<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 06 Aug 2026 13:30:49 +0530</lastBuildDate>
        <atom:link href="https://kannada.asianetnews.com/rss/mysore" rel="self" type="application/rss+xml"/>
        <item>
            <title><![CDATA[ಆಗಸ್ಟ್ 1ಕ್ಕೆ ಮೈಸೂರಿಗೆ ಪ್ರಧಾನಿ ಮೋದಿ ಭೇಟಿ.. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಲಿದೆ ಸಾಂಸ್ಕೃತಿಕ ನಗರಿ..!]]></title>
            <link>https://kannada.asianetnews.com/mysore/pm-narendra-modi-to-visit-mysuru-on-aug-1-vivek-memorial-inauguration-here-is-the-complete-schedule-gkn/articleshow-1icg8rq</link>
            <guid isPermaLink="true">https://kannada.asianetnews.com/mysore/pm-narendra-modi-to-visit-mysuru-on-aug-1-vivek-memorial-inauguration-here-is-the-complete-schedule-gkn/articleshow-1icg8rq</guid>
            <pubDate>Sun, 26 Jul 2026 09:29:21 +0530</pubDate>
            <description><![CDATA[ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1 ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಲಿದ್ದು, ರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಲಾದ ಬಹುನಿರೀಕ್ಷಿತ 'ವಿವೇಕ ಸ್ಮಾರಕ'ವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಲೇಖನವು ಅವರ ಮೈಸೂರು ಪ್ರವಾಸದ ಸಂಪೂರ್ಣ ನಿಮಿಷ-ನಿಮಿಷದ ವೇಳಾಪಟ್ಟಿಯನ್ನು ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kspe83w8xw1kv18q1934a0rr,imgname-narendra-modi-eid-greetings-1779943346055.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು:&lt;/strong&gt; ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಸ್ಟ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಬಹುನಿರೀಕ್ಷಿತ 'ವಿವೇಕ ಸ್ಮಾರಕ'ವನ್ನು ಲೋಕಾರ್ಪಣೆ ಮಾಡಲು ಪ್ರಧಾನಿಗಳು ಆಗಮಿಸುತ್ತಿದ್ದು, ಅವರ ಮಿನಿಟ್-ಟು-ಮಿನಿಟ್ ಪ್ರವಾಸದ ವೇಳಾಪಟ್ಟಿ ಸಿದ್ಧವಾಗಿದೆ.&lt;/p&gt;&lt;h2&gt;&lt;strong&gt;ಮೋದಿ ಪ್ರವಾಸದ ಸಂಪೂರ್ಣ ವೇಳಾಪಟ್ಟಿ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಮಧ್ಯಾಹ್ನ 2.55: &lt;/strong&gt;ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮನ.&lt;/li&gt; &lt;li&gt;&lt;strong&gt;ಮಧ್ಯಾಹ್ನ 3.15:&lt;/strong&gt; ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ನಗರದ ಓವಲ್ ಮೈದಾನಕ್ಕೆ ತಲುಪಲಿರುವ ಮೋದಿ.&lt;/li&gt; &lt;li&gt;&lt;strong&gt;ಮಧ್ಯಾಹ್ನ 3.25: &lt;/strong&gt;ಓವಲ್ ಮೈದಾನದಿಂದ ರಸ್ತೆಯ ಮೂಲಕ ವಿವೇಕ ಸ್ಮಾರಕಕ್ಕೆ ಪ್ರಯಾಣ.&lt;/li&gt; &lt;li&gt;&lt;strong&gt;ಮಧ್ಯಾಹ್ನ 3.30 ರಿಂದ ಸಂಜೆ 5.15: &lt;/strong&gt;ರಾಮಕೃಷ್ಣ ಆಶ್ರಮದಲ್ಲಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಿ. ಇದೇ ವೇಳೆ 'ವಿವೇಕ ಸ್ಮಾರಕ' ಉದ್ಘಾಟನೆ.&lt;/li&gt; &lt;li&gt;&lt;strong&gt;ಸಂಜೆ 5.20:&lt;/strong&gt; ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ.&lt;/li&gt; &lt;li&gt;&lt;strong&gt;ಸಂಜೆ 5.30: &lt;/strong&gt;ಓವಲ್ ಮೈದಾನಕ್ಕೆ ವಾಪಸ್ ಆಗಿ, ಅಲ್ಲಿಂದ ಮೈಸೂರು ವಿಮಾನ ನಿಲ್ದಾಣದತ್ತ ಪ್ರಯಾಣ.&lt;/li&gt; &lt;li&gt;&lt;strong&gt;ಸಂಜೆ 5.55: &lt;/strong&gt;ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸ್.&lt;/li&gt;&lt;/ul&gt;&lt;h2&gt;&lt;strong&gt;ಕಾರ್ಯಕ್ರಮದ ಮಹತ್ವ&lt;/strong&gt;&lt;/h2&gt;&lt;p&gt;ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ನೆನಪಿಗಾಗಿ ನಿರ್ಮಿಸಲಾದ ಈ ವಿವೇಕ ಸ್ಮಾರಕವು ಅತ್ಯಂತ ಮಹತ್ವದ ಯೋಜನೆಯಾಗಿದೆ. ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.&lt;/p&gt;]]></content:encoded>
            <category>mysore</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mysore/pm-narendra-modi-to-visit-mysuru-on-aug-1-vivek-memorial-inauguration-here-is-the-complete-schedule-gkn/articleshow-1icg8rq"/>
        </item>
        <item>
            <title><![CDATA[Parents aware: ಮಗುವಿನ ಜೀವ ತೆಗೆಯಿತು ಚಿಪ್ಸ್ ಪಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್!]]></title>
            <link>https://kannada.asianetnews.com/karnataka-districts/mysuru-5-year-old-boy-died-tragically-after-swallowing-a-plastic-gift-ball-found-inside-a-kurkure-packet/articleshow-3rqc536</link>
            <guid isPermaLink="true">https://kannada.asianetnews.com/karnataka-districts/mysuru-5-year-old-boy-died-tragically-after-swallowing-a-plastic-gift-ball-found-inside-a-kurkure-packet/articleshow-3rqc536</guid>
            <pubDate>Mon, 03 Aug 2026 15:13:46 +0530</pubDate>
            <description><![CDATA[&lt;p&gt;ಚಿಪ್ಸ್ ಪಾಕೆಟ್&zwnj;ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಕುರ್&zwnj;ಕುರೆ ಎಂದುಕೊಂಡು ನುಂಗಿ ಐದು ವರ್ಷದ ಕಂದ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz3fyk72rctm9q04vwte36eh,imgname-----------------------2026-08-03t150937.333-1785750047970.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಣಸೂರು (ಆ.2): ಚಿಪ್ಸ್&lt;/strong&gt; ಪಾಕೆಟ್&zwnj;ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಚಿಪ್ಸ್ ಎಂದುಕೊಂಡು ನುಂಗಿ ಐದು ವರ್ಷದ ಕಂದ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಮುಕುಂದ್ ಮಯೂರ್ (5) ಮೃತ ಬಾಲಕ. ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ-ಶಂಕರ್ ನಾಯಕ ಅವರ ಮೊಮ್ಮಗ, ಸಂತೋಷ್-ಐಶ್ವರ್ಯ ದಂಪತಿಯ ಏಕೈಕ ಪುತ್ರನಾಗಿ ಬಾಲಕ.&lt;/p&gt;&lt;h2&gt;ಚಿಪ್ಸ್ ಪಾಕೆಟ್&zwnj;ನಲ್ಲಿತ್ತು ಪ್ಲಾಸ್ಟಿಕ್ ಗಿಫ್ಟ್ ಬಾಲ್!&lt;/h2&gt;&lt;p&gt;ಮಾಹಿತಿಯ ಪ್ರಕಾರ, ಮಗು ಚಿಪ್ಸ್ ಪಾಕೆಟ್ ಖರೀದಿಸಿದೆ. ಆ ಪಾಕೆಟ್&zwnj;ನೊಂದಿಗೆ ಒಳಗೆ ಗಿಫ್ಟ್ ಬಾಲ್ ಬಂದಿದೆ.ಚಿಪ್ಸ್ ತಿಂದ ಬಳಿಕ ಗಿಫ್ಟ್&zwnj; ಬಾಲ್ ಬಾಯಿಗೆ ಹಾಕಿರುವ ಮಗು ಅಕಸ್ಮಿಕವಾಗಿ ನುಂಗಿದಾಗ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ ಎಂದು ಎನ್ನಲಾಗುತ್ತಿದೆ.&lt;/p&gt;&lt;p&gt;ಈ ಆಘಾತಕಾರಿ ಘಟನೆಯಲ್ಲಿ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;h3&gt;ಚಿಪ್ಸ್ ಪಾಕೆಟ್&zwnj;ನಲ್ಲಿ ಪ್ಲಾಸ್ಟಿಕ್ ಗಿಫ್ಟ್ ಎಷ್ಟು ಅಪಾಯಕಾರಿ!&lt;/h3&gt;&lt;p&gt;ಚಿಪ್ಸ್ ಪಾಕೆಟ್ ಹೆಚ್ಚಾಗಿ ಚಿಕ್ಕ ಮಕ್ಕಳು ತಿನ್ನುತ್ತವೆ. ಕುರ್&zwnj;ಕುರೆಯಲ್ಲಿ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಇರುತ್ತೆಂಬುದನ್ನ ತಿಳಿಯದ ಮಕ್ಕಳು ಚಿಪ್ಸ್ ಎಂದು ತಿಂದರೆ ಅಥವಾ ನುಂಗಿ ಮಕ್ಕಳ ಜೀವಕ್ಕೆ ಅಪಾಯವಾದರೆ ಯಾರು ಹೊಣೆ? ಈಗ ಸಾವನ್ನಪ್ಪಿರುವ ಮಗು ಕೂಡ ಅದೇ ರೀತಿ ನಡೆದಿರುವ ಸಾಧ್ಯತೆಯೂ ಇದೆ. ಮಕ್ಕಳನ್ನ ಆಕರ್ಷಿಸಲು ಈ ರೀತಿ ಅಪಾಯಕಾರಿಯಾಗಿ ಬೇಜವಾಬ್ದಾರಿತನದಿಂದ ಗಿಫ್ಟ್ ಬಾಲ್&zwnj;ಗಳನ್ನು ಹಾಕುವ ಚಿಪ್ಸ್ ಮಾರಾಟಗಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು. ಮಗುವನ್ನು ಕಳೆದುಕೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/mysuru-5-year-old-boy-died-tragically-after-swallowing-a-plastic-gift-ball-found-inside-a-kurkure-packet/articleshow-3rqc536"/>
        </item>
        <item>
            <title><![CDATA[ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ: ಕಬಿನಿ ಭರ್ತಿ, ಹಾರಂಗಿ ಜಲಾಶಯದಿಂದ ಭಾರಿ ನೀರು ತಮಿಳುನಾಡಿಗೆ ಬಿಡುಗಡೆ!]]></title>
            <link>https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv</link>
            <guid isPermaLink="true">https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv</guid>
            <pubDate>Sat, 01 Aug 2026 16:43:27 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ, ಕೆಆರ್&zwnj;ಎಸ್ ಮತ್ತು ಹಾರಂಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಇದು ಕಾವೇರಿ ವಿವಾದದ ತೀವ್ರತೆಯನ್ನು ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyyfpfbj9xmgwztj0rh7gphj,imgname-kabini-1785582009713.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಕಿಚ್ಚು ಹೊತ್ತಿಕೊಂಡಿರುವ ಬೆನ್ನಲ್ಲೇ, ವರುಣ ದೇವ ರಾಜ್ಯದ ರೈತರಿಗೆ ಭಾರಿ ಸಿಹಿ ಸುದ್ದಿ ನೀಡಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಮೈಸೂರು ಜಿಲ್ಲೆಯ ಹೆಮ್ಮೆಯ ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ತಮಿಳುನಾಡಿನತ್ತ ಕಾವೇರಿ ನೀರು ಈ ಜಲಾಶಯದಿಂದ ಹರಿಯಲಾರಂಭಿಸಿದೆ. ಇದು ಸದ್ಯದ ಕಾವೇರಿ ವಿವಾದದ ತೀವ್ರತೆಯನ್ನು ಕೊಂಚ ತಣ್ಣಗಾಗಿಸುವ ಮುನ್ಸೂಚನೆ ನೀಡಿದೆ.&lt;/p&gt;&lt;h2&gt;ಭರ್ತಿಯಾದ ಕಬಿನಿ ಜಲಾಶಯ: ನದಿಗೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ&lt;/h2&gt;&lt;p&gt;ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಜಲಾನಯನ ಪ್ರದೇಶ ಹಾಗೂ ಕೇರಳದ ವಯನಾಡು ಭಾಗದಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದಾಗಿ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಪ್ರಸ್ತುತ ಅಣೆಕಟ್ಟೆಗೆ 15,500 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ.&lt;/p&gt;&lt;p&gt;ಒಟ್ಟು 19.52 ಟಿಎಂಸಿ ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಈಗಾಗಲೇ 18 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಜಲಾಶಯದ 4 ಕ್ರಸ್ಟ್ ಗೇಟ್&zwnj;ಗಳ ಮೂಲಕ ಸುಮಾರು 10 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸುತ್ತಿದ್ದಾರೆ. ಈ ನೀರು ಕಪಿಲಾ ನದಿಯ ಮೂಲಕ ತಮಿಳುನಾಡಿನತ್ತ &amp;nbsp;ಹರಿದು ಹೋಗಲಿದೆ. ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಬಿನಿ ಜಲಾಶಯದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ಘೋಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.&lt;/p&gt;&lt;h2&gt;ಮಂಡ್ಯದ ಕೆಆರ್&zwnj;ಎಸ್ ಜಲಾಶಯದಲ್ಲೂ ಒಳಹರಿವು ಭಾರಿ ಏರಿಕೆ&lt;/h2&gt;&lt;p&gt;ಕಾವೇರಿ ಗಲಾಟೆಯ ನಡುವೆಯೇ ಮಂಡ್ಯ ಭಾಗದ ರೈತರಿಗೂ ವರುಣ ಮುನಿಸು ಬಿಟ್ಟು ಹರಸಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ (KRS) ಡ್ಯಾಂಗೆ ಬರುವ ಒಳಹರಿವು 13,522 ಕ್ಯೂಸೆಕ್&zwnj;ಗೆ ಏರಿಕೆಯಾಗಿದೆ.&lt;/p&gt;&lt;p&gt;ಗರಿಷ್ಠ 124.80 ಅಡಿ ಸಾಮರ್ಥ್ಯ ಹೊಂದಿರುವ ಕೆಆರ್&zwnj;ಎಸ್ ಡ್ಯಾಂನ ನೀರಿನ ಮಟ್ಟ ಸದ್ಯ 94.40 ಅಡಿಗೆ ತಲುಪಿದೆ. ಇನ್ನು 49.452 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟಿನಲ್ಲಿ ಪ್ರಸ್ತುತ 18.733 ಟಿಎಂಸಿ ನೀರು ಶೇಖರಣೆಯಾಗಿದೆ. ಸದ್ಯಕ್ಕೆ ಡ್ಯಾಂನಿಂದ ಕೇವಲ 1,565 ಕ್ಯೂಸೆಕ್ ನೀರನ್ನು ಮಾತ್ರ ಹೊರಹರಿಸಲಾಗುತ್ತಿದ್ದು, ಒಳಹರಿವು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಜಿಗಿಯಲಿದೆ.&lt;/p&gt;&lt;h2&gt;ಕೊಡಗಿನ ಹಾರಂಗಿ ಜಲಾಶಯದಲ್ಲೂ ಹೆಚ್ಚಿದ ಜಲವೈಭವ&lt;/h2&gt;&lt;p&gt;ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ಜಲಾಶಯ ಕೂಡ ಭರ್ತಿಯಾಗಿದೆ. ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, &amp;nbsp;ಜಲಾಶಯದ ಮುಂಭಾಗದಲ್ಲಿರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹಾರಂಗಿ ಯಡವನಾಡು ಸೋಮವಾರಪೇಟೆ ಸಂಪರ್ಕ ರಸ್ತೆ ಬಂದ್ ಆಗಿದೆ. &amp;nbsp;ಮೂರು ಅಡಿ ನೀರು ಸೇತುವೆ ಮೇಲೆ ಹರಿಯುತ್ತಿದೆ. ಹಾರಂಗಿ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. &amp;nbsp;ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಾಗಿದ್ದು (8.5 ಟಿಎಂಸಿ ಸಾಮರ್ಥ್ಯ), ಇಂದಿನ ಇತ್ತೀಚಿನ ವರದಿಯ ಪ್ರಕಾರ ನೀರಿನ ಮಟ್ಟ 2857.83 ಅಡಿಗಳಿಗೆ (8.104 ಟಿಎಂಸಿ) ತಲುಪಿದೆ. ಜಲಾಶಯಕ್ಕೆ ಸದ್ಯ 9,896 ಕ್ಯೂಸೆಕ್ ನೀರು ಒಳಹರಿವಾಗಿ ಬರುತ್ತಿದ್ದು, ಅಷ್ಟೇ ವೇಗವಾಗಿ ಅಂದರೆ 10,058 ಕ್ಯೂಸೆಕ್ ನೀರನ್ನು ಹೊರಹರಿವಿನ ಮೂಲಕ ನದಿಗೆ ಹರಿಸಲಾಗುತ್ತಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಹೆಚ್ಚುತ್ತಿರುವ ನೀರಿನ ಸಂಗ್ರಹವು ಕರ್ನಾಟಕದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಕೃತಿಯೇ ಕಾವೇರಿ ಸಂಕಷ್ಟಕ್ಕೆ ಸದ್ಯಕ್ಕೆ ಪರಿಹಾರ ನೀಡುತ್ತಿರುವಂತೆ ಭಾಸವಾಗುತ್ತಿದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv"/>
