<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 06 Jun 2026 07:44:46 +0530</lastBuildDate>
        <atom:link href="https://kannada.asianetnews.com/rss/mysore" rel="self" type="application/rss+xml"/>
        <item>
            <title><![CDATA[₹422 ಕೋಟಿ ವೆಚ್ಚದಲ್ಲಿ ಜಿಲ್ಲೆಯ ರೈಲ್ವೆ ಅಭಿವೃದ್ಧಿ: ಚೆನ್ನೈ ಬುಲೆಟ್ ಟ್ರೈನ್ ಮೈಸೂರಿಗೆ ವಿಸ್ತರಿಸಲು ಸಂಸದರ ಮನವಿ]]></title>
            <link>https://kannada.asianetnews.com/karnataka-districts/mysuru-railway-station-makeover-chennai-bengaluru-high-speed-rail-extension-to-mysuru-mp-yaduveer-wodeyar-proposed-gdp/articleshow-1i1gdye</link>
            <guid isPermaLink="true">https://kannada.asianetnews.com/karnataka-districts/mysuru-railway-station-makeover-chennai-bengaluru-high-speed-rail-extension-to-mysuru-mp-yaduveer-wodeyar-proposed-gdp/articleshow-1i1gdye</guid>
            <pubDate>Wed, 03 Jun 2026 21:29:55 +0530</pubDate>
            <description><![CDATA[ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಮೈಸೂರು ರೈಲು ನಿಲ್ದಾಣದ ಮೇಲ್ದರ್ಜೆಗೇರಿಕೆ, ತೃತೀಯ ಪ್ರವೇಶ ದ್ವಾರ ನಿರ್ಮಾಣ ಹಾಗೂ ಚೆನ್ನೈ-ಮೈಸೂರು ಬುಲೆಟ್ ಟ್ರೈನ್ ಸಂಪರ್ಕ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೊಡಗಿನಲ್ಲಿ ಯಾವುದೇ ಹೊಸ ರೈಲು ಮಾರ್ಗ ನಿರ್ಮಾಣದ ಪ್ರಸ್ತಾವನೆ ಇಲ್ಲವೆಂದು ಸಚಿವರು ಸ್ಪಷ್ಟಪಡಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt73bhq7kned3aemqjzenhqy,imgname-mysuru-mp-yaduveer-wodeyar-1780502349542.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಸಾಂಸ್ಕೃತಿಕ ನಗರಿ ಮೈಸೂರನ್ನು ದಕ್ಷಿಣ ಭಾರತದ ಪ್ರಮುಖ ಮತ್ತು ಅತ್ಯಾಧುನಿಕ ರೈಲ್ವೆ ಹಬ್ ಆಗಿ ಪರಿವರ್ತಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಮೈಸೂರು ರೈಲು ನಿಲ್ದಾಣದ ಸಮಗ್ರ ಮೇಲ್ದರ್ಜೆಗೇರಿಕೆ, ಬಹುಕಾಲದ ಬೇಡಿಕೆಯಾದ ತೃತೀಯ ಪ್ರವೇಶ ದ್ವಾರದ (Third Entry) ನಿರ್ಮಾಣ ಹಾಗೂ ಬಹುನಿರೀಕ್ಷಿತ ಚೆನ್ನೈ&ndash;ಮೈಸೂರು ಹೈಸ್ಪೀಡ್ ರೈಲು (ಬುಲೆಟ್ ಟ್ರೈನ್) ಸಂಪರ್ಕದ ವಿಸ್ತರಣೆಗೆ ಸಂಬಂಧಿಸಿದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪ್ರಮುಖ ಭೇಟಿಯ ವೇಳೆ ಮೈಸೂರು ಮತ್ತು ಕೊಡಗು ಭಾಗದ ರೈಲ್ವೆ ಸಂಪರ್ಕ ವ್ಯವಸ್ಥೆ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ವಿವಿಧ ಯೋಜನೆಗಳ ಕುರಿತು ಕೇಂದ್ರ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು.&lt;/p&gt;&lt;h2&gt;₹422 ಕೋಟಿ ವೆಚ್ಚದ ಮೆಗಾ ಯೋಜನೆ: ತೃತೀಯ ಪ್ರವೇಶ ದ್ವಾರಕ್ಕೆ ಬೇಡಿಕೆ&lt;/h2&gt;&lt;p&gt;ಮೈಸೂರು ರೈಲು ನಿಲ್ದಾಣಕ್ಕೆ ದಿನದಿಂದ ದಿನಕ್ಕೆ ಪ್ರಯಾಣಿಕರ ಮತ್ತು ರೈಲುಗಳ ಸಂಚಾರದ ಒತ್ತಡ ಹೆಚ್ಚಾಗುತ್ತಲೇ ಇದೆ. ಇದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧಪಡಿಸಲಾಗಿರುವ ₹422 ಕೋಟಿ ವೆಚ್ಚದ ಬೃಹತ್ ಅಭಿವೃದ್ಧಿ ಯೋಜನೆಗೆ ತಕ್ಷಣವೇ ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ನೀಡುವಂತೆ ಸಂಸದ ಯದುವೀರ್ ಒಡೆಯರ್ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.&lt;/p&gt;&lt;h2&gt;ಯೋಜನೆಯ ಪ್ರಮುಖ ಪ್ರಯೋಜನಗಳು:&lt;/h2&gt;&lt;p&gt;&lt;strong&gt;ಒತ್ತಡ ನಿವಾರಣೆ&lt;/strong&gt;: ನಿಲ್ದಾಣದ ಪ್ರಸ್ತುತ ಇರುವ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಮೇಲಿನ ಅತಿಯಾದ ಜನದಟ್ಟಣೆ ಹಾಗೂ ವಾಹನ ದಟ್ಟಣೆಯನ್ನು ಈ ಮೂರನೇ ಪ್ರವೇಶ ದ್ವಾರವು ಗಣನೀಯವಾಗಿ ಕಡಿಮೆ ಮಾಡಲಿದೆ.&lt;/p&gt;&lt;p&gt;&lt;strong&gt;ಪ್ರಯಾಣಿಕರ ಅನುಕೂಲತೆ&lt;/strong&gt;: ನಿಲ್ದಾಣಕ್ಕೆ ಬರುವ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅತ್ಯಾಧುನಿಕ ಮೂಲಸೌಕರ್ಯಗಳು ಒಂದೇ ಸೂರಿನಡಿ ಲಭ್ಯವಾಗಲಿವೆ.&lt;/p&gt;&lt;p&gt;&lt;strong&gt;ಮಲ್ಟಿ-ಮೋಡಲ್ ಕನೆಕ್ಟಿವಿಟಿ: &lt;/strong&gt;ನಗರದ ವಿವಿಧ ಸಾರಿಗೆ ವ್ಯವಸ್ಥೆಗಳ (ಬಸ್, ಆಟೋ, ಟ್ಯಾಕ್ಸಿ) ನಡುವೆ ಸುಲಭ ಸಂಪರ್ಕ ಕಲ್ಪಿಸಲು ಇದು ಸಹಕಾರಿಯಾಗಲಿದ್ದು, ಮೈಸೂರಿನ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡಲಿದೆ.&lt;/p&gt;&lt;h2&gt;ಮೈಸೂರಿಗೆ ಬರಲಿದೆಯೇ ಬುಲೆಟ್ ಟ್ರೈನ್? ಹೈಸ್ಪೀಡ್ ರೈಲು ವಿಸ್ತರಣೆಗೆ ಪ್ರಸ್ತಾವನೆ!&lt;/h2&gt;&lt;p&gt;ಸಭೆಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಪ್ರಸ್ತುತ ಯೋಜಿತ ಹಂತದಲ್ಲಿರುವ ಚೆನ್ನೈ&ndash;ಬೆಂಗಳೂರು ಹೈಸ್ಪೀಡ್ ರೈಲು (High-Speed Rail Corridor) ಸಂಪರ್ಕವನ್ನು ಮೈಸೂರಿನವರೆಗೂ ವಿಸ್ತರಿಸುವಂತೆ ಸಂಸದರು ಬಲವಾದ ಒತ್ತಾಯ ಮಾಡಿದ್ದಾರೆ.&lt;/p&gt;&lt;p&gt;ಮೈಸೂರು ನಗರದ ಕಾರ್ಯತಂತ್ರದ ಪ್ರಾಮುಖ್ಯತೆ, ಹೆಚ್ಚುತ್ತಿರುವ ಕೈಗಾರಿಕೀಕರಣ ಮತ್ತು ದಿನೇ ದಿನೇ ಏರಿಕೆಯಾಗುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಒಡೆಯರ್, ರೈಲ್ವೆ ಸಚಿವಾಲಯವು ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಭವಿಷ್ಯದ ಯೋಜನೆಗಳು ಹಾಗೂ ತಾಂತ್ರಿಕ ಕಾರ್ಯಸಾಧ್ಯತಾ ಅಧ್ಯಯನಗಳಲ್ಲಿ (Feasibility Studies) 'ಮೈಸೂರು ವಿಸ್ತರಣೆ'ಯನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಬೇಕು ಎಂದು ವಿನಂತಿಸಿದರು. ಈ ಯೋಜನೆ ಸಾಕಾರಗೊಂಡರೆ ಮೈಸೂರು ಮತ್ತು ಕರಾವಳಿ-ಬೆಂಗಳೂರು ನಡುವಿನ ಆರ್ಥಿಕ ಕಾರಿಡಾರ್ ಅತ್ಯಂತ ಬಲಗೊಳ್ಳಲಿದೆ.&lt;/p&gt;&lt;h2&gt;ಕೊಡಗಿನ ರೈಲು ಮಾರ್ಗ ವಿವಾದಕ್ಕೆ ಪೂರ್ಣವಿರಾಮ: ಯಾವುದೇ ಪ್ರಸ್ತಾವನೆ ಇಲ್ಲ!&lt;/h2&gt;&lt;p&gt;ಇದೇ ಸಂದರ್ಭದಲ್ಲಿ, ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ಹೊಸ ರೈಲು ಯೋಜನೆಗಳ ಕುರಿತು ಸಾರ್ವಜನಿಕ ವಲಯದಲ್ಲಿ ಎದ್ದಿದ್ದ ಎಲ್ಲಾ ರೀತಿಯ ಊಹಾಪೋಹ ಹಾಗೂ ಆತಂಕಗಳಿಗೆ ಸಂಸದರು ಸ್ಪಷ್ಟನೆ ನೀಡಿದ್ದಾರೆ. ಕೊಡಗಿನ ಮೂಲಕ ಯಾವುದೇ ರೈಲು ಮಾರ್ಗವನ್ನು ನಿರ್ಮಿಸುವ ಯಾವುದೇ ಪ್ರಸ್ತಾವನೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಇಲ್ಲ ಎಂಬುದನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಯದುವೀರ್ ಒಡೆಯರ್ ತಿಳಿಸಿದ್ದಾರೆ. ಕೊಡಗಿನ ಪರಿಸರ ಸೂಕ್ಷ್ಮತೆ ಮತ್ತು ಪ್ರಾಕೃತಿಕ ಸಮತೋಲನಕ್ಕೆ ಧಕ್ಕೆಯಾಗದಂತೆ ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದ್ದು, ಇಂತಹ ಯಾವುದೇ ಯೋಜನೆಗಳು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ದೃಢಪಡಿಸುವ ಮೂಲಕ ಸ್ಥಳೀಯ ನಿವಾಸಿಗಳು ಹಾಗೂ ಪರಿಸರ ಪ್ರೇಮಿಗಳ ಆತಂಕವನ್ನು ಅವರು ಸಂಪೂರ್ಣವಾಗಿ ದೂರ ಮಾಡಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಸಾಂಸ್ಕೃತಿಕ ನಗರಿ ಮೈಸೂರಿನ ರೈಲ್ವೆ ಇತಿಹಾಸಕ್ಕೆ ಹೊಸ ಆಯಾಮ ನೀಡಬಲ್ಲ ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದ್ದು, ಮುಂಬರುವ ದಿನಗಳಲ್ಲಿ ಮೈಸೂರು ರೈಲು ನಿಲ್ದಾಣ ಉನ್ನತ ಮಟ್ಟದ ಸೌಲಭ್ಯಗಳನ್ನು ಹೊಂದಲಿದೆ ಎನ್ನಬಹುದು.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mysuru-railway-station-makeover-chennai-bengaluru-high-speed-rail-extension-to-mysuru-mp-yaduveer-wodeyar-proposed-gdp/articleshow-1i1gdye"/>
        </item>
        <item>
            <title><![CDATA[ಎಸ್ಐಆರ್‌ಗೆ ಕಾಂಗ್ರೆಸ್ ಆಕ್ಷೇಪ ಅನುಮಾನಕ್ಕೆಡೆ ಮಾಡಿದೆ: ಮಾಜಿ ಸಚಿವ ಸಾ.ರಾ.ಮಹೇಶ್]]></title>
            <link>https://kannada.asianetnews.com/karnataka-districts/sa-ra-mahesh-on-congress-sir-voter-list-karnataka-gvd/articleshow-3yoogae</link>
            <guid isPermaLink="true">https://kannada.asianetnews.com/karnataka-districts/sa-ra-mahesh-on-congress-sir-voter-list-karnataka-gvd/articleshow-3yoogae</guid>
            <pubDate>Wed, 27 May 2026 00:28:49 +0530</pubDate>
            <description><![CDATA[&lt;p&gt;ಎಸ್ಐಆರ್&zwnj;ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾದರೆ ಕಾಂಗ್ರೆಸ್ ನವರು 2023ರ ಚುನಾವಣೆಯಲ್ಲಿ ಯಾವ ರೀತಿ ಗೆದ್ದರು ಎಂಬ ಅನುಮಾನ ಕಾಡುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx23zkyrhj97744pd9qdhcmx,imgname-----------------------2025-06-06t132816.715-1749196722135.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮೇ.27): &lt;/strong&gt;ಎಸ್ಐಆರ್&zwnj;ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾದರೆ ಕಾಂಗ್ರೆಸ್ ನವರು 2023ರ ಚುನಾವಣೆಯಲ್ಲಿ ಯಾವ ರೀತಿ ಗೆದ್ದರು ಎಂಬ ಅನುಮಾನ ಕಾಡುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕಾಂಗ್ರೆಸ್ ನವರು ಯಾಕೆ ಆತಂಕಗೊಂಡಿದ್ದಾರೆ. ಕೆ.ಆರ್. ನಗರ, ಚಾಮರಾಜ, ನರಸಿಂಹರಾಜ ಸೇರಿದಂತೆ ವಿವಿಧ ಕ್ಷೇತ್ರಗಳ ಮತದಾರರ ಪಟ್ಟಿ ಸಿಗುತ್ತಿಲ್ಲ ಎಂದು ಆಡಳಿತ ಪಕ್ಷದವರೇ ಗಾಬರಿ ಬೀಳುತ್ತಿದ್ದಾರೆ.&lt;/p&gt;&lt;p&gt;ಹಾಗಿದ್ದರೆ 2023ರ ಚುನಾವಣೆ ಪಾರದರ್ಶಕವಾಗಿ ನಡೆದಿರಲಿಲ್ಲವೇ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಕೆ.ಆರ್. ನಗರದಲ್ಲಿ 18800 ಮತದಾರರ ವಿಳಾಸವೇ ಸಿಗುತ್ತಿಲ್ಲ. ಈಗ ಅವರೆಲ್ಲಾ ಎಲ್ಲಿಗೆ ಹೋದರು? ನಮಗೆ ಕಳೆದ ಚುನಾವಣೆ ಸರಿಯಾಗಿ ನಡೆದಿಲ್ಲ ಎಂಬ ಅನುಮಾನ ಕಾಡುತ್ತಿದೆ. ಅಷ್ಟಕ್ಕೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿರುವ ಬಿಎಲ್&zwnj;ಒ, ತಹಸೀಲ್ದಾರ್, ಎಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ನಿಮ್ಮದೇ ಸರ್ಕಾರದ ನೌಕರರು. ನಿಮಗೆ ನಿಮ್ಮದೇ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ? ಸತ್ತವರು, ಮದುವೆಯಾಗಿ ಹೋದವರ ಹೆಸರನ್ನು ಪಟ್ಟಿಯಿಂದ ತೆಗೆಯಲು ಹೊರಟರೆ ನಿಮಗೇಕೆ ಗಾಬರಿ? ಅರ್ಹ ಮತದಾರರಿದ್ದರೆ ಪಟ್ಟಿ ಪ್ರಕಟವಾದ ಮೇಲೂ ಹೆಸರು ಸೇರಿಸಲು ಅವಕಾಶವಿದೆ ಎಂದರು.&lt;/p&gt;&lt;h2&gt;&lt;strong&gt;ದ್ವೇಷ ರಾಜಕಾರಣ&lt;/strong&gt;&lt;/h2&gt;&lt;p&gt;ಕುಮಾರಸ್ವಾಮಿಯವರ ಕೇತಗಾನಹಳ್ಳಿ ತೋಟದ 50 ಎಕರೆ ಜಮೀನನ್ನು 40 ವರ್ಷಗಳ ಹಿಂದೆಯೇ ಕಾನೂನುಬದ್ಧವಾಗಿ ಖರೀದಿಸಿದ್ದಾರೆ. ಅದಕ್ಕೆ ಸ್ಪಷ್ಟ ದಾಖಲೆಗಳಿವೆ. ಯಾರೋ ಪುಣ್ಯಾತ್ಮ 14 ಎಕರೆ ಒತ್ತುವರಿ ಎಂದು ಸುಳ್ಳು ಹೇಳುತ್ತಿದ್ದಾನೆ. ರಾಜ್ಯದ ಇತಿಹಾಸದಲ್ಲಿ ಎಷ್ಟೋ ರಾಜಕಾರಣಿಗಳ ಭೂ ಒತ್ತುವರಿ ಪ್ರಕರಣಗಳು ಚರ್ಚೆಗೆ ಬಂದಿವೆ. ಆದರೆ, ಒಂದೇ ಒಂದು ಪ್ರಕರಣವನ್ನಾದರೂ ಎಸ್&zwnj;ಐಟಿಗೆ ಕೊಟ್ಟಿದ್ದೀರಾ?&lt;/p&gt;&lt;p&gt;ದೇವೇಗೌಡರ ಕುಟುಂಬ ಹಾಗೂ ಕುಮಾರಸ್ವಾಮಿ ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡಬೇಕು ಎನ್ನುವ ಏಕೈಕ ಉದ್ದೇಶದಿಂದಲೇ ಇದನ್ನು ಎಸ್&zwnj;ಐಟಿಗೆ ವಹಿಸಲಾಗಿದೆ. ಇದು ನೂರಕ್ಕೆ ನೂರು ದ್ವೇಷದ ರಾಜಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿಯವರ ಆಸ್ತಿ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಆಲೂಗೆಡ್ಡೆ ಬೆಳೆದು ಇಷ್ಟೊಂದು ಅಸ್ತಿ ಮಾಡಿದ್ದಾರಾ ಎಂದು ಪ್ರಶ್ನೆ ಮಾಡುತ್ತಾರೆ. ಕಾಂಗ್ರೆಸ್ ನವರು ಭತ್ತ, ರಾಗಿ, ಕಡೆಲೆಕಾಯಿ ಬೆಳೆದು ಆಸ್ತಿ ಸಂಪಾದಿಸಿದ್ದಾರೆಯೇ? ದೊಡ್ಡ ದೊಡ್ಡ ಬಂಗ್ಲೆ ಕಟ್ಟಲು ದುಡ್ಡು ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.&lt;/p&gt;&lt;p&gt;ಪಕ್ಷ ಸಂಘಟನೆಯಲ್ಲಿ ತೊಡಗಿರುವ ನಿಖಿಲ್ ಕುಮಾರಸ್ವಾಮಿ ನಿಮ್ಮನ್ನು ಪ್ರಶ್ನೆ ಮಾಡಿದರೆ ಇಷ್ಟೊಂದು ಬೇಸರ ಮಾಡಿಕೊಳ್ಳುತ್ತಿರುವುದೇಕೆ? ಅವರು ಮಂಡ್ಯದಲ್ಲಿ ಐದೂವರೆ ಲಕ್ಷ ಮತ ಪಡೆದಿದ್ದಾರೆ. ಇಂದು ಟೀಕೆ ಮಾಡುತ್ತಿರುವ ಕಾಂಗ್ರೆಸ್&zwnj; ನ ಯಾವ ನಾಯಕರೂ ಯಾವುದೇ ಚುನಾವಣೆಯಲ್ಲೂ ವೈಯಕ್ತಿಕವಾಗಿ ಅಷ್ಟೊಂದು ಮತ ಪಡೆದಿಲ್ಲ. ಜನರ ಬೆಂಬಲ ಇಲ್ಲದವರು ನಿಖಿಲ್ ಅವರನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಅವರು ತಿರುಗೇಟು ನೀಡಿದರು.&lt;/p&gt;&lt;p&gt;ರಾಜಕೀಯದಲ್ಲಿ ಟೀಕೆ- ಟಿಪ್ಪಣಿಗಳು ಸಹಜ. ಆದರೆ, ಸಾರ್ವಜನಿಕ ಜೀವನದಲ್ಲಿ ಭಾಷೆಯ ಮೇಲೆ ಇತಿಮಿತಿ ಇರಲಿ. ಇನ್ನೂ ಎರಡು ವರ್ಷ ನಿಮ್ಮದೇ ಸರ್ಕಾರ ಇರಬಹುದು&zwnj;. ಜನರೇ ಮುಂದಿನ ಚುನಾವಣೆಯಲ್ಲಿ ಸತ್ಯ ಯಾವುದು, ಅಸತ್ಯ ಯಾವುದು ಎಂಬುದನ್ನು ತೀರ್ಮಾನಿಸಲಿದ್ದಾರೆ ಎಂದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sa-ra-mahesh-on-congress-sir-voter-list-karnataka-gvd/articleshow-3yoogae"/>
        </item>
        <item>
            <title><![CDATA[ಹಿಜಾಬ್ ಸಮಾನತೆ ಸಂಕೇತ, ಕೇಸರಿ ಶಾಲು ಹಾಕಿ ಶಾಲೆಗೆ ಬಂದ್ರೆ ಕಾನೂನು ಕ್ರಮ: ಮಧು ಬಂಗಾರಪ್ಪ ಎಚ್ಚರಕೆ!]]></title>
            <link>https://kannada.asianetnews.com/state/legal-action-if-students-wear-saffron-shawls-to-school-minister-madhu-warning-rav/articleshow-4ddi68m</link>
            <guid isPermaLink="true">https://kannada.asianetnews.com/state/legal-action-if-students-wear-saffron-shawls-to-school-minister-madhu-warning-rav/articleshow-4ddi68m</guid>
