<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 16 Sep 2026 14:56:44 +0530</lastBuildDate>
        <atom:link href="https://kannada.asianetnews.com/rss/mandya" rel="self" type="application/rss+xml"/>
        <item>
            <title><![CDATA[ಮಳೆಗೆ ಪ್ರಾರ್ಥಿಸಿ ಮಕ್ಕಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು, ಮಂಡ್ಯದ ಈ ಊರಲ್ಲಿದೆ ವಿಚಿತ್ರ ಆಚರಣೆ!]]></title>
            <link>https://kannada.asianetnews.com/karnataka-districts/devalapur-villagers-in-mandya-childrens-wedding-to-pray-for-rain-rav/articleshow-0oekxrr</link>
            <guid isPermaLink="true">https://kannada.asianetnews.com/karnataka-districts/devalapur-villagers-in-mandya-childrens-wedding-to-pray-for-rain-rav/articleshow-0oekxrr</guid>
            <pubDate>Tue, 08 Sep 2026 06:13:45 +0530</pubDate>
            <description><![CDATA[ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರದಲ್ಲಿ ಮಳೆ ಬರಿಸಲು ವಿಶಿಷ್ಟ ಜಾನಪದ ಆಚರಣೆಯೊಂದನ್ನು ನಡೆಸಲಾಗಿದೆ. ಈ ಸಂಪ್ರದಾಯದ ಭಾಗವಾಗಿ, ಇಬ್ಬರು ಹೆಣ್ಣು ಮಕ್ಕಳಿಗೆ ಸಾಂಕೇತಿಕವಾಗಿ ಮದುವೆ ಮಾಡಿ, ಊರಿನಲ್ಲಿ ಮೆರವಣಿಗೆ ನಡೆಸುವ ಮೂಲಕ ಮಳೆರಾಯನನ್ನು ಪ್ರಾರ್ಥಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m1z7cy11j5zdttwmm7fqver8,imgname-child-marriage-for-rain-1788828088353.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೇವಲಾಪುರ (ಮಂಡ್ಯ):&lt;/strong&gt; ಮಳೆ ಬರುವಂತೆ ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡುವುದು ಇತ್ಯಾದಿ ಜಾನಪದ ಆಚರಣೆಗಳನ್ನು ನೋಡಿರುತ್ತೇವೆ. ಆದರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಮಳೆಗಾಗಿ ಇಬ್ಬರು ಹೆಣ್ಣು ಮಕ್ಕಳಿಗೆ ಸಾಂಕೇತಿಕ ಮದುವೆ ಮಾಡಿರುವ ಅಪರೂಪದ ಆಚರಣೆಯೊಂದು ಗಮನ ಸೆಳೆದಿದೆ.&lt;/p&gt;&lt;h2&gt;ಊರಿನ ಬೀದಿಗಳಲ್ಲಿ ಮೆರವಣಿಗೆ&lt;/h2&gt;&lt;p&gt;ಹಿಂದೆಲ್ಲ ಮಳೆಯಾಗಲಿಲ್ಲ ಎಂದರೆ ಮಕ್ಕಳಿಗೆ ಮದುವೆ ಮಾಡುವ ಸಂಪ್ರದಾಯವಿತ್ತು. ಈ ನಿಟ್ಟಿನಲ್ಲಿ ಈ ಆಚರಣೆಯನ್ನು ಸ್ಥಳೀಯರು ನೆರವೇರಿಸಿದ್ದಾರೆ. ಮಕ್ಕಳಿಗೆ ಅಲಂಕಾರ ಮಾಡಿ, ಹೂವು, ಹಣ್ಣು, ಕಾಯಿ, ಬೆಲ್ಲ ಹಿಡಿದು ಹಿರಿಯರು ಮದುವೆಯ ಸಾಂಪ್ರದಾಯಿಕ ಗೀತೆಯನ್ನು ಹಾಡುವ ಮೂಲಕ ಸಾಂಕೇತಿಕ ಮದುವೆ ಮಾಡಿಸಿದ್ದಾರೆ. ಬಳಿಕ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.&lt;/p&gt;&lt;h3&gt;ಚಂದಮಾಮಾ ಮಕ್ಕಳ ನಡೂವೆ ಮದುವೆ&lt;/h3&gt;&lt;p&gt;ನಾಗಮಂಗಲ ಅಲ್ಲದೆ ಕೆ.ಆರ್.ಪೇಟೆ ತಾಲೂಕಿನ ಗಂಗೇನಹಳ್ಳಿ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಇಬ್ಬರು ಗಂಡು ಮಕ್ಕಳನ್ನು ಅಥವಾ ಅಪ್ರಾಪ್ತರನ್ನು ಮದುವೆ ಮಾಡಿಸುವ ಸಂಪ್ರದಾಯವೂ ಇದೆ. ಕೆಲವೆಡೆ ಚಂದಮಾಮ ಹಾಗೂ ಮಕ್ಕಳ ಮದುವೆ ಮಾಡಿಸಲಾಗುತ್ತೆ. ಜಾನಪದ ಸಂಸ್ಕೃತಿಯ ನಂಬಿಕೆಯಂತೆ ಮಳೆಗಾಗಿ ಪ್ರಾರ್ಥಿಸಿ ಚಂದಮಾಮನ ಮದುವೆ ಹಾಗೂ ಮಕ್ಕಳ ಮದುವೆ ಮಾಡಿಸುವ ಪದ್ಧತಿ ಕೆಲವು ಕಡೆ ಇದೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/devalapur-villagers-in-mandya-childrens-wedding-to-pray-for-rain-rav/articleshow-0oekxrr"/>
        </item>
        <item>
            <title><![CDATA[ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ; ಹೃದಯಾಘಾತಕ್ಕೆ 9ನೇ ತರಗತಿ ಬಾಲಕ ಬಲಿ]]></title>
            <link>https://kannada.asianetnews.com/karnataka-districts/heartbreaking-14-year-old-9th-standard-student-dies-of-heart-attack-in-mandya-gkn/articleshow-2gkq8xa</link>
            <guid isPermaLink="true">https://kannada.asianetnews.com/karnataka-districts/heartbreaking-14-year-old-9th-standard-student-dies-of-heart-attack-in-mandya-gkn/articleshow-2gkq8xa</guid>
            <pubDate>Wed, 02 Sep 2026 19:13:05 +0530</pubDate>
            <description><![CDATA[&lt;p&gt;ಬಿಸಿಯೂಟ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ 9ನೇ ತರಗತಿ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತ ಒಂದು ವರದಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1h5q6f9z5x8qvn814wz2zmk,imgname-mandya-heart-attack-1788356565481.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಇಂದು ಸಂಭವಿಸಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯನ್ನೇ ಕಣ್ಣೀರಲ್ಲಿ ಮುಳುಗಿಸಿದೆ. ಆಟವಾಡಿ ಕಲಿಯಬೇಕಿದ್ದ 14 ವರ್ಷದ ಬಾಲಕನೊಬ್ಬ ಶಾಲೆಯಲ್ಲೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ. ಬೆಳಿಗ್ಗೆ ನಗುನಗುತ್ತಾ ಶಾಲೆಗೆ ಹೋದ ಮಗ ಸಂಜೆಯ ವೇಳೆಗೆ ಶವವಾಗಿ ಮನೆಗೆ ಮರಳಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;h2&gt;&lt;strong&gt;ಬಿಸಿಯೂಟ ಮಾಡುವಾಗಲೇ ದುರಂತ&lt;/strong&gt;&lt;/h2&gt;&lt;p&gt;ಸೋಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವೀರಮಣಿ (14) ಮೃತಪಟ್ಟ ದುರ್ದೈವಿ. ಎಂದಿನಂತೆ ಶಾಲೆಗೆ ಹೋಗಿದ್ದ ವೀರಮಣಿ ಮಧ್ಯಾಹ್ನದ ವಿರಾಮದ ವೇಳೆ ಶಾಲೆಯಲ್ಲಿ ನೀಡುವ ಬಿಸಿಯೂಟವನ್ನು ಸೇವಿಸುತ್ತಿದ್ದ. ಈ ಸಂದರ್ಭದಲ್ಲಿ ಹಠಾತ್ತನೆ ಆತನಿಗೆ ಮೂರ್ಛೆ ಬಂದಿದ್ದು, ಕುಳಿತಲ್ಲೇ ಕುಸಿದು ಬಿದ್ದಿದ್ದಾನೆ.&lt;/p&gt;&lt;p&gt;ತಕ್ಷಣವೇ ಎಚ್ಚೆತ್ತುಕೊಂಡ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಬಾಲಕನನ್ನು ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ ಬಾಲಕನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ರವಾನಿಸಲಾಯಿತು. ದುರಾದೃಷ್ಟವಶಾತ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ವೀರಮಣಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.&lt;/p&gt;&lt;h2&gt;&lt;strong&gt;ವೈದ್ಯರು ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಬಾಲಕನ ಸಾವಿನ ಬಗ್ಗೆ ಮಾಹಿತಿ ನೀಡಿರುವ ಮಿಮ್ಸ್ ವೈದ್ಯರು, ವೀರಮಣಿ ಸಾವಿಗೆ ತೀವ್ರ ಹೃದಯಾಘಾತವೇ ಕಾರಣ ಎಂದು ದೃಢಪಡಿಸಿದ್ದಾರೆ. 14 ವರ್ಷದ ಈ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಸಂಭವಿಸಿರುವುದು ಇಡೀ ಗ್ರಾಮಸ್ಥರಿಗೆ ಅಚ್ಚರಿ ಮತ್ತು ನೋವನ್ನುಂಟು ಮಾಡಿದೆ. ಹತ್ತನೇ ತರಗತಿಗೆ ಕಾಲಿಡಬೇಕಿದ್ದ ಮಗ ಹೀಗೆ ಅಕಾಲಿಕ ಸಾವನ್ನಪ್ಪಿರುವುದು ಸೋಮನಹಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.&lt;/p&gt;]]></content:encoded>
            <category>mandya</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/heartbreaking-14-year-old-9th-standard-student-dies-of-heart-attack-in-mandya-gkn/articleshow-2gkq8xa"/>
        </item>
        <item>
            <title><![CDATA[Mandya: ಹಾಲಿನ ವ್ಯಾನ್-ಟಾಟಾ ಏಸ್ ಭೀಕರ ಡಿಕ್ಕಿ: ಹರಕೆ ತೀರಿಸಲು ಹೊರಟಿದ್ದವರು ಆಸ್ಪತ್ರೆಗೆ! ಸಾವು-ನೋವುಗಳೆಷ್ಟು?]]></title>
            <link>https://kannada.asianetnews.com/gallery/karnataka-districts/ten-people-were-injured-in-a-collision-between-a-milk-van-and-a-tata-ace-near-nagamangala-mandya-rav-401dogd</link>
            <guid isPermaLink="true">https://kannada.asianetnews.com/gallery/karnataka-districts/ten-people-were-injured-in-a-collision-between-a-milk-van-and-a-tata-ace-near-nagamangala-mandya-rav-401dogd</guid>
            <pubDate>Sun, 13 Sep 2026 12:25:52 +0530</pubDate>
            <description><![CDATA[&lt;p&gt;ದೇವಸ್ಥಾನಕ್ಕೆ ಹರಕೆ ಮಾಡಲು ಹೊರಟ್ಟಿದ್ದ ವೇಳ ಹಾಲಿನ ವ್ಯಾನ್ ಡಿಕ್ಕಿ ಸಂಭವಿಸಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಮಂಗಲ ಬಳಿ ನಡೆದಿದೆ. ಘಟನೆಗೆ ಕಾರಣವೇನು? ತಿಳಿಯಿರಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cr7zm99vbxbf276c5q43j2,imgname-mandya-nagamangala-tata-ace-accident-1789281959561.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇವಸ್ಥಾನಕ್ಕೆ ಹರಕೆ ಮಾಡಲು ಹೊರಟ್ಟಿದ್ದ ವೇಳ ಹಾಲಿನ ವ್ಯಾನ್ ಡಿಕ್ಕಿ ಸಂಭವಿಸಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಮಂಗಲ ಬಳಿ ನಡೆದಿದೆ. ಘಟನೆಗೆ ಕಾರಣವೇನು? ತಿಳಿಯಿರಿ&lt;/p&gt;&lt;img&gt;&lt;p&gt;ಮಂಡ್ಯ (ಸೆ.13): ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕ್ಯಾತನಹಳ್ಳಿ ಗೇಟ್ ಬಳಿ ಹಾಲಿನ ವ್ಯಾನ್ ಹಾಗೂ ಟಾಟಾ ಏಸ್ ನಡುವೆ ಭೀಕರ ಮುಖಾಮುಖಿ ಡಿಕ್ಕಿಯಾಗಿ 10ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆದ ಬಗ್ಗೆ ವರದಿಯಾಗಿಲ್ಲ. ಆದರೆ ಇಬ್ಬರು ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದೆ.&lt;/p&gt;&lt;img&gt;&lt;p&gt;ಶ್ರವಣಬೆಳಗೋಳ-ನಾಗಮಂಗಲ ರಸ್ತೆಯ ಗಡಿ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳು ಚನ್ನರಾಯಪಟ್ಟಣದ ಶ್ರೀನಿವಾಸಪುರದ ನಿವಾಸಿಗಳಾಗಿದ್ದಾರೆ. ನಾಗಮಂಗಲ ಬಳಿಯ ಮುಳ್ಳುಕಟ್ಟಮ್ಮ ದೇವಸ್ಥಾನಕ್ಕೆ ಪರ(ಹರಕೆ) ಮಾಡಲು ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.&lt;/p&gt;&lt;img&gt;&lt;p&gt;ಟಾಟಾ ಏಸ್&zwnj;ನಲ್ಲಿ ಹೊರಟಿದ್ದ ವೇಳೆ ಎದುರುಗಡೆಯಿಂದ ಬಂದ ಹಾಲಿನ ವ್ಯಾನ್ ಈ ವೇಳೆ ನಿಯಂತ್ರಣ ಕಳೆದುಕೊಂಡು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ರಸ್ತೆ ಮೇಲೆ ಚೆಲ್ಲಪಿಲ್ಲಿ ಬಿದ್ದ ಜನರು. ತಕ್ಷಣ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;]]></content:encoded>
            <category>mandya</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/ten-people-were-injured-in-a-collision-between-a-milk-van-and-a-tata-ace-near-nagamangala-mandya-rav-401dogd"/>
        </item>
        <item>
            <title><![CDATA[ಗಣಪತಿ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆ ದಾಖಲು]]></title>
            <link>https://kannada.asianetnews.com/karnataka-districts/mandya-congress-mla-ganiga-ravikumar-injured-at-ganapati-event-hospitalised/articleshow-6dzpcz3</link>
            <guid isPermaLink="true">https://kannada.asianetnews.com/karnataka-districts/mandya-congress-mla-ganiga-ravikumar-injured-at-ganapati-event-hospitalised/articleshow-6dzpcz3</guid>
            <pubDate>Sat, 12 Sep 2026 22:55:32 +0530</pubDate>
