<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 06 Apr 2026 16:21:38 +0530</lastBuildDate>
        <atom:link href="https://kannada.asianetnews.com/rss/mysore" rel="self" type="application/rss+xml"/>
        <item>
            <title><![CDATA[ಪತಿಯ ಸಾವಿನ ನೋವಲ್ಲೂ ಶಾಲೆಗೆ ಹಾಜರಾದ ಶಿಕ್ಷಕಿ: ವೈಯಕ್ತಿಕ ದುಃಖ ಬದಿಗಿಟ್ಟು ವಿದ್ಯಾರ್ಥಿಗಳಿಗೆ ಗಣಿತ ಪಾಠ]]></title>
            <link>https://kannada.asianetnews.com/karnataka-districts/mysuru-teacher-jyothi-duty-first-husband-death-sslc-maths-exam-preparation-san/articleshow-0ml3qhb</link>
            <guid isPermaLink="true">https://kannada.asianetnews.com/karnataka-districts/mysuru-teacher-jyothi-duty-first-husband-death-sslc-maths-exam-preparation-san/articleshow-0ml3qhb</guid>
            <pubDate>Fri, 27 Mar 2026 22:42:08 +0530</pubDate>
            <description><![CDATA[&lt;p&gt;ಮೈಸೂರಿನ ಶಿಕ್ಷಕಿ ಜ್ಯೋತಿ ಅವರು, ಪತಿಯ ನಿಧನದ ದುಃಖದ ನಡುವೆಯೂ ಎಸ್&zwnj;ಎಸ್&zwnj;ಎಲ್&zwnj;ಸಿ ವಿದ್ಯಾರ್ಥಿಗಳ ಗಣಿತ ಪರೀಕ್ಷಾ ಸಿದ್ಧತೆಗಾಗಿ ಶಾಲೆಗೆ ಹಾಜರಾಗಿದ್ದಾರೆ. ತಮ್ಮ ವೈಯಕ್ತಿಕ ನೋವಿಗಿಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆದ್ಯತೆ ನೀಡಿದ ಅವರ ಈ ಕರ್ತವ್ಯನಿಷ್ಠೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmr3zde8gqhknyne673rq679,imgname-mysuru-teacher-1774630974909.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮಾ. 27)&lt;/strong&gt;: ಶಿಕ್ಷಕ ವೃತ್ತಿ ಎಂದರೆ ಕೇವಲ ಉದ್ಯೋಗವಲ್ಲ, ಅದೊಂದು ಪವಿತ್ರ ಜವಾಬ್ದಾರಿ ಎಂಬುದನ್ನು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಜಿ.ಬಿ. ಸರಗೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಅವರು ತಮ್ಮ ನಡೆ ಮೂಲಕ ಜಗತ್ತಿಗೆ ಸಾರಿದ್ದಾರೆ. ಪತಿಯ ಸಾವಿನ ಅತೀವ ನೋವಿನ ನಡುವೆಯೂ ಅವರು ಶಾಲೆಗೆ ಹಾಜರಾಗಿ ಎಸ್&zwnj;ಎಸ್&zwnj;ಎಲ್&zwnj;ಸಿ ವಿದ್ಯಾರ್ಥಿಗಳಿಗೆ ಗಣಿತದ ಪಾಠ ಮಾಡುವ ಮೂಲಕ ಅಪಾರ ಕರ್ತವ್ಯನಿಷ್ಠೆ ಮೆರೆದಿದ್ದಾರೆ.&lt;/p&gt;&lt;p&gt;ಮೈಸೂರಿನ ದಟ್ಟಗಳ್ಳಿ ನಿವಾಸಿಯಾಗಿರುವ ಜ್ಯೋತಿ ಅವರ ಪತಿ, ಸಾಫ್ಟ್&zwnj;ವೇರ್ ಎಂಜಿನಿಯರ್ ಕಿರಣ್ ಕುಮಾರ್ (47) ಅವರು ಮಾರ್ಚ್ 25ರ ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಪತಿಯ ಅಗಲಿಕೆಯಿಂದ ಕುಟುಂಬವೇ ಶೋಕಸಾಗರದಲ್ಲಿ ಮುಳುಗಿದ್ದರೂ, ಜ್ಯೋತಿ ಅವರು ತಮ್ಮ ವೈಯಕ್ತಿಕ ನೋವಿಗಿಂತ ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯ ಎಂದು ಭಾವಿಸಿದರು.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳಿಗಾಗಿ ದೃಢ ನಿರ್ಧಾರ&lt;/strong&gt;&lt;/h2&gt;&lt;p&gt;ಮಾರ್ಚ್ 28ರಂದು ಎಸ್&zwnj;ಎಸ್&zwnj;ಎಲ್&zwnj;ಸಿ ಗಣಿತ ಪರೀಕ್ಷೆ ನಡೆಯಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗಣಿತ ವಿಷಯವು ಕೊಂಚ ಕಠಿಣವೆನಿಸುವುದರಿಂದ, ಪರೀಕ್ಷೆಯ ಈ ನಿರ್ಣಾಯಕ ಸಮಯದಲ್ಲಿ ಮಕ್ಕಳಿಗೆ ಮಾರ್ಗದರ್ಶನದ ಅಗತ್ಯವಿದೆ ಎಂದು ಜ್ಯೋತಿ ಅವರು ಪತಿಯ ಮರಣದ ಮರುದಿನವೇ (ಗುರುವಾರ) ಶಾಲೆಗೆ ಹಾಜರಾದರು. ಗಣಿತ ಶಿಕ್ಷಕಿಯೂ ಆಗಿರುವ ಅವರು, ಪರೀಕ್ಷಾ ಪೂರ್ವ ಸಿದ್ಧತೆ ಮತ್ತು ಕಠಿಣ ಸಮಸ್ಯೆಗಳನ್ನು ಬಿಡಿಸುವ ಕುರಿತು ಮಕ್ಕಳಿಗೆ ಧೈರ್ಯ ತುಂಬಿದರು.&lt;/p&gt;&lt;h2&gt;&lt;strong&gt;ಸಾಂತ್ವನ ನೀಡಿದ ಬಿಇಒ&lt;/strong&gt;&lt;/h2&gt;&lt;p&gt;ಈ ವಿಷಯ ತಿಳಿದ ತಕ್ಷಣ ಎಚ್.ಡಿ.ಕೋಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸಿ.ಎನ್. ರಾಜು ಅವರು ಶಾಲೆಗೆ ಭೇಟಿ ನೀಡಿ ಜ್ಯೋತಿ ಅವರಿಗೆ ಸಾಂತ್ವನ ಹೇಳಿದರು. &quot;ನಿಮ್ಮ ಪತಿ ನಿನ್ನೆಯಷ್ಟೇ ಅಗಲಿದ್ದಾರೆ, ನೀವು ಅತೀವ ದುಃಖದಲ್ಲಿದ್ದೀರಿ. ನಿಮ್ಮ ಬದಲಿಗೆ ಎರಡು ದಿನಗಳ ಮಟ್ಟಿಗೆ ಬೇರೆ ಶಿಕ್ಷಕರನ್ನು ನಿಯೋಜಿಸುತ್ತೇವೆ, ನೀವು ಮನೆಗೆ ತೆರಳಿ ವಿಶ್ರಾಂತಿ ಪಡೆಯಿರಿ&quot; ಎಂದು ಸಲಹೆ ನೀಡಿದರು.&lt;/p&gt;&lt;p&gt;ಆದರೆ ಇದನ್ನು ವಿನಯದಿಂದಲೇ ನಿರಾಕರಿಸಿದ ಜ್ಯೋತಿ ಅವರು, &quot;ಗಣಿತ ವಿಷಯವನ್ನು ಸಂಪೂರ್ಣವಾಗಿ ನಾನೇ ಬೋಧಿಸಿದ್ದೇನೆ. ನನ್ನ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು ಎಂಬುದು ನನ್ನ ಆಸೆ. ನಾಳೆಯೂ ಬಂದು ಮಕ್ಕಳ ಪರೀಕ್ಷಾ ಸಿದ್ಧತೆಗೆ ಬೆಂಬಲವಾಗಿರುತ್ತೇನೆ&quot; ಎಂದು ಹೇಳುವ ಮೂಲಕ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದರು.&lt;/p&gt;&lt;p&gt;ವೈಯಕ್ತಿಕ ಸಂಕಷ್ಟದ ಸಮಯದಲ್ಲಿಯೂ ವೃತ್ತಿ ಬದ್ಧತೆ ಮೆರೆದ ಜ್ಯೋತಿ ಅವರ ಕಾರ್ಯಕ್ಕೆ ಪೋಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಇಒ ರಾಜು ಅವರು ಮಾತನಾಡಿ, &quot;ಜ್ಯೋತಿ ಅವರು ಮಾನವೀಯತೆ ಮತ್ತು ವೃತ್ತಿನಿಷ್ಠೆಗೆ ಅಪರೂಪದ ಉದಾಹರಣೆಯಾಗಿದ್ದಾರೆ. ಅವರ ಈ ಸೇವಾ ಮನೋಭಾವ ಇಡೀ ಸಮಾಜಕ್ಕೆ ಪ್ರೇರಣೆ&quot; ಎಂದು ಪ್ರಶಂಸಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/mysuru-teacher-jyothi-duty-first-husband-death-sslc-maths-exam-preparation-san/articleshow-0ml3qhb"/>
        </item>
        <item>
            <title><![CDATA[ಸರ್ಕಾರ ದೇವಸ್ಥಾನದ ಹುಂಡಿ ಹಣವನ್ನೂ ಲೂಟಿ ಮಾಡುತ್ತಿದೆ: ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪ]]></title>
            <link>https://kannada.asianetnews.com/politics/sa-ra-mahesh-slams-congress-govt-over-corruption-claims-gvd/articleshow-1sx5fgx</link>
            <guid isPermaLink="true">https://kannada.asianetnews.com/politics/sa-ra-mahesh-slams-congress-govt-over-corruption-claims-gvd/articleshow-1sx5fgx</guid>
            <pubDate>Thu, 19 Mar 2026 17:47:51 +0530</pubDate>
            <description><![CDATA[&lt;p&gt;ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ, ಈಗ ಭ್ರಷ್ಟಾಚಾರದಲ್ಲೇ ಮುಳುಗಿದ್ದು ದೇವಸ್ಥಾನದ ಹುಂಡಿ ಹಣವನ್ನೂ ಲೂಟಿ ಮಾಡುವ ದರಿದ್ರ ಸ್ಥಿತಿಗೆ ತಲುಪಿದೆ ಎಂದು ಮಾಜಿ ಸಚಿವ, ಜೆಡಿಎಸ್&zwnj; ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಆರೋಪಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx23zkyrhj97744pd9qdhcmx,imgname-----------------------2025-06-06t132816.715-1749196722135.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮಾ.19): &lt;/strong&gt;ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ, ಈಗ ಭ್ರಷ್ಟಾಚಾರದಲ್ಲೇ ಮುಳುಗಿದ್ದು ದೇವಸ್ಥಾನದ ಹುಂಡಿ ಹಣವನ್ನೂ ಲೂಟಿ ಮಾಡುವ ದರಿದ್ರ ಸ್ಥಿತಿಗೆ ತಲುಪಿದೆ ಎಂದು ಮಾಜಿ ಸಚಿವ, ಜೆಡಿಎಸ್&zwnj; ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್&zwnj; ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿತ್ತು. ಆದರೆ, ಸರ್ಕಾರ ಈಗ ಮಾಡುತ್ತಿರುವುದಾದರೂ ಏನು? ದೇವಸ್ಥಾನದಲ್ಲೂ ಲಂಚ ಪಡೆಯುತ್ತಿದೆ.&lt;/p&gt;&lt;p&gt;ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ನಡೆದ ಧನುರ್ಮಾಸದ ಜಾತ್ರಾ ಮಹೋತ್ಸವದಲ್ಲಿ ಕೇವಲ ಪೇಂಟಿಂಗ್ ಕೆಲಸಕ್ಕೆ ಜಿ.ಎಸ್&zwnj;.ಟಿ ಹೊರತುಪಡಿಸಿ 5,27,639 ರು. ಬಿಲ್ ಮಾಡಲಾಗಿದೆ. ಈ ಹಿಂದೆ ಇದೇ ಕೆಲಸಕ್ಕೆ ಗರಿಷ್ಠ ಎಂದರೆ ಕೇವಲ 1 ಲಕ್ಷ ರು. ವೆಚ್ಚವಾಗುತ್ತಿತ್ತು ಎಂದರು. ಇನ್ನು ಲೈಟಿಂಗ್, ಸೌಂಡ್ ಸಿಸ್ಟಮ್ ಮತ್ತು ಬ್ಯಾರಿಕೇಡ್ ವ್ಯವಸ್ಥೆಗೆ 14.74 ಲಕ್ಷ ರು. ಬಿಲ್ ಮಾಡಿದ್ದಾರೆ. ನಿರ್ಮಿತಿ ಕೇಂದ್ರದಿಂದ ಈ ಜಾತ್ರೆಗಾಗಿ 32 ಲಕ್ಷ ರು. ತೆಗೆದುಕೊಳ್ಳಲಾಗಿದೆ. ರೈತರು ಜಾನುವಾರುಗಳನ್ನು ಕಟ್ಟುತ್ತಾರೆ. ವ್ಯಾಪಾರಿಗಳು ಅಂಗಡಿಗಳನ್ನು ಹಾಕುತ್ತಾರೆ. ಅಂದ ಮೇಲೆ 32 ಲಕ್ಷ ರೂ. ಖರ್ಚು ಮಾಡಿದ್ದಾದರೂ ಏಕೆ ಎಂದು ಪ್ರಶ್ನಿಸಿದರು.&lt;/p&gt;&lt;p&gt;2019ರಲ್ಲಿ ಈ ಜಾತ್ರೆಗೆ 4.47 ಲಕ್ಷ ರು. 2020-21 ರಲ್ಲಿ ಕೋವಿಡ್&zwnj; ಸಮಯವಾದ್ದರಿಂದ ಕೇವಲ 21 ಸಾವಿರ ರು. ವೆಚ್ಚ ಮಾಡಲಾಗಿತ್ತು. ನಾನು ಶಾಸಕನಾಗಿದ್ದಾಗ 2022- 23ರಲ್ಲಿ 3,74600 ರು. ಖರ್ಚು ಮಾಡಲಾಗಿತ್ತು. ಈ ಬಾರಿ 32 ಲಕ್ಷ ಎಂದರೆ ಸರ್ಕಾರ ಎಷ್ಟು ಪರ್ಸೆಂಟ್ ಭ್ರಷ್ಟಾಚಾರ ಮಾಡುತ್ತಿದೆ ಎಂದು ಜನರೇ ತೀರ್ಮಾನಿಸಬೇಕು. ಅಲ್ಲದೇ, ದೇವಸ್ಥಾನದ ಅಭಿವೃದ್ಧಿಗೆ ಬಳಸಬೇಕಿದ್ದ ಸುಮಾರು 80 ಲಕ್ಷ ರು. ಹುಂಡಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಈ ರೀತಿಯಾದರೆ ರಾಜ್ಯದ ಗತಿಯೇನು?, ಈ ಭ್ರಷ್ಟಾಚಾರಗಳ ಹಿಂದೆ ಯಾರಿದ್ದಾರೆ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. 17 ಬಾರಿ ದಾಖಲೆಯ ಬಜೆಟ್ ಮಂಡಿಸಿದ್ದೇನೆ. ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ. ಈ ಬಾರಿಯ ಬಜೆಟ್&zwnj; ನಲ್ಲಿ ಸರ್ಕಾರ ದಿವಾಳಿ ಆಗಿರುವುದು ತಿಳಿಯುತ್ತದೆ. 2018 -19 ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಜೆಟ್&zwnj;ನ ಶೇ. 24ರಷ್ಟು ಹಣ ಅಭಿವೃದ್ಧಿ ಕೆಲಸಗಳಿಗೆ (ಬಂಡವಾಳ ವೆಚ್ಚ) ಮೀಸಲಿಡಲಾಗುತ್ತಿತ್ತು. ಆದರೆ, 2026 -27ರ ಬಜೆಟ್&zwnj; ನಲ್ಲಿ ಇದು ಕೇವಲ ಶೇ. 16.7ಕ್ಕೆ ಕುಸಿದಿದೆ. ಅಂದರೆ ಅಭಿವೃದ್ಧಿ ಕೆಲಸಗಳಿಗೆ ಶೇ.10ರಷ್ಟು ಹಣ ಕಡಿತವಾಗಿದೆ ಎಂದರು.&lt;/p&gt;&lt;h2&gt;&lt;strong&gt;ವೋಟಿನ ದುರಾಸೆ&lt;/strong&gt;&lt;/h2&gt;&lt;p&gt;ಹಿಂದಿನ ಎಲ್ಲಾ ಸಿಎಂಗಳು ಸೇರಿ ಮಾಡಿದ್ದ ಒಟ್ಟು ಸಾಲ 3.27 ಲಕ್ಷ ಕೋಟಿ ರು. ಇದನ್ನು ಸಿದ್ದರಾಮಯ್ಯ 8.24 ಲಕ್ಷ ಕೋಟಿಗೆ ಏರಿಸಿದ್ದಾರೆ. ಹಿಂದೆ ಪ್ರತಿ ವ್ಯಕ್ತಿಯ ಮೇಲೆ 50 ಸಾವಿರ ರು. ಸಾಲವಿದ್ದರೆ, ಇಂದು ಹುಟ್ಟುವ ಮಗುವಿನ ತಲೆಯ ಮೇಲೂ 1.18 ಲಕ್ಷ ರು. ಸಾಲವಿದೆ. ಸಿದ್ದರಾಮಯ್ಯ ವೋಟಿನ ದುರಾಸೆಗೆ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಇನ್ನಾದರೂ ಎಚ್ಚೆತ್ತುಕೊಳ್ಳಿ. ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟು ಅಭಿವೃದ್ಧಿ ಮಾಡಿ. ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತನ್ನಿ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಕಡೆ ಗಮನಹರಿಸಿ ಎಂದು ಹೇಳಿದರು.&lt;/p&gt;&lt;p&gt;ಕೆ.ಆರ್. ನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ಮಹಿಳಾ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಶುಲ್ಕ ಏರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಹಿಂದೆ ಶುಲ್ಕವಿರಲಿಲ್ಲ. ಈಗ 10 ರು. ಮಾಡಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ 5 ರು. ಇದ್ದ ಶುಲ್ಕವನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆಯಲ್ಲಿದ್ದ ಸುಮಾರು 60 ಲಕ್ಷ ರು. ಹಣ ಎಲ್ಲಿ ಖರ್ಚಾಗಿದೆ ಎಂಬ ಮಾಹಿತಿಯೇ ಇಲ್ಲ. ಸಾಲಿಗ್ರಾಮ ಗ್ರಾಪಂ ಪಿಡಿಒ ಒಬ್ಬರನ್ನು ರಜೆಯ ಮೇಲೆ ಕಳುಹಿಸಿ ಕೇವಲ 15 ದಿನಗಳಲ್ಲಿ ಹಳೆಯ ದಿನಾಂಕ ಹಾಕಿ ಗ್ರಾಪಂ ಖಾತೆಯಿಂದ 44 ಲಕ್ಷ ರು. ಹಣ ಡ್ರಾ ಮಾಡಲಾಗಿದೆ. ಇದು ಈ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಆರೋಪಿಸಿದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/sa-ra-mahesh-slams-congress-govt-over-corruption-claims-gvd/articleshow-1sx5fgx"/>
        </item>
        <item>
            <title><![CDATA[ಮೈಸೂರಿನಲ್ಲಿ ಬೃಹತ್ ದಾಳಿ: 30 ಕೆಜಿ ಸಿಂಥೆಟಿಕ್ ಡ್ರಗ್ಸ್ ಪತ್ತೆ, ಇಬ್ಬರ ಬಂಧನ!]]></title>
            <link>https://kannada.asianetnews.com/crime/mysuru-drug-bust-30kg-synthetic-drugs-seized-hunsur-police-gvd/articleshow-2zm8k3p</link>
            <guid isPermaLink="true">https://kannada.asianetnews.com/crime/mysuru-drug-bust-30kg-synthetic-drugs-seized-hunsur-police-gvd/articleshow-2zm8k3p</guid>
            <pubDate>Fri, 27 Mar 2026 23:32:04 +0530</pubDate>
