂಥ ಘಟನೆಗಳಿಗೆ ಕಾರಣವಾಗಿದೆ. ಹೋಂ ಸ್ಟೇನಲ್ಲಿ ಪತ್ತೆಯಾದ ವಸ್ತುಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರೈತ ಸಂಘದ ಮುಖಂಡ ಶಶಿ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bandipur-46-deer-antlers-peacock-feathersand-guns-found-at-a-homestay-rav/articleshow-fwm5s9n"/>
        </item>
        <item>
            <title><![CDATA[ಕರಾವಳಿ ಕರ್ನಾಟಕದ ಬಹುದಿನದ ಬೇಡಿಕೆ ನನಸು: ಕೇರಳ ವಶದಲ್ಲಿದ್ದ ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆ!]]></title>
            <link>https://kannada.asianetnews.com/karnataka-districts/mangalore-railway-area-transferred-to-mysuru-division-south-western-railway-san/articleshow-ikyyaeu</link>
            <guid isPermaLink="true">https://kannada.asianetnews.com/karnataka-districts/mangalore-railway-area-transferred-to-mysuru-division-south-western-railway-san/articleshow-ikyyaeu</guid>
            <pubDate>Fri, 21 Aug 2026 20:03:23 +0530</pubDate>
            <description><![CDATA[&lt;p&gt;ದಶಕಗಳ ಬೇಡಿಕೆಯಂತೆ, ಮಂಗಳೂರು ರೈಲ್ವೇ ಪ್ರದೇಶವನ್ನು ಕೇರಳದ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಿ ಕೇಂದ್ರ ರೈಲ್ವೇ ಮಂಡಳಿ ಆದೇಶಿಸಿದೆ. 2026ರ ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ನಿರ್ಧಾರದಿಂದ ಕರಾವಳಿ ಭಾಗದಲ್ಲಿ ರೈಲ್ವೇ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0jbqmb8nwkgcpxvc71e1jz1,imgname-mangalore-railway-1787322683752.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಮೈಸೂರು (ಆ.21): &lt;/strong&gt;ಕರಾವಳಿ ಕರ್ನಾಟಕದ ಸಾರ್ವಜನಿಕರ ಹಾಗೂ ರೈಲು ಪ್ರಯಾಣಿಕರ ದಶಕಗಳ ಸುದೀರ್ಘ ಬೇಡಿಕೆಗೆ ಕೊನೆಗೂ ಕೇಂದ್ರ ರೈಲ್ವೇ ಸಚಿವಾಲಯ ಅಸ್ತು ಎಂದಿದೆ. ಇದುವರೆಗೆ ಕೇರಳದ ಪಾಲಕ್ಕಾಡ್ ವಿಭಾಗದ ಆಡಳಿತ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೇ ಪ್ರದೇಶವನ್ನು, ಇದೀಗ ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ವರ್ಗಾಯಿಸಿ ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇಡೀ ಕರಾವಳಿ ಭಾಗದಲ್ಲಿ ಆಡಳಿತಾತ್ಮಕ ಗೊಂದಲಗಳಿಗೆ ತೆರೆಬಿದ್ದಿದ್ದು, ರೈಲ್ವೇ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.&lt;/p&gt;&lt;h2&gt;&lt;strong&gt;ಅಕ್ಟೋಬರ್ 1, 2026 ರಿಂದ ನೂತನ ವ್ಯವಸ್ಥೆ ಜಾರಿ&lt;/strong&gt;&lt;/h2&gt;&lt;p&gt;ರೈಲ್ವೇ ಮಂಡಳಿಯ ಅಧಿಸೂಚನೆಯಂತೆ ಈ ಹೊಸ ಆಡಳಿತಾತ್ಮಕ ಬದಲಾವಣೆಯು 2026ರ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದೆ. ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಸೇರಿದಂತೆ ಉಳ್ಳಾಲ ರೈಲ್ವೇ ನಿಲ್ದಾಣದವರೆಗಿನ ಸಂಪೂರ್ಣ ಪ್ರದೇಶವು ಮೈಸೂರು ವಿಭಾಗಕ್ಕೆ ಹಸ್ತಾಂತರಗೊಳ್ಳಲಿದೆ. ಪ್ರಸ್ತುತ ಪಾಲಕ್ಕಾಡ್ ಮತ್ತು ಮೈಸೂರು ವಿಭಾಗಗಳ ನಡುವೆ 'ಪಡೀಲ್' ರೈಲ್ವೇ ನಿಲ್ದಾಣವು ಗಡಿಯಾಗಿತ್ತು (ಇಂಟರ್&zwnj;ಚೇಂಜ್ ಪಾಯಿಂಟ್). ಇನ್ನು ಮುಂದೆ 'ಉಳ್ಳಾಲ' ರೈಲ್ವೇ ನಿಲ್ದಾಣವು ನೂತನ ಇಂಟರ್&zwnj;ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ. ನೂತನ ವ್ಯವಸ್ಥೆಯಡಿ ವಿಭಾಗೀಯ ಪ್ರಧಾನ ಕಚೇರಿ (Divisional HQ) ಮೈಸೂರಿನಲ್ಲಿದ್ದರೆ, ವಲಯ ಪ್ರಧಾನ ಕಚೇರಿ (Zonal HQ) ಹುಬ್ಬಳ್ಳಿಯಲ್ಲಿ ಇರಲಿದೆ.&lt;/p&gt;&lt;h2&gt;&lt;strong&gt;ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಯತ್ನಕ್ಕೆ ಒಲಿದ ಜಯ&lt;/strong&gt;&lt;/h2&gt;&lt;p&gt;ಮಂಗಳೂರು ಪ್ರದೇಶವನ್ನು ಕರ್ನಾಟಕದ ವಲಯಕ್ಕೇ ಸೇರ್ಪಡೆಗೊಳಿಸಲು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್&zwnj; ಚೌಟ ಅವರು ನಿರಂತರವಾಗಿ ಶ್ರಮಿಸಿದ್ದರು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ವಿಷಯ ತಂದಿದ್ದಲ್ಲದೆ, ಜುಲೈ 2024 ರಲ್ಲಿ ರೈಲ್ವೇ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಪ್ರತ್ಯೇಕ ಸಭೆ ನಡೆಸಿ ಸತತ ಒತ್ತಡ ಹೇರಿದ್ದರು. ಇದೀಗ ಅವರ ಶ್ರಮಕ್ಕೆ ಬಹುದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಿದ್ಧಪಡಿಸಲಾದ ಈ ಪ್ರಸ್ತಾವನೆಗೆ ತಕ್ಷಣವೇ ಅನುಮೋದನೆ ನೀಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸಂಸದ ಚೌಟ ಧನ್ಯವಾದ ಅರ್ಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಯಾಣಿಕರಿಗೆ ಸಿಗಲಿದೆ ಭಾರಿ ಅನುಕೂಲ&lt;/strong&gt;&lt;/h2&gt;&lt;p&gt;ಮಂಗಳೂರು ರೈಲ್ವೇ ಪಾಲಕ್ಕಾಡ್ ವಿಭಾಗದಲ್ಲಿದ್ದ ಕಾರಣ ಹೊಸ ರೈಲುಗಳ ಚಾಲನೆ, ವೇಳಾಪಟ್ಟಿ ಬದಲಾವಣೆ ಹಾಗೂ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಯಂತಹ ಸಂದರ್ಭಗಳಲ್ಲಿ ಇಷ್ಟು ದಿನ ನಾನಾ ರೀತಿಯ ಆಡಳಿತಾತ್ಮಕ ತೊಡಕುಗಳು ಎದುರಾಗುತ್ತಿದ್ದವು. ಇದೀಗ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗಿರುವುದರಿಂದ ಸಾರ್ವಜನಿಕರ ಕುಂದುಕೊರತೆಗಳಿಗೆ ಶೀಘ್ರ ಪರಿಹಾರ ಸಿಗಲಿದೆ. ಕರಾವಳಿ ಭಾಗದಿಂದ ಬೆಂಗಳೂರು, ಮೈಸೂರು ಹಾಗೂ ಉತ್ತರ ಕರ್ನಾಟಕಕ್ಕೆ ಹೊಸ ರೈಲುಗಳ ಸಂಪರ್ಕ ಕಲ್ಪಿಸಲು ಹಾದಿ ಸುಗಮವಾಗಲಿದೆ. ಕರಾವಳಿ ರೈಲ್ವೇ ಮೂಲಸೌಕರ್ಯ ಯೋಜನೆಯ ಕಾಮಗಾರಿಗಳಿಗೆ ಭಾರಿ ವೇಗ ದೊರೆಯಲಿದೆ.ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಮಂಗಳೂರು ಹಾಗೂ ಕರಾವಳಿ ಭಾಗದ ರೈಲು ಪ್ರಯಾಣಿಕರು ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಹರ್ಷ ವ್ಯಕ್ತವಾಗಿದೆ.&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/mangalore-railway-area-transferred-to-mysuru-division-south-western-railway-san/articleshow-ikyyaeu"/>
        </item>
        <item>
            <title><![CDATA[ಚಾಮರಾಜನಗರ ಎನ್‌ಕೌಂಟರ್: ಅವರು ಬೇಟೆಗಾರರಲ್ಲ ರೈತರು, ಕಾರಣ ತಿಳಿಯದೆ ಮೃತದೇಹ ಸ್ವೀಕರಿಸಲ್ಲ! ಮಾವಂದಿರ ಸಾವಿಗೆ ಸಂಬಂಧಿ ಕಣ್ಣೀರು]]></title>
            <link>https://kannada.asianetnews.com/karnataka-districts/chamarajanagar-forest-encounter-relatives-refuse-to-accept-bodies-demand-justice-over-poaching-firing-gdp/articleshow-l5shx24</link>
            <guid isPermaLink="true">https://kannada.asianetnews.com/karnataka-districts/chamarajanagar-forest-encounter-relatives-refuse-to-accept-bodies-demand-justice-over-poaching-firing-gdp/articleshow-l5shx24</guid>
            <pubDate>Sat, 15 Aug 2026 12:32:12 +0530</pubDate>
            <description><![CDATA[ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದ ಎನ್&zwnj;ಕೌಂಟರ್&zwnj;ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆಯು ಇವರನ್ನು ಬೇಟೆಗಾರರೆಂದು ಹೇಳಿದರೆ, ಮೃತರ ಕುಟುಂಬಸ್ಥರು ಇವರು ಅಮಾಯಕ ರೈತರೆಂದು ವಾದಿಸುತ್ತಿದ್ದಾರೆ. ಈ ಘಟನೆಯು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಸಂಬಂಧಿಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m022xx4ry37h4h20nmen6mwm,imgname-chamarajanagar-forest-encounter--2--1786776581272.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು:&lt;/strong&gt; ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗಿನ ಜಾವ ನಡೆದಿದ್ದ ಮೂವರ ಎನ್&zwnj;ಕೌಂಟರ್ ಪ್ರಕರಣ ಇದೀಗ ತೀವ್ರ ಚರ್ಚೆ ಹಾಗೂ ಗ್ರಾಮಸ್ಥರು ಮತ್ತು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಸಿಬ್ಬಂದಿ ಯಾಕೆ ಮತ್ತು ಯಾವ ಆಧಾರದ ಮೇಲೆ ಶೂಟೌಟ್ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುವ ವರೆಗೂ ನಾವು ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಮೃತರ ಸಂಬಂಧಿ ವಿಜಯ್ ಆಂಥೋನಿ ಮೈಸೂರಿನ ಕೆ.ಆರ್. ಆಸ್ಪತ್ರೆಯ ಬಳಿ ಖಡಕ್ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದೇ ಈ ಭೀಕರ ಸುದ್ದಿ ತಿಳಿದು ಮೈಸೂರಿಗೆ ಧಾವಿಸಿರುವ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.&lt;/p&gt;&lt;h2&gt;ನಮ್ಮವರು ಬೇಟೆಗಾರರಲ್ಲ, ರೈತರು: ಮೃತರ ಸಂಬಂಧಿ ವಿಜಯ್ ಆಂಥೋನಿ ಆಕ್ರೋಶ&lt;/h2&gt;&lt;p&gt;ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಮೃತದೇಹಗಳನ್ನು ವೀಕ್ಷಿಸಲು ಬಂದ ಮೃತರ ನಿಕಟ ಸಂಬಂಧಿ ವಿಜಯ್ ಆಂಥೋನಿ ಮಾಧ್ಯಮಗಳೊಂದಿಗೆ ಮಾತನಾಡಿ ಅರಣ್ಯ ಇಲಾಖೆಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;&quot;ಮೃತಪಟ್ಟ ಮೂವರೂ (ಅಂತೊಣಿಸ್ವಾಮಿ, ಪೀಟರ್ ಹಾಗೂ ಕುಮಾರ್) ನನಗೆ ಸ್ವಂತ ಮಾವಂದಿರು. ಅವರ್ಯಾರೂ ಬೇಟೆಗಾರರಲ್ಲ. ಎಲ್ಲರೂ ಕೃಷಿ ಮಾಡಿಕೊಂಡು, ಹಸು-ಎಮ್ಮೆಗಳನ್ನು ಸಾಕಿಕೊಂಡಿದ್ದ ಸಾಧಾರಣ ರೈತರು. ದನಕರುಗಳು ಕಾಡಿಗೆ ಮೇಯಲು ಹೋದಾಗ, ಅವು ರಾತ್ರಿಯಾದರೂ ಮನೆಗೆ ಬರದಿದ್ದರೆ ಹುಡುಕಿಕೊಂಡು ಹೋಗುವುದು ನಮಗೆ ಸಾಮಾನ್ಯ. ಅಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಇವರ ಮೇಲೆ ಗುಂಡು ಹಾರಿಸಿದ್ದಾರೆ. ಒಂದು ವೇಳೆ ಅವರ ಬಳಿ ಆಯುಧವೇ ಇದ್ದರೂ, ನೇರವಾಗಿ ಜೀವ ತೆಗೆಯುವಂತೆ ಶೂಟ್ ಮಾಡುವ ಅಗತ್ಯ ಏನಿತ್ತು? ಗುಂಡು ಹೊಡೆಯುವಾಗ ಕನಿಷ್ಠ ಕಾಲಿನ ಕೆಳಭಾಗಕ್ಕಾದರೂ ಹೊಡೆದು ಬಂಧಿಸಬಹುದಿತ್ತಲ್ಲವೇ? ನಮ್ಮವರು ಫೈರಿಂಗ್ ಮಾಡಿದ್ದಾರೆ ಎಂದು ಇಲಾಖೆ ಹೇಳುತ್ತಿದೆಯಲ್ಲ, ಹಾಗಾದರೆ ಯಾವ ಅರಣ್ಯ ಸಿಬ್ಬಂದಿಗೆ ಗುಂಡು ತಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ!