<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 06 Apr 2026 07:35:53 +0530</lastBuildDate>
        <atom:link href="https://kannada.asianetnews.com/rss/magazine" rel="self" type="application/rss+xml"/>
        <item>
            <title><![CDATA[ಪದ್ಮ ಪ್ರಶಸ್ತಿ ಘನತೆ ಹೆಚ್ಚಿಸಿದ ಶತಾವಧಾನಿ ಡಾ.ಆರ್ ಗಣೇಶ್‌‌ಗೆ ನೀಡಿದ ಗೌರವ!]]></title>
            <link>https://kannada.asianetnews.com/karnataka-districts/shatavadhani-dr-r-ganesh-padma-bhushan-award-2026-karnataka-pride-san/articleshow-09gggtv</link>
            <guid isPermaLink="true">https://kannada.asianetnews.com/karnataka-districts/shatavadhani-dr-r-ganesh-padma-bhushan-award-2026-karnataka-pride-san/articleshow-09gggtv</guid>
            <pubDate>Mon, 26 Jan 2026 13:01:35 +0530</pubDate>
            <description><![CDATA[&lt;p&gt;ಶತಾವಧಾನಿ ಡಾ. ಆರ್ ಗಣೇಶರು ಸ್ವಯಮಾಚಾರ್ಯ ಮಾರ್ಗದಲ್ಲಿ ಹತ್ತಾರು ಶಾಸ್ತ್ರ-ಕಲೆಗಳನ್ನು ಕರಗತ ಮಾಡಿಕೊಂಡ 'ಸಂಸ್ಕೃತಿಯ ಪ್ರಹರಿ'. ಕನ್ನಡದಲ್ಲಿ ಅವಧಾನಕಲೆಯನ್ನು ಪುನರುಜ್ಜೀವನಗೊಳಿಸಿದ ಇವರು, 1200ಕ್ಕೂ ಹೆಚ್ಚು ಅವಧಾನಗಳು &amp;nbsp;ಮೂಲಕ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfwk6fzn1h92v9x5se7ffqsr,imgname-shatavadhani-dr-r-ganesh-1769412444149.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಚ್ ಎ ವಾಸುಕಿ, ಸಂಸ್ಕೃತಿ ಚಿಂತಕರು&lt;/strong&gt;&lt;/p&gt;&lt;p&gt;ನಾಡೋಜ ಡಾ. ಎಸ್ ಆರ್ ರಾಮಸ್ವಾಮಿಯವರ ಮಾತುಗಳಲ್ಲಿ ಬಣ್ಣಿಸುವುದಾದರೆ ಇವರು &quot;ವಿದ್ವಲ್ಲೋಕದ ವಿಸ್ಮಯ&quot; ಮಾತ್ರವಲ್ಲ, &quot;ಸಂಸ್ಕೃತಿಯ ಪ್ರಹರಿ&quot; ಕೂಡ. ಈ ಎರಡು ಪದಪುಂಜಗಳಲ್ಲಿ ರಾಮಸ್ವಾಮಿಗಳು ಶತಾವಧಾನಿ ಡಾ. ಆರ್ ಗಣೇಶರ ವ್ಯಕ್ತಿತ್ವವನ್ನಷ್ಟೇ ಅಲ್ಲ ವಿದ್ವಚ್ಚಾರಿತ್ರ್ಯವನ್ನೇ ಹಿಡಿದಿಟ್ಟಿದ್ದಾರೆ ಎಂಬುದು ಗಣನೀಯ.&lt;/p&gt;&lt;p&gt;ಇಂದು ಹತ್ತಾರು ಶಾಸ್ತ್ರ-ಕಲೆಗಳ ವಿಷಯದಲ್ಲಿ ಕಡೆಯ ಮಾತು ಎಂಬಂತಿರುವ ಗಣೇಶರು ಅವುಗಳಲ್ಲಿ ಯಾವುದನ್ನೂ ಗುರುಮುಖೇನ ಅಥವಾ ವಿಶ್ವವಿದ್ಯಾಲಯಗಳಿಗೆ ಹೋಗಿ ಕಲಿಯಲಿಲ್ಲ; ಕಲಿತದ್ದೆಲ್ಲ ಸ್ವಯಮಚಾರ್ಯಮಾರ್ಗದಲ್ಲೇ. ಇದು ವಿಸ್ಮಯದ ಮಾತಾಯಿತು. ಇನ್ನು ಪ್ರಹರಿ ಎಂದರೆ ದ್ವಾರಪಾಲಕ ಎಂದರ್ಥ.&lt;/p&gt;&lt;p&gt;&quot;ಸನಾತನ ಭಾರತೀಯ ಕಲೆ-ಸಂಸ್ಕೃತಿ&quot; ಎಂಬ ಮೌಲ್ಯಸೌಧದಲ್ಲಿ ನೆಮ್ಮದಿಯನ್ನು ಕಾಣುತ್ತಿರುವ ಹಲವರಿಗೆ ಗಣೇಶರು ನಮ್ಮ ಕಲೆ-ಮೌಲ್ಯಗಳನ್ನು ಕಾಯುತ್ತಿದ್ದಾರೆ ಎಂಬ ನೆಮ್ಮದಿ. ಕಾವ್ಯ-ಸಂಗೀತ-ನೃತ್ಯ-ಚಿತ್ರ-ಶಿಲ್ಪಾದಿಗಳಲ್ಲಿ ತೊಡಗಿಸಿಕೊಂಡವರಿಗೆ ಇವರು ಸೌಂದರ್ಯಮಾರ್ಗದರ್ಶಿ. ಸಂಸ್ಕೃತ-ಕನ್ನಡ-ತೆಲುಗು ಮುಂತಾದ ಹಲವು ಭಾಷೆಗಳಲ್ಲಿ ಇವರು ಉನ್ನತಸ್ತರದ ಸೃಷ್ಟಿಶೀಲ ಆಶುಕವಿ.&lt;/p&gt;&lt;p&gt;ಕನ್ನಡದ ಮಟ್ಟಿಗೆ ಹೇಳುವುದಾದರೆ, ವಿಸ್ಮೃತಪ್ರಾಯವಾಗಿದ್ದ ಅವಧಾನಕಲೆಯನ್ನು ಉಜ್ಜೀವನಗೊಳಿಸಿ ಅದನ್ನು ಶಿಖರಾಗ್ರಕ್ಕೆ ಮುಟ್ಟಿಸಿದ ಅಶೇಷ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಮಾನ್ಯವಾಗಿ ಒಬ್ಬರು ಉನ್ನತಸ್ತರದ ಸೃಷ್ಟಿಶೀಲ ಕವಿಯಾಗಿರಬಹುದು ಅಥವಾ ಉನ್ನತಸ್ತರದ ವಾಗ್ಮಿಯಾಗಿರಬಹುದು ಅಥವಾ ಉನ್ನತಸ್ತರದ ಲೇಖಕರಾಗಿರಬಹುದು; ಆದರೆ ಗಣೇಶರು ಈ ಮೂರೂ ಮಾರ್ಗಗಳಲ್ಲಿ ಉನ್ನತರು.&lt;/p&gt;&lt;p&gt;ವಿಜ್ಞಾನ-ತಂತ್ರಜ್ಞಾನಗಳಲ್ಲಿ ಭಾರತದ ಸರ್ವೋಚ್ಚ ವಿದ್ಯಾಸ್ಥಾನಗಳಲ್ಲೊಂದಾದ ಭಾರತೀಯ ವಿಜ್ಞಾನ ಮಂದಿರದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ರಾಮಯ್ಯ ಹಾಗು ಆರ್.ವಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರೂ ಕೂಡ ಗಣೇಶರ ಒಲವು ಎಂದೆಂದಿಗೂ ಇದ್ದದ್ದು ಕಾವ್ಯ-ಕಲೆಗಳಲ್ಲಿಯೇ.&lt;/p&gt;&lt;p&gt;ವಿಶ್ವವೇ ವಸ್ತುಗರ್ಭವಾಗಿರುವ ಅವಧಾನದಂತಹ ಕಲೆಗೆ ವಿಶ್ವಕುತೂಹಲಿಯಾಗದೆ ಸಾಧ್ಯವಿಲ್ಲ ಎಂಬುದು ಅದು ಹೇಗೋ ಗಣೇಶರಿಗೆ ಮನ ಮುಟ್ಟಿತ್ತು ಎನಿಸುತ್ತದೆ. ವಿಜ್ಞಾನ-ತಂತ್ರಜ್ಞಾನಗಳ ಪ್ರವೇಶ ಇದ್ದೇ ಇತ್ತು; ಇಂದಿಗೂ ಇದೆ. ಒಟ್ಟೊಟ್ಟಿಗೇ ವಿಸ್ತಾರವಾದ ವ್ಯಾಪ್ತಿಯಲ್ಲಿ ಭಾರತೀಯ ಶಾಸ್ತ್ರ-ಕಲೆ-ಆಚರಣೆಗಳ ಅಧ್ಯಯನ ಮಾಡಿ ಕರಗತ ಮಾಡಿಕೊಂಡರು. ಸೌಂದರ್ಯಮೀಮಾಂಸೆ ಅಥವಾ ಅಲಂಕಾರಶಾಸ್ತ್ರವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದರು. ಅದರ ಬೆಳಕಿನಲ್ಲಿ ಎಲ್ಲ ಕಲೆಗಳ ಅಂತರಾಳವನ್ನೇ ಹಿಡಿದು ಅಪೂರ್ವವಾದ ಸಮಗ್ರತೆಯನ್ನು ಸಾಧಿಸಿಕೊಂಡರು.&lt;/p&gt;&lt;p&gt;ಮಹಾನುಭಾವರಾದ ಡಿ. ವಿ. ಗುಂಡಪ್ಪನವರಿಂದ ಗಾಢವಾಗಿ ಪ್ರಭಾವಿತರಾಗಿರುವ ಗಣೇಶರು ಅವರ ಲೋಕದೃಷ್ಟಿಯನ್ನೇ ಮಾರ್ಗದರ್ಶನಕ್ಕಾಗಿ ನೆಚ್ಚಿಕೊಂಡರು. ಹೀಗೆ ಸ್ವಯಮಾಚಾರ್ಯಮಾರ್ಗದಲ್ಲಿ ಆಧುನಿಕತೆಯನ್ನು ತೊರೆಯದೆ ಸನಾತನತೆಯನ್ನು ಉಳಿಸಿಕೊಂಡ ಕಾರಣವೇ ಗಣೇಶರ ಕಾವ್ಯ-ಭಾಷಣ-ಬರೆಹಗಳಲ್ಲಿ ಅಪರೂಪದ ಸತ್ಯ-ಸೌಂದರ್ಯಗಳ ಸುವರ್ಣಪಾಕದ ಆಕರ್ಷಣೆಯಿದೆ.&lt;/p&gt;&lt;p&gt;ಇಂತಹ ಗಣೇಶರು 1200ಕ್ಕೂ ಹೆಚ್ಚು ಅವಧಾನಗಳನ್ನು ಮಾಡಿ ರಸಿಕರನ್ನು ರಂಜಿಸಿದ್ದಾರೆ; ಸಾವಿರಾರು ಗಂಟೆಗಳಷ್ಟು ಪ್ರಮಾಣದ ಮೌಲಿಕವಾದ ಭಾಷಣಗಳನ್ನು ನೀಡಿದ್ದಾರೆ; 75ಕ್ಕೂ ಹೆಚ್ಚು ಮೌಲಿಕವಾದ ಗ್ರಂಥಗಳನ್ನು ಬರೆದಿದ್ದಾರೆ. ಒಟ್ಟಂದದಲ್ಲಿ ಹೇಳಬೇಕಾದರೆ, ಗಣೇಶರು ಒಂದು ವಿಶ್ವವಿದ್ಯಾಲಯವು ಮಾಡಬೇಕಾದಷ್ಟು ಕೆಲಸಗಳನ್ನು ಏಕಾಂಗಿಯಾಗಿ ಮಾಡಿ ಮುಗಿಸಿದ್ದಾರೆ. ಇನ್ನೂ ಮಾಡುತ್ತಲಿದ್ದಾರೆ ಕೂಡ.&lt;/p&gt;&lt;p&gt;ಇಂತಹ ಮಹನೀಯರಿಗೆ ಈ ಬಾರಿಯ ಪದ್ಮಭೂಷಣ ಪ್ರಶಸ್ತಿ ಸಂದಿರುವುದು ಕನ್ನಡಿಗರಾದ ನಮಗೆಲ್ಲ ಸಂತಸದ ಸಂಗತಿ. ಇಂತಹ ಮಹನೀಯರಿಗೆ ಸಂದಿದೆ ಎಂಬ ಕಾರಣದಿಂದ ಪ್ರಶಸ್ತಿಯ ಘನತೆಯೂ ಹೆಚ್ಚಿದೆ. ಗಣೇಶರು ಪ್ರಶಸ್ತಿಗಳನ್ನು ಅರಸಿದವರಲ್ಲ; ಆದರೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, ಕೇಂದ್ರ ಸರ್ಕಾರದ ಬಾದರಾಯಣ ವ್ಯಾಸ ಪುರಸ್ಕಾರ - ಹೀಗೆ ಹತ್ತು ಹಲವು ಪ್ರಶಸ್ತಿಗಳು ಅದಾಗಲೇ ಗಣೇಶರನ್ನು ಅರಸಿಕೊಂಡು ಬಂದಿವೆ. ಈ ಸಾಲಿಗೆ ಇಂದಿನಿಂದ ಪದ್ಮಭೂಷಣ ಕೂಡ ಸೇರುತ್ತದೆ. ಈ ಸಂದರ್ಭದಲ್ಲಿ ಗಣೇಶರನ್ನು ನಾವೆಲ್ಲರೂ ಆದರಾಭಿಮಾನಗಳಿಂದ ಅಭಿನಂದಿಸುತ್ತೇವೆ. ಭಾರತೀಯ ಸಾಹಿತ್ಯ-ಸಂಸ್ಕೃತಿಗಳಿಗೆ ಅವರ ಸೇವೆ ಹೀಗೆಯೇ ಮುಂದುವರೆಯುತ್ತಿರಲಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>magazine</category>
            <dc:creator>Suvarna News</dc:creator>
            <atom:link href="https://kannada.asianetnews.com/karnataka-districts/shatavadhani-dr-r-ganesh-padma-bhushan-award-2026-karnataka-pride-san/articleshow-09gggtv"/>
        </item>
        <item>
            <title><![CDATA[ತೋರು ಬೆರಳು: ಬೆಳಕು ತೋರುವ ತಮಾಷೆ ಕಥೆಗಳು]]></title>
            <link>https://kannada.asianetnews.com/special/shory-stories-that-revela-life-truth-in-humerous-way-spltuc</link>
            <guid isPermaLink="true">https://kannada.asianetnews.com/special/shory-stories-that-revela-life-truth-in-humerous-way-spltuc</guid>
            <pubDate>Fri, 10 Jan 2025 11:16:30 +0530</pubDate>
            <description><![CDATA[&lt;p&gt;ನಸ್ರುದ್ದೀನನ ಹಾಸ್ಯ ಪ್ರಸಂಗಗಳು: ಅಪರಿಚಿತನಿಗೆ ಸಾಲ ನಿರಾಕರಿಸಿದ, ಗೆಳೆಯನಿಗೆ ಉಂಗುರ ಕೊಡದೆ ನೆನಪಿನ ಉಪಾಯ ಹೇಳಿದ, ಫಕೀರನ ಮೋಸದ ಬಗ್ಗೆ ಓದಿ ತಿಳಿದ, ಕಳ್ಳತನದಲ್ಲಿ ಚಡ್ಡಿ ಉಳಿದಿದ್ದರಿಂದ ಕಳ್ಳರು ತಮ್ಮೂರಿನವರಲ್ಲ ಎಂದ, ಸ್ವಾರ್ಥದ ಬಗ್ಗೆ ವಿಶಿಷ್ಟವಾಗಿ ಯೋಚಿಸುವುದಾಗಿ ಹೇಳಿದ, ಕಲ್ಲಂಗಡಿ ಕಳ್ಳತನಕ್ಕೆ ಗಾಳಿ ನೆಪ ಹೇಳಿದ, ಚಳಿ ಅನುಭವಿಸುವ ಸ್ವಾತಂತ್ರ್ಯ ಶ್ರೀಮಂತರಿಗೆ ಮಾತ್ರ ಎಂದ, ಧರ್ಮಗುರುವಿನ ಕಥೆಯ ಪಾತ್ರಗಳು ಊಟ ಮಾಡುತ್ತವೆಯೇ ಎಂದು ಕೇಳಿದ, ಸಾಲ ಕೇಳಿದ ಭಾವನಿಗೆ ನಿದ್ದೆ ನೆಪ ಹೇಳಿದ ಹಾಗೂ ಬುದ್ಧಿವಂತ ಹೆಣ್ಣನ್ನು ಹುಡುಕಲು ಮಗನಿಗೆ ಕಪಾಳಕ್ಕೆ ಹೊಡೆದು ಪರೀಕ್ಷಿಸಿದ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jfpgpfzf5x7y0fr37rxapna5,imgname-bhanuprabha-story-article.jpg" type="image/jpeg" height="390" width="690"/>
            <content:encoded><![CDATA[&lt;p&gt;1-&lt;/p&gt; &lt;p&gt;ದಾರೀಲಿ ಹೋಗ್ತಾ ನಸ್ರುದ್ದೀನನಿಗೆ ಒಬ್ಬ ಅಪರಿಚಿತ ಎದುರಾದ. ಅವನ ಜೊತೆ ನಸ್ರುದ್ದೀನ್ ಮಾತು ಶುರುಮಾಡಿದ.&lt;/p&gt; &lt;p&gt;ಮಾತಿನ ಮಧ್ಯೆ ಕೇಳಿದ:&lt;/p&gt; &lt;p&gt;ಹೇಗೆ ನಡೀತಿದೆ ವ್ಯಾಪಾರ?&lt;/p&gt; &lt;p&gt;ಅದ್ಭುತ ಅಂದ ಅಪರಿಚಿತ&lt;/p&gt; &lt;p&gt;ಹಂಗಿದ್ರೆ ನಂಗೊಂದು ಹತ್ತು ಸಾವಿರ ರೂಪಾಯಿ ಸಾಲ ಕೊಡ್ತೀರಾ?&lt;/p&gt; &lt;p&gt;ಸಾಲಾನಾ? ನಿಂಗಾ? ನೀನ್ಯಾರು ಅಂತಾನೇ ನಂಗೊತ್ತಿಲ್ಲವಲ್ಲ?&lt;/p&gt; &lt;p&gt;ಇದೊಳ್ಳೇ ಕತೆಯಾಯ್ತಲ್ಲ. ನನ್ನೂರಿನ ಜನಕ್ಕೆ ನಾನ್ಯಾರು ಅಂತ ಗೊತ್ತು. ಅದಕ್ಕೇ ಅವರು ನಂಗೆ ಸಾಲ ಕೊಡಲ್ಲ. ನಿಂಗೆ ನಾನ್ಯಾರು ಅಂತ ಗೊತ್ತಿಲ್ಲ. ಅದಕ್ಕೇ ನೀನು ಸಾಲ ಕೊಡಲ್ಲ. ಹಿಂಗಾದ್ರೆ ನಮ್ಮಂತೋರು ಬದ್ಕೋದು ಹೆಂಗೆ?&lt;/p&gt; &lt;p&gt;-2-&lt;/p&gt; &lt;p&gt;ನಸ್ರುದ್ದೀನ್ ಗೆಳೆಯನೊಬ್ಬ ಊರು ಬಿಟ್ಟು ಹೊರಟಿದ್ದ. ಹೊರಡೋ ಮುಂಚೆ ನಸ್ರುದ್ದೀನನ ಹತ್ರ ಬಂದ.&lt;/p&gt; &lt;p&gt;ನೋಡಯ್ಯಾ ಮಿತ್ರಾ, ನಾನು ಊರು ಬಿಟ್ಟು ಹೋಗ್ತಾ ಇದ್ದೀನಿ. ನೀನು ನಂಗೊಂದು ಬಂಗಾರದ ಉಂಗುರ ಕೊಡು. ಅದನ್ನು ನೋಡ್ತಿದ್ದಾಗೆಲ್ಲ ನಿನ್ನ ನೆನಪಾಗ್ತಿರುತ್ತೆ ನಂಗೆ.&lt;/p&gt; &lt;p&gt;ನಸ್ರುದ್ದೀನ್ ಹೇಳಿದ.&lt;/p&gt; &lt;p&gt;ನಾನು ನಿಂಗೊಂದು ಉಂಗುರ ಕೊಡ್ತೀನಿ ಅಂತಿಟ್ಕೋ. ನೀನು ಅದನ್ನು ಕಳ್ಕೋಬಹುದು. ಆಗ ನನ್ನನ್ನೂ ಮರೀತೀಯ ಅಲ್ವಾ. ಅದರ ಬದಲು ನಾನು ಉಂಗುರ ಕೊಡೋಲ್ಲ ಅಂತಿಟ್ಕೋ. ಆಗ ನಿಂಗೆ ನಿನ್ನ ಉಂಗುರವಿಲ್ಲದ ಬೆರಳು ನೋಡಿದಾಗೆಲ್ಲ ನನ್ನ ನೆನಪಾಗ್ತಾ ಇರುತ್ತೆ.  ಪಟಕ್ಕನೆ ಓದಿ ಮುಗಿಸಬಹುದಾದ ಕನ್ನಡದ 10 ಅತ್ಯಾಪ್ತ ಸಣ್ಣಕಥೆಗಳು!&lt;/p&gt; &lt;p&gt;-3-&lt;/p&gt; &lt;p&gt;ಓದೋದಕ್ಕೂ ಬರಿಯೋದಕ್ಕೂ ಗೊತ್ತಿಲ್ಲದ ಅನಕ್ಷರಸ್ಥನಿಗೆ ನಾನು ಒಂದೇ ಕ್ಷಣದಲ್ಲಿ ಓದುಬರಹ ಕಲಿಸಬಲ್ಲೆ.&lt;/p&gt; &lt;p&gt;ಹಾಗಂತ ಹೇಳ್ತಾ ಫಕೀರನೊಬ್ಬ ಊರು ತುಂಬ ಓಡಾಡ್ತಿದ್ದ. ನಸ್ರುದ್ದೀನ್ ಅವನ ಬಳಿಗೆ ಓಡಿದ. ನನಗೆ ಕಲಿಸು ಅಂದ.&lt;/p&gt; &lt;p&gt;ಫಕೀರ ನಸ್ರುದ್ದೀನನ ತಲೆಯ ಮೇಲೆ ಕೈಯಿಟ್ಟು ಧ್ಯಾನಿಸಿದ. ಈಗ ನಿಂಗೆ ಓದೋಕೆ ಬರುತ್ತೆ ಹೋಗು ಅಂದ.&lt;/p&gt; &lt;p&gt;ಅದಾಗಿ ಅರ್ಧಗಂಟೆಗೆ ವಾಪಸ್ಸು ಬಂದ ನಸ್ರುದ್ದೀನ್, ಆ ಫಕೀರನಿಗೋಸ್ಕರ ಊರಲ್ಲೆಲ್ಲ ಹುಡುಕತೊಡಗಿದ.&lt;/p&gt; &lt;p&gt;ಏನಾಯ್ತಪ್ಪ.. ಓದೋದು ಕಲಿಸ್ತೀನಿ ಅಂತ ಫಕೀರ ಚೆನ್ನಾಗಿ ನಾಮ ಹಾಕಿದ್ನಾ? ದಾರಿಹೋಕನೊಬ್ಬ ಕೇಳಿದ.&lt;/p&gt; &lt;p&gt;ಹಂಗೇನಿಲ್ಲ, ಚೆನ್ನಾಗೇ ಓದೋದಕ್ಕೆ ಬರುತ್ತೆ. ಓದೋಕ್ ಬಂದಿದ್ರಿಂದಲೇ ಆ ಫಕೀರನ್ನ ಹುಡುಕ್ತಿರೋದು ನಾನು. ಎಲ್ಹೋದ ಆ ಮೋಸಗಾರ.&lt;/p&gt; &lt;p&gt;ಇದೇನಪ್ಪ ಹೀಗ್ ಮಾತಾಡ್ತಿದ್ದೀಯ. ನಿಂಗೆ ಒಂದೇ ನಿಮಿಷದಲ್ಲಿ ಓದೋಕೆ ಕಲಿಸಿದೋನನ್ನ ಮೋಸಗಾರ ಅಂತಿದ್ದೀಯಲ್ಲ. ಸರೀನಾ ಇದು.&lt;/p&gt; &lt;p&gt;''''ಹೌದು ಮತ್ತೆ'''' ನಾನು ಓದೋಕೆ ಎತ್ತಿಕೊಂಡ ಪುಸ್ತಕದ ಮೊದಲನೇ ಸಾಲಲ್ಲೇ ''''ಎಲ್ಲಾ ಫಕೀರರೂ ಶುದ್ಧ ಮೋಸಗಾರರು'''' ಅಂತ ಬರೆದಿತ್ತು.&lt;/p&gt; &lt;p&gt;-4-&lt;/p&gt; &lt;p&gt;ನಸ್ರುದ್ದೀನ್ ನ್ಯಾಯಾಧೀಶನಾಗಿದ್ದಾಗ ಅವನ ಹತ್ತಿರ ಒಬ್ಬಾತ ಓಡೋಡಿ ಬಂದು ದೂರು ಹೇಳಿಕೊಂಡ.&lt;/p&gt; &lt;p&gt;ನಿಮ್ಮೂರಿನ ದಿಡ್ಡಿಬಾಗಿಲಿನ ಹತ್ತಿರ ಯಾರೋ ಒಂದಿಬ್ಬರು ನನ್ನನ್ನು ದರೋಡೆ ಮಾಡಿದರು. ನನ್ನಲ್ಲಿದ್ದ ಎಲ್ಲವನ್ನೂ ಕಿತ್ತುಕೊಂಡರು. ನನ್ನ ಚೀಲ, ಅಂಗಿ, ಸರ, ಗಡಿಯಾರ, ಪ್ಯಾಂಟು ಎಲ್ಲವನ್ನೂ ದೋಚಿಕೊಂಡು ಹೋದರು. ಚಪ್ಪಲಿಯನ್ನೂ ಬಿಡಲಿಲ್ಲ. ಅವರನ್ನು ಹಿಡಿದು ಶಿಕ್ಷಿಸಿ. ನಿಮ್ಮೂರಿನ ಬಾಗಿಲಲ್ಲಿ ಇಂಥ ಕೆಲಸ ಮಾಡಿದ್ದಾರೆ ಅಂತಾದರೆ ಅವರು ನಿಮ್ಮೂರಿನವರೇ ಇರಬೇಕು.&lt;/p&gt; &lt;p&gt;ನಸ್ರುದ್ದೀನ್ ಅವನನ್ನು ಮೇಲಿಂದ ಕೆಳಗಿನ ತನಕ ನೋಡಿದವನೇ, ಹೇಳಿದ.&lt;/p&gt; &lt;p&gt;ಅವರು ನಮ್ಮೂರಿನೋರಲ್ಲ ಬಿಡಪ್ಪ.&lt;/p&gt; &lt;p&gt;ನಿಮ್ಮೂರಿನವರಲ್ಲ ಅಂತ ಅದೆಂಗ್ ಹೇಳ್ತೀರಿ ಅಂತ ದೂರುದಾರ ಕೇಳಿದ.&lt;/p&gt; &lt;p&gt;ನಮ್ಮೂರಿನೋರು ಏನು ಮಾಡಿದ್ರೂ ಅಚ್ಚುಕಟ್ಟಾಗಿ ಮಾಡ್ತಾರೆ. ನಿನ್ನ ಚಡ್ಡಿ ಹಂಗೇ ಬಿಟ್ಟಿದ್ದಾರಲ್ಲ. ನಮ್ಮೂರಿನ ಕಳ್ಳರಾಗಿದ್ರೆ ಅದನ್ನೂ ಕಿತ್ಕೊಂಡಿರೋರು. ಯಾರೋ ಅಡ್ಡಕಸಬಿಗಳ ಕೆಲಸ ಇದು.  ಕಥೆಕೂಟ ಸಮಾವೇಶ: ಸಣ್ಣಕಥೆಗಳ ಗುಂಪಿನ ಐದನೇ ಸಮ್ಮಿಲನ, ಬರಹಗಾರಿಕೆಯ ಬಗ್ಗೆ ಚರ್ಚೆ&lt;/p&gt; &lt;p&gt;-5-&lt;/p&gt; &lt;p&gt;ಸನ್ಯಾಸಿಯೊಬ್ಬ ನಸ್ರುದ್ದೀನನಿಗೆ ತತ್ವೋಪದೇಶ ಮಾಡುತ್ತಿದ್ದ.&lt;/p&gt; &lt;p&gt;ನೋಡಯ್ಯ. ಮನುಷ್ಯ ಸ್ವಾರ್ಥಿಯಾಗಬಾರದು. ಯಾವಾಗ್ಲೂ ತನ್ನ ಬಗ್ಗೇನೇ ಯೋಚನೆ ಮಾಡ್ತಿರಬಾರದು. ಇನ್ನೊಬ್ಬರ ಬಗ್ಗೆ ಚಿಂತೆ ಮಾಡಬೇಕು. ನಾನು ಆ ಸಾಧನೆ ಮಾಡಿದ್ದೀನಿ. ಯಾವತ್ತೂ ನನ್ನ ಬಗ್ಗೆ ಯೋಚಿಸೋಲ್ಲ.&lt;/p&gt; &lt;p&gt;ನಸ್ರುದ್ದೀನ್ ಅಂದ: ಗುರುಗಳೇ, ನಾನು ಯಾವಾಗ್ಲೋ ಆ ಎತ್ತರಕ್ಕೆ ಏರಿಬಿಟ್ಟಿದ್ದೀನಿ.&lt;/p&gt; &lt;p&gt;ಗುರು ಅಚ್ಚರಿಯಿಂದ ಕೇಳಿದ: ಹೌದೇ.. ಹೇಗೆ.&lt;/p&gt; &lt;p&gt;ನಸ್ರುದ್ದೀನ್ ಗಂಭೀರವಾಗಿ ಹೇಳಿದ:&lt;/p&gt; &lt;p&gt;ನಾನು ಯಾರನ್ನು ನೋಡಿದ್ರೂ ಅವನನ್ನನ್ನು ನನ್ನ ಸ್ಥಾನದಲ್ಲಿಟ್ಟು ನೋಡ್ತೀನಿ. ಅವನೇ ನಾನು ಅಂದ್ಕೊಂಡು ಬಿಡ್ತೀನಿ. ಹೀಗಾಗಿ ನಾನು ನನ್ನ ಬಗ್ಗೆ ಯೋಚನೆ ಮಾಡಿದ್ದೆಲ್ಲ, ನಿಜವಾಗಿ, ಅವನ ಬಗ್ಗೇನೇ ಆಗಿರುತ್ತೆ.&lt;/p&gt; &lt;p&gt;-6-&lt;/p&gt; &lt;p&gt;ನಸ್ರುದ್ದೀನ್ ಯಾರದೋ ಹೊಲಕ್ಕೆ ಹೋಗಿ ಕಲ್ಲಂಗಡಿ ಹಣ್ಣುಗಳನ್ನು ಕೊಯ್ದು ಗೋಣಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ. ಅಷ್ಟು ಹೊತ್ತಿಗೆ ಕಲ್ಲಂಗಡಿ ಹೊಲದ ಮಾಲಿಕ ಬಂದು, ನಸ್ರುದ್ದೀನನನ್ನು ತರಾಟೆಗೆ ತೆಗೆದುಕೊಂಡ.&lt;/p&gt; &lt;p&gt;ನನ್ನ ಹೊಲದಲ್ಲಿ ನೀನೇನು ಮಾಡ್ತಿದ್ದೀಯಾ?&lt;/p&gt; &lt;p&gt;ಏನ್ ಗಾಳಿ ಅಂತೀರಿ. ಅದೇ ನನ್ನ ತಳ್ಕೊಂಡು ಬಂದುಬಿಡ್ತು.&lt;/p&gt; &lt;p&gt;ಸರೀ, ಒಪ್ಕೋತೀನಿ. ಆದ್ರೆ ಕಲ್ಲಂಗಡಿ ಹಣ್ಣನ್ನ ಯಾಕೆ ಹಿಡ್ಕೊಂಡಿದ್ದೀಯಾ&lt;/p&gt; &lt;p&gt;ದೇವರೇ, ಈ ಕಲ್ಲಂಗಡಿ ಹಣ್ಣನ್ನೇನಾದರೂ ಹಿಡ್ಕೊಳ್ಳದೇ ಹೋಗಿದ್ರೆ ಗಾಳಿ ನನ್ನನ್ನು ಇನ್ನೂ ದೂರ ತಳ್ಕೊಂಡು ಹೋಗ್ತಾ ಇತ್ತು.&lt;/p&gt; &lt;p&gt;ಆಯ್ತು, ಅದನ್ನೂ ಒಪ್ಕೋತೀನಿ. ಆದ್ರೆ ಆ ಕಲ್ಲಂಗಡಿ ಹಣ್ಣು ನಿನ್ನ ಗೋಣಿ ಚೀಲದೊಳಗೆ ಹೇಗ್ ಹೋಯ್ತು.&lt;/p&gt; &lt;p&gt;ಇದೊಂದು ಪ್ರಶ್ನೆಗೆ ಉತ್ತರ ಹೊಳೀತಿಲ್ಲ ನೋಡಪ್ಪ. ಏನು ಹೇಳೋದು ಅಂತ ನಾನೂ ಯೋಚಿಸ್ತಿದ್ದೀನಿ, ತಡಿ.  ಹೇಗಿದ್ರು, ಹೇಗಾದ್ರು? ನಾಲ್ಕೇ ಪೋಟೋದಲ್ಲಿ ಯುಪಿ, ಬಿಹಾರದ ಕತೆ!&lt;/p&gt; &lt;p&gt;-7-&lt;/p&gt; &lt;p&gt;ಚಳಿಗಾಲದ ಒಂದು ಬೆಳಗ್ಗೆ, ಅರೆಬರೆ ಬಟ್ಟೆ ಹಾಕ್ಕೊಂಡು ರಸ್ತೇಲಿ ಹೋಗ್ತಿದ್ದ ನಸ್ರುದ್ದೀನನನ್ನು ಶ್ರೀಮಂತನೊಬ್ಬ ತಡೆದು ನಿಲ್ಲಿಸಿದ.&lt;/p&gt; &lt;p&gt;ಅಲ್ಲಯ್ಯಾ, ಮೈ ಕೊರೆಯೋ ಚಳೀಲಿ ಮೈ ತುಂಬ ಬಟ್ಟೆ ಹಾಕ್ಕೊಳ್ಳದೇ ಹೋಗ್ತಿದ್ದೀಯಲ್ಲ, ನಿಂಗೇನು ಚಳಿಗಿಳಿ ನಾಟೋದಿಲ್ವಾ?&lt;/p&gt; &lt;p&gt;ನಿನ್ನ ಹತ್ರ ಬೇಕಾದಷ್ಟು ಬಟ್ಟೆ ಇದೆ. ಹಿಂಗಾಗಿ ನಿಂಗೆ ಚಳಿ ಆಗ್ತಿದೆ. ನನ್ನ ಹತ್ರ ಇರೋದೇ ಈ ಹರಕು ಅಂಗಿ, ತುಂಡು ಚಡ್ಡಿ, ನನ್ನಂತೋರಿಗೆ ಚಳಿ ಅಂತ ಹೇಳೋ ಸ್ವಾತಂತ್ರ್ಯ ಇರಲ್ಲ. ಚಳಿಯಾಗೋದು ಸೆಕೆಯಾಗೋದು ಅದಕ್ಕೆ ಉಪಾಯ ಕಂಡುಕೊಳ್ಳಬಲ್ಲಂಥ ಶ್ರೀಮಂತರಿಗೆ ಮಾತ್ರ.&lt;/p&gt; &lt;p&gt;-8-&lt;/p&gt; &lt;p&gt;ಒಂದು ದಿನ ಊರಿನ ಧರ್ಮಗುರುವೊಬ್ಬ ನಸ್ರುದ್ದೀನನನ್ನು ಊಟಕ್ಕೆ ಆಹ್ವಾನಿಸಿದ.&lt;/p&gt; &lt;p&gt;ಆವತ್ತಿಡೀ ನಸ್ರುದ್ದೀನ್ ಉಪವಾಸವಿದ್ದ. ಸಂಜೆಯಾಗುತ್ತಿದ್ದಂತೆ ಆತುರದಿಂದ ಧರ್ಮಗುರುವಿನ ಮನೆಗೆ ಹೋದ. ಹೋದ ತಕ್ಷಣ ಏನಾದರೂ ತಿಂದುಬಿಡಬೇಕು ಅಂದುಕೊಂಡಿದ್ದ.&lt;/p&gt; &lt;p&gt;ಧರ್ಮಗುರು ನಿರಾಳವಾಗಿದ್ದ. ಆತ ಅತ್ಯುತ್ಸಾಹದಿಂದ ನಸ್ರುದ್ದೀನನಿಗೆ ಹಲವಾರು ಧರ್ಮಸೂಕ್ಷ್ಮದ ಕತೆಗಳನ್ನು ಹೇಳತೊಡಗಿದ. ಸುಮಾರು ಎರಡು ಗಂಟೆಗಳ ಕಾಲ ಈ ಕಥಾಕಾಲಕ್ಷೇಪ ನಡೆಯಿತು. ನಸ್ರುದ್ದೀನನ ಹಸಿವು ಏರುತ್ತಲೇ ಇತ್ತು. ಮಾತು ಮುಗಿಯದೇ ಇದ್ದಾಗ, ತಡೆಯಲಾರದೆ ನಸ್ರುದ್ದೀನ್ ಕೇಳಿದ.&lt;/p&gt; &lt;p&gt;ನಾನು ನಿಮ್ಮನ್ನೇನೋ ಕೇಳಲೇ?&lt;/p&gt; &lt;p&gt;ಧಾರಾಳವಾಗಿ ಕೇಳಪ್ಪ. ನಮಗೀಗ ಪ್ರಶ್ನೆ ಕೇಳುವವರು ಬೇಕಾಗಿದ್ದಾರೆ. ಯಾವ ಪ್ರಶ್ನೆಗೆ ಬೇಕಿದ್ದರೂ ಉತ್ತರಿಸುತ್ತೇನೆ ತಗೋ.&lt;/p&gt; &lt;p&gt;ಅಂಥದ್ದೇನಿಲ್ಲ ಗುರುಗಳೇ. ನಿಮ್ಮ ಕತೆಗಳಲ್ಲಿ ಬರುವ ಪಾತ್ರಗಳು ಊಟ ಗೀಟ ಮಾಡುತ್ತವೋ ಇಲ್ಲವೋ?&lt;/p&gt; &lt;p&gt;-9-&lt;/p&gt; &lt;p&gt;ನಸ್ರುದ್ದೀನ್ ಕಣ್ಮುಚ್ಚಿ ಮಲಗಿದ್ದ.&lt;/p&gt; &lt;p&gt;ಅಲ್ಲಿಗೆ ಬಂದ ಅವನ ಭಾವ ಮೆತ್ತಗೆ ಕೇಳಿದ.&lt;/p&gt; &lt;p&gt;ಭಾವಾ, ನಿದ್ದೆ ಮಾಡಿದ್ದೀರೇನು?&lt;/p&gt; &lt;p&gt;ಏನು ಬೇಕಾಗಿತ್ತು?&lt;/p&gt; &lt;p&gt;ಒಂದೈದು ಸಾವಿರ ರುಪಾಯಿ ಬೇಕಾಗಿತ್ತು. ಸಾಲ ಕೊಡ್ತೀರಾ?&lt;/p&gt; &lt;p&gt;ಒಂದ್ ಕೆಲಸ ಮಾಡೋಣಂತೆ. ನಾನೀಗ ನಿನ್ನ ಮೊದಲನೇ ಪ್ರಶ್ನೆಗೆ ಉತ್ತರ ಕೊಡ್ತೀನಿ.&lt;/p&gt; &lt;p&gt;ನಾನು ನಿದ್ದೆ ಮಾಡ್ತಿದ್ದೀನಿ, ತೊಂದ್ರೆ ಮಾಡಬೇಡ.  ಕಥಾ ಕಮ್ಮಟಕ್ಕೆ ಮೋದಿಗೆ ಪತ್ರ ಬರೆದಿದ್ದ ಬಾಲಕಿಯ ಮುಗ್ಧ ಆಹ್ವಾನ&lt;/p&gt; &lt;p&gt;-10-&lt;/p&gt; &lt;p&gt;ನಸ್ರುದ್ದೀನನ ಮಗನಿಗೆ ಮದುವೆ ಆಗೋ ಆಸೆಯಾಯಿತು. ಅಪ್ಪನ ಹತ್ತಿರ ಬಂದು ಹೆಣ್ಣು ಹುಡುಕೋದಕ್ಕೆ ಹೇಳಿದ.&lt;/p&gt; &lt;p&gt;ಎಂಥಾ ಹೆಣ್ಣು ಬೇಕೋ ಮಗನೇ ನಿಂಗೆ.&lt;/p&gt; &lt;p&gt;ಬುದ್ಧಿವಂತಳಾಗಿರಬೇಕು. ಅನ್ನಿಸಿದ್ದನ್ನು ಹೇಳೋಳೂ ಆಗಿರಬೇಕು.&lt;/p&gt; &lt;p&gt;ಸರಿ, ನಡಿ ನನ್ನ ಜೊತೆ ಅಂತ ಹೇಳಿ ನಸ್ರುದ್ದೀನ್ ಮಗನನ್ನು ಕರೆದುಕೊಂಡು ಸಂತೆಗೆ ಹೋದ. ಅಲ್ಲೊಂದಷ್ಟು ಜನ ಸೇರಿದ ಮೇಲೆ ಮಗನ ಕಪಾಳಕ್ಕೊಂದು ಬಾರಿಸಿದ.&lt;/p&gt; &lt;p&gt;ಯೇಯ್ ದಡ್ಡಾ. ನಾನು ಏನು ಹೇಳಿದ್ದೀನೋ ಅದನ್ನೇ ಮಾಡಿದ್ದೀಯಲ್ಲೋ ಮುಠ್ಠಾಳ... ಏನು ತುಂಬಿದೆ ನಿನ್ನ ತಲೇಲಿ ಎಂದು ಬೈದ.&lt;/p&gt; &lt;p&gt;ಅಲ್ಲಿದ್ದ ಹೆಣ್ಣೊಬ್ಬಳು ಸಿಟ್ಟಿನಿಂದ ಯಾಕಪ್ಪಾ ಹೊಡೀತೀಯ ಅವನನ್ನ. ನೀನೇನು ಹೇಳಿದ್ದಾನೋ ಅದನ್ನೇ ಮಾಡಿದ್ದಾನಲ್ಲ ಅವನು. ಅದು ತಪ್ಪಾ ಅಂತ ಜೋರಾಗಿ ಕೇಳಿದಳು.&lt;/p&gt; &lt;p&gt;ಮಗನಿಗೆ ಸಂತೋಷವಾಯಿತು. ಇಂಥದ್ದೇ ಹುಡುಗಿ ಬೇಕು ಅಂದಿದ್ದು ನಾನು ಅಂದ. ನಸ್ರುದ್ದೀನ್ ಯಾವುದಕ್ಕೂ ಇನ್ನೊಂದು ಹೆಣ್ಣು ತೋರಿಸ್ತೀನಿ ಬಾ ಅಂತ ಹೇಳಿ, ಮಗನನ್ನು ಪಕ್ಕದೂರಿನ ಸಂತೆಗೆ ಕರೆದೊಯ್ದ. ಅಲ್ಲಿ ಎಲ್ಲರ ಮುಂದೆ ಅದೇ ಮಾತುಗಳನ್ನು ಹೇಳುತ್ತಾ ಕಪಾಳಕ್ಕೆ ಹೊಡೆದ.&lt;/p&gt; &lt;p&gt;ಅದನ್ನು ನೋಡುತ್ತಿದ್ದ ಹುಡುಗಿಯೊಬ್ಬಳು ಇನ್ನೂ ಎರಡೇಟು ಹಾಕು. ಹೇಳಿದಷ್ಟೇ ಮಾಡೋರಷ್ಟು ದಡ್ಡರಿಗೆ ಅದೇ ಸರಿಯಾದ ಶಿಕ್ಷೆ ಅಂದಳು.&lt;/p&gt; &lt;p&gt;ನಸ್ರುದ್ದೀನ್ ಮಗನಿಗೆ ಹೇಳಿದ.&lt;/p&gt; &lt;p&gt;ಮೊದಲನೇ ಹುಡುಗಿ ಬುದ್ಧಿವಂತೆ, ಅನ್ನಿಸಿದ್ದನ್ನು ಹಂಗಂಗೇ ಹೇಳೋಳು. ಆದರೆ ಈ ಹುಡುಗಿ ಇನ್ನೂ ಬುದ್ಧಿವಂತೆ. ಇವಳನ್ನೇ ಕಟ್ಕೋ, ಉದ್ಧಾರ ಆಗ್ತೀಯ.&lt;/p&gt;]]></content:encoded>
