<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 07 Aug 2026 22:27:54 +0530</lastBuildDate>
        <atom:link href="https://kannada.asianetnews.com/rss/my-money-money" rel="self" type="application/rss+xml"/>
        <item>
            <title><![CDATA[Fast Tag: ವಾಹನ ಸವಾರರಿಗೆ ಗುಡ್ ನ್ಯೂಸ್; ಫಾಸ್ಟ್‌ಟ್ಯಾಗ್ ಹೆಚ್ಚುವರಿ ಹಣ ಕಡಿತವಾದರೆ 100% ರಿಫಂಡ್ ಪಕ್ಕಾ!]]></title>
            <link>https://kannada.asianetnews.com/my-money-money/fastag-wrong-toll-deduction-100-percent-refund-mp-high-court-verdict-bmk/articleshow-9atd48v</link>
            <guid isPermaLink="true">https://kannada.asianetnews.com/my-money-money/fastag-wrong-toll-deduction-100-percent-refund-mp-high-court-verdict-bmk/articleshow-9atd48v</guid>
            <pubDate>Sat, 18 Jul 2026 21:15:02 +0530</pubDate>
            <description><![CDATA[&lt;p&gt;ಮಧ್ಯಪ್ರದೇಶ ಹೈಕೋರ್ಟ್&zwnj;ನ ಐತಿಹಾಸಿಕ ತೀರ್ಪಿನ ಪ್ರಕಾರ, ಫಾಸ್ಟ್&zwnj;ಟ್ಯಾಗ್&zwnj;ನಲ್ಲಿ ತಾಂತ್ರಿಕ ದೋಷದಿಂದ ಹೆಚ್ಚುವರಿ ಹಣ ಕಡಿತವಾದರೆ ವಾಹನ ಸವಾರರಿಗೆ ಶೇ. 100ರಷ್ಟು ಮರುಪಾವತಿ ಮಾಡಬೇಕು. ಅದೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hme3bafjp1ts5zd956fd2qae,imgname-Update-Your-Fast-tagKYC-1705575295474.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಧ್ಯಪ್ರದೇಶ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಟೋಲ್ ಪ್ಲಾಜಾಗಳಲ್ಲಿ ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯದಿಂದಾಗಿ ಫಾಸ್ಟ್&zwnj;ಟ್ಯಾಗ್ ಖಾತೆಯಿಂದ ಹೆಚ್ಚುವರಿ ಹಣ ಕಡಿತವಾದರೆ, ವಾಹನ ಮಾಲೀಕರಿಗೆ ಶೇ. 100 ರಷ್ಟು ಹಣವನ್ನು ಮರುಪಾವತಿ ಮಾಡಬೇಕು ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ಆದೇಶವು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿರದೆ, ಇಡೀ ದೇಶಕ್ಕೆ ಮಾದರಿಯಾಗುವಂತಹ ಮುನ್ಸೂಚನೆಯನ್ನು ನೀಡಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ದೇಶದಲ್ಲಿ ಫಾಸ್ಟ್&zwnj;ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ವಾಹನ ಸವಾರರ ಪ್ರಯಾಣ ಸುಲಭವಾಗಿದೆಯಾದರೂ, ತಾಂತ್ರಿಕ ದೋಷಗಳ ಸಮಸ್ಯೆಗಳು ನಿರಂತರವಾಗಿ ಕಾಡುತ್ತಿವೆ. ಹಲವು ಸಂದರ್ಭಗಳಲ್ಲಿ ವಾಹನಗಳು ಟೋಲ್ ದಾಟದಿದ್ದರೂ ಹಣ ಕಡಿತವಾಗುವುದು, ನಿಗದಿತ ಶುಲ್ಕಕ್ಕಿಂತ ದುಪ್ಪಟ್ಟು ಹಣ ಕಟ್ ಆಗುವುದು ಅಥವಾ ಒಂದೇ ಟೋಲ್&zwnj;ನಲ್ಲಿ ಎರಡು ಬಾರಿ ಹಣ ಕಡಿತವಾಗುವಂತಹ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದವು. ಇಂತಹದೇ ಒಂದು ಗಂಭೀರ ಪ್ರಕರಣದ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್, ಟೋಲ್ ಕಂಪನಿಗಳು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮೊಂಡುತನಕ್ಕೆ ಬ್ರೇಕ್ ಹಾಕಿದೆ.&lt;/p&gt;&lt;h3&gt;&lt;strong&gt;ಹೈಕೋರ್ಟ್ ತೀರ್ಪಿನಲ್ಲಿ ಏನಿದೆ?&lt;/strong&gt;&lt;/h3&gt;&lt;p&gt;ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು, &quot;ಫಾಸ್ಟ್&zwnj;ಟ್ಯಾಗ್ ವ್ಯವಸ್ಥೆಯು ಸಾರ್ವಜನಿಕರ ಅನುಕೂಲಕ್ಕಾಗಿ ಇರುವುದೇ ಹೊರತು ಅವರನ್ನು ಸುಲಿಗೆ ಮಾಡುವುದಕ್ಕಲ್ಲ. ತಾಂತ್ರಿಕ ದೋಷ ಅಥವಾ ಟೋಲ್ ಸಿಬ್ಬಂದಿಯ ತಪ್ಪಿನಿಂದಾಗಿ ವಾಹನ ಸವಾರರಿಂದ ಹೆಚ್ಚುವರಿ ಹಣ ಕಡಿತವಾದರೆ, ಅದಕ್ಕೆ ಗ್ರಾಹಕರು ಜವಾಬ್ದಾರರಲ್ಲ. ಅಂತಹ ಸಂದರ್ಭಗಳಲ್ಲಿ ಕಡಿತವಾದ ಹೆಚ್ಚುವರಿ ಮೊತ್ತವನ್ನು ಸಂಪೂರ್ಣವಾಗಿ (100% Refund) ಗ್ರಾಹಕರ ಖಾತೆಗೆ ಮರುಪಾವತಿಸಬೇಕು&quot; ಎಂದು ಆದೇಶಿಸಿದೆ.&lt;/p&gt;&lt;h3&gt;&lt;strong&gt;ಕಚೇರಿಗೆ ಅಲೆಯುವ ಅಗತ್ಯವಿಲ್ಲ!&lt;/strong&gt;&lt;/h3&gt;&lt;p&gt;ಇದರೊಂದಿಗೆ, ಹೆಚ್ಚುವರಿ ಹಣ ಕಡಿತವಾದಾಗ ಅದನ್ನು ವಾಪಸ್ ಪಡೆಯಲು ಗ್ರಾಹಕರು ಕಚೇರಿಗಳಿಂದ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಬ್ಯಾಂಕ್&zwnj;ಗಳು ಮತ್ತು ಟೋಲ್ ಆಪರೇಟರ್&zwnj;ಗಳು ಈ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಬೇಕು ಮತ್ತು ತನಿಖೆಯ ನಂತರ ತಪ್ಪು ಸಾಬೀತಾದರೆ ತಕ್ಷಣವೇ ಹಣವನ್ನು ರೀಫಂಡ್ ಮಾಡಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.