&lt;/p&gt;&lt;p&gt;ಮೂವರಿಗೂ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಶುಭ ದಿನದಂದೇ ನಮಗೆ ಈ ದುಃಖದ ಸುದ್ದಿ ತಲುಪಿಸಿದ್ದಾರೆ. ಇವರನ್ನು ಕೊಲ್ಲಲು ಅರಣ್ಯ ಇಲಾಖೆಗೆ ಅನುಮತಿ ಕೊಟ್ಟವರು ಯಾರು? ನಮಗೆ ಈ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಸಿಗಬೇಕು. ಶೂಟೌಟ್&zwnj;ಗೆ ಸೂಕ್ತ ಕಾರಣ ಮತ್ತು ಸ್ಪಷ್ಟನೆ ಸಿಗುವವರೆಗೂ ನಾವು ಮೃತದೇಹಗಳನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದಿದ್ದಾರೆ&lt;/p&gt;&lt;h2&gt;ಘಟನೆಯ ಹಿನ್ನೆಲೆ: ಅರಣ್ಯ ಇಲಾಖೆಯ ವಾದ&lt;/h2&gt;&lt;p&gt;ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಬೇಟೆಗೆ ಶಂಕಿತ ಬೇಟೆಗಾರರ ತಂಡ ಎಂಟ್ರಿ ಕೊಟ್ಟಿದೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಈ ವೇಳೆ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಹಾಗೂ ಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿದೆ.&lt;/p&gt;&lt;p&gt;ಸ್ವಯಂ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ನಡೆಸಿದ ಪ್ರತ್ಯುತ್ತರದ ದಾಳಿಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳದಿಂದ ಒಂದು ನಾಡಬಂದೂಕು ಹಾಗೂ ಒಂದು ಜಿಂಕೆಯ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದ್ದು, ಗಾಯಗೊಂಡ ಅರಣ್ಯ ಸಿಬ್ಬಂದಿಯೊಬ್ಬರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ಭುಗಿಲೆದ್ದ ಸಾರ್ವಜನಿಕ ಆಕ್ರೋಶ &ndash; ಬಿಗಿ ಪೊಲೀಸ್ ಬಂದೋಬಸ್ತ್&lt;/h2&gt;&lt;p&gt;ಇತ್ತ ಎನ್&zwnj;ಕೌಂಟರ್ ವಿಷಯ ತಿಳಿಯುತ್ತಿದ್ದಂತೆಯೇ ಶಾಗ್ಯ ಗ್ರಾಮದಲ್ಲಿ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ. ಅರಣ್ಯಾಧಿಕಾರಿಗಳು ಸುಳ್ಳು ಕಥೆ ಕಟ್ಟಿ, ಜೀವಂತವಾಗಿ ಹಿಡಿದು ಹತ್ತಿರದಿಂದ ಶೂಟ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ ಉಪವಲಯ ಅರಣ್ಯಾಧಿಕಾರಿಗಳ (DRFO) ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಕಚೇರಿಯ ಪೀಠೋಪಕರಣಗಳು, ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಧ್ವಂಸಗೊಳಿಸಲಾಗಿದೆ. ಪ್ರಸ್ತುತ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರ ಹಾಗೂ ಶಾಗ್ಯ ಅರಣ್ಯ ಕಚೇರಿಯ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಬಂದೋಬಸ್ತ್&zwnj; ಅನ್ನು ಬಿಗಿಗೊಳಿಸಲಾಗಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chamarajanagar-forest-encounter-relatives-refuse-to-accept-bodies-demand-justice-over-poaching-firing-gdp/articleshow-l5shx24"/>
        </item>
        <item>
            <title><![CDATA[Captain Abhimanyu: ಇದು ವಿದಾಯವಲ್ಲ, ಒಂದು ಯುಗದ ಅಂತ್ಯಕ್ಕೆ ಸಂದ ಗೌರವ; ಕೂಬಿಂಗ್ ಸ್ಪೆಷಲಿಸ್ಟ್‌ ಕ್ಯಾಪ್ಟನ್‌ ಅಭಿಮನ್ಯುವಿಗೆ ಭಾವುಕ ಬೀಳ್ಕೊಡುಗೆ!]]></title>
            <link>https://kannada.asianetnews.com/karnataka-districts/captain-abhimanyu-retirement-mysore-dasara-2026-gajapayana-emotional-farewell-coombing-specialist-bmk/articleshow-lqqcdn8</link>
            <guid isPermaLink="true">https://kannada.asianetnews.com/karnataka-districts/captain-abhimanyu-retirement-mysore-dasara-2026-gajapayana-emotional-farewell-coombing-specialist-bmk/articleshow-lqqcdn8</guid>
            <pubDate>Wed, 26 Aug 2026 20:15:06 +0530</pubDate>
            <description><![CDATA[ಮೈಸೂರು ದಸರಾ ಜಂಬೂ ಸವಾರಿಯಲ್ಲಿ 6 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅಭಿಮನ್ಯುವಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನಿಯಮಗಳಂತೆ ಗೌರವಯುತ ವಿದಾಯ ನೀಡಲಾಗಿದೆ. ಕೂಬಿಂಗ್ ಸ್ಪೆಷಲಿಸ್ಟ್ ಎಂದೇ ಖ್ಯಾತನಾಗಿದ್ದ ಈ ಗಜವೀರನಿಗೆ ಗಜಪಯಣದ ವೇಳೆ ಇಡೀ ನಾಡು ಭಾವುಕ ಬೀಳ್ಕೊಡುಗೆ ಸಲ್ಲಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m0z8fz1t2xjzra3w6x8tbwh9,imgname-captain-abhimanyu-1787755494458.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರಿನ ರಾಜಮಾರ್ಗದಲ್ಲಿ ದಸರಾ ಆನೆಗಳ ಗಾಂಭೀರ್ಯದ ನಡಿಗೆಯನ್ನು ಕಣ್ಣುತುಂಬಿಕೊಳ್ಳುವುದೇ ಒಂದು ಪರಮಾನಂದ. ಆದರೆ, ಈ ಬಾರಿಯ ಮೈಸೂರು ದಸರಾ 2026ರ ಗಜಪಯಣದ ಆರಂಭ ಮಾತ್ರ ಕೇವಲ ಸಂಭ್ರಮಕ್ಕೆ ಸೀಮಿತವಾಗಿರಲಿಲ್ಲ, ಅಲ್ಲಿ ಭಾವುಕತೆಯ ಅಲೆ ಎದ್ದಿತ್ತು, ಕೃತಜ್ಞತೆಯ ಕಣ್ಣೀರು ಜಿನುಗಿತ್ತು. ಏಕೆಂದರೆ, ಮೈಸೂರು ಜಂಬೂ ಸವಾರಿಯ ಇತಿಹಾಸದಲ್ಲಿ ಕೇವಲ ಆನೆಯಾಗಿ ಉಳಿಯದೆ, ಸಾಹಸ ಮತ್ತು ನಂಬಿಕೆಯ ಒಂದು ಅದ್ಭುತ ಶಕ್ತಿಯಾಗಿದ್ದ &lsquo;ಕ್ಯಾಪ್ಟನ್&rsquo; ಅಭಿಮನ್ಯುವಿನ ಧೀರ ಯುಗಕ್ಕೆ ಇಂದು ಅಧಿಕೃತ ತೆರೆ ಬಿದ್ದಿದೆ. ಇದು ಕೇವಲ ಒಂದು ವಿದಾಯವಲ್ಲ, ದಸರಾ ಇತಿಹಾಸದ ಸುವರ್ಣ ಪುಟವೊಂದರ ಮಹಾ ಸಮರ್ಪಣೆ.&lt;/p&gt;&lt;h2&gt;&lt;strong&gt;ಅಭಿಮಾನಿಗಳಲ್ಲಿ ತುಂಬಿ ಬಂದ ಕಣ್ಣಾಲಿಗಳು!&lt;/strong&gt;&lt;/h2&gt;&lt;p&gt;ಇಂದು ನಾಗರಹೊಳೆಯ ಹೆಬ್ಬಾಗಿಲು ವೀರನಹೊಸಹಳ್ಳಿಯ ಬಳಿ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರು ದಸರಾ 2026 ರ ಗಜ ಪಯಣಕ್ಕೆ ಭವ್ಯ ಚಾಲನೆ ನೀಡಿದರು. ಮೊದಲ ಹಂತದಲ್ಲಿ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ, ಏಕಲವ್ಯ, ಧನಂಜಯ, ಗೋಪಿ, ಕಾವೇರಿ, ಪ್ರಶಾಂತ ಮತ್ತು ಶ್ರೀರಾಮ ಆನೆಗಳನ್ನೊಳಗೊಂಡ 9 ಆನೆಗಳ ಗಜಪಡೆ ಮೈಸೂರು ಅರಮನೆಯತ್ತ ಹೆಜ್ಜೆ ಇಟ್ಟವು. ಹೊಸ ಆನೆಗಳ ಆಗಮನದ ಸಂಭ್ರಮ ಒಂದು ಕಡೆಯಾದರೆ, ಇಷ್ಟು ವರ್ಷಗಳ ಕಾಲ ಇಡೀ ಗಜಪಡೆ ಮುನ್ನಡೆಸಿದ್ದ ಅಧಿಪತಿ ಕ್ಯಾಪ್ಟನ್&zwnj; ಅಭಿಮನ್ಯುವಿಗೆ ಇಡೀ ನಾಡು ಅತ್ಯಂತ ಗೌರವಪೂರ್ವಕವಾಗಿ, ಕಣ್ಣಾಲಿಗಳು ಒದ್ದೆಯಾಗುವಂತೆ ಬೀಳ್ಕೊಡುಗೆ ನೀಡಿತು.&lt;/p&gt;&lt;h3&gt;&lt;strong&gt;ಕೂಬಿಂಗ್&zwnj; ಕ್ಯಾಪ್ಟನ್&zwnj; ಖ್ಯಾತಿ!&lt;/strong&gt;&lt;/h3&gt;&lt;p&gt;ಅಭಿಮನ್ಯು ಅಂದರೆ ಕೇವಲ ಅಂಬಾರಿ ಹೊರುವ ಆನೆಯಲ್ಲ, ಆತ ಅರಣ್ಯ ಇಲಾಖೆಯ ಸಂಕಟಮೋಚಕ, ಕಾಡಿನ ವೀರ ಸೈನಿಕ. ಕಾಡಾನೆಗಳ ಹಾವಳಿಯಿಂದ ಇಡೀ ಹಳ್ಳಿಗಳು ತತ್ತರಿಸಿದಾಗ, ನರಭಕ್ಷಕ ಹುಲಿಗಳು ಜನರ ಜೀವಕ್ಕೆ ಕಂಟಕವಾದಾಗ ಇಲಾಖೆಗೆ ಮೊದಲು ನೆನಪಾಗುತ್ತಿದ್ದುದೇ ಇದೇ ಅಭಿಮನ್ಯು. ದಟ್ಟ ಅರಣ್ಯದ ಇಂಚಿಂಚೂ ಜಾಗವನ್ನು ಜಾಲಾಡಿ ಶತ್ರುವನ್ನು ಸದೆಬಡಿಯುವ ಕಲೆ ಆತನಿಗೆ ಒಲಿದಿತ್ತು. ಹಾಗಾಗಿಯೇ ಆತನನ್ನು ಇಲಾಖೆ &lsquo;ಅಪ್ರತಿಮ ಕೂಬಿಂಗ್ ಸ್ಪೆಷಲಿಸ್ಟ್&rsquo; ಎಂದು ಕರೆಯುತ್ತಿತ್ತು. ತನ್ನ ಜೀವಿತಾವಧಿಯಲ್ಲಿ 300ಕ್ಕೂ ಹೆಚ್ಚು ಆನೆಗಳನ್ನು, 80ಕ್ಕೂ ಹೆಚ್ಚು ನರಭಕ್ಷಕ ಹುಲಿಗಳನ್ನು ಸೆರೆಹಿಡಿಯಲು ಅಪ್ರತಿಮ ಸಾಹಸ ತೋರಿದ ಈ ವೀರನಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ವಿದಾಯ ಘೋಷಿಸಲಾಗಿದೆ.&lt;/p&gt;&lt;h3&gt;&lt;strong&gt;ಕಾಡಿನಲ್ಲಿ ರೌದ್ರಾವತಾರ!&lt;/strong&gt;&lt;/h3&gt;&lt;p&gt;ನಾಡಿನ ಹಿತಕ್ಕಾಗಿ ಕಾಡಿನಲ್ಲಿ ರೌದ್ರಾವತಾರ ತಾಳುತ್ತಿದ್ದ ಇದೇ ಅಭಿಮನ್ಯು, ಮೈಸೂರಿನ ರಾಜಮಾರ್ಗಕ್ಕೆ ಬಂದರೆ ಸಾಕು ಶಾಂತಮೂರ್ತಿಯಾಗಿಬಿಡುತ್ತಿದ್ದ. 2020 ರಿಂದ 2025ರ ವರೆಗೆ ಸತತವಾಗಿ 6 ವರ್ಷಗಳ ಕಾಲ 750 ಕೆಜಿ ತೂಕದ ಭವ್ಯ ಚಿನ್ನದ ಅಂಬಾರಿಯನ್ನು ತನ್ನ ವಿಶಾಲ ಹೆಗಲ ಮೇಲೆ ಹೊತ್ತು, ಜಗನ್ಮಾತೆ ಶ್ರೀ ಚಾಮುಂಡೇಶ್ವರಿಯನ್ನು ರಾಜಗಾಂಭೀರ್ಯದಿಂದ ಹೊತ್ತು ಸಾಗಿದ ಆ ದಿನಗಳು ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿವೆ. ಕರೋನಾ ಕರಾಳ ದಿನಗಳ ಸಣ್ಣ ಅರಮನೆ ಆವರಣದ ಸವಾರಿಯಿಂದ ಹಿಡಿದು, ಲಕ್ಷಾಂತರ ಜನರ ಸಮ್ಮುಖದ ಭವ್ಯ ಜಂಬೂ ಸವಾರಿಯವರೆಗೆ ಅಭಿಮನ್ಯು ತೋರಿದ ನಿಷ್ಠೆ, ತೋರಿದ ಸಂಯಮ ಅಸದೃಶವಾದದ್ದು.&lt;/p&gt;&lt;h3&gt;&lt;strong&gt;ಭಾವುಕವಾದ ಜನಸ್ತೋಮ!&lt;/strong&gt;&lt;/h3&gt;&lt;p&gt;ಇಂದು ಗಜಪಯಣದ ವೇದಿಕೆಯಲ್ಲಿ ಅಭಿಮನ್ಯು ನಡೆದು ಬರುತ್ತಿದ್ದರೆ ಇಡೀ ಜನಸ್ತೋಮ ಭಾವುಕವಾಯಿತು. ಸಚಿವ ಯತೀಂದ್ರ ಸಿದ್ದರಾಮಯ್ಯ ಮತ್ತು ಅಧಿಕಾರಿಗಳು ಅಭಿಮನ್ಯುವಿಗೆ ಸ್ವಾಗತ ನೀಡಿ, ಹೂಮಳೆಗರೆದು, ಸತ್ಕರಿಸಿದಾಗ ಅದು ಕೇವಲ ಪ್ರಶಸ್ತಿಯಾಗಿರಲಿಲ್ಲ, ಇಡೀ ಕರ್ನಾಟಕದ ಆರೂವರೆ ಕೋಟಿ ಜನತೆ ಆ ಮಹಾನ್ ಚೇತನಕ್ಕೆ ಮಣಿದ ಶಿರಸಾಷ್ಟಾಂಗ ನಮನವಾಗಿತ್ತು. ಇನ್ಮುಂದೆ ಅರಮನೆಯ ರಾಜಮಾರ್ಗದಲ್ಲಿ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಸಾಗದೇ ಇರಬಹುದು, ಆದರೆ ಆತ ಇಟ್ಟ ಪ್ರತಿಯೊಂದು ಗಂಭೀರ ಹೆಜ್ಜೆಯ ಸದ್ದು, ಆತನ ಗಜಗಾಂಭೀರ್ಯದ ನೋಟ ಮೈಸೂರಿನ ಮಣ್ಣಿನಲ್ಲಿ, ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಅಚ್ಚೊತ್ತಿರುತ್ತದೆ.ಇದು ವಿದಾಯವಲ್ಲ ಅಭಿಮನ್ಯು, ನಿನ್ನ ನಿಸ್ವಾರ್ಥ ಸೇವೆಗೆ ಇಡೀ ನಾಡು ಹೆಮ್ಮೆಯಿಂದ ತಲೆಬಾಗಿ ಸಲ್ಲಿಸಿದ ಗೌರವ. ಥ್ಯಾಂಕ್ ಯೂ ಕ್ಯಾಪ್ಟನ್, ನಿನ್ನ ಋಣ ಎಂದಿಗೂ ತೀರದು ಎಂದು ಅಭಿಮಾನಿಗಳು ಹೇಳಿದ ಶಬ್ದ ಹೃದಯಕ್ಕೆ ತಟ್ಟುವಂತಿತ್ತು.&lt;/p&gt;]]></content:encoded>
            <category>mysore</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/captain-abhimanyu-retirement-mysore-dasara-2026-gajapayana-emotional-farewell-coombing-specialist-bmk/articleshow-lqqcdn8"/>
        </item>
        <item>
            <title><![CDATA[ಮೈಸೂರು ದಸರಾ ಹೊತ್ತಲ್ಲಿ ಇದೇನು ಹೊಸ ಸಮಸ್ಯೆ! ಚಾಮುಂಡೇಶ್ವರಿ ದೇವಾಲಯದ ಅರ್ಚಕರಿಗೆ ಬಿಳಿಮಚ್ಚೆ ಕಾರಣಕ್ಕೆ ಪೂಜೆಗೆ ಅಡ್ಡಿ? ಕೋರ್ಟ್ ಹೇಳಿದ್ದೇನು?]]></title>