            <category>magazine</category>
            <dc:creator>Nirupama ks</dc:creator>
            <atom:link href="https://kannada.asianetnews.com/special/shory-stories-that-revela-life-truth-in-humerous-way-spltuc"/>
        </item>
        <item>
            <title><![CDATA[61 ವರ್ಷದಲ್ಲೂ ಸುರೇಶ್ ಗೌಡ 45ರಂತಿದ್ದಾರೆ]]></title>
            <link>https://kannada.asianetnews.com/magazine/bjp-mla-suresh-gowda-gets-relief-from-australian-medicine-for-his-chronic-acidity-problem-mrq/articleshow-2vq7koy</link>
            <guid isPermaLink="true">https://kannada.asianetnews.com/magazine/bjp-mla-suresh-gowda-gets-relief-from-australian-medicine-for-his-chronic-acidity-problem-mrq/articleshow-2vq7koy</guid>
            <pubDate>Mon, 06 Apr 2026 07:35:50 +0530</pubDate>
            <description><![CDATA[&lt;p&gt;ಬಿಜೆಪಿ ಶಾಸಕ ಸುರೇಶ್ ಗೌಡರು ತಮ್ಮ ದೀರ್ಘಕಾಲದ ಆ್ಯಸಿಡಿಟಿ ಸಮಸ್ಯೆಗೆ ಆಸ್ಟ್ರೇಲಿಯಾದ ಔಷಧದಿಂದ ಪರಿಹಾರ ಕಂಡುಕೊಂಡಿದ್ದನ್ನು ವಿಧಾನಸಭೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಇರಾನ್ ಯುದ್ಧದ ಸುಳ್ಳು ಸುದ್ದಿಯಿಂದಾಗಿ ಬೆಳಗಾವಿಯಲ್ಲಿ ಪೆಟ್ರೋಲ್-ಡೀಸೆಲ್&zwnj;ಗಾಗಿ ಜನರು ಮುಗಿಬಿದ್ದಿದ್ದು, ಪ್ಲಾಸ್ಟಿಕ್ ಬಾಟಲಿಗಳ ಮಾರಾಟ ಜೋರಾಗಿತ್ತು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kng8g35pgnggyj2hr4cj2vty,imgname-bjp-mla-suresh-gowda-1775441022134.jpg" type="image/jpeg" height="390" width="690"/>
            <content:encoded><![CDATA[&lt;p&gt;ತೈಲವನ್ನು ಕೇವಲ ವಾಹನಗಳಿಗೆ ಹಾಕಿಸಿಕೊಂಡರೆ ಪರ್ವಾಗಿಲ್ಲ. ನೀರು ಸಂಗ್ರಹಿಸುವ ಬಾಟಲ್&zwnj;ಗಳು, ಕ್ಯಾನ್&zwnj;ಗಳು, ಡ್ರಮ್&zwnj;ಗಳಲ್ಲಿಯೂ ಕೂಡ ಜನ ತಂದು ತುಂಬಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭ ಬಳಸಿಕೊಂಡು ಕೆಲ ವ್ಯಾಪಾರಸ್ಥರು ಪೆಟ್ರೋಲ್&zwnj; ಬಂಕ್&zwnj;ಗಳ ಪಕ್ಕದಲ್ಲೇ ಪ್ಲಾಸ್ಟಿಕ್&zwnj; ಬಾಟಲ್&zwnj;ಗಳು (2, 3, 5, 10 ಲೀ.) ಮಾರಾಟ ಮಾಡಲು ಆರಂಭಿಸಿಬಿಟ್ರು. ಪರಿಣಾಮ ಪೆಟ್ರೋಲ್&zwnj;, ಡಿಸೇಲ್&zwnj; ತುಂಬಿಸಿಕೊಳ್ಳಲು ಬಂದವರಿಗಿಂತ ಪ್ಲಾಸ್ಟಿಕ್&zwnj; ಬಾಟಲ್&zwnj; ಮಾರಾಟ ಮಾಡುವವರದ್ದೇ ದೊಡ್ಡ ಹವಾ ಆಯ್ತು.&lt;/p&gt;&lt;p&gt;--------&lt;/p&gt;&lt;p&gt;ಆ್ಯಸಿಡಿಟಿ ಸಮಸ್ಯೆಗೆ 10 ವರ್ಷ ಕಾಲ ಸುಮಾರು 1 ಲಕ್ಷ ರಾನ್&zwnj;ಟೆಕ್&zwnj; ಮಾತ್ರೆ ನುಂಗಿದರೂ ಸರಿ ಹೋಗಲಿಲ್ಲ. ನೂರು ಜನ ವೈದ್ಯರಿಗೆ ತೋರಿಸಿದರೂ ಸಮಸ್ಯೆ ಪರಿಹಾರ ಆಗಲಿಲ್ಲ. ಕೊನೆಗೆ ಆಸ್ಟ್ರೇಲಿಯಾದ ವೈದ್ಯರೊಬ್ಬರು ನೀಡಿದ ಒಂದು ಮಾತ್ರೆಯಿಂದ ಆ್ಯಸಿಡಿಟಿ ಸಮಸ್ಯೆ ವಾಸಿಯಾಯಿತು. ಕಳೆದ 14 ವರ್ಷಗಳಿಂದ ನನಗೆ ಆ್ಯಸಿಡಿಟಿ ಸಮಸ್ಯೆಯೇ ಇಲ್ಲ. ನನಗೀಗ 61 ವರ್ಷ. ಆರೋಗ್ಯವಾಗಿರುವುದರಿಂದ 45 ವರ್ಷದವನಂತೆ ಕಾಣುತ್ತೇನೆ..!&lt;/p&gt;&lt;p&gt;ಹೀಗೆ ತಮ್ಮ ಆರೋಗ್ಯದ ಗುಟ್ಟುರಟ್ಟು ಮಾಡಿದವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್&zwnj; ಗೌಡ. ಇತ್ತೀಚೆಗೆ ನಡೆದ ವಿಧಾನಸಭೆ ಕಲಾಪದಲ್ಲಿ ಆರೋಗ್ಯ ಇಲಾಖೆ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡುವಾಗ ಈ ವಿಚಾರ ಪ್ರಸ್ತಾಪಿಸಿದರು.&lt;/p&gt;&lt;p&gt;ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ. ಆರೋಗ್ಯ ಬೇಕಾ? ಹಾಗಾದ್ರೆ ಮೊದಲು ಸರ್ಕಾರ ಮದ್ಯ ನಿಷೇಧಿಸಬೇಕು. ಸರ್ಕಾರವೇ ಮದ್ಯ ಮಾರಾಟಕ್ಕೆ ಟಾರ್ಗೆಟ್&zwnj; ಫಿಕ್ಸ್&zwnj; ಮಾಡಿ ಮದ್ಯ ಕುಡಿಯಿರಿ, ಕುಡಿಯಿರಿ ಎಂದರೆ, ಆರೋಗ್ಯ ಎಲ್ಲಿಂದ ಸಿಗಬೇಕು? ಹುಲಿ, ಚಿರತೆ, ಆನೆ ಮೊದಲಾದ ಪ್ರಾಣಿಗಳಿಗೆ ಯಾವ ಆಸ್ಪತ್ರೆ ಇತ್ತು? ಮನುಷ್ಯನೂ ಸಹ ಪ್ರಾಣಿಯೇ. ನಾಗರಿಕತೆಯಿಂದ ಈ ಮಟ್ಟಕ್ಕೆ ಬೆಳೆದಿದ್ದಾನೆ. ಸರ್ಕಾರ ಆಸ್ಪತ್ರೆಗಳಿಗೆ ವೈದ್ಯರನ್ನು ನೀಡುವುದಕ್ಕಿಂತ ರೋಗಗಳು ಬಾರದಂತೆ ತಡೆಯಬೇಕು ಎಂದು ಸಲಹೆ ನೀಡಿದರು.&lt;/p&gt;&lt;p&gt;ಇಂದಿನ ಆಹಾರ ಪದ್ಧತಿ ಬದಲಾಗಿದೆ. ಕೊಳಚೆ ನೀರಿನಿಂದ ಬೆಳೆಯುವ ತರಕಾರಿಗಳು ವಿಷಕಾರಿಯಾಗಿವೆ. ನಮ್ಮ ತಾತ ನೂರು ವರ್ಷ ಬದುಕಿದ್ದರು. ಆಗೆಲ್ಲಾ ಯಾವ ಆಸ್ಪತ್ರೆಗಳಿದ್ದವು? ನಾನು ಮನೆಯಲ್ಲೇ ಹುಟ್ಟಿದವನು. ಈಗ ಸಿಸೇರಿಯನ್&zwnj; ಎಂಬುದು ಮಾಫಿಯಾ ಆಗಿದೆ. ಸರ್ಕಾರ ಆಸ್ಪತ್ರೆಗಳಿಗೆ ವೈದ್ಯರನ್ನು ನೀಡುವುದಕ್ಕಿಂತ ಕಾಯಿಲೆ ಬಾರದಂತೆ ತಡೆಯಬೇಕು. ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು. ಮದ್ಯ ಮಾರಾಟಕ್ಕೆ ಟಾರ್ಗೆಟ್&zwnj; ಫಿಕ್ಸ್&zwnj; ಮಾಡುವುದನ್ನು ಬಿಟ್ಟು ಮದ್ಯವನ್ನೇ ಬ್ಯಾನ್&zwnj; ಮಾಡಬೇಕು ಎಂದು ಸುರೇಶ್&zwnj; ಗೌಡ ಆಗ್ರಹಿಸಿದರು.&lt;/p&gt;&lt;p&gt;--------&lt;/p&gt;&lt;h2&gt;&lt;strong&gt;ಇರಾನ್&zwnj; ವಾರು-ಪ್ಲಾಸ್ಟಿಕ್&zwnj; ಬಾಟಲಿ ಮಾರಾಟ ಜೋರು!&lt;/strong&gt;&lt;/h2&gt;&lt;p&gt;ಮಧ್ಯಪ್ರಾಚ್ಯದಲ್ಲಿ ಇರಾನ್&zwnj; ಹೊತ್ತಿ ಉರಿಯುತ್ತಿದೆ. ಅಲ್ಲಿನ ಬೆಂಕಿಯ ಬಿಸಿ ಭಾರತಕ್ಕೂ ತಟ್ಟಿದೆ. ಇದರ ಮಧ್ಯೆ ಬೆಳಗಾವಿಯಲ್ಲಿ ಪೆಟ್ರೋಲ್&zwnj;, ಡಿಸೇಲ್&zwnj; ಕೊರತೆಯಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನೇ ಹಬ್ಬಿಸಿಬಿಟ್ಟರು. ಸಿಕ್ಕಿದ್ದು ಸೀರುಂಡೆ ಎಂಬಂತೆ ಬೆಳಗಾವಿ, ಬೈಲಹೊಂಗಲ, ಗೋಕಾಕ ಸೇರಿ ಅನೇಕ ಕಡೆಯ ಪೆಟ್ರೋಲ್&zwnj; ಬಂಕ್&zwnj;ಗಳು ರಾತ್ರಿ 12 ಗಂಟೆಯಾದರೂ ಫುಲ್&zwnj; ರಶ್&zwnj;.&lt;/p&gt;&lt;p&gt;ತೈಲವನ್ನು ಕೇವಲ ವಾಹನಗಳಿಗೆ ಹಾಕಿಸಿಕೊಂಡರೆ ಪರ್ವಾಗಿಲ್ಲ. ನೀರು ಸಂಗ್ರಹಿಸುವ ಬಾಟಲ್&zwnj;ಗಳು, ಕ್ಯಾನ್&zwnj;ಗಳು, ಡ್ರಮ್&zwnj;ಗಳನ್ನು ಕೂಡ ಜನ ತಂದು ತುಂಬಿಸಿಕೊಳ್ಳುತ್ತಿದ್ದರು. ಇದೆ ಸಂದರ್ಭ ಬಳಸಿಕೊಂಡು ಕೆಲ ವ್ಯಾಪಾರಸ್ಥರು ಪೆಟ್ರೋಲ್&zwnj; ಬಂಕ್&zwnj;ಗಳ ಪಕ್ಕದಲ್ಲೇ ಪ್ಲಾಸ್ಟಿಕ್&zwnj; ಬಾಟಲ್&zwnj;ಗಳು (2, 3, 5, 10 ಲೀ) ಮಾರಾಟ ಮಾಡಲು ಆರಂಭಿಸಿಬಿಟ್ರು.&lt;/p&gt;&lt;p&gt;ಪರಿಣಾಮ ಪೆಟ್ರೋಲ್&zwnj;, ಡಿಸೇಲ್&zwnj; ತುಂಬಿಸಿಕೊಳ್ಳಲು ಬಂದವರಿಗಿಂತ ಪ್ಲಾಸ್ಟಿಕ್&zwnj; ಬಾಟಲ್&zwnj; ಮಾರಾಟ ಮಾಡುವವರದ್ದೇ ದೊಡ್ಡ ಹವಾ ಆಯ್ತು. ಇದನ್ನು ಕಂಡ ಪೊಲೀಸ್&zwnj; ಇಲಾಖೆ ಕೇವಲ ವಾಹನಗಳಿಗೆ ಮಾತ್ರ ತೈಲ ತುಂಬಿಸಬೇಕು. ಇಲ್ಲವಾದರೆ ಕೇಸ್&zwnj; ಹಾಕ್ತೀವಿ ಅಂತ ಖಡಕ್&zwnj; ಎಚ್ಚರಿಕೆ ಕೊಟ್ಟು.&lt;/p&gt;&lt;h3&gt;&lt;strong&gt;ಮರುದಿನ ಯಾವ ಬಂಕ್&zwnj;ನಲ್ಲಿಯೂ ಪ್ಲಾಸ್ಟಿಕ್&zwnj;ಗಳಿಗೆ ಪೆಟ್ರೋಲ್&zwnj; ಬೀಳಲಿಲ್ಲ !&lt;/strong&gt;&lt;/h3&gt;&lt;h3&gt;--------------&lt;/h3&gt;&lt;p&gt;&lt;strong&gt;ಕಾಂಗ್ರೆಸ್&zwnj; ಪರ ಯತ್ನಾಳ ಪ್ರಚಾರ ಮಾಡ್ತಾರಾ?&lt;/strong&gt;&lt;/p&gt;&lt;p&gt;ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್&zwnj; ಮತ್ತು ಬಿಜೆಪಿ ನಾಯಕರ ಪ್ರಚಾರ ಭರಾಟೆ ತೀವ್ರಗೊಂಡಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಘಟಾನುಘಟಿ ನಾಯಕರು ಆಗಮಿಸಿದ್ದರು. ಇದೆ ವೇಳೆ ಬಿಜೆಪಿ ಉಚ್ಚಾಟಿತ ನಾಯಕ ಯತ್ನಾಳ ಕೂಡ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರುತ್ತಾರೆ ಅಂತ ಜೋರಾಗಿ ವದಂತಿ ಹಬ್ಬಿತ್ತು. ಆದರೆ, ಬಿಜೆಪಿ ಪರ ಯತ್ನಾಳ ಪ್ರಚಾರದ ಸಾಧ್ಯತೆಯ ವದಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದರು. ಅಷ್ಟೇ ಅಲ್ಲ, ನನ್ನ ಪ್ರಕಾರ ಶಾಸಕ ಬಸನಗೌಡ ಯತ್ನಾಳ ಅವರು ಕಾಂಗ್ರೆಸ್ ಪರ ಕೆಲಸ ಮಾಡಬೇಕು ಎಂದು ವಾದಿಸಿದರು.&lt;/p&gt;&lt;p&gt;ಬಾಗಲಕೋಟೆ ಪ್ರಚಾರಕ್ಕೆ ಆಗಮಿಸಿದ್ದ ಸಿಎಂ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯತ್ನಾಳ್&zwnj; ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ. ಉಚ್ಚಾಟನೆ ಮಾಡಿದ ಪಾರ್ಟಿ ಪರ ಯಾಕೆ ಮಾಡಬೇಕು ಎ೦ಬುದು ಮುಖ್ಯಮಂತ್ರಿಯವರ ವಾದವಾಗಿತ್ತು. ನನಗೆ ಗೊತ್ತಿರುವ ಮಟ್ಟಿಗೆ ಶಾಸಕ ಬಸನಗೌಡ ಯತ್ನಾಳ ಬಿಜೆಪಿಗೆ ಮಾಡಲಿಕ್ಕಿಲ್ಲ ಎಂದಷ್ಟೇ ಹೇಳಿದರು.&lt;/p&gt;&lt;p&gt;ಆದರೆ, ಅಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಹಾಗಾದರೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಯತ್ನಾಳ ಅವರಿಗೆ ಮನವಿ ಮಾಡುವಿರಾ ಎಂಬ ಪ್ರಶ್ನೆ ಕೇಳಿದರು. ಇದಕ್ಕುತ್ತರಿಸಿದ ಸಿಎಂ ಸಿದ್ದರಾಮಯ್ಯ, ಇಲ್ಲ ಎನ್ನುವ ಬದಲು ಆಗಲ್ಲ ಎಂಬುವುದನ್ನು ಸನ್ನೆ ಮೂಲಕ ತಿಳಿಸಿಕೊಟ್ಟು, ನಕ್ಕು ಮುಂದೆ ನಡೆದರು.&lt;/p&gt;&lt;p&gt;&lt;strong&gt;-ಮೋಹನ ಹಂಡ್ರಂಗಿ&lt;/strong&gt;&lt;/p&gt;&lt;p&gt;&lt;strong&gt;-ಶ್ರೀಶೈಲ ಮಠದ&lt;/strong&gt;&lt;/p&gt;&lt;p&gt;&lt;strong&gt;-ಈಶ್ವರ ಶೆಟ್ಟರ.&lt;/strong&gt;&lt;/p&gt;]]></content:encoded>
            <category>magazine</category>
            <dc:creator>Kannadaprabha News</dc:creator>
            <atom:link href="https://kannada.asianetnews.com/magazine/bjp-mla-suresh-gowda-gets-relief-from-australian-medicine-for-his-chronic-acidity-problem-mrq/articleshow-2vq7koy"/>
        </item>
        <item>
            <title><![CDATA[ಮದುವೆ ಔಟ್‌ಡೇಟೆಡ್‌ ಆಗೋಯ್ತಾ!]]></title>
            <link>https://kannada.asianetnews.com/magazine/is-marriage-becoming-outdated-meaning-behind-jaya-bachchan-s-statement-mrq/articleshow-33ch9yc</link>
            <guid isPermaLink="true">https://kannada.asianetnews.com/magazine/is-marriage-becoming-outdated-meaning-behind-jaya-bachchan-s-statement-mrq/articleshow-33ch9yc</guid>
            <pubDate>Sun, 07 Dec 2025 11:15:32 +0530</pubDate>
            <description><![CDATA[&lt;p&gt;ಹಿರಿಯ ಪತ್ರಕರ್ತೆ ಬರ್ಖಾ ದತ್ತ್&zwnj; ಅವರ ಪಾಡ್&zwnj;ಕಾಸ್ಟ್&zwnj; &lsquo;ವಿ ದ ವುಮೆನ್&zwnj;&rsquo;ನಲ್ಲಿ ಜಯಾ ಬಚ್ಚನ್&zwnj; ಮುಕ್ತವಾಗಿ ಮದುವೆ ಕುರಿತಾದ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಸಂಚಲನ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbcrgmw37sa7z2c3dhfq9svx,imgname-new-project--29--1764586181506.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಯಾ ಬಚ್ಚನ್&zwnj; ತನ್ನ ವಿಶಿಷ್ಟ ಮಾತುಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ಈ ಸೀನಿಯರ್&zwnj; ನಟಿ; ಅದಕ್ಕೆ ವ್ಯಕ್ತವಾಗುವ ವಿರೋಧಗಳಿಗೆಲ್ಲ ಕ್ಯಾರೇ ಅನ್ನೋರಲ್ಲ.&lt;/p&gt;&lt;p&gt;ಕೆಲವು ಸಮಯದ ಹಿಂದೆ ಸಂಸತ್&zwnj;ನಲ್ಲಿ, ಆಗ ಉಪರಾಷ್ಟ್ರಪತಿಗಳಾಗಿದ್ದ ಜಗದೀಪ್&zwnj; ಧಂಕರ್&zwnj; ಅವರು, ಜಯಾ ಹೆಸರಿನ ಜೊತೆಗೆ ಪತಿ ಅಮಿತಾಭ್&zwnj; ಹೆಸರನ್ನು ಸೇರಿಸಿ ಕರೆದಾಗ ಜಯಾ ಕಿಡಿಕಿಡಿಯಾಗಿದ್ದರು. &lsquo;ಗಂಡನ ಬಗ್ಗೆ ಹೆಮ್ಮೆ ಗೌರವ ಇದೆ. ಆದರೆ ನನ್ನ ಅಸ್ಮಿತೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ಕೊಡಿ&rsquo; ಎಂದು ನಿಷ್ಠುರವಾಗಿ ಹೇಳಿದ್ದರು. &lsquo;ಸರ್ಟಿಫಿಕೆಟ್&zwnj;ನಲ್ಲಿ ನಿಮ್ಮ ಹೆಸರಿನ ಜೊತೆಗೆ ಅಮಿತಾಬ್&zwnj; ಹೆಸರೂ ಇದೆಯಲ್ಲಾ?&rsquo; ಅಂದಿದ್ದಕ್ಕೂ ಅವರ ಬಳಿ ಉತ್ತರವಿತ್ತು. ಆಮೇಲೆ ಇದು ಒಂದಿಷ್ಟು ಮಂದಿಗೆ ಲೇವಡಿಯ ವಿಷಯವಾಯಿತು. ಹೆಚ್ಚಿನವರು ಅವರ ಮಾತಿನ ಹಿಂದಿನ ಮರ್ಮ ಅರ್ಥ ಮಾಡಿಕೊಳ್ಳಲಿಲ್ಲ. ಹೆಣ್ಣಾಗಲಿ, ಗಂಡಾಗಲಿ ಸಾರ್ವಜನಿಕವಾಗಿ ಅವರನ್ನು ಇನ್ನೊಬ್ಬರ ಮೂಲಕ ಗುರುತಿಸುವ ಪ್ರವೃತ್ತಿಯ ಬಗ್ಗೆ ಅವರು ಪ್ರಶ್ನೆ ಮಾಡಿದ್ದರು.&lt;/p&gt;&lt;p&gt;ಜಾಗತಿಕವಾಗಿ ಹೆಣ್ಣನ್ನು ಗಂಡಿನ ಮೂಲಕ ಗುರುತಿಸುವ ಪ್ರವೃತ್ತಿಯ ಇತಿಹಾಸ ಎಲ್ಲಿದೆಯೋ ಗೊತ್ತಿಲ್ಲ, ಆದರೆ ಇಂಥ ಅಬದ್ಧಗಳ ಬಗ್ಗೆ ದನಿ ಎತ್ತಿದ ಕೂಡಲೇ ಅವರನ್ನು ಗಂಡು ವಿರೋಧಿ, ಸೋ ಕಾಲ್ಡ್&zwnj; ಸ್ತ್ರೀವಾದಿ ಇತ್ಯಾದಿ ಹಣೆಪಟ್ಟಿಗಳಿಂದ ಲೇವಡಿ ಮಾಡುತ್ತಾರೆ. ಆ ಮೂಲಕ ಇಂಥಾ ದನಿಯನ್ನು ಅಲ್ಲೇ ಹೂತು ಹಾಕುವ ಸೂಕ್ಷ್ಮ ಕ್ರೌರ್ಯವೂ ಚಾಲ್ತಿಯಲ್ಲಿದೆ.&lt;/p&gt;&lt;h2&gt;&lt;strong&gt;ಮದುವೆ ಔಟ್&zwnj;ಡೇಟೆಡ್&zwnj;&lt;/strong&gt;&lt;/h2&gt;&lt;p&gt;.. ಜಯಾ ಬಚ್ಚನ್&zwnj; ಅವರ &lsquo;ಮದುವೆ ಔಟ್&zwnj;ಡೇಟೆಡ್&zwnj;&rsquo; ಅನ್ನೋ ಮಾತಿನ ಹಿಂದೆ ಇಂಥಾ ಅರ್ಥವ್ಯಾಪ್ತಿಯೂ ಇರಬಹುದೇನೋ.&lt;/p&gt;&lt;p&gt;ನವ್ಯಾ ನವೇಲಿ ಅನ್ನೋ ಅಮಿತಾಬ್&zwnj; ಬಚ್ಚನ್&zwnj; ಮೊಮ್ಮಗಳು ಆಗಾಗ ತಾಯಿ ಶ್ವೇತಾ ಬಚ್ಚನ್&zwnj;, ಅಜ್ಜಿ ಜಯಾ ಜೊತೆಗೆ ಪಾಡ್&zwnj;ಕಾಸ್ಟ್&zwnj; ಮಾಡುತ್ತಿರುತ್ತಾರೆ. ಇದರಲ್ಲಿ ಜಯಾ ಬಚ್ಚನ್&zwnj; ಮುಕ್ತವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.&lt;/p&gt;&lt;p&gt;&lsquo;ಒಂದು ಸಂಬಂಧದಲ್ಲಿ ದೈಹಿಕ ಆಕರ್ಷಣೆ ಜೊತೆಗೆ ಹೊಂದಾಣಿಕೆ ಅನ್ನೋದು ಬಹಳ ಮುಖ್ಯ. ನಮ್ಮ ಕಾಲದಲ್ಲಿ ಸಂಬಂಧಗಳ ವಿಚಾರಕ್ಕೆ ಬಂದರೆ ಹೊಸತನಕ್ಕೆ, ಪ್ರಯೋಗಶೀಲತೆಗೆ ಅವಕಾಶ ಇರಲಿಲ್ಲ. ಆದರೆ ಈಗ ಹಾಗಲ್ಲ. ಈಗ ಅವರಿಗೆ ಎಲ್ಲ ಸ್ವಾತಂತ್ರ್ಯವೂ ಇದೆ, ಹಾಗಿರುವಾಗ ಅವರ್ಯಾರೆ ಹೊಸ ಬಗೆಯ ಬದುಕಿಗೆ ತೆರೆದುಕೊಳ್ಳಬಾರದು, ಏಕೆಂದರೆ ಒಂದು ಸಂಬಂಧ ತನ್ನ ಆರ್ದ್ರತೆಯನ್ನು ಬಹುಕಾಲದವರೆಗೆ ಉಳಿಸಿಕೊಳ್ಳಲು ಅದೂ ಮುಖ್ಯ&rsquo; ಅಂದಿದ್ದಾರೆ.&lt;/p&gt;&lt;p&gt;ಇನ್ನೊಂದೆಡೆ ಹಿರಿಯ ಪತ್ರಕರ್ತೆ ಬರ್ಖಾ ದತ್ತ್&zwnj; ಅವರ ಪಾಡ್&zwnj;ಕಾಸ್ಟ್&zwnj; &lsquo;ವಿ ದ ವುಮೆನ್&zwnj;&rsquo;ನಲ್ಲಿ ಜಯಾ ಬಚ್ಚನ್&zwnj; ಮುಕ್ತವಾಗಿ ಮದುವೆ ಕುರಿತಾದ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಸಂಚಲನ ಸೃಷ್ಟಿಸಿದೆ. ಅಲ್ಲವರು&lt;/p&gt;&lt;p&gt;&lsquo;ಮದುವೆ ಅನ್ನೋದು ಔಟ್&zwnj; ಡೇಟೆಡ್&zwnj; ಕಾನ್ಸೆಪ್ಟ್&zwnj;&rsquo; ಎಂದು ಹೇಳಿ, ತನ್ನ ಮೊಮ್ಮಗಳು ನವ್ಯಾ ನವೇಲಿ ನಂದ ಇದೀಗ 28ರ ಹರೆಯಕ್ಕೆ ಕಾಲಿಡುತ್ತಿದ್ದು, ಆಕೆ ಮದುವೆ ಆಗೋದು ತನಗೆ ಸುತಾರಾಂ ಇಷ್ಟವಿಲ್ಲ ಅಂದುಬಿಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಮೊಮ್ಮಗಳು ನವ್ಯಾ ಮದುವೆ ಆಗೋದು ನನಗಿಷ್ಟವಿಲ್ಲ&lt;/strong&gt;&lt;/h3&gt;&lt;p&gt;&lsquo;ಈ ಕಾಲದ ಹೆಣ್ಣುಮಕ್ಕಳಿಗೆ ಸಲಹೆ ನೀಡಲು ನಾನು ತುಂಬ ಹಿರಿಯಳಾದೆ. ಮಕ್ಕಳನ್ನು ಹೇಗೆ ಬೆಳೆಸಬೇಕು ಅನ್ನೋದನ್ನೆಲ್ಲ ನಾನು ಹೇಳಿದರೆ ಸರಿಯಾಗದು. ಯಾಕೆಂದರೆ ಈ ಕಾಲದ ಮಕ್ಕಳು ಬಹಳ ಸ್ಮಾರ್ಟ್&zwnj; ಇದ್ದಾರೆ. ಲೈಫನ್ನು ಎನ್&zwnj;ಜಾಯ್&zwnj; ಮಾಡಿ ಅಂತಷ್ಟೇ ಹೇಳಬಲ್ಲೆ. ನಾನು ಮದುವೆಯಾಗಿ ಸಕ್ರಿಯ ವೃತ್ತಿ ಬದುಕಿನಿಂದ ಹೊರಗುಳಿದೆ. ನನ್ನ ಮಗಳು ಶ್ವೇತಾ ಸಹ ನನ್ನದೇ ಹಾದಿ ಹಿಡಿದಳು. ಆದರೆ ನನ್ನ ಮೊಮ್ಮಗಳು ನವ್ಯಾ ಮದುವೆ ಆಗೋದು ನನಗಿಷ್ಟವಿಲ್ಲ&rsquo; ಎಂದು ನಿರ್ಭೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಜಯಾ ಬಚ್ಚನ್&zwnj; ಮಾತುಗಳು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಬದಲಾದ ಸ್ಥಿತ್ಯಂತರದ ಕಾಲಘಟ್ಟಕ್ಕೆ ತಕ್ಕಂತೆ ಅವರ ಮಾತುಗಳಿವೆ. ಒಂದು ಕಾಲಕ್ಕೆ ಮದುವೆ ಅನ್ನೋದು ಗಂಡು ಹೆಣ್ಣಿನ ಸಂಬಂಧಕ್ಕೆ ಕಾನೂನಿನ ಮುದ್ರೆಯಂತಿತ್ತು. ಆಗ ಅದು ಅನಿವಾರ್ಯವಾಗಿತ್ತು. ಆದರೆ ಈಗ ಹೆಣ್ಣು, ಗಂಡಿನ ಸಂಬಂಧದಲ್ಲಿ ಬಂಧನಕ್ಕಿಂತಲೂ ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಕಾನೂನಿನ, ಸಂಪ್ರದಾಯದ ಅಂಕಿತದಡಿ ಜೊತೆಗಿರಬೇಕಾದ ಅನಿವಾರ್ಯತೆ ಅವರಿಗಿಲ್ಲ. ಹೀಗಿರುವಾಗ ಜಯಾ ಬಚ್ಚನ್&zwnj; ಮಾತು ಹೆಚ್ಚು ಪ್ರಸ್ತುತವಾಗುತ್ತದೆ.&lt;/p&gt;]]></content:encoded>
            <category>magazine</category>
            <dc:creator>Kannadaprabha News</dc:creator>
            <atom:link href="https://kannada.asianetnews.com/magazine/is-marriage-becoming-outdated-meaning-behind-jaya-bachchan-s-statement-mrq/articleshow-33ch9yc"/>
        </item>
        <item>
            <title><![CDATA[Karnataka Live: Bhagyalakshmi Serial ಮುಗಿಯಲ್ಲ, ಪಾತ್ರ ಬದಲು- ಖುದ್ದು ನಟಿ ಸುಷ್ಮಾ ರಾವ್​ ಏನ್​ ಹೇಳಿದ್ರು ನೋಡಿ]]></title>
            <link>https://kannada.asianetnews.com/magazine/bengaluru-airport-drug-bust-1-7-kg-hashish-hidden-in-candy-packets-seized-from-bangkok-passenger-rav/liveblog-updates-3g3p8t5</link>
            <guid isPermaLink="true">https://kannada.asianetnews.com/magazine/bengaluru-airport-drug-bust-1-7-kg-hashish-hidden-in-candy-packets-seized-from-bangkok-passenger-rav/liveblog-updates-3g3p8t5</guid>
