<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 05 Aug 2026 13:07:51 +0530</lastBuildDate>
        <atom:link href="https://kannada.asianetnews.com/rss/money" rel="self" type="application/rss+xml"/>
        <item>
            <title><![CDATA['ಕಾಯಿ ಕಾಯಿ ನುಗ್ಗೆಕಾಯಿ' ತಂದಿಟ್ಟ ಕೋಟಿ ಭಾಗ್ಯ! ಈ ರೈತನ ಸಕ್ಸಸ್ ಸ್ಟೋರಿ ಕೇಳಿದ್ರೆ ಶಾಕ್ ಆಗ್ತೀರಾ!]]></title>
            <link>https://kannada.asianetnews.com/viral/farmer-switched-from-pomegranates-to-drumsticks-now-earns-1-15-crore-annually/articleshow-03rbinf</link>
            <guid isPermaLink="true">https://kannada.asianetnews.com/viral/farmer-switched-from-pomegranates-to-drumsticks-now-earns-1-15-crore-annually/articleshow-03rbinf</guid>
            <pubDate>Tue, 04 Aug 2026 13:45:45 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ರೈತ ಸಾಗರ್ ಯೆಲ್ಪಲೆ ದಾಳಿಂಬೆ ಕೃಷಿಯ ಹೆಚ್ಚಿದ ವೆಚ್ಚ ಮತ್ತು ಹವಾಮಾನ ಸವಾಲುಗಳಿಂದ ನುಗ್ಗೆಕಾಯಿ ಕೃಷಿಗೆ ತಿರುಗಿದರು. ಒಂದು ಎಕರೆಯ ಪ್ರಯೋಗದಿಂದ ಆರಂಭಿಸಿ ಇಂದು 18 ಎಕರೆಯಲ್ಲಿ 12 ಸಾವಿರ ಗಿಡಗಳನ್ನು ಬೆಳೆಸಿ ವರ್ಷಕ್ಕೆ 180&ndash;200 ಟನ್ ನುಗ್ಗೆಕಾಯಿ ಉತ್ಪಾದಿಸುತ್ತಿದ್ದಾರೆ. ನುಗ್ಗೆಕಾಯಿ ಹಾಗೂ ಬೀಜ ಮಾರಾಟದಿಂದ ವಾರ್ಷಿಕ ₹1.15 ಕೋಟಿ ವಹಿವಾಟು ನಡೆಸಿ ರೈತರಿಗೆ ಹೊಸ ಮಾದರಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz5q4n9gy2dyfnq3e3bza5cb,imgname-a-farmer-switched-from-pomegranates-to-drumsticks--now-earns--1.15-crore-annually-1785824695600.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾಳಿಂಬೆಯಿಂದ ನುಗ್ಗೆಕಾಯಿವರೆಗೆ... ರೈತನ ಯಶಸ್ಸಿನ ಹೊಸ ಅಧ್ಯಾಯ!&lt;/strong&gt;&lt;/p&gt;&lt;p&gt;&lt;strong&gt;ಮಹಾರಾಷ್ಟ್ರ:&lt;/strong&gt; ಭಾರತೀಯ ಕೃಷಿ ಕ್ಷೇತ್ರವು ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆಯ ಅನಿಶ್ಚಿತತೆಯಿಂದ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲ ರೈತರು ಹೊಸ ಬೆಳೆಗಳತ್ತ ಮುಖ ಮಾಡಿ ಯಶಸ್ಸಿನ ಹೊಸ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ರೈತ ಸಾಗರ್ ಯೆಲ್ಪಲೆ ಅವರ ಕಥೆಯೂ ಇದೇ ಸಾಲಿಗೆ ಸೇರುತ್ತದೆ. ದಾಳಿಂಬೆ ಕೃಷಿಯಲ್ಲಿ ನಷ್ಟ ಅನುಭವಿಸಿದ ಅವರು, ನುಗ್ಗೆಕಾಯಿ (ಡ್ರಮ್&zwnj;ಸ್ಟಿಕ್) ಬೆಳೆಗೆ ತಿರುಗಿ ಇಂದು ವರ್ಷಕ್ಕೆ ಸುಮಾರು ₹1.15 ಕೋಟಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದ್ದಾರೆ.&lt;/p&gt;&lt;p&gt;&lt;strong&gt;ದಾಳಿಂಬೆ ಕೃಷಿಯಿಂದ ನಿರಾಸೆ!&lt;/strong&gt;&lt;/p&gt;&lt;p&gt;2012ರಲ್ಲಿ ಶಿಕ್ಷಣ ಪೂರ್ಣಗೊಳಿಸಿದ ಸಾಗರ್, ತಂದೆಯ 10 ಎಕರೆ ಜಮೀನಿನಲ್ಲಿ ದಾಳಿಂಬೆ ಕೃಷಿ ಮುಂದುವರಿಸಿದರು. ಆದರೆ ಹವಾಮಾನ ವೈಪರೀತ್ಯ, ರೋಗಬಾಧೆ ಮತ್ತು ರಾಸಾಯನಿಕ ವೆಚ್ಚ ಹೆಚ್ಚಳದಿಂದ ಲಾಭ ಕಡಿಮೆಯಾಗತೊಡಗಿತು. ಎಕರೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದ್ದರೂ, ಆದಾಯಕ್ಕಾಗಿ ಆರು ತಿಂಗಳು ಕಾಯಬೇಕಾಗುತ್ತಿತ್ತು. ಇದರಿಂದ ಕಡಿಮೆ ವೆಚ್ಚದ ಹಾಗೂ ವೇಗವಾಗಿ ಆದಾಯ ನೀಡುವ ಪರ್ಯಾಯ ಬೆಳೆ ಹುಡುಕಲು ಆರಂಭಿಸಿದರು.&lt;/p&gt;&lt;p&gt;&lt;strong&gt;ಒಂದು ಎಕರೆಯ ಪ್ರಯೋಗವೇ ಯಶಸ್ಸಿನ ತಿರುವು!&lt;/strong&gt;&lt;/p&gt;&lt;p&gt;2017ರಲ್ಲಿ ಸ್ನೇಹಿತನ ಸಲಹೆಯ ಮೇರೆಗೆ ಕೇವಲ ಒಂದು ಎಕರೆಯಲ್ಲಿ ನುಗ್ಗೆಕಾಯಿ ಬೆಳೆದರು. ಸುಮಾರು ₹4,000 ಮೌಲ್ಯದ ಬೀಜ ಖರೀದಿಸಿ ಜೈವಿಕ ಗೊಬ್ಬರದ ನೆರವಿನಿಂದ ಕೃಷಿ ಆರಂಭಿಸಿದರು. ಐದು ತಿಂಗಳಲ್ಲೇ ಸುಮಾರು 10 ಟನ್ ಇಳುವರಿ ದೊರೆತು ಮೂರು ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸಿದರು. ಈ ಯಶಸ್ಸು ಅವರಿಗೆ ಸಂಪೂರ್ಣ ಜಮೀನನ್ನು ಕ್ರಮೇಣ ನುಗ್ಗೆಕಾಯಿ ಬೆಳೆಗೆ ಪರಿವರ್ತಿಸಲು ಆತ್ಮವಿಶ್ವಾಸ ನೀಡಿತು.&lt;/p&gt;&lt;p&gt;&lt;strong&gt;18 ಎಕರೆಯಲ್ಲಿ 12 ಸಾವಿರ ಗಿಡಗಳು!&lt;/strong&gt;&lt;/p&gt;&lt;p&gt;ಇಂದು ಸಾಗರ್ ಅವರ 18 ಎಕರೆ ಜಮೀನಿನಲ್ಲಿ ಸುಮಾರು 12,000 ನುಗ್ಗೆಕಾಯಿ ಗಿಡಗಳಿವೆ. ವರ್ಷಕ್ಕೆ 180&ndash;200 ಟನ್ ನುಗ್ಗೆಕಾಯಿ ಉತ್ಪಾದನೆಯಾಗುತ್ತದೆ. ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಜೈವಿಕ ಗೊಬ್ಬರ, ಸಮರ್ಪಕ ಸಮರುವಿಕೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ತಮ್ಮ ಜಮೀನಿನಲ್ಲೇ ಜೈವಿಕ ಅನಿಲ ಘಟಕ ಸ್ಥಾಪಿಸಿ, ಅದರಿಂದ ಸಿಗುವ ಸ್ಲರಿಯನ್ನು ಗೊಬ್ಬರವಾಗಿ ಬಳಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ನುಗ್ಗೆಕಾಯಿ ಮಾತ್ರವಲ್ಲ, ಬೀಜ ಮಾರಾಟದಲ್ಲೂ ಲಾಭ!&lt;/strong&gt;&lt;/p&gt;&lt;p&gt;ತಾಜಾ ನುಗ್ಗೆಕಾಯಿ ಮಾರಾಟದ ಜೊತೆಗೆ ಗುಣಮಟ್ಟದ ಬೀಜಗಳಿಗೂ ಬೇಡಿಕೆ ಹೆಚ್ಚಾಗಿದೆ. ರೈತರಿಗೆ ಬೀಜಗಳನ್ನು ಮಾರಾಟ ಮಾಡುವ ಮೂಲಕ ವರ್ಷಕ್ಕೆ ಸುಮಾರು ₹15 ಲಕ್ಷ ಹೆಚ್ಚುವರಿ ಆದಾಯ ಬರುತ್ತಿದೆ. ಅವರ ಹೆಚ್ಚಿನ ಉತ್ಪನ್ನ ಹೈದರಾಬಾದ್ ಮಾರುಕಟ್ಟೆಗೆ ಸಾಗುತ್ತಿದ್ದು, ಹಿಂದೆ ದುಬೈಗೂ ರಫ್ತು ಮಾಡುತ್ತಿದ್ದರು. ಋತುವಿನ ಪ್ರಕಾರ ಬೆಲೆ ಬದಲಾಗಿದರೂ, ವಾರ್ಷಿಕ ಸರಾಸರಿ ಆದಾಯ ಲಾಭದಾಯಕವಾಗಿಯೇ ಉಳಿದಿದೆ.&lt;/p&gt;&lt;p&gt;&lt;strong&gt;ರೈತರಿಗೆ ಸಾಗರ್ ನೀಡುವ ಸಲಹೆ..!&lt;/strong&gt;&lt;/p&gt;&lt;p&gt;ಯಾವುದೇ ಹೊಸ ಬೆಳೆಗೆ ಸಂಪೂರ್ಣವಾಗಿ ತಿರುಗುವ ಮೊದಲು ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಬೇಕು ಎಂದು ಸಾಗರ್ ಸಲಹೆ ನೀಡುತ್ತಾರೆ. ಬೆಳೆ ಬೆಳೆಯುವ ವಿಧಾನ, ಮಾರುಕಟ್ಟೆ ಬೇಡಿಕೆ ಹಾಗೂ ಖರೀದಿದಾರರ ಜಾಲವನ್ನು ಮೊದಲೇ ಸಿದ್ಧಪಡಿಸಿಕೊಂಡರೆ ಅಪಾಯ ಕಡಿಮೆಯಾಗುತ್ತದೆ. ಕೃಷಿಯಲ್ಲಿ ಯಶಸ್ಸಿಗೆ ಹೊಸತನ, ತಾಳ್ಮೆ ಮತ್ತು ಮಾರುಕಟ್ಟೆ ಅರಿವು ಅತ್ಯಗತ್ಯ ಎಂಬುದನ್ನು ಅವರ ಸಾಧನೆ ತೋರಿಸುತ್ತದೆ.&lt;/p&gt;]]></content:encoded>
            <category>money</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/farmer-switched-from-pomegranates-to-drumsticks-now-earns-1-15-crore-annually/articleshow-03rbinf"/>
        </item>
        <item>
            <title><![CDATA[RBI Repo Rate: ನಿಮ್ಮ ಮನೆ, ಕಾರಿನ ಇಎಂಐ ಹೆಚ್ಚಾಯ್ತಾ? ಆರ್ ಬಿಐ ನಿರ್ಧಾರ ಏನು ?]]></title>
            <link>https://kannada.asianetnews.com/business/rbi-repo-rate-unchanged-impact-home-loan-auto-loan-emi/articleshow-4h5am47</link>
            <guid isPermaLink="true">https://kannada.asianetnews.com/business/rbi-repo-rate-unchanged-impact-home-loan-auto-loan-emi/articleshow-4h5am47</guid>
            <pubDate>Wed, 05 Aug 2026 11:52:32 +0530</pubDate>
            <description><![CDATA[&lt;p&gt;Repo Rate : ಆರ್ ಬಿಐ ರೆಪೋ ದರಕ್ಕೆ ಸಂಬಂಧಿಸಿದಂತೆ ಸಭೆ ತೀರ್ಪನ್ನು ಪ್ರಕಟಿಸಿದೆ. ಈ ಬಾರಿ ರೆಪೋ ದರದಲ್ಲಿ ಯಾವ ಬದಲಾವಣೆ ಆಗಿದೆ? ನಿಮ್ಮ ಇಎಂಐಗೆ ಹೊಡೆತ ಬೀಳುತ್ತಾ ಎನ್ನುವ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz89an3txhqamc86maf9q8w3,imgname-repo-rate-1785910875258.jpg" type="image/jpeg" height="390" width="690"/>
            <content:encoded><![CDATA[&lt;p&gt;ಗೃಹ ಸಾಲ ಅಥವಾ ವಾಹನ ಸಾಲ ತೆಗೆದುಕೊಂಡಿದ್ರೆ ನಿಮಗೊಂದು ಮಹತ್ವದ ಸುದ್ದಿ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿ ಸಮಿತಿಯ (RBI MPC) ಫಲಿತಾಂಶಗಳನ್ನು ಪ್ರಕಟಿಸಿದೆ. ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೊ ದರದ ಬಗ್ಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;ರೆಪೋ ದರದಲ್ಲಿ ಬದಲಾವಣೆ ?&lt;/h2&gt;&lt;p&gt;ಈ ಬಾರಿಯೂ ರೆಪೋ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ , ಶೇಕಡಾ 5.25ರ ದರವನ್ನೇ ಉಳಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಹಾಗಾಗಿ ನಿಮ್ ಗೃಹ ಹಾಗೂ ವಾಹನ ಸಾಲದ ಮೇಲಿನ ಇಎಂಐನಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಹಿಂದಿನ ಇಎಂಐ ಮುಂದುವರೆಯಲಿದೆ.&lt;/p&gt;&lt;p&gt;RBI MPC ಫಲಿತಾಂಶಗಳನ್ನು ಪ್ರಕಟಿಸಿದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ, ತಟಸ್ಥ ನಿಲುವನ್ನು ಕಾಯ್ದುಕೊಳ್ಳಲು ಮತ್ತು ದರವನ್ನು ಶೇಕಡಾ 5.25 ರಲ್ಲಿ ಸ್ಥಿರವಾಗಿಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಇದಲ್ಲದೆ, ಸ್ಟ್ಯಾಂಡಿಂಗ್ ಠೇವಣಿ ಸೌಲಭ್ಯ (SDF) ದರವನ್ನು ಶೇಕಡಾ 5 ರಲ್ಲಿ ಇರಿಸಲಾಗಿದೆ. ಆದ್ರೆ ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ (MSF) ದರವನ್ನು ಶೇಕಡಾ 5.50 ರಲ್ಲಿ ಸ್ಥಿರವಾಗಿ ಇರಿಸಲಾಗಿದೆ.&lt;/p&gt;&lt;p&gt;ಆರ್ ಬಿಐ ಗವರ್ನರ್ ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಉಲ್ಲೇಖಿಸಿದ್ದಾರೆ. ಪಶ್ಚಿಮ ಏಷ್ಯಾದಿಂದಾಗಿ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಇದೆ. ಕಚ್ಚಾ ತೈಲ ಬೆಲೆಗಳಲ್ಲಿ ನಿರಂತರ ಏರಿಳಿತವಿದೆ ಎಂದು ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;ಈ ವರ್ಷ ರೆಪೊ ದರದಲ್ಲಿ ಯಾವ ಬದಲಾವಣೆ ?&lt;/h3&gt;&lt;p&gt;ಈ ವರ್ಷ ಈವರೆಗೂ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜೂನ್ನಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕ್ (RBI) MPC ಸಭೆಯು ರೆಪೊ ದರವನ್ನು ಸ್ಥಿರವಾಗಿ ಕಾಯ್ದುಕೊಂಡಿದೆ. ಪ್ರಸ್ತುತ ಅದು ಶೇಕಡಾ 5.25 ರಲ್ಲಿಯೇ ಉಳಿದಿದೆ. ಇದಕ್ಕೂ ಮೊದಲು, 2025 ರಲ್ಲಿ, RBI ಹಲವಾರು ಬಾರಿ ರೆಪೊ ದರವನ್ನು ಕಡಿತಗೊಳಿಸುವ ಮೂಲಕ ಸಾಲಗಾರರಿಗೆ ಗಿಫ್ಟ್ ನೀಡಿತ್ತು. ರೆಪೊ ದರವನ್ನು ಒಟ್ಟು 125 ಅಂಕಗಳಷ್ಟು ಕಡಿಮೆ ಮಾಡಿತ್ತು.&lt;/p&gt;&lt;p&gt;ಜಾಗತೀಕ ಉದ್ವಿಗ್ನತೆ ಮಧ್ಯೆಯೂ ಭಾರತೀಯ ಆರ್ಥಿಕತೆಯು ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಗವರ್ನರ್ ಹೇಳಿದ್ದಾರೆ. FY27 ಗಾಗಿ GDP ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.6 ರಿಂದ ಶೇಕಡಾ 6.7 ಕ್ಕೆ ಹೆಚ್ಚಿಸಲಾಗಿದೆ.&lt;/p&gt;&lt;p&gt;&lt;strong&gt;ರೆಪೋ ದರ ಎಂದ್ರೇನು?&lt;/strong&gt;&lt;/p&gt;&lt;p&gt;ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳಿಗೆ ನೀಡುವ ಸಾಲದ ದರವೇ ರೆಪೊ ದರ. ಆರ್ಥಿಕತೆಯಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಸಹ ಇದನ್ನು ಬಳಸಲಾಗುತ್ತದೆ. ರೆಪೊ ದರ ಹೆಚ್ಚಾದಾಗ, ಸಾಲ ಪಡೆಯುವುದು ಬ್ಯಾಂಕುಗಳಿಗೆ ಹೆಚ್ಚು ದುಬಾರಿಯಾಗುತ್ತದೆ. ಇದು ಸಾಮಾನ್ಯ ಜನರ ಮನೆ ಮತ್ತು ವಾಹನ ಸಾಲದ ಇಎಂಐ ಹೆಚ್ಚಳಕ್ಕೆ ಕಾರಣವಾಗುತ್ತದೆ.&lt;/p&gt;]]></content:encoded>
            <category>money</category>
            <dc:creator>Roopa Hegde</dc:creator>
            <atom:link href="https://kannada.asianetnews.com/business/rbi-repo-rate-unchanged-impact-home-loan-auto-loan-emi/articleshow-4h5am47"/>
        </item>
        <item>
            <title><![CDATA[ಸಿಕ್ಕಾಪಟ್ಟೆ ಹಣ ಕಳೆದುಕೊಂಡ ಸ್ಟಾರ್ ನಟಿ, OTP ಹೇಳಿಲ್ಲ, ಲಿಂಕ್ ಕ್ಲಿಕ್ ಮಾಡಿಲ್ಲ.. ಆದ್ರೂ ಹೀಗೆ ಆಗಿದ್ದು ಹೇಗೆ?!]]></title>
            <link>https://kannada.asianetnews.com/news-entertainment/cyber-fraudsters-loot-lakhs-of-rupees-from-bollywood-actress-kirti-kulhari-bank-account/articleshow-58tgawp</link>
            <guid isPermaLink="true">https://kannada.asianetnews.com/news-entertainment/cyber-fraudsters-loot-lakhs-of-rupees-from-bollywood-actress-kirti-kulhari-bank-account/articleshow-58tgawp</guid>
            <pubDate>Thu, 30 Jul 2026 20:51:22 +0530</pubDate>
