<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 22 Apr 2026 21:56:02 +0530</lastBuildDate>
        <atom:link href="https://kannada.asianetnews.com/rss/mandya" rel="self" type="application/rss+xml"/>
        <item>
            <title><![CDATA[PM  Modi to visit Karnataka: ಆದಿಚುಂಚನಗಿರಿಗೆ ಇಂದು ಮೋದಿ:  ಭೈರವೈಕ್ಯ ಮಂದಿರ ಲೋಕಾರ್ಪಣೆ]]></title>
            <link>https://kannada.asianetnews.com/state/pm-modi-in-adichunchanagiri-today-inauguration-sri-guru-bhyravykya-mandir-special-prayer-kalabhairaveshwar-rav/articleshow-442entb</link>
            <guid isPermaLink="true">https://kannada.asianetnews.com/state/pm-modi-in-adichunchanagiri-today-inauguration-sri-guru-bhyravykya-mandir-special-prayer-kalabhairaveshwar-rav/articleshow-442entb</guid>
            <pubDate>Wed, 15 Apr 2026 04:44:34 +0530</pubDate>
            <description><![CDATA[ಪ್ರಧಾನಿ ನರೇಂದ್ರ ಮೋದಿಯವರು ಆದಿಚುಂಚನಗಿರಿಯಲ್ಲಿ ಡಾ. ಬಾಲಗಂಗಾಧರನಾಥ ಶ್ರೀಗಳ ಶ್ರೀಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ದ್ರಾವಿಡ-ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾದ ಈ ಭವ್ಯ ಮಂದಿರದ ಉದ್ಘಾಟನಾ ಕಾರ್ಯಕ್ರಮ ಮತ್ತು ಅದರ ನಿರ್ಮಾಣದ ವಿಶೇಷತೆಗಳನ್ನು ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp73w54wj4wtmbgvwfp40jws,imgname-----------------------2026-04-15t043505.347-1776207926427.jpg" type="image/jpeg" height="390" width="690"/>
            <content:encoded><![CDATA[&lt;p&gt;- &lt;strong&gt;ನಾಗಮಂಗಲ (ಮಂಡ್ಯ) (ಏ.15) &lt;/strong&gt;ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆಗೆ ಸಕಲ ರೀತಿಯಲ್ಲೂ ಶ್ರೀಕ್ಷೇತ್ರ ಸಜ್ಜಾಗಿದೆ. ಬುಧವಾರ ಬೆಳಗ್ಗೆ 11.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ರೀಕ್ಷೇತ್ರದ ಡಾ। ಬಾಲಗಂಗಾಧರನಾಥ ಶ್ರೀಗಳ ಶ್ರೀಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಆಗಲಿದೆ.&lt;/p&gt;&lt;p&gt;1500 ವರ್ಷಗಳಿಗೂ ಮಿಗಿಲಾದ ಇತಿಹಾಸ ಹೊಂದಿರುವ ನಾಥ ಪರಂಪರೆಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ಆಗಿರುವ ಆದಿಚುಂಚನಗಿರಿ ಮಠಕ್ಕೆ ದೇಶದ ಪ್ರಧಾನಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ನಮೋ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಶ್ರೀಮಠ ಹಾಗೂ ಜಿಲ್ಲಾಡಳಿತ ಸಜ್ಜಾಗಿ ನಿಂತಿದೆ.&lt;/p&gt;&lt;h2&gt;ಬೆಳಗ್ಗೆ 11ಕ್ಕೆ ಶ್ರೀಕ್ಷೇತ್ರಕ್ಕೆ ಮೋದಿ:&lt;/h2&gt;&lt;p&gt;ಬುಧವಾರ ಬೆಳಗ್ಗೆ 7.15ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ವಿಶೇಷ ಸೇನಾ ಹೆಲಿಕಾಪ್ಟರ್&zwnj;ನಲ್ಲಿ ಬರಲಿರುವ ಪ್ರಧಾನಿ ಮೋದಿ ಅವರು 10.55ಕ್ಕೆ ಆದಿಚುಂಚನಗಿರಿ ಕ್ಷೇತ್ರದ ತಪೋವನದ ಆವರಣದಲ್ಲಿನ ಹೆಲಿಪ್ಯಾಡ್&zwnj;ಗೆ ಬಂದಿಳಿಯುವರು. ನಂತರ 1.5 ಕಿ.ಮೀ. ದೂರದವರೆಗೆ ವಿಶೇಷ ರಕ್ಷಣಾ ತಂಡದ (ಎಸ್&zwnj;ಪಿಜಿ) ಬಿಗಿ ಭದ್ರತೆಯಲ್ಲಿ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಬಂದು ಶ್ರೀಕ್ಷೇತ್ರದ ಕಾಲಭೈರವೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು 11.30ಕ್ಕೆ ಉದ್ಘಾಟಿಸಲಿದ್ದಾರೆ.&lt;/p&gt;&lt;p&gt;ಮಂದಿರ ಉದ್ಘಾಟನೆ ನಂತರ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಪಾದುಕೆಗೆ ನಮಸ್ಕರಿಸಿ ಪುತ್ಥಳಿ ಇರುವ ಭವ್ಯ ಧ್ಯಾನ ಮಂದಿರ ಹಾಗೂ ನೆಲಮಹಡಿಯಲ್ಲಿರುವ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದ ನಂತರ ಕ್ಷೇತ್ರದ ಅಧಿದೇವತೆ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರಾಧಿದೇವತೆಗಳ ದರ್ಶನಾಶೀರ್ವಾದ ಪಡೆದುಕೊಳ್ಳುವರು. ಬಳಿಕ ಶ್ರೀಕ್ಷೇತ್ರದ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.&lt;/p&gt;&lt;p&gt;ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಮಂಗಳವಾರ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್&zwnj;.ಅಶೋಕ್&zwnj; ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಜೊತೆ ಸಿದ್ಧತೆ ಪರಿಶೀಲನೆ ನಡೆಸಿದರು.&lt;/p&gt;&lt;p&gt;--&lt;/p&gt;&lt;h3&gt;ಮಂದಿರದ ವಿಶೇಷತೆ&lt;/h3&gt;&lt;p&gt;ಡಾ। ಬಾಲಗಂಗಾಧರನಾಥ ಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂದಿರ ಒಡಿಶಾದ ಸೂರ್ಯದೇಗುಲದ ಮಾದರಿ ನಿರ್ಮಿಸಲಾಗಿದೆ. ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗ ವಾಸ್ತು ಶಿಲ್ಪದ ಸಮ್ಮಿಶ್ರಣವಾಗಿದೆ. ಶ್ರೀಕ್ಷೇತ್ರದಲ್ಲಿ ಭೈರವೈಕ್ಯ ಶ್ರೀಗಳ ಆತ್ಮಜ್ಯೋತಿ ಸದಾ ಕಾಲ ಬೆಳಗುವಂತೆ ₹80 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ.&lt;/p&gt;&lt;p&gt;2013ರ ಜ.13ರಂದು ಚುಂಚಶ್ರೀಗಳು ಭೌತಿಕ ದೇಹ ತ್ಯಜಿಸಿದ್ದರು. ಅಂತ್ಯ ಸಂಸ್ಕಾರವನ್ನು ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಉತ್ತರ ಭಾಗದಲ್ಲಿ ಅದಾಗಲೇ ನಿರ್ಮಿತವಾಗಿದ್ದ ಮಂಗಳ ಮಂಟಪದಲ್ಲಿ ನೆರವೇರಿಸಲಾಗಿತ್ತು. 2016ರ ಮೇ 9ರಂದು ಶ್ರೀ ಗುರು ಭೈರವೈಕ್ಯ ಮಂದಿರದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.&lt;/p&gt;&lt;p&gt;ಸುಮಾರು 250ಕ್ಕೂ ಹೆಚ್ಚು ಮಂದಿ ನುರಿತ ಶಿಲ್ಪಿಗಳು 10 ವರ್ಷ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಎರಡು ಅಂತಸ್ತುಳ್ಳ ಗುರುಭೈರವೈಕ್ಯ ಮಂದಿರವನ್ನು ಸಂಪೂರ್ಣವಾಗಿ ಕೆಂಪು ಗ್ರಾನೈಟ್ ಶಿಲೆ, ವಿವಿಧ ಗ್ರಾನೈಟ್ ಶಿಲೆಗಳಿಂದ ನಿರ್ಮಿಸಲಾಗಿದೆ.&lt;/p&gt;&lt;p&gt;ಸ್ಥೂಲ ಶರೀರ, ಸೂಕ್ಷ್ಮ ಶರೀರ ಹಾಗೂ ಕಾರಣ ಶರೀರದ ಮಾದರಿಯಲ್ಲಿ ಮಂದಿರ ನಿರ್ಮಾಣವಾಗಿದೆ. ಗುರುಮಂದಿರವು ಉತ್ತರ ದಕ್ಷಿಣಕ್ಕೆ 175 ಚದರ ಅಡಿ, ಪೂರ್ವ ಪಶ್ಚಿಮಕ್ಕೆ 150 ಚದರ ಅಡಿ ಇದ್ದು 26,250 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. ಮಂದಿರದ ನೆಲಮಹಡಿಯಲ್ಲಿ ಭೈರವೈಕ್ಯಶ್ರೀಗಳ ಸನ್ನಿಧಿ, ಮಂದಿರದ ಒಳಭಾಗ ಚಿನ್ನ ಮತ್ತು ಬೆಳ್ಳಿಯ ಕವಚದ ಹೊದಿಕೆಯನ್ನು ಹೊಂದಿದೆ. ಶ್ರೀಸನ್ನಿಧಿಯ ಸುತ್ತಲೂ ಪ್ರದಕ್ಷಿಣಾ ಸ್ಥಳವಿದೆ. ನೆಲಮಹಡಿಯ ಮೇಲಿನ ಅಂತಸ್ತು ಡಾ। ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿ ಇರುವ ಭವ್ಯ ಧ್ಯಾನ ಮಂದಿರವಿದೆ. 26 ಕಂಬಗಳಿರುವ ಮಂದಿರ ದ್ರಾವಿಡ ಮತ್ತು ಹೊಯ್ಸಳ ಶೈಲಿಯ ಶಿಲ್ಪಕಲೆ ಹೊಂದಿದೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/pm-modi-in-adichunchanagiri-today-inauguration-sri-guru-bhyravykya-mandir-special-prayer-kalabhairaveshwar-rav/articleshow-442entb"/>
        </item>
        <item>
            <title><![CDATA[Adichunchanagiri: ನಾಳೆ ಆದಿಚುಂಚನಗಿರಿಗೆ ಪ್ರಧಾನಿ ಮೋದಿ, ₹100 ಕೋಟಿಯ ಭೈರವೈಕ್ಯ ಮಂದಿರ ಲೋಕಾರ್ಪಣೆ]]></title>
            <link>https://kannada.asianetnews.com/state/inauguration-of-a-rs-100-crore-temple-in-adichunchanagiri-tomorrow-rav/articleshow-4bx8a90</link>
            <guid isPermaLink="true">https://kannada.asianetnews.com/state/inauguration-of-a-rs-100-crore-temple-in-adichunchanagiri-tomorrow-rav/articleshow-4bx8a90</guid>
            <pubDate>Tue, 14 Apr 2026 07:54:13 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿಯವರು ಏ.15 ರಂದು ಆದಿಚುಂಚನಗಿರಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ದ್ರಾವಿಡ ಶೈಲಿಯ ಶ್ರೀಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಈ ದೇಗುಲವು ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗ ವಾಸ್ತುಶಿಲ್ಪದ ಸಮ್ಮಿಶ್ರಣವಾಗಿದ್ದು, ಇದೊಂದು ಜೀವಂತ ಆಧ್ಯಾತ್ಮ ಧಾಮವಾಗಿದೆ&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp4vt2jjq2778j9faqxhnr8z,imgname-----------------------2026-04-14t073259.319-1776132360786.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಏ.14): &lt;/strong&gt;ದ್ರಾವಿಡ ವಾಸ್ತು ಶಿಲ್ಪ ಶೈಲಿಯಲ್ಲಿ ಆದಿ ಚುಂಚನಗಿರಿಯಲ್ಲಿ ನಿರ್ಮಿಸಲಾಗಿರುವ ಶ್ರೀಗುರು ಭೈರವೈಕ್ಯ ಮಂದಿರ ಕೇವಲ ಕಲ್ಲು-ಮಣ್ಣಿನ ಕಟ್ಟಡವಲ್ಲ, ಅದೊಂದು ಜೀವಂತ ಆಧ್ಯಾತ್ಮ ಧಾಮವಾಗಿದ್ದು, ಏ.15 ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.&lt;/p&gt;&lt;p&gt;ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ₹100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಒರಿಸ್ಸಾದ ಸೂರ್ಯದೇಗುಲದ ಕಲೆಯನ್ನು ಒಳಗೊಂಡ ಸುಂದರ ದೇಗುಲ ರೂಪುಗೊಂಡಿದ್ದು, ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗ ವಾಸ್ತು ಶಿಲ್ಪದ ಸಮ್ಮಿಶ್ರಣವನ್ನು ಕಾಣಬಹುದಾಗಿದೆ ಎಂದರು.&lt;/p&gt;&lt;h2&gt;ಪಿಎಂ ಮೋದಿ ಮುಕುಟಕ್ಕೆ ನಾಲ್ವಡಿ ಮಾದರಿಯ ಪೇಟ&amp;nbsp;&lt;/h2&gt;&lt;p&gt;&lt;strong&gt;ಮೈಸೂರು:&lt;/strong&gt; ಮೈಸೂರು ಮಹಾರಾಜ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ರಾಜಗಾಂಭೀರ್ಯದ ಪೇಟವು ಪ್ರಧಾನಿ ನರೇಂದ್ರ ಮೋದಿ ಅವರ ಮುಕುಟ ಏರಲು ಮೈಸೂರಿನಲ್ಲಿ ಸಿದ್ಧವಾಗಿದೆ. ಮೈಸೂರಿನ ಕಲಾವಿದ ನಂದನ್ ಅವರು 5 ದಿನ ಶ್ರಮ ವಹಿಸಿ ಅತ್ಯಂತ ಆಕರ್ಷಕವಾಗಿ ರೂಪಿಸಿದ್ದಾರೆ. ಬನಾರಸ್ ಸೀರೆ ಹಾಗೂ ವಿಶೇಷ ಮೋಲ್ಡ್&zwnj;ಗಳನ್ನು ಬಳಸಿ ಸಿದ್ಧಪಡಿಸಲಾಗಿದೆ.&lt;/p&gt;&lt;p&gt;ದ್ರಾವಿಡ ವಾಸ್ತು ಶಿಲ್ಪ ಶೈಲಿ ಸಹಸ್ರಾರು ವರ್ಷಗಳಿಂದ ದೈವಿಕ ಶಕ್ತಿಯ ದೃಶ್ಯಭಾಷೆ ಎಂದೇ ಪ್ರಸಿದ್ಧಿ ಪಡೆದಿದೆ. ಆಗಸಕ್ಕೆ ಚಾಚಿದ ಗೋಪುರಗಳು, ಶಿಲ್ಪಕಲೆಯ ಅದ್ಭುತ ಕೆತ್ತನೆಗಳು, ಬ್ರಹ್ಮಾಂಡ ನಿಯಮಗಳಿಗೆ ಅನುಸಾರವಾದ ವಿನ್ಯಾಸವಿದೆ. 3 ಮಾದರಿಯ ಕಲ್ಲುಗಳನ್ನು ಭೈರವೈಕ್ಯ ಮಂದಿರದಲ್ಲಿ ಕಾಣಬಹುದಾಗಿದೆ. ಕ್ಲೈರಾ ಎಂಬ ಕಲ್ಲನ್ನು ಹೆಚ್ಚು ಬಳಸಲಾಗಿದ್ದು, ಧರ್ಮಗುಡಿಗೆ ಇಳಕಲ್ ಮಾದರಿ ಶಿಲೆ, ಕೆಳಭಾಗಕ್ಕೆ ಸಂತೆಕಲ್ ಮಾದರಿಯ ಶಿಲೆ, ಮಂದಿರದ ಒಳಭಾಗ ಮತ್ತು ಹೊರಭಾಗ ಪೂರ್ತಾ ಕ್ಲೈರಾ ಶಿಲೆಯನ್ನು ಬಳಸಲಾಗಿದೆ ಎಂದು ವಿವರಿಸಿದರು.&lt;/p&gt;&lt;h3&gt;ನವಿಲಿಗೆ ಸಂಬಂಧಿಸಿದ ಉಡುಗೊರೆ:&lt;/h3&gt;&lt;p&gt;ಇದೇ ಮೊದಲ ಬಾರಿಗೆ ಶ್ರೀಮಠಕ್ಕೆ ಪ್ರಧಾನಿ ಆಗಮಿಸುತ್ತಿದ್ದು, ನಮ್ಮ ರಾಷ್ಟ್ರಪಕ್ಷಿ ಹಾಗೂ ಆದಿ ಚುಂಚನಗಿರಿಯ ಸಂಕೇತವಾದ ನವಿಲಿಗೆ ಸಂಬಂಧಿಸಿದ ನೆನಪಿನ ಕಾಣಿಕೆಯನ್ನು ಉಡುಗೊರೆ ರೂಪದಲ್ಲಿ ನೀಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.&lt;/p&gt;&lt;p&gt;&lt;strong&gt;ಪ್ರಧಾನಿ ಕಾರ್ಯಕ್ರಮ:&lt;/strong&gt;&lt;/p&gt;&lt;p&gt;ಏ.15ರಂದು ಬೆಂಗಳೂರಿನ ಎಚ್&zwnj;ಎಎಲ್ ಏರ್&zwnj;ಫೋರ್ಟ್&zwnj;ನಿಂದ ಹೆಲಿಕಾಪ್ಟರ್ ಮೂಲಕ ಹೋರಡುವ ನರೇಂದ್ರ ಮೋದಿ ಅವರು ಆದಿ ಚುಂಚನಗಿರಿ ತಪೋವನಕ್ಕೆ ಬಂದಿಳಿಯುವರು. ಅಲ್ಲಿಂದ ಶ್ರೀಕಾಲಭೈರವೇಶ್ವರ ಮಂದಿರಕ್ಕೆ ತೆರಳಿ ದರ್ಶನ ಪಡೆಯುವರು. ನಂತರ ಶ್ರೀಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆ ವೀಕ್ಷಿಸುವರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ &lsquo;ಗೋರಕ್ಷನಾಥ ಸಿದ್ಧ ಸಿದ್ಧಾಂತ ಪದ್ಧತಿ&rsquo; ಎಂಬ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಸಾರ್ವಜನಿಕರಿಗೆ ನಿರ್ಬಂಧ&lt;/strong&gt;&lt;/p&gt;&lt;p&gt;ಪ್ರಧಾನಿ ಮೋದಿ ಅವರು ಭೇಟಿ ಕಾರಣ ಮಠದ ಆವರಣ, ದೇವಾಲಯ ಪ್ರದೇಶಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಅವರು ತೆರಳಿದ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರು ಕಾರ್ಯಕ್ರಮಕ್ಕೆ ಆಗಮಿಸುವುದಕ್ಕೂ ಮುಂಚಿತವಾಗಿ ಕನಿಷ್ಠ 2 ಗಂಟೆ ಮೊದಲೇ ತಲುಪಿರಬೇಕು. ಪ್ರಧಾನಿ ಆಗಮನಕ್ಕೆ ಮೊದಲೇ ಎಲ್ಲಾ ಪ್ರವೇಶದ್ವಾರಗಳನ್ನು ಮುಚ್ಚಲಾಗುವುದು. ಎಲ್ಲ ಮಾದರಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕ್ಷೇತ್ರದೊಳಗೆ ತರಲು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.&lt;/p&gt;&lt;p&gt;ದ್ರಾವಿಡ ವಾಸ್ತು ಶಿಲ್ಪ ಶೈಲಿ ಸಹಸ್ರಾರು ವರ್ಷಗಳಿಂದ ದೈವಿಕ ಶಕ್ತಿಯ ದೃಶ್ಯಭಾಷೆ ಎಂದೇ ಪ್ರಸಿದ್ಧಿ ಪಡೆದಿದೆ. ಆಗಸಕ್ಕೆ ಚಾಚಿದ ಗೋಪುರಗಳು, ಶಿಲ್ಪಕಲೆಯ ಅದ್ಭುತ ಕೆತ್ತನೆಗಳು, ಬ್ರಹ್ಮಾಂಡ ನಿಯಮಗಳಿಗೆ ಅನುಸಾರವಾದ ವಿನ್ಯಾಸವಿದೆ. 3 ಮಾದರಿಯ ಕಲ್ಲುಗಳನ್ನು ಭೈರವೈಕ್ಯ ಮಂದಿರದಲ್ಲಿ ಕಾಣಬಹುದಾಗಿದೆ. ಕ್ಲೈರಾ ಎಂಬ ಕಲ್ಲನ್ನು ಹೆಚ್ಚು ಬಳಸಲಾಗಿದ್ದು, ಧರ್ಮಗುಡಿಗೆ ಇಳಕಲ್ ಮಾದರಿ ಶಿಲೆ, ಕೆಳಭಾಗಕ್ಕೆ ಸಂತೆಕಲ್ ಮಾದರಿಯ ಶಿಲೆ, ಮಂದಿರದ ಒಳಭಾಗ ಮತ್ತು ಹೊರಭಾಗ ಪೂರ್ತಾ ಕ್ಲೈರಾ ಶಿಲೆಯನ್ನು ಬಳಸಲಾಗಿದೆ ಎಂದು ವಿವರಿಸಿದರು.&lt;/p&gt;&lt;p&gt;&lt;strong&gt;ನವಿಲಿಗೆ ಸಂಬಂಧಿಸಿದ ಉಡುಗೊರೆ:&lt;/strong&gt;&lt;/p&gt;&lt;p&gt;ಇದೇ ಮೊದಲ ಬಾರಿಗೆ ಶ್ರೀಮಠಕ್ಕೆ ಪ್ರಧಾನಿ ಆಗಮಿಸುತ್ತಿದ್ದು, ನಮ್ಮ ರಾಷ್ಟ್ರಪಕ್ಷಿ ಹಾಗೂ ಆದಿ ಚುಂಚನಗಿರಿಯ ಸಂಕೇತವಾದ ನವಿಲಿಗೆ ಸಂಬಂಧಿಸಿದ ನೆನಪಿನ ಕಾಣಿಕೆಯನ್ನು ಉಡುಗೊರೆ ರೂಪದಲ್ಲಿ ನೀಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.&lt;/p&gt;&lt;p&gt;&lt;strong&gt;ಪ್ರಧಾನಿ ಕಾರ್ಯಕ್ರಮ:&lt;/strong&gt;&lt;/p&gt;&lt;p&gt;ಏ.15ರಂದು ಬೆಂಗಳೂರಿನ ಎಚ್&zwnj;ಎಎಲ್ ಏರ್&zwnj;ಫೋರ್ಟ್&zwnj;ನಿಂದ ಹೆಲಿಕಾಪ್ಟರ್ ಮೂಲಕ ಹೋರಡುವ ನರೇಂದ್ರ ಮೋದಿ ಅವರು ಆದಿ ಚುಂಚನಗಿರಿ ತಪೋವನಕ್ಕೆ ಬಂದಿಳಿಯುವರು. ಅಲ್ಲಿಂದ ಶ್ರೀಕಾಲಭೈರವೇಶ್ವರ ಮಂದಿರಕ್ಕೆ ತೆರಳಿ ದರ್ಶನ ಪಡೆಯುವರು. ನಂತರ ಶ್ರೀಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆ ವೀಕ್ಷಿಸುವರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ &lsquo;ಗೋರಕ್ಷನಾಥ ಸಿದ್ಧ ಸಿದ್ಧಾಂತ ಪದ್ಧತಿ&rsquo; ಎಂಬ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಸಾರ್ವಜನಿಕರಿಗೆ ನಿರ್ಬಂಧ&lt;/strong&gt;&lt;/p&gt;&lt;p&gt;ಪ್ರಧಾನಿ ಮೋದಿ ಅವರು ಭೇಟಿ ಕಾರಣ ಮಠದ ಆವರಣ, ದೇವಾಲಯ ಪ್ರದೇಶಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಅವರು ತೆರಳಿದ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರು ಕಾರ್ಯಕ್ರಮಕ್ಕೆ ಆಗಮಿಸುವುದಕ್ಕೂ ಮುಂಚಿತವಾಗಿ ಕನಿಷ್ಠ 2 ಗಂಟೆ ಮೊದಲೇ ತಲುಪಿರಬೇಕು. ಪ್ರಧಾನಿ ಆಗಮನಕ್ಕೆ ಮೊದಲೇ ಎಲ್ಲಾ ಪ್ರವೇಶದ್ವಾರಗಳನ್ನು ಮುಚ್ಚಲಾಗುವುದು. ಎಲ್ಲ ಮಾದರಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕ್ಷೇತ್ರದೊಳಗೆ ತರಲು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/inauguration-of-a-rs-100-crore-temple-in-adichunchanagiri-tomorrow-rav/articleshow-4bx8a90"/>
