<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 15 Jul 2026 18:37:39 +0530</lastBuildDate>
        <atom:link href="https://kannada.asianetnews.com/rss/mandya" rel="self" type="application/rss+xml"/>
        <item>
            <title><![CDATA[ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ; ಮಂಡ್ಯ ಆಟೋ ಚಾಲಕರಿಂದ ಆರ್‌ಟಿಒ ಕಚೇರಿಗೆ ಮುತ್ತಿಗೆ!]]></title>
            <link>https://kannada.asianetnews.com/gallery/karnataka-districts/mandya-auto-drivers-protest-against-rapido-bike-taxi-rto-office-siege-1cgof1e</link>
            <guid isPermaLink="true">https://kannada.asianetnews.com/gallery/karnataka-districts/mandya-auto-drivers-protest-against-rapido-bike-taxi-rto-office-siege-1cgof1e</guid>
            <pubDate>Mon, 22 Jun 2026 16:23:18 +0530</pubDate>
            <description><![CDATA[&lt;p&gt;ಸಕ್ಕರೆ ನಾಡು ಮಂಡ್ಯದಲ್ಲಿ ರ&zwj;್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಜೀವನಾಧಾರಕ್ಕೆ ಹೊಡೆತ ಬಿದ್ದಿದೆ ಎಂದು ಆರೋಪಿಸಿ, ರ&zwj;್ಯಾಪಿಡೋ ಅನುಮತಿ ರದ್ದುಗೊಳಿಸುವಂತೆ ಆರ್&zwnj;ಟಿಒ ಕಚೇರಿಗೆ ಮುತ್ತಿಗೆ ಹಾಕಿ ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqf1k2rjazw75e59ve8wpck,imgname-mandya-rapido-protest-1782125218904.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಕ್ಕರೆ ನಾಡು ಮಂಡ್ಯದಲ್ಲಿ ರ&zwj;್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಜೀವನಾಧಾರಕ್ಕೆ ಹೊಡೆತ ಬಿದ್ದಿದೆ ಎಂದು ಆರೋಪಿಸಿ, ರ&zwj;್ಯಾಪಿಡೋ ಅನುಮತಿ ರದ್ದುಗೊಳಿಸುವಂತೆ ಆರ್&zwnj;ಟಿಒ ಕಚೇರಿಗೆ ಮುತ್ತಿಗೆ ಹಾಕಿ ಆಗ್ರಹಿಸಿದ್ದಾರೆ.&lt;/p&gt;&lt;img&gt;&lt;p&gt;ಸಕ್ಕರೆ ನಾಡು ಮಂಡ್ಯದಲ್ಲಿ ರ&zwj;್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಆಟೋ ಮತ್ತು ಟ್ಯಾಕ್ಸಿ ಚಾಲಕರು ರೊಚ್ಚಿಗೆದ್ದಿದ್ದಾರೆ. ರ&zwj;್ಯಾಪಿಡೋ ಬೈಕ್ ಟ್ಯಾಕ್ಸಿಗಳಿಗೆ ನೀಡಿರುವ ಅನುಮತಿಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿ, ಮಂಡ್ಯದ ಆಟೋ ಮತ್ತು ಟ್ಯಾಕ್ಸಿ ಚಾಲಕರ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.&lt;/p&gt;&lt;img&gt;&lt;p&gt;&lt;strong&gt;ಮಹಾವೀರ ವೃತ್ತದಿಂದ ಆರ್&zwnj;ಟಿಒ ಕಚೇರಿವರೆಗೆ ಮೆರವಣಿಗೆ:&lt;/strong&gt;&lt;/p&gt;&lt;p&gt;ನಗರದ ಪ್ರಮುಖ ಕೇಂದ್ರವಾದ ಮಹಾವೀರ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ನೂರಾರು ಚಾಲಕರು, ಮೆರವಣಿಗೆಯ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (RTO) ಕಚೇರಿಗೆ ತೆರಳಿದರು. ಮೆರವಣಿಗೆಯುದ್ದಕ್ಕೂ ಸರ್ಕಾರದ ಮತ್ತು ರ&zwj;್ಯಾಪಿಡೋ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದ ಚಾಲಕರು, ಆರ್&zwnj;ಟಿಒ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಜೀವನಾಧಾರಕ್ಕೆ ಹೊಡೆತ: ಚಾಲಕರ ಅಳಲು:&lt;/p&gt;&lt;p&gt;ಈಗಾಗಲೇ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಏರಿಕೆಯಿಂದಾಗಿ ನಮ್ಮ ಬದುಕು ದುಸ್ತರವಾಗಿದೆ. ಇದರ ನಡುವೆ ರ&zwj;್ಯಾಪಿಡೋ ಬೈಕ್ ಮತ್ತು ಓಲಾ ಆಟೋಗಳಿಗೆ ಮುಕ್ತವಾಗಿ ಅವಕಾಶ ನೀಡಿರುವುದರಿಂದ ಪ್ರಾಮಾಣಿಕವಾಗಿ ಆಟೋ ಓಡಿಸುವವರು ಬೀದಿಗೆ ಬೀಳುವಂತಾಗಿದೆ. ಬ್ಯಾಂಕ್&zwnj;ಗಳಲ್ಲಿ ಮಾಡಿರುವ ಆಟೋ ಲೋನ್ (EMI) ಕಟ್ಟಲು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ,&quot; ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು.&lt;/p&gt;&lt;img&gt;&lt;p&gt;&lt;strong&gt;ಅಧಿಕಾರಿಗಳಿಗೆ ಎಚ್ಚರಿಕೆ:&lt;/strong&gt;&lt;/p&gt;&lt;p&gt;ಆರ್&zwnj;ಟಿಒ ಕಚೇರಿ ಆವರಣದಲ್ಲಿ ಜಮಾಯಿಸಿದ ಚಾಲಕರು, ಸ್ಥಳಕ್ಕೆ ಬಂದ ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೈಕ್ ಟ್ಯಾಕ್ಸಿಗಳಿಂದಾಗಿ ಸಾರಿಗೆ ನಿಯಮಗಳು ಉಲ್ಲಂಘನೆಯಾಗುತ್ತಿವೆ ಮತ್ತು ಆಟೋ ಚಾಲಕರ ಅನ್ನ ಕಿತ್ತುಕೊಳ್ಳಲಾಗುತ್ತಿದೆ ಎಂದು ದೂರಿದರು. ಕೂಡಲೇ ಈ ಸೇವೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.&lt;/p&gt;&lt;img&gt;&lt;p&gt;&lt;strong&gt;ಭರವಸೆ ಮತ್ತು ಮುಂದಿನ ಹೋರಾಟ:&lt;/strong&gt;&lt;/p&gt;&lt;p&gt;ಮನವಿ ಸ್ವೀಕರಿಸಿದ ಆರ್&zwnj;ಟಿಒ ಅಧಿಕಾರಿಗಳು, ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ, ಚಾಲಕರು &quot;ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಇಡೀ ಜಿಲ್ಲಾದ್ಯಂತ ಬೃಹತ್ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು&quot; ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/mandya-auto-drivers-protest-against-rapido-bike-taxi-rto-office-siege-1cgof1e"/>
        </item>
        <item>
            <title><![CDATA[ಅಂತೂ, ಇಂತೂ ಜಲಾಶಯಗಳಿಗೆ ಬಂತು ಜೀವಕಳೆ.. KRS, ತುಂಗಭದ್ರಾ ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆ]]></title>
            <link>https://kannada.asianetnews.com/gallery/mandya/heavy-rainfall-in-over-all-karnataka-and-krs-dam-tugbhadra-dams-water-level-increased-gkn-3qch70k</link>
            <guid isPermaLink="true">https://kannada.asianetnews.com/gallery/mandya/heavy-rainfall-in-over-all-karnataka-and-krs-dam-tugbhadra-dams-water-level-increased-gkn-3qch70k</guid>
            <pubDate>Tue, 07 Jul 2026 10:37:41 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಗಳಿಗೆ ಜಲಾಭಿಷೇಕ ಆಗಿದೆ. ಹೊಸ ಜೀವಕಳೆಯೊಂದಿಗೆ ಮೈದುಂಬಿ ನಿಂತಿವೆ. ಕೆಆರ್&zwj;&zwnj;ಎಸ್, ತುಂಗಭದ್ರಾ ಜಲಾಶಯದ ನೀರಿನ ಮಟ್ಟದ ಇಂದಿನ ಸ್ಥಿತಿ ಹೇಗಿದೆ ಅನ್ನೋದ್ರ ವಿವರ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jz3rcr9dcn4rmye4wb1c47wc,imgname-krs-dam-1751399162156.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಗಳಿಗೆ ಜಲಾಭಿಷೇಕ ಆಗಿದೆ. ಹೊಸ ಜೀವಕಳೆಯೊಂದಿಗೆ ಮೈದುಂಬಿ ನಿಂತಿವೆ. ಕೆಆರ್&zwj;&zwnj;ಎಸ್, ತುಂಗಭದ್ರಾ ಜಲಾಶಯದ ನೀರಿನ ಮಟ್ಟದ ಇಂದಿನ ಸ್ಥಿತಿ ಹೇಗಿದೆ ಅನ್ನೋದ್ರ ವಿವರ ಇಲ್ಲಿದೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಮಲೆನಾಡು, ಕೊಡಗು ಹಾಗೂ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಸುಡುತ್ತಿದ್ದ ಬಿಸಿಲಿಗೆ ಬತ್ತಿ ಹೋಗುತ್ತಿದ್ದ ಜಲಾಶಯಗಳಿಗೆ ಈಗ ಮಳೆರಾಯ ಜೀವಕಳೆ ತಂದಿದ್ದಾನೆ. ನದಿಗಳ ಹರಿವು ಹೆಚ್ಚಾಗಿ ಜಲಾಶಯಗಳು ಭರ್ತಿಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ನಾಡಿನ ಅನ್ನದಾತರ ಮೊಗದಲ್ಲಿ ಸಂತೋಷದ ಚಿಲುಮೆ ಮೂಡಿದೆ.&lt;/p&gt;&lt;img&gt;&lt;p&gt;ಮಲೆನಾಡಿನಲ್ಲಿ ಮಳೆ ಸತತವಾಗಿ ಸುರಿಯುತ್ತಿರುವುದರಿಂದ ಶಿವಮೊಗ್ಗದ ತುಂಗಾ ಜಲಾಶಯಕ್ಕೆ ಬೃಹತ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವನ್ನು ತಲುಪಿದ್ದು, ನದಿಗೆ ಹೆಚ್ಚಿನ ನೀರನ್ನು ಬಿಡಲಾಗುತ್ತಿದೆ.&lt;/p&gt;&lt;ul&gt; &lt;li&gt;ಗರಿಷ್ಠ ಮಟ್ಟ: 588.24 ಮೀಟರ್&lt;/li&gt; &lt;li&gt;ಇಂದಿನ ಮಟ್ಟ: 588.24 ಮೀಟರ್ (ಸಂಪೂರ್ಣ ಭರ್ತಿ)&lt;/li&gt; &lt;li&gt;ಒಳಹರಿವು: 21,508 ಕ್ಯೂಸೆಕ್&lt;/li&gt; &lt;li&gt;ಹೊರಹರಿವು: 19,078 ಕ್ಯೂಸೆಕ್&lt;/li&gt; &lt;li&gt;ಪ್ರಸ್ತುತ ನೀರಿನ ಸಂಗ್ರಹ: 2.411 ಟಿಎಂಸಿ&lt;/li&gt;&lt;/ul&gt;&lt;img&gt;&lt;p&gt;ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಕಾವೇರಿ ನದಿಯ ಒಳಹರಿವು ಹೆಚ್ಚಾಗಿದೆ. ಇದರಿಂದ ಕೆಆರ್&zwnj;ಎಸ್ ಜಲಾಶಯದ ನೀರಿನ ಮಟ್ಟ ಕಳೆದ ಎರಡು ದಿನಗಳಲ್ಲಿ ಭರ್ತಿ 2 ಅಡಿಗಳಷ್ಟು ಏರಿಕೆಯಾಗಿದೆ. ಇದು ಮೈಸೂರು ಮತ್ತು ಮಂಡ್ಯ ಭಾಗದ ರೈತರ ಮೊಗದಲ್ಲಿ ನಗು ತಂದಿದೆ.&lt;/p&gt;&lt;ul&gt; &lt;li&gt;ಗರಿಷ್ಠ ಮಟ್ಟ: 124.80 ಅಡಿ&lt;/li&gt; &lt;li&gt;ಇಂದಿನ ಮಟ್ಟ: 82.45 ಅಡಿ (ಎರಡು ದಿನದಲ್ಲಿ 2 ಅಡಿ ಏರಿಕೆ)&lt;/li&gt; &lt;li&gt;ಒಳಹರಿವು: 5,734 ಕ್ಯೂಸೆಕ್&lt;/li&gt; &lt;li&gt;ಹೊರಹರಿವು: 777 ಕ್ಯೂಸೆಕ್&lt;/li&gt; &lt;li&gt;ಪ್ರಸ್ತುತ ನೀರಿನ ಸಂಗ್ರಹ: 11.909 ಟಿಎಂಸಿ&lt;/li&gt;&lt;/ul&gt;&lt;img&gt;&lt;p&gt;ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೂ ಈಗ ಹೊಸ ನೀರಿನ ಹರಿವು ಶುರುವಾಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 3 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗುತ್ತಿದ್ದು, ಒಣಗುತ್ತಿದ್ದ ನದಿ ಪಾತ್ರಕ್ಕೆ ಮಳೆರಾಯ ಹೊಸ ಕಳೆ ನೀಡಿದ್ದಾನೆ.&lt;/p&gt;&lt;ul&gt; &lt;li&gt;ಇಂದಿನ ಮಟ್ಟ: 1587.92 ಅಡಿ&lt;/li&gt; &lt;li&gt;ಪ್ರಸ್ತುತ ಒಳಹರಿವು: 2,150 ಕ್ಯೂಸೆಕ್&lt;/li&gt; &lt;li&gt;ಪ್ರಸ್ತುತ ನೀರಿನ ಸಂಗ್ರಹ: 9.379 ಟಿಎಂಸಿ&lt;/li&gt;&lt;/ul&gt;&lt;p&gt;ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 77.343 ಟಿಎಂಸಿ ನೀರಿತ್ತು. ಈ ಬಾರಿ ಮಳೆ ತಡವಾಗಿದ್ದರೂ, ಈಗ ಒಳಹರಿವು ಆರಂಭವಾಗಿರುವುದು ಆಶಾದಾಯಕವಾಗಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ. ಎಲ್ಲಾ ಜಲಾಶಯಗಳು ಆದಷ್ಟು ಬೇಗ ಭರ್ತಿಯಾಗಲಿ, ಈ ಬಾರಿ ನಾಡು ಸುಭಿಕ್ಷವಾಗಿರಲಿ ಎನ್ನುವುದು ರಾಜ್ಯದ ರೈತರ ಏಕೈಕ ಪ್ರಾರ್ಥನೆಯಾಗಿದೆ.&lt;/p&gt;]]></content:encoded>
            <category>mandya</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/mandya/heavy-rainfall-in-over-all-karnataka-and-krs-dam-tugbhadra-dams-water-level-increased-gkn-3qch70k"/>
        </item>
        <item>
            <title><![CDATA[KRS ಒಳಹರಿವಿನಲ್ಲಿ ಭಾರೀ ಕುಸಿತ, ರೈತರಲ್ಲಿ ಮನೆ ಮಾಡಿದ ಆತಂಕ..!]]></title>
            <link>https://kannada.asianetnews.com/mandya/big-shocking-news-for-karnataka-farmers-krs-dam-water-inflow-decreased-gkn/articleshow-483vzy4</link>
            <guid isPermaLink="true">https://kannada.asianetnews.com/mandya/big-shocking-news-for-karnataka-farmers-krs-dam-water-inflow-decreased-gkn/articleshow-483vzy4</guid>
            <pubDate>Tue, 14 Jul 2026 10:25:25 +0530</pubDate>
            <description><![CDATA[&lt;p&gt;ಕಳೆದ ಒಂದು ವಾರದ ಹಿಂದೆ ಆರ್ಭಟಿಸಿದ್ದ ಮಳೆರಾಯ ಮತ್ತೆ ರಾಜ್ಯದಲ್ಲಿ ಕಳೆದು ಹೋಗಿದ್ದಾನೆ. ಪರಿಣಾಮ ರಾಜ್ಯದ ಜಲಾಶಯಗಳಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆ ಆಗಿದೆ. ಕೆಆರ್&zwj;&zwnj;ಎಸ್ ಡ್ಯಾಂ ಕುರಿತ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hbymm9vm2rg5xb7bsw5ftwcw,imgname-ffbbffb.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ (KRS) ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದು ಕೇವಲ ಅನ್ನದಾತರ ಆತಂಕಕ್ಕೆ ಕಾರಣವಾಗಿರುವುದಲ್ಲದೆ, ಕಾವೇರಿ ನಂಬಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕುಡಿಯುವ ನೀರಿನ ಸಂಕಷ್ಟ ಎದುರಾಗುವ ಮುನ್ಸೂಚನೆ ನೀಡಿದೆ.&lt;/p&gt;&lt;h2&gt;&lt;strong&gt;ಒಳಹರಿವಿನಲ್ಲಿ ಕುಸಿತ&lt;/strong&gt;&lt;/h2&gt;&lt;p&gt;ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಕೆಆರ್&zwnj;ಎಸ್ ಡ್ಯಾಂಗೆ ಬರುವ ನೀರಿನ ಪ್ರಮಾಣ 12 ಸಾವಿರ ಕ್ಯೂಸೆಕ್ ದಾಟಿತ್ತು. ಈಗ ಮಳೆ ಬಿಡುವು ನೀಡಿರುವುದರಿಂದ ಒಳಹರಿವು ಗಣನೀಯವಾಗಿ ಕುಸಿದಿದೆ. ನಿನ್ನೆ 7500 ಕ್ಯೂಸೆಕ್ ಇದ್ದ ಒಳಹರಿವು ಇಂದು ಕೇವಲ 3685 ಕ್ಯೂಸೆಕ್ ಗೆ ಇಳಿಕೆಯಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಮುಂಗಾರು ಆರಂಭದಲ್ಲಿ ಸುರಿದ ಮಳೆ ನೋಡಿ ರೈತರು ಕೃಷಿ ಚಟುವಟಿಕೆಗಳಿಗೆ ಸಜ್ಜಾಗಿದ್ದರು. ಈಗ ಡ್ಯಾಂ ಒಳಹರಿವು ಕುಸಿದಿರುವುದು ರೈತರ ನಿದ್ದೆಗೆಡಿಸಿದೆ. ಬೆಳೆಗಳಿಗೆ ನೀರು ಸಿಗುತ್ತದೆಯೇ ಇಲ್ಲವೇ ಎಂಬ ಆತಂಕ ಮಂಡ್ಯ ಭಾಗದ ರೈತರಲ್ಲಿ ಮನೆಮಾಡಿದೆ.&lt;/p&gt;&lt;h3&gt;&lt;strong&gt;ಬೆಂಗಳೂರಿಗರಿಗೂ ತಪ್ಪದ ಸಂಕಷ್ಟ&lt;/strong&gt;&lt;/h3&gt;&lt;p&gt;ಕೆಆರ್&zwnj;ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ಬೆಂಗಳೂರು ನಗರದ ಪಾಲಿಗೆ ಕೆಟ್ಟ ಸುದ್ದಿಯಾಗಿದೆ. ಬೆಂಗಳೂರಿನ ಬಹುತೇಕ ಭಾಗಗಳಿಗೆ ಕುಡಿಯುವ ನೀರು ಪೂರೈಕೆಯಾಗುವುದು ಇದೇ ಕಾವೇರಿ ನದಿಯಿಂದ. ಸದ್ಯ ಕುಡಿಯುವ ಉದ್ದೇಶಕ್ಕಾಗಿ ಜಲಾಶಯದಿಂದ 623 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಂದು ವೇಳೆ ಮಳೆ ಮತ್ತೆ ಚುರುಕುಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ಜಲಾಶಯದ ಇಂದಿನ ಸ್ಥಿತಿಗತಿ:&lt;/strong&gt;&lt;/h3&gt;&lt;ul&gt; &lt;li&gt;ಗರಿಷ್ಠ ಮಟ್ಟ: 124.80 ಅಡಿ.&lt;/li&gt; &lt;li&gt;ಇಂದಿನ ಮಟ್ಟ: 92.54 ಅಡಿ.&lt;/li&gt; &lt;li&gt;ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ.&lt;/li&gt; &lt;li&gt;ಸದ್ಯದ ನೀರಿನ ಸಂಗ್ರಹ: 17.509 ಟಿಎಂಸಿ.&lt;/li&gt; &lt;li&gt;ಇಂದಿನ ಒಳಹರಿವು: 3685 ಕ್ಯೂಸೆಕ್.&lt;/li&gt; &lt;li&gt;ಇಂದಿನ ಹೊರಹರಿವು: 623 ಕ್ಯೂಸೆಕ್.&lt;/li&gt;&lt;/ul&gt;&lt;p&gt;ಒಟ್ಟಾರೆಯಾಗಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದು ಇತ್ತ ರೈತರಿಗೂ ಅತ್ತ ಕುಡಿಯುವ ನೀರು ಅವಲಂಬಿಸಿರುವ ಸಾರ್ವಜನಿಕರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜೂನ್ ತಿಂಗಳಲ್ಲಿ ಮಳೆ ಮತ್ತೆ ಚುರುಕಾಗದಿದ್ದರೆ ಸಂಕಷ್ಟ ಅನಿವಾರ್ಯ ಎಂಬಂತಾಗಿದೆ.&lt;/p&gt;]]></content:encoded>