            <description><![CDATA[&lt;p&gt;ಈ ಘಟನೆಯಿಂದ ನಾವೆಲ್ಲರೂ ಕಲಿಯಬೇಕಾದ ದೊಡ್ಡ ಪಾಠವಿದೆ. ಫ್ರೀ ಸಿಗುತ್ತದೆ ಎಂದು ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ ಅಥವಾ ಕೆಫೆಗಳಲ್ಲಿ 'ಪಬ್ಲಿಕ್ ವೈ-ಫೈ' (Public Wi-Fi) ಬಳಸಿ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಕ್ರೆಡಿಟ್ ಕಾರ್ಡ್&zwnj;ನಲ್ಲಿ ಇಂಟರ್&zwnj;ನ್ಯಾಷನಲ್ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಆಫ್ ಮಾಡಿ ಇಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyssdkpc2tdesyx1v004mgxx,imgname-kirti-kulhari-1785424432844.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;OTP ನೀಡಿಲ್ಲ, ಲಿಂಕ್ ಕ್ಲಿಕ್ ಮಾಡಿಲ್ಲ; ಆದ್ರೂ ನಟಿಯ ಅಕೌಂಟ್&zwnj;ನಿಂದ ಲಕ್ಷ ಲಕ್ಷ ಮಾಯ! ಸೈಬರ್ ಕಳ್ಳರ ಈ 'ಖತರ್ನಾಕ್' ಪ್ಲಾನ್ ಬೆಚ್ಚಿಬೀಳಿಸುವಂತಿದೆ!&lt;/strong&gt;&lt;/p&gt;&lt;p&gt;ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಾವೆಲ್ಲರೂ ನಮ್ಮ ಹಣ ಸೇಫ್ ಆಗಿದೆ ಅಂದುಕೊಳ್ಳುತ್ತೇವೆ. ಆದರೆ, ಹ್ಯಾಕರ್ಸ್&zwnj;ಗಳು ಸಾಮಾನ್ಯ ಜನರನ್ನು ಬಿಡಿ, ಸ್ವತಃ ಸೆಲೆಬ್ರಿಟಿಗಳನ್ನೇ ಬೆನ್ನತ್ತಿ ಶಾಕ್ ನೀಡುತ್ತಿದ್ದಾರೆ. 'ಪಿಂಕ್' (Pink) ಮತ್ತು 'ಉರಿ' (Uri) ಸಿನಿಮಾಗಳ ಮೂಲಕ ಕಮಾಲ್ ಮಾಡಿದ್ದ ಖ್ಯಾತ ಬಾಲಿವುಡ್ ನಟಿ ಕೀರ್ತಿ ಕುಲ್ಹಾರಿ (Kirti Kulhari) ಅವರ ಬ್ಯಾಂಕ್ ಅಕೌಂಟ್&zwnj;ಗೆ ಕನ್ನ ಹಾಕಿರುವ ಖತರ್ನಾಕ್ ಕಳ್ಳರು, ಯಾವ ಸಿನಿಮಾ ಸೀನ್&zwnj;ಗೂ ಕಮ್ಮಿ ಇಲ್ಲದಂತೆ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾರೆ!&lt;/p&gt;&lt;p&gt;&lt;img&gt;&lt;/p&gt;&lt;h2&gt;ಥಿಯೇಟರ್&zwnj;ನಲ್ಲಿ ಸಿನಿಮಾ ನೋಡುತ್ತಿದ್ದ ನಟಿಗೆ ಅಸಲಿ ಸಿನಿಮಾ ಶುರುವಾಗಿದ್ದು ಅಲ್ಲಿ!&lt;/h2&gt;&lt;p&gt;ಕಳೆದ ಜುಲೈ 24ರ ರಾತ್ರಿ, ಮುಂಬೈನ ಅಂಧೇರಿಯಲ್ಲಿರುವ ಮಲ್ಟಿಪ್ಲೆಕ್ಸ್&zwnj;ವೊಂದರಲ್ಲಿ ಕೀರ್ತಿ ಕುಲ್ಹಾರಿ ಅವರು ಆರಾಮವಾಗಿ ಸಿನಿಮಾ ವೀಕ್ಷಿಸುತ್ತಿದ್ದರು. ಆದರೆ, ತೆರೆಯ ಮೇಲೆ ಸಿನಿಮಾ ಓಡುತ್ತಿದ್ದರೆ, ಅವರ ಮೊಬೈಲ್&zwnj;ಗೆ ಬ್ಯಾಂಕ್&zwnj;ನಿಂದ ಲಟಾ ಲಟಾ ಅಂತ ಮೆಸೇಜ್&zwnj;ಗಳು ಬರತೊಡಗಿದವು. ಅವರು ಯಾವುದೇ ಶಾಪಿಂಗ್ ಮಾಡಿರಲಿಲ್ಲ, ಯಾರಿಗೂ ಹಣ ಕಳುಹಿಸಿರಲಿಲ್ಲ. ಆದರೆ, ಮೆಕ್ಸಿಕೋದ 'ಏರೋಮೆಕ್ಸಿಕೊ' ಹೆಸರಿನಲ್ಲಿ ವಿದೇಶಿ ವಿಮಾನಯಾನ ಸಂಸ್ಥೆಗೆ ಲಕ್ಷಾಂತರ ರೂಪಾಯಿ ಪಾವತಿಯಾಗುತ್ತಿದೆ ಎಂಬ ನೋಟಿಫಿಕೇಶನ್ ನೋಡಿ ನಟಿ ಕಂಗಾಲಾದರು.&lt;/p&gt;&lt;p&gt;ಅರೆಕ್ಷಣದಲ್ಲಿ ಮಾಯವಾಯಿತು 2.43 ಲಕ್ಷ ರೂಪಾಯಿ!&lt;/p&gt;&lt;p&gt;ಕೇವಲ ಕೆಲವೇ ನಿಮಿಷಗಳಲ್ಲಿ ವಂಚಕರು ನಟಿಯ ಕ್ರೆಡಿಟ್ ಕಾರ್ಡ್&zwnj;ನಿಂದ ಬರೋಬ್ಬರಿ 2.11 ಲಕ್ಷ ರೂಪಾಯಿಯನ್ನು ಎಗರಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಹ್ಯಾಕರ್ಸ್ ಮತ್ತೆ ನಾಲ್ಕು ಬಾರಿ ಹಣ ಕದಿಯಲು ಯತ್ನಿಸಿದರು. ತಕ್ಷಣವೇ ಬ್ಯಾಂಕ್&zwnj;ನಿಂದ ಕರೆ ಬಂದಾಗ ಎಚ್ಚೆತ್ತ ಕೀರ್ತಿ, ಅಕೌಂಟ್&zwnj;ನಲ್ಲಿ ಏನೋ ದೊಡ್ಡ ವಂಚನೆ ನಡೆಯುತ್ತಿದೆ ಎಂದು ಅರಿತು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿದರು. ಅಷ್ಟರಲ್ಲಾಗಲೇ 2.43 ಲಕ್ಷ ರೂಪಾಯಿ ಅವರ ಕೈಬಿಟ್ಟು ಹೋಗಿತ್ತು. ಕೂಡಲೇ ಅವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೌಡಾಯಿಸಿ ಸೈಬರ್ ಕ್ರೈಮ್ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಇಲ್ಲಿ ಅಸಲಿ ಪ್ರಶ್ನೆ ಇರೋದೇ ಇಲ್ಲಿ; OTP ನೀಡದಿದ್ದರೂ ಹಣ ಹೋಗಿದ್ದು ಹೇಗೆ?&lt;/h3&gt;&lt;p&gt;ಸಾಮಾನ್ಯವಾಗಿ ನಾವು ಯಾರೊಂದಿಗೂ OTP (One Time Password) ಹಂಚಿಕೊಳ್ಳದಿದ್ದರೆ ಹಣ ಸುರಕ್ಷಿತವಾಗಿರುತ್ತದೆ ಎಂದು ನಂಬುತ್ತೇವೆ. ಆದರೆ ಕೀರ್ತಿ ಕುಲ್ಹಾರಿ ಅವರ ಪ್ರಕರಣ ಸೈಬರ್ ತಜ್ಞರನ್ನೂ ಚಿಂತೆಗೀಡು ಮಾಡಿದೆ. ನಟಿ ಪೊಲೀಸರಿಗೆ ನೀಡಿದ ಹೇಳಿಕೆಯಂತೆ, ಅವರು ಯಾರೊಂದಿಗೂ OTP ಹೇಳಿಲ್ಲ, ಕಾರ್ಡ್ ಪಿನ್ ಹಂಚಿಕೊಂಡಿಲ್ಲ ಅಥವಾ ಯಾವುದೇ ಅನುಮಾನಾಸ್ಪದ ಲಿಂಕ್ ಮೇಲೆ ಕ್ಲಿಕ್ ಮಾಡಿಲ್ಲ.&lt;/p&gt;&lt;p&gt;ಸೈಬರ್ ಪೊಲೀಸರ ಪ್ರಕಾರ, ಇದು 'ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್' ಲೂಪ್&zwnj;ಹೋಲ್! ಹೌದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣ ಪಾವತಿ ಮಾಡುವಾಗ ಭಾರತದಂತೆ OTP ಕೇಳುವುದಿಲ್ಲ. ಕೇವಲ ಕಾರ್ಡ್ ನಂಬರ್ ಮತ್ತು CVV ಇದ್ದರೆ ಸಾಕು, ಜಗತ್ತಿನ ಯಾವುದೇ ಮೂಲೆಯಿಂದ ಹಣ ವರ್ಗಾಯಿಸಬಹುದು. ವಂಚಕರು 'ಡಾರ್ಕ್ ವೆಬ್' ಮೂಲಕ ನಟಿಯ ಕಾರ್ಡ್ ವಿವರಗಳನ್ನು ಖರೀದಿಸಿರಬಹುದು ಅಥವಾ ಅವರ ಮೊಬೈಲ್&zwnj;ಗೆ ಗುಟ್ಟಾಗಿ 'ಸ್ಪೈವೇರ್' ಕಳುಹಿಸಿ ಮಾಹಿತಿ ಕದ್ದಿರಬಹುದು ಎಂದು ಶಂಕಿಸಲಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಸೈಬರ್ ತಜ್ಞರ ಎಚ್ಚರಿಕೆ: ನೀವು ಸೇಫ್ ಆಗಿರಬೇಕೆ?&lt;/p&gt;&lt;p&gt;ಈ ಘಟನೆಯಿಂದ ನಾವೆಲ್ಲರೂ ಕಲಿಯಬೇಕಾದ ದೊಡ್ಡ ಪಾಠವಿದೆ. ಫ್ರೀ ಸಿಗುತ್ತದೆ ಎಂದು ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ ಅಥವಾ ಕೆಫೆಗಳಲ್ಲಿ 'ಪಬ್ಲಿಕ್ ವೈ-ಫೈ' (Public Wi-Fi) ಬಳಸಿ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಕ್ರೆಡಿಟ್ ಕಾರ್ಡ್&zwnj;ನಲ್ಲಿ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಆಫ್ ಮಾಡಿ ಇಡಿ ಅಥವಾ ಕಡಿಮೆ ಮಾಡಿಡಿ. ಕೆವೈಸಿ ಅಪ್&zwnj;ಡೇಟ್ ಅಥವಾ ಉಚಿತ ಉಡುಗೊರೆಯ ಹೆಸರಿನಲ್ಲಿ ಬರುವ ಲಿಂಕ್&zwnj;ಗಳಿಂದ ದೂರವಿರಿ.&lt;/p&gt;&lt;p&gt;ಒಟ್ಟಿನಲ್ಲಿ, ಕೀರ್ತಿ ಕುಲ್ಹಾರಿ ಸಮಯಪ್ರಜ್ಞೆಯಿಂದ ದೊಡ್ಡ ಮಟ್ಟದ ಹಣ ಉಳಿದಿದ್ದರೂ, ಸೈಬರ್ ಕಳ್ಳರ ಈ ಹೊಸ ಅವತಾರ ಮಾತ್ರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ!&lt;/p&gt;]]></content:encoded>
            <category>money</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/cyber-fraudsters-loot-lakhs-of-rupees-from-bollywood-actress-kirti-kulhari-bank-account/articleshow-58tgawp"/>
        </item>
        <item>
            <title><![CDATA[ಮುಂದಿನ ಐದು ವರ್ಷ ರೈತರಿಗೆ ನಿಶ್ಚಿಂತೆ, ಅನ್ನದಾತರಿಗೆ ಬಿಗ್‌ಗಿಫ್ಟ್‌ ಘೋಷಣೆ ಮಾಡಿದ ಪ್ರಧಾನಿ ಮೋದಿ!]]></title>
            <link>https://kannada.asianetnews.com/gallery/business/pm-kisan-scheme-extended-till-2031-modi-govt-allocates-315-lakh-crore-san-9xw702i</link>
            <guid isPermaLink="true">https://kannada.asianetnews.com/gallery/business/pm-kisan-scheme-extended-till-2031-modi-govt-allocates-315-lakh-crore-san-9xw702i</guid>
            <pubDate>Fri, 31 Jul 2026 20:35:35 +0530</pubDate>
            <description><![CDATA[&lt;p&gt;ಕೇಂದ್ರದ ನರೇಂದ್ರ ಮೋದಿ ಸರ್ಕಾರವು 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-KISAN) ಯೋಜನೆಯನ್ನು 2030-31ರವರೆಗೆ ವಿಸ್ತರಿಸಿ, ಅದಕ್ಕಾಗಿ 3.15 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಮೀಸಲಿಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkg2yp9msvaqrkjk3j7jfwdf,imgname-asianet-news-bangla-images-size---2026-03-12t092242.800-1773287725364.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರದ ನರೇಂದ್ರ ಮೋದಿ ಸರ್ಕಾರವು 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-KISAN) ಯೋಜನೆಯನ್ನು 2030-31ರವರೆಗೆ ವಿಸ್ತರಿಸಿ, ಅದಕ್ಕಾಗಿ 3.15 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಮೀಸಲಿಟ್ಟಿದೆ.&lt;/p&gt;&lt;img&gt;&lt;p&gt;ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ಕೋಟ್ಯಂತರ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ದೇಶದ ಕೃಷಿಕರ ಬೃಹತ್ ಆಸರೆಯಾಗಿರುವ 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-KISAN) ಯೋಜನೆಯನ್ನು ಮುಂದಿನ 5 ವರ್ಷಗಳ ಕಾಲ, ಅಂದರೆ 2030-31ರವರೆಗೆ ವಿಸ್ತರಿಸಿ ಅತಿ ದೊಡ್ಡ ಘೋಷಣೆ ಮಾಡಿದೆ.&lt;/p&gt;&lt;img&gt;&lt;p&gt;ಕೇಂದ್ರ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಮುಂದಿನ ಐದು ವರ್ಷಗಳ ಕಾಲ ಅಂದರೆ 2030-31ರ ಹಣಕಾಸು ವರ್ಷದವರೆಗೆ ಮುಂದುವರಿಸಲು ಅನುಮೋದನೆ ನೀಡಲಾಗಿದೆ. ಈ ಬೃಹತ್ ಯೋಜನೆಗಾಗಿ ಕೇಂದ್ರ ಸರ್ಕಾರವು 3.15 ಲಕ್ಷ ಕೋಟಿ ರೂಪಾಯಿಗಳ ಭಾರಿ ನಿಧಿಯನ್ನು ಕಾಯ್ದಿರಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸಚಿವ ಸಂಪುಟದ ಈ ನಿರ್ಧಾರಗಳನ್ನು ಅಧಿಕೃತವಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇ ವೇಳೆ 'ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ'ಗೂ (PM-SSY) ಮುಂದುವರಿಕೆ ಮಂಜೂರಾತಿ ನೀಡಲಾಗಿದೆ.&lt;/p&gt;&lt;img&gt;&lt;p&gt;ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿರುವ ದೇಶದ ರೈತರು ಪ್ರಸ್ತುತ 24ನೇ ಕಂತಿನ (24th Installment) ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಯೋಜನೆಯನ್ನು ಮುಂದಿನ 5 ವರ್ಷಗಳಿಗೆ ವಿಸ್ತರಿಸಿರುವುದು ರೈತರ ದೊಡ್ಡ ಚಿಂತೆಯನ್ನು ದೂರ ಮಾಡಿದೆ. ಮೂಲಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣವು ಬರುವ ಅಕ್ಟೋಬರ್ ತಿಂಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ತಲುಪುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಯೋಜನೆ ಪ್ರಾರಂಭವಾದಾಗಿನಿಂದ ಇದುವರೆಗೆ ಒಟ್ಟು 23 ಕಂತುಗಳ ಮೂಲಕ ಬರೋಬ್ಬರಿ 4.47 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ಪ್ರಸ್ತುತ 23ನೇ ಕಂತಿನ ಲಾಭವನ್ನು ದೇಶದ 9.49 ಕೋಟಿಗೂ ಹೆಚ್ಚು ರೈತರು ಪಡೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುತ್ತಿರುವವರಲ್ಲಿ ಮಹಿಳಾ ರೈತರ ಸಂಖ್ಯೆಯೂ ಗಮನಾರ್ಹವಾಗಿದೆ. ಪ್ರಸ್ತುತ ಯೋಜನೆಯ ಪ್ರತಿ ನಾಲ್ಕೂ ಫಲಾನುಭವಿಗಳ ಪೈಕಿ ಒಬ್ಬರು ಮಹಿಳಾ ರೈತರಾಗಿದ್ದು, ದೇಶದ ಗ್ರಾಮೀಣ ಭಾಗದ ಮಹಿಳಾ ಸಬಲೀಕರಣಕ್ಕೂ ಈ ಯೋಜನೆ ದೊಡ್ಡ ಮಟ್ಟದಲ್ಲಿ ನೆರವಾಗಿದೆ.&lt;/p&gt;&lt;img&gt;&lt;p&gt;ಕೇಂದ್ರ ಸರ್ಕಾರವು ಯೋಜನೆಗೆ 2030-31ರವರೆಗೆ ವಿಸ್ತರಣೆ ನೀಡಿ ₹3.15 ಲಕ್ಷ ಕೋಟಿ ಅನುದಾನ ಕಾಯ್ದಿರಿಸಿರುವುದರಿಂದ ಮುಂದಿನ ಐದು ವರ್ಷಗಳ ಕಾಲ ರೈತರ ಖಾತೆಗೆ ನಿಗದಿತ ಸಮಯದಲ್ಲಿ ನೇರವಾಗಿ ಸಹಾಯಧನದ ಹಣ ತಲುಪಲಿದೆ. ಕೇಂದ್ರದ ಈ ದೀರ್ಘಾವಧಿ ಆರ್ಥಿಕ ಬೆಂಬಲವು ಕಷ್ಟದಲ್ಲಿದ್ದ ರೈತ ಸಮುದಾಯಕ್ಕೆ ದೊಡ್ಡ ಆಸರೆಯಾಗಿ ಪರಿಣಮಿಸಿದೆ.&lt;/p&gt;]]></content:encoded>
            <category>money</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/pm-kisan-scheme-extended-till-2031-modi-govt-allocates-315-lakh-crore-san-9xw702i"/>
        </item>
        <item>
            <title><![CDATA[ವರ್ಷಕ್ಕೆ ₹1 ಕೋಟಿ ಸಂಬಳ, 3 ಮನೆಗಳಿದ್ದರೂ ₹15,000 ಟ್ಯಾಕ್ಸ್ ಕಟ್ಟಲು ಹಣವಿಲ್ಲ! ವೈರಲ್ ಆಯ್ತು CA ಹಂಚಿಕೊಂಡ ಕಥೆ!]]></title>
            <link>https://kannada.asianetnews.com/india-news/1-crore-salary-3-own-houses-but-no-money-to-pay-15000-tax-ca-shares-eye-opening-story/articleshow-bcwyfqs</link>
            <guid isPermaLink="true">https://kannada.asianetnews.com/india-news/1-crore-salary-3-own-houses-but-no-money-to-pay-15000-tax-ca-shares-eye-opening-story/articleshow-bcwyfqs</guid>
            <pubDate>Wed, 29 Jul 2026 09:00:16 +0530</pubDate>
