<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 15 Sep 2026 22:32:03 +0530</lastBuildDate>
        <atom:link href="https://kannada.asianetnews.com/rss/money" rel="self" type="application/rss+xml"/>
        <item>
            <title><![CDATA[Oil: ದೀಪಾವಳಿಗಾದ್ರು ತೈಲ ಬೆಲೆ ಇಳಿಯುತ್ತಾ? ಇಳಿಯಲ್ವಾ? ರಷ್ಯಾ-ಸೌದಿಯಿಂದ ಬಿಗ್ ಅಪ್ಡೇಟ್!]]></title>
            <link>https://kannada.asianetnews.com/money/diwali-oil-price-petrol-diesel-price-russia-saudi-arabia-opec-plus-big-decision-crude-oil-price-bmk/articleshow-3euzdyu</link>
            <guid isPermaLink="true">https://kannada.asianetnews.com/money/diwali-oil-price-petrol-diesel-price-russia-saudi-arabia-opec-plus-big-decision-crude-oil-price-bmk/articleshow-3euzdyu</guid>
            <pubDate>Sun, 06 Sep 2026 20:43:50 +0530</pubDate>
            <description><![CDATA[&lt;p&gt;ಹಬ್ಬಗಳ ಸೀಸನ್&zwnj;ನಲ್ಲಿ ಪೆಟ್ರೋಲ್-ಡೀಸೆಲ್ ದರ ಕಮ್ಮಿಯಾಗಿ ಜೇಬಿಗೆ ಸ್ವಲ್ಪ ಸಮಾಧಾನ ಸಿಗಬಹುದು ಎಂದು ಕಾಯುತ್ತಿದ್ದೀರಾ? ದೀಪಾವಳಿ ಹೊತ್ತಿಗೆ ಭಾರತೀಯರ ಜೇಬಿಗೆ ಶುಭಸುದ್ದಿ ಸಿಗುತ್ತಾ ಅಥವಾ ತೈಲ ದರ ಏರಿಕೆಯ ಭೀಕರ ಶಾಕ್ ಕಾದಿದೆಯಾ? ತೈಲ ಉತ್ಪಾದಕ ರಾಷ್ಟ್ರಗಳಾದ ರಷ್ಯಾ ಮತ್ತು ಸೌದಿ ಅರೇಬಿಯಾ ರಹಸ್ಯ ಉತ್ತರವೊಂದನ್ನು ನೀಡಿವೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1131yxp9tnhs2ytjhdagrft,imgname-petrol-pump-1787816901558.jpg" type="image/jpeg" height="390" width="690"/>
            <content:encoded><![CDATA[&lt;p&gt;ಬರುವ ಸಾಲು ಸಾಲು ಹಬ್ಬಗಳ ಸೀಸನ್&zwnj;ನಲ್ಲಿ ಪೆಟ್ರೋಲ್-ಡೀಸೆಲ್ ದರ ಕಮ್ಮಿಯಾಗಿ ಜೇಬಿಗೆ ಸ್ವಲ್ಪ ಸಮಾಧಾನ ಸಿಗಬಹುದು ಎಂದು ಕಾಯುತ್ತಿದ್ದೀರಾ? ದೀಪಾವಳಿ ಹೊತ್ತಿಗೆ ಭಾರತೀಯರ ಜೇಬಿಗೆ ಶುಭಸುದ್ದಿ ಸಿಗುತ್ತಾ ಅಥವಾ ತೈಲ ದರ ಏರಿಕೆಯ ಭೀಕರ ಶಾಕ್ ಕಾದಿದೆಯಾ? ಈ ಗೊಂದಲಕ್ಕೆ ಜಗತ್ತಿನ ಬಲಶಾಲಿ ರಾಷ್ಟ್ರಗಳಾದ ರಷ್ಯಾ ಮತ್ತು ಸೌದಿ ಅರೇಬಿಯಾ ರಹಸ್ಯ ಉತ್ತರವೊಂದನ್ನು ನೀಡಿವೆ! ಏನೆಂದು ನೋಡಿಕೊಂಡು ಬರೋಣ ಬನ್ನಿ.&lt;/p&gt;&lt;h2&gt;&lt;strong&gt;ತೈಲ ಬೆಲೆ ಇಳಿಯುತ್ತಾ? ಅಥವಾ ಇಳಿಯಲ್ವಾ?!&lt;/strong&gt;&lt;/h2&gt;&lt;p&gt;ಜನರ ನಿರೀಕ್ಷೆಗೆ ಸಂಪೂರ್ಣ ಉಲ್ಟಾ ಫಲಿತಾಂಶ ಸಿಕ್ಕಿದೆ. ದೀಪಾವಳಿ ವೇಳೆಗೆ ತೈಲ ಬೆಲೆ ಖಂಡಿತವಾಗಿಯೂ ಇಳಿಯುವುದಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಭಾರಿ ಬೇಡಿಕೆಯಿದ್ದರೂ, ದೀಪಾವಳಿ ಹಬ್ಬ ಮುಗಿಯುವವರೆಗೆ ತೈಲ ಉತ್ಪಾದನೆಯನ್ನು ಯಾವುದೇ ಕಾರಣಕ್ಕೂ ಹೆಚ್ಚಿಸದಿರಲು ಬಲಶಾಲಿ ರಾಷ್ಟ್ರಗಳು ನಿರ್ಧರಿಸಿವೆ. ಇದರಿಂದಾಗಿ ಮುಂಬರುವ ಹಬ್ಬದ ಋತುವಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುವ ಭರವಸೆಗಳು ಸಂಪೂರ್ಣವಾಗಿ ಹುಸಿಯಾಗಿವೆ.&lt;/p&gt;&lt;h3&gt;&lt;strong&gt;ರಷ್ಯಾ ಮತ್ತು ಸೌದಿ ಪಡೆಯ ಬಿಗ್ ಅಪ್ಡೇಟ್!&lt;/strong&gt;&lt;/h3&gt;&lt;p&gt;ಸೌದಿ ಅರೇಬಿಯಾ ಮತ್ತು ರಷ್ಯಾ ನೇತೃತ್ವದ 'ಒಪೆಕ್' (OPEC) ತೈಲ ಸಂಘಟನೆಯ ಏಳು ರಾಷ್ಟ್ರಗಳು ನಡೆಸಿರುವ ತುರ್ತು ವೀಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳಿಗೆ ಆಘಾತ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.&lt;/p&gt;&lt;p&gt;&lt;strong&gt;ಉತ್ಪಾದನೆ ಹೆಚ್ಚಳಕ್ಕೆ ಬ್ರೇಕ್;&lt;/strong&gt; ಪ್ರಸ್ತುತ ಮಾರುಕಟ್ಟೆಯಲ್ಲಿ ತೈಲ ಅಭಾವವಿದ್ದರೂ, ಅಕ್ಟೋಬರ್ ವರೆಗೆ ಕಚ್ಚಾ ತೈಲ ಉತ್ಪಾದನಾ ಕೋಟಾವನ್ನು ಹೆಚ್ಚಿಸದೆ ಯಥಾವತ್ತಾಗಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ.&lt;/p&gt;&lt;p&gt;&lt;strong&gt;ಹೊಸ ಮಾರ್ಗ ಸಿಗುವವರೆಗೆ ಕಾಯುವಿಕೆ;&lt;/strong&gt; ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ತೈಲ ರಫ್ತು ಮಾರ್ಗಗಳು ಕಂಡುಕೊಳ್ಳುವವರೆಗೆ ಪ್ರಸ್ತುತ ಇರುವ ಉತ್ಪಾದನೆಯನ್ನಷ್ಟೇ ಮುಂದುವರಿಸಲಾಗುವುದು ಎಂದು ಈ ಒಕ್ಕೂಟ ಪಟ್ಟು ಹಿಡಿದಿದೆ.&lt;/p&gt;&lt;h3&gt;&lt;strong&gt;ಯುಎಸ್-ಇರಾನ್ ಯುದ್ಧ ತಂದಿಟ್ಟ ಸಂಕಟ!&lt;/strong&gt;&lt;/h3&gt;&lt;p&gt;ಅಮೆರಿಕ ಮತ್ತು ಇರಾನ್ ನಡುವೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಭೀಕರ ಯುದ್ಧವೇ ಈ ಎಲ್ಲಾ ಗೊಂದಲಗಳಿಗೆ ಮುಖ್ಯ ಕಾರಣವಾಗಿದೆ.&lt;/p&gt;&lt;p&gt;&lt;strong&gt;1. ಹಾರ್ಮುಜ್ ಜಲಸಂಧಿ ಬ್ಲಾಕ್&lt;/strong&gt;; ಯುದ್ಧದ ಬಿಕ್ಕಟ್ಟಿನಿಂದಾಗಿ ಪ್ರಮುಖ ತೈಲ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯಲ್ಲಿ ತೈಲ ಸಾಗಣೆ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.&lt;/p&gt;&lt;p&gt;&lt;strong&gt;2. ಪೂರೈಕೆಯಲ್ಲಿ ಭಾರಿ ಕಡಿತ;&lt;/strong&gt; ಪರ್ಷಿಯನ್ ಕೊಲ್ಲಿಯ ಮೂಲಕ ಜಗತ್ತಿನಾದ್ಯಂತ ರಫ್ತಾಗಬೇಕಿದ್ದ ಕಚ್ಚಾ ತೈಲದ ಪ್ರಮಾಣ ಗಣನೀಯವಾಗಿ ಕುಸಿದಿದೆ.&lt;/p&gt;&lt;h3&gt;ಸಾಗಣೆಯಲ್ಲಾಗಿರುವ ಈ ಭಾರಿ ತಡೆಯಿಂದಾಗಿ ಜಾಗತಿಕವಾಗಿ ತೈಲ ಅಭಾವ ಸೃಷ್ಟಿಯಾಗಿದ್ದು, ಬೆಲೆ ಇಳಿಕೆ ಸಾಧ್ಯವೇ ಇಲ್ಲದಂತಾಗಿದೆ.&lt;/h3&gt;&lt;h3&gt;&lt;strong&gt;ಕೈಕೊಟ್ಟ ಒಪೆಕ್ ದೇಶಗಳ ಯೋಜನೆ!&lt;/strong&gt;&lt;/h3&gt;&lt;p&gt;2023 ರಲ್ಲಿ ಉತ್ಪಾದನಾ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ಮಾರುಕಟ್ಟೆಗೆ ಯಥೇಚ್ಛವಾಗಿ ತೈಲ ಪೂರೈಸುವ ಯೋಜನೆಯನ್ನು ಈ ಮೈತ್ರಿಕೂಟ ಹೊಂದಿತ್ತು. ಯುದ್ಧ ಮುಗಿದ ಬಳಿಕ ಉತ್ಪಾದನೆ ಹೆಚ್ಚಿಸುವ ಆಸೆಯಿತ್ತಾದರೂ, ಹಲವು ವರ್ಷಗಳ ನಿರ್ಬಂಧಗಳಿಂದಾಗಿ ಸದಸ್ಯ ರಾಷ್ಟ್ರಗಳ ಬೌದ್ಧಿಕ ಹಾಗೂ ತಾಂತ್ರಿಕ ಉತ್ಪಾದನಾ ಸಾಮರ್ಥ್ಯವೇ ಕುಸಿದುಹೋಗಿದೆ. ಇದೀಗ ಯುಎಸ್-ಇರಾನ್ ಸಮರ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದ್ದು, ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ತೈಲ ಪೂರೈಸುವುದು ತೈಲ ಒಕ್ಕೂಟಕ್ಕೂ ಸವಾಲಾಗಿ ಪರಿಣಮಿಸಿದೆ. ಪರಿಣಾಮವಾಗಿ, ಈ ದೀಪಾವಳಿ ಹಬ್ಬಕ್ಕೂ ತೈಲ ದರ ಇಳಿಕೆಯಾಗದೆ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವುದು ಬಹುತೇಕ ಖಚಿತವಾಗಿದೆ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/diwali-oil-price-petrol-diesel-price-russia-saudi-arabia-opec-plus-big-decision-crude-oil-price-bmk/articleshow-3euzdyu"/>
        </item>
        <item>
            <title><![CDATA[Bank Strike: ದೇಶದಾದ್ಯಂತ ನಾಳೆಯಿಂದ 4 ದಿನ ಬ್ಯಾಂಕ್ ಬಂದ್, ಇವತ್ತೇ ನಿಮ್ಮ ಕೆಲಸ ಪೂರ್ಣಗೊಳಿಸಿ!]]></title>
            <link>https://kannada.asianetnews.com/business/4-days-bank-strike-across-the-country-from-tomorrow-get-your-work-done-today-sns/articleshow-4av9txs</link>
            <guid isPermaLink="true">https://kannada.asianetnews.com/business/4-days-bank-strike-across-the-country-from-tomorrow-get-your-work-done-today-sns/articleshow-4av9txs</guid>
            <pubDate>Thu, 10 Sep 2026 16:48:13 +0530</pubDate>
            <description><![CDATA[ಸೆಪ್ಟೆಂಬರ್&zwnj; 11ರಂದು ಬ್ಯಾಂಕ್ ಯೂನಿಯನ್&zwnj;ಗಳು ಮುಷ್ಕರಕ್ಕೆ ಕರೆ ನೀಡಿವೆ. ವಾರಕ್ಕೆ ಐದು ದಿನಗಳ ಕೆಲಸ ಮತ್ತು ಪಿಂಚಣಿ ಪರಿಷ್ಕರಣೆಯಂತಹ ಬೇಡಿಕೆಗಳನ್ನು ಮುಂದಿಟ್ಟಿದ್ದು, ಈ ಮುಷ್ಕರ ಹಾಗೂ ಸರಣಿ ರಜೆಗಳಿಂದಾಗಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್&zwnj;ಗಳು ಬಂದ್ ಆಗಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0a5sg28df78ne231vpzvtbp,imgname-bank-holiday-19-august-2026-1787048017992.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸೆಪ್ಟೆಂಬರ್&zwnj; 11ರಂದು ದೇಶದ್ಯಾಂತ ಬ್ಯಾಂಕ್ ಯೂನಿಯನ್&zwnj;ಗಳು ಮುಷ್ಕರಕ್ಕೆ ಕರೆ ನೀಡಿದೆ. ವಾರಕ್ಕೆ ಐದು ದಿನಗಳ ಕೆಲಸದ ವಿಧಾನ, ಪಿಂಚಣಿಯ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೆ ಇಟ್ಟಿದ್ದು, ಇದರ ಪ್ರಭಾವ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್&zwnj;ಗಳು ಬಂದ್&zwnj; ಆಗಲಿದೆ.&lt;/p&gt;&lt;p&gt;ಬ್ಯಾಂಕ್ ಖಾತೆದಾರಿಗೆ ಬಿಗ್ ಅಲರ್ಟ್ ಇಲ್ಲಿದೆ. ಬ್ಯಾಂಕ್ ಸತತವಾಗಿ ನಾಲ್ಕು ದಿನಗಳ ಕಾಲ ಬಂದ್ ಆಗಲಿದೆ. ಬ್ಯಾಂಕ್ ನೌಕರರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡಿದ್ದು, ವಾರಕ್ಕೆ ಐದು ದಿನಗಳ ಕೆಲಸ ವಿಧಾನವನ್ನು ಜಾರಿ ಮಾಡಬೇಕು. ಪಿಂಚಣಿ ಸಮಸ್ಯೆಗಳನ್ನು ತಕ್ಷಣದಿಂದಲೇ ಬಗೆಹರಿಸಬೇಕು. ಕೆಲಸ ಸಾಮರ್ಥ್ಯದ ಆಧಾರದ ಮೇಲೆ ಪ್ರೋತ್ಸಾಹ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.&lt;/p&gt;&lt;p&gt;ಕೇಂದ್ರ ಸರ್ಕಾರ ಮೇಲೆ ಒತ್ತಡ ಹೇರಲು ಬ್ಯಾಂಕ ಯೂನಿಯನ್&zwnj;ಗಳು ಶುಕ್ರವಾರ ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರೊಂದಿಗೆ ನಾಳೆ ಅಂದರೆ ಸೆಪ್ಟೆಂಬರ್ 11 ರಿಂದ ಬ್ಯಾಂಕ್ ಸೇವೆಗಳಲ್ಲಿ ಸಮಸ್ಯೆಗಳು ಎದುರಾಗಲಿದೆ. ಆ ಬಳಿ ಎರಡನೇ ಶನಿವಾರ ಮತ್ತು ಭಾನುವಾರ ರಜೆ ಇದ್ದು, ಸೋಮವಾರ ಗಣೇಶ ಚತುರ್ಥಿಯ ಇರುವುದರಿಂದ ಸಾರ್ವತ್ರೀಕ ರಜೆ ಇದ್ದು, ಸತತವಾಗಿ ನಾಲ್ಕು ದಿನಗಳು ಬಂದ್ ಇರಲಿದೆ.&lt;/p&gt;&lt;h2&gt;ಸತತವಾಗಿ ನಾಲ್ಕು ದಿನ ಬ್ಯಾಂಕ್ ಬಂದ್&lt;/h2&gt;&lt;p&gt;ಸೆಪ್ಟೆಂಬರ್&zwnj; 11ರಂದು ಮುಷ್ಕರ ಇರುವ ಕಾರಣ ಬ್ಯಾಂಕ್ ಚಟುವಟಿಕೆಗಳ ಮೇಲೆ ಪ್ರಭಾವ ಉಂಟಾಗಲಿದೆ. ಆ ಬಳಿಕ ಸೆಪ್ಟೆಂಬರ್ 12ರಂದು ಶನಿವಾರ ಎರಡನೇ ಶನಿವಾರ ಬ್ಯಾಂಕ್ ರಜೆ ಇರುವುದರಿಂದ ಈ ದಿನವೂ ಬ್ಯಾಂಕ್ ಕ್ಲೋಸ್ ಇರಲಿದೆ. ಇನ್ನು ಸೆಪ್ಟೆಂಬರ್ 13ರಂದು ಭಾನುವಾರ ಎಲ್ಲಾ ಸರ್ಕಾರಿ ಸೇರಿದಂತೆ ಬ್ಯಾಂಕ್&zwnj;ಗಳಿಗೆ ರಜೆ ಇರಲಿದೆ. ಆ ಬಳಿಕ ಸೋಮವಾರ ಗಣೇಶ ಹಬ್ಬ ಬಂದಿರುವ ಕಾರಣ ಸೆಪ್ಟೆಂಬರ್ 14 ತಾರೀಖು ಸಾರ್ವತ್ರೀಕ ರಜೆ ಇರುವ ದೇಶದಾದ್ಯಂತ ಬ್ಯಾಂಕ್&zwnj;ಗಳು ಬಂದ್ ಇರಲಿದೆ. ಇದರೊಂದಿಗೆ ಸೆಪ್ಟೆಂಬರ್&zwnj; 11 ರಿಂದ 14ರ ವರೆಗೂ ಸತತವಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ ಬಂದ್ ಆಗುತ್ತವೆ.&lt;/p&gt;&lt;p&gt;ಸತತ ರಜೆ ಇರುವ ಕಾರಣ ಬ್ಯಾಂಕ್&zwnj;ನಲ್ಲಿ ನಗದು ಡಿಪಾಸಿಟ್, ವಿತ್ ಡ್ರಾ, ಚೆಕ್ ಕ್ಲೀಯರ್ ನೊಂದಿಗೆ ಇತರರ ಸೇವೆಗಳು ಬಂದ್ ಇರಲಿದೆ. ಸಾಮಾನ್ಯ ಜನರೊಂದಿಗೆ ವ್ಯಾಪಾರ, ವಾಣಿಜ್ಯ ವರ್ಗದ ಮೇಲೆ ಇದರ ನೇರ ಪ್ರಭಾವ ಇರಲಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಸೆಪ್ಟೆಂಬರ್ 28ರಿಂದ ಮೂರು ದಿನಗಳ ಕಾಲ, ಆ ಬಳಿಕ ಅಕ್ಟೋಬರ್ 26 ರಿಂದ ಬ್ಯಾಂಕ್ ನೌಕರರ ಸಂಘಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿವೆ.&lt;/p&gt;&lt;h2&gt;ಬ್ಯಾಂಕ್ ಯೂನಿಯನ್&zwnj;ಗಳೊಂದಿಗೆ ಚರ್ಚೆ ವಿಫಲ&lt;/h2&gt;&lt;p&gt;ಈಗಾಗಲೇ ಕೇಂದ್ರ ಸರ್ಕಾರ ಬ್ಯಾಂಕ್ ಯೂನಿಯನ್&zwnj;ಗಳೊಂದಿಗೆ ಚರ್ಚೆ ನಡೆಸಿದೆ. ಆದರೆ ಈ ಚರ್ಚೆಗಳು ವಿಫಲವಾಗಿದ್ದು, ಶುಕ್ರವಾರ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಐದು ದಿನಗಳ ಕೆಲಸದ ಅವಧಿ ನಿಗದಿ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಅಲ್ಲಿಯವರೆಗೂ ಮುಷ್ಕರ ಹಿಂದಕ್ಕೆ ಪಡೆಯುವುದಿಲ್ಲ ಎಂದು ಯೂನಿಯನ್&zwnj;ಗಳ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಪ್ರತಿನಿಧಿಗಳು ಮಾತುಕತೆ ನಡೆಸಿದ್ದು, ಮುಷ್ಕರವನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಆದರೆ ಬ್ಯಾಂಕ್ ಯೂನಿಯನ್&zwnj;ಗಳು ಇದನ್ನು ನಿರಾಕರಿಸಿ ಮುಷ್ಕರಕ್ಕೆ ಕರೆ ನೀಡಿವೆ.&lt;/p&gt;]]></content:encoded>
            <category>money</category>
            <dc:creator>Sumanth SN</dc:creator>
            <atom:link href="https://kannada.asianetnews.com/business/4-days-bank-strike-across-the-country-from-tomorrow-get-your-work-done-today-sns/articleshow-4av9txs"/>
        </item>
        <item>
            <title><![CDATA[ಮನೆಯಲ್ಲಿ ಎಷ್ಟು ನಗದು ಹಣ ಇಟ್ಟುಕೊಳ್ಳುವುದು ಸೂಕ್ತ? ಅಗತ್ಯಕ್ಕಿಂತ ಹೆಚ್ಚು ಹಣ ಇಟ್ಟರೆ ನಿಮಗೇ ನಷ್ಟ!]]></title>
            <link>https://kannada.asianetnews.com/money/how-much-cash-should-you-keep-at-home-rules-and-safety-tips-kannada-sat/articleshow-5lsa1yp</link>
            <guid isPermaLink="true">https://kannada.asianetnews.com/money/how-much-cash-should-you-keep-at-home-rules-and-safety-tips-kannada-sat/articleshow-5lsa1yp</guid>
            <pubDate>Sun, 06 Sep 2026 12:39:26 +0530</pubDate>
