<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 06 Aug 2026 05:55:24 +0530</lastBuildDate>
        <atom:link href="https://kannada.asianetnews.com/rss/mandya" rel="self" type="application/rss+xml"/>
        <item>
            <title><![CDATA[ಮಂಡ್ಯ ಕಾರು ಅಪಘಾತಕ್ಕೆ ಟ್ವಿಸ್ಟ್: ಮೃತ ಯುವತಿ ತಾಯಿ ಬಿಚ್ಚಿಟ್ಲು ಶಾಕಿಂಗ್‌ ವಿಷಯ]]></title>
            <link>https://kannada.asianetnews.com/mandya/mandya-car-accident-mother-alleges-daughter-was-mur-ered-by-friends-not-accident-gkn/articleshow-1ormd2o</link>
            <guid isPermaLink="true">https://kannada.asianetnews.com/mandya/mandya-car-accident-mother-alleges-daughter-was-mur-ered-by-friends-not-accident-gkn/articleshow-1ormd2o</guid>
            <pubDate>Tue, 04 Aug 2026 09:14:32 +0530</pubDate>
            <description><![CDATA[ಮಂಡ್ಯದಲ್ಲಿ ನಡೆದ ಕಾರು ಅಪಘಾತದಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದು, ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಮೃತೆಯ ತಾಯಿ ಆರೋಪಿಸಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ಕರೆದೊಯ್ದು ಕೊಲೆ ಮಾಡಿ, ಅಪಘಾತವೆಂದು ಬಿಂಬಿಸಲು ಯತ್ನಿಸಲಾಗಿದೆ ಎಂದು ಸ್ನೇಹಿತರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5dws7av44wga2teh5s9k74,imgname-mandya-1785815000298.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕಾರು ಅಪಘಾತವೊಂದರಲ್ಲಿ ಮೃತಪಟ್ಟ ಯುವತಿಯ ಸಾವಿನ ಹಿಂದೆ ಭಾರಿ ಸಂಚು ಅಡಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯುವತಿಯನ್ನು ಕೊಲೆ ಮಾಡಿ, ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಲಾಗಿದೆ ಎಂದು ಮೃತ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣಕ್ಕೆ ತೀವ್ರ ತಿರುವು ಸಿಕ್ಕಿದೆ.&lt;/p&gt;&lt;p&gt;ಮೃತ ಯುವತಿಯನ್ನು ಹೊನ್ನೆಮಡು ಗ್ರಾಮದ ನವೀನ (19) ಎಂದು ಗುರುತಿಸಲಾಗಿದೆ. ಈಕೆಯ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಸ್ನೇಹಿತರಾದ ಅಶ್ವಿನಿ, ವಿಷ್ಣು ಮತ್ತು ಶಿವಕುಮಾರ್ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಮಂಡ್ಯ ನಗರದ ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನವೀನ, ಅಲ್ಲಿಯೇ ಪಿ.ಜಿಯೊಂದರಲ್ಲಿ ವಾಸವಿದ್ದಳು. ಆಗಸ್ಟ್ 2ರಂದು ಸಂಜೆ ತಾನು ಮನೆಗೆ ಹೋಗುವುದಾಗಿ ಪಿ.ಜಿ ಮಾಲೀಕರಿಗೆ ತಿಳಿಸಿ ಹೊರಟಿದ್ದಳು. ಆದರೆ ಆಕೆ ತನ್ನ ಸ್ನೇಹಿತರಾದ ಅಶ್ವಿನಿ, ವಿಷ್ಣು ಮತ್ತು ಶಿವಕುಮಾರ್ ಅವರೊಂದಿಗೆ ಕೊಮ್ಮೇರಹಳ್ಳಿ ಬೆಟ್ಟಕ್ಕೆ ಕಾರಿನಲ್ಲಿ ತೆರಳಿದ್ದಾಳೆ. ಕೊಮ್ಮೇರಹಳ್ಳಿ ಬಳಿ ಇವರು ಪ್ರಯಾಣಿಸುತ್ತಿದ್ದ ಕಾರು ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ನವೀನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಉಳಿದ ಮೂವರು ಸ್ನೇಹಿತರಿಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿವೆ.&lt;/p&gt;&lt;h2&gt;&lt;strong&gt;ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಲು ಕಾರಣಗಳೇನು?&lt;/strong&gt;&lt;/h2&gt;&lt;p&gt;ನವೀನ ಸಾವಿನ ಬಗ್ಗೆ ಆಕೆಯ ಕುಟುಂಬಸ್ಥರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಸ್ನೇಹಿತರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಪಘಾತವು ಆಗಸ್ಟ್ 2ರ ಸಂಜೆ ನಡೆದಿದ್ದರೂ, ಸ್ನೇಹಿತರು ಯುವತಿಯ ಕುಟುಂಬದವರಿಗೆ ರಾತ್ರಿ 11 ಗಂಟೆಯ ಸುಮಾರಿಗೆ ಮಾಹಿತಿ ನೀಡಿದ್ದಾರೆ. ಈ ವಿಳಂಬವೇ ಹಲವು ಸಂಶಯಗಳಿಗೆ ಕಾರಣವಾಗಿದೆ. ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ನವೀನಳನ್ನು ಕರೆದುಕೊಂಡು ಹೋಗಿ, ಅಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಅದಕ್ಕೆ ನವೀನ ಒಪ್ಪದಿದ್ದಾಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಯುವತಿಯನ್ನು ಕೊಲೆ ಮಾಡಿದ ಬಳಿಕ, ಹೆಣವನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಕೂರಿಸಿ ತಂದು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆಸಲಾಗಿದೆ. ಆ ಮೂಲಕ ಇದೊಂದು ಅಪಘಾತ ಎಂಬಂತೆ ಬಿಂಬಿಸಲು ಆರೋಪಿಗಳು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಮೃತ ಯುವತಿ ನವೀನಳ ತಾಯಿ ಬೊಮ್ಮಮ್ಮ ಅವರು ನೀಡಿದ ದೂರಿನ ಮೇರೆಗೆ ಸ್ನೇಹಿತರಾದ ಅಶ್ವಿನಿ, ವಿಷ್ಣು ಮತ್ತು ಶಿವಕುಮಾರ್ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ಅಪಘಾತವೇ ಅಥವಾ ಪ್ರೀ-ಪ್ಲಾನ್ಡ್ ಕೊಲೆಯೇ ಎಂಬ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mandya/mandya-car-accident-mother-alleges-daughter-was-mur-ered-by-friends-not-accident-gkn/articleshow-1ormd2o"/>
        </item>
        <item>
            <title><![CDATA[ಮಂಡ್ಯದ ತೋಟವೊಂದರಲ್ಲಿ ಏಷ್ಯನ್ ಟಾಡಿ ಬೆಕ್ಕು ಪತ್ತೆ! ಕಾಡು ಬೆಕ್ಕಿನ ಆಕಾರ ನೋಡಿ ಬೆಚ್ಚಿಬಿದ್ದ ಸ್ಥಳೀಯರು!]]></title>
            <link>https://kannada.asianetnews.com/karnataka-districts/asian-palm-civet-found-in-a-garden-in-mandya-district-karnataka-rav/articleshow-4wexigm</link>
            <guid isPermaLink="true">https://kannada.asianetnews.com/karnataka-districts/asian-palm-civet-found-in-a-garden-in-mandya-district-karnataka-rav/articleshow-4wexigm</guid>
            <pubDate>Sun, 26 Jul 2026 05:19:28 +0530</pubDate>
            <description><![CDATA[ಮಂಡ್ಯ ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ತೋಟವೊಂದರಲ್ಲಿ ರಾಜ್ಯದಲ್ಲೇ ಅಪರೂಪದ 'ಏಷ್ಯನ್ ಟಾಡಿ ಬೆಕ್ಕು' ಪತ್ತೆಯಾಗಿದೆ. ನಿಶಾಚಾರಿ ಪ್ರಾಣಿಯಾದ ಇದು ರೈತ ಸ್ನೇಹಿಯಾಗಿದ್ದು, ಸಣ್ಣಪುಟ್ಟ ಹುಳುಗಳು ಮತ್ತು ಹಣ್ಣುಗಳನ್ನು ತಿಂದು ಬದುಕುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kydtr4pyhzywgh79kn0famtj,imgname-----------------------2026-07-26t050356.319-1785023173342.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.26):&lt;/strong&gt; ರಾಜ್ಯದಲ್ಲಿ ಅಪರೂಪ ಎನ್ನಲಾದ &lsquo;ಏಷ್ಯನ್ ಟಾಡಿ ಬೆಕ್ಕು&rsquo; ಮಂಡ್ಯ ತಾಲೂಕಿನಲ್ಲಿ ಪತ್ತೆಯಾಗಿದೆ. ಕಾಡು ಬೆಕ್ಕಿನ ಆಕಾರವನ್ನು ಹೋಲುವ ಈ ಪ್ರಾಣಿಯ ಬಾಲ ಉದ್ದವಾಗಿದ್ದು, ಗಟ್ಟಿಮುಟ್ಟಾದ ದೇಹವನ್ನು ಹೊಂದಿದೆ. ಒರಟಾದ ಶಾಗ್ಗಿ ಕೂದಲಿನಿಂದ ಆವೃತವಾದ ಈ ಬೆಕ್ಕು ಮಂಡ್ಯ ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಸಬ್ಬನಹಳ್ಳಿಯ ಶಂಭುಲಿಂಗೇಗೌಡ ಎಂಬುವರ ತೋಟದಲ್ಲಿ ಕಂಡುಬಂದಿದೆ.&lt;/p&gt;&lt;h2&gt;ಅಪರೂಪದ ಬೆಕ್ಕು ಪತ್ತೆ ಹಚ್ಚಿದ್ದು ಹೇಗೆ?&lt;/h2&gt;&lt;p&gt;ಕಳೆದ ಹಲವಾರು ದಿನಗಳಿಂದಲೂ ಈ ಏಷ್ಯನ್ ಟಾಡಿ ಬೆಕ್ಕು ತೋಟದಲ್ಲಿ ಸಂಚರಿಸುತ್ತಿದ್ದು, ಇದನ್ನು ಸ್ಥಳೀಯರು ನೋಡಿದ್ದಾರೆ. ಆದರೆ, ಇದು ಯಾವ ಪ್ರಾಣಿ ಎಂಬುದರ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಹಾಗಾಗಿ ಇದರ ಬಳಿಗೆ ಹೋಗಲು ಭಯಪಡುತ್ತಿದ್ದರು. ತೋಟದ ಮಾಲೀಕ ಶಂಭುಲಿಂಗೇಗೌಡರು ಶುಕ್ರವಾರ ಈ ಪ್ರಾಣಿಯ ಸಂಚಾರ ಗಮನಿಸಿ ಮೊಬೈಲ್ ಕ್ಯಾಮೆರಾದಲ್ಲಿ ಫೋಟೊ ಸೆರೆ ಹಿಡಿದಿದ್ದಾರೆ. ಪಶುವೈದ್ಯರೊಬ್ಬರ ಬಳಿ ಈ ಪ್ರಾಣಿಯ ಬಗ್ಗೆ ವಿವರಣೆ ಕೇಳಿದಾಗ, ಆಗ ಅದು ಏಷ್ಯನ್ ಟಾಡಿ ಕ್ಯಾಟ್ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಾಣಿಯ ಸಂತತಿ ಕಡಿಮೆಯಾಗುತ್ತಿದೆ. ಈ ಪ್ರಾಣಿ ಭಾರತ, ನೇಪಾಳ, ಭೂತಾನ್, ಶ್ರೀಲಂಕಾ, ಥೈಲ್ಯಾಂಡ್, ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಂಡುಬರುತ್ತದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.&lt;/p&gt;&lt;h3&gt;ಈ ನಿಶಾಚಾರಿ ಪ್ರಾಣಿ ರಾಜ್ಯದಲ್ಲಿ ಅಪರೂಪ&lt;/h3&gt;&lt;p&gt;ಕೆಲ ವರ್ಷಗಳ ಹಿಂದೆ ಚೆನ್ನೈನ ವಂಡಲೂರಿನ ಅಣ್ಣಾ ಪ್ರಾಣಿ ಶಾಸ್ತ್ರೀಯ ಉದ್ಯಾನದಲ್ಲಿ ಏಷ್ಯನ್ ಟಾಡಿ ಬೆಕ್ಕೊಂದು ೪ ಮರಿಗಳಿಗೆ ಜನ್ಮ ನೀಡಿತ್ತು. ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿರುವ ಈ ಉದ್ಯಾನ ರಾತ್ರಿ ಪ್ರಾಣಿಗಳ ಸಂಗ್ರಹ ಭಾಗವಾಗಿದೆ. ಈ ಪ್ರಾಣಿ ರಾತ್ರಿಯ ಹೊತ್ತು ಸಂಚಾರ ಮಾಡುತ್ತದೆ. ಅಂದರೆ, ಕತ್ತಲು ಕವಿದ ವಾತಾವರಣದಲ್ಲಿ ಸಂಚರಿಸುತ್ತದೆ.&lt;/p&gt;&lt;p&gt;ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟವು ಈ ಬೆಕ್ಕಿನ ಜಾತಿಯನ್ನು &lsquo;ಕಡಿಮೆ ಕಾಳಜಿ&rsquo; ಎಂದು ವರ್ಗೀಕರಿಸಿದೆ, ಏಕೆಂದರೆ ಇದು ಹಲವಾರು ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೆಲವು ಪ್ರದೇಶಗಳಲ್ಲಿ ಇದನ್ನು ಹತ್ಯೆ ಮಾಡಿ ಮಾಂಸ ತಿನ್ನುವುದು, ಮಾರಾಟ ಮಾಡುವಂತಹ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಹಾಗಾಗಿ ಇದರ ಸಾಕಾಣಿಕೆ, ಕೊಲ್ಲುವುದನ್ನು ಸ್ಥಳೀಯ ಸರ್ಕಾರಗಳು ನಿಷೇಧಿಸಿವೆ. ಇನ್ನು ಕೆಲವು ಕಡೆಗಳಲ್ಲಿ ಸಾಮಾನ್ಯ ಬೆಕ್ಕಿನ ರೀತಿಯಲ್ಲೇ ಸಾಕಾಣಿಕೆ ಮಾಡಲಾಗುತ್ತಿದೆ. ಆದರೆ, ಈ ಪ್ರಾಣಿ ಕೆಂಪು ಪಟ್ಟಿ ಕಾಳಜಿ ಹೊಂದಿರುವ ಕಾರಣ ಕೊಲ್ಲುವುದನ್ನು ನಿಷೇಧಿಸಲಾಗಿದೆ.&lt;/p&gt;&lt;p&gt;ಸಾಮಾನ್ಯವಾಗಿ ಏಷ್ಯನ್ ಪಾಮ್ ಸಿವೆಟ್ ಎಂದು ಕರೆಯಲಾಗುವ ಈ ಪ್ರಾಣಿ ರೈತನ ಸ್ನೇಹಿತನ ರೀತಿಯಲ್ಲಿರುತ್ತದೆ. ಇದು ಸಣ್ಣ ಪುಟ್ಟ ಹುಳುಗಳು, ಬೀಜಗಳು, ಹಣ್ಣುಗಳನ್ನು ತಿಂದು ಬದುಕುತ್ತದೆ. ಇದು ಯಾರಿಗೂ ತೊಂದರೆ ಮಾಡುವುದಿಲ್ಲ.&lt;/p&gt;&lt;p&gt;&lt;strong&gt;-ಶಿವರಾಮು, ಅರಣ್ಯಾಧಿಕಾರಿ, ನಾಗಮಂಗಲ&lt;/strong&gt;&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/asian-palm-civet-found-in-a-garden-in-mandya-district-karnataka-rav/articleshow-4wexigm"/>
        </item>
        <item>
            <title><![CDATA[ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ: ಕಬಿನಿ ಭರ್ತಿ, ಹಾರಂಗಿ ಜಲಾಶಯದಿಂದ ಭಾರಿ ನೀರು ತಮಿಳುನಾಡಿಗೆ ಬಿಡುಗಡೆ!]]></title>
            <link>https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv</link>
            <guid isPermaLink="true">https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv</guid>
