<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 04 Jun 2026 13:13:23 +0530</lastBuildDate>
        <atom:link href="https://kannada.asianetnews.com/rss/mandya" rel="self" type="application/rss+xml"/>
        <item>
            <title><![CDATA[ಪಕ್ಕದ ಮನೆಯವರ ಬಳಿ ಮೊಬೈಲ್​ ಕೇಳಿದ್ದಕ್ಕೆ ಬೈದ ಅಮ್ಮ: ಡೆತ್​ನೋಟ್​ ಬರೆದಿಟ್ಟು ಮಂಡ್ಯದ ಬಾಲೆಯರು ಕಣ್ಮರೆ]]></title>
            <link>https://kannada.asianetnews.com/karnataka-districts/mandya-children-left-home-as-their-mother-scold-for-little-thing-suc/articleshow-1pzk62e</link>
            <guid isPermaLink="true">https://kannada.asianetnews.com/karnataka-districts/mandya-children-left-home-as-their-mother-scold-for-little-thing-suc/articleshow-1pzk62e</guid>
            <pubDate>Wed, 20 May 2026 21:27:20 +0530</pubDate>
            <description><![CDATA[ಮಂಡ್ಯ ಜಿಲ್ಲೆಯಲ್ಲಿ, ತಾಯಿ ಗದರಿದ್ದಕ್ಕೆ ಇಬ್ಬರು ಸಹೋದರಿಯರು ಡೆತ್ ನೋಟ್ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದಾರೆ. ನಾವು ದೂರ ಹೋಗಿ ಸಾಯುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಆತಂಕಗೊಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks31nnxtbdtjbw69aq4zyt3g,imgname-mandya-death-1779292624826.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದು ಮಕ್ಕಳಿಗೆ ಸ್ವಲ್ಪ ಏನು ಹೇಳುವುದೂ ಕಷ್ಟ ಎನ್ನುವ ಸ್ಥಿತಿ ಇದೆ. ಮನೆಯಲ್ಲಿ ಅಪ್ಪ- ಅಮ್ಮ ಏನಾದ್ರೂ ಹೇಳಿದ್ರೆ, ಶಾಲೆಯಲ್ಲಿ ಶಿಕ್ಷಕರು ಏನಾದರೂ ಗದರಿಸಿದರೆ ಸೀದಾ ಸಾವಿನ ಹಾದಿ ತುಳಿಯುವ ಮನಸ್ಥಿತಿ ಇಂದಿನ ಮಕ್ಕಳದ್ದು. ಅಂಥದ್ದೇ ಒಂದು ಆಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ. ಯಾರದ್ದೋ ಬಳಿ ಮಾತನಾಡಲು ಪಕ್ಕದವರ ಮೊಬೈಲ್​ ಕೇಳಿದ್ದಾರೆ ಇಬ್ಬರು ಬಾಲಕಿಯರು. ಹೀಗೆ ಏಕೆ ಮಾಡಿದ್ದಿ ಎಂದು ಗದರಿದ್ದಾರೆ ಅಮ್ಮ. ಇದೇ ಕಾರಣಕ್ಕೆ ಡೆತ್​ನೋಟ್​ ಬರೆದಿಟ್ಟು ಬಾಲಕಿಯರು ಕಾಣೆಯಾಗಿರುವ ಆತಂಕಕಾರಿ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಅಪ್ಪ-ಅಮ್ಮ ಸಾರಿ&lt;/strong&gt;&lt;/h2&gt;&lt;p&gt;ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ರಾಮಚಂದ್ರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಅಕ್ಕ-ತಂಗಿಯಾಗಿದ್ದಾರೆ. ಮನೆ ಬಿಟ್ಟು ಹೋಗುವ ಮುನ್ನ ಪತ್ರವೊಂದು ಬರೆದಿಟ್ಟಿದ್ದಾರೆ. ಅದರಲ್ಲಿ ಅವರು, ಅಮ್ಮ-ಅಪ್ಪ ಸಾರಿ. ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ನಮಗೆ ಆಗುವುದಿಲ್ಲ. ಹೀಗಾಗಿ ನಾವು ದೂರ ಹೋಗಿ ಸಾಯುತ್ತಿದ್ದೇವೆ ಎಂದು ಪತ್ರ ಬರೆದಿಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಪೊಲೀಸರಲ್ಲಿ ದೂರು&lt;/strong&gt;&lt;/h3&gt;&lt;p&gt;ಇದನ್ನು ನೋಡಿ ಆತಂಕಗೊಂಡ ಅಪ್ಪ-ಅಮ್ಮ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕೂಡಲೇ ಪೊಲೀಸರು ದೂರು ದಾಖಲಿಸಿಕೊಂಡು ಮಕ್ಕಳ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ. ಮಕ್ಕಳು ಏನಾದರೂ ಪ್ರಾಣಕ್ಕೆ ಅಪಾಯ ಮಾಡಿಕೊಂಡಿರಬಹುದೇ ಎಂದು ಕುಟುಂಬಸ್ಥರು ಆತಂಕಗೊಂಡು ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>mandya</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/mandya-children-left-home-as-their-mother-scold-for-little-thing-suc/articleshow-1pzk62e"/>
        </item>
        <item>
            <title><![CDATA[ಮಕ್ಕಳನ್ನು ಪ್ರಾಣಿಗಳಂತ ತಿಳ್ಕೊಂಡಿದಿರೇನ್ರೀ: ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಬಿ.ವೀರಪ್ಪ ಆಕ್ರೋಶ]]></title>
            <link>https://kannada.asianetnews.com/karnataka-districts/mandya-girls-hostel-condition-deputy-lokayukta-b-veerappa-news-gvd/articleshow-1w3dbzx</link>
            <guid isPermaLink="true">https://kannada.asianetnews.com/karnataka-districts/mandya-girls-hostel-condition-deputy-lokayukta-b-veerappa-news-gvd/articleshow-1w3dbzx</guid>
            <pubDate>Sat, 23 May 2026 19:16:45 +0530</pubDate>
            <description><![CDATA[&lt;p&gt;ಇವರೇನು ಮಕ್ಕಳೂ ಅಂತ ತಿಳ್ಕೊಂಡಿದೀರಾ ಅಥವಾ ಪ್ರಾಣಿಗಳಂತ ತಿಳ್ಕೊಂಡಿದಿರಾ. ನೀವೆಲ್ಲಾ ಮನುಷ್ಯರೇನ್ರೀ. ನಿಮಗೆ ಮನುಷ್ಯತ್ವ ಇದೆಯಾ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksahd2tewpxe5crd8ccqr38j,imgname-xgx-1779544001358.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಮೇ.23): &lt;/strong&gt;ಇವರೇನು ಮಕ್ಕಳೂ ಅಂತ ತಿಳ್ಕೊಂಡಿದೀರಾ ಅಥವಾ ಪ್ರಾಣಿಗಳಂತ ತಿಳ್ಕೊಂಡಿದಿರಾ. ನೀವೆಲ್ಲಾ ಮನುಷ್ಯರೇನ್ರೀ. ನಿಮಗೆ ಮನುಷ್ಯತ್ವ ಇದೆಯಾ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ನಗರದ ಬಂದೀಗೌಡ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತರು ದಿಢೀರ್ ಭೇಟಿ ನೀಡಿದ ವೇಳೆ ಒಂದೇ ಕೊಠಡಿಯಲ್ಲಿ 13 ಹೆಣ್ಣು ಮಕ್ಕಳು ವಾಸವಿರುವುದನ್ನು ಕಂಡರು.&lt;/p&gt;&lt;p&gt;ಇದರಿಂದ ಆಕ್ರೋಶಗೊಂಡ ಅವರು, ಪ್ರಾಣಿಗಳು ತುಂಬುವಂತೆ ಕೊಠಡಿಯಲ್ಲಿ ತುಂಬಿದ್ದೀರಲ್ರೀ. ನಿಮಗೇನೂ ಅನ್ನಿಸೋಲ್ವಾ. ಅವರಿಗೆ ಅನುಕೂಲವಿದ್ದಿದ್ದರೆ ಇಲ್ಲಿಗ್ಯಾಕ್ರೀ ಬರ್ತಾ ಇದ್ದರು. ಇವರೆಲ್ಲಾ ಬಡವರ ಮಕ್ಕಳು. ಓದುವುದಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಅವರನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳಬೇಕಲ್ಲವೇ. ಓದುವ ಮಕ್ಕಳನ್ನು ಹೀಗೆ ಏನ್ರೀ ನೋಡಿಕೊಳ್ಳೋದು ಎಂದು ವಸತಿ ನಿಲಯದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.&lt;/p&gt;&lt;p&gt;ಅಂಬೇಡ್ಕರ್ ಸಂವಿಧಾನ ಕೊಟ್ಟು ಹೋದರು. ಆದರೆ, ನೀವು ಚಿತ್ರಹಿಂಸೆ ಕೊಡುತ್ತಿದ್ದೀರಿ. ಸಮಾನತೆ, ಗೌರವಯುತ ಬದುಕಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಿ. ಪ್ರಾಣಿಗಳಂತೆ ವರ್ತಿಸುತ್ತಿದ್ದೀರಿ. ಹೆಣ್ಣು ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡುವ ಬಾಕ್ಸ್ ಇಲ್ಲ, ವೈದ್ಯರು ಬರೋದಿಲ್ಲ. ಅದೇ ತಿಂಡಿ, ಅದೇ ಊಟ. ಪಾತ್ರೆಗಳಿಲ್ಲ. ಅವರೇನು ಪ್ರಾಣಿಗಳಾ.&lt;/p&gt;&lt;h2&gt;&lt;strong&gt;ನಿಮಗೆ ಯೋಗ್ಯತೆ ಇಲ್ಲವೇ&lt;/strong&gt;&lt;/h2&gt;&lt;p&gt;ನಿಮಗೆ ಸಂಬಳ ಬರುತ್ತಿದೆ ತಾನೇ. ನಿಮ್ಮ ಕೈಯಿಂದ ದುಡ್ಡು ಕೊಡ್ತಿದ್ದೀರಾ. ಸರ್ಕಾರದ ಹಣ, ತೆರಿಗೆದಾರರು ಕೊಡುತ್ತಿರುವ ಹಣ. ಸರಿಯಾಗಿ ಏಕೆ ಮಾಡುತ್ತಿಲ್ಲ ಎಂದು ಕಟುವಾಗಿ ಪ್ರಶ್ನಿಸಿದರು. ಪಾತ್ರೆ ತೆಗೆದುಕೊಳ್ಳುವುದಕ್ಕೆ ನಿಮಗೆ ಯೋಗ್ಯತೆ ಇಲ್ಲವೇ. ಅದಕ್ಕೂ ಲೆಟರ್ ಬರೀಬೇಕಾ. ಎಷ್ಟಾಗುತ್ತೆ ಪಾತ್ರೆಗಳಿಗೆ ಎಂದಾಗ ₹3 ರಿಂದ ₹4 ಲಕ್ಷ ಎಂದು ಅಧಿಕಾರಿಗಳು ಹೇಳಿದಾಗ, ಈ ಪಾತ್ರೆಗಳಿಗೆ ₹3 ಲಕ್ಷನಾ ಎಂದು ಅಚ್ಚರಿ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mandya-girls-hostel-condition-deputy-lokayukta-b-veerappa-news-gvd/articleshow-1w3dbzx"/>
        </item>
        <item>
            <title><![CDATA[ರಾಜ್ಯದಲ್ಲಿ 60 ಕಿ.ಮೀ ವೇಗದ ಸುಂಟರಗಾಳಿ ಅಬ್ಬರ, ಈ 5 ಜಿಲ್ಲೆಗಳ ಜನರೇ ಎಚ್ಚರ; ಹವಾಮಾನ ಇಲಾಖೆ 'ಡೇಂಜರ್' ಅಲರ್ಟ್!]]></title>
            <link>https://kannada.asianetnews.com/gallery/state/karnataka-weather-report-60-kmph-wind-and-heavy-rain-alert-for-interior-5-districts-sat-2sd2i21</link>
            <guid isPermaLink="true">https://kannada.asianetnews.com/gallery/state/karnataka-weather-report-60-kmph-wind-and-heavy-rain-alert-for-interior-5-districts-sat-2sd2i21</guid>
            <pubDate>Tue, 19 May 2026 15:41:05 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಬಿರುಸುಗೊಂಡಿದ್ದು, ಮೇ 26ರ ಸುಮಾರಿಗೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krztsbbp092nn12as0can513,imgname-screenshot-2026-05-17-202159-1779184741749.png" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಬಿರುಸುಗೊಂಡಿದ್ದು, ಮೇ 26ರ ಸುಮಾರಿಗೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: ರಾ&lt;/strong&gt;ಜ್ಯದಲ್ಲಿ ಮುಂಗಾರು ಪೂರ್ವ ಮಳೆ (Pre-monsoon Rain) ಬಿರುಸುಗೊಂಡಿದ್ದು, ಜನತೆಗೆ ತಂಪಾದ ಅನುಭವದ ಜೊತೆಗೆ ಆತಂಕವೂ ಎದುರಾಗಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ನೈರುತ್ಯ ಮುಂಗಾರು (Southwest Monsoon) ಮಾರುತಗಳು ವೇಗವಾಗಿ ಚಲಿಸುತ್ತಿದ್ದು, ಮೇ 26ರ ಸುಮಾರಿಗೆ ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರಿ ಗುಡುಗು ಸಹಿತ ಮಳೆ ಮತ್ತು ಅತಿ ವೇಗದ ಗಾಳಿ ಬೀಸುವ ಕುರಿತು ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;ಹವಾಮಾನ ಇಲಾಖೆಯ ವರದಿಯಂತೆ, ಇಂದು (ಮೇ 19) ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ 40 ರಿಂದ 50 ಕಿ.ಮೀ ಇರಲಿದೆ. ಗುಡುಗು ಸಿಂಚನದ ಜೊತೆಗೆ ಈ ಬಲವಾದ ಗಾಳಿಯು ಮರಗಳು ಮತ್ತು ವಿದ್ಯುತ್ ಕಂಬಗಳಿಗೆ ಹಾನಿ ಮಾಡುವ ಸಂಭವವಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಇಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ (Heavy Rainfall) ಮುನ್ಸೂಚನೆಯಿದೆ. ವಿಶೇಷವಾಗಿ &lt;strong&gt;ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು&lt;/strong&gt; ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸಲಿದೆ.&amp;nbsp;&lt;/p&gt;&lt;p&gt;ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಉತ್ತರ ಒಳನಾಡಿನ ಜಿಲ್ಲೆಗಳಾದ &lt;strong&gt;ಬೆಳಗಾವಿ, ಧಾರವಾಡ, ಗದಗ, ಕಲಬುರಗಿ ಮತ್ತು ಹಾವೇರಿ&lt;/strong&gt; ಜಿಲ್ಲೆಗಳಲ್ಲಿ ಇಂದು ಚದುರಿದಂತೆ ಮಳೆಯಾಗಲಿದ್ದು, ಇಲ್ಲಿಯೂ ಕೂಡ 50-60 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ವರದಿ ತಿಳಿಸಿದೆ.&lt;/p&gt;&lt;img&gt;&lt;p&gt;ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ವ್ಯಾಪಕವಾಗಿ ಮಳೆಯಾಗಲಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ. ಮೀನುಗಾರರು ಮತ್ತು ಪ್ರವಾಸಿಗರು ಜಾಗರೂಕರಾಗಿರಲು ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡಕವಿದ ವಾತಾವರಣವಿರಲಿದ್ದು, ಮಧ್ಯಾಹ್ನ ಅಥವಾ ಸಂಜೆಯ ನಂತರ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಗರದ ಗರಿಷ್ಠ ತಾಪಮಾನ 33&deg;C ಹಾಗೂ ಕನಿಷ್ಠ ತಾಪಮಾನ 21&deg;C ದಾಖಲಾಗುವ ಸಂಭವವಿದೆ.&lt;/p&gt;&lt;img&gt;&lt;p&gt;ಸದ್ಯ ಮುಂಗಾರು ಮಾರುತಗಳು ಆಗ್ನೇಯ ಅರಬ್ಬೀ ಸಮುದ್ರ, ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಹಲವು ಭಾಗಗಳಲ್ಲಿ ಆವರಿಸಿವೆ. ಮುಂದಿನ 3-4 ದಿನಗಳಲ್ಲಿ ಇವು ಕೇರಳದ ಕಡೆಗೆ ಮುನ್ನಡೆಯಲು ಪೂರಕವಾದ ವಾತಾವರಣವಿದೆ. ಉತ್ತರ ಪ್ರದೇಶದಿಂದ ಕೇರಳದವರೆಗೆ ಹರಡಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ಮಳೆ ಮುಂದುವರಿಯಲಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-report-60-kmph-wind-and-heavy-rain-alert-for-interior-5-districts-sat-2sd2i21"/>
        </item>
        <item>
            <title><![CDATA[ಮಂಡ್ಯದಲ್ಲಿ ವಿಪ್ರೋತ್ಸವ-2026: ಸಮಾಜದ ಏಕತೆ, ಸಂಸ್ಕೃತಿ ಮತ್ತು ಯುವ ಸಬಲೀಕರಣಕ್ಕೆ ಒತ್ತು!]]></title>
            <link>https://kannada.asianetnews.com/karnataka-districts/viprotsava-2026-mandya-abbms-brahmin-community-event-gvd/articleshow-40ay5e9</link>
            <guid isPermaLink="true">https://kannada.asianetnews.com/karnataka-districts/viprotsava-2026-mandya-abbms-brahmin-community-event-gvd/articleshow-40ay5e9</guid>
            <pubDate>Mon, 18 May 2026 18:03:40 +0530</pubDate>