            <description><![CDATA[&lt;p&gt;ಮನೆಯೊಂದರಲ್ಲಿ ಸಿಂಥೆಟಿಕ್&zwnj; ಡ್ರಗ್ಸ್&zwnj; ದಾಸ್ತಾನು ಮಾಡಿರುವ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್&zwnj; ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಎಸ್&zwnj;ಪಿ ಸಿ.ಮಲ್ಲಿಕ್&zwnj;, ಹುಣಸೂರು ಉಪವಿಭಾಗದ ಪೊಲೀಸರ ತಂಡ ದಾಳಿ ನಡೆಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01fscvyvw85mdqmxyddtqfv95h,imgname-jail-hand-cuff-pb.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮಾ.27): &lt;/strong&gt;ಡ್ರಗ್ಸ್&zwnj; ಚಟುವಟಿಕೆ ಮೈಸೂರಿನಲ್ಲಿ ತೀವ್ರಗೊಂಡಿದ್ದು, ಜಿಲ್ಲಾ ಪೊಲೀಸರ ತಂಡವು ಮತ್ತೊಂದು ಬೃಹತ್&zwnj; ಡ್ರಗ್ಸ್&zwnj; ಜಾಲ ಪತ್ತೆಹಚ್ಚಿದೆ. ಹುಣಸೂರು ತಾಲ್ಲೂಕು ದಾಸನಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಡ್ರಗ್ಸ್&zwnj; ಮಾರಾಟ ಜಾಲವನ್ನು ಜಿಲ್ಲಾ ಪೊಲೀಸರ ತಂಡ ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ಮನೆಯೊಂದರಲ್ಲಿ ಸಿಂಥೆಟಿಕ್&zwnj; ಡ್ರಗ್ಸ್&zwnj; ದಾಸ್ತಾನು ಮಾಡಿರುವ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್&zwnj; ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಎಸ್&zwnj;ಪಿ ಸಿ.ಮಲ್ಲಿಕ್&zwnj;, ಹುಣಸೂರು ಉಪವಿಭಾಗದ ಡಿವೈಎಸ್&zwnj;ಪಿ ರವಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಕೋಟ್ಯಾಂತರ ಮೌಲ್ಯದ ಸುಮಾರು 30 ಕೆ.ಜಿಗಿಂತಲೂ ಹೆಚ್ಚಿನ ಸಿಂಥೆಟಿಕ್&zwnj; ಡ್ರಗ್ಸ್&zwnj; ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ಇಬ್ಬರು ಆರೋಪಿಗಳೂ ಮೈಸೂರು ನಿವಾಸಿ&lt;/strong&gt;&lt;/h2&gt;&lt;p&gt;&lsquo;ಗುರುವಾರ ಡ್ರಗ್ಸ್&zwnj; ಸೇವನೆ ಮಾಡಿದ್ದ ಇಬ್ಬರನ್ನು ಬಂಧಿಸಿದ್ದೆವು. ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ದಾಸನಪುರದ ಮನೆಯೊಂದರಲ್ಲಿ ಸಿಂಥೆಟಿಕ್&zwnj; ಡ್ರಗ್ಸ್&zwnj; ದಾಸ್ತಾನು ಮಾಡಿರುವ ಮಾಹಿತಿ ತಿಳಿಯಿತು. ದಾಳಿ ನಡೆಸಿದಾಗ 2 ಕೆ.ಜಿ, 5 ಕೆ.ಜಿಯ ಪೊಟ್ಟಣಗಳಲ್ಲಿ ಡ್ರಗ್ಸ್&zwnj; ತುಂಬಿಟ್ಟಿರುವುದು ಕಂಡುಬಂದಿದೆ. ಇಬ್ಬರು ಆರೋಪಿಗಳೂ ಮೈಸೂರು ನಿವಾಸಿಗಳಾಗಿದ್ದು, ಇಲ್ಲಿಂದ ಇತರೆಡೆಗೆ ಡ್ರಗ್ಸ್&zwnj; ಪೂರೈಕೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ತನಿಖೆ ಮುಂದುವರೆಸಿದ್ದೇವೆ&rsquo; ಎಂದು ಎಸ್&zwnj;ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/mysuru-drug-bust-30kg-synthetic-drugs-seized-hunsur-police-gvd/articleshow-2zm8k3p"/>
        </item>
        <item>
            <title><![CDATA[ಮೈಸೂರು ಜಿಲ್ಲೆಯ ಎರಡು ಗ್ರಾಮದ ಜನರು LPGಯೇ ಬಳಸಲ್ಲ; ಇವರಿಗೆಲ್ಲಾ ಇಲ್ಲ ಟೆನ್ಷನ್]]></title>
            <link>https://kannada.asianetnews.com/karnataka-districts/mysuru-district-villages-in-hd-kote-and-saragur-taluks-have-become-self-sufficient-using-biogas-mrq/articleshow-8i7k60q</link>
            <guid isPermaLink="true">https://kannada.asianetnews.com/karnataka-districts/mysuru-district-villages-in-hd-kote-and-saragur-taluks-have-become-self-sufficient-using-biogas-mrq/articleshow-8i7k60q</guid>
            <pubDate>Mon, 06 Apr 2026 06:24:54 +0530</pubDate>
            <description><![CDATA[&lt;p&gt;ಮಧ್ಯಪ್ರಾಚ್ಯ ಯುದ್ಧದಿಂದ ಉಂಟಾದ ಅಡುಗೆ ಅನಿಲದ ಕೊರತೆಯ ನಡುವೆಯೂ, ಎಚ್&zwnj;.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಗ್ರಾಮಗಳು ಜೈವಿಕ ಅನಿಲ ಬಳಸಿ ಸ್ವಾವಲಂಬಿಯಾಗಿವೆ. &amp;nbsp;ನೂರಾರು ಕುಟುಂಬಗಳು ಇಂಧನಕ್ಕಾಗಿ ಜೈವಿಕ ಅನಿಲವನ್ನು ಅವಲಂಬಿಸಿ, ಆರ್ಥಿಕ ಉಳಿತಾಯ ಮಾಡುತ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kng4h77hg31mfy4hc89c6dra,imgname-bio-gas-1775436864753.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು:&lt;/strong&gt; &amp;nbsp;ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಅಡುಗೆ ಅನಿಲದ ಕೊರತೆಯಿಂದ ಪರಿತಪಿಸುತ್ತಿದ್ದರೆ, ಕರ್ನಾಟಕದ ಈ ಗ್ರಾಮಗಳಿಗೆ ಅದರ ಶಾಖ ತಟ್ಟಿಲ್ಲ. ಹಾಗಂತ ಇಲ್ಲಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆಯನ್ನೂ ಮಾಡುವುದಿಲ್ಲ.&lt;/p&gt;&lt;p&gt;ಮೈಸೂರು ಭಾಗದಲ್ಲಿ ಹೆಚ್ಚು ಸಮುದಾಯ ಆಧಾರಿತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಸ್ವಾಮಿ ವಿವೇಕಾನಂದ ಯೂತ್&zwnj;ಮೂವ್&zwnj;ಮೆಂಟ್&zwnj;ನ ಅಂಗ ಸಂಸ್ಥೆಯಾದ ಕೆಂಚನಹಳ್ಳಿಯ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರವು ಎಚ್&zwnj;.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಜೈವಿಕ ಅನಿಲ (ಬಯೋಗ್ಯಾಸ್&zwnj;) ಅಳವಡಿಕೆಗೆ ನೆರವಾಗಿರುವುದು ಇವತ್ತಿನ ಇಂಧನ ಅಭಾವವನ್ನು ಮರೆಸುತ್ತಿದೆ.&lt;/p&gt;&lt;h2&gt;&lt;strong&gt;70 ಕುಟುಂಬಗಳಿಗೆ ಬಯೋಗ್ಯಾಸ್&zwnj; ಸೌಲಭ್ಯ&lt;/strong&gt;&lt;/h2&gt;&lt;p&gt;ಟೈಟಾನ್&zwnj; ಕಂಪನಿಯ ನೆರವಿನೊಂದಿಗೆ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಎಚ್&zwnj;.ಡಿ.ಕೋಟೆ ತಾಲೂಕಿನ ಚಕ್ಕೂರು ಗ್ರಾಮದ ಸುಮಾರು 70 ಕುಟುಂಬಗಳಿಗೆ ಬಯೋಗ್ಯಾಸ್&zwnj; ಸೌಲಭ್ಯ ಕಲ್ಪಿಸಿದೆ. ಈ ಕುಟುಂಬಗಳು ಅಡುಗೆಗೆ, ಮನೆಗೆ ವಿದ್ಯುತ್&zwnj;ಬಲ್ಪ್&zwnj; ಬಳಕೆಗೆ ಜೈವಿಕ ಅನಿಲವನ್ನೇ ಅವಲಂಬಿಸಿವೆ.&lt;/p&gt;&lt;p&gt;ಅಂತೆಯೇ ಅದೇ ತಾಲೂಕಿನ ಜೋಂಪನಹಳ್ಳಿಯ 53 ಕುಟುಂಬಗಳಿಗೆ ಜೈವಿಕ ಅನಿಲ ಅಳವಡಿಕೆಗೆ ನೆರವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 300 ಕುಟುಂಬಗಳಿಗೆ ಜೈವಿಕ ಅನಿಲ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದ್ದ ಸಂಸ್ಥೆಯು ಆ ಗುರಿ ಮುಟ್ಟಿದ್ದು, ಮುಂದಿನ ಆರ್ಥಿಕ ವರ್ಷಕ್ಕೆ ಸುಮಾರು 200 ಕುಟುಂಬಗಳಿಗೆ ಜೈವಿಕ ಅನಿಲ ಅಳವಡಿಕೆಗೆ ಅವಕಾಶ ಕಲ್ಪಿಸುತ್ತಿದೆ.&lt;/p&gt;&lt;p&gt;ಅಲ್ಲದೆ ಚಕ್ಕೂರು ಮತ್ತು ಜೋಂಪನಹಳ್ಳಿಯನ್ನು ಸಂಪೂರ್ಣವಾಗಿ ಜೈವಿಕ ಅನಿಲ ಗ್ರಾಮವನ್ನಾಗಿ ಪರಿವರ್ತಿಸುವ ಗುರಿ ಇದೆ. ಆದರೆ ಗ್ರಾಮದ ಅನೇಕ ಮಂದಿ ನಿವಾಸಿಗಳಿಗೆ ಅಗತ್ಯವಿರುವ ಸ್ಥಳಾವಕಾಶ ಮತ್ತು ಹಸುಗಳು ಇಲ್ಲ.&lt;/p&gt;&lt;h3&gt;&lt;strong&gt;ಜೈವಿಕ ಅನಿಲ ಅಳವಡಿಕೆಗೆ ಏನು ಮಾಡಬೇಕು?&lt;/strong&gt;&lt;/h3&gt;&lt;p&gt;ಜೈವಿಕ ಅನಿಲ ಅಳವಡಿಕೆಗೆ ಸುಮಾರು 10/15 ಅಡಿ ಸ್ಥಳಾವಕಾಶಬೇಕು ಮತ್ತು ಕನಿಷ್ಠ 2 ಹಸುಗಳು ಇರಬೇಕು. ಇವುಗಳ ಸಗಣಿ ಮೂಲಕ ಜೈವಿಕ ಅನಿಲ ತಯಾರಿಸಿ ಅಡುಗೆಗೆ ಬಳಸಿಕೊಳ್ಳಬಹುದು. ಗ್ಯಾಸ್&zwnj; ತಯಾರಾಗಿ ಉಳಿದ ಸಗಣಿಯನ್ನು ಗೊಬ್ಬರವಾಗಿಯೂ ರೈತರು ಬಳಸಿಕೊಳ್ಳಬಹುದು. ರೈತರಿಗೆ ₹3800 ಮಾತ್ರ ಪಡೆಯಲಾಗುತ್ತದೆ. ಉಳಿದ ಎಲ್ಲಾ ಹಣವನ್ನು ಟೈಟಾನ್&zwnj; ಮತ್ತು ವಿವೇಕ ಗ್ರಾಮೀಣ ಜೀವನಾಧಾರ ಸಂಸ್ಥೆ ಭರಿಸುತ್ತದೆ. ಈ ಎಲ್ಲಾ ಸೌಲಭ್ಯ ಇರುವುದರಿಂದ ಮತ್ತು ಸಿಮೇಎಣ್ಣೆ, ಗ್ಯಾಸ್&zwnj;, ಎಲೆಕ್ಟ್ರಿಕ್&zwnj;ಸ್ಟೌ ಮುಂತಾದ ಯಾವುದೇ ಮೂಲವನ್ನು ಅವಲಂಬಿಸಬೇಕಾದ ಅಗತ್ಯವಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಎಲ್&zwnj;ಪಿಜಿ ಸಿಲಿಂಡರ್ ಕೊರತೆ ನೀಗಿಸಿದ ಹೊಸ ಒಲೆ: ಬೆಳಗಾವಿ ಹೋಟೆಲ್&zwnj;ಗಳಲ್ಲಿ ಬಯೋಮಾಸ್- ಹೋಟೆಲ್ ಉದ್ಯಮವನ್ನು ಸಂಕಷ್ಟ ದೂರ ಮಾಡಿದ ಪರ್ಯಾವ ವ್ಯವಸ್ಥೆ&lt;/strong&gt;&lt;/p&gt;&lt;p&gt;ಕೊಲ್ಲಿ ದೇಶದಲ್ಲಿ ನಡೆಯುತ್ತಿರುವ ಈ ಯುದ್ಧದ ಸಂದರ್ಭದಲ್ಲಿ ಅಡುಗೆ ಅನಿಲದ ಕೊರತೆ ಆಗಿದೆ ಎಂಬ ಬಾಧೆಯೂ ಇವರನ್ನು ಕಾಡಿಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ತೀರ ಅಗತ್ಯ ಇರುವವರನ್ನು ಗುರುತಿಸಿ ಸಂಸ್ಥೆಯು ಈ ಸೌಲಭ್ಯ ಕಲ್ಪಿಸುತ್ತದೆ.&lt;/p&gt;&lt;p&gt;ಒಂದು ಕುಟುಂಬಕ್ಕೆ ತಿಂಗಳಿಗೆ ಒಂದು ಅಡುಗೆ ಅನಿಲ ಬೇಕು ಎಂದರೂ ಒಂದು ಅಡುಗೆ ಅನಿಲ ಸಿಲಿಂಡರ್&zwnj;ಗೆ ₹900 ವೆಚ್ಚ ಮಾಡಬೇಕು. ಅದು ವರ್ಷಕ್ಕೆ ₹10,800 ಆಗುತ್ತದೆ. ಅಂತದ್ದು ಚಕ್ಕೂರು ಗ್ರಾಮದ 71 ಕುಟುಂಬಕ್ಕೆ ₹7.66 ಲಕ್ಷ ಆಗುತ್ತದೆ. ಅಂದರೆ ಪ್ರತಿ ಕುಟುಂಬವು ಅಡುಗೆ ಅನಿಲ ಕೊರತೆಯ ತೊಂದರೆಗೆ ಆಳಗಾಗದೆ, ಉಳಿತಾಯವನ್ನೂ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೊಗೆನೂ ಇಲ್ಲ, ಖರ್ಚೂ ಇಲ್ಲ ಸಿಕ್ಕಾಪಟ್ಟೆ ಸ್ಪೀಡ್! ಸಿಲಿಂಡರ್ ಕೊರತೆಗೆ ಬ್ರೇಕ್ ಹಾಕಿದ ಬೆಂಗಳೂರಿನ &lsquo;ರಾಕೆಟ್ ಸ್ಟವ್&lt;/strong&gt;&lt;strong&gt;&rsquo;&lt;/strong&gt;&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mysuru-district-villages-in-hd-kote-and-saragur-taluks-have-become-self-sufficient-using-biogas-mrq/articleshow-8i7k60q"/>
        </item>
        <item>
            <title><![CDATA[ಮೈಸೂರಿನ 'ಕಿಲ್ಲಿಂಗ್ ಡಾಕ್ಟರ್' ವಿನಯ್ ಅಸಲಿ ಬಣ್ಣ ಬಯಲು: ಸೈಕೋ ವೈದ್ಯನ ಬಲೆಗೆ ಸಿಲುಕಿ ನಲುಗಿದ ಮೂವರು ಸುಂದರಿಯರು!]]></title>
            <link>https://kannada.asianetnews.com/gallery/karnataka-districts/dark-secrets-of-mysuru-doctor-vinay-dr-nagashree-ca-gowthami-and-wife-vinoda-abuse-sat-c9rs8hz</link>
            <guid isPermaLink="true">https://kannada.asianetnews.com/gallery/karnataka-districts/dark-secrets-of-mysuru-doctor-vinay-dr-nagashree-ca-gowthami-and-wife-vinoda-abuse-sat-c9rs8hz</guid>
            <pubDate>Wed, 25 Mar 2026 16:30:18 +0530</pubDate>
            <description><![CDATA[&lt;p&gt;ಮೈಸೂರಿನ ಆಯುರ್ವೇದ ವೈದ್ಯನೆಂದು ಹೇಳಿಕೊಳ್ಳುವ ವಿನಯ್, ಪ್ರೀತಿಯ ಹೆಸರಲ್ಲಿ ಹಲವು ಮಹಿಳೆಯರಿಗೆ ಮೋಸ ಮಾಡಿದ್ದಾರೆ. ವೈದ್ಯೆ ನಾಗಶ್ರೀ 12 ವರ್ಷ ಕೋಮಾದಲ್ಲಿದ್ದು ಸಾವು, ಮತ್ತೊಬ್ಬ ಯುವತಿ ಆತ್ಮ*ಹತ್ಯೆ. ತನ್ನ ಪತ್ನಿಗೂ ವಿಚಿತ್ರ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಸತ್ಯಗಳು ಇದೀಗ ಬಯಲಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmj8qdykddgg2q9dfv05xxec,imgname-mysuru-doctor-vinay-love-scam-1774434629586.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರಿನ ಆಯುರ್ವೇದ ವೈದ್ಯನೆಂದು ಹೇಳಿಕೊಳ್ಳುವ ವಿನಯ್, ಪ್ರೀತಿಯ ಹೆಸರಲ್ಲಿ ಹಲವು ಮಹಿಳೆಯರಿಗೆ ಮೋಸ ಮಾಡಿದ್ದಾರೆ. ವೈದ್ಯೆ ನಾಗಶ್ರೀ 12 ವರ್ಷ ಕೋಮಾದಲ್ಲಿದ್ದು ಸಾವು, ಮತ್ತೊಬ್ಬ ಯುವತಿ ಆತ್ಮ*ಹತ್ಯೆ. ತನ್ನ ಪತ್ನಿಗೂ ವಿಚಿತ್ರ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಸತ್ಯಗಳು ಇದೀಗ ಬಯಲಾಗಿವೆ.&lt;/p&gt;&lt;img&gt;&lt;p&gt;&lt;strong&gt;ಮೈಸೂರು (ಮಾ.25): ಸ&lt;/strong&gt;ಮಾಜದಲ್ಲಿ ವೈದ್ಯರನ್ನು ದೇವರ ಸಮಾನ ಎಂದು ಕಾಣಲಾಗುತ್ತದೆ. ಆದರೆ ಮೈಸೂರಿನಲ್ಲಿ ಆಯುರ್ವೇದ ವೈದ್ಯನೆಂದು ಕರೆಸಿಕೊಳ್ಳುವ ವಿನಯ್ ಎಂಬಾತನ ಕ್ರೂರ ಕೃತ್ಯಗಳು ಕೇಳಿದರೆ ಮೈ ಜುಂ ಎನ್ನುತ್ತದೆ. ಈತ ಕೇವಲ ವೈದ್ಯನಲ್ಲ, ಪ್ರೀತಿಯ ಹೆಸರಲ್ಲಿ ಹೆಣ್ಣುಮಕ್ಕಳ ಜೀವನದ ಜೊತೆ ಚೆಲ್ಲಾಟವಾಡಿ, ಸಾವು-ನೋವಿಗೆ ಕಾರಣನಾದ ಒಬ್ಬ ಸರಣಿ ಅಪರಾಧಿ ಎಂಬ ಆಘಾತಕಾರಿ ಸತ್ಯಗಳು ಈಗ ಹೊರಬರುತ್ತಿವೆ.&lt;/p&gt;&lt;img&gt;&lt;p&gt;ಹುಣಸೂರು ತಾಲೂಕಿನ ಹನಗೋಡು ಸಮೀಪ ಕ್ಲಿನಿಕ್ ನಡೆಸುತ್ತಿದ್ದ ಈ 'ಮೋಸದ ವೈದ್ಯ'ನ ಅಸಲಿ ಮುಖ ಈಗ ಬಯಲಾಗಿದೆ. &amp;nbsp;ಈತ ಮೈಸೂರು ಆಯುರ್ವೇದ ಡಾಕ್ಟರ್ ಅಲ್ಲಲ್ಲಾ, ಹುಡುಗಿಯರಿಗೆ ಮೋಸ ಮಾಡುವ ವಿಕ್ಟರ್. ಗಂಡನಿಂದ ವಿಚಿತ್ರ ಲೈಂಗಿಕ ಕಿರುಕುಳ ಕೇಸಿನ ಬೆನ್ನಲ್ಲಿಯೇ ಆತನ ಹಳೆಯ ಪ್ರೇಮ ಪುರಾಣಗಳೆಲ್ಲವೂ ಹೊರಬೀಳುತ್ತಿವೆ. ಈತನ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;12 ವರ್ಷದ ಹಿಂದಿನ ಲವ್ ಕಹಾನಿ, ವೈದ್ಯನ ಮೋಸಕ್ಕೆ ನರಳಿ ಪ್ರಾಣಬಿಟ್ಟ ವೈದ್ಯೆ ನಾಗಶ್ರೀ. ವೈದ್ಯೆಯ ಸಾವಿನ ಹಿಂದೆ ರೋಚಕ ಕಹಾನಿಯೊಂದು ಹೊರಬಿದ್ದಿದೆ. ಮೈಸೂರಿನ ಖಾಸಗಿ ಆಯುರ್ವೇದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾ.ನಾಗಶ್ರೀ ಜೊತೆಗೆ, ಜ್ಯೂನಿಯರ್ ಡಾಕ್ಟರ್ ಆಗಿ ವಿನಯ್ ಸೇರಿಕೊಂಡನು.&lt;/p&gt;&lt;p&gt;ನಂತರ ತನಗಿಂತ ಹಿರಿಯ ಡಾಕ್ಟರ್ ನಾಗಶ್ರೀ ಅವರನ್ನ ಪುಸಲಾಯಿಸಿ ಲವ್ ಮಾಡ್ತಾನೆ. ಮದುವೆ ಮಾಡಿಕೊಳ್ಳುವುದಾಗಿ ಲೈಂಗಿಕ ಸಂಬಂಧವನ್ನೂ ಬೆಳೆಸುತ್ತಾನೆ. ನಂತರ, ಮದುವೆ ಮಾಡಿಕೊಳ್ಳುವಂತೆ ಕೇಳಿದಾಗ ನೀನು ನನಗಿಂತ 2 ವರ್ಷ ದೊಡ್ಡವಳು ಮದುವೆ ಮಾಡಿಕೊಳ್ಳಲು ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ನಾಟಕ ಮಾಡಿದ್ದಾನೆ.