            <category>mandya</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mandya/big-shocking-news-for-karnataka-farmers-krs-dam-water-inflow-decreased-gkn/articleshow-483vzy4"/>
        </item>
        <item>
            <title><![CDATA[ಮಂಡ್ಯ: ನಡುರಸ್ತೆಯಲ್ಲೇ ಲಾರಿ ಚಾಲಕನ ಮೇಲೆ ಪ್ರಭಾವಿಯ ಪುತ್ರ ಮತ್ತು ಗ್ಯಾಂಗ್‌ನಿಂದ ಗುಂಡಿನ ದಾಳಿ, ದರೋಡೆ ಯತ್ನ!]]></title>
            <link>https://kannada.asianetnews.com/karnataka-districts/mandya-highway-horror-businessman-son-gun-fires-at-container-driver-in-daring-robbery-attempt-gdp/articleshow-5xukydf</link>
            <guid isPermaLink="true">https://kannada.asianetnews.com/karnataka-districts/mandya-highway-horror-businessman-son-gun-fires-at-container-driver-in-daring-robbery-attempt-gdp/articleshow-5xukydf</guid>
            <pubDate>Fri, 03 Jul 2026 08:48:00 +0530</pubDate>
            <description><![CDATA[ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, ಪ್ರಭಾವಿ ಉದ್ಯಮಿಯೊಬ್ಬನ ಪುತ್ರ ಮತ್ತು ಆತನ ಗ್ಯಾಂಗ್ ಔಷಧ ಸಾಗಿಸುತ್ತಿದ್ದ ಕಂಟೇನರ್ ಲಾರಿ ಚಾಲಕನ ಮೇಲೆ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ್ದಾರೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಅಕ್ರಮ ಗನ್ ಬಳಸಿದ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khwh2ngekb4mqw5z3yenmdx4,imgname-tamil-news--51--1771557705230.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗುವಂತಹ ಘಟನೆಯೊಂದು ನಡೆದಿದೆ. ಮಂಡ್ಯದ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀಮಂತಿಕೆಯ ಅಮಲಿನಲ್ಲಿರುವ ಪ್ರಭಾವಿ ವ್ಯಕ್ತಿಯೊಬ್ಬನ ಪುತ್ರ ಹಾಗೂ ಆತನ ಗ್ಯಾಂಗ್, ಔಷಧ ತುಂಬಿದ ಕಂಟೇನರ್ ಲಾರಿ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.&lt;/p&gt;&lt;h2&gt;ಮುಂಜಾನೆ 4 ಗಂಟೆಗೆ ಹೈವೆಯಲ್ಲಿ ನಡೆದಿದ್ದೇನು?&lt;/h2&gt;&lt;p&gt;ನಿನ್ನೆ ಮುಂಜಾನೆ ಸುಮಾರು 4 ಗಂಟೆಯ ಅವಧಿಯಲ್ಲಿ ಈ ದರೋಡೆ ಯತ್ನ ನಡೆದಿದೆ. ಬೆಂಗಳೂರಿನಿಂದ ಮೆಡಿಸಿನ್ (ಔಷಧ) ಲೋಡ್ ಮಾಡಿಕೊಂಡು ಮಂಡ್ಯದ ಕಡೆಗೆ ಬರುತ್ತಿದ್ದ ಕಂಟೇನರ್ ಲಾರಿಯನ್ನು ಐಷಾರಾಮಿ ಕಾರಿನಲ್ಲಿ ಬಂದ ಐದು ಮಂದಿ ಯುವಕರ ತಂಡ ಅಡ್ಡಗಟ್ಟಲು ಯತ್ನಿಸಿದೆ. ಕಂಟೇನರ್&zwnj;ನಲ್ಲಿ ಮೈಸೂರು ಮೂಲದ ಚಾಲಕನೊಬ್ಬನೇ ಇದ್ದು, ಮುಂಜಾನೆಯ ನಿರ್ಜನ ರಸ್ತೆಯಲ್ಲಿ ಕಾರಿನಲ್ಲಿದ್ದವರ ವರ್ತನೆ ಕಂಡು ಆತ ಲಾರಿ ನಿಲ್ಲಿಸದೆ ಮುಂದೆ ಚಲಾಯಿಸಿದ್ದಾನೆ.&lt;/p&gt;&lt;p&gt;ಇದರಿಂದ ಆಕ್ರೋಶಗೊಂಡ ಐಷಾರಾಮಿ ಕಾರಿನಲ್ಲಿದ್ದ ಪ್ರಭಾವಿ ಉದ್ಯಮಿಯ ಪುತ್ರ, ತನ್ನ ಬಳಿಯಿದ್ದ ಗನ್&zwnj;ನಿಂದ ನೇರವಾಗಿ ಚಾಲಕನತ್ತ ಗುಂಡು ಹಾರಿಸಿ ತನ್ನ ಕ್ರೌರ್ಯ ಮೆರೆದಿದ್ದಾನೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತೀವ್ರ ಭಯಭೀತರಾದ ಚಾಲಕ, ಪ್ರಾಣಭಯದಿಂದ ತಕ್ಷಣ ಅಲ್ಲಿಂದ ಹೊರಟು ಹೋಗಿದ್ದ ಎನ್ನಲಾಗಿದೆ.&lt;/p&gt;&lt;h2&gt;ಬಾಯಿಂದ ಬಾಯಿಗೆ ಹರಡಿದ ಸುದ್ದಿ: ಎಚ್ಚೆತ್ತ ಪೊಲೀಸರು&lt;/h2&gt;&lt;p&gt;ಘಟನೆ ನಡೆದು ಕೆಲ ಗಂಟೆಗಳ ಕಾಲ ಯಾರಿಗೂ ತಿಳಿಯದಿದ್ದರೂ, ನಂತರ ಸಾರ್ವಜನಿಕ ವಲಯದಲ್ಲಿ ಈ ವಿಷಯ ಬಾಯಿಂದ ಬಾಯಿಗೆ ಹರಡತೊಡಗಿತು. ವಿಷಯದ ಗಂಭೀರತೆಯನ್ನು ಅರಿತು ಎಚ್ಚೆತ್ತ ಮಂಡ್ಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಘಟನೆಯ ಮುಖ್ಯ ಸೂತ್ರಧಾರ ಎನ್ನಲಾದ ಮಂಡ್ಯದ ಪ್ರಭಾವಿ ಉದ್ಯಮಿಯನ್ನು ಜೊತೆಗೆ ಆತನ ಪುಂಡ ಪುತ್ರನನ್ನು ತಡರಾತ್ರಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಮಂಡ್ಯ ಡಿವೈಎಸ್ಪಿ (DYSP) ಕಚೇರಿಯಲ್ಲಿ ಆರೋಪಿಯ ತೀವ್ರ ವಿಚಾರಣೆ ನಡೆದಿದೆ ಎಂದು ವರದಿ ತಿಳಿಸಿದೆ.&lt;/p&gt;&lt;h2&gt;ಲೈಸೆನ್ಸ್ ಇಲ್ಲದ ಅಕ್ರಮ ಗನ್: ಪೊಲೀಸರಿಗೇ ಸವಾಲು!&lt;/h2&gt;&lt;p&gt;ಈ ಇಡೀ ಪ್ರಕರಣದಲ್ಲಿ ಅತ್ಯಂತ ಆತಂಕಕಾರಿ ವಿಷಯವೆಂದರೆ ಆರೋಪಿ ಬಳಸಿರುವ ಅಕ್ರಮ ಮಾರಕಾಸ್ತ್ರ. ಬಂಧಿತ ಉದ್ಯಮಿ ಪುತ್ರನ ಬಳಿ ಯಾವುದೇ ಅಧಿಕೃತ ಗನ್ ಲೈಸೆನ್ಸ್ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಿದ್ದಲ್ಲಿ, ಆತನಿಗೆ ಈ ಮಾರಕ ಗನ್ ಸಿಕ್ಕಿದ್ದಾದರೂ ಎಲ್ಲಿಂದ? ಮಂಡ್ಯದ ಯುವಕರಿಗೆ ಇಷ್ಟೊಂದು ಸುಲಭವಾಗಿ ಅಕ್ರಮ ಶಸ್ತ್ರಾಸ್ತ್ರಗಳು ಸರಬರಾಜಾಗುತ್ತಿವೆಯೇ? ಮುಂಜಾನೆ 4 ಗಂಟೆಗೆ ಆ ಐಷಾರಾಮಿ ಕಾರಿನಲ್ಲಿ ಉದ್ಯಮಿ ಪುತ್ರ ಮತ್ತು ಗ್ಯಾಂಗ್ ಹೆದ್ದಾರಿಯಲ್ಲಿ ಹೊಂಚು ಹಾಕಿ ನಿಂತಿದ್ದರ ಅಸಲಿ ಉದ್ದೇಶವೇನು? ಎಂಬ ಹತ್ತಾರು ಪ್ರಶ್ನೆಗಳು ಈಗ ತನಿಖಾಧಿಕಾರಿಗಳ ಮುಂದಿವೆ.&lt;/p&gt;&lt;h2&gt;ಮಂಡ್ಯ ಪುಡಾರಿಗಳ ತಾಣವಾಗುತ್ತಿದೆಯೇ?&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಮಂಡ್ಯದಲ್ಲಿ ರಾಜಕೀಯ ಹಾಗೂ ಹಣದ ಪ್ರಭಾವ ಇರುವ ಯುವಕರ ಪುಂಡಾಟಿಕೆ ಮಿತಿಮೀರುತ್ತಿದೆ. &quot;ನಮ್ಮನ್ನು ಕೇಳುವವರೇ ಇಲ್ಲ&quot; ಎಂಬಂತೆ ವರ್ತಿಸುತ್ತಿರುವ ಪುಡಿ ರೌಡಿಗಳು ಮತ್ತು ಶ್ರೀಮಂತರ ಮಕ್ಕಳು ಮಂಡ್ಯ ಪೊಲೀಸರಿಗೇ 'ಡೋಂಟ್ ಕೇರ್' ಎನ್ನುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಈಗ ನಡೆದಿರುವ ಉದ್ಯಮಿ ಪುತ್ರನ ದರೋಡೆ ಯತ್ನ ಮತ್ತು ಗುಂಡಿನ ದಾಳಿ ಯತ್ನದ ಪ್ರಕರಣ ಇದಕ್ಕೆ ಜೀವಂತ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mandya-highway-horror-businessman-son-gun-fires-at-container-driver-in-daring-robbery-attempt-gdp/articleshow-5xukydf"/>
        </item>
        <item>
            <title><![CDATA[ಹಾವೇರಿ ಬೆಳಗಾವಿ ಬಳಿಕ ಮತ್ತೆರಡು ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಚಿಂತನೆ,  ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?]]></title>
            <link>https://kannada.asianetnews.com/state/cloud-seeding-considered-for-mysuru-and-mandya-due-to-rainfall-deficit-rav/articleshow-68idwc1</link>
            <guid isPermaLink="true">https://kannada.asianetnews.com/state/cloud-seeding-considered-for-mysuru-and-mandya-due-to-rainfall-deficit-rav/articleshow-68idwc1</guid>
            <pubDate>Mon, 13 Jul 2026 08:30:19 +0530</pubDate>
            <description><![CDATA[ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿದ್ದರಿಂದ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಈ ನೀರಿನ ಕೊರತೆಯನ್ನು ನೀಗಿಸಲು, ಮೈಸೂರು ಮತ್ತು ಮಂಡ್ಯ ಭಾಗದಲ್ಲಿ ಮೋಡ ಬಿತ್ತನೆ ಮೂಲಕ ಕೃತಕ ಮಳೆ ಸುರಿಸಲು ಸರ್ಕಾರ ತಜ್ಞರ ಅಭಿಪ್ರಾಯವನ್ನು ಕೋರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcpjsa78wx8bzvxzqp5tb2c,imgname-----------------------2026-07-13t082532.235-1783911507271.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13)&lt;/strong&gt;: ಕಳೆದ ಮೂರು ದಿನಗಳಿಂದ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸಿದ್ದು, ಜಲಾಶಯ ಭರ್ತಿಯಾಗಲು ಇನ್ನೂ 13 ಅಡಿಗಳಷ್ಟು ನೀರಿನ ಹರಿವು ಬರಬೇಕಾಗಿದೆ. ಹಾಗಾಗಿ ಮೈಸೂರು, ಮಂಡ್ಯ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.&lt;/p&gt;&lt;p&gt;ಅಲ್ಲದೆ, ಕಳೆದ ಎರಡು ದಿನಗಳಿಂದ ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಕಂಡು ಬಂದಿದೆ. ಹೀಗಾಗಿ, ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕೂಡ ಕುಸಿತವಾಗಿದೆ. ಇದರ ಪರಿಣಾಮವಾಗಿ ಹಾರಂಗಿ ಅಣೆಕಟ್ಟು ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಕೃಷಿ ಚಟುವಟಿಕೆ ನಡೆಸಲು ಕೊಳವೆಬಾವಿ ನೀರನ್ನು ಅವಲಂಬಿಸುವಂತಾಗಿದೆ.&lt;/p&gt;&lt;p&gt;ಪ್ರಸಕ್ತ ನೀರಿನ ಕೊರತೆ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ ಭಾಗದಲ್ಲಿ ಮೋಡ ಬಿತ್ತನೆ ಮೂಲಕ ಮಳೆ ಸುರಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ತಜ್ಞರ ಅಭಿಮತ ಕೋರಿದೆ ಎಂದು ಹಿರಿಯ ಭೂವಿಜ್ಞಾನಿ ಡಾ.ಎಚ್.ಎಸ್.ಎಂ ಪ್ರಕಾಶ್ ತಿಳಿಸಿದ್ದಾರೆ.&lt;/p&gt;&lt;h2&gt;ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ&lt;/h2&gt;&lt;ul&gt; &lt;li&gt;ಕಬಿನಿ 57% 2284 2268.93&lt;/li&gt; &lt;li&gt;ಹೇಮಾವತಿ 58% 2922 2902.85&lt;/li&gt; &lt;li&gt;ತುಂಗಭದ್ರಾ 20% 1633 1599.55&lt;/li&gt; &lt;li&gt;ಸೂಪಾ(ಮೀ.) 25% 564 529.25&lt;/li&gt; &lt;li&gt;ಕೆಆರ್&zwnj;ಎಸ್ 32% 124.80 86.80&lt;/li&gt; &lt;li&gt;ಘಟಪ್ರಭಾ 36% 2175 2123.15&lt;/li&gt; &lt;li&gt;ಲಿಂಗನಮಕ್ಕಿ 20% 1819.12 1762.70&lt;/li&gt; &lt;li&gt;ಭದ್ರಾ 44% 2158.00 2118.82&lt;/li&gt; &lt;li&gt;ಹಾರಂಗಿ 56% 2859 2844.95&lt;/li&gt; &lt;li&gt;ಆಲಮಟ್ಟಿ(ಮೀ.) 58% 519.60 515.85&lt;/li&gt; &lt;li&gt;ನಾರಾಯಣಪುರ(ಮೀ.) 59% 492.25 488.72&lt;/li&gt; &lt;li&gt;ಮಲಪ್ರಭಾ 32% 2079.50 2053.80&lt;/li&gt;&lt;/ul&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cloud-seeding-considered-for-mysuru-and-mandya-due-to-rainfall-deficit-rav/articleshow-68idwc1"/>
        </item>
        <item>
            <title><![CDATA[Mandya Tourism: ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಐವರ ಜಲಸಮಾಧಿ; ಫೋಟೋ ಕ್ರೇಜ್‌ಗೆ ಒಂದೇ ಕುಟುಂಬದವರ ಸಾವು!]]></title>
            <link>https://kannada.asianetnews.com/karnataka-districts/mandya-tourist-spot-muthathi-cauvery-river-drowning-five-of-family-dead/articleshow-7py3q8l</link>
            <guid isPermaLink="true">https://kannada.asianetnews.com/karnataka-districts/mandya-tourist-spot-muthathi-cauvery-river-drowning-five-of-family-dead/articleshow-7py3q8l</guid>
            <pubDate>Wed, 24 Jun 2026 20:18:32 +0530</pubDate>