        </item>
        <item>
            <title><![CDATA[ಮಂಡ್ಯ ಕುರುಬರ ಸಂಘದ ಅಧ್ಯಕ್ಷನಿಗೆ ಮಸಿ ಬಳಿದಿದ್ಯಾಕೆ? ಏನಿದು ವಿವಾದ?]]></title>
            <link>https://kannada.asianetnews.com/karnataka-districts/black-ink-attack-on-mandya-kurubara-sangha-president-what-triggered-the-protest/articleshow-4xgv2og</link>
            <guid isPermaLink="true">https://kannada.asianetnews.com/karnataka-districts/black-ink-attack-on-mandya-kurubara-sangha-president-what-triggered-the-protest/articleshow-4xgv2og</guid>
            <pubDate>Fri, 27 Mar 2026 10:59:08 +0530</pubDate>
            <description><![CDATA[ಅವಧಿ ಮುಗಿದರೂ ರಾಜೀನಾಮೆ ನೀಡದ ಮಂಡ್ಯ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಸುರೇಶ್ ಅವರಿಗೆ ಸದಸ್ಯರು ಘೇರಾವ್ ಹಾಕಿ ಪ್ರತಿಭಟಿಸಿದರು. ಈ ವೇಳೆ ಮಾತಿಗೆ ಜಗ್ಗದ ಅಧ್ಯಕ್ಷರ ಮೈಮೇಲೆ ಕಪ್ಪು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kmpw2r27d33qm4kbd2kzsvag,imgname----------------------58--1774589141063.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಮಾ.27): &lt;/strong&gt;ಅವಧಿ ಮುಗಿದ ಬಳಿಕವೂ ರಾಜೀನಾಮೆ ನೀಡದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆಂದು ಆರೋಪಿಸಿ ಜಿಲ್ಲಾ ಕುರುಬರ ಸಂಘದ ಸದಸ್ಯರು ಅಧ್ಯಕ್ಷ ಎಂ.ಸುರೇಶ್ ಅವರಿಗೆ ಘೇರಾವ್ ಹಾಕಿ ಮೈಮೇಲೆ ಕಪ್ಪು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಗರದ ಕುರುಬರ ಸಂಘದ ಆವರಣದಲ್ಲಿ ನಡೆಯಿತು.&lt;/p&gt;&lt;p&gt;ಅಧ್ಯಕ್ಷರ ಅವಧಿ ಮುಗಿದು ಇಪ್ಪತ್ತು ದಿನಗಳಾದರೂ ರಾಜೀನಾಮೆ ನೀಡದೆ ಉದ್ಧಟತನ ಪ್ರದರ್ಶಿಸುತ್ತಿರುವುದು ಸರಿಯಲ್ಲ. ಸಂಘದ ಬೈಲಾ ಪ್ರಕಾರ ಸಂಘಕ್ಕೆ ಚುನಾವಣೆ ನಡೆಸಬೇಕು. ಏಕಪಕ್ಷೀಯವಾಗಿ ಅಧ್ಯಕ್ಷರು ಅಧಿಕಾರದಲ್ಲಿ ಮುಂದುವರೆಯುತ್ತಾ ಭಂಡತನ ತೋರುತ್ತಿದ್ದಾರೆ. ಸಂಘದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ರಾಜೀನಾಮೆ ನೀಡುವಂತೆ ಬಿಗಿಪಟ್ಟು ಹಿಡಿದರು.&lt;/p&gt;&lt;p&gt;ಪೊಲೀಸರು ಸ್ಥಳಕ್ಕೆ ಆಗಮಿಸಿ ಅಧ್ಯಕ್ಷರು ಸೇರಿದಂತೆ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೂ ಬಿಡದೆ ಸದಸ್ಯರು ಅಧ್ಯಕ್ಷ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರ ರಕ್ಷಣೆಯಲ್ಲಿ ಸಂಘದ ಆವರಣದಿಂದ ಕಾರಿನಲ್ಲಿ ತೆರಳಲು ಯತ್ನಿಸಿದಾಗ ಸದಸ್ಯರು ಮತ್ತೆ ಘೇರಾವ್ ಹಾಕಿ ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಸದಸ್ಯರನ್ನು ಸಮಾಧಾನಪಡಿಸಿ ಅಧ್ಯಕ್ಷರು ತೆರಳುವುದಕ್ಕೆ ಅನುವು ಮಾಡಿಕೊಟ್ಟರು.&lt;/p&gt;&lt;h2&gt;ನಡೆದಿದ್ದೇನು?&lt;/h2&gt;&lt;p&gt;ಜಿಲ್ಲಾ ಕುರುಬರ ಸಂಘದಲ್ಲಿ ಗುರುವಾರ ಅಧ್ಯಕ್ಷ ಎಂ.ಸುರೇಶ್ ಆಡಳಿತ ಮಂಡಳಿ ಸಭೆ ಕರೆದಿದ್ದರು. ಬೆಳಗ್ಗೆ ೧೧ ಗಂಟೆ ವೇಳೆಗೆ ಸದಸ್ಯರು ಸಂಘದ ಆವರಣದಲ್ಲಿ ಬಂದು ಸೇರಿದ್ದರು. ಅಧ್ಯಕ್ಷರು ಕಾರಿನಲ್ಲಿ ಸಂಘದ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆಯೇ ಸದಸ್ಯರು ಅವರನ್ನು ಸುತ್ತುವರಿದರು. ಅವಧಿ ಮುಗಿದರೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಿರುವುದಕ್ಕೆ ಆಕ್ರೋಶ, ಅಸಹನೆ ವ್ಯಕ್ತಪಡಿಸಿದರು. ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ಜಿಲ್ಲಾಧ್ಯಕ್ಷರ ಅಧಿಕಾರವಧಿ ಮಾ.೬ರಂದೇ ಮುಕ್ತಾಯವಾಗಿದೆ. ಆದರೂ ಇದುವರೆಗೆ ರಾಜೀನಾಮೆ ನೀಡಿಲ್ಲ. ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನೂ ಆರಂಭಿಸಿಲ್ಲ. ಹಿಂದಿನ ಆಡಳಿತ ಮಂಡಳಿಯವರನ್ನೇ ಜೊತೆಯಲ್ಲಿಟ್ಟುಕೊಂಡು ಸರ್ವಾಧಿಕಾರಿಯಂತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಕುರುಬರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿದ್ಯಾರ್ಥಿನಿಲಯದ ಕಾಮಗಾರಿಯಲ್ಲಿ ಹಣ ಲಪಟಾಯಿಸಬೇಕೆನ್ನುವುದೇ ಇವರ ಹುನ್ನಾರವಾಗಿದೆ. ಅದಕ್ಕಾಗಿ ಮತ್ತೊಂದು ಅವಧಿಗೆ ಈಗಿನ ಆಡಳಿತ ಮಂಡಳಿಯನ್ನು ಮುಂದುವರೆಸಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.&lt;/p&gt;&lt;h3&gt;ಡಿ.೨೮ರ ಸಭೆಯ ಬಗ್ಗೆ ಸುಳ್ಳು ಮಾಹಿತಿ:&lt;/h3&gt;&lt;p&gt;ಹಿಂದಿನ ಆಡಳಿತ ಮಂಡಳಿಯನ್ನು ಮುಂದುವರೆಸದೆ, ಚುನಾವಣೆ ನಡೆಸುವಂತೆ ಡಿ.೨೮ರಂದು ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲೂ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಅಂದಿನ ಸಭೆಯೂ ಸಹ ರದ್ದಾಗಿತ್ತು ಆದರೂ ಸಹ, ಅಧ್ಯಕ್ಷ ಎಂ.ಸುರೇಶ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸಭೆಯಲ್ಲಿ ನಿರ್ಣಯವಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಆಡಳಿತ ಮಂಡಳಿಯನ್ನು ಮುಂದುವರೆಸಿದ್ದಾರೆ ಎಂದು ಕಿಡಿಕಾರಿದರು.&lt;/p&gt;&lt;p&gt;ಅಧ್ಯಕ್ಷ ಸುರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ದಡದಪುರ ಶಿವಣ್ಣ ಅವರ ಬಲದಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ ಸದಸ್ಯರು, ಸಂಘದ ಬೈಲಾ ಪ್ರಕಾರ ಅಧಿಕಾರವಧಿ ಮುಗಿದ ಐದು ವರ್ಷಕ್ಕೆ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಬಳಿಕ ಅವರೇ ಚುನಾವಣೆಗೆ ಮತ್ತೆ ಸ್ಪರ್ಧಿಸಿ ಗೆದ್ದು ಬರಲಿ. ಮತ್ತೆ ಅಧ್ಯಕ್ಷರಾಗಿ ಅಧಿಕಾರ ನಡೆಸಲಿ. ಆದರೆ ಹಿಂಭಾಗಿಲಿನಿಂದ ಅಧಿಕಾರ ಹಿಡಿಯುವ ಆಟ ಬೇಡ ಎಂದು ಹರಿಹಾಯ್ದರು.&lt;/p&gt;&lt;h3&gt;ಕಪ್ಪು ಮಸಿ ಎರಚಿದ ಸದಸ್ಯರು:&lt;/h3&gt;&lt;p&gt;ಸದಸ್ಯರ ಪ್ರತಿಭಟನೆ, ಆಕ್ರೋಶದ ಮಾತುಗಳಿಗೆ ಮನ್ನಣೆಯನ್ನು ನೀಡದೆ ಉಡಾಫೆಯಾಗಿ ಉತ್ತರ ನೀಡುತ್ತಾ ಅಧ್ಯಕ್ಷ ಎಂ.ಸುರೇಶ್ ಮುನ್ನಡೆಯುತ್ತಿದ್ದಾಗ ರೊಚ್ಚಿಗೆದ್ದ ಕೆಲ ಸದಸ್ಯರು ಮೈಮೇಲೆ ಕಪ್ಪು ಮಸಿ ಎರಚಿದರು. ಹಿಂದೆ, ಮುಂದೆಯೆಲ್ಲಾ ಕಪ್ಪು ಮಸಿ ಎರಚಿ ಆಕ್ರೋಶ ಹೊರಹಾಕಿದರು. ಈ ಸಮಯದಲ್ಲಿ ಅಧ್ಯಕ್ಷರ ಕಡೆಯವರು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದರು.&lt;/p&gt;&lt;p&gt;ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು, ಪೊಲೀಸರ ಎದುರೇ ಅಧ್ಯಕ್ಷನಿಗೆ ಸದಸ್ಯರು ತರಾಟೆ ತೆಗೆದುಕೊಂಡರು. ಬಳಿಕ ಪೊಲೀಸರ ರಕ್ಷಣೆಯಲ್ಲಿ ಅಧ್ಯಕ್ಷ ಸುರೇಶ್ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದಾಗ ಸದಸ್ಯರು ಕಾರಿನ ಮುಂದೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಲು ಮುಂದಾದರು. ಬಳಿಕ ಪೊಲೀಸರು ಸದಸ್ಯರನ್ನು ಸಮಾಧಾನಪಡಿಸಿ ಅಧ್ಯಕ್ಷ ಸುರೇಶ್ ಅವರನ್ನು ಕಳುಹಿಸಿಕೊಟ್ಟರು.&lt;/p&gt;&lt;p&gt;ಪ್ರತಿಭಟನೆಯಲ್ಲಿ ಚಂದಹಳ್ಳಿ ಶ್ರೀಧರ್, ಸ್ವಾಮಿ, ಶ್ರೀರಂಗಪಟ್ಟಣ ಮಂಜು, ಮದ್ದೂರು ಬೀರೇಶ್, ಅಣಸಾಲೆ ಶಿವಣ್ಣ, ಶಿವರಾಮು, ಗೋಪಾಲ್, ರಮೇಶ್ ಸೇರಿದಂತೆ ಸೇರಿದಂತೆ ಹಲವರು ಹಾಜರಿದ್ದರು.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/black-ink-attack-on-mandya-kurubara-sangha-president-what-triggered-the-protest/articleshow-4xgv2og"/>
        </item>
        <item>
            <title><![CDATA[ಆಕಾಶವನ್ನೇ ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ: ಸಚಿವ ಚಲುವರಾಯಸ್ವಾಮಿ ಬೇಸರ]]></title>
            <link>https://kannada.asianetnews.com/karnataka-districts/nagamangala-development-works-chaluvarayaswamy-statement-gvd/articleshow-5n0rbr3</link>
            <guid isPermaLink="true">https://kannada.asianetnews.com/karnataka-districts/nagamangala-development-works-chaluvarayaswamy-statement-gvd/articleshow-5n0rbr3</guid>
            <pubDate>Mon, 20 Apr 2026 21:26:59 +0530</pubDate>
            <description><![CDATA[&lt;p&gt;ಇಷ್ಟೊಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೂ ಸಹ ತೃಪ್ತಿ ಇಲ್ಲವೆಂದರೆ ಆಕಾಶವನ್ನು ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jwme81vf0haf7r987hrkefck,imgname-vdv-1748737722223.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಗಮಂಗಲ (ಏ.20):&lt;/strong&gt; ಜನರ ನಿರೀಕ್ಷೆಗೂ ಮೀರಿ ತಾಲೂಕಿನಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೂ ಸಹ ತೃಪ್ತಿ ಇಲ್ಲವೆಂದರೆ ಆಕಾಶವನ್ನು ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ತಾಲೂಕಿನ ಹೆರಗನಹಳ್ಳಿಯಲ್ಲಿ ನಿರ್ಮಿಸಿರುವ ಕಲ್ಯಾಣಿಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಚುನಾವಣೆಯಲ್ಲಿ ನನ್ನ ವಿರುದ್ಧ ಗೆದ್ದವರು ಐದು ವರ್ಷ ಕಾಲ ಯಾವುದೇ ಅಭಿವೃದ್ಧಿ ಕೆಲಸ ಮಾಡದಿದ್ದರೂ ಜನ ಕೇಳುವುದಿಲ್ಲ. ನಾನು ಗೆದ್ದಾಗ ಮಾತ್ರ ಅಭಿವೃದ್ಧಿ ಕೆಲಸ ಮಾಡಿ ಎಂದು ಒತ್ತಡ ಹೇರುತ್ತೀರಿ. ಕ್ಷೇತ್ರದ ಜನರು ಚುನಾವಣೆಯಲ್ಲಿ ಎರಡು ಬಾರಿ ನನ್ನನ್ನು ಸೋಲಿಸದಿದ್ದರೆ ತಾಲೂಕು ಇನ್ನೂ ನಾಲ್ಕುಪಟ್ಟು ಅಭಿವೃದ್ಧಿಯಾಗುತ್ತಿತ್ತು ಎಂದರು.&lt;/p&gt;&lt;p&gt;ಗ್ರಾಮದ ಡಾ.ಎಚ್.ಎಲ್.ನಾಗೇಗೌಡರು ಮತ್ತು ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ ಅವರು ಸಾಹಿತ್ಯ ಹಾಗೂ ರಾಜಕೀಯ ಕ್ಷೇತ್ರಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿ ಗೌರವ ಕಾಪಾಡಿಕೊಂಡಿದ್ದಾರೆ. ಅವಕಾಶವಿದ್ದಾಗ ಶಾಶ್ವತವಾಗಿ ಉಳಿಯುವಂತಹ ಅಭಿವೃದ್ಧಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ನಾನೂ ಕೂಡ ಜನರ ನಿರೀಕ್ಷೆಗೂ ಮೀರಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಜನರು ಇದನ್ನು ಅರ್ಥೈಸಿಕೊಳ್ಳಬೇಕು ಎಂದರು.&lt;/p&gt;&lt;h2&gt;&lt;strong&gt;ವಿಶೇಷ ಮಂಜೂರಾತಿ&lt;/strong&gt;&lt;/h2&gt;&lt;p&gt;ಈ ಹಿಂದೆ ಹೆರಗನಹಳ್ಳಿ ಸಮೀಪವಿರುವ ಎನ್&zwnj;ಬಿಸಿ ಕಾಲುವೆಯ ಎಡಭಾಗದ ಅಚ್ಚುಕಟ್ಟಿಗೆ ಮಾತ್ರ ಹೇಮಾವತಿ ನೀರು ಹರಿಸಲು ಕಾನೂನಿನಲ್ಲಿ ಅವಕಾಶವಿತ್ತು. ಈ ಹಿಂದೆ ನಾನು ಸಚಿವನಾಗಿದ್ದ ಅವಧಿಯಲ್ಲಿ ಬಲಭಾಗದ ಅಚ್ಚುಕಟ್ಟಿಗೂ ಅವಕಾಶ ಕಲ್ಪಿಸುವ ಸಲುವಾಗಿ ವಿಶೇಷ ಮಂಜೂರಾತಿ ಕೊಡಿಸಲಾಯಿತು. ನಂತರ ಈ ಭಾಗದ ಕೆರೆಗಳಿಗೂ ನೀರು ತುಂಬಿಸಲು 990 ಲಕ್ಷ ರು. ವೆಚ್ಚದ ಯೋಜನೆಯನ್ನು ಕೈಗೆತ್ತಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದರಿಂದಾಗಿ ಹೆರಗನಹಳ್ಳಿ ಸೇರಿದಂತೆ ಈಭಾಗದ ಬಹುತೇಕ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಲಿದೆ ಎಂದರು.&lt;/p&gt;&lt;p&gt;ಕೆ.ಆರ್.ಪೇಟೆ ಮೂಲಕ ತಾಲೂಕಿಗೆ ಹರಿದು ಬರುವ ಹೇಮಾವತಿ ಜಲಾಶಯದ ನೀರಿನಿಂದಾಗಿ ಹೊಣಕೆರೆ, ಕಸಬಾ ಮತ್ತು ದೇವಲಾಪುರ ಹೋಬಳಿಯ ಕೆಲ ಪ್ರದೇಶಕ್ಕೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ 340 ಕೋಟಿ ರು. ವೆಚ್ಚದ ಯೋಜನೆ ಕೈಗೆತ್ತಿಕೊಂಡು ಕೆಲ ತಿಂಗಳ ಹಿಂದೆ ತಾಲೂಕಿನ ಗಡಿಭಾಗ ಗಿಡುವಿನಹೊಸಹಳ್ಳಿ ಸಮೀಪ ಭೂಮಿಪೂಜೆ ನೆರವೇರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದರು.&lt;/p&gt;&lt;p&gt;ತಾಲೂಕಿನ ಜನರು ಬರಗಾಲದ ನಡುವೆ ಜೀವನ ನಡೆಸಿದರೂ ಕೂಡ ಅತ್ಯಂತ ಸೌಮ್ಯಸ್ವಭಾವದವರು, ಬುದ್ಧವಂತರು ಎನ್ನುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಯಾವ ಕಾರಣಕ್ಕೆ ಬದಲಾವಣೆಯಾಗಿದ್ದಾರೆಂಬುದು ನನಗೆ ಗೊತ್ತಿಲ್ಲ. ಇನ್ನು ಮುಂದಾದರೂ ಪಕ್ಷ, ರಾಷ್ಟ್ರ ರಾಜಕಾರಣ ಹಾಗೂ ತಾಲೂಕಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡುವವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/nagamangala-development-works-chaluvarayaswamy-statement-gvd/articleshow-5n0rbr3"/>
        </item>
        <item>
            <title><![CDATA['ನನ್ನ ಹೆಂಡ್ತಿ ಜೆಡಿಸ್ ಮಾಜಿ ಶಾಸಕರ ಸಂಬಂಧದಲ್ಲವ್ಳೆ' ಎಂದ ಪ್ರಸನ್ನ; ಅವನೊಬ್ಬ ಸುಳ್ಳುಗಾರ ಎಂದ ಡಾ.ಕೆ.ಅನ್ನದಾನಿ!]]></title>
            <link>https://kannada.asianetnews.com/state/karnataka-politics-mandya-ex-mla-dr-k-annadani-clarification-on-illegal-affair-allegations-sat/articleshow-dazs57t</link>
            <guid isPermaLink="true">https://kannada.asianetnews.com/state/karnataka-politics-mandya-ex-mla-dr-k-annadani-clarification-on-illegal-affair-allegations-sat/articleshow-dazs57t</guid>
            <pubDate>Mon, 06 Apr 2026 18:22:01 +0530</pubDate>