&amp;nbsp;&lt;/p&gt;&lt;img&gt;&lt;p&gt;ಇದಾದ ನಂತರ ಇಬ್ಬರೂ ಬದುಕುವುದು ಬೇಡವೆಂದು ಶ್ರೀರಂಗಪಟ್ಟಣಕ್ಕೆ ಹೋಗಿ ಇಬ್ಬರೂ ಸಾಯೋಣವೆಂದು ಹೇಳಿದ್ದಾನೆ. ಶ್ರೀರಂಗಪಟ್ಟಣದಲ್ಲಿ ಲಾಡ್ಜ್ ರೂಮು ಮಾಡಿ, ಇಬ್ಬರೂ ನಿದ್ರೆ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ. ನಂತರ, ಯುವತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಡಾ.ನಾಗಶ್ರೀಗೆ ಓವರ್&zwnj;ಡೋಸ್ ಇಂಜೆಕ್ಷನ್ ಕೂಡ ಕೊಟ್ಟಿದ್ದಾನೆ. ಇದರಿಂದ ಯುವತಿ ಸ್ಥಿತಿ ಗಂಭೀರವಾಗಿದ್ದು ಕೋಮಾಕ್ಕೆ ಜಾರಿದ್ದಳು. ಆದರೆ, ವಿನಯ್&zwnj;ಗೆ ಏನೂ ಆಗಿರಲಿಲ್ಲ. 12 ವರ್ಷಗಳ ಕಾಲ ಕೋಮಾದಲ್ಲಿದ್ದ ಡಾ.ನಾಗಶ್ರೀ ಇತ್ತೀಚೆಗೆ ಸಾವನ್ನಪ್ಪಿದ್ದಾರೆ.&lt;/p&gt;&lt;img&gt;&lt;p&gt;ಚಾರ್ಟೆಡ್ ಅಕೌಂಟೆಂಟ್ ಗೌತಮಿ ಹಿರೇಮಠ ಅವರು 2014ರಿಂದ 2017ರವರೆಗೆ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದಾದ ನಂತರ 2017ರಲ್ಲಿ ಗೌತಮಿ ಹಿರೇಮಠ ಮೈಸೂರಿಗೆ ಬಂದು ವಾಸವಾಗಿದ್ದರು. ಆಗ ಡಾ. ವಿನಯ್ ಫೇಸ್&zwnj;ಬುಕ್ ಮೂಲಕ ಗೌತಮಿಯನ್ನು ಪರಿಚಯ ಮಾಡಿಕೊಂಡಿದ್ದನು. ಇಬ್ಬರೂ ಪರಿಚಿತರಾಗಿ, ಲವ್ ಮಾಡಿ ಒಂದು ವರ್ಷಗಳ ಕಾಲ ಪ್ರೇಮ ಹಕ್ಕಿಗಳಾಗಿ ವಿಹಾರ ಮಾಡಿದ್ದಾರೆ.&lt;/p&gt;&lt;p&gt;ಆದರೆ, ವಿನಯ್ ಜೊತೆಗೆ ಲವ್&zwnj;ನಲ್ಲಿದ್ದ ಗೌತಮಿ ಒಂದು ವರ್ಷದ ಬಳಿಕ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನು ಗೌತಮಿಯ ತಂದೆ ಡಾ.ವಿನಯ್&zwnj;ನಿಂದಲೇ ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರ ಮೇಲೆ ಪ್ರಭಾವ ಬೀರಿದ್ದರಿಂದ ಆ ಕೇಸಿನಿಂದಲೂ ವಿನಯ್ ಲೀಲಾಜಾಲವಾಗಿ ಹೊರಬಂದಿದ್ದನು.&lt;/p&gt;&lt;img&gt;&lt;p&gt;ಇದೀಗ ಹುಣಸೂರಿನ ಹನಗೋಡು ಗ್ರಾಮದ ಪಕ್ಕದಲ್ಲಿರುವ ಹುಡುಗಿ ವಿನೋದಾ ಎನ್ನುವವರನ್ನು ಮದುವೆ ಮಾಡಿಕೊಳ್ಳುತ್ತಾರೆ. ವಿನೋದಾ ಮದುವೆಯಾಗಿ 15 ದಿನಕ್ಕೆ ಮನೆಯಿಂದ ಹೊರಗಡೆ ಬಂದಿದ್ದಾಳೆ. ಮದುವೆಯಾಗಿ ಒಂದೇ ವಾರದಲ್ಲಿ ನಿಮ್ಮ ಮನೆಯವರಿಗೆ ಅದ್ಧೂರಿ ಮದುವೆ ಮಾಡಿಕೊಡಲು ಆಗಿಲ್ಲ, ನಾವು ಕೇಳಿದಷ್ಟು ಹಣ ಕೊಡಲು ಆಗಿಲ್ಲ. ನೀವು ನಿಮ್ಮನೆಯಲ್ಲಿ ಮಾಡಿರುವ ಮದುವೆ ಸಾಲಕ್ಕೆ ಜಮೀನು ಮಾರುತ್ತಾರಂತೆ, ಅದೇ ಜಮೀನನ್ನ ನಮ್ಮ ಹೆಸರಿಗೆ ಬರೆದುಕೊಡಲು ಹೇಳು ಎಂದು ಒತ್ತಡ ಹಾಕಿದ್ದಾರೆ.&lt;/p&gt;&lt;img&gt;&lt;p&gt;ಇದ್ಯಾವುದಕ್ಕೂ ವಿನೋದಾ ಸೊಪ್ಪು ಹಾಕದಿದ್ದಾಗ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಪ್ರತಿದಿನ ಜ್ಯೂಸ್&zwnj;ನಲ್ಲಿ ಡ್ರಗ್ಸ್ ಹಾಕಿಕೊಟ್ಟು ಮಂಕು ಕವಿದಂತೆ ಮಾಡುತ್ತಿದ್ದನು. ಇನ್ನು ರಾತ್ರಿಯಾದರೆ ವಿಚಿತ್ರ ಲೈಂಗಿಕತೆಗೆ ಬೇಡಿಕೆ ಇಡುತ್ತಿದ್ದನು. ಇದಕ್ಕೊಪ್ಪದಿದ್ದರೆ ಗನ್ ತೋರಿಸಿ ಜೀವ ಬೆದರಿಕೆಯನ್ನೂ ಹಾಕುತ್ತಿದ್ದನು ಎಂದು ಆರೋಪ ಮಾಡಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/dark-secrets-of-mysuru-doctor-vinay-dr-nagashree-ca-gowthami-and-wife-vinoda-abuse-sat-c9rs8hz"/>
        </item>
        <item>
            <title><![CDATA[ಮೈಸೂರಿನಲ್ಲಿ ಮತ್ತೊಂದು  ಬೃಹತ್‌ ಡ್ರಗ್ಸ್‌ ಜಾಲ ಪತ್ತೆ]]></title>
            <link>https://kannada.asianetnews.com/crime/major-drug-racket-busted-again-in-mysuru/articleshow-fn021uc</link>
            <guid isPermaLink="true">https://kannada.asianetnews.com/crime/major-drug-racket-busted-again-in-mysuru/articleshow-fn021uc</guid>
            <pubDate>Sat, 28 Mar 2026 03:10:07 +0530</pubDate>
            <description><![CDATA[&lt;p&gt;ಡ್ರಗ್ಸ್&zwnj; ತಯಾರಿಕಾ ಫ್ಯಾಕ್ಟರಿ ಪತ್ತೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ ಮೈಸೂರಿನಲ್ಲಿ ಮತ್ತೆ ಕೋಟ್ಯಂತರ ರುಪಾಯಿ ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ. ಮೈಸೂರು ಜಿಲ್ಲಾ ಪೊಲೀಸರು ಎರಡನೇ ಬಾರಿ ಡ್ರಗ್ಸ್&zwnj; ಸಂಗ್ರಹವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kg78468f2544h6e9tkmgq35b,imgname-----------------------2026-01-30t161524.413-1769769933071.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು :&lt;/strong&gt; ಡ್ರಗ್ಸ್&zwnj; ತಯಾರಿಕಾ ಫ್ಯಾಕ್ಟರಿ ಪತ್ತೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ ಮೈಸೂರಿನಲ್ಲಿ ಮತ್ತೆ ಕೋಟ್ಯಂತರ ರುಪಾಯಿ ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ.&lt;/p&gt;&lt;p&gt;ಮಹಾರಾಷ್ಟ್ರ, ದೆಹಲಿ ಪೊಲೀಸರು ವಿವಿಧ ಸಂದರ್ಭದಲ್ಲಿ ಮೂರು ಬಾರಿ ಮೈಸೂರಿನಲ್ಲಿ ಡ್ರಗ್ಸ್&zwnj; ಫ್ಯಾಕ್ಟರಿ ಪತ್ತೆ ಹಚ್ಚಿ ದಾಳಿ ನಡೆಸಿದ್ದರು. ಇದರಿಂದಾಗಿ ಸ್ಥಳೀಯ ಪೊಲೀಸರ ದಕ್ಷತೆ ಮೇಲೆಯೇ ಸಂಶಯ ಮೂಡಿತ್ತು. ಬಳಿಕ ಚುರುಕಾದ ಮೈಸೂರು ಜಿಲ್ಲಾ ಪೊಲೀಸರು ಎರಡನೇ ಬಾರಿ ಡ್ರಗ್ಸ್&zwnj; ಸಂಗ್ರಹವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್&zwnj; ವ್ಯಸನಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭಾರೀ ಪ್ರಮಾಣದಲ್ಲಿ ಮಾದಕ ವಸ್ತು ಸಂಗ್ರಹಿಸಿರುವ ಮಾಹಿತಿ ಸಿಕ್ಕಿದ್ದು, ಅದನ್ನು ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ 30 ಕೇಜಿಯ ಡ್ರಗ್ಸ್&zwnj; ಸಿಕ್ಕಿದೆ. ನಗರ ವ್ಯಾಪ್ತಿಯಲ್ಲಷ್ಟೇ ಇದ್ದ ಡ್ರಗ್ಸ್&zwnj; ತಯಾರಿ, ಸಂಗ್ರಹ ಈಗ ಗ್ರಾಮಾಂತರ ಮಟ್ಟಕ್ಕೂ ವಿಸ್ತರಿಸಿರುವುದು ಈಗ ಬೆಳಕಿಗೆ ಬಂದಿದೆ.&lt;/p&gt;&lt;h2&gt;&lt;strong&gt;30 ಕೆ.ಜಿ.ಗಿಂತಲೂ ಹೆಚ್ಚಿನ ಸಿಂಥೆಟಿಕ್&zwnj; ಡ್ರಗ್ಸ್&zwnj;&lt;/strong&gt;&lt;/h2&gt;&lt;p&gt;ಹುಣಸೂರು ತಾಲೂಕು ದಾಸನಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಡ್ರಗ್ಸ್&zwnj; ಮಾರಾಟ ಜಾಲವನ್ನು ಪತ್ತೆ ಹಚ್ಚಿ ಕೋಟ್ಯಂತರ ರುಪಾಯಿ ಮೌಲ್ಯದ 30 ಕೇಜಿ ಸಿಂಥೆಟಿಕ್&zwnj; ಡ್ರಗ್ಸ್&zwnj; ವಶಕ್ಕೆ ಪಡೆದಿದ್ದಾರೆ. ಮನೆಯೊಂದರಲ್ಲಿ ಸಿಂಥೆಟಿಕ್&zwnj; ಡ್ರಗ್ಸ್&zwnj; ದಾಸ್ತಾನು ಮಾಡಿರುವ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್&zwnj; ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಎಸ್&zwnj;ಪಿ ಸಿ.ಮಲ್ಲಿಕ್&zwnj;, ಹುಣಸೂರು ಉಪವಿಭಾಗದ ಡಿವೈಎಸ್&zwnj;ಪಿ ರವಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಕೋಟ್ಯಂತರ ಮೌಲ್ಯದ ಸುಮಾರು 30 ಕೆ.ಜಿ.ಗಿಂತಲೂ ಹೆಚ್ಚಿನ ಸಿಂಥೆಟಿಕ್&zwnj; ಡ್ರಗ್ಸ್&zwnj; ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಡ್ರಗ್ಸ್&zwnj; ಸೇವನೆ ಮಾಡಿದ್ದ ಇಬ್ಬರನ್ನು ಬಂಧಿಸಿದ್ದೆವು&lt;/strong&gt;&lt;/h3&gt;&lt;p&gt;&lsquo;ಗುರುವಾರ ಡ್ರಗ್ಸ್&zwnj; ಸೇವನೆ ಮಾಡಿದ್ದ ಇಬ್ಬರನ್ನು ಬಂಧಿಸಿದ್ದೆವು. ಅವರನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ದಾಸನಪುರದ ಮನೆಯೊಂದರಲ್ಲಿ ಸಿಂಥೆಟಿಕ್&zwnj; ಡ್ರಗ್ಸ್&zwnj; ದಾಸ್ತಾನು ಮಾಡಿರುವ ಮಾಹಿತಿ ತಿಳಿಯಿತು. ದಾಳಿ ನಡೆಸಿದಾಗ 2 ಕೆ.ಜಿ, 5 ಕೆ.ಜಿ.ಯ ಪೊಟ್ಟಣಗಳಲ್ಲಿ ಡ್ರಗ್ಸ್&zwnj; ತುಂಬಿಟ್ಟಿರುವುದು ಕಂಡುಬಂದಿದೆ. ಇಬ್ಬರು ಆರೋಪಿಗಳೂ ಮೈಸೂರು ನಿವಾಸಿಗಳಾಗಿದ್ದು, ಇಲ್ಲಿಂದ ಇತರೆಡೆಗೆ ಡ್ರಗ್ಸ್&zwnj; ಪೂರೈಕೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ತನಿಖೆ ಮುಂದುವರೆಸಿದ್ದೇವೆ&rsquo; ಎಂದು ಎಸ್&zwnj;ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.&lt;/p&gt;&lt;p&gt;ಮೈಸೂರಿನಲ್ಲಿ ಡ್ರಗ್ಸ್&zwnj; ಫ್ಯಾಕ್ಟರಿಯನ್ನೇ ಸ್ಥಾಪಿಸಿ ಮಾದಕ ವಸ್ತುವನ್ನು ತಯಾರಿಸಿ ಮಾರಾಟ, ಸಾಗಣೆ ಮಾಡುತ್ತಿದ್ದ ಜಾಲವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹೆಚ್ಚಿದ್ದರು. ವಿವಿಧ ಸಂದರ್ಭದಲ್ಲಿ 2 ಬಾರಿ ದಾಳಿ ನಡೆಸಿ ಕೋಟ್ಯಂತರ ರುಪಾಯಿ ಮೌಲ್ಯದ ಫ್ಯಾಕ್ಟರಿಯನ್ನು ಸೀಜ್&zwnj; ಮಾಡಿದ್ದರು. ಅಲ್ಲದೆ ದೆಹಲಿಯ ಪೊಲೀಸರು ಒಮ್ಮೆ ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು. ಇದರಿಂದಾಗಿ ಮೈಸೂರು ಜಿಲ್ಲಾ ಪೊಲೀಸರಿಗೆ ಭಾರೀ ಮುಜುಗರವಾಗಿತ್ತು. ಅಲ್ಲದೆ ರಾಷ್ಟ್ರಮಟ್ಟದಲ್ಲಿ ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಬಳಿಕ ಚುರುಕಾದ ಪೊಲೀಸರು, ಭಾರೀ ನಿಗಾವಹಿಸಿದ್ದು, ದಂಪತಿ ಮನೆಯಲ್ಲಿ ಡ್ರಗ್ಸ್&zwnj; ತಯಾರಿಸುತ್ತಿರುವ ಮಾಹಿತಿ ಸಂಗ್ರಹಿಸಿ ಡ್ರಗ್ಸ್&zwnj; ವಶಕ್ಕೆ ಪಡೆದಿದ್ದರು. ಈಗ ಮತ್ತೊಂದು ಪ್ರಕರಣವನ್ನು ಭೇದಿಸಿದ್ದು, ಸಂಗ್ರಹಿಸಿ ಇಟ್ಟಿದ್ದ ಡ್ರಗ್ಸ್&zwnj; ವಶಕ್ಕೆ ಪಡೆದಿದ್ದಾರೆ. ಅದರ ಒಟ್ಟಾರೆ ಮೌಲ್ಯ ತನಿಖೆಯಿಂದಷ್ಟೇ ತಿಳಿಯಬೇಕಿದೆ.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/major-drug-racket-busted-again-in-mysuru/articleshow-fn021uc"/>
        </item>
        <item>
            <title><![CDATA[Mysuru: ಒಣಗಿದ ದಾಸವಾಳದ ಹೂವು ನುಂಗಿ ಉಸಿರು ಚೆಲ್ಲಿದ 6 ತಿಂಗಳ ಕಂದಮ್ಮ]]></title>
            <link>https://kannada.asianetnews.com/state/hunsur-baby-death-dried-hibiscus-flower-swallowing-tragedy-mysuru-san/articleshow-g07ei25</link>
            <guid isPermaLink="true">https://kannada.asianetnews.com/state/hunsur-baby-death-dried-hibiscus-flower-swallowing-tragedy-mysuru-san/articleshow-g07ei25</guid>
            <pubDate>Mon, 30 Mar 2026 12:42:34 +0530</pubDate>
            <description><![CDATA[&lt;p&gt;ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಆಟವಾಡುತ್ತಿದ್ದ ಆರೂವರೆ ತಿಂಗಳ ಮಗು, ಒಣಗಿದ ದಾಸವಾಳ ಹೂವನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಹೂವು ಗಂಟಲಲ್ಲಿ ಸಿಲುಕಿದ್ದರಿಂದ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmys67c5bvwyaxvfechy8cfk,imgname-mysuru-child-death-1774854544773.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮಾ.30): &lt;/strong&gt;ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಅತ್ಯಂತ ದುರದೃಷ್ಟಕರ ಹಾಗೂ ಮನಕಲಕುವ ಘಟನೆಯೊಂದು ನಡೆದಿದ್ದು, ಆಟವಾಡುತ್ತಿದ್ದ ಆರೂವರೆ ತಿಂಗಳ ಮಗು ಒಣಗಿದ ದಾಸವಾಳದ ಹೂವನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ.&lt;/p&gt;&lt;p&gt;ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದ ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರ ಆರೂವರೆ ತಿಂಗಳ ಚಿನ್ಮಯಿಗೌಡ ಮೃತಪಟ್ಟ ಕರುಳ ಕುಡಿ. ಶನಿವಾರ ಈ ಪುಟ್ಟ ಕಂದಮ್ಮ ತನ್ನ ಅಣ್ಣನೊಂದಿಗೆ ಮನೆಯಲ್ಲಿ ಆಟವಾಡುತ್ತಿತ್ತು. ಈ ವೇಳೆ ಮನೆಯ ಹೊಸಲಿನಲ್ಲಿ ಪೂಜೆ ಮಾಡಿ ಇಟ್ಟಿದ್ದ ದಾಸವಾಳದ ಹೂವು ಒಣಗಿ ಬಿದ್ದಿತ್ತು. ಆಟವಾಡುವ ವೇಳೆ ಮಗು ಆ ಒಣಗಿದ ಹೂವಿನ ತುಂಡನ್ನು ಬಾಯಿಗೆ ಹಾಕಿಕೊಂಡಿದೆ.&lt;/p&gt;&lt;h2&gt;&lt;strong&gt;ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದ ಕುಟುಂಬ&lt;/strong&gt;&lt;/h2&gt;&lt;p&gt;ತನ್ನ ಕೈಯಲ್ಲಿದ್ದ ಹೂವಿನ ತುಂಡನ್ನು ಅಣ್ಣ ಕಿತ್ತುಕೊಳ್ಳಬಹುದೆಂಬ ಭಯದಲ್ಲಿ ಮಗು ಅದನ್ನು ನುಂಗಲು ಯತ್ನಿಸಿದೆ. ಈ ಸಂದರ್ಭದಲ್ಲಿ ಹೂವಿನ ತುಂಡು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಅಸ್ವಸ್ಥಗೊಂಡಿದೆ. ಆರಂಭದಲ್ಲಿ ಮಗುವಿಗೆ ಉಸಿರಾಟದ ಸಮಸ್ಯೆಗೆ ಕಾರಣವೇನು ಅನ್ನೋದು ಗೊತ್ತಾಗಿರಲಿಲ್ಲ. ಆಸ್ಪತ್ರೆಗೆ ತೆಗೆದುಕೊಂಡು ಹೋದ ಬಳಿಕವೇ ಮಗು ಹೂವು ನುಂಗಿದ್ದು ಗೊತ್ತಾಗಿದೆ. ಉಸಿರನ್ನು ಎಳೆದುಕೊಳ್ಳುತ್ತಲೇ, ಆಸ್ಪತ್ರೆಯ ಬೆಡ್&zwnj; ಮೇಲೆ ಮಗು ಪ್ರಾಣ ಬಿಟ್ಟಿದ್ದು ಕರುಳು ಹಿಂಡುವಂತಿದೆ.&lt;/p&gt;&lt;p&gt;ತಕ್ಷಣವೇ ಮಗುವನ್ನು ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ. ಈ ಘಟನೆಯಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ತಾಯಿಯೊಂದಿಗೆ ಮಗು ಚಿನ್ಮಯಿ ಗೌಡ&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/state/hunsur-baby-death-dried-hibiscus-flower-swallowing-tragedy-mysuru-san/articleshow-g07ei25"/>
        </item>
        <item>
            <title><![CDATA[Karnataka Bypolls: ಉಪಸಮರ ರಿಸಲ್ಟ್‌ಗೂ ಸಿಎಂ ಕುರ್ಚಿಗೂ ನಂಟು ಇಲ್ಲ; ವರಿಷ್ಠರು ಒಪ್ಪಿದ್ರೆ ಇನ್ನೂ 2 ಬಜೆಟ್‌ ಮಂಡನೆ: ಸಿದ್ದರಾಮಯ್ಯ]]></title>
            <link>https://kannada.asianetnews.com/politics/karnataka-bypolls-2026-cm-siddaramaiah-reacts-at-mysuru-rav/articleshow-hlvg6gh</link>