            <link>https://kannada.asianetnews.com/state/mysuru-chamundeshwari-temple-priests-white-patches-case-what-will-the-court-commissioners-report-rav/articleshow-mn4qzo1</link>
            <guid isPermaLink="true">https://kannada.asianetnews.com/state/mysuru-chamundeshwari-temple-priests-white-patches-case-what-will-the-court-commissioners-report-rav/articleshow-mn4qzo1</guid>
            <pubDate>Sat, 22 Aug 2026 06:56:07 +0530</pubDate>
            <description><![CDATA[ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಅನುವಂಶಿಕ ಅರ್ಚಕರಿಗೆ ಬಿಳಿಮಚ್ಚೆ ಕಾರಣಕ್ಕೆ ಪೂಜೆಗೆ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಹೈಕೋರ್ಟ್&zwnj;, ಅರ್ಚಕರಿಗೆ ಪೂಜೆಗೆ ಅಡ್ಡಿ ಉಂಟಾಗಿದೆಯೇ ಎಂದು ಪರಿಶೀಲಿಸಲು ಇಬ್ಬರು ವಕೀಲರನ್ನು ಕೋರ್ಟ್ ಕಮಿಷನರ್&zwnj;ಗಳಾಗಿ ನೇಮಿಸಿ ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0kgwwm2y4fj90pbkepytxp0,imgname-----------------------2026-08-22t065026.115-1787361653378.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.22):&lt;/strong&gt; ದೇಹದಲ್ಲಿ ಬಿಳಿಮಚ್ಚೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಅನುವಂಶಿಕ ಅರ್ಚಕರಾಗಿರುವ ಎನ್. ಅನಿಲ್ ಕುಮಾರ್ ಅವರಿಗೆ ಪೂಜೆ ನೆರವೇರಿಸಲು ದೇವಾಲಯದ ಆಡಳಿತ ಮಂಡಳಿಯಿಂದ ಅಡ್ಡಿ ಉಂಟಾಗಿದೆಯೇ? ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಲು ವಕೀಲರಿಬ್ಬರನ್ನು ಕೋರ್ಟ್ ಕಮಿಷನರ್&zwnj; ಆಗಿ ಹೈಕೋರ್ಟ್&zwnj; ನೇಮಿಸಿದೆ.&lt;/p&gt;&lt;h2&gt;ಏನಿದು &lsquo;ಬಿಳಿಮಚ್ಚೆ&rsquo; ಪ್ರಕರಣ?&lt;/h2&gt;&lt;p&gt;ನ್ಯಾಯಾಲಯದ ಆದೇಶದ ನಡುವೆಯೂ ಪೂಜಾ ಕೈಂಕರ್ಯಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿ ದೇವಾಲಯದ &lsquo;&rsquo;ಸನ್ನಿಧಿ ಪರಿಚಾರಕ'ರಾಗಿದ್ದ ಎನ್.ಅನಿಲ್ ಕುಮಾರ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ ಈ ಆದೇಶ ನೀಡಿ ವಿಚಾರಣೆ ಮುಂದೂಡಿದೆ.&lt;/p&gt;&lt;p&gt;ವಕೀಲರಾದ ನಾರಾಯಣ ರಾವ್ ಮತ್ತು ಶಿವರುದ್ರ ಅವರನ್ನು ಕೋರ್ಟ್ ಕಮಿಷನರ್&zwnj; ಆಗಿ ನೇಮಿಸಿರುವ ಪೀಠ, ಈ ವಕೀಲರಿಬ್ಬರು ದೇವಾಲಯಕ್ಕೆ ಬೇರೆ ಬೇರೆ ದಿನಗಳಲ್ಲಿ ಅರ್ಚಕರೊಂದಿಗೆ ಖುದ್ದಾಗಿ ಭೇಟಿ ನೀಡಬೇಕು. ಅರ್ಜಿದಾರ ಅರ್ಚಕರಿಗೆ ಪೂಜೆ ನೆರವೇರಿಸಲು ಯಾವುದೇ ಅಡ್ಡಿಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪರಿಶೀಲನಾ ಕಾರ್ಯಕ್ಕೆ ದೇವಾಲಯದ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಬೇಕು. ಈ ಇಬ್ಬರೂ ವಕೀಲರು ವಸ್ತುಸ್ಥಿತಿ ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.&lt;/p&gt;&lt;p&gt;ಅರ್ಜಿದಾರ ಅರ್ಚಕರ ಪರ ವಕೀಲರು, ಅರ್ಜಿದಾರರಿಗೆ ದೇವಾಲಯದಲ್ಲಿ ಪೂಜೆ ನೆರವೇರಿಸಲು ಇಂದಿಗೂ ಪರೋಕ್ಷವಾಗಿ ಕಿರುಕುಳ ಮತ್ತು ಅಡ್ಡಿಗಳು ನೀಡಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ಸರ್ಕಾರಿ ವಕೀಲರು, ಅರ್ಜಿದಾರ ಅರ್ಚಕರಿಗೆ ಪೂಜೆ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಅವರು ಮುಕ್ತವಾಗಿ ಕರ್ತವ್ಯ ನಿರ್ವಹಿಸಬಹುದು ಎಂದು ತಿಳಿಸಿದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/mysuru-chamundeshwari-temple-priests-white-patches-case-what-will-the-court-commissioners-report-rav/articleshow-mn4qzo1"/>
        </item>
        <item>
            <title><![CDATA[Mysuru Dasara: ಗಜಪಯಣಕ್ಕೆ ಚಾಲನೆ, ಕಾಡಿನಿಂದ ನಾಡಿಗೆ 9 ಆನೆಗಳು; ಕ್ಯಾಪ್ಟನ್ ಅಭಿಮನ್ಯುಗೆ ರಾಜಮರ್ಯಾದೆ ವಿದಾಯ]]></title>
            <link>https://kannada.asianetnews.com/karnataka-districts/mysuru-dasara-2026-gaja-payana-flagged-off-9-elephants-royal-farewell-for-captain-abhimanyu-sns/articleshow-ng7hfdo</link>
            <guid isPermaLink="true">https://kannada.asianetnews.com/karnataka-districts/mysuru-dasara-2026-gaja-payana-flagged-off-9-elephants-royal-farewell-for-captain-abhimanyu-sns/articleshow-ng7hfdo</guid>
            <pubDate>Wed, 26 Aug 2026 16:13:57 +0530</pubDate>
            <description><![CDATA[ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೊದಲ ಹಂತದ 9 ಆನೆಗಳ ಗಜಪಡೆ ಆಗಮಿಸಿದೆ. 6 ಬಾರಿ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯುಗೆ 60 ವರ್ಷ ತುಂಬಿದ್ದರಿಂದ ಗೌರವಯುತ ವಿದಾಯ ನೀಡಲಾಗಿದ್ದು, ಈ ಬಾರಿ ದಸರಾ ಕಂಬಳ ಆಯೋಜನೆಯೂ ಖಚಿತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ythcxybkm3s6589qtmwem8,imgname-mysuru-dasara-2026--3--1787740861374.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗಜಪಡೆ ಭರ್ಜರಿ ಎಂಟ್ರಿಯಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನ ಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ 9 ಆನೆಗಳ ಮೊದಲ ತಂಡವನ್ನು ಜಿಲ್ಲಾಡಳಿತ ನಾಡಿಗೆ ಬರಮಾಡಿಕೊಂಡಿದೆ. ಇದೇ ವೇಳೆ, ಸತತ 6 ವರ್ಷಗಳ ಕಾಲ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯ ಮೆರೆದಿದ್ದ ಕ್ಯಾಪ್ಟನ್ ಅಭಿಮನ್ಯುಗೆ ಆತ್ಮೀಯ ಭೀಳ್ಕೊಡುಗೆ ಸಿಕ್ಕಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇಂದಿನಿಂದ ಮೈಸೂರಿನ ದಸಾರ ಸಂಭ್ರಮ ಶುರುವಾಗಿದೆ. ಹುಣಸೂರು ತಾಲೂಕಿ&zwnj;ನ ವೀರನ ಹೊಸಹಳ್ಳಿ ಹೆಬ್ಬಾಗಿಲಿನಲ್ಲಿ ಗಜಪಯಣಕ್ಕೆ&zwnj; ಅದ್ಧೂರಿ ಸ್ವಾಗತ ಸಿಕ್ಕಿದೆ. ಕಾಡಿನ ರಸ್ತೆಗಳನ್ನು ಸಿಂಗರಿಸಿ, ತುಲಾ ಲಗ್ನದ ಶುಭ ಮುಹೂರ್ತದಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಗಜಪಡೆಗೆ ವಿಧ್ಯುಕ್ತ ಚಾಲನೆ ನೀಡಿದರು. ಗಜಪಡೆಗೆ ಫಲ ತಾಂಬೂಲ, ಕಬ್ಬು, ಬೆಲ್ಲ, ಹಣ್ಣು-ಹಂಪಲುಗಳ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಮೊದಲ ಹಂತದ ಗಜಪಡೆಯಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಅರಮನೆ ನಗರಿಯತ್ತ ಹೆಜ್ಜೆ ಹಾಕಿದವು.&lt;/p&gt;&lt;p&gt;ಸಂಜೆ ಮೊದಲ ತಂಡದ 9 ಆನೆಗಳು ಮೈಸೂರಿಗೆ ಆಗಮಿಸಿದ್ದು, ಆಗಸ್ಟ್ 28ರಂದು ಬೆಳಗ್ಗೆ 8:45ಕ್ಕೆ ಅರಣ್ಯ ಭವನದಿಂದ ಮೈಸೂರು ಅರಮನೆ ಆವರಣಕ್ಕೆ ಪಾದಾರ್ಪಣೆ ಮಾಡಲಿವೆ. ನಂತರದ ದಿನಗಳಲ್ಲಿ 2ನೇ ಹಂತದಲ್ಲಿ ಉಳಿದ ಆನೆಗಳು ಸೇರ್ಪಡೆಯಾಗಲಿವೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಕ್ಯಾಪ್ಟನ್ ಅಭಿಮನ್ಯುಗೆ ರಾಜಮರ್ಯಾದೆಯ ವಿದಾಯ&lt;/h2&gt;&lt;p&gt;ಇನ್ನು ಕಳೆದ 20 ವರ್ಷಗಳಿಗೂ ಹೆಚ್ಚು ಕಾಲ ದಸರಾದಲ್ಲಿ ಭಾಗಿಯಾಗಿ, 6 ಬಾರಿ ಚಿನ್ನದ ಅಂಬಾರಿಯನ್ನು ನಿರ್ವಿಘ್ನವಾಗಿ ಹೊತ್ತಿದ್ದ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯುಗೆ 60 ವರ್ಷ ತುಂಬಿದೆ. ಸರ್ಕಾರದ ನಿಯಮಾನುಸಾರ ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯಿಂದ ಅಭಿಮನ್ಯುಗೆ ವಿಶ್ರಾಂತಿ ನೀಡಲಾಗಿದೆ. ಈಗಾಗಿ ಗಜಪಯಣದ ವೇಳೆ ಅಭಿಮನ್ಯುವಿಗೆ ಆತ್ಮೀಯ ಭೀಳ್ಕೊಡುಗೆ ನೀಡಲಾಯಿತು. ​ಶಂಖ, ಚಕ್ರ, ಗಂಡಭೇರುಂಡ ಹಾಗೂ ಹೂವಿನ ಬಳ್ಳಿಯ ಚಿತ್ತಾರಗಳಿಂದ ಅಭಿಮನ್ಯುವನ್ನು ಭವ್ಯವಾಗಿ ಸಿಂಗರಿಸಲಾಗಿತ್ತು. ​ದಾರಿಯುದ್ದಕ್ಕೂ ಅರಣ್ಯ ಸಿಬ್ಬಂದಿ ಹಾಗೂ ಮಾವುತರು ಹೂಮಳೆ ಸುರಿಸಿದರು. ಜೊತೆಗಿದ್ದ ಇತರ ಆನೆಗಳು ಸಾಲಾಗಿ ನಿಂತು ಗೌರವ ಸಲ್ಲಿಸಿದ ಕ್ಷಣ ಬಾಹುಕವಾಗಿತ್ತು.&lt;/p&gt;&lt;p&gt;&lt;img&gt;&lt;/p&gt;&lt;h2&gt;ಈ ಬಾರಿ ದಸರಾ ಕಂಬಳ ಫಿಕ್ಸ್&lt;/h2&gt;&lt;p&gt;ಮತ್ತೊಂದೆಡೆ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳ ಆಯೋಜನೆ ಕುರಿತ ಗೊಂದಲಗಳಿಗೆ ತೆರೆಬಿದ್ದಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಈ ಬಾರಿ ನಿಗದಿತ ಜಾಗದಲ್ಲೇ ದಸರಾ ಕಂಬಳವನ್ನು ಸರ್ಕಾರದಿಂದಲೇ ಅಚ್ಚುಕಟ್ಟಾಗಿ ನಡೆಸಲು ತೀರ್ಮಾನಿಸಲಾಗಿದೆ. ವೀರನ ಹೊಸಹಳ್ಳಿಯಲ್ಲಿ ಈ ವಿಚಾರವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಒಟ್ಟಾರೆ ​ಕ್ಯಾಪ್ಟನ್ ಅಭಿಮನ್ಯುವಿನ ನಿವೃತ್ತಿಯ ಭಾವುಕ ಕ್ಷಣಗಳ ನಡುವೆಯೇ, ಹೊಸ ಅಂಬಾರಿ ಆನೆಯ ಆಯ್ಕೆಯ ತಾಲೀಮಿಗೆ ಅರಮನೆ ನಗರಿ ಸಜ್ಜಾಗಿದ್ದು, ಅರಮನೆ ನಗರಿಯಲ್ಲಿ ದಸರಾ ಕಳೆ ಗರಿಗೆದರುತ್ತಿದೆ. &lt;strong&gt;(ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)&amp;nbsp;&lt;/strong&gt;&lt;/p&gt;]]></content:encoded>
            <category>mysore</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/mysuru-dasara-2026-gaja-payana-flagged-off-9-elephants-royal-farewell-for-captain-abhimanyu-sns/articleshow-ng7hfdo"/>
        </item>
        <item>
            <title><![CDATA[ಮುಡಾ ಕೇಸ್‌ಗೆ ಟ್ವಿಸ್ಟ್! 1,100 ನಿವೇಶನಗಳ ಹಂಚಿಕೆ ರದ್ದು! ಸರ್ಕಾರಕ್ಕೆ 2000 ಕೋಟಿ ಆಸ್ತಿ ಉಳಿಸಿದ ಯತೀಂದ್ರ]]></title>
            <link>https://kannada.asianetnews.com/mysore/muda-case-1100-site-allotments-cancelled-minister-yathindra-saves-rs-2000-crore-assets-gkn/articleshow-oa5lfbg</link>
            <guid isPermaLink="true">https://kannada.asianetnews.com/mysore/muda-case-1100-site-allotments-cancelled-minister-yathindra-saves-rs-2000-crore-assets-gkn/articleshow-oa5lfbg</guid>
            <pubDate>Wed, 19 Aug 2026 19:01:53 +0530</pubDate>