            <description><![CDATA[&lt;p&gt;ಮಂಡ್ಯದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ವತಿಯಿಂದ ಆಯೋಜಿಸಲಾದ &lsquo;ವಿಪ್ರೋತ್ಸವ-2026&rsquo; ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಸಮಾಜದ ಏಕತೆ, ಸಂಸ್ಕೃತಿ ಮತ್ತು ಯುವ ಸಬಲೀಕರಣಕ್ಕೆ ಒತ್ತು ನೀಡಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxgs29cz09v6jm6c99eds3q,imgname-vjvj-1779107137836.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಮೇ.18):&lt;/strong&gt; ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ, ಮಂಡ್ಯ ಜಿಲ್ಲೆ ಇವರ ವತಿಯಿಂದ ಮಂಡ್ಯ ಜಿಲ್ಲಾ ಗಾಯತ್ರಿ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ 'ವಿಪ್ರೋತ್ಸವ-2026' ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನೆರವೇರಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿಪ್ರ ಬಂಧುಗಳು, ಮಹಿಳೆಯರು, ಯುವಕರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಮೆರುಗು ತಂದರು.&lt;/p&gt;&lt;p&gt;ಕಾರ್ಯಕ್ರಮವನ್ನು ABBMS ರಾಜ್ಯಾಧ್ಯಕ್ಷರಾದ ಜಿ.ಆರ್. ಪ್ರದೀಪ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬ್ರಾಹ್ಮಣ ಸಮಾಜವು ಸಂಘಟಿತವಾಗಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಬಲಿಷ್ಠವಾಗಬೇಕಾಗಿದೆ ಎಂದು ತಿಳಿಸಿದರು. ಯುವಪೀಳಿಗೆಯಲ್ಲಿ ಸಂಸ್ಕಾರ, ವೇದಪಾರಂಪರ್ಯ ಹಾಗೂ ಭಾರತೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು. ಸಮಾಜದ ಏಕತೆ, ಸಹಕಾರ ಮತ್ತು ಸೇವಾಭಾವದ ಮೂಲಕ ಸಂಘಟನೆಯನ್ನು ಇನ್ನಷ್ಟು ವಿಸ್ತರಿಸುವ ಗುರಿಯನ್ನು ABBMS ಹೊಂದಿದೆ ಎಂದು ತಿಳಿಸಿದರು.&lt;/p&gt;&lt;p&gt;ಕಾರ್ಯಕ್ರಮದ ಅಧ್ಯಕ್ಷತೆಯನ್ನು ABBMS ಮಂಡ್ಯ ಜಿಲ್ಲಾಧ್ಯಕ್ಷರಾದ ಶ್ರೀಪತಿ ಭಾರಧ್ವಾಜ್ ವಹಿಸಿದ್ದರು. ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಸಂಘದ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಬ್ರಾಹ್ಮಣ ಸಮಾಜದ ಏಕತೆ, ಯುವಕರ ಭಾಗವಹಿಸುವಿಕೆ, ಮಹಿಳಾ ಸಬಲೀಕರಣ ಹಾಗೂ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಸಂಘವು ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಮಾಜದ ಹಿತ ಮತ್ತು ಅಭಿವೃದ್ದಿಗಾಗಿ ಎಲ್ಲರೂ ಒಂದಾಗಿ ಕೈಜೋಡಿಸುವ ಅಗತ್ಯವಿದೆ ಎಂದು ಕರೆ ನೀಡಿದರು.&lt;/p&gt;&lt;p&gt;ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ಳೂರು ಶಿವರಾಂ, ಸದಾಶಿವ ಭಟ್ ಹಾಗೂ ಮಮತಾ ರಮೇಶ್ ಅವರು ಸಮಾಜದಲ್ಲಿ ಪರಸ್ಪರ ಸಹಕಾರ, ಧಾರ್ಮಿಕ ಮೌಲ್ಯಗಳ ಉಳಿವು, ಮಹಿಳಾ ಸಬಲೀಕರಣ ಹಾಗೂ ಭಾರತೀಯ ಸಂಸ್ಕೃತಿಯ ಸಂರಕ್ಷಣೆ ಕುರಿತು ಮಾತನಾಡಿದರು. ABBMS ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ ಜೋಶಿ ಅವರು ಸಂಘದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.&lt;/p&gt;&lt;p&gt;ದೇಶದ 22 ರಾಜ್ಯಗಳಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸಮಾಜದ ಏಕತೆ ಮತ್ತು ಅಭಿವೃದ್ಧಿಗೆ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಯುವಕರ ಸಬಲೀಕರಣಕ್ಕಾಗಿ ಆಯೋಜಿಸಲಾಗುತ್ತಿರುವ ಸ್ಟಾರ್ಟ್&zwnj;ಅಪ್ ಸಮಾವೇಶ, ಉದ್ಯೋಗ ಮೇಳ ಹಾಗೂ ಬ್ರಹ್ಮ ಉದ್ಯೋಗ ಯೋಜನೆಗಳ ಕುರಿತು ವಿವರಿಸಿದರು. ಯುವಜನತೆಗೆ ಉದ್ಯೋಗಾವಕಾಶಗಳು, ಸ್ವಯಂ ಉದ್ಯಮ ಹಾಗೂ ವೃತ್ತಿ ಮಾರ್ಗದರ್ಶನ ಒದಗಿಸುವ ನಿಟ್ಟಿನಲ್ಲಿ ಸಂಘವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಗಣ್ಯರಿಗೆ ಭಾರ್ಗವ ಭೂಷಣ ಪ್ರಶಸ್ತಿ&lt;/strong&gt;&lt;/h2&gt;&lt;p&gt;'ಬ್ರಾಹ್ಮಣರಿಂದ-ಬ್ರಾಹ್ಮಣರಿಗಾಗಿ-ಬ್ರಾಹ್ಮಣರಿಗೋಸ್ಕರ' ಎಂಬ ಧ್ಯೇಯದೊಂದಿಗೆ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ವೇ||ಬ್ರ||ಶ್ರೀ ಅನಂತನಾರಾಯಣ ಶಾಸ್ತ್ರಿ ಹಾಗೂ ಶ್ರೀಮತಿ ಪ್ರೇಮ ರಾಮಚಂದ್ರ ಹಂದೆ ಅವರಿಗೆ 'ಭಾರ್ಗವ ಭೂಷಣ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಧಾರ್ಮಿಕ, ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಸಭಿಕರು ಭಾರೀ ಕರತಾಡನದ ಮೂಲಕ ಗೌರವ ಸೂಚಿಸಿದರು.&lt;/p&gt;&lt;p&gt;ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಭರತನಾಟ್ಯ, ಭಜನೆ ಹಾಗೂ ಹಾಸ್ಯ ಕಾರ್ಯಕ್ರಮಗಳು ಸಭಿಕರ ಮನಗೆದ್ದವು. ಕಲಾವಿದರು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮಕ್ಕಳ ಹಾಗೂ ಯುವಕರ ಸಾಂಸ್ಕೃತಿಕ ಪ್ರತಿಭೆಗಳು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತಂದವು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶ್ರಮವಹಿಸಿದ್ದರು. ಒಟ್ಟಾರೆ, ವಿಪ್ರೋತ್ಸವ-2026 ಕಾರ್ಯಕ್ರಮವು ಬ್ರಾಹ್ಮಣ ಸಮಾಜದ ಏಕತೆ, ಧಾರ್ಮಿಕ ಮೌಲ್ಯಗಳು, ಸಂಸ್ಕೃತಿ ಹಾಗೂ ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ವೇದಿಕೆಯಾಗಿದ್ದು, ಅತ್ಯಂತ ಯಶಸ್ವಿಯಾಗಿ ನೆರವೇರಿತು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/viprotsava-2026-mandya-abbms-brahmin-community-event-gvd/articleshow-40ay5e9"/>
        </item>
        <item>
            <title><![CDATA[ಮೇಕೆದಾಟು ಯೋಜನೆ ಬಗ್ಗೆ ಡಿಕೆಶಿ ಇಲ್ಲಿ ಮಾತಾಡಿದ್ದಕ್ಕೆ, ತಮಿಳುನಾಡಲ್ಲಿ ಹೊತ್ತಿಕೊಂಡ ಜ್ವಾಲೆ, ತೀವ್ರ ರಾಜಕೀಯ ಸಂಘರ್ಷ]]></title>
            <link>https://kannada.asianetnews.com/india-news/dcm-dk-shivakumar-mekedatu-statement-spark-political-firestorm-in-tamil-nadu-cm-vijay-orders-legal-offensive-gdp/articleshow-4krnv6p</link>
            <guid isPermaLink="true">https://kannada.asianetnews.com/india-news/dcm-dk-shivakumar-mekedatu-statement-spark-political-firestorm-in-tamil-nadu-cm-vijay-orders-legal-offensive-gdp/articleshow-4krnv6p</guid>
            <pubDate>Tue, 26 May 2026 15:08:59 +0530</pubDate>
            <description><![CDATA[ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಕೆದಾಟು ಯೋಜನೆ ಕುರಿತ ಹೇಳಿಕೆಯು ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸಿರುವ ತಮಿಳುನಾಡಿನ ಆಡಳಿತ ಮತ್ತು ವಿರೋಧ ಪಕ್ಷಗಳು, ಕರ್ನಾಟಕದ ವಿರುದ್ಧ ಕಾನೂನು ಹೋರಾಟವನ್ನು ತೀವ್ರಗೊಳಿಸಲು ತಮ್ಮ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಈ ಬೆಳವಣಿಗೆಯು ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krqa2ypn411epexs4cs62qz4,imgname-dk-shivakumar-1778898795221.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ರಾಜಕೀಯ ಸಂಘರ್ಷ ಮತ್ತೊಮ್ಮೆ ತಾರಕಕ್ಕೇರಿದೆ. ಮೇಕೆದಾಟು ಸಮತೋಲನ ಜಲಾಶಯ ಯೋಜನೆಯನ್ನು ವಿರೋಧಿಸುವ ಯಾವುದೇ ಕಾನೂನಾತ್ಮಕ ಹಕ್ಕು ತಮಿಳುನಾಡಿಗಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ನೀಡಿದ್ದ ಹೇಳಿಕೆ ನೆರೆರಾಜ್ಯದಲ್ಲಿ ರಾಜಕೀಯ ಜ್ವಾಲೆಗೆ ಕಾರಣವಾಗಿದೆ.&amp;nbsp;&lt;/p&gt;&lt;p&gt;ಡಿ.ಕೆ.ಶಿ ಅವರ ಈ ಹೇಳಿಕೆಯನ್ನು &quot;ದುರಹಂಕಾರದ ಪರಮಾವಧಿ&quot; ಎಂದು ಕರೆದಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK) ಮತ್ತು ಪ್ರತಿಪಕ್ಷಗಳಾದ ಎಐಎಡಿಎಂಕೆ (AIADMK), ಪಿಎಂಕೆ ಹಾಗೂ ಎಎಂಎಂಕೆ ಪಕ್ಷಗಳು ಕರ್ನಾಟಕ ಸರ್ಕಾರದ ವಿರುದ್ಧ ಜಂಟಿಯಾಗಿ ಮುಗಿಬಿದ್ದಿವೆ. ಜೊತೆಗೆ, ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರ ನೇತೃತ್ವದ ಟಿವಿಕೆ (TVK) ಸರ್ಕಾರವು ಈ ನಿಟ್ಟಿನಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಸಿಎಂ ವಿಜಯ್ ಕೂಡ ಸರ್ಕಾರದ ಅಧಿಕಾರಿಗಳಿಗೆ ಕಾನೂನು ಹೋರಾಟ ಮುಂದುವರೆಸುವಂತೆ ಆದೇಶ ನೀಡಿದ್ದಾರೆ.&lt;/p&gt;&lt;h2&gt;ಡಿಕೆಶಿ ಹೇಳಿಕೆ ಅವರ ದುರಹಂಕಾರದ ಮನಸ್ಥಿತಿ ತೋರಿಸುತ್ತದೆ : ಕೆ.ಎನ್. ನೆಹರು ಕಿಡಿ&lt;/h2&gt;&lt;p&gt;ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡಿಎಂಕೆ ಹಿರಿಯ ನಾಯಕ ಹಾಗೂ ಸಚಿವ ಕೆ.ಎನ್. ನೆಹರು, ಕರ್ನಾಟಕದ ನಡೆ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. &quot;ಕಾವೇರಿ ನದಿಪಾತ್ರದ ಕೆಳಗಿನ ರಾಜ್ಯಗಳ (Lower Riparian States) ಒಪ್ಪಿಗೆಯಿಲ್ಲದೆ ಮೇಕೆದಾಟುವಿನಲ್ಲಿ ಯಾವುದೇ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದೂ ಶಿವಕುಮಾರ್ ಇಂತಹ ಹೇಳಿಕೆ ನೀಡಿರುವುದು ಕಾವೇರಿ ಜಲಾನಯನ ಪ್ರದೇಶದ ತಮಿಳುನಾಡು ಜಿಲ್ಲೆಗಳ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ದುರ್ಬಲ ಸರ್ಕಾರವಿದೆ ಮತ್ತು ಕಾಂಗ್ರೆಸ್ ಪಕ್ಷವು ಇಲ್ಲಿನ ಮೈತ್ರಿಕೂಟದ ಭಾಗವಾಗಿರುವುದರಿಂದ ಯಾರೂ ವಿರೋಧಿಸುವುದಿಲ್ಲ ಎಂಬ ತಪ್ಪು ಕಲ್ಪನೆಯಿಂದ ಅವರು ಈ ರೀತಿ ಅಹಂಕಾರದಿಂದ ಮಾತನಾಡುತ್ತಿದ್ದಾರೆ ಎಂದಿದ್ದಾರೆ.&lt;/p&gt;&lt;p&gt;ಮುಂದುವರಿದು ಮಾತನಾಡಿದ ಅವರು, ನಮ್ಮ ನಾಯಕ ಎಂ.ಕೆ. ಸ್ಟಾಲಿನ್ ಅವರು ಕಾವೇರಿ ವಿಚಾರದಲ್ಲಿ ತಮಿಳುನಾಡು ಜನರ ಮತ್ತು ರೈತರ ಹಕ್ಕುಗಳನ್ನು ರಕ್ಷಿಸಲು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂದರು.&lt;/p&gt;&lt;h2&gt;ಹೊಸ ಮುಖ್ಯಮಂತ್ರಿ ವಿಜಯ್&zwnj;ಗೆ ವಿರೋಧ ಪಕ್ಷಗಳ ಕಠಿಣ ಒತ್ತಾಯ&lt;/h2&gt;&lt;p&gt;ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ಹಕ್ಕುಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿಯ ನಿಲುವನ್ನು ಮುಖ್ಯಮಂತ್ರಿ ವಿಜಯ್ ಅವರು ತಕ್ಷಣವೇ ಖಂಡಿಸಬೇಕು ಎಂದು ಡಿಎಂಕೆ ಒತ್ತಾಯಿಸಿದೆ. ಆರಂಭಿಕ ಹಂತದಲ್ಲೇ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಯತ್ನಗಳನ್ನು ತಮಿಳುನಾಡು ಸರ್ಕಾರ ವಿಫಲಗೊಳಿಸಬೇಕು ಎಂದು ಆಗ್ರಹಿಸಿದೆ.&lt;/p&gt;&lt;p&gt;ಮತ್ತೊಂದೆಡೆ, ಪ್ರತಿಪಕ್ಷ ನಾಯಕ ಹಾಗೂ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರು ಡಿ.ಕೆ.ಶಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಯೋಜನೆಯನ್ನು ವಿರೋಧಿಸುವ ಎಲ್ಲಾ ಕಾನೂನಾತ್ಮಕ ಮತ್ತು ನೈತಿಕ ಅಧಿಕಾರ ತಮಿಳುನಾಡಿಗಿದೆ ಎಂದು ತಿರುಗೇಟು ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ತಮಿಳುನಾಡಿನ ಹಕ್ಕುಗಳನ್ನು ವ್ಯವಸ್ಥಿತವಾಗಿ ದಮನ ಮಾಡಲಾಗುತ್ತಿದೆ. ಆದರೂ ತಮಿಳುನಾಡು ಸರ್ಕಾರಗಳು ಮೌನವಾಗಿ ಕುಳಿತಿರುವುದು ಖೇದಕರ. ಈಗಲಾದರೂ ಹೊಸ ಸರ್ಕಾರ ತನ್ನ ನಿಲುವನ್ನು ಕಠಿಣಗೊಳಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ರೈತರ ಹಿತರಕ್ಷಣೆ: ಡಿಪಿಆರ್ ತಿರಸ್ಕರಿಸಲು ಆಗ್ರಹ&lt;/h2&gt;&lt;h3&gt;ರೈತರಿಗೆ ಕಂಟಕ:&amp;nbsp;&lt;/h3&gt;&lt;p&gt;ಎಎಂಎಂಕೆ (AMMK) ಪಕ್ಷದ ಮುಖ್ಯಸ್ಥ ಟಿ.ಟಿ.ವಿ. ದಿನಕರನ್ ಅವರು ಮಾತನಾಡಿ, ಮೇಕೆದಾಟು ಯೋಜನೆ ಜಾರಿಯಾದರೆ ಕಾವೇರಿ ಜಲಾನಯನ ಪ್ರದೇಶದ ಲಕ್ಷಾಂತರ ರೈತರ ಬದುಕು ಬೀದಿಗೆ ಬರಲಿದೆ. ಕರ್ನಾಟಕ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಬಿಡಬೇಕು ಎಂದಿದ್ದಾರೆ.&lt;/p&gt;&lt;h3&gt;ಕೇಂದ್ರದ ಮೇಲೆ ಒತ್ತಡ:&lt;/h3&gt;&lt;p&gt;ಪಿಎಂಕೆ (PMK) ನಾಯಕ ಅನ್ಬುಮಣಿ ರಾಮದಾಸ್ ಅವರು, ಕರ್ನಾಟಕ ಸರ್ಕಾರ ಸಿದ್ಧಪಡಿಸಿರುವ ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿಯನ್ನು (DPR) ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಮತ್ತು ಅದನ್ನು ತಕ್ಷಣವೇ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ರಾಜತಾಂತ್ರಿಕ ಒತ್ತಡ ಹೇರಲು ಮುಖ್ಯಮಂತ್ರಿ ವಿಜಯ್ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಚುರುಕು ನೀಡುತ್ತಿರುವ ಬೆನ್ನಲ್ಲೇ, ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಯೋಜನೆಯನ್ನು ವಿರೋಧಿಸಲು ಸಜ್ಜಾಗುತ್ತಿರುವುದರಿಂದ ಕಾವೇರಿ ಗಡಿಭಾಗದಲ್ಲಿ ಮತ್ತೆ ರಾಜಕೀಯ ಹಗ್ಗಜಗ್ಗಾಟ ತೀವ್ರಗೊಂಡಿದೆ. ಕರ್ನಾಟಕದಲ್ಲೂ ಎಲ್ಲಾ ರಾಜಕೀಯ ಪಕ್ಷಗಳು ಕೂಡ ಈ ಬಗ್ಗೆ ಒಂದಾಗಿ ಒಗ್ಗಟ್ಟಾಗಿ ಹೋರಾಡಬೇಕಾಗಿದೆ. ಕನ್ನಡಿಗರು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕಿದೆ.&lt;/p&gt;&lt;h2&gt;ಏನಿದು ಮೇಕೆದಾಟು ಯೋಜನೆ?&lt;/h2&gt;&lt;p&gt;ಮೇಕೆದಾಟು ಯೋಜನೆಯು ಕಾವೇರಿ ನದಿಗೆ ಸಂಬಂಧಿಸಿದೆ. ಇದು ಕರ್ನಾಟಕದ ರಾಮನಗರ ಜಿಲ್ಲೆಯ ಮೇಕೆದಾಟು ಎಂಬಲ್ಲಿ ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ಬಹುಪಯೋಗಿ ಯೋಜನೆಯಾಗಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವುದು ಈ ಪ್ರಮುಖ ಉದ್ದೇಶ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/dcm-dk-shivakumar-mekedatu-statement-spark-political-firestorm-in-tamil-nadu-cm-vijay-orders-legal-offensive-gdp/articleshow-4krnv6p"/>
        </item>
        <item>
            <title><![CDATA['ನಿಮ್ಮನ್ನ ಸುಮ್ನೆ ಬಿಡೋಲ್ಲ..'  ಮಂಡ್ಯ ಭ್ರಷ್ಟ ಪಿಡಿಒ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ!]]></title>
            <link>https://kannada.asianetnews.com/karnataka-districts/mandya-lokayukta-police-raid-pdos-residences-rav/articleshow-a5r6hd3</link>
            <guid isPermaLink="true">https://kannada.asianetnews.com/karnataka-districts/mandya-lokayukta-police-raid-pdos-residences-rav/articleshow-a5r6hd3</guid>
            <pubDate>Thu, 04 Jun 2026 07:32:27 +0530</pubDate>