            <guid isPermaLink="true">https://kannada.asianetnews.com/politics/karnataka-bypolls-2026-cm-siddaramaiah-reacts-at-mysuru-rav/articleshow-hlvg6gh</guid>
            <pubDate>Sun, 29 Mar 2026 06:35:18 +0530</pubDate>
            <description><![CDATA[&lt;p&gt;Karnataka Bypolls ಉಪಚುನಾವಣೆಯ ಫಲಿತಾಂಶಕ್ಕೂ ಮುಖ್ಯಮಂತ್ರಿ ಕುರ್ಚಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjh6cdyp4ctd2hcjcaa601pg,imgname-cm-siddaramaiah--1772251133910.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮಾ.29): &lt;/strong&gt;ಉಪಚುನಾವಣೆಯ ಫಲಿತಾಂಶಕ್ಕೂ, ಸಿಎಂ ಕುರ್ಚಿ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.&lt;/p&gt;&lt;p&gt;ಮೈಸೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಹೇಳಿದರೆ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದು ಅಧಿವೇಶನದಲ್ಲೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ಉಪಚುನಾವಣಾ ಫಲಿತಾಂಶಕ್ಕೂ, ಸಿಎಂ ಕುರ್ಚಿ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ&zwnj;. ದಾವಣಗೆರೆ ದಕ್ಷಿಣದಲ್ಲಿ ಯಾವ ಗೊಂದಲವೂ ಇಲ್ಲ. ಕಳೆದ ಮೂರು ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿಯೂ ನಾವೇ ಗೆದ್ದಿದ್ದೇವೆ&zwnj;. ಅದು ರಾಜ್ಯದ ಜನ ನಮ್ಮ ಸರ್ಕಾರಕ್ಕೆ ಮಾಡಿದ ಆಶೀರ್ವಾದ. ಈ ಫಲಿತಾಂಶ ಕೂಡ ನಮ್ಮ ಸರ್ಕಾರಕ್ಕೆ ಜನ ಮಾಡುವ ಆಶೀರ್ವಾದ. ಇದನ್ನು ದಿಕ್ಸೂಚಿ, ಅದು, ಇದು ಎಂದು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;&lsquo;ನಾನು ಏಪ್ರಿಲ್ 1 ರಿಂದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಏಪ್ರಿಲ್ 5ರಂದು ಕೇರಳಕ್ಕೆ ಪ್ರಚಾರಕ್ಕೆ ಹೋಗುತ್ತೇನೆ. ತಮಿಳುನಾಡು ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ&rsquo; ಎಂದು ಅವರು ತಿಳಿಸಿದರು.&lt;/p&gt;&lt;h2&gt;ಚುನಾವಣಾ ಪ್ರಚಾರ&lt;/h2&gt;&lt;p&gt;ಏ.1ರಿಂದ ರಾಜ್ಯದ ಎರಡು ಕ್ಷೇತ್ರಗಳ ಪ್ರಚಾರಕ್ಕೆ ತೆರಳುವೆ. ಏ.5ರಂದು ಕೇರಳಕ್ಕೆ ತೆರಳುವೆ. ಈ ಬಾರಿ ತಮಿಳುನಾಡಿನಲ್ಲಿ ಪ್ರಚಾರಕ್ಕೆ ನಾನು ಹೋಗುತ್ತಿಲ್ಲ.&lt;/p&gt;&lt;p&gt;ಸಿದ್ದರಾಮಯ್ಯ, ಮುಖ್ಯಮಂತ್ರಿ&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-bypolls-2026-cm-siddaramaiah-reacts-at-mysuru-rav/articleshow-hlvg6gh"/>
        </item>
        <item>
            <title><![CDATA[ಮೈಸೂರು ಮಹಾರಾಜ ಯದುವೀರ್ ಒಡೆಯರ್ ಹುಟ್ಟುಹಬ್ಬ: ಬೆಸ್ಟ್ ಫ್ರೆಂಡ್’ಗೆ ಪತ್ನಿಯಿಂದ ಸ್ಪೆಷಲ್ ವಿಶ್]]></title>
            <link>https://kannada.asianetnews.com/gallery/mysore/trishika-kumari-wishes-husband-yaduveer-wadiyar-on-his-birthday-iidolsl</link>
            <guid isPermaLink="true">https://kannada.asianetnews.com/gallery/mysore/trishika-kumari-wishes-husband-yaduveer-wadiyar-on-his-birthday-iidolsl</guid>
            <pubDate>Tue, 24 Mar 2026 16:01:13 +0530</pubDate>
            <description><![CDATA[&lt;p&gt;Yaduveer Wadiyar Birthday: ಮೈಸೂರು ಸಂಸ್ಥಾನದ ಮಹಾರಾಜರಾದ ಯದುವೀರ್ ಒಡೆಯರ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪತ್ನಿ ತ್ರಿಷಿಕಾ ಕುಮಾರಿ ಗಂಡನ ಫೋಟೊ ಜೊತೆ ವಿಶೇಷ ಮೆಸೇಜ್ ಶೇರ್ ಮಾಡಿ ಶುಭ ಕೋರಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmfp7spwe0q5f0n48t5hqv05,imgname-yaduveer-wodeyar-1774348134107.jpg" type="image/jpeg" height="390" width="690"/>
            <content:encoded><![CDATA[&lt;p&gt;Yaduveer Wadiyar Birthday: ಮೈಸೂರು ಸಂಸ್ಥಾನದ ಮಹಾರಾಜರಾದ ಯದುವೀರ್ ಒಡೆಯರ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪತ್ನಿ ತ್ರಿಷಿಕಾ ಕುಮಾರಿ ಗಂಡನ ಫೋಟೊ ಜೊತೆ ವಿಶೇಷ ಮೆಸೇಜ್ ಶೇರ್ ಮಾಡಿ ಶುಭ ಕೋರಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮೈಸೂರು ಮಹಾರಾಜ ಹಾಗೂ ರಾಜಕಾರಣಿ ಶ್ರೀ ಯದುವೀರ್ ಒಡೆಯರ್ ಅವರು ಇಂದು ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪತ್ನಿ ಮಹಾರಾಣಿ ತ್ರಿಷಿಕಾ ಕುಮಾರಿ ದೇವಿ ಪತಿಯ ಫೋಟೊ ಜೊತೆಗೆ ವಿಶೇಷ ಮೆಸೇಜ್ ಹಂಚಿಕೊಂಡು ಶುಭ ಕೋರಿದ್ದಾರೆ.&lt;/p&gt;&lt;img&gt;&lt;p&gt;ಯದುವೀರ್ ಒಡೆಯರ್ ಜೊತೆಗಿನ ಫೋಟೊ ಜೊತೆಗೆ ತ್ರಿಷಿಕಾ ದೇವಿ &lsquo;ನನ್ನ ಪತಿ, ನನ್ನ ಅತ್ಯುತ್ತಮ ಸ್ನೇಹಿತ ಹಾಗೂ ಅದ್ಭುತ ತಂದೆಯಾದ ಶ್ರೀ ಯದುವೀರ್ ಒಡೆಯರ್ ಅವರಿಗೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ನಿಮ್ಮನ್ನು ಸದಾ ಆಶೀರ್ವದಿಸಿ ಕಾಪಾಡಲಿ ಎಂದು ಶುಭ ಹಾರೈಸಿದ್ದಾರೆ.&lt;/p&gt;&lt;img&gt;&lt;p&gt;ಜೊತೆಗೆ ತ್ರಿಷಿಕಾ ದೇವಿ ಪತಿ ಜೊತೆಗಿನ ಫಾರಿನ್ ಟ್ರಿಪ್ ಫೋಟೊಗಳನ್ನು ಶೇರ್ ಮಾಡಿದ್ದಾರೆ, ಅಲ್ಲದೇ ಪತಿ ಹಾಗೂ ಮಕ್ಕಳ ಜೊತೆಗೆ ಸೇರಿ ಪೂಜೆ ಮಾಡುತ್ತಿರುವ ಫೋಟೊ ಕೂಡ ಹಂಚಿಕೊಂಡಿದ್ದಾರೆ. ಎರಡರಲ್ಲೂ ರಾಯರ್ ಫ್ಯಾಮಿಲಿಯಾದರೂ ಅವರು ಪಾಲಿಸಿಕೊಂಡು ಬರುತ್ತಿರುವ ಸಿಂಪ್ಲಿಸಿಟಿ ಎದ್ದು ಕಾಣುತ್ತಿದೆ.&lt;/p&gt;&lt;img&gt;&lt;p&gt;ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾರ್ಚ್ 24, 1992 ರಂದು ಜನಿಸಿದರು. ಅವರು ರಾಜಮನೆತನದ 27 ನೇ ರಾಜ. ಬೆಟ್ಟದ ಕೋಟೆ ಕುಟುಂಬದ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರನ್ನು ಫೆಬ್ರವರಿ 23, 2015 ರಂದು ಪ್ರಮೋದಾ ದೇವಿ ಒಡೆಯರ್ ದತ್ತು ಪಡೆದರು. ಡಿಸೆಂಬರ್ 10, 2013 ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ನಂತರ ದತ್ತು ಸ್ವೀಕಾರ ನಡೆದಿತ್ತು.&lt;/p&gt;&lt;img&gt;&lt;p&gt;ಮೇ 28, 2015 ರಂದು ಯದು ರಾಜವಂಶದ 27 ನೇ ಮಹಾರಾಜರಾಗಿ ಅಧಿಕೃತವಾಗಿ ಪಟ್ಟಾಭಿಷೇಕ ಮಾಡಲಾಯಿತು. ಜೂನ್ 27, 2016 ರಲ್ಲಿ ತ್ರಿಷೀಕಾ ದೇವಿಯನ್ನು ಮದುವೆಯಾದರು. ಈ ದಂಪತಿಗಳಿಗೆ ಡಿಸೆಂಬರ್ 6, 2017 ಆದ್ಯವೀರ್ ನರಸಿಂಹದತ್ತ ಒಡೆಯರ್ ಮತ್ತು 2024ರ ಅಕ್ಟೋಬರ್ 11ರಂದು ಎರಡನೇ ಗಂಡು ಮಗು ಜನಿಸಿತ್ತು.&lt;/p&gt;&lt;img&gt;&lt;p&gt;ತ್ರಿಷಿಕಾ ಕುಮಾರಿ ಸಿಂಗ್, ರಾಜಸ್ಥಾನದ ಡುಂಗರ್&zwnj;ಪುರ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶಿ ಕುಮಾರಿ ಅವರ ಪುತ್ರಿ. ತ್ರಿಷಿಕಾ ದೇವಿ ಹಾಗೂ ಯದುವೀರ್ ಒಡೆಯರ್ ಜೊತೆಯಾಗಿ ಓದಿದ್ದರು, ಬಳಿಕ ಪ್ರೀತಿಸಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.&lt;/p&gt;]]></content:encoded>
            <category>mysore</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/mysore/trishika-kumari-wishes-husband-yaduveer-wadiyar-on-his-birthday-iidolsl"/>
        </item>
        <item>
            <title><![CDATA[ಮೈಸೂರಿನಲ್ಲಿ ಮಂಗಳಮುಖಿಯರ ಮೇಲೆ ಕ್ರೂರ ಹಲ್ಲೆ: ಮೂವರು ಆರೋಪಿಗಳು ವಶಕ್ಕೆ]]></title>
            <link>https://kannada.asianetnews.com/crime/mysuru-transgender-assault-muslim-youth-attack-amruth-layout-gvd/articleshow-m9snviq</link>
            <guid isPermaLink="true">https://kannada.asianetnews.com/crime/mysuru-transgender-assault-muslim-youth-attack-amruth-layout-gvd/articleshow-m9snviq</guid>
            <pubDate>Tue, 31 Mar 2026 16:32:17 +0530</pubDate>
            <description><![CDATA[&lt;p&gt;ಮುಸ್ಲಿಂ ಯುವಕರು ಕೇಳಿದ ಹಣವನ್ನು ಕೊಡಲು ನಿರಾಕರಿಸಿದ ಕೋಪಕ್ಕೆ ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn1rvytfmqxc01cnw0hqqa78,imgname-cchch-1774954871631.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮಾ.31):&lt;/strong&gt; ಅವರೆಲ್ಲ ಮಂಗಳ ಮುಖಿಯರು. ಸಮಾಜದ ಮೂಲ ಸ್ಥರದಿಂದ ದೂರ ತಳ್ಳಲ್ಪಟ್ಟಿರುವವರು. ಜೀವನೋಪಾಯಕ್ಕಾಗಿ ಭಿಕ್ಷಾಟನೆ ಸೇರಿ ನಾನಾ ಕಸರತ್ತು ಮಾಡುವವರು. ಅಂತಹ ಅಸಹಾಯಕರನ್ನೇ ಹಣಕ್ಕಾಗಿ ಹಿಂಸಿಸಿ ಮುಖವನ್ನು ಕುಯ್ಯಲಾಗಿದೆ. ಮಂಗಳಮುಖಿಯರ ಮೇಲೆ ಮುಸ್ಲಿಂ ಯುವಕರು ಮಾಡಿದ ಅಟ್ಟಹಾಸ ಸಾಂಸ್ಕೃತಿಕ ನಗರಿ ಮೈಸೂರು ಜನರನ್ನು ಬೆಚ್ಚಿ ಬೀಳಿಸಿದೆ.&lt;/p&gt;&lt;p&gt;ಮುಸ್ಲಿಂ ಯುವಕರು ಕೇಳಿದ ಹಣವನ್ನು ಕೊಡಲು ನಿರಾಕರಿಸಿದ ಕೋಪಕ್ಕೆ ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಭಾನುವಾರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದ್ದು, ಹಲ್ಲೆ ದೃಶ್ಯಗಳು ಬೆಚ್ಚಿ ಬೀಳಿಸುತ್ತಿವೆ. ಚಾಕು, ತಲ್ವಾರ್&zwnj;ಗಳಿಂದ ಹಲ್ಲೆ ನಡೆಸಿರುವ ಮುಸ್ಲಿಂ ಯುಕರು, ಓರ್ವ ಮಂಗಳಮುಖಿಯ ಮುಖವನ್ನು ಚಾಕುವಿನಿಂದ ಕುಯ್ದಿದ್ದಾರೆ. ಅಲ್ಲದೆ ಗಲಾಟೆ ಬಿಡಿಸಲು ಬಂದ ಮತ್ತೊಬ್ಬ ಮಂಗಳ ಮುಖಿಗೂ ಹಲ್ಲೆ ಮಾಡಲಾಗಿದೆ.&lt;/p&gt;&lt;p&gt;ಮೈಸೂರಿನ&zwnj; ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ನಡೆದ ಹಲ್ಲೆಯಲ್ಲಿ ಪಾರಿ (30), ಆನಮ್ (21) ಎಂಬ ಮಂಗಳಮುಖಿಯರು ಗಾಯಗೊಂಡಿದ್ದಾರೆ. ಅದೇ ಏರಿಯಾದ ತಬ್ರೇಸ್ ಅಲಿಯಾಸ್ ಗುಡಿ ಮತ್ತು ಸಯ್ಯದ್ ಫರ್ದಿನ್ ಎಂಬುವರೇ ತಲ್ವಾರ್&zwnj;ನಿಂದ ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ಘಟನೆ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೆಡಿಕಲ್ ಸ್ಟೋರ್ ಗೆ ಹೋಗಿ ಔಷಧಿ ತೆಗೆದುಕೊಂಡು ಬರುವಾಗ ನನ್ನ ಬಳಿ ಇರುವ ದುಡ್ಡನ್ನು ಕೇಳಿದ ಆರೋಪಿಗಳು ನಿರಾಕರಿಸಿದಾಗ ಹಲ್ಲೆ ಮಾಡಿ ಗಲಾಟೆ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಮೂವರು ಆರೋಪಿಗಳು ವಶಕ್ಕೆ&lt;/strong&gt;&lt;/h2&gt;&lt;p&gt;ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹಲ್ಲೆಮಾಡಿ ಕೊಲೆ ಯತ್ನ ನಡೆಸಿದ್ದಾರೆ ಎಂದು ಪರ್ದೀನ್ ಅಲಿಯಾಸ್ ಪದ್ದು, ದಾದಾಪಿ&zwnj; ಅಲಿಯಾಸ್ ಗುಡಿ, ರಿಯನ ಹಾಗೂ ಇತರರ ಮೇಲೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಮೂರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ ಬದುಕು ನಡೆಸಲು ಭಿಕ್ಷೆ ಬೇಡುವ ಇಂತಹವರ ಬಳಿಯೇ ಹಣ ಕೀಳಲು ಮುಂದಾದ ನೀಚರ ಬಗ್ಗೆ ಅಸಹ್ಯ ಹುಟ್ಟಿರೋದು ಮಾತ್ರ ಸತ್ಯ.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/mysuru-transgender-assault-muslim-youth-attack-amruth-layout-gvd/articleshow-m9snviq"/>
        </item>
        <item>
            <title><![CDATA[ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ರಥೋತ್ಸವದಲ್ಲಿ ಗರುಡ ದರ್ಶನ;  ಪುಳಕಿತರಾದ ಭಕ್ತರು]]></title>
            <link>https://kannada.asianetnews.com/karnataka-districts/garuda-darshan-at-srikanteshwara-swamy-rathotsava-in-nanjangud-jatre-mysuru-video-viral-mrq/articleshow-o1vetw7</link>
            <guid isPermaLink="true">https://kannada.asianetnews.com/karnataka-districts/garuda-darshan-at-srikanteshwara-swamy-rathotsava-in-nanjangud-jatre-mysuru-video-viral-mrq/articleshow-o1vetw7</guid>
            <pubDate>Tue, 31 Mar 2026 08:13:27 +0530</pubDate>
