<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 26 Aug 2026 07:07:09 +0530</lastBuildDate>
        <atom:link href="https://kannada.asianetnews.com/rss/money" rel="self" type="application/rss+xml"/>
        <item>
            <title><![CDATA[ಮನೆಯ ಬಜೆಟ್ ಮಾತ್ರವಲ್ಲ, ಹೂಡಿಕೆಯಲ್ಲೂ ಮಹಿಳೆಯರೇ ಬಾಸ್! mutual funds ವಿಚಾರದಲ್ಲಿ ಹೊಸ ದಾಖಲೆ]]></title>
            <link>https://kannada.asianetnews.com/money/india-mutual-fund-revolution-women-lead-the-shift-to-long-term-equity-investing-gkn/articleshow-05t58pm</link>
            <guid isPermaLink="true">https://kannada.asianetnews.com/money/india-mutual-fund-revolution-women-lead-the-shift-to-long-term-equity-investing-gkn/articleshow-05t58pm</guid>
            <pubDate>Wed, 26 Aug 2026 07:07:04 +0530</pubDate>
            <description><![CDATA[&lt;p&gt;ಭಾರತೀಯ ಮ್ಯೂಚುಯಲ್ ಫಂಡ್ ಹೂಡಿಕೆದಾರರು ಈಗ ದೀರ್ಘಾವಧಿಯ ಹೂಡಿಕೆಗೆ ಒಲವು ತೋರುತ್ತಿದ್ದು, ಮಹಿಳೆಯರು ಷೇರು ಮಾರುಕಟ್ಟೆ ಆಧಾರಿತ ಫಂಡ್&zwnj;ಗಳಲ್ಲಿ ಹೆಚ್ಚಿನ ಹಣ ತೊಡಗಿಸುತ್ತಿದ್ದಾರೆ. ತೆರಿಗೆ ನಿಯಮಗಳ ಬದಲಾವಣೆಯಿಂದ ಜನರು ಡೆಬ್ಟ್ ಫಂಡ್&zwnj;ಗಳಿಂದ ದೂರ ಸರಿಯುತ್ತಿದ್ದರೂ, ಮಾರುಕಟ್ಟೆಯ ಏರಿಳಿತ ಎದುರಿಸಲು ಸಮತೋಲಿತ ಹೂಡಿಕೆ ಅಗತ್ಯವೆಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0wmbwwh48zavn5m0ffdr3cs,imgname-mutual-funds-1787667280784.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆದಾರರ ಧೋರಣೆ ಕಳೆದ ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಹಿಂದೆಲ್ಲಾ ಅಲ್ಪಾವಧಿಗೆ ಹೂಡಿಕೆ ಮಾಡಿ ಲಾಭ ಗಳಿಸಿ ಹೊರಬರುತ್ತಿದ್ದ ಹೂಡಿಕೆದಾರರು, ಈಗ ದೀರ್ಘಕಾಲದವರೆಗೆ ಹೂಡಿಕೆ ಮಾಡಲು ಇಷ್ಟಪಡುತ್ತಿದ್ದಾರೆ. ಇದರ ಜೊತೆಗೆ ಮಹಿಳೆಯರು ಮತ್ತು ಹಳ್ಳಿಗಾಡಿನ ಹೂಡಿಕೆದಾರರು ಕೂಡ ಈಕ್ವಿಟಿ (ಷೇರು ಮಾರುಕಟ್ಟೆ ಸಂಬಂಧಿತ ಫಂಡ್&zwnj;ಗಳು) ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು 'AMFI-Crisil' ವರದಿ ತಿಳಿಸಿದೆ.&lt;/p&gt;&lt;h2&gt;&lt;strong&gt;ಈ ಬದಲಾವಣೆಯ ಪ್ರಮುಖ ಅಂಶಗಳು ಇಲ್ಲಿವೆ&lt;/strong&gt;&lt;/h2&gt;&lt;h3&gt;&lt;strong&gt;1. ಹೂಡಿಕೆದಾರರಲ್ಲಿ ಹೆಚ್ಚಿದ ತಾಳ್ಮೆ&lt;/strong&gt;&lt;/h3&gt;&lt;p&gt;ಹಿಂದೆ ಹೂಡಿಕೆ ಮಾಡಿದ ಒಂದು ವರ್ಷದೊಳಗೆ ಹಣ ಹಿಂಪಡೆಯುವವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಹೂಡಿಕೆದಾರರು ಕನಿಷ್ಠ 5 ವರ್ಷಗಳ ಕಾಲ ಹಣವನ್ನು ಹೂಡಿಕೆಯಲ್ಲೇ ಇರಿಸುತ್ತಿದ್ದಾರೆ. ಅದರಲ್ಲೂ ಎಸ್&zwnj;ಐಪಿ (SIP) ಮೂಲಕ ಹೂಡಿಕೆ ಮಾಡುವವರಲ್ಲಿ ಈ ಬದಲಾವಣೆ ಎದ್ದು ಕಾಣುತ್ತಿದೆ. 2021ರಲ್ಲಿ ಕೇವಲ 7.7% ರಷ್ಟಿದ್ದ ದೀರ್ಘಾವಧಿ ಹೂಡಿಕೆದಾರರ ಪ್ರಮಾಣ 2026ರ ವೇಳೆಗೆ 19.2% ಕ್ಕೆ ಏರಿಕೆಯಾಗಿದೆ.&lt;/p&gt;&lt;h2&gt;&lt;strong&gt;2. ಮಹಿಳಾ ಹೂಡಿಕೆದಾರರ ಹೊಸ ಟ್ರೆಂಡ್&lt;/strong&gt;&lt;/h2&gt;&lt;p&gt;ಮಹಿಳೆಯರು ಈಗ ಕೇವಲ ಸೇವಿಂಗ್ಸ್ ಅಕೌಂಟ್ ಅಥವಾ ಚಿನ್ನದ ಮೇಲೆ ಅವಲಂಬಿತವಾಗಿಲ್ಲ. ಮ್ಯೂಚುಯಲ್ ಫಂಡ್&zwnj;ನಲ್ಲಿ ಮಹಿಳೆಯರ ಹೂಡಿಕೆ 5.84 ಲಕ್ಷ ಕೋಟಿ ರೂ.ನಿಂದ 15.88 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಆಶ್ಚರ್ಯದ ಸಂಗತಿಯೆಂದರೆ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿಯರು ತಮ್ಮ ಹೂಡಿಕೆಯ ಶೇ. 88ರಷ್ಟು ಭಾಗವನ್ನು ರಿಸ್ಕ್ ಇರುವ ಆದರೆ ಹೆಚ್ಚಿನ ಲಾಭ ನೀಡುವ ಈಕ್ವಿಟಿ ಫಂಡ್&zwnj;ಗಳಲ್ಲೇ ತೊಡಗಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;3. ಸಲಹೆಗಾರರಿದ್ದವರಿಗೆ ಹೆಚ್ಚಿನ ಲಾಭ&lt;/strong&gt;&lt;/h2&gt;&lt;p&gt;ನೀವೇ ನೇರವಾಗಿ ಹೂಡಿಕೆ ಮಾಡುವ (Direct Plan) ಹೂಡಿಕೆದಾರರಿಗಿಂತ, ಒಬ್ಬ ಪರಿಣಿತ ಸಲಹೆಗಾರರ ಮೂಲಕ ಹೂಡಿಕೆ ಮಾಡುವವರು (Regular Plan) ಹೆಚ್ಚು ಕಾಲ ಹೂಡಿಕೆಯಲ್ಲಿ ಮುಂದುವರಿಯುತ್ತಿದ್ದಾರೆ. ಮಾರುಕಟ್ಟೆ ಕುಸಿದಾಗ ಜನರು ಭಯಬಿದ್ದು ಹಣ ಹಿಂಪಡೆಯದಂತೆ ಸಲಹೆಗಾರರು ಧೈರ್ಯ ತುಂಬುವುದು ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು.&lt;/p&gt;&lt;h2&gt;&lt;strong&gt;4. ಡೆಬ್ಟ್ (ಸಾಲದ ನಿಧಿ) ಕಡೆಗೆ ಒಲವು ಕಡಿಮೆ&lt;/strong&gt;&lt;/h2&gt;&lt;p&gt;ಈ ಹಿಂದೆ ಜನರು ಸುರಕ್ಷಿತ ಹೂಡಿಕೆ ಎಂದು 'ಡೆಬ್ಟ್ ಫಂಡ್'ಗಳಲ್ಲಿ ಹಣ ಹಾಕುತ್ತಿದ್ದರು. ಆದರೆ ಇತ್ತೀಚಿನ ತೆರಿಗೆ ನಿಯಮಗಳ ಬದಲಾವಣೆ ಮತ್ತು ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ಲಾಭದಿಂದಾಗಿ ಜನರು ಈಗ ಡೆಬ್ಟ್ ಫಂಡ್&zwnj;ಗಳಿಂದ ಈಕ್ವಿಟಿ ಫಂಡ್&zwnj;ಗಳ ಕಡೆಗೆ ಮುಖ ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹೂಡಿಕೆದಾರರಿಗೆ ತಜ್ಞರ ಕಿವಿಮಾತು&lt;/strong&gt;&lt;/h2&gt;&lt;ul&gt; &lt;li&gt;ಷೇರು ಮಾರುಕಟ್ಟೆಯಲ್ಲಿ ಲಾಭ ಇದೆ ಎಂದು ಎಲ್ಲವನ್ನೂ ಅಲ್ಲೇ ಹೂಡಿಕೆ ಮಾಡಬೇಡಿ&lt;/li&gt; &lt;li&gt;ನಿಮ್ಮ ಹೂಡಿಕೆಯ ಅವಧಿ 3 ರಿಂದ 5 ವರ್ಷಕ್ಕಿಂತ ಕಡಿಮೆ ಇದ್ದರೆ ರಿಸ್ಕ್ ಬೇಡ&lt;/li&gt; &lt;li&gt;ತುರ್ತು ಪರಿಸ್ಥಿತಿಗೆ ಬೇಕಾಗುವ ಹಣವನ್ನು ಯಾವಾಗಲೂ ಸುರಕ್ಷಿತವಾದ ಡೆಬ್ಟ್ ಫಂಡ್&zwnj;ಗಳಲ್ಲಿ ಅಥವಾ ಬ್ಯಾಂಕ್&zwnj;ನಲ್ಲಿ ಇಡಿ&lt;/li&gt; &lt;li&gt;ಮಾರುಕಟ್ಟೆ ಯಾವಾಗಲೂ ನಿಮ್ಮ ಲೆಕ್ಕಾಚಾರದಂತೆ ನಡೆಯುವುದಿಲ್ಲ, ಅದು ಕುಸಿದಾಗಲೂ ಹಣದ ಅವಶ್ಯಕತೆ ಬಂದರೆ ನಿಮಗೆ ತೊಂದರೆಯಾಗಬಹುದು.&lt;/li&gt;&lt;/ul&gt;&lt;p&gt;ಒಟ್ಟಾರೆಯಾಗಿ ಹೇಳುವುದಾದರೆ ಭಾರತೀಯ ಹೂಡಿಕೆದಾರರು ಈಗ ಹೆಚ್ಚು ಪ್ರೌಢಿಮೆ ಮೆರೆಯುತ್ತಿದ್ದಾರೆ. ದೀರ್ಘಕಾಲದ ಹೂಡಿಕೆ ಮಾಡುವುದು ಒಳ್ಳೆಯದು, ಆದರೆ ನಿಮ್ಮ ಹೂಡಿಕೆಯು ನಿಮ್ಮ ಗುರಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ತಕ್ಕಂತೆ ಇರಲಿ.&lt;/p&gt;]]></content:encoded>
            <category>money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/india-mutual-fund-revolution-women-lead-the-shift-to-long-term-equity-investing-gkn/articleshow-05t58pm"/>
        </item>
        <item>
            <title><![CDATA[ಉಬರ್‌ಗೆ 9,226 ಕೋಟಿ ರೂಪಾಯಿ ದಂಡ; ಕಾರಣವೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್]]></title>
            <link>https://kannada.asianetnews.com/business/european-regulatory-uber-fined-rs-9226-crore-what-is-the-reason-sns/articleshow-30t1qga</link>
            <guid isPermaLink="true">https://kannada.asianetnews.com/business/european-regulatory-uber-fined-rs-9226-crore-what-is-the-reason-sns/articleshow-30t1qga</guid>
            <pubDate>Mon, 24 Aug 2026 17:51:36 +0530</pubDate>
            <description><![CDATA[ಯುರೋಪ್&zwnj;ನಲ್ಲಿ ಕ್ಯಾಬ್ ಕಂಪನಿ ಉಬರ್&zwnj;ಗೆ 9,226 ಕೋಟಿ ರೂ. ದಂಡ ವಿಧಿಸಲಾಗಿದೆ. ಚಾಲಕರ ಖಾತೆಗಳನ್ನು ಯಾವುದೇ ಮಾನವ ಪರಿಶೀಲನೆ ಇಲ್ಲದೆ ಸ್ವಯಂಚಾಲಿತವಾಗಿ ಅಮಾನತುಗೊಳಿಸಿದ್ದಕ್ಕಾಗಿ ನೆದರ್&zwnj;ಲ್ಯಾಂಡ್ಸ್ ಡೇಟಾ ಪ್ರೊಟೆಕ್ಷನ್ ವಾಚ್&zwnj;ಡಾಗ್ ಈ ಕ್ರಮ ಕೈಗೊಂಡಿದೆ. ಇದು ಚಾಲಕರ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky7b8bbyneq1j4njzyrq0phq,imgname-gemini-generated-image-ixcqvrixcqvrixcq-1784805600638.png" type="image/jpeg" height="390" width="690"/>
            <content:encoded><![CDATA[&lt;p&gt;ಕ್ಯಾಬ್ ಬುಕ್ಕಿಂಗ್ ಕಂಪನಿ ಉಬರ್&zwnj;ಗೆ ಯುರೋಪ್&zwnj;ನಲ್ಲಿ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ನೆದರ್&zwnj;ಲ್ಯಾಂಡ್ಸ್ ಡೇಟಾ ಪ್ರೊಟೆಕ್ಷನ್ ವಾಚ್&zwnj;ಡಾಗ್, ಉಬರ್ ಕಂಪನಿಯ ಮೇಲೆ 825 ಮಿಲಿಯನ್ ಯುರೋಗಳು ಅಂದರೆ ಭಾರತದಲ್ಲಿ ರೂಪಾಯಿಯಲ್ಲಿ 9,226 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.&lt;/p&gt;&lt;h2&gt;ಯುರೋಪ್&zwnj;ನಲ್ಲಿ ಉಬರ್&zwnj;ಗೆ ಆಘಾತ&lt;/h2&gt;&lt;p&gt;ಯಾವುದೇ ಮುನ್ಸೂಚನೆ ನೀಡದೆ, ಯಾವುದೇ ಪರಿಶೀಲನೆ ನಡೆಸದೆ ಏಕಾಏಕಿ ಚಾಲಕರ ಖಾತೆಗಳನ್ನು ಅಮಾನತು ಮಾಡುವುದು ಹಾಗೂ ಸ್ವಯಂ ಚಾಲಿತ ವ್ಯವಸ್ಥೆಯ ಮೂಲಕ ಖಾತೆಗಳನ್ನು ಅಮಾನತುಗೊಳಿಸುವ ಕಾರಣದಿಂದ ಭಾರೀ ದಂಡ ವಿಧಿಸಲಾಗಿದೆ.&lt;/p&gt;&lt;p&gt;ಉಬರ್ ಕ್ರಮವನ್ನು ಚಾಲಕರ ಹಕ್ಕುಗಳ ಗಂಭೀರ ಉಲ್ಲಂಘಟನೆ ಎಂದು ಕರೆಯಲಾಗಿದ್ದು, ಯಾವುದೇ ಮಾನವ ಪರಿಶೀಲನೆ ನಡೆಸದೆ ಕಂಪ್ಯೂಟರ್ ವ್ಯವಸ್ಥೆ ಮೂಲಕ ನಿಷ್ಕ್ರೀಯ ಗೊಳಿಸಲಾಗಿದೆ. ಡಬ್ ಡೇಟಾ ಪ್ರೊಟೆಕ್ಷನ್ ಅಥಾರಿಟಿಯ ಅನ್ವಯ, ಹಲವು ಸಂದರ್ಭದಲ್ಲಿ ಉಬರ್ ಸಂಸ್ಥೆ ಚಾಲಕರ ಖಾತೆಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ಕ್ಲೋಸ್ ಮಾಡಿರುವುದು ಗಂಭೀರ ಉಲ್ಲಂಘಟನೆ ಎಂದು ಹೇಳಿದೆ.&lt;/p&gt;&lt;h2&gt;ನಿಗೂಢ ಖಾತೆ ಅಮಾನತಿನ ಸತ್ಯ&lt;/h2&gt;&lt;p&gt;ಚಾಲಕರ ಜೀವನ ತೀವ್ರವಾಗಿ ಪರಿಣಾಮ ಬೀರುವ ಸಂದರ್ಭದಲ್ಲಿ, ಕೇವಲ ಕಂಪ್ಯೂಟರ್ ಅಲ್ಗಾರಿದಮ್ ಗಳನ್ನು ಮಾತ್ರ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಿಂದ ಹಲವರಿಗೆ ಅನ್ಯಾಯವಾಗಿದೆ. ಚಾಲಕರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕಿದೆ ಎಂದು ಹೇಳಿದೆ.&lt;/p&gt;&lt;p&gt;2018 ಮತ್ತು 2022ರ ನಡುವೆ ಯುರೋಪ್&zwnj;ನಲ್ಲಿ ನಡೆದ ಘಟನೆಗಳನ್ನು ಒಳಗೊಂಡಿದ್ದು, ಫ್ರಾನ್ಸ್ ನಲ್ಲಿ ನೀಡಿದ ಒಂದು ದೂರಿನಿಂದ ಆರಂಭವಾದ ತನಿಖೆಯನ್ನು ಡಚ್ ಡೇಟಾ ಸಂರಕ್ಷಣ ನಿಯಂತ್ರಕ ಕೈಗೊಂಡಿತ್ತು. ಉಬರ್&zwnj;ನ ಯುರೋಪಿಯನ್&zwnj; ಪ್ರಧಾನ ನೆದರ್&zwnj;ಲ್ಯಾಂಡ್ಸ್&zwnj;ನಲ್ಲಿದ್ದು, ಚಾಲಕರ ಚಟುವಟಿಕೆಗಳನ್ನು ಗುರುತಿಸಲು ಉಬರ್ ತಂದಿದ್ದ ವ್ಯವಸ್ಥೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.&lt;/p&gt;&lt;p&gt;ಕೇವಲ ಗ್ರಾಹಕರ ಕಡಿಮೆ ರೇಟಿಂಗ್ ಆಧಾರದ ಮೇಲೆ ಕೆಲವು ಚಾಲಕರ ಖಾತೆಗಳನ್ನು ಸ್ವಯಃಚಾಲಿತವಾಗಿ ನಿಷ್ಕ್ರಿಯಗೊಳಿಸುವ ವ್ಯವಸ್ಥೆ ಹೊಂದಿತ್ತು. ಆದರೆ ಉಬರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದಂಡ ವಿಧಿಸಿದ ಕ್ರಮ ಅಸಮಾನ ಮತ್ತು ತೀವ್ರ ಕ್ರಮ ಎಂದು ಹೇಳಿದೆ. ಚಾಲಕರ ಹಕ್ಕುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಚಾಲಕರಿಗೆ ಅಮಾನತು ಪ್ರಶ್ನಿಸುವ ಆಯ್ಕೆಯನ್ನು ನೀಡುವ ಆಯ್ಕೆ ಹೊಂದಿದ್ದಾರೆ ಎಂದು ಹೇಳಿದೆ.&lt;/p&gt;&lt;p&gt;ಯುರೋಪ್&zwnj;ನಲ್ಲಿ ಉಬರ್ ಮಾತ್ರವಲ್ಲದೇ, ಈ ಹಿಂದೆ ಗ್ರಾಹಕರ ಡೇಟಾ ಗೌಪ್ಯತೆ ಮತ್ತು ಡಿಜಿಟಲ್ ನಿಯಮಗಳ ಉಲ್ಲಂಘಟನೆ ಅಡಿ ಮೆಟಾ, ಗೂಗಲ್, ಆಪಲ್ ಮತ್ತು ಅಮೆಜಾನ್ ನಂತರ ಕಂಪನಿಗಳಿಗೆ ಭಾರೀ ದಂಡಗಳನ್ನು ವಿಧಿಸಲಾಗಿದೆ. ಸದ್ಯ ಈ ಸಾಲಿಗೆ ಉಬರ್ ಕೂಡ ಸೇರ್ಪಡೆಯಾಗಿದೆ. ಎಐ ತಂತ್ರಜ್ಞಾನ ತೆಗೆದುಕೊಳ್ಳುವ ಕ್ರಮದಿಂದ ಉದ್ಯೋಗಿ ಅಥವಾ ಗ್ರಾಹಕನ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದರೆ, ಅದರ ಮೇಲ್ವಿಚಾರಣೆಯನ್ನು ಕೇವಲ ಯಾಂತ್ರೀಕೃತ ವ್ಯವಸ್ಥೆಯಿಂದ ಮಾಡದೆ ಮನುಷ್ಯನ ನೇತೃತ್ವದಲ್ಲಿ ನಡೆಯಬೇಕು ಎಂದು ಯುರೋಪಿಯನ್ ರೆಗ್ಯುಲೆಟರಿ ಹೇಳುತ್ತದೆ.&lt;/p&gt;]]></content:encoded>
            <category>money</category>
            <dc:creator>Sumanth SN</dc:creator>
            <atom:link href="https://kannada.asianetnews.com/business/european-regulatory-uber-fined-rs-9226-crore-what-is-the-reason-sns/articleshow-30t1qga"/>
        </item>
        <item>
            <title><![CDATA[ಭಾರತದ ಮೊದಲ ಎಟಿಎಂ ಯಾವುದು? ಎಲ್ಲಿ ಸ್ಥಾಪಿಸಲಾಯಿತು? ಇದರ ಹಿಂದಿನ ಇತಿಹಾಸ ಗೊತ್ತಾ?]]></title>
            <link>https://kannada.asianetnews.com/gallery/business/india-first-atm-where-was-it-installed-and-what-is-its-interesting-story-kvn-3zztir6</link>
            <guid isPermaLink="true">https://kannada.asianetnews.com/gallery/business/india-first-atm-where-was-it-installed-and-what-is-its-interesting-story-kvn-3zztir6</guid>
            <pubDate>Thu, 20 Aug 2026 18:50:41 +0530</pubDate>
            <description><![CDATA[&lt;p&gt;ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಟಿಎಂಗಳು ತಂದ ಕ್ರಾಂತಿಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಎಟಿಎಂ ಬಂದ ನಂತರ ಬ್ಯಾಂಕಿಂಗ್ ವ್ಯವಹಾರವೇ ಬದಲಾಯಿತು. ಹಾಗಾದರೆ, ಭಾರತದ ಮೊದಲ ಎಟಿಎಂ ಎಲ್ಲಿದೆ, ಅದರ ಹಿಂದಿನ ಕಥೆ ಏನು? ತಿಳಿಯೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0c98avjvmxdsyesvt3hm7g5,imgname-atm-1787118758769.jpg" type="image/jpeg" height="390" width="690"/>
            <content:encoded><![CDATA[&lt;p&gt;ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಟಿಎಂಗಳು ತಂದ ಕ್ರಾಂತಿಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಎಟಿಎಂ ಬಂದ ನಂತರ ಬ್ಯಾಂಕಿಂಗ್ ವ್ಯವಹಾರವೇ ಬದಲಾಯಿತು. ಹಾಗಾದರೆ, ಭಾರತದ ಮೊದಲ ಎಟಿಎಂ ಎಲ್ಲಿದೆ, ಅದರ ಹಿಂದಿನ ಕಥೆ ಏನು? ತಿಳಿಯೋಣ ಬನ್ನಿ.&lt;/p&gt;&lt;img&gt;&lt;p&gt;ಎಟಿಎಂ ಎಂದರೆ ಆಟೋಮೇಟೆಡ್ ಟೆಲ್ಲರ್ ಮೆಷಿನ್. ಬ್ಯಾಂಕ್&zwnj;ಗೆ ಹೋಗದೆ ಹಣ ವಿತ್&zwnj;ಡ್ರಾ ಮಾಡಲು ಬಳಸುವ ಯಂತ್ರವಿದು. ಎಟಿಎಂ ಕಾರ್ಡ್ ಮತ್ತು ಪಿನ್ ಬಳಸಿ, ಹಣ ತೆಗೆಯುವುದು, ಬ್ಯಾಲೆನ್ಸ್ ಚೆಕ್ ಮಾಡುವುದು, ಮಿನಿ ಸ್ಟೇಟ್&zwnj;ಮೆಂಟ್ ಪಡೆಯುವಂತಹ ಸೇವೆಗಳನ್ನು ಗ್ರಾಹಕರು ಪಡೆಯಬಹುದು.&lt;/p&gt;&lt;img&gt;&lt;p&gt;ಭಾರತದಲ್ಲಿ ಮೊದಲ ಎಟಿಎಂ ಅನ್ನು 1987ರಲ್ಲಿ ಮುಂಬೈನಲ್ಲಿ ಸ್ಥಾಪಿಸಲಾಯಿತು. ಎಚ್&zwnj;ಎಸ್&zwnj;ಬಿಸಿ (HSBC) ಬ್ಯಾಂಕ್ ತನ್ನ ಮುಂಬೈ ಶಾಖೆಯಲ್ಲಿ ಈ ಎಟಿಎಂ ಸೇವೆಯನ್ನು ಆರಂಭಿಸಿತು. ಆ ಸಮಯದಲ್ಲಿ, ಇದು ಭಾರತಕ್ಕೆ ಸಂಪೂರ್ಣ ಹೊಸ ಬಗೆಯ ಬ್ಯಾಂಕಿಂಗ್ ಸೌಲಭ್ಯವಾಗಿತ್ತು.&lt;/p&gt;&lt;img&gt;&lt;p&gt;1987ಕ್ಕಿಂತ ಮೊದಲು, ಜನರಿಗೆ ಹಣ ಬೇಕಿದ್ದರೆ ಬ್ಯಾಂಕ್ ಶಾಖೆಗೆ ಹೋಗಲೇಬೇಕಿತ್ತು. ಅಲ್ಲಿ ಬ್ಯಾಂಕ್ ಸಿಬ್ಬಂದಿಯ ಸಹಾಯದಿಂದ ಹಣ ಪಡೆಯಬೇಕಿತ್ತು. ಕೆಲವೊಮ್ಮೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇತ್ತು. ಎಟಿಎಂ ಬಂದ ನಂತರ, ಬ್ಯಾಂಕ್ ಕೌಂಟರ್&zwnj;ಗಳ ಮೇಲಿನ ಅವಲಂಬನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು.&lt;/p&gt;&lt;img&gt;&lt;p&gt;ಆರಂಭದಲ್ಲಿ, ಜನರು ಮುಖ್ಯವಾಗಿ ನಗದು ವಿತ್&zwnj;ಡ್ರಾ ಮಾಡಲು ಎಟಿಎಂ ಬಳಸುತ್ತಿದ್ದರು. ಕಾಲಾನಂತರದಲ್ಲಿ, ಎಟಿಎಂಗಳಲ್ಲಿ ಹಲವು ಹೊಸ ಸೌಲಭ್ಯಗಳು ಲಭ್ಯವಾದವು. ನಗದು ಹಿಂಪಡೆಯುವುದರ ಜೊತೆಗೆ, ಖಾತೆಯ ಬ್ಯಾಲೆನ್ಸ್ ಪರಿಶೀಲನೆ ಮತ್ತು ಮಿನಿ ಸ್ಟೇಟ್&zwnj;ಮೆಂಟ್ ಪಡೆಯುವಂತಹ ಸೇವೆಗಳೂ ಸೇರಿಕೊಂಡವು.&lt;/p&gt;&lt;img&gt;&lt;p&gt;ಮುಂಬೈನಲ್ಲಿ ಆರಂಭವಾದ ಎಟಿಎಂ ಸೇವೆಗಳು ಕ್ರಮೇಣ ದೇಶದ ಇತರ ನಗರಗಳು ಮತ್ತು ಪ್ರದೇಶಗಳಿಗೆ ವಿಸ್ತರಿಸಿದವು. ಪ್ರಸ್ತುತ ಯುಪಿಐ (UPI) ಮತ್ತು ಡಿಜಿಟಲ್ ಪಾವತಿಗಳು ಹೆಚ್ಚಾಗಿದ್ದರೂ, ಅಗತ್ಯವಿದ್ದಾಗ ನಗದು ಪಡೆಯಲು ಎಟಿಎಂಗಳು ಇಂದಿಗೂ ಪ್ರಮುಖ ಪಾತ್ರ ವಹಿಸುತ್ತವೆ.&lt;/p&gt;&lt;img&gt;&lt;p&gt;ರಿಸರ್ವ್&zwnj; ಬ್ಯಾಂಕ್ ಡೇಟಾ ಪ್ರಕಾರ, ಭಾರತದಲ್ಲಿ ಇದುವರೆಗೂ 2,51,057 ಎಟಿಎಂ ಬೂತ್&zwnj;ಗಳನ್ನು ಸ್ಥಾಪಿಸಲಾಗಿದ್ದು, ಕೋಟ್ಯಾಂತರ ಮಂದಿ ಎಟಿಎಂನಿಂದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ 1,33,544 ಎಟಿಎಂಗಳು ಸಾರ್ವಜನಿಕ ವಲಯದ ಬ್ಯಾಂಕ್&zwnj;ಗಳಾಗಿದ್ದರೇ, 77,117 ಎಟಿಎಂ ಮಷೀನ್&zwnj;ಗಳು ಪ್ರೈವೇಟ್ ಸೆಕ್ಟರ್ ಬ್ಯಾಂಕಿನವುಗಳಾಗಿವೆ. ಇನ್ನು 36,216 ಮಷೀನ್&zwnj;ಗಳು ಬ್ಯಾಂಕೇತರ ಎಟಿಎಂಗಳಾಗಿವೆ.&lt;/p&gt;]]></content:encoded>