            <description><![CDATA[&lt;p&gt;ಮಳವಳ್ಳಿಯ ಮಾಜಿ ಶಾಸಕ ಡಾ. ಕೆ. ಅನ್ನದಾನಿ ತಮ್ಮ ಮೇಲಿನ 'ಅಕ್ರಮ ಸಂಬಂಧ'ದ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇದೊಂದು ತಮ್ಮ ರಾಜಕೀಯ ಬೆಳವಣಿಗೆಯನ್ನು ಸಹಿಸದ ಹಿತಶತ್ರುಗಳ ಪಿತೂರಿ ಎಂದಿದ್ದಾರೆ. ಆರೋಪಿಸಿದ ವ್ಯಕ್ತಿ ವಿರುದ್ಧ ಈಗಾಗಲೇ ಪೊಲೀಸ್ ದೂರು ಕೊಟ್ಟಿದ್ದಾಗಿಯೂ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knhcv5rpwqh4hw84q8813tan,imgname-malavalli-ex-mla-dr-k-annadani-1775479133974.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಏ.06): ಮ&lt;/strong&gt;ಳವಳ್ಳಿಯ ಜೆಡಿಎಸ್ ಮಾಜಿ ಶಾಸಕ ಡಾ. ಕೆ. ಅನ್ನದಾನಿ ಅವರ ಮೇಲೆ ಕೇಳಿಬಂದಿದ್ದ 'ಅಕ್ರಮ ಸಂಬಂಧ'ದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ, ಶಾಸಕರು ಈಗ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧ ಕೇಳಿಬಂದಿರುವ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಅವರು, ಇದೊಂದು ಹಿತಶತ್ರುಗಳ 'ರಾಜಕೀಯ ಪಿತೂರಿ' ಎಂದು ಬಣ್ಣಿಸಿದ್ದಾರೆ.&lt;/p&gt;&lt;h3&gt;&lt;strong&gt;ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಅನ್ನದಾನಿ&lt;/strong&gt;&lt;/h3&gt;&lt;p&gt;ತಮ್ಮ ವಿರುದ್ಧ ಪ್ರಸನ್ನ ಎಂಬ ವ್ಯಕ್ತಿ ನೀಡಿದ್ದ ದೂರಿನ ಬೆನ್ನಲ್ಲೇ ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅನ್ನದಾನಿ, 'ನನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ಸತ್ಯಕ್ಕೆ ದೂರವಾದವು. ಸಾರ್ವಜನಿಕ ಜೀವನದಲ್ಲಿರುವ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಪ್ರಸನ್ನ ಎಂಬಾತ ಕಳೆದ ಕೆಲವು ಸಮಯದಿಂದ ಸತತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾನೆ ಎಂದು ಅನ್ನದಾನಿ ದೂರಿದ್ದಾರೆ. 'ಈ ವ್ಯಕ್ತಿಯ ಕಿರುಕುಳದ ಬಗ್ಗೆ ನಾನು ಈ ಹಿಂದೆಯೇ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆತ ಮಾಡುವುದೆಲ್ಲವೂ ಸುಳ್ಳು ಆರೋಪಗಳು ಎಂಬುದು ಪೊಲೀಸರಿಗೂ ತಿಳಿದಿದೆ' ಎಂದು ಸ್ಪಷ್ಟಪಡಿಸಿದರು.&lt;/p&gt;&lt;h2&gt;&lt;strong&gt;ನ್ಯಾಯಾಲಯದಿಂದ ತಡೆಯಾಜ್ಞೆ (Injunction Order)&lt;/strong&gt;&lt;/h2&gt;&lt;p&gt;ಕೇವಲ ಪೊಲೀಸ್ ದೂರು ಮಾತ್ರವಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕರು ಕಾನೂನು ಹೋರಾಟವನ್ನೂ ನಡೆಸುತ್ತಿದ್ದಾರೆ. ಪ್ರಸನ್ನ ಎಂಬಾತ ಸೋಶಿಯಲ್ ಮೀಡಿಯಾದಲ್ಲಿ ಅನ್ನದಾನಿ ಅವರ ವಿರುದ್ಧ ಯಾವುದೇ ಮಾನಹಾನಿಕರ ಪೋಸ್ಟ್&zwnj;ಗಳನ್ನು ಹಾಕಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. 'ನನ್ನ ಬಳಿ ನ್ಯಾಯಾಲಯದ ಆದೇಶದ ಪ್ರತಿಗಳಿವೆ. ಕೋರ್ಟ್ ಆದೇಶವಿದ್ದರೂ ಸಹ ಆತ ಮತ್ತೆ ಮತ್ತೆ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾನೆ. ಇದು ನ್ಯಾಯಾಂಗ ನಿಂದನೆಯೂ ಹೌದು' ಎಂದು ಎಚ್ಚರಿಸಿದ್ದಾರೆ.&lt;/p&gt;&lt;h2&gt;&lt;strong&gt;ರಾಜಕೀಯ ಷಡ್ಯಂತ್ರದ ಆರೋಪ&lt;/strong&gt;&lt;/h2&gt;&lt;p&gt;ಮಂಡ್ಯ ಜಿಲ್ಲೆಯ ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮನ್ನು ಗುರಿ ಮಾಡಲಾಗುತ್ತಿದೆ ಎಂಬುದು ಅನ್ನದಾನಿ ಅವರ ವಾದ. 'ದಿಶಾ ಸಭೆಯ ಸಂದರ್ಭದಲ್ಲೇ ಈ ರೀತಿ ನಾಟಕವಾಡಿರುವುದು ಯೋಜಿತ ಪಿತೂರಿಯಾಗಿದೆ. ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದವರು ಆತನನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ. ಒಟ್ಟಾರೆಯಾಗಿ, ಮಂಡ್ಯದಲ್ಲಿ 'ಅಕ್ರಮ ಸಂಬಂಧ'ದ ಆರೋಪ ಮತ್ತು ಪ್ರತ್ಯಾರೋಪಗಳ ಪರ್ವ ಜೋರಾಗಿದ್ದು, ಪ್ರಕರಣ ಈಗ ಕಾನೂನು ಸಮರದ ಜೊತೆಗೆ ರಾಜಕೀಯ ಬಣ್ಣವನ್ನೂ ಪಡೆದುಕೊಂಡಿದೆ. ನ್ಯಾಯಾಲಯದ ಆದೇಶವಿದ್ದರೂ ಆರೋಪ ಮಾಡಿದ ವ್ಯಕ್ತಿಯ ವಿರುದ್ಧ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-politics-mandya-ex-mla-dr-k-annadani-clarification-on-illegal-affair-allegations-sat/articleshow-dazs57t"/>
        </item>
        <item>
            <title><![CDATA[ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ: ವಿಪಕ್ಷ ನಾಯಕ ಆರ್.ಅಶೋಕ್ ಟೀಕೆ]]></title>
            <link>https://kannada.asianetnews.com/karnataka-districts/r-ashok-supports-women-reservation-bill-modi-nda-history-gvd/articleshow-eio9kbg</link>
            <guid isPermaLink="true">https://kannada.asianetnews.com/karnataka-districts/r-ashok-supports-women-reservation-bill-modi-nda-history-gvd/articleshow-eio9kbg</guid>
            <pubDate>Sat, 18 Apr 2026 21:49:03 +0530</pubDate>
            <description><![CDATA[&lt;p&gt;ಪ್ರಧಾನಿ ಮೋದಿ ನೇತೃತ್ವದ ಎನ್&zwnj;ಡಿಎ ಸರ್ಕಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಹಿಳೆಯರಿಗೆ ಇದರಿಂದ ರಾಜಕೀಯ ಪ್ರಾತಿನಿಧ್ಯ ಸಿಕ್ಕಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp4xerh5y19pdx33ap2rabfz,imgname-----------------------2026-04-14t080426.123-1776134087205.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಏ.18): &lt;/strong&gt;ಮಹಿಳಾ ಮೀಸಲು ಮಸೂದೆಯನ್ನು ಜಾರಿಗೆ ತರುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್&zwnj;ಡಿಎ ಸರ್ಕಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಹಿಳೆಯರಿಗೆ ಇದರಿಂದ ರಾಜಕೀಯ ಪ್ರಾತಿನಿಧ್ಯ ಸಿಕ್ಕಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಮಹಿಳಾ ಮೀಸಲು ಮಸೂದೆ ಜಾರಿಗೆ ಹಿಂದಿನ ಸರ್ಕಾರಗಳು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಯಾವ ರೀತಿಯಲ್ಲಿ ಜಾರಿಗೊಳಿಸಬೇಕೆಂಬ ವಿಚಾರದಲ್ಲಿ ಗೊಂದಲದಲ್ಲಿದ್ದವು. ಆದರೆ, ಎನ್&zwnj;ಡಿಎ ಸರ್ಕಾರ ಮಹಿಳೆಯರನ್ನು ರಾಜಕೀಯವಾಗಿ ಸಬಲೀಕರಣಗೊಳಿಸುವ ದೂರದೃಷ್ಟಿಯನ್ನಿಟ್ಟುಕೊಂಡು ಗೊಂದಲಗಳಿಗೆ ಅವಕಾಶವಾಗದ ರೀತಿಯಲ್ಲಿ ಜಾರಿಗೊಳಿಸಿ ಹೊಸ ಚರಿತ್ರೆಯನ್ನು ಸೃಷ್ಟಿಸಿರುವುದಾಗಿ ಹೇಳಿದರು.&lt;/p&gt;&lt;p&gt;ದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಎಲ್ಲರಿಗೂ ಸಮಾನತೆ ಸಿಗಬೇಕು. ಮಹಿಳೆಯರಿಗೂ ರಾಜಕೀಯ ಶಕ್ತಿ ತುಂಬಬೇಕೆಂಬ ಕಾರಣದಿಂದ ಮಸೂದಯೆನ್ನು ಜಾರಿಗೊಳಿಸಲಾಗಿದೆ. ಇದಕ್ಕೆ ಮಹಿಳೆಯರೆಲ್ಲರೂ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್&zwnj;ನವರು ಮಾತ್ರ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲದ ಕಿತಾಪತಿ ಮಾಡುತ್ತಿದ್ದಾರೆ. ಧರ್ಮಾಧಾರಿತವಾಗಿಯೂ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಟೀಕಿಸಿದರು.&lt;/p&gt;&lt;p&gt;&lt;strong&gt;ದಕ್ಷಿಣ ರಾಜ್ಯಗಳಿಗೆ ಅನ್ಯಾಯವಿಲ್ಲ: &lt;/strong&gt;ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಿಂದ ದಕ್ಷಿಣದ ಯಾವುದೇ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್&zwnj;ಗೆ ಬುದ್ದಿ ಇಲ್ಲ. ಕೇಂದ್ರ ಸರ್ಕಾರ ಬಿಲ್&zwnj;ನಲ್ಲಿ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಹಿಂದೆ ಕಾಂಗ್ರೆಸ್ ಕೂಡ ಇದನ್ನೇ ಮಾಡಿದ್ದು. ತಮಿಳುನಾಡಿನಲ್ಲಿ 39 ಕ್ಷೇತ್ರಗಳಿರುವುದನ್ನು 59ಕ್ಕೆ ಏರಿಸಲಾಗುತ್ತಿದೆ. ಇವರಿಗೇನು ಕಷ್ಟ? ಮೋದಿಯವರು ಮೂರನೇ ಬಾರಿ ಗೆದ್ದಿದ್ದಾರೆ. ನಾಲ್ಕನೇ ಬಾರಿಯೂ ಗೆದ್ದರೆ ನಾವೆಲ್ಲ ಟೆಂಟ್ ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ಅವರಿಗೆ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;&lt;strong&gt;ಸಿಬಿಐನಿಂದ ಸತ್ಯ ಬಹಿರಂಗ: &lt;/strong&gt;ರಾಜಕಾರಣಿಯ ಮಾತು ಕೇಳಿ ಕೊಲೆ ಮಾಡಿದರೆ ಏನಾಗುತ್ತದೆ ಎಂಬುದು ವಿನಯ್ ಕುಲಕರ್ಣಿ ಪ್ರಕರಣ ಉದಾಹರಣೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್&zwnj;ಗೆ ಶಿಕ್ಷೆಯಾಗಿದೆ. ಯಾರು ಕೊಲೆಯಲ್ಲಿ ಭಾಗಿಯಾಗಿದ್ದರೋ ಅವರೇ ಸತ್ಯ ಹೇಳಿದ್ದಾರೆ. ಕಾಂಗ್ರೆಸ್ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿದ್ದರು. ಸಿಬಿಐಗೆ ಕೊಟ್ಟ ಮೇಲೆ ಸತ್ಯ ಬಹಿರಂಗ ಆಗಿದೆ. ರಾಜಕೀಯ ಕೊಲೆಗೆ ತಿಲಾಂಜಲಿ ಹಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರವನ್ನು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಇದರಲ್ಲಿ ನಮ್ಮ ಹಸ್ತಕ್ಷೇಪ ಏನೂ ಇರುವುದಿಲ್ಲ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ರಾಜ್ಯದಲ್ಲಿ ಸತ್ತಂತಿರುವ ಕಾಂಗ್ರೆಸ್ ಸರ್ಕಾರ&lt;/strong&gt;&lt;/h2&gt;&lt;p&gt;ಕರ್ನಾಟಕ ಸರ್ಕಾರ ಸತ್ತು ಹೋಗಿದೆ. ಶಾಸಕರು ದೆಹಲಿಗೆ ಹೋಗುತ್ತಿದ್ದಾರೆ. ಒಂದೆಡೆ ಡಿ.ಕೆ.ಶಿವಕುಮಾರ್ ಸಿಎಂ ಆಗಲು ಹೊರಟಿದ್ದಾರೆ. ಆದರೆ ಸಿದ್ದರಾಮಯ್ಯ ಸೀಟ್ ಬಿಡುತ್ತಿಲ್ಲ. ಇದೀಗ ಅವರವರ ಮಕ್ಕಳು ಅಪ್ಪಂದಿರೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಕೂಪಕ್ಕೆ ಕೊಂಡೊಯ್ಯುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಲ್ಲಿ ಒಂದು ಕ್ಯಾಬಿನೆಟ್ ಇದೆ ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;ದಾವಣಗೆರೆ ಉಪ ಚುನಾವಣೆ ಬಳಿಕ ಮುಸ್ಲಿಂ ನಾಯಕರು ಟಾರ್ಗೆಟ್ ಆಗಿದ್ದಾರೆ. ಜಮೀರ್ ಅಹಮದ್ ಟಾರ್ಗೆಟ್ ಆಗುತ್ತಿದ್ದಾರೆ. ಸದ್ಯ ಕಾಂಗ್ರೆಸ್&zwnj;ನಲ್ಲಿ ಗೊಂದಲ ಇರುವುದಂತೂ ಸತ್ಯ. ಯಾರು ಮುಖ್ಯಮಂತ್ರಿ ಅನ್ನೋದು ಜನರ ಪ್ರಶ್ನೆಯೂ ಆಗಿದೆ ಎಂದು ಛೇಡಿಸಿದರು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/r-ashok-supports-women-reservation-bill-modi-nda-history-gvd/articleshow-eio9kbg"/>
        </item>
        <item>
            <title><![CDATA[ಬೆಂಗಳೂರು: ಲಿವಿಂಗ್ ಇನ್‌ ಟುಗೆದರ್‌, ಮೋಜಿನ ಜೀವನ, ಬೀಗ ಹಾಕಿದ ಮನೆಯೇ ಟಾರ್ಗೆಟ್‌ ಮಂಡ್ಯ ರ್‍ಯಾಪಿಡೋ ಚಾಲಕನ ಕಳ್ಳತನ!]]></title>
            <link>https://kannada.asianetnews.com/karnataka-districts/bengaluru-rapido-driver-arrested-for-daytime-burglaries-targeting-locked-homes-gdp/articleshow-ge2l5ph</link>
            <guid isPermaLink="true">https://kannada.asianetnews.com/karnataka-districts/bengaluru-rapido-driver-arrested-for-daytime-burglaries-targeting-locked-homes-gdp/articleshow-ge2l5ph</guid>
            <pubDate>Sat, 18 Apr 2026 16:51:30 +0530</pubDate>
            <description><![CDATA[ಬೆಂಗಳೂರಿನಲ್ಲಿ ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ರ್&zwj;ಯಾಪಿಡೋ ಚಾಲಕ ನಾಗರಾಜ್&zwnj;ನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ಪ್ರೇಯಸಿಯೊಂದಿಗಿನ ಮೋಜಿನ ಜೀವನಕ್ಕಾಗಿ ಈ ಕೃತ್ಯ ಎಸಗುತ್ತಿದ್ದು, ಆತನಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01g92a9zw2r95j8wpt4ad9pfts,imgname-new-thumbnail-2022-new.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದಲ್ಲಿ ಹಗಲು ಹೊತ್ತಿನಲ್ಲೇ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ರ್&zwj;ಯಾಪಿಡೋ ಕ್ಯಾಬ್ ಚಾಲಕನನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ರಾಮಮೂರ್ತಿ ನಗರದ ನಿವಾಸಿ ನಾಗರಾಜ್ ಎಂದು ಗುರುತಿಸಲಾಗಿದ್ದು, ಆತನಿಂದ ಸುಮಾರು 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಒಂದು ಬೈಕ್ ಸೇರಿದಂತೆ ಒಟ್ಟು 35 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;p&gt;ಕೆಲ ದಿನಗಳ ಹಿಂದೆ ಜಯನಗರದ ಟಿ ಬ್ಲಾಕ್ ಪ್ರದೇಶದಲ್ಲಿ ನಡೆದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್&zwnj;ಪೆಕ್ಟರ್ ವಿಶ್ವನಾಥ್ ನೇತೃತ್ವದ ಪೊಲೀಸ್ ತಂಡ ತಾಂತ್ರಿಕ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ.&lt;/p&gt;&lt;h2&gt;ಮಂಡ್ಯ ಮೂಲದವನಿಗೆ ಕ್ರಿಮಿನಲ್ ಹಿನ್ನೆಲೆ&lt;/h2&gt;&lt;p&gt;ಮಂಡ್ಯ ಜಿಲ್ಲೆಯ ಹೊಸಹಳ್ಳಿ ಗ್ರಾಮದ ಮೂಲದ ನಾಗರಾಜ್&zwnj;ಗೆ ಕ್ರಿಮಿನಲ್ ಹಿನ್ನೆಲೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ರ್&zwj;ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆತ, ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಕಳ್ಳತನದ ದಾರಿಗೆ ತಿರುಗಿದ್ದಾನೆ. ರಾಮಮೂರ್ತಿ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ.&lt;/p&gt;&lt;p&gt;ನಾಗರಾಜ್&zwnj; ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡುವುದರಲ್ಲಿ ಪರಿಣತನಾಗಿದ್ದನು. ಮನೆಯವರು ಹೊರಗೆ ತೆರಳುವ ವೇಳೆ ಗೇಟ್ ಮತ್ತು ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಕೊಂಡಿರುವ ಮನೆಗಳನ್ನು ಗುರುತಿಸಿ, ಅವುಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಈ ರೀತಿಯಾಗಿ ಮನೆಗಳಲ್ಲಿ ಯಾರೂ ಇಲ್ಲದ ಸಮಯವನ್ನು ಸದುಪಯೋಗಪಡಿಸಿಕೊಂಡು ಆತನಿಂದ ಹಲವಾರು ಕೃತ್ಯಗಳು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.&lt;/p&gt;&lt;p&gt;ಕಳೆದ ತಿಂಗಳು ಜಯನಗರದ 4ನೇ ಹಂತದಲ್ಲಿ ವಾಸವಾಗಿರುವ ಕುಟುಂಬವೊಂದು ಮನೆ ಬಾಗಿಲಿಗೆ ಚೀಲ ಹಾಕಿ, ಗೇಟ್ ಲಾಕ್ ಮಾಡಿಕೊಂಡು ದಿನಸಿ ಖರೀದಿಗೆ ತೆರಳಿತ್ತು. ಈ ವೇಳೆ ಮನೆಯೊಳಗೆ ನುಗ್ಗಿದ ನಾಗರಾಜ್ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ನಂತರ ಮನೆಮಂದಿ ಮರಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;ಲಿವಿಂಗ್ ಇನ್&zwnj; ಟುಗೆದರ್&zwnj;, ಮೋಜಿನ ಜೀವನಕ್ಕೆ ಕಳ್ಳತನ!&lt;/h2&gt;&lt;p&gt;ಇನ್ನು ವೈಯಕ್ತಿಕ ಜೀವನದಲ್ಲಿ, ನಾಗರಾಜ್ ತನ್ನ ಪ್ರೇಯಸಿಯೊಂದಿಗೆ ಸಹಜೀವನ (ಲಿವಿಂಗ್ ಇನ್&zwnj; ಟುಗೆದರ್&zwnj;) ನಡೆಸುತ್ತಿದ್ದನು. ಕಳ್ಳತನದ ಮೂಲಕ ಗಳಿಸಿದ ಹಣವನ್ನು ವೈಭವಯುತ ಜೀವನಕ್ಕೆ ಹಾಗೂ ಮೋಜು-ಮಸ್ತಿಗೆ ಬಳಸುತ್ತಿದ್ದನೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ನಗರದಲ್ಲಿ ಹೆಚ್ಚುತ್ತಿರುವ ಮನೆಕಳ್ಳತನ ಪ್ರಕರಣಗಳ ನಡುವೆಯೇ ತಿಲಕನಗರ ಪೊಲೀಸರ ಈ ಕಾರ್ಯಾಚರಣೆ ಪ್ರಮುಖವಾಗಿದ್ದು, ಆರೋಪಿಯನ್ನು ಬಂಧಿಸುವ ಮೂಲಕ ಇನ್ನಷ್ಟು ಕೃತ್ಯಗಳನ್ನು ತಡೆಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-rapido-driver-arrested-for-daytime-burglaries-targeting-locked-homes-gdp/articleshow-ge2l5ph"/>
        </item>
        <item>
            <title><![CDATA[ಸ್ನೇಹಿತರ ಜೊತೆ ಪ್ರವಾಸ ದುರಂತ, ಕಾವೇರಿ ನದಿಯಲ್ಲಿ ಈಜಲು ಹೋದ ಬೆಂಗಳೂರು ಇನ್ಫೋಸಿಸ್ ಉದ್ಯೋಗಿ ಜಲಸಮಾಧಿ]]></title>
            <link>https://kannada.asianetnews.com/karnataka-districts/mandya-tragedy-infosys-employee-drowns-in-cauvery-river-at-edmuri-tourist-spot-gdp/articleshow-gsw15ui</link>
            <guid isPermaLink="true">https://kannada.asianetnews.com/karnataka-districts/mandya-tragedy-infosys-employee-drowns-in-cauvery-river-at-edmuri-tourist-spot-gdp/articleshow-gsw15ui</guid>