            <description><![CDATA[ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬೇಕು ಎಂಬುದು ಹಲವರ ಪ್ರಶ್ನೆ. ತುರ್ತು ಖರ್ಚುಗಳಿಗಾಗಿ 3-7 ದಿನಗಳಿಗೆ ಸಾಕಾಗುವಷ್ಟು ಹಣ ಇಡುವುದು ಸೂಕ್ತ. ಆದರೆ, ದೊಡ್ಡ ಮೊತ್ತದ ತುರ್ತು ನಿಧಿಯನ್ನು ಮನೆಯಲ್ಲಿಡುವುದರಿಂದ ಹಣದುಬ್ಬರ ಮತ್ತು ಕಳ್ಳತನದ ಅಪಾಯವಿದ್ದು, ಅದನ್ನು ಬ್ಯಾಂಕ್ ಅಥವಾ ಲಿಕ್ವಿಡ್ ಫಂಡ್&zwnj;ಗಳಲ್ಲಿ ಇಡುವುದು ಜಾಣತನ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrchfdyzc3cpyyqaet1fd0e,imgname-ex-bus-drivers-home-unearths-rs-5-crore-cash--15-kg-gold-and-politics-1785377373630.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಡಿಜಿಟಲ್ ಯುಗದಲ್ಲಿ ಯುಪಿಐ (UPI), ನೆಟ್ ಬ್ಯಾಂಕಿಂಗ್ ಮತ್ತು ಡೆಬಿಟ್ ಕಾರ್ಡ್&zwnj;ಗಳ ಬಳಕೆ ಹೆಚ್ಚಾಗಿದೆ. ಆದರೂ, ಯಾವುದೇ ತುರ್ತು ಸಂದರ್ಭ ಎದುರಾದರೂ ತಕ್ಷಣಕ್ಕೆ ಕೈಗೆ ಸಿಗಲಿ ಎಂಬ ಕಾರಣಕ್ಕೆ ಬಹುತೇಕರು ಮನೆಯಲ್ಲಿ ಸ್ವಲ್ಪ ನಗದು ಹಣವನ್ನು (Cash) ಇಟ್ಟುಕೊಳ್ಳುವುದು ವಾಡಿಕೆ. ಆದರೆ, ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳುವುದು ಸರಿ? ಎಂಬ ಪ್ರಶ್ನೆ ಅನೇಕರಲ್ಲಿದೆ.&lt;/p&gt;&lt;p&gt;ಮನೆಯಲ್ಲಿ ತೀರ ಕಡಿಮೆ ಹಣ ಇಟ್ಟುಕೊಂಡರೆ, ಹಠಾತ್ ಇಂಟರ್ನೆಟ್ ಸರ್ವರ್ ಡೌನ್ ಆದಾಗ ಅಥವಾ ಎಟಿಎಂಗಳು ಕೆಲಸ ಮಾಡದಿದ್ದಾಗ ತೊಂದರೆಗೆ ಸಿಲುಕಬೇಕಾಗುತ್ತದೆ. ಹಾಗಂತ ಮಿತಿಮೀರಿ ಲಕ್ಷಾಂತರ ರೂಪಾಯಿ ಹಣವನ್ನು ಮನೆಯಲ್ಲೇ ಇಟ್ಟುಕೊಂಡರೆ ಕಳ್ಳತನದ ಭಯ ಮಾತ್ರವಲ್ಲದೆ, ಹಣದುಬ್ಬರದಿಂದಾಗಿ (Inflation) ಆ ಹಣದ ಮೌಲ್ಯ ಕುಸಿಯುತ್ತದೆ. ಹಾಗಾದರೆ ಇದಕ್ಕೆ ಸರಿಯಾದ ಲೆಕ್ಕಾಚಾರ ಯಾವುದು?&lt;/p&gt;&lt;h2&gt;&lt;strong&gt;ಮನೆಯಲ್ಲಿ ಇಡುವ ನಗದನ್ನು ಹೇಗೆ ನಿರ್ಧರಿಸಬೇಕು?&lt;/strong&gt;&lt;/h2&gt;&lt;p&gt;ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬೇಕು ಎಂಬುದಕ್ಕೆ ಎಲ್ಲ ಕುಟುಂಬಗಳಿಗೂ ಒಂದೇ ನಿಯಮ ಅನ್ವಯಿಸುವುದಿಲ್ಲ.&lt;/p&gt;&lt;p&gt;&lt;strong&gt;ನಗರ ಪ್ರದೇಶಗಳು: &lt;/strong&gt;ನಗರಗಳಲ್ಲಿ ವಾಸಿಸುವವರಿಗೆ ಎಟಿಎಂಗಳು, ಆನ್&zwnj;ಲೈನ್ ಡೆಲಿವರಿ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆ ಸುಲಭವಾಗಿ ಲಭ್ಯವಿರುವುದರಿಂದ ಅವರು ಹೆಚ್ಚು ನಗದು ಇಟ್ಟುಕೊಳ್ಳುವ ಅಗತ್ಯವಿರುವುದಿಲ್ಲ.&lt;/p&gt;&lt;p&gt;&lt;strong&gt;ಗ್ರಾಮೀಣ ಪ್ರದೇಶಗಳು:&lt;/strong&gt; ಗ್ರಾಮೀಣ ಭಾಗಗಳಲ್ಲಿ ಬ್ಯಾಂಕ್ ಮತ್ತು ಎಟಿಎಂ ಸೌಲಭ್ಯಗಳು ದೂರವಿರಬಹುದು. ಇಂತಹ ಕಡೆಗಳಲ್ಲಿ ತುಸು ಹೆಚ್ಚಿನ ನಗದು ಇಟ್ಟುಕೊಳ್ಳುವುದು ಅನಿವಾರ್ಯ.&lt;/p&gt;&lt;p&gt;ಸಾಮಾನ್ಯವಾಗಿ ಒಂದು ಕುಟುಂಬಕ್ಕೆ 3 ರಿಂದ 7 ದಿನಗಳ ತುರ್ತು ದಿನಸಿ, ಹಾಲಿನ ಖರ್ಚು, ಸ್ಥಳೀಯ ಸಾರಿಗೆ ಹಾಗೂ ವೈದ್ಯಕೀಯ ತುರ್ತು ಅಗತ್ಯಗಳನ್ನು ಪೂರೈಸುವಷ್ಟು ಹಣವನ್ನು ಮನೆಯಲ್ಲಿ ನಗದಾಗಿ ಇಟ್ಟುಕೊಳ್ಳುವುದು ಪ್ರಾಯೋಗಿಕ ಮತ್ತು ಸೂಕ್ತ. ಇದನ್ನು ಕೇವಲ 'ತುರ್ತು ಸಣ್ಣ ಖರ್ಚುಗಳ ಬಫರ್' ಎಂದು ಪರಿಗಣಿಸಬೇಕೇ ಹೊರತು, ಮನೆಯ ಬೀರುವನ್ನು ಎರಡನೇ ಬ್ಯಾಂಕ್ ಖಾತೆಯಂತೆ ಬಳಸಬಾರದು.&lt;/p&gt;&lt;h2&gt;&lt;strong&gt;ದೊಡ್ಡ ಮೊತ್ತದ ಎಮರ್ಜೆನ್ಸಿ ಫಂಡ್ ಮನೆಯಲ್ಲಿ ಬೇಡ!&lt;/strong&gt;&lt;/h2&gt;&lt;p&gt;ಕೆಲಸ ಕಳೆದುಕೊಳ್ಳುವುದು, ಗಂಭೀರ ಅನಾರೋಗ್ಯದಂತಹ ದೊಡ್ಡ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಲು ಪ್ರತಿಯೊಬ್ಬರೂ 'ತುರ್ತು ನಿಧಿ' (Emergency Fund) ಇಟ್ಟುಕೊಳ್ಳುವುದು ಅವಶ್ಯಕ. ಸೆಬಿ (SEBI) ನಿಯಮಗಳ ಪ್ರಕಾರ, ದೀರ್ಘಾವಧಿಯ ಹೂಡಿಕೆ ಮಾಡುವ ಮುನ್ನ 3 ರಿಂದ 6 ತಿಂಗಳ ಖರ್ಚಿಗೆ ಸಮನಾದ ತುರ್ತು ನಿಧಿಯನ್ನು ಹೊಂದಿರಬೇಕು.&lt;/p&gt;&lt;p&gt;ಆದರೆ ಈ ದೊಡ್ಡ ಮೊತ್ತವನ್ನು ನಗದು ರೂಪದಲ್ಲಿ ಮನೆಯ ಲಾಕರ್ ಅಥವಾ ಅಲ್ಮೇರಾದಲ್ಲಿ ಇಡಬಾರದು. ಬದಲಿಗೆ, ಅಗತ್ಯವಿದ್ದಾಗ ತಕ್ಷಣವೇ ಡ್ರಾ ಮಾಡಿಕೊಳ್ಳಬಹುದಾದ (Liquid Funds) ಅಥವಾ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್&zwnj;ಗಳಲ್ಲಿ (FD/Savings Account) ಇಡಬೇಕು. ಇದರಿಂದ ಹಣ ಸುರಕ್ಷಿತವಾಗಿರುವುದಲ್ಲದೆ, ಬಡ್ಡಿಯೂ ಸಿಗುತ್ತದೆ.&lt;/p&gt;&lt;h2&gt;&lt;strong&gt;ಹೆಚ್ಚು ಹಣ ಮನೆಯಲ್ಲಿ ಇಡುವುದರ ಅಪಾಯಗಳೇನು?&lt;/strong&gt;&lt;/h2&gt;&lt;p&gt;&lt;strong&gt;ಯಾವುದೇ ಬಡ್ಡಿ ಇರುವುದಿಲ್ಲ: &lt;/strong&gt;ಮನೆಯಲ್ಲಿರುವ ನೋಟುಗಳು ಯಾವುದೇ ಆದಾಯ ಅಥವಾ ಬಡ್ಡಿಯನ್ನು ತಂದುಕೊಡುವುದಿಲ್ಲ.&lt;/p&gt;&lt;p&gt;&lt;strong&gt;ಹಣದುಬ್ಬರದ ಹೊಡೆತ: &lt;/strong&gt;ವರ್ಷದಿಂದ ವರ್ಷಕ್ಕೆ ಬೆಲೆ ಏರಿಕೆಯಾಗುವುದರಿಂದ ಮನೆಯಲ್ಲಿ ಸುಮ್ಮನೆ ಇಟ್ಟ ಹಣದ ಕೊಳ್ಳುವ ಶಕ್ತಿ (Purchasing Power) ಕುಸಿಯುತ್ತದೆ.&lt;/p&gt;&lt;p&gt;&lt;strong&gt;ಸುರಕ್ಷತೆ ಕೊರತೆ: &lt;/strong&gt;ಕಳ್ಳತನ, ಬೆಂಕಿ ಅಥವಾ ಆಕಸ್ಮಿಕ ನಷ್ಟದ ಅಪಾಯ ಸದಾ ಇರುತ್ತದೆ.&lt;/p&gt;&lt;h2&gt;&lt;strong&gt;ವಿಶೇಷ ಸಂದರ್ಭಗಳಲ್ಲಿ ಮಾತ್ರ ಹೆಚ್ಚು ಹಣವಿರಲಿ&lt;/strong&gt;&lt;/h2&gt;&lt;p&gt;ದೂರದ ಹಳ್ಳಿಗಳಿಗೆ ಪ್ರವಾಸ ಹೋಗುವಾಗ, ಮನೆಯಲ್ಲಿ ವಯೋವೃದ್ಧರು ಅಥವಾ ತೀವ್ರ ಅನಾರೋಗ್ಯದ ರೋಗಿಗಳಿದ್ದಾಗ, ಇಲ್ಲವೇ ಪ್ರಾಕೃತಿಕ ವಿಕೋಪಗಳಂತಹ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಸ್ವಲ್ಪ ಹೆಚ್ಚಿನ ನಗದನ್ನು ಇಟ್ಟುಕೊಳ್ಳುವುದು ಜಾಣತನ. ಪರಿಸ್ಥಿತಿ ತಿಳಿಯಾದ ಬಳಿಕ ಹೆಚ್ಚುವರಿ ಹಣವನ್ನು ಬ್ಯಾಂಕ್&zwnj;ಗೆ ಜಮಾ ಮಾಡುವುದು ನಿಮ್ಮ ಆರ್ಥಿಕ ಆರೋಗ್ಯಕ್ಕೆ ಒಳ್ಳೆಯದು.&lt;/p&gt;]]></content:encoded>
            <category>money</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/money/how-much-cash-should-you-keep-at-home-rules-and-safety-tips-kannada-sat/articleshow-5lsa1yp"/>
        </item>
        <item>
            <title><![CDATA[4 ಲಕ್ಷದಿಂದ 64 ಲಕ್ಷಕ್ಕೆ ಜಂಪ್, ಸರ್ಕಾರಿ ಕಾಲೇಜಿನಲ್ಲಿ ಓದಿದ ಹುಡುಗನ ಸ್ಫೂರ್ತಿದಾಯಕ ಸಾಹಸ]]></title>
            <link>https://kannada.asianetnews.com/jobs/beating-tier-3-odds-engineer-lands-rs-64-lpa-amazon-role-with-smart-networking-and-coding-skills-gkn/articleshow-5rfxqe9</link>
            <guid isPermaLink="true">https://kannada.asianetnews.com/jobs/beating-tier-3-odds-engineer-lands-rs-64-lpa-amazon-role-with-smart-networking-and-coding-skills-gkn/articleshow-5rfxqe9</guid>
            <pubDate>Thu, 10 Sep 2026 19:06:42 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ಟೈರ್-3 ಎಂಜಿನಿಯರಿಂಗ್ ಕಾಲೇಜು ಎಂದ ಕೂಡಲೇ ಕ್ಯಾಂಪಸ್ ಸೆಲೆಕ್ಷನ್&zwnj;ನಲ್ಲಿ 3 ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕರೆ ಹೆಚ್ಚು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಪ್ರತಿಭೆ ಜೊತೆಗೆ ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವಿದ್ದರೆ ಕಾಲೇಜು ಅಥವಾ ಕ್ಯಾಂಪಸ್ ಮಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾರತೀಯ ಯುವ ಎಂಜಿನಿಯರ್ ಒಬ್ಬರು ಸಾಬೀತುಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25rbjcm299vhkc4rjpr17x4,imgname-job-1789047196051.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಟೈರ್-3 ಎಂಜಿನಿಯರಿಂಗ್ ಕಾಲೇಜು ಎಂದ ಕೂಡಲೇ ಕ್ಯಾಂಪಸ್ ಸೆಲೆಕ್ಷನ್&zwnj;ನಲ್ಲಿ 3 ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕರೆ ಹೆಚ್ಚು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಪ್ರತಿಭೆ ಜೊತೆಗೆ ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವಿದ್ದರೆ ಕಾಲೇಜು ಅಥವಾ ಕ್ಯಾಂಪಸ್ ಮಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾರತೀಯ ಯುವ ಎಂಜಿನಿಯರ್ ಒಬ್ಬರು ಸಾಬೀತುಪಡಿಸಿದ್ದಾರೆ.&lt;/p&gt;&lt;p&gt;ಕೇವಲ 4 ಲಕ್ಷ ರೂಪಾಯಿ ಸರಾಸರಿ ಪ್ಯಾಕೇಜ್ ನೀಡುತ್ತಿದ್ದ ಸಾಮಾನ್ಯ ಸರ್ಕಾರಿ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಯೊಬ್ಬ, ಇಂದು ಜಾಗತಿಕ ಟೆಕ್ ದೈತ್ಯ ಅಮೆಜಾನ್ (Amazon) ಸಂಸ್ಥೆಯಲ್ಲಿ ಬರೋಬ್ಬರಿ 64 ಲಕ್ಷ ರೂಪಾಯಿ ವಾರ್ಷಿಕ ವೇತನದೊಂದಿಗೆ 'ಸಾಫ್ಟ್&zwnj;ವೇರ್ ಡೆವಲಪ್&zwnj;ಮೆಂಟ್ ಎಂಜಿನಿಯರ್ 2' ಹುದ್ದೆ ಗಿಟ್ಟಿಸಿಕೊಂಡು ಹುಬ್ಬೇರಿಸಿದ್ದಾರೆ!&lt;/p&gt;&lt;p&gt;ವಿಕಾಸ್ ಅಲ್ವಿಸ್ (Vikas Alwys) ಎಂಬುವವರು 'X' (ಟ್ವಿಟರ್) ಜಾಲತಾಣದಲ್ಲಿ ಹಂಚಿಕೊಂಡಿರುವ ಯಶೋಗಾಥೆಯ ಪ್ರಕಾರ, ಈ ಯುವಕ ತೆಲಂಗಾಣದ ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದ (JNTU ಜಗಿತ್ಯಾಲ) ಟೈರ್-3 ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಟೆಕ್ ಮುಗಿಸಿದ್ದರು. ಈ ಕಾಲೇಜಿನಲ್ಲಿ ಸರಾಸರಿ ವೇತನ ಪ್ಯಾಕೇಜ್ ಸುಮಾರು 4 ಲಕ್ಷ ರೂ. ಇತ್ತು. ಹೆಚ್ಚಿನ ವಿದ್ಯಾರ್ಥಿಗಳು ಟಿಸಿಎಸ್, ಕಾಗ್ನಿಜೆಂಟ್, ಕ್ಯಾಪ್&zwnj;ಜೆಮಿನಿ, ಅಕ್ಸೆಂಚರ್&zwnj;ನಂತಹ ಸಾಫ್ಟ್&zwnj;ವೇರ್ ಸರ್ವಿಸ್ ಕಂಪನಿಗಳಿಗೆ ಮಾತ್ರ ಆಯ್ಕೆಯಾಗುತ್ತಿದ್ದರು. ಜೊತೆಗೆ ಕಾಲೇಜಿನಲ್ಲಿ ಕಾಂಪಿಟಿಟಿವ್ ಪ್ರೋಗ್ರಾಮಿಂಗ್ ಅಥವಾ ಹೈ-ಲೆವೆಲ್ ಟೆಕ್ ಇಂಟರ್ವ್ಯೂಗಳಿಗೆ ತರಬೇತಿ ನೀಡುವ ಪೂರಕ ವಾತಾವರಣವೂ ಇರಲಿಲ್ಲ.&lt;/p&gt;&lt;h2&gt;&lt;strong&gt;ಸ್ನೇಹಿತರ ನೆಟ್&zwnj;ವರ್ಕ್&lt;/strong&gt;&lt;/h2&gt;&lt;p&gt;ಕಾಲೇಜಿನ ಮಿತಿಗಳನ್ನೇ ನೆಪ ಮಾಡಿಕೊಳ್ಳದ ಎಂಜಿನಿಯರ್ ತಮಗೆ ತಾವೇ ಒಂದು ಹೊಸ ದಾರಿ ಕಂಡುಕೊಂಡರು. ಐಐಟಿ (IIT) ಮತ್ತು ಎನ್&zwnj;ಐಟಿ (NIT) ಕಾಲೇಜುಗಳಲ್ಲಿ ಓದುತ್ತಿದ್ದ ಸ್ನೇಹಿತರೊಂದಿಗೆ ನಿರಂತರ ಸಂಪರ್ಕ ಸಾಧಿಸಿದರು. ಅವರ ಮೂಲಕ ಕಾಂಪಿಟಿಟಿವ್ ಪ್ರೋಗ್ರಾಮಿಂಗ್, ಕೋಡಿಂಗ್ ಚರ್ಚೆಗಳು ಮತ್ತು ಇತ್ತೀಚಿನ ಟೆಕ್ ಟ್ರೆಂಡ್&zwnj;ಗಳ ಬಗ್ಗೆ ಮಾಹಿತಿ ಪಡೆದರು. ಕಾಲೇಜು ಪಠ್ಯಕ್ಕೆ ಸೀಮಿತವಾಗದೆ ಆನ್&zwnj;ಲೈನ್ ಕೋಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಹೆಚ್ಚಿಸಿಕೊಂಡರು.&lt;/p&gt;&lt;h2&gt;&lt;strong&gt;ಇನ್ಫೋಸಿಸ್&zwnj;ನಿಂದ ಅಮೆಜಾನ್&zwnj;ವರೆಗೆ&lt;/strong&gt;&lt;/h2&gt;&lt;p&gt;ಕಠಿಣ ಪರಿಶ್ರಮದ ಫಲವಾಗಿ ಕಾಲೇಜಿನ ಸರಾಸರಿಗಿಂತ ಮೂರು ಪಟ್ಟು ಹೆಚ್ಚು ಅಂದರೆ ವಾರ್ಷಿಕ 11 ಲಕ್ಷ ರೂ. ಪ್ಯಾಕೇಜ್&zwnj;ನೊಂದಿಗೆ ಇನ್ಫೋಸಿಸ್&zwnj;ನಲ್ಲಿ 'ಸ್ಪೆಷಲಿಸ್ಟ್ ಪ್ರೋಗ್ರಾಮರ್' ಆಗಿ ಮೊದಲ ಉದ್ಯೋಗ ಪಡೆದರು. ಇನ್ಫೋಸಿಸ್&zwnj;ಗೆ ಸೇರಿಕೊಂಡ ನಂತರವೂ ಕಲಿಕೆಯನ್ನು ನಿಲ್ಲಿಸದ ಅವರು, ಕೇವಲ 3 ವರ್ಷಗಳ ವೃತ್ತಿಜೀವನದಲ್ಲಿ ನೇರವಾಗಿ ಅಮೆಜಾನ್ ಸಂಸ್ಥೆಯ 'SDE 2' ಹುದ್ದೆಗೆ ಆಯ್ಕೆಯಾಗುವ ಮೂಲಕ ವಾರ್ಷಿಕ 64 ಲಕ್ಷ ರೂ. ವೇತನ ಪಡೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.&lt;/p&gt;&lt;p&gt;ನೀವು ಓದುವ ಕಾಲೇಜು ನಿಮ್ಮ ವೃತ್ತಿಜೀವನದ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಟೈರ್-3 ಕಾಲೇಜಿನಲ್ಲಿದ್ದರೂ, ಸ್ವಯಂ ಕಲಿಕೆ, ಉನ್ನತ ಕನಸು ಕಾಣುವ ಗೆಳೆಯರ ನೆಟ್&zwnj;ವರ್ಕ್ ಮತ್ತು ನೈಜ ತಾಂತ್ರಿಕ ಕೌಶಲಗಳು ನಿಮ್ಮಲ್ಲಿದ್ದರೆ ಗೂಗಲ್, ಅಮೆಜಾನ್&zwnj;ನಂತಹ ಜಾಗತಿಕ ದೈತ್ಯ ಸಂಸ್ಥೆಗಳ ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ ಎಂಬುದಕ್ಕೆ ಈ ಯುವಕನ ಪಯಣವೇ ಸಾಕ್ಷಿ!&lt;/p&gt;&lt;p&gt;There is a friend of mine who completed his https://t.co/BC6fLkcQNf CS from JNTU Jagityal, a tier-3 Govt college. To be honest, the college's average package is 4 LPA and most students get placed in TCS, Cognizant, Capgemini, and Accenture.But he is SDE 2 at Amazon earning&hellip;&lt;/p&gt;&lt;p&gt;&mdash; Vikas Alwys (@VikasAlwys) September 9, 2026&lt;/p&gt;&lt;p&gt;&lt;/p&gt;]]></content:encoded>
            <category>money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/jobs/beating-tier-3-odds-engineer-lands-rs-64-lpa-amazon-role-with-smart-networking-and-coding-skills-gkn/articleshow-5rfxqe9"/>
        </item>
        <item>
            <title><![CDATA[PF ಅಕೌಂಟ್ ಇರುವವರಿಗೆ ಕೇಂದ್ರದ ಗುಡ್‌ನ್ಯೂಸ್; ಈ ಸಿಂಪಲ್ ಕೆಲಸ ಮಾಡಿ, ಖಾತೆಗೆ ಬೀಳುತ್ತೆ 15 ಸಾವಿರ ರೂ.]]></title>
            <link>https://kannada.asianetnews.com/business/good-news-for-pf-account-holders-pradhan-mantri-viksit-bharat-rozgar-yojana-must-complete-uan-activation-sns/articleshow-6n8cdph</link>
            <guid isPermaLink="true">https://kannada.asianetnews.com/business/good-news-for-pf-account-holders-pradhan-mantri-viksit-bharat-rozgar-yojana-must-complete-uan-activation-sns/articleshow-6n8cdph</guid>
            <pubDate>Wed, 09 Sep 2026 13:22:05 +0530</pubDate>
            <description><![CDATA[ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಇಪಿಎಫ್&zwnj;ಓ ಮಹತ್ವದ ಎಚ್ಚರಿಕೆ ನೀಡಿದೆ. ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ ₹15,000 ಲಾಭ ಪಡೆಯಲು, ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಸಂಬಂಧಿಸಿದ ಡಿಬಿಟಿ ಸೌಲಭ್ಯ ಮತ್ತು ಎನ್&zwnj;ಪಿಸಿಐ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ ಆರ್ಥಿಕ ನೆರವು ಕೈತಪ್ಪಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyc7rfmrq9fjgna1c4376zzt,imgname-epfo-interest-credited-check-pf-balance-missed-call-sms-withdrawal-rules-upi-atm-umang-epfo-portal-2025-26-1784969707160.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಪಿಎಫ್&zwnj;ಓ ಬಿಗ್ ಅಲರ್ಟ್ ನೀಡಿದೆ. ಹೊಸದಾಗಿ ಕೆಲಸಕ್ಕೆ ಸೇರುವವರು ತಪ್ಪದೇ ಮಾಡಬೇಕಾದವರು ಈ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ. ಇಲ್ಲ ಎಂದರೆ ಖಾತೆ ಬೀಳಲಿರುವ 15 ಸಾವಿರ ರೂಪಾಯಿ ಮಿಸ್ ಆಗಲಿದೆ ಎಂದು ತಿಳಿಸಿದೆ. ಬ್ಯಾಂಕ್ ಖಾತೆಗೆ ಡಿಬಿಟಿ ಸೌಲಭ್ಯ ತಪ್ಪದೇ ಇರಬೇಕು, ಎನ್&zwnj;ಪಿಸಿಐ ಮ್ಯಾಪಿಂಹ್ ಪೂರ್ತಿಗೊಳಿಸಬೇಕು ಎಂದು ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಇಪಿಎಫ್&zwnj;ಓ ಎಚ್ಚರಿಕೆ: ಈ ತಪ್ಪಿನಿಂದ ₹15,000 ನಷ್ಟ!&lt;/h2&gt;&lt;p&gt;ಹೊಸದಾಗಿ ಕೆಸಲಕ್ಕೆ ಸೇರುವವರಿಗೆ ಲಾಭಗಳಿಸಲು, ಉದ್ಯೋಗ ಕೊಡುವ ಕಂಪನಿಗಳಿಗೆ ಪ್ರೋತ್ಸಹ ನೀಡಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಮೂಲಕ ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ 15 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಿದೆ. ಒಮ್ಮೆ ಮಾತ್ರ ಈ ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಆದರೆ ಎರಡು ಹಂತಗಳಲ್ಲಿ ಈ ಹಣ ಫಲಾನುಭವಿಯ ಖಾತೆಗೆ ಜಮಾ ಮಾಡಲಿದೆ. ಇನ್ನು, ಕೆಲಸ ನೀಡುವ ಕಂಪನಿಗೂ ಓರ್ವ ಉದ್ಯೋಗಿಗೆ ಮೂರು ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ.&lt;/p&gt;&lt;p&gt;ದೇಶದಲ್ಲಿ ಉದ್ಯೋಗ ಸೃಷ್ಟಿ, ಕಂಪನಿಗಳು ಉದ್ಯೋಗ ನೀಡುವುದನ್ನು ಹೆಚ್ಚಿಸಲು ಈ ಯೋಜನೆಯನ್ನು ಜಾರಿ ಮಾಡುತ್ತಿದೆ. ಈ ಯೋಜನೆ ಮೂಲಕ ಲಕ್ಷಾಂತರ ಮಂದಿಗೆ ಉದ್ಯೋಗಗಳು ಲಾಭ ಪಡೆದುಕೊಳ್ಳಲಿದ್ದಾರೆ. ಆದರೆ ಈ ಯೋಜನೆಯ ಕುರಿತು ಈಪಿಎಫ್&zwnj;ಓ ಬಿಗ್ ಅಪ್&zwnj;ಡೇಟ್ ನೀಡಿ, ಉದ್ಯೋಗಿಗಳಿಗೆ ಅಲರ್ಟ್ ನೀಡಿದೆ.&lt;/p&gt;&lt;h2&gt;ಈ ಕೆಲಸ ಮಾಡಿದರೆ ಮಾತ್ರ ಖಾತೆ ಹಣ ಬರುತ್ತದೆ!&lt;/h2&gt;&lt;p&gt;ಹೊಸದಾಗಿ ಕೆಲಸಕ್ಕೆ ಸೇರುವವರು ಈ ಯೋಜನೆಗೆ ಲಾಭ ಪಡೆದುಕೊಳ್ಳಲು ಪಿಎಫ್ ಖಾತೆ ಹೊಂದಿರಬೇಕು. ಪಿಎಫ್ (PF) ಯೋಜನೆಯ ವ್ಯಾಪ್ತಿಗೆ ಬರುವ ಕಂಪನಿಗೆ ಸೇರಿದರೆ ಮಾತ್ರ ನೀವು ಹಣವನ್ನು ಪಡೆಯುತ್ತೀರಿ. ನಿಮಗೆ ಪಿಎಫ್ ಖಾತೆ ಇದ್ದರೆ ಮಾತ್ರ ಸಾಕಾಗುವುದಿಲ್ಲ. ನಿಮಗೆ ಯಎಎನ್ ನಂಬರ್ ಕೂಡ ಆಕ್ಟೀವ್ ಮಾಡಿಕೊಳ್ಳಬೇಕು ಎಂದು ಈಪಿಎಫ್&zwnj;ಓ ಅಲರ್ಟ್ ನೀಡಿದೆ. ಫೇಸ್ ಅಥೆಂಟಿಕೇಷನ್ ಪ್ರಕ್ರಿಯೆ ಮೂಲಕ ಈ ಪ್ರೋಸೆಸ್ ಪೂರ್ತಿ ಮಾಡಬೇಕು. ಇಷ್ಟೇ ಅಲ್ಲದೆ, ಈಪಿಎಫ್&zwnj;ಓ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಸೌಕರ್ಯ ಕೂಡ ಇರ್ಬೇಕು ಅಂತ ಚೆಕ್ ಮಾಡಿಕೊಳ್ಳಬೇಕು. ಡಿಬಿಟಿ ಸೌಕರ್ಯ ಇಲ್ಲ ಎಂದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಅಪ್&zwnj;ಡೇಟ್ ಮಾಡಿಕೊಳ್ಳಿ. ಉದ್ಯೋಗಿಗಳು ಈ ಪ್ರಕ್ರಿಯೆ ಪೂರ್ಣಗೊಳಿಸಿದರೆ 15 ಸಾವಿರ ರೂಪಾಯಿ ಖಾತೆ ಜಮೆ ಆಗಲಿದೆ. ಇಲ್ಲ ಎಂದರೆ ಸಮಸ್ಯೆಗಳು ಎದುರಾಗುತ್ತದೆ. ಈ ವಿಚಾರವನ್ನ ಈಪಿಎಫ್ಓ ತನ್ನ ಎಕ್ಸ್ ಫ್ಲಾಟ್&zwnj;ಫಾರ್ಮ್&zwnj;ನಲ್ಲಿ ತಿಳಿಸಿದೆ.&lt;/p&gt;&lt;h2&gt;ಮೊದಲ ವರ್ಷವೇ ಖಾತೆಗೆ ಬರುತ್ತೆ ಹಣ!&lt;/h2&gt;&lt;p&gt;ಬ್ಯಾಂಕ್ ಖಾತೆಗೆ ಎನ್&zwnj;ಪಿಸಿಐ ಮ್ಯಾಪಿಂಗ್ ಪೂರ್ಣಗೊಳಿಸಬೇಕು. ಪ್ರಧಾನಮಂತ್ರಿ ವಿಕಸಿತ್ ಭಾರತ್ ಯೋಜನೆಯನ್ನು ಆಗಸ್ಟ್ 15, 2025ರಂದು ಪ್ರಧಾನಿ ಮೋದಿ ಪ್ರಾರಂಭಿಸಿದ್ದರು. ಕೆಲಸಕ್ಕೆ ಸೇರಿದ ಮೊದಲ ವರ್ಷವೇ ಈ ಯೋಜನೆಯ ಲಾಭ ಸಿಗಲಿದೆ. ಒಂದು ಲಕ್ಷ ರೂಪಾಯಿ ಒಳಗೆ ಸಂಬಳ ಇರುವ ಈ ಸೌಲಭ್ಯ ಸಿಗುತ್ತದೆ. ಈ ಯೋಜನೆಗೆ ನೀವು ಯಾವುದೇ ವಿಶೇಷ ಅರ್ಜಿ ಸಲ್ಲಿಕೆ ಮಾಡುವ ಅಗತ್ಯವಿಲ್ಲ. ಪಿಎಫ್ ಅಕೌಂಟ್ ಇದ್ದರೆ ಸತತವಾಗಿ ಆರು ತಿಂಗಳ ಕಾಲ ನಿಮ್ಮ ಖಾತೆಗೆ ಪಿಎಫ್ ಹಣ ಜಮೆಯಾದರೆ, ಎರಡು ಹಂತಗಳಲ್ಲಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ. ಮೊದಲ ಹಂತದಲ್ಲಿ 8 ಸಾವಿರ ರೂಪಾಯಿ, ಎರಡನೇ ಹಂತದಲ್ಲಿ 7 ಸಾವಿರ ರೂಪಾಯಿ ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ.&lt;/p&gt;&lt;p&gt;Pradhan Mantri Viksit Bharat Rozgar YojanaEmployees must complete UAN Activation and Authentication through Face Authentication and ensure that their bank account is DBT-enabled to receive the incentive.#PradhanMantriViksitBharatRozgarYojana #EPFO #EPFOWithYou #HumHainNa pic.twitter.com/54rOLdmdiU&lt;/p&gt;&lt;p&gt;&mdash; EPFO (@officialepfo) September 8, 2026&lt;/p&gt;&lt;p&gt;&lt;/p&gt;]]></content:encoded>