            <pubDate>Fri, 13 Feb 2026 22:37:23 +0530</pubDate>
            <description><![CDATA[&lt;p&gt;&lt;strong&gt;ಬೆಂಗಳೂರು (ಫೆ.13)&lt;/strong&gt;: ವಿದೇಶದಿಂದ ಪೆಪ್ಪರ್&zwnj;ಮೆಂಟ್ ಹಾಗೂ ಸಿಹಿ ತಿನಿಸುಗಳಲ್ಲಿ ಡ್ರಗ್ಸ್ ಅಡಗಿಸಿ ಸಾಗಾಣಿಕೆಗೆ ಯತ್ನಿಸಿದ್ದ ಪೆಡ್ಲರ್&zwnj;ನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.&lt;/p&gt;&lt;p&gt;ಬ್ಯಾಂಕಾಕ್&zwnj;ನಿಂದ ಕೆಐಎಗೆ ಬಂದಿಳಿದ ಪ್ರಯಾಣಿಕನನ್ನು ಶಂಕೆ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ತಪಾಸಣೆಗೊಳಪಡಿಸಿದ್ದಾರೆ. ಆಗ ಆತನ ಬ್ಯಾಗ್&zwnj;ನಲ್ಲಿದ್ದ ಪೆಪ್ಪರ್&zwnj;ಮೆಂಟ್&zwnj; (ಕ್ಯಾಡಿ) ಹಾಗೂ ಸಿಹಿ ತಿನಿಸುಗಳ ಪೊಟ್ಟಣಗಳನ್ನು ತೆರೆದು ನೋಡಿದಾಗ 4.25 ಲಕ್ಷ ರು. ಮೌಲ್ಯದ 1.7 ಕೆಜಿ ಹ್ಯಾಶೀಶ್ ಹಾಗೂ ಚರಸ್&zwnj; ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಟ್ಟಣ ತೆರೆದು ಪರಿಶೀಲಿಸುವ ಸಮಯದ ವಿಡಿಯೋ ಹಾಗೂ ಪೋಟೋವನ್ನು ಕಸ್ಟಮ್ಸ್ ಅಧಿಕಾರಿಗಳು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;sub&gt;ಮತ್ತೆ 3.39 ಕೋಟಿ ಮೌಲ್ಯದ ಗಾಂಜಾ ಜಪ್ತಿ&lt;/sub&gt;&lt;/p&gt;&lt;p&gt;ಕೆಐಎನಲ್ಲಿ ಕಸ್ಟಮ್ಸ್ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ 3.39 ಕೋಟಿ ರು. ಮೌಲ್ಯದ 9.7 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ.&lt;/p&gt;&lt;p&gt;ಕೆಐಎಗೆ ಬುಧವಾರ ಬ್ಯಾಂಕಾಕ್&zwnj;ನಿಂದ ಬಂದಿಳಿದ ಪ್ರಯಾಣಿಕನ ಬಳಿ ಗಾಂಜಾ ಪತ್ತೆಯಾಗಿದೆ. ಬ್ಯಾಂಕಾಕ್&zwnj;ನಿಂದ ಹೈಡ್ರೋ ಗಾಂಜಾ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬ್ಯಾಗ್&zwnj;ನಲ್ಲಿ ಗಾಂಜಾ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khbzet16nc6pkz9gvz0qwqt1,imgname-sushma-k-rao-1771002357798.jpg" type="image/jpeg" height="390" width="690"/>
            <category>magazine</category>
            <dc:creator>Asianet News</dc:creator>
            <atom:link href="https://kannada.asianetnews.com/magazine/bengaluru-airport-drug-bust-1-7-kg-hashish-hidden-in-candy-packets-seized-from-bangkok-passenger-rav/liveblog-updates-3g3p8t5"/>
        </item>
        <item>
            <title><![CDATA[ನಮ್ಮ ಕನ್ನಡಿಗರೇ ಆಗಿ ಬಿಟ್ಟಿದ್ದ ಮಲಯಾಳಂ ಸಾಹಿತಿ ಎಂ ಟಿ ವಾಸುದೇವನ್ ನಾಯರ್]]></title>
            <link>https://kannada.asianetnews.com/special/word-tribute-to-malayalam-writer-mt-vasudevan-nair-life-splsif</link>
            <guid isPermaLink="true">https://kannada.asianetnews.com/special/word-tribute-to-malayalam-writer-mt-vasudevan-nair-life-splsif</guid>
            <pubDate>Fri, 10 Jan 2025 11:17:08 +0530</pubDate>
            <description><![CDATA[&lt;p&gt;ಎಂ.ಟಿ. ವಾಸುದೇವನ್ ನಾಯರ್, ಮಲಯಾಳಂನ ಪ್ರಮುಖ ಸಾಹಿತಿ, ಕನ್ನಡಕ್ಕೆ ಹಲವು ಅನುವಾದಗಳ ಮೂಲಕ ಸುಪರಿಚಿತರು. ಹಳ್ಳಿ, ಬಡತನ, ಕುಟುಂಬ, ಸ್ತ್ರೀ ಪಾತ್ರಗಳು ಅವರ ಕಥೆಗಳ ಕೇಂದ್ರಬಿಂದು. ಸರಳ ನಿರೂಪಣೆ, ಸಂಭಾಷಣೆಗಳಲ್ಲಡಗಿರುವ ಆಳ ಅವರ ಬರವಣಿಗೆಯ ವೈಶಿಷ್ಟ್ಯ. 'ಚೌಕಟ್ಟಿನ ಮನೆ', 'ಕಾಲ', 'ವಾರಾಣಸಿ' ಮುಂತಾದವು ಪ್ರಮುಖ ಕೃತಿಗಳು. ಊರಿನ ಬದುಕೇ ಅವರ ಸಾಹಿತ್ಯದ ಜೀವಾಳ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jg8gdmbg3k7e13a3ckee2smj,imgname-bhanuprabha-vasudevan-article.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ನರೇಂದ್ರ ಪೈ&lt;/strong&gt;&lt;/p&gt; &lt;p&gt;ವೈಕಂ ಬಶೀರ್, ತಗಳಿ ಶಿವಶಂಕರ ಪಿಳ್ಳೆ ಸಾಲಿಗೆ ಸೇರುವ ಇನ್ನೊಬ್ಬ ಮಲಯಾಳಂ ಕತೆಗಾರ, ಕಾದಂಬರಿಕಾರ ಎಂ ಟಿ ವಾಸುದೇವನ್ ನಾಯರ್. ಅವರ ಸಣ್ಣಕತೆಗಳು, ಕಾದಂಬರಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ ಎನ್ನುವುದು ಸರಿಯೇ. ಆದರೆ ಕನ್ನಡದವರಾಗಿ ನಾವಂತೂ ನಿಜಕ್ಕೂ ಭಾಗ್ಯವಂತರು ಎನ್ನಬೇಕು. ಏಕೆಂದರೆ, ಕೆ ಕೆ ನಾಯರ್, ಸಿ ರಾಘವನ್, ಡಾ. ಅಶೋಕ್ ಕುಮಾರ್, ಬಿ ಕೆ ತಿಮ್ಮಪ್ಪ, ಮೋಹನ ಕುಂಟಾರ್, ಪಾರ್ವತಿ ಜಿ ಐತಾಳ್, ಕೆ ಕೆ ಗಂಗಾಧರನ್, ಕೆ ಎಸ್ ಕರುಣಾಕರನ್ ಮುಂತಾದವರಿಂದಾಗಿ ಸುಮಾರು ಹತ್ತು ಕೃತಿಗಳ ಮೂಲಕ ಎಂ ಟಿ ವಾಸುದೇವನ್ ನಾಯರ್ ಅವರ ಮಹತ್ವದ ಕೃತಿಗಳೆಲ್ಲವೂ ಕನ್ನಡಕ್ಕೆ ಬಂದಿವೆ. ಎಂಟಿ ಅವರನ್ನು ನಾವು ಕನ್ನಡದಲ್ಲಿಯೇ ಓದಬಹುದು. ಹಾಗಾಗಿ ನಮಗೆಲ್ಲ ಅವರು ಕನ್ನಡದವರಲ್ಲ ಅನಿಸುವುದು ಕಷ್ಟ.&lt;/p&gt; &lt;p&gt;ಆಕ್ಸ್&zwnj;ಫರ್ಡ್ ಯುನಿವರ್ಸಿಟಿ ಪ್ರೆಸ್ 2017ರಲ್ಲಿ ಮಲಯಾಳಂ ಭಾಷೆಯ ಕಾವ್ಯ, ನಾಟಕ, ಗದ್ಯ ಮತ್ತು ಕತೆ ಕಾದಂಬರಿಗಳ ಅಧ್ಯಯನ ಪೂರ್ಣ ಪರಿಚಯವುಳ್ಳ ಎರಡು ಬೃಹತ್ ಸಂಪುಟಗಳನ್ನು ಕೂಡ ಪ್ರಕಟಿಸಿದೆ. ಕನ್ನಡ ಅನುವಾದಗಳಲ್ಲೂ ನಮಗೆ ಫಕೀರ್ ಮಹಮ್ಮದ್ ಕಟ್ಪಾಡಿ, ಮೋಹನ್ ಕುಂಟಾರ್, ಕೃಷ್ಣ ಚೈತನ್ಯರಂಥವರು ಮುನ್ನುಡಿಗಳ ನೆಪದಲ್ಲಿ ಮಲಯಾಳಂ ಸಾಹಿತ್ಯದ ಸಂಕ್ಷಿಪ್ತ ಪರಿಚಯವನ್ನೂ, ಎಂಟಿ ಅವರ ಸಾಹಿತ್ಯದ ಪರಿಚಯವನ್ನೂ ಸಾಕಷ್ಟು ವಿಸ್ತಾರವಾಗಿಯೇ ಒದಗಿಸಿದ್ದಾರೆ. ಹಾಗಿದ್ದೂ, ನಮ್ಮ ಯು ಆರ್ ಅನಂತಮೂರ್ತಿ, ಲಂಕೇಶ್ ಅವರ ಸಮಕಾಲೀನ ತಲೆಮಾರಿನವರಾದ, ನವ್ಯ ಎಂದು ನಾವು ಗುರುತಿಸಿಕೊಂಡ, ಹೆಚ್ಚು ಪಾಶ್ಚಾತ್ಯ ಸಾಹಿತ್ಯದ ಪ್ರಭಾವ ಹೊಂದಿದ್ದ ಒಂದು ಕಾಲಘಟ್ಟದಲ್ಲಿಯೇ ಬರೆಯತೊಡಗಿದ್ದ ಎಂಟಿ ಅವರು ಅಂಥದ್ದನ್ನೆಲ್ಲ ಅಷ್ಟಾಗಿ ತಮ್ಮ ಸಾಹಿತ್ಯದಲ್ಲಿ ತೋರದೆ, ತೀರ ಸರಳವಾಗಿ ಬರೆಯುತ್ತಿದ್ದರು ಎನ್ನುವುದು ಒಂದು ಕೌತುಕವಾದರೆ, ಅಂಥ ಎಂಟಿ ಅವರ ಸಾಹಿತ್ಯದ ಆಕರ್ಷಣೆ ಏನು ಎನ್ನುವುದು ಇನ್ನೊಂದು ಕುತೂಹಲಕರ ಪ್ರಶ್ನೆ.&lt;/p&gt; &lt;p&gt;ಎಂಟಿ ಅವರ ಕಥಾ ಸಾಹಿತ್ಯದ ರಂಗಭೂಮಿ ಹಳ್ಳಿಯ ಬದುಕು. ಬಡತನದಲ್ಲಿ ಏಗುತ್ತಿರುವ ಅಳಿಯಕಟ್ಟಿನ ಸಂಸಾರ, ಅವಿಭಕ್ತ ಕುಟುಂಬಗಳು, ಗತಕಾಲದ ವೈಭವ ಕಳೆದುಕೊಂಡು ಕುಸಿಯುತ್ತಿರುವ ಮನೆತನಗಳು, ಸ್ತ್ರೀಪ್ರಧಾನ ಪಾತ್ರಭೂಮಿಕೆ. ತೀವ್ರವಾದ ಯಾವುದೇ ಪ್ರತಿರೋಧ ತೋರದ ನಮ್ರ ಬದುಕಿಗೆ ಪಕ್ಕಾದವರ ಚಿತ್ರಣ. ನಾಯಕನ ಮೌನ, ಒಂಟಿತನ, ಕೊಂಚ ಅರ್ಥವಾಗದ ನಡವಳಿಕೆ. ಸುಲಭವಾದ ಯಶಸ್ಸು ಅವನ ಬಾಳಲ್ಲಿ ಎದುರಾಗುವುದು ಕಡಿಮೆ. ಹಾಗೆ ಎದುರಾದರೂ ಅವನಲ್ಲಿ ಏನೋ ಕೊರತೆ, ಯಾವುದೋ, ಯಾರೋ ಕೈತಪ್ಪಿ ಹೋದ ವಿಷಾದ, ಸಂತ್ರಸ್ತ ಭಾವ. ಇಷ್ಟಾದ ಬಳಿಕ ಬದುಕಿನ ಸಂಕೀರ್ಣ ಮುಖಗಳು ತೆರೆದುಕೊಳ್ಳುತ್ತ ಹೋಗುವುದು ಕಥನದ ಮುಂದಿನ ಹೆಜ್ಜೆ. ಅವರು ಪುರಾಣದ ಪಾತ್ರಗಳತ್ತ ಹೊರಳಲಿ, ಜನ್ಮ ಮೃತ್ಯು ಅಪರಲೋಕದ ಜಿಜ್ಞಾಸೆಯತ್ತ ಹೊರಳಲಿ, ಕಥನದ ಸ್ಥಾಯೀ ಬಿಂದುಗಳು ಬದಲಾಗುವುದಿಲ್ಲ.  ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: 6 ಕವನಗಳು ಬೇಗ ಮುಗಿದವು, ಮತ್ತಾರು ಕವನಕ್ಕೆ ಶಿಳ್ಳೆ, ಚಪ್ಪಾಳೆ ಬಿದ್ದವು!&lt;/p&gt; &lt;p&gt;ಎಂಟಿ ಅವರ ಕಥನದ ನಿಜವಾದ ಆಕರ್ಷಣೆ ಅವರ ಸಂಭಾಷಣೆಗಳು. ಎಂಟಿ ಈ ಸಂಭಾಷಣೆಗಳನ್ನು ಹೇಗೆ ಹೆಣೆಯುತ್ತಾರೆಂದರೆ ಅವು ಪ್ರತಿ ಬಾರಿ ಹೇಳುತ್ತಿರುವುದಕ್ಕಿಂತ ಹೆಚ್ಚಿನದ್ದೇನೋ ಅಡಗಿಸಿಟ್ಟುಕೊಂಡಿರುತ್ತವೆ ಮತ್ತು ಓದುಗನನ್ನು ಆ ಹೇಳದೇ ಬಿಟ್ಟ ಮಾತು ಸದಾ ಕಾಡುತ್ತಲೇ ಇರುವಂತೆ ಅವುಗಳ ನೇಯ್ಗೆ ಇರುತ್ತದೆ. ಅದು ಕೆಲವೊಮ್ಮೆ ಮುಗ್ಧ ಮಕ್ಕಳ ಮಾತುಕತೆಯಾಗಿರುತ್ತದೆ, ಕೆಲವೊಮ್ಮೆ ಬಾಯ್ಬಿಟ್ಟು ಮಾತನಾಡಲು ಹೆದರುವ ಹೆಂಗಸರದ್ದೋ, ಕೂಲಿಯವರದ್ದೋ ಮಾತಾಗಿರುತ್ತದೆ. ಇನ್ನು ಕೆಲವೊಮ್ಮೆ ಪ್ರೇಮಿಗಳದ್ದು, ನೊಂದವರದ್ದು, ಮಾತು ಬೇಡವಾಗಿ ಬಿಟ್ಟವರದ್ದು. ಅದೇನಿದ್ದರೂ ಎಂಟಿ ಅವರ ಸಂಭಾಷಣೆಗಳು ಸದಾ ಓದುಗನನ್ನು ಕಾಡುತ್ತಲೇ ಉಳಿಯುವ , ಹೇಳದೇ ಬಿಟ್ಟ ಯಾವುದೋ ಹೊಳಹುಗಳೊಂದಿಗೆ ನಿಲ್ಲುತ್ತವೆ, ಗೊಂಡೆ ಕಟ್ಟದ ರೇಶ್ಮೆ ಸೀರೆಯ ಕುಚ್ಚುಗಳಂತೆ.&lt;/p&gt; &lt;p&gt;ಎಂಟಿ ಅವರ ಚೊಚ್ಚಲ ಕಾದಂಬರಿ &lsquo;ಚೌಕಟ್ಟಿನ ಮನೆ&rsquo; (1958) ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಅಳಿಯಕಟ್ಟಿನ ಸಂಸಾರವೊಂದರ ಹೆಣ್ಣು ತನ್ನಿಷ್ಟದ ಗಂಡಿನ ಜೊತೆ ಓಡಿ ಹೋಗಿದ್ದರಿಂದ ವಾರಸುದಾರನಾಗುವ ಹಕ್ಕಿಗೆ ಎರವಾದ ಮಗ ಅಪ್ಪುಣ್ಣಿ ಈ ಕಾದಂಬರಿಯ ಕೇಂದ್ರ. ಇದು ಅವಿಭಕ್ತ ಕೌಟುಂಬಿಕತೆ ಶಿಥಿಲವಾಗುತ್ತಿರುವುದರ ಕಥನ ಕೂಡ ಹೌದು. ಇಂಥದೇ ಚೌಕಟ್ಟು ಹೊಂದಿದ, ಆದರೆ ಹೆಚ್ಚು ಸಂಕೀರ್ಣವಾದ ಕಾದಂಬರಿ &lsquo;ಕಾಲ&rsquo; (1969)ದಲ್ಲಿ ಸೇತು ಮಾಧವನ್ ಅಪ್ಪುಣ್ಣಿಯ ಪಾತ್ರವನ್ನೇ ಮುಂದುವರಿಸಿದಂತಿದೆ. ಹಾಗೆ ನೋಡಿದರೆ ಎಂಟಿ ಅವರ ಎರಡನೆಯ ಕಾದಂಬರಿ &lsquo;ದುರ್ಬೀಜ&rsquo; (1962) ಕೂಡ ತರವಾಡಿನ ಆರ್ಥಿಕ ಕುಸಿತ ಮತ್ತು ಅದರ ಬಲಿಪಶುವಾದ ಗೋವಿಂದನ್ ಕುಟ್ಟಿಯನ್ನು ಅವನ ಭಾವನೇ ಶೋಷಿಸುವ ಕತೆ, ನಿರರ್ಥಕ ಸೇಡಿನ ಕತೆ. ನಡುವಿನ &lsquo;ಮಂಜು&rsquo; (1965) ನೈನಿತಾಲಿಗೆ ಬಂದ ಯುವಕನ ಪ್ರೇಮದ ಮಾತುಗಳನ್ನು ನಂಬಿ ವ್ಯರ್ಥ ಕಾಯುವಿಕೆಯಲ್ಲಿ ಕಲ್ಲಾಗುವ ಕತೆ. ಇಂಥ ವ್ಯರ್ಥ ನಿರೀಕ್ಷೆಯೊಂದು ಎಂಟಿ ಅವರ ಹೆಚ್ಚಿನ ಎಲ್ಲ ಕತೆ ಕಾದಂಬರಿಗಳಲ್ಲೂ ಸ್ಥಾಯಿಯಾಗಿ ಇದ್ದೇ ಇರುತ್ತದೇನೋ ಅನಿಸುವಂತೆ ಅವರ ಒಟ್ಟು ಕೃತಿಗಳನ್ನು ಮನಸ್ಸಿಗೆ ತಂದುಕೊಂಡಾಗೆಲ್ಲ ಅನಿಸಿಯೇ ಅನಿಸುತ್ತದೆ. &lsquo;ಭೀಮಾಯಣ&rsquo; (1984)ದ ಭೀಮನನ್ನು ಕೂಡ ಸದಾ ಎರಡನೆಯವನಾಗಿ ಅನುಭವಿಸಿದ ಅಪಮಾನದ ನೆರಳಿನಲ್ಲಿಯೇ ಅವರು ಕಾಣಿಸಿದ್ದಾರೆ. 2002ರಲ್ಲಿ ಬಂದ &lsquo;ವಾರಾಣಸಿ&rsquo; ಮಾತ್ರ ಈ ಎಲ್ಲ ಮೆಲಂಕಲಿಯೂ ಇನ್ನೊಂದೇ ಸ್ತರಕ್ಕೇರಿದ, ಜಿಜ್ಞಾಸೆಯ ಸಂಕೀರ್ಣತೆಯಲ್ಲಿ ಮೂಡಿಬಂದ ಬಹಳ ಅಪರೂಪದ ಕಾದಂಬರಿ.&lt;/p&gt; &lt;p&gt;ಇವಲ್ಲದೆ, &lsquo;ಕುಟ್ಯಕ್ಕ ಮತ್ತು ಇತರ ಕಥೆಗಳು&rsquo; ಹಾಗೂ &lsquo;ಶ್ರೀಖಡ್ಗ ಮತ್ತು ಕಾಲಗಗ್ಗರ&rsquo; ಎಂಬ ಎರಡು ಕಥಾ ಸಂಕಲನಗಳನ್ನು, ಎಂ ಟಿ ವಾಸುದೇವನ್ ನಾಯರ್ ಅವರ ಕತೆಗಳನ್ನು ಮೊತ್ತ ಮೊದಲ ಬಾರಿಗೆ ಕನ್ನಡಕ್ಕೆ ಪರಿಚಯಿಸಿದ ಕೆ ಕೆ ನಾಯರ್ ಅವರೇ ಅನುವಾದಿಸಿದ್ದಾರೆ. ಇವಲ್ಲದೆಯೂ ಕನ್ನಡದಲ್ಲಿ ಪ್ರಕಟವಾಗಿರುವ ಕೆಲವು ಮಲಯಾಳಂ ಕಥೆಗಳ ಸಂಕಲನಗಳಲ್ಲಿ ಒಂದೆರಡಾದರೂ ಎಂಟಿ ಕತೆಗಳು ಇದ್ದೇ ಇರುತ್ತವೆ. ಬಹುಶಃ ಎಂಟಿ ಅವರ ಒಂದು ಆತ್ಮಕಥಾನಕ ಮಾತ್ರ ಕನ್ನಡಕ್ಕೆ ಬರಬೇಕಾಗಿತ್ತು ಬಂದಿಲ್ಲ ಎಂಬ ಕೊರತೆಯನ್ನು ಬಿಟ್ಟರೆ ಅವರ ಬಹುತೇಕ ಎಲ್ಲ ಮಹತ್ವದ ಕೃತಿಗಳೂ ಕನ್ನಡದಲ್ಲಿವೆ.  ಮಂಡ್ಯ ಸಾಹಿತ್ಯ ಸಮ್ಮೇಳನ: ನೀರು ಹಂಚಿಕೆ ಸಮಸ್ಯೆ ಶೀಘ್ರ ಇತ್ಯರ್ಥ ಆಗಲಿ, ನೀರಾವರಿ ತಜ್ಞ ಕ್ಯಾ.ರಾಜಾರಾವ್&lt;/p&gt; &lt;p&gt;ಒಂಬತ್ತು ಕಾದಂಬರಿಗಳು, ಹತ್ತೊಂಬತ್ತು ಕಥಾಸಂಕಲನಗಳು, ಆರು ಸಿನಿಮಾಗಳ ನಿರ್ದೇಶನ, ಐವತ್ತನಾಲ್ಕು ಸಿನಿಮಾಗಳಿಗೆ ಚಿತ್ರಕಥೆ, ಇಪ್ಪತ್ತೊಂದು ರಾಜ್ಯಮಟ್ಟದ ಸಿನಿಮಾ ಪ್ರಶಸ್ತಿಗಳು, ಏಳು ರಾಷ್ಟ್ರೀಯ ಮಟ್ಟದ ಚಲಚಿತ್ರ ಪ್ರಶಸ್ತಿಗಳು, ಹಲವಾರು ಲೇಖನಗಳ ಸಂಕಲನಗಳು ಎಂಟಿ ಅವರ ಸಾಧನೆ. ಪದ್ಮಭೂಷಣ, ಜ್ಞಾನಪೀಠ, ಜೆ ಸಿ ಡೇನಿಯಲ್ ಅವಾರ್ಡ್, ಕೇರಳ ಜ್ಯೋತಿ ಅವಾರ್ಡ್, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನಗಳು...ಆ ಸಾಧನೆಗೆ ದೊರೆತ ಕೆಲವು ಗೌರವಗಳಷ್ಟೇ.&lt;/p&gt; &lt;p&gt;ಮೋಹನ್ ಕುಂಟಾರ್ ಅನುವಾದದ &lsquo;ವಾಸುದೇವನ್ ನಾಯರ್ ಕತೆಗಳು&rsquo; ಎಂಬ ಕೃತಿಯಲ್ಲಿ ಎಂಟಿಯವರೇ ಹೇಳಿಕೊಂಡ ಆತ್ಮಕಥನದ ಭಾಗವಿದೆ. ಅಲ್ಲಿ ಅವರ ಬಾಲ್ಯ, ಬರವಣಿಗೆಯ ಆರಂಭದ ಅವಮಾನಗಳು, ನಿರೀಕ್ಷೆ, ಕನಸು, ಮನೆಯ ಪರಿಸ್ಥಿತಿಯ ವಿಪರ್ಯಾಸ, ಮನಸ್ಸಿನಲ್ಲಿ ಉಳಿದು ಹೋದ ಆಪ್ತ ಚಿತ್ರಗಳು, ವ್ಯಕ್ತಿಗಳ ಕುರಿತೆಲ್ಲ ಅವರಾಡಿದ ಮಾತುಗಳಿವೆ. ಅದನ್ನು ಈಗ, ಅವರಿಲ್ಲದ ಹೊತ್ತಲ್ಲಿ ಓದುತ್ತಿದ್ದರೆ ಅವರು ಅದೆಷ್ಟು ಸರಳವಾಗಿ ಸಾಹಿತ್ಯದ ಜೀವಧಾತುವಿನ ಬಗ್ಗೆ ಹೇಳಿಬಿಟ್ಟಿದ್ದಾರಲ್ಲ ಅನಿಸಿ ಅಚ್ಚರಿಯಾಗುತ್ತದೆ.&lt;/p&gt; &lt;p&gt;ಒಂದು ಕತೆಯೋ ಕಾದಂಬರಿಯೋ ಕವಿತೆಯೋ ನಮಗೇಕೆ ಇಷ್ಟವಾಗುತ್ತದೆ, ಅದೇಕೆ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದ ಒಂದು ಸ್ಮೃತಿಯಾಗಿ ಅಷ್ಟಿಷ್ಟಾದರೂ ಉಳಿದುಕೊಂಡು ಬಿಡುತ್ತದೆ ಎನ್ನುವುದಕ್ಕೆ ಉತ್ತರವಿದೆಯೆ? ಅದರಲ್ಲಿ ಒಳ್ಳೆಯ ಕತೆಯಿತ್ತು ಎಂಬ ಕಾರಣಕ್ಕಾಗಿಯಲ್ಲ. ಎಷ್ಟೋ ಬಾರಿ ನಮಗೆ ತುಂಬ ಇಷ್ಟವಾದ ಪುಸ್ತಕ, ಕಾದಂಬರಿಯ ಕಥಾನಕ ನಮಗೆ ನೆನಪೇ ಇರುವುದಿಲ್ಲ! ಅದರ ಥೀಮ್ ಚೆನ್ನಾಗಿತ್ತು ಎಂಬ ಕಾರಣಕ್ಕೂ ಅಲ್ಲ. ತಾತ್ವಿಕ ಆಯಾಮವನ್ನು ಒಬ್ಬ ಕತೆಗಾರ ತೊಡಿಸಿರುತ್ತಾನೆ, ಅಂಗಿ ತೊಡಿಸಿದ ಹಾಗೆ; ನೀವು ಎಲ್ಲಿ ನಿಂತು ನೋಡುತ್ತಿದ್ದೀರಿ ಎನ್ನುವುದರ ಮೇಲೆ ನೋಡುತ್ತಿರುವುದರ ತಾತ್ವಿಕತೆ ಬದಲಾಗುತ್ತದೆ ಎನ್ನುವುದೂ ಕ್ರಮೇಣ ನಮಗೆ ಗೊತ್ತಾಗಿ ಬಿಡುತ್ತದೆ. ಇದ್ಯಾವುದೂ ನಮಗೆ ಕರ್ವಾಲೋ ಇಷ್ಟವಾಗಲು, ಮಲೆಗಳಲ್ಲಿ ಮದುಮಗಳು ಇಷ್ಟವಾಗಲು, ಬೆಟ್ಟದ ಜೀವ ಇಷ್ಟವಾಗಲು ಕಾರಣವಾಗಿರುವುದಿಲ್ಲ. ಯಾವುದೋ ಒಂದು ಪುಟ್ಟ ವಿವರ, ನಮ್ಮ ನೆನಪುಗಳಲ್ಲಿ ಹುದುಗಿದ್ದ ಯಾವುದೋ ಇನ್ನೊಂದು ಚಿತ್ರದೊಂದಿಗೆ ಇದ್ದಕ್ಕಿದ್ದಂತೆ ಸ್ಥಾಪಿಸಿಕೊಂಡು ಬಿಡುವ ಒಂದು ನಂಟಿದೆಯಲ್ಲ, ಅದು ನಮಗೂ ಆ ಲೇಖಕನಿಗೂ ಒಂದು ನಂಟನ್ನು ನಿಗದಿಪಡಿಸುತ್ತಿರುತ್ತದೆ. ಪುಟ್ಟ ಹುಡುಗನೊಬ್ಬ ಹೆದರುತ್ತಲೇ ನಿರ್ಜನ ಪ್ರದೇಶದಲ್ಲಿರುವ ಪಾಳುಬಿದ್ದ ಬಂಗಲೆಯೊಳಗೆ ಹೊಕ್ಕು, ಅಲ್ಲಿ ಆಳೆತ್ತರ ಬೆಳೆದು ನಿಂತ ಹುಲ್ಲು, ಪೊದೆಗಳ ನಡುವೆ ಕಂಗಾಲಾದ ಕ್ಷಣ ಕತೆಯ, ಕಾದಂಬರಿಯ ಅಥವಾ ಕವಿತೆಯ ಮೂಲ ಎಳೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲದೇ ಇರಬಹುದು, ಆದರೆ ಆ ಕ್ಷಣ ನಿಮ್ಮ ಮನಸ್ಸಿನಲ್ಲಿ ಎಂದೋ ದಾಖಲಾಗಿದ್ದ ಇನ್ಯಾವುದೋ ನೆನಪಿನ ಜೊತೆ ಸಂಬಂಧ ಕಟ್ಟಿಕೊಂಡು ಬಿಡಬಹುದು. ಅಷ್ಟು ಸಾಕು, ಕೆಲವೊಮ್ಮೆ ನಮಗೆ ಒಬ್ಬ ಲೇಖಕ ನಮ್ಮವನಾಗಿ ಬಿಡುವುದಕ್ಕೆ. ಏಕೆಂದರೆ, ನಿಮ್ಮ ನೆನಪಿನ ಚಿತ್ರದೊಂದಿಗೆ ಆವತ್ತು ನಿಮಗೆ ಅರ್ಥವಾಗಿದ್ದು ಆ ಲೇಖಕನಿಗೂ ಅರ್ಥವಾಗಿತ್ತು ಎಂಬ ಸಣ್ಣ ಸಂಗತಿ ಸಾಕಾಗುತ್ತದೆ ಅದಕ್ಕೆ. ಏಕೆಂದರೆ, ಆ ಹುಡುಗನಿಗೆ ಆ ಕ್ಷಣಕ್ಕೆ ಸಂಭವಿಸಿದ್ದು ಏನೆಂಬುದು ನಿಮಗೆ ಗೊತ್ತಾಗಿ ಬಿಟ್ಟಿದೆ! ಆದರೂ ಬರೆದಾತ ಅದನ್ನು ಹೇಳಿಯೇ ಇಲ್ಲ!!  ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಶಕ್ತಿ ಯೋಜನೆ ಸಾಥ್&zwnj;!&lt;/p&gt; &lt;p&gt;ಎಂಟಿ ಹೊಂದಿದ್ದ ಅಪಾರ ಜನಪ್ರಿಯತೆಗೆ ಅದು ಕಾರಣ. ಹಾಗಾಗಿಯೇ ಅವರು ಸದಾ ನನ್ನ ಕತೆಗಳು ನನ್ನೂರಿಗೆ ಋಣಿ ಎನ್ನುತ್ತಿದ್ದರು. ಊರಿನಲ್ಲಿ ಕಳೆದ ಕೆಲವು ಗಳಿಗೆಗಳನ್ನು, ನೆನಪಿನಲ್ಲಿ ನಿಂತ ಚಿತ್ರಗಳನ್ನು ನೆನೆಯುತ್ತಲೇ ಇರುತ್ತಿದ್ದರು. ಊರಿನಲ್ಲಿ ಯಾವೆಲ್ಲ ಗೆಳೆಯರೊಂದಿಗೆ, ಹಿರಿಯರೊಂದಿಗೆ ಕಾಲ ಕಳೆದಿದ್ದರೋ ಅವರನ್ನೆಲ್ಲ ನೆನಪಿಸಿಕೊಂಡು ನೆಮ್ಮದಿ ಕಾಣುತ್ತಿದ್ದರು, ತೀರ ನಿನ್ನೆ ಮೊನ್ನೆಯ ವರೆಗೂ.&lt;/p&gt;]]></content:encoded>
            <category>magazine</category>
            <dc:creator>Nirupama ks</dc:creator>
            <atom:link href="https://kannada.asianetnews.com/special/word-tribute-to-malayalam-writer-mt-vasudevan-nair-life-splsif"/>
        </item>
        <item>
            <title><![CDATA[ಹರಕೆ ಆಟ - ಕಲಿಕೆಯ ಪಾಠ: ಯಕ್ಷಗಾನದ ಯೂನಿವರ್ಸಿಟಿ ಶ್ರೀ ಕ್ಷೇತ್ರ ಗುಂಡಬಾಳ]]></title>
            <link>https://kannada.asianetnews.com/travel/dakshina-kannada-folk-culture-yakshagana-university-shri-kshetra-gundabala-se2x7x</link>
            <guid isPermaLink="true">https://kannada.asianetnews.com/travel/dakshina-kannada-folk-culture-yakshagana-university-shri-kshetra-gundabala-se2x7x</guid>
            <pubDate>Wed, 12 Jun 2024 15:59:04 +0530</pubDate>