        </item>
        <item>
            <title><![CDATA[ಕಾವೇರಿ ಕಿಚ್ಚು ಏರಿದ ನಡುವೆ, ನಳನಳಿಸಿದ ಕಬಿನಿ, ಹಾರಂಗಿ ಜಲಾಶಯ!]]></title>
            <link>https://kannada.asianetnews.com/karnataka-districts/kabini-harangi-dam-water-level-rises-cauvery-basin-flood-alert-san/articleshow-5vl1gbv</link>
            <guid isPermaLink="true">https://kannada.asianetnews.com/karnataka-districts/kabini-harangi-dam-water-level-rises-cauvery-basin-flood-alert-san/articleshow-5vl1gbv</guid>
            <pubDate>Sat, 01 Aug 2026 12:14:56 +0530</pubDate>
            <description><![CDATA[&lt;p&gt;ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ ಮತ್ತು ಹಾರಂಗಿ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಇದರಿಂದ ಕಾವೇರಿ ಜಲಾನಯನ ಪ್ರದೇಶದ ರೈತರಲ್ಲಿ ಸಂತಸ ಮೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyy0z7ycqcm85w3fx16jq1vx,imgname-kabini-dam-1785566568396.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು/ಮಡಿಕೇರಿ (ಆ.1): &lt;/strong&gt;ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ಎದ್ದಿದ್ದ &lsquo;ಕಾವೇರಿ ಕಿಚ್ಚು&rsquo; ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿವೆ. ನೆರೆಯ ಕೇರಳದ ವೈನಾಡು ಹಾಗೂ ಕೊಡಗಿನ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಕಬಿನಿ ಹಾಗೂ ಹಾರಂಗಿ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಕೇರಳದ ವೈನಾಡಿನಲ್ಲಿ ಮಳೆರಾಯ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಹರಿಯುವ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಸ್ತುತ ಅಣೆಕಟ್ಟೆಗೆ ಭಾರಿ ಪ್ರಮಾಣದ ನೀರು ತಲುಪುತ್ತಿದ್ದು, ನದಿ ನೀರು ಹಂಚಿಕೆ ಸಂಘರ್ಷದ ನಡುವೆ ಕಾವೇರಿ ಜಲಾನಯನ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.&lt;/p&gt;&lt;h2&gt;&lt;strong&gt;ಕಬಿನಿಯಿಂದ ಕೆಳಭಾಗಕ್ಕೆ ಹರಿಯಲಿದೆ 10 ಸಾವಿರ ಕ್ಯೂಸೆಕ್ ನೀರು!&lt;/strong&gt;&lt;/h2&gt;&lt;p&gt;19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಪ್ರಸ್ತುತ 18 ಟಿಎಂಸಿ ನೀರು ಭರ್ತಿಯಾಗಿದೆ. ಜಲಾಶಯಕ್ಕೆ ಪ್ರಸ್ತುತ 15,500 ಕ್ಯೂಸೆಕ್ ಒಳಹರಿವಿದ್ದು, ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಬಿನಿ ಅಣೆಕಟ್ಟೆಯಿಂದ ನದಿಗೆ 8,000 ದಿಂದ 10,000 ಕ್ಯೂಸೆಕ್ ನೀರನ್ನು ಹೊರಬಿಡಲು ನಿರ್ಧರಿಸಿದ್ದಾರೆ.&lt;/p&gt;&lt;p&gt;ಇತ್ತ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೂ ಹರಿಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಹಾರಂಗಿ ಅಣೆಕಟ್ಟೆಯ ಗರಿಷ್ಠ ಮಟ್ಟ 2,859 ಅಡಿ (8.5 ಟಿಎಂಸಿ) ಇದ್ದು, ಪ್ರಸ್ತುತ ನೀರಿನ ಮಟ್ಟ 2,857.83 ಅಡಿ (8.104 ಟಿಎಂಸಿ) ಗೆ ತಲುಪಿದೆ. ಜಲಾಶಯಕ್ಕೆ 9,896 ಕ್ಯೂಸೆಕ್ ಒಳಹರಿವಿದ್ದು, ಭದ್ರತೆಯ ದೃಷ್ಟಿಯಿಂದ 10,058 ಕ್ಯೂಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ.&lt;/p&gt;&lt;h2&gt;&lt;strong&gt;ಪ್ರವಾಹ ಮುನ್ನೆಚ್ಚರಿಕೆ: ನದಿ ಪಾತ್ರದ ಜನರಿಗೆ ಅಲರ್ಟ್&lt;/strong&gt;&lt;/h2&gt;&lt;p&gt;ಕಬಿನಿ ಮತ್ತು ಹಾರಂಗಿ ಎರಡೂ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಾದರೂ ಹೊರಹರಿವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಪ್ರವಾಹ ಮುನ್ನೆಚ್ಚರಿಕೆ ಪ್ರಕಟಿಸಿದ್ದು, ನದಿ ದಂಡೆಯ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/kabini-harangi-dam-water-level-rises-cauvery-basin-flood-alert-san/articleshow-5vl1gbv"/>
        </item>
        <item>
            <title><![CDATA[2026 Commonwealth Games: ದುರಂತವನ್ನೇ ಸೋಲಿಸಿದ ಶಿಲ್ಪಾ; ಕಾಮನ್‌ವೆಲ್ತ್ ಕನಸು ನನಸು, ರಾಜ್ಯದಿಂದ ಆಯ್ಕೆಯಾದ ಏಕೈಕ ಅಥ್ಲೀಟ್]]></title>
            <link>https://kannada.asianetnews.com/sports/from-tragedy-to-triumph-shilpa-qualifies-as-karnataka-s-lone-athlete-for-2026-commonwealth-games-rav/articleshow-9gr1xq4</link>
            <guid isPermaLink="true">https://kannada.asianetnews.com/sports/from-tragedy-to-triumph-shilpa-qualifies-as-karnataka-s-lone-athlete-for-2026-commonwealth-games-rav/articleshow-9gr1xq4</guid>
            <pubDate>Sun, 26 Jul 2026 08:54:26 +0530</pubDate>
            <description><![CDATA[&lt;p&gt;ನಾಲ್ಕನೇ ವಯಸ್ಸಿನಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡ ಮೈಸೂರಿನ ಕೆ.ಎಸ್. ಶಿಲ್ಪಾ, ಎಲ್ಲಾ ಅಡೆತಡೆಗಳನ್ನು ಮೀರಿ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ. &amp;nbsp;ಇವರು, ಇದೀಗ 2026ರ ಕಾಮನ್&zwnj;ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kye6sjn3w9579nbwjrqdjfvd,imgname-----------------------2026-07-26t084625.506-1785035803299.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚುಂಚನಕಟ್ಟೆ (ಜು.26):&lt;/strong&gt; ನಾಲ್ಕು ವರ್ಷದ ಬಾಲಕಿಯಾಗಿದ್ದಾಗ ಮನೆಯ ಸಮೀಪ ಐಸ್&zwnj;ಕ್ರೀಂ ಖರೀದಿಸಿ ಹಿಂದಿರುಗುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಡಗಾಲನ್ನೇ ಕಳೆದುಕೊಂಡಳು. ಎಲ್ಲರಂತೆ ಈ ಘಟನೆಯನ್ನು ತನ್ನ ಪಾಲಿನ ದೌರ್ಭಾಗ್ಯವೆಂದು ನೆನೆದು ಮನೆಯಲ್ಲೇ ಉಳಿದಿದ್ದರೆ ಇಂದು ಈಕೆ ರಾಷ್ಟ್ರಮಟ್ಟದ ಅಥ್ಲೀಟ್ಆಗಿ ರೂಪುಗೊಳ್ಳುತ್ತಿರಲಿಲ್ಲ. ತನಗೆ ಬಂದೊದಗಿದ ದುರ್ಗತಿಯನ್ನು ಸೂರ್ತಿಯಾಗಿ ಸ್ವೀಕರಿಸಿದ ಮೈಸೂರು ಜಿಲ್ಲೆಯ ಕೆ.ಆರ್&zwnj;. ನಗರ ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ 36 ವರ್ಷದ ಕೆ.ಎಸ್&zwnj;. ಶಿಲ್ಪಾ, ಗೆಳತಿ ನೀಡಿದ ಅಮೂಲ್ಯ ಸಲಹೆಯಂತೆ ವಿಶೇಷ ಚೇತನರಿಗಾಗಿಯೇ ಇರುವ ಕ್ರೀಡಾ ಅಭ್ಯಾಸದಲ್ಲಿ ತೊಡಗಿಸಿಕೊಂಡರು.&lt;/p&gt;&lt;p&gt;ಅವರ ಈ ಪ್ರಾಮಾಣಿಕ ಪ್ರಯತ್ನ ಜು. 23 ರಿಂದ ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆಯಲಿರುವ 2026ರ ಕಾಮನ್&zwnj;ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ತಂದುಕೊಟ್ಟಿದೆ. ಈ ಕ್ರೀಡಾಕೂಟದ ಅಥ್ಲೆಟಿಕ್ಸ್&zwnj; ವಿಭಾಗದಲ್ಲಿ ಸ್ಪರ್ಧಿಸಲು ರಾಜ್ಯದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಇವರಾಗಿದ್ದಾರೆ. ರೈತ ಶೈಲಾ ಹಾಗೂ ಗೃಹಿಣಿ ಶಾಂತಾ ದಂಪತಿ ಪುತ್ರಿಯಾಗಿರುವ ಶಿಲ್ಪಾ, ಗ್ರಾಮೀಣ ವಾತಾವರಣದಲ್ಲೇ ಬೆಳೆದವರು. ಕ್ರೀಡೆಗೆ ಹೆಚ್ಚಿನ ಅವಕಾಶಗಳಿಲ್ಲದ ಪರಿಸ್ಥಿತಿಯಲ್ಲೂ ಸ್ನಾತಕೋತ್ತರ ಪದವಿ ಹಾಗೂ ಬಿಇಡಿ ಪೂರ್ಣಗೊಳಿಸಿ, ಮೈಸೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರತಿದಿನ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪರಿಚಯವಾದ ಗೆಳತಿ ಗೀತಾ ಅವರು ಪ್ಯಾರಾ ಕ್ರೀಡೆಗಳತ್ತ ಶಿಲ್ಪಾ ಅವರನ್ನು ಕರೆದೊಯ್ದರು. 2019ರಲ್ಲಿ ಕ್ರೀಡಾ ಬದುಕಿಗೆ ಮುಖ ಮಾಡಿದರು.&lt;/p&gt;&lt;p&gt;ಆಗ ಅವರಿಗೆ 29 ವರ್ಷ. ಮೊದಲಿಗೆ ಸಿಟ್ಟಿಂಗ್ ವಾಲಿಬಾಲ್&zwnj;ಗೆ ಆಯ್ಕೆ ಮಾಡಿಕೊಂಡ ಅವರು, ಕರ್ನಾಟಕ ತಂಡವನ್ನು ನಾಲ್ಕು ಬಾರಿ ಮುನ್ನಡೆಸಿದರು. ಅವರ ಸಾಮರ್ಥ್ಯವನ್ನು ಗುರುತಿಸಿದ ವಾಲಿಬಾಲ್ ಕೋಚ್ ರಾಘವೇಂದ್ರ, ವೈಯಕ್ತಿಕ ಸ್ಪರ್ಧೆಗಳತ್ತ ಗಮನ ಹರಿಸುವಂತೆ ಸಲಹೆ ನೀಡಿದರು. ಅದರಂತೆ 2023ರಲ್ಲಿ ಶಾಟ್ಪುಟ್, ಡಿಸ್ಕಸ್ಥ್ರೋ ಅಭ್ಯಾಸ ಆರಂಭಿಸಿದರು. ಮೊದಲಿಗೆ ಸ್ವತಃ ಅಭ್ಯಾಸ ಆರಂಭಿಸಿದ ಅವರು, 2024ರಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ಎಸ್&zwnj;.ಡಿ. ಈಶಾನ್ಅವರಿಂದ ತರಬೇತಿ ಪಡೆದರು. ಬಳಿಕ ಸತ್ಯನಾರಾಯಣ ಅವರು ಅಂತಾರಾಷ್ಟ್ರೀಯ ವರ್ಗೀಕರಣ ಪ್ರಕ್ರಿಯೆಯಲ್ಲಿ ನೆರವಾದರು. ಪರಿಣಾಮ 2023ರಲ್ಲಿ ಥಾಯ್ಲೆಂಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆ ಡಿಸ್ಕಸ್ನಲ್ಲಿ ಬೆಳ್ಳಿ ಹಾಗೂ ಜಾವೆಲಿನ್ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಮೊದಲ ಅಂತಾರಾಷ್ಟ್ರೀಯ ಯಶಸ್ಸು ದಾಖಲಿಸಿದರು.&lt;/p&gt;&lt;p&gt;2024ರಲ್ಲಿ ಗೋವಾದ ರಾಷ್ಟ್ರೀಯ ಚಾಂಪಿಯನ್ಷಿಪ್ನ ಶಾಟ್ ಪುಟ್ನಲ್ಲಿ ಮೊದಲ ಪದಕ ಗೆದ್ದರು. 2025ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ಪ್ರಿಕ್ನಲ್ಲಿ ಶಾಟ್ಪುಟ್ನಲ್ಲಿ ಚಿನ್ನದ ಪದಕ ಗೆದ್ದು ಮಹತ್ವದ ಸಾಧನೆ ಮಾಡಿದರು. ಈ ಸಾಧನೆಯ ಬಳಿಕ ಶಿಕ್ಷಕಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಪೂರ್ಣಾವ ಕ್ರೀಡೆಯನ್ನೇ ಆಯ್ಕೆ ಮಾಡಿಕೊಂಡರು. ಆರ್ಥಿಕ ಸಂಕಷ್ಟ ನೀಗಲಿಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದರೂ ಶಿಲ್ಪಾ ಅವರಿಗೆ ಆರ್ಥಿಕ ಸಂಕಷ್ಟ ಇನ್ನೂ ದೊಡ್ಡ ಸವಾಲಾಗಿದೆ. ಯಾವುದೇ ಕಾರ್ಪೊರೇಟ್ ಅಥವಾ ಸಂಸ್ಥೆಗಳ ಪ್ರಾಯೋಜಕತ್ವ ಇಲ್ಲದ ಕಾರಣ, ಅತ್ಯಾಧುನಿಕ ಕ್ರೀಡಾ ಕೃತಕ ಕಾಲಿನ ಬದಲಿಗೆ ಸಾಮಾನ್ಯ ಜೈಪುರ್ಫುಟ್ಬಳಸಿ ತರಬೇತಿ ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.&lt;/p&gt;&lt;p&gt;ಭಾರತವನ್ನು ಪ್ರತಿನಿಸುವುದು ನನ್ನ ಪಾಲಿಗೆ ಹೆಮ್ಮೆಯ ಸಂಗತಿ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವುದೇ ಈಗಿನ ಗುರಿ. ಪ್ಯಾರಾ ಒಲಂಪಿಕ್ಸ್ ಕ್ರೀಡಾಕೂಟಗಳಿಗೆ ಕಾರ್ಪೊರೇಟ್ಸಂಸ್ಥೆಗಳು ಬೆಂಬಲ ನೀಡಬೇಕು. ತರಬೇತಿ ಹಾಗೂ ಸ್ಪರ್ಧೆಗಳ ವೆಚ್ಚ ಭರಿಸುವುದು ಅನೇಕ ಕ್ರೀಡಾಪಟುಗಳಿಗೆ ಕಷ್ಟವಾಗುತ್ತಿದೆ, ಎಂದು ಶಿಲ್ಪಾ ಪತ್ರಿಕೆಗೆ ತಿಳಿಸಿದ್ದಾರೆ.&lt;/p&gt;&lt;p&gt;ಅಪಘಾತದ ಬಳಿಕ ನಮ್ಮ ಕುಟುಂಬಕ್ಕೆ ಭಾರಿ ಆಘಾತವಾಗಿತ್ತು. ಆದರೆ, ಪಾಲಕರು ನನ್ನ ದೊಡ್ಡ ಶಕ್ತಿಯಾಗಿ ನಿಂತರು. ನಾನು ಕಾಲು ಕಳೆದುಕೊಂಡಿದ್ದೇನೆ ಎಂಬ ಕಾರಣಕ್ಕೆ ಎಂದಿಗೂ ವಿಭಿನ್ನವಾಗಿ ನೋಡಲಿಲ್ಲ. ಎಲ್ಲವನ್ನೂ ಆತ್ಮವಿಶ್ವಾಸದಿಂದ ಪ್ರಯತ್ನಿಸು ಎಂದು ಸದಾ ಪ್ರೋತ್ಸಾಹಿಸಿದರು.&lt;/p&gt;&lt;p&gt;- ಶಿಲ್ಪಾ ಕೆ.ಎಸ್&zwnj;., ಪ್ಯಾರಾ ಅಥ್ಲೀಟ್&zwnj;, ಮೈಸೂರು&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/from-tragedy-to-triumph-shilpa-qualifies-as-karnataka-s-lone-athlete-for-2026-commonwealth-games-rav/articleshow-9gr1xq4"/>
        </item>
        <item>
            <title><![CDATA[Karnataka Cabinet expansion today: ಶಾಸಕ ತನ್ವೀರ್‌ ಸೇಠ್‌ಗೆ ಕೈತಪ್ಪಿದ ಸಚಿವ ಸ್ಥಾನ; ಬೆಂಬಲಿಗರಿಂದ ಪ್ರತಿಭಟನೆ]]></title>
            <link>https://kannada.asianetnews.com/politics/karnataka-cabinet-expansion-today-mla-tanveer-sait-missed-post-supporters-protest-in-mysuru-mandya/articleshow-adayd7y</link>
