<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 26 Aug 2026 14:12:47 +0530</lastBuildDate>
        <atom:link href="https://kannada.asianetnews.com/rss/mandya" rel="self" type="application/rss+xml"/>
        <item>
            <title><![CDATA[ಸಕ್ಕರೆ ನಾಡಲ್ಲಿ ಬೆಲ್ಲ 'ಬಂಗಾರ': ಮಂಡ್ಯ ಮಾರುಕಟ್ಟೆ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಬೆಲ್ಲದ ದರ!]]></title>
            <link>https://kannada.asianetnews.com/karnataka-districts/mandya-jaggery-price-hike-drought-all-time-high-rate-san/articleshow-0gcgdgl</link>
            <guid isPermaLink="true">https://kannada.asianetnews.com/karnataka-districts/mandya-jaggery-price-hike-drought-all-time-high-rate-san/articleshow-0gcgdgl</guid>
            <pubDate>Sat, 22 Aug 2026 10:36:09 +0530</pubDate>
            <description><![CDATA[ಮಂಡ್ಯದಲ್ಲಿ ತೀವ್ರ ಬರಗಾಲದಿಂದಾಗಿ ಕಬ್ಬಿನ ಇಳುವರಿ ಕುಸಿದಿದ್ದು, ಬೆಲ್ಲದ ಉತ್ಪಾದನೆಗೆ ಹೊಡೆತ ಬಿದ್ದಿದೆ. ಈ ಕಾರಣದಿಂದ ಮಾರುಕಟ್ಟೆಯಲ್ಲಿ ಬೆಲ್ಲದ ಕೊರತೆ ಉಂಟಾಗಿ, ಅದರ ದರವು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0kxps32jpbsz8spra07qy4k,imgname-mandya-bella-price-hike-1787375084642.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.22): &lt;/strong&gt;ಸಕ್ಕರೆ ನಾಡು ಮಂಡ್ಯದಲ್ಲಿ ಭೀಕರ ಬರಗಾಲದ ಕರಿಛಾಯೆ ಆವರಿಸಿದ್ದು, ಬೆಲ್ಲ ಹಾಗೂ ಸಕ್ಕರೆ ದರ ಗಗನಕ್ಕೇರಿದೆ. ಕಳೆದ ಆರು ತಿಂಗಳಿಂದ ಸೂಕ್ತ ಮಳೆಯಾಗದೆ ಹಾಗೂ ಕಾವೇರಿ ನೀರಿನ ಪೂರೈಕೆ ಸಿಗದೆ ಕಬ್ಬಿನ ಗದ್ದೆಗಳು ಸಂಪೂರ್ಣ ಒಣಗಿ ನಿಂತಿವೆ. ಪರಿಣಾಮವಾಗಿ, ಕಬ್ಬಿನ ಇಳುವರಿ ಅರ್ಧದಷ್ಟು ಕುಸಿದಿದ್ದು, ಬೆಲ್ಲ ಉತ್ಪಾದಿಸುವ ಗಾಣಗಳಿಗೆ ಅಗತ್ಯ ಕಬ್ಬು ಸಿಗದೆ ಮಾರುಕಟ್ಟೆಯಲ್ಲಿ ಬೆಲ್ಲದ ಕೊರತೆ ತೀವ್ರವಾಗಿದೆ. ಇದರಿಂದಾಗಿ ಮಂಡ್ಯ ಬೆಲ್ಲದ ಮಾರುಕಟ್ಟೆಯ ಇತಿಹಾಸದಲ್ಲೇ ಎಂದೂ ಕಾಣದ ರೀತಿಯಲ್ಲಿ ಬೆಲ್ಲದ ದರ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಹರಾಜಾಗುತ್ತಿದೆ.&lt;/p&gt;&lt;h2&gt;&lt;strong&gt;ಎರಡೇ ದಿನದಲ್ಲಿ ಕ್ವಿಂಟಾಲ್&zwnj;ಗೆ 2,000 ರೂ. ಏರಿಕೆ&lt;/strong&gt;&lt;/h2&gt;&lt;p&gt;ಮಂಡ್ಯ ಮಾರುಕಟ್ಟೆಯಲ್ಲಿ ಈ ಹಿಂದೆ ಪ್ರತಿ ಕ್ವಿಂಟಾಲ್ ಬೆಲ್ಲದ ದರ 4,500 ರೂಪಾಯಿ ಇತ್ತು. ಆದರೆ, ಕೇವಲ ಕಳೆದ ಎರಡ್ಮೂರು ದಿನಗಳಲ್ಲಿ ದಿಢೀರನೇ 2,000 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ ಕ್ವಿಂಟಾಲ್&zwnj; ಬೆಲ್ಲ 6,500 ರಿಂದ 7,000 ರೂಪಾಯಿವರೆಗೆ ಭಾರಿ ಬೆಲೆಗೆ ಹರಾಜಾಗುತ್ತಿದೆ. ಸಾಮಾನ್ಯವಾಗಿ ಈ ಋತುವಿನಲ್ಲಿ ಬೆಲ್ಲದ ದರ ಇಳಿಕೆಯಾಗಬೇಕಿತ್ತು. ಆದರೆ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ದರ ಏರಿಕೆಯಾಗಿರುವುದು ಮಂಡ್ಯ ಮಾರುಕಟ್ಟೆಯ ಇತಿಹಾಸದಲ್ಲೇ ಇದೇ ಮೊದಲು ಎಂದು ಸ್ಥಳೀಯ ವ್ಯಾಪಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಅರ್ಧದಷ್ಟು ಕುಸಿದ ಬೆಲ್ಲದ ಪೂರೈಕೆ&lt;/strong&gt;&lt;/h2&gt;&lt;p&gt;ನೀರಿಲ್ಲದೆ ಕಬ್ಬಿನ ಇಳುವರಿ ಅರ್ಧಕ್ಕಿಂತ ಕಡಿಮೆ ಬಂದಿರುವುದರಿಂದ ಬೆಲ್ಲ ಉತ್ಪಾದನೆಯ ಮೇಲೆಯೂ ನೇರ ಪರಿಣಾಮ ಬೀರಿದೆ. ಪ್ರತಿದಿನ ಮಂಡ್ಯ ಮಾರುಕಟ್ಟೆಯಿಂದ ಸುಮಾರು 10 ರಿಂದ 12 ಲಾರಿಯಷ್ಟು ಬೆಲ್ಲ ವಿಲೇವಾರಿಯಾಗುತ್ತಿತ್ತು. ಪ್ರಸ್ತುತ ಬೆಲ್ಲದ ಪೂರೈಕೆ ಶೇ. 50 ರಷ್ಟು ಕಡಿಮೆಯಾಗಿದ್ದು, ಮಾರುಕಟ್ಟೆಗೆ ಬರುವ ಬೆಲ್ಲದ ಪ್ರಮಾಣ ತೀವ್ರ ಕುಸಿತ ಕಂಡಿದೆ. ನೀರಿನ ಅಭಾವ, ಗಾಣಗಳಿಗೆ ಕಬ್ಬಿನ ಅಭಾವ ಮತ್ತು ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವುದು ಮಂಡ್ಯ ಬೆಲ್ಲದ ದರ ದಾಖಲೆ ಮಟ್ಟಕ್ಕೆ ತಲುಪಲು ಮುಖ್ಯ ಕಾರಣವಾಗಿದೆ.&lt;/p&gt;]]></content:encoded>
            <category>mandya</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/mandya-jaggery-price-hike-drought-all-time-high-rate-san/articleshow-0gcgdgl"/>
        </item>
        <item>
            <title><![CDATA[ಮಂಡ್ಯ ಕಾರು ಅಪಘಾತಕ್ಕೆ ಟ್ವಿಸ್ಟ್: ಮೃತ ಯುವತಿ ತಾಯಿ ಬಿಚ್ಚಿಟ್ಲು ಶಾಕಿಂಗ್‌ ವಿಷಯ]]></title>
            <link>https://kannada.asianetnews.com/mandya/mandya-car-accident-mother-alleges-daughter-was-mur-ered-by-friends-not-accident-gkn/articleshow-1ormd2o</link>
            <guid isPermaLink="true">https://kannada.asianetnews.com/mandya/mandya-car-accident-mother-alleges-daughter-was-mur-ered-by-friends-not-accident-gkn/articleshow-1ormd2o</guid>
            <pubDate>Tue, 04 Aug 2026 09:14:32 +0530</pubDate>
            <description><![CDATA[ಮಂಡ್ಯದಲ್ಲಿ ನಡೆದ ಕಾರು ಅಪಘಾತದಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದು, ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಮೃತೆಯ ತಾಯಿ ಆರೋಪಿಸಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ಕರೆದೊಯ್ದು ಕೊಲೆ ಮಾಡಿ, ಅಪಘಾತವೆಂದು ಬಿಂಬಿಸಲು ಯತ್ನಿಸಲಾಗಿದೆ ಎಂದು ಸ್ನೇಹಿತರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5dws7av44wga2teh5s9k74,imgname-mandya-1785815000298.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕಾರು ಅಪಘಾತವೊಂದರಲ್ಲಿ ಮೃತಪಟ್ಟ ಯುವತಿಯ ಸಾವಿನ ಹಿಂದೆ ಭಾರಿ ಸಂಚು ಅಡಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯುವತಿಯನ್ನು ಕೊಲೆ ಮಾಡಿ, ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಲಾಗಿದೆ ಎಂದು ಮೃತ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣಕ್ಕೆ ತೀವ್ರ ತಿರುವು ಸಿಕ್ಕಿದೆ.&lt;/p&gt;&lt;p&gt;ಮೃತ ಯುವತಿಯನ್ನು ಹೊನ್ನೆಮಡು ಗ್ರಾಮದ ನವೀನ (19) ಎಂದು ಗುರುತಿಸಲಾಗಿದೆ. ಈಕೆಯ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಸ್ನೇಹಿತರಾದ ಅಶ್ವಿನಿ, ವಿಷ್ಣು ಮತ್ತು ಶಿವಕುಮಾರ್ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಮಂಡ್ಯ ನಗರದ ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನವೀನ, ಅಲ್ಲಿಯೇ ಪಿ.ಜಿಯೊಂದರಲ್ಲಿ ವಾಸವಿದ್ದಳು. ಆಗಸ್ಟ್ 2ರಂದು ಸಂಜೆ ತಾನು ಮನೆಗೆ ಹೋಗುವುದಾಗಿ ಪಿ.ಜಿ ಮಾಲೀಕರಿಗೆ ತಿಳಿಸಿ ಹೊರಟಿದ್ದಳು. ಆದರೆ ಆಕೆ ತನ್ನ ಸ್ನೇಹಿತರಾದ ಅಶ್ವಿನಿ, ವಿಷ್ಣು ಮತ್ತು ಶಿವಕುಮಾರ್ ಅವರೊಂದಿಗೆ ಕೊಮ್ಮೇರಹಳ್ಳಿ ಬೆಟ್ಟಕ್ಕೆ ಕಾರಿನಲ್ಲಿ ತೆರಳಿದ್ದಾಳೆ. ಕೊಮ್ಮೇರಹಳ್ಳಿ ಬಳಿ ಇವರು ಪ್ರಯಾಣಿಸುತ್ತಿದ್ದ ಕಾರು ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ನವೀನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಉಳಿದ ಮೂವರು ಸ್ನೇಹಿತರಿಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿವೆ.&lt;/p&gt;&lt;h2&gt;&lt;strong&gt;ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಲು ಕಾರಣಗಳೇನು?&lt;/strong&gt;&lt;/h2&gt;&lt;p&gt;ನವೀನ ಸಾವಿನ ಬಗ್ಗೆ ಆಕೆಯ ಕುಟುಂಬಸ್ಥರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಸ್ನೇಹಿತರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಪಘಾತವು ಆಗಸ್ಟ್ 2ರ ಸಂಜೆ ನಡೆದಿದ್ದರೂ, ಸ್ನೇಹಿತರು ಯುವತಿಯ ಕುಟುಂಬದವರಿಗೆ ರಾತ್ರಿ 11 ಗಂಟೆಯ ಸುಮಾರಿಗೆ ಮಾಹಿತಿ ನೀಡಿದ್ದಾರೆ. ಈ ವಿಳಂಬವೇ ಹಲವು ಸಂಶಯಗಳಿಗೆ ಕಾರಣವಾಗಿದೆ. ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ನವೀನಳನ್ನು ಕರೆದುಕೊಂಡು ಹೋಗಿ, ಅಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಅದಕ್ಕೆ ನವೀನ ಒಪ್ಪದಿದ್ದಾಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಯುವತಿಯನ್ನು ಕೊಲೆ ಮಾಡಿದ ಬಳಿಕ, ಹೆಣವನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಕೂರಿಸಿ ತಂದು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆಸಲಾಗಿದೆ. ಆ ಮೂಲಕ ಇದೊಂದು ಅಪಘಾತ ಎಂಬಂತೆ ಬಿಂಬಿಸಲು ಆರೋಪಿಗಳು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಮೃತ ಯುವತಿ ನವೀನಳ ತಾಯಿ ಬೊಮ್ಮಮ್ಮ ಅವರು ನೀಡಿದ ದೂರಿನ ಮೇರೆಗೆ ಸ್ನೇಹಿತರಾದ ಅಶ್ವಿನಿ, ವಿಷ್ಣು ಮತ್ತು ಶಿವಕುಮಾರ್ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ಅಪಘಾತವೇ ಅಥವಾ ಪ್ರೀ-ಪ್ಲಾನ್ಡ್ ಕೊಲೆಯೇ ಎಂಬ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mandya/mandya-car-accident-mother-alleges-daughter-was-mur-ered-by-friends-not-accident-gkn/articleshow-1ormd2o"/>
        </item>
        <item>
            <title><![CDATA[ದಕ್ಷಿಣದ  ಜೀವಗಂಗೆ ದಾಹದಲ್ಲಿ ಅನ್ನದಾತ; ಖಾಲಿಯಾದ ಕಾವೇರಿ ಒಡಲು,  ನೀರು ಬಿಡದಿದ್ದರೆ ಸಂಕಷ್ಟ ಫಿಕ್ಸ್‌!]]></title>
            <link>https://kannada.asianetnews.com/karnataka-districts/cauvery-water-crisis-karnataka-farmers-cauvery-basin-drought-paddy-crop-loss-water-shortage-cauvery-water-dispute-bmk/articleshow-3ta6nhl</link>
            <guid isPermaLink="true">https://kannada.asianetnews.com/karnataka-districts/cauvery-water-crisis-karnataka-farmers-cauvery-basin-drought-paddy-crop-loss-water-shortage-cauvery-water-dispute-bmk/articleshow-3ta6nhl</guid>
            <pubDate>Sat, 22 Aug 2026 17:40:20 +0530</pubDate>
            <description><![CDATA[ಕಾವೇರಿ ನದಿ ನೀರಿಲ್ಲದೆ ಬತ್ತಿ ಹೋಗುತ್ತಿದ್ದು, ಜಲಾಶಯಗಳು ಖಾಲಿಯಾಗಿವೆ. ಇದರಿಂದಾಗಿ, ಕಾವೇರಿ ಕೊಳ್ಳದ ರೈತರು ಬೆಳೆ ನಷ್ಟದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಸುಳಿಯಲ್ಲಿ ಬಳಲುತ್ತಿದ್ದಾರೆ. ರಾಜಕೀಯ ಹೋರಾಟಗಳ ನಡುವೆ ಅನ್ನದಾತನ ಬದುಕು ಅತಂತ್ರವಾಗಿದ್ದು, ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0mp1shdp4bc6hqvnn2aqw4k,imgname-cauvery-crisis-1787400611372.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾವೇರಿ ಎಂಬುದು ಕೇವಲ ನದಿಯಲ್ಲ, ದಕ್ಷಿಣ ಭಾರತದ ಕೋಟ್ಯಂತರ ಜೀವಗಳ ಹಸಿವು ನೀಗಿಸುವ ಜಲದೇವತೆ, ಅನ್ನದಾತನ ಪಾಲಿನ ಸಾಕ್ಷಾತ್ ಜೀವಗಂಗೆ. ಆದರೆ ಇಂದು ಅದೇ ಜೀವಗಂಗೆಯ ಒಡಲು ಬತ್ತಿಹೋಗುತ್ತಿದೆ. ಮಳೆರಾಯ ಕೈಕೊಟ್ಟಿದ್ದಾನೆ, ಜಲಾಶಯಗಳು ಖಾಲಿಯಾಗುತ್ತಿವೆ. ಇತ್ತ ನದಿಯ ನೀರಿಗಾಗಿ ರಾಜ್ಯಗಳ ನಡುವೆ ಹಗ್ಗಜಗ್ಗಾಟ ತೀವ್ರಗೊಳ್ಳುತ್ತಿದ್ದರೆ, ಅತ್ತ ನದಿಯನ್ನೇ ನಂಬಿ ಬದುಕುತ್ತಿರುವ ಕಾವೇರಿ ಕೊಳ್ಳದ ರೈತನ ಕಣ್ಣುಗಳಲ್ಲಿ ಕಣ್ಣೀರು ಒಣಗದಂತಾಗಿದೆ. ಪ್ರತಿ ವರ್ಷ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಇಂದು ನೀರಿಲ್ಲದೆ ಬಿರುಕು ಬಿಡುತ್ತಿವೆ. ಕಾವೇರಿಯ ಉಭಯ ದಂಡೆಗಳಲ್ಲೂ ಇಂದು ಕೇಳಿಸುತ್ತಿರುವುದು ಕೇವಲ ಅನ್ನದಾತನ ಆಕ್ರಂದನ ಮತ್ತು ಅಸಹಾಯಕತೆ ಮಾತ್ರ.&lt;/p&gt;&lt;h2&gt;&lt;strong&gt;ಅನಿಶ್ಚಿತತೆಯಲ್ಲಿ ಅನ್ನದಾತ!&lt;/strong&gt;&lt;/h2&gt;&lt;p&gt;ರೈತನ ಬದುಕು ಸದಾ ಅನಿಶ್ಚಿತತೆಯ ಮೇಲೆ ನಿಂತಿರುತ್ತದೆ. ಈ ವರ್ಷವೂ ಮುಂಗಾರು ಮಳೆ ಕೈಕೊಟ್ಟರೂ, 'ಜೀವಗಂಗೆ' ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆಯಿಂದ ರೈತ ಸಾಲಸೋಲ ಮಾಡಿ ಗದ್ದೆಗೆ ಇಳಿದಿದ್ದ. ಹಗಲಿರುಳು ಕಷ್ಟಪಟ್ಟು ಭೂಮಿ ಹದಮಾಡಿ, ಭತ್ತದ ಸಸಿಗಳನ್ನು ನೆಟ್ಟು ಹಸಿರು ಕನಸು ಕಂಡಿದ್ದ. ಆದರೆ ಕಾವೇರಿ ಕೊಳ್ಳದಲ್ಲಿ ಒಂದು ಎಕರೆ ಭತ್ತದ ಕೃಷಿ ಮಾಡುವುದು ಇಂದು ಸಾಮಾನ್ಯ ಮಾತಲ್ಲ.&lt;/p&gt;&lt;h3&gt;&lt;strong&gt;ದೊಡ್ಡ ವೆಚ್ಚದ ಹೊರೆ!&lt;/strong&gt;&lt;/h3&gt;&lt;p&gt;ಆರಂಭಿಕ ಹಂತದಲ್ಲೇ ರೈತನಿಗೆ ದೊಡ್ಡ ವೆಚ್ಚದ ಹೊರೆ ಬೀಳುತ್ತದೆ. ಕೆಲ ವರದಿಗಳ ಅಂಕಿ-ಅಂಶಗಳ ಪ್ರಕಾರ, ಎರಡೂವರೆ ಎಕರೆ ಜಮೀನಿನ ನಾಟಿಗೆ ರೈತರು ಈಗಾಗಲೇ ₹8,000 ಹಣವನ್ನು ಖರ್ಚು ಮಾಡಿದ್ದಾರೆ. ಇದನ್ನು ಸರಾಸರಿ ಲೆಕ್ಕ ಹಾಕಿದರೆ, ಪ್ರತಿ 1 ಎಕರೆ ಜಮೀನಿಗೆ ಕೇವಲ ಆರಂಭಿಕ ನರ್ಸರಿ ಸಿದ್ಧತೆ ಮತ್ತು ಸಸಿ ನಾಟಿಗೇ ಕನಿಷ್ಠ ₹3,200 ವೆಚ್ಚವಾಗುತ್ತದೆ. ಬಡ ರೈತನಿಗೆ ಆ ಮೂರು ಸಾವಿರ ರೂಪಾಯಿ ಕೇವಲ ಹಣವಲ್ಲ, ಅದು ಅವನ ರಕ್ತ, ಬೆವರು ಮತ್ತು ಇಡೀ ವರ್ಷದ ಬದುಕಿನ ಬಂಡವಾಳ.&lt;/p&gt;&lt;h3&gt;&lt;strong&gt;ತೆಲೆಕೆಳಗಾದ ಪರಿಸ್ಥಿತಿ!&lt;/strong&gt;&lt;/h3&gt;&lt;p&gt;ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತಲೆಕೆಳಗಾಗಿದೆ. ಜಲಾಶಯಗಳಿಂದ ಸರಿಯಾಗಿ ನೀರು ಬಿಡದ ಕಾರಣ, ನಾಟಿ ಮಾಡಿದ ಸಸಿಗಳು ಕಣ್ಣಮುಂದೆಯೇ ಒಣಗಿ ಕಪ್ಪಾಗುತ್ತಿವೆ. ಇನ್ನು ಕೇವಲ ಹತ್ತು ದಿನಗಳ ಒಳಗೆ ಗದ್ದೆಗಳಿಗೆ ನೀರು ಹರಿಯದಿದ್ದರೆ, ರೈತ ತಾನು ಕೇವಲ ಈ ಆರಂಭಿಕ ಬಂಡವಾಳವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಮುಂದೆ ಉಳುಮೆ, ಗೊಬ್ಬರ, ಕಳೆ ಕೀಳುವಿಕೆ ಸೇರಿದಂತೆ ಒಂದು ಎಕರೆಗೆ ತಗುಲುವ ಒಟ್ಟು ₹15,000 ದಿಂದ ₹20,000 ವರೆಗಿನ ಕೃಷಿ ಹೂಡಿಕೆಯ ಕನಸೆಲ್ಲಾ ಕಮರಿ ಹೋಗುತ್ತದೆ.