            <description><![CDATA[&lt;p&gt;ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಸಮಯಕ್ಕೆ ಸರಿಯಾಗಿ ಬಂದ ಗರುಡ ಪಕ್ಷಿಯನ್ನು ಭಕ್ತರು ಕಣ್ತುಂಬಿಕೊಂಡರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn0w6w2ezbexx45v34qwy42n,imgname-nanjangud-1774924820558.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಗರಳಪುರಿ, ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾರಥೋತ್ಸವವು ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮೊದಲು ಗಣಪತಿ ರಥ, ನಂತರ ಶ್ರೀಕಂಠೇಶ್ವರ ಸ್ವಾಮಿ ದೊಡ್ಡರಥ, ಸುಬ್ರಹ್ಮಣ್ಯ, ಚಂಡಿಕೇಶ್ವರಸ್ವಾಮಿ, ಕೊನೆಯಲ್ಲಿ ಪಾರ್ವತಮ್ಮನವರ ರಥಗಳು 1.5 ಕಿ.ಮೀ. ರಥ ಬೀದಿಯಲ್ಲಿ ಸಂಚರಿಸಿದವು. ಲಕ್ಷಾಂತರ ಭಕ್ತರು ರಥಕ್ಕೆ ಹಣ್ಣು-ಧವನ ಎಸೆದು ಹರಕೆ ತೀರಿಸಿಕೊಂಡರು. ರಥೋತ್ಸವದ ಸಮಯಕ್ಕೆ ಸರಿಯಾಗಿ ಬಂದ ಗರುಡ ಪಕ್ಷಿಯನ್ನು ಭಕ್ತರು ಕಣ್ತುಂಬಿಕೊಂಡರು.&lt;/p&gt;&lt;p&gt;ರಥೋತ್ಸವದ ವೇಳೆ ಗರುಡ ಆಗಮನದ ದೃಶ್ಯವನ್ನು ಭಕ್ತರು ಮೊಬೈಲ್&zwnj;ನಲ್ಲಿ ಸೆರೆ ಹಿಡಿದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. Suresh Kumar Belli ಎಂಬವರು ತಮ್ಮ ಫೇಸ್&zwnj;ಬುಕ್ ಪೇಜ್&zwnj;ನಲ್ಲಿ ಗರುಡ ಆಗಮನದ ವಿಡಿಯೋ ಹಂಚಿಕೊಂಡಿದ್ದು, ಇಲ್ಲಿಯವರೆಗೆ 1.68 ಲಕ್ಷಕ್ಕೂ ಅಧಿಕ ವ್ಯೂವ್, 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.&lt;/p&gt;&lt;h2&gt;&lt;strong&gt;ನಂಜನಗೂಡು ಜಾತ್ರೆಯಲ್ಲಿ ಹೃದಯಾಘಾತಕ್ಕೆ ವ್ಯಕ್ತಿ ಬಲಿ&lt;/strong&gt;&lt;/h2&gt;&lt;p&gt;ದಕ್ಷಿಣ ಕಾಶಿ ಖ್ಯಾತಿಯ ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರೆಗೆ ಬಂದಿದ್ದ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸೋಮವಾರ ಜರುಗಿದೆ. ಬೆಂಗಳೂರು ಗ್ರಾಮಾಂತರ ಮಾಗಡಿ ನಿವಾಸಿ ನಂಜುಂಡಸ್ವಾಮಿ (58) ಮೃತ ದುರ್ದೈವಿ. ಜಾತ್ರೆಗಾಗಿ ಮಾಗಡಿಯಿಂದ ಆಗಮಿಸಿದ್ದ ನಂಜುಂಡಸ್ವಾಮಿ. ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಡಯಾಲಿಸಿಸ್ ಪಡೆಯುತ್ತಿದ್ದರು ಎನ್ನಲಾಗಿದ್ದು, ಜಾತ್ರೆಯ ದೊಡ್ಡ ರಥ ಚಲಿಸುವ ವೇಳೆ ದೇವಾಲಯದ ಮೂಲೆ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.&lt;/p&gt;&lt;p&gt;&lt;/p&gt;&lt;h3&gt;&lt;strong&gt;ನೂಕು ನುಗ್ಗಲು ಉಂಟಾಗಿ ಅಪ್ಪ, ಮಗನಿಗೆ ಗಾಯ&lt;/strong&gt;&lt;/h3&gt;&lt;p&gt;ಇನ್ನು ದೇವಾಲಯದ ಮುಂಭಾಗ ಗೌತಮ ಪಂಚ ಮಹಾ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದ ವೇಳೆಯಲ್ಲಿ ನಿರೀಕ್ಷೆಗೂ ಮೀರಿದ ಜನ ಸೇರಿದ ಕಾರಣದಿಂದ ನೂಕು ನುಗ್ಗಲು ಉಂಟಾಗಿ ಕೆಳಗೆ ಬಿದ್ದು ಪಟ್ಟಣದ ಶಂಕರಪುರ ಬಡಾವಣೆಯ ರಂಗಸ್ವಾಮಿ (52), ಆತನ ಪುತ್ರ ಅಪ್ಪು (13) ಗಾಯಗೊಂಡಿದ್ದಾರೆ.&lt;/p&gt;&lt;p&gt;ಜಾತ್ರೆಯಲ್ಲಿ ಭಾಗಿಯಾಗಿದ್ದ ರಂಗಸ್ವಾಮಿ ದೇವಾಲಯದ ಮುಂಭಾಗದ ಲಾಡು ಪ್ರಸಾದ ನೀಡುವ ಕೌಂಟರ್ ಬಳಿ ರಥ ವೀಕ್ಷಣೆ ಮಾಡುತ್ತಿದ್ದ ವೇಳೆ ನೂಕು ನುಗ್ಗಲು ಉಂಟಾಗಿ ಕೆಳಗೆ ಬಿದ್ದಿದ್ದಾರೆ, ಅವರ ಮೇಲೆ ಹತ್ತು ಮಂದಿ ಮೇಲೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ, ಅವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.&lt;/p&gt;&lt;h3&gt;&lt;strong&gt;ನಂಜುಂಡೇಶ್ವರನ ಜಾತ್ರೆ ಕುರಿತು ಎಡಿಸಿ ಡಾ.ಶಿವರಾಜ್&zwnj; ರಿಂದ ಗೀತ ರಚನೆ&lt;/strong&gt;&lt;/h3&gt;&lt;p&gt;ನಂಜನಗೂಡು ದೊಡ್ಡ ಜಾತ್ರೆ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್&zwnj; ಅವರು ಗೀತೆಯನ್ನು ರಚಿಸಿ ಖ್ಯಾತ ಗಾಯಕ ಹೇಮಂತ್&zwnj; ಅವರಿಂದ ಹಾಡಿಸಿ ಶಾಸಕ ದರ್ಶನ್&zwnj; ಧ್ರುವನಾರಾಯಣ್&zwnj;ಅವರ ಮೂಲಕ ಬಿಡುಗಡೆಗೊಳಿಸಿದ್ದಾರೆ. ಗೀತೆಯ ರಂಗು ಕಳೆದ ಬಾರಿಯ ದಸರಾ ಗೀತೆಯ ಮೂಲಕ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದ ಡಾ.ಪಿ. ಶಿವರಾಜ್ ಅವರು ಈ ಬಾರಿ ನಂಜನಗೂಡು ದೊಡ್ಡ ಜಾತ್ರೆಗೆ ಸಂಬಂಧಿಸಿದಂತೆ ಅರ್ಥಪೂರ್ಣವಾದ ಗೀತೆಯನ್ನು ರಚಿಸಿ ಅದನ್ನು ಗಾಯಕ ಹೇಮಂತ್ ಅವರಿಂದ ಹಾಡಿಸಿದ್ದಾರೆ.&lt;/p&gt;&lt;p&gt;&lt;/p&gt;&lt;p&gt;ನಂಜುಂಡೇಶ್ವರನ ಜಾತ್ರೆ ಮತ್ತು ನಂಜುಂಡೇಶ್ವರನ ಕುರಿತಾದ ಈ ಗೀತೆಗೆ ಉತ್ತಮ ಸಂಗೀತವೂ ದೊರಕಿದೆ. ಉತ್ತಮ ಸಾಹಿತ್ಯದ ಮೂಲಕ ಸಾರ್ವಜನಿಕರಿಗೆ ದೊಡ್ಡ ಜಾತ್ರೆಯ ಸಂದೇಶವನ್ನು ನೀಡಿ, ಜೊತೆಗೆ ಭಕ್ತಾಧಿಗಳನ್ನು ಸ್ವಾಗತಿಸುವ ರೀತಿಯಲ್ಲಿ ಇದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇಂದು ಸಪ್ತ ರಾಶಿಗಳಿಗೆ ಸಿಗಲಿದೆ ಕುಬೇರನ ಕೃಪೆ; ಆಕಸ್ಮಿಕ ಧನಲಾಭದ ಜೊತೆ ಶುಭ ಸುದ್ದಿ&lt;/strong&gt;&lt;/p&gt;&lt;p&gt;ಶಾಸಕ ದರ್ಶನ್&zwnj; ಧೃವನಾರಾಯಣ್&zwnj; ಅವರು&zwnj; ದೊಡ್ಡಜಾತ್ರೆ ಗೀತೆಯನ್ನು ಬಿಡುಗಡೆಗೊಳಿಸಿ ಶುಭ ಕೋರಿದರು. ಅಲ್ಲದೆ ಗೀತೆಯು ಉತ್ತಮವಾಗಿ ಮೂಡಿ ಬಂದಿದೆ. ಜಾತ್ರೆಯ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತಿದೆ ಎಂದು ಅವರು ಡಾ.ಶಿವರಾಜ್&zwnj; ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಈ ದಿಕ್ಕಿನಲ್ಲಿರುವ ಮನಿ ಪ್ಲಾಂಟ್ ಭಿಕ್ಷುಕನನ್ನು ಸಹ ಶ್ರೀಮಂತನನ್ನಾಗಿ ಮಾಡಬಹುದು, ಆದ್ರೆ ಈ 4 ತಪ್ಪು ಮಾಡ್ಬೇಡಿ&lt;/strong&gt;&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/garuda-darshan-at-srikanteshwara-swamy-rathotsava-in-nanjangud-jatre-mysuru-video-viral-mrq/articleshow-o1vetw7"/>
        </item>
        <item>
            <title><![CDATA[ಪ್ರಸಿದ್ಧ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ರಾಮನಗರದಲ್ಲಿ ನಿಲುಗಡೆಗೆ ಒಪ್ಪಿಗೆ, ಸಂಸದ ಸಂತಸ]]></title>
            <link>https://kannada.asianetnews.com/karnataka-districts/wodeyar-superfast-express-to-stop-at-ramanagara-railways-approves-new-halt-between-bengaluru-and-mysuru-gdp/articleshow-o5lof7e</link>
            <guid isPermaLink="true">https://kannada.asianetnews.com/karnataka-districts/wodeyar-superfast-express-to-stop-at-ramanagara-railways-approves-new-halt-between-bengaluru-and-mysuru-gdp/articleshow-o5lof7e</guid>
            <pubDate>Wed, 25 Mar 2026 16:04:13 +0530</pubDate>
            <description><![CDATA[ಬೆಂಗಳೂರು-ಮೈಸೂರು ಮಾರ್ಗದ ಪ್ರಸಿದ್ಧ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲಿಗೆ ಇನ್ನು ಮುಂದೆ ರಾಮನಗರ ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಲಾಗಿದೆ. ಜನಪ್ರತಿನಿಧಿಗಳ ನಿರಂತರ ಪ್ರಯತ್ನದ ಫಲವಾಗಿ ಈ ಬಹುದಿನಗಳ ಬೇಡಿಕೆ ಈಡೇರಿದ್ದು, ಇದು ಸ್ಥಳೀಯ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmj8tmcakn8k19r35zqqpj0n,imgname-wodeyar-superfast-express-ramanagara-stop-1774434734474.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ:&lt;/strong&gt; ಬೆಂಗಳೂರು&ndash;ಮೈಸೂರು ಮಾರ್ಗದಲ್ಲಿ ಸಂಚರಿಸುವ ಪ್ರಸಿದ್ಧ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲು ಈಗಿನಿಂದ ರಾಮನಗರ ರೈಲು ನಿಲ್ದಾಣದಲ್ಲೂ ನಿಲುಗಡೆಗೊಳ್ಳಲಿದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದ್ದು, ಸ್ಥಳೀಯ ಪ್ರಯಾಣಿಕರಿಗೆ ಇದು ಬಹು ದಿನಗಳ ಬೇಡಿಕೆಗೆ ಸಿಕ್ಕ ಮಹತ್ವದ ಯಶಸ್ಸಾಗಿದೆ.&lt;/p&gt;&lt;h2&gt;ರೈಲು ವೇಳಾಪಟ್ಟಿ ಮತ್ತು ಸಂಚಾರ ವಿವರ&lt;/h2&gt;&lt;p&gt;ಪ್ರತಿದಿನ ಮಧ್ಯಾಹ್ನ 3.15ಕ್ಕೆ ಬೆಂಗಳೂರಿನಿಂದ ಹೊರಡುವ ಈ ರೈಲು, ಸಂಜೆ 5.45ಕ್ಕೆ ಮೈಸೂರು ತಲುಪುತ್ತದೆ. ಸುಮಾರು 139 ಕಿಲೋಮೀಟರ್ ದೂರವನ್ನು ಕೇವಲ 2 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುವ ಈ ರೈಲು ವೇಗ ಹಾಗೂ ಸಮಯಪಾಲನೆಗಾಗಿ ಪ್ರಸಿದ್ಧವಾಗಿದೆ. ಈವರೆಗೆ ಈ ರೈಲು ಕೇವಲ ಕೆಂಗೇರಿ ಮತ್ತು ಮಂಡ್ಯ ರೈಲು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಹೊಂದಿತ್ತು. ಇದೀಗ ರಾಮನಗರವನ್ನು ಹೊಸ ನಿಲ್ದಾಣವಾಗಿ ಸೇರಿಸಿರುವುದರಿಂದ, ಆ ಭಾಗದ ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಲಿದೆ.&lt;/p&gt;&lt;h2&gt;ಜನಪ್ರತಿನಿಧಿಗಳ ನಿರಂತರ ಪ್ರಯತ್ನ ಫಲ&lt;/h2&gt;&lt;p&gt;ರಾಮನಗರದಲ್ಲಿ ರೈಲು ನಿಲುಗಡೆ ಕಲ್ಪಿಸಬೇಕೆಂಬ ಬೇಡಿಕೆಯನ್ನು ಹಲವಾರು ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತಂದಿದ್ದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಇಕ್ಬಾಲ್ ಹುಸೇನ್ ಇವರು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಲ್ಲಿ ಮನವಿ ಸಲ್ಲಿಸಿದ್ದರು. ಇದರ ಜೊತೆಗೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ಈ ಬೇಡಿಕೆಯನ್ನು ಮುಂದಿಟ್ಟಿದ್ದರು. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಇದೀಗ ರಾಮನಗರದಲ್ಲಿ ನಿಲುಗಡೆಗೆ ಅನುಮತಿ ದೊರೆತಿದೆ.&lt;/p&gt;&lt;h2&gt;ಸ್ಥಳೀಯರಿಗೆ ಸಿಗುವ ಪ್ರಯೋಜನಗಳು&lt;/h2&gt;&lt;p&gt;ಈ ಹೊಸ ನಿಲುಗಡೆಯಿಂದ ರಾಮನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಹಲವಾರು ಪ್ರಯೋಜನಗಳು ಲಭ್ಯವಾಗಲಿವೆ:&lt;/p&gt;&lt;ul&gt; &lt;li&gt;ಬೆಂಗಳೂರು ಮತ್ತು ಮೈಸೂರು ನಡುವೆ ಸುಲಭ ಸಂಚಾರ&lt;/li&gt; &lt;li&gt;ದೈನಂದಿನ ಪ್ರಯಾಣಿಕರಿಗೆ ಸಮಯ ಮತ್ತು ವೆಚ್ಚ ಉಳಿತಾಯ&lt;/li&gt; &lt;li&gt;ಪ್ರವಾಸೋದ್ಯಮ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ&lt;/li&gt; &lt;li&gt;ರಸ್ತೆ ಸಾರಿಗೆಯ ಮೇಲಿನ ಒತ್ತಡ ಕಡಿಮೆ&lt;/li&gt;&lt;/ul&gt;&lt;h2&gt;ಇನ್ನಷ್ಟು ರೈಲು ನಿಲುಗಡೆಗೆ ಬೇಡಿಕೆ&lt;/h2&gt;&lt;p&gt;ಒಡೆಯರ್ ಎಕ್ಸ್&zwnj;ಪ್ರೆಸ್ ಜೊತೆಗೆ ಮೈಲಾಡತುರೈ ಎಕ್ಸ್&zwnj;ಪ್ರೆಸ್ ರೈಲುಗೂ ರಾಮನಗರದಲ್ಲಿ ನಿಲುಗಡೆ ಕಲ್ಪಿಸಬೇಕೆಂಬ ಬೇಡಿಕೆ ಕೂಡ ಮುಂದುವರಿದಿದೆ. ಈ ಬಗ್ಗೆ ರೈಲ್ವೆ ಇಲಾಖೆ ಮುಂದಿನ ದಿನಗಳಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ರಾಮನಗರದಲ್ಲಿ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್&zwnj;ಪ್ರೆಸ್ ನಿಲುಗಡೆ ಅನುಮತಿ ದೊರೆತಿರುವುದು ಸ್ಥಳೀಯ ಜನರಿಗೆ ಮಹತ್ವದ ಸಾಧನೆಯಾಗಿದೆ. ಜನಪ್ರತಿನಿಧಿಗಳ ನಿರಂತರ ಪ್ರಯತ್ನ ಮತ್ತು ಸಾರ್ವಜನಿಕರ ಬೇಡಿಕೆಯ ಫಲವಾಗಿ ಈ ನಿರ್ಧಾರ ಜಾರಿಯಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸೌಲಭ್ಯಗಳು ಸಿಗುವ ನಿರೀಕ್ಷೆ ಮೂಡಿಸಿದೆ.&lt;/p&gt;&lt;h2&gt;ಜನರ ಧ್ವನಿಗೆ ಜಯ ಎಂದು ಸಂತಸ ವ್ಯಕ್ತಪಡಿಸಿದ ಸಂಸದ ಡಾ.ಸಿ ಎನ್ ಮಂಜುನಾಥ್&lt;/h2&gt;&lt;p&gt;ರಾಮನಗರದಲ್ಲಿ ಒಡೆಯರ್ ಎಕ್ಸಪ್ರೆಸ್ ರೈಲು ನಿಲುಗಡಗೆ ಕೇಂದ್ರ ರೈಲ್ವೆ ಇಲಾಖೆ ಆದೇಶ ಹೊರಡಿಸಿರುವುದು ಅತ್ಯಂತ ಸಂತೋಷಕರ ಹಾಗೂ ಐತಿಹಾಸಿಕ ಬೆಳವಣಿಗೆಯಾಗಿದೆ.&lt;/p&gt;&lt;p&gt;ರಾಮನಗರ ಹಾಗೂ ಚನ್ನಪಟ್ಟಣ ಭಾಗದ ಜನರ ಬಹುಕಾಲದ ಬೇಡಿಕೆ ಇಂದು ಈಡೇರಿದಂತಾಗಿದೆ. ಈ ಭಾಗದ ಪ್ರಯಾಣಿಕರು, ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು ಹಾಗೂ ವ್ಯಾಪಾರಸ್ಥರು ಎದುರಿಸುತ್ತಿದ್ದ ಸಂಚಾರದ ತೊಂದರೆಗಳನ್ನು ಮನಗಂಡು, ಈ ನಿಲುಗಡೆ ಅತ್ಯಂತ ಅಗತ್ಯವಾಗಿತ್ತು. ಜನರ ಈ ನ್ಯಾಯಸಮ್ಮತ ಬೇಡಿಕೆಯನ್ನು ಈಡೇರಿಸಲು ನಾನು ನಿರಂತರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೆ.&lt;/p&gt;&lt;p&gt;ಈ ಸಂಬಂಧ ಹಲವು ಬಾರಿ ಪತ್ರಗಳ ಮೂಲಕ ಮನವಿ ಸಲ್ಲಿಸುವುದರ ಜೊತೆಗೆ, ಖುದ್ದಾಗಿ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ರೈಲ್ವೇ ಖಾತೆ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ, ರಾಮನಗರದಲ್ಲಿ ಈ ರೈಲು ನಿಲುಗಡೆಯ ಅಗತ್ಯತೆ ಮತ್ತು ಜನರಿಗೆ ಆಗುವ ಅನುಕೂಲಗಳನ್ನು ವಿವರವಾಗಿ ಮನವರಿಕೆ ಮಾಡಿಕೊಟ್ಟಿದ್ದೆ. ಈ ಪ್ರಯತ್ನಗಳಿಗೆ ಇಂದು ಸಕಾರಾತ್ಮಕ ಫಲ ದೊರೆತಿರುವುದು ಅಪಾರ ಸಂತೋಷವನ್ನುಂಟುಮಾಡಿದೆ.&lt;/p&gt;&lt;p&gt;ನನ್ನ ಮನವಿಗೆ ಸ್ಪಂದಿಸಿ, ರಾಮನಗರದಲ್ಲಿ ಒಡೆಯರ್ ಎಕ್ಸಪ್ರೆಸ್ ನಿಲುಗಡಗೆ ಅನುಮೋದನೆ ನೀಡಿದ ಕೇಂದ್ರ ರೈಲ್ವೇ ಸಚಿವರಾದ Ashwini Vaishnaw, ರೈಲ್ವೇ ರಾಜ್ಯ ಖಾತೆ ಸಚಿವರಾದ ವಿ ಸೋಮಣ್ಣ ಹಾಗೂ ಈ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.&lt;/p&gt;&lt;p&gt;ಈ ನಿರ್ಧಾರದಿಂದ ರಾಮನಗರ ಮತ್ತು ಚನ್ನಪಟ್ಟಣ ಭಾಗದ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳೊಂದಿಗೆ ಸಂಪರ್ಕ ಮತ್ತಷ್ಟು ಸುಗಮವಾಗುವುದರಿಂದ ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆಗಳು ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ವಿಶೇಷವಾಗಿ ದೈನಂದಿನ ಪ್ರಯಾಣಿಕರಿಗೆ ಇದು ದೊಡ್ಡ ಮಟ್ಟದ ನೆರವಾಗಲಿದೆ. ಮುಂದಿನ ದಿನಗಳಲ್ಲಿ ಕೂಡ ಜನರ ಅಗತ್ಯಗಳನ್ನು ಮನಗಂಡು, ಈ ಭಾಗದ ಅಭಿವೃದ್ಧಿಗೆ ಇನ್ನಷ್ಟು ಸೌಲಭ್ಯಗಳನ್ನು ತರಲು ನಾನು ಬದ್ಧನಾಗಿದ್ದೇನೆ. ಎಂದು ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/wodeyar-superfast-express-to-stop-at-ramanagara-railways-approves-new-halt-between-bengaluru-and-mysuru-gdp/articleshow-o5lof7e"/>
        </item>
        <item>