            <category>money</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/india-first-atm-where-was-it-installed-and-what-is-its-interesting-story-kvn-3zztir6"/>
        </item>
        <item>
            <title><![CDATA["ಆ ಒಂದು ರಾತ್ರಿ ನನ್ನನ್ನು ಬಿಕಾರಿಯನ್ನಾಗಿ ಮಾಡ್ತು!": 1.8 ಲಕ್ಷ ಸಂಬಳ ಪಡೆಯುವ ಬೆಂಗಳೂರು ಟೆಕ್ಕಿಯ ಕಣ್ಣೀರಿನ ಕಥೆ!]]></title>
            <link>https://kannada.asianetnews.com/viral/1-8-lakh-salary-80000-sip-bengaluru-techies-icu-emergency-reveals-the-hidden-risk-of-being-rich-on-paper/articleshow-4fxmdnc</link>
            <guid isPermaLink="true">https://kannada.asianetnews.com/viral/1-8-lakh-salary-80000-sip-bengaluru-techies-icu-emergency-reveals-the-hidden-risk-of-being-rich-on-paper/articleshow-4fxmdnc</guid>
            <pubDate>Tue, 25 Aug 2026 14:59:11 +0530</pubDate>
            <description><![CDATA[&lt;p&gt;ತಿಂಗಳಿಗೆ ₹1.8 ಲಕ್ಷ ಗಳಿಸಿ ₹80,000 SIP ಮಾಡುತ್ತಿದ್ದ ಬೆಂಗಳೂರಿನ ಟೆಕ್ಕಿಗೆ ತಂದೆಯ ಹಠಾತ್ ICU ಚಿಕಿತ್ಸೆಯ ವೇಳೆ ₹2.5 ಲಕ್ಷ ಮುಂಗಡದ ಅಗತ್ಯ ಎದುರಾಯಿತು. ಉಳಿತಾಯದಲ್ಲಿ ₹32,000 ಮಾತ್ರವಿದ್ದ ಕಾರಣ ಸಂಬಂಧಿಕರಿಂದ ಹಣ ಸಾಲ ಪಡೆಯಬೇಕಾಯಿತು. ಹೂಡಿಕೆಗಳ ಜೊತೆಗೆ ತುರ್ತು ನಿಧಿ, ಆರೋಗ್ಯ ವಿಮೆ ಮತ್ತು ದ್ರವ ಹಣವೂ ಅಗತ್ಯ ಎಂಬ ಪಾಠ ಇದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0vvvnqszj2rtxn68gpqzg8q,imgname-high-salary--heavy-investments--but-no-cash-bengaluru-techie-s-medical-emergency-going-viral--1--1787641583339.jpg" type="image/jpeg" height="390" width="690"/>
            <content:encoded><![CDATA[&lt;h2&gt;₹1.8 ಲಕ್ಷ ಸಂಬಳ, ₹80 ಸಾವಿರ SIP&hellip; ಆದರೂ ತುರ್ತು ಸಮಯದಲ್ಲಿ ಹಣಕ್ಕಾಗಿ ಪರದಾಟ!&lt;/h2&gt;&lt;p&gt;ತಿಂಗಳಿಗೆ ₹1.8 ಲಕ್ಷ ಗಳಿಕೆ, ಬೆಂಗಳೂರಿನ ಗೇಟೆಡ್ ಸೊಸೈಟಿಯಲ್ಲಿ ಜೀವನ, ಪ್ರತಿ ತಿಂಗಳು ₹80,000 SIP ಹೂಡಿಕೆ&mdash;ಇವೆಲ್ಲ ನೋಡಿದರೆ ಆ ವ್ಯಕ್ತಿಯ ಆರ್ಥಿಕ ಸ್ಥಿತಿ ಬಲವಾಗಿದೆ ಎಂದೇ ಅನಿಸುತ್ತದೆ. ಆದರೆ ಕುಟುಂಬದಲ್ಲಿ ಎದುರಾದ ಹಠಾತ್ ವೈದ್ಯಕೀಯ ತುರ್ತು ಪರಿಸ್ಥಿತಿಯೊಂದು ಈ ಭಾವನೆಯನ್ನು ಸಂಪೂರ್ಣವಾಗಿ ಬದಲಿಸಿತು.&lt;/p&gt;&lt;h3&gt;ಮಧ್ಯರಾತ್ರಿ ಎದುರಾದ ₹2.5 ಲಕ್ಷದ ಬೇಡಿಕೆ&lt;/h3&gt;&lt;p&gt;ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡ ಅನುಭವದ ಪ್ರಕಾರ, ಟೆಕ್ಕಿಯ ತಂದೆ ಏಕಾಏಕಿ ಕುಸಿದುಬಿದ್ದಿದ್ದು, ತಕ್ಷಣ ICUಗೆ ದಾಖಲಿಸಬೇಕಾಯಿತು. ಆಸ್ಪತ್ರೆಯು ₹2.5 ಲಕ್ಷ ಮುಂಗಡ ಠೇವಣಿ ಕೇಳಿದಾಗ ಸಮಸ್ಯೆ ಶುರುವಾಯಿತು.&lt;/p&gt;&lt;p&gt;ಅವರ ಉಳಿತಾಯ ಖಾತೆಯಲ್ಲಿ ಕೇವಲ ₹32,000 ಇತ್ತು. ಲ್ಯಾಪ್&zwnj;ಟಾಪ್ ಖರೀದಿಯಿಂದ ಪ್ರಮುಖ ಕ್ರೆಡಿಟ್ ಕಾರ್ಡ್&zwnj;ನ ಮಿತಿ ಕೂಡ ಬಹುತೇಕ ಮುಗಿದಿತ್ತು. ಮ್ಯೂಚುವಲ್ ಫಂಡ್&zwnj;ಗಳಲ್ಲಿ ಹಣವಿದ್ದರೂ, ಅದನ್ನು ತಕ್ಷಣ ನಗದಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಹೂಡಿಕೆ ಇದೆ, ಆದರೆ ಕೈಯಲ್ಲಿ ಹಣವಿಲ್ಲ!&lt;/h3&gt;&lt;p&gt;ಈ ಘಟನೆ ಅವರಿಗೆ ಒಂದು ಕಠಿಣ ಸತ್ಯವನ್ನು ತೋರಿಸಿತು: ಆಸ್ತಿಯ ಮೌಲ್ಯ ಮತ್ತು ತಕ್ಷಣ ಬಳಸಬಹುದಾದ ಹಣ ಒಂದೇ ಅಲ್ಲ.&lt;/p&gt;&lt;p&gt;ಬೆಳಗಿನ 1:30ರ ವೇಳೆಗೆ ಆಸ್ಪತ್ರೆಯ ಹಜಾರದಲ್ಲಿ ಕುಳಿತು ದೂರದ ಸಂಬಂಧಿಕರಿಗೆ ಕರೆ ಮಾಡಿ UPI ಮೂಲಕ ಹಣ ಸಾಲವಾಗಿ ಪಡೆಯಬೇಕಾದ ಪರಿಸ್ಥಿತಿ ಎದುರಾಯಿತು. ಹೆಚ್ಚಿನ ಸಂಬಳವಿದ್ದರೂ ತುರ್ತು ಸಂದರ್ಭದಲ್ಲಿ ದ್ರವ ಹಣದ ಕೊರತೆ ಎಷ್ಟು ದೊಡ್ಡ ಸಮಸ್ಯೆಯಾಗಬಹುದು ಎಂಬುದನ್ನು ಇದು ತೋರಿಸುತ್ತದೆ.&lt;/p&gt;&lt;h3&gt;SIPಗಿಂತ ಮೊದಲು Emergency Fund ಮುಖ್ಯವೇ?&lt;/h3&gt;&lt;p&gt;SIP ಮತ್ತು ದೀರ್ಘಾವಧಿಯ ಹೂಡಿಕೆಗಳು ಸಂಪತ್ತು ನಿರ್ಮಿಸಲು ಸಹಾಯ ಮಾಡುತ್ತವೆ. ಆದರೆ ಅವು ತುರ್ತು ನಿಧಿಗೆ ಪರ್ಯಾಯವಲ್ಲ. ಆಸ್ಪತ್ರೆ, ಉದ್ಯೋಗ ನಷ್ಟ, ಅಪಘಾತ ಅಥವಾ ಇತರ ಅನಿರೀಕ್ಷಿತ ವೆಚ್ಚಗಳಿಗೆ ಸುಲಭವಾಗಿ ಲಭ್ಯವಿರುವ ಹಣ ಪ್ರತ್ಯೇಕವಾಗಿರಬೇಕು.&lt;/p&gt;&lt;p&gt;ಆರೋಗ್ಯ ವಿಮೆ, ಕುಟುಂಬಕ್ಕೆ ಸೂಕ್ತವಾದ ವೈದ್ಯಕೀಯ ಕವರ್, ಸಾಕಷ್ಟು ಬ್ಯಾಂಕ್ ಉಳಿತಾಯ ಮತ್ತು ತುರ್ತು ಕ್ರೆಡಿಟ್ ಆಯ್ಕೆಗಳು ಹಣಕಾಸಿನ ಸುರಕ್ಷತೆಯ ಪ್ರಮುಖ ಭಾಗಗಳು.&lt;/p&gt;&lt;h3&gt;ಈ ಘಟನೆಯ ದೊಡ್ಡ ಪಾಠ&lt;/h3&gt;&lt;p&gt;ಹೆಚ್ಚು ಸಂಪಾದಿಸುವುದು ಮಾತ್ರ ಆರ್ಥಿಕ ಭದ್ರತೆಯ ಅಳತೆ ಅಲ್ಲ. &ldquo;ಹೂಡಿಕೆ ಎಷ್ಟು?&rdquo; ಎನ್ನುವುದರ ಜೊತೆಗೆ &ldquo;ತುರ್ತು ಸಂದರ್ಭದಲ್ಲಿ ತಕ್ಷಣ ಎಷ್ಟು ಹಣ ಲಭ್ಯ?&rdquo; ಎಂಬ ಪ್ರಶ್ನೆಯೂ ಮುಖ್ಯ.&lt;/p&gt;&lt;p&gt;ಆದ್ದರಿಂದ ಹೂಡಿಕೆ ಮಾಡುವ ಮೊದಲು ಕುಟುಂಬದ ಅಗತ್ಯಕ್ಕೆ ತಕ್ಕ ತುರ್ತು ನಿಧಿ ಮತ್ತು ಆರೋಗ್ಯ ವಿಮೆ ಹೊಂದಿರುವುದು ಹಣಕಾಸು ಯೋಜನೆಯ ಮೂಲಭೂತ ಹೆಜ್ಜೆಯಾಗಿರಬೇಕು.&lt;/p&gt;]]></content:encoded>
            <category>money</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/1-8-lakh-salary-80000-sip-bengaluru-techies-icu-emergency-reveals-the-hidden-risk-of-being-rich-on-paper/articleshow-4fxmdnc"/>
        </item>
        <item>
            <title><![CDATA[EPFO ಅಪ್‌ಡೇಟ್! ಬಂತು ನ್ಯೂ ಕ್ಯಾಲ್ಕುಲೇಟರ್‌, ನಿವೃತ್ತಿ ವೇಳೆಗೆ ಎಷ್ಟು PF, ಪಿಂಚಣಿ ಹಣ ಸಿಗಲಿದೆ? ಕ್ಷಣಾರ್ಧದಲ್ಲಿ ನೀವೇ ಲೆಕ್ಕ ಹಾಕಿ!]]></title>
            <link>https://kannada.asianetnews.com/money/epfo-new-update-passbook-calculator-check-epf-pension-retirement-amount-online-bmk/articleshow-7fq1pir</link>
            <guid isPermaLink="true">https://kannada.asianetnews.com/money/epfo-new-update-passbook-calculator-check-epf-pension-retirement-amount-online-bmk/articleshow-7fq1pir</guid>
            <pubDate>Thu, 20 Aug 2026 16:57:00 +0530</pubDate>
            <description><![CDATA[ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಪಾಸ್&zwnj;ಬುಕ್ ಪೋರ್ಟಲ್&zwnj;ನಲ್ಲಿ 'ನಿವೃತ್ತಿ ಕ್ಯಾಲ್ಕುಲೇಟರ್' ಎಂಬ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಇದರ ಮೂಲಕ ಉದ್ಯೋಗಿಗಳು ತಮ್ಮ ನಿವೃತ್ತಿಯ ಸಮಯದಲ್ಲಿ ಸಿಗಬಹುದಾದ ಪಿಎಫ್ ಮೊತ್ತ ಮತ್ತು ಮಾಸಿಕ ಪಿಂಚಣಿಯನ್ನು ಸುಲಭವಾಗಿ ಅಂದಾಜು ಮಾಡಬಹುದು. ಈ ಲೆಕ್ಕಾಚಾರವು ಬಡ್ಡಿದರ, ವೇತನ ಹೆಚ್ಚಳ ಮತ್ತು ಸೇವಾ ಅವಧಿಯಂತಹ ಅಂಶಗಳನ್ನು ಅವಲಂಬಿಸಿರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m01yqrrrnwbsft9mtm9kjksm,imgname-epfo-pension-1786772185880.jpg" type="image/jpeg" height="390" width="690"/>
            <content:encoded><![CDATA[&lt;p&gt;ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಅಧಿಕೃತ ಸದಸ್ಯರ ಪಾಸ್&zwnj;ಬುಕ್ ಪೋರ್ಟಲ್ (passbook.epfindia.gov.in) ಅನ್ನು ಸಂಪೂರ್ಣವಾಗಿ ನವೀಕರಿಸಿದ್ದು, ಹೊಸದಾಗಿ 'ನಿವೃತ್ತಿ ಕ್ಯಾಲ್ಕುಲೇಟರ್' (Retirement Calculator) ಉಪಕರಣವನ್ನು ಅಳವಡಿಸಿದೆ. ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕೋಟ್ಯಂತರ ಉದ್ಯೋಗಿಗಳು ತಮ್ಮ 58ನೇ ವಯಸ್ಸಿನಲ್ಲಿ ನಿವೃತ್ತರಾಗುವಾಗ ಎಷ್ಟು ಪಿಎಫ್ (PF) ಮೊತ್ತ ಮತ್ತು ಮಾಸಿಕ ಪಿಂಚಣಿ ಕೈಸೇರಲಿದೆ ಎಂಬುದನ್ನು ಲೆಕ್ಕ ಹಾಕಲು ಇನ್ನು ಮುಂದೆ ಯಾವುದೇ ಚಾರ್ಟರ್ಡ್ ಅಕೌಂಟೆಂಟ್ (CA) ಅಥವಾ ಬಾಹ್ಯ ಆರ್ಥಿಕ ತಜ್ಞರ ಮೊರೆ ಹೋಗುವ ಅಗತ್ಯವಿಲ್ಲ.&lt;/p&gt;&lt;h2&gt;&lt;strong&gt;ಹೊಸ ಕ್ಯಾಲ್ಕುಲೇಟರ್ ಸೌಲಭ್ಯದ ಮುಖ್ಯಾಂಶಗಳು!&lt;/strong&gt;&lt;/h2&gt;&lt;p&gt;&lt;strong&gt;UAN ಮೂಲಕ ನೇರ ಪ್ರವೇಶ;&lt;/strong&gt; ಉದ್ಯೋಗಿಗಳು ಕೇವಲ ತಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN) ಮತ್ತು ಪಾಸ್&zwnj;ವರ್ಡ್ ಬಳಸಿ ಪಾಸ್&zwnj;ಬುಕ್ ಪೋರ್ಟಲ್&zwnj;ಗೆ ಲಾಗಿನ್ ಆಗುವ ಮೂಲಕ ಈ ಸೌಲಭ್ಯವನ್ನು ಪಡೆಯಬಹುದು.&lt;/p&gt;&lt;p&gt;&lt;strong&gt;ಮೊಬೈಲ್&zwnj;ನಲ್ಲೇ ಲಭ್ಯ;&lt;/strong&gt; ಕೇವಲ ಕಂಪ್ಯೂಟರ್ ಮಾತ್ರವಲ್ಲದೆ, ನಿಮ್ಮ ಸ್ಮಾರ್ಟ್&zwnj;ಫೋನ್ ಮೂಲಕವೂ ಕೇವಲ ಒಂದೆರಡು ನಿಮಿಷಗಳಲ್ಲಿ ನಿವೃತ್ತಿ ನಿಧಿಯ ವಿವರಗಳನ್ನು ಪರಿಶೀಲಿಸಬಹುದು.&lt;/p&gt;&lt;p&gt;&lt;strong&gt;ಭವಿಷ್ಯದ ಆರ್ಥಿಕ ಯೋಜನೆ;&lt;/strong&gt; ನಿವೃತ್ತಿಯ ನಂತರ ನಿಮ್ಮ ಜೀವನ ನಿರ್ವಹಣೆಗೆ ಎಷ್ಟು ಹಣ ಸಿಗಲಿದೆ ಎಂಬ ಸ್ಪಷ್ಟ ಚಿತ್ರಣ ಸಿಗುವುದರಿಂದ, ಭವಿಷ್ಯದ ಉಳಿತಾಯ ಮತ್ತು ಹೂಡಿಕೆಯ ಯೋಜನೆಗಳನ್ನು ಇಂದೇ ರೂಪಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.&lt;/p&gt;&lt;h3&gt;&lt;strong&gt;ಈ ಲೆಕ್ಕಾಚಾರದ ಕುರಿತು ನೆನಪಿಡಬೇಕಾದ 3 ಪ್ರಮುಖ ಅಂಶಗಳು!&lt;/strong&gt;&lt;/h3&gt;&lt;p&gt;&lt;strong&gt;ಲೆಕ್ಕಾಚಾರವು ಸಂಪೂರ್ಣವಾಗಿ ಅಂದಾಜು ಮೊತ್ತವಾಗಿದೆ!&lt;/strong&gt;&lt;/p&gt;&lt;p&gt;ಈ ಕ್ಯಾಲ್ಕುಲೇಟರ್ ಪ್ರಸ್ತುತ ಜಾರಿಯಲ್ಲಿರುವ ಶೇ. 8.25ರ ಬಡ್ಡಿದರ ಮತ್ತು ಭವಿಷ್ಯದಲ್ಲಿ ನಿಮಗೆ ಸಿಗಬಹುದಾದ ವಾರ್ಷಿಕ ವೇತನ ಹೆಚ್ಚಳದ (Salary increment) ಆಧಾರದ ಮೇಲೆ ಅಂದಾಜು ನಿಧಿಯನ್ನು ಲೆಕ್ಕಾಚಾರ ಮಾಡುತ್ತದೆ. ಮುಂದಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಇಪಿಎಫ್ ಬಡ್ಡಿದರವನ್ನು ಹೆಚ್ಚಿಸಿದರೆ ಅಥವಾ ಕಡಿಮೆ ಮಾಡಿದರೆ, ನಿಮಗೆ ಕೊನೆಯಲ್ಲಿ ಸಿಗುವ ಅಂತಿಮ ನಿಧಿಯ ಮೊತ್ತದಲ್ಲಿಯೂ ಏರುಪೇರಾಗುವ ಸಾಧ್ಯತೆಯಿರುತ್ತದೆ.&lt;/p&gt;&lt;h3&gt;&lt;strong&gt;ಮಧ್ಯದಲ್ಲಿ ಹಣ ಹಿಂಪಡೆದರೆ ನಿವೃತ್ತಿ ನಿಧಿ ಕಡಿಮೆಯಾಗುತ್ತದೆ!&lt;/strong&gt;&lt;/h3&gt;&lt;p&gt;ಅನೇಕ ಉದ್ಯೋಗಿಗಳು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಉದ್ಯೋಗ ಬದಲಾಯಿಸುವಾಗ ಅಥವಾ ಸಣ್ಣಪುಟ್ಟ ಆರ್ಥಿಕ ಅಗತ್ಯಗಳಿಗಾಗಿ ತಮ್ಮ ಪಿಎಫ್ ಖಾತೆಯಿಂದ ಭಾಗಶಃ ಹಣವನ್ನು (Partial withdrawal) ಹಿಂಪಡೆಯುತ್ತಾರೆ. ಹೀಗೆ ಮಧ್ಯದಲ್ಲಿಯೇ ಹಣವನ್ನು ಡ್ರಾ ಮಾಡುವುದರಿಂದ, ಅದಕ್ಕೆ ಸಿಗಬೇಕಾದ ಚಕ್ರಬಡ್ಡಿಯ ಲಾಭ ಕಡಿತಗೊಳ್ಳುತ್ತದೆ. ಪರಿಣಾಮವಾಗಿ, ನೀವು 58ನೇ ವಯಸ್ಸಿನಲ್ಲಿ ನಿವೃತ್ತರಾಗುವಾಗ ನಿಮ್ಮ ಕೈಸೇರಬೇಕಿದ್ದ ಬೃಹತ್ ನಿಧಿಯ ಮೊತ್ತವು ಗಣನೀಯವಾಗಿ ಕಡಿಮೆಯಾಗುತ್ತದೆ. ಆದ್ದರಿಂದ, ಅನಿವಾರ್ಯವಲ್ಲದ ಹೊರತು ಪಿಎಫ್ ಹಣವನ್ನು ಹಿಂಪಡೆಯದಿರುವುದು ಉತ್ತಮ.&lt;/p&gt;&lt;h3&gt;&lt;strong&gt;ಮಾಸಿಕ ಪಿಂಚಣಿಗೆ 10 ವರ್ಷಗಳ ಸೇವೆ ಕಡ್ಡಾಯ!&lt;/strong&gt;&lt;/h3&gt;&lt;p&gt;ನಿವೃತ್ತಿಯ ನಂತರ ಇಪಿಎಫ್&zwnj;ಒ ಕಡೆಯಿಂದ ನಿರಂತರವಾಗಿ ಮಾಸಿಕ ಪಿಂಚಣಿ (EPS Pension) ಪಡೆಯಲು ಒಂದು ಪ್ರಮುಖ ನಿಯಮವಿದೆ. ಯಾವುದೇ ಉದ್ಯೋಗಿ ಕನಿಷ್ಠ 10 ವರ್ಷಗಳ ಕಾಲ ಇಪಿಎಫ್&zwnj;ಒ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರಬೇಕು (ಉದ್ಯೋಗ ಬದಲಾಯಿಸಿದರೂ ಒಟ್ಟು ಸೇವಾ ಅವಧಿ 10 ವರ್ಷವಾಗಿರಬೇಕು). 10 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದರೆ, ಪಿಂಚಣಿ ಯೋಜನೆಗೆ (EPS) ಜಮೆಯಾದ ಹಣವನ್ನು ಒಟ್ಟಾರೆಯಾಗಿ ಹಿಂಪಡೆಯಬಹುದೇ ಹೊರತು, ಜೀವಿತಾವಧಿ ಮಾಸಿಕ ಪಿಂಚಣಿ ಸೌಲಭ್ಯಕ್ಕೆ ಅವರು ಅರ್ಹರಾಗುವುದಿಲ್ಲ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/epfo-new-update-passbook-calculator-check-epf-pension-retirement-amount-online-bmk/articleshow-7fq1pir"/>
        </item>
        <item>
            <title><![CDATA[ನಾಳೆಯೇ ಅಂತಿಮ ದಿನಾಂಕ; ಎಲ್‌ಪಿಜಿ ಗ್ಯಾಸ್ ಬಳಕೆದಾರರಿಗೆ ಇದೇ ಫೈನಲ್‌ ಅಲರ್ಟ್!]]></title>
            <link>https://kannada.asianetnews.com/money/tomorrow-is-the-last-date-this-is-the-final-alert-for-lpg-gas-users-to-complete-e-kyc-sns/articleshow-8cg2pkv</link>
            <guid isPermaLink="true">https://kannada.asianetnews.com/money/tomorrow-is-the-last-date-this-is-the-final-alert-for-lpg-gas-users-to-complete-e-kyc-sns/articleshow-8cg2pkv</guid>
            <pubDate>Sat, 22 Aug 2026 12:56:02 +0530</pubDate>
            <description><![CDATA[ದೇಶದಾದ್ಯಂತ ಇಂಡಿಯನ್, ಎಚ್&zwnj;ಪಿ, ಮತ್ತು ಭಾರತ್ ಗ್ಯಾಸ್ ಬಳಕೆದಾರರು ತಮ್ಮ ಎಲ್&zwnj;ಪಿಜಿ ಸಬ್ಸಿಡಿಯನ್ನು ಮುಂದುವರಿಸಲು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯನ್ನು ಆನ್&zwnj;ಲೈನ್ ಆ್ಯಪ್&zwnj;ಗಳ ಮೂಲಕ ಅಥವಾ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಪೂರ್ಣಗೊಳಿಸಬಹುದು, ತಪ್ಪಿದಲ್ಲಿ ಸಬ್ಸಿಡಿ ಸ್ಥಗಿತಗೊಳ್ಳುವ ಎಚ್ಚರಿಕೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09xwsha2387qgyhz4nbbqzz,imgname-lpg-e-kyc-1787039737386.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದಾದ್ಯಂತ ಕೋಟ್ಯಾಂತರ ಮಂದಿ ಗ್ಯಾಸ್ ಬಳಕೆದಾರರು ಇದು ಪ್ರಮುಖ ಅಲರ್ಟ್. ಇಂಡಿಯನ್, ಎಚ್&zwnj;ಪಿ, ಭಾರತ್ ಗ್ಯಾಸ್ ಬಳಕೆದಾರರು ತಮ್ಮ ಎಲ್&zwnj;ಪಿಜಿ ಕನೆಕ್ಷನ್&zwnj;ಗೆ ಸಂಬಂಧಿಸಿದ ಇ-ಕೆವೈಸಿ ಪೂರ್ಣಗೊಳಿಸಲು ಕಂಪನಿಗಳು ಪ್ರಮುಖ ಅಲರ್ಟ್ ನೀಡಿದೆ. ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಎಂಬ ಇ-ಕೆವೈಸಿ ಪ್ರಕ್ರಿಯೆಯನ್ನು ನಾಳೆಯ ವೇಳೆಗೆ ಪೂರ್ಣಗೊಳಿಸಲು, ಇಲ್ಲ ಎಂದರೆ ಗ್ಯಾಸ್ ಸಬ್ಸಿಡಿ ಮಿಸ್ ಮಾಡಿಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.&lt;/p&gt;&lt;h2&gt;ಗ್ಯಾಸ್ ಸಬ್ಸಿಡಿ ರಹಸ್ಯ: ತಪ್ಪಿಸಲು ಇದೊಂದೇ ದಾರಿ!&lt;/h2&gt;&lt;p&gt;ಅಗತ್ಯ ನಿಯಮಗಳನ್ನು ಪೂರ್ಣಗೊಳಿಸಲಿಲ್ಲ ಎಂದರೆ, ಸಬ್ಸಿಡಿ ಪ್ರಯೋಜನ ಮಿಸ್ ಆಗುವ ಅವಕಾಶವಿದೆ. ಸರ್ಕಾರ ಕಡ್ಡಾಯ ಮಾಡಿರುವ ನಿಯಮವನ್ನು ಪಾಲಿಸಬೇಕು ಎಂದು, ಇದನ್ನು ಗ್ರಾಹಕರು ನಿರ್ಲಕ್ಷ್ಯ ಮಾಡುವಂತೆ ಇಲ್ಲ ಎಂದು ಕಂಪನಿಗಳು ಹೇಳಿವೆ. ಇದರಿಂದ ಸಾಮಾನ್ಯ ದರಕ್ಕೆ ಸಿಲಿಂಡರ್ ಸಿಗದೆ ನೀವು ಅಧಿಕ ಮೊತ್ತ ಪಾವತಿ ಮಾಡಬೇಕಾಗುತ್ತದೆ ಎಂದು ಗ್ಯಾಸ್ ಕಂಪನಿಗಳು ಸ್ಪಷ್ಟ ಮಾಡಿದೆ.&lt;/p&gt;&lt;p&gt;ಆಲ್&zwnj;ಲೈನ್ ಪೋರ್ಟಲ್&zwnj;ಗಳ ಸರ್ವಸ್ ಸಮಸ್ಯೆ ಎದುರಾದ ಕಾರಣ ಈ ಹಿಂದೆ ನಿಗದಿ ಮಾಡಿದ್ದ ಡೆಡ್&zwnj;ಲೈನ್&zwnj;ಅನ್ನು ವಿಸ್ತರಣೆ ಮಾಡಲಾಗಿತ್ತು. ಈ ಕ್ರಮವೂ ಸಿಲಿಂಡರ್&zwnj;ಗಳ ಪೂರೈಕೆಯಲ್ಲಿ ಪಾರದರ್ಶಕತೆ ಉಳಿಸಿಕೊಳ್ಳಲು, ನಕಲಿ ಕನೆಕ್ಷನ್ ಸಮಸ್ಯೆಯನ್ನು ನಿವಾರಿಸಲು ನಡೆಸಲಾಗುತ್ತಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಅಷ್ಟೇ ಅಲ್ಲದೇ, ಸಾಮಾನ್ಯ ಗೃಹ ಬಳಕೆದಾರರು, ಇದುವರೆಗೂ ಇ-ಕೆವೈಸಿ ಮಾಡಿಸದವರು ಕೂಡಲೇ ಈ ಪ್ರಕ್ರಿಯೆನ್ನು ಪೂರ್ಣಗೊಳಿಸಬೇಕಿದೆ.&lt;/p&gt;&lt;h2&gt;5 ನಿಮಿಷದಲ್ಲಿ ಇ-ಕೆವೈಸಿ ಪೂರ್ಣಗೊಳಿಸಿ&lt;/h2&gt;&lt;p&gt;ಓಟಿಪಿ ಮೂಲಕ ಲಾಗ್ ಇನ್ ಆಗಿ, ಫೇಸ್ ಸ್ಕ್ಯಾನ್ ಮೂಲಕ ಕೆಲವೇ ನಿಮಿಷಗಳಲ್ಲಿ ಈ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಬಹಳ ಸರಳ ಪ್ರಕ್ರಿಯೆಯಾಗಿದೆ. ಗ್ರಾಹಕರು ತಮ್ಮ ಗ್ಯಾಸ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ಆಧಾರ್ ಕಾರ್ಡ್ ನಂಬರ್, ಕನ್ಸೂಮರ್ ಐಡಿ ತೆಗೆದಿಟ್ಟುಕೊಳ್ಳಬೇಕಿದೆ. ಅಧಿಕೃತ ಆ್ಯಪ್ಗಳಾಗಿರುವ ಇಂಡಿಯನ್ ಅಯಿಲ್, ಎಚ್&zwnj;ಪಿ, ಹಲೋ ಬಿಪಿಸಿಎಲ್ ಗಳೊಂದಿಗೆ ಆಧಾರ್ ಫೇಸ್ ಆರ್ಡಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು, ಒಟಿಪಿ ಮೂಲಕ ಲಾಗ್ ಇನ್ ಆಗಿ, ಫೇಸ್ ಸ್ಕ್ಯಾನ್ ಮಾಡಿದರೆ ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.&lt;/p&gt;&lt;p&gt;ಗ್ರಾಹಕರು ತಮ್ಮ ಗ್ಯಾಸ್ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ತಕ್ಷಣವೇ ಪೂರ್ಣಗೊಳಿಸಲು ಆ್ಯಪ್ ಮೂಲಕ ಇದನ್ನು ಮಾಡಲು ಸಾಧ್ಯವಾಗದಿದ್ದರೆ, ಅವರು ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ನಿಗದಿತ ಸಮಯದೊಳಗೆ ಇದನ್ನು ಪೂರ್ಣಗೊಳಿಸಲು ವಿಫಲವಾದರೆ ಸಬ್ಸಿಡಿ ಸ್ಥಗಿತಗೊಳ್ಳಬಹುದು ಮತ್ತು ಭವಿಷ್ಯದಲ್ಲಿ ಸಿಲಿಂಡರ್&zwnj;ಗಳನ್ನು ಬುಕ್ ಮಾಡುವಲ್ಲಿ ತೊಂದರೆಗಳು ಉಂಟಾಗಬಹುದು. ಆದ್ದರಿಂದ, ಅಧಿಕಾರಿಗಳು ಗ್ರಾಹಕರಿಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ.&lt;/p&gt;&lt;p&gt;ಒಂದೊಮ್ಮೆ ಆ್ಯಪ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಸಮಸ್ಯೆಗಳು ಎದುರಾದರೆ ಹೆಲ್ಪ್&zwnj;ಲೈನ್ ನಂಬರ್&zwnj;ಗಳಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ಈ ಪ್ರಕ್ರಿಯೆ ಪೂರ್ಣಗೊಂಡರೆ ಸಾಮಾನ್ಯ ದರಕ್ಕೆ ಎಲ್&zwnj;ಪಿಜಿ ಸಿಲಿಂಡರ್ ಸಿಗಲಿದೆ, ಆದ್ದರಿಂದ ಮಿಸ್ ಮಾಡದೆ ಇ-ಕೆವೈಸಿ ಪೂರ್ಣಗೊಳಿಸಿ.&lt;/p&gt;]]></content:encoded>
