<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 24 Jun 2026 17:44:07 +0530</lastBuildDate>
        <atom:link href="https://kannada.asianetnews.com/rss/money" rel="self" type="application/rss+xml"/>
        <item>
            <title><![CDATA[ಶಿವಂ ಅಸೋಸಿಯೇಟ್ಸ್ ಅಕ್ರಮ ಹಣದಲ್ಲಿ ಸನ್ನಿ ಲಿಯೋನ್‌ ಮಾತ್ರವಲ್ಲ, ಇನ್ನೂ 4 ಕನ್ನಡದ ನಟ-ನಟಿಯರಿಗೆ ಪಾಲು?!]]></title>
            <link>https://kannada.asianetnews.com/sandalwood/shivam-associates-fraud-network-widens-not-just-sunny-leone-and-names-of-other-four-kannada-stars-are-linked-to-case/articleshow-13wndv7</link>
            <guid isPermaLink="true">https://kannada.asianetnews.com/sandalwood/shivam-associates-fraud-network-widens-not-just-sunny-leone-and-names-of-other-four-kannada-stars-are-linked-to-case/articleshow-13wndv7</guid>
            <pubDate>Wed, 10 Jun 2026 13:45:47 +0530</pubDate>
            <description><![CDATA[&lt;p&gt;ಬಡವರ ರಕ್ತ ಹೀರಿ ಕಟ್ಟಿದ ಈ 2,400 ಕೋಟಿ ರೂಪಾಯಿಗಳ ಸಾಮ್ರಾಜ್ಯ ಈಗ ಬುಡಮೇಲಾಗುತ್ತಿದೆ. ಸಿಐಡಿ ಅಧಿಕಾರಿಗಳು ದಾಖಲೆಗಳ ಬೆನ್ನತ್ತಿದ್ದು, ಚಿತ್ರರಂಗದ ಗಣ್ಯರು ಈ ವಂಚನೆಯ ಜಾಲದಲ್ಲಿ ಎಷ್ಟು ಆಳಕ್ಕೆ ಸಿಲುಕಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktr9038dp56htxv68vgrbhn1,imgname-shivananda-neelannavar-sunny-leone--1--1781078691085.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳ್ಳಿತೆರೆಯ ವರ್ಣರಂಜಿತ ಲೋಕದ ಹಿಂದೆ ಕೆಲವೊಮ್ಮೆ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಕರಾಳ ರಹಸ್ಯಗಳು ಅಡಗಿರುತ್ತವೆ. ಈಗ ಸ್ಯಾಂಡಲ್&zwnj;ವುಡ್ ಮತ್ತು ಬಾಲಿವುಡ್ ಎರಡನ್ನೂ ನಡುಗಿಸುತ್ತಿರುವ ಒಂದು ಬ್ರೇಕಿಂಗ್ ನ್ಯೂಸ್ ಎಂದರೆ ಅದು ಬೆಳಗಾವಿ ಮೂಲದ 'ಶಿವಂ ಅಸೋಸಿಯೇಟ್ಸ್' (Shivam Associates) ನಡೆಸಿದ ಬರೋಬ್ಬರಿ 2,400 ಕೋಟಿ ರೂಪಾಯಿಗಳ ಬೃಹತ್ ವಂಚನೆ ಜಾಲ! ಈ ಹಗರಣದ ತನಿಖೆ ಈಗ ಸಿನಿಮಾ ಗ್ಲಾಮರ್&zwnj;ನ ಹೊಳಪನ್ನು ಮಂಕಾಗಿಸಿದೆ.&lt;/p&gt;&lt;p&gt;&lt;strong&gt;ಒಂದು ಐಟಂ ಸಾಂಗ್, ಒಂದು ಕೋಟಿ ಸಂಭಾವನೆ!&lt;/strong&gt;&lt;/p&gt;&lt;p&gt;ಈ ಕಥೆಯ ಅಸಲಿ ಟ್ವಿಸ್ಟ್ ಶುರುವಾಗುವುದು ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಎಂಟ್ರಿಯೊಂದಿಗೆ. 2023ರಲ್ಲಿ ಬಿಡುಗಡೆಯಾದ 'ಚಾಂಪಿಯನ್' ಎಂಬ ಕನ್ನಡ ಸಿನಿಮಾದಲ್ಲಿ ಸನ್ನಿ ಲಿಯೋನ್ ಒಂದು ಸ್ಪೆಷಲ್ ಐಟಂ ಸಾಂಗ್&zwnj;ಗೆ ಹೆಜ್ಜೆ ಹಾಕಿದ್ದರು. ಕೇವಲ ಒಂದು ಹಾಡಿಗೆ ಅವರಿಗೆ ನೀಡಲಾದ ಸಂಭಾವನೆ ಎಷ್ಟು ಗೊತ್ತೇ? ಬರೋಬ್ಬರಿ 1 ಕೋಟಿ ರೂಪಾಯಿ! ಆದರೆ, ಈಗ ಸಿಐಡಿ ಅಧಿಕಾರಿಗಳು ಬಿಚ್ಚಿಟ್ಟಿರುವ ಸತ್ಯವೇನೆಂದರೆ, ಈ ಹಣ ಜನಸಾಮಾನ್ಯರು ಬೆವರು ಸುರಿಸಿ ದುಡಿದು ಇಟ್ಟಿದ್ದ ಠೇವಣಿ ಹಣವಾಗಿತ್ತು. ಅಕ್ರಮ ಹಣವನ್ನು ಸಿನಿಮಾ ರಂಗದಲ್ಲಿ ವೈಟ್ ಮಾಡಿಕೊಳ್ಳಲು ಈ ದಾರಿಯನ್ನು ಬಳಸಲಾಗಿತ್ತೇ ಎಂಬ ಅನುಮಾನ ಈಗ ದಟ್ಟವಾಗಿದೆ. ಈ ವ್ಯವಹಾರದ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಸಿಐಡಿ ಈಗಾಗಲೇ ಸನ್ನಿ ಲಿಯೋನ್&zwnj;ಗೆ ನೋಟಿಸ್ ಜಾರಿ ಮಾಡಿದೆ.&lt;/p&gt;&lt;h2&gt;ಬೆಳಗಾವಿಯಿಂದ ಶುರುವಾದ ಮಾಸ್ಟರ್ ಪ್ಲಾನ್!&lt;/h2&gt;&lt;p&gt;ಶಿವಾನಂದ ನೀಲಣ್ಣನವರ್ ಎಂಬ ವ್ಯಕ್ತಿಯ ಮಾಲೀಕತ್ವದ 'ಶಿವಂ ಅಸೋಸಿಯೇಟ್ಸ್' ಎಂಬ ಸಂಸ್ಥೆ, ಜನರಿಗೆ ಆಕರ್ಷಕ ಬಡ್ಡಿ ಮತ್ತು ಲಾಭದ ಆಸೆ ತೋರಿಸಿ ಬಲೆ ಬೀಸಿತ್ತು. ಯಾವುದೇ ಸರ್ಕಾರಿ ಅನುಮತಿಯಿಲ್ಲದೆ ಅಕ್ರಮವಾಗಿ ಸುಮಾರು 40,700 ಜನರಿಂದ ಹಣ ಸಂಗ್ರಹಿಸಿತ್ತು. ಸಾಮಾನ್ಯ ಜನರು ತಮ್ಮ ಕಷ್ಟಕಾಲಕ್ಕೆ ಇರಲಿ ಎಂದು ಇಟ್ಟಿದ್ದ ಹಣವನ್ನೇ ಬಂಡವಾಳವಾಗಿಸಿಕೊಂಡ ಶಿವಾನಂದ್, ಅದನ್ನು ಮೋಜು-ಮಸ್ತಿ, ಸಿನಿಮಾ ನಿರ್ಮಾಣ ಮತ್ತು ಸೆಲೆಬ್ರಿಟಿ ಇವೆಂಟ್&zwnj;ಗಳಿಗೆ ನೀರಂತೆ ಖರ್ಚು ಮಾಡಿದ್ದ ಎನ್ನಲಾಗಿದೆ.&lt;/p&gt;&lt;h3&gt;ಸಿಐಡಿ ಬಲೆಯಲ್ಲಿ ಸ್ಯಾಂಡಲ್&zwnj;ವುಡ್ ಸ್ಟಾರ್&zwnj;ಗಳು!&lt;/h3&gt;&lt;p&gt;ಈ ಹಗರಣ ಕೇವಲ ಸನ್ನಿ ಲಿಯೋನ್&zwnj;ಗೆ ಸೀಮಿತವಾಗಿಲ್ಲ. ಕಳೆದ ವರ್ಷ ಡಿಸೆಂಬರ್&zwnj;ನಲ್ಲಿ ನಡೆದ 'ಕನ್ನಡ ಉತ್ಸವಂ' ಕಾರ್ಯಕ್ರಮ ಈಗ ತನಿಖಾ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿದೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಮತ್ತು ಪರ್ಫಾರ್ಮೆನ್ಸ್ ನೀಡಲು ಬಂದಿದ್ದ ಸ್ಯಾಂಡಲ್&zwnj;ವುಡ್&zwnj;ನ ಹಲವು ನಟನಟಿಯರಿಗೆ, ಅದರಲ್ಲೂ ಮುಖ್ಯವಾಗಿ ಇಬ್ಬರು ನಟರು- ಇಬ್ಬರು ನಟಿಯರಿಗೆ ಸಿಐಡಿ ನೋಟಿಸ್ ನೀಡಲು ಸಜ್ಜಾಗಿದೆ ಎಂಬ ಮಾಹಿತಿ ಇದೆ. ಈ ನಟನಟಿಯರಿಗೆ ಸಂಭಾವನೆಯ ರೂಪದಲ್ಲಿ ಹೋದ ಹಣ ಕೂಡ ವಂಚನೆಯಿಂದ ಬಂದಿದ್ದೇ ಎಂಬುದು ಅಧಿಕಾರಿಗಳ ಸಂಶಯ.&lt;/p&gt;&lt;p&gt;ಒಟ್ಟಿನಲ್ಲಿ, ಬಡವರ ರಕ್ತ ಹೀರಿ ಕಟ್ಟಿದ ಈ 2,400 ಕೋಟಿ ರೂಪಾಯಿಗಳ ಸಾಮ್ರಾಜ್ಯ ಈಗ ಬುಡಮೇಲಾಗುತ್ತಿದೆ. ಸಿಐಡಿ ಅಧಿಕಾರಿಗಳು ದಾಖಲೆಗಳ ಬೆನ್ನತ್ತಿದ್ದು, ಚಿತ್ರರಂಗದ ಗಣ್ಯರು ಈ ವಂಚನೆಯ ಜಾಲದಲ್ಲಿ ಎಷ್ಟು ಆಳಕ್ಕೆ ಸಿಲುಕಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ. ಗ್ಲಾಮರ್ ಲೋಕದ ಈ &quot;ರಿಯಲ್ ಫೈಟ್&quot; ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ!&lt;/p&gt;]]></content:encoded>
            <category>money</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/shivam-associates-fraud-network-widens-not-just-sunny-leone-and-names-of-other-four-kannada-stars-are-linked-to-case/articleshow-13wndv7"/>
        </item>
        <item>
            <title><![CDATA[1 ಸೂಪರ್‌ ಬೈಕ್‌ ಖರೀದಿ ಮಾಡೋವಷ್ಟು ಹಣವನ್ನು ಕೂತಲ್ಲೇ ದುಡಿಯುತ್ತಿರುವ Kannada Actress Jyoti Rai]]></title>
            <link>https://kannada.asianetnews.com/gallery/tv-talk/kannada-actress-jyoti-rai-poorvaj-instagram-account-exclusive-subscriptions-2rlnxmi</link>
            <guid isPermaLink="true">https://kannada.asianetnews.com/gallery/tv-talk/kannada-actress-jyoti-rai-poorvaj-instagram-account-exclusive-subscriptions-2rlnxmi</guid>
            <pubDate>Wed, 24 Jun 2026 17:44:01 +0530</pubDate>
            <description><![CDATA[&lt;p&gt;Kannada Actress Jyoti Rai Poorvaj: ಖ್ಯಾತ ಧಾರಾವಾಹಿ ನಟಿ ಜ್ಯೋತಿ ರೈ ಪೂರ್ವಜ ಅವರು ಸಖತ ಬೋಲ್ಡ್&zwnj; ಫೋಟೋಗಳಿಂದಲೇ ಗಮನಸೆಳೆಯುತ್ತಾರೆ. ಈಗ ಅವರು ಕೂತಲ್ಲೇ ಎರಡು ಲಕ್ಷ ರೂಪಾಯಿ ಹಣ ಗಳಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvwrh8rhjvv2swjxv8kv3jsd,imgname-new-project---2026-06-24t173355.404-1782302941968.jpg" type="image/jpeg" height="390" width="690"/>
            <content:encoded><![CDATA[&lt;p&gt;Kannada Actress Jyoti Rai Poorvaj: ಖ್ಯಾತ ಧಾರಾವಾಹಿ ನಟಿ ಜ್ಯೋತಿ ರೈ ಪೂರ್ವಜ ಅವರು ಸಖತ ಬೋಲ್ಡ್&zwnj; ಫೋಟೋಗಳಿಂದಲೇ ಗಮನಸೆಳೆಯುತ್ತಾರೆ. ಈಗ ಅವರು ಕೂತಲ್ಲೇ ಎರಡು ಲಕ್ಷ ರೂಪಾಯಿ ಹಣ ಗಳಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಸಬ್&zwnj;ಸ್ಕ್ರಿಪ್ಶನ್&zwnj; ಆಪ್ಶನ್&zwnj; ಕೊಟ್ಟಿದ್ದಾರೆ. ಅಲ್ಲಿಂದಲೂ ಅವರು ಹಣ ಗಳಿಕೆ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಪ್ರತಿ ತಿಂಗಳಿಗೆ 45 ರೂಪಾಯಿ ಕೊಟ್ಟರೆ ಅವರ ಅಕೌಂಟ್&zwnj;ಗೆ ಸಬ್&zwnj;ಸ್ಕ್ರಿಪ್ಶನ್&zwnj; ಪಡೆಯಬಹುದು. ಎಕ್ಸ್&zwnj;ಕ್ಲೂಸಿವ್&zwnj; ಆಗಿ 1 ವಿಡಿಯೋ ಅಪ್&zwnj;ಲೋಡ್&zwnj; ಮಾಡಿದ್ದಾರೆ. ಎಕ್ಸ್&zwnj;ಕ್ಲೂಸಿವ್&zwnj; ಕಂಟೆಂಟ್&zwnj; ಏನು ಎನ್ನೋದನ್ನು ಜ್ಯೋತಿ ರೈ ಅಥವಾ ಸಬ್&zwnj;ಸ್ಕ್ರೈಬ್&zwnj; ಆದವರೇ ಹೇಳಬೇಕಿದೆ.&lt;/p&gt;&lt;img&gt;&lt;p&gt;4758 ಜನರು 45 ರೂಪಾಯಿ ಕೊಟ್ಟು ಸಬ್&zwnj;ಸ್ಕ್ರೈಬ್&zwnj; ಆಗಿದ್ದಾರೆ. ಹೀಗಾಗಿ ಇನ್&zwnj;ಸ್ಟಾಗ್ರಾಮ್&zwnj; ಎಕ್ಸ್&zwnj;ಕ್ಲೂಸಿವ್&zwnj; ಕಂಟೆಂಟ್&zwnj;ನಿಂದಲೇ 214110 ರೂಪಾಯಿ ಸಿಗುತ್ತದೆ.&lt;/p&gt;&lt;img&gt;&lt;p&gt;ಇನ್ನೂ ಕೆಲ ನಟಿಯರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಸಬ್&zwnj;ಸ್ಕ್ರಿಪ್ಶನ್&zwnj; ಆಪ್ಶನ್&zwnj; ಕೊಟ್ಟು ಹಣ ಮಾಡುತ್ತಿದ್ದಾರೆ. ಕೆಲವರಂತೂ ಅಶ್ಲೀಲ ಕಂಟೆಂಟ್&zwnj; ಅಪ್&zwnj;ಲೋಡ್&zwnj; ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ.&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/kannada-actress-jyoti-rai-poorvaj-instagram-account-exclusive-subscriptions-2rlnxmi"/>
        </item>
        <item>
            <title><![CDATA[40 ಮೀಟರ್ ಮೊಬೈಲ್ ಟವರ್ ಮಾಯ! ಬಿಹಾರ ಪೊಲೀಸರಿಗೆ ತಲೆನೋವಾದ ವಿಚಿತ್ರ ಕೇಸ್]]></title>
            <link>https://kannada.asianetnews.com/india-news/how-did-thieves-steal-a-whole-mobile-tower-in-bihar-story/articleshow-6pahu22</link>
            <guid isPermaLink="true">https://kannada.asianetnews.com/india-news/how-did-thieves-steal-a-whole-mobile-tower-in-bihar-story/articleshow-6pahu22</guid>
            <pubDate>Sun, 14 Jun 2026 10:29:09 +0530</pubDate>
            <description><![CDATA[&lt;p&gt;How did thieves steal a whole mobile tower in Bihar: ಏನೇನೋ ಕಳ್ಳತನ ಆಗಿದ್ದನ್ನು ನೋಡಿರುತ್ತೀರಿ, ಎಷ್ಟೋ ಬಾರಿ ಎಟಿಎಂ ಮಶಿನ್&zwnj; ಕದಿಯಲು ಹೋಗಿ, ಪಾಸ್&zwnj;ಬುಕ್&zwnj; ಪ್ರಿಂಟರ್&zwnj; ಕದ್ದ ಉದಾಹರಣೆ ಕೂಡ ಇದೆ. ಈ ಕಳ್ಳರು ಮಾತ್ರ ಈಗ ಮೊಬೈಲ್&zwnj; ಟವರ್&zwnj; ಕದ್ದಿದ್ದಾರೆ, ಹೌದ್ರೀ, ನೀವು ನಂಬಲೇಬೇಕು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv27tdc00m9hg33fkb1ydmcn,imgname-new-project---2026-06-14t102002.691-1781413000576.jpg" type="image/jpeg" height="390" width="690"/>