            <pubDate>Sat, 01 Aug 2026 16:43:27 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ, ಕೆಆರ್&zwnj;ಎಸ್ ಮತ್ತು ಹಾರಂಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಇದು ಕಾವೇರಿ ವಿವಾದದ ತೀವ್ರತೆಯನ್ನು ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyyfpfbj9xmgwztj0rh7gphj,imgname-kabini-1785582009713.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಕಿಚ್ಚು ಹೊತ್ತಿಕೊಂಡಿರುವ ಬೆನ್ನಲ್ಲೇ, ವರುಣ ದೇವ ರಾಜ್ಯದ ರೈತರಿಗೆ ಭಾರಿ ಸಿಹಿ ಸುದ್ದಿ ನೀಡಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಮೈಸೂರು ಜಿಲ್ಲೆಯ ಹೆಮ್ಮೆಯ ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ತಮಿಳುನಾಡಿನತ್ತ ಕಾವೇರಿ ನೀರು ಈ ಜಲಾಶಯದಿಂದ ಹರಿಯಲಾರಂಭಿಸಿದೆ. ಇದು ಸದ್ಯದ ಕಾವೇರಿ ವಿವಾದದ ತೀವ್ರತೆಯನ್ನು ಕೊಂಚ ತಣ್ಣಗಾಗಿಸುವ ಮುನ್ಸೂಚನೆ ನೀಡಿದೆ.&lt;/p&gt;&lt;h2&gt;ಭರ್ತಿಯಾದ ಕಬಿನಿ ಜಲಾಶಯ: ನದಿಗೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ&lt;/h2&gt;&lt;p&gt;ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಜಲಾನಯನ ಪ್ರದೇಶ ಹಾಗೂ ಕೇರಳದ ವಯನಾಡು ಭಾಗದಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದಾಗಿ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಪ್ರಸ್ತುತ ಅಣೆಕಟ್ಟೆಗೆ 15,500 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ.&lt;/p&gt;&lt;p&gt;ಒಟ್ಟು 19.52 ಟಿಎಂಸಿ ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಈಗಾಗಲೇ 18 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಜಲಾಶಯದ 4 ಕ್ರಸ್ಟ್ ಗೇಟ್&zwnj;ಗಳ ಮೂಲಕ ಸುಮಾರು 10 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸುತ್ತಿದ್ದಾರೆ. ಈ ನೀರು ಕಪಿಲಾ ನದಿಯ ಮೂಲಕ ತಮಿಳುನಾಡಿನತ್ತ &amp;nbsp;ಹರಿದು ಹೋಗಲಿದೆ. ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಬಿನಿ ಜಲಾಶಯದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ಘೋಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.&lt;/p&gt;&lt;h2&gt;ಮಂಡ್ಯದ ಕೆಆರ್&zwnj;ಎಸ್ ಜಲಾಶಯದಲ್ಲೂ ಒಳಹರಿವು ಭಾರಿ ಏರಿಕೆ&lt;/h2&gt;&lt;p&gt;ಕಾವೇರಿ ಗಲಾಟೆಯ ನಡುವೆಯೇ ಮಂಡ್ಯ ಭಾಗದ ರೈತರಿಗೂ ವರುಣ ಮುನಿಸು ಬಿಟ್ಟು ಹರಸಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ (KRS) ಡ್ಯಾಂಗೆ ಬರುವ ಒಳಹರಿವು 13,522 ಕ್ಯೂಸೆಕ್&zwnj;ಗೆ ಏರಿಕೆಯಾಗಿದೆ.&lt;/p&gt;&lt;p&gt;ಗರಿಷ್ಠ 124.80 ಅಡಿ ಸಾಮರ್ಥ್ಯ ಹೊಂದಿರುವ ಕೆಆರ್&zwnj;ಎಸ್ ಡ್ಯಾಂನ ನೀರಿನ ಮಟ್ಟ ಸದ್ಯ 94.40 ಅಡಿಗೆ ತಲುಪಿದೆ. ಇನ್ನು 49.452 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟಿನಲ್ಲಿ ಪ್ರಸ್ತುತ 18.733 ಟಿಎಂಸಿ ನೀರು ಶೇಖರಣೆಯಾಗಿದೆ. ಸದ್ಯಕ್ಕೆ ಡ್ಯಾಂನಿಂದ ಕೇವಲ 1,565 ಕ್ಯೂಸೆಕ್ ನೀರನ್ನು ಮಾತ್ರ ಹೊರಹರಿಸಲಾಗುತ್ತಿದ್ದು, ಒಳಹರಿವು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಜಿಗಿಯಲಿದೆ.&lt;/p&gt;&lt;h2&gt;ಕೊಡಗಿನ ಹಾರಂಗಿ ಜಲಾಶಯದಲ್ಲೂ ಹೆಚ್ಚಿದ ಜಲವೈಭವ&lt;/h2&gt;&lt;p&gt;ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ಜಲಾಶಯ ಕೂಡ ಭರ್ತಿಯಾಗಿದೆ. ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, &amp;nbsp;ಜಲಾಶಯದ ಮುಂಭಾಗದಲ್ಲಿರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹಾರಂಗಿ ಯಡವನಾಡು ಸೋಮವಾರಪೇಟೆ ಸಂಪರ್ಕ ರಸ್ತೆ ಬಂದ್ ಆಗಿದೆ. &amp;nbsp;ಮೂರು ಅಡಿ ನೀರು ಸೇತುವೆ ಮೇಲೆ ಹರಿಯುತ್ತಿದೆ. ಹಾರಂಗಿ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. &amp;nbsp;ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಾಗಿದ್ದು (8.5 ಟಿಎಂಸಿ ಸಾಮರ್ಥ್ಯ), ಇಂದಿನ ಇತ್ತೀಚಿನ ವರದಿಯ ಪ್ರಕಾರ ನೀರಿನ ಮಟ್ಟ 2857.83 ಅಡಿಗಳಿಗೆ (8.104 ಟಿಎಂಸಿ) ತಲುಪಿದೆ. ಜಲಾಶಯಕ್ಕೆ ಸದ್ಯ 9,896 ಕ್ಯೂಸೆಕ್ ನೀರು ಒಳಹರಿವಾಗಿ ಬರುತ್ತಿದ್ದು, ಅಷ್ಟೇ ವೇಗವಾಗಿ ಅಂದರೆ 10,058 ಕ್ಯೂಸೆಕ್ ನೀರನ್ನು ಹೊರಹರಿವಿನ ಮೂಲಕ ನದಿಗೆ ಹರಿಸಲಾಗುತ್ತಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಹೆಚ್ಚುತ್ತಿರುವ ನೀರಿನ ಸಂಗ್ರಹವು ಕರ್ನಾಟಕದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಕೃತಿಯೇ ಕಾವೇರಿ ಸಂಕಷ್ಟಕ್ಕೆ ಸದ್ಯಕ್ಕೆ ಪರಿಹಾರ ನೀಡುತ್ತಿರುವಂತೆ ಭಾಸವಾಗುತ್ತಿದೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv"/>
        </item>
        <item>
            <title><![CDATA[Mandya: ಗಾಳಿ-ಬೆಳಕು ಸೋಂಕಿಲ್ಲದೇ ಬರುವ ಸಾವಯವ ಹಾಲು; ಬೆಂಗಳೂರು, ಹೈದರಾಬಾದ್‌ನಲ್ಲಿ ಮಾರುಕಟ್ಟೆ]]></title>
            <link>https://kannada.asianetnews.com/karnataka-districts/mandya-s-farm-connect-company-has-introduced-a-new-concept-called-organic-milk-market-in-bengaluru-hyderabad-mrq/articleshow-6wdfguk</link>
            <guid isPermaLink="true">https://kannada.asianetnews.com/karnataka-districts/mandya-s-farm-connect-company-has-introduced-a-new-concept-called-organic-milk-market-in-bengaluru-hyderabad-mrq/articleshow-6wdfguk</guid>
            <pubDate>Mon, 27 Jul 2026 20:58:05 +0530</pubDate>
            <description><![CDATA[ಮಂಡ್ಯದ ಫಾರ್ಮ್ ಕನೆಕ್ಟ್ ಸಂಸ್ಥೆಯು 'ಸಾವಯವ ಹಾಲು' ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ. ಈ ವಿಧಾನದಲ್ಲಿ, ಹಾಲನ್ನು ಗಾಳಿ-ಬೆಳಕಿನ ಸೋಂಕಿಲ್ಲದೆ ಯಂತ್ರದ ಮೂಲಕ ಕರದು, ಶೀತಲೀಕರಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಇದರಿಂದ ಹಾಲಿನ ಪೋಷಕಾಂಶಗಳು ಉಳಿದುಕೊಳ್ಳುವುದಲ್ಲದೆ, ರೈತರಿಗೂ ಅಧಿಕ ಆದಾಯ ಸಿಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyj2yc0xwb2ebsj6znds9w42,imgname-mandya-milk-1785165983773.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ ಮಂಜುನಾಥ&lt;/strong&gt;&lt;/p&gt;&lt;p&gt;&lt;strong&gt;ಮಂಡ್ಯ: &lt;/strong&gt;ಸಾವಯವ ಕೃಷಿ, ಸಾವಯವ ಗೊಬ್ಬರ, ಸಾವಯವ ಬೆಲ್ಲ ಎಂಬ ಹೆಸರುಗಳನ್ನು ಕೇಳಿದ್ದೇವೆ. ಇದೇನಿದು &lsquo;ಸಾವಯವ ಹಾಲು&rsquo; ಎನ್ನುತ್ತಿದ್ದೀರಾ. ಇದು ಹಾಲಿನಲ್ಲಿರುವ ಪೋಷಕಾಂಶಗಳನ್ನು ಕಾಪಾಡುವ ವಿಧಾನ. ಗಾಳಿ-ಬೆಳಕು ಸೋಂಕಿಲ್ಲದೆ ಹಸುವಿನ ಕೆಚ್ಚಲಿನಿಂದ ಬಂದ ಹಾಲನ್ನು ಫಾರ್ಮ್&zwnj;ನಲ್ಲಿ ಶೀತಲೀಕರಿಸಿ ನೇರವಾಗಿ ಗ್ರಾಹಕರ ಮನೆಗೆ ತಲುಪುವುದೇ &lsquo;ಸಾವಯವ ಹಾಲು&rsquo;.&lt;/p&gt;&lt;p&gt;ಮಂಡ್ಯದ ಫಾರ್ಮ್ ಕನೆಕ್ಟ್ ಸಂಸ್ಥೆಯವರು ಇಂತಹದೊಂದು ಹೊಸ ರೂಪದ ಹಾಲಿಗೆ ಮೊದಲ ಬಾರಿಗೆ ನಾಂದಿ ಹಾಡಿದ್ದಾರೆ. ಫಾರ್ಮ್ ಕನೆಕ್ಟ್&zwnj;ನವರು ನಗರದ ವಿಕಸನ ಸಂಸ್ಥೆಯವರ ಜೊತೆಗೂಡಿ ಅಮೃತ ಸಮಾನವಾದ ಹಾಲನ್ನು ಪರಿಶುದ್ಧತೆಯ ಜೊತೆಗೆ ಪೋಷಕಾಂಶಗಳೊಂದಿಗೆ ಗ್ರಾಹಕರಿಗೆ ತಲುಸುವ ಧ್ಯೇಯವನ್ನು ಗುರಿಯಾಗಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ರೈತರ ನೋಂದಣಿ&lt;/strong&gt;&lt;/h2&gt;&lt;p&gt;ಫಾರ್ಮ್ ಕನೆಕ್ಟ್ ಕಂಪನಿಗೆ ಹಾಲು ಪೂರೈಸುವ ರೈತರು ಕನಿಷ್ಠ 4 ರಿಂದ 5 ಎಕರೆ ಭೂಮಿಯನ್ನು ಹೊಂದಿರಬೇಕು. 20 ರಿಂದ 25 ಹಸುಗಳನ್ನು ಸಾಕುವವರಾಗಿರಬೇಕು. ಹಸುಗಳನ್ನು ಒಂದೇ ಕಡೆ ಕಟ್ಟುವಂತಿಲ್ಲ. ಅವುಗಳು ವಿಶಾಲ ಜಾಗದಲ್ಲಿ ಸ್ವತಂತ್ರವಾಗಿ ಮೇಯಬೇಕು. ಇಂತಹ ರೈತರನ್ನು ಕಂಪನಿಯವರು ನೋಂದಾಯಿಸಿಕೊಂಡು ಹಸುಗಳ ಸಾಕಣೆ, ನಿರ್ವಹಣೆ ಬಗ್ಗೆ ಅವರಿಗೆ ತರಬೇತಿಯನ್ನು ನೀಡುವರು.&lt;/p&gt;&lt;p&gt;ಹಸುಗಳಿಗೆ ಹಸಿ ಮೇವು, ಒಣಮೇವು, ಮರಮೇವು, ರಸ ಮೇವು, ಕಡ್ಲೆ ಹಿಂಡಿ, ಜೋಳದ ನುಚ್ಚು ಸೇರಿದಂತೆ ೮ ರಿಂದ ೧೦ ಮಾದರಿಯ ಮೇವನ್ನು ಯಾವ ಪ್ರಮಾಣದಲ್ಲಿ ಹೇಗೆ ನೀಡಬೇಕು ಎಂಬುದನ್ನು ತಿಳಿಸಿಕೊಡುವರು. ಅದೇ ಮಾದರಿಯಲ್ಲಿ ನಿತ್ಯವೂ ಹಸುಗಳಿಗೆ ನೀಡುವ ಮೂಲಕ ಪೌಷ್ಟಿಕಾಂಶಯುಕ್ತ ಹಾಲು ಉತ್ಪಾದನೆಗೆ ಮಹತ್ವ ನೀಡಲಾಗುತ್ತದೆ.&lt;/p&gt;&lt;h3&gt;&lt;strong&gt;ಗಾಳಿ-ಬೆಳಕಿನ ಸೋಂಕಿಲ್ಲ&lt;/strong&gt;&lt;/h3&gt;&lt;p&gt;ಹಾಲನ್ನು ಕರೆಯುವ ವಿಧಾನದಲ್ಲೂ ಹೆಚ್ಚಿನ ಜಾಗೃತಿ ವಹಿಸಲಾಗುತ್ತದೆ. ಹಸುವಿನ ಕೆಚ್ಚಲಿನಿಂದ ಹಾಲು ಗಾಳಿ-ಬೆಳಕಿನ ಸೋಂಕಿಲ್ಲದೆ ಹಾಲು ಕರೆಯುವ ಯಂತ್ರದ ಮೂಲಕ 4 ಡಿಗ್ರಿ ಸೆಂಟಿಗ್ರೇಡ್&zwnj;ನಲ್ಲಿ 500 ಲೀಟರ್ ಸಾಮರ್ಥ್ಯದ ಬಲ್ಕ್ ಮಿಲ್ಕ್ ಕೂಲರ್&zwnj;ಗೆ ನೇರವಾಗಿ ಸೇರುತ್ತದೆ. ಸಂಜೆ ಅದನ್ನು ಅಷ್ಟೇ ಜಾಗರೂಕತೆಯಿಂದ ಡೇರಿಗೆ ತಂದು ಹಾಲನ್ನು ಪರೀಕ್ಷೆಗೊಳಪಡಿಸಿ ಕಚ್ಚಾ ಹಾಲು ಮತ್ತು ಪಾಶ್ಚೀಕರಿಸಿದ ಹಾಲನ್ನು ಪ್ಯಾಕ್ ಮಾಡಿ ಗ್ರಾಹಕರ ಮನೆಗೆ ತಲುಪಿಸಲಾಗುತ್ತದೆ.&lt;/p&gt;&lt;p&gt;ಹಸುವಿನ ಕೆಚ್ಚಲಿನಿಂದ ಬರುವ ಹಾಲು ಗಾಳಿ-ಬೆಳಕಿಗೆ ಸೇರಿದರೆ ಬ್ಯಾಕ್ಟೀರಿಯಾಗಳು ಅದನ್ನು ಆವರಿಸುತ್ತವೆ. ಅದರ ಶುದ್ಧತೆಯೂ ಹಾಳಾಗುತ್ತದೆ. ಅದು ಡೇರಿ ಸೇರಿ ಸಂಸ್ಕರಣೆಯಾಗಿ, ಪ್ಯಾಕ್ ಆಗಿ ಬರುವುದರಲ್ಲಿ ಅದರಲ್ಲಿರುವ ಪೋಷಕಾಂಶಗಳೂ ನಶಿಸಿರುತ್ತವೆ. ಹಾಗಾಗಿ ಆ ಹಾಲು ಗುಣಮಟ್ಟದಿಂದ ಕೂಡಿದ ಹಾಲಾಗಿರುವುದಿಲ್ಲ. ಶುದ್ಧತೆಯ ಜೊತೆಗೆ ಪೋಷಕಾಂಶಗಳು ಹಾಲಿನಲ್ಲಿ ಉಳಿದಾಗ ಮಾತ್ರ ಪರಿಶುದ್ಧ ಹಾಲು ದೊರೆಯುತ್ತದೆ ಎನ್ನುವುದು ಫಾರ್ಮ್ ಕನೆಕ್ಟ್ ಕಂಪನಿಯವರು ಹೇಳುವ ಮಾತಾಗಿದೆ.&lt;/p&gt;&lt;h3&gt;&lt;strong&gt;ಬೆಂಗಳೂರು, ಹೈದರಾಬಾದ್&zwnj;ನಲ್ಲಿ ಮಾರುಕಟ್ಟೆ&lt;/strong&gt;&lt;/h3&gt;&lt;p&gt;ಮಂಡ್ಯದಲ್ಲಿ ತಯಾರಾಗುವ ಹಾಲನ್ನು ಬೆಂಗಳೂರು ಮತ್ತು ಹೈದರಾಬಾದ್&zwnj;ಗೆ ಸರಬರಾಜು ಮಾಡಲಾಗುತ್ತಿದೆ. ನಿತ್ಯ ಬೆಂಗಳೂರಿನಲ್ಲಿ 1000 ಜನರಿಗೆ ಸಾವಯವ ಹಾಲನ್ನು ಪೂರೈಸಲಾಗುತ್ತಿದೆ. ಕಚ್ಚಾ ಹಾಲು ಒಂದು ಲೀಟರ್&zwnj;ಗೆ 78 ರು., ಪಾಶ್ಚೀಕರಿಸಿದ ಹಾಲು ಲೀಟರ್&zwnj;ಗೆ 80 ರು.ನಂತೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ ಮೊಸರು, ಪನ್ನೀರ್, ತುಪ್ಪ, ಬೆಣ್ಣೆಯನ್ನೂ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಅರ್ಧ ಕೆಜಿ ಬೆಣ್ಣೆಗೆ 560 ರು., ತುಪ್ಪ ಅರ್ಧ ಕೆಜಿ 799 ರು., ಪನ್ನೀರ್ 200 ಗ್ರಾಂಗೆ 150 ರು., ಮೊಸರು 50 ರಿಂದ 100 ರು.ವರೆಗೆ ಮಾರಾಟ ಮಾಡಲಾಗುತ್ತಿದೆ.&lt;/p&gt;&lt;p&gt;ಪ್ರತಿದಿನ ಪೂರೈಕೆಯಾಗುವ 3000 ಲೀಟರ್ ಹಾಲಿನಲ್ಲಿ 1000 ಲೀಟರ್ ಹಾಲು ತಯಾರಿಕೆಗೆ, 300 ಲೀಟರ್ ಮೊಸರು, ಉಳಿದದ್ದು ಪನ್ನೀರ್, ಬೆಣ್ಣೆ, ತುಪ್ಪ ತಯಾರಿಕೆಗೆ ಬಳಸಲಾಗುತ್ತಿದೆ.&lt;/p&gt;&lt;h3&gt;&lt;strong&gt;ರೈತರಿಗೆ ಲೀಟರ್&zwnj;ಗೆ 43 ರು. ನಿಂದ 45 ರು.&lt;/strong&gt;&lt;/h3&gt;&lt;p&gt;ಫಾರ್ಮ್ ಕನೆಕ್ಟ್ ಕಂಪನಿಗೆ ಹಾಲು ಪೂರೈಸುವ ರೈತರಿಗೆ ಪ್ರತಿ ಲೀಟರ್&zwnj;ಗೆ 43 ರಿಂದ 45 ರು. ನೀಡಲಾಗುತ್ತಿದೆ. ರೈತರಿಗೆ ಪ್ರತಿ ತಿಂಗಳು ಏನಿಲ್ಲವೆಂದರೂ 2 ಲಕ್ಷ ರು. ಆದಾಯ ಬರುವಂತೆ ಮಾಡುವುದು ಕಂಪನಿಯ ಧ್ಯೇಯವಾಗಿದೆ. ಹಾಲಿನ ಹಣವನ್ನು ವಿಳಂಬ ಮಾಡದೆ ಆಯಾ ತಿಂಗಳೇ ರೈತರಿಗೆ ನೀಡಲಾಗುತ್ತಿದೆ. ಇದರಿಂದ ಉತ್ತೇಜನಗೊಂಡು ಹೆಚ್ಚಿನ ರೈತರು ಹಾಲು ಪೂರೈಸುವುದಕ್ಕೆ ಮುಂದಾಗುತ್ತಿದ್ದಾರೆ. ಪರಿಶುದ್ಧತೆ ಮತ್ತು ಗುಣಮಟ್ಟದಿಂದ ಕೂಡಿರುವುದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿರುವುದಾಗಿ ಫಾರ್ಮ್ ಕನೆಕ್ಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಹಾಲಿನ ಕೃಷಿಯನ್ನು ಒಂದು ಸಮಗ್ರ, ಸಾವಯವ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಯನ್ನಾಗಿ ಪರಿವರ್ತಿಸುವ ಮೂಲಕ ಭೂತಾಯಿಯನ್ನು ಪುನರುಜ್ಜೀವನಗೊಳಿಸುವುದು, ಇದರಿಂದ ರೈತರ ಜೀವನವನ್ನು ಸಮೃದ್ಧಗೊಳಿಸುವುದು, ಮಣ್ಣಿನ ಆರೋಗ್ಯವನ್ನು ಮರಳಿ ಸ್ಥಾಪಿಸುವುದು ಮತ್ತು ಭವಿಷ್ಯದ ಪೀಳಿಗೆಯನ್ನು ಪೋಷಿಸುವುದು.&lt;/p&gt;&lt;p&gt;&lt;strong&gt;ಮೂರ್ತಿ ಮುನಿಯಪ್ಪ, ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು, ಫಾರ್ಮ್ ಕನೆಕ್ಟ್&lt;/strong&gt;&lt;/p&gt;&lt;p&gt;ಹಾಲು ಪೂರೈಸುವ ರೈತರಿಗೆ 4 ರಿಂದ 5 ಎಕರೆ ಜಮೀನಿರಬೇಕು. 20 ರಿಂದ 25 ಹಸುಗಳನ್ನು ಸಾಕುತ್ತಿರಬೇಕು. ಅಂತಹವರನ್ನು ನೋಂದಣಿ ಮಾಡಿಕೊಂಡು ಅವರಿಗೆ ಹಸುವಿಗೆ ನೀಡುವ ಮೇವು, ಸಾಕಣೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಹಾಲು ಮತ್ತು ಉತ್ಪನ್ನಗಳ ಗುಣಮಟ್ಟಕ್ಕೆ ಆದ್ಯತೆ ನೀಡುವುದು ನಮ್ಮ ಗುರಿ.&lt;/p&gt;&lt;p&gt;&lt;strong&gt;ಎನ್.ನಿತ್ಯಾನಂದ, ಮುಖ್ಯಸ್ಥರು, ಫಾರ್ಮ್ ಡೆವಲಪ್&zwnj;ಮೆಂಟ್ ಅಂಡ್ ಪ್ರೊಕ್ಯೂರ್&zwnj;ಮೆಂಟ್ ಆಫೀಸರ್&lt;/strong&gt;&lt;/p&gt;&lt;p&gt;ಹಾಲು ಗಾಳಿ-ಬೆಳಕಿಗೆ ಬಂದ ಕೂಡಲೇ ಬ್ಯಾಕ್ಟೀರಿಯಾಗಳು ಅತಿಕ್ರಮಿಸುತ್ತವೆ. ಇದರಿಂದ ಹಾಲಿನ ಶುದ್ಧತೆ ಹಾಳಾಗುತ್ತದೆ. ಪೋಷಕಾಂಶಗಳು ನಶಿಸಿಹೋಗುತ್ತವೆ. ನಿರುಪಯುಕ್ತ ಹಾಲನ್ನು ನಾವು ಸೇವಿಸಿದಂತಾಗುತ್ತದೆ. ಅಮೃತ ಸಮಾನವಾದ ಹಾಲನ್ನು ಅಷ್ಟೇ ಜಾಗರೂಕತೆಯಿಂದ ಕಾಪಾಡಿದಾಗ ಪರಿಶುದ್ಧ, ಪೋಷಕಾಂಶಯುಕ್ತ ಹಾಲು ಸಿಗುತ್ತದೆ.&lt;/p&gt;&lt;p&gt;&lt;strong&gt;ಮಹೇಶ್&zwnj;ಚಂದ್ರಗುರು, ಸಂಸ್ಥಾಪಕರು, ವಿಕಸನ ಸಂಸ್ಥೆ&lt;/strong&gt;&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-s-farm-connect-company-has-introduced-a-new-concept-called-organic-milk-market-in-bengaluru-hyderabad-mrq/articleshow-6wdfguk"/>
        </item>