            <guid isPermaLink="true">https://kannada.asianetnews.com/politics/karnataka-cabinet-expansion-today-mla-tanveer-sait-missed-post-supporters-protest-in-mysuru-mandya/articleshow-adayd7y</guid>
            <pubDate>Mon, 03 Aug 2026 15:16:00 +0530</pubDate>
            <description><![CDATA[ಶಾಸಕ ತನ್ವೀರ್ ಸೇಠ್&zwnj;ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮೈಸೂರು ಹಾಗೂ ಮಂಡ್ಯದಲ್ಲಿ ಅವರ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಓರ್ವ ಬೆಂಬಲಿಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಮತ್ತೊಬ್ಬ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz3f0hq3pz93baan1xyfz25e,imgname-----------------------2026-08-03t144000.281-1785749063395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು/ಮಂಡ್ಯ(ಆ.3): &lt;/strong&gt;ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ನೂತನ ಸಚಿವರ ಅಧಿಕೃತ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಸಚಿವ ಸ್ಥಾನ ಸಿಕ್ಕಿದ ನಾಯಕರು ಹರ್ಷ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಸಚಿವ ಸ್ಥಾನ ಕೈತಪ್ಪಿದ ನಾಯಕರ ಬೆಂಬಲಿಗರು ಮುಖ್ಯಮಂತ್ರಿ ಮತ್ತು ಹೈಕಮಾಂಡ್ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;ಶಾಸಕ ತನ್ವೀರ್ ಸೇಠ್ ಬೆಂಬಲಿಗರ ಪ್ರತಿಭಟನೆ&lt;/h2&gt;&lt;p&gt;ಮೈಸೂರಿನ ಎನ್&zwnj;ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಮಂಡ್ಯದಲ್ಲಿ ಬೆಂಬಲಿಗರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್(Manipal hospital junction) ಬಳಿ ರಸ್ತೆ ಮಧ್ಯೆಯೇ ಕುಳಿತು ಪ್ರತಿಭಟನೆ ನಡೆಸಿದ ಬೆಂಬಲಿಗರು ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು. ಈ ವೇಳೆ ಒಬ್ಬ ಬೆಂಬಲಿಗ ತನ್ನ ಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಮುಂದಾಗಿದ್ದು ಪೊಲೀಸರು ಸಮಯಪ್ರಜ್ಞೆ ಮೆರೆದು ಆತನ ಕೈಯಲ್ಲಿದ್ದ ಪೆಟ್ರೋಲ್ ಬಾಟಲಿಯನ್ನು ಕಸಿದುಕೊಂಡು ಅನಾಹುತ ತಪ್ಪಿಸಿದರು.&lt;/p&gt;&lt;h3&gt;ಮಂಡ್ಯದಲ್ಲೂ ರಸ್ತೆ ತಡೆದು ಪ್ರತಿಭಟನೆ&lt;/h3&gt;&lt;p&gt;ಇತ್ತ ಮಂಡ್ಯದಲ್ಲೂ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ತನ್ವೀರ್ ಸೇಠ್ ಸಾಕಷ್ಟು ಶ್ರಮಿಸಿದ್ದಾರೆ. ಆದರೂ ಸಚಿವ ಸ್ಥಾನ ನೀಡದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಿಢೀರ್ ಪ್ರತಿಭಟನೆಯಿಂದ ಮೈಸೂರಿನಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ರಸ್ತೆ ತಡೆ ನಡೆಸುತ್ತಿದ್ದ ತನ್ವೀರ್ ಸೇಠ್ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.&lt;/p&gt;&lt;p&gt;&lt;strong&gt;ವಿಷ ಕುಡಿದ ತನ್ವೀರ್ ಸೇಠ್ ಬೆಂಬಲಿಗ!&lt;/strong&gt;&lt;/p&gt;&lt;p&gt;ಇನ್ನೊಂದೆಡೆ, ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ಮತ್ತೋರ್ವ ಅಭಿಮಾನಿ ವಿಷ ಸೇವಿಸಿ ಆತ್ಮ೧ಹತ್ಯೆಗೆ ಯತ್ನಿಸಿದ್ದು ಆತನಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕ ತನ್ವೀರ್ ಸೇಠ್ ಆಸ್ಪತ್ರೆಗೆ ಭೇಟಿ ನೀಡಿ ಅಭಿಮಾನಿಯ ಆರೋಗ್ಯ ವಿಚಾರಿಸಿದರು.&lt;/p&gt;]]></content:encoded>
            <category>mysore</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/karnataka-cabinet-expansion-today-mla-tanveer-sait-missed-post-supporters-protest-in-mysuru-mandya/articleshow-adayd7y"/>
        </item>
        <item>
            <title><![CDATA[ಕೊಡಗಿನಲ್ಲಿ ಭಾರೀ ಮಳೆ, ಕಾವೇರಿಗೆ ಬಂತು ಜೀವಕಳೆ: 100 ಅಡಿ ಭರ್ತಿಯತ್ತ ಕೆಆರ್‌ಎಸ್ ಜಲಾಶಯ!]]></title>
            <link>https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm</link>
            <guid isPermaLink="true">https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm</guid>
            <pubDate>Sun, 02 Aug 2026 22:05:36 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್&zwnj;ಎಸ್ ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಯ ಸಮೀಪ ತಲುಪಿದೆ. ಪ್ರಸ್ತುತ 31,583 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಈ ಬೆಳವಣಿಗೆಯು ಮಂಡ್ಯ ಮತ್ತು ಮೈಸೂರು ಭಾಗದ ರೈತರಲ್ಲಿ ಮುಂಗಾರು ಬೆಳೆಗೆ ನೀರಿನ ಭರವಸೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz1n6y1epybamt47k40a8qf3,imgname-mandya-krs-dam-1785688455214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.02): ಕ&lt;/strong&gt;ನ್ನಡ ನಾಡಿನ ಜೀವನಾಡಿ ಕಾವೇರಿ (Cauvery) ಮತ್ತೊಮ್ಮೆ ಕನ್ನಡಿಗರ ನಿರೀಕ್ಷೆ ಉಳಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Catchment) ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ (Heavy Rain) ಪರಿಣಾಮ ಮಂಡ್ಯ (Mandya) ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆ (KRS Dam) ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ.&lt;/p&gt;&lt;p&gt;ಭಾನುವಾರ ಲಭ್ಯವಾದ ಮಾಹಿತಿಯ ಪ್ರಕಾರ, ಕೆಆರ್&zwnj;ಎಸ್ ಅಣೆಕಟ್ಟೆಯಲ್ಲಿ 98.80 ಅಡಿ ನೀರು ಸಂಗ್ರಹವಾಗಿದ್ದು, ಬೆಳಗಿನ ವೇಳೆಗೆ 100 ಅಡಿ ಗಡಿ ತಲುಪುವ ಸಾಧ್ಯತೆ ಇದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಇನ್ನೂ 26.80 ಅಡಿ ನೀರು ತುಂಬಬೇಕಿದೆ. ಪ್ರಸ್ತುತ ಡ್ಯಾಂಗೆ 31,583 ಕ್ಯೂಸೆಕ್ (Cusecs) ನೀರು ಒಳಹರಿವು ದಾಖಲಾಗುತ್ತಿದೆ. ಇನ್ನೊಂದೆಡೆ 1,819 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಒಳಹರಿವು ಹೆಚ್ಚುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ವೇಗವಾಗಿ ಏರಿಕೆಯಾಗುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;22 ಟಿಎಂಸಿ ನೀರು ಸಂಗ್ರಹ&lt;/strong&gt;&lt;/h2&gt;&lt;p&gt;ಸದ್ಯ ಕೆಆರ್&zwnj;ಎಸ್ ಅಣೆಕಟ್ಟೆಯಲ್ಲಿ 21.885 ಟಿಎಂಸಿ (TMC) ನೀರು ಸಂಗ್ರಹವಾಗಿದೆ. ಡ್ಯಾಂನ ಒಟ್ಟು ಗರಿಷ್ಠ ಸಾಮರ್ಥ್ಯ 49.452 ಟಿಎಂಸಿ ಆಗಿದೆ. ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇದೇ ರೀತಿ ಮುಂದುವರಿದರೆ, ಆಗಸ್ಟ್ ತಿಂಗಳಲ್ಲೇ ಅಣೆಕಟ್ಟೆ ಗಣನೀಯ ಮಟ್ಟಕ್ಕೆ ಭರ್ತಿಯಾಗುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ (Irrigation Department) ಮೂಲಗಳು ಅಂದಾಜಿಸಿವೆ.&lt;/p&gt;&lt;p&gt;ಕೆಆರ್&zwnj;ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಿಂದ ಮಂಡ್ಯ, ಮೈಸೂರು (Mysuru) ಸೇರಿದಂತೆ ಕಾವೇರಿ ನೀರಾವರಿ ಪ್ರದೇಶದ (Cauvery Irrigation Region) ರೈತರಲ್ಲಿ ಸಂತಸ ಮನೆ ಮಾಡಿದೆ. ಮುಂಗಾರು (Monsoon) ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;ಕೆಆರ್&zwnj;ಎಸ್ (KRS Dam) ಇಂದಿನ ಪ್ರಮುಖ ಅಂಕಿಅಂಶಗಳು&lt;/strong&gt;&lt;/h2&gt;&lt;ul&gt; &lt;li&gt;ಗರಿಷ್ಠ ಮಟ್ಟ (Maximum Level): 124.80 ಅಡಿ&lt;/li&gt; &lt;li&gt;ಇಂದಿನ ನೀರಿನ ಮಟ್ಟ (Current Water Level): 98.80 ಅಡಿ&lt;/li&gt; &lt;li&gt;ಒಳಹರಿವು (Inflow): 31,583 ಕ್ಯೂಸೆಕ್&lt;/li&gt; &lt;li&gt;ಹೊರಹರಿವು (Outflow): 1,819 ಕ್ಯೂಸೆಕ್&lt;/li&gt; &lt;li&gt;ಗರಿಷ್ಠ ಸಂಗ್ರಹ ಸಾಮರ್ಥ್ಯ (Maximum Storage): 49.452 ಟಿಎಂಸಿ&lt;/li&gt; &lt;li&gt;ಇಂದಿನ ನೀರಿನ ಸಂಗ್ರಹ (Current Storage): 21.885 ಟಿಎಂಸಿ&lt;/li&gt; &lt;li&gt;ಭರ್ತಿಗೆ ಬಾಕಿ (Balance to Full Reservoir Level): 26.80 ಅಡಿ&lt;/li&gt;&lt;/ul&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm"/>
        </item>
        <item>
            <title><![CDATA[ಮೈಸೂರಿನ 'ಚಿನ್ನದ ಹುಡುಗಿ'ಯ ಕಂಚಿನ ಸಾಧನೆ!  ಬಾಲ್ಯದ ಕಷ್ಟಗಳನ್ನು ಮೆಟ್ಟಿ ನಿಂತು ಕಾಮನ್‌ವೆಲ್ತ್‌ನಲ್ಲಿ ಇತಿಹಾಸ ಬರೆದ ಎಸ್.ಕೆ. ಶಿಲ್ಪಾ!]]></title>
            <link>https://kannada.asianetnews.com/sports/mysuru-sk-shilpa-bronze-commonwealth-games-history/articleshow-f0mp99o</link>
            <guid isPermaLink="true">https://kannada.asianetnews.com/sports/mysuru-sk-shilpa-bronze-commonwealth-games-history/articleshow-f0mp99o</guid>
            <pubDate>Tue, 28 Jul 2026 22:56:29 +0530</pubDate>
            <description><![CDATA[ಮೈಸೂರಿನ ಶ್ಕೆ. ಎಸ್. ಶಿಲ್ಪಾ ಅವರು ಕಾಮನ್&zwnj;ವೆಲ್ತ್ ಕ್ರೀಡಾಕೂಟ-2026ರ F57 ಶಾಟ್&zwnj;ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಬಾಲ್ಯದ ದೈಹಿಕ ಹಾಗೂ ಸಾಮಾಜಿಕ ಸವಾಲುಗಳನ್ನು ಮೀರಿ ಅವರು ಮಾಡಿದ ಈ ಸಾಧನೆಯು, ನಾಡಿನ ಯುವಜನತೆಗೆ ಮತ್ತು ವಿಕಲಚೇತನರಿಗೆ ಬಹುದೊಡ್ಡ ಸ್ಫೂರ್ತಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kymw5v58kr4wbphn7ktdb4bw,imgname-shilpa--1785259551912.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಮನ್&zwnj;ವೆಲ್ತ್ ಕ್ರೀಡಾಕೂಟ-2026ರ ಮಹಿಳೆಯರ F57 ಶಾಟ್&zwnj;ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ಮಗಳು ಶ್ಕೆ. ಎಸ್. ಶಿಲ್ಪಾ ಭಾರತ ಹಾಗೂ ಕರ್ನಾಟಕದ ಕೀರ್ತಿಪತಾಕೆಯನ್ನು ಜಗತ್ತಿನಾದ್ಯಂತ ಹಾರಿಸಿದ್ದಾರೆ.&amp;nbsp;&lt;/p&gt;&lt;h2&gt;&lt;strong&gt;ಸಾಮಾಜಿಕ ಸವಾಲುಗಳಿಗೆ ಸೆಡ್ಡು ಹೊಡೆದ ಶಿಲ್ಪಾ!&lt;/strong&gt;&lt;/h2&gt;&lt;p&gt;ಬಾಲ್ಯದಲ್ಲೇ ಎದುರಾದ ದೈಹಿಕ ಹಾಗೂ ಸಾಮಾಜಿಕ ಸವಾಲುಗಳನ್ನು ಲೆಕ್ಕಿಸದೆ, ಅಚಲ ಆತ್ಮವಿಶ್ವಾಸ, ದೃಢಸಂಕಲ್ಪ ಮತ್ತು ಅವಿರತ ಪರಿಶ್ರಮದಿಂದ ಮೈದಾನಕ್ಕಿಳಿದ ಶಿಲ್ಪಾ, ಇಂದು ಇಡೀ ಕನ್ನಡಿಗರು ಹೆಮ್ಮೆಪಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅವರ ಈ ಹೋರಾಟದ ಮನೋಭಾವ ಮತ್ತು ಸೋಲೊಪ್ಪದ ಛಲವು ನಾಡಿನ ಕೋಟ್ಯಂತರ ಯುವಜನತೆಗೆ ಹಾಗೂ ವಿಕಲಚೇತನರಿಗೆ ಬಹುದೊಡ್ಡ ಸ್ಫೂರ್ತಿಯಾಗಿದೆ.&lt;/p&gt;&lt;h3&gt;&lt;strong&gt;ಜಾಗತಿಕ ವೇದಿಕೆಯಲ್ಲಿ ಕನ್ನಡದ ಮೆರುಗು!&lt;/strong&gt;&lt;/h3&gt;&lt;p&gt;ಕನ್ನಡ ಮಣ್ಣಿನ ಗುಣವಾದ 'ಛಲ' ಮತ್ತು 'ಸಾಧನೆ'ಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿ, ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿದಿರುವ ಮೈಸೂರಿನ ಈ ಕುವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಪದಕಗಳನ್ನು ಗೆದ್ದು ಭಾರತ ಹಾಗೂ ನಮ್ಮ ಹೆಮ್ಮೆಯ ಕರ್ನಾಟಕಕ್ಕೆ ಮತ್ತಷ್ಟು ಕೀರ್ತಿ ತಂದುಕೊಡಲಿ ಎಂದು ಹಾರೈಸೋಣ ಎಂದು ಸಂಸದ ಬಿ.ವೈ.ವಿಜಯೇಂದ್ರ ಅವರು ಶುಭ ಹಾರೈಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/sports/mysuru-sk-shilpa-bronze-commonwealth-games-history/articleshow-f0mp99o"/>
        </item>
        <item>
            <title><![CDATA[Karnataka Bandh: ಕಾವೇರಿ ನೀರಿಗಾಗಿ ಮತ್ತೆ ಹೋರಾಟ 13ರಂದು ಕರ್ನಾಟಕ ಬಂದ್ ಫಿಕ್ಸ್, ವಾಪಸ್ ಮಾತೇ ಇಲ್ಲ: ವಾಟಾಳ್]]></title>
            <link>https://kannada.asianetnews.com/state/cauvery-water-dispute-karnataka-bandh-on-aug-13-pro-kannadiga-vatal-nagaraj-stats-rav/articleshow-guawlkr</link>
            <guid isPermaLink="true">https://kannada.asianetnews.com/state/cauvery-water-dispute-karnataka-bandh-on-aug-13-pro-kannadiga-vatal-nagaraj-stats-rav/articleshow-guawlkr</guid>
            <pubDate>Mon, 03 Aug 2026 07:32:57 +0530</pubDate>