            <category>money</category>
            <dc:creator>Sumanth SN</dc:creator>
            <atom:link href="https://kannada.asianetnews.com/money/tomorrow-is-the-last-date-this-is-the-final-alert-for-lpg-gas-users-to-complete-e-kyc-sns/articleshow-8cg2pkv"/>
        </item>
        <item>
            <title><![CDATA[EPFO: 10 ವರ್ಷದ ಸೇವೆಯ ನಂತರವೂ ಪಿಂಚಣಿ ಕೈತಪ್ಪಬಹುದು! EPFO ಖಾತೆಯಲ್ಲಿ ಈ ಕೆಲಸ ಇಂದೇ ಪೂರ್ಣಗೊಳಿಸಿ!]]></title>
            <link>https://kannada.asianetnews.com/money/epfo-pension-small-mistake-10-years-service-pension-eligibility-employees-alert-bmk/articleshow-8fkg01k</link>
            <guid isPermaLink="true">https://kannada.asianetnews.com/money/epfo-pension-small-mistake-10-years-service-pension-eligibility-employees-alert-bmk/articleshow-8fkg01k</guid>
            <pubDate>Mon, 24 Aug 2026 22:53:19 +0530</pubDate>
            <description><![CDATA[ಇಪಿಎಫ್ ಖಾತೆಯಲ್ಲಿ ಸೇರ್ಪಡೆ ಅಥವಾ ನಿರ್ಗಮನ ದಿನಾಂಕ ತಪ್ಪಾಗಿದ್ದರೆ, ಅದು ನಿಮ್ಮ ಪಿಂಚಣಿ ಅರ್ಹತೆಗೆ ಧಕ್ಕೆ ತರಬಹುದು ಮತ್ತು ಪಿಎಫ್ ವರ್ಗಾವಣೆಗೆ ಅಡ್ಡಿಯಾಗಬಹುದು. ಈ ಲೇಖನವು, ಉದ್ಯೋಗದಾತರ ಸಹಾಯವಿಲ್ಲದೆ, ಮನೆಯಲ್ಲೇ ಆನ್&zwnj;ಲೈನ್ ಮೂಲಕ 'Mark Exit' ಬಳಸಿ ದಿನಾಂಕವನ್ನು ಸರಿಪಡಿಸುವ ಸರಳ ವಿಧಾನವನ್ನು ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0tcpvaqm3hfvha03n4q16dd,imgname-epfo-crisis-1787592142167.jpg" type="image/jpeg" height="390" width="690"/>
            <content:encoded><![CDATA[&lt;p&gt;ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ನೌಕರರ ಪಿಂಚಣಿ ಯೋಜನೆ (EPS) ಮೂಲಕ ಮಾಸಿಕ ಪಿಂಚಣಿ ಪಡೆಯಲು ಕನಿಷ್ಠ 10 ವರ್ಷಗಳ ಸೇವೆ ಕಡ್ಡಾಯವಾಗಿದೆ. ಆದರೆ, ನಿಮ್ಮ ದಾಖಲೆಗಳಲ್ಲಿನ ಒಂದು ಸಣ್ಣ ತಪ್ಪು ವೃದ್ಧಾಪ್ಯದಲ್ಲಿ ಬರುವ ಪಿಂಚಣಿಯನ್ನು ಇಲ್ಲದಂತೆ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಖಾತೆಯಲ್ಲಿ ನಿಮ್ಮ ಸೇರ್ಪಡೆ ದಿನಾಂಕ (Date of Joining) ಅಥವಾ ನಿರ್ಗಮನ ದಿನಾಂಕ (Date of Exit) ತಪ್ಪಾಗಿದ್ದರೆ ಉಂಟಾಗುವ ತೊಂದರೆಗಳು ಮತ್ತು ಅದನ್ನು ಮನೆಯಲ್ಲೇ ಸರಿಪಡಿಸಿಕೊಳ್ಳುವ ಸರಳ ವಿಧಾನ ಇಲ್ಲಿದೆ.&lt;/p&gt;&lt;h2&gt;&lt;strong&gt;ದಿನಾಂಕದ ವ್ಯತ್ಯಾಸದಿಂದ ಉಂಟಾಗುವ ಪ್ರಮುಖ ತೊಂದರೆಗಳು!&lt;/strong&gt;&lt;/h2&gt;&lt;h3&gt;&lt;strong&gt;1. ಪಿಂಚಣಿ ಅರ್ಹತೆಗೆ ಧಕ್ಕೆ!&lt;/strong&gt;&lt;/h3&gt;&lt;p&gt;ನಿಮ್ಮ ನಿಜವಾದ ಕೆಲಸದ ಅವಧಿ 10 ವರ್ಷಗಳಾಗಿದ್ದರೂ, ದಾಖಲೆಯಲ್ಲಿ ತಪ್ಪಾದ ದಿನಾಂಕ ನಮೂದಾಗಿದ್ದರೆ ಒಟ್ಟು ಸೇವಾ ಅವಧಿ 10 ವರ್ಷಕ್ಕಿಂತ ಕಡಿಮೆ ಎಂದು ತೋರಿಸಬಹುದು. ಇದರಿಂದ ನೀವು ಪಿಂಚಣಿ ಪಡೆಯುವ ಅರ್ಹತೆಯನ್ನೇ ಕಳೆದುಕೊಳ್ಳುವ ಅಪಾಯವಿರುತ್ತದೆ.&lt;/p&gt;&lt;h3&gt;&lt;strong&gt;2. ಸೇವಾ ಇತಿಹಾಸದಲ್ಲಿ ಅಸ್ತವ್ಯಸ್ತ (Overlapping &amp;amp; Gaps)!&lt;/strong&gt;&lt;/h3&gt;&lt;p&gt;ದಿನಾಂಕಗಳು ಸರಿಯಿಲ್ಲದಿದ್ದರೆ, ನೀವು ಕೆಲಸ ಮಾಡದಿದ್ದರೂ ಕಂಪನಿಗಳ ನಡುವೆ 'ಅಂತರ' (Gap) ಇದೆಯೆಂದು ಅಥವಾ ಒಂದೇ ಸಮಯದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡಿದ್ದೀರಿ (Overlapping) ಎಂದು ಸಿಸ್ಟಮ್ ತೋರಿಸುತ್ತದೆ. ಇದು ಭವಿಷ್ಯದಲ್ಲಿ ಸೇವೆಯನ್ನು ಸಾಬೀತುಪಡಿಸಲು ದೊಡ್ಡ ತೊಡಕಾಗುತ್ತದೆ.&lt;/p&gt;&lt;h3&gt;&lt;strong&gt;3. ಪಿಎಫ್ ಬ್ಯಾಲೆನ್ಸ್ ಹಾಗೂ ವರ್ಗಾವಣೆಗೆ ಅಡಚಣೆ!&lt;/strong&gt;&lt;/h3&gt;&lt;p&gt;ಸೇರ್ಪಡೆ ದಿನಾಂಕ ತಪ್ಪಿದ್ದರೆ ನಿಮ್ಮ ಪಿಎಫ್ ಖಾತೆಗೆ ಜಮೆಯಾಗುವ ಕೊಡುಗೆ ಹಾಗೂ ಬಡ್ಡಿಯ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಬಹುದು. ಅದೇ ರೀತಿ, ಹಳೆಯ ಕಂಪನಿಯು ಸರಿಯಾದ 'Date of Exit' ನವೀಕರಿಸದಿದ್ದರೆ, ಹೊಸ ಕಂಪನಿಗೆ ನಿಮ್ಮ ಪಿಎಫ್ ಹಣವನ್ನು ಆನ್&zwnj;ಲೈನ್&zwnj;ನಲ್ಲಿ ವರ್ಗಾಯಿಸಲು (Transfer) ಅಥವಾ ಹಿಂಪಡೆಯಲು (Withdrawal) ಸಾಧ್ಯವಾಗುವುದಿಲ್ಲ.&lt;/p&gt;&lt;h3&gt;&lt;strong&gt;ದಾಖಲೆಯಲ್ಲಿನ ತಪ್ಪನ್ನು ಮನೆಯಿಂದಲೇ ಸರಿಪಡಿಸುವುದು ಹೇಗೆ?&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಉದ್ಯೋಗದಾತರು (Employer) ಪೋರ್ಟಲ್&zwnj;ನಲ್ಲಿ ಮಾಹಿತಿ ನೀಡುವಾಗ ಇಂತಹ ತಪ್ಪುಗಳು ನಡೆಯುತ್ತವೆ. ಆದರೆ ಆಧಾರ್ ಲಿಂಕ್ ಆಗಿರುವ UAN ಹೊಂದಿರುವ ಸದಸ್ಯರು ಈಗ ಆನ್&zwnj;ಲೈನ್ ಮೂಲಕವೇ ಇದನ್ನು ಸರಿಪಡಿಸಿಕೊಳ್ಳಬಹುದು.&lt;/p&gt;&lt;h3&gt;&lt;strong&gt;'Mark Exit' ಸೌಲಭ್ಯ ಬಳಸುವ ವಿಧಾನ!&lt;/strong&gt;&lt;/h3&gt;&lt;p&gt;1. ನೀವು ಕೆಲಸ ಬಿಟ್ಟು 2 ತಿಂಗಳು ಕಳೆದ ನಂತರ, EPFO ಸದಸ್ಯರ ಪೋರ್ಟಲ್&zwnj;ಗೆ ಲಾಗಿನ್ ಆಗಿ.&lt;/p&gt;&lt;p&gt;2. ಅಲ್ಲಿ Manage' ವಿಭಾಗಕ್ಕೆ ಹೋಗಿ 'Mark Exit' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.&lt;/p&gt;&lt;p&gt;3. ನಿಮ್ಮ ಸರಿಯಾದ ನಿರ್ಗಮನ ದಿನಾಂಕ ಮತ್ತು ಕೆಲಸ ಬಿಡಲು ಕಾರಣವನ್ನು ನಮೂದಿಸಿ.&lt;/p&gt;&lt;p&gt;4. ಆಧಾರ್ ಆಧಾರಿತ OTP ಮೂಲಕ ಪರಿಶೀಲನೆ (Verification) ಪೂರ್ಣಗೊಳಿಸಿ.&lt;/p&gt;&lt;p&gt;ಗಮನಿಸಿ; ಕೆಲವು ಸಂಕೀರ್ಣ ಸಂದರ್ಭಗಳಲ್ಲಿ ಅಥವಾ ಹಳೆಯ ಪ್ರಕ್ರಿಯೆಗಳಿದ್ದಾಗ ಉದ್ಯೋಗದಾತರ (Employer) ಮೂಲಕವೇ ತಿದ್ದುಪಡಿ ಮಾಡಬೇಕಾಗಬಹುದು.&lt;/p&gt;&lt;h3&gt;&lt;strong&gt;ಸಂದೇಶ ಸ್ಪಷ್ಟವಾಗಿದೆ!&lt;/strong&gt;&lt;/h3&gt;&lt;p&gt;ಕೆಲಸ ಬದಲಾಯಿಸಿದಾಗ ಅಥವಾ ಕೆಲಸ ತೊರೆದ ತಕ್ಷಣವೇ ನಿಮ್ಮ EPF ದಾಖಲೆಗಳನ್ನು ಪರಿಶೀಲಿಸುವುದು ಅತ್ಯಗತ್ಯ. ಸಮಯಕ್ಕೆ ಸರಿಯಾಗಿ ದಿನಾಂಕಗಳನ್ನು ನವೀಕರಿಸುವುದರಿಂದ ಭವಿಷ್ಯದಲ್ಲಿ ಪಿಂಚಣಿ, ಪಿಎಫ್ ವರ್ಗಾವಣೆ ಅಥವಾ ಹಣ ಹಿಂಪಡೆಯುವ ಸಮಯದಲ್ಲಿ ಎದುರಾಗುವ ಅನಗತ್ಯ ತೊಂದರೆಗಳಿಂದ ಪಾರಾಗಬಹುದು.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/epfo-pension-small-mistake-10-years-service-pension-eligibility-employees-alert-bmk/articleshow-8fkg01k"/>
        </item>
        <item>
            <title><![CDATA[ಗಂಡ ಬಿಟ್ಟು ಹೋದದ್ದು ಕೋಟಿ ಕೋಟಿ ಆಸ್ತಿ.. ಆದರೆ ಹೆಂಡತಿಗೆ ಸಿಗುತ್ತಿರುವುದು ತಿಂಗಳಿಗೆ ಕೇವಲ ₹1,000! ಯಾಕೆ ಗೊತ್ತಾ?]]></title>
            <link>https://kannada.asianetnews.com/india-news/husband-left-crores-behind-but-wife-got-just-1000-a-month-after-his-death-a-crucial-money-lesson-for-couples/articleshow-9dzbuse</link>
            <guid isPermaLink="true">https://kannada.asianetnews.com/india-news/husband-left-crores-behind-but-wife-got-just-1000-a-month-after-his-death-a-crucial-money-lesson-for-couples/articleshow-9dzbuse</guid>
            <pubDate>Mon, 24 Aug 2026 17:11:50 +0530</pubDate>
            <description><![CDATA[&lt;p&gt;ಕೋಟ್ಯಂತರ ಆಸ್ತಿ ಹೊಂದಿದ್ದ ಪತಿಯ ನಿಧನದ ಬಳಿಕ ಜೈಪುರದ ಅನುರಾಧಾ ಅವರ ಬದುಕು ಸಂಪೂರ್ಣ ಬದಲಾಯಿತು. ಕುಟುಂಬದ ಹಣಕಾಸು, ಆಸ್ತಿ ಮತ್ತು ದಾಖಲೆಗಳ ಮಾಹಿತಿ ಅವರಿಗಿರಲಿಲ್ಲ. ಇಂದು ದಿನನಿತ್ಯದ ಖರ್ಚಿಗೂ ಮಕ್ಕಳಿಂದ ತಿಂಗಳಿಗೆ ₹1,000 ಪಡೆಯುತ್ತಿದ್ದಾರೆ. ದಂಪತಿಗಳು ಆಸ್ತಿ, ಬ್ಯಾಂಕ್ ಖಾತೆ, ಹೂಡಿಕೆ, ವಿಮೆ, ನಾಮಿನೇಷನ್ ಮತ್ತು ವಿಲ್ ಬಗ್ಗೆ ಪರಸ್ಪರ ಮಾಹಿತಿ ಹೊಂದಿರಬೇಕು ಎಂಬುದೇ ಈ ಕಥೆಯ ಪಾಠ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0srzxh75qh7p49rbppp1d2r,imgname-crorepati-husband-dies--wife-left-financially-dependent-on-sons---money-mistake-couples-must-avoid--1--1787571467815.jpg" type="image/jpeg" height="390" width="690"/>
            <content:encoded><![CDATA[&lt;h2&gt;ಕುಟುಂಬದ ಸಂಪತ್ತು ಇದ್ದರೂ ಭದ್ರತೆ ಏಕೆ ಇರಲಿಲ್ಲ?&lt;/h2&gt;&lt;p&gt;&lt;strong&gt;ರಾಜಸ್ಥಾನ:&lt;/strong&gt; ಜೈಪುರದ 66 ವರ್ಷದ ಅನುರಾಧಾ (ಹೆಸರು ಬದಲಿಸಲಾಗಿದೆ) ಅವರ ಜೀವನ ಒಂದು ಕಾಲದಲ್ಲಿ ಐಷಾರಾಮಿನಿಂದ ಕೂಡಿತ್ತು. ಅವರ ಪತಿ ಕೋಟ್ಯಧಿಪತಿ ಉದ್ಯಮಿಯಾಗಿದ್ದು, ನಗರದಲ್ಲಿ ಹಲವು ಆಸ್ತಿಗಳು, ಬಾಡಿಗೆಗೆ ನೀಡಿದ್ದ ಅಂಗಡಿಗಳು ಮತ್ತು ಇತರ ಹೂಡಿಕೆಗಳನ್ನು ಹೊಂದಿದ್ದರು. ಅನುರಾಧಾ ಮನೆಯ ಹಣಕಾಸಿನ ಬಗ್ಗೆ ಹೆಚ್ಚು ಚಿಂತಿಸದೆ ಜೀವನ ನಡೆಸುತ್ತಿದ್ದರು.&lt;/p&gt;&lt;p&gt;ಆದರೆ ಪತಿಗೆ ಹಠಾತ್ ಹೃದಯಾಘಾತವಾಗಿ ಮೃತಪಟ್ಟ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಕುಟುಂಬದ ಆಸ್ತಿ ಎಲ್ಲಿದೆ, ಯಾವ ಹೂಡಿಕೆಗಳಿವೆ, ದಾಖಲೆಗಳು ಎಲ್ಲಿವೆ ಮತ್ತು ಅವುಗಳನ್ನು ಹೇಗೆ ಪಡೆಯಬೇಕು ಎಂಬ ಪ್ರಮುಖ ಮಾಹಿತಿಗಳು ಅನುರಾಧಾಗೆ ತಿಳಿದಿರಲಿಲ್ಲ.&lt;/p&gt;&lt;h3&gt;ಕೋಟ್ಯಂತರ ಸಂಪತ್ತಿನಿಂದ ತಿಂಗಳಿಗೆ ₹1,000ಕ್ಕೆ!&lt;/h3&gt;&lt;p&gt;ಪತಿಯ ನಿಧನದ ಬಳಿಕ ಮಕ್ಕಳೇ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ತಂದಿದ್ದು, ಅವುಗಳಿಗೆ ಸಹಿ ಮಾಡುವಂತೆ ಹೇಳಿದ್ದರು ಎಂದು ಅನುರಾಧಾ ತಿಳಿಸಿದ್ದಾರೆ. ನಂತರ ಕುಟುಂಬದ ಸಂಪತ್ತಿನ ನಿಯಂತ್ರಣ ಮಕ್ಕಳ ಕೈಗೆ ಹೋದ ಬಳಿಕ, ದಿನನಿತ್ಯದ ಖರ್ಚಿಗೂ ಅವರು ಮಕ್ಕಳನ್ನು ಅವಲಂಬಿಸುವಂತಾಯಿತು. ಇಂದು ಅವರಿಗೆ ತಿಂಗಳಿಗೆ ₹1,000 ನೀಡಲಾಗುತ್ತಿದೆ ಎಂದು ವರದಿ ಹೇಳುತ್ತದೆ.&lt;/p&gt;&lt;p&gt;ಈ ಕಥೆ ಕೇವಲ ಕುಟುಂಬದ ಸಮಸ್ಯೆಯಲ್ಲ; ದಂಪತಿಗಳ ನಡುವೆ ಆರ್ಥಿಕ ಮಾಹಿತಿ ಹಂಚಿಕೊಳ್ಳದಿರುವುದು ಎಷ್ಟು ದೊಡ್ಡ ಅಪಾಯವಾಗಬಹುದು ಎಂಬುದನ್ನು ತೋರಿಸುತ್ತದೆ.&lt;/p&gt;&lt;h3&gt;ಹಣಕಾಸಿನ ಮಾಹಿತಿ ಪತ್ನಿಗೂ ಅಗತ್ಯವಲ್ಲವೇ?&lt;/h3&gt;&lt;p&gt;ಹಲವು ಕುಟುಂಬಗಳಲ್ಲಿ ಒಬ್ಬರು ಹಣ ಸಂಪಾದಿಸಿ, ಹೂಡಿಕೆ, ಆಸ್ತಿ ಮತ್ತು ತೆರಿಗೆಗಳನ್ನು ನೋಡಿಕೊಳ್ಳುತ್ತಾರೆ. ಮತ್ತೊಬ್ಬರು ಮನೆ ಮತ್ತು ಮಕ್ಕಳ ಜವಾಬ್ದಾರಿ ನಿರ್ವಹಿಸುತ್ತಾರೆ. ಆದರೆ ಇಂತಹ ವ್ಯವಸ್ಥೆಯಲ್ಲಿ ಕನಿಷ್ಠ ಮಟ್ಟದಲ್ಲಾದರೂ ಇಬ್ಬರೂ ಕುಟುಂಬದ ಹಣಕಾಸಿನ ಚಿತ್ರಣವನ್ನು ತಿಳಿದಿರಬೇಕು.&lt;/p&gt;&lt;p&gt;ಬ್ಯಾಂಕ್ ಖಾತೆಗಳು, ಹೂಡಿಕೆಗಳು, ವಿಮೆ, ಸಾಲಗಳು, ಆಸ್ತಿಗಳು, ತೆರಿಗೆ ದಾಖಲೆಗಳು ಮತ್ತು ನಾಮಿನೇಷನ್&zwnj;ಗಳ ವಿವರಗಳನ್ನು ಇಬ್ಬರೂ ತಿಳಿದಿರುವುದು ಮುಖ್ಯ. ದಾಖಲೆಗಳನ್ನು ಸುರಕ್ಷಿತ ಡಿಜಿಟಲ್ ಫೋಲ್ಡರ್&zwnj;ನಲ್ಲಿ ವ್ಯವಸ್ಥಿತವಾಗಿ ಇಡುವುದೂ ಸಹಾಯಕ.&lt;/p&gt;&lt;h3&gt;ವಿಲ್ ಮಾಡುವುದು ಯಾಕೆ ಮುಖ್ಯ?&lt;/h3&gt;&lt;p&gt;ಆಸ್ತಿ ಹಂಚಿಕೆ ಮತ್ತು ವಾರಸುದಾರಿಕೆಯ ಗೊಂದಲ ತಪ್ಪಿಸಲು ಆರೋಗ್ಯವಾಗಿರುವಾಗಲೇ ವಿಲ್ ಮಾಡುವುದು ಉತ್ತಮ. ಹಣಕಾಸು ಆಸ್ತಿಗಳ ನಾಮಿನೇಷನ್&zwnj;ಗಳನ್ನು ವಿಲ್&zwnj;ಗೆ ಹೊಂದಿಕೆಯಾಗುವಂತೆ ಪರಿಶೀಲಿಸಬೇಕು. ಪವರ್ ಆಫ್ ಅಟಾರ್ನಿ ಮಾತ್ರ ವಿಲ್&zwnj;ಗೆ ಪರ್ಯಾಯವಲ್ಲ; ವ್ಯಕ್ತಿಯ ಮರಣದ ಬಳಿಕ ಅದು ಪರಿಣಾಮಕಾರಿಯಾಗಿರುವುದಿಲ್ಲ.&lt;/p&gt;&lt;h3&gt;ದಂಪತಿಗಳಿಗೆ ₹1,000 ಕಥೆಯ ದೊಡ್ಡ ಪಾಠ&lt;/h3&gt;&lt;p&gt;ಕುಟುಂಬದಲ್ಲಿ ಎಷ್ಟು ಕೋಟಿ ಆಸ್ತಿ ಇದೆ ಎನ್ನುವುದಕ್ಕಿಂತ, ಅದನ್ನು ಎಲ್ಲಿ ಇಟ್ಟಿದ್ದಾರೆ, ಯಾರ ಹೆಸರಿನಲ್ಲಿದೆ, ದಾಖಲೆಗಳು ಎಲ್ಲಿವೆ ಮತ್ತು ಅಗತ್ಯವಿದ್ದಾಗ ಅದನ್ನು ಹೇಗೆ ಪಡೆಯಬೇಕು ಎಂಬ ಮಾಹಿತಿ ಇಬ್ಬರಿಗೂ ಇರುವುದು ಮುಖ್ಯ. ಪತ್ನಿ ಅಥವಾ ಪತಿ ಸಂಪೂರ್ಣವಾಗಿ ಮತ್ತೊಬ್ಬರ ಹಣಕಾಸಿನ ಜ್ಞಾನವನ್ನು ಅವಲಂಬಿಸದಂತೆ ನೋಡಿಕೊಳ್ಳುವುದು ನಿಜವಾದ ಆರ್ಥಿಕ ಭದ್ರತೆ.&lt;/p&gt;]]></content:encoded>
            <category>money</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/husband-left-crores-behind-but-wife-got-just-1000-a-month-after-his-death-a-crucial-money-lesson-for-couples/articleshow-9dzbuse"/>
        </item>
        <item>
            <title><![CDATA[Gratuity Calculator: 5 ವರ್ಷ ಕೆಲಸ ಮಾಡಿದವರಿಗೆ ಸರ್ಕಾರದ ನಿಯಮದಂತೆ ಎಷ್ಟು ಗ್ರ್ಯಾಚ್ಯುಟಿ? ನಿಮ್ಮ ಹಣದ ಲೆಕ್ಕ ಇಲ್ಲಿದೆ!]]></title>
            <link>https://kannada.asianetnews.com/my-money-money/personal-finance-gratuity-calculation-after-5-years-government-rules-eligibility-and-amount-bmk/articleshow-a820aal</link>
            <guid isPermaLink="true">https://kannada.asianetnews.com/my-money-money/personal-finance-gratuity-calculation-after-5-years-government-rules-eligibility-and-amount-bmk/articleshow-a820aal</guid>
            <pubDate>Tue, 18 Aug 2026 21:29:27 +0530</pubDate>