        <item>
            <title><![CDATA[Karnataka Cabinet expansion today: ಶಾಸಕ ತನ್ವೀರ್‌ ಸೇಠ್‌ಗೆ ಕೈತಪ್ಪಿದ ಸಚಿವ ಸ್ಥಾನ; ಬೆಂಬಲಿಗರಿಂದ ಪ್ರತಿಭಟನೆ]]></title>
            <link>https://kannada.asianetnews.com/politics/karnataka-cabinet-expansion-today-mla-tanveer-sait-missed-post-supporters-protest-in-mysuru-mandya/articleshow-adayd7y</link>
            <guid isPermaLink="true">https://kannada.asianetnews.com/politics/karnataka-cabinet-expansion-today-mla-tanveer-sait-missed-post-supporters-protest-in-mysuru-mandya/articleshow-adayd7y</guid>
            <pubDate>Mon, 03 Aug 2026 15:16:00 +0530</pubDate>
            <description><![CDATA[ಶಾಸಕ ತನ್ವೀರ್ ಸೇಠ್&zwnj;ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮೈಸೂರು ಹಾಗೂ ಮಂಡ್ಯದಲ್ಲಿ ಅವರ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಓರ್ವ ಬೆಂಬಲಿಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಮತ್ತೊಬ್ಬ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz3f0hq3pz93baan1xyfz25e,imgname-----------------------2026-08-03t144000.281-1785749063395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು/ಮಂಡ್ಯ(ಆ.3): &lt;/strong&gt;ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ನೂತನ ಸಚಿವರ ಅಧಿಕೃತ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಸಚಿವ ಸ್ಥಾನ ಸಿಕ್ಕಿದ ನಾಯಕರು ಹರ್ಷ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಸಚಿವ ಸ್ಥಾನ ಕೈತಪ್ಪಿದ ನಾಯಕರ ಬೆಂಬಲಿಗರು ಮುಖ್ಯಮಂತ್ರಿ ಮತ್ತು ಹೈಕಮಾಂಡ್ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;ಶಾಸಕ ತನ್ವೀರ್ ಸೇಠ್ ಬೆಂಬಲಿಗರ ಪ್ರತಿಭಟನೆ&lt;/h2&gt;&lt;p&gt;ಮೈಸೂರಿನ ಎನ್&zwnj;ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಮಂಡ್ಯದಲ್ಲಿ ಬೆಂಬಲಿಗರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್(Manipal hospital junction) ಬಳಿ ರಸ್ತೆ ಮಧ್ಯೆಯೇ ಕುಳಿತು ಪ್ರತಿಭಟನೆ ನಡೆಸಿದ ಬೆಂಬಲಿಗರು ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು. ಈ ವೇಳೆ ಒಬ್ಬ ಬೆಂಬಲಿಗ ತನ್ನ ಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಮುಂದಾಗಿದ್ದು ಪೊಲೀಸರು ಸಮಯಪ್ರಜ್ಞೆ ಮೆರೆದು ಆತನ ಕೈಯಲ್ಲಿದ್ದ ಪೆಟ್ರೋಲ್ ಬಾಟಲಿಯನ್ನು ಕಸಿದುಕೊಂಡು ಅನಾಹುತ ತಪ್ಪಿಸಿದರು.&lt;/p&gt;&lt;h3&gt;ಮಂಡ್ಯದಲ್ಲೂ ರಸ್ತೆ ತಡೆದು ಪ್ರತಿಭಟನೆ&lt;/h3&gt;&lt;p&gt;ಇತ್ತ ಮಂಡ್ಯದಲ್ಲೂ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ತನ್ವೀರ್ ಸೇಠ್ ಸಾಕಷ್ಟು ಶ್ರಮಿಸಿದ್ದಾರೆ. ಆದರೂ ಸಚಿವ ಸ್ಥಾನ ನೀಡದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಿಢೀರ್ ಪ್ರತಿಭಟನೆಯಿಂದ ಮೈಸೂರಿನಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ರಸ್ತೆ ತಡೆ ನಡೆಸುತ್ತಿದ್ದ ತನ್ವೀರ್ ಸೇಠ್ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.&lt;/p&gt;&lt;p&gt;&lt;strong&gt;ವಿಷ ಕುಡಿದ ತನ್ವೀರ್ ಸೇಠ್ ಬೆಂಬಲಿಗ!&lt;/strong&gt;&lt;/p&gt;&lt;p&gt;ಇನ್ನೊಂದೆಡೆ, ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ಮತ್ತೋರ್ವ ಅಭಿಮಾನಿ ವಿಷ ಸೇವಿಸಿ ಆತ್ಮ೧ಹತ್ಯೆಗೆ ಯತ್ನಿಸಿದ್ದು ಆತನಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕ ತನ್ವೀರ್ ಸೇಠ್ ಆಸ್ಪತ್ರೆಗೆ ಭೇಟಿ ನೀಡಿ ಅಭಿಮಾನಿಯ ಆರೋಗ್ಯ ವಿಚಾರಿಸಿದರು.&lt;/p&gt;]]></content:encoded>
            <category>mandya</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/karnataka-cabinet-expansion-today-mla-tanveer-sait-missed-post-supporters-protest-in-mysuru-mandya/articleshow-adayd7y"/>
        </item>
        <item>
            <title><![CDATA[Siddaramaiah: 2028ರ ಚುನಾವಣೆಗೆ  ಸಿದ್ದರಾಮಯ್ಯ ಸ್ಪರ್ಧಿಸುತ್ತಾರಾ, ಇಲ್ಲವಾ? ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಸಿಎಂ]]></title>
            <link>https://kannada.asianetnews.com/politics/former-cm-siddaramaiah-stated-that-i-will-not-contest-the-2028-election-at-mandya-rav/articleshow-ao9nk87</link>
            <guid isPermaLink="true">https://kannada.asianetnews.com/politics/former-cm-siddaramaiah-stated-that-i-will-not-contest-the-2028-election-at-mandya-rav/articleshow-ao9nk87</guid>
            <pubDate>Sun, 26 Jul 2026 06:54:38 +0530</pubDate>
            <description><![CDATA[ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ರಾಜಕೀಯ ಕ್ಷೇತ್ರ ಕಲುಷಿತಗೊಂಡಿರುವುದೇ ಇದಕ್ಕೆ ಕಾರಣವೆಂದು ತಿಳಿಸಿದ್ದು, ಸಕ್ರಿಯ ರಾಜಕಾರಣದಲ್ಲಿ ಮುಂದುವರಿದು ಜನರ ಧ್ವನಿಯಾಗಿ ಉಳಿಯುವುದಾಗಿ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kye0c58nmky5ej61js4c6fb7,imgname-----------------------2026-07-26t064051.517-1785029072149.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೆ.ಆರ್.ಪೇಟೆ (ಜು.26): &lt;/strong&gt;ರಾಜಕೀಯ ಕ್ಷೇತ್ರ ಇಂದು ಕಲುಷಿತಗೊಂಡಿರುವುದರಿಂದ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಕಷ್ಟ, ಸುಖಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.&lt;/p&gt;&lt;p&gt;ಕೆ.ಆರ್.ಪೇಟೆಯಲ್ಲಿ ಮಾಜಿ ಸ್ಪೀಕರ್ ದಿ.ಕೃಷ್ಣರ 86ನೇ ಜನ್ಮದಿನದ ಅಂಗವಾಗಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ರಾಜಕೀಯವಾಗಿ ಸ್ಪರ್ಧೆ ಮಾಡಿದಾಗ ಕ್ಷೇತ್ರದ ಜನರೇ ನಮಗೆ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ಇಂದು ಅಂತಹ ಪರಿಸ್ಥಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;ವಿಶೇಷ ಸಂಪಾದಕೀಯ | ಮೋದಿಗಷ್ಟೇ ಅಲ್ಲ, ಸಿಎಂ ಡಿಕೆಶಿಗೂ ಜಿರಳೆ ಎಚ್ಚರಿಕೆ!&lt;/p&gt;&lt;p&gt;ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾವು ಜನರಿಗೆ ದುಡ್ಡುಕೊಡಬೇಕಾದ ಕಾಲ ಬಂದಿದೆ. ಇಂದು ರಾಜಕಾರಣ ಸಾಕಷ್ಟು ಕಲುಷಿತವಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲ್ಲವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದರು.&lt;/p&gt;&lt;p&gt;ದಿ.ಕೃಷ್ಣರನ್ನು ಕ್ಷೇತ್ರದ ಜನ ಬಯಸುತ್ತಿದ್ದರು. ಆದರೆ, ಅವರು ಕಲುಷಿತ ರಾಜಕೀಯ ವ್ಯವಸ್ಥೆಯಿಂದ ನಿವೃತ್ತಿ ಘೋಷಿಸಿ ಸಕ್ರಿಯ ರಾಜಕಾರಣದಿಂದ ದೂರ ಉಳಿದರು. ಜನ ಬಯಸುತ್ತಿರುವಾಗಲೇ ರಾಜಕೀಯ ನಿವೃತ್ತಿ ಘೋಷಿಸಿದ ಕೃಷ್ಣ ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಬಿಟ್ಟು ಹೋಗಿರುವ ರಾಜಕೀಯ ಆದರ್ಶಗಳು ನಮ್ಮ ಮುಂದಿವೆ. ಕೃಷ್ಣರಂತೆ ಬದುಕಿನ ಆದರ್ಶಗಳನ್ನು ಬಿಟ್ಟು ಹೋಗಿರುವವರ ನೆನಪಿನ ಕಾರ್ಯಕ್ರಮಗಳು ರಾಜ್ಯದೆಲ್ಲೆಡೆ ನಡೆಯಬೇಕು ಎಂದು ಆಶಿಸಿದರು.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/former-cm-siddaramaiah-stated-that-i-will-not-contest-the-2028-election-at-mandya-rav/articleshow-ao9nk87"/>
        </item>
        <item>
            <title><![CDATA[ಕೊಡಗಿನಲ್ಲಿ ಭಾರೀ ಮಳೆ, ಕಾವೇರಿಗೆ ಬಂತು ಜೀವಕಳೆ: 100 ಅಡಿ ಭರ್ತಿಯತ್ತ ಕೆಆರ್‌ಎಸ್ ಜಲಾಶಯ!]]></title>
            <link>https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm</link>
            <guid isPermaLink="true">https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm</guid>
            <pubDate>Sun, 02 Aug 2026 22:05:36 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್&zwnj;ಎಸ್ ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಯ ಸಮೀಪ ತಲುಪಿದೆ. ಪ್ರಸ್ತುತ 31,583 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಈ ಬೆಳವಣಿಗೆಯು ಮಂಡ್ಯ ಮತ್ತು ಮೈಸೂರು ಭಾಗದ ರೈತರಲ್ಲಿ ಮುಂಗಾರು ಬೆಳೆಗೆ ನೀರಿನ ಭರವಸೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz1n6y1epybamt47k40a8qf3,imgname-mandya-krs-dam-1785688455214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.02): ಕ&lt;/strong&gt;ನ್ನಡ ನಾಡಿನ ಜೀವನಾಡಿ ಕಾವೇರಿ (Cauvery) ಮತ್ತೊಮ್ಮೆ ಕನ್ನಡಿಗರ ನಿರೀಕ್ಷೆ ಉಳಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Catchment) ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ (Heavy Rain) ಪರಿಣಾಮ ಮಂಡ್ಯ (Mandya) ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆ (KRS Dam) ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ.&lt;/p&gt;&lt;p&gt;ಭಾನುವಾರ ಲಭ್ಯವಾದ ಮಾಹಿತಿಯ ಪ್ರಕಾರ, ಕೆಆರ್&zwnj;ಎಸ್ ಅಣೆಕಟ್ಟೆಯಲ್ಲಿ 98.80 ಅಡಿ ನೀರು ಸಂಗ್ರಹವಾಗಿದ್ದು, ಬೆಳಗಿನ ವೇಳೆಗೆ 100 ಅಡಿ ಗಡಿ ತಲುಪುವ ಸಾಧ್ಯತೆ ಇದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಇನ್ನೂ 26.80 ಅಡಿ ನೀರು ತುಂಬಬೇಕಿದೆ. ಪ್ರಸ್ತುತ ಡ್ಯಾಂಗೆ 31,583 ಕ್ಯೂಸೆಕ್ (Cusecs) ನೀರು ಒಳಹರಿವು ದಾಖಲಾಗುತ್ತಿದೆ. ಇನ್ನೊಂದೆಡೆ 1,819 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಒಳಹರಿವು ಹೆಚ್ಚುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ವೇಗವಾಗಿ ಏರಿಕೆಯಾಗುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;22 ಟಿಎಂಸಿ ನೀರು ಸಂಗ್ರಹ&lt;/strong&gt;&lt;/h2&gt;&lt;p&gt;ಸದ್ಯ ಕೆಆರ್&zwnj;ಎಸ್ ಅಣೆಕಟ್ಟೆಯಲ್ಲಿ 21.885 ಟಿಎಂಸಿ (TMC) ನೀರು ಸಂಗ್ರಹವಾಗಿದೆ. ಡ್ಯಾಂನ ಒಟ್ಟು ಗರಿಷ್ಠ ಸಾಮರ್ಥ್ಯ 49.452 ಟಿಎಂಸಿ ಆಗಿದೆ. ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇದೇ ರೀತಿ ಮುಂದುವರಿದರೆ, ಆಗಸ್ಟ್ ತಿಂಗಳಲ್ಲೇ ಅಣೆಕಟ್ಟೆ ಗಣನೀಯ ಮಟ್ಟಕ್ಕೆ ಭರ್ತಿಯಾಗುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ (Irrigation Department) ಮೂಲಗಳು ಅಂದಾಜಿಸಿವೆ.&lt;/p&gt;&lt;p&gt;ಕೆಆರ್&zwnj;ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಿಂದ ಮಂಡ್ಯ, ಮೈಸೂರು (Mysuru) ಸೇರಿದಂತೆ ಕಾವೇರಿ ನೀರಾವರಿ ಪ್ರದೇಶದ (Cauvery Irrigation Region) ರೈತರಲ್ಲಿ ಸಂತಸ ಮನೆ ಮಾಡಿದೆ. ಮುಂಗಾರು (Monsoon) ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;ಕೆಆರ್&zwnj;ಎಸ್ (KRS Dam) ಇಂದಿನ ಪ್ರಮುಖ ಅಂಕಿಅಂಶಗಳು&lt;/strong&gt;&lt;/h2&gt;&lt;ul&gt; &lt;li&gt;ಗರಿಷ್ಠ ಮಟ್ಟ (Maximum Level): 124.80 ಅಡಿ&lt;/li&gt; &lt;li&gt;ಇಂದಿನ ನೀರಿನ ಮಟ್ಟ (Current Water Level): 98.80 ಅಡಿ&lt;/li&gt; &lt;li&gt;ಒಳಹರಿವು (Inflow): 31,583 ಕ್ಯೂಸೆಕ್&lt;/li&gt; &lt;li&gt;ಹೊರಹರಿವು (Outflow): 1,819 ಕ್ಯೂಸೆಕ್&lt;/li&gt; &lt;li&gt;ಗರಿಷ್ಠ ಸಂಗ್ರಹ ಸಾಮರ್ಥ್ಯ (Maximum Storage): 49.452 ಟಿಎಂಸಿ&lt;/li&gt; &lt;li&gt;ಇಂದಿನ ನೀರಿನ ಸಂಗ್ರಹ (Current Storage): 21.885 ಟಿಎಂಸಿ&lt;/li&gt; &lt;li&gt;ಭರ್ತಿಗೆ ಬಾಕಿ (Balance to Full Reservoir Level): 26.80 ಅಡಿ&lt;/li&gt;&lt;/ul&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm"/>
