<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 14 May 2026 14:39:51 +0530</lastBuildDate>
        <atom:link href="https://kannada.asianetnews.com/rss/money" rel="self" type="application/rss+xml"/>
        <item>
            <title><![CDATA[ಮೆಸೇಜ್, ವಾಟ್ಸಪ್‌ಗೆ ಬರುವ ಈ ಡೇಂಜರಸ್ ಲಿಂಕ್ ಕ್ಲಿಕ್ ಮಾಡಬೇಡಿ; ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಆಗುವ ಮುನ್ನ ಈ ಸುದ್ದಿ ಓದಿ!]]></title>
            <link>https://kannada.asianetnews.com/money/sbi-reward-points-scam-cyber-criminals-target-customers-with-dangerous-links/articleshow-zglkbrg</link>
            <guid isPermaLink="true">https://kannada.asianetnews.com/money/sbi-reward-points-scam-cyber-criminals-target-customers-with-dangerous-links/articleshow-zglkbrg</guid>
            <pubDate>Sat, 31 Jan 2026 20:10:22 +0530</pubDate>
            <description><![CDATA[&lt;p&gt;'ರಿವಾರ್ಡ್ ಪಾಯಿಂಟ್ಸ್' ಹೆಸರಿನಲ್ಲಿ ಸೈಬರ್ ವಂಚಕರು ಕಳುಹಿಸುವ ನಕಲಿ ಲಿಂಕ್&zwnj;ಗಳ ಮೂಲಕ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಎಸ್&zwnj;ಬಿಐ ಎಚ್ಚರಿಸಿದೆ. ಈ ಆಕರ್ಷಕ ಸಂದೇಶಗಳಿಗೆ ಮರುಳಾಗಿ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಂಡರೆ, ನಿಮ್ಮ ಖಾತೆಯ ಹಣ ಕ್ಷಣಾರ್ಧದಲ್ಲಿ ಕಳುವಾಗಬಹುದು!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kga7t5vjgfnj6yrns03ysav1,imgname-image--8--1769870268274.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ದಿನಕ್ಕೊಂದು ಹೊಸ ದಾರಿಯನ್ನು ಹುಡುಕುತ್ತಿದ್ದಾರೆ. ಈಗ 'ರಿವಾರ್ಡ್ ಪಾಯಿಂಟ್ಸ್' (Reward Points) ಹೆಸರಿನಲ್ಲಿ ಜನರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ದೊಡ್ಡ ಜಾಲ ಸಕ್ರಿಯವಾಗಿದೆ. ಈ ಬಗ್ಗೆ ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ತೀವ್ರ ಎಚ್ಚರಿಕೆ ನೀಡಿದೆ. ಕೇವಲ ಅಶಿಕ್ಷಿತರು ಮಾತ್ರವಲ್ಲದೆ, ತಂತ್ರಜ್ಞಾನ ತಿಳಿದಿರುವ ವಿದ್ಯಾವಂತರೂ ಸಹ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ.&lt;/p&gt;&lt;h2&gt;ಉಚಿತ ಕೊಡುಗೆಯ ಹೆಸರಿನಲ್ಲಿ ಬರುವ ಡೇಂಜರ್ ಲಿಂಕ್&lt;/h2&gt;&lt;p&gt;ವಂಚಕರು ಸಾಮಾನ್ಯವಾಗಿ ಎಸ್&zwnj;ಎಮ್&zwnj;ಎಸ್ (SMS) ಅಥವಾ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸುತ್ತಾರೆ. 'ನಿಮ್ಮ ಖಾತೆಯಲ್ಲಿ ಸಾವಿರಾರು ರಿವಾರ್ಡ್ ಪಾಯಿಂಟ್&zwnj;ಗಳು ಜಮೆಯಾಗಿವೆ, ಅವುಗಳ ಅವಧಿ ಇಂದು ರಾತ್ರಿ ಮುಗಿಯಲಿದೆ; ಕೂಡಲೇ ರಿಡೀಮ್ ಮಾಡಿಕೊಳ್ಳಿ' ಎಂಬ ಆಕರ್ಷಕ ಸಂದೇಶ ಇರುತ್ತದೆ. ಉಚಿತವಾಗಿ ಸಿಗುವ ಹಣ ಅಥವಾ ಪಾಯಿಂಟ್ಸ್ ಕಳೆದುಕೊಳ್ಳಬಾರದು ಎಂಬ ಧಾವಂತದಲ್ಲಿ ಜನರು ಆ ಸಂದೇಶದ ಕೆಳಗಿರುವ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ದುರಂತವೆಂದರೆ, ವಂಚನೆ ಶುರುವಾಗುವುದೇ ಇಲ್ಲಿಂದ.&lt;/p&gt;&lt;h3&gt;ಅಸಲಿ ಬ್ಯಾಂಕ್ ವೆಬ್&zwnj;ಸೈಟ್&zwnj;ನಂತೆ ಕಾಣುವ ನಕಲಿ!&lt;/h3&gt;&lt;p&gt;ಆ ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ, ಅದು ಎಸ್&zwnj;ಬಿಐನ ಅಸಲಿ ವೆಬ್&zwnj;ಸೈಟ್&zwnj;ನಂತೆಯೇ ಕಾಣುವ ನಕಲಿ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಿಮ್ಮ ಡೆಬಿಟ್ ಕಾರ್ಡ್ ಮಾಹಿತಿ, ಸಿವಿವಿ (CVV) ಸಂಖ್ಯೆ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳನ್ನು ಭರ್ತಿ ಮಾಡಲು ಕೇಳಲಾಗುತ್ತದೆ. ನೀವು ಮಾಹಿತಿ ನೀಡಿದ ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಯಲ್ಲಿದ್ದ ಹಣ ವಂಚಕರ ಪಾಲಾಗಿರುತ್ತದೆ. ನಿಮ್ಮ ಗೌಪ್ಯ ಮಾಹಿತಿಯನ್ನು ನೀವೇ ಅವರಿಗೆ ಹಸ್ತಾಂತರಿಸುವಂತೆ ಮಾಡುವುದು ಇವರ ತಂತ್ರ.&lt;/p&gt;&lt;p&gt;&lt;strong&gt;ನಕಲಿ ಸಂದೇಶಗಳನ್ನು ಗುರುತಿಸುವುದು ಹೇಗೆ?&lt;/strong&gt;&lt;/p&gt;&lt;p&gt;ಬ್ಯಾಂಕ್ ನೀಡಿರುವ ಸಲಹೆಯಂತೆ, ವಂಚನೆಯ ಸಂದೇಶಗಳನ್ನು ಪತ್ತೆ ಹಚ್ಚುವುದು ಸುಲಭ. ಇಂತಹ ಸಂದೇಶಗಳಲ್ಲಿ ಭಾಷಾ ತಪ್ಪುಗಳು (Grammar mistakes) ಮತ್ತು ಕಾಗುಣಿತ ದೋಷಗಳಿರುತ್ತವೆ. ಅಲ್ಲದೆ, 'ತಕ್ಷಣವೇ ಮಾಡಿ, ಇಲ್ಲದಿದ್ದರೆ ಅಕೌಂಟ್ ಬಂದ್ ಆಗುತ್ತದೆ' ಎಂಬ ಬೆದರಿಕೆ ಇರುತ್ತದೆ. ನೆನಪಿಡಿ, ಎಸ್&zwnj;ಬಿಐನಿಂದ ಅಧಿಕೃತ ಕರೆಗಳು ಬಂದರೆ ಅವು ಸಾಮಾನ್ಯವಾಗಿ '1600' ರಿಂದ ಆರಂಭವಾಗುವ ಸಂಖ್ಯೆಗಳಿಂದ ಇರುತ್ತವೆ. ಮುಖ್ಯವಾಗಿ, ಯಾವುದೇ ಬ್ಯಾಂಕ್ ಫೋನ್ ಅಥವಾ ಲಿಂಕ್ ಮೂಲಕ ನಿಮ್ಮ ಪಾಸ್&zwnj;ವರ್ಡ್ ಅಥವಾ ಓಟಿಪಿ ಕೇಳುವುದಿಲ್ಲ.&lt;/p&gt;&lt;p&gt;&lt;strong&gt;ಹಣ ಕಳೆದುಕೊಂಡರೆ ಗಾಬರಿಯಾಗಬೇಡಿ, ಕೂಡಲೇ ದೂರು ನೀಡಿ&lt;/strong&gt;&lt;/p&gt;&lt;p&gt;ಒಂದು ವೇಳೆ ನೀವು ಇಂತಹ ವಂಚನೆಗೆ ಬಲಿಯಾಗಿದ್ದರೆ, ಸಮಯ ವ್ಯರ್ಥ ಮಾಡದೆ ಕ್ರಮ ಕೈಗೊಳ್ಳಿ. ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್&zwnj;ಸೈಟ್&zwnj;ನಲ್ಲಿ ದೂರು ದಾಖಲಿಸಿ. ತಡ ಮಾಡದೆ ದೂರು ನೀಡಿದರೆ, ನಿಮ್ಮ ಖಾತೆಯಿಂದ ಹೋದ ಹಣವನ್ನು ವಾಪಸ್ ಪಡೆಯುವ ಅಥವಾ ವಂಚಕರ ಖಾತೆಯನ್ನು ಫ್ರೀಜ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.&lt;/p&gt;&lt;p&gt;&lt;strong&gt;ಸುರಕ್ಷಿತವಾಗಿರಲು ಈ ಸೂತ್ರಗಳನ್ನು ಪಾಲಿಸಿ&lt;/strong&gt;&lt;/p&gt;&lt;p&gt;ಯಾವುದೇ ಅಪರಿಚಿತ ಲಿಂಕ್&zwnj;ಗಳ ಮೇಲೆ ಕ್ಲಿಕ್ ಮಾಡಬೇಡಿ. ನಿಮ್ಮ ಓಟಿಪಿ (OTP), ಸಿವಿವಿ, ಯುಪಿಐ ಪಿನ್ ಅಥವಾ ಯಾವುದೇ ಬ್ಯಾಂಕಿಂಗ್ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. 'ಜಾಗರೂಕತೆಯೇ ರಕ್ಷಣೆ' ಎಂಬ ಮಂತ್ರವನ್ನು ಪಾಲಿಸಿದರೆ ಮಾತ್ರ ನಿಮ್ಮ ಕಷ್ಟಪಟ್ಟು ದುಡಿದ ಹಣ ಸುರಕ್ಷಿತವಾಗಿರಲು ಸಾಧ್ಯ.&lt;/p&gt;]]></content:encoded>
            <category>money</category>
            <dc:creator>Ravi Janekal</dc:creator>
            <atom:link href="https://kannada.asianetnews.com/money/sbi-reward-points-scam-cyber-criminals-target-customers-with-dangerous-links/articleshow-zglkbrg"/>
        </item>
        <item>
            <title><![CDATA[Gold Rate: ಏಕಾಏಕಿ ಕುಸಿಯುತ್ತಿರುವ ಬಂಗಾರ; ಈಗ ಖರೀದಿಸಬಹುದೇ? ಇನ್ನೂ ಕಡಿಮೆ ಆಗುತ್ತೆ ಅಂತ ಕಾಯಬೇಕಾ?]]></title>
            <link>https://kannada.asianetnews.com/gallery/news-money/gold-and-silver-rate-market-time-to-buy-or-wait-1sd1fnt</link>
            <guid isPermaLink="true">https://kannada.asianetnews.com/gallery/news-money/gold-and-silver-rate-market-time-to-buy-or-wait-1sd1fnt</guid>
            <pubDate>Sun, 01 Feb 2026 19:52:17 +0530</pubDate>
            <description><![CDATA[&lt;p&gt;Gold And Silver Rate Update: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ₹1.35 ಲಕ್ಷದಷ್ಟು ಕುಸಿತ ಕಂಡಿದೆ. ಇದು ಶೇಕಡಾ 33 ರಷ್ಟು ಇಳಿಕೆಯಾದರೆ, ಚಿನ್ನದ ಬೆಲೆಯೂ ಶೇಕಡಾ 18 ರಷ್ಟು ಇಳಿಕೆ ಕಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgbx0tayssrsdzg5a9wx1rb3,imgname-4-1769926060382.jpg" type="image/jpeg" height="390" width="690"/>
            <content:encoded><![CDATA[&lt;p&gt;Gold And Silver Rate Update: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ₹1.35 ಲಕ್ಷದಷ್ಟು ಕುಸಿತ ಕಂಡಿದೆ. ಇದು ಶೇಕಡಾ 33 ರಷ್ಟು ಇಳಿಕೆಯಾದರೆ, ಚಿನ್ನದ ಬೆಲೆಯೂ ಶೇಕಡಾ 18 ರಷ್ಟು ಇಳಿಕೆ ಕಂಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇತ್ತೀಚಿಗೆ ಬೆಳ್ಳಿ ಮತ್ತು ಚಿನ್ನದ ಬೆಲೆಯು ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿತ್ತು. ಇದರಿಂದ ಹೂಡಿಕೆದಾರರು ತಮ್ಮ ಲಾಭವನ್ನು ನಗದು ಮಾಡಿಕೊಳ್ಳಬೇಕು ಎಂದು ಮಾರಾಟ ಮಾಡಲು ಆರಂಭಿಸಿದ್ದರು. ಹೀಗಾಗಿ ಬೆಳ್ಳಿ, ಬಂಗಾರ ಬೆಲೆಯು ಕಡಿಮೆ ಆಗಿತ್ತು.&lt;/p&gt;&lt;img&gt;&lt;p&gt;ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷರಾಗಿ ಕೆವಿನ್ ವಾರ್ಶ್ ಅವರ ನಾಮನಿರ್ದೇಶನವಾಗಿದೆ. ಇನ್ನು ಡಾಲರ್ ಮೌಲ್ಯ ಕೂಡ ಏರಿಕೆಯಾಗಿದೆ. ಹೀಗಾಗಿ ಹೂಡಿಕೆದಾರರು ಚಿನ್ನಕ್ಕೆ ಹೂಡಿಕೆ ಮಾಡಿದ್ದನ್ನು ನಗದು ಮಾಡಿಕೊಳ್ಳಲು ನೋಡುತ್ತಿದ್ದಾರೆ.&lt;/p&gt;&lt;img&gt;&lt;p&gt;2026ರ ಕೇಂದ್ರ ಬಜೆಟ್ ಮಂಡನೆಯಲ್ಲಿ, ಏನಾದರೂ ಆಮದು ಸುಂಕದಲ್ಲಿ ಬದಲಾವಣೆಯಾಗಬಹುದು ಎಂಬ ನಿರೀಕ್ಷೆ ಇತ್ತು.&lt;/p&gt;&lt;img&gt;&lt;p&gt;ಶುಕ್ರವಾರ ಮತ್ತು ಭಾನುವಾರದ ವಹಿವಾಟಿನಲ್ಲಿ ಬೆಳ್ಳಿ, ಚಿನ್ನದ ETFs ಕೂಡ ನಷ್ಟ ಅನುಭವಿಸಿವೆ. ಕೆಲವು ಹಂತಗಳಲ್ಲಿ ಇವು 'ಲೋಯರ್ ಸರ್ಕ್ಯೂಟ್' ತಲುಪಿದ್ದವು.&lt;/p&gt;&lt;img&gt;&lt;p&gt;ಚಿನ್ನ, ಬೆಳ್ಳಿಯ ಬೆಲೆಯಲ್ಲಿನ ಈ ಕುಸಿತದಿಂದಾಗಿ ಹೂಡಿಕೆದಾರರಿಗೆ ಆತಂಕ ಆಗಬಹುದು. ಆದರೆ ಇದು ದೀರ್ಘಕಾಲದ ಹೂಡಿಕೆಗೆ ಒಂದು ಅವಕಾಶವೂ ಆಗಿರಬಹುದು. ಬೆಲೆಗಳು ಇನ್ನೂ ಸ್ವಲ್ಪ ಇಳಿಕೆ ಆಗಬಹುದು. ಹೀಗಾಗಿ ಒಮ್ಮೆಯೇ ದೊಡ್ಡ ಮೊತ್ತದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ, ಆಗಾಗ ಖರೀದಿ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಚಿನ್ನ, ಬೆಳ್ಳಿಯನ್ನು ಟ್ರೇಡಿಂಗ್&zwnj;ಗಾಗಿ ಬಳಸದೆ, ಪೋರ್ಟ್&zwnj;ಫೋಲಿಯೊದ ರಕ್ಷಣೆಗಾಗಿ (Hedging) ಬಳಸುವವರಿಗೆ ಇದು ಖರೀದಿಯ ಟೈಮ್&zwnj; ಆಗಬಹುದು. ಮಾರುಕಟ್ಟೆಯಲ್ಲಿನ ಈ ಏರಿಳಿತವು ಜಾಗತಿಕ ರಾಜಕೀಯ, ಆರ್ಥಿಕ ಬದಲಾವಣೆಗಳಿಂದ ಉಂಟಾಗಿದೆ. ಹೂಡಿಕೆದಾರರು ಕೂಡ ಅವಸರದ ನಿರ್ಧಾರ ತೆಗೆದುಕೊಳ್ಳಬಾರದು.&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/news-money/gold-and-silver-rate-market-time-to-buy-or-wait-1sd1fnt"/>
        </item>
        <item>
            <title><![CDATA[ಅತಿ ಕಡಿಮೆ ದುಡ್ಡಿನಲ್ಲಿ ಮನೆಯಲ್ಲಿ ಕೂತು ಸೀರೆ ಇತ್ಯಾದಿಗಳನ್ನು Online ಮಾರಾಟ ಮಾಡೋದು ಹೇಗೆ?]]></title>
            <link>https://kannada.asianetnews.com/gallery/business/how-to-do-online-business-from-home-here-is-a-tips-a518sbg</link>
            <guid isPermaLink="true">https://kannada.asianetnews.com/gallery/business/how-to-do-online-business-from-home-here-is-a-tips-a518sbg</guid>
            <pubDate>Mon, 02 Feb 2026 17:07:32 +0530</pubDate>
            <description><![CDATA[&lt;p&gt;Online Business: ಅನೇಕರು ಇಂದು ಮನೆಯಲ್ಲಿ ಕೂತು ಆನ್&zwnj;ಲೈನ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇಂದಿನ ಕಾಲದಲ್ಲಿ ಇದು ಅತ್ಯಂತ ಲಾಭ ತಂದುಕೊಡುವ ಹಾಗೂ ಸ್ಮಾರ್ಟ್ ನಿರ್ಧಾರವಾಗಿದೆ. ಕಡಿಮೆ ಬಂಡವಾಳದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆಯಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcr57xx213c83g4m9qtsk4q0,imgname-4-1766042367906.jpg" type="image/jpeg" height="390" width="690"/>
            <content:encoded><![CDATA[&lt;p&gt;Online Business: ಅನೇಕರು ಇಂದು ಮನೆಯಲ್ಲಿ ಕೂತು ಆನ್&zwnj;ಲೈನ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇಂದಿನ ಕಾಲದಲ್ಲಿ ಇದು ಅತ್ಯಂತ ಲಾಭ ತಂದುಕೊಡುವ ಹಾಗೂ ಸ್ಮಾರ್ಟ್ ನಿರ್ಧಾರವಾಗಿದೆ. ಕಡಿಮೆ ಬಂಡವಾಳದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆಯಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮೊದಲು ನೀವು ಏನು ಮಾರಾಟ ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ. ಬಟ್ಟೆ, ಆಭರಣಗಳು, ಮನೆಯ ಅಲಂಕಾರಿಕ ವಸ್ತುಗಳು ಇತ್ಯಾದಿ ಮಾರಾಟ ಮಾಡಬಹುದು.&lt;/p&gt;&lt;p&gt;ಗ್ರಾಫಿಕ್ ಡಿಸೈನಿಂಗ್, ಕಂಟೆಂಟ್ ರೈಟಿಂಗ್, ಆನ್&zwnj;ಲೈನ್ ಟ್ಯೂಷನ್, ಡಿಜಿಟಲ್ ಮಾರ್ಕೆಟಿಂಗ್ ಕೂಡ ಮಾಡಬಹುದು. ನೀವು ಮಾರಾಟ ಮಾಡುವ ವಸ್ತುಗಳನ್ನು ಸ್ಟಾಕ್ ಇಟ್ಟುಕೊಳ್ಳದೆ ಬೇರೆಯವರ ಉತ್ಪನ್ನಗಳನ್ನು ಕೂಡ ನಿಮ್ಮ ವೆಬ್&zwnj;ಸೈಟ್ ಮೂಲಕ ಮಾರಬಹುದು.&lt;/p&gt;&lt;img&gt;&lt;p&gt;ನೀವು ಆಯ್ಕೆ ಮಾಡಿದ ಪ್ರೊಡಕ್ಟ್&zwnj;ಗೆ ಮಾರುಕಟ್ಟೆಯಲ್ಲಿ ನಿಜಕ್ಕೂ ಬೇಡಿಕೆ ಇದೆಯೇ? ನಿಮ್ಮ ಪ್ರತಿ ಸ್ಪರ್ಧಿಗಳು ಯಾರು? ಎಂದು ತಿಳಿದುಕೊಳ್ಳಿ. ಜನರು ಏನು ಹುಡುಕುತ್ತಿದ್ದಾರೆ ಎಂದು Google Trends ಬಳಸಿ.&lt;/p&gt;&lt;img&gt;&lt;p&gt;ನಿಮ್ಮ ಬ್ರ್ಯಾಂಡ್&zwnj;ಗೆ ಆಕರ್ಷಕವಾದ, ಸುಲಭವಾದ, ಜನರಿಗೆ ನೆನಪು ಇಡುವಂಥ ಹೆಸರು ಇಡಿ. ವಾರ್ಷಿಕವಾಗಿ ಜಾಸ್ತಿ ವ್ಯವಹಾರ ಇದ್ದರೆ, ಅಂತರರಾಜ್ಯ ವ್ಯವಹಾರ ಇದ್ದರೆ ಭಾರತದಲ್ಲಿ ಬ್ಯುಸಿನೆಸ್ ಮಾಡಲು GST ಅವಶ್ಯಕತೆ ಇರುತ್ತದೆ.&lt;/p&gt;&lt;img&gt;&lt;p&gt;ಪ್ಲಾಟ್&zwnj;ಫಾರ್ಮ್ ಆಯ್ಕೆ ಮಾಡಿ&amp;nbsp;&lt;/p&gt;&lt;p&gt;ಇ-ಕಾಮರ್ಸ್ ವೆಬ್&zwnj;ಸೈಟ್&zwnj;ಗಳಾದ Amazon, Flipkart ಅಥವಾ Meesho ಮೂಲಕ ನೋಂದಾಯಿಸಿಕೊಂಡು ಮಾರಾಟ ಮಾಡಬಹುದು. Shopify ಅಥವಾ WooCommerce ಬಳಸಿ ನಿಮ್ಮದೇ ವೆಬ್&zwnj;ಸೈಟ್ ಮಾಡಿಕೊಳ್ಳಿ. Instagram, Facebook ಮೂಲಕ ನೇರವಾಗಿ ಗ್ರಾಹಕರಿಗೆ ವಸ್ತುಗಳನ್ನು ಕೊಡಬಹುದು&lt;/p&gt;&lt;p&gt;ಗ್ರಾಹಕರಿಂದ ಹಣ ಪಡೆಯಲು Razorpay ಅಥವಾ Instamojo ನಂತಹ ಗೇಟ್&zwnj;ವೇಗಳನ್ನು ಬಳಸಬಹುದು, ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು Shiprocket / ದೆಹಲಿವರಿ (Delhivery) ನಂತಹ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಬಹುದು&lt;/p&gt;&lt;img&gt;&lt;p&gt;ನಿಮ್ಮ ಬ್ಯುಸಿನೆಸ್ ಬಗ್ಗೆ ಜನರಿಗೆ ತಿಳಿಯದಿದ್ದರೆ ಖರೀದಿ ಹೇಗೆ ಮಾಡುತ್ತಾರೆ? Instagram Reels ಮತ್ತು Facebook Ads ಬಳಸಿ. ಜನರು ಗೂಗಲ್&zwnj;ನಲ್ಲಿ ಹುಡುಕಿದಾಗ ನಿಮ್ಮ ಸೈಟ್ ಕಾಣಿಸುವ ಹಾಗೆ ಮಾಡಿ.&lt;/p&gt;&lt;img&gt;&lt;p&gt;ಆರಂಭದಲ್ಲೇ ಹೆಚ್ಚು ಹಣ ಹಾಕಬೇಡಿ, ಮೊದಲು ಬೇಡಿಕೆ ಎಷ್ಟಿದೆ ಎಂದು ಪರೀಕ್ಷಿಸಿ. ಗ್ರಾಹಕರು ನೀಡುವ ಫೀಡ್&zwnj;ಬ್ಯಾಕ್ ಗಮನಿಸಿ, ಅದಕ್ಕೆ ತಕ್ಕಂತೆ ಸೇವೆ ನೀಡಿ. ಒಮ್ಮೆ ಗುಣಮಟ್ಟ ಕೆಟ್ಟರೆ ಆನ್&zwnj;ಲೈನ್&zwnj;ನಲ್ಲಿ ನಂಬಿಕೆ ಕಳೆದುಕೊಳ್ಳಲಾಗುತ್ತದೆ.&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/how-to-do-online-business-from-home-here-is-a-tips-a518sbg"/>
        </item>
        <item>
            <title><![CDATA[ಈ ರಾಶಿಚಕ್ರ ಚಿಹ್ನೆಗಳನ್ನು ಹಣವಂತರು, ಅವರು ಜುಗಾಡ್ ಮೂಲಕ ಸಲೀಸಾಗಿ ಹಣ ಗಳಿಸುತ್ತಾರೆ]]></title>