&lt;/p&gt;&lt;h3&gt;&lt;strong&gt;ಬರಬೇಕಾದ ಆದಾಯವೂ ಮಣ್ಣುಪಾಲು!&lt;/strong&gt;&lt;/h3&gt;&lt;p&gt;ಬೆಳೆ ಕೈಗೆ ಬರದಿದ್ದರೆ ಮುಂದೆ ಬರಬೇಕಾದ ತಲಾ ಎಕರೆಗೆ ಸುಮಾರು ₹40,000 ದಷ್ಟು ನಿವ್ವಳ ಆದಾಯವೂ ಮಣ್ಣುಪಾಲಾಗಿ, ಇಡೀ ವರ್ಷದ ಬೆಳೆಯನ್ನೇ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ. ಕಾವೇರಿ ಕೊಳ್ಳದ ಹಳ್ಳಿಗಳಲ್ಲಿ ಇಂದು ಹೋದ ಕಡೆಯಲ್ಲೆಲ್ಲಾ ಇದೇ ಆತಂಕ ಮನೆಮಾಡಿದೆ. ಸಾಲದ ಸುಳಿಗೆ ಸಿಲುಕಿರುವ ಅನ್ನದಾತನಿಗೆ ಮುಂದೆ ಭವಿಷ್ಯವೇ ಕಾಣದಂತಾಗಿದೆ. ಖಾಸಗಿ ಲೇವಾದೇವಿದಾರರಿಂದ ಮತ್ತು ಸಹಕಾರ ಬ್ಯಾಂಕುಗಳಿಂದ ತಂದ ಸಾಲ ಹೇಗೆ ತೀರಿಸಲಿ? ಮುಂದಿನ ದಿನಗಳಲ್ಲಿ ಕುಟುಂಬವನ್ನು ಹೇಗೆ ಸಾಕಲಿ? ಎಂಬ ಪ್ರಶ್ನೆ ಪ್ರತಿ ರೈತನನ್ನೂ ಭೀತಿಯಿಂದ ಕಾಡುತ್ತಿದೆ.&lt;/p&gt;&lt;h3&gt;&lt;strong&gt;ಕುಡಿಯುವ ನೀರಿನ ಅಭಾವ!&lt;/strong&gt;&lt;/h3&gt;&lt;p&gt;ಇತ್ತ ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಕೋಟ್ಯಂತರ ಜನರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ. ಕಾವೇರಿ ನೀರು ಕುಡಿಯುವ ಜನರಿಗೆ ಆಸರೆಯಾಗಬೇಕೋ ಅಥವಾ ಬೆಳೆ ಒಣಗುತ್ತಿರುವ ರೈತನಿಗೆ ಜೀವ ನೀಡಬೇಕೋ ಎಂಬ ಧರ್ಮಸಂಕಟ ಸೃಷ್ಟಿಯಾಗಿದೆ. ಕಾವೇರಿ ವಿವಾದದ ರಾಜಕೀಯ ಹೋರಾಟಗಳು, ಕೋರ್ಟು-ಕಚೇರಿಗಳ ಆದೇಶಗಳು ವರ್ಷಗಳಿಂದ ನಡೆಯುತ್ತಲೇ ಇವೆ. ಆದರೆ ಈ ಎಲ್ಲಾ ಹೋರಾಟಗಳ ನಡುವೆ ನಲುಗಿ ಹೋಗುತ್ತಿರುವುದು ಮಾತ್ರ ಕಾವೇರಿ ಮಡಿಲ ಅನ್ನದಾತ. ನೀರಿಗಾಗಿ ಕಾಯುತ್ತಾ ಒಣಗುತ್ತಿರುವ ಗದ್ದೆಯ ಬದಿಯಲ್ಲಿ ನಿಂತು ಆಕಾಶದ ಕಡೆಗೆ ಮುಖಮಾಡಿ ಕಣ್ಣೀರಿಡುತ್ತಿರುವ ರೈತನಿಗೆ ಸಾಂತ್ವನ ಹೇಳುವವರೇ ಇಲ್ಲದಂತಾಗಿದೆ. ಕಾವೇರಿ ಕೊಳ್ಳದ ಈ ಜಲಕ್ಷಾಮ ಕೇವಲ ಬೆಳೆಯ ನಾಶವಲ್ಲ, ಅದು ದೇಶಕ್ಕೆ ಅನ್ನ ನೀಡುವ ಜಗತ್ತಿನ ಅತ್ಯಂತ ದೊಡ್ಡ ಶ್ರಮಿಕನ ಬದುಕಿನ ನಾಶ.&lt;/p&gt;&lt;h3&gt;&lt;strong&gt;ಅನ್ನದಾತನನ್ನು ನೋಡಿ!&lt;/strong&gt;&lt;/h3&gt;&lt;p&gt;ಚುನಾವಣೆ ಬಂದಾಗ ಕಾವೇರಿ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಾಡುವ ನಮ್ಮ ನಾಯಕರು, ಸಂಕಷ್ಟದ ಸಮಯದಲ್ಲಿ ರೈತ ತಲೆಮೇಲೆ ಕೈಹೊತ್ತು ಕುಳಿತಾಗ ಎಲ್ಲಿ ಮಾಯವಾಗುತ್ತಾರೆ? ಎಸಿ ರೂಮಿನಲ್ಲಿ ಕುಳಿತು ಹೇಳಿಕೆ ನೀಡುವುದನ್ನು ಬಿಟ್ಟು, ನಾಲೆಯ ಕೊನೆಯ ಭಾಗದವರೆಗೂ ನೀರು ತಲುಪಿಸುವ ಶಾಶ್ವತ ಯೋಜನೆಗಳನ್ನು ಜಾರಿಗೆ ತರಬೇಕು. ಇನ್ನಾದರೂ ರಾಜಕಾರಣಿಗಳು ಹಠಮಾರಿ ರಾಜಕೀಯ ಬಿಟ್ಟು, ಕಣ್ಮುಂದೆಯೇ ಒಣಗುತ್ತಿರುವ ಬೆಳೆಗಳನ್ನು ಮತ್ತು ಸಾಲದ ಸುಳಿಗೆ ಸಿಲುಕುತ್ತಿರುವ ಅನ್ನದಾತನನ್ನು ಉಳಿಸಬೇಕಿದೆ. ರೈತನಿಗೆ ನಿಮ್ಮ ಭರವಸೆಗಳಿಗಿಂತ ಗದ್ದೆಗೆ ಹರಿಯುವ ಜೀವಜಲ ಮುಖ್ಯ. ಇಲ್ಲದಿದ್ದರೆ, ದೇಶಕ್ಕೆ ಅನ್ನ ನೀಡುವ ರೈತನೇ ಇಲ್ಲದಂತಾಗಿ ಕಾವೇರಿ ಮಡಿಲು ಕೇವಲ ಕಣ್ಣೀರಿನ ಕೊಳ್ಳವಾಗುವುದು ಫಿಕ್ಸ್.&lt;/p&gt;]]></content:encoded>
            <category>mandya</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/cauvery-water-crisis-karnataka-farmers-cauvery-basin-drought-paddy-crop-loss-water-shortage-cauvery-water-dispute-bmk/articleshow-3ta6nhl"/>
        </item>
        <item>
            <title><![CDATA[ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರು; ಸ್ವಾತಂತ್ರ್ಯ ದಿನಾಚರಣೆ ದಿನವೇ ರೈತರ ಪ್ರತಿಭಟನೆ]]></title>
            <link>https://kannada.asianetnews.com/karnataka-districts/cauvery-water-flows-from-krs-dam-to-tamil-nadu-farmers-protest-on-independence-day-in-mandya-sns/articleshow-56o214l</link>
            <guid isPermaLink="true">https://kannada.asianetnews.com/karnataka-districts/cauvery-water-flows-from-krs-dam-to-tamil-nadu-farmers-protest-on-independence-day-in-mandya-sns/articleshow-56o214l</guid>
            <pubDate>Sat, 15 Aug 2026 12:34:10 +0530</pubDate>
            <description><![CDATA[&lt;p&gt;ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರದ ಕ್ರಮವನ್ನು ವಿರೋಧಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವು ರಹಸ್ಯವಾಗಿ ನೀರು ಬಿಡುಗಡೆ ಮಾಡಿ, ಅಧಿಕೃತ ಅಂಕಿಅಂಶಗಳನ್ನು ಮುಚ್ಚಿಡುತ್ತಿದೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m023gzc5x68480gkeaa8k1pb,imgname-krs-dam-water--1786777206148.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಕೆಆರ್&zwnj;ಎಸ್&zwnj; ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗಿದೆ. ರಾತ್ರಿಯಿಂದಲೇ&zwnj; ಕೆಆರ್ ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದೆ. ಇಷ್ಟು ದಿನ ಕಬಿನಿ ಜಲಾಶಯದಿಂದ ಮಾತ್ರ ನೀರು ಬಿಡಲಾಗುತ್ತಿತ್ತು, ಆದರೆ ಕಬಿನಿ ಜಲಾಶಯದ ಒಳ ಹರಿವು ತಗ್ಗಿದ ಹಿನ್ನೆಲೆಯಲ್ಲಿ ಕೆಆರ್ಎಸ್ ಡ್ಯಾಂನಿಂದಲೂ&zwnj; ನೀರು &zwnj;ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;ಕೆಆರ್&zwnj;ಎಸ್&zwnj;ನಿಂದ 3000 ಕ್ಯೂಸೆಕ್ ನೀರು ತಮಿಳುನಾಡಿಗೆ&lt;/h2&gt;&lt;p&gt;ಸರ್ಕಾರದ ಸೂಚನೆಯಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು 80+ ಗೇಟ್ ಮೂಲಕ ನೀರು ಬಿಡುಗಡೆ ಮಾಡಿದ್ದು, 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಮಾಹಿತಿ ಸಿಕ್ಕಿದೆ. ಕೆಆರ್&zwnj;ಎಸ್&zwnj;ನಿಂದ 3000 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ ಹಿನ್ನಲೆಯಲ್ಲಿ ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ರೈತರು, ತಮಿಳುನಾಡಿಗೆ ನೀರು ಬಿಡಲ್ಲ ಎಂದ ಸರ್ಕಾರ ಹೇಳಿತ್ತು. ಆದರೆ ಕದ್ದು ಮುಚ್ಚಿ ನೀರು ಹರಿಸಲಾಗ್ತಿದೆ ಎಂದು ಆರೋಪ ಮಾಡಿದ್ದಾರೆ. ಇತ್ತ ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿದರೆ ನೀರು ಬಿಟ್ಟಿಲ್ಲ ಎಂದು ರೈತರಿಗೆ ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ನೀರು ಬಿಟ್ಟು ಮಾಹಿತಿ ಮುಚ್ಚಿಟ್ಟ ಸರ್ಕಾರ?&lt;/h2&gt;&lt;p&gt;ಇನ್ನು, ಅಧಿಕೃತ ಸರ್ಕಾರ ಕೊಟ್ಟ ಅಧಿಕೃತ ಮಾಹಿತಿಯಲ್ಲೂ ನೀರಿನ ಅಂಕಿ ಅಂಶಗಳನ್ನು ಜಿಲ್ಲಾಡಳಿತ ಮುಚ್ಚಿಟ್ಟಿದೆ ಎಂದು ರೈತರು ಆರೋಪ ಮಾಡಿದ್ದು, ಜಲಾಶಯದಿಂದ ನಾಲೆಗಳಿಗೆ ನೀರು ಬಿಟ್ಟಿರುವ ಮಾಹಿತಿ ಮಾತ್ರ ಜಿಲ್ಲಾಡಳಿತ ಕೊಟ್ಟಿದೆ. ಆದರೆ ಕೆ.ಆರ್&zwnj;.ಎಸ್ ಜಲಾಶಯದ ಗೇಟ್ ನಿಂದ ಹರಿದು ಹೋಗುತ್ತಿದ್ದರು, ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ಮುಚ್ಚಿಟ್ಟಿದೆ. ನದಿಗೆ ನೀರು ಬಿಟ್ಟು ಇದೀಗಾ ಬಿಟ್ಟಿಲ್ಲ ಎನ್ನುತ್ತಿದೆ. ಅಧಿಕೃತ ಅಂಕಿ ಅಂಶವನ್ನೇ ಮುಚ್ಚಿಡುವ ಕೆಲಸ ಮಾಡುತ್ತಿದೆ. ಸದ್ಯ ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ ನಿನ್ನೆ ಸಂಜೆ ಜಲಾಶಯದ ಹೊರಹರಿವು 2410 ಕ್ಯೂಸೆಕ್ ಎಂದು ತಿಳಿಸಿದೆ. ರಾತ್ರಿಯಿಂದ ನದಿಗೆ ನೀರು ಬಿಟ್ಟರು 2699 ಕ್ಯೂಸೆಕ್ ಮಾತ್ರ ಹೊರಹರಿವು ಎಂದು ಮಾಹಿತಿ ನೀಡಿದೆ.&lt;/p&gt;&lt;h3&gt;ಕೆಆರ್&zwnj;ಎಸ್ ಡ್ಯಾಂ ನೀರಿನ ಮಟ್ಟ&lt;/h3&gt;&lt;ul&gt; &lt;li&gt;ಗರಿಷ್ಠ ಮಟ್ಟ: 124.80 ಅಡಿ.&lt;/li&gt;&lt;/ul&gt;&lt;ul&gt; &lt;li&gt;ಇಂದಿನ ಮಟ್ಟ : 109.75 ಅಡಿ.&lt;/li&gt; &lt;li&gt;ಒಳಹರಿವು : 2,274 ಕ್ಯೂಸೆಕ್&lt;/li&gt; &lt;li&gt;ಹೊರಹರಿವು : 2,699ಕ್ಯೂಸೆಕ್&lt;/li&gt;&lt;/ul&gt;&lt;p&gt;ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ&lt;/p&gt;&lt;p&gt;ಇಂದಿನ ಸಂಗ್ರಹ : 31.471 ಟಿಎಂಸಿ&lt;/p&gt;&lt;h3&gt;ಕಬಿನಿ ಜಲಾಶಯ&lt;/h3&gt;&lt;ul&gt; &lt;li&gt;ಜಲಾಶಯದ ಗರಿಷ್ಠ ಮಟ್ಟ 2284 ಅಡಿ.&lt;/li&gt; &lt;li&gt;ಇಂದಿನ ನೀರಿನ ಮಟ್ಟ 2281.63 ಅಡಿ.&lt;/li&gt; &lt;li&gt;ಒಳ ಹರಿವು : 8,701 ಕ್ಯೂಸೆಕ್.&lt;/li&gt;&lt;/ul&gt;&lt;p&gt;ಹೊರ ಹರಿವು : 11,896 ಕ್ಯೂಸೆಕ್.&lt;/p&gt;&lt;p&gt;ಕಾಲುವೆಗಳಿಗೆ ಇಂದೂ ನೀರು ಬಿಡುಗಡೆ ಇಲ್ಲ&lt;/p&gt;]]></content:encoded>
            <category>mandya</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/cauvery-water-flows-from-krs-dam-to-tamil-nadu-farmers-protest-on-independence-day-in-mandya-sns/articleshow-56o214l"/>
        </item>
        <item>
            <title><![CDATA[ಶ್ರೀರಂಗನಾಥನಿಗೆ ಬಂಗಾರದ ಕಳಸ ನೀಡಿದ TVS ಉದ್ಯಮಿ.. ಅಷ್ಟಲಕ್ಷ್ಮಿ ಕತೆಯುಳ್ಳ ಗಿಫ್ಟ್ ಸಮರ್ಪಣೆ]]></title>
            <link>https://kannada.asianetnews.com/mandya/tvs-md-venu-srinivasan-donates-rs-66-lakh-gold-ashta-lakshmi-kalasha-to-sri-ranganatha-swamy-temple-gkn/articleshow-6q30vli</link>
            <guid isPermaLink="true">https://kannada.asianetnews.com/mandya/tvs-md-venu-srinivasan-donates-rs-66-lakh-gold-ashta-lakshmi-kalasha-to-sri-ranganatha-swamy-temple-gkn/articleshow-6q30vli</guid>
            <pubDate>Thu, 20 Aug 2026 21:43:59 +0530</pubDate>
            <description><![CDATA[&lt;p&gt;ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇಗುಲಕ್ಕೆ ಟಿವಿಎಸ್ ಕಂಪನಿ ಎಂಡಿ ವೇಣು ಶ್ರೀನಿವಾಸನ್ ಅವರು 66 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ತೂಕದ ಚಿನ್ನದ ಅಷ್ಟಲಕ್ಷ್ಮಿ ಕಳಶವನ್ನು ಕಾಣಿಕೆಯಾಗಿ ನೀಡಿದ್ದಾರೆ. ಪಂಚರಂಗ ಕ್ಷೇತ್ರಗಳಲ್ಲಿ ಮೊದಲನೆಯದಾದ 'ಆದಿ ರಂಗ' ಖ್ಯಾತಿಯ ಈ ಪುರಾತನ ದೇಗುಲಕ್ಕೆ ಉದ್ಯಮಿ ನೀಡಿದ ಕೊಡುಗೆಯು ಭಕ್ತರ ಶ್ಲಾಘನೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fz6bz6e4f464kd013c9x2m,imgname-mandya-gold-kalasha-1787242426342.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಜಿಲ್ಲೆಯ ಐತಿಹಾಸಿಕ ನಗರಿ ಶ್ರೀರಂಗಪಟ್ಟಣದ ಸುಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ದೇಗುಲಕ್ಕೆ ಉದ್ಯಮಿಯೊಬ್ಬರು ಬರೋಬ್ಬರಿ 66 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಳಶವನ್ನು ಕಾಣಿಕೆಯಾಗಿ ನೀಡಿದ್ದಾರೆ. ಖ್ಯಾತ ಟಿವಿಎಸ್ (TVS) ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವೇಣು ಶ್ರೀನಿವಾಸನ್ ಅವರು ಈ ಭವ್ಯವಾದ ಬಂಗಾರದ ಕಳಶವನ್ನು ದೇವರಿಗೆ ಸಮರ್ಪಿಸುವ ಮೂಲಕ ತಮ್ಮ ಭಕ್ತಿ ಮೆರೆದಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಕಾಣಿಕೆ?&lt;/strong&gt;&lt;/h2&gt;&lt;p&gt;ಟಿವಿಎಸ್ ಕಂಪನಿಯ ಮುಖ್ಯಸ್ಥ ವೇಣು ಶ್ರೀನಿವಾಸನ್ ಅವರು ಇಂದು ಶ್ರೀರಂಗನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಗೋಪುರಕ್ಕೆ ಅಳವಡಿಸಲು ಸುಮಾರು 400 ಗ್ರಾಂ ತೂಕದ ಶುದ್ಧ ಬಂಗಾರದ ಕಳಶವನ್ನು ಹಸ್ತಾಂತರಿಸಿದರು. ಈ ಕಳಶದಲ್ಲಿ ಸುಂದರವಾದ 'ಅಷ್ಟಲಕ್ಷ್ಮಿ'ಯರ ಕೆತ್ತನೆಯಿದ್ದು, ಇದರ ಮೌಲ್ಯ ಅಂದಾಜು 66 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಉದ್ಯಮಿಯು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ (EO) ಉಮಾ ಅವರಿಗೆ ಈ ಕಳಶವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.&lt;/p&gt;&lt;p&gt;ಟಿವಿಎಸ್ ಸಮೂಹದ ವೇಣು ಶ್ರೀನಿವಾಸನ್ ಅವರು ಕೇವಲ ಯಶಸ್ವಿ ಉದ್ಯಮಿ ಮಾತ್ರವಲ್ಲದೆ, ದೇಶದ ಹಲವು ಪುರಾತನ ದೇಗುಲಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಶ್ರೀರಂಗನಾಥ ಸ್ವಾಮಿ ಮೇಲಿನ ಭಕ್ತಿಯಿಂದ ಈ ಅಮೂಲ್ಯ ಕಾಣಿಕೆಯನ್ನು ನೀಡಿದ್ದಾರೆ.&lt;/p&gt;&lt;p&gt;ಶ್ರೀರಂಗನಾಥ ಸ್ವಾಮಿ ದೇಗುಲವು ಕರ್ನಾಟಕದ ಅತ್ಯಂತ ದೊಡ್ಡ ಮತ್ತು ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಕಾವೇರಿ ನದಿ ದಡದಲ್ಲಿರುವ ಐದು ಪ್ರಮುಖ ರಂಗನಾಥ ಸ್ವಾಮಿ ದೇಗುಲಗಳನ್ನು 'ಪಂಚರಂಗ ಕ್ಷೇತ್ರಗಳು' ಎಂದು ಕರೆಯಲಾಗುತ್ತದೆ. ಅದರಲ್ಲಿ ಶ್ರೀರಂಗಪಟ್ಟಣದ ಈ ದೇಗುಲವು ಮೊದಲನೆಯದಾಗಿದ್ದು, ಇದನ್ನು 'ಆದಿ ರಂಗ' ಎಂದು ಕರೆಯಲಾಗುತ್ತದೆ. (ಉಳಿದವು ಶಿವನಸಮುದ್ರದ ಮಧ್ಯರಂಗ ಮತ್ತು ತಮಿಳುನಾಡಿನ ಶ್ರೀರಂಗಂನ ಅಂತ್ಯರಂಗ).&lt;/p&gt;&lt;h2&gt;&lt;strong&gt;ಐತಿಹಾಸಿಕ ಹಿನ್ನೆಲೆ&lt;/strong&gt;&lt;/h2&gt;&lt;p&gt;ದೇವಾಲಯವನ್ನು ಕ್ರಿ.ಶ. 894 ರಲ್ಲಿ ಗಂಗ ವಂಶದ ಅರಸರು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ. ನಂತರದ ದಿನಗಳಲ್ಲಿ ಹೊಯ್ಸಳ, ವಿಜಯನಗರ ಮತ್ತು ಮೈಸೂರು ಒಡೆಯರ್ ಅರಸರು ಈ ದೇಗುಲವನ್ನು ವಿಸ್ತರಿಸಿ, ಅಭಿವೃದ್ಧಿಪಡಿಸಿದರು. ಈ ದೇವಾಲಯವು ಹೊಯ್ಸಳ ಮತ್ತು ವಿಜಯನಗರ ಶೈಲಿಯ ವಾಸ್ತುಶಿಲ್ಪದ ಸುಂದರ ಮಿಶ್ರಣವಾಗಿದೆ. ಇಲ್ಲಿನ ಬೃಹತ್ ಗೋಪುರ ಮತ್ತು ಕೆತ್ತನೆಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಇಲ್ಲಿ ರಂಗನಾಥ ಸ್ವಾಮಿಯು ಆದಿಶೇಷನ ಮೇಲೆ ಮಲಗಿರುವ ಭಂಗಿಯಲ್ಲಿದ್ದಾನೆ (ಶಯನ ಮುದ್ರೆ). ಈ ವಿಗ್ರಹವು ಅತ್ಯಂತ ಆಕರ್ಷಕವಾಗಿದ್ದು, ಸುತ್ತಲೂ ವಿಷ್ಣುವಿನ ವಿವಿಧ ಅವತಾರಗಳನ್ನು ಕಾಣಬಹುದು. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತಾವಧಿಯಲ್ಲೂ ಈ ದೇಗುಲಕ್ಕೆ ವಿಶೇಷ ಗೌರವ ಮತ್ತು ದಾನ-ದತ್ತಿಗಳನ್ನು ನೀಡಲಾಗಿತ್ತು ಎಂಬುದು ವಿಶೇಷ. ಐತಿಹಾಸಿಕ ಶ್ರೀರಂಗಪಟ್ಟಣದ ಧಾರ್ಮಿಕ ಮತ್ತು ಪ್ರವಾಸಿ ಪ್ರಾಮುಖ್ಯತೆಯನ್ನು ಹೆಚ್ಚಿಸುವಲ್ಲಿ ಇಂತಹ ಧಾರ್ಮಿಕ ಕಾರ್ಯಗಳು ಸಹಕಾರಿಯಾಗಲಿವೆ. ಉದ್ಯಮಿ ವೇಣು ಶ್ರೀನಿವಾಸನ್ ಅವರ ಈ ಕೊಡುಗೆಯು ದೇಗುಲದ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;]]></content:encoded>