            <description><![CDATA[&lt;p&gt;ಗಣಪತಿ ಮೂರ್ತಿ ರಿವೀಲ್ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯವಾಗಿದೆ. ತಕ್ಷಣವೇ ಶಾಸಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕರು ಗಾಯಗೊಂಡಿದ್ದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2badzrxeb55jj7qhv06814a,imgname-mandya-mla-ganiga-ravikumar-suffers-injury-1789233921821.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಸೆ.12) &lt;/strong&gt;ರಾಜ್ಯದಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಡ್ಯದಲ್ಲಿ ಗಣಪತಿ ಹಬ್ಬ ಆಚರಣೆ ಜೋರಾಗಿದೆ. ಬೃಹತ್ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಮೂರ್ತಿಯನ್ನು ಅನಾವರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ರವಿಕುಮಾರ್ ತಲೆಗೆ ಗಾಯವಾಗಿದೆ. ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಸ್ಕ್ರೀನ್&zwnj;ನ ಕೊಂಡಿ ಬಿದ್ದು ರವಿಕುಮಾರ್ ಗಾಯಗೊಂಡಿದ್ದಾರೆ. ತಕ್ಷಣ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ತಲೆಗೆ ಬಿದ್ದ ಸ್ಕ್ರೀನ್ ಕೊಂಡಿ&lt;/h2&gt;&lt;p&gt;ಮಂಡ್ಯದ ಮರಿಗೌಡ ಬಡಾವಣೆಯಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ. ಈ ಬಾರಿಯೂ ಬೃಹತ್ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಣೇಶನ ಪ್ರತಿಷ್ಠಾಪನೆಗೂ ಮೊದಲು ಮೂರ್ತಿಯನ್ನು ಅನಾವರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರು ಗಾಯಗೊಂಡಿದ್ದಾರೆ. ಸ್ಕ್ರೀನ್&zwnj;ನ ಕೊಂಡಿ ಶಾಸಕರ ತಲೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ.ಅದ್ಧೂರಿ ಕಾರ್ಯಕ್ರಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;p&gt;ಗಾಯಗೊಂಡ ಶಾಸಕ ಗಣಿಗ ರವಿಕುಮಾರ್ ಅವರನ್ನು ತಕ್ಷಣವೇ ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಾಸಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪಂದನ ಆಸ್ಪತ್ರೆಯತ್ತ ಶಾಸಕ ಗಣಿಗ ರವಿಕುಮಾರ್ ಬೆಂಬಲಿಗರು ದೌಡಾಯಿಸಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/mandya-congress-mla-ganiga-ravikumar-injured-at-ganapati-event-hospitalised/articleshow-6dzpcz3"/>
        </item>
        <item>
            <title><![CDATA[Mandy: ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವ್ಯಕ್ತಿ ಬಂಧನ; ಆದರೂ ಕೆ.ಆರ್.ಪೇಟೆ ಪೊಲೀಸ್ ಠಾಣೆ ಎದುರು ನಿಲ್ಲದ ಹೈಡ್ರಾಮಾ!]]></title>
            <link>https://kannada.asianetnews.com/karnataka-districts/kr-pete-police-station-high-drama-vedamurthy-arrest-ambedkar-controversial-statement-dalit-organizations-protest-bmk/articleshow-9g7yyka</link>
            <guid isPermaLink="true">https://kannada.asianetnews.com/karnataka-districts/kr-pete-police-station-high-drama-vedamurthy-arrest-ambedkar-controversial-statement-dalit-organizations-protest-bmk/articleshow-9g7yyka</guid>
            <pubDate>Sun, 06 Sep 2026 20:03:09 +0530</pubDate>
            <description><![CDATA[ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ವೇದಮೂರ್ತಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ, ದಲಿತಪರ ಸಂಘಟನೆಗಳು ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಆರೋಪಿಯನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m1vj23s5b4xybx2ssq1nkbbf,imgname-kr-pete-1788705050405.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸುತ್ತಿದ್ದಂತೆ, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಮುಂದೆ ತೀವ್ರ ಹೈಡ್ರಾಮಾ ಮತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಆರೋಪಿ ವಶಕ್ಕೆ ಪಡೆದ ಖಾಕಿ ಪಡೆ!&lt;/strong&gt;&lt;/h2&gt;&lt;p&gt;ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ದೊಡ್ಡ ಯಾಚೇನಹಳ್ಳಿ ಗ್ರಾಮದ ನಿವಾಸಿ ವೇದಮೂರ್ತಿ ಎಂಬಾತನೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತು ನಾಲಿಗೆ ಹರಿಬಿಟ್ಟು ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪಿಯಾಗಿದ್ದಾನೆ. ಈತನ ಹೇಳಿಕೆಯು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿದ್ದವು. ಪ್ರಕರಣದ ಗಂಭೀರತೆಯನ್ನು ಅರಿತ ಕೆ.ಆರ್.ಪೇಟೆ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ವೇದಮೂರ್ತಿಯನ್ನು ವಶಕ್ಕೆ ಪಡೆದಿದ್ದರು.&lt;/p&gt;&lt;h3&gt;&lt;strong&gt;ಶಾಂತವಾದ ಸಂಘಟನಕಾರರು!&lt;/strong&gt;&lt;/h3&gt;&lt;p&gt;ಆರೋಪಿ ವೇದಮೂರ್ತಿಯನ್ನು ಪೊಲೀಸರು ಬಂಧಿಸಿ ಠಾಣೆಯಲ್ಲಿಟ್ಟಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ, ವಿವಿಧ ದಲಿತಪರ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಲು ಪ್ರಾರಂಭಿಸಿದರು. ಠಾಣೆಯ ಮುಂಭಾಗದಲ್ಲಿ ನೆರೆದ ಆಕ್ರೋಶಿತ ಕಾರ್ಯಕರ್ತರು ಆರೋಪಿಯ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದರು.&lt;/p&gt;&lt;h3&gt;&lt;strong&gt;ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಪಟ್ಟು!&lt;/strong&gt;&lt;/h3&gt;&lt;p&gt;ಪ್ರತಿಭಟನೆಯ ವೇಳೆ ಸನ್ನಿವೇಶವು ಕೈಮೀರುವ ಹಂತಕ್ಕೆ ತಲುಪಿತು. ಅಂಬೇಡ್ಕರ್ ಅವರಿಗೆ ಅಪಮಾನವೆಸಗಿದ ಆರೋಪಿ ವೇದಮೂರ್ತಿಯ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು, &quot;ಆರೋಪಿಯನ್ನು ಪೊಲೀಸರು ತಕ್ಷಣ ನಮಗೆ ಒಪ್ಪಿಸಬೇಕು, ಆತನಿಗೆ ನಾವೇ ತಕ್ಕ ಬುದ್ಧಿ ಕಲಿಸುತ್ತೇವೆ&quot; ಎಂದು ಪಟ್ಟು ಹಿಡಿದರು. ಇದರಿಂದಾಗಿ ಪೊಲೀಸ್ ಠಾಣೆಯ ಆವರಣದಲ್ಲಿ ತೀವ್ರ ಗೊಂದಲ ಹಾಗೂ ಬಿಗುವಿನ ವಾತಾವರಣ ಸೃಷ್ಟಿಯಾಯಿತು.&lt;/p&gt;&lt;h3&gt;&lt;strong&gt;ಪೊಲೀಸರ ಹರಸಾಹಸ!&lt;/strong&gt;&lt;/h3&gt;&lt;p&gt;ಸ್ಥಳದಲ್ಲಿದ್ದ ಆಕ್ರೋಶಿತ ಜನಸಮೂಹವನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಠಾಣೆಯ ಸುತ್ತಮುತ್ತ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದುದನ್ನು ಕಂಡ ಪೊಲೀಸರು, ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ಆರೋಪಿಯ ಸುರಕ್ಷತೆಯ ಹಿತದೃಷ್ಟಿಯಿಂದ ತಕ್ಷಣವೇ ತಂತ್ರ ಬದಲಾಯಿಸಿದರು. ಸನ್ನಿವೇಶದ ಗಂಭೀರತೆಯನ್ನು ಅರಿತ ಪೊಲೀಸ್ ಅಧಿಕಾರಿಗಳು, ಪ್ರತಿಭಟನಾಕಾರರ ಕಣ್ಣು ತಪ್ಪಿಸಿ ಆರೋಪಿ ವೇದಮೂರ್ತಿಯನ್ನು ಠಾಣೆಯಿಂದ ರಹಸ್ಯವಾಗಿ ಮತ್ತೊಂದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.&lt;/p&gt;&lt;h3&gt;&lt;strong&gt;ಸೂಕ್ತ ಸಿದ್ದತೆಯಲ್ಲಿ ಖಾಕಿ ಪಡೆ!&lt;/strong&gt;&lt;/h3&gt;&lt;p&gt;ಪ್ರಸ್ತುತ ಕೆ.ಆರ್.ಪೇಟೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವ ಪೊಲೀಸರು, ಆರೋಪಿ ವೇದಮೂರ್ತಿಯನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/kr-pete-police-station-high-drama-vedamurthy-arrest-ambedkar-controversial-statement-dalit-organizations-protest-bmk/articleshow-9g7yyka"/>
        </item>
        <item>
            <title><![CDATA[ಗಣೇಶೋತ್ಸವ ವೇಳೆ ಕಲ್ಲು ತೂರಾಟ ಪ್ರಕರಣ: ಒಂದು ವರ್ಷದ ಬಳಿಕ ಬಿಜೆಪಿ ಮುಖಂಡರಿಗೆ ಪೊಲೀಸರು ನೋಟಿಸ್!]]></title>
            <link>https://kannada.asianetnews.com/politics/maddur-ganeshotsav-stone-pelting-case-police-issue-summons-to-bjp-leaders-after-a-year-rav/articleshow-alp8ac4</link>
            <guid isPermaLink="true">https://kannada.asianetnews.com/politics/maddur-ganeshotsav-stone-pelting-case-police-issue-summons-to-bjp-leaders-after-a-year-rav/articleshow-alp8ac4</guid>
            <pubDate>Sun, 13 Sep 2026 14:08:10 +0530</pubDate>
            <description><![CDATA[&lt;p&gt;Maddur Ganeshotsav ಮದ್ದೂರಿನಲ್ಲಿ ಕಳೆದ ವರ್ಷದ ಗಣೇಶೋತ್ಸವದ ಕಲ್ಲು ತೂರಾಟ ಖಂಡಿಸಿ ಪ್ರತಿಭಟಿಸಿದ್ದ ಬಿಜೆಪಿ ಮುಖಂಡರಿಗೆ ಸರ್ಕಾರ ಒಂದು ವರ್ಷದ ಬಳಿಕ ನೋಟಿಸ್ ನೀಡಿದೆ. ಇದು ಹಿಂದೂಗಳನ್ನು ಕುಗ್ಗಿಸುವ ಪ್ರಯತ್ನವಾಗಿ ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cxtvsy317gymw88wsernka,imgname-mandya-1789287821118.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯ (ಸೆ.13): ಕಳೆದ ವರ್ಷ ಮದ್ದೂರು ಗಣೇಶೋತ್ಸವದ ವೇಳೆ ಕಲ್ಲು ತೂರಾಟ ನಡೆಸಿದ್ದ ಕಿಡಿಗೇಡಿಗಳ ವಿರುದ್ಧ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು. ಇದೀಗ ಒಂದು ವರ್ಷದ ಬಳಿಕ ಪ್ರತಿಭಟನೆ ನಡೆಸಿದ್ದ ಬಿಜೆಪಿ ಮುಖಂಡರಿಗೆ, ಹಿಂದೂಪರ ಸಂಘಟನೆಗಳಿಗೆ ಸರ್ಕಾರ ನೋಟಿಸ್ ನೀಡಿ ಅಚ್ಚರಿ ಮೂಡಿಸಿದೆ.&lt;/p&gt;&lt;h2&gt;ಮದ್ದೂರು ಬಿಜೆಪಿ ಮುಖಂಡ ಆಕ್ರೋಶ&lt;/h2&gt;&lt;p&gt;ಕಳೆದ ವರ್ಷ ಗಣೇಶೋತ್ಸವ ವೇಳೆ ಕಲ್ಲು ತೂರಿದ್ದು ಯಾರು? ಕಲ್ಲು ತೂರಿದ ಕಿಡಿಗೇಡಿಗಳನ್ನು ಬಿಟ್ಟು ಕಿಡಿಗಳ ಬಂಧನಕ್ಕೆ ಪ್ರತಿಭಟನೆ ನಡೆಸಿದ ನಮಗೇ ಸಮನ್ಸ್ ನೀಡ್ತೀರಾ? ಪೊಲೀಸರ ನಡೆಗೆ ಮದ್ದೂರಿನ ಬಿಜೆಪಿ ಮುಖಂಡ ಎಸ್&zwnj;ಪಿ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h3&gt;ಈ ಸರ್ಕಾರದಿಂದ ಹಿಂದೂಗಳ ಕುಗ್ಗಿಸುವ ಪ್ರಯತ್ನ&lt;/h3&gt;&lt;p&gt;ಕಳೆದ ವರ್ಷ ಮೆರವಣಿಗೆ ವೇಳೆ ಕಲ್ಲು ತೂರಿದ್ದ ಕಿಡಿಗೇಡಿಗಳು. ಇದರ ವಿರುದ್ಧ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಇದೀಗ ಕಲ್ಲು ತೂರಿದ ಕಿಡಿಗೇಡಿಗಳ ಜೊತೆಗೆ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ 23 ಬಿಜೆಪಿ ಮುಖಂಡರಿಗೂ ಸಮನ್ಸ್ ಜಾರಿ ಮಾಡಿದೆ. ಸಮನ್ಸ್ ಕೊಟ್ಟು ಹಿಂದೂಗಳನ್ನು ಕುಗ್ಗಿಸುವ ಪ್ರಯತ್ನ ಮಾಡ್ತಿದ್ದಾರೆ. ಹಿಂದೂಗಳ ಹಬ್ಬ ಆಚರಣೆಗೆ ಕಾಂಗ್ರೆಸ್ ಸರ್ಕಾರ ಅಡ್ಡಿ ಮಾಡ್ತಿದೆ. ಕಳೆದ ವರ್ಷ ನಡೆದ ಗಲಾಟೆ ಸಂಬಂಧ ಒಂದು ವರ್ಷದ ಬಳಿಕ ಇದೀಗ ಗಣೇಶೋತ್ಸವದವೇಳೆ ಸಮನ್ಸ್ ಜಾರಿ ಮಾಡಿದ್ದಾರೆ. ಗಣಪತಿ ಪ್ರತಿಷ್ಠಾಪನೆಗೆ ಕಠಿಣ ಷರತ್ತು ಹೇರಿದ್ದಾರೆ. ಅನುಮತಿ ನೀಡಲು ಯುವಕರನ್ನು ಉದ್ದೇಶಪೂರ್ವಕವಾಗಿ ಅಲೆದಾಡಿಸುತ್ತಿದ್ದಾರೆ. ಮಸೀದಿ ಮುಂದೆ ಗಣಪತಿ ಮೆರವಣಿಗೆ ಹೋಗದಂತೆ ಪೋಲೀಸರಿಂದಲೇ ನಿರ್ಬಂಧವಿದೆ. ವೋಟ್&zwnj;ಬ್ಯಾಂಕ್&zwnj;ಗಾಗಿ ಈ ಸರ್ಕಾರದಿಂದ ಒಂದೇ ಕೋಮಿನ ಓಲೈಕೆ ನಡೆಯುತ್ತಿದೆ ಎಂದು ಆರೋಪಿಸಿದರು.&lt;/p&gt;&lt;h3&gt;ಪೊಲೀಸ್ ಪವರ್ ಹಿಂದೂಗಳ ಮುಂದೆ ಮಾತ್ರವಾ?&lt;/h3&gt;&lt;p&gt;ಅದೇ ಮುಸ್ಲಿಮರು ಹಬ್ಬ ಆಚರಿಸುವಾಗ ಯಾವುದ ನಿರ್ಬಂಧಗಳಿರೋದಿಲ್ಲ. ಗಣೇಶೋತ್ಸವ ಮೆರವಣಿಗೆಗೆ ಕೊಡೋ ಎಚ್ಚರಿಕೆ ಡೈಲಾಗ್&zwnj;ಗಳು ಅವರ ಹಬ್ಬದಲ್ಲಿ ಪೊಲೀಸರು ಕೊಡೋ ಧೈರ್ಯ ಮಾಡೋಲ್ಲ. ಅವರು ಮಂದಿರಗಳ ಮುಂದೆ ಮೆರವಣಿಗೆ ಹೋಗ್ತಾರೆ, ನಾವು ಮಸೀದಿ ಹೋಗ್ತೇವೆ. ಅವರ ಏನೇ ಹಬ್ಬ ಮೆರವಣಿಗೆಗಳಾದರೂ, ನಮ್ಮ ದೇವಾಲಯಗಳ ಮುಂದೆ ಸಾಗಿದ್ರೂ ಯಾವುದೇ ಕಲ್ಲು ತೂರಾಟ, ಗಲಾಟೆ ನಡೆಯಲ್ಲ. ಆದ್ರೆ ಹಿಂದೂಗಳ ಹಬ್ಬ ಆಚರಿಸುವಾಗ ಮಸೀದಿ ಮುಂದೆ ಹೋಗದಂತೆ ಪೊಲೀಸರೇ ನಿರ್ಬಂಧ ಹೇರುತ್ತಾರೆ. ಇದ್ಯಾಕೆ ಹಿಂಗೆ? ಯಾಕೆ ಕಲ್ಲು ತೂರಾಡೋದು? ಅವರಿಗೆ ಎಚ್ಚರಿಕೆ ಕೊಟ್ಟು ಕಲ್ಲು ತೂರುವ ಕಿಡಿಗೇಡಿಗಳಿಗೆ ಒಂದು ಭಯ ಹುಟ್ಟಿಸಬೇಕಲ್ಲ? ಕಲ್ಲು ತೂರದಂತೆ ಬಂದೋಬಸ್ತ್ ಮಾಡಬಹುದಲ್ಲ? ಅದುಬಿಟ್ಟ ಹಿಂದೂಗಳಿಗೆ ಷರತ್ತು ಹಾಕುವ ಕೆಲಸ ಮಾಡ್ತಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.&lt;/p&gt;]]></content:encoded>