        </item>
        <item>
            <title><![CDATA[ಕೆಆರ್ ಪೇಟೆ: ಪೌತಿ ಖಾತೆ ಬಗ್ಗೆ ವಿಚಾರಿಸಲು ಬಂದ ರೈತನನ್ನ ಕೂಡಿಹಾಕಿದ ತಹಸೀಲ್ದಾರ್‌!]]></title>
            <link>https://kannada.asianetnews.com/karnataka-districts/kr-pet-tahsildar-arrogance-on-farmer-who-came-to-inquire-about-a-pauti-khata-mandya-rav/articleshow-fk7hnyi</link>
            <guid isPermaLink="true">https://kannada.asianetnews.com/karnataka-districts/kr-pet-tahsildar-arrogance-on-farmer-who-came-to-inquire-about-a-pauti-khata-mandya-rav/articleshow-fk7hnyi</guid>
            <pubDate>Fri, 31 Jul 2026 08:04:11 +0530</pubDate>
            <description><![CDATA[ಕೆ.ಆರ್.ಪೇಟೆ ತಾಲೂಕು ಕಚೇರಿಯಲ್ಲಿ ಪೌತಿ ಖಾತೆ ಬಗ್ಗೆ ವಿಚಾರಿಸಲು ಹೋದ ರೈತನನ್ನು ತಹಸೀಲ್ದಾರ್ ಮತ್ತು ಸಿಬ್ಬಂದಿ ಕೊಠಡಿಯಲ್ಲಿ ಕೂಡಿಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyv060ehcfeypv47sxp3w7zw,imgname-----------------------2026-07-31t075046.069-1785465078225.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೆ.ಆರ್.ಪೇಟೆ(ಮಂಡ್ಯ) (ಜು.31): &lt;/strong&gt;ಪೌತಿ ಖಾತೆ ಕುರಿತು ವಿಚಾರಿಸಲು ಕಂದಾಯ ಇಲಾಖೆ ಕಚೇರಿಗೆ ಹೋದ ರೈತನನ್ನು ತಹಸೀಲ್ದಾರ್ ಅವರು ಕಚೇರಿ ಕಾರಿಡಾರ್&zwnj;ನಿಂದ ಎಳೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಸುಮಾರು 1 ಗಂಟೆ ಬಂಧಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್&zwnj;.ಪೇಟೆ ತಾಲೂಕಿನಲ್ಲಿ ನಡೆದಿದೆ.&lt;/p&gt;&lt;h2&gt;ಕಾರಿಡಾರ್&zwnj;ನಿಂದ ಎಳೆದೊಯ್ದು 1 ಗಂಟೆ ವೃದ್ಧನ ಸೆರೆ&lt;/h2&gt;&lt;p&gt;ತಹಸೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ರೈತನನ್ನು ಕಾರಿಡಾರ್&zwnj;ನಿಂದ ನೂಕಿಕೊಂಡು ಕೊಠಡಿಗೆ ತಳ್ಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಹಸೀಲ್ದಾರ್ ಶ್ರೇಯಸ್ ಮತ್ತು ಕಚೇರಿ ಸಿಬ್ಬಂದಿ ನಡೆಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.&lt;/p&gt;&lt;p&gt;ತಾಲೂಕಿನ ಮಲ್ಕೋನಹಳ್ಳಿಯ ಅಣ್ಣಯ್ಯ ಬಿನ್ ಸಿದ್ದೇಗೌಡ ತಮ್ಮ ಗ್ರಾಮದ ರೈತ ಮಹಿಳೆಯ ಪೌತಿ ಖಾತೆ ಸಂಬಂಧ ಆಗಿರುವ ಬೆಳವಣಿಗೆಗಳ ಬಗ್ಗೆ ವಿಚಾರಿಸಲು ತಾಲೂಕು ಕಚೇರಿಗೆ ಹೋಗಿದ್ದಾಗ ತಹಸೀಲ್ದಾರ್ ಶ್ರೇಯಸ್, ಪೌತಿ ಖಾತೆ ಸಂಬಂಧ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸುವ ಬದಲು ರೈತನನ್ನೇ ತರಾಟೆ ತೆಗೆದುಕೊಂಡಿದ್ದಾರೆ.&lt;/p&gt;&lt;p&gt;&lsquo;ನೀನು ಯಾರಿಗಾದರೂ ದೂರು ಕೊಡು ನನಗೆ ಉತ್ತರಿಸುವುದು ಗೊತ್ತಿಗೆ&rsquo; ಎಂದು ಹೇಳಿ ಸ್ಥಳದಲ್ಲಿದ್ದ ತಮ್ಮ ಅಧೀನ ಸಿಬ್ಬಂದಿ ಆರ್&zwnj;ಆರ್&zwnj;ಟಿಇ ಶಿರಸ್ತೇದಾರ್ ಅಸ್ಲಂ ಭಾಷ ಮತ್ತು ವಿಶ್ವನಾಥ್ ಎನ್ನುವವರ ಜೊತೆಗೂಡಿ ರೈತನನ್ನು ಕಚೇರಿ ಕಾರಿಡಾರ್&zwnj;ನಿಂದ ತಳ್ಳಿಕೊಂಡು ಶಿರಸ್ತೇದಾರ್ ಕೊಠಡಿಯಲ್ಲಿ ಕೂಡಿ ಹಾಕಿದ್ದಲ್ಲದೆ ಪೊಲೀಸರನ್ನು ಕರೆಸುವ ಬೆದರಿಕೆ ಹಾಕಿರುವ ವೀಡಿಯೋ ವೈರಲ್ ಆಗಿದೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kr-pet-tahsildar-arrogance-on-farmer-who-came-to-inquire-about-a-pauti-khata-mandya-rav/articleshow-fk7hnyi"/>
        </item>
        <item>
            <title><![CDATA[ಕಲ್ಲುಗಳ ಪ್ರಪಾತವಾದ ಪ್ರಸಿದ್ಧ ಜಲಪಾತ: ಧುಮ್ಮಿಕ್ಕುತ್ತಿದ್ದ ಭರಚುಕ್ಕಿಯಲ್ಲಿ ಈ ಬಾರಿ ಒಂದು ನೀರಿನ ಗೆರೆಯೂ ಇಲ್ಲ!]]></title>
            <link>https://kannada.asianetnews.com/gallery/travel/bharachukki-waterfall-dry-due-to-lack-of-rain-in-cauvery-basintourists-disappointed-geia6gw</link>
            <guid isPermaLink="true">https://kannada.asianetnews.com/gallery/travel/bharachukki-waterfall-dry-due-to-lack-of-rain-in-cauvery-basintourists-disappointed-geia6gw</guid>
            <pubDate>Sun, 26 Jul 2026 15:52:39 +0530</pubDate>
            <description><![CDATA[ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆಯಿಂದಾಗಿ, ಚಾಮರಾಜನಗರದ ಪ್ರಸಿದ್ಧ ಭರಚುಕ್ಕಿ ಜಲಪಾತವು ಮಳೆಗಾಲದಲ್ಲೂ ಸಂಪೂರ್ಣವಾಗಿ ಬತ್ತಿ ಹೋಗಿದೆ. ಸದಾ ಭೋರ್ಗರೆಯುತ್ತಿದ್ದ ಜಲಪಾತದ ಜಾಗದಲ್ಲಿ ಈಗ ಕೇವಲ ಬಂಡೆಗಳು ಕಾಣಿಸುತ್ತಿದ್ದು, ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಕುಸಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyexej68adm9y6p0yxkfa2cy,imgname-chamarajanagara-bharachukki-falls-1785059559624.jpg" type="image/jpeg" height="390" width="690"/>
            <content:encoded><![CDATA[ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆಯಿಂದಾಗಿ, ಚಾಮರಾಜನಗರದ ಪ್ರಸಿದ್ಧ ಭರಚುಕ್ಕಿ ಜಲಪಾತವು ಮಳೆಗಾಲದಲ್ಲೂ ಸಂಪೂರ್ಣವಾಗಿ ಬತ್ತಿ ಹೋಗಿದೆ. ಸದಾ ಭೋರ್ಗರೆಯುತ್ತಿದ್ದ ಜಲಪಾತದ ಜಾಗದಲ್ಲಿ ಈಗ ಕೇವಲ ಬಂಡೆಗಳು ಕಾಣಿಸುತ್ತಿದ್ದು, ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಕುಸಿದಿದೆ.&lt;img&gt;&lt;p&gt;ಚಾಮರಾಜನಗರ (ಜು.26)): ರಾಜ್ಯದ ಗಡಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಭರಚುಕ್ಕಿ ಜಲಪಾತ (Bharachukki Waterfall) ಮಳೆಗಾಲ ಬಂತೆಂದರೆ ಸಾಕು ಮೈದುಂಬಿ ಹರಿಯುವುದು ವಾಡಿಕೆ. ಆದರೆ, ಹೇಳಿ ಕೇಳಿ ಇದು ಮಳೆಗಾಲವಾದರೂ (Monsoon season), ಈ ಬಾರಿ ಭರಚುಕ್ಕಿಯಲ್ಲಿ ಒಂದು ನೀರಿನ ಗೆರೆಯೂ ಕಾಣಿಸುತ್ತಿಲ್ಲ.&lt;/p&gt;&lt;img&gt;&lt;p&gt;ಕಾವೇರಿ ಕೊಳ್ಳದಲ್ಲಿ (Cauvery basin) ಎದುರಾಗಿರುವ ಮಳೆಯ ಕೊರತೆಯಿಂದಾಗಿ, ಸದಾ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದ್ದ ಭರಚುಕ್ಕಿ ಜಲಪಾತ ಇದೀಗ ಸಂಪೂರ್ಣವಾಗಿ ಬಣಬಣ ಎನ್ನುತ್ತಿದೆ.&lt;/p&gt;&lt;img&gt;&lt;p&gt;ಮಾಯವಾದ ಜಲಧಾರೆ, ಕೇವಲ ಬಂಡೆಗಳ ದರ್ಶನ!&lt;/p&gt;&lt;p&gt;ಸಾಮಾನ್ಯವಾಗಿ 220 ಅಡಿ ಎತ್ತರದಿಂದ ಭೋರ್ಗರೆಯುತ್ತಾ, ವಿಶಾಲವಾಗಿ ಕವಲು ಕವಲಾಗಿ ಧುಮ್ಮಿಕ್ಕುತ್ತಿದ್ದ ಕಾವೇರಿ (River Cauvery) ನದಿಯ ಜಲಧಾರೆಗಳು ಈಗ ಸಂಪೂರ್ಣವಾಗಿ ಮಾಯವಾಗಿವೆ. ಮಳೆಗಾಲದಲ್ಲಿ ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದರೂ, ಜಲಪಾತದಲ್ಲಿ ಮಾತ್ರ ನೀರಿಲ್ಲದೆ ಕೇವಲ ಬಂಡೆಗಳ ದರ್ಶನ (Bare rocks) ಆಗುತ್ತಿದೆ.&lt;/p&gt;&lt;img&gt;&lt;p&gt;ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದ ಭಾರಿ ಜಲಪಾತ ಈಗ ಕೇವಲ ಒಂದು ಸಣ್ಣ ಜರಿಯಂತೆ (Small stream) ಹರಿಯುತ್ತಿದೆ. ನದಿಯಲ್ಲಿ ನೀರಿನ ಹರಿವು (Water flow) ತೀರಾ ಕಡಿಮೆಯಾಗಿರುವುದೇ ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;img&gt;&lt;p&gt;ಈ ಬಾರಿ ಭರಚುಕ್ಕಿ ಫಾಲ್ಸ್&zwnj;ನಲ್ಲಿ ನೀರಿಲ್ಲದ ಕಾರಣ ಜಲಪಾತದ ಸೌಂದರ್ಯ ಮಾಸಿದ್ದು, ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲೂ (Tourist footfall) ಭಾರಿ ಇಳಿಕೆ ಕಂಡುಬಂದಿದೆ. ಸ್ಥಳೀಯ ವ್ಯಾಪಾರಸ್ಥರ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಿದೆ.&lt;/p&gt;&lt;img&gt;&lt;p&gt;ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದರೆ (Heavy rainfall) ಮಾತ್ರ ಜಲಪಾತ ಮತ್ತೆ ಜೀವಕಳೆ ಪಡೆಯಲಿದೆ. ಮುಂದಿನ ದಿನಗಳಲ್ಲಾದರೂ ವರುಣ ಕೃಪೆ ತೋರಿ, ಭರಚುಕ್ಕಿ ಮತ್ತೆ ಮೈದುಂಬಿ ಹರಿಯಲಿ ಎಂಬುದೇ ಪ್ರಕೃತಿ ಪ್ರೇಮಿಗಳ ಆಶಯವಾಗಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/bharachukki-waterfall-dry-due-to-lack-of-rain-in-cauvery-basintourists-disappointed-geia6gw"/>
        </item>
        <item>
            <title><![CDATA[Mysuru: ಮಹಿಳೆಯನ್ನು ಕೊಲೆ ಮಾಡಿ 20 ದಿನಗಳ ಬಳಿಕ ಖುದ್ದು ಪೊಲೀಸರಿಗೆ ಶರಣಾದ!]]></title>
            <link>https://kannada.asianetnews.com/karnataka-districts/mandya-man-surrendered-police-station-20-days-after-murdering-a-woman-rav/articleshow-gkzrqvq</link>
            <guid isPermaLink="true">https://kannada.asianetnews.com/karnataka-districts/mandya-man-surrendered-police-station-20-days-after-murdering-a-woman-rav/articleshow-gkzrqvq</guid>
            <pubDate>Wed, 05 Aug 2026 05:48:12 +0530</pubDate>
            <description><![CDATA[&lt;p&gt;ತನ್ನೊಂದಿಗೆ ವಾಸವಿದ್ದ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯು 20 ದಿನಗಳ ಬಳಿಕ ಖುದ್ದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಆರೋಪಿ ಶರಣಾದ ಬಳಿಕವೇ ಮಹಿಳೆ ಕೊಲೆಯಾದ ವಿಚಾರ ಪೊಲೀಸರಿಗೆ ಗೊತ್ತಾಗಿದ್ದು, ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jyqjyjexqxz8bdnbbp9q6hq3,imgname-----------------------2025-06-27t074911.273-1750990801373.jpg" type="image/jpeg" height="390" width="690"/>
            <content:encoded><![CDATA[&lt;h2&gt;-ಆರೋಪಿಯೇ ತಪ್ಪೊಪ್ಪಿಕೊಂಡ ಮೇಲೆ ಕೊಲೆ ಕೇಸ್&zwnj; ಬೆಳಕಿಗೆ&lt;/h2&gt;&lt;p&gt;&lt;strong&gt;ಮೈಸೂರು (ಆ.5): &lt;/strong&gt;ತನ್ನೊಂದಿಗೆ ವಾಸವಿದ್ದ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯು 20 ದಿನಗಳ ಬಳಿಕ ಖುದ್ದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಆರೋಪಿ ಶರಣಾದ ಬಳಿಕವೇ ಮಹಿಳೆ ಕೊಲೆಯಾದ ವಿಚಾರ ಪೊಲೀಸರಿಗೆ ಗೊತ್ತಾಗಿದ್ದು, ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ನಡೆಸಿದ್ದಾರೆ.&lt;/p&gt;&lt;p&gt;ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದ ಜ್ಯೋತಿ (40) ಕೊಲೆಯಾದವರು. ಕನಕಪುರ ಮೂಲದ ಆಟೋ ಚಾಲಕ ಸಿದ್ದರಾಜು (64) ಪೊಲೀಸರಿಗೆ ಶರಣಾದ ಆರೋಪಿ.&lt;/p&gt;&lt;p&gt;ಜ್ಯೋತಿ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ಸಂಬಂಧಿಕರಾದ ಸಿದ್ದರಾಜು ಜೊತೆಗೆ ಮೈಸೂರಿನ ಬನ್ನೂರು ರಸ್ತೆಯ ಭುಗತಹಳ್ಳಿಯ ಆಶ್ರಯ ಲೇಔಟ್&zwnj;ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಸಿದ್ದರಾಜುನನ್ನು ಜ್ಯೋತಿ ನಿರ್ಲಕ್ಷಿಸುತ್ತಿದ್ದರು. ಆಗಾಗ ಪೋಷಕರ ಮನೆಗೆ ಜ್ಯೋತಿ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಹೀಗಿರುವಾಗ ಜು.13 ರಂದು ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಜ್ಯೋತಿ ಮಲಗಿದ್ದಾಗ ಆರೋಪಿ ಸಿದ್ದರಾಜು, ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮನೆಯಿಂದ ಪರಾರಿಯಾಗಿದ್ದ. 3 ವಾರಗಳ ಬಳಿಕ ಆಲನಹಳ್ಳಿ ಠಾಣೆಗೆ ತೆರಳಿ ಆರೋಪಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಕೃತ್ಯವು ಮೈಸೂರು ದಕ್ಷಿಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಆರೋಪಿಯನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.&lt;/p&gt;&lt;h2&gt;ಕೊಳೆತ ಮೃತದೇಹ ಪತ್ತೆ:&lt;/h2&gt;&lt;p&gt;ಆರೋಪಿ ಸಿದ್ದರಾಜು ನೀಡಿದ ಮಾಹಿತಿ ಮೇರೆಗೆ ಮೈಸೂರು ದಕ್ಷಿಣ ಠಾಣೆ ಪೊಲೀಸರು ಭುಗತಹಳ್ಳಿಯ ಆಶ್ರಯ ಲೇಔಟ್&zwnj; ನ ಬಾಡಿಗೆ ಮನೆಗೆ ತೆರಳಿ, ಮನೆ ಮಾಲೀಕ ಡಿ.ಕೃಷ್ಣ ಅವರ ಸಮ್ಮುಖದಲ್ಲಿ ಬಾಗಿಲು ತೆಗೆದಾಗ ಮನೆಯಲ್ಲಿ ದುರ್ವಾಸನೆ ಹರಡಿತ್ತು. ಹಾಸಿಗೆ ಕೆಳಗೆ ಅಡಗಿಸಿದ್ದ ಜ್ಯೋತಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ಮನೆ ಮಾಲೀಕ ನೀಡಿದ ದೂರಿನ ಮೇರೆಗೆ ಮೈಸೂರು ದಕ್ಷಿಣ ಪೊಲೀಸ್&zwnj; ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-man-surrendered-police-station-20-days-after-murdering-a-woman-rav/articleshow-gkzrqvq"/>