            <description><![CDATA[&lt;p&gt;ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ನಡೆದ ಭೀಕರ ದುರಂತದಲ್ಲಿ, ಚನ್ನಪಟ್ಟಣ ಮೂಲದ ಒಂದೇ ಕುಟುಂಬದ ಐವರು ಸದಸ್ಯರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ದೇವರ ದರ್ಶನದ ನಂತರ ನದಿಯ ಬಳಿ ಫೋಟೋ ತೆಗೆಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvx1n371xv88cknjm0nzp62k,imgname-mandya-muthathi-kaveri-river-tragedy-1782312504545.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜೂ.24): ಜಿ&lt;/strong&gt;ಲ್ಲೆಯ ಮಳವಳ್ಳಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯಕ್ಷೇತ್ರ ಮುತ್ತತ್ತಿಯಲ್ಲಿ ಬುಧವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದೆ. ಕಾವೇರಿ ನದಿಯಲ್ಲಿ ಫೋಟೋ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ಐವರು ಸದಸ್ಯರು ನದಿ ಪಾಲಾಗಿದ್ದಾರೆ. ಈ ಮನಕಲಕುವ ಘಟನೆಯು ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ.&lt;/p&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ಕುಟುಂಬ ಮುತ್ತತ್ತಿಯ ಪ್ರಸಿದ್ಧ ಮುತ್ತತ್ತಿರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿತ್ತು. ದೇವರ ದರ್ಶನ ಮುಗಿಸಿದ ಕುಟುಂಬದ ಸದಸ್ಯರು, ಸಂಜೆ ಸುಮಾರು 4.45 ರ ಸುಮಾರಿಗೆ ಮುತ್ತತ್ತಿಯ ಪಕ್ಕದಲ್ಲಿ ಹರಿಯುವ ಕಾವೇರಿ ನದಿ ತೀರಕ್ಕೆ ತೆರಳಿದ್ದಾರೆ. ನದಿಯ ಹರಿವಿನ ಮಧ್ಯೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಮೃತರ ವಿವರ:&lt;/strong&gt;&lt;/h2&gt;&lt;p&gt;ಈ ಜಲಸಮಾಧಿಯಲ್ಲಿ ಮೃತಪಟ್ಟವರೆಲ್ಲರೂ ಚನ್ನಪಟ್ಟಣದ ಒಂದೇ ಕುಟುಂಬದವರು ಎಂದು ಗುರುತಿಸಲಾಗಿದೆ. ಮೃತರನ್ನು ವಿಜಯಮ್ಮ (50), ಶ್ವೇತಾ (38), ಪ್ರಿಯಾಂಕ (28), ಚೈತ್ರ (20) ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಫೋಟೋ ತೆಗೆದುಕೊಳ್ಳುವ ಆತುರದಲ್ಲಿ ಅಥವಾ ನದಿಯ ಆಳ ತಿಳಿಯದೆ ಒಬ್ಬರು ನೀರಿಗೆ ಜಾರಿದ್ದು, ಅವರನ್ನು ಉಳಿಸಲು ಹೋದ ಉಳಿದವರು ಕೂಡ ನೀರಿನ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ಕಾರ್ಯಾಚರಣೆ ಮತ್ತು ಪೊಲೀಸ್ ಭೇಟಿ:&lt;/strong&gt;&lt;/h2&gt;&lt;p&gt;ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಪ್ರವಾಸಿಗರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಹಲಗೂರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಲೇ ಕಾರ್ಯಾಚರಣೆ ಆರಂಭಿಸಿ ಐವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಸ್ತುತ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.&lt;/p&gt;&lt;p&gt;ಮುತ್ತತ್ತಿಯ ಕಾವೇರಿ ನದಿ ಸ್ಥಳದಲ್ಲಿ ಈ ಹಿಂದೆಯೂ ಇಂತಹ ಅನೇಕ ಅಪಾಯಕಾರಿ ಘಟನೆಗಳು ನಡೆದಿವೆ. &amp;nbsp;ಆದರೂ ಪ್ರವಾಸಿಗರು ಎಚ್ಚರಿಕೆ ಫಲಕಗಳನ್ನು ನಿರ್ಲಕ್ಷಿಸಿ ನೀರಿಗಿಳಿಯುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ. ದೇವರಿಗೆ ಬಂದ ಸಂಭ್ರಮದಲ್ಲಿದ್ದ ಕುಟುಂಬವೊಂದು ಈಗ ಮಸಣ ಸೇರಿರುವುದು ಚನ್ನಪಟ್ಟಣದಲ್ಲಿ ಶೋಕದ ಛಾಯೆ ಮೂಡಿಸಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mandya-tourist-spot-muthathi-cauvery-river-drowning-five-of-family-dead/articleshow-7py3q8l"/>
        </item>
        <item>
            <title><![CDATA[ಮಳೆ ಬರದಿದ್ದರೆ ಬೆಂಗಳೂರಿಗೆ ತೀವ್ರ ಜಲ ಕಂಟಕ: ಕಾವೇರಿ ನೀರಿಗಾಗಿ ಜಲಮಂಡಳಿ ಭವಿಷ್ಯದ ಹೆಜ್ಜೆ!]]></title>
            <link>https://kannada.asianetnews.com/karnataka-districts/bengaluru-water-crisis-bwssb-seeks-9-56-tmc-cauvery-water-gdp/articleshow-bm5uztl</link>
            <guid isPermaLink="true">https://kannada.asianetnews.com/karnataka-districts/bengaluru-water-crisis-bwssb-seeks-9-56-tmc-cauvery-water-gdp/articleshow-bm5uztl</guid>
            <pubDate>Mon, 22 Jun 2026 12:09:35 +0530</pubDate>
            <description><![CDATA[ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ದುರ್ಬಲ ಮುಂಗಾರಿನಿಂದಾಗಿ ಜಲಸಂಕಷ್ಟದ ಆತಂಕ ಎದುರಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಭವಿಷ್ಯದ ಬರವನ್ನು ತಡೆಯಲು ಜಲಮಂಡಳಿಯು ಕಾವೇರಿ ಪ್ರಾಧಿಕಾರಕ್ಕೆ 9.56 ಟಿ.ಎಂ.ಸಿ ನೀರನ್ನು ಕಾಯ್ದಿರಿಸಲು ಮನವಿ ಮಾಡಿದೆ. ಮಳೆ ಬಾರದಿದ್ದರೆ ಸೆಪ್ಟೆಂಬರ್&zwnj;ನಿಂದ ನೀರಿನ ಅಭಾವ ತೀವ್ರಗೊಳ್ಳುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hrzr6vkkcd41pff8ebxvf5zc,imgname-dvdfv.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ದೇಶದ ಹೆಮ್ಮೆಯ ತಂತ್ರಜ್ಞಾನ ನಗರಿ, ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಆದರೆ, ಈ ಬೆಳವಣಿಗೆಯ ಜೊತೆ ಜೊತೆಗೇ ನಗರದ ಜಲಮೂಲಗಳ ಮೇಲಿನ ಒತ್ತಡವೂ ಹೆಚ್ಚಾಗುತ್ತಿದೆ. ಪ್ರಸ್ತುತ ಮುಂಗಾರು ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ರಾಜಧಾನಿಗೆ ಭೀಕರ ಜಲ ಸಂಕಷ್ಟ ಎದುರಾಗುವ ಮುನ್ಸೂಚನೆ ಸಿಕ್ಕಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಜಲಮಂಡಳಿ ಅಧಿಕಾರಿಗಳ ನಿದ್ದೆಗೆಡಿಸಿದೆ.&lt;/p&gt;&lt;h2&gt;ಹೆಮ್ಮಾರಿಯಂತೆ ಬೆಳೆದ ಜನಸಂಖ್ಯೆ , ಹೆಚ್ಚಿದ ನೀರಿನ ಬೇಡಿಕೆ&lt;/h2&gt;&lt;p&gt;ಪ್ರಸ್ತುತ ಬೆಂಗಳೂರು ಮಹಾನಗರದ ಜನಸಂಖ್ಯೆ ಬರೋಬ್ಬರಿ 1.50 ಕೋಟಿಯನ್ನು ದಾಟಿದೆ. ನಗರದಲ್ಲಿ ದಿನೇ ದಿನೇ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ನೀರಿನ ಬೇಡಿಕೆಯೂ ಗಗನಕ್ಕೇರಿದೆ. ಸದ್ಯ ಬೆಂಗಳೂರು ಜಲಮಂಡಳಿ (BWSSB) ವ್ಯಾಪ್ತಿಯಲ್ಲಿ 11.50 ಲಕ್ಷಕ್ಕೂ ಹೆಚ್ಚು ಅಧಿಕೃತ ನೀರಿನ ಸಂಪರ್ಕಗಳಿವೆ. ಈ ಬೃಹತ್ ಜನಸಂಖ್ಯೆಯ ದಾಹವನ್ನು ತಣಿಸಲು ಜಲಮಂಡಳಿಯು ಪ್ರತಿದಿನ 2,225 ಎಂ.ಎಲ್.ಡಿ (ಮಿಲಿಯನ್ ಲೀಟರ್) ನೀರನ್ನು ಪೂರೈಸುತ್ತಿದೆ. ವಿಶೇಷವೆಂದರೆ, ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಕಾವೇರಿ 5ನೇ ಹಂತದ ಯೋಜನೆಯಿಂದ ಸಿಗುತ್ತಿರುವ 775 ಎಂ.ಎ.ಲ್.ಡಿ ನೀರು ಸಹ ಇದರಲ್ಲಿ ಸೇರಿದೆ. ಇಷ್ಟೆಲ್ಲಾ ನೀರು ಸರಬರಾಜು ಆಗುತ್ತಿದ್ದರೂ, ನಗರದ ಹಲವು ಭಾಗಗಳಲ್ಲಿ ಇಂದಿಗೂ ನೀರಿನ ಅಭಾವ ನಿಂತಿಲ್ಲ.&lt;/p&gt;&lt;h2&gt;ಕಾವೇರಿ ಪ್ರಾಧಿಕಾರಕ್ಕೆ ಜಲಮಂಡಳಿ ತುರ್ತು ಮನವಿ&lt;/h2&gt;&lt;p&gt;ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಭೀಕರ ಬರಗಾಲವನ್ನು ತಡೆಗಟ್ಟಲು ಜಲಮಂಡಳಿ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದೆ. ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾವೇರಿ ಕೊಳ್ಳದ ಜಲಾಶಯಗಳಿಂದ 9.56 ಟಿ.ಎಂ.ಸಿ (TMC) ನೀರನ್ನು ಕಾಯ್ದಿರಿಸುವಂತೆ (Reserve) ಕಾವೇರಿ ನೀರು ನಿಯಂತ್ರಣ ಸಮಿತಿಗೆ ಜಲಮಂಡಳಿ ಅಧಿಕೃತವಾಗಿ ಮನವಿ ಸಲ್ಲಿಸಿದೆ. ಬೆಂಗಳೂರಿನ ಜನರ ಬಾಯಾರಿಕೆ ನೀಗಿಸಲು ಈ ಪ್ರಮಾಣದ ನೀರನ್ನು ಮುಂಚಿತವಾಗಿಯೇ ಕಾಯ್ದಿರಿಸುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಮಂಡಳಿ ಆತಂಕ ವ್ಯಕ್ತಪಡಿಸಿದೆ.&lt;/p&gt;&lt;ul&gt; &lt;li&gt;ಪ್ರಮುಖ ಅಂಕಿ-ಅಂಶಗಳು ಒಂದು ನೋಟದಲ್ಲಿ:&lt;/li&gt; &lt;li&gt;ಬೆಂಗಳೂರಿನ ಜನಸಂಖ್ಯೆ: 1.50 ಕೋಟಿ&lt;/li&gt; &lt;li&gt;ಒಟ್ಟು ನೀರಿನ ಸಂಪರ್ಕಗಳು: 11.50 ಲಕ್ಷಕ್ಕೂ ಹೆಚ್ಚು&lt;/li&gt; &lt;li&gt;ದಿನಿತ್ಯದ ನೀರು ಪೂರೈಕೆ: 2,225 ಎಂ.ಎಲ್.ಡಿ (ಕಾವೇರಿ 5ನೇ ಹಂತದ 775 ಎಂ.ಎಲ್.ಡಿ ಸೇರಿ)&lt;/li&gt; &lt;li&gt;ಕಾಯ್ದಿರಿಸಲು ಕೋರಿರುವ ನೀರು: 9.56 ಟಿ.ಎಂ.ಸಿ&lt;/li&gt;&lt;/ul&gt;&lt;h2&gt;ಜಲಾಶಯಗಳಲ್ಲಿ ಕುಸಿದ ನೀರಿನ ಮಟ್ಟ: ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ&lt;/h2&gt;&lt;p&gt;ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಮುಂಗಾರು ಮಳೆ ಚುರುಕಾಗಬೇಕಿತ್ತು. ಆದರೆ ಈ ಬಾರಿ ಮುಂಗಾರು ಆರಂಭದಲ್ಲೇ ತೀವ್ರ ಕ್ಷೀಣಿಸಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ, ಕೆ.ಆರ್.ಎಸ್ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿನ ನೀರಿನ ಸಂಗ್ರಹವು ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಾಗಿದೆ. ಇದು ಜಲಮಂಡಳಿ ಹಾಗೂ ಸರ್ಕಾರದ ಅಧಿಕಾರಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.&lt;/p&gt;&lt;h2&gt;ಸೆಪ್ಟೆಂಬರ್&zwnj;ನಿಂದ ನೀರಿನ ಅಭಾವ ಗ್ಯಾರಂಟಿ?&lt;/h2&gt;&lt;p&gt;ಹವಾಮಾನ ಇಲಾಖೆಯ ಮುನ್ಸೂಚನೆಗಳು ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ ಮುಂಬರುವ ತಿಂಗಳುಗಳು ಅತ್ಯಂತ ನಿರ್ಣಾಯಕವಾಗಿವೆ. ಒಂದು ವೇಳೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೆ, ಬರುವ ಸೆಪ್ಟೆಂಬರ್ ತಿಂಗಳಿನಿಂದಲೇ ಬೆಂಗಳೂರಿನಲ್ಲಿ ನೀರಿನ ಅಭಾವ ಸೃಷ್ಟಿಯಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಕೆರೆ-ಕಟ್ಟೆಗಳು ಒಣಗುತ್ತಿರುವುದು ಮತ್ತು ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ವರುಣ ದೇವನ ಕೃಪೆ ಬಾರದಿದ್ದರೆ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಮ್ಮೆ ಜಲಕ್ಷಾಮದ ಸುಳಿಗೆ ಸಿಲುಕುವುದು ಖಂಡಿತ. ನಾಗರಿಕರು ಈಗಿನಿಂದಲೇ ನೀರನ್ನು ಅತ್ಯಂತ ಜಾಗರೂಕತೆಯಿಂದ ಹಾಗೂ ಮಿತವಾಗಿ ಬಳಸಬೇಕಾದ ಅವಶ್ಯಕತೆ ಇದೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-water-crisis-bwssb-seeks-9-56-tmc-cauvery-water-gdp/articleshow-bm5uztl"/>
        </item>
        <item>
            <title><![CDATA['ನನ್ನ ಒಡವೆ ತಗೊಳ್ಳಿ, ಪತಿಯನ್ನು ಬಿಟ್ಟುಬಿಡಿ': ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಿರಾತಕರ ಅಟ್ಟಹಾಸ!]]></title>
            <link>https://kannada.asianetnews.com/karnataka-districts/bengaluru-mysuru-expressway-road-rage-family-attacked-viral-video-arrests/articleshow-g9b0xtn</link>
            <guid isPermaLink="true">https://kannada.asianetnews.com/karnataka-districts/bengaluru-mysuru-expressway-road-rage-family-attacked-viral-video-arrests/articleshow-g9b0xtn</guid>
            <pubDate>Thu, 09 Jul 2026 16:48:58 +0530</pubDate>
            <description><![CDATA[ಮಂಡ್ಯದ ಮದ್ದೂರು ಬಳಿ ಬೆಂಗಳೂರು-ಮೈಸೂರು ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಸಣ್ಣ ಅಪಘಾತವೊಂದು ವಿಕೋಪಕ್ಕೆ ತಿರುಗಿದೆ. ದುಷ್ಕರ್ಮಿಗಳ ಗುಂಪೊಂದು 10 ತಿಂಗಳ ಮಗು ಸೇರಿದಂತೆ ಇಡೀ ಕುಟುಂಬದ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx39hsc1b7w6rhwq9z2xxypt,imgname-bengaluru-mysuru-expressway-1783595853184.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಮಂಡ್ಯ (ಜು.09): 'ನ&lt;/strong&gt;ನ್ನ ಚಿನ್ನದ ಒಡವೆಗಳನ್ನು ಬೇಕಾದರೆ ತೆಗೆದುಕೊಳ್ಳಿ, ಆದರೆ ನನ್ನ ಪತಿಯನ್ನು ಮಾತ್ರ ಬಿಟ್ಟುಬಿಡಿ...' - ಇದು ಮಂಡ್ಯ ಜಿಲ್ಲೆಯ ಮದ್ದೂರು ಬಳಿ ಬೆಂಗಳೂರು-ಮೈಸೂರು ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ದುಷ್ಕರ್ಮಿಗಳ ಕೈಗೆ ಸಿಲುಕಿ ನರಳುತ್ತಿದ್ದ ಮಹಿಳೆಯೊಬ್ಬರ ಆಕ್ರಂದನ. ಸಣ್ಣ ಕಾರು ಅಪಘಾತವೊಂದು ವಿಕೋಪಕ್ಕೆ ತಿರುಗಿ, ಇಡೀ ಕುಟುಂಬವನ್ನೇ ನಡುರಸ್ತೆಯಲ್ಲಿ ಅಮಾನವೀಯವಾಗಿ ಥಳಿಸಿದ ಘಟನೆ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಭಾನುವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಬೆಂಗಳೂರು ನಿವಾಸಿ ಸಾಗರ್ ಕುಮಾರ್ ಅವರು ತಮ್ಮ ಪತ್ನಿ, 10 ತಿಂಗಳ ಮಗು ಮತ್ತು ಹಿರಿಯ ಮಹಿಳೆಯೊಬ್ಬರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಭಾರಿ ಟ್ರಾಫಿಕ್ ಇದ್ದ ಕಾರಣ, ಸಾಗರ್ ಅವರ ಕಾರು ಮತ್ತೊಂದು ವಾಹನಕ್ಕೆ ಸ್ವಲ್ಪ ತಗುಲಿತ್ತು. ಇದೇ ವಿಚಾರಕ್ಕೆ ಗಲಾಟೆ ಆರಂಭಿಸಿದ ಸುಮಾರು 9 ಜನರ ಗುಂಪು, ಸಾಗರ್ ಅವರ ಕಾರನ್ನು ಅಡ್ಡಗಟ್ಟಿ ಅಟ್ಟಹಾಸ ಮೆರೆದಿದೆ.&lt;/p&gt;&lt;h2&gt;&lt;strong&gt;ವೈರಲ್ ವಿಡಿಯೋದಲ್ಲಿದೆ ಭೀಕರ ದೃಶ್ಯ:&lt;/strong&gt;&lt;/h2&gt;&lt;p&gt;ಹಿಂದಿನ ಕಾರಿನ ಡ್ಯಾಶ್&zwnj;ಕ್ಯಾಮ್&zwnj;ನಲ್ಲಿ ಈ ಇಡೀ ಘಟನೆ ಸೆರೆಯಾಗಿದೆ. ದುಷ್ಕರ್ಮಿಗಳು ಸಾಗರ್ ಅವರ ಕಾರನ್ನು ಸುತ್ತುವರಿದು, ಅವರನ್ನು ಬಲವಂತವಾಗಿ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಗರ್ ಪತ್ನಿ ಅಕ್ಷರಶಃ ಪ್ರಾಣಭಿಕ್ಷೆ ಕೇಳಿದ್ದಾರೆ. 'ನಮ್ಮ ಜೊತೆ ಮಗುವಿದೆ, ದಯವಿಟ್ಟು ಬಿಟ್ಟುಬಿಡಿ. ಬೇಕಿದ್ದರೆ ನನ್ನ ಮೈಮೇಲಿರುವ ಚಿನ್ನದ ಒಡವೆಗಳನ್ನು ಕಿತ್ತುಕೊಳ್ಳಿ, ಆದರೆ ಪತಿಯನ್ನು ಹೊಡೆಯಬೇಡಿ' ಎಂದು ಕಣ್ಣೀರಿಟ್ಟರೂ, ಆ ಪಾಪಿಗಳು ಮಾತ್ರ ಹಲ್ಲೆ ನಿಲ್ಲಿಸಲಿಲ್ಲ. ಹತ್ತು ತಿಂಗಳ ಹಸುಗೂಸಿನ ಮುಂದೆಯೇ ತಂದೆಯನ್ನು ಮನಬಂದಂತೆ ಥಳಿಸಲಾಗಿದೆ.&lt;/p&gt;&lt;h2&gt;&lt;strong&gt;ಸಾಗರ್ ಕುಮಾರ್ ಅವರ ಅಳಲು:&lt;/strong&gt;&lt;/h2&gt;&lt;p&gt;ಘಟನೆಯಿಂದ ತೀವ್ರವಾಗಿ ಗಾಯಗೊಂಡಿರುವ ಸಾಗರ್ ಎನ್&zwnj;ಡಿಟಿವಿಯೊಂದಿಗೆ ಮಾತನಾಡುತ್ತಾ, 'ಆ ರಾತ್ರಿ ನಾವು ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಸುಮಾರು 9 ಜನರು ನಮ್ಮ ಮೇಲೆ ಮುಗಿಬಿದ್ದರು. ನನ್ನ ಪತ್ನಿ ಕೈಮುಗಿದು ಬೇಡಿಕೊಂಡರೂ ಅವರು ಕರುಣೆ ತೋರಿಸಲಿಲ್ಲ. ಎಕ್ಸ್&zwnj;ಪ್ರೆಸ್&zwnj;ವೇನ ಅನೇಕ ಕಡೆ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಭದ್ರತೆಯೂ ಇಲ್ಲ. ಈ ವಿಡಿಯೋ ರೆಕಾರ್ಡ್ ಆಗಿದ್ದಕ್ಕೆ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಇಲ್ಲದಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು?' ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;&lt;strong&gt;ಪೊಲೀಸ್ ಕ್ರಮ:&lt;/strong&gt;&lt;/h3&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಂಡ್ಯ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ. ಹೆದ್ದಾರಿಗಳಲ್ಲಿ ಸಾರ್ವಜನಿಕರ ಸುರಕ್ಷತೆ ಎಲ್ಲಿದೆ ಎಂಬ ಪ್ರಶ್ನೆಯನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ಕುಟುಂಬ ಇಂದಿಗೂ ಆಘಾತದಿಂದ ಹೊರಬಂದಿಲ್ಲ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-mysuru-expressway-road-rage-family-attacked-viral-video-arrests/articleshow-g9b0xtn"/>