            <description><![CDATA[&lt;p&gt;ಮುಡಾ 50:50 ಹಗರಣದಲ್ಲಿ ನಿಯಮ ಉಲ್ಲಂಘಿಸಿ ಹಂಚಿಕೆಯಾಗಿದ್ದ 1,100 ನಿವೇಶನಗಳನ್ನು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ರದ್ದುಪಡಿಸಿದ್ದು, ಈ ಮೂಲಕ ಸರ್ಕಾರಕ್ಕೆ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಉಳಿಸಿದ್ದಾರೆ. ಈಗಾಗಲೇ ನೋಂದಣಿಯಾಗಿರುವ ಕ್ರಯಪತ್ರಗಳನ್ನು ರದ್ದುಗೊಳಿಸಲು ಕಾನೂನು ಕ್ರಮ ಜರುಗಿಸುವಂತೆ ಹಾಗೂ ಹೊಸದಾಗಿ ಖಾತಾ ಮಾಡಿಕೊಡುವುದನ್ನು ತಕ್ಷಣವೇ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqcsyk6kx565v2kb0p66jtm,imgname-dr-yatindra-siddaramaiah--1--1784270355046.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಬಹುಕೋಟಿ ಮೌಲ್ಯದ 50:50 ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಿಯಮ ಮೀರಿ ಹಂಚಿಕೆಯಾಗಿದ್ದ ಬರೋಬ್ಬರಿ 1,100 ನಿವೇಶನಗಳನ್ನು ರದ್ದುಗೊಳಿಸುವ ಮೂಲಕ ಸಚಿವರು ಶಾಕ್ ನೀಡಿದ್ದಾರೆ.&lt;/p&gt;&lt;h2&gt;&lt;strong&gt;2 ಸಾವಿರ ಕೋಟಿ ಮೌಲ್ಯದ ಆಸ್ತಿ ರಕ್ಷಣೆ&lt;/strong&gt;&lt;/h2&gt;&lt;p&gt;50:50 ನಿಯಮದಡಿ ಅಕ್ರಮವಾಗಿ ಹಂಚಿಕೆಯಾಗಿದ್ದ ಸುಮಾರು 1,100 ನಿವೇಶನಗಳ ಹಂಚಿಕೆಯನ್ನು ಸಚಿವರು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ. ಈ ದಿಟ್ಟ ಕ್ರಮದಿಂದಾಗಿ ಪ್ರಾಧಿಕಾರಕ್ಕೆ ಸೇರಬೇಕಿದ್ದ ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಈಗ ಸರ್ಕಾರದ ವಶದಲ್ಲೇ ಉಳಿದಂತಾಗಿದೆ.&lt;/p&gt;&lt;p&gt;14-03-2023ರಂದು ಸರ್ಕಾರ ನೀಡಿದ್ದ ಸ್ಪಷ್ಟ ನಿರ್ದೇಶನಗಳನ್ನು ಉಲ್ಲಂಘಿಸಿ ಈ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಹಗರಣದ ಕುರಿತು ತನಿಖೆ ನಡೆಸಿದ್ದ ಏಕಸದಸ್ಯ ವಿಚಾರಣಾ ಆಯೋಗ ಮತ್ತು ಉನ್ನತ ಮಟ್ಟದ ತಾಂತ್ರಿಕ ಸಮಿತಿ ನೀಡಿರುವ ವರದಿಯ ಆಧಾರದ ಮೇಲೆ ಸಚಿವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.&lt;/p&gt;&lt;h2&gt;&lt;strong&gt;ನೋಂದಣಿಯಾದ ಸೈಟ್&zwnj;ಗಳ ಕಥೆಯೇನು?&lt;/strong&gt;&lt;/h2&gt;&lt;p&gt;ಕೇವಲ ಹಂಚಿಕೆ ಆದೇಶ ರದ್ದುಗೊಳಿಸುವುದು ಮಾತ್ರವಲ್ಲದೆ ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವ ನಿವೇಶನಗಳ ವಿರುದ್ಧವೂ ಸಚಿವರು ಗದಾಪ್ರಹಾರ ನಡೆಸಿದ್ದಾರೆ. ಈಗಾಗಲೇ ಕ್ರಯಪತ್ರ (Sale Deed) ಆಗಿರುವ ನಿವೇಶನಗಳನ್ನು ರದ್ದುಪಡಿಸಲು ತಕ್ಷಣವೇ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಮುಡಾ (MDA) ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲು ಮುಡಾಗೆ ತಿಳಿಸಲಾಗಿದೆ.&lt;/p&gt;&lt;p&gt;ಸರ್ಕಾರದ ಮುಂದಿನ ಸ್ಪಷ್ಟ ಮಾರ್ಗಸೂಚಿ ಬರುವವರೆಗೂ ಪ್ರಾಧಿಕಾರದಿಂದ ಯಾವುದೇ ಹೊಸ ಕ್ರಯಪತ್ರಗಳನ್ನು ನೀಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಹಗರಣದ ಆಳ-ಅಗಲವನ್ನು ಪರಿಶೀಲಿಸಿ ಅಕ್ರಮ ಎಸಗಿದವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮಾಡಲಾಗಿರುವ ಎಲ್ಲಾ ಹಂಚಿಕೆಗಳು ಅಸಿಂಧು ಎಂದು ಅವರು ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಕ್ರಮದಿಂದಾಗಿ ಮೈಸೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು ಅಕ್ರಮವಾಗಿ ನಿವೇಶನ ಪಡೆದಿದ್ದ ಪ್ರಭಾವಿಗಳಿಗೆ ಆತಂಕ ಶುರುವಾಗಿದೆ.&lt;/p&gt;]]></content:encoded>
            <category>mysore</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mysore/muda-case-1100-site-allotments-cancelled-minister-yathindra-saves-rs-2000-crore-assets-gkn/articleshow-oa5lfbg"/>
        </item>
        <item>
            <title><![CDATA[ಪ್ರೀತಿಸಿದ ಜೋಡಿ, ಮದುವೆ ನಿಶ್ಚಯವಾಗುತ್ತಿದ್ದಂತೆ ಪ್ರಾಣಬಿಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಗಳು!]]></title>
            <link>https://kannada.asianetnews.com/karnataka-districts/karnataka-mysuru-hunsur-state-bank-of-india-employees-engaged-couple-died-separately/articleshow-p39ndsz</link>
            <guid isPermaLink="true">https://kannada.asianetnews.com/karnataka-districts/karnataka-mysuru-hunsur-state-bank-of-india-employees-engaged-couple-died-separately/articleshow-p39ndsz</guid>
            <pubDate>Fri, 14 Aug 2026 11:54:16 +0530</pubDate>
            <description><![CDATA[&lt;p&gt;ಮುಂದಿನ ನಾಲ್ಕೈದು ತಿಂಗಳಲ್ಲಿ ಮದುವೆಗೆ ಸಿದ್ಧರಾಗಿದ್ದ ಎಸ್&zwnj;ಬಿಐ ಉದ್ಯೋಗಿಗಳಾದ ಯುವಕ ಮತ್ತು ಯುವತಿ, ಫೋನ್&zwnj;ನಲ್ಲಿ ಜಗಳವಾಡಿದ ನಂತರ ಸಾವಿಗೆ ಕೊರಳೊಡ್ಡಿದ್ದಾಳೆ. ಹುಣಸೂರಿನಲ್ಲಿ ಯುವತಿ ನೇಣಿಗೆ ಶರಣಾದರೆ, ಈ ಸುದ್ದಿ ತಿಳಿದು ಯುವಕ ಕೇರಳದಲ್ಲಿ ತನ್ನ ಪ್ರಾಣವನ್ನು ಕೊನೆಗೊಳಿಸಿಕೊಂಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzzeky6szd1cmb0n7pxsx9d9,imgname-sbi-employees-vimal-and-anushree-death-1786688174297.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಆ.14): &lt;/strong&gt;ಇನ್ನು ಕೆಲವೇ ತಿಂಗಳುಗಳಲ್ಲಿ ಹೊಸ ಜೀವನಕ್ಕೆ ಕಾಲಿಟ್ಟು, ಹಸೆಮಣೆ ಏರಬೇಕಿದ್ದ ಯುವ ಜೋಡಿಯೊಂದು ನೂರೆಂಟು ಕನಸುಗಳೊಂದಿಗೆ ಜೀವನವನ್ನೇ ಮುಗಿಸಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ಎಸ್&zwnj;ಬಿಐ (SBI) ಬ್ಯಾಂಕ್ ಉದ್ಯೋಗಿಗಳಾಗಿದ್ದ ಮೂಲತಃ ಕೇರಳದ ಯುವಕ ಮತ್ತು ಯುವತಿ ಹುಣಸೂರು ಹಾಗೂ ಕೇರಳದ ಲಾಡ್ಜ್&zwnj; ಒಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಮೃತರನ್ನು ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಚಂದ್ರನ್ ಅವರ ಪುತ್ರಿ ಅನುಶ್ರೀ (26) ಹಾಗೂ ಕೇರಳದ ಇರಿಟ್ಟಿ ಮೂಲದ ಅಮಲ್ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;&lt;strong&gt;ತರಬೇತಿ ವೇಳೆ ಚಿಗುರಿದ್ದ ಪ್ರೀತಿ!&lt;/strong&gt;&lt;/h2&gt;&lt;p&gt;ಮೃತ ಅನುಶ್ರೀ ಇತ್ತೀಚೆಗಷ್ಟೇ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರು. ಪ್ರಸ್ತುತ ಮೈಸೂರು ಜಿಲ್ಲೆಯ ಹುಣಸೂರು ನಗರದ ಸುಬ್ಬಣ್ಣ ಬಡಾವಣೆಯಲ್ಲಿ ವಾಸವಾಗಿದ್ದರು. ಇತ್ತ ಅಮಲ್ ಕೇರಳದ ಎರ್ನಾಕುಲಂನ ಎಸ್&zwnj;ಬಿಐ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ನಡೆದ ತರಬೇತಿ (Training) ಅವಧಿಯಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಈ ಪರಿಚಯ ದಿನಕಳೆದಂತೆ ಪ್ರೀತಿಗೆ ತಿರುಗಿ, ಇಬ್ಬರ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆ ಕೂಡ ನಿಶ್ಚಯವಾಗಿತ್ತು. ಬರುವ ಡಿಸೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಮದುವೆಯಾಗಲು ಇಬ್ಬರೂ ಸಿದ್ಧತೆ ನಡೆಸುತ್ತಿದ್ದರು.&lt;/p&gt;&lt;h2&gt;&lt;strong&gt;ಫೋನ್ ಜಗಳ ತಂದಿಟ್ಟ ದುರಂತ!&lt;/strong&gt;&lt;/h2&gt;&lt;p&gt;ಸಾವಿಗೂ ಮುನ್ನ ಅನುಶ್ರೀ ತಮ್ಮ ತಂದೆ, ತಾಯಿ ಹಾಗೂ ಸಹೋದರಿಯೊಂದಿಗೆ ದೂರವಾಣಿ ಮೂಲಕ ಸಾಮಾನ್ಯವಾಗಿಯೇ ಮಾತನಾಡಿದ್ದರು. ಆದರೆ, ತದನಂತರ ಅನುಶ್ರೀ ಹಾಗೂ ಅಮಲ್ ನಡುವೆ ಫೋನ್&zwnj;ನಲ್ಲಿ ಮಾತನಾಡುವಾಗ ಯಾವುದೋ ವಿಚಾರಕ್ಕೆ ದೊಡ್ಡ ಮಟ್ಟದ ಜಗಳ ನಡೆದಿದೆ ಎನ್ನಲಾಗಿದೆ. ಜಗಳದಿಂದ ತೀವ್ರ ಮನನೊಂದ ಅನುಶ್ರೀ, ಹುಣಸೂರಿನ ತಮ್ಮ ಬಾಡಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಿಯತಮೆ ಸಾವಿನ ಸುದ್ದಿ ತಿಳಿದು ಪ್ರಿಯಕರನೂ ಜೀವಬಿಟ್ಟ&lt;/strong&gt;&lt;/h2&gt;&lt;p&gt;ಅತ್ತ ಅನುಶ್ರೀ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಅಮಲ್, ಕೇರಳದ ಇರಿಟ್ಟಿ ನಗರದ ಲಾಡ್ಜ್&zwnj; ಒಂದರಲ್ಲಿ ರೂಮ್ ಪಡೆದುಕೊಂಡು ಅಲ್ಲೇ ನೇಣಿಗೆ ಶರಣಾಗಿದ್ದಾರೆ. ಪ್ರೀತಿಸಿದ ಹುಡುಗಿ ಇಲ್ಲವಾದ ಮೇಲಷ್ಟೇ ತಾನೂ ಬದುಕಿರಲಾರೆ ಎಂದು ನಿರ್ಧರಿಸಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ.&lt;/p&gt;&lt;p&gt;ಇಬ್ಬರೂ ಭವಿಷ್ಯದ ಬಗ್ಗೆ ಸಾಲು ಸಾಲು ಕನಸುಗಳನ್ನು ಕಂಡಿದ್ದರು. ಆದರೆ, ಸಣ್ಣ ಜಗಳ ಇಬ್ಬರ ಜೀವವನ್ನೇ ಬಲಿ ಪಡೆದಿದ್ದು, ಎರಡೂ ಕುಟುಂಬಗಳಲ್ಲಿ ಶೋಕಸಾಗರ ಆವರಿಸಿದೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-mysuru-hunsur-state-bank-of-india-employees-engaged-couple-died-separately/articleshow-p39ndsz"/>
        </item>
        <item>
            <title><![CDATA[ಚಾಮರಾಜನಗರದಲ್ಲಿ 3 ಬೇಟೆಗಾರರ ಎನ್‌ಕೌಂಟರ್‌, ಇವರನ್ನ ಕೊಲ್ಲಲು ಅರಣ್ಯ ಸಿಬ್ಬಂದಿಗೆ ಹಕ್ಕು ಕೊಟ್ಟದ್ಯಾರು? ಜನರ ಆಕ್ರೋಶ]]></title>
            <link>https://kannada.asianetnews.com/karnataka-districts/chamarajanagar-forest-encounter-suspected-poachers-killed-cauvery-wildlife-sanctuary-public-outrage-demand-justice-gdp/articleshow-q365yg9</link>
            <guid isPermaLink="true">https://kannada.asianetnews.com/karnataka-districts/chamarajanagar-forest-encounter-suspected-poachers-killed-cauvery-wildlife-sanctuary-public-outrage-demand-justice-gdp/articleshow-q365yg9</guid>
            <pubDate>Sat, 15 Aug 2026 12:11:39 +0530</pubDate>