            <description><![CDATA[&lt;p&gt;Uttara Kannada ಜಿಲ್ಲೆಯ ಹೊನ್ನಾವರದ ಗುಂಡಬಾಳ ಕ್ಷೇತ್ರದ ಆರಾಧ್ಯ ದೇವತೆ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ. ದೇಗುಲದ ಸರಿ ಎದುರಿನ ಬಯಲಲ್ಲಿರುವ ರಂಗಸ್ಥಳದಲ್ಲಿ ಯಕ್ಷಗಾನ ಪ್ರಿಯ ಮುಖ್ಯಪ್ರಾಣನಿಗೆ ನಿರಂತರವಾಗಿ ಯಕ್ಷಗಾನ ಸೇವೆ ನಡೆಯುತ್ತಿರುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hysq6nj92212fsn20ppsqnv4,imgname-bhanuprabha---raghavendra-article.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲೇಖನ- ರಾಘವೇಂದ್ರ ಅಗ್ನಿಹೋತ್ರಿ&lt;/strong&gt;&lt;/p&gt; &lt;p&gt;&lt;strong&gt;ಚಿತ್ರಗಳು- ರಾಮಚಂದ್ರ ಭಟ್&zwnj; ಉಳ್ಳಾಲ&lt;/strong&gt;&lt;/p&gt; &lt;p&gt;ಹಿಂದೆ ಸಂಪರ್ಕ ಸಾಧನಗಳು ಇಲ್ಲದ ಸಮಯದಲ್ಲಿ, ಮಡಲುಗರಿಯ ಸೂಡಿ (ಸೂಟೆ) ಹೊತ್ತಿಸಿ ಗುಂಡಬಾಳದತ್ತ ಮುಖ ಮಾಡಿ ಹೊರಟರೆ ಸಾಕು, ಯಕ್ಷಗಾನದ ಸ್ಥಳ ತಲುಪುತ್ತಿದ್ದರಂತೆ, ದೇವರು ಆಟಕ್ಕೆ ಕರೆಸಿಕೊಳ್ಳುತ್ತಾನೆ ಎಂಬುದು ಜನರ ನಂಬಿಕೆಯಾಗಿತ್ತು. ಇಂದಿಗೂ ಇಂಥಾ ಅದೆಷ್ಟೋ ನಂಬಿಕೆ, ಭಕ್ತಿಭಾವಗಳಿಂದ ಈಗಲೂ ದಿನಂಪ್ರತಿ ಯಕ್ಷಗಾನ ನಡೆಯುವ ಕ್ಷೇತ್ರವಿದ್ದರೆ ಅದು ಗುಂಡಬಾಳ ಮಾತ್ರ.&lt;/p&gt; &lt;p&gt;ಜಗವೆಲ್ಲ ಮಲಗಿದ್ದರೂ ಇಲ್ಲಿ ರಾತ್ರಿಯಿಂದ ಬೆಳಗಿನವರೆಗೆ ನಿರಂತರವಾಗಿ ಯಕ್ಷಗಾನ ನಡೆಯುತ್ತಲೇ ಇರುತ್ತದೆ. ಪ್ರೇಕ್ಷಕರ ಸಂಖ್ಯೆ ಇಲ್ಲಿ ಮುಖ್ಯವೇ ಅಲ್ಲ. ಕೆಲವೊಮ್ಮೆ ನೂರಾರು ಪ್ರೇಕ್ಷಕರಿಂದ ಸಭಾಂಗಣ ತುಂಬಿರಬಹುದು, ಕೆಲವೊಮ್ಮೆ ಬೆರಳೆಣಿಕೆಯ ಪ್ರೇಕ್ಷಕರಿದ್ದರೂ ರಾತ್ರಿ ಬೆಳಗಿನವರೆಗೆ ಹರಕೆಯ ಯಕ್ಷಗಾನ ನಡೆಯುತ್ತಲೇ ಇರುತ್ತದೆ. ವರ್ಷದಲ್ಲಿ ಐದು ತಿಂಗಳು (ಮಾರ್ಗಶಿರ ಶುದ್ಧ ದಶಮಿಯಿಂದ ಆರಂಭಿಸಿ ವೈಶಾಖ ಶುದ್ಧ ಅಷ್ಟಮಿಯವರೆಗೆ) ಒಂದೇ ಕ್ಷೇತ್ರದ ಒಂದೇ ರಂಗಸ್ಥಳದಲ್ಲಿ ನಿರಂತರ ಹರಕೆಯ ಯಕ್ಷಗಾನ ನಡೆಯುವ ರಾಜ್ಯದ ಏಕೈಕ ಕ್ಷೇತ್ರವೆಂದರೆ ಅದು ಗುಂಡಬಾಳ ಕ್ಷೇತ್ರ. ಈ ಕ್ಷೇತ್ರದಲ್ಲಿ ಮುಂದಿನ ಎಂಟು ವರ್ಷಗಳ ವರೆಗಿನ ಹರಕೆಯ ಸೇವೆಯಾಟ ಈಗಾಗಲೇ ಮುಂಗಡವಾಗಿ ಬುಕ್ಕಿಂಗ್&zwnj; ಆಗಿದೆ!  ಮಹಿಷನ ಅವತಾರದಲ್ಲಿ ಪ್ರಜ್ವಲ್ ದೇವರಾಜ್: ಯಕ್ಷಗಾನ ಕಲಾವಿದನಾದ ಡೈನಾಮಿಕ್ ಪ್ರಿನ್ಸ್!&lt;/p&gt; &lt;p&gt;ಗುಂಡಬಾಳ ಕ್ಷೇತ್ರ ಭಕ್ತರಿಗೆ ಹರಕೆಯ ತಾಣವಾದರೆ ಕಿರಿಯ ಕಲಾವಿದರಿಗೆ ಕಲಿಕೆಯ ತಾಣ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಂಡಬಾಳ ಕ್ಷೇತ್ರದ ಆರಾಧ್ಯ ದೇವತೆ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ. ದೇಗುಲದ ಸರಿ ಎದುರಿನ ಬಯಲಲ್ಲಿರುವ ರಂಗಸ್ಥಳದಲ್ಲಿ ಯಕ್ಷಗಾನ ಪ್ರಿಯ ಮುಖ್ಯಪ್ರಾಣನಿಗೆ ನಿರಂತರವಾಗಿ ಯಕ್ಷಗಾನ ಸೇವೆ ನಡೆಯುತ್ತಿರುತ್ತದೆ. ಶರಾವತಿ ನದಿಯ ಉಪನದಿ ಗುಂಡಬಾಳ ನದಿಯ ತಪ್ಪಲಿನ ಪಶ್ಚಿಮ ಘಟ್ಟದ ಈ ತಾಣ ಯಕ್ಷ ಕಾಶಿ, ಯಕ್ಷಗಾನದ ತವರು ಎಂದೇ ಪ್ರಸಿದ್ಧಿ ಪಡೆದಿದೆ.&lt;/p&gt; &lt;p&gt;ಖಾಯಂ ಚೌಕಿ ರಂಗಸ್ಥಳ ಹೊಂದಿರುವ ಯಕ್ಷಗಾನದ ಸೀಸನ್&zwnj;ನಲ್ಲಿ ಪ್ರತಿದಿನವೂ ತಪ್ಪದೇ ಯಕ್ಷಗಾನ ನಡೆಯುವ ರಾಜ್ಯದ ಏಕೈಕ ತಾಣವೂ ಹೌದು. ಇಂತಹ ರಂಗಭೂಮಿ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲಿಯೇ ಎಲ್ಲೂ ಇಲ್ಲ ಎನ್ನುತ್ತಾರೆ ಇಲ್ಲಿನ ದೇವಾಲಯದ ಟ್ರಸ್ಟಿಗಳಲ್ಲಿ ಒಬ್ಬರಾದ ಮಾರುತಿ ಪ್ರಭು.&lt;/p&gt; &lt;p&gt;ಯಕ್ಷಗಾನವೆನ್ನುವುದು ಇಲ್ಲಿ ವ್ಯವಹಾರಕ್ಕಾಗಿ ನಡೆಯುತ್ತಿಲ್ಲ, ತಲತಲಾಂತರಗಳಿಂದ ಭಕ್ತಿಯಿಂದ ನಡೆದು ಬಂದಿದೆ, ಇನ್ನೂ ನಡೆಯುತ್ತಲೇ ಇದೆ. ಸಂಕಷ್ಟ ಎದುರಾದಾಗ ಇಲ್ಲಿ ಹರಕೆ ಹೊತ್ತು ಪರಿಹಾರ ಕಂಡುಕೊಂಡ ಸಾಕಷ್ಟು ಉದಾಹರಣೆಗಳನ್ನು ದೇವಾಲಯದ ಆಡಳಿತ ಮಂಡಳಿಯವರು ನೀಡುತ್ತಾರೆ. ಸುಮಾರು ಅಂದಾಜು 500 ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಸೇವೆ ನಡೆಯುತ್ತಾ ಬಂದಿದೆ. ಕೇವಲ ಸ್ಥಳೀಯರಷ್ಟೇ ಅಲ್ಲ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಮುಂಬೈ, ಮಂಗಳೂರಿಂದಲೂ ತಂಡಗಳು ಬಂದು ಇಲ್ಲಿ ಹರಕೆ ಹೊತ್ತು ಆಟ ಆಡಿ ಕೃತಾರ್ಥರಾಗುತ್ತಾರೆ.  6ನೇ ಕ್ಲಾಸ್​​ನಲ್ಲಿ ಯಕ್ಷ ಪಯಣ: ಯಕ್ಷಗಾನ ಧಾರಿಯಾದ ರಿಷಬ್​ ಶೆಟ್ಟಿಯ ಅಪರೂಪದ ಫೋಟೋ ವೈರಲ್​&lt;/p&gt; &lt;p&gt;ಗುಂಡಬಾಳ ಮೇಳದಲ್ಲಿ ಕಲಿಯುವ ಕಿರಿಯರೂ ಇದ್ದಾರೆ, ಹಿರಿಯ ಕಲಾವಿದರೂ ಇದ್ದಾರೆ. ಕಿರಿಯರು ಇಲ್ಲಿ ಶ್ರದ್ಧೆಯಿಂದ ಯಕ್ಷಗಾನ ಕಲಿತರೆ ಮುಂದೆ ಅವರ ಭವಿಷ್ಯ ಉಜ್ವಲವೆಂಬುದಕ್ಕೆ ಹಲವು ತಲೆಮಾರುಗಳ ಯಕ್ಷಸಾಧಕರೇ ಸಾಕ್ಷಿ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ ಬಡಗುತಿಟ್ಟಿನ ಕಲಾವಿದರೆಲ್ಲ ಇಲ್ಲಿ ಹೆಜ್ಜೆ ಹಾಕಿದ್ದಾರೆ. ರಾಷ್ಟ ಪ್ರಶಸ್ತಿ ಪುರಸ್ಕೃತ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಂಡದಕುಳಿ ರಾಮ ಹೆಗಡೆ, ಕೃಷ್ಣ ಯಾಜಿಯವರಂಥ ಅತಿರಥ ಮಹಾರಥರು ಯಕ್ಷಗಾನದ ಹರಕೆಯ ಸೇವೆ ಸಲ್ಲಿಸಿದ್ದಾರೆ. ಕರ್ಕಿ ಹಾಸ್ಯಗಾರ ಮೇಳದ ಕಲಾವಿದರು ಸೇರಿ ಜಿಲ್ಲೆಯ ಹೆಚ್ಚಿನ ಕಲಾವಿದರು ಇಲ್ಲಿ ಹರಕೆಯ ಸೇವೆ ಸಲ್ಲಿಸಿದ್ದಾರೆ. ಈಗಲೂ ವೃತ್ತಿಪರ ಮೇಳಗಳಿಗೆ ಉತ್ತಮ ಕಲಾವಿದರನ್ನು ಇಲ್ಲಿಂದಲೇ ಆಯ್ಕೆ ಮಾಡಿ ಸೇರ್ಪಡೆಗೊಳ್ಳುತ್ತಿದ್ದಾರೆ.&lt;/p&gt; &lt;p&gt;&lt;strong&gt;ಇಲ್ಲಿ ಏನೆಲ್ಲಾ ಹರಕೆ?&lt;/strong&gt; ಈ ಕ್ಷೇತ್ರದಲ್ಲಿ ಯಕ್ಷಗಾನ ಆಡಿಸುವುದು ಒಂದು ಹರಕೆಯಾದರೆ, ಯಕ್ಷಗಾನ ನೋಡುವುದು ಇಲ್ಲಿ ಹರಕೆಯೇ. ಒಂದು, ಐದು ಯಕ್ಷಗಾನ ನೋಡುತ್ತೇನೆ ಎಂದೂ ಇಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ. ಇಲ್ಲಿಯೇ ಪ್ರಥಮವಾಗಿ ಕುಣಿದು ರಂಗಪ್ರವೇಶ ಮಾಡುವ ಬಗ್ಗೆಯೂ ಹರಕೆ ಹೊತ್ತುಕೊಂಡು ಇಲ್ಲಿ ಮೊದಲ ಬಾರಿಗೆ ಗೆಜ್ಜೆ ಕಟ್ಟಿ ಕುಣಿದು ಧನ್ಯರಾಗುತ್ತಾರೆ. ರಂಗಸ್ಥಳದ ಮಣ್ಣನ್ನು ಹಣೆಗೆ ಹಚ್ಚಿಕೊಳ್ಳುವ ಬಗ್ಗೆಯೂ ಹರಕೆ ಹೊತ್ತುಕೊಳ್ಳುತ್ತಾರೆ.&lt;/p&gt; &lt;p&gt;&lt;strong&gt;ಯಕ್ಷಗಾನ ಹರಕೆ ಹೇಗೆ?&lt;/strong&gt; ಗುಂಡಬಾಳ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆ ಮಾಡಿಸಿ ಅರ್ಚಕರಲ್ಲಿ ಹೇಳಿ ಸಂಕಲ್ಪಿಸಬೇಕು. ಬಳಿಕ ದೇವಸ್ಥಾನದ ಕಚೇರಿಯಲ್ಲಿ ಯಕ್ಷಗಾನ ಬುಕಿಂಗ್&zwnj; ಮಾಡಬೇಕು. ಸರದಿಯ ದಿನಾಂಕ ಬಂದಾಗ ಕಚೇರಿಯಿಂದ ಬುಕಿಂಗ್&zwnj; ಮಾಡಿದವರಿಗೆ ತಿಳಿಸುತ್ತಾರೆ. ಆ ದಿನ ಅಂದರೆ ಯಕ್ಷಗಾನ ಪ್ರದರ್ಶನವಾಗುವ ದಿನ 9900 ರುಪಾಯಿ ವೀಳ್ಯದ ಹಣ ದೇವಸ್ಥಾನದ ಕೌಂಟರ್&zwnj;ನಲ್ಲಿ ನೀಡಿ ಸೇವೆಯಾಟ ಆಡಿಸಬೇಕು. ಹೀಗೆ ಹರಕೆಯ ಸಂಪ್ರದಾಯ ನಡೆದು ಬಂದಿದೆ. ಆರಂಭದಲ್ಲಿ ದಿನಕ್ಕೆ ಒಂದೇ ಯಕ್ಷಗಾನ ನಡೆಯುತ್ತಿತ್ತು, ಆಗ ಹರಕೆಯ ಆಟ ಆಡಿಸಲು ತುಂಬಾ ವರ್ಷಗಳವರೆಗೆ ಕಾಯಬೇಕಿತ್ತು. 2002 ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಈ ಕ್ಷೇತ್ರಕ್ಕೆ ಬಂದಿದ್ದಾಗ ದಿನಕ್ಕೆ ಎರಡು ಆಟ ಆಡಿಸುವ ಸಲಹೆ ನೀಡಿದ್ದರು. ಅದರಂತೆ ದೇವರಲ್ಲಿ ಈ ಬಗ್ಗೆ ಪ್ರಸಾದ ಕೇಳಿದ ಬಳಿಕ ದಿನಕ್ಕೆ ಇಬ್ಬರು ಹರಕೆದಾರರ ಹರಕೆಯಾಟ ಪ್ರದರ್ಶನವಾಗುತ್ತಿದೆ. ಆದರೂ ಈಗ ಹೊಸದಾಗಿ ಯಕ್ಷಗಾನ ಹರಕೆ ಹೊತ್ತವರಿಗೆ ಯಕ್ಷಗಾನ ಪ್ರದರ್ಶನವಾಗಬೇಕು ಎಂದರೆ ಆರೆಂಟು ವರ್ಷ ಕಾಯಲೇಬೇಕು. ಅಷ್ಟು ಆಟಗಳು ಬುಕ್ಕಿಂಗ್&zwnj; ಆಗಿದೆ ಎನ್ನುತ್ತಾರೆ ಗುಂಡಬಾಳ ಯಕ್ಷಗಾನ ಮೇಳದ ವ್ಯವಸ್ಥಾಪಕ ಪ್ರಭಾಕರ ಚಿಟ್ಟಾಣಿಯವರು.  ಕೋಲ ಆಯ್ತು, ಈಗ ಯಕ್ಷಗಾನ&hellip;. ಶ್ರೀ ಗೌರಿ ಸೀರಿಯಲ್&zwnj;ಗೂ ತಟ್ಟಿದ ಅಸಮಧಾನದ ಬಿಸಿ&lt;/p&gt; &lt;p&gt;&lt;strong&gt;ಹೇಗೆ ತಲುಪುವುದು?&lt;/strong&gt; ಹೊನ್ನಾವರದಿಂದ ಗುಂಡಬಾಳಕ್ಕೆ 15 ಕಿ.ಮೀ. ದೂರವಿದೆ. ಹೊನ್ನಾವರ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 9 ಕೀ.ಮೀ. ಸಾಗಿದರೆ ಹಡಿನಬಾಳ. ಹಡಿನಬಾಳದಲ್ಲಿ ಗುಂಡಬಾಳ ಮಹಾದ್ವಾರವಿದ್ದು, ಅಲ್ಲಿಂದ 6 ಕೀ.ಮೀ. ಸಾಗಿದರೆ ಗುಂಡಬಾಳ ಶ್ರೀ ಕ್ಷೇತ್ರ ತಲುಪಬಹುದು. ಹೊನ್ನಾವರ ಬಸ್&zwnj; ನಿಲ್ದಾಣದಿಂದ ಬೆಳಿಗ್ಗೆಯಿಂದ ಸಂಜೆ 7 ರವರೆಗೆ ಬಸ್&zwnj; ವ್ಯವಸ್ಥೆ ಇದೆ. ಖಾಸಗಿ ಹಾಗೂ ಬಾಡಿಗೆ ವಾಹನದ ಮೂಲಕವೂ ಇಲ್ಲಿಗೆ ತಲುಪಬಹುದು.&lt;/p&gt;]]></content:encoded>
            <category>magazine</category>
            <dc:creator>Kannadaprabha News</dc:creator>
            <atom:link href="https://kannada.asianetnews.com/travel/dakshina-kannada-folk-culture-yakshagana-university-shri-kshetra-gundabala-se2x7x"/>
        </item>
        <item>
            <title><![CDATA[ಬೊಮ್ಮನಹಳ್ಳಿ ಜಂಗಮ ಜಿ.ಟಿ., ಹಳ್ಳಿಯಲ್ಲಿ ನಿಂತು ಸಾಂಸ್ಕೃತಿಕ ಬದುಕನ್ನು ಕಟ್ಟಿದವರು]]></title>
            <link>https://kannada.asianetnews.com/life/bommanahalli-jangama-g-t-built-a-cultural-life-in-the-village-vin-sdczkb</link>
            <guid isPermaLink="true">https://kannada.asianetnews.com/life/bommanahalli-jangama-g-t-built-a-cultural-life-in-the-village-vin-sdczkb</guid>
            <pubDate>Wed, 12 Jun 2024 16:00:21 +0530</pubDate>
            <description><![CDATA[&lt;p&gt;ಮಂಚಿಕೇರಿ, ಹಾಸಣಗಿ, ಬೊಮ್ಮನಹಳ್ಳಿ ಇಲ್ಲೆಲ್ಲ ಒಂದು ಸಾಂಸ್ಕ್ರತಿಕ ವಾತಾವರಣ ಅನಾದಿ ಕಾಲದಿಂದ ಬೆಳೆದು ಬಂದಿದೆ ಎಂದು ಹಿರಿಯರ ಬಾಯಲ್ಲಿ ಕೇಳಿದ್ದೇನೆ. ಹಿಂದೆ ಬಹಳ ಸಮರ್ಥ ಯಕ್ಷಗಾನ ಕಲಾವಿದರು ಈ ಭಾಗದಲ್ಲಿ ಆಗಿ ಹೋಗಿದ್ದಾರೆ. ನನ್ನ ಅಜ್ಜ ಕೆರೆಮನೆ ಶಿವರಾಮ ಹೆಗಡೆಯವರ ಕಾಲದಲ್ಲೇ ಈ ಭಾಗದಲ್ಲಿ ಯಕ್ಷಗಾನ ಪ್ರದರ್ಶನ ಮಾಡುವದು ಒಂದು ಮಹತ್ವದ ಸವಾಲಿನ ಸಂಗತಿಯೇ ಆಗಿತ್ತು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hxnnvtkthrmqb1jg4crvds3k,imgname-bhanuprabha-gt-article.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;-ಕೆರೆಮನೆ ಶಿವಾನಂದ ಹೆಗಡೆ&lt;/strong&gt;&lt;/p&gt; &lt;p&gt;ಮಂಚಿಕೇರಿ, ಹಾಸಣಗಿ, ಬೊಮ್ಮನಹಳ್ಳಿ ಇಲ್ಲೆಲ್ಲ ಒಂದು ಸಾಂಸ್ಕ್ರತಿಕ ವಾತಾವರಣ ಅನಾದಿ ಕಾಲದಿಂದ ಬೆಳೆದು ಬಂದಿದೆ ಎಂದು ಹಿರಿಯರ ಬಾಯಲ್ಲಿ ಕೇಳಿದ್ದೇನೆ. ಹಿಂದೆ ಬಹಳ ಸಮರ್ಥ ಯಕ್ಷಗಾನ ಕಲಾವಿದರು ಈ ಭಾಗದಲ್ಲಿ ಆಗಿ ಹೋಗಿದ್ದಾರೆ. ನನ್ನ ಅಜ್ಜ ಕೆರೆಮನೆ ಶಿವರಾಮ ಹೆಗಡೆಯವರ ಕಾಲದಲ್ಲೇ ಈ ಭಾಗದಲ್ಲಿ ಯಕ್ಷಗಾನ ಪ್ರದರ್ಶನ ಮಾಡುವದು ಒಂದು ಮಹತ್ವದ ಸವಾಲಿನ ಸಂಗತಿಯೇ ಆಗಿತ್ತು.&amp;nbsp;&lt;/p&gt; &lt;p&gt;ಕಾರಣ ಈ ಭಾಗದಲ್ಲಿ ದಟ್ಟವಾಗಿ ಬೆಳೆದ ಕಾಡಿನ ಮಧ್ಯೆ ಸಂಗೀತ, ಸಾಹಿತ್ಯ, ಯಕ್ಷಗಾನ ತಾಳಮದ್ದಲೆ ಮುಂತಾದ ಕಲಾಪ್ರಕಾರಗಳು ಸಮೃದ್ಧವಾಗಿ ಬೆಳೆದಿದ್ದವು. ಇಲ್ಲಿನ ಅಕ್ಕ ಪಕ್ಕದ ಊರುಗಳಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ತೊಡಗಿಸಿಕೊಂಡ ಆಡ್ಯಸ್ತರು, ಆಸಕ್ತರು ಮೆರೆದ ಕಾಲದ ಬಗ್ಗೆ ಕೂಡಾ ನಾನು ಕೇಳಿದ್ದೆ. ನನ್ನ ಅಜ್ಜ ಶಿವರಾಮ ಹೆಗಡೆ ಆಥವಾ ನನ್ನ ತಂದೆ ಶಂಭು ಹೆಗಡೆಯವರ ಅನೇಕ ಅಪೂರ್ವ ಯಕ್ಷಗಾನ ಪ್ರದರ್ಶನ ನಡೆದ್ದದ್ದು ಈ ಸ್ಥಳಗಳಲ್ಲಿ. ಇಂಥ ಊರು ನಮ್ಮ ಕರ್ನಾಟಕದ ಒಂದು ಸಾಂಸ್ಕೃತಿಕ ಕೇಂದ್ರದಂತೆ ಕಂಡರೆ ವಿಸ್ಮಯವೇನೂ ಅಲ್ಲ. ಇಂಥಾ ಊರಲ್ಲಿ ಕೆಲವು ವರುಷಗಳ ಹಿಂದೆ ನಮ್ಮ ಈಗಿನ ಮಂಡಳಿಯ ಆಟವಾಗಿತ್ತು. ಆಟವನ್ನು ಆಡಿಸಿದವರು ಮತ್ಯಾರಲ್ಲ, ರಾಯಸಂ ಸಂಸ್ಥಾಪಕ , ಕಲಾವಿದ ಬೊಮ್ಮನಹಳ್ಳಿಯ ಜಿ. ಟಿ. ಭಟ್ಟರು.&lt;/p&gt; &lt;p&gt;ಔತ್ತಮ್ಯದ ಗೀಳಿನಲ್ಲಿ&lt;/p&gt; &lt;p&gt;ಜಿ.ಟಿ ಭಟ್ಟರು ಎಂದ ತಕ್ಷಣ ನನಗೆ ಅವರ ತುಂಬು ನಗುವಿನ ಮುಖವೇ ಕಾಣಿಸುತ್ತದೆ. ಅವರದ್ದು ಒಂಥರಾ ಮಗುವಿನ ಮುಗ್ಧ ಮುಖವೂ ಹೌದು. ಈ ಹಿರಿಯರ ವೈವಿಧ್ಯಪೂರ್ಣ ಬದುಕನ್ನು, ಸಾಧನೆಯ ಕಷ್ಟವನ್ನೆಲ್ಲಾ ಕಂಡಾಗ ಅವರ ಸಣಕಲು ಶರೀರ ಇಂಥಾ ಕಠಿಣ ಹೊರೆಯನ್ನ ಹೊತ್ತುಕೊಂಡು ಬಾಳಿಕೊಂಡಿದೆ ಎಂದೆನಿಸದಿರದು! ಎಂತೆಂಥದ್ದೋ ಆಸಕ್ತಿ, ನಿರಂತರ ಕೆಲಸ, ಆಲೋಚನೆ ಹೀಗೇ ಜಿ.ಟಿ ಸರ್ ಅನೇಕವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬಾಳಿದ ರೀತಿ ಅಚ್ಚರಿಯದು! ಅವರ ಒಂದೊಂದೇ ಆಸಕ್ತಿಯನ್ನು ಮತ್ತು ಆ ಕುರಿತ ಸಾಧನೆಯನ್ನು ಬಿಡಿಬಿಡಿಯಾಗಿ ನೋಡಿದರೂ ಸಾಕು, ನಾವು ಅವರನ್ನು ಅಭಿನಂದಿಸಲು ಉಳಿದ ಉಪಾದಿಗಳ ಅಗತ್ಯವಿಲ್ಲ ಎನಿಸುತ್ತದೆ!&lt;/p&gt; &lt;p&gt;ರಾಯಸಂ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ ಅವರು ಆ ಮೂಲಕ ತುಂಬಾ ಗಮನೀಯ ಕೆಲಸಕ್ಕೆ ಕೈ ಹಾಕಿದವರು. ಅದೇ ಸಂಸ್ಥೆಯ ಅಡಿಯಲ್ಲಿ ನಮ್ಮ ಯಕ್ಷಗಾನವಾಗಿ ಇಂದಿಗೆ 8 - 10 ವರ್ಷ ಸಂದಿದೆ. ಆದರೆ ಅಂದು ಅವರು ತೋರಿದ ಆ ಪ್ರೀತಿ, ಆದರಾತಿಥ್ಯ ಎಂದೂ ಮರೆಯದು. ಕಲಾ ಸಂಘಟನೆಯನ್ನು ಗೌರವಿಸುವ, ಕಲಾವಿದರನ್ನು ಆಧರಿಸುವ ಅವರ ಮನೆ; ಬಂಧು ಬಾಂಧವ್ಯದ ಘನತೆಯನ್ನು, ಪ್ರೀತಿಯನ್ನು ಲೋಕಕ್ಕೆ ಸಾರುವುದಕ್ಕೊಂದು ರೂಪಕವೋ ಎಂಬಂತೆ ಇತ್ತು ಮತ್ತು ಇಂದೂ ಇದೆ! ಒಂದು ಹಳ್ಳಿಯಲ್ಲಿ ನಿಂತು ಸಾಂಸ್ಕೃತಿಕ ಬದುಕನ್ನು ಹೊಸದಾಗಿ ಕಟ್ಟುವುದು ತುಂಬಾ ಕಷ್ಟದ ಸಂಗತಿ.&amp;nbsp;&lt;/p&gt; &lt;p&gt;ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ &lt;/p&gt; &lt;p&gt;ಬಹಳ ಸಮೃದ್ಧವಾದ ಸಾಂಸ್ಕೃತಿಕ ಹಿನ್ನೆಲೆ ಇದ್ದರೆ ಆ ಊರಲ್ಲಿ ಇನ್ನೂ ಸಂಕೀರ್ಣ ಪರಿಸ್ಥಿತಿ ಇರುತ್ತದೆ. &lsquo;ಹೊಸತನ್ನು ಮಾಡಿದರೆ ಅನುಮಾನ ಹಳೆಯದನ್ನು ತಂದರೆ ದುಮ್ಮಾನ&rsquo; ಎನ್ನುವ ಸ್ಥಿತಿ ಇರುತ್ತದೆ. ಇಂಥ ಪರಿಸ್ಥಿತಿ ಹಾಸಣಗಿ, ಬೊಮ್ಮನಹಳ್ಳಿ, ಮಂಚಿಕೇರಿ ಊರಲ್ಲಿ ಕೂಡಾ ಇರುತ್ತದೆ. ಅಂತಲ್ಲಿ ಜಿ ಟಿ ಭಟ್ಟರ ಹೆಸರು ಜನಜನಿತವಾಗಿ ಇರಬೇಕೆಂದರೆ ಅವರ ಪ್ರತಿಭೆ ಸಾಹಸ ಸಾಮಾನ್ಯವಲ್ಲ. ನಾಟಕ ಕಲಾವಿದರಾಗಿ, ಸಂಘಟಕರಾಗಿ ಯಕ್ಷಗಾನದ ಕಲಾವಿದ ಹಾಗೂ ಶಿಕ್ಷಣ ಕ್ಷೇತ್ರದ ಕ್ರಿಯಾಶೀಲತೆಯನ್ನು ಉಳಿಸಿಕೊಂಡವರಾಗಿ ಜಿ.ಟಿ ಭಟ್ಟರು ನಮ್ಮ ಕಲಾವಾಹಿನಿಯ ಮುಖ್ಯ ಸಾಧಕರಾಗಿದ್ದಾರೆ.&amp;nbsp;&lt;/p&gt; &lt;p&gt;ಜಿ.ಟಿ.ಭಟ್ಟರಂತವರನ್ನು ಬೆಂಗಳೂರಿನಂತಲ್ಲಿ ಇಟ್ಟು ನೋಡಿದರೆ; ಅಲ್ಲಿನ ನಾಮಾಂಕಿತ ಕಲಾವಿದರ ಅಥವಾ ಕಲಾಸಂಘಟಕರ ಈ ಎರಡು ಮಗ್ಗಲಿನಲ್ಲಿ ಎತ್ತರದ ಸ್ಥಾನದಲ್ಲೇ ಅವರು ಇರುತ್ತಿದ್ದರು. ಆದರೆ ನಮ್ಮ ಹಳ್ಳಿಗಳಲ್ಲಿ ಸಾಧನೆ ಮತ್ತು ಸಾಧಕರಿಗೆ ಬರಗಾಲ ಇಲ್ಲದಿದ್ದರೂ ನಮಗೆ ಬರಿಗಾಲೇ ಗತಿ! ಅದನ್ನು ಗುರುತಿಸುವ ಕಣ್ಣಿಗೆ ಬರಗಾಲವೇ. ತಾನು ಕೈಗೊಂಡ ಪ್ರತಿ ಕೆಲಸದಲ್ಲೂ ಪ್ರಥಮ ದರ್ಜೆಯನ್ನೇ ಕಾಣಿಸುವ ಜಿಟಿ ಭಟ್ ಅವರು ನಮ್ಮ ಸಂಪನ್ಮೂಲ ಎಂದು ಸಮಾಜ, ಸರಕಾರ ಗುರುತಿಸದಿರುವುದು ಖಂಡಿತಾ ವಿಷಾದನೀಯ. ಮನಸ್ಸು ಕಾಡುವ ಪ್ರಶ್ನೆ.&amp;nbsp;&lt;/p&gt; &lt;p&gt;ಇಂತಿದ್ದರೂ ಒಬ್ಬ ನಾಟಕದ ನಟನಾಗಿ, ಒಳ್ಳೆಯ ಕೃಷಿಕನಾಗಿ ಸ್ವಾವಲಂಬಿಯಾಗಿ, ಸಮಾಜದ ಎಲ್ಲಾ ಸ್ತರದ ಕೆಲಸದಲ್ಲೂ ಆಸಕ್ತಿ ಮತ್ತು ಶ್ರಮವನ್ನು ಯಥೇಚ್ಛ ಖರ್ಚು ಮಾಡುವ ಜಿ ಟಿ ಸರ್ ಮುಖದಲ್ಲಿ ಸದಾ ಮಂದಹಾಸ ಮಿನುಗುವುದು ನಮ್ಮ ಪುಣ್ಯ. ಅವರ ವಿದಾಯಕ ಕೆಲಸ ಮತ್ತು ಕಾಯಕ ಯೋಗಿಯಂತೆ ದುಡಿವ ಸೃಜನಶೀಲ ಮನಸ್ಸಿನ ಬಗ್ಗೆ ತಿಳಿದಿದ್ದೇನೆ. ಅವರನ್ನು ಹತ್ತಿರದಿಂದ ಬಲ್ಲವರಿಂದ ತಿಳಿದಂತೆ ಅವರು ಅತ್ಯಂತ ಸ್ನೇಹಜೀವಿ.&lt;/p&gt; &lt;p&gt;&amp;nbsp;ಅವರ ಒಡನಾಟ ನನಗಿಲ್ಲ. ಆದರೆ ಸಂಪರ್ಕ ಇದೆ. ಅವರ ಮಕ್ಕಳಿಗೆ, ನನಗೆ ಆತ್ಮೀಯ ಸ್ನೇಹವಿದೆ. ವಿದ್ಯಾ, ಜ್ಯೋತಿ, ಡಾ ಶೀಲಾ ಇವರೆಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಜಿಟಿ ಭಟ್ಟರ ಪ್ರತಿಬಿಂಬದಂತೆ ಕಾಣುತ್ತಾರೆ. ತಂದೆಯಾಗಿ ಅವರು ನೀಡಿದ ಸಂಸ್ಕಾರಗಳೆಲ್ಲ ಈ ಮಕ್ಕಳಲ್ಲಿ ಒಡಮೂಡಿದೆ. ಜಿಟಿ ಯವರ ವ್ಯಕ್ತಿತ್ವವನ್ನು ಸಮನಾಗಿ ಹಂಚಿಕೊಂಡ ಇವರೆಲ್ಲಾ ಒಟ್ಟಿಗೆ ಒಂದೇ ಕಡೆ ಸೇರಿದರೆ ಅಲ್ಲಿ ಜಿಟಿ ಭಟ್ಟರೇ ವಿವಿಧ ಶರೀರದಲ್ಲಿ ಅವತಾರಗೊಂಡಂತೆ ಭಾಸವಾಗುತ್ತದೆ. ಜೀವನದುದ್ದಕ್ಕೂ ಕಲೆಯನ್ನು ಕಾಯಕ ಮಾಡಿಕೊಂಡು ಬದುಕನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡ ಜಿಟಿಯವರು ನಮ್ಮ ನಡುವಿನ ಸ್ಫೂರ್ತಿ. ಅವರ ಶ್ರೀಮತಿಯವರ ತ್ಯಾಗ, ಸಹನೆ, ನಿರ್ಮಲ ಮನಸ್ಸು ಕೂಡಾ ವಿರಳವೇ. ಇಂಥ ಒಂದು ಸಂಸಾರದ ಸಾರಥಿಯಾಗಿದ್ದು ಅವರ ಭಾಗ್ಯವೂ ಹೌದು.&lt;/p&gt;]]></content:encoded>
            <category>magazine</category>
            <dc:creator>Nirupama K S</dc:creator>
            <atom:link href="https://kannada.asianetnews.com/life/bommanahalli-jangama-g-t-built-a-cultural-life-in-the-village-vin-sdczkb"/>
        </item>
        <item>
            <title><![CDATA[ಬದುಕು ಪ್ರಕಾಶಮಾನ-ಹಳ್ಳಿಗಳನ್ನು ಕಟ್ಟುವ ಕಷ್ಟಸುಖ ಪುಸ್ತಕ ಬಿಡುಗಡೆ]]></title>
            <link>https://kannada.asianetnews.com/life/halligalannu-kattuva-kasta-sukha-dr-prakash-bhat-book-release-today-vin-sdq1wg</link>
            <guid isPermaLink="true">https://kannada.asianetnews.com/life/halligalannu-kattuva-kasta-sukha-dr-prakash-bhat-book-release-today-vin-sdq1wg</guid>
            <pubDate>Wed, 12 Jun 2024 15:59:57 +0530</pubDate>
            <description><![CDATA[&lt;p&gt;ಬೈಫ್ ಸಂಸ್ಥೆಯಲ್ಲಿ ತೊಡಗಿಕೊಂಡು ಗ್ರಾಮಾಭಿವೃದ್ಧಿಯ ಕನಸು ಕಂಡು, ದಶಕಗಳ ಕಾಲ ಅದಕ್ಕೆ ಕಟ್ಟುಬಿದ್ದು, ಸುಸ್ಥಿರ ವಿಕಾಸಕ್ಕೆ ಮಾದರಿಯಾದ ಪ್ರಕಾಶ್ ಭಟ್ ಅವರ ಅನುಭವ 'ಕಥನ- ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಧಾರವಾಡದಲ್ಲಿ ಇವತ್ತು ಬಿಡುಗಡೆ ಆಗುತ್ತಿದೆ. ಅವರ ಸೇವಾಕಥನದ ಒಂದು ಭಾಗ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hy7q7bf49pcvjf9dgy2esh0w,imgname-bhanuprabha---prakash-article.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;-ಡಾ.ಪ್ರಕಾಶ್&zwnj; ಭಟ್&zwnj;&lt;/strong&gt;&lt;/p&gt; &lt;p&gt;ನಾವು 41 ಜನ, 1980 ಮಾರ್ಚ್&zwnj;ನಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯದ ಸ್ನಾತಕರಾದೆವು. ನಮ್ಮ ಡಿಗ್ರಿಯ ಕೊನೆಯ ಹಂತದಲ್ಲಿ ಒಂದು ದಿನ ನಮಗೆ ಕ್ಯಾಂಪಸ್ ಇಂಟರ್&zwnj;ವ್ಯೂ. ಆ ದಿನ ನಮ್ಮ ಸಂದರ್ಶನ ಮಾಡಲು ಬಂದವರು ಸಾಮಾನ್ಯರೇನಲ್ಲ, ಗಾಂಧೀಜಿಯವರ ಶಿಷ್ಯರಾಗಿದ್ದ ಡಾ.ಮಣಿಭಾಯಿ ದೇಸಾಯಿ. ಮಣಿಭಾಯಿ ಪುಣೆಯ ಸಮೀಪದ ಉರಳಿಕಾಂಚನ ಎಂಬ ಹಳ್ಳಿಯಲ್ಲಿ ಗ್ರಾಮೀಣಾಭಿವೃದಿಟಛಿಯ ಹೊಸ ಮಾದರಿಯೊಂದನ್ನು ಕಲ್ಪಿಸಿ ನಡೆಸುತ್ತಿದ್ದರು. ಭಾರತೀಯ ಕೃಷಿ ಉದ್ಯೋಗ ಪ್ರತಿಷ್ಠಾನ ಎಂಬುದು ಅವರು ಕಟ್ಟಿದ್ದ ಸಂಸ್ಥೆಯ ಅಂದಿನ ಹೆಸರು, ಸಂಕ್ಷಿಪ್ತವಾಗಿ 'ಬೈಫ್'. ಮುಂದೆ ಅದೇ &amp;nbsp;'ಬೈಫ್ ಅಭಿವೃದಿಟಛಿ ಸಂಶೋಧನ ಪ್ರತಿಷ್ಠಾನ' ಎಂದು ಹೆಸರಾಯಿತು.&lt;/p&gt; &lt;p&gt;ಗಾಂಧೀಜಿಯವರಲ್ಲಿ ತಾವು ಶಿಷ್ಯತ್ವ ಪಡೆಯಲು ಹೋದ ಸಂದರ್ಭವನ್ನು ಮಣಿಭಾಯಿ ಸ್ವಾರಸ್ಯಕರವಾಗಿ ಹೇಳುತ್ತಿದ್ದರು, ಗಾಂಧೀಜಿ ಮಣಿಭಾಯಿಯನ್ನು ಪ್ರಶ್ನಿಸುತ್ತಾರೆ. 'ಭಾರತ ಯಾಕೆ ಬಡವಾಗಿದೆ', ಗಾಂಧಿಯ ಭೇಟಿಗೆ ಹೋಗುವ ಮೊದಲೇ ಮಣಿಭಾಯಿಗೆ ಯಾರೋ ಹೇಳಿದ್ದರಂತೆ, ಗಾಂಧೀಜಿ ಕೇಳಿದ ಪ್ರಶ್ನೆಗಳನ್ನು ಉತ್ತರಿಸಲು ಹೋಗಬೇಡ. ಅವರೇ ತಮ್ಮ ಪ್ರಶ್ನೆಗೆ ಉತ್ತರ ಹೇಳುತ್ತಾರೆ. ತಾವೇ ಪ್ರಶ್ನೆ ಕೇಳಿ, ತಾವೇ ಉತ್ತರಹೇಳುವುದು ಅವರ ಶೈಲಿ ಎಂದು. ಮಣಿಭಾಯಿ ಉತ್ತರಿಸುವುದಿಲ್ಲ.&lt;/p&gt; &lt;p&gt;ಔತ್ತಮ್ಯದ ಗೀಳಿನಲ್ಲಿ&lt;/p&gt; &lt;p&gt;ಗಾಂಧೀಜಿಯವರೇ ಹೇಳಿದರು, 'ಯಾಕೆಂದರೆ ಭಾರತದ ಹಳ್ಳಿಗಳು ಬಡವಾಗಿವೆ'. ಮತ್ತೆ ಪ್ರಶ್ನೆ, 'ಭಾರತದ ಹಳ್ಳಿಗಳು ಯಾಕೆ ಬಡವಾಗಿವೆ'. ಯಾಕೆಂದರೆ ಹಳ್ಳಿಗರು ಅರೆಕಾಲಿಕ ಉದ್ಯೋಗಿಗಳು, ಅರೆಕಾಲಿಕ, ಉದ್ಯೋಗದ ಸಮಸ್ಯೆ ನಿರುದ್ಯೋಗದ ಸಮಸ್ಯೆಗಿಂತ ಸಂಕೀರ್ಣ'. ಮಣಿಭಾಯಿ ಆಶ್ರಮದ ಪಾಯಿಖಾನೆಯ ಸ್ವಚ್ಛತೆಗೆ ನೇಮಿಸಲ್ಪಟ್ಟರು. ಪಾಯಿಖಾನೆ ಅಂದರೆ ಕೆಳಗಡೆ ಬಕೆಟ್ ಇಡುವ ಮಾದರಿಯದು. ಆ ಬಕೆಟ್ ತುಂಬುತ್ತಿದ್ದಂತೆಯೇ ಅದನ್ನು ಒಯ್ದು ಅದರಲ್ಲಿರುವ ಮಲವನ್ನು ಮಣ್ಣಲ್ಲಿ ಮುಚ್ಚಿ ಗೊಬ್ಬರ ಮಾಡಲು ಹಾಕಿ, ಬಕೆಟ್ ತೊಳೆದು ತಿರುಗಿ ತಂದಿಡುವ ಕೆಲಸ ಮಣಿಭಾಯಿಗೆ. ಎಷ್ಟು ಸ್ವಚ್ಛ ಮಾಡಬೇಕೆಂಬ ಸೂಚನೆಯನ್ನು ಗಾಂಧೀಜಿಯವರೇ ಕೊಡುತ್ತಿದ್ದರಂತೆ.&amp;nbsp;&lt;/p&gt; &lt;p&gt;'ಬಕೆಟ್ ತಳದಲ್ಲಿ ನಿನ್ನ ಮುಖ ಕಾಣಬೇಕು'. ಮಣಿಭಾಯಿ ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಗಾಂಧೀಜಿ ಪುಣೆಯ ಸಮೀಪ ಉರುಳಿಕಾಂಚನ್ ಎಂಬಲ್ಲಿ ನಿಸರ್ಗೋಪಚಾರ ಕೇಂದ್ರವೊಂದನ್ನು ಸ್ಥಾಪಿಸಿರುತ್ತಾರೆ. ನಿಸರ್ಗ ಚಿಕಿತ್ಸೆಯ ಪ್ರಯೋಜನವನ್ನು ಬಲವಾಗಿ ಪ್ರತಿಪಾದಿಸಿದವರು ಗಾಂಧಿ. ತಾನು ಹೇಳಿದ್ದನ್ನು ಮಾಡುವ ಗಾಂಧಿ, ಉರುಳಿಯಲ್ಲಿ (ಉರುಳಿ-ಉರುಳಿ ಕಾಂಚನದ ಬಳಕೆಯ ಹೆಸರು) ನಿಸರ್ಗೋಪಚಾರ ಕೇಂದ್ರ ಸ್ಥಾಪಿಸಿ, ಅಲ್ಲೊಬ್ಬ ತರುಣ ಕಾರ್ಯಕರ್ತ ಬೇಕೆಂದು ಯೋಚಿಸಿ, ಮಾಣಿಭಾಯಿಯವರನ್ನು ಕೇಂದ್ರದ ಕೆಲಸಕ್ಕೆ ನಿಯೋಜಿಸುತ್ತಾರೆ. ಮುಂದೆ ಮಣಿಭಾಯಿ ಉರುಳಿಯಲ್ಲಿ ಸಾಧಿಸಿದ್ದು ದೇಶದ ಗ್ರಾಮಾಭಿವೃದ್ಧಿ ಕೆಲಸದ ಐತಿಹಾಸಿಕ ಮಾದರಿಯಾಗುತ್ತದೆ.