            <description><![CDATA[&lt;p&gt;ವರ್ಷಕ್ಕೆ ₹1 ಕೋಟಿಗೂ ಹೆಚ್ಚು ಸಂಬಳ ಪಡೆಯುತ್ತಿದ್ದ ಐಐಟಿಯನ್ ಉದ್ಯೋಗಿಗೆ ₹15,000 ಆದಾಯ ತೆರಿಗೆ ಪಾವತಿಸಲು ಹಣವಿಲ್ಲದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೊನೆಗೆ ಅವರು ಸಾಲ ಪಡೆದು ತೆರಿಗೆ ಪಾವತಿಸಿದ್ದಾರೆ. ಈ ಘಟನೆ ಉತ್ತಮ ಹಣಕಾಸು ಯೋಜನೆ ಮತ್ತು ಆರ್ಥಿಕ ಸಾಕ್ಷರತೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kym0ddrtf2vrd1rrevbmgs41,imgname-man-struggling-to-pay-15000-tax-1785230440218.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಧಿಕ ಸಂಬಳ ಎಂದರೆ ಆರ್ಥಿಕವಾಗಿ ಸಂಪೂರ್ಣ ಸುರಕ್ಷಿತ ಜೀವನ ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಇತ್ತೀಚೆಗೆ ಚಾರ್ಟರ್ಡ್ ಅಕೌಂಟೆಂಟ್ (CA) ಹಂಚಿಕೊಂಡಿರುವ ನೈಜ ಘಟನೆ ಈ ಕಲ್ಪನೆಗೆ ಪ್ರಶ್ನೆ ಎತ್ತಿದೆ. ವರ್ಷಕ್ಕೆ ₹1 ಕೋಟಿಗೂ ಹೆಚ್ಚು ಸಂಬಳ ಪಡೆಯುತ್ತಿದ್ದ ಉದ್ಯೋಗಿಯೊಬ್ಬರು ಕೇವಲ ₹15,000 ಆದಾಯ ತೆರಿಗೆ ಪಾವತಿಸಲು ಸಹ ಹಣವಿಲ್ಲದೆ ಸಂಕಷ್ಟ ಎದುರಿಸಿದ್ದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ಐಐಟಿಯನ್ ಕ್ಲೈಂಟ್ ಬಗ್ಗೆ CA ಹೇಳಿದ್ದೇನು?&lt;/strong&gt;&lt;/p&gt;&lt;p&gt;ಸಾಮಾಜಿಕ ಜಾಲತಾಣ Xನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಸಿಎ, ತಮ್ಮ ಐಐಟಿ ಪದವೀಧರ ಕ್ಲೈಂಟ್ ಕಳೆದ ಐದು ವರ್ಷಗಳಿಂದ ₹1 ಕೋಟಿಗೂ ಅಧಿಕ ವಾರ್ಷಿಕ ಪ್ಯಾಕೇಜ್ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅವರ ಬಳಿ ಮೂರು ಮನೆಗಳಿದ್ದು, ಅವುಗಳಲ್ಲಿ ಎರಡು ನಿರ್ಮಾಣ ಹಂತದಲ್ಲಿವೆ. ಇಷ್ಟೊಂದು ಆಸ್ತಿ ಮತ್ತು ಆದಾಯ ಇದ್ದರೂ, ತೆರಿಗೆ ಪಾವತಿಸಲು ಅಗತ್ಯವಿದ್ದ ₹15,000 ಕೈಯಲ್ಲಿ ಇರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ತೆರಿಗೆ ಪಾವತಿಸಲು ಕೊನೆಗೆ ಸಾಲದ ಮೊರೆ..!&lt;/strong&gt;&lt;/p&gt;&lt;p&gt;ತೆರಿಗೆ ಪಾವತಿಯನ್ನು ಆಗಸ್ಟ್&zwnj;ವರೆಗೆ ಮುಂದೂಡಿದರೆ ಹೆಚ್ಚುವರಿ ಬಡ್ಡಿ ಕಟ್ಟಬೇಕಾಗುತ್ತದೆ ಎಂದು ತಿಳಿದ ಬಳಿಕ, ಆ ಉದ್ಯೋಗಿ ಪರಿಚಿತರಿಂದ ಹಣ ಎರವಲು ಪಡೆದು ತೆರಿಗೆ ಪಾವತಿಸಿ ಐಟಿಆರ್ ಸಲ್ಲಿಸಿದರು. ಈ ಘಟನೆ ಹೆಚ್ಚು ಆದಾಯ ಇದ್ದರೂ ತಕ್ಷಣದ ನಗದು ಲಭ್ಯತೆ ಇಲ್ಲದಿದ್ದರೆ ಎದುರಾಗುವ ಸಮಸ್ಯೆಯನ್ನು ಸ್ಪಷ್ಟವಾಗಿ ತೋರಿಸಿದೆ.&lt;/p&gt;&lt;p&gt;&lt;strong&gt;ದೊಡ್ಡ ಸಂಬಳ ಎಂದರೆ ಕೈಯಲ್ಲಿ ಹಣ ಇರುತ್ತದೆ ಎಂದಲ್ಲ..!&lt;/strong&gt;&lt;/p&gt;&lt;p&gt;ಹಣಕಾಸು ತಜ್ಞರ ಪ್ರಕಾರ, ಅನೇಕರು ತಮ್ಮ ಆದಾಯದ ಬಹುಭಾಗವನ್ನು ಮನೆ ಸಾಲ, ಇಎಂಐ, ಹೂಡಿಕೆಗಳು ಹಾಗೂ ಜೀವನಶೈಲಿ ವೆಚ್ಚಗಳಿಗೆ ಮೀಸಲಿಡುತ್ತಾರೆ. ಪರಿಣಾಮವಾಗಿ ಮಾಸಿಕ ಆದಾಯ ಹೆಚ್ಚಿದ್ದರೂ, ತುರ್ತು ಅಗತ್ಯಗಳಿಗೆ ಬಳಸುವಷ್ಟು ನಗದು ಕೈಯಲ್ಲಿ ಇರುವುದಿಲ್ಲ. ಇದನ್ನೇ ಹಣಕಾಸಿನ ಭಾಷೆಯಲ್ಲಿ &quot;Asset Rich, Cash Poor&quot; ಎಂದು ಕರೆಯಲಾಗುತ್ತದೆ.&lt;/p&gt;&lt;p&gt;&lt;strong&gt;ಹಣಕಾಸಿನ ಶಿಸ್ತು ಏಕೆ ಮುಖ್ಯ?&lt;/strong&gt;&lt;/p&gt;&lt;p&gt;ಈ ಘಟನೆಯಿಂದ ದೊಡ್ಡ ಸಂಬಳ ಗಳಿಸುವುದಷ್ಟೇ ಸಾಕಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ತೆರಿಗೆ ಪಾವತಿಗಾಗಿ ಪ್ರತ್ಯೇಕ ಹಣ ಮೀಸಲಿಡುವುದು, ತುರ್ತು ನಿಧಿ ನಿರ್ಮಿಸಿಕೊಳ್ಳುವುದು, ವೆಚ್ಚಗಳನ್ನು ನಿಯಂತ್ರಿಸುವುದು ಮತ್ತು ಸರಿಯಾದ ಹಣಕಾಸು ಯೋಜನೆ ರೂಪಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಅಗತ್ಯ.&lt;/p&gt;&lt;p&gt;&lt;strong&gt;ಈ ಘಟನೆಯಿಂದ ಅರಿಯಬೇಕಾದ ಸಂಗತಿ..!&lt;/strong&gt;&lt;/p&gt;&lt;p&gt;ಆರ್ಥಿಕ ಯಶಸ್ಸನ್ನು ಕೇವಲ ಆದಾಯದ ಅಂಕಿಗಳಿಂದ ಅಳೆಯಲು ಸಾಧ್ಯವಿಲ್ಲ. ನಿಜವಾದ ಆರ್ಥಿಕ ಭದ್ರತೆ ಎಂದರೆ ಅಗತ್ಯ ಸಮಯದಲ್ಲಿ ಹಣ ಲಭ್ಯವಾಗುವಂತೆ ಯೋಜನೆ ಮಾಡುವುದು. ಹೆಚ್ಚು ಸಂಪಾದನೆ ಮಾಡಿದರೂ ಹಣದ ನಿರ್ವಹಣೆ ಸರಿಯಾಗಿರದಿದ್ದರೆ ಸಣ್ಣ ಮೊತ್ತಕ್ಕೂ ಸಂಕಷ್ಟ ಎದುರಾಗಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ.&lt;/p&gt;]]></content:encoded>
            <category>money</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/1-crore-salary-3-own-houses-but-no-money-to-pay-15000-tax-ca-shares-eye-opening-story/articleshow-bcwyfqs"/>
        </item>
        <item>
            <title><![CDATA[Zero to Hero: ಕೇವಲ 19ನೇ ವಯಸ್ಸಿಗೆ ₹95 ಲಕ್ಷ ಸಾಲ ತೀರಿಸಿ ₹50 ಕೋಟಿ ಕಂಪನಿ ಕಟ್ಟಿದ ಹಳ್ಳಿ ಹುಡುಗ]]></title>
            <link>https://kannada.asianetnews.com/viral/meet-the-village-teen-who-overcame-95-lakh-debt-and-built-a-50-crore-empire-at-the-age-of-19-suh/articleshow-bt3kysg</link>
            <guid isPermaLink="true">https://kannada.asianetnews.com/viral/meet-the-village-teen-who-overcame-95-lakh-debt-and-built-a-50-crore-empire-at-the-age-of-19-suh/articleshow-bt3kysg</guid>
            <pubDate>Thu, 30 Jul 2026 13:18:01 +0530</pubDate>
            <description><![CDATA[&lt;p&gt;ಹೆಚ್ಚಿನ ಹದಿಹರೆಯದವರು ಓದು, ಕಾಲೇಜು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವ ವಯಸ್ಸಿನಲ್ಲಿ, ಮಧ್ಯಪ್ರದೇಶದ ಈ ಯುವಕ ತನ್ನ ಜೀವನದಲ್ಲಿ ಎದುರಾದ ಆರ್ಥಿಕ ಸಂಕಷ್ಟವನ್ನೇ ಯಶಸ್ಸಿನ ಮೆಟ್ಟಿಲಾಗಿ ಪರಿವರ್ತಿಸಿಕೊಂಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyrzjqxpbw76d0h41dztfcp0,imgname-meet-the-village-teen-who-overcame-95-lakh-debt-and-built-a-50-crore-empire-at-the-age-of-19-1785397338036.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೆಚ್ಚಿನ ಹದಿಹರೆಯದವರು ಓದು, ಕಾಲೇಜು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವ ವಯಸ್ಸಿನಲ್ಲಿ, ಮಧ್ಯಪ್ರದೇಶದ ಈ ಯುವಕ ತನ್ನ ಜೀವನದಲ್ಲಿ ಎದುರಾದ ಆರ್ಥಿಕ ಸಂಕಷ್ಟವನ್ನೇ ಯಶಸ್ಸಿನ ಮೆಟ್ಟಿಲಾಗಿ ಪರಿವರ್ತಿಸಿಕೊಂಡಿದ್ದಾನೆ. ಕೇವಲ 19ನೇ ವಯಸ್ಸಿನಲ್ಲೇ ₹95 ಲಕ್ಷದ ಸಾಲವನ್ನು ಎದುರಿಸಿ, ಬಳಿಕ ₹50 ಕೋಟಿಗೂ ಹೆಚ್ಚು ಮೌಲ್ಯದ ಉದ್ಯಮ ಕಟ್ಟಿದ ಅಂಶ್ ಪಾಟಿದಾರ್.&amp;nbsp;&lt;/p&gt;&lt;h2&gt;ಕೃಷಿ ಕುಟುಂಬದಲ್ಲಿ ಹುಟ್ಟಿದ ಅಂಶ್&lt;/h2&gt;&lt;p&gt;ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಬೋರ್ಲಾ ಗ್ರಾಮದಲ್ಲಿ ಜನಿಸಿದ ಅಂಶ್ ಪಾಟಿದಾರ್ ಕೃಷಿ ಕುಟುಂಬದಲ್ಲಿ ಬೆಳೆದವರು. ಅವರ ತಂದೆ ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರೂ, ಪದೇಪದೇ ಬೆಳೆ ಹಾಳಾಗುವುದು ಮತ್ತು ಕೃಷಿ ಉತ್ಪನ್ನಗೆ ಸೂಕ್ತ ಬೆಲೆ ಸಿಗದಿರುವುದು ಕುಟುಂಬವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು. ಆದರೆ ತಮ್ಮ ವಿದ್ಯಾಭ್ಯಾಸಕ್ಕಾಗಿ ತಾಯಿ ಆಭರಣಗಳನ್ನು ಮಾರಾಟ ಮಾಡುವುದನ್ನು ಅವರು ಬಯಸಲಿಲ್ಲ. ಬದಲಾಗಿ, ಕುಟುಂಬದ ಪರಿಸ್ಥಿತಿಯನ್ನು ಬದಲಿಸಲು ತಾವೇ ಏನಾದರೂ ಮಾಡಬೇಕು ಎಂದು ನಿರ್ಧರಿಸಿದರು.&lt;/p&gt;&lt;h2&gt;₹3,000 ಬಂಡವಾಳದಿಂದ ಮೊದಲ ಹೆಜ್ಜೆ&lt;/h2&gt;&lt;p&gt;ತಂದೆಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ ಅಂಶ್, ರೈತರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದರು. ಒಂದೇ ರೀತಿಯ ರಾಸಾಯನಿಕ ಸಂಯೋಜನೆ ಹೊಂದಿರುವ ಕೀಟನಾಶಕಗಳಿಗೆ ರೈತರು ಹೆಚ್ಚಿನ ಬೆಲೆ ಪಾವತಿಸುತ್ತಿರುವುದನ್ನು ಅವರು ಗಮನಿಸಿದರು. ಇದೇ ವಿಚಾರ ಅವರ ಮೊದಲ ಉದ್ಯಮದ ಕಲ್ಪನೆಗೆ ಕಾರಣವಾಯಿತು. ಕೇವಲ ₹3,000 ಬಂಡವಾಳದೊಂದಿಗೆ ಗುಜರಾತ್&zwnj;ನ ತಯಾರಕರಿಂದ ಕೃಷಿ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ, ಸ್ಥಳೀಯ ರೈತರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಆರಂಭಿಸಿದರು. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಿದ ಪರಿಣಾಮ ರೈತರಲ್ಲಿ ಅಂಶ್ ಅವರ ಮೇಲೆ ವಿಶ್ವಾಸ ಮೂಡಿತು. ಹೀಗಾಗಿ ಅವರ ವ್ಯಾಪಾರ ನಿಧಾನವಾಗಿ ಸುತ್ತಮುತ್ತಲಿನ ಹಳ್ಳಿಗಳಿಗೂ ವಿಸ್ತರಿಸಿತು.&lt;/p&gt;&lt;h2&gt;15ನೇ ವಯಸ್ಸಿನಲ್ಲೇ ಉದ್ಯಮಿ&lt;/h2&gt;&lt;p&gt;ವರದಿಗಳ ಪ್ರಕಾರ, ಅಂಶ್ ಕೇವಲ 15ನೇ ವಯಸ್ಸಿನಲ್ಲೇ ಜಿಎಸ್&zwnj;ಟಿ ನೋಂದಣಿ ಪಡೆದ ಭಾರತದ ಅತ್ಯಂತ ಕಿರಿಯ ಉದ್ಯಮಿಗಳಲ್ಲಿ ಒಬ್ಬರಾದರು. ಒಂದೆಡೆ ಶಾಲಾ ಶಿಕ್ಷಣ, ಮತ್ತೊಂದೆಡೆ ಉದ್ಯಮ. ಎರಡನ್ನೂ ಸಮತೋಲನಗೊಳಿಸಲು ಅಂಶ್ ಹಗಲು ಸಮಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸಂಜೆ ವೇಳೆ ವಿವಿಧ ಹಳ್ಳಿಗಳಿಗೆ ತೆರಳಿ ರೈತರನ್ನು ಭೇಟಿ ಮಾಡುತ್ತಿದ್ದರು. ರಾತ್ರಿ ಮನೆಗೆ ಮರಳಿ ಓದುತ್ತಿದ್ದರು. ಅವರ ಪರಿಶ್ರಮಕ್ಕೆ ಶೀಘ್ರದಲ್ಲೇ ಫಲ ಸಿಕ್ಕಿತು. ಕೇವಲ 18 ತಿಂಗಳ ಅವಧಿಯಲ್ಲಿ ಅವರ ಉದ್ಯಮ ಸುಮಾರು ₹40 ಲಕ್ಷ ವಹಿವಾಟು ದಾಖಲಿಸಿತು ಎಂದು ವರದಿಯಾಗಿದೆ.&lt;/p&gt;&lt;h2&gt;17ನೇ ವಯಸ್ಸಿನಲ್ಲಿ ₹95 ಲಕ್ಷ ಸಾಲ&lt;/h2&gt;&lt;p&gt;ವ್ಯವಹಾರವನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಅಂಶ್ ಕೃಷಿ ತಂತ್ರಜ್ಞಾನ ವೇದಿಕೆಯೊಂದನ್ನು ಆರಂಭಿಸಿದರು. ಆದರೆ ಈ ಉದ್ಯಮ ನಿರೀಕ್ಷಿಸಿದಂತೆ ಯಶಸ್ವಿಯಾಗಲಿಲ್ಲ. ಇದರ ಪರಿಣಾಮ ಕೇವಲ 17ನೇ ವಯಸ್ಸಿನಲ್ಲೇ ಅಂಶ್ ಅವರ ಮೇಲೆ ಬರೋಬ್ಬರಿ ₹95 ಲಕ್ಷದ ಸಾಲದ ಹೊರೆ ಬಂತು. ಇಷ್ಟು ದೊಡ್ಡ ಮೊತ್ತದ ಸಾಲವನ್ನು ಎದುರಿಸಿದಾಗ ಅನೇಕರು ಉದ್ಯಮವನ್ನೇ ಕೈಬಿಡಬಹುದು. ಆದರೆ ಅಂಶ್ ಸೋಲನ್ನು ಒಪ್ಪಿಕೊಳ್ಳಲಿಲ್ಲ. ರೈತರೊಂದಿಗೆ ವ್ಯವಹರಿಸುವ ಮೂಲಕ ಮತ್ತೆ ಅವರ ವಿಶ್ವಾಸವನ್ನು ಗಳಿಸಿದರು. ಬಳಿಕ ತಮ್ಮ ಮೇಲಿದ್ದ ಸಾಲ ಮತ್ತು ಬಾಕಿ ಹೊಣೆಗಾರಿಕೆಗಳನ್ನು ಹಂತ ಹಂತವಾಗಿ ಮರುಪಾವತಿಸಿದರು.&lt;/p&gt;&lt;h2&gt;2022ರಲ್ಲಿ ಆರಂಭವಾಯಿತು ಹೊಸ ಅಧ್ಯಾಯ&lt;/h2&gt;&lt;p&gt;2022ರಲ್ಲಿ ಅಂಶ್ ಪಾಟಿದಾರ್ ಅರಿವಾ ಆರ್ಗಾನಿಕ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಜೈವಿಕ ಕೀಟನಾಶಕಗಳು ಮತ್ತು ಡ್ರೋನ್ ಆಧಾರಿತ ಕೃಷಿ ಪರಿಹಾರಗಳತ್ತ ಸಂಸ್ಥೆ ಗಮನಹರಿಸಿತು. ಕೃಷಿಯಲ್ಲಿ ತಂತ್ರಜ್ಞಾನವನ್ನು ಬಳಸುವ ಮೂಲಕ ರೈತರಿಗೆ ನೀರು, ರಸಗೊಬ್ಬರ ಮತ್ತು ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುವ ಪರಿಹಾರಗಳನ್ನು ಸಂಸ್ಥೆ ಪರಿಚಯಿಸಿತು. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ನವೀನತೆಯನ್ನು ಅಳವಡಿಸಿಕೊಂಡ ಪರಿಣಾಮ ಉದ್ಯಮ ವೇಗವಾಗಿ ಬೆಳೆಯಿತು. ವರದಿಗಳ ಪ್ರಕಾರ, ಕೇವಲ ಒಂದು ವರ್ಷದೊಳಗೆ ಕಂಪನಿಯ ಮೌಲ್ಯಮಾಪನ ₹50 ಕೋಟಿಗೂ ಅಧಿಕವಾಯಿತು. ಇದರೊಂದಿಗೆ ಸುಮಾರು 15,000 ಎಕರೆ ಕೃಷಿ ಭೂಮಿಯಲ್ಲಿ 5,000ಕ್ಕೂ ಹೆಚ್ಚು ರೈತರಿಗೆ ಸಂಸ್ಥೆ ಬೆಂಬಲ ನೀಡಿದೆ ಎಂದು ಹೇಳಲಾಗಿದೆ.&lt;/p&gt;&lt;h2&gt;₹95 ಲಕ್ಷ ಸಾಲದಿಂದ ₹50 ಕೋಟಿ ಸಾಮ್ರಾಜ್ಯದವರೆಗೆ&lt;/h2&gt;&lt;p&gt;ಕೇವಲ 17ನೇ ವಯಸ್ಸಿನಲ್ಲಿ ₹95 ಲಕ್ಷ ಸಾಲದ ಸುಳಿಗೆ ಸಿಲುಕಿದ್ದ ಯುವಕ, ಕೆಲವೇ ವರ್ಷಗಳಲ್ಲಿ ಅದೇ ಸವಾಲನ್ನು ಮೆಟ್ಟಿನಿಂತು ₹50 ಕೋಟಿಗೂ ಅಧಿಕ ಮೌಲ್ಯದ ಉದ್ಯಮ ಕಟ್ಟಿರುವುದು ಅಚ್ಚರಿ ಮೂಡಿಸುವಂತಿದೆ. ಅಂಶ್ ಪಾಟಿದಾರ್ ಅವರ ಕಥೆ ಕೇವಲ ಒಬ್ಬ ಯುವ ಉದ್ಯಮಿಯ ಯಶೋಗಾಥೆಯಲ್ಲ. ಸಮಸ್ಯೆಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳುವ ಮನಸ್ಥಿತಿ, ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಕೋನ ಮತ್ತು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಧೈರ್ಯವಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಬದಲಿಸಬಹುದು ಎಂಬುದನ್ನು ತೋರಿಸುವ ಪ್ರೇರಣಾದಾಯಕ ಕಥೆಯಾಗಿದೆ.&lt;/p&gt;]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/meet-the-village-teen-who-overcame-95-lakh-debt-and-built-a-50-crore-empire-at-the-age-of-19-suh/articleshow-bt3kysg"/>
        </item>
        <item>
            <title><![CDATA[UPI ಬಳಸುವವರೇ ಎಚ್ಚರ! ಗೊತ್ತಿಲ್ಲದೇ ಪ್ರತಿ ತಿಂಗಳು ₹79 ಕಡಿತವಾಗುತ್ತಿದೆಯೇ? ವೈರಲ್ ಪೋಸ್ಟ್‌ನಲ್ಲಿ ಎಚ್ಚರಿಕೆ]]></title>
            <link>https://kannada.asianetnews.com/viral/upi-autopay-trap-viral-linkedin-post-warns-users-about-recurring-payments/articleshow-dbr7dpa</link>
            <guid isPermaLink="true">https://kannada.asianetnews.com/viral/upi-autopay-trap-viral-linkedin-post-warns-users-about-recurring-payments/articleshow-dbr7dpa</guid>
            <pubDate>Thu, 30 Jul 2026 09:59:55 +0530</pubDate>