            <category>mandya</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/maddur-ganeshotsav-stone-pelting-case-police-issue-summons-to-bjp-leaders-after-a-year-rav/articleshow-alp8ac4"/>
        </item>
        <item>
            <title><![CDATA[Mandya: ಕಸ ಕಡ್ಡಿಗಳಿಂದ ತುಂಬಿದ್ದ 300 ಅಡಿ ಉದ್ದ, 300 ಅಡಿ ಅಗಲ ಮತ್ತು 30 ಅಡಿ ಆಳದ ಕಲ್ಯಾಣಿಗೆ ಮರುಜೀವ]]></title>
            <link>https://kannada.asianetnews.com/gallery/karnataka-districts/reviving-300-foot-long-and-wide-30-foot-deep-pandavapura-ammana-kalyani-mandya-sns-gug7uz3</link>
            <guid isPermaLink="true">https://kannada.asianetnews.com/gallery/karnataka-districts/reviving-300-foot-long-and-wide-30-foot-deep-pandavapura-ammana-kalyani-mandya-sns-gug7uz3</guid>
            <pubDate>Wed, 16 Sep 2026 13:36:09 +0530</pubDate>
            <description><![CDATA[&lt;p&gt;ಮಂಡ್ಯ ಜಿಲ್ಲೆಯ ಗೌಡಗೆರೆ ಗ್ರಾಮದಲ್ಲಿರುವ ಚಿಕ್ಕದೇವರಾಜ ಒಡೆಯರ್ ಕಾಲದ ಐತಿಹಾಸಿಕ 'ಅಮ್ಮನ ಕಲ್ಯಾಣಿ'ಯನ್ನು ಗ್ರಾಮಸ್ಥರು ಹಾಗೂ ಪರಿತ್ರಾಣ ಫೌಂಡೇಶನ್ ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ. (ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ)&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2mk9fbnznc46pgyx1s4jxte,imgname-historic-ammana-kalyani-mandya-1789545201013.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯ ಜಿಲ್ಲೆಯ ಗೌಡಗೆರೆ ಗ್ರಾಮದಲ್ಲಿರುವ ಚಿಕ್ಕದೇವರಾಜ ಒಡೆಯರ್ ಕಾಲದ ಐತಿಹಾಸಿಕ 'ಅಮ್ಮನ ಕಲ್ಯಾಣಿ'ಯನ್ನು ಗ್ರಾಮಸ್ಥರು ಹಾಗೂ ಪರಿತ್ರಾಣ ಫೌಂಡೇಶನ್ ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ. (ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ)&lt;/p&gt;&lt;img&gt;&lt;p&gt;ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಗೌಡಗೆರೆ ಗ್ರಾಮದ ಐತಿಹಾಸಿಕ &lsquo;ಅಮ್ಮನ ಕಲ್ಯಾಣಿ&rsquo; ಸಂರಕ್ಷಣೆಗೆ ಗ್ರಾಮಸ್ಥರು ಹಾಗೂ ಬೆಂಗಳೂರಿನ ಪರಿತ್ರಾಣ ಫೌಂಡೇಶನ್ ಕೈಜೋಡಿಸಿದ್ದಾರೆ.&lt;/p&gt;&lt;img&gt;&lt;p&gt;ಚಿಕ್ಕದೇವರಾಜ ಒಡೆಯರ್ ಅವರ ಆಡಳಿತಕಾಲದಲ್ಲಿ ಧರ್ಮಪತ್ನಿಯ ನೆನಪಿಗಾಗಿ ಈ ಕಲ್ಯಾಣಿ ನಿರ್ಮಾಣಗೊಂಡಿದೆ ಎಂದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ ಎನ್ನಲಾಗಿದೆ. ಸುಮಾರು 10&ndash;12 ವರ್ಷಗಳ ಹಿಂದೆ ನೀರಿನಿಂದ ಸಮೃದ್ಧವಾಗಿದ್ದ ಕಲ್ಯಾಣಿ, ಮಳೆಯ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಬರಡಾಗಿ ಕಸ-ಕಡ್ಡಿ ಮತ್ತು ಗಿಡಗಂಟಿಗಳಿಂದ ಮುಚ್ಚಿಹೋಗಿತ್ತು.&lt;/p&gt;&lt;p&gt;ಕಲ್ಯಾಣಿಯನ್ನು ಉಳಿಸಿ ಅದರ ಗತವೈಭವ ಮರಳಿ ತರಲು ಮುಂದಾದ ಗ್ರಾಮಸ್ಥರ ಪ್ರಯತ್ನಕ್ಕೆ ಪರಿತ್ರಾಣ ಫೌಂಡೇಶನ್&zwnj;ನ ಸಂಸ್ಥಾಪಕ ಸಚಿನ್ ಶಂಕರ್ ಹಾಗೂ ತಂಡ ಕೈಜೋಡಿಸಿದೆ. ಸೆಪ್ಟೆಂಬರ್ 6, 2026 ಸೇರಿದಂತೆ ಮೂರು ಭಾನುವಾರಗಳಲ್ಲಿ ಶ್ರಮದಾನ ನಡೆಸಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಗಿದೆ.&lt;/p&gt;&lt;img&gt;&lt;p&gt;ಸುಮಾರು 300 ಅಡಿ ಉದ್ದ, 300 ಅಡಿ ಅಗಲ ಮತ್ತು 30 ಅಡಿ ಆಳ ಹೊಂದಿರುವ ಈ ಬೃಹತ್ ಜಲಮೂಲದ ಸಂರಕ್ಷಣಾ ಕಾರ್ಯವನ್ನು ಪಾಂಡವಪುರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಭೇಟಿ ನೀಡಿ ಪ್ರಶಂಸಿಸಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಪರಿತ್ರಾಣ ಫೌಂಡೇಶನ್ ತಂಡದ ಸಚಿನ್ ಶಂಕರ್, ಮಹೇಶ್, ಸಂತೋಷ್, ದಿವ್ಯ, ಪವನ್, ನಾಗೇಶ್, ಲಿಖಿತ್ ಸೇರಿದಂತೆ ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದ್ದಾರೆ. ಚನ್ನಪಟ್ಟಣದ ಲಕ್ಷ್ಮಿಕಿಶೋರ್ ಅರಸ್ ಹಾಗೂ ಪಂಜಾಬ್&zwnj;ನ ರೊಪಡ್ ಜಿಲ್ಲೆಯ ನವಜೋತ್ ಸಿಂಗ್ ಕೂಡ ಆಗಮಿಸಿ ಸೇವೆ ಸಲ್ಲಿಸಿದ್ದಾರೆ. ಐತಿಹಾಸಿಕ ಪರಂಪರೆಯ ಸಂರಕ್ಷಣೆ ಜೊತೆಗೆ ಮುಂದಿನ ದಿನಗಳಲ್ಲಿ ಈ ಕಲ್ಯಾಣಿ ಗ್ರಾಮಸ್ಥರು ಹಾಗೂ ಪಶು-ಪಕ್ಷಿಗಳಿಗೆ ಜಲಮೂಲವಾಗಿ ಉಳಿಯಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.&lt;/p&gt;&lt;img&gt;&lt;p&gt;ಈ ಕುರಿತಂತೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ನಟರಾಜ್ ಪಂಡಿತ್ ಅವರು, ಯುವಕರ ತಂಡ ಬಹುದೊಡ್ಡ ಕೆಲಸ ಮಾಡಿದೆ. ಎರಡು ವಾರದ ಕೆಲಸ ಮಾಡಿ ಈ ಕಲ್ಯಾಣಿಗೆ ಮೂಲ ಸ್ವರೂಪ ನೀಡಿದ್ದಾರೆ. ಇಂತಹ ಕಾರ್ಯ ಯಾಕೆ ಮಾಡಬೇಕು ಎಂದು ಬಂದಾಗ, ಜಿಎಸ್ ಶಿವರುದ್ರಪ್ಪನ ಮಾತನ್ನು ನೆನಪಿಸಿದ ಅವರು. ನಿಮ್ಮನ್ನು ನಿಮ್ಮ ಅಮ್ಮ ಮಾತ್ರ ಬೆಳೆಸಿಲ್ಲ. ನಿಮ್ಮ ಬೆಳವಣಿಗೆಗೆ ಸಮಾಜ ಕೂಡ ಕಾರಣವಾಗಿದೆ. ಸಮಾಜದ ಋಣ ನಮ್ಮ ಮೇಲೆ ಅಪಾರವಾಗಿದೆ. ಸಮಾಜ ಯಾವ ಚೆನ್ನಾಗಿದೆ, ಒಳ್ಳೆಯ ವ್ಯಕ್ತಿಗಳು ಸಮಾಜದಿಂದ ಹೊರ ಬಂದಿದ್ದಾರೆ. ಸಮಾಜ ದಿಕ್ಕು ತಪ್ಪುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಗಳು ಉಳಿದುಕೊಳ್ಳುತ್ತದೆ. ಆದರೆ ಈ ಕಾರ್ಯವನ್ನು ಇಲ್ಲಿಗೆ ಕೈಬಿಡದೆ, ಇದನ್ನು ಕೊನೆಯ ಹಂತದ ವರೆಗೂ ಮುಂದುವರಿಸಿಕೊಂಡು ಹೋಗಬೇಕು. ಶಾಸಕರ ಹಿಂದೆ ಬಿಂದು ನೀವು ಈ ಕಲ್ಯಾಣಿಗೆ ನೀರು ತುಂಬುವಂತೆ ಮಾಡಿದರೆ ಕಲ್ಯಾಣಿ ಶಾಶ್ವತವಾಗಿ ಉಳಿದುಕೊಳ್ಳಲಿದೆ ಎಂದು ಸಲಹೆ ನೀಡಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/karnataka-districts/reviving-300-foot-long-and-wide-30-foot-deep-pandavapura-ammana-kalyani-mandya-sns-gug7uz3"/>
        </item>
        <item>
            <title><![CDATA[ಅದ್ಧೂರಿ ದಸರಾಗೆ ಅಡ್ಡಗಾಲಾದ ಬರಗಾಲ: ಸರಳ ಶ್ರೀರಂಗಪಟ್ಟಣ ದಸರಾ ಆಚರಣೆಗೆ ತೀರ್ಮಾನ-ಸಚಿವ ಚಲುವರಾಯಸ್ವಾಮಿ!]]></title>
            <link>https://kannada.asianetnews.com/karnataka-districts/srirangapatna-dasara-simple-celebration-drought-n-cheluvarayaswamy-mandya-sat/articleshow-h9o8cgr</link>
            <guid isPermaLink="true">https://kannada.asianetnews.com/karnataka-districts/srirangapatna-dasara-simple-celebration-drought-n-cheluvarayaswamy-mandya-sat/articleshow-h9o8cgr</guid>
            <pubDate>Tue, 15 Sep 2026 16:01:48 +0530</pubDate>
            <description><![CDATA[&lt;p&gt;ರಾಜ್ಯದಲ್ಲಿನ ತೀವ್ರ ಬರಗಾಲದಿಂದಾಗಿ, ಐತಿಹಾಸಿಕ ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಯೋಜನೆಯೇ ಶಾಶ್ವತ ಪರಿಹಾರ ಎಂದ ಅವರು, ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ರೈತರ ಸಹಕಾರ ಕೋರಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2j9twsfnkt8pnw4632ccwxc,imgname-srirangapattana-dasara-2026-1789468177199.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಸೆ.15): ರಾಜ್ಯದಲ್ಲಿ&lt;/strong&gt; ತಲೆದೋರಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ, ಮೈಸೂರು ದಸರಾಗಿಂತಲೂ ಪುರಾತನ ಇತಿಹಾಸ ಹೊಂದಿರುವ ಐತಿಹಾಸಿಕ ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸುವ ಬದಲು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.&lt;/p&gt;&lt;p&gt;ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಸರಾ ಆಚರಣೆ ಸಂಬಂಧ ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು, ಸರಳವಾಗಿದ್ದರೂ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಕ್ಟೋಬರ್ 12 ಮತ್ತು 13ರಂದು ಯುವ ಸಂಭ್ರಮ ಆಯೋಜಿಸಲಾಗುವುದು. ಇದರಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹಾಗೂ ಮಕ್ಕಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಲಾಗುವುದು.ಅಕ್ಟೋಬರ್ 15 ರಿಂದ 18ರವರೆಗೆ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಜರುಗಲಿದೆ. ದಸರಾ ಆಚರಣೆಗೆ ಸಮಿತಿಯು 5 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಿದೆ. ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಮುಂದಿನ 3 ದಿನಗಳಲ್ಲಿ ದಸರಾ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಒಂದೇ ಶಾಶ್ವತ ಪರಿಹಾರ:&lt;/strong&gt;&lt;/h2&gt;&lt;p&gt;ಕಾವೇರಿ ಜಲವಿವಾದದ ಕುರಿತು ಮಾತನಾಡಿದ ಸಚಿವರು, 'ಸುಪ್ರೀಂ ಕೋರ್ಟ್ ಪೀಠ ಮೂರು ದಿನ ಕಾರ್ಯನಿರ್ವಹಿಸದ ಕಾರಣ, ಕಾವೇರಿ ನೀರು ನಿಯಂತ್ರಣ ಸಮಿತಿಗೆ (CWRC) ಇಂದು ಮಧ್ಯಾಹ್ನವೇ ವಿಶೇಷ ಅರ್ಜಿ ಸಲ್ಲಿಸಿ ರಾಜ್ಯದ ನೀರಿನ ವಾಸ್ತವ ಸ್ಥಿತಿಗತಿ ಹಾಗೂ ಬರಗಾಲದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು. ಕಾವೇರಿ ಜಲ ವಿವಾದಕ್ಕೆ ಮೇಕೆದಾಟು ಸಮತೋಲನಾ ಜಲಾಶಯ ಯೋಜನೆ ಜಾರಿಯಾಗುವುದೊಂದೇ ಶಾಶ್ವತ ಪರಿಹಾರ' ಎಂದು ಪುನರುಚ್ಚರಿಸಿದರು.&lt;/p&gt;&lt;h2&gt;&lt;strong&gt;ಕುಡಿಯುವ ನೀರಿಗೆ ಕೊರತೆಯಿಲ್ಲ; ರೈತರ ಸಹಕಾರಕ್ಕೆ ಮನವಿ&lt;/strong&gt;&lt;/h2&gt;&lt;p&gt;ಮುಂದಿನ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಆದರೆ, ಕೆಲವೆಡೆ ರೈತರು ನಾಲೆಗಳಿಗೆ ಹರಿಯುವ ನೀರನ್ನು ತಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕೆ.ಆರ್. ಪೇಟೆ ಹಾಗೂ ಪಾಂಡವಪುರ ಭಾಗದ ರೈತರು ಸಹಕರಿಸಿ, ಮದ್ದೂರು ಹಾಗೂ ಮಳವಳ್ಳಿ ಭಾಗದ ಕೆರೆ-ಕಟ್ಟೆಗಳನ್ನು ತುಂಬಿಸಲು ಅವಕಾಶ ಮಾಡಿಕೊಡಬೇಕು. ಕುಡಿಯುವ ನೀರಿನ ಹಿತದೃಷ್ಟಿಯಿಂದ ಅಗತ್ಯವಿದ್ದರೆ ಪೊಲೀಸ್ ಭದ್ರತೆ ಪಡೆದು ನೀರು ಹರಿಸಲಾಗುವುದು ಎಂದು ಎಚ್ಚರಿಸಿದರು.&lt;/p&gt;&lt;h3&gt;&lt;strong&gt;ಗಣೇಶೋತ್ಸವದ ನೆಪದಲ್ಲಿ ಬಿಜೆಪಿ ರಾಜಕೀಯ: ಸಚಿವರ ವಾಗ್ದಾಳಿ&lt;/strong&gt;&lt;/h3&gt;&lt;p&gt;ಮದ್ದೂರಿನಲ್ಲಿ ನಡೆಯುತ್ತಿರುವ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಬಿಜೆಪಿ ನಾಯಕರು ಭಾಗವಹಿಸುತ್ತಿರುವ ವಿಚಾರವಾಗಿ ವಾಗ್ದಾಳಿ ನಡೆಸಿದ ಸಚಿವ ಚಲುವರಾಯಸ್ವಾಮಿ, 'ಅಧಿವೇಶನದಲ್ಲಿ ಜನರ ಬವಣೆ, ಬರಗಾಲದ ಬಗ್ಗೆ ಚರ್ಚಿಸಲು ಬಾರದ ಬಿಜೆಪಿ ನಾಯಕರು, ಗಣೇಶ ವಿಸರ್ಜನೆ ನೆಪದಲ್ಲಿ ರಾಜಕೀಯ ಮಾಡಲು ಮಂಡ್ಯಕ್ಕೆ ಬರುತ್ತಿದ್ದಾರೆ. ನಮ್ಮ ಜಿಲ್ಲೆಯ ಜನರಿಗೆ ಗಣೇಶನನ್ನು ಹೇಗೆ ಗೌರವದಿಂದ ವಿಸರ್ಜಿಸಬೇಕು ಎಂಬ ಅರಿವಿದೆ. ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯವಿಲ್ಲದ ಕಾರಣ ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೂ ಸೂಕ್ತ ಭದ್ರತೆ ನೀಡಿ ವಾಪಸ್ ಕಳುಹಿಸಲಾಗುವುದು' ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/srirangapatna-dasara-simple-celebration-drought-n-cheluvarayaswamy-mandya-sat/articleshow-h9o8cgr"/>
        </item>
        <item>
            <title><![CDATA['ನಾನು ಸಿಂಪಲ್ ನನ್ನ ಪೆನ್ನು ತುಂಬಾ ಪವರ್ ಫುಲ್': ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ಬಿ.ವೀರಪ್ಪ ಗುಡುಗು]]></title>
            <link>https://kannada.asianetnews.com/karnataka-districts/mandya-uplokayukta-b-veerappa-takes-strong-action-against-officials-in-nagamangala-gvd/articleshow-iw3ik0c</link>
            <guid isPermaLink="true">https://kannada.asianetnews.com/karnataka-districts/mandya-uplokayukta-b-veerappa-takes-strong-action-against-officials-in-nagamangala-gvd/articleshow-iw3ik0c</guid>