            <category>mandya</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/mandya/tvs-md-venu-srinivasan-donates-rs-66-lakh-gold-ashta-lakshmi-kalasha-to-sri-ranganatha-swamy-temple-gkn/articleshow-6q30vli"/>
        </item>
        <item>
            <title><![CDATA[ದೇಶದಲ್ಲಿ ಅತೀ ಹೆಚ್ಚು ಸಕ್ಕರೆ ತಯಾರಿಸುವ ರಾಜ್ಯ ಯಾವುದು? ಕರ್ನಾಟಕಕ್ಕೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/gallery/india-news/which-state-is-the-largest-sugar-producer-in-india-what-is-karnatakas-position-gkn-7mxxw3z</link>
            <guid isPermaLink="true">https://kannada.asianetnews.com/gallery/india-news/which-state-is-the-largest-sugar-producer-in-india-what-is-karnatakas-position-gkn-7mxxw3z</guid>
            <pubDate>Sat, 22 Aug 2026 23:39:55 +0530</pubDate>
            <description><![CDATA[&lt;p&gt;ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ ಸುಮಾರು ₹17 ರಷ್ಟು ಏರಿಕೆಯಾಗಿದ್ದು, ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಹಾಗೂ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hbkv92pys4673jbmh3xfzp,imgname-sugar-1787289005325.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ ಸುಮಾರು ₹17 ರಷ್ಟು ಏರಿಕೆಯಾಗಿದ್ದು, ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಹಾಗೂ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: &lt;/strong&gt;ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ ಕೇವಲ ಒಂದು ತಿಂಗಳ ಅವಧಿಯಲ್ಲಿ ಸಕ್ಕರೆಯ ಚಿಲ್ಲರೆ ದರ ಪ್ರತಿ ಕೆಜಿಗೆ ಸುಮಾರು ₹48.18 ರಿಂದ ಬರೋಬ್ಬರಿ ₹65 ಕ್ಕೆ ತಲುಪಿದೆ. ಅಂದರೆ ಪ್ರತಿ ಕೆಜಿಗೆ ಸರಿಸುಮಾರು ₹17 ರಷ್ಟು ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯ ನಡುವೆ ದೇಶದಲ್ಲಿ ಸಕ್ಕರೆ ಉತ್ಪಾದನೆ ಮತ್ತು ಅದರ ಮಾರುಕಟ್ಟೆಯ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.&lt;/p&gt;&lt;p&gt;ಜವಳಿ (ಟೆಕ್ಸ್&zwnj;ಟೈಲ್ಸ್) ಉದ್ಯಮದ ನಂತರ ಸಕ್ಕರೆ ಉದ್ಯಮವು ದೇಶದ ಎರಡನೇ ಅತಿ ದೊಡ್ಡ ಕೃಷಿ ಆಧಾರಿತ ಉದ್ಯಮವಾಗಿದೆ. ಇದು ಲಕ್ಷಾಂತರ ರೈತರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ. ಪ್ರಸ್ತುತ 2025-26ರ ಸಕ್ಕರೆ ಹಂಗಾಮಿನಲ್ಲಿ ಭಾರತದ ಒಟ್ಟು ಸಕ್ಕರೆ ಉತ್ಪಾದನೆಯು ಸುಮಾರು 30.6 ಮಿಲಿಯನ್ ಮೆಟ್ರಿಕ್ ಟನ್&zwnj;ಗಳಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯಗಳು ಯಾವುವು? ಮತ್ತು ಈ ಪಟ್ಟಿಯಲ್ಲಿ ನಮ್ಮ ಕರ್ನಾಟಕದ ಸ್ಥಾನ ಎಷ್ಟು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.&lt;/p&gt;&lt;img&gt;&lt;p&gt;ಸದ್ಯ ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಪ್ರಸ್ತುತ ಹಂಗಾಮಿನಲ್ಲಿ ರಾಜ್ಯದಲ್ಲಿ 200ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಮಹಾರಾಷ್ಟ್ರದ ಉಷ್ಣವಲಯದ ಮತ್ತು ಸಮುದ್ರ ಹವಾಮಾನವು ಕಬ್ಬು ಬೇಗನೆ ಒಣಗದಂತೆ ಉತ್ತಮವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲಿಷ್ಠ ಮಾದರಿಯು ರೈತರಿಗೆ ನೇರ ಪ್ರಯೋಜನ ನೀಡುತ್ತದೆ. ರಾಜ್ಯದಲ್ಲಿ ವಾರ್ಷಿಕ ಸುಮಾರು 9.92 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದ್ದು, ಪುಣೆ, ಸತಾರಾ, ಸೋಲಾಪುರ, ಅಹಮದ್&zwnj;ನಗರ ಮತ್ತು ಕೊಲ್ಹಾಪುರ ಪ್ರಮುಖ ಸಕ್ಕರೆ ಉತ್ಪಾದನಾ ಕೇಂದ್ರಗಳಾಗಿವೆ.&lt;/p&gt;&lt;img&gt;&lt;p&gt;ಉತ್ತರ ಪ್ರದೇಶವನ್ನು ಸಾಮಾನ್ಯವಾಗಿ &lsquo;ಭಾರತದ ಸಕ್ಕರೆ ಬಟ್ಟಲು&rsquo; (Sugar Bowl of India) ಎಂದು ಕರೆಯಲಾಗುತ್ತದೆ. ಕಬ್ಬು ಬೆಳೆಯುವ ಅತ್ಯಂತ ದೊಡ್ಡ ವಿಸ್ತೀರ್ಣವನ್ನು ಹೊಂದಿರುವ ಹೆಗ್ಗಳಿಕೆ ಈ ರಾಜ್ಯದ್ದಾಗಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೂ, ಕಬ್ಬು ಬೆಳೆಯುವ ಒಟ್ಟು ವಿಸ್ತೀರ್ಣದಲ್ಲಿ ಉತ್ತರ ಪ್ರದೇಶವೇ ಮುಂಚೂಣಿಯಲ್ಲಿದೆ. ಇಲ್ಲಿ ವಾರ್ಷಿಕ ಸುಮಾರು 8.92 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ಇಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳ ಪಾತ್ರ ದೊಡ್ಡದಾಗಿದೆ. ಮುಜಾಫರ್&zwnj;ನಗರ, ಮೀರತ್, ಬಿಜ್ನೋರ್, ಸಹರಾನ್&zwnj;ಪುರ ಮತ್ತು ಗೋರಖ್&zwnj;ಪುರ ಪ್ರಮುಖ ಉತ್ಪಾದನಾ ಕೇಂದ್ರಗಳಾಗಿವೆ.&lt;/p&gt;&lt;img&gt;&lt;p&gt;ಕರ್ನಾಟಕ (ತೃತೀಯ ಸ್ಥಾನ)&lt;/p&gt;&lt;img&gt;&lt;p&gt;ಗುಜರಾತ್ ನಾಲ್ಕನೇ ಸ್ಥಾನದಲ್ಲಿದ್ದು, ಇಲ್ಲಿ ವಾರ್ಷಿಕ ಸುಮಾರು 1.1 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ಇಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲಿಷ್ಠ ಜಾಲ ಮತ್ತು ಸುಧಾರಿತ ಬೇಸಾಯ ಪದ್ಧತಿಗೆ ಈ ರಾಜ್ಯ ಹೆಸರುವಾಸಿಯಾಗಿದೆ. ದಕ್ಷಿಣ ಗುಜರಾತ್&zwnj;ನ ಮೈದಾನ ಮತ್ತು ಕರಾವಳಿ ಪ್ರದೇಶಗಳಲ್ಲಿ ಕಬ್ಬನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.&lt;/p&gt;&lt;img&gt;&lt;p&gt;ಟಾಪ್ 5 ಪಟ್ಟಿಯಲ್ಲಿ ತಮಿಳುನಾಡು ಕೊನೆಯ ಸ್ಥಾನದಲ್ಲಿದೆ. ಇಲ್ಲಿ ವಾರ್ಷಿಕ ಸುಮಾರು 0.9 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ತಮಿಳುನಾಡಿನ ಬಿಸಿ ಹವಾಮಾನದಿಂದಾಗಿ ಇಲ್ಲಿ ದೀರ್ಘಕಾಲದವರೆಗೆ ಕಬ್ಬು ಕಟಾವು ಮತ್ತು ಅರೆಯುವಿಕೆ ಕಾರ್ಯ ನಡೆಯುತ್ತದೆ. ಇಲ್ಲಿನ ರೈತರು ನೀರಿನ ಸದ್ಬಳಕೆಗಾಗಿ ಹನಿ ನೀರಾವರಿ (Drip Irrigation) ಯಂತಹ ಆಧುನಿಕ ಕೃಷಿ ಪದ್ಧತಿಗಳನ್ನು ಹೆಚ್ಚಾಗಿ ಬಳಸುತ್ತಾರೆ.&lt;/p&gt;]]></content:encoded>
            <category>mandya</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/india-news/which-state-is-the-largest-sugar-producer-in-india-what-is-karnatakas-position-gkn-7mxxw3z"/>
        </item>
        <item>
            <title><![CDATA[ಮಂಡ್ಯ ವಿವಿ ಮುಚ್ಚಿ ಮೈಸೂರು ವಿವಿಗೆ ಸೇರಿಸಿ: ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣ ಏನು?]]></title>
            <link>https://kannada.asianetnews.com/karnataka-districts/students-protest-mandya-university-over-shortage-of-lecturers-lack-of-infrastructure-and-non-resumption-of-classes-mrq/articleshow-7ozl9va</link>
            <guid isPermaLink="true">https://kannada.asianetnews.com/karnataka-districts/students-protest-mandya-university-over-shortage-of-lecturers-lack-of-infrastructure-and-non-resumption-of-classes-mrq/articleshow-7ozl9va</guid>
            <pubDate>Thu, 20 Aug 2026 10:01:23 +0530</pubDate>
            <description><![CDATA[ಮಂಡ್ಯ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು ತರಗತಿಗಳು ಆರಂಭವಾಗದಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿವಿಯಲ್ಲಿನ ಅವ್ಯವಸ್ಥೆಯಿಂದಾಗಿ ತಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ವಿವಿಯನ್ನು ಮುಚ್ಚಿ ಮೈಸೂರು ವಿವಿಯೊಂದಿಗೆ ವಿಲೀನಗೊಳಿಸಬೇಕೆಂದು ಆಗ್ರಹಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0epszfkwq8f8m957wvzv641,imgname-mandya-university-1787200077299.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ&lt;/strong&gt;: ಮಂಡ್ಯ ವಿಶ್ವ ವಿದ್ಯಾಲಯದಲ್ಲಿನ ಅವ್ಯವಸ್ಥೆಗಳನ್ನು ಖಂಡಿಸಿ, ತರಗತಿಗಳು ಆರಂಭವಾಗದ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾರತೀಯ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ನಗರದ ಮಂಡ್ಯ ವಿಶ್ವ ವಿದ್ಯಾಲಯದ ಎದುರು ಧರಣಿ ಕುಳಿತ ವಿದ್ಯಾರ್ಥಿಗಳು, ವಿವಿ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದರು. ಮಂಡ್ಯ ವಿವಿ ಮುಚ್ಚಿ ಮೈಸೂರು ವಿವಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಆಡಳಿತ ಭವನದ ಕಟ್ಟಡದೊಳಗಡೆ ಇರುವುದು ಖಾಲಿ ಗೋಡೆಗಳು. ಉಪನ್ಯಾಸಕರಿಲ್ಲ. ಸೌಲಭ್ಯಗಳೂ ಇಲ್ಲ, ಕುಡಿಯುವ ನೀರೂ ಸಹ ಇಲ್ಲ ಎಂದು ವಿದ್ಯಾರ್ಥಿಗಳು ಅಳಲು ತೊಡಿಕೊಂಡರು. ಕಾಲೇಜಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸದೇ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಉಪನ್ಯಾಸಕರ ಕೊರತೆ&lt;/strong&gt;&lt;/h2&gt;&lt;p&gt;ಕಾಲೇಜು ಆರಂಭವಾಗಿ 20 ದಿನಗಳಾದರೂ ಪಾಠಗಳನ್ನು ಆರಂಭಿಸಿಲ್ಲ. ಉಪನ್ಯಾಸಕರ ಕೊರತೆ ಎದುರಾಗಿದೆ. ಕಾಲೇಜಿನಲ್ಲಿ ಸ್ವಚ್ಛತೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಕಿಡಿಕಾರಿದರು.&lt;/p&gt;&lt;p&gt;ಮಂಡ್ಯ ವಿವಿಯಲ್ಲಿನ ಹಲವು ಶೈಕ್ಷಣಿಕ ಹಾಗೂ ಮೂಲಭೂತ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳ ಸೈಕ್ಷಣಿಕ ಪ್ರಗತಿ, ಪರೀಕ್ಷಾ ಸಿದ್ಧತೆ ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.&lt;/p&gt;&lt;p&gt;ಈ ಹಿಂದೆ ಮೈಸೂರು ಯೂನಿರ್ವಸಿಟಿ ಇದ್ದಾಗಲೇ ಎಲ್ಲವೂ ಚೆನ್ನಾಗಿತ್ತು. ಮಂಡ್ಯ ವಿವಿ ಆದ ಮೇಲೆ ತರಗತಿಗಳಲ್ಲಿ ಪಾಠ ಮಾಡುವುದಕ್ಕೆ ಉಪನ್ಯಾಸಕರೇ ಇಲ್ಲ. ಮಂಡ್ಯ ವಿವಿ ಮೇಲೆ ತಳಕು ಒಳಗಡೆ ಉಳುಕು ಎಂಬ ರೀತಿಯಲ್ಲಿ ಇದೆ ಎಂದು ದೂರಿದರು.&lt;/p&gt;&lt;p&gt;ಕಾಲೇಜಿನ ತರಗತಿಗಳು ನಿಗದಿತ ವೇಳಾಪಟ್ಟಿಯಂತೆ ಪ್ರಾರಂಭಿಸಿ ನಿಯಮಿತವಾಗಿ ನಡೆಸಬೇಕು. ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಮಧ್ಯಾಹ್ನದ ಊಟದ ಸಮಯ ನಿಗದಿ ಪಡಿಸಬೇಕು. ಪರೀಕ್ಷೆಗೂ ಮುನ್ನ ಎಲ್ಲಾ ವಿಷಯಗಳ ಪಠ್ಯ ಕ್ರಮಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.&lt;/p&gt;&lt;h3&gt;&lt;strong&gt;ವಿವಿ ಉಪಕುಲಪತಿಗಳಿಗೆ ಮನವಿ ಪತ್ರ&lt;/strong&gt;&lt;/h3&gt;&lt;p&gt;ಪರೀಕ್ಷಾ ಸಿದ್ದತೆಗೆ ಸಾಕಷ್ಟು ಸಮಯ, ಅಗತ್ಯ ಮಾರ್ಗದರ್ಶನ ನೀಡಬೇಕು. ಪರೀಕ್ಷಾ ಸಿದ್ದತೆ ಅಗತ್ಯ ಅಧ್ಯಯನ ಸಾಮಾಗ್ರಿ, ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಒದಗಿಸಬೇಕು. ಶೇ.75ಕಿಂತಲ್ಲೂ ಹೆಚ್ಚು ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳಲ್ಲಿಯೂ ಪ್ರತಿ ವರ್ಷ ಹೆಚ್ಚು ವಿದ್ಯಾರ್ಥಿಗಳು ವಿಷಯಗಳಲ್ಲಿ ಬ್ಯಾಕ್ ಲಾಗ್ ಹೊಂದಿರುವುದು ಕಂಡು ಬರುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ವಿವಿ ಉಪಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.&lt;/p&gt;&lt;p&gt;ಪ್ರತಿಭಟನೆ ವೇಳೆ ಮಾತನಾಡಿದ ಕಾಲೇಜಿನ ವಿದ್ಯಾರ್ಥಿ ಆನಂದ್, ಮಂಡ್ಯ ಶಾಸಕರಾದ ಪಿ.ರವಿಕುಮಾರ್ ಅವರು ಮೈಸೂರು ಕಾಲ ಕೆಳಗೆ ನಾವು ಇರಬೇಕು. ಮಂಡ್ಯ ವಿವಿ ಉಳಿಸಿಕೊಂಡು ಹೋಗೋಣ ಎಂದು ಹೇಳಿದ್ದರು. ಆದರೆ, ಇಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ನಮಗೆ ಯಾವ ಯೂನಿರ್ವಸಿಟಿಯೂ ಮುಖ್ಯವಲ್ಲ. ಪಾಠ ಮುಖ್ಯ. ಅಗತ್ಯ ಉಪನ್ಯಾಸಕರು, ಲ್ಯಾಬ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಮತ್ತೊರ್ವ ವಿದ್ಯಾರ್ಥಿ ಎನ್.ಯು.ಹರೀಶ್ ಮಾತನಾಡಿ, ಮಂಡ್ಯ ವಿಶ್ವ ವಿದ್ಯಾಲಯವು ಮೇಲೆ ತಳಕು ಒಳಗಡೆ ಉಳುಕು ಎಂಬ ರೀತಿಯಲ್ಲಿ ಇದೆ. ಕಾಲೇಜಿನಲ್ಲಿ ವಿಷಯವಾರು ಉಪನ್ಯಾಸಕರ ಕೊರತೆ ಉಂಟಾಗಿದೆ. ಬೇರೆ ವಿವಿಗಳಲ್ಲಿ ಎರಡು ವಿಷಯಗಳ ಪಾಠಗಳು ನಡೆದಿವೆ. ನಮಲ್ಲಿ ಯಾವುದೇ ಪಾಠಗಳು ಆರಂಭವಾಗಿಲ್ಲ. ಡಿಸೆಂಬರ್ ನಲ್ಲಿ ಪರೀಕ್ಷೆ ಇದೆ. ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳವುದು ಹೇಗೆ. ಯಾವುದೇ ಟೆಸ್ಟ್ ಗಳನ್ನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ವಿವಿ ಹಿರಿಯ ವಿದ್ಯಾರ್ಥಿ ಅಲೋಕ್ ಕುಮಾರ್ ಮಾತನಾಡಿ, ತರಗತಿಗಳು ನಡೆಯಲು ಟೈಮ್ ಟೇಬಲ್ ಹಾಕಿಲ್ಲ. ಊಟದ ಸಮಯವನ್ನು ನಿಗದಿ ಮಾಡಿಲ್ಲ. ಈ ಹಿಂದೆಯೂ ಯಾವುದೇ ಪಾಠಗಳನ್ನು ಮುಗಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಫೇಲಾಗುತ್ತಿದ್ದಾರೆ. ಇದಕ್ಕೆ ಕಾರಣ ಕೊಡಬೇಕು. ಕಾಲೇಜಿನಲ್ಲಿ ಅನುಭವ ವಿಲ್ಲದ ಉಪನ್ಯಾಸಕರಿದ್ದಾರೆ. ಸೈನ್ಸ್ ಬ್ಲಾಕ್ ನಲ್ಲಿ ಕಂಪ್ಯೂಟರ್ ಸರಿಯಾಗಿಲ್ಲ. ತರಗತಿಗಳು, ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದೆ ಕೊಳಕಾಗಿವೆ ಎಂದು ಆರೋಪಿಸಿದರು.&lt;/p&gt;&lt;p&gt;ಕೂಡಲೇ ಕಾಲೇಜಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಪಾಠ ಪ್ರವಚನಗಳನ್ನು ಸರಿಯಾಗಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸ್ಟೂಟೆಂಡ್ ಪವರ್ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.&lt;/p&gt;&lt;p&gt;ವಿದ್ಯಾರ್ಥಿನಿ ನಿತ್ಯ ಮಾತನಾಡಿ, ವಿವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸೈನ್ಸ್, ಕಾಮರ್ಸ್ ಮತ್ತು ಆಡ್ಸ್ ಬ್ಲಾಕ್ ಗಳು ಇವೆ. ಯಾವುದೇ ಬ್ಲಾಕ್ ಗಳಲ್ಲಿ ಕುಡಿಯಲು ಸರಿಯಾದ ನೀರಿಲ್ಲ. ನೀರಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ನಾಲ್ಕು ಸೆಮ್ ಗಳಿಗೂ ಕಾಲೇಜು ಆಡಳಿತ ಮಂಡಳಿ ಪೂರ್ಣ ಹಣ ಕಟ್ಟಿಸಿಕೊಂಡಿದ್ದಾರೆ. ಆದರೆ, ಲ್ಯಾಬ್ ಗಳಲ್ಲಿ ತರಬೇತಿಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿಲ್ಲ. ಸರಿಯಾದ ಸೌಲಭ್ಯ ಕಲ್ಪಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದರು.&lt;/p&gt;&lt;p&gt;ಮತ್ತೊರ್ವ ವಿದ್ಯಾರ್ಥಿನಿ ಶೂಭಿತಾರಂ ಮಾತನಾಡಿ, ಕಾಲೇಜು ಆರಂಭವಾಗಿ 20 ದಿನಗಳಾದರೂ ಯಾವುದೇ ಪ್ರಕ್ರಿಯೆಗಳು ಆರಂಭವಾಗಿಲ್ಲ. ಕಾಲೇಜಿಗೆ ಯಾರೋ ಬರುತ್ತಾರೆ. ಪಾಠ ಮಾಡುತ್ತಾರೆ. ಹೋಗುತ್ತಾರೆ. ಆದರೆ, ಸರಿಯಾಗಿ ಪಾಠ ಮಾಡುವ ಉಪನ್ಯಾಸಕರು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ಪ್ರತಿಭಟನೆಯಲ್ಲಿ ಭಾರತೀಯ ವಿದ್ಯಾರ್ಥಿ ಒಕ್ಕೂಟದ ಬಿ.ಎಸ್.ಮಂಜು ಸೇರಿದಂತೆ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/students-protest-mandya-university-over-shortage-of-lecturers-lack-of-infrastructure-and-non-resumption-of-classes-mrq/articleshow-7ozl9va"/>