        </item>
        <item>
            <title><![CDATA[ಕರ್ನಾಟಕದಲ್ಲಿ ಮಳೆಯಿಲ್ಲದಿದ್ರೂ ಕಾವೇರಿ ನೀರಿಗಾಗಿ ಕ್ಯಾತೆ; ಸಿಎಂ ಬದಲಾದ್ರೂ ಹಳೆ ಚಾಳಿ ಬಿಡದ ತಮಿಳುನಾಡು!]]></title>
            <link>https://kannada.asianetnews.com/gallery/state/cauvery-water-dispute-tamil-nadu-demands-31-tmc-july-quota-from-karnataka-gi7sf8b</link>
            <guid isPermaLink="true">https://kannada.asianetnews.com/gallery/state/cauvery-water-dispute-tamil-nadu-demands-31-tmc-july-quota-from-karnataka-gi7sf8b</guid>
            <pubDate>Tue, 23 Jun 2026 18:45:08 +0530</pubDate>
            <description><![CDATA[&lt;p&gt;ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ, ಜೂನ್ ತಿಂಗಳ ನೀರಿನ ಕೊರತೆ ಭರಿಸಲು ಮತ್ತು ಜುಲೈ ತಿಂಗಳ ಕೋಟಾ ಬಿಡುಗಡೆ ಮಾಡಲು ತಮಿಳುನಾಡು ಕರ್ನಾಟಕದ ಮೇಲೆ ತೀವ್ರ ಒತ್ತಡ ಹೇರಿದೆ. ಮಳೆ ಕೊರತೆ ಮತ್ತು ಜಲಾಶಯಗಳಲ್ಲಿ ಕಡಿಮೆ ನೀರಿನ ಮಟ್ಟದಿಂದಾಗಿ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt9hrmwq1bzcvejd0yp3455,imgname-cauvery-water-dispute-1782220120731.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ, ಜೂನ್ ತಿಂಗಳ ನೀರಿನ ಕೊರತೆ ಭರಿಸಲು ಮತ್ತು ಜುಲೈ ತಿಂಗಳ ಕೋಟಾ ಬಿಡುಗಡೆ ಮಾಡಲು ತಮಿಳುನಾಡು ಕರ್ನಾಟಕದ ಮೇಲೆ ತೀವ್ರ ಒತ್ತಡ ಹೇರಿದೆ. ಮಳೆ ಕೊರತೆ ಮತ್ತು ಜಲಾಶಯಗಳಲ್ಲಿ ಕಡಿಮೆ ನೀರಿನ ಮಟ್ಟದಿಂದಾಗಿ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿದೆ.&lt;/p&gt;&lt;img&gt;&lt;p&gt;&lt;strong&gt;ನವದೆಹಲಿ (ಜೂ.23): ಕಾ&lt;/strong&gt;ವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ನೆರೆರಾಜ್ಯ ತಮಿಳುನಾಡು ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಇತ್ತೀಚಿನ ಸಭೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಅಧಿಕಾರಿಗಳು, ಕರ್ನಾಟಕದಿಂದ ತಮಗೆ ಬರಬೇಕಾದ ನೀರಿನ ಕೋಟಾವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ತೀವ್ರ ಒತ್ತಡ ಹೇರಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಜೂನ್ ತಿಂಗಳ ನೀರಿನಲ್ಲಿ ಭಾರಿ ಕೊರತೆ:&lt;/strong&gt;&lt;/p&gt;&lt;p&gt;ಸಭೆಯಲ್ಲಿ ತನ್ನ ವಾದ ಮಂಡಿಸಿದ ತಮಿಳುನಾಡು ಸರ್ಕಾರ, 'ಜೂನ್ ತಿಂಗಳಿನಲ್ಲಿ ನಿಗದಿತ ವೇಳಾಪಟ್ಟಿಯಂತೆ ಕರ್ನಾಟಕವು 9.19 ಟಿಎಂಸಿ ನೀರನ್ನು ಹರಿಸಬೇಕಿತ್ತು. ಆದರೆ, ಈವರೆಗೆ ಕೇವಲ 2.6 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಂದರೆ ಸರಿಸುಮಾರು 6.5 ಟಿಎಂಸಿ ನೀರಿನ ಕೊರತೆಯಾಗಿದೆ' ಎಂದು ದೂರು ನೀಡಿದೆ. ಈ ಕೊರತೆಯನ್ನು ತಕ್ಷಣವೇ ಭರಿಸಬೇಕು ಎಂದು ಪ್ರಾಧಿಕಾರದ ಮುಂದೆ ಪಟ್ಟು ಹಿಡಿದಿದೆ.&lt;/p&gt;&lt;img&gt;&lt;p&gt;&lt;strong&gt;ಕರ್ನಾಟಕದ ವಾದ ತಳ್ಳಿಹಾಕಿದ ತಮಿಳುನಾಡು:&lt;/strong&gt;&lt;/p&gt;&lt;p&gt;ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಎಂಬ ಕರ್ನಾಟಕದ ವಾದವನ್ನು ತಮಿಳುನಾಡು ಸಾರಾಸಗಟಾಗಿ ತಳ್ಳಿಹಾಕಿದೆ. 'ಫೆಬ್ರವರಿಯಿಂದ ಮೇ ತಿಂಗಳವರೆಗೆ ಕರ್ನಾಟಕವು ತನ್ನ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಳಸಿಕೊಂಡಿದೆ. ಇದರಿಂದಾಗಿಯೇ ಈಗ ನೀರಿನ ಮಟ್ಟ ಕುಸಿದಿದೆ. ನಿಮ್ಮ ತಪ್ಪುಗಳಿಗೆ ನಾವು ಬೆಲೆ ತೆರಲು ಸಾಧ್ಯವಿಲ್ಲ' ಎಂದು ತಮಿಳುನಾಡು ಅಧಿಕಾರಿಗಳು ಆರೋಪಿಸಿದ್ದಾರೆ. ಜೂನ್ ತಿಂಗಳ ಬಾಕಿ ಉಳಿದಿರುವ ನೀರಿನ ಜೊತೆಗೆ, ಜುಲೈ ತಿಂಗಳ ಕೋಟಾ ಆದ 31.24 ಟಿಎಂಸಿ ನೀರನ್ನು ಹರಿಸಲು ಕರ್ನಾಟಕಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಪ್ರಾಧಿಕಾರವನ್ನು ಒತ್ತಾಯಿಸಿದೆ.&lt;/p&gt;&lt;img&gt;&lt;p&gt;&lt;strong&gt;ಸಂಕಷ್ಟದಲ್ಲಿ ಕರ್ನಾಟಕ:&lt;/strong&gt;&lt;/p&gt;&lt;p&gt;ಇನ್ನೊಂದೆಡೆ, ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಮಳೆಯ ಕೊರತೆಯಿಂದಾಗಿ ನೀರಿನ ಸಂಗ್ರಹದ ಮಟ್ಟ ಆಶಾದಾಯಕವಾಗಿಲ್ಲ. ಕುಡಿಯುವ ನೀರಿಗೇ ಆದ್ಯತೆ ನೀಡಬೇಕಾದ ಅನಿವಾರ್ಯತೆಯಲ್ಲಿ ಕರ್ನಾಟಕ ಸರ್ಕಾರವಿದೆ. ಹೀಗಿರುವಾಗ ತಮಿಳುನಾಡು ಒಟ್ಟು 31 ಟಿಎಂಸಿಗೂ ಅಧಿಕ ನೀರಿಗಾಗಿ ಪಟ್ಟು ಹಿಡಿದಿರುವುದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಾಧಿಕಾರವು ಮಳೆಯ ಪ್ರಮಾಣ ಮತ್ತು ಜಲಾಶಯಗಳ ಸ್ಥಿತಿಗತಿಯನ್ನು ಅವಲಂಬಿಸಿ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಈಗ ಕುತೂಹಲ ಕೆರಳಿಸಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/cauvery-water-dispute-tamil-nadu-demands-31-tmc-july-quota-from-karnataka-gi7sf8b"/>
        </item>
        <item>
            <title><![CDATA[ಹುಟ್ಟುಹಬ್ಬದ ದಿನವೇ ಹ*ತ್ಯೆಯಾದ ಪುತ್ರ, ಕಣ್ಣೀರಿಟ್ಟು ತಾಯಿಯ ಗೋಳಾಟ: ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ]]></title>
            <link>https://kannada.asianetnews.com/crime/mandya-krs-mu-rder-youth-killed-on-birthday-investigation-begins-gvd/articleshow-kddngss</link>
            <guid isPermaLink="true">https://kannada.asianetnews.com/crime/mandya-krs-mu-rder-youth-killed-on-birthday-investigation-begins-gvd/articleshow-kddngss</guid>
            <pubDate>Tue, 07 Jul 2026 17:52:24 +0530</pubDate>
            <description><![CDATA[&lt;p&gt;ಹುಟ್ಟುಹಬ್ಬದ ಸಂಭ್ರಮ ಇರಬೇಕಿದ್ದ ದಿನವೇ ತಾಯಿಯ ಮಡಿಲಿಗೆ ಮಗನ ಮೃತದೇಹ ಬಂದಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್&zwnj;ನಲ್ಲಿ ನಡೆದಿದೆ. ಬಂಡಿಹೊಳೆ ಗ್ರಾಮದ ಯುವಕ ರಾಕೇಶ್ ಬರ್ಬರವಾಗಿ ಹ*ತ್ಯೆಯಾಗಿದ್ದಾನೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy8dvfjk5wvvrmn3xz89nfg,imgname-xm-1783426903538.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.07): &lt;/strong&gt;ಹುಟ್ಟುಹಬ್ಬದ ಸಂಭ್ರಮ ಇರಬೇಕಿದ್ದ ದಿನವೇ ತಾಯಿಯ ಮಡಿಲಿಗೆ ಮಗನ ಮೃತದೇಹ ಬಂದಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್&zwnj;ನಲ್ಲಿ ನಡೆದಿದೆ. ಬಂಡಿಹೊಳೆ ಗ್ರಾಮದ ಯುವಕ ರಾಕೇಶ್ ಬರ್ಬರವಾಗಿ ಹ*ತ್ಯೆಯಾಗಿದ್ದು, ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಸ್ಥಳದಲ್ಲಿದ್ದವರ ಕಣ್ಣಂಚನ್ನೂ ತೇವಗೊಳಿಸಿದೆ. ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ರಾಕೇಶ್, ಬುಧವಾರ ಬೆಳಗ್ಗೆ ಮೈಸೂರಿನ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಲು ತೆರಳಿದ್ದರು.&lt;/p&gt;&lt;p&gt;&lt;strong&gt;ಕರೆ ಸ್ವೀಕರಿಸಿದ್ದು ರಾಕೇಶ್ ಅಲ್ಲ&lt;/strong&gt;&lt;/p&gt;&lt;p&gt;ಮನೆ ಬಿಡುವ ಮುನ್ನ ತಾಯಿಗೆ ₹1,000 ಅನ್ನು ಫೋನ್&zwnj;ಪೇ ಮೂಲಕ ಕಳುಹಿಸಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೆಲಸ ಮುಗಿದ ಬಳಿಕ ಮನೆಗೆ ವಾಪಸ್ ಬರುತ್ತೇನೆ ಎಂದು ಹೇಳಿದ್ದ ರಾಕೇಶ್, ರಾತ್ರಿ ಮತ್ತೆ ಕುಟುಂಬವನ್ನು ಸಂಪರ್ಕಿಸಿರಲಿಲ್ಲ. ಮಗ ತಡವಾಗುತ್ತಿದ್ದಂತೆ ಆತಂಕಗೊಂಡ ತಾಯಿ ಹಲವು ಬಾರಿ ಕರೆ ಮಾಡಿದ್ದರು. ಆದರೆ ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಕರೆ ಸ್ವೀಕರಿಸಿದ್ದು ರಾಕೇಶ್ ಅಲ್ಲ, ಬೇರೊಬ್ಬ ವ್ಯಕ್ತಿ. ಆಗ ಮೊಬೈಲ್ ಎಲ್ಲೋ ಕಳೆದುಹೋಗಿರಬಹುದು ಎಂದುಕೊಂಡಿದ್ದ ತಾಯಿಗೆ, ಕೆಲವೇ ಗಂಟೆಗಳಲ್ಲಿ ಮಗನ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿದಿದೆ.&lt;/p&gt;&lt;p&gt;&lt;strong&gt;ಆರೋಪಿಗಳ ಪತ್ತೆಗೆ ತನಿಖೆ&lt;/strong&gt;&lt;/p&gt;&lt;p&gt;ತಾಯಿ ಹೇಳುವ ಪ್ರಕಾರ, &quot;ರಾತ್ರಿ ಪ್ರಯಾಣ ಬೇಡ, ಸಂಬಂಧಿಕರ ಮನೆಯಲ್ಲಿ ಉಳಿದು ಬೆಳಿಗ್ಗೆ ಬಾ&quot; ಎಂದು ಮಗನಿಗೆ ಹೇಳಿದ್ದರು. ರಾಕೇಶ್ ಕೂಡ ಬೆಳಿಗ್ಗೆ ಬರುತ್ತೇನೆ ಎಂದಿದ್ದ. ಆದರೆ ಆ ಮಾತು ಕೊನೆಯ ಮಾತಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪ್ರಾಥಮಿಕ ಮಾಹಿತಿಯಂತೆ, ಬುಧವಾರ ಮಧ್ಯರಾತ್ರಿ ಕೆ.ಆರ್.ಎಸ್. ಬಸ್ ನಿಲ್ದಾಣದ ಬಳಿ ರಾಕೇಶ್ ಮೇಲೆ ದುಷ್ಕರ್ಮಿಗಳು ಕಲ್ಲಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹ*ತ್ಯೆ ಮಾಡಿದ್ದಾರೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.&lt;/p&gt;&lt;h2&gt;&lt;strong&gt;ನನ್ನ ಮಗನೇ ನನ್ನ ಪ್ರಪಂಚ&lt;/strong&gt;&lt;/h2&gt;&lt;p&gt;ಅತ್ಯಂತ ವೇದನಾದಾಯಕ ಸಂಗತಿಯೆಂದರೆ, ಘಟನೆ ನಡೆದ ದಿನವೇ ರಾಕೇಶ್ ಅವರ ಹುಟ್ಟುಹಬ್ಬವಾಗಿತ್ತು. &quot;ನನ್ನ ಮಗನೇ ನನ್ನ ಪ್ರಪಂಚ... ಯಾರಿಗೆ ಏನು ದ್ರೋಹ ಮಾಡಿದ್ದನೋ ಗೊತ್ತಿಲ್ಲ&quot; ಎಂದು ತಾಯಿ ಎದೆಬಡಿದುಕೊಂಡು ಕಣ್ಣೀರಿಡುತ್ತಿದ್ದ ದೃಶ್ಯ ಕಂಡವರ ಮನಕಲಕುವಂತಿತ್ತು. ಈ ಹ*ತ್ಯೆಗೆ ನಿಖರ ಕಾರಣವೇನು, ದುಷ್ಕರ್ಮಿಗಳು ಯಾರು ಎಂಬುದು ಇನ್ನಷ್ಟೇ ತನಿಖೆಯಿಂದ ಬಹಿರಂಗವಾಗಬೇಕಿದೆ.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/mandya-krs-mu-rder-youth-killed-on-birthday-investigation-begins-gvd/articleshow-kddngss"/>
        </item>
        <item>
            <title><![CDATA[ಬಂಗಾರದ ವಂಚನೆ ಆರೋಪಿ ಐಶ್ವರ್ಯ ಗೌಡಗೆ ಹೈಕೋರ್ಟ್‌ ಬಿಗ್ ರಿಲೀಫ್: 5 ಕೇಸುಗಳ ಖುಲಾಸೆಗೆ ಇಲ್ಲಿವೆ ಕಾರಣ!]]></title>
            <link>https://kannada.asianetnews.com/state/karnataka-high-court-quashes-fraud-cases-against-aishwarya-gowda-dk-suresh/articleshow-knuz61s</link>
            <guid isPermaLink="true">https://kannada.asianetnews.com/state/karnataka-high-court-quashes-fraud-cases-against-aishwarya-gowda-dk-suresh/articleshow-knuz61s</guid>
            <pubDate>Mon, 06 Jul 2026 21:53:52 +0530</pubDate>