            <category>money</category>
            <dc:creator>Sumanth SN</dc:creator>
            <atom:link href="https://kannada.asianetnews.com/business/good-news-for-pf-account-holders-pradhan-mantri-viksit-bharat-rozgar-yojana-must-complete-uan-activation-sns/articleshow-6n8cdph"/>
        </item>
        <item>
            <title><![CDATA[FD: ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ದರಗಳ ವಿವರ: 444 ದಿನಗಳ ಯೋಜನೆಯಲ್ಲಿ ಗ್ರಾಹಕರಿಗೆ ಸಿಗಲಿದೆ ಆಕರ್ಷಕ ಬಡ್ಡಿ!]]></title>
            <link>https://kannada.asianetnews.com/money/bank-of-baroda-444-days-fd-3-lakh-investment-maturity-amount-interest-rate-fixed-deposit-bmk/articleshow-bg844ng</link>
            <guid isPermaLink="true">https://kannada.asianetnews.com/money/bank-of-baroda-444-days-fd-3-lakh-investment-maturity-amount-interest-rate-fixed-deposit-bmk/articleshow-bg844ng</guid>
            <pubDate>Mon, 07 Sep 2026 18:19:34 +0530</pubDate>
            <description><![CDATA[ಬ್ಯಾಂಕ್ ಆಫ್ ಬರೋಡಾ ತನ್ನ ಸ್ಥಿರ ಠೇವಣಿಗಳ ಮೇಲೆ ಹೊಸ ಬಡ್ಡಿದರಗಳನ್ನು ಪ್ರಕಟಿಸಿದೆ. ಇದರಲ್ಲಿ 444 ದಿನಗಳ ವಿಶೇಷ ಎಫ್&zwnj;ಡಿ ಯೋಜನೆಯು ಹೂಡಿಕೆದಾರರ ಗಮನ ಸೆಳೆಯುತ್ತಿದ್ದು, ಸಾಮಾನ್ಯ ಗ್ರಾಹಕರು, ಹಿರಿಯ ನಾಗರಿಕರು ಮತ್ತು ಸೂಪರ್ ಹಿರಿಯ ನಾಗರಿಕರಿಗೆ ಶೇಕಡಾ 7.05 ರವರೆಗೆ ಆಕರ್ಷಕ ಬಡ್ಡಿಯನ್ನು ನೀಡುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyj985kat9th81z04czb6awh,imgname-bank-of-baroda-data-leak-dark-web-customer-data-security-1785172596330.png" type="image/jpeg" height="390" width="690"/>
            <content:encoded><![CDATA[&lt;p&gt;ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಸ್ಥಿರ ಠೇವಣಿ ಖಾತೆಗಳ ಮೇಲೆ ಆಕರ್ಷಕ ಬಡ್ಡಿದರಗಳನ್ನು ಪ್ರಕಟಿಸಿದೆ. ಈ ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್&zwnj;ನಲ್ಲಿ ಕನಿಷ್ಠ 7 ದಿನಗಳಿಂದ ಹಿಡಿದು ಗರಿಷ್ಠ 10 ವರ್ಷಗಳ ಅವಧಿಯವರೆಗೆ ಎಫ್&zwnj;ಡಿ ಖಾತೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮೂರು ಕೋಟಿ ರೂಪಾಯಿಗಿಂತ ಕಡಿಮೆ ಮೌಲ್ಯದ ಎಫ್&zwnj;ಡಿ ಠೇವಣಿಗಳ ಮೇಲೆ ಬ್ಯಾಂಕ್ ಶೇಕಡಾ 3.50 ರಿಂದ ಶೇಕಡಾ 7.35 ರವರೆಗೆ ವಿಭಿನ್ನ ಬಡ್ಡಿದರಗಳನ್ನು ನೀಡುತ್ತಿದೆ.&lt;/p&gt;&lt;h2&gt;&lt;strong&gt;ಹೂಡಿಕೆದಾರರ ಗಮನ ಸೆಳೆದ ಈ ಎಫ್&zwnj;ಡಿ ಯೋಜನೆ!&lt;/strong&gt;&lt;/h2&gt;&lt;p&gt;ಬ್ಯಾಂಕ್ ಆಫ್ ಬರೋಡಾ ಪರಿಚಯಿಸಿರುವ 444 ದಿನಗಳ ವಿಶೇಷ ಎಫ್&zwnj;ಡಿ ಯೋಜನೆಯು ಹೂಡಿಕೆದಾರರ ಗಮನ ಸೆಳೆಯುತ್ತಿದ್ದು, ಈ ಅವಧಿಗೆ ಶೇಕಡಾ 6.45 ರಿಂದ ಶೇಕಡಾ 7.05 ರವರೆಗೆ ಬಡ್ಡಿ ಲಭ್ಯವಿದೆ. 59 ವರ್ಷ ವಯಸ್ಸಿನವರೆಗಿನ ಸಾಮಾನ್ಯ ಗ್ರಾಹಕರಿಗೆ 444 ದಿನಗಳ ಠೇವಣಿ ಮೇಲೆ ವಾರ್ಷಿಕ ಶೇಕಡಾ 6.45 ರಷ್ಟು ಬಡ್ಡಿ ನೀಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ಹೆಚ್ಚಿನ ಬಡ್ಡಿ ಸೌಲಭ್ಯ!&lt;/strong&gt;&lt;/h3&gt;&lt;p&gt;ಹಿರಿಯ ನಾಗರಿಕರಿಗೆ ಬ್ಯಾಂಕ್ ವಿಶೇಷ ರಿಯಾಯಿತಿ ಹಾಗೂ ಹೆಚ್ಚಿನ ಬಡ್ಡಿ ಸೌಲಭ್ಯ ಒದಗಿಸಿದೆ. 60 ರಿಂದ 79 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ಇದೇ 444 ದಿನಗಳ ಯೋಜನೆಗೆ ಶೇಕಡಾ 6.95 ರಷ್ಟು ಬಡ್ಡಿ ಸಿಗಲಿದೆ. ಇನ್ನು 80 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಹಿರಿಯ ನಾಗರಿಕರಿಗೆ ಬ್ಯಾಂಕ್ ಗರಿಷ್ಠ ಶೇಕಡಾ 7.05 ರಷ್ಟು ಬಡ್ಡಿದರವನ್ನು ನಿಗದಿಪಡಿಸಿದೆ. ಈ ವಿಶೇಷ ಯೋಜನೆಯಡಿಯಲ್ಲಿ ಗ್ರಾಹಕರು ಗರಿಷ್ಠ 3 ಕೋಟಿ ರೂಪಾಯಿಯವರೆಗೆ ಹೂಡಿಕೆ ಮಾಡಲು ಅವಕಾಶವಿದೆ.&lt;/p&gt;&lt;h3&gt;&lt;strong&gt;ಎಷ್ಟು ಬರಲಿದೆ ಹಣ!&lt;/strong&gt;&lt;/h3&gt;&lt;p&gt;ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತಕ್ಕೆ ಸಿಗುವ ಲಾಭದ ಲೆಕ್ಕಾಚಾರವನ್ನು ಗಮನಿಸುವುದಾದರೆ, ಸಾಮಾನ್ಯ ಗ್ರಾಹಕರೊಬ್ಬರು 444 ದಿನಗಳ ಅವಧಿಗೆ 3 ಲಕ್ಷ ರೂಪಾಯಿಗಳನ್ನು ಎಫ್&zwnj;ಡಿಯಲ್ಲಿ ಠೇವಣಿ ಇಟ್ಟರೆ, ವಾರ್ಷಿಕ ಶೇಕಡಾ 6.45 ರ ಬಡ್ಡಿದರದಲ್ಲಿ ಸುಮಾರು 24,000 ದಿಂದ 24,300 ರೂಪಾಯಿಗಳಷ್ಟು ಬಡ್ಡಿ ಆದಾಯ ಗಳಿಸಬಹುದು. ಇದರಿಂದಾಗಿ 444 ದಿನಗಳ ಅವಧಿ ಪೂರ್ಣಗೊಂಡಾಗ ಒಟ್ಟು ಮೆಚ್ಯೂರಿಟಿ ಮೊತ್ತ ಸರಿಸುಮಾರು 3,24,000 ರೂಪಾಯಿ ತಲುಪುತ್ತದೆ. ಹಿರಿಯ ನಾಗರಿಕರು ಇದೇ ಮೊತ್ತವನ್ನು ಠೇವಣಿ ಮಾಡಿದರೆ ಹೆಚ್ಚಿನ ಬಡ್ಡಿದರದ ಕಾರಣದಿಂದ ಮೆಚ್ಯೂರಿಟಿ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ.&lt;/p&gt;&lt;h3&gt;&lt;strong&gt;ಯಾರಿಗೆ ಸೂಕ್ತ!&lt;/strong&gt;&lt;/h3&gt;&lt;p&gt;ಆದಾಗ್ಯೂ, ಗ್ರಾಹಕರ ಒಟ್ಟು ಆದಾಯ ಹಾಗೂ ನಿಯಮಗಳಿಗೆ ಅನುಗುಣವಾಗಿ ಅನ್ವಯವಾಗುವ ಟಿಡಿಎಸ್ ಅಥವಾ ತೆರಿಗೆ ಕಡಿತದ ನಂತರ ಕೈಗೆ ಸಿಗುವ ಅಂತಿಮ ಮೊತ್ತದಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸವಿರಬಹುದು. ಕಡಿಮೆ ಅವಧಿಯಲ್ಲಿ ಸುರಕ್ಷಿತ ಹಾಗೂ ಉತ್ತಮ ಆದಾಯ ಬಯಸುವ ಹೂಡಿಕೆದಾರರಿಗೆ ಈ ಯೋಜನೆ ಸೂಕ್ತವಾಗಿದೆ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/bank-of-baroda-444-days-fd-3-lakh-investment-maturity-amount-interest-rate-fixed-deposit-bmk/articleshow-bg844ng"/>
        </item>
        <item>
            <title><![CDATA[Cricket: ಒಂದೇ ದಿನ ಎರಡು ದೇಶಗಳಲ್ಲಿ ಕಣಕ್ಕಿಳಿಯಲಿದೆ ಭಾರತ! 28 ವರ್ಷಗಳ ಬಳಿಕ ಮರುಕಳಿಸಲಿದೆ ಅಪರೂಪದ ಇತಿಹಾಸ!]]></title>
            <link>https://kannada.asianetnews.com/money/team-india-two-matches-same-day-28-years-after-historic-record-india-cricket-schedule-bmk/articleshow-fzx85su</link>
            <guid isPermaLink="true">https://kannada.asianetnews.com/money/team-india-two-matches-same-day-28-years-after-historic-record-india-cricket-schedule-bmk/articleshow-fzx85su</guid>
            <pubDate>Mon, 07 Sep 2026 20:13:54 +0530</pubDate>
            <description><![CDATA[&lt;p&gt;ಭಾರತೀಯ ಕ್ರೀಡಾಭಿಮಾನಿಗಳಿಗೆ ಅಪರೂಪದ ದಿನ ಎದುರಾಗಲಿದೆ. ಅಂದು ಭಾರತ ಒಂದೇ ದಿನ ಎರಡು ವಿಭಿನ್ನ ದೇಶಗಳಲ್ಲಿ ಕಣಕ್ಕಿಳಿಯಲಿದೆ. ಈ ಅಪರೂಪದ ವೇಳಾಪಟ್ಟಿಯ ಸಂಪೂರ್ಣ ವಿವರನ್ನೊಮ್ಮೆ ನೋಡಿಕೊಂಡು ಬರೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y54sk34b085f6v2ske2j3n,imgname-team-india-1788792170083.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಕ್ಟೋಬರ್ 3, 2026 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನವಾಗಲಿದೆ. ಈ ಒಂದೇ ದಿನದಂದು ಭಾರತದ ಎರಡು ಪ್ರತ್ಯೇಕ ಪುರುಷರ ಕ್ರಿಕೆಟ್ ತಂಡಗಳು ಎರಡು ವಿಭಿನ್ನ ದೇಶಗಳಲ್ಲಿ ಮೈದಾನಕ್ಕಿಳಿದು ಪಂದ್ಯಗಳನ್ನು ಆಡಲಿವೆ. ಒಂದು ತಂಡ ಭಾರತದ ಚಂಡೀಗಢ ಸಮೀಪದ ಮುಲ್ಲನ್&zwnj;ಪುರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಸೆಣಸಿದರೆ, ಮತ್ತೊಂದು ತಂಡ ಜಪಾನ್&zwnj;ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್&zwnj;ನ ಪದಕದ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ.&lt;/p&gt;&lt;h2&gt;&lt;strong&gt;ಯಾವಾಗ ಮ್ಯಾಚ್?&amp;nbsp;&lt;/strong&gt;&lt;/h2&gt;&lt;p&gt;ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯವು ಅಕ್ಟೋಬರ್ 3 ರಂದು ಮಧ್ಯಾಹ್ನ 2 ಗಂಟೆಗೆ ಮುಲ್ಲನ್&zwnj;ಪುರದಲ್ಲಿ ಪ್ರಾರಂಭವಾಗಲಿದೆ. ಅದೇ ದಿನ ಜಪಾನ್&zwnj;ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ ಪುರುಷರ ಕ್ರಿಕೆಟ್ ವಿಭಾಗದ ಕಂಚಿನ ಮತ್ತು ಚಿನ್ನದ ಪದಕಕ್ಕಾಗಿ ಪಂದ್ಯಗಳು ನಡೆಯಲಿವೆ. ಭಾರತ ತಂಡವು ಫೈನಲ್ ತಲುಪಿದರೆ ಚಿನ್ನದ ಪದಕಕ್ಕಾಗಿ, ಇಲ್ಲವಾದರೆ ಕಂಚಿನ ಪದಕಕ್ಕಾಗಿ ಅಕ್ಟೋಬರ್ 3 ರಂದೇ ಕಣಕ್ಕಿಳಿಯಲಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡವು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಸೆಪ್ಟೆಂಬರ್ 28 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ.&lt;/p&gt;&lt;h3&gt;&lt;strong&gt;ತಂಡವ್ನು ಯಾರು ಮುನ್ನಡೆಸಲಿದ್ದಾರೆ? &lt;/strong&gt;&lt;/h3&gt;&lt;p&gt;ಏಷ್ಯನ್ ಗೇಮ್ಸ್&zwnj;ಗಾಗಿ ಭಾರತೀಯ ಕ್ರಿಕೆಟ್ ಮಂಡಳಿಯು ಬಲಶಾಲಿ ಪಡೆ ಹಾಗೂ ಹೊಸ ನಾಯಕನನ್ನು ಘೋಷಿಸಿದೆ. ಶ್ರೇಯಸ್ ಅಯ್ಯರ್ ಈ ತಂಡವನ್ನು ಮುನ್ನಡೆಸಲಿದ್ದು, ತಂಡದಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಿತ್ ರಾಣಾ ಅವರಂತಹ ಸ್ಟಾರ್ ಆಟಗಾರರಿದ್ದಾರೆ.&lt;/p&gt;&lt;h3&gt;&lt;strong&gt;28 ವರ್ಷಗಳ ನಂತರ ಬಂದ ಆ ದಿನ!&lt;/strong&gt;&lt;/h3&gt;&lt;p&gt;ಭಾರತೀಯ ಕ್ರಿಕೆಟ್&zwnj;ನಲ್ಲಿ ಒಂದೇ ದಿನ ಎರಡು ಬೇರೆ ಬೇರೆ ದೇಶಗಳಲ್ಲಿ ಎರಡು ಪಂದ್ಯಗಳನ್ನು ಆಡುತ್ತಿರುವ ಈ ಅಪರೂಪದ ಕಾಕತಾಳೀಯವು ಬರೋಬ್ಬರಿ 28 ವರ್ಷಗಳ ನಂತರ ಮರುಕಳಿಸುತ್ತಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 12, 1998 ರಂದು ಭಾರತೀಯ ಕ್ರಿಕೆಟ್ ತಂಡವು ಒಂದೇ ದಿನದಲ್ಲಿ ಇಂತಹ ಎರಡು ಭಿನ್ನ ಪಂದ್ಯಗಳನ್ನು ಆಡಿತ್ತು. ಅಂದು ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಅಜಯ್ ಜಡೇಜಾ ಹಾಗೂ ವಿ.ವಿ.ಎಸ್. ಲಕ್ಷ್ಮಣ್ ಅವರನ್ನೊಳಗೊಂಡ ತಂಡವು ಕೌಲಾಲಂಪುರದಲ್ಲಿ ನಡೆದ ಕಾಮನ್&zwnj;ವೆಲ್ತ್ ಕ್ರೀಡಾಕೂಟದಲ್ಲಿ ಕೆನಡಾ ವಿರುದ್ಧ ಆಡಿ 112 ರನ್&zwnj;ಗಳ ಭರ್ಜರಿ ಗೆಲುವು ಸಾಧಿಸಿತ್ತು. ಅನಿಲ್ ಕುಂಬ್ಳೆ ಕೇವಲ 11 ರನ್ ನೀಡಿ 4 ವಿಕೆಟ್ ಕಬಳಿಸಿ ಕೆನಡಾವನ್ನು 45 ರನ್&zwnj;ಗಳಿಗೆ ಆಲೌಟ್ ಮಾಡಿದ್ದರು.&lt;/p&gt;&lt;h3&gt;&lt;strong&gt;ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಕ್ರಿಕೆಟ್&zwnj; ಲೋಕ!&lt;/strong&gt;&lt;/h3&gt;&lt;p&gt;ಅದೇ ದಿನ, ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಮತ್ತೊಂದು ಭಾರತ ತಂಡವು ಕೆನಡಾದ ಟೊರೊಂಟೊದಲ್ಲಿ ನಡೆದ ಸಹಾರಾ ಫ್ರೆಂಡ್&zwnj;ಶಿಪ್ ಕಪ್&zwnj;ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಿತ್ತು. ಸೌರವ್ ಗಂಗೂಲಿ, ನವಜೋತ್ ಸಿಂಗ್ ಸಿಧು, ಜಾವಗಲ್ ಶ್ರೀನಾಥ್ ಮತ್ತು ಅಜಿತ್ ಅಗರ್ಕರ್ ಅವರಿದ್ದ ಈ ಪಡೆಯು ಪಾಕಿಸ್ತಾನವನ್ನು 6 ವಿಕೆಟ್&zwnj;ಗಳಿಂದ ಧೂಳೀಪಟ ಮಾಡಿತ್ತು. ಇದೀಗ 2026 ರಲ್ಲಿ ಮತ್ತೆ ಅದೇ ಮಾದರಿಯ ಐತಿಹಾಸಿಕ ಕ್ಷಣಕ್ಕೆ ಕ್ರಿಕೆಟ್ ಲೋಕ ಸಾಕ್ಷಿಯಾಗಲಿದೆ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/team-india-two-matches-same-day-28-years-after-historic-record-india-cricket-schedule-bmk/articleshow-fzx85su"/>
        </item>
        <item>
            <title><![CDATA[UPI: ವ್ಯಾಪಾರಿಗಳ ಗಮನಕ್ಕೆ; ಯುಪಿಐ ಪಾವತಿ ಮೇಲೆ ಎಂ‌ಡಿ‌ಆರ್ ಕಡಿತವಾಗದಂತೆ ತಡೆಯಲು ಈ 5 ಟಿಪ್ಸ್ ಬಳಸಿ!]]></title>
            <link>https://kannada.asianetnews.com/money/upi-merchant-charges-mdr-2026-personal-qr-upi-lite-static-qr-split-billing-payment-cost-bmk/articleshow-g4afh1e</link>
            <guid isPermaLink="true">https://kannada.asianetnews.com/money/upi-merchant-charges-mdr-2026-personal-qr-upi-lite-static-qr-split-billing-payment-cost-bmk/articleshow-g4afh1e</guid>
            <pubDate>Tue, 15 Sep 2026 22:31:59 +0530</pubDate>