&lt;/p&gt;&lt;h3&gt;&lt;strong&gt;ದೇಶದಾದ್ಯಂತ ವಾಹನ ಸವಾರರಿಗೆ ಸಿಕ್ಕ ದೊಡ್ಡ ಜಯ!&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಟೋಲ್&zwnj;ನಲ್ಲಿ ₹50 ಅಥವಾ ₹100 ಹೆಚ್ಚಿಗೆ ಕಟ್ ಆದಾಗ, ಸಾಮಾನ್ಯ ಜನರು ಕಾನೂನು ಹೋರಾಟ ಮಾಡಲು ಹೋಗುವುದಿಲ್ಲ ಅಥವಾ ಬ್ಯಾಂಕ್&zwnj;ಗಳಿಗೆ ದೂರು ನೀಡಿ ಸುಸ್ತಾಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಕೆಲವು ಟೋಲ್ ಆಪರೇಟರ್&zwnj;ಗಳಿಗೆ ಈ ತೀರ್ಪು ಚಾಟಿ ಬೀಸಿದಂತಾಗಿದೆ. ಮಧ್ಯಪ್ರದೇಶ ಹೈಕೋರ್ಟ್&zwnj;ನ ಈ ತೀರ್ಪನ್ನು ಆಧರಿಸಿ, ಇನ್ನುಮುಂದೆ ದೇಶದ ಯಾವುದೇ ಮೂಲೆಯಲ್ಲಾದರೂ ಫಾಸ್ಟ್&zwnj;ಟ್ಯಾಗ್&zwnj;ನಲ್ಲಿ ತಪ್ಪಾಗಿ ಹಣ ಕಡಿತವಾದರೆ ಗ್ರಾಹಕರು ತಮ್ಮ ಹಕ್ಕನ್ನು ಚಲಾಯಿಸಿ ಸಂಪೂರ್ಣ ಮರುಪಾವತಿ ಕೋರಬಹುದಾಗಿದೆ.&lt;/p&gt;&lt;h3&gt;&lt;strong&gt;ಹಣ ವಾಪಸ್ ಪಡೆಯಲು ಗ್ರಾಹಕರು ಏನು ಮಾಡಬೇಕು?&lt;/strong&gt;&lt;/h3&gt;&lt;p&gt;ಒಂದೊಮ್ಮೆ ನಿಮ್ಮ ಫಾಸ್ಟ್&zwnj;ಟ್ಯಾಗ್&zwnj;ನಿಂದಲೂ ಹೆಚ್ಚಿನ ಹಣ ಕಡಿತವಾದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:&lt;/p&gt;&lt;p&gt;&lt;strong&gt;ದೂರು ದಾಖಲಿಸಿ; &lt;/strong&gt;ಹಣ ಕಡಿತವಾದ ತಕ್ಷಣವೇ ನಿಮ್ಮ ಫಾಸ್ಟ್&zwnj;ಟ್ಯಾಗ್ ಒದಗಿಸಿದ ಬ್ಯಾಂಕ್ ಅಥವಾ ಎನ್&zwnj;ಎಚ್&zwnj;ಎಐ (NHAI) ಸಹಾಯವಾಣಿ ಸಂಖ್ಯೆ 1033 ಗೆ ಕರೆ ಮಾಡಿ ದೂರು ನೀಡಬೇಕು.&lt;/p&gt;&lt;p&gt;&lt;strong&gt;ಆಧಾರಗಳನ್ನು ಒದಗಿಸಿ; &lt;/strong&gt;ಟೋಲ್ ಪ್ಲಾಜಾ ದಾಟಿದ ಸಮಯದ ಮೆಸೇಜ್ ಮತ್ತು ನಿಮ್ಮ ವಾಹನದ ವಿವರಗಳನ್ನು ಕ್ಲೈಮ್ ಮಾಡುವಾಗ ಸಲ್ಲಿಸಬೇಕಾಗುತ್ತದೆ.&lt;/p&gt;&lt;p&gt;&lt;strong&gt;100% ರಿಫಂಡ್ ಪಕ್ಕಾ;&lt;/strong&gt; ಹೊಸ ನಿಯಮದ ಪ್ರಕಾರ, ತಾಂತ್ರಿಕ ತಪಾಸಣೆಯ ನಂತರ ನಿಮ್ಮ ದೂರು ನಿಜವೆಂದು ಕಂಡುಬಂದರೆ, ಕಡಿತಗೊಂಡ ಸಂಪೂರ್ಣ ಮೊತ್ತವು ನಿಮ್ಮ ಫಾಸ್ಟ್&zwnj;ಟ್ಯಾಗ್ ವಾಲೆಟ್&zwnj;ಗೆ ಮರಳಿ ಜಮೆಯಾಗುತ್ತದೆ.&lt;/p&gt;&lt;p&gt;&lt;strong&gt;ಹಣ ಉಳಿಸಿಕೊಳ್ಳಲು ಸಾಧ್ಯವಿಲ್ಲ; &lt;/strong&gt;ಮಧ್ಯಪ್ರದೇಶ ಹೈಕೋರ್ಟ್&zwnj;ನ ಈ ನಿರ್ಧಾರವು ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ನೆರವಾಗಲಿದ್ದು, ಗ್ರಾಹಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಮೈಲಿಗಲ್ಲಾಗಿದೆ. ಇನ್ನುಮುಂದೆ ಟೋಲ್ ಕಂಪನಿಗಳು ತಾಂತ್ರಿಕ ದೋಷಗಳ ನೆಪ ಹೇಳಿ ಸಾರ್ವಜನಿಕರ ಹಣವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.&lt;/p&gt;]]></content:encoded>
            <category>my-money-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/my-money-money/fastag-wrong-toll-deduction-100-percent-refund-mp-high-court-verdict-bmk/articleshow-9atd48v"/>
        </item>
        <item>
            <title><![CDATA[RBI: ಸಾಲಗಾರರಿಗೆ ದೊಡ್ಡ ರಿಲೀಫ್! ಲೋನ್ ಡಿಫಾಲ್ಟ್ ಆದ್ರೂ ಡಿವೈಸ್ ಲಾಕ್ ಮಾಡೋ ಹಾಗಿಲ್ಲ! ರಿಸರ್ವ್ ಬ್ಯಾಂಕ್‌ನಿಂದ ಹೊಸ ರೂಲ್ಸ್‌!]]></title>
            <link>https://kannada.asianetnews.com/my-money-money/rbi-new-rules-no-device-lock-for-loan-default-except-financed-phones-bmk/articleshow-d4xw6q6</link>
            <guid isPermaLink="true">https://kannada.asianetnews.com/my-money-money/rbi-new-rules-no-device-lock-for-loan-default-except-financed-phones-bmk/articleshow-d4xw6q6</guid>
            <pubDate>Fri, 07 Aug 2026 20:01:35 +0530</pubDate>
            <description><![CDATA[&lt;p&gt;ಸಾಲ ಮರುಪಾವತಿ ಮಾಡದ ಗ್ರಾಹಕರ ಫೋನ್&zwnj;ಗಳನ್ನು ಬ್ಯಾಂಕ್&zwnj;ಗಳು ರಿಮೋಟ್ ಆಗಿ ಲಾಕ್ ಮಾಡುವಂತಿಲ್ಲ ಎಂದು ಆರ್&zwnj;ಬಿಐ ಸ್ಪಷ್ಟಪಡಿಸಿದೆ. ಆದರೆ, ನಿರ್ದಿಷ್ಟವಾಗಿ 'ಡಿವೈಸ್ ಲೋನ್' ಪಡೆದು ಅದನ್ನು ಮರುಪಾವತಿಸದಿದ್ದಲ್ಲಿ ಮಾತ್ರ, ಮುಂಚಿತ ಮಾಹಿತಿ ನೀಡಿ ಆ ಸಾಧನವನ್ನು ಸ್ಥಗಿತಗೊಳಿಸಲು ಅವಕಾಶವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvends3vm4dnpfjkjqyn17cz,imgname----------------------6--1781829919867.