            <description><![CDATA[&lt;p&gt;ಉಚಿತ ಟ್ರಯಲ್ ಸೇವೆಗಳ ಮೂಲಕ ಸಕ್ರಿಯವಾಗುವ UPI AutoPay ಆದೇಶಗಳಿಂದ ಪ್ರತಿ ತಿಂಗಳು ಸಣ್ಣ ಮೊತ್ತಗಳು ಖಾತೆಯಿಂದ ಕಡಿತವಾಗಬಹುದು. ಮುಂಬೈನ ವ್ಯಕ್ತಿಯೊಬ್ಬರ ವೈರಲ್ ಪೋಸ್ಟ್ ಬಳಿಕ ಡಿಜಿಟಲ್ ಸಾಕ್ಷರತೆ, ಆಟೋಪೇ ಪರಿಶೀಲನೆ ಹಾಗೂ ಚಂದಾದಾರಿಕೆ ಅನುಮತಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಆರಂಭವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyrmj43y4htxcjqzrmde9a7v,imgname-upi-autopay-alert--1--1785385783421.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಚಿತ ಟ್ರಯಲ್ ಬಳಿಕ ಆಟೋಪೇ ಸಕ್ರಿಯವಾದರೆ ಏನಾಗಬಹುದು?&lt;/strong&gt;&lt;/p&gt;&lt;p&gt;ಡಿಜಿಟಲ್ ಪಾವತಿಗಳು ನಮ್ಮ ದೈನಂದಿನ ಬದುಕಿನ ಭಾಗವಾಗಿವೆ. ಆದರೆ ಸೌಲಭ್ಯ ನೀಡುವ ಇದೇ ವ್ಯವಸ್ಥೆಯಲ್ಲಿ ಕೆಲವೊಮ್ಮೆ ಬಳಕೆದಾರರು ಗಮನಿಸದ ಸಣ್ಣ ಅನುಮತಿಗಳು ಮುಂದಿನ ದಿನಗಳಲ್ಲಿ ಅನಗತ್ಯ ವೆಚ್ಚಕ್ಕೆ ಕಾರಣವಾಗಬಹುದು. ಇತ್ತೀಚೆಗೆ ಮುಂಬೈನ ವ್ಯಕ್ತಿಯೊಬ್ಬರು ಹಂಚಿಕೊಂಡ ಅನುಭವ ಇದೇ ವಿಷಯವನ್ನು ಮತ್ತೆ ಚರ್ಚೆಗೆ ತಂದಿದೆ.&lt;/p&gt;&lt;p&gt;&lt;strong&gt;ತಾಯಿಯ ಫೋನ್ ಪರಿಶೀಲಿಸಿದಾಗ ಬಯಲಾಯಿತು ಸತ್ಯ!&lt;/strong&gt;&lt;/p&gt;&lt;p&gt;ಲಿಂಕ್ಡ್&zwnj;ಇನ್&zwnj;ನಲ್ಲಿ ತಮ್ಮ ಅನುಭವ ಹಂಚಿಕೊಂಡ ಲೋಕೇಶ್ ಅಹುಜಾ, ಕೆಲ ತಿಂಗಳ ಹಿಂದೆ ತಮ್ಮ ತಾಯಿಗೆ UPI ಬಳಸುವುದನ್ನು ಕಲಿಸಿದ್ದಾಗಿ ಹೇಳಿದ್ದಾರೆ. ಇತ್ತೀಚೆಗೆ ಫೋನ್ ಪರಿಶೀಲಿಸಿದಾಗ ಹಲವು UPI AutoPay ಆದೇಶಗಳು ಸಕ್ರಿಯವಾಗಿರುವುದು ಕಂಡುಬಂದಿತು. ಆಶ್ಚರ್ಯವೆಂದರೆ, ಅವರ ತಾಯಿಗೆ ಆ ಚಂದಾದಾರಿಕೆಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇರಲಿಲ್ಲ.&lt;/p&gt;&lt;p&gt;ನಂತರ ಪರಿಶೀಲಿಸಿದಾಗ, ಇವು ಉಚಿತ ಟ್ರಯಲ್ ಆಫರ್&zwnj;ಗಳನ್ನು ಬಳಸುವ ವೇಳೆ ನೀಡಿದ ಅನುಮತಿಗಳಿಂದ ಸಕ್ರಿಯಗೊಂಡಿದ್ದವು ಎಂಬುದು ಗೊತ್ತಾಯಿತು. ಆರಂಭದಲ್ಲಿ ₹0 ಎಂದು ತೋರಿಸಿದ ಸೇವೆಗಳು, ಟ್ರಯಲ್ ಅವಧಿ ಮುಗಿದ ಬಳಿಕ ಸ್ವಯಂಚಾಲಿತವಾಗಿ ಪ್ರತಿ ತಿಂಗಳು ಹಣ ಕಡಿತ ಮಾಡಲು ಅನುಮತಿ ಪಡೆದಿದ್ದವು.&lt;/p&gt;&lt;p&gt;&lt;/p&gt;&lt;p&gt;&lt;strong&gt;₹79 ಕಡಿತವಾದರೂ ಯಾಕೆ ಗೊತ್ತಾಗುವುದಿಲ್ಲ?&lt;/strong&gt;&lt;/p&gt;&lt;p&gt;ಪ್ರತಿ ತಿಂಗಳು ₹79 ಅಥವಾ ₹99 ರೀತಿಯ ಸಣ್ಣ ಮೊತ್ತಗಳು ಕಡಿತವಾದರೆ ಹೆಚ್ಚಿನವರು ಅದನ್ನು ಗಮನಿಸುವುದಿಲ್ಲ. ಏಕೆಂದರೆ ಬ್ಯಾಂಕ್ ಸ್ಟೇಟ್&zwnj;ಮೆಂಟ್&zwnj;ನಲ್ಲಿ ಇಂತಹ ವ್ಯವಹಾರಗಳು ಇತರ UPI ಪಾವತಿಗಳ ನಡುವೆ ಬೆರೆತು ಹೋಗುತ್ತವೆ. ಇದೇ ಕಾರಣಕ್ಕೆ ಅನೇಕರು ತಿಂಗಳುಗಳ ಕಾಲ ಆಟೋಪೇ ಸಕ್ರಿಯವಾಗಿರುವುದನ್ನೇ ಮರೆತು ಬಿಡುತ್ತಾರೆ.&lt;/p&gt;&lt;p&gt;&lt;strong&gt;ಡಿಜಿಟಲ್ ಸಾಕ್ಷರತೆ ಎಂದರೆ ತಂತ್ರಜ್ಞಾನ ಬಳಸುವುದಷ್ಟೇ ಅಲ್ಲ..!&lt;/strong&gt;&lt;/p&gt;&lt;p&gt;ಲೋಕೇಶ್ ಅವರ ಅಭಿಪ್ರಾಯದಂತೆ, ಇಂದು ಡಿಜಿಟಲ್ ಸಾಕ್ಷರತೆ ಎಂದರೆ ಮೊಬೈಲ್ ಅಥವಾ UPI ಬಳಸುವುದು ಮಾತ್ರವಲ್ಲ. ಯಾವುದೇ ಅಪ್ಲಿಕೇಶನ್&zwnj;ಗೆ ಯಾವ ಅನುಮತಿ ನೀಡುತ್ತಿದ್ದೇವೆ, ಯಾವ ಸೇವೆಗೆ ಆಟೋಪೇ ಸಕ್ರಿಯಗೊಳಿಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.&lt;/p&gt;&lt;p&gt;&lt;strong&gt;AutoPay ಪರಿಶೀಲನೆ ಏಕೆ ಅಗತ್ಯ?&lt;/strong&gt;&lt;/p&gt;&lt;p&gt;ಹಣಕಾಸು ತಜ್ಞರ ಪ್ರಕಾರ, ತಿಂಗಳಿಗೊಮ್ಮೆ UPI AutoPay ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ ಅಭ್ಯಾಸ. ಬಳಸದೇ ಇರುವ ಸೇವೆಗಳ ಆಟೋಪೇ ಅನ್ನು ತಕ್ಷಣ ರದ್ದುಗೊಳಿಸಿದರೆ ಅನಗತ್ಯ ವೆಚ್ಚವನ್ನು ತಪ್ಪಿಸಬಹುದು. ಉಚಿತ ಟ್ರಯಲ್ ಬಳಸುವಾಗ ಷರತ್ತುಗಳನ್ನು ಓದುವುದು ಮತ್ತು ಚಂದಾದಾರಿಕೆ ಮುಗಿಯುವ ದಿನಾಂಕವನ್ನು ಗಮನಿಸುವುದು ಭವಿಷ್ಯದ ಅನಗತ್ಯ ಹಣಕಡಿತವನ್ನು ತಡೆಯುತ್ತದೆ.&lt;/p&gt;]]></content:encoded>
            <category>money</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/upi-autopay-trap-viral-linkedin-post-warns-users-about-recurring-payments/articleshow-dbr7dpa"/>
        </item>
        <item>
            <title><![CDATA[ಉತ್ತರ ಪ್ರದೇಶಕ್ಕೆ 19,208 ಕೋಟಿ ಕೊಟ್ಟ ಕೇಂದ್ರ.. ಕರ್ನಾಟಕಕ್ಕೆ ಮೋದಿ ಕೊಟ್ಟಿದ್ದು ಎಷ್ಟು ಕೋಟಿ..?]]></title>
            <link>https://kannada.asianetnews.com/business/centre-to-states-additional-installment-of-109-lakh-crore-released-up-receives-karnataka-gets-rs-4504-crore-rupees-gkn/articleshow-eqsugzo</link>
            <guid isPermaLink="true">https://kannada.asianetnews.com/business/centre-to-states-additional-installment-of-109-lakh-crore-released-up-receives-karnataka-gets-rs-4504-crore-rupees-gkn/articleshow-eqsugzo</guid>
            <pubDate>Sat, 01 Aug 2026 19:35:07 +0530</pubDate>
            <description><![CDATA[ಕೇಂದ್ರ ಸರ್ಕಾರವು ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಹಬ್ಬದ ಸೀಸನ್&zwnj;ಗೂ ಮುನ್ನವೇ ತೆರಿಗೆ ಹಂಚಿಕೆಯ ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಿದೆ. ಈ ಮುಂಗಡ ಪಾವತಿಯು ಒಟ್ಟು 1,09,019 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂಪಾಯಿಗಳ ಪಾಲು ಸಿಕ್ಕಿದೆ. ಈ ಹಣವು ರಾಜ್ಯಗಳಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyysyha4k6sb8gh1c2mad121,imgname-tax-devolution-to-states-1785592759620.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಬ್ಬದ ಸೀಸನ್ ಮುನ್ನ ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಉದ್ದೇಶದಿಂದ ಆಗಸ್ಟ್ 1, 2026 ರಂದು (ಇಂದು) ತೆರಿಗೆ ಹಂಚಿಕೆಯ (Tax Devolution) ಹೆಚ್ಚುವರಿ ಕಂತಾಗಿ ಬರೋಬ್ಬರಿ 1,09,019 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.&lt;/p&gt;&lt;p&gt;ವಿಶೇಷವೆಂದರೆ ಆಗಸ್ಟ್ 10, 2026 ರಂದು ಬಿಡುಗಡೆಯಾಗಬೇಕಿದ್ದ ನಿಯಮಿತ ಮಾಸಿಕ ಕಂತಿನ ಹೊರತಾಗಿ, ಮುಂಗಡವಾಗಿ ಈ ಹೆಚ್ಚುವರಿ ಹಣವನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಈ ಬೃಹತ್ ಮೊತ್ತದಲ್ಲಿ ಕರ್ನಾಟಕದ ಪಾಲಿಗೆ 4,504 ಕೋಟಿ ರೂಪಾಯಿ ಬಿಡುಗಡೆಯಾಗಿದೆ.&lt;/p&gt;&lt;h2&gt;&lt;strong&gt;ಈ ಹೆಚ್ಚುವರಿ ಕಂತು ಬಿಡುಗಡೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಭಾರತ ಸರ್ಕಾರದ ಪ್ರಕಾರ, ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸುವ ಬದ್ಧತೆಯ ಅಡಿಯಲ್ಲಿ ಈ ಮುಂಗಡ ಕಂತನ್ನು ಬಿಡುಗಡೆ ಮಾಡಲಾಗಿದೆ. ಇದರ ಮುಖ್ಯ ಉದ್ದೇಶವೆಂದರೆ, ರಾಜ್ಯಗಳಲ್ಲಿನ ಬಂಡವಾಳ ವೆಚ್ಚ (Capital Expenditure) ಮತ್ತು ಅಭಿವೃದ್ಧಿ ಯೋಜನೆಗಳ ವೇಗವನ್ನು ಹೆಚ್ಚಿಸುವುದು. ಇದರಿಂದ ತಳಮಟ್ಟದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ವೇಗವಾಗಿ ನಡೆಯಲಿದೆ. ಜೊತೆಗೆ ಹಬ್ಬಗಳ ಸೀಸನ್ ಸಮೀಪಿಸುತ್ತಿರುವುದರಿಂದ, ರಾಜ್ಯಗಳಿಗೆ ತಮ್ಮ ಯೋಜನೆಗಳು ಮತ್ತು ಅಗತ್ಯ ವೆಚ್ಚಗಳನ್ನು ನಿರ್ವಹಿಸಲು ಈ ಹೆಚ್ಚುವರಿ ಫಂಡ್ ಬಹಳಷ್ಟು ಸಹಾಯ ಮಾಡಲಿದೆ.&lt;/p&gt;&lt;h2&gt;&lt;strong&gt;ತೆರಿಗೆ ಪಾಲು ಹಂಚಿಕೆ (Tax Sharing) ಎಂದರೇನು?&lt;/strong&gt;&lt;/h2&gt;&lt;p&gt;ಹಣಕಾಸು ಸಚಿವಾಲಯದ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರವು ಸಂಗ್ರಹಿಸುವ ಒಟ್ಟು ತೆರಿಗೆ ಆದಾಯದ ಶೇಕಡಾ 41% (41%) ರಷ್ಟು ಹಣವನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಈ ಮೊತ್ತವನ್ನು ಸಂಪೂರ್ಣ ಆರ್ಥಿಕ ವರ್ಷದಲ್ಲಿ ಒಟ್ಟು 14 ಕಂತುಗಳ ಮೂಲಕ ರಾಜ್ಯಗಳಿಗೆ ತಲುಪಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ಯಾವ ರಾಜ್ಯಕ್ಕೆ ಎಷ್ಟು ಕೋಟಿ ಸಿಕ್ಕಿದೆ?&lt;/strong&gt;&lt;/h2&gt;&lt;p&gt;ಒಟ್ಟು 1.09 ಲಕ್ಷ ಕೋಟಿ ರೂ. ಅನುದಾನದಲ್ಲಿ ಉತ್ತರ ಪ್ರದೇಶ ಅತಿ ಹೆಚ್ಚು ಪಾಲು ಪಡೆದಿದ್ದರೆ, ಕರ್ನಾಟಕ 9ನೇ ಸ್ಥಾನದಲ್ಲಿದೆ. ರಾಜ್ಯವಾರು ಹಂಚಿಕೆಯ ವಿವರ ಈ ಕೆಳಗಿನಂತಿದೆ. (ಮೊತ್ತ ಕೋಟಿ ರೂ. ಗಳಲ್ಲಿ)&lt;/p&gt;&lt;ol&gt; &lt;li&gt;ಉತ್ತರ ಪ್ರದೇಶ: 19,208&amp;nbsp;&lt;/li&gt; &lt;li&gt;ಬಿಹಾರ: 10,845&lt;/li&gt; &lt;li&gt;ಮಧ್ಯ ಪ್ರದೇಶ: 8,010&lt;/li&gt; &lt;li&gt;ಪಶ್ಚಿಮ ಬಂಗಾಳ: 7,866&lt;/li&gt; &lt;li&gt;ಮಹಾರಾಷ್ಟ್ರ: 7,022&amp;nbsp;&lt;/li&gt; &lt;li&gt;ರಾಜಸ್ಥಾನ: 6,460&lt;/li&gt; &lt;li&gt;ಒಡಿಶಾ: 4,819&lt;/li&gt; &lt;li&gt;ಆಂಧ್ರಪ್ರದೇಶ: 4,597&amp;nbsp;&lt;/li&gt; &lt;li&gt;ಕರ್ನಾಟಕ: 4,504&amp;nbsp;&lt;/li&gt; &lt;li&gt;ತಮಿಳುನಾಡು: 4,466&amp;nbsp;&lt;/li&gt; &lt;li&gt;ಗುಜರಾತ್: 4,094&amp;nbsp;&lt;/li&gt; &lt;li&gt;ಜಾರ್ಖಂಡ್: 3,660&lt;/li&gt; &lt;li&gt;ಛತ್ತೀಸ್&zwnj;ಗಢ: 3,602&lt;/li&gt; &lt;li&gt;ಅಸ್ಸಾಂ: 3,552&amp;nbsp;&lt;/li&gt; &lt;li&gt;ಕೇರಳ: 2,597&amp;nbsp;&lt;/li&gt; &lt;li&gt;ತೆಲಂಗಾಣ: 2,370&lt;/li&gt; &lt;li&gt;ಪಂಜಾಬ್: 2,176&amp;nbsp;&lt;/li&gt; &lt;li&gt;ಹರಿಯಾಣ: 1,484&lt;/li&gt; &lt;li&gt;ಅರುಣಾಚಲ ಪ್ರದೇಶ: 1,476&amp;nbsp;&lt;/li&gt; &lt;li&gt;ಉತ್ತರಾಖಂಡ: 1,244&amp;nbsp;&lt;/li&gt; &lt;li&gt;ಹಿಮಾಚಲ ಪ್ರದೇಶ: 996&lt;/li&gt; &lt;li&gt;&amp;nbsp;ತ್ರಿಪುರಾ: 699&amp;nbsp;&lt;/li&gt; &lt;li&gt;ಮೇಘಾಲಯ: 688&amp;nbsp;&lt;/li&gt; &lt;li&gt;ಮಣಿಪುರ: 682&amp;nbsp;&lt;/li&gt; &lt;li&gt;ಮಿಜೋರಾಂ: 615&amp;nbsp;&lt;/li&gt; &lt;li&gt;ನಾಗಾಲ್ಯಾಂಡ್: 524&amp;nbsp;&lt;/li&gt; &lt;li&gt;ಗೋವಾ: 398&lt;/li&gt;&lt;/ol&gt;&lt;p&gt;ಈ ಹೆಚ್ಚುವರಿ ಅನುದಾನದಿಂದ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ತಮ್ಮ ಆರ್ಥಿಕ ನಿರ್ವಹಣೆ ಮತ್ತು ಮೂಲಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆನೆಬಲ ಸಿಕ್ಕಂತಾಗಿದೆ.&lt;/p&gt;]]></content:encoded>
            <category>money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/business/centre-to-states-additional-installment-of-109-lakh-crore-released-up-receives-karnataka-gets-rs-4504-crore-rupees-gkn/articleshow-eqsugzo"/>
        </item>
        <item>
            <title><![CDATA[ಕ್ಲಾಸ್‌ಮೇಟ್ಸ್ ಕೆಲಸ ಹುಡುಕ್ತಿದ್ರೆ, ಈತ 5 ಕೋಟಿ ಆಸ್ತಿ ಮಾಡಿದ; ಬೆಂಗಳೂರು IIM ವಿದ್ಯಾರ್ಥಿಯ 'ಹಣವೇ ಇಂಧನ' ಮಂತ್ರ]]></title>
            <link>https://kannada.asianetnews.com/viral/25-year-old-iim-bangalore-student-says-money-is-fuel-after-building-5-crore-net-worth-suh/articleshow-hkhzwq3</link>
            <guid isPermaLink="true">https://kannada.asianetnews.com/viral/25-year-old-iim-bangalore-student-says-money-is-fuel-after-building-5-crore-net-worth-suh/articleshow-hkhzwq3</guid>
            <pubDate>Sat, 01 Aug 2026 10:29:46 +0530</pubDate>
            <description><![CDATA[&lt;p&gt;ಕೇವಲ 25ನೇ ವಯಸ್ಸಿನಲ್ಲೇ ಸುಮಾರು ₹5 ಕೋಟಿ ನಿವ್ವಳ ಮೌಲ್ಯ (Net Worth) ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಜೈದ್ ಖಾನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyxv063ete3zh4bvm1cga9vc,imgname-25-year-old-iim-bangalore-student-says-money-is-fuel-after-building-5-crore-net-worth-1785560307822.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇವಲ 25ನೇ ವಯಸ್ಸಿನಲ್ಲೇ ಸುಮಾರು ₹5 ಕೋಟಿ ನಿವ್ವಳ ಮೌಲ್ಯ (Net Worth) ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಜೈದ್ ಖಾನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಬ್ರ್ಯಾಂಡಿಂಗ್ ಸಂಸ್ಥೆ Zedital Mediaಯ ಸಂಸ್ಥಾಪಕರಾಗಿರುವ ಜೈದ್, ಇತ್ತೀಚೆಗೆ The Crore Club ಪಾಡ್&zwnj;ಕಾಸ್ಟ್&zwnj;ನಲ್ಲಿ ಭಾಗವಹಿಸಿ ತಮ್ಮ ಯಶಸ್ಸಿನ ಪಯಣ, ಉದ್ಯಮ, ಶಿಕ್ಷಣ ಹಾಗೂ ಹಣದ ಬಗ್ಗೆ ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ನೀವು ಸಾಧಿಸಬೇಕಾದ ಗುರಿಗೆ ಹಣವೇ ಇಂಧನ (Money is Fuel) ಎಂದು ಅವರು ಹೇಳಿರುವ ಮಾತು ಸಾವಿರಾರು ಯುವಕರ ಗಮನ ಸೆಳೆದಿದೆ.&lt;/p&gt;&lt;h2&gt;25ರಲ್ಲೇ ₹5 ಕೋಟಿ ನೆಟ್&zwnj;ವರ್ತ್&lt;/h2&gt;&lt;p&gt;ಜೈದ್ ಖಾನ್ ಅವರ ಪ್ರಕಾರ, ತಮ್ಮ ಕಂಪನಿಯ ಬೆಳವಣಿಗೆ ಹಾಗೂ ರಿಯಲ್ ಎಸ್ಟೇಟ್&zwnj;ನಲ್ಲಿ ಮಾಡಿದ ಬುದ್ಧಿವಂತಿಕೆಯ ಹೂಡಿಕೆಗಳಿಂದ ಇಂದು ಸುಮಾರು ₹5 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ. ಯುವ ವಯಸ್ಸಿನಲ್ಲೇ ಕೋಟ್ಯಾಧಿಪತಿಯಾಗಿರುವ ಅವರು, ಹಣವನ್ನು ಕೇವಲ ಐಷಾರಾಮಿ ಜೀವನಕ್ಕೆ ಅಲ್ಲ, ಭವಿಷ್ಯದ ಕನಸುಗಳನ್ನು ನನಸಾಗಿಸುವ ಸಾಧನವಾಗಿ ಬಳಸಬೇಕು ಎಂದು ಹೇಳಿದ್ದಾರೆ.&lt;/p&gt;&lt;h2&gt;ಯಶಸ್ವಿ ಉದ್ಯಮಿಯಾಗಿದ್ದರೂ IIM ಬೆಂಗಳೂರಿನಲ್ಲಿ ಓದು&lt;/h2&gt;&lt;p&gt;ಈಗಾಗಲೇ ಯಶಸ್ವಿ ಉದ್ಯಮಿಯಾಗಿದ್ದರೂ, ಜೈದ್ ಖಾನ್ ಪ್ರಸ್ತುತ IIM ಬೆಂಗಳೂರುನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, &quot;ನನ್ನ ವ್ಯವಹಾರ ಚೆನ್ನಾಗಿ ನಡೆಯುತ್ತಿತ್ತು. ಆದರೆ ಶಿಕ್ಷಣದ ವಿಷಯದಲ್ಲಿ ನಾನು ಹಿಂದೆ ಬಿದ್ದಿದ್ದೇನೆ ಎಂದು ಅನಿಸಿತು. ಅದಕ್ಕಾಗಿ ಮತ್ತೆ ಓದಲು ನಿರ್ಧರಿಸಿದೆ. IIMನಲ್ಲಿ ಕಲಿಯುತ್ತಿರುವ ವಿಷಯಗಳನ್ನು ನನ್ನ ಕಂಪನಿಯಲ್ಲೇ ಅನುಷ್ಠಾನಗೊಳಿಸುತ್ತಿದ್ದೇನೆ&quot; ಎಂದು ಹೇಳಿದ್ದಾರೆ.