            <pubDate>Sun, 24 May 2026 06:55:51 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರ ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವುದನ್ನ ಹಿಂದೂ ಸಂಘಟನೆಗಳು ತೀವ್ರ ವಿರೋಧಿಸಿದ್ದು ತಮ್ಮ ಮಕ್ಕಳಿಗೆ ಕೇಸರಿ ಶಾಲು ಹಾಕಿ ಶಾಲೆಗೆ ಕಳಿಸುವುದಾಗಿ ನಿರ್ಧಾರ ಮಾಡಿದ್ದಾರೆ ಇದಕ್ಕೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, ಕೇಸರಿ ಶಾಲು ಅವಕಾಶವಿಲ್ಲ ಎಂದು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jd6vbwbj497jtf9z0rqx0z0g,imgname-madhu-bangarappa.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮೇ.24):&lt;/strong&gt; ಹಿಜಾಬ್ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇದೆ. ಬಿಜೆಪಿಯವರಿಗೆ ಅದು ಹಿಜಾಬ್. ನಮಗೆ ಅದು ಸಮಾನತೆ ಸಂಕೇತ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.&amp;nbsp;&lt;/p&gt;&lt;h2&gt;ನಮ್ಮ ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ:&lt;/h2&gt;&lt;p&gt;ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರೀಯ ವಿದ್ಯಾಲಯದಲ್ಲಿ ಯಾವ ನಿಯಮ ಇದೆ ಎಂಬುದನ್ನು ಮೊದಲು ಬಿಜೆಪಿಯವರು ನೋಡಿಕೊಂಡು ಬರಲಿ. ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೊದಲು ಕೇಸರಿ ಶಾಲು ಹಾಕಿಸಿ ಕಳುಹಿಸಲಿ. ನಮ್ಮ ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶ ಇಲ್ಲ. ಯಾರದರೂ ಹಾಕಿಕೊಂಡು ಬಂದರೆ ಕಾನೂನಿನ ಪ್ರಕಾರ ಕ್ರಮ ಆಗುತ್ತದೆ ಎಂದರು. ಹಿಜಾಬ್ ಬಗ್ಗೆ ನಾವು ನಮ್ಮ ಪ್ರಣಾಳಿಕೆಯಲ್ಲೇ ಹೇಳಿದ್ದೇವು. ನಮಗೆ ಜನ ಮತ ಕೊಟ್ಟಿದ್ದಾರೆ ಅದಕ್ಕಾಗಿ ನಾವು ಮತ ಕೊಟ್ಟ ಜನರ ಖುಣ ತಿರಿಸಿದ್ದೇವೆ&zwnj; ಎಂದು ಸ್ಪಷ್ಟಪಡಿಸಿದರು.&lt;/p&gt;&lt;h3&gt;ನನಗೆ ಉಗಿದ್ರೆ ನಾನು ಅವರಿಗೆ ಉಗಿಯುತ್ತೇನೆ:&amp;nbsp;&lt;/h3&gt;&lt;p&gt;ನನಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ. ನನಗೆ ಕನ್ನಡ ಬರೆಯುವುದು ಕಷ್ಟ. ನನ್ನ ಕನ್ನಡ ಬರವಣಿಗೆ ಬಗ್ಗೆ ಪ್ರಶ್ನೆ ಮಾಡುವ ಬಿಜೆಪಿಗರು&zwnj; ನನಗೆ ಪಾಠ ಮಾಡಿದ ಕನ್ನಡ ಮೇಷ್ಟ್ರನ್ನ ಹುಡುಕಿ ತರಲಿ. ಆಗ ಕನ್ನಡ ಮೇಷ್ಟ್ರು ಜೊತೆ ಆ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇನೆ. ನನಗೆ ಯಾರಾದರೂ ಉಗಿದರೆ ನಾನು ಅವರಿಗೆ ಕ್ಯಾಕರಿಸಿ ಉಗಿಯುತ್ತೇನೆ ಎಂದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/legal-action-if-students-wear-saffron-shawls-to-school-minister-madhu-warning-rav/articleshow-4ddi68m"/>
        </item>
        <item>
            <title><![CDATA[ಕರ್ನಾಟಕದಿಂದ ಸೋಲಾಪುರ ಮಾರ್ಗವಾಗಿ ಹೋಗುವ ಹಲವು ರೈಲು ಸಂಚಾರ ನಿರ್ಬಂಧ, ಜೂ. 5ರಿಂದ10ರವರೆಗೆ ಹಲವು ಟ್ರೈನ್ ರದ್ದು!]]></title>
            <link>https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</link>
            <guid isPermaLink="true">https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</guid>
            <pubDate>Fri, 05 Jun 2026 12:14:53 +0530</pubDate>
            <description><![CDATA[ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ನಡೆಯುತ್ತಿರುವ ಮೇಲ್ದರ್ಜೆ ಕಾಮಗಾರಿಯಿಂದಾಗಿ ಕೇಂದ್ರ ರೈಲ್ವೆಯು ಜೂನ್ 5 ರಿಂದ 10 ರವರೆಗೆ ಹಲವು ರೈಲುಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ಕೆಲವು ರೈಲುಗಳ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ ಹಾಗೂ ಸೋಲಾಪುರ-ಕಲಬುರಗಿ ವಿಶೇಷ ರೈಲು ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks4rgymmydvxhdywfct5zw88,imgname-indian-railways--2--1779350141588.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ಮೇಲ್ದರ್ಜೆ ಕಾಮಗಾರಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಇಂಟರ್&zwnj;ಲಾಕಿಂಗ್&zwnj;ನ್ನು ನಿಯೋಜಿಸಲು ಪೂರ್ವ-ಇಂಟರ್&zwnj;ಲಾಕಿಂಗ್ ಅಲ್ಲದ ಮತ್ತು ಇಂಟರ್&zwnj;ಲಾಕಿಂಗ್ ಅಲ್ಲದ ಕೆಲಸದಿಂದಾಗಿ ಜೂನ್ 5ರಿಂದ 10ರವರೆಗೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಹಲವು ರೈಲುಗಳ ಮೇಲೆ ಸಂಚಾರ ನಿರ್ಬಂಧ ವಿಧಿಸಿದೆ.&lt;/p&gt;&lt;h2&gt;ನಿಯಂತ್ರಣ ಯಾವ ರೈಲುಗಳ ಮೇಲೆ ?&lt;/h2&gt;&lt;p&gt;ಜೂನ್&zwnj; 5 ರಂದು ರೈಲು ಸಂಖ್ಯೆ 11311 ಸೋಲಾಪುರ-ಹಾಸನ ಎಕ್ಸ್&zwnj;ಪ್ರೆಸ್ ಹಾಗೂ ರೈಲು ಸಂಖ್ಯೆ 17308 ಬಾಗಲಕೋಟೆ- ಮೈಸೂರು ಬಸವಾ ಎಕ್ಸ್&zwnj;ಪ್ರೆಸ್ ಸಂಚಾರದ ಮೇಲೆ 45 ನಿಮಿಷಗಳ ನಿಯಂತ್ರಣವಿರಲಿದೆ. ಜೂ. 8 ರಂದು ರೈಲು ಸಂಖ್ಯೆ 18520 ಎಲ್&zwnj;ಟಿಟಿ ಮುಂಬೈ- ವಿಶಾಖಪಟ್ಟಣ ಎಕ್ಸ್&zwnj;ಪ್ರೆಸ್ಜೂ 2 ಗಂಟೆ, ರೈಲು ಸಂಖ್ಯೆ 01465 ಸೋಲಾಪುರ-ಕಲಬುರಗಿ ವಿಶೇಷ 1 ಗಂಟೆ 30 ನಿಮಿಷ, ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ 30 ನಿಮಿಷ, ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 30 ನಿಮಿಷ ನಿಯಂತ್ರಣದಲ್ಲಿರಲಿವೆ.&lt;/p&gt;&lt;p&gt;ಜೂನ್&zwnj; 9 ರಂದು ರೈಲು ಸಂಖ್ಯೆ 16382 ಕನ್ಯಾಕುಮಾರಿ-ಪುಣೆ ಎಕ್ಸ್&zwnj;ಪ್ರೆಸ್ 1 ಗಂಟೆ 15 ನಿಮಿಷ, ರೈಲು ಸಂಖ್ಯೆ 11020 ಭುವನೇಶ್ವರ- ಸಿಎಸ್&zwnj;ಎಂಟಿ ಮುಂಬೈ ಎಕ್ಸ್&zwnj;ಪ್ರೆಸ್ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.&lt;/p&gt;&lt;h2&gt;ಕೆಲವು ರೈಲು ಮಾರ್ಗ ಬದಲಾವಣೆ:&lt;/h2&gt;&lt;p&gt;ರೈಲು ಸಂಖ್ಯೆ 57662 ವಿಜಯಪುರ-ರಾಯಚೂರು ಪ್ಯಾಸೆಂಜರ್ ಜೂ. 5 ರಿಂದ 10 ರ ವರೆಗೆ ವಿಜಯಪುರ-ಹೋಟ್ಗಿ-ವಾಡಿ ಮಾರ್ಗ, ರೈಲು ಸಂಖ್ಯೆ 57661 ರಾಯಚೂರು-ವಿಜಯಪುರ ಪ್ಯಾಸೆಂಜರ್ ವಾಡಿ-ಹೋಟ್ಗಿ-ವಿಜಯಪುರ ಮೂಲಕ ಮಾರ್ಗ ಬದಲಾವಣೆ ಮಾಡಲಾಗುತ್ತದೆ.&lt;/p&gt;&lt;p&gt;ಕೆಳಗಿನ ರೈಲುಗಳನ್ನು ನಿರ್ದಿಷ್ಟಪಡಿಸಿದಂತೆ ಮರುಹೊಂದಿಸಲಾಗುತ್ತದೆ. ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ ಜೂ. 10 ರಂದು 2 ಗಂಟೆ 20 ನಿಮಿಷಗಳ ಕಾಲ ಮತ್ತು ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 2 ಗಂಟೆ 15 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ.&lt;/p&gt;&lt;p&gt;ರೈಲು ಸಂಖ್ಯೆ 01465 ಸೋಲಾಪುರ- ಕಲಬುರಗಿ ಮತ್ತು ರೈಲು ಸಂಖ್ಯೆ 01466 ಕಲಬುರಗಿ- ಸೋಲಾಪುರ ಈ ರೈಲು ಜೂ. 10 ರಂದು ರದ್ದು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep"/>
        </item>
        <item>
            <title><![CDATA[ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನು ಬದಲಿಸಿ: ಸಿಎಂಗೆ ಎಚ್.ವಿಶ್ವನಾಥ್ ಮನವಿ ಮಾಡಿದ್ದೇಕೆ?]]></title>
            <link>https://kannada.asianetnews.com/karnataka-districts/h-vishwanath-demand-remove-madhu-bangarappa-education-minister-gvd/articleshow-7atesof</link>
            <guid isPermaLink="true">https://kannada.asianetnews.com/karnataka-districts/h-vishwanath-demand-remove-madhu-bangarappa-education-minister-gvd/articleshow-7atesof</guid>
            <pubDate>Tue, 26 May 2026 21:24:49 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಶಾಲಾ ಶಿಕ್ಷಣ ಅದೋಗತಿಗೆ ತಲುಪಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಮನವಿ ಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k58jy7edw0bpkp2j274gvyhb,imgname-eev-1758003666381.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮೇ.26): &lt;/strong&gt;ರಾಜ್ಯದಲ್ಲಿ ಶಾಲಾ ಶಿಕ್ಷಣ ಅದೋಗತಿಗೆ ತಲುಪಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಮನವಿ ಮಾಡಿದರು. ಪಿಯುಸಿ ಫೇಲ್ ಆಗಿರುವ ಮಧು ಬಂಗಾರಪ್ಪ ಅವರನ್ನು ಶಿಕ್ಷಣ ಖಾತೆಯಿಂದ ತೆಗೆದು ಬೇರೆ ಖಾತೆ ಕೊಡಿ. ಶಾಲಾ ಶಿಕ್ಷಣದ ಬಗ್ಗೆ, ಕನ್ನಡದ ಬಗ್ಗೆ ಅಭಿಮಾನ ಇರುವ ಶಾಸಕಗೆ ಶಿಕ್ಷಣ ಖಾತೆ ನೀಡಿ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕೋರಿದರು.&lt;/p&gt;&lt;p&gt;ರಾಜ್ಯದ ಶಾಲಾ ಶಿಕ್ಷಣದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಾಹಿತಿ ದೇವನೂರು ಮಹದೇವು ಅವರನ್ನು ಭೇಟಿ ಮಾಡಿದ ಬಳಿಕ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಹೊರಟಿದ್ದಾರೆ. ಕಳೆದ ಮೂರು ವರ್ಷದಿಂದ ಶಿಕ್ಷಣ ಸಚಿವರು ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಈ ಸಾಲಿನಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡುತ್ತೇವೆಂದು ಹೇಳಿದ್ದಾರೆ. ಆದರೆ, ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಶಿಕ್ಷಕರು ಎಲ್ಲಿದ್ದಾರೆ ಎಂದು ಅವರು ಪ್ರಶ್ನಿಸಿದರು.&lt;/p&gt;&lt;p&gt;6ನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡ್ತೇವೆ ಎಂದಿದ್ದಾರೆ. 3ನೇ ತರಗತಿಯಿಂದ ದೈಹಿಕ ಶಿಕ್ಷಣ, ಕಲೆ, ಸಾಹಿತ್ಯ ಬೋಧನೆ ಮಾಡ್ತೇವೆ ಎಂದಿದ್ದಾರೆ. ಇದಕ್ಕೆಲ್ಲ ಶಿಕ್ಷಕರು ಎಲ್ಲಿದ್ದಾರೆ? ಶಿಕ್ಷಣ ಸಚಿವರು ಬರೀ ಬೊಗಳೆ ಬಿಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ಅಧೋಗತಿಗೆ ಕೊಂಡೊಯ್ಯುತ್ತಿದ್ದಾರೆ. 5 ವರ್ಷದಲ್ಲಿ ಎಲ್ಲಾ ಖಾಸಗಿ ಶಾಲೆಗಳನ್ನು ಮುಚ್ಚಿಸಿ ಸರ್ಕಾರಿ ಶಾಲೆಗಳನ್ನಾಗಿ ಮಾಡ್ತೀವಿ ಅಂದಿದ್ದಾರೆ. ಇದು ಸಾಧ್ಯವೇ ಎಂದು ಅವರು ಕಿಡಿಕಾರಿದರು.&lt;/p&gt;&lt;p&gt;ಶಿಕ್ಷಣ ತಜ್ಞರ ಸಮಿತಿಯನ್ನೇ ಮಾಡಿಲ್ಲ. ಶಿಕ್ಷಣ ಇಲಾಖೆಯಲ್ಲಿ ಯಾವುದೇ ಮಾರ್ಗಸೂಚಿಗಳನ್ನು ಪ್ರಕಟಿಸಿಲ್ಲ. ಮಕ್ಕಳ&zwnj; ಮುಗ್ಧ ಮನಸ್ಸಿನ ಮೇಲೆ ಒತ್ತಡ ಹೇರಲು ಹೊರಟಿದ್ದಾರೆ. ಶಿಕ್ಷಣ ಸಚಿವರಿಗೆ ನೈತಿಕತೆ ಇಲ್ಲ. ಶಿಕ್ಷಣ ಸಚಿವರ ಹೇಳಿಕೆ ನಗೆಪಾಟಲಿನಂತಿವೆ. ಇದು ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾಗಿದ್ದು ಬರೀ ಸುಳ್ಳಿನ&zwnj;ಇಕಂತೆಯಾಗಿದೆ. ಮುಖಅಯಮಂತ್ರಿಗಳು ಇತ್ತ ಗಮನ ಹರಿಸಬೇಕು. ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನು ಬದಲಿಸಿ, ಅನುಭವವಿರುವ ಶಾಸಕನಿಗೆ ಶಿಕ್ಷಣ ಖಾತೆ ನೀಡಬೇಕು ಎಂದು ಅವರು ತಿಳಿಸಿದರು.&lt;/p&gt;&lt;h2&gt;&lt;strong&gt;ನಾನು ಯಾವುದೇ ಹಣ ಪಡೆದಿಲ್ಲ&lt;/strong&gt;&lt;/h2&gt;&lt;p&gt;ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್ ಅವರು, ಯಾವೋನ್ರೀ ಅವನು ಕೋಟೆಹುಂಡಿ ಮಹದೇವು. ನಾನೊಬ್ಬ ಸೀನಿಯರ್ ಪೊಲೊಟಿಷಿಯನ್. ಅವನ ಜೊತೆಗೆ ನನ್ನನ್ನು ಹೋಲಿಕೆ ಮಾಡ್ಬೇಡಿ. ನಾನು ಕೋಟೆಹುಂಡಿ ಮಹದೇವು ಬಳಿ ಯಾವುದೇ ಹಣ ಪಡೆದಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದರು.&lt;/p&gt;&lt;p&gt;ಎಂ.ಟಿ.ಬಿ ನಾಗರಾಜ್ ಹಾಗೂ ನಾನು ಒಳ್ಳೆಯ ಸ್ನೇಹಿತರು. ನನಗೆ ಹಣ ಕೊಟ್ಟಿದ್ರೇ ಎಂಟಿಬಿ ನಾಗರಾಜ್ ಕೇಳ್ತಾರೆ. ಮಧ್ಯದಲ್ಲಿ ಇವನ್ಯಾರ್ರೀ ಕೇಳೋಕೆ?. ನಾನು ಹಿರಿಯ ನಾಯಕ, ನನ್ನ ಬಗ್ಗೆ ಮಾತನಾಡುವ ಮೊದಲು ಯೋಚನೆ ಮಾಡಲಿ. ನಾನು ಕೂಡ ಒಬ್ಬ ವಕೀಲ. ಈಗಾಗಲೇ ನನ್ನ ಮೇಲೆ ಐದು ಕೇಸು ಹಾಕಿದ್ದಾರೆ. ಸಚಿವ ಭೈರತಿ ಸುರೇಶ್ 50 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದು, ನನ್ನ ಮೇಲೆ ಕೇಸ್ ಹಾಕಿರುವವರೆಲ್ಲ ಸಿದ್ದರಾಮಯ್ಯನ ಚೇಲಾಗಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/h-vishwanath-demand-remove-madhu-bangarappa-education-minister-gvd/articleshow-7atesof"/>
        </item>
        <item>
            <title><![CDATA[ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಕ್ಕೆ ಮನವಿ; ರೂಟ್‌ ಈ ರೀತಿಯಾಗಿರಲಿದೆ]]></title>
            <link>https://kannada.asianetnews.com/gallery/travel/indian-railways-request-to-start-direct-train-service-from-mysuru-to-visakhapatnam-mrq-8ac50s5</link>
            <guid isPermaLink="true">https://kannada.asianetnews.com/gallery/travel/indian-railways-request-to-start-direct-train-service-from-mysuru-to-visakhapatnam-mrq-8ac50s5</guid>
            <pubDate>Tue, 02 Jun 2026 07:55:12 +0530</pubDate>
            <description><![CDATA[ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಿಸುವಂತೆ ದಾವಣಗೆರೆ ರೈಲ್ವೆ ಪ್ರಯಾಣಿಕರ ಸಂಘವು ನೈಋತ್ಯ ರೈಲ್ವೆಗೆ ಮನವಿ ಮಾಡಿದೆ. ಈ ಹೊಸ ಮಾರ್ಗವು ಮೈಸೂರು, ದಾವಣಗೆರೆ, ಹೊಸಪೇಟೆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಹಂಪಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt322tpzbzxg9c6sx1mr7h21,imgname-indian-railways--1--1780366797535.jpg" type="image/jpeg" height="390" width="690"/>
            <content:encoded><![CDATA[ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಿಸುವಂತೆ ದಾವಣಗೆರೆ ರೈಲ್ವೆ ಪ್ರಯಾಣಿಕರ ಸಂಘವು ನೈಋತ್ಯ ರೈಲ್ವೆಗೆ ಮನವಿ ಮಾಡಿದೆ. ಈ ಹೊಸ ಮಾರ್ಗವು ಮೈಸೂರು, ದಾವಣಗೆರೆ, ಹೊಸಪೇಟೆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಹಂಪಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.&lt;img&gt;&lt;p&gt;ಮೈಸೂರು, ದಾವಣಗೆರೆ, ಹೊಸಪೇಟೆ, ಬಳ್ಳಾರಿ ಭಾಗದ ಸಾವಿರಾರು ಪ್ರಯಾಣಿಕರು ಆಂಧ್ರ ಪ್ರದೇಶದ ಪ್ರಮುಖ ನಗರವಾದ ವಿಶಾಖಪಟ್ಟಣಂಗೆ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ಪ್ರವಾಸ ಉದ್ದೇಶಗಳಿಂದ ಪ್ರಯಾಣಿಸುತ್ತಿದ್ದಾರೆ. ಆದರೆ, ಈ ಮಾರ್ಗದಲ್ಲಿ ನೇರ ರೈಲು ಸೇವೆಯ ಕೊರತೆಯಿಂದ ಪ್ರಯಾಣಿಕರು ಬೆಂಗಳೂರಿನಲ್ಲಿ ರೈಲು ಬದಲಾಯಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಪ್ರಸ್ತುತ ಮೈಸೂರು- ವಿಶಾಖಪಟ್ಟಣಂ ನಡುವೆ ಸೀಮಿತ ನೇರ ಸಂಪರ್ಕ ಮಾತ್ರ ಲಭ್ಯವಿದೆ. ಆದ್ದರಿಂದ ಈ ರೀತಿ ಮಾರ್ಗದಲ್ಲಿ ಹೊಸ ದೈನಂದಿನ ವಾರಾಂತ್ಯ ಎಕ್ಸ್ ಪ್ರೆಸ್&zwnj; ರೈಲು ಆರಂಭಿಸುವಂತೆ ದಾವಣಗೆರೆ ನೈಋತ್ಯ ರೈಲ್ವೆ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್.ಜೈನ್ ನೈಋತ್ಯ ರೈಲ್ವೆ ಮಹಾ ಪ್ರಬಂಧಕರಿಗೆ ಪತ್ರ ಬರೆದು ಮೇಲ್ ಮೂಲಕ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಮೈಸೂರು- ತುಮಕೂರು- ದಾವಣಗೆರೆ- ಹೊಸಪೇಟೆ- ಬಳ್ಳಾರಿ- ಗೂಟಿ- ವಿಜಯವಾಡ- ವಿಶಾಖಪಟ್ಟಣಂ ರೈಲು ಸೇವೆಯನ್ನು ಮಾಡುವುದರಿಂದ ದಾವಣಗೆರೆ ಮತ್ತು ಮಧ್ಯ ಕರ್ನಾಟಕಕ್ಕೆ ಆಂಧ್ರ ಪ್ರದೇಶದೊಂದಿಗೆ ಉತ್ತಮ ಸಂಪರ್ಕ ಸಿಗುತ್ತದೆ. ಹೊಸಪೇಟೆ- ಹಂಪಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಮಾರ್ಗದ ಪ್ರಯಾಣ ಒತ್ತಡ ಕಡಿಮೆಯಾಗುತ್ತದೆ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಹಲವು ರೈಲು ಬಳಕೆದಾರ ಸಂಘಗಳು ಹೊಸ ರೈಲುಗಳು ಹಾಗೂ ಹೊಸ ಮಾರ್ಗಗಳ ಬೇಡಿಕೆ ಸಲ್ಲಿಸಿರುವುದು ಗಮನಾರ್ಹವಾಗಿದೆ. ಆದ್ದರಿಂದ ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ ಶೀಘ್ರವೇ ಈ ಹೊಸ ನೇರ ರೈಲು ಸೇವೆಯನ್ನು ಘೋಷಿಸುವಂತೆ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/travel/indian-railways-request-to-start-direct-train-service-from-mysuru-to-visakhapatnam-mrq-8ac50s5"/>