            <title><![CDATA[ಚಾಮುಂಡಿ ಬೆಟ್ಟದಲ್ಲಿ ಬಿಸಿಲ ಬೇಗೆಯ ದಣಿವಿಗೆ 'ಕೂಲ್‌ ಡ್ರಿಂಕ್ಸ್ ಕುಡಿದ ಕೋತಿಗಳು'; ಮಂಕೀಸ್ ರಾಕ್, ಭಕ್ತರು ಶಾಕ್!]]></title>
            <link>https://kannada.asianetnews.com/gallery/state/mysuru-monkeys-drinking-cool-drinks-chamundi-hill-viral-video-summer-heat-sat-p6b32v1</link>
            <guid isPermaLink="true">https://kannada.asianetnews.com/gallery/state/mysuru-monkeys-drinking-cool-drinks-chamundi-hill-viral-video-summer-heat-sat-p6b32v1</guid>
            <pubDate>Mon, 30 Mar 2026 20:19:47 +0530</pubDate>
            <description><![CDATA[&lt;p&gt;ಮೈಸೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಚಾಮುಂಡಿ ಬೆಟ್ಟದ ಕೋತಿಗಳು ತತ್ತರಿಸಿವೆ. ತಮ್ಮ ಬಾಯಾರಿಕೆ ನೀಗಿಸಿಕೊಳ್ಳಲು ಪ್ರವಾಸಿಗರಿಂದ ತಂಪು ಪಾನೀಯ ಕಿತ್ತು ಕುಡಿಯುತ್ತಿದ್ದು, ಈ ದೃಶ್ಯಗಳು ವೈರಲ್ ಆಗಿವೆ. ಆದರೆ, ಈ ಪಾನೀಯಗಳು ಅವುಗಳ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmzjge8zp1v7dx6wcc15vx5z,imgname-chamundi-hills-monkey-jeera-drinks-1774881093919.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಚಾಮುಂಡಿ ಬೆಟ್ಟದ ಕೋತಿಗಳು ತತ್ತರಿಸಿವೆ. ತಮ್ಮ ಬಾಯಾರಿಕೆ ನೀಗಿಸಿಕೊಳ್ಳಲು ಪ್ರವಾಸಿಗರಿಂದ ತಂಪು ಪಾನೀಯ ಕಿತ್ತು ಕುಡಿಯುತ್ತಿದ್ದು, ಈ ದೃಶ್ಯಗಳು ವೈರಲ್ ಆಗಿವೆ. ಆದರೆ, ಈ ಪಾನೀಯಗಳು ಅವುಗಳ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಮೈಸೂರು (ಮಾ.30): ಸಾಂ&lt;/strong&gt;ಸ್ಕೃತಿಕ ನಗರಿ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಕೇವಲ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳು ಕೂಡ ಈ ಬಿಸಿಲ ಧಗೆಯಿಂದ ತತ್ತರಿಸಿ ಹೋಗಿವೆ. ಈ ನಡುವೆ ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೋತಿಗಳು ತಮ್ಮ ದಣಿವು ಆರಿಸಿಕೊಳ್ಳಲು ವಿಭಿನ್ನ ಹಾದಿ ಹಿಡಿದಿರುವ ಅಪರೂಪದ ದೃಶ್ಯಗಳು ಕಂಡುಬಂದಿವೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಕೋತಿಗಳು ಭಕ್ತರ ಕೈಯಿಂದ ಹಣ್ಣು-ಹಂಪಲು ಅಥವಾ ತಿಂಡಿಗಳನ್ನು ಕಿತ್ತುಕೊಳ್ಳುವುದು ಸಹಜ. ಆದರೆ, ಈಗ ಮೈಸೂರಿನಲ್ಲಿ ಕಂಠಪೂರ್ತಿ ಬಿಸಿಲಿರುವುದರಿಂದ ಕೋತಿಗಳಿಗೆ ಹಸಿವಿಗಿಂತ ಹೆಚ್ಚಾಗಿ ಬಾಯಾರಿಕೆಯಾಗುತ್ತಿದೆ. ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರ ಕೈಯಲ್ಲಿದ್ದ ತಂಪು ಪಾನೀಯದ (Cool Drinks) ಬಾಟಲಿಗಳ ಮೇಲೆ ಈ ವಾನರ ಸೈನ್ಯ ದಾಳಿ ನಡೆಸುತ್ತಿದೆ. ಭಕ್ತರ ಕೈಯಿಂದ ಜ್ಯೂಸ್ ಹಾಗೂ ಸೋಡಾ ಬಾಟಲಿಗಳನ್ನು ಕಿತ್ತುಕೊಂಡು ಅರಾಮವಾಗಿ ಕುಡಿಯುವ ಮೂಲಕ ಕೋತಿಗಳು ದಣಿವು ನಿವಾರಿಸಿಕೊಳ್ಳುತ್ತಿವೆ.&lt;/p&gt;&lt;img&gt;&lt;p&gt;ವಿಶೇಷವೆಂದರೆ, ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಓಡಾಡುವ ಪ್ರವಾಸಿಗರು ಹೆಚ್ಚಾಗಿ ಬಳಸುವ 'ಜಿರಾ' (Jeera Soda) ಪಾನೀಯದ ಬಾಟಲಿಗಳನ್ನೇ ಕೋತಿಗಳು ಟಾರ್ಗೆಟ್ ಮಾಡುತ್ತಿವೆ. ಭಕ್ತರ ಕೈಯಲ್ಲಿದ್ದ ಬಾಟಲಿಗಳನ್ನು ಜಾಣ್ಮೆಯಿಂದ ಕಿತ್ತುಕೊಳ್ಳುವ ಕೋತಿಗಳು, ಮನುಷ್ಯರಂತೆಯೇ ಬಾಟಲಿಯ ಮುಚ್ಚಳ ತೆರೆದು ಅಥವಾ ತೂತು ಮಾಡಿ ಪಾನೀಯವನ್ನು ಹೀರುತ್ತಿವೆ. ಸಕ್ಕರೆ ಅಂಶವಿರುವ ಮತ್ತು ತಂಪಾಗಿರುವ ಈ ಪಾನೀಯವನ್ನು ಕುಡಿದು ವಾನರ ಸೈನ್ಯ ಫುಲ್ ಖುಷ್ ಆಗಿರುವ ದೃಶ್ಯಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.&lt;/p&gt;&lt;img&gt;&lt;p&gt;ಚಾಮುಂಡಿ ಬೆಟ್ಟದ ರಸ್ತೆಯ ತಿರುವುಗಳಲ್ಲಿ ಕುಳಿತು ಕೋತಿಗಳು ಮನುಷ್ಯರಂತೆ ಸ್ಟೈಲಿಶ್ ಆಗಿ ಕೂಲ್ ಡ್ರಿಂಕ್ಸ್ ಕುಡಿಯುತ್ತಿರುವ ದೃಶ್ಯವನ್ನು ಅಲ್ಲಿಗೆ ಬಂದಿದ್ದ ಪ್ರವಾಸಿಗರು ತಮ್ಮ ಮೊಬೈಲ್&zwnj;ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. 'ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಬಿಸಿಲಿನ ತಾಪ ತಡೆಯಲು ಸಾಧ್ಯವಾಗುತ್ತಿಲ್ಲ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Sathish Kumar (@sathish_reports)&lt;/p&gt;&lt;p&gt;&lt;/p&gt;&lt;img&gt;&lt;p&gt;ಕೋತಿಗಳು ತಂಪು ಪಾನೀಯ ಕುಡಿಯುವುದು ನೋಡಲು ತಮಾಷೆಯಾಗಿದ್ದರೂ, ಇದು ಅವುಗಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಡುತ್ತಾರೆ. ಪಾನೀಯಗಳಲ್ಲಿರುವ ಅತಿಯಾದ ಸಕ್ಕರೆ ಮತ್ತು ಗ್ಯಾಸ್ ಅಂಶಗಳು ಪ್ರಾಣಿಗಳ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಪ್ರವಾಸಿಗರು ಪ್ರಾಣಿಗಳಿಗೆ ಇಂತಹ ಪಾನೀಯಗಳನ್ನು ನೀಡಬಾರದು ಮತ್ತು ಅವುಗಳಿಗೆ ಕಿತ್ತುಕೊಳ್ಳಲು ಅವಕಾಶ ನೀಡದಂತೆ ಜಾಗರೂಕತೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಮೈಸೂರಿನ ಬಿಸಿಲಿನ ತೀವ್ರತೆಗೆ ಮನುಷ್ಯರಂತೆ ಕೋತಿಗಳು ಕೂಡ ಅಪ್&zwnj;ಡೇಟ್ ಆಗಿದ್ದು, ಸಾಫ್ಟ್ ಡ್ರಿಂಕ್ಸ್ ಮೂಲಕ ತಮ್ಮ ದಾಹ ತೀರಿಸಿಕೊಳ್ಳುತ್ತಿರುವುದು ಒಂದು ಅಪರೂಪದ ವಿದ್ಯಮಾನವಾಗಿದೆ. ಆದರೆ, ಈ ಡ್ರಿಂಕ್ಸ್ ಕೋತಿಗಳ ದೇಹಕ್ಕೆ ಅನಾರೋಗ್ಯ ತರಬಾರದು ಎಂಬುದು ಸ್ಥಳೀಯರ ಆಶಯವಾಗಿದೆ. ಜೊತೆಗೆ, ಅರಣ್ಯ ಅಧಿಕಾರಿಗಳು ಕೂಡ ಈ ಪ್ರಾಣಿಗಳ ಬಗ್ಗೆ ಗಮನಹರಿಸಬೇಕಿದೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/mysuru-monkeys-drinking-cool-drinks-chamundi-hill-viral-video-summer-heat-sat-p6b32v1"/>
        </item>
        <item>
            <title><![CDATA[ಪೂಜೆ ಮಾಡಿ ಹೊಸ್ತಿಲು ಮೇಲೆ ಇಟ್ಟಿದ್ದ ಹೂ 6 ತಿಂಗಳ ಕಂದಮ್ಮನ ಉಸಿರಾಟ ನಿಲ್ಲಿಸ್ತು! ತಾಯಂದಿರೇ ಈ ತಪ್ಪು ಮಾಡ್ಬೇಡಿ!]]></title>
            <link>https://kannada.asianetnews.com/karnataka-districts/mysuru-6-month-old-baby-chokes-to-death-after-swallowing-hibiscus-flower-in-hunsur-rav/articleshow-qkqq75b</link>
            <guid isPermaLink="true">https://kannada.asianetnews.com/karnataka-districts/mysuru-6-month-old-baby-chokes-to-death-after-swallowing-hibiscus-flower-in-hunsur-rav/articleshow-qkqq75b</guid>
            <pubDate>Tue, 31 Mar 2026 07:39:06 +0530</pubDate>
            <description><![CDATA[ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ, ಆಟವಾಡುತ್ತಿದ್ದ ಆರುವರೆ ತಿಂಗಳ ಮಗು ಮನೆಯ ಹೊಸಿಲಿಗೆ ಇಟ್ಟಿದ್ದ ಒಣ ದಾಸವಾಳ ಹೂವನ್ನು ನುಂಗಿ ಉಸಿರುಗಟ್ಟಿ ಮೃತಪಟ್ಟಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn0tdhpx9cfcye58pqev9hyy,imgname----------------------5--1774922942173.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಣಸೂರು (ಮಾ.31): &lt;/strong&gt;ಒಣಗಿದ್ದ ದಾಸವಾಳ ಹೂವಿನ ತುಂಡನ್ನು ನುಂಗಿದ್ದ ಆರುವರೆ ತಿಂಗಳ ಮಗು ಉಸಿರುಗಟ್ಟಿ ಮೃತಪಟ್ಟಿದ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.&amp;nbsp;&lt;/p&gt;&lt;h2&gt;ಹೊಸಲಿಗೆ ಪೂಜೆಗೆ ಇಟ್ಟಿದ್ದ ಹೂ ಮಗುವಿನ ಉಸಿರಾಟ ನಿಲ್ಲಿಸಿತು!&lt;/h2&gt;&lt;p&gt;ದೊಡ್ಡಹೆಜ್ಜೂರಿನ ಸುದರ್ಶನ್ ಮತ್ತು ನವ್ಯಾ ದಂಪತಿಯ ಎರಡನೇ ಪುತ್ರ, ಆರೂವರೆ ತಿಂಗಳ ಚಿನ್ಮಯ್ ಗೌಡ ಮೃತಪಟ್ಟ ದುರ್ದೈವಿ. ಶನಿವಾರ ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ ಚಿನ್ಮಯ್ ಗೌಡ, ಮನೆಯ ಹೊಸಿಲಿಗೆ ಪೂಜೆಗೆ ಇಟ್ಟಿದ್ದ ದಾಸವಾಳದ ಹೂ ಒಣಗಿತ್ತು. ಆ ಹೂವಿನ ತುಂಡನ್ನು ಬಾಯಿಗೆ ಹಾಕಿಕೊಂಡಿದೆ.&amp;nbsp;&lt;/p&gt;&lt;h3&gt;ಚಿಕಿತ್ಸೆ ಫಲಿಸದೇ ಮಗು ಸಾವು&lt;/h3&gt;&lt;p&gt;ಈ ವೇಳೆ ಅಣ್ಣ ಕಿತ್ತುಕೊಂಡರೂ ಮಗು ಒಣಗಿದ ಹೂವನ್ನು ನುಂಗಿದ್ದರಿಂದ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿತ್ತು. ತಕ್ಷಣವೇ ಪೋಷಕರು ಹನಗೋಡು ಆಸ್ಪತ್ರೆಯಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಗು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಪೋಷಕರ, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mysuru-6-month-old-baby-chokes-to-death-after-swallowing-hibiscus-flower-in-hunsur-rav/articleshow-qkqq75b"/>
        </item>
        <item>
            <title><![CDATA[ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿತಾರೆ: ಸಿದ್ದು ಪರ ಪರಮೇಶ್ವರ್ ಬ್ಯಾಟಿಂಗ್]]></title>
            <link>https://kannada.asianetnews.com/state/siddaramaiah-will-continue-as-cm-g-parameshwara-bats-for-siddu/articleshow-rpxdgpb</link>
            <guid isPermaLink="true">https://kannada.asianetnews.com/state/siddaramaiah-will-continue-as-cm-g-parameshwara-bats-for-siddu/articleshow-rpxdgpb</guid>
            <pubDate>Mon, 06 Apr 2026 12:30:28 +0530</pubDate>
            <description><![CDATA[&lt;p&gt;&lt;strong&gt;Karnataka CM change news: &lt;/strong&gt;ಸಿದ್ದರಾಮಯ್ಯನವರೇ ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಸಿಲ್ಲ, ಸಿಎಂ ಬದಲಾವಣೆ ಚರ್ಚೆಗಳು ಕೇವಲ ವೈಯಕ್ತಿಕ ಅಭಿಪ್ರಾಯಗಳಷ್ಟೇ ಎಂದು ಅವರು ಹೇಳಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngrvkeqwbnbhtc5nmyzawas,imgname-cm-siddaramaiah-parameshwar-dk-shivakumar-1775458176469.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸಿದ್ದು ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ&lt;/strong&gt;&lt;/h2&gt;&lt;p&gt;ಮೈಸೂರು: ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳುವ ಮೂಲಕ ಗೃಹ ಸಚಿವ ಜಿ. ಪರಮೇಶ್ವರ್ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಜಿ ಪರಮೇಶ್ವರ್ ಅವರು, ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ. 2013ರಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿರಲಿಲ್ಲ. ಆದರೂ ಅವರು ಐದು ವರ್ಷ ಸಿಎಂ ಆಗಿದ್ರು ತಾನೇ ಹಾಗೆಯೇ ಈ ಬಾರಿಯೂ 2023ರಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿತ್ತು. ಅದರ ಅವಧಿ 2028 ಅದನ್ನ ಅವರು ಮುಗಿಸಬೇಕು ತಾನೇ ಎಂದು ಮಾಧ್ಯಮದವರನ್ನೇ ಮರು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಿದ್ದು ಪರ ಪರಮೇಶ್ವರ್ ಬ್ಯಾಟಿಂಗ್&lt;/strong&gt;&lt;/h3&gt;&lt;p&gt;ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸ್ಪಷ್ಟೀಕರಣ ಕೊಡುವ ಅವಶ್ಯಕತೆ ಇಲ್ಲ. ಹೈಕಮಾಂಡ್ ಯಾವ ಗೊಂದಲಗಳನ್ನ ಸೃಷ್ಟಿ ಮಾಡಿಲ್ಲ.ಬಯಾರು ಏನೇ ಹೇಳಿದರು ಅದು ಮುಖ್ಯ ಅಲ್ಲ. ಹೈಕಮಾಂಡ್ ಯಾವತ್ತಾದರೂ ಸಿದ್ದರಾಮಯ್ಯ ಅವಧಿ ಇಷ್ಟು ಎಂದು ಹೇಳಿದ್ಯಾ? ಯಾವತ್ತಾದರೂ ಬದಲಾವಣೆ ಬಗ್ಗೆ ಮಾತನಾಡಿದ್ದರಾ? ಅದರ ಅರ್ಥ ಆ ರೀತಿಯ ಯಾವ ಬೆಳವಣಿಗೆ ಇಲ್ಲ ಎಂಬುದಾಗಿದೆ ಎಂದು ಪರಮೇಶ್ವರ್&zwnj; ಹೇಳಿಕೆ ನೀಡುತ್ತಾ ಸಿದ್ದರಾಮಯ್ಯ ಗದ್ದುಗೆಯನ್ನು ಭದ್ರಪಡಿಸುವ ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;ಸಿಎಂ ಸ್ಥಾನ ಬದಲಾವಣೆ ಮಾಡಬೇಕಾಗಿರುವುದು ಹೈಕಮಾಂಡ್. ಹೈಕಮಾಂಡ್ ಯಾವತಾದ್ರು ಇದರ ಬಗ್ಗೆ ಮಾತನಾಡಿದರೆ ಆಗ ಅದಕ್ಕೆ ಒಂದು ಅರ್ಥ ಬರುತ್ತದೆ&zwnj;. ಅಲ್ಲಿಯವರೆಗೆ ಯಾರು ಏನೇ ಮಾತನಾಡಿದ್ರು ಅದು ವೈಯಕ್ತಿಕ ಅಭಿಪ್ರಾಯ ಎಂದು ಪರಮೇಶ್ವರ್ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಡಿಸಿಎಂ ಆಗಿದ್ದಾರೆ, ಅವರು ನಮ್ಮ ನಾಯಕರು. ಅವರಿಗೆ ಯಾವ ಸಮಸ್ಯೆಯೂ ಆಗಿಲ್ಲ. ಸಿಎಂ ವಿಧಾನಸಭೆಯಲ್ಲೇ ಹೇಳಿದ್ದಾರೆ. ನಮ್ಮ ಎಲ್ಲಾ ಶಾಸಕರು ಸಿಎಂ ಸ್ಥಾನಕ್ಕೆ ಅರ್ಹರು ಎಂದು ಹೇಳಿದ್ದಾರೆ. ಅದರಲ್ಲಿ ನಾನು ಅರ್ಹ ಇನ್ನೊಬ್ಬರು ಅರ್ಹರಲ್ಲ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಪರಮೇಶ್ವರ ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಬೈಕ್&zwnj;ಗೆ ಗುದ್ದಿದ ಬುಲೇರೋ ಗೂಡ್ಸ್ ವಾಹನ : ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಸಾವು&lt;/strong&gt;&lt;/p&gt;&lt;p&gt;ಉಪಚುನಾವಣೆಯ ಫಲಿತಾಂಶಕ್ಕೂ ಬೇರೆ ವಿಚಾರಕ್ಕೆ ಸಂಬಂಧವೇ ಇಲ್ಲ, ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದ ದಿಕ್ಸೂಚಿ ಅಲ್ಲ. ಉಪ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರಕ್ಕೆ ನೀಡುವ ಮಾರ್ಕ್ಸ್ ಕೂಡ ಅಲ್ಲ. ಅದರ ಫಲಿತಾಂಶದ ಮೇಲೆ ಯಾವ ಬದಲಾವಣೆಯೂ ಆಗುವುದಿಲ್ಲ. ಎರಡು ಕ್ಷೇತ್ರದಲ್ಲೂ ನಾವು ಗೆಲ್ಲುತ್ತೇವೆ. ಜನ ಪರವಾಗಿ ತೀರ್ಪು ಕೊಡುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಮೀರಿಯೂ ಈ ಸರ್ಕಾರದ ಆಡಳಿತ ದಕ್ಷತೆಗೆ ಜನ ಮತ ಹಾಕುತ್ತಾರೆ. ಬಿಜೆಪಿಯವರು ಇಲ್ಲ ಸಲ್ಲದ ಆರೋಪಗಳನ್ನ ಮಾಡುತ್ತಿದ್ದಾರೆ. ಆದರೆ ಜನ ನಮ್ಮ ಪರವಾಗಿ ಇದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಲಬುರಗಿ: ನಡುರಸ್ತೆಯಲ್ಲೇ ಸರ್ಕಾರಿ ಶಾಲಾ ಶಿಕ್ಷಕಿಯ ಬರ್ಬರ ಹತ್ಯೆ&lt;/strong&gt;&lt;/p&gt;]]></content:encoded>