            <pubDate>Fri, 11 Sep 2026 19:52:58 +0530</pubDate>
            <description><![CDATA[&lt;p&gt;&lsquo;ನಾನು ಸಿಂಪಲ್, ನನ್ನ ಪೆನ್ನು ಪವರ್&zwnj;ಫುಲ್&rsquo; ಎಂದು ಬೆಳ್ಳೂರಿನಲ್ಲಿ ಗುಡುಗಿದ ಉಪಲೋಕಾಯುಕ್ತ ಬಿ.ವೀರಪ್ಪ. ಡಾಟಾ ಆಪರೇಟರ್ ವಹಿವಾಟು, ಎಫ್&zwnj;ಸಿ ಮುಗಿದ ಶಾಲಾ ಬಸ್&zwnj;ಗಳು, ಆಸ್ಪತ್ರೆ ಹಾಗೂ ಹಾಸ್ಟೆಲ್ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksahd2tewpxe5crd8ccqr38j,imgname-xgx-1779544001358.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಗಮಂಗಲ (ಸೆ.11): &lt;/strong&gt;ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿದ ವೇಳೆ ಅಧಿಕಾರಿಗಳ ವಿರುದ್ಧ ನೂರಾರು ಮಂದಿ ಸಾರ್ವಜನಿಕರು ದೂರುಗಳ ಸುರಿಮಳೆಗೈದರು. ಇದಕ್ಕೆ ತೀವ್ರ ಅಸಮಾಧಾನಗೊಂಡ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನಾನು ಮಾತ್ರ ಬಹಳ ಸಿಂಪಲ್, ಆದರೆ, ನನ್ನ ಪೆನ್ನು ತುಂಬಾ ಪವರ್ ಫುಲ್ ಆಗಿ ಕೆಲಸ ಮಾಡುತ್ತದೆ ಎಂದು ಗುಡುಗಿದರು.&lt;/p&gt;&lt;p&gt;ಬೆಳ್ಳೂರು ಉಪತಹಸೀಲ್ದಾರ್ ಪದ್ಮ ಅವರಿಗೆ ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳಿವೆ, ಎಷ್ಟು ಒತ್ತುವರಿಯಾಗಿವೆ ಎಂಬ ಯಾವ ಮಾಹಿತಿಯೂ ಇಲ್ಲ. ಅವರು ನೀಡಿರುವ ಒಂದು ಉತ್ತರವೂ ಸಮರ್ಪಕವಾಗಿಲ್ಲ. ಕಚೇರಿ ಡಾಟಾ ಆಪರೇಟರ್ ನಾಗರತ್ನ ಅವರಿಗೆ ಮಾಸಿಕ ವೇತನ ₹16 ಸಾವಿರದಂತೆ 9 ತಿಂಗಳಿಗೆ ₹1.44 ಲಕ್ಷ ಆಗುತ್ತದೆ. ಅವರ ಮೊಬೈಲ್&zwnj;ನಲ್ಲಿ ಯುಪಿಐ ಪರಿಶೀಲಿಸಲಾಗಿ ಕಳೆದ 9 ತಿಂಗಳಲ್ಲಿ ₹4,17,851 ವಹಿವಾಟು ನಡೆಸಿರುವುದು ಕಂಡುಬಂದಿದೆ. ಆದ್ದರಿಂದ ಡಾಟಾ ಆಪರೇಟರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿಸಿದರು.&lt;/p&gt;&lt;p&gt;ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಆಸ್ಪತ್ರೆಯಲ್ಲಿ ಯಾವೊಬ್ಬ ರೋಗಿ ಹಾಗೂ ವೈದ್ಯರು ಇಲ್ಲದಿರುವುದನ್ನು ಕಂಡು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಆಸ್ಪತ್ರೆ ಫಾರ್ಮಸಿಯಲ್ಲಿ ಅವಧಿ ಮೀರಿದ ಔಷಧಗಳು ಪತ್ತೆಯಾದವು. ಇದರಿಂದ ಆಕ್ರೋಶಗೊಂಡ ಬಿ.ವೀರಪ್ಪ ಅವರು, ಈ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಸೇವೆ ನೀಡುತ್ತಿಲ್ಲವೆಂಬ ನೂರಾರು ದೂರುಗಳಿವೆ. ಹಾಗಾಗಿ ಮುಚ್ಚಲು ಶಿಫಾರಸ್ಸು ಮಾಡುತ್ತೇನೆ ಎಂದರು.&lt;/p&gt;&lt;p&gt;ನೆಲ್ಲಿಗೆರೆ ಗ್ರಾಪಂನಲ್ಲಿ ಗುಬ್ಬಿ ಹಾಗೂ ಬೆಳ್ಳೂರು ಕ್ರಾಸ್&zwnj;ನ ಜಿಎಸ್&zwnj;ಟಿ ನೋಂದಣಿ ಇಲ್ಲದ ನಕಲಿ ಅಂಗಡಿಗಳ ಎರಡು ಏಜೆನ್ಸಿಯಲ್ಲಿ ಹಲವು ಸಾಮಗ್ರಿಗಳನ್ನು ಅಕ್ರಮವಾಗಿ ಖರೀದಿ ಮಾಡಿರುವುದು ಹಾಗೂ ನಕಲಿ ಲೆಟರ್ ಹೆಡ್&zwnj;ಗಳಲ್ಲಿ ತಾವೇ ಕೃತಕವಾಗಿ ದರ ಪಟ್ಟಿ ಸಿದ್ಧಪಡಿಸಿಕೊಂಡಿರುವುದು ಬೆಳಕಿಗೆ ಬಂದವು. ಇವೆಲ್ಲವನ್ನು ಪರಿಶೀಲಿಸಿದ ಉಪಲೋಕಾಯುಕ್ತರು ಪಿಡಿಒ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದರು.&lt;/p&gt;&lt;p&gt;ಪಟ್ಟಣದ ಎಆರ್&zwnj;ಟಿಒ ಕಚೇರಿಗೆ ಭೇಟಿ ನೀಡಿದ ಉಪಲೋಕಾಯುಕ್ತರು, ವಾಹನಗಳ ಕುರಿತು ಮಾಹಿತಿ ಪಡೆದುಕೊಂಡರು. ಎಫ್&zwnj;ಸಿ ಮುಗಿದ ವಾಹನಗಳು ನಾಗಮಂಗಲ ಆರ್&zwnj;ಟಿಒ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಹೆಚ್ಚು ವಾಹನಗಳಿರುವುದನ್ನು ಕಂಡು ಅಚ್ಚರಿಪಟ್ಟರು. ಈ ಪೈಕಿ 41 ಶಾಲಾ ಬಸ್&zwnj;ಗಳಿರುವುದನ್ನು ಕಂಡು ಆರ್&zwnj;ಟಿಒ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೇ ಎಫ್&zwnj;ಸಿ ಮುಗಿದಿರುವ ವಾಹನಗಳನ್ನು ಸೀಜ್ ಮಾಡಬೇಕು. ಇಲ್ಲದಿದ್ದರೆ ನಿಮ್ಮೆಲ್ಲರನ್ನು ಮನೆಗೆ ಕಳುಹಿಸುತ್ತೇನೆ. ಮಕ್ಕಳು ಹಾಗೂ ಪ್ರಯಾಣಿಕರ ಜೀವದ ಜತೆ ಚೆಲ್ಲಾಟ ಆಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿ ಆರ್&zwnj;ಟಿಒ ಅಧಿಕಾರಿಗಳ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿಕೊಂಡರು.&lt;/p&gt;&lt;h2&gt;&lt;strong&gt;ತೀವ್ರ ತರಾಟೆ&lt;/strong&gt;&lt;/h2&gt;&lt;p&gt;ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್&zwnj;ಗೆ ಭೇಟಿ ನೀಡಿದ ಉಪಲೋಕಾಯುಕ್ತರು ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಶೌಚಾಲಯಗಳು ಸರಿ ಇಲ್ಲ. ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ನೀವು ಆಸಕ್ತಿ ತೋರಿಲ್ಲ ಎದು ಕಿಡಿಕಾರಿದರು. ಇದಕ್ಕೆ ಉತ್ತರಿಸಿದ ವಾರ್ಡನ್ ಮಕ್ಕಳ ಕೊರತೆ ಇದೆ. ಈ ಹಾಸ್ಟೆಲ್ ಮುಚ್ಚುವಂತೆ ಶಿಫಾರಸ್ಸು ಪತ್ರ ಕೊಟ್ಟಿದ್ದೇನೆ ಸರ್ ಎಂದಾಗ, ಇದಕ್ಕೆ ಸಿಡಿಮಿಡಿಗೊಂಡ ಉಪಲೋಕಾಯುಕ್ತರು, ನಿಮಗೆ ಕೆಲಸ ಮಾಡಲು ಆಸಕ್ತಿ ಇಲ್ಲ. ಈ ರೀತಿಯ ಹಾಸ್ಟೆಲ್ ತರಲು ಎಷ್ಟು ಶ್ರಮ ಇದೆ ಎಂಬುದು ಗೊತ್ತಿದೆಯಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.&lt;/p&gt;&lt;p&gt;ಪಟ್ಟಣದ ಬದರಿಕೊಪ್ಪಲು ಬಳಿಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ಅವರು ಹಾಸ್ಟೆಲ್&zwnj;ನಲ್ಲಿದ್ದ 11 ಜನ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಆದರೆ, ಹಾಜರಾತಿ ಪುಸ್ತಕ ಪರಿಶೀಲಿಸಿದ ವೇಳೆ 36 ಜನ ವಿದ್ಯಾರ್ಥಿಗಳಿರುವುದು ಕಂಡುಬಂತು. ಆದರೆ, 11 ಜನ ವಿದ್ಯಾರ್ಥಿಗಳಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.&lt;/p&gt;&lt;p&gt;ಈ ವೇಳೆ ಅಧಿಕಾರಿ ಹೇಳಿದ ಮಕ್ಕಳ ದಾಖಲಾತಿ ಪಟ್ಟಿ ಮತ್ತು ಹಾಜರಾತಿ ಪುಸ್ತಕದಲ್ಲಿದ್ದ ವಿದ್ಯಾರ್ಥಿಗಳ ಪಟ್ಟಿಗೂ ಸಾಮ್ಯತೆ ಬಾರದಿದ್ದಾಗ ಆಕ್ರೋಶ ವ್ಯಕ್ತಪಡಿಸಿ ಮಕ್ಕಳ ಹೆಸರಿನಲ್ಲಿ ಸುಳ್ಳು ಲೆಕ್ಕ ಕೊಟ್ಟು ಲಂಚ ಹೊಡೆಯಲು ನಾಚಿಕೆಯಾಗಲ್ವಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಹಾಸ್ಟೆಲ್&zwnj;ಗೆ ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಹಾಜರಾತಿ ಅಳವಡಿಸುವಂತೆ ಸೂಚಿಸಿದರು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mandya-uplokayukta-b-veerappa-takes-strong-action-against-officials-in-nagamangala-gvd/articleshow-iw3ik0c"/>
        </item>
        <item>
            <title><![CDATA[ಅಪ್ರಾಪ್ತೆ ಜತೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಅಪರಾಧ: ಹೈಕೋರ್ಟ್ ಮಹತ್ವದ ತೀರ್ಪು..! ಅಷ್ಟಕ್ಕೂ ಏನಿದು ಪ್ರಕರಣ?]]></title>
            <link>https://kannada.asianetnews.com/karnataka-districts/minor-consent-no-defence-under-pocso-karnataka-high-court-says-man-gets-20-years-jail-kvn/articleshow-iwgxcm4</link>
            <guid isPermaLink="true">https://kannada.asianetnews.com/karnataka-districts/minor-consent-no-defence-under-pocso-karnataka-high-court-says-man-gets-20-years-jail-kvn/articleshow-iwgxcm4</guid>
            <pubDate>Thu, 10 Sep 2026 11:10:58 +0530</pubDate>
            <description><![CDATA[&lt;p&gt;ಅಪ್ರಾಪ್ತ ಬಾಲಕಿಯ ಮೇಲಿನ ಲೈಂ*ಗಿಕ ದೌರ್ಜನ್ಯ ಪ್ರಕರಣದಲ್ಲಿ, ಸಂತ್ರಸ್ತೆಯ ಸಮ್ಮತಿ ಇತ್ತು ಎಂಬ ಕಾರಣಕ್ಕೆ ಆರೋಪಿಯನ್ನು ಖುಲಾಸೆಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್&zwnj; ರದ್ದುಗೊಳಿಸಿದೆ. ಕಾನೂನಿನ ದೃಷ್ಟಿಯಲ್ಲಿ ಅಪ್ರಾಪ್ತೆಯ ಸಮ್ಮತಿ ಮಾನ್ಯವಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಯುವಕನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktn8g40cfn90np10t5g1zgyr,imgname-----------------------2026-06-09t090917.634-1780977504268.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಾನೂನಿನ ದೃಷ್ಟಿಯಲ್ಲಿ ಅಪ್ರಾಪ್ತ ಬಾಲಕಿ ಜೊತೆಗಿನ ಸಮ್ಮತಿ ಲೈಂ*ಗಿಕ ಕ್ರಿಯೆ ಮಾನ್ಯವಲ್ಲ ಹಾಗೂ ಲೈಂ*ಗಿಕ ಕ್ರಿಯೆಗೆ ಸಂತ್ರಸ್ತೆಯ ಸಮ್ಮತಿಯಿತ್ತು ಎಂಬ ಕಾರಣಕ್ಕೆ ಆರೋಪವನ್ನು ಕೈಬಿಡಲಾಗದು ಎಂದು ಅಭಿಪ್ರಾಯಪಟ್ಟ ಹೈಕೋರ್ಟ್&zwnj;, ಅಪ್ರಾಪ್ತೆಯನ್ನು ಅಪಹರಿಸಿ ಲೈಂ*ಗಿಕ ದೌರ್ಜನ್ಯ ಎಸಗಿದ ಅಪರಾಧ ಸಂಬಂಧ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.&lt;/p&gt;&lt;p&gt;ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿದ್ದ ಮಂಡ್ಯ ಸೆಷನ್ಸ್ ನ್ಯಾಯಾಲಯ ಆದೇಶ ಪ್ರಶ್ನಿಸಿ ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.&lt;/p&gt;&lt;p&gt;ಆರೋಪಿ ಈ ಆದೇಶ ಪ್ರತಿ ದೊರೆತ ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು. ತಪ್ಪಿದರೆ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ನ್ಯಾಯಾಲಯ ಅಪರಾಧಿಯನ್ನು ಜೈಲಿಗೆ ಕಳುಹಿಸಬೇಕು ಎಂದು ಸೂಚಿಸಿದೆ.&lt;/p&gt;&lt;h2&gt;&lt;strong&gt;ಸಮ್ಮತಿ ಲೈಂ*ಗಿಕ ಕ್ರಿಯೆ&lt;/strong&gt;&lt;/h2&gt;&lt;p&gt;ಆರೋಪಿ ಮತ್ತು ಸಂತ್ರಸ್ತೆಯ ಮಧ್ಯೆ ಸಮ್ಮತಿ ಮೇರೆಗೆ ಲೈಂ*ಗಿಕ ಕ್ರಿಯೆ ನಡೆದಿದೆ. ಹಾಗಾಗಿ, ವಿಚಾರಣಾ ನ್ಯಾಯಾಲಯದ ಆದೇಶ ಸರಿಯಾಗಿದೆ ಎಂಬ ಆರೋಪಿಯ ಪರ ವಕೀಲ ವಾದವನ್ನು ಹೈಕೋರ್ಟ್&zwnj; ತಿರಸ್ಕರಿಸಿದೆ.&lt;/p&gt;&lt;p&gt;ಸಂತ್ರಸ್ತೆಯ ಜನನ ಪ್ರಮಾಣ ಪತ್ರ ಹಾಗೂ ಎಸ್ಎಸ್ಎಲ್&zwnj;ಸಿ ಅಂಕಪಟ್ಟಿ ಪ್ರಕಾರ ಘಟನೆ ನಡೆದಾಗ ಆಕೆಗೆ 16 ವರ್ಷ. ಇದರಿಂದ ಪೋಕ್ಸೋ ಕಾಯ್ದೆಯಡಿ ಆಕೆ ಅಪ್ರಾಪ್ತೆ ಆಗಲಿದ್ದಾರೆ. ಸಂತ್ರಸ್ತೆಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇದ್ದಾಗ ಲೈಂ*ಗಿಕ ಕ್ರಿಯೆಗೆ ಆಕೆಯ ಸಮ್ಮತಿ ಇದೆಯೋ ಇಲ್ಲವೋ ಎಂಬುದು ಕಾನೂನಿನಲ್ಲಿ ಮುಖ್ಯವಾಗುವುದಿಲ್ಲ. ಅಪ್ರಾಪ್ತೆಯ ಸಮ್ಮತಿಯನ್ನು ರಕ್ಷಣೆಯಾಗಿ ಪಡೆಯಲು ಆರೋಪಿಗೆ ಯಾವುದೇ ಹಕ್ಕಿರುವುದಿಲ್ಲ ಎಂದು ಪೀಠ ಹೇಳಿದೆ.&lt;/p&gt;&lt;p&gt;ಆರೋಪಿಯು ಸಂತ್ರಸ್ತೆಗೆ ಗರ್ಭಪಾತ ಮಾಡಿಸಿದ್ದ. ಭ್ರೂಣಕ್ಕೆ ಆರೋಪಿ ಮತ್ತು ಸಂತ್ರಸ್ತೆಯೇ ಜೈವಿಕ ತಂದೆ-ತಾಯಿ ಎಂದು ಡಿಎನ್ಎ ವರದಿ ದೃಢಪಡಿಸಿದೆ. ಸಂತ್ರಸ್ತೆಯ ವಯಸ್ಸು ಮತ್ತು ಡಿಎನ್ಎ ಸಾಕ್ಷ್ಯಗಳನ್ನು ಪರಿಗಣಿಸದೆ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಕಾನೂನು ಬಾಹಿರ. ಆ ನ್ಯಾಯಾಲಯ ಪೋಕ್ಸೋ ಕಾಯ್ದೆಯ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಪೀಠ ಕಿಡಿ ಕಾರಿದೆ.&lt;/p&gt;&lt;h3&gt;&lt;strong&gt;ಪ್ರಕರಣದ ವಿವರ:&lt;/strong&gt;&lt;/h3&gt;&lt;p&gt;2021ರಲ್ಲಿ ಫೇಸ್&zwnj;ಬುಕ್&zwnj; ಮೂಲಕ ಪರಿಚಯಾಗಿದ್ದ 16 ವರ್ಷದ ಸಂತ್ರಸ್ತೆಯನ್ನು ಕಾರಿನಲ್ಲಿ ಅಪಹರಿಸಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಹಲವು ಬಾರಿ ಲೈಂ*ಗಿಕ ಕ್ರಿಯೆ ನಡೆಸಿದ್ದ. ಪರಿಣಾಮ ಸಂತ್ರಸ್ತೆ ಗರ್ಭಿಣಿ ಆಗಿದ್ದಳು ಎಂಬ ಆರೋಪ ಮಂಡ್ಯ ಜಿಲ್ಲೆ ಸಚಿನ್ ಅಲಿಯಾಸ್ ಚೋರ (26) ಎಂಬಾತನ ಮೇಲಿತ್ತು. ಮದ್ದೂರು ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆರೋಪಿಯನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸಂತ್ರಸ್ತೆ ಪೋಷಕರು ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿದ್ದರು.&lt;/p&gt;]]></content:encoded>
            <category>mandya</category>
            <dc:creator>Naveen Kodase</dc:creator>
            <atom:link href="https://kannada.asianetnews.com/karnataka-districts/minor-consent-no-defence-under-pocso-karnataka-high-court-says-man-gets-20-years-jail-kvn/articleshow-iwgxcm4"/>
        </item>
        <item>
            <title><![CDATA[ತಮಿಳುನಾಡಿಗೆ ದಿಢೀರ್ ಕಾವೇರಿ ನೀರು ಹರಿಸಿದ ಸರ್ಕಾರ, ನದಿಯಲ್ಲಿ ಸಿಲುಕಿದ 6 ರಾಸುಗಳು]]></title>