            <description><![CDATA[&lt;p&gt;ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದನ್ನು ವಿರೋಧಿಸಿ ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ರಾಜ್ಯ ಸರ್ಕಾರದ ವಿರುದ್ಧ ರೈತರು ಮತ್ತು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕ ಬಂದ್&zwnj;ಗೆ ಕರೆ ನೀಡಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz2ndex4v1jctg429y4qvs2b,imgname-----------------------2026-08-03t072618.123-1785722223524.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.3): &lt;/strong&gt;ತಮಿಳುನಾಡಿಗೆ ನೀರು ಹರಿಸಿರುವುದನ್ನು ವಿರೋಧಿಸಿ ಭಾನುವಾರವೂ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದವು.&lt;/p&gt;&lt;p&gt;ಮಂಡ್ಯದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ, ಕನ್ನಡಪರ ಸಂಘಟನೆಗಳು ಹಾಗೂ ಎಂ.ಎಂ.ಫೌಂಡೇಷನ್&zwnj; ಪದಾಧಿಕಾರಿಗಳಿಂದ ಪ್ರತಿಭಟನೆಗಳು ನಡೆದವು. ನೀರು ಬಿಡುವುದಿಲ್ಲವೆಂದು ಮಾತು ಕೊಟ್ಟಿದ್ದ ರಾಜ್ಯ ಸರ್ಕಾರ ಇದೀಗ ಮಾತಿಗೆ ತಪ್ಪಿದೆ. ಸರ್ವಪಕ್ಷ ಸಭೆಗೆ ಮುನ್ನವೇ ತಮಿಳುನಾಡಿಗೆ ನೀರು ಹರಿಸಲಾರಂಭಿಸಿದೆ. ಹಾಗಿದ್ದ ಮೇಲೆ ಸರ್ವಪಕ್ಷ ಸಭೆ ಕರೆಯುವ ಅಗತ್ಯವೇನಿತ್ತು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.&lt;/p&gt;&lt;p&gt;ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕುಂಬಾರರ ಜಾಗೃತಿ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಹಾಗೂ ಕರುನಾಡ ಸೇವಕರ ಸಂಘಟನೆಯ ಕಾರ್ಯಕರ್ತರು ಒಗ್ಗೂಡಿ ಖಾಲಿ ಮಡಿಕೆ ಪ್ರದರ್ಶಿಸುವುದರ ಮೂಲಕ ಪ್ರತಿಭಟಿಸಿದರು. ರಸ್ತೆ ತಡೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಷನ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ರೈತರಿಗೆ ಕುಣಿಕೆಯಾಗಿ ಎಳೆಯುವ ವಿಡಂಬನಾತ್ಮಕ ಅಣಕು ಪ್ರದರ್ಶನ ಮಾಡಿ, ಕಪ್ಪುಪಟ್ಟಿ ಧರಿಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮದ್ದೂರು ತಾಲೂಕಿನ ಮದ್ದೂರಿನ ಬೆಸಗರಹಳ್ಳಿ, ಕೊಪ್ಪಗಳಲ್ಲಿ ರೈತ ಸಂಘದ ಪುಟ್ಟಣ್ಣಯ್ಯ ಬಣದಿಂದ ರಸ್ತೆ ತಡೆ ನಡೆಸಲಾಯಿತು.&lt;/p&gt;&lt;p&gt;ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ, ಅವರು ರಾಮನಗರದ ಸಾರಿಗೆ ಬಸ್ ನಿಲ್ದಾಣದ ಫ್ಲಾಟ್ ಫಾರ್ಮ್&zwnj;ನಲ್ಲಿ ಮೇಕೆಗಳೊಂದಿಗೆ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಮೈಸೂರಿನಲ್ಲಿ ಕನ್ನಡ ಕ್ರಿಯಾ ಸಮಿತಿಯವರು ನಗರದ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಸಿದರು. ಇದೇ ವೇಳೆ, ಹಾಸನ ಸೇರಿ ಕಾವೇರಿ ಕೊಳ್ಳದ ಇತರೆಡೆಯೂ ಪ್ರತಿಭಟನೆಗಳು ನಡೆದವು.&lt;/p&gt;&lt;h2&gt;ಆ.13ರಂದು ಕರ್ನಾಟಕ ಬಂದ್&lt;/h2&gt;&lt;p&gt;ಮೈಸೂರು: ಆ.13ರಂದು ಕರ್ನಾಟಕ ಬಂದ್ ಫಿಕ್ಸ್, ಬಂದ್ ವಾಪಸ್ ಪಡೆಯುವ ಮಾತೇ ಇಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಗ್ರ ಕನ್ನಡಿಗರ ಪರವಾಗಿ ಬಂದ್&zwnj;ಗೆ ಕರೆ ಕೊಟ್ಟಿದ್ದೇವೆ.&lt;/p&gt;&lt;p&gt;ಕಾವೇರಿ ನೀರು ಒಂದೇ ವಿಚಾರ ಅಲ್ಲ. ಗಡಿ ಸಮಸ್ಯೆ, ಯುವಕರಿಗೆ ಉದ್ಯೋಗ, ಮೈಸೂರಿನ ಸಮಗ್ರ ಅಭಿವೃದ್ಧಿ, ಕಾವೇರಿ ನೀರು ಹಂಚಿಕೆ ವಿಚಾರ, ಬೆಳಗಾವಿ ಎಂಇಎಸ್ ಪುಂಡಾಟ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಬಂದ್ ಕರೆ ಕೊಟ್ಟಿದ್ದೇವೆ ಎಂದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಂದ್ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದ್ದಾರೆ.&lt;/p&gt;&lt;h3&gt;ಯಾವುದೇ ಬಂದ್ ವಾಪಸ್ ಪಡೆಯೊಲ್ಲ:&lt;/h3&gt;&lt;p&gt;ನಾವು ಯಾವುದೇ ಕಾರಣಕ್ಕೂ ಬಂದ್ ವಾಪಸ್ ಪಡೆಯುವುದಿಲ್ಲ. ಈಗಾಗಲೇ ದಿನಾಂಕವನ್ನೂ ನಿಗದಿ ಮಾಡಲಾಗಿದೆ. ಆ.13ರಂದು ಅಖಂಡ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಅವರು ತಿಳಿಸಿದರು.&lt;/p&gt;]]></content:encoded>
            <category>mysore</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cauvery-water-dispute-karnataka-bandh-on-aug-13-pro-kannadiga-vatal-nagaraj-stats-rav/articleshow-guawlkr"/>
        </item>
        <item>
            <title><![CDATA[ಮೈಸೂರು ಮಹಾರಾಜರಿಗೆ ಸಂತಾನ ಭಾಗ್ಯ ಕರುಣಿಸಿದ್ದ ಆ ಸ್ವಾಮಿಗಳು; ಕರ್ನಾಟಕದಲ್ಲಿ ಅವರ ಆಶ್ರಮ ಎಲ್ಲಿದೆ?]]></title>
            <link>https://kannada.asianetnews.com/karnataka-districts/mysore-maharaja-blessed-with-child-saint-sridhar-swami-ashram-karnataka-suh/articleshow-h0gb5yh</link>
            <guid isPermaLink="true">https://kannada.asianetnews.com/karnataka-districts/mysore-maharaja-blessed-with-child-saint-sridhar-swami-ashram-karnataka-suh/articleshow-h0gb5yh</guid>
            <pubDate>Fri, 31 Jul 2026 13:04:39 +0530</pubDate>
            <description><![CDATA[&lt;p&gt;ಈ ಸ್ಥಳ ಇಂದು ಸಾವಿರಾರು ಭಕ್ತರ ಪಾಲಿಗೆ ಪವಿತ್ರ ಕ್ಷೇತ್ರವಾಗಿದೆ. ಆಶ್ರಮಕ್ಕೆ ಭೇಟಿ ನೀಡುವ ಭಕ್ತರನ್ನು ವಿಶೇಷವಾಗಿ ಸೆಳೆಯುವುದು ಇಲ್ಲಿನ ಪವಿತ್ರ ತೀರ್ಥ ಮತ್ತು ಜಲಧಾರೆ. ಅಂದು ನೀರಿನ ಸೌಲಭ್ಯವೇ ಇಲ್ಲದಿದ್ದ ಈ ಪ್ರದೇಶದಲ್ಲಿ ಭಕ್ತರ ಕಷ್ಟವನ್ನು ನಿವಾರಿಸುವ ಉದ್ದೇಶದಿಂದ ಸ್ವಾಮಿಗಳು ಈ ತೀರ್ಥವನ್ನು ಸೃಷ್ಟಿಸಿದರು ಎಂದು ಭಕ್ತರು ನಂಬುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvhh6rt7t9bewcfzvc4d4tz,imgname-mysore-raja-1785483270938.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಮೀಪದಲ್ಲಿರುವ ವರದಪುರ (ವರದಹಳ್ಳಿ) ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. ಸಮರ್ಥ ರಾಮದಾಸರ ಪರಂಪರೆಯ ಪರಮ ಪೂಜ್ಯ ಶ್ರೀ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಈ ಸ್ಥಳ ಇಂದು ಸಾವಿರಾರು ಭಕ್ತರ ಪಾಲಿಗೆ ಪವಿತ್ರ ಕ್ಷೇತ್ರವಾಗಿದೆ. ಆಶ್ರಮಕ್ಕೆ ಭೇಟಿ ನೀಡುವ ಭಕ್ತರನ್ನು ವಿಶೇಷವಾಗಿ ಸೆಳೆಯುವುದು ಇಲ್ಲಿನ ಪವಿತ್ರ ತೀರ್ಥ ಮತ್ತು ಜಲಧಾರೆ. ಶ್ರೀಧರ ಸ್ವಾಮಿಗಳೇ ಸ್ವತಃ ತಮ್ಮ ಹಸ್ತದಿಂದ ಮಣ್ಣನ್ನು ಬಗೆದು ಈ ಜಲಧಾರೆಯನ್ನು ಉದ್ಭವಗೊಳಿಸಿದರು ಎಂಬ ಐತಿಹ್ಯವಿದೆ. ಅಂದು ನೀರಿನ ಸೌಲಭ್ಯವೇ ಇಲ್ಲದಿದ್ದ ಈ ಪ್ರದೇಶದಲ್ಲಿ ಭಕ್ತರ ಕಷ್ಟವನ್ನು ನಿವಾರಿಸುವ ಉದ್ದೇಶದಿಂದ ಸ್ವಾಮಿಗಳು ಈ ತೀರ್ಥವನ್ನು ಸೃಷ್ಟಿಸಿದರು ಎಂದು ಭಕ್ತರು ನಂಬುತ್ತಾರೆ.&lt;/p&gt;&lt;h2&gt;365 ದಿನವೂ ಹರಿಯುವ ಜಲಧಾರೆ&lt;/h2&gt;&lt;p&gt;ವರದಪುರದ ಈ ಪವಿತ್ರ ತೀರ್ಥವು ವರ್ಷದ 365 ದಿನವೂ ನಿರಂತರವಾಗಿ ಹರಿಯುತ್ತದೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ. ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ತೀರ್ಥಸ್ನಾನ ಮಾಡುತ್ತಾರೆ. ಕೆಲವರು ಈ ಪವಿತ್ರ ನೀರನ್ನು ಲೀಟರ್&zwnj;ಗಟ್ಟಲೆ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ. ಈ ತೀರ್ಥದ ನೀರನ್ನು ಹಲವು ವರ್ಷಗಳ ಕಾಲ ಇಟ್ಟರೂ ಹಾಳಾಗುವುದಿಲ್ಲ ಎಂಬ ನಂಬಿಕೆಯೂ ಭಕ್ತರಲ್ಲಿ ಇದೆ. ಕೆಲವರು 40ರಿಂದ 50 ವರ್ಷಗಳ ಕಾಲ ಸಂಗ್ರಹಿಸಿಟ್ಟರೂ ನೀರು ಶುದ್ಧವಾಗಿಯೇ ಉಳಿದಿದೆ ಎಂದು ಹೇಳುತ್ತಾರೆ.&lt;/p&gt;&lt;h2&gt;ತೀರ್ಥಸ್ನಾನ ಮಾಡಿದರೆ ಕಷ್ಟಗಳು ದೂರವಾಗುತ್ತವೆಯೇ?&lt;/h2&gt;&lt;p&gt;ವರದಪುರದ ತೀರ್ಥಕ್ಕೆ ವಿಶೇಷ ಆಧ್ಯಾತ್ಮಿಕ ಶಕ್ತಿ ಇದೆ ಎಂಬ ನಂಬಿಕೆ ಭಕ್ತರಲ್ಲಿದೆ. ಜೀವನದಲ್ಲಿ ಕಷ್ಟ-ನಷ್ಟಗಳನ್ನು ಎದುರಿಸುತ್ತಿರುವವರು, ಅನಾರೋಗ್ಯ ಅಥವಾ ಮಾನಸಿಕ ಸಂಕಷ್ಟಗಳಿಂದ ಬಳಲುತ್ತಿರುವವರು ನಂಬಿಕೆಯಿಂದ ಇಲ್ಲಿಗೆ ಬಂದು ತೀರ್ಥಸ್ನಾನ ಹಾಗೂ ತೀರ್ಥ ಸೇವನೆ ಮಾಡಿದರೆ ತಮ್ಮ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎಂದು ಅನೇಕ ಭಕ್ತರು ನಂಬುತ್ತಾರೆ. ಆದರೆ ಇವು ಭಕ್ತರ ನಂಬಿಕೆ ಮತ್ತು ಸ್ಥಳೀಯ ಐತಿಹ್ಯಗಳಿಗೆ ಸಂಬಂಧಿಸಿದ ವಿಚಾರಗಳಾಗಿದ್ದು, ವೈದ್ಯಕೀಯ ಸಮಸ್ಯೆಗಳಿಗೆ ವೈದ್ಯರ ಸಲಹೆಯನ್ನು ಪಡೆಯುವುದು ಅಗತ್ಯ.&lt;/p&gt;&lt;h2&gt;ಮೈಸೂರು ಮಹಾರಾಜರ ವಂಶಕ್ಕೂ ಶ್ರೀಧರ ಸ್ವಾಮಿಗಳ ಆಶೀರ್ವಾದ?&lt;/h2&gt;&lt;p&gt;ಶ್ರೀಧರ ಸ್ವಾಮಿಗಳ ಕುರಿತಾಗಿ ಹಲವು ಐತಿಹ್ಯಗಳು ಇಂದಿಗೂ ಪ್ರಚಲಿತದಲ್ಲಿವೆ. ಮೈಸೂರು ಮಹಾರಾಜರ ಪರಂಪರೆಯ ಶ್ರೀಕಂಠದತ್ತ ಒಡೆಯರ್ ಅವರ ಜನನದ ಹಿಂದೆಯೂ ಶ್ರೀಧರ ಸ್ವಾಮಿಗಳ ಅನುಗ್ರಹ ಮತ್ತು ಮಂತ್ರಾಕ್ಷತೆಯ ಆಶೀರ್ವಾದವಿತ್ತು ಎಂಬ ನಂಬಿಕೆ ಭಕ್ತರಲ್ಲಿ ಇದೆ. ಇದೇ ರೀತಿ ಬೆಂಗಳೂರಿನ ವಿಧಾನಸೌಧ ನಿರ್ಮಾಣದ ಸಂದರ್ಭದಲ್ಲಿ ಎದುರಾದ ಕೆಲವು ತೊಂದರೆಗಳ ನಿವಾರಣೆಗೆ ಶ್ರೀಧರ ಸ್ವಾಮಿಗಳು ನೀಡಿದ ಮಂತ್ರಾಕ್ಷತೆಯನ್ನು ವಿಧಾನಸೌಧದ ಪಾಯದಲ್ಲಿ ಹಾಕಲಾಗಿತ್ತು ಎಂಬ ಐತಿಹ್ಯವೂ ಪ್ರಸಿದ್ಧವಾಗಿದೆ.&lt;/p&gt;&lt;h2&gt;ದುಡ್ಡು ಪಡೆದು ಪೂಜೆ ಮಾಡಿಸುವುದಿಲ್ಲ&lt;/h2&gt;&lt;p&gt;ವರದಪುರ ಆಶ್ರಮದ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ವಾಣಿಜ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದಿಲ್ಲ ಎಂಬುದು. ಭಕ್ತರಿಂದ ಹಣ ಕೇಳುವುದಿಲ್ಲ, ಹಣ ಪಡೆದು ವಿಶೇಷ ಪೂಜೆ ಮಾಡಿಸುವುದಿಲ್ಲ ಮತ್ತು ಯಾರ ಪರವಾಗಿಯೂ ಪ್ರಾರ್ಥನೆ ಮಾಡುವುದಿಲ್ಲ ಎಂಬುದು ಆಶ್ರಮದ ಪರಂಪರೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಭಕ್ತರು ತೀರ್ಥಸ್ನಾನ ಮಾಡಿ, ಶ್ರೀಧರ ಸ್ವಾಮಿಗಳ ಸನ್ನಿಧಿಯಲ್ಲಿ ತಾವೇ ಸ್ವತಃ ಪ್ರಾರ್ಥನೆ ಸಲ್ಲಿಸಬಹುದು.&lt;/p&gt;&lt;h2&gt;ಪ್ರತಿದಿನವೂ ಅನ್ನದಾನ, ನೂರಾರು ಗೋವುಗಳ ರಕ್ಷಣೆ&lt;/h2&gt;&lt;p&gt;ವರದಪುರದಲ್ಲಿ ಪ್ರತಿದಿನವೂ ಭಕ್ತರಿಗೆ ಉಚಿತ ಅನ್ನದಾನ ನಡೆಯುತ್ತದೆ. ಯಾವುದೇ ಭೇದಭಾವವಿಲ್ಲದೆ ಇಲ್ಲಿಗೆ ಬರುವ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಇದರ ಜೊತೆಗೆ ಶ್ರೀಧರ ಸ್ವಾಮಿಗಳ ಕಾಲದಿಂದಲೂ ಗೋಸೇವೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಶ್ರಮದ ಗೋಶಾಲೆಯಲ್ಲಿ ನೂರಾರು ಗೋವುಗಳ ರಕ್ಷಣೆ ಮತ್ತು ಪೋಷಣೆ ನಡೆಯುತ್ತಿದೆ.&lt;/p&gt;&lt;h2&gt;ಎಲ್ಲಿದೆ ಈ ಪುಣ್ಯಕ್ಷೇತ್ರ?&lt;/h2&gt;&lt;p&gt;ಶ್ರೀ ಕ್ಷೇತ್ರ ವರದಪುರ (ವರದಹಳ್ಳಿ) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಮೀಪದಲ್ಲಿದೆ. ಸಾಗರ ನಗರದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರಕ್ಕೆ ರಸ್ತೆ ಮಾರ್ಗದ ಮೂಲಕ ತಲುಪಬಹುದು.&lt;/p&gt;&lt;p&gt;ಬೆಂಗಳೂರು ಅಥವಾ ಶಿವಮೊಗ್ಗದ ಕಡೆಯಿಂದ ಬರುವವರು ಮೊದಲು ಸಾಗರ ನಗರ ತಲುಪಿ, ಅಲ್ಲಿಂದ ವರದಪುರಕ್ಕೆ ಖಾಸಗಿ ವಾಹನ ಅಥವಾ ಬಸ್ ಮೂಲಕ ಪ್ರಯಾಣಿಸಬಹುದು.nಆಧ್ಯಾತ್ಮಿಕ ಶಾಂತಿ, ಪವಿತ್ರ ತೀರ್ಥ, ಅನ್ನದಾನ ಮತ್ತು ಶ್ರೀಧರ ಸ್ವಾಮಿಗಳ ಸ್ಮರಣೆಯೊಂದಿಗೆ ಭಕ್ತರನ್ನು ಸೆಳೆಯುತ್ತಿರುವ ವರದಪುರ ಇಂದು ಕರ್ನಾಟಕದ ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಲ್ಲಿ ನಡೆಯುವ ಪವಾಡಗಳು ಮತ್ತು ತೀರ್ಥದ ಮಹತ್ವದ ಕುರಿತ ಹಲವು ನಂಬಿಕೆಗಳು ಭಕ್ತರ ನಡುವೆ ಇಂದಿಗೂ ಜೀವಂತವಾಗಿವೆ.&lt;/p&gt;]]></content:encoded>
            <category>mysore</category>
            <dc:creator>Sushma Hegde</dc:creator>
            <atom:link href="https://kannada.asianetnews.com/karnataka-districts/mysore-maharaja-blessed-with-child-saint-sridhar-swami-ashram-karnataka-suh/articleshow-h0gb5yh"/>
        </item>
        <item>
            <title><![CDATA[ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ, ವಿವೇಕ ಸ್ಮಾರಕ ಉದ್ಘಾಟಿಸಿ ಮೋದಿ ಭಾಷಣ]]></title>
            <link>https://kannada.asianetnews.com/karnataka-districts/india-glorious-heritage-lives-in-every-corner-of-mysuru-says-pm-modi/articleshow-hfs7v7m</link>
            <guid isPermaLink="true">https://kannada.asianetnews.com/karnataka-districts/india-glorious-heritage-lives-in-every-corner-of-mysuru-says-pm-modi/articleshow-hfs7v7m</guid>
            <pubDate>Sat, 01 Aug 2026 18:00:55 +0530</pubDate>