            <description><![CDATA[&lt;p&gt;ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿದ್ದ ಐಶ್ವರ್ಯ ಗೌಡ ಅವರಿಗೆ ಹೈಕೋರ್ಟ್&zwnj;ನಲ್ಲಿ ರಿಲೀಫ್ ಸಿಕ್ಕಿದೆ. ನ್ಯಾಯಾಲಯವು ಅವರ ವಿರುದ್ಧದ 5 ಪ್ರಮುಖ ಪ್ರಕರಣಗಳನ್ನು ರದ್ದುಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jfwaj547zc4094g81md1p1cr,imgname-dk-suresh-sister-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.06): ಮಾ&lt;/strong&gt;ಜಿ ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿದ್ದ ಐಶ್ವರ್ಯ ಗೌಡ ಅವರಿಗೆ ಕರ್ನಾಟಕ ಹೈಕೋರ್ಟ್&zwnj;ನಲ್ಲಿ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ 5 ಪ್ರಮುಖ ಪ್ರಕರಣಗಳನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠವು ರದ್ದುಪಡಿಸಿ ಆದೇಶ ಹೊರಡಿಸಿದೆ.&lt;/p&gt;&lt;h2&gt;&lt;strong&gt;ಸಿವಿಲ್ ಸ್ವರೂಪದ ಪ್ರಕರಣ:&lt;/strong&gt;&lt;/h2&gt;&lt;p&gt;ಐಶ್ವರ್ಯ ಗೌಡ ಪರ ವಾದ ಮಂಡಿಸಿದ ವಕೀಲ ಎಸ್. ಸುನಿಲ್ ಕುಮಾರ್ ಅವರು, 'ದೂರುದಾರರು ನೀಡಿರುವ ದೂರುಗಳೆಲ್ಲವೂ ಹಣದ ವ್ಯವಹಾರ ಮತ್ತು ಅದರ ರಿಕವರಿ (Recovery) ಸ್ವರೂಪದ್ದಾಗಿವೆ. ಇಲ್ಲಿ ಯಾವುದೇ ಉದ್ದೇಶಪೂರ್ವಕ ಅಪರಾಧದ ಅಂಶಗಳಿಲ್ಲ. ಇದು ಕೇವಲ ಸಿವಿಲ್ ಸ್ವರೂಪದ ವಿವಾದವಾಗಿದೆ' ಎಂದು ವಾದಿಸಿದರು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದೆ. ಇದೇ ವೇಳೆ ನಟ ಧರ್ಮೇಂದ್ರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನೂ ನ್ಯಾಯಾಲಯ ರದ್ದುಗೊಳಿಸಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಐಶ್ವರ್ಯ ಗೌಡ ವಿರುದ್ಧ ಈ ಹಿಂದೆ ಅತ್ಯಂತ ಗಂಭೀರವಾದ ವಂಚನೆಯ ಆರೋಪಗಳು ಕೇಳಿಬಂದಿದ್ದವು.&lt;/p&gt;&lt;p&gt;&lt;strong&gt;ವೈದ್ಯೆಗೆ ವಂಚನೆ: &lt;/strong&gt;ಡಿ.ಕೆ. ಸುರೇಶ್ ಅವರ ತಂಗಿ ಎಂದು ನಂಬಿಸಿ ವೈದ್ಯೆ ಡಾ. ಮಂಜುಳಾ ಎಂಬುವವರಿಂದ 2.52 ಕೋಟಿ ರೂ. ನಗದು ಮತ್ತು 2 ಕೆ.ಜಿಗೂ ಹೆಚ್ಚು ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.&lt;/p&gt;&lt;p&gt;&lt;strong&gt;ಚಿನ್ನದ ವ್ಯಾಪಾರಿಗಳಿಗೆ ಮೋಸ: &lt;/strong&gt;ಚಿನ್ನದಂಗಡಿ ಮಾಲೀಕರಿಂದ ಸುಮಾರು 8.41 ಕೋಟಿ ರೂ. ಮೌಲ್ಯದ 14.6 ಕೆ.ಜಿ ಚಿನ್ನ ಪಡೆದು ಹಣ ನೀಡದೆ ಸತಾಯಿಸಿದ ಆರೋಪವೂ ಇವರ ಮೇಲಿತ್ತು. ಇನ್ನೊಂದು ಪ್ರಕರಣದಲ್ಲಿ ಚಿನ್ನದ ವ್ಯಾಪಾರಿಗೆ ಬರೋಬ್ಬರಿ 14 ಕೋಟಿ ರೂ. ವಂಚಿಸಿದ ದೂರು ದಾಖಲಾಗಿತ್ತು.&lt;/p&gt;&lt;p&gt;&lt;strong&gt;ಪೊಲೀಸ್ ದಾಳಿ: &lt;/strong&gt;ವಂಚನೆ ದೂರುಗಳು ಹೆಚ್ಚಾದಾಗ ಪೊಲೀಸರು ಐಶ್ವರ್ಯ ಗೌಡ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಬಿಎಂಡಬ್ಲ್ಯು, ಆಡಿ ಅಂತಹ ಐಷಾರಾಮಿ ಕಾರುಗಳು ಹಾಗೂ 29 ಕೆ.ಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.&lt;/p&gt;&lt;p&gt;ತಾನು ಪ್ರಭಾವಿ ರಾಜಕಾರಣಿಗಳ ಕುಟುಂಬಕ್ಕೆ ಸೇರಿದವಳು ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಮತ್ತು ಗೋಲ್ಡ್ ಬ್ಯುಸಿನೆಸ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿ ನಂಬಿಕೆ ದ್ರೋಹ ಎಸಗುತ್ತಿದ್ದಾರೆ ಎಂಬುದು ದೂರುದಾರರ ಪ್ರಮುಖ ಆರೋಪವಾಗಿತ್ತು. ಆದರೆ ಈಗ ಹೈಕೋರ್ಟ್ ಈ ಎಲ್ಲಾ ಪ್ರಕರಣಗಳಲ್ಲಿ ಐಶ್ವರ್ಯ ಗೌಡ ಮತ್ತು ಅವರ ಪತಿ ಹರೀಶ್ ಅವರಿಗೆ ದೊಡ್ಡ ರಿಲೀಫ್ ನೀಡಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-high-court-quashes-fraud-cases-against-aishwarya-gowda-dk-suresh/articleshow-knuz61s"/>
        </item>
        <item>
            <title><![CDATA[India's First Constitution bhavan: ಮಂಡ್ಯದಲ್ಲಿ ಭಾರತದ ಮೊದಲ ಸಂವಿಧಾನ ಭವನಕ್ಕೆ ಸರ್ಕಾರ ಒಪ್ಪಿಗೆ!]]></title>
            <link>https://kannada.asianetnews.com/gallery/karnataka-districts/mandya-constitution-bhavan-in-3d-approval-granted-by-karnataka-government-rav-kteyeol</link>
            <guid isPermaLink="true">https://kannada.asianetnews.com/gallery/karnataka-districts/mandya-constitution-bhavan-in-3d-approval-granted-by-karnataka-government-rav-kteyeol</guid>
            <pubDate>Fri, 03 Jul 2026 11:28:55 +0530</pubDate>
            <description><![CDATA[&lt;p&gt;ಮಂಡ್ಯ: ಸಂವಿಧಾನದ ಹಕ್ಕು-ಬಾಧ್ಯತೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ವಕೀಲರ ಸಂಘ ವಿನೂತನ ರೀತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಂವಿಧಾನ ಭವನದ ತ್ರೀ-ಡಿ ಮಾದರಿ ಇದೀಗ ಸರ್ಕಾರದಿಂದ ಅಂತಿಮಗೊಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwk81tpvytgfzm2wcqzeffs6,imgname-----------------------2026-07-03t110955.439-1783057410779.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯ: ಸಂವಿಧಾನದ ಹಕ್ಕು-ಬಾಧ್ಯತೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ವಕೀಲರ ಸಂಘ ವಿನೂತನ ರೀತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಂವಿಧಾನ ಭವನದ ತ್ರೀ-ಡಿ ಮಾದರಿ ಇದೀಗ ಸರ್ಕಾರದಿಂದ ಅಂತಿಮಗೊಂಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭಾರತದ ಮೊಟ್ಟ ಮೊದಲ ಸಂವಿಧಾನ ಭವನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಈ ಭವ್ಯ ಭವನಕ್ಕೆ ೭ ಕೋಟಿ ರು. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಅಂದಾಜುಪಟ್ಟಿ ತಯಾರಿಸಿದೆ. ಮೊದಲ ಹಂತದಲ್ಲಿ ರಾಜ್ಯ ಸರ್ಕಾರ ೩ ಕೋಟಿ ರು. ಹಣವನ್ನು ಬಿಡುಗಡೆ ಮಾಡಿದೆ.&lt;/p&gt;&lt;img&gt;&lt;p&gt;ನಾಲ್ಕು ಮಹಡಿಗಳನ್ನು ಹೊಂದಿರುವ ಸಂವಿಧಾನ ಭವನದ ನೆಲ ಮಹಡಿಯಲ್ಲಿ ಪಾರ್ಕಿಂಗ್, ಮೊದಲ ಮಹಡಿಯಲ್ಲಿ ರಿಸೆಪ್ಷನ್, ಸಂವಿಧಾನದ ಗ್ಯಾಲರಿ ಇರಲಿದೆ. ಅದರಲ್ಲಿ ಕಾನೂನು ಪುಸ್ತಕ, ಸಂವಿಧಾನ ರಚನೆಗೆ ಸಂಬಂಧಿಸಿದ ಕನ್ನಡ, ಆಂಗ್ಲ ಪುಸ್ತಕಗಳಿರಲಿವೆ. ಎರಡನೇ ಮಹಡಿಯಲ್ಲಿ ನೂರು ಮಂದಿ ಸಾಮರ್ಥ್ಯದ ಸಭಾಂಗಣ ಹಾಗೂ ಮೂರನೇ ಮಹಡಿಯಲ್ಲಿ ಕ್ಯಾಂಟೀನ್ ಸೌಲಭ್ಯವಿರಲಿದೆ. ಪುಸ್ತಕದ ಮಾದರಿಯಲ್ಲಿ ಕಟ್ಟಡದ ವಿನ್ಯಾಸವನ್ನು ರೂಪಿಸಲಾಗಿದೆ.&lt;/p&gt;&lt;img&gt;&lt;p&gt;ಜಿಲ್ಲಾ ವಕೀಲರ ಸಂಘದ ಕಟ್ಟಡದ ಪಕ್ಕದಲ್ಲೇ ಇರುವ ನಾಲ್ಕು ಗುಂಟೆ ಜಾಗವನ್ನು ಸಂವಿಧಾನ ಭವನಕ್ಕೆ ಕಾಯ್ದಿರಿಸಲಾಗಿದೆ. ಕಳೆದ ೨೦೨೫ರ ನವೆಂಬರ್&zwnj;ನಲ್ಲೇ ಜಿಲ್ಲಾ ವಕೀಲರ ಸಂಘ ಸಮಾಜ ಕಲ್ಯಾಣ ಸಚಿವರ ಮೂಲಕ ಲೋಕೋಪಯೋಗಿ ಇಲಾಖೆ ಮತ್ತು ಮುಖ್ಯಮಂತ್ರಿಗಳಿಗೆ ೫ ಕೋಟಿ ರು. ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಸರ್ಕಾರ ಅದಕ್ಕೆ ಅನುಮೋದನೆ ನೀಡಿದ ನಂತರದಲ್ಲಿ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ೩ ಕೋಟಿ ರು. ಹಣವನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಿ ಮುಖ್ಯ ಇಂಜಿನಿಯರ್&zwnj;ಗೆ ಕೆಲವೊಂದು ಷರತ್ತುಗಳನ್ನು ವಿಧಿಸಿತ್ತು.&lt;/p&gt;&lt;img&gt;&lt;p&gt;ಇದೀಗ ಲೋಕೋಪಯೋಗಿ ಇಲಾಖೆ ಸಂವಿಧಾನ ಭವನದ ತ್ರೀ-ಡಿ ಚಿತ್ರವನ್ನು ಅಂತಿಮಗೊಳಿಸಿದೆ. ಸರ್ಕಾರವೂ ಅದನ್ನು ಒಪ್ಪಿರುವುದರಿಂದ ಕಾಮಗಾರಿ ಶೀಘ್ರವೇ ಪ್ರಾರಂಭವಾಗಬಹುದೆಂಬ ನಿರೀಕ್ಷೆ ಮೂಡಿದೆ.ಸಂವಿಧಾನ ಭವನಕ್ಕೆ ೩ ಕೋಟಿ ರು. ಹಣ ಬಿಡುಗಡೆಯಾಗಿದೆ. ಮುಂದಿನ ವಾರದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಿ ಇನ್ನೊಂದು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಸಂವಿಧಾನ ಆಶಯಗಳನ್ನು ಜನರಿಗೆ ತಿಳಿಸುವುದು ಇದರ ಮೂಲ ಉದ್ದೇಶ. ಸಂವಿಧಾನದ ಪುಸ್ತಕ ಮಾದರಿಯಲ್ಲಿ ತಲೆಎತ್ತಲಿರುವ ಭವನ ಭಾರತದಲ್ಲೇ ಮೊದಲ ಸಂವಿಧಾನ ಭವನ ಎಂಬ ಹಿರಿಮೆಗೆ ಪಾತ್ರವಾಗಲಿದೆ.&amp;nbsp;&lt;/p&gt;&lt;p&gt;- ಪಿ.ರವಿಕುಮಾರ್, ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರಸಂವಿಧಾನ ಭವನ ಜಿಲ್ಲಾ ವಕೀಲರ ಸಂಘದ ಕನಸಿನ ಕೂಸು. ಅದರ ತ್ರೀ-ಡಿ ಮಾದರಿ ಇದೀಗ ಅಂತಿಮಗೊಂಡಿದೆ. ೭ ಕೋಟಿ ರು. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭವನಕ್ಕೆ ೩ ಕೋಟಿ ರು. ಹಣ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು.&lt;/p&gt;&lt;p&gt;&lt;strong&gt;- ಟಿ.ಎಸ್.ಸತ್ಯಾನಂದ, ಅಧ್ಯಕ್ಷರು, ಜಿಲ್ಲಾ ವಕೀಲರ ಸಂಘ, ಮಂಡ್ಯ&lt;/strong&gt;&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/mandya-constitution-bhavan-in-3d-approval-granted-by-karnataka-government-rav-kteyeol"/>
        </item>
        <item>
            <title><![CDATA[ಡಿ.ಕೆ. ಶಿವಕುಮಾರ್‌ರನ್ನ ಜೈಲಿಗೆ ಕಳಿಸಲು ಕುಮಾರಸ್ವಾಮಿ-ಅಮಿತ್ ಶಾ ಸಂಚು: ಶಾಸಕ ಗಣಿಗ ರವಿಕುಮಾರ್ ಸ್ಫೋಟಕ ಹೇಳಿಕೆ!]]></title>
            <link>https://kannada.asianetnews.com/politics/mandya-mla-ravikumar-ganiga-slams-hd-kumaraswamy-amit-shah-conspiracy-against-cm-dk-shivakumar/articleshow-loz7cg7</link>
            <guid isPermaLink="true">https://kannada.asianetnews.com/politics/mandya-mla-ravikumar-ganiga-slams-hd-kumaraswamy-amit-shah-conspiracy-against-cm-dk-shivakumar/articleshow-loz7cg7</guid>
            <pubDate>Wed, 15 Jul 2026 18:37:34 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಅಮಿತ್ ಶಾ ಜಂಟಿಯಾಗಿ ಸಂಚು ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಆರೋಪಿಸಿದ್ದಾರೆ. ಇಡಿ, ಸಿಬಿಐ ಬಳಸಿ ಸಿಎಂಗೆ ತೊಂದರೆ ನೀಡುವುದಲ್ಲದೆ, ಬಿಡದಿ AI ಸಿಟಿ ಯೋಜನೆಗೂ ಅಡ್ಡಿಪಡಿಸಿ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khr6b7dezszj2mzawynwyn8q,imgname-mandya-mla-ganiga-ravikumar-1771412233646.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.15): ಕ&lt;/strong&gt;ರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ರಾಜಕೀಯ ಷಡ್ಯಂತ್ರಗಳು ತೀವ್ರಗೊಂಡಿವೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅಮಿತ್ ಶಾ ಅವರು ಸಿಎಂ ವಿರುದ್ಧ ಜಂಟಿಯಾಗಿ ಸಂಚು ರೂಪಿಸುತ್ತಿದ್ದಾರೆ ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಇಡಿ, ಸಿಬಿಐ ಬಳಸಿ ಸಿಎಂಗೆ ತೊಂದರೆ:&lt;/strong&gt;&lt;/h2&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಗಣಿಗ ರವಿಕುಮಾರ್, 'ಸಿಎಂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಪ್ರತಿದಿನವೂ ಸಂಚು ನಡೆಯುತ್ತಿದೆ. ಅಮಿತ್ ಶಾ ಅವರೊಂದಿಗೆ ಕೈಜೋಡಿಸಿರುವ ಕುಮಾರಸ್ವಾಮಿ ಅವರು, ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ (ED) ಮತ್ತು ಸಿಬಿಐ (CBI) ಅನ್ನು ಬಳಸಿಕೊಂಡು ಸಿಎಂ ಅವರನ್ನ ಜೈಲಿಗಾಕಲು ಷಡ್ಯಂತ್ರ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಅಭಿವೃದ್ಧಿ ಮಾಡಲೂ ಆಗುವುದಿಲ್ಲ, ಅಭಿವೃದ್ಧಿ ಮಾಡುವವರಿಗೂ ಅವರು ಬಿಡುವುದಿಲ್ಲ' ಎಂದು ಕಿಡಿಕಾರಿದರು.&lt;/p&gt;&lt;h2&gt;&lt;strong&gt;ಬಿಡದಿ AI ಸಿಟಿ ಮತ್ತು ರೈತರಿಗೆ ದ್ರೋಹ:&lt;/strong&gt;&lt;/h2&gt;&lt;p&gt;ಬಿಡದಿಯಲ್ಲಿ 'AI ಸಿಟಿ' (ಕೃತಕ ಬುದ್ಧಿಮತ್ತೆ ನಗರ) ನಿರ್ಮಾಣ ಮಾಡುವುದು ಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸಾಗಿತ್ತು. ಇದರಿಂದ ಹಳೆ ಮೈಸೂರು ಭಾಗದ ರೈತರ ಜಮೀನಿಗೆ ಚಿನ್ನದ ಬೆಲೆ ಬಂದು ಸಮಗ್ರ ಅಭಿವೃದ್ಧಿಯಾಗುತ್ತಿತ್ತು. ಆದರೆ ಕುಮಾರಸ್ವಾಮಿ ಅವರು ಈ ಯೋಜನೆಗೆ ಅಡ್ಡಿಪಡಿಸಿ ಒಕ್ಕಲಿಗ ರೈತರು ಉದ್ಧಾರವಾಗುವುದನ್ನು ತಡೆಯುತ್ತಿದ್ದಾರೆ. ಹಿಂದೆ ಬಿಡದಿಯಲ್ಲಿ ಏರ್&zwnj;ಪೋರ್ಟ್ ನಿರ್ಮಾಣವಾಗುವುದನ್ನೂ ಇವರೇ ತಪ್ಪಿಸಿದ್ದರು. ಅಂದು ವಿಮಾನ ನಿಲ್ದಾಣವಾಗಿದ್ದರೆ ಈ ಭಾಗದ ಚಿತ್ರಣವೇ ಬದಲಾಗುತ್ತಿತ್ತು ಎಂದು ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಕುಮಾರಸ್ವಾಮಿ ವಿರುದ್ಧ ಹಳೆಯ ವಿಚಾರಗಳ ಪ್ರಸ್ತಾಪ:&lt;/strong&gt;&lt;/h2&gt;&lt;p&gt;'ಈ ಹಿಂದೆ ಎಸ್.ಎಂ. ಕೃಷ್ಣ ಅವರಿಗೂ ಇದೇ ರೀತಿ ತೊಂದರೆ ಕೊಟ್ಟಿದ್ದರು, ಈಗ ಡಿ.ಕೆ. ಶಿವಕುಮಾರ್ ಅವರಿಗೂ ಅದೇ ರೀತಿ ಮಾಡುತ್ತಿದ್ದಾರೆ. ಹಿಂದೆ ಅಕ್ಕ ಸಮ್ಮೇಳನದ ವಿಚಾರವಾಗಿ ಅಮೆರಿಕದ ನಿಯೋಗ ಕುಮಾರಸ್ವಾಮಿ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿ ಮಾಡಿದ್ದಾಗ, ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಕುಮಾರಸ್ವಾಮಿ ಅವರು ಏನೆಲ್ಲಾ ಮಾತನಾಡಿದ್ದರು ಎಂಬುದು ನಮಗೆ ತಿಳಿದಿದೆ. ಆ ವಿಷಯ ಮಾಧ್ಯಮಗಳಲ್ಲಿ ಬಂದಾಗ ಅವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಆ ಸಮಯದಲ್ಲಿ ಅವರು ಏನು ಮಾತನಾಡಿದ್ದರು ಎಂಬುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇವೆ' ಎಂದು ಶಾಸಕರು ಎಚ್ಚರಿಕೆ ನೀಡಿದರು.&lt;/p&gt;&lt;h2&gt;&lt;strong&gt;ಕೈಗಾರಿಕಾ ಸಚಿವರಾಗಿ ಹೆಚ್&zwnj;ಡಿಕೆ ವೈಫಲ್ಯ:&lt;/strong&gt;&lt;/h2&gt;&lt;p&gt;ಕೇಂದ್ರ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಟೀಕಿಸಿದ ಅವರು, 'ಕೈಗಾರಿಕೆ ತನ್ನಿ ಎಂದರೆ ನನ್ನನ್ನ ಯಾಕೆ ಕೇಳ್ತೀರಾ ಎನ್ನುತ್ತಾರೆ. ನೀವು ಕೈಗಾರಿಕಾ ಸಚಿವರಾದ ಮೇಲೆ ನಾವು ಕೈಗಾರಿಕೆಯನ್ನೇ ಕೇಳಬೇಕು. ಹಾಸನದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಶೂನ್ಯ. ರೇವಣ್ಣ ಮತ್ತು ದೇವೇಗೌಡರ ಕಾರಣದಿಂದ ಹಾಸನ ಅಭಿವೃದ್ಧಿಯಾಗಿದೆ' ಎಂದರು.&lt;/p&gt;&lt;p&gt;ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿ ಮುಂದುವರೆದರೆ ಅಪ್ಪ-ಮಕ್ಕಳ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬ ಭಯದಿಂದಲೇ ಕುಮಾರಸ್ವಾಮಿ ಅವರು ಬಿಡದಿ ಟೌನ್ ಶಿಪ್ ಸೇರಿದಂತೆ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಶಾಸಕ ಗಣಿಗ ರವಿಕುಮಾರ್ ವಾಗ್ದಾಳಿ ನಡೆಸಿದರು.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/mandya-mla-ravikumar-ganiga-slams-hd-kumaraswamy-amit-shah-conspiracy-against-cm-dk-shivakumar/articleshow-loz7cg7"/>
        </item>
        <item>
            <title><![CDATA[ಡಿಕೆಶಿ ಸಿಎಂ ಆಗಿ ಒಂದು ತಿಂಗಳು ಕಳೆದಿಲ್ಲ, ರಾಜ್ಯದ ಎಲ್ಲ ಡ್ಯಾಂಗಳು ಖಾಲಿ: ಆರ್ ಅಶೋಕ್ ವಾಗ್ದಾಳಿ, ರೈತರಿಗೆ 50 ಸಾವಿರ ಪರಿಹಾರಕ್ಕೆ ಆಗ್ರಹ]]></title>