&lt;/p&gt; &lt;p&gt;ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ &lt;/p&gt; &lt;p&gt;ಮಣಿಭಾಯಿಯವರು ಅಂದು ನಮ್ಮ ಸಂದರ್ಶನ ನಡೆಸಿದರು. ನಮ್ಮಲ್ಲಿ 26 ಜನರನ್ನು ಆಯ್ಕೆ ಮಾಡಿದರು. ಹಾಗೆ 1980, ಏಪ್ರಿಲ್ 1ರ ದಿನ ನಾವೆಲ್ಲರೂ ಬೈಫ್&zwnj;ನ ಉರುಳಿಕಾಂಚನದ ಕ್ಯಾಂಪಸ್&zwnj;ನಲ್ಲಿ ತರಬೇತಿಗೆ ಹಾಜರಾದೆವು. ಬೈಫ್&zwnj;ನ ಸೆಂಟ್ರಲ್ ರಿಸರ್ಚ್ ಸ್ಟೇಷನ್ ಅದು. ಅಲ್ಲಿ ಬುಲ್ ಮದರ್&zwnj;ಫಾರ್ಮ್, ವೀರ್ಯಸಂಗ್ರಹಣೆಗಾಗಿ ಉತ್ಕೃಷ್ಟ ಪೆಡಿಗ್ರಿಯ ಹೋರಿಗಳು, ಮೇವಿನ ತಾಕುಗಳು, ಗೋಬರ್&zwnj;ಅನಿಲದ ಪ್ರಯೋಗಗಳು ಇದ್ದವು. ಸುಬಾಬುಲ್ ಗಿಡದ ಬೀಜಗಳನ್ನು ಹವಾಯಿಯಿಂದ ತಂದು ಗಿಡಗಳನ್ನು ಬೆಳೆಸಿ ಮೇವಿನ ಮರವಾಗಿ ಜನಪ್ರಿಯಗೊಳಿಸಲು ಅವುಗಳ ಮೇಲೆ ವಿವಿಧ ಪ್ರಯೋಗಗಳು ಅಲ್ಲಿ ನಡೆದಿದ್ದವು. ಸುಬಾಬುಲ್ ವೇಗವಾಗಿ ಬೆಳೆಯುವ ಗಿಡ. ಅದರ ಹಸುರು ಎಲೆಗಳಲ್ಲಿ ಶೇಕಡಾ 22ರಷ್ಟು ಕ್ರೂಡ್ ಪ್ರೋಟೀನ್ ಇರುತ್ತದೆ. ದನಗಳಿಗೆ ಬೇಕಾದ ಪೌಷ್ಟಿಕ ಅಹಾರ ಹಾಗೂ ಮೇವಿನ ಕೊರತೆ ಇರುವ ಭಾರತದಲ್ಲಿ ಸುಬಾಬುಲ್ ಬಹು ಉಪಯುಕ್ತವಾಗಬಲ್ಲದೆಂದು ಮನಗಂಡು ಮಣಿಭಾಯಿ ಹಾಗೂ ಡಾ. ನಾರಾಯಣ ಹೆಗಡೆ ಸುಬಾಬುಲ್ ಕೃಷಿಗೆ ಹಾಗೂ ಬಳಕೆಗೆ ಮನಸ್ಸು ಮಾಡಿದ್ದರು.&lt;/p&gt; &lt;p&gt;ಸುಬಾಬುಲ್ ಸೊಪ್ಪನ್ನು ದನಗಳಿಗೆ ತಿನ್ನಿಸುವಲ್ಲಿ ಒಂದು ಸಮಸ್ಯೆ ಇತ್ತು. ಅದರ ಎಲೆಗಳಲ್ಲಿ ಮೈಮೊಸಿನ್ ಎಂಬ ವಿಷಕಾರಿಯಾದ, ಪ್ರೋಟೀನ್ ಅಲ್ಲದ ಅಮಿನೋ ಆಸಿಡ್ ಇದ್ದು, ಅದು ದನಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಕುರಿತು ವರದಿಗಳಿದ್ದವು. ಒಟ್ಟೂ ಆಹಾರದ ಮೂರರಲ್ಲಿ ಒಂದು ಪಾಲನ್ನು ಮೀರದಂತೆ ಸುಬಾಬುಲ್ ಎಲೆಗಳನ್ನು ದನಗಳಿಗೆ ಸುರಕ್ಷಿತವಾಗಿ ಮೇಯಿಸಬಹುದೆಂದು ಬೈಫಿನ ಪ್ರಯೋಗಗಳು ಸಾಬೀತುಪಡಿಸಿದವು. ಉರುಳಿಕಾಂಚನದ ತರಬೇತಿಯ ನಂತರ ನಾನು ಜಾನುವಾರು ಸಂವರ್ಧನ ಕೇಂದ್ರಗಳಲ್ಲಿ ಸುಮಾರು ೮-೯ ವರ್ಷಗಳ ಕಾಲ ಕೆಲಸ ನಿರ್ವಹಿಸಿದೆ. ಮೂಡಲಗಿ, ಯಲ್ಲಾಪುರ, ಉಮಚಗಿ ಶಿರಸಿ, ಪುತ್ತೂರು ಹೀಗೆ ಹಲವು ಊರುಗಳಲ್ಲಿ ಜಾನುವಾರು ಸಂವರ್ಧನೆಯ ಹಾಗೂ ಕಾರ್ಯಕ್ರಮದ ಉಸ್ತುವಾರಿಯ ಕೆಲಸ ಮಾಡಿದೆ. ನನ್ನ ಜೊತೆಯಲ್ಲಿ ಬೈಫ್ ಸೇರಿದ ಸಹಪಾಠಿಗಳೆಲ್ಲ ಒಂದೆರಡು ವರ್ಷಗಳಲ್ಲಿ ಕರ್ನಾಟಕ ಸರ್ಕಾರದ ಕೆಲಸ ಸಿಗುತ್ತಿದ್ದಂತೆಯೆ ಬೈಫ್ ತೊರೆದರು. ನಾನು ಸರ್ಕಾರಿ ನೌಕರಿ ಬೇಡವೆಂದೂ ಗ್ರಾಮೀಣಾಭಿವೃದ್ಧಿ ಮುಂದುವರಿಯಬೇಕೆಂದೂ ನಿರ್ಧರಿಸಿದ್ದೆ. ಆರ್ಥಿಕ ಭದ್ರತೆ ಹಾಗೂ ಸರ್ಕಾರಿ ಅಧಿಕಾರಗಳನ್ನು ನಿರಾಕರಿಸಲು ಮನಸ್ಸು ಮಾಡಿದೆ. ನನ್ನ ವ್ಯಕ್ತಿತ್ವಕ್ಕೆ ಸರ್ಕಾರಿ ಕೆಲಸ ಬೇಡವೆಂದು ಅನಿಸಿತು.&amp;nbsp;&lt;/p&gt; &lt;p&gt;ಈಗ ತಿರುಗಿ ನೋಡಿದರೆ ಅದೊಂದು ದೈವಿಕ ನಿರ್ಣಯವೆನಿಸುತ್ತದೆ. ನಾನು ಪ್ರಾಮಾಣಿಕವಾಗಿರಬೇಕು, ನನ್ನಿಂದ ಸಮಾಜಕ್ಕೆ ಒಳಿತಾಗಬೇಕು ಎನ್ನುವ ವಿಚಾರ ನನ್ನ ಕಾಲೇಜು ದಿನಗಳಲ್ಲೇ ಮನಸ್ಸಿನಲ್ಲಿ ಹರಳುಗಟ್ಟಿತ್ತು. ಮಣಿಭಾಯಿಯವರ ನಿಸ್ವಾರ್ಥ ಮಾದರಿ ಅದನ್ನು ಇನ್ನಷ್ಟು ಗಟ್ಟಿ ಮಾಡಿತು. ತೊಂಬತ್ತರ ದಶಕದ ಪ್ರಾರಂಭದಲ್ಲಿಯೇ ನಾನು ಪಶುವೈದ್ಯಕೀಯದ ತಳಿ ಅಭಿವೃದಿಟಛಿಯ ಕೆಲಸಗಳನ್ನು ಮೀರಿ ಕೆಲಸ ಮಾಡುವ ಅವಕಾಶ ದೊರಕಿತು. ಭೈಫ್ ಸಂಸ್ಥೆಯು ಕರ್ನಾಟಕದಲ್ಲಿ ಪ್ರಾರಂಭಿಸಿದ ಕೃಷಿ ಅರಣ್ಯ ಕಾರ್ಯಕ್ರಮದಲ್ಲಿ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಕೆಲಸದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನನಗೆ ನೀಡಲಾಗಿತ್ತು.&amp;nbsp;&lt;/p&gt; &lt;p&gt;ಅಂದಿನ ಧಾರವಾಡ (ಈಗ ಹಾವೇರಿ) ಜಿಲ್ಲೆಯ ಕನವಳ್ಳಿ ಹಾಗೂ ಉತ್ತರ ಕನ್ನಡದ ಮುಂಡಗೋಡಿನ ತಮ್ಯಾನಕೊಪ್ಪ ಎನ್ನುವ ಲಂಬಾಣಿ ತಾಂಡಾ ಈ ಯೋಜನೆಯ ಕಾರ್ಯಕ್ಷೇತ್ರಗಳು. ಅವುಗಳನ್ನು ಬ್ಲಾಕ್&zwnj;ಗಳು ಎಂದು ಗುರುತಿಸಿ ಪ್ರತಿಯೊಂದು ಬ್ಲಾಕ್&zwnj;ನಲ್ಲಿ ನೂರು ಕುಟುಂಬಗಳೊಂದಿಗೆ ಕೆಲಸ ಮಾಡುವುದು ಯೋಜನೆಯ ಉದ್ದೇಶ. ಪ್ರತಿ ಕುಟುಂಬದ ಜಮೀನಿನಲ್ಲಿ ಕೃಷಿಯೊಂದಿಗೆ ಹಣ್ಣಿನ ಗಿಡಗಳು ಹಾಗೂ ಅರಣ್ಯ ಗಿಡಗಳನ್ನು ನೆಟ್ಟು, ಕೃಷಿ ಅರಣ್ಯ ಬೇಸಾಯ ಕೈಗೊಂಡು ಅವರು ತಮ್ಮ ಆದಾಯವನ್ನು ಸುಸ್ಥಿರವಾಗಿ ಹೆಚ್ಚಿಸಿಕೊಳ್ಳಲು ಬೇಕಾಗುವಂತೆ ಮಾಡಲು ಯೋಜನೆ ತಯಾರಿಸಲಾಯಿತು. ಈ ಯೋಜನೆ ಹಲವಾರು ಆಂತರಿಕ ಹಾಗೂ ಬಾಹ್ಯ ತೊಡಕುಗಳನ್ನು ಎದುರಿಸುತ್ತ 1995ರಲ್ಲಿ ಮುಗಿಯಿತು. ಅಷ್ಟರೊಳಗೆ, 1992ರಲ್ಲಿ ಮಣಿಭಾಯಿಯವರು ನಮ್ಮನ್ನಗಲಿದರು.&lt;/p&gt;]]></content:encoded>
            <category>magazine</category>
            <dc:creator>Nirupama K S</dc:creator>
            <atom:link href="https://kannada.asianetnews.com/life/halligalannu-kattuva-kasta-sukha-dr-prakash-bhat-book-release-today-vin-sdq1wg"/>
        </item>
        <item>
            <title><![CDATA[25 ವರ್ಷಗಳಲ್ಲಿ ಏನೇನ್‌ ಆಯ್ತು ಗೊತ್ತಾ? 21ನೇ ಶತಮಾನದ ಕಾಲು ಶತಮಾನಕ್ಕೆ ತೆರೆ, ಶರವೇಗದಲ್ಲಿ ಬದಲಾಗಿದೆ ಕಾಲ]]></title>
            <link>https://kannada.asianetnews.com/magazine/2000-to-2025-journey-how-india-has-changed-in-25-years-a-surprising-journey-mrq/articleshow-9r97ces</link>
            <guid isPermaLink="true">https://kannada.asianetnews.com/magazine/2000-to-2025-journey-how-india-has-changed-in-25-years-a-surprising-journey-mrq/articleshow-9r97ces</guid>
            <pubDate>Thu, 01 Jan 2026 08:21:33 +0530</pubDate>
            <description><![CDATA[ಕಳೆದ ಕಾಲು ಶತಮಾನದಲ್ಲಿ ಭಾರತವು ತಂತ್ರಜ್ಞಾನ, ಆರ್ಥಿಕತೆ, ಮತ್ತು ಮೂಲಸೌಕರ್ಯದಲ್ಲಿ ಅದ್ಭುತ ಬದಲಾವಣೆಗಳನ್ನು ಕಂಡಿದೆ. ಸ್ಮಾರ್ಟ್&zwnj;ಫೋನ್&zwnj; ಕ್ರಾಂತಿಯಿಂದ ಹಿಡಿದು ಇಸ್ರೋದ ಬಾನಂಗಳದ ಸಾಧನೆಗಳವರೆಗೆ, ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಆದ ಮಹತ್ವದ ಪರಿವರ್ತನೆಗಳನ್ನು ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kdtvmfnk4xaw72emx0zpfpt2,imgname-happy-new-year-1767206698674.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಫೋನ್&zwnj;ನಿಂದ ಎಲ್ಲರೂ ಸ್ಮಾರ್ಟ್&zwnj;&lt;/strong&gt;&lt;/h2&gt;&lt;p&gt;21ನೇ ಶತಮಾನಕ್ಕೆ ಕಾಲಿಟ್ಟಾಗ ಮೊಬೈಲ್&zwnj; ಎಂಬುದು ಶ್ರೀಮಂತಿಕೆಯ ಸಂಕೇತವಾಗಿತ್ತು. ಕೀ ಪ್ಯಾಡ್&zwnj; ಮೊಬೈಲ್&zwnj; ಖರೀದಿ, ಅದಕ್ಕೆ ರೀಚಾರ್ಜ್&zwnj; ಮಾಡಿಸುವುದು, ಕರೆ ಮಾಡುವುದು ಹಣವಂತರಿಗಷ್ಟೇ ಸಾಧ್ಯವಿತ್ತು. ಆದರೆ ಈಗ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್&zwnj;ಫೋನ್&zwnj; ಇವೆ.&lt;/p&gt;&lt;h3&gt;&lt;strong&gt;ಡೂಮ್&zwnj; ಟೀವಿಗಳು ಢಂ&lt;/strong&gt;&lt;/h3&gt;&lt;p&gt;ಕಪ್ಪು ಬಿಳುಪಿನ ಅಥವಾ ಬಣ್ಣದ ಡೂಮ್&zwnj; ಟೀವಿಗಳು ಮನೆಗಳನ್ನು ಆಳುತ್ತಿದ್ದ ಕಾಲವದು. ಈ ಕಾಲು ಶತಮಾನದಲ್ಲಿ ತೆಳು ಪರದೆಯ ಟೀವಿಗಳು ಬಂದವು. ಎಲ್&zwnj;ಸಿಡಿ, ಪ್ಲಾಸ್ಮಾ, ಎಲ್&zwnj;ಇಡಿ ಬಳಿಕ ಸ್ಮಾರ್ಟ್&zwnj; ಟೀವಿಗಳು ಬಂದವು. ಈಗ ಫ್ರೀ ಕೊಟ್ಟರೂ ಡೂಮ್&zwnj; ಟೀವಿಗಳನ್ನು ಕೇಳುವವರಿಲ್ಲ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಅಂಗೈಯಲ್ಲೇ ಬ್ಯಾಂಕು&lt;/strong&gt;&lt;/p&gt;&lt;p&gt;ಬ್ಯಾಂಕ್&zwnj; ಖಾತೆಗೆ ಹಣ ತುಂಬಲು, ತೆಗೆಯಲು ಬ್ಯಾಂಕುಗಳ ಮುಂದೆ ಕ್ಯೂ ನಿಲ್ಲಬೇಕಿತ್ತು. ರಜಾ ದಿನ ಬಂತೆಂದರೆ ಕ್ಯೂ ಹೆಚ್ಚಾಗುತ್ತಿತ್ತು. ಆದರೆ ಈಗ ಆ ಬವಣೆ ಇಲ್ಲ. ಮೊಬೈಲ್&zwnj;ನಲ್ಲೇ ಬ್ಯಾಂಕ್&zwnj; ವ್ಯವಹಾರ ನಡೆಯುತ್ತಿವೆ. ಯುಪಿಐ ಬಂದಿದೆ. ಹಣ ವರ್ಗಾವಣೆ, ಸ್ವೀಕಾರ ಸುಲಭ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಆನ್&zwnj;ಲೈನ್&zwnj; ಶಾಪಿಂಗ್&zwnj;&lt;/strong&gt;&lt;/p&gt;&lt;p&gt;ಹಬ್ಬಕ್ಕೆ ಬಟ್ಟೆ ಖರೀದಿಸಲು, ದಿನಸಿ, ಸಾಮಗ್ರಿ ಖರೀದಿಸಲು ಪೇಟೆಗೇ ಹೋಗಬೇಕಿತ್ತು. ಆದರೆ ಈಗ ಮನೆಯಲ್ಲೇ ಕುಳಿತು ಬೇಕಾದ್ದನ್ನು ಖರೀದಿಸಲು ಆನ್&zwnj;ಲೈನ್&zwnj; ಶಾಪಿಂಗ್&zwnj; ಇದೆ. ಊಟ ಕೂಡ ಮನೆ ಬಾಗಿಲಿಗೆ ಬರುತ್ತಿದೆ. ಮನೆಯಿಂದ ಹೊರಗೆ ಹೋಗದೆ ಎಲ್ಲವನ್ನೂ ಮನೆಗೆ ತರಿಸಿಕೊಳ್ಳಬಹುದು.&lt;/p&gt;&lt;p&gt;&lt;strong&gt;ನರೇಂದ್ರ ಮೋದಿ&lt;/strong&gt;&lt;/p&gt;&lt;p&gt;ನರೇಂದ್ರ ಮೋದಿ ಎಂದರೆ ದೇಶದ ಬಹುಪಾಲು ಜನರಿಗೇ ಗೊತ್ತೇ ಇರಲಿಲ್ಲ. ಆದರೆ ಈಗ ದೇಶ- ವಿದೇಶಗಳಲ್ಲೂ &lsquo;ಮೋದಿ&rsquo; ಎಂದರೆ ಗೊತ್ತೇ ಇಲ್ಲದವರು ಇಲ್ಲ ಎನ್ನುವಂತಹ ಕಾಲ. ಅವರು ವಿಶ್ವದ ಪ್ರಭಾವಿ ನಾಯಕರಾಗಿದ್ದಾರೆ. ಅಪ್ಪುಗೆಯ ರಾಜತಾಂತ್ರಿಕ, ವಾಗ್ಝರಿಯಿಂದ ಪ್ರಸಿದ್ಧರಾಗಿದ್ದಾರೆ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಬಾಲ ಬಿಚ್ಚಿದ ಉಗ್ರವಾದ&lt;/strong&gt;&lt;/p&gt;&lt;p&gt;ಸಂಸತ್&zwnj; ಮೇಲೆ ದಾಳಿ, ಮುಂಬೈ ರೈಲು ಸ್ಫೋಟ, 26/11 ಅಟ್ಟಹಾಸ, ಪುಲ್ವಾಮಾದಲ್ಲಿ ಯೋಧರ ಸಂಹಾರ, ಪಹಲ್ಗಾಂ ನರಮೇಧಗಳನ್ನು ಭಾರತ ಕಾಣುವಂತಾಯಿತು. ಪಾಕಿಸ್ತಾನಕ್ಕೆ ಭಾರತವು ಸರ್ಜಿಕಲ್&zwnj; ಸ್ಟ್ರೈಕ್&zwnj;, ಏರ್&zwnj;ಸ್ಟ್ರೈಕ್&zwnj;, ಆಪರೇಷನ್&zwnj; ಸಿಂದೂರ ಹೆಸರಲ್ಲಿ ಭರ್ಜರಿ ತಿರುಗೇಟು ಕೊಟ್ಟಿತು.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಬಾನೆತ್ತರಕ್ಕೆ ಇಸ್ರೋ&lt;/strong&gt;&lt;/p&gt;&lt;p&gt;ಸೈಕಲ್&zwnj; ಮೇಲೆ ರಾಕೆಟ್&zwnj; ಸಾಗಿಸುತ್ತಿದ್ದ ಇಸ್ರೋ ಇಡೀ ವಿಶ್ವವೇ ತಿರುಗಿ ನೋಡುವಂತಹ ಸಾಧನೆ ಮಾಡಿತು. ಕಡಿಮೆ ಖರ್ಚಿನಲ್ಲಿ ಎರಡು ಬಾರಿ ಚಂದ್ರಯಾನ, ಮಂಗಳಯಾನ ನಡೆಸಿತು. ವಿದೇಶಿ ಉಪಗ್ರಹಗಳನ್ನು ಉಡಾಯಿಸಿತು. ಈಗ ಗಗನಯಾನಕ್ಕೆ ಸಜ್ಜಾಗುತ್ತಿದೆ ಇಸ್ರೋ.&lt;/p&gt;&lt;p&gt;&lt;strong&gt;ಚಿನ್ನ, ಬೆಳ್ಳಿ ಭಾರಿ ಜಿಗಿತ&lt;/strong&gt;&lt;/p&gt;&lt;p&gt;2000ನೇ ಇಸ್ವಿಯಲ್ಲಿ ಚಿನ್ನದ ಬೆಲೆ 10 ಗ್ರಾಂ 4400 ರು. ಇತ್ತು. 8000 ರು. ಕೊಟ್ಟರೆ 1 ಕೇಜಿ ಬೆಳ್ಳಿಗಟ್ಟಿ ಸಿಗುತ್ತಿತ್ತು. ಆಗ ನೀವು 10 ಗ್ರಾಂ ಚಿನ್ನ ಖರೀದಿಸಿದ್ದರೆ ಅದರ ಮೌಲ್ಯ ಈಗ 1.36 ಲಕ್ಷ ರು., 1 ಕೇಜಿ ಬೆಳ್ಳಿ ಬೆಲೆ ಕೊಂಡಿದ್ದರೆ ಈಗ 2.40 ಲಕ್ಷ ರು. ಆಗಿರುತ್ತಿತ್ತು!&lt;/p&gt;&lt;p&gt;--&lt;/p&gt;&lt;p&gt;&lt;strong&gt;ಸೆನ್ಸೆಕ್ಸ್ ನಾಗಾಲೋಟ&lt;/strong&gt;&lt;/p&gt;&lt;p&gt;2000ನೇ ಇಸ್ವಿಯಲ್ಲಿ ಸೆನ್ಸೆಕ್ಸ್&zwnj; 6000 ಅಂಕಗಳ ಆಸುಪಾಸಿನಲ್ಲಿತ್ತು. ಈಗ 85 ಸಾವಿರಕ್ಕೇರಿದೆ. ಷೇರು ವ್ಯವಹಾರ, ಮ್ಯೂಚುಯಲ್&zwnj; ಫಂಡ್&zwnj; ಈಗ ಬಹುತೇಕ ಜನರಿಗೆ ಗೊತ್ತಿದೆ. ಹೂಡಿಕೆ ಬಗ್ಗೆ ಹಿಂದೆಂದಿಗಿಂತ ಹೆಚ್ಚಿನ ಜಾಗೃತಿ ಮೂಡಿದೆ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ರಸ್ತೆಗಳಿಗೆ ಹೊಸ ಲುಕ್&zwnj;&lt;/strong&gt;&lt;/p&gt;&lt;p&gt;ದೇಶದಲ್ಲಿ ಸರಿಯಾದ ಹೆದ್ದಾರಿಗಳೇ ಇರಲಿಲ್ಲ. ಈ ಶತಮಾನದಲ್ಲಿ ದೇಶದ ನಾಲ್ಕೂ ದಿಕ್ಕು ಸಂಪರ್ಕಿಸುವ ಸುವರ್ಣ ಚತುಷ್ಪಥ ಯೋಜನೆ ಆಯಿತು. ಈಗ ಎಕ್ಸ್&zwnj;ಪ್ರೆಸ್&zwnj;ವೇಗಳ ಯುಗ. ದೇಶದ ಉದ್ದಗಲಕ್ಕೂ ಸಂಚರಿಸಲು ಯಾವುದೇ ಸಮಸ್ಯೆ ಇಲ್ಲ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ವಿಮಾನಗಳ &lsquo;ಹಾರಾಟ&rsquo;&lt;/strong&gt;&lt;/p&gt;&lt;p&gt;ವಿಮಾನ ಹಾರಾಟ ಎಂಬುದು ಕೆಲವೇ ವರ್ಗಕ್ಕೆ ಸೀಮಿತವಾಗಿದ್ದ ಕಾಲ ಬದಲಾಗಿದೆ. ಹವಾಯಿ ಚಪ್ಪಲಿ ಧರಿಸುವವರೂ ವಿಮಾನ ಏರುವಂತಾಗಿದೆ. ದೇಶದ ಉದ್ದಗಲಕ್ಕೂ ವಿಮಾನ ಸೇವೆ ಇದೆ. ಬೆಂಗಳೂರು ಏರ್&zwnj;ಪೋರ್ಟ್&zwnj; ಸೇರಿ ಹಲವು ವಿಮಾನ ನಿಲ್ದಾಣಗಳು ಆರಂಭವಾಗಿವೆ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಸಾರಿಗೆ ಕ್ರಾಂತಿ&lt;/strong&gt;&lt;/p&gt;&lt;p&gt;ಐಷಾರಾಮಿ ಬಸ್&zwnj;ಗಳ ಸಂಚಾರ ಹೆಚ್ಚಾಗಿವೆ. ಕರ್ನಾಟಕದಲ್ಲಿ ವೋಲ್ವೋ ಬಸ್&zwnj;ಗಳ ಸಂಖ್ಯೆ ಹೆಚ್ಚಿದೆ. ಎಲೆಕ್ಟ್ರಿಕ್&zwnj; ಬಸ್&zwnj;ಗಳು ಅಡ್ಡಾಡುತ್ತಿವೆ. ಎಲೆಕ್ಟ್ರಿಕ್&zwnj; ಬೈಕ್&zwnj;, ಕಾರುಗಳ ಭರಾಟೆ ಹೆಚ್ಚಾಗಿದೆ. ಹೊಸ ಹೊಸ ಕಾರುಗಳು ಬಂದಿವೆ. ಮೆಟ್ರೋ, ವಂದೇ ಭಾರತ್&zwnj;ನಂತಹ ರೈಲುಗಳು ಬಂದಿವೆ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಐಟಿ, ಎಐ ಕ್ರಾಂತಿ&lt;/strong&gt;&lt;/p&gt;&lt;p&gt;ಐಟಿ ಕಂಪನಿಗಳು ಹೊಸ ಎತ್ತರಕ್ಕೆ ಏರಿ ಆರ್ಥಿಕತೆಗೆ ಭಾರಿ ಕೊಡುಗೆ ನೀಡಿದವು. ಯುವಕರಿಗೆ ಉದ್ಯೋಗ ಸಿಕ್ಕಿತು. ಸ್ಟಾರ್ಟಪ್&zwnj; ಕ್ರಾಂತಿಯಿಂದಾಗಿ ರೂಂ, ಫುಡ್&zwnj; ಡೆಲಿವರಿ, ಕ್ಯಾಬ್&zwnj;, ಆಟೋ ಸೇವೆ ಸುಲಭವಾದವು. ಡ್ರೋನ್&zwnj;ಗಳು ಆಳುತ್ತಿವೆ. ಈಗ ಎಐ ಕ್ರಾಂತಿಯೇ ನಡೆಯುತ್ತಿದೆ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಗಡ್ಡ ಬಿಡುವ ಸ್ಟೈಲ್&zwnj;&lt;/strong&gt;&lt;/p&gt;&lt;p&gt;ಮದುವೆ ಬಂತೆಂದರೆ ಯುವಕರು ನೀಟಾಗಿ ಶೇವ್ ಮಾಡಿಸಿಕೊಳ್ಳುತ್ತಿದ್ದರು. ಈಗ ಯುವಕರಿಗೆ ಗಡ್ಡ ಬಿಡುವುದೇ ಟ್ರೆಂಡ್&zwnj;. ಮದುವೆಗಳಲ್ಲೂ ಯುವಕರು ಗಡ್ಡಧಾರಿಗಳಾಗಿಯೇ ತಾಳಿ ಕಟ್ಟುತ್ತಿದ್ದಾರೆ. ಸಿನಿಮಾಗಳಲ್ಲೂ ಹೀರೋಗಳು ಗಡ್ಡಧಾರಿಗಳಾಗಿ ಕಾಣಿಸಿಕೊಳ್ಳುವ ಟ್ರೆಂಡ್&zwnj; ನಡೆಯುತ್ತಿದೆ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಪ್ರತಿಯೊಬ್ಬರಿಗೂ ಆಧಾರ್&zwnj;&lt;/strong&gt;&lt;/p&gt;&lt;p&gt;ದೇಶದ ಜನರ ಬಳಿ ರೇಷನ್&zwnj; ಕಾರ್ಡ್&zwnj;, ವೋಟರ್ ಐಡಿ ಇತ್ತು. ಗುರುತಿನ ಪುರಾವೆ ಎಂದು ಇರಲಿಲ್ಲ. ಈ ಕಾಲು ಶತಮಾನದಲ್ಲಿ ಆಧಾರ್&zwnj; ಎಂಬ 12 ಅಂಕಿಗಳ ವಿಶಿಷ್ಟ ಸಂಖ್ಯೆಯ ಗುರುತಿನ ಐಡಿಯನ್ನು ಪ್ರತಿಯೊಬ್ಬರಿಗೂ ನೀಡಲಾಯಿತು. ಆಧಾರ್&zwnj; ಇಲ್ಲದಿದ್ದರೆ ಈಗ ನಿಮಗೆ ಆಧಾರವೇ ಇಲ್ಲ!&lt;/p&gt;&lt;p&gt;--&lt;/p&gt;&lt;p&gt;&lt;strong&gt;ಮೊಬೈಲ್&zwnj; ಕೆಮೆರಾ ಯುಗ&lt;/strong&gt;&lt;/p&gt;&lt;p&gt;ಫೋಟೋ ತೆಗೆಸಿಕೊಳ್ಳಲು ಸ್ಟುಡಿಯೋಗೆ ಹೋಗಬೇಕಿತ್ತು. ಸ್ವಂತ ಕ್ಯಾಮೆರಾ ಖರೀದಿಸಿದರೆ ರೀಲ್&zwnj; ಲೆಕ್ಕ ಹಾಕಿ ಫೋಟೋ ತೆಗೆಯಬೇಕಿತ್ತು. ಬಳಿಕ ಡಿಜಿಟಲ್&zwnj; ಕ್ಯಾಮೆರಾಗಳು ಪ್ರವೇಶಿಸಿ ಕ್ರಾಂತಿ ಮಾಡಿದವು. ಈಗ ಮೊಬೈಲ್&zwnj; ಕ್ಯಾಮೆರಾಗಳು ಜಾದೂ ಮಾಡಿವೆ. ಎಲ್ಲರೂ ಫೋಟೋಗ್ರಾಫರ್&zwnj;ಗಳೇ!&lt;/p&gt;&lt;p&gt;--&lt;/p&gt;&lt;p&gt;&lt;strong&gt;ಫೇಸ್ಬುಕ್&zwnj;, ಇನ್ಸ್ಟಾ ರೀಲ್ಸ್&zwnj;&lt;/strong&gt;&lt;/p&gt;&lt;p&gt;ಫೇಸ್&zwnj;ಬುಕ್&zwnj;, ಇನ್&zwnj;ಸ್ಟಾ ಗ್ರಾಂ, ವಾಟ್ಸಾಪ್&zwnj; ಸೇರಿ ಈಗ ಬಳಸುತ್ತಿರುವ ಅಷ್ಟೂ ಸೋಷಿಯಲ್&zwnj; ಮೀಡಿಯಾಗಳು ಬಂದಿದ್ದೇ ಈ ಕಾಲು ಶತಮಾನದಲ್ಲಿ. ಇ-ಮೇಲ್&zwnj;ಗಳು ಜನಪ್ರಿಯವಾಗಿದ್ದು ಈ ಕಾಲದಲ್ಲೇ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಭಾರತದ ಪ್ರಾಬಲ್ಯ&lt;/strong&gt;&lt;/p&gt;&lt;p&gt;ಭಾರತದ ಬಗ್ಗೆ ವಿಶ್ವಕ್ಕೆ ಇದ್ದ ಕಲ್ಪನೆಯನ್ನೇ ಬದಲಿಸಿದ ಸಮಯ ಇದು. ಭಾರತ ಈಗ ವಿಶ್ವದ ಪವರ್&zwnj;ಫುಲ್&zwnj; ದೇಶ. ಉತ್ಪಾದನೆ, ರಕ್ಷಣೆ, ಐಟಿ, ವ್ಯಾಪಾರ ಎಲ್ಲ ವಲಯದಲ್ಲೂ ಭಾರತದ ಸಾಧನೆ ಅಮೋಘ. ಭಾರತ ನೀತಿ ನಿರೂಪಣೆಯಲ್ಲಿ ಈಗ ಪ್ರಮುಖ ಪಾತ್ರ ವಹಿಸುವಂತಾಗಿದೆ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಯುದ್ಧ ಕಾಲ&lt;/strong&gt;&lt;/p&gt;&lt;p&gt;ಅಪಘಾನಿಸ್ತಾನ, ಇರಾಕ್&zwnj;, ಲಿಬಿಯಾ, ಸಿರಿಯಾ, ಉಕ್ರೇನ್&zwnj;, ಇಸ್ರೇಲ್&zwnj;, ಪ್ಯಾಲೆಸ್ತೀನ್&zwnj;ನಂತಹ ಘೋರ ಯುದ್ಧಗಳನ್ನು ಈ ಕಾಲು ಶತಮಾನ ಕಂಡಿದೆ.&lt;/p&gt;&lt;p&gt;&lt;strong&gt;ಜನಸಂಖ್ಯೆ ಹೆಚ್ಚಳ&lt;/strong&gt;&lt;/p&gt;&lt;p&gt;ಭಾರತದ ಜನಸಂಖ್ಯೆ 1.05 ಕೋಟಿ ಇತ್ತು. ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿತ್ತು. ಈಗ ದೇಶವಾಸಿಗಳ ಸಂಖ್ಯೆ 140 ಕೋಟಿಯನ್ನು ದಾಟಿದೆ. ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದೆ.&lt;/p&gt;&lt;p&gt;&lt;strong&gt;ವಿಕಾಸಸೌಧ, ಸುವರ್ಣಸೌಧ&lt;/strong&gt;&lt;/p&gt;&lt;p&gt;ಬೆಂಗಳೂರಿನ ವಿಧಾನಸೌಧ ಪಕ್ಕ ವಿಕಾಸಸೌಧ ತಲೆ ಎತ್ತಿದೆ. ಬೆಳಗಾವಿಯಲ್ಲಿ ಪ್ರತಿ ವರ್ಷ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅದಕ್ಕಾಗಿ ಅಲ್ಲೊಂದು ಸುವರ್ಣಸೌಧವನ್ನೂ ನಿರ್ಮಿಸಲಾಗಿದೆ. ದೇಶದಲ್ಲಿ ಹೊಸ ಸಂಸತ್&zwnj; ಭವನ ಎಲೆ ಎತ್ತಿದೆ.&lt;/p&gt;&lt;p&gt;&lt;strong&gt;ಹೊಸ ಜಿಲ್ಲೆ, ರಾಜ್ಯ&lt;/strong&gt;&lt;/p&gt;&lt;p&gt;ಕರ್ನಾಟಕದಲ್ಲಿ ರಾಮನಗರ, ಚಿಕ್ಕಬಳ್ಳಾಪುರ, ಯಾದಗಿರಿ, ವಿಜಯನಗರ ಜಿಲ್ಲೆಗಳು ಸೃಷ್ಟಿಯಾಗಿವೆ. ದೇಶದಲ್ಲಿ ಜಾರ್ಖಂಡ್&zwnj;, ಛತ್ತೀಸ್&zwnj;ಗಢ, ಉತ್ತರಾಖಂಡ, ತೆಲಂಗಾಣ ರಾಜ್ಯಗಳು ಅಸ್ತಿತ್ವಕ್ಕೆ ಬಂದಿವೆ. ರಾಜ್ಯವಾಗಿದ್ದ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿದೆ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ವಿವಾದಗಳಿಗೆ ತೆರೆ&lt;/strong&gt;&lt;/p&gt;&lt;p&gt;ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್&zwnj; 370 ರದ್ದಾಗಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣ ಸಂಪನ್ನಗೊಂಡಿದೆ. ಇದಕ್ಕಾಗಿ ದಶಕಗಳ ಕಾಲ ನಡೆದ ಹೋರಾಟಕ್ಕೂ ತೆರೆ ಬಿದ್ದಿದೆ.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಐಪಿಎಲ್&zwnj;, ವಿಶ್ವಕಪ್&zwnj;&lt;/strong&gt;&lt;/p&gt;&lt;p&gt;ಐಪಿಎಲ್&zwnj; ಟೂರ್ನಿ ನಡೆಯುತ್ತಿದೆ. 1983ರಲ್ಲಿ ವಿಶ್ವಕಪ್&zwnj; ಗೆದ್ದಿದ್ದ ಭಾರತ 2011ರಲ್ಲಿ ಮತ್ತೊಮ್ಮೆ ವಿಶ್ವಕಪ್&zwnj; ಗೆದ್ದಿದೆ. ಟಿ20 ವಿಶ್ವಕಪ್&zwnj; ಆರಂಭವಾಗಿದ್ದು, ಎರಡು ಬಾರಿ ಭಾರತಕ್ಕೆ ಒಲಿದಿದೆ. ವಿರಾಟ್&zwnj; ಕೊಹ್ಲಿಯಂತಹ ಆಟಗಾರ 25 ವರ್ಷದಲ್ಲಿ ವಿಶ್ವ ಕ್ರಿಕೆಟ್&zwnj;ಗೆ ಸಿಕ್ಕ ದೊಡ್ಡ ಕೊಡುಗೆ&lt;/p&gt;&lt;p&gt;--&lt;/p&gt;&lt;p&gt;&lt;strong&gt;ಕೋವಿಡ್&zwnj; ಮಾರಿ&lt;/strong&gt;&lt;/p&gt;&lt;p&gt;ಮನುಕುಲವೇ ಎಂದೂ ಕಾಣದ, ಇಡೀ ದೇಶವನ್ನೇ 40 ದಿನಗಳ ಕಾಲ ಬಂದ್&zwnj; ಮಾಡಿಸಿದ, ಪ್ರೀತಿ ಪಾತ್ರರನ್ನು ಬಲಿ ಪಡೆದ ಕೋವಿಡ್&zwnj;ನಂತಹ ಮಹಾ ಮಾರಿಯನ್ನು ಜನರು ನೋಡಿದ್ದಾರೆ. ಅದರಿಂದ ಈಗ ಹೊರಬಂದಿದ್ದಾರೆ.&lt;/p&gt;&lt;p&gt;&lt;strong&gt;2 ಮಹಿಳಾ ರಾಷ್ಟ್ರಪತಿ&lt;/strong&gt;&lt;/p&gt;&lt;p&gt;ದೇಶದಲ್ಲಿ ಮಹಿಳಾ ರಾಷ್ಟ್ರಪತಿಯೇ ಇರಲಿಲ್ಲ. ಈ 25 ವರ್ಷಗಳಲ್ಲಿ ಇಬ್ಬರು ಮಹಿಳೆಯರು ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ. 2007ರಲ್ಲಿ ಪ್ರತಿಭಾ ಪಾಟೀಲ್&zwnj; ಆ ಹುದ್ದೆಗೇರಿದರೆ, ಈಗ ದ್ರೌಪದಿ ಮುರ್ಮು ದೇಶದ ಪ್ರಥಮ ಪ್ರಜೆಯಾಗಿದ್ದಾರೆ.&lt;/p&gt;]]></content:encoded>
            <category>magazine</category>
            <dc:creator>Mahmad Rafik</dc:creator>