            <description><![CDATA[&lt;p&gt;₹2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲಿನ ಎಂ&zwnj;ಡಿಆರ್ ಶುಲ್ಕವು ವ್ಯಾಪಾರಿಗಳಿಗೆ ಚಿಂತೆಯಾಗಿದೆ. ವೈಯಕ್ತಿಕ ಕ್ಯೂಆರ್, ಯುಪಿಐ ಲೈಟ್, ಮತ್ತು ಬಿಲ್ ವಿಭಜನೆಯಂತಹ ತಂತ್ರಗಳ ಮೂಲಕ ವೆಚ್ಚವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಈ ಸ್ಟೋರಿ ವಿವರಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2jzhnmrk563n2a4y3p1np4m,imgname-screenshot-2026-09-15-221310-1789490943638.png" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಡಿಜಿಟಲ್ ಯುಗದಲ್ಲಿ ತರಕಾರಿ ಅಂಗಡಿಯಿಂದ ಹಿಡಿದು ದೊಡ್ಡ ಸೂಪರ್ ಮಾರ್ಕೆಟ್&zwnj;ವರೆಗೆ ಪ್ರತಿಯೊಂದು ವ್ಯವಹಾರದಲ್ಲೂ ಯುಪಿಐ (UPI) ಪಾವತಿ ವ್ಯವಸ್ಥೆ ಅತಿ ದೊಡ್ಡ ಪಾತ್ರ ವಹಿಸಿದೆ. ಗ್ರಾಹಕರು ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ತಕ್ಷಣ ಪಾವತಿ ಮಾಡುವುದು ಎಷ್ಟು ಸರಳವೋ, ಅಂಗಡಿಯವರಿಗೆ ಈ ಪ್ರತಿಯೊಂದು ಡಿಜಿಟಲ್ ವಹಿವಾಟನ್ನು ನಿರ್ವಹಿಸುವುದು ಅಷ್ಟೇ ನಿರ್ಣಾಯಕವಾಗಿದೆ. ಪ್ರಸ್ತುತ, ₹2,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ಯುಪಿಐ ಪಾವತಿಗಳ ಮೇಲೆ ಶೇಕಡಾ 0.4 ರಷ್ಟು ಎಂ&zwnj;ಡಿಆರ್ ವಿಧಿಸುವ ನಿಯಮವು ವ್ಯಾಪಾರಿಗಳಲ್ಲಿ ವೆಚ್ಚ ಹೆಚ್ಚಾಗುವ ಭೀತಿಯನ್ನು ಹುಟ್ಟುಹಾಕಿದೆ. ಈ ಸಂದರ್ಭದಲ್ಲಿ, ಸಣ್ಣ ಹಾಗೂ ಮಧ್ಯಮ ಕ್ರಮಾಂಕದ ವ್ಯಾಪಾರಿಗಳು ತಮ್ಮ ಪಾವತಿ ವೆಚ್ಚವನ್ನು ಕಡಿಮೆಯಿರಿಸಿಕೊಂಡು ಡಿಜಿಟಲ್ ಸೌಲಭ್ಯವನ್ನು ಸುಗಮವಾಗಿ ನಿರ್ವಹಿಸಲು ಕೆಲವು ಪ್ರಮುಖ ಮಾರ್ಗಗಳು ಮತ್ತು ನಿಯಮಗಳ ಜ್ಞಾನ ಅತ್ಯಗತ್ಯ.&lt;/p&gt;&lt;h2&gt;&lt;strong&gt;ವೈಯಕ್ತಿಕ ಕ್ಯೂಆರ್ (Personal QR) ಕೋಡ್ ಬಳಕೆ!&lt;/strong&gt;&lt;/h2&gt;&lt;p&gt;ಸಣ್ಣ ವ್ಯಾಪಾರಿಗಳು ಸಾಮಾನ್ಯವಾಗಿ ತಮ್ಮ ಸ್ವಂತ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ವೈಯಕ್ತಿಕ ಕ್ಯೂಆರ್ ಕೋಡ್&zwnj;ಗಳನ್ನು ಬಳಸುತ್ತಾರೆ. ಇಂತಹ 'ವೈಯಕ್ತಿಕ ಪಾವತಿಗಳಿಗೆ' (P2P - Person to Person) ಯಾವುದೇ ಎಂ&zwnj;ಡಿಆರ್ ಶುಲ್ಕಗಳು ಅನ್ವಯಿಸುವುದಿಲ್ಲ. ಆದರೆ, ಗಮನಿಸಬೇಕಾದ ವಿಷಯವೆಂದರೆ &mdash; ವ್ಯಾಪಾರದ ದೊಡ್ಡ ವಹಿವಾಟುಗಳನ್ನು ಕೃತಕವಾಗಿ ವೈಯಕ್ತಿಕ ಪಾವತಿ ಎಂದು ತೋರಿಸುವುದು ಸರಿಯಾದ ಮಾರ್ಗವಲ್ಲ. ನಿಮ್ಮ ಬ್ಯಾಂಕ್ ಮತ್ತು ಪಾವತಿ ಸೇವಾ ಪೂರೈಕೆದಾರರ ಶರತ್ತುಗಳಿಗೆ ಅನುಗುಣವಾಗಿ ಮಾತ್ರ ಇವುಗಳನ್ನು ಬಳಸಬೇಕು.&lt;/p&gt;&lt;h3&gt;&lt;strong&gt;ಸಣ್ಣ ಪಾವತಿಗಳಿಗೆ 'UPI Lite' ಬಳಕೆ!&lt;/strong&gt;&lt;/h3&gt;&lt;p&gt;ದೈನಂದಿನ ಅತ್ಯಂತ ಸಣ್ಣ ಮೊತ್ತದ ಪಾವತಿಗಳಿಗೆ 'UPI Lite' ಉತ್ತಮ ಆಯ್ಕೆಯಾಗಿದೆ. ಇದು ಸಣ್ಣ ಮೌಲ್ಯದ ವಹಿವಾಟುಗಳನ್ನು ಅತ್ಯಂತ ವೇಗವಾಗಿ ಮತ್ತು ಸರಳವಾಗಿ ಪೂರ್ಣಗೊಳಿಸುತ್ತದೆ. ಇದು ಬ್ಯಾಂಕ್ ಸರ್ವರ್&zwnj;ಗಳ ಮೇಲಿನ ಒತ್ತಡವನ್ನು ತಗ್ಗಿಸುತ್ತದೆ. ಆದರೆ, ಇದನ್ನು ದೊಡ್ಡ ವ್ಯಾಪಾರಿ ಪಾವತಿಗಳಲ್ಲಿ ಎಂ&zwnj;ಡಿಆರ್ ಶುಲ್ಕದಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿ ಬಳಸಬಾರದು. ಇದು ಕೇವಲ ಚಿಕ್ಕ ಪಾವತಿಗಳ ಸುಲಭ ನಿರ್ವಹಣೆಗೆ ಸೀಮಿತ.&lt;/p&gt;&lt;h3&gt;&lt;strong&gt;ಬಿಲ್ ವಿಭಜನೆ (Split Billing) ಮಾಡುವ ತಂತ್ರ!&lt;/strong&gt;&lt;/h3&gt;&lt;p&gt;₹5,000 ಅಥವಾ ₹10,000 ದಂತಹ ದೊಡ್ಡ ಬಿಲ್ ಮೊತ್ತವನ್ನು ₹2,000 ಕ್ಕಿಂತ ಕಡಿಮೆ ಇರುವ ಸಣ್ಣ ಭಾಗಗಳಾಗಿ ವಿಂಗಡಿಸಿ ಪಾವತಿ ಪಡೆಯುವುದರಿಂದ ಕೆಲವು ಸಂದರ್ಭಗಳಲ್ಲಿ ಉನ್ನತ ಮೌಲ್ಯದ ಎಂ&zwnj;ಡಿಆರ್ ಮಿತಿಯನ್ನು ದಾಟದಂತೆ ನೋಡಿಕೊಳ್ಳಬಹುದು. ಆದರೆ, ಎಂ&zwnj;ಡಿಆರ್ ಶುಲ್ಕದಿಂದ ಸಂಪೂರ್ಣವಾಗಿ ಬಚಾವ್ ಆಗಲು ಬಿಲ್ ಅನ್ನು ಬೇಕಾಬಿಟ್ಟಿ ವಿಭಜಿಸುವುದು ಅಪಾಯಕಾರಿ. ಹೀಗಾಗಿ ನಿಮ್ಮ ಪಾವತಿ ವ್ಯವಸ್ಥೆ ಮತ್ತು ಬ್ಯಾಂಕ್ ನಿಯಮಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಈ ನಿರ್ಧಾರ ಕೈಗೊಳ್ಳುವುದು ಸೂಕ್ತ.&lt;/p&gt;&lt;h3&gt;&lt;strong&gt;ನೇರ ಬ್ಯಾಂಕ್ ಖಾತೆ ವರ್ಗಾವಣೆ!&lt;/strong&gt;&lt;/h3&gt;&lt;p&gt;ವರ್ತಕರು ಗ್ರಾಹಕರಿಂದ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಪಡೆಯಬಹುದು. ಅಂದರೆ ಯುಪಿಐ ಆಟೋ-ಪೇ ಬದಲು ನೇರ 'ಖಾತೆಯಿಂದ ಖಾತೆಗೆ' (Account-to-Account Transfer) ಅಥವಾ NEFT/IMPS ನಂತಹ ಸಾಂಪ್ರದಾಯಿಕ ಡಿಜಿಟಲ್ ಮಾರ್ಗಗಳನ್ನು ಬಳಸಬಹುದು. ಇಲ್ಲಿ ಪಾವತಿ ಸಂಗ್ರಾಹಕರು ಅಥವಾ ಥರ್ಡ್ ಪಾರ್ಟಿ ವಾಲೆಟ್&zwnj;ಗಳ ಅಗತ್ಯವಿರುವುದಿಲ್ಲ. ಆದರೆ ಈ ಸೇವೆಗಳಿಗೆ ಸಂಬಂಧಿಸಿದ ಬ್ಯಾಂಕ್ ಶುಲ್ಕಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಮುಖ್ಯ.&lt;/p&gt;&lt;h3&gt;&lt;strong&gt;ಸ್ಥಿರ ಕ್ಯೂಆರ್ (Static QR) ಮೂಲಕ ವೆಚ್ಚ ಕಡಿತ!&lt;/strong&gt;&lt;/h3&gt;&lt;p&gt;ಪ್ರತಿಯೊಂದು ಸಣ್ಣ ಅಂಗಡಿಗೂ ಲಕ್ಷಾಂತರ ರೂಪಾಯಿ ಮೌಲ್ಯದ ಪಾಯಿಂಟ್-ಆಫ್-ಸೇಲ್ (POS) ಯಂತ್ರಗಳು ಅಥವಾ ತಿಂಗಳ ಬಾಡಿಗೆ ಕಟ್ಟಬೇಕಾದ 'ಸೌಂಡ್&zwnj;ಬಾಕ್ಸ್' (Soundbox) ಅಗತ್ಯವಿರುವುದಿಲ್ಲ. ಬ್ಯಾಂಕ್&zwnj;ನಿಂದ ಸಿಗುವ ಸರಳವಾದ ಸ್ಟ್ಯಾಟಿಕ್ ಕ್ಯೂಆರ್ (Static QR) ಕೋಡ್ ಬಳಸುವುದರಿಂದ ಸಾಧನಗಳ ಬಾಡಿಗೆ ಮತ್ತು ಹೆಚ್ಚುವರಿ ಸೇವಾ ಶುಲ್ಕವನ್ನು ಉಳಿಸಬಹುದು.&lt;/p&gt;&lt;h3&gt;&lt;strong&gt;ಗ್ರಾಹಕರು ಮತ್ತು ವ್ಯಾಪಾರಿಗಳು ನೆನಪಿನಲ್ಲಿಡಬೇಕಾದ ಸತ್ಯ!&lt;/strong&gt;&lt;/h3&gt;&lt;p&gt;ಎಂ&zwnj;ಡಿಆರ್ ಶುಲ್ಕ ಜಾರಿಯಲ್ಲಿದೆ ಎಂದರೆ ಗ್ರಾಹಕರು ಮಾಡುವ ಪ್ರತಿಯೊಂದು ಯುಪಿಐ ಪಾವತಿಗೂ ಪ್ರತ್ಯೇಕ ಶುಲ್ಕ ಬೀಳುತ್ತದೆ ಎಂದರ್ಥವಲ್ಲ. ಗ್ರಾಹಕರಿಗೆ ಯುಪಿಐ ಸೇವೆ ಸಂಪೂರ್ಣ ಉಚಿತವಾಗಿದೆ. ವ್ಯಾಪಾರಿಗಳು ತಮ್ಮ ವಹಿವಾಟಿನ ವೆಚ್ಚವನ್ನು ತಗ್ಗಿಸಲು ಕೇವಲ ಪಾವತಿ ವರ್ಗವನ್ನು ಬದಲಾಯಿಸುವುದರ ಬದಲು, ತಮ್ಮ ವ್ಯಾಪಾರದ ಸ್ವರೂಪಕ್ಕೆ ಸರಿಯಾಗಿ ಹೊಂದುವ ಕ್ಯೂಆರ್ ಕೋಡ್, ಬ್ಯಾಂಕಿಂಗ್ ಚಾನಲ್ ಮತ್ತು ಪಾವತಿ ಸೇವಾ ಪೂರೈಕೆದಾರರನ್ನು (PSP) ಆಯ್ಕೆ ಮಾಡಿಕೊಳ್ಳುವುದೇ ಅತ್ಯಂತ ಪ್ರಾಯೋಗಿಕ ಮಾರ್ಗವಾಗಿದೆ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/upi-merchant-charges-mdr-2026-personal-qr-upi-lite-static-qr-split-billing-payment-cost-bmk/articleshow-g4afh1e"/>
        </item>
        <item>
            <title><![CDATA[10 ಲಕ್ಷದ FD ಅಥವಾ 10 ಸಾವಿರದ RD? ಯಾವುದು ಹೆಚ್ಚು ಆದಾಯ ನೀಡುತ್ತದೆ? ಲೆಕ್ಕಾಚಾರ ಇಲ್ಲಿದೆ!]]></title>
            <link>https://kannada.asianetnews.com/money/10-lakh-fd-vs-10000-monthly-rd-10-years-which-is-better-fixed-deposit-recurring-deposit-interest-return-calculation-bmk/articleshow-gkemv6t</link>
            <guid isPermaLink="true">https://kannada.asianetnews.com/money/10-lakh-fd-vs-10000-monthly-rd-10-years-which-is-better-fixed-deposit-recurring-deposit-interest-return-calculation-bmk/articleshow-gkemv6t</guid>
            <pubDate>Sat, 12 Sep 2026 22:54:19 +0530</pubDate>
            <description><![CDATA[₹10 ಲಕ್ಷವನ್ನು ಎಫ್&zwnj;ಡಿಯಲ್ಲಿ ಹೂಡಿಕೆ ಮಾಡುವುದು ಮತ್ತು ತಿಂಗಳಿಗೆ ₹10,000 ಆರ್&zwnj;ಡಿಯಲ್ಲಿ ತೊಡಗಿಸುವುದರ ನಡುವಿನ ವ್ಯತ್ಯಾಸವನ್ನು ಈ ಲೇಖನ ವಿಶ್ಲೇಷಿಸುತ್ತದೆ. 10 ವರ್ಷಗಳ ಅವಧಿಯಲ್ಲಿ, ಒಂದೇ ಬಡ್ಡಿದರವಿದ್ದರೂ, ಆರಂಭಿಕ ದೊಡ್ಡ ಮೊತ್ತದ ಹೂಡಿಕೆಯಿಂದಾಗಿ ಎಫ್&zwnj;ಡಿ ಹೆಚ್ಚು ಆದಾಯ ನೀಡುತ್ತದೆ. ನಿಮ್ಮ ಬಳಿ ಇರುವ ಹಣ ಮತ್ತು ಉಳಿತಾಯದ ಸಾಮರ್ಥ್ಯದ ಆಧಾರದ ಮೇಲೆ ಯಾವುದು ಉತ್ತಮ ಆಯ್ಕೆ ಎಂಬುದನ್ನು ನಿರ್ಧರಿಸಬೇಕು.]]></description>
            <media:content url="https://static.asianetnews.com/images/w-1280,h-720,format-jpg,imgid-01m10t6xp49dags95v8gjbw1fj,imgname-rbi-1787807626948.png" type="image/jpeg" height="390" width="690"/>
            <content:encoded><![CDATA[&lt;p&gt;ಸುರಕ್ಷಿತವಾಗಿ ಹಣ ಹೂಡಿಕೆ ಮಾಡಬೇಕು, ಆದರೆ ಷೇರು ಮಾರುಕಟ್ಟೆಯ ಏರಿಳಿತದ ಅಪಾಯ ಬೇಡ ಎನ್ನುವವರಿಗೆ ಬ್ಯಾಂಕ್&zwnj;ಗಳ ಸ್ಥಿರ ಠೇವಣಿ (FD) ಮತ್ತು ಮರುಕಳಿಸುವ ಠೇವಣಿ (RD) ಪ್ರಮುಖ ಆಯ್ಕೆಗಳಾಗಿವೆ. ಎರಡೂ ಹೂಡಿಕೆ ವಿಧಾನಗಳು ಕಡಿಮೆ ಅಪಾಯದ ಆಯ್ಕೆಗಳಾಗಿದ್ದರೂ, ಇವೆರಡರ ಕಾರ್ಯವಿಧಾನದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಅದರಲ್ಲೂ ದೀರ್ಘಾವಧಿಗೆ ಹಣ ಹೂಡಿಕೆ ಮಾಡುವಾಗ ಯಾವುದು ಹೆಚ್ಚು ಲಾಭ ನೀಡುತ್ತದೆ ಎಂಬ ಪ್ರಶ್ನೆ ಬಹುತೇಕ ಹೂಡಿಕೆದಾರರನ್ನು ಕಾಡುತ್ತದೆ.&lt;/p&gt;&lt;h2&gt;&lt;strong&gt;10 ವರ್ಷದ ಲೆಕ್ಕಾಚಾರ!&lt;/strong&gt;&lt;/h2&gt;&lt;p&gt;ಇಲ್ಲಿ ವರ್ಷಕ್ಕೆ ಶೇ.6.5ರಷ್ಟು ಬಡ್ಡಿದರವನ್ನು ಊಹಿಸಿಕೊಂಡು 10 ವರ್ಷಗಳ ಲೆಕ್ಕಾಚಾರ ನೋಡೋಣ. ಒಬ್ಬ ವ್ಯಕ್ತಿಯ ಬಳಿ ಆರಂಭದಲ್ಲೇ ₹10 ಲಕ್ಷ ಹಣವಿದ್ದು, ಅದನ್ನು ಎಫ್&zwnj;ಡಿಯಲ್ಲಿ ಹೂಡಿಕೆ ಮಾಡಿದರೆ, ಸಂಪೂರ್ಣ ₹10 ಲಕ್ಷ ಮೊತ್ತಕ್ಕೂ ಮೊದಲ ದಿನದಿಂದಲೇ ಬಡ್ಡಿ ಲೆಕ್ಕಾಚಾರ ಆರಂಭವಾಗುತ್ತದೆ. ಬಡ್ಡಿಯನ್ನು ಮರುಹೂಡಿಕೆ ಮಾಡುವ ರೀತಿಯ ಸಂಯೋಜಿತ ಬಡ್ಡಿಯ ಪರಿಣಾಮದಿಂದ 10 ವರ್ಷಗಳ ಅಂತ್ಯದಲ್ಲಿ ಈ ಮೊತ್ತ ಸುಮಾರು ₹19 ಲಕ್ಷದಷ್ಟಾಗಬಹುದು. ಅಂದರೆ, ಆರಂಭದಲ್ಲೇ ದೊಡ್ಡ ಮೊತ್ತ ಲಭ್ಯವಿದ್ದರೆ ಎಫ್&zwnj;ಡಿ ಮೂಲಕ ದೀರ್ಘಾವಧಿಯಲ್ಲಿ ಉತ್ತಮ ಮೊತ್ತವನ್ನು ನಿರ್ಮಿಸಬಹುದು. ಆದರೆ ಎಲ್ಲರ ಬಳಿಯೂ ಒಂದೇ ಬಾರಿಗೆ ₹10 ಲಕ್ಷ ಹೂಡಿಕೆ ಮಾಡುವಷ್ಟು ಹಣ ಇರಬೇಕೆಂದಿಲ್ಲ. ಅಂತಹ ಸಂದರ್ಭದಲ್ಲಿ ಆರ್&zwnj;ಡಿ ಹೆಚ್ಚು ಅನುಕೂಲಕರವಾಗಬಹುದು.&lt;/p&gt;&lt;h3&gt;&lt;strong&gt;ತಿಂಗಳಿಗೆ ₹10 ಸಾವಿರ RD ಮಾಡಿದರೆ?&lt;/strong&gt;&lt;/h3&gt;&lt;p&gt;ಒಬ್ಬ ಹೂಡಿಕೆದಾರರು ಪ್ರತಿ ತಿಂಗಳು ₹10,000ರಂತೆ ಆರ್&zwnj;ಡಿಯಲ್ಲಿ ಹಣ ಜಮೆ ಮಾಡುತ್ತಾರೆ ಎಂದುಕೊಳ್ಳಿ. ಒಂದು ವರ್ಷದಲ್ಲಿ ಅವರು ₹1.20 ಲಕ್ಷ ಹೂಡಿಕೆ ಮಾಡುತ್ತಾರೆ. ಇದೇ ರೀತಿ 10 ವರ್ಷಗಳ ಕಾಲ ಮುಂದುವರಿಸಿದರೆ, ಒಟ್ಟು ₹12 ಲಕ್ಷ ಹಣವನ್ನು ಠೇವಣಿ ಮಾಡಿರುತ್ತಾರೆ. ಇದಕ್ಕೆ ವರ್ಷಕ್ಕೆ ಶೇ.6.5ರಷ್ಟು ಬಡ್ಡಿ ಸಿಗುತ್ತದೆ ಎಂದು ಅಂದಾಜಿಸಿದರೆ, 10 ವರ್ಷಗಳ ಅಂತ್ಯದಲ್ಲಿ ಆರ್&zwnj;ಡಿ ಮೊತ್ತವು ಸುಮಾರು ₹16.9 ಲಕ್ಷದವರೆಗೆ ಬೆಳೆಯಬಹುದು. ಅಂದರೆ, ಹೂಡಿಕೆ ಮಾಡಿದ ₹12 ಲಕ್ಷದ ಮೇಲೆ ಸುಮಾರು ₹4.9 ಲಕ್ಷದಷ್ಟು ಬಡ್ಡಿ ಲಭಿಸುವ ಸಾಧ್ಯತೆಯಿದೆ. ನಿಜವಾದ ಮೊತ್ತವು ಬ್ಯಾಂಕ್&zwnj;ನ ಬಡ್ಡಿದರ, ಬಡ್ಡಿ ಲೆಕ್ಕಾಚಾರದ ವಿಧಾನ ಮತ್ತು ಕಂತು ಜಮೆ ಮಾಡುವ ಸಮಯದ ಆಧಾರದ ಮೇಲೆ ಬದಲಾಗಬಹುದು.&lt;/p&gt;&lt;h3&gt;&lt;strong&gt;FD ಮತ್ತು RD ನಡುವಿನ ಪ್ರಮುಖ ವ್ಯತ್ಯಾಸವೇನು?&lt;/strong&gt;&lt;/h3&gt;&lt;p&gt;ಎಫ್&zwnj;ಡಿ ಮತ್ತು ಆರ್&zwnj;ಡಿ ನಡುವಿನ ಮೂಲಭೂತ ವ್ಯತ್ಯಾಸವೆಂದರೆ ಹಣ ಹೂಡಿಕೆ ಮಾಡುವ ವಿಧಾನ. ಎಫ್&zwnj;ಡಿಯಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಠೇವಣಿ ಮಾಡಲಾಗುತ್ತದೆ. ಹೀಗಾಗಿ ಸಂಪೂರ್ಣ ಹಣದ ಮೇಲೆ ಆರಂಭದಿಂದಲೇ ಬಡ್ಡಿ ಲೆಕ್ಕವಾಗುತ್ತದೆ. ಆದರೆ ಆರ್&zwnj;ಡಿಯಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಜಮೆ ಮಾಡಬೇಕು. ಮೊದಲ ತಿಂಗಳ ಕಂತಿಗೆ ಹೆಚ್ಚು ಅವಧಿಯ ಬಡ್ಡಿ ಸಿಗುತ್ತದೆ. ನಂತರದ ಕಂತುಗಳಿಗೆ ಅವು ಜಮೆಯಾದ ಸಮಯಕ್ಕೆ ಅನುಗುಣವಾಗಿ ಬಡ್ಡಿ ಲೆಕ್ಕವಾಗುತ್ತದೆ. ಇದೇ ಕಾರಣಕ್ಕೆ ಒಂದೇ ಬಡ್ಡಿದರ ಇದ್ದರೂ, ₹10 ಲಕ್ಷವನ್ನು ಆರಂಭದಲ್ಲೇ ಎಫ್&zwnj;ಡಿಯಲ್ಲಿ ಇಡುವುದರಿಂದ ಸಿಗುವ ಅಂತಿಮ ಮೊತ್ತ ಮತ್ತು ತಿಂಗಳಿಗೆ ₹10 ಸಾವಿರ ಆರ್&zwnj;ಡಿಯಲ್ಲಿ ಜಮೆ ಮಾಡುವುದರಿಂದ ಸಿಗುವ ಮೊತ್ತ ಒಂದೇ ಆಗುವುದಿಲ್ಲ.&lt;/p&gt;&lt;h3&gt;&lt;strong&gt;ಹಾಗಾದರೆ ಯಾವುದು ಉತ್ತಮ?&lt;/strong&gt;&lt;/h3&gt;&lt;p&gt;ನಿಮ್ಮ ಬಳಿ ಈಗಾಗಲೇ ₹10 ಲಕ್ಷದಷ್ಟು ದೊಡ್ಡ ಮೊತ್ತವಿದ್ದು, ಅದನ್ನು 10 ವರ್ಷಗಳ ಕಾಲ ಬಳಸುವ ಅಗತ್ಯವಿಲ್ಲದಿದ್ದರೆ ಎಫ್&zwnj;ಡಿ ಹೆಚ್ಚು ಸೂಕ್ತವಾಗಬಹುದು. ಆದರೆ ನಿಮ್ಮ ಬಳಿ ದೊಡ್ಡ ಮೊತ್ತ ಇಲ್ಲದೆ, ಪ್ರತಿ ತಿಂಗಳು ₹10 ಸಾವಿರದಂತೆ ನಿಯಮಿತವಾಗಿ ಉಳಿಸುವ ಸಾಮರ್ಥ್ಯವಿದ್ದರೆ ಆರ್&zwnj;ಡಿ ಉತ್ತಮ ಆಯ್ಕೆಯಾಗಬಹುದು. ಹೀಗಾಗಿ FD ಅಥವಾ RD ಎಂಬುದರಲ್ಲಿ ಎಲ್ಲರಿಗೂ ಒಂದೇ ಉತ್ತರ ಇರುವುದಿಲ್ಲ. ನಿಮ್ಮ ಕೈಯಲ್ಲಿರುವ ಆರಂಭಿಕ ಹಣ, ಪ್ರತಿ ತಿಂಗಳ ಉಳಿತಾಯ ಸಾಮರ್ಥ್ಯ, ಹೂಡಿಕೆ ಅವಧಿ ಮತ್ತು ನಿಮಗೆ ಬೇಕಿರುವ ದ್ರವ್ಯತೆ ಇವುಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಬಡ್ಡಿದರಗಳು ಬ್ಯಾಂಕ್&zwnj;ನಿಂದ ಬ್ಯಾಂಕ್&zwnj;ಗೆ ಬದಲಾಗುವುದರಿಂದ, ಹೂಡಿಕೆ ಮಾಡುವ ಮುನ್ನ ಪ್ರಸ್ತುತ ಬಡ್ಡಿದರ ಮತ್ತು ನಿಯಮಗಳನ್ನು ಪರಿಶೀಲಿಸುವುದು ಮುಖ್ಯ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/10-lakh-fd-vs-10000-monthly-rd-10-years-which-is-better-fixed-deposit-recurring-deposit-interest-return-calculation-bmk/articleshow-gkemv6t"/>
        </item>
        <item>
            <title><![CDATA[UPI: ಯಾರಿಗೆ ಯುಪಿಐ ಫ್ರೀ, ಯಾರಿಗೆ ಶುಲ್ಕದ ಹೊರೆ?; ಗೊಂದಲಕ್ಕೆ ಇಲ್ಲಿದೆ ಪಕ್ಕಾ ಉತ್ತರ!]]></title>
            <link>https://kannada.asianetnews.com/money/upi-new-rules-2026-mdr-charges-google-pay-phonepe-2000-merchant-payment-fee-bmk/articleshow-hp4nuaz</link>
            <guid isPermaLink="true">https://kannada.asianetnews.com/money/upi-new-rules-2026-mdr-charges-google-pay-phonepe-2000-merchant-payment-fee-bmk/articleshow-hp4nuaz</guid>
            <pubDate>Tue, 15 Sep 2026 21:59:43 +0530</pubDate>