            <content:encoded><![CDATA[&lt;p&gt;Before and after mobile tower theft Bihar: ಎಂಥೆಂಥದೋ ಕಳ್ಳತನದ ವರದಿಗಳನ್ನು ಕೇಳಿರುತ್ತೀರಿ. ಇದಂತೂ ನೆಕ್ಟ್ಸ್&zwnj; ಲೆವೆಲ್&zwnj; ಬಿಡಿ. ಮೊಬೈಲ್&zwnj; ಕದಿಯೋದು ನೋಡಿರಬಹುದು, ಈಗ 40 ಅಡಿ ಎತ್ತರದ ಮೊಬೈಲ್&zwnj; ಟವರ್&zwnj; ಕದ್ದಿದ್ದಾರೆ. ಈ ರೀತಿ ಕಳ್ಳತನ ಸಿನಿಮಾ, ವೆಬ್&zwnj; ಸಿರೀಸ್&zwnj;ನಲ್ಲಿಯೂ ಆಗಿರೋದಿಲ್ಲ. ಬಿಹಾರದ ಬಕ್ಸರ್ ಜಿಲ್ಲೆಯ ಡುಮ್ರಾಂವ್ ನಗರದಲ್ಲಿ ಇಡೀ ಮೊಬೈಲ್ ಟವರ್ ಇಲ್ಲವಾಗಿದೆ. ಅಕ್ಷರಶಃ ಕಳ್ಳರು ಇದನ್ನು ಮಾಯ ಮಾಡಿದ್ದಾರೆ.&lt;/p&gt;&lt;h2&gt;ಟವರ್&zwnj; ಇಲ್ಲ ಅಂತ ಹೇಗೆ ಗೊತ್ತಾಯ್ತು?&lt;/h2&gt;&lt;p&gt;ಈ ಟವರ್&zwnj; 40 ಮೀಟರ್ (ಸುಮಾರು 130 ಅಡಿ) ಎತ್ತರವಿದೆ. ಇದರಲ್ಲಿ ಡೀಸೆಲ್ ಜನರೇಟರ್, ಇತರ ಬೆಲೆಬಾಳುವ ಉಪಕರಣಗಳೂ ಕಣ್ಮರೆಯಾಗಿವೆ. 'ಜಿಟಿಎಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್' ಕಂಪನಿಯ ಅಧಿಕಾರಿಗಳು ಈ ಜಾಗವನ್ನು ಪರಿಶೀಲನೆ ಮಾಡಲು ಬಂದಾಗಲೇ ಈ ಟವರ್&zwnj; ಇಲ್ಲ ಎನ್ನೋದು ಗೊತ್ತಾಗಿದೆ. ಕೆಲವು ವರ್ಷಗಳಿಂದ ಈ ಟವರ್&zwnj; ಬಳಕೆಯಾಗಿಲ್ಲ, ಈಗ ಅಧಿಕಾರಿಗಳು ಆ ಜಾಗಕ್ಕೆ ಬಂದಿದ್ದಾರೆ. ಆಗ ಖಾಲಿ ಜಾಗ ಬಿಟ್ಟರೆ ಬೇರೆ ಏನೂ ಇರಲಿಲ್ಲ. ಆ ಕಂಪನಿಯ ಅಧಿಕಾರಿ ಬೈಜನಾಥ್ ಓಝಾ ತಕ್ಷಣವೇ ಡುಮ್ರಾಂವ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.&lt;/p&gt;&lt;h2&gt;ಜಾಗದ ಮಾಲೀಕ ಏನಂತಾರೆ?&lt;/h2&gt;&lt;p&gt;ಹರಿನಾಥ್ ಯಾದವ್ ಎನ್ನುವವರ ಜಾಗದಲ್ಲಿ ಈ ಟವರ್ ನಿರ್ಮಾಣವಾಗಿದೆ. 2022ಕ್ಕೆ ಕಂಪೆನಿ ಜೊತೆಗಿನ ಲೀಸ್&zwnj; ಒಪ್ಪಂದ ಮುಗಿದಿತ್ತು. 2017ರಿಂದ ಅವರಿಗೆ ಬಾಡಿಗೆ ಹಣ ಕೂಡ ಸಿಕ್ಕಿಲ್ಲ. ನನಗೂ ಈ ಕಳ್ಳತನಕ್ಕೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ. ಮೊಬೈಲ್ ಟವರ್&zwnj;ಗಳಿಂದ ಬ್ಯಾಟರಿ, ಕೇಬಲ್ ಕದಿಯುತ್ತಾರೆ. ಆದರೆ ಇಡೀ ಟವರ್ ಕಳ್ಳತನ ಆಗಿರೋದು ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸಿದೆ.&lt;/p&gt;&lt;h2&gt;ಇದು ಸುಲಭ ಇರಲಿಲ್ಲ!&lt;/h2&gt;&lt;p&gt;40 ಮೀಟರ್ ಎತ್ತರದ ಟವರ್&zwnj; ಬಿಚ್ಚಲು ದೊಡ್ಡ ದೊಡ್ಡ ಯಂತ್ರೋಪಕರಣ ಬೇಕು, ಟೆಕ್ನಿಕಲೀ ಗೊತ್ತಿರಬೇಕು, ಒಂದಿಷ್ಟು ಕೆಲಸಗಾರರು ಕೂಡ ಬೇಕು. ಹೀಗಾಗಿ ಒಂದು ಗ್ಯಾಂಗ್&zwnj; ಈ ರೀತಿ ಮಾಡಿರಬಹುದು ಎನ್ನಲಾಗಿದೆ. ತುಂಬ ದಿನಗಳಿಂದ ಕೆಲಸ ಮಾಡಿ ಈ ಕಳ್ಳತನ ಆಗಿದೆ ಎನ್ನಲಾಗಿದೆ. ಇಷ್ಟು ದೊಡ್ಡ ಕಳ್ಳತನ ಆಗುವಾಗ ಯಾರಿಗೂ ಹೇಗೆ ಗೊತ್ತಾಗಿಲ್ಲ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ.&lt;/p&gt;&lt;h2&gt;ಸೇತುವೆ ಕದ್ದಿದ್ದರು&lt;/h2&gt;&lt;p&gt;2022 ರಲ್ಲಿ ರೋಹ್ತಾಸ್ ಜಿಲ್ಲೆಯಲ್ಲಿ ಸಾರ್ವಜನಿಕರ ಮುಂದೆಯೇ ಸರ್ಕಾರಿ ಅಧಿಕಾರಿಗಳು ಎಂದು ಸುಳ್ಳು ಹೇಳಿಕೊಂಡು, 60 ಅಡಿ ಉದ್ದದ, 500 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಬಿಚ್ಚಿ ಕದ್ದುಕೊಂಡು ಹೋಗಿದ್ದರು. ಇದಕ್ಕೆ ಅವರು ಮೂರು ದಿನಗಳ ಕಾಲ ಗ್ಯಾಸ್ ಕಟರ್, ಜೆಸಿಬಿ ಯಂತ್ರಗಳನ್ನು ಬಳಸಿದ್ದರು.&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/india-news/how-did-thieves-steal-a-whole-mobile-tower-in-bihar-story/articleshow-6pahu22"/>
        </item>
        <item>
            <title><![CDATA[ಭಾರತದಲ್ಲಿ ಕಸಕ್ಕೆ ಎಸೆಯೋ ವಸ್ತುವಿಗೆ ವಿದೇಶದಲ್ಲಿ ಭಾರೀ ಬೇಡಿಕೆ, ಬ್ಯುಸಿನೆಸ್ ಶುರು ಮಾಡಿದ್ರೆ ಕೈ ತುಂಬ ಲಾಭ]]></title>
            <link>https://kannada.asianetnews.com/business/business-idea-from-waste-to-wealth-the-banana-leaf-export-boom/articleshow-8487i81</link>
            <guid isPermaLink="true">https://kannada.asianetnews.com/business/business-idea-from-waste-to-wealth-the-banana-leaf-export-boom/articleshow-8487i81</guid>
            <pubDate>Wed, 17 Jun 2026 13:13:03 +0530</pubDate>
            <description><![CDATA[&lt;p&gt;Banana Leaf Business Idea : ಕೈನಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ಊರಲ್ಲ ಅಲೆದ್ರಂತೆ ಹಾಗಾಗಿದೆ ನಮ್ಮ ಕಥೆ. ನಮ್ಮ ಊರಿನಲ್ಲೇ ಲಕ್ಷಾಂತರ ಸಂಪಾದನೆ ಮಾಡುವ ಬೆಳೆ ಇದೆ. ಆದ್ರೆ ಅದನ್ನು ಸರಿಯಾಗಿ ಬಳಸದೆ ಕಸ ಅಂತ ಎಸೆಯುತ್ತಿದ್ದೇವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva8fy33pkxaawdnnhjpz4be,imgname-banana-leaf-1781682141283.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಬಾಳೆ ಹಣ್ಣಿಗೆ ಇರುವಷ್ಟು ಬೆಲೆ ಬಾಳೆ ಎಲೆಗಿಲ್ಲ. ಜನರು ಬಾಳೆ ಗಿಡದಿಂದ ಬಾಳೆ ಗೊನೆ ತೆಗೆದು ಗಿಡ ಸಾಯಿಸ್ತಾರೆ. ಹಳ್ಳಿಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಮಾತ್ರ ಬಾಳೆ ಎಲೆಗೆ ಪ್ರಾಮುಖ್ಯತೆ ಸಿಗುತ್ತೆ. ಬಹುತೇಕ ಭಾಗಗಳಲ್ಲಿ ಈ ಬಾಳೆ ಎಲೆಯನ್ನು ಕಸದ ರೀತಿಯಲ್ಲೇ ನೋಡಲಾಗುತ್ತೆ. ನಾವು ಕಸ ಅಂದ್ಕೊಂಡಿರುವ ಈ ಬಾಳೆ ಎಲೆಗೆ ವಿದೇಶದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ನೀವು ಲಕ್ಷಾಂತರ ರೂಪಾಯಿಯನ್ನು ಇದ್ರಿಂದ ಸಂಪಾದನೆ ಮಾಡ್ಬಹುದು.&lt;/p&gt;&lt;h2&gt;ವಿದೇಶದಲ್ಲಿ ಬಾಳೆ ಎಲೆಗೆ ಹೈ ಡಿಮ್ಯಾಂಡ್&lt;/h2&gt;&lt;p&gt;ಸಿಂಗಾಪುರ, ಯುಎಇ, ಅಮೆರಿಕಾ, ದಕ್ಷಿಣ ಕೊರಿಯಾ ಮತ್ತು ಯುರೋಪಿನ ಅನೇಕ ದೇಶಗಳಲ್ಲಿ ಈ ಬಾಳೆ ಎಲೆಗೆ ಬಹು ಬೇಡಿಕೆ ಇದೆ. ಇದಕ್ಕೆ ಮುಖ್ಯ ಕಾರಣ ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ. ಜಗತ್ತು ಈಗ ಪ್ಲಾಸ್ಟಿಕ್ನಿಂದ ದೂರ ಸರಿಯುತ್ತಿದೆ. ಪರಿಸರ ರಕ್ಷಣೆಗಾಗಿ ನೈಸರ್ಗಿಕ ವಸ್ತುಗಳ ಬಳಕೆ ಮಾಡ್ತಿದೆ. ಬಾಳೆ ಎಲೆಗಳು ನೈಸರ್ಗಿಕವಾಗಿವೆ. ಅವರು ಸುಲಭವಾಗಿ ಮಣ್ಣಿನಲ್ಲಿ ಕರಗಬಲ್ಲವು. ಹಾಗೆಯೇ ಬ್ಯಾಕ್ಟೀರಿಯಾ ವಿರೋಧಿ. ಬಿಸಿ ಹಾಗೂ ನೀರು ಎರಡನ್ನೂ ತಡೆಯಬಲ್ಲವು. ಆಹಾರದ ಸುಹಾಸನೆ ಹೆಚ್ಚಿಸುವ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ಈ ಬಾಳೆ ಎಲೆಯನ್ನು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಹೆಚ್ಚು ಬಳಕೆ ಮಾಡಲಾಗ್ತಿದೆ.&lt;/p&gt;&lt;p&gt;ವರ್ಷದಲ್ಲೇ ಕೋಟ್ಯಾಧಿಪತಿ ಮಾಡಿದ ₹4ರ ಷೇರು ! ₹1 ಲಕ್ಷ ಹೂಡಿದವರಿಗೆ&lt;/p&gt;&lt;p&gt;ಬಾಳೆ ಎಲೆಗಳನ್ನು ರೆಸ್ಟೋರೆಂಟ್ಗಳು, ಕ್ಯಾಟರಿಂಗ್ ಕಂಪನಿಗಳು, ದೇವಸ್ಥಾನಗಳು ಮತ್ತು ರೆಡಿ-ಮೀಲ್ ಪ್ಯಾಕೇಜಿಂಗ್ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸ್ತಿದ್ದಾರೆ. ವಿಶ್ವದ ಅತಿ ಹೆಚ್ಚು ಬಾಳೆ ಉತ್ಪಾದಕ ಕ್ಷೇತಗಳಲ್ಲಿ ಭಾರತ ಸೇರಿದ್ದು, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಳೆ ಬೆಳೆಯಲಾಗುತ್ತದೆ.&lt;/p&gt;&lt;h3&gt;ನೀವೂ ಶುರು ಮಾಡ್ಬಹುದು ಬ್ಯುಸಿನೆಸೆ&lt;/h3&gt;&lt;p&gt;ಭಾರತದಲ್ಲಿ ಕಚ್ಚಾ ವಸ್ತುವೆಂದು ಬಿಸಾಡುವ ಈ ಬಾಳೆ ಎಲೆಯನ್ನು ಮಾರಾಟ ಮಾಡಿ ನೀವು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ಐವತ್ತು ಸಾವಿರದಿಂದ ಒಂದೂವರೆ ಲಕ್ಷ ರೂಪಾಯಿಗಳ ಹೂಡಿಕೆ ಅಗತ್ಯವಿದೆ.ಎಲೆ ಕತ್ತರಿಸುವ ಉಪಕರಣಗಳು, ತೊಳೆಯುವ ಮತ್ತು ಒಣಗಿಸುವ ಯಂತ್ರ, ಉತ್ತಮ ಪ್ಯಾಕೇಜಿಂಗ್ ಅಗತ್ಯವಿರುತ್ತದೆ.&lt;/p&gt;&lt;p&gt;ನಾಗಲೋಟಕ್ಕೆ ಬಿತ್ತು ಬ್ರೇಕ್; ಚಿನ್ನದ ಬೆಲೆಯಲ್ಲಿ ಎರಡನೇ ದಿನವೂ ಇಳಿಕೆ, ಇಂದೇ ಖರೀದಿಸಿ&lt;/p&gt;&lt;p&gt;&lt;strong&gt;ರಫ್ತು ಮಾಡಲು IEC, GST ಮತ್ತು APEDA ನೋಂದಣಿ ಅಗತ್ಯ&lt;/strong&gt;&lt;/p&gt;&lt;p&gt;ಮಾರುಕಟ್ಟೆಯಲ್ಲಿ ಕಚ್ಚಾ ಬಾಳೆ ಎಲೆಗಳು ಪ್ರತಿ ಕೆಜಿಗೆ ಸುಮಾರು ಇಪ್ಪತ್ತರಿಂದ ಅರವತ್ತು ರೂಪಾಯಿವರೆಗೆ ಮಾರಾಟವಾಗುತ್ತವೆ. ಸಂಸ್ಕರಿಸಿದ ರಫ್ತು ಗುಣಮಟ್ಟದ ಎಲೆಗಳು ಎಂಭತ್ತರಿಂದ ಇನ್ನೂರು ರೂಪಾಯಿವರೆಗೆ ಮಾರಾಟವಾಗುತ್ತವೆ. ಸರಿಯಾದ ಖರೀದಿದಾರರು ಸಿಕ್ಕರೆ ತಿಂಗಳಿಗೆ ಇಪ್ಪತ್ತೈದು ಸಾವಿರದಿಂದ ಎರಡು ಲಕ್ಷ ರೂಪಾಯಿವರೆಗೆ ಆದಾಯ ಗಳಿಸಬಹುದು. ಸ್ಥಳೀಯ ರೈತರಿಂದ ಎಲೆಗಳನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಿ, ಸಂಸ್ಕರಿಸಿ, ತೇವಾಂಶ ನಿರೋಧಕ ಪ್ಯಾಕೇಜಿಂಗ್ನಲ್ಲಿ ಪ್ಯಾಕ್ ಮಾಡಿ. ನಂತರ ಇಂಡಿಯಾ ಮಾರ್ಟ್&zwnj;, Alibaba, TradeIndia ಮುಂತಾದ ವೇದಿಕೆಗಳ ಮೂಲಕ ಮಾರಾಟ ಮಾಡಿ. ವ್ಯಾಪಾರ ಶುರು ಮಾಡುವ ಮುನ್ನ ಸರಿಯಾದ ಮಾಹಿತಿ, ಜ್ಞಾನದ ಅಗತ್ಯವಿದೆ. ರಫ್ತು ನಿಯಮಗಳ ಬಗ್ಗೆ ನೀವು ಸರಿಯಾಗಿ ತಿಳಿದಿರಬೇಕು.&lt;/p&gt;]]></content:encoded>
            <category>money</category>
            <dc:creator>Roopa Hegde</dc:creator>
            <atom:link href="https://kannada.asianetnews.com/business/business-idea-from-waste-to-wealth-the-banana-leaf-export-boom/articleshow-8487i81"/>
        </item>
        <item>
            <title><![CDATA[Swiss bank: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಭಾರೀ ಪ್ರಮಾಣ ಇಳಿಕೆ]]></title>
            <link>https://kannada.asianetnews.com/gallery/business/swiss-bank-indian-money-drops-by-3000-crore-but-customer-deposits-rise-2025-kannada-suh-8pwgm84</link>
            <guid isPermaLink="true">https://kannada.asianetnews.com/gallery/business/swiss-bank-indian-money-drops-by-3000-crore-but-customer-deposits-rise-2025-kannada-suh-8pwgm84</guid>
            <pubDate>Fri, 19 Jun 2026 10:28:59 +0530</pubDate>
            <description><![CDATA[&lt;p&gt;Swiss bank indian money drops by 3000 crore but customer deposits rise 2025 kannada ಸ್ವಿಸ್ ಬ್ಯಾಂಕ್&zwnj;ಗಳಲ್ಲಿ ಭಾರತೀಯರ ಒಟ್ಟು ಹಣ 36 ಸಾವಿರ ಕೋಟಿ ರೂ.ಗೆ ಇಳಿದಿದ್ದರೂ, ವೈಯಕ್ತಿಕ ಮತ್ತು ಕಂಪನಿ ಖಾತೆಗಳ ಠೇವಣಿಯಲ್ಲಿ 50% ಏರಿಕೆ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvf37fqteyxtxch3yn1ehexd,imgname-schweizerische-nationalbank-1781844393721.jpeg" type="image/jpeg" height="390" width="690"/>
            <content:encoded><![CDATA[&lt;p&gt;Swiss bank indian money drops by 3000 crore but customer deposits rise 2025 kannada ಸ್ವಿಸ್ ಬ್ಯಾಂಕ್&zwnj;ಗಳಲ್ಲಿ ಭಾರತೀಯರ ಒಟ್ಟು ಹಣ 36 ಸಾವಿರ ಕೋಟಿ ರೂ.ಗೆ ಇಳಿದಿದ್ದರೂ, ವೈಯಕ್ತಿಕ ಮತ್ತು ಕಂಪನಿ ಖಾತೆಗಳ ಠೇವಣಿಯಲ್ಲಿ 50% ಏರಿಕೆ ದಾಖಲಾಗಿದೆ.&lt;/p&gt;&lt;img&gt;&lt;p&gt;ನವದೆಹಲಿ/ಜ್ಯೂರಿಚ್: ಸ್ವಿಜರ್ಲೆಂಡ್&zwnj;ನ ರಾಷ್ಟ್ರೀಯ ಬ್ಯಾಂಕ್ (SNB) ಬಿಡುಗಡೆ ಮಾಡಿದ 2025ರ ವಾರ್ಷಿಕ ಅಂಕಿಅಂಶಗಳ ಪ್ರಕಾರ, ಸ್ವಿಸ್ ಬ್ಯಾಂಕ್&zwnj;ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ಒಟ್ಟು ಹಣದ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 3,000 ಕೋಟಿ ರೂ. ಇಳಿಕೆಯಾಗಿ 36,000 ಕೋಟಿ ರೂ. ಮಟ್ಟಕ್ಕೆ ತಲುಪಿದೆ.&lt;/p&gt;&lt;p&gt;2024ರಲ್ಲಿ ಭಾರತೀಯರ ಹಣದ ಪ್ರಮಾಣ ಭಾರೀ ಏರಿಕೆ ಕಂಡು ಸುಮಾರು 39,000 ಕೋಟಿ ರೂ. ತಲುಪಿತ್ತು. ಆದರೆ 2025ರಲ್ಲಿ ಒಟ್ಟು ಮೊತ್ತದಲ್ಲಿ ಸುಮಾರು 8% ಕುಸಿತ ಕಂಡುಬಂದಿದೆ. ಇದರಿಂದ ಭಾರತೀಯರ ಸ್ವಿಸ್ ಠೇವಣಿಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.&lt;/p&gt;&lt;img&gt;&lt;p&gt;ಒಟ್ಟು ಠೇವಣಿ ಮೊತ್ತ ಕಡಿಮೆಯಾದರೂ, ಭಾರತೀಯ ವ್ಯಕ್ತಿಗಳು ಹಾಗೂ ಕಂಪನಿಗಳು ನೇರವಾಗಿ ಗ್ರಾಹಕ ಖಾತೆಗಳಲ್ಲಿ ಇಟ್ಟಿರುವ ಮೊತ್ತದಲ್ಲಿ ಸುಮಾರು 50% ಹೆಚ್ಚಳ ಕಂಡುಬಂದಿದೆ. ಈ ವಿಭಾಗದಲ್ಲಿ ಸುಮಾರು 6,000 ಕೋಟಿ ರೂ. ಹೆಚ್ಚಳ ದಾಖಲಾಗಿದ್ದು, ಇದು ಒಟ್ಟು ಭಾರತೀಯ ಹಣದ ಪ್ರಮಾಭ ಸುಮಾರು 16% ರಷ್ಟಾಗುತ್ತದೆ .&lt;/p&gt;&lt;img&gt;&lt;p&gt;ತಜ್ಞರ ಪ್ರಕಾರ, ಸ್ವಿಸ್ ಬ್ಯಾಂಕ್&zwnj;ಗಳಲ್ಲಿ ಇರುವ ಎಲ್ಲಾ ಭಾರತೀಯ ಹಣವನ್ನು ಕಪ್ಪುಹಣ ಎಂದು ಪರಿಗಣಿಸುವುದು ತಪ್ಪು. ಇದರಲ್ಲಿ ಭಾರತೀಯ ಕಂಪನಿಗಳ ವ್ಯವಹಾರಿಕ ಖಾತೆಗಳು, ಬ್ಯಾಂಕ್&zwnj;ಗಳ ನಡುವಿನ ಹಣಕಾಸು , ವ್ಯವಹಾರಗಳು, ಹೂಡಿಕೆ ನಿಧಿಗಳು, ವೈಯಕ್ತಿಕ ಉಳಿತಾಯ ಖಾತೆಗಳು, ಷೇರು ಮತ್ತು ಬಾಂಡ್&zwnj;ಗಳಿಗೆ ಸಂಬಂಧಿಸಿದ ಹೂಡಿಕೆಗಳು ಇತ್ಯಾದಿ ಸೇರಿರುತ್ತವೆ.&lt;/p&gt;&lt;img&gt;&lt;p&gt;ಸ್ವಿಸ್ ರಾಷ್ಟ್ರೀಯ ಬ್ಯಾಂಕ್&zwnj;ನ ಅಧಿಕೃತ ಅಂಕಿಅಂಶಗಳಲ್ಲಿ ಬೇರೆ ದೇಶಗಳ ಹೆಸರಿನಲ್ಲಿ ಅಥವಾ ಟ್ರಸ್ಟ್&zwnj;ಗಳು, ಶೆಲ್ ಕಂಪನಿಗಳ ಮೂಲಕ ಇಡಲಾಗಿರುವ ಹಣವನ್ನು ಪ್ರತ್ಯೇಕವಾಗಿ ಗುರುತಿಸಲಾಗುವುದಿಲ್ಲ. ಆದ್ದರಿಂದ ಈ ಅಂಕಿಅಂಶಗಳು ಭಾರತೀಯರ ಒಟ್ಟು ಜಾಗತಿಕ ಆಸ್ತಿ ವಿವರವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ.&lt;/p&gt;&lt;p&gt;ಸರ್ಕಾರದ ಕ್ರಮಗಳ ಪರಿಣಾಮವೇ?&lt;/p&gt;&lt;p&gt;ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ತೆರಿಗೆ ಮಾಹಿತಿ ವಿನಿಮಯ ಒಪ್ಪಂದ ಜಾರಿಯಲ್ಲಿದೆ. ಇದರ ಪರಿಣಾಮವಾಗಿ ವಿದೇಶಿ ಖಾತೆಗಳ ಪಾರದರ್ಶಕತೆ ಹೆಚ್ಚಾಗಿದ್ದು, ಅಕ್ರಮ ಹಣ ವರ್ಗಾವಣೆಯ ಮೇಲೆ ನಿಗಾ ಬಲಗೊಂಡಿದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/swiss-bank-indian-money-drops-by-3000-crore-but-customer-deposits-rise-2025-kannada-suh-8pwgm84"/>
        </item>