            <link>https://kannada.asianetnews.com/politics/karnataka-all-dams-empty-r-ashok-slams-cm-dk-shivakumar-at-krs-mandya-rav/articleshow-p3rm138</link>
            <guid isPermaLink="true">https://kannada.asianetnews.com/politics/karnataka-all-dams-empty-r-ashok-slams-cm-dk-shivakumar-at-krs-mandya-rav/articleshow-p3rm138</guid>
            <pubDate>Sat, 04 Jul 2026 14:11:04 +0530</pubDate>
            <description><![CDATA[ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಡಿಕೆ ಶಿವಕುಮಾರ್ ಸರ್ಕಾರದ ಅವಧಿಯಲ್ಲಿ ಡ್ಯಾಂಗಳು ಖಾಲಿಯಾಗಿರುವುದನ್ನು ಟೀಕಿಸಿದ್ದಾರೆ. ಕರ್ನಾಟಕದ ರೈತರಿಗೆ ಬೆಳೆ ಬೆಳೆಯದಂತೆ ಹೇಳುವ ಸರ್ಕಾರ, ತಮಿಳುನಾಡಿಗೆ ಇದೇ ಮಾತನ್ನು ಹೇಳಲು ಸವಾಲು ಹಾಕಿದ್ದು, ಬೆಳೆ ಬೆಳೆಯದ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-ani20250719161749,imgname-image-3aa984ee-c8bf-4e84-b547-cdbac43fbdac.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.4):&lt;/strong&gt; ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಒಂದು ತಿಂಗಳಲ್ಲೇ ರಾಜ್ಯದ ಎಲ್ಲ ಡ್ಯಾಂಗಳು ಖಾಲಿ ಖಾಲಿಯಾಗಿವೆ ಎಂದು ವಿರೋಧ ಪಕ್ಷದ ನಾಯಕ ಆರ್&zwnj; ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಇಂದು ಮಂಡ್ಯದ ಕೆಆರ್&zwnj;ಎಸ್&zwnj; ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಈ ಸಂದರ್ಭದಲ್ಲಿದ್ದ ಡ್ಯಾಂನ ನೀರಿನ ಮಟ್ಟದ ಕಾಲು ಭಾಗವೂ ಈ ವರ್ಷ ಇಲ್ಲ. ಈಗ ಕೇವಲ 6 ಟಿಎಂಸಿ ಮಾತ್ರ ನೀರು ಉಳಿದಿದೆ. ಆದರೆ ಪ್ರತಿ ತಿಂಗಳು ಕುಡಿಯುವ ನೀರಿಗೆ 3 ಟಿಎಂಸಿ ಬೇಕು. ಅದು ಅಲ್ಲದೆ ರೈತರು ಸುಮಾರು ಒಂದು ಲಕ್ಷ ಹೆಕ್ಟರ್&zwnj;ನಲ್ಲಿ ಬೆಳೆ ಬೆಳೆದಿದ್ದಾರೆ. ಡ್ಯಾಂ ಖಾಲಿ ಆಗಿವೆ ಬೆಳೆ ಬೆಳೆಯಬೇಡಿ ಅಂತೆಲ್ಲ ಸಿಎಂ ಹೇಳಿದ್ದಾರೆ. ಆದರೆ ನೀವು ಗಮನಿಸಿರಬೇಕು, ಮಧ್ಯಪ್ರಾಚ್ಯ ಯುದ್ಧ ನಡೆಯುವುದು ಚಿನ್ನದ ಬೆಲೆ ಭಾರೀ ಏರಿಕೆ ಆಗಿತ್ತು ಆಗ ಪ್ರಧಾನಿ ಮೋದಿಯವರು ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿದಾಗ, ಪ್ರಧಾನಿ ಹೇಳಿಕೆ ಖಂಡಿಸಿ ಇವರೇ(ಕಾಂಗ್ರೆಸ್) ಬಾಯಿಬಡಿದುಕೊಂಡರು ಈಗ ಬೆಳೆ ಬೆಳೆಯಬೇಡಿ ಎನ್ನುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.&lt;/p&gt;&lt;h2&gt;ಬೆಳೆ ಬೆಳೆಯಬೇಡಿ ಅಂತಾ ತಮಿಳುನಾಡಿಗೆ ಹೇಳಿ&lt;/h2&gt;&lt;p&gt;ತಮಿಳನಾಡಲ್ಲೂ ಇದೇ ಕಾಂಗ್ರೆಸ್ ಹೊಂದಾಣಿಗೆ ಮಾಡಿಕೊಂಡಿರುವ ಪಕ್ಷ ಇದೆ. ಆದರೆ ಅಲ್ಲಿನ ಕಾಂಗ್ರೆಸ್ ನಾಯಕರೇ ಕರ್ನಾಟಕ ಸರ್ಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ. ಸಿಎಂ ಡಿಕೆಶಿ ಅವ್ರೇ ನಮ್ಮ ರೈತರಿಗೆ ಬೆಳೆ ಬೆಳೆಯಬೇಡಿ ಅಂತಾ ಹೇಳ್ತಿರಿ, ಇದೇ ರೀತಿ ತಮಿಳುನಾಡಿಗೆ ಹೇಳಿ ನೋಡೋಣ. ಕಳೆದ ಬಾರಿ ಸ್ಟಾಲಿನ್ ಇದ್ರು. ಈ ಬಾರಿ ಟಿವಿಕೆ ಜೊತೆ ಕಾಂಗ್ರೆಸ್ ಪಾರ್ಟನರ್ ಆಗಿದೆಯಲ್ಲ. ನಮ್ಮ ರಾಜ್ಯದಲ್ಲಿ ಮಳೆಯಿಲ್ಲ, ಡ್ಯಾಂಗಳು ಖಾಲಿಯಾಗಿವೆ. ಇಲ್ಲಿನ ಜನರಿಗೆ ಕುಡಿಯೋಕೂ ನೀರಿಲ್ಲ. ಬೆಳೆ ಬೆಳೆಯಬೇಡಿ ಅಂತಾ ಹೇಳಿ ನೋಡೋಣ ಎಂದು ಸವಾಲು ಹಾಕಿದರು.&lt;/p&gt;&lt;p&gt;ಸರ್ಕಾರ ಇಂಥ ಸಂದರ್ಭದಲ್ಲಿ ರೈತರು, ಸರ್ವಪಕ್ಷದ ಸಭೆ ಕರೆಯಬೇಕಿತ್ತು. ಆದರೆ ಸರ್ಕಾರ ಕಸದ ಟೆಂಡರ್, ಟನಲ್ ರೋಡ್ ಟೆಂಡರ್ ಕರೆಯೋದ್ರಲ್ಲಿ ಆಸಕ್ತಿ ತೋರಿಸುತ್ತಿದೆ. ಮಳೆ ಅಭಾವದ ಸಂಧರ್ಭದಲ್ಲಿ ಆಗಬೇಕಾದ ಕ್ರಮ ಕುರಿತು ಚರ್ಚಿಸಲು ಈ ಸರ್ಕಾರಕ್ಕೆ ಮನಸಿಲ್ಲ, ಕಾಳಜಿನೇ ಇಲ್ಲ. ರೈತರ ಸಮಸ್ಯೆ ಕೇಳಲು ಕೃಷಿ ಸಚಿವರಿಲ್ಲ, ಸಂಪುಟ ರಚನೆಯಂತೂ ಪೂರ್ಣಗೊಂಡಿಲ್ಲ. ಪೇಮೆಂಟ್ ಕ್ಯಾಬಿನೆಟ್&zwnj;ಗೆ ಕಾಯ್ತಿದ್ದಾರ? ದೆಹಲಿಯವರಿಗೆ ದುಡ್ಡು ಕೊಟ್ಟು ಕ್ಯಾಬಿನೆಟ್ ಸ್ಥಾನ ಪಡೆಯಬೇಕು, ಅದರಲ್ಲಿ ಅನುಮಾನವೇ ಇಲ್ಲ. ಡಿಕೆ ಶಿವಕುಮಾರ್ ಸರ್ಕಾರ ದೆಹಲಿ ಕಾಂಗ್ರೆಸ್ ಹೈಕಮಾಂಡ್&zwnj;ನ ಎಟಿಎಂ ಅಗಿದೆ ಎಂದು ಆರೋಪಿಸಿದರು.&lt;/p&gt;&lt;p&gt;ರಾಜ್ಯದಲ್ಲಿ ಕುಡಿಯೋಕೂ ನೀರಿಲ್ಲದೆ ಹಾಹಾಕಾರ ಶುರುವಾಗಿದೆ. ಬೆಳೆ ಬೆಳೆಯಬೇಡಿ ಅಂತೀರಲ್ಲ ಬೆಳೆ ಬೆಳೆಯದೆ ಹೊಟ್ಟೆಗೇನು ಕಡ್ಲೇಕಾಯಿ ತಿನ್ನಬೇಕಾ? ಆಯ್ತಪ್ಪ ಬೆಳೆ ಬೆಳೆಯೋದು ಬೇಡ ಅಂದ್ರೆ ರೈತರಿಗೆ ಪರಿಹಾರ ಆದ್ರೂ ನೀಡಬೇಕಿತ್ತಲ್ಲ? ಮಳೆ ಕೈಕೊಟ್ಟಿದ್ದರಿಂದ ಪರ್ಯಾಯ ಯೋಜನೆಯಾದ್ರೂ ಈ ಸರ್ಕಾರ ಮಾಡಬೇಕಿತ್ತಲ್ವಾ? ಮಳೆ ಕೊರತೆ ಆಗಿದೆ ಹೆದರಬೇಡಿ, ನಿಮ್ಮ ಜೊತೆಗೆ ನಾವಿದ್ದೇವೆ ಅಂತ ಸರ್ಕಾರ ರೈತರ ಜೊತೆ ನಿಲ್ಲಬೇಕಿತ್ತಲ್ಲ? ಅವರಿಗಾಗುವ ನಷ್ಟ ತುಂಬಿಕೊಡ್ತೀವಿ ಎಂಬ ಧೈರ್ಯ ಹೇಳಬೇಕಿತ್ತಲ್ಲ? ಹೂಂ ಇದ್ಯಾವುದು ಹೇಳದೆ ಬೆಳೆ ಬೆಳೆಯಬೇಡಿ ಅಂದ್ರೆ ಕೃಷಿಯನ್ನೇ ಅವಲಂಬಿಸಿರೋ ರೈತರು ಹೇಗೆ ಬದುಕಬೇಕು? ಎಂದು ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;h3&gt;ಬೆಳೆ ಬೆಳೆಯದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ಕೊಡಿ:&lt;/h3&gt;&lt;p&gt;ಬೆಳೆ ಬೆಳೆಯದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ಕೊಡುವಂತೆ ಆಗ್ರಹಿಸಿದ ಆರ್ ಅಶೋಕ್, ಸದ್ಯ ಕೆಆರ್&zwnj;ಎಸ್ ಡ್ಯಾಂ&zwnj;ಗೆ 900ಕ್ಯೂಸೆಕ್ ಒಳಹರಿವು ಇದೆ. ಒಳಹರಿವಿಗಿಂತ ಹೆಚ್ಚು ಹೊರ ಹರಿವು ಇದೆ. ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡುವ ಪ್ಲಾನ್ ಮಾಡ್ಕೊಂಡಿದ್ದಾರಾ, ಗೊತ್ತಿಲ್ಲ? ನಿಜಕ್ಕೂ ಈ ಸರ್ಕಾರ ಜೀವಂತ ಇದ್ರೆ ಮೊದಲು ರೈತರಿಗೆ ಪರಿಹಾರ ಕೊಡುವ ಘೋಷಣೆ ಮಾಡಲಿ. ಇಲ್ಲದಿದ್ರೆ ನಮ್ಮ ಸರ್ಕಾರ ಪಾಪಾರ್ ಆಗಿದೆ ಅಂತಾದ್ರೂ ಹೇಳಿಬಿಡಲಿ. ಅದುಬಿಟ್ಟು&lt;/p&gt;]]></content:encoded>
            <category>mandya</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/karnataka-all-dams-empty-r-ashok-slams-cm-dk-shivakumar-at-krs-mandya-rav/articleshow-p3rm138"/>
        </item>
        <item>
            <title><![CDATA[ಅಮಾವಾಸ್ಯೆ ರಾತ್ರಿ 'ಕೊಳ್ಳಿ ದೆವ್ವ'ಕ್ಕೆ ಕಲ್ಲು ಎಸೆದ ಯುವಕ...ಮುಂದಾಗಿದ್ದೇನು?]]></title>
            <link>https://kannada.asianetnews.com/gallery/mandya/kolli-devva-horror-story-mandya-amavasya-true-story-kannada-suh-qir4g47</link>
            <guid isPermaLink="true">https://kannada.asianetnews.com/gallery/mandya/kolli-devva-horror-story-mandya-amavasya-true-story-kannada-suh-qir4g47</guid>
            <pubDate>Wed, 08 Jul 2026 16:19:53 +0530</pubDate>
            <description><![CDATA[&lt;p&gt;Mandya Amavasya true horror story ಅಮಾವಾಸ್ಯೆ ರಾತ್ರಿ 'ಕೊಳ್ಳಿ ದೆವ್ವ'ವನ್ನು ಸವಾಲು ಹಾಕಿದ ಯುವಕನಿಗೆ ಬಳಿಕ ಸರಣಿ ಭಯಾನಕ ಘಟನೆಗಳು ಎದುರಾದವು ಎಂಬ ಜನಪ್ರಿಯ ಹಾರರ್ ಕಥೆ ಇದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0n9gh6t3r81rjznkz2xhwt,imgname-mandya-amavasya-true-horror-story--5--1783507501606.jpeg" type="image/jpeg" height="390" width="690"/>
            <content:encoded><![CDATA[&lt;p&gt;Mandya Amavasya true horror story ಅಮಾವಾಸ್ಯೆ ರಾತ್ರಿ 'ಕೊಳ್ಳಿ ದೆವ್ವ'ವನ್ನು ಸವಾಲು ಹಾಕಿದ ಯುವಕನಿಗೆ ಬಳಿಕ ಸರಣಿ ಭಯಾನಕ ಘಟನೆಗಳು ಎದುರಾದವು ಎಂಬ ಜನಪ್ರಿಯ ಹಾರರ್ ಕಥೆ ಇದು.&lt;/p&gt;&lt;img&gt;&lt;p&gt;2012ರಲ್ಲಿ ಬೆಂಗಳೂರಿನ ಚಿರಾಗ್ (ಹೆಸರು ಬದಲಿಸಲಾಗಿದೆ) ಎಂಬ ಯುವಕನಿಗೆ ನಡೆದಿತ್ತೆಂದು ಹೇಳಲಾಗುವ ಈ ಘಟನೆ ಇಂದಿಗೂ ಹಾರರ್ ಕಥೆಗಳ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತದೆ. ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮತ್ತು ಟೈಲರಿಂಗ್ ನಡೆಸುತ್ತಿದ್ದ ತಾಯಿಯ ಕಷ್ಟಪಟ್ಟು ಬೆಳೆಸಿದ ಮಗನಾದ ಚಿರಾಗ್, ಪದವಿ ಮುಗಿಸಿದ ಬಳಿಕ ಬೆಂಗಳೂರಿನ ಜೆಪಿ ನಗರದಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದ. ಕೆಲಸಕ್ಕೆ ಸೇರುವ ಮೊದಲು ಒಂದು ತಿಂಗಳ ಸಮಯ ಇದ್ದ ಕಾರಣ ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಗ್ರಾಮದಲ್ಲಿದ್ದ ಅಜ್ಜ-ಅಜ್ಜಿಯನ್ನು ಭೇಟಿ ಮಾಡಲು ತೆರಳಿದ್ದ.&lt;/p&gt;&lt;img&gt;&lt;p&gt;ಆ ಗ್ರಾಮದಲ್ಲಿ ಪ್ರತಿ ಅಮಾವಾಸ್ಯೆ ರಾತ್ರಿ 'ಕೊಳ್ಳಿ ದೆವ್ವ' ಕಾಣಿಸಿಕೊಳ್ಳುತ್ತದೆ ಎಂಬ ನಂಬಿಕೆ ವರ್ಷಗಳಿಂದ ಇತ್ತು. ರಾತ್ರಿ ವೇಳೆ ಹೊಲ, ಕಬ್ಬಿನ ಗದ್ದೆ ಮತ್ತು ಕಾಲುವೆಗಳ ಬಳಿ ಯಾರೂ ಹೋಗುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸುತ್ತಿದ್ದರು. ಆದರೆ ದೇವರು, ಭೂತ-ಪ್ರೇತಗಳ ಮೇಲೆ ನಂಬಿಕೆ ಇಲ್ಲದ ಚಿರಾಗ್ ಈ ಮಾತುಗಳನ್ನು ಮೂಢನಂಬಿಕೆ ಎಂದು ತಳ್ಳಿ ಹಾಕಿದ್ದ. ಗ್ರಾಮದ ಟೀ ಅಂಗಡಿ ಮಾಲೀಕ ಕೂಡ ಅಮಾವಾಸ್ಯೆ ರಾತ್ರಿ ಹೊರಗೆ ಹೋಗಬೇಡ ಎಂದು ಎಚ್ಚರಿಸಿದ್ದರೂ, ಚಿರಾಗ್ ಅದನ್ನು ಸವಾಲಾಗಿ ತೆಗೆದುಕೊಂಡ. ರಾತ್ರಿ ಸುಮಾರು 11 ಗಂಟೆಗೆ ಒಬ್ಬನೇ ಕಬ್ಬಿನ ಗದ್ದೆಯೊಳಗೆ ತೆರಳಿದ. ಅಲ್ಲಿ ನೆಲದಿಂದ ಸ್ವಲ್ಪ ಎತ್ತರದಲ್ಲಿ ತೇಲುತ್ತಿದ್ದ ಹಳದಿ ಬಣ್ಣದ ಬೆಂಕಿಯ ಉಂಡೆಯಂತಹ ಬೆಳಕು ಅವನ ಕಣ್ಣಿಗೆ ಬಿತ್ತು. ಅದನ್ನು ಯಾರೋ ಆಟವಾಡಿಸುತ್ತಿದ್ದಾರೆ ಎಂದುಕೊಂಡ ಚಿರಾಗ್, ಕಲ್ಲು ಎಸೆದು ಹೊಡೆದ. ಕಲ್ಲು ತಾಗುತ್ತಿದ್ದಂತೆ ಆ ಬೆಳಕು ಕ್ಷಣಾರ್ಧದಲ್ಲಿ ಮಾಯವಾಯಿತು.&lt;/p&gt;&lt;img&gt;&lt;p&gt;ಆದರೆ ಅಲ್ಲಿಂದ ಆರಂಭವಾದ ಘಟನೆಗಳು ಚಿರಾಗ್&zwnj;ನ ಬದುಕನ್ನೇ ಬದಲಿಸಿವೆ ಎನ್ನಲಾಗುತ್ತದೆ. ಹಿಂದಿನಿಂದ ತನ್ನ ಹೆಸರನ್ನು ಯಾರೋ ಕರೆಯುತ್ತಿರುವ ಶಬ್ದ, ವಿಚಿತ್ರ ನಗು, ಯಾರೂ ಇಲ್ಲದ ಜಾಗದಲ್ಲಿ ಯಾರೋ ಹಿಂಬಾಲಿಸುತ್ತಿರುವ ಅನುಭವ ಅವನನ್ನು ಕಾಡತೊಡಗಿತು. ಮನೆಗೆ ಬಂದ ಬಳಿಕವೂ ರಾತ್ರಿ ನಿದ್ದೆಯಾಗದೇ ಅದೇ ಧ್ವನಿಗಳು ಕೇಳಿಸುತ್ತಿದ್ದವು. ಕೆಲವೇ ಕ್ಷಣಗಳಲ್ಲಿ ಅವನಿಗೆ ಹೊಟ್ಟೆ ಉರಿ ಆರಂಭವಾಗಿ, ವಾಂತಿ ಮಾಡಿದಾಗ ಬೂದಿಯಂತಿರುವ ವಸ್ತು ಹೊರಬಂದಿತೆಂದು ಕಥೆ ಹೇಳುತ್ತದೆ. ಮರುದಿನ ಈ ವಿಷಯವನ್ನು ಸ್ನೇಹಿತ ವಿನೋದ್&zwnj;ಗೆ ಹೇಳಿದಾಗ, &quot;ನೀನು ಕೊಳ್ಳಿ ದೆವ್ವವನ್ನು ಅವಮಾನ ಮಾಡಿದ್ದೀಯ, ಇನ್ನು ಏನಾಗುತ್ತದೋ ನೋಡುತ್ತೀಯ&quot; ಎಂದು ಆತ ಆತಂಕ ವ್ಯಕ್ತಪಡಿಸಿದ್ದ. ಆದರೆ ಚಿರಾಗ್ ಅದನ್ನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.&lt;/p&gt;&lt;img&gt;&lt;p&gt;ದಿನಗಳು ಕಳೆದಂತೆ ಪರಿಸ್ಥಿತಿ ಮತ್ತಷ್ಟು ಭಯಾನಕವಾಯಿತು. ಮಧ್ಯರಾತ್ರಿ ವಿಚಿತ್ರ ಅಳುವಿನ ಶಬ್ದಗಳು, ತನ್ನ ಹೆಸರನ್ನು ಕರೆಯುವ ಧ್ವನಿ, ಕಾಣದ ಶಕ್ತಿಯೊಂದು ತನ್ನನ್ನು ಹೊರಗೆ ಕರೆದುಕೊಂಡು ಹೋಗುತ್ತಿರುವ ಅನುಭವ ಅವನಿಗೆ ಆಗತೊಡಗಿತು. ಕೆಲವೊಮ್ಮೆ ತನ್ನ ದೇಹದ ಮೇಲೆಯೇ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಆತ ಹೇಳಿಕೊಂಡಿದ್ದ. ಒಂದು ದಿನ ಬೈಕ್&zwnj;ನಲ್ಲಿ ಮನೆಗೆ ಬರುತ್ತಿದ್ದಾಗ ಮತ್ತೆ ಅದೇ ಬೆಂಕಿಯ ಉಂಡೆ ಕಾಣಿಸಿಕೊಂಡಿತು. ಅದನ್ನು ಹಿಂಬಾಲಿಸುತ್ತಾ ಹೋಗಿ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರೂ ಭುಜಕ್ಕೆ ಹಾಗೂ ತಲೆಗೆ ಗಾಯಗಳಾಗಿದ್ದವು. ಮನೆಗೆ ಕರೆತಂದ ಬಳಿಕ ಅವನ ಬೆನ್ನಿನ ಮೇಲೆ ಸುಟ್ಟ ಗಾಯದ ಗುರುತುಗಳಂತೆ ಕಾಣಿಸಿಕೊಂಡಿದ್ದು ಕುಟುಂಬದವರ ಆತಂಕಕ್ಕೆ ಕಾರಣವಾಯಿತು.&lt;/p&gt;&lt;img&gt;&lt;p&gt;ಕೆಲ ದಿನಗಳ ನಂತರ ಚಿರಾಗ್ ನಾಪತ್ತೆಯಾಗಿದ್ದ. ಹುಡುಕಾಟ ನಡೆಸಿದಾಗ ಕಬ್ಬಿನ ಗದ್ದೆಯ ಮಧ್ಯದಲ್ಲಿ ಬಟ್ಟೆಯಿಲ್ಲದೆ ವೃತ್ತಾಕಾರದಲ್ಲಿ ಸುತ್ತುತ್ತಾ, ಕೈಯಲ್ಲಿದ್ದ ಕೋಲಿನಿಂದ ತನ್ನನ್ನೇ ಹೊಡೆಯುತ್ತಿರುವ ಸ್ಥಿತಿಯಲ್ಲಿ ಕಂಡುಬಂದ. ಆಗ ಆತ, &quot;ಬೆಂಕಿಯ ಉಂಡೆ ನನ್ನನ್ನು ಇಲ್ಲಿ ಕರೆತಂದಿತು. ನಂತರ ಬೆಂಕಿ ಹಿಡಿದ ಕೋಲು ಹಿಡಿದ ಭಯಾನಕ ಆಕೃತಿ ನನ್ನ ಮುಂದೆ ಕಾಣಿಸಿಕೊಂಡು ನನ್ನನ್ನು ತನ್ನ ಹಿಂದೆ ನಡೆಯುವಂತೆ ಮಾಡಿತು&quot; ಎಂದು ಹೇಳಿದ್ದಾನೆ ಎನ್ನಲಾಗಿದೆ. ಕೊನೆಗೆ ಅಜ್ಜಿ ಗ್ರಾಮದಲ್ಲಿದ್ದ ಪುರಾತನ ಶಿವ ದೇವಸ್ಥಾನದ ವಯೋವೃದ್ಧ ಅರ್ಚಕರ ಬಳಿ ಕರೆದುಕೊಂಡು ಹೋದರು. ಅವರು ಚಿರಾಗ್&zwnj;ಗೆ ವಿಶೇಷ ಪೂಜೆ ಮಾಡಿ, ಮಂತ್ರಿಸಿದ ವಿಭೂತಿ ಮತ್ತು ತಾಯಿತ ನೀಡಿ, ಮತ್ತೆ ಬೆಂಕಿಯ ಉಂಡೆ ಕಂಡರೆ ಶಿವನ ನಾಮಸ್ಮರಣೆ ಮಾಡುತ್ತಾ ವಿಭೂತಿ ಎರಚುವಂತೆ ಸೂಚಿಸಿದರು. ಅರ್ಚಕರ ಮಾತಿನಂತೆ ಮಾಡಿದ ನಂತರ ಭಯಾನಕ ಅನುಭವಗಳು ನಿಂತು, ಕೊಳ್ಳಿ ದೆವ್ವದ ಕಾಟದಿಂದ ಮುಕ್ತಿ ಸಿಕ್ಕಿತೆಂದು ಈ ಕಥೆ ಹೇಳುತ್ತದೆ. ಆ ಘಟನೆಯ ಬಳಿಕ ಚಿರಾಗ್ ಯಾವುದೇ ನಂಬಿಕೆಯನ್ನು ಹೀಯಾಳಿಸುವುದನ್ನು ಬಿಟ್ಟಿದ್ದಾನೆ ಎನ್ನಲಾಗುತ್ತದೆ. ಆದರೆ ಆ ಅಮಾವಾಸ್ಯೆಯ ರಾತ್ರಿಗಳ ನೆನಪು ಬಂದಾಗ ಇಂದಿಗೂ ಆತ ಬೆಚ್ಚಿಬೀಳುತ್ತಾನೆ ಎಂಬುದು ಈ ಕಥೆಯ ಅಂತ್ಯ.&lt;/p&gt;]]></content:encoded>
            <category>mandya</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/mandya/kolli-devva-horror-story-mandya-amavasya-true-story-kannada-suh-qir4g47"/>
        </item>