            <link>https://kannada.asianetnews.com/karnataka-districts/state-suddenly-releases-cauvery-water-to-tamil-nadu-6-cattle-stranded-in-river-mandya/articleshow-kbh326e</link>
            <guid isPermaLink="true">https://kannada.asianetnews.com/karnataka-districts/state-suddenly-releases-cauvery-water-to-tamil-nadu-6-cattle-stranded-in-river-mandya/articleshow-kbh326e</guid>
            <pubDate>Fri, 11 Sep 2026 10:04:20 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಮಳೆ ಕೊರತೆ ನಡುವೆ ಪ್ರಾಧಿಕಾರ ಆದೇಶ ರಾಜ್ಯದ ಸಂಕಷ್ಟ ಹೆಚ್ಚಿಸಿದೆ. ಇದರ ನಡುವೆ ನಿನ್ನ ಸಂಜೆ ದಿಢೀರ್ ತಮಿಳುನಾಡಿಗೆ ಕಾವೇರು ನೀರು ಹರಿಸಲಾಗಿದ್ದು, ನದಿಯಲ್ಲಿ 6 ರಾಸುಗಳು ಸಂಕಷ್ಟ ಸಿಲುಕಿದ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m27bx06pysyxkw5beq5pnwfw,imgname-cattle-stranded-in-river-after-sudden-cauvery-water-release-1789101244629.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಸೆ.11) ಕ&lt;/strong&gt;ರ್ನಾಟಕ ಹಾಗೂ ಕಾವೇರಿ ನಡುವಿನ ನದಿ ನೀರು ವಿವಾದ ಈ ಬಾರಿ ತೀವ್ರಗೊಂಡಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಳೆ ಕೊರತೆ, ಬರಗಾಲ ಪರಿಸ್ಥಿತಿಯಲ್ಲಿ ರಾಜ್ಯ ನೀರಿನ ಕೊರತೆ ಎದುರಿಸುತ್ತಿದೆ. ಇದರ ನಡುವೆ ಪ್ರಧಿಕಾರ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿದೆ. ಮತ್ತೊಂದೆಡೆ ರೈತರು, ಕನ್ನಡಪರ ಸಂಘಟನೆಗಳು ಹೋರಾಟ ತೀವ್ರಗೊಳಿಸುತ್ತಿದೆ. ಇಕ್ಕಟ್ಟಿನಲ್ಲಿ ಸಿಲುಕಿರುವ ಸರ್ಕಾರ ನಿನ್ನೆ (ಸೆ.10) ದಿಢೀರ್ ತಮಿಳುನಾಡಿಗೆ ನೀರು ಹರಿಸಿದೆ. ಇದರ ಪರಿಣಾಮ ಹುಲ್ಲು ಮೇಯುತ್ತಿದ್ದ ರಾಸುಗಳು ನೀರಿನಲ್ಲಿ ಸಿಲುಕಿದ ಘಟನೆ ನಡೆದಿದೆ.&lt;/p&gt;&lt;h2&gt;8 ಸಾವಿರ ಕ್ಯೂಸೆಕ್ ನೀರು&lt;/h2&gt;&lt;p&gt;ಕಾವೇರಿ ನದಿಯಲ್ಲಿ ನಿನ್ನೆ ಸಂಜೆ ಇದಕ್ಕಿದ್ದಂತೆ ನೀರು ಏರಿಕೆಯಾಗಿದೆ. ನದಿ ನೀರಿನ ಮಟ್ಟದ ಅಂದಾಜಿನಲ್ಲಿ ನಡು ಗುಡ್ಡೆ ಪ್ರದೇಶಗಳಲ್ಲಿ ಹುಲ್ಲು ಮೇಯುತ್ತಿದ್ದ ರಾಸುಗಳು ದಿಢೀರ್ ನೀರು ಹರಿಸಿದ ಕಾರಣ ಸಂಕಷ್ಟಕ್ಕೆ ಸಿಲುಕಿದೆ. ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ರಾಸುಗಳು ಮರಳಿ ಬರಲಾಗದೇ ಕಂಗಾಲಾಗಿದೆ. ಬೆಳಗ್ಗೆ 3 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದ. ಆದರೆ ಸಂದೆ ವೇಳೆ 8 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಏಕಾಏಕಿ 5 ಸಾವಿರ ಕ್ಯೂಸೆಕ್ ನೀರು ಏರಿಕೆಯಾಗಿ ರಾಸುಗಳು ಸಂಕಷ್ಟಕ್ಕೆ ಸಿಲುಕಿತ್ತು.&lt;/p&gt;&lt;h2&gt;ರಾತ್ರಿ ಇಡೀ ರಾಸುಗಳ ರಕ್ಷಣೆಗೆ ಕಾರ್ಯಾಚರಣೆ&lt;/h2&gt;&lt;p&gt;ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಬಳಿಯ ಕಾವೇರಿ ನದಿಯ ನಡುಗುಡ್ಡೆಯಲ್ಲಿ ಸಿಲುಕಿಕೊಂಡಿದ್ದ ರಾಸುಗಳ ರಕ್ಷಣೆಗೆ ರಾತ್ರಿ ಇಡೀ ಕಾರ್ಯಾಚರಣೆ ಮಾಡಲಾಗಿದೆ. ಗಂಜಾಂನ ಶಿವರಾಜು ಎಂಬುವವರಿಗೆ ಸೇರಿದ ರಾಸುಗಳು ಈ ನೀರಿನಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರು ಮಾಹಿತಿ ನೀಡಿದ ಬೆನ್ನಲ್ಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಬಳಿಕ ಕಾರ್ಯಾಚರಣೆ ನಡೆಸಿದೆ.ಸ್ಥಳೀಯರು ಸಾಥ್ ನೀಡಿದ್ದಾರೆ. ಸತತ ಕಾರ್ಯಾಚರಣೆ ಬಳಿಕ 6 ರಾಸುಗಳನ್ನು ಯಶಸ್ವಿಯಾಗಿ ಮರಳಿ ತರಲಾಗಿದೆ.&lt;/p&gt;&lt;p&gt;ತಮಿಳುನಾಡಿಗೆ ನಿನ್ನ ಸಂಜೆಯಿಂದ 8 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣಾಗಿದೆ. ಪ್ರಾಧಿಕಾರ ಆದೇಶ ಪಾಲಿಸಲು ಕಾವೇರಿಯಲ್ಲಿ ನೀರು ಬತ್ತಿಹೋಗುತ್ತಿದೆ. ಮಳೆ ಕೊರತೆಯಿಂದ ಕರ್ನಾಟಕ ಬಹುತೇಕ ಜಲಾಶಗಳಲ್ಲಿ ನೀರಿನ ಕೊರತೆ ಇದೆ. ಈಗಲೇ ಹಲವು ಭಾಗದಲ್ಲಿ ನೀರಿನ ಕೊರತೆ ಎದುರಾಗಿದೆ. ಮಂಡ್ಯ ಸೇರಿದಂತೆ ಕಾವೇರಿ ಭಾಗದ ರೈತರಿಗೆ ಬೆಳೆ ಬೆಳೆಯಲು ನಿರ್ಬಂಧವಿದಿಸಿದೆ. ಆದರೆ ತಮಿಳುನಾಡಿಗೆ ಯಥೇಚ್ಚವಾಗಿ ನೀರು ಹರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದೆ.&lt;/p&gt;]]></content:encoded>
            <category>mandya</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/state-suddenly-releases-cauvery-water-to-tamil-nadu-6-cattle-stranded-in-river-mandya/articleshow-kbh326e"/>
        </item>
        <item>
            <title><![CDATA[ಕೊಡಗು: ರೈತರ ವಿರೋಧದ ನಡುವೆಯೂ ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ರಹಸ್ಯವಾಗಿ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ!]]></title>
            <link>https://kannada.asianetnews.com/karnataka-districts/cauvery-water-dispute-harangi-dam-releases-water-to-tamil-nadu-amid-farmer-protests-gdp/articleshow-lzakbzg</link>
            <guid isPermaLink="true">https://kannada.asianetnews.com/karnataka-districts/cauvery-water-dispute-harangi-dam-releases-water-to-tamil-nadu-amid-farmer-protests-gdp/articleshow-lzakbzg</guid>
            <pubDate>Thu, 10 Sep 2026 15:27:23 +0530</pubDate>
            <description><![CDATA[ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ಹಿನ್ನೆಲೆಯಲ್ಲಿ, ಕೊಡಗಿನ ಹಾರಂಗಿ ಜಲಾಶಯದಿಂದ ಯಾವುದೇ ಮುನ್ಸೂಚನೆ ಇಲ್ಲದೆ ನೀರು ಬಿಡುಗಡೆ ಮಾಡಲಾಗಿದೆ. ಸರ್ಕಾರದ ಈ ಕ್ರಮವು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krh65h0s7gb99d9qmksjx5w1,imgname-chcjc-1778693358617.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಪ್ರಾಧಿಕಾರ (CWMA) ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿವೆ. ಇದರ ಮಧ್ಯೆ, ಕೊಡಗಿನ ಏಕೈಕ ಜೀವನಾಡಿಯಾದ ಹಾರಂಗಿ ಜಲಾಶಯದಿಂದ ಯಾವುದೇ ಮುನ್ಸೂಚನೆ ನೀಡದೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗಿದೆ ಎಂಬ ಆರೋಪವಿದೆ.&lt;/p&gt;&lt;h2&gt;ಜಲಾಶಯದಿಂದ ನೀರು ಬಿಡುಗಡೆ ವಿವರ&lt;/h2&gt;&lt;p&gt;ಅಧಿಕಾರಿಗಳು ಮಧ್ಯಾಹ್ನ 1 ಗಂಟೆಯಿಂದಲೇ ಹಾರಂಗಿ ಜಲಾಶಯದಿಂದ ಕಾವೇರಿ ನದಿಗೆ ಸುಮಾರು 3 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. ತಮಿಳುನಾಡಿಗೆ ನೀರು ಹರಿಸಬೇಕಾಗಿರುವ ಸರ್ಕಾರದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದ್ದರೂ, ಸ್ಥಳೀಯರಿಗೆ ಮತ್ತು ರೈತರಿಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.&lt;/p&gt;&lt;h2&gt;ರೈತರ ಆಕ್ರೋಶ ಮತ್ತು ಸರ್ಕಾರದ ಧೋರಣೆ&lt;/h2&gt;&lt;p&gt;ಒಂದೆಡೆ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಕಟ್ಟುಪದ್ಧತಿಯಲ್ಲಿ ಮಾತ್ರ ನೀರು ಹರಿಸಲಾಗುವುದು ಎಂದು ಹೇಳುತ್ತಿದೆ. ಅಲ್ಲದೆ, ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ದೀರ್ಘಾವಧಿ ಬೆಳೆಗಳನ್ನು ಬೆಳೆಯದಂತೆ ರೈತರಿಗೆ ಎಚ್ಚರಿಕೆ ನೀಡಿದೆ. ಆದರೆ, ಇತ್ತ ಕಡೆ ಮಾತ್ರ ಯಾವುದೇ ಮುಂಜಾಗರೂಕತೆ ಇಲ್ಲದೆ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಕರ್ನಾಟಕದ ರೈತರಿಗೆ ಎಸಗಿರುವ ದೊಡ್ಡ ಮೋಸ ಎಂದು ಸಾರ್ವಜನಿಕರು ಹಾಗೂ ಕೃಷಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;ಹಾರಂಗಿ ಜಲಾಶಯದ ಪ್ರಸ್ತುತ ನೀರಿನ ಮಟ್ಟ&lt;/h2&gt;&lt;p&gt;ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ: 8.5 ಟಿಎಂಸಿ ಅಡಿ (2859 ಅಡಿ)&lt;/p&gt;&lt;p&gt;ಪ್ರಸ್ತುತ ನೀರಿನ ಮಟ್ಟ: 8.03 ಟಿಎಂಸಿ ಅಡಿ (2857 ಅಡಿ)&lt;/p&gt;&lt;p&gt;ಬಳಕೆಗೆ ಲಭ್ಯವಿರುವ ನೀರು: ನೈಜವಾಗಿ ಕೇವಲ 7.32 ಟಿಎಂಸಿ ಅಡಿ ಮಾತ್ರ ಬಳಕೆಗೆ ಲಭ್ಯವಿದೆ.&lt;/p&gt;&lt;p&gt;ಡೆಡ್ ಸ್ಟೋರೇಜ್: ಜಲಾಶಯದಲ್ಲಿರುವ ನೀರಿನಲ್ಲಿ ಸರಿಸುಮಾರು 1 ಟಿಎಂಸಿ ಅಡಿ ನೀರು ಡೆಡ್ ಸ್ಟೋರೇಜ್ ಆಗಿದೆ.&lt;/p&gt;&lt;h2&gt;ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ&lt;/h2&gt;&lt;p&gt;ಸಾಮಾನ್ಯವಾಗಿ ಅಧಿಕೃತವಾಗಿ ನೀರು ಹರಿಸುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕಾಗುತ್ತದೆ. ಆದರೆ ಈ ಬಾರಿ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ನೀರು ಬಿಡುಗಡೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಶೇಷವೆಂದರೆ, ಈ ಕುರಿತು ಮಾಹಿತಿ ಪಡೆಯಲು ಸ್ಥಳೀಯರು ಮತ್ತು ಮಾಧ್ಯಮದವರು ಅಧಿಕಾರಿಗಳಿಗೆ ಕರೆ ಮಾಡಿದರೂ ಯಾರೂ ಸಹ ಕರೆ ಸ್ವೀಕರಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/cauvery-water-dispute-harangi-dam-releases-water-to-tamil-nadu-amid-farmer-protests-gdp/articleshow-lzakbzg"/>
        </item>
        <item>
            <title><![CDATA[ಶತಮಾನದ ಸುರಂಗ; ಬೆಂಗಳೂರಿನಿಂದ ಜಸ್ಟ್  ಎರಡೂವರೆ ಗಂಟೆ ದೂರ! ಮಕ್ಕಳೊಂದಿಗೆ ಹೋಗಲು ಬೆಸ್ಟ್ ಪ್ಲೇಸ್]]></title>
            <link>https://kannada.asianetnews.com/gallery/karnataka-districts/mandy-s-historic-hulikere-tunnel-canal-was-built-between-1928-to-1931-just-two-and-a-half-hours-away-from-bengaluru-mrq-owmgkrt</link>
            <guid isPermaLink="true">https://kannada.asianetnews.com/gallery/karnataka-districts/mandy-s-historic-hulikere-tunnel-canal-was-built-between-1928-to-1931-just-two-and-a-half-hours-away-from-bengaluru-mrq-owmgkrt</guid>
            <pubDate>Sun, 06 Sep 2026 19:06:09 +0530</pubDate>
            <description><![CDATA[&lt;p&gt;1928-1931ರ ಅವಧಿಯಲ್ಲಿ ನಿರ್ಮಾಣವಾದ ಐತಿಹಾಸಿಕ ಸುರಂಗ ಕಾಲುವೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸರ್. ಎಂ. ವಿಶ್ವೇಶರಯ್ಯನವರಿಂದ ನಿರ್ಮಿಸಲ್ಪಟ್ಟ ಈ ಸುರಂಗವು ಇಂದಿಗೂ ಕೃಷಿ ಭೂಮಿಗೆ ನೀರುಣಿಸುತ್ತಾ, ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vebgrh9fwcq48r7g3re1nf,imgname-hulikere-tunnel--3--1788701164305.jpg" type="image/jpeg" height="390" width="690"/>