        </item>
        <item>
            <title><![CDATA[ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು? ಪತ್ತೆ ಹಚ್ಚಲು ಮಂಡ್ಯ ಹುಡುಗನ ಖತರ್ನಾಕ್‌ ಪ್ಲ್ಯಾನ್‌]]></title>
            <link>https://kannada.asianetnews.com/gallery/karnataka-districts/mandya-youth-marks-river-rock-to-check-cauvery-water-release-to-tamil-nadu-san-kbetp41</link>
            <guid isPermaLink="true">https://kannada.asianetnews.com/gallery/karnataka-districts/mandya-youth-marks-river-rock-to-check-cauvery-water-release-to-tamil-nadu-san-kbetp41</guid>
            <pubDate>Sat, 01 Aug 2026 11:01:29 +0530</pubDate>
            <description><![CDATA[&lt;p&gt;ಕೆಆರ್&zwnj;ಎಸ್ ಜಲಾಶಯದಿಂದ ತಮಿಳುನಾಡಿಗೆ ರಾತ್ರಿ ವೇಳೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂಬ ಶಂಕೆಯ ಮೇರೆಗೆ, ಶ್ರೀರಂಗಪಟ್ಟಣದ ಯುವಕನೊಬ್ಬ ಸತ್ಯಾಸತ್ಯತೆ ಪರೀಕ್ಷಿಸಲು ಮುಂದಾಗಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyxwm6yk5y17s08reecznszz,imgname-cauvery-water-mandya-youth-marking--2--1785562012627.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಆರ್&zwnj;ಎಸ್ ಜಲಾಶಯದಿಂದ ತಮಿಳುನಾಡಿಗೆ ರಾತ್ರಿ ವೇಳೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂಬ ಶಂಕೆಯ ಮೇರೆಗೆ, ಶ್ರೀರಂಗಪಟ್ಟಣದ ಯುವಕನೊಬ್ಬ ಸತ್ಯಾಸತ್ಯತೆ ಪರೀಕ್ಷಿಸಲು ಮುಂದಾಗಿದ್ದಾನೆ.&lt;/p&gt;&lt;img&gt;&lt;p&gt;ಕೆಆರ್&zwnj;ಎಸ್ ಜಲಾಶಯದಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂಬ ಶಂಕೆಯ ಬೆನ್ನಲ್ಲೇ, ಸತ್ಯಾಸತ್ಯತೆ ಪತ್ತೆ ಹಚ್ಚಲು ಸ್ಥಳೀಯ ಯುವಕನೊಬ್ಬ ವಿನೂತನ ಹಾದಿ ತುಳಿದಿದ್ದಾನೆ. ಕಾವೇರಿ ನದಿ ಮಧ್ಯದಲ್ಲಿರುವ ಬಂಡೆಯೊಂದಕ್ಕೆ ಬಣ್ಣ ಬಳಿಯುವ ಮೂಲಕ ನೀರಿನ ಮಟ್ಟ ಪರಿಶೀಲನೆಗೆ ಮುಂದಾಗಿರುವ ಘಟನೆ ವರದಿಯಾಗಿದೆ.&lt;/p&gt;&lt;img&gt;&lt;p&gt;ಮಂಡ್ಯ ಜಿಲ್ಲೆಯ ಕೆಆರ್&zwnj;ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರನ್ನು ಹರಿಸಲಾಗುತ್ತಿದೆ ಎಂಬ ಭಾರಿ ಶಂಕೆ ವ್ಯಕ್ತವಾಗಿದೆ. ಕಾವೇರಿ ನದಿಯಲ್ಲಿ ತಮಿಳುನಾಡಿಗೆ ನಿಜವಾಗಿಯೂ ನೀರು ಬಿಡಲಾಗುತ್ತಿದೆಯೋ ಅಥವಾ ಇಲ್ಲವೋ ಎಂಬುದರ ಸತ್ಯಾಸತ್ಯತೆಯನ್ನು ಸ್ವತಃ ಪತ್ತೆ ಹಚ್ಚಲು ಸ್ಥಳೀಯ ಯುವಕನೊಬ್ಬ ವಿಶಿಷ್ಟ ಸಾಹಸಕ್ಕೆ ಮುಂದಾಗಿದ್ದಾನೆ.&lt;/p&gt;&lt;img&gt;&lt;p&gt;ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಮೂಲದ ಅಭಿಷೇಕ್ ಎಂಬ ಯುವಕ ಈ ಸತ್ಯವನ್ನು ಬಯಲಿಗೆಳೆಯಲು ನಿರ್ಧರಿಸಿದ್ದಾನೆ. ಪ್ರಸಿದ್ಧ ಸಂಗಮ ಕ್ಷೇತ್ರದಲ್ಲಿ ಕಾವೇರಿ ನದಿಯ ಮಧ್ಯಭಾಗದಲ್ಲಿರುವ ಬಂಡೆಯೊಂದಕ್ಕೆ ಆತ ಬಣ್ಣವನ್ನು ಬಳಿದು ನೀರಿನ ಮಟ್ಟ ಗುರುತಿಸಲು (Mark) ಮಾರ್ಕ್ ಮಾಡಿದ್ದಾನೆ.&lt;/p&gt;&lt;img&gt;&lt;p&gt;ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ, ಅಭಿಷೇಕ್ ಬಂಡೆಗೆ ಬಳಿದಿರುವ ಬಣ್ಣದ ಗುರುತಿನ ಮೇಲೆ ನೀರು ಹರಿದು ಹೋದರೆ, ಸರ್ಕಾರ ಅಥವಾ ಆಡಳಿತ ಮಂಡಳಿಯು ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿರುವುದು ಸತ್ಯ ಎಂಬುದು ಸಾಬೀತಾಗಲಿದೆ.&lt;/p&gt;&lt;img&gt;&lt;p&gt;ಗಂಜಾಂನ ಅಭಿಷೇಕ್ ನದಿ ಮಧ್ಯಕ್ಕೆ ತೆರಳಿ ಈ ರೀತಿ ಬಂಡೆಗೆ ಗುರುತು ಹಾಕುವ ಮೂಲಕ ಆಡಳಿತ ಮಂಡಳಿಯ ನಡೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾನೆ. ಒಂದು ವೇಳೆ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಬಣ್ಣದ ಮಾರ್ಕ್&zwnj;ನಿಂದ ಧೃಡಪಟ್ಟರೆ, ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಆತ ಎಚ್ಚರಿಕೆ ನೀಡಿದ್ದಾನೆ.&lt;/p&gt;&lt;img&gt;&lt;p&gt;ರಾತ್ರಿ ವೇಳೆಯಲ್ಲಿ ಕಾವೇರಿ ನದಿಯ ಹರಿವಿನಲ್ಲಿ ದಿಢೀರ್ ಏರಿಳಿತ ಕಂಡುಬರುತ್ತಿರುವುದು ಮಂಡ್ಯ ಜಿಲ್ಲೆಯ ರೈತರಲ್ಲಿ ಹಾಗೂ ಕಾವೇರಿ ಹೋರಾಟಗಾರರಲ್ಲಿ ತೀವ್ರ ಅನುಮಾನ ಹುಟ್ಟುಹಾಕಿದೆ. ನದಿ ಮಧ್ಯದ ಬಂಡೆಯ ಮೇಲಿನ ಈ ಗುರುತು ಈಗ ಗಡಿ ಭಾಗದಲ್ಲಿ ನೀರು ಹರಿವಿನ ನೈಜ ಸ್ಥಿತಿಯನ್ನು ಪತ್ತೆಹಚ್ಚಲು ದಿಕ್ಸೂಚಿಯಂತಾಗಿದೆ.&lt;/p&gt;]]></content:encoded>
            <category>mandya</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/mandya-youth-marks-river-rock-to-check-cauvery-water-release-to-tamil-nadu-san-kbetp41"/>
        </item>
        <item>
            <title><![CDATA[ಶತಕ ಬಾರಿಸಿದ KRS; ಆತಂಕಗಳ ನಡುವೆಯೂ ರೈತರಿಗೆ ಭರ್ಜರಿ ಗುಡ್‌ನ್ಯೂಸ್..!]]></title>
            <link>https://kannada.asianetnews.com/mandya/good-news-for-karnataka-farmers-krs-dam-water-level-increased-reached-100-feet-gkn/articleshow-llrki8t</link>
            <guid isPermaLink="true">https://kannada.asianetnews.com/mandya/good-news-for-karnataka-farmers-krs-dam-water-level-increased-reached-100-feet-gkn/articleshow-llrki8t</guid>
            <pubDate>Mon, 03 Aug 2026 09:41:21 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಮಂಡ್ಯದ ಕೃಷ್ಣರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದೆ. ಕೇವಲ ಮೂರು ದಿನಗಳಲ್ಲಿ 8 ಅಡಿಗಳಷ್ಟು ಏರಿಕೆ ಕಂಡಿದ್ದು, ಒಳಹರಿವು ಹೆಚ್ಚಾಗಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ ಮತ್ತು ಕಾವೇರಿ ಹೋರಾಟದ ಕಾವು ಸದ್ಯಕ್ಕೆ ತಣ್ಣಗಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jz3rcr9dcn4rmye4wb1c47wc,imgname-krs-dam-1751399162156.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ (KRS) ಜಲಾಶಯವು 'ಶತಕ' ಬಾರಿಸಿದೆ. ಭಾನುವಾರ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪುವ ಮೂಲಕ ಕಾವೇರಿ ಕೊಳ್ಳದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;h2&gt;&lt;strong&gt;3 ದಿನದಲ್ಲಿ 8 ಅಡಿ ಏರಿಕೆ&lt;/strong&gt;&lt;/h2&gt;&lt;p&gt;ಕಳೆದ ಕೆಲವು ದಿನಗಳಿಂದ ಕೊಡಗು ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆಆರ್&zwnj;ಎಸ್ ಅಣೆಕಟ್ಟಿಗೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಜಲಾಶಯದ ನೀರಿನ ಮಟ್ಟದಲ್ಲಿ ಬರೋಬ್ಬರಿ 8 ಅಡಿಗಳಷ್ಟು ಏರಿಕೆಯಾಗಿರುವುದು ವಿಶೇಷ.&lt;/p&gt;&lt;h2&gt;&lt;strong&gt;ಅರ್ಧದಷ್ಟು ಭರ್ತಿಯಾದ ಜಲಾಶಯ&lt;/strong&gt;&lt;/h2&gt;&lt;p&gt;ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಸದ್ಯ 23.079 ಟಿಎಂಸಿ ನೀರು ಸಂಗ್ರಹವಾಗಿದೆ. ಅಂದರೆ ಜಲಾಶಯವು ಸದ್ಯ ಅರ್ಧದಷ್ಟು ಭರ್ತಿಯಾದಂತಾಗಿದೆ. ಪ್ರಸ್ತುತ ಜಲಾಶಯಕ್ಕೆ 32 ಸಾವಿರ ಕ್ಯೂಸೆಕ್&zwnj;ಗೂ ಅಧಿಕ ನೀರು ಹರಿದು ಬರುತ್ತಿದೆ. ಇದೇ ರೀತಿ ಮುಂದಿನ 10 ರಿಂದ 15 ದಿನಗಳ ಕಾಲ ಒಳಹರಿವು ಮುಂದುವರಿದರೆ ಕೆಆರ್&zwnj;ಎಸ್ ಜಲಾಶಯ ಈ ಬಾರಿ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ತಣ್ಣಗಾದ ಕಾವೇರಿ ಹೋರಾಟ&lt;/strong&gt;&lt;/h2&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ ನೀರಿನ ಕೊರತೆಯಿಂದಾಗಿ ಕಾವೇರಿ ಹೋರಾಟ ತೀವ್ರಗೊಂಡಿತ್ತು. ಆದರೆ ಈಗ ಮಳೆಯ ಕೃಪೆಯಿಂದಾಗಿ ಜಲಾಶಯದ ಮಟ್ಟ ಏರುತ್ತಿರುವುದು ಮತ್ತು ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ಹೋರಾಟದ ಕಾವು ಸದ್ಯಕ್ಕೆ ತಣ್ಣಗಾಗಿದೆ.&lt;/p&gt;&lt;h2&gt;&lt;strong&gt;ಇಂದಿನ ಕೆಆರ್&zwnj;ಎಸ್ ಜಲಾಶಯದ ಅಂಕಿ-ಅಂಶಗಳು&lt;/strong&gt;&lt;/h2&gt;&lt;ul&gt; &lt;li&gt;ಗರಿಷ್ಠ ಮಟ್ಟ: 124.80 ಅಡಿ&lt;/li&gt; &lt;li&gt;ಇಂದಿನ ಮಟ್ಟ: 100.34 ಅಡಿ&lt;/li&gt; &lt;li&gt;ಒಳಹರಿವು: 32,048 ಕ್ಯೂಸೆಕ್&lt;/li&gt; &lt;li&gt;ಹೊರಹರಿವು: 1,821 ಕ್ಯೂಸೆಕ್&lt;/li&gt; &lt;li&gt;ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ&lt;/li&gt; &lt;li&gt;ಇಂದಿನ ಸಂಗ್ರಹ: 23.079 ಟಿಎಂಸಿ&lt;/li&gt;&lt;/ul&gt;&lt;p&gt;ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ರೈತರು ಈ ಬೆಳವಣಿಗೆಯಿಂದ ಸಂಸತಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಮರುಚಾಲನೆ ನೀಡುವ ನಿರೀಕ್ಷೆಯಲ್ಲಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mandya/good-news-for-karnataka-farmers-krs-dam-water-level-increased-reached-100-feet-gkn/articleshow-llrki8t"/>
        </item>
        <item>
            <title><![CDATA[Special voters list revision: ಮಂಡ್ಯ ಜಿಲ್ಲೆಯಲ್ಲಿ ಮತಪಟ್ಟಿಯಿಂದ 1.69 ಲಕ್ಷ ಮಂದಿ ಔಟ್]]></title>
            <link>https://kannada.asianetnews.com/karnataka-districts/special-voters-list-revision-1-point-69-lakh-people-left-out-of-the-voter-list-in-mandya-district-mrq/articleshow-nmgi0a1</link>
            <guid isPermaLink="true">https://kannada.asianetnews.com/karnataka-districts/special-voters-list-revision-1-point-69-lakh-people-left-out-of-the-voter-list-in-mandya-district-mrq/articleshow-nmgi0a1</guid>
            <pubDate>Thu, 06 Aug 2026 05:55:19 +0530</pubDate>
            <description><![CDATA[&lt;p&gt;ಮಂಡ್ಯ ಜಿಲ್ಲೆಯಲ್ಲಿ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ, ಸುಮಾರು 1.69 ಲಕ್ಷ ಜನರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ. ಇದಲ್ಲದೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಆಗಸ್ಟ್ 6 ರಂದು ಎಸ್ಎಸ್ಎಲ್&zwnj;ಸಿ, ಪಿಯುಸಿ, ಮತ್ತು ಪದವೀಧರರಿಗಾಗಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಯೋಜಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz51j210c56m97p7pqvbtbtr,imgname-----------------------2026-08-04t053729.648-1785802065952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿಯಲ್ಲಿದ್ದು ಇದುವರೆಗೆ ಮತದಾರರ ಪಟ್ಟಿಯಿಂದ 1.69 ಲಕ್ಷ ಮಂದಿಯನ್ನು ಕೈಬಿಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟು 15,75,849 ಮತದಾರರಲ್ಲಿ 1,69,037 ಮತದಾರರು ಹೊರಗುಳಿದಿದ್ದಾರೆ. ಪರಿಷ್ಕರಣೆಯ ಸಮಯದಲ್ಲಿ ಶೇ. 10.73 ಜನರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. 1143 ಮತಗಟ್ಟೆಗಳಲ್ಲಿ ಶೇ. 90 ರಷ್ಟು ಮತದಾರರ ಪಟ್ಟಿಯನ್ನು ಆನ್&zwnj;ಲೈನ್&zwnj;ನಲ್ಲಿ ಅಪ್&zwnj;ಲೋಡ್ ಮಾಡಲಾಗಿದೆ ಮತ್ತು ಒಂದು ಮತಗಟ್ಟೆಯಲ್ಲಿ ಶೇ. 100 ರಷ್ಟು ಆನ್&zwnj;ಲೈನ್ ಅಪ್&zwnj;ಲೋಡ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.&lt;/p&gt;&lt;p&gt;ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆಯ ಸಮಯದಲ್ಲಿ 25,264 ಜನರು ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. 86,439 ಜನರು ಶಾಶ್ವತ ವರ್ಗಾವಣೆಗಳಾಗಿದ್ದರೆ, 14,277 ಜನರು ದ್ವಿ ಮತದಾನದ ಹಕ್ಕುಗಳನ್ನು ಹೊಂದಿದ್ದರು, 42,549 ಜನರು ಸಾವನ್ನಪ್ಪಿದ್ದಾರೆ ಮತ್ತು 508 ಇತರ ಮತದಾರರಾಗಿದ್ದಾರೆ.&lt;/p&gt;&lt;p&gt;ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ 61 ಜನರು ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 14,05,313 ಮತದಾರರು ತಮ್ಮ ಮತದಾರರ ಪಟ್ಟಿಯನ್ನು ಆನ್&zwnj;ಲೈನ್&zwnj;ನಲ್ಲಿ ಅಪ್&zwnj;ಲೋಡ್ ಮಾಡುವಲ್ಲಿ 89.18 ಪ್ರಗತಿ ಸಾಧಿಸಿದ್ದಾರೆ, ಆದರೆ 1499 ಮತದಾರರ ಪಟ್ಟಿಗಳು ಇನ್ನೂ ಅಪ್&zwnj;ಲೋಡ್ ಆಗಿಲ್ಲ. 0.10% ಪ್ರಗತಿ ಸಾಧಿಸಬೇಕಾಗಿದೆ.