            <link>https://kannada.asianetnews.com/gallery/astrology/money-manifestor-zodiac-signs-lucky-rashi-attract-money-without-hard-work-suh-0w5f4c5</link>
            <guid isPermaLink="true">https://kannada.asianetnews.com/gallery/astrology/money-manifestor-zodiac-signs-lucky-rashi-attract-money-without-hard-work-suh-0w5f4c5</guid>
            <pubDate>Mon, 11 May 2026 15:35:10 +0530</pubDate>
            <description><![CDATA[&lt;p&gt;ಕೆಲವು ಜನರು ಕಡಿಮೆ ಶ್ರಮದಿಂದ ಬಹಳಷ್ಟು ಹಣವನ್ನು ಗಳಿಸುತ್ತಾರೆಜ್ಯೋತಿಷ್ಯವು ಅವರನ್ನು ಹಣದ ವರ್ಧಕರು ಎಂದು ಪರಿಗಣಿಸುತ್ತದೆ. ಕುಬೇರ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ, ಈ ರಾಶಿಚಕ್ರ ಚಿಹ್ನೆಗಳು ತಂತ್ರ ಮತ್ತು ಅದೃಷ್ಟದ ಮೂಲಕ ಸಂಪತ್ತನ್ನು ಆಕರ್ಷಿಸುತ್ತವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmwzcphvacp09dt8ey0991jd,imgname-rich-people--3--1774793939515.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವು ಜನರು ಕಡಿಮೆ ಶ್ರಮದಿಂದ ಬಹಳಷ್ಟು ಹಣವನ್ನು ಗಳಿಸುತ್ತಾರೆಜ್ಯೋತಿಷ್ಯವು ಅವರನ್ನು ಹಣದ ವರ್ಧಕರು ಎಂದು ಪರಿಗಣಿಸುತ್ತದೆ. ಕುಬೇರ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ, ಈ ರಾಶಿಚಕ್ರ ಚಿಹ್ನೆಗಳು ತಂತ್ರ ಮತ್ತು ಅದೃಷ್ಟದ ಮೂಲಕ ಸಂಪತ್ತನ್ನು ಆಕರ್ಷಿಸುತ್ತವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮಂಗಳ ಗ್ರಹದಿಂದ ಆಳಲ್ಪಡುವ ಈ ರಾಶಿಯವರು ಧೈರ್ಯವನ್ನು ಮಾತ್ರವಲ್ಲದೆ ಬಲವಾದ ಉತ್ಸಾಹ ಮತ್ತು ರಾಜತಾಂತ್ರಿಕ ಕುಶಾಗ್ರಮತಿಯನ್ನು ಸಹ ಹೊಂದಿದ್ದಾರೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ನಂಬಲಾಗದಷ್ಟು ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ. ಲಾಭದಾಯಕ ಹೂಡಿಕೆ ಅವಕಾಶಗಳನ್ನು ಗುರುತಿಸುವಲ್ಲಿ ಅವರು ನಿಪುಣರು. ಅವರು ಅಪಾಯಗಳನ್ನು ತೆಗೆದುಕೊಳ್ಳಲು ಹೆದರದ ಕಾರಣ, ಅವರು ಹೆಚ್ಚಾಗಿ ಗುಪ್ತ ಮಾರ್ಗಗಳ ಮೂಲಕ ಗಣನೀಯ ಲಾಭವನ್ನು ಗಳಿಸುತ್ತಾರೆ. ಆದ್ದರಿಂದ, ಈ ಜನರು ಶ್ರೀಮಂತರಾಗಲು ಹುಟ್ಟಿದ್ದಾರೆ ಎಂದು ಜ್ಯೋತಿಷ್ಯ ಹೇಳುತ್ತದೆ.&lt;/p&gt;&lt;img&gt;&lt;p&gt;ಮಕರ ರಾಶಿಯವರಿಗೆ ಶನಿ ಗ್ರಹದ ಆಶೀರ್ವಾದ ಹೆಚ್ಚು. ಆದ್ದರಿಂದ, ಅವರು ಹೆಚ್ಚು ಶಿಸ್ತುಬದ್ಧರು ಮತ್ತು ಉತ್ತಮ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಯೋಜನೆ ಮತ್ತು ಕಾರ್ಯಗಳನ್ನು ಪೂರ್ಣಗೊಳಿಸುವುದು ಅವರ ಶಕ್ತಿ. ಅವರು ತಮ್ಮ ಗುರಿಗಳನ್ನು ಸಾಧಿಸಲು ಹೆಚ್ಚಾಗಿ ಬುದ್ಧಿವಂತ ತಂತ್ರಗಳನ್ನು ಬಳಸುತ್ತಾರೆ. ಅದಕ್ಕಾಗಿಯೇ ಯಶಸ್ಸು ಮತ್ತು ಸಂಪತ್ತು ಕನಿಷ್ಠ ಪ್ರಯತ್ನದಿಂದ ಮತ್ತು ಕಡಿಮೆ ಸಮಯದಲ್ಲಿ ಅವರಿಗೆ ಬರುತ್ತದೆ.&lt;/p&gt;&lt;img&gt;&lt;p&gt;ಮೀನ ರಾಶಿಯವರನ್ನು ಆಕಾಶ ಗುರು ಗುರು ಆಳುತ್ತಾನೆ. ಈ ರಾಶಿಯ ಜನರು ಹೆಚ್ಚು ಸೃಜನಶೀಲರು ಮತ್ತು ಆಳವಾದ ಚಿಂತನೆಯನ್ನು ಹೊಂದಿರುತ್ತಾರೆ. ಅವರು ಕಠಿಣ ಪರಿಶ್ರಮದಿಂದ ದೂರವಿರುತ್ತಾರೆ, ಆದರೆ ಬುದ್ಧಿವಂತ ಕೆಲಸದ ಮೂಲಕ, ಅವರು ಖ್ಯಾತಿಯನ್ನು ಮಾತ್ರವಲ್ಲದೆ ಬರವಣಿಗೆ, ಕಲೆ ಮತ್ತು ಸಂಗೀತದ ಮೂಲಕ ಗಣನೀಯ ಸಂಪತ್ತನ್ನು ಗಳಿಸಬಹುದು. ಜ್ಯೋತಿಷ್ಯದ ಪ್ರಕಾರ, ಈ ಜನರು ತುಂಬಾ ಅದೃಷ್ಟವಂತರು ಏಕೆಂದರೆ ಅವರು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿರುತ್ತಾರೆ.&lt;/p&gt;&lt;img&gt;&lt;p&gt;ಇದು ರಾಶಿಚಕ್ರದ ಎರಡನೇ ಚಿಹ್ನೆಯಾಗಿದ್ದು, ಭೂಮಿಯ ಅಂಶಕ್ಕೆ ಸಂಬಂಧಿಸಿದೆ ಮತ್ತು ಶುಕ್ರ ಗ್ರಹದಿಂದ ಆಳಲ್ಪಡುತ್ತದೆ. ಶುಕ್ರನ ಪ್ರಭಾವದಿಂದಾಗಿ, ಈ ಜನರು ಭೌತಿಕ ಸೌಕರ್ಯಗಳನ್ನು ಸಾಧಿಸಲು ಹಣದ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರು ತಾಳ್ಮೆಯಿಂದ ತಮ್ಮ ಗುರಿಗಳನ್ನು ಅನುಸರಿಸುತ್ತಾರೆ ಮತ್ತು ಅಂತಿಮವಾಗಿ ಯಶಸ್ಸು ಅವರನ್ನು ಅನುಸರಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಅವರು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಸಹ ಪಡೆಯುತ್ತಾರೆ.&lt;/p&gt;]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/money-manifestor-zodiac-signs-lucky-rashi-attract-money-without-hard-work-suh-0w5f4c5"/>
        </item>
        <item>
            <title><![CDATA[NASA ಗಗನಯಾತ್ರಿಗಳು ಧರಿಸುವ ಬಾಹ್ಯಾಕಾಶ ಸೂಟ್‌ ಬೆಲೆ ಎಷ್ಟು? 7 ತಲೆಮಾರಿನವ್ರು ಕೂತು ತಿನ್ನಬಹುದು! ವಿಶ್ವದ ದುಬಾರಿ ಡ್ರೆಸ್]]></title>
            <link>https://kannada.asianetnews.com/world-news/most-expensive-dress-in-the-world-the-astonishing-nasa-astronaut-space-suit-price/articleshow-27dp4zb</link>
            <guid isPermaLink="true">https://kannada.asianetnews.com/world-news/most-expensive-dress-in-the-world-the-astonishing-nasa-astronaut-space-suit-price/articleshow-27dp4zb</guid>
            <pubDate>Mon, 04 May 2026 10:50:12 +0530</pubDate>
            <description><![CDATA[&lt;p&gt;How Much Does a NASA Space Suit Weigh: ಜಗತ್ತಿನ ಅತ್ಯಂತ ದುಬಾರಿ ಡ್ರೆಸ್ ಯಾವುದು ಗೊತ್ತಾ? ಅದುವೇ ನಾಸಾ ಗಗನಯಾತ್ರಿಗಳು ಧರಿಸುವ ಸ್ಪೇಸ್ ಸೂಟ್. ಇದರ ಬೆಲೆ ಎಷ್ಟಿದೆ ಅಂದ್ರೆ, ಜೀವನಪೂರ್ತಿ ಯಾವುದೇ ಕೆಲಸ ಮಾಡದೆ ಆರಾಮವಾಗಿ ಬದುಕಬಹುದು. ಹಾಗಿದ್ರೆ, ಈ ಸ್ಪೇಸ್ ಸೂಟ್ ಬೆಲೆ ಎಷ್ಟು ಮತ್ತು ಅದರ ವಿಶೇಷತೆಗಳೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqrpkmwf2xj10ge7w6cvpwvy,imgname-new-project---2026-05-04t104517.505-1777871737743.jpg" type="image/jpeg" height="390" width="690"/>
            <content:encoded><![CDATA[&lt;p&gt;ಅವರು ಅಷ್ಟು ಬೆಲೆಯ ಬಟ್ಟೆ ಹಾಕಿದರು, ಇಷ್ಟು ಬೆಲೆ ಬಟ್ಟೆ ಹಾಕಿದರು ಎಂದು ಹೇಳ್ತೀವಿ. ಫ್ಯಾಷನ್ ಜಗತ್ತಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆಯ ಡ್ರೆಸ್&zwnj;ಗಳಿವೆ. ಆದರೆ ಎಲ್ಲಕ್ಕಿಂತ ದುಬಾರಿಯಾದದ್ದು ಗಗನಯಾತ್ರಿಗಳು ಧರಿಸುವ ಸ್ಪೇಸ್ ಸೂಟ್ ( Space suit price in Rupees ). ಇದರ ಬೆಲೆ ನೂರು ಕೋಟಿ ರೂಪಾಯಿ. ಈ ಹಣದಲ್ಲಿ ಒಂದು ಕುಟುಂಬದ ಏಳು ತಲೆಮಾರುಗಳು ಯಾವುದೇ ಕೆಲಸ ಮಾಡದೆ ಆರಾಮವಾಗಿ ಜೀವನ ನಡೆಸಬಹುದು.&lt;/p&gt;&lt;h2&gt;ನಾಸಾ ಸ್ಪೇಸ್ ಸೂಟ್ ಬೆಲೆ 100 ಕೋಟಿ ರೂಪಾಯಿ&lt;/h2&gt;&lt;p&gt;ನಾಸಾ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಹೋಗುವಾಗ ಈ ಸ್ಪೇಸ್ ಸೂಟ್ ಧರಿಸಲೇಬೇಕು. ಇದು ಬಾಹ್ಯಾಕಾಶ ನೌಕೆಯಂತೆಯೇ ಕೆಲಸ ಮಾಡುತ್ತದೆ. ಈ ಸೂಟ್ ಅವರನ್ನು ಶೂನ್ಯ, ಶಾಖ, ತೀವ್ರ ಚಳಿ ಮತ್ತು ವಿಕಿರಣಗಳಿಂದ ರಕ್ಷಿಸುತ್ತದೆ. ಒಂದು ನಾಸಾ ಸ್ಪೇಸ್ ಸೂಟ್ ಬೆಲೆ 100 ಕೋಟಿ ರೂಪಾಯಿ. ಈಗ ನಾಸಾ ಇದಕ್ಕಿಂತಲೂ ದುಬಾರಿ ಸೂಟ್&zwnj;ಗಳನ್ನು ತಯಾರಿಸುತ್ತಿದೆ.&lt;/p&gt;&lt;h2&gt;ಹೇಗೆ ತಯಾರಿಸ್ತಾರೆ?&lt;/h2&gt;&lt;p&gt;ಈ ಸ್ಪೇಸ್ ಸೂಟ್ ಅನ್ನು 16 ಪದರಗಳಿಂದ ತಯಾರಿಸಲಾಗುತ್ತದೆ. ಪ್ರತಿ ಪದರವು ಒತ್ತಡದ ಏರಿಳಿತಗಳನ್ನು ತಡೆಯುತ್ತದೆ, ತಾಪಮಾನವನ್ನು ನಿಯಂತ್ರಿಸುತ್ತದೆ ಮತ್ತು ಗಗನಯಾತ್ರಿಯನ್ನು ಅಪಾಯಗಳಿಂದ ರಕ್ಷಿಸುತ್ತದೆ. ಇದರ ಜೊತೆಗಿನ ಹೆಲ್ಮೆಟ್ ಬೆಲೆ ಎರಡೂವರೆ ಕೋಟಿ ರೂಪಾಯಿ. ಬೆನ್ನಿನ ಮೇಲಿರುವ ಬ್ಯಾಕ್&zwnj;ಪ್ಯಾಕ್ ಲೈಫ್ ಸಪೋರ್ಟ್ ಸಿಸ್ಟಮ್ ಆಮ್ಲಜನಕ ಪೂರೈಸಿ, ಕಾರ್ಬನ್ ಡೈಆಕ್ಸೈಡ್ ತೆಗೆದುಹಾಕುತ್ತದೆ. ಇದರ ಬೆಲೆಯೂ ಕೋಟಿಗಳಲ್ಲೇ ಇರುತ್ತದೆ.&lt;/p&gt;&lt;h2&gt;ಎಷ್ಟು ಖರ್ಚು ಆಗಿವೆ?&lt;/h2&gt;&lt;p&gt;ನಾಸಾ ತನ್ನ ಚಂದ್ರಯಾನಕ್ಕಾಗಿ ಹೊಸ, ಸುಧಾರಿತ ಸೂಟ್&zwnj;ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ತಯಾರಿಕೆಗೆ ಈಗಾಗಲೇ 8,350 ಕೋಟಿ ರೂಪಾಯಿ ಖರ್ಚಾಗಿದೆ. ಈ ಸೂಟ್&zwnj;ಗಳನ್ನು ಅಭಿವೃದ್ಧಿಪಡಿಸಲು ನಾಸಾ ಪ್ರಮುಖ ಕಂಪನಿಗಳಿಗೆ ಗುತ್ತಿಗೆ ನೀಡಿದೆ. ಸುರಕ್ಷತೆಗಾಗಿ ಪ್ರತಿಯೊಂದು ಭಾಗವನ್ನು ಸಾವಿರಾರು ಬಾರಿ ಪರೀಕ್ಷಿಸಲಾಗುತ್ತದೆ. ಸ್ಪೇಸ್ ಸೂಟ್ ಇಲ್ಲದೆ ಗಗನಯಾತ್ರಿ ಬಾಹ್ಯಾಕಾಶದಲ್ಲಿ ಎರಡು ನಿಮಿಷ ಕೂಡ ಬದುಕಲು ಸಾಧ್ಯವಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/world-news/most-expensive-dress-in-the-world-the-astonishing-nasa-astronaut-space-suit-price/articleshow-27dp4zb"/>
        </item>
        <item>
            <title><![CDATA[ನೀವೂ ಆಗಬಹುದು ಕೋಟ್ಯಾಧಿಪತಿ, ಹಣವನ್ನು ಆಯಸ್ಕಾಂತದಂತೆ ಸೆಳೆಯುವ ಟಾಪ್ 4 ರಾಶಿಗಳಿವು]]></title>
            <link>https://kannada.asianetnews.com/gallery/business/zodiac-signs-that-attract-wealth-according-to-astrology-suh-4g6c9nn</link>
            <guid isPermaLink="true">https://kannada.asianetnews.com/gallery/business/zodiac-signs-that-attract-wealth-according-to-astrology-suh-4g6c9nn</guid>
            <pubDate>Fri, 08 May 2026 16:09:21 +0530</pubDate>
            <description><![CDATA[&lt;p&gt;Astrology ಜ್ಯೋತಿಷ್ಯದ ಪ್ರಕಾರ 4 ರಾಶಿಯವರಿಗೆ ಹಣವನ್ನು ಆಕರ್ಷಿಸುವ ಶಕ್ತಿ ಹೆಚ್ಚಿರುತ್ತೆ. 2026ರ ಡಿಸೆಂಬರ್&zwnj;ವರೆಗೆ, ಇವರ ಆರ್ಥಿಕ ಶಿಸ್ತು, ನಿಖರ ಯೋಜನೆ ಮತ್ತು ಧೈರ್ಯದ ನಿರ್ಧಾರಗಳಿಂದ ಕೋಟ್ಯಾಧಿಪತಿಗಳಾಗುವ ಅವಕಾಶ ಹೆಚ್ಚಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr069dc21edxyj72t6eqjjqc,imgname-jupiter-venus-conjuction-in-gemini-makes-dhana-yogam-for-this-5-zodiac-signs-1778123060609.jpg" type="image/jpeg" height="390" width="690"/>
            <content:encoded><![CDATA[&lt;p&gt;Astrology ಜ್ಯೋತಿಷ್ಯದ ಪ್ರಕಾರ 4 ರಾಶಿಯವರಿಗೆ ಹಣವನ್ನು ಆಕರ್ಷಿಸುವ ಶಕ್ತಿ ಹೆಚ್ಚಿರುತ್ತೆ. 2026ರ ಡಿಸೆಂಬರ್&zwnj;ವರೆಗೆ, ಇವರ ಆರ್ಥಿಕ ಶಿಸ್ತು, ನಿಖರ ಯೋಜನೆ ಮತ್ತು ಧೈರ್ಯದ ನಿರ್ಧಾರಗಳಿಂದ ಕೋಟ್ಯಾಧಿಪತಿಗಳಾಗುವ ಅವಕಾಶ ಹೆಚ್ಚಿದೆ.&lt;/p&gt;&lt;img&gt;&lt;p&gt;ಆರ್ಥಿಕ ಸ್ವಾತಂತ್ರ್ಯ ಪ್ರತಿಯೊಬ್ಬರ ಕನಸು. ಆ ಕನಸನ್ನು ನನಸಾಗಿಸುವುದು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ರಾಶಿಯವರಿಗೆ ಹಣವನ್ನು ಆಕರ್ಷಿಸುವ ಶಕ್ತಿ ಸ್ವಾಭಾವಿಕವಾಗಿಯೇ ಹೆಚ್ಚಿರುತ್ತದೆ. ಗ್ರಹಗಳ ಪ್ರಭಾವ ಮತ್ತು ಅವರ ವಿಶಿಷ್ಟ ಗುಣಗಳು ಅವರನ್ನು ಸುಲಭವಾಗಿ ಕೋಟ್ಯಾಧಿಪತಿಗಳಾಗುವ ದಾರಿಯಲ್ಲಿ ನಡೆಸುತ್ತವೆ. 2026ರ ಮೇ ತಿಂಗಳ ಗ್ರಹಸ್ಥಿತಿಗಳನ್ನು ನೋಡಿದರೆ, ಡಿಸೆಂಬರ್&zwnj;ವರೆಗೆ ಈ ನಾಲ್ಕು ರಾಶಿಯವರು ಆರ್ಥಿಕವಾಗಿ ದೊಡ್ಡ ಯಶಸ್ಸನ್ನು ಕಾಣಲಿದ್ದಾರೆ.&lt;/p&gt;&lt;img&gt;&lt;p&gt;ವೃಷಭ ರಾಶಿಯವರು ಶುಕ್ರನ ನೆಚ್ಚಿನವರು. ಐಷಾರಾಮಿ ಜೀವನವನ್ನು ಇಷ್ಟ. ಇವರು ಎಂದಿಗೂ ಆತುರಪಟ್ಟು ಹಣವನ್ನು ವ್ಯರ್ಥ ಮಾಡುವುದಿಲ್ಲ. ಉಳಿತಾಯವನ್ನು ಚಿನ್ನ ಮತ್ತು ಭೂಮಿಯಂತಹ ಸ್ಥಿರ ಆಸ್ತಿಗಳಲ್ಲಿ ಹೂಡಿಕೆ ಮಾಡುವುದರಲ್ಲಿ ಇವರು ನಿಪುಣರು. ಈ ನಿಧಾನಗತಿಯ ನಡೆಯೇ ಇವರನ್ನು ಜೀವನದುದ್ದಕ್ಕೂ ಶ್ರೀಮಂತರಾಗಿರಿಸಲು ಸಹಾಯ ಮಾಡುತ್ತದೆ.&amp;nbsp;&lt;/p&gt;&lt;img&gt;&lt;p&gt;ಬುಧ ಗ್ರಹದ ಪ್ರಭಾವವಿರುವ ಕನ್ಯಾ ರಾಶಿಯವರು, ತಮ್ಮ ಜ್ಞಾನದಿಂದ ಹಣವನ್ನು ಸೃಷ್ಟಿಸುತ್ತಾರೆ. ಒಂದು ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಅದರ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ವಿಶ್ಲೇಷಿಸುವುದರಲ್ಲಿ ಇವರಿಗೆ ಯಾರೂ ಸಾಟಿಯಿಲ್ಲ. ಇವರ ಕೈಗೆ ಹಣ ಸಿಕ್ಕರೆ, ಅದನ್ನು ಹೇಗೆ ದ್ವಿಗುಣಗೊಳಿಸಬೇಕು ಎಂಬ ರಹಸ್ಯ ಇವರಿಗೆ ತಿಳಿದಿದೆ. ವಿಶೇಷವಾಗಿ ಷೇರು ಮಾರುಕಟ್ಟೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇವರು ತೆಗೆದುಕೊಳ್ಳುವ ನಿರ್ಧಾರಗಳು ಕೋಟ್ಯಂತರ ರೂಪಾಯಿ ಲಾಭವನ್ನು ತಂದುಕೊಡುತ್ತವೆ.&amp;nbsp;&lt;/p&gt;&lt;img&gt;ವೃಶ್ಚಿಕ ರಾಶಿಯವರು ಬೇರೆಯವರು ಯೋಚಿಸಲು ಹೆದರುವ ಕಡೆಗಳಲ್ಲಿ ಧೈರ್ಯವಾಗಿ ಹೂಡಿಕೆ ಮಾಡುತ್ತಾರೆ. ಮಂಗಳನ ಪ್ರಭಾವವು ಇವರಿಗೆ ಅಪಾಯಗಳನ್ನು ಎದುರಿಸುವ ಧೈರ್ಯವನ್ನು ನೀಡುತ್ತದೆ. ಇವರ ಆರ್ಥಿಕ ಯೋಜನೆಗಳು ಯಾವಾಗಲೂ ರಹಸ್ಯವಾಗಿರುತ್ತವೆ; ಯಶಸ್ಸು ಸಿಕ್ಕ ನಂತರವೇ ಅದನ್ನು ಜಗತ್ತಿಗೆ ತಿಳಿಸುತ್ತಾರೆ. ರಿಯಲ್ ಎಸ್ಟೇಟ್ ಮತ್ತು ಕ್ರಿಪ್ಟೋದಂತಹ ಆಧುನಿಕ ಹೂಡಿಕೆಗಳಲ್ಲಿ ಇವರು ಪರಿಣಿತರು. ಮೇ ತಿಂಗಳಿಂದ ಡಿಸೆಂಬರ್&zwnj;ವರೆಗೆ ಇವರ ಸತತ ಪ್ರಯತ್ನಕ್ಕೆ ದೊಡ್ಡ ಆರ್ಥಿಕ ಮನ್ನಣೆ ಸಿಗುವ ವರ್ಷ ಇದಾಗಲಿದೆ.&lt;img&gt;ನಿಮ್ಮ ರಾಶಿ ಯಾವುದೇ ಇರಲಿ, ಸಕಾರಾತ್ಮಕ ಆಲೋಚನೆಗಳು ಮತ್ತು ಸರಿಯಾದ ಯೋಜನೆ ನಿಮ್ಮನ್ನು ಯಶಸ್ವಿ ವ್ಯಕ್ತಿಯನ್ನಾಗಿ ಮಾಡುತ್ತದೆ. ಸಂಪತ್ತಿನ ದೇವತೆಯಾದ ಮಹಾಲಕ್ಷ್ಮಿಯನ್ನು ಶುಕ್ರವಾರದಂದು ಪೂಜಿಸುವುದು ಮತ್ತು 'ಓಂ ಶ್ರೀಂ ಹ್ರೀಂ ಕ್ಲೀಂ' ಎಂಬ ಮಂತ್ರವನ್ನು ಪಠಿಸುವುದು ನಿಮ್ಮ ಆರ್ಥಿಕ ಅಡೆತಡೆಗಳನ್ನು ನಿವಾರಿಸಿ, ಸಂಪತ್ತನ್ನು ತಂದುಕೊಡುತ್ತದೆ. ಶ್ರಮ ಮತ್ತು ಅದೃಷ್ಟ ಕೈಜೋಡಿಸಿದಾಗ ಯಾರಾದರೂ ಕೋಟ್ಯಾಧಿಪತಿ ಆಗಬಹುದು! ನಿಮ್ಮ ರಾಶಿ ಈ ಪಟ್ಟಿಯಲ್ಲಿದ್ದರೆ, ಇಂದೇ ನಿಮ್ಮ ಯಶಸ್ಸಿನ ಮೊದಲ ಹೆಜ್ಜೆ ಇಡಿ!]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/zodiac-signs-that-attract-wealth-according-to-astrology-suh-4g6c9nn"/>
        </item>
        <item>
            <title><![CDATA[Mamata Banerjee: ಮೋದಿ ಚುರುಮುರಿ, ದೀದಿ ತರಕಾರಿ; ದುಡ್ಡು ಕೊಡಿ ಅಕ್ಕೋ ಎಂದ ವ್ಯಾಪಾರಿ! Video Viral]]></title>
            <link>https://kannada.asianetnews.com/india-news/west-bengal-mamata-banerjee-vegetable-shopping-no-money/articleshow-4vg80xr</link>
            <guid isPermaLink="true">https://kannada.asianetnews.com/india-news/west-bengal-mamata-banerjee-vegetable-shopping-no-money/articleshow-4vg80xr</guid>
            <pubDate>Mon, 27 Apr 2026 14:46:09 +0530</pubDate>