            <pubDate>Thu, 02 Apr 2026 08:59:56 +0530</pubDate>
            <description><![CDATA[ಬೆಂಗಳೂರಿನ ಇನ್ಫೋಸಿಸ್ ಉದ್ಯೋಗಿ ವಿಘ್ನೇಶ್ (25) ಎಂಬುವವರು ಶ್ರೀರಂಗಪಟ್ಟಣದ ಎಡಮುರಿ ಪ್ರವಾಸಿ ತಾಣದಲ್ಲಿ ಕಾವೇರಿ ನದಿಗೆ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಅವರು, ನೀರಿನ ಹರಿವಿನ ಅಂದಾಜು ಸಿಗದೆ ದುರಂತ ಅಂತ್ಯ ಕಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದು, ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn63p9xvs4ntgarjpvk9z17e,imgname-mandya-tragedy-1775100438459.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಇನ್ಫೋಸಿಸ್&zwnj; ಉದ್ಯೋಗೊಯೊಬ್ಬ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣವಾದ ಎಡಮುರಿ ಕಾವೇರಿ ನದಿಯಲ್ಲಿ ಈ ದುರಂತ ಸಂಭವಿಸಿದೆ.&lt;/p&gt;&lt;h2&gt;ಇನ್ಫೋಸಿಸ್&zwnj; ಉದ್ಯೋಗಿ&lt;/h2&gt;&lt;p&gt;ಮೃತ ಯುವಕನನ್ನು ಬೆಂಗಳೂರು ನಗರದ ರಾಮಮೂರ್ತಿನಗರ ನಿವಾಸಿ ವಿಘ್ನೇಶ್ (25) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಖ್ಯಾತ ಐಟಿ ಸಂಸ್ಥೆ ಇನ್ಫೋಸಿಸ್&zwnj;ನಲ್ಲಿ ಉದ್ಯೋಗಿಯಾಗಿದ್ದು, ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಮಂಡ್ಯ ಜಿಲ್ಲೆಗೆ ಆಗಮಿಸಿದ್ದರು. ಒಟ್ಟು ನಾಲ್ವರು ಸ್ನೇಹಿತರೊಂದಿಗೆ ಬಲಮುರಿ&ndash;ಎಡಮುರಿ ಪ್ರದೇಶಕ್ಕೆ ಭೇಟಿ ನೀಡಿದ್ದ ವಿಘ್ನೇಶ್, ಪ್ರಕೃತಿಯ ಸೌಂದರ್ಯವನ್ನು ಸವಿಯುವ ವೇಳೆ ಕಾವೇರಿ ನದಿಗೆ ಈಜಲು ಇಳಿದಿದ್ದನು.&lt;/p&gt;&lt;h2&gt;ಗೆಳೆಯರ ಎದುರೇ ಜಲಸಮಾಧಿಯಾದ ವಿಘ್ನೇಶ್&lt;/h2&gt;&lt;p&gt;ಈ ವೇಳೆ ಅಚಾನಕ್ ನೀರಿನ ಹರಿವು ಹೆಚ್ಚಾದುದರಿಂದ ಅಥವಾ ಆಳದ ಬಗ್ಗೆ ಅಂದಾಜು ತಪ್ಪಿದ ಪರಿಣಾಮ ವಿಘ್ನೇಶ್ ನೀರಿನಲ್ಲಿ ಮುಳುಗಿ ಜಲಸಮಾಧಿಯಾದ. ಸ್ನೇಹಿತರು ತಕ್ಷಣವೇ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯ್ತು.&lt;/p&gt;&lt;p&gt;ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿ, ಕೆಲ ಸಮಯದ ಬಳಿಕ ವಿಘ್ನೇಶ್ ಅವರ ಮೃತದೇಹವನ್ನು ನದಿಯಿಂದ ಹೊರತೆಗೆಯಲಾಯ್ತು. ಈ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಪ್ರವಾಸಿತಾಣಗಳಲ್ಲಿ ಈಜುವ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಎಚ್ಚರಿಕೆಯ ಕರೆಗಂಟೆಯಾಗಿದೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mandya-tragedy-infosys-employee-drowns-in-cauvery-river-at-edmuri-tourist-spot-gdp/articleshow-gsw15ui"/>
        </item>
        <item>
            <title><![CDATA[Mandya: 18 ಅಡಿ ಉದ್ದದ ಸರಳಿನಿಂದ ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದ ಭಕ್ತರು]]></title>
            <link>https://kannada.asianetnews.com/karnataka-districts/mandya-devotees-fulfill-vow-by-locking-their-mouths-with-18-foo-long-sarapali-srirangapatna-belagola-mrq/articleshow-i8l8d5k</link>
            <guid isPermaLink="true">https://kannada.asianetnews.com/karnataka-districts/mandya-devotees-fulfill-vow-by-locking-their-mouths-with-18-foo-long-sarapali-srirangapatna-belagola-mrq/articleshow-i8l8d5k</guid>
            <pubDate>Wed, 22 Apr 2026 13:04:54 +0530</pubDate>
            <description><![CDATA[ಶ್ರೀರಂಗಪಟ್ಟಣದ ಬೆಳಗೊಳದಲ್ಲಿ ಭಕ್ತರು 18 ಅಡಿ ಉದ್ದದ ಸರಳಿನಿಂದ ಬಾಯಿ ಬೀಗ ಹಾಕಿಸಿಕೊಂಡು ಬನ್ನಾರಮ್ಮ ದೇವಿಗೆ ಹರಕೆ ಸಲ್ಲಿಸಿದರು. ಇದರೊಂದಿಗೆ ಪಟ್ಟಣದಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ ಮತ್ತು ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ಶ್ರೀರಂಗಮುಡಿ ಮಹೋತ್ಸವದ ಕುರಿತು ವರದಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpt1edrq7rnw86zxx844r528,imgname-screenshot-2026-04-22-125330-1776842913559.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ : &lt;/strong&gt;ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಕೋಟೆ ಮಾಳ ಬೀದಿಯಲ್ಲಿನ ಬನ್ನಾರಮ್ಮ ದೇವಿಗೆ ಹರಿಕೆ ಹೊತ್ತ ಭಕ್ತರು 18 ಅಡಿ ಉದ್ದದ ಸರಳಿನಿಂದ ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದರು.&lt;/p&gt;&lt;p&gt;ಕಳೆದ 27 ವರ್ಷದಿಂದ ವಾಣಿಯಾರ್ ಶ್ರೀಬನ್ನಾರಿ ಮಾರಮ್ಮ ನವರ ಭಕ್ತ ಮಂಡಳಿಯಿಂದ ಶ್ರೀ ಬನ್ನಾರಿ ಮಾರಮ್ಮನ ಕರಗ ಮಹೋತ್ಸವ ನಡೆಸಲಾಗುತ್ತಿದೆ. ವಿವಿಧೆಡೆಯ ಭಕ್ತರು ದೇವಿಯಲ್ಲಿ ಹರಿಕೆ ಮಾಡಿಕೊಂಡು ಬೇವಿನ ಸೊಪ್ಪು ಹಿಡಿದು ಬಾಯಿ ಬೀಗ ಚುಚ್ಚಿಸಿ ಹರಿಕೆ ತೀರಿಸಲು ಬಣ್ಣಾರಿ ಮಾರಿಯಮ್ಮನ ಕರಗ ಮಹೋತ್ಸವದ ಅಂಗವಾಗಿ 18 ಅಡಿ ಉದ್ದದ ಸರಳಿನ ಬಾಯಿಬೀಗ ಹಾಕಿಸಿಕೊಂಡಿದ್ದರು.&lt;/p&gt;&lt;p&gt;ಸೋಮವಾರ ರಾತ್ರಿ ಬಲಮುರಿ ಕಾವೇರಿ ನದಿಯಲ್ಲಿ ದೇವರ ಮಡಿ ಮಾಡಿ ಕರಗ ಮಹೋತ್ಸವ ಮೆರವಣಿಗೆ ನಡೆಸಲಾಯಿತು. ಮಂಗಳವಾರ ಬೆಳಗ್ಗೆ ಗ್ರಾಮದ ಮುಂಭಾಗದ ಆಂಜನೇಯ ಹಾಗೂ ಮಾರಮ್ಮನ ದೇವಾಲಯದಲ್ಲಿ ವಿವಿಧ ಪೂಜೆ ಸಲ್ಲಿಸಿ, ಹರಿಕೆ ಹೊತ್ತ ಭಕ್ತರಿಗೆ ಬಾಯಿ ಬೀಗ ಹಾಕಿಸಿಕೊಂಡರು.&lt;/p&gt;&lt;p&gt;ರಣ ಬಿಸಿಲಿನ್ನು ಲೆಕ್ಕಿಸದ ಭಕ್ತರು 18 ಅಡಿ ಉದ್ದದ ದೊಡ್ಡ ಸರಳಿನ ಬಾಯಿ ಬೀಗ ಹಾಕಿಸಿಕೊಂಡು ಸರತಿ ಸಾಲಿನಲ್ಲಿ ದೇವಿ ಬಣ್ಣಾರಿ ಮಾರಿಯಮ್ಮನ ದೇಗುಲದ ವರೆಗೂ ಟಮಟೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು.&lt;/p&gt;&lt;h2&gt;&lt;strong&gt;ಶ್ರೀಶಂಕರಾಚಾರ್ಯರ ಜಯಂತಿ ಆಚರಣೆ&lt;/strong&gt;&lt;/h2&gt;&lt;p&gt;ಶ್ರೀರಂಗಪಟ್ಟಣ ಪಟ್ಟಣದ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀಶಂಕರಾಚಾರ್ಯರ ಜಯಂತಿಯನ್ನು ತಹಸೀಲ್ದಾರ್ ಚೇತನ ಯಾದವ್ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿದರು.&lt;/p&gt;&lt;p&gt;ನಂತರ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಮಾತನಾಡಿ, ಹಿಂದು ಧರ್ಮದ ಅದ್ವೈತ ಸಿದ್ಧಾಂತವನ್ನು ಪ್ರಪಂಚದಲ್ಲಿ ಶಂಕರಾಚಾರ್ಯರು ಪ್ರತಿಪಾದಿಸಿ ಅದರ ಮೌಲ್ಯಗಳನ್ನು ಜಗತ್ತಿಗೆ ಕಾಣುವಂತೆ ಎತ್ತಿ ಹಿಡಿದ ಮಹನೀಯರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.&lt;/p&gt;&lt;p&gt;ಈ ವೇಳೆ ಶ್ರೀರಂಗಪಟ್ಟಣ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಿ.ಎಚ್ ಕೃಷ್ಣ, ನಿರ್ದೇಶಕರಾದ ನರಸಿಂಹ ಮೂರ್ತಿ, ಗಂಗಾಧರ್ ಶರ್ಮ, ರಮೇಶ್ ಶರ್ಮ ಸೇರಿದಂತೆ ತಾಲೂಕು ಕಚೇರಿಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಕನ್ನಡ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.&lt;/p&gt;&lt;h3&gt;&lt;strong&gt;ನಾಳೆ ಶ್ರೀರಂಗಮುಡಿ ಮಹೋತ್ಸವ&lt;/strong&gt;&lt;/h3&gt;&lt;p&gt;ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಏ.23ರಂದು ಶ್ರೀರಂಗಮುಡಿ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ದೇವಾಲಯದ ಶ್ರೀ ರಂಗಮುಡಿ ಕೈಂಕರ್ಯ ಸಭಾ ಮುಖ್ಯಸ್ಥ ಅರ್ಚಕ ವಿಜಯಸಾರತಿ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Dharwad: 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ&lt;/strong&gt;&lt;/p&gt;&lt;p&gt;ಶ್ರೀರಂಗನಾಥನ ಜಯಂತಿ ಪ್ರಯುಕ್ತ ಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಶ್ರೀ ರಂಗ ಮುಡಿ ಉತ್ಸವವನ್ನು ದೇವಾಲಯದ ಆಡಳಿತ ಮಂಡಳಿ ಯೊಂದಿಗೆ ಶ್ರೀರಂಗನ ಉತ್ಸವಮೂರ್ತಿಗೆ ವಜ್ರಖಚಿತ ಕಿರುಮುಡಿಯ ಧಾರಣೆ ಮಾಡಿ ನಂತರ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಗುವುದು.&lt;/p&gt;&lt;p&gt;ಶ್ರೀರಂಗಮುಡಿ ಉತ್ಸವ ಮೂರ್ತಿ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಜೊತೆ ಶಾಸಕರು, ದೇಗುಲದ ಇಒ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಸದಸ್ಯರು ಒಟ್ಟುಗೂಡಿ ಚಾಲನೆ ನೀಡುವರು.&lt;/p&gt;&lt;p&gt;ಶ್ರೀರಂಗನಾಥಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ವಿಗ್ರಹಕ್ಕೆ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ದೇವರಿಗೆ ಮಹಾಭಿಷೇಕವನ್ನು ಅರ್ಚಕರ ನೆರವೇಸುವರು. ಮಧ್ಯಾಹ್ನ ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ನಿಯೋಗ, ನಂತರ ಸಂಜೆ ಪಟ್ಟಣದ ಉಪ ಖಜಾನೆಯಿಂದ ವಿತರಿಸಲಾದ ವಜ್ರ ಖಚಿತ ಚಿನ್ನದ ಕಿರೀಟವನ್ನು ರಂಗನಾಥಸ್ವಾಮಿಗೆ ಕಿರೀಟ ಧಾರಣೆ ಮಾಡಿ ಪಲ್ಲಕಿ ಮೇಲಿರಿಸಿ ಪಟ್ಟಣದ ರಾಜಬೀದಿ, ಪೂರ್ಣಯ್ಯ ಬೀದಿ ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಮಾಡಲಾಗುತ್ತದೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದೂದಿಹಳ್ಳಿ ಗ್ರಾಮದ ಕೆರೆಯ ಹೂಳು ತೆಗೆಯುವಾಗ ಸಿಕ್ತು 3 ಅಡಿ ಎತ್ತರದ ನಂದಿ ಮೂರ್ತಿ&lt;/strong&gt;&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-devotees-fulfill-vow-by-locking-their-mouths-with-18-foo-long-sarapali-srirangapatna-belagola-mrq/articleshow-i8l8d5k"/>
        </item>
        <item>
            <title><![CDATA[ಶ್ರೀರಂಗಪಟ್ಟಣದ 21 ಗ್ರಾಮ ಪಂಚಾಯ್ತಿಗಳಿಂದ  2,83,34,944 ರೂ ಗುಳುಂ; ವ್ಯಾಪಕ ಅಕ್ರಮ]]></title>
            <link>https://kannada.asianetnews.com/karnataka-districts/mandya-2-cr-rupees-corruption-from-21-gram-panchayats-of-srirangapatna-case-came-to-light-lokayukta-investigation-mrq/articleshow-ifh1qpr</link>
            <guid isPermaLink="true">https://kannada.asianetnews.com/karnataka-districts/mandya-2-cr-rupees-corruption-from-21-gram-panchayats-of-srirangapatna-case-came-to-light-lokayukta-investigation-mrq/articleshow-ifh1qpr</guid>
            <pubDate>Sun, 12 Apr 2026 16:38:14 +0530</pubDate>
            <description><![CDATA[&lt;p&gt;ಶ್ರೀರಂಗಪಟ್ಟಣ ತಾಲೂಕಿನ 21 ಗ್ರಾಮ ಪಂಚಾಯ್ತಿಗಳಲ್ಲಿ ಅಧಿಕಾರಿಗಳು ಸುಮಾರು 2.83 ಕೋಟಿ ರೂ. ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ತನಿಖೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಭೂ ವಿನ್ಯಾಸ ನಕ್ಷೆ ಅನುಮೋದನೆಯಲ್ಲೂ ವ್ಯಾಪಕ ಅಕ್ರಮಗಳು ನಡೆದಿರುವುದು ಪತ್ತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp0nyhyxxg22fzsmq9tbd9hk,imgname-srirangapatna--1775991998429.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ:&lt;/strong&gt; &amp;nbsp;ಶ್ರೀರಂಗಪಟ್ಟಣ ತಾಲೂಕಿನ 21 ಗ್ರಾಮ ಪಂಚಾಯ್ತಿಗಳು ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣದಲ್ಲಿ 2,83,34,944 ರು. ಹಣವನ್ನು ಗ್ರಾಮ ಪಂಚಾಯ್ತಿ ನಿಧಿಗೆ ಜಮೆ ಮಾಡದೆ ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣ ಲೋಕಾಯುಕ್ತ ತನಿಖೆಯಿಂದ ಬಹಿರಂಗೊಂಡಿದೆ.&lt;/p&gt;&lt;p&gt;1994-95ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಸ್ಥಳೀಯ ಲೆಕ್ಕ ಪರಿಶೋಧನಾ ವರದಿಗಳ ಪ್ರಕಾರ ಗ್ರಾಮ ಪಂಚಾಯ್ತಿಗಳು ಜನರಿಂದ ಪಡೆದ ತೆರಿಗೆ ಹಣವನ್ನು ಗ್ರಾಮ ಪಂಚಾಯ್ತಿ ನಿಧಿಗೆ ಜಮೆ ಮಾಡದಿರುವುದು ಕಂಡುಬಂದಿದೆ. ಈ ಹಣವನ್ನು ಅಧಿಕಾರಿಗಳೇ ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ನಷ್ಟ ಉಂಟುಮಾಡಿರುವುದಾಗಿ ಲೋಕಾಯುಕ್ತ ತನಿಖಾ ತಂಡ ವರದಿಯಲ್ಲಿ ತಿಳಿಸಿದೆ.&lt;/p&gt;&lt;p&gt;ಕಿರಂಗೂರು ಮೋಹನ್&zwnj;ಕುಮಾರ್ ಅವರು ಕಿರಂಗೂರು ಗ್ರಾಪಂನಲ್ಲಿ 2 ಎಕರೆ 33 ಗುಂಟೆ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಅನ್ಯಕ್ರಾಂತ ಮಾಡಿಸಿಕೊಂಡಿದ್ದು ಇದರಲ್ಲಿ ಅಕ್ರಮವಾಗಿ ವಸತಿ ಬಡಾವಣೆ ಉದ್ದೇಶಕ್ಕೆ ನಕಲಿ ಬಹು ವಿನ್ಯಾಸ ನಕ್ಷೆ ತಯಾರಿಸಿ ಕಿರಂಗೂರು ಗ್ರಾಪಂನಿಂದ ಇ-ಸ್ವತ್ತುಗಳನ್ನು ಕೊಟ್ಟಿರುವುದಾಗಿ ಆರೋಪಿಸಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದರು.&lt;/p&gt;&lt;p&gt;ದೂರು ಅರ್ಜಿಯಲ್ಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಲೋಕಾಯುಕ್ತ ಪೊಲೀಸರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ತಾಪಂ ಕಾರ್ಯನಿರ್ವಹಣಾಧಿಕಾರಿ ಕಚೇರಿ, ಶ್ರೀರಂಗಪಟ್ಟಣ ತಾಲೂಕು ಕಚೇರಿ ಹಾಗೂ ಕಿರಂಗೂರು ಗ್ರಾಪಂ ಕಚೇರಿಯನ್ನು ಶೋಧನೆ ನಡೆಸಲು ವಾರೆಂಟ್ ಹೊರಡಿಸಿದ್ದರು.&lt;/p&gt;&lt;p&gt;ಶ್ರೀರಂಗಪಟ್ಟಣ ತಾಲೂಕು ಕಚೇರಿ ಶೋಧನೆ ಮಾಡಲು ಲೋಕಾಯುಕ್ತ ಪೊಲೀಸ್ ಇನ್ಸ್&zwnj;ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಪೊಲೀಸ್ ಉಪಾಧೀಕ್ಷಕ ಎಚ್.ಟಿ.ಸುನೀಲ್&zwnj;ಕುಮಾರ್ ನೇತೃತ್ವದ ತಂಡ ಹಾಗೂ ಕಿರಂಗೂರು ಗ್ರಾಪಂ ಕಚೇರಿ ಶೋಧನೆಗೆ ಲೋಕಾಯುಕ್ತ ಪೊಲೀಸ್ ಇನ್ಸ್&zwnj;ಪೆಕ್ಟರ್ ಎಂ.ರವಿಕುಮಾರ್, ಆರ್.ಜಿ.ಲೇಪಾಕ್ಷಮೂರ್ತಿ ನೇತೃತ್ವದ ಎರಡು ತಂಡಗಳನ್ನು ರಚಿಸಿಕೊಂಡು ಶೋಧನೆಗಳಿದಾಗ ಅಕ್ರಮಗಳ ಸರಮಾಲೆಗಳು ಬೆಳಕಿಗೆ ಬಂದವು.&lt;/p&gt;&lt;h2&gt;&lt;strong&gt;ತಾಪಂ ಕಚೇರಿ, ತಾಲೂಕು ಕಚೇರಿಯಲ್ಲೂ ಅಕ್ರಮ&lt;/strong&gt;&lt;/h2&gt;&lt;p&gt;ಜಮೀನುಗಳ ವಿನ್ಯಾಸನಕ್ಷೆ ಅನುಮೋದನೆಗೆ ಅರ್ಜಿದಾರರು ಅರ್ಜಿಯನ್ನು ಪಂಚಾಯ್ತಿಗೆ ಸಲ್ಲಿಸಿರುವ ಬಗ್ಗೆ ಗ್ರಾಪಂನಿಂದ ತಾಲೂಕು ಪಂಚಾಯ್ತಿಗೆ ಅನುಮೋದನೆ ಸಂಬಂಧ ಪತ್ರ ವ್ಯವಹಾರ ನಡೆಸಿರುವ ದಾಖಲೆಗಳೇ ಇಲ್ಲ. ಕೇವಲ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿರುವ ಆದೇಶ ಪ್ರತಿ ಮಾತ್ರ ಕಂಡುಬಂದಿದೆ. ತಾಪಂ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ವೇಣು ಅರ್ಜಿದಾರರು ಕೋರಿಕೆ ಸಲ್ಲಿಸದಿದ್ದರೂ ವಿನ್ಯಾಸನಕ್ಷೆಗೆ ಅನುಮೋದನೆ ನೀಡಲಾಗಿದೆ.&lt;/p&gt;&lt;p&gt;ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿದ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಮೊಗರಹಳ್ಳಿ, ಅಣಗನಹಳ್ಳಿ, ಗ್ರಾಮದ ಹಲವಾರು ಸರ್ವೇ ನಂಬರ್&zwnj;ಗಳಲ್ಲಿರುವ ಜಮೀನುಗಳಲ್ಲಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಿನ್ಯಾಸನಕ್ಷೆ ಅನುಮೋದನೆ ಮಾಡಿರುವುದು ಕಂಡುಬಂದಿದೆ.