            <category>mysore</category>
            <dc:creator>Anusha Kb</dc:creator>
            <atom:link href="https://kannada.asianetnews.com/state/siddaramaiah-will-continue-as-cm-g-parameshwara-bats-for-siddu/articleshow-rpxdgpb"/>
        </item>
        <item>
            <title><![CDATA[ಮೈಸೂರಿನಲ್ಲಿ ಹುಸಿಬಾಂಬ್ ಬೆದರಿಕೆ ಮೂಲಕ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ದೆಹಲಿ ಪೊಲೀಸರು!]]></title>
            <link>https://kannada.asianetnews.com/karnataka-districts/man-arrested-in-mysuru-for-sending-fake-bomb-threat-emails-to-schools-offices-and-courts-gdp/articleshow-sizizgr</link>
            <guid isPermaLink="true">https://kannada.asianetnews.com/karnataka-districts/man-arrested-in-mysuru-for-sending-fake-bomb-threat-emails-to-schools-offices-and-courts-gdp/articleshow-sizizgr</guid>
            <pubDate>Sat, 28 Mar 2026 12:23:01 +0530</pubDate>
            <description><![CDATA[ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ನ್ಯಾಯಾಲಯಗಳಿಗೆ ಹುಸಿಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸುತ್ತಿದ್ದ ಮೈಸೂರಿನ ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ತಾಂತ್ರಿಕ ఆధారಗಳ ಮೇಲೆ ಆರೋಪಿಯನ್ನು ಪತ್ತೆಹಚ್ಚಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ka99qvy88jtz5rs68mqch2x1,imgname-fake-bomb-threat-in-thiruvananthapuram-bank-1763396284360.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಹುಸಿಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿ ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳಲ್ಲಿ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಮೈಸೂರಿನಲ್ಲಿ ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ಬಂಧಿತನನ್ನು ಮೈಸೂರಿನ ಬೃಂದಾವನ ಬಡಾವಣೆ ಎರಡನೇ ಹಂತ, 6ನೇ ಕ್ರಾಸ್&zwnj;ನ ನಿವಾಸಿ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಆತ ಮೈಸೂರಿನಲ್ಲಿ ಅಡಗಿ ಕುಳಿತು ನಿಗೂಢವಾಗಿ ಬಾಂಬ್ ಸ್ಫೋಟಿಸುವ ಬಗ್ಗೆ ಬೆದರಿಕೆ ಸಂದೇಶಗಳನ್ನು ಇ-ಮೇಲ್ ಮೂಲಕ ಕಳುಹಿಸುತ್ತಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;h2&gt;ಒಂದೇ ತಿಂಗಳೊಳಗೆ ಹಲವು ಬಾರಿ ಬಾಂಬ್ ಕರೆ&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ವಿವಿಧ ಸರ್ಕಾರಿ ಕಚೇರಿಗಳು, ಶಾಲಾ ಕಟ್ಟಡಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಸಂದೇಶಗಳು ರವಾನೆಯಾಗುತ್ತಿದ್ದವು. ಇದರಿಂದ ಸಾರ್ವಜನಿಕರಲ್ಲಿ ಭಾರೀ ಆತಂಕ ಉಂಟಾಗಿತ್ತು. ಒಂದೇ ತಿಂಗಳೊಳಗೆ ಹಲವು ಬಾರಿ ಇಂತಹ ಹುಸಿ ಸಂದೇಶಗಳನ್ನು ಕಳುಹಿಸಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿಸಿದೆ.&lt;/p&gt;&lt;p&gt;ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಪ್ರಕರಣದ ತನಿಖೆಯನ್ನು ವೇಗಗೊಳಿಸಲು ಸೂಚನೆ ನೀಡಿದ್ದವು. ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ನಡೆಸಿದ ದೆಹಲಿ ಪೊಲೀಸರು, ಈ ಸಂದೇಶಗಳ ಮೂಲ ಮೈಸೂರು ನಗರದಿಂದಲೇ ಬರುತ್ತಿದೆ ಎಂಬುದನ್ನು ಪತ್ತೆಹಚ್ಚಿದರು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ವಿಶೇಷ ತಂಡ ಮೈಸೂರಿಗೆ ಆಗಮಿಸಿ, ವಿವಿ ಪುರಂ ಪೊಲೀಸ್ ಠಾಣೆ ಪೊಲೀಸರ ಸಹಕಾರದೊಂದಿಗೆ ಆರೋಪಿಯ ಮನೆಯ ಮೇಲೆ ಧಿಡೀರ್ ದಾಳಿ ನಡೆಸಿತು. ದಾಳಿಯ ವೇಳೆ ಶ್ರೀನಿವಾಸ್ ಅನ್ನು ಬಂಧಿಸಲಾಯಿತು.&lt;/p&gt;&lt;h2&gt;ದೆಹಲಿಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ&lt;/h2&gt;&lt;p&gt;ಆರೋಪಿಯ ಮನೆಯಲ್ಲಿ ಶೋಧ ನಡೆಸಿದ ವೇಳೆ ಹಲವು ಸಿಮ್ ಕಾರ್ಡ್&zwnj;ಗಳು ಹಾಗೂ ಲ್ಯಾಪ್&zwnj;ಟಾಪ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೂಲಕವೇ ಆತ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.&lt;/p&gt;&lt;p&gt;ಬಂಧಿತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಹಿಂದಿನ ಉದ್ದೇಶ, ಇತರರ ಸಂಪರ್ಕ ಹಾಗೂ ಯಾವುದೇ ಸಂಘಟನೆಯ ಸಂಪರ್ಕವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.&lt;/p&gt;&lt;p&gt;ಈ ಘಟನೆ ಮೈಸೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/man-arrested-in-mysuru-for-sending-fake-bomb-threat-emails-to-schools-offices-and-courts-gdp/articleshow-sizizgr"/>
        </item>
        <item>
            <title><![CDATA[ಚುನಾಯಿತ ಪ್ರತಿನಿಧಿಗಳು ಪ್ರಜೆಗಳ ಗುಲಾಮರಾಗಿರಬೇಕು: ಡಾ.ಮುಖ್ಯಮಂತ್ರಿ ಚಂದ್ರು]]></title>
            <link>https://kannada.asianetnews.com/karnataka-districts/mukhyamantri-chandru-democracy-reforms-voter-power-karnataka-news-gvd/articleshow-xs8f3ko</link>
            <guid isPermaLink="true">https://kannada.asianetnews.com/karnataka-districts/mukhyamantri-chandru-democracy-reforms-voter-power-karnataka-news-gvd/articleshow-xs8f3ko</guid>
            <pubDate>Fri, 03 Apr 2026 19:43:31 +0530</pubDate>
            <description><![CDATA[&lt;p&gt;ಗೆಲುವಿಗೆ ಚಲಾಯಿತ ಮತಗಳ ಪೈಕಿ ಶೇ.50ರಷ್ಟನ್ನು ನಿಗದಿಪಡಿಸಬೇಕು. ಮತದಾರರಿಗೆ ಚುನಾಯಿತ ಪ್ರತಿನಿಧಿಗಳನ್ನು ವಾಪಸ್&zwnj; ಕರೆಸಿಕೊಳ್ಳುವ ಅಧಿಕಾರ ಇರಬೇಕು ಎಂದು ಖ್ಯಾತ ಚಲನಚಿತ್ರ ನಟ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hnfjgt6438va3fyg38dyrptp,imgname-Mukhyamantri-Chandru-1706698500292.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.03):&lt;/strong&gt; ಮತದಾರರಿಗೆ ಚುನಾಯಿತ ಪ್ರತಿನಿಧಿಗಳನ್ನು ವಾಪಸ್&zwnj; ಕರೆಸಿಕೊಳ್ಳುವ ಅಧಿಕಾರ ಇರಬೇಕು ಎಂದು ಖ್ಯಾತ ಚಲನಚಿತ್ರ ನಟ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು. ನಗರದ ವಾಲ್ಮೀಕಿ ರಸ್ತೆಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ದಾರಿ ಫೌಂಡೇಷನ್&zwnj; ಏರ್ಪಡಿಸಿದ್ದ &lsquo;ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಯ ಜವಾಬ್ದಾರಿ ಯುವಶಕ್ತಿಯ ಕೈಯಲ್ಲಿ&rsquo; ಕುರಿತ ಮುಕ್ತ ಸಂವಾದವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅದೇ ರೀತಿ ಗೆಲುವಿಗೆ ಚಲಾಯಿತ ಮತಗಳ ಪೈಕಿ ಶೇ.50ರಷ್ಟನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಈಗ ಆಯ್ಕೆಯಾದ ನಂತರ ಐದು ವರ್ಷ ಚುನಾಯಿತಪ್ರತಿನಿಧಿಗಳು ಏನು ಮಾಡಿದರೂ ಕೇಳುವಂತಿಲ್ಲ ಎಂಬಂತಿದೆ. ಇದು ಹೋಗಬೇಕು. ಅವರು ಮತದಾರರಿಗೆ ಉತ್ತರದಾಯಿಗಳಾಗಿರಬೇಕು. ವಾಪಸ್&zwnj; ಕರೆಸಿಕೊಳ್ಳುವ ಅಧಿಕಾರ ಇದ್ದಲ್ಲಿ ಭಯದಿಂದ ಜನರ ಕೆಲಸ ಮಾಡುತ್ತಾರೆ. ಚುನಾಯಿತ ಪ್ರತಿನಿಧಿಗಳು ಪ್ರಜೆಗಳ ಗುಲಾಮರಾಗಿರಬೇಕೆ ಹೊರತು ಪ್ರಜೆಗಳನ್ನೇ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳಬಾರದು ಎಂದು ಅವರು ಮಾರ್ಮಿಕವಾಗಿ ಹೇಳಿದರು.&lt;/p&gt;&lt;p&gt;ಈಗ ಶೇ.50 ರಷ್ಚು ಮತದಾನ ಆಗದಿದ್ದರೂ , ಚಲಾಯಿತ ಮತಗಳಲ್ಲಿ ಶೇ.50 ಮತಗಳನ್ನು ಪಡೆಯದಿದ್ದರೂ ಹೆಚ್ಚು ಮತ ಪಡೆದವರನ್ನು ಚುನಾಯಿತ ಎಂದು ಘೋಷಿಸಲಾಗುತ್ತಿದೆ. ಇದ್ಯಾವ ರೀತಿಯ ಪ್ರಜಾಪ್ರಭುತ್ವ?. ಇದು ತಪ್ಪಬೇಕು. ಗೆಲುವಿಗೆ ಚಲಾಯಿತ ಮತಗಳಲ್ಲಿ ಶೇ.50 ರಷ್ಟು ನಿಗದಿಪಡಿಸಬೇಕು ಎಂದರು. ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ. ಖಂಡಿತ ಇದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲತತ್ವಗಳನ್ನು ಬದಲಿಸಲು ಅವಕಾಶವೇ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.&lt;/p&gt;&lt;p&gt;ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಜೊತೆಗೆ ಅನಧಿಕೃತವಾಗಿ ಮಾಧ್ಯಮರಂಗವೂ ಇದೆ. ಇತ್ತೀಚೆಗೆ ಧರ್ಮ ಎಂಬ ಮತ್ತೊಂದು ಅಂಗವೂ ಕಾಣಿಸುತ್ತದೆ. ಧರ್ಮ ಇತಿಮಿತಿಯಲ್ಲಿರಬೇಕೆ ಹೊರತು ಅದೇ ಮುಖ್ಯವಾಗಿರಬಾರದು ಎಂದರು. ಹನ್ನೇರಡನೆ ಶತಮಾನದ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಜೀವನ ದರ್ಶನ ಮಾಡಿಸಿದರು. ಕಳಬೇಡ, ಕೊಲಬೇಡು.... ವಚನದ ಮೂಲಕ ಜೀವನ ಸಂವಿಧಾನ ನೀಡಿದರು. ಮಹಾತ್ಮಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ಸ್ವಾತಂತ್ರ್ಯ ಗಳಿಸಿಕೊಟ್ಟರು. ಡಾ.ಬಿ.ಆರ್&zwnj;. ಅಂಬೇಡ್ಕರ್&zwnj; ಅವರು ಇಡೀ ವಿಶ್ವದಲ್ಲಿಯೇ ಅತ್ಯುತ್ತಮವಾದ ಲಿಖಿತ ಸಂವಿಧಾನ ರಚಿಸಿಕೊಟ್ಟರು. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು.&lt;/p&gt;&lt;p&gt;ಸರ್ಕಾರಗಳು ಉಚಿತ ಗ್ಯಾರಂಟಿಗಳನ್ನು ನೀಡುವ ಬದಲು ಎಲ್ಲರಿಗೂ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಶಾಲೆಗಳು, ಕಾಲೇಜುಗಳು ಹಾಗೂ ಆಸ್ಪತ್ರೆಗಳನ್ನು ಬಲಪಡಿಸಬೇಕು. ರೈತರಿಗೆ ಬೆಂಬಲ ಬೆಲೆ ಬದಲು ಸಮರ್ಪಕವಾಗಿ ನೀರು ಹಾಗೂ ವಿದ್ಯುತ್&zwnj; ಪೂರೈಸಬೇಕು ಎಂದು ಅವರು ಸಲಹೆ ಮಾಡಿದರು. ಹಿಂದಿ ರಾಷ್ಟ್ರೀಯ ಭಾಷೆ ಇಲ್ಲ. ಸಂವಿಧಾನದ 9ನೇ ಶೆಡ್ಯೂಲ್&zwnj;ನಲ್ಲಿ ಹೇಳಿರುವಂತೆ ಅದು ಕೂಡ ಒಂದು ಭಾಷೆ. ಹೀಗಾಗಿ ಕರ್ನಾಟಕದಲ್ಲಿ ಎಲ್ಲಾ ಹಂತಗಳಲ್ಲೂ ಕನ್ನಡಕ್ಕೆ ಆದ್ಯತೆ ಸಿಗಬೇಕು. ಇಂಗ್ಲಿಷ್&zwnj; ಅನ್ನು ಕೂಡ ಚೆನ್ನಾಗಿ ಕಲಿಯಬೇಕು ಎಂದು ಅವರು ಸಲಹೆ ಮಾಡಿದರು. ವಿದ್ಯಾರ್ಥಿನಿಯರು ಇಚ್ಚಾಶಕ್ತಿ, ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಚೆನ್ನಾಗಿ ಓದಬೇಕು.&lt;/p&gt;&lt;p&gt;ದೇಶಪ್ರೇಮ, ನಾಡಪ್ರೇಮ, ಮಾತೃಭಾಷಾ ಪ್ರೇಮ ಬೆಳೆಸಿಕೊಳ್ಳಬೇಕು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಸಿ. ನಟರಾಜ್&zwnj; ಮಾತನಾಡಿ, ಪ್ರತಿಯೊಬ್ಬರೂ ಬದ್ಧತೆ, ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು. ಯಾವುದೇ ಹುದ್ದೆಗೆ ಹೋದರೂ ಭ್ರಷ್ಟಾಚಾರಮುಕ್ತವಾಗಿ ಕೆಲಸ ಮಾಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಮುಖ್ಯಮಂತ್ರಿಗಳು ರಾಜ್ಯ ಬಜೆಟ್&zwnj;ನಲ್ಲಿ ಮಹಾರಾಣಿ ಮೂರು ಕಾಲೇಜುಗಳ ಹಾಸ್ಟೆಲ್ ನಿರ್ಮಾಣಕ್ಕೆ 291 ಕೋಟಿ ರು. ನೀಡಿದ್ದು, ನಮ್ಮ ಕಾಲೇಜಿಗೆ 50 ಕೋಟಿ ರು. ದೊರೆತಿದೆ. ಈ ರೀತಿಯ ಮೂಲಸೌಕರ್ಯ ಕಲ್ಪಿಸುವ ಮೂಲಕ ರಾಜ್ಯ ಸರ್ಕಾರ ಗ್ರಾಮೀಣ ಬಡ ಹಾಗೂ ಮಧ್ಯಮವರ್ಗದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು.&lt;/p&gt;&lt;p&gt;ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್&zwnj;, ದಾರಿ ಫೌಂಡೇಷನ್&zwnj; ಅಧ್ಯಕ್ಷ ಎಲ್&zwnj;. ರಂಗಯ್ಯ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯದರ್ಶಿ ತಗಡೂರು ವೀರೇಶ್&zwnj;ಕುಮಾರ್&zwnj; ಮಹಾಮನೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಚಾಲಕ ಪ್ರಭಾಕರ್&zwnj;, ಐಕ್ಯೂಎಸಿ ಸಂಚಾಲಕ ಡಾ.ಎಸ್&zwnj;. ಮುತ್ತುರಾಜ, ಖಜಾಂಚಿ ರಾಘವೇಂದ್ರ, ಮಲ್ಲಣ್ಣ, ತೋಂಟೇಶ್&zwnj; ಮೊದಲಾದವರು ಇದ್ದರು. ಐಕ್ಯತಾ ಪ್ರಾರ್ಥಿಸಿದರು. ಮೈಸೂರು ಎಂ. ಮಹಾಲಿಂಗ ಅವರು ನಾಡಗೀತೆ ಹಾಗೂ ಸಂವಿಧಾನಗೀತೆ ಹಾಡಿದರು. ವಿದ್ಯಾರ್ಥಿನಿ ಅಧ್ಯಕ್ಷೆ ಎಸ್&zwnj;.ಜೆ. ಸಿಂಚನಾ ಸ್ವಾಗತಿಸಿದರು. ಕಾರ್ಯದರ್ಶಿ ಸೈಯದಾ ನೂರೈನ್&zwnj; ವಂದಿಸಿದರು. ತನುಶ್ರೀ ವಂದಿಸಿದರು. ಪಲ್ಲವಿ ಅತಿಥಿಗಳನ್ನು ಪರಿಚಯಿಸಿದರು.&lt;/p&gt;&lt;h2&gt;&lt;strong&gt;ಸಂವಾದದಲ್ಲಿ ಪ್ರಶ್ನೆಗಳ ಸುರಿಮಳೆ!&lt;/strong&gt;&lt;/h2&gt;&lt;p&gt;ಉದ್ಘಾಟನಾ ಭಾಷಣದ ನಂತರ ಮುಖ್ಯಮಂತ್ರಿ ಚಂದ್ರು ಅವರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿರು ಮಾತ್ರವಲ್ಲದೇ ಕೆಲ ಅಧ್ಯಾಪಕರು ಕೂಡ ಪ್ರಶ್ನೆಗಳನ್ನು ಕೇಳಿದರು. ಚಂದ್ರು ಅವರ ಪಕ್ಷಾಂತರ, ಆಮ್&zwnj; ಆದ್ಮಿಪಾರ್ಟಿಯ ನಾಯಕರ ಮೇಲಿನ ಕೋರ್ಟ್&zwnj; ಪ್ರಕರಣಗಳು, ಮೀಸಲಾತಿ, ಚಲನಚಿತ್ರಗಳಲ್ಲಿ ಮಹಿಳಾ ಕಲಾವಿದರಿಗೆ ಇರುವ ರಕ್ಷಣೆ, ಮರ್ಯಾದೆಗೇಡು ಹತ್ಯೆ ಮೊದಲಾದ ವಿಷಯಗಳ ಬಗ್ಗೆ ಪ್ರಶ್ನೆಗಳಿದ್ದವು. ಕೋಮುವಾದ, ಕುಟುಂಬ ರಾಜಕಾರಣ ಹೋಗಬೇಕು. ಅನ್ನದಾನ, ಗೋದಾನ, ಭೂದಾನ, ಕನ್ಯಾದಾನದಂತೆ ಮತದಾನ ಕೂಡ ಮುಖ್ಯ, 18 ನೇ ವಯಸ್ಸಿಗೆ ಮತದಾನದ ಹಕ್ಕು ಪಡೆದಿರುವ ಯುವಜನತೆ ಇದನ್ನು ಅರ್ಥ ಮಾಡಿಕೊಂಡು ಭ್ರಷ್ಟಮುಕ್ತ ಸರ್ಕಾರ ತರುವ ಮನಸ್ಸು ಮಾಡಬೇಕು ಎಂಬುದು ಮುಖ್ಯಮಂತ್ರಿ ಚಂದ್ರು ಅವರ ಉತ್ತರವಾಗಿತ್ತು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mukhyamantri-chandru-democracy-reforms-voter-power-karnataka-news-gvd/articleshow-xs8f3ko"/>