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಲ ಮರುಪಾವತಿ ಮಾಡದ ಗ್ರಾಹಕರ ವಿರುದ್ಧ ಬ್ಯಾಂಕ್&zwnj;ಗಳು ಕೈಗೊಳ್ಳುವ ವಸೂಲಾತಿ ಕ್ರಮಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಹತ್ವದ ಸ್ಪಷ್ಟನೆ ನೀಡಿದೆ. ಗೃಹ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲಗಳನ್ನು (Personal Loans) ಮರುಪಾವತಿಸಲು ಡೀಫಾಲ್ಟ್ ಆದ ತಕ್ಷಣ, ವಸೂಲಾತಿ ನೆಪದಲ್ಲಿ ಬ್ಯಾಂಕ್&zwnj;ಗಳು ಗ್ರಾಹಕರ ಫೋನ್ ಅಥವಾ ಲ್ಯಾಪ್&zwnj;ಟಾಪ್&zwnj;ಗಳನ್ನು ರಿಮೋಟ್&zwnj; ಮೂಲಕ ಸ್ಥಗಿತಗೊಳಿಸುವಂತಿಲ್ಲ (Remote Lock) ಎಂದು ಆರ್&zwnj;ಬಿಐ ಸ್ಪಷ್ಟಪಡಿಸಿದೆ. ಆದರೆ, ಗ್ರಾಹಕರು ನಿರ್ದಿಷ್ಟವಾಗಿ ಅದೇ ಮೊಬೈಲ್ ಅಥವಾ ಲ್ಯಾಪ್&zwnj;ಟಾಪ್ ಖರೀದಿಸಲು &lsquo;ಡಿವೈಸ್ ಲೋನ್&rsquo; ಪಡೆದು, ಆ ಲೋನ್ ಕಂತುಗಳನ್ನು ಮರುಪಾವತಿಸದಿದ್ದಲ್ಲಿ ಮಾತ್ರ ಆ ಸಾಧನಗಳನ್ನು ಸ್ಥಗಿತಗೊಳಿಸಲು ಬ್ಯಾಂಕ್&zwnj;ಗಳಿಗೆ ಅವಕಾಶವಿರುತ್ತದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.&lt;/p&gt;&lt;h2&gt;&lt;strong&gt;ಹೊಸ ಮಾರ್ಗಸೂಚಿ ಏನು ಹೇಳುತ್ತದೆ?&lt;/strong&gt;&lt;/h2&gt;&lt;p&gt;ಆರ್&zwnj;ಬಿಐ ಹೊಸ ಮಾರ್ಗಸೂಚಿಗಳ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಸಾಲ ವಸೂಲಾತಿಗಾಗಿ ಬ್ಯಾಂಕುಗಳು ಕೆಲವು ಬ್ಯಾಂಕಿಂಗ್ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು. ಆದರೆ ಈ ಕ್ರಮವನ್ನು ಏಕಾಏಕಿ ಜಾರಿಗೆ ತರದೆ, ಗ್ರಾಹಕರಿಗೆ ಮುಂಚಿತ ಮಾಹಿತಿ ನೀಡಿ ಹಂತ ಹಂತವಾಗಿ ಅನುಸರಿಸಬೇಕು. ಸಾಲ ವಸೂಲಾತಿ ವೇಳೆ ಸಾಮಾಜಿಕ ಮಾಧ್ಯಮಗಳ ಮೂಲಕ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು ಅಥವಾ ನಿಂದನೀಯ ಭಾಷೆ ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಆರ್&zwnj;ಬಿಐ ಸ್ಪಷ್ಟಪಡಿಸಿದೆ.&lt;/p&gt;&lt;h3&gt;&lt;strong&gt;ಜನವರಿ 2027ರಿಂದ ಹೊಸ ರೂಲ್ಸ್&zwnj;!&lt;/strong&gt;&lt;/h3&gt;&lt;p&gt;ಮರುಪಾವತಿಗೆ ಸಂಬಂಧಿಸಿದ ನಿಯಮಗಳು ಜನವರಿ 1, 2027 ರಿಂದ ಜಾರಿಗೆ ಬರುತ್ತವೆ. ಕೇಂದ್ರ ಬ್ಯಾಂಕಿನ ಸುತ್ತೋಲೆಯ ಪ್ರಕಾರ, ಈ ನಿಯಮಗಳು ಜನವರಿ 1, 2027 ರಿಂದ ಜಾರಿಗೆ ಬರಲಿವೆ. ಸುತ್ತೋಲೆಯಲ್ಲಿ, 'ಯಾವುದೇ ಬ್ಯಾಂಕ್ ಅಂತಹ ತಂತ್ರಜ್ಞಾನ ಆಧಾರಿತ ಕಾರ್ಯವಿಧಾನಗಳನ್ನು ಮರುಪಾವತಿ ಸಾಧನಗಳಿಗಾಗಿ ಬಳಸುವಂತಿಲ್ಲ. ಇದರಿಂದಾಗಿ ಸಾಲಗಾರರ ಮೊಬೈಲ್ ಫೋನ್&zwnj;ಗಳು, ಟ್ಯಾಬ್ಲೆಟ್&zwnj;ಗಳು ಮತ್ತು ಲ್ಯಾಪ್&zwnj;ಟಾಪ್&zwnj;ಗಳಂತಹ ಸಾಧನಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಅವರು ನೀಡಿದ ಸಾಲದ ವಿರುದ್ಧ ಈ ಸಾಧನಗಳನ್ನು ಖರೀದಿಸಿದಾಗ. ಆಗ ಮಾತ್ರ ಬ್ಯಾಂಕ್ ಹಾಗೆ ಮಾಡಬಹುದು ಎಂದು ಹೇಳಲಾಗಿದೆ.&lt;/p&gt;&lt;h3&gt;&lt;strong&gt;ಆರಂಭಿಕ ಹಂತಗಳು!&lt;/strong&gt;&lt;/h3&gt;&lt;p&gt;ಬ್ಯಾಂಕ್ ಲ್ಯಾಪ್&zwnj;ಟಾಪ್-ಮೊಬೈಲ್ ಫೋನ್ ಅನ್ನು ಆಫ್ ಮಾಡಲು ಸಾಧ್ಯವಿಲ್ಲ. ಗ್ರಾಹಕರು ಬ್ಯಾಂಕಿನಿಂದ ಸಾಲ ಪಡೆದು ಲ್ಯಾಪ್&zwnj;ಟಾಪ್, ಮೊಬೈಲ್ ನಂತಹ ಸಾಧನವನ್ನು ಖರೀದಿಸಿದ್ದರೆ, ಬ್ಯಾಂಕ್ ಅದನ್ನು ತಕ್ಷಣವೇ ಸ್ಥಗಿತಗೊಳಿಸುವ ಬದಲು ಹಂತ ಹಂತವಾಗಿ ಸಾಧನವನ್ನು ನಿಷ್ಕ್ರಿಯಗೊಳಿಸಲು ಆಯ್ಕೆ ಮಾಡಬಹುದು ಎಂದು ಆರ್&zwnj;ಬಿಐ ಹೇಳಿದೆ. ಇದರೊಂದಿಗೆ, ಒಳಬರುವ ಕರೆಗಳು, ಎಸ್&zwnj;ಎಂಎಸ್ ಮತ್ತು ತುರ್ತು ಎಸ್&zwnj;ಒಎಸ್ ಸೌಲಭ್ಯಗಳಿಗೆ ಅಗತ್ಯವೆಂದು ಪರಿಗಣಿಸಲಾದ ಕಾರ್ಯವನ್ನು ನಿಷ್ಕ್ರಿಯಗೊಳಿಸಲು ಬ್ಯಾಂಕುಗಳಿಗೆ ಅಧಿಕಾರವಿಲ್ಲ.&lt;/p&gt;&lt;h3&gt;&lt;strong&gt;ಆರ್&zwnj;ಬಿಐ ನೀಡಿದ ಸ್ಪಷ್ಟನೆ ಏನು?&lt;/strong&gt;&lt;/h3&gt;&lt;p&gt;ಸಾಲ ವಸೂಲಾತಿ ಕರಡು ಮಾರ್ಗಸೂಚಿಗಳ ಬಗ್ಗೆ ಆರ್&zwnj;ಬಿಐಗೆ ಹಲವು ಸಲಹೆಗಳು ಮತ್ತು ಆಕ್ಷೇಪಣೆಗಳು ಬಂದಿವೆ. ಈ ವರ್ಷದ ಮೇ ತಿಂಗಳಲ್ಲಿ ಆರ್&zwnj;ಬಿಐ, ಸಾಲ ವಸೂಲಾತಿ ಹಾಗೂ ವಸೂಲಾತಿ ಏಜೆಂಟ್&zwnj;ಗಳ ಕಾರ್ಯವಿಧಾನಕ್ಕೆ ಸಂಬಂಧಿಸಿದ ಕರಡು ನಿಯಮಗಳನ್ನು ಪ್ರಕಟಿಸಿತ್ತು. ಬಂದಿರುವ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ಬಳಿಕ, ತಂತ್ರಜ್ಞಾನ ಆಧಾರಿತ ಸಾಲ ವಸೂಲಾತಿ ವ್ಯವಸ್ಥೆ ಬಳಸುವ ಬ್ಯಾಂಕುಗಳು ಮತ್ತು ಮೂರನೇ ಪಕ್ಷದ ಸೇವಾ ಸಂಸ್ಥೆಗಳು, ತಮ್ಮ ತಂತ್ರಜ್ಞಾನಕ್ಕೆ ಸಾಧನ ತಯಾರಕರು ಅಥವಾ ಆಪರೇಟಿಂಗ್ ಸಿಸ್ಟಮ್ ಪ್ಲಾಟ್&zwnj;ಫಾರ್ಮ್&zwnj;ನಿಂದ ಅಗತ್ಯ ಪ್ರಮಾಣೀಕರಣ ಪಡೆಯುವುದು ಕಡ್ಡಾಯ ಎಂದು ಆರ್&zwnj;ಬಿಐ ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category>my-money-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/my-money-money/rbi-new-rules-no-device-lock-for-loan-default-except-financed-phones-bmk/articleshow-d4xw6q6"/>