        <item>
            <title><![CDATA[ಸ್ಯಾಲರಿ ಚೆನ್ನಾಗಿದ್ರೂ ಸೇವಿಂಗ್ಸ್‌ ಮಾಡೋಕೆ ಆಗ್ತಿಲ್ವಾ? ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸೋ 5 ಗೋಲ್ಡನ್ ಫೈನಾನ್ಸ್ ಟಿಪ್ಸ್]]></title>
            <link>https://kannada.asianetnews.com/business/salary-saving-tips-5-personal-finance-rules-50-30-20-budget-lifestyle-creep-san/articleshow-9b4ukrg</link>
            <guid isPermaLink="true">https://kannada.asianetnews.com/business/salary-saving-tips-5-personal-finance-rules-50-30-20-budget-lifestyle-creep-san/articleshow-9b4ukrg</guid>
            <pubDate>Thu, 11 Jun 2026 22:54:37 +0530</pubDate>
            <description><![CDATA[&lt;p&gt;ಉತ್ತಮ ಸಂಬಳವಿದ್ದರೂ ತಿಂಗಳ ಕೊನೆಯಲ್ಲಿ ಹಣ ಉಳಿಸುವುದು ಅನೇಕರಿಗೆ ಸವಾಲಾಗಿದೆ. ಈ ಲೇಖನವು ಖರ್ಚುಗಳನ್ನು ನಿಯಂತ್ರಿಸಿ, ಉಳಿತಾಯ ಮತ್ತು ಹೂಡಿಕೆ ಮಾಡಲು ಸಹಾಯ ಮಾಡುವ 5 ಸರಳ ಫೈನಾನ್ಸ್ ನಿಯಮಗಳನ್ನು ವಿವರಿಸುತ್ತದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j43kgspwgedhtxhpzdktcne1,imgname-asianet-news---2024-07-31t104537.245.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.11): &lt;/strong&gt;ಅನೇಕ ಬಾರಿ ಉತ್ತಮ ಸಂಬಳವಿದ್ದರೂ ಸಹ ತಿಂಗಳ ಕೊನೆಯಲ್ಲಿ ಕೈಯಲ್ಲಿ ಯಾವುದೇ ಹಣ ಉಳಿಯುವುದಿಲ್ಲ ಎಂಬ ದೂರನ್ನು ಉದ್ಯೋಗಸ್ಥರು ಮಾಡುವುದನ್ನು ನಾವು ಕಾಣುತ್ತೇವೆ. ನಿಮ್ಮದೂ ಇದೇ ಸಮಸ್ಯೆಯಾಗಿದ್ದರೆ, ಈಗ ನಿಮ್ಮ ಆರ್ಥಿಕ ಹವ್ಯಾಸಗಳನ್ನು ಬದಲಾಯಿಸಿಕೊಳ್ಳುವ ಸಮಯ. ಸರಿಯಾದ ಬಜೆಟಿಂಗ್ ಮತ್ತು 5 ಸರಳ ಫೈನಾನ್ಸ್ ಟಿಪ್ಸ್ ಅನುಸರಿಸುವ ಮೂಲಕ ನೀವು ಪ್ರತಿ ತಿಂಗಳು ದೊಡ್ಡ ಮೊತ್ತದ ಉಳಿತಾಯ ಮತ್ತು ಸುರಕ್ಷಿತ ಹೂಡಿಕೆಯನ್ನು ಸುಲಭವಾಗಿ ಮಾಡಬಹುದು.&lt;/p&gt;&lt;p&gt;ಆದಾಯ ಹೆಚ್ಚಿದ್ದರೂ ಉಳಿತಾಯ ಶೂನ್ಯವಾಗಿರುವುದು ಇಂದಿನ ಜೀವನಶೈಲಿಯ ಒಂದು ದೊಡ್ಡ ಸಮಸ್ಯೆ. ಭವಿಷ್ಯದ ತುರ್ತು ಪರಿಸ್ಥಿತಿಗಳು ಮತ್ತು ಆರ್ಥಿಕ ಸ್ಥಿರತೆಗಾಗಿ ಹಣದ ನಿರ್ವಹಣೆ ಮಾಡುವುದು ಅತ್ಯಗತ್ಯ. ಇಂದು ನಾವು ನಿಮಗೆ 5 ಸರಳ ಫೈನಾನ್ಸ್ ನಿಯಮಗಳ ಬಗ್ಗೆ ತಿಳಿಸಿಕೊಡಲಿದ್ದೇವೆ, ಇವುಗಳ ಸಹಾಯದಿಂದ ನೀವು ಹೆಚ್ಚುತ್ತಿರುವ ವೆಚ್ಚಗಳನ್ನು ನಿಯಂತ್ರಿಸಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಬಹುದು. ಇಂದಿನ ಕಾಲದಲ್ಲಿ ಉತ್ತಮ ಸಂಬಳವಿದ್ದರೂ ತಿಂಗಳ ಕೊನೆಯಲ್ಲಿ ಏನನ್ನೂ ಉಳಿಸಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಅವರ ಸಂಪೂರ್ಣ ಸಂಬಳವು ಪ್ರತಿ ತಿಂಗಳು ಖರ್ಚುಗಳಿಗೇ ಮುಗಿದುಹೋಗುತ್ತದೆ. ಅದೇ ಸಮಯದಲ್ಲಿ, ಸಂಬಳ ಹೆಚ್ಚಾದಂತೆ ವೆಚ್ಚಗಳೂ ಹೆಚ್ಚಾಗತೊಡಗುತ್ತವೆ, ಇದರಿಂದಾಗಿ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ.&lt;/p&gt;&lt;p&gt;ಹಣಕಾಸು ತಜ್ಞರ ಪ್ರಕಾರ, ಶ್ರೀಮಂತರಾಗುವ ಹಾದಿಯು ಕೇವಲ ಹೆಚ್ಚು ಗಳಿಸುವುದರಿಂದ ಮಾತ್ರವಲ್ಲ, ಬದಲಿಗೆ ವಿವೇಚನೆಯಿಂದ ಖರ್ಚು ಮಾಡುವುದು ಮತ್ತು ನಿಯಮಿತವಾಗಿ ಹೂಡಿಕೆ ಮಾಡುವುದರಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆದಾಯದ ಜೊತೆಗೆ ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸಲು ನೀವು ಬಯಸಿದರೆ, ಇಂದು ನಾವು ನಿಮಗೆ ಉಳಿತಾಯಕ್ಕೆ ಸಹಾಯ ಮಾಡುವ 5 ಸರಳ ನಿಯಮಗಳ ಬಗ್ಗೆ ತಿಳಿಸಲಿದ್ದೇವೆ.&lt;/p&gt;&lt;h2&gt;&lt;strong&gt;ನಿಮ್ಮ ಜೀವನಶೈಲಿಯನ್ನು ತಕ್ಷಣವೇ ಹೆಚ್ಚಿಸಲು ಆತುರಪಡಬೇಡಿ&lt;/strong&gt;&lt;/h2&gt;&lt;p&gt;ಅನೇಕ ಬಾರಿ ಸಂಬಳ ಹೆಚ್ಚಾದ ತಕ್ಷಣ ಜನರು ದುಬಾರಿ ಮನೆ, ಹೊಸ ಫೋನ್, ಒಳ್ಳೆಯ ಕಾರು ಅಥವಾ ಹೆಚ್ಚುವರಿ ಸೌಕರ್ಯಗಳನ್ನು ಖರೀದಿಸಲು ಪ್ರಾರಂಭಿಸುತ್ತಾರೆ, ಇದನ್ನು 'ಲೈಫ್&zwnj;ಸ್ಟೈಲ್ ಕ್ರೀಪ್' (Lifestyle Creep) ಎಂದು ಕರೆಯಲಾಗುತ್ತದೆ. ಸಂಬಳ ಹೆಚ್ಚಳದ ಸಂಪೂರ್ಣ ಹಣವನ್ನು ಖರ್ಚು ಮಾಡುವ ಬದಲು, ಅದರ ಒಂದು ಭಾಗವನ್ನು ಹೂಡಿಕೆ ಮಾಡಿ. ಈ ಹವ್ಯಾಸವು ದೀರ್ಘಾವಧಿಯಲ್ಲಿ ದೊಡ್ಡ ಸಂಪತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಸಂಬಳ ಹೆಚ್ಚಾದಾಗ ನಿಮ್ಮ ವೆಚ್ಚಗಳನ್ನು ಮಿತಿಗೊಳಿಸಲು ಪ್ರಯತ್ನಿಸಿ.&lt;/p&gt;&lt;h2&gt;&lt;strong&gt;ಬಾಡಿಗೆಗೆ ಶೇಕಡಾ 30 ಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ&lt;/strong&gt;&lt;/h2&gt;&lt;p&gt;ಒಂದು ವೇಳೆ ನೀವು ಬಾಡಿಗೆ ಮನೆಯಲ್ಲಿದ್ದರೆ ಅಥವಾ ಗೃಹ ಸಾಲದ (Home Loan) ಇಎಂಐ ಪಾವತಿಸುತ್ತಿದ್ದರೆ, ಅದನ್ನು ನಿಮ್ಮ ಸಂಬಳದ 30% ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಿ. ಬಾಡಿಗೆ ಅಥವಾ ಇಎಂಐ ನಿಮ್ಮ ಕೈಗೆ ಸಿಗುವ ನಿವ್ವಳ ಸಂಬಳದ (Take-home salary) ಶೇಕಡಾ 30 ಕ್ಕಿಂತ ಹೆಚ್ಚಿರಬಾರದು.&lt;/p&gt;&lt;h2&gt;&lt;strong&gt;ಹೊಸ ಕಾರು ಖರೀದಿಸಲು ಬಜೆಟ್ ಯೋಜನೆ&lt;/strong&gt;&lt;/h2&gt;&lt;p&gt;ಅನೇಕ ಬಾರಿ ಜನರಿಗೆ ಹೊಸ ಕಾರು ಖರೀದಿಸುವುದು ಆಕರ್ಷಕವಾಗಿ ಕಾಣುತ್ತದೆ, ಆದರೆ ಅದರ ಮೌಲ್ಯವು ವೇಗವಾಗಿ ಕುಸಿಯುತ್ತದೆ. ಹೆಚ್ಚಿನ ಹೊಸ ಕಾರುಗಳ ಮೌಲ್ಯವು ಮೊದಲ ವರ್ಷದಲ್ಲೇ ಶೇಕಡಾ 20 ರಿಂದ ಶೇಕಡಾ 30 ರಷ್ಟು ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಉತ್ತಮ ಸ್ಥಿತಿಯಲ್ಲಿರುವ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ (Certified Second-hand) ಕಾರನ್ನು ಖರೀದಿಸುವುದು ಹೂಡಿಕೆಯ ದೃಷ್ಟಿಯಿಂದ ಹೆಚ್ಚು ಜಾಣತನದ ಆಯ್ಕೆ. ಇದರಿಂದ ನೀವು ದೊಡ್ಡ ಮೊತ್ತದ ಹಣವನ್ನು ಉಳಿಸಬಹುದು ಮತ್ತು ಆ ಹಣವನ್ನು ಬೇರೆಡೆ ಹೂಡಿಕೆ ಮಾಡಬಹುದು.&lt;/p&gt;&lt;h2&gt;&lt;strong&gt;ಬಜೆಟ್&zwnj;ಗಾಗಿ 50-30-20 ನಿಯಮ&lt;/strong&gt;&lt;/h2&gt;&lt;p&gt;ಮಾಸಿಕ ಬಜೆಟ್ ಸಿದ್ಧಪಡಿಸಿ ಮತ್ತು ಅದನ್ನು ಕಡ್ಡಾಯವಾಗಿ ಅನುಸರಿಸಿ. ಇದಕ್ಕಾಗಿ 50-30-20 ನಿಯಮವನ್ನು ಅಳವಡಿಸಿಕೊಳ್ಳಿ. ಬಾಡಿಗೆ, ರೇಷನ್, ಬಿಲ್&zwnj;ಗಳು ಮುಂತಾದ ಅಗತ್ಯ ವೆಚ್ಚಗಳಿಗಾಗಿ ಸಂಬಳದ ಶೇಕಡಾ 50 ರಷ್ಟು ಭಾಗವನ್ನು ಮೀಸಲಿಡಿ. ಶೇಕಡಾ 30 ರಷ್ಟು ಭಾಗವನ್ನು ನಿಮ್ಮ ಸ್ವಂತ ಆಸೆ ಹಾಗೂ ಇಷ್ಟದ ವೆಚ್ಚಗಳಿಗಾಗಿ ಇಟ್ಟುಕೊಳ್ಳಿ. ಅದೇ ಸಮಯದಲ್ಲಿ, ಉಳಿದ ಶೇಕಡಾ 20 ರಷ್ಟು ಭಾಗವನ್ನು ಕಡ್ಡಾಯವಾಗಿ ಹೂಡಿಕೆ ಮಾಡಿ.&lt;/p&gt;&lt;h2&gt;&lt;strong&gt;ಸಣ್ಣಪುಟ್ಟ ವೆಚ್ಚಗಳ ಮೇಲೆ ನಿಗಾ ಇರಲಿ&lt;/strong&gt;&lt;/h2&gt;&lt;p&gt;ಅನೇಕ ಬಾರಿ ಹಣವು ದೊಡ್ಡ ಖರೀದಿಯಿಂದಲ್ಲ, ಬದಲಿಗೆ ತಿಂಗಳ ಸಣ್ಣಪುಟ್ಟ ವೆಚ್ಚಗಳಿಂದ ಪೋಲಾಗುತ್ತದೆ. ಉದಾಹರಣೆಗೆ ಒಟಿಟಿ (OTT) ಸಬ್&zwnj;ಸ್ಕ್ರಿಪ್ಷನ್&zwnj;ಗಳು, ಫುಡ್ ಡೆಲಿವರಿ ಮೆಂಬರ್&zwnj;ಶಿಪ್&zwnj;ಗಳು, ಪ್ರೀಮಿಯಂ ಆ್ಯಪ್&zwnj;ಗಳು ಅಥವಾ ಇತರ ಅನಗತ್ಯ ವೆಚ್ಚಗಳು. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ಎಲ್ಲಾ ಸಬ್&zwnj;ಸ್ಕ್ರಿಪ್ಷನ್&zwnj;ಗಳು ಮತ್ತು ನಿಯಮಿತ ವೆಚ್ಚಗಳನ್ನು ಮರುಪರಿಶೀಲಿಸಿ (Review) ಮತ್ತು ಅನಗತ್ಯ ಸೇವೆಗಳನ್ನು ತಕ್ಷಣವೇ ಬಂದ್ ಮಾಡಿ.&lt;/p&gt;&lt;p&gt;&lt;strong&gt;Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಜ್ಞಾನವನ್ನು ಆಧರಿಸಿವೆ. ನಾವು ಇದನ್ನು ದೃಢೀಕರಿಸುವುದಿಲ್ಲ. ಇವುಗಳನ್ನು ಅಳವಡಿಸಿಕೊಳ್ಳುವ ಮುನ್ನ ಆರ್ಥಿಕ ತಜ್ಞರ ಸಲಹೆಯನ್ನು ಖಂಡಿತವಾಗಿಯೂ ಪಡೆದುಕೊಳ್ಳಿ.&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>money</category>
            <dc:creator>Santosh Naik</dc:creator>
            <atom:link href="https://kannada.asianetnews.com/business/salary-saving-tips-5-personal-finance-rules-50-30-20-budget-lifestyle-creep-san/articleshow-9b4ukrg"/>
        </item>
        <item>
            <title><![CDATA[ಯಾರ ಮೇಲೂ ಡಿಪೆಂಡ್‌ ಆಗ್ಬೇಡಿ; ಮದುವೆ ಬಗ್ಗೆ ಫಸ್ಟ್‌ ಟೈಮ್‌ ಮಾತನಾಡಿದ ಅಂಬಾನಿ ಸೊಸೆ Radhika Merchant]]></title>
            <link>https://kannada.asianetnews.com/gallery/india-news/mukesh-ambani-daughter-in-law-radhika-merchant-on-marriage-woman-d30292s</link>
            <guid isPermaLink="true">https://kannada.asianetnews.com/gallery/india-news/mukesh-ambani-daughter-in-law-radhika-merchant-on-marriage-woman-d30292s</guid>
            <pubDate>Tue, 16 Jun 2026 12:29:18 +0530</pubDate>
            <description><![CDATA[&lt;p&gt;Mukesh Ambani Sister In Law Radhika Merchant: ಮುಖೇಶ್ ಅಂಬಾನಿ ಅವರಿಗೆ ಹೇಗೆ ಪರಿಚಯದ ಅಗತ್ಯವಿಲ್ಲವೋ, ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್&zwnj;ಗೂ ಈಗ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗೆ ಅವರು ಆಡಿದ ಮಾತುಗಳು ಸದ್ಯ ವೈರಲ್ ಆಗುತ್ತಿವೆ. ಅನಂತ್&zwnj; ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್&zwnj; ಕೂಡ ಉದ್ಯಮಿ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3tx4qaktr0wmg08gzsyhd7z,imgname-radhika-merchant-anant-ambani-1756470861139.jpg" type="image/jpeg" height="390" width="690"/>
            <content:encoded><![CDATA[&lt;p&gt;Mukesh Ambani Sister In Law Radhika Merchant: ಮುಖೇಶ್ ಅಂಬಾನಿ ಅವರಿಗೆ ಹೇಗೆ ಪರಿಚಯದ ಅಗತ್ಯವಿಲ್ಲವೋ, ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್&zwnj;ಗೂ ಈಗ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗೆ ಅವರು ಆಡಿದ ಮಾತುಗಳು ಸದ್ಯ ವೈರಲ್ ಆಗುತ್ತಿವೆ. ಅನಂತ್&zwnj; ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್&zwnj; ಕೂಡ ಉದ್ಯಮಿ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಗಳು 2024ರಲ್ಲಿ ಅದ್ದೂರಿಯಾಗಿ ನಡೆದವು. ಈ ಸಮಯದಲ್ಲಿ, ರಾಧಿಕಾ ಮರ್ಚೆಂಟ್ ಇಂಟರ್ನೆಟ್&zwnj;ನಲ್ಲಿ ಭಾರಿ ವೈರಲ್ ಆದರು. ಅನಂತ್ ಅಂಬಾನಿ ದಪ್ಪಗಿದ್ದರೂ, ರಾಧಿಕಾ ಕೇವಲ ಹಣಕ್ಕಾಗಿ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದರು. ಆದರೆ, ರಾಧಿಕಾ ಆ ಕಾಮೆಂಟ್&zwnj;ಗಳಿಗೆ ತಲೆಕೆಡಿಸಿಕೊಂಡಿರಲಿಲ್ಲ. ಇತ್ತೀಚೆಗೆ, ತಮ್ಮ ಮದುವೆ, ಪತಿ ಮತ್ತು ಮಹಿಳೆಯರು ಆರ್ಥಿಕವಾಗಿ ಏಕೆ ಸ್ವತಂತ್ರರಾಗಬೇಕು ಎಂಬುದರ ಕುರಿತು ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಭಾರತದಲ್ಲಿ ನಡೆದ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಚಳುವಳಿಯ ಪ್ರಧಾನ ಕಚೇರಿಯ ಸಭೆಯೊಂದರಲ್ಲಿ ರಾಧಿಕಾ ಮಾತನಾಡಿದರು. ಮದುವೆಯಲ್ಲಿ ಸಮಾನತೆ ಮತ್ತು ಮಹಿಳೆಯರಿಗೆ ಆರ್ಥಿಕ ಸಮಾನತೆ ಏಕೆ ಮುಖ್ಯ ಎಂಬುದನ್ನು ಅವರು ವಿವರಿಸಿದರು. ಮಹಿಳೆಯರು ಎಂದಿಗೂ ಇತರರನ್ನು ಅವಲಂಬಿಸಬಾರದು ಮತ್ತು ಜೀವನದಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ರಾಧಿಕಾ ಹೇಳಿದರು.&lt;/p&gt;&lt;img&gt;&lt;p&gt;ಮಹಿಳೆಯರು ಯಾರ ಮಗಳಾಗಿದ್ದರೂ, ಯಾರ ಸೊಸೆಯಾಗಿದ್ದರೂ ಹಣದ ವಿಷಯದಲ್ಲಿ ಯಾರ ಮೇಲೂ ಅವಲಂಬಿತರಾಗಬಾರದು ಎಂದು ರಾಧಿಕಾ ಹೇಳಿದರು. 'ನೀವು ಯಾರ ಮಗಳು, ಯಾರ ಹೆಂಡತಿ, ನಿಮಗೆ ಜೀವನದಲ್ಲಿ ಎಷ್ಟೇ ಸೌಕರ್ಯಗಳಿದ್ದರೂ ಅದು ಮುಖ್ಯವಲ್ಲ. ನೀವು ಜೀವನದಲ್ಲಿ ನಿಮಗಾಗಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದರೆ, ನೀವು ಆರ್ಥಿಕವಾಗಿ ಬೆಳೆದು ತೋರಿಸಬೇಕು. ಹಣದ ವಿಷಯದಲ್ಲಿ ಇತರರ ಮೇಲೆ ಅವಲಂಬಿತರಾಗಬಾರದು' ಎಂದು ರಾಧಿಕಾ ಹೇಳಿದ್ದಾರೆ. ಅಂಬಾನಿ ಸೊಸೆಯಾಗಿದ್ದರೂ, ರಾಧಿಕಾ ಮಹಿಳಾ ಉದ್ಯಮಿಯಾಗಿ ತಮ್ಮದೇ ಆದ ಗುರುತನ್ನು ಗಳಿಸಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/mukesh-ambani-daughter-in-law-radhika-merchant-on-marriage-woman-d30292s"/>