        </item>
        <item>
            <title><![CDATA[ಪುತ್ರನ ಸನಾತನ ಧರ್ಮ ನಾಶ ಹೇಳಿಕೆ ಬೆನ್ನಲ್ಲೇ ಚಾಮುಂಡಿಬೆಟ್ಟಕ್ಕೆ ಸ್ಟಾಲಿನ್‌ ಪತ್ನಿ ದುರ್ಗಾ ಭೇಟಿ, ವಿಶೇಷ ಪೂಜೆ!]]></title>
            <link>https://kannada.asianetnews.com/karnataka-districts/mk-stalin-s-wife-durga-visits-chamundi-hills-mysuru-offers-special-prayers-rav/articleshow-aaol31n</link>
            <guid isPermaLink="true">https://kannada.asianetnews.com/karnataka-districts/mk-stalin-s-wife-durga-visits-chamundi-hills-mysuru-offers-special-prayers-rav/articleshow-aaol31n</guid>
            <pubDate>Tue, 02 Jun 2026 04:30:38 +0530</pubDate>
            <description><![CDATA[&lt;p&gt;ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸನಾತನ ಧರ್ಮದ ಬಗ್ಗೆ ಪುತ್ರ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt2pfnt25gtqxff2qkwr7n4j,imgname-----------------------2026-06-02t042526.856-1780354635586.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜು.2):&lt;/strong&gt; ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(MK Stalin) ಅವರ ಪತ್ನಿ ದುರ್ಗಾ(Durga stalin) ಅವರು ಸೋಮವಾರ ಚಾಮುಂಡಿ ಬೆಟ್ಟ(Chamundi betta)ಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.&amp;nbsp;&lt;/p&gt;&lt;h3&gt;ಮಗ ಸನಾತನ ಧರ್ಮ ನಾಶಕ್ಕೆ ಪಣ, ತಾಯಿ ದೈವಾರಾಧಕಳು!&lt;/h3&gt;&lt;p&gt;ಸ್ಟಾಲಿನ್&zwnj; ಅವರ ಪುತ್ರ, ಮಾಜಿ ಡಿಸಿಎಂ ಹಾಗೂ ಹಾಲಿ ತಮಿಳುನಾಡು ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್&zwnj; ಸನಾತನ ಧರ್ಮ ನಾಶ(Destruction of Sanatan Dharma) ಮಾಡಬೇಕು ಎಂದು ಇತ್ತೀಚೆಗೆ ವಿಧಾನಸಭೆಯ ಕಲಾಪದಲ್ಲಿಯೇ ಹೇಳಿಕೆ ನೀಡಿದ್ದರು. ಆದರೆ ಅವರ ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿರುವುದು ಮಹತ್ವ ಪಡೆದುಕೊಂಡಿದೆ.&lt;/p&gt;&lt;p&gt;ದೇವಾಲಯಕ್ಕೆ ತೆರಳಿದ ನಂತರ ದುರ್ಗಾ ಸ್ಟಾಲಿನ್&zwnj; ಅವರು ನಗರದ ವಿ.ವಿ.ಮೊಹಲ್ಲಾದಲ್ಲಿರುವ ಶಾಸಕ ಜಿ.ಟಿ. ದೇವೇಗೌಡರ(GT Devegowd) ನಿವಾಸಕ್ಕೆ ಭೇಟಿ ನೀಡಿ, ಜಿಟಿಡಿ ಕುಟುಂಬ ಆತಿಥ್ಯ ಸ್ವೀಕರಿಸಿದರು.&lt;/p&gt;&lt;p&gt;. ಜಿ.ಟಿ.ದೇವೇಗೌಡ ಹಾಗೂ ಅವರ ಪತ್ನಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೂ ಆದ ಕೆ.ಲಲಿತಾ ಮತ್ತು ಕುಟುಂಬದವರು ದುರ್ಗಾ ಅವರನ್ನು ಸ್ವಾಗತಿಸಿ&lt;/p&gt;&lt;p&gt;ಕೊಡಗಿನ ಖಾಸಗಿ ರೆಸಾರ್ಟ್&zwnj;ನಲ್ಲಿ ಉಳಿದುಕೊಂಡಿದ್ದ ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬದವರು, ಸೋಮವಾರ ಕೊಡಗಿನಿಂದ ಮೈಸೂರಿಗೆ ರಸ್ತೆ ಮೂಲಕ ಪೊಲೀಸರ ಭದ್ರತೆಯಲ್ಲಿ ಆಗಮಿಸಿದರು. ನಂತರ ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ.&lt;/p&gt;&lt;h2&gt;ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೂ ಭೇಟೀ&lt;/h2&gt;&lt;p&gt;ಅತ್ತ ಮಗ ಸನಾತನ ಹಿಂದೂ ಧರ್ಮವನ್ನು ಉಗ್ರವಾಗಿ ದೂಷಿಸುತಿದ್ದರೆ, ಇತ್ತ ತಾಯಿ ಮಾತ್ರ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.&lt;/p&gt;&lt;p&gt;ಈ ಹಿಂದೆ ಮಗನ ಹೇಳಿಕೆ ವಿವಾದ ನಡುವೆ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪತ್ನಿ ದುರ್ಗಾ, ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು, ಮಾತ್ರವಲ್ಲ ತಾಯಿ ಮೂಕಾಂಬಿಕೆಗೆ ಚಿನ್ನದ ಕಿರೀಟವನ್ನೂ ಒಪ್ಪಿಸಿದ್ದರು.&lt;/p&gt;&lt;p&gt;ತಮಿಳುನಾಡಿನ ಸಾಕಷ್ಟು ಮಂದಿಯಂತೆ ದುರ್ಗಾ ಅವರು ಕೊಲ್ಲೂರು ಮೂಕಾಂಬಿಕೆಯ ವಿಶೇಷ ಭಕ್ತೆಯಾಗಿದ್ದಾರೆ. ಅವರು ತನ್ನ ಕೆಲವು ಸ್ನೇಹಿತೆಯರೊಂದಿಗೆ ಕೊಲ್ಲೂರು ದೇವಾಲಯಕ್ಕೆ ಆಗಾಗ ಭೇಟಿ ನೀಡಿದ್ದಾರೆ. ಇದೀಗ ಇತ್ತೀಚೆಗೆ ನಡೆದ ತಮಿಳನಾಡು ಚುನಾವಣೆಯಲ್ಲಿ ಎಂಕೆ ಸ್ಟಾಲಿನ್, ಉದಯನಿಧಿ ಸ್ನಾಲಿನ್ ಹೀನಾಯ ಸೋಲಿನ ಬಳಿಕ ಚಾಮುಂಡೇಶ್ವರಿ ದೇವಿಯ ಸನ್ನಿಧಿಗೆ ಬಂದಿರುವುದು ಮಹತ್ವ ಪಡೆದುಕೊಂಡಿದೆ.&lt;/p&gt;&lt;p&gt;ತಂದೆ ಮಗ ಹಿಂದೂ ಧರ್ಮ, ಆಚರಣೆ ದ್ವೇಷಿಗಳಾದರೆ ದುರ್ಗಾ ಆರಾಧಕಳು ಎಂಥ ವಿಚಿತ್ರವಲ್ಲವೇ? .&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mk-stalin-s-wife-durga-visits-chamundi-hills-mysuru-offers-special-prayers-rav/articleshow-aaol31n"/>
        </item>
        <item>
            <title><![CDATA['ಅಪ್ಪ'ನ ಉತ್ತರಾಧಿಕಾರಿ ಸ್ಥಾನಕ್ಕೆ ಬಂದ 'ಮಗ' ಯತೀಂದ್ರ: ಮೈಸೂರು ಜಿಲ್ಲೆಯಿಂದ ಸಂಪುಟ ಸೇರಿದ ಏಕೈಕ ವ್ಯಕ್ತಿ!]]></title>
            <link>https://kannada.asianetnews.com/politics/yathindra-siddaramaiah-son-enters-dk-shivakumar-cabinet-gvd/articleshow-eqepcxn</link>
            <guid isPermaLink="true">https://kannada.asianetnews.com/politics/yathindra-siddaramaiah-son-enters-dk-shivakumar-cabinet-gvd/articleshow-eqepcxn</guid>
            <pubDate>Thu, 04 Jun 2026 00:26:33 +0530</pubDate>
            <description><![CDATA[&lt;p&gt;ಸಿದ್ದರಾಮಯ್ಯ ಅವರು ಮುಖಮಂತ್ರಿ ಸ್ಥಾನದಿಂದ ಇಳಿದಿರಬಹುದು. ಆದರೆ ಮೈಸೂರು ಜಿಲ್ಲೆಯ ಪ್ರತಿನಿಧಿಯಾಗಿ ಅವರ ಪುತ್ರ ಡಾ.ಎಸ್&zwnj;, ಯತೀಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಿದ್ದರಾಮಯ್ಯ ಅವರ ಹಿರಿಯ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt7934fyxzdk6whxqxwjr5jm,imgname-vjh-1780508365310.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಂಶಿ ಪ್ರಸನ್ನಕುಮಾರ್&zwnj;&lt;/strong&gt;&lt;/p&gt;&lt;p&gt;&lt;strong&gt;ಮೈಸೂರು (ಜೂ.04): &lt;/strong&gt;ಸಿದ್ದರಾಮಯ್ಯ ಅವರು ಮುಖಮಂತ್ರಿ ಸ್ಥಾನದಿಂದ ಇಳಿದಿರಬಹುದು. ಆದರೆ ಮೈಸೂರು ಜಿಲ್ಲೆಯ ಪ್ರತಿನಿಧಿಯಾಗಿ ಅವರ ಪುತ್ರ ಡಾ.ಎಸ್&zwnj;, ಯತೀಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್&zwnj; 2008 ರಿಂದಲೂ ವರುಣ ಕ್ಷೇತ್ರದಲ್ಲಿ ಅಪ್ಪನ ಪ್ರಚಾರ ಮಾಡುತ್ತಾ, ಭವಿಷ್ಯದ ಉತ್ತರಾಧಿಕಾರಿಯಾಗಲು ಬಯಸಿದ್ದರು.ಸಿದ್ದರಾಮಯ್ಯ ಅವರು ಆಸೆ ಕೂಡ ಅದೇ ಆಗಿತ್ತು.&lt;/p&gt;&lt;p&gt;ಆದರೆ ರಾಕೇಶ್&zwnj; ಒಂಭತ್ತು ವರ್ಷಗಳ ಹಿಂದೆ ವಿದೇಶಕ್ಕೆ ಹೋದಾಗ ನಿಧನರಾದರು. ಇದಾದ ನಂತರವೇ ಯತೀಂದ್ರ ರಾಜಕೀಯ ಪ್ರವೇಶ ಮಾಡಿದ್ದು. ಎಸ್ಎಸ್ಎಲ್&zwnj;ಸಿ ಪರೀಕ್ಷೆಯಲ್ಲಿ ರ್ಯಾಂಕ್&zwnj; ಪಡೆದಿದ್ದ ಯತೀಂದ್ರ ಎಂಬಿಬಿಎಸ್&zwnj; ಓದಿ ಡಾಕ್ಟರ್&zwnj; ಆಗಿದ್ದರು. ರಾಕೇಶ್&zwnj; ನಿಧನಾನಂತರ ತಾಯಿ ಪಾರ್ವತಿ ಅವರ ಒತ್ತಾಸೆಯ ಮೇರೆಗೆ ಯತೀಂದ್ರ ರಾಜಕಾರಣ ಪ್ರವೇಶ ಮಾಡಿದರು.&lt;/p&gt;&lt;p&gt;ಇದರಿಂದಾಗಿಯೇ ಸಿದ್ದರಾಮಯ್ಯ ಅವರು 2018 ರಲ್ಲಿ ವರುಣದಿಂದ ಯತೀಂದ್ರ ಅವರಿಗೆ ಅವಕಾಶ ನೀಡಿ, ತಾವು ಹಳೆಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಯತೀಂದ್ರ ಗೆದ್ದರೆ ಸಿದ್ದರಾಮಯ್ಯ ಅವರು ಜೆಡಿಎಸ್&zwnj;ನ ಜಿ.ಟಿ. ದೇವೇಗೌಡರ ಎದುರು 36 ಸಾವಿರ ಮತಗಳ ಅಂತರದಿಂದ ಸೋತರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ಪದಿಂದಲೂ ಕಣಕ್ಕಿಳಿದಿದ್ದ ಸಿದ್ದರಾಮಯ್ಯ ಅಲ್ಲಿ ಅಲ್ಪ ಮತಗಳ ಅಂತರದಿಂದ ಗೆದ್ದು, ರಾಜಕೀಯವಾಗಿ ಬಚಾವ್&zwnj; ಆಗಿದ್ದರು.&lt;/p&gt;&lt;p&gt;2023ರ ವಿಧಾನಸಭಾ ಚುನಾವಣೆ ಬಂದಾಗ ವರುಣದಲ್ಲಿ ಯತೀಂದ್ರಗೆ ತೊಂದರೆ ಮಾಡುವುದು ಬೇಡ ಎಂದು ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯಲು ಬಯಸಿದ್ದರು. ಆದರೆ ಹೈಕಮಾಂಡ್&zwnj; ಅದು ಸುರಕ್ಷಿತವಲ್ಲ, ವರುಣದಿಂದಲೇ ಸ್ಪರ್ಧಿಸಿ ಎಂದು ಸೂಚಿಸಿತ್ತು. ಹೀಗಾಗಿ ಹಾಲಿ ಶಾಸಕರಾಗಿದ್ದ ಯತೀಂದ್ರ ಅವರು ತಂದೆ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ತ್ಯಾಗ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್&zwnj; ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆದರು. ಯತೀಂದ್ರ ಅವರನ್ನು ಆಶ್ರಯ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು.&lt;/p&gt;&lt;p&gt;ಯತೀಂದ್ರ ಅವರನ್ನು ಮೈಸೂರಿನಿಂದ ಲೋಕಸಭೆಗೂ ಕಾಂಗ್ರೆಸ್&zwnj; ಅಭ್ಯರ್ಥಿ ಮಾಡುವ ಮಾತುಗಳು ಕೇಳಿ ಬಂದಿದ್ದವು. ಆದರೆ ಬಿಜೆಪಿ- ಜೆಡಿಎಸ್&zwnj; ಹೊಂದಾಣಿಕೆ ಮಾಡಿಕೊಂಡ ನಂತರ ಸೋತರೆ ಕಷ್ಟ ಎಂಬ ಕಾರಣದಿಂದ ಸಿದ್ದರಾಮಯ್ಯ ಅವರೇ ಸ್ಪರ್ಧೆ ಬೇಡಿ ಎಂದು ಸೂಚಿಸಿದ್ದರು. ಹೀಗಾಗಿ 2024ರ ಜೂನ್&zwnj;ನಲ್ಲಿ ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆ ಮಾಡಲಾಯಿತು.&lt;/p&gt;&lt;p&gt;ಒಂದು ವೇಳೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್&zwnj; ಅವರಿಗೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಬಂದಲ್ಲಿ ಆಗ ಯತೀಂದ್ರ ಅವರನ್ನು ಮಂತ್ರಿಯಾಗಿ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಈಗ ಅದರಂತೆ ಯತೀಂದ್ರ ಡಿ.ಕೆ. ಶಿವಕುಮಾರ್&zwnj; ಸಂಪುಟದಲ್ಲಿ ಮಂತ್ರಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಮಹದೇವಪ್ಪ, ಕೆ. ವೆಂಕಟೇಶ್&zwnj;ಗೆ ಸಿಗದ ಅವಕಾಶ&lt;/strong&gt;&lt;/h2&gt;&lt;p&gt;ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಹಾಗೂ ಆರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್&zwnj; ಅವರಿಗೆ ಡಿ.ಕೆ. ಶಿವಕುಮಾರ್&zwnj; ಸಂಪುಟದಲ್ಲಿ ಮೊದಲ ಕಂತಿನಲ್ಲಿ ಅವಕಾಶ ಸಿಕ್ಕಿಲ್ಲ. ಈ ಇಬ್ಬರು ಕ್ರಮವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.&lt;/p&gt;&lt;p&gt;ಈ ಇಬ್ಬರೂ 1985 ರಿಂದಲೂ ಚುನಾವಣಾ ರಾಜಕಾರಣದಲ್ಲಿದ್ದು, ಸಿದ್ದರಾಮಯ್ಯ ಅವರನ್ನು ಹಿಂಬಾಲಿಸಿ ಜನತಾ ಪರಿವಾರದಿಂದ ಕಾಂಗ್ರೆಸ್&zwnj;ಗೆ ಬಂದವರು. ಇಬ್ಬರೂ ಸೋಲು- ಗೆಲುವಿನಲ್ಲಿ, ಸಿದ್ದರಾಮಯ್ಯ ಜೊತೆಗೆಯಾಗಿ ನಿಂತವರು. ಮಹದೇವಪ್ಪ ಅವರು ಎಚ್&zwnj;.ಡಿ. ದೇವೇಗೌಡ, ಜೆ.ಎಚ್&zwnj;. ಪಟೇಲ್&zwnj;, ಎನ್&zwnj;. ಧರಂಸಿಂಗ್&zwnj; ಹಾಗೂ ಸಿದ್ದರಾಯ್ಯ ಅವರ ಸಂಪುಟದಲ್ಲಿ ಎರಡೂ ಬಾರಿಯೂ ಸಚಿವರಾಗಿದ್ದರು. ವೆಂಕಟೇಶ್&zwnj; ಪಟೇಲರ ಸಂಪುಟದ ನಂತರ ಈ ಬಾರಿ ಸಿದ್ದರಾಮಯ್ಯ ಸಂಪುಟದಲ್ಲಿದ್ದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/yathindra-siddaramaiah-son-enters-dk-shivakumar-cabinet-gvd/articleshow-eqepcxn"/>
        </item>
        <item>
            <title><![CDATA[ಮೈಸೂರು ಅಳಿಯ ಎಲ್ಲವನ್ನೂ ಸರಿಪಡಿಸಬೇಕು: ಡಿಕೆಶಿ ಆಡಳಿತಕ್ಕೆ ಎಚ್‌.ವಿಶ್ವನಾಥ್‌ ಸಲಹೆಯೇನು?]]></title>
            <link>https://kannada.asianetnews.com/politics/h-vishwanath-advice-to-cm-dk-shivakumar-mysuru-son-in-law-governance-gvd/articleshow-gocg5aa</link>
            <guid isPermaLink="true">https://kannada.asianetnews.com/politics/h-vishwanath-advice-to-cm-dk-shivakumar-mysuru-son-in-law-governance-gvd/articleshow-gocg5aa</guid>
            <pubDate>Fri, 05 Jun 2026 00:28:35 +0530</pubDate>
            <description><![CDATA[&lt;p&gt;ಮೈಸೂರಿನ ಮಗನ ಅಧಿಕಾರ ಅವಧಿಯಲ್ಲಿ ಮಗ ಮತ್ತು ಪಟಾಲಂ ಜತೆ ಸೇರಿ ಆಡಳಿತ ದಾರಿ ತಪ್ಪಿತ್ತು. ಈಗ ಮೈಸೂರಿನ ಅಳಿಯ ಅದೆಲ್ಲವನ್ನೂ ಸರಿಪಡಿಸಬೇಕು ಎಂದು ವಿಧಾನ ಪರಿಷತ್&zwnj; ಸದಸ್ಯ ಎಚ್&zwnj;.ವಿಶ್ವನಾಥ್&zwnj; ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kky3957ykh6500xwyaht3dsk,imgname-h-vishwanath-1773757830398.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜೂ.05): &lt;/strong&gt;ಮೈಸೂರಿನ ಮಗನ ಅಧಿಕಾರ ಅವಧಿಯಲ್ಲಿ ಮಗ ಮತ್ತು ಪಟಾಲಂ ಜತೆ ಸೇರಿ ಆಡಳಿತ ದಾರಿ ತಪ್ಪಿತ್ತು. ಈಗ ಮೈಸೂರಿನ ಅಳಿಯ ಅದೆಲ್ಲವನ್ನೂ ಸರಿಪಡಿಸಬೇಕು ಎಂದು ವಿಧಾನ ಪರಿಷತ್&zwnj; ಸದಸ್ಯ ಎಚ್&zwnj;.ವಿಶ್ವನಾಥ್&zwnj; ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj;ಗೆ ಕಿವಿಮಾತು ಹೇಳಿದರು. ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಮೈಸೂರು ಮಗನ ಆಡಳಿತ ಇತ್ತು. ಈಗ ಅಳಿಯನ ಆಡಳಿತ ಆರಂಭವಾಗಿದೆ. ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿ ಆಗಿ ಬೆಳೆದಿದ್ದಾರೆ. ಅವರಿಗೆ ಶುಭವಾಗಲಿ ಎಂದರು.&lt;/p&gt;&lt;p&gt;ಆಡಳಿತದಲ್ಲಿನ ಹಲವು ಅಂತರಗಳಿವೆ. ಅವುಗಳನ್ನು ಡಿ.ಕೆ. ಶಿವಕುಮಾರ್&zwnj; ಅವರು ಸರಿಪಡಿಸಬೇಕು. ಡಿ.ಕೆ. ಶಿವಕುಮಾರ್&zwnj; ಮತ್ತು ಹರಿಪ್ರಸಾದ್&zwnj; ಒಳ್ಳೆಯ ಜೋಡಿ. ಅವರು ಕಾರ್ಯಕರ್ತರ ದುಃಖ ದುಮ್ಮಾನಗಳಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಕಾರಣ. ಪಕ್ಷ ಕಟ್ಟುವವರು ಕಾರ್ಯಕರ್ತರಾದರೆ ಹಾಳು ಮಾಡುವುದು ನಾಯಕರು ಎಂದು ಜರಿದರು.&lt;/p&gt;&lt;p&gt;ಮೈಸೂರು ಅಳಿಯನಿಂದ ಮೈಸೂರು ಸಾಕಷ್ಟು ನಿರೀಕ್ಷೆ ಮಾಡುತ್ತಿದೆ. ನಾನೂ ಕೂಡ ಮೈಸೂರಿನ ಅಳಿಯ ಎಂಬ ಅಭಿಮಾನದಿಂದಲೇ ಮಾತನಾಡುತ್ತಿದ್ದೇನೆ. ಈ ಹಿಂದೆ ಎಸ್&zwnj;.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ &lsquo;ಮೈಸೂರು ಅಜೆಂಡಾ ಟಾಸ್ಕ್ ಫೋರ್ಸ್&rsquo; ರಚಿಸಿದ್ದರು. ಈಗ ಡಿ.ಕೆ. ಶಿವಕುಮಾರ್&zwnj; ಅವರು 2050ರ ದೂರದೃಷ್ಟಿಯೊಂದಿಗೆ ಯೋಜನೆ ರೂಪಿಸಬೇಕು. ಈ ಸಂಬಂಧ ಅನುಭವಿಗಳ ತಂಡ ರಚಿಸಿ ಅವರ ಅನುಭವದ ಆಧಾರದ ಮೇಲೆ ಮುನ್ನಡೆಯಬೇಕು ಎಂದರು.&lt;/p&gt;&lt;p&gt;ಮೈಸೂರಿನಲ್ಲಿ ಈಗ ಲ್ಯಾಂಡ್&zwnj; ಮಾಫಿಯಾ ಹೆಚ್ಚಾಗಿದೆ. ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಮಾಫಿಯಾಗೆ ಬೆಂಬಲ ನೀಡುತ್ತಿದ್ದಾರೆ. ಮೈಸೂರು ವೀಳ್ಯೆದೆಲೆ, ಅರಮನೆ, ಮೈಸೂರು ಪಾಕ್, ಮೈಸೂರು ಮಲ್ಲಿಗೆ ಹೀಗೆ ಅನೇಕ ವಿಷಯಗಳಿಗೆ ಪ್ರಪಂಚ ಮೈಸೂರಿನ ಕಡೆ ನೋಡುತ್ತಿದೆ. ಆದರೆ ಇಲ್ಲಿ ಲ್ಯಾಂಡ್&zwnj; ಮಾಫಿಯಾ ಮಿತಿ ಮೀರುತ್ತಿದೆ ಎಂದರು.&lt;/p&gt;&lt;p&gt;ಅದೆಲ್ಲವನ್ನೂ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಸರಿಪಡಿಸಬೇಕು. ಮಾಜಿ ಪ್ರಧಾನಿ ಎಚ್&zwnj;.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಬಿ.ಎಸ್&zwnj;. ಯಡಿಯೂರಪ್ಪ ಅವರಂತಹ ಧರ್ಮಾಧಿಕಾರಿಗಳನ್ನು ಭೇಟಿ ಮಾಡುವ ಸತ್ಸಂಪ್ರದಾಯವನ್ನು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಸಿದ್ದರಾಮಯ್ಯ ಅವರ ಹೇಳಿಕೆಗಳು ಮತ್ತು ನಡೆಯಿಂದ ಕಾಂಗ್ರೆಸ್&zwnj; ಎಂದರೆ ಹಿಂದೂ ವಿರೋಧಿ ಎಂಬ ಭಾವನೆ ಇತ್ತು. ನಿಮ್ಮ ನಡವಳಿಕೆ ಅದನ್ನು ಹೋಗಲಾಡಿಸಿದೆ. ನಿಮ್ಮ ನಡವಳಿಕೆ ಅದು ಹೋಗಲಾಡಿಸಿತು. ನಿಮ್ಮ ಹಿಂದು ಪರ ನಿಲುವು ಬಿಜೆಪಿಯನ್ನು ಅಣಕಿಸುವಂತೆ ಇದೆ ಎಂದರು.&lt;/p&gt;&lt;h2&gt;&lt;strong&gt;ಯುವಕರ ಸ್ವರ್ಗವಾಗಬೇಕು&lt;/strong&gt;&lt;/h2&gt;&lt;p&gt;ನೀವು ಒಬ್ಬ ಉತ್ತಮ ಸಂಘಟಕ ಮತ್ತು ಆಡಳಿತಗಾರ ಎಂಬುದನ್ನು ಸಾಬೀತುಪಡಿಸಬೇಕು. ನಿಮ್ಮನ್ನು ಮೈಸೂರಿಗೆ ಕರೆದು ಜನತೆಯ ಪರವಾಗಿ ಗೌರವಿಸಬೇಕು ಎಂಬ ಉದ್ದೇಶವಿದೆ. ನಿವೃತ್ತರ ಸ್ವರ್ಗ ಎಂದು ಕರೆಯುತ್ತಿರುವ ಮೈಸೂರು ಯುವಕರ ಸ್ವರ್ಗವಾಗಬೇಕು. ಅಕ್ಷರ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಹಿಂದಿನ ಸರ್ಕಾರ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿತ್ತು. ಅದರ ಬಗ್ಗೆ ವಿಶೇಷ ಗಮನ ನೀಡಬೇಕು ಎಂದರು. ಗುಂಡೂರಾವ್&zwnj; ಕಾಲದಿಂದಲೂ ರೈತರನ್ನು ಎದುರು ಹಾಕಿಕೊಂಡು ಯಾವ ಸರ್ಕಾರವೂ ಉಳಿದಿಲ್ಲ. ಆದ್ದರಿಂದ ಬಿಡದಿ ಟೌನ್&zwnj;ಶಿಪ್&zwnj; ವಿಷಯದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಎದುರು ಹಾಕಿಕೊಳ್ಳಬಾರದು ಎಂದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/h-vishwanath-advice-to-cm-dk-shivakumar-mysuru-son-in-law-governance-gvd/articleshow-gocg5aa"/>
        </item>
        <item>
            <title><![CDATA[ಕೊಡಗು ಜೈಲಿನಲ್ಲಿ ಇರಿತಕ್ಕೊಳಗಾದ ಖೈದಿ ಮೈಸೂರು ಆಸ್ಪತ್ರೆಯಲ್ಲಿ ಸಾವು: ಕುಟುಂಬದ ಗಂಭೀರ ಆರೋಪವೇನು?]]></title>
            <link>https://kannada.asianetnews.com/crime/kodagu-jail-inmate-hemanth-death-property-dispute-gvd/articleshow-h3wwl2g</link>
            <guid isPermaLink="true">https://kannada.asianetnews.com/crime/kodagu-jail-inmate-hemanth-death-property-dispute-gvd/articleshow-h3wwl2g</guid>
            <pubDate>Wed, 03 Jun 2026 16:38:02 +0530</pubDate>
            <description><![CDATA[&lt;p&gt;ಮೂರು ದಿನದ ಹಿಂದೆ ಕೊಡಗಿನ ಜೈಲಿನಲ್ಲಿ ಇರಿತಕ್ಕೆ ಒಳಗಾಗಿದ್ದ ವಿಚಾರಣಾಧೀನ ಖೈದಿ ಇಂದು ಮೈಸೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಖೈದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01cyx8ar53j2zcdfs8nddx4hhg,imgname-woman-death.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜೂ.03): &lt;/strong&gt;ಮೂರು ದಿನದ ಹಿಂದೆ ಕೊಡಗಿನ ಜೈಲಿನಲ್ಲಿ ಇರಿತಕ್ಕೆ ಒಳಗಾಗಿದ್ದ ವಿಚಾರಣಾಧೀನ ಖೈದಿ ಇಂದು ಮೈಸೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಖೈದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಜೈಲು ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಜೈಲು&zwnj;ಸಿಬ್ಬಂದಿಗಳ ಕುಮ್ಮಕ್ಕು ಇದೆ ಎನ್ನಲಾಗಿದೆ.&lt;/p&gt;&lt;p&gt;ಇದು ಪಕ್ಕಾ ಆಸ್ತಿ ವಿಚಾರಕ್ಕೆ ನಡೆದಿರುವ ಕೊಲೆ. ಯಾವಾಗಲೂ ಹೊರಗೆ ಕೊಲೆ, ಕೊಲೆಯತ್ನ ಮಾಡಿದರು ಜೈಲಿಗೆ ಹೋಗೊದು ಸಾಮಾನ್ಯ. ಆದರೆ ಇಲ್ಲಿ ಜೈಲಿನಲ್ಲಿಕೆ ಕೊಲೆಯತ್ನ ಮಾಡಲಾಗಿದೆ. ತೀರ್ವವಾಗಿ ಗಾಯಗೊಂಡವನು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ವ್ಯಕ್ತಿಯ ಹೆಸರು ಹೇಮಂತ್. ಕೊಡಗಿನಿ ಶ್ರೀಮಂಗಲ ಗ್ರಾಮದವನು. ಆಸ್ತಿ ವಿಚಾರಕ್ಕೆ ಸಂಬಂಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದ ಈತ 307 ಕೇಸ್ ಬುಕ್ ಮಾಡಿಸಿಕೊಂಡು ಕೊಡಗು ಜಿಲ್ಲಾ ಕಾರಾಗೃಹ ಸೇರಿದ್ದ.&lt;/p&gt;&lt;p&gt;ಅದೇ ಜೈಲಿನಲ್ಲಿ ಬೇರೊಂದು ಪ್ರಕರಣದಲ್ಲಿ ಜೈಲು ಸೇರಿದ್ದ ಸಂಬಂಧಿ ರಾಜೇಶ್ ಎನ್ನುವವನು ಈತನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಜೂನ್ 1ನೇ ತಾರೀಕು ಬೆಳಿಗ್ಗೆ 7.30ರ ಸುಮಾರಿಗೆ ಘಟನೆ ಜರುಗಿದ್ದು, ಹೇಮಂತ್&zwnj;ನ ಎದೆ, ಹೊಟ್ಟೆ, ಕಿಬ್ಬೊಟ್ಟೆ ಸೇರಿ ಸುಮಾರು 8 ಕಡೆಗಳಲ್ಲಿ ಚಾಕುವಿನಿಂದ ಇರಿಯಲಾಗಿದೆ. ತೀರ್ವ ರಕ್ತಸ್ರಾವದಲ್ಲಿದ್ದ ಹೇಮಂತ್&zwnj;ನನ್ನು ಕೊಡಗು ಜಿಲ್ಲಾಸ್ಪತ್ರೆ ಸೇರಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಂದೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದ್ದು. ಅಂದು ರಾತ್ರಿ ಹೇಮಂತ್&zwnj;ಗೆ ಶಸ್ತ್ರಚಿಕಿತ್ಸೆ ನಡೆಸಿದರಾದರೂ ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾನೆ.&lt;/p&gt;&lt;p&gt;ತೋಟದ ಜಾಗದ ವಿಚಾರವಾಗಿ ದಾಯಾದಿ ಗಣೇಶ ಎಂಬಾತ ಜಗಳ ತೆಗೆದಿದ್ದಲ್ಲದೆ ತಾನೇ ಬಟ್ಟೆ ಹರಿದುಕೊಂಡು, ಬ್ಲೇಡ್&zwnj;ನಿಂದ ಗಾಯ ಮಾಡಿಕೊಂಡು ಪೊಲೀಸರಿಗೆ ಸುಳ್ಳು ದೂರು ನೀಡಿದ್ದನು ಎನ್ನಲಾಗಿದೆ. ಪೊಲೀಸರು ಯಾವುದೇ ವಿಚಾರಣೆ ನಡೆಸದೆ ಹೇಮಂತ್ ಸೇರಿದಂತೆ ಕುಟುಂಬದ ನಾಲ್ವರನ್ನು ಸೆಕ್ಷನ್ 307 ಅಡಿಯಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಈ ಬಗ್ಗೆ ​ಚಿಕ್ಕಮ್ಮ ಅಶ್ವಿನಿ ಹಾಗೂ ಮಾವ ವೇಣುಗೋಪಾಲ್ ಮಾತನಾಡಿ, ಈ ಹಿಂದೆ ಆಸ್ತಿಗಾಗಿ ಇವರ ಅತ್ತೆಯನ್ನು ಕೊಲೆ ಮಾಡಿದ್ದ ಆರೋಪಿ ರಾಜೇಶ್ ಈಗಾಗಲೇ ಅದೇ ಜೈಲಿನಲ್ಲಿದ್ದನು. ಹಳೆಯ ವೈಷಮ್ಯವಿದ್ದರೂ ಜೈಲು ಅಧಿಕಾರಿಗಳು ಹೇಮನ್&zwnj;ನನ್ನು ರಾಜೇಶ್ ಇದ್ದ ಸೆಲ್&zwnj;ನ ಪಕ್ಕದಲ್ಲೇ ಇರಿಸಿದ್ದರು.&lt;/p&gt;&lt;h2&gt;&lt;strong&gt;ಕೊಲೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಘಟನೆ ನಂತರವೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಆರಂಭದಲ್ಲಿ ಕೇವಲ ಸ್ಪೂನ್ ನಿಂದ ಸಣ್ಣ ಗಾಯವಾಗಿದೆ ಎಂದು ಪೊಲೀಸರು ಸುಳ್ಳು ಹೇಳಿದ್ದರು. ಆದರೆ ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ತೀವ್ರ ರಕ್ತಸ್ರಾವವಾಗಿ ಹೇಮಂತ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ. ಒಟ್ಟಾರೆ ಪೊಲೀಸರ ಲಂಚಾವತಾರ ಹಾಗೂ ಜೈಲು ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಈ ಕೊಲೆಗೆ ಕಾರಣವಾಗಿದ್ದು, ಮೃತನಿಗೆ ನ್ಯಾಯ ಸಿಗಬೇಕಾದರೆ ಈ ಘಟನೆಗೆ ಕಾರಣರಾದ ಆರೋಪಿಗಳು ಹಾಗೂ ಅಧಿಕಾರಿಗಳ ವಿರುದ್ಧ ತಕ್ಷಣ ಎಫ್&zwnj;ಐಆರ್ ದಾಖಲಾಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/kodagu-jail-inmate-hemanth-death-property-dispute-gvd/articleshow-h3wwl2g"/>
        </item>
        <item>
            <title><![CDATA[ದಲಿತರನ್ನು ಸಿಎಂ ಮಾಡದೇ ವಂಚಿಸುತ್ತಿರುವ ಕಾಂಗ್ರೆಸ್‌: ಛಲವಾದಿ ನಾರಾಯಣಸ್ವಾಮಿ ಟೀಕೆ]]></title>
            <link>https://kannada.asianetnews.com/karnataka-districts/chalavadi-narayanaswamy-on-dalit-cm-congress-mysuru-gvd/articleshow-l5dotcb</link>
            <guid isPermaLink="true">https://kannada.asianetnews.com/karnataka-districts/chalavadi-narayanaswamy-on-dalit-cm-congress-mysuru-gvd/articleshow-l5dotcb</guid>
            <pubDate>Thu, 28 May 2026 00:27:41 +0530</pubDate>
            <description><![CDATA[&lt;p&gt;ದಲಿತರನ್ನು ಸಿಎಂ ಮಾಡುತ್ತೇವೆ ಅಂತ ಕಾಂಗ್ರೆಸ್ ಪಕ್ಷ 70 ವರ್ಷದಿಂದ ವಂಚಿಸುತ್ತಿದೆ. ಹಾಗಾಗಿ, ಕಾಂಗ್ರೆಸ್&zwnj; ನಲ್ಲಿರುವ ದಲಿತ ನಾಯಕರು ಸೀಡ್&zwnj; ಲೆಸ್ ಮತ್ತು ಶುಗರ್ ಲೆಸ್ ರೀತಿ ಆಗಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksn90pw48qthbc6kmtpkven3,imgname-jvj-1779904306052.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮೇ.28):&lt;/strong&gt; ದಲಿತರನ್ನು ಸಿಎಂ ಮಾಡುತ್ತೇವೆ ಅಂತ ಕಾಂಗ್ರೆಸ್ ಪಕ್ಷ 70 ವರ್ಷದಿಂದ ವಂಚಿಸುತ್ತಿದೆ. ಹಾಗಾಗಿ, ಕಾಂಗ್ರೆಸ್&zwnj; ನಲ್ಲಿರುವ ದಲಿತ ನಾಯಕರು ಸೀಡ್&zwnj; ಲೆಸ್ ಮತ್ತು ಶುಗರ್ ಲೆಸ್ ರೀತಿ ಆಗಿದ್ದಾರೆ ಎಂದು ವಿಧಾನ ಪರಿಷತ್&zwnj; ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ದಲಿತರನ್ನು ಮುಖ್ಯಮಂತ್ರಿ ಮಾಡದೆ ವಂಚಿಸುತ್ತಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ನಮ್ಮ ತಕರಾರು ಇಲ್ಲ. ಆದರೆ ಕಾಂಗ್ರೆಸ್ ಪಕ್ಷ ದಲಿತರಿಗೆ ಬಗನಿಗೂಟ ಹೊಡೆದಿದೆ ಎಂದು ಟೀಕಿಸಿದರು.&lt;/p&gt;&lt;p&gt;ಆನೆ ಮರಿ ಹಾಕಲು 24 ತಿಂಗಳು ಬೇಕು. ಇದೀಗ ಕಾಂಗ್ರೆಸ್&zwnj; ನಲ್ಲಿ ಕಡೆಗೂ ಆನೆ ಮರಿ ಹಾಕಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಈಗ ಬದಲಾವಣೆಗೆ ಮುಂದಾಗಿದೆ. &lsquo;ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಎಂಬಂತಾಗಿದೆ ಕಾಂಗ್ರೆಸ್ ಕಥೆ. ಆದರೆ ದಲಿತರಲ್ಲಿ ಯಾರಿಗೂ ನಮಗೆ ಸಿಎಂ ಕೊಡಿ ಎಂದು ಕೇಳುವ ತಾಕತ್ತು ಇಲ್ಲ ಎಂದು ಅವರು ದೂರಿದರು. ದಲಿತರು ಸಿಎಂ ಆಗಬೇಕಾದ ಸಮಯದಲ್ಲಿ ದಲಿತರಿಗೆ ಸಮಾಧಿ ಕಟ್ಟಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಈಗಲಾದರೂ ದಲಿತರಾದ ಪರಮೇಶ್ವರ್ ಪರ ಅವರು ದ್ವನಿ ಎತ್ತುತ್ತಿಲ್ಲ.&lt;/p&gt;&lt;p&gt;ಆಗ ಪರಮೇಶ್ವರ್ ಅವರನ್ನು ಸೋಲಿಸಿದ್ದರು. ಕಾಂಗ್ರೆಸ್&zwnj; ನ ದಲಿತ ನಾಯಕರು ಯಾರು ಕೂಡ ಸಚಿವ ಸ್ಥಾನ ತೆಗೆದುಕೊಳ್ಳದೆ ಪ್ರತಿಭಟಿಸಬೇಕು ಎಂದು ಅವರು ಆಗ್ರಹಿಸಿದರು. ಎನ್. ರಾಚಯ್ಯ, ಸಿ. ಬಸವಲಿಂಗಪ್ಪ, ವಿ. ಶ್ರೀನಿವಾಸ ಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಪರಮೇಶ್ವರ್ ವರೆಗೂ ದಲಿತ ನಾಯಕರಿಗೆ ಕಾಂಗ್ರೆಸ್ ಪಕ್ಷ ನಕ್ಷತ್ರ ತೋರಿಸಿ ವಂಚಿಸಿದೆ. ದಲಿತರಿಗೆ ಮೋಸ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಬುದ್ಧಿ ಕಲಿಸುವ ಮೂಲಕ ತಮ್ಮ ಶಕ್ತಿ ತೋರಿಸಬೇಕು ಎಂದರು.&lt;/p&gt;&lt;h2&gt;&lt;strong&gt;ದಲಿತರಿಗೆ ಅನ್ಯಾಯ&lt;/strong&gt;&lt;/h2&gt;&lt;p&gt;ಬಿಜೆಪಿ ಸಂವಿಧಾನ ವಿರೋಧಿ ಅಂತ ಹೇಳುತ್ತಾರೆ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಮಾನ ಮಾಡಿದ್ದು ಕಾಂಗ್ರೆಸ್. ಕೆಲ ದಲಿತ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ವಿಧಿ ಇಲ್ಲದೆ ಕಾಂಗ್ರೆಸ್ ಎನ್ನುವ ದೆವ್ವವನ್ನು ದಲಿತರು ತಬ್ಬಿಕೊಳ್ಳುತ್ತಿದ್ದಾರೆ. ದಲಿತರಿಗೆ ಅನ್ಯಾಯ ಮಾಡಿರೋದು ಕಾಂಗ್ರೆಸ್. ಇನ್ನಾದರೂ ದಲಿತರು ಬದಲಾಗಬೇಕಿದೆ. ಎಲ್ಲ ಸಮುದಾಯಗಳನ್ನು ಕಾಂಗ್ರೆಸ್ ವಂಚಿಸುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;ಮೈಸೂರು ವಿವಿ ಪ.ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಸುಮ್ಮನಿದ್ದಾರೆ. ಪ.ವರ್ಗದ ವಿದ್ಯಾರ್ಥಿಗಳ ಕಲ್ಯಾಣಕ್ಕೆ ವಿವಿಯಲ್ಲಿ 70-80 ಕೋಟಿ ರೂ. ಹಣ ಮೀಸಲಿಡಬೇಕು. ಆದರೆ, ವಿವಿಯಲ್ಲಿ ಪ.ವರ್ಗದ ವಿದ್ಯಾರ್ಥಿಗಳು ತಮ್ಮ ಸೌಲಭ್ಯ ಕೇಳಿದರೂ ಹೆದರಿಸುವ ಕೆಲಸ ನಡೆಯುತ್ತಿದೆ. ಇದು ತಾಲಿಬಾನ್ ವಿವಿಯ ಎಂದು ಪ್ರಶ್ನಿಸಿದರು.&lt;/p&gt;&lt;p&gt;ಕುಲಸಚಿವರಾದ ಎಂ.ಕೆ. ಸವಿತಾ ಅವರು ಮೈಸೂರು ವಿವಿಯಲ್ಲಿಯೇ ಪಿಎಚ್&zwnj;.ಡಿ ಹೇಗೆ ಮಾಡುತ್ತಾರೆ? ಭೂಗೋಳ ಶಾಸ್ತ್ರದ ಪ್ರೊ. ಭಾರತಿ ಅವರು ಅವರ ಗೈಡ್ ಆಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ನಾನು 15 ದಿನದಲ್ಲಿ ಮತ್ತೆ ಬರುತ್ತೇನೆ. ಖುದ್ದು ವಿವಿಗೆ ಭೇಟಿ ನೀಡುತ್ತೇನೆ. ಪ.ವರ್ಗದ ವಿದ್ಯಾರ್ಥಿಗಳಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಿ, ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ಅವರು ಹೇಳಿದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chalavadi-narayanaswamy-on-dalit-cm-congress-mysuru-gvd/articleshow-l5dotcb"/>
        </item>
        <item>
            <title><![CDATA[BREAKING: ಬೆಂಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಿಗೆ ಮುಂದಿನ 3 ಗಂಟೆ 'ಯಲ್ಲೋ ಅಲರ್ಟ್'; ಹಾಸನಕ್ಕೆ ಆರೆಂಜ್ ಅಲರ್ಟ್]]></title>
            <link>https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</link>
            <guid isPermaLink="true">https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</guid>
            <pubDate>Mon, 25 May 2026 18:03:58 +0530</pubDate>
            <description><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzxjj84544nkh17j6s99v9v,imgname-karnataka-rain-alert-1779187665156.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.&lt;img&gt;&lt;p&gt;ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಹತ್ವದ ಮುನ್ಸೂಚನೆಯೊಂದನ್ನು ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರು ನಗರದಲ್ಲಿ ಮುಂದಿನ 3 ಗಂಟೆಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, 'ಯಲ್ಲೋ ಅಲರ್ಟ್' (Yellow Alert) ಘೋಷಿಸಲಾಗಿದೆ. ಕಚೇರಿ ಮುಗಿಸಿ ಮನೆಗೆ ಮರಳುವ ಐಟಿ ಉದ್ಯೋಗಿಗಳು ಹಾಗೂ ವಾಹನ ಸವಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಕೇವಲ ಸಾಧಾರಣ ಮಳೆಯಷ್ಟೇ ಅಲ್ಲದೆ, ಗಂಟೆಗೆ ಭಾರಿ ವೇಗದಲ್ಲಿ ಬೀಸಲಿರುವ ಸುಂಟರಗಾಳಿ ಹಾಗೂ ಗುಡುಗು-ಮಿಂಚಿನ ಸಹಿತ ವರುಣ ಆರ್ಭಟಿಸಲಿದ್ದಾನೆ. ಹೀಗಾಗಿ ಸಾರ್ವಜನಿಕರು ಮರಗಳ ಕೆಳಗೆ ಹಾಗೂ ದುರ್ಬಲ ಕಟ್ಟಡಗಳ ಬಳಿ ಆಶ್ರಯ ಪಡೆಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;img&gt;&lt;p&gt;ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಅತ್ಯಂತ ಹೆಚ್ಚಾಗಿರಲಿದ್ದು, ಹವಾಮಾನ ಇಲಾಖೆಯು ಹಾಸನಕ್ಕೆ ಕಟ್ಟುನಿಟ್ಟಿನ 'ಆರೆಂಜ್ ಅಲರ್ಟ್' (Orange Alert) ಜಾರಿಗೊಳಿಸಿದೆ. ಇಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು ನಗರದ ಜೊತೆಗೆ ರಾಜ್ಯದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಯಾದಗಿರಿ, ರಾಮನಗರ, ಚಾಮರಾಜನಗರ ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಗಳಿಗೂ ಮುಂದಿನ 3 ಗಂಟೆಗಳ ಕಾಲ 'ಯಲ್ಲೋ ಅಲರ್ಟ್' ನಿಯೋಜಿಸಲಾಗಿದೆ. ಈ ಜಿಲ್ಲೆಗಳಲ್ಲೂ ದಿಢೀರ್ ಮಳೆ ಸುರಿಯುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಮುಂದಿನ 3 ಗಂಟೆಗಳ ಅವಧಿ ಅತ್ಯಂತ ನಿರ್ಣಾಯಕವಾಗಿದ್ದು, ಆಯಾ ಜಿಲ್ಲಾಡಳಿತಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಅಲರ್ಟ್ ಆಗಿವೆ. ತಗ್ಗು ಪ್ರದೇಶದ ಜನರಿಗೆ ಮತ್ತು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಕೋರಿದೆ.&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4"/>