&lt;/p&gt;&lt;p&gt;ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳಲು ಕೇವಲ ಮೂರು ದಿನಗಳು ಮಾತ್ರ ಉಳಿದಿವೆ. ಪರಿಷ್ಕರಣೆ ಕಾರ್ಯವು ಜೂನ್ 8 ರಂದು ಪೂರ್ಣಗೊಳ್ಳುತ್ತದೆ. ಅಧಿಕೃತ ಮತದಾರರ ಪಟ್ಟಿಯನ್ನು ಆನ್&zwnj;ಲೈನ್&zwnj;ನಲ್ಲಿ ಅಪ್&zwnj;ಲೋಡ್ ಮಾಡಿದ ನಂತರವೂ, ಹೆಸರು ಕೈಬಿಟ್ಟಿದ್ದರೆ ಅದನ್ನು ಸೇರಿಸಲು ಅನುಮತಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ಉದ್ಯೋಗಾಕಾಂಕ್ಷಿಗಳಿಗೆ ಇಂದು ನೇರ ಸಂದರ್ಶನ&lt;/strong&gt;&lt;/h2&gt;&lt;p&gt;ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಗೋಲ್ಡನ್ ಬ್ರಿಡ್ಜ್ ಪ್ರೋಪರ್ಟಿಸ್, ಮೆ.ಎಚ್.ಡಿ.ಎಫ್.ಸಿ ಲೈಫ್ ಇನ್ಸೂರೆನ್ಸ್ ಮತ್ತು ಮೆ.ಇನ್&zwnj;ಕಾಸ್ಟ್ ಮಿಷನ್ ಸಂಸ್ಥೆಗಳ ಸಹಯೋಗದಲ್ಲಿ ಆ.6ರಂದು ಬೆಳಗ್ಗೆ 10 ಗಂಟೆಗೆ ಖಾಲಿ ಇರುವ ಹುದ್ದೆಗಳಿಗೆ &lsquo;ನೇರಸಂದರ್ಶನ&rsquo; ವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಲಾಗಿದೆ.&lt;/p&gt;&lt;p&gt;ನೇರ ಸಂದರ್ಶನದಲ್ಲಿ ಸದರಿ ಸಂಸ್ಥೆಯಲ್ಲಿ ಖಾಲಿಯಿರುವ ಟೆಲಿಕರ್ಸ್ ಹಾಗೂ ಬ್ಯೂಸಿನೆಸ್ ಡೆವಲಪ್&zwnj;ಮೆಂಟ್ ಮ್ಯಾನೇಜರ್ ಹಾಗೂ ಮಿಷನ್ ವೆಲ್ಡರ್ &amp;amp; ಫಿಟ್ಟರ್ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಿದ್ದು, ಮಂಡ್ಯ ಹಾಗೂ ಮೈಸೂರು ಸ್ಥಳಗಳಲ್ಲಿ ಕೆಲಸ ಮಾಡಲು ಎಸ್ಎಸ್ಎಲ್&zwnj;ಸಿ, ಪಿಯುಸಿ, ಐಟಿಐ (ವೆಲ್ಡರ್ &amp;amp; ಫಿಟ್ಟರ್) ಹಾಗೂ ಯಾವುದೇ ಪದವಿ ಉತ್ತೀರ್ಣರಾಗಿರುವ 18 ರಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳು ತಮ್ಮ ರೆಸ್ಯೂಮ್/ ಬಯೋಡೇಟಾಗಳೊಂದಿಗೆ ನೇರಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ-9164642684, 9113500761, 9113875775, ಮತ್ತು 9741939716 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/special-voters-list-revision-1-point-69-lakh-people-left-out-of-the-voter-list-in-mandya-district-mrq/articleshow-nmgi0a1"/>
        </item>
        <item>
            <title><![CDATA[ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ: CWRC ಆದೇಶ ಎತ್ತಿಹಿಡಿದ CWMA; ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಸೂಚನೆ!]]></title>
            <link>https://kannada.asianetnews.com/state/cwma-upholds-cwrc-order-karnataka-to-release-3500-cusec-cauvery-water-to-tamil-nadu-mandya-protest/articleshow-og6ofo0</link>
            <guid isPermaLink="true">https://kannada.asianetnews.com/state/cwma-upholds-cwrc-order-karnataka-to-release-3500-cusec-cauvery-water-to-tamil-nadu-mandya-protest/articleshow-og6ofo0</guid>
            <pubDate>Thu, 30 Jul 2026 16:21:23 +0530</pubDate>
            <description><![CDATA[ರಾಜ್ಯದಲ್ಲಿ ತೀವ್ರ ಮಳೆ ಕೊರತೆಯ ನಡುವೆಯೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ತಮಿಳುನಾಡಿಗೆ 15 ದಿನಗಳ ಕಾಲ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ಈ ನಿರ್ಧಾರದಿಂದಾಗಿ ಕಾವೇರಿ ಹೋರಾಟದ ಕೇಂದ್ರವಾದ ಮಂಡ್ಯದಲ್ಲಿ ರೈತರು ಮತ್ತು ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kykva5ewd84mp1rr761yd1a2,imgname-karnataka-cauvery-water-cwrc-order-1785225090524.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಮಂಡ್ಯ (ಜು.30): ರಾ&lt;/strong&gt;ಜ್ಯಾದ್ಯಂತ ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಜನಸಾಮಾನ್ಯರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯ ನಡುವೆಯೂ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಕಾವೇರಿ ಆಘಾತ ಎದುರಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿಹಿಡಿದಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್&zwnj;ನಂತೆ ಒಟ್ಟು 4.5 ಟಿಎಂಸಿ ನೀರು ಹರಿಸುವಂತೆ ನಿರ್ದೇಶನ ನೀಡಿದೆ.&lt;/p&gt;&lt;p&gt;ರಾಜ್ಯದಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ CWMA ಮುಂದೆ ಸುದೀರ್ಘ ವಾದ ಮಂಡಿಸಿತ್ತು. ರಾಜ್ಯದ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟು, ಆದೇಶ ಮರುಪರಿಶೀಲಿಸುವಂತೆ ಮನವೊಲಿಸಲು ಯತ್ನಿಸಿತ್ತು. ಆದರೆ, ಕರ್ನಾಟಕದ ಮೇಲ್ಮನವಿಯನ್ನು ತಿರಸ್ಕರಿಸಿರುವ ಪ್ರಾಧಿಕಾರವು, CWRC ಶಿಫಾರಸು ಮಾಡಿದ ಆದೇಶವನ್ನೇ ಖಾಯಂಗೊಳಿಸಿದೆ.&lt;/p&gt;&lt;h2&gt;&lt;strong&gt;ಮಂಡ್ಯದಲ್ಲಿ ಭುಗಿಲೆದ್ದ ರೈತರ ಆಕ್ರೋಶ:&lt;/strong&gt;&lt;/h2&gt;&lt;p&gt;CWMA ನಿರ್ಧಾರ ಹೊರಬೀಳುತ್ತಿದ್ದಂತೆಯೇ ಕಾವೇರಿ ಹೋರಾಟದ ಗಡಿನಾಡು ಮಂಡ್ಯದಲ್ಲಿ ಪ್ರತಿಭಟನೆಯ ಕಿಚ್ಚು ತೀವ್ರಗೊಂಡಿದೆ. ಮಂಡ್ಯದ ಪ್ರಮುಖ ಕೇಂದ್ರವಾದ ಸಂಜಯ್ ವೃತ್ತದಲ್ಲಿ ಜಮಾಯಿಸಿದ ನೂರಾರು ರೈತರು ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ CWMA ವಿರುದ್ಧ ಧಿಕ್ಕಾರದ ಕೂಗು ಕೂಗಿದರು.&lt;/p&gt;&lt;p&gt;ಆಕ್ರೋಶಗೊಂಡ ಪ್ರತಿಭಟನಾಕಾರರು ಹಳೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಿದರು. ರಸ್ತೆ ಮಧ್ಯದಲ್ಲೇ ಕುಳಿತು ಧರಣಿ ನಡೆಸಿದ ರೈತರು, ಟಯರ್&zwnj;ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಬೆಂಕಿ ಹಚ್ಚಲು ತಂದಿದ್ದ ಟಯರ್ ಹಾಗೂ ಪೆಟ್ರೋಲ್ ಕ್ಯಾನ್&zwnj;ಗಳನ್ನು ವಶಪಡಿಸಿಕೊಂಡರು. ಇದರಿಂದಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕಾದಾಟದ ವಾತಾವರಣ ನಿರ್ಮಾಣವಾಗಿ, ತೀವ್ರ ವಾಗ್ವಾದ ನಡೆಯಿತು.&lt;/p&gt;&lt;h2&gt;&lt;strong&gt;ಮುಂದಿನ ನಡೆ ಏನು?&lt;/strong&gt;&lt;/h2&gt;&lt;p&gt;ಕರ್ನಾಟಕದ ಪಾಲಿಗೆ ಕುಡಿಯುವ ನೀರಿಗೇ ಕಂಠಕ ಎದುರಾಗಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ ಎಂಬುದು ರೈತರ ಸ್ಪಷ್ಟ ನಿಲುವಾಗಿದೆ. ಸರ್ಕಾರದ ಮುಂದಿನ ಕಾನೂನು ಹೋರಾಟ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಧಾರದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/cwma-upholds-cwrc-order-karnataka-to-release-3500-cusec-cauvery-water-to-tamil-nadu-mandya-protest/articleshow-og6ofo0"/>
        </item>
        <item>
            <title><![CDATA[ಕೊಡಗು ಭಾರೀ ಮಳೆ ಕೈಹಿಡಿದ ಕಾವೇರಿ: ಹಾರಂಗಿ ಜಲಾಶಯ ಬಹುತೇಕ ಭರ್ತಿ, ನಾಳೆ ನದಿಗೆ ನೀರು ಬಿಡುಗಡೆ!]]></title>
            <link>https://kannada.asianetnews.com/karnataka-districts/kodagu-harangi-dam-water-level-rises-water-to-be-released-cauvery-tomorrow-kushalnagar/articleshow-otfg3ws</link>
            <guid isPermaLink="true">https://kannada.asianetnews.com/karnataka-districts/kodagu-harangi-dam-water-level-rises-water-to-be-released-cauvery-tomorrow-kushalnagar/articleshow-otfg3ws</guid>
            <pubDate>Fri, 24 Jul 2026 16:14:22 +0530</pubDate>
            <description><![CDATA[ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾರಂಗಿ ಜಲಾಶಯವು ಭರ್ತಿಯಾಗುವ ಹಂತ ತಲುಪಿದೆ. ಹೆಚ್ಚಿದ ಒಳಹರಿವಿನಿಂದಾಗಿ, ನಾಳೆ ಮಧ್ಯಾಹ್ನ ನದಿಗೆ ಸುಮಾರು 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ಕಾವೇರಿ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jy0rz9y0rk7nsqy59cd3mzh5,imgname-harangi-dam-kodagu-1750225364928.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಜು.24): ಕೊ&lt;/strong&gt;ಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶಗಳಲ್ಲಿ (Catchment Areas) ಸುರಿಯುತ್ತಿರುವ ಭಾರೀ ಮಳೆಯಿಂದಾಗಿ (Heavy Rains) ಕುಶಾಲನಗರದಲ್ಲಿರುವ ಪ್ರಸಿದ್ಧ ಹಾರಂಗಿ ಜಲಾಶಯ (Harangi Reservoir) ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಿರುವುದರಿಂದ, ನಾಳೆ ಮಧ್ಯಾಹ್ನ 2 ಗಂಟೆಗೆ ನದಿಗೆ ನೀರು ಬಿಡುಗಡೆ ಮಾಡಲು ಜಲಾಶಯದ ಅಧಿಕಾರಿಗಳು ನಿರ್ಧರಿಸಿದ್ದಾರೆ.&lt;/p&gt;&lt;h2&gt;&lt;strong&gt;ಜಲಾಶಯಕ್ಕೆ ಭಾರೀ ಒಳಹರಿವು (Inflow Rises)&lt;/strong&gt;&lt;/h2&gt;&lt;p&gt;ಕೊಡಗಿನ ಬೆಟ್ಟಗುಡ್ಡಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಪ್ರಸ್ತುತ 4,500 ಕ್ಯೂಸೆಕ್ (Cusecs) ನೀರು ಹರಿದುಬರುತ್ತಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದೆ.&lt;/p&gt;&lt;h3&gt;&lt;strong&gt;ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ (Harangi Dam Water Level Details):&lt;/strong&gt;&lt;/h3&gt;&lt;ul&gt; &lt;li&gt;ಗರಿಷ್ಠ ಮಟ್ಟ (Maximum Level): 2,859 ಅಡಿಗಳು (Feet)&lt;/li&gt; &lt;li&gt;ಇಂದಿನ ನೀರಿನ ಮಟ್ಟ (Present Water Level): 2,856 ಅಡಿಗಳು&lt;/li&gt; &lt;li&gt;ಪ್ರಸ್ತುತ ಒಳಹರಿವು (Inflow): 4,500 ಕ್ಯೂಸೆಕ್&lt;/li&gt; &lt;li&gt;ನದಿಗೆ ಹರಿಸಲಿರುವ ನೀರು (Expected Outflow): ಸುಮಾರು 5,000 ಕ್ಯೂಸೆಕ್&lt;/li&gt;&lt;/ul&gt;&lt;p&gt;ಜಲಾಶಯದಲ್ಲಿ ಈಗಾಗಲೇ 2,856 ಅಡಿ ನೀರು ಸಂಗ್ರಹವಾಗಿದ್ದು, ಗರಿಷ್ಠ ಮಟ್ಟ ತಲುಪಲು ಇನ್ನು ಕೇವಲ 3 ಅಡಿ ಮಾತ್ರ ಬಾಕಿಯಿದೆ. ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ನಾಳೆ ಮಧ್ಯಾಹ್ನದಿಂದಲೇ ಸುಮಾರು 5,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲು ಸಜ್ಜಾಗಿದ್ದಾರೆ. ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಸಲಿರುವ ಹಿನ್ನೆಲೆಯಲ್ಲಿ ಹಾರಂಗಿ ನೀರಾವರಿ ಇಲಾಖೆಯ (Irrigation Department) ಅಧಿಕಾರಿಗಳು ಕಾವೇರಿ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ಸಂದೇಶ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ಸೂಚನೆ:&lt;/strong&gt;&lt;/h2&gt;&lt;p&gt;'ಕಾವೇರಿ ನದಿ ಪಾತ್ರದಲ್ಲಿರುವ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ತಕ್ಷಣವೇ ಜಾಗರೂಕರಾಗಿರಬೇಕು. ನದಿಯತ್ತ ತೆರಳದಂತೆ ಹಾಗೂ ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಿರಬೇಕು. ಹಾರಂಗಿ ಜಲಾಶಯ ಭರ್ತಿಯಾಗುತ್ತಿರುವುದು ಕೊಡಗು ಹಾಗೂ ಮೈಸೂರು ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆಯಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kodagu-harangi-dam-water-level-rises-water-to-be-released-cauvery-tomorrow-kushalnagar/articleshow-otfg3ws"/>
        </item>
        <item>
            <title><![CDATA[ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಶಿವನಸಮುದ್ರದಲ್ಲಿ ಉತ್ಪಾದನೆ ಸ್ಥಗಿತ.. ರಾಜ್ಯಕ್ಕೆ ಕರೆಂಟ್ ಶಾಕ್!]]></title>
            <link>https://kannada.asianetnews.com/mandya/power-generation-halted-at-asias-first-hydroelectric-plant-shivanasamudra-gkn/articleshow-rvhdvgd</link>
            <guid isPermaLink="true">https://kannada.asianetnews.com/mandya/power-generation-halted-at-asias-first-hydroelectric-plant-shivanasamudra-gkn/articleshow-rvhdvgd</guid>