            <description><![CDATA[ಉದ್ಯೋಗಿಯ ದೀರ್ಘಕಾಲದ ಸೇವೆಗೆ ಕಂಪನಿ ನೀಡುವ ಗೌರವಯುತ ಪ್ರತಿಫಲವೇ ಗ್ರಾಚ್ಯುಟಿ. ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗಳು ಇದಕ್ಕೆ ಅರ್ಹರಾಗಿದ್ದು, ನಿಮ್ಮ ಕೊನೆಯ ತಿಂಗಳ ಸಂಬಳ ಮತ್ತು ಸೇವಾ ಅವಧಿಯನ್ನು ಆಧರಿಸಿ ಇದರ ಮೊತ್ತವನ್ನು ಸುಲಭವಾಗಿ ಲೆಕ್ಕ ಹಾಕಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kakddj0jcb2v01zj2bf4a5xc,imgname-gratuity-new-rules-1763735685138.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದೇ ಸಂಸ್ಥೆಯಲ್ಲಿ ಸತತವಾಗಿ ಹಲವು ವರ್ಷಗಳ ಕಾಲ ಶ್ರಮವಹಿಸಿ ಕೆಲಸ ಮಾಡುವ ಉದ್ಯೋಗಿಗಳಿಗೆ, ಕೆಲಸ ತೊರೆಯುವಾಗ ಅಥವಾ ನಿವೃತ್ತಿಯ ಸಮಯದಲ್ಲಿ ಸಿಗುವ ದೊಡ್ಡ ಆರ್ಥಿಕ ಬೆಂಬಲವೇ ಗ್ರಾಚ್ಯುಟಿ. ಗ್ರಾಚ್ಯುಟಿ ಎಂಬುದು ಕೇವಲ ಹಣವಲ್ಲ, ಅದು ಉದ್ಯೋಗಿಯ ದೀರ್ಘಕಾಲದ ಸೇವೆ ಮತ್ತು ನಿಷ್ಟೆಗೆ ಕಂಪನಿಯು ನೀಡುವ ಗೌರವಯುತ ಪ್ರತಿಫಲವಾಗಿದೆ. ಆದರೆ, ನಿಮಗೆ ಎಷ್ಟು ಗ್ರಾಚ್ಯುಟಿ ಸಿಗುತ್ತದೆ ಮತ್ತು ಅದನ್ನು ಲೆಕ್ಕ ಹಾಕುವುದು ಹೇಗೆ ಎಂಬ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಗ್ರಾಚ್ಯುಟಿ ಪಡೆಯಲು ಕನಿಷ್ಠ ಅರ್ಹತೆ ಏನು?&lt;/strong&gt;&lt;/h2&gt;&lt;p&gt;ಭಾರತ ಸರ್ಕಾರದ ಗ್ರಾಚ್ಯುಟಿ ಪಾವತಿ ಕಾಯ್ದೆ ಪ್ರಕಾರ, ಹತ್ತು ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುವ ಪ್ರತಿಯೊಂದು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಯಲ್ಲೂ ಗ್ರಾಚ್ಯುಟಿ ನೀಡುವುದು ಕಡ್ಡಾಯವಾಗಿದೆ.&lt;/p&gt;&lt;p&gt;&lt;strong&gt;ಐದು ವರ್ಷಗಳ ಕಡ್ಡಾಯ ಸೇವೆ;&lt;/strong&gt; ಉದ್ಯೋಗಿಯೊಬ್ಬರು ಗ್ರಾಚ್ಯುಟಿ ಪಡೆಯಲು ಆ ಸಂಸ್ಥೆಯಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಸತತವಾಗಿ ಕೆಲಸ ಮಾಡಿರಬೇಕು. ಐದು ವರ್ಷಗಳಿಗಿಂತ ಮುಂಚಿತವಾಗಿಯೇ ರಾಜೀನಾಮೆ ನೀಡಿದರೆ ಸಾಮಾನ್ಯವಾಗಿ ಗ್ರಾಚ್ಯುಟಿ ಸಿಗುವುದಿಲ್ಲ.&lt;/p&gt;&lt;p&gt;&lt;strong&gt;ಆರು ತಿಂಗಳ ನಿಯಮ;&lt;/strong&gt; ಸೇವಾ ಅವಧಿಯನ್ನು ಲೆಕ್ಕಹಾಕುವಾಗ, ಕೊನೆಯ ವರ್ಷದಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ಅಂದರೆ ಉದಾಹರಣೆಗೆ ಐದು ವರ್ಷ ಏಳು ತಿಂಗಳು ಕೆಲಸ ಮಾಡಿದ್ದರೆ, ಅದನ್ನು ಪೂರ್ಣ ಆರು ವರ್ಷಗಳು ಎಂದೇ పరిಗಣಿಸಲಾಗುತ್ತದೆ.&lt;/p&gt;&lt;h3&gt;&lt;strong&gt;ಲೆಕ್ಕಾಚಾರ ಹೇಗೆ ನಡೆಯುತ್ತದೆ?&lt;/strong&gt;&lt;/h3&gt;&lt;p&gt;ಗ್ರಾಚ್ಯುಟಿ ಮೊತ್ತವನ್ನು ಲೆಕ್ಕ ಹಾಕುವುದು ತುಂಬಾ ಸರಳ. ಇದಕ್ಕೆ ನಿಮ್ಮ ಕೊನೆಯ ತಿಂಗಳ ಮೂಲ ವೇತನ ಮತ್ತು ತುಟಿ ಭತ್ಯೆ ಹಾಗೂ ಒಟ್ಟು ಸೇವೆಯ ವರ್ಷಗಳು ಮುಖ್ಯವಾಗುತ್ತವೆ. ತಿಂಗಳಿಗೆ ಇಪ್ಪತ್ತಾರು ಕೆಲಸದ ದಿನಗಳು ಎಂದು ಪರಿಗಣಿಸಿ, ಪ್ರತಿ ಪೂರ್ಣಗೊಂಡ ವರ್ಷಕ್ಕೆ ಹದಿನೈದು ದಿನಗಳ ವೇತನವನ್ನು ಗ್ರಾಚ್ಯುಟಿಯಾಗಿ ನೀಡಲಾಗುತ್ತದೆ. ಅಂದರೆ, ಹದಿನೈದನ್ನು ನಿಮ್ಮ ಕೊನೆಯ ತಿಂಗಳ ಒಟ್ಟು ಮೂಲ ವೇತನದಿಂದ ಗುಣಿಸಿ, ಬಂದ ಮೊತ್ತವನ್ನು ಸೇವೆಯ ವರ್ಷಗಳಿಂದ ಗುಣಿಸಬೇಕು. ನಂತರ ಆ ಅಂತಿಮ ಮೊತ್ತವನ್ನು ಇಪ್ಪತ್ತಾರರಿಂದ ಭಾಗಿಸಿದರೆ ನಿಮಗೆ ಸಿಗುವ ಗ್ರಾಚ್ಯುಟಿ ದೊರೆಯುತ್ತದೆ.&lt;/p&gt;&lt;h3&gt;&lt;strong&gt;ಒಂದು ಸರಳ ಉದಾಹರಣೆ!&lt;/strong&gt;&lt;/h3&gt;&lt;p&gt;ಒಬ್ಬ ಉದ್ಯೋಗಿ ಒಂದು ಕಂಪನಿಯಲ್ಲಿ ಸತತ ಐದು ವರ್ಷ ಕೆಲಸ ಮಾಡಿ ರಾಜೀನಾಮೆ ನೀಡಿದ್ದಾರೆ ಹಾಗೂ ಅವರ ಕೊನೆಯ ತಿಂಗಳ ಮೂಲ ವೇತನ ಮತ್ತು ತುಟಿ ಭತ್ಯೆ ಸೇರಿ ಇಪ್ಪತ್ತು ಸಾವಿರ ರೂಪಾಯಿ ಆಗಿದೆ ಎಂದು ಭಾವಿಸೋಣ. ಮೇಲೆ ತಿಳಿಸಿದ ವಿಧಾನದಂತೆ ಲೆಕ್ಕ ಹಾಕಿದಾಗ, ಇಪ್ಪತ್ತು ಸಾವಿರ ರೂಪಾಯಿ ಮೂಲ ವೇತನ ಹೊಂದಿರುವ ಉದ್ಯೋಗಿಗೆ ಐದು ವರ್ಷಗಳ ಸೇವೆಗೆ ಸುಮಾರು ಐವತ್ತೇಳು ಸಾವಿರದ ಆರನೂರ ತೊಂಬತ್ತೆರಡು ರೂಪಾಯಿ ಗ್ರಾಚ್ಯುಟಿ ರೂಪದಲ್ಲಿ ಸಿಗುತ್ತದೆ.&lt;/p&gt;&lt;h3&gt;&lt;strong&gt;ನಿಮ್ಮ ಹಕ್ಕನ್ನು ಪಡೆಯಲು ಹಿಂಜರಿಯಬೇಡಿ!&lt;/strong&gt;&lt;/h3&gt;&lt;p&gt;ನಿಮ್ಮ ಸೇವಾ ಅವಧಿಗೆ ತಕ್ಕಂತೆ ಸಿಗುವ ಗ್ರಾಚ್ಯುಟಿ ನಿಮ್ಮ ಕಾಯ್ದೆಬದ್ಧ ಹಕ್ಕು. ಕೆಲಸ ಬದಲಾಯಿಸುವಾಗ ಅಥವಾ ನಿವೃತ್ತರಾಗುವಾಗ ನಿಮ್ಮ ಕಂಪನಿಯು ಈ ಮೊತ್ತವನ್ನು ಕಡ್ಡಾಯವಾಗಿ ಪಾವತಿಸಬೇಕು. ಒಂದು ವೇಳೆ ಕಂಪನಿಯು ಗ್ರಾಚ್ಯುಟಿ ನೀಡಲು ನಿರಾಕರಿಸಿದರೆ ಅಥವಾ ಅನಗತ್ಯ ವಿಳಂಬ ಮಾಡಿದರೆ, ನೀವು ಕಾರ್ಮಿಕ ಇಲಾಖೆಗೆ ದೂರು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಚಿವಾಲಯದ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಬಹುದು.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/my-money-money/personal-finance-gratuity-calculation-after-5-years-government-rules-eligibility-and-amount-bmk/articleshow-a820aal"/>
        </item>
        <item>
            <title><![CDATA[30,000 ಸಂಬಳ! ನೀವೂ ಕಾರು ಖರೀದಿಸಬಹುದು.. 20-4-10 ಸೂತ್ರ ಫಾಲೋ ಮಾಡಿ..!]]></title>
            <link>https://kannada.asianetnews.com/car-news/how-to-buy-a-car-with-a-rs-30-000-monthly-salary-full-emi-and-budget-guide-gkn/articleshow-cptuc74</link>
            <guid isPermaLink="true">https://kannada.asianetnews.com/car-news/how-to-buy-a-car-with-a-rs-30-000-monthly-salary-full-emi-and-budget-guide-gkn/articleshow-cptuc74</guid>
            <pubDate>Tue, 25 Aug 2026 20:31:59 +0530</pubDate>
            <description><![CDATA[&lt;p&gt;30 ಸಾವಿರ ರೂಪಾಯಿ ಸಂಬಳ ಪಡೆಯುವವರು &quot;20-4-10&quot; ಸೂತ್ರವನ್ನು ಅನುಸರಿಸುವ ಮೂಲಕ ಮತ್ತು ಬಜೆಟ್ ಕಾರನ್ನು ಆಯ್ಕೆ ಮಾಡುವ ಮೂಲಕ ಕಾರ್ ಖರೀದಿಸಬಹುದು. ಡೌನ್ ಪೇಮೆಂಟ್, ಇಎಂಐ ಮಿತಿ ಮತ್ತು ಕಾರಿನ ನಿರ್ವಹಣಾ ವೆಚ್ಚಗಳನ್ನು ಮೊದಲೇ ಯೋಜಿಸುವುದು ಕಾರ್ ಖರೀದಿಯ ಕನಸನ್ನು ಸುಲಭಗೊಳಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0wq0hvje90n1dr3vjtsctfg,imgname-car-buying-tips-1787670054770.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರತಿಯೊಬ್ಬ ಉದ್ಯೋಗಿಯ ಕನಸು ಒಂದು ಸ್ವಂತ ಮನೆ ಮತ್ತು ಒಂದು ಕಾರ್ ಖರೀದಿಸುವುದು. ಆದರೆ ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳ ಪಡೆಯುವವರಿಗೆ ನನ್ನಿಂದ ಕಾರ್ ಖರೀದಿಸಲು ಸಾಧ್ಯವೇ? ಇಷ್ಟು ಕಡಿಮೆ ಸಂಬಳದಲ್ಲಿ ಇಎಂಐ (EMI) ಕಟ್ಟಲು ಸಾಧ್ಯವೇ? ಎಂಬ ಆತಂಕವಿರುತ್ತದೆ. ಆದರೆ ಸರಿಯಾದ ಆರ್ಥಿಕ ಯೋಜನೆ ಮತ್ತು ಪಕ್ಕಾ ಲೆಕ್ಕಾಚಾರವಿದ್ದರೆ 30 ಸಾವಿರ ಸಂಬಳದಲ್ಲೂ ನೀವು ಆರಾಮವಾಗಿ ಕಾರಿನ ಕನಸನ್ನು ನನಸು ಮಾಡಿಕೊಳ್ಳಬಹುದು. ಅದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.&lt;/p&gt;&lt;h2&gt;&lt;strong&gt;ಕಾರ್ ಖರೀದಿಗೆ 20-4-10 ಸೂತ್ರ ಅನುಸರಿಸಿ&lt;/strong&gt;&lt;/h2&gt;&lt;p&gt;ಹಣಕಾಸು ತಜ್ಞರು ಕಾರ್ ಖರೀದಿಸುವವರಿಗೆ ಒಂದು ಅದ್ಭುತವಾದ ನಿಯಮವನ್ನು ಸೂಚಿಸುತ್ತಾರೆ. ಅದೇ 20-4-10 ರೂಲ್.&lt;/p&gt;&lt;ul&gt; &lt;li&gt;20 (ಡೌನ್ ಪೇಮೆಂಟ್): ಕಾರಿನ ಒಟ್ಟು ಬೆಲೆಯ ಕನಿಷ್ಠ 20 ಪ್ರತಿಶತ ಹಣವನ್ನು ಮುಂಗಡವಾಗಿ (Down Payment) ಪಾವತಿಸಿ. ಇದರಿಂದ ಸಾಲದ ಮೊತ್ತ ಕಡಿಮೆಯಾಗುತ್ತದೆ.&lt;/li&gt; &lt;li&gt;4 (ಸಾಲದ ಅವಧಿ): ಕಾರ್ ಲೋನ್ ಅವಧಿಯನ್ನು ಗರಿಷ್ಠ 4 ವರ್ಷಕ್ಕೆ (48 ತಿಂಗಳು) ಸೀಮಿತಗೊಳಿಸಿ. ಅವಧಿ ಹೆಚ್ಚಾದಷ್ಟೂ ನೀವು ಕಟ್ಟುವ ಬಡ್ಡಿ ಹೆಚ್ಚಾಗುತ್ತದೆ.&lt;/li&gt; &lt;li&gt;10 (ಇಎಂಐ ಮಿತಿ): ನಿಮ್ಮ ತಿಂಗಳ ಇಎಂಐ ನಿಮ್ಮ ಒಟ್ಟು ಸಂಬಳದ 10 ರಿಂದ 15 ಪ್ರತಿಶತಕ್ಕಿಂತ ಹೆಚ್ಚಿರಬಾರದು.&lt;/li&gt;&lt;/ul&gt;&lt;h2&gt;&lt;strong&gt;30 ಸಾವಿರ ಸಂಬಳದವರ ಲೆಕ್ಕಾಚಾರ ಹೀಗಿರಲಿ&lt;/strong&gt;&lt;/h2&gt;&lt;p&gt;ನಿಮ್ಮ ಸಂಬಳ 30,000 ರೂ. ಆಗಿದ್ದರೆ.. ನಿಮ್ಮ ತಿಂಗಳ ಇಎಂಐ ಸುಮಾರು 5 ರಿಂದ 7 ಸಾವಿರ ರೂಪಾಯಿಗಳ ಒಳಗೆ ಇರುವುದು ಸೂಕ್ತ. ಮಾರುಕಟ್ಟೆಯಲ್ಲಿ ಈಗ 4 ರಿಂದ 6 ಲಕ್ಷ ರೂಪಾಯಿ ಬೆಲೆಯ ಉತ್ತಮ ಬಜೆಟ್ ಕಾರುಗಳು (ಉದಾಹರಣೆಗೆ: ಮಾರುತಿ ಆಲ್ಟೊ, ಎಸ್-ಪ್ರೆಸ್ಸೊ, ಅಥವಾ ಸೆಲೆರಿಯೊ) ಲಭ್ಯವಿವೆ. ನೀವು 1.5 ರಿಂದ 2 ಲಕ್ಷ ರೂ. ಡೌನ್ ಪೇಮೆಂಟ್ ಮಾಡಿದರೆ, ಉಳಿದ ಹಣಕ್ಕೆ ಕಡಿಮೆ ಇಎಂಐನಲ್ಲಿ ಸಾಲ ಪಡೆಯಬಹುದು.&lt;/p&gt;&lt;h2&gt;&lt;strong&gt;ಇಎಂಐ ಹೊರತುಪಡಿಸಿ ಈ ವೆಚ್ಚಗಳೂ ನೆನಪಿರಲಿ&lt;/strong&gt;&lt;/h2&gt;&lt;ul&gt; &lt;li&gt;ಕಾರ್ ಖರೀದಿಸುವಾಗ ಕೇವಲ ಇಎಂಐ ಮಾತ್ರವಲ್ಲದೆ, ಈ ಕೆಳಗಿನ ವೆಚ್ಚಗಳ ಬಗ್ಗೆಯೂ ಗಮನಹರಿಸಿ&lt;/li&gt; &lt;li&gt;ತಿಂಗಳಿಗೆ ಪೆಟ್ರೋಲ್ ಅಥವಾ ಡೀಸೆಲ್&zwnj;ಗೆ ಎಷ್ಟು ಖರ್ಚಾಗಬಹುದು ಎಂಬ ಅಂದಾಜಿರಲಿ&lt;/li&gt; &lt;li&gt;ಕಾರ್ ಸರ್ವಿಸ್ ಮತ್ತು ರಿಪೇರಿಗಾಗಿ ಸಣ್ಣ ಮೊತ್ತವನ್ನು ಮೀಸಲಿಡಿ.&lt;/li&gt; &lt;li&gt;ಪ್ರತಿ ವರ್ಷ ಕಟ್ಟಬೇಕಾದ ವಿಮಾ ಕಂತು ಕೂಡ ನಿಮ್ಮ ಬಜೆಟ್&zwnj;ನಲ್ಲಿರಲಿ.&lt;/li&gt; &lt;li&gt;ಬಾಡಿಗೆ, ಕರೆಂಟ್ ಬಿಲ್ ಮತ್ತು ಆಹಾರದ ಖರ್ಚುಗಳನ್ನು ನಿಭಾಯಿಸಿದ ನಂತರವೇ ಕಾರ್ ಖರೀದಿಯ ನಿರ್ಧಾರ ಮಾಡಿ&lt;/li&gt;&lt;/ul&gt;&lt;h2&gt;&lt;strong&gt;ಸಲಹೆಗಳು&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಸಾಲ ಪಡೆಯುವ ಮೊದಲು ವಿವಿಧ ಬ್ಯಾಂಕ್&zwnj;ಗಳ ಬಡ್ಡಿ ದರಗಳನ್ನು (Interest Rates) ಹೋಲಿಕೆ ಮಾಡಿ ನೋಡಿ.&lt;/strong&gt;&lt;/li&gt; &lt;li&gt;&lt;strong&gt;ಕಡಿಮೆ ಬಡ್ಡಿ ದರ ಇರುವ ಬ್ಯಾಂಕ್ ಆಯ್ಕೆ ಮಾಡಿ.&lt;/strong&gt;&lt;/li&gt; &lt;li&gt;&lt;strong&gt;ಸಾಧ್ಯವಾದಷ್ಟು ಹೆಚ್ಚು ಡೌನ್ ಪೇಮೆಂಟ್ ಮಾಡಲು ಪ್ರಯತ್ನಿಸಿ, ಇದರಿಂದ ಇಎಂಐ ಹೊರೆ ಕಡಿಮೆಯಾಗುತ್ತದೆ.&lt;/strong&gt;&lt;/li&gt; &lt;li&gt;&lt;strong&gt;ಸರಿಯಾದ ಯೋಜನೆ ಇದ್ದರೆ, 30 ಸಾವಿರ ಸಂಬಳವೂ ಕಾರಿನ ಕನಸಿಗೆ ಅಡ್ಡಿಯಾಗುವುದಿಲ್ಲ!&lt;/strong&gt;&lt;/li&gt;&lt;/ul&gt;]]></content:encoded>
            <category>money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/car-news/how-to-buy-a-car-with-a-rs-30-000-monthly-salary-full-emi-and-budget-guide-gkn/articleshow-cptuc74"/>
        </item>
        <item>
            <title><![CDATA[8ನೇ ವೇತನ ಆಯೋಗ: 50 ಲಕ್ಷ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆ ಸಾಧ್ಯತೆ!]]></title>
            <link>https://kannada.asianetnews.com/business/8th-pay-commission-fitment-factor-basic-pay-hike-calculator-san/articleshow-ddoeuzo</link>
            <guid isPermaLink="true">https://kannada.asianetnews.com/business/8th-pay-commission-fitment-factor-basic-pay-hike-calculator-san/articleshow-ddoeuzo</guid>
            <pubDate>Mon, 24 Aug 2026 12:07:26 +0530</pubDate>
            <description><![CDATA[&lt;p&gt;8ನೇ ಕೇಂದ್ರ ವೇತನ ಆಯೋಗದ ಜಾರಿಯ ನಿರೀಕ್ಷೆಯಲ್ಲಿರುವ ಕೋಟ್ಯಂತರ ನೌಕರರು ಮತ್ತು ಪಿಂಚಣಿದಾರರ ವೇತನ ಏರಿಕೆಯು 'ಫಿಟ್&zwnj;ಮೆಂಟ್ ಫ್ಯಾಕ್ಟರ್' ಮೇಲೆ ಅವಲಂಬಿತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypzvgrnq868764sstqb8syr,imgname-8th-pay-commission-1785330516756.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.24): &lt;/strong&gt;8ನೇ ಕೇಂದ್ರ ವೇತನ ಆಯೋಗದ (8th Pay Commission) ಶಿಫಾರಸುಗಳ ಜಾರಿಗಾಗಿ ದೇಶದ ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಕಾತರದಿಂದ ಕಾಯುತ್ತಿದ್ದಾರೆ. ಆಯೋಗದ ಶಿಫಾರಸುಗಳು ಅನುಷ್ಠಾನಗೊಂಡ ನಂತರ ನೌಕರರ ವೇತನದಲ್ಲಾಗುವ ಒಟ್ಟು ಏರಿಕೆಯು 'ಫಿಟ್&zwnj;ಮೆಂಟ್ ಫ್ಯಾಕ್ಟರ್' (Fitment Factor) ಅನ್ನು ಸಂಪೂರ್ಣವಾಗಿ ಆಧರಿಸಿರಲಿದೆ. ವೇತನ ಆಯೋಗವು ಪ್ರಸ್ತಾಪಿಸುವ ಈ ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ನಿಂದಾಗಿ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಸೇರಿದಂತೆ ಒಟ್ಟು 1 ಕೋಟಿಗೂ ಅಧಿಕ ಮಂದಿಗೆ ನೇರ ಲಾಭ ಸಿಗುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;ಏನಿದು ಫಿಟ್&zwnj;ಮೆಂಟ್ ಫ್ಯಾಕ್ಟರ್?&lt;/strong&gt;&lt;/h2&gt;&lt;p&gt;ಫಿಟ್&zwnj;ಮೆಂಟ್ ಫ್ಯಾಕ್ಟರ್ ಎಂಬುದು ನೌಕರನ ಹಳೆಯ ಮೂಲ ವೇತನವನ್ನು (Basic Pay) ಹೊಸ ಮೂಲ ವೇತನಕ್ಕೆ ಪರಿವರ್ತಿಸಲು ವೇತನ ಆಯೋಗವು ಬಳಸುವ ಒಂದು ಲೆಕ್ಕಾಚಾರ.&lt;/p&gt;&lt;h2&gt;&lt;strong&gt;ಲೆಕ್ಕಾಚಾರದ ಸೂತ್ರ&lt;/strong&gt;&lt;/h2&gt;&lt;p&gt;&lt;strong&gt;ಹಳೆಯ ಮೂಲ ವೇತನ &times; ಫಿಟ್&zwnj;ಮೆಂಟ್ ಫ್ಯಾಕ್ಟರ್ = ಹೊಸ ಮೂಲ ವೇತನ&lt;/strong&gt;&lt;/p&gt;&lt;p&gt;ಉದಾಹರಣೆಗೆ, 7 ನೇ ವೇತನ ಆಯೋಗದಲ್ಲಿ 2.57 ಫಿಟ್&zwnj;ಮೆಂಟ್ ಫ್ಯಾಕ್ಟರ್ ಅನ್ವಯಿಸಿ ಕನಿಷ್ಠ ಮೂಲ ವೇತನವನ್ನು 7,000 ರೂ. ನಿಂದ 18,000 ರೂ. ಗೆ ಹೆಚ್ಚಿಸಲಾಗಿತ್ತು (7,000 &times; 2.57 = 18,000 ರೂ.).&lt;/p&gt;&lt;h2&gt;&lt;strong&gt;ಆಯೋಗದ ಪ್ರಸ್ತುತ ಸ್ಥಿತಿ ಮತ್ತು ಚರ್ಚೆ&lt;/strong&gt;&lt;/h2&gt;&lt;p&gt;8 ನೇ ವೇತನ ಆಯೋಗದ ಜಾರಿಯ ಕುರಿತು ಪ್ರಸ್ತುತ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ಆಯೋಗವು ದೇಶದ ವಿವಿಧ ನೌಕರರ ಸಂಘಟನೆಗಳು, ಕೇಂದ್ರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಮತ್ತು ಇತರ ಭಾಗಿದಾರರೊಂದಿಗೆ ಚರ್ಚಿಸಿ ವೇತನ ರಚನೆ, ಫಿಟ್&zwnj;ಮೆಂಟ್ ಫ್ಯಾಕ್ಟರ್, ಪೇ ಮ್ಯಾಟ್ರಿಕ್ಸ್, ಭತ್ಯೆಗಳು ಮತ್ತು ಇತರ ಸೌಲಭ್ಯಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಪರಿಶೀಲನೆ ನಡೆಸುತ್ತಿದೆ.&lt;/p&gt;&lt;h2&gt;&lt;strong&gt;ವಿವಿಧ ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗಳ ಆಧಾರದ ಮೇಲೆ ಅಂದಾಜು ವೇತನ (ಲೆವೆಲ್ 1 ರಿಂದ 18):&lt;/strong&gt;&lt;/h2&gt;&lt;p&gt;ವಿವಿಧ ವೇತನ ಶ್ರೇಣಿಯ (Levels) ಆಧಾರದಲ್ಲಿ ನೌಕರರ ಮೂಲ ವೇತನವು ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗೆ ಅನುಗುಣವಾಗಿ ಹೇಗೆ ಹೆಚ್ಚಾಗಬಹುದು ಎಂಬ ಅಂದಾಜು ಪಟ್ಟಿ ಇಲ್ಲಿದೆ:&lt;/p&gt;&lt;h2&gt;&lt;strong&gt;ಲೆವೆಲ್ 1 (7 ನೇ ವೇತನ ಆಯೋಗದ ಮೂಲ ವೇತನ: ₹18,000)&lt;/strong&gt;&lt;/h2&gt;&lt;ul&gt; &lt;li&gt;1.83 ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗೆ: ₹32,940&lt;/li&gt; &lt;li&gt;2.0 ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗೆ: ₹36,000&lt;/li&gt; &lt;li&gt;2.57 ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗೆ: ₹46,260&lt;/li&gt; &lt;li&gt;3.83 ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗೆ: ₹68,940&lt;/li&gt;&lt;/ul&gt;&lt;h2&gt;&lt;strong&gt;ಲೆವೆಲ್ 2 (ಮೂಲ ವೇತನ: ₹19,900)&lt;/strong&gt;&lt;/h2&gt;&lt;p&gt;1.83 ಗೆ: ₹36,417 | 2.0 ಗೆ: ₹39,800 | 2.57 ಗೆ: ₹51,143 | 3.83 ಗೆ: ₹76,217&lt;/p&gt;&lt;h2&gt;&lt;strong&gt;ಲೆವೆಲ್ 3 (ಮೂಲ ವೇತನ: ₹21,700)&lt;/strong&gt;&lt;/h2&gt;&lt;p&gt;1.83 ಗೆ: ₹39,711 | 2.0 ಗೆ: ₹43,400 | 2.57 ಗೆ: ₹55,769 | 3.83 ಗೆ: ₹83,111&lt;/p&gt;&lt;h2&gt;&lt;strong&gt;ಲೆವೆಲ್ 4 (ಮೂಲ ವೇತನ: ₹25,500)&lt;/strong&gt;&lt;/h2&gt;&lt;p&gt;1.83 ಗೆ: ₹46,665 | 2.0 ಗೆ: ₹51,000 | 2.57 ಗೆ: ₹65,535 | 3.83 ಗೆ: ₹97,665&lt;/p&gt;&lt;h2&gt;&lt;strong&gt;ಲೆವೆಲ್ 5 (ಮೂಲ ವೇತನ: ₹29,200)&lt;/strong&gt;&lt;/h2&gt;&lt;p&gt;1.83 ಗೆ: ₹53,436 | 2.0 ಗೆ: ₹58,400 | 2.57 ಗೆ: ₹75,044 | 3.83 ಗೆ: ₹1,11,836&lt;/p&gt;&lt;h2&gt;&lt;strong&gt;ಲೆವೆಲ್ 6 (ಮೂಲ ವೇತನ: ₹35,400)&lt;/strong&gt;&lt;/h2&gt;&lt;p&gt;1.83 ಗೆ: ₹64,782 | 2.0 ಗೆ: ₹70,800 | 2.57 ಗೆ: ₹90,978 | 3.83 ಗೆ: ₹1,35,582&lt;/p&gt;&lt;h2&gt;&lt;strong&gt;ಲೆವೆಲ್ 7 (ಮೂಲ ವೇತನ: ₹44,900)&lt;/strong&gt;&lt;/h2&gt;&lt;p&gt;1.83 ಗೆ: ₹82,167 | 2.0 ಗೆ: ₹89,800 | 2.57 ಗೆ: ₹1,15,393 | 3.83 ಗೆ: ₹1,71,967&lt;/p&gt;&lt;h2&gt;&lt;strong&gt;ಲೆವೆಲ್ 10 (ಮೂಲ ವೇತನ: ₹56,100)&lt;/strong&gt;&lt;/h2&gt;&lt;p&gt;1.83 ಗೆ: ₹1,02,663 | 2.0 ಗೆ: ₹1,12,200 | 2.57 ಗೆ: ₹1,44,177 | 3.83 ಗೆ: ₹2,14,863&lt;/p&gt;&lt;h2&gt;&lt;strong&gt;ಲೆವೆಲ್ 13 (ಮೂಲ ವೇತನ: ₹1,23,100)&lt;/strong&gt;&lt;/h2&gt;&lt;p&gt;1.83 ಗೆ: ₹2,25,273 | 2.0 ಗೆ: ₹2,46,200 | 2.57 ಗೆ: ₹3,16,367 | 3.83 ಗೆ: ₹4,71,473&lt;/p&gt;&lt;h2&gt;&lt;strong&gt;ಲೆವೆಲ್ 18 (ಮೂಲ ವೇತನ: ₹2,50,000)&lt;/strong&gt;&lt;/h2&gt;&lt;p&gt;1.83 ಗೆ: ₹4,57,500 | 2.0 ಗೆ: ₹5,00,000 | 2.57 ಗೆ: ₹6,42,500 | 3.83 ಗೆ: ₹9,57,500&lt;/p&gt;&lt;h2&gt;&lt;strong&gt;ಎಷ್ಟಿರಬಹುದು ಫಿಟ್&zwnj;ಮೆಂಟ್ ಫ್ಯಾಕ್ಟರ್?