&lt;/p&gt;&lt;p&gt;2022ನೇ ಸಾಲಿನ ಭೂ ಪರಿವರ್ತಿತ ಜಮೀನಿನ ಅನುಮೋದಿತ ವಿನ್ಯಾಸ ನಕ್ಷೆಯ 42 ಕಡತಗಳಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಡಿರುವ ಅಂತಿಮ ವಿನ್ಯಾಸ ನಕ್ಷೆ ಅನುಮೋದನೆ ಆದೇಶವನ್ನು ಹೊರತುಪಡಿಸಿ ಯಾವುದೇ ದಾಖಲೆಗಳು ಕಚೇರಿಯಲ್ಲಿ ಕಂಡುಬಂದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ವಿಸ್ತೀರ್ಣದಲ್ಲಿ ರಸ್ತೆ, ಉದ್ಯಾನವನ, ಪಾರ್ಕಿಂಗ್&zwnj;ಗಳನ್ನು ವಿನ್ಯಾಸ ನಕ್ಷೆಯಲ್ಲಿ ಅನುಮೋದಿಸದೆ ಅನುಮೋದನೆ ನೀಡಲಾಗಿದೆ.&lt;/p&gt;&lt;p&gt;ಕಿರಂಗೂರು, ಜಕ್ಕನಹಳ್ಳಿ, ಹೊಸಹಳ್ಳಿ, ಬೆಳಗೊಳ, ಚಿಕ್ಕಅಂಕನಹಳ್ಳಿ, ಕೆ.ಆರ್.ಸಾಗರ, ನೆಲಮನೆ, ನೀಲನಕೊಪ್ಪಲು, ಅಗ್ರಹಾರ, ಕೆ.ಶೆಟ್ಟಹಳ್ಳಿ, ಕಡತನಾಳು, ಬ್ರಹ್ಮಪುರ, ದರಸಗುಪ್ಪೆ, ನಗುವಿನಹಳ್ಳಿ ಗ್ರಾಮದ ನೂರಾರು ಸರ್ವೆ ನಂಬರ್&zwnj;ಗಳಲ್ಲಿ ಪಾರ್ಕಿಂಗ್ ಜಾಗ, ಕಾಲುವೆ ಯಾವ ರೀತಿ ಇದೆ, ಬಫರ್&zwnj;ಜೋನ್ ಸೇರಿದಂತೆ ಹಲವಾರು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ವಿನ್ಯಾಸನಕ್ಷೆ ಅನುಮೋದನೆ ನೀಡಲಾಗಿದೆ. ಹಲವಾರು ಪ್ರಕರಣಗಳಲ್ಲಿ ಏಕ ನಿವೇಶನಕ್ಕೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿ ಬಹು ನಿವೇಶನಗಳ ನಕಾಶೆ ಲಗತ್ತಿಸಿದ್ದರೂ ಅನುಮೋದನೆ ನೀಡಿದೆ. ಹಲವೆಡೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿಲ್ಲವೆಂದು ತಿಳಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;'ನನ್ನ ಫೋಟೋ ಇರುವ ಫ್ಲೆಕ್ಸ್ ಹಾಕಬೇಡಿ' ; ಅಭಿಮಾನಿಗಳಿಗೆ ಮಂಡ್ಯ ಎಸ್&zwnj;ಪಿ ಡಾ. ಶೋಭಾರಾಣಿ ಮನವಿ&lt;/strong&gt;&lt;/p&gt;&lt;h3&gt;&lt;strong&gt;ವಾಣಿಜ್ಯ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಬದಲಾವಣೆ&lt;/strong&gt;&lt;/h3&gt;&lt;p&gt;ಕಿರಂಗೂರು ಗ್ರಾಪಂ ವ್ಯಾಪ್ತಿಯ ಗ್ರಾಮದ ಸರ್ವೇ ನಂ1085/2, 1080/1, 1079/1, 1080/2ಈ ನಾಲ್ಕು ಸರ್ವೇ ನಂಬರ್&zwnj;ಗಳಲ್ಲಿ ಬಹು ನಿವೇಶನ ವಸತಿಯೇತರ ವಾಣಿಜ್ಯ ಉದ್ದೇಶಕ್ಕಾಗಿ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿದೆ. ಆದರೆ, ವಿನ್ಯಾಸ ನಕ್ಷೆಯು ವಾಣಿಜ್ಯ ಉದ್ದೇಶದ ನಕ್ಷೆಯ ಬದಲಾಗಿ ವಸತಿ ಉದ್ದೇಶದ ನಕ್ಷೆಯನ್ನು ತಾಪಂ ಇಒ ಆಗಿದ್ದ ವೇಣು ಅನುಮೋದನೆ ನೀಡಿದ್ದಾರೆ. ಅದರಂತೆ ಪಿಡಿಒ ಪಿ.ಎ.ಪ್ರಶಾಂತ್&zwnj;ಬಾಬು ಅವರು 56 ನಿವೇಶನಗಳ ಪೈಕಿ 10 ನಿವೇಶನಗಳನ್ನು ವಾಣಿಜ್ಯ ನಿವೇಶನಗಳೆಂದು ಇ-ಸ್ವತ್ತು ಖಾತೆ ಮಾಡಿ ಉಳಿದ 46 ನಿವೇಶನಗಳನ್ನು ವಸತಿ ಉದ್ದೇಶದ ನಿವೇಶನಗಳನ್ನಾಗಿ ಇ-ಸ್ವತ್ತು ಖಾತೆ ಮಾಡಿ ಕರ್ತವ್ಯಲೋಪವೆಸಗಿದ್ದಾರೆ. ಜಿಲ್ಲಾಧಿಕಾರಿಗಳೇ ವಾಣಿಜ್ಯ ಉದ್ದೇಶಕ್ಕೆ ಜಮೀನನ್ನು ಅನ್ಯಕ್ರಾಂತ ಮಾಡಿದ್ದರೂ ಅದನ್ನು ನಿವೇಶನ ಉದ್ದೇಶಕ್ಕೆ ಇ-ಸ್ವತ್ತು ಮಾಡಿರುವುದು ಕಂಡುಬಂದಿದೆ. ಮ್ಯುಟೇಷನ್ ವಹಿಗಳನ್ನು ವೈಟ್ನರ್&zwnj;ಗಳಿಂದ ತಿದ್ದಿ ಹೊಸದಾಗಿ ಬರೆದಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.&lt;/p&gt;&lt;h3&gt;&lt;strong&gt;ಶಾಸಕರು ನಿರ್ಮಿಸುತ್ತಿರುವ ಬಡಾವಣೆಯಲ್ಲೂ ನ್ಯೂನತೆ&lt;/strong&gt;&lt;/h3&gt;&lt;p&gt;ಕಿರಂಗೂರು ಗ್ರಾಪಂ ವ್ಯಾಪ್ತಿಯ ಒಟ್ಟು 18 ಖಾಸಗಿ ಬಡಾವಣೆಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದಾಗ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಇದರಲ್ಲಿ ಸುಮತಿ ಕೋಂ. ರಮೇಶ್&zwnj;ಬಾಬು ಅವರು ಕಿರಂಗೂರು ಗ್ರಾಮದ ಸರ್ವೆ ನಂ. 402/2, 418/3, 418/4, 419/2, 419/3ರಲ್ಲಿ ಒಟ್ಟು 2.26 ಎಕರೆಯಲ್ಲಿ ನಿವೇಶನ ಅಭಿವೃದ್ಧಿಪಡಿಸುತ್ತಿದ್ದು, ಇದರಲ್ಲೂ ಸಾಕಷ್ಟು ನ್ಯೂನತೆಗಳು ಕಂಡುಬಂದಿರುವುದನ್ನು ಲೋಕಾಯುಕ್ತ ತನಿಖಾ ತಂಡ ಪತ್ತೆ ಹಚ್ಚಿದೆ.&lt;/p&gt;&lt;p&gt;ಅರ್ಜಿದಾರರು ನಿವೇಶನಗಳ ಬಿಡುಗಡೆ ಸಂಬಂಧ ಸಲ್ಲಿಸಬೇಕಾಗಿರುವ ನೋಟರೀಕೃತ ಪ್ರಮಾಣಪತ್ರ ಸಲ್ಲಿಸಿಲ್ಲ, ನಿವೇಶನ ಬಿಡುಗಡೆ ಸಂಬಂಧ ಸಭೆಯ ನಡಾವಳಿಗಳು ಇರುವುದಿಲ್ಲ, ನಿವೇಶನ ಬಿಡುಗಡೆ ಮಾಡಲು ಸಂಬಂಧಪಟ್ಟ ಇಲಾಖೆಗಳಿಂದ ಪಡೆಯಬೇಕಾಗಿರುವ ನಿರಾಕ್ಷೇಪಣಾ ಪತ್ರಗಳು ಕಡತದಲ್ಲಿ ಲಭ್ಯವಿರುವುದಿಲ್ಲ. ಸಾರ್ವಜನಿಕ ಉಪಯುಕ್ತತೆಯ ಜಾಗವಾದ ಉದ್ಯಾನವನ, ನಾಗರೀಕ ಸೌಲಭ್ಯ, ರಸ್ತೆ ವಿಸ್ತರಣೆ ಜಾಗವನ್ನು ಹಸ್ತಾಂತರಿಸಿಕೊಂಡಿರುವ ಬಗ್ಗೆ ಪರಿತ್ಯಜನ ಪತ್ರ ಇರುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;1988ರಲ್ಲಿ ಮಿಸ್ ಆದ ಕ್ಷಣವನ್ನು ಸೆರೆ ಹಿಡಿದುಕೊಂಡ ಸುಧಾರಾಣಿ&lt;/strong&gt;&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-2-cr-rupees-corruption-from-21-gram-panchayats-of-srirangapatna-case-came-to-light-lokayukta-investigation-mrq/articleshow-ifh1qpr"/>
        </item>
        <item>
            <title><![CDATA[ಮಂಡ್ಯ: ಸ್ಟ್ಯಾಲಿನ್ ಗೆ ಬುದ್ದಿ ಇಲ್ಲ ಬುದ್ದಿ ಕಡಿಮೆ, ಆರ್. ಅಶೋಕ್ ಮಾತಿನ ಸಮರ]]></title>
            <link>https://kannada.asianetnews.com/karnataka-districts/karnataka-opposition-leader-r-ashoka-slams-congress-praises-modi-over-women-reservation-bill-gdp/articleshow-ir07b8s</link>
            <guid isPermaLink="true">https://kannada.asianetnews.com/karnataka-districts/karnataka-opposition-leader-r-ashoka-slams-congress-praises-modi-over-women-reservation-bill-gdp/articleshow-ir07b8s</guid>
            <pubDate>Fri, 17 Apr 2026 16:06:48 +0530</pubDate>
            <description><![CDATA[ಮಂಡ್ಯದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಮಹಿಳಾ ಮೀಸಲಾತಿ ಬಿಲ್ ಕುರಿತು ಕೇಂದ್ರವನ್ನು ಶ್ಲಾಘಿಸಿದರು. ಇದೇ ವೇಳೆ, ಕ್ಷೇತ್ರ ಮರುವಿಂಗಡಣೆ, ಹಿಂದಿ ಪರೀಕ್ಷೆ ವಿವಾದ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಅವರು ಟೀಕಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpdfnjbr95edhpdps6a4dekb,imgname-r-ashoka-1776421620088.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ : &lt;/strong&gt;ಮಂಡ್ಯದಲ್ಲಿ ನಡೆದ ಕಾರ್ಯಕ್ರಮದ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಲವು ರಾಜಕೀಯ ಹಾಗೂ ಸಮಕಾಲೀನ ವಿಚಾರಗಳ ಕುರಿತು ತೀಕ್ಷ್ಣ ಹೇಳಿಕೆಗಳನ್ನು ನೀಡಿದ್ದಾರೆ. ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಬಿಲ್&zwnj;ನಿಂದ ಹಿಡಿದು ರಾಜ್ಯ ರಾಜಕೀಯದ ಬೆಳವಣಿಗೆಗಳವರೆಗೆ ಹಲವು ವಿಷಯಗಳನ್ನು ಅವರು ಪ್ರಸ್ತಾಪಿಸಿದರು.&lt;/p&gt;&lt;h2&gt;ಮಹಿಳಾ ಮೀಸಲಾತಿ ಬಿಲ್&zwnj;ಗೆ ಅಭಿನಂದನೆ&lt;/h2&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿರುವುದನ್ನು ಆರ್. ಅಶೋಕ್ ಸ್ವಾಗತಿಸಿದರು. ಬಹಳ ವರ್ಷಗಳಿಂದ ಹಲವರು ಪ್ರಯತ್ನಿಸಿದರೂ ಸಾಧ್ಯವಾಗದ ಕೆಲಸವನ್ನು ಮೋದಿ ಅವರು ಸಾಧಿಸಿದ್ದಾರೆ. ಇದು ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ದೇಶದ ಮಹಿಳೆಯರಿಗೆ ಸಮಾನತೆ ಒದಗಿಸುವ ಮಹತ್ವದ ಕ್ರಮ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ಮಹಿಳೆಯರು ಕೂಡ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;ಕಾಂಗ್ರೆಸ್ ವಿರುದ್ಧ ಟೀಕೆ&lt;/h2&gt;&lt;p&gt;ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಶೋಕ್, ಕಾಂಗ್ರೆಸ್ ಧರ್ಮ ಆಧಾರಿತ ರಾಜಕೀಯ ಮಾಡುತ್ತಿದೆ. ಮಹಿಳಾ ಮೀಸಲಾತಿ ವಿಚಾರದಲ್ಲೂ ಅನಗತ್ಯ ವಿವಾದ ಸೃಷ್ಟಿಸುತ್ತಿದೆ. ಇದು ಇತಿಹಾಸ ನಿರ್ಮಾಣದ ಕ್ಷಣವಾಗಿದ್ದು, ಅದನ್ನು ರಾಜಕೀಯವಾಗಿ ತಿರುಗಿಸುವುದು ಸರಿಯಲ್ಲ ಎಂದು ಹೇಳಿದರು.&lt;/p&gt;&lt;h2&gt;ಕ್ಷೇತ್ರ ಮರುವಿಂಗಡಣೆ ವಿವಾದ&lt;/h2&gt;&lt;p&gt;ತಮಿಳುನಾಡಿನಲ್ಲಿ ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಿಲ್&zwnj;ನಲ್ಲಿ ಜನಸಂಖ್ಯೆ ಆಧಾರದ ಯಾವುದೇ ಅಂಶವಿಲ್ಲ. ಹಿಂದೆಯೇ ಕಾಂಗ್ರೆಸ್ ಈ ರೀತಿಯ ಕ್ರಮಗಳನ್ನು ಕೈಗೊಂಡಿತ್ತು. ಈಗ ತಮಿಳುನಾಡಿನ ಕ್ಷೇತ್ರಗಳು ಹೆಚ್ಚಾಗುತ್ತಿರುವುದರಲ್ಲಿ ಏನು ಸಮಸ್ಯೆ? ಎಂದು ಪ್ರಶ್ನಿಸಿದರು. ತಮಿಳುನಾಡು ಸಿಎಂ ಸ್ಟಾಲಿನ್&zwnj;ಗೆ ಬುದ್ಧಿ ಕಡಿಮೆ ಇದೆ. ಇದೇ ರೀತಿ ಕಾಂಗ್ರೆಸ್&zwnj; ನಾಯಕರು ಕೂಡ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಿಂದೆ ಲೋಕಸಭೆ ಕ್ಷೇತ್ರ ಎಷ್ಟಿರಬೇಕೆಂದು ಕಾಂಗ್ರೆಸ್&zwnj; ನಾಯಕರೇ ತೀರ್ಮಾನ ಮಾಡಿದ್ದರು. ಜನಸಂಖ್ಯೆ ಆಧಾರಿತವಾಗಿಯೇ ಕ್ಷೇತ್ರ ಮರುವಿಂಗಡಣೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳು 42 ಆಗುತ್ತಿವೆ. ಇಲ್ಲಿ ಕ್ಷೇತ್ರಗಳು ಕಡಿಮೆಯಾಗುವುದಿಲ್ಲ. ಕೇರಳದಲ್ಲಿ 20 ಕ್ಷೇತ್ರಗಳಿಂದ 30 ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59 ಕ್ಕೆ ಏರಿಕೆಯಾಗಲಿದೆ. ಆದರೂ ವಿರೋಧ ಮಾಡುತ್ತಿದ್ದಾರೆ. ಇದನ್ನು ಜಾರಿ ಮಾಡಿದರೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಎಲ್ಲರೂ ಟೆಂಟ್&zwnj; ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ವಿರೋಧ ಪಕ್ಷಗಳ ನಾಯಕರಲ್ಲಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯ ಆಗುತ್ತಿಲ್ಲ. ಯಾವುದೇ ರಾಜ್ಯಗಳಲ್ಲಿ ಸ್ಥಾನಗಳು ಕಡಿಮೆಯಾಗುತ್ತಿಲ್ಲ. ವಿರೋಧ ಪಕ್ಷಗಳ ನಾಯಕರಿಗೆ ಅಭಿವೃದ್ಧಿ ಬೇಕಿಲ್ಲ. ಕಾಂಗ್ರೆಸ್&zwnj;ನ ವಂಶಾಡಳಿತಕ್ಕೆ ಪೂರಕವಾಗಿ ಎಲ್ಲರೂ ಮಾತಾಡುತ್ತಿದ್ದಾರೆ ಎಂದರು.&lt;/p&gt;&lt;h2&gt;ಯೋಗೇಶ್ ಗೌಡ ಹತ್ಯೆ ಪ್ರಕರಣ&lt;/h2&gt;&lt;p&gt;ಯೋಗೇಶ್ ಗೌಡ ಹತ್ಯೆ ಪ್ರಕರಣದ ತೀರ್ಪಿನ ಕುರಿತು ಮಾತನಾಡಿದ ಅವರು, ಈ ಪ್ರಕರಣವು ರಾಜಕೀಯ ಕೊಲೆಗಳಿಗೆ ಒಂದು ಪಾಠವಾಗಿದೆ. ಯಾರಾದರೂ ರಾಜಕಾರಣಿಯ ಮಾತು ಕೇಳಿ ಅಪರಾಧದಲ್ಲಿ ಭಾಗಿಯಾದರೆ ಅದರ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ. ಕಾಂಗ್ರೆಸ್ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿತ್ತು, ಆದರೆ ಸಿಬಿಐ ತನಿಖೆಯಿಂದ ಸತ್ಯ ಬಹಿರಂಗವಾಗಿದೆ ಎಂದು ಹೇಳಿದರು.&lt;/p&gt;&lt;h2&gt;ದೇವೇಗೌಡರ ರಾಜ್ಯಸಭೆ ವಿಚಾರ&lt;/h2&gt;&lt;p&gt;ಹೆಚ್&zwnj;.ಡಿ. ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರ ಕುರಿತು ಮಾತನಾಡಿದ ಅವರು, ಇದು ರಾಷ್ಟ್ರೀಯ ಮಟ್ಟದ ನಾಯಕರು ತೀರ್ಮಾನಿಸುವ ವಿಷಯ ಎಂದು ತಿಳಿಸಿದರು.&lt;/p&gt;&lt;h2&gt;ಹಿಂದಿ ಪರೀಕ್ಷೆ, ಗ್ರೇಸ್ ಮಾರ್ಕ್ಸ್ ವಿವಾದ&lt;/h2&gt;&lt;p&gt;ಹಿಂದಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್ ಆದೇಶವನ್ನು ಪಾಲಿಸಬೇಕು. ವಿದ್ಯಾರ್ಥಿಗಳ ವಿಚಾರದಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.&lt;/p&gt;&lt;h2&gt;ಕನ್ನಡಕ್ಕೆ ಆದ್ಯತೆ&lt;/h2&gt;&lt;p&gt;ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಾವುದೇ ನಿರ್ಧಾರ ಕೈಗೊಳ್ಳಬೇಕು. 365 ದಿನ ಓದಿದ ಮಕ್ಕಳಿಗೆ ಅನ್ಯಾಯವಾಗಬಾರದು ಎಂದು ಹೇಳಿದರು. ಉರ್ದು ಶಾಲೆಗಳಲ್ಲಿ ಕನ್ನಡದ ಸ್ಥಿತಿ ಕುರಿತೂ ಪ್ರಶ್ನೆ ಎತ್ತಿದ ಅವರು, ಈ ವಿಷಯದಲ್ಲಿ ಸಮಗ್ರ ಚರ್ಚೆ ಅಗತ್ಯವಿದೆ ಎಂದರು. ರಾಜ್ಯದ ಮಕ್ಕಳು ಹಿಂದಿ ಓದುವ ಮೊದಲೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಪರೀಕ್ಷೆಯ ಸಮಯದಲ್ಲಿ ತುಘಲಕ್&zwnj; ದರ್ಬಾರ್&zwnj; ಮಾಡುವ ಅಗತ್ಯವಿರಲಿಲ್ಲ. ನಾನು ಕೂಡ ಕನ್ನಡದ ಹೋರಾಟಗಾರನಾಗಿದ್ದು, ಗೋಕಾಕ್&zwnj; ಚಳವಳಿಯಲ್ಲಿ ಭಾಗವಹಿಸಿ ಪೊಲೀಸರ ಲಾಠಿ ಏಟಿನಿಂದ ಕಾಲಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದೆ. ಹೊಸೂರಿನಲ್ಲಿ ಹೆಚ್ಚಿನವರು ಕನ್ನಡ ಮಾತಾಡುತ್ತಾರೆ. ಕಾಸರಗೋಡಿನಲ್ಲೂ ಕನ್ನಡಿಗರು ಹೆಚ್ಚಿದ್ದಾರೆ. ಅಲ್ಲಿ ಕನ್ನಡ ಇಲ್ಲವೆಂದರೆ ಸಮಸ್ಯೆಯಾಗುತ್ತದೆ. ಉರ್ದು ಶಾಲೆಗಳಲ್ಲಿ ಮೊದಲಿಗೆ ಉರ್ದು, ಎರಡನೇ ಭಾಷೆಯಾಗಿ ಇಂಗ್ಲಿಷ್&zwnj; ಓದುತ್ತಾರೆ. ಕೊನೆಯ ಭಾಷೆಯಾಗಿ ಕನ್ನಡ ಓದುತ್ತಾರೆ. ತ್ರಿಭಾಷಾ ಸೂತ್ರ ಇಲ್ಲವೆಂದರೆ ಅಲ್ಲಿ ಕನ್ನಡವೂ ಇರುವುದಿಲ್ಲ. ವಿದ್ಯಾರ್ಥಿಗಳ ವಿಚಾರ ಬಂದಾಗ ಸದನ ಸಮಿತಿ ರಚಿಸಿ ಚರ್ಚೆ ಮಾಡಬೇಕಿತ್ತು ಎಂದರು&lt;/p&gt;&lt;h2&gt;ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ&lt;/h2&gt;&lt;p&gt;ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ ಅಶೋಕ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗೊಂದಲದಲ್ಲಿದೆ. ಮುಖ್ಯಮಂತ್ರಿಯ ಸ್ಥಾನಕ್ಕಾಗಿ ಒಳಪೈಪೋಟಿ ನಡೆಯುತ್ತಿದೆ. ಶಾಸಕರು ದೆಹಲಿಗೆ ತೆರಳುತ್ತಿರುವುದು ಇದಕ್ಕೆ ಸಾಕ್ಷಿ ಎಂದರು. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಲಾಗುತ್ತಿದೆ. ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದರು. ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿರುವುದಕ್ಕೆ ಮುಸ್ಲಿಮ್&zwnj; ಮುಖಂಡರು ಕಾಂಗ್ರೆಸ್&zwnj; ವಿರುದ್ಧ ಮಾತಾಡುತ್ತಿದ್ದಾರೆ. ಸಚಿವ ಜಮೀರ್&zwnj; ಅಹ್ಮದ್&zwnj; ಅವರನ್ನೂ ಟಾರ್ಗೆಟ್&zwnj; ಮಾಡಲಾಗುತ್ತಿದೆ. ಇಡೀ ಪಕ್ಷ ಹಾಗೂ ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ. ಇಂದೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್&zwnj;ಡಿಎ ಸರ್ಕಾರ ಬರಲಿದೆ. ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಕ್ಕೆ ನಮಗೇನೂ ಸಮಸ್ಯೆಯಾಗಿಲ್ಲ, ಬಿಜೆಪಿ ಬೆಂಬಲಿಸುತ್ತೇವೆ ಎಂದು ಮುಸ್ಲಿಮರು ಹೇಳಿದ್ದಾರೆ. ಅವರ ಈ ನಡೆಯನ್ನು ಸ್ವಾಗತಿಸುತ್ತೇನೆ ಎಂದರು.&lt;/p&gt;&lt;h2&gt;ಮುಂದಿನ ಚುನಾವಣೆ ಕುರಿತು ಭವಿಷ್ಯ&lt;/h2&gt;&lt;p&gt;ಮುಂದಿನ ಚುನಾವಣೆಯ ಕುರಿತು ಮಾತನಾಡಿದ ಅವರು, 2028ರಲ್ಲ, ಇಂದೇ ಚುನಾವಣೆ ನಡೆದರೂ ನಮ್ಮ ಎನ್&zwnj;ಡಿಎ ಮೈತ್ರಿ ಶೇ.100 ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಒಟ್ಟಾರೆ ಮಂಡ್ಯದಲ್ಲಿ ಆರ್. ಅಶೋಕ್ ನೀಡಿದ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-opposition-leader-r-ashoka-slams-congress-praises-modi-over-women-reservation-bill-gdp/articleshow-ir07b8s"/>
        </item>
        <item>
            <title><![CDATA[ಸಂತ್ರಸ್ತೆ ಜತೆ ಮದುವೆಯಾಗಲು ಆರೋಪಿಗೆ 23 ದಿನ ಜಾಮೀನು!]]></title>