            <description><![CDATA[&lt;p&gt;Mamata Banerjee Vegetable Shopping Video: ಪ್ರಧಾನಿ ಮೋದಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದಾದ ಬಳಿಕ ಮಮತಾ ಬ್ಯಾನರ್ಜಿ ಅವರು ತರಕಾರಿ ತಗೊಂಡು ದುಡ್ಡು ಕೊಡದೆ ಬಂದಿದ್ದಾರೆ. ಈ ವಿಡಿಯೋ ಈಗ ವೈರಲ್&zwnj; ಆಗ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq737j4sp0qrh3nf9w4n4eaw,imgname-new-project---2026-04-27t143826.344-1777280993433.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ( Mamata Banerjee ) ತಮ್ಮ ಸ್ವಕ್ಷೇತ್ರವಾದ ಭಬಾನಿಪುರಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಎಂದೂ ತರಕಾರಿ ಖರೀದಿ ಮಾಡದ ಅವರು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ್ದಾರೆ. ಅವರ ಅನುಯಾಯಿಗಳು ಕೈಚೀಲ ತಂದು ತರಕಾರಿ ತುಂಬಿಕೊಂಡಿದ್ದಾರೆ. ಅತ್ತ ನರೇಂದ್ರ ಮೋದಿ ಅವರು 'ಬೇಲ್&zwnj; ಪುರಿ' ಸವಿಯುವ ಮೂಲಕ ಸುದ್ದಿಯಾಗಿದ್ದರು. ಈಗ ಮಮತಾ ಬ್ಯಾನರ್ಜಿ ತರಕಾರಿ ಖರೀದಿ ಮಾಡಿದ್ದಾರೆ.&lt;/p&gt;&lt;p&gt;ಬಿಳಿ ಸೀರೆ ಉಟ್ಟು ಮಾರುಕಟ್ಟೆಗೆ ಬಂದ 71 ವರ್ಷದ ಮಮತಾ ಬ್ಯಾನರ್ಜಿ, ತರಕಾರಿ ಮಾರಾಟಗಾರರ ಜೊತೆ ಮಾತನಾಡಿದ್ದಾರೆ. ಬೆಲೆ ಏರಿಕೆ, ತರಕಾರಿ ಪೂರೈಕೆಯ ಬಗ್ಗೆ ಮಾತನಾಡಿದ್ದಾರೆ. ಮೋದಿಯವರು ಹೂಗ್ಲಿ, ಉತ್ತರ 24 ಪರಗಣಗಳಲ್ಲಿ ಬೃಹತ್ ರೋಡ್ ಶೋ ಮಾಡುತ್ತಿದ್ದ ದಿನವೇ ಮಮತಾ ಅವರು ಭಬಾನಿಪುರದ ಗಲ್ಲಿಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ.&lt;/p&gt;&lt;h2&gt;ಮಮತಾ ಬ್ಯಾನರ್ಜಿ ಏನಂದ್ರು?&lt;/h2&gt;&lt;p&gt;ಆ ವೇಳೆ ಮಾತನಾಡಿದ ಅವರು, &quot;ನಾವು ಎಲ್ಲರೂ ಒಂದಾಗಿ ಬಾಳಬೇಕು. ನಮ್ಮವರಿಗೆ ಉತ್ತಮ ಸೌಲಭ್ಯಗಳು ಸಿಗಬೇಕು. ಈಗಾಗಲೇ ನಾವು ಅನೇಕ ದೇವಾಲಯ, ಜೈನ ಮಂದಿರ, ಇಸ್ಕಾನ್ ದೇವಾಲಯ, ಜಗನ್ನಾಥ ಧಾಮವನ್ನು ನಿರ್ಮಿಸಿದ್ದೇವೆ. ಶಿಕ್ಷಣ ಸಂಸ್ಥೆಗಳಿಗೆ ಭೂಮಿ ಕೊಟ್ಟಿದ್ದೇವೆ&quot; ಎಂದು ಹೇಳಿದ್ದಾರೆ.&lt;/p&gt;&lt;h2&gt;ಈ ಬಾರಿ ಮಮತಾ ಗೆಲ್ತಾರಾ?&lt;/h2&gt;&lt;p&gt;2026ರ ವಿಧಾನಸಭಾ ಚುನಾವಣೆಯಲ್ಲಿ ಭಬಾನಿಪುರ ಕ್ಷೇತ್ರವು ಪ್ರಮುಖ ರಣರಂಗವಾಗಲಿದೆ. ಇಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರನ್ನು ಕಣಕ್ಕಿಳಿಸಲಿದ್ದಾರಂತಡ. 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾರನ್ನು ಸುವೇಂದು ಸೋಲಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/india-news/west-bengal-mamata-banerjee-vegetable-shopping-no-money/articleshow-4vg80xr"/>
        </item>
        <item>
            <title><![CDATA[Gold Price Crash: ಇತಿಹಾಸದಲ್ಲೇ  ಈ ಸಮಯದಲ್ಲಿ ಮಾತ್ರ ಚಿನ್ನದ ಬೆಲೆ ದಿಢೀರ್ ಪಾತಳಕ್ಕೆ ಕುಸಿದಿತ್ತು!]]></title>
            <link>https://kannada.asianetnews.com/gallery/business/from-1980-to-2026-the-most-significant-gold-price-crashes-in-history-explained-4w0avp4</link>
            <guid isPermaLink="true">https://kannada.asianetnews.com/gallery/business/from-1980-to-2026-the-most-significant-gold-price-crashes-in-history-explained-4w0avp4</guid>
            <pubDate>Mon, 11 May 2026 16:40:43 +0530</pubDate>
            <description><![CDATA[&lt;p&gt;&lt;strong&gt;Gold Price Crash: &lt;/strong&gt;ಜಾಗತಿಕ ಅಸ್ಥಿರತೆ, ವಿದೇಶಿ ವಿನಿಮಯ ಮೀಸಲು ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ಮೋದಿಯವರು ಒಂದು ವರ್ಷದವರೆಗೆ ಚಿನ್ನ ಖರೀದಿಸದಂತೆ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ನಡುವೆ, ಇತಿಹಾಸದಲ್ಲಿ ಚಿನ್ನದ ಬೆಲೆಯಲ್ಲಿ ಅತಿ ದೊಡ್ಡ ಕುಸಿತ ಯಾವಾಗ ಕಂಡುಬಂದಿತ್ತು? ವಿವರ ಇಲ್ಲಿದೆ. &amp;nbsp; &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knk518p3n4q2txf37b17v085,imgname-fotojet---2026-04-07t103040.798-1775538053826.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Gold Price Crash: &lt;/strong&gt;ಜಾಗತಿಕ ಅಸ್ಥಿರತೆ, ವಿದೇಶಿ ವಿನಿಮಯ ಮೀಸಲು ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ಮೋದಿಯವರು ಒಂದು ವರ್ಷದವರೆಗೆ ಚಿನ್ನ ಖರೀದಿಸದಂತೆ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ನಡುವೆ, ಇತಿಹಾಸದಲ್ಲಿ ಚಿನ್ನದ ಬೆಲೆಯಲ್ಲಿ ಅತಿ ದೊಡ್ಡ ಕುಸಿತ ಯಾವಾಗ ಕಂಡುಬಂದಿತ್ತು? ವಿವರ ಇಲ್ಲಿದೆ. &amp;nbsp; &amp;nbsp;&lt;/p&gt;&lt;img&gt;&lt;p&gt;ಚಿನ್ನವನ್ನು ದೀರ್ಘಕಾಲದಿಂದಲೂ ವಿಶ್ವದ ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ. ಭಾರತದಂತಹ ದೇಶಗಳಲ್ಲಿ ಇದು ಕೇವಲ ಹಣಕಾಸಿನ ಆಸ್ತಿಯಲ್ಲ, ಬದಲಿಗೆ ಒಂದು ಸಾಂಸ್ಕೃತಿಕ ಸಂಕೇತವೂ ಹೌದು.&lt;/p&gt;&lt;img&gt;&lt;p&gt;ಚಿನ್ನದ ಬೆಲೆಯಲ್ಲಿ ಕಂಡುಬಂದ ಅತ್ಯಂತ ತೀವ್ರವಾದ ಕುಸಿತಗಳಲ್ಲಿ ಒಂದು ಮಾರ್ಚ್ 2026 ರಲ್ಲಿ ಸಂಭವಿಸಿತು. ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಸುಮಾರು 19.5% ರಷ್ಟು ಭಾರಿ ಇಳಿಕೆ ದಾಖಲಾಗಿತ್ತು. ಹಣಕಾಸು ವಿಶ್ಲೇಷಕರು ಇದನ್ನು 1970 ರ ದಶಕದ ಮಧ್ಯಭಾಗದ ನಂತರ ಚಿನ್ನದ ಬೆಲೆಯಲ್ಲಿ ಕಂಡುಬಂದ ಅತಿದೊಡ್ಡ ಮಾಸಿಕ ಕುಸಿತ ಎಂದು ಬಣ್ಣಿಸಿದ್ದಾರೆ.&lt;/p&gt;&lt;p&gt;ಭಾರತದಲ್ಲಿ ಈ ಸಮಯದಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ ಸುಮಾರು ₹1.8 ಲಕ್ಷದಿಂದ ₹1.31 ಲಕ್ಷದ ಮಟ್ಟಕ್ಕೆ ಕುಸಿದಿದೆ ಎಂದು ವರದಿಯಾಗಿದೆ. ಅನಿಶ್ಚಿತ ಕಾಲದಲ್ಲಿ ಚಿನ್ನವನ್ನು ಸ್ಥಿರ ಮತ್ತು ಸುರಕ್ಷಿತ ಹೂಡಿಕೆ ಎಂದು ನೋಡಲಾಗುವುದರಿಂದ, ಈ ಹಠಾತ್ ಕುಸಿತವು ಹೂಡಿಕೆದಾರರನ್ನು ದಿಗ್ಭ್ರಮೆಗೊಳಿಸಿತ್ತು.&lt;/p&gt;&lt;img&gt;&lt;p&gt;ಚಿನ್ನದ ಇತಿಹಾಸದ ಮತ್ತೊಂದು ದೊಡ್ಡ ಕುಸಿತ 1980 ಮತ್ತು 1982 ರ ನಡುವೆ ಕಂಡುಬಂದಿತ್ತು. ಜನವರಿ 1980 ರಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಹಣದುಬ್ಬರದ ಭೀತಿಯ ನಡುವೆ, ಚಿನ್ನದ ಬೆಲೆ ಆಗಿನ ಸಾರ್ವಕಾಲಿಕ ದಾಖಲೆಯಾದ ಪ್ರತಿ ಔನ್ಸ್&zwnj;ಗೆ ಸುಮಾರು 850 ಡಾಲರ್&zwnj;ಗಳನ್ನು ತಲುಪಿತ್ತು. ಆದರೆ ಈ ಏರಿಕೆ ಹೆಚ್ಚು ಕಾಲ ಉಳಿಯಲಿಲ್ಲ. ಜೂನ್ 1982 ರ ವೇಳೆಗೆ ಜಾಗತಿಕ ಚಿನ್ನದ ಬೆಲೆಯಲ್ಲಿ ಸುಮಾರು 58% ರಷ್ಟು ಭಾರಿ ಕುಸಿತ ಉಂಟಾಗಿತ್ತು. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಿದ್ದೇ ಈ ಭಾರಿ ಇಳಿಕೆಗೆ ಮುಖ್ಯ ಕಾರಣವಾಗಿತ್ತು.&lt;/p&gt;&lt;img&gt;&lt;p&gt;1983 ರಲ್ಲಿ ಚಿನ್ನದ ಬೆಲೆ ಕೇವಲ ಒಂದೇ ದಿನದಲ್ಲಿ ಭಾರಿ ಕುಸಿತ ಕಂಡಿತ್ತು. ಆ ವರ್ಷದ ಫೆಬ್ರವರಿ 28 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಒಂದೇ ಟ್ರೇಡಿಂಗ್ ಸೆಷನ್&zwnj;ನಲ್ಲಿ ಸುಮಾರು 9.6% ರಷ್ಟು ಕುಸಿದಿತ್ತು. ಆ ಸಮಯದಲ್ಲಿ ಇದು ಈ ಅಮೂಲ್ಯ ಲೋಹದ ಇತಿಹಾಸದಲ್ಲಿ ಒಂದು ದಿನದಲ್ಲಿ ಸಂಭವಿಸಿದ ಅತಿದೊಡ್ಡ ಕುಸಿತಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತು.&lt;/p&gt;&lt;img&gt;&lt;p&gt;ಏಪ್ರಿಲ್ 2013 ರಲ್ಲಿ ಮತ್ತೊಂದು ಪ್ರಮುಖ ತಿರುವು ಎದುರಾಯಿತು. ಇದನ್ನು 'ಗೋಲ್ಡ್ ಫ್ಲ್ಯಾಶ್ ಕ್ರಾಶ್' ಎಂದು ಕರೆಯಲಾಗುತ್ತದೆ. ಕೇವಲ ಎರಡು ದಿನಗಳಲ್ಲಿ ಅಂತಾರಾಷ್ಟ್ರೀಯ ಚಿನ್ನದ ಬೆಲೆ ಸುಮಾರು 13 ರಿಂದ 15% ರಷ್ಟು ಕುಸಿದಿತ್ತು. ಸೈಪ್ರಸ್ ತನ್ನ ಸಾಲದ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಚಿನ್ನದ ಮೀಸಲನ್ನು ಮಾರಾಟ ಮಾಡಲು ನಿರ್ಧರಿಸಿದ್ದು ಮತ್ತು ಅಮೆರಿಕದ ಆರ್ಥಿಕ ಸುಧಾರಣೆಯ ಸೂಚನೆಗಳು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿದ್ದವು.&lt;/p&gt;&lt;img&gt;&lt;p&gt;2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲೂ ಚಿನ್ನದ ಬೆಲೆ ಭಾರಿ ಇಳಿಕೆ ಕಂಡಿತ್ತು. 2008 ರಿಂದ 2009 ರ ಆರಂಭದವರೆಗೆ ಹಲವು ತಿಂಗಳುಗಳಲ್ಲಿ ಚಿನ್ನದ ಬೆಲೆ ಸುಮಾರು 29.5% ರಷ್ಟು ಕುಸಿದಿತ್ತು. ಆದರೆ ನಂತರದ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಬಲವಾದ ಚೇತರಿಕೆ ಕಂಡುಬಂದಿತ್ತು.&lt;/p&gt;]]></content:encoded>
            <category>money</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/business/from-1980-to-2026-the-most-significant-gold-price-crashes-in-history-explained-4w0avp4"/>
        </item>
        <item>
            <title><![CDATA[ಜಗತ್ತಿನ ಟಾಪ್ 10 ಅತಿದೊಡ್ಡ ಸಿನಿಮಾ ಇಂಡಸ್ಟ್ರಿಗಳು ಯಾವವು, ಭಾರತಕ್ಕೆ ಎಷ್ಟೇ ಸ್ಥಾನ? ಇಲ್ಲಿದೆ ಅಚ್ಚರಿಯ ಮಾಹಿತಿ!]]></title>
            <link>https://kannada.asianetnews.com/world-news/top-10-biggest-film-industries-in-the-world-is-know-here-for-your-important-information/articleshow-72yg39s</link>
            <guid isPermaLink="true">https://kannada.asianetnews.com/world-news/top-10-biggest-film-industries-in-the-world-is-know-here-for-your-important-information/articleshow-72yg39s</guid>
            <pubDate>Wed, 29 Apr 2026 13:26:01 +0530</pubDate>
            <description><![CDATA[&lt;p&gt;ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ, ಅದೊಂದು ಬೃಹತ್ ಉದ್ಯಮ. ಜಗತ್ತಿನ ಪ್ರತಿಯೊಂದು ದೇಶವೂ ತನ್ನದೇ ಆದ ವಿಶಿಷ್ಟ ಶೈಲಿಯ ಸಿನಿಮಾಗಳನ್ನು ತಯಾರಿಸುತ್ತದೆ. ಆದರೆ, ಬಾಕ್ಸ್ ಆಫೀಸ್ ಗಳಿಕೆ, ನಿರ್ಮಾಣದ ವೇಗ ಮತ್ತು ಜಾಗತಿಕ ಪ್ರಭಾವದ ಆಧಾರದ ಮೇಲೆ ವಿಶ್ವದ ಟಾಪ್ 10 ಸಿನಿಮಾ ಇಂಡಸ್ಟ್ರಿಗಳು ಯಾವುವು? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqc3sct1519xgerk9x2j4yzb,imgname-movies-theaters-1777449349953.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಶ್ವದ ಟಾಪ್ 10 ಅತಿದೊಡ್ಡ ಸಿನಿಮಾ ಇಂಡಸ್ಟ್ರಿಗಳು: ಭಾರತದ ಸ್ಥಾನ ಎಲ್ಲಿದೆ? ಇಲ್ಲಿವೆ ನೋಡಿ ರೋಚಕ ಮಾಹಿತಿಗಳು!&lt;/strong&gt;&lt;/p&gt;&lt;p&gt;ಬೆಂಗಳೂರು: ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ, ಅದೊಂದು ಬೃಹತ್ ಉದ್ಯಮ. ಜಗತ್ತಿನ ಪ್ರತಿಯೊಂದು ದೇಶವೂ ತನ್ನದೇ ಆದ ವಿಶಿಷ್ಟ ಶೈಲಿಯ ಸಿನಿಮಾಗಳನ್ನು ತಯಾರಿಸುತ್ತದೆ. ಆದರೆ, ಬಾಕ್ಸ್ ಆಫೀಸ್ ಗಳಿಕೆ, ನಿರ್ಮಾಣದ ವೇಗ ಮತ್ತು ಜಾಗತಿಕ ಪ್ರಭಾವದ ಆಧಾರದ ಮೇಲೆ ವಿಶ್ವದ ಟಾಪ್ 10 ಸಿನಿಮಾ ಇಂಡಸ್ಟ್ರಿಗಳು ಯಾವುವು ಎಂಬ ಕುತೂಹಲ ನಿಮಗಿದೆಯೇ? ಹಾಗಾದರೆ ಈ ಲೇಖನ ಓದಿ.&lt;/p&gt;&lt;p&gt;1. ಭಾರತೀಯ ಸಿನಿಮಾ (Indian Cinema) &lt;/p&gt;&lt;p&gt;ಸಿನಿಮಾ ನಿರ್ಮಾಣದ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್! ಕೇವಲ ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಟಾಲಿವುಡ್, ಸ್ಯಾಂಡಲ್&zwnj;ವುಡ್, ಕಾಲಿವುಡ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಇಲ್ಲಿ ವರ್ಷಕ್ಕೆ ಸಾವಿರಾರು ಸಿನಿಮಾಗಳು ತಯಾರಾಗುತ್ತವೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾಗಳಿಗೆ ಇಂದು ಭಾರಿ ಬೇಡಿಕೆಯಿದೆ.&lt;/p&gt;&lt;p&gt;2. ನೊಲಿವುಡ್ (Nollywood) &lt;/p&gt;&lt;p&gt;ನೈಜೀರಿಯಾದ ಈ ಚಿತ್ರರಂಗ ವಿಶ್ವದ ಎರಡನೇ ಅತಿದೊಡ್ಡ ಚಿತ್ರೋದ್ಯಮವಾಗಿದೆ. ಇಲ್ಲಿ ಸಿನಿಮಾ ನಿರ್ಮಾಣದ ವೇಗ ಅತಿ ಹೆಚ್ಚು. ಪ್ರತಿ ವರ್ಷ ಸಾವಿರಾರು ಸಿನಿಮಾಗಳನ್ನು ನಿರ್ಮಿಸುವ ನೊಲಿವುಡ್, ಡಿಜಿಟಲ್ ವೇದಿಕೆಗಳ ಮೂಲಕ ಇಡೀ ಆಫ್ರಿಕಾ ಮತ್ತು ವಿಶ್ವದಾದ್ಯಂತ ತನ್ನ ಕಥೆಗಳನ್ನು ತಲುಪಿಸುತ್ತಿದೆ.&lt;/p&gt;&lt;h2&gt;3. ಚೈನೀಸ್ ಸಿನಿಮಾ (Chinese Cinema) &lt;/h2&gt;&lt;p&gt;ಚೀನಾ ಚಿತ್ರರಂಗ ಇಂದು ಹಾಲಿವುಡ್&zwnj;ಗೆ ನೇರ ಪೈಪೋಟಿ ನೀಡುತ್ತಿದೆ. ಸರ್ಕಾರದ ಭರ್ಜರಿ ಬೆಂಬಲ ಮತ್ತು ಬೃಹತ್ ದೇಶೀಯ ಮಾರುಕಟ್ಟೆಯಿಂದಾಗಿ ಚೀನಾ ಬಾಕ್ಸ್ ಆಫೀಸ್&zwnj;ನಲ್ಲಿ ದಾಖಲೆ ಬರೆಯುತ್ತಿದೆ. ಇಲ್ಲಿನ ಆಕ್ಷನ್ ಮತ್ತು ಐತಿಹಾಸಿಕ ಸಿನಿಮಾಗಳಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.&lt;/p&gt;&lt;p&gt;4. ಹಾಲಿವುಡ್ (Hollywood) &lt;/p&gt;&lt;p&gt;ತಂತ್ರಜ್ಞಾನ ಮತ್ತು ಬಜೆಟ್ ವಿಷಯಕ್ಕೆ ಬಂದರೆ ಅಮೆರಿಕದ ಹಾಲಿವುಡ್ ಸದಾ ಮುಂಚೂಣಿಯಲ್ಲಿರುತ್ತದೆ. ಇಡೀ ವಿಶ್ವದ ಮೇಲೆ ಸಾಂಸ್ಕೃತಿಕ ಪ್ರಭಾವ ಬೀರಿರುವ ಈ ಇಂಡಸ್ಟ್ರಿ, ಜಾಗತಿಕವಾಗಿ ಅತಿ ಹೆಚ್ಚು ಹಣ ಗಳಿಸುವ ಸಿನಿಮಾಗಳನ್ನು ನೀಡುತ್ತದೆ.&lt;/p&gt;&lt;h3&gt;5. ಕೊರಿಯನ್ ಸಿನಿಮಾ (Korean Cinema) &lt;/h3&gt;&lt;p&gt;ಇಂದು 'ಕೆ-ವೇವ್' (K-Wave) ಜಗತ್ತನ್ನೇ ಆವರಿಸಿದೆ. ದಕ್ಷಿಣ ಕೊರಿಯಾದ ಸಿನಿಮಾಗಳು ತಮ್ಮ ವಿಭಿನ್ನ ಕಥೆಗಳು ಮತ್ತು ಅದ್ಭುತ ಮೇಕಿಂಗ್&zwnj;ನಿಂದ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿವೆ. ಆಸ್ಕರ್ ವೇದಿಕೆಯಲ್ಲೂ ಕೊರಿಯನ್ ಸಿನಿಮಾಗಳ ಹವಾ ಜೋರಾಗಿದೆ.&lt;/p&gt;&lt;p&gt;6. ಜಪಾನೀಸ್ ಸಿನಿಮಾ (Japanese Cinema) &lt;/p&gt;&lt;p&gt;ಜಪಾನ್ ಅಂದ ಕೂಡಲೇ ನೆನಪಾಗುವುದು 'ಆನಿಮೆ' (Anime). ಕೇವಲ ಆನಿಮೆ ಮಾತ್ರವಲ್ಲದೆ, ಜಪಾನ್&zwnj;ನ ಲೈವ್ ಆಕ್ಷನ್ ಸಿನಿಮಾಗಳು ಕೂಡ ವಿಶಿಷ್ಟ ಕಥಾಹಂದರಕ್ಕೆ ಹೆಸರುವಾಸಿ. ಇಂದಿಗೂ ಜಪಾನ್ ತನ್ನ ಸಾಂಸ್ಕೃತಿಕ ಬೇರುಗಳನ್ನು ಸಿನಿಮಾಗಳ ಮೂಲಕ ಜಗತ್ತಿಗೆ ತೋರಿಸುತ್ತಿದೆ.&lt;/p&gt;&lt;p&gt;7. ಫ್ರೆಂಚ್ ಸಿನಿಮಾ (French Cinema) &lt;/p&gt;&lt;p&gt;ಸಿನಿಮಾ ಕಲೆಯ ತವರು ಫ್ರಾನ್ಸ್. ಇಲ್ಲಿನ ಸರ್ಕಾರವು ಚಿತ್ರರಂಗಕ್ಕೆ ಭಾರಿ ಧನಸಹಾಯ ನೀಡುತ್ತದೆ. ಕಲಾತ್ಮಕ ಸಿನಿಮಾಗಳು ಮತ್ತು ವಿಶ್ವಪ್ರಸಿದ್ಧ 'ಕಾನ್ ಫಿಲ್ಮ್ ಫೆಸ್ಟಿವಲ್' ಮೂಲಕ ಫ್ರಾನ್ಸ್ ಇಂದಿಗೂ ಸಿನಿಮೀಯ ಜಗತ್ತಿನಲ್ಲಿ ತನ್ನ ಗರಿಮೆಯನ್ನು ಉಳಿಸಿಕೊಂಡಿದೆ.&lt;/p&gt;&lt;p&gt;8. ಸ್ಪ್ಯಾನಿಷ್ ಸಿನಿಮಾ (Spanish Cinema) &lt;/p&gt;&lt;p&gt;ಸ್ಪೇನ್&zwnj;ನ ಕ್ರೈಮ್ ಥ್ರಿಲ್ಲರ್ ಮತ್ತು ಡ್ರಾಮಾ ಸಿನಿಮಾಗಳಿಗೆ ಇತ್ತೀಚಿನ ವರ್ಷಗಳಲ್ಲಿ ಭಾರಿ ಜನಪ್ರಿಯತೆ ಸಿಕ್ಕಿದೆ. ನೆಟ್&zwnj;ಫ್ಲಿಕ್ಸ್&zwnj;ನಂತಹ ಒಟಿಟಿ ವೇದಿಕೆಗಳು ಬಂದ ಮೇಲೆ ಸ್ಪ್ಯಾನಿಷ್ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ.&lt;/p&gt;&lt;p&gt;9. ಇಟಾಲಿಯನ್ ಸಿನಿಮಾ (Italian Cinema) &lt;/p&gt;&lt;p&gt;ಕ್ಲಾಸಿಕ್ ಫಿಲ್ಮ್ ಮೇಕಿಂಗ್&zwnj;ಗೆ ಇಟಲಿ ಹೆಸರುವಾಸಿ. ವಿಶ್ವದ ಶ್ರೇಷ್ಠ ನಿರ್ದೇಶಕರನ್ನು ನೀಡಿದ ಈ ಇಂಡಸ್ಟ್ರಿ, ಕಲಾತ್ಮಕ ಮತ್ತು ಭಾವನಾತ್ಮಕ ಕಥೆಗಳನ್ನು ಹೇಳುವಲ್ಲಿ ಇಂದಿಗೂ ಸೈ ಎನಿಸಿಕೊಂಡಿದೆ.&lt;/p&gt;&lt;p&gt;10. ಮೆಕ್ಸಿಕನ್ ಸಿನಿಮಾ (Mexican Cinema) &lt;/p&gt;&lt;p&gt;ಲ್ಯಾಟಿನ್ ಅಮೆರಿಕದ ಸಿನಿಮೀಯ ಶಕ್ತಿ ಎಂದರೆ ಅದು ಮೆಕ್ಸಿಕೋ. ಇಲ್ಲಿನ ನಿರ್ದೇಶಕರು ಇಂದು ಹಾಲಿವುಡ್&zwnj;ನಲ್ಲಿ ಮಿಂಚುತ್ತಿದ್ದಾರೆ. ಗಟ್ಟಿಯಾದ ಕಥೆ ಮತ್ತು ಅದ್ಭುತ ದೃಶ್ಯ ವೈಭವಕ್ಕೆ ಮೆಕ್ಸಿಕನ್ ಸಿನಿಮಾಗಳು ಪ್ರಸಿದ್ಧ.&lt;/p&gt;&lt;p&gt;ಒಟ್ಟಿನಲ್ಲಿ, ಸಿನಿಮಾ ಲೋಕವು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಭಾರತವು ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಹಾಲಿವುಡ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ನಿಮ್ಮ ನೆಚ್ಚಿನ ಇಂಡಸ್ಟ್ರಿ ಯಾವುದು? ಕಾಮೆಂಟ್ ಮಾಡಿ ತಿಳಿಸಿ..&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>money</category>
            <dc:creator>Shriram Bhat</dc:creator>
            <atom:link href="https://kannada.asianetnews.com/world-news/top-10-biggest-film-industries-in-the-world-is-know-here-for-your-important-information/articleshow-72yg39s"/>