        </item>
        <item>
            <title><![CDATA[ಪಕ್ಕಾ ಬಂಗಾರದಂತೆ ಕಾಣುವ 6 ಕಂಗನ್‌ಗಳು; ಹಾಕೋಳಿ, ರಾಯಲ್ ಲುಕ್ ಗ್ಯಾರಂಟಿ!]]></title>
            <link>https://kannada.asianetnews.com/webstories/fashion/6-stunning-gold-plated-bangle-designs-for-a-royal-look-d6z7ag0</link>
            <guid isPermaLink="true">https://kannada.asianetnews.com/webstories/fashion/6-stunning-gold-plated-bangle-designs-for-a-royal-look-d6z7ag0</guid>
            <pubDate>Mon, 15 Jun 2026 09:05:28 +0530</pubDate>
            <description><![CDATA[&lt;p&gt;ಚಿನ್ನದ ಬೆಲೆ ಗಗನಕ್ಕೇರಿದೆ. ಈ ನಡುವೆ ಮಾರುಕಟ್ಟೆಯಲ್ಲಿ ಅಸಲಿ ಚಿನ್ನದಂತೆ ಕಾಣುವ ಆರ್ಟಿಫಿಶಿಯಲ್ ಬಳೆಗಳು ಸಿಗುತ್ತಿವೆ. ನಿಮ್ಮ ಜ್ಯುವೆಲರಿ ಕಲೆಕ್ಷನ್&zwnj;ಗೆ ಹೊಸ ಮೆರುಗು ನೀಡಲು ಬಯಸಿದರೆ, ಈ 6 ಸ್ಟೈಲಿಶ್ ಕಂಗನ್&zwnj;ಗಳನ್ನು ಟ್ರೈ ಮಾಡಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv4nhrhgqaray4wrzm9xk24e,imgname-namratha-gowda--11--1781494506031.jpg" type="image/jpeg" height="390" width="690"/>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/fashion/6-stunning-gold-plated-bangle-designs-for-a-royal-look-d6z7ag0"/>
        </item>
        <item>
            <title><![CDATA[ಎಲಾನ್ ಮಸ್ಕ್  ಕಂಪನಿ SpaceX IPO ಬದಲಿಸಲಿದೆ ಅದೃಷ್ಟ, ಕೋಟ್ಯಾಧಿಪತಿಗಳಾಗಲಿದ್ದಾರೆ 4400 ಉದ್ಯೋಗಿಗಳು]]></title>
            <link>https://kannada.asianetnews.com/business/elon-musk-spacex-ipo-magic-4400-employee-may-become-millionaires/articleshow-dllx3pn</link>
            <guid isPermaLink="true">https://kannada.asianetnews.com/business/elon-musk-spacex-ipo-magic-4400-employee-may-become-millionaires/articleshow-dllx3pn</guid>
            <pubDate>Fri, 12 Jun 2026 15:57:28 +0530</pubDate>
            <description><![CDATA[&lt;p&gt;Elon Musk Space X : ಸ್ಪೇಸ್ ಎಕ್ಸ್ ಐಪಿಒನಿಂದ ಬರೀ ಎಲಾನ್ ಮಸ್ಕ್ ಅದೃಷ್ಟ ಮಾತ್ರವಲ್ಲ ಉದ್ಯೋಗಿಗಳ ಹಣೆಬರಹ ಕೂಡ ಬದಲಾಗಲಿದೆ. ಅವರು ಕೋಟ್ಯಾಧಿಪತಿಗಳಾಗಲಿದ್ದಾರೆ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktxnv4rn776f4ah787781dxe,imgname-elon-musk-space-x-1781259932437.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಅವರ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ SpaceX ಜೂನ್ 12 ರಂದು ತನ್ನ ಬಹು ನಿರೀಕ್ಷಿತ IPO ಅನ್ನು ಬಿಡುಗಡೆ ಮಾಡುತ್ತಿದೆ. ವರದಿಗಳ ಪ್ರಕಾರ, ಇದು ಇತಿಹಾಸದ ಅತಿದೊಡ್ಡ IPO ಆಗಲಿದೆ. ಮಾಹಿತಿ ಪ್ರಕಾರ, ಸ್ಪೇಸ್ಎಕ್ಸ್ ಷೇರುಗಳನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದ ತಕ್ಷಣ ಕಂಪನಿಯ 4,400 ಕ್ಕೂ ಹೆಚ್ಚು ಉದ್ಯೋಗಿಗಳು ಮಿಲಿಯನೇರ್ ಆಗುವ ಸಾಧ್ಯತೆ ಇದೆ.&lt;/p&gt;&lt;h2&gt;ಸ್ಪೇಸ್ ಎಕ್ಸ್ ಐಪಿಒ ಬೆಲೆ&lt;/h2&gt;&lt;p&gt;ಎಲಾನ್ ಮಸ್ಕ್ ಕಂಪನಿ ಸ್ಪೇಸ್ಎಕ್ಸ್, ತನ್ನ ಐಪಿಒನ ಪ್ರತಿ ಷೇರಿನ ಬೆಲೆಯನ್ನು 135 ಡಾಲರ್ ಎಂದು ನಿಗದಿಪಡಿಸಿದೆ. ಮಸ್ಕ್ ಕಂಪನಿಯ ಅಂದಾಜು ಮೌಲ್ಯ ಸುಮಾರು 1.77 ಟ್ರಿಲಿಯನ್ ಡಾಲರ್ ಆಗಲಿದೆ. ವಿಶ್ವದ ಅತಿದೊಡ್ಡ ಐಪಿಒಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಂಪನಿಯು ಐಪಿಒ ಮೂಲಕ 75 ಬಿಲಿಯನ್ ಡಾಲರ್ ಸಂಗ್ರಹಿಸುವ ಗುರಿ ಹೊಂದಿದೆ.&lt;/p&gt;&lt;p&gt;ಇತಿಹಾಸ ರಚಿಸಲಿದ್ದಾರೆ ಎಲಾನ್&zwnj; ಮಸ್ಕ್, ವಿಶ್ವದ ಮೊದಲ ಟ್ರಿಲಿಯನೇರ್&zwnj; ಪಟ್ಟ?&lt;/p&gt;&lt;h3&gt;ಸ್ಪೇಸ್ಎಕ್ಸ್ ಉದ್ಯೋಗಿಗಳಿಗೆ ಬಂಪರ್&lt;/h3&gt;&lt;p&gt;ವರದಿ ಪ್ರಕಾರ, ಸ್ಪೇಸ್ ಎಕ್ಸ್ ಅಂದಾಜಿನ ಮೌಲ್ಯದಲ್ಲಿ ಮಾರುಕಟ್ಟೆಗೆ ಬಂದ್ರೆ ಅಲ್ಲಿನ 4400 ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಲಿದ್ದಾರೆ. ಇದರಲ್ಲಿ ಹಾಲಿ ಮತ್ತು ಮಾಜಿ ಉದ್ಯೋಗಿಗಳು ಸೇರಿದ್ದಾರೆ. ಅಂದಾಜಿನ ಪ್ರಕಾರ, ಕಂಪನಿಯ &amp;nbsp;ಮಾಜಿ ಉದ್ಯೋಗಿಗಳು ಕನಿಷ್ಠ 1 ಮಿಲಿಯನ್ ಡಾಲರ್ ಗಿಂತ ಹೆಚ್ಚು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಸುಮಾರು 400 ಉದ್ಯೋಗಿಗಳು 100 ಮಿಲಿಯನ್ ಡಾಲರ್ ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.&lt;/p&gt;&lt;p&gt;Currency Notes: ನಮ್ಮ ದೇಶದಲ್ಲಿ ಹತ್ತು ರೂಪಾಯಿಯಿಂದ 500 ರೂಪಾಯಿ ನೋಟು ಎಲ್ಲಿ ಮುದ್ರಿಸುತ್ತಾರೆ ಗೊತ್ತಾ?&lt;/p&gt;&lt;p&gt;&lt;strong&gt;ಸಂಬಳದ ಜೊತೆ ಕಂಪನಿ ಪಾಲು&lt;/strong&gt;&lt;/p&gt;&lt;p&gt;ಸ್ಪೇಸ್ ಎಕ್ಸ್ ಕಂಪನಿ ತನ್ನ ಉದ್ಯೋಗಿಗಳಿಗೆ ಬರೀ ಸಂಬಳ ನೀಡ್ತಿಲ್ಲ. ಅದು ಕಂಪನಿ ಪಾಲನ್ನು ಕೂಡ ನೀಡ್ತಾ ಬಂದಿದೆ. ಕಂಪನಿಯ ಮೌಲ್ಯಮಾಪನವು ವರ್ಷಗಳಲ್ಲಿ ಏರಿದಂತೆ, ಅವರ ಷೇರುಗಳ ಮೌಲ್ಯವು ವೇಗವಾಗಿ ಹೆಚ್ಚಾಗಿದೆ. ಆರಂಭದಲ್ಲಿ ಸ್ಪೇಸ್ಎಕ್ಸ್ಗೆ ಸೇರಿದ ಉದ್ಯೋಗಿಗಳಿಗೆ ಇದು ಜೀವನವನ್ನು ಬದಲಾಯಿಸ್ತಿದೆ. 2011 ರಲ್ಲಿ ಸ್ಪೇಸ್ಎಕ್ಸ್ಗೆ ಸೇರಿದ ಟ್ರೆವರ್ ಹೈಸ್ ಎಂಬುವವರಿಗೆ ಕಂಪನಿ 100,000 ಕ್ಕೂ ಹೆಚ್ಚು ಷೇರುಗಳನ್ನು ನೀಡಿತ್ತು. ಈಗ, ಪ್ರತಿ ಷೇರಿಗೆ 135 ಡಾಲರ್ ಎಂದು ಲೆಕ್ಕ ಹಾಕಿದ್ರೆ ಅವರ ಷೇರುಗಳು ಕನಿಷ್ಠ 13.5 ಮಿಲಿಯನ್ ಡಾಲರ್ ಅಂದ್ರೆ 115 ಕೋಟಿ ತಲುಪಲಿದೆ.&lt;/p&gt;]]></content:encoded>
            <category>money</category>
            <dc:creator>Roopa Hegde</dc:creator>
            <atom:link href="https://kannada.asianetnews.com/business/elon-musk-spacex-ipo-magic-4400-employee-may-become-millionaires/articleshow-dllx3pn"/>
        </item>
        <item>
            <title><![CDATA[ಭಾರೀ ಇಳಿಕೆಯ ಹಾದಿ ಹಿಡಿದ ಚಿನ್ನದ ಬೆಲೆ; ಬೆಂಗಳೂರಲ್ಲಿ ಇವತ್ತಿನ ಗೋಲ್ಡ್ ರೇಟ್ ಎಷ್ಟು?]]></title>
            <link>https://kannada.asianetnews.com/gallery/business/after-massive-surge-gold-prices-witness-sharp-fall-today-check-latest-rates-kvn-hkgwqld</link>
            <guid isPermaLink="true">https://kannada.asianetnews.com/gallery/business/after-massive-surge-gold-prices-witness-sharp-fall-today-check-latest-rates-kvn-hkgwqld</guid>
            <pubDate>Tue, 23 Jun 2026 16:51:59 +0530</pubDate>
            <description><![CDATA[&lt;p&gt;&lt;strong&gt;Gold Price Drops Sharply in Bengaluru Today:&lt;/strong&gt; ಕಳೆದ ಮೂರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇದೀಗ ಮಂಗಳವಾರವಾದ ಇಂದು ಭಾರೀ ಇಳಿಕೆ ಕಂಡಿದೆ. ಜೂನ್ 23ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krwtqcvx79vd7m3h1gwb4cee,imgname-chatgpt-image-may-18--2026--11-28-53-am-1779084014461.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Gold Price Drops Sharply in Bengaluru Today:&lt;/strong&gt; ಕಳೆದ ಮೂರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇದೀಗ ಮಂಗಳವಾರವಾದ ಇಂದು ಭಾರೀ ಇಳಿಕೆ ಕಂಡಿದೆ. ಜೂನ್ 23ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಇರಾನ್-ಅಮೆರಿಕ ಶಾಂತಿ ಒಪ್ಪಂದ ಬಳಿಕ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಮತ್ತೆ ಏರಿಕೆ ಕಂಡಿತ್ತು. ಜೂನ್ 22ರಂದು ಒಂದೇ ದಿನ 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1900 ರುಪಾಯಿ ಏರಿಕೆಯಾಗಿತ್ತು. ಆದರೆ ಜೂನ್ 23ರಂದು ಮತ್ತೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.&lt;/p&gt;&lt;img&gt;&lt;p&gt;ಹೌದು, 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಇಂದು ಒಂದೇ ದಿನ ಬರೋಬ್ಬರಿ 2070 ರುಪಾಯಿ ಇಳಿಕೆಯಾಗಿದೆ. ಈ ಮೂಲಕ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,591 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಇನ್ನು ಇದಷ್ಟೇ ಅಲ್ಲದೇ ಆಭರಣ ಚಿನ್ನವಾಗಿರುವ 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಇಂದು ಸುಮಾರು 1900 ರುಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 13,375 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಇಂದು ಕೊಂಚ ಇಳಿಕೆ ಕಂಡಿದೆ. ಇದೀಗ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 5000 ರುಪಾಯಿ ಇಳಿಕೆ ಕಂಡಿದ್ದು, ಜೂನ್ 23ರಂದು ಒಂದು ಕೆಜಿ ಬೆಳ್ಳಿ ಬೆಲೆ 2,45,000 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಒಂದೇ ದಿನ ಭಾರೀ ಇಳಿಕೆಯಾಗಿರುವುದು ಆಭರಣ ಖರೀದಿಸುವವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.&lt;/p&gt;]]></content:encoded>
            <category>money</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/after-massive-surge-gold-prices-witness-sharp-fall-today-check-latest-rates-kvn-hkgwqld"/>
        </item>
        <item>
            <title><![CDATA[ಸೆಕ್ಯೂರಿಟಿ ಗಾರ್ಡ್ ಈಗ ಕೋಟ್ಯಾಧಿಪತಿ, ಬೆಳಗಾಗೋದ್ರೊಳಗೆ ಬದಲಾಯ್ತು ಅದೃಷ್ಟ]]></title>
            <link>https://kannada.asianetnews.com/money/nepali-security-guard-in-abu-dhabi-wins-rs-78-crore-lottery-jackpot/articleshow-k72mbx9</link>
            <guid isPermaLink="true">https://kannada.asianetnews.com/money/nepali-security-guard-in-abu-dhabi-wins-rs-78-crore-lottery-jackpot/articleshow-k72mbx9</guid>
            <pubDate>Wed, 10 Jun 2026 13:43:20 +0530</pubDate>