&lt;/p&gt;&lt;h2&gt;ಉದ್ಯಮಿಗಳಿಗೆ ಜೈದ್ ಖಾನ್ ಕೊಟ್ಟ ಎರಡು ಸಲಹೆಗಳು&lt;/h2&gt;&lt;p&gt;ಪಾಡ್&zwnj;ಕಾಸ್ಟ್&zwnj;ನಲ್ಲಿ ನಿರೂಪಕಿ ಶ್ರೇಯಾ ಹೆಗ್ಡೆ, ನಿಮ್ಮ ಸಹಪಾಠಿಗಳು ವರ್ಷಕ್ಕೆ ₹35-40 ಲಕ್ಷ ಸಂಬಳದ ಉದ್ಯೋಗಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ನೀವು ಈಗಾಗಲೇ ಉದ್ಯಮಿಯಾಗಿದ್ದೀರಿ. ಯುವ ಉದ್ಯಮಿಗಳಿಗೆ ಏನು ಸಲಹೆ ನೀಡುತ್ತೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜೈದ್ ಎರಡು ಪ್ರಮುಖ ಸಲಹೆಗಳನ್ನು ನೀಡಿದರು.&lt;/p&gt;&lt;p&gt;ಮೊದಲ ಸಲಹೆ: ಏನಾದರೂ ಮಾರಾಟ ಮಾಡಲು ಪ್ರಾರಂಭಿಸಿ, ಅದು ಒಂದು ಕೌಶಲ್ಯವಾಗಿರಬಹುದು, ಸಲಹೆಯಾಗಿರಬಹುದು ಅಥವಾ ಯಾವುದೇ ಸಣ್ಣ ಸೇವೆಯಾಗಿರಬಹುದು. ₹100 ಅಥವಾ ₹200 ಗಳಿಸಿದರೂ ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ&quot; ಎಂದು ಹೇಳಿದರು.&lt;/p&gt;&lt;p&gt;ಎರಡನೇ ಸಲಹೆ: ನಿಮ್ಮ ಡಿಜಿಟಲ್ ಉಪಸ್ಥಿತಿಯನ್ನು ನಿರ್ಮಿಸಿಕೊಳ್ಳಿ, ಇಂದಿನ ಜಗತ್ತಿನಲ್ಲಿ ಕಂಟೆಂಟ್ ನಿಮ್ಮ ಡಿಜಿಟಲ್ ಕರೆನ್ಸಿ. ನೀವು ಆನ್&zwnj;ಲೈನ್&zwnj;ನಲ್ಲಿ ಕಾಣಿಸದಿದ್ದರೆ, ನೀವು ಇಲ್ಲದವರೇ. ಆದ್ದರಿಂದ ವೈಯಕ್ತಿಕ ಬ್ರ್ಯಾಂಡ್ ನಿರ್ಮಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು.&lt;/p&gt;&lt;h2&gt;Zedital Media ಏನು ಮಾಡುತ್ತದೆ?&lt;/h2&gt;&lt;p&gt;ಜೈದ್ ಖಾನ್ ಸ್ಥಾಪಿಸಿರುವ Zedital Media ಒಂದು ಬ್ರ್ಯಾಂಡಿಂಗ್ ಹಾಗೂ ಮೀಡಿಯಾ ಜಾಹೀರಾತು ಸಂಸ್ಥೆಯಾಗಿದೆ.&lt;/p&gt;&lt;p&gt;ಈ ಸಂಸ್ಥೆ,&lt;/p&gt;&lt;p&gt;ವೈಯಕ್ತಿಕ ಬ್ರ್ಯಾಂಡಿಂಗ್&lt;/p&gt;&lt;p&gt;ಬ್ರ್ಯಾಂಡ್ ಕನ್ಸಲ್ಟಿಂಗ್&lt;/p&gt;&lt;p&gt;ಮೀಮ್ ಮಾರ್ಕೆಟಿಂಗ್&lt;/p&gt;&lt;p&gt;ಕಂಟೆಂಟ್ ಡಿಸ್ಟ್ರಿಬ್ಯೂಷನ್&lt;/p&gt;&lt;p&gt;Online Reputation Management (ORM)&lt;/p&gt;&lt;p&gt;Content Distribution Management (CDM)&lt;/p&gt;&lt;p&gt;LinkedIn Profile Amplification Management (PAM) ಸೇರಿದಂತೆ ಹಲವು ಡಿಜಿಟಲ್ ಸೇವೆಗಳನ್ನು ಒದಗಿಸುತ್ತದೆ.&lt;/p&gt;&lt;h2&gt;ವೈದ್ಯನಾಗಬೇಕಿದ್ದ ಹುಡುಗ ಉದ್ಯಮಿಯಾದ ಕಥೆ&lt;/h2&gt;&lt;p&gt;ಜೈದ್ ಖಾನ್ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು. ಎಲ್ಲರೂ ನನಗೆ ವೈದ್ಯನಾಗು ಎಂದು ಹೇಳುತ್ತಿದ್ದರು. ವೈದ್ಯನಾಗದಿದ್ದರೆ ಎಂಜಿನಿಯರಿಂಗ್ ಅಥವಾ MBBS ಓದು ಎಂದು ಒತ್ತಡವಿತ್ತು&quot; ಎಂದು ಅವರು ನೆನಪಿಸಿಕೊಂಡಿದ್ದಾರೆ. 12ನೇ ತರಗತಿಯಲ್ಲಿ NEET ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಅವರು ತಮ್ಮ ಆಸಕ್ತಿ ಬೇರೆ ಕ್ಷೇತ್ರದಲ್ಲಿದೆ ಎಂದು ಅರಿತುಕೊಂಡರು. ಗುಟ್ಟಾಗಿ ಕೆಲವು YouTube ಚಾನೆಲ್&zwnj;ಗಳೊಂದಿಗೆ ಕೆಲಸ ಆರಂಭಿಸಿದ ಅವರು, ಬಳಿಕ ಫ್ರೀಲ್ಯಾನ್ಸ್ ಪ್ರಾಜೆಕ್ಟ್&zwnj;ಗಳನ್ನು ಮಾಡತೊಡಗಿದರು. ಅಮೆರಿಕದ ಕ್ಯಾಲಿಫೋರ್ನಿಯಾದ ಇನ್&zwnj;ಫ್ಲುಯೆನ್ಸರ್ ಒಬ್ಬರಿಂದ ಬಂದ ₹1.24 ಲಕ್ಷ ಪಾವತಿಯೇ ತಮ್ಮ ವೃತ್ತಿಜೀವನದ ಮೊದಲ ದೊಡ್ಡ ಯಶಸ್ಸು ಎಂದು ಹೇಳಿದ್ದಾರೆ.&lt;/p&gt;&lt;h2&gt;Canon ಕ್ಯಾಮೆರಾದಿಂದ ಆರಂಭವಾದ ಕನಸು&lt;/h2&gt;&lt;p&gt;NEET ಬಿಟ್ಟು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನವನ್ನು ಆಯ್ಕೆ ಮಾಡಿಕೊಂಡ ಜೈದ್, ಪೋಷಕರ ಬೆಂಬಲದೊಂದಿಗೆ ಹೊಸ ಬದುಕು ಆರಂಭಿಸಿದರು. Canon 80D ಕ್ಯಾಮೆರಾ ಖರೀದಿಸಿ ವಿಡಿಯೊ ನಿರ್ಮಾಣ ಆರಂಭಿಸಿದ ಅವರು, ನಂತರ ತಮ್ಮದೇ ಪ್ರೊಡಕ್ಷನ್ ಹೌಸ್ ಹಾಗೂ ನಂತರ Zedital Media ಸ್ಥಾಪಿಸಿದರು.&lt;/p&gt;&lt;h2&gt;22ರಲ್ಲೇ ಮೊದಲ ಕೋಟಿ&lt;/h2&gt;&lt;p&gt;2023ರಲ್ಲಿ, ಅಂದರೆ ಕೇವಲ 22ನೇ ವಯಸ್ಸಿನಲ್ಲೇ ಮೊದಲ ₹1 ಕೋಟಿ ಗಳಿಸಿದ್ದಾಗಿ ಜೈದ್ ತಿಳಿಸಿದ್ದಾರೆ.ಆ ಹಣವನ್ನು ಐಷಾರಾಮಿ ಜೀವನಕ್ಕೆ ಬಳಸದೇ, ತಮ್ಮ ಕಂಪನಿಯಲ್ಲೇ ಮರುಹೂಡಿಕೆ ಮಾಡಿದರು.ಅದರ ಫಲವಾಗಿ ಕಂಪನಿ ವೇಗವಾಗಿ ಬೆಳೆಯಿತು ಮತ್ತು ಇಂದು ಕೋಟ್ಯಂತರ ಮೌಲ್ಯದ ವ್ಯವಹಾರವಾಗಿ ಬೆಳೆದಿದೆ.&lt;/p&gt;&lt;h2&gt;'ಹಣವೇ ಇಂಧನ' ಎಂದಿದ್ದು ಏಕೆ?&lt;/h2&gt;&lt;p&gt;ಪಾಡ್&zwnj;ಕಾಸ್ಟ್&zwnj;ನಲ್ಲಿ ಹಣ ಎಂದರೆ ನಿಮಗೆ ಏನು? ಎಂದು ಕೇಳಿದಾಗ ಜೈದ್ ಖಾನ್ ನೀಡಿದ ಉತ್ತರವೇ ಈಗ ವೈರಲ್ ಆಗಿದೆ. ನೀವು ಸಾಧಿಸಬೇಕೆಂದಿರುವ ಗುರಿಗೆ ಹಣವೇ ಇಂಧನ. ಹಣ ಅಂತಿಮ ಗುರಿಯಲ್ಲ, ಅದು ನಿಮ್ಮ ಕನಸುಗಳನ್ನು ನನಸಾಗಿಸಲು ನೆರವಾಗುವ ಸಾಧನ. ಎಂಬ ಅವರ ಮಾತು ಅನೇಕ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ.&lt;/p&gt;]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/25-year-old-iim-bangalore-student-says-money-is-fuel-after-building-5-crore-net-worth-suh/articleshow-hkhzwq3"/>
        </item>
        <item>
            <title><![CDATA[ಬಟ್ಟೆ ಹೊಲೆಯುತ್ತಿದ್ದ ಕೈಗಳಿಂದ ಬೃಹತ್ ಸಾಮ್ರಾಜ್ಯದ ಪ್ರೆಸ್ಟೀಜ್ ಕಟ್ಟಿದ ಇರ್ಫಾನ್ ರಜಾಕ್]]></title>
            <link>https://kannada.asianetnews.com/viral/irfan-razack-prestige-group-success-story-from-bengaluru-tailor-to-rs-70000-crore-realestate-business-suh/articleshow-l8w9ga2</link>
            <guid isPermaLink="true">https://kannada.asianetnews.com/viral/irfan-razack-prestige-group-success-story-from-bengaluru-tailor-to-rs-70000-crore-realestate-business-suh/articleshow-l8w9ga2</guid>
            <pubDate>Wed, 05 Aug 2026 13:07:46 +0530</pubDate>
            <description><![CDATA[&lt;p&gt;ಒಂದು ಕಾಲದಲ್ಲಿ ಬೆಂಗಳೂರಿನ ಸಣ್ಣ ಟೈಲರಿಂಗ್ ಅಂಗಡಿಯಿಂದ ಆರಂಭವಾದ ಕುಟುಂಬದ ವ್ಯವಹಾರ, ಇಂದು ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿ ಬೆಳೆದಿದೆ. ಇರ್ಫಾನ್ ರಜಾಕ್ ಅವರ ರಿಯಲ್ ಎಸ್ಟೇಟ್ ದಿಗ್ಗಜವಾಗಿ ಹೊರಹೊಮ್ಮಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz8d41zvssn7yna7m5dh971d,imgname-irfan-razack-prestige-group-success-story-from-bengaluru-tailor-to-rs-70000-crore-realestate-business-1785914853371.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಕಾಲದಲ್ಲಿ ಬೆಂಗಳೂರಿನ ಸಣ್ಣ ಟೈಲರಿಂಗ್ ಅಂಗಡಿಯಿಂದ ಆರಂಭವಾದ ಕುಟುಂಬದ ವ್ಯವಹಾರ, ಇಂದು ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿ ಬೆಳೆದಿದೆ. ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್ ಅವರ ಕಂಪನಿ ಇಂದು ಸುಮಾರು 70,000 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವ ರಿಯಲ್ ಎಸ್ಟೇಟ್ ದಿಗ್ಗಜವಾಗಿ ಹೊರಹೊಮ್ಮಿದೆ.&lt;/p&gt;&lt;h2&gt;ಟೈಲರ್ ಅಂಗಡಿಯಿಂದ ಆರಂಭವಾದ ಪಯಣ&lt;/h2&gt;&lt;p&gt;ಈ ಕಥೆಯ ಆರಂಭ 1956ರಲ್ಲಿ. ಇರ್ಫಾನ್ ರಜಾಕ್ ಅವರ ತಂದೆ ಸತ್ತಾರ್ ರಜಾಕ್ ಬೆಂಗಳೂರಿನಲ್ಲಿ ಪುರುಷರ ಉಡುಪು ಮತ್ತು ಟೈಲರಿಂಗ್ ಅಂಗಡಿಯನ್ನು ಆರಂಭಿಸಿದ್ದರು. ಶರ್ಟ್&zwnj;, ಪ್ಯಾಂಟ್&zwnj;, ಸೂಟ್&zwnj;ಗಳ ಹೊಲಿಗೆ ಮತ್ತು ಮಾರಾಟವೇ ಕುಟುಂಬದ ಪ್ರಮುಖ ಉದ್ಯಮವಾಗಿತ್ತು. ನಂತರ ಇರ್ಫಾನ್ ರಜಾಕ್ ಮತ್ತು ಅವರ ಇಬ್ಬರು ಸಹೋದರರು ವಿದ್ಯಾಭ್ಯಾಸ ಮುಗಿಸಿ ಕುಟುಂಬದ ವ್ಯವಹಾರಕ್ಕೆ ಸೇರಿದರು.&lt;/p&gt;&lt;h2&gt;ಬೆಂಗಳೂರಿನ ಬೆಳವಣಿಗೆಯೇ ಹೊಸ ಅವಕಾಶ&lt;/h2&gt;&lt;p&gt;1980ರ ದಶಕದಲ್ಲಿ ಬೆಂಗಳೂರು ವೇಗವಾಗಿ ವಿಸ್ತಾರವಾಗುತ್ತಿದ್ದಂತೆ ಕುಟುಂಬವು ಹೊಸ ಉದ್ಯಮದತ್ತ ಗಮನ ಹರಿಸಿತು. ನಗರದಲ್ಲಿ ಭೂಮಿಯ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇರ್ಫಾನ್ ರಜಾಕ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭವಿಷ್ಯ ಕಂಡರು.&lt;/p&gt;&lt;h2&gt;40,000 ಬಂಡವಾಳದಿಂದ ಪ್ರೆಸ್ಟೀಜ್ ಆರಂಭ&lt;/h2&gt;&lt;p&gt;1986ರಲ್ಲಿ Prestige Estates &amp;amp; Constructions ಸಂಸ್ಥೆಯನ್ನು ಕೇವಲ 40,000 ಆರಂಭಿಕ ಬಂಡವಾಳದೊಂದಿಗೆ ಆರಂಭಿಸಲಾಯಿತು. ಕಂಪನಿಯ ಮೊದಲ ಯೋಜನೆ 10,000 ಚದರ ಅಡಿ ಕಚೇರಿ ಕಟ್ಟಡ ನಿರ್ಮಾಣವಾಗಿತ್ತು. ಆರಂಭದಲ್ಲಿ ಸಣ್ಣ ಮಟ್ಟದ ಯೋಜನೆಗಳನ್ನು ಕೈಗೊಂಡ ಸಂಸ್ಥೆ, ಬೆಂಗಳೂರಿನ ಐಟಿ ಮತ್ತು ಸೇವಾ ಕ್ಷೇತ್ರದ ಬೆಳವಣಿಗೆಯೊಂದಿಗೆ ವೇಗವಾಗಿ ವಿಸ್ತರಿಸತೊಡಗಿತು.&lt;/p&gt;&lt;h2&gt;ಬೆಂಗಳೂರಿನ ಐಕಾನಿಕ್ ಕಟ್ಟಡಗಳ ಹಿಂದಿರುವ ಹೆಸರು&lt;/h2&gt;&lt;p&gt;ಕಾಲಕ್ರಮೇಣ ಪ್ರೆಸ್ಟೀಜ್ ಗ್ರೂಪ್ ಬೆಂಗಳೂರಿನಾದ್ಯಂತ ವಸತಿ ಯೋಜನೆಗಳು, ಕಚೇರಿ ಸಂಕೀರ್ಣಗಳು ಮತ್ತು ವಾಣಿಜ್ಯ ಅಭಿವೃದ್ಧಿಗಳನ್ನು ನಿರ್ಮಿಸಿತು. ಫೋರಂ ಮಾಲ್, ಯುಬಿ ಸಿಟಿ, ಕಿಂಗ್&zwnj;ಫಿಷರ್ ಟವರ್ಸ್ ಸೇರಿದಂತೆ ಹಲವು ಐಕಾನಿಕ್ ಯೋಜನೆಗಳು ಕಂಪನಿಗೆ ದೇಶವ್ಯಾಪಿ ಹೆಸರು ತಂದುಕೊಟ್ಟವು.&lt;/p&gt;&lt;h2&gt;IPO ಬಳಿಕ ವೇಗದ ವಿಸ್ತರಣೆ&lt;/h2&gt;&lt;p&gt;2010ರಲ್ಲಿ ಪ್ರೆಸ್ಟೀಜ್ ಎಸ್ಟೇಟ್ಸ್ ಷೇರುಪೇಟೆಗೆ ಪ್ರವೇಶಿಸಿ 1,200 ಕೋಟಿ ಸಂಗ್ರಹಿಸಿತು. ಈ ಬಂಡವಾಳದ ನೆರವಿನಿಂದ ಕಂಪನಿ ದಕ್ಷಿಣ ಭಾರತದಾಚೆಗೂ ತನ್ನ ವ್ಯಾಪಾರವನ್ನು ವಿಸ್ತರಿಸಿತು. ನಂತರ ಹೈದರಾಬಾದ್, ಚೆನ್ನೈ, ಕೊಚ್ಚಿ, ಗೋವಾ, ಪುಣೆ, ಮುಂಬೈ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ತನ್ನ ಯೋಜನೆಗಳನ್ನು ಆರಂಭಿಸಿತು.&lt;/p&gt;&lt;h2&gt;ಮುಂಬೈ ಮಾರುಕಟ್ಟೆಯಲ್ಲೂ ಯಶಸ್ಸು&lt;/h2&gt;&lt;p&gt;2020ರ ಸುಮಾರಿಗೆ ಪ್ರೆಸ್ಟೀಜ್ ಗ್ರೂಪ್ ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಕಾಲಿಟ್ಟಿತು. ಹೊಸ ಜಾಗಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಸಂಕಷ್ಟದಲ್ಲಿದ್ದ ಯೋಜನೆಗಳ ಸ್ವಾಧೀನ, ಪುನರಾಭಿವೃದ್ಧಿ ಹಾಗೂ ಸ್ಥಳೀಯ ಪಾಲುದಾರರೊಂದಿಗೆ ಜಂಟಿ ಅಭಿವೃದ್ಧಿ ಯೋಜನೆಗಳ ಮೂಲಕ ತನ್ನ ಅಸ್ತಿತ್ವವನ್ನು ಬಲಪಡಿಸಿತು.&lt;/p&gt;&lt;h2&gt;ಮನೆಗಳಷ್ಟೇ ಅಲ್ಲ, ಮಾಲ್&zwnj;, ಕಚೇರಿ, ಹೋಟೆಲ್&zwnj;&lt;/h2&gt;&lt;p&gt;ಪ್ರೆಸ್ಟೀಜ್ ಗ್ರೂಪ್ ಇಂದು ಕೇವಲ ಅಪಾರ್ಟ್&zwnj;ಮೆಂಟ್ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಕಂಪನಿ ಐಟಿ ಪಾರ್ಕ್&zwnj;ಗಳು, ಕಚೇರಿ ಸಂಕೀರ್ಣಗಳು, ಶಾಪಿಂಗ್ ಮಾಲ್&zwnj;ಗಳು, ಐಷಾರಾಮಿ ಹೋಟೆಲ್&zwnj;ಗಳು ಹಾಗೂ ಮಿಶ್ರ-ಬಳಕೆಯ (Mixed-use) ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದೆ.&lt;/p&gt;&lt;h2&gt;ಕುಟುಂಬದ ಪಾತ್ರವೇ ಯಶಸ್ಸಿನ ಗುಟ್ಟು&lt;/h2&gt;&lt;p&gt;ಇರ್ಫಾನ್ ರಜಾಕ್ ಇಂದಿಗೂ ಕಂಪನಿಯ ಕಾರ್ಯಾಚರಣೆಯಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರೊಂದಿಗೆ ಪ್ರತಿಯೊಂದು ಪ್ರಮುಖ ಯೋಜನೆಯನ್ನು ಪರಿಶೀಲಿಸುತ್ತಾರೆ. ಪ್ರಸ್ತುತ ರಜಾಕ್ ಕುಟುಂಬದ ಎರಡನೇ ಮತ್ತು ಮೂರನೇ ತಲೆಮಾರಿನ ಸದಸ್ಯರೂ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.&lt;/p&gt;&lt;h2&gt;70,000 ಕೋಟಿ ಕಂಪನಿ, 1.5 ಬಿಲಿಯನ್ ಆಸ್ತಿ&lt;/h2&gt;&lt;p&gt;2026ರ ಆಗಸ್ಟ್ ವೇಳೆಗೆ ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಸುಮಾರು 70,000 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ್ದು, ಭಾರತದ ಪ್ರಮುಖ ಪಟ್ಟಿಮಾಡಿದ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿದೆ. ಫೋರ್ಬ್ಸ್ ಅಂದಾಜಿನ ಪ್ರಕಾರ, ಇರ್ಫಾನ್ ರಜಾಕ್ ಅವರ ನಿವ್ವಳ ಆಸ್ತಿ ಸುಮಾರು 1.5 ಬಿಲಿಯನ್ ಡಾಲರ್ ಆಗಿದೆ.&lt;/p&gt;]]></content:encoded>
            <category>money</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/irfan-razack-prestige-group-success-story-from-bengaluru-tailor-to-rs-70000-crore-realestate-business-suh/articleshow-l8w9ga2"/>
        </item>
        <item>
            <title><![CDATA[ಜನರಿಗೆ ಮತ್ತೆ ಬೆಲೆ ಏರಿಕೆ ಬರೆ..! ಆಗಸ್ಟ್‌ನಿಂದ ಇವುಗಳ ಭಾರೀ ಹೆಚ್ಚಳ.. ಲಿಸ್ಟ್‌ ನೋಡಿ ಗಾಬರಿ ಆಗಬೇಡಿ!]]></title>
            <link>https://kannada.asianetnews.com/news/price-hike-hits-people-again-major-increase-from-august-like-tv-car-televisions-moters-mobile-gkn/articleshow-mos730k</link>
            <guid isPermaLink="true">https://kannada.asianetnews.com/news/price-hike-hits-people-again-major-increase-from-august-like-tv-car-televisions-moters-mobile-gkn/articleshow-mos730k</guid>