        </item>
        <item>
            <title><![CDATA[E-20: ನಿಮ್ಮ ಕಾರು-ಬೈಕ್‌ಗೆ ಇ-20 ಪೆಟ್ರೋಲ್ ಸುರಕ್ಷಿತವೇ? 90,000 ಬಂಕ್‌ಗಳ ಪರಿಶೀಲನೆ ಬಳಿಕ ತೈಲ ಸಂಸ್ಥೆಗಳು ಹೇಳಿದ್ದೇನು?  ಇಲ್ಲಿದೆ ಅಂತಿಮ ತೀರ್ಪು!]]></title>
            <link>https://kannada.asianetnews.com/my-money-money/is-e20-petrol-safe-for-car-bike-oil-companies-final-verdict-after-90000-bunks-check-bmk/articleshow-eeslm9b</link>
            <guid isPermaLink="true">https://kannada.asianetnews.com/my-money-money/is-e20-petrol-safe-for-car-bike-oil-companies-final-verdict-after-90000-bunks-check-bmk/articleshow-eeslm9b</guid>
            <pubDate>Fri, 07 Aug 2026 22:27:49 +0530</pubDate>
            <description><![CDATA[&lt;p&gt;ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಬಂಕ್&zwnj;ಗಳಲ್ಲಿ ನಡೆಸಿದ ವ್ಯಾಪಕ ತಪಾಸಣೆಯ ನಂತರ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇ-20 ಪೆಟ್ರೋಲ್&zwnj; ಕುರಿತು ತಾವು ನೀಡಿದ ತಪಾಸಣೆಯ ಫಲಿತಾಂಶ ಪ್ರಕಟಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzejg17y9tgnxnwwfsty5nxp,imgname-e-20-1786121815294.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಕೆಲವು ದಿನಗಳಿಂದ ಮೋದಿ ಸರ್ಕಾರದ 12 ವರ್ಷಗಳ ಅವಧಿಯಲ್ಲಿ ಸರ್ಕಾರದ ಇ-20 ಪೆಟ್ರೋಲ್ ಬಗ್ಗೆ ಬೇರೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ಎಥೆನಾಲ್ ನೊಂದಿಗೆ ಬೆರೆಸಿದ ಪೆಟ್ರೋಲ್ ಮಾರಾಟ ಆರಂಭವಾದಾಗಿನಿಂದ, ದೇಶಾದ್ಯಂತ ವಿವಿಧ ರೀತಿಯ ಚರ್ಚೆಗಳು ಮತ್ತು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸರ್ಕಾರ, ತಜ್ಞರು ಮತ್ತು ಇತರ ಪ್ರತಿಯೊಂದು ಸಂಸ್ಥೆಯು ಅದರ ಪರವಾಗಿ ತಮ್ಮ ವಾದಗಳನ್ನು ಮಂಡಿಸಿವೆ. ಈಗ, ತೈಲವನ್ನು ವಿತರಿಸುವ ಜವಾಬ್ದಾರಿಯುತ ಪೆಟ್ರೋಲಿಯಂ ಕಂಪನಿಗಳು ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸಿವೆ. ಈ ನಿರ್ಧಾರಕ್ಕೆ ಮುನ್ನ, ಕಂಪನಿಗಳು ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಪಂಪ್&zwnj;ಗಳಲ್ಲಿ ತೈಲವನ್ನು ಪರೀಕ್ಷಿಸಿವೆ. ಅವು ನಿಡಿದ ಅಪ್ಡೇಟ್&zwnj; ಏನು? ಎನ್ನುವುದರ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಕಂಪನಿಗಳು ಹೇಳಿದ್ದೇನು?&lt;/strong&gt;&lt;/h2&gt;&lt;p&gt;ರಾಷ್ಟ್ರವ್ಯಾಪಿ ಸಮೀಕ್ಷೆ ಮತ್ತು ತನಿಖೆ ಪೂರ್ಣಗೊಳಿಸಿದ ನಂತರ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು, ದೇಶಾದ್ಯಂತ ವ್ಯಾಪಕವಾದ ಪರೀಕ್ಷೆಯು E-20 ಪೆಟ್ರೋಲ್&zwnj;ನಲ್ಲಿ ತೇವಾಂಶ ಅಥವಾ ಕ್ಲೋರೈಡ್ ಮಾಲಿನ್ಯದ ಅಂಶಗಳನ್ನು ದೃಢಪಡಿಸಿಲ್ಲ. ಅಲ್ಲದೇ ಇಂಧನ ಗುಣಮಟ್ಟವು ನಿಗದಿತ ಮಾನದಂಡಗಳಲ್ಲಿದೆ ಎನ್ನುವುದು ಕಂಡುಬಂದಿದೆ ಎಂದು ಹೇಳಿವೆ. 20 ಪ್ರತಿಶತ ಎಥೆನಾಲ್ ಹೊಂದಿರುವ E-20 ಪೆಟ್ರೋಲ್&zwnj;ನಲ್ಲಿ ತೇವಾಂಶ ಮತ್ತು ಕ್ಲೋರೈಡ್ ಇರುವುದು ಕಂಡುಬಂದಿದೆ ಎಂಬ ಇತ್ತೀಚಿನ ಮಾಧ್ಯಮ ವರದಿಗಳ ನಂತರ ಈ ತನಿಖೆಯನ್ನು ತೀವ್ರಗೊಳಿಸಲಾಗಿದೆ. ತೈಲದಲ್ಲಿ ಯಾವುದೇ ಮಾಲಿನ್ಯ ಕಂಡುಬಂದಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್&zwnj;ಪಿಸಿಎಲ್) ಜಂಟಿ ಹೇಳಿಕೆಯಲ್ಲಿ ತಿಳಿಸಿವೆ, ಪೂರೈಕೆ ಸರಪಳಿಯಾದ್ಯಂತ ನಡೆಸಿದ ತಪಾಸಣೆಗಳು ಇಂಧನ ಗುಣಮಟ್ಟವು ನಿಗದಿತ ಮಾನದಂಡಗಳಲ್ಲಿ ಸ್ಥಿರವಾಗಿ ಉಳಿದಿದೆ ಎಂದು ದೃಢಪಡಿಸಿದೆ. ತೈಲ ಕಂಪನಿಗಳು ತಪಾಸಣೆಗಳು ಯಾವುದೇ ಮಾಲಿನ್ಯದ ಬಗ್ಗೆ ಯಾವುದೇ ನಿರ್ದಿಷ್ಟ ಪುರಾವೆಗಳನ್ನು ಬಹಿರಂಗಪಡಿಸಿಲ್ಲ ಎಂದು ಸ್ಪಷ್ಟಪಡಿಸಿವೆ. ಈ ತನಿಖೆಯ ನಂತರ, ಇ-20 ಪೆಟ್ರೋಲ್ ಯಾವುದೇ ಕಲಬೆರಕೆಯಿಂದ ಮುಕ್ತವಾಗಿದೆ ಎಂದು ನಿರ್ಧರಿಸಲಾಗಿದೆ.&lt;/p&gt;&lt;h3&gt;&lt;strong&gt;12 ಬಾರಿ ಪರೀಕ್ಷೆ!&lt;/strong&gt;&lt;/h3&gt;&lt;p&gt;ಇ-20 ಪೆಟ್ರೋಲ್&zwnj;ನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ತೈಲ ಕಂಪನಿಗಳು ಸಂಸ್ಕರಣಾಗಾರದಿಂದ ಪೆಟ್ರೋಲ್ ಬಂಕ್&zwnj;ವರೆಗೆ ನಿರಂತರ ಪರೀಕ್ಷೆ ನಡೆಸುತ್ತಿವೆ. ಪೆಟ್ರೋಲ್ ಬಂಕ್&zwnj;ಗಳಲ್ಲಿ ಪ್ರತಿದಿನ 8ರಿಂದ 12 ಬಾರಿ ನೀರಿನ ಕಲಬೆರಕೆ ಮತ್ತು ಸಾಂದ್ರತೆಯನ್ನು ಪರಿಶೀಲಿಸಲಾಗುತ್ತದೆ. ಜೊತೆಗೆ, ಮೊಬೈಲ್ ಪ್ರಯೋಗಾಲಯಗಳ ಮೂಲಕವೂ ಮಾದರಿಗಳನ್ನು ಪರೀಕ್ಷಿಸಲಾಗುತ್ತದೆ. 