            <atom:link href="https://kannada.asianetnews.com/magazine/2000-to-2025-journey-how-india-has-changed-in-25-years-a-surprising-journey-mrq/articleshow-9r97ces"/>
        </item>
        <item>
            <title><![CDATA[ಕುವೆಂಪು ರಾಮಾಯಣ ದರ್ಶನದ ಮಳೆಗಾಲದ ವರ್ಷನ್!]]></title>
            <link>https://kannada.asianetnews.com/special/jnanapeeth-award-winning-epic-ramayana-darshanam-of-kuvempu-and-rain-sfsdw2</link>
            <guid isPermaLink="true">https://kannada.asianetnews.com/special/jnanapeeth-award-winning-epic-ramayana-darshanam-of-kuvempu-and-rain-sfsdw2</guid>
            <pubDate>Fri, 28 Jun 2024 16:15:38 +0530</pubDate>
            <description><![CDATA[&lt;p&gt;ಮಲೆನಾಡು ಹಾಗೂ ಮಳೆ ಇಲ್ಲದೇ&amp;nbsp;ಕುವೆಂಪು ಕಾವ್ಯ ಪರಿಪೂರ್ಣವಾಗುವುದೇ ಇಲ್ಲ. ಜ್ಞಾನಪೀಠ ಪುರಸ್ಕೃತ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂನಲ್ಲೂ ಕುವೆಂಪು ಮಳೆಯನ್ನು ವರ್ಣಿಸಿದ್ದು ಹೀಗೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j1f23z9s67gsc92hxs09gjxf,imgname-malegala-varshan-article.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ವಿಹಂಗಮ&lt;/strong&gt;  ಮಳೆಗಾಲ ಎಂದರೆ ನೆನಪಾಗುವುದು ಬಾಲ್ಯದ ಮಲೆನಾಡಿನ ಎಡೆಬಿಡದ ಮುಂಗಾರು; ತಪ್ಪಿದರೆ ಅದೇ ಮೈಯಾಂತು ಬಂದಂತೆ 'ಶ್ರೀ ರಾಮಾಯಣ ದರ್ಶನಂ' ಕೃತಿಯಲ್ಲಿ ಕುವೆಂಪು ಕಾಣಿಸಿದ ಕಾರ್ಗಾಲ. ಅದು ಅಂತಿಂಥ ಕಾವಳದ ಕಾಲವಲ್ಲ. ಮಲೆಗಳಲ್ಲಿ ಮದುಮಗಳು, ಕಾನೂರು ಕಾದಂಬರಿಗಳಲ್ಲೂ&amp;nbsp;&amp;nbsp;ಅವರ 'ಕದ್ದಿಂಗಳು ಕಗ್ಗತ್ತಲು' ಮೊದಲಾದ ಪದ್ಯಗಳಲ್ಲೂ&amp;nbsp;&amp;nbsp;ಅದರ ಝಲಕ್ ಇದೆ. ರಾಮಾಯಣ ದರ್ಶನಂನಲ್ಲಿ ಕತೆಯ ಭಾಗವಾಗಿ, ರಾಮನ ಮನಸ್ಸಿನ ಭಾವರೂಪಕವಾಗಿ, ಸೀತಾವಿರಹದ ವಸ್ತುಪ್ರತಿರೂಪವಾಗಿ ಅದು ಬರುತ್ತದೆ.&amp;nbsp;&lt;/p&gt; &lt;p&gt;ಅದು ಶುರುವಾಗುವುದು ಹೀಗೆ: ವನವಾಸದ ವೇಳೆ ಸೀತೆಯನ್ನು ಕಳೆದುಕೊಂಡ ರಾಮ ಪಂಚವಟಿಯಿಂದ ಮುಂದೊತ್ತಿ ಬಂದು ಕಿಷ್ಕಿಂಧೆಯಲ್ಲಿ ಸುಗ್ರೀವನ ಸಖ್ಯ ಬೆಳೆಸಿ, ವಾಲಿವಧೆ ಮಾಡುತ್ತಾನೆ. ಅಷ್ಟರಲ್ಲಿ ಮಳೆಗಾಲ ಸಮೀಪಿಸುತ್ತದೆ. ವನವಾಸವಾದ್ದರಿಂದ ಅವನಿಗೆ ಪುರಪ್ರವೇಶವಿಲ್ಲ. ಹೀಗಾಗಿ ಪ್ರಸ್ರವಣ ಪರ್ವತದ ಗುಹೆಯೊಂದರಲ್ಲಿ ತಂಗುತ್ತಾನೆ. ಮುಂಗಾರಿಗಾಗಿ ತಿರೆ ಬಾಯಾರಿದೆ- ಸೀತೆಯ ವಿರಹತಪ್ತ ರಾಮನ ಹಾಗೆ. ದಿಗಂತದಂಚಲ್ಲಿ ಮೇಘಸ್ತೋಮ ಮೇಲ್ಮೇಲೆದ್ದು ಬರುತ್ತದೆ-&amp;nbsp;&lt;/p&gt; &lt;p&gt;&lt;strong&gt;ಸೀತೆಗೆ ರಾಮನಂತೆ, ಮುಂಗಾರ್ಗೆ ತಿರೆ ಬಾಯಾರುತಿರೆ, ಓ ಆ ದಿಗಂತದೆಡೆ, ವರದಂತೆವೋಲ್ ಕಾಣಿಸಿತು ವರ್ಷಶಾಪಂ, ರವಿಸಂಗಿ, ಶರಧಿಶಿಶು, ನೀರದಸ್ತೂಪನೀಲಂ, ಶಿವನ ಜಟೆಯಂತೆವೋಲ್ ಶಿಖರಾಕೃತಿಯಿನುಣ್ಮಿ, ಮೇಲೆಮೇಲಕ್ಕೇರ್ದು ಶೈಲಾಕೃತಿಯಿನುರ್ಬ್ಬಿ, ತೆಕ್ಕನೆ ಕದದ್ದತ್ತು. ಕುಣಿವ ಕಾಳಿಯ ಕರಿಯ ಮುಡಿ ಬಿರ್ಚ್ಚಿ ಪರ್ವುವೋಲ್, ಸಂಜೆಬಾನಂ ಮುಸುಕಿ ಮುಚ್ಚಿ. ಮೇಣ್ ಕಾರ್ಗಾಳಿ ಬೀಸಿದುದು ಮಲೆಯ ಮಂಡೆಯ ಕಾಡುಗೂದಲಂ ಪಿಡಿದಲುಬಿ ತೂಗಿ, ನೋವಿಂಗೊರಲಿದತ್ತಡವಿ : ಹಳೆಮರಗಳುರುಳಿ ; ಮರಕೆ ಮರವುಜ್ಜಿ ; ಕೊಂಬೆಗೆ ಕೊಂಬೆ ತೀಡಿ ; ಮಳೆಯೊಳ್ ಬಿದಿರು ಕರ್ಕಶವುಲಿಯ ಕೀರಿ, ಸಿಡಿರೋಷದಿಂ ಕಿಡಿಯಿಡುವ ಮಸಿನವಿರ ಪುರ್ಬ್ಬಿನಾ ಕಾರ ರಾಕ್ಷಸಿಯಕ್ಷಿಯಲೆವಂತೆ&lt;/strong&gt;&lt;/p&gt; &lt;p&gt;ಈ ಮುಂಗಾರು 'ವರ್ಷಶಾಪಂ'. ವಿರಹಾಗ್ನಿದಗ್ಧ ರಾಮನಂತಃಕರಣದ ಕ್ಷೋಭೆಯಂತೆ ಇಲ್ಲಿ ಕಾಣುವುದೆಲ್ಲ ಕರಾಳ ಪ್ರತಿಮೆಗಳು- ತಲೆಕುಚ್ಚು ಹಿಡಿದಲುಗಿಸುವ, ನೋವಿಗೆ ಒರಲುವ, ಕರ್ಕಶ ಕೀರುವ ಬಿದುರಿನ, ಕಡುಗಪ್ಪುಗೂದಲಿನ ಹುಬ್ಬಿನ ಯಕ್ಷಿರಾಕ್ಷಸಿ ಇತ್ಯಾದಿ. ಮಳೆ ಶುರುವಾಗುತ್ತದೆ:&lt;/p&gt; &lt;p&gt;&lt;strong&gt;ಮಿಂಚಿತು ಮುಗಿಲಿನಂಚು, ಸಂಘಟ್ಟಣೆಗೆ ಸಿಡಿಲ್ ಗುಡುಗಿದವು ಕಾರ್ಗಲ್ ಮುಗಿಲ್&zwnj;ಬಂಡೆ, ತೋರ ಹನಿ ಮೇಣಾಲಿಕಲ್ ಕವಣೆವೀಸಿದುವು. ಬಿಸಿಲುಡುಗಿ, ದೂಳುಂಡೆಗಟ್ಟಿ, ಮಣ್&zwnj;ತೊಯ್ದು, ಕಮ್ಮನೆ ಸೊಗಸಿ ತೀಡಿದುದು ನೆಲಗಂಪು ನಲ್, ಝಣನ್ನೂಪುರದ ಸುಸ್ವರದ ಮಾಧುರ್ಯದಿಂ ಕನತ್ಕಾಂತಿಯಿಂ ಝರದ ಝಲ್ಲರಿಯ ಜವನಿಕೆಯಾಂತು ನರ್ತಿಸುವ ಯೌವನಾ ಯವನಿಯ ಕರದ ಪೊಂಜುರಿಗೆಯಂತೆ ಸುಮನೋಜ್ಞಮಾದುದಾ ಭೀಷ್ಮ ಸೌಂದರ್ಯದಾ ಮುಂಗಾರ್ ಮೊದಲ್.&lt;/strong&gt;&lt;/p&gt; &lt;p&gt;&lt;strong&gt;ಹಿಂಗಿದುದು ಬಡತನಂ ತೊರೆಗೆ, ಮೊಳೆತುದು ಪಸುರ್&zwnj; ತಿರೆಗೆ, ಪೀತಾಂಬರಕೆ ಜರತಾರಿಯೆರಚುವೋಲಂತೆ ಕಂಗೊಳಿಸಿದುದು ಹಸುರು ಗರುಕೆಯ ಪಚ್ಚೆವಾಸಗೆಯೊಳುದುರಿರ್ದ ಪೂವಳದಿ ಪೊನ್, ಬಂಡೆಗಲ್ ಬಿರುಕಿನಿಂದಾಸೆ ಕಣ್ದೆರೆಯುವಂತೆ ತಲೆಯೆತ್ತಿದುದು ಸೊಂಪುವುಲ್. ಮಿಂದು ನಲಿದುದು ನಗಂ : ಮೇದು ತಣಿದುದು ಮಿಗಂ ; ಗರಿಗೊಂಡೆರಂಕೆಗೆದರುತೆ ಹಾಡಿ ಹಾರಾಡಿ ಹಣ್ಣುಂಡು ಹಿಗ್ಗಿದುದು ಹಕ್ಕಿಯ ಮರಿಯ ಸೊಗಂ. ಮಳೆ ಹಿಡಿದುದತಿಥಿಯಾಗೈತಂದವಂ ಮನೆಗೆ ತನ್ನೊಡೆತನವನೊಡ್ಡಿ ನಿಲ್ವಂತೆ.&amp;nbsp;&lt;/strong&gt;&lt;/p&gt; &lt;p&gt;ಮಳೆ ಹಿಡಿದದ್ದು ಮನೆಗೆ ಬಂದ ಅತಿಥಿ ಮನೆಗೇ ಒಡೆತನವನ್ನೊಡ್ಡಿದಂತಾಯ್ತು- ಭಿಕ್ಷೆ ಬೇಡಲು ಬಂದವನು ಗೃಹಿಣಿಯನ್ನೇ ಅಪಹರಿಸಿದಂತೆ! ಇಲ್ಲಿಂದ ರಾಮನ ಏಕಾಂತದುರಿಯ, ಭಗ್ನಮಾನಸದ ದುರ್ದಿನಗಳು ಆರಂಭವಾಗುತ್ತವೆ:&lt;/p&gt; &lt;p&gt;&lt;strong&gt;ದುರ್ದಿನಂ ದ್ರವರೂಪಿಯಾಗಿ ಕರಕರೆಯ ಕರೆದುದನಿಶಂ ದೂರವಾದುದು ದಿನಪದರ್ಶನಂ,&amp;nbsp;&lt;/strong&gt;&lt;/p&gt; &lt;p&gt;&lt;strong&gt;(ದಿನಪಕುಲಜನಿಗೆ ದಿನಪದರ್ಶನ ದುರ್ಲಭವಾಯಿತು)&lt;/strong&gt;&lt;/p&gt; &lt;p&gt;&lt;strong&gt;ಕವಿದುದಯ್ ಕರ್ಮುಗಿಲ ಮರ್ಬ್ಬಿನ ಮಂಕು ಪಗಲಮ್. ಇರುಳಂ ಕರುಳನಿರಿದುದು ಕೀಟಕೋಟಿಯ ಕಂಠವಿಕೃತಿ.&lt;/strong&gt;&lt;/p&gt; &lt;p&gt;&lt;strong&gt;ಸುಖದ ದಿನಗಳಲ್ಲಿ ಜೋಗುಳವೆನಿಸಬಹುದಾಗಿದ್ದ ಇರುಳ ಕೀಟಗಳ ದನಿಯೀಗ ಕಂಠವಿಕೃತಿ. ಇಲ್ಲಿಂದಾಚೆ ಮಲೆನಾಡಿನವರಿಗೆ ಸುಲಭವಾಗಿ ಅರ್ಥವಾಗಬಹುದಾದ ಚಿತ್ರಗಳು. ಗಟ್ಟಿ ಹಿಡಿದು ಸುರಿಯುವ ಮಳೆಗೆ ಮುದುಡುವ ಜೀವರಾಜಿಯ ನೋಟಗಳು.&lt;/strong&gt;&lt;/p&gt; &lt;p&gt;&lt;strong&gt;ಗರಿ ತೊಯ್ದು ಮೆಯ್ದಂಟಿ ಕಿರಿಗೊಂಡ ಗಾತ್ರದಿಂ ಮುದುರಿದೊದ್ದೆಯ ಮುದ್ದೆಯಾಗಿ ಕುಗುರಿತು ಹಕ್ಕಿ ಹೆಗ್ಗೊಂಬನೇರಿ, ಕಾಡಂಚಿನಾ ಪಸಲೆಯಂ ನಿಲ್ವಿರ್ಕೆ ಗೈದು, ರೋಮಂದೊಯ್ದಜಿನದಿಂದ ಕರ್ಪು ಬಣ್ಣಂಬಡೆದವೋಲಿರ್ದು, ಹರಹರೆಯ ಕೊಂಬಿನಿಂದಿಂಬೆಸೆವ ಮಂಡೆಯ ಮೊಗವನಿಳುಹಿ, ಜಡಿಯ ಜಿನುಗಿಗೆ ರೋಸಿ, ತನ್ನ ಹಿಂಡಿನ ನಡುವೆ ನಿಂದುದು ಮಳೆಗೆ ಮಲೆತು, ಕೆಸರು ಮುಚ್ಚಿದ ಖುರದ ಕಾಲ್ಗಳ ಮಿಗದ ಹೋರಿ.&lt;/strong&gt;&lt;/p&gt; &lt;p&gt;&lt;strong&gt;ಕಲ್ಲರೆಯನೇರಿದುದು ಕಟ್ಟಿರುಂಪೆಯ ಪೀಡೆಗಾರದ ಮೊಲಂ, ಜಿಗಣೆ, ನುಸಿ, ಹನಿಗಳಿಗೆ ಹೆದರಿ ಹಳುವನುಳಿಯುತ್ತೆ ಹುಲಿ ಹಳು ಬೆಳೆಯದತ್ತರದ ಮಲೆಯ ನೆತ್ತಿಯನರಸಿ ಚರಿಸಿದುದು. ಜೀರೆಂಬ ಕೀ&zwnj;ದನಿಯ ಚೀ&zwnj;ರ್&zwnj;ಚೀರಿ ಪಗಲಿರುಳ ಗೋಳಗರೆದುದಯ್ ಝಿಲ್ಲಿಕಾ ಸೇನೆ : ಬೇಸರದೇಕನಾದಮಂ ಓ ಬೇಸರಿಲ್ಲದೆಯೆ ಬಾರಿಸುತನವರತಂ ಬಡಿದುದು ಜಡಿಯ ಸೋನೆ !&lt;/strong&gt;&lt;/p&gt; &lt;p&gt;&lt;strong&gt;ಹೀಗೆ ಸಾಮಾನ್ಯರಿಗೂ ಮಂಕು ಹಿಡಿಸುವ ಕಾರ್ಗಾಲ, ಜೀವನದ ಗಾಢ ವಿಷಣ್ಣಕಾಲದಲ್ಲಿರುವವನಿಗೆ ಇನ್ನು ಹೇಗಿರಬಹುದು. ಒಂದೊಂದೇ ಮಾಸ ಯಾವಾಗ ಮುಗಿಯುತ್ತದೆ, ಯಾವಾಗ ಬಿಸಿಲೇಳುತ್ತದೆ ಎಂದು ಕಾಯುವ ಕರ್ಮ.&lt;/strong&gt;&lt;/p&gt; &lt;p&gt;&lt;strong&gt;ಕಳೆದುದಯ್ ಜೇಷ್ಠಮಾಸಂ. ತೊಲಗಿತಾಷಾಢಮುಂ. ತೀರ್ದುದಾ ಶ್ರಾವಣಂ. ಭಾದ್ರಪದ ದೀರ್ಘಮುಂ, ಶಿವಶಿವಾ, ಕೊನೆಮುಟ್ಟಿದತ್ತೆಂತೊ ! ದಾಶರಥಿ ತಾಂ ಮಾಲ್ಯವತ್ ಪರ್ವತ ಗುಹಾಶ್ರಮದಿ ಕೇಳ್, ಶ್ರಮದಿಂದ ನೂಂಕುತಿರ್ದನ್ ಮಳೆಯ ಕಾಲಮಂ, ಕಾಲಮಂ ಸತಿಯ ಚಿಂತೆಗೆ ಸಮನ್ವಯಿಸಿ, ಬೈಗು ಬೆಳಗ ಮೇಣ್ ಪಗಲಿರುಳಂ ದಹಿಸಿತಗಲಿಕೆವೆಂಕೆ : ಪಡಿದೋರ್ದುದಾ ವಿರಹಮಿಂದ್ರಗೋಪಂಗಳಿಂ ಮೇಣ್ ಮಿಂಚುಂಬುಳುಗಳಿಂ; ಇರುಳ್, ಅಣ್ಣತಮ್ಮದಿ&zwnj;ರ್ ಗವಿಯೊಳ್ ಮಲಗಿ, ನಿದ್ದೆ ಬಾರದಿರೆ, ನುಡಿಯುವರ್&lt;/strong&gt;&lt;/p&gt; &lt;p&gt;ಹಗಲು ಕಾಮನಬಿಲ್ಲುಗಳು ವಿರಹವನ್ನು ವೆಗ್ಗಳಿಸುವುವು. ಇರುಳು ಅಗಲಿಕೆ ಬೆಂಕಿ ದಹಿಸಿ ನಿದ್ದೆ ಬಾರದು. ಅಣ್ಣ ತಮ್ಮಂದಿರು ಕತ್ತಲನ್ನು ದಿಟ್ಟಿಸುತ್ತಾ ಮಾತನಾಡುವರು. ಮಾತಿನಲ್ಲಿ ಅಸ್ಪಷ್ಟ ಭವಿಷ್ಯದ ಚಿತ್ರ.&amp;nbsp;&lt;/p&gt; &lt;p&gt;&lt;strong&gt;ಕಡೆಯುವರ್ ತಮ್ಮ ಮುಂದಣ ಕಜ್ಜವಟ್ಟೆಯಂ. ಕಾರಿರುಳ್&zwnj;. ಹೆಪ್ಪುಗಟ್ಟಿದ ಕಪ್ಪು, ಕಲ್ಲಂತೆವೋಲ್. ಹೊರಗೆ, ಮಳೆ ಕರಕರೆಯ ಕರೆಯುತಿದೆ. ಕಪ್ಪೆ ಹುಳು ಹಪ್ಪಟೆಯ ಕೊರಳ ಸಾವಿರ ಹಲ್ಲ ಗರಗಸಂ ಗರ್ಗರನೆ ಕೊರೆಯುತಿದೆ ನಿಶೆಯ ನಿಶ್ಯಬ್ದತೆಯ ಖರ್ಪರವನಾಲಿಸಿದ ಕಿವಿ ಮೂರ್ಛೆವೋಪಂತೆ :&lt;/strong&gt;&lt;/p&gt; &lt;p&gt;&lt;strong&gt;ಸಹ್ಯಾದ್ರಿಯ ಇರುಳಮಳೆ ಎಂದರೆ ಕಪ್ಪೆ ಇತ್ಯಾದಿ ಕೀಟಕೋಟಿಯ ಘೋಷಗಳೂ ಸೇರಿದ ಸಹಸ್ರ ದಂತ ಗರಗಸದ ಕೊರೆತ!&amp;nbsp;&lt;/strong&gt;&lt;/p&gt; &lt;p&gt;&lt;strong&gt;&ldquo;ಏನ್ ವೃಷ್ಟಿ ಘೋಷಮಿದು, ಆಲಿಸಾ, ಸೌಮಿತ್ರಿ ! ಮಲೆ ಕಾಡು ನಾಡು ಬಾನ್ ಒಕ್ಕೊರಲೊಳೊಂದಾಗಿ ಬಾಯಳಿದು ಬೊಬ್ಬಿರಿಯುತಿಪ್ಪಂತೆ ತೋರುತಿದೆ. ಈ ಪ್ರಕೃತಿಯಾಟೋಪದೀ ಉಗ್ರತೆಯ ಮಧ್ಯೆ ನಾವ್ ಮನುಜರತ್ಯಲ್ಪ ಕೃತಿ ! ನಮ್ಮಹಂಕಾರ ರೋಗಕಿಂತಪ್ಪ ಬೃಹದುಗ್ರತಾ ಸಾನ್ನಿಧ್ಯಮೇ ದಿವ್ಯ ಭೇಷಜಮೆಂಬುದೆನ್ನನುಭವಂ. ಇಲ್ಲಿ, ಈ ಗರಡಿಯೊಳ್ ಸಾಧನೆಯನೆಸಗಿದಾತಂಗೆ ದೊರೆಕೊಳ್ವುದೇನ್ ದುರ್ಲಭಂ ಪಾರ್ವತಸ್ಥಿರತೆ ? ಸಾಕ್ಷಿಯದಕಿರ್ಪನಾಂಜನೇಯಂ !..&quot;&lt;/strong&gt;&lt;/p&gt; &lt;p&gt;ಆಗ ರಾಮನ ಮನದಲ್ಲಿ ಮೂಡುವ ಮೂರ್ತಿ ಆಂಜನೇಯ. ಇಂಥ ಪ್ರ&zwnj;ಕೃತಿಯಾಟೋಪದ ಬೃಹದುಗ್ರತಾಸಾನಿಧ್ಯವೇ ನಮ್ಮ ಅಹಂಕಾರಗಳು ಅಳಿಯಲು ಸೂಕ್ತ ಮದ್ದು. ಇಂಥ ಗರಡಿಯ ಸಾಧನೆಯಲ್ಲಿಯೇ ಹನುಮನಂಥ ಪರ್ವತಸ್ಥಿರ ವ್ಯಕ್ತಿತ್ವ ರೂಪುಗೊಂಡೀತು ಎಂಬ ಕಾಣ್ಕೆ ಅವನದು. ಆಮೇಲೆ ನಳ ನೀಲ ಮುಂತಾದ ವಾನರವೀರರ ಕುರಿತೂ ಮಾತಾಗುತ್ತದೆ.&amp;nbsp;  ಎಚ್.ಎಸ್.ವೆಂಕಟೇಶ ಮೂರ್ತಿ ಎಂಬ ರೂಪಕ ಕವಿಯ ಜ್ಞಾಪಕ ಚಿತ್ರಶಾಲೆ&lt;/p&gt; &lt;p&gt;ಆದರೆ ಮಳೆಗಾಲದ ಐದು ತಿಂಗಳು ಕಳೆಯುತ್ತ ಬಂದರೂ ಸುಗ್ರೀವನ ಸುಳಿವಿಲ್ಲ. ವಾನರವೀರರನ್ನು ಕರೆದುಕೊಂಡು ಬಂದು ಸೀತಾನ್ವೇಷಣೆಗೆ ನೆರವಾಗುತ್ತೇನೆ ಎಂದಿದ್ದ ಕಪಿವೀರನ ಸದ್ದಿಲ್ಲ. ಆತಂಕ ಒಳಗೊಳಗೇ ಮಡುಗಟ್ಟುತ್ತದೆ. ಮರೆತನೇನು? ಲಕ್ಷ್ಮಣ ಕೋಪದಿಂದ, ನಾನೇ ಹೋಗಿ ಸುಗ್ರೀವನ ಕಂಡು ಬರುವೆ ಎಂದು ಹೂಂಕರಿಸುತ್ತಾನೆ. ಆದರೆ ರಾಮನೇ ಅವನನ್ನು ಸುಮ್ಮನಿರಿಸುತ್ತಾನೆ. ಈ ಭಯಂಕರ ಮಳೆಯಲ್ಲಿ ಯಾರು ಎಲ್ಲಿ ಹೇಗೆ ಓಡಾಡಲು ಸಾಧ್ಯ? ಮಳೆ ಕಳೆದ ಮೇಲೆ ಬಾ ಎಂದು ನಾನೇ ಅವನಿಗೆ ಹೇಳಿದ್ದಾನೆ ಎನ್ನುತ್ತಾನೆ. ಅಷ್ಟರಲ್ಲಿ ಬಂತು ಅಶ್ವಯುಜ ಮಾಸ!&lt;/p&gt; &lt;p&gt;&lt;strong&gt;ನುಗ್ಗುತಿರ್ದ್ದತ್ತಾಶ್ವಯುಜ ವರ್ಷಾಶ್ವದಳದ ಹೇಷಾರವದ ಘೋಷಂ !... ಆಲಿಸುತ್ತಿದ್ದಂತೆ, ಅರಳಿದುವು ಕಣ್ಣಾಲಿ : ಘೋರಾಂಧಕಾರದಾ ಸಾಗರದಿ ತೇಲಿ ಬಹ ಹನಿಮಿಂಚಿನಂತೆವೋಲ್, ಮಿಂಚುಂಬುಳೊಂದೊಯ್ಯನೊಯ್ಯನೆಯೆ ಪೊಕ್ಕುದಾ ಕಗ್ಗತ್ತಲೆಯ ಗವಿಗೆ, ತೇಲುತೀಜುತ ಮೆಲ್ಲ ಮೆಲ್ಲನೆಯೆ ಹಾರಾಡಿ ನಲಿದಾಡಿತಲ್ಲಲ್ಲಿ, ಮಿಂಚಿನ ಹನಿಯ ಚೆಲ್ಲಿ, ಮಿಂಚಿನ ಹನಿಯ ಸೋರ್ವ ಮಿಂಚುಂಬನಿಯ ಪೋಲ್ವ ಮಿಂಚುಂಬುಳುವನಕ್ಷಿ ಸೋಲ್ವಿನಂ ನೋಡಿ, ರಾಮನ ಕಣ್ಗೆ ಹನಿ ಮೂಡಿ, ತೊಯ್ದತ್ತು ಕೆನ್ನೆ : ತೆಕ್ಕನೆ ತುಂಬಿದುದು ಶಾಂತಿ ತನ್ನಾತ್ಮಮಂ ! ಮತ್ತೆಮತ್ತೆ ನೋಡಿದನದಂ. ಸಾಮಾನ್ಯಮಂ, ಆ ಅನಿರ್ವಚನೀಯ ದೃಶ್ಯಮಂ !&lt;/strong&gt;&lt;/p&gt; &lt;p&gt;ಕಗ್ಗತ್ತಲು ಕವಿದ ರಾಮನ ಬದುಕಿಗೆ ಭರವಸೆಯ ಬೆಳಕು ಬಂದುದು ಒಂದು ಸಣ್ಣ ಮಿಂಚುಹುಳದ ಮೂಲಕ! ವಾಲ್ಮೀಕಿಯಂಥ ಆದಿಕವಿಗೂ ಹೊಳೆಯದ ದೃಶ್ಯವೊಂದು ಮಲೆನಾಡಿನ ಈ ಕವಿಗೆ ಝಗ್ಗನೆ ಹೊಳೆದುಬಿಟ್ಟಿದೆ. ಕಾರ್ಗತ್ತಲಲ್ಲಿ ತಡಕಾಡುತ್ತಿರುವವನಿಗೆ ಅಶ್ವಯುಜ ಮಾಸದ ಮಳೆ ಇಳಿಯುತ್ತ ಬಂದ ಆ ರಾತ್ರಿಯಲ್ಲಿ ಗವಿಯೊಳಗೆ ಮೆಲ್ಲಮೆಲ್ಲನೆ ಹಾರಾಡುತ್ತ ಬಂದ ಮಿಂಚುಹುಳವೊಂದು ಆಸೆಯ ಹಣತೆಗೆ ಕಿಡಿಹಚ್ಚಿತು. ನೋಡಿದ ರಾಮನ ಕಣ್ಣು ಹನಿಗೂಡಿತು, ಆತ್ಮವನ್ನು ಶಾಂತಿ ತುಂಬಿತು. ಅನಿರ್ವಚನೀಯ ದೃಶ್ಯವನ್ನು ಮತ್ತೆ ಮತ್ತೆ ನೋಡಿದ, ಕೆನ್ನೆ ತೋಯಿಸಿಕೊಂಡ.&amp;nbsp;&lt;/p&gt; &lt;p&gt;&lt;strong&gt;ಕುಳ್ಳಿರ್ದ ಮಳೆಗಾಲಮೆದ್ದು ನಿಂತುದು ತುದಿಯ ಕಾಲಿನಲಿ, ನೂಲ್&zwnj;ಸೋನೆಯಾ ತೆರೆಮರೆಯನೆತ್ತಲ್ಕೆ ಶೈಲವರನಕೊ, ಕಾಣಿಸಿತ್ತಾತನೆರ್ದೆಗೊರಗಿ ರಮಿಸಿರ್ದ ಕಾನನ ವಧೂ ಶ್ಯಾಮಲಾಂಬರಂ !&lt;/strong&gt;&lt;/p&gt; &lt;p&gt;ಹಗಲಾಯಿತು. ನೂಲಿನಂತೆ ಸುರಿಯುತ್ತಿದ್ದ ಸೋನೆಮಳೆಯ ತೆರೆಯನ್ನು ಸರಿಸಿದಾಗ ಕಂಡದ್ದು ಮಹಾ ಪರ್ವತವೆಂಬ ವರ! ಅವನ ತೆಕ್ಕೆಗೆ ಒರಗಿದ ಹಸಿರು ವನರಾಜಿಯೆಂಬ ವಧು! ಹೆಂಡತಿಯನ್ನು ಕಳೆದುಕೊಂಡು ಪರಿತಪಿಸುತ್ತಿದ್ದ ರಾಮನಿಗೆ ಇಂಥ ಚೇತೋಹಾರಿ ದೃಶ್ಯ ಇನ್ನೊಂದು ಇದ್ದೀತೆ?&amp;nbsp;&lt;/p&gt; &lt;p&gt;&lt;strong&gt;ಲಂಬಮಾನಂ ಸೋರ್ವ ಮುತ್ತಿನ ಸರಗಳಂತೆ&amp;nbsp; ಕಾವಿಯನುಳಿದ ಮಲೆಯ ತೊರೆಯ ನೀರ್&zwnj;ಬೀಳಗಳು ಕಣ್&zwnj;ಸೆಳೆದುವಲ್ಲಲ್ಲಿ.&amp;nbsp;&lt;/strong&gt;&lt;/p&gt; &lt;p&gt;ಅಬ್ಬರದ ಮಳೆಯಿಂದಾಗಿ ಮಣ್ಣುನೀರು ತುಂಬಿಕೊಂಡು ಕೆಂಪಾಗಿ ಹರಿಯುತ್ತಿದ್ದ ಕಾಡಿನ ತೊರೆಗಳು ಈಗ ʼಕಾವಿ ತೊರೆದುʼ ಮುತ್ತಿನ ಸರಗಳಂತೆ ಕಾಣಿಸತೊಡಗಿದವು. ಅಂದರೆ ರಾಮನಿಗೂ ಕಾವಿ ತೊರೆಯುವ ಕಾಲ ಬಂತು.&amp;nbsp;&lt;/p&gt; &lt;p&gt;&lt;strong&gt;ಕೇದಗೆಗೆ ಮುಪ್ಪಡಸಿ, ಬೀತುದೆ ಸೀತಾಳಿ ಹೂ, ಬಾನ್&zwnj;ಬಯಲೊಳಿರ್ದ ಮೋಡಮೋರೆಗೆ ಕರ್ಪುವೋಗಿ, ಬೆಳ್ಳಿನ ನೆಳಲ್ ಸುಳಿದುದಲ್ಲಲ್ಲಿ. ನಿಸ್ತೇಜನಾಗಿರ್ದ ರವಿ ಘನವನಾಂತರ ವಾಸಮಂ ಮುಗಿಸಿ ಮರುಳುತಿರೆ, ಮೇಘಸಂಧಿಗಳಿಂದೆ, ಮುಸುಕೆತ್ತಿ, ನಸುನಾಣ್ಣಿ, ಮೊಗಕೆ ನಾಣ್&zwnj;ಬೆಟ್ಟೇರಿದಪರಿಚಿತಳಂತೆವೋಲ್ ಇಣಿಕಿತು ಗತೋಷ್ಣಾತಪಂ.&amp;nbsp;&lt;/strong&gt;&lt;/p&gt; &lt;p&gt;ಸೂರ್ಯನಿಗೆ ವನಾಂತರ ವಾಸ ಮುಗಿಯಿತು. ರಾಮನಿಗೆ ಇನ್ನೂ ಮುಗಿದಿಲ್ಲ. ಆದರೆ ಮುಗಿಯುವ ಸೂಚನೆ ನೀಡಿತು. ಸಂದಿದ್ದ ಬೆಚ್ಚಗಿನ ಹವೆ ಮೆಲ್ಲಗೆ ಮೈದೋರಿತು- ಮುಸುಕೆತ್ತಿ ಮುಖಕ್ಕೆ ನಸುನಾಚಿಕೆಯಿಂದ ಬೆರಳನ್ನು ಕುತ್ತಿದ ಮುಗುದೆಯಂತೆ.&amp;nbsp;&lt;/p&gt; &lt;p&gt;&lt;strong&gt;ಪಾಲ್ತುಂಬಿ ತುಳ್ಕಿ ಗರುಕೆಪಚ್ಚೆಗೆ ಸೋರ್ವ ಕೊಡಗೆಚ್ಚಲಿನ ಗೋವು ಹೊಸಬಿಸಿಲ ಸೋಂಕಿಂಗೆ ಸೊಗಸಿ ಮೆಯ್ ಕಾಯಿಸುತೆ ಗಿರಿಸಾನು ಶಾದ್ವಲದಿ ನಿಂತು, ಬಾಲವನೆತ್ತಿ ಕುಣಿದೋಡಿ ಬಂದು ತನ್ನೆಳಮುದ್ದುಮೋರೆಯಂ ತಾಯ್ತನಕೆ ಪಡಿಯೆಣೆಯ ಮೆತ್ತೆಗೆಚ್ಚಲ್ಗಿಡಿದು, ಜೊಲ್ಲುರ್ಕೆ, ಚಪ್ಪರಿಸಿ ಮೊಲೆಯನುಣ್ಬ ಕರುವಂ ನೆಕ್ಕಿತಳ್ಕರೆಗೆ. ಲೋಕದ ಕಿವಿಗೆ ದುರ್ದಿನಂ ಕೊನೆಮುಟ್ಟಿದತ್ತೆಂಬ ಮಂಗಳದ ವಾರ್ತೆಯಂ ಡಂಗುರಂಬೊಯ್ಸಿದುದು ಪಕ್ಷಿಗೀತಂ.&lt;/strong&gt;&lt;/p&gt; &lt;p&gt;ಮಳೆಗಾಲದ ಕೊನೆಯ ದಿನಗಳು ಸುಭಿಕ್ಷದ, ಹಸುರಿನ, ಹಾಲು ತುಂಬಿ ತುಳುಕುವ ಕೊಡಗೆಚ್ಚಲಿನ ಗೋವುಗಳ ಕಾಲ. ದುರ್ದಿನಗಳು ಮುಗಿದವು ಎಂಬ ಘೋಷವನ್ನು ಪಕ್ಷಿಗೀತೆಗಳು ಡಂಗುರ ಸಾರಿದವು.&amp;nbsp;  ಲಕ್ಷ್ಮೀ ನಿವಾಸದ ಮುದ್ದು ಹುಡುಗಿ ಜಾನ್ವಿ ಆಲಿಯಾಸ್ ಚಂದನಾ ಬಗ್ಗೆ ನಿಮಗೆಷ್ಟು ಗೊತ್ತು?&lt;/p&gt; &lt;p&gt;ಹೀಗೆ ಮಳೆಗಾಲದ ವರ್ಣನೆ ಕೊನೆಯಾಗುತ್ತದೆ. ಇಲ್ಲಿಂದ ಮುಂದೆ ಸುಗ್ರೀವಾಜ್ಞೆ, ವಾನರವೀರರ ದಿಟ್ಟ ಹೋರಾಟದ ಸುಂದರ ಪುಟಗಳು ತೆರೆದುಕೊಳ್ಳುತ್ತವೆ. ಅಯೋಧ್ಯೆಯ ನಗರವಾಸಿ ರಾಮ, ಕರ್ನಾಟಕದ ಸಹ್ಯಾದ್ರಿಯ ಮಲೆಗಳ ನಡುವೆ ಗುಹೆಯಲ್ಲಿ, ಮುಂಗಾರಿನ ಬಿರುಹೊಯ್ಲಿನ, ಕಾರ್ಗತ್ತಲಿನ, ಸೋನೆಮಳೆಯ, ಮಿಂಚುಹುಳಗಳ, ದಿನಗಳ ನಡುವೆ ಆಶೆನಿರಾಶೆಗಳ ರಾಟವಾಳದಲ್ಲಿ ಕುಳಿತು ಏರಿಳಿಯುತ್ತಾನೆ. ಮಳೆಗಾಲದ ಮುಗಿದಾಗ ಅವನು ಹೊಸ ಮನುಷ್ಯನಾಗಿದ್ದಾನೆ.&amp;nbsp;&lt;/p&gt; &lt;p&gt;ಈತ ವಾಲ್ಮೀಕಿಗೆ ಕಾಣಿಸಿರದ, ಕುವೆಂಪುಗೆ ಮಾತ್ರ ಕಾಣಿಸಬಹುದಾದ ರಾಮ.&lt;/p&gt;]]></content:encoded>
            <category>magazine</category>
            <dc:creator>Suvarna News</dc:creator>
            <atom:link href="https://kannada.asianetnews.com/special/jnanapeeth-award-winning-epic-ramayana-darshanam-of-kuvempu-and-rain-sfsdw2"/>
        </item>
        <item>
            <title><![CDATA[ಮತ್ತೆ ಮತ್ತೆ ಕಾಳಿದಾಸ, ಮೇಘದೂತವೆಂಬ ಎಲ್ಲೆ ಮೀರಿದ ವಿರಹದ ಧ್ಯಾನದಲ್ಲಿ]]></title>
            <link>https://kannada.asianetnews.com/life/again-and-again-kalidasa-meditating-on-the-transcendental-wonder-called-meghaduta-vin-sd06j9</link>
            <guid isPermaLink="true">https://kannada.asianetnews.com/life/again-and-again-kalidasa-meditating-on-the-transcendental-wonder-called-meghaduta-vin-sd06j9</guid>
            <pubDate>Sun, 05 May 2024 13:40:01 +0530</pubDate>