            <description><![CDATA[ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಸಾವನ್ನಪ್ಪಿದ್ದಾರೆ. ಇದು ಆತ್ಮರಕ್ಷಣೆಗಾಗಿ ನಡೆಸಿದ ದಾಳಿ ಎಂದು ಅರಣ್ಯ ಇಲಾಖೆ ಹೇಳಿದರೆ, ಇದು ನಕಲಿ ಎನ್&zwnj;ಕೌಂಟರ್ ಎಂದು ಸ್ಥಳೀಯರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m022e0t80nfb4pg9mh1hpxr4,imgname-chamarajanagar-forest-encounter--1--1786776060744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮಕ್ಕೆ ಒಳಪಡುವ ಶಾಗ್ಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗಿನ ಜಾವ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಮೂವರು ಶಂಕಿತ ಬೇಟೆಗಾರರನ್ನು ಅರಣ್ಯ ಸಿಬ್ಬಂದಿಯ ಎನ್&zwnj;ಕೌಂಟರ್&zwnj; ಮಾಡಿದ್ದಾರೆ. ಬಲಿಯಾದವರನ್ನು ಅಂತೊಣಿಸ್ವಾಮಿ, ಪೀಟರ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;ನಡೆದಿದ್ದೇನು?&lt;/h2&gt;&lt;p&gt;ಲಭ್ಯವಿರುವ ಮಾಹಿತಿಯ ಪ್ರಕಾರ, ವನ್ಯಜೀವಿಗಳ ಬೇಟೆಗೆ ಕಾಡಿಗೆ ಎಂಟ್ರಿ ಕೊಟ್ಟಿದ್ದ ಬೇಟೆಗಾರರ ಕುರಿತು ಅರಣ್ಯ ಸಿಬ್ಬಂದಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅರಣ್ಯ ಸಿಬ್ಬಂದಿಯನ್ನು ಕಂಡ ಬೇಟೆಗಾರರು ಏಕಾಏಕಿ ಅವರ ಮೇಲೆಯೇ ಗುಂಡು ಹಾರಿಸಲು ಮುಂದಾಗಿದ್ದಾರೆನ್ನಲಾಗಿದೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ನಡೆಸಿದ ಪ್ರತ್ಯುತ್ತರದ ಗುಂಡಿನ ದಾಳಿಯಲ್ಲಿ ಮೂವರು ಬೇಟೆಗಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಯ ವೇಳೆ ಮತ್ತೊಬ್ಬ ಬೇಟೆಗಾರ ಪರಾರಿಯಾಗಿದ್ದು, ಘಟನಾ ಸ್ಥಳದಿಂದ ಒಂದು ನಾಡಬಂದೂಕು ಹಾಗೂ ಒಂದು ಜಿಂಕೆಯ ಮೃತದೇಹವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಈ ಗುಂಡಿನ ಕಾಳಗದಲ್ಲಿ ಅರಣ್ಯ ಸಿಬ್ಬಂದಿಯೊಬ್ಬರಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ಸ್ಥಳೀಯರ ಆಕ್ರೋಶ &ndash; ಕಚೇರಿ ಧ್ವಂಸ&lt;/h2&gt;&lt;p&gt;ಈ ಎನ್&zwnj;ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆಯೇ ಕಾವೇರಿ ವನ್ಯಧಾಮ ವ್ಯಾಪ್ತಿಯ ಶಾಗ್ಯ ಗ್ರಾಮದ ಸ್ಥಳೀಯರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯಾಧಿಕಾರಿಗಳು ಸುಳ್ಳು ಕಥೆ ಸೃಷ್ಟಿಸುತ್ತಿದ್ದಾರೆ, ಇವರನ್ನು ಜೀವಂತವಾಗಿ ಸೆರೆಹಿಡಿದು ಹತ್ತಿರದಿಂದ ಶೂಟ್ ಮಾಡಿ ಕೊಲ್ಲಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;&lt;p&gt;ಆಕ್ರೋಶಗೊಂಡ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳ ಕಚೇರಿ (DRFO Office) ಮೇಲೆ ದಾಳಿ ನಡೆಸಿ, ಕಚೇರಿಯಲ್ಲಿದ್ದ ಪೀಠೋಪಕರಣಗಳು, ಬೈಕ್ ಹಾಗೂ ಕೈಗೆ ಸಿಕ್ಕ ವಸ್ತುಗಳನ್ನು ಧ್ವಂಸಗೊಳಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;h2&gt;ನಮಗೆ ನ್ಯಾಯ ಬೇಕು, ಮೃತರ ಸಂಬಂಧಿಕರ ಕಣ್ಣೀರು&lt;/h2&gt;&lt;p&gt;ಇತ್ತ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಳ್ಳೇಗಾಲದ ಆಸ್ಪತ್ರೆಯಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವಿಷಯ ತಿಳಿದ ಮೃತರ ಸಂಬಂಧಿಕರು ಮೈಸೂರಿನ ಕೆ.ಆರ್. ಆಸ್ಪತ್ರೆಯ ಬಳಿ ಜಮಾಯಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತರ ಸಂಬಂಧಿ ವಿಜಯ ಎಂಬುವವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;&quot;ಮೃತಪಟ್ಟ ಮೂವರೂ ನಮ್ಮ ಹತ್ತಿರದ ಸಂಬಂಧಿಗಳು. ಬೆಳಗ್ಗೆಯಷ್ಟೇ ನಮಗೆ ಈ ವಿಚಾರ ತಿಳಿದು ಮೈಸೂರಿಗೆ ಬಂದಿದ್ದೇವೆ. ಅವರು ದನ ಮೇಯಿಸಲು ಹೋದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಅವರ ಬಳಿ ಆಯುಧವೇ ಇದ್ದರೂ, ಅವರನ್ನು ನೇರವಾಗಿ ಎನ್&zwnj;ಕೌಂಟರ್ ಮಾಡುವ ಅಗತ್ಯವೇನಿತ್ತು? ಮೂವರಿಗೂ ಮದುವೆಯಾಗಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಇವರನ್ನು ಕೊಲ್ಲಲು ಅರಣ್ಯ ಸಿಬ್ಬಂದಿಗೆ ಹಕ್ಕು ಕೊಟ್ಟವರು ಯಾರು? ನಮ್ಮವರಿಂದ ಯಾವ ಅರಣ್ಯ ಅಧಿಕಾರಿಗೆ ಫೈರ್ ಆಗಿದೆ ಎಂಬುದನ್ನು ಇಲಾಖೆ ತೋರಿಸಲಿ. ಅವರ ಮೇಲೆ ಹಳೆಯ ಪ್ರಕರಣಗಳಿದ್ದವು ಅಥವಾ ಅವರು ಬೇಟೆಗೆ ಹೋಗಿದ್ದರು ಎಂಬ ಬಗ್ಗೆ ನಮಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಈ ಪ್ರಕರಣದಲ್ಲಿ ನಮಗೆ ಸಂಪೂರ್ಣ ನ್ಯಾಯ ಸಿಗಬೇಕು.&quot; ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಸದ್ಯ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಶಾಗ್ಯ ಅರಣ್ಯ ಕಚೇರಿ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chamarajanagar-forest-encounter-suspected-poachers-killed-cauvery-wildlife-sanctuary-public-outrage-demand-justice-gdp/articleshow-q365yg9"/>
        </item>
        <item>
            <title><![CDATA[ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ: ಹಲವು ಟ್ರೈನ್‌ ವ್ಯಾಪ್ತಿ ಬದಲಾವಣೆ, ಇಲ್ಲಿದೆ ರೈಲುಗಳ ಪಟ್ಟಿ]]></title>
            <link>https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s</link>
            <guid isPermaLink="true">https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s</guid>
            <pubDate>Mon, 24 Aug 2026 12:07:57 +0530</pubDate>
            <description><![CDATA[ಅಕ್ಟೋಬರ್ 1 ರಿಂದ ಮಂಗಳೂರು ರೈಲ್ವೆ ಪ್ರದೇಶವು ಕೇರಳದ ಪಾಲಕ್ಕಾಡ್ ವಿಭಾಗದಿಂದ ಬೇರ್ಪಟ್ಟು ನೈಋತ್ಯ ರೈಲ್ವೆಯ ಮೈಸೂರು ವಿಭಾಗದೊಂದಿಗೆ ವಿಲೀನಗೊಳ್ಳಲಿದೆ. ಈ ಬದಲಾವಣೆಯಿಂದಾಗಿ ವಂದೇ ಭಾರತ್ ಸೇರಿದಂತೆ 12ಕ್ಕೂ ಹೆಚ್ಚು ಪ್ರಮುಖ ರೈಲುಗಳು ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿದ್ದು, ಇದು ಕರಾವಳಿ ಕರ್ನಾಟಕದ ರೈಲ್ವೆ ಸುಧಾರಣೆಗೆ ಮಹತ್ವದ ಹೆಜ್ಜೆ ಎನ್ನಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0s7qsr6n5jzhp6e5j4qs5xx,imgname-railway--1--1787553376005.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಮಂಗಳೂರು ನೈಋತ್ಯ ರೈಲ್ವೆ ವಲಯದ ಜೊತೆ ವಿಲೀನಗೊಂಡ ಬಳಿಕ ಅ.1 ರಿಂದ ಕೇರಳ ಪಾಲಕ್ಕಡ್ ವಿಭಾಗದ ಬದಲು ಮೈಸೂರು ವಿಭಾಗದ ವ್ಯಾಪ್ತಿಗೆ 12ಕ್ಕೂ ಅಧಿಕ ಪ್ರಮುಖ ರೈಲುಗಳು ಒಳಪಡಲಿವೆ. ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದಿಂದ ಉಳ್ಳಾಲ ವರೆಗಿನ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಿದ ಬಳಿಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಸಂಚರಿಸುವ ಹಾಗೂ ಅದರ ನಿರ್ವಹಣಾ ಸೌಲಭ್ಯಗಳಿಗೆ ಸಂಬಂಧಿಸಿದ ಹಲವು ರೈಲುಗಳು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿವೆ.&lt;/p&gt;&lt;h2&gt;ಪ್ರಮುಖ ರೈಲುಗಳು:&lt;/h2&gt;&lt;p&gt;12619/12620-ಮಂಗಳೂರು ಸೆಂಟ್ರಲ್-ಎಲ್&zwnj;ಟಿಟಿ ಮುಂಬೈ ಮತ್ಸ್ಯಗಂಧ ಎಕ್ಸ್&zwnj;ಪ್ರೆಸ್, 20645/20646- ಮಂಗಳೂರು ಸೆಂಟ್ರಲ್&ndash;ಮಡಗಾಂವ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್, 20631/20632-ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್, 16649/16650-ಕನ್ಯಾಕುಮಾರಿ-ಮಂಗಳೂರು ಸೆಂಟ್ರಲ್ ಪರಶುರಾಮ್ ಎಕ್ಸ್&zwnj;ಪ್ರೆಸ್, 16605/16606-ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಎರ್ನಾಡ್ ಎಕ್ಸ್&zwnj;ಪ್ರೆಸ್, 16603/16604- ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್&zwnj;ಪ್ರೆಸ್, 16629/16630- ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್&zwnj;ಪ್ರೆಸ್, 16323/16324-ಮಂಗಳೂರು ಸೆಂಟ್ರಲ್-ಕೊಯಮತ್ತೂರು ಎಕ್ಸ್&zwnj;ಪ್ರೆಸ್, 22609/22610- ಮಂಗಳೂರು ಸೆಂಟ್ರಲ್-ಕೊಯಮತ್ತೂರು ಇಂಟರ್&zwnj;ಸಿಟಿ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್, 12601/12602-ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್&zwnj;ಫಾಸ್ಟ್ ಮೇಲ್ ಎಕ್ಸ್&zwnj;ಪ್ರೆಸ್, 16621/16622- ಮಂಗಳೂರು ಸೆಂಟ್ರಲ್-ರಾಮೇಶ್ವರಂ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್, 22637/22638-ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲುಗಳು ಮೈಸೂರು ವಿಭಾಗಕ್ಕೆ ಒಳಪಡಲಿದೆ.&lt;/p&gt;&lt;h2&gt;ಪ್ಯಾಸೆಂಜರ್ ರೈಲುಗಳು:&lt;/h2&gt;&lt;p&gt;56625/56626 -ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56627/56628- ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56629/56630-ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56615/56616- ಮಂಗಳೂರು ಸೆಂಟ್ರಲ್-ಮಡಗಾಂವ್ ಪ್ಯಾಸೆಂಜರ್ ಮತ್ತು ಮಂಗಳೂರು ಸೆಂಟ್ರಲ್ ಹಾಗೂ ಅದರ ನಿರ್ವಹಣಾ ಸೌಲಭ್ಯಗಳಿಗೆ ಸಂಬಂಧಿಸಿದ ಇತರೆ ರೈಲುಗಳು ಒಳಗೊಳ್ಳಲಿವೆ.&lt;/p&gt;&lt;h2&gt;ಇಂಟರ್&zwnj; ಚೇಂಜ್&zwnj; ಪಾಯಿಂಟ್&zwnj;:&lt;/h2&gt;&lt;p&gt;ಅ. 1 ರಿಂದ ಪ್ರಮುಖ ಇಂಟರ್&zwnj;ಚೇಂಜ್ ಪಾಯಿಂಟ್&zwnj;ಗಳು (ರೈಲ್ವೆ ವಲಯ ಬದಲಾವಣೆ ಕೇಂದ್ರಗಳು)ಕೂಡ ಬದಲಾಗಲಿವೆ. ಈವರೆಗೆ ಪಡೀಲ್ ಬದಲಿಗೆ &lsquo;ಉಳ್ಳಾಲ&rsquo; ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್&zwnj;ಚೇಂಜ್ ಪಾಯಿಂಟ್ ಆಗಿರಲಿದೆ. ತೋಕೂರು ಕೊಂಕಣ ರೈಲ್ವೆಯ ಅಡಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್&zwnj;ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.&lt;/p&gt;&lt;h2&gt;ಈಡೇರಿಸಬೇಕಾದ ಬೇಡಿಕೆ:&lt;/h2&gt;&lt;p&gt;ಮಂಗಳೂರು ಸೆಂಟ್ರಲ್- ಜಂಕ್ಷನ್ ಹಳಿ ಡಬ್ಲಿಂಗ್ ( ನೈಋತ್ಯ ರೈಲ್ವೆ), ತೋಕೂರು- ಸುರತ್ಕಲ್ 4 ಕಿ.ಮೀ. ಡಬ್ಲಿಂಗ್ (ಕೊಂಕಣ ರೈಲ್ವೆ), ಸಕಲೇಶಪುರ- ಹಾಸನ- ಬೆಂಗಳೂರು ಮತ್ತು ಸುಬ್ರಹ್ಮಣ್ಯ- ಪಡೀಲ್ ನಡುವಿನ ಹಳಿಯ ವೇಗಧಾರಣ ಸಾಮರ್ಥ್ಯ ಹೆಚ್ಚಳ. (ಘಾಟ್ ಪ್ರದೇಶದ ಅನಿವಾರ್ಯ ವಿಳಂಬ ನಿವಾರಣೆಗಾಗಿ) ಹಾಗೂ ಮಂಗಳೂರು ಸೆಂಟ್ರಲ್&zwnj;ನಲ್ಲಿ ಫ್ಲಾಟ್ ಫಾರಂ ಹೆಚ್ಚಳ ಬೇಡಿಕೆ ಈಡೇರಿಸುವ ಅಗತ್ಯವನ್ನು ರೈಲ್ವೆ ಸಂಘಟನೆಗಳು ಹೇಳುತ್ತಿವೆ.&lt;/p&gt;&lt;h2&gt;ಕೊಂಕಣ ರೈಲ್ವೆ ವಿಲೀನಕ್ಕೆ ಮುನ್ನುಡಿ&lt;/h2&gt;&lt;p&gt;ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುತ್ತಿರುವಂತೆಯೇ ಕೊಂಕಣ ರೈಲ್ವೆ ಜಾಲ ಕೂಡ ಭಾರತೀಯ ರೈಲ್ವೆ ಜೊತೆ ವಿಲೀನಕ್ಕೆ ಮುನ್ನುಡಿ ಬರೆದಂತಾಗಿದೆ. ಕರಾವಳಿ ಕರ್ನಾಟಕದಲ್ಲಿ ರೈಲ್ವೆ ವಿಳಂಬ ಪ್ರಯಾಣ ನಿವಾರಣೆಗೆ ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಯತ್ನ ಕರಾವಳಿಯ ಸಂಸದರಿಂದ ನಡೆಯುತ್ತಿದೆ.&lt;/p&gt;&lt;p&gt;ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳ್ಳುವುದಕ್ಕೆ ಗೋವಾ ಯಾವುದೇ ಶರತ್ತು ಇಲ್ಲದೆ ಒಪ್ಪಿಗೆ ನೀಡಿದೆ, ಆದರೆ ಕರ್ನಾಟಕ, ಕೇರಳ, ಮಹಾರಾಷ್ಟ್ರ ನಿರ್ಧಾರ ಬಾಕಿಯಿದೆ. ಆದರೆ ಮಂಗಳೂರು ಪ್ರದೇಶ ಮೈಸೂರು ವಿಭಾಗದಲ್ಲಿ ವಿಲೀನಕ್ಕೆ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.&lt;/p&gt;&lt;p&gt;ಆಡಳಿತಾತ್ಮಕ ಮತ್ತು ಕಾರ್ಯಾಚರಣೆ ಸುಗಮಕ್ಕಾಗಿ ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದು ಕರಾವಳಿ ಕರ್ನಾಟಕದ ರೈಲ್ವೆ ಸುಧಾರಣೆಗೆ ಅತ್ಯಂತ ಮಹತ್ವದ ಐತಿಹಾಸಿಕ ಹೆಜ್ಜೆಯಾಗಿದೆ. ಇದರಿಂದ ಮಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಆಡಳಿತಾತ್ಮಕ, ಕಾರ್ಯಾಚರಣೆಗಳಿಗೆ ಬಹಳ ಅನುಕೂಲವಾಗಲು ಕೇಂದ್ರ ರೈಲ್ವೆ ಸಚಿವಾಲಯ ಈ ತೀರ್ಮಾನ ಕೈಗೊಂಡಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s"/>