100ಕ್ಕೂ ಹೆಚ್ಚು ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ಕ್ಲೋರೈಡ್ ಪ್ರಮಾಣ 1 ppm ಅಥವಾ ಅದಕ್ಕಿಂತ ಕಡಿಮೆ ಕಂಡುಬಂದಿದ್ದು, ಡಿಸ್ಟಿಲರಿ ಮತ್ತು ಚಿಲ್ಲರೆ ಮಟ್ಟದ ಮಾದರಿಗಳಲ್ಲಿಯೂ ಅದು 3 ppmಗಿಂತ ಕಡಿಮೆಯೇ ಇತ್ತು. ಇದರಿಂದ ಇಂಧನದ ಗುಣಮಟ್ಟ ಸುರಕ್ಷಿತವಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಇ-20 ಸುಕ್ಷಿತವೇ?&lt;/strong&gt;&lt;/h3&gt;&lt;p&gt;ಪರೀಕ್ಷೆಯ ವೇಳೆ ಕೇವಲ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾತ್ರ ಕ್ಲೋರೈಡ್ ಪ್ರಮಾಣ ಹೆಚ್ಚಿರುವುದು ಕಂಡುಬಂದಿದ್ದು, ತಕ್ಷಣವೇ ಆ ಇಂಧನದ ಪೂರೈಕೆಯನ್ನು ಸ್ಥಗಿತಗೊಳಿಸಿ ಹೆಚ್ಚಿನ ಪರೀಕ್ಷೆ ನಡೆಸಲಾಯಿತು. ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಬಂಕ್&zwnj;ಗಳ ಟ್ಯಾಂಕ್&zwnj;ಗಳನ್ನು ಪರಿಶೀಲಿಸಿದರೂ ನೀರಿನ ಕಲಬೆರಕೆಯ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಇ-20 ಪೆಟ್ರೋಲ್ ಸುರಕ್ಷಿತವಾಗಿದ್ದು, ಅದರ ಬಗ್ಗೆ ಹರಿದಾಡುತ್ತಿರುವ ಕೆಲವು ಹೇಳಿಕೆಗಳು ಉತ್ಪ್ರೇಕ್ಷೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಸರ್ಕಾರಿ ತೈಲ ಕಂಪನಿಗಳು ಸ್ಪಷ್ಟಪಡಿಸಿವೆ. ಗ್ರಾಹಕರು ಯಾವುದೇ ಆತಂಕವಿಲ್ಲದೆ ಇ-20 ಪೆಟ್ರೋಲ್ ಬಳಸಬಹುದು ಎಂದು ಅವರು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>my-money-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/my-money-money/is-e20-petrol-safe-for-car-bike-oil-companies-final-verdict-after-90000-bunks-check-bmk/articleshow-eeslm9b"/>
        </item>
        <item>
            <title><![CDATA[FD vs RD : ಐದು ವರ್ಷದ ನಂತರ ನೀವು ಯಾವುದರಲ್ಲಿ ಹೆಚ್ಚಿನ ಆದಾಯ ಗಳಿಸಬಹುದು?]]></title>
            <link>https://kannada.asianetnews.com/gallery/money/fd-or-rd-which-investment-gives-better-returns-in-5-years-grpmlo4</link>
            <guid isPermaLink="true">https://kannada.asianetnews.com/gallery/money/fd-or-rd-which-investment-gives-better-returns-in-5-years-grpmlo4</guid>
            <pubDate>Fri, 22 Aug 2025 15:00:36 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ಜನರು ಎರಡರಲ್ಲೂ ಬಡ್ಡಿದರ ಬಹುತೇಕ ಸಮಾನವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ಆದ್ದರಿಂದ FD ಮತ್ತು RD ಯಲ್ಲಿ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ, ಐದು ವರ್ಷಗಳ ನಂತರ ನೀವು ಎಲ್ಲಿ ಹೆಚ್ಚಿನ ಆದಾಯ ಪಡೆಯುತ್ತೀರಿ? ನೋಡೋಣ ಬನ್ನಿ...&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jyqvczm32v7swd6spgvma03c,imgname-tamil-news---2025-06-27t101622.687-1750999662208.png" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಜನರು ಎರಡರಲ್ಲೂ ಬಡ್ಡಿದರ ಬಹುತೇಕ ಸಮಾನವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ಆದ್ದರಿಂದ FD ಮತ್ತು RD ಯಲ್ಲಿ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ, ಐದು ವರ್ಷಗಳ ನಂತರ ನೀವು ಎಲ್ಲಿ ಹೆಚ್ಚಿನ ಆದಾಯ ಪಡೆಯುತ್ತೀರಿ? ನೋಡೋಣ ಬನ್ನಿ...&amp;nbsp;&lt;/p&gt;&lt;img&gt;&lt;p&gt;ಹಣ ಉಳಿತಾಯ ಮಾಡಬೇಕೆನ್ನುವವರು ಹೆಚ್ಚಾಗಿ ಬ್ಯಾಂಕ್&zwnj;ನಲ್ಲಿ ಸ್ಥಿರ ಠೇವಣಿ (Fixed Deposit) ಮತ್ತು ಮರುಕಳಿಸುವ ಠೇವಣಿ (Recurring Deposit) ಆಯ್ಕೆ ಮಾಡಿಕೊಳ್ಳುತ್ತಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ FDಯಲ್ಲಿ, ಒಂದು ದೊಡ್ಡ ಅಮೌಂಟನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಅಥವಾ ಠೇವಣಿ ಮಾಡಲಾಗುತ್ತದೆ. ಆದರೆ RDಯಲ್ಲಿ ಹಾಗಲ್ಲ, ಪ್ರತಿ ತಿಂಗಳು ಸಣ್ಣ ಕಂತುಗಳಲ್ಲಿ ಡೆಪಾಸಿಟ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಜನರು ಎರಡರಲ್ಲೂ ಬಡ್ಡಿದರ ಬಹುತೇಕ ಸಮಾನವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ಆದ್ದರಿಂದ FD ಮತ್ತು RD ಯಲ್ಲಿ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ, ಐದು ವರ್ಷಗಳ ನಂತರ ನೀವು ಎಲ್ಲಿ ಹೆಚ್ಚಿನ ಆದಾಯ ಪಡೆಯುತ್ತೀರಿ? ನೋಡೋಣ ಬನ್ನಿ...