            <description><![CDATA[&lt;p&gt;ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ ಎಂದಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyymnw7eb3ck52w8b1z88c3x,imgname-pm-modi-1785587233004.png" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು (ಆ.01) ಭಾರತದ ಅರ್ಥ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ. ಭಾರತದ ಯುವ ಶಕ್ತಿಯಿಂದ ಇದು ಸಾಧ್ಯವಾಗಿದೆ. ಇಂದು ಭಾರತ ವಿಶ್ವದ ಮೂರನೇ ಅತೀ ದೊಡ್ಡ ಸ್ಟಾರ್ಟ್ಅಪ್ ವ್ಯವಸ್ಥೆಯಾಗಿದೆ.ಇದರ ಹಿಂದೆ ಯವ ಶಕ್ತಿ ಇದೆ. ಇಂದು ಭಾರತ ಅತೀ ದೊಡ್ಡ ಮೊಬೈಲ್ ರಫ್ತು ದೇಶವಾಗಿದೆ. ಇದರ ಹಿಂದೆ ಯುವ ಶಕ್ತಿ ಕಾರಣವಾಗಿದೆ. ಭಾರತದ ಯುವಕರ ಸಾಮರ್ಥ್ಯದಿಂದ ಸೆಮಿಕಂಡಕ್ಟರ್, ಎಐ, ತಂತ್ರಜ್ಞಾನ, ಸಂಶೋಧನೆಯಲ್ಲಿ ಹೊಸ ಅಧ್ಯಾಯ ನಿರ್ಮಾಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಯುವ ಶಕ್ತಿಯಿಂದ ಭಾರತ ಕಂಗೊಳಿಸುತ್ತಿದೆ ಎಂದು ಯುವ ಸಮೂಹದ ಶಕ್ತಿ ಪ್ರದರ್ಶನ ಮಾಡಿದ್ದಾರೆ.&lt;/p&gt;&lt;p&gt;ರಾಮಕೃಷ್ಣ ಆಶ್ರಮದ ವಿದ್ಯಾ ಶಾಲೆ ವೇದಿಕೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ ಸಾರ್ವಜನಿಕರನ್ನುದ್ದೇಶಿಸಿ ಕನ್ನಡದಲ್ಲೇ ಮಾತು ಆರಂಭಿಸಿದರು. ಮೈಸೂರು ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪ್ರಮಾಣ ಸಲ್ಲಿಸಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ನನ್ನ ಯಾತ್ರೆ ಆರಂಭ ಹಾಗೂ ಇಂದು ನಾನು ಯಾವ ಸ್ಥಾನದಲ್ಲಿದ್ದೇನೆ ಅನ್ನೋದರ ಹಿಂದೆ ರಾಮಕೃಷ್ಣ ಮಠದ ಯೋಗದಾನವಿದೆ ಎಂದು ಮೋದಿ ಹೇಳಿದ್ದಾರೆ.&lt;/p&gt;&lt;p&gt;ಮೈಸೂರಿನ ಪವಿತ್ರ ಭೂಮಿಯಲ್ಲಿ ನನಗೆ ವಿಶೇಷ ಉತ್ಸಾಹ, ಹಾಗೂ ಚೈತನ್ಯ ಸಿಗುತ್ತಿದೆ. ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿನ ದೇವಸ್ಥಾನ, ಇಲ್ಲಿನ ಪರಂಪರೆ, ಉತ್ಸವ, ಮೈಸೂರು ದಸರಾ, ಇಲ್ಲಿನ ಅರಮನೆ, ಸಂಗೀತ, ಸಾಹಿತ್ಯ ಸೇರಿದಂತೆ ಭಾರತೀಯ ಪರಂಪರೆ ಇಲ್ಲಿನ ಭೂಮಿಯ ಕಣಕಣದಲ್ಲಿದೆ. ಶ್ರೀ ರಾಮಕೃಷ್ಣ ಆಶ್ರಮ ಮೈಸೂರಿನ ಸಮೃದ್ಧ ಪರಂಪರೆಯಲ್ಲಿ ಭವ್ಯ ಕೊಡುಗೆ ನೀಡಿದೆ. ಸ್ವಾಮಿ ವಿವೇಕಾನಂದರ ಪ್ರಯಾಣದಲ್ಲಿ ಇಲ್ಲಿ ತಂಗಿದ್ದರು. ರಾಷ್ಟ್ರ ಕವಿ ಕುವೆಂಪು ಮೈಸೂರಿನಲ್ಲಿರುವಾಗ ರಾಮಕೃಷ್ಣ ಆಶ್ರಮದ ಜೊತೆ ಉತ್ತಮ ಸಂಬಂಧ ಹೊಂದಿದ್ದರು.&lt;/p&gt;&lt;p&gt;ಸ್ವಾಮಿ ವಿವೇಕಾನಂದರು ಯುವ ಸ್ವಾಮಿಯಾಗಿದ್ದ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದರು. ಅಂದು ವಿವೇಕಾನಂದರು ಯುವಕರಾಗಿದ್ದರು ಅವರ ಮಾತುಗಳು, ಚಿಂತನೆಗಳು ಪ್ರಬುದ್ಧವಾಗಿತ್ತು. ಅಂದು ಮೈಸೂರಿಗೆ ಆಗಮಿಸಿದ ಸ್ವಾಮಿ ವಿವೇಕಾನಂದರಿಗೆ ಮೈಸೂರು ಮಹಾರಾಜರು ಅತ್ಯಂತ ಗೌರವ ನೀಡಿದ್ದರು. ವಿವೇಕಾನಂದರ ಅಮೆರಿಕ ಪ್ರಯಾಣದಲ್ಲಿ ಮಹಾರಾಜರ ಕೊಡುಗೆಯನ್ನು ಸ್ಮರಿಸಿದ್ದಾರೆ.&lt;/p&gt;&lt;h2&gt;ಯುವ ಶಕ್ತಿಯಿಂದ ಭಾರತ ಬಲಿಷ್ಠ&lt;/h2&gt;&lt;p&gt;ಭಾರತದ ಯುವ ಶಕ್ತಿಯಿಂದ ಭಾರತ ಪ್ರಬಲ ರಾಷ್ಟ್ರವಾಗಿ ಮುನ್ನುಗ್ಗುತ್ತಿದೆ. ಯಾವುದೇ ದೇಶದಲ್ಲಿ ಯುವ ಸಾಮರ್ಥ್ಯ ಸರಿಯಾದ ದಿಕ್ಕು, ಅವಕಾಶಗಳು ಸಿಕ್ಕಿದಾಗ ಆ ದೇಶ ಪ್ರಬಲ ಶಕ್ತಿಯಾಗಿ ಬೆಳೆಯುತ್ತದೆ. ಇದೇ ವೇಳೆ ಭಾರತದಲ್ಲಿ ಐಐಟಿ, ಐಟಿ , ವಿಶ್ವವಿದ್ಯಾಲಯ, ದೇಶದ ಎಂಬಿಬಿಎಸ್ ಸೀಟುಗಳು, ಮೆಡಿಕಲ್ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಯುವ ಸಮೂಹವನ್ನು ಭವಿಷ್ಯಕ್ಕಾಗಿ ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ಮೋದಿ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>mysore</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/india-glorious-heritage-lives-in-every-corner-of-mysuru-says-pm-modi/articleshow-hfs7v7m"/>
        </item>
        <item>
            <title><![CDATA[ಸಂಪುಟ ವಿಸ್ತರಣೆ ಸೀಕ್ರೆಟ್ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ: ಅಪ್ಪ ಸಿದ್ದು ಹಾಕಿದ್ದ ಮಾಸ್ಟರ್ ಪ್ಲಾನ್ ರಿವೀಲ್]]></title>
            <link>https://kannada.asianetnews.com/politics/dr-yathindra-siddaramaiah-reveals-cm-siddaramaiahs-plan-for-cabinet-expansion-gkn/articleshow-if6y6br</link>
            <guid isPermaLink="true">https://kannada.asianetnews.com/politics/dr-yathindra-siddaramaiah-reveals-cm-siddaramaiahs-plan-for-cabinet-expansion-gkn/articleshow-if6y6br</guid>
            <pubDate>Thu, 06 Aug 2026 13:30:41 +0530</pubDate>
            <description><![CDATA[&lt;p&gt;ಆಗಸ್ಟ್ 3 ರಂದು ನಡೆದ ಸಚಿವ ಸಂಪುಟ ವಿಸ್ತರಣೆಯ ಹಿಂದಿನ ಅಸಲಿ ಕಥೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ಧಪಡಿಸಿದ್ದ 'ಮಾಸ್ಟರ್ ಪ್ಲಾನ್' ಬಗ್ಗೆ ಅವರ ಪುತ್ರ ಹಾಗೂ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರಿನಲ್ಲಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಶಿಫಾರಸ್ಸು ಪಟ್ಟಿಯಲ್ಲಿದ್ದವರು ಯಾರು? ಹೈಕಮಾಂಡ್ ಅದಕ್ಕೆ ಹೇಗೆ ಪ್ರತಿಕ್ರಿಯಿಸಿತು ಎಂಬ ಇಡೀ 'ಸೀಕ್ರೆಟ್' ಈಗ ಬಹಿರಂಗವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzb1bvmm50v86p7ck9c3q483,imgname-siddaramaiah-and-yatidnra-siddaramaiah-1786003189395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು:&lt;/strong&gt; ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಮುಗಿದಿದೆ. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಈ ಪ್ರಕ್ರಿಯೆಯ ಹಿಂದೆ ಸಿದ್ದರಾಮಯ್ಯ ಅವರ ಪಾತ್ರವೇನು ಎಂಬ ಚರ್ಚೆಗೆ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಇಟ್ಟಿದ್ದ ಪಟ್ಟಿ ಮತ್ತು ಅದರಲ್ಲಾದ ಬದಲಾವಣೆಗಳ ಬಗ್ಗೆ ಯತೀಂದ್ರ ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;14 ಜನರ ಶಿಫಾರಸ್ಸು ಪಟ್ಟಿ ಸಿದ್ಧಪಡಿಸಿದ್ದ ಸಿದ್ದರಾಮಯ್ಯ&lt;/strong&gt;&lt;/h2&gt;&lt;p&gt;ಯತೀಂದ್ರ ಅವರ ಪ್ರಕಾರ ಸಿದ್ದರಾಮಯ್ಯ ಅವರು ಒಟ್ಟು 14 ಜನರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಬಳಿ ಶಿಫಾರಸ್ಸು ಮಾಡಿದ್ದರು. ನಮ್ಮ ತಂದೆ ಕೊಟ್ಟಿದ್ದ ಪಟ್ಟಿಯಲ್ಲಿನ ಬಹುತೇಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಅವರು ಪಕ್ಷದ ಹಿತದೃಷ್ಟಿಯಿಂದಲೇ ಈ ಪಟ್ಟಿಯನ್ನು ಸಿದ್ಧಪಡಿಸಿದ್ದರು ಎಂದು ಯತೀಂದ್ರ ತಿಳಿಸಿದ್ದಾರೆ. ಇದು ಸಂಪುಟದ ಮೇಲೆ ಸಿದ್ದರಾಮಯ್ಯ ಅವರು ಹೊಂದಿದ್ದ ಹಿಡಿತವನ್ನು ತೋರಿಸುತ್ತದೆ.&lt;/p&gt;&lt;p&gt;ಈ ಸಂಪುಟ ವಿಸ್ತರಣೆಯಲ್ಲಿ ಎಚ್.ಸಿ.ಮಹದೇವಪ್ಪ ಅವರಿಗೆ ಸ್ಥಾನ ಸಿಗದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಯತೀಂದ್ರ, ಸಿದ್ದರಾಮಯ್ಯ ಅವರು ಸಿದ್ಧಪಡಿಸಿದ್ದ ಎರಡು ಹಂತದ ಪಟ್ಟಿಯಲ್ಲೂ ಮಹದೇವಪ್ಪ ಅವರ ಹೆಸರಿತ್ತು. ಅವರಿಗೆ ಸಚಿವ ಸ್ಥಾನ ಕೊಡಿ ಎಂದು ನಮ್ಮ ತಂದೆ ಹೈಕಮಾಂಡ್ ಬಳಿ ಒತ್ತಾಯ ಮಾಡಿದ್ದರು. ಆದರೆ ಹೈಕಮಾಂಡ್ ಮಾತ್ರ ಯಾವುದೋ ಕಾರಣಕ್ಕೆ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಲು ಒಪ್ಪಲಿಲ್ಲ ಎಂದು ಹೈಕಮಾಂಡ್ ನಡೆಯನ್ನು ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ಜಮೀರ್ ಬಗ್ಗೆ ಸಿದ್ದರಾಮಯ್ಯ ಕೇಳಿರಲಿಲ್ಲ&lt;/strong&gt;&lt;/h2&gt;&lt;p&gt;ಇನ್ನೊಂದು ಅಚ್ಚರಿಯ ವಿಷಯವೆಂದರೆ ಸಿದ್ದರಾಮಯ್ಯ ಅವರು ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಬಳಿ ಕೇಳಿರಲೇ ಇಲ್ಲವಂತೆ. ಹಾಗೆಯೇ ಗಾಯತ್ರಿ ಅವರಿಗೆ ಸಚಿವ ಸ್ಥಾನ ತಪ್ಪಿದ ವಿಚಾರದಲ್ಲಾಗಲಿ ಅಥವಾ ತನ್ವೀರ್ ಸೇಠ್ ಅವರಿಗೆ ಸ್ಥಾನ ಸಿಗದ ವಿಚಾರದಲ್ಲಾಗಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಎಂದು ಯತೀಂದ್ರ ಸ್ಪಷ್ಟಪಡಿಸಿದ್ದಾರೆ. ಕೆಲವೊಂದು ಬಾರಿ ಕೆಲವು ಜಾತಿಗಳಿಗೆ ಸ್ಥಾನ ತಪ್ಪುತ್ತದೆ, ಅದನ್ನು ಪಕ್ಷ ಮುಂದೆ ಸರಿದೂಗಿಸುತ್ತದೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಮಾಣ ವಚನಕ್ಕೆ ಬಾರದ ರಹಸ್ಯ&lt;/strong&gt;&lt;/h2&gt;&lt;p&gt;ಆಗಸ್ಟ್ 3 ರಂದು ನಡೆದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಗೈರಾಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆಗಸ್ಟ್ 3 ನಮ್ಮ ತಂದೆಯ ಹುಟ್ಟು ಹಬ್ಬ. ಆ ಕಾರಣಕ್ಕಾಗಿಯೇ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಸಂಪುಟದ ಬಗ್ಗೆ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಯತೀಂದ್ರ ಗೊಂದಲಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡಿದ್ದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ತಂದೆ ಅರ್ಧಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿದ ಕಾರಣ ನನಗೆ ಸಚಿವ ಸ್ಥಾನ ನೀಡಲಾಗಿದೆ. ನನಗೆ ಸ್ಥಾನ ನೀಡದಿದ್ದರೆ ಸಹಜವಾಗಿ ನಮ್ಮ ಸಮುದಾಯಕ್ಕೆ ಬೇಜಾರಾಗುತ್ತಿತ್ತು. ಇದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ತಮ್ಮ ಸಚಿವ ಸ್ಥಾನವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಅಸಮಾಧಾನಗೊಂಡಿರುವ ಹಿರಿಯ ನಾಯಕರಾದ ಮಹದೇವಪ್ಪ ಹಾಗೂ ತನ್ವೀರ್ ಸೇಠ್ ಅವರನ್ನು ಖುದ್ದು ಭೇಟಿಯಾಗಿ ಮಾತನಾಡುವುದಾಗಿ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/dr-yathindra-siddaramaiah-reveals-cm-siddaramaiahs-plan-for-cabinet-expansion-gkn/articleshow-if6y6br"/>
        </item>
        <item>
            <title><![CDATA[ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು? ಪತ್ತೆ ಹಚ್ಚಲು ಮಂಡ್ಯ ಹುಡುಗನ ಖತರ್ನಾಕ್‌ ಪ್ಲ್ಯಾನ್‌]]></title>
            <link>https://kannada.asianetnews.com/gallery/karnataka-districts/mandya-youth-marks-river-rock-to-check-cauvery-water-release-to-tamil-nadu-san-kbetp41</link>
            <guid isPermaLink="true">https://kannada.asianetnews.com/gallery/karnataka-districts/mandya-youth-marks-river-rock-to-check-cauvery-water-release-to-tamil-nadu-san-kbetp41</guid>
            <pubDate>Sat, 01 Aug 2026 11:01:29 +0530</pubDate>
            <description><![CDATA[&lt;p&gt;ಕೆಆರ್&zwnj;ಎಸ್ ಜಲಾಶಯದಿಂದ ತಮಿಳುನಾಡಿಗೆ ರಾತ್ರಿ ವೇಳೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂಬ ಶಂಕೆಯ ಮೇರೆಗೆ, ಶ್ರೀರಂಗಪಟ್ಟಣದ ಯುವಕನೊಬ್ಬ ಸತ್ಯಾಸತ್ಯತೆ ಪರೀಕ್ಷಿಸಲು ಮುಂದಾಗಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyxwm6yk5y17s08reecznszz,imgname-cauvery-water-mandya-youth-marking--2--1785562012627.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಆರ್&zwnj;ಎಸ್ ಜಲಾಶಯದಿಂದ ತಮಿಳುನಾಡಿಗೆ ರಾತ್ರಿ ವೇಳೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂಬ ಶಂಕೆಯ ಮೇರೆಗೆ, ಶ್ರೀರಂಗಪಟ್ಟಣದ ಯುವಕನೊಬ್ಬ ಸತ್ಯಾಸತ್ಯತೆ ಪರೀಕ್ಷಿಸಲು ಮುಂದಾಗಿದ್ದಾನೆ.&lt;/p&gt;&lt;img&gt;&lt;p&gt;ಕೆಆರ್&zwnj;ಎಸ್ ಜಲಾಶಯದಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂಬ ಶಂಕೆಯ ಬೆನ್ನಲ್ಲೇ, ಸತ್ಯಾಸತ್ಯತೆ ಪತ್ತೆ ಹಚ್ಚಲು ಸ್ಥಳೀಯ ಯುವಕನೊಬ್ಬ ವಿನೂತನ ಹಾದಿ ತುಳಿದಿದ್ದಾನೆ. ಕಾವೇರಿ ನದಿ ಮಧ್ಯದಲ್ಲಿರುವ ಬಂಡೆಯೊಂದಕ್ಕೆ ಬಣ್ಣ ಬಳಿಯುವ ಮೂಲಕ ನೀರಿನ ಮಟ್ಟ ಪರಿಶೀಲನೆಗೆ ಮುಂದಾಗಿರುವ ಘಟನೆ ವರದಿಯಾಗಿದೆ.&lt;/p&gt;&lt;img&gt;&lt;p&gt;ಮಂಡ್ಯ ಜಿಲ್ಲೆಯ ಕೆಆರ್&zwnj;ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರನ್ನು ಹರಿಸಲಾಗುತ್ತಿದೆ ಎಂಬ ಭಾರಿ ಶಂಕೆ ವ್ಯಕ್ತವಾಗಿದೆ. ಕಾವೇರಿ ನದಿಯಲ್ಲಿ ತಮಿಳುನಾಡಿಗೆ ನಿಜವಾಗಿಯೂ ನೀರು ಬಿಡಲಾಗುತ್ತಿದೆಯೋ ಅಥವಾ ಇಲ್ಲವೋ ಎಂಬುದರ ಸತ್ಯಾಸತ್ಯತೆಯನ್ನು ಸ್ವತಃ ಪತ್ತೆ ಹಚ್ಚಲು ಸ್ಥಳೀಯ ಯುವಕನೊಬ್ಬ ವಿಶಿಷ್ಟ ಸಾಹಸಕ್ಕೆ ಮುಂದಾಗಿದ್ದಾನೆ.&lt;/p&gt;&lt;img&gt;&lt;p&gt;ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಮೂಲದ ಅಭಿಷೇಕ್ ಎಂಬ ಯುವಕ ಈ ಸತ್ಯವನ್ನು ಬಯಲಿಗೆಳೆಯಲು ನಿರ್ಧರಿಸಿದ್ದಾನೆ. ಪ್ರಸಿದ್ಧ ಸಂಗಮ ಕ್ಷೇತ್ರದಲ್ಲಿ ಕಾವೇರಿ ನದಿಯ ಮಧ್ಯಭಾಗದಲ್ಲಿರುವ ಬಂಡೆಯೊಂದಕ್ಕೆ ಆತ ಬಣ್ಣವನ್ನು ಬಳಿದು ನೀರಿನ ಮಟ್ಟ ಗುರುತಿಸಲು (Mark) ಮಾರ್ಕ್ ಮಾಡಿದ್ದಾನೆ.&lt;/p&gt;&lt;img&gt;&lt;p&gt;ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ, ಅಭಿಷೇಕ್ ಬಂಡೆಗೆ ಬಳಿದಿರುವ ಬಣ್ಣದ ಗುರುತಿನ ಮೇಲೆ ನೀರು ಹರಿದು ಹೋದರೆ, ಸರ್ಕಾರ ಅಥವಾ ಆಡಳಿತ ಮಂಡಳಿಯು ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿರುವುದು ಸತ್ಯ ಎಂಬುದು ಸಾಬೀತಾಗಲಿದೆ.&lt;/p&gt;&lt;img&gt;&lt;p&gt;ಗಂಜಾಂನ ಅಭಿಷೇಕ್ ನದಿ ಮಧ್ಯಕ್ಕೆ ತೆರಳಿ ಈ ರೀತಿ ಬಂಡೆಗೆ ಗುರುತು ಹಾಕುವ ಮೂಲಕ ಆಡಳಿತ ಮಂಡಳಿಯ ನಡೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾನೆ. ಒಂದು ವೇಳೆ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಬಣ್ಣದ ಮಾರ್ಕ್&zwnj;ನಿಂದ ಧೃಡಪಟ್ಟರೆ, ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಆತ ಎಚ್ಚರಿಕೆ ನೀಡಿದ್ದಾನೆ.&lt;/p&gt;&lt;img&gt;&lt;p&gt;ರಾತ್ರಿ ವೇಳೆಯಲ್ಲಿ ಕಾವೇರಿ ನದಿಯ ಹರಿವಿನಲ್ಲಿ ದಿಢೀರ್ ಏರಿಳಿತ ಕಂಡುಬರುತ್ತಿರುವುದು ಮಂಡ್ಯ ಜಿಲ್ಲೆಯ ರೈತರಲ್ಲಿ ಹಾಗೂ ಕಾವೇರಿ ಹೋರಾಟಗಾರರಲ್ಲಿ ತೀವ್ರ ಅನುಮಾನ ಹುಟ್ಟುಹಾಕಿದೆ. ನದಿ ಮಧ್ಯದ ಬಂಡೆಯ ಮೇಲಿನ ಈ ಗುರುತು ಈಗ ಗಡಿ ಭಾಗದಲ್ಲಿ ನೀರು ಹರಿವಿನ ನೈಜ ಸ್ಥಿತಿಯನ್ನು ಪತ್ತೆಹಚ್ಚಲು ದಿಕ್ಸೂಚಿಯಂತಾಗಿದೆ.&lt;/p&gt;]]></content:encoded>