            <description><![CDATA[&lt;p&gt;ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಆದೇಶದ ಮೇರೆಗೆ ಮಂಡ್ಯ ಲೋಕಾಯುಕ್ತ ಪೊಲೀಸರು ಬೇಲೂರು ಮತ್ತು ಬೇವಿನಹಳ್ಳಿ ಗ್ರಾಮ ಪಂಚಾಯ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಪಿಡಿಒಗಳ ನಿವಾಸ ಹಾಗೂ ಕಚೇರಿಗಳಲ್ಲಿ ಇ-ಸ್ವತ್ತು, ತೆರಿಗೆ ಸಂಗ್ರಹ, ಲೇ-ಔಟ್ ಶುಲ್ಕ ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt85qh4dx6pdw67t9kdm0dwg,imgname-----------------------2026-06-04t072907.860-1780538393741.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜೂ.4)&lt;/strong&gt;: ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಆದೇಶದ ಮೇರೆಗೆ ಮಂಡ್ಯ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಗ್ಗೆಯಿಂದಲೇ ತಾಲೂಕಿನ ಬೇಲೂರು, ಬೇವಿನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒಗಳ ನಿವಾಸ, ಪಂಚಾಯ್ತಿ ಕಚೇರಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.&lt;/p&gt;&lt;p&gt;ಹದಿನೈದು ದಿನಗಳ ಹಿಂದೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಬೇಲೂರು, ಬೇವಿನಹಳ್ಳಿ ಗ್ರಾಮ ಪಂಚಾಯ್ತಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ಸಮಯದಲ್ಲಿ ಪಂಚಾಯ್ತಿಯ ಇ-ಸ್ವತ್ತು, ತೆರಿಗೆ ಸಂಗ್ರಹ, ಲೇ-ಔಟ್ ಶುಲ್ಕ, ಕೃಷಿ ಭೂಮಿ ಅನ್ಯಕ್ರಾಂತ ಸೇರಿದಂತೆ ಹಲವು ದಾಖಲೆಗಳನ್ನು ಪಂಚಾಯ್ತಿ ಅಧಿಕಾರಿಗಳು ಸಮರ್ಪಕವಾಗಿ ಒದಗಿಸದೆ ಮುಚ್ಚಿಡುವ ಪ್ರಯತ್ನ ನಡೆಸಿದ್ದರು.&lt;/p&gt;&lt;p&gt;ಮಂಡ್ಯದಿಂದ ತೆರಳಿದ ನಂತರ ಉಪ ಲೋಕಾಯುಕ್ತರು ಬೇಲೂರು ಹಾಗೂ ಬೇವಿನಹಳ್ಳಿ ಪಂಚಾಯ್ತಿ ಕಚೇರಿ, ಪಿಡಿಒ ನಿವಾಸಗಳಲ್ಲಿ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಮಂಡ್ಯ ಲೋಕಾಯುಕ್ತ ಅಧೀಕ್ಷಕ ಸುರೇಶ್&zwnj;ಬಾಬು ಅವರಿಗೆ ಆದೇಶಿಸಿದ್ದರು.&lt;/p&gt;&lt;p&gt;ಅದರಂತೆ ಬುಧವಾರ ಲೋಕಾಯುಕ್ತ ಡಿವೈಎಸ್ಪಿ ಸುನೀಲ್&zwnj;ಕುಮಾರ್, ಲೋಕಾಯುಕ್ತ ನಿರೀಕ್ಷಕ ಬ್ಯಾಟರಾಯಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳ ನೇತೃತ್ವದ ತಂಡ ಬೇಲೂರು ಗ್ರಾಪಂ ಪಿಡಿಒ ಸಿದ್ದರಾಜು, ಬೇವಿನಹಳ್ಳಿ ಗ್ರಾಪಂ ಪಿಡಿಒ ಚಾಮರಾಜು ನಿವಾಸ ಮತ್ತು ತಾಲೂಕು ಪಂಚಾಯ್ತಿ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.&lt;/p&gt;&lt;p&gt;ಬೇವಿನಹಳ್ಳಿ ಗ್ರಾಪಂ ಪಿಡಿಒ ಮನೆಯಲ್ಲಿ ದಾಖಲೆಗಳ ಪರಿಶೀಲನೆ ವೇಳೆ ಚಾಮರಾಜು ಅವರು ಹಿಂದೆ ಪಿಡಿಒ ಆಗಿ ಕಾರ್ಯನಿರ್ವಹಿಸಿದ್ದ ನಾಗಮಂಗಲ ತಾಲೂಕಿನ ಕರಡಹಳ್ಳಿ, ಮಂಡ್ಯ ತಾಲೂಕಿನ ದೊಡ್ಡ ಗರುಡನಹಳ್ಳಿ ಗ್ರಾಪಂ ಸೀಲ್&zwnj;ಗಳು ಹಾಗೂ ಅಧ್ಯಕ್ಷರ ಸೀಲ್&zwnj;ಗಳು ಕಂಡುಬಂದವು. ವರ್ಗಾವಣೆಯಾದ ನಂತರವೂ ಸೀಲ್&zwnj;ಗಳನ್ನು ಇಟ್ಟುಕೊಂಡಿರುವುದನ್ನು ನೋಡಿದರೆ ಅವುಗಳ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಲೋಕಾಯುಕ್ತ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಿಂದಿನ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುವ ವೇಳೆ ಬ್ಯಾಂಕ್&zwnj;ಗೆ ಹಣ ಕಟ್ಟಿದ ಚಲನ್&zwnj;ಗಳನ್ನು ಜೊತೆಯಲ್ಲೇ ಇಟ್ಟುಕೊಂಡಿದ್ದು, ಅವೆಲ್ಲವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.&lt;/p&gt;&lt;p&gt;ಬೇವಿನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸುಮಾರು ಎರಡು ಸಾವಿರ ಇ-ಸ್ವತ್ತುಗಳಿವೆ. ಪ್ರತಿಯೊಂದು ಇ-ಸ್ವತ್ತುಗಳನ್ನು ಪರಿಶೀಲನೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಆನ್&zwnj;ಲೈನ್&zwnj;ಗೆ ಅಪ್&zwnj;ಲೋಡ್ ಮಾಡಿರುವ ದಾಖಲೆಗಳೆಲ್ಲವೂ ಕಡತಗಳಲ್ಲಿವೆಯೇ, ಇಲ್ಲವೇ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ನಿರೀಕ್ಷಕ ಬ್ಯಾಟರಾಯಗೌಡ ಅವರು ಹಿಂದಿನ ಐದು ವರ್ಷಗಳಲ್ಲಿ ನಡೆದಿರುವ ಇ-ಸ್ವತ್ತುಗಳನ್ನು ಪರಿಶೀಲನೆಗೊಳಪಡಿಸಿದ್ದಾರೆ.&lt;/p&gt;&lt;p&gt;ಪಂಚಾಯ್ತಿ ವ್ಯಾಪ್ತಿಯಲ್ಲಿ ಆಗಿರುವ ತೆರಿಗೆ ಸಂಗ್ರಹವೆಷ್ಟು, ಬ್ಯಾಂಕಿಗೆ ಜಮೆ ಆಗಿರುವ ಹಣವೆಷ್ಟು, ಎಷ್ಟು ಲೇ-ಔಟ್&zwnj;ಗಳನ್ನು ನಿಯಮಾನುಸಾರ ನಿರ್ಮಿಸಲಾಗಿದೆ. ಅನಧಿಕೃತವಾಗಿ ಎಷ್ಟು ಲೇ-ಔಟ್&zwnj;ಗಳಿಗೆ ಅನುಮತಿ ನೀಡಲಾಗಿದೆ. ಭೂಮಿ ಅನ್ಯಕ್ರಾಂತ ಪ್ರಕ್ರಿಯೆಗಳು ಹೇಗೆಲ್ಲಾ ನಡೆದಿವೆ, ಕೆರೆಗಳ ಒತ್ತುವರಿಯಾಗಿವೆಯೇ ಎಂಬ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.&lt;/p&gt;&lt;p&gt;ಉಪ ಲೋಕಾಯುಕ್ತ ಬಿ.ವೀರಪ್ಪನವರು ಬೇವಿನಹಳ್ಳಿ ಗ್ರಾಪಂಗೆ ಭೇಟಿ ನೀಡಿದ್ದ ಸಮಯದಲ್ಲಿ ಕೃಷಿ ಭೂಮಿಯ ಅನ್ಯಕ್ರಾಂತವನ್ನು ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಸಹಿಯೊಂದಿಗೆ ಜಿಲ್ಲಾಧಿಕಾರಿ ಆದೇಶವಿಲ್ಲದೆ ಪಿಡಿಒ ಚಾಮರಾಜು ಅವರೇ ಮಾಡಿದ್ದನ್ನು ಕಂಡು ಬೆರಗಾಗಿದ್ದರು. ಇದರ ಜೊತೆಗೆ ಕೃಷಿ ಭೂಮಿಯಲ್ಲಿ ಕಟ್ಟಡ ಕಟ್ಟಿದ ನಂತರ ಪರವಾನಗಿ ನೀಡಿ, ವಾಣಿಜ್ಯ ವ್ಯವಹಾರಕ್ಕೆ ಅನುಮತಿ ನೀಡಿರುವುದು ಕಂಡುಬಂದಿತ್ತು. ಆ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿಯನ್ನು ವಿವರವಾಗಿ ಪಡೆದುಕೊಳ್ಳುವಲ್ಲಿ ಅಧಿಕಾರಿಗಳು ನಿರತರಾಗಿದ್ದರು.&lt;/p&gt;&lt;h2&gt;ತಾಪಂ ಕಚೇರಿಯಲ್ಲಿ ಡಿವೈಎಸ್ಪಿ ಸುನೀಲ್&zwnj;ಕುಮಾರ್ ಪರಿಶೀಲನೆ&lt;/h2&gt;&lt;p&gt;ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಗೆ ತೆರಳಿದ ಡಿವೈಎಸ್ಪಿ ಸುನೀಲ್&zwnj;ಕುಮಾರ್ ನೇತೃತ್ವದ ತಂಡ ಕಂದಾಯ ನಕ್ಷೆಯ ಬಗ್ಗೆ ಪರಿಶೀಲಿಸಿದರು. ನಕ್ಷೆಯಲ್ಲಿ ಒಂದು ಊರಿನ ವಿಸ್ತೀರ್ಣ, ಗಡಿ, ಎಷ್ಟು ಸರ್ವೇನಂಬರ್&zwnj;ಗಳು ಗ್ರಾಮದ ವ್ಯಾಪ್ತಿಗೆ ಬರಲಿವೆ, ಆ ಸರ್ವೆ ನಂಬರ್&zwnj;ಗಳಲ್ಲಿರುವ ಸರ್ಕಾರಿ ಜಮೀನು, ಗೋಮಾಳ, ಒತ್ತುವರಿಯಾಗಿದೆಯೇ. ಇಲ್ಲವೇ, ಅಕ್ರಮವಾಗಿ ಲೇಔಟ್&zwnj;ಗಳನ್ನು ನಿರ್ಮಿಸಲಾಗಿದೆಯೇ ಎಂಬ ಬಗ್ಗೆ ತಾಪಂ ಇಓ ಲೋಕೇಶ್&zwnj;ಮೂರ್ತಿ ಅವರನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸಿ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಂಡರು.&lt;/p&gt;&lt;p&gt;ಗ್ರಾಮ ಪಂಚಾಯ್ತಿಗಳಲ್ಲಿರುವ ಇ-ಸ್ವತ್ತುಗಳು, ತಾಪಂನಲ್ಲಿ ದಾಖಲಿಸಿರುವ ಇ-ಸ್ವತ್ತುಗಳ ಸಂಖ್ಯೆಗೆ ತಾಳೆಯಾಗಲಿದೆಯೇ, ಪಂಚಾಯ್ತಿಯಿಗಳಿಂದ ಸಂಗ್ರಹವಾದ ತೆರಿಗೆ ಹಣ, ತಾಪಂನಲ್ಲಿ ನಮೂದಿಸಿರುವ ತೆರಿಗೆ ಹಣದ ಲೆಕ್ಕ ಸಮರ್ಪಕವಾಗಿದೆಯೇ ಎಂಬೆಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಪಂಚಾಯ್ತಿ ವ್ಯಾಪ್ತಿಯಲ್ಲಿ ಅನುಮತಿ ನೀಡಿರುವ ಲೇಔಟ್&zwnj;ಗಳಲ್ಲಿ ಎಲ್ಲವನ್ನೂ ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆಯೇ ಅಥವಾ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟು ಬಡಾವಣೆ ರಚಿಸಲಾಗಿದೆಯೇ. ಯಾವ ಯಾವ ನಿಯಮಗಳು ಉಲ್ಲಂಘನೆಯಾಗಿವೆ ಎಂಬ ಕುರಿತಂತೆ ಮಾಹಿತಿ ಸಂಗ್ರಹಿಸಿದರು.&lt;/p&gt;&lt;p&gt;ಬುಧವಾರದಿಂದ ಆರಂಭವಾಗಿರುವ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಗುರುವಾರವೂ ಮುಂದುವರೆಯುವ ಸಾಧ್ಯತೆಗಳಿವೆ. ಬೇವಿನಹಳ್ಳಿ ಹಾಗೂ ಬೇಲೂರು ಪಂಚಾಯಿತಿಗಳಲ್ಲಿರುವ ಕಡತಗಳನ್ನು ಸಂಪೂರ್ಣ ಪರಿಶೀಲಿಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ಬಿ.ವೀರಪ್ಪನವರ ಆದೇಶದಂತೆ ಕಾರ್ಯಾಚರಣೆ ಚುರುಕನ್ನು ಪಡೆದುಕೊಂಡಿದೆ.&lt;/p&gt;&lt;p&gt;ಲೋಕಾಯುಕ್ತ ಪೊಲೀಸ್ ಚಿಕ್ಕಣ್ಣ ಹಾಜರಿದ್ದರು.&lt;/p&gt;&lt;h3&gt;ಸುಮ್ಮನೆ ಬಿಡೋಲ್ಲ ಎಂದಿದ್ದ ಬಿ.ವೀರಪ್ಪ&lt;/h3&gt;&lt;p&gt;ಕಳೆದ ಮೇ ೨೦ರಂದು ಸಂಜೆ ತಾಲೂಕಿನ ಬೇಲೂರು ಗ್ರಾಮ ಪಂಚಾಯ್ತಿ ಕಚೇರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ದಿಢೀರ್ ಭೇಟಿ ನೀಡಿದ ವೇಳೆ ಅಧಿಕಾರಿಗಳಿಗೆ ಯಾವುದೇ ಕಡತ ಸಿಗದಂತೆ ಬಚ್ಚಿಟ್ಟಿದ್ದರು. ಯಾವುದೇ ಕಡತಗಳನ್ನು ಕೇಳಿದರೂ ಅವುಗಳನ್ನು ಒದಗಿಸದೆ ದಿಕ್ಕುತಪ್ಪಿಸುವ ಪ್ರಯತ್ನ ನಡೆಸಿದ್ದರು. ಆ ಸಮಯದಲ್ಲಿ ಕೆಂಡಾಮಂಡಲರಾದ ಬಿ.ವೀರಪ್ಪ ಅವರು ನನಗೆಲ್ಲಾ ಗೊತ್ತಿದೆ. ಅಧಿಕಾರಿಗಳು ತಪ್ಪಿಸಿಕೊಳ್ಳುವ ಸಲುವಾಗಿ ಕಡತಗಳನ್ನು ಉದ್ದೇಶಪೂರ್ವಕವಾಗಿ ಬಚ್ಚಿಡುವ ಪ್ರಯತ್ನ ನಡೆಸಿದ್ದಾರೆ. ಇದೆಲ್ಲವೂ ವ್ಯವಸ್ಥಿತ ಸಂಚು. ಯಾವ ಕತಗಳನ್ನೂ ನೀಡದೆ, ನಿರ್ವಹಣೆ ಮಾಡದೆ ನಮ್ಮನ್ನೇ ದಿಕ್ಕುತಪ್ಪಿಸುತ್ತಿದ್ದೀರಿ. ನಾನು ಇದನ್ನು ಇಲ್ಲಿಗೆ ಬಿಡುವುದಿಲ್ಲ. ಎಲ್ಲರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವೆ. ಕಡತಗಳನ್ನು ಹಾಜರುಪಡಿಸುವವರೆಗೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.&lt;/p&gt;&lt;p&gt;ಮಂಡ್ಯಕ್ಕೆ ಭೇಟಿ ನೀಡಿ ಹೋದ ಹದಿನೈದೇ ದಿನದಲ್ಲಿ ಬೇಲೂರು, ಬೇವಿನಹಳ್ಳಿ ಗ್ರಾಪಂಗಳ ಕಡತಗಳ ಸಮಗ್ರ ಪರಿಶೀಲನೆಗೆ ಆದೇಶಿಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸುವುದರೊಂದಿಗೆ ಮತ್ತೊಮ್ಮೆ ಎರಡೂ ಪಂಚಾಯ್ತಿಗಳಿಗೆ ಶಾಕ್ ನೀಡಿದ್ದಾರೆ. ಕಳೆದ ವರ್ಷ ಇಂಡುವಾಳು, ಮಂಡ್ಯ ಗ್ರಾಮಾಂತರ ಪಂಚಾಯಿತಿಗಳಲ್ಲಿನ ಅಕ್ರಮಗಳನ್ನು ಬಯಲಿಗೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-lokayukta-police-raid-pdos-residences-rav/articleshow-a5r6hd3"/>
        </item>
        <item>
            <title><![CDATA[Karnataka Power Tussle: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ನನ್ನೆರಡು  ಕಣ್ಣುಗಳಿದ್ದಂತೆ: ಚಲುವರಾಯಸ್ವಾಮಿ]]></title>
            <link>https://kannada.asianetnews.com/politics/karnataka-power-tussle-siddaramaiah-dks-like-my-two-eyes-says-minister-chaluvarayaswamy-rav/articleshow-dbr9dfp</link>
            <guid isPermaLink="true">https://kannada.asianetnews.com/politics/karnataka-power-tussle-siddaramaiah-dks-like-my-two-eyes-says-minister-chaluvarayaswamy-rav/articleshow-dbr9dfp</guid>
            <pubDate>Thu, 28 May 2026 09:00:39 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಅಥವಾ ನಾಯಕತ್ವ ಬದಲಾವಣೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ತನಗೆ ಎರಡು ಕಣ್ಣುಗಳಿದ್ದಂತೆ, ಈ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತೆ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jwme81vf0haf7r987hrkefck,imgname-vdv-1748737722223.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಮೇ.28)&lt;/strong&gt;: ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ(Siddaramaiah) ಅವರು ರಾಜೀನಾಮೆ ನೀಡುವ ವಿಚಾರವಾಗಲೀ, ನಾಯಕತ್ವ ಬದಲಾವಣೆ ವಿಚಾರವಾಗಲೀ ನನಗೆ ಗೊತ್ತಿಲ್ಲ. ಆದರೆ, ನನಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್(DCM DK Shivakumar) ಎರಡು ಕಣ್ಣಿದ್ದಂತೆ ಎಂದು ಕೃಷಿ ಸಚಿವ ಎನ್&zwnj;.ಚಲುವರಾಯಸ್ವಾಮಿ ಹೇಳಿದ್ದಾರೆ.&amp;nbsp;&lt;/p&gt;&lt;h2&gt;ಇಬ್ಬರು ನಾಯಕರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ:&lt;/h2&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ರಾಜ್ಯ ನಾಯಕರೇ. 136 ಜನ ಶಾಸಕರು ಗೆದ್ದಿದ್ದು, ಅದರಲ್ಲಿ ಇವರಿಬ್ಬರ ಕೊಡುಗೆ ಅಪಾರವಾದದು. ಹಾಗಾಗಿ ಇಬ್ಬರೂ ನಾಯಕರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ ಎಂದರು. ಗುರುವಾರ ಸಿಎಂ ಉಪಾಹಾರ ಸಭೆ ಕರೆದಿದ್ದಾರೆ. ಅಲ್ಲಿ ದೆಹಲಿಯ ವಿಷಯ ಚರ್ಚೆಗೆ ಬರಬಹುದು. ಎಐಸಿಸಿ ನಾಯಕರು ದೆಹಲಿಯಿಂದ ಬರುತ್ತಿದ್ದು, ಅವರು ಬಂದ ಮೇಲೆ ವಿಚಾರ ಗೊತ್ತಾಗಲಿದೆ ಎಂದರು.&lt;/p&gt;&lt;p&gt;.ಸಿದ್ದರಾಮಯ್ಯ ಅವರ ರಾಜೀನಾಮೆ, ನಾಯಕತ್ವ ಬದಲಾವಣೆ ಚರ್ಚೆಯಾಗಿರುವ ಬಗ್ಗೆ ನನಗಂತೂ ಮಾಹಿತಿ ಇಲ್ಲ.&lt;/p&gt;&lt;p&gt;ನನಗೆ ಗೊತ್ತಿರುವಂತೆ ರಾಜ್ಯಸಭೆ ಮತ್ತು ವಿಧಾನಪರಿಷತ್&zwnj; ಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಲು ಹೈಕಮಾಂಡ್&zwnj; ನಾಯಕರ ಬಳಿ ಹೋಗಿದ್ದರು&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-power-tussle-siddaramaiah-dks-like-my-two-eyes-says-minister-chaluvarayaswamy-rav/articleshow-dbr9dfp"/>
        </item>
        <item>
            <title><![CDATA[ಬರಾಕ್ ಒಬಾಮಾಗಾಗಿ 11.4 ಕೋಟಿ ರು. ವೆಚ್ಚದಲ್ಲಿ 7.5 ಕಿ.ಮೀ.  ಮಂಡ್ಯ ರಸ್ತೆ ಅಭಿವೃದ್ಧಿ]]></title>
            <link>https://kannada.asianetnews.com/karnataka-districts/mandya-barack-obama-s-arrival-11-crores-for-the-development-of-si-kodihalli-gate-to-hallegere-village-road-mrq/articleshow-f22vdgx</link>
            <guid isPermaLink="true">https://kannada.asianetnews.com/karnataka-districts/mandya-barack-obama-s-arrival-11-crores-for-the-development-of-si-kodihalli-gate-to-hallegere-village-road-mrq/articleshow-f22vdgx</guid>
            <pubDate>Mon, 25 May 2026 06:11:11 +0530</pubDate>
            <description><![CDATA[&lt;p&gt;ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಮಂಡ್ಯ ಜಿಲ್ಲೆಯ ಹಲ್ಲೇಗೆರೆ ಭೇಟಿಯ ಹಿನ್ನೆಲೆಯಲ್ಲಿ, ಎಸ್.ಐ.ಕೋಡಿಹಳ್ಳಿ ಗೇಟ್&zwnj;ನಿಂದ ಹಲ್ಲೇಗೆರೆವರೆಗೆ 7.5 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಸಚಿವ ಸಂಪುಟ 11.4 ಕೋಟಿ ರು. ಅನುದಾನವನ್ನು ಅನುಮೋದಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kse90t7h52ezartvbc5cjtnt,imgname-barack-obama--1--1779669428465.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ:&lt;/strong&gt; ಮಂಡ್ಯ ಹೊರವಲಯದ ಎಸ್.ಐ.ಕೋಡಿಹಳ್ಳಿ ಗೇಟ್&zwnj;ನಿಂದ ಹಲ್ಲೇಗೆರೆ ಗ್ರಾಮದವರೆಗೆ 7.5 ಕಿ.ಮೀ. ರಸ್ತೆಯನ್ನು 11.4 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡುವುದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.&lt;/p&gt;&lt;p&gt;ಹಲ್ಲೇಗೆರೆಯಲ್ಲಿ ಅನಿವಾಸಿ ಭಾರತೀಯ, ಅಮೆರಿಕಾ ವೈದ್ಯ ಡಾ.ಲಕ್ಷ್ಮೀನರಸಿಂಹಮೂರ್ತಿ ಅವರು ಭೂತಾಯಿ ಟ್ರಸ್ಟ್ ಹೆಸರಿನಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರದ ಶಂಕುಸ್ಥಾಪನಾ ಸಮಾರಂಭಕ್ಕೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪತ್ನಿ ಮಿಚೆಲ್ ಆಗಮಿಸಲಿರುವ ಹಿನ್ನೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸುವುದಕ್ಕೆ ಸಿದ್ಧತೆ ನಡೆದಿದೆ.&lt;/p&gt;&lt;h2&gt;&lt;strong&gt;ಏನೇನು ಸೌಲಭ್ಯ?&lt;/strong&gt;&lt;/h2&gt;&lt;p&gt;ಈ ಶಂಕುಸ್ಥಾಪನಾ ಸಮಾರಂಭದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಈಗಾಗಲೇ ಹೆಲಿಪ್ಯಾಡ್, ರಸ್ತೆ, ಚರಂಡಿ, ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಸಮಾಲೋಚನೆ ನಡೆಸಿ ಎಲ್ಲೆಲ್ಲಿ ಏನೇನು ಸೌಲಭ್ಯ ಕಲ್ಪಿಸಬೇಕೆಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ.&lt;/p&gt;&lt;h3&gt;&lt;strong&gt;11.5 ಕೋಟಿ ರು. ಬಿಡುಗಡೆಗೆ ಸಂಪುಟ ಅಸ್ತು&lt;/strong&gt;&lt;/h3&gt;&lt;p&gt;ಸರ್ಕಾರದಿಂದ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿತ್ತು. ಅದಕ್ಕೆ ಮುಖ್ಯಮಂತ್ರಿಯೂ ಒಪ್ಪಿಗೆ ಸೂಚಿಸಿದ್ದರು. ಅದರಂತೆ 7.5 ಕಿ.ಮೀ. ರಸ್ತೆ ಅಭಿವೃದ್ಧಿಗೆ 11.5 ಕೋಟಿ ರು. ಬಿಡುಗಡೆಗೆ ಸಂಪುಟ ಅಸ್ತು ನೀಡಿದೆ. ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-barack-obama-s-arrival-11-crores-for-the-development-of-si-kodihalli-gate-to-hallegere-village-road-mrq/articleshow-f22vdgx"/>