&lt;/strong&gt;&lt;/h2&gt;&lt;p&gt;ವಿವಿಧ ನೌಕರರ ಸಂಘಟನೆಗಳು ಹಾಗೂ ನಿವೃತ್ತ ನೌಕರರ ಒಕ್ಕೂಟಗಳು ಗರಿಷ್ಠ ಫಿಟ್&zwnj;ಮೆಂಟ್ ಫ್ಯಾಕ್ಟರ್ ಜಾರಿಗೆ ತರಬೇಕೆಂದು ಒತ್ತಾಯಿಸಿವೆ. 'ಕ್ಲಿಯರ್&zwnj;ಟ್ಯಾಕ್ಸ್' (ClearTax) ವರದಿಯ ಪ್ರಕಾರ, ನೌಕರರ ಪ್ರತಿನಿಧಿಗಳು ಗರಿಷ್ಠ ಅಂದರೆ 3.83 ಫಿಟ್&zwnj;ಮೆಂಟ್ ಫ್ಯಾಕ್ಟರ್ ಜಾರಿಗೊಳಿಸುವಂತೆ ಪ್ರಸ್ತಾಪಿಸಿದ್ದಾರೆ. ಆದರೆ, ಆರ್ಥಿಕ ತಜ್ಞರ ಕನಿಷ್ಠ ಅಂದಾಜಿನ ಪ್ರಕಾರ ಫಿಟ್&zwnj;ಮೆಂಟ್ ಫ್ಯಾಕ್ಟರ್ 1.83 ರಿಂದ 2.0 ಇರಲಿದ್ದು, ಮಾರುಕಟ್ಟೆ ಶ್ರೇಣಿಯ ಸರಾಸರಿ ಅಂದಾಜಿನ ಪ್ರಕಾರ 2.0 ರಿಂದ 2.57 ರಷ್ಟಿರಬಹುದು ಎನ್ನಲಾಗಿದೆ. 8 ನೇ ವೇತನ ಆಯೋಗದಲ್ಲಿ ಫಿಟ್&zwnj;ಮೆಂಟ್ ಫ್ಯಾಕ್ಟರ್ ಇನ್ಮನೂ ಅಂತಿಮಗೊಂಡಿಲ್ಲ. ಆಯೋಗದ ಶಿಫಾರಸುಗಳನ್ನು ಸಲ್ಲಿಸಿದ ನಂತರ, ಕೇಂದ್ರ ಸರ್ಕಾರದ ಅಂತಿಮ ಒಪ್ಪಿಗೆಯ ಬಳಿಕವಷ್ಟೇ ನೂತನ ವೇತನ ಶ್ರೇಣಿ ಜಾರಿಗೆ ಬರಲಿದೆ.&lt;/p&gt;]]></content:encoded>
            <category>money</category>
            <dc:creator>Santosh Naik</dc:creator>
            <atom:link href="https://kannada.asianetnews.com/business/8th-pay-commission-fitment-factor-basic-pay-hike-calculator-san/articleshow-ddoeuzo"/>
        </item>
        <item>
            <title><![CDATA[AI Windfall: ದೇಶದ ಪ್ರತಿ ಪ್ರಜೆಗೂ 30 ಸಾವಿರ ನಗದು, ಎಐಗೆ ಧನ್ಯವಾದ ಹೇಳುತ್ತಿರುವ ತೈವಾನ್ ಜನರು!]]></title>
            <link>https://kannada.asianetnews.com/gallery/business/ai-windfall-30000-in-cash-for-every-citizen-people-in-taiwan-are-thanking-ai-sns-exwfa48</link>
            <guid isPermaLink="true">https://kannada.asianetnews.com/gallery/business/ai-windfall-30000-in-cash-for-every-citizen-people-in-taiwan-are-thanking-ai-sns-exwfa48</guid>
            <pubDate>Wed, 19 Aug 2026 11:07:35 +0530</pubDate>
            <description><![CDATA[&lt;p&gt;ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಮುಂದಿನ ವರ್ಷ ತನ್ನ ದೇಶದ ಅರ್ಹ ನಾಗರಿಕರಿಗೆ 30 ಸಾವಿರ ರೂಪಾಯಿ ನಗದು ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದಕ್ಕೆ ಕೃತಕ ಬುದ್ಧಿಮತ್ತೆ ನೇತೃತ್ವದ ಪ್ರಗತಿಯೇ ಕಾರಣ ಎಂದು ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0c8095vbnk47c2nwgbf7fp1,imgname-ai-image---7--1787117446331.jpg" type="image/jpeg" height="390" width="690"/>
            <content:encoded><![CDATA[&lt;p&gt;ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಮುಂದಿನ ವರ್ಷ ತನ್ನ ದೇಶದ ಅರ್ಹ ನಾಗರಿಕರಿಗೆ 30 ಸಾವಿರ ರೂಪಾಯಿ ನಗದು ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದಕ್ಕೆ ಕೃತಕ ಬುದ್ಧಿಮತ್ತೆ ನೇತೃತ್ವದ ಪ್ರಗತಿಯೇ ಕಾರಣ ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಮುಂದಿನ ವರ್ಷ ತನ್ನ ದೇಶದ ಅರ್ಹ ನಾಗರಿಕರಿಗೆ 30 ಸಾವಿರ ರೂಪಾಯಿ ನಗದು ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದಕ್ಕೆ ಕೃತಕ ಬುದ್ಧಿಮತ್ತೆ ನೇತೃತ್ವದ ಪ್ರಗತಿಯೇ ಕಾರಣ ಎಂದು ಅವರು ಹೇಳಿದ್ದಾರೆ. 70,700 ಕೋಟಿಗಳ ಹ್ಯಾಂಟ್&zwnj;ಔಟ್ ಹೊರತಾಗಿಯೂ ತೈವಾನ್ ನಿವ್ವಳ ಸಾಲ ಹೆಚ್ಚಳ ಕಾಣುವುದಿಲ್ಲ ಎಂದು ಲೈ ಹೇಳಿದ್ದಾರೆ.&lt;/p&gt;&lt;img&gt;&lt;p&gt;ತೈವಾನ್ ದೇಶದ ಆರ್ಥಿಕತೆ ಈ ಹಿಂದೆ ಊಹಿಸಿದ್ದಕ್ಕಿಂತ ಹೆಚ್ಚು ಬಲವಾಗಿದ್ದು, ಎಐಯಿಂದ ಪಡೆದ ಸಿಕ್ಕ ಪ್ರಗತಿಯನ್ನು ದೇಶದ ನಾಗರಿಕರೊಂದಿಗೆ ಹಂಚಿಕೊಳ್ಳುವ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಯನ್ನು ತೈವಾನ್ ಪಡೆದುಕೊಳ್ಳಲಿದೆ. ಈ ಕುರಿತಂತೆ ಸಿಯೋಲ್ ಎಕಾನಮಿಕ್ ಡೈಲಿ ವರದಿ ಮಾಡಿದೆ.&lt;/p&gt;&lt;img&gt;&lt;p&gt;ವರದಿಯಲ್ಲಿಉಲ್ಲೇಖ ಮಾಡಿರುವಂತೆ, ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಮುಂದಿನ ವರ್ಷ ಎಲ್ಲಾ ನಾಗಕರಿಗೆ ಅಂದರೆ ಪ್ರತಿ ಅರ್ಹ ವ್ಯಕ್ತಿಗೆ 10 ಸಾವಿರ ತೈವಾನೀಸ್ ಡಾಲರ್ ಅಂದರೆ ಸುಮಾರು 4,40,000 ವೋನ್&zwnj; ಹಣವನ್ನು ವಿತರಣೆ ಮಾಡುವ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಈ ವರ್ಷದೊಳಗೆ ಮುಂದಿನ ವರ್ಷದ ಬಜೆಟ್ ಅಂಗೀಕರಿಸಿದರೆ, ಫೆಬ್ರವರಿಯಲ್ಲಿ ಹೊಸ ವರ್ಷದಲ್ಲಿ ಹಣವನ್ನು ಸ್ವೀಕರಿಸಬಹುದಾಗಿದೆ.&lt;/p&gt;&lt;img&gt;&lt;p&gt;ಈ ವರ್ಷ ತೈವಾನ್ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಸುಮಾರು ಶೇಕಡಾ 11.05ಕ್ಕೆ ತಲುಪುವ ನಿರೀಕ್ಷೆ ಇದ್ದು, ಇದು ಕಳೆದ 39 ವರ್ಷಗಳಲ್ಲಿಯೇ ಅತ್ಯಾಧಿಕ ಎಂದು ಅಂದಾಜು ಮಾಡಲಾಗಿದೆ. ವಿಶೇಷವಾಗಿ ಎಐ ಮತ್ತು ಕ್ಲೌಡ್ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ವಿವರಿಸಲಾಗಿದೆ. ದೇಶದ ಬೆಳವಣಿಗೆಯ ಫಲವನ್ನು ಪ್ರತಿ ನಾಗರೀಕರಿಗೆ ತಲುಪಿಸುವ ಕ್ರಮವಾಗಿ ಸರ್ಕಾರ ಮಹತ್ವ ಯೋಜನೆಯನ್ನು ಕೈಗೊಳ್ಳುತ್ತಿದೆ.&lt;/p&gt;&lt;img&gt;&lt;p&gt;ಆದರೆ, ಈ ಯೋಜನೆಗೆ ರಾಜಕೀಯ ವಲಯದಿಂದ ಭಾರ ಟೀಕೆ ಕೇಳಿ ಬಂದಿದ್ದು, ಕಳೆದ ವರ್ಷ ಇಂತಹ ನಗದು ಯೋಜನೆಯನ್ನು ಜಾರಿ ಮಾಡಲು ಹೇಳಿದ ಸಂದರ್ಭದಲ್ಲಿ ಆಡಳಿತಾರೂಢ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಕ್ಷ ಇದನ್ನು ಅಸಂವಿಧಾನಿಕ ಎಂದು ವಿರೋಧ ಮಾಡಿತ್ತಂತೆ. ಆದರೆ ನವೆಂಬರ್&zwnj;ನಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಎದುರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ ಎಂದು ಟೀಕೆ ಮಾಡಿದೆ.&lt;/p&gt;&lt;img&gt;&lt;p&gt;ಇದರ ನಡುವೆಯೇ ತೈವಾನ್ ಸರ್ಕಾರ ಸಮತೋಲಿತ ಆದಾಯ ಮತ್ತು ಖರ್ಚು ಹಾಗೂ ಶೂನ್ಯ ಸಾಲದ ಆಧಾರದ ಮೇಲೆ ಮುಂದಿನ ವರ್ಷದ ಬಜೆಟ್ ರೂಪಿಸಲು ಸಿದ್ಧತೆ ನಡೆಸಿದೆ. ಇದರಂತೆ 235.7 ಬಿಲಿಯನ್ ತೈವಾನೀಸ್ ಡಾಲರ್ ಬಜೆಟ್ ರೂಪಿಸಲು ಸರ್ಕಾರ ಮುಂದಾಗಿದ್ದು, ಈ ಬಜೆಟ್ ಇದೇ ತಿಂಗಳ 20ರಂದು ಫೈನಲ್ ಆಗುವ ನಿರೀಕ್ಷೆ ಇದೆ.&lt;/p&gt;&lt;img&gt;&lt;p&gt;ತೈವಾನ್ ದೇಶದಲ್ಲಿ ಸೆಮಿಕಂಡಕ್ಟರ್, ಎಐ (ಕೃತಕ ಬುದ್ಧಿಮತ್ತೆ), ಐಸಿಟಿ ಕ್ಷೇತ್ರಗಳಿಗೆ ವಿಶ್ವದಾದ್ಯಂತ ಭಾರೀ ಬೇಡಿಕೆ ಹೆಚ್ಚಾಗಿದ್ದು, ಇದರಿಂದ ತೈವಾನ್ ದೇಶದ ಆರ್ಥಿಕತೆ ತೀವ್ರವಾಗಿ ಬೆಳೆದಿದೆ. 2026ರ ಆರಂಭದಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 14ರಷ್ಟು ಹೆಚ್ಚಾಗಿದ್ದರೆ, ಇದು ವರ್ಷವಿಡೀ ಹೋಲಿಕೆ ಮಾಡಿದರೆ ಶೇಕಡಾ 11ರಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಇದರಂತೆ ಸರ್ಕಾರ ಸುಮಾರು 235.7 ಶತಕೋಟಿ ತೈವಾನ್ ಡಾಲರ್ ಹಣವನ್ನು ಜನರಿಗೆ ಹಂಚಿಕೆ ಮಾಡಲು ಮುಂದಾಗಿದ್ದು, ದೇಶದ ಸುಮಾರು 2.3 ರಿಂದ 2.4 ಕೋಟಿ ಜನರಿಗೆ ಈ ನಗದು ಯೋಜನೆಯ ಪ್ರಯೋಜನ ಸಿಗಲಿದೆ ಎಂದು ಅಂದಾಜು ಮಾಡಲಾಗಿದೆ.&lt;/p&gt;&lt;img&gt;&lt;p&gt;ಜನರು ಈ ಹಣದಲ್ಲಿ ಶಿಕ್ಷಣ, ಕುಟುಂಬ ವೆಚ್ಚ ಅಥವಾ ಸ್ಥಳೀಯ ವ್ಯವಹಾರ ಹಾಗೂ ವೃದ್ಧರ ಆರೈಕೆಗೆ ಬಳಕೆ ಮಾಡಬಹುದು ಎಂದು ತೈವಾನ್ ಅಧ್ಯಕ್ಷ ಹೇಳಿದ್ದಾರೆ. ತೈವಾನ್&zwnj;ನಲ್ಲಿ ಈ ರೀತಿಯ ನಗದು ವಿತರಣೆ ಯೋಜನೆ ಜಾರಿ ಆಗುತ್ತಿರುವುದು ಇದೇ ಮೊದಲೇನು ಅಲ್ಲ, ಈ ಹಿಂದೆ 2025ರಲ್ಲೂ ಇದೇ ರೀತಿಯ ನಗದು ಹಂಚಿಕೆ ಮಾಡಲಾಗಿತ್ತು.&lt;/p&gt;&lt;img&gt;&lt;p&gt;ತೈವಾನ್&zwnj;ನ ಟಿಎಸ್&zwnj;ಎಂಸಿ ಸೇರಿದಂತೆ ಹಲವು ಕಂಪನಿಗಳು ಎಐ ಬೂಮ್&zwnj;ನಿಂದ ಭಾರೀ ಲಾಭ ಪಡೆದುಕೊಂಡಿದೆ. ರಫ್ತು ಹೆಚ್ಚಾಗಿ ಸರ್ಕಾರಕ್ಕೆ ಬರುವ ತೆರಿಗೆ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು, ಈ ಕಾರಣದಿಂದಲೇ ಇದಕ್ಕೆ ಎಐ ರೆಡ್ ಪ್ಯಾಕ್ ಅಥವಾ ಲಾಭದ ಹಂಚಿಕೆ ಎಂದು ಕರೆಯಲಾಗುತ್ತಿದೆ. ಇದರಂದ ಸಣ್ಣ ವ್ಯಾಪಾರಿಗಳು, ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುವ ಜನರಿಗೆ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ. ಆದರೆ ಚುನಾವಣಾ ಮುನ್ನ ಇಂತಹ ಯೋಜನೆ ಘೋಷಣೆ ಮಾಡಿರೋದನ್ನು ವಿರೋಧ ಪಕ್ಷಗಳು ಪಾಪ್ಯುಲಿಸಂ ಎಂದು ಟೀಕೆ ಮಾಡುತ್ತಿದೆ. ಇದರಿಂದ ಜನರಲ್ಲಿ ಅಸಮಾನತೆ ಹೆಚ್ಚಾಗುತ್ತಿದೆ ಎಂದು ಟೀಕೆ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>money</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/business/ai-windfall-30000-in-cash-for-every-citizen-people-in-taiwan-are-thanking-ai-sns-exwfa48"/>
        </item>
        <item>
            <title><![CDATA[ಖಾಲಿ ಹಾಲಿನ ಪ್ಯಾಕೆಟ್ ಕಸಕ್ಕೆ ಹಾಕೋ ಬದಲು ಹೀಗೆ ಮಾಡಿದ್ರೆ ಹಣ ಮಾಡ್ಬಹುದು !]]></title>
            <link>https://kannada.asianetnews.com/business/instead-of-throwing-milk-cartons-in-the-trash-you-can-collect-them-and-earn-money/articleshow-lgqrgt6</link>
            <guid isPermaLink="true">https://kannada.asianetnews.com/business/instead-of-throwing-milk-cartons-in-the-trash-you-can-collect-them-and-earn-money/articleshow-lgqrgt6</guid>
            <pubDate>Tue, 25 Aug 2026 13:49:06 +0530</pubDate>
            <description><![CDATA[&lt;p&gt;milk cover earn money : ಹಾಲಿನ ಕವರ್&zwnj; ಕಸಕ್ಕೆ ಎಸಿತಿದ್ದೀರಾ? ಇನ್ಮುಂದೆ ಅದನ್ನು ಸಂಗ್ರಹಿಸಿ. ಈ ಕವರ್ ನಿಮಗೆ ಕಸ ಎನ್ನಿಸಿದ್ರೂ ಸಣ್ಣ ಗಳಿಕೆಗೆ ಸಹಾಯ ಮಾಡುತ್ತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0vzx7tmj7k55tr3nktd6874,imgname-plastic-cover-1787645828948.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರತಿದಿನ ಬೆಳಗ್ಗೆ ಹಾಲಿನ ಪ್ಯಾಕೆಟ್ ಮನೆಗೆ ಬರುತ್ತೆ. ಹಾಲನ್ನು ಪಾತ್ರೆಗೆ ಹಾಕಿ ಪ್ಯಾಕೆಟ್&zwnj; ಕಸಕ್ಕೆ ಹಾಕ್ತೇವೆ. ಆದ್ರೆ ಈ ಖಾಲಿ ಪ್ಲಾಸ್ಟಿಕ್ ಪ್ಯಾಕೆಟ್ ಕಸಕ್ಕೆ ಹಾಕೋ ಬದಲು ಅದ್ರಲ್ಲೇ ಹಣ ಮಾಡ್ಬುದು. ಮನೆಗೆ ಪ್ರತಿ ದಿನ ಬರುವ ಹಾಲಿನ ಪ್ಯಾಕೆಟನ್ನು ಕಸಕ್ಕೆ ಹಾಕುವ ಬದಲು ಪ್ರತ್ಯೇಕವಾಗಿ ಸಂಗ್ರಹಿಸಿ.&lt;/p&gt;&lt;p&gt;ಹಾಲಿನ ಪ್ಯಾಕೆಟ್ಗಳು ಸಾಮಾನ್ಯವಾಗಿ LDPE ಪ್ಲಾಸ್ಟಿಕ್ನಿಂದ ತಯಾರಾಗಿರುತ್ತವೆ. ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಸ್ಕ್ರ್ಯಾಪ್ ವ್ಯಾಪಾರಿಗಳಿಗೆ ಅಥವಾ ಮರುಬಳಕೆ ಮಾಡುವ ಸಂಸ್ಥೆಗಳಿಗೆ ನೀಡಬಹುದು. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ಹಾಲಿನ ಪ್ಯಾಕೆಟ್ಗೆ ದೇಶಾದ್ಯಂತ ಒಂದೇ ಬೆಲೆ ಇರೋದಿಲ್ಲ.&lt;/p&gt;&lt;h2&gt;ಪ್ಯಾಕೆಟ್ ಗೆ ಎಷ್ಟು ಹಣ ಸಿಗಬಹುದು?&lt;/h2&gt;&lt;p&gt;ಲಭ್ಯವಿರುವ ಕೆಲವು ಮಾರುಕಟ್ಟೆ ಪಟ್ಟಿಗಳು ಮತ್ತು ಡೈರಿ ಸ್ಕ್ರ್ಯಾಪ್ ಹರಾಜು ದಾಖಲೆಗಳನ್ನು ನೋಡಿದರೆ, ಬೆಲೆ ಸ್ಥಳ, ಪ್ಲಾಸ್ಟಿಕ್ನ ಗುಣಮಟ್ಟ, ಸ್ವಚ್ಛತೆ ಮತ್ತು ಸಂಗ್ರಹಿಸಿರುವ ಪ್ರಮಾಣದ ಮೇಲೆ ಬದಲಾಗುತ್ತದೆ. ಕೆಲವು ಕಡೆ ಕಿಲೋಗೆ ಸುಮಾರು 13ರಿಂದ 20 ರೂಪಾಯಿ ದರಗಳು ಕಂಡುಬಂದಿವೆ. ಕೆಲವು ವಿಶೇಷ LDPE ಫಿಲ್ಮ್ ಸ್ಕ್ರ್ಯಾಪ್ಗಳಿಗೆ ಇದಕ್ಕಿಂತ ಹೆಚ್ಚಿನ ದರವೂ ದಾಖಲಾಗಿದೆ.&lt;/p&gt;&lt;p&gt;ಸೋಶಿಯಲ್&zwnj; ಮೀಡಿಯಾದಲ್ಲಿ ಪ್ರತಿ ಕಿಲೋ ಹಾಲಿನ ಪ್ಯಾಕೆಟ್ಗೆ 70 ರೂಪಾಯಿ ಸಿಗುತ್ತೆ ಅಂತ ಹೇಳಲಾಗ್ತಿದೆ. ಆದ್ರೆ ಅದು ಸಂಪೂರ್ಣ ಸತ್ಯವಲ್ಲ. ಎಲ್ಲ ಕಡೆ ನಿಮಗೆ ಇಷ್ಟೊಂದು ಬೆಲೆ ಸಿಗೋದಿಲ್ಲ. ಆದ್ರೆ ಕಸಕ್ಕೆ ಎಸೆದು ಪರಿಸರ ನಾಶ ಮಾಡುವ ಬದಲು ನೀವು ಈ ಪ್ಲಾಸ್ಟಿಕ್&zwnj; ಕವರನ್ನು ಮಾರಾಟ ಮಾಡಿ ಸಣ್ಣ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡ್ಬಹುದು. ಹಾಗೆಯೇ ಪರಿಸರ ರಕ್ಷಣೆಗೆ ನಿಮ್ಮ ಪುಟ್ಟ ಸೇವೆ ಮಾಡ್ಬಹುದು.&lt;/p&gt;&lt;h3&gt;ಏನು ಮಾಡ್ಬೇಕು?&lt;/h3&gt;&lt;p&gt;ನೀವು ಹಾಲಿನ ಪ್ಯಾಕೆಟ್&zwnj; ಮಾರಾಟ ಮಾಡುವ ಮನಸ್ಸು ಹೊಂದಿದ್ದರೆ ಹಾಲಿನ ಪ್ಯಾಕೆಟ್ಗಳನ್ನು ಕಸದ ಜೊತೆ ಬೆರೆಸದೆ, ಸಾಧ್ಯವಾದಷ್ಟು ಸ್ವಚ್ಛವಾಗಿ ಒಣಗಿಸಿ ಪ್ರತ್ಯೇಕವಾಗಿ ಸಂಗ್ರಹಿಸಿ. ಸಾಕಷ್ಟು ಪ್ರಮಾಣದಲ್ಲಿ ಕವರ್&zwnj; ಸಂಗ್ರಹವಾದಾಗ ನೀವು ಪ್ಲಾಸ್ಟಿಕ್&zwnj; ಕವರ್&zwnj; ಖರೀದಿ ಮಾಡುವವರನ್ನು ಸಂಪರ್ಕಿಸಿ.&lt;/p&gt;]]></content:encoded>
            <category>money</category>
            <dc:creator>Roopa Hegde</dc:creator>
            <atom:link href="https://kannada.asianetnews.com/business/instead-of-throwing-milk-cartons-in-the-trash-you-can-collect-them-and-earn-money/articleshow-lgqrgt6"/>
        </item>
        <item>
            <title><![CDATA[ಮತ್ತೊಂದು ಅತೀ ದೊಡ್ಡ ಹಗರಣ - ನಕಲಿ ದಾಖಲೆ ಸೃಷ್ಟಿಸಿ ವಿದೇಶಕ್ಕೆ 2,395 ರೂಪಾಯಿ ಟ್ರಾನ್ಸ್‌ಫರ್]]></title>
            <link>https://kannada.asianetnews.com/money/chartered-accountant-transfers-rs-2395-abroad-by-creating-fake-documents-gkn/articleshow-mq7b0rz</link>
            <guid isPermaLink="true">https://kannada.asianetnews.com/money/chartered-accountant-transfers-rs-2395-abroad-by-creating-fake-documents-gkn/articleshow-mq7b0rz</guid>
            <pubDate>Tue, 25 Aug 2026 16:49:09 +0530</pubDate>