        </item>
        <item>
            <title><![CDATA[Liquor Price Hike: ಕರ್ನಾಟಕದಲ್ಲಿ ಮೇ 1 ರಿಂದ ಮದ್ಯದ ದರ ಏರಿಕೆ: ಯಾವ ಬ್ರ್ಯಾಂಡ್‌ಗೆ ಎಷ್ಟು?]]></title>
            <link>https://kannada.asianetnews.com/gallery/business/alcohol-karnataka-liquor-prices-to-increase-from-may-1-97egp11</link>
            <guid isPermaLink="true">https://kannada.asianetnews.com/gallery/business/alcohol-karnataka-liquor-prices-to-increase-from-may-1-97egp11</guid>
            <pubDate>Sun, 26 Apr 2026 17:48:48 +0530</pubDate>
            <description><![CDATA[ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ಹೊಸ ತೆರಿಗೆ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಮೇ 1 ರಿಂದ ಈ ಬದಲಾವಣೆ ಜಾರಿಗೆ ಬರಲಿದ್ದು, ಮದ್ಯದ ದರ ಶೇ. 20ರಷ್ಟು ಹೆಚ್ಚಾಗಲಿದೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇದು 5ನೇ ಬಾರಿಯ ದರ ಏರಿಕೆಯಾಗಿದ್ದು, ಮದ್ಯ ಪ್ರಿಯರಿಗೆ ಆಘಾತ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfcwezttavbd4p51deb5mch2,imgname-liquor-ban-1768885288794.jpg" type="image/jpeg" height="390" width="690"/>
            <content:encoded><![CDATA[ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ಹೊಸ ತೆರಿಗೆ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಮೇ 1 ರಿಂದ ಈ ಬದಲಾವಣೆ ಜಾರಿಗೆ ಬರಲಿದ್ದು, ಮದ್ಯದ ದರ ಶೇ. 20ರಷ್ಟು ಹೆಚ್ಚಾಗಲಿದೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇದು 5ನೇ ಬಾರಿಯ ದರ ಏರಿಕೆಯಾಗಿದ್ದು, ಮದ್ಯ ಪ್ರಿಯರಿಗೆ ಆಘಾತ ನೀಡಿದೆ.&lt;img&gt;ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಗೃಹಲಕ್ಷ್ಮಿ ಯೋಜನೆಯಡಿ 1.10 ಕೋಟಿ ಕುಟುಂಬ ಯಜಮಾನಿಯರಿಗೆ ಮಾಸಿಕ 2000 ರೂ. ನೀಡಲಾಗುತ್ತಿದೆ. ಜೊತೆಗೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಾರಿಯಲ್ಲಿವೆ. ಇದರಿಂದಾಗಿ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದ್ದು, ನೀರು ಮತ್ತು ವಿದ್ಯುತ್ ಶುಲ್ಕ ಏರಿಕೆ ನಂತರ ಇದೀಗ ಮದ್ಯದ ದರವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.&lt;img&gt;ಕಳೆದ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ ಪದ್ಧತಿಯನ್ನು ಘೋಷಿಸಿದ್ದರು. ದೇಶದಲ್ಲೇ ಮೊದಲ ಬಾರಿಗೆ, ಆಲ್ಕೋಹಾಲ್ ಅಂಶವನ್ನು ಆಧರಿಸಿ ಮದ್ಯದ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಹೇಳಲಾಗಿತ್ತು.&lt;img&gt;ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಬಕಾರಿ ಸುಂಕವನ್ನು ತಿದ್ದುಪಡಿ ಮಾಡಲು ನಿರ್ಧರಿಸಲಾಯಿತು. ಈ ಕುರಿತು ರಾಜ್ಯ ಸರ್ಕಾರವು ಮೇ 18 ರಂದು ಅಧಿಸೂಚನೆ ಹೊರಡಿಸಿದೆ. ಅದರಂತೆ, ತಿದ್ದುಪಡಿ ಮಾಡಿದ ತೆರಿಗೆಯು ಮೇ 1 ರಿಂದ ರಾಜ್ಯದಾದ್ಯಂತ ಜಾರಿಗೆ ಬರಲಿದೆ. ಇದರಿಂದ ಮದ್ಯದ ದರ ಶೇ. 20ರಷ್ಟು ಏರಿಕೆಯಾಗಲಿದೆ. ಕಡಿಮೆ ಬೆಲೆಯ ಮದ್ಯದಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿರುವುದರಿಂದ, ಅವುಗಳ ಬೆಲೆಯೇ ಹೆಚ್ಚಾಗಿ ಏರಿಕೆಯಾಗಲಿದೆ. ಇದು ಮದ್ಯ ಪ್ರಿಯರಲ್ಲಿ ಆಘಾತ ಮೂಡಿಸಿದೆ.&lt;img&gt;ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್&zwnj;ಗಳ ಬೆಲೆಯಲ್ಲಿ ಸುಮಾರು 10 ರಿಂದ 25 ರೂಪಾಯಿ ಏರಿಕೆಯಾಗುವ ನಿರೀಕ್ಷೆಯಿದೆ. ಒರಿಜಿನಲ್ ಚಾಯ್ಸ್ (Original Choice) 180 ml ಬಾಟಲಿ ಈಗ 95 ರೂ. ಇದ್ದು, ಹೊಸ ಬೆಲೆ ಸುಮಾರು 115 ರೂ. ಆಗಲಿದೆ. ಅದೇ ರೀತಿ, ಓಲ್ಡ್ ಟ್ಯಾವರ್ನ್ (Old Tavern) 180 ml ಬಾಟಲಿಯ ಈಗಿನ ಬೆಲೆ 80 ರೂ. ಇದ್ದು, ಹೊಸ ಬೆಲೆ 100 ರೂ. ಆಗಲಿದೆ. ಬಡವರಲ್ಲಿ ಜನಪ್ರಿಯವಾಗಿರುವ ರಾಜಾ ವಿಸ್ಕಿಯ (Raja Whisky) 180 ml ಬಾಟಲಿಯ ಹೊಸ ಬೆಲೆ 95 ರೂ. ಆಗಲಿದೆ, ಇದರ ಈಗಿನ ಬೆಲೆ 70 ರೂ. ಮಾತ್ರ. ಹೇವರ್ಡ್ಸ್ (Haywards) ಈಗ 100 ರೂ. ಇದ್ದು, ಹೊಸ ಬೆಲೆ 120 ರೂ. ಆಗಲಿದೆ.&lt;img&gt;ಕಳೆದ ವರ್ಷ ಮೇ ತಿಂಗಳಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿತ್ತು. ಆಗ ಭಾರತೀಯ ನಿರ್ಮಿತ ಮದ್ಯದ ಬೆಲೆ 10 ರಿಂದ 45 ರೂ.ವರೆಗೆ ಏರಿಕೆಯಾಗಿತ್ತು. ಇದೀಗ ಮತ್ತೆ ಮದ್ಯದ ದರವನ್ನು ಹೆಚ್ಚಿಸಲಾಗಿದೆ. 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಈವರೆಗೆ ನಾಲ್ಕು ಬಾರಿ ಮದ್ಯದ ದರವನ್ನು ಹೆಚ್ಚಿಸಿದ್ದು, ಇದೀಗ ಐದನೇ ಬಾರಿಗೆ ದರ ಏರಿಕೆ ಮಾಡಿರುವುದು ಮದ್ಯ ಪ್ರಿಯರಲ್ಲಿ ಆಘಾತ ಮೂಡಿಸಿದೆ.]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/alcohol-karnataka-liquor-prices-to-increase-from-may-1-97egp11"/>
        </item>
        <item>
            <title><![CDATA[ಕೆಲಸ ಇದೆ ಎಂದು ಬೀಗಬೇಡ! ಬೃಹತ್‌ ಲಾಭವಿದ್ರೂ, ಉದ್ಯೋಗಿಗಳ ಹೊಟ್ಟೆಪಾಡು ಕಿತ್ತುಕೊಂಡ ದೈತ್ಯ ಕಂಪೆನಿ, ಬ್ಯಾಂಕ್!]]></title>
            <link>https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h</link>
            <guid isPermaLink="true">https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h</guid>
            <pubDate>Mon, 27 Apr 2026 17:00:42 +0530</pubDate>
            <description><![CDATA[&lt;p&gt;ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್&zwnj;ನಂತಹ ಟೆಕ್ ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಈಗ ಅಕ್ಸಿಸ್&zwnj; ಬ್ಯಾಂಕ್&zwnj; ಕೂಡ ಲೇಆಫ್&zwnj; ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpst958axanasrak62ap6ghk,imgname-tcs-victim-recounts-horror-office-bullying-politics-gettyimages-470766688-1776835400970.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್&zwnj;ನಂತಹ ಟೆಕ್ ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಈಗ ಅಕ್ಸಿಸ್&zwnj; ಬ್ಯಾಂಕ್&zwnj; ಕೂಡ ಲೇಆಫ್&zwnj; ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈಗಾಗಲೇ ಐಟಿ ಕಂಪೆನಿಗಳು ಸಾಕಷ್ಟು ಉದ್ಯೋಗಿಗಳ ವಜಾ ಮಾಡಿದೆ. ಒರಾಕಲ್ (Oracle) ಕಂಪನಿಯು ಜಾಗತಿಕವಾಗಿ ಅಂದಾಜು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮೆಟಾ, ಮೈಕ್ರೋಸಾಫ್ಟ್, ಡಿಸ್ನಿ, ಎಎಸ್&zwnj;ಎಮ್&zwnj;ಎಲ್ ಕಂಪನಿಗಳು ಉದ್ಯೋಗ ಕಡಿತ ಮಾಡಲಿವೆ.&lt;/p&gt;&lt;img&gt;&lt;p&gt;ಕಂಪನಿಗಳು ಕೃತಕ ಬುದ್ಧಿಮತ್ತೆಯಲ್ಲಿ ಬೃಹತ್ ಹೂಡಿಕೆ ಮಾಡುತ್ತಿವೆ. ಇದರಿಂದ ಹೆಚ್ಚು ಲಾಭ ಬರುತ್ತಿದೆ, ಆದರೆ ದಶಕಗಳಿಂದ ಕೆಲಸ ಮಾಡುತ್ತಿದ್ದವರು ಮನೆಗೆ ಹೋಗುತ್ತಿದ್ದಾರೆ. ಒರಾಕಲ್&zwnj;ನಲ್ಲಿ 33 ವರ್ಷ ಕೆಲಸ ಮಾಡಿದ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.&amp;nbsp;&lt;/p&gt;&lt;img&gt;&lt;p&gt;ಭಾರತದಲ್ಲಿ ಆಕ್ಸಿಸ್ ಬ್ಯಾಂಕ್&zwnj; ಸಹ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು, ತನ್ನ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 2026ರಲ್ಲಿ 3,100ರಷ್ಟು ಉದ್ಯೋಗಿಗಳ ಸಂಖ್ಯೆ ಕುಸಿದಿದೆ.&lt;/p&gt;&lt;img&gt;&lt;p&gt;ಈಗ ಬ್ಯಾಂಕ್&zwnj;ನಲ್ಲಿ ಸಿಬ್ಬಂದಿ ಸಂಖ್ಯೆ ಇಳಿಕೆಯಾಗಿದ್ದರೂ ಬ್ಯಾಂಕ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇದೇ ಅವಧಿಯಲ್ಲಿ ಸುಮಾರು 400 ಹೊಸ ಶಾಖೆಗಳನ್ನು ತೆರೆಯಲಾಗಿದ್ದು, ₹7,071 ಕೋಟಿಗಳಷ್ಟು ಬೃಹತ್ ಲಾಭ ಮಾಡಿದೆ&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h"/>
        </item>
        <item>
            <title><![CDATA[Amruthadhaare Serial: ಹೆಣ್ಣಿನ ಕಣ್ಣೀರಿನ ಶಾಪ ಬಿಡ್ಲೇ ಇಲ್ಲ, ಮತ್ತೆ ಬಂದ ದಿಯಾ; ಸರ್ವನಾಶವಾದ ಜಯದೇವ್‌]]></title>
            <link>https://kannada.asianetnews.com/gallery/tv-talk/amruthadhaare-kannada-serial-episode-update-diya-scolds-jayadev-e0ep2xg</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-episode-update-diya-scolds-jayadev-e0ep2xg</guid>
            <pubDate>Mon, 04 May 2026 16:00:27 +0530</pubDate>
            <description><![CDATA[&lt;p&gt;Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಬೇಬಿ ದಿಯಾ ವಿದೇಶಕ್ಕೆ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವಳು ಜಯದೇವ್&zwnj;ನ ಎಲ್ಲ ಆಸ್ತಿಯನ್ನು ತಗೊಂಡು ಎಸ್ಕೇಪ್&zwnj; ಆಗಿದ್ದಳು. ಈಗ ಅವಳ ಜಾಗಕ್ಕೆ ಬಂದ ಜಯದೇವ್&zwnj;ನನ್ನು ಕತ್ತು ಹಿಡಿದು ಆಚೆ ನೂಕಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqs7yq5fwkc9v6fyj49da5f9,imgname-new-project---2026-05-04t154227.609-1777889926305.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಬೇಬಿ ದಿಯಾ ವಿದೇಶಕ್ಕೆ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವಳು ಜಯದೇವ್&zwnj;ನ ಎಲ್ಲ ಆಸ್ತಿಯನ್ನು ತಗೊಂಡು ಎಸ್ಕೇಪ್&zwnj; ಆಗಿದ್ದಳು. ಈಗ ಅವಳ ಜಾಗಕ್ಕೆ ಬಂದ ಜಯದೇವ್&zwnj;ನನ್ನು ಕತ್ತು ಹಿಡಿದು ಆಚೆ ನೂಕಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹೆಣ್ಣಿನ ಕಣ್ಣೀರಿಗೆ ಕಾರಣವಾದವರು ಉಳಿದ ಚರಿತ್ರೆಯೇ ಇಲ್ಲ. ಕಟ್ಟಿಕೊಂಡ ಹೆಂಡ್ತಿ ಮಲ್ಲಿಗೆ ಮೋಸ ಮಾಡಿ ಜಯದೇವ್&zwnj;, ಇನ್ನೊಂದು ಮದುವೆ ಆದನು. ಯಾರು ಎಷ್ಟೇ ಹೇಳಿದರೂ ಕೂಡ ಅವನು ಕೇಳದೆ, ದಿಯಾಳನ್ನು ಮದುವೆ ಆದನು. ತನ್ನ ಕುತಂತ್ರದಿಂದ ಬಹುತೇಕ ಆಸ್ತಿಯನ್ನು ಜಯದೇವ್&zwnj; ಕಳೆದುಕೊಂಡಿದ್ದನು. ಒಂದಿಷ್ಟು ಆಸ್ತಿ, ಹಣ, ಬಂಗಾರ ಎಲ್ಲ ಮನೆಯಲ್ಲಿತ್ತು. ಆ ಹಣವನ್ನು ದಿಯಾ ತಗೊಂಡು ಹೋಗಿದ್ದಾಳೆ.&lt;/p&gt;&lt;img&gt;&lt;p&gt;ಅರಸನಕೋಟೆ ಅಖಿಲಾಂಡೇಶ್ವರಿ ಸಹಾಯ ಪಡೆದು ಗೌತಮ್ ದಿವಾನ್&zwnj;, ಹರಾಜಿಗೆ ಬಂದ ದಿವಾನ್&zwnj; ಮನೆ, ಕಂಪೆನಿಯೆಲ್ಲವನ್ನು ಮರಳಿ ಪಡೆದಿದ್ದಾನೆ. ಈಗ ಅವನು ಹೊಸ ಮನೆಗೆ ಕಾಲಿಡಬೇಕು. ಅದೇ ಟೈಮ್&zwnj;ನಲ್ಲಿ ಇನ್ನೊಂದು ವಿಷಯ ಗೊತ್ತಾಗಿದೆ.&lt;/p&gt;&lt;img&gt;&lt;p&gt;ಗೌತಮ್&zwnj;ಗೆ ಜನಿಸಿದ ಮಗಳಿಂದ ಅವನ ಪ್ರಾಣಕ್ಕೆ ಅಪಾಯ ಇದೆ ಎಂದು ಜ್ಯೋತಿಷಿ ಹೇಳಿದ್ದಾನೆ. ಇದರಿಂದ ಭೂಮಿಕಾ ಟೆನ್ಶನ್&zwnj; ಮಾಡಿಕೊಂಡಿದ್ದರೆ, ಗೌತಮ್&zwnj; ಮಾತ್ರ, &ldquo;ನಮ್ಮ ಮಗಳು ಇನ್ನೂ ಬದುಕಿದ್ದಾಳೆ ಎಂದು ಅರ್ಥ ಆಯಿತು&rdquo; ಎಂದು ಖುಷಿ ಹೊರಹಾಕಿದ್ದಾನೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.&lt;/p&gt;&lt;img&gt;&lt;ul&gt; &lt;li&gt;ಇದೊಂದು ಮುಗಿಯದ ಗೋಳು ಮತ್ತೆ ಬೋರ್ ಹೊಡೆಸೋಕೆ ಶುರು ಮಾಡಿದ ಡೈರೆಕ್ಟರ್&lt;/li&gt; &lt;li&gt;ಜೆಡಿ ಅಹಂ ಇಳಿದಿಲ್ಲ, ಗೌತಮ್ ಭೂಮಿಕಾಗೆ ಕಷ್ಟ ತಪ್ಪಲಿಲ್ಲ, ಅಮೃತಧಾರೆ ಟೈಟಲ್&zwnj;ಗೆ ಅರ್ಥವೇ ಇಲ್ಲ.&lt;/li&gt; &lt;li&gt;ಯಾರ ಜಾತಕದಲ್ಲೂ ಕಂಠಕ ಬರಲ್ಲ..ಕಂಟಕ ಬರುವುದು ಮನುಷ್ಯ ಜಾತಿಯ ರಾಕ್ಷಸರಿಂದ&lt;/li&gt; &lt;li&gt;ಇಟ್ಕೊಂಡ್ ಇರೋಳು ಇರೋತನಕ, ಕಟ್ಟಿಕೊಂಡು ಇರೋಳು ಕೊನೆತನಕ&lt;/li&gt; &lt;li&gt;ಜಯದೇವಗೆ ಬುದ್ದಿ ಕಲಿಸಬೇಕಿತ್ತು.ಅವನು ಸೋಲಬೇಕು.ಆಗ ಧರ್ಮ ಜಾತಿ ಸಾಧಿಸಿದಂತೆ.ಇಲ್ಲದಿದ್ದರೆ ಕೆಟ್ಟವರಿಗೆ ಒಳ್ಳೆಯದಾಗುತ್ತದೆ ಎಂಬ ದುಷ್ಟ ಸಂದೇಶ ಹೋಗಿಬಿಡುತ್ತದೆ&lt;/li&gt; &lt;li&gt;ಇದುವರೆಗೂ ಹೆಣ್ಣು ಮಗುವಿಗೆ ಒಂದು closure ಕೊಟ್ಟಿರಲಿಲ್ಲ. ಅದಕ್ಕೇ ಕಂಟಕ ಕಥೆ&lt;/li&gt; &lt;li&gt;ಕೇಡಿ ಜಯ ದೇವ ಗೆ ಸರಿಯಾಗಿ ಆಗಿದೆ ನೋಡಿ ಬೇಬಿ ಬೇಬಿ ಅಂತ ಇದಾ ಬೇಬಿ ಸರಿಯಾಗಿ ಮಾಡಿದ್ದಾಳೆ&lt;/li&gt;&lt;/ul&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-episode-update-diya-scolds-jayadev-e0ep2xg"/>
        </item>
        <item>
            <title><![CDATA[ಚಿನ್ನದ ಮೇಲೆ ಸಾಲ ಪಡೆಯುವುದರಲ್ಲಿ ಈ 5 ರಾಜ್ಯಗಳೇ ಟಾಪ್! ಕರ್ನಾಟಕಕ್ಕೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/gallery/business/gold-loan-boom-in-india-tamil-nadu-tops-list-karnataka-ranks-3rd-south-states-dominate-market-kvn-emuz2wk</link>
            <guid isPermaLink="true">https://kannada.asianetnews.com/gallery/business/gold-loan-boom-in-india-tamil-nadu-tops-list-karnataka-ranks-3rd-south-states-dominate-market-kvn-emuz2wk</guid>
            <pubDate>Sun, 03 May 2026 13:08:20 +0530</pubDate>
            <description><![CDATA[&lt;p&gt;Gold Loans: ಭಾರತದಲ್ಲಿ ಗೋಲ್ಡ್ ಲೋನ್ ಈಗ ಕೇವಲ ತುರ್ತು ಸಂದರ್ಭದಲ್ಲಿ ಪಡೆಯುವ ಸಾಲವಾಗಿ ಉಳಿದಿಲ್ಲ. ಇದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಹಣಕಾಸು ಆಯ್ಕೆಯಾಗಿ ಬದಲಾಗಿದೆ. ಹಾಗಿದ್ರೆ, ದೇಶದ ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಗೋಲ್ಡ್ ಲೋನ್&zwnj;ಗಳನ್ನು ಪಡೆಯಲಾಗುತ್ತಿದೆ ಎಂದು ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k8q5jh147x39n5nd3t441d6v,imgname-gold-loan-1761714193443.jpg" type="image/jpeg" height="390" width="690"/>