        </item>
        <item>
            <title><![CDATA[ಘೋಷಣೆ, ಅನುಷ್ಠಾನ ಆಧಾರಿತ ರಾಜಕಾರಣ ನಮ್ಮ ಧ್ಯೇಯ: ಮಾಜಿ ಸಿಎಂ ಸದಾನಂದಗೌಡ]]></title>
            <link>https://kannada.asianetnews.com/karnataka-districts/dv-sadananda-gowda-on-bjp-workers-training-at-mysuru-gvd/articleshow-mayfbag</link>
            <guid isPermaLink="true">https://kannada.asianetnews.com/karnataka-districts/dv-sadananda-gowda-on-bjp-workers-training-at-mysuru-gvd/articleshow-mayfbag</guid>
            <pubDate>Tue, 26 May 2026 00:26:20 +0530</pubDate>
            <description><![CDATA[&lt;p&gt;ಶಿಸ್ತಿಲ್ಲದ ಪಕ್ಷ ಬೆಳೆಯಲು ಸಾಧ್ಯವಿಲ್ಲ. ಘೋಷಣೆ, ಅನುಷ್ಠಾನ ಆಧಾರಿತ ರಾಜಕಾರಣ ನಮ್ಮ ಧ್ಯೇಯ. ದೀನ್ ದಯಾಳ್ ಉಪಾಧ್ಯಾಯರ ಆಶಯದಂತೆ ಕೊನೆಯ ಜನರನ್ನೂ ತಲುಪಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kknhr8mxp045hsfq4dcn8y0m,imgname-dv-sadananda-gowda-1773471015581.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮೇ.26):&lt;/strong&gt; ಘೋಷಣೆ, ಅನುಷ್ಠಾನ ಆಧಾರಿತ ರಾಜಕಾರಣ ನಮ್ಮ ಧ್ಯೇಯ. ದೀನ್ ದಯಾಳ್ ಉಪಾಧ್ಯಾಯರ ಆಶಯದಂತೆ ಕೊನೆಯ ಜನರನ್ನೂ ತಲುಪಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ನಗರದ ಹೊರ ವಲಯದ ಲಿಂಗದೇವರಕೊಪ್ಪಲಿನ ಪ್ರಜಾಪಿತ ಬ್ರಹ್ಮ ಕುಮಾರಿ ಆಶ್ರಮದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ - 2026 ಅಂಗವಾಗಿ ಬಿಜೆಪಿಯ ಮೈಸೂರು ನಗರದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.&lt;/p&gt;&lt;p&gt;ಶಿಸ್ತಿಲ್ಲದ ಪಕ್ಷ ಬೆಳೆಯಲು ಸಾಧ್ಯವಿಲ್ಲ. ಅಂತಹ ಪಕ್ಷ ದೃಶ್ಯದಲ್ಲಿ ಯಾವ ಸ್ಥಿತಿಗೆ ಬಂದಿದೆ ಎಂದು ನೋಡಿದ್ದೇವೆ. ಪಕ್ಷದ ಪ್ರತಿಯೊಬ್ಬನೂ ಗೌರವ ಪಡೆಯಲು ಪಕ್ಷದ ಮೂಲ ಸಿದ್ಧಾಂತ ತಿಳಿಯಬೇಕು ಎಂಬ ಕಾರಣಕ್ಕೆ ಪ್ರಶಿಕ್ಷಣ ವರ್ಗ ಆರಂಭವಾಗಿದೆ. ಪಕ್ಷದ ಕಾರ್ಯಕರ್ತ ಬಲಿಷ್ಠನಾದಾಗ ಪಕ್ಷ ಬಲಿಷ್ಠನಾಗುತ್ತಾನೆ ಎಂದರು. ರಾಜಕಾರಣದಲ್ಲಿ ವಿಚಾರಗಳನ್ನು ಒಳಗಿಟ್ಟುಕೊಂಡು ಭಾವನಾತ್ಮಕ ಪ್ರತಿಕ್ರಿಯೆ ನೀಡಿದರೆ, ಕಾರ್ಯಕರ್ತ ಬೆಳವಣಿಗೆ ಆಗುವುದಿಲ್ಲ. ಬಿಜೆಪಿ ವಿಚಾರಕ್ಕೆ ಒತ್ತು ಕೊಟ್ಟು ಕೆಲಸ ಮಾಡಿಕೊಂಡು ಬಂದಿದೆ. ದೇಶ ಮೊದಲು ಎಂಬ ಪರಿಕಲ್ಪನೆಯಲ್ಲಿ ಕೆಲಸ ಮಾಡಿದೆ. ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣ.&lt;/p&gt;&lt;p&gt;ಆರ್ಟಿಕಲ್ 370 ವಿಚಾರಗಳನ್ನು ಅಧಿಕಾರ ಇದ್ದಾಗ ಇಲ್ಲದಾಗಲೂ ಪ್ರತಿಪಾದಿಸಿದ್ದೆವು. ಸ್ವಾಭಿಮಾನಿ, ಸಮೃದ್ಧ ದೇಶದ ವಿಚಾರಕ್ಕೆ ಬದ್ದವಾದ ರಾಜಕೀಯ ನೀತಿ ಬರಲು ಬಿಜೆಪಿ ರೂಪುಗೊಂಡಿದ್ದಾಗಿ ಅವರು ಹೇಳಿದರು. ರಾಜಕಾರಣಿಗಳಿಗೂ ಪುನಶ್ಚೇತನ ಕಾರ್ಯಕ್ರಮ ಇರುತ್ತದೆ. ಬದಲಾವಣೆಗೆ ಅನುಗುಣವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿಸುತ್ತೇವೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಹಿರಿಯರ ವಿಚಾರಕ್ಕೆ ಬದ್ಧವಾಗಿ ನಾವು ಕೆಲಸ ಮಾಡಬೇಕು. ನೀವು ಜನರ ಬಳಿಗೆ ಯೋಜನೆ ತಲುಪಿಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ಯಶಸ್ವಿಯಾಯಿತು ಎಂದರು.&lt;/p&gt;&lt;p&gt;ರಾಜಕೀಯ ಪಕ್ಷದ ಕಾರ್ಯಕರ್ತ ಹೀಗಿರಬೇಕೋ ಅಂತಹ ನಡವಳಿಕೆ ಇರಬೇಕು. ಎಲ್ಲರೂ ವಿವೇಕಾನಂದರು, ನರೇಂದ್ರ ಮೋದಿ ಆಗಲು ಸಾಧ್ಯವಿಲ್ಲ. ಆದರೆ ಸದ್ವಿಚಾರಗಳನ್ನು ಅಳವಡಿಸಿಕೊಂಡು ನಾಯಕತ್ವ ಬೆಳೆಸಿಕೊಳ್ಳಬೇಕು. ಹೊಗಳಿಕೆಯಲ್ಲಿ ಅಡಗಿರುವ ಸುಳ್ಳನ್ನು ಯಾರು ತಿಳಿದುಕೊಳ್ಳುತ್ತಾರೋ ಅವರು ಯಶಸ್ವಿಯಾಗುತ್ತಾರೆ. ಟೀಕೆಯಲ್ಲಿ ಅಡಗಿರುವ ಸುಳ್ಳು. ಹೊಗಳಿಕೆಯಲ್ಲಿನ ಸತ್ಯ ಎರಡನ್ನೂ ಗುರುತಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಒಬ್ಬ ಜನಪ್ರತಿನಿಧಿಯ ಶೇ. 75ರಷ್ಟು ಶಕ್ತಿ ಕಾರ್ಯಕರ್ತರು ಹಾಗೂ ಪಕ್ಷ ಆಗಿರುತ್ತದೆ. ಮೈಸೂರಿನಲ್ಲಿ ಕಳೆದ ಚುನಾವಣೆಯಲ್ಲಿ ನೀವು ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಳ್ಳಲು ಕಾರ್ಯಕರ್ತರ ಅಗತ್ಯವಿದೆ ಎಂದರು.&lt;/p&gt;&lt;h2&gt;&lt;strong&gt;ಭಾರತೀಯ ಸಿದ್ಧಾಂತವೇ ನಮ್ಮ ಸಿದ್ದಾಂತ&lt;/strong&gt;&lt;/h2&gt;&lt;p&gt;ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್&zwnj;ಮಾತನಾಡಿ, ಬಿಜೆಪಿಯ ಬೇರು ಕಾರ್ಯಕರ್ತರು. ಅವರೇ ನಮ್ಮ ನಾಯಕರು. ಭಾರತೀಯ ಸಿದ್ಧಾಂತವೇ ನಮ್ಮ ಸಿದ್ದಾಂತ ಆಗಿರುವುದರಿಂದ ರಾಷ್ಟ್ರವೇ ನಮ್ಮನ್ನು ಒಪ್ಪಿಕೊಂಡಿದೆ. ವೈಯಕ್ತಿಕ ಆಕಾಂಕ್ಷೆಯ ಜೊತೆಗೆ ಸಿದ್ಧಾಂತದ ಗುರಿಯೊಂದಿಗೆ ಮುಂದುವರಿಯಬೇಕು. ದೇಶದಲ್ಲಿ ಬಲಿಷ್ಠವಾಗಿ ಇದ್ದರೂ, ಶ್ರೇಷ್ಠ ದೇಶ ನಿರ್ಮಾಣಕ್ಕೆ ಅನೇಕ ಸಮಸ್ಯೆ ಇದೆ. ಅದನ್ನು ಎದುರಿಸಲು ಕಾರ್ಯಕರ್ತರ ಶಕ್ತಿ ಅಗತ್ಯ ಎಂದು ಅವರು ಹೇಳಿದರು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಅವರನ್ನು ಹೇಗೆ ಎದುರಿಸುತ್ತೇವೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ದುರಾಡಳಿತದ ಬಗ್ಗೆ ಜನರಿಗೆ ತಿಳಿಸಬೇಕಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಆಡಳಿತ ಬರುವ ಅವಕಾಶ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dv-sadananda-gowda-on-bjp-workers-training-at-mysuru-gvd/articleshow-mayfbag"/>
        </item>
        <item>
            <title><![CDATA[ಮೆಟ್ರಿಮೋನಿಯಲ್​ ಸೈಟ್​ನಲ್ಲಿ 'ಹ್ಯಾಂಡ್​ಸಮ್​ ಡಾಕ್ಟರ್​': ಲಕ್ಷ ಲಕ್ಷ ಕಳಕೊಂಡ ಕರ್ನಾಟಕದ ಯುವತಿಯರು]]></title>
            <link>https://kannada.asianetnews.com/relationship/a-major-matrimonial-fraud-case-has-come-to-light-in-bengaluru-and-mysuru-suc/articleshow-pg0fkcz</link>
            <guid isPermaLink="true">https://kannada.asianetnews.com/relationship/a-major-matrimonial-fraud-case-has-come-to-light-in-bengaluru-and-mysuru-suc/articleshow-pg0fkcz</guid>
            <pubDate>Sat, 23 May 2026 19:14:12 +0530</pubDate>
            <description><![CDATA[ತಾನು ಪಿಎಚ್&zwnj;ಡಿ ಪದವೀಧರ, ಕೋಟ್ಯಧಿಪತಿ ಡಾಕ್ಟರ್ ಎಂದು ಮೆಟ್ರಿಮೋನಿಯಲ್ ಸೈಟ್​ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿದ ಪ್ರದೀಪ್ ಜೋಸೆಫ್ ಎಂಬಾತ, ಬೆಂಗಳೂರು ಮತ್ತು ಮೈಸೂರಿನ ವಿದ್ಯಾವಂತ ಯುವತಿಯರಿಗೆ ಮೋಸ ಮಾಡಿದ್ದಾನೆ. ಬಣ್ಣದ ಮಾತುಗಳಿಂದ ನಂಬಿಸಿ, ಲಕ್ಷಾಂತರ ರೂಪಾಯಿ ಪೀಕಿದ್ದು, ಈತನ ವಿರುದ್ಧ ದೂರು ದಾಖಲಾಗಿದ್ದರೂ, ಆತ ಇನ್ನೂ ಸಕ್ರಿಯನಾಗಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksah7yc9171n2yaarzbvhfx5,imgname-fake-doctor-1779543832968.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಬಹುತೇಕ ಯುವತಿಯರು ಮಾತೆತ್ತಿದರೆ ವೆಲ್​ಸೆಟಲ್ಡ್​ ಹುಡುಗ ಬೇಕು ಎನ್ನುತ್ತಾರೆ. ಅವರ ಡಿಮಾಂಡ್​ ಕೇಳಿ ಹಲವು ಹುಡುಗರು ಮದುವೆಯಾಗುವ ಆಸೆಯನ್ನೇ ಬಿಟ್ಟುಬಿಡುವ ಸ್ಥಿತಿಯೂ ಬಂದಿದೆ. ಲಕ್ಷ ಲಕ್ಷ ಬಿಟ್ಟು ಕೋಟಿ ಕೋಟಿಯಲ್ಲಿಯೇ ಹಲವು ಯುವತಿಯರ ಡಿಮಾಂಡ್​ ಇರುತ್ತದೆ. ತಾವು ದುಡಿಯುತ್ತಿರಲಿ, ದುಡಿಯದೇ ಇರಲಿ ಹುಡುಗ ಹೀಗಿರಬೇಕು ಎನ್ನುವ ಭರ್ಜರಿ ಡಿಮಾಂಡ್​ ಇರುತ್ತದೆ. ಇಷ್ಟು ಡಿಮಾಂಡ್​ ಇಡಲು ಎಷ್ಟು ಬುದ್ಧಿ ಉಪಯೋಗಿಸುತ್ತಾರೋ, ಅಷ್ಟೇ ಬುದ್ಧಿ ತಾವು ಕಂಡ ಹುಡುಗನ ಹಿನ್ನೆಲೆ, ಅವನು ತಮಗೆ ಮೋಸ ಮಾಡ್ತಿದ್ದಾನಾ, ಅವನು ಬಣ್ಣಬಣ್ಣದ ಮಾತುಗಳಿಂದ ಮರುಳು ಮಾಡ್ತಿದ್ದಾನಾ ಎನ್ನುವುದನ್ನು ಯೋಚಿಸುವುದಕ್ಕೆ ಉಪಯೋಗಿಸುವುದೇ ಇಲ್ಲ. ಅದಕ್ಕಾಗಿಯೇ ಇಂದು ಯುವತಿಯರನ್ನು ಬಗೆ ಬಗೆ ರೂಪದಲ್ಲಿ ಗಾಳ ಹಾಕುವುದು ಫೇಕುಗಳಿಗೆ ಬಲು ಸುಲಭವಾಗಿಬಿಟ್ಟಿದೆ.&lt;/p&gt;&lt;h2&gt;&lt;strong&gt;ಯುವತಿಯರೇ ಹೀಗಲ್ವೆ?&lt;/strong&gt;&lt;/h2&gt;&lt;p&gt;ದೊಡ್ಡ ಮೊತ್ತದ ಕಾರು, ಬೈಕು, ಸಿನಿಮಾ ತಾರೆಯರ ರೀತಿ ಹೇರ್​ಸ್ಟೈಲ್​ ಹೀಗೆಲ್ಲಾ ಮಾಡಿ, ತಾನು ಕೋಟ್ಯಧಿಪತಿ ಎಂದು ಹೇಳಿಕೊಂಡ ತಕ್ಷಣ ಬೀಳುವ ಯುವತಿಯರು ಎಷ್ಟು ಮಂದಿ ಇಲ್ಲ ಹೇಳಿ, ಹಲವಾರು ಲವ್ ಜಿಹಾದ್​ ಕೇಸ್​ಗಳಲ್ಲಿ ಹಿಂದೂ ಯುವತಿಯರು ಬಲೆಗೆ ಬೀಳುತ್ತಿರುವುದಕ್ಕೆ ಬಹುಮುಖ್ಯ ಕಾರಣ ಇದೇ ಎನ್ನುವುದು ಇದಾಗಲೇ ವರದಿಗಳು ಹೇಳಿವೆ. ಇಂಥವರನ್ನೇ ಗಾಳ ಹಾಕುವ ಯುವಕರು ಹೆಣ್ಣುಮಕ್ಕಳ ಈ ಶ್ರೀಮಂತಿಕೆಯ ಹಪಾಹಪಿಯನ್ನು ಚೆನ್ನಾಗಿ ಅರಿತಿದ್ದಾರೆ. ಇದೀಗ ಅಂಥದ್ದೇ ಒಂದು ಕೇಸ್​ ನಡೆದಿದ್ದು, ತಾನು ಡಾಕ್ಟರ್​ ಎಂದು ಹೇಳಿಕೊಂಡಿರುವ ತಮಿಳುನಾಡಿನ ಪ್ರದೀಪ್ ಜೋಸೆಫ್ ಎಂಬಾತ ಮೆಟ್ರಿಮೋನಿಯಲ್​ ಸೈಟ್​ನಲ್ಲಿ ತನ್ನ ಬಗ್ಗೆ ಬರೆದುಕೊಂಡು ಹಲವು ಯುವತಿಯರಿಂದ ಲಕ್ಷ ಲಕ್ಷ ಪೀಕಿರುವ ಘಟನೆ ನಡೆದಿದೆ.&lt;/p&gt;&lt;h3&gt;&lt;strong&gt;ಶ್ರೀಮಂತನ ಹುಡುಕಾಟದಲ್ಲಿ...&lt;/strong&gt;&lt;/h3&gt;&lt;p&gt;ಬೆಂಗಳೂರು ಮತ್ತು ಮೈಸೂರಿನ ಎಜುಕೇಟೆಡ್​ ಯುವತಿಯರೇ ಇವನ ಮೋಸದಲ್ಲಿ ಸಿಲುಕಿರುವುದು ತಿಳಿದಿದೆ. ವೈವಾಹಿಕ ವೆಬ್&zwnj;ಸೈಟ್&zwnj;ನಲ್ಲಿ ನಕಲಿ ಗುರುತನ್ನು ಸೃಷ್ಟಿಸಿ ಶ್ರೀಮಂತ ಮತ್ತು ವಿದ್ಯಾವಂತ ವರನೆಂದು ಹೇಳಿಕೊಂಡಿದ್ದಾನೆ ಈಗ. ಪ್ರದೀಪ್ ಸೊಲೊಮನ್ ಅಲಿಯಾಸ್ ಪ್ರದೀಪ್ ಜೋಸೆಫ್ ಎಂದು ಗುರುತಿಸಿಕೊಂಡಿರುವ ಈತ ತಮಿಳುನಾಡಿನವ. ಆದ್ರೆ ಗಾಳ ಹಾಕಿರೋದು ಕರ್ನಾಕಟದ ಯುವತಿಯರಿಗೆ.&lt;/p&gt;&lt;h3&gt;&lt;strong&gt;ಅಪ್ಪ-ಅಮ್ಮನ ವಿಶ್ವಾಸವನ್ನೂ ಗಳಿಸ್ತಿದ್ದ!&lt;/strong&gt;&lt;/h3&gt;&lt;p&gt;ತಾನು ಪಿಎಚ್&zwnj;ಡಿ ಪದವೀಧರನೆಂದು ಮತ್ತು ಆರ್ಥಿಕವಾಗಿ ಉತ್ತಮವಾಗಿ ನೆಲೆಸಿರುವುದಾಗಿ ಹೇಳಿಕೊಂಡು ಪ್ರೊಫೈಲ್ ತೆರೆದಿದ್ದಾನೆ. ವೈವಾಹಿಕ ವೇದಿಕೆಗಳ ತನ್ನ ಸುಂದರ ಫೋಟೋ ಹಾಕಿ ಡಾಕ್ಟರ್​ ಎಂದಿದ್ದಾನೆ. ಹುಡುಗಿಯರಿಗೆ ಮತ್ತು ಶ್ರೀಮಂತ ಅಳಿಯನನ್ನು ಹುಡುಕುತ್ತಿರುವ ಹುಡುಗಿಯ ಮನೆಯವರಿಗೆ ಇನ್ನೇನು ಬೇಕು. ಹಿನ್ನೆಲೆಯನ್ನೂ ತಿಳಿಯದೇ ಆತನನ್ನು ಸಂಪರ್ಕಿಸಿದ್ದಾರೆ ಕೆಲವರು. ಹುಡುಗಿಯರಿಗೆ ಬಣ್ಣ ಬಣ್ಣದ ಮಾತುಗಳನ್ನಾಡಿದ್ದಾನೆ. ಕೆಲವು ಕೇಸ್​ಗಳಲ್ಲಿ ಅಪ್ಪ-ಅಮ್ಮನ ವಿಶ್ವಾಸವನ್ನೂ ಗಳಿಸಿದ್ದಾನೆ.&lt;/p&gt;&lt;h3&gt;&lt;strong&gt;ಭಾವಿ ಅಳಿಯನಿಗೆ ಲಕ್ಷ ಲಕ್ಷ ಕೊಟ್ಟ ಅಪ್ಪ-ಅಮ್ಮ&lt;/strong&gt;&lt;/h3&gt;&lt;p&gt;ಕೊನೆಗೆ ಆ ನೆಪ ಈ ನೆಪ ಹೇಳಿ ಅವರಿಂದ ಲಕ್ಷ ಲಕ್ಷ ಪೀಕಿದ್ದಾನೆ. ತನ್ನ ಅಪಾರ ಹಣವು ವ್ಯವಹಾರ ಅಥವಾ ಹಣಕಾಸಿನ ವಹಿವಾಟಿನಲ್ಲಿ &quot;ಸಿಕ್ಕಿಹೋಗಿದೆ&quot; ಮತ್ತು ತುರ್ತಾಗಿ ತಾತ್ಕಾಲಿಕ ಆರ್ಥಿಕ ಸಹಾಯದ ಅಗತ್ಯವಿದೆ ಎಂದು ಹೇಳುತ್ತಿದ್ದ. ಅವನ ಭರವಸೆಗಳನ್ನು ನಂಬಿದ ಹಲವಾರು ಕುಟುಂಬಗಳು ಅವನಿಗೆ ಲಕ್ಷಾಂತರ ರೂಪಾಯಿಗಳನ್ನು ವರ್ಗಾಯಿಸಿವೆ. ಕೋಟ್ಯಧಿಪತಿ ಸಿಗುವಾಗ ಒಂದಿಷ್ಟು ಲಕ್ಷ ಹೋದ್ರೆ ದೊಡ್ಡ ವಿಷ್ಯವೇನಲ್ಲ ಬಿಡಿ ಎಂದುಕೊಂಡು ಯುವತಿಯರು ಅವನು ಕೇಳಿದಷ್ಟು ದುಡ್ಡು ಕೊಟ್ಟಿದ್ದಾರೆ. ಆಮೇಲೆ ಚಾಪ್ಟರ್​ ಕ್ಲೋಸ್​. ಮತ್ತೊಂದು ಮಿಕನ್ನ ಹಿಡಿಯುವಲ್ಲಿ ಈತ ತಲ್ಲೀನ. ಹೀಗೆ ಅನೇಕರಿಗೆ ಟೋಪಿ ಹಾಕಿರುವ ಈತನ ವಿರುದ್ಧ ಯಾರೋ ಒಬ್ಬರು ದೂರು ಸಲ್ಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.&lt;/p&gt;&lt;p&gt;ಇನ್ನೂ ಆ್ಯಕ್ಟೀವ್, ಪೊಲೀಸ್ರಿಗೆ ಸಿಗ್ತಿಲ್ಲ!&lt;/p&gt;&lt;p&gt;ಸದ್ಯ, ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತಂಡಗಳು ಪ್ರಸ್ತುತ ಆರೋಪಿಗಾಗಿ ಹುಡುಕಾಟ ನಡೆಸುತ್ತಿವೆ, ಅವರು ಬಂಧನದ ಭಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇವನಿಗೆ ಇವನ ಅಮ್ಮ ಎಂದು ಹೇಳುವ ಕಲಾವತಿ ಎನ್ನುವ ಮಹಿಳೆಯೂ ಸಹಾಯ ಮಾಡುತ್ತಿದ್ದಳು. ಇವನ ಬಗ್ಗೆ ತಿಳಿಯತ್ತಲೇ ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಎಲ್ಲಿಯೋ ಕುಳಿತು ವಿಡಿಯೋ ಮಾಡಿದ್ದಾನೆ ಈತ. ಪೊಲೀಸರಿಗೆ ಮಾತ್ರ ಸಿಕ್ತಿಲ್ಲವಂತೆ. ಇಷ್ಟೆಲ್ಲಾ ಕಂಪ್ಲೇಂಟ್​ ಆದ್ರೂ ಇನ್ನೂ ಮೆಟ್ರಿಮೋನಿಯಲ್​ ಸೈಟ್​ನಲ್ಲಿ ಆ್ಯಕ್ಟೀವ್​ ಆಗಿದ್ದಾನಂತೆ! ಪೊಲೀಸರು ಹುಡುಕಾಟ ನಡೆಸ್ತಾ ಇದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/a-major-matrimonial-fraud-case-has-come-to-light-in-bengaluru-and-mysuru-suc/articleshow-pg0fkcz"/>
        </item>
        <item>
            <title><![CDATA[ಮಹಿಳೆಯರೇ 'ಗೃಹಲಕ್ಷ್ಮಿ' 3 ಲಕ್ಷ ಸಾಲದ ಬಲೆಯಲ್ಲಿ ಸಿಲುಕಿಕೊಳ್ಳಬೇಡಿ; ಇಲ್ಲಿದೆ ಸತ್ಯಾಂಶ]]></title>
            <link>https://kannada.asianetnews.com/gallery/karnataka-districts/it-is-a-false-news-that-loans-up-to-rs-3-lakh-can-be-availed-under-the-gruha-lakshmi-loan-scheme-mrq-q96mpaa</link>
            <guid isPermaLink="true">https://kannada.asianetnews.com/gallery/karnataka-districts/it-is-a-false-news-that-loans-up-to-rs-3-lakh-can-be-availed-under-the-gruha-lakshmi-loan-scheme-mrq-q96mpaa</guid>
            <pubDate>Tue, 02 Jun 2026 08:41:06 +0530</pubDate>