        </item>
        <item>
            <title><![CDATA[ಕಬಿನಿ ಬೆನ್ನಲ್ಲೇ KRSನಿಂದಲೂ ತಮಿಳುನಾಡಿಗೆ ಕಾವೇರಿ ನೀರು?: ಒಳಹರಿವು ತಗ್ಗಿದ್ರೂ ಹೊರಹರಿವು 4,917 ಕ್ಯೂಸೆಕ್‌ಗೆ ಏರಿಕೆ!]]></title>
            <link>https://kannada.asianetnews.com/karnataka-districts/krs-dam-water-release-controversy-tamil-nadu-outflow-increased-mandya-farmers-allegations/articleshow-8qo55kw</link>
            <guid isPermaLink="true">https://kannada.asianetnews.com/karnataka-districts/krs-dam-water-release-controversy-tamil-nadu-outflow-increased-mandya-farmers-allegations/articleshow-8qo55kw</guid>
            <pubDate>Tue, 18 Aug 2026 13:20:51 +0530</pubDate>
            <description><![CDATA[ಕೆಆರ್&zwnj;ಎಸ್ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದರೂ, ಹೊರಹರಿವನ್ನು ದುಪ್ಪಟ್ಟು ಮಾಡಿರುವುದು ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂಬ ಶಂಕೆಗೆ ಕಾರಣವಾಗಿದೆ. ಸರ್ಕಾರದ ಈ ನಡೆಯಿಂದಾಗಿ ಮಂಡ್ಯದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09xeas77d6gz2z8kw2jqwh5,imgname-karnataka-cauvery-water-1787039263526.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.18): ಕ&lt;/strong&gt;ಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬ ವಿವಾದದ ಬೆನ್ನಲ್ಲೇ, ಇದೀಗ ಕಾವೇರಿ ಕೊಳ್ಳದ ಜೀವನಾಡಿ ಕೃಷ್ಣರಾಜ ಸಾಗರ (KRS) ಡ್ಯಾಂನಿಂದಲೂ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆಯೇ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವು ಭಾರಿ ಪ್ರಮಾಣದಲ್ಲಿ ಕುಸಿದಿದ್ದರೂ, ಹೊರಹರಿವನ್ನು ದುಪ್ಪಟ್ಟು ಮಾಡಿರುವುದು ಮಂಡ್ಯದ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕುಡಿಯುವ ನೀರು ಹಾಗೂ ನಾಲೆಗಳ ನೆಪ ಹೇಳಿ, ತಮಿಳುನಾಡಿಗೆ ಗುಟ್ಟಾಗಿ ನೀರು ಹರಿಸುತ್ತಿದ್ದಾರೆ ಎಂದು ರೈತ ಸಂಘಟನೆಗಳು ಗಂಭೀರವಾಗಿ ಆರೋಪಿಸಿವೆ.&lt;/p&gt;&lt;h2&gt;&lt;strong&gt;ಒಳಹರಿವು ಕಡಿಮೆ, ದುಪ್ಪಟ್ಟಾದ ಹೊರಹರಿವು&lt;/strong&gt;&lt;/h2&gt;&lt;p&gt;ಕೆಆರ್&zwnj;ಎಸ್ ಜಲಾಶಯಕ್ಕೆ ಪ್ರಸ್ತುತ ಹರಿದು ಬರುತ್ತಿರುವ ನೀರಿನ ಪ್ರಮಾಣ ಕೇವಲ 1,961 ಕ್ಯೂಸೆಕ್. ಆದರೆ, ಡ್ಯಾಂನಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ಬರೋಬ್ಬರಿ 4,917 ಕ್ಯೂಸೆಕ್ ಆಗಿದೆ. ಕಳೆದ ಕೆಲವು ದಿನಗಳ ಹಿಂದೆ ನಾಲೆಗಳಿಗೆ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೆ ಕೇವಲ 2,000 ದಿಂದ 2,500 ಕ್ಯೂಸೆಕ್ ನೀರನ್ನು ಮಾತ್ರ ಹರಿಸಲಾಗುತ್ತಿತ್ತು. ಆದರೆ, ಕಳೆದ ಆಗಸ್ಟ್ 15 ರಿಂದಲೇ ಯಾವುದೇ ಅಧಿಕೃತ ಮುನ್ಸೂಚನೆ ನೀಡದೆ ಹೊರಹರಿವನ್ನು ಏಕಾಏಕಿ 4,917 ಕ್ಯೂಸೆಕ್&zwnj;ಗೆ ಹೆಚ್ಚಿಸಲಾಗಿದೆ. ಜಲಾಶಯಕ್ಕೆ ಬರುವ ನೀರಿಗಿಂತ ಹೊರಹೋಗುವ ನೀರಿನ ಪ್ರಮಾಣವೇ ಹೆಚ್ಚಾಗಿರುವುದರಿಂದ ಡ್ಯಾಂ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ.&lt;/p&gt;&lt;h2&gt;&lt;strong&gt;ಇಂದಿನ ಕೆಆರ್&zwnj;ಎಸ್ ಡ್ಯಾಂ ನೀರಿನ ಮಟ್ಟದ ವಿವರ (Water Level Stats):&lt;/strong&gt;&lt;/h2&gt;&lt;ul&gt; &lt;li&gt;ಗರಿಷ್ಠ ಮಟ್ಟ: 124.80 ಅಡಿಗಳು&lt;/li&gt; &lt;li&gt;ಇಂದಿನ ನೀರಿನ ಮಟ್ಟ: 109.28 ಅಡಿಗಳು&lt;/li&gt; &lt;li&gt;ಒಳಹರಿವು (Inflow): 1,961 ಕ್ಯೂಸೆಕ್&lt;/li&gt; &lt;li&gt;ಹೊರಹರಿವು (Outflow): 4,917 ಕ್ಯೂಸೆಕ್&lt;/li&gt; &lt;li&gt;ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ (TMC)&lt;/li&gt; &lt;li&gt;ಇಂದಿನ ನೀರಿನ ಸಂಗ್ರಹ: 31.004 ಟಿಎಂಸಿ&lt;/li&gt;&lt;/ul&gt;&lt;h2&gt;&lt;strong&gt;ಸುಳ್ಳು ಮಾಹಿತಿ ನೀಡುತ್ತಿರುವ ಅಧಿಕಾರಿಗಳು &ndash; ರೈತರ ಆಕ್ರೋಶ:&lt;/strong&gt;&lt;/h2&gt;&lt;p&gt;'ನಮ್ಮ ಭಾಗದ ರೈತರ ಕೃಷಿ ಬೆಳೆಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ಅಧಿಕಾರಿಗಳು ಸ್ಥಳೀಯ ನಾಲೆಗಳಿಗೆ ನೀರು ಹರಿಸುತ್ತಿದ್ದೇವೆ ಎಂದು ಸುಳ್ಳು ಲೆಕ್ಕ ನೀಡಿ, ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ನೀರು ತಲುಪುವಂತೆ ಮಾಡುತ್ತಿದ್ದಾರೆ' ಎಂದು ಸ್ಥಳೀಯ ರೈತರು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಡ್ಯಾಂನಲ್ಲಿರುವ ನೀರನ್ನು ಸಂರಕ್ಷಿಸದೆ, ನೆರೆ ರಾಜ್ಯಕ್ಕೆ ನೀರು ಬಿಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು; ಇಲ್ಲವಾದರೆ ಕಾವೇರಿ ಕೊಳ್ಳದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/krs-dam-water-release-controversy-tamil-nadu-outflow-increased-mandya-farmers-allegations/articleshow-8qo55kw"/>
        </item>
        <item>
            <title><![CDATA[ಶಾಸಕ ಸುರೇಶ್ ಗೌಡ ಪುತ್ರಿಯಿಂದ ಪಿಎಸ್‌ಐಗೆ ಕಪಾಳಮೋಕ್ಷ, ಮಗಳ ತಪ್ಪಿಗೆ ಕ್ಷಮೆಗೆ ಮುಂದಾದ ಅಪ್ಪ!]]></title>
            <link>https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr</link>
            <guid isPermaLink="true">https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr</guid>
            <pubDate>Fri, 14 Aug 2026 12:25:56 +0530</pubDate>
            <description><![CDATA[ತುಮಕೂರು ಶಾಸಕ ಬಿ. ಸುರೇಶ್&zwnj;ಗೌಡರ ಪುತ್ರಿ ಐಶ್ವರ್ಯ, ದೇವಸ್ಥಾನದಲ್ಲಿ ದರ್ಶನ ವಿಳಂಬವಾದ ಕಾರಣಕ್ಕೆ ಮಹಿಳಾ ಪಿಎಸ್&zwnj;ಐ ಜೊತೆ ವಾಗ್ವಾದ ನಡೆಸಿ ಕಪಾಳಮೋಕ್ಷ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಾಸಕರು ಪ್ರತಿಕ್ರಿಯಿಸಿದ್ದು, ಮಗಳದ್ದು ತಪ್ಪಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzgpffnrrkz5115c5swxwp9,imgname-bjp-mla-suresh-gowda-daughter-1786690354677.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್&zwnj;ಗೌಡ ಅವರ ಪುತ್ರಿ, ಎಸಿಪಿ ಗೌತಮ್ ಅವರ ಪತ್ನಿ ಐಶ್ವರ್ಯ ಅವರು ದೇವಸ್ಥಾನದಲ್ಲಿ ದರ್ಶನ ತಡವಾದ ವಿಚಾರವಾಗಿ ಅಹಂಕಾರ ತೋರಿಸಿ ಮಹಿಳಾ ಸಬ್ ಇನ್ಸ್&zwnj;ಪೆಕ್ಟರ್ (PSI) ಅವರೊಂದಿಗೆ ವಾಗ್ವಾದ ನಡೆಸಿ, ಕಪಾಳಮೋಕ್ಷ ಮಾಡಿರುವ ಘಟನೆ ಆಗಸ್ಟ್ 12ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ನಡೆದಿದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಶಾಸಕ ಸುರೇಶ್&zwnj;ಗೌಡ ಅವರು ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ನನ್ನ ಮಗಳ ತಪ್ಪಿದ್ದರೆ ನಾನು ಕ್ಷಮೆಯಾಚಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಘಟನೆಯ ಹಿನ್ನೆಲೆ:&lt;/h2&gt;&lt;p&gt;ಭೀಮನ ಅಮಾವಾಸ್ಯೆಯ ಶುಭ ಸಂದರ್ಭದಲ್ಲಿ ಶಾಸಕ ಸುರೇಶ್&zwnj;ಗೌಡ ಅವರ ಪುತ್ರಿ, ಎಸಿಪಿ ಗೌತಮ್ ಪತ್ನಿ ಐಶ್ವರ್ಯ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮಂಡ್ಯ ಜಿಲ್ಲೆಯ ಶೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದರು. ತನ್ನ ಪ್ರಭಾವ ಬಳಸಿ ದೇಗುಲಕ್ಕೆ ಬಂದಿದ್ದ ಐಶ್ವರ್ಯಾ ವಿಐಪಿ (VIP) ಸಾಲಿನಲ್ಲಿ ನಿಂತು ದರ್ಶನಕ್ಕೆ ಕಾಯುತ್ತಿದ್ದರು. ದೇಗುಲದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಮಹಿಳಾ ಸಬ್ ಇನ್ಸ್&zwnj;ಪೆಕ್ಟರ್ ಸುನೀತಾ ಪಾಟೀಲ್ ಕೇಳಿದಾಗ ಆ ರೀತಿಯ ನಿಯಮ ಇಲ್ಲ ಎಂದಿದ್ದಾರೆ. ಇದೇ ವೇಳೆ ಮಹಿಳಾ ಪೇದೆಯೊಬ್ಬರು ಕೆಲಸ ನಿಮಿತ್ತ ಗರ್ಭಗುಡಿಯ ಒಳಗೆ ಹೋದರು. ಆ ಸಮಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ನಾನು ಎಂಎಲ್&zwnj;ಎ ಮಗಳು ಎಸಿಪಿ ಪತ್ನಿ ಎಂದು ದರ್ಪ ತೋರಿದ್ದಾರೆನ್ನಲಾಗಿದೆ.&lt;/p&gt;&lt;p&gt;ಇದಾದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್&zwnj;ಪೆಕ್ಟರ್ (CI) ಅವರು ಶಾಸಕರ ಪುತ್ರಿಯನ್ನು ಗುರುತಿಸಿ, ಅವರನ್ನು ದರ್ಶನಕ್ಕೆ ಒಳಗೆ ಬಿಟ್ಟಿದ್ದಾರೆ. ಈ ವೇಳೆ ಐಶ್ವರ್ಯ ಅವರು, &quot;ನನ್ನನ್ನು ಏಕೆ ತಡೆದಿರಿ?&quot; ಎಂದು ಸಬ್ ಇನ್ಸ್&zwnj;ಪೆಕ್ಟರ್ ಅವರನ್ನು ಮತ್ತೆ ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವಾಗ್ವಾದದ ನಡುವೆ ಶಾಸಕರ ಪುತ್ರಿ ಐಶ್ವರ್ಯ ಅವರು ಸಬ್ ಇನ್ಸ್&zwnj;ಪೆಕ್ಟರ್ ಅವರ ಕಪಾಳಕ್ಕೆ ಹೊಡೆದಿದ್ದಾರೆಂದು ಆರೋಪಿಸಲಾಗಿದೆ.&lt;/p&gt;&lt;h2&gt;ಮಗಳು ಮಾಡಿದ ತಪ್ಪಿಗೆ ಕ್ಷಮೆ ಕೇಳೋದಾಗಿ ಹೇಳಿದ ಅಪ್ಪ&lt;/h2&gt;&lt;p&gt;ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಿ. ಸುರೇಶ್&zwnj;ಗೌಡ ಅವರು ಕಳಕಳಿ ಮತ್ತು ಹೊಣೆಗಾರಿಕೆಯ ಮಾತುಗಳನ್ನಾಡಿದ್ದಾರೆ.&lt;/p&gt;&lt;p&gt;&quot;ದೇವಸ್ಥಾನದಲ್ಲಿ ಗಲಾಟೆಯಾಗಿದ್ದು ನಿಜ ಎಂದು ನನ್ನ ಮಗಳು ಒಪ್ಪಿಕೊಂಡಿದ್ದಾಳೆ. ದೇವಸ್ಥಾನಕ್ಕೆ ಪ್ರತಿಯೊಬ್ಬರೂ ಮನಸ್ಸಿನ ಶಾಂತಿಗಾಗಿ ಹೋಗುತ್ತಾರೆ, ಅಲ್ಲಿ ಇಂತಹ ಗಲಾಟೆಗಳು ನಡೆಯಬಾರದಿತ್ತು. ಮಾಧ್ಯಮಗಳಲ್ಲಿ ನನ್ನ ಮಗಳು ಕಪಾಳಕ್ಕೆ ಹೊಡೆದಿದ್ದಾಳೆ ಎಂಬ ಸುದ್ದಿಗಳನ್ನು ನೋಡಿದ್ದೇನೆ. ಈ ಘಟನೆಯಲ್ಲಿ ಪರಿಶೀಲನೆ ನಡೆಸಿ, ಒಂದು ವೇಳೆ ನನ್ನ ಮಗಳದ್ದೇ ತಪ್ಪು ಅಂತ ಸಾಬೀತಾದರೆ, ನಾನು ಬಹಿರಂಗವಾಗಿ ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದಿದ್ದಾರೆ.&lt;/p&gt;&lt;h2&gt;ಪ್ರಭಾವಿಗಳ ಮಕ್ಕಳಿಗೇಕೆ ಈ ನಿಯಮ&lt;/h2&gt;&lt;p&gt;ಇನ್ನು ಘಟನೆ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಬಿಎನ್&zwnj;ಎಸ್&zwnj;ನ ಸೆಕ್ಷನ್&zwnj; 132, 115(2), 352 ಮತ್ತು 351(2) ಅಡಿಯಲ್ಲಿ ಎಫ್&zwnj;ಐಆರ್&zwnj; ದಾಖಲಾಗಿದೆ. ಇದೇ ವೇಳೆ, ಮಹಿಳಾ ಪಿಎಸ್&zwnj;ಐ ವಿರುದ್ಧವೂ ಪ್ರತಿದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ. ಶಾಸಕರ ಪುತ್ರಿಯನ್ನು ಪಿಎಸ್&zwnj;ಐ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದಡಿ ಈ ಪ್ರತಿದೂರು ನೀಡಲಾಗಿದೆಯಂತೆ.&lt;/p&gt;&lt;p&gt;ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಂಎಲ್&zwnj;ಎಗಳು, ಡಿವೈಎಸ್&zwnj;ಪಿ ಗಳು ಬಂದಾಗ ದೇಗುಲದಲ್ಲಿ ವಿಶೇಷ ದರ್ಶನ, ಗರ್ಭಗುಡಿ ಸಮೀಪ ಬಿಡುವುದು ಶಿಷ್ಟಾಚಾರ. ಪ್ರಭಾವಿಗಳ ಮಕ್ಕಳಿಗೆ ಏಕೆ ಎಂದು ಚರ್ಚೆ ಆರಂಭವಾಗಿದೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr"/>
        </item>
        <item>
            <title><![CDATA[ಮಂಡ್ಯದಲ್ಲಿ ಎಣ್ಣೆ ಮತ್ತಿನಲ್ಲಿ ಸರಣಿ ಅಪಘಾತ, ಕಾರು ಪಲ್ಟಿ; ಕುಡುಕ ಡ್ರೈವರ್‌ನನ್ನು ಹಿಡಿದು ಕಜ್ಜಾಯ ಕೊಟ್ಟ ಜನ!]]></title>
            <link>https://kannada.asianetnews.com/karnataka-districts/mandya-maddur-drunk-driver-serial-accident-car-overturns-public-thrash-driver-harish/articleshow-ctsxp4g</link>
            <guid isPermaLink="true">https://kannada.asianetnews.com/karnataka-districts/mandya-maddur-drunk-driver-serial-accident-car-overturns-public-thrash-driver-harish/articleshow-ctsxp4g</guid>
            <pubDate>Mon, 17 Aug 2026 13:28:38 +0530</pubDate>