        <item>
            <title><![CDATA[ಮಂಡ್ಯ ಮೂಲದ ಕುಟುಂಬಕ್ಕೆ ಮಾರ್ಗೋನಹಳ್ಳಿಯ 95 ಎಕರೆ ಗೋಮಾಳ ಭೂಮಿ ವರ್ಗಾವಣೆ ಆರೋಪ]]></title>
            <link>https://kannada.asianetnews.com/karnataka-districts/mandya-kr-pete-95-acres-of-gomala-land-illegally-allotted-to-powerful-people-allegations-mrq/articleshow-rco3qhe</link>
            <guid isPermaLink="true">https://kannada.asianetnews.com/karnataka-districts/mandya-kr-pete-95-acres-of-gomala-land-illegally-allotted-to-powerful-people-allegations-mrq/articleshow-rco3qhe</guid>
            <pubDate>Tue, 14 Jul 2026 08:57:29 +0530</pubDate>
            <description><![CDATA[ಕೆ.ಆರ್.ಪೇಟೆ ತಾಲೂಕಿನ ಮಾರ್ಗೋನಹಳ್ಳಿ ಗ್ರಾಮದಲ್ಲಿ 95 ಎಕರೆ ಗೋಮಾಳ ಭೂಮಿಯನ್ನು ಬಲಾಢ್ಯರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಕ್ರಮ ಮಂಜೂರಾತಿ ರದ್ದುಪಡಿಸಿ, ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಅಂಬೇಡ್ಕರ್ ಸೇವಾ ಸಮಿತಿ ನೇತೃತ್ವದಲ್ಲಿ ಒತ್ತಾಯಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kxfad4qe6mcp0x6t73j1qxqz,imgname-mandya-kr-pete-1783999402734.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯ: 95 ಎಕರೆ ಗೋಮಾಳ ಭೂಮಿಯನ್ನು ಬಲಾಢ್ಯರಿಗೆ ಅಕ್ರಮವಾಗಿ ಮಂಜೂರು ಮಾಡಿಕೊಡಲಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ತಾಲೂಕಿನ ಮಾರ್ಗೋನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಕರ್ನಾಟಕ ಅಂಬೇಡ್ಕರ್ ಸೇವಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದ ಗ್ರಾಮಸ್ಥರು, ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಬಲಾಢ್ಯರಿಗೆ ಮಾಡಿಕೊಟ್ಟಿರುವ ಅಕ್ರಮ ಭೂ ಮಂಜೂರಾತಿ ರದ್ದುಪಡಿಸಬೇಕು. ಇದಕ್ಕೆ ಸಹಕರಿಸಿದ ಕಂದಾಯ ಇಲಾಖೆ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.&lt;/p&gt;&lt;h2&gt;&lt;strong&gt;ಸರ್ವೇ ನಂ.13 ಮತ್ತು ಹೊಸ ಸರ್ವೇ ನಂ.165 ರಲ್ಲಿರುವ ಒಟ್ಟು 95 ಎಕರೆ 13 ಗುಂಟೆ ಗೋಮಾಳ ಭೂಮಿ&lt;/strong&gt;&lt;/h2&gt;&lt;p&gt;ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆ.ಎಂ.ಸಂದೇಶ ಮಾತನಾಡಿ, ಗ್ರಾಮದ ಸರ್ವೇ ನಂ.13 ಮತ್ತು ಹೊಸ ಸರ್ವೇ ನಂ.165 ರಲ್ಲಿರುವ ಒಟ್ಟು 95 ಎಕರೆ 13 ಗುಂಟೆ ಗೋಮಾಳ ಭೂಮಿಯನ್ನು ಮಂಡ್ಯ ಮೂಲದ ಡಿ.ರಾಮಲಿಂಗಯ್ಯ ಕುಟುಂಬಸ್ಥರು ಏಕ ಕಾಲದಲ್ಲಿ ಮಂಜೂರು ಮಾಡಿಕೊಂಡಿದ್ದಾರೆ. ಹಣ ಮತ್ತು ರಾಜಕಾರಣಿ ಬಲದಿಂದ ದೌರ್ಜನ್ಯದ ಮೂಲಕ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;ಈ ಭೂಮಿ ದಲಿತರು ಮತ್ತು ಹಿಂದುಳಿದ ವರ್ಗದ ರೈತರಿಗೆ ಸೇರಬೇಕಾಗಿತ್ತು. ಈ ಗ್ರಾಮವೇ ಇನಾಮ್ ಗ್ರಾಮವಾಗಿದೆ. 95 ಎಕರೆ ಭೂಮಿ ಮಂಜೂರಿನ ಹಿಂದೆ ದೊಡ್ಡ ಸಂಚು ನಡೆದಿದೆ. ಕೂಡಲೇ ತನಿಖೆ ಆಗಬೇಕು. ಭೂಕಬಳಿಕೆ ಮಾಡಿರುವ ಡಿ.ರಾಮಲಿಂಗಯ್ಯ ಪುತ್ರ ವಿವೇಕಾನಂದ ಸರ್ಕಾರಿ ಪೊಲೀಸ್ ಅಧಿಕಾರಿಯಾಗಿದ್ದು, ಅದನ್ನು ಪ್ರಶ್ನಿಸಿ ಹೋರಾಟ ಮಾಡುವ ಗ್ರಾಮದ ಮುಗ್ಧ ಜನರ ಮೇಲೆ ಸುಳ್ಳು ಕೇಸ್ ದಾಖಲಿಸಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.&lt;/p&gt;&lt;h3&gt;&lt;strong&gt;ಮಂಜೂರಾತಿ ರದ್ದುಗೊಳಿಸುವಂತೆ ಆಗ್ರಹ&lt;/strong&gt;&lt;/h3&gt;&lt;p&gt;ಈ ಭೂಗಳ್ಳರ ಕುಟುಂಬಕ್ಕೆ ಕಿಕ್ಕೇರಿ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಭೂ ಕಬಳಿಕೆ ವಿರುದ್ಧ ಹೋರಾಟ ಮಾಡುತ್ತಿರುವ ರೈತರು ಕ್ರಿಮಿನಲ್&zwnj;ಗಳಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿರುವ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕಿಕ್ಕೇರಿ ಪೊಲೀಸರು ಬಲಾಡ್ಯರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.&lt;/p&gt;&lt;p&gt;ಗೋಮಳದ ಅಕ್ರಮ ಮಂಜೂರಾತಿ ರದ್ದುಗೊಳಿಸಬೇಕು. ರೈತರ ಮೇಲೆ ಹಾಕಿರುವ ಸುಳ್ಳು ಕೇಸ್&zwnj;ಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ತಹಸೀಲ್ದಾರ್&zwnj;ಗೆ ಮನವಿ ಸಲ್ಲಿಸಿದರು.&lt;/p&gt;&lt;h3&gt;&lt;strong&gt;ತಹಸೀಲ್ದಾರ್ ಶ್ರೇಯಸ್ ಭರವಸೆ&lt;/strong&gt;&lt;/h3&gt;&lt;p&gt;ಮನವಿ ಸ್ವೀಕರಿಸಿದ ತಹಸೀಲ್ದಾರ್ ಶ್ರೇಯಸ್ ಮಾತನಾಡಿ, ಈ ಆರೋಪದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಂದಾಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ಅಕ್ರಮವಾಗಿ ಮಂಜೂರಾಗಿದ್ದರೆ ಕೂಡಲೇ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಾವೇರಿ ಬೆಳಗಾವಿ ಬಳಿಕ ಮತ್ತೆರಡು ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಚಿಂತನೆ, ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?&lt;/strong&gt;&lt;/p&gt;&lt;p&gt;ದಲಿತರು ಮತ್ತು ಹಿಂದುಳಿದ ರೈತರ ಮೇಲೆ ದಾಖಲಾಗಿರುವ ಸುಳ್ಳು ಕೇಸ್ ಆರೋಪಗಳ ಬಗ್ಗೆಯೂ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.&lt;/p&gt;&lt;p&gt;ಪ್ರತಿಭಟನೆಯಲ್ಲಿ ಮಾರ್ಗೋನಹಳ್ಳಿ ಅಯ್ಯಪ್ಪ, ಮಂಜುನಾಥ್, ಗಿರೀಶ್, ನಾಗರಾಜು, ಅಜ್ಜೇಗೌಡ, ರಾಜೇಗೌಡ, ಶಿವಣ್ಣ, ನರಸಿಂಹ, ಯೋಗೇಶ್, ತ್ರಿಪುರರಾಜ್, ಬಾಬು, ರಾಮು, ರುದ್ರೇಶ್, ನಾಗರಾಜು, ರಾಮ, ನರಸೇಗೌಡ, ಲಕ್ಷ್ಮಣ, ಚಂದ್ರು, ರಾಜಶೇಖರ, ವಿಜಯ, ಜಯಣ್ಣ, ಶ್ರೀನಿವಾಸ್, ಶಾಂತಮ್ಮ, ತಾಯಮ್ಮ, ಕೆಂಚಮ್ಮ, ರಂಗಮ್ಮ, ಅಂಜಲಿ ಸೇರಿದಂತೆ ಹಲವು ಗ್ರಾಮಸ್ಥರು ಪಾಲ್ಗೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;'ಭಾರತ್ ಜೋಡೋ' ಸಂಘ ಸ್ಥಾಪನೆ, ಸದಸ್ಯತ್ವ ನೋಂದಣಿ ಹೇಗೆ? ವಾರ್ಷಿಕ ₹10 ಲಕ್ಷ ಅನುದಾನ&lt;/strong&gt;&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-kr-pete-95-acres-of-gomala-land-illegally-allotted-to-powerful-people-allegations-mrq/articleshow-rco3qhe"/>
        </item>
        <item>
            <title><![CDATA[ಕೊಡಗಿನಲ್ಲಿ ಮಳೆಯಾಗುತ್ತಿದ್ದಂತೆ ತಮಿಳುನಾಡಿಗೆ ಹೊರಟ ಕಾವೇರಿ; ಮಂಡ್ಯದಲ್ಲಿ ನದಿಗಿಳಿದು ರೈತರ ಪ್ರತಿಭಟನೆ!]]></title>
            <link>https://kannada.asianetnews.com/karnataka-districts/mandya-farmers-protest-by-entering-cauvery-river-against-water-release-to-tamil-nadu/articleshow-tpv9378</link>
            <guid isPermaLink="true">https://kannada.asianetnews.com/karnataka-districts/mandya-farmers-protest-by-entering-cauvery-river-against-water-release-to-tamil-nadu/articleshow-tpv9378</guid>
            <pubDate>Tue, 07 Jul 2026 20:01:03 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಬರಗಾಲದ ನಡುವೆಯೂ ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರನ್ನು ರಹಸ್ಯವಾಗಿ ಹರಿಸುತ್ತಿದೆ ಎಂದು ಆರೋಪಿಸಿ, ಮಂಡ್ಯದ ರೈತರು ಶ್ರೀರಂಗಪಟ್ಟಣದಲ್ಲಿ ನದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyfmchxjdyw6jc67r64c7db,imgname-screenshot-2026-07-07-194927-1783434457660.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.07): ರಾ&lt;/strong&gt;ಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದ್ದರೂ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗುಟ್ಟಾಗಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದೆ ಎಂದು ಆರೋಪಿಸಿ ಮಂಡ್ಯದ ರೈತರು ಆಕ್ರೋಶ ಹೊರಹಾಕಿದ್ದಾರೆ. ಶ್ರೀರಂಗಪಟ್ಟಣದ ಪವಿತ್ರ ಸ್ನಾನಘಟ್ಟದ ಬಳಿ ರೈತ ಸಂಘದ ಕಾರ್ಯಕರ್ತರು ನದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h2&gt;&lt;p&gt;ಕಳೆದ ನಾಲ್ಕೈದು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶವಾದ ಕೊಡಗು ಮತ್ತಿತರ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕೆಆರ್&zwnj;ಎಸ್ ಜಲಾಶಯಕ್ಕೆ ಈ ವರ್ಷದ ಮಳೆಗಾಲದಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿನ ಒಳಹರಿವು ಬಂದಿದೆ. ಇದೀಗ ಕೆಆರ್ ಎಸ್ ಜಲಾಶಯಕ್ಕೆ ಒಳಹರಿವು 5 ಸಾವಿರ ಕ್ಯೂಸೆಕ್ ದಾಟುತ್ತಿದ್ದಂತೆಯೇ, ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಮುಂದಾಗಿದೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಹಬ್ಬಿದೆ. ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಈ ಬಾರಿ ಸರಿಯಾಗಿ ಮಳೆಯಾಗದೆ ಬೆಳೆಗಳು ಒಣಗುತ್ತಿವೆ. ಅದರಲ್ಲೂ ವಿಶೇಷವಾಗಿ ಮಂಡ್ಯದ ಜೀವನಾಡಿ ಎನಿಸಿರುವ ಕಬ್ಬು ನೀರಿಲ್ಲದೆ ಬಾಡಿ ಹೋಗುತ್ತಿದೆ. ಸ್ಥಳೀಯ ರೈತರ ನಾಲೆಗಳಿಗೆ ನೀರು ಬಿಡದ ಸರ್ಕಾರ, ನೆರೆ ರಾಜ್ಯಕ್ಕೆ ನೀರು ಹರಿಸುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.&lt;/p&gt;&lt;h2&gt;&lt;strong&gt;ನದಿಗಿಳಿದು ಪ್ರತಿಭಟನೆ:&lt;/strong&gt;&lt;/h2&gt;&lt;p&gt;ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಸ್ನಾನಘಟ್ಟದ ಬಳಿ ಜಮಾಯಿಸಿದ ರೈತ ಸಂಘದ ನೂರಾರು ಕಾರ್ಯಕರ್ತರು, ಕಾವೇರಿ ನದಿಯ ನೀರಿನಲ್ಲಿ ನಿಂತು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. 'ನಮ್ಮ ಹೊಲಗಳಿಗೆ ನೀರಿಲ್ಲ, ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ನಮ್ಮ ರೈತರ ಹಿತಕ್ಕಿಂತ ತಮಿಳುನಾಡಿನ ಹಿತವೇ ಮುಖ್ಯವಾಯಿತೇ?' ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರಕ್ಕೆ ರೈತರ ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ರೈತರ ಹಿತಾಸಕ್ತಿ ಮುಖ್ಯವಲ್ಲ ಎಂದು ಕಿಡಿಕಾರಿದ ರೈತರು, ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ, ಸ್ಥಳೀಯ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ತಮಿಳುನಾಡಿಗೆ ನೀರು ಹರಿಸುವುದನ್ನು ಮುಂದುವರೆಸಿದರೆ ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mandya-farmers-protest-by-entering-cauvery-river-against-water-release-to-tamil-nadu/articleshow-tpv9378"/>
        </item>
        <item>
            <title><![CDATA[ರಾಜ್ಯದ ಅನ್ನದಾತರಿಗೆ ಗುಡ್‌ ನ್ಯೂಸ್.. 6 ತಿಂಗಳ ಬಳಿಕ KRS ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ]]></title>
            <link>https://kannada.asianetnews.com/mandya/good-news-for-farmers-there-has-been-a-huge-increase-in-the-flow-in-to-the-kaveri-river/articleshow-yzr42og</link>
            <guid isPermaLink="true">https://kannada.asianetnews.com/mandya/good-news-for-farmers-there-has-been-a-huge-increase-in-the-flow-in-to-the-kaveri-river/articleshow-yzr42og</guid>
            <pubDate>Mon, 06 Jul 2026 09:09:50 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ, ಕೆಆರ್&zwnj;ಎಸ್ ಜಲಾಶಯದ ಒಳಹರಿವು ಕಳೆದ ಆರು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಈ ಬೆಳವಣಿಗೆಯು ಮಂಡ್ಯ ಮತ್ತು ಮೈಸೂರು ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದು, ಕುಡಿಯುವ ನೀರಿನ ಸಮಸ್ಯೆ ನೀಗುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jz3rcr9dcn4rmye4wb1c47wc,imgname-krs-dam-1751399162156.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ರಾಜ್ಯದ ಜನತೆಗೆ ಅದರಲ್ಲೂ ವಿಶೇಷವಾಗಿ ಕಾವೇರಿ ನಂಬಿರುವ ಅನ್ನದಾತರಿಗೆ ಕಡೆಗೂ ಮಳೆರಾಯ ಸಿಹಿ ಸುದ್ದಿ ನೀಡಿದ್ದಾನೆ. ಕಳೆದ ಆರು ತಿಂಗಳಿನಿಂದ ಮಳೆಯಿಲ್ಲದೆ ಸೊರಗಿದ್ದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗ ಮಳೆ ಚುರುಕುಗೊಂಡಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ (KRS) ಜಲಾಶಯಕ್ಕೆ ಜೀವಕಳೆ ಬಂದಿದೆ.&lt;/p&gt;&lt;h2&gt;&lt;strong&gt;ಒಂದೇ ದಿನದಲ್ಲಿ ಭಾರೀ ಏರಿಕೆ&lt;/strong&gt;&lt;/h2&gt;&lt;p&gt;ಕಳೆದ ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯದ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನಿನ್ನೆ ಕೇವಲ 1,449 ಕ್ಯೂಸೆಕ್ ಇದ್ದ ಒಳಹರಿವು, ಇಂದು ಬರೋಬ್ಬರಿ 4,291 ಕ್ಯೂಸೆಕ್&zwnj;ಗೆ ಏರಿಕೆಯಾಗಿದೆ. ಇದು ಕಳೆದ ಆರು ತಿಂಗಳಲ್ಲೇ ದಾಖಲಾದ ಗರಿಷ್ಠ ಒಳಹರಿವು ಎಂಬುದು ಗಮನಾರ್ಹ.&lt;/p&gt;&lt;p&gt;ಬೇಸಿಗೆಯ ಕಡು ಬಿಸಿಲು ಮತ್ತು ನೀರಿನ ಕೊರತೆಯಿಂದ ಕಂಗಾಲಾಗಿದ್ದ ಮಂಡ್ಯ, ಮೈಸೂರು ಭಾಗದ ರೈತರಿಗೆ ಈ ಬೆಳವಣಿಗೆ ಹೊಸ ಭರವಸೆ ನೀಡಿದೆ. ಕುಡಿಯುವ ನೀರಿನ ಸಮಸ್ಯೆ ನೀಗುವುದರ ಜೊತೆಗೆ, ಮುಂಗಾರು ಮಳೆ ಹೀಗೆಯೇ ಮುಂದುವರಿದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬ ಆಶಯ ವ್ಯಕ್ತವಾಗಿದೆ.&lt;/p&gt;&lt;h3&gt;&lt;strong&gt;ಇಂದಿನ ಕೆಆರ್&zwnj;ಎಸ್ ಜಲಾಶಯದ ಮಟ್ಟ&lt;/strong&gt;&lt;/h3&gt;&lt;ul&gt; &lt;li&gt;ಗರಿಷ್ಠ ಮಟ್ಟ: 124.80 ಅಡಿಗಳು&lt;/li&gt; &lt;li&gt;ಇಂದಿನ ನೀರಿನ ಮಟ್ಟ: 80.90 ಅಡಿಗಳು (ನಿನ್ನೆ 81.55 ಅಡಿ ಇತ್ತು, ಒಳಹರಿವು ಹೆಚ್ಚಿರುವುದರಿಂದ ಶೀಘ್ರವೇ ಮಟ್ಟ ಏರಲಿದೆ)&lt;/li&gt; &lt;li&gt;ಇಂದಿನ ಒಳಹರಿವು: 4,291 ಕ್ಯೂಸೆಕ್&lt;/li&gt; &lt;li&gt;ಇಂದಿನ ಹೊರಹರಿವು: 764 ಕ್ಯೂಸೆಕ್&lt;/li&gt; &lt;li&gt;ಗರಿಷ್ಠ ಸಾಮರ್ಥ್ಯ: 49.452 TMC&lt;/li&gt; &lt;li&gt;ಇಂದಿನ ಒಟ್ಟು ನೀರಿನ ಸಂಗ್ರಹ: 11.487 TMC&lt;/li&gt;&lt;/ul&gt;&lt;h3&gt;&lt;strong&gt;ಮುಂದುವರಿದ ಮಳೆ ಮುನ್ಸೂಚನೆ&lt;/strong&gt;&lt;/h3&gt;&lt;p&gt;ಕೊಡಗು ಸೇರಿದಂತೆ ಕಾವೇರಿ ಹರಿವಿನ ಭಾಗಗಳಲ್ಲಿ ಮಳೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕೆಆರ್&zwnj;ಎಸ್ ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಇನ್ನು ಹೆಚ್ಚಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ವರುಣನ ಕೃಪೆಯಿಂದ ಕಾವೇರಿ ಒಡಲು ತುಂಬುತ್ತಿರುವುದು ನಾಡಿನ ಜನರಲ್ಲಿ ಸಂತಸ ತಂದಿದೆ.&lt;/p&gt;]]></content:encoded>