            <link>https://kannada.asianetnews.com/state/karnataka-high-court-grants-bail-to-accused-to-marry-victim-bangalore-news-san/articleshow-kk97gtg</link>
            <guid isPermaLink="true">https://kannada.asianetnews.com/state/karnataka-high-court-grants-bail-to-accused-to-marry-victim-bangalore-news-san/articleshow-kk97gtg</guid>
            <pubDate>Fri, 03 Apr 2026 06:38:38 +0530</pubDate>
            <description><![CDATA[&lt;p&gt;ವಿವಾಹವಾಗುವುದಾಗಿ ಯುವತಿಗೆ ಮೋಸ ಮಾಡಿದ್ದ ವ್ಯಕ್ತಿಗೆ ಅದೇ ಹುಡುಗಿಯ ಜೊತೆ ಮದುವೆಯಾಗಲು ಕರ್ನಾಟಕ ಹೈಕೋರ್ಟ್&zwnj; 23 ದಿನ ಜಾಮೀನು ನೀಡಿದೆ. ಕೇಸ್&zwnj; ದಾಖಲು ಬಳಿಕ ಇಬ್ಬರ ಮಧ್ಯೆ ರಾಜಿ ಸಂಧಾನ ನಡೆದಿತ್ತು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5xvrhbtf3jycpmrdj3gwwck,imgname-karnataka-high-court-1758717560186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.3): &lt;/strong&gt;ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ ಬಳಿಕ ವಂಚಿಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿಗೆ ಸಂತ್ರಸ್ತೆಯನ್ನು ಮದುವೆಯಾಗಬೇಕು ಎಂಬ ಷರತ್ತಿನೊಂದಿಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್&zwnj; ಆದೇಶಿಸಿದೆ. ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಮಂಡ್ಯ ಜಿಲ್ಲೆಯ ಹುಲ್ಲಗಾಲದ ಮಹದೇವ ಅಲಿಯಾಸ್&zwnj; ಮಾದೇವ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಸಂತ್ರಸ್ತೆಯನ್ನು ಮದುವೆಯಾಗಲು ಅರ್ಜಿದಾರನಿಗೆ ಏ.2 ರಿಂದ ಏ.24ರವರೆಗೆ ಜಾಮೀನು ನೀಡಿ ಆದೇಶಿಸಿದೆ.&lt;/p&gt;&lt;p&gt;ಅರ್ಜಿ ವಿಚಾರಣೆ ವೇಳೆ ಅರ್ಜಿದಾರನ ಪರ ವಕೀಲರು, ಸಂತ್ರಸ್ತೆಯನ್ನು ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ಆರೋಪ ಸಂಬಂಧ ಅರ್ಜಿದಾರನ ವಿರುದ್ಧ ತಲಘಟ್ಟಪುರ ಪೊಲೀಸ್&zwnj; ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಸದ್ಯ ಅರ್ಜಿದಾರರು ಮತ್ತು ದೂರುದಾರರು ಮಾತುಕತೆ ನಡೆಸಿ ರಾಜಿ ಮಾಡಿಕೊಂಡಿದ್ದು, ವಿವಾಹಕ್ಕೆ ಇಬ್ಬರೂ ಒಪ್ಪಿದ್ದಾರೆ. ಆದರೆ, ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಮದುವೆಯಾಗಲು ಅಡ್ಡಿಯಾಗಿದ್ದು, ಜಾಮೀನು ನೀಡಬೇಕು ಎಂದು ಕೋರಿದರು.&lt;/p&gt;&lt;h2&gt;&lt;strong&gt;ಷರತ್ತು ವಿಧಿಸಿದ ಹೈಕೋರ್ಟ್&zwnj;&lt;/strong&gt;&lt;/h2&gt;&lt;p&gt;ಈ ಮನವಿ ಪರಿಗಣಿಸಿದ ನ್ಯಾಯಮೂರ್ತಿಗಳು, ವಿಚಿತ್ರ ಸನ್ನಿವೇಶದಲ್ಲಿ ಅರ್ಜಿದಾರನಿಗೆ ಜಾಮೀನು ನೀಡುವುದು ಸೂಕ್ತವೆನಿಸಿದೆ. ಆರೋಪಿಯು ಸಂತ್ರಸ್ತೆಯನ್ನು ವಿವಾಹವಾದ ಬಳಿಕ ಮದುವೆ ನೋಂದಾಯಿಸಿದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಅರ್ಜಿದಾರನಿಗೆ ನಿರ್ದೇಶಿಸಿದ್ದು, ವಿಚಾರಣೆಯನ್ನು ಏ.24ಕ್ಕೆ ಮುಂದೂಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-high-court-grants-bail-to-accused-to-marry-victim-bangalore-news-san/articleshow-kk97gtg"/>
        </item>
        <item>
            <title><![CDATA['ಕರ್ನಾಟಕ ನನಗೆ ಪ್ರೇರಣೆ': ಭೈರವೈಕ್ಯ ಮಂದಿರ ಉದ್ಘಾಟಿಸಿ ‘ವಿಕಸಿತ ಭಾರತ' ನಿರ್ಮಾಣಕ್ಕೆ  ನಮೋ ಪಣ, ಮೋದಿ ಹೇಳಿದ 9 ಸಂಕಲ್ಪಗಳಾವುವು?]]></title>
            <link>https://kannada.asianetnews.com/state/karnataka-is-my-inspiration-pm-modi-inaugurates-bhyravykya-mandira-pledges-for-viksit-bharat-with-9-resolutions-rav/articleshow-knisv9v</link>
            <guid isPermaLink="true">https://kannada.asianetnews.com/state/karnataka-is-my-inspiration-pm-modi-inaugurates-bhyravykya-mandira-pledges-for-viksit-bharat-with-9-resolutions-rav/articleshow-knisv9v</guid>
            <pubDate>Thu, 16 Apr 2026 05:17:37 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಬಾಲಗಂಗಾಧರನಾಥ ಸ್ವಾಮೀಜಿಯವರ &lsquo;ಶ್ರೀ ಗುರು ಭೈರವೈಕ್ಯ&rsquo; ಮಂದಿರವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ, 'ವಿಕಸಿತ ಭಾರತ' ನಿರ್ಮಾಣಕ್ಕಾಗಿ ದೇಶದ ಜನರು ಪಾಲಿಸಬೇಕಾದ ಒಂಬತ್ತು ಪ್ರಮುಖ ಸಂಕಲ್ಪಗಳ ಬಗ್ಗೆ ಅವರು ಕರೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp9r627g6ghvffaya9j0sxgf,imgname-----------------------2026-04-16t050834.646-1776296331504.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ ಮಂಜುನಾಥ&lt;/strong&gt;&lt;/p&gt;&lt;p&gt;&lsquo;ವಿಕಸಿತ ಭಾರತ&rsquo; ಸಾಕಾರಕ್ಕಾಗಿ ದೇಶದ ಜನರು ಒಂಬತ್ತು ಸಂಕಲ್ಪಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಅಲ್ಲದೆ, ಆದಿಚುಂಚನಗಿರಿ ಮಠದ ಪರಂಪರೆಯನ್ನು ಕೊಂಡಾಡಿದ್ದಾರೆ.&lt;/p&gt;&lt;p&gt;ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಗೆ ಭೇಟಿ ನೀಡಿದ ಮೋದಿ, ಪ್ರಸಿದ್ಧ ನಾಥ ಪಂಥದ ಶೈವ ಮಠವಾದ ಆದಿಚುಂಚನಗಿರಿಯ 71ನೇ ಪೀಠಾಧಿಪತಿ ಬಾಲಗಂಗಾಧರನಾಥ ಸ್ವಾಮೀಜಿಯವರ &lsquo;ಶ್ರೀ ಗುರು ಭೈರವೈಕ್ಯ&rsquo; ಮಂದಿರ ಲೋಕಾರ್ಪಣೆಗೊಳಿಸಿ ಮಾತನಾಡಿದರು.&lt;/p&gt;&lt;h2&gt;ಕನ್ನಡಲ್ಲಿ ಮಾತು ಆರಂಭಿಸಿದ ಪ್ರಧಾನಿ&lt;/h2&gt;&lt;p&gt;&lsquo;ಕರ್ನಾಟಕದ ಸಹೋದರ-ಸಹೋದರಿಯರಿಗೆ ನನ್ನ ನಮಸ್ಕಾರಗಳು&rsquo; ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, &lsquo;ವಿಕಸಿತ ಭಾರತ&rsquo; ಹಾಗೂ &lsquo;ವಿಕಸಿತ ಕರ್ನಾಟಕ&rsquo;ದ ಸಾಕಾರಕ್ಕೆ 9 ಸಂಕಲ್ಪಗಳನ್ನು ತೊಡುವಂತೆ ಜನರಿಗೆ ಕರೆ ನೀಡಿದರು. &lsquo;ಜಲ ಸಂರಕ್ಷಣೆ, ತಾಯಿಯ ಹೆಸರಿನಲ್ಲಿ ಸಸಿ ನೆಡುವುದು, ಸ್ವಚ್ಛತೆ, ಸ್ವದೇಶಿ ಮತ್ತು ಆತ್ಮನಿರ್ಭರ, ಪ್ರವಾಸೋದ್ಯಮಕ್ಕೆ ಉತ್ತೇಜನ, ರಾಸಾಯನಿಕ ಮುಕ್ತ ಕೃಷಿ, ಆರೋಗ್ಯ, ಯೋಗ-ಕ್ರೀಡೆ, ಫಿಟ್&zwnj;ನೆಸ್&zwnj; ಹಾಗೂ ಸೇವಾ ಮನೋಭಾವ&rsquo;ಗಳು ಭಾರತವನ್ನು ಸದೃಢ, ಸುಂದರ ರಾಷ್ಟ್ರವನ್ನಾಗಿ ನಿರ್ಮಿಸಲು ಪ್ರೇರಕ ಶಕ್ತಿಯಾಗಿವೆ. ಇವೆಲ್ಲವನ್ನೂ ಪಾಲಿಸಿದರೆ &lsquo;ವಿಕಸಿತ ಭಾರತ&rsquo; ಹಾಗೂ &lsquo;ವಿಕಸಿತ ಕರ್ನಾಟಕ&rsquo; ಸಾಧ್ಯವಾಗಲಿದೆ ಎಂದು ಪ್ರತಿಪಾದಿಸಿದರು.&lt;/p&gt;&lt;h3&gt;ಕರ್ನಾಟಕಕ್ಕೆ ಬಂದಾಗಲೆಲ್ಲಾ ನನಗೆ ಪ್ರೇರಣೆ&lt;/h3&gt;&lt;p&gt;ತಮ್ಮ ಭಾಷಣದಲ್ಲಿ ಆದಿಚುಂಚನಗಿರಿಯ ಸೇವೆಯನ್ನು ಸ್ಮರಿಸಿದ ಮೋದಿ, ಪ್ರತಿ ಬಾರಿ ಕರ್ನಾಟಕಕ್ಕೆ ಬಂದಾಗಲೆಲ್ಲಾ ನನಗೆ ಪ್ರೇರಣೆ ಸಿಗುತ್ತದೆ. ಜಗತ್ತಿನಲ್ಲಿ ಎಲ್ಲೂ ನಮ್ಮ ತರಹದ ದೊಡ್ಡ ಪರಂಪರೆ ಇಲ್ಲ. ಈ ಮಠದಲ್ಲಿ ನಿರಂತರತೆಯ ರೂಪದಲ್ಲಿ ಪರಂಪರೆ ಮುಂದುವರಿದಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ದೂರದೃಷ್ಟಿಯ ಹೆಜ್ಜೆಯನ್ನು ಇಟ್ಟಿದ್ದಾರೆ. ಭೈರವೈಕ್ಯ ಸ್ವಾಮೀಜಿಗಳು ಕೇವಲ ಮನುಷ್ಯರನ್ನು ಮಾತ್ರ ಉದ್ದಾರ ಮಾಡುತ್ತಿಲ್ಲ. ಜೀವ ಸಂಕುಲದ ರಕ್ಷಣೆ ಮಾಡುತ್ತಿದ್ದಾರೆ. ಇಲ್ಲಿ ಅನ್ನ, ಅಕ್ಷರ, ಆರೋಗ್ಯ, ಆಧ್ಯಾತ್ಮ, ಅರಣ್ಯ, ಆಶ್ರಯ, ಆಕಳು, ಅನುಗ್ರಹ, ಅನುಕಂಪ ಸೇರಿ 9 ಸಿದ್ದಾಂತದ ಮೇಲೆ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ನಾವು 9 ಸಾಮೂಹಿಕ ಸಂಕಲ್ಪ ತೊಡಬೇಕು ಎಂದು ಹೇಳಿದರು.&lt;/p&gt;&lt;p&gt;&lt;strong&gt;ಮೋದಿ ಹೇಳಿದ 9 ಸಂಕಲ್ಪ&lt;/strong&gt;&lt;/p&gt;&lt;p&gt;1. ನೀರು ಸಂರಕ್ಷಿಸಿ, ಉತ್ತಮ ನಿರ್ವಹಣೆ&lt;/p&gt;&lt;p&gt;2. ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡಿ&lt;/p&gt;&lt;p&gt;3. ಸಾರ್ವಜನಿಕ, ಧಾರ್ಮಿಕ ಸ್ಥಳದಲ್ಲಿ ಸ್ವಚ್ಛತೆ&lt;/p&gt;&lt;p&gt;4. ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಿ&lt;/p&gt;&lt;p&gt;5. ದೇಶೀಯ ಪ್ರವಾಸೋದ್ಯಮ ಪ್ರೋತ್ಸಾಹಿಸಿ&lt;/p&gt;&lt;p&gt;6. ರಾಸಾಯನಿಕರಹಿತ ನೈಸರ್ಗಿಕ ಕೃಷಿ ಮಾಡಿ&lt;/p&gt;&lt;p&gt;7. ಸಿರಿಧಾನ್ಯ, ಸ್ವಸ್ಥ ಆಹಾರ, ಕಮ್ಮಿ ಎಣ್ಣೆ ಬಳಸಿ&lt;/p&gt;&lt;p&gt;8. ಯೋಗ ಮತ್ತು ಫಿಟ್ನೆಸ್&zwnj; ಅಳವಡಿಸಿಕೊಳ್ಳಿ.&lt;/p&gt;&lt;p&gt;9. ಸೇವಾ ಮನೋಭಾವ ಬೆಳೆಸಿಕೊಳ್ಳಿ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-is-my-inspiration-pm-modi-inaugurates-bhyravykya-mandira-pledges-for-viksit-bharat-with-9-resolutions-rav/articleshow-knisv9v"/>
        </item>
        <item>
            <title><![CDATA[ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ: ಕುರುಬರ ಸಂಘದ ಜಿಲ್ಲಾಧ್ಯಕ್ಷ, ಸಿಎಂ ಸಿದ್ದು ಆಪ್ತನಿಗೆ ಮಸಿ ಎರಚಿ ಆಕ್ರೋಶ]]></title>
            <link>https://kannada.asianetnews.com/gallery/state/members-smeared-ink-on-mandya-district-president-of-shepherd-association-q55p9i9</link>
            <guid isPermaLink="true">https://kannada.asianetnews.com/gallery/state/members-smeared-ink-on-mandya-district-president-of-shepherd-association-q55p9i9</guid>
            <pubDate>Thu, 26 Mar 2026 14:37:56 +0530</pubDate>
            <description><![CDATA[&lt;p&gt;ಮಂಡ್ಯ ಕುರುಬರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಕಿತ್ತಾಟದಲ್ಲಿ, ಅಧಿಕಾರಾವಧಿ ಮುಗಿದರೂ ಮುಂದುವರೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಹಾಲಿ ಅಧ್ಯಕ್ಷ ಸುರೇಶ್&zwnj;ಗೆ ಸದಸ್ಯರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmmng7y3kk7zeg61dx2p8x7v,imgname-mandya-kurubara-sangha-fight--4--1774515134403.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯ ಕುರುಬರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಕಿತ್ತಾಟದಲ್ಲಿ, ಅಧಿಕಾರಾವಧಿ ಮುಗಿದರೂ ಮುಂದುವರೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಹಾಲಿ ಅಧ್ಯಕ್ಷ ಸುರೇಶ್&zwnj;ಗೆ ಸದಸ್ಯರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಮಂಡ್ಯ: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ ನಡಿತಿದ್ರೆ ಇಂದು ಮಂಡ್ಯದಲ್ಲಿ ಕುರುಬರ ಸಂಘದ ಜಿಲ್ಲಾಧ್ಯಕ್ಷಗಾದಿಗಾಗಿ ಕಿತ್ತಾಟ ನಡೆದಿದ್ದು, ಮಂಡ್ಯದ ಕುರುಬರ ಸಂಘದ ಆವರಣದಲ್ಲಿ ಹೈಡ್ರಾಮಾ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;&lt;strong&gt;ಬೋಟ್&zwnj;ಗೆ ಏರುವ ವೇಳೆ ಪದ್ಮಾ ನದಿಗುರುಳಿದ ಬಸ್ : 25 ಜನರ ದಾರುಣ ಸಾವು&lt;/strong&gt;&lt;/p&gt;&lt;img&gt;&lt;p&gt;ಕುರುಬರ ಸಂಘದ ಜಿಲ್ಲಾಧ್ಯಕ್ಷನಿಗೆ ಸದಸ್ಯರು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಅವಧಿ ಮುಗಿದಿದೆ, ಜಿಲ್ಲಾಧ್ಯಕ್ಷ ಸ್ಥಾನ ಬಿಟ್ಟು ಹೋಗಿ ಎಂದು ಮಂಡ್ಯ ಕುರುಬರ ಸಂಘದ ಹಾಲಿ ಜಿಲ್ಲಾಧ್ಯಕ್ಷರಾಗಿರುವ ಸುರೇಶ್&zwnj;ಗೆ ಮಸಿ ಎರಚಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನನ್ನ ಯಾಕೆ ಬಿಟ್ಟೋದೆ: ಮಲತಾಯಿಯ ಕಿರುಕುಳದ ಬಳಿಕ ತಾಯಿ ಸಮಾಧಿ ಬಳಿ ಗೋಳಾಡಿದ ಪುಟ್ಟ ಬಾಲಕಿ&lt;/strong&gt;&lt;/p&gt;&lt;img&gt;&lt;p&gt;ಕುರುಬರ ಸಂಘದ ಹಾಲಿ ಜಿಲ್ಲಾಧ್ಯಕ್ಷರಾಗಿರುವ ಸುರೇಶ್&zwnj; ಕಳೆದ ಅವಧಿಯಲ್ಲಿ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದಾರೆ. ಮಾರ್ಚ್ 6 ರಂದು ಸುರೇಶ್ ಅಧಿಕಾರದ ಅವಧಿ ಮುಕ್ತಾಯವಾಗಿದ್ದು, ಆದರೂ ಚುನಾವಣೆ&zwnj; ನಡೆಸದೇ ಮತ್ತೊಂದು ಅವಧಿಗೆ ಜಿಲ್ಲಾಧ್ಯಕ್ಷರಾಗಿ ಮುಂದುವರೆಯಲು ಸುರೇಶ್ ಹಿಂಭಾಗಲಿನಿಂದ ಪ್ರಯತ್ನಿಸುತ್ತಿದ್ದಾರೆ ಎಂದು ಕುರುಬರ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಹಿಳೆಯ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಅಮ್ಮನ ಸ್ಕೂಟಿ ಮಾರಲು ಹೋಗಿ ಸಿಕ್ಕಿಬಿದ್ದ ಮಗಳು&lt;/strong&gt;&lt;/p&gt;&lt;img&gt;&lt;p&gt;ಇಂದು ಸಂಘದ ಕಚೇರಿಗೆ ಬಂದ ವೇಳೆ ಸದಸ್ಯರು ಕೆಲ ಪಧಾಧಿಕಾರಿಗಳಿಗೆ ಘೇರಾವ್ ಹಾಕಿದ್ದು, ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ವಾಗ್ವಾದದ ವೇಳೆ ಜಿಲ್ಲಾಧ್ಯಕ್ಷ ಸುರೇಶ್&zwnj;ಗೆ ಕೆಲವರು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&amp;nbsp;&lt;/strong&gt;&lt;strong&gt; 10ನೇ ಕ್ಲಾಸ್ ಕೂಡ ಓದಿಲ್ಲ, ಆದ್ರೂ ದಂತವೈದ್ಯ: 20 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದ ನಕಲಿ ಡೆಂಟಿಸ್ಟ್ ಅರೆಸ್ಟ್&lt;/strong&gt;&lt;/p&gt;&lt;img&gt;&lt;p&gt;ಅಧಿಕಾರ ಬಿಟ್ಟು ಹೋಗಿ ಕುರುಬರ ಸಂಘದ ಜಿಲ್ಲಾಧ್ಯಕ್ಷನ ಗಾದಿಗೆ ಚುನಾವಣೆ ನಡೆಸುವಂತೆ ಸದಸ್ಯರು ಆಗ್ರಹಿಸಿದ್ದಾರೆ. ಚುನಾವಣೆ ನಡೆಸಿ ಗೆದ್ದು ಬಳಿಕ ಜಿಲ್ಲಾಧ್ಯಕ್ಷನಾಗು, ಅಲ್ಲಿವರೆಗೂ ಸಂಘಕ್ಕೆ ಬರಬೇಡಾ ಎಂದು ಕೆಲವರು ಘೇರಾವ್ ಹಾಕಿದ್ದಾರೆ. ಇದೇ ಸಮಯದಲ್ಲಿ ಕಚೇರಿ ಒಳಹೋಗಲು ಯತ್ನಿಸಿದ ಸುರೇಶ್ ಅವರನ್ನು ಕೆಲ ಸದಸ್ಯರು ಎಳೆದು ಹೊರ ತಳ್ಳಿದ್ದಾರೆ. ಬಳಿಕ ಪೊಲೀಸರ ರಕ್ಷಣೆಯಲ್ಲಿ ಕುರುಬರ ಸಂಘದ ಅಧ್ಯಕ್ಷ ಸುರೇಶ್ ತೆರಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;2 ವಾರ ಡೈಪರ್ ಚೇಂಜ್ ಮಾಡದೇ 4 ತಿಂಗಳ ಮಗು ಸಾವಿಗೆ ಕಾರಣರಾದ ಪಾಪಿ ಪೋಷಕರು&lt;/strong&gt;&lt;/p&gt;]]></content:encoded>
            <category>mandya</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/members-smeared-ink-on-mandya-district-president-of-shepherd-association-q55p9i9"/>
        </item>
        <item>
            <title><![CDATA[ಮಂಡ್ಯ ಜೆಡಿಎಸ್ ಮಾಜಿ ಶಾಸಕ ಅನ್ನದಾನಿ ವಿರುದ್ಧ ಅಕ್ರಮ ಸಂಬಂಧ ಆರೋಪ; ಕುಮಾರಣ್ಣಗೆ ದೂರು ಕೊಟ್ಟ ಸಂತ್ರಸ್ತ ಗಂಡ!]]></title>
            <link>https://kannada.asianetnews.com/state/mandya-jds-ex-mla-dr-k-annadani-illegal-affair-complaint-to-union-minister-hd-kumaraswamy-sat/articleshow-rf85ka3</link>
            <guid isPermaLink="true">https://kannada.asianetnews.com/state/mandya-jds-ex-mla-dr-k-annadani-illegal-affair-complaint-to-union-minister-hd-kumaraswamy-sat/articleshow-rf85ka3</guid>