            <description><![CDATA[ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ, ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ಸರಣಿ ಅಪಘಾತಗಳನ್ನು ಸೃಷ್ಟಿಸಿ, ಕೊನೆಗೆ ಕಾರು ಪಲ್ಟಿಯಾಗಿದೆ. ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಸಾರ್ವಜನಿಕರೊಂದಿಗೆ ವಾಗ್ವಾದಕ್ಕಿಳಿದ ಚಾಲಕನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈತ ಇತ್ತೀಚೆಗಷ್ಟೇ ಕುಡಿತ ಬಿಡಿಸುವ ಕೇಂದ್ರದಿಂದ ಬಂದಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m07bk2cffergda450z7trf4f,imgname-mandya-drink-and-drive-accident-1786953435535.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.17): ಮಂ&lt;/strong&gt;ಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಕುಡುಕ ಚಾಲಕನೊಬ್ಬ ಭೀಕರ ಅವಾಂತರ ಸೃಷ್ಟಿಸಿದ್ದಾನೆ. ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಎಸಗಿದ್ದು, ಕೊನೆಗೆ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಕಾರು ಪಲ್ಟಿಯಾಗಿದೆ. ಅಪಘಾತದ ಬಳಿಕ ಸಾರ್ವಜನಿಕರ ಮೇಲೆಯೇ ದರ್ಪ ತೋರಲು ಬಂದ ಚಾಲಕನಿಗೆ ರೊಚ್ಚಿಗೆದ್ದ ಸ್ಥಳೀಯರು ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ.&lt;/p&gt;&lt;p&gt;ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ನಿವಾಸಿ ಹರೀಶ್ ಎಂಬಾತನೇ ಈ ಅವಾಂತರ ಸೃಷ್ಟಿಸಿದ ಕಾರು ಚಾಲಕ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಚನ್ನಪಟ್ಟಣದಿಂದ ಮದ್ದೂರಿಗೆ ಬಂದಿದ್ದ ಹರೀಶ್, ಪೂರ್ಣ ಪ್ರಮಾಣದಲ್ಲಿ ಮದ್ಯದ ಅಮಲಿನಲ್ಲಿದ್ದನು. ಮದ್ದೂರಿನ ಕೆಎಸ್&zwnj;ಆರ್&zwnj;ಟಿಸಿ (KSRTC) ಬಸ್ ನಿಲ್ದಾಣದ ಬಳಿ ಹಾಗೂ ಟಿ.ಬಿ. ವೃತ್ತದ (TB Circle) ಸುತ್ತಮುತ್ತ ಸಿಕ್ಕ ಸಿಕ್ಕ ವಾಹನಗಳಿಗೆ ಕಾರಿನಿಂದ ಡಿಕ್ಕಿ ಹೊಡೆದುಕೊಂಡು ಅಡ್ಡಾದಿಡ್ಡಿಯಾಗಿ ಸಾಗಿದ್ದಾನೆ. ವಾಹನ ಸವಾರರು ಹಾಗೂ ಪಾದಚಾರಿಗಳು ಪ್ರಾಣಭಯದಿಂದ ಓಡಿಹೋಗಿದ್ದಾರೆ. ಕೊನೆಗೆ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯಲ್ಲೇ ಉರುಳಿಬಿದ್ದಿದೆ (ಪಲ್ಟಿಯಾಗಿದೆ).&lt;/p&gt;&lt;h2&gt;&lt;strong&gt;ತಪ್ಪೊಪ್ಪಿಕೊಳ್ಳದೆ ಸಾರ್ವಜನಿಕರ ಜತೆ ಗಲಾಟೆ &ndash; ಬಿತ್ತು ಗೂಸಾ!&lt;/strong&gt;&lt;/h2&gt;&lt;p&gt;ಕಾರು ಪಲ್ಟಿಯಾದ ಬಳಿಕ ಸ್ಥಳೀಯರು ಆತನನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ, ಕಾರಿನಿಂದ ಇಳಿದ ಹರೀಶ್ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು, ಸಾರ್ವಜನಿಕರ ಮೇಲೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಗ್ವಾದಕ್ಕೆ ಇಳಿದಿದ್ದಾನೆ. ಇದರಿಂದ ತೀವ್ರ ಕೆರಳಿದ ಸ್ಥಳೀಯರು ಮತ್ತು ವಾಹನ ಸವಾರರು ಆತನಿಗೆ ಸ್ಥಳದಲ್ಲೇ ಹಿಗ್ಗಾಮುಗ್ಗಾ ಥಳಿಸಿ ಧರ್ಮದೇಟು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಕುಡಿತ ಬಿಡಿಸುವ ಕೇಂದ್ರದಲ್ಲಿದ್ದ ಭೂಪ!&lt;/strong&gt;&lt;/h2&gt;&lt;p&gt;ವಿಚಾರಣೆ ವೇಳೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹರೀಶ್ ಅತಿಯಾದ ಕುಡಿತದ ಚಟಕ್ಕೆ ದಾಸನಾಗಿದ್ದರಿಂದ, ಆತನ ಮದ್ಯಪಾನ ಬಿಡಿಸಲು ಕುಟುಂಬಸ್ಥರು ಇತ್ತೀಚೆಗಷ್ಟೇ &lsquo;ಕುಡಿತ ಬಿಡಿಸುವ ಕೇಂದ್ರ&rsquo;ಕ್ಕೆ (Rehabilitation Centre) ಸೇರಿಸಿದ್ದರು. ಆದರೆ ಮನೆಯಲ್ಲಿ ಯಾರಿಗೂ ಹೇಳದೆ ಗುಟ್ಟಾಗಿ ಕಾರು ತೆಗೆದುಕೊಂಡು ಬಂದು ಮದ್ದೂರಿನಲ್ಲಿ ಈ ರಂಪಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಆಸ್ಪತ್ರೆ ಹಾಗೂ ಪೊಲೀಸರ ಮೇಲೂ ರೌದ್ರಾವತಾರ:&lt;/strong&gt;&lt;/h2&gt;&lt;p&gt;ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮದ್ದೂರು ಸಂಚಾರ ಪೊಲೀಸರು, ಗಾಯಗೊಂಡಿದ್ದ ಚಾಲಕ ಹರೀಶ್&zwnj;ನನ್ನು ವಶಕ್ಕೆ ಪಡೆದು ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮದ್ಯದ ಅಮಲು ಇಳಿಯದ ಕಾರಣ ಆತ ಆಸ್ಪತ್ರೆಯಲ್ಲೂ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರ ಜೊತೆ ಅಸಭ್ಯವಾಗಿ ವರ್ತಿಸಿ ರಂಪಾಟ ಮುಂದುವರಿಸಿದ್ದಾನೆ.&lt;/p&gt;&lt;p&gt;ಸದ್ಯ ಘಟನೆ ಸಂಬಂಧ ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಾಹನವನ್ನು ಜಪ್ತಿ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mandya-maddur-drunk-driver-serial-accident-car-overturns-public-thrash-driver-harish/articleshow-ctsxp4g"/>
        </item>
        <item>
            <title><![CDATA[ದಾವಣಗೆರೆ ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು]]></title>
            <link>https://kannada.asianetnews.com/karnataka-districts/doctors-at-adichunchanagiri-hospital-discovered-a-betel-nut-stuck-in-trachea-and-removed-it-through-bronchoscopy-mrq/articleshow-cvv979f</link>
            <guid isPermaLink="true">https://kannada.asianetnews.com/karnataka-districts/doctors-at-adichunchanagiri-hospital-discovered-a-betel-nut-stuck-in-trachea-and-removed-it-through-bronchoscopy-mrq/articleshow-cvv979f</guid>
            <pubDate>Wed, 19 Aug 2026 09:06:35 +0530</pubDate>
            <description><![CDATA[ಕಳೆದ 9 ತಿಂಗಳಿಂದ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದ ಮತ್ತು ಕ್ಷಯರೋಗಿ ಎಂದು ಶಂಕಿಸಲಾಗಿದ್ದ ಮಹಿಳೆಯ ಶ್ವಾಸನಾಳದಲ್ಲಿ ಸಿಲುಕಿದ್ದ ಅಡಿಕೆಯನ್ನು ಆದಿಚುಂಚನಗಿರಿ ಆಸ್ಪತ್ರೆಯ ವೈದ್ಯರು ಪತ್ತೆಹಚ್ಚಿದ್ದಾರೆ. ಬ್ರೋಂಕೋಸ್ಕೋಪಿ ಮೂಲಕ ಅಡಿಕೆಯನ್ನು ಯಶಸ್ವಿಯಾಗಿ ಹೊರತೆಗೆದು, ಮಹಿಳೆಯನ್ನು ಸಂಪೂರ್ಣವಾಗಿ ಗುಣಪಡಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0c1e66fbteb1k9fh13s5nfm,imgname-mandya-1787110561999.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಕಳೆದ 9 ತಿಂಗಳಿಂದ ಕಫದೊಂದಿಗೆ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದ ಮಹಿಳೆಯ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಹೆಬ್ಬೆರಳು ಗಾತ್ರದ ಅಡಿಕೆಯನ್ನು ಹೊರತೆಗೆದು ಕ್ಷಯ ಎಂದು ಶಂಕಿಸಲಾಗಿದ್ದ ರೋಗಿಯನ್ನು ಗುಣಪಡಿಸುವಲ್ಲಿ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆ ಶ್ವಾಸಕೋಶ ವೈದ್ಯಕೀಯ ವಿಭಾಗದ ವೈದ್ಯರು ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;ದಾವಣಗೆರೆಯ ಸಂತೋಷ್&zwnj;ಗಿರಿ ಗೋಸಾವಿ ಪತ್ನಿ ವೇದಿಕಾ ಅವರೇ ಬ್ರೋಂಕೋಸ್ಕೋಪಿ ಮೂಲಕ ಶ್ವಾಸನಾಳ ಮಾರ್ಗದಲ್ಲಿ ಸಿಲುಕಿದ್ದ ಅಡಿಕೆಯನ್ನು ಹೊರತೆಗೆಸಿಕೊಂಡು ಗುಣಮುಖರಾಗಿ ನಿರಂತರ ಕೆಮ್ಮಿನ ಸಮಸ್ಯೆಗೆ ಮುಕ್ತಿಪಡೆದಿರುವ ಗೃಹಿಣಿ.&lt;/p&gt;&lt;h2&gt;&lt;strong&gt;ಕ್ಷಯ ಶಂಕಿತ ರೋಗಿ&lt;/strong&gt;&lt;/h2&gt;&lt;p&gt;ಕಫದೊಂದಿಗೆ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದ ವೇದಿಕಾ ಅವರಿಗೆ ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದ್ದರೂ ಸಮಸ್ಯೆಗೆ ನಿಖರವಾದ ಕಾರಣ ಪತ್ತೆಯಾಗಿರಲಿಲ್ಲ. ಕ್ಷಯರೋಗಕ್ಕೆ ಯಾವುದೇ ಖಚಿತ ಸಾಕ್ಷ್ಯಗಳಿಲ್ಲದಿದ್ದರೂ, ದೀರ್ಘಕಾಲದ ಕೆಮ್ಮಿನ ಕಾರಣದಿಂದಾಗಿ ಅವರನ್ನು ಹಲವು ಬಾರಿ ಕ್ಷಯ ಶಂಕಿತ ರೋಗಿ ಎಂದು ಗುರುತಿಸಲಾಗಿತ್ತು.&lt;/p&gt;&lt;p&gt;ತಿಪಟೂರಿನ ವೈದ್ಯರೊಬ್ಬರ ಸಲಹೆ ಮೇರೆಗೆ ಇತ್ತೀಚೆಗೆ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಬಂದು ದಾಖಲಾದ ವೇದಿಕಾ ಅವರಿಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶ್ವಾಸಕೋಶ ವೈದ್ಯಕೀಯ ವಿಭಾಗದಲ್ಲಿ ಪರೀಕ್ಷಿಸಿದ ವೈದ್ಯರು ರೋಗಿಯ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಿದರು. ಈ ವೇಳೆ ಕೆಲ ತಿಂಗಳ ಹಿಂದೆ ಶ್ವಾಸನಾಳಕ್ಕೆ ಅಡಿಕೆ ಹೋಗಿರಬಹುದಾದ ಕುರಿತು ಮಹತ್ವದ ಮಾಹಿತಿ ದೊರೆಯಿತು.&lt;/p&gt;&lt;h3&gt;&lt;strong&gt;ಫ್ಲೆಕ್ಸಿಬಲ್ ಬ್ರೋಂಕೋಸ್ಕೋಪಿ&lt;/strong&gt;&lt;/h3&gt;&lt;p&gt;ಈ ಸುಳಿವಿನ ಆಧಾರದ ಮೇಲೆ ಫ್ಲೆಕ್ಸಿಬಲ್ ಬ್ರೋಂಕೋಸ್ಕೋಪಿ (ಶ್ವಾಶನಾಳದರ್ಶಿ) ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ವೇಳೆ ಶ್ವಾಸನಾಳ ಮಾರ್ಗದಲ್ಲಿ 2.5x1.5 ಸೆಂ.ಮೀ. ಗಾತ್ರದ ದೊಡ್ಡವರ ಹೆಬ್ಬೆರಳು ಗಾತ್ರದ ಅಡಿಕೆ ಸಿಲುಕಿಕೊಂಡಿರುವ ಅಚ್ಚರಿಯ ಸಂಗತಿಯನ್ನು ವೈದ್ಯರು ಪತ್ತೆ ಹಚ್ಚಿದರು. ಸುಮಾರು 9 ತಿಂಗಳಿಂದ ರೋಗಿಯನ್ನು ಕಾಡುತ್ತಿದ್ದ ಸಮಸ್ಯೆಗೆ ಇದೇ ಮೂಲ ಕಾರಣವಾಗಿತ್ತು.&lt;/p&gt;&lt;p&gt;ಶ್ವಾಸಕೋಶ ವೈದ್ಯಕೀಯ ವಿಭಾಗದ ತಜ್ಞರ ತಂಡ ಅತ್ಯಂತ ಜಾಗರೂಕತೆಯಿಂದ ಮತ್ತು ನಿಖರತೆಯಿಂದ ಜನರಲ್ ಅನಸ್ತೇಶಿಯ ನೀಡಿ ಬ್ರೋಂಕೋಸ್ಕೋಪಿ ಮೂಲಕ ಆ ಅಡಿಕೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಶ್ವಾಸನಾಳ ಮಾರ್ಗಗಳಿಗೆ ಯಾವುದೇ ಹಾನಿಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಚಿಕಿತ್ಸೆ ಬಳಿಕ ಸುಮಾರು ಒಂದು ವರ್ಷದಿಂದ ರೋಗಿಯನ್ನು ಕಾಡುತ್ತಿದ್ದ ಕೆಮ್ಮು ಹಾಗೂ ಇತರ ಲಕ್ಷಣಗಳು ಬಹುತೇಕ ಸಂಪೂರ್ಣ ಕಡಿಮೆಯಾಗಿವೆ.&lt;/p&gt;&lt;p&gt;ಈ ಅಪರೂಪದ ಪ್ರಕರಣವು ಸರಿಯಾದ ವೈದ್ಯಕೀಯ ಇತಿಹಾಸ ಸಂಗ್ರಹಣೆ, ವೈದ್ಯರ ಅನುಭವ ಹಾಗೂ ಸಮಗ್ರ ರೋಗ ನಿರ್ಣಯದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಜೊತೆಗೆ ದೀರ್ಘಕಾಲದ ಉಸಿರಾಟದ ಸಮಸ್ಯೆಗಳ ನಿಜವಾದ ಕಾರಣವನ್ನು ಪತ್ತೆಹಚ್ಚುವಲ್ಲಿ ಬ್ರೋಂಕೋಸ್ಕೋಪಿ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಧಾರವಾಡದಲ್ಲಿ ಮೂವರು ರೈತರ ಸಾವು: ಸಚಿವರ ಬರ ವೀಕ್ಷಣೆ ವೇಳೆ ಸಂತ್ರಸ್ತರಿಗೆ ಸಿಗದ ಸಾಂತ್ವನ; ಸೌಜನ್ಯಕ್ಕೂ ಬರಲಿಲ್ಲ ಎಂದು ಆಕ್ರೋಶ&lt;/strong&gt;&lt;/p&gt;&lt;h3&gt;&lt;strong&gt;ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆಗಳು&lt;/strong&gt;&lt;/h3&gt;&lt;p&gt;ಇಂತಹ ಸುಧಾರಿತ ಬ್ರೋಂಕೋಸ್ಕೋಪಿ ಮತ್ತು ಇಂಟರ್ ವೆನ್ಷನಲ್ ಪಲ್ಮನಾಲಜಿ ಚಿಕಿತ್ಸೆಗಳು ಸಾಮಾನ್ಯವಾಗಿ ದೊಡ್ಡ ನಗರ ಪ್ರದೇಶದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆಗಳು ಸುರಕ್ಷಿತವಾಗಿ, ಪರಿಣಾಮಕಾರಿಯಾಗಿ ಹಾಗೂ ಕೈಗೆಟುಕುವ ದರದಲ್ಲಿ ಸಿಗಬೇಕೆಂಬ ಭೈರವೈಕ್ಯ ಡಾ.ಬಾಲಗಂಗಾಧನಾಥಶ್ರೀಗಳ ಆಶಯದಂತೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ರೋಗಿಗಳಿಗೆ ವಿಶ್ವ ಮಟ್ಟದ ಚಿಕಿತ್ಸೆ ಗ್ರಾಮೀಣ ಪ್ರದೇಶದಲ್ಲಿಯೇ ದೊರೆಯುತ್ತದೆ ಎಂಬುದನ್ನು ಆದಿಚುಂಚನಗಿರಿ ಆಸ್ಪತ್ರೆ ಸಾಬೀತು ಪಡಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಹನೂರು ಶೂಟೌಟ್&zwnj;ನಲ್ಲಿ ಪರಾರಿಯಾಗಿದ್ದ 4ನೇ ಆರೋಪಿ ದಾಸ್ ಪ್ರತ್ಯಕ್ಷ; ಕೇಸಿಗೆ ಟ್ವಿಸ್ಟ್ ನೀಡಿದ ವಿಡಿಯೋ ಹೇಳಿಕೆ!&lt;/strong&gt;&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/doctors-at-adichunchanagiri-hospital-discovered-a-betel-nut-stuck-in-trachea-and-removed-it-through-bronchoscopy-mrq/articleshow-cvv979f"/>
        </item>
        <item>
            <title><![CDATA[Mysuru: ಮಹಿಳೆಯನ್ನು ಕೊಲೆ ಮಾಡಿ 20 ದಿನಗಳ ಬಳಿಕ ಖುದ್ದು ಪೊಲೀಸರಿಗೆ ಶರಣಾದ!]]></title>
            <link>https://kannada.asianetnews.com/karnataka-districts/mandya-man-surrendered-police-station-20-days-after-murdering-a-woman-rav/articleshow-gkzrqvq</link>
            <guid isPermaLink="true">https://kannada.asianetnews.com/karnataka-districts/mandya-man-surrendered-police-station-20-days-after-murdering-a-woman-rav/articleshow-gkzrqvq</guid>
            <pubDate>Wed, 05 Aug 2026 05:48:12 +0530</pubDate>
            <description><![CDATA[&lt;p&gt;ತನ್ನೊಂದಿಗೆ ವಾಸವಿದ್ದ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯು 20 ದಿನಗಳ ಬಳಿಕ ಖುದ್ದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಆರೋಪಿ ಶರಣಾದ ಬಳಿಕವೇ ಮಹಿಳೆ ಕೊಲೆಯಾದ ವಿಚಾರ ಪೊಲೀಸರಿಗೆ ಗೊತ್ತಾಗಿದ್ದು, ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jyqjyjexqxz8bdnbbp9q6hq3,imgname-----------------------2025-06-27t074911.273-1750990801373.jpg" type="image/jpeg" height="390" width="690"/>