        </item>
        <item>
            <title><![CDATA[ಮಂಡ್ಯ ಜಿಲ್ಲೆಯ  ಕೆರೆಗಳ ಅಭಿವೃದ್ಧಿಗೆ 130 ಕೋಟಿ ರು ಬಿಡುಗಡೆ; ಶಾಸಕರಿಂದ ಮಾಹಿತಿ]]></title>
            <link>https://kannada.asianetnews.com/karnataka-districts/mandya-maddur-mla-km-uday-has-released-grant-of-rs-130-crore-for-the-development-of-all-lakes-in-the-ataguru-area-mrq/articleshow-fhnxcf9</link>
            <guid isPermaLink="true">https://kannada.asianetnews.com/karnataka-districts/mandya-maddur-mla-km-uday-has-released-grant-of-rs-130-crore-for-the-development-of-all-lakes-in-the-ataguru-area-mrq/articleshow-fhnxcf9</guid>
            <pubDate>Wed, 27 May 2026 08:46:53 +0530</pubDate>
            <description><![CDATA[ಮದ್ದೂರು ಕ್ಷೇತ್ರದ ಆತಗೂರು ಭಾಗದ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಶಾಸಕ ಕೆ.ಎಂ.ಉದಯ್ 130 ಕೋಟಿ ರು. ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಯೋಜನೆಯು ಕೆರೆಗಳ ಪುನಶ್ಚೇತನ, ಅಂತರ್ಜಲ ಮಟ್ಟ ಹೆಚ್ಚಳ ಮತ್ತು ರೈತರಿಗೆ ಅನುಕೂಲ ಮಾಡಿಕೊಡುವುದನ್ನು ಗುರಿಯಾಗಿಸಿಕೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khp1rh9z99b61da1h7gcveqm,imgname-lake-1771340318015.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ:&lt;/strong&gt; ಮದ್ದೂರು ವಿಧಾನಸಭಾ ಕ್ಷೇತ್ರದ ಆತಗೂರು ಭಾಗದ ಎಲ್ಲಾ ಕೆರೆಗಳ ಅಭಿವೃದ್ಧಿಗೆ 130 ಕೋಟಿ ರು. ಬಿಡುಗಡೆಯಾಗಿದೆ. ಶೀಘ್ರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು. ತಾಲೂಕಿನ ಸೋಮನಹಳ್ಳಿ ಏತ ನೀರಾವರಿ ಯೋಜನೆ, ಕೆ.ಕೋಡಿಹಳ್ಳಿ ಬಳಿ ಶಿಂಷಾನದಿಗೆ ಅಡ್ಡಲಾಗಿ 4.50ಕೋಟಿ ರು. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.&lt;/p&gt;&lt;h2&gt;&lt;strong&gt;ಸಂಪೂರ್ಣ ಅಭಿವೃದ್ಧಿಗೆ 130 ಕೋಟಿ ರು. ಅನುದಾನ&lt;/strong&gt;&lt;/h2&gt;&lt;p&gt;ಆತಗೂರು ಹೋಬಳಿ ವ್ಯಾಪ್ತಿ ಎಲ್ಲಾ ಕೆರೆಗಳು ನಿರ್ಮಾಣವಾದ ಕಾಲದಿಂದಲೂ ಅಭಿವೃದ್ಧಿ ಕಾಣದೆ ಕೆರೆ ಏರಿ, ತೂಬು, ಮೇಲಿನ ಪಕ್ಕದ ರಸ್ತೆಗಳು ಸಂಪೂರ್ಣ ಹಾಳಾಗಿದ್ದವು. ಅವುಗಳ ಸಂಪೂರ್ಣ ಅಭಿವೃದ್ಧಿಗೆ 130 ಕೋಟಿ ರು. ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ ಎಂದರು.&lt;/p&gt;&lt;p&gt;ಈ ಒಂದು ಚೆಕ್ ಡ್ಯಾಂ ನಿರ್ಮಾಣದಿಂದ ಸೋಮನಹಳ್ಳಿಸ ಕೊಡಹಳ್ಳಿ, ಆಗರಲಿಂಗದೊಡ್ಡಿಸ ತೈಲೂರು, ಸೋಮನಹಳ್ಳಿ ಏತ ನೀರಾವರಿಯಿಂದ ಕೆರೆಗಳಿಗೆ ನೀರು ತುಂಬಿಸಬಹುದು. ಮಳೆಗಾಲದಲ್ಲಿ ಅಲ್ಲದೇ, ಬೇಸಿಗೆಗಾಲದಲ್ಲೂ ನೀರಿನ ಸಮಸ್ಯೆ ಆಗದಂತೆ ಬಗೆಹರಿಸಲು ಈ ಯೋಜನೆ ತರಲಾಗಿದೆ. ಇದರಿಂದ ಈ ಭಾಗದ ಎಲ್ಲಾ ಬೋರ್ ವೆಲ್ ಗಳಲ್ಲಿ ಅಂತರ್ಜಲ ಹೆಚ್ಚಾಗಲಿದೆ ಎಂದರು.&lt;/p&gt;&lt;p&gt;ಇನ್ನೂ ಮೂರು ತಿಂಗಳಲ್ಲಿ ಈ ವ್ಯಾಪ್ತಿಯ ಬನ್ನಹಳ್ಳಿ ಏತನೀರಾವರಿ ಯೋಜನೆ ಪೂರ್ಣಗೊಂಡು ಕೆ.ಹೊನ್ನಲಗೆರೆ ವ್ಯಾಪ್ತಿಯ 17 ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಭಾಗದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿ ಇನ್ನಿತರ ಸಮಸ್ಯೆಗಳು ಕಂಡು ಬಂದಿದೆ. ಇದನ್ನು ಪರಿಹರಿಸಲು ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ವಿದ್ಯುತ್ ಸೋಮನಹಳ್ಳಿ ಬಳಿ ಸಬ್ ಟೇಷನ್ ನಿರ್ಮಾಣ ಹಂತದಲ್ಲಿದೆ ಎಂದರು.&lt;/p&gt;&lt;h3&gt;&lt;strong&gt;ನಾಲೆಗಳ ಮೂಲಕ ಕೆರೆಗಳಿಗೆ ನೀರು&lt;/strong&gt;&lt;/h3&gt;&lt;p&gt;ಕೆರೆಗಳ ಅಭಿವೃದ್ಧಿ ನಾಳೆಗಳ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ನಾಲೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಸೋಮನಹಳ್ಳಿ, ಕೊಡಹಳ್ಳಿ, ಅಗರಲಿಂಗನದೊಡ್ಡಿ ಗ್ರಾಮಗಳು ಈಗಾಗಲೇ ನಗರಸಭೆಗೆ ಸೇರಿದ್ದರೂ ಸಹ ಶೇ.95ರಷ್ಟು ಈ ಭಾಗದಲ್ಲಿ ವ್ಯವಸಾಯ ಮಾಡುವ ರೈತರ ಇದ್ದು, ಈ ಭಾಗದ ರೈತರಿಗೆ ಅನುಕೂಲವಾಗುವ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡಲಾಗುತ್ತದೆ ಎಂದರು.&lt;/p&gt;&lt;p&gt;ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ ಸಂದರ್ಶ, ಯೂನಿಯನ್ ಬ್ಯಾಂಕ್ ನಿರ್ದೇಶಕ ಆರ್.ಸಿ.ಮಹೇಶ್, ಹಳ್ಳಿಕೆರೆ ಎಚ್.ಎಲ್.ಸತೀಶ್, ತೈಲೂರು ರಘು, ಸಿಪಾಯಿ ಶ್ರೀನಿವಾಸ್, ಪೊಲೀಸ್ ರವಿ, ವೆಂಕಟೇಶ್, ಸುರೇಶ್, ಕೆ.ಸೀನಯ್ಯ, ಶಂಕರ್, ಹನುಮೇಗೌಡ, ಅಪ್ಪೇಗೌಡ, ಪುಟ್ಟಪ್ಪ, ರಾಜೇಂದ್ರ, ಅರುವನಹಳ್ಳಿ ಸಿದ್ದರಾಜು, ವಿಜಯ್ ಕುಮಾರ್, ಶಿವು ಚರಣ್, ಜಗದೀಶ್, ಉಮಾಶಂಕರ್, ಅಭಿ, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;&lt;h3&gt;&lt;strong&gt;ಜಿಲ್ಲೆ ಸಹಕಾರ ಒಕ್ಕೂಟದ ನೂತನ ನಿರ್ದೇಶಕ ಮಹೇಶ್ ಶಾಸಕರಿಗೆ ಅಭಿನಂದನೆ&lt;/strong&gt;&lt;/h3&gt;&lt;p&gt;ಮಂಡ್ಯ ಜಿಲ್ಲೆ ಸಹಕಾರ ಒಕ್ಕೂಟದ ನೂತನವಾಗಿ ನಿರ್ದೇಶಕರಾಗಿ ಆಯ್ಕೆಗೆ ಕಾರಣರಾದ ಶಾಸಕ ಕೆ.ಎಂ.ಉದಯ್ ಅವರನ್ನು ನೂತನ ನಿರ್ದೇಶಕ ಆರ್.ಸಿ.ಮಹೇಶ್ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿದ ಶಾಸಕ ಉದಯ್ ಅವರು, ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾದ ನಿರ್ದೇಶಕರು ಸಂಘಗಳಿಗೆ ಬೇಕಾದ ಎಲ್ಲಾ ರೀತಿಯ ಸಹಕಾ ನೀಡಿ ಅಭಿವೃದ್ಧಿಗೆ ಸಹಕಾರಿಯಾಗಿರಬೇಕು ಎಂದರು.&lt;/p&gt;&lt;p&gt;ನೂತನ ನಿರ್ದೇಶಕ ಮಹೇಶ್ ಮಾತನಾಡಿ. ತಾಲೂಕಿನ ಎಲ್ಲಾ ಸಹಕಾರ ಸಂಘಗಳು ವತಿಯಿಂದ ನನಗೆ 19 ಮತಗಳನ್ನು ನೀಡಿ ಭರ್ಜರಿ ಗೆಲುವು ಸಾಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಗೆಲುವಿಗೆ ಕಾರಣರಾದ ಸಹಕಾರ ಸಂಘದವರಿಗೆ ಚಿರಋಣಿಯಾಗಿರುತ್ತೇನೆ ಎಂದರು.&lt;/p&gt;&lt;p&gt;ಈ ವೇಳೆ ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ ಸಂದರ್ಶ, ಕೊಪ್ಪ ಜೋಗಿಗೌಡ, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರ್ ರಾಜೀವ್, ಮುಖಂಡರಾದ ರವಿ, ಪ್ರಕಾಶ್, ವಿಜಯ್ ಕುಮಾರ್, ವೆಂಕಟೇಶ್, ತಿಮ್ಮೇಗೌಡ, ಶಿವಚರಣ್, ಡಾಬಾ ಮಹೇಶ್, ಪುನೀತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-maddur-mla-km-uday-has-released-grant-of-rs-130-crore-for-the-development-of-all-lakes-in-the-ataguru-area-mrq/articleshow-fhnxcf9"/>
        </item>
        <item>
            <title><![CDATA[ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಸರ್ವೇ ಸಾಮಾನ್ಯ: ಮಾಜಿ ಸಚಿವ ಕುಮಾರ್ ಬಂಗಾರಪ್ಪ]]></title>
            <link>https://kannada.asianetnews.com/karnataka-districts/ex-minister-kumar-bangarappa-on-karnataka-cm-change-mandya-gvd/articleshow-gzunh8y</link>
            <guid isPermaLink="true">https://kannada.asianetnews.com/karnataka-districts/ex-minister-kumar-bangarappa-on-karnataka-cm-change-mandya-gvd/articleshow-gzunh8y</guid>
            <pubDate>Thu, 28 May 2026 22:30:29 +0530</pubDate>
            <description><![CDATA[&lt;p&gt;ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಸರ್ವೇ ಸಾಮಾನ್ಯ. ಮುಖ್ಯಮಂತ್ರಿ ಯಾರೇ ಆಗಲಿ ಆಡಳಿತದಲ್ಲಿ ಅಸಮತೋಲನವಾಗದಂತೆ, ಆರ್ಥಿಕ ಕುಸಿತ ಕಾಣದ ರೀತಿಯಲ್ಲಿ ಆಡಳಿತ ನಡೆಯಬೇಕಷ್ಟೇ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-fdb47980-dbb8-48d2-9925-eeef6cf15b74,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಮೇ.28): &lt;/strong&gt;ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಸರ್ವೇ ಸಾಮಾನ್ಯ. ಮುಖ್ಯಮಂತ್ರಿ ಯಾರೇ ಆಗಲಿ ಆಡಳಿತದಲ್ಲಿ ಅಸಮತೋಲನವಾಗದಂತೆ, ಆರ್ಥಿಕ ಕುಸಿತ ಕಾಣದ ರೀತಿಯಲ್ಲಿ ಆಡಳಿತ ನಡೆಯಬೇಕಷ್ಟೇ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.&lt;/p&gt;&lt;p&gt;ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ನಮ್ಮ ತಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೂ ಎರಡು ವರ್ಷಕ್ಕೆ ಮತ್ತೊಬ್ಬರು ಮುಖ್ಯಮಂತ್ರಿಯಾದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸದಾನಂದಗೌಡರು ಮುಖ್ಯಮಂತ್ರಿಯಾದರು. ನಂತರ ಬಸವರಾಜ ಬೊಮ್ಮಾಯಿ ಬಂದರು. ರಾಜಕಾರಣದಲ್ಲಿ ಇವೆಲ್ಲವೂ ಸಾಮಾನ್ಯ ಬೆಳವಣಿಗೆ. ಯಾರೇ ಮುಖ್ಯಮಂತ್ರಿಯಾದರೂ ರಾಜ್ಯದ ಆರ್ಥಿಕತೆ ಕುಸಿತ ಕಾಣದ ರೀತಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ಇವರೇ ಮುಖ್ಯಮಂತ್ರಿಯಾಗಬೇಕೆಂದು ಅವರವರ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಆಸೆ ಇದ್ದೇ ಇರುತ್ತೆ. ಯಾವುದೇ ಪಕ್ಷದ ಸರ್ಕಾರ ಇದ್ದಾಗಲೂ ಇಂತಹ ಬದಲಾವಣೆಗಳು ಸಾಮಾನ್ಯ. ಮುಖ್ಯಮಂತ್ರಿ ಬದಲಾವಣೆಯಿಂದ ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ ಎನ್ನಲಾಗುವುದಿಲ್ಲ ಎಂದರು.&lt;/p&gt;&lt;p&gt;ಇನ್ನೆರಡು ವರ್ಷ ಕಳೆದರೆ ಚುನಾವಣೆ ಬರುತ್ತೆ. ಈಗಿನಿಂದಲೇ ಚುನಾವಣಾ ಕಾರ್ಯಚಟುವಟಿಕೆಗಳನ್ನು ಆರಂಭಿಸಬೇಕು. ರಾಜ್ಯಾದ್ಯಂತ ಸುತ್ತಾಟ ನಡೆಸಲು ಎಲ್ಲಾ ಪಕ್ಷದವರೂ ತಯಾರಿ ನಡೆಸಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ರಾಜಕಾರಣದಲ್ಲಿ ತೊಡಗುತ್ತೇನೆ&lt;/strong&gt;&lt;/h2&gt;&lt;p&gt;ಕುಮಾರ ಬಂಗಾರಪ್ಪ ರಾಜಕೀಯದಲ್ಲಿ ಸಕ್ರೀಯವಾಗಿಲ್ಲ ಎಂಬ ಪ್ರಶ್ನೆಗೆ, ಚುನಾವಣೆಯಲ್ಲಿ ಒಂದು ಸಲ ಕಳೆದುಕೊಂಡ ಮೇಲೆ ಅದು ಸಹಜ. ನಮ್ಮ ನಮ್ಮ ಕ್ಷೇತ್ರದಲ್ಲಿ ಓಡಾಡಿಕೊಂಡು ಇದ್ದೇವೆ. ನಮ್ಮ ಪಕ್ಷದಲ್ಲಿ ಆಂತರಿಕ ಬೆಳವಣಿಗೆ ನಡೆಯುತ್ತಿವೆ. ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಬಂದು ಹೋಗಿದ್ದಾರೆ. ಚುನಾವಣೆ ಬಹಳ ದಿನ ಏನಿಲ್ಲ. ಇನ್ನು ಮೇಲೆ ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತೇನೆ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಬಿಜೆಪಿಯಲ್ಲಿ ಬಣಗಳ ಒಳಕಿತ್ತಾಟ ವಿಚಾರವಾಗಿ ಕೇಳಿದಾಗ, ಸರಿಕಾಣದ್ದನ್ನು ನಾನು ಆಂತರಿಕವಾಗಿ ಪಕ್ಷದ ನಾಯಕರಿಗೆ ಹೇಳಿದ್ದೇವೆ. ಕೇಂದ್ರ ಅಧಿಕೃತವಾಗಿ ಒಂದು ತೀರ್ಮಾನ ತೆಗೆದುಕೊಳ್ಳಬೇಕು. ನಮ್ಮ ಹಕ್ಕು ಪ್ರತಿಪಾದಿಸುವ ಕೆಲಸ ಮಾಡುತ್ತಿದ್ದೇನೆ. ಕೆಲವರಿಂದ ಹತ್ತಿಕ್ಕುವ ಕೆಲಸವೂ ಆಗುತ್ತಿದೆ. ಹಾಗಂತ ನಮಗೆ ಹಿನ್ನಡೆಯಾಗಿದೆ ಎಂದು ಭಾವಿಸುವುದಿಲ್ಲ ಎಂದು ಹೇಳಿದರು.&lt;/p&gt;&lt;p&gt;ವಕ್ಫ್ ಹೋರಾಟ ಮಾಡಿದ್ದೇವೆ. ನಮ್ಮ ಕೆಲಸಗಳನ್ನು ನಾವು ಕೊಟ್ಟಿದ್ದೇವೆ. ವಾಲ್ಮೀಕಿ ಹಗರಣದ ಹೋರಾಟ ಮಾಡಿದೆವು. ದೊಡ್ಡ ಮಟ್ಟದಲ್ಲಿ ನುಸುಳಿಕೋರರ ವಿರುದ್ದ ಹೋರಾಟ ಮಾಡಿದೆವು. ಕರ್ನಾಟಕದಲ್ಲಿ 16 ಲಕ್ಷ ಜನ ಅಕ್ರಮ ನುಸುಳುಕೋರರಿದ್ದಾರೆ. ಹೆಬ್ಬಾಳ, ಮಹದೇವಪುರದಲ್ಲಿ ನುಸುಳುಕೋರರು ಹೆಚ್ಚಾಗಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನದವರು ಇದ್ದಾರೆ, ಆಫ್ರಿಕಾದವರು ಬೆಂಗಳೂರಿನಲ್ಲಿದ್ದಾರೆ. ಇದರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ex-minister-kumar-bangarappa-on-karnataka-cm-change-mandya-gvd/articleshow-gzunh8y"/>
        </item>
        <item>
            <title><![CDATA[ಅಂಗವಿಕಲರ ಬಸ್‌ ಪಾಸ್ ದುರುಪಯೋಗ; ಮಂಡ್ಯದ ಸರ್ಕಾರಿ ಶಿಕ್ಷಕಿಗೆ 1 ವರ್ಷ ಜೈಲು ಶಿಕ್ಷೆ!]]></title>
            <link>https://kannada.asianetnews.com/state/misuse-pwd-bus-pass-mandya-government-teacher-sentenced-to-1-year-in-jail-rav/articleshow-hg1ot14</link>
            <guid isPermaLink="true">https://kannada.asianetnews.com/state/misuse-pwd-bus-pass-mandya-government-teacher-sentenced-to-1-year-in-jail-rav/articleshow-hg1ot14</guid>
            <pubDate>Tue, 19 May 2026 06:56:32 +0530</pubDate>