            <pubDate>Mon, 06 Apr 2026 15:16:27 +0530</pubDate>
            <description><![CDATA[&lt;p&gt;ಮಳವಳ್ಳಿಯ ಜೆಡಿಎಸ್ ಮಾಜಿ ಶಾಸಕ ಡಾ. ಕೆ. ಅನ್ನದಾನಿ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಪ್ರಸನ್ನ ಎಂಬುವವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ದೂರು ನೀಡಿದ್ದಾರೆ. ಅನ್ನದಾನಿ ತನ್ನ ಪತ್ನಿಗಾಗಿ ಮೈಸೂರಿನಲ್ಲಿ ಫ್ಲ್ಯಾಟ್ ಕೊಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knh2q3ctwmc3yykmbj7qkybr,imgname-mandya-dr-k-annadanii-1775468514713.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಏ.06): ಸ&lt;/strong&gt;ಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್&zwnj;ನ ಮಾಜಿ ಶಾಸಕರೊಬ್ಬರ ವಿರುದ್ಧ ಗಂಭೀರ ಸ್ವರೂಪದ ದೂರಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಳವಳ್ಳಿಯ ಜೆಡಿಎಸ್ ಮಾಜಿ ಶಾಸಕ ಡಾ. ಕೆ. ಅನ್ನದಾನಿ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಇಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದಾರೆ.&lt;/p&gt;&lt;h3&gt;&lt;strong&gt;ದಿಶಾ ಸಭೆಯಲ್ಲಿ ಸಾರ್ವಜನಿಕ ಅಳಲು&lt;/strong&gt;&lt;/h3&gt;&lt;p&gt;ಮಂಡ್ಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ 'ದಿಶಾ' ಸಭೆ ಆಯೋಜಿಸಲಾಗಿತ್ತು. ಸಭೆಗೆ ಆಗಮಿಸಿದ್ದ ಕುಮಾರಣ್ಣನವರನ್ನು ಭೇಟಿಯಾದ ಮಳವಳ್ಳಿ ಮೂಲದ ಪ್ರಸನ್ನ ಎಂಬ ವ್ಯಕ್ತಿ, ಮಾಜಿ ಶಾಸಕರ ವಿರುದ್ಧ ಸಾಕ್ಷ್ಯ ಸಮೇತ ಅಹವಾಲು ಸಲ್ಲಿಸಿದರು. &lsquo;ನನ್ನ ಸಂಸಾರ ಹಾಳಾಗಲು ಅನ್ನದಾನಿ ಅವರೇ ಕಾರಣ, ದಯವಿಟ್ಟು ನನಗೆ ನ್ಯಾಯ ಕೊಡಿಸಿ&rsquo; ಎಂದು ಮನವಿ ಮಾಡಿದರು.&lt;/p&gt;&lt;h3&gt;&lt;strong&gt;ಕೋಟಿ ಬೆಲೆಯ ಅಪಾರ್ಟ್&zwnj;ಮೆಂಟ್ ಮತ್ತು ಅಕ್ರಮ ಸಂಬಂಧದ ಆರೋಪ&lt;/strong&gt;&lt;/h3&gt;&lt;ul&gt; &lt;li&gt;ದೂರುದಾರ ಪ್ರಸನ್ನ ಅವರು ಮಾಧ್ಯಮಗಳ ಮುಂದೆ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ:&lt;/li&gt; &lt;li&gt;&lt;strong&gt;ಅಕ್ರಮ ಸಂಬಂಧ: &lt;/strong&gt;ನನ್ನ ಪತ್ನಿಯ ಜೊತೆ ಮಾಜಿ ಶಾಸಕ ಅನ್ನದಾನಿ ಕಳೆದ ಕೆಲವು ಸಮಯದಿಂದ ಅಕ್ರಮ ಸಂಬಂಧ ಹೊಂದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಿದ್ದಾರೆ.&lt;/li&gt; &lt;li&gt;&lt;strong&gt;ಮೈಸೂರಿನಲ್ಲಿ ಫ್ಲ್ಯಾಟ್: &lt;/strong&gt;ನನ್ನ ಪತ್ನಿಗಾಗಿ ಅನ್ನದಾನಿ ಅವರು ಮೈಸೂರಿನಲ್ಲಿ ಸುಮಾರು 1.5 ಕೋಟಿ ರೂಪಾಯಿ ಬೆಲೆ ಬಾಳುವ ಐಷಾರಾಮಿ ಅಪಾರ್ಟ್&zwnj;ಮೆಂಟ್ ಕೊಡಿಸಿದ್ದಾರೆ. ಪ್ರತಿದಿನ ರಾತ್ರಿ ಅನ್ನದಾನಿ ಅಲ್ಲಿಗೆ ಭೇಟಿ ನೀಡುತ್ತಾರೆ.&lt;/li&gt; &lt;li&gt;&lt;strong&gt;ಫೋನ್ ಕಾಲ್ ದಾಖಲೆ:&lt;/strong&gt; ಗಂಟೆಗಟ್ಟಲೆ ನನ್ನ ಪತ್ನಿಯೊಂದಿಗೆ ಅವರು ಫೋನ್&zwnj;ನಲ್ಲಿ ಮಾತನಾಡಿದ ದಾಖಲೆಗಳು ನನ್ನ ಬಳಿ ಇವೆ.&lt;/li&gt;&lt;/ul&gt;&lt;h2&gt;&lt;strong&gt;ವಿಚ್ಛೇದನಕ್ಕೆ 30 ಲಕ್ಷ ಬೇಡಿಕೆ?&lt;/strong&gt;&lt;/h2&gt;&lt;p&gt;ಪ್ರಸನ್ನ ಅವರ ಅಳಲಿನ ಪ್ರಕಾರ, ಅವರ ಪತ್ನಿ ಈಗ ವಿಚ್ಛೇದನ ನೀಡಲು ನಿರಾಕರಿಸುತ್ತಿದ್ದಾರೆ. ಒಂದು ವೇಳೆ ಡಿವೋರ್ಸ್ ನೀಡಬೇಕೆಂದರೆ 30 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. 'ನನ್ನ ಹೆಂಡತಿ ಇನ್ನೊಬ್ಬನ ಜೊತೆ ಇರುವುದನ್ನು ನಾನು ಹೇಗೆ ಸಹಿಸಿಕೊಳ್ಳಲಿ? ನನಗೆ ಆಕೆಯಿಂದ ವಿಚ್ಛೇದನ ಕೊಡಿಸಿ, ನಾನು ಯಾರ ತಂಟೆಗೂ ಹೋಗುವುದಿಲ್ಲ' ಎಂದು ಅವರು ಕಣ್ಣೀರು ಹಾಕಿದ್ದಾರೆ.&lt;/p&gt;&lt;h3&gt;&lt;strong&gt;ನ್ಯಾಯದ ಭರವಸೆ ನೀಡಿದ ಕುಮಾರಸ್ವಾಮಿ&lt;/strong&gt;&lt;/h3&gt;&lt;p&gt;ಬಡ ವ್ಯಕ್ತಿಯ ಅಳಲನ್ನು ಆಲಿಸಿದ ಹೆಚ್.ಡಿ. ಕುಮಾರಸ್ವಾಮಿ ಅವರು, 'ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ನ್ಯಾಯ ಕೊಡಿಸುತ್ತೇನೆ' ಎಂದು ಭರವಸೆ ನೀಡಿದ್ದಾರೆ. ದಿಶಾ ಸಭೆ ಮುಗಿದ ಬಳಿಕ ಈ ವಿಚಾರವಾಗಿ ಅವರು ಮಾಜಿ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಅನ್ನದಾನಿ ಅವರು ದೂರುದಾರನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/mandya-jds-ex-mla-dr-k-annadani-illegal-affair-complaint-to-union-minister-hd-kumaraswamy-sat/articleshow-rf85ka3"/>
        </item>
        <item>
            <title><![CDATA[ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗೆ 'ಭಾರತ ರತ್ನ' ಕೊಡಿ: ಪ್ರಧಾನಿ ಮೋದಿಗೆ ಶಿಫಾರಸಿಗಾಗಿ ಸರ್ಕಾರಕ್ಕೆ ಪತ್ರ!]]></title>
            <link>https://kannada.asianetnews.com/state/demand-for-posthumous-bharat-ratna-for-dr-balagangadharanatha-swamiji-pm-modi-visit-sat/articleshow-rng2gql</link>
            <guid isPermaLink="true">https://kannada.asianetnews.com/state/demand-for-posthumous-bharat-ratna-for-dr-balagangadharanatha-swamiji-pm-modi-visit-sat/articleshow-rng2gql</guid>
            <pubDate>Tue, 14 Apr 2026 19:44:17 +0530</pubDate>
            <description><![CDATA[&lt;p&gt;ಆದಿಚುಂಚನಗಿರಿ ಮಠದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳಿಗೆ ಮರಣೋತ್ತರ 'ಭಾರತ ರತ್ನ' ನೀಡಬೇಕೆಂಬ ಕೂಗು ಬಲಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಠದ ಭೇಟಿಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಈ ಕುರಿತು ಶಿಫಾರಸು ಮಾಡಬೇಕೆಂದು ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp6587yf6fpkq6hpy65d7yrz,imgname-balagangadharanatha-swamiji-1776175816655.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಮಂಡ್ಯ (ಏ.14): ಆ&lt;/strong&gt;ದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ರಾಂತಿಯನ್ನು ಪರಿಗಣಿಸಿ ಅವರಿಗೆ ಮರಣೋತ್ತರ 'ಭಾರತ ರತ್ನ' ಪ್ರಶಸ್ತಿ ಘೋಷಿಸಬೇಕು ಎಂಬ ಕೂಗು ಬಲವಾಗಿದೆ. ನಾಳೆ (ಏ.15ರಂದು) ಪ್ರಧಾನಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಈ ಕುರಿತು ಪ್ರಧಾನಿಗಳಿಗೆ ಅಧಿಕೃತವಾಗಿ ಶಿಫಾರಸು ಮಾಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.&lt;/p&gt;&lt;h3&gt;&lt;strong&gt;ಪ್ರಧಾನಿ ಮೋದಿ ಭೇಟಿ ಮತ್ತು ಶಾಸಕರ ಮನವಿ:&lt;/strong&gt;&lt;/h3&gt;&lt;p&gt;ನಾಳೆ ಆದಿಚುಂಚನಗಿರಿ ಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 'ಗುರು ಭೈರವೈಕ್ಯ ಮಂದಿರ'ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಶ್ರೀಗಳಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡುವಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹಾಗೂ ಎಂಎಲ್ಸಿ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಅಷ್ಟೇ ಅಲ್ಲದೆ, ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಿಗೂ ಈ ಕುರಿತು ಪತ್ರ ಬರೆದು ಬೆಂಬಲ ಕೋರಿದ್ದಾರೆ.&lt;/p&gt;&lt;h3&gt;&lt;strong&gt;ಯುಗಪುರುಷನ ಅಪ್ರತಿಮ ಸೇವೆ:&lt;/strong&gt;&lt;/h3&gt;&lt;p&gt;ಆದಿಚುಂಚನಗಿರಿ ಮಠದ 71ನೇ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಕೇವಲ ಒಬ್ಬ ಆಧ್ಯಾತ್ಮಿಕ ಗುರುವಾಗಿರಲಿಲ್ಲ, ಬದಲಿಗೆ ಆಧುನಿಕ ಕರ್ನಾಟಕದ ಶಿಲ್ಪಿಯಾಗಿದ್ದರು. ಅವರು ಪೀಠ ಅಲಂಕರಿಸಿದಾಗ ಮಠಕ್ಕೆ ಅಷ್ಟೊಂದು ಪ್ರಸಿದ್ಧಿ ಇರಲಿಲ್ಲ. ಆದರೆ ತಮ್ಮ ದಣಿವರಿಯದ ದುಡಿಮೆ ಮತ್ತು ದೂರದೃಷ್ಟಿಯಿಂದ ಚುಂಚನಗಿರಿಯನ್ನು 'ಚಿನ್ನದ ಗಿರಿ'ಯನ್ನಾಗಿ ಪರಿವರ್ತಿಸಿದರು. ಸಾಮಾನ್ಯ ವ್ಯಕ್ತಿಗಳು 300 ವರ್ಷಗಳಲ್ಲಿ ಮಾಡಬಹುದಾದ ಕೆಲಸವನ್ನು ಶ್ರೀಗಳು ಕೇವಲ 33 ವರ್ಷಗಳ ಅವಧಿಯಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದು ಪತ್ರದಲ್ಲಿ ಬಣ್ಣಿಸಲಾಗಿದೆ.&lt;/p&gt;&lt;h2&gt;&lt;strong&gt;ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ:&lt;/strong&gt;&lt;/h2&gt;&lt;p&gt;ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಲು ಶ್ರೀಗಳು 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇಂದು 'ಆದಿಚುಂಚನಗಿರಿ ವಿಶ್ವವಿದ್ಯಾಲಯ'ವಾಗಿ ಹೆಮ್ಮರವಾಗಿ ಬೆಳೆದಿರುವ ಈ ಸಂಸ್ಥೆಗಳಲ್ಲಿ ವಾರ್ಷಿಕ 1.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಇನ್ನು ಆರೋಗ್ಯ ಕ್ಷೇತ್ರದಲ್ಲಿ, ಗ್ರಾಮೀಣ ಜನತೆಗೆ ಅತ್ಯಾಧುನಿಕ ಚಿಕಿತ್ಸೆ ನೀಡಲು ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆ:&lt;/strong&gt;&lt;/h2&gt;&lt;p&gt;ಸಂಸ್ಕೃತ ಮತ್ತು ಭಾರತೀಯ ಸಂಸ್ಕೃತಿಯ ಉಳಿವಿಗಾಗಿ 60ಕ್ಕೂ ಹೆಚ್ಚು ವೇದ ಪಾಠಶಾಲೆಗಳನ್ನು ತೆರೆದಿದ್ದ ಶ್ರೀಗಳು, ಜಾತಿ-ಮತದ ಭೇದವಿಲ್ಲದೆ ಲಕ್ಷಾಂತರ ಜನರಿಗೆ ಅನ್ನದಾಸೋಹ ಮತ್ತು ವಸತಿ ಸೌಲಭ್ಯ ಒದಗಿಸಿದ್ದರು. ಅವರ ಈ ಅಸಾಧಾರಣ ಮಾನವೀಯ ಕಾರ್ಯಗಳನ್ನು ಗುರುತಿಸಿ 'ಭಾರತ ರತ್ನ' ನೀಡುವುದು ಕೋಟ್ಯಂತರ ಭಕ್ತರ ಹಾಗೂ ಕನ್ನಡಿಗರ ಬಹುದಿನಗಳ ಆಶಯವಾಗಿದೆ. ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಡಬೇಕೆಂದು ರಾಜ್ಯದ ಜನತೆ ಎದುರು ನೋಡುತ್ತಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/demand-for-posthumous-bharat-ratna-for-dr-balagangadharanatha-swamiji-pm-modi-visit-sat/articleshow-rng2gql"/>
        </item>
        <item>
            <title><![CDATA[ನಮ್ಮ ಮತ ಮಾರಾಟಕ್ಕಿಲ್ಲ: ಮನೆ ಮುಂದೆ ನಾಮಫಲಕ ಅಳವಡಿಸಿದ ಪಾಲಹಳ್ಳಿಯ ರುದ್ರಮ್ಮ ಅಜ್ಜಿ]]></title>
            <link>https://kannada.asianetnews.com/karnataka-districts/our-vote-is-not-for-sale-rudramma-ajji-of-palahalli-installs-nameplate-in-front-of-house-srirangapatna-mandya-mrq/articleshow-s283bmk</link>
            <guid isPermaLink="true">https://kannada.asianetnews.com/karnataka-districts/our-vote-is-not-for-sale-rudramma-ajji-of-palahalli-installs-nameplate-in-front-of-house-srirangapatna-mandya-mrq/articleshow-s283bmk</guid>
            <pubDate>Sun, 29 Mar 2026 09:02:07 +0530</pubDate>
            <description><![CDATA[&lt;p&gt;ಪಾಲಹಳ್ಳಿಯ 80 ವರ್ಷದ ವೃದ್ಧೆ ರುದ್ರಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿನ ಆಮಿಷಗಳಿಗೆ ಬೇಸತ್ತು 'ನಮ್ಮ ಓಟು ಮಾರಾಟಕ್ಕಿಲ್ಲ, ಖರೀದಿಗೆ ಬಂದವರಿಗೆ ಓಟಿಲ್ಲ' ಎಂಬ ನಾಮಫಲಕವನ್ನು ತಮ್ಮ ಮನೆ ಮುಂದೆ ಹಾಕಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmvt1nvbx1mevqv5td80nk75,imgname-mandya--1774754781035.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀರಂಗಪಟ್ಟಣ: &lt;/strong&gt;ನಮ್ಮ ಓಟು ಮಾರಾಟಕ್ಕಿಲ್ಲ. ಖರೀದಿಗೆ ಬಂದವರಿಗೆ ಓಟಿಲ್ಲ ಎಂದು ತಾಲೂಕಿನ ಪಾಲಹಳ್ಳಿಯ 80 ವರ್ಷದ ವೃದ್ಧೆ ತಮ್ಮ ಮನೆ ಮುಂದೆ ನಾಮಫಲಕ ಹಾಕಿ ಗಮನ ಸೆಳೆದಿದ್ದಾರೆ.&amp;nbsp;&lt;/p&gt;&lt;p&gt;ಗ್ರಾಮದ ರುದ್ರಮ್ಮ ನಾಗರಾಜು (80) ಮಾ.29 ರಂದು ನಡೆಯಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗೆ ಮತದಾರರನ್ನು ಸೆಳೆಯುತ್ತಿರುವ ಆಮಿಷಗಳಿಂದ ಬೇಸರಗೊಂಡು ಈ ರೀತಿ ತಮ್ಮ ಮನೆ ಮುಂದೆ ನಾಮಫಲಕ ಹಾಕಿದ್ದಾರೆ.&amp;nbsp;&lt;/p&gt;&lt;h2&gt;&lt;strong&gt;ರುದ್ರಮ್ಮಾ ಅಜ್ಜಿ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ರುದ್ರಮ್ಮರ ಪುತ್ರ ಪ್ರಸನ್ನ ಈ ಸಂಬಂಧ ಪ್ರತಿಕ್ರಿಯಿಸಿ, ನಮ್ಮ ಮನೆಯಲ್ಲಿ ನನ್ನ ತಾಯಿ ರುದ್ರಮ್ಮ ಹಾಗೂ ನನ್ನದು ಸೇರಿ ಎರಡು ಮತಗಳಿವೆ. ಚುನಾವಣೆಗೆ ಸ್ಪರ್ಧಿಸಿರುವವರು ಮತದಾರರಿಗೆ ಹಣ ಸೇರಿದಂತೆ ಇನ್ನಿಲ್ಲದ ಆಮಿಷಗಳನ್ನು ತೋರುತ್ತಿದ್ದಾರೆ. ಸ್ಥಳೀಯ ಸಂಘ, ಸಂಸ್ಥೆಗಳ ಚುನಾವಣೆಗೂ ಆಮಿಷ ಹಾಗೂ ಹಣ ಹಂಚಿಕೆ ಮಾಡಿದರೆ ಸಹಕಾರ ಸಂಘಗಳು ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಈ ವ್ಯವಸ್ಥೆಯಿಂದ ಬೇಸರಗೊಂಡು ನಮ್ಮ ಓಟು ಮಾರಾಟಕ್ಕಿಲ್ಲ, ಖರೀದಿಗೆ ಬಂದವರಿಗೆ ನಮ್ಮ ಓಟಿಲ್ಲ ಎಂಬ ನಾಮಫಲಕ ಹಾಕಿರುವುದಾಗಿ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗೆಜ್ಜಲಗೆರೆ ಗ್ರಾಪಂ ನಗರಸಭೆಯಿಂದ ಹೊರಗಿಡುವುದು ಕಷ್ಟದ ಕೆಲಸ: ಸಚಿವ ಚಲುವರಾಯಸ್ವಾಮಿ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಂಡ್ಯ ಕುರುಬರ ಸಂಘದ ಅಧ್ಯಕ್ಷನಿಗೆ ಮಸಿ ಬಳಿದಿದ್ಯಾಕೆ? ಏನಿದು ವಿವಾದ?&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;Davanagere Bypolls: ಸವಾಲು ಸ್ವೀಕರಿಸಿ ದಾವಣಗೆರೆಗೆ ಬಂದ ಪ್ರದೀಪ್ ಈಶ್ವರ್; ಬಿಜೆಪಿ ವಿರುದ್ಧ ವಾಗ್ದಾಳಿ#davanagere #karnatakabypolls #pradeepeshwar #congressvsbjp #kannadanewshttps://t.co/BX6cKi3TCg&lt;/p&gt;&lt;p&gt;&mdash; Asianet Suvarna News (@AsianetNewsSN) March 29, 2026&lt;/p&gt;&lt;p&gt;&amp;nbsp;&lt;/p&gt;&lt;p&gt;--------&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/our-vote-is-not-for-sale-rudramma-ajji-of-palahalli-installs-nameplate-in-front-of-house-srirangapatna-mandya-mrq/articleshow-s283bmk"/>
        </item>
        <item>
            <title><![CDATA[2 ಸಾವಿರ ಕೋಟಿ ವೆಚ್ಚದಲ್ಲಿ ಕೃಷಿ ಯಂತ್ರೋಪಕರಣ ವಿತರಣೆ: ಸಚಿವ ಚಲುವರಾಯಸ್ವಾಮಿ]]></title>
            <link>https://kannada.asianetnews.com/karnataka-districts/karnataka-farmers-harvester-subsidy-chaluvarayaswamy-news-gvd/articleshow-sn5vx90</link>
            <guid isPermaLink="true">https://kannada.asianetnews.com/karnataka-districts/karnataka-farmers-harvester-subsidy-chaluvarayaswamy-news-gvd/articleshow-sn5vx90</guid>