            <content:encoded><![CDATA[&lt;h2&gt;-ಆರೋಪಿಯೇ ತಪ್ಪೊಪ್ಪಿಕೊಂಡ ಮೇಲೆ ಕೊಲೆ ಕೇಸ್&zwnj; ಬೆಳಕಿಗೆ&lt;/h2&gt;&lt;p&gt;&lt;strong&gt;ಮೈಸೂರು (ಆ.5): &lt;/strong&gt;ತನ್ನೊಂದಿಗೆ ವಾಸವಿದ್ದ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯು 20 ದಿನಗಳ ಬಳಿಕ ಖುದ್ದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಆರೋಪಿ ಶರಣಾದ ಬಳಿಕವೇ ಮಹಿಳೆ ಕೊಲೆಯಾದ ವಿಚಾರ ಪೊಲೀಸರಿಗೆ ಗೊತ್ತಾಗಿದ್ದು, ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ನಡೆಸಿದ್ದಾರೆ.&lt;/p&gt;&lt;p&gt;ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದ ಜ್ಯೋತಿ (40) ಕೊಲೆಯಾದವರು. ಕನಕಪುರ ಮೂಲದ ಆಟೋ ಚಾಲಕ ಸಿದ್ದರಾಜು (64) ಪೊಲೀಸರಿಗೆ ಶರಣಾದ ಆರೋಪಿ.&lt;/p&gt;&lt;p&gt;ಜ್ಯೋತಿ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ಸಂಬಂಧಿಕರಾದ ಸಿದ್ದರಾಜು ಜೊತೆಗೆ ಮೈಸೂರಿನ ಬನ್ನೂರು ರಸ್ತೆಯ ಭುಗತಹಳ್ಳಿಯ ಆಶ್ರಯ ಲೇಔಟ್&zwnj;ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಸಿದ್ದರಾಜುನನ್ನು ಜ್ಯೋತಿ ನಿರ್ಲಕ್ಷಿಸುತ್ತಿದ್ದರು. ಆಗಾಗ ಪೋಷಕರ ಮನೆಗೆ ಜ್ಯೋತಿ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಹೀಗಿರುವಾಗ ಜು.13 ರಂದು ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಜ್ಯೋತಿ ಮಲಗಿದ್ದಾಗ ಆರೋಪಿ ಸಿದ್ದರಾಜು, ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮನೆಯಿಂದ ಪರಾರಿಯಾಗಿದ್ದ. 3 ವಾರಗಳ ಬಳಿಕ ಆಲನಹಳ್ಳಿ ಠಾಣೆಗೆ ತೆರಳಿ ಆರೋಪಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಕೃತ್ಯವು ಮೈಸೂರು ದಕ್ಷಿಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಆರೋಪಿಯನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.&lt;/p&gt;&lt;h2&gt;ಕೊಳೆತ ಮೃತದೇಹ ಪತ್ತೆ:&lt;/h2&gt;&lt;p&gt;ಆರೋಪಿ ಸಿದ್ದರಾಜು ನೀಡಿದ ಮಾಹಿತಿ ಮೇರೆಗೆ ಮೈಸೂರು ದಕ್ಷಿಣ ಠಾಣೆ ಪೊಲೀಸರು ಭುಗತಹಳ್ಳಿಯ ಆಶ್ರಯ ಲೇಔಟ್&zwnj; ನ ಬಾಡಿಗೆ ಮನೆಗೆ ತೆರಳಿ, ಮನೆ ಮಾಲೀಕ ಡಿ.ಕೃಷ್ಣ ಅವರ ಸಮ್ಮುಖದಲ್ಲಿ ಬಾಗಿಲು ತೆಗೆದಾಗ ಮನೆಯಲ್ಲಿ ದುರ್ವಾಸನೆ ಹರಡಿತ್ತು. ಹಾಸಿಗೆ ಕೆಳಗೆ ಅಡಗಿಸಿದ್ದ ಜ್ಯೋತಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ಮನೆ ಮಾಲೀಕ ನೀಡಿದ ದೂರಿನ ಮೇರೆಗೆ ಮೈಸೂರು ದಕ್ಷಿಣ ಪೊಲೀಸ್&zwnj; ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-man-surrendered-police-station-20-days-after-murdering-a-woman-rav/articleshow-gkzrqvq"/>
        </item>
        <item>
            <title><![CDATA[Rahul gandhi Next PM: 2029ಕ್ಕೆ ರಾಹುಲ್ ಗಾಂಧಿ ಪ್ರಧಾನಿ ಮಾಡಲು ಪಣ, ಕಾರ್ಯಕರ್ತರಿಗೆ ನೂತನ ಸಚಿವ ಪಿಎಂ ನರೇಂದ್ರಸ್ವಾಮಿ ಕರೆ!]]></title>
            <link>https://kannada.asianetnews.com/politics/mandya-new-cabinet-minister-pm-narendraswamy-calls-rahul-gandhi-prime-minister-2029-rav/articleshow-glo4qrd</link>
            <guid isPermaLink="true">https://kannada.asianetnews.com/politics/mandya-new-cabinet-minister-pm-narendraswamy-calls-rahul-gandhi-prime-minister-2029-rav/articleshow-glo4qrd</guid>
            <pubDate>Sun, 09 Aug 2026 06:15:45 +0530</pubDate>
            <description><![CDATA[&lt;p&gt;2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು 2029ರಲ್ಲಿ ರಾಹುಲ್ ಗಾಂಧಿ(Rahul gandhi)ಅವರನ್ನು ದೇಶದ ಪ್ರಧಾನ ಮಂತ್ರಿ ಮಾಡಲು ಎಲ್ಲರೂ ಪಣ ತೊಡಬೇಕು ಎಂದು ನೂತನ ಸಚಿವ ಪಿ.ಎಂ.ನರೇಂದ್ರಸ್ವಾಮಿ(PM Narendraswamy) ಕಾರ್ಯಕರ್ತರಿಗೆ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzhzm1cm2bzbg2garvn935e1,imgname-----------------------2026-08-09t061342.014-1786236241300.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.9): 2028&lt;/strong&gt;ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು 2029ರಲ್ಲಿ ರಾಹುಲ್ ಗಾಂಧಿ(Rahul gandhi)ಅವರನ್ನು ದೇಶದ ಪ್ರಧಾನ ಮಂತ್ರಿ ಮಾಡಲು ಎಲ್ಲರೂ ಪಣ ತೊಡಬೇಕು ಎಂದು ನೂತನ ಸಚಿವ ಪಿ.ಎಂ.ನರೇಂದ್ರಸ್ವಾಮಿ(PM Narendraswamy) ಕಾರ್ಯಕರ್ತರಿಗೆ ಹೇಳಿದರು.&lt;/p&gt;&lt;h2&gt;ಯಾರನ್ನೂ ಟೀಕೆ ಮಾಡಲ್ಲ&lt;/h2&gt;&lt;p&gt;ಸಿಲ್ವರ್ ಜ್ಯೂಬಿಲಿ ಪಾರ್ಕ್&zwnj;ನಲ್ಲಿ ಆಯೋಜಿಸಿದ್ದ ನೂತನ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಯಾರನ್ನೂ ಟೀಕೆ ಮಾಡುವುದಿಲ್ಲ. ಪ್ರಚೋದನೆಗೂ ಒಳಗಾಗುವುದಿಲ್ಲ. ಜನರ ಸೇವೆ ಮಾಡುವುದಷ್ಟೇ ನಮ್ಮ ಕೆಲಸ ಎಂದು ಶಪಥ ಮಾಡಿದರು.&lt;/p&gt;&lt;h3&gt;2029ಕ್ಕೆ ರಾಹುಲ್ ಗಾಂಧಿ ಪ್ರಧಾನಿ ಮಾಡಲು ಪಣ&lt;/h3&gt;&lt;p&gt;ನಾವು ನೆಪಮಾತ್ರಕ್ಕಷ್ಟೇ ಮಂತ್ರಿಗಳು. ನಿಮ್ಮಂತೆಯೇ ನಾವೂ ಕಾರ್ಯಕರ್ತರೇ. ಜಿಲ್ಲೆಯ ಅಭಿವೃದ್ಧಿ ಮಾಡುವುದಕ್ಕಷ್ಟೇ ನಮ್ಮ ಆದ್ಯತೆ. ವೀರಾವೇಷದ ಮಾತುಗಳ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ೨೦೨೮ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ತರಲು ಮತ್ತು ೨೦೨೯ಕ್ಕೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಒಟ್ಟಾಗಿ ಶ್ರಮಿಸೋಣ ಎಂದರು.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/mandya-new-cabinet-minister-pm-narendraswamy-calls-rahul-gandhi-prime-minister-2029-rav/articleshow-glo4qrd"/>
        </item>
        <item>
            <title><![CDATA[Mandya: ಜೈಲಿನಲ್ಲಿ ಇರಬೇಕಿದ್ದ ಆರೋಪಿ ಗರ್ಲ್‌ಫ್ರೆಂಡ್ ಜೊತೆ, ಆಸ್ಪತ್ರೆಗೆ ಬಂದ ನ್ಯಾಯಾಧೀಶರಿಗೆ ಬಿಗ್ ಶಾಕ್!]]></title>
            <link>https://kannada.asianetnews.com/karnataka-districts/mandya-judge-gets-big-shock-at-the-hospital-finds-an-accused-who-should-have-been-in-jail-with-his-girlfriend-sns/articleshow-i128v2m</link>
            <guid isPermaLink="true">https://kannada.asianetnews.com/karnataka-districts/mandya-judge-gets-big-shock-at-the-hospital-finds-an-accused-who-should-have-been-in-jail-with-his-girlfriend-sns/articleshow-i128v2m</guid>
            <pubDate>Tue, 25 Aug 2026 10:57:23 +0530</pubDate>
            <description><![CDATA[&lt;p&gt;ಅಕ್ರಮ ಖಾತೆ ಪ್ರಕರಣದ ಆರೋಪಿಯೊಬ್ಬನಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ರಾಜಾತಿಥ್ಯ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿ ವೇಳೆ, ಯಾವುದೇ ಆರೋಗ್ಯ ಸಮಸ್ಯೆಯಿಲ್ಲದ ಕೈದಿಯು ಯುವತಿಯೊಂದಿಗೆ ವಿಶೇಷ ಕೊಠಡಿಯಲ್ಲಿದ್ದು, ವಿಐಪಿ ಚಿಕಿತ್ಸೆ ಪಡೆಯುತ್ತಿರುವುದು ಪತ್ತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0vp1g5te4neqxgvrjbxmemm,imgname-mandya--hospital-1787635482810.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿ ಸೇರಿದಂತೆ ಕರ್ನಾಟಕ ಕೆಲವು ಜೈಲಿಗಳಿಗೆ ಪ್ರಭಾವಿ ಕೈದಿಗಳಿಗೆ ಹಾಗೂ ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿರುವ ಆರೋಪಿಗಳಿಗೆ ರಾಜ್ಯಾತಿಥ್ಯ ನೀಡುತ್ತಿರುವ ಘಟನೆಗಳು ಪದೇ ಪದೇ ವಿವಾದಕ್ಕೆ ಕಾರಣವಾಗುತ್ತದೆ. ಸದ್ಯ ಇಂತಹದ್ದೇ ಘಟನೆಯೊಂದು ಮಂಡ್ಯದಲ್ಲಿ ಬೆಳಕಿಗೆ ಬಂದಿದ್ದು, ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಘಾತಗಾರಿ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h2&gt;ಅಕ್ರಮ ಖಾತೆ ಪ್ರಕರಣದ ಕಿಂಗ್ ಪಿನ್ ಆಗಿದ್ದ ಆರೋಪಿ&lt;/h2&gt;&lt;p&gt;ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಆರೋಪಿಗೆ ರಾಜಾತಿಥ್ಯ ನೀಡುತ್ತಿದ್ದ ರಹಸ್ಯ ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿಯಿಂದ ಬೆಳಕಿಗೆ ಬಂದಿದೆ. ಅಕ್ರಮ ಖಾತೆಗಳ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವ್ಯಕ್ತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವಿಐಪಿ ಟ್ರೀಟ್&zwnj;ಮೆಂಟ್ ನೀಡುತ್ತಿರುವುದು ಕಂಡು ನ್ಯಾಯಾಧೀಶರು ಗರಂ ಆಗಿದ್ದರು. ಅದರಲ್ಲೂ ಯಾವುದೇ ಕಾಯಿಲೆ ಇಲ್ಲದವನಿಗೆ ಕಾಯಿಲೆ ಎಂದು ಅಡ್ಮಿಟ್ ಮಾಡಿದ್ದ ಜೈಲಾಧಿಕಾರಿಗಳು ನಡೆ ನ್ಯಾಯಾಧೀಶರಿಗೆ ಕೂಡ ಶಾಕ್ ಕೊಟ್ಟಿತ್ತು.&lt;/p&gt;&lt;p&gt;&lt;img&gt;&lt;/p&gt;&lt;h2&gt;ಲೋಕಾಯುಕ್ತ ಪೊಲೀಸರಿಂದ ಆರೋಪಿ ಅರೆಸ್ಟ್&lt;/h2&gt;&lt;p&gt;ಜಿಲ್ಲಾ ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ್ ನೇತೃತ್ವದ ತಂಡದಿಂದ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಆರೋಪಿ ಜೊತೆಗೆ ಯುವತಿ ಇರುವುದು ಕಂಡು ಬಂದಿತ್ತು. ಲೋಕಾಯುಕ್ತ ಪೊಲೀಸರಿಂದ ಅರೆಸ್ಟ್ ಆಗಿದ್ದ ಶ್ರೀರಂಗಪಟ್ಟಣ ADLR ಮಹಮದ್ ಹುಸೇನ್&zwnj; ಎಂಬ ಆರೋಪಿ ಜೈಲಿನಲ್ಲಿರಬೇಕಿತ್ತು. ಆದರೆ ಹುಸೇನ್ ನನ್ನು ಜೈಲಾಧಿಕಾರಿಗಳು ಮಿಮ್ಸ್&zwnj;ಗೆ ದಾಖಲು ಮಾಡಿ, ವಿಶೇಷ ರೂಪ ವ್ಯವಸ್ಥೆಯನ್ನು ಮಾಡಿದ್ದರು. ನ್ಯಾಯಾಧೀಶರ ಪರಿಶೀಲನೆ ವೇಳೆ ಮಿಮ್ಸ್ ಆಸ್ಪತ್ರೆಯಲ್ಲಿ ಸ್ಪೆಷಲ್ ರೂಮ್&zwnj;ನಲ್ಲಿ ಅನಧಿಕೃತ ಚಿಕಿತ್ಸೆ ನೀಡುತ್ತಿರುವುದು ಖಚಿತವಾಗಿದೆ.&lt;/p&gt;&lt;h2&gt;ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರು ಆಸ್ಪತ್ರೆಗೆ ದಾಖಲು&lt;/h2&gt;&lt;p&gt;ಆರೋಪಿಯನ್ನು ಕಂಡು ವೈದ್ಯಾಧಿಕಾರಿಗಳಿಗೆ ನ್ಯಾಯಾಧಶೀರು ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿದ್ದರು. ಈ ವೇಳೆ ಆತನಿಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದರಂತೆ. ಅಲ್ಲದೇ, ಇದೇ ವೇಳೆ ಆರೋಪಿ ಇದ್ದ ಸ್ಪೆಷಲ್ ರೂಮ್&zwnj;ನಲ್ಲಿ ಮಹಿಳೆಗೆ ಪ್ರಶ್ನಿಸಿದರೆ, ತಾನು ಆರೋಪಿಯ ಗೆಳತಿ ಆಕೆ ಹೇಳಿದ್ದಳಂತೆ.&lt;/p&gt;&lt;h2&gt;ಅಧಿಕಾರಿಗಳಿಗೆ ಕ್ಲಾಸ್, ವರದಿ ನೀಡಲು ಸೂಚನೆ&lt;/h2&gt;&lt;p&gt;ಇದರೊಂದಿಗೆ ಗರಂ ಆದ ನ್ಯಾಯಾಧೀಶರು, ಜೈಲಾಧಿಕಾರಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇವನಿಗೆ ಕಾಯಿಲೆ ಇಲ್ಲ ಯಾಕೆ ಇಲ್ಲಿ ಅಡ್ಮಿಟ್ ಮಾಡಿದ್ದೀರಾ? ಎಂದು ಪ್ರಶ್ನಿಸಿದರೆ, ಜೈಲಿನ ವೈದ್ಯರ ಸಲಹೆ ಮೇರೆಗೆ ಸೇರಿಸಿದ್ದೇವೆ ಎಂದು ಜೈಲಾಧಿಕಾರಿ ಹೇಳಿದ್ದರಂತೆ. ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದೀರಾ ಎಂದು ಕೇಳಿದರೆ, ಇಲ್ಲ ಮುಂದೆ ಗಮನಕ್ಕೆ ತರುತ್ತೇವೆ ಸಮಾಜಯಿಷಿ ನೀಡಿದ್ದರಂತೆ. ಇದರೊಂದಿಗೆ ನ್ಯಾಯಾಧೀಶರು, ಜೈಲಾಧಿಕಾರಿ ಹಾಗೂ ಮಿಮ್ಸ್ ವೈದ್ಯಾಧಿಕಾರಿಗಳಿಗೆ ತಕ್ಷಣ ರಿಪೋರ್ಟ್ ನೀಡಲು ಆದೇಶ ನೀಡಿದ್ದು, ವರದಿ ಬಳಿಕ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;]]></content:encoded>
            <category>mandya</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/mandya-judge-gets-big-shock-at-the-hospital-finds-an-accused-who-should-have-been-in-jail-with-his-girlfriend-sns/articleshow-i128v2m"/>
        </item>
        <item>
            <title><![CDATA[Special voters list revision: ಮಂಡ್ಯ ಜಿಲ್ಲೆಯಲ್ಲಿ ಮತಪಟ್ಟಿಯಿಂದ 1.69 ಲಕ್ಷ ಮಂದಿ ಔಟ್]]></title>
            <link>https://kannada.asianetnews.com/karnataka-districts/special-voters-list-revision-1-point-69-lakh-people-left-out-of-the-voter-list-in-mandya-district-mrq/articleshow-nmgi0a1</link>
            <guid isPermaLink="true">https://kannada.asianetnews.com/karnataka-districts/special-voters-list-revision-1-point-69-lakh-people-left-out-of-the-voter-list-in-mandya-district-mrq/articleshow-nmgi0a1</guid>
            <pubDate>Thu, 06 Aug 2026 05:55:19 +0530</pubDate>