            <description><![CDATA[&lt;p&gt;ನೇಪಾಳಿ ಸೆಕ್ಯೂರಿಟಿ ಗಾರ್ಡ್ ಅದೃಷ್ಟ ಬದಲಾಗಿದೆ. ಸೆಕ್ಯೂರಿಟಿ ಕೆಲ್ಸಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದೆ. ನಾಲ್ಕು ವರ್ಷಗಳಿಂದ ಕಾಯ್ತಿದ್ದ ಆ ಕಾಲ ಕೊನೆಗೂ ಕೂಡಿ ಬಂದಿದೆ. ಸಾವಿರಕ್ಕೆ ಕಷ್ಟಪಡ್ತಿದ್ದ ವ್ಯಕ್ತಿ ಈಗ ಕೋಟ್ಯಾಧಿಪತಿ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktr9f96xbkz9h4aq0w3wdq7q,imgname-security-guard-1781079188701.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತಮ ಅವಕಾಶ ಹುಡ್ಕೊಂಡು ಅಬುಧಾಬಿಗೆ ತೆರಳಿದ 26 ವರ್ಷದ ನೇಪಾಳಿ ವ್ಯಕ್ತಿ ಭವಿಷ್ಯ ಬದಲಾಗಿದೆ. ದೇವರು ಕೊಡೊವಾಗ ಕೈ ತುಂಬಿ ಕೊಡ್ತಾನೆ ಅನ್ನೋದಕ್ಕೆ ಈ ಸೆಕ್ಯೂರಿಟಿ ಗಾರ್ಡ್ ಉತ್ತಮ ನಿದರ್ಶನ. ನೇಪಾಳದ ಭದ್ರತಾ ಸಿಬ್ಬಂದಿ ಖಾನ್, ಯುಎಇ ಲಾಟರಿ ಗೆದ್ದಿದ್ದಾರೆ. ಒಂದಲ್ಲ ಎರಡಲ್ಲ 30 ಮಿಲಿಯನ್ ದಿರ್ಹಮ್ ಅಂದ್ರೆ ಸುಮಾರು 78 ಕೋಟಿ ಜಾಕ್ಪಾಟ್ ಗೆದ್ದಿದ್ದಾರೆ.&lt;/p&gt;&lt;h2&gt;ಆ ಕ್ಷಣ ಕೈ ಕಾಲು ನಡುಗಿತ್ತು&lt;/h2&gt;&lt;p&gt;ಖಾನ್, ಲಾಟರಿ (Lottery) ವಿನ್ನರ್ ಸಂಖ್ಯೆ ಘೋಷಣೆ ಮಾಡೋವಾಗ ಅಲ್ಲಿರಲಿಲ್ಲ. ನಂತ್ರ ಇಮೇಲ್ ರಿಸೀವ್ ಮಾಡಿದ್ದಾರೆ. ಇಮೇಲ್ ನಲ್ಲಿ ಬಂದ ಮೆಸ್ಸೇಜನ್ನು ಆರಂಭದಲ್ಲಿ ಗಂಭೀರವಾಗಿ ಪರಿಗಣಿಸಲಿಲ್ಲ. ಹಿಂದೆ ಅನೇಕ ಬಾರಿ ಖಾನ್ ಸಣ್ಣಪುಟ್ಟ ಬಹುಮಾನ ಗೆದ್ದಿದ್ದರು. ಅದೇ ರೀತಿ ಇದೂ ಒಂದು ಅಂತ ಭಾವಿಸಿದ್ದರು. ಆದ್ರೆ ಇಮೇಲ್ ಓಪನ್ ಮಾಡಿದಾಗ ಲಾಟರಿ ಮೊತ್ತ ನೋಡಿ ದಂಗಾಗಿದ್ದಾರೆ.ಕೈ ಕಾಲುಗಳು ನಡುಗಲು ಶುರುವಾಗಿದೆ. ಇದು ಕನಸಿನಂತೆ ಭಾಸವಾಗಿದೆ.&lt;/p&gt;&lt;p&gt;ಜೂನ್ ತಿಂಗಳಿನಲ್ಲೇ ಚಿನ್ನದ ಬೆಲೆಯಲ್ಲಿ ಅತಿದೊಡ್ಡ ಕುಸಿತ! ಇಂದು ಒಂದೇ ದಿನ ₹4300 ರುಪಾಯಿ ಇಳಿಕೆ&lt;/p&gt;&lt;p&gt;2024 ರ ಆರಂಭದಿಂದಲೂ ಸೆಕ್ಯೂರಿಟಿ ಗಾರ್ಡ್ (Security Guard) ಲಾಟರಿ ಖರೀದಿ ಮಾಡ್ತಿದ್ದರು. ಸಣ್ಣಪುಟ್ಟ ಬಹುಮಾನ ಸಿಕ್ಕಿದ್ರೂ ಖರೀದಿ ಮುಂದುವರೆದಿತ್ತು. ಖಾನ್ ಬಂದ ಹಣದಲ್ಲಿ ಮನೆ ಖರೀದಿ ನಿರ್ಧಾರ ಮಾಡಿದ್ದಾರೆ. ನೇಪಾಳದಲ್ಲಿ ಕುಟುಂಬಸ್ಥರಿಗಾಗಿ ಮನೆ ಖರೀದಿ ಮಾಡೋದು ಅವರ ಉದ್ದೇಶವಾಗಿದೆ. ಸೆಕ್ಯೂರಿಟಿ ಗಾರ್ಡ್ ಹುದ್ದೆಯಲ್ಲಿ ಮುಂದುವರೆಯುವ ಉದ್ದೇಶ ಅವರಿಗಿಲ್ಲ. ಲಾಟರಿಯಲ್ಲಿ ಸಿಕ್ಕ ಹಣವನ್ನು ಅವರು ರಿಯಲ್ ಎಸ್ಟೇಟ್ ನಲ್ಲಿ ಬಳಸುವ ಪ್ಲಾನ್ ಮಾಡ್ತಿದ್ದಾರೆ. ದುಬೈನಲ್ಲಿ ಅಪಾರ್ಟ್ ಮೆಂಟ್ ಖರೀದಿ ಯೋಚನೆ ಮಾಡಿದ್ದಾರೆ. ಇಷ್ಟೇ ಅಲ್ಲ, ತಮ್ಮ ಬಹುದಿನದ ಆಸೆಯಾದ ಮಹೀಂದ್ರಾ ಥಾರ್ ಎಸ್ಯುವಿ ಮತ್ತು ರೋಲೆಕ್ಸ್ ವಾಚ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;1 ಲೀಟರ್ ಎಥನಾಲ್&zwnj; ತಯಾರಿಸಲು ಎಷ್ಟು ಕಬ್ಬು ಬೇಕು?: ದೇಶಕ್ಕೆ&lt;/p&gt;&lt;p&gt;ಲಾಟರಿ ತಮ್ಮ ಜೀವನದ ದಿಕ್ಕನ್ನು ಬದಲಿಸಿದೆ ಎಂದು ಖಾನ್ ಭಾವಿಸಿದ್ದಾರೆ. ಹೊಸ ಹೂಡಿಕೆ, ಬ್ಯುಸಿನೆಸ್ ಮೇಲೆ ಗಮನ ಹರಿಸುವ ಆಲೋಚನೆ ಅವರಿಗಿದೆ. ಸೆಕ್ಯೂರಿಟಿ ಗಾರ್ಡ್ ಒಬ್ಬರೇ ಲಾಟರಿ ಖರೀದಿ ಮಾಡಿರಲಿಲ್ಲ. ಅವರ ನಾಲ್ವರು ಸ್ನೇಹಿತರು ಸೇರಿ ಲಾಟರಿ ಖರೀದಿ ಮಾಡಿದ್ರು. ಹಾಗಾಗಿ ಖಾನ್ ಬಂದ ಹಣವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಲಿದ್ದಾರೆ. ಬಹುಶಃ ಖಾನ್ ಅವರ ಗೆಲುವಿನ ಅತ್ಯಂತ ಗಮನಾರ್ಹ ಅಂಶವೆಂದರೆ ಅದು ಸ್ನೇಹ ಮತ್ತು ಪರಿಶ್ರಮದ ಮೇಲೆ ನಿರ್ಮಿಸಲ್ಪಟ್ಟಿದೆ. ಭವಿಷ್ಯದ ಮಿಲಿಯನೇರ್ಗಳು ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿದ್ದ ಈ ಐವರು ಸ್ನೇಹಿತರು, ಸಾಂದರ್ಭಿಕವಾಗಿ ಸಣ್ಣ ಗೆಲುವುಗಳನ್ನು ಗಳಿಸಿದರೂ ಒಟ್ಟಿಗೆ ಟಿಕೆಟ್ಗಳನ್ನು ಖರೀದಿಸುವುದನ್ನು ಮುಂದುವರೆಸಿದ್ದರು. ಅವರ ತಾಳ್ಮೆ ಫಲ ನೀಡಿದೆ. ಆದ್ರೆ ಲಾಟರಿ ಖರೀದಿ ಚಟವಾದ್ರೆ ಅದು ಮನೆ ನಿರ್ಮಿಸುವ ಬದಲು ಮನೆ ಹಾಳು ಮಾಡ್ಬಹುದು. ಇದು ನೆನಪಿರಲಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>money</category>
            <dc:creator>Roopa Hegde</dc:creator>
            <atom:link href="https://kannada.asianetnews.com/money/nepali-security-guard-in-abu-dhabi-wins-rs-78-crore-lottery-jackpot/articleshow-k72mbx9"/>
        </item>
        <item>
            <title><![CDATA[ಬೇರೆಯವರ ಮನೆಯಿಂದ ತಂದ ಮನಿ ಪ್ಲಾಂಟ್ ನೆಡ್ತೀರಾ? ವಾಸ್ತು ಪ್ರಕಾರ ಇದು ಶುಭನಾ? ಅಶುಭನಾ?]]></title>
            <link>https://kannada.asianetnews.com/gallery/vaastu/astro-tips-vastu-shastra-rules-for-stolen-plants-money-plant-benefits-myth-vs-reality-suh-lnggnf9</link>
            <guid isPermaLink="true">https://kannada.asianetnews.com/gallery/vaastu/astro-tips-vastu-shastra-rules-for-stolen-plants-money-plant-benefits-myth-vs-reality-suh-lnggnf9</guid>
            <pubDate>Wed, 24 Jun 2026 12:21:48 +0530</pubDate>
            <description><![CDATA[&lt;p&gt;Vastu shastra rules for money plant ಕಳ್ಳತನದಿಂದ, ಬೇರೆಯವರ ಮನೆಯಿಂದ ತಂದ ಮನಿ ಪ್ಲಾಂಟ್ನಿಮದ ಹಣದ ಹರಿವು ಹೆಚ್ಚಾಗುತ್ತಾ ಅಥವಾ ಸಮಸ್ಯೆಗಳು ಹೆಚ್ಚಾಗುತ್ತಾ ವಾಸ್ತು ತಜ್ಞರು ಹೇಳುತ್ತಾರೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knxg5z1etmftchb0qhj3vhrm,imgname-money-plant-vastu-01-1775885286445.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu shastra rules for money plant ಕಳ್ಳತನದಿಂದ, ಬೇರೆಯವರ ಮನೆಯಿಂದ ತಂದ ಮನಿ ಪ್ಲಾಂಟ್ನಿಮದ ಹಣದ ಹರಿವು ಹೆಚ್ಚಾಗುತ್ತಾ ಅಥವಾ ಸಮಸ್ಯೆಗಳು ಹೆಚ್ಚಾಗುತ್ತಾ ವಾಸ್ತು ತಜ್ಞರು ಹೇಳುತ್ತಾರೆ ನೋಡಿ.&lt;/p&gt;&lt;img&gt;&lt;p&gt;ಮನೆಗೆ ಸಮೃದ್ಧಿ, ಧನಲಾಭ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುವ ಸಸ್ಯಗಳಲ್ಲಿ ಮನಿ ಪ್ಲಾಂಟ್ ಪ್ರಮುಖವಾಗಿದೆ. ಅನೇಕರು ಮನಿ ಪ್ಲಾಂಟ್&zwnj;ನ್ನು ಮನೆಯಲ್ಲಿ ಬೆಳೆಸಿದರೆ ಹಣದ ಹರಿವು ಹೆಚ್ಚುತ್ತದೆ ಎಂದು ನಂಬುತ್ತಾರೆ. ಆದರೆ, &quot;ಬೇರೆಯವರ ಮನೆಯಿಂದ ಕದ್ದು ತಂದ ಮನಿ ಪ್ಲಾಂಟ್ ನೆಟ್ಟರೆ ಹೆಚ್ಚು ಅದೃಷ್ಟ ಬರುತ್ತದೆ&quot; ಎಂಬ ನಂಬಿಕೆಯೂ ಸಾಕಷ್ಟು ಜನರಲ್ಲಿ ಇದೆ.&lt;/p&gt;&lt;img&gt;&lt;p&gt;ವಾಸ್ತುಶಾಸ್ತ್ರದ ಪ್ರಕಾರ, ಕಳ್ಳತನ ಅಥವಾ ಮೋಸದ ಮೂಲಕ ಪಡೆದ ಯಾವುದೇ ವಸ್ತು ಶುಭ ಫಲಿತಾಂಶ ನೀಡುವುದಿಲ್ಲ. ಮನಿ ಪ್ಲಾಂಟ್ ಕೂಡ ಇದಕ್ಕೆ ಹೊರತಲ್ಲ. ಬೇರೆಯವರ ಅನುಮತಿ ಇಲ್ಲದೆ ಗಿಡವನ್ನು ತೆಗೆದುಕೊಂಡು ಬರುವುದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.&lt;/p&gt;&lt;img&gt;&lt;p&gt;ಮನಿ ಪ್ಲಾಂಟ್&zwnj;ನ್ನು ಸ್ವಯಂ ಖರೀದಿಸಿ ಅಥವಾ ಯಾರಾದರೂ ಉಡುಗೊರೆಯಾಗಿ ನೀಡಿದರೆ ನೆಡುವುದು ಶುಭ.&lt;/p&gt;&lt;p&gt;ಗಿಡವನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.&lt;/p&gt;&lt;p&gt;ಒಣಗಿದ ಅಥವಾ ಹಳದಿ ಬಣ್ಣಕ್ಕೆ ತಿರುಗಿದ ಎಲೆಗಳನ್ನು ತಕ್ಷಣ ತೆಗೆದುಹಾಕಬೇಕು.&lt;/p&gt;&lt;p&gt;ಗಿಡವು ನೆಲಕ್ಕೆ ತಾಕದಂತೆ ನೋಡಿಕೊಳ್ಳಬೇಕು.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಹಣದ ಗಿಡ ನೆಡಲು ಆಗ್ನೇಯ ದಿಕ್ಕನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕು ಅಗ್ನಿ ಅಂಶ ಮತ್ತು ಗಣೇಶನೊಂದಿಗೆ ಸಂಬಂಧ ಹೊಂದಿದೆ. ಈ ದಿಕ್ಕಿನಲ್ಲಿ ಹಣದ ಗಿಡ ನೆಡುವುದರಿಂದ ಆರ್ಥಿಕ ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದಾಗ್ಯೂ, ಈಶಾನ್ಯ ದಿಕ್ಕಿನಲ್ಲಿ ಹಣದ ಗಿಡ ನೆಡುವುದನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ, ಏಕೆಂದರೆ ಈ ದಿಕ್ಕು ನೀರಿನ ಅಂಶ ಮತ್ತು ಆಧ್ಯಾತ್ಮಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಇಲ್ಲಿ ಹಣದ ಗಿಡ ನೆಡುವುದರಿಂದ ಶಕ್ತಿಯ ಸಮತೋಲನವನ್ನು ಅಡ್ಡಿಪಡಿಸಬಹುದು.&lt;/p&gt;&lt;img&gt;&lt;p&gt;ಬುಧವಾರ ಮತ್ತು ಶುಕ್ರವಾರಗಳನ್ನು ಮನಿ ಪ್ಲಾಂಟ್ ನೆಡಲು ವಿಶೇಷವಾಗಿ ಶುಭವೆಂದು ಪರಿಗಣಿಸಲಾಗುತ್ತದೆ. ಬುಧವಾರ ಬುಧದ ದಿನವಾಗಿದ್ದು, ಇದನ್ನು ವ್ಯವಹಾರ ಮತ್ತು ಪ್ರಗತಿಯಲ್ಲಿ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ, ಆದರೆ ಶುಕ್ರವಾರ ಸಂಪತ್ತು ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುವ ಶುಕ್ರನೊಂದಿಗೆ ಸಂಬಂಧ ಹೊಂದಿದೆ. ಅಲ್ಲದೆ, ಗಾಜಿನ ಬಾಟಲಿಯಲ್ಲಿ ಮನಿ ಪ್ಲಾಂಟ್ ನೆಡದಂತೆ ಜಾಗರೂಕರಾಗಿರಿ; ಹಾಗೆ ಮಾಡುವುದರಿಂದ ಲಾಭದ ಬದಲು ಹಾನಿಯಾಗಬಹುದು.&lt;/p&gt;]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/vaastu/astro-tips-vastu-shastra-rules-for-stolen-plants-money-plant-benefits-myth-vs-reality-suh-lnggnf9"/>
        </item>
        <item>
            <title><![CDATA[ಕೇವಲ ಆಧಾರ್ ಸಂಖ್ಯೆ ಬಳಸಿ ನಿಮ್ಮ ಬ್ಯಾಂಕ್ ಹಣ ಲಪಟಾಯಿಸಲು ಸಾಧ್ಯವೇ? ಈ ಬಗ್ಗೆ UIDAI ನೀಡಿದ ಮಹತ್ವದ ಮಾಹಿತಿ ಇಲ್ಲಿದೆ!]]></title>
            <link>https://kannada.asianetnews.com/news-money/can-money-be-stolen-from-your-bank-account-with-just-an-aadhaar-number-and-here-is-the-key-information-from-uidai/articleshow-ogeuavu</link>
            <guid isPermaLink="true">https://kannada.asianetnews.com/news-money/can-money-be-stolen-from-your-bank-account-with-just-an-aadhaar-number-and-here-is-the-key-information-from-uidai/articleshow-ogeuavu</guid>
            <pubDate>Sat, 13 Jun 2026 22:26:26 +0530</pubDate>
            <description><![CDATA[&lt;p&gt;ಫಿನ್&zwnj;ಟೆಕ್ ಮತ್ತು ಬ್ಯಾಂಕಿಂಗ್ ವಲಯದ ಮೂಲಸೌಕರ್ಯವು ಆಧಾರ್&zwnj;ನೊಂದಿಗೆ ಗಟ್ಟಿಯಾಗಿ ಬೆಸೆದುಕೊಂಡಿದೆ. ಕೇವಲ ಆಧಾರ್ ಸಂಖ್ಯೆ ಸೋರಿಕೆಯಾದ ಮಾತ್ರಕ್ಕೆ ಆರ್ಥಿಕ ಹಾನಿ ಸಂಭವಿಸಬಹುದೇ? ಈ ಬಗ್ಗೆ ಯುಐಡಿಎಐ ನೀಡಿದ ಸ್ಪಷ್ಟನೆ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv0yezab1z62zy5eb7669dqs,imgname-aadhaar-card-1781369634122.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೇವಲ ಆಧಾರ್ ಸಂಖ್ಯೆಯಿಂದ ಹಣ ದೋಚಲು ಸಾಧ್ಯವೇ? ಯುಐಡಿಎಐ ನೀಡಿರುವ ಮಹತ್ವದ ಸ್ಪಷ್ಟನೆಯ ವಿಶ್ಲೇಷಣೆ&lt;/strong&gt;&lt;/p&gt;&lt;p&gt;ನವದೆಹಲಿ/ಬೆಂಗಳೂರು: ಭಾರತದ ಡಿಜಿಟಲ್ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಆಧಾರ್ ಕಾರ್ಡ್ (Aadhaar Card) ಅತ್ಯಂತ ಪ್ರಮುಖ 'ಕೆವೈಸಿ' (KYC) ದಾಖಲೆಯಾಗಿ ಹೊರಹೊಮ್ಮಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳ ಹಿನ್ನೆಲೆಯಲ್ಲಿ, &quot;ಬಹಿರಂಗವಾಗಿ ಸಿಗುವ ಆಧಾರ್ ಸಂಖ್ಯೆಯನ್ನು ಬಳಸಿ ಬ್ಯಾಂಕ್ ಖಾತೆಗಳಿಂದ ಹಣ ಕದಿಯಲು (Aadhaar Card Fraud) ಸಾಧ್ಯವೇ?&quot; ಎಂಬ ಗಂಭೀರ ಆತಂಕ ಹೂಡಿಕೆದಾರರು ಮತ್ತು ಸಾಮಾನ್ಯ ಗ್ರಾಹಕರಲ್ಲಿ ಮನೆಮಾಡಿದೆ. ಈ ಕುರಿತು ಮಾರುಕಟ್ಟೆಯಲ್ಲಿ ಹಬ್ಬಿರುವ ಆತಂಕಗಳನ್ನು ದೂರಗೊಳಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಅಧಿಕೃತ ಸ್ಪಷ್ಟನೆಯನ್ನು ನೀಡಿದೆ.&lt;/p&gt;&lt;p&gt;ಡೇಟಾ ಸುರಕ್ಷತೆ ಮತ್ತು ವಹಿವಾಟಿನ ರಕ್ಷಣೆ:&lt;/p&gt;&lt;p&gt;ಯುಐಡಿಎಐ ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಕೇವಲ 12 ಅಂಕಿಗಳ ಆಧಾರ್ ಸಂಖ್ಯೆಯು ಬ್ಯಾಂಕ್ ವಹಿವಾಟನ್ನು ಪೂರ್ಣಗೊಳಿಸಲು ಸಾಕಾಗುವುದಿಲ್ಲ. ಕಾರ್ಪೊರೇಟ್ ಹಣಕಾಸು ನಿಯಮಗಳಂತೆ, ಯಾವುದೇ ಆರ್ಥಿಕ ವರ್ಗಾವಣೆಗೆ ಕನಿಷ್ಠ ಎರಡು ಹಂತದ ದೃಢೀಕರಣ (Two-factor authentication) ಅಗತ್ಯವಿರುತ್ತದೆ. ನಿಮ್ಮ ಆಧಾರ್ ಸಂಖ್ಯೆ ಸಾರ್ವಜನಿಕವಾಗಿ ಲಭ್ಯವಿದ್ದರೂ ಅಥವಾ ವಂಚಕರ ಕೈ ಸೇರಿದರೂ, ಅದನ್ನು ಬಳಸಿ ಬ್ಯಾಂಕ್ ಖಾತೆಗೆ ಕನ್ನ ಹಾಕಲು ಸಾಧ್ಯವಿಲ್ಲ. ಏಕೆಂದರೆ, ವಹಿವಾಟು ನಡೆಸಲು ಆಧಾರ್ ಸಂಖ್ಯೆಯ ಜೊತೆಗೆ ಈ ಕೆಳಗಿನ ಯಾವುದಾದರೂ ಒಂದು ಅಂಶ ಕಡ್ಡಾಯವಾಗಿರುತ್ತದೆ:&lt;/p&gt;&lt;h2&gt;ಬ್ಯಾಂಕ್ ನಮೂನೆಯಲ್ಲಿರುವ ಸಹಿ.&lt;/h2&gt;&lt;p&gt;ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್&zwnj;ನ ಭೌತಿಕ ಲಭ್ಯತೆ.&lt;/p&gt;&lt;p&gt;ವೈಯಕ್ತಿಕ ಪಿನ್ (PIN) ಅಥವಾ ರಹಸ್ಯ ಪಾಸ್&zwnj;ವರ್ಡ್.&lt;/p&gt;&lt;p&gt;ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP).&lt;/p&gt;&lt;p&gt;AePS ವ್ಯವಸ್ಥೆಯ ಭದ್ರತಾ ಚೌಕಟ್ಟು:&lt;/p&gt;&lt;p&gt;ಬ್ಯಾಂಕಿಂಗ್ ಉದ್ಯಮದಲ್ಲಿ ಪ್ರಮುಖವಾಗಿ ಬಳಕೆಯಾಗುವ 'ಆಧಾರ್ ಆಧಾರಿತ ಪಾವತಿ ವ್ಯವಸ್ಥೆ' (AePS - Aadhaar enabled Payment System) ಬಗ್ಗೆಯೂ ಯುಐಡಿಎಐ ಬೆಳಕು ಚೆಲ್ಲಿದೆ. ಈ ವ್ಯವಸ್ಥೆಯ ಮೂಲಕ ಹಣ ಹಿಂಪಡೆಯಬೇಕಾದರೂ ಸಹ 'ಬಯೋಮೆಟ್ರಿಕ್ ದೃಢೀಕರಣ' ಅನಿವಾರ್ಯ. ಗ್ರಾಹಕನ ಬೆರಳಚ್ಚು (Fingerprint) ಅಥವಾ ಕಣ್ಣಿನ ರೆಟಿನಾ ಸ್ಕ್ಯಾನ್ ಇಲ್ಲದೆ ಯಾವುದೇ ಹಣಕಾಸು ಸಂಸ್ಥೆಯು ವಹಿವಾಟನ್ನು ಅನುಮೋದಿಸುವುದಿಲ್ಲ. ಹೀಗಾಗಿ, ತಾಂತ್ರಿಕವಾಗಿ ವಂಚಕರಿಗೆ ಕೇವಲ ಸಂಖ್ಯೆಯನ್ನು ಬಳಸಿ ಹಣ ಪಡೆಯುವುದು ಅಸಾಧ್ಯ ಎಂದು ಪ್ರಾಧಿಕಾರ ವಿಶ್ಲೇಷಿಸಿದೆ.&lt;/p&gt;&lt;p&gt;ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ:&lt;/p&gt;&lt;p&gt;ಸೈಬರ್ ಭದ್ರತಾ ತಜ್ಞರ ಪ್ರಕಾರ, ಆಧಾರ್ ಸಂಖ್ಯೆ ಸೋರಿಕೆಯಾಗುವುದಕ್ಕಿಂತಲೂ, 'ಸೋಷಿಯಲ್ ಇಂಜಿನಿಯರಿಂಗ್' (ಗ್ರಾಹಕರನ್ನು ನಂಬಿಸಿ ಮಾಹಿತಿ ಪಡೆಯುವುದು) ಮೂಲಕ ನಡೆಯುವ ವಂಚನೆಗಳೇ ಹೆಚ್ಚು. ಯುಐಡಿಎಐ ವರದಿಯ ಪ್ರಕಾರ, ಇಲ್ಲಿಯವರೆಗೆ ನಡೆದಿರುವ ಹೆಚ್ಚಿನ ವಂಚನೆ ಪ್ರಕರಣಗಳು ನಕಲಿ ದಾಖಲೆ ಸೃಷ್ಟಿಸುವಿಕೆಗೆ ಸೀಮಿತವಾಗಿವೆ ಹೊರತು, ಆಧಾರ್ ಡೇಟಾಬೇಸ್&zwnj;ನಿಂದ ನೇರವಾಗಿ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಪ್ರಕರಣಗಳಿಲ್ಲ.&lt;/p&gt;&lt;h3&gt;ಗ್ರಾಹಕರಿಗೆ ಮತ್ತು ಉದ್ದಿಮೆದಾರರಿಗೆ ಸಲಹೆ:&lt;/h3&gt;&lt;p&gt;ತನ್ನ ಪ್ರಕಟಣೆಯಲ್ಲಿ ಯುಐಡಿಎಐ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸೂಚಿಸಿದೆ:&lt;/p&gt;&lt;p&gt;ಬಯೋಮೆಟ್ರಿಕ್ ಲಾಕ್: ನಿಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಯುಐಡಿಎಐ ಪೋರ್ಟಲ್ ಅಥವಾ ಎಂ-ಆಧಾರ್ ಆ್ಯಪ್ ಮೂಲಕ ಲಾಕ್ ಮಾಡಿಕೊಳ್ಳಬಹುದು.&lt;/p&gt;&lt;p&gt;ಒಟಿಪಿ ಗೌಪ್ಯತೆ: ಯಾವುದೇ ಸಂದರ್ಭದಲ್ಲಿ ಫೋನ್ ಅಥವಾ ಸಂದೇಶದ ಮೂಲಕ ಬರುವ ಒಟಿಪಿ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು.&lt;/p&gt;&lt;p&gt;ಮಾಸ್ಕ್ಡ್ ಆಧಾರ್: ಸಾರ್ವಜನಿಕವಾಗಿ ಗುರುತಿನ ಚೀಟಿ ನೀಡುವಾಗ ಕೊನೆಯ 4 ಅಂಕಿಗಳು ಮಾತ್ರ ಕಾಣಿಸುವ 'ಮಾಸ್ಕ್ಡ್ ಆಧಾರ್' (Masked Aadhaar) ಬಳಸುವುದು ಸುರಕ್ಷಿತ.&lt;/p&gt;&lt;p&gt;ತೀರ್ಮಾನ:&lt;/p&gt;&lt;p&gt;ಫಿನ್&zwnj;ಟೆಕ್ ಮತ್ತು ಬ್ಯಾಂಕಿಂಗ್ ವಲಯದ ಮೂಲಸೌಕರ್ಯವು ಆಧಾರ್&zwnj;ನೊಂದಿಗೆ ಗಟ್ಟಿಯಾಗಿ ಬೆಸೆದುಕೊಂಡಿದೆ. ಕೇವಲ ಆಧಾರ್ ಸಂಖ್ಯೆ ಸೋರಿಕೆಯಾದ ಮಾತ್ರಕ್ಕೆ ಆರ್ಥಿಕ ಹಾನಿ ಸಂಭವಿಸುವುದಿಲ್ಲ ಎಂಬ ಯುಐಡಿಎಐ ಸ್ಪಷ್ಟನೆಯು ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದು ಮತ್ತು ಡಿಜಿಟಲ್ ಜಾಗೃತಿ ಹೊಂದುವುದೇ ಹಣಕಾಸಿನ ಸುರಕ್ಷತೆಗೆ ಅಂತಿಮ ಮದ್ದಾಗಿದೆ.&lt;/p&gt;]]></content:encoded>