            <description><![CDATA[&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹಲಕ್ಷ್ಮಿ ಲೋನ್ ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತದೆ ಎಂಬುದು ಸುಳ್ಳು ಸುದ್ದಿ. ಸರ್ಕಾರದಿಂದ ಇಂತಹ ಯಾವುದೇ ಅಧಿಕೃತ ಯೋಜನೆ ಪ್ರಕಟವಾಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hqe0x5h8z66e4xdmhwx0638h,imgname-23krmn3-131.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹಲಕ್ಷ್ಮಿ ಲೋನ್ ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತದೆ ಎಂಬುದು ಸುಳ್ಳು ಸುದ್ದಿ. ಸರ್ಕಾರದಿಂದ ಇಂತಹ ಯಾವುದೇ ಅಧಿಕೃತ ಯೋಜನೆ ಪ್ರಕಟವಾಗಿಲ್ಲ.&lt;/p&gt;&lt;img&gt;&lt;p&gt;ಗೃಹಲಕ್ಷ್ಮಿ ಲೋನ್ ಯೋಜನೆಯಿಂದ 30 ಸಾವಿರದಿಂದ 3 ಲಕ್ಷದವರೆಗೆ ಸಾಲ ಸಿಗುತ್ತದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಗಮನಕ್ಕೆ ಬಂದಿದ್ದು, ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಕರೆ ಮಾಡುತ್ತಿರುತ್ತಾರೆ.&lt;/p&gt;&lt;img&gt;&lt;p&gt;ಗೃಹಲಕ್ಷ್ಮಿ ಲೋನ್ ಯೋಜನೆ ಎಂಬ ಅಧಿಕೃತ ಯೋಜನೆ ಪ್ರಕಟವಾಗಿರುವುದಿಲ್ಲ. ಜನರು ಮೋಸ ಹೋಗಬೇಡಿ, ಇದು ಸುಳ್ಳು ಸುದ್ದಿಯಾಗಿದ್ದು, ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿರುವುದಿಲ್ಲ ಹಾಗೂ ಯಾವುದೇ ಅಪರಿಚಿತ ಎಪಿಕೆ ಫೈಲ್ ಲಿಂಕ್&zwnj; ಗಳನ್ನು ಇನ್&zwnj; ಸ್ಟಾಲ್ ಮಾಡಬೇಡಿ ಮತ್ತು ಓಟಿಪಿ ಬ್ಯಾಂಕ್ ಡಿಟೇಲ್ಸ್ ಹಾಗೂ ಪರ್ಸನಲ್ ಇನ್&zwnj; ಫರ್&zwnj; ಮೇಷನ್&zwnj; ಗಳನ್ನು ಯಾರೊಂದಿಗೂ ಷೇರ್ ಮಾಡಬೇಡಿ.&lt;/p&gt;&lt;img&gt;&lt;p&gt;ಸಾಮಾಜಿಕ ಜಾಲತಾಣಗಳಾದ ಇನ್&zwnj; ಸ್ಟಾ ಗ್ರಾಮ್, ಫೇಸ್&zwnj; ಬುಕ್, ಯುಟ್ಯೂಬ್&zwnj; ಗಳನ್ನು ನಂಬಿ ಹಣ ಪಾವತಿಸಬೇಡಿ. ಸರ್ಕಾರದಿಂದ ಅಧಿಕೃತ ಆದೇಶ ಅಥವಾ ನ್ಯೂಸ್ ಪೇಪರ್ ಸ್ಟೇಟ್&zwnj; ಮೆಂಟ್ ಬಂದಾಗ ಮಾತ್ರ ನಂಬಿಕೆ ಇಡಿ. ಯಾರಿಗೂ ದುಡ್ಡು ಕೊಟ್ಟು ಮೋಸ ಹೋಗಬೇಡಿ ಎಂದು ಮೈಸೂರು ಮಹಾನಗರ ಪಾಲಿಕೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಪುಷ್ಪವಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/it-is-a-false-news-that-loans-up-to-rs-3-lakh-can-be-availed-under-the-gruha-lakshmi-loan-scheme-mrq-q96mpaa"/>
        </item>
        <item>
            <title><![CDATA[ಬೆಂಗಳೂರಿನಿಂದ ಧರ್ಮಸ್ಥಳ-ಕುಕ್ಕೆಗೆ ಹೊಸ ಸ್ಲೀಪರ್ ಬಸ್‌ ಆರಂಭ, ಹಗಲು ಮತ್ತು ರಾತ್ರಿ ಸಮಯದ ವೇಳಾಪಟ್ಟಿ ಇಲ್ಲಿದೆ]]></title>
            <link>https://kannada.asianetnews.com/karnataka-districts/ksrtc-launches-new-non-ac-sleeper-bus-connecting-bengaluru-mysuru-and-coorg-to-dharmasthala-and-kukke-subrahmanya-gdp/articleshow-srxge4r</link>
            <guid isPermaLink="true">https://kannada.asianetnews.com/karnataka-districts/ksrtc-launches-new-non-ac-sleeper-bus-connecting-bengaluru-mysuru-and-coorg-to-dharmasthala-and-kukke-subrahmanya-gdp/articleshow-srxge4r</guid>
            <pubDate>Thu, 28 May 2026 15:49:49 +0530</pubDate>
            <description><![CDATA[ಕೆಎಸ್ಆರ್ಟಿಸಿ, ಬೆಂಗಳೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ಕೊಡಗು ಜಿಲ್ಲೆಯ ಸೋಮವಾರಪೇಟೆ, ಶನಿವಾರಸಂತೆ ಮತ್ತು ಬಿಸ್ಲೆ ಘಾಟ್ ಮಾರ್ಗವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksq1c08b9cf5s22x3dg3p82e,imgname-ksrtc--1--1779963396363.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತಾದಿಗಳಿಗೆ ಮತ್ತು ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ, ಕೊಡಗು ಮತ್ತು ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿರುವ ನೂತನ &quot;ನಾನ್ ಎಸಿ ಸ್ಲೀಪರ್&quot; (Non-AC Sleeper) ಬಸ್ ಸೇವೆಗೆ ಇಂದಿನಿಂದಲೇ ಅಧಿಕೃತವಾಗಿ ಚಾಲನೆ ನೀಡಲಾಗಿದೆ.&lt;/p&gt;&lt;p&gt;ಕೊಡಗು ಜಿಲ್ಲೆಯ ಸೋಮವಾರಪೇಟೆ, ಶನಿವಾರಸಂತೆ ಹಾಗೂ ಸುಂದರ ಪ್ರಕೃತಿ ಸೌಂದರ್ಯದ ಬಿಸ್ಲೆ ಘಾಟ್ ಮಾರ್ಗವಾಗಿ ಈ ಹೊಸ ಸ್ಲೀಪರ್ ಬಸ್ ಸಂಚರಿಸಲಿದ್ದು, ಪ್ರವಾಸಿಗರಿಗೆ ಮತ್ತು ನಿತ್ಯ ಪ್ರಯಾಣಿಕರಿಗೆ ಇದು ವರದಾನವಾಗಲಿದೆ.&lt;/p&gt;&lt;h2&gt;ನೂತನ ಸ್ಲೀಪರ್ ಬಸ್ ಸಂಚಾರದ ಸಂಪೂರ್ಣ ಮಾರ್ಗ ಮತ್ತು ವೇಳಾಪಟ್ಟಿ:&lt;/h2&gt;&lt;p&gt;ಪುತ್ತೂರು ವಿಭಾಗದ ಕ.ರಾ.ರ.ಸಾ. ಸಂಸ್ಥೆಯು ಈ ನೂತನ ಸೇವೆಯನ್ನು ವಿನ್ಯಾಸಗೊಳಿಸಿದ್ದು, ಬಸ್ಸುಗಳ ಸಂಚಾರದ ನಿಖರ ಸಮಯ ಹೀಗಿದೆ:&lt;/p&gt;&lt;h3&gt;ಧರ್ಮಸ್ಥಳದಿಂದ ಬೆಂಗಳೂರಿನತ್ತ ಪ್ರಯಾಣ (ಬೆಳಗ್ಗಿನ ವೇಳಾಪಟ್ಟಿ):&lt;/h3&gt;&lt;p&gt;ಈ ನೂತನ ಸ್ಲೀಪರ್ ಬಸ್ ಪ್ರತಿದಿನ ಬೆಳಗ್ಗೆ 6:30 ಗಂಟೆಗೆ ಧರ್ಮಸ್ಥಳದಿಂದ ಹೊರಡಲಿದೆ. ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಿ, ಬೆಳಗ್ಗೆ 8:00 ಗಂಟೆಗೆ ಸುಬ್ರಹ್ಮಣ್ಯದಿಂದ ಪ್ರಯಾಣ ಮುಂದುವರಿಸಲಿದೆ. ತದನಂತರ ಬಿಸ್ಲೆಯಿಂದ ಬೆಳಗ್ಗೆ 8:50ಕ್ಕೆ, ಶನಿವಾರಸಂತೆಯಿಂದ ಬೆಳಗ್ಗೆ 9:35ಕ್ಕೆ ಹಾಗೂ ಸೋಮವಾರಪೇಟೆಯಿಂದ ಬೆಳಗ್ಗೆ 10:30 ಗಂಟೆಗೆ ಹೊರಡಲಿದೆ. ಅಲ್ಲಿಂದ ಕುಶಾಲನಗರ ಮತ್ತು ಮೈಸೂರು ಮಾರ್ಗವಾಗಿ ರಾಜಧಾನಿ ಬೆಂಗಳೂರನ್ನು ತಲುಪಲಿದೆ.&lt;/p&gt;&lt;h3&gt;ಬೆಂಗಳೂರಿನಿಂದ ಧರ್ಮಸ್ಥಳದತ್ತ ಪ್ರಯಾಣ (ರಾತ್ರಿಯ ವೇಳಾಪಟ್ಟಿ):&lt;/h3&gt;&lt;p&gt;ಮತ್ತೊಂದೆಡೆ, ಇದೇ ನಾನ್ ಎಸಿ ಸ್ಲೀಪರ್ ಬಸ್ ಪ್ರತಿದಿನ ರಾತ್ರಿ 9:45 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಹೊರಡಲಿದೆ. ರಾತ್ರಿ ಪೂರ್ತಿ ಸಂಚರಿಸಲಿರುವ ಈ ಬಸ್ ಮೈಸೂರು, ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ, ಕೂಡುರಸ್ತೆ, ಬಿಸ್ಲೆ ಘಾಟ್ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮಾರ್ಗವಾಗಿ ಮರುದಿನ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತಲುಪಲಿದೆ.&lt;/p&gt;&lt;h2&gt;ಆನ್&zwnj;ಲೈನ್ ಬುಕ್ಕಿಂಗ್ ಲಭ್ಯ: ಪ್ರಯಾಣಿಕರಿಗೆ ಅಧಿಕಾರಿಗಳ ಮನವಿ&lt;/h2&gt;&lt;p&gt;ಕೊಡಗು ಮತ್ತು ಕರಾವಳಿಯ ಧಾರ್ಮಿಕ ಕ್ಷೇತ್ರಗಳ ನಡುವೆ ನೇರ ಸ್ಲೀಪರ್ ಬಸ್ ಸೌಕರ್ಯ ಇರಲಿಲ್ಲ. ಸದ್ಯ ಈ ಹೊಸ ಸೇವೆಯಿಂದಾಗಿ ಸುಖಕರ ಪ್ರಯಾಣಕ್ಕೆ ಹಂಬಲಿಸುವ ಸಾರ್ವಜನಿಕರಿಗೆ ದೊಡ್ಡ ಅನುಕೂಲ ಸಿಕ್ಕಂತಾಗಿದೆ.&lt;/p&gt;&lt;p&gt;ಈ ನೂತನ ಸ್ಲೀಪರ್ ಸಾರಿಗೆಯ ಸದುಪಯೋಗವನ್ನು ಸಾರ್ವಜನಿಕರು ಹಾಗೂ ಯಾತ್ರಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಶ್ರೀಹರಿಬಾಬು ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.&lt;/p&gt;&lt;h2&gt;ಟಿಕೆಟ್ ಕಾಯ್ದಿರಿಸುವಿಕೆ ಹೇಗೆ?&lt;/h2&gt;&lt;p&gt;ಈ ಬಸ್ಸಿನಲ್ಲಿ ಪ್ರಯಾಣಿಸಲು ಇಚ್ಛಿಸುವ ಸಾರ್ವಜನಿಕರು ತಮ್ಮ ಹತ್ತಿರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕೌಂಟರ್&zwnj;ಗಳಿಗೆ ಭೇಟಿ ನೀಡಿ ಮುಂಗಡ ಟಿಕೆಟ್ ಪಡೆಯಬಹುದು. ಅಥವಾ ಸಂಸ್ಥೆಯ ಅಧಿಕೃತ ಜಾಲತಾಣವಾದ www.ksrtc.in ಗೆ ಭೇಟಿ ನೀಡುವ ಮೂಲಕ ಆನ್&zwnj;ಲೈನ್&zwnj;ನಲ್ಲಿಯೂ ಸೀಟುಗಳನ್ನು ಸುಲಭವಾಗಿ ಬುಕ್ ಮಾಡಿಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/ksrtc-launches-new-non-ac-sleeper-bus-connecting-bengaluru-mysuru-and-coorg-to-dharmasthala-and-kukke-subrahmanya-gdp/articleshow-srxge4r"/>
        </item>
        <item>
            <title><![CDATA[KR Nagar: ಆಣೆ- ಪ್ರಮಾಣ, JDSನ ಎರಡು ಗುಂಪುಗಳ ನಡುವೆ ವಾಗ್ವಾದ; 10 ಲಕ್ಷದ ಬೆಟ್ಟಿಂಗ್]]></title>
            <link>https://kannada.asianetnews.com/karnataka-districts/clashes-between-two-factions-of-jds-in-kr-nagar-allegations-of-betting-in-the-2019-lok-sabha-elections-mrq/articleshow-x1tabyy</link>
            <guid isPermaLink="true">https://kannada.asianetnews.com/karnataka-districts/clashes-between-two-factions-of-jds-in-kr-nagar-allegations-of-betting-in-the-2019-lok-sabha-elections-mrq/articleshow-x1tabyy</guid>
            <pubDate>Sat, 06 Jun 2026 07:44:41 +0530</pubDate>
            <description><![CDATA[2019ರ ಲೋಕಸಭಾ ಚುನಾವಣೆಯ ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಜೆಡಿಎಸ್&zwnj;ನ ಎರಡು ಬಣಗಳು ಕಪ್ಪಡಿ ಕ್ಷೇತ್ರದಲ್ಲಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದವು. ಆದರೆ, ಈ ಸಭೆಯು ತಳ್ಳಾಟ-ನೂಕಾಟ ಮತ್ತು ಚಪ್ಪಲಿ ಎಸೆಯುವಿಕೆಯೊಂದಿಗೆ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಅಂತಿಮವಾಗಿ, ಸ್ಥಳೀಯರ ವಿರೋಧದಿಂದ ಆಣೆ ಪ್ರಮಾಣ ರದ್ದಾಗಿ, ಎರಡೂ ಬಣಗಳು ಕೇವಲ ಪೂಜೆ ಸಲ್ಲಿಸಿ ಹಿಂತಿರುಗಿದವು.]]></description>
            <media:content url="https://static.asianetnews.com/images/w-1280,h-720,format-jpg,imgid-01ktdb7cveggvzf85ey98667t7,imgname-kr-nagar--1--1780711928686.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು:&lt;/strong&gt; 2019ರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಾ.ರಾ. ನಂದೀಶ್ ಅವರು ಸುಮಲತಾ ಅವರು ಗೆಲ್ಲುತ್ತಾರೆಂದು 10 ಲಕ್ಷ ರೂಪಾಯಿಗಳನ್ನು ಬೆಟ್ಟಿಂಗ್ ಕಟ್ಟಿದ್ದರು, ಆ ಬೆಟ್ಟಿಂಗ್ ಹಣವನ್ನು ಮೈಸೂರಿನ ಅವರ ಕಚೇರಿಯಲ್ಲಿ ಪಡೆದುಕೊಂಡರು ಎನ್ನುವ ಆರೋಪವನ್ನು ಹೂಟಗಳ್ಳಿ ಗ್ರಾಮದ ಜಿ.ಟಿ.ದೇವೇಗೌಡರ ಬೆಂಬಲಿಗ ಸುರೇಶ್ ಕೆಲವು ದಿನಗಳ ಹಿಂದೆ ಆರೋಪಿಸಿದ್ದು ಜೆಡಿಎಸ್ ಪಕ್ಷದಲ್ಲಿ ಕಿಡಿ ಎಬ್ಬಿಸಿದೆ.&lt;/p&gt;&lt;p&gt;ಸಾಲಿಗ್ರಾಮ ತಾಲೂಕಿನ ಕುಪ್ಪಹಳ್ಳಿ ಗ್ರಾಮದ ಮಾಜಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಕುಪ್ಪಹಳ್ಳಿ ಸೋಮಶೇಖರ್ ಪ್ರತಿಕ್ರಿಯಿಸಿ ಹೌದು ನಾನೇ ಹತ್ತು ಲಕ್ಷ ರೂಪಾಯಿಗಳನ್ನು ಮೈಸೂರಿಗೆ ತೆಗೆದುಕೊಂಡು ಹೋಗಿ ಸಾ.ರಾ.ನಂದೀಶ್ ಗೆ ಕೊಟ್ಟಿರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದು ಈ ಬಗ್ಗೆ ಜೆಡಿಎಸ್ ಎರಡು ಬಣಗಳ( ಜಿ ಟಿ ದೇವೇಗೌಡ, ಹರೀಶ್ ಗೌಡ ಮತ್ತು ಸಾ.ರಾ, ಮಹೇಶ್ ಬಣ) ಮುಖಂಡರು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದು ಬೆಟ್ಟಿಂಗ್ ವಿಚಾರದಲ್ಲಿ ಸತ್ಯದ ಬಗ್ಗೆ ಪ್ರಮಾಣಿಕರಿಸಲು ಶ್ರೀ ಕ್ಷೇತ್ರ ಕಪ್ಪಡಿಯಲ್ಲಿ ಆಣೆ ಪ್ರಮಾಣಕ್ಕೆ ಒತ್ತಾಯಿಸಿ ಬಹಿರಂಗವಾಗಿ ಮಾತನಾಡಿದ್ದರು.&lt;/p&gt;&lt;p&gt;ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಾ.ರಾ.ನಂದೀಶ್ ಗುಂಪು ಮತ್ತು 10:45 ಗಂಟೆಗೆ ಸುರೇಶ್ ಕಡೆಯವರು ಸುಮಾರು ನೂರಾರು ಜನರು ಕಪ್ಪಡಿ ಕ್ಷೇತ್ರಕ್ಕೆ ಬರುವ ಹೆಬ್ಬಾಳಿನ ಮುಖ್ಯ ದ್ವಾರದ ಬಳಿ ಜಮಾಯಿಸಿದ್ದ ಸಂದರ್ಭದಲ್ಲಿ ಹೆಬ್ಬಾಳು ಗ್ರಾಮಸ್ಥರು ತಡೆಗಟ್ಟಿದರು. ಹೂಟಗಳ್ಳಿ ಸುರೇಶ್ ಮತ್ತು ಕುಪ್ಪಳ್ಳಿ ಸೋಮಶೇಖರ್ ಅವರು ಬೇರೆ ರಸ್ತೆಯಲ್ಲಿ ಕಪ್ಪಡಿ ಕ್ಷೇತ್ರಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ವಾಪಸ್ಸು ಬರಬೇಕಾದರೆ ಅವನ ಕಾರನ್ನು ಅಡ್ಡಗಟ್ಟಲು ಹೆಬ್ಬಾಳು ಮುಖ್ಯದ್ವಾರದಲ್ಲಿ ಸಾ.ರಾ.ನಂದೀಶ್ ಬೆಂಬಲಿಗರು ಅಡ್ಡಗಟ್ಟಲು ಪ್ರಯತ್ನಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಕಾರನ್ನು ನಿಲ್ಲಿಸದೆ ಹೋಗುವಾಗ ಅವರ ಕಾರಿನ ಮೇಲೆ ಸಾ.ರಾ.ನಂದೀಶ್ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಎಸೆದು ಧಿಕ್ಕಾರದ ಘೋಷಣೆಗಳನ್ನು ಕೂಗಿದರಲ್ಲದೆ. ಕುಪ್ಪಹಳ್ಳಿ ಸೋಮಶೇಖರ್ ರವರನ್ನು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡು ತಳ್ಳಾಟ ,ನೂಕಾಟ ಮಾಡಿದರು. ನಂತರ ಮತ್ತೊಂದು ಕಾರನ್ನು ಅಡ್ಡಗಟ್ಟಿ ಕೀ ಕಿತ್ತುಕೊಂಡಿದ್ದರುಸ್ಥಳಕ್ಕೆ ಬಂದ ಪೊಲೀಸರು ಗುಂಪಿನಿಂದ ಕುಪ್ಪಹಳ್ಳಿ ಸೋಮಶೇಖರವರನ್ನು ಕರೆದುಕೊಂಡು ಸ್ಕೂಟರ್ ನಲ್ಲಿ ಕೆ.ಆರ್.ನಗರದ ಕಡೆ ಕಳುಹಿಸಿದರು.&lt;/p&gt;&lt;p&gt;ಇದಾದ ನಂತರ ಸಾ.ರಾ.ನಂದೀಶ್ ಹಾಗೂ ಅವರ ಬೆಂಬಲಿಗರು ಕಪ್ಪಡಿ ಕ್ಷೇತ್ರಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಪ್ಪಡಿ ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ, ಜಯ ಘೋಷಣೆಗಳನ್ನು ಕೂಗಿದರು. ಹಾಗೂ ಕುಪ್ಪಹಳ್ಳಿ ಸೋಮಶೇಖರ್ ಹಾಗೂ ಹೂಟಗಳ್ಳಿ ಸುರೇಶ್ ರವರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಅಣ್ಣ ತಮ್ಮಂದಿರ ನಡುವೆ ಬಿರುಕು ಮೂಡಿಸುವ ಪ್ರಯತ್ನ&lt;/strong&gt;&lt;/h2&gt;&lt;p&gt;ಸಾ.ರಾ.ನಂದೀಶ್ ಮಾತನಾಡಿ ನಾನು ಯಾವುದೇ ಬೆಟ್ಟಿಂಗ್ ನಲ್ಲಿ ಭಾಗಿಯಾಗಿಲ್ಲ. ಆದರೆ ಕುಪ್ಪಹಳ್ಳಿ ಸೋಮಶೇಖರ್, ಹೂಟಗಳ್ಳಿ ಸುರೇಶ್ ಹಾಗೂ ಇತರರು ನನ್ನ ಮೇಲೆ ವಿನಾಕಾರಣ ಸುಳ್ಳು ಆರೋಪ ಮಾಡಿದ್ದಾರೆ.ಇದರಿಂದ ನನ್ನ ಮತ್ತು ನನ್ನ ಕುಟುಂಬದವರ ಮನಸ್ಸಿಗೆ ಸಾಕಷ್ಟು ಆಘಾತವಾಗಿ ಆರೋಗ್ಯ ಸಹ ಹಾಳಾಗಿದೆ. ನಮ್ಮ ಅಣ್ಣ ತಮ್ಮಂದಿರ ನಡುವೆ ಬಿರುಕು ಮೂಡಿಸುವ ಪ್ರಯತ್ನವಿದು ಎಂದರು.&lt;/p&gt;&lt;p&gt;ನಾನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಮಾಡಿಲ್ಲ ಬೆಟ್ಟಿಂಗ್ ಆಡುವುದಕ್ಕೆ ನನ್ನ ಸಹಮತ ಇಲ್ಲ ಮತ್ತು ಕಾನೂನಿನಲ್ಲಿ ಅವಕಾಶ ಇಲ್ಲ. ಕೆಲವರು ಮಾಧ್ಯಮಗಳಲ್ಲಿಯೇ ಬೆಟ್ಟಿಂಗ್ ಆಡಿದ್ದೇವೆ ಎಂದು ಹೇಳಿದರು ಸಹ ಇದುವರೆಗೂ ಪೊಲೀಸ್ ಇಲಾಖೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಅವರನ್ನು ಬಂಧಿಸಿಲ್ಲ,ಇಷ್ಟೆಲ್ಲಕ್ಕೂ ಪೊಲೀಸರ ವೈಫಲ್ಯ ಕಾರಣ ಎಂದು ಕಿಡಿ ಕಾರಿದರು.&lt;/p&gt;&lt;p&gt;ನಮ್ಮ ಅಣ್ಣ ಮತ್ತು ನನ್ನ ರಾಜಕೀಯ ಯಶಸ್ಸನ್ನು ಸಹಿಸದೆ ನಮ್ಮ ವಿರೋಧಿಗಳು ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಅಣ್ಣ ಸಾರಾ ಮಹೇಶ್ ಏನು ಹೇಳಿದ್ದಾರೊ, ಯಾವ ನಿರ್ದೇಶನ ಕೊಟ್ಟಿದ್ದಾರೋ ಅದೇ ರೀತಿ ನಡೆದುಕೊಂಡಿದ್ದೇನೆ. ನನ್ನ ತಾಲೂಕಿನ ಜನತೆಗೆ ಹಾಗೂ ಕಾರ್ಯಕರ್ತರಿಗೆ ನಮ್ಮ ಬದ್ಧತೆ. ಹೆಬ್ಬಾಳಿನ ಸ್ಥಳೀಯರು ಯಾವುದೇ ಕಾರಣಕ್ಕೂ ಆಣೆ ಪ್ರಮಾಣ ಬೇಡ ಎಂದು ಹೇಳಿದರು. ಸುರೇಶ ದೂರವಾಣಿ ಕರೆ ಮಾಡಿ ನನ್ನದು ತಪ್ಪಾಗಿದೆ ಎಂದು ಹೇಳಿದನು. ಅದನ್ನು ಮಾಧ್ಯಮದ ಮುಂದೆ ಹೇಳು ಎಂದು ಹೇಳಿದೆ. ಎಲ್ಲವನ್ನು ದೇವರು ನೋಡಿಕೊಳ್ಳುತ್ತಾನೆ ಎಂದರು.&lt;/p&gt;&lt;p&gt;ಕಪ್ಪಡಿಯಿಂದ ವಾಪಸ್ ಬರುವಾಗ ಪುನಃ ಹೆಬ್ಬಾಳು ಗ್ರಾಮದ ಮುಖ್ಯ ದ್ವಾರದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ ಸಾರಾ ಮಹೇಶ್ ಮತ್ತು ನಂದೀಶ್ ಪರವಾಗಿ ಘೋಷಣೆಗಳನ್ನು ಕೂಗಿದರು.&lt;/p&gt;&lt;h3&gt;&lt;strong&gt;ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಭದ್ರತೆ&lt;/strong&gt;&lt;/h3&gt;&lt;p&gt;ಎರಡು ಕಡೆಯವರನ್ನು ಪ್ರತ್ಯೇಕವಾಗಿ ಗುದ್ದುಗೆ ದರ್ಶನಕ್ಕೆ ಪೊಲೀಸರು ಕಳುಹಿಸಿದರಲ್ಲದೇ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೋಲಿಸ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್ ನೇತೃತ್ವದಲ್ಲಿ ಸೂಕ್ತ ಬಂದೋ ಬಸ್ತ್ ಏರ್ಪಡಿಸಿದರು. ಎರಡು ಕಡೆಯವರು ಜೆಡಿಎಸ್ ಮುಖಂಡರುಗಳೆ ಆಗಿದ್ದು ಯಾವುದೇ ಆಣೆ ಪ್ರಮಾಣ ಮಾಡದೆ ಸ್ಥಳೀಯರ ವಿರೋಧದಿಂದ ಕೇವಲ ಪೂಜೆ ಸಲ್ಲಿಸುವ ಮೂಲಕ ತೆರಳಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಯುವ ಜೆಡಿಎಸ್ ಅಧ್ಯಕ್ಷ ಹಂಪಾಪುರ ಸುರೇಶ್, ಹೆಬ್ಬಾಳು ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಬಾಲು, ಮುಖಂಡರಾದ ಹೆಬ್ಬಾಳು ಸಂತೋಷ್, ಸುಜಯ್ ಗೌಡ, ಕಪ್ಪಡಿಹರೀಶ್, ಮಧು, ವಕೀಲ ಅಂಕನಹಳ್ಳಿ ತಿಮ್ಮಪ್ಪ, ಅಯ್ಯರುದ್ರೇಶ್, ಅನೀಫ್ ಗೌಡ, ಶ್ರೀಧರ, ಮಹೇಶ್, ರಾಜೇಗೌಡ, ಕುಚೇಲ, ಮಹೇಶ್, ಮುಂಡೂರು ಶಿವು, ಸಾಲಿಗ್ರಾಮ ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/clashes-between-two-factions-of-jds-in-kr-nagar-allegations-of-betting-in-the-2019-lok-sabha-elections-mrq/articleshow-x1tabyy"/>