            <content:encoded><![CDATA[&lt;p&gt;1928-1931ರ ಅವಧಿಯಲ್ಲಿ ನಿರ್ಮಾಣವಾದ ಐತಿಹಾಸಿಕ ಸುರಂಗ ಕಾಲುವೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸರ್. ಎಂ. ವಿಶ್ವೇಶರಯ್ಯನವರಿಂದ ನಿರ್ಮಿಸಲ್ಪಟ್ಟ ಈ ಸುರಂಗವು ಇಂದಿಗೂ ಕೃಷಿ ಭೂಮಿಗೆ ನೀರುಣಿಸುತ್ತಾ, ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿದೆ.&lt;/p&gt;&lt;img&gt;&lt;p&gt;ಮಂಡ್ಯ ಜಿಲ್ಲೆಯಲ್ಲೊಂದು ಸುರಂಗ ಕಾಲುವೆಯನ್ನು ನೋಡಲು ಜನರು ಆಗಮಿಸುತ್ತಾರೆ. ಯಾವುದೇ ಅತ್ಯಾಧುನಿಕ ಯಂತ್ರೋಪಕರಣಗಳು ಇಲ್ಲದ ಸಮಯದಲ್ಲಿ ನಿರ್ಮಾಣವಾದ ಅದ್ಭುತವಾದ ಸುರಂಗ ಕಾಲುವೆ, ಇಂದಿಗೂ ಇಲ್ಲಿಯ ಕೃಷಿ ಜಮೀನುಗಳಿಗೆ ನೀರೂಣಿಸುತ್ತಿದೆ. ಇಂದು ಕಾಲುವೆಗಳು ಉದ್ಘಾಟನೆಗೂ ಮುಂಚೆಯೇ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಉದಾಹರಣೆಗಳ ನಡುವೆ 1928-1931ರ ಅವಧಿಯಲ್ಲಿ ನಿರ್ಮಾಣವಾದ ಸುರಂಗ ಕೂತಹಲ ಮೂಡಿಸುತ್ತದೆ.&lt;/p&gt;&lt;img&gt;&lt;p&gt;ಮಂಡ್ಯ ಜಿಲ್ಲೆಯ ಹುಲಿಕೆರೆ ಗ್ರಾಮದಲ್ಲಿ (ಕಳೆನಹಳ್ಳಿ ಹತ್ತಿರ) ಅಪರೂಪದ ನೀರಾವರಿ ಕಾಲುವೆ ಸುರಂಗವನ್ನು ಕಾಣಬಹುದು. ಬೆಂಗಳೂರಿನಿಂದ 139 ಕಿ.ಮೀ. ದೂರದಲ್ಲಿರುವ ಈ ಸುರಂಗ ತಲುಪಲು ಎರಡೂವರೆ ಗಂಟೆ ಸಮಯ ಬೇಕಾಗುತ್ತದೆ. ರಜಾದಿನಗಳಲ್ಲಿ ಮಕ್ಕಳನ್ನು ಸಿನಿಮಾ, ಮಾಲ್ ಅಂತ ಕರೆದುಕೊಂಡು ಹೋಗದೇ ಹುಲಿಕೆರೆಗೆ ಕರೆದುಕೊಂಡು ಹೋಗಿ. ಅಪರೂಪ ಮತ್ತು ವಿಶೇಷ ವಿನ್ಯಾಸವುಳ್ಳ ಸುರಂಗವನ್ನು ಮಕ್ಕಳಿಗೆ ತೋರಿಸಬಹುದು. ಮಂಡ್ಯ ನಗರದಿಂದ 14 ಕಿಮೀ ದೂರದಲ್ಲಿ ಹುಲಿಕೆರೆ ಗ್ರಾಮ ಸಿಗುತ್ತದೆ.&lt;/p&gt;&lt;img&gt;&lt;p&gt;ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸುರಂಗ ನಿರ್ಮಾಣಕ್ಕೆ ಆದೇಶ ನೀಡುತ್ತಾರೆ. ಅಂದಿನ ಮಂತ್ರಿಗಳಾಗಿದ್ದ ಸರ್ ಮಿರ್ಜಾ ಇಸ್ಮೈಲ್ ಅವರು ಖ್ಯಾತ ಇಂಜಿನೀಯರ್ ಸರ್ ಎಂ.ವಿಶ್ವೇಶರಯ್ಯ ಜೊತೆಗೂಡಿ 1928ರಲ್ಲಿ ಸುರಂಗ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಾರೆ. ಯೋಜನೆಯಂತೆ 1931ರಲ್ಲಿ ಸುರಂಗ ಕಾಲುವೆ ಉದ್ಘಾಟನೆಯಾಗುತ್ತದೆ.&lt;/p&gt;&lt;img&gt;&lt;p&gt;ಹುಲಿಕೆರೆ ಸುರಂಗ ನಿರ್ಮಾಣಗೊಂಡು 95 ವರ್ಷ ಪೂರ್ಣಗೊಂಡಿದ್ದು, ಇಂದಿಗೂ ಕೃಷಿಭೂಮಿ ನೀರು ಒದಗಿಸುವ ಕೆಲಸವನ್ನು ಮಾಡುತ್ತಿದೆ. ಈ ಸುರಂಗವು ಸುಮಾರು 2,800 ಮೀಟರ್ ಉದ್ದ, 3.75 ಮೀಟರ್ ಅಗಲ ಹಾಗೂ 4.5 ಮೀಟರ್ ಎತ್ತರವಿದೆ. ಇದನ್ನು ಏಷ್ಯಾದ ಮೊದಲ ಭೂಗತ ನೀರಾವರಿ ಸುರಂಗ ಎಂದು ಪರಿಗಣಿಸಲಾಗುತ್ತದೆ. ಅಂದಿನ ಕಾಲಘಟ್ಟದಲ್ಲಿ ಈ ಸುರಂಗವು 4,56,000 ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದಕ್ಕಾಗಿ ಕೇರಳ, ಮಹಾರಾಷ್ಟ್ರ, ಪಂಜಾಬ್&zwnj; ರಾಜ್ಯಗಳಿಂದಲೂ ತಜ್ಞ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿತ್ತು.&lt;/p&gt;&lt;img&gt;&lt;p&gt;ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರಿಗೆ ಒಂದು ದಿನಕ್ಕೆ 1.50 ರಿಂದ 4 ಆಣೆವರೆಗೆ ಸಂಬಳವನ್ನು ನೀಡಲಾಗುತ್ತಿತ್ತು. ಇದು 20 ಅಡಿ ಕಮಾನಿನ ಪ್ರವೇಶದ್ವಾರ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಪ್ರವಾಸಿತ ತಾಣವಾಗಿ ಬದಲಾಗುತ್ತಿದೆ. ಇದು ವಿಶ್ವೇಶರಯ್ಯ ನಾಲೆಯ ಭಾಗವಾಗಿದ್ದು, ಎರಡು ಬದಿಯಲ್ಲಿ ಭೂಮಿಯನ್ನು ಅಗೆದು ಸುರಂಗ ನಿರ್ಮಿಸಲಾಗಿದೆ. ಈ ಸುರಂಗ ನೋಡಲು ಮಂಡ್ಯದಿಂದ ಶಿರಳ್ಳಿ ಮಾರ್ಗವಾಗಿ 14 ಕಿ.ಮೀ. ಪ್ರಯಾಣಿಸಿದ್ರೆ ಹುಲಿಕೆರೆ ಗ್ರಾಮ ಸಿಗುತ್ತದೆ.&lt;/p&gt;]]></content:encoded>
            <category>mandya</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/mandy-s-historic-hulikere-tunnel-canal-was-built-between-1928-to-1931-just-two-and-a-half-hours-away-from-bengaluru-mrq-owmgkrt"/>
        </item>
        <item>
            <title><![CDATA[ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಗಗನಚುಕ್ಕಿ-ಭರಚುಕ್ಕಿ ಜಲಪಾತ;  ಕಬಿನಿ ಜಲಾಶಯ ಭರ್ತಿ]]></title>
            <link>https://kannada.asianetnews.com/karnataka-districts/kabini-reservoir-is-full-water-released-into-river-gaganachukki-and-bharachukki-waterfalls-are-flowing-in-torrents-mrq/articleshow-q89zebq</link>
            <guid isPermaLink="true">https://kannada.asianetnews.com/karnataka-districts/kabini-reservoir-is-full-water-released-into-river-gaganachukki-and-bharachukki-waterfalls-are-flowing-in-torrents-mrq/articleshow-q89zebq</guid>
            <pubDate>Tue, 01 Sep 2026 08:33:07 +0530</pubDate>
            <description><![CDATA[ಕೇರಳದಲ್ಲಿನ ವ್ಯಾಪಕ ಮಳೆಯಿಂದ ಕಬಿನಿ ಜಲಾಶಯ ಭರ್ತಿಯಾಗಿದ್ದು, ನದಿಗೆ ಹೆಚ್ಚಿನ ನೀರು ಬಿಡಲಾಗಿದೆ. ಇದರಿಂದಾಗಿ, ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಈ ನೈಸರ್ಗಿಕ ಜಲವೈಭವವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1denz85xvdtnmfn4tper8w9,imgname-gaganachukki-and-bharachukki-1788231744773.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ:&lt;/strong&gt; ಗಗನದಿಂದ ಹಾಲಿನ ನೊರೆಯಂತೆ ದುಮ್ಮಿಕ್ಕಿ ಹರಿಯುತ್ತಿರುವ ವಿಶ್ವ ಪ್ರಸಿದ್ಧ ಗಗನಚುಕ್ಕಿ ಜಲಪಾತಕ್ಕೆ ನೈಸರ್ಗಿಕ ಸೌಂದರ್ಯದ ಜೀವಕಳೆ ಬಂದಿದ್ದು, ಜಲ ಸಿರಿಯ ವೈಭವ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.&lt;/p&gt;&lt;p&gt;ಕಳೆದ ವಾರವಷ್ಟೇ ನೀರಿಲ್ಲದೇ ಕಲ್ಲು ಬಂಡಗಳಿಂದ ಭಣಗುಡುತ್ತಿದ್ದ ಗಗನ ಚುಕ್ಕಿ ಜಲಪಾತ ಪ್ರವಾಸಿಗರಿಲ್ಲದೆ ಸೊರಗಿತ್ತು. ಇತ್ತೀಚಿಗೆ ಕೇರಳದಲ್ಲಿ ವ್ಯಾಪಕ ಮಳೆಯಾಗಿ ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನದಿಗೆ ಸುಮಾರು ೩೦ ಸಾವಿರ ಕ್ಯುಸೆಕ್ ನೀರು ಬಿಡುತ್ತಿರುವುದರಿಂದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಮೈದುಂಬಿಕೊಂಡಿವೆ. ಜಲಪಾತದಲ್ಲಿನ ಜಲವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ದಿನದಿನಕ್ಕೆ ಹೆಚ್ಚಾಗುತ್ತಿದೆ.&lt;/p&gt;&lt;p&gt;ನೂರಾರು ಅಡಿಗಳ ಎತ್ತರದಿಂದ ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತ ಹಾಗೂ ಕಲ್ಲು ಬಂಡೆಗಳ ನಡುವೆ ಮೈ ದುಂಬಿ ಹರಿಯುವ ಕೊಳ್ಳೇಗಾಲದ ಭರಚುಕ್ಕಿ ಜಲಪಾತಗಳು ತನ್ನ ಸೌಂದರ್ಯದ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಎರಡೂ ಜಲಧಾರೆಗಳು ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಗಡಿಯಂಚಿನನಲ್ಲಿದ್ದು, ಕೊಡಗಿನ ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ನದಿಯು ಬೆಟ್ಟ-ಗುಡ್ಡ, ಕಾಡು-ಮೇಡುಗಳ ಮೂಲಕ ಸಾಗಿ ಶಿವನಸಮುದ್ರ ತಲುಪುತ್ತಿದ್ದಂತೆಯೇ ಧುಮುಕಿ ಗಗನಚುಕ್ಕಿ ಬಳಿಕ ಭರಚುಕ್ಕಿಯಾಗಿ ರೂಪಾಂತರಗೊಂಡು ಹರಿಯುತ್ತದೆ.&lt;/p&gt;&lt;h2&gt;&lt;strong&gt;ಸಮಸ್ಯೆಗೆ ಪರಿಹಾರ, ವಿವಾದ ಜೀವಂತ&lt;/strong&gt;&lt;/h2&gt;&lt;p&gt;ಕಾವೇರಿ ನ್ಯಾಯಮಂಡಳಿ ತೀರ್ಪಿನ ಪ್ರಕಾರ ಪ್ರತಿದಿನ 10 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂಬ ಆದೇಶದ ವಿರುದ್ಧ ರಾಜ್ಯಾದ್ಯಂತ ಹೋರಾಟದ ಕಿಚ್ಚನ್ನು ಹೆಚ್ಚಿಸಿತ್ತು. ಕೆಆರ್&zwnj;ಎಸ್ ಅಣೆಕಟ್ಟೆಯಲ್ಲಿಯೇ ನೀರಿಲ್ಲದ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಬಾರದೆಂಬ ಕೂಗು ಎಲ್ಲೆಡೆಯೂ ಕೇಳಿ ಬರುತ್ತಿತ್ತು.&lt;/p&gt;&lt;p&gt;ತಮಿಳುನಾಡಿಗೆ ನೀರು ಹರಿದುಹೋಗುವುದು ಗಗನಚುಕ್ಕಿ ಜಲಪಾತ ಸಾಕ್ಷಿಯಾಗಿ ಪರಿಣಮಿಸಿದೆ. ಗಗನಚುಕ್ಕಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂಬ ಕೂಗು ಕೂಡ ಕೇಳಿ ಬಂದಿತ್ತು. ಕಬಿನಿ ಜಲಾಶಯ ಭರ್ತಿಯಾಗಿ ಸಾವಿರಾರು ಕ್ಯುಸೆಕ್ ಗಗನಚುಕ್ಕಿ ಜಲಪಾತದ ಕಡೆಗೆ ಹರಿದು ಬಂದ ಪರಿಣಾಮ ಎರಡು ರಾಜ್ಯಗಳ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರಕಿದ್ದರೂ, ವಿವಾದವಿನ್ನೂ ಜೀವಂತವಾಗಿದೆ.&lt;/p&gt;&lt;h3&gt;&lt;strong&gt;ಜಲಪಾತದ ಸೌಂದರ್ಯ&lt;/strong&gt;&lt;/h3&gt;&lt;h3&gt;------------------&lt;/h3&gt;&lt;p&gt;ಗಗನಚುಕ್ಕಿ ಜಲಪಾತಕ್ಕೆ ಹೆಚ್ಚಿನ ನೀರು ಹರಿದುಬರುತ್ತಿರುವುದರಿಂದ ಪ್ರವಾಸಿತಾಣದ ವೈಭವವನ್ನು ನೋಡಿ ಆನಂದ ಪಡುವಂತಾಗಿದೆ. ಮುಂಗಾರು ಮಳೆ ಸಮರ್ಪಕವಾಗಿ ಆಗದೇ ಬರ ಎದುರಾಗುತ್ತದೆ ಎಂಬ ಭಯ ಪ್ರತಿಯೊಬ್ಬರಲ್ಲಿತ್ತು. ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗಿ ಕಬಿನಿ ಭರ್ತಿಯಾಗಿದ್ದು, ಜೊತೆಗೆ ಜಲಪಾತದ ಸೌಂದರ್ಯವನ್ನು ಹೆಚ್ಚಿಸಿದೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕೆಆರ್&zwnj;ಎಸ್&zwnj;ಗೆ ಹೆಚ್ಚಿನ ನೀರು ಬರುತ್ತಿದೆ. ಜಿಲ್ಲಾಡಳಿತ ಪ್ರವಾಸಿಗರ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ ಎಂದು ರಾಜು ಮಳವಳ್ಳಿ ಆಗ್ರಹಿಸಿದ್ದಾರೆ.&lt;/p&gt;&lt;p&gt;ನೂರಾರು ಅಡಿಗಳ ಎತ್ತರದಿಂದ ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತ ಹಾಗೂ ಕಲ್ಲು ಬಂಡೆಗಳ ನಡುವೆ ಮೈ ದುಂಬಿ ಹರಿಯುವ ಕೊಳ್ಳೇಗಾಲದ ಭರಚುಕ್ಕಿ ಜಲಪಾತಗಳು ತನ್ನ ಸೌಂದರ್ಯದ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿವೆ ಎಂದು ಪ್ರವಾಸಿಗ ಸಿ.ಸಿದ್ದರಾಜು ಹೇಳುತ್ತಾರೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kabini-reservoir-is-full-water-released-into-river-gaganachukki-and-bharachukki-waterfalls-are-flowing-in-torrents-mrq/articleshow-q89zebq"/>
        </item>
        <item>
            <title><![CDATA[ಕೇಳಿದ್ದು 40, ಸಿಕ್ಕಿದ್ದು 100: ಮಂಡ್ಯ ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ ಭೈರತಿ ಸುರೇಶ್]]></title>
            <link>https://kannada.asianetnews.com/karnataka-districts/100-new-transport-buses-to-start-operating-in-mandya-district-soo-minister-byrathi-suresh/articleshow-slwclwq</link>
            <guid isPermaLink="true">https://kannada.asianetnews.com/karnataka-districts/100-new-transport-buses-to-start-operating-in-mandya-district-soo-minister-byrathi-suresh/articleshow-slwclwq</guid>
            <pubDate>Mon, 14 Sep 2026 07:30:21 +0530</pubDate>
            <description><![CDATA[&lt;p&gt;ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಮಂಡ್ಯ ಜಿಲ್ಲೆಗೆ 100 ಹೊಸ ಬಸ್&zwnj;ಗಳನ್ನು ಶೀಘ್ರದಲ್ಲೇ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯಾದ್ಯಂತ 1 ಸಾವಿರ ಹೊಸ ಬಸ್&zwnj;ಗಳ ಖರೀದಿ ಹಾಗೂ ಬಸ್ ನಿಲ್ದಾಣಗಳ ಉನ್ನತೀಕರಣಕ್ಕೂ ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcraha1h6h4bwmjax7101gvh,imgname-screenshot-2025-12-18-141931-1766047918129.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ:&lt;/strong&gt; ಜಿಲ್ಲೆಗೆ ಹೊಸದಾಗಿ 40 ಸಾರಿಗೆ ಬಸ್&zwnj;ಗಳನ್ನು ಮಂಜೂರು ಮಾಡುವಂತೆ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮನವಿ ಸಲ್ಲಿಸಿದ್ದಾರೆ. ಆದರೆ, ನಮ್ಮ ಸರ್ಕಾರ ಮಂಡ್ಯ ಜಿಲ್ಲೆಗೆ 100 ಬಸ್&zwnj;ಗಳನ್ನು ಕೊಟ್ಟು ಶೀಘ್ರದಲ್ಲಿ ಬಸ್&zwnj;ಗಳ ಸಂಚಾರ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಭರವಸೆ ನೀಡಿದರು.&lt;/p&gt;&lt;h2&gt;&lt;strong&gt;1 ಸಾವಿರ ಹೊಸ ಬಸ್&zwnj;ಗಳನ್ನು ಖರೀದಿಸಲು ಹಸಿರು ನಿಶಾನೆ&lt;/strong&gt;&lt;/h2&gt;&lt;p&gt;ತಾಲೂಕಿನ ಕನ್ನಾಘಟ್ಟ ಗ್ರಾಮದಲ್ಲಿ ಶ್ರೀಮಹಾಗಣಪತಿ ದೇವಾಲಯ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಸಾರಿಗೆ ಇಲಾಖೆಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರು.ಗಳ ಅನುದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಅಲ್ಲದೇ, 1 ಸಾವಿರ ಹೊಸ ಬಸ್&zwnj;ಗಳನ್ನು ಖರೀದಿಸಲು ಹಸಿರು ನಿಶಾನೆ ತೋರಿದ್ದಾರೆ. ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದಿಂದ 2 ಸಾವಿರ ಕೋಟಿ ರು. ಪಡೆಯಲೂ ಸಮ್ಮತಿ ಸೂಚಿಸಿದ್ದಾರೆ ಎಂದರು.&lt;/p&gt;&lt;p&gt;ಮಂಡ್ಯ ಜಿಲ್ಲೆಗೆ ಹೊಸದಾಗಿ 40 ಬಸ್&zwnj;ಗಳನ್ನು ಮಂಜೂರು ಮಾಡುವಂತೆ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಮನವಿ ಸಲ್ಲಿಸಿದ್ದಾರೆ. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರ ಈ ಜಿಲ್ಲೆಗೆ 100 ಹೊಸ ಬಸ್&zwnj;ಗಳನ್ನು ನೀಡಲಿದೆ ಎಂದರು.&lt;/p&gt;&lt;h3&gt;&lt;strong&gt;ಶ್ರೀಮಠದಿಂದ ಸಮಪಾಲು ಸಮಬಾಳು&lt;/strong&gt;&lt;/h3&gt;&lt;p&gt;ಆದಿ ಚುಂಚನಗಿರಿ ಪುಣ್ಯಕ್ಷೇತ್ರವು ಕೇವಲ ಒಕ್ಕಲಿಗ ಸಮುದಾಯದ ಹಿತವನ್ನಷ್ಟೆ ಕಾಯುತ್ತಿಲ್ಲ. ಎಲ್ಲಾ ಸಮುದಾಯವನ್ನು ಒಂದೇ ರೀತಿಯಲ್ಲಿ ಪರಿಗಣಿಸುತ್ತಿದೆ. ಇದರಿಂದಾಗಿ ಎಲ್ಲ ವರ್ಗದ ಮಕ್ಕಳು ಶ್ರೀಮಠದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಮೂಲಕ ಶ್ರೀಮಠವು ಕುವೆಂಪು ಅವರ ತತ್ವ ಆದರ್ಶಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/100-new-transport-buses-to-start-operating-in-mandya-district-soo-minister-byrathi-suresh/articleshow-slwclwq"/>