            <pubDate>Fri, 31 Jul 2026 08:58:59 +0530</pubDate>
            <description><![CDATA[&lt;p&gt;ಸಾಮಾನ್ಯ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಆಗಸ್ಟ್ ತಿಂಗಳಿನಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದ್ದು, ಹಲವು ದಿನಬಳಕೆ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿವೆ. ಹೇರ್ ಆಯಿಲ್, ಟೀ ಪುಡಿ, ಬಟ್ಟೆಗಳು ಹಾಗೂ ಎಲೆಕ್ಟ್ರಾನಿಕ್ ಸರಕುಗಳ ಬೆಲೆಗಳು ಶೀಘ್ರದಲ್ಲೇ ಗಗನಕ್ಕೇರಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyv3f3rjbxehmqrc6qg511wj,imgname-price-hike-1785468522258.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಾಮಾನ್ಯ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಆಗಸ್ಟ್ ತಿಂಗಳಿನಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದ್ದು, ಹಲವು ದಿನಬಳಕೆ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿವೆ. ಹೇರ್ ಆಯಿಲ್, ಟೀ ಪುಡಿ, ಬಟ್ಟೆಗಳು ಹಾಗೂ ಎಲೆಕ್ಟ್ರಾನಿಕ್ ಸರಕುಗಳ ಬೆಲೆಗಳು ಶೀಘ್ರದಲ್ಲೇ ಗಗನಕ್ಕೇರಲಿವೆ.&lt;/p&gt;&lt;p&gt;ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅಮೆರಿಕ-ಇರಾನ್ ನಡುವಿನ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯು ಜಾಗತಿಕ ಪೂರೈಕೆ ಸರಪಳಿಯನ್ನು (Supply Chain) ಸಂಪೂರ್ಣವಾಗಿ ಹದಗೆಡಿಸಿದೆ. ಇದರಿಂದಾಗಿ ಸರಕು ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದು, ಕಚ್ಚಾ ವಸ್ತುಗಳು, ಕಚ್ಚಾ ತೈಲ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿವೆ. ಜಾಗತಿಕ ರಾಜಕೀಯ ಅನಿಶ್ಚಿತತೆಯು ಹಣದುಬ್ಬರದ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;p&gt;ಇದರ ನೇರ ಪರಿಣಾಮ ಭಾರತದ ಮೇಲೂ ಬೀರುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ತೀವ್ರ ಏರಿಳಿತ ಕಂಡುಬರುತ್ತಿರುವುದರಿಂದ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗಿ ಬಂದಿದೆ. ಈ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಹಲವು ಪ್ರಮುಖ ಕಂಪನಿಗಳು ಆಗಸ್ಟ್&zwnj;ನಿಂದ ಬೆಲೆ ಏರಿಕೆಗೆ ಮುಂದಾಗಿವೆ.&lt;/p&gt;&lt;h2&gt;&lt;strong&gt;ಯಾವ ವಸ್ತುಗಳ ಬೆಲೆ ಎಷ್ಟು ಹೆಚ್ಚಾಗಬಹುದು?&lt;/strong&gt;&lt;/h2&gt;&lt;ul&gt; &lt;li&gt;ಆಗಸ್ಟ್ ತಿಂಗಳಿನಿಂದ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಸ್ಮಾರ್ಟ್&zwnj;ಫೋನ್&zwnj;ಗಳು, ಬಟ್ಟೆಗಳು ಮತ್ತು ಕಾರುಗಳ ಬೆಲೆಗಳು ಹೆಚ್ಚಾಗಲಿವೆ&lt;/li&gt; &lt;li&gt;ಪ್ಯಾಕ್ ಮಾಡಿದ ಟೀ ಪುಡಿ: ಶೇ. 6 ರಿಂದ ಶೇ. 8 ರಷ್ಟು ಹೆಚ್ಚಳ&lt;/li&gt; &lt;li&gt;&amp;nbsp;ಹೇರ್ ಆಯಿಲ್ (ಕೂದಲ ಎಣ್ಣೆ): ಶೇ. 6 ರಿಂದ ಶೇ. 8 ರಷ್ಟು ಹೆಚ್ಚಳ&amp;nbsp;&lt;/li&gt; &lt;li&gt;ಟಿವಿ (Televisions): ಶೇ. 4 ರಿಂದ ಶೇ. 6 ರಷ್ಟು ಹೆಚ್ಚಳ&lt;/li&gt; &lt;li&gt;&amp;nbsp;ರೆಫ್ರಿಜರೇಟರ್ (ಫ್ರಿಡ್ಜ್): ಶೇ. 4 ರಿಂದ ಶೇ. 6 ರಷ್ಟು ಹೆಚ್ಚಳ&amp;nbsp;&lt;/li&gt; &lt;li&gt;ವಾಷಿಂಗ್ ಮೆಷಿನ್: ಶೇ. 10 ರವರೆಗೆ ಹೆಚ್ಚಳ&amp;nbsp;&lt;/li&gt; &lt;li&gt;ಬ್ರಾಂಡೆಡ್ ಬಟ್ಟೆಗಳು: ಶೇ. 8 ರವರೆಗೆ ಹೆಚ್ಚಳ&lt;/li&gt; &lt;li&gt;ಸ್ಮಾರ್ಟ್&zwnj;ಫೋನ್ ಮತ್ತು ಲ್ಯಾಪ್&zwnj;ಟಾಪ್: ಮೆಮೊರಿ ಚಿಪ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಬಿಡಿಭಾಗಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ಇವುಗಳ ದರವೂ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ.&lt;/li&gt;&lt;/ul&gt;&lt;h2&gt;&lt;strong&gt;ಕಾರುಗಳ ಬೆಲೆಯೂ ದುಬಾರಿ!&lt;/strong&gt;&lt;/h2&gt;&lt;p&gt;ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ವೆಚ್ಚದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ಆಗಸ್ಟ್&zwnj;ನಿಂದ ಕಾರುಗಳ ಬೆಲೆ ಹೆಚ್ಚಿಸಲು ನಿರ್ಧರಿಸಿವೆ. ಮಾರುತಿ ಸುಜುಕಿ ತನ್ನ ಆಯ್ದ ಮಾಡೆಲ್&zwnj;ಗಳ ಬೆಲೆಯನ್ನು 30,000 ರೂ.ವರೆಗೆ ಹೆಚ್ಚಿಸುವ ಸಾಧ್ಯತೆಯಿದೆ. ಹೋಂಡಾ ಕಾರ್ಸ್ ಇಂಡಿಯಾ ಆಗಸ್ಟ್ 1 ರಿಂದಲೇ ಹೊಸ ಬೆಲೆಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಮರ್ಸಿಡಿಸ್-ಬೆಂಜ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್-ಬೆಂಜ್ ಕೂಡ ಆಗಸ್ಟ್&zwnj;ನಿಂದ ದರ ಹೆಚ್ಚಿಸಲು ಯೋಜಿಸುತ್ತಿದೆ. ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಇವುಗಳು ಈಗಾಗಲೇ ಪ್ರಸಕ್ತ ತಿಂಗಳ ಆರಂಭದಲ್ಲೇ ಕೆಲವು ಮಾಡೆಲ್&zwnj;ಗಳ ಬೆಲೆಯನ್ನು ಹೆಚ್ಚಿಸಿವೆ. ಮುಂಬರುವ ಹಬ್ಬದ ಸೀಸನ್&zwnj;ನಲ್ಲಿ ಬಟ್ಟೆಗಳು, ಸ್ಮಾರ್ಟ್&zwnj;ಫೋನ್&zwnj;ಗಳು ಅಥವಾ ಕಾರುಗಳನ್ನು ಖರೀದಿಸಲು ಯೋಜಿಸುತ್ತಿರುವ ಗ್ರಾಹಕರಿಗೆ ಈ ಬೆಲೆ ಏರಿಕೆ ದೊಡ್ಡ ಹೊರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.&lt;/p&gt;]]></content:encoded>
            <category>money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/news/price-hike-hits-people-again-major-increase-from-august-like-tv-car-televisions-moters-mobile-gkn/articleshow-mos730k"/>
        </item>
        <item>
            <title><![CDATA[₹2 ಲಕ್ಷದಿಂದ ₹40,000ಕ್ಕೆ ಕುಸಿದ ತಿಂಗಳ ಆದಾಯ! 'ಎಐ' ತಂದಿಟ್ಟ ಸಂಕಷ್ಟ ಬಿಚ್ಚಿಟ್ಟ ಕಾಪಿರೈಟರ್!]]></title>
            <link>https://kannada.asianetnews.com/jobs/from-2-lakh-to-40k-copywriter-says-ai-turned-his-career-upside-down/articleshow-osvgegv</link>
            <guid isPermaLink="true">https://kannada.asianetnews.com/jobs/from-2-lakh-to-40k-copywriter-says-ai-turned-his-career-upside-down/articleshow-osvgegv</guid>
            <pubDate>Mon, 03 Aug 2026 17:00:32 +0530</pubDate>
            <description><![CDATA[&lt;p&gt;ಕಾಪಿರೈಟರ್ ಒಬ್ಬರು AI ಕಾರಣದಿಂದ ತಮ್ಮ ಮಾಸಿಕ ಆದಾಯ ₹2 ಲಕ್ಷದಿಂದ ₹40 ಸಾವಿರಕ್ಕೆ ಕುಸಿದಿದೆ ಎಂದು ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡ ಬಳಿಕ ಕಡಿಮೆ ಸಂಬಳದ ಕೆಲಸಕ್ಕೆ ಸೇರಿರುವ ಅವರು, AI ಉದ್ಯೋಗ ಕ್ಷೇತ್ರದಲ್ಲಿ ತರುತ್ತಿರುವ ಬದಲಾವಣೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್&zwnj;ಗೆ ನೆಟ್ಟಿಗರು ಧೈರ್ಯ ತುಂಬುವ ಪ್ರತಿಕ್ರಿಯೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz2gmy7gs5vtwpzcxs2dbgcy,imgname-ai-replaced-my-job--freelancer-s-income-crashes-by-80-1785717225712.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;AI ಅಲೆಗೆ ತತ್ತರಿಸಿದ ಕಾಪಿರೈಟರ್ ಬದುಕು! ಆದಾಯ ಕುಸಿತದ ಹಿಂದೆ ಏನಿದೆ?&lt;/strong&gt;&lt;/p&gt;&lt;p&gt;ಕೃತಕ ಬುದ್ಧಿಮತ್ತೆ (AI) ಅನೇಕ ಉದ್ಯೋಗ ಕ್ಷೇತ್ರಗಳಲ್ಲಿ ವೇಗವಾಗಿ ಬದಲಾವಣೆ ತರುತ್ತಿದೆ. ಕೆಲವರಿಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದರೆ, ಮತ್ತೊಂದೆಡೆ ಕೆಲ ವೃತ್ತಿಪರರಿಗೆ ಉದ್ಯೋಗ ಮತ್ತು ಆದಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಂತಹದ್ದೇ ಅನುಭವವನ್ನು ಹೈದರಾಬಾದ್ ಮೂಲದ ಕಾಪಿರೈಟರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;₹2 ಲಕ್ಷ ಸಂಬಳದಿಂದ ₹40 ಸಾವಿರಕ್ಕೆ ಕುಸಿತ!&lt;/strong&gt;&lt;/p&gt;&lt;p&gt;ರೆಡ್ಡಿಟ್&zwnj;ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವ್ಯಕ್ತಿ, ಎಂಟು ವರ್ಷಗಳ ಹಿಂದೆ ಫ್ರೀಲಾನ್ಸ್ ಕಾಪಿರೈಟಿಂಗ್ ಆರಂಭಿಸಿದ್ದಾಗಿ ತಿಳಿಸಿದ್ದಾರೆ. ಕಾಲೇಜು ಶಿಕ್ಷಣ ಪೂರ್ಣಗೊಳಿಸದಿದ್ದರೂ ಕೌಶಲ್ಯದ ಆಧಾರದಲ್ಲಿ ವೃತ್ತಿ ಕಟ್ಟಿಕೊಂಡು, 22ನೇ ವಯಸ್ಸಿನಲ್ಲೇ ತಿಂಗಳಿಗೆ ₹2 ಲಕ್ಷ ಆದಾಯ ಗಳಿಸುತ್ತಿದ್ದರಂತೆ. ಆದರೆ 2026ರಲ್ಲಿ AI ತಂತ್ರಜ್ಞಾನ ವ್ಯಾಪಕ ಬಳಕೆಗೆ ಬಂದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Went from 2L a month to 40K a month salary, the...&amp;nbsp;by u/username in r/IndianWorkplace&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;AI ಕಾರಣದಿಂದ ಕೆಲಸ ಕಳೆದುಕೊಂಡೆ ಎಂದ ಉದ್ಯೋಗಿ..!&lt;/strong&gt;&lt;/p&gt;&lt;p&gt;ತಮ್ಮ ವಿದೇಶಿ ಕ್ಲೈಂಟ್&zwnj;ಗಳು AI ಆಧಾರಿತ ಕಂಟೆಂಟ್ ಉತ್ಪಾದನೆಗೆ ಆದ್ಯತೆ ನೀಡಿದ್ದು, ಸ್ಥಳೀಯ ಸಿಬ್ಬಂದಿಯನ್ನು ನೇಮಿಸಿಕೊಂಡ ಕಾರಣ ಎಲ್ಲಾ ಪ್ರಾಜೆಕ್ಟ್&zwnj;ಗಳನ್ನು ಕಳೆದುಕೊಂಡೆ ಎಂದು ಅವರು ಆರೋಪಿಸಿದ್ದಾರೆ. ಕೆಲವೇ ವಾರಗಳಲ್ಲಿ ಆದಾಯ ಶೂನ್ಯಕ್ಕೆ ಇಳಿದಿದ್ದು, ನಂತರ ಹೈದರಾಬಾದ್&zwnj;ನ ಮಾರ್ಕೆಟಿಂಗ್ ಏಜೆನ್ಸಿಯಲ್ಲಿ ತಿಂಗಳಿಗೆ ₹40 ಸಾವಿರ ಸಂಬಳಕ್ಕೆ ಕೆಲಸ ಸೇರಬೇಕಾಯಿತು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಹೆಚ್ಚು ಜವಾಬ್ದಾರಿ... ಕಡಿಮೆ ವೇತನ!&lt;/strong&gt;&lt;/p&gt;&lt;p&gt;ಪ್ರಸ್ತುತ ತೆಲಂಗಾಣ ಪ್ರವಾಸೋದ್ಯಮದ ಮಾರ್ಕೆಟಿಂಗ್ ತಂತ್ರ ರೂಪಿಸುವ ಪ್ರಮುಖ ತಂಡದಲ್ಲಿದ್ದರೂ, ಹಿಂದಿನ ಆದಾಯಕ್ಕೆ ಹೋಲಿಸಿದರೆ ವೇತನ ಬಹಳ ಕಡಿಮೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲಸದ ಒತ್ತಡ ಹೆಚ್ಚಿದ್ದರೂ ಸೃಜನಶೀಲ ವಾತಾವರಣದ ಕೊರತೆ ಹಾಗೂ ಉತ್ಸಾಹವಿಲ್ಲದ ಕೆಲಸದ ಸಂಸ್ಕೃತಿ ತಮ್ಮ ಪ್ರೇರಣೆಯನ್ನೇ ಕುಗ್ಗಿಸಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;'ಧೈರ್ಯ ಕಳೆದುಕೊಳ್ಳಬೇಡಿ' ಎಂದ ನೆಟ್ಟಿಗರು..!&lt;/strong&gt;&lt;/p&gt;&lt;p&gt;ಈ ಪೋಸ್ಟ್&zwnj;ಗೆ ಪ್ರತಿಕ್ರಿಯಿಸಿದ ಅನೇಕರು, AI ಯುಗದಲ್ಲಿ ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದ್ದಾರೆ. ಕೆಲವರು ಇದು ತಾತ್ಕಾಲಿಕ ಹಿನ್ನಡೆಯಷ್ಟೇ ಎಂದು ಹೇಳಿದರೆ, ಇನ್ನೂ ಕೆಲವರು ಮತ್ತೆ ಫ್ರೀಲಾನ್ಸಿಂಗ್ ಆರಂಭಿಸಿ ನೆಟ್&zwnj;ವರ್ಕ್ ವಿಸ್ತರಿಸಿಕೊಳ್ಳುವಂತೆ ಪ್ರೋತ್ಸಾಹಿಸಿದ್ದಾರೆ. ಬದಲಾವಣೆಗೆ ಹೊಂದಿಕೊಳ್ಳುವವರು ಮಾತ್ರ ಮುಂದಿನ ದಿನಗಳಲ್ಲಿ ಯಶಸ್ಸು ಸಾಧಿಸಬಲ್ಲರು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.&lt;/p&gt;]]></content:encoded>
            <category>money</category>
            <dc:creator>Chandrashekar GS</dc:creator>
            <atom:link href="https://kannada.asianetnews.com/jobs/from-2-lakh-to-40k-copywriter-says-ai-turned-his-career-upside-down/articleshow-osvgegv"/>
        </item>
        <item>
            <title><![CDATA[Parle-G: ಪ್ರತಿ ಮನೆಯ ನೆಚ್ಚಿನ ಪಾರ್ಲೆ ಜಿಗೆ  95 ವರ್ಷಗಳ ಸಂಭ್ರಮ, ಹೊಸ ದಾಖಲೆ ಬರೆದ ಕಂಪನಿ]]></title>
            <link>https://kannada.asianetnews.com/business/parle-completes-95-years-turnover-of-four-major-brands-crosses-1000-crore/articleshow-ox04gcz</link>
            <guid isPermaLink="true">https://kannada.asianetnews.com/business/parle-completes-95-years-turnover-of-four-major-brands-crosses-1000-crore/articleshow-ox04gcz</guid>
            <pubDate>Wed, 29 Jul 2026 12:19:05 +0530</pubDate>