            <category>mysore</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/mandya-youth-marks-river-rock-to-check-cauvery-water-release-to-tamil-nadu-san-kbetp41"/>
        </item>
        <item>
            <title><![CDATA[ಶತಕ ಬಾರಿಸಿದ KRS; ಆತಂಕಗಳ ನಡುವೆಯೂ ರೈತರಿಗೆ ಭರ್ಜರಿ ಗುಡ್‌ನ್ಯೂಸ್..!]]></title>
            <link>https://kannada.asianetnews.com/mandya/good-news-for-karnataka-farmers-krs-dam-water-level-increased-reached-100-feet-gkn/articleshow-llrki8t</link>
            <guid isPermaLink="true">https://kannada.asianetnews.com/mandya/good-news-for-karnataka-farmers-krs-dam-water-level-increased-reached-100-feet-gkn/articleshow-llrki8t</guid>
            <pubDate>Mon, 03 Aug 2026 09:41:21 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಮಂಡ್ಯದ ಕೃಷ್ಣರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದೆ. ಕೇವಲ ಮೂರು ದಿನಗಳಲ್ಲಿ 8 ಅಡಿಗಳಷ್ಟು ಏರಿಕೆ ಕಂಡಿದ್ದು, ಒಳಹರಿವು ಹೆಚ್ಚಾಗಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ ಮತ್ತು ಕಾವೇರಿ ಹೋರಾಟದ ಕಾವು ಸದ್ಯಕ್ಕೆ ತಣ್ಣಗಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jz3rcr9dcn4rmye4wb1c47wc,imgname-krs-dam-1751399162156.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ (KRS) ಜಲಾಶಯವು 'ಶತಕ' ಬಾರಿಸಿದೆ. ಭಾನುವಾರ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪುವ ಮೂಲಕ ಕಾವೇರಿ ಕೊಳ್ಳದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;h2&gt;&lt;strong&gt;3 ದಿನದಲ್ಲಿ 8 ಅಡಿ ಏರಿಕೆ&lt;/strong&gt;&lt;/h2&gt;&lt;p&gt;ಕಳೆದ ಕೆಲವು ದಿನಗಳಿಂದ ಕೊಡಗು ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆಆರ್&zwnj;ಎಸ್ ಅಣೆಕಟ್ಟಿಗೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಜಲಾಶಯದ ನೀರಿನ ಮಟ್ಟದಲ್ಲಿ ಬರೋಬ್ಬರಿ 8 ಅಡಿಗಳಷ್ಟು ಏರಿಕೆಯಾಗಿರುವುದು ವಿಶೇಷ.&lt;/p&gt;&lt;h2&gt;&lt;strong&gt;ಅರ್ಧದಷ್ಟು ಭರ್ತಿಯಾದ ಜಲಾಶಯ&lt;/strong&gt;&lt;/h2&gt;&lt;p&gt;ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಸದ್ಯ 23.079 ಟಿಎಂಸಿ ನೀರು ಸಂಗ್ರಹವಾಗಿದೆ. ಅಂದರೆ ಜಲಾಶಯವು ಸದ್ಯ ಅರ್ಧದಷ್ಟು ಭರ್ತಿಯಾದಂತಾಗಿದೆ. ಪ್ರಸ್ತುತ ಜಲಾಶಯಕ್ಕೆ 32 ಸಾವಿರ ಕ್ಯೂಸೆಕ್&zwnj;ಗೂ ಅಧಿಕ ನೀರು ಹರಿದು ಬರುತ್ತಿದೆ. ಇದೇ ರೀತಿ ಮುಂದಿನ 10 ರಿಂದ 15 ದಿನಗಳ ಕಾಲ ಒಳಹರಿವು ಮುಂದುವರಿದರೆ ಕೆಆರ್&zwnj;ಎಸ್ ಜಲಾಶಯ ಈ ಬಾರಿ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ತಣ್ಣಗಾದ ಕಾವೇರಿ ಹೋರಾಟ&lt;/strong&gt;&lt;/h2&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ ನೀರಿನ ಕೊರತೆಯಿಂದಾಗಿ ಕಾವೇರಿ ಹೋರಾಟ ತೀವ್ರಗೊಂಡಿತ್ತು. ಆದರೆ ಈಗ ಮಳೆಯ ಕೃಪೆಯಿಂದಾಗಿ ಜಲಾಶಯದ ಮಟ್ಟ ಏರುತ್ತಿರುವುದು ಮತ್ತು ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ಹೋರಾಟದ ಕಾವು ಸದ್ಯಕ್ಕೆ ತಣ್ಣಗಾಗಿದೆ.&lt;/p&gt;&lt;h2&gt;&lt;strong&gt;ಇಂದಿನ ಕೆಆರ್&zwnj;ಎಸ್ ಜಲಾಶಯದ ಅಂಕಿ-ಅಂಶಗಳು&lt;/strong&gt;&lt;/h2&gt;&lt;ul&gt; &lt;li&gt;ಗರಿಷ್ಠ ಮಟ್ಟ: 124.80 ಅಡಿ&lt;/li&gt; &lt;li&gt;ಇಂದಿನ ಮಟ್ಟ: 100.34 ಅಡಿ&lt;/li&gt; &lt;li&gt;ಒಳಹರಿವು: 32,048 ಕ್ಯೂಸೆಕ್&lt;/li&gt; &lt;li&gt;ಹೊರಹರಿವು: 1,821 ಕ್ಯೂಸೆಕ್&lt;/li&gt; &lt;li&gt;ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ&lt;/li&gt; &lt;li&gt;ಇಂದಿನ ಸಂಗ್ರಹ: 23.079 ಟಿಎಂಸಿ&lt;/li&gt;&lt;/ul&gt;&lt;p&gt;ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ರೈತರು ಈ ಬೆಳವಣಿಗೆಯಿಂದ ಸಂಸತಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಮರುಚಾಲನೆ ನೀಡುವ ನಿರೀಕ್ಷೆಯಲ್ಲಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mandya/good-news-for-karnataka-farmers-krs-dam-water-level-increased-reached-100-feet-gkn/articleshow-llrki8t"/>
        </item>
        <item>
            <title><![CDATA[ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಕ್ಲೀನ್‌ಚಿಟ್: ಹಾಗಾದ್ರೆ ತಪ್ಪಿತಸ್ಥರು ಯಾರು? 11 ಜನರ ಸಾವಿಗೆ ಕಾರಣ ಯಾರು?: ಸಾರಾ ಮಹೇಶ್ ಕಿಡಿ]]></title>
            <link>https://kannada.asianetnews.com/politics/former-minister-sa-ra-mahesh-reacts-on-chinnaswamy-stampede-case-at-mysuru-rav/articleshow-pvfituq</link>
            <guid isPermaLink="true">https://kannada.asianetnews.com/politics/former-minister-sa-ra-mahesh-reacts-on-chinnaswamy-stampede-case-at-mysuru-rav/articleshow-pvfituq</guid>
            <pubDate>Wed, 29 Jul 2026 12:12:09 +0530</pubDate>
            <description><![CDATA[&lt;p&gt;ಕಾಲ್ತುಳಿತ ಪ್ರಕರಣದಲ್ಲಿ ಕ್ಲೀನ್&zwnj;ಚಿಟ್ ನೀಡಿರುವುದನ್ನು ಪ್ರಶ್ನಿಸಿರುವ ಸಾರಾ ಮಹೇಶ್, ಈ ದುರಂತಕ್ಕೆ ಯಾರು ಹೊಣೆ ಎಂದು ಸರ್ಕಾರಕ್ಕೆ ತರಾಟೆ.. ಅಲ್ಲದೆ, ಚಾಮುಂಡಿ ಬೆಟ್ಟದಲ್ಲಿ ವಿಐಪಿ ದರ್ಶನದ ಹಾವಳಿ ಹೆಚ್ಚಾಗಿದ್ದು, ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಮನವಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyp9dhemaf0tshzbqvkv7yzh,imgname-----------------------2026-07-29t120607.182-1785306990035.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜು.29)&lt;/strong&gt;: ನಾನು ಅವತ್ತೇ ಹೇಳಿದ್ದೆ ದಯಾನಂದ್ ದಕ್ಷ ಅಧಿಕಾರಿ, ಅವರನ್ನು ಅಮಾನತು ಮಾಡಿದ್ದು ತಪ್ಪು ಎಂದು. ಐಪಿಎಲ್ ಕಾಲ್ತುಳಿತ ಪ್ರಕರಣದಲ್ಲಿ ಕ್ಲಿನ್&zwnj;ಚಿಟ್ ಕೊಟ್ಟುಕೊಂಡಿರಿ ಹಾಗಾದರೆ ತಪ್ಪು ಮಾಡಿದವರು ಯಾರು? ಈ ದುರಂತಕ್ಕೆ ಕಾರಣ ಯಾರು? ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದು.&lt;/p&gt;&lt;h2&gt;ಪ್ರಕರಣ ಕ್ಲೋಸ್ ಮಾಡಲು ಕಮಿಟಿ ಎಂಬ ಕಣ್ಣೊರೆಸುವ ತಂತ್ರ&lt;/h2&gt;&lt;p&gt;ಮೈಸೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ದುರಂತದ ಹೊಣೆ ಆ ಹಿರಿಯ ಅಧಿಕಾರಿ ಮೇಲೆ ಹೊರಿಸಿ ಅಮಾನತು ಮಾಡಿದ್ರಿ, ತನ್ನದಲ್ಲದ ತಪ್ಪಿಗೆ ಆ ಅಧಿಕಾರಿಗೆ ಆದ ನೋವನ್ನು ಯಾರು ಭರಿಸುತ್ತೀರಿ? ಪ್ರಕರಣದಲ್ಲಿ ಕ್ಲೀಚ್ ಚೀಟ್ ಕೊಟ್ಟುಕೊಂಡರೆ ಹನ್ನೊಂದು ಅಮಾಯಕ ಜನರ ಸಾವಿಗೆ ಕಾರಣ ಯಾರು? ಸರ್ಕಾರ ಸಿದ್ಧತೆ ಮಾಡಿಕೊಳ್ಳದೆ ತರಾತುರಿಯಲ್ಲಿ ಕಾರ್ಯಕ್ರಮ ಮಾಡಿದ್ದು ತಪ್ಪಲ್ಲವೇ? ಕ್ಲೀನ್&zwnj;ಚಿಟ್ ಕೊಟ್ಟರೆ ಸತ್ತ ಹನ್ನೊಂದು ಜನರ ಕುಟುಂಬಕ್ಕೆ ಆಧಾರ ಯಾರು? ಎಂದು ಪ್ರಶ್ನಿಸಿದರು.&lt;/p&gt;&lt;p&gt;ಕಾಲ್ತುಳಿತ ಪ್ರಕರಣ ಒಂದು ಅಲ್ಲ, ರಾಜ್ಯದಲ್ಲಿ ಇಂಥ ದುರಂತಗಳು ನಡೆದಾಗ, ರಾಜಕಾರಣಿಗಳಾಗಿರಲಿ, ಅಧಿಕಾರಿಯಾಗಿರಲಿ ತಪ್ಪು ಮಾಡಿದಾಗ ಸರ್ಕಾರ ತಕ್ಷಣ ಒಂದು ಕಮಿಟಿ ಮಾಡುತ್ತದೆ. ಜನರು ಆ ಘಟನೆ ಮರೆತ ಮೇಲೆ ಇಡೀ ಪ್ರಕರಣ ಕ್ಲೋಸ್ ಮಾಡೋದು ಈ ಸರ್ಕಾರದ ಚಾಳಿ ಆಗಿದೆ. ಈ ಹಿಂದೆ ಮುಡಾ ಹಗರಣ ಆಯ್ತು, ಮುಖ್ಯಮಂತ್ರಿಗಳೇ ಸೈಟ್ ವಾಪಸ್ ಕೊಟ್ಟ ಮೇಲೆ ಅವರಿಗಿಂತ ಮೇಲೆ ಯಾರಿದ್ದಾರೆ. ಅದಕ್ಕೊಂದು ಕಮಿಟಿ ಮಾಡಿದ್ರು. ತಪ್ಪು ಮಾಡಿದ್ದಕ್ಕೆ ತಾನೆ ಸೈಟ್ ವಾಪಸ್ ಕೊಟ್ಟಿದ್ದು? ಆ ಪ್ರಕರಣ ಈಗ ಏನಾಗಿದೆ ಅಂತಾ ಎಲ್ಲರಿಗೆ ಗೊತ್ತಿರೋ ವಿಚಾರ. ಅದೇ ರೀತಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣವೂ ತಪ್ಪಿಸ್ಥರನ್ನು ಬಚಾವ್ ಮಾಡಲೆಂದೇ ಕಮಿಟಿ ಮಾಡಿ ಈಗ ಕ್ಲೀನ್ ಚಿಟ್ ಕೊಡಲಾಗಿದೆ.&lt;/p&gt;&lt;h3&gt;ಚಾಮುಂಡಿ ತಾಯಿ ವಿಐಪಿಗಳಿಗೆ ಒಳ್ಳೇದು ಮಾಡಿದ್ದು ಸಾಕು:&lt;/h3&gt;&lt;p&gt;ಇನ್ನು ಚಾಮುಂಡಿ ಆಷಾಡ ಶುಕ್ರವಾರ ವಿಐಪಿ ಹೆಚ್ಚಾದ ವಿಚಾರವಾಗಿ ಮಾತನಾಡಿದ ಸಾರಾ ಮಹೇಶ್, ನಾನು ವೈಯಕ್ತಿಕವಾಗಿ ಮನವಿ ಮಾಡುತ್ತೇನೆ. ಆ ಚಾಮುಂಡಿ ತಾಯಿ ನಮಗೆ ಎಲ್ಲನೂ ಕೊಟ್ಟಿದ್ದಾಳೆ. ಜನರ ಮತ್ತು ತಾಯಿ ಆಶೀರ್ವಾದದಿಂದ ನಾವು ಎಂಎಲ್&zwnj;ಎ ಆಗಿದ್ದೆವು. ಇನ್ನು ಚಾಮುಂಡಿ ತಾಯಿ ವಿಐಪಿಗಳಿಗೆ ಒಳ್ಳೆಯದು ಮಾಡಿದ್ದು ಸಾಕು, ಜನಸಾಮಾನ್ಯರಿಗೆ ದೇವರು ಒಳ್ಳೆಯದು ಮಾಡಲಿ. ಸ್ವಲ್ಪ ಜನ ಸಾಮಾನ್ಯರು ದೇವರ ದರ್ಶನ ಮಾಡಲು ಅವಕಾಶ ಮಾಡಿಕೊಡಲಿ ಎಂದು ಮನವಿ ಮಾಡಿದರು.&lt;/p&gt;&lt;h3&gt;ಹಾಸನಾಂಬೆ ಘಟನೆ ನೆನೆದ ಸಾರಾ ಮಹೇಶ:&lt;/h3&gt;&lt;p&gt;ಕಳೆದ ಏಳೆಂಟು ವರ್ಷಗಳಿಂದ ಆಷಾಡ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಹೋಗುವುದೇ ಬಿಟ್ಟಿದ್ದೇನೆ. ನಾನು ಮಂತ್ರಿಯಾಗಿದ್ದಾಗ ಹಾಸನಾಂಬೆೆ ಹೋಗಿದ್ದೆ. ಆಗ ಅಲ್ಲಿ ಯುವತಿಯೊಬ್ಬಳು ನನ್ನನ್ನು ಪ್ರಶ್ನಿಸಿದಳು, ವಿಐಪಿಗಳಿಂದ ಜನಸಾಮಾನ್ಯರ ದರ್ಶನಕ್ಕೆ ಎಷ್ಟು ತೊಂದರೆಯಾಗುತ್ತದೆ ಎಂದು ಅರಿತುಕೊಂಡೆ ಅಂದಿನಿಂದ ನಾನು ಹಾಸನಾಂಬೆಗೆ ಹೋಗಲೇ ಇಲ್ಲ. ಇಲ್ಲಿಂದಲೇ ಕೈಮುಗಿಯುತ್ತೇನೆ. ವಿಐಪಿ ಜೊತೆ ನೂರಾರು ಜನರು ಬರ್ತಾರೆ. ಇದರಿಂದ ಜನಸಾಮಾನ್ಯರು ದರ್ಶನ ಮಾಡಲು ಆಗುವುದಿಲ್ಲ ಎಂದರು.&lt;/p&gt;&lt;p&gt;ಮೈಸೂರಿನವರೇ ಮಂತ್ರಿ, ಮುಖ್ಯಮಂತ್ರಿ, ಉಸ್ತುವಾರಿ ಮಂತ್ರಿಯೂ ಮೈಸೂರಿನವರೇ. ಚಾಮುಂಡಿ ಬೆಟ್ಟದಲ್ಲಿಯೂ ಅಕ್ರಮ. ಚಾಮುಂಡೇಶ್ವರಿ ಬಟ್ಟೆ, ಬ್ಯಾಗ್&zwnj;ನಲ್ಲಿಯೂ ಅಕ್ರಮ, ಮುಡಾದಲ್ಲೂ ಅಕ್ರಮ. ಮೈಸೂರಲ್ಲೇ ಈ ರೀತಿ ಆದ್ರೆ ಇನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಏನೆಲ್ಲ ಅಕ್ರಮ ನಡೆಯುತ್ತಿರಬಹುದು ಟೀಕಿಸಿದರು.&lt;/p&gt;]]></content:encoded>
            <category>mysore</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/former-minister-sa-ra-mahesh-reacts-on-chinnaswamy-stampede-case-at-mysuru-rav/articleshow-pvfituq"/>
        </item>
        <item>
            <title><![CDATA[ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಶಿವನಸಮುದ್ರದಲ್ಲಿ ಉತ್ಪಾದನೆ ಸ್ಥಗಿತ.. ರಾಜ್ಯಕ್ಕೆ ಕರೆಂಟ್ ಶಾಕ್!]]></title>
            <link>https://kannada.asianetnews.com/mandya/power-generation-halted-at-asias-first-hydroelectric-plant-shivanasamudra-gkn/articleshow-rvhdvgd</link>
            <guid isPermaLink="true">https://kannada.asianetnews.com/mandya/power-generation-halted-at-asias-first-hydroelectric-plant-shivanasamudra-gkn/articleshow-rvhdvgd</guid>
            <pubDate>Sun, 26 Jul 2026 11:41:14 +0530</pubDate>