        </item>
        <item>
            <title><![CDATA[ಸಾಕಷ್ಟು ಕೆಲಸ ಮಾಡಿದ್ರೂ ಗೆಲುವು ಕಷ್ಟ: ದೇವರ ಮೊರೆ ಹೋದ್ರಾ ಸಚಿವರು? ಶ್ರೀಹೊಳೆ ಆಂಜನೇಯಸ್ವಾಮಿಗೆ 1.25 ಪೈಸೆ ನಾಣ್ಯ ಹರಕೆ ಅರ್ಪಿಸಿದ್ದೇಕೆ?]]></title>
            <link>https://kannada.asianetnews.com/politics/minister-chaluvarayaswamy-offers-special-prayers-to-sri-hole-anjaneyaswamy-madduru-mandya-rav/articleshow-smkkgih</link>
            <guid isPermaLink="true">https://kannada.asianetnews.com/politics/minister-chaluvarayaswamy-offers-special-prayers-to-sri-hole-anjaneyaswamy-madduru-mandya-rav/articleshow-smkkgih</guid>
            <pubDate>Mon, 07 Sep 2026 08:04:29 +0530</pubDate>
            <description><![CDATA[&lt;p&gt;ನಾನು ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಜನರ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದ್ರೂ ಚುನಾವಣೆ ಗೆಲ್ಲೋಕೆ ಕಷ್ಟ ಎಂದು ಸಚಿವ ಚಲುವರಾಯಸ್ವಾಮಿ ಬೇಸರ.ಐತಿಹಾಸಿಕ ಐಹೊಳೆ ಆಂಜನೇಸ್ವಾಮಿಗೆ ವಿಶೇಶ ಪೂಜೆ ಸಲ್ಲಿಸಿ ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1wtnwvhey31rjphqs251eh6,imgname-minister-chaluvarayaswamy-visit-anjaneya-temple-1788747641712.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದ್ದೂರು (ಮಂಡ್ಯ) (ಸೆ.7)) ನಾನು ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಜನರ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ, ಇಷ್ಟೊಂದು ಕೆಲಸ ಮಾಡಿದ್ದರೂ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಕಷ್ಟು ಹೋರಾಟ ಮಾಡಬೇಕಾಗಿರುವುದು ದುರಂತ ಎಂದು ಸಚಿವ ಎನ್. ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.&lt;/p&gt;&lt;h2&gt;ಸುರೇಶ್ ಗೌಡರ ವಿರುದ್ಧ ಕಿಡಿ&lt;/h2&gt;&lt;p&gt;ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಭಾನುವಾರ ಮಾತನಾಡಿ, ನಾನು ಮಾಡಿದ ಕೆಲಸವನ್ನು ದೊಡ್ಡದಾಗಿ ಹೇಳಿಕೊಳ್ಳಲ್ಲ. ಕೆಲಸ ಮಾಡದಿರುವುದನ್ನು ಮಾಡಿದ್ದೇನೆ ಅಂತ ಹೇಳಿಲ್ಲ. ಈ ಚಲುವರಾಯಸ್ವಾಮಿಯನ್ನು ಸುಲಭವಾಗಿ ಗೆಲ್ಲಿಸಬೇಡಿ. ನನ್ನ ಕೆಲಸ ನೋಡಿ ಮತ ಹಾಕಿ. ಏನೂ ಮಾತನಾಡಕ್ಕೆ ಬರದವನು ನನ್ನ ಸರಿಸಟಿ ನಿಲ್ತಾರೆ ಎಂದು ಪರೋಕ್ಷವಾಗಿ ಸುರೇಶ್ ಗೌಡರ ವಿರುದ್ಧ ಕಿಡಿಕಾರಿದರು.&lt;/p&gt;&lt;p&gt;ಬೆಳಗ್ಗೆ ಇಲ್ಲಿಗೆ ಬಂದವನು ಸೊಂಟ, ಬೆನ್ನು ಬಿದ್ದುಹೋಗಿದೆ. ಅಷ್ಟು ಕೆಲಸ ಮಾಡಿ ಬಂದು ಇಲ್ಲಿ ನಿಂತಿದ್ದಿನಿ. ನೀವು ಮನೆಗೆ ಹೋಗಿ ಮಲಗುತ್ತೀರಾ. ನನಗೆ ಇನ್ನು ಕೆಲಸ ಇದೆ. ನಾನು ದಿನ ಬಂದು ಭಾಷಣ ಮಾಡ್ತಿನಾ? ನನ್ನ ನೋವು ಯಾರ ಹತ್ತಿರ ಹೇಳಿಕೊಳ್ಳಲಿ ಎಂದರು.&lt;/p&gt;&lt;h3&gt;ನಾನು ಯಾಕೆ ಇಲ್ಲಿಗೆ ಬರಬೇಕು, ಭಾಷಣ ಮಾಡಬೇಕು?&lt;/h3&gt;&lt;p&gt;ನೀವು ನನ್ನ ಕಷ್ಟ ಕೇಳೋರು. ಜೊತೆ ನಿಲ್ಲೋರು. ನಿಮ್ಮ ಅಕ್ಕಪಕ್ಕದ ಜನರ ಒಂದೊಂದು ವೋಟ್ ವಿಶ್ವಾಸಕ್ಕೆ ತೆಗೆದುಕೊಂಡರೆ ಚುನಾವಣೆಯಲ್ಲಿ ಗೆಲ್ಲುತ್ತೇನೆ. ನಾನು ಯಾಕೆ ಇಲ್ಲಿಗೆ ಬರಬೇಕು, ಭಾಷಣ ಮಾಡಬೇಕು? ನೀವೇ ರಾಜ್ಯ ಸುತ್ತಿ ಕೆಲಸ ಮಾಡಿ ಅಣ್ಣ ಅಂತ ಹೇಳಿದರೆ ಸಚಿವನಾಗಿ ಹಾಸನಕ್ಕೊ, ತುಮಕೂರಿಗೋ ಹೋಗಿ ಕೆಲಸ ಮಾಡುವೆ. ನಾನು ಮದುವೆಗೆ ಬಂದಿಲ್ಲ, ಹಬ್ಬಕ್ಕೆ ಬಂದಿಲ್ಲ ಅನ್ನೋದನ್ನು ಕಾರ್ಯಕರ್ತರು, ಮುಖಂಡರು ಬಿಡಬೇಕು ಎಂದು ಮನವಿ ಮಾಡಿದರು.&lt;/p&gt;&lt;h3&gt;ಶ್ರೀಹೊಳೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ&lt;/h3&gt;&lt;p&gt;ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದರ್ಶನ ಪಡೆದು ಕೈಯಲ್ಲಿ 1.25 ಪೈಸೆ ನಾಣ್ಯ ಹಿಡಿದು ಹರಕೆ ಸಮರ್ಪಿಸಿದ ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ. ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ 4ನೇ ಬಾರಿ ಸಚಿವನಾಗಿದ್ದೇನೆ. ದೇವರು ಮತ್ತು ಕ್ಷೇತ್ರದ ಜನರ ಆಶೀರ್ವಾದ ನನ್ನ ಏಳಿಗೆಗೆ ಕಾರಣ ಎಂದಿದ್ದಾರೆ&lt;/p&gt;&lt;p&gt;ನಗರದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಡೆ ಶ್ರಾವಣ ಶನಿವಾರದ ಅಂಗವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/minister-chaluvarayaswamy-offers-special-prayers-to-sri-hole-anjaneyaswamy-madduru-mandya-rav/articleshow-smkkgih"/>
        </item>
        <item>
            <title><![CDATA[ಮುಸ್ಲಿಮರಲ್ಲಿ ದಾರಿ ತಪ್ಪಿದರೆ ಜಿಹಾದಿ, ಹಿಂದುತ್ವದಲ್ಲಿ ದಾರಿ ತಪ್ಪಿದರೆ ಕಾಂಗ್ರೆಸ್ಸಿಗರಾಗ್ತಾರೆ; ಛಲವಾದಿ ನಾರಾಯಣಸ್ವಾಮಿ]]></title>
            <link>https://kannada.asianetnews.com/politics/chalavadi-narayanaswamy-controversial-statement-jihadis-and-congress-maddur-ganesh-procession-sat/articleshow-szxv3fc</link>
            <guid isPermaLink="true">https://kannada.asianetnews.com/politics/chalavadi-narayanaswamy-controversial-statement-jihadis-and-congress-maddur-ganesh-procession-sat/articleshow-szxv3fc</guid>
            <pubDate>Wed, 16 Sep 2026 14:56:37 +0530</pubDate>
            <description><![CDATA[&lt;p&gt;ಮಂಡ್ಯದ ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಾರಿ ತಪ್ಪಿದ ಹಿಂದೂಗಳು ಕಾಂಗ್ರೆಸ್ಸಿಗರಾಗುತ್ತಾರೆ ಮತ್ತು ಅವರು ಜಿಹಾದಿಗಳಿಗೆ ಸಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2mrfy6nygtezyp5ayqz1bea,imgname-chalavadi-narayanaswamy-1789550655701.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಸೆ.16): ಮು&lt;/strong&gt;ಸ್ಲಿಂ ಸಮುದಾಯದ ದಾರಿ ತಪ್ಪಿದ ವ್ಯಕ್ತಿ ಜಿಹಾದಿ ಆಗುವಂತೆ, ಹಿಂದೂತ್ವದಲ್ಲಿ ದಾರಿ ತಪ್ಪಿದವರು ಕಾಂಗ್ರೆಸ್ಸಿಗರು ಆಗುತ್ತಾರೆ. ಜಿಹಾದಿಗಳಿಗೂ ಹಾಗೂ ಕಾಂಗ್ರೆಸ್ಸಿಗರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಹಾಗೂ ಮೆರವಣಿಗೆಯ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದು, ಸದ್ಯ ರಾಜ್ಯ ರಾಜಕಾರಣದಲ್ಲಿ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, 'ಹಿಂದೂ-ಮುಸ್ಲಿಂ ಎಲ್ಲರೂ ಅಣ್ಣ-ತಮ್ಮಂದಿರ ರೀತಿಯಲ್ಲಿ ಇದ್ದಾರೆ. ಎರಡು ಸಮುದಾಯದಲ್ಲೂ ಒಳ್ಳೆಯವರು ಹಾಗೂ ಕೆಟ್ಟವರು ಇದ್ದಾರೆ. ಮುಸ್ಲಿಂ ಸಮುದಾಯದಲ್ಲಿ ದಾರಿ ತಪ್ಪಿದ ವ್ಯಕ್ತಿ ಜಿಹಾದಿ ಆಗುತ್ತಾನೆ. ಅದೇ ರೀತಿ ಹಿಂದೂತ್ವದಲ್ಲೂ ಅಂತಹವರು ಇದ್ದು, ದಾರಿ ತಪ್ಪಿದವರು ಕಾಂಗ್ರೆಸ್ಸಿಗರು ಆಗುತ್ತಾರೆ' ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಜಿಹಾದಿಗಳು ಹಾಗೂ ಕಾಂಗ್ರೆಸ್ಸಿಗರು ಇಬ್ಬರೂ ದೇಶಕ್ಕೆ ಗಂಡಾಂತರ ತರುವ ವ್ಯಕ್ತಿಗಳಾಗುತ್ತಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷವು ತನ್ನ ಜಿಹಾದಿ ನಡವಳಿಕೆಯನ್ನು ಬಿಟ್ಟು, ದೇಶಭಕ್ತಿ ಹಾಗೂ ನಾವೆಲ್ಲರೂ ಒಂದೇ ಎಂಬ ಸದ್ಭಾವನೆಯನ್ನು ಬೆಳೆಸಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಶಾಂತಿ ಕದಡುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.&lt;/p&gt;&lt;h2&gt;&lt;strong&gt;ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ಹೈಡ್ರಾಮಾ:&lt;/strong&gt;&lt;/h2&gt;&lt;p&gt;ಇನ್ನೊಂದೆಡೆ, ಮದ್ದೂರಿನ ಪೇಟೆ ಬೀದಿಯಲ್ಲಿ ಸಾಮೂಹಿಕ ಗಣೇಶ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಸಾಗಿತು. ಒಟ್ಟು 108 ಗಣೇಶ ಮೂರ್ತಿಗಳು ಹಾಗೂ ವಿವಿಧ ಕಲಾತಂಡಗಳೊಂದಿಗೆ ಹಿಂದೂ ಯುವಕರು ಹೆಜ್ಜೆ ಹಾಕಿದರು. ಮೆರವಣಿಗೆಯು ಮಸೀದಿ ಹಾಗೂ ದರ್ಗಾ ಇರುವ ಪ್ರದೇಶದ ಬಳಿಗೆ ಆಗಮಿಸುತ್ತಿದ್ದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಹೈ ಅಲರ್ಟ್ ಘೋಷಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.&lt;/p&gt;&lt;p&gt;ಮೆರವಣಿಗೆಯು ಪೇಟೆ ಬೀದಿಯಲ್ಲಿರುವ ದರ್ಗಾ ಬಳಿಗೆ ಬರುತ್ತಿದ್ದಂತೆ ಹಿಂದೂ ಕಾರ್ಯಕರ್ತರು ದರ್ಗಾ ಮುಂಭಾಗದ ರಸ್ತೆಯಲ್ಲೇ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿ ತಮ್ಮ ಆಕ್ರೋಶ ಹಾಗೂ ಭಕ್ತಿ ಮೆರೆದರು. ಬಿಗಿ ಭದ್ರತೆಯ ನಡುವೆಯೂ ಮದ್ದೂರಿನಲ್ಲಿ ನಡೆದ ಈ ವಿದ್ಯಮಾನಗಳು ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಸಿತ್ತು. ಛಲವಾದಿ ನಾರಾಯಣಸ್ವಾಮಿ ಅವರ ಈ ವಿವಾದಾತ್ಮಕ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/chalavadi-narayanaswamy-controversial-statement-jihadis-and-congress-maddur-ganesh-procession-sat/articleshow-szxv3fc"/>
        </item>
        <item>
            <title><![CDATA[Mandya: ಲಕ್ಷಾಂತರ ರೂ ಸಂಗ್ರಹಿಸಿದ್ದ ಭಿಕ್ಷುಕಿ ಸಾವಿತ್ರಿ ಅಜ್ಜಿ ಅನಾರೋಗ್ಯದಿಂದ ನಿಧನ]]></title>
            <link>https://kannada.asianetnews.com/karnataka-districts/mandya-beggar-savitri-who-collected-lakhs-of-rupees-passes-away-due-to-illness-mrq/articleshow-tfkoqh6</link>
            <guid isPermaLink="true">https://kannada.asianetnews.com/karnataka-districts/mandya-beggar-savitri-who-collected-lakhs-of-rupees-passes-away-due-to-illness-mrq/articleshow-tfkoqh6</guid>
            <pubDate>Thu, 10 Sep 2026 07:18:24 +0530</pubDate>
            <description><![CDATA[&lt;p&gt;ಶ್ರೀರಂಗಪಟ್ಟಣದಲ್ಲಿ ಭಿಕ್ಷಾಟನೆ ಮಾಡಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದ ಸಾವಿತ್ರಿ ಎಂಬ ಭಿಕ್ಷುಕಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ಅಂತ್ಯಕ್ರಿಯೆಯನ್ನು ಸ್ಥಳೀಯರು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m24fqntdw6hxawx1p16p1b2b,imgname-mandya-1789004601165.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ/ ಶ್ರೀರಂಗಪಟ್ಟಣ: &lt;/strong&gt;ಭಿಕ್ಷಾಟನೆ ನಡೆಸಿ ಲಕ್ಷ, ಲಕ್ಷ ಹಣ ಸಂಗ್ರಹಿಸಿದ್ದ ಭಿಕ್ಷುಕಿ ಸಾವಿತ್ರಿ ಅನಾರೋಗ್ಯದ ಹಿನ್ನೆಲೆ ಬುಧವಾರ ಮಧ್ಯಾಹ್ನ ಪಟ್ಟಣದಲ್ಲಿ ನಿಧನರಾದರು. ಸಾವಿತ್ರಿ ಅವರ ಅನಾರೋಗ್ಯದ ಹಿನ್ನೆಲೆ ಅನಾಥವಾಗಿದ್ದ ಅವರನ್ನು ಸ್ಥಳೀಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗಿದೆ ಮೃತರಾಗಿದ್ದಾರೆ.&lt;/p&gt;&lt;h2&gt;&lt;strong&gt;ಬ್ರಾಹ್ಮಣ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆ&lt;/strong&gt;&lt;/h2&gt;&lt;p&gt;ವೇದ ಬ್ರಹ್ಮ ಡಾ ಭಾನುಪ್ರಕಾಶ್ ಶರ್ಮಾ, ಸಮಾಜ ಸೇವಕಿ ಸರಸ್ವತಿ, ಅಭಿಷೇಕ್ ಸೇರಿ ಸ್ಥಳೀಯರು ಮೃತರ ಅಂತ್ಯಕ್ರಿಯೆಯನ್ನು ಬ್ರಾಹ್ಮಣ ಸಂಪ್ರದಾಯದಂತೆ ಪಟ್ಟಣದ ಶಂಭುಲಿಂಗಯ್ಯನ ಕಟ್ಟೆ ಸ್ಮಶಾನದಲ್ಲಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಭಿಕ್ಷುಕಿ ಸಾವಿತ್ರಿ ಅವರ ಮನೆಯಲ್ಲಿ ಕಸದ ರಾಶಿ ಜೊತೆ ನೋಟು, ಚಿಲ್ಲರೆ ಹಣ ಸೇರಿದಂತೆ ಸುಮಾರು ಲಕ್ಷಾಂತರ ರು. ಹಣ ಹಾಗೂ ಒಂದು ಅಮೆರಿಕನ್ ಡಾಲರ್ ಸಹ ದೊರೆತಿತ್ತು. ಸಾವಿತ್ರಿ ಅವರ ತಾಯಿ ಇತ್ತೀಚೆಗೆ ಮೃತರಾಗಿದ್ದು, ಸ್ಥಳೀಯರೇ ಅವರ ಅಂತ್ಯ ಸಂಸ್ಕಾರವನ್ನು ಸಹ ನೆರವೇರಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕುಮಾರಸ್ವಾಮಿಯನ್ನ ಹಾವಾಡಿಗರಿಗೆ, ಡಿಕೆಶಿಯನ್ನ ಪೈಲ್ವಾನ್&zwnj;ರಿಗೆ ಹೋಲಿಸಿದ ಕೃಷಿ ಸಚಿವ ನರೇಂದ್ರಸ್ವಾಮಿ! ಹೆಚ್&zwnj;ಡಿಕೆಗೆ ಹಾಕಿದ ಸವಾಲೇನು?&lt;/strong&gt;&lt;/p&gt;&lt;h3&gt;&lt;strong&gt;ದೇವಾಲಯದ ಬಳಿ ಭಿಕ್ಷಾಟನೆ&lt;/strong&gt;&lt;/h3&gt;&lt;p&gt;ತಾಯಿ ಹಾಗೂ ಮಗಳು ಸಾವಿತ್ರಿ ವೃದ್ದ್ಯಾಪ್ಯ ವೇತನ ಪಡೆಯುವ ಜೊತೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥದೇವಾಲಯ, ಸ್ನಾನಘಟ್ಟ, ಗಂಗಾಧರೇಶ್ವರ ಸ್ವಾಮಿ ದೇವಾಲಯದ ಬಳಿ ಭಿಕ್ಷೆ ಬೇಡಿಕೊಂಡು ಈ ಹಣವನ್ನು ಸಂಗ್ರಹಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನನಗೆ ಜೀಪ್ ಬೇಕು ಅಂಕಲ್, ವಿಶೇಷ ಚೇತನ ಬಾಲಕನ ಮನವಿಗೆ ತಕ್ಷಣ ಸ್ಪಂದಿಸಿದ ಹೆಚ್&zwnj;ಡಿ ಕುಮಾರಸ್ವಾಮಿ&lt;/strong&gt;&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-beggar-savitri-who-collected-lakhs-of-rupees-passes-away-due-to-illness-mrq/articleshow-tfkoqh6"/>