            <pubDate>Sun, 26 Jul 2026 11:41:14 +0530</pubDate>
            <description><![CDATA[&lt;p&gt;ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳ ಸನಿಹದಲ್ಲೇ ಇರುವ ಈ ಸ್ಥಾವರವು ಐತಿಹಾಸಿಕ ಮತ್ತು ತಾಂತ್ರಿಕ ಮಹತ್ವದ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ನೂರು ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಈ ಮಹತ್ವದ ಸ್ಥಾವರವು ಇಂದು ಮಳೆಯಿಲ್ಲದೆ ಸ್ತಬ್ದವಾಗಿರುವುದು ಆತಂಕಕಾರಿ ಸಂಗತಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyegpket5raphx1g249pthjh,imgname-shivanasamudra-hydroelectric-project--1--1785046191578.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ರಾಜ್ಯದಲ್ಲಿ ಮಳೆಯ ಅಭಾವ ಕೇವಲ ಕೃಷಿ ವಲಯಕ್ಕೆ ಮಾತ್ರವಲ್ಲದೆ, ಜಲವಿದ್ಯುತ್ ಉತ್ಪಾದನೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿರುವ ಏಷ್ಯಾದ ಅತ್ಯಂತ ಹಳೆಯ ಮತ್ತು ಮೊದಲ ಜಲವಿದ್ಯುತ್ ಸ್ಥಾವರ 'ಶಿವನಸಮುದ್ರ'ದಲ್ಲಿ ವಿದ್ಯುತ್ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.&lt;/p&gt;&lt;h2&gt;&lt;strong&gt;ಒಂದೂವರೆ ತಿಂಗಳಿನಿಂದ ಸ್ಥಗಿತ&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ನೀರಿಲ್ಲದ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಶಿವನಸಮುದ್ರ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಬಂದ್ ಆಗಿದೆ. ಕಾವೇರಿ ನದಿ ಸಂಪೂರ್ಣ ಬರಿದಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಈ ಸ್ಥಾವರದಲ್ಲಿ ಪ್ರತಿದಿನ ಸರಾಸರಿ 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ನಿರಂತರ ವಿದ್ಯುತ್ ಉತ್ಪಾದನೆಗಾಗಿ ದಿನಕ್ಕೆ ಕನಿಷ್ಠ 1450 ಕ್ಯೂಸೆಕ್ ನೀರಿನ ಅವಶ್ಯಕತೆ ಇರುತ್ತದೆ. ಕೃಷ್ಣರಾಜ ಸಾಗರ (KRS) ಅಥವಾ ಕಬಿನಿ ಜಲಾಶಯದಿಂದ ನದಿಗೆ ನೀರು ಬಿಟ್ಟರೆ ಮಾತ್ರ ಇಲ್ಲಿ ಮತ್ತೆ ವಿದ್ಯುತ್ ಉತ್ಪಾದನೆ ಆರಂಭಿಸಲು ಸಾಧ್ಯವಿದೆ. ಪ್ರಸ್ತುತ ಅಣೆಕಟ್ಟುಗಳಲ್ಲೂ ನೀರಿನ ಮಟ್ಟ ಕುಸಿದಿರುವುದರಿಂದ ಜಲವಿದ್ಯುತ್ ಉತ್ಪಾದನೆಗೆ ಸಂಕಷ್ಟ ಎದುರಾಗಿದೆ.&lt;/p&gt;&lt;h2&gt;&lt;strong&gt;ಶಿವನಸಮುದ್ರ ವಿದ್ಯುತ್ ಸ್ಥಾವರದ ಐತಿಹಾಸಿಕ ಹಿನ್ನೆಲೆ&lt;/strong&gt;&lt;/h2&gt;&lt;p&gt;ಶಿವನಸಮುದ್ರ ಜಲವಿದ್ಯುತ್ ಸ್ಥಾವರವು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಏಷ್ಯಾ ಖಂಡಕ್ಕೇ ಹೆಮ್ಮೆಯ ಸಂಕೇತವಾಗಿದೆ. 1902 ರಲ್ಲಿ ಪ್ರಾರಂಭವಾದ ಈ ಸ್ಥಾವರವು ಏಷ್ಯಾ ಖಂಡದ ಮೊದಲ ಜಲವಿದ್ಯುತ್ ಯೋಜನೆಯಾಗಿದೆ. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಅಂದಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಶ್ರಮದಿಂದ ಈ ಯೋಜನೆ ಸಾಕಾರಗೊಂಡಿತು. ಆರಂಭದಲ್ಲಿ ಇಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಅನ್ನು ಕೋಲಾರದ ಚಿನ್ನದ ಗಣಿ (KGF) ಗೆ ಸರಬರಾಜು ಮಾಡಲಾಗುತ್ತಿತ್ತು. ಆಗಿನ ಕಾಲಕ್ಕೆ ಇದು ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಮಾರ್ಗಗಳಲ್ಲಿ ಒಂದಾಗಿತ್ತು (ಸುಮಾರು 147 ಕಿ.ಮೀ).&lt;/p&gt;&lt;p&gt;ಅಂದಿನ ಕಾಲದಲ್ಲಿ ಅಮೆರಿಕ ಮತ್ತು ಸ್ವಿಟ್ಜರ್ಲೆಂಡ್&zwnj;ನಿಂದ ಯಂತ್ರೋಪಕರಣಗಳನ್ನು ತರಿಸಿ ಇಲ್ಲಿ ಅಳವಡಿಸಲಾಗಿತ್ತು. ಇದು ಭಾರತದ ಔದ್ಯೋಗಿಕ ಮತ್ತು ತಾಂತ್ರಿಕ ಕ್ರಾಂತಿಯ ಮೊದಲ ಹೆಜ್ಜೆ ಎನ್ನಲಾಗುತ್ತದೆ. ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳ ಸನಿಹದಲ್ಲೇ ಇರುವ ಈ ಸ್ಥಾವರವು ಐತಿಹಾಸಿಕ ಮತ್ತು ತಾಂತ್ರಿಕ ಮಹತ್ವದ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ನೂರು ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಈ ಮಹತ್ವದ ಸ್ಥಾವರವು ಇಂದು ಮಳೆಯಿಲ್ಲದೆ ಸ್ತಬ್ದವಾಗಿರುವುದು ಆತಂಕಕಾರಿ ಸಂಗತಿಯಾಗಿದೆ.&lt;/p&gt;]]></content:encoded>
            <category>mandya</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mandya/power-generation-halted-at-asias-first-hydroelectric-plant-shivanasamudra-gkn/articleshow-rvhdvgd"/>
        </item>
        <item>
            <title><![CDATA[ಕನ್ನಡಿಗರಿಂದ ಕಿತ್ತುಕೊಳ್ಳುವ ಕಾವೇರಿ ನೀರು ಸಮುದ್ರ ಪಾಲು; ತಮಿಳುನಾಡಿನ ಕಳ್ಳಾಟ ಬಿಚ್ಚಿಟ್ಟ ಮಂಡ್ಯ ಶಾಸಕ ಗಣಿಗ ರವಿ!]]></title>
            <link>https://kannada.asianetnews.com/state/mandya-mla-ganiga-ravi-kumar-video-proof-cauvery-water-wasted-into-sea-in-tamil-nadu/articleshow-uqhoq7g</link>
            <guid isPermaLink="true">https://kannada.asianetnews.com/state/mandya-mla-ganiga-ravi-kumar-video-proof-cauvery-water-wasted-into-sea-in-tamil-nadu/articleshow-uqhoq7g</guid>
            <pubDate>Tue, 28 Jul 2026 17:26:01 +0530</pubDate>
            <description><![CDATA[&lt;p&gt;ಮಂಡ್ಯ ಶಾಸಕ ಗಣಿಗ ರವಿಕುಮಾರ್, ತಮಿಳುನಾಡಿನಲ್ಲಿ ಕಾವೇರಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ವಿಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ. ಸಾಕಷ್ಟು ನೀರು ಪೋಲಾಗುತ್ತಿದ್ದರೂ, ಕರ್ನಾಟಕದಿಂದ ನೀರು ಕೇಳುವ ತಮಿಳುನಾಡಿನ ಬೇಡಿಕೆಯನ್ನು ಅವರು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ, CWRC ಆದೇಶ ಪಾಲಿಸದೆ ನೀರು ಬಿಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kym94qe7t59ejr86a4kzzsa3,imgname-mandya-mla-ravi-ganiga-about-cauvery-water-1785239592391.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯ ಬ್ರೇಕಿಂಗ್: ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಕಳ್ಳಾಟ ಬಯಲು! ಸಮುದ್ರ ಸೇರುತ್ತಿರುವ ನೀರಿನ ವೀಡಿಯೋ ಪ್ರೂಫ್ ಬಿಡುಗಡೆ ಮಾಡಿದ ಶಾಸಕ ಗಣಿಗ ರವಿ!&lt;/p&gt;&lt;p&gt;&lt;strong&gt;ಮಂಡ್ಯ (ಜು.28): ತ&lt;/strong&gt;ಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC Order) ಆದೇಶ ನೀಡಿರುವ ಬೆನ್ನಲ್ಲೇ, ನೆರೆ ರಾಜ್ಯ ತಮಿಳುನಾಡಿನ ಅಸಲಿ ಬಣ್ಣವನ್ನು ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Mandya MLA Ganiga Ravikumar) ಬಯಲು ಮಾಡಿದ್ದಾರೆ. ತಮಿಳುನಾಡಿನಲ್ಲಿ ಕಾವೇರಿ ನೀರು ಪೋಲಾಗಿ ನೇರವಾಗಿ ಸಮುದ್ರಕ್ಕೆ ಸೇರುತ್ತಿರುವ 'ರಿಯಾಲಿಟಿ ಚೆಕ್' ವೀಡಿಯೋ (Reality Check Video) ಬಿಡುಗಡೆ ಮಾಡುವ ಮೂಲಕ ತಮಿಳುನಾಡಿನ ಡಬಲ್ ಗೇಮ್ ಅನ್ನು ಸಾಕ್ಷಿ ಸಮೇತ ಎತ್ತಿ ತೋರಿಸಿದ್ದಾರೆ.&lt;/p&gt;&lt;h2&gt;&lt;strong&gt;ಚಿದಂಬರಂನಲ್ಲಿ ಸಮುದ್ರ ಪಾಲಾಗುತ್ತಿದೆ ಕಾವೇರಿ ನೀರು!&lt;/strong&gt;&lt;/h2&gt;&lt;p&gt;ಕಳೆದ ಮೂರು ದಿನಗಳ ಹಿಂದೆ ತಮಿಳುನಾಡು ಪ್ರವಾಸಕ್ಕೆ ಹೋಗಿದ್ದ ಶಾಸಕ ಗಣಿಗ ರವಿಕುಮಾರ್, ಚಿದಂಬರಂ (Chidambaram) ಬಳಿ ಕಾವೇರಿ ನದಿ ಹರಿಯುವ ದೃಶ್ಯವನ್ನು ತಮ್ಮ ಮೊಬೈಲ್&zwnj;ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಅಲ್ಲಿ ಅಪಾರ ಪ್ರಮಾಣದ ಕಾವೇರಿ ನೀರು ಯಾವುದೇ ಬಳಕೆಯಿಲ್ಲದೆ ನೇರವಾಗಿ ಬಂಗಾಳ ಕೊಲ್ಲಿ ಸಮುದ್ರಕ್ಕೆ ಸೇರುತ್ತಿದೆ. 'ಅವರಲ್ಲಿ ಈಗಾಗಲೇ ಸಾಕಷ್ಟಿರುವ ನೀರೇ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುತ್ತಿದೆ. ಹೀಗಿರುವಾಗ ಮತ್ತೆ ಕರ್ನಾಟಕದಿಂದ ನೀರು ಬಿಡಿ ಎಂದು ಕ್ಯಾತೆ ತೆಗೆಯುತ್ತಿರುವುದು ಎಷ್ಟು ಸರಿ?' ಎಂದು ಗಣಿಗ ರವಿ ಖಾರವಾಗಿ ಪ್ರಶ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;'ನಮ್ಮ ಸರ್ಕಾರ ಸಿಡಬ್ಲ್ಯೂಆರ್&zwnj;ಸಿ ಆದೇಶ ಪಾಲಿಸಬಾರದು!&lt;/strong&gt;&lt;/h2&gt;&lt;p&gt;ವಿಡಿಯೋ ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ಶಾಸಕ ಗಣಿಗ ರವಿ, 'CWRC ಯಾವ ಆಧಾರದ ಮೇಲೆ ತಮಿಳುನಾಡಿಗೆ ನೀರು ಬಿಡಲು ಹೇಳಿದೆಯೋ ಗೊತ್ತಿಲ್ಲ. ನಮ್ಮ ಮಂಡ್ಯ ಹಾಗೂ ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆಗಳಿಗೆ ನೀರು ಇಲ್ಲದಿರುವುದು ಒಂದೆಡೆಯಾದರೆ, ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ. ಹೀಗಾಗಿ ನಮ್ಮ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ CWRC ಆದೇಶವನ್ನು ಪಾಲಿಸಬಾರದು ಮತ್ತು ತಮಿಳುನಾಡಿಗೆ ಕಾವೇರಿ ನೀರನ್ನು (Cauvery Water) ಹರಿಸಬಾರದು' ಎಂದು ಬಹಿರಂಗವಾಗಿ ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೇಕೆದಾಟು ನಿರ್ಮಾಣಕ್ಕೆ ಸಾಕ್ಷಿ; ತಮಿಳುನಾಡಿಗೂ ಉಚಿತ ಸಲಹೆ!&lt;/strong&gt;&lt;/h2&gt;&lt;p&gt;'ತಮಿಳುನಾಡು ನಾಯಕರು ಮೇಕೆದಾಟು ಯೋಜನೆಗೆ (Mekedatu Project) ಸುಮ್ಮನೆ ತಗಾದೆ ತೆಗೆಯುತ್ತಿದ್ದಾರೆ. ನಾವು ನಮ್ಮ ಗಡಿಯಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟೇ ಕಟ್ಟುತ್ತೇವೆ. ತಮಿಳುನಾಡಿನವರಿಗೂ ಬುದ್ಧಿ ಇದ್ದರೆ, ಅವರು ಮೆಟ್ಟೂರು ಜಲಾಶಯದ (Mettur Dam) ಕೆಳಭಾಗದಲ್ಲಿ ಇನ್ನೊಂದು ಅಣೆಕಟ್ಟು ನಿರ್ಮಿಸಿಕೊಳ್ಳಲಿ. ಇದರಿಂದ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುವ ಕೋಟ್ಯಂತರ ಕ್ಯೂಸೆಕ್ ನೀರನ್ನು ಅವರು ಉಳಿಸಿಕೊಳ್ಳಬಹುದು. ಅದನ್ನು ಬಿಟ್ಟು ಕನ್ನಡಿಗರ ಹೊಟ್ಟೆಗೆ ಹೊಡೆಯುವ ಕೆಲಸ ನಿಲ್ಲಿಸಲಿ' ಎಂದು ಶಾಸಕ ಗಣಿಗ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/mandya-mla-ganiga-ravi-kumar-video-proof-cauvery-water-wasted-into-sea-in-tamil-nadu/articleshow-uqhoq7g"/>
        </item>
        <item>
            <title><![CDATA[Cauvery water: ಕೆಆರ್‌ಎಸ್‌ನಲ್ಲಿ ಈಗ ಉಳಿದಿರುವುದು ಕೇವಲ 8 ಟಿಎಂಸಿ ನೀರು ಮಾತ್ರ! ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ]]></title>
            <link>https://kannada.asianetnews.com/state/what-current-water-levels-in-the-karnataka-reservoirs-including-krs-today-rav/articleshow-vrdnmpz</link>
            <guid isPermaLink="true">https://kannada.asianetnews.com/state/what-current-water-levels-in-the-karnataka-reservoirs-including-krs-today-rav/articleshow-vrdnmpz</guid>
            <pubDate>Thu, 30 Jul 2026 05:55:30 +0530</pubDate>