            <description><![CDATA[&lt;p&gt;ಭಾರತದ ಪ್ರತಿ ಮನೆಯಲ್ಲೂ ಪರಿಚಿತವಾಗಿರುವ ಪಾರ್ಲೆ-ಜಿ ಬಿಸ್ಕತ್ ತಯಾರಿಸುವ ಪಾರ್ಲೆ ಪ್ರೊಡಕ್ಟ್ಸ್ ಸಂಸ್ಥೆ ತನ್ನ ಯಶಸ್ವಿ ಪಯಣದ 95 ವರ್ಷಗಳನ್ನು ಪೂರ್ಣಗೊಳಿಸಿದೆ. ಈ ಸಂಭ್ರಮದ ಜೊತೆಗೆ ಕಂಪನಿ ಮತ್ತೊಂದು ಮಹತ್ವದ ಸಾಧನೆಯನ್ನೂ ದಾಖಲಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypa39hddd1tamzhhjm6z167,imgname-parle-g-1785307702829.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಾರ್ಲೆ ಜಿ ಬಿಸ್ಕತ್&zwnj; ಇಂದಿಗೂ ಅನೇಕರ ಫೆವರೆಟ್.&zwnj; ಟೀ ಜೊತೆ ಬಿಸ್ಕತ್&zwnj; ಬೇಕೇಬೇಕು. ಪಾರ್ಲೆ ಜಿ ತನ್ನ ಗುಣಮಟ್ಟದಿಂದ ಲಕ್ಷಾಂತರ ಜನರ ಮನಸ್ಸು ಗೆದ್ದಿದೆ. ಪಾರ್ಲೆ ಜಿ ಬಿಸ್ಕತ್&zwnj; ಕಂಪನಿ ಪಾರ್ಲೆ ಪ್ರೊಡಕ್ಟ್&zwnj; ಸಂಸ್ಥೆ ಈಗ ಯಶಸ್ವಿ 95 ವರ್ಷಗಳನ್ನು ಪೂರೈಸಿದೆ. ಕಂಪನಿಯ ಹಲವು ಜನಪ್ರಿಯ ಬ್ರ್ಯಾಂಡ್ಗಳು ವರ್ಷಕ್ಕೆ 1,000 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸುವ ಕ್ಲಬ್ಗೆ ಸೇರ್ಪಡೆಯಾಗಿವೆ. ಅವುಗಳಲ್ಲಿ ಪಾರ್ಲೆ-ಜಿ, ಹೈಡ್ ಅಂಡ್ ಸೀಕ್, ಮೊನಾಕೊ ಮತ್ತು ಮೆಲೋಡಿ ಪ್ರಮುಖವಾಗಿವೆ.&lt;/p&gt;&lt;h2&gt;ಪಾರ್ಲೆ ಜಿ ದಾಖಲೆ&lt;/h2&gt;&lt;p&gt;ಇವುಗಳಲ್ಲಿ ಪಾರ್ಲೆ-ಜಿ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಬಿಸ್ಕತ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬ್ರ್ಯಾಂಡ್ನ ವಾರ್ಷಿಕ ಆದಾಯವೇ 17,000 ಕೋಟಿ ರೂಪಾಯಿಗೂ ಹೆಚ್ಚು ಎಂದು ಕಂಪನಿ ತಿಳಿಸಿದೆ. ಕಂಪನಿಯ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮಯಂಕ್ ಶಾ ಅವರ ಪ್ರಕಾರ, ಕಾಲಕ್ಕೆ ತಕ್ಕಂತೆ ಪ್ಯಾಕೇಜಿಂಗ್, ಜಾಹೀರಾತು ಮತ್ತು ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದರಿಂದಲೇ ಪಾರ್ಲೆ ಹಲವು ತಲೆಮಾರಿನ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದಿದ್ದಾರೆ.&lt;/p&gt;&lt;p&gt;2024&ndash;25ನೇ ಹಣಕಾಸು ವರ್ಷದಲ್ಲಿ ಪಾರ್ಲೆ ಪ್ರೊಡಕ್ಟ್ಸ್ ಸುಮಾರು 15,570 ಕೋಟಿ ರೂಪಾಯಿ ಆದಾಯ ಗಳಿಸಿತ್ತು. 980 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿತ್ತು. ಎಫ್ಎಂಸಿಜಿ ಕ್ಷೇತ್ರದಲ್ಲಿ ಬ್ರಿಟಾನಿಯಾ ಸೇರಿದಂತೆ ದೊಡ್ಡ ಕಂಪನಿಗಳಿಗೆ ಪಾರ್ಲೆ ಪ್ರಬಲ ಪೈಪೋಟಿ ನೀಡುತ್ತಿದೆ.&lt;/p&gt;&lt;p&gt;ಇದರ ಜೊತೆಗೆ, 1929ರಲ್ಲಿ ಆರಂಭವಾದ ಈ ಕುಟುಂಬ ಆಧಾರಿತ ಕಂಪನಿ ಈಗ ಷೇರು ಮಾರುಕಟ್ಟೆಗೆ ಪ್ರವೇಶಿಸುವ ಪ್ಲಾನ್ ರೂಪಿಸಿದೆ. ಸುಮಾರು 1 ಬಿಲಿಯನ್ ಡಾಲರ್ ಮೌಲ್ಯದ ಐಪಿಒ ತರಲು ಕಂಪನಿ ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಕಂಪನಿಯ ಮೌಲ್ಯ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಐಪಿಒ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.&lt;/p&gt;]]></content:encoded>
            <category>money</category>
            <dc:creator>Roopa Hegde</dc:creator>
            <atom:link href="https://kannada.asianetnews.com/business/parle-completes-95-years-turnover-of-four-major-brands-crosses-1000-crore/articleshow-ox04gcz"/>
        </item>
        <item>
            <title><![CDATA["ನಿಮ್ಮ ಸಂಬಳವನ್ನು ಸದ್ದಿಲ್ಲದೆ ಖಾಲಿ ಮಾಡುತ್ತಿವೆ ಈ 5 ವೆಚ್ಚಗಳು!" - ಬೆಂಗಳೂರು ವ್ಯಕ್ತಿಯ ವೈರಲ್ ಪೋಸ್ಟ್]]></title>
            <link>https://kannada.asianetnews.com/viral/bengaluru-man-reveals-5-silent-expenses-draining-your-salary/articleshow-pgcxyak</link>
            <guid isPermaLink="true">https://kannada.asianetnews.com/viral/bengaluru-man-reveals-5-silent-expenses-draining-your-salary/articleshow-pgcxyak</guid>
            <pubDate>Sun, 02 Aug 2026 09:08:50 +0530</pubDate>
            <description><![CDATA[&lt;p&gt;ಬೆಂಗಳೂರು ಮೂಲದ ಕಂಟೆಂಟ್ ಕ್ರಿಯೇಟರ್ ಅಕ್ಷಯ್ ಸಿಎನ್, ಸಂಬಳ ಕಡಿಮೆ ಎನ್ನುವುದಕ್ಕಿಂತ ದೈನಂದಿನ ಸಣ್ಣ ಖರ್ಚಿನ ಅಭ್ಯಾಸಗಳೇ ಹಣವನ್ನು ಸದ್ದಿಲ್ಲದೆ ಕರಗಿಸುತ್ತವೆ ಎಂದು ಹೇಳಿದ್ದಾರೆ. ಆಹಾರ ಡೆಲಿವರಿ, ಕ್ಯಾಬ್, ಅನಗತ್ಯ ಶಾಪಿಂಗ್, ಬಳಸದ ಚಂದಾದಾರಿಕೆ ಹಾಗೂ ಯೋಜನೆಯಿಲ್ಲದ ವಾರಾಂತ್ಯ ವೆಚ್ಚಗಳನ್ನು ನಿಯಂತ್ರಿಸಿದರೆ ಉಳಿತಾಯ ಹೆಚ್ಚಿಸಬಹುದು ಎಂಬ ಸಲಹೆ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz08heysymdvc4tb1btta9s5,imgname-bengaluru-man-reveals-5-silent-expenses-draining-your-salary-1785641614297.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಬಳವಲ್ಲ, ಖರ್ಚಿನ ಅಭ್ಯಾಸವೇ ನಿಜವಾದ ಸವಾಲು!&lt;/strong&gt;&lt;/p&gt;&lt;p&gt;ಬೆಂಗಳೂರು ನಗರದಲ್ಲಿ ಉತ್ತಮ ಸಂಬಳ ಗಳಿಸಿದರೂ ತಿಂಗಳ ಕೊನೆಯಲ್ಲಿ ಹಣ ಕೈಯಲ್ಲಿ ಉಳಿಯುವುದಿಲ್ಲ ಎಂಬ ದೂರು ಅನೇಕರದ್ದು. ಆದರೆ ಇದಕ್ಕೆ ಕಾರಣ ಕಡಿಮೆ ಆದಾಯವಲ್ಲ, ನಮ್ಮ ದೈನಂದಿನ ಖರ್ಚಿನ ಅಭ್ಯಾಸಗಳೇ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ಚರ್ಚೆಗೆ ಕಾರಣವಾಗಿದೆ. ಕೆಲವು ಸಣ್ಣ ವೆಚ್ಚಗಳು ಗಮನಿಸದೆಯೇ ದೊಡ್ಡ ಹಣಕಾಸಿನ ಹೊರೆ ಆಗುತ್ತವೆ ಎಂದು ವಿಷಯ ರಚನೆಕಾರ ಅಕ್ಷಯ್ ಸಿಎನ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಸದ್ದಿಲ್ಲದೆ ಸಂಬಳ ಕರಗಿಸುವ ಐದು ಅಭ್ಯಾಸಗಳು!&lt;/strong&gt;&lt;/p&gt;&lt;p&gt;Instagram ವಿಡಿಯೊದಲ್ಲಿ ಅಕ್ಷಯ್ ಐದು ಸಾಮಾನ್ಯ ಖರ್ಚುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಪ್ರತಿದಿನ ಆಹಾರವನ್ನು ಆನ್&zwnj;ಲೈನ್&zwnj;ನಲ್ಲಿ ಆರ್ಡರ್ ಮಾಡುವುದು, ಅಗತ್ಯವಿಲ್ಲದಿದ್ದರೂ ಕ್ಯಾಬ್ ಬಳಸುವುದು, ಆಫರ್ ಹೆಸರಿನಲ್ಲಿ ಅನಗತ್ಯ ಶಾಪಿಂಗ್ ಮಾಡುವುದು, ಬಳಸದೇ ಇರುವ OTT ಹಾಗೂ ಇತರ ಡಿಜಿಟಲ್ ಚಂದಾದಾರಿಕೆಗಳಿಗೆ ಹಣ ಪಾವತಿಸುವುದು ಮತ್ತು ಪ್ರತಿ ವಾರಾಂತ್ಯ ಯೋಜನೆಯಿಲ್ಲದೆ ಹೊರಗಡೆ ಹೆಚ್ಚು ಖರ್ಚು ಮಾಡುವುದು ಉಳಿತಾಯಕ್ಕೆ ದೊಡ್ಡ ಅಡ್ಡಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಆದಾಯವಲ್ಲ, ಹಣಕಾಸಿನ ಅರಿವು ಮುಖ್ಯ!&lt;/strong&gt;&lt;/p&gt;&lt;p&gt;ಹೆಚ್ಚು ಸಂಬಳ ಗಳಿಸುವ ಎಲ್ಲರೂ ಶ್ರೀಮಂತರಾಗುವುದಿಲ್ಲ ಎಂಬುದನ್ನು ಅವರು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ತಿಂಗಳಿಗೆ ₹40 ಸಾವಿರ ಗಳಿಸುವವರಲ್ಲೂ ಉಳಿತಾಯ ಇರುವವರಿದ್ದಾರೆ. ಮತ್ತೊಂದೆಡೆ ₹1 ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುವವರಿಗೂ ತಿಂಗಳ ಕೊನೆಯಲ್ಲಿ ಹಣದ ಕೊರತೆ ಎದುರಾಗುತ್ತದೆ. ಇದಕ್ಕೆ ಕಾರಣ ಆದಾಯದ ಪ್ರಮಾಣವಲ್ಲ, ಹಣವನ್ನು ಹೇಗೆ ಬಳಸಲಾಗುತ್ತಿದೆ ಎಂಬ ಅರಿವು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಒಂದು ಪ್ರಶ್ನೆ ನಿಮ್ಮ ಖರ್ಚನ್ನು ಬದಲಾಯಿಸಬಹುದು..!&lt;/strong&gt;&lt;/p&gt;&lt;p&gt;ಯಾವುದೇ ವಸ್ತು ಖರೀದಿಸುವ ಮೊದಲು &ldquo;ಇದನ್ನು 30 ದಿನಗಳ ನಂತರವೂ ಖರೀದಿಸಿದ್ದು ಸರಿಯೇ ಎಂದು ನನಗೆ ಅನಿಸುತ್ತದೆಯೇ?&rdquo; ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅಕ್ಷಯ್ ಸಲಹೆ ನೀಡಿದ್ದಾರೆ. ಈ ಒಂದು ಸರಳ ಚಿಂತನೆ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ, ಉಳಿತಾಯದ ಅಭ್ಯಾಸ ಬೆಳೆಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ!&lt;/strong&gt;&lt;/p&gt;&lt;p&gt;ಈ ವಿಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು &ldquo;ಇದು ಎಲ್ಲರಿಗೂ ತಿಳಿದಿರುವ ಸತ್ಯ&rdquo; ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ಖರ್ಚಿನ ಮೇಲೆ ನಿಯಂತ್ರಣ ಸಾಧಿಸಲು ಈ ರೀತಿಯ ಜಾಗೃತಿ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚುತ್ತಿರುವ ನಗರ ಜೀವನ ವೆಚ್ಚದ ನಡುವೆ ಹಣಕಾಸಿನ ಶಿಸ್ತು ಮತ್ತು ಯೋಜಿತ ವೆಚ್ಚದ ಮಹತ್ವವನ್ನು ಈ ಚರ್ಚೆ ಮತ್ತೊಮ್ಮೆ ನೆನಪಿಸಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by AKSHAY CN (@bangalore_viral)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>money</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/bengaluru-man-reveals-5-silent-expenses-draining-your-salary/articleshow-pgcxyak"/>
        </item>
        <item>
            <title><![CDATA[ಐಟಿಆರ್ ಸಲ್ಲಿಕೆಯಲ್ಲಿ ಕೊಂಚ ತಡ; ಮಹಿಳೆಗೆ ಬಿತ್ತು ಬಿಗ್‌ ಪೆನಾಲ್ಟಿ! ಸೋಶಿಯಲ್ ಮೀಡಿಯಾದಲ್ಲಿ ಫುಲ್‌ ವೈರಲ್!]]></title>
            <link>https://kannada.asianetnews.com/economy-money/itr-filing-delay-5000-penalty-woman-viral-story-bmk/articleshow-sl78ba2</link>
            <guid isPermaLink="true">https://kannada.asianetnews.com/economy-money/itr-filing-delay-5000-penalty-woman-viral-story-bmk/articleshow-sl78ba2</guid>
            <pubDate>Tue, 04 Aug 2026 16:12:28 +0530</pubDate>
            <description><![CDATA[&lt;p&gt;ತಾಯಿಯ ಐಟಿಆರ್ ಅನ್ನು ಮೊದಲ ಬಾರಿಗೆ ಸಲ್ಲಿಸುವಾಗ ಕೇವಲ 2.5 ಗಂಟೆ ತಡವಾದ ಕಾರಣಕ್ಕೆ ವ್ಯಕ್ತಿಯೊಬ್ಬರು ಎಷ್ಟು ದಂಡ ಪಾವತಿಸಿದ್ದಾರೆ ಗೊತ್ತಾ? ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆದಾಯ ತೆರಿಗೆ ನಿಯಮಗಳ ಕಠಿಣತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypkw1p749z1emrphmgvxf4w,imgname-itr-filing-deadline-2026-1785317951174.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;/p&gt;&lt;p&gt;ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಮುಖ್ಯ ಕರ್ತವ್ಯವಾಗಿದೆ. ಆದರೆ, ನಿಗದಿತ ಸಮಯಕ್ಕಿಂತ ಕೆಲವೇ ಕೆಲವು ನಿಮಿಷ ಅಥವಾ ಗಂಟೆ ತಡವಾದರೂ ತೆರಿಗೆ ಇಲಾಖೆಯ ನಿಯಮಗಳು ಎಷ್ಟು ಕಟ್ಟುನಿಟ್ಟಾಗಿರುತ್ತವೆ ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಸಿಕ್ಕಿದೆ. ಮೊದಲ ಬಾರಿಗೆ ತನ್ನ ತಾಯಿಯ ಐಟಿಆರ್ ಸಲ್ಲಿಸಲು ಹೊರಟ ವ್ಯಕ್ತಿಯೊಬ್ಬರು ಕೇವಲ 2.5 ಗಂಟೆ ತಡ ಮಾಡಿದ್ದಕ್ಕಾಗಿ ಬರೋಬ್ಬರಿ ₹5,000 ವಿಳಂಬ ಶುಲ್ಕ ತೆರಬೇಕಾಗಿ ಬಂದಿದೆ. ಈ ಘಟನೆ ಈಗ ಸಾಮಾಜಿಕ ಜಾಲತಾಣವಾದ 'X' ನ ಪೋಸ್ಟ್ ಮೂಲಕ ಭಾರತದ ಐಟಿಆರ್ ಫೈಲಿಂಗ್ ನಿಯಮಗಳ ಕುರಿತು ಭಾರಿ ಚರ್ಚೆಗೆ ನಾಂದಿ ಹಾಡಿದೆ.&lt;/p&gt;&lt;h2&gt;&lt;strong&gt;ಘಟನೆ ಹಂಚಿಕೊಂಡವರು ಯಾರು?&lt;/strong&gt;&lt;/h2&gt;&lt;p&gt;'X' ಬಳಕೆದಾರರಾದ ಪೂಜಾ (@poojaofficial5) ಎಂಬುವವರು ಈ ಆಸಕ್ತಿಕರ ಘಟನೆ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ತಮ್ಮ ತಾಯಿಯ ಹೆಸರಿನಲ್ಲಿ ಮೊದಲ ಬಾರಿಗೆ ಐಟಿಆರ್ ಫೈಲ್ ಮಾಡುತ್ತಿದ್ದರು. ಸಲ್ಲಿಕೆ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪುಗಳಾಗಬಾರದು ಹಾಗೂ ಎಲ್ಲಾ ವಿವರಗಳು ನಿಖರವಾಗಿರಬೇಕು ಎಂಬ ಕಾರಣಕ್ಕೆ ಅವರು ಪ್ರಮುಖ ಹಣಕಾಸಿನ ದಾಖಲೆಯೊಂದಕ್ಕಾಗಿ ಕಾಯುತ್ತಿದ್ದರು. ಪ್ರಮುಖ ದಾಖಲೆ ಸಿಕ್ಕ ನಂತರವೇ ಫೈಲ್ ಮಾಡುವುದು ಸೂಕ್ತ ಎಂದು ಭಾವಿಸಿ ಅವರು ಉದ್ದೇಶಪೂರ್ವಕವಾಗಿ ಕೊಂಚ ತಡ ಮಾಡಿದ್ದರು.&lt;/p&gt;&lt;h3&gt;&lt;strong&gt;ದಂಡ ಬಿದ್ದಿದ್ದು ಎಷ್ಟು?&lt;/strong&gt;&lt;/h3&gt;&lt;p&gt;ಆದರೆ, ಎಲ್ಲಾ ವಿವರಗಳನ್ನು ಸರಿಯಾಗಿ ಜೋಡಿಸಿಕೊಂಡು ಅವರು ಆದಾಯ ತೆರಿಗೆ ಇಲಾಖೆಯ ಪೋರ್ಟಲ್&zwnj;ಗೆ ಲಾಗಿನ್ ಆಗುವ ಹೊತ್ತಿಗೆ, ಐಟಿಆರ್ ಸಲ್ಲಿಸಲು ನೀಡಲಾಗಿದ್ದ ಅಂತಿಮ ಗಡುವು ಮುಗಿದು ಕೇವಲ ಎರಡೂವರೆ ಗಂಟೆಗಳು ಕಳೆದಿತ್ತು. ಅವರ ಉದ್ದೇಶ ಪ್ರಾಮಾಣಿಕವಾಗಿದ್ದರೂ, ತೆರಿಗೆ ಪೋರ್ಟಲ್&zwnj;ನ ಸ್ವಯಂಚಾಲಿತ ವ್ಯವಸ್ಥೆಗೆ ಮಾನವೀಯ ಭಾವನೆಗಳಿಗಿಂತ ನಿಯಮಗಳೇ ಮುಖ್ಯವಾಗಿದ್ದವು. ಗಡುವು ದಾಟಿದ್ದೇ ತಡ, ಪೋರ್ಟಲ್ ತನ್ನ ನಿಯಮದಂತೆ ₹5,000 ವಿಳಂಬ ಶುಲ್ಕವನ್ನು ಮೂಲ ತೆರಿಗೆಗೆ ಸೇರ್ಪಡೆಗೊಳಿಸಿತು.&lt;/p&gt;&lt;h3&gt;&lt;strong&gt;ಮಾರಕವಾದ 2.5 ಗಂಟೆ!&lt;/strong&gt;&lt;/h3&gt;&lt;p&gt;ಇದರ ಪರಿಣಾಮವಾಗಿ, ಆರಂಭದಲ್ಲಿ ಕೇವಲ ₹850 ಬಾಕಿ ಇದ್ದ ಮೂಲ ತೆರಿಗೆ ಪಾವತಿಯು, ₹5,000 ದಂಡ ಸೇರಿದ ನಂತರ ಒಟ್ಟು ₹5,850 ಕ್ಕೆ ಏರಿಕೆಯಾಯಿತು. ಅಂದರೆ, ಕೇವಲ 2.5 ಗಂಟೆಯ ವಿಳಂಬದಿಂದಾಗಿ ಅವರು ಪಾವತಿಸಬೇಕಿದ್ದ ನಿಜವಾದ ತೆರಿಗೆಗಿಂತ ಸುಮಾರು ಏಳು ಪಟ್ಟು ಹೆಚ್ಚು ಮೊತ್ತವನ್ನು ಕೇವಲ ದಂಡದ ರೂಪದಲ್ಲೇ ನೀಡಬೇಕಾಯಿತು. &quot;ಅವರು ಪೋರ್ಟಲ್&zwnj;ಗೆ ಲಾಗಿನ್ ಆಗುವ ಹೊತ್ತಿಗೆ ಕೇವಲ 2.5 ಗಂಟೆ ತಡವಾಗಿತ್ತು, ಅಷ್ಟಕ್ಕೇ ವ್ಯವಸ್ಥೆ ದಂಡ ವಿಧಿಸಿತು ಎಂದು ಪೋಸ್ಟ್&zwnj;ನಲ್ಲಿ ಅಳಲು ತೋಡಿಕೊಳ್ಳಲಾಗಿದೆ.&lt;/p&gt;&lt;h3&gt;&lt;strong&gt;ವಿಭಿನ್ನ ಅಭಿಪ್ರಾಯ ಸಂಗ್ರಹ!&lt;/strong&gt;&lt;/h3&gt;&lt;p&gt;ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು &quot;ಐಟಿಆರ್ ಸಲ್ಲಿಸಲು ಸರ್ಕಾರ ತಿಂಗಳುಗಳ ಕಾಲ ಸಮಯ ನೀಡುತ್ತದೆ, ಕೊನೆಯ ದಿನದವರೆಗೂ ಕಾಯುವುದು ಏಕೆ, ಸಿಸ್ಟಮ್ ಅಂದಮೇಲೆ ನಿಯಮಗಳು ಎಲ್ಲರಿಗೂ ಒಂದೇ&quot; ಎಂದು ತೆರಿಗೆದಾರರ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ. ಆದರೆ ಇನ್ನೊಂದೆಡೆ, &quot;ಮೊದಲ ಬಾರಿಗೆ ಫೈಲ್ ಮಾಡುವಾಗ ಸಣ್ಣಪುಟ್ಟ ವಿಳಂಬ ಸಹಜ, ಕೇವಲ ₹850 ತೆರಿಗೆಗೆ ₹5,000 ದಂಡ ಹಾಕುವುದು ಅತಿಯಾಯಿತು, ನಿಯಮಗಳಲ್ಲಿ ಮಾನವೀಯ ವಿನಾಯಿತಿಗೆ ಅವಕಾಶವಿರಬೇಕು&quot; ಎಂದು ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಪೋರ್ಟಲ್&zwnj;ನಲ್ಲಿ ಟೆಕ್ನಿಕಲ್ ಎರರ್!&lt;/strong&gt;&lt;/h3&gt;&lt;p&gt;ಅಷ್ಟೇ ಅಲ್ಲದೆ, ಅನೇಕ ಬಳಕೆದಾರರು ತಮಗಾದ ಹಳೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. 2022 ರಲ್ಲೂ ಕೊನೆಯ ದಿನದಂದು ತೆರಿಗೆ ಪೋರ್ಟಲ್&zwnj;ನಲ್ಲಿ ತಾಂತ್ರಿಕ ತೊಂದರೆ ಎದುರಾಗಿ, ಕೊನೆಯ ಕ್ಷಣದಲ್ಲಿ ಲಾಗಿನ್ ಆಗಲಾಗದೆ ಕೇವಲ ಒಂದು ನಿಮಿಷದ ವಿಳಂಬಕ್ಕೂ ₹5,000 ದಂಡ ತೆರಬೇಕಾಗಿ ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ಈ ಘಟನೆಯು ಪ್ರತಿಯೊಬ್ಬ ತೆರಿಗೆದಾರರಿಗೂ ಒಂದು ಎಚ್ಚರಿಕೆಯ ಗಂಟೆಯಾಗಿದ್ದು, ಕಡೆಯ ನಿಮಿಷದವರೆಗೂ ಕಾಯದೆ ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಸುವುದು ಎಷ್ಟು ಮುಖ್ಯ ಎಂಬುದನ್ನು ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/economy-money/itr-filing-delay-5000-penalty-woman-viral-story-bmk/articleshow-sl78ba2"/>