            <content:encoded><![CDATA[&lt;p&gt;Gold Loans: ಭಾರತದಲ್ಲಿ ಗೋಲ್ಡ್ ಲೋನ್ ಈಗ ಕೇವಲ ತುರ್ತು ಸಂದರ್ಭದಲ್ಲಿ ಪಡೆಯುವ ಸಾಲವಾಗಿ ಉಳಿದಿಲ್ಲ. ಇದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಹಣಕಾಸು ಆಯ್ಕೆಯಾಗಿ ಬದಲಾಗಿದೆ. ಹಾಗಿದ್ರೆ, ದೇಶದ ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಗೋಲ್ಡ್ ಲೋನ್&zwnj;ಗಳನ್ನು ಪಡೆಯಲಾಗುತ್ತಿದೆ ಎಂದು ನೋಡೋಣ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂದಿನ ದಿನಗಳಲ್ಲಿ ಚಿನ್ನ ಕೇವಲ ಆಭರಣವಲ್ಲ, ತುರ್ತು ಸಂದರ್ಭದಲ್ಲಿ ನೆರವಾಗುವ ಆರ್ಥಿಕ ಸಾಧನವಾಗಿದೆ. ಹಣದ ಅವಶ್ಯಕತೆ ಇದ್ದಾಗ, ಬ್ಯಾಂಕ್&zwnj;ನಲ್ಲಿ ಹೆಚ್ಚು ಪ್ರಕ್ರಿಯೆಗಳಿಲ್ಲದೆ ಚಿನ್ನ ಅಡವಿಟ್ಟು ತಕ್ಷಣ ಸಾಲ ಪಡೆಯಬಹುದು. ಹೀಗಾಗಿಯೇ ಗೃಹಸಾಲದ ನಂತರ ಗೋಲ್ಡ್ ಲೋನ್ ಎರಡನೇ ಸ್ಥಾನದಲ್ಲಿದೆ. ದೇಶಾದ್ಯಂತ ಇದರ ಮಾರುಕಟ್ಟೆ ಮೌಲ್ಯ ಸುಮಾರು ₹16.8 ಲಕ್ಷ ಕೋಟಿಗೆ ತಲುಪಿದ್ದು, ಕಳೆದ ಕೆಲವು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಗೋಲ್ಡ್ ಲೋನ್ ಪಡೆಯುವ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಬೇರೆಲ್ಲಾ ಪ್ರದೇಶಗಳಿಗಿಂತ ಮುಂದಿವೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಂತಹ ರಾಜ್ಯಗಳು ದೇಶದ ಒಟ್ಟು ಗೋಲ್ಡ್ ಲೋನ್ ಮಾರುಕಟ್ಟೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಿವೆ. ಈ ಪ್ರದೇಶಗಳಲ್ಲಿ ಚಿನ್ನವನ್ನು ಕೂಡಿಡುವ ಸಂಸ್ಕೃತಿ ಹೆಚ್ಚಾಗಿರುವುದು ಮತ್ತು ಅಗತ್ಯವಿದ್ದಾಗ ಅದನ್ನು ಸುಲಭವಾಗಿ ನಗದಾಗಿ ಪರಿವರ್ತಿಸಿಕೊಳ್ಳುವ ಅಭ್ಯಾಸವೇ ಈ ಟ್ರೆಂಡ್&zwnj;ಗೆ ಕಾರಣ.&lt;/p&gt;&lt;img&gt;&lt;p&gt;ದೇಶದಲ್ಲಿ ಅತಿ ಹೆಚ್ಚು ಗೋಲ್ಡ್ ಲೋನ್ ಪಡೆಯುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಈ ರಾಜ್ಯವೊಂದೇ ದೇಶದ ಒಟ್ಟು ಮಾರುಕಟ್ಟೆಯಲ್ಲಿ ಸುಮಾರು 25.8% ಪಾಲನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ 13.6% ಮಾರುಕಟ್ಟೆ ಪಾಲನ್ನು ಹೊಂದಿದೆ.&lt;/p&gt;&lt;img&gt;&lt;p&gt;ಕರ್ನಾಟಕ 11.7% ಪಾಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಕೇರಳ 9% ಪಾಲಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ತೆಲಂಗಾಣ 8.8% ಪಾಲಿನೊಂದಿಗೆ ಐದನೇ ಸ್ಥಾನದಲ್ಲಿದೆ. ತೆಲಂಗಾಣದಲ್ಲಿ ಇತ್ತೀಚೆಗೆ ಗೋಲ್ಡ್ ಲೋನ್ ಬಳಕೆ ವೇಗವಾಗಿ ಹೆಚ್ಚುತ್ತಿರುವುದು ವಿಶೇಷ.&lt;/p&gt;&lt;img&gt;&lt;p&gt;ದಕ್ಷಿಣದ ರಾಜ್ಯಗಳ ನಂತರ, ಮಹಾರಾಷ್ಟ್ರದಂತಹ ರಾಜ್ಯಗಳು ಕೂಡ ಗೋಲ್ಡ್ ಲೋನ್&zwnj;ನತ್ತ ಮುಖ ಮಾಡಿವೆ. ಈ ರಾಜ್ಯದಲ್ಲಿ ಮಾರುಕಟ್ಟೆ ಪಾಲು ಕಡಿಮೆಯಿದ್ದರೂ, ಬೆಳವಣಿಗೆಯ ದರ ಹೆಚ್ಚಾಗಿದೆ. ಅದೇ ಸಮಯದಲ್ಲಿ, ಉತ್ತರ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿಯೂ ಗೋಲ್ಡ್ ಲೋನ್ ಬಳಕೆ ಕ್ರಮೇಣ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳು ಮತ್ತು ಜನರಲ್ಲಿ ಆರ್ಥಿಕ ಅರಿವು ಹೆಚ್ಚಾಗುತ್ತಿರುವುದು ಈ ಬದಲಾವಣೆಗೆ ಕಾರಣ.&lt;/p&gt;&lt;img&gt;&lt;p&gt;ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಿನ್ನದ ಮೇಲೆ ವಿಶೇಷವಾದ ಭಾವನಾತ್ಮಕ ಸಂಬಂಧವಿದೆ. ಇಲ್ಲಿನ ಕುಟುಂಬಗಳು ಹೆಚ್ಚಾಗಿ ಚಿನ್ನವನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ ಮತ್ತು ಅಗತ್ಯವಿದ್ದಾಗ ಅದನ್ನು ಬಳಸಿಕೊಳ್ಳುವುದು ಸಾಮಾನ್ಯ. ಅಷ್ಟೇ ಅಲ್ಲದೆ, ಈ ಪ್ರದೇಶಗಳಲ್ಲಿ ಬ್ಯಾಂಕ್&zwnj;ಗಳು ಮತ್ತು ಹಣಕಾಸು ಸಂಸ್ಥೆಗಳು ವ್ಯಾಪಕವಾಗಿರುವುದರಿಂದ ಗೋಲ್ಡ್ ಲೋನ್ ಪಡೆಯುವುದು ತುಂಬಾ ಸುಲಭವಾಗಿದೆ. ಈ ಎಲ್ಲಾ ಕಾರಣಗಳು ದಕ್ಷಿಣದ ರಾಜ್ಯಗಳನ್ನು ಈ ಕ್ಷೇತ್ರದಲ್ಲಿ ಮುಂದಿಟ್ಟಿವೆ.&lt;/p&gt;]]></content:encoded>
            <category>money</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/gold-loan-boom-in-india-tamil-nadu-tops-list-karnataka-ranks-3rd-south-states-dominate-market-kvn-emuz2wk"/>
        </item>
        <item>
            <title><![CDATA[ಹೂಡಿಕೆ ಮಾಡ್ಬೇಕೊ, ಸಾಲ ತೀರಿಸಬೇಕೋ? ChatGPT  ನೀಡಿದ ಉತ್ತರ ಆಶ್ಚರ್ಯಕರವಾಗಿತ್ತು!]]></title>
            <link>https://kannada.asianetnews.com/business/should-you-pay-off-your-home-loan-early-or-continue-your-sips/articleshow-ftscy2g</link>
            <guid isPermaLink="true">https://kannada.asianetnews.com/business/should-you-pay-off-your-home-loan-early-or-continue-your-sips/articleshow-ftscy2g</guid>
            <pubDate>Sat, 02 May 2026 15:04:48 +0530</pubDate>
            <description><![CDATA[&lt;p&gt;&lt;strong&gt;Home Loan Prepayment: &lt;/strong&gt;ಓರ್ವ 40 ವರ್ಷದ ವಿವಾಹಿತ ವ್ಯಕ್ತಿ, ಅದರಲ್ಲೂ ಒಂದು ಮಗುವಿನ ಜವಾಬ್ದಾರಿ ಹೊಂದಿರುವವರು ಹೇಗೆ ತಮ್ಮ ಗೃಹ ಸಾಲ ಮತ್ತು ಕಾರಿನ ಸಾಲವನ್ನು ಮರುಪಾವತಿಸುತ್ತಲೇ SIP ಗಳಲ್ಲಿ ಹೂಡಿಕೆ ಮಾಡಬಹುದು ಎಂಬ ಮಾಹಿತಿ ಇಲ್ಲಿದ್ದು, ದೀರ್ಘಕಾಲದ ಆರ್ಥಿಕ ಭದ್ರತೆಗಾಗಿ AI ಶಿಫಾರಸು ಮಾಡಿರುವ ಈ ಸಮತೋಲಿತ ವಿಧಾನವನ್ನು ಅನುಸರಿಸಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqm0je0bfdg0gp2xdzex30vp,imgname-thumbnail---2026-05-02t150236.319-1777714411531.jpg" type="image/jpeg" height="390" width="690"/>
            <content:encoded><![CDATA[&lt;p&gt;ಓರ್ವ 40 ವರ್ಷದ ವಿವಾಹಿತ ವ್ಯಕ್ತಿ, ಅದರಲ್ಲೂ ಒಂದು ಮಗುವಿನ ಜವಾಬ್ದಾರಿ ಹೊಂದಿರುವವರು ಹೇಗೆ ತಮ್ಮ ಗೃಹ ಸಾಲ ಮತ್ತು ಕಾರಿನ ಸಾಲವನ್ನು ಮರುಪಾವತಿಸುತ್ತಲೇ SIP ಗಳಲ್ಲಿ ಹೂಡಿಕೆ ಮಾಡಬಹುದು ಎಂಬ ಮಾಹಿತಿ ಇಲ್ಲಿದ್ದು, ದೀರ್ಘಕಾಲದ ಆರ್ಥಿಕ ಭದ್ರತೆಗಾಗಿ AI ಶಿಫಾರಸು ಮಾಡಿರುವ ಈ ಸಮತೋಲಿತ ವಿಧಾನವನ್ನು ಅನುಸರಿಸಿ.&lt;/p&gt;&lt;h2&gt;&lt;strong&gt;ಓರ್ವ ವ್ಯಕ್ತಿ ಚಾಟ್&zwnj;ಜಿಪಿಟಿಯನ್ನು ಹೀಗೆ ಕೇಳಿದ್ದಾರೆ..&lt;/strong&gt;&lt;/h2&gt;&lt;p&gt;&ldquo;ನಾವು ವಿವಾಹಿತ ದಂಪತಿಗಳು, ನಮಗೆ ಒಂದು ಮಗುವಿದೆ. ನನ್ನ ವಯಸ್ಸು 40 ಮತ್ತು ನನ್ನ ಪತ್ನಿಯ ವಯಸ್ಸು 38. ನಮ್ಮ ಒಟ್ಟು ಮಾಸಿಕ ಆದಾಯ ₹2.5 ಲಕ್ಷ. ನಾವು 9% ಬಡ್ಡಿದರದಲ್ಲಿ 25 ವರ್ಷಗಳ ಅವಧಿಗೆ ₹1 ಕೋಟಿ ಗೃಹ ಸಾಲ ಪಡೆದಿದ್ದೇವೆ ಮತ್ತು ನಮ್ಮ ಮಾಸಿಕ EMI ₹83,920 ಆಗಿದೆ. ನಾವು ಎರಡು ಬೇರೆ ಬೇರೆ ಮ್ಯೂಚುವಲ್ ಫಂಡ್&zwnj;ಗಳಲ್ಲಿ ತಲಾ ₹20,000 ಗಳಂತೆ ಎರಡು SIPಗಳನ್ನು(ಇದು ಒಟ್ಟಿಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಬದಲು, ಪ್ರತಿ ತಿಂಗಳು ಒಂದು ನಿಗದಿತ ದಿನದಂದು ಹಣವನ್ನು ಹೂಡಿಕೆ ಮಾಡುವ ವಿಧಾನವಾಗಿದೆ) ಹೊಂದಿದ್ದೇವೆ.&lt;/p&gt;&lt;p&gt;ನಮ್ಮ ಮಗುವಿನ ಮಾಸಿಕ ಖರ್ಚು ₹30,000 ವರೆಗೆ ಇರುತ್ತದೆ, ಕಾರಿನ ಸಾಲದ EMI ₹15,000 ಆಗಿದೆ. ಮನೆಗೆಲಸದವರು, ಯುಟಿಲಿಟಿ ಮುಂತಾದ ಇತರ ಮಾಸಿಕ ವೆಚ್ಚಗಳಿಗೆ ಸುಮಾರು ₹60,000 ಖರ್ಚಾಗುತ್ತದೆ. ಉಳಿದ ಮೊತ್ತವನ್ನು ನಾವು ತುರ್ತು ಸಂದರ್ಭಗಳಿಗಾಗಿ ಇಟ್ಟುಕೊಳ್ಳಲು ಬಯಸುತ್ತೇವೆ. ನಮ್ಮ ವಾರ್ಷಿಕ ಬೋನಸ್ ಸುಮಾರು ₹2 ಲಕ್ಷ ಬರುತ್ತದೆ. ಈಗ ನನ್ನ ಪ್ರಶ್ನೆ ಏನೆಂದರೆ, SIP ಗಳನ್ನು ಕಡಿತಗೊಳಿಸಿ ಮೊದಲು ಗೃಹ ಸಾಲವನ್ನು ಮುಗಿಸುವುದು ಅಥವಾ ಮುಂಗಡ ಪಾವತಿ (Prepayment) ಮಾಡುವುದು ಒಳ್ಳೆಯದೇ ? ಸಾಲದ ಅವಧಿಯನ್ನು ಪೂರ್ತಿ ಮುಂದುವರಿಸಬೇಕೇ?&rdquo;&lt;/p&gt;&lt;h2&gt;&lt;strong&gt;ChatGPT ನೀಡಿದ ಉತ್ತರವಿದು&lt;/strong&gt;&lt;/h2&gt;&lt;p&gt;ಚಾಟ್&zwnj;ಜಿಪಿಟಿಯು ಗೃಹ ಸಾಲದ ಮುಂಗಡ ಪಾವತಿ ಮಾಡದಂತೆ ನೇರವಾಗಿ ಸಲಹೆ ನೀಡಿತು. ಹಾಗೆಯೇ ಆರ್ಥಿಕ ಸಮತೋಲನವನ್ನು ಕಾಪಾಡುವಂತಹ ಒಂದು ಮಧ್ಯಮ ಮಾರ್ಗವನ್ನು ಶಿಫಾರಸ್ಸು ಮಾಡಿದೆ.&lt;/p&gt;&lt;p&gt;ನಿಮ್ಮ ಗೃಹ ಸಾಲದ ಬಡ್ಡಿ 9% ಆಗಿದ್ದರೂ, ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗಳು (SIP) ದೀರ್ಘಾವಧಿಯಲ್ಲಿ ಸುಮಾರು 10-12% ಲಾಭ ನೀಡುವ ಸಾಮರ್ಥ್ಯವನ್ನು ಹೊಂದಿವೆ. ಲೆಕ್ಕಾಚಾರದ ಪ್ರಕಾರ, ಸಾಲವನ್ನು ಮುಂಚಿತವಾಗಿ ಪಾವತಿಸಿ ಬಡ್ಡಿಯನ್ನು ಉಳಿಸುವುದಕ್ಕಿಂತ, ಹೂಡಿಕೆಯನ್ನು ಮುಂದುವರಿಸುವುದು ಹೆಚ್ಚಿನ ಸಂಪತ್ತನ್ನು ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಆದರೆ ಈ ನಿರ್ಧಾರವು ಅಷ್ಟು ಸರಳವಲ್ಲ, ಏಕೆಂದರೆ ಯಾವಾಗ ನೀವು ಸಾಲದ ಅಸಲು ಮೊತ್ತವನ್ನು (Principal Amount) ಬ್ಯಾಂಕಿಗೆ ವಾಪಸ್ ಕಟ್ಟುತ್ತೀರೋ, ಆ ಕ್ಷಣದಿಂದಲೇ ಆ ಮೊತ್ತದ ಮೇಲೆ ನೀವು ಕಟ್ಟಬೇಕಿದ್ದ 9% ಬಡ್ಡಿಯ ಹೊರೆ ನಿಂತುಹೋಗುತ್ತದೆ. ಇದಕ್ಕೆ ವಿರುದ್ಧವಾಗಿ, ಮ್ಯೂಚುವಲ್ ಫಂಡ್ ಮಾರುಕಟ್ಟೆಯ ಲಾಭಗಳು ನಿಗದಿತವಾಗಿರುವುದಿಲ್ಲ ಮತ್ತು ಅವು ಏರಿಳಿತಗಳಿಗೆ ಒಳಪಟ್ಟಿರುತ್ತವೆ. ಆದ್ದರಿಂದ, ಹೂಡಿಕೆಯ ಲಾಭ ಮತ್ತು ಸಾಲದ ಉಳಿತಾಯದ ನಡುವೆ ಸರಿಯಾದ ಸಮತೋಲನವನ್ನು ಕಂಡುಕೊಳ್ಳುವುದು ಬಹಳ ಮುಖ್ಯ.&lt;/p&gt;&lt;p&gt;ಸಾಲವನ್ನು ವೇಗವಾಗಿ ತೀರಿಸಬೇಕೆಂಬ ಆತುರದಲ್ಲಿ ನೀವು ನಿಮ್ಮ ₹40,000 SIP ಹೂಡಿಕೆಯನ್ನು ಕಡಿತಗೊಳಿಸಿದರೆ, ನಿಮ್ಮ ಬಡ್ಡಿಯ ಹೊರೆ ಕಡಿಮೆಯಾಗಿ ಸಾಲವು ಕೆಲವು ವರ್ಷಗಳ ಮೊದಲೇ ಮುಕ್ತಾಯವಾಗಬಹುದು. ಆದರೆ ಈ ನಿರ್ಧಾರಕ್ಕೆ ನೀವು ಭವಿಷ್ಯದಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಏಕೆಂದರೆ, ಹೂಡಿಕೆಯನ್ನು ಮುಂದುವರಿಸಿದಲ್ಲಿ ಮುಂದಿನ 15-20 ವರ್ಷಗಳಲ್ಲಿ 'ಕಾಂಪೌಂಡಿಂಗ್' ಶಕ್ತಿಯಿಂದ ಆ ಹಣವು ಅತಿ ದೊಡ್ಡ ಮೊತ್ತವಾಗಿ ಬೆಳೆಯುವ ಅವಕಾಶವಿರುತ್ತದೆ. ಈಗ ಹೂಡಿಕೆಯನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಎಂದರೆ, ವಿಶೇಷವಾಗಿ ನಿಮ್ಮ 40ರ ಹರೆಯದಲ್ಲಿ, ಮಾರುಕಟ್ಟೆಯಲ್ಲಿ ಹಣ ಬೆಳೆಯಲು ಬೇಕಾದ ಅತ್ಯಮೂಲ್ಯ ಸಮಯವನ್ನು ಕಳೆದುಕೊಂಡಂತೆ. ಈ ಉಳಿತಾಯವು ನಿಮ್ಮ ನಿವೃತ್ತಿ ಜೀವನ ಮತ್ತು ಮಗುವಿನ ಉನ್ನತ ಶಿಕ್ಷಣದಂತಹ ದೀರ್ಘಕಾಲೀನ ಗುರಿಗಳನ್ನು ತಲುಪಲು ಬಹಳ ಮುಖ್ಯವಾಗಿದೆ.&lt;/p&gt;&lt;p&gt;ಹೂಡಿಕೆ ಮಾಡುವುದು ಎಷ್ಟು ಮುಖ್ಯವೋ, ಹಾಗೆಯೇ ಸಾಲದ ಮುಂಗಡ ಪಾವತಿಯನ್ನು (Prepayment) ಸಂಪೂರ್ಣವಾಗಿ ನಿರ್ಲಕ್ಷಿಸುವುದು ಕೂಡ ಸರಿಯಲ್ಲ. 9% ಬಡ್ಡಿದರದಲ್ಲಿ 25 ವರ್ಷಗಳ ಕಾಲ ಸಾಲವನ್ನು ಮುಂದುವರಿಸಿದರೆ, ನೀವು ಅಸಲಿಗಿಂತ ಹೆಚ್ಚಿನ ಮೊತ್ತವನ್ನು ಬಡ್ಡಿಯ ರೂಪದಲ್ಲೇ ಕಟ್ಟಬೇಕಾಗುತ್ತದೆ. ಆದ್ದರಿಂದ, ಪ್ರತಿ ವರ್ಷ ನಿಮಗೆ ಬರುವ ₹2 ಲಕ್ಷ ಬೋನಸ್&zwnj;ನಂತಹ ಹಣವನ್ನು ಸಾಲದ ಅಸಲು ತೀರಿಸಲು ಬಳಸಿಕೊಳ್ಳುವುದು ಉತ್ತಮ ಮಾರ್ಗ. ಹೀಗೆ ಮಾಡುವುದರಿಂದ ನಿಮ್ಮ ಮಾಸಿಕ ಖರ್ಚುಗಳಿಗೆ (Cash flow) ತೊಂದರೆಯಾಗುವುದಿಲ್ಲ ಮತ್ತು ಸಾಲದ ಅವಧಿ ಹಾಗೂ ಒಟ್ಟು ಬಡ್ಡಿಯ ಹೊರೆ ಗಣನೀಯವಾಗಿ ಕಡಿಮೆಯಾಗುತ್ತದೆ. ಅಸಲು ಮೊತ್ತಕ್ಕೆ ನೀವು ಮಾಡುವ ಸಣ್ಣ ಪ್ರಮಾಣದ ಹೆಚ್ಚುವರಿ ಪಾವತಿಗಳು ಕೂಡ ದೀರ್ಘಕಾಲದಲ್ಲಿ ನಿಮ್ಮ ಲಕ್ಷಾಂತರ ರೂಪಾಯಿ ಹಣವನ್ನು ಉಳಿಸುತ್ತವೆ.&lt;/p&gt;&lt;h3&gt;&lt;strong&gt;ಇದರ ಹಿಂದಿರುವ ಗಣಿತವೇನು?&lt;/strong&gt;&lt;/h3&gt;&lt;p&gt;&lt;strong&gt;ಹಂತ 1:&lt;/strong&gt; ನೀವು ತಿಂಗಳಿಗೆ ₹40,000 ರಂತೆ 20 ವರ್ಷಗಳ ಕಾಲ 11% ವಾರ್ಷಿಕ ರಿಟರ್ನ್ಸ್&zwnj;ನಲ್ಲಿ ಹೂಡಿಕೆ ಮಾಡಿದರೆ, ಅದರ ಭವಿಷ್ಯದ ಮೌಲ್ಯವು ಅಂದಾಜು ₹3.3&ndash;3.5 ಕೋಟಿ ಆಗುತ್ತದೆ. ಇದು ನೀವು ಹೂಡಿಕೆಯಲ್ಲಿ ಮುಂದುವರಿದರೆ ಕಾಂಪೌಂಡಿಂಗ್ ನೀಡುವ ಶಕ್ತಿಯನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;ಹಂತ 2: &lt;/strong&gt;ನೀವು ಪ್ರತಿ ವರ್ಷ ₹2 ಲಕ್ಷ ಮುಂಗಡ ಪಾವತಿ ಮಾಡಿದರೆ, ನೀವು ಸಾಲದ ಅವಧಿಯನ್ನು ಸುಮಾರು 5&ndash;7 ವರ್ಷಗಳಷ್ಟು ಕಡಿಮೆ ಮಾಡಬಹುದು ಮತ್ತು ಸುಮಾರು ₹25&ndash;40 ಲಕ್ಷ ಬಡ್ಡಿ ಉಳಿಸಬಹುದು.&lt;/p&gt;&lt;p&gt;&lt;strong&gt;ಹಂತ 3: ಎರಡೂ ನಿರ್ಧಾರಗಳ ಹೋಲಿಕೆ&lt;/strong&gt;&lt;strong&gt;SIP ಕಡಿತಗೊಳಿಸುವುದು: &lt;/strong&gt;ನೀವು ಕೋಟ್ಯಂತರ ರೂಪಾಯಿಗಳ ಸಂಭಾವ್ಯ ಸಂಪತ್ತು ಸೃಷ್ಟಿಯನ್ನು ಕಳೆದುಕೊಳ್ಳುತ್ತೀರಿ.&lt;strong&gt;ಸಾಲದ ಮುಂಗಡ ಪಾವತಿ: &lt;/strong&gt;ನೀವು ಲಕ್ಷಾಂತರ ರೂಪಾಯಿಗಳ ಬಡ್ಡಿಯನ್ನು ಉಳಿಸುತ್ತೀರಿ.&lt;/p&gt;&lt;p&gt;ಹೂಡಿಕೆಗಳು ಸಂಪತ್ತನ್ನು ಸೃಷ್ಟಿಸುತ್ತವೆ, ಆದರೆ ಮುಂಗಡ ಪಾವತಿಯು ವೆಚ್ಚವನ್ನು ಉಳಿಸುತ್ತದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.&lt;/p&gt;&lt;p&gt;ಇನ್ನೊಂದು ಪ್ರಮುಖ ಅಂಶವೆಂದರೆ ತುರ್ತು ಸಂದರ್ಭಗಳಿಗಾಗಿ ನೀವು ಹಣವನ್ನು ಇಟ್ಟುಕೊಳ್ಳಲು ಬಯಸುತ್ತೀರಿ ಎಂದು ಹೇಳಿದ್ದೀರಿ. ಇದು ಸರಿಯಾದ ಕ್ರಮ, ಆದರೆ ಕನಿಷ್ಠ 6 ತಿಂಗಳ ವೆಚ್ಚಕ್ಕೆ ಆಗುವಷ್ಟು ಹಣವನ್ನು ತುರ್ತು ನಿಧಿಯಾಗಿ ಮೀಸಲಿಟ್ಟಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಈ ರಕ್ಷಾಕವಚ ಇಲ್ಲದೆ ಸಾಲ ತೀರಿಸಲು ಹೋದರೆ, ಅನಿರೀಕ್ಷಿತ ಖರ್ಚು ಬಂದಾಗ ನೀವು ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು.&lt;/p&gt;&lt;h3&gt;&lt;strong&gt;ಸಮತೋಲನ ಕಾಯ್ದುಕೊಳ್ಳಲು ಉತ್ತಮ ಮಾರ್ಗ&lt;/strong&gt;&lt;/h3&gt;&lt;p&gt;ವಾರ್ಷಿಕ ಬೋನಸ್ ಹಣವನ್ನು ಸಾಲದ ಅಸಲು ತೀರಿಸಲು ಬಳಸಿದರೆ, ನಿಮ್ಮ ತಿಂಗಳ ಖರ್ಚಿನ ಮೇಲೆ ಹೊರೆಯಾಗದಂತೆ ಸಾಲದ ಅವಧಿಯನ್ನು ಬೇಗ ಮುಗಿಸಬಹುದು. ಆದಾಯ ಹೆಚ್ಚಿದಾಗ EMI ಹಣವನ್ನು ಸ್ವಲ್ಪ ಹೆಚ್ಚಿಸುವ ಮೂಲಕವೂ ಸಾಲದ ಹೊರೆಯನ್ನು ತಗ್ಗಿಸಬಹುದು. ಮುಖ್ಯವಾಗಿ, ಹೂಡಿಕೆಗಳನ್ನು ನಿಲ್ಲಿಸಿ ಕೇವಲ ಸಾಲ ತೀರಿಸುವುದಕ್ಕೆ ಆದ್ಯತೆ ನೀಡುವ ಬದಲು, ಹೂಡಿಕೆ ಮತ್ತು ಸಾಲ ಮರುಪಾವತಿ ಎರಡರ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಉತ್ತಮ.&lt;/p&gt;]]></content:encoded>
            <category>money</category>
            <dc:creator>Ashwini HR</dc:creator>
            <atom:link href="https://kannada.asianetnews.com/business/should-you-pay-off-your-home-loan-early-or-continue-your-sips/articleshow-ftscy2g"/>
        </item>
        <item>
            <title><![CDATA[Post Office Scheme: 5 ಲಕ್ಷ ಇಟ್ಟರೆ 10 ಲಕ್ಷ ಸಿಗುತ್ತೆ..! ಪೋಸ್ಟ್ ಆಫೀಸ್‌ನ ಅದ್ಭುತ ಯೋಜನೆ!]]></title>
            <link>https://kannada.asianetnews.com/gallery/money/double-your-money-safely-with-post-office-kisan-vikas-patra-scheme-kvn-i3bhbgx</link>
            <guid isPermaLink="true">https://kannada.asianetnews.com/gallery/money/double-your-money-safely-with-post-office-kisan-vikas-patra-scheme-kvn-i3bhbgx</guid>
            <pubDate>Thu, 30 Apr 2026 15:09:15 +0530</pubDate>
            <description><![CDATA[ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಯಾವುದೇ ರಿಸ್ಕ್ ಇಲ್ಲದೆ ಉತ್ತಮ ರಿಟರ್ನ್ಸ್ ನೀಡುವ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಂತಹ ಒಂದು ಅತ್ಯುತ್ತಮ ಯೋಜನೆ ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (KVP).]]></description>
            <media:content url="https://static.asianetnews.com/images/w-1280,h-720,format-jpg,imgid-01kg6w982gfdc4hfnrvyav0n08,imgname-post-office-scheme-1769757515856.jpg" type="image/jpeg" height="390" width="690"/>