        </item>
        <item>
            <title><![CDATA[Breaking News: ಮೈಸೂರಿನಲ್ಲಿ ದೆಹಲಿ ಪೊಲೀಸರ ಬಿಗ್ ಆಪರೇಷನ್; ದೇಶಾದ್ಯಂತ ಹುಸಿ ಬಾಂಬ್ ಬೆದರಿಕೆ ಹಾಕುತ್ತಿದ್ದ ಕಿಡಿಗೇಡಿ ಕೊನೆಗೂ ಅರೆಸ್ಟ್!]]></title>
            <link>https://kannada.asianetnews.com/state/delhi-police-arrest-mysuru-man-srinivas-for-nationwide-hoax-bomb-threats-rav/articleshow-xumml7s</link>
            <guid isPermaLink="true">https://kannada.asianetnews.com/state/delhi-police-arrest-mysuru-man-srinivas-for-nationwide-hoax-bomb-threats-rav/articleshow-xumml7s</guid>
            <pubDate>Sat, 28 Mar 2026 12:18:09 +0530</pubDate>
            <description><![CDATA[&lt;p&gt;ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ದೇಶಾದ್ಯಂತ ಸರ್ಕಾರಿ ಕಚೇರಿ ಮತ್ತು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸುತ್ತಿದ್ದ ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmsjv52stc50feyjf5dtbj2x,imgname----------------------68--1774680118361.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮಾ.28): &lt;/strong&gt;ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಇಂದು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಹುಸಿ ಬಾಂಬ್ ಸಂದೇಶಗಳನ್ನ ಕಳಿಸಿ ಸರ್ಕಾರಿ ಕಚೇರಿ, ಶಾಲೆಗಳಲ್ಲಿ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಕೊನೆಗೂ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;ಬೃಂದಾವನ ಬಡಾವಣೆಯಲ್ಲಿ ಅಡಗಿದ್ದ ಆರೋಪಿ:&lt;/h2&gt;&lt;p&gt;ನಗರದ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತದ 6ನೇ ಕ್ರಾಸ್&zwnj;ನಲ್ಲಿರುವ ಮನೆಯೊಂದರ ಮೇಲೆ ದೆಹಲಿ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿದೆ. ಶ್ರೀನಿವಾಸ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಮೈಸೂರಿನಲ್ಲೇ ಕುಳಿತು ನಿಗೂಢವಾಗಿ ಬೆದರಿಕೆ ಇಮೇಲ್&zwnj;ಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.&lt;/p&gt;&lt;h3&gt;ಸರ್ಕಾರಿ ಕಚೇರಿಗಳೇ ಆರೋಪಿ ಶ್ರೀನಿವಾಸ್ ಟಾರ್ಗೆಟ್:&lt;/h3&gt;&lt;p&gt;ಬಂಧಿತ ಆರೋಪಿ ಶ್ರೀನಿವಾಸ್ ಇತ್ತೀಚೆಗೆ ಸರ್ಕಾರಿ ಕಚೇರಿಗಳು, ಶಾಲಾ ಕಟ್ಟಡಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಿ ಆತಂಕ ಸೃಷ್ಟಿಸಿದ್ದ. ಹಲವಾರು ಕಚೇರಿಗಳಿಗೆ, ಶಾಲೆಗಳಿಗೆ ಭಯೋತ್ಪಾದಕ ರೀತಿ ಹುಸಿ ಬಾಂಬ್ ಕಳಿಸಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದ ಆರೋಪಿ. ಕೇವಲ ಒಂದೇ ತಿಂಗಳಿನಲ್ಲಿ ಹಲವು ಬಾರಿ ಇಂತಹ ಸಂದೇಶಗಳನ್ನ ಇಮೇಲ್ ಮೂಲಕ ಕಳಿಸಿ ಭದ್ರತಾ ಏಜೆನ್ಸಿಗಳಿಗೆ ತಲೆನೋವಾಗಿದ್ದ.&lt;/p&gt;&lt;h3&gt;ಸೀಜ್ ಆದ ಎಲೆಕ್ಟ್ರಾನಿಕ್ ಡಿವೈಸ್&zwnj;ಗಳು:&lt;/h3&gt;&lt;p&gt;ದೇಶದ ಭದ್ರತೆಗೆ ಸವಾಲಾಗಿದ್ದ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕಿಡಿಗೇಡಿಯ ಪತ್ತೆಗೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿತ್ತು. ಸದ್ಯ ಆರೋಪಿಯನ್ನ ಬಂಧಿಸಿದ್ದು, ಕಾರ್ಯಾಚರಣೆಯ ವೇಳೆ ಆರೋಪಿಯ ಮನೆಯಲ್ಲಿದ್ದ ಹಲವು ಸಿಮ್ ಕಾರ್ಡ್&zwnj;ಗಳು, ಲ್ಯಾಪ್&zwnj;ಟಾಪ್&zwnj;ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.&lt;/p&gt;&lt;h3&gt;ಹೆಚ್ಚಿನ ವಿಚಾರಣೆಗೆ ಆರೋಪಿ ದೆಹಲಿಗೆ ಶಿಫ್ಟ್&lt;/h3&gt;&lt;p&gt;ಈ ಕಾರ್ಯಾಚರಣೆಗೆ ಮೈಸೂರಿನ ವಿ.ವಿ. ಪುರಂ ಠಾಣೆ ಪೊಲೀಸರು ದೆಹಲಿ ಪೊಲೀಸರಿಗೆ ಸಾಥ್ ನೀಡಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರು ತಮ್ಮೊಂದಿಗೆ ಕರೆದೊಯ್ಯಲಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/delhi-police-arrest-mysuru-man-srinivas-for-nationwide-hoax-bomb-threats-rav/articleshow-xumml7s"/>
        </item>
        <item>
            <title><![CDATA[ಶಿಕ್ಷಣದಲ್ಲಿ ದ್ವಿಭಾಷಾ ನೀತಿ ನಿರ್ಧಾರವನ್ನು ಎಲ್ಲರೂ ಒಪ್ಪಲೇಬೇಕು: ಸಿಎಂ ಸಿದ್ದರಾಮಯ್ಯ]]></title>
            <link>https://kannada.asianetnews.com/politics/cm-siddaramaiah-on-bilingual-policy-exams-karnataka-gvd/articleshow-yinzlap</link>
            <guid isPermaLink="true">https://kannada.asianetnews.com/politics/cm-siddaramaiah-on-bilingual-policy-exams-karnataka-gvd/articleshow-yinzlap</guid>
            <pubDate>Sun, 29 Mar 2026 21:11:40 +0530</pubDate>
            <description><![CDATA[&lt;p&gt;ಶಿಕ್ಷಣದಲ್ಲಿ ದ್ವಿಭಾಷಾ ನೀತಿ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಯಾರೋ ಕೆಲವರು ವಿರೋಧ ಮಾಡಿದರು ಎಂಬ ಕಾರಣಕ್ಕೆ ನಾವು ಹಿಂದೆ ಸರಿಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjh6cdyp4ctd2hcjcaa601pg,imgname-cm-siddaramaiah--1772251133910.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಮಾ.29): &lt;/strong&gt;ಶಿಕ್ಷಣದಲ್ಲಿ ದ್ವಿಭಾಷಾ ನೀತಿ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಯಾರೋ ಕೆಲವರು ವಿರೋಧ ಮಾಡಿದರು ಎಂಬ ಕಾರಣಕ್ಕೆ ನಾವು ಹಿಂದೆ ಸರಿಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಯಾಗಬೇಕು ಎಂಬುದು ಅಭಿಪ್ರಾಯ. ಶಿಕ್ಷಣದಲ್ಲಿ ದ್ವಿಭಾಷಾ ನೀತಿ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು.&lt;/p&gt;&lt;p&gt;ಯಾರೋ ಕೆಲವರು ವಿರೋಧ ಮಾಡಿದರು ಎಂದು ನಾವು ಹಿಂದೆ ಸರಿಯುವುದಿಲ್ಲ. ಎಲ್ಲಾ ದೃಷ್ಟಿಕೋನದಲ್ಲಿ ಪರಾಮರ್ಶಿಸಿ, ಸರ್ಕಾರ ಈ ನಿರ್ಧಾರ ಮಾಡಿದೆ. ಎಲ್ಲರೂ ಈ ನಿರ್ಧಾರವನ್ನ ಒಪ್ಪಿಕೊಳ್ಳಬೇಕು ಎಂದು ಹೇಳಿದರು. ಈ ವರ್ಷದಿಂದಲೇ ಪರೀಕ್ಷೆಯಲ್ಲಿ ಇದು ಜಾರಿಯಾಗಲಿದೆ. ಹಾಗಂತ, ಹಿಂದಿ ಕಲಿಯಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ, ಹಿಂದಿ ಕಡ್ಡಾಯ ಬೇಡ ಎಂದು ಹೇಳುತ್ತಿದ್ದೇನೆ&zwnj;&zwnj;.&lt;/p&gt;&lt;p&gt;ನಾನು ಓದುವಾಗ ಹಿಂದಿ ಕಡ್ಡಾಯ ಇರಲಿಲ್ಲ. ಹೀಗಾಗಿ, ನಾನು ಹಿಂದಿ ಓದಲೇ ಇಲ್ಲ. ಸುಮ್ಮನೆ ಹೇರಿಕೆಯಾಗಬಾರದು ಎಂದರು. ಇದೇ ವೇಳೆ, ಶಾಸಕರಿಗೆ 2 ಐಪಿಎಲ್&zwnj; ಟಿಕೆಟ್&zwnj; ನೀಡಿರುವ ಕುರಿತು ಪ್ರತಿಕ್ರಿಯಿಸಿ, ಶಾಸಕರು 2 ಐಪಿಎಲ್ ಟಿಕೆಟ್ ಕೇಳಿದ್ದರು. ಮೊದಲು ಒಂದು ಕೊಡುತ್ತಿದ್ದರು, ಈಗ ಎರಡು ಟಿಕೆಟ್ ಕೊಟ್ಟಿದ್ದಾರೆ. ಇಷ್ಟ ಇದ್ದವರು ಹೋಗಬಹುದು, ಬೇಡ ಎಂದರೆ ಬಿಡಬಹುದು. ಇದರಲ್ಲಿ ತಪ್ಪು-ಸರಿ ಪ್ರಶ್ನೆ ಬರುವುದಿಲ್ಲ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ನನಗೆ ಕ್ರಿಕೆಟ್ ಅಂದರೆ ಇಷ್ಟ&lt;/strong&gt;&lt;/h2&gt;&lt;p&gt;ನಾನು ಏನೂ ಕೆಲಸ ಇಲ್ಲ ಅಂದರೆ ಮಾತ್ರ ಕ್ರಿಕೆಟ್ ನೋಡಲು ಹೋಗುತ್ತೇನೆ. ಇಲ್ಲ ಅಂದ್ರೆ ಹೋಗುವುದಿಲ್ಲ. ನನಗೆ ಕ್ರಿಕೆಟ್ ಅಂದರೆ ಇಷ್ಟ. ಆದರೆ, ಕೆಲಸ ಇದ್ದಾಗ ನೋಡುವುದಿಲ್ಲ. ನನಗೆ 9 ತಾರೀಖಿನವರೆಗೂ ಚುನಾವಣಾ ಕೆಲಸಗಳು ಇದೆ. ಅಲ್ಲಿವರೆಗೆ ಯಾವ ಮ್ಯಾಚ್ ಗಳನ್ನೂ ನೋಡಲು ಹೋಗುವುದಿಲ್ಲ. ಆಮೇಲೆ ಬೇಕಾದ್ರೆ ನೋಡೋಣ ಎಂದರು.&lt;/p&gt;]]></content:encoded>
            <category>mysore</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/cm-siddaramaiah-on-bilingual-policy-exams-karnataka-gvd/articleshow-yinzlap"/>
        </item>
        <item>
            <title><![CDATA[Kerala Woman Missing: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ತೆರಳಿದ್ದ ಕೇರಳದ ಯುವತಿ ನಿಗೂಢ ನಾಪತ್ತೆ, ಮುಂದುವರಿದ ಕಾರ್ಯಾಚರಣೆ]]></title>
            <link>https://kannada.asianetnews.com/karnataka-districts/search-underway-for-kerala-woman-missing-during-tadiandamol-peak-trek-in-kodagu-rav/articleshow-zeo6go9</link>
            <guid isPermaLink="true">https://kannada.asianetnews.com/karnataka-districts/search-underway-for-kerala-woman-missing-during-tadiandamol-peak-trek-in-kodagu-rav/articleshow-zeo6go9</guid>
            <pubDate>Sat, 04 Apr 2026 08:29:59 +0530</pubDate>
            <description><![CDATA[ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಯುವತಿ ಶರಣ್ಯ ನಾಪತ್ತೆಯಾಗಿದ್ದಾರೆ. ಪೊಲೀಸ್, ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರನ್ನೊಳಗೊಂಡ ನಾಲ್ಕು ತಂಡಗಳು ತೀವ್ರ ಶೋಧ ನಡೆಸುತ್ತಿದ್ದರೂ, ಯುವತಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ. ಈ ಘಟನೆಯು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knb6xb1e6m5b63n2b4xkbp3s,imgname----------------------50--1775271586862.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಪೋಕ್ಲು (ಏ.4): &lt;/strong&gt;ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ತೆರಳಿದ್ದ ಕೇರಳದ ಯುವತಿ ನಾಪತ್ತೆ ಶುಕ್ರವಾರ ಸಂಜೆವರೆಗೂ ಯುವತಿಯ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.&lt;/p&gt;&lt;p&gt;ಪೊಲೀಸ್, ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರು ಸೇರಿದಂತೆ 4 ತಂಡಗಳಿಂದ ಬಿರುಸಿನ ಶೋಧ ಕಾರ್ಯ ಶುಕ್ರವಾರ ಸಂಜೆವರೆಗೂ ನಡೆದಿದ್ದು ಯುವತಿ ಮತ್ತೆ ಆಗದೆ ಆತಂಕ ಸೃಷ್ಟಿಯಾಗಿದೆ.&lt;/p&gt;&lt;h2&gt;ಕೇರಳ ಯುವತಿ ಹೋಗಿದ್ದೆಲ್ಲಿಗೆ?&lt;/h2&gt;&lt;p&gt;ಕೊಡಗು ಜಿಲ್ಲೆಯ ಕಕ್ಕಬ್ಬೆ ಬಳಿಯ ಯವಕಪಾಡಿ ಗ್ರಾಮದ ಗ್ರಾಮದ ಕಬ್ಬಿನ ಕಾಡು ನಿವಾಸಿ ನಂದ ಎಂಬವರ ಹೋಂ ಸ್ಟೇಗೆ ಬಂದಿದ್ದ ಕೇರಳ ಮೂಲದ ಕೊಯ್ಕೊಡು ನಿವಾಸಿ ಯುವತಿ ಶರಣ್ಯ (36) ಎಂಬಾಕೆ ಬುಧವಾರ ಬೆಳಿಗ್ಗೆ ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್ಗೆ ಆನ್ಲೈನ್ನಲ್ಲಿ ಬುಕಿಂಗ್ ಮಾಡಿ ತೆರಳಿದ್ದು ಜೊತೆಯಾಗಿ ತೆರಳಿದ ಪ್ರವಾಸಿಗರು ಹಿಂತಿರುಗಿದ್ದರು. ಆದರೆ ಈಕೆ ಹಿಂತಿರುಗದೆ ನಾಪತ್ತೆಯಾಗಿದ್ದಾಳೆ.&amp;nbsp;&lt;/p&gt;&lt;h3&gt;ತೀವ್ರ ಹುಡುಕಾಟ ನಡೆಸುತ್ತಿದ್ದರೂ ಶರಣ್ಯ ಸುಳಿವು ಇಲ್ಲ&lt;/h3&gt;&lt;p&gt;ಈ ವಿಷಯ ತಿಳಿದ ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು, ಪೋಲಿಸ್ ಶ್ವಾನ ಹಾಗೂ ಗ್ರಾಮಸ್ಥರು ನಿರಂತರ ಹುಡುಕಾಟದಲ್ಲಿ ತೊಡಗಿಕೊಂಡಿದ್ದು ಗುರುವಾರ ತಡ ರಾತ್ರಿಯವರೆಗೆ ಹಾಗೂ ಶುಕ್ರವಾರ ಸಂಜೆವರೆಗೂ ಬೆಟ್ಟದಲ್ಲಿ ಶೋಧ ನಡೆಸಿದರೂ ಶರಣ್ಯ ಸುಳಿವು ದೊರೆತಿಲ್ಲ.&amp;nbsp;&lt;/p&gt;&lt;p&gt;ಈ ಬಗ್ಗೆ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಸಂಜೆ ಕೊಯ್ಕೊಡು ನಿವಾಸಿ ಯುವತಿ ಶರಣ್ಯಳ ಅಣ್ಣ ಶ್ಯಾಮ್ ಆಗಮಿಸಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಕುಡಿಯರ ಮುತ್ತಪ್ಪ ತಿಳಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/search-underway-for-kerala-woman-missing-during-tadiandamol-peak-trek-in-kodagu-rav/articleshow-zeo6go9"/>
        </item>
    </channel>
</rss>