            <description><![CDATA[&lt;p&gt;ಪ್ರೇಮ ಸಿದ್ಧಾಂತ ಮತ್ತು ವಿರಹ ಸಿದ್ಧಾಂತವನ್ನು ಕಾಳಿದಾಸನಷ್ಟು ದೈವಿಧ್ಯಮಯವಾಗಿ ಕಟ್ಟಿಕೊಟ್ಟ ಕವಿ ಇನ್ನೊಬ್ಬ ಇರಲಿಕ್ಕಿಲ್ಲ. ಒಂದೊಂದು ಸಾಲೂ ಕೋಟೆಬಲ್ ಕೋಟ್ ರೀತಿಯಲ್ಲಿರುತ್ತವೆ. ಆ ಕಾರಣಕ್ಕಾಗಿಯೇ ಇವತ್ತಿಗೂ ಸಾಹಿತ್ಯಾಸಕ್ತರು ಮತ್ತೆ ಮತ್ತೆ ಕಾಳಿದಾಸನತ್ತ ತಿರುಗಿ ನೋಡುತ್ತಾರೆ. ಅವರಿಗೆ ಮೋಸವಾಗುವುದಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hx3wjwzd9yk0c3fg779pkwv0,imgname-meghadutha.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಮಹಾಬಲ ಸೀತಾಳಭಾವಿ&lt;/strong&gt;&lt;/p&gt; &lt;p&gt;ಪ್ರೇಮ ಸಿದ್ಧಾಂತ ಮತ್ತು ವಿರಹ ಸಿದ್ಧಾಂತವನ್ನು ಕಾಳಿದಾಸನಷ್ಟು ವೈವಿಧ್ಯಮಯವಾಗಿ ಕಟ್ಟಿಕೊಟ್ಟ ಕವಿ ಇನ್ನೊಬ್ಬ ಇರಲಿಕ್ಕಿಲ್ಲ. ಅವನ ಕಾವ್ಯ ಹಾಗೂ ನಾಟಕಗಳ ಒಂದೊಂದು ಸಾಲೂ ಕೋಟೆಬಲ್ ಕೋಟ್ಸ್ ರೀತಿಯಲ್ಲಿರುತ್ತವೆ. ಆ ಕಾರಣಕ್ಕಾಗಿಯೇ ಇವತ್ತಿಗೂ ಸಾಹಿತ್ಯಾಸಕ್ತರು ಮತ್ತೆ ಮತ್ತೆ ಕಾಳಿದಾಸನತ್ತ ತಿರುಗಿ ನೋಡುತ್ತಾರೆ. ಅವರಿಗೆ ಮೋಸವಾಗುವುದಿಲ್ಲ.ಕಾಳಿದಾಸನನ್ನು ಓದುವುದು ಒಂದು ಖುಷಿಯಾದರೆ, ಅನುವಾದ ಮಾಡುವುದು ಇನ್ನೊಂದೇ ಖುಷಿ. ಹತ್ತು ವರ್ಷಗಳ ಹಿಂದೆ &lsquo;ಅಭಿಜ್ಞಾನ ಶಾಕುಂತಲ&rsquo;ವನ್ನು ಅನುವಾದ ಮಾಡುವಾಗ ಅದನ್ನು ಮೊದಲ ಬಾರಿ ಅನುಭವಿಸಿದ್ದೆ.&lt;/p&gt; &lt;p&gt;&amp;nbsp;ಈಗ &lsquo;ಮೇಘದೂತ&rsquo;.ಹಿಮಾಲಯದ ಅಲಕಾನಗರಿಯ ರಾಜ ಕುಬೇರ. ಅವನ ಸೇವೆಗೆ ಅಸಂಖ್ಯ ಗಂಧರ್ವರಿದ್ದಾರೆ. ಒಬ್ಬ ಗಂಧರ್ವ ಅದೇನೋ ತಪ್ಪು ಮಾಡಿ ಕುಬೇರನನ್ನು ಸಿಟ್ಟಿಗೇಳಿಸಿದ್ದಾನೆ. ಅದಕ್ಕಾಗಿ ಅವನಿಗೆ ಒಂದು ವರ್ಷವನ್ನು ಕಾಡಿನಲ್ಲಿ ಕಳೆಯುವಂತೆ ಕುಬೇರ ಶಾಪ ನೀಡಿ ಚಿತ್ರಕೂಟ ಪರ್ವತಕ್ಕೆ ಕಳುಹಿಸಿದ್ದಾನೆ.&amp;nbsp;&lt;/p&gt; &lt;p&gt;ಪತ್ರಕರ್ತನ ಡೈರಿ; ಪದ್ಮರಾಜ ದಂಡಾವತಿಯವರ ನೆನಪಿನ ಪುಟಗಳು&lt;/p&gt; &lt;p&gt;ಅವನು ಆಗಷ್ಟೇ ಮದುವೆಯಾಗಿದ್ದ ಗಂಧರ್ವ. ಶಾಪದಿಂದಾಗಿ ಗಂಧರ್ವತ್ವವನ್ನು ಕಳೆದುಕೊಂಡು ಕಾಡಿಗೆ ಹೋಗಿ ಎಂಟು ತಿಂಗಳನ್ನು ಮನುಷ್ಯನಂತೆ ಕಳೆದಿದ್ದಾನೆ. ಶಾಪ ಮುಗಿಯಲು ಇನ್ನೂ ನಾಲ್ಕು ತಿಂಗಳಿದೆ. ಪತ್ನಿಯ ವಿರಹ ತೀವ್ರವಾಗಿ ಬಾಧಿಸುತ್ತಿದೆ. ಅವಳೂ ಅಷ್ಟೇ ಸಂಕಷ್ಟದಲ್ಲಿದ್ದಾಳೆಂಬುದೂ ಅವನಿಗೆ ಗೊತ್ತಿದೆ. ಹೇಗಾದರೂ ಮಾಡಿ ತಾನು ಬದುಕಿರುವ ವಾರ್ತೆಯನ್ನು ಅವಳಿಗೆ ತಿಳಿಸಬೇಕಲ್ಲ? ಅಷ್ಟೊತ್ತಿಗೆ ಮಳೆಗಾಲದ ಮೋಡ ಆಗಸದಲ್ಲಿ ಕಾಣಿಸಿಕೊಂಡಿದೆ. ತನ್ನ ಸಂದೇಶವನ್ನು ಪತ್ನಿಗೆ ಕಳುಹಿಸಲು ಈ ಮೋಡವೇ ಸರಿ ಎಂದು ಅವನಿಗೆ ಅನ್ನಿಸಿದೆ.&amp;nbsp;&lt;/p&gt; &lt;p&gt;ವಿರಹದಿಂದ ಉನ್ಮತ್ತರಾದವರಿಗೆ ಜೀವವಿರುವ ಮತ್ತು ಜೀವವಿಲ್ಲದ ವಸ್ತುಗಳಲ್ಲಿ ವ್ಯತ್ಯಾಸವೆಲ್ಲಿ?ಆ ಮೋಡಕ್ಕೆ ಶಾಪಗ್ರಸ್ತ ಗಂಧರ್ವನು ತನ್ನ ಪ್ರೇಯಸಿಗೆ ತಿಳಿಸುವಂತೆ ಕಾಡು ಹೂವುಗಳನ್ನು ಬೊಗಸೆಯಲ್ಲಿಟ್ಟುಕೊಂಡು ಮಂಡಿಯೂರಿ ಕುಳಿತು ಅರುಹುವ ಸಂದೇಶವೇ ಜಗತ್ಪ್ರಸಿದ್ಧ &lsquo;ಮೇಘದೂತ&rsquo; ಖಂಡಕಾವ್ಯದ ಪೂರ್ವಮೇಘ ಮತ್ತು ಉತ್ತರಮೇಘವೆಂಬ ಎರಡು ವಿಭಾಗಗಳ ನೂರಿಪ್ಪತ್ತೊಂದು ಶ್ಲೋಕಗಳಲ್ಲಿ ಇರುವ ರಸಪಾಕ.ಮೇಘದೂತ ಕಾವ್ಯದ ಹಿರಿಮೆಯನ್ನು ಹೇಳುವಾಗ 1500 ವರ್ಷಗಳ ಹಿಂದೆಯೇ ಕಾಳಿದಾಸ ಮಧ್ಯಪ್ರದೇಶದ ಚಿತ್ರಕೂಟ ಪರ್ವತದಿಂದ ನೇಪಾಳದ ಕೈಲಾಸ ಪರ್ವತದವರೆಗಿನ ಸುಮಾರು 700 ಕಿಲೋಮೀಟರ್ ದೂರದ ದಾರಿಯನ್ನು ಎಷ್ಟು ಕರಾರುವಾಕ್ಕಾಗಿ ಹೇಳಿದ್ದಾನೆಂದು ಹುಬ್ಬೇರಿಸುವುದು ವಾಡಿಕೆ.&amp;nbsp;&lt;/p&gt; &lt;p&gt;ಅದೂ ಒಂದು ಅದ್ಭುತ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಮೇಘದೂತದ ಹಿರಿಮೆಯಿರುವುದು ಒಬ್ಬ ಮುಗ್ಧ ಪ್ರಾಮಾಣಿಕ ಪ್ರೇಮಿಯ ವಿರಹದ ತುರೀಯಾವಸ್ಥೆಯನ್ನು ಹಿಂದೆಯೂ ಮುಂದೆಯೂ ಯಾರೂ ಚಿತ್ರಿಸಿರದ ರೀತಿಯಲ್ಲಿ ಒಬ್ಬ ಮನಃಶಾಸ್ತ್ರಜ್ಞನಂತಹ ಕವಿಯಾಗಿ ಕಾಳಿದಾಸ ಚಿತ್ರಿಸಿರುವುದರಲ್ಲಿ. ವಿರಹಿ ಹೇಗೆ ಅರೆಹುಚ್ಚನೂ ಆಗಿರುತ್ತಾನೆಂಬುದನ್ನು ಯಕ್ಷನ ಮರ್ಯಾದೆಯನ್ನು ಕಳೆಯದೆಯೇ ಕಾಳಿದಾಸ ಬಣ್ಣಿಸಿರುವ ರೀತಿ ಅನನ್ಯವಾಗಿದೆ.ಮೊದಲಿಗೆ ಗಂಧರ್ವ ತನ್ನ ಪತ್ನಿಯನ್ನು ನೋಡದೆ ಎಂಥಾ ದುಸ್ಥಿತಿಗೆ ತಲುಪಿದ್ದಾನೆಂದು ಕಾಳಿದಾಸ ಹೇಳುತ್ತಾನೆ.&amp;nbsp;&lt;/p&gt; &lt;p&gt;ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ&lt;/p&gt; &lt;p&gt;ನಂತರ ಮೋಡವನ್ನೇಕೆ ಅವನು ಸಂದೇಶ ಕಳುಹಿಸಲು ಆಯ್ಕೆ ಮಾಡಿಕೊಂಡ ಎಂಬುದನ್ನು ತಿಳಿಸುತ್ತಾನೆ. ಬಳಿಕ ಯಕ್ಷನು ಮೋಡಕ್ಕೆ ನೀನೆಷ್ಟು ಶ್ರೇಷ್ಠ, ಏಕೆ ನೀನು ನನ್ನ ಸಂದೇಶವನ್ನು ಪ್ರಿಯತಮೆಗೆ ತಲುಪಿಸಬೇಕು, ಏಕೆ ಇದೊಂದು ಮಹತ್ಕಾರ್ಯ ಎಂಬುದನ್ನು ಹೇಳುತ್ತಾನೆ. ನಂತರ ಸಾಗಬೇಕಾದ ದಾರಿಯನ್ನು ತಿಳಿಸುತ್ತಾನೆ. ಮೊದಲಿಗೆ ಸಿಗುವ ಕಾಡು, ನದಿ, ನಂತರ ಸಿಗುವ ಉಜ್ಜಯಿನಿ ನಗರ, ಅಲ್ಲಿನ ಜನಜೀವನ, ನಂತರ ಸಿಗುವ ಗಿರಿ ಪರ್ವತಗಳು, ಅವುಗಳ ಶ್ರೇಷ್ಠತೆ, ದಾರಿಯ ಹವಾಮಾನ, ಮತ್ತೆ ಸಿಗುವ ತೊರೆಗಳು, ನಂತರ ಸಿಗುವ ಅಲಕಾನಗರಿ, ಅಲ್ಲಿನ ವೈಭೋಗ, ಇವುಗಳನ್ನು ಬಣ್ಣಿಸುವಾಗ ಕಾವ್ಯದುದ್ದಕ್ಕೂ ಪ್ರೇಮ ಮತ್ತು ವಿರಹದ ಸ್ಥಾಯಿಭಾವ...&amp;nbsp;&lt;/p&gt; &lt;p&gt;ಇದು ಮೇಘದೂತದ ಪಕ್ಷಿನೋಟ.ಈಗಾಗಲೇ ಸಾಕಷ್ಟು ಅನುವಾದಗಳು ಬಂದಿರುವಾಗ ಮೇಘದೂತವನ್ನು ಮತ್ತೆ ಮತ್ತೆ ಅನುವಾದಿಸುವ ಅಗತ್ಯವೇನಿದೆ? ರಾಮಾಯಣ ಮತ್ತು ಮಹಾಭಾರತವನ್ನು ಏಕೆ ನಾವು ಮತ್ತೆ ಮತ್ತೆ ಹೊಸತಾಗಿ ಕೃತಿಗಿಳಿಸುತ್ತೇವೆ ಎಂಬ ಪ್ರಶ್ನೆಗೆ ಏನು ಉತ್ತರವೋ ಇದಕ್ಕೂ ಅದೇ ಉತ್ತರ. ಹೊಸ ಹೊಸ ಅನುವಾದಗಳು ಬಂದಾಗ ಕೆಲವರಾದರೂ ಹೊಸತಾಗಿ ಅದನ್ನು ಓದುತ್ತಾರೆ. ಅಷ್ಟರಮಟ್ಟಿಗೆ ಅದು ಸಾರ್ಥಕ. ಹೊಸ ಅನುವಾದದಲ್ಲಿ ನಮಗೆ ಗೊತ್ತಿಲ್ಲದೆಯೇ ಮೂಲಕ್ಕೆ ಹೊಸ ವ್ಯಾಖ್ಯಾನಗಳು ಸೇರಿಕೊಳ್ಳುತ್ತವೆ. ಅದು ಮೂಲದ ಸಾಧ್ಯತೆಯನ್ನು ವಿಸ್ತರಿಸುತ್ತದೆ. ಅದು ಇನ್ನೊಂದು ಲಾಭ. ಮೂರನೆಯದಾಗಿ, ಸಂಸ್ಕೃತದ ಕಾವ್ಯಗಳನ್ನು ಸಂಸ್ಕೃತ ಓದಿಲ್ಲದವರು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಆದರೆ, ಅವುಗಳ ಬಹುತೇಕ ಅನುವಾದಗಳು ಹಳೆಗನ್ನಡದಲ್ಲಿವೆ ಅಥವಾ ಹೊಸಗನ್ನಡದ ಕಾವ್ಯದಲ್ಲಿವೆ.&amp;nbsp;&lt;/p&gt; &lt;p&gt;ಅದು ಈಗಿನ ಓದುಗರಿಗೆ ಇನ್ನೊಂದು ಕಷ್ಟ. ಹೀಗಾಗಿ ಒಂದು ಸರಳ ಅನುವಾದ ಲಭ್ಯವಿದ್ದರೆ ಅದು ಕಾಳಿದಾಸನನ್ನು ಇನ್ನೊಂದು ಪೀಳಿಗೆಯ ಕೆಲವೇ ಕೆಲವರಿಗೆ ದಾಟಿಸುವ ಕೆಲಸವನ್ನು ಮಾಡಿದರೂ ಸರಿ, ಅದು ಸ್ವಾಗತಾರ್ಹ.ಕಾಳಿದಾಸ ಮೇಲ್ನೋಟಕ್ಕಷ್ಟೇ ಸರಳ ಕವಿ. ಆದರೆ ಅನುವಾದಕ್ಕೆ ಕುಳಿತರೆ ಅವನ ಅಗಾಧತೆಯ ದರ್ಶನವಾಗುತ್ತದೆ. ಅವನ ಉಪಮಾಲೋಲುಪತೆ ಮತ್ತು ಶ್ಲೇಷಪ್ರಿಯತೆಯು ಅನುವಾದಕರನ್ನು ಗೊಂದಲಕ್ಕೆ ಬೀಳಿಸುವುದುಂಟು. ಹಾಗೆ ಗೊಂದಲವಾದಾಗಲೆಲ್ಲ ನಮಗೆ ಏಕೈಕ ಆಶ್ರಯ ಮಲ್ಲಿನಾಥ.&amp;nbsp;&lt;/p&gt; &lt;p&gt;ಕಾಳಿದಾಸನ ಬಹುತೇಕ ಎಲ್ಲಾ ಕೃತಿಗಳಿಗೂ ಅದ್ಭುತವಾದ &lsquo;ಸಂಜೀವನಿ&rsquo; ವ್ಯಾಖ್ಯಾನವನ್ನು ಬರೆದ ಮಹಾಮಹೋಪಾಧ್ಯಾಯ ಮಲ್ಲಿನಾಥ ಸೂರಿ ಕಾಳಿದಾಸನ ಓದುಗರಿಗೆ ಮಹದುಪಕಾರವನ್ನು ಮಾಡಿದ್ದಾನೆ. ವ್ಯಾಕರಣ ಬದ್ಧವಾಗಿ ಕಾಳಿದಾಸನನ್ನು ಸುಲಭವಾಗಿ ಓದುಗರಿಗೆ ಅರ್ಥ ಮಾಡಿಸಿದ ಕೀರ್ತಿ ಮಲ್ಲಿನಾಥನಿಗೇ ಸಲ್ಲುತ್ತದೆ. ಕಾಳಿದಾಸ ಮಾಡಿರಬಹುದಾದ ವ್ಯಾಕರಣದ ತಪ್ಪು ಪ್ರಯೋಗಗಳನ್ನು ಅಥವಾ ಕಾಳಿದಾಸನ ಪದಪ್ರಯೋಗಗಳಲ್ಲಿ ಅಲ್ಲಲ್ಲಿ ಕಾಣಿಸುವ ಗೊಂದಲಗಳನ್ನು ಬಗೆಹರಿಸಿದ ಕೀರ್ತಿಯೂ ಅವನದೇ ಆಗಿದೆ.&amp;nbsp;&lt;/p&gt; &lt;p&gt;ಆದರೆ, ಮಲ್ಲಿನಾಥನ ವ್ಯಾಖ್ಯಾನವೂ ಸಾಮಾನ್ಯ ಸಾಹಿತ್ಯಾಸಕ್ತರಿಗೆ ಸುಲಭವಿಲ್ಲ. ಅದನ್ನು ಸರಳೀಕರಿಸಿ, ಸಂಕ್ಷಿಪ್ತಗೊಳಿಸಿದ ಅನುವಾದವೊಂದರ ಅಗತ್ಯವಿತ್ತು.ಪ್ರತಿ ಓದು, ಪ್ರತಿ ಅನುವಾದ, ಪ್ರತಿ ಪಾಠ ಹಾಗೂ ಪ್ರತಿ ಚರ್ಚೆಯಲ್ಲೂ ಕಾಳಿದಾಸ ಹೊಸ ಹೊಳಹುಗಳನ್ನು ಹುಟ್ಟಿಸುತ್ತಾನೆ. ಇದು ಶೇಕ್ಸ್&zwnj;ಪಿಯರ್&zwnj;ನಿಂದ ಹಿಡಿದು ಜಗತ್ತಿನ ಎಲ್ಲ ಸಾರ್ವಕಾಲಿಕ ಶ್ರೇಷ್ಠ ಬರಹಗಾರರ ವಿಷಯದಲ್ಲೂ ನಿಜ. &lsquo;ಮೇಘದೂತ&rsquo;ವೆಂಬ ಅನನ್ಯ ಕೃತಿಗೆ ಅಂತಹದ್ದೊಂದು ಹೊಸತಾದ ಮತ್ತು ಸುಲಭವಾದ ಕನ್ನಡಾನುವಾದ ಬಂದಿದೆ.ಯಕ್ಷನ ವಿರಹವನ್ನು ಪುನಃ ಪುನಃ ಧ್ಯಾನಿಸಿ ಉತ್ಕಟ ಪ್ರೇಮಿಗಳಾಗುವ ಸುಖ ನಮ್ಮದಾಗಲಿ.&lt;/p&gt; &lt;p&gt;*&lt;/p&gt; &lt;p&gt;*ಮಹಾಬಲ ಸೀತಾಳಭಾವಿ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿರುವ ಅಂಕಿತ ಪುಸ್ತಕದ &lsquo;ಮೇಘದೂತ&rsquo; ಇಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಬಿಡುಗಡೆಯಾಗಲಿದೆ&lt;/p&gt;]]></content:encoded>
            <category>magazine</category>
            <dc:creator>Vinutha Perla</dc:creator>
            <atom:link href="https://kannada.asianetnews.com/life/again-and-again-kalidasa-meditating-on-the-transcendental-wonder-called-meghaduta-vin-sd06j9"/>
        </item>
        <item>
            <title><![CDATA[ಕ್ರೈಮ್‌ ರಿಪೋರ್ಟರ್ ಕಂಡಂತೆ ಐಪಿಎಸ್ ಅಧಿಕಾರಿ ಎನ್‌.ಎಸ್‌. ಮೇಘರಿಕ್]]></title>
            <link>https://kannada.asianetnews.com/magazine/complete-information-about-the-career-of-ips-officer-n-s-megharik-mrq-sua5d7</link>
            <guid isPermaLink="true">https://kannada.asianetnews.com/magazine/complete-information-about-the-career-of-ips-officer-n-s-megharik-mrq-sua5d7</guid>
            <pubDate>Sun, 06 Apr 2025 10:44:03 +0530</pubDate>
            <description><![CDATA[&lt;p&gt;ರಾಜಸ್ಥಾನ ಮೂಲದ ಎನ್&zwnj;.ಎಸ್&zwnj;. ಮೇಘರಿಕ್ ಅವರು 1987ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿ ಮೂರೂವರೆ ದಶಕಗಳು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಪ್ರಾಮಾಣಿಕತೆ, ದಕ್ಷತೆ ಹಾಗೂ ನಿಷ್ಠೆ ಎಲ್ಲರಿಗೂ ಮಾದರಿಯಾಗಿತ್ತು. ಅವರ ಸೇವಾವಧಿಯ ಕೆಲ ನೆನಪುಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-2bb25a70-ded6-4070-a2b0-d67cbf087942,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಗಿರೀಶ್ ಮಾದೇನಹಳ್ಳಿ&lt;/strong&gt;&lt;/p&gt; &lt;p&gt;ರಾಜಸ್ಥಾನ ಮೂಲದ ಎನ್&zwnj;.ಎಸ್&zwnj;. ಮೇಘರಿಕ್ ಅ&zwj;ವರು 1987ನೇ ಸಾಲಿನ ಐಪಿಎಸ್ ಅಧಿಕಾರಿ. ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಡಿಜಿಪಿ, ಕಾರಾಗೃಹ ಇಲಾಖೆಯ ಮುಖ್ಯಸ್ಥ, ಬೆಂಗಳೂರು ನಗರ ಆಯುಕ್ತ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗದ ಎಡಿಜಿಪಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಹೀಗೆ ಮೂರೂವರೆ ದಶಕಗಳು ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಮೇಘರಿಕ್ ಅವರು ಪ್ರಾಮಾಣಿಕತೆ, ದಕ್ಷತೆ ಹಾಗೂ ನಿಷ್ಠೆ ಎಂಬ ಗುಣಗಳನ್ನು ಸಾರ್ವಜನಿಕವಾಗಿ ಕಾಣುವ ಆಭರಣದಂತೆ ಧರಿಸಿಕೊಂಡು ಓಡಾಡಲಿಲ್ಲ. ಅವುಗಳು ಅವರ ನಡೆ-ನುಡಿಗಳಲ್ಲಿ ಶೋಭಿಸಿದವು. ತಾವು ನಿರ್ವಹಿಸಿದ ಪ್ರತಿ ಹುದ್ದೆಯ ಘನತೆ ಹೆಚ್ಚಿಸಿದರು. ಕಾನೂನು ಮೀರದ ಅವರು, ಎಂದಿಗೂ ಸ್ವಹಿತಾಸಕ್ತಿಗೆ ರಾಜಿ ಆಗಲಿಲ್ಲ. ಅಧಿಕಾರಿ ಮತ್ತು ಸಿಬ್ಬಂದಿ ನೋವಿಗೂ ಮಿಡಿದರು. ಆಡಳಿತದಲ್ಲೂ ಛಾಪು ಮೂಡಿಸಿದರು. ಸಿಐಡಿ, ಸಿಬಿಐ, ಎಸಿಬಿಯಂತಹ ತನಿಖಾ ಸಂಸ್ಥೆಗಳಲ್ಲಿ ಸಹ ಅವರ ಹೆಜ್ಜೆ ಗುರುತುಗಳಿವೆ. ರಾಜ್ಯ ಪೊಲೀಸ್ ಇಲಾಖೆಯ ಕಂಡ ಅಪರೂಪ ಅಧಿಕಾರಿಯ ಸೇವಾವಧಿಯ ಕೆಲ ನೆನಪುಗಳ ಹೀಗಿವೆ.&lt;/p&gt; &lt;p&gt;&lt;strong&gt;ಡಿಸಿಪಿ ಅವಮಾನಿಸಿದ್ರು, ಆಯುಕ್ತರಾಗಿ ಗೌರವ ಪಡೆದ್ರು&lt;/strong&gt; ಎರಡೂವರೆ ದಶಕಗಳ ಹಿಂದೆ ಪೂರ್ವ ವಿಭಾಗದ ಡಿಸಿಪಿ ಆಗಿದ್ದಾಗ ಮೇಘರಿಕ್&zwnj;ರವರು ಸಕಾರಣವಿಲ್ಲದೆ ಹಿರಿಯ ಅಧಿಕಾರಿಯೊಬ್ಬರ ದುರಾಗ್ರಹಕ್ಕೆ ತುತ್ತಾದರು. ಡಿಸಿಪಿಯಾದ ಎರಡ್ಮೂರು ದಿನಗಳಲ್ಲೇ ಅಸಮಾಧಾನ ಮೂಡಿತು. ಒಂದು ದಿನ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಅಹಂ ತೋರಿಸಿದ ಹಿರಿಯ ಅಧಿಕಾರಿ, ಮರುದಿನವೇ ಮೇಘರಿಕ್&zwnj;ರವರಿಗೆ ವರ್ಗಾವಣೆ ಆದೇಶ ತಂದು ಕೈಗಿತ್ತರು. ಅಂದು ತನ್ನ ಜಾತಿಯ ಆಡಳಿತ ಪಕ್ಷದ ಪ್ರಬಲ ರಾಜಕಾರಣಿಯ ಆಶೀರ್ವಾದ ಕಾರಣಕ್ಕೆ ಇಲಾಖೆಯಲ್ಲಿ ಅಧಿಕಾರಿ ಪವರ್&zwnj;ಫುಲ್ ಆಗಿದ್ದರು. ಹೀಗೆ ಬೇಸರದಿಂದ ಡಿಸಿಪಿ ಹುದ್ದೆ ತೊರೆದಿದ್ದ ಮೇಘರಿಕ್ ಅವರಿಗೆ ದಶಕಗಳ ಬಳಿಕ ಕಮಿಷನರ್ ಪದವಿ ಒಲಿಯಿತು. ಅರ್ಹತೆಗೆ ಎಂದಿಗೂ ಗೌರವ ಪುರಸ್ಕಾರ ಇರುತ್ತದೆ ಎಂದು ತೋರಿಸಿದರು. ಕಮೀಷನರೇಟ್&zwnj; ಆಡಳಿತಕ್ಕೆ ಹೊಸತನ ತಂದು ಚರಿತ್ರೆ ಬರೆದರು.&lt;/p&gt; &lt;p&gt;&lt;strong&gt;ತಿಂಡಿ ಊಟ ಬಿಲ್ 1200 ರು. ಹಣ ಕೊಟ್ಟರು&lt;/strong&gt; 2016ರ ಅಕ್ಟೋಬರ್&zwnj; 16ರಂದು ಶಿವಾಜಿನಗರದ ಸ್ಥಳೀಯ ಆರ್&zwnj;ಆರ್&zwnj;ಎಸ್&zwnj; ನಾಯಕ ರುದ್ರೇಶ್ ಕೊಲೆಯಾಗಿತ್ತು. ಆ ದಿನವಿಡೀ ಕಮರ್ಷಿಯಲ್ ಸ್ಟ್ರೀಟ್&zwnj; ಠಾಣೆಯಲ್ಲೇ ಮೊಕ್ಕಾಂ ಹೂಡಿ ಹಂತಕರ ಪತ್ತೆ ಕಾರ್ಯಾಚರಣೆ ಹಾಗೂ ಬಂದೋಬಸ್ತ್&zwnj; ಮೇಲುಸ್ತುವಾರಿಯನ್ನು ಖುದ್ದು ಆಯುಕ್ತ ಮೇಘರಿಕ್ ನಡೆಸಿದ್ದರು. ಠಾಣೆಯಲ್ಲೇ ಅವರೊಂದಿಗೆ ಹೆಚ್ಚುವರಿ ಆಯುಕ್ತರಾದ ಚರಣ್ ರೆಡ್ಡಿ ಹಾಗೂ ಹಿತೇಂದ್ರ ಕೂಡ ಇದ್ದರು. ಮಧ್ಯಾಹ್ನ ಊಟ, ತಿಂಡಿ ಹಾಗೂ ಕಾಫಿ ತರಿಸಿಕೊಂಡು ಅಲ್ಲೇ ಅಧಿಕಾರಿಗಳ ಜತೆ ಆಯುಕ್ತರು ಸೇವಿಸಿದ್ದರು. ನನಗೆ ರಾತ್ರಿ 10.30ರಲ್ಲಿ ಆಯುಕ್ತರು ಠಾಣೆಯಲ್ಲೇ ಇರುವ ವಿಚಾರ ಗೊತ್ತಾಗಿ ಕೊಲೆ ಪ್ರಕರಣದ ಆಪ್&zwnj;ಡೇಟ್ ಕೇಳಲು ಹೋಗಿದ್ದೆ. ಆಗಷ್ಟೇ ಅವರು ಸಹ ಠಾಣೆಯಿಂದ ಹೊರಡಲು ಅನುವಾಗಿದ್ದರು.&lt;/p&gt; &lt;p&gt;ತಮಗೆ ಬೆಳಗ್ಗೆಯಿಂದ ರಾತ್ರಿವರೆಗೆ ಊಟೋಪಚಾರ ನೋಡಿಕೊಂಡ ಕಾನ್&zwnj;ಸ್ಟೇಬಲ್&zwnj;ನನ್ನು ಕರೆದ ಆಯುಕ್ತರು, ಬಿಲ್ ಎಷ್ಟಾಯಿತು ಎಂದರು. ಅದಕ್ಕೆ ಆ ಕಾನ್&zwnj;ಸ್ಟೇಬಲ್&zwnj;, ಬೇಡ ಸರ್ ಪರವಾಗಿಲ್ಲ ಎಂದು ಗೋಣಾಡಿಸಿದ. ಅಲ್ರೀ ದುಡ್ಡು ಕೊಡದೆ ಊಟ ಕಾಫಿ-ತಿಂಡಿ ಕೊಡೋದಕ್ಕೆ ಅದೇನು ನಿಮ್ಮ ಮನೇನಾ ಅಂತ ದಬಾಯಿಸಿದರು. ತಾವೇ ಊಟೋಪಚಾರದ ಖರ್ಚು ಲೆಕ್ಕ ಹಾಕಿ 1200 ರುಪಾಯಿ ಕೊಟ್ಟು ಠಾಣೆಯಿಂದ ಹೊರಟರು. ಆಗ ಬಾಗಿಲಿನಲ್ಲಿ ನನ್ನನ್ನು ಕಂಡು ಏನ್ರೀ ಇಷ್ಟೊತ್ತಿನಲ್ಲಿ ಹುಡುಕಿಕೊಂಡು ಬಂದಿದ್ದೀರಿ. ಏನೂ ಸ್ಕೂಪ್ ಇಲ್ಲ ಬಿಡಿ ಅಂತ ತಮಾಷೆ ಮಾಡಿ ಕಾರು ಹತ್ತಿದರು.&lt;/p&gt; &lt;p&gt;&lt;strong&gt;ವಾಸ್ತು ಸರಿಯಿಲ್ಲವೆಂದಿದ್ದ ಚೇಂಬರ್&zwnj;ನಲ್ಲೇ ಕುಳಿತರು&lt;/strong&gt; ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿದೆಯಲ್ಲ ಆರಂಭದಲ್ಲಿ ವಾಸ್ತು ದೋಷಕ್ಕೆ ತುತ್ತಾಗಿತ್ತು. ಆ ಕಟ್ಟಡವು ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ಕಮಿಷನರ್ ಆಗಿ ಬಂದವರು ಮಾತ್ರ ಪುರಾತನ ಕಾಲದ ಹಳೇ ಚೇಂಬರ್ ಬಿಡಲು ಹಿಂದೇಟು ಹಾಕುತ್ತಿದ್ದ ಬಗ್ಗೆ ಚರ್ಚೆ ನಡೆದಿತ್ತು. ಒಂದು ದಿನ ಆಯುಕ್ತರ ಕಚೇರಿಗೆ ಬೀಟ್&zwnj; ಹೋದವನು ಮೇಘರಿಕ್ ಅವರನ್ನು ಭೇಟಿಯಾದೆ. ಇಳಿ ಮಧ್ಯಾಹ್ನವೇ ಜೋರು ಮಳೆ. ಆಯುಕ್ತರ ಚೇಂಬರ್&zwnj; ಸೂರಿನಲ್ಲಿ ಹನಿಗಳು ತೊಟ್ಟಿಕ್ಕುತ್ತಿದ್ದವು. ಮಳೆ ಹನಿ ಬಿದ್ದ ಜಾಗದಲ್ಲಿ ಬಕೆಟ್&zwnj; ಇಡುತ್ತಿದ್ದ ತಮ್ಮ ಸಹಾಯಕನನ್ನು ಮೇಘರಿಕ್ ನೋಡಿದರು. ಹೊಸ ಬಿಲ್ಡಿಂಗ್ ಶಿಫ್ಟ್ ಆಗ್ತೀನ್ರೀ ಅಂದ್ರು. ಸರ್&zwnj; ಅಲ್ಲಿ ವಾಸ್ತು ದೋಷ ಅಂತಾರೆ ಅಂದೇ. ಏನ್ರೀ ವಾಸ್ತು ದೋಷ ಅಂದ್ರೇ, ದೋಷ ನಾವು ಮಾಡುವ ಕೆಲಸದಲ್ಲಿರಬಾರದಷ್ಟೇ ಎಂದು ನಗಾಡಿದರು. ಇದಾದ ಮೂರೇ ದಿನದಲ್ಲೇ ಹೊಸ ಚೇಂಬರ್&zwnj;ನಲ್ಲಿ ಮೇಘರಿಕ್ ಠಳಾಯಿಸಿದರು. ಒಂದೂವರೆ ವರ್ಷ ಉತ್ತಮ ಆಡಳಿತ ನೀಡಿದರು. ವಾಸ್ತು ದೋಷಕ್ಕೆ ಹೆದರಿದವರು ವರ್ಷಕ್ಕೆ ವರ್ಗವಾಗಿದ್ದು ವಿಪರ್ಯಾಸ.&lt;/p&gt; &lt;p&gt;&lt;strong&gt;ಅಮಾವಾಸೆ ದಿನ ಮನೆ ಖಾಲಿ ಮಾಡಿದ್ರು&lt;/strong&gt; ಅಮಾವಾಸ್ಯೆ ಹಿಂದಿನ ದಿನ ಕಮಿಷನರ್ ಹುದ್ದೆಯಿಂದ ಮೇಘರಿಕ್ ಅವರನ್ನು ವರ್ಗಾವಣೆ ಮಾಡಲಾಯಿತು. ತಮ್ಮ ಕಚೇರಿ ಸಿಬ್ಬಂದಿಯನ್ನು ಕರೆದು ನಾಳೆ ತಮ್ಮ ಅಧಿಕೃತ ಸರ್ಕಾರಿ ನಿವಾಸ ಖಾಲಿ ಮಾಡಬೇಕು ಎಂದು ಅವರು ಸೂಚಿಸಿದರು. ಈ ಮಾತಿಗೆ ಸಿಬ್ಬಂದಿ, ಸರ್ ನಾಳೆ ಮಂಗಳವಾರ ಅಮಾವಾಸ್ಯೆ ಬೇರೆ ಇದೆ. ನಾಡಿದ್ದು ಮಾಡೋಣ ಎಂದರಂತೆ. ಯಾವುದ್ರೀ ಅಮಾವಾಸ್ಯೆ. ಅದೂ ತಿಂಗಳಲ್ಲೊಂದು ದಿನವಷ್ಟೇ ಬಿಡಿ ಎಂದು ನಕ್ಕಿದರಂತೆ. ಮರುದಿನವೇ ಮನೆ ಖಾಲಿ ಮಾಡಿದರು.&lt;/p&gt; &lt;p&gt;&lt;strong&gt;ಸೈಟ್&zwnj; ಮಾರಿದ್ರು, ನಿವೃತ್ತಿ ಹಣದಲ್ಲಿ ಫ್ಲ್ಯಾಟ್ ಖರೀದಿಸಿದ್ರು&lt;/strong&gt; ಒಂದು ದಿನ ಇಳಿ ಸಂಜೆ ಆಯುಕ್ತರಾಗಿದ್ದಾಗ ಮೇಘರಿಕ್ ರವರ ಜೊತೆ ಅನೌಪಾಚಾರಿಕ ಮಾತುಕತೆ ನಡೆದಿತ್ತು. ನಿವೃತ್ತಿ ಬಳಿಕ ಬೆಂಗಳೂರಿನಲ್ಲೇ ಉಳಿಯುತ್ತೇನೆ. ಅದಕ್ಕೆ ಒಂದು ಫ್ಲ್ಯಾಟ್&zwnj; ನೋಡ್ತಾ ಇದ್ದೀನಿ ಅಂದ್ರು. ಸರ್ ಯಾರಾದರೂ ಚಾರ್ಲಿ (ಇನ್ಸ್&zwnj;ಪೆಕ್ಟರ್&zwnj;)ರವರಿಗೆ ಹೇಳಿ ಒಳ್ಳೆಯ ಫ್ಲ್ಯಾಟ್&zwnj; ಕೊಡಿಸುತ್ತಾರೆ ಅಂದೆ. ನಾನು ಹೇಳಿದರೆ ಬಿಲ್ಡರ್ ಜತೆ ಕಚೇರಿಗೆ ಬಂದು ಫ್ಲ್ಯಾಟ್&zwnj; ಖರೀದಿ ವ್ಯವಹಾರ ಮುಗಿಸಿ ಇನ್ಸ್&zwnj;ಪೆಕ್ಟರ್ ಹೋಗುತ್ತಾರೆ. ಆದರೆ ನಾನು ದುಡ್ಡು ಕೊಟ್ಟು ಫ್ಲ್ಯಾಟ್ ಖರೀದಿಸಿದರೂ ಇಲಾಖೆಯಲ್ಲಿ ಇನ್ಸ್&zwnj;ಪೆಕ್ಟರ್ ಡೀಲ್ ಮಾಡಿ ಕೊಡಿಸಿದ ಅಂತಾರೆ. ವೈಯಕ್ತಿಕ ಕೆಲಸಗಳಿಗೆ ಅಧಿಕಾರಿಗಳ ಸಹಾಯ ಪಡೆಯೋದು ನನಗೆ ಸರಿ ಕಾಣಲ್ಲ ಕಣ್ರೀ ಅಂದ್ರು. ತರುವಾಯ ಸಿಐಡಿ ಡಿಜಿಪಿಯಾಗಿ ನಿವೃತ್ತರಾದ ಬಳಿಕ ಬಂದ ಹಣದಲ್ಲಿ ಯಲಹಂಕ ಸಮೀಪ ಫ್ಲ್ಯಾಟ್ ಖರೀದಿಸಿದರು. ಮೂರೂವರೆ ದಶಕ ಐಪಿಎಸ್ ಅಧಿಕಾರಿಯಾಗಿ ಎಸ್ಪಿಯಿಂದ ಡಿಜಿಪಿ ಹುದ್ದೆವರೆಗೆ ಸೇವೆ ಸಲ್ಲಿಸಿದರೂ ಒಂದು ಮನೆ ಮಾಡಿಕೊಳ್ಳದ ಅಪ್ಪಟ ಪ್ರಾಮಾಣಿಕ. ಸರ್ಕಾರ ಮಂಜೂರು ಮಾಡಿದ್ದ ಬಿಡಿಎ ನಿವೇಶನವನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರಾಟ ಮಾಡಿದ್ದರು. ನೆನಪಿರಲಿ ಈಗ ಕೆಲ ಸಾಮಾನ್ಯ ಕಾನ್&zwnj;ಸ್ಟೇಬಲ್&zwnj;ಗಳ ಮನೆಗಳೇ ಅರಮನೆಗಳಾಗಿವೆ.&lt;/p&gt; &lt;p&gt;&lt;strong&gt;ಮಗನಿಗೆ ಸರ್ ಅನ್ನಬಾರದು ಎಂದು ತಾಕೀತು&lt;/strong&gt; ಒಂದು ದಿನ ಅವರ ಪುತ್ರ ಹೇಳಿದ ಕಾರಣಕ್ಕೆ ಹೋಟೆಲ್&zwnj;ನಿಂದ ವಾಕಿ (ಸಹಾಯಕ) ತಿಂಡಿ ಪಾರ್ಸಲ್&zwnj; ತಂದಿದ್ದಾರೆ. ಅದನ್ನು ನೋಡಿದ ಮೇಘರಿಕ್ ಅವರು, ಯಾರಿಗೆ ಇರು ಪಾರ್ಸಲ್ ಅಂತ ಕೇಳಿದಾಗ ಸರ್ ಹೇಳಿದ್ರು ಎಂದರು. ಯಾವ ಸರ್ ಅಂದಿದ್ದಾರೆ. ಆಗ ಅವರ ಮಗನ ಹೆಸರನ್ನು ವಾಕಿ ಹೇಳಿದಾಗ ಮೇಘರಿಕ್&zwnj;ರವರಿಗೆ ಕೋಪ ಬಂದಿದೆ. ಕೂಡಲೇ ಮಗನನ್ನು ಕರೆಸಿ ಆತನ ಎದುರಿನಲ್ಲೇ ವಾಕಿಗೆ ನೀವು ಕಷ್ಟಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸರ್ಕಾರಿ ನೌಕರ ಪಡೆದಿದ್ದೀರಿ. ಏನೂ ಅಲ್ಲದ ಈತನಿಗೆ ನನ್ನ ಮಗ ಅನ್ನುವ ಕಾರಣಕ್ಕೆ ಸರ್ ಅಂತ ಕರೆಯಬೇಡಿ. ಹಾಗೆ ಆತ ಹೇಳಿದ ಕೆಲಸ ಸಹ ಮಾಡಬಾರದು ಎಂದು ಫರ್ಮಾನು ಹೊರಡಿಸಿದ್ದರಂತೆ. ಅದೇ ಕಮಿಷನರೇಟ್&zwnj; ಅಂಗಳದಲ್ಲಿ ಅಪ್ಪನ ಹೆಸರಿನಲ್ಲಿ ದರ್ಬಾರ್&zwnj; ನಡೆಸಿದ ಮಕ್ಕಳಿದ್ದಾರೆ.&lt;/p&gt; &lt;p&gt;&lt;strong&gt;ಕ್ಯಾಪ್&zwnj; ದುಡ್ಡು ಕೊಟ್ಟಿದ್ದು ನೋಡಿ ವ್ಯಾಪಾರಿ ಅಚ್ಚರಿ&lt;/strong&gt; ಆಯುಕ್ತರಾದ ಮರುದಿನ ಮೇಘರಿಕ್ ಅವರಿಗೆ ಹೊಸ ಕ್ಯಾಪ್ ಖರೀದಿಸಬೇಕಿತ್ತು. ಆಗ ಉಪ್ಪಾರಪೇಟೆ ಠಾಣೆ ಇನ್ಸ್&zwnj;ಪೆಕ್ಟರ್&zwnj; ಅವರನ್ನು ಸಂಪರ್ಕಿಸಿ ಒಳ್ಳೆಯ ಕ್ಯಾಪ್ ಕಳುಹಿಸಿ ಕೊಡುವಂತೆ ಆಯುಕ್ತರ ಕಚೇರಿ ಸಿಬ್ಬಂದಿ ಹೇಳಿದರು. ಸರಿ ಆಯುಕ್ತರು ಹೇಳಿದ್ದಾರೆ ಅಂದ್ಮೇಲೆ ಇನ್ಸ್&zwnj;ಪೆಕ್ಟರ್&zwnj;, ಖಾಕಿ ಸಮವಸ್ತ್ರಗಳ ಮಾರಾಟಕ್ಕೆ ಹೆಸರುವಾಸಿಯಾದ ಅಂಗಡಿಯಿಂದ ಏಳೆಂಟು ಒಳ್ಳೆಯ ಕ್ಯಾಪ್&zwnj;ಗಳನ್ನು ಆರಿಸಿ ಕಳುಹಿಸಿದರಂತೆ. ಅದರಲ್ಲೊಂದು ಆರಿಸಿಕೊಂಡ ಮೇಘರಿಕ್ ಅವರು, ಆ ಕ್ಯಾಪ್ ಬೆಲೆ ಎಷ್ಟು ಎಂದು ವಿಚಾರಿಸಿದರಂತೆ. ಆಗ ಇನ್ಸ್&zwnj;ಪೆಕ್ಟರ್&zwnj; ಬಿಡಿ ಸರ್ ಪರವಾಗಿಲ್ಲ ಎಂದಿದ್ದಾರೆ. ಕ್ಯಾಪ್&zwnj;ನ ಬೆಲೆ 800 ರು ಹಣ ಕೊಟ್ಟ ಆಯುಕ್ತರು, ಕೊನೆಗೆ ಆ ಬಟ್ಟೆ ಅಂಗಡಿ ಮಾಲೀಕನಿಗೆ ಕರೆ ಮಾಡಿ ಹಣ ತಲುಪಿತಾ ಎಂದು ಖುದ್ದು ವಿಚಾರಿಸಿದರಂತೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಹಿರಿಯ ಅಧಿಕಾರಿಯೊಬ್ಬರು ಕ್ಯಾಪ್ ಖರೀದಿಸಿ ದುಡ್ಡು ಕೊಟ್ಟಿದ್ದು ಎಂದು ಅಚ್ಚರಿಪಟ್ಟರಂತೆ ಆತ.