            <description><![CDATA[&lt;p&gt;ಮಂಡ್ಯದಲ್ಲಿ ಅಂಗವಿಕಲರ ರಿಯಾಯ್ತಿ ಬಸ್ ಪಾಸ್ ದುರುಪಯೋಗಪಡಿಸಿಕೊಂಡ ಸರ್ಕಾರಿ ನೌಕರೊಬ್ಬರಿಗೆ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ವಂಚನೆ ಪ್ರಕರಣದಲ್ಲಿ ದೋಷಿ ಎಂದು ಸಾಬೀ ಹಿನ್ನೆತುಲೆಯಲ್ಲಿ, 10 ಸಾವಿರ ರೂ. ದಂಡ ಮತ್ತು ಸಾರಿಗೆ ನಿಗಮಕ್ಕೆ 47 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kryx41avj0pfxwgj84d5x6fb,imgname-----------------------2026-05-19t065006.382-1779153634650.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಮೇ.19):&lt;/strong&gt; ಅಂಗವಿಕಲರ ರಿಯಾಯ್ತಿ ದರದ ಪಾಸನ್ನು ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಮಹಿಳಾ ನೌಕರರೊಬ್ಬರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ದಂಡ ವಿಧಿಸಿರುವ ನ್ಯಾಯಾಲಯ ಸಾರಿಗೆ ನಿಗಮದವರಿಗೆ 47 ಸಾವಿರ ರು. ಪರಿಹಾರ ನೀಡುವಂತೆ ಆದೇಶಿಸಿದೆ.&lt;/p&gt;&lt;p&gt;ಮದ್ದೂರು ತಾಲೂಕು ಎರಗನಹಳ್ಳಿ ಗ್ರಾಮದ ಎ.ಶ್ರುತಿ (47) ಶಿಕ್ಷೆಗೊಳಗಾದ ಸರ್ಕಾರಿ ಮಹಿಳಾ ನೌಕರೆ. ಸರ್ಕಾರಿ ನೌಕರರು ಅಂಗವಿಕರ ರಿಯಾಯ್ತಿ ದರದ ಬಸ್ ಪಾಸ್ ಸೌಲಭ್ಯ ಪಡೆಯಲು ಅರ್ಹರಿಲ್ಲದಿದ್ದರೂ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನೀಡುವ ಅಂಗವಿಕಲರ ರಿಯಾಯ್ತಿ ದರದ ಪಾಸನ್ನು ಪಡೆದುಕೊಂಡು ದುರುಪಯೋಗಪಡಿಸಿಕೊಂಡಿದ್ದರು.&lt;/p&gt;&lt;p&gt;ರಸ್ತೆ ಸಾರಿಗೆ ನಿಗಮದ ಮಂಡ್ಯ ಮತ್ತು ಮದ್ದೂರು ಘಟಕದಿಂದ ಅಂಗವಿಕಲರ ಬಸ್ ಪಾಸ್ ಪಡೆದು 1.1.2014ರಿಂದ 17.10.2015ರ ವರೆಗೆ ನಿಗಮದ ಬಸ್&zwnj;ಗಳಲ್ಲಿ ಸಂಚರಿಸಿ ನಿಗಮಕ್ಕೆ 46,640 ರು. ನಷ್ಟವುಂಟು ಮಾಡಿ ಮೋಸ ಮಾಡಿರುವ ಬಗ್ಗೆ ದೂರು ಬಂದಿತ್ತು.&lt;/p&gt;&lt;p&gt;ಪ್ರಕರಣ ದಾಖಲಿಸಿಕೊಂಡ ಪೂರ್ವ ಠಾಣೆ ಪೊಲೀಸರು ಕಲಂ 420 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿ ಶ್ರುತಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪಿಸಿಜೆ ಮತ್ತು ಜೆಎಂಎಫ್&zwnj;ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಸಾಕ್ಷ್ಯಧಾರಗಳನ್ನು ಪರಿಗಣಿಸಿ ನ್ಯಾಯಾಲಯವು ಆರೋಪಿ ಎ.ಶ್ರುತಿ ಕಲಂ 420 ಐಪಿಸಿ ರೀತ್ಯಾ ವಂಚನೆ ಮಾಡಿರುವುದಾಗಿ ಪರಿಗಣಿಸಿ ನ್ಯಾಯಾಧೀಶ ಜಿ.ಜೆ.ಶಿವಕುಮಾರ್&zwnj; ಅವರು ಭಾರತೀಯ ದಂಡ ಸಂಹಿತೆ ಕಲಂ 420ರಡಿ ಅಪರಾಧಕ್ಕೆ 1 ವರ್ಷಗಳ ಸೆರೆಮನೆ ವಾಸ ಮತ್ತು 10 ಸಾವಿರ ರು. ದಂಡ ವಿಧಿಸಿದರು. ಜೊತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮರವರಿಗೆ 47,000 ರು. ಪರಿಹಾರ ನೀಡಬೇಕೆಂದು ತೀರ್ಪು ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಶಿವಕುಮಾರ್ ವಾದ ಮಂಡಿಸಿದ್ದರು.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/misuse-pwd-bus-pass-mandya-government-teacher-sentenced-to-1-year-in-jail-rav/articleshow-hg1ot14"/>
        </item>
        <item>
            <title><![CDATA[ಮಂಡ್ಯದ ಹಲ್ಲೇಗೆರೆಯಲ್ಲಿ 50 ಲಕ್ಷದ ವೇದಿಕೆ; ಭೂಕಂಪವಾದ್ರೂ ಜಗ್ಗಲ್ಲ, ಏನಿದರ ವಿಶೇಷತೆ?]]></title>
            <link>https://kannada.asianetnews.com/karnataka-districts/mandya-stage-has-been-set-up-for-the-installation-of-bhudevi-at-the-bhudevi-spiritual-center-mrq/articleshow-lul1bq3</link>
            <guid isPermaLink="true">https://kannada.asianetnews.com/karnataka-districts/mandya-stage-has-been-set-up-for-the-installation-of-bhudevi-at-the-bhudevi-spiritual-center-mrq/articleshow-lul1bq3</guid>
            <pubDate>Tue, 26 May 2026 19:08:35 +0530</pubDate>
            <description><![CDATA[ಮಂಡ್ಯ ತಾಲೂಕಿನ ಹಲ್ಲೇಗೆರೆಯಲ್ಲಿ ಸ್ಕೋಪ್ ಫೌಂಡೇಷನ್ ವತಿಯಿಂದ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣವಾಗುತ್ತಿದೆ. ಈ ಕೇಂದ್ರದ ಶಂಕುಸ್ಥಾಪನೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಗಮಿಸುವ ನಿರೀಕ್ಷೆಯಿದ್ದು, ಭೂದೇವಿ ಪ್ರತಿಷ್ಠಾಪನೆಗೆ ಹಾಗೂ ಗಣ್ಯರ ಸ್ವಾಗತಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksj7xxxjxyx9ny7yqstsx6px,imgname-barack-obama--1--1779802503090.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &amp;nbsp;&lt;/strong&gt;ತಾಲೂಕಿನ ಹಲ್ಲೇಗೆರೆ ಹೊರವಲಯದಲ್ಲಿ ಸ್ಕೋಪ್ ಫೌಂಡೇಷನ್ ವತಿಯಿಂದ ನಿರ್ಮಿಸುತ್ತಿರುವ ಭೂದೇವಿ ಆಧ್ಯಾತ್ಮಿಕ ಕೇಂದ್ರದಲ್ಲಿ ಭೂದೇವಿ ಪ್ರತಿಷ್ಠಾಪನೆಗೆ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಈ ಕೇಂದ್ರದ ಶಂಕುಸ್ಥಾಪನೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಷೆಲ್&zwnj; ಅವರು ಆಗಮಿಸುವ ಸಾಧ್ಯತೆಯಿದ್ದು, ಕಾರ್ಯಕ್ರಮ ಸಾಕಷ್ಟು ಮಹತ್ವ ಪಡೆದಿದೆ.&lt;/p&gt;&lt;h2&gt;&lt;strong&gt;50 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ವೇದಿಕೆ ನಿರ್ಮಾಣ&lt;/strong&gt;&lt;/h2&gt;&lt;p&gt;ಈ ಕಾರ್ಯಕ್ರಮಕ್ಕಾಗಿ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಸುಮಾರು 50 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ಭೂಕಂಪನಕ್ಕೂ ಜಗ್ಗದ ರೀತಿಯಲ್ಲಿ ತಳಪಾಯವನ್ನು ನಿರ್ಮಿಸಲಾಗಿದೆ. 12 ಅಡಿ ಆಳದಿಂದ ನಾಲ್ಕು ಹಂತದಲ್ಲಿ ತಳಪಾಯವನ್ನು ನಿರ್ಮಿಸಿಕೊಂಡು ಬಂದಿದ್ದು, ಅದರ ಮೇಲೆ ಇನ್ನೂ 4 ಅಡಿ ಎತ್ತರಿಸಿ ಅದರ ಮೇಲೆ ಭೂದೇವಿ (ಮದರ್ ಆಫ್ ಅರ್ಥ್) ಪ್ರತಿಷ್ಠಾಪನೆ ಮಾಡಲಾಗುವುದು.&lt;/p&gt;&lt;p&gt;ತಳಪಾಯಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕದೆ ಸಂಪೂರ್ಣವಾಗಿ ಕಲ್ಲುಗಳು ಹಾಗೂ ಮಣ್ಣನ್ನು ತುಂಬಿ ನೈಸರ್ಗಿಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ನೀಲಿ ಗ್ರಾನೈಟ್ ಮತ್ತು ವೈಟ್ ಸ್ಟೋನ್&zwnj;ನಿಂದ 14 ಅಡಿ ಎತ್ತರದ ಭೂದೇವಿಯ ಏಕಶಿಲಾ ಪ್ರತಿಮೆಯನ್ನು ಖ್ಯಾತ ಶಿಲ್ಪಿಗಳಿಂದ ಕೆತ್ತಿಸಲು ಯೋಜನೆ ರೂಪಿಸಲಾಗಿದೆ.&lt;/p&gt;&lt;h3&gt;&lt;strong&gt;7.5 ಕಿ.ಮೀ.ರಸ್ತೆ 11.4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ&lt;/strong&gt;&lt;/h3&gt;&lt;p&gt;ಹಲ್ಲೇಗೆರೆಯಲ್ಲಿ ಭೂದೇವಿ ಆಧ್ಯಾತ್ಮಿಕ ಕೇಂದ್ರದ ಶಂಕುಸ್ಥಾಪನೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಬಸರಾಳು-ತಂಗಳಗೆರೆ ರಸ್ತೆ, ಕೊತ್ತಗೆರೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ, ಬಸರಾಳು-ಕೊಪ್ಪ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಸುಮಾರು 7.5 ಕಿ.ಮೀ.ರಸ್ತೆಯನ್ನು 11.4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ.&lt;/p&gt;&lt;p&gt;ಮುಂದಿನ ಆಗಸ್ಟ್ ತಿಂಗಳಲ್ಲಿ ಅಮೆರಿಕದ ಖ್ಯಾತ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಆಗಮಿಸಲಿದ್ದಾರೆ. ಅವರು ಬಂದ ನಂತರ ಎಲ್ಲ ಕಾರ್ಯಗಳಿಗೂ ಚುರುಕು ನೀಡಲಿದ್ದಾರೆ. ಕಾರ್ಯಕ್ರಮದ ದಿನಾಂಕ ಕೂಡ ನಂತರ ಘೋಷಣೆಯಾಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mandya-stage-has-been-set-up-for-the-installation-of-bhudevi-at-the-bhudevi-spiritual-center-mrq/articleshow-lul1bq3"/>
        </item>
        <item>
            <title><![CDATA[ನಮಗೂ ಪೊರಕೆ, ದೊಣ್ಣೆ, ಒನಕೆ ಹಿಡಿದು ಪ್ರತಿಭಟಿಸಲು ಬರುತ್ತದೆ: ಶಾಸಕ ಕೆ.ಎಂ.ಉದಯ್ ಕಿಡಿ]]></title>
            <link>https://kannada.asianetnews.com/karnataka-districts/mla-km-uday-comments-on-protest-gejjalagere-development-gvd/articleshow-m64xz7m</link>
            <guid isPermaLink="true">https://kannada.asianetnews.com/karnataka-districts/mla-km-uday-comments-on-protest-gejjalagere-development-gvd/articleshow-m64xz7m</guid>
            <pubDate>Sun, 17 May 2026 21:57:50 +0530</pubDate>
            <description><![CDATA[&lt;p&gt;ನಮಗೂ ಪೊರಕೆ, ದೊಣ್ಣೆ, ಒನಕೆ ಹಿಡಿದು ಪ್ರತಿಭಟನೆ ಮಾಡಲು ಬರುತ್ತದೆ. ಪ್ರತಿಭಟನೆ ಮಾಡಲು ನಮ್ಮ ಬಳಿಯೂ ಜನರಿದ್ದಾರೆ. ನಮಗೆ ಶಾಂತಿ ಕಾಪಾಡುವುದು ಮುಖ್ಯ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k01xjd4na27q6nwmwf0yx1rq,imgname-fdbfb-1752411223189.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮದ್ದೂರು (ಮೇ.17): &lt;/strong&gt;ನಮಗೂ ಪೊರಕೆ, ದೊಣ್ಣೆ, ಒನಕೆ ಹಿಡಿದು ಪ್ರತಿಭಟನೆ ಮಾಡಲು ಬರುತ್ತದೆ. ಪ್ರತಿಭಟನೆ ಮಾಡಲು ನಮ್ಮ ಬಳಿಯೂ ಜನರಿದ್ದಾರೆ. ನಮಗೆ ಶಾಂತಿ ಕಾಪಾಡುವುದು ಮುಖ್ಯ ಎಂದು ಶಾಸಕ ಕೆ.ಎಂ.ಉದಯ್ ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವ ವಿರುದ್ಧ ಕಿಡಿಕಾರಿದರು. ನಿಮ್ಮ ವಿರುದ್ಧ ಪ್ರತಿಭಟನೆ ಮಾಡಿ ಅಶಾಂತಿ ಉಂಟು ಮಾಡುವುದು ಬೇಡ ಎಂದು ಸುಮ್ಮನೆ ಇದ್ದೇವೆ. ನಿಮ್ಮ ವಿರುದ್ಧ ಹೇಳಿಕೆ ನೀಡಲು ನಮಗೆ ಸಮಯವಿಲ್ಲ. ನಮಗೆ ಮತ ನೀಡಿರುವ ಜನರು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ.&lt;/p&gt;&lt;p&gt;ನ್ಯಾಯಾಲಯದಲ್ಲಿ ಪ್ರಕರಣವಿದೆ. ಪ್ರಕರಣದ ತೀರ್ಪಿಗೆ ನಾವು ಬದ್ಧವಾಗಿದೆ. ಅಲ್ಲಿಯವರೆಗೆ ನೀವು ಸಹ ಬದ್ಧವಾಗಿ ಇರಬೇಕು ಎಂದರು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಸಮ್ಮುಖದಲ್ಲಿ ಮಾತುಕತೆ ನಡೆಸಿ ಪ್ರತಿಭಟನೆ ಬೇಡ ಎಂದಿದ್ದರು. ಯಾರದೋ ಹಿತ ಕಾಪಾಡಲು ತಮ್ಮ ಪ್ರತಿಷ್ಠೆಗೋಸ್ಕರ ಪ್ರತಿಭಟನೆ ಮುಂದುವರಿಸಿದ್ದೀರಿ. ಪ್ರತಿಭಟನೆಯಲ್ಲಿ ಭಾಗವಹಿಸುವ ಮುಗ್ಧ ಜನರನ್ನು ದಿಕ್ಕು ತಪ್ಪಿಸುವ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.&lt;/p&gt;&lt;p&gt;ಜಿಲ್ಲೆಯ ಹಲವು ಗ್ರಾಪಂಗಳನ್ನು ನಗರಸಭೆಗೆ ಮೇಲ್ದರ್ಜೆಗೇರಿಸಲು ಶಾಸಕರು ಮುಖ್ಯಮಂತ್ರಿಗಳಿಗೆ ಬಳಿ ದುಂಬಾಲು ಬಿದ್ದಿದ್ದಾರೆ. ಆದರೆ, ನಮ್ಮ ಪ್ರಯತ್ನದಿಂದ ಗೆಜ್ಜಲಗೆರೆ ಗ್ರಾಮವು ನಗರಸಭೆಯನ್ನಾಗಿ ಸೇರ್ಪಡೆಯಾಗಿದೆ. ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಅವಕಾಶ ನೀಡಲಾಗುತ್ತದೆ. ಇದರಿಂದ ಕೈಗಾರಿಕಾ ಪ್ರದೇಶದಲ್ಲಿ ಹೊಸ ಕೈಗಾರಿಕೆ ನಿರ್ಮಾಣಕ್ಕೆ ಅಗತ್ಯ ಸೌವಲತ್ತುಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.&lt;/p&gt;&lt;p&gt;ಗ್ರಾಪಂ ಅನ್ನು ಕೆಲವರು ನಗರಸಭೆಗೆ ಸೇರಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುವವರೇ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಖಾಸಗಿ ಶಾಲೆಗಳಲ್ಲಿ ಮಾಡಿಸುತ್ತಿದ್ದಾರೆ. ಅವರ ಮಕ್ಕಳಿಗೆ ದೊಡ್ಡ ಕಂಪನಿಗಳಲ್ಲಿ ಕೆಲಸ ಕೊಡುಸುತ್ತಾರೆ. ಆದರೆ, ಗ್ರಾಮದ ರೈತರ, ಕೂಲಿಕಾರರ ಮಕ್ಕಳು ಅವರ ಮಕ್ಕಳ ದೊಡ್ಡ ಮಟ್ಟಕ್ಕೆ ಬೆಳೆಯುವುದು ಬೇಡವೇ. ಇದನ್ನು ಮುಗ್ಧ ರೈತರು, ಗ್ರಾಮದ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.&lt;/p&gt;&lt;h2&gt;&lt;strong&gt;ಗ್ರಾಮವು ನಗರಸಭೆ ಸೇರಿದೆ&lt;/strong&gt;&lt;/h2&gt;&lt;p&gt;ಗೆಜ್ಜಲಗೆರೆಯಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದರೆ ನೆರ ರಾಜ್ಯಗಳಿಂದ ಬಂಡವಾಳ ಶಾಹಿಗಳು ಬಂದು ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ವಿದ್ಯಾವಂತ ಯುವಕರಿಗೆ ನಿರುದ್ಯೋಗ ಸಮಸ್ಯೆ ಪರಿಹಾರ ಆಗುತ್ತದೆ ಎಂದು ತಿಳಿಸಿದರು. ಈಗಾಗಲೇ ಗೆಜ್ಜಲಗೆರೆ ಗ್ರಾಮವು ನಗರಸಭೆ ಸೇರಿದೆ. ಹಲವು ವರ್ಷಗಳಿಂದ ಕೈಗಾರಿಕೆಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲು ಸಮಸ್ಯೆಯಾಗಿತ್ತು.&lt;/p&gt;&lt;p&gt;ಈಗ ಗುಣಮಟ್ಟ ಹಾಗೂ ನಿರಂತರ ವಿದ್ಯುತ್ ಸರಬರಾಜ ಮಾಡಲು ಈಗಾಗಲೇ 220 ಕೆ ವಿ. ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಯು ಸೋಮನಹಳ್ಳಿ ಹೊರವಲಯದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಮುಂದಿನ ವರ್ಷದೊಳಗೆ ಕಾಮಗಾರಿ ಮುಕ್ತಾವಾಗಿ ಕೈಗಾರಿಕಾ ಪ್ರದೇಶಕ್ಕೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತದೆ. ಇದರ ಜೊತೆಗೆ ನಿರಂತರ ನೀರಿನ ವ್ಯವಸ್ಥೆ ಹಾಗೂ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mla-km-uday-comments-on-protest-gejjalagere-development-gvd/articleshow-m64xz7m"/>
        </item>
        <item>
            <title><![CDATA[ಮಳೆ ಹಾನಿಗೆ ನಿರ್ಲಕ್ಷ್ಯ ಬೇಡ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಖಡಕ್ ಎಚ್ಚರಿಕೆ]]></title>
            <link>https://kannada.asianetnews.com/karnataka-districts/minister-chaluvarayaswamy-warning-officers-rain-damage-drought-monsoon-gvd/articleshow-npmm4g2</link>
            <guid isPermaLink="true">https://kannada.asianetnews.com/karnataka-districts/minister-chaluvarayaswamy-warning-officers-rain-damage-drought-monsoon-gvd/articleshow-npmm4g2</guid>
            <pubDate>Thu, 21 May 2026 22:58:26 +0530</pubDate>