        </item>
        <item>
            <title><![CDATA[ಹಸು ಕಟ್ಟುವ ವಿಚಾರಕ್ಕೆ ಅಪ್ಪನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ದುಷ್ಟರು.. ಹೆದರಿದ ಅಪ್ರಾಪ್ತ ಪುತ್ರ, ದುರಂತ ಅಂತ್ಯ]]></title>
            <link>https://kannada.asianetnews.com/mysore/brutally-thrashed-father-over-dispute-tether-cow-his-terrified-minor-son-met-a-tragic-end-in-mysore-gkn/articleshow-s0yvfy2</link>
            <guid isPermaLink="true">https://kannada.asianetnews.com/mysore/brutally-thrashed-father-over-dispute-tether-cow-his-terrified-minor-son-met-a-tragic-end-in-mysore-gkn/articleshow-s0yvfy2</guid>
            <pubDate>Thu, 20 Aug 2026 22:50:18 +0530</pubDate>
            <description><![CDATA[&lt;p&gt;ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿಂಗಾರಿಪುರದಲ್ಲಿ ಹಸು ಕಟ್ಟುವ ವಿಚಾರದ ಗಲಾಟೆಗೆ ಹೆದರಿ ನಾಗೇಂದ್ರ ಎಂಬ ಅಪ್ರಾಪ್ತ ಬಾಲಕ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0g2ygdgm8gvccqkke4pe8x0,imgname-mysore-cow-clash-1787246363055.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಮನೆ ಮುಂದೆ ಹಸು ಕಟ್ಟುವ ಸಣ್ಣ ವಿಚಾರವೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ನೆರೆಹೊರೆಯವರ ಕ್ಷುಲ್ಲಕ ಜಗಳಕ್ಕೆ ಅಪ್ರಾಪ್ತ ಬಾಲಕನೊಬ್ಬ ಬಲಿಯಾಗಿದ್ದಾನೆ. ತಂದೆಯ ಮೇಲೆ ಕಣ್ಣೆದುರೇ ನಡೆದ ರಕ್ತಸಿಕ್ತ ಹಲ್ಲೆ ಮತ್ತು ಆರೋಪಿಗಳು ಹಾಕಿದ ಪ್ರಾಣ ಬೆದರಿಕೆಗೆ ಬೆದರಿದ ಬಾಲಕ, ಮನನೊಂದು ಸಾವಿಗೆ ಶರಣಾಗಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ನಂಜನಗೂಡು ತಾಲ್ಲೂಕಿನ ಸಿಂಗಾರಿಪುರ ಗ್ರಾಮದ ನಿವಾಸಿ ಶಂಕರ್ (49) ಎಂಬುವವರ ಮೇಲೆ ಈ ಭೀಕರ ಹಲ್ಲೆ ನಡೆದಿದೆ. ಶಂಕರ್ ಅವರು ತಮ್ಮ ಮನೆ ಮುಂದೆ ಹಸು ಕಟ್ಟುವ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಗ್ರಾಮದ ಮಾದೇಗೌಡ, ಕುಳ್ಳೇಗೌಡ, ಮಾದೇವ ಸೇರಿದಂತೆ ಒಟ್ಟು ಒಂಬತ್ತು ಮಂದಿ ಶಂಕರ್ ಅವರೊಂದಿಗೆ ಗಲಾಟೆ ತೆಗೆದಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಜಗಳದ ವೇಳೆ ಸಿಟ್ಟಿಗೆದ್ದ ಆರೋಪಿಗಳು ಏಕಾಏಕಿ ಶಂಕರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಕಲ್ಲು, ದೊಣ್ಣೆಗಳಿಂದ ಮನಬಂದಂತೆ ಹೊಡೆದ ಪರಿಣಾಮ ಶಂಕರ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.&lt;/p&gt;&lt;p&gt;ಶಂಕರ್ ಅವರ ಮೇಲೆ ಹಲ್ಲೆ ನಡೆಯುವಾಗ ಅವರ ಅಪ್ರಾಪ್ತ ಪುತ್ರ ನಾಗೇಂದ್ರ ಅಲ್ಲೇ ಇದ್ದ. ಆರೋಪಿಗಳು ಶಂಕರ್ ಅವರನ್ನು ಹೊಡೆಯುವುದಲ್ಲದೆ ನಾಗೇಂದ್ರನಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿನ್ನನ್ನೂ ಸುಮ್ಮನೆ ಬಿಡುವುದಿಲ್ಲ, ನಿನ್ನನ್ನೂ ಕೊಲ್ಲುತ್ತೇವೆ ಎಂದು ಎಲ್ಲರ ಮುಂದೆ ಪ್ರಾಣ ಬೆದರಿಕೆ ಹಾಕಿದ್ದಾರೆ. ತನ್ನ ಕಣ್ಣೆದುರೇ ತಂದೆಯ ಮೇಲೆ ನಡೆದ ಕ್ರೂರ ಹಲ್ಲೆ ಮತ್ತು ತನಗೂ ಸಾವು ಕಾದಿದೆ ಎಂಬ ಭಯದಿಂದ ನಾಗೇಂದ್ರ ತೀವ್ರವಾಗಿ ನೊಂದಿದ್ದಾನೆ. ಆರೋಪಿಗಳು ಹೋದ ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕ ನೇ* ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾನೆ.&lt;/p&gt;&lt;h2&gt;&lt;strong&gt;ಒಂಬತ್ತು ಜನರ ವಿರುದ್ಧ FIR ದಾಖಲು&lt;/strong&gt;&lt;/h2&gt;&lt;p&gt;ಈ ಘಟನೆಯಿಂದ ಸಿಂಗಾರಿಪುರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮೃತ ಬಾಲಕನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕೌಲಂದೆ ಪೊಲೀಸ್ ಠಾಣೆಯಲ್ಲಿ ಮಾದೇಗೌಡ, ಕುಳ್ಳೇಗೌಡ, ಮಾದೇವ ಸೇರಿದಂತೆ ಒಟ್ಟು 9 ಜನರ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ. ಘಟನೆಯ ನಂತರ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.&lt;/p&gt;&lt;p&gt;ಒಂದು ಸಣ್ಣ ಜಗಳ ಒಂದು ಇಡೀ ಕುಟುಂಬವನ್ನೇ ಬೀದಿಗೆ ತಂದಿದೆ. ಮಗ ಮಣ್ಣಿನ ಪಾಲಾಗಿದ್ದರೆ, ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. &quot;ನನ್ನ ಮಗನ ಸಾವಿಗೆ ಆ ಒಂಬತ್ತು ಮಂದಿಯೇ ಕಾರಣ, ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಶಂಕರ್ ಪತ್ನಿ ಸುಮಿತ್ರಾ ಕಣ್ಣೀರಿಡುತ್ತಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mysore/brutally-thrashed-father-over-dispute-tether-cow-his-terrified-minor-son-met-a-tragic-end-in-mysore-gkn/articleshow-s0yvfy2"/>
        </item>
        <item>
            <title><![CDATA[ಅರಣ್ಯ ಸಿಬ್ಬಂದಿ ಗುಂಡಿಗೆ 3 ಬೇಟೆಗಾರರು ಬಲಿ ಪ್ರಕರಣ; ಶವ ಏಕೆ ಮೈಸೂರಿಗೆ ತಂದರು? ಸಂಸದರ ಸಂಶಯದ ಪ್ರಶ್ನೆಗೆ ಉತ್ತರ ಇಲ್ಲ!]]></title>
            <link>https://kannada.asianetnews.com/karnataka-districts/why-the-bodies-were-brought-to-mysuru-after-three-killed-in-forest-encounter-mp-sunil-bose-questions-rav/articleshow-t1c9zuo</link>
            <guid isPermaLink="true">https://kannada.asianetnews.com/karnataka-districts/why-the-bodies-were-brought-to-mysuru-after-three-killed-in-forest-encounter-mp-sunil-bose-questions-rav/articleshow-t1c9zuo</guid>
            <pubDate>Sun, 16 Aug 2026 06:59:43 +0530</pubDate>
            <description><![CDATA[ಚಾಮರಾಜನಗರ ಸಂಸದ ಸುನಿಲ್ ಬೋಸ್, ಎನ್&zwnj;ಕೌಂಟರ್&zwnj; ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಎನ್&zwnj;ಕೌಂಟರ್&zwnj; ನಂತರ ಶವಗಳನ್ನು ಮೈಸೂರಿಗೆ ಏಕೆ ತರಲಾಯಿತು ಎಂದು ಪ್ರಶ್ನಿಸಿರುವ ಅವರು, ಅರಣ್ಯಾಧಿಕಾರಿಗಳ ಹೇಳಿಕೆ ಮಾತ್ರವಲ್ಲದೆ, ಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m022e0t80nfb4pg9mh1hpxr4,imgname-chamarajanagar-forest-encounter--1--1786776060744.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು (ಆ.16): ಎನ್&zwnj;ಕೌಂಟರ್&zwnj; ಆದ ಮೇಲೆ ಮೈಸೂರಿಗೆ ಶವಗಳನ್ನ ಯಾಕೆ ತಂದರು. ಇದು ಬಹುದೊಡ್ಡ ಅನುಮಾನ ಮೂಡಿಸುವ ಪ್ರಶ್ನೆ. ಈ ಪ್ರಶ್ನೆಗೆ ಯಾರಿಂದಲೂ ನಮಗೆ ಸಮರ್ಪಕ ಉತ್ತರ &zwnj;ಸಿಗುತ್ತಿಲ್ಲ. ಈ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿದ್ದೇನೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಎಂದು ಚಾಮರಾಜನಗರ ಸಂಸದ ಸುನಿಲ್ ಬೋಸ್ ಹೇಳಿದರು.&lt;/p&gt;&lt;h2&gt;ಅರಣ್ಯಾಧಿಕಾರಿಗಳು ಹೇಳೋದೇನು?&lt;/h2&gt;&lt;p&gt;ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್&zwnj;ಕೌಂಟರ್&zwnj; ಆದವರು ಬೇಟೆಯಾಡಿ ಬೇಟೆಯ ಮಾಂಸ ಹಂಚಿಕೊಳ್ಳುತ್ತಿದ್ದರು. ಆಗ ಅರಣ್ಯ ಅಧಿಕಾರಿಗಳು ಅವರನ್ನ ನೋಡಿ ಶರಣಾಗುವಂತೆ ಹೇಳಿದ್ದಾರೆ. ಅವರು ಅಧಿಕಾರಿಗಳು ಮೇಲೆ ಫೈರ್ ಮಾಡಿದ್ದಾರೆ. ಅದಕ್ಕೆ ಅಧಿಕಾರಿಗಳು ಎನ್ಕೌಂಟರ್ ಮಾಡಿದ್ದಾರೆ. ಇದು ಅರಣ್ಯ ಅಧಿಕಾರಿಗಳು ನಮಗೆ ಹೇಳುತ್ತಿರುವ ಮಾಹಿತಿ ಎಂದರು.&lt;/p&gt;&lt;p&gt;ಒಂದು ಕಡೆಯ ಮಾಹಿತಿಯನ್ನು ನಂಬಲು ನಾನು ಸಿದ್ಧನಿಲ್ಲ. ಇನ್ನೊಂದು ಕಡೆಯ ಮಾಹಿತಿ ಏನು ಎಂಬುದು ನಮಗೆ ಬೇಕಿದೆ. ಎನ್&zwnj;ಕೌಂಟರ್ ಬಳಿಕ ಮೈಸೂರಿಗೆ ಏಕೆ ಶವ ತಂದರು. ಇದಕ್ಕೆ ಉತ್ತರ ಬೇಕಿದೆ. ಆ ಮಾಹಿತಿಯನ್ನ ಸ್ಥಳಕ್ಕೆ ಹೋಗಿ ಪಡೆಯುತ್ತೇನೆ. ಸಂಸದರು ತಿಳಿಸಿದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/why-the-bodies-were-brought-to-mysuru-after-three-killed-in-forest-encounter-mp-sunil-bose-questions-rav/articleshow-t1c9zuo"/>
        </item>
        <item>
            <title><![CDATA[ಫ್ಯಾನ್ಸಿ ನಂಬರ್‌ ಕ್ರೇಜ್‌ನಿಂದ ಸಾರಿಗೆ ಇಲಾಖೆಗೆ ಹರಿದುಬಂತು ಕೋಟಿ ಕೋಟಿ ಹಣ, ಯಾವ ನಂಬರ್‌ಗೆ ಎಷ್ಟು ದುಡ್ಡು? ಇಲ್ಲಿದೆ ಡೀಟೇಲ್ಸ್‌..]]></title>
            <link>https://kannada.asianetnews.com/bengaluru-urban/karnataka-transport-dept-earns-118-crore-fancy-number-auction-san/articleshow-u3q2g24</link>