            <category>money</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-money/can-money-be-stolen-from-your-bank-account-with-just-an-aadhaar-number-and-here-is-the-key-information-from-uidai/articleshow-ogeuavu"/>
        </item>
        <item>
            <title><![CDATA[RBI: ಗೋಕಾಕ ಮಹಾಲಕ್ಷ್ಮಿ ಬ್ಯಾಂಕ್‌ ಲೈಸೆನ್ಸ್‌ ರದ್ದು, ದಿವಾಳಿಗೆ ಕಾರಣವೇನು? ನಿಮ್ಮ ಹಣ ಮರಳಿ ಬರುತ್ತಾ?]]></title>
            <link>https://kannada.asianetnews.com/india-news/rbi-cancels-licence-of-karnataka-based-sri-mahalaxmi-urban-co-operative-credit-bank-rav/articleshow-oxig2gd</link>
            <guid isPermaLink="true">https://kannada.asianetnews.com/india-news/rbi-cancels-licence-of-karnataka-based-sri-mahalaxmi-urban-co-operative-credit-bank-rav/articleshow-oxig2gd</guid>
            <pubDate>Fri, 19 Jun 2026 06:21:40 +0530</pubDate>
            <description><![CDATA[&lt;p&gt;ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಆರ್&zwnj;ಬಿಐ, ಬೆಳಗಾವಿ ಜಿಲ್ಲೆಯ ಗೋಕಾಕ ಮೂಲದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ. ಬ್ಯಾಂಕಿನ ವ್ಯವಹಾರವನ್ನು ನಿಷೇಧಿಸಲಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvends3vm4dnpfjkjqyn17cz,imgname----------------------6--1781829919867.jpg" type="image/jpeg" height="390" width="690"/>
            <content:encoded><![CDATA[&lt;h2&gt;ಠೇವಣಿದಾರರಿಗೆ ಹಣ ಮರಳಿಸಲು ಕ್ರಮ&lt;/h2&gt;&lt;p&gt;ಪಿಟಿಐ ಮುಂಬೈ (ಜೂ.19): ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಕರ್ನಾಟಕ ಬೆಳಗಾವಿ ಜಿಲ್ಲೆ ಗೋಕಾಕ ಮೂಲದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕಿನ(Sri Mahalakshmi Urban Co-operative Credit Bank) ಪರವಾನಗಿಯನ್ನು ರಿಸರ್ವ್ ಬ್ಯಾಂಕ್(RBI) ರದ್ದುಗೊಳಿಸಿದೆ. ಅದರಂತೆ ಗುರುವಾರದಿಂದಲೇ ಠೇವಣಿ ಸ್ವೀಕಾರ ಮತ್ತು ಠೇವಣಿ ಮರುಪಾವತಿ ಸೇರಿದಂತೆ ಎಲ್ಲ ಬ್ಯಾಂಕಿಂಗ್ ವ್ಯವಹಾರವನ್ನು ನಿಷೇಧಿಸಲಾಗಿದೆ.&lt;/p&gt;&lt;h3&gt;ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶ&lt;/h3&gt;&lt;p&gt;ಬ್ಯಾಂಕ್ ವ್ಯವಹಾರ ಅಂತ್ಯಗೊಳಿಸಲು ಮತ್ತು ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶ ಹೊರಡಿಸುವಂತೆ ಕರ್ನಾಟಕದ ಸಹಕಾರ ಸಂಘಗಳ ರಿಜಿಸ್ಟ್ರಾರ್&zwnj;ಗೆ ಕೋರಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್&zwnj;ಬಿಐ) ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.&lt;/p&gt;&lt;p&gt;ದಿವಾಳಿಯ ನಂತರ, ಸುಮಾರು ಶೇ.97.9ರಷ್ಟು ಠೇವಣಿದಾರರು ತಮ್ಮ ಠೇವಣಿಗಳ ಪೂರ್ಣ ಮೊತ್ತವನ್ನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್&zwnj;ನಿಂದ ಪಡೆಯಲಿದ್ದಾರೆ ಎಂದು ಅದು ಹೇಳಿದೆ.&lt;/p&gt;&lt;p&gt;ಬ್ಯಾಂಕ್&zwnj; ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆಗಳನ್ನು ಹೊಂದಿಲ್ಲ ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ರ ಕೆಲವು ನಿಬಂಧನೆಗಳನ್ನು ಅದು ಪಾಲಿಸಲು ಸಾಧ್ಯವಿಲ್ಲ ಎಂದು ಲೈಸೆನ್ಸ್&zwnj; ರದ್ದತಿಗೆ ಆರ್&zwnj;ಬಿಐ ಕಾರಣ ನೀಡಿದೆ.&lt;/p&gt;&lt;p&gt;&lsquo;ಈಗಿನ ಆರ್ಥಿಕ ಸ್ಥಿತಿಯನ್ನು ನೋಡಿದರೆ ಬ್ಯಾಂಕ್ ತನ್ನ ಪ್ರಸ್ತುತ ಠೇವಣಿದಾರರಿಗೆ ಪೂರ್ಣವಾಗಿ ಪಾವತಿಸಲು ಸಾಧ್ಯವಾಗುವುದಿಲ್ಲ. ಬ್ಯಾಂಕಿನ ಮುಂದುವರಿಕೆಯು ಅದರ ಠೇವಣಿದಾರರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ&rsquo; ಎಂದೂ ಅದು ಹೇಳಿದೆ.&lt;/p&gt;]]></content:encoded>
            <category>money</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/rbi-cancels-licence-of-karnataka-based-sri-mahalaxmi-urban-co-operative-credit-bank-rav/articleshow-oxig2gd"/>
        </item>
        <item>
            <title><![CDATA[ಚಿನ್ನ ಖರೀದಿಸುವವರಿಗೆ ಶುಭ ಶುಕ್ರವಾರ; ಅಮೆರಿಕ-ಇರಾನ್ ಡೀಲ್ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ಬರೋಬ್ಬರಿ 3650 ರುಪಾಯಿ ಕುಸಿತ!]]></title>
            <link>https://kannada.asianetnews.com/gallery/business/gold-prices-crash-after-us-iran-peace-deal-gold-falls-3650-rupees-silver-drops-10000-on-june-19-kvn-ufntver</link>
            <guid isPermaLink="true">https://kannada.asianetnews.com/gallery/business/gold-prices-crash-after-us-iran-peace-deal-gold-falls-3650-rupees-silver-drops-10000-on-june-19-kvn-ufntver</guid>
            <pubDate>Fri, 19 Jun 2026 11:10:47 +0530</pubDate>
            <description><![CDATA[&lt;p&gt;ಕಳೆದ ಕೆಲವು ದಿನಗಳಿಂದ ಆಕಾಶದತ್ತ ಮುಖ ಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಕುಸಿತ ಕಂಡಿದೆ. ಅಮೆರಿಕ-ಇರಾನ್ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮಹಾಪತನ ಕಂಡಿದೆ. ಜೂನ್ 19ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಎಷ್ಟು ಕುಸಿತ ಕಂಡಿದೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmm4jkq3gw693raa33ksz2bk,imgname-india-gold-price-today-26-march-2026-24k-22k-rate-delhi-mumbai-patna-gold-price-rise-oil-inflation-impact-1-1774497386211.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಕೆಲವು ದಿನಗಳಿಂದ ಆಕಾಶದತ್ತ ಮುಖ ಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಕುಸಿತ ಕಂಡಿದೆ. ಅಮೆರಿಕ-ಇರಾನ್ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮಹಾಪತನ ಕಂಡಿದೆ. ಜೂನ್ 19ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಎಷ್ಟು ಕುಸಿತ ಕಂಡಿದೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಳೆದ ಮೂರೂವರೆ ತಿಂಗಳಿನಿಂದ ಮಧ್ಯಪ್ರಾಚ್ಯ ಯುದ್ದದಿಂದಾಗಿ ಪ್ರತಿ ದಿನ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯವಾಗಿದ್ದವು. ಅದರಲ್ಲೂ ಮದುವೆ ಹಬ್ಬ, ಹರಿದಿನಗಳ ಸಂದರ್ಭದಲ್ಲೇ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದರಿಂದ ಸಾಮಾನ್ಯ ವರ್ಗದ ಜನ ಚಿನ್ನ ಖರೀದಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.&lt;/p&gt;&lt;img&gt;&lt;p&gt;ಇದೀಗ ಇರಾನ್ ಹಾಗೂ ಅಮೆರಿಕ ನಡುವಿನ ಯುದ್ದ ಉಭಯ ದೇಶಗಳ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ, ಭಾರತದ ಷೇರು ಮಾರುಕಟ್ಟೆ ಹಾಗೂ ರುಪಾಯಿ ಮೌಲ್ಯದಲ್ಲಿ ಕೊಂಚ ಏರಿಕೆ ಕಂಡಿದೆ. ಇನ್ನು ಇದರ ನಡುವೆ ಇಂದು ಚಿನ್ನದ ಬೆಲೆಯಲ್ಲಿ ಮಹಾ ಕುಸಿತ ಕಂಡಿದ್ದು, ಆಭರಣ ಪ್ರಿಯರ ಪಾಲಿಗೆ ಇಂದು ಶುಭ ಶುಕ್ರವಾರವಾಗಿ ಪರಿಣಮಿಸಿದೆ.&lt;/p&gt;&lt;img&gt;&lt;p&gt;ಹೌದು, 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಇಂದು ಒಂದೇ ದಿನ ಬರೋಬ್ಬರಿ 3650 ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಇಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,586 ರುಪಾಯಿಗಳಾಗಿವೆ. ಇದು ಬಂಗಾರದ ಮೇಲೆ ಹೂಡಿಕೆ ಮಾಡುವವರಿಗೆ ಶುಭ ಸುದ್ದಿಯಾಗಿದೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ ಆಭರಣ ಚಿನ್ನವಾಗಿರುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಸಹ ಗಣನೀಯ ಕುಸಿತವಾಗಿದೆ. ಇದೀಗ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಸುಮಾರು 3,350 ರುಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 13,370 ರುಪಾಯಿಗಳಾಗಿವೆ.&lt;/p&gt;&lt;img&gt;&lt;p&gt;ಇಂದು ಚಿನ್ನದ ಬೆಲೆಯಲ್ಲಿ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರುಪಾಯಿ ಇಳಿಕೆಯಾಗಿದೆ. ಜೂನ್ 19ರಂದು ಒಂದು ಕೆಜಿ ಬೆಳ್ಳಿ ಬೆಲೆ 2,50,000 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಒಂದು ಕಡೆ ಷೇರು ಮಾರುಕಟ್ಟೆಯಲ್ಲಿ ಏರಿಕೆ, ಯುದ್ದದ ಕಾವು ತಣ್ಣಗಾದ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿರುವುದು ಚಿನ್ನ ಖರೀದಿಸುವವರ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರ ಮುಖದಲ್ಲಿ ಮಂದಹಾಸ ಮೂಡಿಸಿರುವುದಂತೂ ಸುಳ್ಳಲ್ಲ.&lt;/p&gt;]]></content:encoded>
            <category>money</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/gold-prices-crash-after-us-iran-peace-deal-gold-falls-3650-rupees-silver-drops-10000-on-june-19-kvn-ufntver"/>
        </item>
        <item>
            <title><![CDATA[ಇತಿಹಾಸ ರಚಿಸಲಿದ್ದಾರೆ ಎಲಾನ್‌ ಮಸ್ಕ್,  ವಿಶ್ವದ ಮೊದಲ ಟ್ರಿಲಿಯನೇರ್‌ ಪಟ್ಟ?]]></title>
            <link>https://kannada.asianetnews.com/business/elon-musk-could-create-history-soon-become-worlds-first-trillionaire/articleshow-uuheslg</link>
            <guid isPermaLink="true">https://kannada.asianetnews.com/business/elon-musk-could-create-history-soon-become-worlds-first-trillionaire/articleshow-uuheslg</guid>
            <pubDate>Fri, 12 Jun 2026 15:17:32 +0530</pubDate>