            <description><![CDATA[&lt;p&gt;ಬರಗಾಲದ ಜೊತೆಗೆ ಮುಂಗಾರು ಕೂಡ ಬರುತ್ತಿದೆ. ಎರಡನ್ನು ಎದುರಿಸಲು ಸನ್ನದ್ಧರಾಗುವ ಜೊತೆಗೆ ಮಳೆಯಿಂದ ಹಾನಿ ಆದರೆ ನಿರ್ಲಕ್ಷಿಸಿದೆ ತಕ್ಷಣ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hnef3dsc66cb6ypkedkkgjhv,imgname-vdv.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಗಮಂಗಲ (ಮೇ.21):&lt;/strong&gt; ಬರಗಾಲದ ಜೊತೆಗೆ ಮುಂಗಾರು ಕೂಡ ಬರುತ್ತಿದೆ. ಎರಡನ್ನು ಎದುರಿಸಲು ಸನ್ನದ್ಧರಾಗುವ ಜೊತೆಗೆ ಮಳೆಯಿಂದ ಹಾನಿ ಆದರೆ ನಿರ್ಲಕ್ಷಿಸಿದೆ ತಕ್ಷಣ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದ ಹಲವೆಡೆ ಬರಗಾಲವಿದೆ. ಮತ್ತೆ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಬರಗಾಲದಿಂದ ರೈತರಿಗೆ ಸ್ವಲ್ಪ ನಷ್ಟವಾಗುತ್ತದೆ. ಅದೇ ಮಳೆಯಿಂದ ಹಾನಿಯಾದರೆ ಉಳುಮೆ, ಬಿತ್ತನೆ, ರಸಗೊಬ್ಬರ ಈ ಎಲ್ಲದಕ್ಕೂ ಖರ್ಚು ಮಾಡಿರುವುದರಿಂದ ಹೆಚ್ಚು ನಷ್ಟ ಉಂಟಾಗಲಿದೆ ಎಂದರು.&lt;/p&gt;&lt;p&gt;ಮಳೆಯಿಂದಾಗುವ ಹಾನಿ ಬಗ್ಗೆ ಅಧಿಕಾರಿಗಳು ಜಾಗೃತರಾಗಬೇಕು. ಮಳೆಹಾನಿ ಪರಿಹಾರದಲ್ಲಿ ನಿರ್ಲಕ್ಷ್ಯವಾದರೆ ಯಾವುದೇ ಮುಲಾಜಿಗೆ ಒಳಗಾಗದೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಳೆದ 3 ವರ್ಷಗಳಿಂದ ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಪರಿಶ್ರಮದಿಂದ ಇಲಾಖಾವಾರು ಅನುದಾನ ಶೇ.100 ರಷ್ಟು ಸದ್ಬಳಕೆಯಾಗುತ್ತಿರುವುದಕ್ಕೆ ಅಭಿನಂದಿಸುತ್ತೇನೆ. ಜಿಪಂ ಹಾಗೂ ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಕಾಮಗಾರಿಗಳು ನಿಗಧಿತ ಸಮಯದೊಳಗೆ ಟೆಂಡರ್ ಆಗಿರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕು.&lt;/p&gt;&lt;p&gt;ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿಗಳನ್ನು ಮಳೆಗಾಲಕ್ಕೂ ಮುಂಚೆ ತ್ವರಿತಗತಿಯಲ್ಲಿ ಮುಗಿಸಬೇಕು. ಶಿಥಿಲಾವಸ್ಥೆಯ ಅಂಗನವಾಡಿ ಕೇಂದ್ರಗಳು, ಶಾಲಾ ಕಟ್ಟಡಗಳಿದ್ದರೆ ಶೀಘ್ರ ಮಾಹಿತಿ ಕೊಟ್ಟಲ್ಲಿ ದುರಸ್ತಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದರು. ಕಳೆದ ವರ್ಷ 3.5 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಕೊರತೆಯಾಗಿದೆ. ಈ ಬಾರಿ ಪ್ರಧಾನ ಮಂತ್ರಿ ಅವರೇ ರಸಗೊಬ್ಬರ ಕಡಿಮೆ ಬಳಸಿ ಎಂದು ಕರೆ ಕೊಟ್ಟಿದ್ದಾರೆ. ಯಾವ ಬೆಳೆಗೆ ಎಷ್ಟು ಅವಶ್ಯವಿದೆ ಅಷ್ಟು ಮಾತ್ರ ಬಳಕೆ ಮಾಡುವಂತೆ ರೈತರಿಗೆ ಜಾಗೃತಿ ಮೂಡಿಸಬೇಕು. ಅಕ್ರಮ ರಸಗೊಬ್ಬರ ಮಾರಾಟ ಕಂಡುಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದರು.&lt;/p&gt;&lt;p&gt;ಮುಂಗಾರಿಗೆ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ಮೊದಲು ಜಮೀನು ಇಲ್ಲದವರು ರಸಗೊಬ್ಬರ ಪಡೆಯುತ್ತಿದ್ದರು. ಆದರೆ, ಈ ಬಾರಿ ಎಫ್&zwnj;ಐಡಿ ಸಂಖ್ಯೆ ಆಧಾರದ ಮೇಲೆ ರಸಗೊಬ್ಬರ ನೀಡಲಾಗುವುದು. ಜಮೀನು ಇಲ್ಲದವರು ರಸಗೊಬ್ಬರ ಪಡೆಯಲು ಸಾಧ್ಯವಿಲ್ಲ ಎಂದರು. ಸೆಸ್ಕಾಂ ಇಲಾಖೆ ಬಗ್ಗೆ ಈಗಲೂ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿವೆ. ಕಳೆದ 3 ವರ್ಷದಲ್ಲಿ ಇಲಾಖೆಯಲ್ಲಿ ಏನೆಲ್ಲಾ ಕೆಲಸಗಳಾಗಿವೆ ಎಂಬುದರ ಕುರಿತು ಸಮಗ್ರ ವರದಿ ನೀಡಬೇಕು. ನಿರಂತರ ಜ್ಯೋತಿ ಯೋಜನೆಯಡಿ ಲೋಪವಿರುವ ಕಾಮಗಾರಿ ಸರಿಪಡಿಸಬೇಕು ಎಂದು ಸೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.&lt;/p&gt;&lt;h2&gt;&lt;strong&gt;ನಿರ್ಮಾಣಕ್ಕೆ ಟೆಂಡರ್&lt;/strong&gt;&lt;/h2&gt;&lt;p&gt;ಬೆಳ್ಳೂರು ಮತ್ತು ನಾಗಮಂಗಲ ವಿಭಾಗದ ಸೆಸ್ಕಾಂ ಎಇಇ ಕಚೇರಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಮತ್ತಷ್ಟು ಹೊಸ ವಿದ್ಯುತ್ ವಿತರಣಾ ಕೇಂದ್ರ ತರಲಾಗುವುದು. ತಾಲೂಕಿನ ಅಂಚೆಚಿಟ್ಟನಹಳ್ಳಿ ಹಾಗೂ ಬುರುಡುಗುಂಟೆ ಗ್ರಾಮದಲ್ಲಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಜಾಗ ಗುರುತು ಮಾಡಲಾಗಿದೆ ಎಂದರು. ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸಿಡಿಪಿಒ ಇಲಾಖೆ ಮೇಲ್ವಿಚಾರಕರು ಪ್ರತಿ ಮನೆಗಳಿಗೆ ಖುದ್ದು ಭೇಟಿಕೊಟ್ಟು ಸೌಲಭ್ಯ ಪಡೆಯುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿ ಗ್ರಾಮವಾರು ವರದಿ ಸಿದ್ಧಪಡಿಸಬೇಕು.&lt;/p&gt;&lt;p&gt;ಲೋಪವಾದರೆ ಸಿಡಿಪಿಒ ಅವರನ್ನು ಹೊಣೆ ಮಾಡಿ ಮನೆಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು. ಹೇಮಾವತಿಯಿಂದ ಕೆರೆ- ಕಟ್ಟೆಗಳನ್ನು ತುಂಬಿಸಲು ನೀರು ಬಿಡಲಾಗಿತ್ತು. ಆದರೆ, ಕೆ.ಆರ್.ಪೇಟೆ ಮತ್ತು ಪಾಂಡವಪುರದಲ್ಲಿ ಕೆಲವು ತೊಂದರೆಗಳಾಗಿ ತಾಲೂಕಿಗೆ ನಿರೀಕ್ಷೆಯಷ್ಟು ನೀರು ಬರಲಿಲ್ಲ. ಸೂಳೆಕೆರೆಗೆ ಹೇಮಾವತಿಯಿಂದ ನೀರು ತುಂಬಿಸುವ ಕೆಲಸವಾಗುತ್ತಿದೆ. ಬೇಸಿಗೆ ಸಮಯದಲ್ಲಿ ಹೇಮಾವತಿ ಜಲಾಶಯದಿಂದ 204 ಕಿ.ಮೀ.ದೂರವಿರುವ ನಾಗಮಂಗಲ ತಾಲೂಕಿಗೆ ನೀರು ತರುವುದು ಒಂದು ದೊಡ್ಡ ಸಾಹಸ.&lt;/p&gt;&lt;p&gt;ಮುಂದಿನ ಎರಡು ದಿನಗಳ ಕಾಲ ನೀರು ಹರಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು. ಜೆಜೆಎಂಗೆ ಸಂಬಂಧಿಸಿದ 15 ಸಾವಿರ ಕೋಟಿ ರು.ಗಳ ಅನುದಾನವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಜನರಿಗೆ ತೊಂದರೆಯಾಗದಂತೆ ಕುಡಿವ ನೀರಿನ ಯೋಜನೆಗೆ ರಾಜ್ಯ ಸರ್ಕಾರವೇ ಹೆಚ್ಚು ಅನುದಾನ ಬಳಕೆ ಮಾಡುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಜೆಜೆಎಂ ಕಾಮಗಾರಿ ಪೂರ್ಣಗೊಳ್ಳಬೇಕು. ಯಾವುದೇ ಕಾಮಗಾರಿಗಳಲ್ಲಿ ವಿಳಂಬ ಮಾಡದೇ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದರು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/minister-chaluvarayaswamy-warning-officers-rain-damage-drought-monsoon-gvd/articleshow-npmm4g2"/>
        </item>
        <item>
            <title><![CDATA[ಕೆಆರ್‌ಎಸ್ ಟ್ರಯಲ್ ಬ್ಲಾಸ್ಟ್ ನಡೆಯದಿದ್ದರೂ 1.11 ಕೋಟಿ ರೂ. ಬಿಲ್, ಹಗರಣ ನಡೆದ ಬಗ್ಗೆ ದೊಡ್ಡ ಅನುಮಾನ!]]></title>
            <link>https://kannada.asianetnews.com/gallery/karnataka-districts/audit-exposes-rs1-11-crore-swindle-by-cauvery-neeravari-nigama-for-krs-dam-trial-blasts-that-never-took-place-gdp-ow0t5xy</link>
            <guid isPermaLink="true">https://kannada.asianetnews.com/gallery/karnataka-districts/audit-exposes-rs1-11-crore-swindle-by-cauvery-neeravari-nigama-for-krs-dam-trial-blasts-that-never-took-place-gdp-ow0t5xy</guid>
            <pubDate>Mon, 25 May 2026 19:33:28 +0530</pubDate>
            <description><![CDATA[&lt;p&gt;ವರದಿ:ಮಂಡ್ಯ ಮಂಜುನಾಥ&lt;/p&gt;&lt;p&gt;ಕೃಷ್ಣರಾಜಸಾಗರ ಜಲಾಶಯದ ಬಳಿ ಪರೀಕ್ಷಾರ್ಥ ಸ್ಫೋಟ ನಡೆಸದೆಯೇ,ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು 1.11ಕೋಟಿ ರೂ &amp;nbsp;ಖರ್ಚು ಮಾಡಿರುವುದು ಆಡಿಟ್ ವರದಿಯಿಂದ ಬಹಿರಂಗವಾಗಿದೆ. ಮೂರು ಬಾರಿ ಸ್ಫೋಟಕ್ಕೆ ಯತ್ನ ವಿಫಲವಾದರೂ ಇಷ್ಟು ದೊಡ್ಡ ಮೊತ್ತದ ಖರ್ಚು,ತೆರಿಗೆ ವಂಚನೆ ಅನುಮಾನಗಳಿಗೆ ಕಾರಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jz3rcr9dcn4rmye4wb1c47wc,imgname-krs-dam-1751399162156.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ:ಮಂಡ್ಯ ಮಂಜುನಾಥ&lt;/p&gt;&lt;p&gt;ಕೃಷ್ಣರಾಜಸಾಗರ ಜಲಾಶಯದ ಬಳಿ ಪರೀಕ್ಷಾರ್ಥ ಸ್ಫೋಟ ನಡೆಸದೆಯೇ,ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು 1.11ಕೋಟಿ ರೂ &amp;nbsp;ಖರ್ಚು ಮಾಡಿರುವುದು ಆಡಿಟ್ ವರದಿಯಿಂದ ಬಹಿರಂಗವಾಗಿದೆ. ಮೂರು ಬಾರಿ ಸ್ಫೋಟಕ್ಕೆ ಯತ್ನ ವಿಫಲವಾದರೂ ಇಷ್ಟು ದೊಡ್ಡ ಮೊತ್ತದ ಖರ್ಚು,ತೆರಿಗೆ ವಂಚನೆ ಅನುಮಾನಗಳಿಗೆ ಕಾರಣ.&lt;/p&gt;&lt;img&gt;&lt;p&gt;&lt;strong&gt;ಮಂಡ್ಯ: &lt;/strong&gt;ಕೃಷ್ಣರಾಜಸಾಗರ ಜಲಾಶಯದ ಬಳಿ ಪರೀಕ್ಷಾರ್ಥ ಸ್ಫೋಟ (ಟ್ರಯಲ್ ಬ್ಲಾಸ್ಟ್) ನಡೆಯದೇ ಇದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಟ್ರಯಲ್ ಬ್ಲಾಸ್ಟ್ ಹೆಸರಿನಲ್ಲಿ 1.11 ಕೋಟಿ ರು. ಖರ್ಚು ಮಾಡಿರುವುದು ಆಡಿಟ್ ವರದಿಯಿಂದ ಬೆಳಕಿಗೆ ಬಂದಿದೆ. ನಿಗಮದ ಅಧಿಕಾರಿಗಳು ಮಾಡಿರುವ ಖರ್ಚಿನ ಬಗ್ಗೆ ಅನುಮಾನಗಳು ಮೂಡಲಾರಂಭಿಸಿವೆ. ಮೊದಲ ಬಾರಿಗೆ 2016ರ ಜ.25ರಂದು ನಡೆಸಲು ಉದ್ದೇಶಿಸಿದ್ದ ಪರೀಕ್ಷಾರ್ಥ ಸ್ಫೋಟಕ್ಕೆ 44,61,536 ರು., ಎರಡನೇ ಬಾರಿ 25 ಮೇ 2022ರಲ್ಲಿ ನಡೆಸಲು ನಿರ್ಧರಿಸಿದ್ದ ಟ್ರಯಲ್ ಬ್ಲಾಸ್ಟ್&zwnj;ಗೆ 59,48,715 ರು. ಹಾಗೂ 2024ರ ಜು.7ರಂದು ನಡೆಸಲುದ್ದೇಶಿಸಿದ್ದ ಸ್ಫೋಟಕ್ಕೆ 7,55,932 ರು. ಸೇರಿ ಒಟ್ಟು 1,11,66,183 ರು.ಗಳನ್ನು ವೆಚ್ಚ ಮಾಡಿರುವುದಾಗಿ ತಿಳಿಸಿದೆ.&lt;/p&gt;&lt;img&gt;&lt;p&gt;ತೆರಿಗೆ ಕಡಿತ ಮಾಡುವ ವೇಳೆ ಮೊದಲನೇ ಬಾರಿಗೆ 3,56,922 ರು. ಕಡಿತ ಮಾಡುವುದಕ್ಕೆ 89,231 ರು., ಎರಡನೇ ಬಾರಿಗೆ 4,75,895 ರು.ಗೆ ಬದಲಾಗಿ 1,18,976 ರು. ಹಾಗೂ ಮೂರನೇ ಬಾರಿ 60,474 ರು. ಕಡಿತ ಮಾಡುವ ಬದಲು 15,119 ರು.ಗಳನ್ನು ಕಡಿತ ಮಾಡಿರುವುದನ್ನು ಲೆಕ್ಕ ಪರಿಶೋಧಕರು ಗುರುತಿಸಿದ್ದರು. ತೆರಿಗೆ ಹಣ ಕಡಿತ ಮಾಡುವ ವೇಳೆ 8,93,191 ರು.ಗಳಿಗೆ ಬದಲಾಗಿ 2,23,326 ರು. ಹಣವನ್ನು ಮಾತ್ರ ಕಡಿತಗೊಳಿಸಲಾಗಿದೆ. ಇನ್ನೂ 6,69,965 ರು. ಬಾಕಿ ಹಣವನ್ನು ಸಂಬಂಧಿಸಿದ ಏಜೆನ್ಸಿಯವರಿಂದ ವಸೂಲಿ ಮಾಡುವಂತೆ ಸೂಚಿಸಿದ್ದರು. ಅದನ್ನು ಏಜೆನ್ಸಿಯವರಿಂದ ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ಲೆಕ್ಕಪರಿಶೋಧಕರು ಆಕ್ಷೇಪವೆತ್ತಿದ್ದಾರೆ. ಒಮ್ಮೆಯೂ ಪರೀಕ್ಷಾರ್ಥ ಸ್ಫೋಟವೇ ನಡೆಯದಿದ್ದರೂ ಇಷ್ಟೊಂದು ಹಣ ಖರ್ಚಾಗಿದ್ದು ಹೇಗೆ. ಯಾವ್ಯಾವುದಕ್ಕೆ ಈ ಹಣವನ್ನು ಖರ್ಚು ಮಾಡಲಾಗಿದೆ. ವಿಜ್ಞಾನಿಗಳ ತಂಡವನ್ನು ಕರೆಸುವುದಕ್ಕೆ ಮಾಡಲಾದ ಖರ್ಚೆಷ್ಟು ಎಂಬ ವಿವರಗಳನ್ನು ತೋರಿಸಿಲ್ಲ. ಇದರಿಂದ ಸರ್ಕಾರಕ್ಕೆ ಉಂಟಾಗಿರುವ ಒಟ್ಟು ನಷ್ಟದ ವಿವರ ತಿಳಿಯದಂತಾಗಿದೆ.&lt;/p&gt;&lt;img&gt;&lt;p&gt;ಕಲ್ಲು ಗಣಿಗಾರಿಕೆಯಿಂದ ಕೆಆರ್&zwnj;ಎಸ್ ಅಣೆಕಟ್ಟೆಯ ಸುರಕ್ಷತೆಗೆ ಧಕ್ಕೆಯಾಗಲಿದೆ ಎಂಬ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ನು ಆಧರಿಸಿ ಕೆಆರ್&zwnj;ಎಸ್ ಅಣೆಕಟ್ಟು ವ್ಯಾಪ್ತಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರ ಕಲ್ಲು ಗಣಿಗಾರಿಕೆ ನಿಷೇಧ ಮಾಡಲಾಗಿತ್ತು. ಅಣೆಕಟ್ಟು ಬಳಿ ಸಿಡಿಮದ್ದು ಸ್ಫೊಟದ ಪರಿಣಾಮವನ್ನು ಅಂದಾಜಿಸಲು ಪ್ರಾಯೋಗಿಕ ಸ್ಫೊಟ (ಟ್ರಯಲ್ ಬ್ಲಾಸ್ಟ್) ಕೈಗೊಳ್ಳಲು ಪುಣೆಯ ಸಿಡಬ್ಲ್ಯುಪಿಆರ್&zwnj;ಎಸ್ ವಿಜ್ಞಾನಿಗಳ ತಂಡಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪತ್ರ ಬರೆದಿದ್ದರು. ಪರೀಕ್ಷಾರ್ಥ ಸ್ಫೋಟ ನಡೆಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ ಬಳಿಕ ಸಿಡಬ್ಲ್ಯುಪಿಆರ್&zwnj;ಎಸ್ ತಂಡ 2018 ಡಿಸೆಂಬರ್ 6 ರಿಂದ 18ರವರೆಗೆ ಕೆಆರ್&zwnj;ಎಸ್ ಅಣೆಕಟ್ಟೆಯ ಸುತ್ತ ಕಲ್ಲುಗಣಿಗಾರಿಕೆ ನಡೆಯುವ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತ್ತು. ಜ.24ರಿಂದ 5 ದಿನಗಳ ಕಾಲ ಕೆಆರ್&zwnj;ಎಸ್ ಉತ್ತರ ದಂಡೆಯ ಕಡೆ ಇರುವ ಎಲ್ಲಾ ಕಲ್ಲು ಗಣಿಗಾರಿಕೆ ಕೇಂದ್ರಗಳಲ್ಲಿ ಪ್ರಾಯೋಗಿಕ ಸ್ಫೊಟ ಕೈಗೊಳ್ಳಲು ಜಿಲ್ಲಾಡಳಿತ ಷರತ್ತಿನ ಅನುಮತಿ ನೀಡಿತ್ತು. ಆದರೆ, ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಬರಲೂ ಇಲ್ಲ, ಪರೀಕ್ಷಾರ್ಥ ಸ್ಫೋಟ ನಡೆಯಲೂ ಇಲ್ಲ.&lt;/p&gt;&lt;img&gt;&lt;p&gt;20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿರುವ ಆದೇಶ ಪ್ರಶ್ನಿಸಿ 17 ಮಂದಿ ಕ್ರಷರ್ ಮಾಲೀಕರು 2021ರಲ್ಲಿ ಹೈಕೋರ್ಟ್&zwnj;ನಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 12.1.2022ರಲ್ಲಿ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ವೈಜ್ಞಾನಿಕ ವರದಿ ಪಡೆದು, ಟ್ರಯಲ್ ಬ್ಲಾಸ್ಟ್ ನಡೆಸಿ ನಂತರ ಅನುಮತಿ ನೀಡುವಂತೆ ತಿಳಿಸಿತ್ತು. ಅಣೆಕಟ್ಟು ಸುರಕ್ಷತಾ ಸಮಿತಿ ವರದಿ ಆಧರಿಸಿ ಕಾವೇರಿ ನೀರಾವರಿ ನಿಗಮದವರು ಜಾರ್ಖಂಡ್&zwnj;ನ ಧನಾಬಾದ್&zwnj;ನಲ್ಲಿರುವ ಸಿಐಎಂಎಫ್&zwnj;ಆರ್ ತಂಡವನ್ನು ಕರೆಸಿ 25.5.2022ರಲ್ಲಿ ಟ್ರಯಲ್ ಬ್ಲಾಸ್ಟ್&zwnj;ಗೆ ಮುಂದಾದಾಗ ರೈತರಿಂದ ವಿರೋಧ ವ್ಯಕ್ತವಾಗಿತ್ತು. ಮತ್ತೆ ಕೆಆರ್&zwnj;ಎಸ್ ಬಳಿ ಗಣಿಗಾರಿಕೆಗೆ ಅನುಮತಿ ನೀಡುವಾಗ ಜಿಲ್ಲಾಧಿಕಾರಿಗಳು ಟ್ರಯಲ್ ಬ್ಲಾಸ್ಟ್ ನಡೆಸಿ ಅನುಮತಿ ನೀಡಬೇಕು ಎಂದು ರಾಜ್ಯಸರ್ಕಾರದ ಅಣೆಕಟ್ಟು ಸುರಕ್ಷಾ ಸಮಿತಿ ನಿರ್ಧಾರ ಕೈಗೊಂಡು 25 ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ನಿಷೇಧ ಜಾರಿಗೊಳಿಸಿತು.&lt;/p&gt;&lt;img&gt;&lt;p&gt;ಇದನ್ನು ಪ್ರಶ್ನಿಸಿ ಹೈಕೋರ್ಟ್&zwnj;ಗೆ ಗಣಿ ಮಾಲೀಕರು ಹೋದಾಗ 8.1.2024ರಲ್ಲಿ ಕೆಆರ್&zwnj;ಎಸ್ ಅಣೆಕಟ್ಟು ವ್ಯಾಪ್ತಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿತು. ಅದರ ಮರುದಿನವೇ 9.1.2024ರಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದಾಗ ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿತ್ತು. ಅದರಂತೆ ಕಾವೇರಿ ನೀರಾವರಿ ನಿಗಮದವರು ಜು.7ರಂದು ಪರೀಕ್ಷಾರ್ಥ ಸ್ಫೋಟಕ್ಕೆ ಜಾರ್ಖಂಡ್&zwnj;ನ ಧನಾಬಾದ್&zwnj;ನಲ್ಲಿರುವ ಸಿಐಎಂಎಫ್&zwnj;ಆರ್ ತಂಡವನ್ನು ಕರೆಸಿ ಸ್ಫೋಟ ನಡೆಸಲು ಯತ್ನಿಸಿದರೂ ಸಫಲವಾಗಲಿಲ್ಲ.&lt;/p&gt;&lt;img&gt;&lt;p&gt;ಮೂರು ಬಾರಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪರೀಕ್ಷಾರ್ಥ ಸ್ಫೋಟಕ್ಕೆ ಯತ್ನ ನಡೆಸಿದರೂ ಒಮ್ಮೆಯೂ ಒಂದು ಕಲ್ಲು ಕೂಡ ಸಿಡಿಯಲಿಲ್ಲ. ಆದರೂ 1.11 ಕೋಟಿ ರು. ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಗಿದೆ. ಒಮ್ಮೆ 44.61 ಲಕ್ಷ ರು., ಇನ್ನೊಮ್ಮೆ 59.48 ಲಕ್ಷ ರು. ಕೊನೆಯ ಬಾರಿ ಕೇವಲ 7.55 ಲಕ್ಷ ರು. ಖರ್ಚು ಮಾಡಿರುವುದಾಗಿ ತೋರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಏಜೆನ್ಸಿಯವರಿಂದ ವಸೂಲಿಯಾಗಬೇಕಾದ ತೆರಿಗೆ ಕಡಿತ ಹಣದಲ್ಲಿ 6.69 ಲಕ್ಷ ರು. ಸರ್ಕಾರಕ್ಕೆ ನಷ್ಟ ಉಂಟುಮಾಡಿರುವುದು ಕಂಡುಬಂದಿದೆ.&lt;/p&gt;&lt;img&gt;&lt;p&gt;ರೈತರ ವಿರೋಧದಿಂದಾಗಿ ಟ್ರಯಲ್&zwnj; ಬ್ಲಾಸ್ಟ್&zwnj; ಮೂರು ಬಾರಿಯೂ ನಡೆದೇ ಇಲ್ಲ. ಆದರೂ, 1.11 ಕೋಟಿ ಖರ್ಚಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. ಐಟಿ ಕಡಿತದಲ್ಲೂ ಸರ್ಕಾರಕ್ಕೆ ನಷ್ಟ ಉಂಟುಮಾಡಲಾಗಿದೆ. ಇವೆಲ್ಲವೂ ಸಂದೇಹಾಸ್ಪದ ನಡೆಯಾಗಿದೆ. ಹಾಗಾಗಿ ನಿಗಮದ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುವುದು ಅವಶ್ಯವಾಗಿದೆ.&lt;/p&gt;&lt;p&gt;ಕೆ.ಆರ್&zwnj;.ರವೀಂದ್ರ, ಸಾಮಾಜಿಕ ಹೋರಾಟಗಾರ&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/audit-exposes-rs1-11-crore-swindle-by-cauvery-neeravari-nigama-for-krs-dam-trial-blasts-that-never-took-place-gdp-ow0t5xy"/>
        </item>
        <item>
            <title><![CDATA[ಕರ್ನಾಟಕ ಹವಾಮಾನದಲ್ಲಿ ದಿಢೀರ್ ಬದಲಾವಣೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್, ಈ ಭಾಗದ ಜನರಿಗೆ ಹೈ-ಅಲರ್ಟ್!]]></title>
            <link>https://kannada.asianetnews.com/gallery/state/karnataka-weather-report-heavy-rain-thunderstorm-alert-bengaluru-may-2026-sat-owgys6v</link>
            <guid isPermaLink="true">https://kannada.asianetnews.com/gallery/state/karnataka-weather-report-heavy-rain-thunderstorm-alert-bengaluru-may-2026-sat-owgys6v</guid>