            <content:encoded><![CDATA[ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಯಾವುದೇ ರಿಸ್ಕ್ ಇಲ್ಲದೆ ಉತ್ತಮ ರಿಟರ್ನ್ಸ್ ನೀಡುವ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಂತಹ ಒಂದು ಅತ್ಯುತ್ತಮ ಯೋಜನೆ ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (KVP).&lt;img&gt;ಶೇರು ಮಾರುಕಟ್ಟೆಯ ರಿಸ್ಕ್ ತೆಗೆದುಕೊಳ್ಳದೆ, ಸುರಕ್ಷಿತವಾಗಿ ಹಣವನ್ನು ಬೆಳೆಸಲು ಬಯಸುವವರಿಗೆ ಅಂಚೆ ಕಚೇರಿಯ 'ಕಿಸಾನ್ ವಿಕಾಸ್ ಪತ್ರ' (KVP) ಯೋಜನೆ ಉತ್ತಮ ಆಯ್ಕೆಯಾಗಿದೆ. ಇದು ಕೇಂದ್ರ ಸರ್ಕಾರದ ಗ್ಯಾರಂಟಿ ಹೊಂದಿರುವ ಕಾರಣ, ಹೂಡಿಕೆದಾರರಿಗೆ ಸಂಪೂರ್ಣ ಭದ್ರತೆ ಸಿಗುತ್ತದೆ. ಸದ್ಯ ಈ ಯೋಜನೆಗೆ ವಾರ್ಷಿಕ 7.5% ಬಡ್ಡಿ ನೀಡಲಾಗುತ್ತಿದೆ. ಸ್ಥಿರ ಆದಾಯ ಬಯಸುವವರಿಗೆ ಇದು ಒಂದು ನಂಬಿಕಾರ್ಹ ಮಾರ್ಗ.&lt;img&gt;ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವು 115 ತಿಂಗಳಲ್ಲಿ, ಅಂದರೆ ಸುಮಾರು 9 ವರ್ಷ 7 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಮಾರುಕಟ್ಟೆಯ ಏರಿಳಿತಗಳ ಯಾವುದೇ ಪರಿಣಾಮವಿಲ್ಲದೆ, ನಿಗದಿತ ಅವಧಿಯಲ್ಲಿ ನಿಮ್ಮ ಹೂಡಿಕೆ ಡಬಲ್ ಆಗುತ್ತದೆ. ಉದಾಹರಣೆಗೆ, ನೀವು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಅವಧಿ ಮುಗಿದಾಗ 10 ಲಕ್ಷ ರೂಪಾಯಿ ಪಡೆಯುತ್ತೀರಿ. ದೀರ್ಘಾವಧಿಯಲ್ಲಿ ಹಣ ಬೆಳೆಸಲು ಇದು ಸೂಕ್ತ ಆಯ್ಕೆ.&lt;img&gt;ಭಾರತದ ಯಾವುದೇ ವಯಸ್ಕ ವ್ಯಕ್ತಿ ಈ ಯೋಜನೆಯಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ಏಕಾಂಗಿಯಾಗಿ ಖಾತೆ ತೆರೆಯಬಹುದು ಅಥವಾ ಇಬ್ಬರು ಸೇರಿ ಜಂಟಿ ಖಾತೆ ತೆರೆಯಬಹುದು. ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲೂ ಈ ಪ್ರಮಾಣಪತ್ರವನ್ನು ಖರೀದಿಸಬಹುದು. ಕನಿಷ್ಠ ₹1000 ದಿಂದ ಹೂಡಿಕೆ ಆರಂಭಿಸಬಹುದು. ಈ ಯೋಜನೆಯಲ್ಲಿ ಗರಿಷ್ಠ ಮಿತಿ ಇಲ್ಲದಿರುವುದು ಮತ್ತೊಂದು ದೊಡ್ಡ ಪ್ರಯೋಜನವಾಗಿದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಷ್ಟೇ ಹಣವನ್ನು ಹೂಡಿಕೆ ಮಾಡಬಹುದು.&lt;img&gt;ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ 100% ಸರ್ಕಾರದ ಗ್ಯಾರಂಟಿ ಇರುವುದರಿಂದ ಭದ್ರತೆಯ ಬಗ್ಗೆ ಯಾವುದೇ ಚಿಂತೆಯಿಲ್ಲ. ಹೂಡಿಕೆದಾರರಿಗೆ ನಾಮಿನೇಷನ್ ಸೌಲಭ್ಯ ಲಭ್ಯವಿದೆ, ಇದರಿಂದ ಭವಿಷ್ಯದಲ್ಲಿ ಕುಟುಂಬ ಸದಸ್ಯರಿಗೆ ಸುಲಭವಾಗಿ ವರ್ಗಾಯಿಸಬಹುದು. ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ಈ ಯೋಜನೆಯನ್ನು ತೆರೆಯಬಹುದು. ಅಗತ್ಯವಿದ್ದರೆ ಒಂದು ಅಂಚೆ ಕಚೇರಿಯಿಂದ ಇನ್ನೊಂದಕ್ಕೆ ವರ್ಗಾವಣೆ ಮಾಡಿಕೊಳ್ಳುವ ಸೌಲಭ್ಯವೂ ಇದೆ. ಇದು ಹೂಡಿಕೆ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.&lt;img&gt;ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ತಕ್ಷಣವೇ ಹಿಂಪಡೆಯಲು ಸಾಧ್ಯವಿಲ್ಲ, ಏಕೆಂದರೆ ಇದಕ್ಕೆ 2.5 ವರ್ಷಗಳ ಲಾಕ್-ಇನ್ ಅವಧಿ ಇರುತ್ತದೆ. ಆದರೆ, ಆ ಅವಧಿ ಪೂರ್ಣಗೊಂಡ ನಂತರ ಅಗತ್ಯವಿದ್ದರೆ ಹಣವನ್ನು ಹಿಂಪಡೆಯಬಹುದು. ತುರ್ತು ಸಂದರ್ಭಗಳಲ್ಲಿ ಈ ಕೆವಿಪಿ ಪ್ರಮಾಣಪತ್ರವನ್ನು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆಯುವ ಅವಕಾಶವೂ ಇದೆ. ಇದರಿಂದ ಅಗತ್ಯದ ಸಮಯದಲ್ಲಿ ಹಣಕ್ಕಾಗಿ ಪರದಾಡುವ ಪ್ರಮೇಯ ಬರುವುದಿಲ್ಲ.]]></content:encoded>
            <category>money</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/money/double-your-money-safely-with-post-office-kisan-vikas-patra-scheme-kvn-i3bhbgx"/>
        </item>
        <item>
            <title><![CDATA[ನೀವು ಶ್ರೀಮಂತರಾಗಬೇಕೇ? ಹಾಗಿದ್ರೆ ಈ 5 ತಪ್ಪುಗಳನ್ನು ಮಾಡಲೇಬೇಡಿ]]></title>
            <link>https://kannada.asianetnews.com/gallery/business/five-common-money-mistakes-that-keep-you-poor-suh-n1iyetw</link>
            <guid isPermaLink="true">https://kannada.asianetnews.com/gallery/business/five-common-money-mistakes-that-keep-you-poor-suh-n1iyetw</guid>
            <pubDate>Tue, 05 May 2026 18:18:33 +0530</pubDate>
            <description><![CDATA[&lt;p&gt;Money Mistakes ಶ್ರೀಮಂತರು ಸಾಮಾನ್ಯವಾಗಿ ಈ 5 ಹಣಕಾಸಿನ ತಪ್ಪುಗಳನ್ನು ಮಾಡುವುದಿಲ್ಲ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಕೋಟ್ಯಾಧಿಪತಿಯಾಗಲು, ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಶ್ರೀಮಂತರು ಮತ್ತಷ್ಟು ಸಂಪತ್ತು ಗಳಿಸಲು ಅನುಸರಿಸುವ ರಹಸ್ಯ ಮಾರ್ಗವೂ ಇದೇ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqw1sbj92y1xjete2hrv2zez,imgname-wealthy-lifestyle--1--1777984122441.jpg" type="image/jpeg" height="390" width="690"/>
            <content:encoded><![CDATA[&lt;p&gt;Money Mistakes ಶ್ರೀಮಂತರು ಸಾಮಾನ್ಯವಾಗಿ ಈ 5 ಹಣಕಾಸಿನ ತಪ್ಪುಗಳನ್ನು ಮಾಡುವುದಿಲ್ಲ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಕೋಟ್ಯಾಧಿಪತಿಯಾಗಲು, ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಶ್ರೀಮಂತರು ಮತ್ತಷ್ಟು ಸಂಪತ್ತು ಗಳಿಸಲು ಅನುಸರಿಸುವ ರಹಸ್ಯ ಮಾರ್ಗವೂ ಇದೇ ಆಗಿದೆ.&lt;/p&gt;&lt;img&gt;ಮಧ್ಯಮ ವರ್ಗದವರು ತಾವು ಶ್ರೀಮಂತರು ಎಂದು ತೋರಿಸಿಕೊಳ್ಳಲು ದುಬಾರಿ ಕಾರು, ಬ್ರಾಂಡೆಡ್ ಬಟ್ಟೆಗಳನ್ನು ಖರೀದಿಸುತ್ತಾರೆ. ಆದರೆ, ನಿಜವಾದ ಶ್ರೀಮಂತರು 'ಕಣ್ಣಿಗೆ ಕಾಣದ ಸಂಪತ್ತನ್ನು' (Invisible Wealth) ಹೆಚ್ಚಿಸುವುದರ ಮೇಲೆ ಗಮನ ಹರಿಸುತ್ತಾರೆ. ಅವರು ಹಳೆಯ ಕಾರು ಓಡಿಸಿದರೂ, ಅವರ ಬ್ಯಾಂಕ್ ಖಾತೆ ಬೆಳೆಯುತ್ತಲೇ ಇರುತ್ತದೆ. ಅವರಿಗೆ ಆಡಂಬರಕ್ಕಿಂತ 'ಸ್ವಾತಂತ್ರ್ಯ' ಮುಖ್ಯ.&lt;img&gt;ಅನೇಕರು ತಮ್ಮ ತಿಂಗಳ ಸಂಬಳವನ್ನೇ ಸಂಪೂರ್ಣವಾಗಿ ನಂಬಿಕೊಂಡಿರುತ್ತಾರೆ. ಆದರೆ, ಕೋಟ್ಯಾಧಿಪತಿಗಳು ಸರಾಸರಿ 7 ವಿವಿಧ ಆದಾಯದ ಮೂಲಗಳನ್ನು (Passive Income) ಹೊಂದಿರುತ್ತಾರೆ. ಒಂದು ದಾರಿ ಮುಚ್ಚಿದರೂ, ಉಳಿದ ಮೂಲಗಳು ಅವರನ್ನು ಕಾಪಾಡುತ್ತವೆ. ಶೇರು ಮಾರುಕಟ್ಟೆ ಲಾಭ, ಬಾಡಿಗೆ ಆದಾಯ, ವ್ಯಾಪಾರದಲ್ಲಿನ ಹೂಡಿಕೆಗಳು ಇದರಲ್ಲಿ ಸೇರಿವೆ.&lt;img&gt;ಹಣವನ್ನು ಬ್ಯಾಂಕಿನಲ್ಲಿ ಹಾಗೆಯೇ ಇಟ್ಟರೆ ಹಣದುಬ್ಬರದಿಂದ (Inflation) ಅದರ ಮೌಲ್ಯ ಕಡಿಮೆಯಾಗುತ್ತದೆ ಎಂಬುದು ಅವರಿಗೆ ತಿಳಿದಿರುತ್ತದೆ. ಸಾಮಾನ್ಯ ಜನರು ಹಣವನ್ನು ಉಳಿತಾಯ (Saving) ಮಾಡುತ್ತಾರೆ. ಆದರೆ ಶ್ರೀಮಂತರು ಹಣವನ್ನು ಹೂಡಿಕೆ (Invest) ಮಾಡುತ್ತಾರೆ. ನೀವು ಹಣಕ್ಕಾಗಿ ದುಡಿಯುವಂತೆ, ಹಣವೂ ನಿಮಗಾಗಿ 24 ಗಂಟೆಗಳ ಕಾಲ ದುಡಿಯಬೇಕು ಎನ್ನುವುದೇ ಅವರ ತತ್ವ.&lt;img&gt;ಶ್ರೀಮಂತರಿಗೆ ಮಾನಸಿಕ ಒತ್ತಡ ಅಥವಾ ಅತಿಯಾದ ಸಂತೋಷದ ಸಮಯದಲ್ಲಿ ವಸ್ತುಗಳನ್ನು ಖರೀದಿಸುವ ಅಭ್ಯಾಸವಿರುವುದಿಲ್ಲ. ಏನನ್ನಾದರೂ ಖರೀದಿಸುವ ಮೊದಲು, 'ಇದು ನನ್ನ ಅಗತ್ಯವೇ ಅಥವಾ ಕೇವಲ ಆಸೆಯೇ?' ಎಂದು ಯೋಚಿಸುತ್ತಾರೆ. ವಿಶೇಷವಾಗಿ, ಅನಗತ್ಯ ಸಾಲ ಮಾಡಿ ಆಸ್ತಿಗಳನ್ನು ಖರೀದಿಸುವುದಿಲ್ಲ. ಉದಾಹರಣೆಗೆ, ಸಾಲದಲ್ಲಿ ಫೋನ್ ಖರೀದಿಸುವುದು ಅವರಿಗೆ ಇಷ್ಟವಾಗದ ವಿಚಾರ.&lt;img&gt;'ನನಗೆ ಎಲ್ಲವೂ ತಿಳಿದಿದೆ' ಎಂದು ಭಾವಿಸುವುದೇ ಅತಿದೊಡ್ಡ ಹಣಕಾಸಿನ ತಪ್ಪು. ಶ್ರೀಮಂತರು ಯಾವಾಗಲೂ ಹಣದ ಬಗ್ಗೆ ಪುಸ್ತಕಗಳನ್ನು ಓದುವುದು ಮತ್ತು ಹೊಸ ಹೂಡಿಕೆ ವಿಧಾನಗಳನ್ನು ಕಲಿಯುವುದರಲ್ಲಿ ಸಮಯ ಕಳೆಯುತ್ತಾರೆ. ಅವರು ಹಣಕಾಸು ಸಲಹೆಗಾರರ ಸಲಹೆ ಪಡೆಯಲು ಎಂದಿಗೂ ಹಿಂಜರಿಯುವುದಿಲ್ಲ.]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/five-common-money-mistakes-that-keep-you-poor-suh-n1iyetw"/>
        </item>
        <item>
            <title><![CDATA[ಈ ಬ್ಯುಸಿನೆಸ್‌ಗಳನ್ನುಮಾಡಿ... IAS, IPS ಅಧಿಕಾರಿಗಳಿಗಿಂತ ಹೆಚ್ಚು ಸಂಪಾದಿಸಬಹುದು!]]></title>
            <link>https://kannada.asianetnews.com/gallery/business/high-income-street-businesses-that-beat-officer-salaries-suh-n2zc2h1</link>
            <guid isPermaLink="true">https://kannada.asianetnews.com/gallery/business/high-income-street-businesses-that-beat-officer-salaries-suh-n2zc2h1</guid>
            <pubDate>Thu, 07 May 2026 13:17:55 +0530</pubDate>
            <description><![CDATA[&lt;p&gt;High Income Street Businesses ದೊಡ್ಡ ಓದು, ಆಫೀಸ್ ಕೆಲಸ ಅಥವಾ ಕೋಟ್ಯಂತರ ರೂಪಾಯಿ ಬಂಡವಾಳ ಇಲ್ಲದೆಯೂ ಕೆಲವು ಬೀದಿ ಬದಿಯ ವ್ಯಾಪಾರಗಳು ತಿಂಗಳಿಗೆ ಲಕ್ಷಗಟ್ಟಲೆ ಆದಾಯ ತಂದುಕೊಡುತ್ತವೆ. ಅತಿ ಹೆಚ್ಚು ಲಾಭ ತರುವ ಆ ವ್ಯಾಪಾರಗಳು ಯಾವುವು ಗೊತ್ತಾ? ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn2219beg77f790yx3ed017d,imgname-new-project---2026-03-31t190403.407-1774964483438.jpg" type="image/jpeg" height="390" width="690"/>
            <content:encoded><![CDATA[&lt;p&gt;High Income Street Businesses ದೊಡ್ಡ ಓದು, ಆಫೀಸ್ ಕೆಲಸ ಅಥವಾ ಕೋಟ್ಯಂತರ ರೂಪಾಯಿ ಬಂಡವಾಳ ಇಲ್ಲದೆಯೂ ಕೆಲವು ಬೀದಿ ಬದಿಯ ವ್ಯಾಪಾರಗಳು ತಿಂಗಳಿಗೆ ಲಕ್ಷಗಟ್ಟಲೆ ಆದಾಯ ತಂದುಕೊಡುತ್ತವೆ. ಅತಿ ಹೆಚ್ಚು ಲಾಭ ತರುವ ಆ ವ್ಯಾಪಾರಗಳು ಯಾವುವು ಗೊತ್ತಾ? ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;ಬೀದಿ ಬದಿಯ ಫುಡ್ ಸ್ಟಾಲ್&zwnj;ಗಳು ಇಂದು ಅತಿ ಹೆಚ್ಚು ಆದಾಯ ತರುವ ಉದ್ಯಮಗಳಲ್ಲಿ ಒಂದಾಗಿವೆ. ಇಡ್ಲಿ, ದೋಸೆ, ಪರೋಟ, ಚಿಕನ್ ರೈಸ್, ಶವರ್ಮಾ, ಜ್ಯೂಸ್&zwnj;ನಂತಹ ತಿನಿಸುಗಳನ್ನು ಮಾರುವ ಅಂಗಡಿಗಳಿಗೆ ಪ್ರತಿದಿನ ನೂರಾರು ಗ್ರಾಹಕರು ಬರುತ್ತಾರೆ. ಅದರಲ್ಲೂ ರಾತ್ರಿ &amp;nbsp;ಫುಡ್&zwnj; &amp;nbsp;ಸ್ಟಾಲ್ ಯುವಜನರ ಭಾರಿ ಬೇಡಿಕೆಯಿದೆ. ಕೆಲವು ಪ್ರಸಿದ್ಧ ಸ್ಟ್ರೀಟ್ ಫುಡ್ ಅಂಗಡಿಗಳು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸುತ್ತವೆ.&lt;/p&gt;&lt;img&gt;ಒಂದು ಸಣ್ಣ ಟೀ ಅಂಗಡಿ ಕೂಡ, ಸರಿಯಾದ ಜಾಗದಲ್ಲಿದ್ದರೆ ಚಿನ್ನದ ಗಣಿಯಂತೆ ಆಗಬಲ್ಲದು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕಾಲೇಜು ಬಳಿಯಿರುವ ಟೀ ಸ್ಟಾಲ್&zwnj;ಗಳಿಗೆ ಯಾವಾಗಲೂ ಜನಜಂಗುಳಿ ಇರುತ್ತದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ವ್ಯವಹಾರದಲ್ಲಿ ಪ್ರತಿದಿನದ ಹಣದ ಹರಿವು ಹೆಚ್ಚಾಗಿರುತ್ತದೆ. ಕೆಲವರು ಟೀ ಅಂಗಡಿಯನ್ನೇ ಬ್ರ್ಯಾಂಡ್ ಮಾಡಿ, ಹಲವು ಶಾಖೆಗಳನ್ನು ತೆರೆದು ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ.&lt;img&gt;ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳಿಗೆ ಸದಾ ಬೇಡಿಕೆ ಇರುತ್ತದೆ. ಬೀದಿ ಬದಿಯಲ್ಲಿ ಚಾರ್ಜರ್, ಹೆಡ್&zwnj;ಫೋನ್, ಮೊಬೈಲ್ ಕವರ್, ಟೆಂಪರ್ಡ್ ಗ್ಲಾಸ್&zwnj;ನಂತಹ ವಸ್ತುಗಳನ್ನು ಮಾರಾಟ ಮಾಡಿ ಉತ್ತಮ ಲಾಭ ಗಳಿಸಬಹುದು. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಈ ವ್ಯಾಪಾರ ವೇಗವಾಗಿ ಬೆಳೆಯುತ್ತದೆ.&lt;img&gt;&lt;p&gt;ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದರಿಂದ, ಹಣ್ಣಿನ ರಸ ಮತ್ತು ಹಣ್ಣುಗಳ ಮಾರಾಟದ ಉದ್ಯಮಕ್ಕೂ ಉತ್ತಮ ಬೇಡಿಕೆ ಬಂದಿದೆ. ಫ್ರೆಶ್ ಜ್ಯೂಸ್, ಫ್ರೂಟ್ ಸಲಾಡ್, ಕಬ್ಬಿನ ಹಾಲನ್ನುನೀಡಿದರೆ ಗ್ರಾಹಕರು ಮತ್ತೆ ಮತ್ತೆ ಬರುತ್ತಾರೆ. ಬೇಸಿಗೆ ಕಾಲದಲ್ಲಿ ಈ ವ್ಯಾಪಾರದ ಆದಾಯ ಮತ್ತಷ್ಟು ಹೆಚ್ಚಾಗುತ್ತದೆ.&lt;/p&gt;]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/high-income-street-businesses-that-beat-officer-salaries-suh-n2zc2h1"/>
        </item>
        <item>
            <title><![CDATA[Amazon Now: ಮಂಗಳೂರು, ಮೈಸೂರಿಗೆ ಕಾಲಿಟ್ಟ ದೈತ್ಯ ಗಾತ್ರದ ಅಮೆಜಾನ್‌ ಕಂಪೆನಿ; 2800 ಕೋಟಿ ರೂ ಹೂಡಿಕೆ]]></title>
            <link>https://kannada.asianetnews.com/business/amazon-to-expand-amazon-now-to-100-cities-mangaluru-mysore-invests-2800-crore-rupees/articleshow-nvgkxgb</link>
            <guid isPermaLink="true">https://kannada.asianetnews.com/business/amazon-to-expand-amazon-now-to-100-cities-mangaluru-mysore-invests-2800-crore-rupees/articleshow-nvgkxgb</guid>
            <pubDate>Mon, 27 Apr 2026 16:17:37 +0530</pubDate>
            <description><![CDATA[&lt;p&gt;Amazon Now 2800 Crore Rupees Investment: ಅಮೆಜಾನ್&zwnj; ಕಂಪೆನಿಯು ಮಂಗಳೂರು, ಮೈಸೂರಿನತ್ತ ಕಾಲಿಟ್ಟಿದೆ. ಹೌದು, ಈ ಕಂಪೆನಿಯು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ರೆಡಿಯಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq78gqmw134jj2ad41rnaz9m,imgname-new-project---2026-04-27t160012.973-1777286536860.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತದ 'ಕ್ವಿಕ್ ಕಾಮರ್ಸ್' (ವೇಗದ ವಿತರಣೆ) ಮಾರುಕಟ್ಟೆಯಲ್ಲಿ ದಿನ ದಿನಕ್ಕೂ ಪೈಪೋಟಿ ಜೋರಾಗಿದ್ದು, ಈ ವಲಯದಲ್ಲಿ ಪಾರುಪತ್ಯ ಸಾಧಿಸಲು ಇ-ಕಾಮರ್ಸ್ ದೈತ್ಯ 'ಅಮೆಜಾನ್' ಹೆಜ್ಜೆಯಿಟ್ಟಿದೆ. ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸುವ ತನ್ನ ಮಹತ್ವಾಕಾಂಕ್ಷೆಯ 'ಅಮೆಜಾನ್ ನೌ' ಸೇವೆಯನ್ನು ಈಗಾಗಲೇ ಆರಂಭಿಸಿರುವ ಕಂಪನಿ ಇದೀಗ ಈ ಸೇವೆಯನ್ನು ದೇಶದ 100 ನಗರಗಳಿಗೆ ವಿಸ್ತರಿಸುವುದಾಗಿ ಹೇಳಿದೆ.&lt;/p&gt;&lt;h2&gt;2,800 ಕೋಟಿ ರೂ. ಹೂಡಿಕೆ&lt;/h2&gt;&lt;p&gt;ತನ್ನ ಕಾರ್ಯಾಚರಣಾ ಜಾಲವನ್ನು ಬಲಪಡಿಸಲು ಅಮೆಜಾನ್ ಬರೋಬ್ಬರಿ 2,800 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ಬೃಹತ್ ಮೊತ್ತವನ್ನು ಕೇವಲ ವ್ಯಾಪಾರ ವಿಸ್ತರಣೆಗೆ ಮಾತ್ರವಲ್ಲದೆ, ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮಕ್ಕೂ ವಿನಿಯೋಗಿಸಲು ಅಮೆಜಾನ್ ನಿರ್ಧರಿಸಿದೆ. ಈ ಮೂಲಕ ಭಾರತದ ಅತ್ಯಂತ ಸುರಕ್ಷಿತ, ವೇಗದ ಮತ್ತು ವಿಶ್ವಾಸಾರ್ಹ ಕಾರ್ಯಾಚರಣಾ ಜಾಲವಾಗಿ ಹೊರಹೊಮ್ಮುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ.&lt;/p&gt;&lt;h2&gt;ಮಂಗಳೂರು, ಮೈಸೂರಿನತ್ತ ಅಮೆಜಾನ್ ಚಿತ್ತ!&amp;nbsp;&lt;/h2&gt;&lt;p&gt;ಈಗಾಗಲೇ ರಾಜಧಾನಿ ಬೆಂಗಳೂರು, ಮುಂಬೈ ಮತ್ತು ದೆಹಲಿ-ಎನ್&zwnj;ಸಿಆರ್&zwnj;ನಂತಹ ಮಹಾನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 'ಅಮೆಜಾನ್ ನೌ', ಇದೀಗ ಕರ್ನಾಟಕದ ಪ್ರಮುಖ ವಾಣಿಜ್ಯ ನಗರ ಮಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿಗೂ ಲಗ್ಗೆ ಇಡುತ್ತಿದೆ.&lt;/p&gt;&lt;p&gt;ಈ ವಿಸ್ತರಣೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಅಮೆಜಾನ್ ದೇಶಾದ್ಯಂತ 1,000ಕ್ಕೂ ಹೆಚ್ಚು ವಿಶೇಷ 'ಮೈಕ್ರೋ-ಫುಲ್&zwnj;ಫಿಲ್&zwnj;ಮೆಂಟ್ ಕೇಂದ್ರ'ಗಳನ್ನು (ಎಂಎಫ್&zwnj;ಸಿ) ಸ್ಥಾಪಿಸುತ್ತಿದೆ. ಕರ್ನಾಟಕದ ನಗರಗಳಲ್ಲದೆ ಪುಣೆ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಜೈಪುರ, ಲಕ್ನೋ, ಕಾನ್ಪುರ, ಚಂಡೀಗಢ, ಅಹಮದಾಬಾದ್, ಮೀರತ್, ಪಾಣಿಪತ್, ಕೊಚ್ಚಿ, ಅಮೃತಸರ ಮತ್ತು ವೈಜಾಗ್ ಸೇರಿದಂತೆ ಒಟ್ಟು 100 ಎರಡನೇ ಹಾಗೂ ಮೂರನೇ ಸ್ಥರದ ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುತ್ತಿದೆ.&lt;/p&gt;&lt;h2&gt;ಮನೆ ಬಾಗಿಲಿಗೆ ಬರಲಿದೆ ತಾಜಾ ಹಣ್ಣು-ತರಕಾರಿ&lt;/h2&gt;&lt;p&gt;'ಅಮೆಜಾನ್ ನೌ' ಸೇವೆಯ ಅಡಿಯಲ್ಲಿ ಗ್ರಾಹಕರಿಗೆ ದಿನಸಿ (ಹಣ್ಣು, ತರಕಾರಿ, ಫ್ರೋಜನ್ ಫುಡ್), ವೈಯಕ್ತಿಕ ಆರೈಕೆ ಉತ್ಪನ್ನಗಳು, ಫ್ಯಾಷನ್ ಮತ್ತು ಸೌಂದರ್ಯವರ್ಧಕಗಳು, ಸಣ್ಣ ಗೃಹೋಪಯೋಗಿ ವಸ್ತುಗಳು, ಮಕ್ಕಳ ಉತ್ಪನ್ನಗಳು, ಸಾಕುಪ್ರಾಣಿಗಳ ಆಹಾರ ಮತ್ತು ಆರೋಗ್ಯ ಸಪ್ಲಿಮೆಂಟ್&zwnj;ಗಳು ಕೆಲವೇ ನಿಮಿಷಗಳಲ್ಲಿ ಡೆಲಿವರಿಯಾಗಲಿವೆ.&lt;/p&gt;&lt;p&gt;ಈ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಮಾತ್ರವಲ್ಲ 16,000ಕ್ಕೂ ಹೆಚ್ಚು ರೈತರಿಗೂ ಲಾಭವಾಗಲಿದ್ದು, ಅಮೆಜಾನ್&zwnj;ನ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ಲಾಭವನ್ನು ಇವರು ಪಡೆಯಲಿದ್ದಾರೆ. ಇವರು ಬೆಳೆದ ತಾಜಾ ಕೃಷಿ ಉತ್ಪನ್ನಗಳು ಮಾರಾಟಗಾರರ ಮೂಲಕ ನೇರವಾಗಿ ಮತ್ತು ಅತಿ ವೇಗವಾಗಿ ಗ್ರಾಹಕರ ಕೈಸೇರಲಿವೆ.