            <description><![CDATA[&lt;p&gt;ಜೈಪುರದ ಸಿಎ ಒಬ್ಬರು 3,168 ನಕಲಿ 15CB ಪ್ರಮಾಣಪತ್ರಗಳನ್ನು ಬಳಸಿ 2,395 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿದ ಆರೋಪದ ಮೇಲೆ ಎಫ್&zwnj;ಐಆರ್ ಎದುರಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿ, ಯಾವುದೇ ವಹಿವಾಟು ನಡೆಸದ 40ಕ್ಕೂ ಹೆಚ್ಚು ಶಂಕಾಸ್ಪದ ಕಂಪನಿಗಳ ಮೂಲಕ ಈ ಹಣ ರವಾನೆಯಾಗಿರುವುದು ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzq7t0c77mrx05gy4tycwvb7,imgname-wet-currency-1786412597639.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ರಾಜಸ್ಥಾನದ ಜೈಪುರದಲ್ಲಿ ಭಾರೀ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಚಾರ್ಟರ್ಡ್ ಅಕೌಂಟೆಂಟ್ (CA) ಒಬ್ಬರು ನಕಲಿ ದಾಖಲೆಗಳನ್ನು ಬಳಸಿಕೊಂಡು ಸುಮಾರು 2,395 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿರುವ ಆರೋಪದ ಮೇಲೆ ಎಫ್&zwnj;ಐಆರ್ (FIR) ದಾಖಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಜೈಪುರದ ಪತ್ರಕರ್ತ ಕಾಲೋನಿ ನಿವಾಸಿ, ಸಿಎ ಅಭಿಷೇಕ್ ಜೈನ್ ಎಂಬುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ದೂರು ನೀಡಿದೆ. ಆರೋಪದ ಪ್ರಕಾರ ಅಭಿಷೇಕ್ ಜೈನ್ 2021 ರಿಂದ 2024 ರ ನಡುವೆ ಸುಮಾರು 3,168 ನಕಲಿ 'ಫಾರ್ಮ್ 15CB' ಸರ್ಟಿಫಿಕೇಟ್&zwnj;ಗಳನ್ನು ಜಾರಿ ಮಾಡಿದ್ದಾರೆ. ಈ ಪ್ರಮಾಣಪತ್ರಗಳ ಆಧಾರದ ಮೇಲೆ ಬರೋಬ್ಬರಿ 2,395 ಕೋಟಿ ರೂಪಾಯಿಗಳನ್ನು ಭಾರತದಿಂದ ವಿದೇಶಕ್ಕೆ ರವಾನಿಸಲಾಗಿದೆ. ಕಳೆದ ಆಗಸ್ಟ್ 18 ರಂದು ಆದಾಯ ತೆರಿಗೆ ಇಲಾಖೆಯ ತನಿಖಾ ದಳವು ಸಿಎ ಅಭಿಷೇಕ್ ಜೈನ್ ಅವರ ಕಚೇರಿಯ ಮೇಲೆ ಸರ್ವೆ ನಡೆಸಿತ್ತು. ಈ ವೇಳೆ ಅಲ್ಲಿ ದೊರೆತ ದಾಖಲೆಗಳನ್ನು ಪರಿಶೀಲಿಸಿದಾಗ ಯಾವುದೇ ಸರಿಯಾದ ದಾಖಲೆಗಳಿಲ್ಲದೆ ಸಾವಿರಾರು ವಿದೇಶಿ ವಿನಿಮಯ ಪ್ರಮಾಣಪತ್ರಗಳನ್ನು ನೀಡಿರುವುದು ಪತ್ತೆಯಾಗಿದೆ.&lt;/p&gt;&lt;p&gt;ಐಟಿ ಇಲಾಖೆಯ ತನಿಖೆಯಲ್ಲಿ ಕೆಲವು ಆಘಾತಕಾರಿ ವಿಷಯಗಳು ಬಯಲಾಗಿವೆ.ಸುಮಾರು 40ಕ್ಕೂ ಹೆಚ್ಚು ನಕಲಿ ಅಥವಾ ಶಂಕಾಸ್ಪದ ಕಂಪನಿಗಳ (Shell Companies) ಹೆಸರಿನಲ್ಲಿ ಹಣವನ್ನು ವಿದೇಶಕ್ಕೆ ಕಳುಹಿಸಲಾಗಿದೆ. ಈ ಹಣ ವರ್ಗಾವಣೆ ಮಾಡಿದ ಹಲವು ಕಂಪನಿಗಳ ಆದಾಯವು ತುಂಬಾ ಕಡಿಮೆ ಇದೆ ಅಥವಾ ಅವರು ಎಂದಿಗೂ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿಲ್ಲ. ಯಾವುದೇ ವ್ಯವಹಾರ ನಡೆಸದ ಹೆಸರಿಗಷ್ಟೇ ಇರುವ ಟ್ರಸ್ಟ್&zwnj;ಗಳು ಮತ್ತು ಫರ್ಮ್&zwnj;ಗಳನ್ನು ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಫಾರ್ಮ್ 15CB ಎಂದರೇನು?&lt;/strong&gt;&lt;/h2&gt;&lt;p&gt;ಭಾರತದಿಂದ ವಿದೇಶಕ್ಕೆ ಹಣವನ್ನು ಕಳುಹಿಸುವಾಗ ಆ ಹಣಕ್ಕೆ ಸಂಬಂಧಪಟ್ಟ ತೆರಿಗೆಯನ್ನು (TDS) ಸರಿಯಾಗಿ ಪಾವತಿಸಲಾಗಿದೆ ಎಂದು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ದೃಢೀಕರಿಸಬೇಕಾಗುತ್ತದೆ. ಇದನ್ನೇ ಫಾರ್ಮ್ 15CB ಎನ್ನಲಾಗುತ್ತದೆ. ಅಭಿಷೇಕ್ ಜೈನ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಹಣದ ಮೂಲವನ್ನು ಪರಿಶೀಲಿಸದೆ ಸರ್ಟಿಫಿಕೇಟ್ ನೀಡಿದ್ದಾರೆ ಎಂಬುದು ಗಂಭೀರ ಆರೋಪವಾಗಿದೆ.&lt;/p&gt;&lt;p&gt;ಜೈಪುರದ ಪತ್ರಕರ್ತ ಕಾಲೋನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ಖಾತೆಗಳು, ವಿದೇಶಿ ವಹಿವಾಟಿನ ದಾಖಲೆಗಳು ಮತ್ತು ಈ ಹಗರಣದ ಹಿಂದೆ ಇರುವ ಇತರ ಮಧ್ಯವರ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದು ಕೇವಲ ಒಬ್ಬ ಸಿಎ ಮಾಡಿದ ಕೆಲಸವೇ ಅಥವಾ ಇದರ ಹಿಂದೆ ದೊಡ್ಡ ವ್ಯವಸ್ಥಿತ ಜಾಲವಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.&lt;/p&gt;]]></content:encoded>
            <category>money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/chartered-accountant-transfers-rs-2395-abroad-by-creating-fake-documents-gkn/articleshow-mq7b0rz"/>
        </item>
        <item>
            <title><![CDATA[Success Story: ಜೇಬಿನಲ್ಲಿ ₹20 ಇಟ್ಟು ಅಮೆರಿಕಾಗೆ ಹೋದ ಹುಡುಗ! ಇಂದು ಸಾವಿರಾರು ಕೋಟಿ ಒಡೆಯ! ತನ್ನ ಬೇರು ಮರೆಯದೆ ಭಾರತದ ಯುವಕರಿಗಾಗಿ ಮತ್ತೆ ಬಂದಿದ್ದಾರೆ!]]></title>
            <link>https://kannada.asianetnews.com/viral/ramesh-wadhwani-success-story-20-rupees-to-billionaire-indian-youth-gen-z-bmk/articleshow-o4r703h</link>
            <guid isPermaLink="true">https://kannada.asianetnews.com/viral/ramesh-wadhwani-success-story-20-rupees-to-billionaire-indian-youth-gen-z-bmk/articleshow-o4r703h</guid>
            <pubDate>Sat, 22 Aug 2026 10:15:06 +0530</pubDate>
            <description><![CDATA[1969ರಲ್ಲಿ ಕೇವಲ 20 ರೂಪಾಯಿಗಳೊಂದಿಗೆ ಅಮೆರಿಕಕ್ಕೆ ತೆರಳಿದ ಭಾರತೀಯ ಮೂಲದ ರೋಮೇಶ್ ವಾಧ್ವಾನಿ, ದೈಹಿಕ ಸವಾಲು ಮತ್ತು ಉದ್ಯಮದ ಸೋಲುಗಳನ್ನು ಮೆಟ್ಟಿ ನಿಂತರು. ತಮ್ಮ 'ಆಸ್ಪೆಕ್ಟ್ ಡೆವಲಪ್&zwnj;ಮೆಂಟ್' ಕಂಪನಿಯನ್ನು 9.3 ಬಿಲಿಯನ್ ಡಾಲರ್&zwnj;ಗೆ ಮಾರಾಟ ಮಾಡಿ ಶತಕೋಟ್ಯಾಧಿಪತಿಯಾದ ಅವರು, ಇಂದು 'ವಾಧ್ವಾನಿ ಫೌಂಡೇಶನ್' ಮೂಲಕ ಭಾರತದ ಯುವಕರಿಗೆ ಪ್ರೇರಣೆಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0jpzkk1wr8486mkm2agh3pv,imgname-success-story--1787334479457.jpg" type="image/jpeg" height="390" width="690"/>
            <content:encoded><![CDATA[&lt;p&gt;ವರ್ಷ 1969. ಭಾರತದ ಯುವಕನೊಬ್ಬ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ವಿಮಾನ ಏರಿದಾಗ ಆತನ ಜೇಬಿನಲ್ಲಿದ್ದುದು ಕೇವಲ 2.50 ಡಾಲರ್, ಅಂದರೆ ಅಂದಿನ ಕಾಲದ ಲೆಕ್ಕಾಚಾರದಲ್ಲಿ ಕೇವಲ 20 ರೂಪಾಯಿ. ಕೈಯಲ್ಲಿ ಯಾವುದೇ ಕೋಟಿಗಳ ಆಸ್ತಿ ಇರಲಿಲ್ಲ, ಯಾವುದೇ ವ್ಯಾಪಾರಿ ಹಿನ್ನೆಲೆಯೂ ಇರಲಿಲ್ಲ. ಆದರೆ, ದಶಕಗಳ ನಂತರ ಅದೇ ಯುವಕ ಶತಕೋಟಿ ಡಾಲರ್ ಆಸ್ತಿಯನ್ನು ಹೊಂದುವ ಮೂಲಕ ಜಾಗತಿಕ ಉದ್ಯಮ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದರು. ಅವರೇ ಭಾರತೀಯ ಮೂಲದ ಉದ್ಯಮಿ ರೋಮೇಶ್ ವಾಧ್ವಾನಿ.&lt;/p&gt;&lt;h2&gt;&lt;strong&gt;ಬಾಲ್ಯದ ಸವಾಲು ಮತ್ತು ಶಿಕ್ಷಣ!&lt;/strong&gt;&lt;/h2&gt;&lt;p&gt;1947ರಲ್ಲಿ ಕರಾಚಿಯಲ್ಲಿ ಜನಿಸಿದ ರೋಮೇಶ್ ವಾಧ್ವಾನಿ ಅವರ ಕುಟುಂಬ, ದೇಶ ವಿಭಜನೆಯ ನಂತರ ಭಾರತಕ್ಕೆ ಸ್ಥಳಾಂತರಗೊಂಡಿತು. ಬಾಲ್ಯದಲ್ಲೇ ಪೋಲಿಯೊ ರೋಗಕ್ಕೆ ತುತ್ತಾದ ಅವರಿಗೆ ನಡೆಯಲು ತೊಂದರೆಯಿತ್ತು. ಆದರೆ, ಈ ದೈಹಿಕ ನ್ಯೂನತೆಯನ್ನು ಅವರು ಎಂದಿಗೂ ತಮ್ಮ ಗುರಿಗೆ ಅಡ್ಡಿಯಾಗಲು ಬಿಡಲಿಲ್ಲ. ಐಐಟಿ ಬಾಂಬೆಯಲ್ಲಿ ಪದವಿ ಮುಗಿಸಿದ ಅವರು, 1969ರಲ್ಲಿ ಅಮೆರಿಕಕ್ಕೆ ತೆರಳಿ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್&zwnj;ನಲ್ಲಿ ಪಿಎಚ್&zwnj;ಡಿ ಪೂರ್ಣಗೊಳಿಸಿದರು.&lt;/p&gt;&lt;h3&gt;&lt;strong&gt;ಉದ್ಯಮಶೀಲತೆಯ ಕಠಿಣ ಹಾದಿ!&lt;/strong&gt;&lt;/h3&gt;&lt;p&gt;ಪಿಎಚ್&zwnj;ಡಿ ನಂತರ ಕೆಲಸದ ಆಫರ್&zwnj;ಗಳನ್ನು ತಿರಸ್ಕರಿಸಿ ಸ್ವಂತ ಕಂಪನಿ ಸ್ಥಾಪಿಸಲು ನಿರ್ಧರಿಸಿದರು. 'ಕಂಪ್ಯೂಗಾರ್ಡ್ ಕಾರ್ಪೊರೇಷನ್' ಆರಂಭಿಸಲು ಬೇಕಿದ್ದ $100,000 ಹಣಕ್ಕಾಗಿ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ 125 ವೆಂಚರ್ ಕ್ಯಾಪಿಟಲ್ ಸಂಸ್ಥೆಗಳನ್ನು ಸಂಪರ್ಕಿಸಿದರು. ಮೊದಲ 124 ಸಂಸ್ಥೆಗಳು ಮುಖ ಗಂಟಿಕ್ಕಿ ನಿರಾಕರಿಸಿದರೂ, 125ನೇ ಸಂಸ್ಥೆ ಹೂಡಿಕೆಗೆ ಒಪ್ಪಿಕೊಂಡಿತು. 10 ವರ್ಷಗಳ ಕಾಲ ಈ ಕಂಪನಿಯನ್ನು ಯಶಸ್ವಿಯಾಗಿ ನಡೆಸಿ, $10 ಮಿಲಿಯನ್&zwnj;ಗೆ ಮಾರಾಟ ಮಾಡಿ ತಮ್ಮ ಮೊದಲ ಅನುಭವ ಪಡೆದರು. ಬಳಿಕ 'ಅಮೇರಿಕನ್ ರೋಬೋಟ್' ಕಂಪನಿ ವಹಿಸಿಕೊಂಡಾಗ ಜಪಾನಿ ಕಂಪನಿಗಳ ತೀವ್ರ ಸ್ಪರ್ಧೆಯಿಂದಾಗಿ ಭಾರಿ ನಷ್ಟ ಎದುರಾಯಿತು. ಆದರೂ ಹೂಡಿಕೆಯನ್ನು ಅರ್ಧಕ್ಕೆ ತೊರೆಯದೆ, 10 ವರ್ಷ ಶ್ರಮಿಸಿ ಉದ್ಯಮದ ಮಾದರಿಯನ್ನು ಬದಲಾಯಿಸಿ ಹೂಡಿಕೆದಾರರ ಹಣವನ್ನು ಮರಳಿಸಿದರು.&lt;/p&gt;&lt;h3&gt;&lt;strong&gt;9.3 ಬಿಲಿಯನ್ ಡಾಲರ್ ಒಪ್ಪಂದ ಹಾಗೂ ಬಿಲಿಯನೇರ್ ಪಟ್ಟ!&lt;/strong&gt;&lt;/h3&gt;&lt;p&gt;ರೋಮೇಶ್ ಅವರ ನಿಜವಾದ ಯಶಸ್ಸು ಸಿಕ್ಕಿದ್ದು 1990ರ ದಶಕದಲ್ಲಿ. ಸಿಲಿಕಾನ್ ವ್ಯಾಲಿಗೆ ಸ್ಥಳಾಂತರಗೊಂಡು ಅವರು ಆರಂಭಿಸಿದ 'ಆಸ್ಪೆಕ್ಟ್ ಡೆವಲಪ್&zwnj;ಮೆಂಟ್' ಕಂಪನಿಯು ಪೂರೈಕೆ ಸರಪಳಿ (Supply Chain) ಸಾಫ್ಟ್&zwnj;ವೇರ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿತು. 2000ರಲ್ಲಿ 'i2 ಟೆಕ್ನಾಲಜೀಸ್' ಕಂಪನಿಯು ಆಸ್ಪೆಕ್ಟ್ ಕಂಪನಿಯನ್ನು 9.3 ಬಿಲಿಯನ್ ಡಾಲರ್&zwnj;ಗೆ (ಸ್ಟಾಕ್ ಒಪ್ಪಂದ) ಸ್ವಾಧೀನಪಡಿಸಿಕೊಂಡಿತು. ಇದರೊಂದಿಗೆ ರೋಮೇಶ್ ವಾಧ್ವಾನಿ ಮೊದಲ ಬಾರಿಗೆ ಅಧಿಕೃತ ಬಿಲಿಯನೇರ್ ಆದರು. ನಂತರ 'ಸಿಂಫನಿ ಟೆಕ್ನಾಲಜಿ ಗ್ರೂಪ್' ಮೂಲಕ 40ಕ್ಕೂ ಹೆಚ್ಚು ಸಾಫ್ಟ್&zwnj;ವೇರ್ ಕಂಪನಿಗಳನ್ನು ಬೆಳೆಸಿದ ಅವರು, ಕಷ್ಟದಲ್ಲಿದ್ದ ಕಂಪನಿಗಳನ್ನು ಯಶಸ್ವಿ ಸಂಸ್ಥೆಗಳಾಗಿ ಪರಿವರ್ತಿಸಿದರು.&lt;/p&gt;&lt;h3&gt;&lt;strong&gt;78ರ ವಯಸ್ಸಿನಲ್ಲೂ AI ಕ್ರಾಂತಿ ಮತ್ತು 'ವಾಧ್ವಾನಿ ಫೌಂಡೇಶನ್'!&lt;/strong&gt;&lt;/h3&gt;&lt;p&gt;ಇಂದು ಸುಮಾರು 5.5 ಬಿಲಿಯನ್ ಡಾಲರ್ (ಅಂದಾಜು ₹46,000 ಕೋಟಿ) ಸಂಪತ್ತು ಹೊಂದಿರುವ 78 ವರ್ಷದ ರೋಮೇಶ್ ವಾಧ್ವಾನಿ, ನಿವೃತ್ತರಾಗದೆ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. 2017ರಲ್ಲಿ ಅವರು ಸ್ಥಾಪಿಸಿದ 'SymphonyAI' ಕಂಪನಿಗೆ ತಮ್ಮ ಸ್ವಂತ ಆಸ್ತಿಯಿಂದ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ತಮ್ಮ ಯಶಸ್ಸಿನ ಫಲವನ್ನು ಭಾರತದ ಯುವಜನತೆಗೆ ನೀಡಲು 'ವಾಧ್ವಾನಿ ಫೌಂಡೇಶನ್' ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಮೂಲಕ ಭಾರತೀಯ ಕಾಲೇಜುಗಳಲ್ಲಿ ಉದ್ಯಮಶೀಲತೆ (Entrepreneurship) ಮತ್ತು ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದ್ದು, ಲಕ್ಷಾಂತರ ಯುವಕರಿಗೆ ಆಸರೆಯಾಗಿದೆ. 20 ರೂಪಾಯಿಯೊಂದಿಗೆ ಆರಂಭವಾದ ಅವರ ಪ್ರಯಾಣ, ಇಂದು ಕೋಟ್ಯಂತರ ಯುವಜನರಿಗೆ ಪ್ರೇರಣೆಯಾಗಿದೆ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/ramesh-wadhwani-success-story-20-rupees-to-billionaire-indian-youth-gen-z-bmk/articleshow-o4r703h"/>
        </item>
        <item>
            <title><![CDATA[Axis credit card ಬಳಕೆದಾರರಿಗೆ ಶಾಕ್.. ಆಗಸ್ಟ್ 28 ರಿಂದ ಹೊಸ ರೂಲ್ಸ್‌, ಜೇಬಿಗೆ ಕತ್ತರಿ ಗ್ಯಾರಂಟಿ..!]]></title>
            <link>https://kannada.asianetnews.com/gallery/money/axis-credit-card-new-rules-from-august-28th-gkn-pk01r7d</link>
            <guid isPermaLink="true">https://kannada.asianetnews.com/gallery/money/axis-credit-card-new-rules-from-august-28th-gkn-pk01r7d</guid>
            <pubDate>Sat, 22 Aug 2026 14:28:13 +0530</pubDate>
            <description><![CDATA[&lt;p&gt;ಆಕ್ಸಿಸ್ ಬ್ಯಾಂಕ್ (Axis Bank) ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್&zwnj;ಗಳ ನಿಯಮಗಳು ಮತ್ತು ಶುಲ್ಕಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಹೊಸ ನಿಯಮಗಳು ಆಗಸ್ಟ್ 28, 2026 ರಿಂದ ಜಾರಿಗೆ ಬರಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mag5jx6s9tbd80b8tdq4gz,imgname-axis-bank-1787388499549.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಕ್ಸಿಸ್ ಬ್ಯಾಂಕ್ (Axis Bank) ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್&zwnj;ಗಳ ನಿಯಮಗಳು ಮತ್ತು ಶುಲ್ಕಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಹೊಸ ನಿಯಮಗಳು ಆಗಸ್ಟ್ 28, 2026 ರಿಂದ ಜಾರಿಗೆ ಬರಲಿವೆ.&lt;/p&gt;&lt;img&gt;&lt;p&gt;ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಶಾಕಿಂಗ್&zwnj; ಸುದ್ದಿಯೊಂದು ಕಾದಿದೆ. ಆಕ್ಸಿಸ್ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬಿಗಿಗೊಳಿಸಿದ್ದು, ಹೊಸ ಶುಲ್ಕಗಳನ್ನು ಜಾರಿಗೆ ತರುತ್ತಿದೆ. ಆಗಸ್ಟ್ 28 ರಿಂದ ಜಾರಿಗೆ ಬರುವ ಈ ಹೊಸ ಬದಲಾವಣೆಗಳು ಗ್ರಾಹಕರ ಜೇಬಿಗೆ ಕೊಂಚ ಹೊರೆಯಾಗಲಿವೆ.&lt;/p&gt;&lt;img&gt;&lt;p&gt;ಒಂದು ವೇಳೆ ನೀವು ನಿಗದಿತ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಮರೆತರೆ ವಿಧಿಸಲಾಗುವ ವಿಳಂಬ ಶುಲ್ಕವನ್ನು ಬ್ಯಾಂಕ್ ಪರಿಷ್ಕರಿಸಿದೆ. ಅದರಲ್ಲೂ ವಿಶೇಷವಾಗಿ 50,000 ರೂ.ಗಿಂತ ಹೆಚ್ಚು ಬಾಕಿ ಉಳಿಸಿಕೊಂಡರೆ ಭಾರಿ ದಂಡ ತೆರಬೇಕಾಗುತ್ತದೆ. ವಿವಿಧ ಬಾಕಿ ಮೊತ್ತಗಳಿಗೆ ಅನ್ವಯವಾಗುವ ಹೊಸ ಶುಲ್ಕಗಳ ಪಟ್ಟಿ ಇಲ್ಲಿದೆ.&lt;/p&gt;&lt;ul&gt; &lt;li&gt;500 ರೂ. ವರೆಗೆ: ಯಾವುದೇ ವಿಳಂಬ ಶುಲ್ಕ ಇರುವುದಿಲ್ಲ&lt;/li&gt; &lt;li&gt;501 ರೂ. ನಿಂದ 5,000 ರೂ. ವರೆಗೆ: 500 ರೂ. ಶುಲ್ಕ&lt;/li&gt; &lt;li&gt;5,001 ರೂ. ನಿಂದ 10,000 ರೂ. ವರೆಗೆ: 750 ರೂ. ಶುಲ್ಕ&lt;/li&gt; &lt;li&gt;10,001 ರೂ. ನಿಂದ 50,000 ರೂ. ವರೆಗೆ: 1,200 ರೂ. ಶುಲ್ಕ&lt;/li&gt; &lt;li&gt;50,000 ರೂ. ಗಿಂತ ಹೆಚ್ಚಿನ ಬಾಕಿ ಮೊತ್ತಕ್ಕೆ: 1,300 ರೂ. ವಿಳಂಬ ಶುಲ್ಕ&lt;/li&gt;&lt;/ul&gt;&lt;img&gt;&lt;p&gt;ಒಂದು ವೇಳೆ ನೀವು ಬಿಲ್&zwnj;ನ ಪೂರ್ಣ ಮೊತ್ತವನ್ನು ಪಾವತಿಸದೆ ಭಾಗಶಃ ಮೊತ್ತವನ್ನು ಪಾವತಿಸಿದರೆ, ನಿಮ್ಮ ಹಣವನ್ನು ಯಾವ ರೀತಿ ಹೊಂದಾಣಿಕೆ ಮಾಡಲಾಗುತ್ತದೆ ಎಂಬುದಕ್ಕೆ ಬ್ಯಾಂಕ್ ಹೊಸ ಕ್ರಮವನ್ನು ಅನುಸರಿಸಲಿದೆ. ನಿಮ್ಮ ಪಾವತಿಯನ್ನು ಮೊದಲು ಅನ್ವಯವಾಗುವ ತೆರಿಗೆಗಳು ಮತ್ತು ವಿವಿಧ ಶುಲ್ಕಗಳಿಗೆ (Fees &amp;amp; Charges) ಹೊಂದಿಸಲಾಗುತ್ತದೆ. ಅದರ ನಂತರ ಇಎಂಐ (EMI) ಗಳಿಗೆ, ಆ ಬಳಿಕ ಬಡ್ಡಿ ಶುಲ್ಕಗಳಿಗೆ, ನಂತರ ಸಾಮಾನ್ಯ ಖರೀದಿಗಳಿಗೆ ಮತ್ತು ಕೊನೆಯದಾಗಿ ಕ್ಯಾಶ್ ಅಡ್ವಾನ್ಸ್ (ನಗದು ಡ್ರಾ) ಗಳಿಗೆ ಹೊಂದಾಣಿಕೆ ಮಾಡಲಾಗುತ್ತದೆ.&lt;/p&gt;&lt;img&gt;&lt;p&gt;ಅಂತರರಾಷ್ಟ್ರೀಯ ವಹಿವಾಟುಗಳಿಗೆ ಅಥವಾ ವಿದೇಶಿ ವೆಬ್&zwnj;ಸೈಟ್&zwnj;ಗಳಲ್ಲಿ ಭಾರತೀಯ ರೂಪಾಯಿಗಳ ಮೂಲಕ ಪಾವತಿ ಮಾಡುವಾಗ ವಿಧಿಸಲಾಗುವ ಡೈನಾಮಿಕ್ ಕರೆನ್ಸಿ ಕನ್ವರ್ಶನ್ (DCC) ಮಾರ್ಕಪ್ ಶುಲ್ಕವನ್ನು ಶೇಕಡಾ 1.5 ರಿಂದ ಶೇಕಡಾ 3.5 ಕ್ಕೆ ಗಣನೀಯವಾಗಿ ಹೆಚ್ಚಿಸಲಾಗಿದೆ. (ಆದರೆ ಮ್ಯಾಗ್ನಸ್ ಕಾರ್ಡ್&zwnj;ಗಳಿಗೆ ಇದು ಶೇ. 2 ರಷ್ಟಿರುತ್ತದೆ). ಇದು ವಿದೇಶ ಪ್ರವಾಸ ಮಾಡುವವರಿಗೆ ಅಥವಾ ವಿದೇಶಿ ಪಾವತಿಗಳನ್ನು ಭಾರತೀಯ ಕರೆನ್ಸಿಯಲ್ಲಿ ಮಾಡುವವರಿಗೆ ವೆಚ್ಚವನ್ನು ಹೆಚ್ಚಿಸಲಿದೆ.&lt;/p&gt;&lt;img&gt;&lt;p&gt;ದೇಶೀಯ (ಡೊಮೆಸ್ಟಿಕ್) ಏರ್&zwnj;ಪೋರ್ಟ್ ಲೌಂಜ್&zwnj;ಗಳಲ್ಲಿ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್&zwnj;ನ &lsquo;ಪ್ರಯಾರಿಟಿ ಪಾಸ್&rsquo; (Priority Pass) ಇನ್ನು ಮುಂದೆ ಮಾನ್ಯವಾಗುವುದಿಲ್ಲ. ದೇಶೀಯ ಲೌಂಜ್ ಪ್ರವೇಶಿಸಲು ಗ್ರಾಹಕರು ತಮ್ಮ ಭೌತಿಕ ಕಾರ್ಡ್ (Physical Card) ಮತ್ತು ಬೋರ್ಡಿಂಗ್ ಪಾಸ್ ಅನ್ನು ಒದಗಿಸಬೇಕಾಗುತ್ತದೆ. ಇಮಿಗ್ರೇಷನ್ ಪ್ರಕ್ರಿಯೆಯ ನಂತರದ ಭಾರತೀಯ ಅಂತರರಾಷ್ಟ್ರೀಯ ಟರ್ಮಿನಲ್&zwnj;ಗಳಲ್ಲಿರುವ ಏರ್&zwnj;ಪೋರ್ಟ್ ಲೌಂಜ್&zwnj;ಗಳನ್ನು ಅಂತರರಾಷ್ಟ್ರೀಯ ಲೌಂಜ್&zwnj;ಗಳೆಂದೇ ಪರಿಗಣಿಸಲಾಗುತ್ತದೆ. ಅಲ್ಲಿಗೆ ಪ್ರಯಾರಿಟಿ ಪಾಸ್ ಬಳಸಿ ಪ್ರವೇಶ ಪಡೆಯಬಹುದು.&lt;/p&gt;&lt;img&gt;&lt;p&gt;ಗಿಫ್ಟ್ ಕಾರ್ಡ್ ಖರೀದಿಗಳಿಗೆ ಇನ್ಮುಂದೆ ಯಾವುದೇ ರೀತಿಯ ರಿವಾರ್ಡ್ ಪಾಯಿಂಟ್&zwnj;ಗಳು ಅಥವಾ ಕ್ಯಾಶ್&zwnj;ಬ್ಯಾಕ್ ಲಭ್ಯವಿರುವುದಿಲ್ಲ. ಇವುಗಳನ್ನು &lsquo;ವ್ಯಾಲೆಟ್&rsquo; ಖರ್ಚುಗಳ ವಿಭಾಗದಿಂದ ಬದಲಾಯಿಸಿ, 'ಗಿಫ್ಟ್ ಕಾರ್ಡ್ಸ್' ಎಂಬ ಪ್ರತ್ಯೇಕ ವಿಭಾಗದಲ್ಲಿ ವರ್ಗೀಕರಿಸಲಾಗುತ್ತದೆ. ಟೋಲ್ ಪಾವತಿಗಳು, ರಸ್ತೆ ಶುಲ್ಕಗಳು ಮತ್ತು ಬ್ರಿಡ್ಜ್ ಫೀಸ್ ಪಾವತಿಗಳ ಮೇಲೂ ಇನ್ನು ಮುಂದೆ ಯಾವುದೇ ರಿವಾರ್ಡ್ ಪಾಯಿಂಟ್&zwnj;ಗಳನ್ನು ನೀಡಲಾಗುವುದಿಲ್ಲ.&lt;/p&gt;&lt;p&gt;ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಈ ಹೊಸ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮಾಸಿಕ ಬಿಲ್&zwnj;ಗಳನ್ನು ನಿಗದಿತ ಸಮಯದೊಳಗೆ ಪಾವತಿಸುವುದು ಸೂಕ್ತ. ವಿಳಂಬ ಪಾವತಿ ಮತ್ತು ಅಂತರರಾಷ್ಟ್ರೀಯ ವಹಿವಾಟುಗಳ ಮೇಲಿನ ಶುಲ್ಕ ಹೆಚ್ಚಳದಿಂದ ತಪ್ಪಿಸಿಕೊಳ್ಳಲು ಈಗಿನಿಂದಲೇ ಎಚ್ಚರಿಕೆ ವಹಿಸಿ.&lt;/p&gt;]]></content:encoded>