            <guid isPermaLink="true">https://kannada.asianetnews.com/bengaluru-urban/karnataka-transport-dept-earns-118-crore-fancy-number-auction-san/articleshow-u3q2g24</guid>
            <pubDate>Mon, 17 Aug 2026 18:02:33 +0530</pubDate>
            <description><![CDATA[&lt;p&gt;ವಾಹನಗಳ ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಮೇಲಿನ ವ್ಯಾಮೋಹದಿಂದಾಗಿ ಸಾರಿಗೆ ಇಲಾಖೆಯು 2025-26ನೇ ಸಾಲಿನಲ್ಲಿ ಇ-ಹರಾಜಿನ ಮೂಲಕ ದಾಖಲೆಯ 118.14 ಕೋಟಿ ರೂ. ಆದಾಯ ಗಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07v7y5hvrwsxt3j1rmbawt6,imgname-fancy-number-plate-ktk-1786969847985.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.17): &lt;/strong&gt;ವಾಹನಗಳ ನೋಂದಣಿ ಸಂಖ್ಯೆ ಎನ್ನುವುದು ಇನ್ನು ಮುಂದೆ ಕೇವಲ ಒಂದು ಗುರುತು ಮಾತ್ರವಲ್ಲ. ಬದಲಿಗೆ, ಕಳೆದ ಕೆಲವು ವರ್ಷಗಳಿಂದ ಇದು ಪ್ರತಿಷ್ಠೆಯ ಪ್ರತೀಕವಾಗಿ, ಅದೃಷ್ಟದ ಸಂಕೇತವಾಗಿ ಮತ್ತು ವೈಯಕ್ತಿಕ ಪರಿಚಯದ ವಿಧಾನವಾಗಿ ರೂಪುಗೊಂಡಿದೆ. ರಾಜಕಾರಣಿಗಳು ಮತ್ತು ಸಿನಿಮಾ ಸ್ಟಾರ್&zwnj;ಗಳಿಂದ ಹಿಡಿದು ಉದ್ಯಮಿಗಳು ಹಾಗೂ ಯುವ ಲಕ್ಸುರಿ ಕಾರು ಮಾಲೀಕರವರೆಗೆ ವಿಶೇಷ 'ಫ್ಯಾನ್ಸಿ' ನೋಂದಣಿ ಸಂಖ್ಯೆಗಳನ್ನು ಸ್ವಂತವಾಗಿಸಿಕೊಳ್ಳಲು ನಡೆಯುತ್ತಿರುವ ಪೈಪೋಟಿಯು ಸಾರಿಗೆ ಇಲಾಖೆಗೆ ದಾಖಲೆ ಮಟ್ಟದ ಆದಾಯವನ್ನು ತಂದುಕೊಡುತ್ತಿದೆ. 2025-26ನೇ ಸಾಲಿನಲ್ಲಿ ಒಂದೇ ವರ್ಷದಲ್ಲಿ ಪ್ರೀಮಿಯಂ ನೋಂದಣಿ ಸಂಖ್ಯೆಗಳ ಇ-ಹರಾಜಿನ ಮೂಲಕ ಇಲಾಖೆಯು ಅತಿ ಹೆಚ್ಚು ಅಂದರೆ ಬರೋಬ್ಬರಿ 118.14 ಕೋಟಿ ರೂಪಾಯಿಗಳ ಭರ್ಜರಿ ಆದಾಯವನ್ನು ಗಳಿಸಿದೆ.&lt;/p&gt;&lt;h2&gt;&lt;strong&gt;ಐದು ವರ್ಷಗಳಲ್ಲಿ ದಾಖಲೆ ಮಟ್ಟದ ಆದಾಯ ಏರಿಕೆ&lt;/strong&gt;&lt;/h2&gt;&lt;p&gt;0001, 0007, 9999, 1111 ಮತ್ತು 7777 ರಂತಹ ಜನಪ್ರಿಯ ಸಂಖ್ಯೆಗಳ ಮೇಲಿನ ಹೆಚ್ಚುತ್ತಿರುವ ವ್ಯಾಮೋಹವು, ವಾಹನ ಮಾಲೀಕರು ಲಕ್ಷಾಂತರ ರೂಪಾಯಿಗಳನ್ನು, ಕೆಲವೊಮ್ಮೆ ಕಾರಿನ ಬೆಲೆಗಿಂತಲೂ ಹೆಚ್ಚಿನ ಹಣವನ್ನು ತಮ್ಮಿಷ್ಟದ ನಂಬರ್&zwnj;ಗಾಗಿ ಖರ್ಚು ಮಾಡಲು ಸಿದ್ಧರಿರುವುದನ್ನು ತೋರಿಸುತ್ತದೆ. ಸಾರಿಗೆ ಇಲಾಖೆಯ ದತ್ತಾಂಶದ ಪ್ರಕಾರ, ಫ್ಯಾನ್ಸಿ ನಂಬರ್ ಹರಾಜಿನಿಂದ ಬರುವ ಆದಾಯವು ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಏರಿಕೆಯಾಗಿದೆ.&lt;/p&gt;&lt;ul&gt; &lt;li&gt;&lt;strong&gt;2021-22: 24.51 ಕೋಟಿ ರೂ.&lt;/strong&gt;&lt;/li&gt; &lt;li&gt;&lt;strong&gt;2022-23: 66.34 ಕೋಟಿ ರೂ.&lt;/strong&gt;&lt;/li&gt; &lt;li&gt;&lt;strong&gt;2023-24: 94.58 ಕೋಟಿ ರೂ.&lt;/strong&gt;&lt;/li&gt; &lt;li&gt;&lt;strong&gt;2024-25: 89.20 ಕೋಟಿ ರೂ.&lt;/strong&gt;&lt;/li&gt; &lt;li&gt;&lt;strong&gt;2025-26: ದಾಖಲೆಯ 118.14 ಕೋಟಿ ರೂ.&lt;/strong&gt;&lt;/li&gt;&lt;/ul&gt;&lt;h2&gt;&lt;strong&gt;ಬೆಂಗಳೂರು ಮತ್ತು ಮೈಸೂರಿನಲ್ಲಿ ಮುಂಚೂಣಿ ಕ್ರೇಜ್&lt;/strong&gt;&lt;/h2&gt;&lt;p&gt;ಈ ಕ್ರೇಜ್ ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ಐಷಾರಾಮಿ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆಯಾಗಿದೆ. ಕೋರಮಂಗಲದ ಕೆಎ-01 (KA-01) ಪ್ರಾದೇಶಿಕ ಸಾರಿಗೆ ಕಚೇರಿಯು (RTO) ಪ್ರೀಮಿಯಂ ನೋಂದಣಿ ಸಂಖ್ಯೆಗಳಿಗೆ ಅತಿ ಹೆಚ್ಚು ಬಿಡ್&zwnj;ಗಳನ್ನು ದಾಖಲಿಸುವುದನ್ನು ಮುಂದುವರಿಸಿದೆ, ಇದರ ನಂತರದ ಸ್ಥಾನದಲ್ಲಿ ಮೈಸೂರು ಇದೆ.&lt;/p&gt;&lt;h2&gt;&lt;strong&gt;ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಪ್ರಮುಖ ಸಂಖ್ಯೆಗಳ ವಿವರ&lt;/strong&gt;&lt;/h2&gt;&lt;p&gt;'0001' ಸಂಖ್ಯೆಯು 28.60 ಲಕ್ಷ ರೂ.ಗಳಿಗೆ ಮಾರಾಟವಾಗಿದೆ. ಮತ್ತೊಂದು ವಾಹನಕ್ಕೆ '0001' ಸಂಖ್ಯೆಯು 22.85 ಲಕ್ಷ ರೂ.ಗಳಿಗೆ ಹರಾಜಾಗಿದೆ. ಇನ್ನುಳಿದಂತೆ 9999 ಸಂಖ್ಯೆ 21.75 ಲಕ್ಷ ರೂ., ಮತ್ತೊಂದು 0001 ಸಂಖ್ಯೆ 20.75 ಲಕ್ಷ ರೂ. ಹಾಗೂ 0081 ಸಂಖ್ಯೆಯು 21.15 ಲಕ್ಷ ರೂ.ಗಳ ಗರಿಷ್ಠ ಬಿಡ್ ಪಡೆದುಕೊಂಡಿದೆ.&lt;/p&gt;&lt;h2&gt;&lt;strong&gt;ಅನಧಿಕೃತ ಮಾರ್ಗಗಳಿಗೆ ಅಂತ್ಯ ಹಾಡಿದ ಪಾರದರ್ಶಕ ಆನ್&zwnj;ಲೈನ್ ಹರಾಜು&lt;/strong&gt;&lt;/h2&gt;&lt;p&gt;ತಮ್ಮಿಷ್ಟದ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳುವುದು ಹಿಂದೆ ಅನಧಿಕೃತ ಮಾರ್ಗಗಳು ಅಥವಾ ಶಿಫಾರಸುಗಳನ್ನು ಅವಲಂಬಿಸಿತ್ತು. ಸಾರಿಗೆ ಇಲಾಖೆಯು ಪಾರದರ್ಶಕ ಇ-ಹರಾಜು (e-auction) ವ್ಯವಸ್ಥೆಯನ್ನು ಪರಿಚಯಿಸುವ ಮೊದಲು, ಅರ್ಜಿದಾರರು ವಿಐಪಿ ನಂಬರ್&zwnj;ಗಳನ್ನು ಮುಂಚಿತವಾಗಿ ಪಡೆದುಕೊಳ್ಳಲು ವೈಯಕ್ತಿಕ ಪ್ರಭಾವವನ್ನು ಬೀರುವುದು ಅಥವಾ ಅಧಿಕಾರಿಗಳಿಗೆ ಲಂಚ ನೀಡುವುದು ಸಾಮಾನ್ಯಾವಾಗಿತ್ತು.&lt;/p&gt;&lt;p&gt;ಆದರೆ, ಡಿಜಿಟಲ್ ಹರಾಜು ಪ್ರಕ್ರಿಯೆಯು ಪ್ರಸ್ತುತ ಮತ್ತು ಮುಂಗಡ ಸಿರೀಸ್&zwnj;ಗಳಲ್ಲಿ (running and advance series) ಲಭ್ಯವಿರುವ ಸಂಖ್ಯೆಗಳಿಗೆ ಯಾರು ಬೇಕಾದರೂ ಮುಕ್ತವಾಗಿ ಬಿಡ್ ಮಾಡಲು ಅವಕಾಶ ಕಲ್ಪಿಸುವ ಮೂಲಕ ಇಂತಹ ಅಕ್ರಮಗಳಿಗೆ ಬಹುತೇಕ ಕಡಿವಾಣ ಹಾಕಿದೆ. ಇಂದು ಬಿಡ್&zwnj;ದಾರರು ಸ್ಪರ್ಧಾತ್ಮಕ ಆನ್&zwnj;ಲೈನ್ ಹರಾಜಿನಲ್ಲಿ ಭಾಗವಹಿಸುವ ಮೊದಲು ಭದ್ರತಾ ಠೇವಣಿ (Earnest Money Deposit) ಯೊಂದಿಗೆ ನಿಗದಿತ ನೋಂದಣಿ ಶುಲ್ಕವನ್ನು ಪಾವತಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿಷ್ಠೆ, ಸಂಖ್ಯಾಶಾಸ್ತ್ರ ಮತ್ತು ಹೂಡಿಕೆ ಮೌಲ್ಯ&lt;/strong&gt;&lt;/h2&gt;&lt;p&gt;ಪ್ರತಿಷ್ಠೆ, ಸಂಖ್ಯಾಶಾಸ್ತ್ರ (Numerology) ಮತ್ತು ಹೂಡಿಕೆಯ ಮೌಲ್ಯದ ಸಂಯೋಜನೆಯೇ ಈ ಭಾರಿ ಬೇಡಿಕೆಗೆ ಕಾರಣ ಎಂದು ಅಧಿಕಾರಿಗಳು ವಿವರಿಸುತ್ತಾರೆ. ಅನೇಕ ಖರೀದಿದಾರರು ನಿರ್ದಿಷ್ಟ ಸಂಖ್ಯೆಗಳು ಸಮೃದ್ಧಿ ಅಥವಾ ಯಶಸ್ಸನ್ನು ತರುತ್ತವೆ ಎಂದು ನಂಬಿದರೆ, ಇತ್ತ ಕೆಲವರು ಪುನರಾವರ್ತಿತ ಅಂಕಿಅಂಶಗಳನ್ನು ನೆನಪಿಟ್ಟುಕೊಳ್ಳಲು ಸುಲಭವೆಂದು ಇಷ್ಟಪಡುತ್ತಾರೆ. ಐಷಾರಾಮಿ ವಾಹನಗಳ ಮರುಮಾರಾಟ ಮೌಲ್ಯವನ್ನು ಹೆಚ್ಚಿಸುವುದರ ಜೊತೆಗೆ, ಪ್ರೀಮಿಯಂ ನೋಂದಣಿ ಸಂಖ್ಯೆಗಳು ವ್ಯಾಪಾರ ಮಾಲೀಕರಿಗೆ ಮತ್ತು ಸೋಶಿಯಲ್&zwnj; ಮೀಡಿಯಾ ಇನ್ಫ್ಲುಯೆನ್ಸರ್&zwnj;ಗಳಿಗೆ (influencers) ಒಂದು ಬ್ರ್ಯಾಂಡಿಂಗ್ ಸಾಧನವಾಗಿ ಮಾರ್ಪಟ್ಟಿವೆ.&lt;/p&gt;&lt;p&gt;&quot;ವಾಹನ ಮಾಲೀಕರು ಆಕರ್ಷಕ ನೋಂದಣಿ ಸಂಖ್ಯೆಗಳನ್ನು ಪಡೆಯಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಕೇವಲ ಫ್ಯಾನ್ಸಿ ನಂಬರ್ ಹರಾಜಿನಿಂದಲೇ ಇಲಾಖೆಯು ಒಂದೇ ಹಣಕಾಸು ವರ್ಷದಲ್ಲಿ ಸುಮಾರು 118 ಕೋಟಿ ರೂ.ಗಳನ್ನು ಗಳಿಸಿದೆ&quot; ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.&lt;/p&gt;&lt;p&gt;ಮೂಲಗಳ ಪ್ರಕಾರ, ರಾಜಕೀಯ ನಾಯಕರು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಅನೇಕರು ತಮ್ಮ ಜನ್ಮ ದಿನಾಂಕಗಳು, ಅದೃಷ್ಟದ ಸಂಖ್ಯೆಗಳು ಅಥವಾ ಸಂಖ್ಯಾಶಾಸ್ತ್ರದ ಆದ್ಯತೆಗಳಿಗೆ ಹೊಂದಿಕೆಯಾಗುವ ನೋಂದಣಿ ಸಂಖ್ಯೆಗಳನ್ನು ಆರಿಸಿಕೊಳ್ಳುತ್ತಾರೆ. ಚಲನಚಿತ್ರ ವ್ಯಕ್ತಿತ್ವಗಳು, ಉದ್ಯಮಿಗಳು ಮತ್ತು ಶ್ರೀಮಂತ ವ್ಯಕ್ತಿಗಳು (HNIs) ಕೂಡ ವಿಶೇಷ ಸಂಯೋಜನೆಗಳನ್ನು ಪಡೆದುಕೊಳ್ಳಲು ಉತ್ಸುಕರಾಗಿದ್ದು, ಬಿಡ್&zwnj;ಗಳನ್ನು ಸಲ್ಲಿಸುವ ಮೊದಲು ಹೆಚ್ಚಾಗಿ ಜ್ಯೋತಿಷಿಗಳನ್ನು ಸಂಪರ್ಕಿಸುತ್ತಾರೆ.&lt;/p&gt;&lt;p&gt;&quot;ಈ ಬೆಳೆಯುತ್ತಿರುವ ಗೀಳು ಅನಿರೀಕ್ಷಿತ ಆರ್ಥಿಕ ಲಾಭವನ್ನು ತಂದುಕೊಟ್ಟಿದೆ. ಯಾವುದೇ ಹೆಚ್ಚುವರಿ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡದೆ, ಇಲಾಖೆಯು ಕೇವಲ ಸೀಮಿತ ಸಂಖ್ಯೆಯ ಅಪೇಕ್ಷಿತ ಸಂಖ್ಯೆಗಳನ್ನು ಹರಾಜು ಮಾಡುವ ಮೂಲಕ ಕೋಟ್ಯಂತರ ರೂಪಾಯಿಗಳ ತೆರಿಗೆಯೇತರ ಆದಾಯವನ್ನು (non-tax revenue) ಉತ್ಪಾದಿಸುತ್ತಿದೆ. ಪ್ರತಿವರ್ಷ ಹೆಚ್ಚಿನ ಐಷಾರಾಮಿ ವಾಹನಗಳು ರಸ್ತೆಗಿಳಿಯುತ್ತಿರುವುದರಿಂದ, ವಿಶೇಷ ನೋಂದಣಿ ಸಂಖ್ಯೆಗಳ ಸ್ಪರ್ಧೆಯು ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ&quot; ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/karnataka-transport-dept-earns-118-crore-fancy-number-auction-san/articleshow-u3q2g24"/>
        </item>
        <item>
            <title><![CDATA[Kabini Dam: ಕಬಿನಿ ಡ್ಯಾಂನಿಂದ 9 ದಿನಗಳಲ್ಲೇ 4 ಟಿಎಂಸಿ ನೀರು ತಮಿಳುನಾಡಿಗೆ! ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ?]]></title>
            <link>https://kannada.asianetnews.com/state/kabini-dam-released-4-tmc-water-to-tamil-nadu-in-just-9-days-current-water-levels-in-karnataka-reservoirs-rav/articleshow-xwercmk</link>
            <guid isPermaLink="true">https://kannada.asianetnews.com/state/kabini-dam-released-4-tmc-water-to-tamil-nadu-in-just-9-days-current-water-levels-in-karnataka-reservoirs-rav/articleshow-xwercmk</guid>
            <pubDate>Sat, 22 Aug 2026 05:25:44 +0530</pubDate>