&lt;/p&gt;&lt;p&gt;ಅಮೆಜಾನ್ ಇದಕ್ಕಾಗಿ ಬೃಹತ್&zwnj; ಜಾಲವನ್ನು ನಿರ್ಮಿಸಿದ್ದು ಸಾವಿರಾರು ದಿನಬಳಕೆ ವಸ್ತುಗಳು ನಿಮಿಷಗಳಲ್ಲಿ ಡೆಲಿವರಿಯಾಗಲಿದ್ದರೆ, 10 ಲಕ್ಷಕ್ಕೂ ಹೆಚ್ಚು ವಸ್ತುಗಳು ಬುಕ್ ಮಾಡಿದ ಅದೇ ದಿನ ಹಾಗೂ 40 ಲಕ್ಷಕ್ಕೂ ಹೆಚ್ಚು ವಸ್ತುಗಳು ಮರುದಿನ ಗ್ರಾಹಕರ ಕೈ ಸೇರಲಿವೆ.&lt;/p&gt;&lt;h2&gt;ಪ್ರೈಮ್ ಸದಸ್ಯರ ಶಾಪಿಂಗ್ ಮೂರು ಪಟ್ಟು ಏರಿಕೆ!&lt;/h2&gt;&lt;p&gt;&quot;ಗ್ರಾಹಕರು 'ಅಮೆಜಾನ್ ನೌ' ಸೇವೆಯ ವೇಗ, ಮೌಲ್ಯ ಮತ್ತು ರೈತರಿಂದ ನೇರವಾಗಿ ಪಡೆಯುವ ತಾಜಾ ಉತ್ಪನ್ನಗಳ ಗುಣಮಟ್ಟವನ್ನು ಮೆಚ್ಚಿಕೊಂಡಿದ್ದಾರೆ,&rdquo; ಎಂದಿರುವ ಅಮೆಜಾನ್ ಇಂಡಿಯಾದ 'ಎವರಿಡೇ ಎಸೆನ್ಶಿಯಲ್ಸ್&zwnj;ʼ ವಿಭಾಗದ ಉಪಾಧ್ಯಕ್ಷ ಹರ್ಷ ಗೋಯಲ್, &ldquo;ಈ ಯಶಸ್ಸಿನ ಹಿನ್ನೆಲೆಯಲ್ಲಿ 1,000ಕ್ಕೂ ಹೆಚ್ಚು ಮೈಕ್ರೋ-ಫುಲ್&zwnj;ಫಿಲ್&zwnj;ಮೆಂಟ್ ಕೇಂದ್ರಗಳ ಜಾಲದೊಂದಿಗೆ 100 ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುತ್ತಿದ್ದೇವೆ,&rdquo; ಎಂದು ತಿಳಿಸಿದ್ದಾರೆ.&lt;/p&gt;&lt;p&gt;'ಅಮೆಜಾನ್ ನೌ' ಬಳಸಲು ಆರಂಭಿಸಿದಾಗಿನಿಂದ ಪ್ರೈಮ್ ಸದಸ್ಯರ ಶಾಪಿಂಗ್ ಪ್ರಮಾಣ ಬರೋಬ್ಬರಿ ಮೂರು ಪಟ್ಟು ಹೆಚ್ಚಾಗಿದೆ. ಈ ವಿಸ್ತರಣೆ ಬಳಿಕವೂ ಪ್ರೈಮ್ ಸದಸ್ಯರು 'ಅನಿಯಮಿತ ಉಚಿತ ಡೆಲಿವರಿ' ಸೌಲಭ್ಯವನ್ನು ಪಡೆಯಲಿದ್ದಾರೆ.&lt;/p&gt;&lt;p&gt;ನಿಮ್ಮ ಪಿನ್&zwnj;ಕೋಡ್&zwnj;ನಲ್ಲಿ ಸೇವೆ ಲಭ್ಯವಿದೆಯೇ? ಚೆಕ್ ಮಾಡುವುದು ಹೇಗೆ?&lt;/p&gt;&lt;p&gt;ತಾವಿರುವ ಪ್ರದೇಶದ ಪಿನ್&zwnj;ಕೋಡ್&zwnj;ನಲ್ಲಿ 'ಅಮೆಜಾನ್ ನೌ' ಕ್ವಿಕ್ ಡೆಲಿವರಿ ಸೇವೆ ಲಭ್ಯವಿದೆಯೇ ಎಂಬುದನ್ನು ಪರೀಕ್ಷಿಸಲು, ಗ್ರಾಹಕರು ಅಮೆಜಾನ್ ಆ್ಯಪ್ ತೆರೆದು ಮುಖಪುಟದ ಮೇಲ್ಭಾಗದ ಬ್ಯಾನರ್&zwnj;ನಲ್ಲಿರುವ ಸಿಡಿಲಿನ ಅಥವಾ Lightning ಆಕಾರದ 'Now' ಐಕಾನ್ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬಹುದು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/business/amazon-to-expand-amazon-now-to-100-cities-mangaluru-mysore-invests-2800-crore-rupees/articleshow-nvgkxgb"/>
        </item>
        <item>
            <title><![CDATA[ಈ ದಿನಾಂಕಗಳಲ್ಲಿ ಹುಟ್ಟಿದವರು ತುಂಬಾ ಲಕ್ಕಿ.. ಬೇಗ ಶ್ರೀಮಂತರಾಗ್ತಾರಂತೆ!]]></title>
            <link>https://kannada.asianetnews.com/gallery/money/lucky-birth-dates-according-to-numerology-for-wealth-suh-olm8c4y</link>
            <guid isPermaLink="true">https://kannada.asianetnews.com/gallery/money/lucky-birth-dates-according-to-numerology-for-wealth-suh-olm8c4y</guid>
            <pubDate>Tue, 12 May 2026 10:25:37 +0530</pubDate>
            <description><![CDATA[&lt;p&gt;ಸಂಖ್ಯಾಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕವು ಅವರ ವ್ಯಕ್ತಿತ್ವ, ಅದೃಷ್ಟ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ದಿನಾಂಕಗಳಲ್ಲಿ ಜನಿಸಿದವರು ಸಹಜವಾಗಿಯೇ ಅದೃಷ್ಟವನ್ನು ಆಕರ್ಷಿಸುತ್ತಾರಂತೆ. ಇವರು ಬೇಗನೆ ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುತ್ತದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kck28vtdc6sgdc5z4k12cxhd,imgname-d1764483-e407-4cad-9a8c-70ececa62b71--1--1765871480652.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂಖ್ಯಾಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕವು ಅವರ ವ್ಯಕ್ತಿತ್ವ, ಅದೃಷ್ಟ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ದಿನಾಂಕಗಳಲ್ಲಿ ಜನಿಸಿದವರು ಸಹಜವಾಗಿಯೇ ಅದೃಷ್ಟವನ್ನು ಆಕರ್ಷಿಸುತ್ತಾರಂತೆ. ಇವರು ಬೇಗನೆ ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುತ್ತದೆ.&amp;nbsp;&lt;/p&gt;&lt;img&gt;ವ್ಯಕ್ತಿಯ ಜೀವನದ ಮೇಲೆ ಜನ್ಮ ದಿನಾಂಕವು ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರ ಹೇಳುತ್ತದೆ. ವ್ಯಕ್ತಿಯ ಹುಟ್ಟಿದ ದಿನ, ದಿನಾಂಕ ಮತ್ತು ಸಮಯದ ಆಧಾರದ ಮೇಲೆ ಅವರ ಸ್ವಭಾವ, ಅದೃಷ್ಟ, ಆರ್ಥಿಕ ಸ್ಥಿತಿ ಮತ್ತು ಭವಿಷ್ಯವನ್ನು ಊಹಿಸಬಹುದು. ಅದರಲ್ಲೂ ಕೆಲವು ದಿನಾಂಕಗಳಲ್ಲಿ ಜನಿಸಿದವರು ಸಹಜವಾಗಿಯೇ ಅದೃಷ್ಟವನ್ನು ಆಕರ್ಷಿಸುತ್ತಾರೆ. ಇವರು ಜೀವನದಲ್ಲಿ ಬೇಗನೆ ಕೋಟ್ಯಾಧಿಪತಿಗಳಾಗುತ್ತಾರಂತೆ. ಆ ದಿನಾಂಕಗಳು ಯಾವುವು ಎಂದು ನೋಡೋಣ.&lt;img&gt;ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 1, 10, 19 ಮತ್ತು 28ನೇ ತಾರೀಖಿನಂದು ಜನಿಸಿದವರ ಮೇಲೆ ಸೂರ್ಯ ಗ್ರಹದ ಪ್ರಭಾವ ಹೆಚ್ಚಾಗಿರುತ್ತದೆ. ಇವರಲ್ಲಿ ನಾಯಕತ್ವದ ಗುಣಗಳು ಸಹಜವಾಗಿ ಕಂಡುಬರುತ್ತವೆ. ಯಾವುದೇ ಕೆಲಸ ಮಾಡಿದರೂ ಮುಂಚೂಣಿಯಲ್ಲಿ ನಿಂತು ಮುನ್ನಡೆಸುವ ಸ್ವಭಾವ ಇವರದ್ದು. ಸಮಾಜದಲ್ಲಿ ಗೌರವ, ಮನ್ನಣೆ ಮತ್ತು ಕೀರ್ತಿಯನ್ನು ಗಳಿಸುವ ಅವಕಾಶ ಇವರಿಗೆ ಹೆಚ್ಚು. ಅದರಲ್ಲೂ ಸರ್ಕಾರಿ ಉದ್ಯೋಗ, ವ್ಯಾಪಾರ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಇವರು ಬೇಗನೆ ಯಶಸ್ಸು ಕಾಣುತ್ತಾರೆ.&lt;img&gt;ಯಾವುದೇ ತಿಂಗಳ 3, 12, 21 ಮತ್ತು 30ನೇ ತಾರೀಖಿನಂದು ಜನಿಸಿದವರ ಮೇಲೆ ಗುರು ಗ್ರಹದ ಪ್ರಭಾವವಿರುತ್ತದೆ. ಇವರು ತಮ್ಮ ಬುದ್ಧಿವಂತಿಕೆ, ಆಧ್ಯಾತ್ಮಿಕ ಚಿಂತನೆಗಳು ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಮುನ್ನಡೆಯುತ್ತಾರೆ. ಕುಟುಂಬಕ್ಕೆ ಗೌರವ ತರುವುದಲ್ಲದೆ, ಸಮಾಜದಲ್ಲೂ ವಿಶೇಷ ಮನ್ನಣೆ ಗಳಿಸುತ್ತಾರೆ. ಹಣಕಾಸಿನ ವಿಚಾರದಲ್ಲೂ ಇವರಿಗೆ ಅದೃಷ್ಟ ಚೆನ್ನಾಗಿ ಕೈ ಹಿಡಿಯುತ್ತದೆ.&lt;img&gt;ಯಾವುದೇ ತಿಂಗಳ 5, 14 ಮತ್ತು 23ನೇ ತಾರೀಖಿನಂದು ಜನಿಸಿದವರು ಬುಧ ಗ್ರಹದ ಪ್ರಭಾವದಲ್ಲಿರುತ್ತಾರೆ. ಇವರು ತಮ್ಮ ಚುರುಕುತನ, ಮಾತಿನ ಶೈಲಿ ಮತ್ತು ವ್ಯಾಪಾರ ಕೌಶಲ್ಯದಿಂದ ಜೀವನದಲ್ಲಿ ಬೇಗನೆ ಯಶಸ್ಸು ಗಳಿಸುತ್ತಾರೆ. ಹೊಸ ಆಲೋಚನೆಗಳು ಮತ್ತು ಹೊಸ ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ಇವರು ಮುಂಚೂಣಿಯಲ್ಲಿರುತ್ತಾರೆ. ಸಾಮಾಜಿಕ ಮಾಧ್ಯಮ, ವ್ಯಾಪಾರ, ಮಾರ್ಕೆಟಿಂಗ್ ಮತ್ತು ಸಂವಹನ ಕ್ಷೇತ್ರಗಳಲ್ಲಿ ಇವರು ಉನ್ನತ ಸ್ಥಾನಕ್ಕೇರುತ್ತಾರೆ.&lt;img&gt;ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 7, 16 ಮತ್ತು 25ನೇ ತಾರೀಖಿನಂದು ಜನಿಸಿದವರು ಬಹಳ ಅದೃಷ್ಟವಂತರು. ಇವರಿಗೆ ಆಧ್ಯಾತ್ಮಿಕ ಶಕ್ತಿ ಹೆಚ್ಚಾಗಿರುತ್ತದೆ. ಜೀವನದಲ್ಲಿ ಇವರು ಬೇಗನೆ ಉನ್ನತ ಸ್ಥಾನಕ್ಕೆ ತಲುಪುತ್ತಾರೆ. ಆರಂಭದಲ್ಲಿ ಸ್ವಲ್ಪ ಕಷ್ಟಗಳನ್ನು ಎದುರಿಸಿದರೂ, ನಂತರದ ದಿನಗಳಲ್ಲಿ ಉತ್ತಮ ಅವಕಾಶಗಳು ಇವರನ್ನು ಹುಡುಕಿ ಬರುತ್ತವೆ. ವಿದೇಶ ಪ್ರಯಾಣ, ಉತ್ತಮ ಉದ್ಯೋಗ ಮತ್ತು ಅನಿರೀಕ್ಷಿತ ಧನಲಾಭದ ಯೋಗ ಇವರಿಗೆ ಹೆಚ್ಚಾಗಿರುತ್ತದೆ ಎಂದು ಪಂಡಿತರು ಹೇಳುತ್ತಾರೆ.]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/money/lucky-birth-dates-according-to-numerology-for-wealth-suh-olm8c4y"/>
        </item>
        <item>
            <title><![CDATA[ಪತ್ನಿಯನ್ನ ಕೊಂದು ಕಾಂಕ್ರೀಟ್‌ ಹಾಕಿ ಸಮಾಧಿ ಮಾಡಿದ ಪತಿ! ಮಗನ ಕೈಗೆ ಸಿಕ್ಕ ಚೀಟಿಯಿಂದ ಬಯಲಾಯ್ತು ಪ್ರಕರಣ!]]></title>
            <link>https://kannada.asianetnews.com/india-news/surat-man-kills-dietitian-wife-buries-her-in-concrete-in-gujarath-rav/articleshow-ss6t37i</link>
            <guid isPermaLink="true">https://kannada.asianetnews.com/india-news/surat-man-kills-dietitian-wife-buries-her-in-concrete-in-gujarath-rav/articleshow-ss6t37i</guid>
            <pubDate>Tue, 28 Apr 2026 04:59:39 +0530</pubDate>
            <description><![CDATA[ಸೂರತ್&zwnj;ನಲ್ಲಿ, ಪತ್ನಿಯ ಅನೈತಿಕ ಸಂಬಂಧವನ್ನು ಶಂಕಿಸಿದ ಪತಿಯೊಬ್ಬ ಆಕೆಯನ್ನು ಕೊಂದು, ಶವವನ್ನು ಮರದ ಪೆಟ್ಟಿಗೆಯಲ್ಲಿಟ್ಟು ಕಾಂಕ್ರೀಟ್&zwnj;ನಿಂದ ಮುಚ್ಚಿದ್ದಾನೆ. ನಾಪತ್ತೆ ಪ್ರಕರಣವೆಂದು ಭಾವಿಸಿದ್ದ ಪೊಲೀಸರಿಗೆ, ಆರೋಪಿ ಪತಿಯೇ ಬರೆದಿಟ್ಟ ಪತ್ರ ಮಗನ ಕೈಗೆ ಸಿಕ್ಕಿದ್ದರಿಂದ ಈ ಘೋರ ಕೃತ್ಯ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq8m86w01tfr8f3vxrv6mxm7,imgname--------------------------------17--1777332394880.jpg" type="image/jpeg" height="390" width="690"/>
            <content:encoded><![CDATA[&lt;h2&gt;- ಮಗನಿಗೆ ಸಿಕ್ಕ ಚೀಟಿಯಿಂದ ಕೃತ್ಯ ಬಯಲಿಗೆ&lt;/h2&gt;&lt;p&gt;&lt;strong&gt;ಸೂರತ್&zwnj;:&lt;/strong&gt; ಗುಜರಾತ್&zwnj;ನ ಸೂರತ್&zwnj;ನಲ್ಲಿ ವ್ಯಕ್ತಿಯೊಬ್ಬ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿ ಆಕೆಯನ್ನು ಕೊಂದು ಮರದ ಪೆಟ್ಟಿಯೊಳಗೆ ತುಂಬಿ ಕಾಂಕ್ರೀಟ್&zwnj; ಹಾಕಿ ಮುಚ್ಚಿಟ್ಟ ಆಘಾತಕಾರಿ ಘಟನೆ ನಡೆದಿದೆ. ಆದರೆ ಮಗನಿಗೆ ಸಿಕ್ಕ ಪತ್ರದಿಂದ ಪಾಪಿಯ ಕೃತ್ಯ ಬಯಲಿಗೆ ಬಂದಿದೆ.&lt;/p&gt;&lt;p&gt;ಆಹಾರ ತಜ್ಞೆ ಶಿಲ್ಪಾ ನಾಪತ್ತೆಯಾಗಿದ್ದಾರೆ ಎಂದು ಆಕೆಯ ಪತಿ ವಿಶಾಲ್&zwnj; ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಪೊಲೀಸರು ಇದೊಂದು ಸಾಮಾನ್ಯ ನಾಪತ್ತೆ ಪ್ರಕರಣ ಎಂದೇ ಭಾವಿಸಿದ್ದರು.&lt;/p&gt;&lt;p&gt;ಆಗಿದ್ದೇನು?: ದೂರು ನೀಡಿದ ಎರಡು ದಿನಗಳ ಬಳಿಕ ವಿಶಾಲ್&zwnj; ಕೂಡಾ ನಾಪತ್ತೆಯಾಗಿದ್ದ. ಇದೇ ಮನೆಯಲ್ಲಿ ಪುತ್ರನಿಗೆ ವಿಶಾಲ್&zwnj; ಬರೆದಿಟ್ಟ ಪತ್ರವೊಂದು ಸಿಕ್ಕಿತ್ತು. ಅದರಲ್ಲಿ ಆತ ಹತ್ಯೆ ಬಗ್ಗೆ ತಪ್ಪೊಪ್ಪಿಕೊಂಡಿದ್ದ. ಅದರಲ್ಲಿ ಸಿಕ್ಕ ಮಾಹಿತಿ ಅನ್ವಯ ಸಮೀಪದ ಪಾಳು ಬಿದ್ದ ಮನೆ ಹುಡುಕಿದಾಗ ಅಲ್ಲಿ ಮರದ ಶವದ ಮೇಲೆ ಕಾಂಕ್ರೀಟ್ ಹಾಕಿ ಮುಚ್ಚಿದ್ದ ಮರದ ಪೆಟ್ಟಿಗೆ ಸಿಕ್ಕಿದೆ. ಬಳಿಕ ಹುಡುಕಾಟ ನಡೆಸಿದ ವೇಳೆ ವಿಶಾಲ್&zwnj; ಕೂಡಾ ಸಿಕ್ಕಿಬಿದ್ದಿದ್ದಾನೆ.&lt;/p&gt;]]></content:encoded>
            <category>money</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/surat-man-kills-dietitian-wife-buries-her-in-concrete-in-gujarath-rav/articleshow-ss6t37i"/>
        </item>
        <item>
            <title><![CDATA[Do Not Buy Gold: ನರೇಂದ್ರ ಮೋದಿ ಹೇಳಿದಂತೆ ಯಾಕೆ 1 ವರ್ಷ ಬಂಗಾರ ಖರೀದಿ ಮಾಡಬಾರದು? ಏನಾಗುತ್ತೆ?]]></title>
            <link>https://kannada.asianetnews.com/gallery/business/why-prime-minister-narendra-modi-asked-indians-avoid-to-buy-gold-for-one-year-reason-we8w2vk</link>
            <guid isPermaLink="true">https://kannada.asianetnews.com/gallery/business/why-prime-minister-narendra-modi-asked-indians-avoid-to-buy-gold-for-one-year-reason-we8w2vk</guid>
            <pubDate>Mon, 11 May 2026 10:37:13 +0530</pubDate>
            <description><![CDATA[&lt;p&gt;Gold Price: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷವಾದರೂ ಕೂಡ, ಗೋಲ್ಡ್&zwnj; ಖರೀದಿ ಮಾಡಬೇಡಿ ಎಂದು ಹೇಳಿದ್ದಾರೆ. ಅನೇಕರು ಗೋಲ್ಡ್&zwnj; ಖರೀದಿ ಮಾಡುತ್ತಾರೆ, ಇದನ್ನು ದೊಡ್ಡ ಮಟ್ಟದ ಹೂಡಿಕೆ ಎಂದು ಭಾವಿಸಿದ್ದಾರೆ. ಮದುವೆ ಎಂದು ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ನರೇಂದ್ರ ಮೋದಿ ಹೇಳಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krapdm5ypyzq6fd5kkf2axbc,imgname-new-project---2026-05-11t102742.851-1778475520190.jpg" type="image/jpeg" height="390" width="690"/>
            <content:encoded><![CDATA[&lt;p&gt;Gold Price: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷವಾದರೂ ಕೂಡ, ಗೋಲ್ಡ್&zwnj; ಖರೀದಿ ಮಾಡಬೇಡಿ ಎಂದು ಹೇಳಿದ್ದಾರೆ. ಅನೇಕರು ಗೋಲ್ಡ್&zwnj; ಖರೀದಿ ಮಾಡುತ್ತಾರೆ, ಇದನ್ನು ದೊಡ್ಡ ಮಟ್ಟದ ಹೂಡಿಕೆ ಎಂದು ಭಾವಿಸಿದ್ದಾರೆ. ಮದುವೆ ಎಂದು ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ನರೇಂದ್ರ ಮೋದಿ ಹೇಳಿದರು.&amp;nbsp;&lt;/p&gt;&lt;img&gt;&lt;p&gt;ಸಂಪ್ರದಾಯ, ಉಳಿತಾಯ, ಕೌಟುಂಬಿಕ ಆಚರಣೆಗಳ ಜೊತೆ ಬಂಗಾರ ಸೇರಿಕೊಂಡಿದೆ. ಹೀಗಿರುವಾಗ ನರೇಂದ್ರ ಮೋದಿ ಅವರು ಯಾಕೆ ಹೀಗೆ ಹೇಳಿದರು ಎಂಬ ಡೌಟ್&zwnj; ಕಾಡ್ತಿದೆ. ಇದರ ಹಿಂದಿರುವ ಕಾರಣ ಏನು?&lt;/p&gt;&lt;p&gt;ಇರಾನ್-ಇಸ್ರೇಲ್&zwnj; ಯುದ್ಧ ನಡೆಯುತ್ತಿದೆ. ಅಲ್ಲಿಂದ ಒಂದಿಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಪೆಟ್ರೋಲ್&zwnj; ಕೂಡ ಸಿಗೋದು ಕಷ್ಟ ಆಗಿದೆ. ಒಟ್ಟಿನಲ್ಲಿ ಜಾಗತಿಕ ಇಂಧನ ಬಿಕ್ಕಟ್ಟು ನಡೆಯುತ್ತಿದೆ. ಒಟ್ಟಿನಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು (Forex Reserves) ಮೇಲಿನ ಒತ್ತಡ, ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ರಕ್ಷಿಸಬೇಕಿದೆ.&amp;nbsp;&lt;/p&gt;&lt;img&gt;&lt;p&gt;ಪಶ್ಚಿಮ ಏಷ್ಯಾದ ಸಂಘರ್ಷ, ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಸುತ್ತಲು ಉದ್ವಿಗ್ನತೆ ಶುರುವಾಗಿದೆ. ಹೀಗಾಗಿ ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿದೆ.&lt;/p&gt;&lt;p&gt;ಕೆಲವು ವಾರಗಳಿಂದ ಪ್ರತಿ ಬ್ಯಾರೆಲ್&zwnj;ಗೆ ಜಾಗತಿಕ ಕಚ್ಚಾ ತೈಲ ಬೆಲೆಯು ಸುಮಾರು $70 ರಿಂದ ಸುಮಾರು $126 ಕ್ಕೆ ಏರಿದೆ. ಇದರಿಂದ ಭಾರತದ ಆಮದು ವೆಚ್ಚ ಹೋಗಿದೆ. ಪೆಟ್ರೋಲ್, ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ, ವಿದೇಶಿ ವಿನಿಮಯವನ್ನು ಸಂರಕ್ಷಿಸಿ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾರತದ ಪಾಲಿಗೆ ಚಿನ್ನ, ಕಚ್ಚಾ ತೈಲ ಎರಡೂ ಒಂದೇ ಆಗಿದೆ. ಇವೆರಡನ್ನೂ ಹೆಚ್ಚಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ, ಅದನ್ನು ಯುಎಸ್ ಡಾಲರ್&zwnj;ಗಳಲ್ಲಿ ಕೊಡಲಾಗುತ್ತದೆ. ಭಾರತಕ್ಕೆ ಎಷ್ಟು ತೈಲ ಬೇಕೋ ಅದರಲ್ಲಿ, ಸುಮಾರು 85% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ, ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರರಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.&lt;/p&gt;&lt;p&gt;ಪೆಟ್ರೋಲ್&zwnj;, ಡಿಸೇಲ್ ಬೆಲೆ ಹೆಚ್ಚಾದಾಗ, ಚಿನ್ನದ ಆಮದು ಕೂಡ ಹೆಚ್ಚಾಗಿದ್ದಾಗ, ಭಾರತಕ್ಕೆ ಇದನ್ನೆಲ್ಲ ಆಮದು ಪಾವತಿ ಮಾಡಲು ಹೆಚ್ಚಿನ ಡಾಲರ್&zwnj;ಗಳು ಬೇಕು. ಇದರಿಂದ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್&zwnj; ಬೇಡಿಕೆ ಹೆಚ್ಚುವುದು, ರೂಪಾಯಿ ಮೌಲ್ಯದ ಮೇಲೆ ಒತ್ತಡ ಹೇರುತ್ತದೆ.&lt;/p&gt;&lt;img&gt;&lt;p&gt;ಅರ್ಥಶಾಸ್ತ್ರಜ್ಞರದ ಪ್ರಕಾರ, ಚಿನ್ನವು ಸಾಮಾನ್ಯ ಗ್ರಾಹಕ ಉತ್ಪನ್ನವಲ್ಲ. ಚಿನ್ನದ ಆಮದನ್ನು ಹೆಚ್ಚಾಗಿ ಐಚ್ಛಿಕ ಖರ್ಚು ಅಥವಾ ಉಳಿತಾಯದ ಬೇಡಿಕೆ ಎನ್ನಲಾಗುವುದು. ಯುದ್ಧದ ಟೈಮ್&zwnj;ನಲ್ಲಿ ಚಿನ್ನವನ್ನು ಖರೀದಿ ಮಾಡಿದರೆ, ದೇಶದಿಂದ ಹೆಚ್ಚಿನ ಡಾಲರ್&zwnj;ಗಳು ಹೊರಹೋಗುತ್ತವೆ. ಇದು ಭಾರತದ ಚಾಲ್ತಿ ಖಾತೆ ಕೊರತೆಯನ್ನು (Current Account Deficit) ಹೆಚ್ಚಿಸಬಹುದು. ಇದರಿಂದ ರೂಪಾಯಿ ಮೌಲ್ಯ ಕುಂಠಿತವಾಗುತ್ತದೆ.&lt;/p&gt;&lt;img&gt;&lt;p&gt;ಇಂಥ ಟೈಮ್&zwnj;ನಲ್ಲಿ ಚಿನ್ನದ ಆಮದು ಕಡಿಮೆ ಮಾಡಲು ಭಾರತವು, ಭಾರತದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿವೆ, ಆಮದಿನ ಮೇಲೆ ನಿರ್ಬಂಧ ಹೇರಿವೆ, ಸಾವರಿನ್ ಗೋಲ್ಡ್ ಬಾಂಡ್&zwnj;ಗಳನ್ನು ಹೆಚ್ಚು ಮಾಡಿವೆ. ಇದರಿಂದ ವಿದೇಶಿ ವಿನಿಮಯ ಮೀಸಲು ಮೇಲಿನ ಒತ್ತಡ ಕಡಿಮೆ ಮಾಡುವುದು, ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲಾಗುವುದು.&lt;/p&gt;&lt;img&gt;&lt;p&gt;ಒಂದು ಕುಟುಂಬವು ಮದುವೆಗಾಗಿ ಆಭರಣ ಖರೀದಿಯನ್ನು ಮುಂದೂಡಿದೆ, ಇದರಿಂದ ರೂಪಾಯಿ ಮೌಲ್ಯ ಬದಲಾಗುವುದಿಲ್ಲ. ಆದರೆ ಅರ್ಥಶಾಸ್ತ್ರಜ್ಞರು ಒಂದೊಂದು ಕುಟುಂಬ ಎಂದುಕೊಂಡರೂ ಕೂಡ, ನೂರಾರು ಕುಟುಂಬಗಳು ಇದೇ ನಿರ್ಧಾರ ಕೈಗೊಂಡರೆ ಡಾಲರ್&zwnj; ಮೌಲ್ಯ ಕುಸಿಯೋದಿಲ್ಲ. ಮದುವೆಗೆ ಅಥವಾ ಮುಂದಿನ ದಿನಗಳಲ್ಲಿ ಬಂಗಾರದ ರೇಟ್&zwnj; ಹೆಚ್ಚಾಗುತ್ತದೆ ಎಂದು ಖರೀದಿ ಮಾಡುವವರು ಜಾಸ್ತಿ.&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/why-prime-minister-narendra-modi-asked-indians-avoid-to-buy-gold-for-one-year-reason-we8w2vk"/>