            <description><![CDATA[ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದರೆ ಕೆಆರ್&zwnj;ಎಸ್ ಜಲಾಶಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗುವ ಆತಂಕವಿದೆ. ಪ್ರಸ್ತುತ ಕೇವಲ 8 ಟಿಎಂಸಿ ನೀರು ಲಭ್ಯವಿದ್ದು, ಹಾರಂಗಿ ಜಲಾಶಯ ಭರ್ತಿಯಾಗಿದ್ದರೂ ಕೊಡಗಿನಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kycpdqmcphs5vw7bzz1n2evc,imgname-krs-dam-1784985083532.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.30): &lt;/strong&gt;ಒಂದೆಡೆ ಕಾವೇರಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ ನಿತ್ಯ 4 ಟಿಎಂಸಿ ನೀರು ಹರಿಸುವಂತೆ ಸೂಚಿಸಿದೆ. ಆದರೆ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ ಇರುವುದು ಕೇವಲ 8 ಟಿಎಂಸಿ ನೀರು ಮಾತ್ರ. ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸ್ಸಿನಂತೆ ತಮಿಳುನಾಡಿಗೆ 15 ದಿನ ನೀರು ಹರಿಸಿದರೆ 4 ಟಿಎಂಸಿಯಷ್ಟು ನೀರು ಖಾಲಿ ಆಗಲಿದೆ. ಆಗ ಉಳಿಯೋದು ಕೇವಲ 4 ಟಿಎಂಸಿ ನೀರು ಮಾತ್ರ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;ಕಾವೇರಿ ನೀರು ವಿವಾದ:ಕರ್ನಾಟಕ ಬಂದ್&zwnj; ಆಗುತ್ತಾ? ನಾಳೆ ಹೈವೋಲ್ಟೇಜ್ ಮೀಟಿಂಗ್, ಕನ್ನಡ ಸಂಘಟನೆಗಳಿಂದ ಬಿಗ್ ಅಪ್ಡೇಟ್!&lt;/p&gt;&lt;p&gt;ಈ ಆದೇಶ ಪಾಲನೆಯಾಗುವ ಸನ್ನಿವೇಶ ಸೃಷ್ಟಿಯಾದರೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಲ್ಲಿ 91.94 ಅಡಿ ನೀರು ದಾಖಲಾಗಿದೆ. ಜಲಾಶಯಕ್ಕೆ ಕೇವಲ 2842 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 1747 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿರುವ ನೀರಿನಲ್ಲಿ ಬಳಕೆಗೆ ಸಿಗುವುದು ಕೇವಲ 8.747 ಟಿಎಂಸಿ ಅಡಿ ನೀರು ಮಾತ್ರ ಎನ್ನಲಾಗಿದೆ.&lt;/p&gt;&lt;h2&gt;ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?&lt;/h2&gt;&lt;p&gt;ಕಬಿನಿ 75% 2284 2275.79&lt;/p&gt;&lt;p&gt;ಹೇಮಾವತಿ 65% 2922 2906.60&lt;/p&gt;&lt;p&gt;ತುಂಗಭದ್ರಾ 33% 1633 1608.70&lt;/p&gt;&lt;p&gt;ಸೂಪಾ(ಮೀ.) 36% 564 536.10&lt;/p&gt;&lt;p&gt;ಕೆಆರ್&zwnj;ಎಸ್ 35% 124.80 91.94&lt;/p&gt;&lt;p&gt;ಘಟಪ್ರಭಾ 62% 2175 2147.67&lt;/p&gt;&lt;p&gt;ಲಿಂಗನಮಕ್ಕಿ 30% 1819.12 1774.15&lt;/p&gt;&lt;p&gt;ಭದ್ರಾ 53% 2158 2126.41&lt;/p&gt;&lt;p&gt;ಹಾರಂಗಿ 96% 2859 2857.88&lt;/p&gt;&lt;p&gt;ಆಲಮಟ್ಟಿ(ಮೀ.) 96% 519.60 519.29&lt;/p&gt;&lt;p&gt;ನಾರಾಯಣಪುರ(ಮೀ.) 94% 492.25 491.81&lt;/p&gt;&lt;p&gt;ಮಲಪ್ರಭಾ 40% 2079.50 2058.30&lt;/p&gt;&lt;h3&gt;1825 ಕ್ಯೂಸೆಕ್&zwnj; ಹಾರಂಗಿ ಅಣೆಕಟ್ಟೆಯಿಂದ ಬಿಡುಗಡೆ&lt;/h3&gt;&lt;p&gt;ಮಡಿಕೇರಿ: ಕೊಡಗಿನ ಹಾರಂಗಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ 8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 8.1 ಟಿಎಂಸಿ ನೀರು ಸಂಗ್ರಹವಾಗಿದೆ. 2859 ಅಡಿ ಗರಿಷ್ಠ ಮಟ್ಟದ ಹಾರಂಗಿ ಜಲಾಶಯದಲ್ಲಿ ಸದ್ಯ 2858 ಅಡಿ ನೀರು ಸಂಗ್ರಹವಾಗಿದ್ದು, 1825 ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯ ಭರ್ತಿಯಾಗಿದ್ದರೂ ಕೊಡಗಿನಲ್ಲೇ ತೀವ್ರ ಮಳೆ ಕೊರತೆ ಕಂಡು ಬಂದಿದೆ. ಕಳೆದ ವರ್ಷ ಈ ಅವಧಿಗೆ ಜಿಲ್ಲೆಯಲ್ಲಿ 2099 ಮಿಲಿ ಮೀಟರ್ ಮಳೆ ಆಗಿತ್ತು. ಆದರೆ ಈ ವರ್ಷ ಕೇವಲ 871 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ 1150ಕ್ಕೂ ಹೆಚ್ಚು ಮಿಲಿ ಮೀಟರ್ ಮಳೆ ಕೊರತೆಯಾಗಿದೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/what-current-water-levels-in-the-karnataka-reservoirs-including-krs-today-rav/articleshow-vrdnmpz"/>
        </item>
        <item>
            <title><![CDATA[ದೇಶದಲ್ಲೇ ಅತ್ಯಂತ ಜನಪ್ರಿಯ ಇಂಟರ್‌ಸಿಟಿ ಮಾರ್ಗವಾಗಿ ಹೊರಹೊಮ್ಮಿದ ಬೆಂಗಳೂರು-ಮೈಸೂರು]]></title>
            <link>https://kannada.asianetnews.com/bengaluru-urban/bengaluru-mysuru-corridor-top-intercity-route-uber-travel-index-san/articleshow-xfgtltv</link>
            <guid isPermaLink="true">https://kannada.asianetnews.com/bengaluru-urban/bengaluru-mysuru-corridor-top-intercity-route-uber-travel-index-san/articleshow-xfgtltv</guid>
            <pubDate>Fri, 24 Jul 2026 16:10:08 +0530</pubDate>
            <description><![CDATA[&lt;p&gt;ಜಾಗತಿಕ ಟ್ಯಾಕ್ಸಿ ಸೇವಾ ಸಂಸ್ಥೆ 'ಉಬರ್' ಬಿಡುಗಡೆ ಮಾಡಿರುವ 'ಇಂಟರ್&zwnj;ಸಿಟಿ ಟ್ರಾವೆಲ್ ಇಂಡೆಕ್ಸ್' ವರದಿಯ ಪ್ರಕಾರ, ಬೆಂಗಳೂರು-ಮೈಸೂರು ಮಾರ್ಗವು ದೇಶದ ಮೂರನೇ ಅತ್ಯಂತ ಜನಪ್ರಿಯ ಇಂಟರ್&zwnj;ಸಿಟಿ ಪ್ರಯಾಣ ಮಾರ್ಗವಾಗಿ ಹೊರಹೊಮ್ಮಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9v7dracbrxcsj76vbr4zfk,imgname-b-luru-mysuru-among-most-popular-intercity-routes-1784889456394.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.24): &lt;/strong&gt;ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವಿನ ಸಂಚಾರ ಕಾರಿಡಾರ್ (ರಸ್ತೆ ಮಾರ್ಗ) ದೇಶದಲ್ಲೇ ಅತ್ಯಂತ ಜನಪ್ರಿಯ ನಗರಗಳ ನಡುವಿನ (ಇಂಟರ್&zwnj;ಸಿಟಿ) ಪ್ರಯಾಣ ಮಾರ್ಗಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಜಾಗತಿಕ ಟ್ಯಾಕ್ಸಿ ಸೇವಾ ಸಂಸ್ಥೆ 'ಉಬರ್' (Uber) ಬಿಡುಗಡೆ ಮಾಡಿರುವ 'ಇಂಟರ್&zwnj;ಸಿಟಿ ಟ್ರಾವೆಲ್ ಇಂಡೆಕ್ಸ್' (Intercity Travel Index) ವರದಿಯಲ್ಲಿ ಬೆಂಗಳೂರು-ಮೈಸೂರು ಮಾರ್ಗವು ದೇಶದಲ್ಲಿಯೇ ಮೂರನೇ ಸ್ಥಾನ ಪಡೆದುಕೊಂಡಿದೆ.&lt;/p&gt;&lt;p&gt;2026 ರ ಏಪ್ರಿಲ್&zwnj;ನಿಂದ ಜೂನ್&zwnj;ವರೆಗಿನ ಉಬರ್ ಇಂಟರ್&zwnj;ಸಿಟಿ ಪ್ರಯಾಣದ ಒಟ್ಟು ಅಂಕಿ-ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಬ್ಯುಸಿ ಇಂಟರ್&zwnj;ಸಿಟಿ ಮಾರ್ಗಗಳಲ್ಲಿ ಮುಂಬೈ-ಪುಣೆ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ-ಆಗ್ರಾ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು-ಮೈಸೂರು (3ನೇ ಸ್ಥಾನ), ಲಕ್ನೋ-ಕಾನ್ಪುರ (4ನೇ ಸ್ಥಾನ) ಮತ್ತು ಅಹಮದಾಬಾದ್-ವಡೋದರಾ (5ನೇ ಸ್ಥಾನ) ನಂತರದ ಸ್ಥಾನಗಳಲ್ಲಿವೆ.&lt;/p&gt;&lt;h2&gt;&lt;strong&gt;ವೇಗವಾಗಿ ಬೆಳೆಯುತ್ತಿರುವ ಮಾರ್ಗಗಳಲ್ಲಿ 2ನೇ ಸ್ಥಾನ&lt;/strong&gt;&lt;/h2&gt;&lt;p&gt;ಪ್ರಮುಖ ನಗರಗಳ ನಡುವಿನ ಸಂಚಾರದ ಪ್ರಗತಿಯ ದೃಷ್ಟಿಯಿಂದಲೂ ಬೆಂಗಳೂರು-ಮೈಸೂರು ಕಾರಿಡಾರ್ ಬೃಹತ್ ಬೆಳವಣಿಗೆಯನ್ನು ದಾಖಲಿಸಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಇಂಟರ್&zwnj;ಸಿಟಿ ಮಾರ್ಗಗಳ ಪಟ್ಟಿಯಲ್ಲಿ ಅಹಮದಾಬಾದ್-ವಡೋದರಾ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು-ಮೈಸೂರು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ದೆಹಲಿ-ಡೆಹ್ರಾಡೂನ್, ದೆಹಲಿ-ಚಂಡೀಗಢ ಮತ್ತು ಚೆನ್ನೈ-ಪುದುಚೇರಿ ಮಾರ್ಗಗಳು ನಂತರದ ಸ್ಥಾನಗಳಲ್ಲಿವೆ.&lt;/p&gt;&lt;h2&gt;&lt;strong&gt;ಪಾರಂಪರಿಕ ಮತ್ತು ಧಾರ್ಮಿಕ ಪ್ರವಾಸಿ ತಾಣಗಳಲ್ಲಿ ಮೈಸೂರಿಗೆ 2ನೇ ಶ್ರೇಯಾಂಕ&lt;/strong&gt;&lt;/h2&gt;&lt;p&gt;ಉಬರ್ ಮೂಲಕ ಪ್ರಯಾಣಿಸುವ ಪ್ರವಾಸಿಗರ ನೆಚ್ಚಿನ ಪಾರಂಪರಿಕ ಹಾಗೂ ಧಾರ್ಮಿಕ (Heritage and Pilgrimage) ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೈಸೂರು ದೇಶದಲ್ಲೇ ಎರಡನೇ ಅತ್ಯಂತ ಜನಪ್ರಿಯ ನಗರವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶದ 'ಆಗ್ರಾ' ಮೊದಲ ಸ್ಥಾನದಲ್ಲಿದ್ದರೆ, ಪ್ರಯಾಗ್&zwnj;ರಾಜ್, ಅಜ್ಮೇರ್ ಹಾಗೂ ಉದಯಪುರ ನಗರಗಳು ಮೈಸೂರಿನ ನಂತರದ ಸ್ಥಾನಗಳನ್ನು ಪಡೆದಿವೆ.&lt;/p&gt;&lt;h2&gt;&lt;strong&gt;ಬೆಂಗಳೂರಿಗರ ನೆಚ್ಚಿನ ರೌಂಡ್-ಟ್ರಿಪ್ ತಾಣಗಳು&lt;/strong&gt;&lt;/h2&gt;&lt;p&gt;ಇನ್ನು ಉಬರ್ ಸಂಸ್ಥೆಯ ವರದಿಯ ಪ್ರಕಾರ, ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರು ಅತಿ ಹೆಚ್ಚು ಬುಕ್ ಮಾಡುವ 'ರೌಂಡ್-ಟ್ರಿಪ್' (ಹೋಗಿ ಬರುವ) ಪ್ರವಾಸಿ ತಾಣಗಳಲ್ಲಿ ನಂದಿ ಬೆಟ್ಟ, ಮಾಗಡಿ, ಧರ್ಮಪುರಿ (ತಮಿಳುನಾಡು) ಮತ್ತು ಮಂಡ್ಯ ಪ್ರಮುಖವಾಗಿ ಸೇರಿವೆ.&lt;/p&gt;&lt;p&gt;&lt;/p&gt;]]></content:encoded>
            <category>mandya</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-mysuru-corridor-top-intercity-route-uber-travel-index-san/articleshow-xfgtltv"/>
        </item>
        <item>
            <title><![CDATA[BREAKING: ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರು ಬಿಡಲು CWRC ಆದೇಶ!]]></title>
            <link>https://kannada.asianetnews.com/state/cwrc-orders-karnataka-to-release-3500-cusecs-cauvery-water-to-tamil-nadu-for-15-days/articleshow-xtx6pkg</link>
            <guid isPermaLink="true">https://kannada.asianetnews.com/state/cwrc-orders-karnataka-to-release-3500-cusecs-cauvery-water-to-tamil-nadu-for-15-days/articleshow-xtx6pkg</guid>
            <pubDate>Tue, 28 Jul 2026 13:22:59 +0530</pubDate>
            <description><![CDATA[ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಜಲಾಶಯಗಳು ಬರಿದಾಗಿದ್ದರೂ, ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಶಿಫಾರಸು ಮಾಡಿದೆ. ಕರ್ನಾಟಕದ ವಾದವನ್ನು ಪರಿಗಣಿಸದ ಈ ಆದೇಶದಿಂದಾಗಿ ರಾಜ್ಯದ ರೈತರು ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳ ಜನರಲ್ಲಿ ಆತಂಕ ಮೂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kykva5ewd84mp1rr761yd1a2,imgname-karnataka-cauvery-water-cwrc-order-1785225090524.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ / ಬೆಂಗಳೂರು (ಜು.28): ರಾ&lt;/strong&gt;ಜ್ಯದಲ್ಲಿ ಮಳೆ ಕೊರತೆಯಿಂದ ಕಾವೇರಿ ನದಿಯ ಕೆಆರ್&zwnj;ಎಸ್ ಜಲಾಶಯದಲ್ಲಿ ನೀರಿಲ್ಲದೇ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳ ಜನರು ಪರದಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿರುವಾಗ ಕಾವೇರಿ ನೀರು ನಿಯಂತ್ರಣ ಸಮಿತಿಯ (Cauvery Water Regulation Committee - CWRC) ಮುಂದಿನ 15 ದಿನಗಳ ಕಾಲ ನಿರಂತರವಾಗಿ ದಿನಕ್ಕೆ 3,000 ಕ್ಯೂಸೆಕ್ ಕಾವೇರಿ ನೀರನ್ನು (Cusecs Water) ಬಿಡುಗಡೆ ಮಾಡುವಂತೆ ಸಮಿತಿಯು ಶಿಫಾರಸು ಮಾಡಿದೆ.&lt;/p&gt;&lt;p&gt;ದೆಹಲಿಯಲ್ಲಿ ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ (Cauvery Water Regulation Committee - CWRC) ಮಹತ್ವದ ಸಭೆ ಮುಕ್ತಾಯಗೊಂಡಿದ್ದು, ನೆರೆ ರಾಜ್ಯ ತಮಿಳುನಾಡಿಗೆ (Tamil Nadu) ಮತ್ತೊಮ್ಮೆ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಲಾಗಿದೆ. ಮುಂದಿನ 15 ದಿನಗಳ ಕಾಲ ನಿರಂತರವಾಗಿ ದಿನಕ್ಕೆ 3,500 ಕ್ಯೂಸೆಕ್ ಕಾವೇರಿ ನೀರನ್ನು (Cusecs Water) ಬಿಡುಗಡೆ ಮಾಡುವಂತೆ ಸಮಿತಿಯು ಶಿಫಾರಸು ಮಾಡಿದೆ.&lt;/p&gt;&lt;h2&gt;&lt;strong&gt;15 ದಿನಗಳ ಕಾಲ ನೀರು ಬಿಡಲು ಸೂಚನೆ:&lt;/strong&gt;&lt;/h2&gt;&lt;p&gt;ನವದೆಹಲಿಯಲ್ಲಿ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ನೀರಿನ ಲಭ್ಯತೆ, ಮಳೆಯ ಪ್ರಮಾಣ ಹಾಗೂ ಕುಡಿಯುವ ನೀರಿನ ಅಗತ್ಯತೆಯನ್ನು ಪರಾಮರ್ಶಿಸಿದ ಸಮಿತಿಯು, ತಮಿಳುನಾಡಿಗೆ ಇಂದಿನಿಂದಲೇ ಜಾರಿಗೆ ಬರುವಂತೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಬಿಡಲು ನಿರ್ದೇಶನ ನೀಡಿದೆ.&lt;/p&gt;&lt;h2&gt;&lt;strong&gt;ಕರ್ನಾಟಕದ ವಾದ ತಿರಸ್ಕೃತ?&lt;/strong&gt;&lt;/h2&gt;&lt;p&gt;ಸಭೆಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ (Water Resources Dept) ಅಧಿಕಾರಿಗಳು ಮತ್ತು ತಜ್ಞರ ತಂಡವು ರಾಜ್ಯದಲ್ಲಿ ಎದುರಾಗಿರುವ ತೀವ್ರ ಮಳೆ ಕೊರತೆ ಹಾಗೂ ಜಲಾಶಯಗಳಲ್ಲಿನ ಕಡಿಮೆ ನೀರಿನ ಮಟ್ಟದ ಬಗ್ಗೆ ವಿವರವಾದ ಮಾಹಿತಿ ನೀಡಿದ್ದರು. ಹಾರಂಗಿ ಹೊರತುಪಡಿಸಿ ಕೆಆರ್&zwnj;ಎಸ್ (KRS Dam), ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಕುಡಿಯುವ ನೀರಿಗೆ ಮತ್ತು ಸ್ಥಳೀಯ ರೈತರ ಬೆಳೆಗೆ ನೀರಿಲ್ಲ ಎಂದು ಬಲವಾಗಿ ವಾದ ಮಂಡಿಸಲಾಗಿತ್ತು. ಆದಾಗ್ಯೂ, ಸಮಿತಿಯು ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿರುವುದು ಕರ್ನಾಟಕದ ರೈತರಲ್ಲಿ ತೀವ್ರ ಕಳವಳ ಮೂಡಿಸಿದೆ.&lt;/p&gt;&lt;h2&gt;&lt;strong&gt;ಪ್ರಾಧಿಕಾರಕ್ಕೆ ಮೇಲ್ಮನವಿ ಸಾಧ್ಯತೆ:&lt;/strong&gt;&lt;/h2&gt;&lt;p&gt;CWRC ನೀಡಿರುವ ಈ ಆದೇಶದಿಂದಾಗಿ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಮತ್ತೆ ನೀರಿನ್&zwnj; ಅಭಾವ ಎದುರಾಗುವ ಭೀತಿ ಶುರುವಾಗಿದೆ. ಹೀಗಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಈ ತೀರ್ಮಾನದ ವಿರುದ್ಧ ಕರ್ನಾಟಕ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/cwrc-orders-karnataka-to-release-3500-cusecs-cauvery-water-to-tamil-nadu-for-15-days/articleshow-xtx6pkg"/>
        </item>
    </channel>
</rss>