            <category>money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/money/axis-credit-card-new-rules-from-august-28th-gkn-pk01r7d"/>
        </item>
        <item>
            <title><![CDATA[Indian Economy: 2036ಕ್ಕೆ ಭಾರತ 20 ಟ್ರಿಲಿಯನ್ ಡಾಲರ್ ಆರ್ಥಿಕತೆ! ಚೀನಾ ಸಾಧಿಸಿದ್ದು ನಮಗೂ ಸಾಧ್ಯ!]]></title>
            <link>https://kannada.asianetnews.com/economy-money/india-eyes-20-trillion-dollar-economy-by-2036-with-major-reforms-agenda/articleshow-tg2vykr</link>
            <guid isPermaLink="true">https://kannada.asianetnews.com/economy-money/india-eyes-20-trillion-dollar-economy-by-2036-with-major-reforms-agenda/articleshow-tg2vykr</guid>
            <pubDate>Thu, 20 Aug 2026 13:12:21 +0530</pubDate>
            <description><![CDATA[ಸತತ ಸುಧಾರಣೆಗಳನ್ನು ಜಾರಿಗೆ ತಂದರೆ 2036ರ ವೇಳೆಗೆ ಭಾರತ 20 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು Equirus ವರದಿ ಹೇಳಿದೆ. ಈ ಮಹತ್ವಾಕಾಂಕ್ಷೆಯ ಗುರಿ ತಲುಪಲು ಚೀನಾದಂತೆ ಶೇ.18ರಷ್ಟು ಬೆಳವಣಿಗೆ ಬೇಕು. ಇದಕ್ಕಾಗಿ 20 ಅಂಶಗಳ ಸುಧಾರಣಾ ಕಾರ್ಯಸೂಚಿಯನ್ನು ವರದಿ ಮುಂದಿಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-b1d45bf6-6787-43e2-b6e4-43d3b5d12064.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೂಲಸೌಕರ್ಯ, ಬಂಡವಾಳ ಮಾರುಕಟ್ಟೆ, ಮಾನವ ಸಂಪನ್ಮೂಲ, ಸೇವಾ ವಲಯ ಮತ್ತು ಆಡಳಿತದಲ್ಲಿ ನಿರಂತರ ಸುಧಾರಣೆಗಳನ್ನು ತಂದರೆ 2036ರ ವೇಳೆಗೆ ಭಾರತ 20 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಸಾಮರ್ಥ್ಯ ಹೊಂದಿದೆ ಎಂದು Equirus ರಿಸರ್ಚ್ ವರದಿಯೊಂದು ತಿಳಿಸಿದೆ.&lt;/p&gt;&lt;h2&gt;ಭಾರತದ ಆರ್ಥಿಕತೆ 20 ಟ್ರಿಲಿಯನ್ ಡಾಲರ್ ದಾಟಲು ಏನು ಮಾಡಬೇಕು?&lt;/h2&gt;&lt;p&gt;ಸದ್ಯ ಭಾರತದ ಆರ್ಥಿಕತೆ ಸುಮಾರು 3.7 ಟ್ರಿಲಿಯನ್ ಡಾಲರ್ ಇದೆ. 20 ಟ್ರಿಲಿಯನ್ ಡಾಲರ್ ತಲುಪಬೇಕೆಂದರೆ ನಮ್ಮ ಆರ್ಥಿಕತೆ ಈಗಿರುವುದಕ್ಕಿಂತ ಸುಮಾರು 5.5 ಪಟ್ಟು ದೊಡ್ಡದಾಗಬೇಕು. ಇದಕ್ಕೆ ಪ್ರತಿ ವರ್ಷ ಡಾಲರ್ ಲೆಕ್ಕದಲ್ಲಿ ಶೇ. 18ರಷ್ಟು ಬೆಳವಣಿಗೆ ಬೇಕು. ಇದು ದೊಡ್ಡ ಗುರಿ ಅನಿಸಿದರೂ, ಚೀನಾ ಇದನ್ನು ಮಾಡಿ ತೋರಿಸಿದೆ ಎಂದು ವರದಿ ಹೇಳುತ್ತದೆ. 'ಚೀನಾ ಸುಮಾರು $1.7 ಟ್ರಿಲಿಯನ್ ಆರ್ಥಿಕತೆ ಇದ್ದಾಗ, ಸತತ 11 ವರ್ಷಗಳ ಕಾಲ ಶೇ. 18ರಷ್ಟು ಬೆಳವಣಿಗೆ ಸಾಧಿಸಿತ್ತು' ಎಂದು ವರದಿ ಉಲ್ಲೇಖಿಸಿದೆ. ಸರಿಯಾದ ಸುಧಾರಣೆಗಳನ್ನು ಜಾರಿ ಮಾಡಿದರೆ ಭಾರತ ಕೂಡ ಇದೇ ರೀತಿ ಬೆಳೆಯಬಹುದು ಎಂಬುದು ವರದಿಯ ಆಶಯ.&lt;/p&gt;&lt;h3&gt;20 ಅಂಶಗಳ ಸುಧಾರಣಾ ಕಾರ್ಯಸೂಚಿಯಲ್ಲಿ ಏನಿದೆ?&lt;/h3&gt;&lt;p&gt;ವರದಿಯು 20 ಅಂಶಗಳ ಸುಧಾರಣಾ ಕಾರ್ಯಸೂಚಿಯನ್ನು ಪ್ರಸ್ತಾಪಿಸಿದೆ. ಇದನ್ನು 5 ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ - ನೈಜ ಆರ್ಥಿಕತೆ, ಬಂಡವಾಳ ಮಾರುಕಟ್ಟೆ, ಮಾನವ ಸಂಪನ್ಮೂಲ, ಸೇವಾ ವಲಯ, ಮತ್ತು ಜೀವನಮಟ್ಟ ಹಾಗೂ ಆಡಳಿತ. ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್&zwnj;ಟಿ ವ್ಯಾಪ್ತಿಗೆ ತರುವುದು, ರಾಜ್ಯಗಳು ತಮ್ಮ ಬಜೆಟ್&zwnj;ನಲ್ಲಿ ಘೋಷಿಸಿದ ಬಂಡವಾಳ ವೆಚ್ಚವನ್ನು ಪೂರ್ತಿಯಾಗಿ ಬಳಸಿಕೊಳ್ಳುವಂತೆ ಮಾಡುವುದು, ಖಾಸಗಿ ಬಂಡವಾಳ ಸೆಳೆಯಲು ಸರ್ಕಾರಿ ಆಸ್ತಿಗಳನ್ನು ಬಳಸುವುದು ಪ್ರಮುಖ ಕ್ರಮಗಳಲ್ಲಿ ಸೇರಿವೆ. ರಾಜ್ಯಗಳು ತಮ್ಮ ಬಂಡವಾಳ ವೆಚ್ಚದ ಗುರಿಯನ್ನು ತಲುಪಿದರೆ, ಯಾವುದೇ ಹೆಚ್ಚುವರಿ ಸಾಲವಿಲ್ಲದೆ ಜಿಡಿಪಿಗೆ ಸುಮಾರು 5.2 ಟ್ರಿಲಿಯನ್ ರೂಪಾಯಿ ಸೇರ್ಪಡೆಯಾಗಲಿದೆ ಎಂದು Equirus ಅಂದಾಜಿಸಿದೆ.&lt;/p&gt;&lt;h3&gt;ಪ್ರಮುಖ ಆರ್ಥಿಕ ಮತ್ತು ಬಂಡವಾಳ ಮಾರುಕಟ್ಟೆ ಸಲಹೆಗಳು&lt;/h3&gt;&lt;p&gt;ಸಿಂಗಾಪುರದ 'Temasek' ಮಾದರಿಯಲ್ಲಿ ಭಾರತದ್ದೇ ಆದ ಸಾರ್ವಭೌಮ ನಿಧಿಯನ್ನು (India sovereign fund) ಸ್ಥಾಪಿಸಲು ವರದಿ ಸಲಹೆ ನೀಡಿದೆ. ಇದಕ್ಕಾಗಿ ಸಾರ್ವಜನಿಕ ವಲಯದ ಕಂಪನಿಗಳಲ್ಲಿರುವ ಸರ್ಕಾರದ ಷೇರುಗಳನ್ನು ಒಟ್ಟುಗೂಡಿಸಬಹುದು. ಇದರಿಂದ ಸುಮಾರು 249 ಬಿಲಿಯನ್ ಡಾಲರ್ ಆರಂಭಿಕ ಬಂಡವಾಳ ಸಿಗಬಹುದು. ಈ ಹಣವನ್ನು ಮೂಲಸೌಕರ್ಯ ಮತ್ತು ಇತರ ಯೋಜನೆಗಳಿಗೆ ಬಳಸಬಹುದು.&lt;/p&gt;&lt;p&gt;ಬಂಡವಾಳ ಮಾರುಕಟ್ಟೆಯನ್ನು ಇನ್ನಷ್ಟು ಬಲಪಡಿಸುವುದು ಕೂಡ ಮುಖ್ಯವಾಗಿದೆ. ಬಾಂಡ್ ಮತ್ತು ಈಕ್ವಿಟಿ ಮೇಲಿನ ತೆರಿಗೆಯನ್ನು ಸಮಾನಗೊಳಿಸುವುದು, ಸಣ್ಣ ಉಳಿತಾಯದ ಹಣವನ್ನು ಮಾರುಕಟ್ಟೆ ಆಧಾರಿತ ಬಾಂಡ್&zwnj;ಗಳತ್ತ ತಿರುಗಿಸುವುದು, ಮುಂಗಡ ತೆರಿಗೆಯನ್ನು ರದ್ದುಗೊಳಿಸುವುದು ಮತ್ತು ಹೂಡಿಕೆ ಆದಾಯದ ಮೇಲಿನ ಟಿಡಿಎಸ್ ಅನ್ನು ಶೇ. 5ಕ್ಕೆ ಇಳಿಸಲು ವರದಿ ಸಲಹೆ ನೀಡಿದೆ. ಈ ಕ್ರಮಗಳಿಂದ ದೊಡ್ಡ ಪ್ರಮಾಣದ ಕಾರ್ಯನಿರತ ಬಂಡವಾಳ ಲಭ್ಯವಾಗುತ್ತದೆ ಮತ್ತು ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ ವಿಸ್ತಾರವಾಗುತ್ತದೆ ಎಂದು ವರದಿ ಹೇಳಿದೆ.&lt;/p&gt;&lt;h3&gt;ಪೇಟೆಂಟ್ ಸಲ್ಲಿಕೆಯಲ್ಲಿ ಚೀನಾಕ್ಕಿಂತ ಭಾರತ ತುಂಬಾ ಹಿಂದೆ!&lt;/h3&gt;&lt;p&gt;ಮಾನವ ಸಂಪನ್ಮೂಲ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಭಾರತ ಸದ್ಯ ಜಿಡಿಪಿಯ ಶೇ. 0.8ರಷ್ಟನ್ನು ಮಾತ್ರ ಸಂಶೋಧನೆ ಮತ್ತು ಅಭಿವೃದ್ಧಿಗೆ (R&amp;amp;D) ಖರ್ಚು ಮಾಡುತ್ತಿದೆ. ಪೇಟೆಂಟ್ ಸಲ್ಲಿಕೆಯಲ್ಲಿ ಚೀನಾಗೆ ಹೋಲಿಸಿದರೆ ನಾವು ಬಹಳ ಹಿಂದೆ ಇದ್ದೇವೆ. ಹೀಗಾಗಿ, R&amp;amp;Dಗೆ ಮತ್ತೆ ಪ್ರೋತ್ಸಾಹ ನೀಡುವುದು, ಶಿಕ್ಷಣದಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಿಸುವುದು, ವಿಶ್ವವಿದ್ಯಾಲಯಗಳಿಗೆ ಅವುಗಳ ಸಾಧನೆ ಆಧಾರದ ಮೇಲೆ ಅನುದಾನ ನೀಡುವುದು ಮತ್ತು ಅಪ್ರೆಂಟಿಸ್&zwnj;ಶಿಪ್&zwnj;ಗಳನ್ನು ಗಣನೀಯವಾಗಿ ಹೆಚ್ಚಿಸಬೇಕೆಂದು ವರದಿ ಶಿಫಾರಸು ಮಾಡಿದೆ.&lt;/p&gt;&lt;h3&gt;ಬೆಳವಣಿಗೆಯ ಪ್ರಮುಖ ಚಾಲಕಶಕ್ತಿ ಸೇವಾ ವಲಯ&lt;/h3&gt;&lt;p&gt;ಸೇವಾ ವಲಯವು ದೇಶದ ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಜಿಡಿಪಿಯಲ್ಲಿ ಶೇ. 54ರಷ್ಟು ಪಾಲು ಹೊಂದಿರುವ ಈ ವಲಯ, ಶೇ. 65ಕ್ಕಿಂತ ಹೆಚ್ಚಾಗಬೇಕು. ಅಂದರೆ, ಸುಮಾರು 2 ಟ್ರಿಲಿಯನ್ ಡಾಲರ್&zwnj;ನಿಂದ 11 ಟ್ರಿಲಿಯನ್ ಡಾಲರ್&zwnj;ಗಿಂತಲೂ ಅಧಿಕವಾಗಿ ಬೆಳೆಯಬೇಕಿದೆ. ರಾಷ್ಟ್ರೀಯ ಜಿಸಿಸಿ ನೀತಿಯನ್ನು (National GCC policy) ಜಾರಿಗೆ ತಂದರೆ, ಈಗಿರುವ 1,800 ಗ್ಲೋಬಲ್ ಕೆಪಬಿಲಿಟಿ ಸೆಂಟರ್&zwnj;ಗಳನ್ನು 5,000ಕ್ಕೆ ಹೆಚ್ಚಿಸಬಹುದು. ಇದರಿಂದ 470-600 ಬಿಲಿಯನ್ ಡಾಲರ್ ಆರ್ಥಿಕ ಲಾಭ ಮತ್ತು 20-25 ಮಿಲಿಯನ್ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ. ಪ್ರವಾಸೋದ್ಯಮವೂ ಒಂದು ದೊಡ್ಡ ಅವಕಾಶ. ಟರ್ಕಿಯೊಂದಿಗೆ ಇರುವ ಅಂತರವನ್ನು ಕಡಿಮೆ ಮಾಡಿದರೆ, ಪ್ರತಿ ವರ್ಷ ಹೆಚ್ಚುವರಿಯಾಗಿ 21 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಗಳಿಸಬಹುದು ಎಂದು Equirus ಅಂದಾಜಿಸಿದೆ.&lt;/p&gt;&lt;h3&gt;ಆರ್ಥಿಕ ಮತ್ತು ಹಣಕಾಸಿನ ಲಾಭ&lt;/h3&gt;&lt;p&gt;ಈ ಸುಧಾರಣೆಗಳು ಜಾರಿಯಾದರೆ, ರೂಪಾಯಿ ಮೌಲ್ಯದಲ್ಲಿನ ಬೆಳವಣಿಗೆ ದರವು ಶೇ. 10.5ರಿಂದ ಶೇ. 14.2ಕ್ಕೆ ಏರಬಹುದು ಎಂದು Equirus ಅಂದಾಜಿಸಿದೆ. ಆದರೆ, 20 ಟ್ರಿಲಿಯನ್ ಡಾಲರ್ ಗುರಿ ತಲುಪಲು, ಇದರ ಜೊತೆಗೆ ರೂಪಾಯಿ ಮೌಲ್ಯವು ಪ್ರತಿ ವರ್ಷ ಶೇ. 3-3.6ರಷ್ಟು ಹೆಚ್ಚಾಗಬೇಕಾಗುತ್ತದೆ. 'ಆರ್ಥಿಕತೆ ಎಷ್ಟು ವೇಗವಾಗಿ ಬೆಳೆಯುತ್ತದೆ ಎನ್ನುವುದರಷ್ಟೇ, ಅದು ಹೇಗೆ ಬೆಳೆಯುತ್ತದೆ ಎಂಬುದು ಕೂಡ ಮುಖ್ಯ' ಎಂದು ವರದಿ ಹೇಳಿದೆ.&lt;/p&gt;&lt;p&gt;ಹಣಕಾಸಿನ ದೃಷ್ಟಿಯಿಂದಲೂ ಇದು ಲಾಭದಾಯಕ. ಈ ಸುಧಾರಣಾ ಪ್ಯಾಕೇಜ್&zwnj;ಗೆ ವಾರ್ಷಿಕವಾಗಿ ಸುಮಾರು 3.4 ಟ್ರಿಲಿಯನ್ ರೂಪಾಯಿ ನೇರ ವೆಚ್ಚವಾಗಬಹುದು. ಆದರೆ, ಇದರಿಂದ ಸಿಗುವ ನೇರ ಲಾಭ ಸುಮಾರು 7.9 ಟ್ರಿಲಿಯನ್ ರೂಪಾಯಿ. ಅಂದರೆ, ಮೊದಲ ವರ್ಷದಲ್ಲೇ ಸುಮಾರು 4.5 ಟ್ರಿಲಿಯನ್ ರೂಪಾಯಿ ನಿವ್ವಳ ಲಾಭವಾಗಲಿದೆ.&lt;/p&gt;&lt;p&gt;20 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಾದಿ ಕೇವಲ ಒಂದೇ ವಿಷಯದ ಮೇಲೆ ನಿಂತಿಲ್ಲ, ಬದಲಿಗೆ ಪರಸ್ಪರ ಪೂರಕವಾದ ಇಪ್ಪತ್ತು ಅಂಶಗಳ ಮೇಲೆ ನಿಂತಿದೆ&quot; ಎಂದು ವರದಿ ಹೇಳಿದೆ. ಚೀನಾದ ಅನುಭವವು ಭಾರತ ಯಾವ ಮಟ್ಟದ ಬೆಳವಣಿಗೆಯನ್ನು ಗುರಿಯಾಗಿಸಬಹುದು ಎಂಬುದನ್ನು ತೋರಿಸುತ್ತದೆ. ಆದರೆ 2036ರ ವೇಳೆಗೆ 20 ಟ್ರಿಲಿಯನ್ ಡಾಲರ್ ತಲುಪುವುದು ಮೂಲಸೌಕರ್ಯ, ಬಂಡವಾಳ, ಶಿಕ್ಷಣ, ಸಂಶೋಧನೆ, ಸೇವೆಗಳು, ಪ್ರವಾಸೋದ್ಯಮ ಮತ್ತು ಆಡಳಿತದಲ್ಲಿ ನಿರಂತರ ಸುಧಾರಣೆಗಳನ್ನು ಜಾರಿ ಮಾಡುವುದರ ಮೇಲೆ ಅವಲಂಬಿತವಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ.&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>money</category>
            <dc:creator>Ravi Janekal</dc:creator>
            <atom:link href="https://kannada.asianetnews.com/economy-money/india-eyes-20-trillion-dollar-economy-by-2036-with-major-reforms-agenda/articleshow-tg2vykr"/>
        </item>
        <item>
            <title><![CDATA[ಯಾವ ರೀತಿಯ ಎಮ್ಮೆ ಹೆಚ್ಚು ಹಾಲು ಕೊಡುತ್ತದೆ..? ಹೈನುಗಾರಿಕೆ ಶುರು ಮಾಡುವಾಗ ಈ 5 ಟಿಪ್ಸ್ ಮರೆಯದೇ ಫಾಲೋ ಮಾಡಿ]]></title>
            <link>https://kannada.asianetnews.com/business/how-to-choose-a-good-dairy-buffalo-follow-these-5-important-tips-kvn/articleshow-tvuou3l</link>
            <guid isPermaLink="true">https://kannada.asianetnews.com/business/how-to-choose-a-good-dairy-buffalo-follow-these-5-important-tips-kvn/articleshow-tvuou3l</guid>
            <pubDate>Tue, 25 Aug 2026 15:02:08 +0530</pubDate>
            <description><![CDATA[ಹೈನುಗಾರಿಕೆ ವ್ಯವಹಾರದಲ್ಲಿ ಯಶಸ್ಸು ಗಳಿಸಲು ಉತ್ತಮ ಎಮ್ಮೆಗಳ ಆಯ್ಕೆ ಬಹಳ ಮುಖ್ಯ. ಈ ಲೇಖನದಲ್ಲಿ, ಎಮ್ಮೆಗಳ ಚುರುಕುತನ, ಕೆಚ್ಚಲು, ಕಾಲುಗಳು, ವಯಸ್ಸು ಮತ್ತು ಚರ್ಮವನ್ನು ಪರೀಕ್ಷಿಸಿ ಹೆಚ್ಚು ಹಾಲು ಕೊಡುವ ಆರೋಗ್ಯಕರ ಎಮ್ಮೆಗಳನ್ನು ಗುರುತಿಸಲು 5 ಪ್ರಮುಖ ಸಲಹೆಗಳನ್ನು ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk3s3rdvn06syj7dn9mnjyet,imgname-buffalo-milk-1772874752443.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ಹೈನುಗಾರಿಕೆ ಬ್ಯುಸಿನೆಸ್ ಶುರು ಮಾಡಬೇಕು ಅಂದ್ಕೊಂಡಿದ್ದೀರಾ? ಅಥವಾ ಈಗಾಗಲೇ ಈ ವ್ಯವಹಾರದಲ್ಲಿದ್ದೀರಾ? ಹಾಗಿದ್ರೆ, ಒಳ್ಳೆ ಹಾಲಿನ ಎಮ್ಮೆಗಳನ್ನು ಆಯ್ಕೆ ಮಾಡೋದು ತುಂಬಾನೇ ಮುಖ್ಯ. ಅದಕ್ಕಾಗಿ ಈ 5 ಟಿಪ್ಸ್&zwnj;ಗಳನ್ನು ಫಾಲೋ ಮಾಡಿ.&lt;/p&gt;&lt;p&gt;ಇಂದಿನ ಯುವಕರು ಕೆಲಸಕ್ಕಿಂತ ಹೆಚ್ಚಾಗಿ ವ್ಯಾಪಾರ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಮೊದಲೆಲ್ಲಾ ಚೆನ್ನಾಗಿ ಓದಿ ಕೆಲಸಕ್ಕೆ ಸೇರುತ್ತಿದ್ದರು. ಆದರೆ ಈಗ ಡಿಗ್ರಿ, ಇಂಜಿನಿಯರಿಂಗ್, ಎಂಬಿಎ ಮಾಡಿದವರು ಕೂಡ ಸ್ಟಾರ್ಟ್&zwnj;ಅಪ್&zwnj;ಗಳನ್ನು ಆರಂಭಿಸುತ್ತಿದ್ದಾರೆ. ಕೆಲವರು ಐಟಿ, ಟೆಕ್ನಾಲಜಿ ಅಷ್ಟೇ ಅಲ್ಲದೆ ಕೃಷಿಯನ್ನೂ ತಮ್ಮ ವ್ಯವಹಾರವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಆರ್ಗಾನಿಕ್ ಫಾರ್ಮಿಂಗ್ ಮಾಡಿದರೆ, ಇನ್ನೂ ಕೆಲವರು ಹೆಚ್ಚು ಬೇಡಿಕೆಯಿರುವ ಹಣ್ಣು, ಹೂವುಗಳನ್ನು ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ. ನಮ್ಮ ಸಾಂಪ್ರದಾಯಿಕ ಹೈನುಗಾರಿಕೆಯನ್ನು ಕೂಡ ಕೆಲವು ಯುವಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ಆದರೆ, ಹೈನುಗಾರಿಕೆ ಸ್ವಲ್ಪ ರಿಸ್ಕ್ ಇರುವ ಕೆಲಸ. ಇದು ಪ್ರಾಣಿಗಳ ಜೊತೆ ಮಾಡುವ ಬ್ಯುಸಿನೆಸ್ ಆಗಿರೋದ್ರಿಂದ, ಡೈರಿ ವ್ಯವಹಾರವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಇದರಲ್ಲಿ ಅತಿ ಮುಖ್ಯವಾದುದು ಉತ್ತಮ ಹೈನು ಎಮ್ಮೆಗಳ ಆಯ್ಕೆ. ಅವು ಆರೋಗ್ಯವಾಗಿದ್ದು, ಹೆಚ್ಚು ಹಾಲು ಕೊಟ್ಟರೆ ಮಾತ್ರ ಉತ್ತಮ ಲಾಭ ಸಿಗಲು ಸಾಧ್ಯ. ಹಾಗಾದರೆ ಎಮ್ಮೆಗಳನ್ನು ಖರೀದಿಸುವಾಗ ಅದು ಆರೋಗ್ಯವಾಗಿದೆಯೇ? ಹೆಚ್ಚು ಹಾಲು ಕೊಡುತ್ತದೆಯೇ? ಎಂದು ತಿಳಿಯುವುದು ಹೇಗೆ? ಅದಕ್ಕಾಗಿ ಈ 5 ಟಿಪ್ಸ್ ಫಾಲೋ ಮಾಡಿ.&lt;/p&gt;&lt;p&gt;ಡೈರಿ ಬ್ಯುಸಿನೆಸ್ ಶುರು ಮಾಡುವ ಮುನ್ನ ಹೈನು ಎಮ್ಮೆಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಮೊದಲು ಯಾವ ರೀತಿಯ ಎಮ್ಮೆಗಳನ್ನು ಖರೀದಿಸಬೇಕು ಎಂದು ತಿಳಿಯಬೇಕು. ಕೆಲವು ವಿಷಯಗಳನ್ನು ನೋಡಿ ಎಮ್ಮೆ ಒಳ್ಳೆಯದೋ, ಕೆಟ್ಟದ್ದೋ ಎಂದು ತಿಳಿಯಬಹುದು. ಅದರಲ್ಲಿ ಮುಖ್ಯವಾದುದು ಅದರ ಚುರುಕುತನ.&lt;/p&gt;&lt;p&gt;ಎಮ್ಮೆ ಖರೀದಿಸುವ ಮುನ್ನ ಅದು ಆಕ್ಟಿವ್ ಆಗಿದೆಯೇ ಎಂದು ನೋಡಬೇಕು. ಇದಕ್ಕಾಗಿ ಅದರ ಮೂಗಿನ ಮೇಲೆ ಬೆವರನ್ನು ಪರೀಕ್ಷಿಸಿ. ಹೆಚ್ಚು ಬೆವರು ಇದ್ದರೆ, ಆ ಎಮ್ಮೆ ಆಕ್ಟಿವ್ ಆಗಿದೆ ಎಂದರ್ಥ. ಅಷ್ಟೇ ಅಲ್ಲ, ಎಮ್ಮೆಯ ಕಣ್ಣುಗಳನ್ನು ನೋಡಿಯೂ ಅದು ಸೋಮಾರಿಯೇ ಅಥವಾ ಚುರುಕಾಗಿದೆಯೇ ಎಂದು ತಿಳಿಯಬಹುದು. ಕಣ್ಣುಗಳನ್ನು ಚುರುಕಾಗಿ ಚಲಿಸುತ್ತಾ, ಎಲ್ಲಾ ಕಡೆ ನೋಡುತ್ತಾ ಹುರುಪಿನಿಂದ ಕಂಡರೆ ಅದು ಉತ್ತಮ ಹೈನು ಎಮ್ಮೆ ಎಂದರ್ಥ.&lt;/p&gt;&lt;h2&gt;&lt;strong&gt;ಎಮ್ಮೆಯ ಕೆಚ್ಚಲನ್ನು ಪರೀಕ್ಷಿಸಿ&lt;/strong&gt;&lt;/h2&gt;&lt;p&gt;ಎಮ್ಮೆಗಳನ್ನು ಖರೀದಿಸುವ ಮುನ್ನ ಅದರ ಕೆಚ್ಚಲನ್ನು ಖಂಡಿತವಾಗಿಯೂ ಪರೀಕ್ಷಿಸಬೇಕು. ಇದು ಬಹಳ ಮುಖ್ಯ. ಎಮ್ಮೆಯ ಕೆಚ್ಚಲು ಎರಡು ಕಾಲುಗಳ ಮಧ್ಯೆ ಸರಿಯಾಗಿ ಸೆಂಟರ್&zwnj;ನಲ್ಲಿರಬೇಕು. ಕೆಚ್ಚಲು ಒಂದು ಕಡೆಗೆ ವಾಲಿಕೊಂಡಿದ್ದರೆ ಅಥವಾ ಬಿಗಿಯಾಗಿ, ಫಿಟ್ ಆಗಿ ಇಲ್ಲದಿದ್ದರೆ ಆ ಎಮ್ಮೆಯನ್ನು ಕೊಳ್ಳದಿರುವುದೇ ಉತ್ತಮ. ಇಂತಹ ಎಮ್ಮೆಗಳು ಕಡಿಮೆ ಹಾಲು ಕೊಡುತ್ತವೆ. ಆರೋಗ್ಯಕರ ಕೆಚ್ಚಲು ಇರುವ ಎಮ್ಮೆಗಳನ್ನೇ ಹೈನುಗಾರಿಕೆಯಲ್ಲಿ ಬಳಸಬೇಕು.&lt;/p&gt;&lt;h3&gt;&lt;strong&gt;ಕಾಲುಗಳನ್ನು ನೋಡಿಯೂ ಎಮ್ಮೆಯನ್ನು ಅಂದಾಜಿಸಿ&lt;/strong&gt;&lt;/h3&gt;&lt;p&gt;ಎಮ್ಮೆಯ ಕಾಲುಗಳ ಗೊರಸುಗಳನ್ನು ನೋಡಿಯೂ ಅದು ಉತ್ತಮ ಹೈನು ಎಮ್ಮೆ ಹೌದೋ, ಅಲ್ಲವೋ ಎಂದು ತಿಳಿಯಬಹುದು. ನಾಲ್ಕು ಕಾಲುಗಳ ಗೊರಸುಗಳು ಸಮಾನವಾಗಿರಬೇಕು. ಅವುಗಳಿಗೆ ಯಾವುದೇ ಬಿರುಕು, ಊತ, ಗಾಯಗಳು ಇರದಂತೆ ನೋಡಿಕೊಳ್ಳಬೇಕು. ಎಮ್ಮೆಯನ್ನು ಸ್ವಲ್ಪ ದೂರ ನಡೆಯಿಸಿ, ಅದು ಸರಿಯಾಗಿ ನಡೆಯುತ್ತದೆಯೇ ಎಂದು ನೋಡಬೇಕು. ಹೀಗೆ ಎಮ್ಮೆಗಳ ಕಾಲುಗಳು ಅದರ ಹಾಲು ಉತ್ಪಾದನೆ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತವೆ.&lt;/p&gt;&lt;h3&gt;&lt;strong&gt;ಕಡಿಮೆ ವಯಸ್ಸಿನ ಎಮ್ಮೆಯನ್ನು ಹೇಗೆ ಗುರುತಿಸುವುದು?&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಹೈನುಗಾರಿಕೆಗೆ ಕಡಿಮೆ ವಯಸ್ಸಿನ ಎಮ್ಮೆಗಳು ಬೇಕು. ಹಾಗಾಗಿ ಇಂತಹವುಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಎಮ್ಮೆಯ ವಯಸ್ಸನ್ನು ತಿಳಿಯಲು ಅದರ ಬಾಯಿಯಲ್ಲಿರುವ ಹಲ್ಲುಗಳನ್ನು ಪರೀಕ್ಷಿಸಬೇಕು. ಎಷ್ಟು ಕಡಿಮೆ ಹಲ್ಲುಗಳಿವೆಯೋ, ಅದರ ವಯಸ್ಸು ಅಷ್ಟು ಕಡಿಮೆ ಎಂದರ್ಥ. ಸಾಮಾನ್ಯವಾಗಿ ಎರಡು, ನಾಲ್ಕು, ಆರು, ಎಂಟು ಹಲ್ಲುಗಳಿರುತ್ತವೆ. ಆದ್ದರಿಂದ ಕಡಿಮೆ ಹಲ್ಲುಗಳಿರುವ ಎಮ್ಮೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.&lt;/p&gt;&lt;h3&gt;&lt;strong&gt;ಎಮ್ಮೆಯ ಚರ್ಮ ಹೇಗಿರಬೇಕು?&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಹೆಚ್ಚಿನ ಎಮ್ಮೆಗಳ ಚರ್ಮ ದಪ್ಪವಾಗಿರುತ್ತದೆ. ಕೆಲವಕ್ಕೆ ಮಾತ್ರ ತೆಳುವಾಗಿರುತ್ತದೆ. ಹೀಗೆ ತೆಳುವಾದ ಚರ್ಮವಿರುವ ಎಮ್ಮೆಗಳು ಹೆಚ್ಚು ಹಾಲು ಕೊಡುತ್ತವೆಯಂತೆ. ಅಷ್ಟೇ ಅಲ್ಲ, ಕೆಚ್ಚಲಿನಲ್ಲಿರುವ ಪ್ರತಿ ತೊಟ್ಟುಗಳ ಮಧ್ಯೆ ಸಮಾನ ಅಂತರ ಇರಬೇಕು. ಪ್ರತಿಯೊಂದರ ಮಧ್ಯೆ ನಮ್ಮ ನಾಲ್ಕು ಬೆರಳುಗಳು ಹಿಡಿಸುವಷ್ಟು ಗ್ಯಾಪ್ ಇರಬೇಕು. ಹೀಗೆ ಚರ್ಮ ಮತ್ತು ಕೆಚ್ಚಲನ್ನು ನೋಡಿ ಹೆಚ್ಚು ಹಾಲು ಕೊಡುವ ಎಮ್ಮೆಯನ್ನು ಗುರುತಿಸಬಹುದು.&lt;/p&gt;]]></content:encoded>