            <description><![CDATA[&lt;p&gt;ಮಂಡ್ಯ ಜಿಲ್ಲೆಯಲ್ಲಿ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ, ಸುಮಾರು 1.69 ಲಕ್ಷ ಜನರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ. ಇದಲ್ಲದೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಆಗಸ್ಟ್ 6 ರಂದು ಎಸ್ಎಸ್ಎಲ್&zwnj;ಸಿ, ಪಿಯುಸಿ, ಮತ್ತು ಪದವೀಧರರಿಗಾಗಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಯೋಜಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz51j210c56m97p7pqvbtbtr,imgname-----------------------2026-08-04t053729.648-1785802065952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿಯಲ್ಲಿದ್ದು ಇದುವರೆಗೆ ಮತದಾರರ ಪಟ್ಟಿಯಿಂದ 1.69 ಲಕ್ಷ ಮಂದಿಯನ್ನು ಕೈಬಿಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟು 15,75,849 ಮತದಾರರಲ್ಲಿ 1,69,037 ಮತದಾರರು ಹೊರಗುಳಿದಿದ್ದಾರೆ. ಪರಿಷ್ಕರಣೆಯ ಸಮಯದಲ್ಲಿ ಶೇ. 10.73 ಜನರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. 1143 ಮತಗಟ್ಟೆಗಳಲ್ಲಿ ಶೇ. 90 ರಷ್ಟು ಮತದಾರರ ಪಟ್ಟಿಯನ್ನು ಆನ್&zwnj;ಲೈನ್&zwnj;ನಲ್ಲಿ ಅಪ್&zwnj;ಲೋಡ್ ಮಾಡಲಾಗಿದೆ ಮತ್ತು ಒಂದು ಮತಗಟ್ಟೆಯಲ್ಲಿ ಶೇ. 100 ರಷ್ಟು ಆನ್&zwnj;ಲೈನ್ ಅಪ್&zwnj;ಲೋಡ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.&lt;/p&gt;&lt;p&gt;ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆಯ ಸಮಯದಲ್ಲಿ 25,264 ಜನರು ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. 86,439 ಜನರು ಶಾಶ್ವತ ವರ್ಗಾವಣೆಗಳಾಗಿದ್ದರೆ, 14,277 ಜನರು ದ್ವಿ ಮತದಾನದ ಹಕ್ಕುಗಳನ್ನು ಹೊಂದಿದ್ದರು, 42,549 ಜನರು ಸಾವನ್ನಪ್ಪಿದ್ದಾರೆ ಮತ್ತು 508 ಇತರ ಮತದಾರರಾಗಿದ್ದಾರೆ.&lt;/p&gt;&lt;p&gt;ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ 61 ಜನರು ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 14,05,313 ಮತದಾರರು ತಮ್ಮ ಮತದಾರರ ಪಟ್ಟಿಯನ್ನು ಆನ್&zwnj;ಲೈನ್&zwnj;ನಲ್ಲಿ ಅಪ್&zwnj;ಲೋಡ್ ಮಾಡುವಲ್ಲಿ 89.18 ಪ್ರಗತಿ ಸಾಧಿಸಿದ್ದಾರೆ, ಆದರೆ 1499 ಮತದಾರರ ಪಟ್ಟಿಗಳು ಇನ್ನೂ ಅಪ್&zwnj;ಲೋಡ್ ಆಗಿಲ್ಲ. 0.10% ಪ್ರಗತಿ ಸಾಧಿಸಬೇಕಾಗಿದೆ.&lt;/p&gt;&lt;p&gt;ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳಲು ಕೇವಲ ಮೂರು ದಿನಗಳು ಮಾತ್ರ ಉಳಿದಿವೆ. ಪರಿಷ್ಕರಣೆ ಕಾರ್ಯವು ಜೂನ್ 8 ರಂದು ಪೂರ್ಣಗೊಳ್ಳುತ್ತದೆ. ಅಧಿಕೃತ ಮತದಾರರ ಪಟ್ಟಿಯನ್ನು ಆನ್&zwnj;ಲೈನ್&zwnj;ನಲ್ಲಿ ಅಪ್&zwnj;ಲೋಡ್ ಮಾಡಿದ ನಂತರವೂ, ಹೆಸರು ಕೈಬಿಟ್ಟಿದ್ದರೆ ಅದನ್ನು ಸೇರಿಸಲು ಅನುಮತಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ಉದ್ಯೋಗಾಕಾಂಕ್ಷಿಗಳಿಗೆ ಇಂದು ನೇರ ಸಂದರ್ಶನ&lt;/strong&gt;&lt;/h2&gt;&lt;p&gt;ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಗೋಲ್ಡನ್ ಬ್ರಿಡ್ಜ್ ಪ್ರೋಪರ್ಟಿಸ್, ಮೆ.ಎಚ್.ಡಿ.ಎಫ್.ಸಿ ಲೈಫ್ ಇನ್ಸೂರೆನ್ಸ್ ಮತ್ತು ಮೆ.ಇನ್&zwnj;ಕಾಸ್ಟ್ ಮಿಷನ್ ಸಂಸ್ಥೆಗಳ ಸಹಯೋಗದಲ್ಲಿ ಆ.6ರಂದು ಬೆಳಗ್ಗೆ 10 ಗಂಟೆಗೆ ಖಾಲಿ ಇರುವ ಹುದ್ದೆಗಳಿಗೆ &lsquo;ನೇರಸಂದರ್ಶನ&rsquo; ವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಲಾಗಿದೆ.&lt;/p&gt;&lt;p&gt;ನೇರ ಸಂದರ್ಶನದಲ್ಲಿ ಸದರಿ ಸಂಸ್ಥೆಯಲ್ಲಿ ಖಾಲಿಯಿರುವ ಟೆಲಿಕರ್ಸ್ ಹಾಗೂ ಬ್ಯೂಸಿನೆಸ್ ಡೆವಲಪ್&zwnj;ಮೆಂಟ್ ಮ್ಯಾನೇಜರ್ ಹಾಗೂ ಮಿಷನ್ ವೆಲ್ಡರ್ &amp;amp; ಫಿಟ್ಟರ್ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಿದ್ದು, ಮಂಡ್ಯ ಹಾಗೂ ಮೈಸೂರು ಸ್ಥಳಗಳಲ್ಲಿ ಕೆಲಸ ಮಾಡಲು ಎಸ್ಎಸ್ಎಲ್&zwnj;ಸಿ, ಪಿಯುಸಿ, ಐಟಿಐ (ವೆಲ್ಡರ್ &amp;amp; ಫಿಟ್ಟರ್) ಹಾಗೂ ಯಾವುದೇ ಪದವಿ ಉತ್ತೀರ್ಣರಾಗಿರುವ 18 ರಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳು ತಮ್ಮ ರೆಸ್ಯೂಮ್/ ಬಯೋಡೇಟಾಗಳೊಂದಿಗೆ ನೇರಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ-9164642684, 9113500761, 9113875775, ಮತ್ತು 9741939716 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/special-voters-list-revision-1-point-69-lakh-people-left-out-of-the-voter-list-in-mandya-district-mrq/articleshow-nmgi0a1"/>
        </item>
        <item>
            <title><![CDATA[ಮಂಡ್ಯ: ಸತ್ತ ಭಿಕ್ಷುಕಿ ಗುಡಿಸಲಿನಲ್ಲಿ ಹಣದ ಮೂಟೆಗಳ ರಾಶಿ, ಮನೆಯವರು ಎಣಿಸಲಾಗದೇ ಮಸೀದಿಗೆ ತಂದರು!]]></title>
            <link>https://kannada.asianetnews.com/gallery/viral/mandya-elderly-beggar-woman-noor-death-8-lakh-rupees-cash-found-guttalu-ucitygt</link>
            <guid isPermaLink="true">https://kannada.asianetnews.com/gallery/viral/mandya-elderly-beggar-woman-noor-death-8-lakh-rupees-cash-found-guttalu-ucitygt</guid>
            <pubDate>Sun, 23 Aug 2026 19:36:07 +0530</pubDate>
            <description><![CDATA[&lt;p&gt;ಮಂಡ್ಯದಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿನ ನಂತರ ಮನೆಯನ್ನು ಪರಿಶೀಲಿಸಿದಾಗ, ಭಿಕ್ಷೆಯಿಂದ ಸಂಗ್ರಹಿಸಿದ್ದ ಲಕ್ಷ ಲಕ್ಷ ಕಂತೆ-ಕಂತೆ ನಗದು ಹಣ ಪತ್ತೆಯಾಗಿದೆ. ಈ ಹಣವನ್ನು ಸಂಬಂಧಿಕರು ಹಂಚಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qecpe03n37v960a8bx47r8,imgname-mandya-begger-lady-amount-1787493243328.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯದಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿನ ನಂತರ ಮನೆಯನ್ನು ಪರಿಶೀಲಿಸಿದಾಗ, ಭಿಕ್ಷೆಯಿಂದ ಸಂಗ್ರಹಿಸಿದ್ದ ಲಕ್ಷ ಲಕ್ಷ ಕಂತೆ-ಕಂತೆ ನಗದು ಹಣ ಪತ್ತೆಯಾಗಿದೆ. ಈ ಹಣವನ್ನು ಸಂಬಂಧಿಕರು ಹಂಚಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಮಂಡ್ಯ (ಆ.23): ಸಿ&lt;/strong&gt;ಕ್ಕರೆ ಊಟ, ಇಲ್ಲದಿದ್ದರೆ ಉಪವಾಸ... ಊರೂರು ಅಲೆದು ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಬಳಿಕ ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಹಣ ಪತ್ತೆಯಾಗಿರುವ ಅಚ್ಚರಿಯ ಘಟನೆ ಮಂಡ್ಯ ನಗರದಲ್ಲಿ ಬೆಳಕಿಗೆ ಬಂದಿದೆ. ಬದುಕಿದ್ದಾಗ ಕಣ್ಣೆತ್ತಿಯೂ ನೋಡದ ಸಂಬಂಧಿಕರು, ಸಾವಿನ ನಂತರ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಹಂಚಿಕೊಂಡಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿಯಾಗಿದ್ದ ನೂರ್ (ಹೆಸರು) ಎಂಬ ವೃದ್ಧೆ, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಸರೆ ಇಲ್ಲದೆ ಹಲವು ವರ್ಷಗಳಿಂದ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ (ಗುರುವಾರ) ತಮ್ಮ ಪುಟ್ಟ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ವೃದ್ಧೆ ಮೃತಪಟ್ಟ ಸುದ್ದಿ ತಿಳಿದ ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.&lt;/p&gt;&lt;img&gt;&lt;p&gt;ಅಂತ್ಯಸಂಸ್ಕಾರ ಮುಗಿದ ನಂತರ ಸಂಬಂಧಿಕರು ಹಾಗೂ ಸ್ಥಳೀಯ ಮುಖಂಡರು ವೃದ್ಧೆ ವಾಸವಿದ್ದ ಮನೆಯನ್ನು ಪರಿಶೀಲಿಸಲು ತೆರಳಿದ್ದಾರೆ. ಈ ವೇಳೆ ಮನೆಯ ಒಳಗಿದ್ದ ಮೂಟೆಗಳು, ಪೆಟ್ಟಿಗೆಗಳನ್ನು ತೆರೆದು ನೋಡಿದಾಗ ಎಲ್ಲರಿಗೂ ಶಾಕ್ ಕಾದಿತ್ತು. ಮನೆಯ ಮೂಲೆ ಮೂಲೆಗಳಲ್ಲಿ ಕಂತೆ ಕಂತೆ ನೋಟುಗಳು ಹಾಗೂ ನಾಣ್ಯಗಳ ಮೂಟೆಗಳು ಪತ್ತೆಯಾಗಿದ್ದವು. ಹಲವು ವರ್ಷಗಳಿಂದ ತನಗೆ ಭಿಕ್ಷೆಯಲ್ಲಿ ಬಂದ ಹಣವನ್ನು ಆ ವೃದ್ಧೆ ಖರ್ಚು ಮಾಡದೆ ಹಾಗೆಯೇ ಕೂಡಿಟ್ಟಿದ್ದರು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಕುಳಿತು ನಾಣ್ಯಗಳು ಮತ್ತು ನೋಟುಗಳನ್ನು ಎಣಿಕೆ ಮಾಡಲು ಆರಂಭಿಸಿದ್ದು, ಎಣಿಕೆಯ ನಂತರ ಒಟ್ಟು ಮೊತ್ತ ₹8 ಲಕ್ಷಕ್ಕೂ ಅಧಿಕ ಇರುವುದು ದೃಢಪಟ್ಟಿದೆ. ಬಳಿಕ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಮಾತುಕತೆ ನಡೆಸಿ, ಆ ಹಣವನ್ನು ವೃದ್ಧೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. 'ವೃದ್ಧೆ ಬದುಕಿದ್ದಾಗ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಬೀದಿ ಬೀದಿ ಅಲೆದಾಗ ಯಾವೊಬ್ಬ ಸಂಬಂಧಿಯೂ ಸಹಾಯಕ್ಕೆ ಬರಲಿಲ್ಲ. ಆದರೆ ಆಕೆ ಸತ್ತ ಮೇಲೆ ಆಕೆಯ ಭಿಕ್ಷಾಟನೆಯ ಕಷ್ಟದ ಹಣವನ್ನು ಮುಲಾಜಿಲ್ಲದೆ ಹಂಚಿಕೊಂಡಿದ್ದಾರೆ' ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆ ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/viral/mandya-elderly-beggar-woman-noor-death-8-lakh-rupees-cash-found-guttalu-ucitygt"/>
        </item>
        <item>
            <title><![CDATA[ವರಮಹಾಲಕ್ಷ್ಮಿ ಸಂಭ್ರಮ: ₹3 ಲಕ್ಷ ಮೌಲ್ಯದ ನೋಟುಗಳ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಿ!]]></title>
            <link>https://kannada.asianetnews.com/karnataka-districts/srirangapatna-chamundeshwari-temple-decorated-with-notes-for-varamahalakshmi-san/articleshow-v31wvod</link>
            <guid isPermaLink="true">https://kannada.asianetnews.com/karnataka-districts/srirangapatna-chamundeshwari-temple-decorated-with-notes-for-varamahalakshmi-san/articleshow-v31wvod</guid>
            <pubDate>Fri, 21 Aug 2026 20:27:08 +0530</pubDate>
            <description><![CDATA[ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯವನ್ನು ಸುಮಾರು ₹3 ಲಕ್ಷ ಮೌಲ್ಯದ ನೂತನ ನೋಟುಗಳು ಮತ್ತು ನಾಣ್ಯಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಈ 'ಧನಲಕ್ಷ್ಮಿ' ಸ್ವರೂಪದ ದೇವಿಯ ದರ್ಶನ ಪಡೆಯಲು ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0jd3fvsk09m1q1axd0wzm45,imgname-mandya-srirangpattana-1787324120953.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀರಂಗಪಟ್ಟಣ (ಮಂಡ್ಯ)&lt;/strong&gt;: ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅಪರೂಪದ ಹಾಗೂ ಶೋಭಾಯಮಾನವಾದ ಧನಲಕ್ಷ್ಮಿ ಅಲಂಕಾರ ಭಕ್ತಾದಿಗಳನ್ನು ಆಕರ್ಷಿಸಿದೆ. ಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದ ಗರ್ಭಗುಡಿಯನ್ನು ಸುಮಾರು ₹3 ಲಕ್ಷ ಮೌಲ್ಯದ ನೂತನ ನೋಟುಗಳು ಮತ್ತು ನಾಣ್ಯಗಳಿಂದ ವಿಶೇಷವಾಗಿ ಸಿಂಗರಿಸಲಾಗಿದ್ದು, ನೋಟುಗಳ ನಡುವೆ ಕಂಗೊಳಿಸುತ್ತಿರುವ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾಗಿದ್ದಾರೆ.&lt;/p&gt;&lt;p&gt;ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಮಧ್ಯರಾತ್ರಿಯಿಂದಲೇ ವೈವಿಧ್ಯಮಯ ಅಲಂಕಾರಿಕ ಕೈಂಕರ್ಯಗಳು ಆರಂಭಗೊಂಡಿದ್ದವು. ದೇವಸ್ಥಾನದ ಒಳ ಪ್ರಾಕಾರದ ನಾಲ್ಕೂ ಮೂಲೆಗಳು, ಪ್ರಭಾವಳಿ ಹಾಗೂ ಗರ್ಭಗುಡಿಯನ್ನು ₹10, ₹20, ₹50, ₹100, ₹200 ಹಾಗೂ ₹500 ಮುಖಬೆಲೆಯ ಹೊಸ ನೋಟುಗಳು ಮತ್ತು ಹೊಳೆಯುವ ನಾಣ್ಯಗಳಿಂದ ಮನಮೋಹಕವಾಗಿ ವಿನ್ಯಾಸಗೊಳಿಸಲಾಗಿತ್ತು. ಗರ್ಭಗುಡಿಯ ಮೇಲ್ಭಾಗದಲ್ಲಿ ನೋಟುಗಳನ್ನು ಸುರುಳಿಯಾಕಾರದಲ್ಲಿ ಜೋಡಿಸಿ ತೋರಣದಂತೆ ತೂಗುಬಿಟ್ಟಿದ್ದು ದೇವಾಲಯದ ದಿವ್ಯತೆಗೆ ಮತ್ತಷ್ಟು ಮೆರುಗು ನೀಡಿತ್ತು.&lt;/p&gt;&lt;p&gt;ದೇವಾಲಯದ ಅರ್ಚಕ ವೃಂದದವರು ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಹೊಸ ಸೀರೆ, ರತ್ನಖಚಿತ ಆಭರಣಗಳನ್ನು ತೊಡಿಸಿ, ಮಲ್ಲಿಗೆ ಸೇರಿದಂತೆ ತರಹೇವಾರಿ ಸುಗಂಧಿತ ಪುಷ್ಪಗಳು ಹಾಗೂ ಹಣ್ಣುಗಳಿಂದ 'ಧನಲಕ್ಷ್ಮಿ' ಸ್ವರೂಪದಲ್ಲಿ ದೇವಿಯನ್ನು ಕಣ್ಣುತುಂಬಿಸುವಂತೆ ಅಲಂಕರಿಸಿದ್ದರು.&lt;/p&gt;&lt;p&gt;ಬೆಳಗಿನ ಜಾವದಿಂದಲೇ ದೇವಿಗೆ ವಿಶೇಷ ಪೂಜೆ, ಹೋಮ-ಹವನಗಳು, ಮಂತ್ರೋಪದೇಶ ಹಾಗೂ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ನೆರವೇರಿದವು. ನೂತನ ನೋಟುಗಳ ಮಧ್ಯೆ ಕಂಗೊಳಿಸುತ್ತಿದ್ದ ದೇವಿಯ ದರ್ಶನ ಪಡೆಯಲು ಬೆಳಗಿನ ಜಾವದಿಂದಲೇ ಮಂಡ್ಯ ಮಾತ್ರವಲ್ಲದೆ ನಾಡಿನ ವಿವಿಧ ಮೂಲೆಗಳಿಂದ ಭಕ್ತರ ದಂಡೇ ದೇವಾಲಯಕ್ಕೆ ಹರಿದುಬಂದಿತ್ತು. ವರಮಹಾಲಕ್ಷ್ಮಿ ಹಬ್ಬದ ದಿನದಂದು ನಡೆದ ಈ ವಿಶೇಷ 'ಧನಲಕ್ಷ್ಮಿ' ಪೂಜೆ ಮತ್ತು ಅಲಂಕಾರ ಸಾರ್ವಜನಿಕರ ಹಾಗೂ ಶ್ರದ್ಧಾಳುಗಳ ಗಮನ ಸೆಳೆದ ಮುಖ್ಯ ಆಕರ್ಷಣೆಯಾಯಿತು.&lt;/p&gt;]]></content:encoded>
            <category>mandya</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/srirangapatna-chamundeshwari-temple-decorated-with-notes-for-varamahalakshmi-san/articleshow-v31wvod"/>
        </item>
        <item>
            <title><![CDATA[Mandya: ಗರ್ಲ್‌ಫ್ರೆಂಡ್‌ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಕೈದಿ; ಕರ್ತವ್ಯ ಲೋಪ ಹಿನ್ನೆಲೆ ಪೊಲೀಸ್ ಪೇದೆ ಸಸ್ಪೆಂಡ್]]></title>
            <link>https://kannada.asianetnews.com/karnataka-districts/undertrial-caught-with-girlfriend-in-hospital-police-constable-suspended-for-dereliction-of-duty-in-mandya-sns/articleshow-xhvask7</link>
            <guid isPermaLink="true">https://kannada.asianetnews.com/karnataka-districts/undertrial-caught-with-girlfriend-in-hospital-police-constable-suspended-for-dereliction-of-duty-in-mandya-sns/articleshow-xhvask7</guid>
            <pubDate>Wed, 26 Aug 2026 14:11:08 +0530</pubDate>