        </item>
        <item>
            <title><![CDATA[ಬೆಕ್ಕಿನ ಜೊತೆ ಆಟವಾಡ್ತಿದ್ದ ಬಾಲಕ ICU ಪಾಲು.. ಪೋಷಕರೇ ನಿಮ್ಮ ಮಗು ಜೋಪಾನ]]></title>
            <link>https://kannada.asianetnews.com/india-news/8-year-old-boy-in-icu-after-being-scratched-by-cat-in-kolkata-gkn/articleshow-vhh8302</link>
            <guid isPermaLink="true">https://kannada.asianetnews.com/india-news/8-year-old-boy-in-icu-after-being-scratched-by-cat-in-kolkata-gkn/articleshow-vhh8302</guid>
            <pubDate>Tue, 04 Aug 2026 12:18:24 +0530</pubDate>
            <description><![CDATA[&lt;p&gt;ಇಂದಿನ ದಿನಗಳಲ್ಲಿ ಮನೆಯಲ್ಲಿ ನಾಯಿ, ಬೆಕ್ಕು ಸೇರಿದಂತೆ ಸಾಕುಪ್ರಾಣಿಗಳನ್ನು ಸಾಕುವುದು ಟ್ರೆಂಡ್ ಆಗಿದೆ. ಆದರೆ.. ಒಂದು ಪುಟ್ಟ ನಿರ್ಲಕ್ಷ್ಯವು ಪ್ರಾಣಕ್ಕೇ ಕಂಟಕವಾಗಬಹುದು ಎಂಬುದಕ್ಕೆ ಕೋಲ್ಕತ್ತಾದಲ್ಲಿ ನಡೆದ ಘಟನೆಯೇ ಸಾಕ್ಷಿ. ಬೆಕ್ಕು ಗೀರಿದ್ದರಿಂದ ಎಂಟು ವರ್ಷದ ಬಾಲಕನೊಬ್ಬ ಐಸಿಯು (ICU) ಸೇರಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz5reapesqq4a7q55xp8hgy6,imgname-boy-play-with-cat-1785826061006.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತ್ತಾ: &lt;/strong&gt;ಮಕ್ಕಳಿಗೆ ಸಾಕುಪ್ರಾಣಿಗಳ ಜೊತೆ ಆಟವಾಡುವುದು ಮನಸ್ಸಿಗೆ ಖುಷಿ ನೀಡುತ್ತದೆ ನಿಜ. ಆದರೆ, ಆಟದ ವೇಳೆ ಅವು ಗೀರುವುದು ಅಥವಾ ಕಚ್ಚುವುದನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ದಕ್ಷಿಣ ಕೋಲ್ಕತ್ತಾದ ಎಂಟು ವರ್ಷದ ಬಾಲಕನ ವಿಷಯದಲ್ಲಿ ಇದೇ ನಿರ್ಲಕ್ಷ್ಯ ಪ್ರಾಣಾಪಾಯ ತಂದೊಡ್ಡಿತ್ತು. ಬೆಕ್ಕು ಗೀರಿದ್ದರಿಂದ ಉಂಟಾದ ಸೋಂಕು ಆತನ ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರಿದೆ.&lt;/p&gt;&lt;h2&gt;&lt;strong&gt;ಮೂರ್ಛೆ ರೋಗದಿಂದ ವೆಂಟಿಲೇಟರ್&zwnj;ವರೆಗೆ..&lt;/strong&gt;&lt;/h2&gt;&lt;p&gt;ಜುಲೈ 10 ರಂದು ಬಾಲಕನಿಗೆ ಹಠಾತ್ತನೆ ತೀವ್ರವಾದ ಮೂರ್ಛೆ (Fits) ಕಾಣಿಸಿಕೊಂಡಿದೆ. ಗಾಬರಿಗೊಂಡ ಪೋಷಕರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನಿಗೆ ಪ್ರಜ್ಞೆ ಬರದೇ ಸತತವಾಗಿ ಫಿಟ್ಸ್ ಬರುತ್ತಿದ್ದರಿಂದ ವೈದ್ಯರು ಇದನ್ನು 'ಸ್ಟೇಟಸ್ ಎಪಿಲೆಪ್ಟಿಕಸ್' ಎಂದು ಕರೆದರು. ಔಷಧಿ ನೀಡಿದರೂ ಪರಿಸ್ಥಿತಿ ಹತೋಟಿಗೆ ಬಾರದಿದ್ದಾಗ ಆತನನ್ನು ಪೀಡಿಯಾಟ್ರಿಕ್ ಐಸಿಯುಗೆ ಸ್ಥಳಾಂತರಿಸಿ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟ ನೀಡಲಾಯಿತು.&lt;/p&gt;&lt;h2&gt;&lt;strong&gt;ವೈದ್ಯರಿಗೆ ಸವಾಲಾಗಿದ್ದ ರೋಗ ಪತ್ತೆ&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಮೆದುಳು ಮತ್ತು ಬೆನ್ನುಹುರಿಯ ಪರೀಕ್ಷೆ ನಡೆಸಿದರೂ ಕಾಯಿಲೆಗೆ ಸರಿಯಾದ ಕಾರಣ ತಿಳಿಯಲಿಲ್ಲ. ವೈದ್ಯರು ಇದನ್ನು 'ನಾರ್ಸ್' (NORSE - New-Onset Refractory Status Epilepticus) ಎಂಬ ಅಪರೂಪದ ನರಗಳ ಕಾಯಿಲೆ ಎಂದು ಶಂಕಿಸಿದ್ದರು. ಆದರೆ ಬಾಲಕನಿಗೆ ಜ್ವರ ಇರುವುದನ್ನು ಗಮನಿಸಿದ ವೈದ್ಯರು ಪೋಷಕರನ್ನು ಆಳವಾಗಿ ವಿಚಾರಿಸಿದಾಗ ಅಸಲಿ ವಿಷಯ ಬಯಲಾಗಿದೆ.&lt;/p&gt;&lt;p&gt;ಬಾಲಕ ಪ್ರತಿದಿನ ತನ್ನ ಮುದ್ದಿನ ಬೆಕ್ಕಿನೊಂದಿಗೆ ಮಲಗುತ್ತಿದ್ದ. ಮೂರ್ಛೆ ಬರುವ 10 ದಿನಗಳ ಮೊದಲು ಆತನ ಚರ್ಮದ ಮೇಲೆ ಕೆಂಪು ಗುರುತು ಹಾಗೂ ಊತ ಕಾಣಿಸಿಕೊಂಡಿತ್ತು. ತಕ್ಷಣವೇ ಆಂಟಿಬಾಡಿ ಪರೀಕ್ಷೆ ನಡೆಸಿದಾಗ ಅದು 'ಬಾರ್ಟೋನೆಲ್ಲಾ' (Bartonella) ಎಂಬ ಬ್ಯಾಕ್ಟೀರಿಯಾದಿಂದ ಬರುವ 'ಕ್ಯಾಟ್ ಸ್ಕ್ರ್ಯಾಚ್ ಡಿಸೀಸ್' (Cat Scratch Disease) ಎಂದು ದೃಢಪಟ್ಟಿದೆ.&lt;/p&gt;&lt;h2&gt;&lt;strong&gt;ಚೇತರಿಸಿಕೊಂಡ ಬಾಲಕ&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಈ ಸೋಂಕು ಸಣ್ಣ ಜ್ವರದೊಂದಿಗೆ ಮುಗಿಯುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ ಇದು ಮೆದುಳು ಮತ್ತು ನರಮಂಡಲದ ಮೇಲೆ ದಾಳಿ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸೂಕ್ತ ಆಂಟಿಬಯೋಟಿಕ್ ಚಿಕಿತ್ಸೆ ನೀಡಿದ ನಂತರ ಬಾಲಕ ಚೇತರಿಸಿಕೊಂಡಿದ್ದು 10 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ. ಬೆಕ್ಕು ಅಥವಾ ನಾಯಿ ಗೀರಿದರೆ ಅಥವಾ ಕಚ್ಚಿದರೆ ಆ ಜಾಗವನ್ನು ತಕ್ಷಣವೇ ಸೋಪು ಮತ್ತು ಹರಿಯುವ ನೀರಿನಿಂದ ಚೆನ್ನಾಗಿ ತೊಳೆಯಿರಿ. ಸಾಕುಪ್ರಾಣಿಗಳೊಂದಿಗೆ ಆಟವಾಡಿದ ನಂತರ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ಸ್ವಚ್ಛಗೊಳಿಸಿಕೊಳ್ಳಿ. ಸಾಕುಪ್ರಾಣಿಗಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿ ಮತ್ತು ಅವುಗಳ ಮೈಮೇಲೆ ಉಣ್ಣೆ/ಪರೋಪಜೀವಿಗಳು ಇರದಂತೆ ನೋಡಿಕೊಳ್ಳಿ. ಮಕ್ಕಳು ಪ್ರಾಣಿಗಳ ಜೊತೆ ಆಡುವಾಗ ಪೋಷಕರ ನಿಗಾ ಇರಲಿ.&lt;/p&gt;]]></content:encoded>
            <category>money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/8-year-old-boy-in-icu-after-being-scratched-by-cat-in-kolkata-gkn/articleshow-vhh8302"/>
        </item>
        <item>
            <title><![CDATA[ಮಾಜಿ ಬಸ್ ಚಾಲಕನ ಮನೆಯಲ್ಲಿ 20 ಕೋಟಿಗೂ ಅಧಿಕ ದುಡ್ಡು, 15 ಕೆಜಿ ಚಿನ್ನ ಪತ್ತೆ..! ಭಾರೀ ಸಂಚಲನ..!]]></title>
            <link>https://kannada.asianetnews.com/news/ex-bus-driver-minar-mondals-house-raided-rs-20-crore-cash-and-15-kg-gold-seized-gkn/articleshow-xf9urr0</link>
            <guid isPermaLink="true">https://kannada.asianetnews.com/news/ex-bus-driver-minar-mondals-house-raided-rs-20-crore-cash-and-15-kg-gold-seized-gkn/articleshow-xf9urr0</guid>
            <pubDate>Thu, 30 Jul 2026 07:40:08 +0530</pubDate>
            <description><![CDATA[&lt;p&gt;ದಾಳಿ ವೇಳೆ ಚಿನ್ನ ಮತ್ತು ಹಣ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ನಗದು ಎಣಿಕೆಗೆ 5 ಮಷಿನ್&zwnj;ಗಳನ್ನ ತಂದಿದ್ದಾರೆ. ಇತ್ತ ಮುಖ್ಯಮಂತ್ರಿ ಅವರು ಭ್ರಷ್ಟರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyrchfdyzc3cpyyqaet1fd0e,imgname-ex-bus-drivers-home-unearths-rs-5-crore-cash--15-kg-gold-and-politics-1785377373630.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತ್ತಾ: &lt;/strong&gt;ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಮೊಹಮ್ಮದ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ದೇವಚಾ ಗ್ರಾಮದ ಸಾಮಾನ್ಯ ದ್ವಿತಲ ಕಟ್ಟಡವೊಂದು ಈಗ ಇಡೀ ದೇಶದ ಗಮನ ಸೆಳೆದಿದೆ. ಸಾರಿಗೆ ಇಲಾಖೆಯ ನಿವೃತ್ತ ಬಸ್ ಚಾಲಕನೊಬ್ಬನ ಮನೆಯ ಮೇಲೆ ಪೊಲೀಸರು ನಡೆಸಿದ ಭಾರಿ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ನಗದು ಮತ್ತು ಭಾರಿ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಮಂಗಳವಾರ ತಡರಾತ್ರಿ ಆರಂಭವಾದ ಈ ಜಂಟಿ ಪೊಲೀಸ್ ಕಾರ್ಯಾಚರಣೆಯು ಬುಧವಾರ ಸಂಜೆಯವರೆಗೂ ಮುಂದುವರಿದಿದ್ದು, ಜಪ್ತಿ ಮಾಡಿದ ಹಣವನ್ನು ಎಣಿಸಲು ಬರೋಬ್ಬರಿ ಐದು ಎಣಿಕೆ ಯಂತ್ರಗಳನ್ನು ಬಳಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿಯ ವೇಳೆ 15 ಕೆಜಿ ತೂಕದ ಚಿನ್ನದ ಬಿಸ್ಕತ್&zwnj;ಗಳು ಹಾಗೂ ಸುಮಾರು 20 ಕೋಟಿ ರೂಪಾಯಿಗೂ ಅಧಿಕ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ಯಾರೀ ಮಿನಾರ್ ಮೊಂಡಲ್?&lt;/strong&gt;&lt;/h2&gt;&lt;p&gt;ದಾಳಿಗೊಳಗಾದ ಮನೆಯು ಮಿನಾರ್ ಮೊಂಡಲ್ ಎಂಬುವವರಿಗೆ ಸೇರಿದ್ದಾಗಿದೆ. ಇವರು ಈ ಹಿಂದೆ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅವರು ಈ ಭಾಗದ ಪ್ರಮುಖ ಕಲ್ಲು ಮತ್ತು ಮರಳು ಉದ್ಯಮಿಯಾದ ಟುಲು ಮೊಂಡಲ್ (ಅಲಿಯಾಸ್ ಮೊಹಮ್ಮದ್ ನಜಿಬುದ್ದೀನ್) ಅವರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಟುಲು ಮೊಂಡಲ್ ಅವರ ಕಲ್ಲು ಕ್ವಾರಿಗಳು ಮತ್ತು ಸಾರಿಗೆ ವ್ಯವಹಾರದ ಕಂದಾಯ ಸಂಗ್ರಹದ ಜವಾಬ್ದಾರಿಯನ್ನು ಮಿನಾರ್ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಟುಲು ಮೊಂಡಲ್, ಈ ಹಿಂದೆ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಪ್ರಭಾವಿ ನಾಯಕ ಅನುಬ್ರತಾ ಮೊಂಡಲ್ ಅವರ ಅತ್ಯಂತ ಆಪ್ತನಾಗಿದ್ದರು. ಅನುಬ್ರತಾ ಮೊಂಡಲ್ ಇತ್ತೀಚೆಗಷ್ಟೇ ರೀತಾಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಟಿಎಂಸಿ ಬಣವನ್ನು ಸೇರಿಕೊಂಡಿದ್ದರು.&lt;/p&gt;&lt;h2&gt;&lt;strong&gt;ಸುವೇಂದು ಅಧಿಕಾರಿ ಶ್ಲಾಘನೆ ಮತ್ತು ಎಚ್ಚರಿಕೆ&lt;/strong&gt;&lt;/h2&gt;&lt;p&gt;ಪೊಲೀಸರ ಈ ಭಾರಿ ಯಶಸ್ಸನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಮಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ಅಕ್ರಮ ಮರಳು ಮತ್ತು ಕಲ್ಲು ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ನಮ್ಮ ಕಾನೂನು ಜಾರಿ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಬಿರ್ಭೂಮ್ ಪೊಲೀಸರು ನಿಖರವಾದ ಮಾಹಿತಿ ಆಧರಿಸಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ ಎಂದಿದ್ದಾರೆ. ಮುಂದುವರಿದು ಬರೆದಿರುವ ಅವರು, ನಮ್ಮ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟವು 'ಶೂನ್ಯ ಸಹಿಷ್ಣುತೆ ನೀತಿ'ಯಡಿ ಮುಂದುವರಿಯಲಿದೆ. ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿ, ಅಂದಿನ ಆಡಳಿತಾರೂಢ ರಾಜಕೀಯ ಪಕ್ಷದ ಬೆಂಬಲದೊಂದಿಗೆ ಅಕ್ರಮ ಆಸ್ತಿ ಗಳಿಸಿದ ಯಾರನ್ನೂ ಬಿಡುವುದಿಲ್ಲ. ಸಾರ್ವಜನಿಕರ ಹಣ ಜನರಿಗೇ ಸೇರಬೇಕಾದದ್ದು. ಲೂಟಿಕೋರರು ಕಠಿಣ ಕಾನೂನು ಕ್ರಮ ಎದುರಿಸಲಿದ್ದಾರೆ&quot; ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಟಿಎಂಸಿ ವರ್ಸಸ್ ಟಿಎಂಸಿ ರಾಜಕೀಯ ಸಮರ&lt;/strong&gt;&lt;/h2&gt;&lt;p&gt;ಈ ಭಾರಿ ಜಪ್ತಿಯ ನಂತರ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಬಣಗಳ ನಡುವೆ ತೀವ್ರ ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ. ಕೆಲವು ನಾಯಕರು ತಮ್ಮ ಅಕ್ರಮ ಸಂಪತ್ತನ್ನು ರಕ್ಷಿಸಿಕೊಳ್ಳಲು ಈಗ 'ಒಳ್ಳೆಯ ಟಿಎಂಸಿ' ಎನ್ನುವ ಬಂಡಾಯ ಬಣ ಸೇರಿಕೊಳ್ಳುತ್ತಿದ್ದಾರೆ. ಪೊಲೀಸರು ಇಂತಹ ಎಲ್ಲಾ ನಾಯಕರನ್ನು ಸೂಕ್ತ ವಿಚಾರಣೆಗೆ ಒಳಪಡಿಸಬೇಕು ಎಂದು ಟಿಎಂಸಿ ಶಾಸಕ ಕುನಾಲ್ ಘೋಷ್ ಒತ್ತಾಯಿಸಿದ್ದಾರೆ. ಬಿರ್ಭೂಮ್ ಯಾವಾಗಲೂ ಕೆಲವೇ ಕೆಲವು ಪ್ರಭಾವಿ ವ್ಯಕ್ತಿಗಳ ಹಕ್ಕಿನ ಕ್ಷೇತ್ರವಾಗಿತ್ತು. ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಪ್ರಭಾವಿ ವ್ಯಕ್ತಿಗಳ ಸಂಪರ್ಕವನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಎಂದಿದ್ದಾರೆ.&lt;/p&gt;&lt;h2&gt;&lt;strong&gt;100 ಕೋಟಿ ಮದುವೆಯ ನಂಟು&lt;/strong&gt;&lt;/h2&gt;&lt;p&gt;ಈ ಭಾರಿ ದಾಳಿಯ ಬೆನ್ನಲ್ಲೇ ಟುಲು ಮೊಂಡಲ್ ಈ ಹಿಂದೆ 2024 ರಲ್ಲಿ ತನ್ನ ಮಗಳ ವಿವಾಹಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿದ್ದ ಅದ್ದೂರಿ ಮದುವೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಮಾರಂಭಕ್ಕೆ ಬಾಲಿವುಡ್ ನಟರಾದ ಅರ್ಬಾಜ್ ಖಾನ್, ಜರೀನ್ ಖಾನ್ ಸೇರಿದಂತೆ ಚಿತ್ರರಂಗದ ಹಲವು ಪ್ರಮುಖ ಗಣ್ಯರು ಭಾಗವಹಿಸಿದ್ದರು. ಅಂದಿನ ಆಡಂಬರದ ಹಣದ ಮೂಲವೇ ಈ ಅಕ್ರಮ ವ್ಯವಹಾರಗಳು ಎಂಬ ಶಂಕೆ ಈಗ ದಟ್ಟವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಿನಾರ್ ಮೊಂಡಲ್ ಹಾಗೂ ಅವರ ಪುತ್ರನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/news/ex-bus-driver-minar-mondals-house-raided-rs-20-crore-cash-and-15-kg-gold-seized-gkn/articleshow-xf9urr0"/>
        </item>
    </channel>
</rss>