        </item>
        <item>
            <title><![CDATA[ದೈವಕ್ಕೆ ಅವಮಾನ, ಚಿತ್ರರಂಗದಿಂದ ಬ್ಯಾನ್ ಚಾಮುಂಡಿ ಬೆಟ್ಟಕ್ಕೆ ಓಡೋಡಿ ಬಂದು ತಾಯಿ ಮುಂದೆ ಮಂಡಿಯೂರಿದ ರಣವೀರ್ ಸಿಂಗ್!]]></title>
            <link>https://kannada.asianetnews.com/cine-world/bollywood-star-ranveer-singh-apologizes-at-mysuru-chamundi-hills-over-kantara-movie-row-gdp/articleshow-xfngyz7</link>
            <guid isPermaLink="true">https://kannada.asianetnews.com/cine-world/bollywood-star-ranveer-singh-apologizes-at-mysuru-chamundi-hills-over-kantara-movie-row-gdp/articleshow-xfngyz7</guid>
            <pubDate>Tue, 26 May 2026 12:59:14 +0530</pubDate>
            <description><![CDATA[ಕರಾವಳಿಯ ಪವಿತ್ರ ದೈವಾರಾಧನೆಯನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಟ ರಣವೀರ್ ಸಿಂಗ್, ಕಾನೂನು ಹೋರಾಟಕ್ಕೆ ಮಣಿದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಅವರು ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಮಂಡಿಯೂರಿ ಬೇಷರತ್ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kshjyv6hzkjknhq1q2kfcf4s,imgname-ranveer-singh-apologizes--1--1779780512977.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಕರಾವಳಿ ಕರ್ನಾಟಕದ ಪರಮ ಪವಿತ್ರ ಸಂಸ್ಕೃತಿಯಾದ ದೈವಾರಾಧನೆಯನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿದ್ದ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್, ಕೊನೆಗೂ ಕಾನೂನು ಹೋರಾಟಕ್ಕೆ ಮಣಿದು. ತಮ್ಮ ತಪ್ಪಿನ ಅರಿವಾಗಿ ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ದಿಢೀರ್ ಭೇಟಿ ನೀಡಿದ ನಟ, ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಮಂಡಿಯೂರಿ ಬೇಷರತ್ ಕ್ಷಮೆಯಾಚಿಸಿದ್ದಾನೆ. ಈ ಮೂಲಕ ಕಳೆದ ಕೆಲವು ಸಮಯದಿಂದ ಸೃಷ್ಟಿಯಾಗಿದ್ದ ದೊಡ್ಡ ಧಾರ್ಮಿಕ ವಿವಾದವೊಂದು ಸುಖಾಂತ್ಯ ಕಂಡಿದೆ.&lt;/p&gt;&lt;h2&gt;ವಿವಾದದ ಹಿನ್ನೆಲೆ ಏನು?&lt;/h2&gt;&lt;p&gt;ಗೋವಾದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ನಟ ರಣವೀರ್ ಸಿಂಗ್, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಕರಾವಳಿ ಹಿನ್ನೆಲೆಯ &lsquo;ಕಾಂತಾರ&rsquo; ಸಿನಿಮಾದ ಪವಿತ್ರ ದೈವದ ನರ್ತನ ಹಾಗೂ ನಟನೆಯನ್ನು ವೇದಿಕೆಯ ಮೇಲೆ ಅನುಕರಿಸಿದ್ದರು. ಈ ವೇಳೆ ಅವರು ಪವಿತ್ರ ದೈವವನ್ನು &lsquo;ದೆವ್ವ&rsquo; (Ghost) ಎಂಬುದಾಗಿ ಹೋಲಿಸಿ ಮಾತನಾಡಿದ್ದರು. ಕರಾವಳಿ ಮತ್ತು ಸಮಸ್ತ ಕರ್ನಾಟಕದ ಜನರ ಆರಾಧ್ಯ ದೈವಕ್ಕೆ ಬಾಲಿವುಡ್ ನಟ ಈ ರೀತಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ವಿರುದ್ಧ ವ್ಯಾಪಕ ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತವಾಗಿತ್ತು.&lt;/p&gt;&lt;h2&gt;ನ್ಯಾಯಾಲಯದ ಮೆಟ್ಟಿಲೇರಿದ್ದ ಕಾನೂನು ಹೋರಾಟ&lt;/h2&gt;&lt;p&gt;ದೈವ ನಿಂದನೆಯ ಈ ಗಂಭೀರ ಪ್ರಕರಣವನ್ನು ಖಂಡಿಸಿ ಹಿರಿಯ ವಕೀಲರಾದ ಪ್ರಶಾಂತ್ ಮೇತಲ್ ಅವರು ನಟ ರಣವೀರ್ ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಈ ಕಾನೂನು ಹೋರಾಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ವಕೀಲ ಪ್ರಶಾಂತ್, ನಟ ರಣವೀರ್ ಸಿಂಗ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಖುದ್ದಾಗಿ ಬಂದು, ತಾಯಿ ಚಾಮುಂಡೇಶ್ವರಿಯ ಎದುರು ಮಂಡಿಯೂರಿ ಬೇಷರತ್ ಕ್ಷಮೆ ಕೇಳಿದರೆ ಮಾತ್ರ ತಾವು ಈ ಕೇಸ್ ಹಿಂಪಡೆಯುವುದಾಗಿ ಕಠಿಣ ಷರತ್ತು ವಿಧಿಸಿದ್ದರು. ಬಾಲಿವುಡ್ ನಟನ ಅಹಂಕಾರದ ವಿರುದ್ಧ ವಕೀಲರು ನಡೆಸಿದ ಈ ಪಟ್ಟುಬಿಡದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿತ್ತು.&lt;/p&gt;&lt;h2&gt;ಚಾಮುಂಡಿ ಬೆಟ್ಟಕ್ಕೆ ದಿಢೀರ್ ಭೇಟಿ; ಮಂಡಿಯೂರಿದ ನಟ&lt;/h2&gt;&lt;p&gt;ಹೀಗಾಗಿ ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದಿಢೀರ್ ಭೇಟಿ ನೀಡಿದ ರಣವೀರ್ ಸಿಂಗ್, ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ತದನಂತರ, ದೈವ ನಿಂದನೆಯ ಮಹಾಪರಾಧಕ್ಕಾಗಿ ದೇವಸ್ಥಾನದ ಆವರಣದಲ್ಲಿ ತಾಯಿಯ ಸನ್ನಿಧಿಯಲ್ಲೇ ಮಂಡಿಯೂರಿ ಕುಳಿತು ಬೇಷರತ್ ಕ್ಷಮೆಯಾಚಿಸಿದರು.&lt;/p&gt;&lt;p&gt;ಈ ಹಿಂದೆ ಕಳೆದ ಏಪ್ರಿಲ್ ತಿಂಗಳಿನಲ್ಲಿಯೂ ನ್ಯಾಯಾಲಯದಲ್ಲಿ ಎಫ್&zwnj;ಐಆರ್ (FIR) ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ರಣವೀರ್ ಸಿಂಗ್, ತಮಗಾದ ತಪ್ಪಿಗೆ ಲಿಖಿತವಾಗಿ ವಿಷಾದ ವ್ಯಕ್ತಪಡಿಸಿದ್ದರು. ಇನ್ನೊಮ್ಮೆ ಯಾವುದೇ ಕಾರಣಕ್ಕೂ ಇಂತಹ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ ಎಂದು ಕೋರ್ಟ್&zwnj;ಗೆ ಪ್ರಮಾಣಪತ್ರ ಸಲ್ಲಿಸಿದ್ದರು.&lt;/p&gt;&lt;p&gt;ಕಾಂತಾರ ಚಿತ್ರದಲ್ಲಿನ ನಟ ರಿಷಬ್ ಶೆಟ್ಟಿ ಅವರ ಅದ್ಭುತ ಅಭಿನಯವನ್ನು ಶ್ಲಾಘಿಸುವುದು ಮತ್ತು ಎತ್ತಿ ತೋರಿಸುವುದು ಮಾತ್ರ ನನ್ನ ಉದ್ದೇಶವಾಗಿತ್ತು. ಕರಾವಳಿಯ ಜನರ ಧಾರ್ಮಿಕ ನಂಬಿಕೆಗೆ ನೋವುಂಟು ಮಾಡುವ ಯಾವುದೇ ದುರುದ್ದೇಶ ನನಗಿರಲಿಲ್ಲ, ವಿವಾದದ ಕುರಿತು ನಟ ರಣವೀರ್ ಸಿಂಗ್ &amp;nbsp;ಸ್ಪಷ್ಟನೆ ಕೂಡ ನೀಡಿದ್ದರು.&lt;/p&gt;&lt;h2&gt;ಚಿತ್ರರಂಗದಿಂದ ಬ್ಯಾನ್, ಸೋಷಿಯಲ್ ಮೀಡಿಯಾದಲ್ಲಿ 'ದೈವದ ಶಕ್ತಿ' ಚರ್ಚೆ!&amp;nbsp;&lt;/h2&gt;&lt;p&gt;ಖ್ಯಾತ ನಟ ರಣವೀರ್&zwnj; ಸಿಂಗ್&zwnj; ಚಲನಚಿತ್ರ ಕಾರ್ಮಿಕರ ಸಂಘ ನಿಷೇಧ ಹೇರಿದೆ. ಡಾನ್&zwnj;-3 ಸಿನಿಮಾ ಚಿತ್ರಿಕರಣ ಆರಂಭಕ್ಕೆ 3 ವಾರ ಇರುವಾಗ, ಅದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳಬೇಕಿದ್ದ ರಣವೀರ್&zwnj; ಸಿಂಗ್&zwnj; ಅವರು ಚಿತ್ರದಿಂದ ಹಿಂದೆ ಸರಿದಿದ್ದರು. ರಣವೀರ್&zwnj;ರ ದಿಢೀರ್&zwnj; ನಿರ್ಧಾರದಿಂದ ತಮಗಾಗಿರುವ ನಷ್ಟವನ್ನು ಭರಿಸಲು 45 ಕೋಟಿ ರು. ಪರಿಹಾರ ನೀಡಬೇಕು ಎಂದು ನಿರ್ಮಾಪಕ ಫರ್ಹಾನ್ ಅಖ್ತರ್&zwnj; ಅವರು ಆಗ್ರಹಿಸಿದ್ದರು. ಆದರೆ ನಟ ಇದನ್ನು ತಿರಸ್ಕರಿಸಿದ್ದರು. ಜತೆಗೆ, ಈ ವಿವಾದದ ಕುರಿತು ಸಮಾಲೋಚನೆ ನಡೆಸಲು ಒಕ್ಕೂಟ ನೀಡಿದ್ದ ಸರಣಿ ನೋಟಿಸ್&zwnj;ಗಳನ್ನೂ ನಿರ್ಲಕ್ಷಿಸಿದ್ದರು. ಇದರಿಂದ ಕೆರಳಿರುವ ಭಾರತ ಚಲನಚಿತ್ರ ನೌಕರರ ಒಕ್ಕೂಟ (ಎಫ್&zwnj;ಡಬ್ಲ್ಯುಐಸಿಇ), ನಟನ ವಿರುದ್ಧ ಅಸಹಕಾರ ಘೋಷಿಸಿದೆ. &lsquo;ಯಾವ ಸೂಪರ್&zwnj;ಸ್ಟಾರ್ ಕೂಡ ನಿಯಮಕ್ಕಿಂತ ದೊಡ್ಡವನಲ್ಲ&rsquo; ಎಂದಿರುವ ಒಕ್ಕೂಟ, ಸಮಸ್ಯೆ ಇತ್ಯರ್ಥವಾಗುವವರೆಗೂ ಚಿತ್ರರಂಗದ ಯಾವುದೇ ತಾಂತ್ರಿಕ ನೌಕರರು ಅಥವಾ ಕಾರ್ಮಿಕರು ರಣವೀರ್ ಸಿಂಗ್ ಚಿತ್ರಗಳಿಗೆ ಸಹಕರಿಸುವುದಿಲ್ಲ ಎಂದು ಘೋಷಿಸಿದೆ.&lt;/p&gt;&lt;p&gt;ಇದಾದ ಬಳಿಕ ತಕ್ಷಣ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಇದನ್ನು &lsquo;ದೈವದ ಕಾರಣಿಕ&rsquo; ಎಂದು ಬಣ್ಣಿಸಿದ್ದಾರೆ. &quot;ಕಾಂತಾರ ದೈವಕ್ಕೆ ಅಪಮಾನ ಮಾಡಿದ್ದಕ್ಕೇ ರಣವೀರ್ ಸಿಂಗ್&zwnj;ಗೆ ಈ ಪರಿಸ್ಥಿತಿ ಬಂದಿದೆ, ದೈವದ ಶಕ್ತಿ ಸುಮ್ಮನೆ ಬಿಡುವುದಿಲ್ಲ&quot; ಎಂದು ನೆಟ್ಟಿಗರು ವ್ಯಾಪಕವಾಗಿ ಚರ್ಚೆ ನಡೆಸುತ್ತಿದ್ದಾರೆ. ಕೊನೆಗೂ ಕಾನೂನು ಮತ್ತು ಧಾರ್ಮಿಕ ಸಂಪ್ರದಾಯದ ಮುಂದೆ ಬಾಲಿವುಡ್ ತಾರೆ ತಲೆಬಾಗಿದ್ದು, ಪ್ರಕರಣ ಸಂಪೂರ್ಣವಾಗಿ ಇತ್ಯರ್ಥಗೊಂಡಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/cine-world/bollywood-star-ranveer-singh-apologizes-at-mysuru-chamundi-hills-over-kantara-movie-row-gdp/articleshow-xfngyz7"/>
        </item>
        <item>
            <title><![CDATA[ಕಾಣಿಯೂರು-ಸುಳ್ಯ-ಕೊಡಗು ಮಾರ್ಗವಾಗಿ ಮೈಸೂರಿಗೆ ಹೊಸ ರೈಲು ಮಾರ್ಗ ಪ್ರಸ್ತಾವನೆ ಇಲ್ಲ! ಯಾಕಿಷ್ಟು ಗೊಂದಲವಾಯ್ತು?]]></title>
            <link>https://kannada.asianetnews.com/gallery/karnataka-districts/kodagu-railway-projects-mp-yaduveer-dismisses-coorg-rail-rumors-while-sullia-pushes-for-alternate-route-gdp-y3kf8bg</link>
            <guid isPermaLink="true">https://kannada.asianetnews.com/gallery/karnataka-districts/kodagu-railway-projects-mp-yaduveer-dismisses-coorg-rail-rumors-while-sullia-pushes-for-alternate-route-gdp-y3kf8bg</guid>
            <pubDate>Wed, 03 Jun 2026 20:37:11 +0530</pubDate>
            <description><![CDATA[&lt;p&gt;ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು, ಕೊಡಗು ಜಿಲ್ಲೆಯ ಮೂಲಕ ಯಾವುದೇ ಹೊಸ ರೈಲು ಮಾರ್ಗದ ಪ್ರಸ್ತಾವನೆ ಸದ್ಯಕ್ಕೆ ರೈಲ್ವೆ ಸಚಿವಾಲಯದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವರೊಂದಿಗಿನ ಭೇಟಿಯ ನಂತರ, ಈ ಹಿಂದೆ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt6ywer077hmfzxbg35x3aqz,imgname-kodagu-railway-line-proposal-mp-yaduveer-wodeyar--3--1780497660672.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು, ಕೊಡಗು ಜಿಲ್ಲೆಯ ಮೂಲಕ ಯಾವುದೇ ಹೊಸ ರೈಲು ಮಾರ್ಗದ ಪ್ರಸ್ತಾವನೆ ಸದ್ಯಕ್ಕೆ ರೈಲ್ವೆ ಸಚಿವಾಲಯದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವರೊಂದಿಗಿನ ಭೇಟಿಯ ನಂತರ, ಈ ಹಿಂದೆ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.&lt;/p&gt;&lt;img&gt;&lt;p&gt;ಮಡಿಕೇರಿ: ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ಯಾವುದೇ ಹೊಸ ರೈಲು ಯೋಜನೆ ಅಥವಾ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅವರು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಂಪರ್ಕ ವ್ಯವಸ್ಥೆಗಳ ಕುರಿತು ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶಗಳ ಮೂಲಕ ರೈಲು ಮಾರ್ಗ ಹಾದುಹೋಗುವ ಸಾಧ್ಯತೆ ಇದೆ ಎಂಬ ವರದಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದವು. ಇದು ಕೊಡಗಿನ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ಜನರಲ್ಲಿ ಭಾರಿ ಆತಂಕ ಮೂಡಿಸಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಯದುವೀರ್ ಒಡೆಯರ್, ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತಂದರು. ಸಚಿವರೊಂದಿಗೆ ನಡೆದ ಸಮಾಲೋಚನೆಯಲ್ಲಿ, ಕೊಡಗಿಗೆ ಸಂಬಂಧಿಸಿದಂತೆ ಇಂತಹ ಯಾವುದೇ ರೈಲು ಯೋಜನೆಯ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂಬುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಕೊಡಗಿನ ಪ್ರಾಕೃತಿಕ ಸೌಂದರ್ಯ ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಯಾವುದೇ ರೀತಿಯ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಸ್ಥಳೀಯರು, ಪರಿಸರವಾದಿಗಳು ಹಾಗೂ ಎಲ್ಲಾ ಹಿತಾಸಕ್ತಿ ಹೊಂದಿರುವ ಪಾಲುದಾರರೊಂದಿಗೆ ಕಡ್ಡಾಯವಾಗಿ ಸಮಾಲೋಚನೆ ನಡೆಸಲಾಗುವುದು. ಜನರ ಅಭಿಪ್ರಾಯವನ್ನು ಪಡೆದೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸದರು ಭರವಸೆ ನೀಡಿದ್ದಾರೆ. ಈ ಮೂಲಕ ಕೊಡಗಿನ ಮೂಲಕ ರೈಲು ಹಳಿ ನಿರ್ಮಾಣವಾಗಲಿದೆ ಎಂಬ ವದಂತಿ ಹಾಗೂ ಗೊಂದಲಗಳಿಗೆ ಪೂರ್ಣವಿರಾಮ ಬಿದ್ದಂತಾಗಿದೆ.&lt;/p&gt;&lt;img&gt;&lt;p&gt;ಕಾಣಿಯೂರು-ಸುಳ್ಯ-ನಾಪೋಕ್ಲು- ಮಾರ್ಗವಾಗಿ ಮೈಸೂರಿಗೆ ಹೊಸ ರೈಲು ಮಾರ್ಗ ಪ್ರಸ್ತಾವನೆ ಬಗ್ಗೆ ಚರ್ಚಿಸಲು ಸಭೆ ನಡೆಸುವಂತೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಕಳೆದ ತಿಂಗಳು ಮಂಗಳೂರು ಭೇಟಿ ವೇಳೆ ಮನವಿ ಸಲ್ಲಿಸಿದ್ದ ಬಗ್ಗೆ ಸುದ್ದಿಯಾಗಿತ್ತು. ಸಂಸದ ಬ್ರಿಜೇಶ್ ಚೌಟ ಮುಂದಾಳತ್ವದಲ್ಲಿ ಈ ಮನವಿ ಸಲ್ಲಿಕೆಯಾಗಿತ್ತು. ಅದಾದ ಈ ಯೋಜನೆ ವ್ಯಾಪಕ ಟೀಕೆಗೂ ಕಾರಣವಾಗಿತ್ತು. ಏಕೆಂದರೆ ಲಕ್ಷಾಂತರ ಜನ ತಮ್ಮ ಕೃಷಿ ಭೂಮಿ ಕಳೆದುಕೊಳ್ಳುವ ಭೀತಿ ವ್ಯಕ್ತ ಪಡಿಸಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿ ಮೊದಲಿಗೆ ರಸ್ತೆ, ಆಸ್ಪತ್ರೆಗಳ ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.&lt;/p&gt;&lt;img&gt;&lt;p&gt;ಕಾಣಿಯೂರು-ಸುಳ್ಯ-ನಾಪೋಕ್ಲು- ಮಾರ್ಗವಾಗಿ ಮೈಸೂರಿಗೆ ಹೊಸ ರೈಲು ಮಾರ್ಗ ಪ್ರಸ್ತಾವನೆಯನ್ನು ಹಾಗೂ ಕಾಣಿಯೂರು ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಮತ್ತು ಏಲಡ್ಕಕ್ಕೆ ಸ್ಥಳಾಂತರಿಸಲು ಮನವಿ ಸಲ್ಲಿಸಲಾಗಿತ್ತು, ಆ ಪ್ರಸ್ತಾವನೆ ಬಗ್ಗೆ ರೈಲ್ವೆ ಇಲಾಖೆ ತಾಂತ್ರಿಕ ತಂಡ ಪೂರಕವಾಗಿ ಸ್ಪಂದಿಸದೇ ಇರುವುದಾಗಿ ತಿಳಿದುಬಂದಿದೆ. ಆದ್ದರಿಂದ ಆ ವಿಚಾರಗಳ ಬಗ್ಗೆ ತಮ್ಮ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಸಂಸದರು, ಕೊಡಗು ಸಂಸದರು ಮತ್ತು ರೈಲ್ವೆ ಇಲಾಖೆಯ ತಾಂತ್ರಿಕ ತಂಡದವರೊಂದಿಗೆ ಸಭೆಯನ್ನು ನಿಗದಿ ಮಾಡಿ ಈ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಶಾಸಕಿ ಮರುಳ್ಯ ಮನವಿ ಮಾಡಿದ್ದರು. ಸಂಸದ ಕ್ಯಾ.