            <description><![CDATA[ಎನ್&zwnj;ಪಿಸಿಐನ ಹೊಸ ನಿಯಮದಂತೆ, ಯುಪಿಐ ಪಾವತಿ ಸಾಮಾನ್ಯ ಗ್ರಾಹಕರಿಗೆ ಸಂಪೂರ್ಣ ಉಚಿತವಾಗಿದೆ. ₹2,000 ಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಎಂಡಿಆರ್ ಶುಲ್ಕ ಅನ್ವಯವಾಗಲಿದ್ದು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kzddcj569ez6erj34x3n6nsp,imgname-upi-mdr-charges-1786082904229.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶಾದ್ಯಂತ ಕೋಟ್ಯಂತರ ಜನ ದಿನನಿತ್ಯ ಬಳಸುವ ಯುಪಿಐ (UPI) ಪಾವತಿ ವ್ಯವಸ್ಥೆಯ ನಿಯಮಗಳಲ್ಲಿ ಎನ್&zwnj;ಪಿಸಿಐ (NPCI) ದೊಡ್ಡ ಬದಲಾವಣೆಯನ್ನು ಘೋಷಿಸಿದೆ. 2026ರ ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ನೂತನ &lsquo;ಎಂಡಿಆರ್&rsquo; (MDR - Merchant Discount Rate) ಫ್ರೇಮ್&zwnj;ವರ್ಕ್ ಸಾರ್ವಜನಿಕರಲ್ಲಿ ದೊಡ್ಡ ಗೊಂದಲವನ್ನು ಸೃಷ್ಟಿಸಿದೆ. &quot;ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಬಳಸಿದರೆ ನಮಗೂ ಚಾರ್ಜ್ ಬೀಳುತ್ತಾ?&quot;, &quot;ಅಂಗಡಿಯವರು ಹೆಚ್ಚುವರಿ ಹಣ ಕೇಳ್ತಾರಾ?&quot; ಎಂಬ ಪ್ರಶ್ನೆಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಿವೆ. ಈ ಎಲ್ಲಾ ಗೊಂದಲಗಳಿಗೆ ಲಭ್ಯವಿರುವ ಸ್ಪಷ್ಟ ಹಾಗೂ ಅಧಿಕೃತ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಗ್ರಾಹಕರಿಗೆ ಯುಪಿಐ ಸಂಪೂರ್ಣ ಉಚಿತ!&lt;/strong&gt;&lt;/h2&gt;&lt;p&gt;ಮೊದಲನೆಯದಾಗಿ, ಸಾಮಾನ್ಯ ಗ್ರಾಹಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ. ನೀವು ಅಂಗಡಿಯಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಪಾವತಿಸಲಿ ಅಥವಾ ನಿಮ್ಮ ಸ್ನೇಹಿತರಿಗೆ ಹಣ ಕಳುಹಿಸಲಿ, ಗ್ರಾಹಕರಿಗೆ ಯುಪಿಐ ಸೇವೆ ಮೊದಲಿನಂತೆಯೇ ಸಂಪೂರ್ಣ ಉಚಿತವಾಗಿದೆ. ಯಾವುದೇ ಬ್ಯಾಂಕ್ ಅಥವಾ ಆಪ್ ನಿಮ್ಮಿಂದ ಎಂಡಿಆರ್ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ.&lt;/p&gt;&lt;h3&gt;&lt;strong&gt;₹2,000 ವರೆಗಿನ ವಹಿವಾಟಿಗೆ ಶೂನ್ಯ ಶುಲ್ಕ!&lt;/strong&gt;&lt;/h3&gt;&lt;p&gt;ನೀವು ಪ್ರತಿದಿನ ಮಾಡುವ ಶೇಕಡಾ 95 ರಷ್ಟು ವಹಿವಾಟುಗಳು ₹2,000 ಕ್ಕಿಂತ ಕಡಿಮೆ ಮೊತ್ತದ್ದಾಗಿರುತ್ತವೆ. ಹೀಗಾಗಿ, ₹2,000 ವರೆಗಿನ ಯಾವುದೇ P2P (ವ್ಯಕ್ತಿಯಿಂದ ವ್ಯಕ್ತಿಗೆ) ಹಾಗೂ P2M (ವ್ಯಕ್ತಿಯಿಂದ ಅಂಗಡಿಯವನಿಗೆ) ಪಾವತಿಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಸಣ್ಣಪುಟ್ಟ ಮನೆಬಳಕೆ ಸಾಮಗ್ರಿ, ತರಕಾರಿ, ಚಹಾ-ಬಿಸ್ಕತ್ತು ಖರೀದಿಸುವಾಗ ಯಾವುದೇ ಚಾರ್ಜ್ ಇರುವುದಿಲ್ಲ.&lt;/p&gt;&lt;h3&gt;&lt;strong&gt;ಸಣ್ಣ ವ್ಯಾಪಾರಿಗಳು, ತರಕಾರಿ ಮಾರಾಟಗಾರರಿಗೆ ಜೀರೋ ಎಂಡಿಆರ್!&lt;/strong&gt;&lt;/h3&gt;&lt;p&gt;ರಸ್ತೆ ಬದಿ ವ್ಯಾಪಾರಿಗಳು, ತರಕಾರಿ ಮಾರುವವರು ಹಾಗೂ ಸಣ್ಣ ಅಂಗಡಿಯವರ ಹಿತಕಾಪಾಡಲು P2PM (Person-to-Person Merchant) ನಿಯಮವನ್ನು ಮುಂದುವರಿಸಲಾಗಿದೆ. ಅಂದರೆ, ಯುಪಿಐ ಕ್ಯೂಆರ್ ಕೋಡ್ ಮೂಲಕ ತಿಂಗಳಿಗೆ ₹1 ಲಕ್ಷದವರೆಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಪಡೆಯುವ ಸಣ್ಣ ವರ್ತಕರಿಗೆ ಯಾವುದೇ ಎಂಡಿಆರ್ ಇರುವುದಿಲ್ಲ. ಅಂದರೆ, ಸಣ್ಣ ವ್ಯಾಪಾರಿಗಳ ಜೇಬಿಗೂ ಯಾವುದೇ ಕನ್ನ ಬೀಳುವುದಿಲ್ಲ.&lt;/p&gt;&lt;h3&gt;&lt;strong&gt;ಯಾರಿಗೆ ಈ ಶುಲ್ಕದ ಹೊರೆ?&lt;/strong&gt;&lt;/h3&gt;&lt;p&gt;ಹಾಗಿದ್ದರೆ ಎಂಡಿಆರ್ ಶುಲ್ಕ ಬೀಳುವುದು ಯಾರಿಗೆ? ₹2,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರ (MDR) ನಡೆಸುವ ದೊಡ್ಡ ವರ್ತಕರಿಗೆ ಮಾತ್ರ ಇದು ಅನ್ವಯಿಸುತ್ತದೆ.&lt;/p&gt;&lt;p&gt;&lt;strong&gt;1. ವಿಶೇಷ ವಲಯಗಳು;&lt;/strong&gt; ರೈಲ್ವೇ, ಟೆಲಿಕಾಂ, ಇನ್ಶೂರೆನ್ಸ್ ಮತ್ತು ಪೆಟ್ರೋಲ್ ಬಂಕ್&zwnj;ಗಳಲ್ಲಿ ₹2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಪ್ರತಿಯೊಂದು ವಹಿವಾಟಿಗೆ ₹5 ಫ್ಲಾಟ್ ಎಂಡಿಆರ್ ಅನ್ವಯವಾಗುತ್ತದೆ.&lt;/p&gt;&lt;p&gt;&lt;strong&gt;2. ಇತರ ದೊಡ್ಡ ಮರ್ಚೆಂಟ್&zwnj;ಗಳು;&lt;/strong&gt; ಇನ್ನುಳಿದ ದೊಡ್ಡ ವ್ಯಾಪಾರಿಗಳಿಗೆ ₹2,000 ಕ್ಕಿಂತ ಹೆಚ್ಚಿನ ಪಾವತಿಯ ಮೇಲೆ 0.4% ಎಂಡಿಆರ್ ಇರುತ್ತದೆ (ಗರಿಷ್ಠ ಮಿತಿ ₹300).&lt;/p&gt;&lt;p&gt;&lt;strong&gt;3. ₹75,000 ಕ್ಕಿಂತ ಹೆಚ್ಚಿನ ಪಾವತಿ;&lt;/strong&gt; ₹75,000 ಕ್ಕಿಂತ ದೊಡ್ಡ ಮೊತ್ತದ ವಹಿವಾಟುಗಳಿಗೂ ಗರಿಷ್ಠ ಎಂಡಿಆರ್ ₹300 ಕ್ಕೆ ಸೀಮಿತಗೊಳಿಸಲಾಗಿದೆ.&lt;/p&gt;&lt;h3&gt;&lt;strong&gt;ಸಣ್ಣ ನಗರಗಳಿಗೆ 'ಸ್ಪೆಷಲ್ ಫಂಡ್'!&lt;/strong&gt;&lt;/h3&gt;&lt;p&gt;ಸಣ್ಣ ವ್ಯಾಪಾರಿಗಳು ಮತ್ತು Tier-3 ನಗರಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಲಪಡಿಸಲು ಎನ್&zwnj;ಪಿಸಿಐ ಪ್ರತ್ಯೇಕ 'ಡೆಡಿಕೇಟೆಡ್ ಫಂಡ್' (Dedicated Fund) ಸ್ಥಾಪಿಸುತ್ತಿದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್&zwnj;ಗಳಿಗೆ ಹೋಲಿಸಿದರೆ ಯುಪಿಐ ಎಂಡಿಆರ್ ದರಗಳು ಇಂದಿಗೂ ಅತ್ಯಂತ ಕಡಿಮೆಯಾಗಿವೆ.&lt;/p&gt;&lt;h3&gt;&lt;strong&gt;ಯಾರಿಗೆ ಅನ್ವಯ್?&lt;/strong&gt;&lt;/h3&gt;&lt;p&gt;ದೊಡ್ಡ ವಹಿವಾಟುಗಳಿಂದ ಸಂಗ್ರಹವಾಗುವ ಈ ಎಂಡಿಆರ್ ಹಣವನ್ನು ಯುಪಿಐ ತಂತ್ರಜ್ಞಾನದ ಭದ್ರತೆ, ಸೈಬರ್ ಸೆಕ್ಯೂರಿಟಿ ಮತ್ತು ನೆಟ್&zwnj;ವರ್ಕ್ ಸುಧಾರಣೆಗೆ ಬಳಸಲಾಗುತ್ತದೆ. ಒಟ್ಟಿನಲ್ಲಿ, ಸಾಮಾನ್ಯ ಗ್ರಾಹಕರು ಹಾಗೂ ಸಣ್ಣ ಅಂಗಡಿಯವರಿಗೆ ಯುಪಿಐ 'ಫ್ರೀ' ಆಗಿದ್ದರೆ, ದೊಡ್ಡ ಸಂಸ್ಥೆಗಳಿಗೆ 'ಶುಲ್ಕ'ದ ನಿಯಮ ಅನ್ವಯವಾಗಲಿದೆ!&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/upi-new-rules-2026-mdr-charges-google-pay-phonepe-2000-merchant-payment-fee-bmk/articleshow-hp4nuaz"/>
        </item>
        <item>
            <title><![CDATA[Business ಶುರು ಮಾಡೋಕೆ ಲೋನ್ ಬೇಕಾ? 16 ಸರ್ಕಾರಿ ಯೋಜನೆಗಳು ಒಂದೇ ಪೋರ್ಟಲ್‌ನಲ್ಲಿ! ಅರ್ಜಿ ಸಲ್ಲಿಸುವುದು ಹೇಗೆ?]]></title>
            <link>https://kannada.asianetnews.com/money/government-business-loans-16-schemes-for-starting-business-online-application-without-visiting-banks-bmk/articleshow-ht665am</link>
            <guid isPermaLink="true">https://kannada.asianetnews.com/money/government-business-loans-16-schemes-for-starting-business-online-application-without-visiting-banks-bmk/articleshow-ht665am</guid>
            <pubDate>Sun, 06 Sep 2026 19:15:39 +0530</pubDate>
            <description><![CDATA[ಸ್ವಂತ ಉದ್ಯಮ ಆರಂಭಿಸಲು ಬಂಡವಾಳ ಮತ್ತು ಸಾಲದ ಗೊಂದಲದಲ್ಲಿರುವವರಿಗೆ ಕೇಂದ್ರ ಸರ್ಕಾರದ 'ಜನ ಸಮರ್ಥ್' ಪೋರ್ಟಲ್ ಒಂದು ಉತ್ತಮ ಪರಿಹಾರವಾಗಿದೆ. ಈ ಡಿಜಿಟಲ್ ವೇದಿಕೆಯು ಕೃಷಿ, ವ್ಯವಹಾರ, ವಸತಿ ಸೇರಿದಂತೆ 16 ಸರ್ಕಾರಿ ಸಾಲ ಯೋಜನೆಗಳನ್ನು ಒಂದೇ ಸೂರಿನಡಿ ತಂದಿದ್ದು, ಬ್ಯಾಂಕ್&zwnj;ಗೆ ಅಲೆಯದೆ ಸುಲಭವಾಗಿ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0qdq99pz1a9epqv54s98422,imgname-80-20-rule-for-money-a-simple-way-to-control-expenses-and-save-more-from-your-salary-1787492541750.png" type="image/jpeg" height="390" width="690"/>
            <content:encoded><![CDATA[&lt;p&gt;ಬ್ಯುಸಿನೆಸ್ ಶುರು ಮಾಡೋಕೆ ಲೋನ್ ಬೇಕಾ? 16 ಸರ್ಕಾರಿ ಯೋಜನೆಗಳು ಒಂದೇ ಪೋರ್ಟಲ್&zwnj;ನಲ್ಲಿ! ಅರ್ಜಿ ಸಲ್ಲಿಸುವುದು ಹೇಗೆ?&lt;/p&gt;&lt;p&gt;ನಮ್ಮಲ್ಲಿ ಹಲವರಿಗೆ ಸ್ವಂತ ಉದ್ಯಮ ಅಥವಾ ಬ್ಯುಸಿನೆಸ್ ಪ್ರಾರಂಭಿಸಬೇಕೆಂಬ ದೊಡ್ಡ ಕನಸಿರುತ್ತದೆ. ಆದರೆ, ಆರಂಭಿಕ ಬಂಡವಾಳ ಹೂಡುವುದು ಹೇಗೆ ಮತ್ತು ಸಾಲ ಪಡೆಯುವುದು ಎಲ್ಲಿ ಎಂಬ ಗೊಂದಲದಿಂದಾಗಿ ಅನೇಕರ ಕನಸುಗಳು ಕೈಗೂಡುವುದೇ ಇಲ್ಲ. ವಿಶೇಷವಾಗಿ, ಬ್ಯಾಂಕ್&zwnj;ಗಳಿಗೆ ಹೋದಾಗ ಅವರು ಕೇಳುವ 'ಗ್ಯಾರಂಟಿ' (ಶ್ಯೂರಿಟಿ) ನೀಡಲು ಸಾಧ್ಯವಾಗದೆ ಸಣ್ಣ ಉದ್ಯಮಿಗಳು ಹಿಂಜರಿಯುತ್ತಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವು 'ಜನ ಸಮರ್ಥ್' ಎಂಬ ಅತ್ಯುತ್ತಮ ಡಿಜಿಟಲ್ ವೇದಿಕೆಯನ್ನು ಜಾರಿಗೆ ತಂದಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಏನಿದು 'ಜನ ಸಮರ್ಥ್' ಡಿಜಿಟಲ್ ವೇದಿಕೆ?&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರದ ವಿವಿಧ ಸಾಲ ಯೋಜನೆಗಳನ್ನು ಒಂದೇ ಸೂರಿನಡಿ ತರಲು 'ಜನ ಸಮರ್ಥ್' ಎಂಬ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳನ್ನು ಉತ್ತೇಜಿಸಲು ರೂಪಿಸಲಾದ ಏಕ-ಗವಾಕ್ಷಿ ಡಿಜಿಟಲ್ ವ್ಯವಸ್ಥೆಯಾಗಿದೆ. ಕೃಷಿ, ವ್ಯವಹಾರ, ವಸತಿ, ಇಂಧನ ಮತ್ತು ಜೀವನೋಪಾಯದಂತಹ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಸಾಲಗಳನ್ನು ಬ್ಯಾಂಕ್&zwnj;ಗೆ ಅಲೆಯದೆ ಈ ವೇದಿಕೆಯ ಮೂಲಕ ಸುಲಭವಾಗಿ ಪಡೆಯಬಹುದು.&lt;/p&gt;&lt;h3&gt;&lt;strong&gt;ಒಂದೇ ಪೋರ್ಟಲ್&zwnj;ನಲ್ಲಿ ಲಭ್ಯವಿರುವ 16 ಪ್ರಮುಖ ಯೋಜನೆಗಳು!&lt;/strong&gt;&lt;/h3&gt;&lt;p&gt;ಈ ಸಿಂಗಲ್ ಪ್ಲಾಟ್&zwnj;ಫಾರ್ಮ್ ಮೂಲಕ ನೀವು ಸರ್ಕಾರದ 16 ಪ್ರಮುಖ ಯೋಜನೆಗಳ ಅಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅವುಗಳಲ್ಲಿ ಪ್ರಮುಖವಾದವು!&lt;/p&gt;&lt;p&gt;ಪ್ರಧಾನ ಮಂತ್ರಿ ಮುದ್ರಾ ಯೋಜನೆ (MUDRA Loan)&lt;/p&gt;&lt;p&gt;ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP)&lt;/p&gt;&lt;p&gt;ಪಿಎಂ ಸ್ವನಿಧಿ ಯೋಜನೆ (PM SVANidhi)&lt;/p&gt;&lt;p&gt;ಕಿಸಾನ್ ಕ್ರೆಡಿಟ್ ಕಾರ್ಡ್ (KCC)&lt;/p&gt;&lt;p&gt;ಇ-ಕಿಸಾನ್ ಉಪಜ್ ನಿಧಿ ಹಾಗೂ ವಸತಿ ಯೋಜನೆಗಳು&lt;/p&gt;&lt;p&gt;ತುರ್ತು ಸಾಲ ಖಾತರಿ ಯೋಜನೆ ಮತ್ತು ಸೌರ ಮೇಲ್ಛಾವಣಿ (Solar Rooftop) ಯೋಜನೆ&lt;/p&gt;&lt;p&gt;ಅರ್ಜಿ ಸಲ್ಲಿಸುವುದು ಮತ್ತು ಪ್ರಕ್ರಿಯೆ ಹೇಗೆ?&lt;/p&gt;&lt;h3&gt;&lt;strong&gt;ಈ ಪೋರ್ಟಲ್&zwnj;ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ ಅತ್ಯಂತ ಸರಳವಾಗಿದೆ!&lt;/strong&gt;&lt;/h3&gt;&lt;p&gt;&lt;strong&gt;1. ಅರ್ಹತೆ ಪರಿಶೀಲನೆ;&lt;/strong&gt; ಜನ್ ಸಮರ್ಥ್ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ ಕೆಲವೇ ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ನೀವು ಯಾವ ಯೋಜನೆಗೆ ಅರ್ಹರಾಗಿದ್ದೀರಿ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.&lt;/p&gt;&lt;p&gt;&lt;strong&gt;2. ಸ್ವಯಂಚಾಲಿತ ಮಾಹಿತಿ ಭರ್ತಿ; &lt;/strong&gt;ಸುಧಾರಿತ ತಂತ್ರಜ್ಞಾನದ ನೆರವಿನಿಂದ ನಿಮ್ಮ ವಿವರಗಳು ಆಟೋಮ್ಯಾಟಿಕ್ ಆಗಿ ಭರ್ತಿಯಾಗುತ್ತವೆ.&lt;/p&gt;&lt;p&gt;&lt;strong&gt;3.ಸರ್ಕಾರಿ ದಾಖಲೆಗಳ ಜೋಡಣೆ:&lt;/strong&gt; ಉದ್ಯಮ್ ನೋಂದಣಿ, ಆಧಾರ್ (UIDAI), ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್&zwnj;ಟಿ (GST) ದತ್ತಸಂಚಯಗಳೊಂದಿಗೆ ಈ ಪೋರ್ಟಲ್ ಸಂಯೋಜನೆಗೊಂಡಿರುವುದರಿಂದ, ನಿಮ್ಮ ದಾಖಲೆಗಳ ಪರಿಶೀಲನೆ ಕ್ಷಣಾರ್ಧದಲ್ಲಿ ನಡೆಯುತ್ತದೆ.&lt;/p&gt;&lt;p&gt;&lt;strong&gt;4. ಆನ್&zwnj;ಲೈನ್ ಟ್ರ್ಯಾಕಿಂಗ್; &lt;/strong&gt;ಬ್ಯಾಂಕ್&zwnj;ಗೆ ನೇರವಾಗಿ ಅಲೆಯುವ ಅಗತ್ಯವಿಲ್ಲದೆ, ನಿಮ್ಮ ಅರ್ಜಿಗೆ ಆನ್&zwnj;ಲೈನ್&zwnj;ನಲ್ಲೇ ಅನುಮೋದನೆ ದೊರೆಯುತ್ತದೆ ಮತ್ತು ಅರ್ಜಿಯ ಸ್ಥಿತಿಯನ್ನು (Application Status) ನೀವೇ ಮೊಬೈಲ್&zwnj;ನಲ್ಲಿ ಟ್ರ್ಯಾಕ್ ಮಾಡಬಹುದು.&lt;/p&gt;&lt;h3&gt;&lt;strong&gt;ಲಕ್ಷಾಂಸತರ ಉದ್ಯಮಿಗಳಿಗೆ ವರದಾನವಾದ ಯೋಜನೆ!&lt;/strong&gt;&lt;/h3&gt;&lt;p&gt;ಜನ ಸಮರ್ಥ್ ವೇದಿಕೆಯು ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದೆ. ಜೂನ್ 1, 2026 ರವರೆಗಿನ ಅಂಕಿ-ಅಂಶಗಳ ಪ್ರಕಾರ, ಈ ಪೋರ್ಟಲ್ ಮೂಲಕ ಸುಮಾರು 54.10 ಲಕ್ಷ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗಿದ್ದು, 3 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ. ಇದಲ್ಲದೆ, ಬ್ಯಾಂಕುಗಳು ಡಿಜಿಟಲ್ ರೂಪದಲ್ಲೇ 49.55 ಲಕ್ಷ ಫಲಾನುಭವಿಗಳಿಗೆ 2.76 ಲಕ್ಷ ಕೋಟಿ ರೂ. ಸಾಲವನ್ನು ಅನುಮೋದಿಸಿವೆ.&lt;/p&gt;&lt;h3&gt;ಸೈಟ್&zwnj;ಗೆ ಒಂದು ಸಾರಿ ಭೇಟಿ ನೀಡಿ!&lt;/h3&gt;&lt;p&gt;ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳಾ ಉದ್ಯಮಿಗಳು, ರೈತರು ಮತ್ತು ಸಣ್ಣ ಬೀದಿಬದಿ ವ್ಯಾಪಾರಿಗಳಿಗೆ ಈ ಯೋಜನೆ ಅತ್ಯಂತ ನೆರವಾಗಿದೆ. ನೀವೂ ಕೂಡ ಸ್ವಂತ ಉದ್ಯಮ ಆರಂಭಿಸುವ ಕನಸು ಕಂಡಿದ್ದರೆ, ತಕ್ಷಣವೇ 'ಜನ ಸಮರ್ಥ್' ಪೋರ್ಟಲ್&zwnj;ಗೆ ಭೇಟಿ ನೀಡಿ ಈ ಸೌಲಭ್ಯದ ಪ್ರಯೋಜನ ಪಡೆಯಬಹುದು.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/government-business-loans-16-schemes-for-starting-business-online-application-without-visiting-banks-bmk/articleshow-ht665am"/>
        </item>
        <item>
            <title><![CDATA[EPFO: ಪಿಎಫ್‌ಗೆ 5 ವರ್ಷ ಹಣ ಹಾಕಿಲ್ಲ ಅಂದ್ರೆ ಬಡ್ಡಿ ನಿಲ್ಲುತ್ತಾ? ನಿಮ್ಮ ಖಾತೆಯ ಹಣದ ಲೆಕ್ಕ ಇಲ್ಲಿದೆ!]]></title>
            <link>https://kannada.asianetnews.com/money/pf-interest-after-5-years-no-contribution-epf-account-interest-rules-epfo-pf-interest-on-inactive-account-bmk/articleshow-idmmizq</link>
            <guid isPermaLink="true">https://kannada.asianetnews.com/money/pf-interest-after-5-years-no-contribution-epf-account-interest-rules-epfo-pf-interest-on-inactive-account-bmk/articleshow-idmmizq</guid>
            <pubDate>Wed, 09 Sep 2026 20:24:02 +0530</pubDate>
            <description><![CDATA[&lt;p&gt;ಉದ್ಯೋಗಿ ಭವಿಷ್ಯ ನಿಧಿ (EPF) ಖಾತೆಗೆ ಹಣ ಜಮಾ ಮಾಡುವುದು ನಿಂತರೂ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಬಡ್ಡಿ ಜಮೆಯಾಗುತ್ತಲೇ ಇರುತ್ತಾ? 2016ರ ನಿಯಮ ತಿದ್ದುಪಡಿಯ ಪ್ರಕಾರ, ನಿಷ್ಕ್ರಿಯ ಖಾತೆಗಳಿಗೂ ಬಡ್ಡಿ ಲಭ್ಯವಿದೆಯಾ? ಇಲ್ಲಿದೆ ಕಂಪ್ಲೀಟ್&zwnj; ಮಾಹಿತಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01yqrrrnwbsft9mtm9kjksm,imgname-epfo-pension-1786772185880.jpg" type="image/jpeg" height="390" width="690"/>