            <pubDate>Wed, 22 Apr 2026 21:55:56 +0530</pubDate>
            <description><![CDATA[&lt;p&gt;ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 2 ಸಾವಿರ ಕೋಟಿ ರು. ವೆಚ್ಚದ ಯಂತ್ರೋಪಕರಣಗಳನ್ನು ರಿಯಾಯ್ತಿ ದರದಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hmr0507ad5kpxzz5hr51yy3p,imgname-Chsd-1705907486953.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಏ.22):&lt;/strong&gt; ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 2 ಸಾವಿರ ಕೋಟಿ ರು. ವೆಚ್ಚದ ಯಂತ್ರೋಪಕರಣಗಳನ್ನು ರಿಯಾಯ್ತಿ ದರದಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಹೈಟೆಕ್ ಹಾರ್ವೆಸ್ಟರ್ ಕಟಾವು ಯಂತ್ರೋಪಕರಣ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿ ಕಾರ್ಮಿಕರ ಕೊರತೆ ಸರಿದೂಗಿಸಿ ಸಾವಿರಾರು ರುಪಾಯಿ ಹಣ ಉಳಿಸಿ ಹಾಗೂ ಇಳುವರಿ ವೃದ್ಧಿಸುವ ಸದುದ್ದೇಶದಿಂದ ಹೈಟೆಕ್ ಯಂತ್ರೋಪಕರಣ ವಿತರಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದರು.&lt;/p&gt;&lt;p&gt;ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬು, ಭತ್ತ, ರಾಗಿ, ನವಣೆ ಸೇರಿದಂತೆ ಇತರೆ ಬೆಳೆಗಳ ಕಟಾವಿಗಾಗಿ ಹೈಟೆಕ್ ಹಾರ್ವೆಸ್ಟರ್ ಯಂತ್ರಗಳನ್ನು ಶೇ. 50ರಷ್ಟು ಸಹಾಯಧನದಲ್ಲಿ ವಿತರಿಸಲಾಗುತ್ತಿದ್ದು, ಇಂದು 13 ಹಾರ್ವೆಸ್ಟರ್ ಯಂತ್ರಗಳು ಹಾಗೂ ಮುಂದಿನ ದಿನಗಳಲ್ಲಿ 7 ಯಂತ್ರಗಳನ್ನು ವಿತರಿಸಲು ಕ್ರಮವಹಿಸಲಾಗಿದೆ ಎಂದರು. ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 400 ಕಟಾವು ಯಂತ್ರೋಪಕರಣ ವಿತರಣೆ ಮಾಡಲಾಗಿದ್ದು, ಇದರಿಂದ ಕಬ್ಬು, ಭತ್ತ, ರಾಗಿ ಸೇರಿದಂತೆ ಇತರೆ ಬೆಳೆಗಳ ಕಟಾವಿಗೆ ಅನುಕೂಲವಾಗಿದ್ದು, ಗುಂಪು ಆಧಾರಿತ ಹಾಗೂ ಎಸ್ಸಿ, ಎಸ್ಟಿ ಜನಾಂಗದವರಿಗೆ ಶೇ.50ರಷ್ಟು, ಸಾಮಾನ್ಯ ವರ್ಗದವರಿಗೆ ಶೇ.40ರಷ್ಟು ಸಬ್ಸಿಡಿ ದೊರೆಯಲಿದೆ ಎಂದರು.&lt;/p&gt;&lt;p&gt;ಜಿಲ್ಲೆಯ ಯುವಜನರಲ್ಲಿ ಕೃಷಿ ಬಗ್ಗೆ ತಾತ್ಸಾರ ಮನೋಭಾವವಿದೆ. ಇದನ್ನು ಬಿಟ್ಟು ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬೇಕು. ಉತ್ತರ ಕರ್ನಾಟಕ ಭಾಗದ ರಾಯಚೂರು, ಬೆಳಗಾವಿ ಹಾಗೂ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗಳ ರೈತರ ಕೃಷಿ ಪ್ರೀತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಹಿಂದೆ 12 ಲಕ್ಷ ರೈತರು ಕೃಷಿ ವಿಮೆ ಮಾಡಿಸುತ್ತಿದ್ದರು. ಆದರೆ, ಕೃಷಿಕರಲ್ಲಿ ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ 28 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಇದುವರೆಗೆ 6 ಲಕ್ಷ ಕೋಟಿ ರು. ಬೆಳೆ ಪರಿಹಾರ ನೀಡಲಾಗಿದೆ. ಬೆಳೆ ನಾಶಕ್ಕೆ ಎಫ್&zwnj;ಐಡಿ ಮೂಲಕ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಹೊಸ ಕೃಷಿ ವಿಶ್ವವಿದ್ಯಾಲಯ ಆರಂಭ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೃಷಿ ಪ್ರಧಾನ ಜಿಲ್ಲೆ ಮಂಡ್ಯದಲ್ಲಿ ಹೊಸ ಕೃಷಿ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಇದರ ಪರಿಣಾಮ ರೈತರಿಗೆ ಹೊಸ ತಳಿಗಳ ಅನ್ವೇಷಣೆ, ತಂತ್ರಜ್ಞಾನ ಆಧಾರಿತ ಕೃಷಿ ಅಳವಡಿಕೆಗೆ ಕ್ರಮ ಸೇರಿದಂತೆ ರೈತರ ಶಾಶ್ವತ ಅಭಿವೃದ್ಧಿಗೆ ಅವಕಾಶ ದೊರೆಯಲಿದ್ದು, ಇದು ನಮ್ಮ ಸರ್ಕಾರದ ಬದ್ಧತೆ ಎಂದರು. ರೈತ ಫಲಾನುಭವಿಗಳಿಗೆ ಹೈಟೆಕ್ ಮಾದರಿಯ 10 ಕಟಾವು ಯಂತ್ರೋಪಕರಣಗಳನ್ನು ಸಚಿವ ಎನ್.ಚಲುವರಾಯಸ್ವಾಮಿ ಅವರು ವಿತರಿಸಿದರು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/karnataka-farmers-harvester-subsidy-chaluvarayaswamy-news-gvd/articleshow-sn5vx90"/>
        </item>
        <item>
            <title><![CDATA[ಬೇಸಿಗೆ ರಜೆ ಹಿನ್ನೆಲೆ, ಮೈಸೂರಿನಿಂದ ಪೂರ್ವ ಭಾರತಕ್ಕೆ ವಿಶೇಷ ರೈಲು, ಕರ್ನಾಟಕದ ಯಾವ ನಿಲ್ದಾಣಗಳಲ್ಲಿ ನಿಲುಗಡೆಯಿದೆ?]]></title>
            <link>https://kannada.asianetnews.com/karnataka-districts/special-summer-trains-announced-between-mysuru-and-jalpaiguri-junction-to-meet-passenger-demand-gdp/articleshow-ws3zsuw</link>
            <guid isPermaLink="true">https://kannada.asianetnews.com/karnataka-districts/special-summer-trains-announced-between-mysuru-and-jalpaiguri-junction-to-meet-passenger-demand-gdp/articleshow-ws3zsuw</guid>
            <pubDate>Fri, 10 Apr 2026 19:56:05 +0530</pubDate>
            <description><![CDATA[ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆ ಇಲಾಖೆಯು ಮೈಸೂರು ಮತ್ತು ಜಲ್ಪೈಗುಡಿ ಜಂಕ್ಷನ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳು ಏಪ್ರಿಲ್ ತಿಂಗಳ ನಿಗದಿತ ದಿನಾಂಕಗಳಲ್ಲಿ ಸಂಚರಿಸಲಿದ್ದು, ದಕ್ಷಿಣ ಮತ್ತು ಪೂರ್ವ ಭಾರತದ ನಡುವಿನ ಪ್ರಯಾಣವನ್ನು ಸುಲಭಗೊಳಿಸಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kddtprbp4cvn9jmymxwwajx6,imgname-railway-1766769516918.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು: ಬೇಸಿಗೆ ರಜೆ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ನೈಋತ್ಯ ರೈಲ್ವೆ ಇಲಾಖೆ ಮೈಸೂರು&ndash;ಜಲ್ಪೈಗುಡಿ ಜಂಕ್ಷನ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ. ಈ ವಿಶೇಷ ಸೇವೆಯಿಂದ ದಕ್ಷಿಣ ಮತ್ತು ಪೂರ್ವ ಭಾರತದ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಮಹತ್ತರ ಅನುಕೂಲವಾಗಲಿದೆ.&lt;/p&gt;&lt;h2&gt;ಯಾವೆಲ್ಲ ರೈಲು?&lt;/h2&gt;&lt;p&gt;ರೈಲು ಸಂಖ್ಯೆ 06251 ಮೈಸೂರು&ndash;ಜಲ್ಪೈಗುಡಿ ಜಂಕ್ಷನ್ ವಿಶೇಷ ಎಕ್ಸ್&zwnj;ಪ್ರೆಸ್, ಏಪ್ರಿಲ್ 17 ಮತ್ತು 24ರಂದು ಶುಕ್ರವಾರಗಳಂದು ಮೈಸೂರಿನಿಂದ ಸಂಜೆ 4.40ಕ್ಕೆ ಹೊರಟು, ಭಾನುವಾರ ಸಂಜೆ 5.30ಕ್ಕೆ ಜಲ್ಪೈಗುಡಿ ಜಂಕ್ಷನ್ ತಲುಪಲಿದೆ. ಇದೇ ರೀತಿ ಮರುಪಯಣದಲ್ಲಿ ರೈಲು ಸಂಖ್ಯೆ 06252 ಜಲ್ಪೈಗುಡಿ ಜಂಕ್ಷನ್&ndash;ಮೈಸೂರು ವಿಶೇಷ ಎಕ್ಸ್&zwnj;ಪ್ರೆಸ್, ಏಪ್ರಿಲ್ 20 ಮತ್ತು 27ರಂದು ಸೋಮವಾರಗಳಂದು ಜಲ್ಪೈಗುಡಿ ಜಂಕ್ಷನ್&zwnj;ನಿಂದ ಸಂಜೆ 4.45ಕ್ಕೆ ಹೊರಟು, ಬುಧವಾರ ಸಂಜೆ 4.00ಕ್ಕೆ ಮೈಸೂರು ತಲುಪಲಿದೆ.&lt;/p&gt;&lt;h2&gt;ಹಲವಾರು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ&lt;/h2&gt;&lt;p&gt;ಈ ವಿಶೇಷ ರೈಲು ತನ್ನ ಪ್ರಯಾಣದ ಅವಧಿಯಲ್ಲಿ ಹಲವಾರು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ. ಮಂಡ್ಯ, ಮದ್ದೂರು, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಬಂಗಾರಪೇಟೆ, ಜೋಲಾರಪೇಟೆ, ಕಟ್ಪಾಡಿ, ರೇಣಿಗುಂಟಾ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಾಲಾಸಾ, ಬ್ರಹ್ಮಪುರ, ಬಾಲುಗಾಂ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಜಾಜ್ಪುರ ಕೆ ರೋಡ್, ಭದ್ರಕ್, ಬಾಲಸೋರ್, ಖರಗ್ಪುರ್, ಅಂಡುಲ್, ದಾಂಕುಣಿ, ಬರ್ಧಮಾನ, ಬೋಲ್ಪುರ ಶಾಂತಿನಿಕೇತನ, ರಾಮ್ಪುರಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಕಿಶನ್&zwnj;ಗಂಜ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ಈ ರೈಲು ನಿಲ್ಲಲಿದೆ.&lt;/p&gt;&lt;p&gt;ಪ್ರಯಾಣಿಕರ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಈ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ 1 ಫಸ್ಟ್ ಎಸಿ ಟು-ಟಯರ್, 2 ಎಸಿ ತ್ರಿ-ಟಯರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಎಸ್&zwnj;ಎಲ್&zwnj;ಆರ್/ಡಿ (SLR/D) ಬೋಗಿಗಳು ಒಳಗೊಂಡಿರುತ್ತವೆ. ಈ ವಿಶೇಷ ರೈಲು ಸೇವೆ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ, ದೀರ್ಘ ದೂರ ಪ್ರಯಾಣವನ್ನು ಸುಲಭಗೊಳಿಸುವಲ್ಲಿ ಸಹಾಯಕವಾಗಲಿದೆ. ಪ್ರಯಾಣಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/special-summer-trains-announced-between-mysuru-and-jalpaiguri-junction-to-meet-passenger-demand-gdp/articleshow-ws3zsuw"/>
        </item>
        <item>
            <title><![CDATA[ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ 500 ಎಕರೆ ಬೇಕು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ]]></title>
            <link>https://kannada.asianetnews.com/karnataka-districts/hd-kumaraswamy-arai-testing-centre-mandya-land-requirement-gvd/articleshow-zyvlavf</link>
            <guid isPermaLink="true">https://kannada.asianetnews.com/karnataka-districts/hd-kumaraswamy-arai-testing-centre-mandya-land-requirement-gvd/articleshow-zyvlavf</guid>
            <pubDate>Tue, 14 Apr 2026 20:05:40 +0530</pubDate>
            <description><![CDATA[&lt;p&gt;ಎಆರ್&zwnj;ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ 500 ರಿಂದ 600 ಎಕರೆ ಭೂಮಿಯ ಅಗತ್ಯವಿದೆ. ಏ.30ರೊಳಗೆ ಜಾಗದ ಕುರಿತಾದ ಸಮಸ್ಯೆ ಬಗೆಹರಿಸಿಕೊಡುವಂತೆ ರಾಜ್ಯ ಕೈಗಾರಿಕಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjh4e3cpb1nh2cfx2c6c52gr,imgname-hd-kumaraswamy-1772249091477.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಏ.14): &lt;/strong&gt;ಜಿಲ್ಲೆಯಲ್ಲಿ ಎಆರ್&zwnj;ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ 500 ರಿಂದ 600 ಎಕರೆ ಭೂಮಿಯ ಅಗತ್ಯವಿದೆ. ಏ.30ರೊಳಗೆ ಜಾಗದ ಕುರಿತಾದ ಸಮಸ್ಯೆ ಬಗೆಹರಿಸಿಕೊಡುವಂತೆ ರಾಜ್ಯ ಕೈಗಾರಿಕಾ ಸಚಿವರಿಗೆ ಮನವಿ ಮಾಡಿದ್ದು, ಮೇ ತಿಂಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಭೂಮಿ ಪೂಜೆ ಮಾಡುವ ಉದ್ದೇಶ ಹೊಂದಿರುವುದಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.&lt;/p&gt;&lt;p&gt;ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಬೃಹತ್ ಕೈಗಾರಿಕೆ ಖಾತೆ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ನಡೆದ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ರಾಜ್ಯದಲ್ಲಿ ಉದ್ಯಮಗಳನ್ನು ಉತ್ತೇಜಿಸಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ವಿಸ್ತೃತ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಕೂಡ ಪಾಲ್ಗೊಂಡಿದ್ದರು. ಇವರ ಜೊತೆ ಮಂಡ್ಯದ ಜನಪ್ರತಿನಿಧಿಗಳು ಹಾಗೂ ಮಾಜಿ ಮಂತ್ರಿಗಳು, ಮಾಜಿ ಶಾಸಕರು ಭಾಗಿಯಾಗಿದ್ದರು.&lt;/p&gt;&lt;h2&gt;&lt;strong&gt;ಎಚ್&zwnj;ಡಿಕೆ ಹೇಳಿದ್ದಿಷ್ಟು&lt;/strong&gt;&lt;/h2&gt;&lt;p&gt;ಈಗಾಗಲೇ ಬೃಹತ್ ಕೈಗಾರಿಕೆ ಇಲಾಖೆಯ ಅಧೀನದಲ್ಲಿ ಬರುವ ಆಟೋ ಮೋಟಿವ್ ರಿಸರ್ಚ್ ಇನ್ಸ್ಟಿಟ್ಯೂಟ್ ಪರೀಕ್ಷಾ ಕೇಂದ್ರವನ್ನು ಮಂಡ್ಯದಲ್ಲಿ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಅಂತಹ ಕೇಂದ್ರಗಳು ಇಡೀ ರಾಷ್ಟ್ರದಲ್ಲಿ ನಾಲ್ಕು ಕಡೆ ಮಾತ್ರ ಇವೆ. ಐದನೇ ಕೇಂದ್ರವನ್ನು ಕರ್ನಾಟಕಕ್ಕೆ ತರಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ನಮ್ಮ ಇಲಾಖೆಗೆ ಸಂಬಂಧಿಸಿದ ಎಆರ್&zwnj;ಎಐ ಅಂತಾರಾಷ್ಟ್ರೀಯ ಮಟ್ಟದ ಪರೀಕ್ಷಾ ಕೇಂದ್ರ ಆಗಬೇಕಿದೆ.&lt;/p&gt;&lt;p&gt;ಈ ಕೇಂದ್ರದಿಂದ ಆಟೋ ಮೊಬೈಲ್ ಕ್ಷೇತ್ರಕ್ಕೆ ಅದರಲ್ಲೂ ಮುಖ್ಯವಾಗಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಅತಿ ಹೆಚ್ಚಿನ ಉತ್ತೇಜನ ದೊರೆಯಲಿದೆ. ಎಆರ್&zwnj;ಎಐ ಕೇಂದ್ರವು ಸೇರಿದಂತೆ ಅದಕ್ಕೆ ಪೂರಕ ವ್ಯವಸ್ಥೆಗಳನ್ನು ನಿರ್ಮಿಸುವ ಉದ್ದೇಶದಿಂದ ಸುಮಾರು 500-600 ಎಕರೆ ಭೂಮಿ ಬೇಕಿದೆ. ಅದು ನನ್ನ ಲೋಕಸಭಾ ಕ್ಷೇತ್ರ ಮಂಡ್ಯದಲ್ಲೇ ಆಗಬೇಕು ಎಂದು ನಿರ್ಧರಿಸಿದ್ದೇನೆ. ಎಆರ್&zwnj;ಎಐ ಕೇಂದ್ರಕ್ಕೆ ಈಗಾಗಲೇ ಜಿಲ್ಲೆಯಲ್ಲಿ ಎರಡು ಮೂರು ಜಾಗ ನೋಡಿದ್ದೇವೆ.&lt;/p&gt;&lt;p&gt;ಅಲ್ಲಿ ಲಭ್ಯವಿರುವ ಜಾಗ ಬಹಳ ಸೀಮಿತವಾಗಿದೆ. ಆ ಅಂಶದ ಬಗ್ಗೆಯೂ ರಾಜ್ಯದ ಕೈಗಾರಿಕಾ ಸಚಿವರ ಜತೆ ಚರ್ಚಿಸಲಾಯಿತು. ಕೈಗಾರಿಕಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯನ್ನು ಸಮಾನಂತರವಾಗಿ ನಡೆಯಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಏಪ್ರಿಲ್ 30ರೊಳಗೆ ಜಾಗದ ಸಮಸ್ಯೆ ಬಗೆಹರಿಸಿ ಕೊಡುವಂತೆ ಸಚಿವರನ್ನು ಕೋರಿದ್ದೇನೆ. ಏಕೆಂದರೆ ಮೇ ತಿಂಗಳಲ್ಲಿ ಟೆಸ್ಟಿಂಗ್ ಕೇಂದ್ರ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸುವ ಉದ್ದೇಶವನ್ನು ನನ್ನ ಸಚಿವಾಲಯ ಹೊಂದಿದೆ ಎಂದರು.&lt;/p&gt;&lt;p&gt;ನಾನು ಕೂಡ ಭೂಮಿ ಬಗ್ಗೆ ಒಂದು ಸಲಹೆಯನ್ನು ಸಚಿವರಿಗೆ ನೀಡಿದ್ದೇನೆ. ಒಂದೆಡೆ 500 ಎಕರೆ ಸರ್ಕಾರಿ ಭೂಮಿ ಇದೆ. ಭೂಮಿಯಲ್ಲಿ ಯಾರಾದರೂ ರೈತರು ಅನುಭೋಗದಲ್ಲಿ ಇದ್ದರೆ ಅವರಿಗೆ ಸೂಕ್ತ ಪರಿಹಾರ ನೀಡಿ ಭೂಮಿಯನ್ನು ತೆಗೆದುಕೊಳ್ಳಬಹುದು. ಈ ಬಗ್ಗೆ ನಾನು ಕೂಡ ಆ ರೈತರ ಜೊತೆ ಒಮ್ಮೆ ಚರ್ಚಿಸಿದೆ ಅದಕ್ಕೆ ಅವರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿತ್ತು. ಅದೇ ರೀತಿ ಮುಂಗಡ ಪತ್ರದಲ್ಲಿ 100 ಎಕರೆ ಇರುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು ಎಂದು ಸಚಿವರು ಹೇಳಿದರು.&lt;/p&gt;&lt;p&gt;ಮಂಡ್ಯ ಕೃಷಿ ಆಧಾರಿತ ನೀರಾವರಿ ಜಿಲ್ಲೆ. ಅಲ್ಲಿ ಸರ್ಕಾರಿ ಮತ್ತು ಒಣಭೂಮಿ ಲಭ್ಯತೆ ಅತ್ಯಂತ ಕಡಿಮೆ ಇದೆ. ಆದರೆ, ಉದ್ದೇಶಿತ ಪರೀಕ್ಷಾ ಕೇಂದ್ರಕ್ಕೆ ಸರ್ಕಾರ 100 ಎಕರೆ ನೀಡುವುದಾಗಿ ತಿಳಿಸಿದೆ ಎಂಬುದೇನೋ ಸರಿ. ಆದರೆ, ಇನ್ನು ಹೆಚ್ಚಿನ ಜಾಗ ಕೊಟ್ಟರೆ ಉತ್ತಮ ರೀತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ತರಬಹುದು ಎಂದರು. ಸಭೆಯಲ್ಲಿ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕ ಪಿ.ರವಿಕುಮಾರ್ ಹಾಗೂ ಎಆರ್&zwnj;ಎಐ ಪರೀಕ್ಷಾ ಕೇಂದ್ರ, ಕೆಐಎಡಿಬಿ ಅಧಿಕಾರಿಗಳು ಹಾಜರಿದ್ದರು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/hd-kumaraswamy-arai-testing-centre-mandya-land-requirement-gvd/articleshow-zyvlavf"/>
        </item>
    </channel>
</rss>