        </item>
        <item>
            <title><![CDATA[ಕಬಿನಿ ಖಾಲಿಯಾದ ಬೆನ್ನಲ್ಲೇ ಕೆಆರ್‌ಎಸ್‌ನಿಂದಲೂ ತಮಿಳುನಾಡಿಗೆ ಕಾವೇರಿ ನೀರು! ರೈತರಿಂದ ಹೆಚ್ಚಾದ ಆಕ್ರೋಶ]]></title>
            <link>https://kannada.asianetnews.com/karnataka-districts/mandya-krs-dam-water-release-to-tamil-nadu-sparks-farmer-outrage-sat/articleshow-tk19e2n</link>
            <guid isPermaLink="true">https://kannada.asianetnews.com/karnataka-districts/mandya-krs-dam-water-release-to-tamil-nadu-sparks-farmer-outrage-sat/articleshow-tk19e2n</guid>
            <pubDate>Mon, 31 Aug 2026 09:47:29 +0530</pubDate>
            <description><![CDATA[ಕಡಿಮೆ ಒಳಹರಿವಿನ ನಡುವೆಯೂ ಕೆಆರ್&zwnj;ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಇದು ಮಂಡ್ಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಬೆಳೆಗಳಿಗೆ ನೀರಿಲ್ಲದಿದ್ದರೂ, ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ರೈತರು ಖಂಡಿಸಿದ್ದಾರೆ. ಜಲಾಶಯದ ಒಳಹರಿವಿಗಿಂತ ಹೊರಹರಿವು ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m023gzc5x68480gkeaa8k1pb,imgname-krs-dam-water--1786777206148.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.31): ರಾ&lt;/strong&gt;ಜ್ಯದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ಉಲ್ಬಣಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಇಷ್ಟು ದಿನ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹರಿಯುತ್ತಿದ್ದ ಕಾವೇರಿ ನೀರು, ಇದೀಗ ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ (ಕೆಆರ್&zwnj;ಎಸ್) ಅಣೆಕಟ್ಟೆಯಿಂದಲೂ ತಮಿಳುನಾಡಿಗೆ ಹರಿಯಲು ಆರಂಭಿಸಿದೆ. ಇದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಒಳಹರಿವಿಗಿಂತ ಹೊರಹರಿವೇ ಹೆಚ್ಚು:&lt;/strong&gt;&lt;/h2&gt;&lt;p&gt;ಕೆಆರ್&zwnj;ಎಸ್ ಜಲಾಶಯಕ್ಕೆ ಬರುವ ನೀರಿಗಿಂತ ಹೊರಹೋಗುವ ನೀರಿನ ಪ್ರಮಾಣವೇ ಹೆಚ್ಚಾಗಿದೆ. ಜಲಾಶಯದ ಇಂದಿನ ಒಳಹರಿವು ಕೇವಲ 5,426 ಕ್ಯೂಸೆಕ್ ಇದ್ದರೆ, ತಮಿಳುನಾಡಿಗೆ ಹರಿಸುತ್ತಿರುವ ಹೊರಹರಿವು ಬರೋಬ್ಬರಿ 7,170 ಕ್ಯೂಸೆಕ್ ತಲುಪಿದೆ. ದಿನದಿಂದ ದಿನಕ್ಕೆ ಕಾವೇರಿ ನಡಿಗೆ ನೀರು ಹರಿಸುವ ಪ್ರಮಾಣ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.&lt;/p&gt;&lt;h2&gt;&lt;strong&gt;ಸರ್ಕಾರದ ಧೋರಣೆಗೆ ರೈತರ ತೀವ್ರ ಖಂಡನೆ:&lt;/strong&gt;&lt;/h2&gt;&lt;p&gt;ಮಂಡ್ಯ ಭಾಗದ ನಮ್ಮದೇ ರೈತರ ಕೃಷಿ ಬೆಳಗಳಿಗೆ ನೀರು ಕೊಡುವುದಿಲ್ಲ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ, ಮತ್ತೊಂದೆಡೆ ತಮಿಳುನಾಡಿನ ಕೃಷಿಗೆ ಮಾತ್ರ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಕಾವೇರಿ ನೀರು ಹರಿಸುತ್ತಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. 'ಒಂದೆಡೆ ನಮ್ಮ ರೈತರಿಗೆ ನೀರನ್ನೇ ಬಿಡುವುದಿಲ್ಲ ಎಂದು ಹೇಳುವ ಸರ್ಕಾರ, ಮತ್ತೊಂದೆಡೆ ಕದ್ದುಮುಚ್ಚಿ ಹೆಚ್ಚುವರಿಯಾಗಿ ನೀರು ಹರಿಸುತ್ತಿರುವುದು ರೈತದ್ರೋಹಿ ನೀತಿಯಾಗಿದೆ' ಎಂದು ಕೃಷಿಕರು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಕೆಆರ್&zwnj;ಎಸ್ ಜಲಾಶಯದ ಇಂದಿನ ನೀರಿನ ವಿವರ:&lt;/strong&gt;&lt;/h2&gt;&lt;p&gt;ಗರಿಷ್ಠ ಮಟ್ಟ: 124.80 ಅಡಿ&lt;/p&gt;&lt;p&gt;ಇಂದಿನ ಮಟ್ಟ: 110.04 ಅಡಿ (110.20 ಅಡಿ)&lt;/p&gt;&lt;p&gt;ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ&lt;/p&gt;&lt;p&gt;ಇಂದಿನ ನೀರಿನ ಸಂಗ್ರಹ: 31.381 ಟಿಎಂಸಿ&lt;/p&gt;&lt;p&gt;ಒಳಹರಿವು (Inflow): 5,426 ಕ್ಯೂಸೆಕ್&lt;/p&gt;&lt;p&gt;ಹೊರಹರಿವು (Outflow): 7,170 ಕ್ಯೂಸೆಕ್&lt;/p&gt;&lt;h2&gt;&lt;strong&gt;ಕಬಿನಿ ಜಲಾಶಯ&lt;/strong&gt;&lt;/h2&gt;&lt;p&gt;ಗರಿಷ್ಠ ನೀರಿನ ಮಟ್ಟ (FRL): 2284 ಅಡಿ&lt;/p&gt;&lt;p&gt;ಪ್ರಸ್ತುತ ನೀರಿನ ಮಟ್ಟ (PRL): 2270.65 ಅಡಿ&lt;/p&gt;&lt;p&gt;ಇಂದಿನ ನೀರಿನ ಸಂಗ್ರಹ: 12 / 19.52 ಟಿಎಂಸಿ&lt;/p&gt;&lt;p&gt;ಒಳಹರಿವು (Inflow): 4,480 ಕ್ಯೂಸೆಕ್&lt;/p&gt;&lt;p&gt;ಹೊರಹರಿವು (Outflow): 8,260 ಕ್ಯೂಸೆಕ್&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mandya-krs-dam-water-release-to-tamil-nadu-sparks-farmer-outrage-sat/articleshow-tk19e2n"/>
        </item>
        <item>
            <title><![CDATA[ಕುಮಾರಸ್ವಾಮಿಯನ್ನ ಹಾವಾಡಿಗರಿಗೆ, ಡಿಕೆಶಿಯನ್ನ ಪೈಲ್ವಾನ್‌ರಿಗೆ ಹೋಲಿಸಿದ ಕೃಷಿ ಸಚಿವ ನರೇಂದ್ರಸ್ವಾಮಿ! ಹೆಚ್‌ಡಿಕೆಗೆ ಹಾಕಿದ ಸವಾಲೇನು?]]></title>
            <link>https://kannada.asianetnews.com/politics/minister-narendraswamy-slams-union-minister-hd-kumaraswamy-in-mandya-rav/articleshow-u917yzc</link>
            <guid isPermaLink="true">https://kannada.asianetnews.com/politics/minister-narendraswamy-slams-union-minister-hd-kumaraswamy-in-mandya-rav/articleshow-u917yzc</guid>
            <pubDate>Sun, 06 Sep 2026 15:14:48 +0530</pubDate>
            <description><![CDATA[ಕೇಂದ್ರ ಸಚಿವ ಕುಮಾರಸ್ವಾಮಿ ಅವರ 'ದೇಶವೇ ಅಲ್ಲೋಲ ಕಲ್ಲೋಲ' ಹೇಳಿಕೆಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ನರೇಂದ್ರಸ್ವಾಮಿ, ಕುಮಾರಸ್ವಾಮಿಯವರನ್ನು ಹಾವಾಡಿಗರಿಗೆ ಹೋಲಿಸಿದ್ದಾರೆ. ದಾಖಲೆಗಳಿವೆ ಎಂದು ಹೆದರಿಸುವ ಬದಲು, ತಮ್ಮ ಬುಟ್ಟಿಯಲ್ಲಿರುವುದನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1v0bjtzda7vzktng7f5x7ww,imgname-karnataka-politics-1788686486367.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಸೆ.6):&lt;/strong&gt; 'ದೇಶವೇ ಅಲ್ಲೋಲ ಕಲ್ಲೋಲ ವಿಚಾರ ಹೇಳ್ತೇನೆ' ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಮಂಡ್ಯದ ಹಲಗೂರಿನಲ್ಲಿ ಕೃಷಿ ಸಚಿವ ನರೇಂದ್ರಸ್ವಾಮಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿಯವರನ್ನ ಹಾವಾಡಿಗರಿಗೆ ಹೋಲಿಸಿ ತಿರುಗೇಟು ನೀಡಿದರು.&lt;/p&gt;&lt;h2&gt;ಕುಮಾರಸ್ವಾಮಿ ಹಾವಾಡಿಗರಿದ್ದಂತೆ..&lt;/h2&gt;&lt;p&gt;ಟೀಕೆ ಮಾಡಲೆಂದೇ ಒಬ್ಬರಿಗೆ ಕೇಂದ್ರ ಸಚಿವ ಸ್ಥಾನ ಕೊಟ್ಟಿದ್ದಾರೆ. ಹಿಂದೆ ಹಾವಾಡಿಗರು ಐದಾರು ಬುಟ್ಟಿ ತರುತ್ತಿದ್ದರು. ಅದರಲ್ಲಿ ವಿಷ ಸರ್ಪಗಳಿವೆ ಅಂತಾ ಹೆದರಿಸ್ತಿದ್ರು ಆದ್ರೆ ಯಾರಿಗೂ ತೋರಿಸ್ತಿರಲಿಲ್ಲ. ಅದೇ ರೀತಿ ಕುಮಾರಸ್ವಾಮಿ ದಾಖಲೆ ಇದೆ, ಆಗ ಬಿಡುಗಡೆ ಮಾಡ್ತೀನಿ, ಈಗ ಬಿಡುಗಡೆ ಮಾಡ್ತೀನಿ ಅಂತಾ ಹೆದರಿಸ್ತಾರೆ. ಆದರೆ ಈವರೆಗೆ ಒಂದು ದಾಖಲೆ ಬಿಟ್ಟಿಲ್ಲ ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;ಸದನದಲ್ಲೂ ಅಷ್ಟೇ ಹೆಚ್&zwnj;ಡಿಕೆ, ರೇವಣ್ಣ ಇಬ್ಬರೂ ಅವರೇ ಕಾಣದಷ್ಟು ಎತ್ತರದ ಫೈಲು ಇಟ್ಟುಕೊಂಡು ಕೂರುತ್ತಿದ್ದರು. ಆದ್ರೆ ಯಾವುದಾದರೂ ದಾಖಲೆ ಇದುವರೆಗೆ ಬಿಟ್ಟಿದ್ದು ನೋಡಿಲ್ಲ. ಒಂದು ರೀತಿ ಕುಮಾರಸ್ವಾಮಿ ಹಿಟ್ ಅಂಡ್&zwnj; ರನ್. ಈಗಲೂ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡ್ಬೇಡಿ. ನಿಮ್ಮ ಬುಟ್ಟಿಯಲ್ಲೇನಿದೆ ತೋರಿಸಿ, ಈಗಲಾದ್ರೂ ದಾಖಲೆಗಳನ್ನ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.&lt;/p&gt;&lt;h3&gt;ಕುಮಾರಸ್ವಾಮಿ ವಿರುದ್ಧ ಕುಸ್ತಿ ಗೆದ್ದ ಒಬ್ಬನೇ ಪೈಲ್ವಾನ್ ಡಿಕೆಶಿ&lt;/h3&gt;&lt;p&gt;ಕುಮಾರಸ್ವಾಮಿ ವಿರುದ್ಧ ಕುಸ್ತಿ ಗೆದ್ದ ಒಬ್ಬನೇ ಒಬ್ಬ ಪೈಲ್ವಾನ್ ನಮ್ಮ ಡಿಕೆಶಿ. ದೊಡ್ಡ ದೊಡ್ಡ ಕುಸ್ತಿಪಟುಗಳನ್ನ ಹೊಡೆದುಕೊಂಡು ಬಂದ ದೊಡ್ಡ ಪೈಲ್ವಾನ್ ಡಿಕೆಶಿ. ಕುಮಾರಸ್ವಾಮಿ ಎಂಥ ಪಟ್ಟು ಹಾಕದ್ರೂ ಡಿಕೆಸಿ ಉತ್ತರ ಕೊಡ್ತಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್&zwnj; ಅವರನ್ನ ಹಾಡಿಹೊಗಳಿದರು.&lt;/p&gt;&lt;h3&gt;ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಬಗ್ಗೆ ಕೃಷಿ ಸಚಿವ ಹೇಳಿದ್ದೇನು?&lt;/h3&gt;&lt;p&gt;ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಕಾವೇರಿ ನೀರು ತಮಿಳುನಾಡಿಗೆ ಬಿಟ್ಟು ಬಿಟ್ಟಿದ್ದಾರೆ ಅಂತ ಹೋರಾಟಗಳು ನಡೆಯುತ್ತಿವೆ. ಆದರೆ CWMA, CWRC ಸುಪ್ರೀಂ ಕೋರ್ಟ್ ಮುಂದೆ ವಾಸ್ತವ ಸ್ಥಿತಿ ಇಟ್ಟಿದ್ದೇವೆ. ಒಂದು ಕಡೆ ನಮ್ಮ ರೈತರ ಹಿತವನ್ನು ಕಾಪಾಡಬೇಕಿದೆ. ಜೊತೆಗೆ ದೇಶದ ಕಾನೂನನ್ನು ಪಾಲಿಸಬೇಕಿದೆ. ಇದನ್ನ ಸರ್ಕಾರ ನಿಭಾಯಿಸುವ ಕೆಲಸ ಮಾಡ್ತಿದೆ ಎಂದರು.&lt;/p&gt;&lt;h3&gt;ಭಗವಂತ ಬಿಟ್ಟರೆ ಬೇರೆ ದಾರಿ ಇಲ್ಲ&lt;/h3&gt;&lt;p&gt;ಮಂಡ್ಯ ಜಿಲ್ಲೆ ಕೃಷಿ ಪ್ರದೇಶ. ಬೆಳೆ ಇಲ್ಲದೆ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.. ಜನಜಾನುವಾರುಗಳ ರಕ್ಷಣೆ ಮಾಡಲು ನಾವು ಸಿದ್ದರಿದ್ದೇವೆ. ಈ ಬಾರಿ ಮಳೆ ಕೊರತೆ, ಬರಗಾಲದಿಂದಾಗಿ ರಾಜ್ಯದಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ. ಇದೇ ಪರಿಸ್ಥಿತಿ ಒಂದು ತಿಂಗಳು ಮುಂದುವರಿದರೆ ಕಷ್ಟವಾಗುತ್ತೆ. ಸದ್ಯ ಭಗವಂತನ ಬಿಟ್ಟರೆ ಬೇರೆ ದಾರಿ ಇಲ್ಲ. ಅಧಿಕಾರಿಗಳ ತಂಡಗಳನ್ನು ರೈತರ ಜಮೀನಿಗೆ ಕಳುಹಿಸಿ ಪರಿಶೀಲನೆ ನಡೆಸುತ್ತಿದ್ದೇವೆ.&lt;/p&gt;&lt;h3&gt;ರೈತರು ಸಹಕರಿಸುವಂತೆ ಕೃಷಿ ಸಚಿವ ಮನವಿ&lt;/h3&gt;&lt;p&gt;ರೈತರು ಈ ವರ್ಷ ಅರೆ ಬೆಳೆ ಬೆಳೆಯುವ ಕೆಲಸ ಮಾಡಬೇಕು. ಈ ಬಾರಿ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ದಯವಿಟ್ಟು ರೈತರು ಸಹಕರಿಸಬೇಕು. ಬೆಂಗಳೂರಿನ ಕುಡಿಯುವ ನೀರಿಗೆ ಕೂಡ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.&lt;/p&gt;]]></content:encoded>
            <category>mandya</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/minister-narendraswamy-slams-union-minister-hd-kumaraswamy-in-mandya-rav/articleshow-u917yzc"/>
        </item>
    </channel>
</rss>