            <description><![CDATA[&lt;p&gt;ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳ ಸನಿಹದಲ್ಲೇ ಇರುವ ಈ ಸ್ಥಾವರವು ಐತಿಹಾಸಿಕ ಮತ್ತು ತಾಂತ್ರಿಕ ಮಹತ್ವದ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ನೂರು ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಈ ಮಹತ್ವದ ಸ್ಥಾವರವು ಇಂದು ಮಳೆಯಿಲ್ಲದೆ ಸ್ತಬ್ದವಾಗಿರುವುದು ಆತಂಕಕಾರಿ ಸಂಗತಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyegpket5raphx1g249pthjh,imgname-shivanasamudra-hydroelectric-project--1--1785046191578.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ರಾಜ್ಯದಲ್ಲಿ ಮಳೆಯ ಅಭಾವ ಕೇವಲ ಕೃಷಿ ವಲಯಕ್ಕೆ ಮಾತ್ರವಲ್ಲದೆ, ಜಲವಿದ್ಯುತ್ ಉತ್ಪಾದನೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿರುವ ಏಷ್ಯಾದ ಅತ್ಯಂತ ಹಳೆಯ ಮತ್ತು ಮೊದಲ ಜಲವಿದ್ಯುತ್ ಸ್ಥಾವರ 'ಶಿವನಸಮುದ್ರ'ದಲ್ಲಿ ವಿದ್ಯುತ್ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.&lt;/p&gt;&lt;h2&gt;&lt;strong&gt;ಒಂದೂವರೆ ತಿಂಗಳಿನಿಂದ ಸ್ಥಗಿತ&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ನೀರಿಲ್ಲದ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಶಿವನಸಮುದ್ರ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಬಂದ್ ಆಗಿದೆ. ಕಾವೇರಿ ನದಿ ಸಂಪೂರ್ಣ ಬರಿದಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಈ ಸ್ಥಾವರದಲ್ಲಿ ಪ್ರತಿದಿನ ಸರಾಸರಿ 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ನಿರಂತರ ವಿದ್ಯುತ್ ಉತ್ಪಾದನೆಗಾಗಿ ದಿನಕ್ಕೆ ಕನಿಷ್ಠ 1450 ಕ್ಯೂಸೆಕ್ ನೀರಿನ ಅವಶ್ಯಕತೆ ಇರುತ್ತದೆ. ಕೃಷ್ಣರಾಜ ಸಾಗರ (KRS) ಅಥವಾ ಕಬಿನಿ ಜಲಾಶಯದಿಂದ ನದಿಗೆ ನೀರು ಬಿಟ್ಟರೆ ಮಾತ್ರ ಇಲ್ಲಿ ಮತ್ತೆ ವಿದ್ಯುತ್ ಉತ್ಪಾದನೆ ಆರಂಭಿಸಲು ಸಾಧ್ಯವಿದೆ. ಪ್ರಸ್ತುತ ಅಣೆಕಟ್ಟುಗಳಲ್ಲೂ ನೀರಿನ ಮಟ್ಟ ಕುಸಿದಿರುವುದರಿಂದ ಜಲವಿದ್ಯುತ್ ಉತ್ಪಾದನೆಗೆ ಸಂಕಷ್ಟ ಎದುರಾಗಿದೆ.&lt;/p&gt;&lt;h2&gt;&lt;strong&gt;ಶಿವನಸಮುದ್ರ ವಿದ್ಯುತ್ ಸ್ಥಾವರದ ಐತಿಹಾಸಿಕ ಹಿನ್ನೆಲೆ&lt;/strong&gt;&lt;/h2&gt;&lt;p&gt;ಶಿವನಸಮುದ್ರ ಜಲವಿದ್ಯುತ್ ಸ್ಥಾವರವು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಏಷ್ಯಾ ಖಂಡಕ್ಕೇ ಹೆಮ್ಮೆಯ ಸಂಕೇತವಾಗಿದೆ. 1902 ರಲ್ಲಿ ಪ್ರಾರಂಭವಾದ ಈ ಸ್ಥಾವರವು ಏಷ್ಯಾ ಖಂಡದ ಮೊದಲ ಜಲವಿದ್ಯುತ್ ಯೋಜನೆಯಾಗಿದೆ. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಅಂದಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಶ್ರಮದಿಂದ ಈ ಯೋಜನೆ ಸಾಕಾರಗೊಂಡಿತು. ಆರಂಭದಲ್ಲಿ ಇಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಅನ್ನು ಕೋಲಾರದ ಚಿನ್ನದ ಗಣಿ (KGF) ಗೆ ಸರಬರಾಜು ಮಾಡಲಾಗುತ್ತಿತ್ತು. ಆಗಿನ ಕಾಲಕ್ಕೆ ಇದು ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಮಾರ್ಗಗಳಲ್ಲಿ ಒಂದಾಗಿತ್ತು (ಸುಮಾರು 147 ಕಿ.ಮೀ).&lt;/p&gt;&lt;p&gt;ಅಂದಿನ ಕಾಲದಲ್ಲಿ ಅಮೆರಿಕ ಮತ್ತು ಸ್ವಿಟ್ಜರ್ಲೆಂಡ್&zwnj;ನಿಂದ ಯಂತ್ರೋಪಕರಣಗಳನ್ನು ತರಿಸಿ ಇಲ್ಲಿ ಅಳವಡಿಸಲಾಗಿತ್ತು. ಇದು ಭಾರತದ ಔದ್ಯೋಗಿಕ ಮತ್ತು ತಾಂತ್ರಿಕ ಕ್ರಾಂತಿಯ ಮೊದಲ ಹೆಜ್ಜೆ ಎನ್ನಲಾಗುತ್ತದೆ. ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳ ಸನಿಹದಲ್ಲೇ ಇರುವ ಈ ಸ್ಥಾವರವು ಐತಿಹಾಸಿಕ ಮತ್ತು ತಾಂತ್ರಿಕ ಮಹತ್ವದ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ನೂರು ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಈ ಮಹತ್ವದ ಸ್ಥಾವರವು ಇಂದು ಮಳೆಯಿಲ್ಲದೆ ಸ್ತಬ್ದವಾಗಿರುವುದು ಆತಂಕಕಾರಿ ಸಂಗತಿಯಾಗಿದೆ.&lt;/p&gt;]]></content:encoded>
            <category>mysore</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mandya/power-generation-halted-at-asias-first-hydroelectric-plant-shivanasamudra-gkn/articleshow-rvhdvgd"/>
        </item>
        <item>
            <title><![CDATA[ಪ್ರತಾಪ್ ಸಿಂಹಗೆ ಸಕಲೇಶಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಓಪನ್ ಚಾಲೆಂಜ್ ಹಾಕಿದ ಚಾಮರಾಜ ಕ್ಷೇತ್ರದ ಶಾಸಕ!]]></title>
            <link>https://kannada.asianetnews.com/karnataka-districts/political-war-in-mysuru-mla-harish-gowda-challenges-former-mp-pratap-simha-to-contest-from-sakleshpur-gdp/articleshow-v11vlup</link>
            <guid isPermaLink="true">https://kannada.asianetnews.com/karnataka-districts/political-war-in-mysuru-mla-harish-gowda-challenges-former-mp-pratap-simha-to-contest-from-sakleshpur-gdp/articleshow-v11vlup</guid>
            <pubDate>Fri, 31 Jul 2026 17:20:54 +0530</pubDate>
            <description><![CDATA[ಶಾಸಕ ಕೆ.ಹರೀಶ್ ಗೌಡ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಚಾಮುಂಡಿಬೆಟ್ಟದಲ್ಲಿ ಬಹಿರಂಗ ಸವಾಲು ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಕಲೇಶಪುರ ಅಥವಾ ಚಾಮರಾಜ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಆಹ್ವಾನಿಸಿದ್ದು, ವೈಯಕ್ತಿಕ ಟೀಕೆ ಮತ್ತು ಪದಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvzz4rwksmv35q96d38tfzs,imgname-harish-gowda-chamaraja-constituency--1--1785498407708.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ರಾಜಕೀಯ ವಲಯದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೈಸೂರಿನ ಪವಿತ್ರ ಚಾಮುಂಡಿಬೆಟ್ಟದಲ್ಲಿ ನಿಂತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹರೀಶ್ ಗೌಡ, ಪ್ರತಾಪ್ ಸಿಂಹ ಅವರಿಗೆ ನೇರವಾದ ಬಹಿರಂಗ ಸವಾಲು ಹಾಕಿದ್ದು, ಧೈರ್ಯವಿದ್ದರೆ ಮುಂದಿನ ಚುನಾವಣೆಯಲ್ಲಿ ಸಕಲೇಶಪುರ ಅಥವಾ ಚಾಮರಾಜ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ.&lt;/p&gt;&lt;h2&gt;ಸಕಲೇಶಪುರ ಕಣದಲ್ಲಿ ಮುಖಾಮುಖಿಗೆ ಆಹ್ವಾನ&lt;/h2&gt;&lt;p&gt;ಸಕಲೇಶಪುರ ಕ್ಷೇತ್ರವು ಪ್ರತಾಪ್ ಸಿಂಹ ಅವರ ಸ್ವಗ್ರಾಮವಾಗಿದೆ. ಪ್ರಸ್ತುತ ಇದು ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿಯ ಸಿಮೆಂಟ್ ಮಂಜು ಇಲ್ಲಿ ಶಾಸಕರಾಗಿದ್ದಾರೆ. ಆದರೆ ಮುಂಬರುವ ಚುನಾವಣೆಗೆ ಇದು ಸಾಮಾನ್ಯ ಕ್ಷೇತ್ರವಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಮಾತನಾಡಿರುವ ಹರೀಶ್ ಗೌಡ, &quot;ನಾನು ಮುಂದಿನ ಚುನಾವಣೆಯಲ್ಲಿ ಸಕಲೇಶಪುರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ. ನಮ್ಮ ಹೈಕಮಾಂಡ್ ನಾಯಕರಿಗೂ ಅಲ್ಲಿಂದಲೇ ಟಿಕೆಟ್ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ಪ್ರತಾಪ್ ಸಿಂಹ, ನೀನು ಕೂಡ ಅಲ್ಲೇ ಬಂದು ಸ್ಪರ್ಧೆ ಮಾಡು, ಯಾರು ಗೆಲ್ಲುತ್ತಾರೆ ಎಂಬುದು ಅಲ್ಲಿಯೇ ತೀರ್ಮಾನವಾಗಲಿ. ಒಂದು ವೇಳೆ ಅಲ್ಲಿಗೆ ಬರುವುದಿಲ್ಲ ಎಂದಾದರೆ ಚಾಮರಾಜ ಕ್ಷೇತ್ರದಲ್ಲಾದರೂ ಸ್ಪರ್ಧೆ ಮಾಡು, ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ಚಾಲೆಂಜ್ ಮಾಡಿದ್ದಾರೆ..&lt;/p&gt;&lt;h2&gt;ವೈಯಕ್ತಿಕ ಟೀಕೆಗಳಿಗೆ ತಿರುಗೇಟು&lt;/h2&gt;&lt;p&gt;ಚಾಮರಾಜ ಕ್ಷೇತ್ರದ ಮತದಾರರಿಗೆ ಹಾಗೂ ಜನತೆಗೆ ಹರೀಶ್ ಗೌಡ ಯಾರೆಂಬುದು ಸಂಪೂರ್ಣವಾಗಿ ತಿಳಿದಿದೆ. ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕು ಹೊರತು, ವೈಯಕ್ತಿಕ ವಿಚಾರಗಳನ್ನು ಕೆದಕುವುದು ಸರಿಯಲ್ಲ. ನನ್ನ ಹಿನ್ನೆಲೆಯನ್ನು ಬಿಚ್ಚಿಡುತ್ತೇನೆ ಎಂದು ಸವಾಲು ಹಾಕುತ್ತಿರುವ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಏನೋ ನನ್ನ ಹಿನ್ನೆಲೆ ಬಿಚ್ಚಿಡುತ್ತೇನೆ ಅಂತ ಹೇಳ್ತಿದ್ದೀರಲ್ಲ, ಧೈರ್ಯವಿದ್ದರೆ ಬಿಚ್ಚಿಡಿ ನೋಡೋಣ. ತಾನು ಪ್ರತಾಪ್ ಸಿಂಹ ಅವರನ್ನು 'ವಲಸಿಗ' ಎಂದು ಎಲ್ಲಿಯೂ ಹೀಯಾಳಿಸಿಲ್ಲ ಎಂದರು.&lt;/p&gt;&lt;h2&gt;ಮಹನೀಯರ ಹೆಸರು ಬಳಕೆ ಹಾಗೂ ಪದಬಳಕೆ ಬಗ್ಗೆ ಆಕ್ಷೇಪ&lt;/h2&gt;&lt;p&gt;ರಾಷ್ಟ್ರಕವಿ ಕುವೆಂಪು ಹಾಗೂ ಕನ್ನಡದ ದಿಗ್ಗಜ ಸಾಹಿತಿ ಎಸ್.ಎಲ್. ಭೈರಪ್ಪ ಅವರಂತಹ ಮಹನೀಯರ ಹೆಸರನ್ನು ಈ ರಾಜಕೀಯ ವಿವಾದಗಳಿಗೆ ಅನಗತ್ಯವಾಗಿ ಎಳೆದು ತರುವುದು ಸರಿಯಲ್ಲ ಎಂದು ಹರೀಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ತಮ್ಮ ಜೊತೆ ಇರುವವರನ್ನು ಉದ್ದೇಶಿಸಿ ಪ್ರತಾಪ್ ಸಿಂಹ 'ರೇಬಿಸ್ ಬಂದಿರುವ ನಾಯಿಗಳು' ಎಂದು ಹಗುರವಾಗಿ ಮಾತನಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, &quot;ಮಾತನಾಡುವಾಗ ಸ್ವಲ್ಪ ಗಮನಕೊಟ್ಟು ಮಾತನಾಡಿ, ನೀವೊಬ್ಬರು ಜವಾಬ್ದಾರಿಯುತ ಮಾಜಿ ಸಂಸದರು ಎಂಬುದನ್ನು ಮರೆಯಬಾರದು&quot; ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಶಾಸಕ ಹರೀಶ್ ಗೌಡ ನೀಡಿರುವ ಈ ಓಪನ್ ಚಾಲೆಂಜ್ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂಬರುವ ದಿನಗಳಲ್ಲಿ ಈ ನಾಯಕರ ಮಾತಿನ ಸಮರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.&lt;/p&gt;]]></content:encoded>
            <category>mysore</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/political-war-in-mysuru-mla-harish-gowda-challenges-former-mp-pratap-simha-to-contest-from-sakleshpur-gdp/articleshow-v11vlup"/>
        </item>
        <item>
            <title><![CDATA[BREAKING: ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರು ಬಿಡಲು CWRC ಆದೇಶ!]]></title>
            <link>https://kannada.asianetnews.com/state/cwrc-orders-karnataka-to-release-3500-cusecs-cauvery-water-to-tamil-nadu-for-15-days/articleshow-xtx6pkg</link>
            <guid isPermaLink="true">https://kannada.asianetnews.com/state/cwrc-orders-karnataka-to-release-3500-cusecs-cauvery-water-to-tamil-nadu-for-15-days/articleshow-xtx6pkg</guid>
            <pubDate>Tue, 28 Jul 2026 13:22:59 +0530</pubDate>
            <description><![CDATA[ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಜಲಾಶಯಗಳು ಬರಿದಾಗಿದ್ದರೂ, ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಶಿಫಾರಸು ಮಾಡಿದೆ. ಕರ್ನಾಟಕದ ವಾದವನ್ನು ಪರಿಗಣಿಸದ ಈ ಆದೇಶದಿಂದಾಗಿ ರಾಜ್ಯದ ರೈತರು ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳ ಜನರಲ್ಲಿ ಆತಂಕ ಮೂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kykva5ewd84mp1rr761yd1a2,imgname-karnataka-cauvery-water-cwrc-order-1785225090524.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ / ಬೆಂಗಳೂರು (ಜು.28): ರಾ&lt;/strong&gt;ಜ್ಯದಲ್ಲಿ ಮಳೆ ಕೊರತೆಯಿಂದ ಕಾವೇರಿ ನದಿಯ ಕೆಆರ್&zwnj;ಎಸ್ ಜಲಾಶಯದಲ್ಲಿ ನೀರಿಲ್ಲದೇ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳ ಜನರು ಪರದಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿರುವಾಗ ಕಾವೇರಿ ನೀರು ನಿಯಂತ್ರಣ ಸಮಿತಿಯ (Cauvery Water Regulation Committee - CWRC) ಮುಂದಿನ 15 ದಿನಗಳ ಕಾಲ ನಿರಂತರವಾಗಿ ದಿನಕ್ಕೆ 3,000 ಕ್ಯೂಸೆಕ್ ಕಾವೇರಿ ನೀರನ್ನು (Cusecs Water) ಬಿಡುಗಡೆ ಮಾಡುವಂತೆ ಸಮಿತಿಯು ಶಿಫಾರಸು ಮಾಡಿದೆ.&lt;/p&gt;&lt;p&gt;ದೆಹಲಿಯಲ್ಲಿ ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ (Cauvery Water Regulation Committee - CWRC) ಮಹತ್ವದ ಸಭೆ ಮುಕ್ತಾಯಗೊಂಡಿದ್ದು, ನೆರೆ ರಾಜ್ಯ ತಮಿಳುನಾಡಿಗೆ (Tamil Nadu) ಮತ್ತೊಮ್ಮೆ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಲಾಗಿದೆ. ಮುಂದಿನ 15 ದಿನಗಳ ಕಾಲ ನಿರಂತರವಾಗಿ ದಿನಕ್ಕೆ 3,500 ಕ್ಯೂಸೆಕ್ ಕಾವೇರಿ ನೀರನ್ನು (Cusecs Water) ಬಿಡುಗಡೆ ಮಾಡುವಂತೆ ಸಮಿತಿಯು ಶಿಫಾರಸು ಮಾಡಿದೆ.