            <description><![CDATA[&lt;p&gt;ಎಚ್&zwnj;.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವ ಬದಲು, ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈ ನೀರು ನೇರವಾಗಿ ತಮಿಳುನಾಡಿಗೆ ಸೇರುತ್ತಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಜಲಾಶಯದಿಂದ 4 ಟಿಎಂಸಿ ನೀರು ಖಾಲಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyyfpfbj9xmgwztj0rh7gphj,imgname-kabini-1785582009713.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಆ.22):&lt;/strong&gt; ಎಚ್&zwnj;.ಡಿ.ಕೋಟೆ ತಾಲೂಕು ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯದಿಂದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸುವ ಬದಲು ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.&lt;/p&gt;&lt;p&gt;ನದಿಗೆ ಬಿಡುವ ನೀರು ನೇರವಾಗಿ ತಮಿಳುನಾಡಿನ ಮೆಟ್ಟೂರು ಜಲಾಶಯ ಸೇರುತ್ತಿದೆ. ಕೇರಳದ ವೈನಾಡಲ್ಲಿ ಸುರಿದ ಮಳೆಯಿಂದಾಗಿ ಜಲಾಶಯ (ಗರಿಷ್ಠ ಮಟ್ಟ 2284 ಅಡಿ) ಭರ್ತಿಯಾಗಿತ್ತು. ಈಗ ಜಲಾಶಯದ ನೀರಿನ ಮಟ್ಟ 2275.56 ಅಡಿಗೆ ಕುಸಿದಿದೆ. ಕಳೆದ ಒಂಬತ್ತು ದಿನಗಳಲ್ಲಿ ಜಲಾಶಯದಿಂದ 4 ಟಿಎಂಸಿ ನೀರು ಖಾಲಿ ಮಾಡಲಾಗಿದೆ. ಆ.13ರಂದು 2,282 ಅಡಿ ಇದ್ದ ನೀರಿನ ಮಟ್ಟ, ಶುಕ್ರವಾರ 2,275 ಅಡಿ ಇದೆ. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ ಕೇವಲ 14.57 ಟಿಎಂಸಿ ನೀರುವ ಮಾತ್ರ ಲಭ್ಯವಿದೆ.&lt;/p&gt;&lt;h2&gt;ಜಲಾಶಯಗಳ ಇಂದಿನ ನೀರಿನ ಮಟ್ಟ (21-8-2026)&lt;/h2&gt;&lt;ul&gt; &lt;li&gt;ಕಬಿನಿ 78% 2284 2276.25&lt;/li&gt; &lt;li&gt;ಹೇಮಾವತಿ 86% 2922 2916.45&lt;/li&gt; &lt;li&gt;ತುಂಗಭದ್ರಾ 89% 1633 1630.50&lt;/li&gt; &lt;li&gt;ಸೂಪಾ(ಮೀ.) 59% 564 548.00&lt;/li&gt; &lt;li&gt;ಕೆಆರ್&zwnj;ಎಸ್ 62% 124.80 109.05&lt;/li&gt; &lt;li&gt;ಘಟಪ್ರಭಾ 100% 2175 2174.50&lt;/li&gt; &lt;li&gt;ಲಿಂಗನಮಕ್ಕಿ 56% 1819.12 1795.25&lt;/li&gt; &lt;li&gt;ಭದ್ರಾ 82% 2158 2147.10&lt;/li&gt; &lt;li&gt;ಹಾರಂಗಿ 98% 2859 2858.25&lt;/li&gt; &lt;li&gt;ಆಲಮಟ್ಟಿ(ಮೀ.) 99% 519.60 519.50&lt;/li&gt; &lt;li&gt;ನಾರಾಯಣಪುರ(ಮೀ.) 98% 492.12 492.10&lt;/li&gt; &lt;li&gt;ಮಲಪ್ರಭಾ 58% 2079.50 2066.10&lt;/li&gt;&lt;/ul&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/kabini-dam-released-4-tmc-water-to-tamil-nadu-in-just-9-days-current-water-levels-in-karnataka-reservoirs-rav/articleshow-xwercmk"/>
        </item>
        <item>
            <title><![CDATA[ಮಂಗಳೂರು KFC ಮಳಿಗೆ, ಮೈಸೂರಿನ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ! ಕೊಳೆತ ಮಾಂಸ ಪತ್ತೆ]]></title>
            <link>https://kannada.asianetnews.com/dakshina-kannada/food-safety-officials-raid-mangaluru-kfc-and-mysuru-hotels-rotten-meat-found-godown-seized-gkn/articleshow-z9q92pk</link>
            <guid isPermaLink="true">https://kannada.asianetnews.com/dakshina-kannada/food-safety-officials-raid-mangaluru-kfc-and-mysuru-hotels-rotten-meat-found-godown-seized-gkn/articleshow-z9q92pk</guid>
            <pubDate>Mon, 17 Aug 2026 21:53:59 +0530</pubDate>
            <description><![CDATA[&lt;p&gt;ಮಂಗಳೂರು ಮತ್ತು ಮೈಸೂರಿನ ಕೆಎಫ್&zwnj;ಸಿ ಹಾಗೂ ಪ್ರತಿಷ್ಠಿತ ಹೋಟೆಲ್&zwnj;ಗಳ ಮೇಲೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು, ದೊಡ್ಡ ಪ್ರಮಾಣದ ಕೊಳೆತ ಮತ್ತು ಅವಧಿ ಮುಗಿದ ಮಾಂಸವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಳಿಗೆಗಳ ಗೋಡೌನ್ ಸೀಜ್ ಮಾಡಲಾಗಿದ್ದು, ಆಹಾರದ ಮಾದರಿಗಳನ್ನು ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m037zrjrd87sqypwhsevghmn,imgname-raid-on-mangaluru-kfc-1786815439448.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಮೈಸೂರು:&lt;/strong&gt; ರಾಜ್ಯದ ಪ್ರಮುಖ ನಗರಗಳಾದ ಮಂಗಳೂರು ಮತ್ತು ಮೈಸೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ (FSSAI) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕೆಎಫ್&zwnj;ಸಿ (KFC) ಮಳಿಗೆ ಹಾಗೂ ಮೈಸೂರಿನ ಐಷಾರಾಮಿ ಹೋಟೆಲ್&zwnj;ಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಅಧಿಕಾರಿಗಳು, ಕೊಳೆತ ಹಾಗೂ ಅವಧಿ ಮುಗಿದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸಿಟಿ ಸೆಂಟರ್ KFC ಮೇಲೆ ದಾಳಿ&lt;/strong&gt;&lt;/h2&gt;&lt;p&gt;ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್&zwnj;ನಲ್ಲಿರುವ ಕೆಎಫ್&zwnj;ಸಿ ರೆಸ್ಟೋರೆಂಟ್ ಮೇಲೆ ಗ್ರಾಹಕರೊಬ್ಬರ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗ್ರಾಹಕರೊಬ್ಬರು ಆನ್&zwnj;ಲೈನ್&zwnj;ನಲ್ಲಿ ಆರ್ಡರ್ ಮಾಡಿದ್ದ ಚಿಕನ್ ಕೊಳೆತು ಹೋಗಿದ್ದು, ತೀವ್ರವಾಗಿ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಅಧಿಕಾರಿಗಳು ಕೆಎಫ್&zwnj;ಸಿ ಮಳಿಗೆಗೆ ಭೇಟಿ ನೀಡಿ ತಪಾಸಣೆ ನಡೆಸಿದಾಗ ಮೇಲ್ನೋಟಕ್ಕೆ ಕೊಳೆತ ಚಿಕನ್ ಪೀಸ್&zwnj;ಗಳು ಪತ್ತೆಯಾಗಿವೆ.&lt;/p&gt;&lt;h2&gt;&lt;strong&gt;ಹಳೆಯ ಮಾಂಸ ಜಪ್ತಿ&lt;/strong&gt;&lt;/h2&gt;&lt;p&gt;ತಪಾಸಣೆಯ ವೇಳೆ ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಹಳೆಯ ಕೋಳಿ ಮಾಂಸ ಪತ್ತೆಯಾಗಿದೆ. ಫ್ರೋಜನ್ ಚಿಕನ್ (Frozen Chicken) ತಿಂಗಳುಗಟ್ಟಲೆ ಬಳಕೆಗೆ ಯೋಗ್ಯವಾಗಿರುತ್ತದೆ ಎಂದು ಕೆಎಫ್&zwnj;ಸಿ ಸಿಬ್ಬಂದಿ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಅಧಿಕಾರಿಗಳು ಕೆಎಫ್&zwnj;ಸಿ ಮಳಿಗೆಯ ಗೋಡೌನ್ ಸೀಜ್ ಮಾಡಿದ್ದು, ಚಿಕನ್ ಹಾಗೂ ಬಳಸುತ್ತಿದ್ದ ಎಣ್ಣೆಯ ಮಾದರಿಗಳನ್ನು (Samples) ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ.ತಿಮ್ಮಯ್ಯ ಅವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಳಿಗೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು ಲ್ಯಾಬ್ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಐಷಾರಾಮಿ ಹೋಟೆಲ್&zwnj;ಗಳ ಮೇಲೂ ರೇಡ್!&lt;/strong&gt;&lt;/h2&gt;&lt;p&gt;ಇತ್ತ ಮೈಸೂರಿನಲ್ಲೂ ಆಹಾರ ಸುರಕ್ಷತಾ ಅಧಿಕಾರಿಗಳು ವಿವಿಧ ಹೋಟೆಲ್&zwnj;ಗಳ ಮೇಲೆ ದಾಳಿ ನಡೆಸಿದ್ದು, ಅವಧಿ ಮುಗಿದ ಮಾಂಸ ಪತ್ತೆಯಾಗಿದೆ.&lt;/p&gt;&lt;ul&gt; &lt;li&gt;&lt;strong&gt;ಗ್ರ್ಯಾಂಡ್ ಮರ್ಕ್ಯೂರ್ (Grand Mercure) ಹೋಟೆಲ್:&lt;/strong&gt; ಈ ಪ್ರತಿಷ್ಠಿತ ಹೋಟೆಲ್&zwnj;ನಲ್ಲಿ ಅವಧಿ ಮುಗಿದ ಸುಮಾರು 68 ಕೆಜಿ ಮಾಂಸವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.&lt;/li&gt; &lt;li&gt;&lt;strong&gt;ಕ್ಯೂ ಸ್ಟಾರ್ (Q Star) ಹೋಟೆಲ್:&lt;/strong&gt; ಇಲ್ಲಿಂದ 4 ಕೆಜಿ ಹಳೆಯ ಅಣಬೆಯನ್ನು (Mushrooms) ಜಪ್ತಿ ಮಾಡಲಾಗಿದೆ.&lt;/li&gt;&lt;/ul&gt;&lt;p&gt;ಇದಲ್ಲದೆ, ಮೈಸೂರಿನ ಮತ್ತೊಂದು ಹೋಟೆಲ್&zwnj;ನಿಂದ 9 ಕೆಜಿ ಹಳೆಯ ಕೋಳಿ ಮಾಂಸವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್&zwnj;ಗಳು ಮತ್ತು ತಾರಾ ಹೋಟೆಲ್&zwnj;ಗಳಲ್ಲೇ ಇಂತಹ ಗುಣಮಟ್ಟವಿಲ್ಲದ ಹಾಗೂ ಹಳೆಯ ಆಹಾರ ಪೂರೈಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಇನ್ನು ದಾಳಿ ಬೆನ್ನಲ್ಲೇ ಕೆಎಫ್&zwnj;ಸಿ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದೆ.&lt;/p&gt;&lt;h2&gt;&lt;strong&gt;ಕೆಎಫ್&zwnj;ಸಿ ಸ್ಪಷ್ಟನೆ&lt;/strong&gt;&lt;/h2&gt;&lt;p&gt;&lt;strong&gt;ಜವಾಬ್ದಾರಿಯುತ ಬ್ರ್ಯಾಂಡ್ ಆಗಿ, ಕೆಎಫ್&zwnj;ಸಿ (KFC) ಉನ್ನತ ಮಟ್ಟದ ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ನೈರ್ಮಲ್ಯವನ್ನು ಒದಗಿಸಲು ದೃಢವಾಗಿ ಬದ್ಧವಾಗಿದೆ. ಪ್ರಸ್ತುತ ಹರಿದಾಡುತ್ತಿರುವ ಮಾಹಿತಿಯು ನೈಜ ಸತ್ಯಗಳನ್ನು ಬಿಂಬಿಸುವುದಿಲ್ಲ. ನಮ್ಮ ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ಬಡಿಸುವ ನಿಟ್ಟಿನಲ್ಲಿ, ನಾವು ದೇಶದಾದ್ಯಂತ ಇರುವ ಪ್ರತಿಷ್ಠಿತ ಪೂರೈಕೆದಾರರಿಂದ ಉತ್ತಮ ಗುಣಮಟ್ಟದ ಚಿಕನ್ ಅನ್ನು ಪಡೆಯುತ್ತೇವೆ ಮತ್ತು FSSAI ಮಾರ್ಗಸೂಚಿಗಳ ಜೊತೆಗೆ ಕೆಲವು ಜಾಗತಿಕ ಗುಣಮಟ್ಟದ ಮಾನದಂಡಗಳನ್ನು ಸಕ್ರಿಯವಾಗಿ ಪಾಲಿಸುತ್ತೇವೆ.&lt;/strong&gt;&lt;/p&gt;&lt;p&gt;&lt;strong&gt;ನಾವು ಬಡಿಸುವ ಮತ್ತು ಸಂಗ್ರಹಿಸುವ ಚಿಕನ್ ನಿಯಮಾವಳಿಗಳ ಪ್ರಕಾರವೇ ಇರುತ್ತದೆ ಮತ್ತು ಅದನ್ನು ಪ್ರತಿದಿನ ಸ್ಟೋರ್&zwnj;ನಲ್ಲಿಯೇ ತಯಾರಿಸಲಾಗುತ್ತದೆ. ಪೂರೈಕೆದಾರರ ಫಾರ್ಮ್&zwnj;ನಿಂದ (ಕೋಳಿ ಸಾಕಾಣಿಕಾ ಕೇಂದ್ರದಿಂದ) ಗ್ರಾಹಕರ ತಟ್ಟೆಯನ್ನು ತಲುಪುವವರೆಗೆ, ಪ್ರತಿಯೊಂದು ತುಂಡು ಕೂಡ ಹಲವಾರು ಕಟ್ಟುನಿಟ್ಟಾದ ಗುಣಮಟ್ಟ ಮತ್ತು ಸುರಕ್ಷತಾ ತಪಾಸಣೆಗಳಿಗೆ ಒಳಪಡುತ್ತದೆ.&lt;/strong&gt;&lt;/p&gt;&lt;p&gt;&lt;strong&gt;ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಮತ್ತು ಅನ್ವಯವಾಗುವ ಕಾನೂನು ಹಾಗೂ ನಿಯಂತ್ರಣ ನಿಯಮಾವಳಿಗಳಿಗೆ ಅನುಗುಣವಾಗಿ ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. KFCಯ ಕಟ್ಟುನಿಟ್ಟಾದ ಅಡುಗೆಮನೆಯ ಕಾರ್ಯವಿಧಾನಗಳು ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಚ್ಛಿಸುವ ಯಾವುದೇ ಗ್ರಾಹಕರು ಕಿಚನ್ ಟೂರ್ (ಅಡುಗೆಮನೆಯ ವೀಕ್ಷಣೆ) ಗಾಗಿ ರೆಸ್ಟೋರೆಂಟ್ ಮ್ಯಾನೇಜರ್ ಅವರನ್ನು ಸಂಪರ್ಕಿಸಬಹುದು.&lt;/strong&gt;&lt;/p&gt;&lt;p&gt;&lt;strong&gt;ತಂಡದ ಪಿಆರ್ (PR), ಕೆಎಫ್&zwnj;ಸಿ ಇಂಡಿಯಾ&lt;/strong&gt;&lt;/p&gt;]]></content:encoded>
            <category>mysore</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/dakshina-kannada/food-safety-officials-raid-mangaluru-kfc-and-mysuru-hotels-rotten-meat-found-godown-seized-gkn/articleshow-z9q92pk"/>
        </item>
    </channel>
</rss>