            <content:encoded><![CDATA[&lt;p&gt;ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಖಾತೆಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವು ಚಂದಾದಾರರಲ್ಲಿರುವ ದೊಡ್ಡ ತಪ್ಪು ಕಲ್ಪನೆ. ನಾನು ಕಳೆದ 5 ವರ್ಷಗಳಿಂದ ಪಿಎಫ್&zwnj;ಗೆ ಹಣ ಠೇವಣಿ ಮಾಡಿಲ್ಲ, ನನಗಿನ್ನೂ ಬಡ್ಡಿ ಸಿಗುತ್ತದೆಯೇ? ಎಂಬ ಪ್ರಶ್ನೆಗೆ ಸ್ಪಷ್ಟ ಮತ್ತು ನೇರ ಉತ್ತರ &lsquo;ಹೌದು, ಖಂಡಿತವಾಗಿಯೂ ಸಿಗುತ್ತದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಇಪಿಎಫ್&zwnj;ಒ ನ ನಿಯಮಗಳ ಪ್ರಕಾರ, ನೀವು ಕೆಲಸ ಬಿಟ್ಟರೂ ಅಥವಾ ಖಾತೆಗೆ ವಂತಿಗೆ ಜಮೆಯಾಗುವುದು ನಿಂತರೂ ಸಹ, ನಿಮ್ಮ ಪಿಎಫ್&zwnj; ಖಾತೆಯಲ್ಲಿರುವ ಮೊತ್ತಕ್ಕೆ ನಿಯಮಿತವಾಗಿ ಬಡ್ಡಿ ಜಮೆಯಾಗುತ್ತಲೇ ಇರುತ್ತದೆ.&lt;/p&gt;&lt;h2&gt;&lt;strong&gt;3 ವರ್ಷಗಳ ನಿಯಮದ ಅಸಲಿ ಸತ್ಯವೇನು?&lt;/strong&gt;&lt;/h2&gt;&lt;p&gt;ಹಿಂದೆ (2016 ಕ್ಕಿಂತ ಮೊದಲು) ಪಿಎಫ್&zwnj; ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ಹಣ ಜಮೆಯಾಗದಿದ್ದರೆ, ಅದನ್ನು 'ನಿಷ್ಕ್ರಿಯ ಖಾತೆ' (Inoperative Account) ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಆದರೆ, ಇಪಿಎಫ್&zwnj;ಒ 2016 ರಲ್ಲಿ ಈ ನಿಯಮಕ್ಕೆ ತಿದ್ದುಪಡಿ ತಂದಿದೆ. ಹೊಸ ನಿಯಮದಂತೆ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್&zwnj; ಖಾತೆಯಲ್ಲಿರುವ ಹಣಕ್ಕೆ ಚಕ್ರಬಡ್ಡಿ (Compounding Interest) ಸಿಗುತ್ತಲೇ ಇರುತ್ತದೆ.&lt;/p&gt;&lt;h3&gt;&lt;strong&gt;ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಿ!&lt;/strong&gt;&lt;/h3&gt;&lt;p&gt;&lt;strong&gt;ಉದಾಹರಣೆಗೆ; &lt;/strong&gt;ಒಬ್ಬ ವ್ಯಕ್ತಿ ತಮ್ಮ ೪೦ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ಪಿಎಫ್&zwnj; ಹಣವನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದಿಟ್ಟುಕೊಳ್ಳೋಣ. 5 ವರ್ಷಗಳ ಕಾಲ (ಅಂದರೆ ಅವರಿಗೆ 45 ವರ್ಷವಾಗುವವರೆಗೆ) ಯಾವುದೇ ಹಣ ಜಮೆಯಾಗದಿದ್ದರೂ, ಮುಂದಿನ 13 ವರ್ಷಗಳ ಕಾಲ ಅಂದರೆ ಅವರಿಗೆ 58 ವರ್ಷ ವಯಸ್ಸಾಗುವವರೆಗೆ ಆ ಖಾತೆಯಲ್ಲಿರುವ ಹಣಕ್ಕೆ ಇಪಿಎಫ್&zwnj;ಒ ನಿಗದಿಪಡಿಸುವ ವಾರ್ಷಿಕ ಬಡ್ಡಿ ಜಮೆಯಾಗುತ್ತಲೇ ಇರುತ್ತದೆ. ಅದೇ ರೀತಿ, 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟ ಸಚೇತನ ಸದಸ್ಯರಿಗೂ 58 ವರ್ಷ ತಲುಪುವವರೆಗಿನ 8 ವರ್ಷಗಳ ಕಾಲ ಬಡ್ಡಿ ಪಡೆಯಲು ಅರ್ಹತೆ ಇರುತ್ತದೆ.&lt;/p&gt;&lt;h3&gt;&lt;strong&gt;ತೆರಿಗೆ ನಿಯಮವನ್ನು ಮರೆಯದಿರಿ!&lt;/strong&gt;&lt;/h3&gt;&lt;p&gt;ನಿಮ್ಮ ಹಣಕ್ಕೆ ಬಡ್ಡಿಯಂತೂ ಸಿಗುತ್ತದೆ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ನಿಯಮವನ್ನು ನೆನಪಿನಲ್ಲಿಡಬೇಕು. ನೀವು ಕೆಲಸದಲ್ಲಿದ್ದಾಗ ಪಿಎಫ್&zwnj; ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದರೆ, ಕೆಲಸ ಬಿಟ್ಟ ನಂತರ ನಿಮ್ಮ ಪಿಎಫ್&zwnj; ಖಾತೆಯಲ್ಲಿ ಜಮೆಯಾಗುವ ಬಡ್ಡಿಯು &lsquo;ಇತರ ಮೂಲಗಳಿಂದ ಬಂದ ಆದಾಯ&rsquo; (Income from Other Sources) ಎಂದು ಪರಿಗಣಿತವಾಗುತ್ತದೆ ಮತ್ತು ಆ ಬಡ್ಡಿಯ ಮೊತ್ತಕ್ಕೆ ನೀವು ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್&zwnj;ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.&lt;/p&gt;&lt;h3&gt;&lt;strong&gt;ಖಾತೆದಾರರು ಏನು ಮಾಡಬೇಕು?&lt;/strong&gt;&lt;/h3&gt;&lt;p&gt;&lt;strong&gt;1. ಕೆಲಸ ಬದಲಾಯಿಸಿದ್ದರೆ;&lt;/strong&gt; ಹಳೆಯ ಪಿಎಫ್&zwnj; ಖಾತೆಯಲ್ಲಿರುವ ಹಣವನ್ನು ಹಿಂಪಡೆಯುವ ಬದಲು, ಹೊಸ ಕಂಪನಿಯ ಯುಎಎನ್&zwnj; (UAN) ಖಾತೆಗೆ ವರ್ಗಾವಣೆ (Transfer) ಮಾಡುವುದು ಜಾಣತನ.&lt;/p&gt;&lt;p&gt;&lt;strong&gt;2. ಕೆಲಸ ಬಿಟ್ಟಿದ್ದರೆ/ವಿರಾಮದಲ್ಲಿದ್ದರೆ;&lt;/strong&gt; 58 ವರ್ಷಗಳವರೆಗೆ ಹಣ ಸುರಕ್ಷಿತವಾಗಿರುತ್ತದೆ ಮತ್ತು ಬಡ್ಡಿಯೂ ಸಿಗುತ್ತದೆ. ಆದರೆ ಅಗತ್ಯವಿಲ್ಲದಿದ್ದರೆ ಹಣವನ್ನು ಸುಮ್ಮನೆ ಇಡುವ ಬದಲು ಸೂಕ್ತ ಹೂಡಿಕೆ ಯೋಜನೆಗಳಿಗೆ ಬಳಸುವುದು ಉತ್ತಮ.&lt;/p&gt;&lt;p&gt;&lt;strong&gt;3. 58 ವರ್ಷ ಪೂರ್ಣಗೊಂಡರೆ;&lt;/strong&gt; ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣ ಹಿಂಪಡೆಯದಿದ್ದರೆ ಮಾತ್ರ ಖಾತೆಯನ್ನು 'ನಿಷ್ಕ್ರಿಯ' ಎಂದು ವರ್ಗೀಕರಿಸಿ, ಬಡ್ಡಿ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಆದ್ದರಿಂದ, 5 ವರ್ಷಗಳಿಂದ ಹಣ ಠೇವಣಿಯಾಗದಿದ್ದರೂ ನಿಮ್ಮ ಪಿಎಫ್&zwnj; ಖಾತೆಯಲ್ಲಿ ನಿಮ್ಮ ಹಣ ಬಡ್ಡಿಯೊಂದಿಗೆ ಸುರಕ್ಷಿತವಾಗಿ ಬೆಳೆಯುತ್ತಿರುತ್ತದೆ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/pf-interest-after-5-years-no-contribution-epf-account-interest-rules-epfo-pf-interest-on-inactive-account-bmk/articleshow-idmmizq"/>
        </item>
        <item>
            <title><![CDATA[ಗುಡಿಸಲಿನಿಂದ ₹80 ಲಕ್ಷದ ಮರ್ಸಿಡಿಸ್ ಕಾರ್‌ವರೆಗೆ: ಯಾರು ಈ ಭಾರತದ ಸ್ಟಾರ್ ಯೂಟ್ಯೂಬರ್?]]></title>
            <link>https://kannada.asianetnews.com/india-news/manoj-dey-inspiring-journey-from-financial-struggles-to-youtube-success/articleshow-nq1wfbl</link>
            <guid isPermaLink="true">https://kannada.asianetnews.com/india-news/manoj-dey-inspiring-journey-from-financial-struggles-to-youtube-success/articleshow-nq1wfbl</guid>
            <pubDate>Thu, 10 Sep 2026 08:11:40 +0530</pubDate>
            <description><![CDATA[&lt;p&gt;ಆರ್ಥಿಕ ಸಂಕಷ್ಟದ ಹಿನ್ನೆಲೆಯಿಂದ ಬಂದ ಮನೋಜ್ ಡೇ, ತಂತ್ರಜ್ಞಾನ ಮತ್ತು ಮೊಬೈಲ್&zwnj;ಗಳ ಮೇಲಿನ ಆಸಕ್ತಿಯನ್ನು ಯೂಟ್ಯೂಬ್ ವೃತ್ತಿಯನ್ನಾಗಿ ಮಾಡಿಕೊಂಡರು. ಆರಂಭದಲ್ಲಿ ಕಡಿಮೆ ವೀಕ್ಷಣೆ ಇದ್ದರೂ ನಿರಂತರ ಪರಿಶ್ರಮದಿಂದ ಜನಪ್ರಿಯತೆ ಗಳಿಸಿದರು. ಜಾಹೀರಾತು ಮತ್ತು ಬ್ರ್ಯಾಂಡ್ ಸಹಯೋಗಗಳ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಗಳಿಸಿದ ಅವರ ಪಯಣ ಯುವಕರಿಗೆ ಪ್ರೇರಣೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m239rmj6htr85wy16sannyd8,imgname-indian-youtube-star-manoj-dey-1788964786758.jpg" type="image/jpeg" height="390" width="690"/>
            <content:encoded><![CDATA[&lt;h2&gt;ಬಡತನದಿಂದ ಕೋಟಿಗಳವರೆಗೆ ಮನೋಜ್ ಡೇ ಅವರ ಯೂಟ್ಯೂಬ್ ಯಶೋಗಾಥೆ&lt;/h2&gt;&lt;p&gt;ಡಿಜಿಟಲ್ ಯುಗದಲ್ಲಿ ಯೂಟ್ಯೂಬ್ ಕೇವಲ ಮನರಂಜನೆಯ ವೇದಿಕೆಯಾಗಿಲ್ಲ. ಸರಿಯಾದ ವಿಷಯ, ನಿರಂತರ ಪರಿಶ್ರಮ ಮತ್ತು ಪ್ರೇಕ್ಷಕರ ನಂಬಿಕೆ ಇದ್ದರೆ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ದೊಡ್ಡ ಮಟ್ಟದ ಯಶಸ್ಸು ಸಾಧಿಸಬಹುದು. ಯೂಟ್ಯೂಬರ್ ಮನೋಜ್ ಡೇ ಅವರ ಪಯಣ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.&lt;/p&gt;&lt;h3&gt;ಕಷ್ಟದ ಹಿನ್ನೆಲೆಯಿಂದ ಬಂದ ಯುವಕ&lt;/h3&gt;&lt;p&gt;ಮನೋಜ್ ಡೇ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಬೆಳೆದರು. ಬಾಲ್ಯದಿಂದಲೇ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದ್ದ ಅವರು, ಜೀವನದಲ್ಲಿ ಸ್ಥಿರತೆ ಪಡೆಯಲು ಹಲವು ಮಾರ್ಗಗಳನ್ನು ಹುಡುಕಿದರು. ಸಾಮಾನ್ಯ ಕುಟುಂಬದಿಂದ ಬಂದಿದ್ದರೂ ದೊಡ್ಡ ಕನಸು ಕಾಣುವುದನ್ನು ಅವರು ನಿಲ್ಲಿಸಲಿಲ್ಲ.&lt;/p&gt;&lt;p&gt;ತಂತ್ರಜ್ಞಾನ ಮತ್ತು ಮೊಬೈಲ್&zwnj;ಗಳ ಬಗ್ಗೆ ಆಸಕ್ತಿ ಹೊಂದಿದ್ದ ಮನೋಜ್, ಇದೇ ಆಸಕ್ತಿಯನ್ನು ಆಧಾರವಾಗಿಸಿಕೊಂಡು ಯೂಟ್ಯೂಬ್&zwnj;ನಲ್ಲಿ ವಿಡಿಯೋಗಳನ್ನು ಮಾಡುವ ನಿರ್ಧಾರ ಕೈಗೊಂಡರು. ಆರಂಭದಲ್ಲಿ ಅವರಿಗೆ ಹೆಚ್ಚಿನ ಸೌಲಭ್ಯಗಳು ಅಥವಾ ದುಬಾರಿ ಉಪಕರಣಗಳು ಇರಲಿಲ್ಲ.&lt;/p&gt;&lt;p&gt;&lt;strong&gt;ಸಣ್ಣ ಆರಂಭದಿಂದ ದೊಡ್ಡ ಗುರುತಿನವರೆಗೆ&lt;/strong&gt;&lt;/p&gt;&lt;p&gt;ಮನೋಜ್ ಡೇ ಅವರು ತಂತ್ರಜ್ಞಾನ, ಮೊಬೈಲ್ ವಿಮರ್ಶೆಗಳು, ಯೂಟ್ಯೂಬ್ ಟಿಪ್ಸ್ ಮತ್ತು ಡಿಜಿಟಲ್ ವಿಷಯಗಳ ಕುರಿತು ವಿಡಿಯೋಗಳನ್ನು ಪ್ರಕಟಿಸಲು ಆರಂಭಿಸಿದರು. ಮೊದಲ ದಿನಗಳಲ್ಲಿ ವೀಕ್ಷಣೆ ಮತ್ತು ಆದಾಯ ಕಡಿಮೆಯಿದ್ದರೂ ಅವರು ನಿರಂತರವಾಗಿ ವಿಡಿಯೋಗಳನ್ನು ಮಾಡುತ್ತಿದ್ದರು.&lt;/p&gt;&lt;p&gt;ಪ್ರೇಕ್ಷಕರಿಗೆ ಉಪಯುಕ್ತವಾಗುವ ಸರಳ ಭಾಷೆಯ ವಿಷಯಗಳನ್ನು ನೀಡಿದ ಪರಿಣಾಮ ಅವರ ಚಾನೆಲ್&zwnj;ಗೆ ನಿಧಾನವಾಗಿ ಜನಪ್ರಿಯತೆ ದೊರೆಯಿತು. ಗುಣಮಟ್ಟದ ಮಾಹಿತಿ, ನಿಯಮಿತ ಅಪ್&zwnj;ಲೋಡ್&zwnj;ಗಳು ಮತ್ತು ಪ್ರೇಕ್ಷಕರೊಂದಿಗೆ ಉತ್ತಮ ಸಂಪರ್ಕ ಅವರ ಯಶಸ್ಸಿನ ಪ್ರಮುಖ ಕಾರಣಗಳಾದವು.&lt;/p&gt;&lt;p&gt;&lt;strong&gt;ಯೂಟ್ಯೂಬ್ ಆದಾಯದಿಂದ ಜೀವನದಲ್ಲಿ ಬದಲಾವಣೆ&lt;/strong&gt;&lt;/p&gt;&lt;p&gt;ಚಾನೆಲ್ ಜನಪ್ರಿಯವಾಗುತ್ತಿದ್ದಂತೆ ಜಾಹೀರಾತು, ಬ್ರ್ಯಾಂಡ್ ಸಹಯೋಗಗಳು ಮತ್ತು ಇತರ ಡಿಜಿಟಲ್ ಆದಾಯದ ಮಾರ್ಗಗಳಿಂದ ಮನೋಜ್ ಡೇ ಅವರಿಗೆ ಉತ್ತಮ ಸಂಪಾದನೆ ಆರಂಭವಾಯಿತು. ವರದಿಗಳ ಪ್ರಕಾರ, ಯೂಟ್ಯೂಬ್ ಮೂಲಕ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮತ್ತು ಆದಾಯ ಗಳಿಸಿದ್ದಾರೆ ಎಂದು ಹೇಳಲಾಗಿದೆ.&lt;/p&gt;&lt;p&gt;ಆದರೆ ಈ ಯಶಸ್ಸಿನ ಹಿಂದೆ ಹಲವು ವರ್ಷಗಳ ಪರಿಶ್ರಮ, ನಿರಂತರ ಕಲಿಕೆ ಮತ್ತು ವಿಫಲತೆಗಳನ್ನು ಎದುರಿಸುವ ಮನೋಭಾವವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಯಶಸ್ಸಿನ ಹಿಂದೆ ಇರುವ ಶ್ರಮವನ್ನು ಅವರ ಕಥೆ ನೆನಪಿಸುತ್ತದೆ.&lt;/p&gt;&lt;p&gt;&lt;strong&gt;ಯುವಕರಿಗೆ ಪ್ರೇರಣೆಯಾದ ಕಥೆ&lt;/strong&gt;&lt;/p&gt;&lt;p&gt;ಮನೋಜ್ ಡೇ ಅವರ ಜೀವನಯಾನವು ಅವಕಾಶಗಳು ಎಲ್ಲರಿಗೂ ಒಂದೇ ರೀತಿಯಾಗಿ ಸಿಗುವುದಿಲ್ಲವಾದರೂ, ಅವುಗಳನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬಹುದು ಎಂಬುದನ್ನು ತೋರಿಸುತ್ತದೆ. ಸಣ್ಣ ಮಟ್ಟದಲ್ಲಿ ಆರಂಭಿಸಿ, ಕೌಶಲ್ಯ ಬೆಳೆಸಿ ಮತ್ತು ನಿರಂತರವಾಗಿ ಕೆಲಸ ಮಾಡಿದರೆ ಡಿಜಿಟಲ್ ಕ್ಷೇತ್ರದಲ್ಲಿಯೂ ಉತ್ತಮ ಭವಿಷ್ಯ ನಿರ್ಮಿಸಬಹುದು.&lt;/p&gt;&lt;p&gt;ಅವರ ಕಥೆ ಯೂಟ್ಯೂಬ್&zwnj;ನಲ್ಲಿ ವೃತ್ತಿ ಆರಂಭಿಸಲು ಬಯಸುವ ಯುವಕರಿಗೆ ಪ್ರೇರಣೆಯಾಗಿದೆ. ಆದರೆ ಯಶಸ್ಸಿಗೆ ತಾಳ್ಮೆ, ಮೂಲಭೂತ ಜ್ಞಾನ, ನಿಯಮಿತ ಪರಿಶ್ರಮ ಮತ್ತು ಪ್ರೇಕ್ಷಕರ ವಿಶ್ವಾಸ ಅತ್ಯಗತ್ಯ ಎಂಬುದನ್ನೂ ಇದು ಸೂಚಿಸುತ್ತದೆ.&lt;/p&gt;]]></content:encoded>
            <category>money</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/manoj-dey-inspiring-journey-from-financial-struggles-to-youtube-success/articleshow-nq1wfbl"/>
        </item>
        <item>
            <title><![CDATA[90 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಕೃಷಿಗೆ ಇಳಿದ ಯುವಕ; 30000 ಹೂಡಿಕೆಯಲ್ಲಿ ಈ ಕೋಟಿಗಳ ಒಡೆಯ]]></title>
            <link>https://kannada.asianetnews.com/money/corporate-employee-quits-rs-90-lakh-salary-to-start-microgreens-farm-now-earns-1-44-crore-gkn/articleshow-s50zmxe</link>
            <guid isPermaLink="true">https://kannada.asianetnews.com/money/corporate-employee-quits-rs-90-lakh-salary-to-start-microgreens-farm-now-earns-1-44-crore-gkn/articleshow-s50zmxe</guid>
            <pubDate>Sun, 06 Sep 2026 18:52:11 +0530</pubDate>
            <description><![CDATA[&lt;p&gt;90 ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು ಕೇವಲ 30 ಸಾವಿರ ರೂ. ಹೂಡಿಕೆಯೊಂದಿಗೆ ಮೈಕ್ರೋಗ್ರೀನ್ಸ್ ಕೃಷಿ ಆರಂಭಿಸಿದ ಚಂಡೀಗಢದ ಮೋಹಿತ್ ನಿಜ್ಹವನ್, ಇಂದು ಕೋಟಿಗಳ ಒಡೆಯನಾಗಿದ್ದಾರೆ. ವಾರ್ಷಿಕ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಇವರು, ಲಾಭದಾಯಕ ಕೃಷಿ ಮಾಡುವುದು ಹೇಗೆಂದು ಇತರ ರೈತರು ಮತ್ತು ಉದ್ಯಮಿಗಳಿಗೆ ತರಬೇತಿ ನೀಡುತ್ತಾ ಸ್ಫೂರ್ತಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vdz31pc8qysvreeg6vc7gb,imgname-microgreens-business-1788700757046.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂಡೀಗಢ: &lt;/strong&gt;ಇಂದಿನ ಕಾಲದಲ್ಲಿ ವರ್ಷಕ್ಕೆ 90 ಲಕ್ಷ ರೂಪಾಯಿ ಸಂಬಳ ಬರುವ ಕಾರ್ಪೊರೇಟ್ ಕೆಲಸ ಎಂದರೆ ಅದು ಅನೇಕರ ಪಾಲಿಗೆ ಕನಸಿನ ಉದ್ಯೋಗ. ಆದರೆ ಚಂಡೀಗಢದ ಮೋಹಿತ್ ನಿಜ್ಹವನ್ ಅವರಿಗೆ ಈ ಸಂಬಳ ಕೇವಲ ಒಂದು ಆರಂಭವಾಗಿತ್ತು. ತಮ್ಮ ಸುಖದಾಯಕ ಕೆಲಸಕ್ಕೆ ರಾಜೀನಾಮೆ ನೀಡಿ, ಕೇವಲ 30 ಸಾವಿರ ರೂಪಾಯಿ ಹೂಡಿಕೆಯೊಂದಿಗೆ ಅವರು ಆರಂಭಿಸಿದ 'ಮೈಕ್ರೋಗ್ರೀನ್ಸ್' ಕೃಷಿ ಇಂದು ಕೋಟಿ ರೂಪಾಯಿಗಳ ವ್ಯವಹಾರವಾಗಿ ಬೆಳೆದಿದೆ.&lt;/p&gt;&lt;h2&gt;&lt;strong&gt;ಯಾರು ಈ ಮೋಹಿತ್ ನಿಜ್ಹವನ್?&lt;/strong&gt;&lt;/h2&gt;&lt;p&gt;ಕಂಪ್ಯೂಟರ್ ಸೈನ್ಸ್&zwnj;ನಲ್ಲಿ ಬಿ.ಟೆಕ್ ಪದವೀಧರರಾಗಿರುವ ಮೋಹಿತ್, 2020ರ ಡಿಸೆಂಬರ್&zwnj;ನಲ್ಲಿ ತಮ್ಮ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ತೊರೆದರು. ಏನಾದರೂ ಹೊಸದನ್ನು ಮಾಡಬೇಕೆಂಬ ಹಂಬಲದಿಂದ ಅವರು ಆಯ್ದುಕೊಂಡಿದ್ದು 'ಇಂಡೋರ್ ಫಾರ್ಮಿಂಗ್' ಅಥವಾ ಒಳಾಂಗಣ ಕೃಷಿ. ಅಂತಿಮವಾಗಿ ಅವರು ಮೈಕ್ರೋಗ್ರೀನ್ಸ್ (ಪೋಷಕಾಂಶ ಭರಿತ ಸಣ್ಣ ಸಸ್ಯಗಳು) ಬೆಳೆಯುವತ್ತ ಗಮನ ಹರಿಸಿದರು.&lt;/p&gt;&lt;h2&gt;&lt;strong&gt;100 ಚದರ ಅಡಿಯಿಂದ ಆರಂಭವಾದ ಪಯಣ&lt;/strong&gt;&lt;/h2&gt;&lt;p&gt;ಯಾವುದೇ ದೊಡ್ಡ ಹೂಡಿಕೆ ಮಾಡದೆ, ಮೋಹಿತ್ ತಮ್ಮ ಮನೆಯ ಎರಡನೇ ಮಹಡಿಯ 100 ಚದರ ಅಡಿ ಜಾಗದಲ್ಲಿ ಕೇವಲ 30,000 ರೂಪಾಯಿಗಳೊಂದಿಗೆ ಈ ಕೆಲಸ ಆರಂಭಿಸಿದರು. ಆರಂಭದಲ್ಲಿ ಕೇವಲ 21 ಜಾತಿಯ ಸಾವಯವ ತರಕಾರಿಗಳನ್ನು ಬೆಳೆಸಲು ಮುಂದಾದರು. ಯಾವುದೇ ಕೀಟನಾಶಕಗಳಿಲ್ಲದೆ, ನೈಸರ್ಗಿಕ ವಿಧಾನದಲ್ಲಿ ಬೆಳೆ ತೆಗೆಯುವುದು ಅವರ ಗುರಿಯಾಗಿತ್ತು. 'ಗ್ರೀನು ಮೈಕ್ರೋಗ್ರೀನ್ಸ್' (Greenu Microgreens) ಎಂಬ ಹೆಸರಿನಲ್ಲಿ ಈ ಉದ್ದಿಮೆ ಪ್ರಾರಂಭವಾಯಿತು.&lt;/p&gt;&lt;h2&gt;&lt;strong&gt;ತಿಂಗಳಿಗೆ 12 ಲಕ್ಷ ರೂಪಾಯಿ ಆದಾಯ&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಕೇವಲ 3 ರಾಕ್&zwnj;ಗಳಿಂದ ಶುರುವಾದ ಕೃಷಿ, ಇಂದು 500 ಚದರ ಅಡಿಯ ಫೆಸಿಲಿಟಿಗೆ ವಿಸ್ತರಿಸಿದೆ. ಪ್ರಸ್ತುತ ಮೋಹಿತ್ ಬಳಿ 60 ರಾಕ್&zwnj;ಗಳಿದ್ದು, ಪ್ರತಿ ತಿಂಗಳು 12,000 ಟ್ರೇಗಳಲ್ಲಿ ಮೈಕ್ರೋಗ್ರೀನ್ಸ್ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ವರದಿಗಳ ಪ್ರಕಾರ, ಅವರ ಈ ಉದ್ಯಮವು ತಿಂಗಳಿಗೆ ಸುಮಾರು 12 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದು, ವಾರ್ಷಿಕವಾಗಿ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.&lt;/p&gt;&lt;p&gt;ಕೇವಲ ತಾವೊಬ್ಬರೇ ಬೆಳೆಯುವುದಲ್ಲದೆ ಮೋಹಿತ್ ಇತರ ರೈತರಿಗೆ ಮತ್ತು ಉದ್ಯಮಿಗಳಿಗೆ ಮೈಕ್ರೋಗ್ರೀನ್ಸ್ ಕೃಷಿಯ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಕೃಷಿ ತಂತ್ರಜ್ಞಾನ ಮತ್ತು ವಾಣಿಜ್ಯ ಎರಡನ್ನೂ ಅವರು ಜನರಿಗೆ ಕಲಿಸಿಕೊಡುತ್ತಿದ್ದಾರೆ. ಅವರ ಈ ಅಸಾಧಾರಣ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>money</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/corporate-employee-quits-rs-90-lakh-salary-to-start-microgreens-farm-now-earns-1-44-crore-gkn/articleshow-s50zmxe"/>
        </item>
        <item>
            <title><![CDATA[₹1 ಕೋಟಿ ಗಳಿಸಬೇಕಾ? EPFOಗೆ ಮಾಸಿಕ ₹10,750 ಕಟ್ಟಿ; ಆದ್ರೆ ಈ ಒಂದು ತಪ್ಪು ಮಾಡಿದ್ರೆ ಭಾರೀ ನಷ್ಟ ಆಗುತ್ತೆ!]]></title>
            <link>https://kannada.asianetnews.com/gallery/money/how-to-accumulate-1-crore-retirement-corpus-through-epf-compounding-impact-career-break-sat-up1zlu7</link>
            <guid isPermaLink="true">https://kannada.asianetnews.com/gallery/money/how-to-accumulate-1-crore-retirement-corpus-through-epf-compounding-impact-career-break-sat-up1zlu7</guid>