&lt;/p&gt;&lt;img&gt;&lt;p&gt;ಈ ಮೊದಲೇ ಹೇಳಿದ ಹಾಗೆ FD ಯಲ್ಲಿ ನೀವು ಬ್ಯಾಂಕಿನಲ್ಲಿ ಒಂದು ದೊಡ್ಡ ಅಮೌಂಟನ್ನು ಡೆಪಾಸಿಟ್ ಇಡುತ್ತೀರಿ. ನಂತರ ಅದರ ಮೇಲೆ ನಿಗದಿತ ಅವಧಿ(Fixed period)ಗೆ ಬಡ್ಡಿ ಪಡೆಯುತ್ತೀರಿ. ಆದರೆ RD ಯಲ್ಲಿ ಹಾಗಲ್ಲ, ನೀವು ಪ್ರತಿ ತಿಂಗಳು ನಿಗದಿತ ಮೊತ್ತ(Fixed amount)ವನ್ನು ಡೆಪಾಸಿಟ್ ಮಾಡ್ತೀರಿ. ಹಾಗಾಗಿ EMIಯಂತೆ ಪ್ರತಿ ಕಂತಿನ ಮೇಲೆ ವಿಭಿನ್ನ ಅವಧಿ(Different period)ಗಳಿಗೆ ಅನುಗುಣವಾಗಿ ಬಡ್ಡಿಯನ್ನು ಪಡೆಯುತ್ತೀರಿ.&lt;/p&gt;&lt;img&gt;&lt;p&gt;FDಯಲ್ಲಿ ಸಂಪೂರ್ಣ ಅವಧಿಗೆ ಸಂಪೂರ್ಣ ಮೊತ್ತದ (Full amount) ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಆದ್ದರಿಂದ ಗಳಿಕೆ ಹೆಚ್ಚು. RD ಯಲ್ಲಿ, ಪ್ರತಿ ಕಂತು ಬೇರೆ ಬೇರೆ ದಿನಾಂಕದಿಂದ ಬಡ್ಡಿ ಗಳಿಸಲು ಪ್ರಾರಂಭಿಸುತ್ತದೆ, ಇದರಿಂದಾಗಿ ಒಟ್ಟು ಬಡ್ಡಿ ಸ್ವಲ್ಪ ಕಡಿಮೆ ಇರುತ್ತದೆ.&lt;/p&gt;&lt;img&gt;&lt;p&gt;ವಾರ್ಷಿಕ ಬಡ್ಡಿದರ ಶೇಕಡ 7 ಎಂದು ಭಾವಿಸೋಣ. ಮತ್ತು ನೀವು 5 ವರ್ಷಗಳ ಕಾಲ ಒಂದು ಲಕ್ಷ ರೂಪಾಯಿಗಳನ್ನು FD ಯಲ್ಲಿ ಇಟ್ಟರೆ, ನಿಮಗೆ ಸುಮಾರು 1,40,255 ರೂ. ಸಿಗುತ್ತದೆ. ಆದರೆ ನೀವು 5 ವರ್ಷಗಳ ಕಾಲ RD ಯಲ್ಲಿ ಪ್ರತಿ ತಿಂಗಳು 1,666 ರೂ. (ಒಟ್ಟು 1 ಲಕ್ಷ) ಡೆಪಾಸಿಟ್ ಇಟ್ಟರೆ, ನೀವು ಸುಮಾರು 1,19,500 ರೂ. ಗಳಿಸುತ್ತೀರಿ. ಅಂದರೆ ನೀವು FD ಯಲ್ಲಿ ಸುಮಾರು 20,700 ರೂ. ಹೆಚ್ಚಿನ ಲಾಭ ಪಡೆಯುತ್ತೀರಿ.&lt;/p&gt;&lt;img&gt;&lt;p&gt;ನೀವು ಒಂದೇ ಬಾರಿಗೆ ಹೆಚ್ಚು ಹಣ ಡೆಪಾಸಿಟ್ ಮಾಡಿದ್ರೆ ನಿಮಗೆ FD ಯಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ. ಒಂದು ವೇಳೆ ನೀವು ಪ್ರತಿ ತಿಂಗಳು ಸ್ವಲ್ಪ ಉಳಿಸಲು ಸಾಧ್ಯವಾದರೆ RD ಸರಿ.&amp;nbsp;&lt;/p&gt;&lt;img&gt;&lt;p&gt;ಎರಡರ ಮೇಲೂ ಪಡೆಯುವ ಬಡ್ಡಿಯು ತೆರಿಗೆಗೆ ಒಳಪಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಮತ್ತು ಬಡ್ಡಿಯು ನಿಗದಿತ ಮಿತಿಯನ್ನು ಮೀರಿದರೆ ಬ್ಯಾಂಕ್ ಟಿಡಿಎಸ್ ಅನ್ನು ಸಹ ಕಡಿತಗೊಳಿಸಬಹುದು. ಹೆಚ್ಚಿನ ಆದಾಯದ ಮೇಲಿನ ತೆರಿಗೆ ಪರಿಣಾಮವು ಸ್ವಲ್ಪ ಹೆಚ್ಚಾಗಿರುತ್ತದೆ.&lt;/p&gt;]]></content:encoded>
            <category>my-money-money</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/money/fd-or-rd-which-investment-gives-better-returns-in-5-years-grpmlo4"/>
        </item>
        <item>
            <title><![CDATA[Cricket: ಹಾರ್ದಿಕ್‌ಗೆ ಬಿಗ್‌ ಆಫರ್; ಪಾಂಡ್ಯ ಬೇಕಾದ್ರೆ ಆ ಇಬ್ಬರನ್ನು ಕೊಡಿ; KKR ಮುಂದೆ ಅತಿದೊಡ್ಡ ಕಂಡೀಷನ್ ಇಟ್ಟಿತಾ ಮುಂಬೈ?]]></title>
            <link>https://kannada.asianetnews.com/my-money-money/big-offer-for-hardik-pandya-mumbai-indians-sets-biggest-condition-for-kkr-trade-bmk/articleshow-qlwgt0v</link>
            <guid isPermaLink="true">https://kannada.asianetnews.com/my-money-money/big-offer-for-hardik-pandya-mumbai-indians-sets-biggest-condition-for-kkr-trade-bmk/articleshow-qlwgt0v</guid>
            <pubDate>Fri, 07 Aug 2026 21:14:48 +0530</pubDate>
            <description><![CDATA[&lt;p&gt;ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ್, ಚೆನ್ನೈ ಬಳಿಕ ಇದೀಗ ಕೆಕೆಆರ್ ಕೂಡ ಆಸಕ್ತಿ ತೋರಿದೆ. ಆದರೆ, ಪಾಂಡ್ಯರನ್ನು ಬಿಟ್ಟುಕೊಡಲು ಮುಂಬೈ ಇಂಡಿಯನ್ಸ್ ತಂಡವು ಕೆಕೆಆರ್ ಮುಂದೆ ಆ ಇಬ್ಬರು ಆಟಗಾರರನ್ನು ನೀಡಬೇಕೆಂಬ ದೊಡ್ಡ ಷರತ್ತು ಇಟ್ಟಿದೆ ಎನ್ನಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzeebacwj8e888m0kw454ep5,imgname-hardik-pandya-1786117466523.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರಂಭದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ಹೊಂದಿತ್ತು, ಅಲ್ಲದೇ ರಾಜಸ್ಥಾನ್ ತಂಡವು ಹಾರ್ದಿಕ್ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಮುಂಬೈಗೆ ನೀಡಲಿದೆ ಎಂಬ ಮಾತು ಕೇಳಿಬಂದಿದ್ದವು. ಆದರೆ ನಂತರ ಚೆನ್ನೈ ಸೂಪರ್ ಕಿಂಗ್ಸ್ ಹೆಸರು ಮುನ್ನೆಲೆಗೆ ಬಂದಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಾರ್ದಿಕ್ ಅವರಿಗೆ ಬದಲಾಗಿ ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್ ಮತ್ತು ಮುಂಬೈಗೆ 10 ಕೋಟಿ ರೂ.