            <description><![CDATA[ಬೆನ್ನು ನೋವಿನ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಮಹಮದ್ ಹುಸೇನ್, ತನ್ನ ಗೆಳತಿಯೊಂದಿಗೆ ವಿಶೇಷ ಕೊಠಡಿಯಲ್ಲಿ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ. ನ್ಯಾಯಾಧೀಶರ ದಿಢೀರ್ ಭೇಟಿಯಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ykh5c59a3sn659pck8m3mm,imgname-mandya-hospital-1787733513605.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಜೈಲಿನಲ್ಲಿ ಇರಬೇಕಿದ್ದ ವಿಚಾರಣಾಧೀನ ಕೈದಿಗೆ ಆಸ್ಪತ್ರೆಯಲ್ಲಿ ರಾಜ್ಯಾತಿಥ್ಯ ನೀಡಿದ ಪ್ರಕರಣಕ್ಕೆ ಸಂಧಿಸಿದಂತೆ ಪೊಲೀಸ್ ಪೇದೆ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಚಂದ್ರು ಅಮಾನತುಗೊಂಡಿದ್ದು, ಕರ್ತವ್ಯ ಲೋಪ ಹಿನ್ನಲೆ ಮಂಡ್ಯ ಎಸ್&zwnj;ಪಿ ಡಾ.ಶೋಭಾರಾಣಿ ಅಮಾನತು ಆದೇಶ ನೀಡಿದ್ದಾರೆ.&lt;/p&gt;&lt;p&gt;ಆರೋಪಿ ಮಹಮದ್ ಹುಸೇನ್, ಬೆನ್ನು ನೋವು ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದನಂತೆ. ಈ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿ ವಿಶೇಷ ಕೊಠಡಿಯಲ್ಲಿ ಗೆಳತಿಯೊಂದಿಗೆ ಏಕಾಂತದಲ್ಲಿ ಸಿಕ್ಕಿ ಬಿದ್ದಿದ್ದ. ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ಭೇಟಿ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ನ್ಯಾಯಾಧೀಶಕರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡು ವರದಿ ನೀಡುವಂತೆ ಸೂಚನೆ ನೀಡಿದ್ದರು.&lt;/p&gt;&lt;p&gt;ಇದರ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಕರ್ತವ್ಯಲೋಪದ ಬಗ್ಗೆ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಇಡೀ ಪ್ರಕರಣದ ಕುರಿತು ಡಿಐಜಿ ಕಾರಾಗೃಹ (ದಕ್ಷಿಣ) ದಿವ್ಯಾಶ್ರೀ ನೇತೃತ್ವದಲ್ಲಿ ತನಿಖೆಗೆ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದರು.&lt;/p&gt;&lt;h2&gt;ಲೋಕಾಯುಕ್ತ ಪೊಲೀಸರಿಂದ ಆರೋಪಿ ಅರೆಸ್ಟ್&lt;/h2&gt;&lt;p&gt;ಜಿಲ್ಲಾ ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ್ ನೇತೃತ್ವದ ತಂಡದಿಂದ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಆರೋಪಿ ಜೊತೆಗೆ ಯುವತಿ ಇರುವುದು ಕಂಡು ಬಂದಿತ್ತು. ಲೋಕಾಯುಕ್ತ ಪೊಲೀಸರಿಂದ ಅರೆಸ್ಟ್ ಆಗಿದ್ದ ಶ್ರೀರಂಗಪಟ್ಟಣ ADLR ಮಹಮದ್ ಹುಸೇನ್&zwnj; ಎಂಬ ಆರೋಪಿ ಜೈಲಿನಲ್ಲಿರಬೇಕಿತ್ತು. ಆದರೆ ಹುಸೇನ್ ನನ್ನು ಜೈಲಾಧಿಕಾರಿಗಳು ಮಿಮ್ಸ್&zwnj;ಗೆ ದಾಖಲು ಮಾಡಿ, ವಿಶೇಷ ರೂಪ ವ್ಯವಸ್ಥೆಯನ್ನು ಮಾಡಿದ್ದರು. ನ್ಯಾಯಾಧೀಶರ ಪರಿಶೀಲನೆ ವೇಳೆ ಮಿಮ್ಸ್ ಆಸ್ಪತ್ರೆಯಲ್ಲಿ ಸ್ಪೆಷಲ್ ರೂಮ್&zwnj;ನಲ್ಲಿ ಅನಧಿಕೃತ ಚಿಕಿತ್ಸೆ ನೀಡುತ್ತಿರುವುದು ಖಚಿತವಾಗಿತ್ತು.&lt;/p&gt;&lt;h2&gt;ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರು ಆಸ್ಪತ್ರೆಗೆ ದಾಖಲು&lt;/h2&gt;&lt;p&gt;ಆರೋಪಿಯನ್ನು ಕಂಡು ವೈದ್ಯಾಧಿಕಾರಿಗಳಿಗೆ ನ್ಯಾಯಾಧಶೀರು ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿದ್ದರು. ಈ ವೇಳೆ ಆತನಿಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದರಂತೆ. ಅಲ್ಲದೇ, ಇದೇ ವೇಳೆ ಆರೋಪಿ ಇದ್ದ ಸ್ಪೆಷಲ್ ರೂಮ್&zwnj;ನಲ್ಲಿ ಮಹಿಳೆಗೆ ಪ್ರಶ್ನಿಸಿದರೆ, ತಾನು ಆರೋಪಿಯ ಗೆಳತಿ ಆಕೆ ಹೇಳಿದ್ದಳಂತೆ.&lt;/p&gt;]]></content:encoded>
            <category>mandya</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/undertrial-caught-with-girlfriend-in-hospital-police-constable-suspended-for-dereliction-of-duty-in-mandya-sns/articleshow-xhvask7"/>
        </item>
        <item>
            <title><![CDATA[ಮಂಡ್ಯ: ಸರ್ಕಾರಿ ಆಸ್ಪತ್ರೆಗೆ ವೈದ್ಯರ ನಿಯೋಜನೆ ಮಾಡಿ ಅಂದ್ರೆ, ರೀಲ್ಸ್ ರಾಣಿಯರನ್ನ ಕಳಿಸಿ ಡ್ಯಾನ್ಸ್ ಮಾಡಿಸಿದ ಶಾಸಕ!]]></title>
            <link>https://kannada.asianetnews.com/karnataka-districts/mandya-outrage-srirangapatna-congress-mla-ramesha-bandisiddegowda-misuses-govt-hospital-for-birthday-play-gdp/articleshow-xw1uvcw</link>
            <guid isPermaLink="true">https://kannada.asianetnews.com/karnataka-districts/mandya-outrage-srirangapatna-congress-mla-ramesha-bandisiddegowda-misuses-govt-hospital-for-birthday-play-gdp/articleshow-xw1uvcw</guid>
            <pubDate>Fri, 21 Aug 2026 11:44:53 +0530</pubDate>
            <description><![CDATA[ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ತಮ್ಮ ತಾಯಿಯ ಜನ್ಮದಿನದ ಕಾರ್ಯಕ್ರಮಕ್ಕಾಗಿ ಸರ್ಕಾರಿ ಆಸ್ಪತ್ರೆಯನ್ನು ಮೇಕಪ್ ರೂಂ ಆಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಲಾವಿದರು ಆಸ್ಪತ್ರೆಯಲ್ಲೇ ರೀಲ್ಸ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಮೂಲ ಸೌಕರ್ಯಗಳಿಲ್ಲದೆ ರೋಗಿಗಳು ಪರದಾಡುತ್ತಿರುವಾಗ ಶಾಸಕರ ಈ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0hf5ze3waysk3rjrrg25zbe,imgname-ramesha-bandisiddegowda-1787292745155.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ:&lt;/strong&gt; ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ನಡೆ ಇದೀಗ ಭಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ, ತಮ್ಮ ತಾಯಿಯ ಜನ್ಮದಿನದ ನೆಪದಲ್ಲಿ ಶಾಸಕರು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನದ ವೇಳೆ ಸರ್ಕಾರಿ ಆಸ್ಪತ್ರೆಯನ್ನು ಅಸಭ್ಯವಾಗಿ ದುರ್ಬಳಕೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಸರ್ಕಾರಿ ಆಸ್ಪತ್ರೆಯೇ ಮೇಕಪ್ ರೂಮ್, ರೀಲ್ಸ್ ವೇದಿಕೆ!&lt;/h2&gt;&lt;p&gt;ನಾಮಕಾವಸ್ಥೆಗೆ ಆಸ್ಪತ್ರೆಯಲ್ಲಿದ್ದ ಕೊಠಡಿಗಳನ್ನು ನಾಟಕ ಅಭಿನಯಿಸಲು ಬಂದಿದ್ದ ಮಹಿಳಾ ಪಾತ್ರಧಾರಿಗಳಿಗೆ 'ಮೇಕಪ್ ಕೊಠಡಿ'ಗಳನ್ನಾಗಿ ಪರಿವರ್ತಿಸಲಾಗಿತ್ತು. ಅಷ್ಟಕ್ಕೇ ನಿಲ್ಲದೆ, ಈ ಮಹಿಳಾ ಕಲಾವಿದರು ಸಾರ್ವಜನಿಕ ಆರೋಗ್ಯ ಕೇಂದ್ರದ ಆವರಣ ಮತ್ತು ಕೊಠಡಿಗಳಲ್ಲೇ ಅಸಭ್ಯವಾಗಿ ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡಿ, ರೀಲ್ಸ್ ಚಿತ್ರೀಕರಿಸಿದ್ದಾರೆ. ಪ್ರಸ್ತುತ ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ನೆಟ್ಟಿಗರು ಶಾಸಕರ ಕಾರ್ಯಾಚರಣೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.&lt;/p&gt;&lt;h2&gt;ವೈದ್ಯರಿಲ್ಲ, ಸೌಲಭ್ಯಗಳಿಲ್ಲ; ರೋಗಿಗಳಿಗೆ ನಿತ್ಯ ನರಕಯಾತನೆ&lt;/h2&gt;&lt;p&gt;ಒಂದೆಡೆ ಶ್ರೀರಂಗಪಟ್ಟಣದ ಈ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ನೂರಾರು ಬಡ ರೋಗಿಗಳಿಗೆ ಮೂಲಭೂತ ಸೌಕರ್ಯಗಳೇ ಸಿಗುತ್ತಿಲ್ಲ. ನುರಿತ ವೈದ್ಯರು ಮತ್ತು ಅಗತ್ಯ ಸಿಬ್ಬಂದಿಯ ಅಭಾವದಿಂದಾಗಿ ರೋಗಿಗಳು ನಿತ್ಯ ಪರದಾಡುವಂತಾಗಿದೆ. ಇರುವ ವೈದ್ಯರು ಸಹ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಾರದೆ ಅಸಡ್ಡೆ ತೋರುತ್ತಿದ್ದಾರೆ ಎಂಬ ಗಂಭೀರ ಆರೋಪಗಳಿದ್ದು, ಸರಿಯಾದ ವೈದ್ಯಕೀಯ ನೆರವು ಸಿಗದೆ ಸಾರ್ವಜನಿಕರು ಆಸ್ಪತ್ರೆಯ ಆಡಳಿತ ಮಂಡಳಿಗೆ ಶಾಪ ಹಾಕುತ್ತಿದ್ದಾರೆ.&lt;/p&gt;&lt;h2&gt;ಖಾಸಗಿ ಕಾರ್ಯಕ್ರಮಕ್ಕೆ ಅತಿ ಉತ್ಸಾಹ&lt;/h2&gt;&lt;p&gt;ಬಡ ರೋಗಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು, ಆಸ್ಪತ್ರೆಯ ತೊಂದರೆಗಳನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಳ್ಳದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು, ತಮ್ಮ ವೈಯಕ್ತಿಕ ಮತ್ತು ಕುಟುಂಬದ ಕಾರ್ಯಕ್ರಮಕ್ಕಾಗಿ ಸರ್ಕಾರಿ ಆಸ್ತಿಯನ್ನು ಈ ರೀತಿ ಅಜಾಗರೂಕತೆಯಿಂದ ಬಳಸಿಕೊಂಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬಡವರ ಆರೋಗ್ಯ ರಕ್ಷಣೆ ಮಾಡಬೇಕಾದ ಆಸ್ಪತ್ರೆಯನ್ನು ಶಾಸಕರು ತಮ್ಮ ತಾಯಿಯ ಹುಟ್ಟುಹಬ್ಬದ ಮೋಜು-ಮಸ್ತಿಗೆ ಮತ್ತು ಮೇಕಪ್ ರೂಮ್ ಆಗಿ ಬಳಸಿರುವುದು ಎಷ್ಟರ ಮಟ್ಟಿಗೆ ಸರಿ? ಇದೇನಾ ನಿಮ್ಮ ಜವಾಬ್ದಾರಿಯುತ ಕಾರ್ಯವೈಖರಿ ಶಾಸಕರೇ?&quot; ಎಂದು ಮಂಡ್ಯ ಹಾಗೂ ಶ್ರೀರಂಗಪಟ್ಟಣದ ಜನತೆ ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ. ಘಟನೆ ಸಂಬಂಧಿಸಿದಂತೆ ವೈರಲ್ ಆಗಿರುವ ವೀಡಿಯೊಗಳು ಕಾಂಗ್ರೆಸ್ ಶಾಸಕರ ನಾಯಕತ್ವದ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದ್ದು, ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mandya-outrage-srirangapatna-congress-mla-ramesha-bandisiddegowda-misuses-govt-hospital-for-birthday-play-gdp/articleshow-xw1uvcw"/>
        </item>
        <item>
            <title><![CDATA[ಮಂಡ್ಯದಲ್ಲಿ ಬೆಲ್ಲ ಕ್ವಿಂಟಾಲ್‌ಗೆ ₹6740ಗೆ ಹರಾಜು: ಐತಿಹಾಸಿಕ ದಾಖಲೆ, ದರ ಏರಿಕೆಗೆ ಕಾರಣ ಏನು?]]></title>
            <link>https://kannada.asianetnews.com/karnataka-districts/jaggery-auctioned-at-rs-6740-per-quintal-in-mandya-historic-record-what-is-the-reason-for-the-price-hike-mrq/articleshow-ztozuq9</link>
            <guid isPermaLink="true">https://kannada.asianetnews.com/karnataka-districts/jaggery-auctioned-at-rs-6740-per-quintal-in-mandya-historic-record-what-is-the-reason-for-the-price-hike-mrq/articleshow-ztozuq9</guid>
            <pubDate>Sun, 23 Aug 2026 08:43:38 +0530</pubDate>
            <description><![CDATA[&lt;p&gt;ಮಂಡ್ಯದಲ್ಲಿ ಬೆಲ್ಲದ ಬೆಲೆ ಕ್ವಿಂಟಾಲ್&zwnj;ಗೆ ₹6740 ತಲುಪಿ ಐತಿಹಾಸಿಕ ದಾಖಲೆ ಬರೆದಿದೆ. ಕಬ್ಬಿನ ಪೂರೈಕೆ ಕೊರತೆ, ಕೂಲಿಯಾಳುಗಳ ಅಭಾವ, ಮತ್ತು ಸಕ್ಕರೆ ಬೆಲೆ ಏರಿಕೆಯಂತಹ ಕಾರಣಗಳಿಂದ ಉತ್ಪಾದನೆ ಕುಸಿದಿದ್ದು, ಇದು ಬೆಲ್ಲದ ದರದಲ್ಲಿ ಏರಿಕೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0m2a8m6jh6s1mrv88hvk9n2,imgname-----------------------2026-08-22t115456.071-1787379917446.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ ಮಂಜುನಾಥ&lt;/strong&gt;&lt;/p&gt;&lt;p&gt;&lt;strong&gt;ಮಂಡ್ಯ: &lt;/strong&gt;ಕಬ್ಬಿನ ಪೂರೈಕೆ ಕೊರತೆ, ಕೂಲಿಯಾಳುಗಳ ಅಭಾವ, ಸಕ್ಕರೆ ಬೆಲೆ ಏರಿಕೆಯಿಂದಾಗಿ ಬೆಲ್ಲದ ಉತ್ಪಾದನೆ ಕುಸಿತ ಕಂಡಿದ್ದು ಪರಿಣಾಮ ಕ್ವಿಂಟಾಲ್&zwnj; ಬೆಲ್ಲದ ದರ ₹6500- 6740 ರು.ಗೆ ಏರಿಕೆಯಾಗಿದೆ. ಈ ಮೂಲಕ ಹಿಂದೆಂದೂ ಕಾಣದಷ್ಟು ಐತಿಹಾಸಿಕ ದಾಖಲೆ ಬೆಲೆಯನ್ನು ಕಂಡಿದೆ.&lt;/p&gt;&lt;p&gt;ಪ್ರತಿ ಕ್ವಿಂಟಾಲ್ ಬೆಲ್ಲದ ಬೆಲೆ ಸಾಮಾನ್ಯವಾಗಿ ₹4,500 ರಿಂದ ₹4700 ರವರೆಗೆ ಇರುತ್ತಿತ್ತು. ಆದರೆ, ಮಂಡ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಬೆಲ್ಲದ ಬೆಲೆ ₹6500 ರಿಂದ ₹6740ಕ್ಕೆ ಏರಿಕೆಯಾಗಿದೆ. ಕುರಿಕಾಲಚ್ಚು ಬೆಲ್ಲ ಪ್ರತಿ ಕ್ವಿಂಟಾಲ್&zwnj;ಗೆ ₹5500 ನಿಂದ ₹6000 ವರೆಗೆ ಇದ್ದರೆ, ಅಚ್ಚು ಬೆಲ್ಲ ಕ್ವಿಂಟಾಲ್&zwnj;ಗೆ ₹5300 ನಿಂದ ₹5800 ವರೆಗೆ ಮಾರಾಟವಾಗುತ್ತಿದೆ. ಮೊದಲು ಮಂಡ್ಯ ಬೆಲ್ಲದ ಮಾರುಕಟ್ಟೆಯಿಂದ ನಿತ್ಯ 10 ರಿಂದ 12 ಲಾರಿಗಳಲ್ಲಿ ಬೆಲ್ಲ ಹೊರ ರಾಜ್ಯಗಳಿಗೆ ಸಾಗಣೆಯಾಗುತ್ತಿತ್ತು. ಆದರೆ, ಈಗ ಅರ್ಧದಷ್ಟು ಬೆಲ್ಲವೂ ಸಾಗಣೆಯಾಗದಿರುವುದರಿಂದ ಬೆಲ್ಲದ ಬೆಲೆ ದುಬಾರಿಯಾಗುವುದಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಕಬ್ಬಿನ ಪೂರೈಕೆ ಕೊರತೆ&lt;/strong&gt;&lt;/h2&gt;&lt;p&gt;ಕೂಲಿಯಾಳುಗಳ ಕೊರತೆ ಪರಿಣಾಮ ಜಿಲ್ಲೆಯಲ್ಲಿರುವ ಆಲೆಮನೆಗಳಿಗೆ ಕಬ್ಬಿನ ಪೂರೈಕೆ ಕೊರತೆ ಎದುರಾಗಿದೆ. ಸ್ಥಳೀಯವಾಗಿ ಕಬ್ಬು ಕಡಿಯುವುದಕ್ಕೆ ಜನರಿಲ್ಲ. ಉತ್ತರ ಕರ್ನಾಟಕ ಅಥವಾ ಹೊರರಾಜ್ಯಗಳಿಂದ ಕೂಲಿಯಾಳುಗಳನ್ನು ಕರೆ ತರಬೇಕಿದೆ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಆಲೆಮನೆಗಳಿಗೆ ಪೂರೈಕೆಯಾಗದಿರುವುದು ಬೆಲ್ಲ ಉತ್ಪಾದನೆ ಕುಸಿತಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.&lt;/p&gt;&lt;p&gt;ಇದರ ಜತೆಗೆ ಆಲೆಮನೆಗಳಿಗೆ ಬೆಲ್ಲ ತಯಾರು ಮಾಡುವ ಕೂಲಿಯಾಳುಗಳು ಸಿಗುತ್ತಿಲ್ಲ. ಬಿಹಾರದಿಂದ ಕೆಲಸಕ್ಕೆ ಬರುತ್ತಿದ್ದರು. ಈಗ ಅವರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನಲಾಗಿದೆ. ಇದರಿಂದ ಹಲವು ಆಲೆಮನೆಗಳು ಸ್ಥಗಿತಗೊಂಡಿವೆ ಎನ್ನಲಾಗುತ್ತಿದೆ.&lt;/p&gt;&lt;h3&gt;&lt;strong&gt;ಸಕ್ಕರೆ ಬೆಲೆ ಹೆಚ್ಚಳ&lt;/strong&gt;&lt;/h3&gt;&lt;p&gt;ಸಕ್ಕರೆ ಬೆಲೆ ಹೆಚ್ಚಳವಾಗಿರುವುದು ಕೂಡ ಬೆಲ್ಲ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಹಿಂದೆ ಸಕ್ಕರೆ ಬೆಲೆ ಪ್ರತಿ ಕೆಜಿಗೆ ₹40 ರಿಂದ ₹42ರ ವರೆಗೆ ಇತ್ತು. ಈಗ ₹68 ರಿಂದ ₹72ರ ವರೆಗೆ ಏರಿಕೆಯಾಗಿದೆ. ಸಕ್ಕರೆ ಹಾಕಿ ಬೆಲ್ಲ ತಯಾರಿಸುವವರ ಸಂಖ್ಯೆ ಹೆಚ್ಚಾಗಿದ್ದು, ಸಕ್ಕರೆ ಬೆಲೆ ಹೆಚ್ಚಾದ ಕೂಡಲೇ ಸಕ್ಕರೆ ಹಾಕಿ ಬೆಲ್ಲ ತಯಾರಿಸುವವರ ಸಂಖ್ಯೆಯೂ ಕಡಿಮೆಯಾಯಿತು. ಇದರಿಂದ ಬೆಲ್ಲದ ಉತ್ಪಾದನೆ ಇಳಿಮುಖವಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಕ್ಕರೆ ನಾಡಲ್ಲಿ ಬೆಲ್ಲ 'ಬಂಗಾರ': ಮಂಡ್ಯ ಮಾರುಕಟ್ಟೆ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಬೆಲ್ಲದ ದರ!&lt;/strong&gt;&lt;/p&gt;&lt;p&gt;ಕೇಂದ್ರದ ಇ20 ಪೆಟ್ರೋಲ್&zwnj; ಪರಿಣಾಮ ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಒತ್ತು ಕೊಡದೆ ಎಥೆನಾಲ್ ಉತ್ಪಾದನೆಗೆ ಆದ್ಯತೆ ನೀಡಲಾರಂಭಿಸಿವೆ. ಇದರ ಪರಿಣಾಮ ಸಕ್ಕರೆ ಉತ್ಪಾದನೆ ಕುಸಿತಗೊಂಡು ಬೇಡಿಕೆ ಹೆಚ್ಚಿರುವುದರಿಂದ ಸಕ್ಕರೆ ಬೆಲೆಯಲ್ಲೂ ₹20 ರಿಂದ ₹30 ಹೆಚ್ಚಳವಾಗಲು ಕಾರಣವಾಗಿದೆ.&lt;/p&gt;&lt;p&gt;ಇದನ್ನೂ ಓದಿ:&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/jaggery-auctioned-at-rs-6740-per-quintal-in-mandya-historic-record-what-is-the-reason-for-the-price-hike-mrq/articleshow-ztozuq9"/>
        </item>
    </channel>
</rss>