            <description><![CDATA[&lt;p&gt;ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್&zwnj; ಮಸ್ಕ್&zwnj; ಒಡೆತನದ SpaceX IPO ಇಂದು ಷೇರು ಮಾರುಕಟ್ಟೆ ಪ್ರವೇಶ ಮಾಡಲಿದ್ದು, ಇತಿಹಾಸ ನಿರ್ಮಿಸುವ ನಿರೀಕ್ಷೆ ಇದೆ. ಒಂದ್ವೇಳೆ ನಿರೀಕ್ಷೆಯಂತೆ ಆದಲ್ಲಿ ಎಲಾನ್ ಮಸ್ಕ್ ಇತಿಹಾಸ ಸೃಷ್ಟಿಸಲಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktxkjn6aqzpfjwv2kzngd0wk,imgname-elon-musk-1781257557194.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್&zwnj; ಮಸ್ಕ್ (Elon Musk) ಶೀಘ್ರದಲ್ಲೇ ಇತಿಹಾಸ ನಿರ್ಮಿಸಿ ವಿಶ್ವದ ಮೊದಲ ಟ್ರಿಲಿಯನೇರ್ ಆಗುವ ಸಾಧ್ಯತೆ ದಟ್ಟವಾಗಿದೆ. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 1.11 ಟ್ರಿಲಿಯನ್ ಡಾಲರ್ಗಳಿಗೆ ಏರಬಹುದು ಎಂದು ಅಂದಾಜಿಸಲಾದೆ.&lt;/p&gt;&lt;h2&gt;SpaceX IPO ಪ್ರಮುಖ ಕಾರಣ&lt;/h2&gt;&lt;p&gt;ವರದಿಗಳ ಪ್ರಕಾರ, ಮಸ್ಕ್ ಅವರ ಬಾಹ್ಯಾಕಾಶ ಕಂಪನಿ SpaceX ಸಾರ್ವಜನಿಕ ಷೇರು ಮಾರುಕಟ್ಟೆಗೆ (IPO) ಇಂದು ಪ್ರವೇಶ ಮಾಡಲಿದೆ. ಬಹು ನಿರೀಕ್ಷಿತ SpaceX IPO ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಅತಿದೊಡ್ಡ ಲಿಸ್ಟಿಂಗ್ಗಳಲ್ಲಿ ಒಂದಾಗಲಿದೆ ಎಂದು ಹೇಳಲಾಗುತ್ತಿದೆ. Elon Musk ಅವರ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯು Nasdaq ನಲ್ಲಿ SPCX ಎಂಬ ಟಿಕ್ಕರ್ ಚಿಹ್ನೆಯಡಿ ಲಿಸ್ಟ್ ಆಗಲಿದೆ. ಜೂನ್&zwnj; 12 ರಂದು ಅಮೆರಿಕದ ಪೂರ್ವ ಸಮಯದ ಪ್ರಕಾರ ಬೆಳಿಗ್ಗೆ 9. 30 ಅಂದ್ರೆ ಭಾರತೀಯ ಸಮಯ ಸಂಜೆ 7 ಗಂಟೆಗೆ ಲೀಸ್ಟಿಂಗ್&zwnj; ಆಗಲಿದೆ. ಕಂಪನಿಯ ಮೌಲ್ಯ ಸುಮಾರು 1.77 ಟ್ರಿಲಿಯನ್ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;Currency Notes: ನಮ್ಮ ದೇಶದಲ್ಲಿ ಹತ್ತು ರೂಪಾಯಿಯಿಂದ 500 ರೂಪಾಯಿ ನೋಟು ಎಲ್ಲಿ ಮುದ್ರಿಸುತ್ತಾರೆ ಗೊತ್ತಾ?&lt;/p&gt;&lt;p&gt;ಮಸ್ಕ್ ಅವರ ಬಳಿ SpaceXನಲ್ಲಿ ಸುಮಾರು ಅರ್ಧದಷ್ಟು ಪಾಲುದಾರಿಕೆ ಇದೆ. ಈ ಮೌಲ್ಯಮಾಪನ ನಿಜವಾದರೆ, ಅವರ ವೈಯಕ್ತಿಕ ಆಸ್ತಿ ಮೌಲ್ಯವು 1.11 ಟ್ರಿಲಿಯನ್ ಡಾಲರ್ ತಲುಪುವ ಸಾಧ್ಯತೆ ಇದೆ. 1 ಟ್ರಿಲಿಯನ್ ಡಾಲರ್ ಆಸ್ತಿ ಮೌಲ್ಯವು ತೈವಾನ್, ಐರ್ಲೆಂಡ್, ಸ್ವೀಡನ್ ಮತ್ತು ಸಿಂಗಾಪುರದಂತಹ ದೇಶಗಳ ವಾರ್ಷಿಕ GDPಗಿಂತಲೂ ಹೆಚ್ಚು.&lt;/p&gt;&lt;p&gt;ಸ್ಯಾಲರಿ ಚೆನ್ನಾಗಿದ್ರೂ ಸೇವಿಂಗ್ಸ್&zwnj; ಮಾಡೋಕೆ ಆಗ್ತಿಲ್ವಾ? ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸೋ 5 ಗೋಲ್ಡನ್ ಫೈನಾನ್ಸ್ ಟಿಪ್ಸ್&lt;/p&gt;&lt;h3&gt;ಈಗಿನ ಆಸ್ತಿ ಎಷ್ಟು?&lt;/h3&gt;&lt;p&gt;ಇತ್ತೀಚಿನ ಅಂದಾಜಿನ ಪ್ರಕಾರ, ಎಲನ್ ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 707 ಬಿಲಿಯನ್ ಡಾಲರ್ ಆಗಿದೆ. 2026ರಲ್ಲಿ ಮಾತ್ರವೇ ಅವರ ಆಸ್ತಿಯಲ್ಲಿ ಸುಮಾರು 87.5 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>money</category>
            <dc:creator>Roopa Hegde</dc:creator>
            <atom:link href="https://kannada.asianetnews.com/business/elon-musk-could-create-history-soon-become-worlds-first-trillionaire/articleshow-uuheslg"/>
        </item>
        <item>
            <title><![CDATA[Wrong UPI Transaction Refund: ತಪ್ಪಾಗಿ ಹೆಚ್ಚು ಫೋನ್‌ಪೇ ಮಾಡಿದ್ರೆ ಹೇಗೆ ಹಣ ವಾಪಾಸ್‌ ಪಡೆಯೋದು?]]></title>
            <link>https://kannada.asianetnews.com/gallery/india-news/what-to-do-if-we-send-money-to-wrong-account-in-google-pay-upi-how-to-get-back-money-x5fp8z1</link>
            <guid isPermaLink="true">https://kannada.asianetnews.com/gallery/india-news/what-to-do-if-we-send-money-to-wrong-account-in-google-pay-upi-how-to-get-back-money-x5fp8z1</guid>
            <pubDate>Wed, 24 Jun 2026 16:56:35 +0530</pubDate>
            <description><![CDATA[&lt;p&gt;What if I accidentally transfer money to wrong UPI ID: ಫೋನ್ ಪೇ, ಗೂಗಲ್ ಪೇ ನಂತಹ ಯುಪಿಐ ಆ್ಯಪ್&zwnj;ಗಳ ಮೂಲಕ ಹಣ ಕಳುಹಿಸುವಾಗ ತುಂಬಾ ಜಾಗರೂಕರಾಗಿರಬೇಕು. ಸಣ್ಣ ತಪ್ಪಾದರೂ ನಮ್ಮ ಹಣ ಬೇರೆಯವರ ಖಾತೆಗೆ ಹೋಗಿಬಿಡುತ್ತದೆ. ಹೀಗೆ ಗೊತ್ತಿಲ್ಲದ ನಂಬರ್&zwnj;ಗೆ ಹಣ ಕಳುಹಿಸಿದರೆ ಏನು ಮಾಡಬೇಕು ಗೊತ್ತಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hr66cz0d2a03vg9aezj8snn4,imgname-googlepay-phonepay.jpg" type="image/jpeg" height="390" width="690"/>
            <content:encoded><![CDATA[&lt;p&gt;What if I accidentally transfer money to wrong UPI ID: ಫೋನ್ ಪೇ, ಗೂಗಲ್ ಪೇ ನಂತಹ ಯುಪಿಐ ಆ್ಯಪ್&zwnj;ಗಳ ಮೂಲಕ ಹಣ ಕಳುಹಿಸುವಾಗ ತುಂಬಾ ಜಾಗರೂಕರಾಗಿರಬೇಕು. ಸಣ್ಣ ತಪ್ಪಾದರೂ ನಮ್ಮ ಹಣ ಬೇರೆಯವರ ಖಾತೆಗೆ ಹೋಗಿಬಿಡುತ್ತದೆ. ಹೀಗೆ ಗೊತ್ತಿಲ್ಲದ ನಂಬರ್&zwnj;ಗೆ ಹಣ ಕಳುಹಿಸಿದರೆ ಏನು ಮಾಡಬೇಕು ಗೊತ್ತಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭಾರತ ಈಗ ಸಂಪೂರ್ಣ ಡಿಜಿಟಲ್ ಆಗಿದೆ. ಪ್ರತಿಯೊಂದು ಕೆಲಸವೂ ತಂತ್ರಜ್ಞಾನದ ಸಹಾಯದಿಂದಲೇ ನಡೆಯುತ್ತಿದೆ. ಅದರಲ್ಲೂ ಆರ್ಥಿಕ ವಹಿವಾಟುಗಳಂತೂ ಹಿಂದೆಂದಿಗಿಂತಲೂ ಸುಲಭವಾಗಿವೆ. ಬ್ಯಾಂಕ್&zwnj;ಗಳ ಸುತ್ತ ಅಲೆಯುವ ಬದಲು, ಕೈಯಲ್ಲಿರುವ ಸ್ಮಾರ್ಟ್&zwnj;ಫೋನೇ ಡಿಜಿಟಲ್ ಬ್ಯಾಂಕ್ ಆಗಿದೆ.&amp;nbsp;&lt;/p&gt;&lt;p&gt;ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಭೀಮ್, ಅಮೆಜಾನ್ ಪೇ ನಂತಹ ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್&zwnj;ಫೇಸ್) ಆ್ಯಪ್&zwnj;ಗಳ ಮೂಲಕ ಒಂದೇ ಕ್ಲಿಕ್&zwnj;ನಲ್ಲಿ ಹಣಕಾಸಿನ ವಹಿವಾಟುಗಳು ನಡೆಯುತ್ತಿವೆ.&amp;nbsp;&lt;/p&gt;&lt;p&gt;ಈ ಯುಪಿಐ ಆ್ಯಪ್&zwnj;ಗಳ ಮೂಲಕ ಪಾವತಿ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಸಣ್ಣ ತಪ್ಪಾದರೂ ಹಣ ಕಳೆದುಕೊಳ್ಳುವ ಅಪಾಯವಿರುತ್ತದೆ. ತಪ್ಪು ಫೋನ್ ನಂಬರ್ ಹಾಕಿದರೆ, ಹಣವು ಗೊತ್ತಿಲ್ಲದ ವ್ಯಕ್ತಿಗಳ ಖಾತೆಗೆ ಹೋಗುತ್ತದೆ.&amp;nbsp;&lt;/p&gt;&lt;p&gt;ಕೆಲವೊಮ್ಮೆ ನಾವು ಅಚಾನಕ್ಕಾಗಿ ಹೆಚ್ಚು ಹಣವನ್ನು ಕಳುಹಿಸಿಬಿಡುತ್ತೇವೆ. ಇಂತಹ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದೆ ಅನೇಕರು ಆತಂಕಕ್ಕೆ ಒಳಗಾಗುತ್ತಾರೆ. ಹಾಗಾದರೆ ಈ ಸಮಯದಲ್ಲಿ ಏನು ಮಾಡಬೇಕು? ಕಳುಹಿಸಿದ ಹಣವನ್ನು ಹಿಂಪಡೆಯಬಹುದೇ?&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಈ ಕೆಳಗಿನ ಕಾರಣಗಳಿಂದ ಯುಪಿಐನಲ್ಲಿ ತಪ್ಪು ವಹಿವಾಟುಗಳು ನಡೆಯುತ್ತವೆ.&amp;nbsp;&lt;/p&gt;&lt;p&gt;ತಪ್ಪು ಯುಪಿಐ ಐಡಿ ನಮೂದಿಸುವುದು ಅಥವಾ ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ಟೈಪ್ ಮಾಡುವುದು.&amp;nbsp;&lt;/p&gt;&lt;p&gt;ಆತುರದಲ್ಲಿ ಒಂದು ಸೊನ್ನೆ ಹೆಚ್ಚಿಗೆ ಟೈಪ್ ಮಾಡಿದರೂ ಹೆಚ್ಚು ಹಣ ಹೋಗುತ್ತದೆ. ಉದಾಹರಣೆಗೆ, ಫೋನ್ ಪೇನಲ್ಲಿ ಒಬ್ಬರಿಗೆ ರೂ.1,000 ಕಳುಹಿಸಬೇಕೆಂದುಕೊಂಡರೆ, ಒಂದು ಸೊನ್ನೆ ಹೆಚ್ಚಾಗಿ ಟೈಪ್ ಮಾಡಿದರೆ ರೂ.10,000 ಕಟ್ ಆಗುತ್ತದೆ.&amp;nbsp;&lt;/p&gt;&lt;p&gt;ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಹಣ ಸ್ವೀಕರಿಸುವವರ ಹೆಸರನ್ನು ಪರಿಶೀಲಿಸದೆ ಕಳುಹಿಸುವುದು.&lt;/p&gt;&lt;img&gt;&lt;p&gt;ವಹಿವಾಟಿನ ವಿವರಗಳನ್ನು ಸೇವ್ ಮಾಡಿಕೊಳ್ಳಿ ಮೊದಲಿಗೆ, ಟ್ರಾನ್ಸಾಕ್ಷನ್ ಐಡಿ, ಯುಟಿಆರ್ ಸಂಖ್ಯೆ, ದಿನಾಂಕ, ಸಮಯ, ಮತ್ತು ಮೊತ್ತದಂತಹ ವಿವರಗಳ ಸ್ಕ್ರೀನ್&zwnj;ಶಾಟ್ ತೆಗೆದುಕೊಳ್ಳಿ.&amp;nbsp;&lt;/p&gt;&lt;p&gt;ಹಣ ಪಡೆದ ವ್ಯಕ್ತಿಯನ್ನು ಸಂಪರ್ಕಿಸಿ ತಪ್ಪಾಗಿ ಹಣ ಹೋದ ವ್ಯಕ್ತಿಯ ವಿವರಗಳು ನಿಮಗೆ ತಿಳಿದಿದ್ದರೆ, ನೇರವಾಗಿ ಅವರನ್ನು ಸಂಪರ್ಕಿಸಿ ಹಣವನ್ನು ವಾಪಸ್ ಕಳುಹಿಸಲು ಕೇಳಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇದೇ ಅತ್ಯಂತ ವೇಗದ ಪರಿಹಾರ.&amp;nbsp;&lt;/p&gt;&lt;p&gt;ಬ್ಯಾಂಕ್ ಅಥವಾ ಯುಪಿಐ ಆ್ಯಪ್&zwnj;ನಲ್ಲಿ ದೂರು ನೀಡಿ Google Pay, PhonePe, Paytm, BHIM ನಂತಹ ಆ್ಯಪ್&zwnj;ಗಳಲ್ಲಿ 'Transaction History'ಗೆ ಹೋಗಿ, ಸಂಬಂಧಪಟ್ಟ ವಹಿವಾಟನ್ನು ಆಯ್ಕೆ ಮಾಡಿ. ಅಲ್ಲಿ 'Report Issue' ಅಥವಾ 'Raise Complaint' ಆಯ್ಕೆಯನ್ನು ಆರಿಸಿ, ತಪ್ಪು ವಹಿವಾಟಿನ ಬಗ್ಗೆ ವಿವರಗಳನ್ನು ದಾಖಲಿಸಿ.&lt;/p&gt;&lt;img&gt;&lt;p&gt;ನೀವು ತಪ್ಪು ವ್ಯಕ್ತಿಗಳಿಗೆ ಹಣ ಕಳುಹಿಸಿದರೆ ಅಥವಾ ಕಳುಹಿಸಬೇಕಾಗಿದ್ದಕ್ಕಿಂತ ಹೆಚ್ಚು ಹಣ ಕಳುಹಿಸಿದರೆ ಏನು ಮಾಡಬೇಕು? ಯುಪಿಐ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆ NPCI (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ನಿಯಮಗಳು ಏನು ಹೇಳುತ್ತವೆ?&amp;nbsp;&lt;/p&gt;&lt;p&gt;&amp;nbsp;ಬ್ಯಾಂಕ್&zwnj;ನಲ್ಲಿ ಅಧಿಕೃತವಾಗಿ ದೂರು ನೀಡಬಹುದು.&amp;nbsp;&lt;/p&gt;&lt;p&gt;NPCI ಗ್ರೀವೆನ್ಸ್ ಪೋರ್ಟಲ್ ಮೂಲಕ ದೂರು ದಾಖಲಿಸಬಹುದು. NPCI ಡಿಸ್ಪ್ಯೂಟ್ ರಿಡ್ರೆಸಲ್ ಮೆಕ್ಯಾನಿಸಂ ಮೂಲಕ 1800-120-1740 ಟೋಲ್-ಫ್ರೀ ಸಂಖ್ಯೆಗೂ ದೂರು ನೀಡಬಹುದು.&amp;nbsp;&lt;/p&gt;&lt;p&gt;ವಹಿವಾಟಿನ ಪುರಾವೆಗಳನ್ನು ಸಲ್ಲಿಸಬೇಕು.&amp;nbsp;&lt;/p&gt;&lt;p&gt;ತನಿಖೆಯ ನಂತರ ಹಣ ತಪ್ಪಾಗಿ ಹೋಗಿದೆ ಎಂದು ಸಾಬೀತಾದರೆ, ಅದನ್ನು ಮರುಪಡೆಯುವ ಪ್ರಕ್ರಿಯೆ ಆರಂಭವಾಗುತ್ತದೆ.&amp;nbsp;&lt;/p&gt;&lt;p&gt;NPCI ನಿಯಮಗಳ ಪ್ರಕಾರ, ತಿಂಗಳಲ್ಲಿ 10 ಬಾರಿ ಮಾತ್ರ ತಪ್ಪಾಗಿ ಕಳುಹಿಸಿದ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸಬಹುದು. ಅದೇ ಒಬ್ಬ ವ್ಯಕ್ತಿಗೆ 5ಕ್ಕಿಂತ ಹೆಚ್ಚು ಬಾರಿ ತಪ್ಪಾಗಿ ಕಳುಹಿಸಿದರೆ ಹಣ ವಾಪಸ್ ಬರುವುದಿಲ್ಲ. RBI ಅಂಬುಡ್ಸ್&zwnj;ಮನ್&zwnj;ರನ್ನು ಸಂಪರ್ಕಿಸಬಹುದೇ? ಬ್ಯಾಂಕ್ ಅಥವಾ ಯುಪಿಐ ಸೇವಾ ಪೂರೈಕೆದಾರರಿಗೆ ದೂರು ನೀಡಿದರೂ ಪರಿಹಾರ ಸಿಗದಿದ್ದರೆ, RBI ಇಂಟಿಗ್ರೇಟೆಡ್ ಅಂಬುಡ್ಸ್&zwnj;ಮನ್ ಸ್ಕೀಮ್ ಅಡಿಯಲ್ಲಿ ದೂರು ನೀಡಬಹುದು. ಇದಕ್ಕಾಗಿ ಮೊದಲು ಬ್ಯಾಂಕ್&zwnj;ನಲ್ಲಿ ದೂರು ನೀಡಿರಬೇಕು. 30 ದಿನಗಳಲ್ಲಿ ಪರಿಹಾರ ಸಿಗದಿದ್ದರೆ ಮಾತ್ರ RBI ಅನ್ನು ಸಂಪರ್ಕಿಸಬೇಕು.&lt;/p&gt;&lt;p&gt;&lt;strong&gt;ಹಣ ವಾಪಸ್ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?&lt;/strong&gt;&amp;nbsp;&lt;/p&gt;&lt;p&gt;ದೂರು ಮತ್ತು ತನಿಖೆಯನ್ನು ಆಧರಿಸಿ ಕೆಲವು ದಿನಗಳಲ್ಲಿ ಪರಿಹಾರ ಸಿಗಬಹುದು. ಕೆಲವು ಸಂಕೀರ್ಣ ಪ್ರಕರಣಗಳಲ್ಲಿ ಕೆಲವು ವಾರಗಳು పట్టಬಹುದು. ವಹಿವಾಟಿನ ವಿವರಗಳನ್ನು ಸರಿಯಾಗಿ ನೀಡಿದರೆ, ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ.&lt;/p&gt;&lt;img&gt;&lt;p&gt;ಕೆಲವು ಸಂದರ್ಭಗಳಲ್ಲಿ ಯುಪಿಐ ಮೂಲಕ ಮಾಡಿದ ತಪ್ಪನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ, ಅಂದರೆ ಹಣ ವಾಪಸ್ ಬರುವುದು ಕಷ್ಟ.&amp;nbsp;&lt;/p&gt;&lt;p&gt;ನೀವು ಸರಿಯಾದ ವ್ಯಕ್ತಿಗೆ ಹಣ ಕಳುಹಿಸಿ, ನಂತರ ಬೇಕೆಂದೇ ವಾಪಸ್ ಕೇಳಿದರೆ, ಹಣ ಪಡೆದ ವ್ಯಕ್ತಿ ಆ ಹಣವನ್ನು ಖರ್ಚು ಮಾಡಿದ್ದರೆ, ತಪ್ಪು ಮಾಹಿತಿಯೊಂದಿಗೆ ದೂರು ನೀಡಿದರೆ, ವಹಿವಾಟಿಗೆ ಸರಿಯಾದ ಪುರಾವೆ ಇಲ್ಲದಿದ್ದರೆ, ಯುಪಿಐ ಪಾವತಿ ಸಮಯದಲ್ಲಿ ತಪ್ಪುಗಳು ಆಗದಂತೆ ತಡೆಯಲು ಏನು ಮಾಡಬೇಕು? &amp;nbsp;&lt;/p&gt;&lt;p&gt;ಹಣ ಕಳುಹಿಸುವ ಮೊದಲು ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಎರಡು ಬಾರಿ ಪರಿಶೀಲಿಸಿ.&amp;nbsp;&lt;/p&gt;&lt;p&gt;ದೊಡ್ಡ ಮೊತ್ತದ ಹಣ ಕಳುಹಿಸುವ ಮೊದಲು ರೂ.1 ಕಳುಹಿಸಿ ಖಚಿತಪಡಿಸಿಕೊಳ್ಳಿ. &amp;nbsp;&lt;/p&gt;&lt;p&gt;ಕ್ಯೂಆರ್ ಕೋಡ್ ಅನ್ನು ಎಚ್ಚರಿಕೆಯಿಂದ ಸ್ಕ್ಯಾನ್ ಮಾಡಿ.&lt;/p&gt;&lt;p&gt;ಆತುರದಲ್ಲಿ ವಹಿವಾಟು ನಡೆಸದೆ, ಮೊತ್ತವನ್ನು ಮತ್ತೊಮ್ಮೆ ಪರಿಶೀಲಿಸಿ. &amp;nbsp;&lt;/p&gt;&lt;p&gt;ಯುಪಿಐ ಪಿನ್ ನಮೂದಿಸುವ ಮೊದಲು ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/what-to-do-if-we-send-money-to-wrong-account-in-google-pay-upi-how-to-get-back-money-x5fp8z1"/>