ಗಳನ್ನು ನೀಡಲು ಒಪ್ಪಿತು, ಆದರೆ ಮುಂಬೈ ಮಾತ್ರ CSK ಯಿಂದ ದುಬೆ, ಆಯುಷ್ ಮ್ಹಾತ್ರೆ ಮತ್ತು 10 ಕೋಟಿ ರೂ. ಕೇಳಿತ್ತು, ಅದನ್ನು CSK ನಯವಾಗಿ ತಿರಸ್ಕರಿಸಿತ್ತು ಎಂದು ಈಗಾಗಲೇ ಕೆಲ ವರದಿಗಳು ಹೇಳಿವೆ.&lt;/p&gt;&lt;h2&gt;&lt;strong&gt;ರೇಸ್&zwnj;ನಲ್ಲಿತ್ತಾ ಡೆಲ್ಲಿ ಕ್ಯಾಪಿಟಲ್ಸ್&zwnj;?&lt;/strong&gt;&lt;/h2&gt;&lt;p&gt;ನಂತರ, ಡೆಲ್ಲಿ ಕೂಡ ಹಾರ್ದಿಕ್&zwnj; ಖರೀದಿಸುವ ಚರ್ಚೆಗೆ ಧುಮುಕಿತು. ಹಾರ್ದಿಕ್ ಬದಲಿಗೆ ಡೆಲ್ಲಿ ಇಬ್ಬರು ಆಟಗಾರರಾದ ಅಕ್ಷರ್ ಪಟೇಲ್ ಮತ್ತು ಪೃಥ್ವಿ ಶಾ ಅವರನ್ನು ಮುಂಬೈಗೆ ನೀಡುವುದಾಗಿ ಹೇಳಲಾಗಿತ್ತು, ಆದರೆ ಈ ಚರ್ಚೆಗಳನ್ನು ಯಾರೂ ಅಧಿಕೃತವಾಗಿ ದೃಢಪಡಿಸಿಲ್ಲ. ರಾಜಸ್ಥಾನ ಮತ್ತು ಸಿಎಸ್&zwnj;ಕೆ ನಂತರ, ಈಗ ಹಾರ್ದಿಕ್ ತಂಡದಲ್ಲಿ ಕೆಕೆಆರ್ ಹೆಸರು ಕೇಳಿಬಂದಿದೆ. ಅಜಿಂಕ್ಯ ರಹಾನೆ ನಿವೃತ್ತಿ ಹೊಂದುತ್ತಿದ್ದಂತೆ, ಕೆಕೆಆರ್ ಹೊಸ ನಾಯಕನನ್ನು ಹುಡುಕಬೇಕಾಗುತ್ತದೆ. ಅಲ್ಲದೆ, ರಸೆಲ್ ನಿವೃತ್ತಿಯ ನಂತರ, ಕೆಕೆಆರ್&zwnj;ಗೆ ಆಲ್&zwnj;ರೌಂಡರ್ ಕೂಡ ಬೇಕಾಗಿದ್ದಾರೆ, ಪಾಂಡ್ಯ ಈ ಎರಡೂ ನಿರೀಕ್ಷೆಗಳನ್ನು ಪೂರೈಸಬಹುದು.&lt;/p&gt;&lt;h3&gt;&lt;strong&gt;ಹಾರ್ದಿಕ್&zwnj;ಗೆ ಫುಲ್&zwnj; ಡಿಮ್ಯಾಂಡ್!&lt;/strong&gt;&lt;/h3&gt;&lt;p&gt;ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್&zwnj;ಗೆ ಬಂದ ನಂತರ, ಮುಂಬೈ ಮೂರು ಸೀಸನ್&zwnj;ಗಳಲ್ಲಿ ಒಂದರಲ್ಲಿ ಮಾತ್ರ ಪ್ಲೇಆಫ್ ತಲುಪಿತು. ಒಂದು ಸೀಸನ್&zwnj;ನಲ್ಲಿ ಅವರು ಹತ್ತನೇ ಸ್ಥಾನ ಪಡೆದರು, ಅಂದರೆ ಕೊನೆ ಸ್ಥಾನ. ಅಲ್ಲದೇ ಇನ್ನೊಂದು ಸೀಸನ್&zwnj;ನಲ್ಲಿ ಒಂಬತ್ತನೇ ಸ್ಥಾನ ಪಡೆದರು. ಆದ್ದರಿಂದ ಮುಂಬೈ ಹಾರ್ದಿಕ್&zwnj; ಪಾಂಡ್ಯ ಅವರನ್ನು ಕೈ ಬಿಡಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಕೆಕೆಆರ್&zwnj;ನ ಇಬ್ಬರು ಆಟಗಾರರನ್ನು ನೀಡಿದರೆ, ಹಾರ್ದಿಕ್&zwnj;ನನ್ನು ನೀಡಲಾಗುತ್ತದೆ. ಎನ್ನುವ ಮಾತು ಕೇಳಿಬಂದಿದೆ. ಅಲ್ಲದೇ ಆ ಇಬ್ಬರು ಯಾರು ಎಂದರೆ, ರಿಂಕು ಮತ್ತು ಹರ್ಷಿತ್ ರಾಣಾ ಹೆಸರು ಈಗ ಕೆಲ ವರದಿಗಳ ಪ್ರಕಾರ ಅತೀ ಹೆಚ್ಚು ಚರ್ಚೆಯಲ್ಲಿವೆ.&lt;/p&gt;&lt;h3&gt;&lt;strong&gt;ಅಶ್ವಿನ್&zwnj; ಬಿಗ್&zwnj; ಸ್ಟೇಟಮೆಂಟ್!&lt;/strong&gt;&lt;/h3&gt;&lt;p&gt;ಮುಂಬೈ ಮತ್ತು ಕೆಕೆಆರ್ ನಡುವಿನ ವ್ಯಾಪಾರದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ದೊಡ್ಡ ಹೇಳಿಕೆ ನೀಡಿದ್ದಾರೆ. ಕೆಕೆಆರ್ ಕ್ಯಾಮರೂನ್ ಗ್ರೀನ್ ನೀಡಲಿದೆ ಎಂಬ ಮಾತು ಕೇಳಿಬರುತ್ತಿದೆ, ಆದರೆ ಗ್ರೀನ್ ಮುಂದಿನ ವರ್ಷದ ಆಶಸ್&zwnj;ಗಾಗಿ ಐಪಿಎಲ್&zwnj;ನಿಂದ ಹಿಂದೆ ಸರಿದರೆ ಏನಾಗುತ್ತದೆ? ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ. ಮುಂಬೈ ಇಂಡಿಯನ್ಸ್ ನನ್ನ ಹಿಡಿತದಲ್ಲಿದ್ದರೆ, ಹಾರ್ದಿಕ್ ಬದಲಿಗೆ ಹರ್ಷಿತ್ ರಾಣಾ, ರಿಂಕು ಸಿಂಗ್ ಲಭ್ಯವಿದ್ದರೆ ಮಾತ್ರ ನಾನು ಕೆಕೆಆರ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದೆ. ಹಾರ್ದಿಕ್ ಬದಲಿಗೆ ಹರ್ಷಿತ್ ಮತ್ತು ರಿಂಕು ಲಭ್ಯವಿದ್ದರೆ ಮಾತ್ರ ಮುಂಬೈ ತಂಡ ಬಲಿಷ್ಠವಾಗಿರುತ್ತದೆ ಎಂದು ಅಶ್ವಿನ್ ಹೇಳಿದ್ದಾರೆ. ಸಿಎಸ್&zwnj;ಕೆ ಹಾರ್ದಿಕ್ ಬದಲಿಗೆ ದುಬೆ ಮತ್ತು ವೇಗದ ಬೌಲರ್ ಅನ್ನು ನೀಡಿದರೆ, ಸಿಎಸ್&zwnj;ಕೆ ಬಲಿಷ್ಠ ತಂಡವಾಗುತ್ತದೆ, ಆದರೆ ಚುರುಕಾದ ತಂಡವಾಗುವುದಿಲ್ಲ. ಆದರೆ ಕೆಕೆಆರ್ ಹಾರ್ದಿಕ್ ಅವರನ್ನು ಪಡೆದರೆ, ಅವರ ಬ್ಯಾಟಿಂಗ್ ಸ್ಫೋಟಕವಾಗಿರುತ್ತದೆ ಎಂದು ಅಶ್ವಿನ್ ಕೂಡ ಭಾವಿಸುತ್ತಾರೆ.&lt;/p&gt;]]></content:encoded>
            <category>my-money-money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/my-money-money/big-offer-for-hardik-pandya-mumbai-indians-sets-biggest-condition-for-kkr-trade-bmk/articleshow-qlwgt0v"/>
        </item>
        <item>
            <title><![CDATA[EPFO new rules: ಇನ್ಮುಂದೆ ನಿಮ್ಮ ಇನ್-ಹ್ಯಾಂಡ್ ಸ್ಯಾಲರಿ ಹೆಚ್ಚಾಗಲಿದೆ! ಹೆಂಗೆ ಗೊತ್ತಾ..?]]></title>
            <link>https://kannada.asianetnews.com/my-money-money/epfo-new-rules-from-now-on-your-in-hand-salary-will-increase-want-to-know-how/articleshow-uovh8f7</link>
            <guid isPermaLink="true">https://kannada.asianetnews.com/my-money-money/epfo-new-rules-from-now-on-your-in-hand-salary-will-increase-want-to-know-how/articleshow-uovh8f7</guid>
            <pubDate>Thu, 02 Jul 2026 14:16:05 +0530</pubDate>