            <pubDate>Fri, 22 May 2026 13:40:26 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು ಮುಂದಿನ ಏಳು ದಿನಗಳ ಕಾಲ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಗುಡುಗು, ಸಿಡಿಲು ಹಾಗೂ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಬೆಂಗಳೂರಿನಲ್ಲೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzg9kjtw2w4t0p60t2jm9b3,imgname-capture-1779173740122.png" type="image/jpeg" height="390" width="690"/>
            <content:encoded><![CDATA[ಭಾರತೀಯ ಹವಾಮಾನ ಇಲಾಖೆಯು ಮುಂದಿನ ಏಳು ದಿನಗಳ ಕಾಲ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಗುಡುಗು, ಸಿಡಿಲು ಹಾಗೂ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಬೆಂಗಳೂರಿನಲ್ಲೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.&lt;img&gt;&lt;p&gt;&lt;strong&gt;ಬೆಂಗಳೂರು (ಮೇ 22): ರಾ&lt;/strong&gt;ಜ್ಯದಲ್ಲಿ ಮುಂಗಾರು ಪೂರ್ವ ಮಾರುತಗಳು ತೀವ್ರಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರವು ಮೇ 22 ರಿಂದ ಮುಂದಿನ ಏಳು ದಿನಗಳ ಕಾಲ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಮಾಲ್ಡೀವ್ಸ್ ಮತ್ತು ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೆ ಮುನ್ನಡೆಯಲು ಪೂರಕ ವಾತಾವರಣವಿದ್ದು, ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಗುಡುಗು, ಸಿಡಿಲು ಹಾಗೂ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರದ ಮುಖ್ಯಸ್ಥರಾದ ಡಾ. ಎನ್. ಪುವಿಯರಸನ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಜಿಲ್ಲಾವಾರು ಮಳೆ ಮುನ್ಸೂಚನೆ ಮತ್ತು ಎಚ್ಚರಿಕೆ (ಮೇ 22, 2026)&lt;/strong&gt;&lt;/p&gt;&lt;p&gt;ಉತ್ತರ ಒಳನಾಡು: ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯೊಂದಿಗೆ ಆಲಿಕಲ್ಲು ಮಳೆ ಸಂಭವಿಸುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದೆ. ವಿಜಯಪುರ, ರಾಯಚೂರು, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.&lt;/p&gt;&lt;img&gt;&lt;p&gt;&lt;strong&gt;ದಕ್ಷಿಣ ಒಳನಾಡು: &lt;/strong&gt;ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಮತ್ತು ಹಾಸನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಹಾಗೂ ಗುಡುಗು ಸಹಿತ ತೀವ್ರ ಗಾಳಿ (50-60 Kmph) ಬೀಸುವ ಮುನ್ಸೂಚನೆ ನೀಡಲಾಗಿದೆ. ತುಮಕೂರು, ಬಳ್ಳಾರಿ, ವಿಜಯನಗರ, ದಾವಣಗೆರೆ ಮತ್ತು ಚಾಮರಾಜನಗರ ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯಾಗಲಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಮಂಡ್ಯ, ರಾಮನಗರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಸಾಧಾರಣ ಮಳೆಯ ಮುನ್ಸೂಚನೆ ಇದೆ.&lt;/p&gt;&lt;p&gt;&lt;strong&gt;ಕರಾವಳಿ ಕರ್ನಾಟಕ:&lt;/strong&gt; ಉತ್ತರಾ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮೇ 22 ರಿಂದ ಮೇ 26 ರವರೆಗೆ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;&lt;strong&gt;ಮುಂದಿನ ದಿನಗಳ ಹವಾಮಾನದ ಹಾದಿ (ಮೇ 23 - ಮೇ 28)&lt;/strong&gt;&lt;/p&gt;&lt;p&gt;ಮೇ 23 ರಂದು ಬಾಗಲಕೋಟೆ, ಕೊಪ್ಪಳ, ವಿಜಯಪುರ, ತುಮಕೂರು, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ. ಮೇ 24 ರಂದು ತುಮಕೂರು, ಹಾಸನ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದ್ದು, ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇರಲಿದೆ. ಮೇ 25 ಮತ್ತು 26 ರಂದು ಮಳೆಯ ತೀವ್ರತೆ ಕೊಂಚ ಕಡಿಮೆಯಾಗಲಿದ್ದರೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇನ್ನು ಮೇ 27 ಮತ್ತು 28 ರಂದು ಕರಾವಳಿಯ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಒಳನಾಡಿನ ಹಲವೆಡೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ಲಭ್ಯವಾಗಿದೆ.&lt;/p&gt;&lt;p&gt;ರಾಜ್ಯದ ಗರಿಷ್ಠ ತಾಪಮಾನದಲ್ಲಿ ಮುಂದಿನ 5 ದಿನಗಳವರೆಗೆ ಯಾವುದೇ ಪ್ರಮುಖ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;img&gt;&lt;p&gt;&lt;strong&gt;ಸಿಲಿಕಾನ್ ಸಿಟಿ ಬೆಂಗಳೂರಿನ ಹವಾಮಾನ ಹೇಗಿರಲಿದೆ?&lt;/strong&gt;&lt;/p&gt;&lt;p&gt;ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಸಂಪೂರ್ಣವಾಗಿ ಮೋಡ ಮುಚ್ಚಿಕೊಳ್ಳಲಿದೆ. ನಗರದ ಕೆಲವು ಭಾಗಗಳಲ್ಲಿ ಭಾರೀ ಮಳೆ/ಗುಡುಗು ಸಹಿತ ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 33&deg;C ಮತ್ತು ಕನಿಷ್ಠ ತಾಪಮಾನ 20&deg;C ಇರಲಿದೆ.&lt;/p&gt;&lt;p&gt;ಮುಂದಿನ 48 ಗಂಟೆಗಳ ಅವಧಿಯಲ್ಲೂ ಸಾಧಾರಣ ಮಳೆಯೊಂದಿಗೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ತಾಪಮಾನವು 34&deg;C (ಗರಿಷ್ಠ) ಹಾಗೂ 21&deg;C (ಕನಿಷ್ಠ) ಆಸುಪಾಸಿನಲ್ಲಿರಲಿದೆ ಎಂದು ಹವಾಮಾನ ವರದಿ ತಿಳಿಸಿದೆ.&lt;/p&gt;]]></content:encoded>
            <category>mandya</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-report-heavy-rain-thunderstorm-alert-bengaluru-may-2026-sat-owgys6v"/>
        </item>
        <item>
            <title><![CDATA[ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ನಂಬಿಕೆ ಬೆಳೆಸಿಕೊಳ್ಳಬೇಕು: ಸಚಿವ ಎನ್.ಚಲುವರಾಯಸ್ವಾಮಿ]]></title>
            <link>https://kannada.asianetnews.com/karnataka-districts/kr-pete-government-hospital-n-chaluvarayaswamy-statement-gvd/articleshow-t237bge</link>
            <guid isPermaLink="true">https://kannada.asianetnews.com/karnataka-districts/kr-pete-government-hospital-n-chaluvarayaswamy-statement-gvd/articleshow-t237bge</guid>
            <pubDate>Tue, 26 May 2026 20:50:40 +0530</pubDate>
            <description><![CDATA[&lt;p&gt;ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ನಂಬಿಕೆ ಬೆಳೆಸಿಕೊಳ್ಳಬೇಕು. ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳನ್ನು ತಾಳ್ಮೆಯಿಂದ ಪರೀಕ್ಷೆ ಮಾಡಿ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hnef3dsc66cb6ypkedkkgjhv,imgname-vdv.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೆ.ಆರ್.ಪೇಟೆ (ಮೇ.26): &lt;/strong&gt;ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ನಂಬಿಕೆ ಬೆಳೆಸಿಕೊಳ್ಳಬೇಕು. ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳನ್ನು ತಾಳ್ಮೆಯಿಂದ ಪರೀಕ್ಷೆ ಮಾಡಿ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ತಂದಿದ್ದು ಎಂದು ಕೆಲವರು ಹೇಳುತ್ತಿದ್ದಾರೆ ಇದರ ಬಗ್ಗೆ ನನಗಾಗಲಿ ಆಥವಾ ಕ್ಷೇತ್ರದ ಶಾಸಕರಾದ ಎಚ್.ಟಿ.ಮಂಜುಗಾಗಲೀ ಯಾವುದೇ ಅಸೂಹೆಯಿಲ್ಲ ಎಂದರು.&lt;/p&gt;&lt;p&gt;ಒಂದು ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಮುಂದೆ ಬಂದ ಮತ್ತೊಂದು ಸರ್ಕಾರ ಮುಂದುವರಿಸುತ್ತದೆ. ಅದರಂತೆ ಆಸ್ಪತ್ರೆ ಮುಂದುವರಿದ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮತ್ತು ಕ್ಷೇತ್ರದ ಶಾಸಕ ಎಚ್.ಟಿ.ಮಂಜು ನಮ್ಮ ನಮ್ಮ ಜವಾಬ್ದಾರಿ ಅರಿತು ಪೂರ್ಣಗೊಳಿಸಿ ಕ್ಷೇತ್ರದ ಜನರಿಗೆ ಸಮರ್ಪಿಸಿದ್ದೇವೆ ಎಂದರು.&lt;/p&gt;&lt;p&gt;ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಪ್ಪಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ತಾಯಿ ಮಗು ಆಸ್ಪತ್ರೆ ನಿರ್ಮಿಸಿ ಅಗತ್ಯ ವೈದ್ಯರ ನೇಮಕ ಮಾಡಿದೆ. ಬೆಂಗಳೂರು ಮಹಾನಗರದಲ್ಲಿ ಒಂದು ಹೆರಿಗೆ ಮಾಡಿಸಿಕೊಳ್ಳಲು ಕನಿಷ್ಠ 5 ರಿಂದ 6 ಲಕ್ಷ ರು. ಹಣ ಬೇಕು. ಮೈಸೂರು, ಹಾಸನ ಮುಂತಾದ ನಗರ ಪ್ರದೇಶಗಳಲ್ಲಿ ಹೆರಿಗೆ ಮಾಡಿಸಿಕೊಂಡರೆ ಕನಿಷ್ಠ 1 ರಿಂದ 2 ಲಕ್ಷ ರು. ಬೇಕು. ಸರ್ಕಾರಿ ತಾಯಿ ಮಗು ಆಸ್ಪತ್ರೆಯಲ್ಲಿ ಒಂದೇ ನಯಾಪೈಸೆ ಖರ್ಚಿಲ್ಲದೆ ಹೆರಿಗೆ ಮಾಡಲಾಗುತ್ತದೆ. ಇದರ ಪ್ರಯೋಜನ ಪಡೆಯುವಂತೆ ಸಚಿವರು ಮನವಿ ಮಾಡಿದರು.&lt;/p&gt;&lt;p&gt;ಆಸ್ಪತ್ರೆಗೆ ಹೊಸಹೊಳಲಿನ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ಕುಂಟುಂಬಸ್ಥರು 6 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಆಸ್ಪತ್ರೆಗೆ ಮಾತ್ರವಲ್ಲದೆ ಶಾಲಾ ಕಾಲೇಜು ಮತ್ತಿತರ ಸಾರ್ವಜನಿಕ ಸಂಸ್ಥೆಗಳ ನಿರ್ಮಾಣಕ್ಕೂ ದುಂಡುಶೆಟ್ಟಿ ವಂಶಸ್ಥರು ಸುಮಾರು 50 ಎಕರೆಯಷ್ಟು ಭೂಮಿ ದಾನ ಮಾಡಿದ್ದಾರೆ. ಇಂತಹ ಮಹಾನ್ ದಾನಿಗಳ ಸೇವೆ ನಿತ್ಯ ಸ್ಮರಣೀಯ. ದಾನಿಗಳ ಕುಂಟುಂಬಕ್ಕೆ ಸೇರಿದ ವೆಂಕಟಕೃಷ್ಣ ಶೆಟ್ಟರನ್ನು ಸನ್ಮಾನಿಸಿದರು.&lt;/p&gt;&lt;p&gt;ಕೇಂದ್ರ ಸರ್ಕಾರ ರಾಜ್ಯದಲ್ಲೂ ಮತದಾರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ತಾಲೂಕಿನಲ್ಲಿ ಈಗಾಗಲೇ ಶೇ.95 ರಷ್ಟು ಮ್ಯಾಪಿಂಗ್ ಕಾರ್ಯ ಆಗಿದೆ. ಉಳಿದ ರಷ್ಟು ಆಗಬೇಕಾಗಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ನಿಮಗೆ ಯಾವುದೇ ಸರ್ಕಾರದ ಸವಲತ್ತುಗಳು ದೊರಕುವುದಿಲ್ಲ. ಜನತೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಸ್ವಯಂ ಪರಿಶೀಲನೆ ಮಾಡಿಕೊಳ್ಳುವಂತೆ ಎಚ್ಚರಿಸಿದರು.&lt;/p&gt;&lt;h2&gt;&lt;strong&gt;ಸಚಿವರಲ್ಲಿ ಮನವಿ&lt;/strong&gt;&lt;/h2&gt;&lt;p&gt;ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ದಾನಿಗಳ ಕುಟುಂಬಸ್ಥರನ್ನು ಶಾಶ್ವತವಾಗಿ ಆರೋಗ್ಯ ಸುರಕ್ಷಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡುವಂತೆ ಸರ್ಕರದ ಮಟ್ಟದಲ್ಲಿ ತೀರ್ಮಾನಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಹುಟ್ಟೂರಿನ ಜನರ ಕಲ್ಯಾಣಕ್ಕಾಗಿ ಆಸ್ಪತ್ರೆಗೆ ಮಂಜೂರಾತಿ ನೀಡಿದ್ದರು. ಅಂದು ಸಚಿವರಾಗಿದ್ದ ಕೆ.ಸಿ.ನಾರಾಯಣಗೌಡರು ಕಾಮಗಾರಿ ಆರಂಭಿಸಿದ್ದರು. ಅದನ್ನು ನನ್ನ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.&lt;/p&gt;&lt;p&gt;ನಮ್ಮ ಶಾಸ್ಪತ್ರೆಗೆ ಬರಬೇಕಾಗಿದ್ದ ಆರೋಗ್ಯ ಪರಿಕರಗಳು ಮತ್ತು ಯಂತ್ರೋಪಕರಣಗಳು ನೆರೆಯ ಕೆ.ಆರ್.ನಗರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಅವು ಅಲ್ಲಿ ಬಳಕೆಯಾಗುತ್ತಿದ್ದವು. ಇದನ್ನು ಮಾಜಿ ಸಚಿವರೇ ನನಗೆ ತಿಳಿಸಿ ಅವುಗಳನ್ನು ನಮ್ಮ ಆಸ್ಪತ್ರೆಗೆ ತರಿಸಿಕೊಳ್ಳುವಂತೆ ತಿಳಿಸಿದ್ದರು. ಈಗ ಅಲ್ಲಿ ಬಳಕೆಯಾಗಿ ಹಾಳಾಗಿರುವ ಯಂತ್ರೋಪಕರಣಗಳನ್ನು ಅಲ್ಲಿಯೇ ಬಿಟ್ಟು ಉಳಿದವುಗಳನ್ನು ಇಲ್ಲಿಗೆ ತರಲಾಗಿದೆ ಎಂದರು.&lt;/p&gt;&lt;p&gt;ಅಗತ್ಯ ವೈದ್ಯಕೀಯ ಸಿಬ್ಬಂದಿ, ಯಂತ್ರೋಪಕರಣಗಳನ್ನು ತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂಧಿಗಳ ಕೊರತೆಯಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದೆ. ಅದನ್ನು ಬಳಕೆ ಮಾಡುವ ರೆಡಿಯಾಲಿಜಿಸ್ಟ್ ಇಲ್ಲ. ಸರ್ಕಾರ ಅಗತ್ಯ ಮೂಲ ಸೌಲಭ್ಯ, ಸಿಬ್ಬಂದಿಗಳನ್ನು ಒದಗಿಸಿಕೊಟ್ಟಾಗ ಮಾತ್ರ ಸರ್ಕಾರದ ಆಶಯ ಈಡೇರುತ್ತದೆ ಎಂದರು.&lt;/p&gt;]]></content:encoded>
            <category>mandya</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kr-pete-government-hospital-n-chaluvarayaswamy-statement-gvd/articleshow-t237bge"/>
        </item>
        <item>
            <title><![CDATA[ಮಂಡ್ಯ ಜಿಲ್ಲೆಯಲ್ಲಿದೆ ಕರ್ನಾಟಕದ ಹಾಲಿವುಡ್; ಬೆಂಗ್ಳೂರಿಗರೇ ವೀಕೆಂಡ್‌ ಟ್ರಿಪ್‌ಗೆ ಬೆಸ್ಟ್ ಪ್ಲೇಸ್]]></title>
            <link>https://kannada.asianetnews.com/gallery/travel/hollywood-of-karnataka-is-located-in-mandya-district-shooting-mahadevapur-best-place-for-a-weekend-trip-mrq-tunt97d</link>
            <guid isPermaLink="true">https://kannada.asianetnews.com/gallery/travel/hollywood-of-karnataka-is-located-in-mandya-district-shooting-mahadevapur-best-place-for-a-weekend-trip-mrq-tunt97d</guid>
            <pubDate>Thu, 04 Jun 2026 13:13:20 +0530</pubDate>
            <description><![CDATA[ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮವು 'ಕರ್ನಾಟಕದ ಹಾಲಿವುಡ್' ಎಂದೇ ಪ್ರಸಿದ್ಧವಾಗಿತ್ತು. ಇಂದು ಈ ಹಚ್ಚಹಸಿರಿನಿಂದ ಕೂಡಿದ, ಕಾವೇರಿ ನದಿ ತೀರದ ಸುಂದರ ತಾಣವು ಪ್ರಿ-ವೆಡ್ಡಿಂಗ್ ಫೋಟೋಶೂಟ್&zwnj;ಗೆ ಮತ್ತು ವೀಕೆಂಡ್ ಟ್ರಿಪ್&zwnj;ಗೆ ಜನಪ್ರಿಯವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt8rx00fb0pqmf09egq9jkfj,imgname-shooting-mahadevapur--3--1780558495759.jpg" type="image/jpeg" height="390" width="690"/>