        </item>
        <item>
            <title><![CDATA[ಜುಲೈ 1 ರಿಂದ ಬದಲಾಗಲಿದೆ ಆಧಾರ್ ಕಾರ್ಡ್ ನ ಈ ನಿಯಮ, ಉಚಿತವಾಗಿ ಸಿಗಲಿದೆ ಸೇವೆ]]></title>
            <link>https://kannada.asianetnews.com/gallery/business/aadhaar-card-new-rules-july-1-free-email-id-update-x6qb8r3</link>
            <guid isPermaLink="true">https://kannada.asianetnews.com/gallery/business/aadhaar-card-new-rules-july-1-free-email-id-update-x6qb8r3</guid>
            <pubDate>Tue, 23 Jun 2026 12:07:06 +0530</pubDate>
            <description><![CDATA[&lt;p&gt;Aadhaar Card : ಆಧಾರ್ ಕಾರ್ಡ್ ಗೆ ಇಮೇಲ್ ಲಿಂಕ್ ಮಾಡುವವರಿಗೆ ಹಾಗೂ ಇಮೇಲ್ ಬದಲಿಸುವ ಪ್ಲಾನ್ ನಲ್ಲಿದ್ರೆ ನಿಮಗೊಂದು ಖುಷಿ ಸುದ್ದಿ ಇದೆ. ಯುಐಡಿಎಐ, ಈ ಸೇವೆ ಶುಲ್ಕವನ್ನು ತಾತ್ಕಾಲಿಕವಾಗಿ ಮನ್ನಾ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsjx3qbfy58ev6mt8618kkq,imgname-aadhaar-card-1782196375275.jpg" type="image/jpeg" height="390" width="690"/>
            <content:encoded><![CDATA[&lt;p&gt;Aadhaar Card : ಆಧಾರ್ ಕಾರ್ಡ್ ಗೆ ಇಮೇಲ್ ಲಿಂಕ್ ಮಾಡುವವರಿಗೆ ಹಾಗೂ ಇಮೇಲ್ ಬದಲಿಸುವ ಪ್ಲಾನ್ ನಲ್ಲಿದ್ರೆ ನಿಮಗೊಂದು ಖುಷಿ ಸುದ್ದಿ ಇದೆ. ಯುಐಡಿಎಐ, ಈ ಸೇವೆ ಶುಲ್ಕವನ್ನು ತಾತ್ಕಾಲಿಕವಾಗಿ ಮನ್ನಾ ಮಾಡಿದೆ.&lt;/p&gt;&lt;img&gt;&lt;p&gt;ಆಧಾರ್ ಕಾರ್ಡ್ ಗೆ ಇಮೇಲ್ ಐಡಿ ಲಿಂಕ್ ಮಾಡ್ಬೇಕು ಇಲ್ಲ ಹಳೆ ಇಮೇಲ್ ಐಡಿ ಬದಲಿಸಬೇಕು ಎನ್ನುವವರು ಶೀಘ್ರವೇ ಈ ಕೆಲ್ಸ ಮಾಡಿ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಈ ಸೇವಯನ್ನು ಸದ್ಯ ಉಚಿತ ಮಾಡ್ತಿದೆ. ಅಂದ್ರೆ ಜುಲೈ ಒಂದರಿಂದ ಈ ಸೇವೆ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಆದ್ರೆ ಇದು ತಾತ್ಕಾಲಿಕವಾಗಿರಲಿದೆ. ಗ್ರಾಹಕರು ಆರು ತಿಂಗಳುಗಳ ಕಾಲ ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು.&lt;/p&gt;&lt;img&gt;&lt;p&gt;ಯುಐಡಿಎಐ ಈ ನಿರ್ಧಾರದಿಂದ ಸಾರ್ವಜನಿಕರ ಹಣ ಉಳಿಯಲಿದೆ. ಈ ಹಿಂದೆ ಇಮೇಲ್ ಬದಲಿಸಲು ಅಥವಾ ಇಮೇಲ್ ಸೇರಿಸಲು 75 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗಿತ್ತು. ಯುಐಡಿಎಐ (UIDAI) ಯ ಹೊಸ ನಿರ್ಧಾರದ ಪ್ರಕಾರ, ಈ ಸಂಪೂರ್ಣ ಪ್ರಕ್ರಿಯೆಯನ್ನು ಜುಲೈ 1, 2026 ರಿಂದ ಡಿಸೆಂಬರ್ 2026 ರವರೆಗೆ ಉಚಿತವಾಗಿ ನೀಡಲಾಗುವುದು. ಸಾರ್ವಜನಿಕರು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ.&lt;/p&gt;&lt;img&gt;&lt;p&gt;ಇನ್ನು ಆಧಾರ್ ಜೊತೆ ಇಮೇಲ್ ಲಿಂಕ್ ಮಾಡಲು ನೀವು ಆಧಾರ್ ಕೇಂದ್ರಕ್ಕೆ ಹೋಗಿ ಸರತಿ ಸಾಲಿನಲ್ಲಿ ನಿಲ್ಬೇಕಾಗಿಲ್ಲ. ಯುಐಡಿಎಐ ತನ್ನ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಸಂಪೂರ್ಣ ಸೇವೆಯನ್ನು ಒದಗಿಸುತ್ತಿದೆ. ಫೋನ್ನಲ್ಲಿ ಅಪ್ಲಿಕೇಶನ್ ಓಪನ್ ಮಾಡಿ, ಸರಳ ವಿಧಾನದ ಮೂಲಕ ಇಮೇಲ್ ಲಿಂಕ್ ಮಾಡ್ಬಹುದು. ಇದು ಹಣದ ಜೊತೆ ಸಮಯ ಕೂಡ ಉಳಿಸುತ್ತೆ.&lt;/p&gt;&lt;img&gt;&lt;p&gt;ಯುಐಡಿಎಐ ಮತ್ತು ಸರ್ಕಾರ ಈ ಸೇವೆಯನ್ನು ಉಚಿತವಾಗಿ ನೀಡಲು ಪ್ರಮುಖ ಕಾರಣ ಅಂದ್ರೆ ಡಿಜಿಟಲ್ ಗುರಿ ಸಾಧನೆ. ಇತ್ತೀಚಿನ ದಿನಗಳಲ್ಲಿ, ಬಹುತೇಕ ಎಲ್ಲಾ ಸರ್ಕಾರಿ ಮತ್ತು ಹಣಕಾಸು ಸೇವೆಗಳು ಆನ್ಲೈನ್ನಲ್ಲಿ ಲಭ್ಯವಿದೆ. ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಇಮೇಲ್ ವಿಳಾಸವನ್ನು ಆಧಾರ್ನೊಂದಿಗೆ ಲಿಂಕ್ ಮಾಡಬೇಕೆಂದು ಯುಐಡಿಎಐ ಬಯಸುತ್ತದೆ. ಇಮೇಲ್ ಐಡಿಯನ್ನು ಲಿಂಕ್ ಮಾಡುವುದರಿಂದ ಒಟಿಪಿ ಆಧಾರಿತ ದೃಢೀಕರಣ ಮತ್ತು ಆನ್ಲೈನ್ ಕೆವೈಸಿ ಪ್ರಕ್ರಿಯೆಗಳು ಅತ್ಯಂತ ಸುರಕ್ಷಿತ, ವೇಗ ಮತ್ತು ಸುಲಭವಾಗುತ್ತದೆ.&lt;/p&gt;]]></content:encoded>
            <category>money</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/business/aadhaar-card-new-rules-july-1-free-email-id-update-x6qb8r3"/>
        </item>
        <item>
            <title><![CDATA[Elon Musk: ಎಲಾನ್ ಮಸ್ಕ್‌ಗೆ ಕೋಟಿ ಕೋಟಿ ನಷ್ಟ? 3 ದಿನಗಳಲ್ಲಿ 27% ಕುಸಿದ SpaceX ಷೇರು]]></title>
            <link>https://kannada.asianetnews.com/gallery/business/elon-musks-spacex-stock-falls-amid-tech-sell-off-in-markets-suh-yd6i5lk</link>
            <guid isPermaLink="true">https://kannada.asianetnews.com/gallery/business/elon-musks-spacex-stock-falls-amid-tech-sell-off-in-markets-suh-yd6i5lk</guid>
            <pubDate>Tue, 23 Jun 2026 15:20:40 +0530</pubDate>
            <description><![CDATA[&lt;p&gt;Elon Musk ಅವರ SpaceX ಷೇರುಗಳು ಭಾರೀ ಕುಸಿತ ಕಂಡಿವೆ. ಕಳೆದ ಮೂರು ದಿನಗಳಲ್ಲಿ ಕಂಪನಿಯ ಷೇರುಗಳು ಸುಮಾರು 27% ರಷ್ಟು ಕುಸಿದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗಷ್ಟೇ ದಾಖಲೆ ಮಟ್ಟದ IPO ಮೂಲಕ ಮಾರುಕಟ್ಟೆಗೆ ಕಾಲಿಟ್ಟಿದ್ದ SpaceX ಈಗ ಭಾರೀ ಮಾರಾಟದ ಒತ್ತಡಕ್ಕೆ ಸಿಲುಕಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g9c2sq7pcy71tbe07qyg8ymk,imgname-gettyimages-1229892852-594x594.jpg" type="image/jpeg" height="390" width="690"/>
            <content:encoded><![CDATA[&lt;p&gt;Elon Musk ಅವರ SpaceX ಷೇರುಗಳು ಭಾರೀ ಕುಸಿತ ಕಂಡಿವೆ. ಕಳೆದ ಮೂರು ದಿನಗಳಲ್ಲಿ ಕಂಪನಿಯ ಷೇರುಗಳು ಸುಮಾರು 27% ರಷ್ಟು ಕುಸಿದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗಷ್ಟೇ ದಾಖಲೆ ಮಟ್ಟದ IPO ಮೂಲಕ ಮಾರುಕಟ್ಟೆಗೆ ಕಾಲಿಟ್ಟಿದ್ದ SpaceX ಈಗ ಭಾರೀ ಮಾರಾಟದ ಒತ್ತಡಕ್ಕೆ ಸಿಲುಕಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಸೋಮವಾರದ ವಹಿವಾಟಿನಲ್ಲಿ SpaceX ಷೇರುಗಳು ಒಂದೇ ದಿನದಲ್ಲಿ 16% ರಷ್ಟು ಕುಸಿದು ಪ್ರತಿ ಷೇರಿನ ಬೆಲೆ 154.60 ಡಾಲರ್&zwnj;ಗೆ ಇಳಿದಿದೆ. ಜೂನ್ 16ರಂದು 211.39 ಡಾಲರ್ ಗರಿಷ್ಠ ಮಟ್ಟ ತಲುಪಿದ್ದ ಷೇರುಗಳು ಕೆಲವೇ ದಿನಗಳಲ್ಲಿ ಭಾರೀ ನಷ್ಟ ಕಂಡಿವೆ.&lt;/p&gt;&lt;img&gt;&lt;p&gt;ಮಾಧ್ಯಮ ವರದಿಗಳ ಪ್ರಕಾರ, SpaceX ಸುಮಾರು 20 ಬಿಲಿಯನ್ ಡಾಲರ್&zwnj;ಗಳ ಬಾಂಡ್&zwnj;ಗಳನ್ನು ಮಾರಾಟ ಮಾಡುವ ಯೋಜನೆ ರೂಪಿಸಿದೆ. ಕಂಪನಿಯ AI ಯೋಜನೆಗಳು, ಬಾಹ್ಯಾಕಾಶ ಡೇಟಾ ಸೆಂಟರ್&zwnj;ಗಳು ಮತ್ತು ಇತರ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಹಣ ಸಂಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಕಂಪನಿಯ ಹೆಚ್ಚುತ್ತಿರುವ ಸಾಲದ ಹೊರೆ ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಜಾಗತಿಕ ಮಾರುಕಟ್ಟೆಯಲ್ಲಿ AI ಕಂಪನಿಗಳ ಮೌಲ್ಯಮಾಪನದ ಬಗ್ಗೆ ಈಗಾಗಲೇ ಪ್ರಶ್ನೆಗಳು ಎದ್ದಿವೆ. SpaceX ಕೂಡ AI ಮತ್ತು ಬಾಹ್ಯಾಕಾಶ ಯೋಜನೆಗಳಿಗೆ ಭಾರೀ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿರುವುದರಿಂದ ಹೂಡಿಕೆದಾರರು ಎಚ್ಚರಿಕೆಯ ನಿಲುವು ತಾಳಿದ್ದಾರೆ. ಇದರ ಪರಿಣಾಮ ಟೆಕ್ ಷೇರುಗಳಲ್ಲೂ ಭಾರೀ ಮಾರಾಟ ಕಂಡುಬಂದಿದೆ.&lt;/p&gt;&lt;img&gt;&lt;p&gt;ಇತ್ತೀಚಿನ ಕುಸಿತದ ಹೊರತಾಗಿಯೂ, SpaceX ಷೇರುಗಳು ಇನ್ನೂ IPO ಬೆಲೆಯಿಗಿಂತ ಸುಮಾರು 30% ಹೆಚ್ಚು ಮಟ್ಟದಲ್ಲೇ ವಹಿವಾಟು ನಡೆಸುತ್ತಿವೆ. ಆದಾಗ್ಯೂ, ಕಂಪನಿಯ ಭವಿಷ್ಯದ ಬೆಳವಣಿಗೆ ಮತ್ತು ಸಾಲದ ಯೋಜನೆಗಳ ಬಗ್ಗೆ ಹೂಡಿಕೆದಾರರು ಹೆಚ್ಚು ಗಮನ ಹರಿಸುತ್ತಿದ್ದಾರೆ.&lt;/p&gt;]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/elon-musks-spacex-stock-falls-amid-tech-sell-off-in-markets-suh-yd6i5lk"/>
        </item>
        <item>
            <title><![CDATA[How to save money: ಲೈಫ್‌ಸ್ಟೈಲ್‌ ಬದಲಾಯಿಸದೆ ಈ 7 ಸೂತ್ರದಿಂದ ಹಣ ಉಳಿತಾಯ ಮಾಡಿದ ಬೆಂಗಳೂರಿನ ವ್ಯಕ್ತಿ! ಅದೇನು?]]></title>
            <link>https://kannada.asianetnews.com/gallery/life/a-bengaluru-based-man-saved-money-with-formula-7-how-zmprnpf</link>
            <guid isPermaLink="true">https://kannada.asianetnews.com/gallery/life/a-bengaluru-based-man-saved-money-with-formula-7-how-zmprnpf</guid>
            <pubDate>Sat, 13 Jun 2026 19:08:15 +0530</pubDate>
            <description><![CDATA[&lt;p&gt;Top 10 brilliant money saving tips: ಸಿಟಿಗಳಲ್ಲಿ ಹಣ ಉಳಿಸೋದು ಟಾಸ್ಕ್&zwnj; ಆಗಿದೆ. ಬಾಡಿಗೆ ಮನೆ-ಊಟ ತಿಂಡಿ, ಬಟ್ಟೆ ಮುಂತಾದ ವಿಷಯಕ್ಕೆ ಹಣ ಖಾಲಿ ಆಗುತ್ತದೆ. ಯುವ ಜನತೆ ಹಣ ಉಳಿಸೋಕೆ ಆಗದೆ ಒದ್ದಾಡೋದುಂಟು. ಬೆಂಗಳೂರಿನ ಈ ವ್ಯಕ್ತಿ ಈ 7 ನಿಯಮ ಪಾಲಿಸಿ ಹಣ ಉಳಿತಾಯ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv0jvsxxy56z3e9g8gemw4tt,imgname-new-project---2026-06-13t185614.649-1781357471677.jpg" type="image/jpeg" height="390" width="690"/>
            <content:encoded><![CDATA[&lt;p&gt;Top 10 brilliant money saving tips: ಸಿಟಿಗಳಲ್ಲಿ ಹಣ ಉಳಿಸೋದು ಟಾಸ್ಕ್&zwnj; ಆಗಿದೆ. ಬಾಡಿಗೆ ಮನೆ-ಊಟ ತಿಂಡಿ, ಬಟ್ಟೆ ಮುಂತಾದ ವಿಷಯಕ್ಕೆ ಹಣ ಖಾಲಿ ಆಗುತ್ತದೆ. ಯುವ ಜನತೆ ಹಣ ಉಳಿಸೋಕೆ ಆಗದೆ ಒದ್ದಾಡೋದುಂಟು. ಬೆಂಗಳೂರಿನ ಈ ವ್ಯಕ್ತಿ ಈ 7 ನಿಯಮ ಪಾಲಿಸಿ ಹಣ ಉಳಿತಾಯ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮೆಟ್ರೋ ನಿಲ್ದಾಣದ ಕಡೆಗೆ ಬಾಡಿಗೆ ಮನೆ ಮಾಡಿದೆ. ಆರಂಭದಲ್ಲಿ ಹಣ ಹೆಚ್ಚಾಗಿ ಕಂಡರೂ ಕೂಡ ಆಟೋ, ಬಸ್&zwnj; ಎಂದು ಹಣ ಖರ್ಚು ಮಾಡುವ ಪ್ರಮೇಯವೇ ಬರಲಿಲ್ಲ.&lt;/p&gt;&lt;img&gt;&lt;p&gt;ಅನಗತ್ಯ ಖರ್ಚನ್ನು ನಿಲ್ಲಿಸಿದೆ. ಕ್ವಿಕ್&zwnj; ಡೆಲಿವರಿ, ಆಟೋಗಳು, ಆಪ್&zwnj; ಸಬ್&zwnj;ಸ್ಕ್ರಿಪ್ಶನ್ಸ್, ಸಣ್ಣ ಪುಟ್ಟ ಆನ್&zwnj;ಲೈನ್&zwnj; ಖರ್ಚುಗಳು ತಿಂಗಳಾದ್ಯಂತ ಹೆಚ್ಚು ಖರ್ಚು ಮಾಡುತ್ತವೆ.&lt;/p&gt;&lt;img&gt;&lt;p&gt;ಮೊದಲೇ ವೀಕೆಂಡ್ ಪ್ಲಾನ್&zwnj; ಮಾಡದೆ&zwnj;, ಸುಮ್ಮನೆ ಖರ್ಚು ಮಾಡಲಾಗುತ್ತದೆ. ಹೀಗಾಗಿ ವೀಕೆಂಡ್&zwnj; ಹೀಗೆ ಕಳೆಯಬೇಕು ಎಂದು ಪ್ಲ್ಯಾನ್&zwnj; ಮಾಡುತ್ತೇವೆ. ಸುಮ್ಮನೆ ಕೆಫೆ ಹೋಗೋದು, ಪಬ್&zwnj; ಹೋಗೋದು, ಸುಮ್ಮನೆ ಹೊರಗಡೆ ಹೋಗೋದರಿಂದ ಹಣ ಖರ್ಚಾಗುತ್ತದೆ. ಇದನ್ನೆಲ್ಲ ನಿಲ್ಲಿಸಿದೆ.&lt;/p&gt;&lt;img&gt;&lt;p&gt;ಬೇರೆಯವರ ಹತ್ರ ಇದೆ ಎಂದು ನನ್ನ ಗ್ಯಾಜೆಟ್&zwnj;ನ್ನು ಅಪ್&zwnj;ಗ್ರೇಡ್&zwnj; ಮಾಡಲಿಲ್ಲ. ಇದಕ್ಕಾಗಿ ನಾನು ಹಣ ಖರ್ಚು ಮಾಡಲಿಲ್ಲ.&lt;/p&gt;&lt;img&gt;&lt;p&gt;ದಿನಕ್ಕೊಂದು ಟ್ರೆಂಡ್&zwnj; ಬರುತ್ತದೆ. ಇದಕ್ಕೆಂದು ನಾನು ಹಣವನ್ನು ಖಾಲಿ ಮಾಡಲಿಲ್ಲ. ನಮಗೋಸ್ಕರ ಹಣ ಖಾಲಿ ಮಾಡೋ ಬದಲು, ಜನರು ಸಮಾಜಕ್ಕೋಸ್ಕರ ಹಣ ಖರ್ಚು ಮಾಡೋದು ಜಾಸ್ತಿ.&lt;/p&gt;&lt;img&gt;&lt;p&gt;ಒಂದಕ್ಕೆ ಎರಡು ಕೊಟ್ಟು ತಿನ್ನೋ ಬದಲು ನಾವು ಮನೆಯಲ್ಲಿ ಅಡುಗೆ ಮಾಡಿಕೊಳ್ಳೋದು ಉತ್ತಮ. ನಾನು ಹೊರಗಡೆ ತಿನ್ನೋದು ನಿಲ್ಲಿಸಿದೆ. ಇದರಿಂದ ನನ್ನ ಆರೋಗ್ಯ, ಹಣ ಎರಡನ್ನು ಕಾಪಾಡಿಕೊಂಡೆ.&lt;/p&gt;&lt;img&gt;&lt;p&gt;ಅತಿ ಹೆಚ್ಚು ಸಂಬಳ ಪಡೆಯೋದರಿಂದ ನಮ್ಮ ಹಣ ಉಳಿತಾಯ ಆಗೋದಿಲ್ಲ. ಬದಲಾಗಿ ನಮ್ಮ ಹವ್ಯಾಸದಿಂದ ಹಣ ಉಳಿತಾಯ ಆಗುತ್ತದೆ.&lt;/p&gt;]]></content:encoded>
            <category>money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/life/a-bengaluru-based-man-saved-money-with-formula-7-how-zmprnpf"/>
        </item>
    </channel>
</rss>