            <description><![CDATA[&lt;p&gt;ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪಿಎಫ್ ಕಡಿತದ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಹೊಸ ನಿಯಮದ ಪ್ರಕಾರ, ₹15,000ಕ್ಕಿಂತ ಹೆಚ್ಚು ಮೂಲ ವೇತನ ಹೊಂದಿರುವ ನೌಕರರು ₹1,800ಕ್ಕಿಂತ ಹೆಚ್ಚಿನ ಪಿಎಫ್ ದೇಣಿಗೆಯನ್ನು ಸ್ವಯಂಪ್ರೇರಿತವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಅವರ ಕೈಗೆ ಸಿಗುವ ಸಂಬಳ ಹೆಚ್ಚಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwgzw3xk2sj9v5qy2d9q806g,imgname-epfo-1782981726106.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ 8 ಕೋಟಿ ಸಕ್ರಿಯ ಚಂದಾದಾರರಿಗೆ ಭರ್ಜರಿ ಗುಡ್&zwnj;ನ್ಯೂಸ್ ನೀಡಿದೆ. ಪಿಎಫ್ ಕಡಿತದ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಇದರಿಂದ ನೌಕರರ ಕೈಗೆ ಸಿಗುವ ಮಾಸಿಕ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ.&lt;/p&gt;&lt;h2&gt;&lt;strong&gt;ಹೊಸ ನಿಯಮವೇನು?&lt;/strong&gt;&lt;/h2&gt;&lt;p&gt;EPFO ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಪ್ರತಿ ತಿಂಗಳು 1,800 ರೂಪಾಯಿಗಿಂತ ಹೆಚ್ಚಿನ ಪಿಎಫ್ ದೇಣಿಗೆಯನ್ನು ಕಡಿತಗೊಳಿಸುವುದು ಈಗ ಸಂಪೂರ್ಣವಾಗಿ ಉದ್ಯೋಗಿಯ ಇಚ್ಛೆಗೆ ಅಥವಾ 'ಸ್ವಯಂಪ್ರೇರಿತ' (Voluntary) ಆಯ್ಕೆಗೆ ಬಿಟ್ಟ ವಿಷಯವಾಗಿದೆ. ಅಂದರೆ, ನಿಮ್ಮ ಒಪ್ಪಿಗೆಯಿಲ್ಲದೆ ಕಂಪನಿಗಳು ನಿಮ್ಮ ಸಂಬಳದಿಂದ ಹೆಚ್ಚಿನ ಪಿಎಫ್ ಹಣವನ್ನು ಕಡಿತಗೊಳಿಸುವಂತಿಲ್ಲ.&lt;/p&gt;&lt;h3&gt;&lt;strong&gt;ಯಾರಿಗೆ ಅನ್ವಯವಾಗುತ್ತದೆ?&lt;/strong&gt;&lt;/h3&gt;&lt;p&gt;ಈ ನಿಯಮವು ಮುಖ್ಯವಾಗಿ 15,000 ರೂಪಾಯಿಗಿಂತ ಹೆಚ್ಚಿನ ಮೂಲ ವೇತನ (Basic Salary) ಹೊಂದಿರುವ ನೌಕರರಿಗೆ ಅನ್ವಯಿಸುತ್ತದೆ.ಸರ್ಕಾರದ ನಿಯಮದಂತೆ 15,000 ರೂಪಾಯಿ ಕನಿಷ್ಠ ವೇತನ ಮಿತಿಯ ಮೇಲೆ ಶೇ. 12 ರಷ್ಟು ಅಂದರೆ 1,800 ರೂಪಾಯಿ ಕಡಿತ ಮಾಡುವುದು ಕಡ್ಡಾಯ. ಆದರೆ, ನಿಮ್ಮ ಸಂಬಳ ಇದಕ್ಕಿಂತ ಎಷ್ಟೇ ಹೆಚ್ಚಿದ್ದರೂ, ಕಡ್ಡಾಯವಾಗಿ ಕಡಿತವಾಗುವ ಮೊತ್ತ 1,800 ರೂ. ಮಾತ್ರ. ಉಳಿದ ಮೊತ್ತವನ್ನು ಪಿಎಫ್&zwnj;ಗೆ ಕಡಿತ ಮಾಡಬೇಕೇ ಅಥವಾ ಸಂಬಳದ ರೂಪದಲ್ಲಿ ಪಡೆಯಬೇಕೇ ಎಂಬ ಆಯ್ಕೆ ಈಗ ನೌಕರರ ಕೈಯಲ್ಲಿದೆ.&lt;/p&gt;&lt;h3&gt;&lt;strong&gt;ಸರಳ ಉದಾಹರಣೆ&lt;/strong&gt;&lt;/h3&gt;&lt;p&gt;ಒಬ್ಬ ನೌಕರನ ಮೂಲ ವೇತನ 50,000 ರೂಪಾಯಿ ಅಂದುಕೊಂಡರೆ, ಹಳೆಯ ನಿಯಮದ ಪ್ರಕಾರ ಆತನ ಸಂಬಳದಿಂದ ಶೇ. 12 ರಷ್ಟು ಅಂದರೆ 6,000 ರೂಪಾಯಿ ಪಿಎಫ್ ಕಡಿತವಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ ಕಡ್ಡಾಯವಾಗಿ ಕೇವಲ 1,800 ರೂಪಾಯಿ ಮಾತ್ರ ಕಡಿತವಾಗಲಿದೆ. ಉಳಿದ 4,200 ರೂಪಾಯಿಯನ್ನು ನೌಕರನು ಪಿಎಫ್&zwnj;ಗೆ ನೀಡುವ ಬದಲಾಗಿ ತನ್ನ 'ಟೇಕ್ ಹೋಮ್ ಸ್ಯಾಲರಿ'ಯಾಗಿ ಪಡೆಯಬಹುದು.&lt;/p&gt;&lt;h3&gt;&lt;strong&gt;ಇದರಿಂದ ಆಗುವ ಲಾಭಗಳೇನು?&lt;/strong&gt;&lt;/h3&gt;&lt;ul&gt; &lt;li&gt;ನಿಮ್ಮ ಕೈಗೆ ಸಿಗುವ ಮಾಸಿಕ ನಗದು ಮೊತ್ತ ಹೆಚ್ಚಾಗುತ್ತದೆ&amp;nbsp;&lt;/li&gt; &lt;li&gt;ಇದರಿಂದ ದೈನಂದಿನ ಖರ್ಚು ವೆಚ್ಚಗಳಿಗೆ ಹೆಚ್ಚಿನ ಹಣ ಸಿಗುತ್ತದೆ&lt;/li&gt; &lt;li&gt;ನಿವೃತ್ತಿ ಉಳಿತಾಯಕ್ಕಾಗಿ ಹೆಚ್ಚಿನ ಹಣ ಕಡಿತ ಮಾಡಬೇಕೇ? ಬೇಡವೇ ಎಂಬುದನ್ನು ನೌಕರನೇ ನಿರ್ಧರಿಸಬಹುದು&lt;/li&gt; &lt;li&gt;ಕಂಪನಿಗಳು ಕೂಡ ನೌಕರನ ದೊಡ್ಡ ಮೊತ್ತದ ಸಂಬಳಕ್ಕೆ ತಕ್ಕಂತೆ ಹೆಚ್ಚಿನ ದೇಣಿಗೆ ನೀಡುವ ಹೊರೆಯಿಂದ ಮುಕ್ತ&lt;/li&gt;&lt;/ul&gt;&lt;p&gt;ಒಂದು ವೇಳೆ ನೀವು ಹೆಚ್ಚಿನ ಪಿಎಫ್ ಕಡಿತವನ್ನು ನಿಲ್ಲಿಸಿದರೆ ನಿಮ್ಮ ಮಾಸಿಕ ಸಂಬಳ ಹೆಚ್ಚಾಗಬಹುದು. ಆದರೆ ನಿವೃತ್ತಿಯ ಸಮಯದಲ್ಲಿ ಸಿಗುವ ಒಟ್ಟು ಪಿಎಫ್ ಮೊತ್ತ ಮತ್ತು ಬಡ್ಡಿಯ ಪ್ರಮಾಣ ಕಡಿಮೆಯಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ, 2026ರ ಅಡಿಯಲ್ಲಿ ಈ ಹೊಸ ಬದಲಾವಣೆಗಳನ್ನು ತರಲಾಗಿದೆ. ಹೆಚ್ಚಿನ ಸಂಬಳ ಪಡೆಯುವ ವರ್ಗಕ್ಕೆ ಇದು ದೊಡ್ಡ ಮಟ್ಟದ ಆರ್ಥಿಕ ಸ್ವಾತಂತ್ರ್ಯ ನೀಡಲಿದೆ.&lt;/p&gt;]]></content:encoded>
            <category>my-money-money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/my-money-money/epfo-new-rules-from-now-on-your-in-hand-salary-will-increase-want-to-know-how/articleshow-uovh8f7"/>
        </item>
    </channel>
</rss>