            <content:encoded><![CDATA[ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮವು 'ಕರ್ನಾಟಕದ ಹಾಲಿವುಡ್' ಎಂದೇ ಪ್ರಸಿದ್ಧವಾಗಿತ್ತು. ಇಂದು ಈ ಹಚ್ಚಹಸಿರಿನಿಂದ ಕೂಡಿದ, ಕಾವೇರಿ ನದಿ ತೀರದ ಸುಂದರ ತಾಣವು ಪ್ರಿ-ವೆಡ್ಡಿಂಗ್ ಫೋಟೋಶೂಟ್&zwnj;ಗೆ ಮತ್ತು ವೀಕೆಂಡ್ ಟ್ರಿಪ್&zwnj;ಗೆ ಜನಪ್ರಿಯವಾಗಿದೆ.&lt;img&gt;&lt;p&gt;ವೀಕೆಂಡ್ ಬಂದ್ರೆ ಟ್ರಿಪ್ ಮಾಡಬೇಕು ಅನ್ನೋದು ಬೆಂಗಳೂರು ಜನತೆಯ ಆಸೆ. ಮಂಡ್ಯ ಜಿಲ್ಲೆಯಲ್ಲಿ ಸುಂದರವಾದ ತಾಣವವೊಂದಿದ್ದು, ನಿಮಗೆ ಗೋವಾದ ಅನುಭವವನ್ನು ನೀಡುತ್ತದೆ. ಇಲ್ಲಿಯ ನಿಸರ್ಗ ಸೌಂದರ್ಯ ಸವಿಯುತ್ತಾ ಕುಳಿತ್ರೆ ಸಮಯ ಹೋಗಿದ್ದೇ ಗೊತ್ತಾಗಲ್ಲ. ಈ ಪ್ಲೇಸ್ ಯಾವುದು ಎಂದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;90ರ ದಶಕದಲ್ಲಿ ಈ ಸ್ಥಳ ಕರ್ನಾಟಕದ ಹಾಲಿವುಡ್ ಆಗಿತ್ತು. ಈ ಗ್ರಾಮದಲ್ಲಿ ಒಂದಿಲ್ಲೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಸ್ಟಾರ್ ಕಲಾವಿದರನ್ನು ನೋಡಲು ಜನರು ಮಂಡ್ಯ ಜಿಲ್ಲೆಯಲ್ಲಿರುವ ಈ ಗ್ರಾಮಕ್ಕೆ ಬರುತ್ತಿದ್ದರು. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಸಿನಿಮಾ ನಿರ್ದೇಶಕರು ಹೊರಾಂಗಣ ಚಿತ್ರೀಕರಣಕ್ಕೆ ಈ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ನಿರಂತರವಾಗಿ ಚಿತ್ರೀಕರಣ ನಡೆಯುತ್ತಿರೋದರಿಂದ ಇದನ್ನು ಕರ್ನಾಟಕದ ಹಾಲಿವುಡ್ ಎಂದು ಕರೆಯಲಾಗುತ್ತಿತ್ತು.&lt;/p&gt;&lt;img&gt;&lt;p&gt;ಮಂಡ್ಯದ ಕೊಪ್ಪಲು, ಅಂದ್ರೆ ಮಹದೇವಪುರ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಮಹದೇವಪುರ ಗ್ರಾಮ ಬರುತ್ತದೆ. ಮಂಡ್ಯ ನಗರದಿಂದ ಕೇವಲ 28 ಕಿ.ಮೀ. ಮತ್ತು ಶ್ರೀರಂಗಪಟ್ಟಣದಿಂದ 15 ಕಿ.ಮೀ ದೂರದಲ್ಲಿದೆ ಈ ಸುಂದರವಾದ ಸ್ಥಳ. ಶೂಟಿಂಗ್ ಮಹದೇವಪುರ ಅಂತಾನೇ ಈ ಗ್ರಾಮ ಜನಪ್ರಿಯವಾಗಿದೆ.&lt;/p&gt;&lt;img&gt;&lt;p&gt;ಸುತ್ತಲೂ ಭತ್ತದ ಗದ್ದೆ, ರಸ್ತೆಯುದ್ದಕ್ಕೂ ತೆಂಗಿನಮರಗಳು, ಸ್ವಚ್ಛಂದ ಕಾವೇರಿ ನದಿ, ಹೂವಿನ ತೋಟಗಳು, ಪಕ್ಷಿದಾಮ ಸೇರಿದಂತೆ ಇಡೀ ಪ್ರದೇಶ ಹಚ್ಚಹಸಿರಿನಿಂದ ಕೂಡಿದೆ. ನದಿತೀರದಲ್ಲಿ ಬೋರದೇವರ ದೇವಸ್ಥಾನವಿದ್ದು, ವರ್ಷವಿಡೀ ತಂಪಾದ ವಾತಾವರಣವನ್ನು ಹೊಂದಿರೋದರಿಂದ ಕುಟುಂಬ ಸಮೇತರಾಗಿ ಈ ಸ್ಥಳಕ್ಕೆ ಭೇಟಿ ನೀಡಬಹುದು. ಇಂದು ಈ ಪ್ರದೇಶ ಪ್ರಿವೆಡ್ಡಿಂಗ್ ಸ್ಪಾಟ್ ಆಗಿ ಬದಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗೆಳೆಯನೊಂದಿಗೆ ಜಲಕ್ರೀಡೆಯಲ್ಲಿ ತೊಡಗಿದ್ದಾಗ ಇಬ್ಬರು ಯುವತಿಯರ ನಡುವೆ ಶುರುವಾದ ಜಗಳ&lt;/strong&gt;&lt;/p&gt;&lt;img&gt;&lt;p&gt;90ರ ದಶಕದಲ್ಲಿ ಇಲ್ಲಿನ ಜನರಿಗೆ ಚಿತ್ರೀಕರಣ ಕಾಲಕ್ಕೆ ತಮ್ಮ ದನಕರುಗಳನ್ನು ಕ್ಯಾಮೆರಾ ಮುಂದೆ ಒಂದು ಕ್ಷಣ ನಡೆಸಿಕೊಂಡು ಹೋಗು ಎಂದರೆ ನೂರು ರೂಪಾಯಿ ಕೇಳುತ್ತಿದ್ದರು. ಸಿನಿಮಾ ನಟರನ್ನು ನೋಡಲು ಮನೆತನಕ ಹೋದರೂ ಸಿಗದವರು ಇಲ್ಲಿ ಸಿಗುತ್ತಿದ್ದರು. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲೂ ಸಹ ಪೋಟೋಗ್ರಾಫರಗಳೂ ಸಹ ಹಾಜರಿರುತ್ತಿದ್ದರು.ಈ ಗ್ರಾಮದಲ್ಲಿ ಹೊರಾಂಗಣ ಚಿತ್ರೀಕರಣ ಮಾಡಿದ ಚಿತ್ರಗಳಲ್ಲಿ ಅತ್ಯಂತ ಯಶಸ್ವಿಯಾದ ಚಿತ್ರ ಜನುಮದ ಜೋಡಿ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬತ್ತಿರುವ ಬೋರ್&zwnj;ವೆಲ್&zwnj;ನ್ನು ಮೂರು ವಿಧಾನಗಳಿಂದ ರೀಚಾರ್ಜ್ ಮಾಡಿ; ನೀರಿನ ಸಮಸ್ಯೆ ಇರಲ್ಲ&lt;/strong&gt;&lt;/p&gt;]]></content:encoded>
            <category>mandya</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/travel/hollywood-of-karnataka-is-located-in-mandya-district-shooting-mahadevapur-best-place-for-a-weekend-trip-mrq-tunt97d"/>
        </item>
        <item>
            <title><![CDATA[ರಾಜ್ಯಸಭೆ ಚುನಾವಣೆ ರೇಸ್‌ನಲ್ಲಿ ಸುಮಲತಾ: ಡಿಕೆಶಿ ಸಿಎಂ ಆಗ್ತಿರೋದಕ್ಕೂ ಇದಕ್ಕೂ ಇರುವ ಕನೆಕ್ಷನ್‌ ಏನು? ಬಿಜೆಪಿ ಮಾಸ್ಟರ್‌ ಪ್ಲಾನ್ ಬಯಲು!]]></title>
            <link>https://kannada.asianetnews.com/politics/sumalatha-ambareesh-in-the-race-for-rajya-sabha-elections-what-bjps-master-plan-rav/articleshow-udd8ras</link>
            <guid isPermaLink="true">https://kannada.asianetnews.com/politics/sumalatha-ambareesh-in-the-race-for-rajya-sabha-elections-what-bjps-master-plan-rav/articleshow-udd8ras</guid>
            <pubDate>Tue, 02 Jun 2026 06:33:45 +0530</pubDate>
            <description><![CDATA[&lt;p&gt;ರಾಜ್ಯಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು, ಬಿಜೆಪಿ ಪಾಳಯದಿಂದ ಸುಮಲತಾ ಅಂಬರೀಷ್ ಅವರ ಹೆಸರು ಮುಂಚೂಣಿಯಲ್ಲಿದೆ. ಜೆಡಿಎಸ್&zwnj;ನ ದೇವೇಗೌಡರಿಗೆ ಬೆಂಬಲ ನೀಡದಿದ್ದರೆ, ಸುಮಲತಾ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke9t2tqckvqh49v1b437294f,imgname-sumalatha-ambareesh--3--1767708388076.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.2):&lt;/strong&gt; ರಾಜ್ಯಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ಪಾಳೆಯದಿಂದ ಮಾಜಿ ಸಂಸದೆ ಸುಮಲತಾ ಅಂಬರೀಷ್(Sumalata Ambareesh) ಅವರ ಹೆಸರು ಮುಂಚೂಣಿಗೆ ಬಂದಿದೆ.&lt;/p&gt;&lt;p&gt;ಹಲವು ದಿನಗಳ ಹಿಂದೆ ನಡೆದ ರಾಜ್ಯ ಬಿಜೆಪಿ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ(DV Sadanandagowda) ಹಾಗೂ ಮಾಜಿ ಶಾಸಕ ನಿರ್ಮಲ್&zwnj; ಕುಮಾರ್ ಸುರಾನ ಅವರ ಹೆಸರುಗಳು ಪ್ರಮುಖವಾಗಿ ಪ್ರಸ್ತಾಪವಾಗಿ ವರಿಷ್ಠರಿಗೆ ರವಾನಿಸಲಾಗಿತ್ತು.&lt;/p&gt;&lt;p&gt;ಇದೀಗ ಆಡಳಿತಾರೂಢ ಕಾಂಗ್ರೆಸ್(Congress) ಪಾಳೆಯದಲ್ಲಿ ಮಹತ್ತರ ಬದಲಾವಣೆಯಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ.ಶಿವಕುಮಾರ್(DK Shivakumar) ಅವರು ಮುಖ್ಯಮಂತ್ರಿ ಗಾದಿ ಏರಲು ಸಜ್ಜಾಗುತ್ತಿದ್ದಂತೆಯೇ ಸುಮಲತಾ ಅಂಬರೀಷ್&zwnj; ಅವರ ಹೆಸರು ಬಲವಾಗಿ ಕೇಳಿಬಂದಿದ್ದು, ಖುದ್ದು ಬಿಜೆಪಿ ವರಿಷ್ಠರೇ ಆಸಕ್ತಿ ತೋರಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;ಗೌಡರ ಆಯ್ಕೆ ಬಗ್ಗೆ ಬಗೆಹರಿಯದ ಗೊಂದಲ:&lt;/h2&gt;&lt;p&gt;ಈ ನಡುವೆ ಸಿಗುವ ಒಂದು ಸ್ಥಾನಕ್ಕೆ ಮಾಜಿ ಪ್ರಧಾನಿ ಹಾಗೂ ಮಿತ್ರ ಪಕ್ಷವಾದ ಜೆಡಿಎಸ್&zwnj;ನ ರಾಷ್ಟ್ರೀಯ ಅಧ್ಯಕ್ಷ ಎಚ್&zwnj;.ಡಿ.ದೇವೇಗೌಡ(HD Devegowda)ರನ್ನು ಪರಿಗಣಿಸಲು ವರಿಷ್ಠರ ಮಟ್ಟದಲ್ಲಿ ಚರ್ಚೆ ನಡೆಸುತ್ತಿದೆಯಾದರೂ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ದೇವೇಗೌಡರಿಗೆ ಬೆಂಬಲ ನೀಡುವುದು ಬೇಡ ಎಂದಾದಲ್ಲಿ ಬಿಜೆಪಿಯಿಂದಲೇ ಸುಮಲತಾ ಅಂಬರೀಷ್&zwnj; ಹೆಸರು ಅಂತಿಮಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ.&lt;/p&gt;&lt;p&gt;ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಬೆಂಬಲ ನೀಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸದಸ್ಯರಾಗಿದ್ದ ಸುಮಲತಾ ಅವರು ಜೆಡಿಎಸ್&zwnj; ಪಕ್ಷ ಎನ್&zwnj;ಡಿಎ ಭಾಗವಾದ ಬಳಿಕ ಎಚ್&zwnj;.ಡಿ.ಕುಮಾರಸ್ವಾಮಿ ಅವರಿಗೆ ಆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆ ಬಳಿಕ ಸುಮಲತಾ ಅವರಿಗೆ ಎರಡು ವರ್ಷಗಳಾದರೂ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಇದೀಗ ಅವರ ವರ್ಚಸ್ಸು ಮತ್ತು ರಾಜಕೀಯ ಶಕ್ತಿ ಬಳಸಿಕೊಳ್ಳುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಚಿಂತನೆ ನಡೆದಿದೆ. ಅಂತಿಮವಾಗಿ ಟಿಕೆಟ್ ಘೋಷಣೆಯಾಗುವವರೆಗೆ ಕಾದು ನೋಡಬೇಕಿದೆ.&lt;/p&gt;]]></content:encoded>
            <category>mandya</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/sumalatha-ambareesh-in-the-race-for-rajya-sabha-elections-what-bjps-master-plan-rav/articleshow-udd8ras"/>
        </item>
        <item>
            <title><![CDATA[ಬರಾಕ್ ಒಬಾಮಾ ಮಂಡ್ಯ ಭೇಟಿ ಹಿನ್ನೆಲೆ, ಈ ಹಳ್ಳಿಯ ರಸ್ತೆ ಅಭಿವೃದ್ಧಿಗೆ ₹11.4ಕೋಟಿ ಮಂಜೂರು ಮಾಡಿದ ರಾಜ್ಯ ಕ್ಯಾಬಿನೆಟ್]]></title>
            <link>https://kannada.asianetnews.com/karnataka-districts/karnataka-cabinet-approves-mandya-hikes-budget-for-barack-obama-and-dalai-lama-to-visit-gdp/articleshow-yew2lti</link>
            <guid isPermaLink="true">https://kannada.asianetnews.com/karnataka-districts/karnataka-cabinet-approves-mandya-hikes-budget-for-barack-obama-and-dalai-lama-to-visit-gdp/articleshow-yew2lti</guid>
            <pubDate>Sun, 24 May 2026 18:22:25 +0530</pubDate>
            <description><![CDATA[ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಮಂಡ್ಯ ಭೇಟಿಯ ನಿರೀಕ್ಷೆಯಲ್ಲಿ, ರಾಜ್ಯ ಸರ್ಕಾರವು ಹಲ್ಲೆಗೆರೆ ಗ್ರಾಮದ 7.5 ಕಿ.ಮೀ ರಸ್ತೆ ಅಭಿವೃದ್ಧಿಗೆ ₹11.4 ಕೋಟಿ ಅನುದಾನ ಮಂಜೂರು ಮಾಡಿದೆ. ದಲೈ ಲಾಮಾ ಕೂಡ ಭಾಗವಹಿಸಲಿರುವ ಈ ಕಾರ್ಯಕ್ರಮವು, ಡಾ. ಲಕ್ಷ್ಮಿ ನರಸಿಂಹ ಮೂರ್ತಿ ನೇತೃತ್ವದ ₹80 ಕೋಟಿ ವೆಚ್ಚದ ಅಂತರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರದ ಶಿಲಾನ್ಯಾಸ ಸಮಾರಂಭವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksd0h5p9gjkz9mh4xpxqyyp2,imgname-barack-obama-1779626972871.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಜಾಗತಿಕ ಮಟ್ಟದ ಗಣ್ಯರ ಭೇಟಿಯು ಸ್ಥಳೀಯವಾಗಿ ಮೂಲಸೌಕರ್ಯದ ಆದ್ಯತೆಗಳನ್ನು ಎಷ್ಟು ತ್ವರಿತವಾಗಿ ಬದಲಾಯಿಸಬಲ್ಲದು ಎಂಬುದಕ್ಕೆ ಮಂಡ್ಯ ಜಿಲ್ಲೆಯ ಈ ವಿದ್ಯಮಾನವೊಂದು ಸಾಕ್ಷಿಯಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಪತ್ನಿ, ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರ ಭೇಟಿಯ ಹಿನ್ನೆಲೆಯಲ್ಲಿ, ಮಂಡ್ಯದ ಹೊರವಲಯದ ಹಳ್ಳಿಯೊಂದರ 7.5 ಕಿಲೋಮೀಟರ್ ಉದ್ದದ ರಸ್ತೆಯನ್ನು ಬರೋಬ್ಬರಿ ₹11.4 ಕೋಟಿ ವೆಚ್ಚದಲ್ಲಿ ನವೀಕರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ.&lt;/p&gt;&lt;p&gt;ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರದ ಶಿಲಾನ್ಯಾಸ ಸಮಾರಂಭದಲ್ಲಿ ಒಬಾಮಾ ದಂಪತಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ, ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಹಲ್ಲೆಗೆರೆ ಗ್ರಾಮದ ಬಳಿಯ ಎಸ್&zwnj;ಐ ಕೋಡಿಹಳ್ಳಿ ಗೇಟ್&zwnj;ನಿಂದ ಬಸರಾಳು-ಕೊಪ್ಪ ರಸ್ತೆಗೆ ಸಂಪರ್ಕ ಕಲ್ಪಿಸುವ, ಸದ್ಯ ಕಳಪೆ ಸ್ಥಿತಿಯಲ್ಲಿರುವ ರಸ್ತೆಯ ಆಧುನೀಕರಣ ಕಾಮಗಾರಿಗೆ ಅಧಿಕೃತವಾಗಿ ಅನುಮೋದನೆ ನೀಡಿದೆ.&lt;/p&gt;&lt;h2&gt;ದಲೈ ಲಾಮಾ ಸೇರಿದಂತೆ ಜಾಗತಿಕ ಗಣ್ಯರ ದಂಡು&lt;/h2&gt;&lt;p&gt;ಭೂತಾಯ್ ಟ್ರಸ್ಟ್ ಪ್ರಾಯೋಜಿಸುತ್ತಿರುವ ಈ ಬೃಹತ್ ಕಾರ್ಯಕ್ರಮಕ್ಕೆ ಕೇವಲ ಒಬಾಮಾ ದಂಪತಿ ಮಾತ್ರವಲ್ಲದೆ, ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಸೇರಿದಂತೆ ವಿಶ್ವದ ಹಲವು ಪ್ರಮುಖ ಗಣ್ಯರು ಆಗಮಿಸಲಿದ್ದಾರೆ. ಗಣ್ಯರ ಸಂಚಾರಕ್ಕೆ ಮತ್ತು ಕಾರ್ಯಕ್ರಮದ ಭದ್ರತೆಯ ದೃಷ್ಟಿಯಿಂದ ಈ ರಸ್ತೆಯ ನವೀಕರಣ ಅತ್ಯಂತ ಅನಿವಾರ್ಯವಾಗಿದೆ.&lt;/p&gt;&lt;p&gt;ಯೋಜನೆಯ ಮಹತ್ವದ ಕುರಿತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿಕೆ ನೀಡಿ, &quot;ಭೂತಾಯ್ ಟ್ರಸ್ಟ್ ವತಿಯಿಂದ ಇಲಾಖೆಗೆ ಬಂದಿದ್ದ ಬಹುತೇಕ ಎಲ್ಲಾ ವಿನಂತಿಗಳನ್ನು ಸರ್ಕಾರ ಸಕಾರಾತ್ಮಕವಾಗಿ ಪೂರೈಸಿದೆ. ಈ 7.5 ಕಿ.ಮೀ. ಉದ್ದದ ರಸ್ತೆಯು ಅತ್ಯಂತ ನಿರ್ಣಾಯಕವಾಗಿದ್ದು, ಇದು ಗಣ್ಯರಿಗಾಗಿ ನಿರ್ಮಿಸಲಾಗುವ ಹೆಲಿಪ್ಯಾಡ್ ಅನ್ನು ಮುಖ್ಯ ರಸ್ತೆ ಹಾಗೂ ಕಾರ್ಯಕ್ರಮ ನಡೆಯುವ ಮುಖ್ಯ ಸ್ಥಳಕ್ಕೆ ಸಂಪರ್ಕಿಸುತ್ತದೆ. ಈ ರಸ್ತೆಯ ಕೆಲವು ಭಾಗಗಳನ್ನು ಈ ಹಿಂದೆ ₹20 ಕೋಟಿ ವೆಚ್ಚದಲ್ಲಿ ಪುನರ್ನಿರ್ಮಿಸಲಾಗಿದ್ದರೂ, ಈ ನಿರ್ದಿಷ್ಟ ಭಾಗ ಮಾತ್ರ ಬಾಕಿ ಉಳಿದಿತ್ತು. ರಾಜ್ಯ ಸರ್ಕಾರವು ಈಗ ಲೋಕೋಪಯೋಗಿ ಇಲಾಖೆಗೆ (PWD) ಈ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳಲು ಹಣವನ್ನು ಮಂಜೂರು ಮಾಡಿದೆ.&quot;&lt;/p&gt;&lt;h2&gt;ಮೂರು ವರ್ಷಗಳ ಕಾಲ ವಿಳಂಬವಾಗಿದ್ದ ಕಾರ್ಯಕ್ರಮ&lt;/h2&gt;&lt;p&gt;ಮಂಡ್ಯ ಜಿಲ್ಲಾ ಅಧಿಕಾರಿಗಳ ಪ್ರಕಾರ, ಈ ಜಾಗತಿಕ ಮಟ್ಟದ ಕಾರ್ಯಕ್ರಮವನ್ನು ಮೂಲತಃ 2023ರ ಡಿಸೆಂಬರ್ ತಿಂಗಳಿನಲ್ಲೇ ನಡೆಸಲು ಯೋಜಿಸಲಾಗಿತ್ತು. ಆದರೆ ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿಯಲ್ಲಿನ ವಿಳಂಬ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ದಿನಾಂಕಗಳ ಲಭ್ಯತೆಯ ಕೊರತೆಯಿಂದಾಗಿ ಈ ಯೋಜನೆ ಸರಿಸುಮಾರು ಮೂರು ವರ್ಷಗಳ ಕಾಲ ಮುಂದೂಡಲ್ಪಟ್ಟಿತ್ತು. &quot;ಟ್ರಸ್ಟ್ ವತಿಯಿಂದ ಇನ್ನೂ ಅಧಿಕೃತ ಕಾರ್ಯಕ್ರಮದ ದಿನಾಂಕವನ್ನು ಅಂತಿಮಗೊಳಿಸಿಲ್ಲವಾದರೂ, ಅದಕ್ಕೂ ಮುನ್ನವೇ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ&quot; ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.&lt;/p&gt;&lt;h2&gt;ಏನಿದು ₹80 ಕೋಟಿಯ ಬೃಹತ್ ಧ್ಯಾನ ಕೇಂದ್ರ?&lt;/h2&gt;&lt;p&gt;ಹಲ್ಲೆಗೆರೆ ಗ್ರಾಮದ ಬಳಿ ಜಾಗತಿಕ ಗಮನ ಸೆಳೆಯುತ್ತಿರುವ ಈ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರವನ್ನು ಒಟ್ಟು ₹80 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ನೇತೃತ್ವ: ಅಮೆರಿಕ ಮೂಲದ ಭಾರತೀಯ ವೈದ್ಯರಾದ ಡಾ. ಲಕ್ಷ್ಮಿ ನರಸಿಂಹ ಮೂರ್ತಿ ಅವರು ಈ ಯೋಜನೆಯ ನೇತೃತ್ವ ವಹಿಸಿದ್ದಾರೆ.&lt;/p&gt;&lt;p&gt;ಡಾ. ಲಕ್ಷ್ಮಿ ನರಸಿಂಹ ಮೂರ್ತಿ ಅವರು ಅಮೆರಿಕದ ಮಾಜಿ ಸರ್ಜನ್ ಜನರಲ್ ವಿವೇಕ್ ಮೂರ್ತಿ ಅವರ ತಂದೆಯಾಗಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ವಿವೇಕ್ ಮೂರ್ತಿ ಅವರು ಈ ಹಿಂದೆ ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರಿಗೆ ವೈದ್ಯಕೀಯ ಸಲಹೆಗಾರರಾಗಿ ಅತ್ಯಂತ ಆಪ್ತವಾಗಿ ಸೇವೆ ಸಲ್ಲಿಸಿದ್ದರು. ಇದೇ ಪ್ರಭಾವಶಾಲಿ ಒಡನಾಟವು ಇಂದು ಅಮೆರಿಕದ ಮಾಜಿ ಅಧ್ಯಕ್ಷರನ್ನು ಮಂಡ್ಯದ ಹಳ್ಳಿಯೊಂದಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.&lt;/p&gt;&lt;p&gt;ಒಬಾಮಾ ದಂಪತಿ ಹಾಗೂ ದಲೈ ಲಾಮಾ ಅವರ ಈ ಭೇಟಿಯು ಮಂಡ್ಯ ಜಿಲ್ಲೆಯನ್ನು ಅಂತಾರಾಷ್ಟ್ರೀಯ ಭೂಪಟದಲ್ಲಿ ಗುರುತಿಸುವಂತೆ ಮಾಡಲಿದ್ದು, ಸ್ಥಳೀಯ ಗ್ರಾಮೀಣ ಭಾಗದ ರಸ್ತೆ ಮತ್ತು ಮೂಲಸೌಕರ್ಯಗಳು ಜಾಗತಿಕ ಮಟ್ಟಕ್ಕೆ ಮೇಲ್ದರ್ಜೆಗೇರಲು ಪ್ರೇರಣೆಯಾಗಿದೆ.&lt;/p&gt;]]></content:encoded>
            <category>mandya</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-cabinet-approves-mandya-hikes-budget-for-barack-obama-and-dalai-lama-to-visit-gdp/articleshow-yew2lti"/>
        </item>
    </channel>
</rss>