            <pubDate>Fri, 11 Sep 2026 14:00:43 +0530</pubDate>
            <description><![CDATA[EPF: ಪ್ರತಿ ತಿಂಗಳು ₹10,750 ಹೂಡಿಕೆ ಮಾಡಿದರೆ 25 ವರ್ಷಗಳಲ್ಲಿ ₹1 ಕೋಟಿ ಗಳಿಸಬಹುದು. ಆದರೆ, ಕೆಲಸದ ಮಧ್ಯೆ ದೀರ್ಘ ವಿರಾಮ ತೆಗೆದುಕೊಂಡರೆ ನಿಮ್ಮ ನಿವೃತ್ತಿ ನಿಧಿಗೆ ದೊಡ್ಡ ಹೊಡೆತ ಬೀಳಬಹುದು. ಅದು ಹೇಗೆ? ಇಲ್ಲಿದೆ ಪೂರ್ತಿ ಲೆಕ್ಕಾಚಾರ!]]></description>
            <media:content url="https://static.asianetnews.com/images/w-1280,h-720,format-jpg,imgid-01kwh0bn5dmtk89ztyp12xdahf,imgname-epf-benefits-1782982235309.jpg" type="image/jpeg" height="390" width="690"/>
            <content:encoded><![CDATA[EPF: ಪ್ರತಿ ತಿಂಗಳು ₹10,750 ಹೂಡಿಕೆ ಮಾಡಿದರೆ 25 ವರ್ಷಗಳಲ್ಲಿ ₹1 ಕೋಟಿ ಗಳಿಸಬಹುದು. ಆದರೆ, ಕೆಲಸದ ಮಧ್ಯೆ ದೀರ್ಘ ವಿರಾಮ ತೆಗೆದುಕೊಂಡರೆ ನಿಮ್ಮ ನಿವೃತ್ತಿ ನಿಧಿಗೆ ದೊಡ್ಡ ಹೊಡೆತ ಬೀಳಬಹುದು. ಅದು ಹೇಗೆ? ಇಲ್ಲಿದೆ ಪೂರ್ತಿ ಲೆಕ್ಕಾಚಾರ!&lt;img&gt;&lt;p&gt;ಸಂಬಳ ಪಡೆಯುವ ಅನೇಕರಿಗೆ ಪ್ರತಿ ತಿಂಗಳು ಸಂಬಳದಿಂದ ಕಡಿತವಾಗುವ ಪಿಎಫ್ ಮೊತ್ತ ದೊಡ್ಡದಾಗಿ ಕಾಣಿಸುವುದಿಲ್ಲ. ಆದರೆ, ಅದನ್ನು ದೀರ್ಘಕಾಲದವರೆಗೆ ಉಳಿತಾಯ ಮಾಡಿದರೆ, ಅದಕ್ಕೆ ಸಿಗುವ ಬಡ್ಡಿಯೊಂದಿಗೆ ಸೇರಿ ನಿವೃತ್ತಿ ಸಮಯದಲ್ಲಿ ದೊಡ್ಡ ಮೊತ್ತವಾಗಿ ಬದಲಾಗುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ, ಉದ್ಯೋಗಿ ಮತ್ತು ಕಂಪನಿಯ ಇಪಿಎಫ್ ಪಾಲು ಸೇರಿ ತಿಂಗಳಿಗೆ ₹10,750 ನಿರಂತರವಾಗಿ ಪಾವತಿಯಾದರೆ ಮತ್ತು ವಾರ್ಷಿಕ 8.25% ಬಡ್ಡಿ ಸಿಕ್ಕರೆ, ಸುಮಾರು 24-25 ವರ್ಷಗಳಲ್ಲಿ ₹1 ಕೋಟಿ ತಲುಪಬಹುದು.&lt;/p&gt;&lt;p&gt;ಇಲ್ಲಿ ಮುಖ್ಯವಾದ ವಿಷಯವೆಂದರೆ, ತಿಂಗಳು ಪಾವತಿಸುವ ಮೊತ್ತ ಮಾತ್ರವಲ್ಲ, ಹಲವು ವರ್ಷಗಳ ಕಾಲ ನಿರಂತರವಾಗಿ ಉಳಿತಾಯ ಮಾಡುವುದು ಮತ್ತು ಅದಕ್ಕೆ ಸಿಗುವ ಬಡ್ಡಿ ಮತ್ತೆ ಬೆಳೆಯುವುದೇ ಇದರ ಹಿಂದಿನ ಶಕ್ತಿ.&lt;/p&gt;&lt;img&gt;&lt;p&gt;ಇಪಿಎಫ್&zwnj;ನಲ್ಲಿ ಉದ್ಯೋಗಿಯ ಪಾಲು ಸಾಮಾನ್ಯವಾಗಿ ಮೂಲ ವೇತನದ 12% ಇರುತ್ತದೆ. ಕಂಪನಿಯೂ ತನ್ನ ಪಾಲನ್ನು ನೀಡುತ್ತದೆ. ಆದರೆ ಕಂಪನಿಯ ಸಂಪೂರ್ಣ ಪಾಲು ಒಂದೇ ಖಾತೆಗೆ ಸೇರುವುದಿಲ್ಲ; ಅದರಲ್ಲಿ ಒಂದು ಭಾಗ ಉದ್ಯೋಗಿಗಳ ಪಿಂಚಣಿ ಯೋಜನೆಗೂ ಹೋಗುತ್ತದೆ. ಹಾಗಾಗಿ, ಸಂಬಳದಿಂದ ಕಡಿತವಾಗುವ ಪಿಎಫ್ ಮೊತ್ತವನ್ನು ಮಾತ್ರ ನೋಡಿ 'ಇಷ್ಟೇನಾ?' ಎಂದು ಅಂದುಕೊಳ್ಳಬಾರದು.&lt;/p&gt;&lt;p&gt;ಹಲವು ವರ್ಷಗಳ ಕಾಲ ಹಣ ಸೇರಿದಾಗ, ಈಗಾಗಲೇ ಸೇರಿದ ಮೊತ್ತಕ್ಕೂ ಬಡ್ಡಿ ಸಿಗುತ್ತದೆ. ಆ ಬಡ್ಡಿಯೂ ಖಾತೆಗೆ ಸೇರುವುದರಿಂದ, ಕಾಲ ಕಳೆದಂತೆ ಬೆಳವಣಿಗೆ ವೇಗವಾಗುತ್ತದೆ. ಇದನ್ನೇ ಚಕ್ರಬಡ್ಡಿ ಬೆಳವಣಿಗೆ ಎಂದು ಹೇಳಬಹುದು.&lt;/p&gt;&lt;img&gt;&lt;p&gt;ಇಲ್ಲಿದೆ ನೋಡಿ ಹಲವರಿಗೆ ತಿಳಿಯದ ಮುಖ್ಯವಾದ ವಿಷಯ. ಒಬ್ಬ ವ್ಯಕ್ತಿ 25 ವರ್ಷಗಳ ಕಾಲ ನಿರಂತರವಾಗಿ ಇಪಿಎಫ್&zwnj;ಗೆ ಹಣ ಕಟ್ಟಿದರೆ, ಮೇಲಿನ ಲೆಕ್ಕಾಚಾರದ ಪ್ರಕಾರ ಸುಮಾರು ₹1 ಕೋಟಿ ಸಿಗಬಹುದು. ಅದೇ ವ್ಯಕ್ತಿ 3 ವರ್ಷ ಕೆಲಸದಲ್ಲಿ ವಿರಾಮ ತೆಗೆದುಕೊಂಡರೆ, ಆ ಸಮಯದಲ್ಲಿ ಹೊಸ ಇಪಿಎಫ್ ಪಾಲು ಸೇರುವುದಿಲ್ಲ. ಆಗ ಖಾತೆಯಲ್ಲಿರುವ ಹಣ ಹಾಗೆಯೇ ಇರುತ್ತದೆ; ಆದರೆ ಆ 3 ವರ್ಷಗಳಲ್ಲಿ ಸೇರಬೇಕಾದ ಹೊಸ ಹಣ ಮತ್ತು ಆ ಹಣಕ್ಕೆ ಮುಂದಿನ ವರ್ಷಗಳಲ್ಲಿ ಸಿಗಬೇಕಾದ ಬಡ್ಡಿ ಇಲ್ಲವಾಗುತ್ತದೆ.&lt;/p&gt;&lt;p&gt;ಹೀಗಾಗಿ, 25 ವರ್ಷಗಳ ಬದಲು 22 ವರ್ಷ ಮಾತ್ರ ಹಣ ಕಟ್ಟಿದರೆ, ಇದೇ ಲೆಕ್ಕಾಚಾರದಲ್ಲಿ ನಿವೃತ್ತಿ ಮೊತ್ತ ಸುಮಾರು ₹76.6 ಲಕ್ಷಕ್ಕೆ ಇಳಿಯಬಹುದು. ಅಂದರೆ, ಸುಮಾರು ₹24.9 ಲಕ್ಷದಷ್ಟು ವ್ಯತ್ಯಾಸ ಉಂಟಾಗಬಹುದು. ಇದಕ್ಕೆ ಕಾರಣ, ಕೆಲಸದ ವಿರಾಮದಲ್ಲಿ ಪಾವತಿಸದ ಮೊತ್ತ ಮಾತ್ರವಲ್ಲ, ಆ ಮೊತ್ತವು ಮುಂದಿನ ಹಲವು ವರ್ಷಗಳಲ್ಲಿ ಗಳಿಸಬಹುದಾಗಿದ್ದ ಬಡ್ಡಿಯೂ ನಷ್ಟವಾಗುತ್ತದೆ.&lt;/p&gt;&lt;img&gt;&lt;p&gt;ಇಪಿಎಫ್&zwnj;ನಲ್ಲಿ ಸಾಮಾನ್ಯ ಪಾಲುದಾರಿಕೆಗಿಂತ ಹೆಚ್ಚಾಗಿ, ಅರ್ಹ ಉದ್ಯೋಗಿಗಳು ಸ್ವಯಂಪ್ರೇರಿತ ಭವಿಷ್ಯ ನಿಧಿ (VPF) ಮೂಲಕ ಹೆಚ್ಚುವರಿ ಹಣವನ್ನು ಪಾವತಿಸಬಹುದು. ಉದಾಹರಣೆಗೆ, ತಿಂಗಳಿಗೆ ₹10,750 ಇಪಿಎಫ್ ಪಾಲಿನೊಂದಿಗೆ ಹೆಚ್ಚುವರಿಯಾಗಿ ₹6,000 ಪಾವತಿಸಿದರೆ, ಒಟ್ಟು ಮಾಸಿಕ ಪಾಲು ₹16,750 ಆಗುತ್ತದೆ.&lt;/p&gt;&lt;p&gt;ಇದೇ ರೀತಿ 25 ವರ್ಷಗಳ ಕಾಲ ನಿರಂತರವಾಗಿ ಪಾವತಿಸಿ, ವಾರ್ಷಿಕ 8.25% ಬಡ್ಡಿ ಸಿಕ್ಕರೆ, ಒಟ್ಟು ಮೊತ್ತ ಸುಮಾರು ₹1.58 ಕೋಟಿಯವರೆಗೆ ತಲುಪಬಹುದು. ಆದರೆ VPFಗೆ ಕಂಪನಿಯು ಅಷ್ಟೇ ಪ್ರಮಾಣದ ಹೆಚ್ಚುವರಿ ಪಾಲು ನೀಡಬೇಕೆಂಬ ನಿಯಮವಿಲ್ಲ. ಹೆಚ್ಚುವರಿ ಹಣ ಪಾವತಿಸುವ ಮುನ್ನ, ನಿಮ್ಮ ಸಂಬಳ, ಮಾಸಿಕ ಖರ್ಚುಗಳು ಮತ್ತು ಇತರ ಹೂಡಿಕೆಗಳನ್ನು ಪರಿಗಣಿಸುವುದು ಮುಖ್ಯ.&lt;/p&gt;&lt;img&gt;&lt;p&gt;ಇಪಿಎಫ್&zwnj;ನ ಅತಿದೊಡ್ಡ ಶಕ್ತಿಯೇ ದೀರ್ಘಕಾಲದ ನಿರಂತರ ಉಳಿತಾಯ. ತಿಂಗಳಿಗೆ ಪಾವತಿಸುವ ಮೊತ್ತ ಚಿಕ್ಕದಾಗಿದ್ದರೂ, 20-25 ವರ್ಷಗಳ ಕಾಲ ಅದನ್ನು ಮುಂದುವರಿಸಿದರೆ, ಬಡ್ಡಿಯ ಮೂಲಕ ಮೊತ್ತವು ಗಣನೀಯವಾಗಿ ಬೆಳೆಯುತ್ತದೆ. ಅದೇ ಸಮಯದಲ್ಲಿ, ಕೆಲಸದಲ್ಲಿ ವಿರಾಮ, ಪಿಎಫ್ ಹಣವನ್ನು ಮೊದಲೇ ಹಿಂಪಡೆಯುವುದು ದೀರ್ಘಕಾಲೀನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಸಂಬಳದಲ್ಲಿ ಪಿಎಫ್ ಕಡಿತವಾಗುತ್ತಿದೆ ಎನ್ನುವುದನ್ನು ಬಿಟ್ಟು, ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಸೇರುತ್ತಿದೆ, ಕಂಪನಿಯ ಪಾಲು ಎಷ್ಟು, VPF ಅಗತ್ಯವಿದೆಯೇ, ನಿವೃತ್ತಿ ಗುರಿಗೆ ಇದು ಸಾಕಾಗುತ್ತದೆಯೇ ಎಂಬುದನ್ನು ಆಗಾಗ ಪರಿಶೀಲಿಸುವುದು ಒಳ್ಳೆಯದು.&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ಮೇಲಿನ ₹1 ಕೋಟಿ, ₹76.6 ಲಕ್ಷ, ₹1.58 ಕೋಟಿ ಇತ್ಯಾದಿ ಲೆಕ್ಕಾಚಾರಗಳು ವಾರ್ಷಿಕ 8.25% ಬಡ್ಡಿ ಮತ್ತು ನಿರ್ದಿಷ್ಟ ಅವಧಿಗೆ ನಿರಂತರ ಹೂಡಿಕೆ ಮಾಡಲಾಗುವುದು ಎಂಬ ಊಹೆಯ ಮೇಲಿನ ಉದಾಹರಣೆಗಳಾಗಿವೆ. ನಿಜವಾದ ಇಪಿಎಫ್ ಬಡ್ಡಿ ದರ ಮತ್ತು ನಿಯಮಗಳಿಗೆ ಅನುಗುಣವಾಗಿ ಅಂತಿಮ ಮೊತ್ತ ಬದಲಾಗಬಹುದು.&lt;/p&gt;]]></content:encoded>
            <category>money</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/money/how-to-accumulate-1-crore-retirement-corpus-through-epf-compounding-impact-career-break-sat-up1zlu7"/>
        </item>
        <item>
            <title><![CDATA[Long Time Investment: ಈ ವರ್ಷ 1 ಲಕ್ಷ ರೂಪಾಯಿ ಚಿನ್ನ ತೆಗೆದುಕೊಂಡದರೆ 2050ರಲ್ಲಿ ಎಷ್ಟು ಹಣ ಆಗುತ್ತೆ?]]></title>
            <link>https://kannada.asianetnews.com/business/if-you-buy-gold-worth-rs-1-lakh-this-year-how-much-will-it-be-worth-in-2050-sns/articleshow-vh9eivh</link>
            <guid isPermaLink="true">https://kannada.asianetnews.com/business/if-you-buy-gold-worth-rs-1-lakh-this-year-how-much-will-it-be-worth-in-2050-sns/articleshow-vh9eivh</guid>
            <pubDate>Mon, 07 Sep 2026 14:18:35 +0530</pubDate>
            <description><![CDATA[ಭಾರತದಲ್ಲಿ ಚಿನ್ನವು ದೀರ್ಘಕಾಲದ ಹೂಡಿಕೆಯಾಗಿದ್ದು, 2050ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 14-22 ಲಕ್ಷ ರೂಪಾಯಿ ತಲುಪುವ ನಿರೀಕ್ಷೆಯಿದೆ. ಇಂದಿನ 1 ಲಕ್ಷ ರೂಪಾಯಿ ಹೂಡಿಕೆಯು 2050ರ ಹೊತ್ತಿಗೆ 9.85 ಲಕ್ಷದಿಂದ 15 ಲಕ್ಷದವರೆಗೆ ಮೌಲ್ಯವನ್ನು ಪಡೆಯಬಹುದು, ಆದರೆ ಹೂಡಿಕೆಯಲ್ಲಿ ಅಪಾಯಗಳಿರುತ್ತವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1xgkbrk1g7n9cbxb30ae6y8,imgname-gold--1788770627347.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಚಿನ್ನದ ಬೆಲೆ ಆರು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದರಂತೆ 2050ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 14-22 ಲಕ್ಷ ರೂಪಾಯಿ ವರೆಗೂ ತಲುಪಬಹುದಾಗಿದೆ. ಜಾತಿಗಿಕವಾಗಿ ನೋಡುವುದಾದರೆ ಒಂದು ಔನ್ಸ್ ಚಿನ್ನದ ಬೆಲೆ 10 ಸಾವಿರ ಡಾಲರ್ಗೆ ಮೀರಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.&lt;/p&gt;&lt;p&gt;ಭಾರತದಲ್ಲಿ ಚಿನ್ನ ಕೇವಲ ಒಂದು ಆಭರಣ ಮಾತ್ರ ಅಲ್ಲ. ಇದು ಒಂದು ದೀರ್ಘದ ಕಾಲದ ಹೂಡಿಕೆಯಾಗಿದೆ. ಐತಿಹಾಸಿಕವಾಗಿಯೂ ಚಿನ್ನದ ದರ ಏರಿಕೆಯಾಗುತ್ತಲೇ ಇರುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೋ ಒಂದು ಸಂದರ್ಭದಲ್ಲಿ ಅಂದರೆ ಹಣದುಬ್ಬರ, ಆರ್ಥಿಕ ಅನಿಶ್ಚತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಂತಹ ಸಂದರ್ಭದಲ್ಲಿಯೂ ಚಿನ್ನದ ದರ ಹೆಚ್ಚಾಗುತ್ತಲೇ ಇವೆ. 2050ರ ವೇಳೆಗೆ ಚಿನ್ನ ಬೆಲೆಗಳು ಹೇಗಿರಬಹುದು ಎಂಬ ಕುತೂಹಲ ಹಲವರಿಗೆ ಇರುತ್ತದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;2050ರ ಚಿನ್ನದ ದರ: ನಿಮ್ಮ 1 ಲಕ್ಷದ ಭವಿಷ್ಯವೇನು?&lt;/h2&gt;&lt;p&gt;2026ರ ಜನವರಿಗೆ ವೇಳೆಗೆ ಭಾರತದಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ ಸುಮಾರು 1,42,540 ರೂಪಾಯಿ ಅಥವಾ ಪ್ರತಿ ಗ್ರಾಂಗೆ 14,254 ರೂಪಾಯಿ ಇತ್ತು. ಅದೇ ರೀತಿ 22 ಕ್ಯಾರೆಟ್ ಚಿನ್ನದ ವೇಲೆ 10 ಗ್ರಾಂಗೆ 1,30,660 ರೂಪಾಯಿ, ಪ್ರತಿ ಗ್ರಾಂಗೆ 13,066 ರೂಪಾಯಿ ಇತ್ತು. ಕಳೆದ ಆರು ವರ್ಷಗಳಲ್ಲಿ ಕ್ಯಾರೆಟ್ ಚಿನ್ನದ ಬೆಲೆ ಬಹುತೇಕ ಮೂರು ಪಟ್ಟು ಹೆಚ್ಚಾಗಿದೆ. 2020ರಲ್ಲಿ 50,000 ರೂಪಾಯಿ ಇದ್ದ ಚಿನ್ನದ ಬೆಲೆ ಈಗ 1,42,540 ರೂಪಾಯಿಗೆ ಏರಿಕೆಯಾಗಿದೆ.&lt;/p&gt;&lt;p&gt;ಕಳೆದ 30 ವರ್ಷಗಳ ಹಿಂದಿನ ಅಂಕಿ-ಅಂಶಗಳನ್ನು ಪರಿಶೀಲನೆ ನಡೆಸುವುದಾದರೆ, ಸರಾಸರಿ 10.83 ಪ್ರಮಾಣದಲ್ಲಿ ಬೆಳೆದಿದ್ದು, ಇದು 20 ವರ್ಷಗಳಲ್ಲಿ 14.35 ಶೇಕಡಾ ಹೆಚ್ಚಾಗಿದೆ. ಕಳೆದ 15 ವರ್ಷಗಳಲ್ಲಿ ಸರಾಸರಿ ಆದಾಯ ಸುಮಾರು 12ರಷ್ಟು ಹೆಚ್ಚಾಗಿದೆ. ಇದಕ್ಕೆ ಹಣದುಬ್ಬರ ಹಾಗೂ ರೂಪಾಯಿಯ ಅಪಮೌಲ್ಯ ಪ್ರಮುಖ ಕಾರಣವಾಗಿದೆ. ಯುಎಸ್&zwnj;ಡಿಯಲ್ಲಿ ನೋಡುವುದಾದರೆ, ಚಿನ್ನದ ವಾರ್ಷಿಕ ದರ ಹೆಚ್ಚಳ ಶೇಕಡಾ 5-7ರಷ್ಟಿದೆ.&lt;/p&gt;&lt;p&gt;2030ರ ವೇಳೆಗೆ ಚಿನ್ನವೂ ಪ್ರತಿ ಔನ್ಸ್ಗೆ 5-10 ಸಾವಿರ ಯುಸ್ ಡಾಲರ್&zwnj;ಗೆ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ. ಇದೇ ವೇಳೆ 2040-2050ರ ವೇಳೆಗೆ ಎಷ್ಟು ದರ ಹೆಚ್ಚಳ ಆಗಬಹುದು ಎಂದು ತಜ್ಞರು ಊಹೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತರರಾಷ್ಟ್ರಿಯ ಅಂದಾಜಿನ ಪ್ರಕಾರ 2050ರ ವೇಳೆಗೆ ಪ್ರತಿ ಔನ್ಸ್ ಚಿನ್ನ ಬೆಲೆ 10 ಸಾವಿರ ಯುಎಸ್ ಡಾಲರ್&zwnj; ಮೀರಬಹುದು. ಆದರೆ ಕೆಲವರು 15 ರಿಂದ 20 ಸಾವಿರ ಯುಎಸ್ ಡಾಲರ್&zwnj;ಗೆ ಮುಟ್ಟಬಹುದು ಎಂದು ಊಹೆ ಮಾಡಿದ್ದಾರೆ. ಭಾರತದಲ್ಲಿ ರೂಪಾಯಿ ಮೌಲ್ಯ ಆಧಾರ ಮೇಲೆ ನೋಡುವುದಾದರೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. 2050ರ ವೇಳೆಗೆ ಚಿನ್ನದ ಪ್ರಸ್ತುತ ಮೌಲ್ಯಕ್ಕಿಂತ 6-8 ಪಟ್ಟು ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಈ ಹಿಂದಿ ಅಂಕಿ-ಅಂಶಗಳ ಆಧಾರದ ಮೇರೆಗೆ ನೋಡುವುದಾದರೆ, ಚಿನ್ನದ ಬೆಲೆ 2050ರ ವೇಳೆಗೆ ಶೇಕಡಾ 10ರಷ್ಟು ಬೆಳೆವಣಿಗೆ ಕಂಡರೂ, 24 ಕ್ಯಾರೆಟ್ ಚಿನ್ನದ ಬೆಲೆ 14-15 ಲಕ್ಷಗಳಿಗೆ ಏರಿಕೆ ಆಗಬಹುದು. ಶೇಕಡಾ 12ರಷ್ಟು ಸಿಎಜಿಆರ್ ನೊಂದಿಗೆ ಬೆಳವಣಿಗೆ ಆದರೆ 21-22 ಲಕ್ಷಗಳ ವರೆಗೂ ಹೆಚ್ಚಾಗಬಹುದು. ಅದೇ ರೀತಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 12.8 ಲಕ್ಷ ರೂಪಾಯಿಗೆ ಅಥವಾ 19.8 ಲಕ್ಷ ರೂಪಾಯಿಗೆ ತಲುಪಬಹುದು. ಇದು ಕೇಲವ ಸರಾಸರಿ ಅಂದಾಜು ಆಗಿದ್ದು, ನಿಖರ ಬೆಲೆ ಬದಲಾವಣೆಯಾಗಬಹುದು.&lt;/p&gt;&lt;p&gt;ಈಗ ನೀವು 24 ಕ್ಯಾರೆಟ್ ಚಿನ್ನದಲ್ಲಿ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ನಿಮಗೆ ಸುಮಾರು 7.016 ಗ್ರಾಂ ಚಿನ್ನ ಖರೀದಿ ಮಾಡಬಹುದು. ಶೇಕಡಾ 10 ಸಿಎಜಿಆರ್&zwnj;ನಲ್ಲಿ 2050ರ ವೇಳೆಗೆ ಸುಮಾರು 9.85 ಲಕ್ಷ ರೂಪಾಯಿ, 11-12 ಸಿಎಜಿಆರ್&zwnj;ನಲ್ಲಿ 12-15 ಲಕ್ಷ ರೂಪಾಯಿಗೆ ಹೆಚ್ಚಾಗಬಹುದು. ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರೆ, 2050ರ ವೇಳೆಗೆ 4.17-5.29 ಲಕ್ಷ ರೂಪಾಯಿಗೆ ಹೆಚ್ಚಾಗಬಹುದು. ಆದರೆ ಇಲ್ಲಿ ಚಿನ್ನ ಮೇಲಿನ ಹೂಡಿಕೆ ಅಪಾಯವನ್ನು ಹೊಂದಿರುತ್ತದೆ ಎಂದು ಗ್ರಾಹಕರು ಮರೆಯುವಂತೆ ಇಲ್ಲ. ಹೂಡಿಕೆಯಲ್ಲಿ ದೀರ್ಘಾವಧಿಯ ಯೋಜನೆಯಗಳ ಉತ್ತಮ ಲಾಭ ನೀಡಿದರೂ, ಇದರ ಆಯ್ಕೆ ಸಂಪೂರ್ಣ ವೈಯುಕ್ತಿಕವಾಗಿರುತ್ತದೆ.&lt;/p&gt;]]></content:encoded>
            <category>money</category>
            <dc:creator>Sumanth SN</dc:creator>
            <atom:link href="https://kannada.asianetnews.com/business/if-you-buy-gold-worth-rs-1-lakh-this-year-how-much-will-it-be-worth-in-2050-sns/articleshow-vh9eivh"/>
        </item>
        <item>
            <title><![CDATA[EPFO: ಪಿಎಫ್ ಹಣ ಹಿಂಪಡೆಯುವುದು ಈಗ ನೀರು ಕುಡಿದಷ್ಟೇ ಸುಲಭ! ಇಲ್ಲಿದೆ ಕಂಪ್ಲೀಟ್ ಗೈಡ್!]]></title>
            <link>https://kannada.asianetnews.com/money/pf-withdrawal-process-epfo-pf-money-withdrawal-online-rules-guide-bmk/articleshow-vig0iag</link>
            <guid isPermaLink="true">https://kannada.asianetnews.com/money/pf-withdrawal-process-epfo-pf-money-withdrawal-online-rules-guide-bmk/articleshow-vig0iag</guid>
            <pubDate>Wed, 09 Sep 2026 22:33:02 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರವು ಪಿಎಫ್ ಭಾಗಶಃ ಹಣ ಹಿಂಪಡೆಯುವ ನಿಯಮಗಳನ್ನು ಸರಳಗೊಳಿಸಿದೆ. ಅನಾರೋಗ್ಯ, ಶಿಕ್ಷಣ, ಮದುವೆ, ಮನೆ ಖರೀದಿ ಮತ್ತು ಇತರೆ ತುರ್ತು ಅಗತ್ಯಗಳಿಗಾಗಿ ಹಣ ಕ್ಲೈಮ್ ಮಾಡಲು ಮೂರು ಹೊಸ ವರ್ಗಗಳನ್ನು ಪರಿಚಯಿಸಲಾಗಿದೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9sk78secph9ksxbenyzxxj,imgname-epfo-new-rules-2026-1784887745800.png" type="image/jpeg" height="390" width="690"/>