&lt;/p&gt;&lt;h2&gt;&lt;strong&gt;15 ದಿನಗಳ ಕಾಲ ನೀರು ಬಿಡಲು ಸೂಚನೆ:&lt;/strong&gt;&lt;/h2&gt;&lt;p&gt;ನವದೆಹಲಿಯಲ್ಲಿ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ನೀರಿನ ಲಭ್ಯತೆ, ಮಳೆಯ ಪ್ರಮಾಣ ಹಾಗೂ ಕುಡಿಯುವ ನೀರಿನ ಅಗತ್ಯತೆಯನ್ನು ಪರಾಮರ್ಶಿಸಿದ ಸಮಿತಿಯು, ತಮಿಳುನಾಡಿಗೆ ಇಂದಿನಿಂದಲೇ ಜಾರಿಗೆ ಬರುವಂತೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಬಿಡಲು ನಿರ್ದೇಶನ ನೀಡಿದೆ.&lt;/p&gt;&lt;h2&gt;&lt;strong&gt;ಕರ್ನಾಟಕದ ವಾದ ತಿರಸ್ಕೃತ?&lt;/strong&gt;&lt;/h2&gt;&lt;p&gt;ಸಭೆಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ (Water Resources Dept) ಅಧಿಕಾರಿಗಳು ಮತ್ತು ತಜ್ಞರ ತಂಡವು ರಾಜ್ಯದಲ್ಲಿ ಎದುರಾಗಿರುವ ತೀವ್ರ ಮಳೆ ಕೊರತೆ ಹಾಗೂ ಜಲಾಶಯಗಳಲ್ಲಿನ ಕಡಿಮೆ ನೀರಿನ ಮಟ್ಟದ ಬಗ್ಗೆ ವಿವರವಾದ ಮಾಹಿತಿ ನೀಡಿದ್ದರು. ಹಾರಂಗಿ ಹೊರತುಪಡಿಸಿ ಕೆಆರ್&zwnj;ಎಸ್ (KRS Dam), ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಕುಡಿಯುವ ನೀರಿಗೆ ಮತ್ತು ಸ್ಥಳೀಯ ರೈತರ ಬೆಳೆಗೆ ನೀರಿಲ್ಲ ಎಂದು ಬಲವಾಗಿ ವಾದ ಮಂಡಿಸಲಾಗಿತ್ತು. ಆದಾಗ್ಯೂ, ಸಮಿತಿಯು ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿರುವುದು ಕರ್ನಾಟಕದ ರೈತರಲ್ಲಿ ತೀವ್ರ ಕಳವಳ ಮೂಡಿಸಿದೆ.&lt;/p&gt;&lt;h2&gt;&lt;strong&gt;ಪ್ರಾಧಿಕಾರಕ್ಕೆ ಮೇಲ್ಮನವಿ ಸಾಧ್ಯತೆ:&lt;/strong&gt;&lt;/h2&gt;&lt;p&gt;CWRC ನೀಡಿರುವ ಈ ಆದೇಶದಿಂದಾಗಿ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಮತ್ತೆ ನೀರಿನ್&zwnj; ಅಭಾವ ಎದುರಾಗುವ ಭೀತಿ ಶುರುವಾಗಿದೆ. ಹೀಗಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಈ ತೀರ್ಮಾನದ ವಿರುದ್ಧ ಕರ್ನಾಟಕ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>mysore</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/cwrc-orders-karnataka-to-release-3500-cusecs-cauvery-water-to-tamil-nadu-for-15-days/articleshow-xtx6pkg"/>
        </item>
        <item>
            <title><![CDATA[ಮೈಸೂರಿನಲ್ಲಿ ಇದೆ ಮಹಾನ್ ಚೇತನನ ಹೆಜ್ಜೆ ಗುರುತು.. ಈ ಬಾರಿ ಮೋದಿ ಭೇಟಿ ನೀಡ್ತಿರುವ ಈ ಸ್ಥಳದ ಮಹತ್ವವೇನು?]]></title>
            <link>https://kannada.asianetnews.com/gallery/mysore/what-is-the-significance-of-the-place-that-pm-modi-is-visiting-in-mysuru-this-time-gkn-y29orsx</link>
            <guid isPermaLink="true">https://kannada.asianetnews.com/gallery/mysore/what-is-the-significance-of-the-place-that-pm-modi-is-visiting-in-mysuru-this-time-gkn-y29orsx</guid>
            <pubDate>Sun, 26 Jul 2026 10:22:24 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ನೂತನ 'ವಿವೇಕ ಸ್ಮಾರಕ'ವನ್ನು ಲೋಕಾರ್ಪಣೆ ಮಾಡಲಿದ್ದಾರೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಇದು ಯುವ ಸಬಲೀಕರಣ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyebqenz380z8pxcdd812mn2,imgname-pm-modi-visit-mysore-viveka-memoria--10--1785040976575.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ನೂತನ 'ವಿವೇಕ ಸ್ಮಾರಕ'ವನ್ನು ಲೋಕಾರ್ಪಣೆ ಮಾಡಲಿದ್ದಾರೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಇದು ಯುವ ಸಬಲೀಕರಣ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.&lt;/p&gt;&lt;img&gt;&lt;p&gt;ಮೈಸೂರು: ಆಗಸ್ಟ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ಪ್ರಮುಖ ಉದ್ದೇಶ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ 'ವಿವೇಕ ಸ್ಮಾರಕ' (Viveka Smaraka) ವನ್ನು ಲೋಕಾರ್ಪಣೆ ಮಾಡುವುದು. ಹಾಗಾದರೆ, ಮೋದಿ ಭೇಟಿ ನೀಡುತ್ತಿರುವ ಈ ಸ್ಥಳದ ಮಹತ್ವವೇನು? ಇಲ್ಲಿ ಅಡಗಿರುವ ಐತಿಹಾಸಿಕ ಕ್ಷಣಗಳಾವುವು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.&lt;/p&gt;&lt;p&gt;ವಿವೇಕ ಸ್ಮಾರಕ ಕೇವಲ ಒಂದು ಕಟ್ಟಡವಲ್ಲ; ಇದು ಭಾರತದ ಆಧ್ಯಾತ್ಮಿಕ ಇತಿಹಾಸದ ಒಂದು ಪ್ರಮುಖ ಪುಟ. 1893ರಲ್ಲಿ ಶಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡುವ ಮೊದಲು, ಅಂದರೆ 1892ರ ನವೆಂಬರ್&zwnj;ನಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದರು. ಸುಮಾರು ಮೂರು ವಾರಗಳ ಕಾಲ ಅವರು ಇಲ್ಲಿ ತಂಗಿದ್ದರು.&lt;/p&gt;&lt;img&gt;&lt;p&gt;ಈ ವೇಳೆ ಅಂದಿನ ಮೈಸೂರು ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ ಮತ್ತು ದಿವಾನರಾದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರೊಂದಿಗೆ ವಿವೇಕಾನಂದರು ಸಂವಾದ ನಡೆಸಿದ್ದರು. ವಿದೇಶದಲ್ಲಿ ಭಾರತದ ಸನಾತನ ಧರ್ಮದ ಧ್ವಜವನ್ನು ಹಾರಿಸಲು ಮಹಾರಾಜರು ನೀಡಿದ ಬೆಂಬಲ ಮತ್ತು ಪ್ರೋತ್ಸಾಹ ಸ್ವಾಮೀಜಿಯವರ ನಿರ್ಧಾರಕ್ಕೆ ದೊಡ್ಡ ಬಲ ತುಂಬಿತ್ತು. ಆ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಸ್ಥಳದಲ್ಲೇ ಇಂದು ಈ ಸ್ಮಾರಕ ತಲೆಯೆತ್ತಿದೆ.&lt;/p&gt;&lt;img&gt;&lt;p&gt;ಈ ಸ್ಮಾರಕ ನಿರ್ಮಾಣವಾದ ಜಾಗವು ಈ ಹಿಂದೆ 'ಎನ್&zwnj;.ಟಿ.ಆರ್. ಶಾಲೆ' (NTR School) ಆವರಣವಾಗಿತ್ತು. ಈ ಜಾಗವನ್ನು ವಿವೇಕಾನಂದರ ಸ್ಮಾರಕವಾಗಿ ಪರಿವರ್ತಿಸಲು ರಾಮಕೃಷ್ಣ ಆಶ್ರಮವು ಹತ್ತಾರು ವರ್ಷಗಳ ಕಾಲ ಹೋರಾಟ ನಡೆಸಿದೆ. ಹಳೆಯ ಶಾಲೆಯನ್ನು ಸ್ಥಳಾಂತರಿಸಲು ವಿರೋಧ ವ್ಯಕ್ತವಾಗಿದ್ದರೂ, ಸುದೀರ್ಘ ಕಾನೂನು ಹೋರಾಟದ ನಂತರ ಹೈಕೋರ್ಟ್ ಆದೇಶದಂತೆ ಜಾಗವನ್ನು ಹಸ್ತಾಂತರಿಸಲಾಯಿತು. ರಾಮಕೃಷ್ಣ ಆಶ್ರಮವು ಇದಕ್ಕೆ ಪ್ರತಿಯಾಗಿ ಅತ್ಯಂತ ಸುಸಜ್ಜಿತವಾದ ಪರ್ಯಾಯ ಶಾಲಾ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ.&lt;/p&gt;&lt;img&gt;&lt;p&gt;ಇದು ಕೇವಲ ದರ್ಶನ ಪಡೆಯುವ ಸ್ಥಳವಲ್ಲ, ಬದಲಿಗೆ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಇದರ ಪ್ರಮುಖ ಆಕರ್ಷಣೆಗಳೆಂದರೆ..&lt;/p&gt;&lt;ul&gt; &lt;li&gt;&lt;strong&gt;ಧ್ಯಾನ ಮಂದಿರ: &lt;/strong&gt;ಮನಸ್ಸಿನ ಶಾಂತಿ ಮತ್ತು ಏಕಾಗ್ರತೆಗಾಗಿ ಅತ್ಯಂತ ಸುಂದರವಾದ ಧ್ಯಾನ ಮಂದಿರ ಇಲ್ಲಿದೆ&lt;/li&gt; &lt;li&gt;&lt;strong&gt;ಭವ್ಯ ಕಂಚಿನ ಪ್ರತಿಮೆ: &lt;/strong&gt;ಸ್ವಾಮಿ ವಿವೇಕಾನಂದರ ಎತ್ತರದ ಕಂಚಿನ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿದೆ&lt;/li&gt; &lt;li&gt;&lt;strong&gt;ಚಿತ್ರಪಟ ಪ್ರದರ್ಶನ (Gallery)&lt;/strong&gt;: ಆಧುನಿಕ ತಂತ್ರಜ್ಞಾನ ಬಳಸಿ ಸ್ವಾಮೀಜಿಯವರ ಜೀವನದ ಪ್ರಮುಖ ಘಟ್ಟಗಳು ಮತ್ತು ಮೈಸೂರು ಭೇಟಿಯ ಕ್ಷಣಗಳನ್ನು ವಿವರಿಸುವ ಗ್ಯಾಲರಿ ಇಲ್ಲಿದೆ&lt;/li&gt; &lt;li&gt;&lt;strong&gt;ಯುವ ಸಬಲೀಕರಣ ಕೇಂದ್ರ:&lt;/strong&gt; ಇಲ್ಲಿ ಯುವಜನರಿಗೆ ನಾಯಕತ್ವ ಗುಣ, ಮೌಲ್ಯಾಧಾರಿತ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ದೇಶಪ್ರೇಮದ ತರಬೇತಿ ನೀಡಲಾಗುತ್ತದೆ&lt;/li&gt;&lt;/ul&gt;&lt;img&gt;&lt;p&gt;ಸ್ವಾಮಿ ವಿವೇಕಾನಂದರ ತತ್ತ್ವಗಳು 2047ರ ವೇಳೆಗೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ (Viksit Bharat 2047) ಹಾದಿಯಲ್ಲಿ ದಾರಿದೀಪವಾಗಲಿವೆ ಎಂಬುದು ಕೇಂದ್ರ ಸರ್ಕಾರದ ಆಶಯ. ಯುವಶಕ್ತಿಯನ್ನು ಸರಿಯಾದ ಹಾದಿಯಲ್ಲಿ ನಡೆಸಲು ಈ ಕೇಂದ್ರವು ಸಹಕಾರಿಯಾಗಲಿದೆ. ಆಗಸ್ಟ್ 1ರಂದು ಮಧ್ಯಾಹ್ನ ಪ್ರಧಾನಿ ಮೋದಿ ಈ ಪವಿತ್ರ ತಾಣವನ್ನು ಉದ್ಘಾಟಿಸಿ ದೇಶಕ್ಕೆ ಸಮರ್ಪಿಸಲಿದ್ದಾರೆ.&lt;/p&gt;]]></content:encoded>
            <category>mysore</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/mysore/what-is-the-significance-of-the-place-that-pm-modi-is-visiting-in-mysuru-this-time-gkn-y29orsx"/>
        </item>
        <item>
            <title><![CDATA[ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರಧಾನಿ ಮೋದಿಯಿಂದ ವಿವೇಕ ಸ್ಮಾರಕ ಉದ್ಘಾಟನೆ]]></title>
            <link>https://kannada.asianetnews.com/karnataka-districts/pm-modi-inaugurates-viveka-memorial-at-ramakrishna-ashrama-in-mysuru/articleshow-zvlk4ut</link>
            <guid isPermaLink="true">https://kannada.asianetnews.com/karnataka-districts/pm-modi-inaugurates-viveka-memorial-at-ramakrishna-ashrama-in-mysuru/articleshow-zvlk4ut</guid>
            <pubDate>Sat, 01 Aug 2026 16:51:14 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿದ ಮೋದಿ ವಿವೇಕ ಸಾಂಸ್ಕೃತಿ ಕೇಂದ್ರ ಉದ್ಘಾಟನೆ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyygjsypmv0e6mx7kenndnb7,imgname-narendra-modi-at-mysuru-1785582938070.png" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು (ಆ.01) ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ( ವಿವೇಕ ಸ್ಮಾರಕ)ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಇಲ್ಲಿ ತಂಗಿದ್ದರು. ಈ ಪ್ರಮುಖ ಹಾಗೂ ವಿಶೇಷ ಘಟನೆಯ ನೆನಪಿಗಾಗಿ ವಿವೇಕ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಥ್ ನೀಡಿದರು.45 ಕೋಟಿ ರೂಪಾಯಿ ವೆಚ್ಚದ ವಿವೇಕ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆಗೊಂಡಿದೆ. ವೀವೇಕ ಕೇಂದ್ರದಲ್ಲಿ ಗಿಡ ನಡುವ ಮೂಲಕ ಮೋದಿ ವಿವೇಕ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕವನ್ನು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯಲ್ಲಿ ಮೂಡಿಬಂದಿದೆ.&lt;/p&gt;&lt;h2&gt;ಸ್ವಾಮಿ ವಿವೇಕಾನಂದರ ಆಶೀರ್ವಾದ ಪಡೆದ ಮೋದಿ&lt;/h2&gt;&lt;p&gt;1892ರಲ್ಲಿ ಮೈಸೂರಿಗೆ ಆಗಮಿಸಿದ್ದ ಸ್ವಾಮಿ ವಿವೇಕಾನಂದರು ಇದೇ ಸ್ಥಳದಲ್ಲಿ ಪ್ರವಚನ ನೀಡಿದ್ದರು. ಈ ವೇಳೆ ಮೈಸೂರು ಮಹಜಾರಾಜರು, ದಿವಾನರು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದರ ಸವಿನೆನಪಿಗಾಗಿ ಇದೀಗ ವಿವೇಕ ಸ್ಮಾರಕ ತಲೆ ಎತ್ತಿದೆ. ವಿವೇಕ ಸ್ಮಾರಕ ಉದ್ಘಾಟನೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ರಾಮಕೃಷ್ಣ ಆಶ್ರಮದಲ್ಲಿರುವ ಸ್ವಾಮಿ ವಿವೇಕಾನಂದರ ಮೂರ್ತಿಗೆ ನಮನ ಸಲ್ಲಿಸಿದರು.ವಿವೇಕಾನಂದ ಸ್ಮಾರಕದಲ್ಲಿ ಕುಳಿತ ಪ್ರಧಾನಿ ಮೋದಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಮೇಲೆ ಬೆಳಕು ಚೆಲ್ಲಿದರು.&lt;/p&gt;&lt;p&gt;ಆಂಧ್ರ ಪ್ರದೇಶಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಬಳಿಕ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ ಮೋದಿಯನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೂಗುಚ್ಚ ನೀಡಿ ಸ್ವಾಗತ ನೀಡಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ರಸ್ತೆ ಮಾರ್ಗವಾಗಿ ಓವೆಲ್ ಮೈದಾನಕ್ಕೆ ಆಗಮಿಸಿದರು.&lt;/p&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನಲೆಯಲ್ಲಿ ಭಾರಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಇಷ್ಟೇ ಅಲ್ಲ ಮೋದಿ ಸಂಚರಿಸುವ ಮಾರ್ಗಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.ಮೋದಿ ಸಂಚರಿಸುವ ಮಾರ್ಗದ ಇಕ್ಕೆಲಗಳಲ್ಲಿ ಕಿಕ್ಕಿರಿದು ಜನ ತುಂಬಿದ್ದರು. ಮೋದಿಯತ್ತ ಕೈಬೀಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮೋದಿ ಮೋದಿ ಎಂಬ ಜಯಘೋಷಗಳು ಮೊಳಗಿದೆ. ಪ್ರಧಾನಿ ಮೋದಿಯನ್ನು ಹತ್ತಿರದಿಂದ ನೋಡಿ ಹಲವು ಖುಷಿಯಾಗಿದ್ದಾರೆ. ಜೀವನದಲ್ಲಿ ಮೊದಲ ಬಾರಿಗೆ ಮೋದಿ ನೋಡಿದ್ದೇವೆ. ನಮ್ಮ ಬಳಿ ಬಂದಾಗ ಮೋದಿ ವಾಹನ ನಿಧಾನ ಮಾಡಿ ಕೈಬೀಸಿದರು. ಇದು ನಮ್ಮ ಖುಷಿ ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>mysore</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/pm-modi-inaugurates-viveka-memorial-at-ramakrishna-ashrama-in-mysuru/articleshow-zvlk4ut"/>
        </item>
    </channel>
</rss>