        </item>
        <item>
            <title><![CDATA[ಪಿಎಫ್ ಹಣಕ್ಕಾಗಿ ಇನ್ನು ಎಚ್‌ಆರ್ ಹಿಂದೆ ಅಲೆಯಬೇಕಿಲ್ಲ: ಆಧಾರ್ ಇದ್ದರೆ ಸಾಕು, ಹಳೆಯ ಖಾತೆಯ ಹಣ ನಿಮ್ಮ ಜೇಬಿಗೆ!]]></title>
            <link>https://kannada.asianetnews.com/business/epfo-e-praapti-portal-reclaim-old-inactive-provident-fund-money-online-san/articleshow-xt7b1bl</link>
            <guid isPermaLink="true">https://kannada.asianetnews.com/business/epfo-e-praapti-portal-reclaim-old-inactive-provident-fund-money-online-san/articleshow-xt7b1bl</guid>
            <pubDate>Thu, 30 Apr 2026 13:28:31 +0530</pubDate>
            <description><![CDATA[ಹಲವು ಕಂಪನಿಗಳಲ್ಲಿ ಕೆಲಸ ಬದಲಿಸಿದವರಿಗೆ ತಮ್ಮ ಹಳೆಯ, ನಿಷ್ಕ್ರಿಯ ಪಿಎಫ್ ಖಾತೆಗಳನ್ನು ಪತ್ತೆಹಚ್ಚಲು EPFO 'ಇ-ಪ್ರಾಪ್ತಿ' ಎಂಬ ಹೊಸ ಪೋರ್ಟಲ್ ಅನ್ನು ಪರಿಚಯಿಸಿದೆ. ಈ ಆಧಾರ್ ಆಧಾರಿತ ವ್ಯವಸ್ಥೆಯು ಯುಎಎನ್ ಇಲ್ಲದಿದ್ದರೂ ಸಹ, ಹಳೆಯ ಖಾತೆಗಳಿಂದ ಹಣವನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kag7aka8tb0mnzmdh23tsbtg,imgname-epfo-1763628633416.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.30): &lt;/strong&gt;ನೀವು ಹಲವಾರು ಕಂಪನಿಗಳಲ್ಲಿ ಕೆಲಸ ಬದಲಿಸಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಹಳೆಯ ಭವಿಷ್ಯ ನಿಧಿ (PF) ಖಾತೆಯಲ್ಲಿ ಹಣ ಹಾಗೆಯೇ ಉಳಿದಿರುವ ಸಾಧ್ಯತೆ ಹೆಚ್ಚಿದೆ. ಈವರೆಗೆ ಹಳೆಯ, ನಿಷ್ಕ್ರಿಯ ಖಾತೆಗಳಿಂದ ಹಣ ಪಡೆಯುವುದು ಅಥವಾ ಅವುಗಳನ್ನು ಪತ್ತೆಹಚ್ಚುವುದು ತೀರಾ ಸಂಕೀರ್ಣವಾಗಿತ್ತು. ಆದರೆ ಈಗ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಈ ಸಮಸ್ಯೆಗೆ ಮುಕ್ತಿ ನೀಡಲು ಸಜ್ಜಾಗಿದೆ. ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರು 'ಇ-ಪ್ರಾಪ್ತಿ' (E-PRAAPTI) ಎಂಬ ಹೊಸ ಪೋರ್ಟಲ್ ಅನ್ನು ಘೋಷಿಸಿದ್ದಾರೆ. ಇದು ಹಳೆಯ ಅಥವಾ ನಿಷ್ಕ್ರಿಯವಾಗಿರುವ ಪಿಎಫ್ ಖಾತೆಗಳನ್ನು ಪತ್ತೆಹಚ್ಚಲು ಮತ್ತು ಸಕ್ರಿಯಗೊಳಿಸಲು ಉದ್ಯೋಗಿಗಳಿಗೆ ನೆರವಾಗಲಿದೆ.&lt;/p&gt;&lt;h2&gt;&lt;strong&gt;ಇದು ನಿಮಗೆ ಏಕೆ ಮುಖ್ಯ?&lt;/strong&gt;&lt;/h2&gt;&lt;p&gt;ಭಾರತದ ಸಂಬಳ ಪಡೆಯುವ ವರ್ಗಕ್ಕೆ ಪಿಎಫ್ ಅತಿ ದೊಡ್ಡ ದೀರ್ಘಾವಧಿಯ ಉಳಿತಾಯವಾಗಿದೆ. ಆದರೆ ವರ್ಷಗಳು ಉರುಳಿದಂತೆ, ಕೆಲಸ ಬದಲಾದಾಗ ಹಳೆಯ ಖಾತೆಗಳ ಲಿಂಕ್ ತಪ್ಪುತ್ತದೆ.ಕೆಲವು ಕಂಪನಿಗಳು ಮುಚ್ಚಿಹೋಗುತ್ತವೆ. ಹಳೆಯ ಪಿಎಫ್ ಐಡಿಗಳು ಮರೆತುಹೋಗುತ್ತವೆ. ಯುಎಎನ್ (UAN) ಸಂಖ್ಯೆಗೆ ಹಳೆಯ ಖಾತೆಗಳು ಜೋಡಣೆಯಾಗಿರುವುದಿಲ್ಲ. ಇದರ ಪರಿಣಾಮವಾಗಿ, ನಿಮ್ಮ ಕಷ್ಟದ ದುಡಿಮೆಯ ಸಾವಿರಾರು ಅಥವಾ ಲಕ್ಷಾಂತರ ರೂಪಾಯಿ ಹಣ ಪಿಎಫ್ ಖಾತೆಯಲ್ಲಿ ಸುಮ್ಮನೆ ಬಿದ್ದಿರುತ್ತದೆ. ಇದನ್ನು ಸುಲಭವಾಗಿ ಹಿಂಪಡೆಯುವುದೇ ಈ ಪೋರ್ಟಲ್&zwnj;ನ ಮುಖ್ಯ ಉದ್ದೇಶ.&lt;/p&gt;&lt;h2&gt;&lt;strong&gt;ಏನಿದು ಇ-ಪ್ರಾಪ್ತಿ? ಇದರಿಂದ ಆಗುವ ಲಾಭಗಳೇನು?&lt;/strong&gt;&lt;/h2&gt;&lt;p&gt;E-PRAAPTI (Employee Provident Fund Aadhaar-Based Access Portal for Tracking Inoperative Accounts) ಎಂಬುದು ಆಧಾರ್ ಆಧಾರಿತ ಡಿಜಿಟಲ್ ವ್ಯವಸ್ಥೆಯಾಗಿದೆ.&lt;/p&gt;&lt;h2&gt;&lt;strong&gt;ಈ ಪೋರ್ಟಲ್ ಮೂಲಕ ನೀವು ಏನೇನು ಮಾಡಬಹುದು?&lt;/strong&gt;&lt;/h2&gt;&lt;ul&gt; &lt;li&gt;ಹಳೆಯ ಅಥವಾ ನಿಷ್ಕ್ರಿಯ ಪಿಎಫ್ ಖಾತೆಗಳನ್ನು ಪತ್ತೆಹಚ್ಚಬಹುದು.&lt;/li&gt; &lt;li&gt;ಯುಎಎನ್ (UAN) ಸಂಖ್ಯೆ ಇಲ್ಲದಿದ್ದರೂ ಹಳೆಯ ಖಾತೆಗಳನ್ನು ಪ್ರವೇಶಿಸಬಹುದು.&lt;/li&gt; &lt;li&gt;ದಾಖಲೆಗಳಿಗಾಗಿ ಅಲೆಯುವ ಬದಲು ಆಧಾರ್ ಆಧಾರಿತ ದೃಢೀಕರಣ ಬಳಸಬಹುದು.&lt;/li&gt; &lt;li&gt;ನಿಮ್ಮ ಯುಎಎನ್ ಸಂಖ್ಯೆಯನ್ನು ಹಳೆಯ ಖಾತೆಗೆ ಲಿಂಕ್ ಮಾಡಬಹುದು ಮತ್ತು ಸಕ್ರಿಯಗೊಳಿಸಬಹುದು.&lt;/li&gt; &lt;li&gt;ನಿಮ್ಮ ಪ್ರೊಫೈಲ್ ಅನ್ನು ಸುಲಭವಾಗಿ ಅಪ್&zwnj;ಡೇಟ್ ಮಾಡಬಹುದು.&lt;/li&gt;&lt;/ul&gt;&lt;h2&gt;&lt;strong&gt;ವೇಗವಾಗಿ ಬದಲಾಗುತ್ತಿದೆ ಇಪಿಎಫ್&zwnj;ಒ&lt;/strong&gt;&lt;/h2&gt;&lt;p&gt;ಪಿಎಫ್ ಹಣ ವಿಲೇವಾರಿ ಪ್ರಕ್ರಿಯೆಯು ಈಗ ಹಿಂದೆಂದಿಗಿಂತಲೂ ವೇಗವಾಗಿದೆ. ಅಂಕಿಅಂಶಗಳ ಪ್ರಕಾರ:&lt;/p&gt;&lt;ul&gt; &lt;li&gt;2025-26ರ ಆರ್ಥಿಕ ವರ್ಷದಲ್ಲಿ 8.31 ಕೋಟಿ ಕ್ಲೈಮ್&zwnj;ಗಳ ಇತ್ಯರ್ಥ (ಹಿಂದಿನ ವರ್ಷ 6.01 ಕೋಟಿ ಇತ್ತು).&lt;/li&gt; &lt;li&gt;ಶೇ. 71.11 ರಷ್ಟು ಮುಂಗಡ ಹಣದ ಅರ್ಜಿಗಳು ಕೇವಲ 3 ದಿನಗಳಲ್ಲಿ ಪೂರ್ಣಗೊಂಡಿವೆ.&lt;/li&gt; &lt;li&gt;ಶೇ. 98.7 ರಷ್ಟು ಅರ್ಜಿಗಳು 20 ದಿನಗಳ ಒಳಗೆ ಇತ್ಯರ್ಥವಾಗಿವೆ.&lt;/li&gt; &lt;li&gt;ಏಪ್ರಿಲ್ 2026 ಒಂದೇ ತಿಂಗಳಲ್ಲಿ 61.03 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಇದರಲ್ಲಿ ಶೇ. 74 ರಷ್ಟು ಅರ್ಜಿಗಳು ತಂತಾನೇ (Automatic) ಪ್ರಕ್ರಿಯೆಗೊಂಡಿವೆ.&lt;/li&gt;&lt;/ul&gt;&lt;h2&gt;&lt;strong&gt;ಕಡಿಮೆ ಕಾಗದದ ಕೆಲಸ - ಹೆಚ್ಚಿನ ನಿಯಂತ್ರಣ:&lt;/strong&gt;&lt;/h2&gt;&lt;p&gt;ಈಗ ಪಿಎಫ್ ಕೆಲಸಗಳಿಗಾಗಿ ಕಂಪನಿಯ ಎಚ್&zwnj;ಆರ್ (HR) ಅಥವಾ ಕಾಗದದ ದಾಖಲೆಗಳ ಮೇಲೆ ಅವಲಂಬಿತವಾಗುವುದು ತಪ್ಪುತ್ತಿದೆ:&lt;/p&gt;&lt;ul&gt; &lt;li&gt;6.68 ಕೋಟಿ ಸದಸ್ಯರು ಚೆಕ್ ಪ್ರತಿ ಅಪ್&zwnj;ಲೋಡ್ ಮಾಡದೆಯೇ ಹಣ ಪಡೆದಿದ್ದಾರೆ.&lt;/li&gt; &lt;li&gt;1.59 ಕೋಟಿ ಸದಸ್ಯರು ಉದ್ಯೋಗದಾತರ ಅನುಮೋದನೆ ಇಲ್ಲದೆಯೇ ಬ್ಯಾಂಕ್ ಖಾತೆ ಲಿಂಕ್ ಮಾಡಿದ್ದಾರೆ.&lt;/li&gt; &lt;li&gt;29.34 ಲಕ್ಷ ಬಳಕೆದಾರರು ತಮ್ಮ ವೈಯಕ್ತಿಕ ವಿವರಗಳನ್ನು ತಾವೇ ಸರಿಪಡಿಸಿಕೊಂಡಿದ್ದಾರೆ.&lt;/li&gt;&lt;/ul&gt;&lt;h2&gt;&lt;strong&gt;ಪೋರ್ಟಲ್ ಲಾಂಚ್ ಆಗುವ ಮುನ್ನ ಈ ತಯಾರಿ ಮಾಡಿಕೊಳ್ಳಿ&lt;/strong&gt;&lt;/h2&gt;&lt;ul&gt; &lt;li&gt;ನಿಮ್ಮ ಎಲ್ಲಾ ಹಳೆಯ ಕೆಲಸಗಳ ವಿವರಗಳು ಪ್ರಸ್ತುತ ಯುಎಎನ್ ಸಂಖ್ಯೆಗೆ ಲಿಂಕ್ ಆಗಿವೆಯೇ ಎಂದು ಪರಿಶೀಲಿಸಿ.&lt;/li&gt; &lt;li&gt;ನಿಮ್ಮ ಆಧಾರ್ ಮತ್ತು ಬ್ಯಾಂಕ್ ವಿವರಗಳು ಸರಿಯಾಗಿ ಅಪ್&zwnj;ಡೇಟ್ ಆಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.&lt;/li&gt; &lt;li&gt;ಹಳೆಯ ಕಂಪನಿಗಳ ಪಿಎಫ್ ಐಡಿ ಅಥವಾ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳಿ.&lt;/li&gt;&lt;/ul&gt;&lt;p&gt;&amp;nbsp;&lt;/p&gt;]]></content:encoded>
            <category>money</category>
            <dc:creator>Santosh Naik</dc:creator>
            <atom:link href="https://kannada.asianetnews.com/business/epfo-e-praapti-portal-reclaim-old-inactive-provident-fund-money-online-san/articleshow-xt7b1bl"/>
        </item>
        <item>
            <title><![CDATA[Zoho CEO Sridhar Vembu: ವಿದೇಶದಲ್ಲಿರುವ ಭಾರತೀಯರೇ ತಾಯ್ನಾಡು ಕಟ್ಟಲು ಬನ್ನಿ!]]></title>
            <link>https://kannada.asianetnews.com/india-news/dear-overseas-indians-it-s-time-to-give-back-help-shape-the-future-of-your-motherland-rav/articleshow-yeqqorq</link>
            <guid isPermaLink="true">https://kannada.asianetnews.com/india-news/dear-overseas-indians-it-s-time-to-give-back-help-shape-the-future-of-your-motherland-rav/articleshow-yeqqorq</guid>
            <pubDate>Tue, 28 Apr 2026 08:24:16 +0530</pubDate>
            <description><![CDATA[&lt;p&gt;ಝೋಹೋ ಸಂಸ್ಥಾಪಕ ಶ್ರೀಧರ್&zwnj; ವೆಂಬು ಅವರು ಅಮೆರಿಕದಲ್ಲಿ ಬದಲಾಗುತ್ತಿರುವ ಪರಿಸ್ಥಿತಿ ಮತ್ತು ಭಾರತೀಯರ ಮೇಲಿನ ಮನೋಭಾವವನ್ನು ವಿವರಿಸುತ್ತಾರೆ. ಅಮೆರಿಕದಲ್ಲಿರುವ ಭಾರತೀಯ ಪ್ರತಿಭೆಗಳು ತಾಯ್ನಾಡಿಗೆ ಹಿಂತಿರುಗಿ ದೇಶ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಅವರು ಮನವಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq8zv6gk7jqgzztm8m5yjm32,imgname--------------------------------28--1777344551443.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀಧರ್&zwnj; ವೆಂಬು&lt;/strong&gt;&lt;/p&gt;&lt;p&gt;ಝೋಹೋ ಸಂಸ್ಥಾಪಕ, ಸಿಇಒ&lt;/p&gt;&lt;p&gt;37 ವರ್ಷಗಳ ಹಿಂದೆ ನಾನು ಮಾಡಿದಂತೆ, ನೀವು ಕೂಡ ಅಮೆರಿಕಕ್ಕೆ ಬಂದಿರಿ. ಆಗ ನಿಮ್ಮ ಬಳಿ ಹಣ ಇರಲಿಲ್ಲ. ಬದಲಿಗೆ ಇದ್ದುದು ಭಾರತದಲ್ಲಿ ಪಡೆದ ಉತ್ತಮ ಶಿಕ್ಷಣ ಮತ್ತು ಸಾಂಸ್ಕೃತಿಕ ಪರಂಪರೆ. ಬಳಿಕ ಅಮೆರಿಕದಲ್ಲಿ ನೆಲೆಸಿ ನೀವೆಲ್ಲಾ ಅತ್ಯುತ್ತಮ ಸಾಧನೆ ಮಾಡಿ, ಯಶಸ್ಸನ್ನು ಗಳಿಸಿದಿರಿ. ಅಮೆರಿಕ ನಮಗೆ ಇದಕ್ಕೆಲ್ಲಾ ಅನುಕೂಲ ಮಾಡಿಕೊಟ್ಟಿತು. ಈ ಉಪಕಾರಕ್ಕಾಗಿ ನಾವು ಆ ದೇಶಕ್ಕೆ ಕೃತಜ್ಞರಾಗಿರಬೇಕು. ಕಾರಣ, ಕೃತಜ್ಞತೆ ನಮ್ಮ ಭಾರತೀಯ ತತ್ವ.&lt;/p&gt;&lt;h2&gt;ಬದಲಾದ ಸ್ಥಿತಿ:&lt;/h2&gt;&lt;p&gt;ಆದರೆ ಇಂದು ಈ ಪರಿಸ್ಥಿತಿ ಅಲ್ಲಿಲ್ಲ. ಎಲ್ಲಾ ಅಮೆರಿಕನ್ನರು ಅಲ್ಲದಿದ್ದರೂ ಒಂದಿಷ್ಟು ಮಂದಿ, &lsquo;ಭಾರತೀಯರು ಬಂದು ಅಮೆರಿಕನ್ನರ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಾರೆ&rsquo; ಎಂದು ಭಾವಿಸುತ್ತಿದ್ದಾರೆ. ಜತೆಗೆ, ಅಮೆರಿಕದಲ್ಲಿ ನಮಗೆ ಸಿಕ್ಕಿದ ಯಶಸ್ಸನ್ನು ಅನ್ಯಾಯವಾಗಿ ಗಳಿಸಲಾಗಿದ್ದು ಎಂಬುದು ಅವರ ವಾದವಾಗಿದೆ.&lt;/p&gt;&lt;p&gt;ಮುಂದಿನ ಚುನಾವಣೆಯವರೆಗೆ ಇದನ್ನು ತಡೆದುಕೊಂಡಿದ್ದರೆ, ಬಳಿಕ ಇಂತಹ ಮನಃಸ್ಥಿತಿ ಬದಲಾಗಬಹುದು ಎಂದು ನೀವು ಭಾವಿಸಬಹುದು. ಆದರೆ ಆಗ ನೀವು, ಭಾರತೀಯ ನಾಗರಿಕತೆಯನ್ನು ದ್ವೇಷಿಸುವ ಜನರು ಮತ್ತು ನಾಗರಿಕತೆಯ ಬಗ್ಗೆಯೇ ಹಗೆತನ ಹೊಂದಿರುವ ಜನರ ನಡುವೆ ಆಯ್ಕೆ ಮಾಡಬೇಕಾಗಿ ಬರುತ್ತದೆ. ಅದು ಕಠಿಣ ಬಲಪಂಥೀಯವಾದ ಮತ್ತು ಎಡಪಂಥೀಯವಾದದ ನಡುವಿನ ಯುದ್ಧವಾಗಿರುತ್ತದೆ. ಆ ಸಂಘರ್ಷಕ್ಕೆ ನೀವು ಕೇವಲ ಪ್ರೇಕ್ಷಕರಾಗಿ ಉಳಿಯುತ್ತೀರಿ.&lt;/p&gt;&lt;h3&gt;ದೇಶದ ಸ್ಥಿತಿಯಿಂದ ಗೌರವ ನಿರ್ಧಾರ:&lt;/h3&gt;&lt;p&gt;ಸಾರ್ವಕಾಲಿಕ ಸತ್ಯವೊಂದಿದೆ. ಅದೇನೆಂದರೆ, ವಿಶ್ವಾದ್ಯಂತ ಭಾರತೀಯರಿಗೆ ಲಭಿಸುವ ಗೌರವವು, ಭಾರತದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ದೇಶದ ಸ್ಥಿತಿ ಉತ್ತಮವಾಗಿದ್ದರೆ ಮಾತ್ರ ಅದರ ಪ್ರಜೆಗಳಿಗೆ ವಿದೇಶಗಳಲ್ಲಿ ಗೌರವ. ಇಲ್ಲದಿದ್ದರೆ ಇಲ್ಲ. ಭಾರತವು ಬಡ ರಾಷ್ಟ್ರವಾಗಿ ಉಳಿದರೆ, ಎಡಪಂಥೀಯರು ನಮಗೆ ಉಪನ್ಯಾಸ ನೀಡಲು ಬರುತ್ತಾರೆ. ಅತ್ತ ಬಲಪಂಥೀಯರು ತಿರಸ್ಕಾರದಿಂದ ಕಾಣುತ್ತಾರೆ. ಈ ವಿಷಯ ಮಾತಾಡುವಾಗ, ಇತ್ತೀಚೆಗೆ ಭಾರತವನ್ನು ನರಕಕೂಪ ಎಂದು ಕರೆದದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಪ್ರತಿಪಾದಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಜತೆಗೆ ಅವರು ಸಹ ತಮ್ಮದೇ ಆದ ಬುದ್ಧಿವಾದವನ್ನು ಹೇಳುತ್ತಾರೆ. ನಾವು ಇವೆರಡನ್ನೂ ಗೌರವ ಎಂದು ಭಾವಿಸುವ ತಪ್ಪು ಮಾಡಬಾರದು.&lt;/p&gt;&lt;p&gt;&lt;strong&gt;ತಂತ್ರಜ್ಞಾನದ ಶಕ್ತಿ:&lt;/strong&gt;&lt;/p&gt;&lt;p&gt;ಇಂದಿನ ಜಗತ್ತಿನಲ್ಲಿ ನಮಗೆ ಗೌರವ ಸಿಗಲು ದೇಶವು ಸಮೃದ್ಧ ಹಾಗೂ ಭದ್ರವಾಗಿರುವ ಜೊತೆಗೆ ತಾಂತ್ರಿಕವಾಗಿಯೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ. ಆ ಪಾರಮ್ಯವನ್ನು ಸಾಧಿಸಲು ಬೇಕಾಗುವಷ್ಟು ಬುದ್ಧಿವಂತಿಕೆ ಭಾರತದಲ್ಲಿ ಸಾಕಷ್ಟಿದೆ. ಆದರೆ ದುರದೃಷ್ಟವಶಾತ್ ನಾವು ಆ ಪ್ರತಿಭೆಯ ಬಹುಭಾಗವನ್ನು ವಿದೇಶಗಳಿಗೆ ಧಾರೆ ಎರೆದು ಕೊಡುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಅಮೆರಿಕಕ್ಕೆ ಬಹುಪಾಲನ್ನು ರಫ್ತು ಮಾಡಿದ್ದೇವೆ. ಹೀಗೆ ಮಾಡುವ ಬದಲು, ಭಾರತದಲ್ಲೇ ತಾಂತ್ರಿಕ ಸಾಮರ್ಥ್ಯವನ್ನು ಬೆಳೆಸಿಕೊಂಡು ನಮ್ಮಲ್ಲೇ ಅದನ್ನು ಉಳಿಸಿಕೊಂಡರೆ, ಭಾರತದ ಆಳವಾದ, ಪ್ರಾಚೀನ, ಶಕ್ತಿಶಾಲಿ ಸಂಸ್ಕೃತಿ ಮತ್ತು ನಾಗರಿಕತೆಯು ಭವಿಷ್ಯದಲ್ಲಿ ಸ್ವಾಭಾವಿಕವಾಗಿಯೇ ಅಭಿವೃದ್ಧಿಯಾಗುತ್ತದೆ ಹಾಗೂ ತನ್ನ ಶಕ್ತಿಯನ್ನು ಮತ್ತೆ ಜಗತ್ತಿನೆದುರು ಅನಾವರಣ ಮಾಡುತ್ತದೆ&lt;/p&gt;&lt;p&gt;&lt;strong&gt;ತಾಯ್ನಾಡಿಗೆ ಬನ್ನಿ:&lt;/strong&gt;&lt;/p&gt;&lt;p&gt;ಅಮೆರಿಕ ಸೇರಿದಂತೆ ವಿದೇಶಗಳ ಆರಾಮದಾಯಕ ಜೀವನಕ್ಕೆ ಒಗ್ಗಿಕೊಂಡಿರುವ ಬಹುತೇಕರಿಗೆ ನನ್ನ ಮನವಿಯ ಬಗ್ಗೆ ಯೋಚಿಸುವುದು ಕೂಡ ಕಷ್ಟಕರವಾಗಬಹುದು. ಆದರೂ ದಯವಿಟ್ಟು ತವರಿಗೆ ಹಿಂತಿರುಗಿ. ಭಾರತ ಮಾತೆಗೆ ನಿಮ್ಮ ಪ್ರತಿಭೆಯ ಅಗತ್ಯವಿದೆ. ನೀವು ಇಷ್ಟು ವರ್ಷ ಪರಕೀಯರ ನಾಡಿಗೆ ಹೋಗಿ ಸಂಪಾದಿಸಿರುವ ತಂತ್ರಜ್ಞಾನ ನಾಯಕತ್ವದ ಆವಶ್ಯಕತೆಯು ನಮ್ಮ ಯುವ ಜನತೆಗೆ ಇದೆ. ಅವರಿಗೆ ಸಮೃದ್ಧಿಯತ್ತ ಮಾರ್ಗದರ್ಶನ ನೀಡಲು ಇದು ಅತ್ಯಗತ್ಯ. ಈ ಕೆಲಸವನ್ನು ನಾವೆಲ್ಲಾ ಅತ್ಯುತ್ಸಾಹದಿಂದ ಮಾಡೋಣ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೇ, ದಯವಿಟ್ಟು ಭಾರತಕ್ಕೆ ಬನ್ನಿ. ತಾಯ್ನಾಡನ್ನು ಕಟ್ಟುವ ಕೆಲಸ ನಿಮ್ಮ ಬರುವಿಕೆಯನ್ನು ಎದುರುನೋಡುತ್ತಿದೆ.&lt;/p&gt;]]></content:encoded>
            <category>money</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/dear-overseas-indians-it-s-time-to-give-back-help-shape-the-future-of-your-motherland-rav/articleshow-yeqqorq"/>
        </item>
    </channel>
</rss>