            <content:encoded><![CDATA[&lt;p&gt;ಕೋಟ್ಯಂತರ ಉದ್ಯೋಗಿಗಳಿಗೆ ಮತ್ತು ಇಪಿಎಫ್&zwnj;ಒ (EPFO) ಚಂದಾದಾರರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು &lsquo;ನೌಕರರ ಭವಿಷ್ಯ ನಿಧಿ ಯೋಜನೆ, 2026&rsquo; ಅಡಿಯಲ್ಲಿ ಪಿಎಫ್ ಖಾತೆಯಿಂದ ಭಾಗಶಃ ಹಣವನ್ನು (PF Partial Withdrawal) ಹಿಂಪಡೆಯುವ ನಿಯಮಗಳನ್ನು ಅತ್ಯಂತ ಸರಳ ಮತ್ತು ಪಾರದರ್ಶಕಗೊಳಿಸಿದೆ. ಈ ಹಿಂದೆ ಇದ್ದ ಸಂಕೀರ್ಣ ನಿಯಮಗಳು ಹಾಗೂ ಹತ್ತಾರು ನಮೂನೆಗಳ (Forms) ಗೊಂದಲಕ್ಕೆ ತೆರೆ ಎಳೆದಿರುವ ಇಪಿಎಫ್&zwnj;ಒ, ಮುಂಗಡ ಹಣ ಕ್ಲೈಮ್ ಮಾಡುವುದನ್ನು ಮೂರು ಪ್ರಮುಖ ವರ್ಗಗಳಾಗಿ (Categories) ವಿಂಗಡಿಸಿದೆ.&lt;/p&gt;&lt;h2&gt;&lt;strong&gt;1.ಮುಂಗಡ ಹಣ ಹಿಂಪಡೆಯುವಿಕೆಯ 3 ಹೊಸ ವರ್ಗಗಳು!&lt;/strong&gt;&lt;/h2&gt;&lt;p&gt;&lt;strong&gt;ವರ್ಗ 1:&lt;/strong&gt; ಅನಾರೋಗ್ಯ, ಶಿಕ್ಷಣ ಮತ್ತು ಮದುವೆ;&lt;/p&gt;&lt;p&gt;&lt;strong&gt;ಅನಾರೋಗ್ಯ ಚಿಕಿತ್ಸೆ;&lt;/strong&gt; ಸದಸ್ಯರು ತಮ್ಮ ಅಥವಾ ತಮ್ಮ ಕುಟುಂಬದ ಸದಸ್ಯರ ಆರೋಗ್ಯ ತುರ್ತುಸ್ಥಿತಿಗಾಗಿ ಯಾವುದೇ ನಿರ್ದಿಷ್ಟ ಮಿತಿಯಿಲ್ಲದೆ ಎಷ್ಟು ಬಾರಿ ಬೇಕಾದರೂ ಮುಂಗಡ ಹಣವನ್ನು ಹಿಂಪಡೆಯಬಹುದು.&lt;/p&gt;&lt;p&gt;&lt;strong&gt;ಶಿಕ್ಷಣ;&lt;/strong&gt; ಇಪಿಎಫ್ ಸದಸ್ಯತ್ವದ ಸಂಪೂರ್ಣ ಅವಧಿಯಲ್ಲಿ ಮಕ್ಕಳ ಅಥವಾ ಸ್ವಂತ ಉನ್ನತ ಶಿಕ್ಷಣಕ್ಕಾಗಿ ಗರಿಷ್ಠ 10 ಬಾರಿ ಹಣ ಪಡೆಯಲು ಅವಕಾಶವಿದೆ.&lt;/p&gt;&lt;p&gt;&lt;strong&gt;ಮದುವೆ;&lt;/strong&gt; ಸದಸ್ಯತ್ವ ಅವಧಿಯಲ್ಲಿ ಮದುವೆ ವೆಚ್ಚಗಳಿಗಾಗಿ ಗರಿಷ್ಠ ೫ ಬಾರಿ ಮುಂಗಡ ಪಡೆಯಬಹುದು.&lt;/p&gt;&lt;p&gt;&lt;strong&gt;ವರ್ಗ 2; &lt;/strong&gt;ಮನೆ ಖರೀದಿ, ನಿರ್ಮಾಣ ಮತ್ತು ಗೃಹ ಸಾಲ!&lt;/p&gt;&lt;p&gt;ಮನೆ ಅಥವಾ ಫ್ಲಾಟ್ ಖರೀದಿ, ಭೂಮಿ ಖರೀದಿ, ಹೊಸ ಮನೆ ನಿರ್ಮಾಣ, ಗೃಹ ಸಾಲ ಮರುಪಾವತಿ (Home Loan Repayment) ಮತ್ತು ಮನೆಯ ನವೀಕರಣಕ್ಕಾಗಿ (Renovation) ಇಡೀ ಸದಸ್ಯತ್ವ ಅವಧಿಯಲ್ಲಿ ಗರಿಷ್ಠ 5 ಬಾರಿ ಮುಂಗಡ ಹಣ ಹಿಂಪಡೆಯಬಹುದು.&lt;/p&gt;&lt;h3&gt;&lt;strong&gt;ವರ್ಗ 3: ವಿಶೇಷ ಮತ್ತು ಇತರೆ ಸಂದರ್ಭಗಳು!&lt;/strong&gt;&lt;/h3&gt;&lt;p&gt;ಮಂಡಳಿಯು ನಿಗದಿಪಡಿಸಿದ ವಿಶೇಷ ತುರ್ತು ಅಥವಾ ಇತರೆ ಅಗತ್ಯಗಳಿಗಾಗಿ ಸದಸ್ಯರು ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ೨ ಬಾರಿ ಭಾಗಶಃ ಪಿಎಫ್ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;h3&gt;&lt;strong&gt;2. ಅರ್ಹತೆ ಮತ್ತು 75% ನ ಹೊಸ ಪ್ರಮುಖ ನಿಯಮಗಳು!&lt;/strong&gt;&lt;/h3&gt;&lt;p&gt;&lt;strong&gt;ಕನಿಷ್ಠ 12 ತಿಂಗಳ ಸದಸ್ಯತ್ವ;&lt;/strong&gt; ಯಾವುದೇ ವರ್ಗದಲ್ಲಿ ಭಾಗಶಃ ಪಿಎಫ್ ಮುಂಗಡ ಪಡೆಯಲು, ಉದ್ಯೋಗಿಯು ಕನಿಷ್ಠ 12 ತಿಂಗಳು (1 ವರ್ಷ) ಇಪಿಎಫ್ ಸದಸ್ಯತ್ವ ಪೂರ್ಣಗೊಳಿಸಿರಬೇಕು.&lt;/p&gt;&lt;p&gt;&lt;strong&gt;ಶೇ. 75ರಷ್ಟು ಮುಂಗಡ ಪಡೆಯಬಹುದು;&lt;/strong&gt; ಇನ್ಮುಂದೆ ಚಂದಾದಾರರು ತಮ್ಮ ಮತ್ತು ಉದ್ಯೋಗದಾತರ ಒಟ್ಟು ಕೊಡುಗೆಯ ಗರಿಷ್ಠ ಶೇ. 75 ರಷ್ಟು ಹಣ ಹಾಗೂ ಅದಕ್ಕೆ ಬಂದ ಬಡ್ಡಿಯನ್ನು ಮುಂಗಡವಾಗಿ ಹಿಂಪಡೆಯಬಹುದು.&lt;/p&gt;&lt;h3&gt;&lt;strong&gt;ಶೇ. 25ರಷ್ಟು ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ!&lt;/strong&gt;&lt;/h3&gt;&lt;p&gt;ಉದ್ಯೋಗಿಯ ನಿವೃತ್ತಿ ಜೀವನ ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಖಾತೆಯಲ್ಲಿ ಒಟ್ಟು ಪಿಎಫ್ ಬ್ಯಾಲೆನ್ಸ್&zwnj;ನ ಕನಿಷ್ಠ ಶೇ. 25ರಷ್ಟು ಹಣವನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕಾಗುತ್ತದೆ. ಈ ಸರಳೀಕೃತ ವ್ಯವಸ್ಥೆಗೆ ಅಕ್ಟೋಬರ್ ೨೦೨೫ ರಲ್ಲಿ ಇಪಿಎಫ್&zwnj;ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಅನುಮೋದನೆ ನೀಡಿತ್ತು. ತದನಂತರ ಜುಲೈ ೨೦೨೬ ರಿಂದ ದೇಶಾದ್ಯಂತ ಇದು ಕಾನೂನುಬದ್ಧವಾಗಿ ಅನುಷ್ಠಾನಕ್ಕೆ ಬಂದಿದೆ.&lt;/p&gt;&lt;h3&gt;&lt;strong&gt;ಕಾನೂನು ಹಾಗೂ ಆರ್ಥಿಕ ತಜ್ಞರ ಪ್ರಕಾರ!&lt;/strong&gt;&lt;/h3&gt;&lt;p&gt;ಹಳೆಯ ಗೊಂದಲಮಯ ನಿಯಮಗಳಿಂದಾಗಿ ಲಕ್ಷಾಂತರ ಪಿಎಫ್ ಕ್ಲೈಮ್&zwnj;ಗಳು ರಿಜೆಕ್ಟ್ (Reject) ಆಗುತ್ತಿದ್ದವು. ಈ ಮೂರು ಸ್ಪಷ್ಟ ವರ್ಗೀಕರಣದಿಂದಾಗಿ ಕ್ಲೈಮ್&zwnj;ಗಳು ತಿರಸ್ಕರಿಸಲ್ಪಡುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದ್ದು, ತುರ್ತು ಅಗತ್ಯವಿರುವ ಉದ್ಯೋಗಿಗಳ ಕೈಗೆ ಶೀಘ್ರವಾಗಿ ಹಣ ತಲುಪಲಿದೆ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/pf-withdrawal-process-epfo-pf-money-withdrawal-online-rules-guide-bmk/articleshow-vig0iag"/>
        </item>
        <item>
            <title><![CDATA[ಮದುವೆ, ಸಮಾರಂಭಕ್ಕೆ 10 ರೂಪಾಯಿ ನೋಟಿನ ಬಂಡಲ್ ಬೇಕಿದ್ರೆ ಹೀಗೆ ಮಾಡಿ]]></title>
            <link>https://kannada.asianetnews.com/business/where-and-how-to-get-bundles-of-10-rupees-notes/articleshow-wmnesx6</link>
            <guid isPermaLink="true">https://kannada.asianetnews.com/business/where-and-how-to-get-bundles-of-10-rupees-notes/articleshow-wmnesx6</guid>
            <pubDate>Tue, 15 Sep 2026 14:51:02 +0530</pubDate>
            <description><![CDATA[&lt;p&gt;10 rupees notes : ಮದುವೆ, ಪೂಜೆ ಸಂದರ್ಭದಲ್ಲಿ ಚಿಲ್ಲರೆ ನೋಟಿನ ಅಗತ್ಯ ಹೆಚ್ಚಿರುತ್ತದೆ. ಒಂದು ರೂಪಾಯಿ ಕಾಯಿನ್ ಜೊತೆ ಹತ್ತು &ndash; 20 ರೂಪಾಯಿ ನೋಟಿನ ಕಂತೆಯ ಅಗತ್ಯ ಇರುತ್ತದೆ. ಆದ್ರೆ ಅಗತ್ಯವಿರುಷ್ಟು ನೋಟಿನ ಕಂತೆ ನಿಮ್ಮ ಬಳಿ ಇರೋದಿಲ್ಲ. ಆಗ ಏನು ಮಾಡ್ಬೇಕು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2j5t8a25kpec4drh07ztaf3,imgname-bundle-of-notes-1789463961922.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಸಂಪ್ರದಾಯದಲ್ಲಿ ನೋಟಿನ ಅಗತ್ಯ ಹೆಚ್ಚಿದೆ. ಈಗ ಡಿಜಿಟಲ್ ಯುಗ ಶುರುವಾಗಿದೆಯಾದ್ರೂ ಅನೇಕ ಕಾರ್ಯಕ್ರಮಗಳಲ್ಲಿ ನೋಟಿನ ಬೆಲೆ ಕಡಿಮೆಯಾಗಿಲ್ಲ. ಮದುವೆಗಳಲ್ಲಿ, ಹಬ್ಬದ ಸಂದರ್ಭಗಳಲ್ಲಿ, ದಾನ ನೀಡಲು ಅನೇಕರು ಹತ್ತು &ndash; 20 ರೂಪಾಯಿ ನೋಟನ್ನು ಇಟ್ಟುಕೊಳ್ತಾರೆ. 10 ರೂಪಾಯಿ ನೋಟುಗಳನ್ನು ಒಟ್ಟಾಕಿಡಲು ಸಾಧ್ಯವಿಲ್ಲ. ನಿಮಗೆ ಬಂಡಲ್ ಗಟ್ಟಲೆ ಹಣ ಎಲ್ಲಿ ಸಿಗುತ್ತೆ? ಅದಕ್ಕಿರುವ ನಿಯಮ ಏನು ಎಂಬುದು ಇಲ್ಲಿದೆ.&lt;/p&gt;&lt;h2&gt;10 ರೂಪಾಯಿ ನೋಟಿನ ಬಂಡಲ್ ಸಿಗೋದು ಎಲ್ಲಿ&lt;/h2&gt;&lt;p&gt;ಮದುವೆ ಅಥವಾ ಇತರ ಕಾರ್ಯಕ್ರಮಕ್ಕಾಗಿ ನಿಮಗೆ 10 ರೂಪಾಯಿ ನೋಟುಗಳ ಬಂಡಲ್ ಬೇಕಾದರೆ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಿಂದ ನೀವು ಒಂದನ್ನು ಪಡೆಯಬಹುದು. ಬ್ಯಾಂಕ್ ಶಾಖೆಯು 10 ರೂಪಾಯಿ ನೋಟುಗಳ ಬಂಡಲ್ಗಳನ್ನು ಹೊಂದಿದೆಯೇ ಎಂಬುದು ಅದರ ಸ್ಟಾಕ್ ಅನ್ನು ಅವಲಂಬಿಸಿರುತ್ತದೆ.&lt;/p&gt;&lt;p&gt;ದೊಡ್ಡ ಮೊತ್ತದಲ್ಲಿ ನಿಮಗೆ ಬಂಡಲ್ ಅಗತ್ಯವಿದ್ದರೆ ನೀವು ಮುಂಚಿತವಾಗಿ ಬ್ಯಾಂಕ್ ಅನ್ನು ಸಂಪರ್ಕಿಸುವುದು ಉತ್ತಮ. ಗ್ರಾಹಕರಾದ ನೀವು ಶಾಖೆಗೆ ನಿಮ್ಮ ಅಗತ್ಯವನ್ನು ವಿವರಿಸಬಹುದು. ಹಾಗೆಯೇ 10 ರೂಪಾಯಿ ನೋಟುಗಳು ಲಭ್ಯವಿದೆಯೇ ಎಂದು ಕೇಳಬಹುದು.&lt;/p&gt;&lt;h3&gt;ಆರ್ಬಿಐ ನಿಯಮಗಳು ಏನು ಹೇಳುತ್ತವೆ?&lt;/h3&gt;&lt;p&gt;ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಿಯಮಗಳ ಅಡಿಯಲ್ಲಿ, ಗ್ರಾಹಕರಿಗೆ ಶುದ್ಧ ಮತ್ತು ಚಲಾವಣೆಯಲ್ಲಿರುವ ಓದಬಹುದಾದ ನೋಟುಗಳನ್ನು ಒದಗಿಸಲು ಬ್ಯಾಂಕುಗಳು ವ್ಯವಸ್ಥೆ ಮಾಡುತ್ತವೆ. ಒಂದು ಶಾಖೆಯಲ್ಲಿ 10 ರೂಪಾಯಿ ನೋಟುಗಳ ಬಂಡಲ್ ಸಿಗದಿದ್ದರೆ, ಇನ್ನೊಂದು ಶಾಖೆಯಲ್ಲಿ ಲಭ್ಯತೆಯ ಬಗ್ಗೆ ನೀವು ವಿಚಾರಿಸಬಹುದು. ಬ್ಯಾಂಕಿನಿಂದ ಸಣ್ಣ ನೋಟುಗಳನ್ನು ಪಡೆಯಲು ನಿಮಗೆ ಏಜೆಂಟ್ ಅಥವಾ ಮಧ್ಯವರ್ತಿ ಅಗತ್ಯವಿಲ್ಲ. ಸಣ್ಣ ನೋಟುಗಳ ಬಂಡಲ್ ಅನ್ನು ಖರೀದಿಸುವಾಗ, ನೋಟುಗಳ ಸಂಖ್ಯೆ ಮತ್ತು ಮೌಲ್ಯವನ್ನು ಪರೀಕ್ಷಿಸಬೇಕು. ನೋಟುಗಳು ಅಸಲಿಯೇ, ನಕಲಿಯೇ ಎಂಬುದನ್ನು ಪರೀಕ್ಷಿಸಬೇಕು.&lt;/p&gt;]]></content:encoded>
            <category>money</category>
            <dc:creator>Roopa Hegde</dc:creator>
            <atom:link href="https://kannada.asianetnews.com/business/where-and-how-to-get-bundles-of-10-rupees-notes/articleshow-wmnesx6"/>
        </item>
        <item>
            <title><![CDATA[UIDAI: ಆಧಾರ್ ಕೊಟ್ಟಿದ್ದೀರಾ? ಎಲ್ಲೆಲ್ಲಿ ಬಳಕೆಯಾಗಿದೆ ಗೊತ್ತಾ? ಈಗಲೇ ಚೆಕ್ ಮಾಡಿ!]]></title>
            <link>https://kannada.asianetnews.com/gallery/news-money/aadhaar-misuse-check-aadhaar-authentication-history-maadhaar-app-biometric-lock-uidai-1947-aadhaar-security-tips-bmk-wurm7d4</link>
            <guid isPermaLink="true">https://kannada.asianetnews.com/gallery/news-money/aadhaar-misuse-check-aadhaar-authentication-history-maadhaar-app-biometric-lock-uidai-1947-aadhaar-security-tips-bmk-wurm7d4</guid>
            <pubDate>Fri, 04 Sep 2026 20:33:22 +0530</pubDate>
            <description><![CDATA[&lt;p&gt;ಆಧಾರ್ ನಮ್ಮ ಪ್ರಮುಖ ಗುರುತಿನ ಚೀಟಿಯಾಗಿದ್ದು, ಅದರ ದುರುಪಯೋಗದ ಅಪಾಯವೂ ಹೆಚ್ಚುತ್ತಿದೆ. ನಿಮ್ಮ ಆಧಾರ್ ಅನ್ನು ಕಳೆದ 6 ತಿಂಗಳುಗಳಲ್ಲಿ ಎಲ್ಲೆಲ್ಲಿ ಬಳಸಲಾಗಿದೆ ಎಂಬುದನ್ನು ಪರಿಶೀಲಿಸುವುದು ಹೇಗೆ ಮತ್ತು ದುರ್ಬಳಕೆ ಕಂಡುಬಂದಲ್ಲಿ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸ್ಟೋರಿಯಲ್ಲಿ ವಿವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5vc9bt5cyh5bfwbwbct0g03,imgname-aadhaar-card-benefits-1758634225477.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಧಾರ್ ನಮ್ಮ ಪ್ರಮುಖ ಗುರುತಿನ ಚೀಟಿಯಾಗಿದ್ದು, ಅದರ ದುರುಪಯೋಗದ ಅಪಾಯವೂ ಹೆಚ್ಚುತ್ತಿದೆ. ನಿಮ್ಮ ಆಧಾರ್ ಅನ್ನು ಕಳೆದ 6 ತಿಂಗಳುಗಳಲ್ಲಿ ಎಲ್ಲೆಲ್ಲಿ ಬಳಸಲಾಗಿದೆ ಎಂಬುದನ್ನು ಪರಿಶೀಲಿಸುವುದು ಹೇಗೆ ಮತ್ತು ದುರ್ಬಳಕೆ ಕಂಡುಬಂದಲ್ಲಿ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸ್ಟೋರಿಯಲ್ಲಿ ವಿವರಿಸಲಾಗಿದೆ.&lt;/p&gt;&lt;img&gt;&lt;p&gt;ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ನಮ್ಮ ಪ್ರತಿಯೊಬ್ಬ ಭಾರತೀಯನ ಜೀವನದ ಅತ್ಯಂತ ಪ್ರಮುಖ ಗುರುತಿನ ಚೀಟಿಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ಹೊಸ ಸಿಮ್ ಕಾರ್ಡ್ ಪಡೆಯುವುದು, ಸರ್ಕಾರಿ ಯೋಜನೆಗಳ ಲಾಭ ಪಡೆಯುವುದು ಹಾಗೂ ಪ್ರಯಾಣದ ಸಂದರ್ಭಗಳಲ್ಲಿ ಆಧಾರ್ ಅತ್ಯಗತ್ಯ. ಆಧಾರ್ ನಮ್ಮ ದೈನಂದಿನ ಕೆಲಸಗಳನ್ನು ಸುಲಭಗೊಳಿಸಿದಷ್ಟೇ ವೇಗವಾಗಿ, ಅದರ ದುರುಪಯೋಗ ಮತ್ತು ಡೇಟಾ ಕಳ್ಳತನದ (Data Theft) ಅಪಾಯಗಳೂ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.&lt;/p&gt;&lt;img&gt;&lt;p&gt;ಅನೇಕ ಜನರು ಯಾವುದೇ ರೀತಿಯ ಮುನ್ನೆಚ್ಚರಿಕೆ ವಹಿಸದೆ ಸಿಕ್ಕ ಸಿಕ್ಕ ಫೋಟೋಕಾಪಿ (Xerox) ಅಂಗಡಿಗಳಲ್ಲಿ ತಮ್ಮ ಆಧಾರ್ ಕಾರ್ಡ್&zwnj;ಗಳ ಪ್ರತಿಗಳನ್ನು ನೀಡುತ್ತಾರೆ. ಇನ್ನು ಕೆಲವರು ಅನಧಿಕೃತ ಅಥವಾ ನಕಲಿ ಡಿಜಿಟಲ್ ವೇದಿಕೆಗಳಲ್ಲಿ ತಮ್ಮ ಬೆರಳಚ್ಚು (Biometric) ದೃಢೀಕರಣವನ್ನು ಮಾಡಿ ಹಣಕಾಸಿನ ವಂಚನೆಗೆ ಬಲಿಯಾಗುತ್ತಿದ್ದಾರೆ. ನಿಮ್ಮ ಆಧಾರ್ ಮಾಹಿತಿಯನ್ನು ನಿಮ್ಮ ಅರಿವಿಲ್ಲದೇ ಯಾರಾದರೂ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಭಯ ನಿಮಗಿದ್ದರೆ, ಅದನ್ನು ನೀವೇ ಸ್ವತಃ ಸುಲಭವಾಗಿ ಟ್ರ್ಯಾಕ್ ಮಾಡಬಹುದು.&lt;/p&gt;&lt;img&gt;&lt;p&gt;ನೀವು ಯಾವುದೇ ಸೇವೆಗಾಗಿ OTP, ಫಿಂಗರ್&zwnj;ಪ್ರಿಂಟ್ ಅಥವಾ ಐರಿಸ್ (ಕಣ್ಣಿನ ಸ್ಕ್ಯಾನ್) ಮೂಲಕ ಆಧಾರ್ ದೃಢೀಕರಣ ಮಾಡಿದಾಗಲೆಲ್ಲಾ, ಅದರ ಡಿಜಿಟಲ್ ದಾಖಲೆಯು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ವ್ಯವಸ್ಥೆಯಲ್ಲಿ ತಕ್ಷಣವೇ ನಮೂದಾಗುತ್ತದೆ. ಈ ಸೌಲಭ್ಯದ ಮೂಲಕ ಕಳೆದ 6 ತಿಂಗಳುಗಳಲ್ಲಿ ನಿಮ್ಮ ಆಧಾರ್ ಅನ್ನು ಎ ಎಲ್ಲೆಲ್ಲಿ ಮತ್ತು ಯಾವ ಸಮಯದಲ್ಲಿ ಬಳಸಲಾಗಿದೆ ಎಂಬುದರ ಸಂಪೂರ್ಣ ಪಟ್ಟಿಯನ್ನು ನೀವು ಪರಿಶೀಲಿಸಬಹುದು. ಇದರಿಂದ ನಿಮ್ಮ ಗಮನಕ್ಕೆ ಬಾರದೇ ನಿಮ್ಮ ಆಧಾರ್ ದುರುಪಯೋಗವಾಗಿದ್ದರೆ ತಕ್ಷಣವೇ ಪತ್ತೆ ಹಚ್ಚಬಹುದು.&lt;/p&gt;&lt;img&gt;&lt;p&gt;1. ಮೊದಲಿಗೆ ನಿಮ್ಮ ಮೊಬೈಲ್&zwnj;ನಲ್ಲಿ Google Play Store ಅಥವಾ Apple App Store ನಿಂದ ಅಧಿಕೃತ mAadhaar ಅಪ್ಲಿಕೇಶನ್ ಡೌನ್&zwnj;ಲೋಡ್ ಮಾಡಿ.&lt;/p&gt;&lt;p&gt;2. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಮೂಲಕ ಲಾಗಿನ್ ಪೂರ್ಣಗೊಳಿಸಿ.&lt;/p&gt;&lt;p&gt;3. ಆ್ಯಪ್&zwnj;ನ ಸುರಕ್ಷತೆಗಾಗಿ 4-ಅಂಕಿಯ ರಹಸ್ಯ ಪಿನ್ (PIN) ಒಂದನ್ನು ರಚಿಸಿ.&lt;/p&gt;&lt;p&gt;4. ಆ್ಯಪ್&zwnj;ನಲ್ಲಿ 'My Aadhaar' ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮ್ಮ ಪಿನ್ ನಮೂದಿಸಿ.&lt;/p&gt;&lt;p&gt;5. 'Security' ಟ್ಯಾಬ್ ಅಡಿಯಲ್ಲಿರುವ 'Aadhaar Authentication History' ಆಯ್ಕೆಯನ್ನು ಆಯ್ಕೆಮಾಡಿ.&lt;/p&gt;&lt;p&gt;6. ನೀವು ಪರಿಶೀಲಿಸಲು ಬಯಸುವ ನಿರ್ದಿಷ್ಟ ದಿನಾಂಕ ಅಥವಾ ಸಮಯದ ಅವಧಿಯನ್ನು ನಮೂದಿಸಿದರೆ, ನಿಮ್ಮ ಆಧಾರ್ ಬಳಕೆಯ ಸಂಪೂರ್ಣ ವಿವರ ಪರದೆಯ ಮೇಲೆ ಕಾಣಿಸುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ದೃಢೀಕರಣ ಇತಿಹಾಸದಲ್ಲಿ ನೀವು ಮಾಡದಿರುವ ಯಾವುದೇ ವಹಿವಾಟು ಅಥವಾ ಪರಿಶೀಲನೆ ಕಂಡುಬಂದರೆ, ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ!&lt;/p&gt;&lt;p&gt;1947 ಗೆ ಕರೆ ಮಾಡಿ; ತಕ್ಷಣವೇ UIDAI ನ ಉಚಿತ ಸಹಾಯವಾಣಿ ಸಂಖ್ಯೆ 1947ಕ್ಕೆ ಕರೆ ಮಾಡಿ ದೂರು ನೋಂದಾಯಿಸಿ.&lt;/p&gt;&lt;p&gt;ಬಯೋಮೆಟ್ರಿಕ್ ಲಾಕ್ ಮಾಡಿ; mAadhaar ಆ್ಯಪ್&zwnj;ನಲ್ಲಿರುವ 'Biometrics Lock' ವೈಶಿಷ್ಟ್ಯವನ್ನು ಬಳಸಿ ನಿಮ್ಮ ಫಿಂಗರ್&zwnj;ಪ್ರಿಂಟ್ ಮತ್ತು ಐರಿಸ್ ಡೇಟಾವನ್ನು ಲಾಕ್ ಮಾಡಿ. ಇದರಿಂದ ನಿಮ್ಮ ಅನುಮತಿಯಿಲ್ಲದೆ ಯಾರೂ ಬಯೋಮೆಟ್ರಿಕ್ ಬಳಸಲಾಗುವುದಿಲ್ಲ.&lt;/p&gt;&lt;p&gt;ನಿಯಮಿತ ತಪಾಸಣ; ನಿಮ್ಮ ಆಧಾರ್ ದೃಢೀಕರಣ ಇತಿಹಾಸವನ್ನು ತಿಂಗಳಿಗೆ ಒಮ್ಮೆಯಾದರೂ ಪರಿಶೀಲಿಸುವ ಅಭ್ಯಾಸ ಮಾಡಿಕೊಳ್ಳಿ.&lt;/p&gt;&lt;img&gt;&lt;p&gt;ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ಆಧಾರ್ ಪ್ರತಿ ನೀಡುವಾಗ 'Masked Aadhaar'(ಇದರಲ್ಲಿ ಮೊದಲ 8 ಅಂಕೆಗಳು ಮರೆಯಾಗಿರುತ್ತವೆ) ಬಳಸುವುದು ಅತ್ಯಂತ ಸುರಕ್ಷಿತ. ಅಗತ್ಯವಿಲ್ಲದ ಸಮಯದಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಯಾವಾಗಲೂ ಲಾಕ್ ಮಾಡಿಡಿ. ಅಗತ್ಯ ಬಿದ್ದಾಗ ಆ್ಯಪ್ ಮೂಲಕವೇ ಕೆಲವೇ ಸೆಕೆಂಡುಗಳಲ್ಲಿ ಅನ್&zwnj;ಲಾಕ್ ಮಾಡಿಕೊಳ್ಳಬಹುದು. ಜಾಗರೂಕರಾಗಿರಿ, ನಿಮ್ಮ ಡಿಜಿಟಲ್ ಗುರುತನ್ನು ಸುರಕ್ಷಿತವಾಗಿರಿಸಿಕೊಳ್ಳಿ.&lt;/p&gt;]]></content:encoded>
            <category>money</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/news-money/aadhaar-misuse-check-aadhaar-authentication-history-maadhaar-app-biometric-lock-uidai-1947-aadhaar-security-tips-bmk-wurm7d4"/>
        </item>
    </channel>
</rss>