ಬ್ರಿಜೇಶ್&zwnj; ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್&zwnj; ಕುಂಪಲ, ಶಾಸಕರಾದ ರಾಜೇಶ್&zwnj; ನಾಯಕ್&zwnj; ಉಳಿಪಾಡಿಗುತ್ತು, ಡಾ.ಭರತ್&zwnj; ಶೆಟ್ಟಿ ಮತ್ತಿತರರು ಮಂಗಳೂರಿನಲ್ಲಿ ಮನವಿ ಕೊಡುವ ವೇಳೆ ಉಪಸ್ಥಿತರಿದ್ದರು.&lt;/p&gt;&lt;img&gt;&lt;p&gt;ರಾಜ್ಯದ ಗ್ರಾಮೀಣ ಭಾಗಗಳಿಗೆ ಉತ್ತಮ ಸಾರಿಗೆ ಸಂಪರ್ಕ ದೃಷ್ಟಿಯಿಂದ ಈ ಭಾಗದ ಜನರ ಬಹುಕಾಲದ ಬೇಡಿಕೆಯಾದ ಕಾಣಿಯೂರು-ಸುಳ್ಯ-ನಾಪೋಕ್ಲು ಮಾರ್ಗವಾಗಿ ಮೈಸೂರಿಗೆ ನೂತನ ರೈಲು ಮಾರ್ಗ ನಿರ್ಮಾಣ ಆಗಬೇಕು. ಈ ನೂತನ ರೈಲ್ವೆ ಮಾರ್ಗವು ಈ ಭಾಗದ ಆರ್ಥಿಕತೆಗೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ. ಸುಳ್ಯ ಮತ್ತು ಕೊಡಗು ಭಾಗದಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಸಾಂಬಾರ ಪದಾರ್ಥಗಳು, ರಬ್ಬರ್, ಅಡಿಕೆ ಪ್ರಮುಖ ಬೆಳೆ ಆಗಿರುವುದರಿಂದ ಆರ್ಥಿಕತೆಗೆ ಉತ್ತೇಜನ ನೀಡಲಿದೆ. ಈಗ ಇರುವ ಕಾಣಿಯೂರು ರೈಲ್ವೆ ಸ್ಟೇಷನ್&zwnj; ಮೂಲಕ ಸುಳ್ಯ- ನಾಪೋಕ್ಲು ಮಾರ್ಗವಾಗಿ ಮೈಸೂರಿಗೆ ನೂತನ ರೈಲು ಮಾರ್ಗ ನಿರ್ಮಾಣದ ಕುರಿತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸಂಸದ ಕ್ಯಾ। ಬ್ರಿಜೇಶ್ ಚೌಟರವರ ನೇತೃತ್ವದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮನವಿ ಮಾಡಿದ್ದರು. ಈ ಪ್ರಸ್ತಾಪಿತ ರೈಲು ಮಾರ್ಗವು ಮಂಗಳೂರು-ಹಾಸನ ರೈಲು ಮಾರ್ಗದಲ್ಲಿರುವ 'ಕಾಣಿಯೂರು' ನಿಲ್ದಾಣದಿಂದ (ಇದು ಹಿಂದೆ ಪ್ರಸ್ತಾಪಿಸಲಾದ ಕಾಣಿಯೂರು-ಕಾಞಂಗಾಡ್ ಮಾರ್ಗದ ಜಂಕ್ಷನ್ ಕೂಡ ಆಗಿತ್ತು) ಪ್ರಾರಂಭಿಸಲು ಮನವಿ ಸಲ್ಲಿಸಲಾಗಿತ್ತು. ಈ ಮಾರ್ಗ ಆದರೆ ಸುಳ್ಯ ಮತ್ತು ನಾಪೋಕ್ಲು ಮೂಲಕ ಹಾದುಹೋಗಿ, ಪ್ರಸ್ತಾಪಿತ ಕುಶಾಲನಗರ -ಮೈಸೂರು ರೈಲು ಮಾರ್ಗವನ್ನು ಕುಶಾಲನಗರದಲ್ಲಿ ಸಂಪರ್ಕಿಸಲಿದೆ. ತನ್ಮೂಲಕ ಮೈಸೂರು ಮತ್ತು ಮುಂದಿನ ಊರುಗಳಿಗೆ ನೇರ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕು ಆಗಿದ್ದರೂ, ಸುಳ್ಯ ತಾಲೂಕಿನಲ್ಲಿ ಪ್ರಸ್ತುತ ಯಾವುದೇ ರೈಲು ಹಳಿ ಅಥವಾ ರೈಲು ನಿಲ್ದಾಣವಿಲ್ಲ. ಆದ್ದರಿಂದ ಈ ಮನವಿಯನ್ನು ಪುರಸ್ಕರಿಸಿ ಈ ಯೋಜನೆ ನೀಡಬೇಕಾಗಿ ಮನವಿಯಲ್ಲಿ ಆಗ್ರಹಿಸಲಾಗಿತ್ತು.&lt;/p&gt;&lt;img&gt;&lt;p&gt;ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಬರುವ ಸುಬ್ರಹ್ಮಣ್ಯ-ಸಕಲೇಶಪುರ ಘಾಟ್ ಮಾರ್ಗ ಈಗಾಗಲೇ ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾಪವು ಅತ್ಯಂತ ನಿರ್ಣಾಯಕವಾಗಿದೆ. ಕಾರ್ಯಾಚರಣೆಯ ಅಡೆತಡೆಗಳಿಂದಾಗಿ ಈ ವಿಭಾಗದಲ್ಲಿ ಹೊಸ&lt;/p&gt;&lt;p&gt;ರೈಲುಗಳನ್ನು ಪರಿಚಯಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಪ್ರಸ್ತುತ ಪ್ರತಿದಿನ ಸುಮಾರು 12 ಪ್ಯಾಸೆಂಜರ್ ಮತ್ತು 4 ಗೂಡ್ಸ್ ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಇದು ಗರಿಷ್ಠ ಒತ್ತಡದಲ್ಲಿದೆ. ಪ್ರಸ್ತಾಪಿತ ಕಾಣಿಯೂರು - ಸುಳ್ಯ - ನಾಪೋಕ್ಲು - ಕುಶಾಲನಗರ ಮಾರ್ಗವು ಅಸ್ತಿತ್ವದಲ್ಲಿರುವ ಮಾರ್ಗದ ದಟ್ಟಣೆಯನ್ನು ಕಡಿಮೆ ಮಾಡಲು, ಹೆಚ್ಚುವರಿ ರೈಲು ಓಡಾಟದ ಸಾಮರ್ಥ್ಯವನ್ನು ಸೃಷ್ಟಿಸಲು ಮತ್ತು ಹೊಸ ಪ್ರಯಾಣಿಕ ಹಾಗೂ ಸರಕು ಸೇವೆಗಳನ್ನು ಆರಂಭಿಸಲು ಸಹಕಾರಿಯಾಗಲಿದೆ. ಅಲ್ಲದೆ, ಈ ಹೊಸಮಾರ್ಗವು ಕರಾವಳಿ ಕರ್ನಾಟಕ ಮತ್ತು ಒಳನಾಡು ಪ್ರದೇಶಗಳನ್ನು ಮೈಸೂರು, ಬೆಂಗಳೂರು, ಉತ್ತರ ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಭಾರತದೊಂದಿಗೆ ಸಂಪರ್ಕಿಸಲು ನೇರ ರೈಲುಗಳನ್ನು ಓಡಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಕಾಣಿಯೂರು-ಸುಳ್ಯ-ನಾಪೋಕ್ಲು-ಕುಶಾಲನಗರ-ಮೈಸೂರು ರೈಲುಮಾರ್ಗದ ಸರ್ವೇ ನಡೆಸಲು ರೈಲ್ವೇ ಮಂಡಳಿ ಮತ್ತು ಸಂಬಂಧಿತ ವಿಭಾಗಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮತ್ತು ಮುಂಬರುವ ರೈಲ್ವೇ ಮೂಲಸೌಕರ್ಯ ಯೋಜನೆಗಳು ಹಾಗೂ ಬಜೆಟ್ ಅವಕಾಶಗಳಲ್ಲಿ ಈ ನೂತನ ಮಾರ್ಗದ ನಿರ್ಮಾಣದ ಪ್ರಸ್ತಾವನೆಯನ್ನು ಸೇರಿಸಬೇಕೆಂದು ಎಂದು ಮನವಿಯಲ್ಲಿ ತಿಳಿಸಲಾಗಿತ್ತು.&lt;/p&gt;&lt;img&gt;&lt;p&gt;ದ.ಕ.ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಎಡಮಂಗಲ ಪೇಟೆಯಲ್ಲಿ ಬರುವ ಎರಡು ಕಡೆಗಳಲ್ಲಿನ ರೈಲ್ವೆ ಕ್ರಾಸಿಂಗ್&zwnj; ಗೇಟ್&zwnj;ಗಳ ಬದಲಾಗಿ ಓವರ್&zwnj;ಬ್ರಿಡ್ಜ್&zwnj; ನಿರ್ಮಾಣಕ್ಕೆ ತ್ವರಿತ ಕ್ರಮಕೈಗೊಳ್ಳುವಂತೆ ಸಂಸದ ಕ್ಯಾ.ಬ್ರಿಜೇಶ್&zwnj; ಚೌಟ ಮತ್ತು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಕಾರ್ಯಕರ್ತ ಎಡಮಂಗಲದ ವಿನಯಚಂದ್ರ ಅವರು ಮನವಿ ಸಲ್ಲಿಸಿದ್ದಾರೆ.&lt;/p&gt;&lt;p&gt;ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಬರುವ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ಪ್ರಮುಖ ರಸ್ತೆಗಳಿಗೆ ಅಡ್ಡವಾಗಿ ಎಲ್&zwnj;ಸಿ 69 ಮತ್ತು ಎಲ್&zwnj;ಸಿ 70 ಎಂಬ ಎರಡು ರೈಲ್ವೆ ಲೆವೆಲ್&zwnj; ಕ್ರಾಸಿಂಗ್&zwnj; ಗೇಟ್&zwnj;ಗಳಿವೆ. ಈ ರಸ್ತೆ ಗ್ರಾಮಸ್ಥರಿಗೆ ಪ್ರಮುಖ ಮಾರ್ಗವಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರೈಲ್ವೆ ಇಲಾಖೆ ಈ ಗೇಟ್&zwnj;ಗಳನ್ನು ತೆಗೆದು ಅಡರ್&zwnj;ಪಾಸ್&zwnj; ಅಥವಾ ಓವರ್&zwnj;ಬ್ರಿಡ್ಜ್&zwnj; ನಿರ್ಮಿಸಲು ಈಗಾಗಲೇ ನಕ್ಷೆ ಸಿದ್ದ್ದಪಡಿಸಿದೆ ಎಂಬ ಮಾಹಿತಿ ಇದೆ. ಈ ಯೋಜನೆಯ ಅನುಷ್ಠಾನಕ್ಕೆ ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಪರಿಣಾಮ ರೈಲು ಸಂಚಾರದ ವೇಳೆ ಗೇಟ್&zwnj; ಅಳವಡಿಸುವ ಸಂದರ್ಭದಲ್ಲಿ ದಿನನಿತ್ಯ ಗಂಟೆ ಗಟ್ಟಲೆ ಎರಡೂ ಕಡೆಗಳಲ್ಲಿ ವಾಹನ ಸವಾರರು ನಿಲ್ಲುವ ಪರಿಸ್ಥಿತಿ ಎದುರಾಗುತ್ತಿದೆ. ತಾವುಗಳು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಪತ್ರ ಬರೆದು ಈ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲು ಅಗತ್ಯ ಒತ್ತಡ ತರಬೇಕೆಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/kodagu-railway-projects-mp-yaduveer-dismisses-coorg-rail-rumors-while-sullia-pushes-for-alternate-route-gdp-y3kf8bg"/>
        </item>
        <item>
            <title><![CDATA[ಮೈಸೂರಿನಿಂದ ಐತಿಹಾಸಿಕ ರೈಲು ಪಯಣ: ಒಡಿಶಾಗೆ ದೇಶೀಯ ಖನಿಜ ರವಾನೆಯ ಮೊದಲ ರೈಲು ಯಶಸ್ವಿ ಪ್ರಾಯೋಗಿಕ ಚಾಲನೆ!]]></title>
            <link>https://kannada.asianetnews.com/karnataka-districts/mysore-kadakola-icd-launches-first-1750-km-cargo-train-to-odisha-gdp/articleshow-z8wfxdd</link>
            <guid isPermaLink="true">https://kannada.asianetnews.com/karnataka-districts/mysore-kadakola-icd-launches-first-1750-km-cargo-train-to-odisha-gdp/articleshow-z8wfxdd</guid>
            <pubDate>Mon, 25 May 2026 18:10:55 +0530</pubDate>
            <description><![CDATA[ಮೈಸೂರಿನ ಕಡಕೋಳ ಕೈಗಾರಿಕಾ ವಲಯದಿಂದ ಒಡಿಶಾಗೆ ಮೊದಲ ಬಾರಿಗೆ ಸರಕು ರೈಲಿನ ಮೂಲಕ 2,200 ಮೆಟ್ರಿಕ್ ಟನ್ 'ಡ್ಯೂನೈಟ್' ಖನಿಜವನ್ನು ಯಶಸ್ವಿಯಾಗಿ ಸಾಗಿಸಲಾಗಿದೆ. ಈ 1,750 ಕಿ.ಮೀ. ದೂರದ ಪ್ರಾಯೋಗಿಕ ಸಾಗಣೆಯು ಮೈಸೂರಿನ ಗಣಿಗಾರಿಕೆ ಮತ್ತು ಲಾಜಿಸ್ಟಿಕ್ಸ್ ವಲಯದಲ್ಲಿ ಹೊಸ ಮೈಲಿಗಲ್ಲಾಗಿದ್ದು, ಪರಿಸರಸ್ನೇಹಿ ಸಾರಿಗೆಗೆ ದಾರಿ ಮಾಡಿಕೊಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksfjan75btm1rc594rxkpjdp,imgname-mysuru-domestic-rail-logistics-1779712742629.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಜಿಲ್ಲೆಯ ಕಡಕೋಳ ಕೈಗಾರಿಕಾ ವಲಯವು ದೇಶೀಯ ರೈಲು ಲಾಜಿಸ್ಟಿಕ್ಸ್ (ಸರಕು ಸಾಗಣೆ) ವಲಯದಲ್ಲಿ ಹೊಸದೊಂದು ಐತಿಹಾಸಿಕ ಅಧ್ಯಾಯವನ್ನು ಬರೆದಿದೆ. ದೀರ್ಘ ಪ್ರಯಾಣದ ಕೈಗಾರಿಕಾ ಖನಿಜ ರವಾನೆಯ ಮೊದಲ ಪ್ರಾಯೋಗಿಕ ಚಾಲನೆಯನ್ನು (Trial Run) ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಮೈಸೂರು ವಲಯವು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.&lt;/p&gt;&lt;p&gt;ತಾಂಡವಪುರ ಸಮೀಪದ ಕಡಕೋಳದಲ್ಲಿರುವ ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ (CONCOR) ಸಂಸ್ಥೆಯ ಗ್ರೀನ್&zwnj;ಫೀಲ್ಡ್ ಟರ್ಮಿನಲ್ ಹಾಗೂ ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ (MMLP) / ಇನ್&zwnj;ಲ್ಯಾಂಡ್ ಕಂಟೇನರ್ ಡಿಪೋ (ICD), ಖನಿಜ ಸಂಪತ್ತಿನಿಂದ ಸಮೃದ್ಧವಾಗಿರುವ ಮೈಸೂರು ಪ್ರದೇಶವನ್ನು ಒಡಿಶಾದ ಪ್ರಮುಖ ಉಕ್ಕಿನ ಕೈಗಾರಿಕಾ ಕೇಂದ್ರಗಳೊಂದಿಗೆ ಸಂಪರ್ಕಿಸುವ ತನ್ನ ಮೊದಲ ಹೊರಹೋಗುವ ಕಂಟೇನರ್ ರೇಕ್&zwnj;ಗೆ (Cargo Train) ಅಧಿಕೃತವಾಗಿ ಚಾಲನೆ ನೀಡಿದೆ.&lt;/p&gt;&lt;h2&gt;1,750 ಕಿ.ಮೀ ದೂರದ ಸುದೀರ್ಘ ಪಯಣ&lt;/h2&gt;&lt;p&gt;ಈ ಉದ್ಘಾಟನಾ ಸರಕು ರೈಲು ಒಟ್ಟು 80 ಟಿಇಯುಗಳನ್ನು (TEUs - ಇಪ್ಪತ್ತು ಅಡಿ ಸಮಾನ ಘಟಕಗಳ ಕಂಟೇನರ್) ಹೊತ್ತೊಯ್ದಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಿಂದ ಪಡೆದ ಅತ್ಯಮೂಲ್ಯ ಕೈಗಾರಿಕಾ ಖನಿಜವಾದ ಸುಮಾರು 2,200 ಮೆಟ್ರಿಕ್ ಟನ್&zwnj;ಗಳಷ್ಟು ಅರೆ-ಸಂಸ್ಕರಿಸಿದ 'ಡ್ಯೂನೈಟ್' (Dunite) ಅನ್ನು ಒಡಿಶಾದಲ್ಲಿರುವ ಜಿಂದಾಲ್ ಸ್ಟೇನ್&zwnj;ಲೆಸ್ ಲಿಮಿಟೆಡ್ (Jindal Stainless Limited) ಕಾರ್ಖಾನೆಗೆ ಅತ್ಯಂತ ಸುರಕ್ಷಿತವಾಗಿ ಸಾಗಿಸಲಾಗಿದೆ.&lt;/p&gt;&lt;p&gt;ಸುಮಾರು 1,750 ಕಿಲೋಮೀಟರ್&zwnj;ಗಳಷ್ಟು ದೀರ್ಘ ಅಂತರವನ್ನು ಕ್ರಮಿಸುವ ಈ ಸಾಗಣೆಯು, ಕಡಕೋಳ ಸೌಲಭ್ಯದಿಂದ ಇದುವರೆಗೆ ಕೈಗೊಂಡ ಅತಿ ಉದ್ದದ ದೇಶೀಯ ಪೂರೈಕೆ ಮಾರ್ಗ (Supply Route) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ, ಈ ಘಟಕವು ಮುಖ್ಯವಾಗಿ ಮೈಸೂರಿನಿಂದ ಚೆನ್ನೈಗೆ ದ್ವಿಚಕ್ರ ವಾಹನಗಳು (ಮೋಟಾರ್ ಸೈಕಲ್&zwnj;ಗಳು) ಮತ್ತು ವಾಣಿಜ್ಯ ಸರಕುಗಳು ಸೇರಿದಂತೆ ಕಡಿಮೆ ದೂರದ ರವಾನೆಗಳನ್ನು ಮಾತ್ರ ನಿರ್ವಹಿಸುತ್ತಿತ್ತು.&lt;/p&gt;&lt;h2&gt;ಗಣಿಗಾರಿಕೆ ಮತ್ತು ಲಾಜಿಸ್ಟಿಕ್ಸ್ ವಲಯಕ್ಕೆ ಹೊಸ ಮೈಲಿಗಲ್ಲು&lt;/h2&gt;&lt;p&gt;ಈ ಇಡೀ ಕಾರ್ಯಾಚರಣೆಯನ್ನು ಕಾನ್ಕಾರ್ (CONCOR) ಎಂಎಂಎಲ್&zwnj;ಪಿ ಪ್ರಧಾನ ವ್ಯವಸ್ಥಾಪಕರಾದ (General Manager) ಎಂ.ಪಿ. ವಿಜಯ್ ಕುಮಾರ್ ಅವರ ನೇರ ಉಸ್ತುವಾರಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಈ ಪ್ರಕ್ರಿಯೆಯು ನಂಜನಗೂಡಿನ ಗಣಿಗಳಿಂದ ಕಚ್ಚಾ ಕಲ್ಲಿನ ರೂಪದಲ್ಲಿ ಡ್ಯೂನೈಟ್ ಖನಿಜವನ್ನು ಹೊರತೆಗೆಯುವುದು, ನಂತರ ಕೈಗಾರಿಕಾ ಅಗತ್ಯಕ್ಕೆ ತಕ್ಕಂತೆ ಆಧುನಿಕ ಯಂತ್ರಗಳ ಮೂಲಕ ಪುಡಿ ಮಾಡುವುದು ಮತ್ತು ದೂರದ ರೈಲು ಸಾಗಣೆಗಾಗಿ ಕಂಟೇನರ್&zwnj;ಗಳಿಗೆ ಲೋಡ್ ಮಾಡುವುದನ್ನು ಒಳಗೊಂಡಿತ್ತು.&lt;/p&gt;&lt;p&gt;ಈ ಮಹತ್ವದ ಸಾಧನೆಯ ಕುರಿತು ಮಾತನಾಡಿದ ಜಿಎಂ ವಿಜಯ್ ಕುಮಾರ್, &quot;ಪ್ರಸ್ತುತ ಕೈಗೊಂಡಿರುವ ಈ ಆಂದೋಲನವು ಪ್ರಾಥಮಿಕ ಹಂತದ ಪ್ರಾಯೋಗಿಕ ಚಾಲನೆಯಾಗಿದೆ. ಇದರ ಯಶಸ್ಸು ಮುಂಬರುವ ದಿನಗಳಲ್ಲಿ ನಿಯಮಿತವಾಗಿ ಸರಕು ಸೇವೆಗಳನ್ನು ಆರಂಭಿಸಲು ಹೆದ್ದಾರಿಯಾಗಲಿದ್ದು, ದಕ್ಷಿಣ ಮತ್ತು ಪೂರ್ವ ಭಾರತದ ನಡುವಿನ ಬಹುಮಾದರಿ ಸಂಪರ್ಕವನ್ನು (Multi-modal Connectivity) ಮತ್ತಷ್ಟು ಗಟ್ಟಿಗೊಳಿಸಲಿದೆ&quot; ಎಂದು ಆಶಯ ವ್ಯಕ್ತಪಡಿಸಿದರು.&lt;/p&gt;&lt;p&gt;ಈ ಹೊಸ ಬೆಳವಣಿಗೆಯು ಮೈಸೂರಿನ ಗಣಿಗಾರಿಕೆ ಮತ್ತು ಲಾಜಿಸ್ಟಿಕ್ಸ್ ಉದ್ಯಮಕ್ಕೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಕಂಟೇನರೀಕೃತ ರೈಲು ಸೇವೆಗಳ (Containerised Rail Services) ಮೂಲಕ ದೇಶದ ಯಾವುದೇ ಮೂಲೆಗಾದರೂ ಭಾರೀ ಪ್ರಮಾಣದ ಕೈಗಾರಿಕಾ ಖನಿಜಗಳನ್ನು ಅತ್ಯಂತ ಸುಲಭವಾಗಿ ಸಾಗಿಸಬಹುದು ಎಂಬುದನ್ನು ಇದು ಪ್ರಾಯೋಗಿಕವಾಗಿ ಸಾಬೀತುಪಡಿಸಿದೆ.&lt;/p&gt;&lt;h2&gt;ಪರಿಸರಸ್ನೇಹಿ ಮತ್ತು ವೆಚ್ಚದಾಯಕ ಪರಿಹಾರ&lt;/h2&gt;&lt;p&gt;ರೈಲು ಆಧಾರಿತ ಈ ಬೃಹತ್ ಸಾಗಣೆ ವ್ಯವಸ್ಥೆಯಿಂದಾಗಿ ಭವಿಷ್ಯದಲ್ಲಿ ರಸ್ತೆ ಸಾರಿಗೆ ಮತ್ತು ಲಾರಿಗಳ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ. ಇದು ಹೆದ್ದಾರಿಗಳ ಮೇಲಿನ ದಟ್ಟಣೆಯನ್ನು ಕಡಿಮೆ ಮಾಡುವುದಲ್ಲದೆ, ಇಂಧನ ಉಳಿತಾಯ ಮತ್ತು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾಗಿ ಹೆಚ್ಚು ಸುಸ್ಥಿರ (Sustainable) ಹಾಗೂ ಆರ್ಥಿಕವಾಗಿ ಲಾಭದಾಯಕವಾದ ಲಾಜಿಸ್ಟಿಕ್ಸ್ ಪರಿಹಾರವನ್ನು ಒದಗಿಸಲಿದೆ.&lt;/p&gt;&lt;h2&gt;100 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ:&lt;/h2&gt;&lt;p&gt;ಸುಮಾರು 100 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸುಸಜ್ಜಿತ ಇನ್&zwnj;ಲ್ಯಾಂಡ್ ಕಂಟೇನರ್ ಡಿಪೋವನ್ನು (ICD) ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12, 2024 ರಂದು ವರ್ಚುವಲ್ (Virtual) ಮೂಲಕ ಉದ್ಘಾಟಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.&lt;/p&gt;&lt;p&gt;ಪ್ರಸ್ತುತ, ಮೈಸೂರು ಭಾಗದಿಂದ ರಫ್ತಾಗುವ ಹೆಚ್ಚಿನ ಸರಕುಗಳನ್ನು ರಸ್ತೆಯ ಮೂಲಕವೇ ತಮಿಳುನಾಡಿನ ಚೆನ್ನೈ ಬಂದರಿಗೆ ಸಾಗಿಸಲಾಗುತ್ತಿದೆ. ಇದು ಉದ್ಯಮಿಗಳಿಗೆ ಸಾಗಣೆ ವೆಚ್ಚವನ್ನು ಹೆಚ್ಚಿಸುವುದರ ಜೊತೆಗೆ ಸಮಯದ ವ್ಯಯಕ್ಕೂ ಕಾರಣವಾಗುತ್ತಿತ್ತು. ಆದರೆ, ಈಗ ಕಡಕೋಳದ ಈ ಐಸಿಡಿ ಕೇಂದ್ರವು ಸುರಕ್ಷಿತ, ಅತ್ಯಂತ ವೇಗವಾದ ಮತ್ತು ಹೆಚ್ಚು ವಿಶ್ವಾಸಾರ್ಹವಾದ ಪರ್ಯಾಯ ಮಾರ್ಗವನ್ನು ಒದಗಿಸಲಿದೆ ಎಂದು ಅಧಿಕಾರಿಗಳು ದೃಢವಾಗಿ ನಂಬಿದ್ದಾರೆ.&lt;/p&gt;&lt;p&gt;ಮೈಸೂರು ಪ್ರಾಂತ್ಯದಿಂದ ಪ್ರಮುಖವಾಗಿ ಇಂಜಿನಿಯರಿಂಗ್ ಸರಕುಗಳು, ಉತ್ಕೃಷ್ಟ ಗುಣಮಟ್ಟದ ಕಾಫಿ, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ವಿವಿಧ ಕೃಷಿ ಆಧಾರಿತ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಬೆಂಗಳೂರಿನ ವೈಟ್&zwnj;ಫೀಲ್ಡ್ ಮತ್ತು ಮಂಗಳೂರಿನ ಕಂಟೇನರ್ ಯಾರ್ಡ್&zwnj;ಗಳ ನಂತರ ಕಡಕೋಳ ಸೌಲಭ್ಯವು ಇಡೀ ಕರ್ನಾಟಕದಲ್ಲೇ ಕಾನ್ಕಾರ್ (CONCOR) ಸಂಸ್ಥೆಯ ಮೂರನೇ ಅತಿ ದೊಡ್ಡ ಕಂಟೇನರ್ ಯಾರ್ಡ್ ಎಂಬ ಕೀರ್ತಿಗೆ ಪಾತ್ರವಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;#ThinklogisticsthinkCONCOR https://t.co/PG6l5ZQzXN&lt;/p&gt;&lt;p&gt;&mdash; CONCOR (@concor_india) May 23, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mysore-kadakola-icd-launches-first-1750-km-cargo-train-to-odisha-gdp/articleshow-z8wfxdd"/>
        </item>
    </channel>
</rss>