            <category>money</category>
            <dc:creator>Naveen Kodase</dc:creator>
            <atom:link href="https://kannada.asianetnews.com/business/how-to-choose-a-good-dairy-buffalo-follow-these-5-important-tips-kvn/articleshow-tvuou3l"/>
        </item>
        <item>
            <title><![CDATA[₹13ರ ಕಸದಿಂದ ತಿಂಗಳಿಗೆ ₹40 ಲಕ್ಷ ಸಂಪಾದನೆ! ಈ ಯುವಕನ ಸೂಪರ್ ಬಿಸಿನೆಸ್ ಐಡಿಯಾ ನೋಡಿ...]]></title>
            <link>https://kannada.asianetnews.com/viral/from-waste-to-wealth-entrepreneur-turns-discarded-plastic-into-a-profitable-business/articleshow-xosaw0i</link>
            <guid isPermaLink="true">https://kannada.asianetnews.com/viral/from-waste-to-wealth-entrepreneur-turns-discarded-plastic-into-a-profitable-business/articleshow-xosaw0i</guid>
            <pubDate>Sat, 22 Aug 2026 10:12:48 +0530</pubDate>
            <description><![CDATA[&lt;p&gt;ಕೆಜಿಗೆ ಸುಮಾರು ₹13ಕ್ಕೆ ತ್ಯಾಜ್ಯ ಪ್ಲಾಸ್ಟಿಕ್ ಖರೀದಿಸಿ, ಅದನ್ನು ವಿಂಗಡಿಸಿ, ಸ್ವಚ್ಛಗೊಳಿಸಿ ಗ್ರ್ಯಾನ್ಯೂಲ್&zwnj;ಗಳಾಗಿ ಸಂಸ್ಕರಿಸಿ ₹80-90ಕ್ಕೆ ಮಾರಾಟ ಮಾಡುವ ಉದ್ಯಮದ ಕಥೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ತಿಂಗಳಿಗೆ ಸುಮಾರು 50 ಟನ್ ಪ್ಲಾಸ್ಟಿಕ್ ಸಂಸ್ಕರಿಸುವ ಈ ಮಾದರಿ &lsquo;ತ್ಯಾಜ್ಯದಿಂದ ಸಂಪತ್ತು&rsquo; ಎಂಬ ಪರಿಕಲ್ಪನೆಗೆ ಉತ್ತಮ ಉದಾಹರಣೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0kwdzpx65da13ck3dpwezxq,imgname-a-man-converts-waste-plastic-into-a-profitable-business--1--1787373747932.jpg" type="image/jpeg" height="390" width="690"/>
            <content:encoded><![CDATA[&lt;h2&gt;ಕಸವೆಂದು ಎಸೆದ ಪ್ಲಾಸ್ಟಿಕ್&zwnj;ನಿಂದ ದೊಡ್ಡ ಬಿಸಿನೆಸ್; &lsquo;ವೆಸ್ಟ್ ಟು ವೆಲ್ತ್&rsquo; ಮಾದರಿ ವೈರಲ್!&lt;/h2&gt;&lt;p&gt;ಪ್ಲಾಸ್ಟಿಕ್ ತ್ಯಾಜ್ಯ ಎಂದರೆ ಸಾಮಾನ್ಯವಾಗಿ ಪರಿಸರಕ್ಕೆ ಹೊರೆ ಎಂದು ಪರಿಗಣಿಸಲಾಗುತ್ತದೆ. ಆದರೆ ಅದೇ ತ್ಯಾಜ್ಯವನ್ನು ಕಡಿಮೆ ಬೆಲೆಗೆ ಖರೀದಿಸಿ, ವೈಜ್ಞಾನಿಕವಾಗಿ ಸಂಸ್ಕರಿಸಿ ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಚಾ ವಸ್ತುವಾಗಿ ಮಾರಾಟ ಮಾಡಿದರೆ ಅದು ಉತ್ತಮ ಉದ್ಯಮ ಮಾದರಿಯಾಗಬಹುದು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಉದ್ಯಮಿಯೊಬ್ಬರ ಕಥೆ ಇದೀಗ ಇದೇ ಕಾರಣಕ್ಕೆ ಗಮನ ಸೆಳೆಯುತ್ತಿದೆ.&lt;/p&gt;&lt;h3&gt;&lsquo;ಪ್ಲಾಸ್ಟಿಕ್ ಬಿಸಿನೆಸ್&rsquo; ಎಂದಿದ್ದ ಸಂಬಂಧಿಯ ಕಥೆ&lt;/h3&gt;&lt;p&gt;ಪ್ರಥಮ್ ಎಂಬ X ಬಳಕೆದಾರರು ಕುಟುಂಬದ ಮದುವೆಯಲ್ಲಿ ತಮ್ಮ ಸಂಬಂಧಿಯೊಬ್ಬರನ್ನು ಭೇಟಿಯಾದಾಗ ಅವರ ದುಬಾರಿ ವಾಚ್ ಗಮನಿಸಿದ್ದರು. ಅವರು ಯಾವ ಉದ್ಯಮ ಮಾಡುತ್ತಾರೆ ಎಂದು ಕೇಳಿದಾಗ, ಸರಳವಾಗಿ &lsquo;ಪ್ಲಾಸ್ಟಿಕ್ ಬಿಸಿನೆಸ್&rsquo; ಎಂದು ಉತ್ತರಿಸಿದ್ದರು.&lt;/p&gt;&lt;p&gt;ಆದರೆ ಇದರ ಹಿಂದಿರುವ ನಿಜವಾದ ವ್ಯವಹಾರ ಮಾದರಿ ತಿಳಿದಾಗ ಪ್ರಥಮ್&zwnj;ಗೆ ಅಚ್ಚರಿಯಾಗಿದೆ. ಅವರ ಸಂಬಂಧಿಯ ಉದ್ಯಮ ಹೊಸ ಪ್ಲಾಸ್ಟಿಕ್ ಉತ್ಪಾದನೆಯ ಬದಲು ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಮರುಬಳಕೆಯ ವಸ್ತುವಾಗಿ ಪರಿವರ್ತಿಸುವುದಾಗಿದೆ.&lt;/p&gt;&lt;h3&gt;ಕೆಜಿಗೆ ₹13ಕ್ಕೆ ತ್ಯಾಜ್ಯ ಖರೀದಿ ವಿಂಗಡಣೆ, ಸ್ವಚ್ಛತೆ ಮತ್ತು ಸಂಸ್ಕರಣೆ&lt;/h3&gt;&lt;p&gt;ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಕಾರ್ಖಾನೆ ತ್ಯಜಿಸಲಾದ ಬಾಟಲಿ, ಡಬ್ಬಿ ಮತ್ತು ವಿವಿಧ ಪ್ಲಾಸ್ಟಿಕ್ ಸ್ಕ್ರ್ಯಾಪ್&zwnj;ಗಳನ್ನು ಸುಮಾರು ₹13 ಪ್ರತಿ ಕೆಜಿಗೆ ಖರೀದಿಸುತ್ತದೆ. ನಂತರ ಅವುಗಳನ್ನು ವಿವಿಧ ವಿಧಗಳಾಗಿ ವಿಂಗಡಿಸಿ, ಸ್ವಚ್ಛಗೊಳಿಸಿ ಮತ್ತು ಸಂಸ್ಕರಿಸಲಾಗುತ್ತದೆ.&lt;/p&gt;&lt;p&gt;ಈ ಪ್ರಕ್ರಿಯೆಯ ಬಳಿಕ ಪ್ಲಾಸ್ಟಿಕ್ ಗ್ರ್ಯಾನ್ಯೂಲ್&zwnj;ಗಳನ್ನು ತಯಾರಿಸಲಾಗುತ್ತದೆ. ಇವುಗಳನ್ನು ಕೈಗಾರಿಕೆಗಳಿಗೆ ಮರುಬಳಕೆಯ ಕಚ್ಚಾ ವಸ್ತುವಾಗಿ ಮಾರಾಟ ಮಾಡಲಾಗುತ್ತದೆ.&lt;/p&gt;&lt;h3&gt;₹80-90ಕ್ಕೆ ಮರುಬಳಕೆಯ ಗ್ರ್ಯಾನ್ಯೂಲ್!&lt;/h3&gt;&lt;p&gt;ಮಾಹಿತಿಯ ಪ್ರಕಾರ, ಸಂಸ್ಕರಿಸಿದ ಗ್ರ್ಯಾನ್ಯೂಲ್&zwnj;ಗಳನ್ನು ಸುಮಾರು ₹80ರಿಂದ ₹90 ಪ್ರತಿ ಕೆಜಿಗೆ ಮಾರಾಟ ಮಾಡಬಹುದಾಗಿದೆ. ಇವುಗಳನ್ನು ಕಾರು ಮತ್ತು ಆಟೋ ಭಾಗಗಳು, ಪ್ಯಾಕೇಜಿಂಗ್ ವಸ್ತುಗಳು, ಬಟ್ಟೆ ನಾರುಗಳು, ಪೈಪ್&zwnj;ಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಬಹುದು.&lt;/p&gt;&lt;h3&gt;ತಿಂಗಳಿಗೆ 50 ಟನ್ ಸಂಸ್ಕರಣೆ&lt;/h3&gt;&lt;p&gt;ಕಾರ್ಖಾನೆ ತಿಂಗಳಿಗೆ ಸುಮಾರು 50 ಟನ್ ಪ್ಲಾಸ್ಟಿಕ್ ಸಂಸ್ಕರಿಸುತ್ತದೆ ಎಂದು ಪೋಸ್ಟ್&zwnj;ನಲ್ಲಿ ಹೇಳಲಾಗಿದೆ. ಕೆಜಿಗೆ ₹80ರ ದರದಲ್ಲಿ ಲೆಕ್ಕ ಹಾಕಿದರೆ, ತಿಂಗಳ ಮಾರಾಟ ಸುಮಾರು ₹40 ಲಕ್ಷದಷ್ಟಾಗಬಹುದು.&lt;/p&gt;&lt;p&gt;ಆದರೆ ಇದು ವಹಿವಾಟಿನ ಅಂದಾಜು ಮಾತ್ರ, ನೇರ ಲಾಭವಲ್ಲ. ತ್ಯಾಜ್ಯ ಸಂಗ್ರಹ, ಸಾಗಣೆ, ಕಾರ್ಮಿಕರು, ವಿಂಗಡಣೆ, ಸ್ವಚ್ಛತೆ, ಯಂತ್ರೋಪಕರಣ, ವಿದ್ಯುತ್ ಮತ್ತು ಇತರ ಕಾರ್ಯಾಚರಣಾ ವೆಚ್ಚಗಳನ್ನು ಲಾಭ ಲೆಕ್ಕಾಚಾರದಲ್ಲಿ ಪರಿಗಣಿಸಬೇಕು.&lt;/p&gt;&lt;h3&gt;&lsquo;ತ್ಯಾಜ್ಯದಿಂದ ಸಂಪತ್ತು&rsquo;ಗೆ ಹೊಸ ಅರ್ಥ&lt;/h3&gt;&lt;p&gt;ಈ ಉದ್ಯಮ ಮಾದರಿಯ ಪ್ರಮುಖ ಅಂಶವೆಂದರೆ ಇತರರಿಗೆ ಬೇಡವಾದ ವಸ್ತುವನ್ನು ಕೈಗಾರಿಕೆಗಳಿಗೆ ಉಪಯುಕ್ತ ಕಚ್ಚಾ ವಸ್ತುವಾಗಿ ಪರಿವರ್ತಿಸುವುದು. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಇದನ್ನು &lsquo;Waste to Wealth&rsquo; ಮಾದರಿ ಎಂದು ಶ್ಲಾಘಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಸರಿಯಾದ ಸಂಗ್ರಹಣೆ, ತಂತ್ರಜ್ಞಾನ ಮತ್ತು ಮಾರುಕಟ್ಟೆ ಸಂಪರ್ಕವಿದ್ದರೆ ತ್ಯಾಜ್ಯವೂ ಆರ್ಥಿಕ ಮೌಲ್ಯ ಸೃಷ್ಟಿಸಬಲ್ಲದು ಎಂಬುದನ್ನು ಈ ಉದ್ಯಮದ ಕಥೆ ತೋರಿಸುತ್ತದೆ.&lt;/p&gt;&lt;p&gt;Recently, I met my cousin at a relative&rsquo;s wedding.We rarely talk, but I noticed his limited-edition Rolex.Curious, I asked, &ldquo;What do you do?&rdquo;He said, &ldquo;Plastic business.&rdquo;I assumed it was normal plastic trading business.Then I asked, &ldquo;How are you making so much money?&rdquo;&hellip;&lt;/p&gt;&lt;p&gt;&mdash; Pratham (@CapitalLens_) August 19, 2026&lt;/p&gt;&lt;p&gt;&lt;/p&gt;]]></content:encoded>
            <category>money</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/from-waste-to-wealth-entrepreneur-turns-discarded-plastic-into-a-profitable-business/articleshow-xosaw0i"/>
        </item>
        <item>
            <title><![CDATA[Onion Price: ಗ್ರಾಹಕರಿಗೆ ರಿಲೀಫ್‌, ಆದರೆ ಈರುಳ್ಳಿ ಬೆಳೆದ ರೈತನಿಗೆ ಆತಂಕ?  ಆಡಳಿತದ ಹೊಸ ಪ್ಲಾನ್‌ ಅನ್ನದಾತನಿಗೆ ತಂದಿಡ್ತಾ ಸಂಕಷ್ಟ!]]></title>
            <link>https://kannada.asianetnews.com/state/onion-price-rise-government-kanda-express-buffer-stock-onion-farmers-crisis-apmc-market-india-agriculture-news-bmk/articleshow-zmn7orp</link>
            <guid isPermaLink="true">https://kannada.asianetnews.com/state/onion-price-rise-government-kanda-express-buffer-stock-onion-farmers-crisis-apmc-market-india-agriculture-news-bmk/articleshow-zmn7orp</guid>
            <pubDate>Mon, 24 Aug 2026 17:06:23 +0530</pubDate>
            <description><![CDATA[ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ 'ಕಾಂದಾ ಎಕ್ಸ್&zwnj;ಪ್ರೆಸ್' ಮೂಲಕ ಬಫರ್ ಸ್ಟಾಕ್ ಬಿಡುಗಡೆ ಮಾಡುತ್ತಿದೆ. ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿದು, ಕಡಿಮೆ ಇಳುವರಿ ಪಡೆದ ರೈತರು ತಮ್ಮ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಈ ನಿರ್ಧಾರವು ಗ್ರಾಹಕರಿಗೆ ತಾತ್ಕಾಲಿಕ ಸಮಾಧಾನ ನೀಡಿದರೂ, ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ದೂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0sqpvkkzam2f6s74jt523mn,imgname-onion-1787570122355.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೂ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅಥವಾ ನ್ಯಾಯಕ್ಕಾಗಿ ಹೋರಾಡಲು ಕಾನೂನಿನಲ್ಲಿ ಒಂದು ಅವಕಾಶವಿರುತ್ತದೆ. ಆದರೆ, ಹಗಲಿರುಳೆನ್ನದೆ ಬೆವರು ಹರಿಸಿ ಇಡೀ ದೇಶಕ್ಕೆ ಅನ್ನ ನೀಡುವ ರೈತನಿಗೆ ಮಾತ್ರ ತನ್ನ ಬೆಳೆಗೆ ನ್ಯಾಯಯುತ ಬೆಲೆ ಕೇಳುವ ಹಕ್ಕೂ ಇಲ್ಲದಂತಾಗಿದೆ. ಇಂದು ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿಪಡಿಸಲಾಗದೆ, ಸರ್ಕಾರದ ಮುಂದೆ ಕೈ ಒಡ್ಡಿ ನಿಲ್ಲುವಂತ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಇತ್ತೀಚೆಗೆ ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸ ಯೋಜನೆಯಂತೂ, ಸಾಲ ಸೋಲ ಮಾಡಿ ಕೃಷಿ ಮಾಡಿದ ಅನ್ನದಾತನ ಹೊಟ್ಟೆಯ ಮೇಲೆ ನೇರವಾಗಿ ಹೊಡೆಯುವಂತಿದೆ. ಅಷ್ಟಕ್ಕೂ ದೇಶದ ಲಕ್ಷಾಂತರ ಈರುಳ್ಳಿ ಬೆಳೆಗಾರರನ್ನು ಕಂಗಾಲು ಮಾಡಿರುವ ಆ ಯೋಜನೆ ಯಾವುದು? ಸರ್ಕಾರದ ಈ ನಿರ್ಧಾರದಿಂದ ರೈತನ ಬದುಕು ಹೇಗೆ ಕತ್ತಲಿಗೆ ತಳ್ಳಲ್ಪಡುತ್ತಿದೆ?&lt;/p&gt;&lt;h2&gt;&lt;strong&gt;ಏನಿದು ಸರ್ಕಾರದ ಹೊಸ ಪ್ಲಾನ್?&lt;/strong&gt;&lt;/h2&gt;&lt;p&gt;ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೊಂಚ ಏರಿಕೆಯಾಗುತ್ತಿದ್ದಂತೆ, ಗ್ರಾಹಕರನ್ನು ಮತ್ತು ನಗರವಾಸಿಗಳನ್ನು ಸಮಾಧಾನಪಡಿಸಲು ಕೇಂದ್ರ ಸರ್ಕಾರವು ತಕ್ಷಣವೇ ರಂಗಕ್ಕಿಳಿದಿದೆ. ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ದರ ನಿಯಂತ್ರಿಸಲು ಸರ್ಕಾರ ತನ್ನ ಬಳಿ ಇರುವ &lsquo;ಬಫರ್ ಸ್ಟಾಕ್&rsquo; ಅಂದರೆ ತುರ್ತು ದಾಸ್ತಾನನ್ನು ಮಾರುಕಟ್ಟೆಗೆ ಮುಕ್ತವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದಕ್ಕಾಗಿಯೇ &lsquo;ಕಾಂದಾ ಎಕ್ಸ್&zwnj;ಪ್ರೆಸ್&rsquo; (Kanda Express) ಎಂಬ ವಿಶೇಷ ರೈಲುಗಳ ಮೂಲಕ ನಾಸಿಕ್&zwnj;ನಂತಹ ಪ್ರಮುಖ ಉತ್ಪಾದನಾ ಕೇಂದ್ರಗಳಿಂದ ದೆಹಲಿ, ಚೆನ್ನೈ, ಗುವಾಹಾಟಿ ಹಾಗೂ ಕೊಚ್ಚಿಯಂತಹ ನಗರಗಳಿಗೆ ಭಾರಿ ಪ್ರಮಾಣದ ಈರುಳ್ಳಿಯನ್ನು ಕಡಿಮೆ ದರದಲ್ಲಿ ಸಾಗಾಟ ಮಾಡಿ ಪೂರೈಸಲಾಗುತ್ತಿದೆ. ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ, ಅದೆನೆಂದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಹೆಚ್ಚಿಸಿ, ಕೃತಕ ಅಭಾವವನ್ನು ತಪ್ಪಿಸಿ, ಗ್ರಾಹಕರಿಗೆ ಚಿಲ್ಲರೆ ದರದಲ್ಲಿ ಈರುಳ್ಳಿ ಅಗ್ಗವಾಗಿ ಸಿಗುವಂತೆ ಮಾಡುವುದು.&lt;/p&gt;&lt;h3&gt;&lt;strong&gt;ಆದರೆ, ಈ ಯೋಜನೆಯಲ್ಲಿ ಅನ್ನದಾತ ನಲುಗುತ್ತಿರುವುದಾದರೂ ಹೇಗೆ?&lt;/strong&gt;&lt;/h3&gt;&lt;p&gt;ಬೆಲೆ ಇಳಿಕೆಯ ಈ ಸಂಭ್ರಮದ ಹಿಂದೆ ಕಣ್ಣೀರು ಹಾಕುತ್ತಿರುವುದು ಇದೇ ಈರುಳ್ಳಿಯನ್ನು ಬೆಳೆದ ರೈತ. ಕೃಷಿ ಎಂಬುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಜೂಜಾಟವಾಗಿದೆ. ಸಾಲ ಮಾಡಿ, ಬೀಜ, ಗೊಬ್ಬರ, ಕ್ರಿಮಿನಾಶಕ ತಂದು, ಅಕಾಲಿಕ ಮಳೆ ಮತ್ತು ಕ್ರಿಮಿಕೀಟಗಳ ಕಾಟವನ್ನು ಎದುರಿಸಿ ಬೆಳೆಯನ್ನು ಕೈಗೆ ತರುವುದು ಸಣ್ಣ ಮಾತಲ್ಲ. ಈ ಬಾರಿ ಮಹಾರಾಷ್ಟ್ರ ಸೇರಿದಂತೆ ಹಲವು ಭಾಗಗಳಲ್ಲಿ ಖಾರಿಫ್ ಈರುಳ್ಳಿ ಇಳುವರಿ ಶೇಕಡಾ 5 ರಿಂದ 7 ರಷ್ಟು ಕುಸಿದಿದೆ. ಅಂದರೆ, ರೈತನ ಕೈಯಲ್ಲಿ ಬೆಳೆ ಕಡಿಮೆಯಿದೆ. ಸಾಮಾನ್ಯ ಆರ್ಥಿಕ ನಿಯಮದಂತೆ, ಇಳುವರಿ ಕಡಿಮೆಯಾದಾಗ ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಬೆಲೆಯಿಂದ ರೈತ ತನ್ನ ಹಿಂದಿನ ನಷ್ಟವನ್ನು ಸರಿದೂಗಿಸಿಕೊಳ್ಳಬೇಕಿತ್ತು. ಆದರೆ, ರೈತನಿಗೆ ಆ ನಾಲ್ಕು ಕಾಸು ಲಾಭ ಸಿಗುವ ಸಮಯ ಬಂದ ತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ ಬಫರ್ ಸ್ಟಾಕ್ ಬಿಡುಗಡೆ ಮಾಡುತ್ತಿದೆ.&lt;/p&gt;&lt;h3&gt;&lt;strong&gt;ರೈತನಿಗಿಲ್ಲ ಸೂಕ್ತ ಬೆಲೆ!&lt;/strong&gt;&lt;/h3&gt;&lt;p&gt;ಸರ್ಕಾರ ಸಾಗರೋಪಾದಿಯಲ್ಲಿ ಕಡಿಮೆ ದರದ ಈರುಳ್ಳಿಯನ್ನು ಮಾರುಕಟ್ಟೆಗೆ ಸುರಿದಾಗ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಧರಾಸಾಹಿಯಾಗಿ ಕುಸಿಯುತ್ತದೆ. ಪರಿಣಾಮವಾಗಿ, ಮಾರುಕಟ್ಟೆಗೆ ತನ್ನ ಬೆಳೆಯನ್ನು ತರುವ ಸಾಮಾನ್ಯ ರೈತನಿಗೆ ಸೂಕ್ತ ಬೆಲೆ ಸಿಗುವುದಿಲ್ಲ. ದಲ್ಲಾಳಿಗಳು ಮತ್ತು ವ್ಯಾಪಾರಿಗಳು &quot;ಸರ್ಕಾರವೇ ಕಡಿಮೆ ದರಕ್ಕೆ ಈರುಳ್ಳಿ ಕೊಡುತ್ತಿದೆ&quot; ಎಂಬ ನೆಪ ಹೇಳಿ ರೈತನಿಂದ ಕನಿಷ್ಠ ದರಕ್ಕೂ ಈರುಳ್ಳಿ ಖರೀದಿಸುವುದಿಲ್ಲ.&lt;/p&gt;&lt;h3&gt;&lt;strong&gt;ಬೆಲೆ ಏರಿಕೆಯ ನಷ್ಟ ರೈತನಿಗೆ, ಲಾಭ ಯಾರಿಗೆ?&lt;/strong&gt;&lt;/h3&gt;&lt;p&gt;ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಕೂಲಿ ಆಳುಗಳ ವೆಚ್ಚ, ಸಾಗಣೆ ವೆಚ್ಚ ಎಲ್ಲವೂ ಗಗನಕ್ಕೇರಿದೆ. ಆದರೆ ರೈತ ಬೆಳೆದ ಬೆಳೆಗೆ ಬೆಲೆ ಸಿಗಬೇಕಾದ ಕ್ಷಣದಲ್ಲಿ ಸರ್ಕಾರದ ಈ ರಿಲೀಫ್ ಪ್ಲಾನ್ ಅವನ ಕುತ್ತಿಗೆಗೆ ಉರುಳಾಗುತ್ತಿದೆ ಎನ್ನಲಾಗಿದೆ. ಗ್ರಾಹಕರಿಗೆ ರಿಲೀಫ್ ನೀಡುವುದು ತಪ್ಪಲ್ಲ, ಆದರೆ ಆ ರಿಲೀಫ್&zwnj;ನ ಸಂಪೂರ್ಣ ಹೊರೆಯನ್ನು ರೈತನ ಹೆಗಲ ಮೇಲೆಯೇ ಹಾಕುವುದು ಎಷ್ಟರ ಮಟ್ಟಿಗೆ ನ್ಯಾಯ? ಅಪರಾಧಿಗೂ ಸಿಗುವ ಕನಿಷ್ಠ ನ್ಯಾಯದ ಅವಕಾಶ, ಹಗಲಿರುಳು ಕಷ್ಟಪಟ್ಟು ದೇಶದ ಹಸಿವು ನೀಗಿಸುವ ಅನ್ನದಾತನಿಗೆ ಸಿಗದಿರುವುದು ದುರಂತವೇ ಸರಿ. ಸರ್ಕಾರ ತರುತ್ತಿರುವ ಈ ಯೋಜನೆಯು ಗ್ರಾಹಕರಿಗೆ ತಾತ್ಕಾಲಿಕ ಸಮಾಧಾನ ನೀಡಬಹುದಾದರೂ, ಈರುಳ್ಳಿ ಬೆಳೆದ ರೈತನ ಮನೆಯಲ್ಲಿ ಮಾತ್ರ ಕಣ್ಣೀರ ಕೊಳವನ್ನು ಸೃಷ್ಟಿಸುತ್ತಿದೆ.&lt;/p&gt;&lt;h3&gt;&lt;strong&gt;ಪ್ರಮುಖ ನಗರಗಳಿಗೆ ಆಗಮನ!&lt;/strong&gt;&lt;/h3&gt;&lt;p&gt;ಸದ್ಯಕ್ಕೆ ನಾಸಿಕ್&zwnj;ನಿಂದ ಹೊರಟ &lsquo;ಕಾಂದಾ ಎಕ್ಸ್&zwnj;ಪ್ರೆಸ್&rsquo; ದೆಹಲಿ, ಚೆನ್ನೈ, ಕೊಚ್ಚಿ ಹಾಗೂ ಗುವಾಹಟಿಯಂತಹ ನಾಲ್ಕು ಪ್ರಮುಖ ನಗರಗಳನ್ನಷ್ಟೇ ತಲುಪುತ್ತಿದ್ದು, ಅಲ್ಲಿನ ಮಾರುಕಟ್ಟೆಗಳಲ್ಲಿ ಬೆಲೆ ಸಮತೋಲನ ತರಲು ಸರ್ಕಾರ ಯತ್ನಿಸುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಈ ಸೌಲಭ್ಯ ಕರ್ನಾಟಕಕ್ಕೂ ವಿಸ್ತರಿಸುವ ಸಾಧ್ಯತೆಯಿದೆ. ಗ್ರಾಹಕರಿಗೆ ಸಮಾಧಾನ ತರುವ ಈ ಯೋಜನೆ ರಾಜ್ಯಕ್ಕೆ ಕಾಲಿಟ್ಟರೆ, ಇಲ್ಲಿನ ಈರುಳ್ಳಿ ಬೆಳೆಗಾರರ ಮೇಲಾಗುವ ಪರಿಣಾಮವೇನು ಎಂಬುದು ಆತಂಕದ ವಿಷಯ. ಗ್ರಾಹಕರ ಹಿತ ಕಾಯುವ ನೆಪದಲ್ಲಿ ಸ್ಥಳೀಯ ಕೃಷಿಕರ ಹೊಟ್ಟೆಗೆ ಹೊಡೆಯದೆ, ಸರ್ಕಾರ ಅನ್ನದಾತನಿಗೂ ನ್ಯಾಯಯುತ ಬೆಲೆ ಖಾತ್ರಿಪಡಿಸುವ ಸಮತೋಲಿತ ನೀತಿ ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/onion-price-rise-government-kanda-express-buffer-stock-onion-farmers-crisis-apmc-market-india-agriculture-news-bmk/articleshow-zmn7orp"/>
        </item>
    </channel>
</rss>