            <category>mandya</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mandya/good-news-for-farmers-there-has-been-a-huge-increase-in-the-flow-in-to-the-kaveri-river/articleshow-yzr42og"/>
        </item>
        <item>
            <title><![CDATA[Bengaluru-Mysuru Expressway ಗುಂಡು ಹಾರಿಸಿ ಟ್ರಕ್ ದರೋಡೆ ಯತ್ನ: ಪ್ರಭಾವಿ ಪುತ್ರ ಸೇರಿ 7 ಮಂದಿ ಬಂಧನ]]></title>
            <link>https://kannada.asianetnews.com/karnataka-districts/firing-and-attacking-truck-bengaluru-mysuru-expressway-influential-person-son-among-7-arrested-by-mandya-police-gdp/articleshow-zbmfgkv</link>
            <guid isPermaLink="true">https://kannada.asianetnews.com/karnataka-districts/firing-and-attacking-truck-bengaluru-mysuru-expressway-influential-person-son-among-7-arrested-by-mandya-police-gdp/articleshow-zbmfgkv</guid>
            <pubDate>Fri, 03 Jul 2026 12:46:06 +0530</pubDate>
            <description><![CDATA[ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಔಷಧಿ ಸಾಗಿಸುತ್ತಿದ್ದ ಟ್ರಕ್ ಅಡ್ಡಗಟ್ಟಿ, ಏರ್ ಗನ್&zwnj;ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಡ್ಯ ಪೊಲೀಸರು ಪ್ರಭಾವಿ ವ್ಯಕ್ತಿಯೊಬ್ಬರ ಪುತ್ರ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwkd5s1j42f8nnjjnqh3xsyz,imgname-truck-robbery-attempt-mandya-1783062783025.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ/ಮೈಸೂರು: &lt;/strong&gt;ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಮಂಡ್ಯ ಸಮೀಪ ಚಲಿಸುತ್ತಿದ್ದ ಮೆಡಿಸಿನ್ ಟ್ರಕ್ ಒಂದನ್ನು ಅಡ್ಡಗಟ್ಟಿ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಗಂಭೀರ ಪ್ರಕರಣ ಸಂಬಂಧ ತಕ್ಷಣ ಕಾರ್ಯಪ್ರವೃತ್ತರಾದ ಮಂಡ್ಯ ಪೊಲೀಸರು ಪ್ರಭಾವಿ ವ್ಯಕ್ತಿಯೊಬ್ಬರ ಪುತ್ರ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;ನಡೆದಿದ್ದೇನು?&lt;/h2&gt;&lt;p&gt;ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರದವರಾದ ಶಂಕರ್ ಎಂಬುವವರು ಪ್ರಸ್ತುತ ಮೈಸೂರಿನ ಗೋಕುಲಂನಲ್ಲಿ ಪಿ.ಜಿಯಲ್ಲಿ ವಾಸಿಸುತ್ತಿದ್ದಾರೆ. ಇವರು ಕಳೆದ ಹಲವು ವರ್ಷಗಳಿಂದ ಟಾಟಾ ಸಂಸ್ಥೆಗೆ ಸೇರಿದ (ನಂಬರ್: KA-01-AB-1300, ಹಿಂಭಾಗ 'ಎಸ್.ಗೌಡ' ಎಂದು ಬರೆಯಲಾಗಿದೆ) ಟ್ರಕ್&zwnj;ನಲ್ಲಿ ಪ್ರತಿನಿತ್ಯ ಬೆಂಗಳೂರಿನಿಂದ ಮೈಸೂರಿಗೆ ಅಗತ್ಯ ಔಷಧಿಗಳನ್ನು (Medicines) ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;ಯಥಾಪ್ರಕಾರ ಮೊನ್ನೆ ಮುಂಜಾನೆ 4:30ರ ಸುಮಾರಿಗೆ ಶಂಕರ್ ಅವರು ಬೆಂಗಳೂರಿನಿಂದ ಔಷಧಿಗಳನ್ನು ಲೋಡ್ ಮಾಡಿಕೊಂಡು ಮೈಸೂರಿನ ಕಡೆಗೆ ಬರುತ್ತಿದ್ದರು. ಈ ವೇಳೆ ಮಂಡ್ಯದ ಅಮರಾವತಿ ಹೋಟೆಲ್ ಬಳಿ ಕಪ್ಪು ಬಣ್ಣದ ಫಾರ್ಚೂನರ್ (Fortuner) ಕಾರಿನಲ್ಲಿ ಬಂದ ಯುವಕರ ಗುಂಪೊಂದು ಟ್ರಕ್ ಅನ್ನು ತಡೆಯಲು ಯತ್ನಿಸಿದೆ.&lt;/p&gt;&lt;h2&gt;ಏರ್ ಗನ್ ತೋರಿಸಿ ಹೆದರಿಸಿದ ದುಷ್ಕರ್ಮಿಗಳು&lt;/h2&gt;&lt;p&gt;ಟ್ರಕ್ ಚಾಲಕ ಶಂಕರ್ ಗಾಬರಿಗೊಂಡು ವಾಹನವನ್ನು ಮುಂದೆ ಚಲಾಯಿಸಲು ಯತ್ನಿಸಿದಾಗ, ಕಾರಿನಲ್ಲಿದ್ದ ಯುವಕರ ತಂಡ ತಕ್ಷಣವೇ ಗನ್ ತೋರಿಸಿ ಹೆದರಿಸಿದೆ. ಅಷ್ಟಕ್ಕೇ ನಿಲ್ಲದೆ, ಟ್ರಕ್ ಮೇಲೆ ಗುಂಡು (Air Fire) ಹಾರಿಸಿದ್ದಾರೆ. ಈ ವೇಳೆ ಶಂಕರ್ ತಕ್ಷಣವೇ ಬ್ರೇಕ್ ಹಾಕಿದ್ದರಿಂದ ಗುಂಡೇಟಿನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.&lt;/p&gt;&lt;p&gt;ಹೆದ್ದಾರಿಯಲ್ಲಿ ವಾಹನಗಳನ್ನು ತಡೆಯುವುದು ಸಾಮಾನ್ಯ ಆದರೆ ಕೈಯಲ್ಲಿ ಗನ್ ಹಿಡಿದು ಶೂಟ್ ಮಾಡಲು ಬಂದಿದ್ದರಿಂದ ಚಾಲಕ ಶಂಕರ್ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಘಟನೆಯಿಂದ ಸಂಪೂರ್ಣವಾಗಿ ಭಯಭೀತರಾದ ಅವರು ಹೇಗೋ ಮೈಸೂರಿನ ಗೋಕುಲಂನಲ್ಲಿರುವ ತಮ್ಮ ನಿವಾಸಕ್ಕೆ ಬಂದು ತಲುಪಿ, ಮನೆ ಮುಂದೆ ಟ್ರಕ್ ನಿಲ್ಲಿಸಿ ಮಲಗಿದ್ದರು. ವಿಷಯ ತಿಳಿದ ಮಂಡ್ಯ ಗ್ರಾಮಾಂತರ ಪೊಲೀಸರು ಸಂಜೆ ವೇಳೆ ಶಂಕರ್ ಅವರ ಮನೆಗೆ ಭೇಟಿ ನೀಡಿ, ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಎಂದು ಚಾಲಕನ ಸ್ನೇಹಿತ ಪ್ರದೀಪ್ ಈ ಆತಂಕದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;h2&gt;ಪ್ರಭಾವಿ ವ್ಯಕ್ತಿಯ ಪುತ್ರ ಸೇರಿ 7 ಮಂದಿ ಕಂಬಿ ಹಿಂದೆ!&lt;/h2&gt;&lt;p&gt;ಈ ಜಂಟಿ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ (FIR) ದಾಖಲಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 7 ಮಂದಿ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಬಂಧಿತರನ್ನು ರೋಹನ್ ಗೌಡ, ಶಶಾಂಕ್, ಉಮರ್, ನಿತಿನ್, ಮೊಹಮದ್ ಅಬೂಕರ್, ಸಚಿನ್ ಮತ್ತು ಮತ್ತೊಬ್ಬರು ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ ಪ್ರಭಾವಿ ವ್ಯಕ್ತಿಯ ಮಗನೂ ಸೇರಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಫಾರ್ಚೂನರ್ ಕಾರು ಮತ್ತು ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.&lt;/p&gt;&lt;h2&gt;'ಫನ್'ಗಾಗಿ ಫೈರಿಂಗ್ ಮಾಡಿದ್ರಾ?&lt;/h2&gt;&lt;p&gt;ಘಟನೆ ಕುರಿತು ಮಾಹಿತಿ ನೀಡಿರುವ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP), ಆರೋಪಿಗಳು ಕೇವಲ ಮೋಜು-ಮಸ್ತಿಗಾಗಿ (Fun) ಏರ್ ಗನ್ ಬಳಸಿ ಫೈರ್ ಮಾಡಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ಘಟನೆಯಲ್ಲಿ ಬಳಕೆಯಾಗಿರುವುದು ಕೇವಲ ಏರ್ ಗನ್ ಹೌದೇ ಅಥವಾ ಬೇರೆ ಮಾರಕಾಸ್ತ್ರವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆ ಗನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸಿದ ಯುವಕರ ಗ್ಯಾಂಗ್ ಈಗ ಕಂಬಿ ಎಣಿಸುತ್ತಿದೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/firing-and-attacking-truck-bengaluru-mysuru-expressway-influential-person-son-among-7-arrested-by-mandya-police-gdp/articleshow-zbmfgkv"/>
        </item>
        <item>
            <title><![CDATA[ಕಾವೇರಿಗೆ ಕ್ಯಾತೆ ತೆಗೆದ ಸ್ಟಾಲಿನ್; ನಮಗೆ ಕುಡಿಯಲು ನೀರಿಲ್ಲ, ನೀವು ನೀರು ಪೋಲು ಮಾಡದೇ ಸಂರಕ್ಷಿಸಿ-ರಾಮಲಿಂಗಾರೆಡ್ಡಿ]]></title>
            <link>https://kannada.asianetnews.com/state/karnataka-ramalinga-reddy-tells-to-tamil-nadu-conserve-cauvery-water-react-to-udhayanidhi-stalin/articleshow-zpvu8qn</link>
            <guid isPermaLink="true">https://kannada.asianetnews.com/state/karnataka-ramalinga-reddy-tells-to-tamil-nadu-conserve-cauvery-water-react-to-udhayanidhi-stalin/articleshow-zpvu8qn</guid>
            <pubDate>Thu, 09 Jul 2026 21:07:57 +0530</pubDate>
            <description><![CDATA[ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ವಿವಾದ ಭುಗಿಲೆದ್ದಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆಯಾಗಿದ್ದು, ಮಳೆಯ ಅಭಾವದಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನವೇ ಅಂತಿಮ ಎಂದು ಅವರು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx3qyn5b7r9650f811wb2syh,imgname-ramalinga-reddy-udhayanidhi-stalin-cauvery-water-1783610954923.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.09): ಕಾ&lt;/strong&gt;ವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ವಾಕ್ಸಮರ ಆರಂಭವಾಗಿದೆ. ತಮಿಳುನಾಡು ನೀರಿಗಾಗಿ ಆಗ್ರಹಿಸುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕರ್ನಾಟಕದ ಸಚಿವ ರಾಮಲಿಂಗಾರೆಡ್ಡಿ, 'ರಾಜ್ಯದ ಜಲಾಶಯಗಳಲ್ಲಿ ಸದ್ಯಕ್ಕೆ ನೀರಿನ ಸಂಗ್ರಹ ಕಡಿಮೆ ಇದೆ. ಹೀಗಾಗಿ ತಮಿಳುನಾಡು ಲಭ್ಯವಿರುವ ನೀರನ್ನು ಸಂರಕ್ಷಿಸಿಕೊಳ್ಳುವತ್ತ ಗಮನ ಹರಿಸಬೇಕು' ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಇತ್ತೀಚೆಗೆ ನಡೆಸಿದ ಸಭೆಯಲ್ಲಿ, ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ತಮ್ಮ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಸಾಧ್ಯವಾದಷ್ಟು ಮಿತವಾಗಿ ಬಳಸಬೇಕು ಮತ್ತು ಕುಡಿಯುವ ನೀರು ಹಾಗೂ ಪರಿಸರ ಹರಿವಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿವೆ.&lt;/p&gt;&lt;h2&gt;&lt;strong&gt;ಜಲಾಶಯಗಳಲ್ಲಿನ ನೀರಿನ ಕೊರತೆ:&lt;/strong&gt;&lt;/h2&gt;&lt;p&gt;ಜೂನ್ 30ರ ಅಂಕಿಅಂಶಗಳ ಪ್ರಕಾರ, ಕರ್ನಾಟಕದ ಕಾವೇರಿ ಪಾತ್ರದ ನಾಲ್ಕು ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ (KRS), ಕಬಿನಿ, ಹಾರಂಗಿ ಮತ್ತು ಹೇಮಾವತಿಯಲ್ಲಿ ಒಟ್ಟು ಜೀವಂತ ನೀರಿನ ಸಂಗ್ರಹ ಕೇವಲ 15.761 ಟಿಎಂಸಿ ಅಡಿ ಮಾತ್ರ ಇದೆ. ಈ ಪ್ರಮಾಣದ ನೀರು ಮುಂದಿನ ಮೂರು ತಿಂಗಳ ಕಾಲ ಬೆಂಗಳೂರು ಮಹಾನಗರ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಇತರ ಪಟ್ಟಣಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಸಾಲದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ತಮಿಳುನಾಡು ನಾಯಕ ಉದಯನಿಧಿ ಸ್ಟಾಲಿನ್ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, 'ಕರ್ನಾಟಕವು ಉದ್ದೇಶಪೂರ್ವಕವಾಗಿ ನೀರು ನಿಲ್ಲಿಸುತ್ತಿಲ್ಲ. ಮಳೆಯ ಅಭಾವದಿಂದ ಜಲಾಶಯಗಳಿಗೆ ಒಳಹರಿವು ಇಲ್ಲದಿರುವುದು ನಮ್ಮ ಅಸಹಾಯಕತೆಗೆ ಕಾರಣವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಕೂಡ ಈ ಬಾರಿ ಮುಂಗಾರು ವಿಳಂಬ ಮತ್ತು ಮಳೆಯ ಕೊರತೆಯ ಬಗ್ಗೆ ವರದಿ ನೀಡಿದೆ. ಕಾವೇರಿ ಕಣಿವೆ ಸದ್ಯಕ್ಕೆ ನೀರಿನ ಕೊರತೆಯನ್ನು ಎದುರಿಸುತ್ತಿದೆ' ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಪ್ರಾಧಿಕಾರದ ತೀರ್ಮಾನವೇ ಅಂತಿಮ:&lt;/strong&gt;&lt;/h2&gt;&lt;p&gt;ಕೆಆರ್ಎಸ್ ಜಲಾಶಯದಿಂದ ನೀರು ಬಿಡುವ ಅಧಿಕಾರ ಕರ್ನಾಟಕ ಸರ್ಕಾರದ ಕೈಲಿಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸಿನ ಮೇರೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಕರ್ನಾಟಕದ ಪಾತ್ರ ಸೀಮಿತವಾಗಿದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.&lt;/p&gt;&lt;p&gt;ಆದಾಗ್ಯೂ, ಮುಂದಿನ ದಿನಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಳ್ಳುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಜಲಾಶಯಗಳು ಭರ್ತಿಯಾಗಲಿವೆ ಮತ್ತು ನೀರಿನ ಬಿಕ್ಕಟ್ಟು ಬಗೆಹರಿಯಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-ramalinga-reddy-tells-to-tamil-nadu-conserve-cauvery-water-react-to-udhayanidhi-stalin/articleshow-zpvu8qn"/>
        </item>
    </channel>
</rss>