&lt;/p&gt; &lt;p&gt;&lt;strong&gt;ಜೈಲು ಸಿಬ್ಬಂದಿಗೆ ಬಹುಮಾನ&lt;/strong&gt; ಕಾರಾಗೃಹ ಇಲಾಖೆ ಮುಖ್ಯಸ್ಥರಾದಾಗ ಆ ಇಲಾಖೆಯ ಗ್ರಹಗತಿ ಸರಿಯಿರಲಿಲ್ಲ. ಆಗಷ್ಟೇ ವಿವಾದದ ಬಿರುಗಾಳಿ ಎದ್ದು ತಣ್ಣಗಾಗಿತ್ತು. ಆ ಇಲಾಖೆ ಹೊಣೆಗಾರಿಕೆಯನ್ನು ಮೇಘರಿಕ್&zwnj;ರವರ ಹೆಗಲಿಗೆ ಹಾಕಿತು ಸರ್ಕಾರ. ಸೆರೆಮನೆಗಳಲ್ಲಿ ಸಹ ಸ್ವಚ್ಥತಾ ಅಭಿಯಾನ ಶುರುವಾಯಿತು. ಪೊಲೀಸ್ ಇಲಾಖೆಯ ಮಾದರಿಯಲ್ಲಿ ವಲಯಗಳನ್ನು ರಚಿಸಿ ಆಡಳಿತದಲ್ಲಿ ಬದಲಾವಣೆ ತಂದರು. ಅಷ್ಟೇ ಅಲ್ಲ, ವಿಶೇಷ ದಿನಗಳಲ್ಲಿ ಉತ್ತಮ ಕೆಲಸ ಮಾಡಿದ ಕಚೇರಿ ಸಿಬ್ಬಂದಿಗೆ 2 ರಿಂದ 5 ಸಾವಿರ ರು ವರೆಗೆ ನಗದು ಬಹುಮಾನ ನೀಡಿ ಬೆನ್ನುತಟ್ಟಿದರು. ಜೈಲುಗಳ ಮುಖ್ಯಸ್ಥರ ಸಭೆ ಕರೆದು 50 ರಿಂದ 70 ಸಾವಿರ ರು ನಗದು ಹಣ ಕೊಟ್ಟು ತುರ್ತು ಸಂದರ್ಭದಲ್ಲಿ ಬಳಸುವಂತೆ ಹೇಳಿದ್ದರು. ಇಲಾಖೆಯಲ್ಲಿ ರಹಸ್ಯ ನಿಧಿ ದುರ್ಬಳಕೆ ತಡೆದರು.&lt;/p&gt; &lt;p&gt;&lt;strong&gt;ಕಾರು-ಸಿಬ್ಬಂದಿ ವಾಪಸ್ ಕಳುಹಿಸಿದ್ರು&lt;/strong&gt; ನಿವೃತ್ತಿ ಮುನ್ನ ದಿನವೇ ತಮ್ಮ ಸಿಬ್ಬಂದಿ ಹಾಗೂ ಕಾರನ್ನು ಸರ್ಕಾರಕ್ಕೆ ಮೇಘರಿಕ್ ಮರಳಿಸಿದ್ದರು. ನಿವೃತ್ತರಾದ ನಂತರ ಅವರು ಕಾರು ಖರೀದಿಸಿದರು. ಸೇವಾ ನಿಯಮ ಹಾಗೂ ಕಾನೂನು ಉಲ್ಲಂಘಿಸಿ ಸಣ್ಣದೊಂದು ಸೌಲಭ್ಯವನ್ನು ಅವರು ಪಡೆದ ನಿದರ್ಶನವಿಲ್ಲ. ಎಷ್ಟೋ ಬಾರಿ ತಿಂಗಳಿಗೆ ನಿಗದಿಪಡಿಸಿದ್ದಷ್ಟೇ ಲೀಟರ್&zwnj; ಪೆಟ್ರೋಲ್ ಅನ್ನು ಅವರು ಬಳಸಿದ್ದರು. ಅದಕ್ಕಿಂತ ಒಂದು ಲೀಟರ್ ಕೂಡ ಹೆಚ್ಚು ಬಳಸುತ್ತಿರಲಿಲ್ಲ ಎಂದು ಅವರ ಕಾರು ಚಾಲಕರು ಹೇಳುತ್ತಿದ್ದರು.&lt;/p&gt; &lt;p&gt;&lt;strong&gt;ಮಗಳಿಗೆ ಸೀಟು ಕೊಡಲಿಲ್ಲ, ಚಾಲಕನಿಗೆ ಕೊಡಿಸಿದ್ರು&lt;/strong&gt; ಡಿಸಿಪಿ ಆಗಿದ್ದಾಗ ಅ&zwj;ವರ ಮಗಳಿಗೆ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಸೀಟು ನಿರಾಕರಿಸಿದ್ದರಂತೆ. ಆದರೆ ಆಯುಕ್ತರಾಗಿದ್ದಾಗ ಅದೇ ಕಾಲೇಜಿಗೆ ಅವರ ಕಾರು ಚಾಲಕನ ಮಗಳಿಗೆ ಪ್ರವೇಶಕ್ಕೆ ತುಂಬಾ ಹಿಂಜರಿಕೆಯಿಂದ ಶಿಫಾರಸು ಪತ್ರ ಕೊಟ್ಟಿದ್ದರಂತೆ. ಆ ಪತ್ರ ನೋಡಿದ ಆಡಳಿತ ಮಂಡಳಿ, ನಾವು ನಿಮ್ಮ ಸಾಹೇಬ್ರು ಮಗಳಿಗೆ ಸೀಟ್ ಕೊಟ್ಟಿರಲಿಲ್ಲ ಎಂದು ನೆನಪಿಸಿದ್ದರಂತೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳದ ಪುಟ್ಟ ಉದಾಹರಣೆ ಇದೂ.&lt;/p&gt; &lt;p&gt;&lt;strong&gt;ಮಂತ್ರಿ ಪಿಎಗೆ ತಾಕೀತು ಮಾಡಿದ್ದ ಆಯುಕ್ತರು&lt;/strong&gt; ಮೇಘರಿಕ್ ಅವರು ಕಮೀಷನರ್ ಆಗಿದ್ದಾಗ ಕಾನ್&zwnj;ಸ್ಟೇಬಲ್ ವರ್ಗಾವಣೆಗೆ ಮಂತ್ರಿಯೊಬ್ಬರು ಶಿಫಾರಸು ಪತ್ರ ಕಳುಹಿಸಿದ್ದರು. ನಾನು ಸಹ ಅವರ ಚೇಂಬರ್&zwnj;ನಲ್ಲೇ ಇದ್ದೆ. ಕಡತಗಳ ಪರಿಶೀಲಿಸುವಾಗ ಈ ಪತ್ರ ನೋಡಿದ ಕೂಡಲೇ ಮೇಘರಿಕ್&zwnj; ಅವರು, ಆ ಮಂತ್ರಿ ಪಿಎಗೆ ಕರೆ ಮಾಡಿ ಅಲ್ರೀ ಕಾನ್&zwnj;ಸ್ಟೇಬಲ್&zwnj; ವರ್ಗಾವಣೆಗೆ ಪತ್ರ ಕೊಡೋದು ಆ ಮಂತ್ರಿ ಹುದ್ದೆಗೆ ಘನತೆ ಅಲ್ಲ. ನೀವು ನೇರವಾಗಿ ನನ್ನ ಬಳಿಗೆ ಅವರನ್ನು ಕಳುಹಿಸಿ ಎಂದು ತಾಕೀತು ಮಾಡಿದರು. ಈ ಮಾತು ಕೇಳಿ ಅರೆಕ್ಷಣ ನಾನು ಅವಾಕ್ಕಾಗಿದ್ದು ನಿಜ.&lt;/p&gt; &lt;p&gt;&lt;strong&gt;ಲಕ್ಷ ರು ವೈಯಕ್ತಿಕ ನೆರವು&lt;/strong&gt; ತಮ್ಮ ಅಧಿಕಾರಿ-ಸಿಬ್ಬಂದಿ ಯೋಗ ಕ್ಷೇಮ ವಿಚಾರದಲ್ಲಿ ಮೇಘರಿಕ್ ಮುತುವರ್ಜಿ ವಹಿಸುತ್ತಿದ್ದರು. ಎಸಿಬಿ ಮುಖ್ಯಸ್ಥರಾಗಿದ್ದಾಗ ಸಿಬ್ಬಂದಿಗೆ ಹೆಚ್ಚುವರಿ ತಿಂಗಳ ವೇತನ ನೀಡದ ಬಗ್ಗೆ ತಾವೇ ಖುದ್ದು ಫೈಲ್&zwnj; ತೆಗೆದುಕೊಂಡು ಹೋಗಿ ಸರ್ಕಾರದ ಮಂಜೂರಾತಿ ಪಡೆದು ಬಂದಿದ್ದರು. ಕೊರೋನಾ ಸೋಂಕು ಬಾಧಿತರಾಗಿ ಅವರ ಕಚೇರಿ ಸಹಾಯಕ ರಫೀಕ್ ಮೃತಪಟ್ಟ ಸಂಗತಿ ತಿಳಿದು ನೊಂದ ಅವರು, ಮರುದಿನ ಅವರ ಕುಟುಂಬದವರನ್ನು ಭೇಟಿಯಾಗಿ 1 ಲಕ್ಷ ರು ವೈಯಕ್ತಿಕ ನೆರವು ಕೊಟ್ಟು ಸಾಂತ್ವನ ಹೇಳಿದ್ದರು.&lt;/p&gt;]]></content:encoded>
            <category>magazine</category>
            <dc:creator>Kannadaprabha News</dc:creator>
            <atom:link href="https://kannada.asianetnews.com/magazine/complete-information-about-the-career-of-ips-officer-n-s-megharik-mrq-sua5d7"/>
        </item>
        <item>
            <title><![CDATA[ನೋವ ಮರೆಯಲು ರಾಗಾಲಾಪ,  ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂ.ರಾಜೀವ ತಾರಾನಾಥ]]></title>
            <link>https://kannada.asianetnews.com/life/article-about-panidt-rajeev-tharanath-vin-sefwez</link>
            <guid isPermaLink="true">https://kannada.asianetnews.com/life/article-about-panidt-rajeev-tharanath-vin-sefwez</guid>
            <pubDate>Wed, 12 Jun 2024 15:58:14 +0530</pubDate>
            <description><![CDATA[&lt;p&gt;&lsquo;ಸಂಗೀತವೇ ಉಸಿರು&rsquo; ಎಂದು ಬದುಕುತ್ತಿರುವ ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕರಾದ ಪಂ.ರಾಜೀವ ತಾರಾನಾಥರು ತಮ್ಮ ಮನೆಯಲ್ಲಿಯೇ ಬಿದ್ದು ತೊಡೆ ಮೂಳೆ ಮುರಿದುಕೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ತಿಂಗಳ ಮೇಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hzbsrwag3q6m69cb13kz7zme,imgname-ragalapa.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಗಣೇಶ ಅಮೀನಗಡ&lt;/strong&gt;&lt;/p&gt; &lt;p&gt;&lsquo;ಸಂಗೀತವೇ ಉಸಿರು&rsquo; ಎಂದು ಬದುಕುತ್ತಿರುವ ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕರಾದ ಪಂ.ರಾಜೀವ ತಾರಾನಾಥರು ತಮ್ಮ ಮನೆಯಲ್ಲಿಯೇ ಬಿದ್ದು ತೊಡೆ ಮೂಳೆ ಮುರಿದುಕೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ತಿಂಗಳ ಮೇಲಾಯಿತು.ಅವರನ್ನು ಯಾರೇ ಕಾಣಲು ಬಂದರೂ ಸಂಗೀತ, ಸಾಹಿತ್ಯ ಕುರಿತೇ ಚರ್ಚೆ ಸಾಮಾನ್ಯ. ಲೇಖಕರು ಬಂದರೆ &rsquo;ಯಾವ ಪುಸ್ತಕ ಓದಿದ್ರಿ? ಏನು ಬರದ್ರಿ?&rsquo; ಎಂದೇ ಮಾತಿಗಾರಂಭಿಸುತ್ತಾರೆ. ಅದರಲ್ಲೂ ಸಂಗೀತಗಾರರು ಬಂದರೆ &lsquo;ಹಾಡ್ರಿ&rsquo; ಎಂದು ಒತ್ತಾಯಿಸುತ್ತಾರೆ ಇಲ್ಲವೆ ತಾವೇ ಹಾಡುತ್ತಾರೆ. ಹಾಗೆ ಹಾಡಿದವರ ಹಾಡು ಮೆಚ್ಚುಗೆಯಾದರೆ ಶಹಾಭಾಷ್ ಎನ್ನುತ್ತಾರೆ ಇಲ್ಲದಿದ್ದರೆ &lsquo;ಇನ್ನಷ್ಟು ಸುಧಾರಿಸಬೇಕ್ರಿ&rsquo; ಎಂದು ಮುಲಾಜಿಲ್ಲದೇ ಹೇಳುತ್ತಾರೆ.&amp;nbsp;&lt;/p&gt; &lt;p&gt;ಈಚೆಗೆ ಮೈಸೂರಿಗೆ ಸಂಗೀತ ಕಛೇರಿ ನೀಡಲು ಬಂದಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕರಾದ ಧಾರವಾಡದ ಪಂ.ವೆಂಕಟೇಶಕುಮಾರ ಅವರು ರಾಜೀವ ತಾರಾನಾಥ ಅವರನ್ನು ಭೇಟಿಯಾದರು. &lsquo;ಆರಾಮ ಅದೀರಿ? ಆರಾಮ ಆಕ್ತೀರಿ&rsquo; ಎಂದು ಪಂ.ವೆಂಕಟೇಶಕುಮಾರ ಅವರು ಜವಾರಿ ಭಾಷೆಯಲ್ಲಿಯೇ ಮಾತುಕತೆ ಶುರು ಮಾಡಿದಾಗ ಪ್ರತಿಯಾಗಿ &lsquo;ಆರಾಮ ಆಕ್ತೀನ್ರಿ&rsquo; ಎಂದು ಜವಾರಿ ಭಾಷೆಯಲ್ಲಿಯೇ ಉತ್ತರ ನೀಡಿದರು.&amp;nbsp;&lt;/p&gt; &lt;p&gt;ಔತ್ತಮ್ಯದ ಗೀಳಿನಲ್ಲಿ&lt;/p&gt; &lt;p&gt;ನಂತರ ದರ್ಬಾರಿ ಕಾನಡ ರಾಗದ ಝಲಕನ್ನು ರಾಜೀವ ತಾರಾನಾಥರು ಹಾಡಿದಾಗ ತಲೆದೂಗಿದರು ಪಂ.ವೆಂಕಟೇಶಕುಮಾರ. ಬಳಿಕ ಮುಲ್ತಾನಿ ರಾಗವನ್ನು ಸ್ವಲ್ಪ ಹೊತ್ತು ರಾಜೀವ ತಾರಾನಾಥರು ಹಾಡಿದಾಗ ಎದ್ದು ನಿಂತ ವೆಂಕಟೇಶಕುಮಾರ ಅವರು &lsquo;ನೀವು ೧೦೧ ವರ್ಷ ಇರಬೇಕ್ರಿ. ನಮ್ಮಂಥವರ ಸಲುವಾಗಿ, ಸಂಗೀತದ ಸಲುವಾಗಿ&rsquo; ಎಂದು ಕೈ ಮುಗಿದರು.&lt;/p&gt; &lt;p&gt;ಮುಗಳ್ನಕ್ಕರು ರಾಜೀವ ತಾರಾನಾಥರು ಮುಲ್ತಾನಿ ರಾಗ ಹಾಡಲು ಕಾರಣವಿದೆ; ಪಂ.ವೆಂಕಟೇಶಕುಮಾರ ಅವರು ಗದಗದ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳ ಬಳಿ ಸಂಗೀತ ಕಲಿತವರು. ಪುಟ್ಟರಾಜ ಗವಾಯಿಗಳ ಗುರುಗಳಾದ ಪಂಚಾಕ್ಷರಿ ಗವಾಯಿಗಳ ಹತ್ತಿರ ಮುಲ್ತಾನಿ ಹಾಗೂ ಪೂರಿಯಾ ರಾಗಗಳನ್ನು ಕಲಿತ ಸದ್ಯ ಬದುಕಿದವರಲ್ಲಿ ರಾಜೀವ ತಾರಾನಾಥರು ಒಬ್ಬರೇ. ಇದಕ್ಕಾಗಿ ಅವರು ಮುಲ್ತಾನಿ ರಾಗವನ್ನು ಗುಣುಗುಣಿಸಿದರು.&lt;/p&gt; &lt;p&gt;ಅವರು ಹೋದ ಮೇಲೆ ಅಮೆರಿಕದಿಂದ ಬೆಲ್ಲಿ ಅವರ ಫೋನ್ ಕರೆ ಬಂದಾಗ, ತಾರಾನಾಥರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪಾಠ ಶುರು ಮಾಡಿದರು. ಇದಾದ ಸ್ವಲ್ಪ ಹೊತ್ತಿಗೆ ಅವರನ್ನು ಬೆಡ್ಡಿನಲ್ಲಿಯೇ ನರ್ಸ್&zwnj;ಗಳಿಬ್ಬರು ಎತ್ತಿ ಕೂರಿಸುವಾಗ ಆದ ನೋವನ್ನು ಕೂಡಾ ರಾಗವಾಗಿ ಹೊರಹಾಕಿದರು. ಹೀಗೆಯೇ ನೋವನ್ನು ತಡೆದುಕೊಳ್ಳಲು ಅವರು ರಾಗಗಳಿಗೆ ಮೊರೆಹೋಗುತ್ತಾರೆ.&lt;/p&gt; &lt;p&gt;ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ &lt;/p&gt; &lt;p&gt;ಒಂದಿನ ಸಂಜೆ ಯುವಕನೊಬ್ಬ ತಾರಾನಾಥರಿದ್ದ ಕೋಣೆಯೊಳಗೆ ಬಂದು ಕೈ ಮುಗಿದ. &lsquo;ಏನು ಹೆಸರು?&rsquo; &lsquo;ಸುಬ್ರಹ್ಮಣ್ಯ&rsquo;.&lsquo;ಏನು ಮಾಡ್ತೀರಿ?&rsquo;&lsquo;ಎಂಜಿನಿಯರ್&rsquo;. &lsquo;ಯಾವ ಎಂಜಿನಿಯರ್?&rsquo;ಸಾಫ್ಟ್&zwnj;ವೇರ್ ಎಂಜಿನಿಯರ್&rsquo;.&lsquo;ಮತ್ತೇನು ಮಾಡ್ತೀರಿ&rsquo;.&lsquo;ಕೊಳಲು ನುಡಸ್ತೀನಿ&rsquo;.&lsquo;ತಂದೀರಿ?&rsquo;&lsquo;ಇಲ್ಲ ಸರ್&rsquo;.&lsquo;ಮತ್ಯಾಕ ಬಂದೀರಿ?&rsquo;&lsquo;ನಿಮ್ಮನ್ನು ಭೇಟಿಯಾಗಲು&rsquo;.&lsquo;ಅಷ್ಟ ಸಾಲ್ದು. ಕೊಳಲು ತಂದಿದ್ರ ನುಡಸ್ರಿ&rsquo; ಒತ್ತಾಯಿಸಿದರು. ಸುಬ್ರಹ್ಮಣ್ಯ ಸುಮ್ಮನೆ ಕುಳಿತಾಗ ಮತ್ತೆ ಹೇಳಿದರು. ಮೆಲ್ಲನೆ ಬ್ಯಾಗಿನಿಂದ ಕೊಳಲು ತೆಗೆದ ಸುಬ್ರಹ್ಮಣ್ಯ ಅವರು ನುಡಿಸಿದಾಗ ತಾರಾನಾಥರು ತಲೆದೂಗಿದರು. ಬಳಿಕ ಯಮನ್ ರಾಗವನ್ನು ಹಾಡಿ ಅದರ ಹಾಗೆ ಕೊಳಲು ನುಡಿಸಲು ಹೇಳಿದರು.&amp;nbsp;&lt;/p&gt; &lt;p&gt;ಸುಬ್ರಹ್ಮಣ್ಯ ಅವರು ಕೊಳಲು ನುಡಿಸಿದಾಗ ಸಮಾಧಾನವಾಗಲಿಲ್ಲ ಅವರಿಗೆ. ಮತ್ತೆ ಯಮನ್ ರಾಗ ಹಾಡಿ, ನುಡಿಸಲು ಹೇಳಿದರು. ಆಗಲೂ ಅವರಿಗೆ ತೃಪ್ತಿಯಾಗಲಿಲ್ಲ. ಮತ್ತೆ ಹಾಡಿದರು. ಮತ್ತೆ ಕೊಳಲು ವಾದನ. ಹೀಗೆ ಸ್ವಲ್ಪ ಹೊತ್ತು ನಡೆಯಿತು. ಆಗ ಸಿಟ್ಟಿಗೆದ್ದ ತಾರಾನಾಥರು &lsquo;ಅಮೀನಗಡ, ಬಡಿಗಿ (ಕೋಲು) ತಗೊಂಡು ಬರ್ರಿ&rsquo; ಎಂದರು.&amp;nbsp;&lt;/p&gt; &lt;p&gt;ಆ ಯುವಕನಿಗೆ ಹೊಡೆಯಲು. &lsquo;ನೀವು ಆರಾಮ ಆಗ್ರಿ. ಸುಬ್ರಹ್ಮಣ್ಯ ಮತ್ತೆ ಬರ್&zwj;ತಾರ&rsquo; ಎಂದೆ. ಸುಮ್ಮನಾದ ಅವರು &lsquo;ಈಗ ಹೋಗ್ರಿ, ಮತ್ತ ಬರ್ರಿ&rsquo; ಎಂದು ಕಳಿಸಿಕೊಟ್ಟರು. ಇದಕ್ಕಿಂತ ಭಿನ್ನ; ಅವರ ಬಳಿ ಮೂವತ್ತು ವರ್ಷಗಳಿಂದ ಸರೋದ್ ಕಲಿಯುತ್ತಿರುವ ಅಹ್ಮದಾಬಾದಿನ ಸೋಹನ್ ನೀಲಕಂಠ ಅವರು ಈಚೆಗೆ ಬಂದು ವಾರಗಟ್ಟಲೆ ಇದ್ದರು. ವೃತ್ತಿಯಲ್ಲಿ ವಾಸ್ತುಶಿಲ್ಪಿಯಾದ, 72 ವರ್ಷ ವಯಸ್ಸಿನ ಸೋಹನ್ ಅವರು ಗುಜರಾತಿನ ಪ್ರಸಿದ್ಧವಾದ ಶ್ರೀಕಂಡವನ್ನು ತಮ್ಮ ಗುರುಗಳ ಮನೆಯಲ್ಲಿ ತಯಾರಿಸಿ ತಂದು ತಿನ್ನಿಸುತ್ತಿದ್ದರು. ಹಾಗೆ ತಿಂದಾಗ &lsquo;ಆಹಾ&rsquo; ಎಂದ ತಾರಾನಾಥರ ಸೇವೆಯನ್ನು ಮುಂದುವರಿಸುತ್ತಿದ್ದ ಅವರಿಗೆ ಸಂಗೀತ ಪಾಠವೂ ಮುಂದುವರೆಯುತ್ತಿತ್ತು. ಹೀಗೆಯೇ ಪುಣೆಯಿಂದ ಅನುಪಮ್ ಜೋಶಿ ಎರಡು ಬಾರಿ ಬಂದು ಹೋಗಿದ್ದಾರೆ.&amp;nbsp;&lt;/p&gt; &lt;p&gt;ಕಕ್ಕುಲಾತಿಯಿಂದ ತಮ್ಮ ಗುರುಗಳ ಸೇವೆ ಮಾಡುವ ಅನುಪಮ್ ಅವರಿಗೆ ಸಂಗೀತ ಪಾಠ ನಿತ್ಯವೂ ಸಿಗುತ್ತಿತ್ತು. ಅವರು ಮಲಗಿದಾಗ ಇತರರ ಸರೋದ್ ಕಛೇರಿಯನ್ನು, ಹಳೆಯ ಹಿಂದಿ ಸಿನಿಮಾ ಹಾಡುಗಳನ್ನು ಮೊಬೈಲ್ ಫೋನ್ ಮೂಲಕ ಕೇಳಿಸುತ್ತಿದ್ದರು. ಇವರ ಹಾಗೆ ಪಟ್ಟ ಶಿಷ್ಯರೆಂದರೆ ಮೈಸೂರಿನ ಸಚಿನ್ ಹಂಪಿಹೊಳಿ ಹಾಗೂ ಅವರ ಮಗಳೇ ಆಗಿರುವ ಪ್ರೊ.ಕೃಷ್ಣಾ ಮನವಲ್ಲಿ. ೧೩ ವರ್ಷಗಳಿಂದ ಸರೋದ್ ತಾಲೀಮಿನಲ್ಲಿ ತಬಲಾ ಸಾಥಿ ನೀಡುವ ಭೀಮಾಶಂಕರ ಬಿದನೂರ ಅವರು &rsquo;ಸರೋದ್&zwnj;ನಲ್ಲಿ ನುಡಿಸಿದ್ದ ಸ್ವರಗಳನ್ನು ತಬಲಾದಲ್ಲಿ ಹೇಗೆ ನುಡಿಸಬೇಕೆಂದು ಹೇಳಿಕೊಡುತ್ತಾರೆ ಅಂದರೆ ತಿಹಾಹಿಗಳನ್ನು ಹೇಳಿಕೊಡುತ್ತಾರೆ.&amp;nbsp;&lt;/p&gt; &lt;p&gt;ಕೃತಕ ಬರಹಗಾರ; ಕಂಪ್ಯೂಟರ್&zwnj; ಕೈ ಬರೆಯುತ್ತದೆ &lt;/p&gt; &lt;p&gt;ತಬಲಾದ ಸಾಥ್ ಸಂಗಾತ್ ಹೇಗಿರಬೇಕು ಎಂಬುದನ್ನು ಹೇಳಿಕೊಡುತ್ತಲೇ ಇರುತ್ತಾರೆ. ಅದು ಮನೆಯಾಗಿರಬಹುದು, ಆಸ್ಪತ್ರೆಯಾಗಿರಬಹುದು. ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುವುದೆಂದರೆ ಸಂಗೀತದ ಪಾಠವೂ ಆಗುತ್ತದೆ&rsquo; ಎನ್ನುವ ಖುಷಿ ಅವರಿಗೆಕಳೆದ ವಾರ ಪಂ.ವೀರಭದ್ರಯ್ಯ ಹಿರೇಮಠ ಅವರು ತಮ್ಮ ಮಗಳು ಸುನೀತಾ ಅವರೊಂದಿಗೆ ಆಸ್ಪತ್ರೆಯಲ್ಲಿ ರಾಜೀವ ತಾರಾನಾಥ ಅವರನ್ನು ಭೇಟಿಯಾದಾಗ ಬಿಹಾರ್ ರಾಗವನ್ನು ಹಾಡಿಸಿದರು ಮತ್ತು ತಾವೇ ಹಾಡಿ ತೋರಿಸಿದರು. &rsquo;ಕಾಲಿನ ನೋವು, ದಣಿವಾಗಿದ್ರೂ ಸಂಗೀತ ಹೇಳಿಕೊಟ್ರು. 92 ನೇ ವಯಸ್ಸಲ್ಲೂ ಅವರು ಸ್ವರ ಹಿಡಿಯುವ ರೀತಿ ಅದ್ಭುತ. ಎಲ್ಲ ರಾಗಗಳಿಗೂ ಅವುಗಳದ್ದೇ ಜಾಗವಿರುತ್ತದೆ. ಆ ಜಾಗ ಮುಟ್ಟಲು ಸಾಧಕರಿಗೆ ಮಾತ್ರ ಸಾಧ್ಯ. ಅವ್ರಿಗೆ ಸಾಧ್ಯವಾಗ್ತದ. ಬಿಹಾಗ್ ರಾಗವನ್ನು ಅರ್ಧ ಗಂಟೆಯವರೆಗೂ ಹಾಡಿದ್ರು. ಅವರೊಂದಿಗೆ ನಾವೂ ಹಾಡಿದೆವು.&amp;nbsp;&lt;/p&gt; &lt;p&gt;ತಪ್ಪಾದರೆ ತಿದ್ದುತ್ತಿದ್ದರು&rsquo; ಎಂದು ಸುನೀತಾ ಹಿರೇಮಠ ಸಂಭ್ರಮದಿಂದ ಹೇಳಿದರು. ಆಮೇಲೆ ತಾರಾನಾಥರು &lsquo;ಛಲೋ ರಿಯಾಜ್ ಮಾಡವ್ವ. ಛಲೋ ಭವಿಷ್ಯ ಐತಿ&rsquo; ಎಂದು ಹಾರೈಸಿದರು. ಕಳೆದ ವರ್ಷ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಅಮೆರಿಕದಿಂದ ಫೋರ್ಡ್ ಫೌಂಡೇಷನ್ ಫೆಲೋಶಿಪ್ ಪಡೆದು ಸಂಗೀತ ಕುರಿತು ಪಿಎಚ್.ಡಿ ಅಧ್ಯಯನ ಕೈಗೊಂಡಿದ್ದ ಸೋಫಿಯಾ ಅವರಿಗೆ ತಪ್ಪದೇ ಸಂಗೀತ ಕುರಿತು ಮಾತನಾಡಿದರು. &lsquo;ಸಂಗೀತದೊಳಗೆ ಮಾದಕಶಕ್ತಿಯಿದೆ.&lt;/p&gt; &lt;p&gt;ಆ ಮಾದಕಶಕ್ತಿಯನ್ನು ಉಳ್ಳವರು ಸಂಗೀತಗಾರರು. ಅವಸರದ ಬೆನ್ನೇರಿದರೆ ಅವಸಾನ ಅಂದರೆ ಪ್ರಚಾರದ ಹುಚ್ಚು ಹತ್ತಬಾರದು. ಸಂಗೀತ, ಸಾಹಿತ್ಯಕ್ಕೆ ನಿಧಾನವೇ ಪ್ರಧಾನ. ಆದರೆ ಬಹಳಷ್ಟು ಮಂದಿ ಅವಸರದಲ್ಲಿದ್ದಾರೆ. ನಮ್ಮ ನಡುವೆ ಒಂದು ಬೆಚ್ಚಗಿನ ಅನ್ಯೋನ್ಯತೆ ಇರಬೇಕು. ಅದು ಸಂಗೀತ, ಸಾಹಿತ್ಯವಾಗಿರಬಹುದು. ಅವು ನೆಮ್ಮದಿ ನೀಡುತ್ತವೆ, ನೀಡಬೇಕು. ಕೃತಕವಾಗಿರಬಾರದು. ನನ್ನ ಒಡನಾಟ ಇರುವುದು, ಅನ್ಯೋನ್ಯತೆ ಇರುವುದು ಸಂಗೀತದೊಂದಿಗೆ. ಈ ಆಸ್ಪತ್ರೆಯ ನನ್ನ ರೂಮಿನೊಳಗೆ ಸಂಗೀತಕ್ಕೆ ಸಂಬಂಧಿಸಿದವರು ಬಂದಾಗ ಸಂಗೀತ ಕುರಿತು ಚರ್ಚಿಸುವೆ ಇಲ್ಲದಿದ್ದಾಗ ನನ್ನಷ್ಟಕ್ಕೆ ನಾನೇ ಹಾಡಿಕೊಳ್ಳುವೆ. ಇದು ನಿರಂತರ...&rsquo; ಎನ್ನುವ ರಾಜೀವ ತಾರಾನಾಥ ಅವರೊಂದಿಗೆ ಮಾತೆಂದರೆ ಸಂಗೀತ ಮತ್ತು ಸಾಹಿತ್ಯದ ಜುಗಲ್&zwnj;ಬಂದಿಯ ಸಹವಾಸದಂತೆ.&lt;/p&gt;]]></content:encoded>
            <category>magazine</category>
            <dc:creator>Nirupama K S</dc:creator>
            <atom:link href="https://kannada.asianetnews.com/life/article-about-panidt-rajeev-tharanath-vin-sefwez"/>
        </item>
        <item>
            <title><![CDATA[ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?]]></title>
            <link>https://kannada.asianetnews.com/magazine/otravert-the-mysterious-new-personality-who-feels-lonely-in-a-group-mrq/articleshow-hshvkwe</link>
            <guid isPermaLink="true">https://kannada.asianetnews.com/magazine/otravert-the-mysterious-new-personality-who-feels-lonely-in-a-group-mrq/articleshow-hshvkwe</guid>
            <pubDate>Sun, 07 Dec 2025 11:03:55 +0530</pubDate>
            <description><![CDATA[&lt;p&gt;ಒಟ್ರಾವರ್ಟ್&zwnj; ಎಂಬ ಹೊಸ ವ್ಯಕ್ತಿತ್ವದ ಮಾದರಿಯನ್ನು ಈ ಲೇಖನ ಪರಿಚಯಿಸುತ್ತದೆ. ಪಾರ್ಟಿಗಳಲ್ಲಿ ಎಲ್ಲರೊಂದಿಗೆ ಬೆರೆತರೂ, ಒಳಗೊಳಗೆ ಒಂಟಿತನ ಅನುಭವಿಸುವ ಮತ್ತು ಗುಂಪುಗಳಿಂದ ದೂರವಿರಲು ಇಷ್ಟಪಡುವವರ ಗುಣಲಕ್ಷಣಗಳನ್ನು ಇದು ವಿವರಿಸುತ್ತದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbvmrbjcg2102ktb5yq31v7w,imgname-otrovert--1765085556300.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/p&gt;&lt;p&gt;ಅರವಿಂದ್&zwnj; ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹ್ಯಾಂಡ್&zwnj;ಸಮ್&zwnj; ಹುಡುಗ. ಪಾರ್ಟಿಗಳಲ್ಲಿ ಇವನಿದ್ದರೇ ಜೋಶ್&zwnj;. ಫ್ರೆಂಡ್ಸ್&zwnj; ಸರ್ಕಲ್&zwnj;ನಲ್ಲೆಲ್ಲ ಪಾರ್ಟಿ ಸ್ಟಾರ್ ಅಂತಲೇ ಫೇಮಸ್&zwnj;. ಸೋಷಲ್&zwnj; ಗ್ಯಾದರಿಂಗ್&zwnj;ನಲ್ಲಿ ತಮಾಷೆ ಮಾಡುತ್ತ, ಎಲ್ಲರನ್ನೂ ನಗಿಸುತ್ತ, ಸೈಲೆಂಟ್&zwnj; ಇರುವವರನ್ನೂ ಬಿಡದೇ ಡ್ಯಾನ್ಸ್&zwnj; ಮಾಡಿಸುತ್ತ ಇದ್ದರೆ ಎಲ್ಲ ಕಣ್ಣೂ ಇವನ ಮೇಲೆ. ಒಂಥರಾ ಸೆಂಟರ್&zwnj; ಆಫ್&zwnj; ಅಟ್ರಾಕ್ಷನ್&zwnj; ಅಂತಾರಲ್ಲ, ಹಾಗೆ.&lt;/p&gt;&lt;p&gt;ಹೀಗೆ ಫುಲ್&zwnj; ಜೋಶ್&zwnj;ನಲ್ಲಿ ಮಿಂಚುತ್ತಿರುವಾಗಲೇ ಎಲ್ಲರ ಗಮನವನ್ನು ಮತ್ತೆಲ್ಲಿಗೋ ದಾಟಿಸಿ, ಕ್ಷಣಮಾತ್ರದಲ್ಲಿ ಅಲ್ಲಿಂದ ಕಣ್ಮರೆಯಾಗಿ ಬಿಡುತ್ತಾನೆ. ಜೋರಾಗಿ ಉಸಿರೆಳೆದುಕೊಳ್ಳುತ್ತ ಹೊರಗೆ ಬರುತ್ತಾನೆ. ಯಾರಿಗೂ ಕಾಣದ ಜಾಗದಲ್ಲಿ ಒಬ್ಬನೇ ನಿಂತು ಬೀದಿ ದೀಪಗಳನ್ನೋ, ದೀಪದ ಸುತ್ತ ಹಾರುವ ಕೀಟಗಳನ್ನೋ ತದೇಕ ಚಿತ್ತದಿಂದ ನೋಡುತ್ತ ನಿಲ್ಲುತ್ತಾನೆ. ಉದ್ವಿಗ್ನಗೊಂಡ ಅವನ ಮನಸ್ಸು ನಿಧಾನಕ್ಕೆ ಶಾಂತವಾಗುತ್ತ ಹೋಗುತ್ತದೆ.&lt;/p&gt;&lt;p&gt;ತಾನು ಯಾಕೆ ಹೀಗೆ ಅನ್ನುವುದು ಅವನಿಗೇ ಇನ್ನೂ ಅರ್ಥವಾಗಿಲ್ಲ. ಪಾರ್ಟಿಯಲ್ಲಿ ಎಲ್ಲರ ಜೊತೆಗೆ ಅಷ್ಟು ಸಲೀಸಾಗಿ ಬೆರೆತರೂ, ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದರೂ ಅವನ ಮನಸ್ಸು ಒಳಗಿಂದೊಳಗೇ ತಾನು ಇಲ್ಲಿಗೆ ಸೇರಿದವನಲ್ಲ ಅಂತ ಹೇಳುತ್ತಿರುತ್ತದೆ. ಅಲ್ಲಿಂದ ಒಮ್ಮೆ ಪಾರಾದರೆ ಸಾಕು ಎಂದು ಚಡಪಡಿಸುತ್ತದೆ. ಆದರೆ ಅದ್ಯಾವುದನ್ನೂ ಹೊರ ಜಗತ್ತಿಗೆ ತೋರ್ಪಡಿಸಿಕೊಳ್ಳದೇ ತನ್ನ ಸ್ವಭಾವಕ್ಕೆ ತದ್ವಿರುದ್ಧವಾಗಿರುವ ಕಲೆಯೂ ಅವನಿಗೆ ಗೊತ್ತು. ತನ್ನ ಅಂತರಂಗವನ್ನು ಹೊರ ಜಗತ್ತಿನಿಂದ ಮುಚ್ಚಿಟ್ಟು ಬೇರೆ ಥರ ಅಂತ ತೋರಿಸಿಕೊಳ್ಳುತ್ತ ಹೋಗುತ್ತಾನೆ.&lt;/p&gt;&lt;p&gt;ಇದು ಈ ಕಾಲದಲ್ಲಿ ಪತ್ತೆಹಚ್ಚಲಾದ ವ್ಯಕ್ತಿತ್ವದ ಮಾದರಿ. ಇಟ್ಟಿರುವ ಹೆಸರು &lsquo;ಒಟ್ರಾವರ್ಟ್&zwnj;&rsquo;. ಡಾ ರಾಮಿ ಕಾಮಿಸ್ಕಿ ಎಂಬ ವಿಶ್ವಪ್ರಸಿದ್ಧ ಸೈಕಿಯಾಟ್ರಿಸ್ಟ್&zwnj; ಈ ಮಾದರಿಯನ್ನು ಪತ್ತೆ ಹಚ್ಚಿ ಅದಕ್ಕೆ &lsquo;ಒಟ್ರಾವರ್ಟ್&zwnj;&rsquo; ಅನ್ನೋ ವಿಚಿತ್ರ ಹೆಸರನ್ನೂ ಇಟ್ಟಿದ್ದಾರೆ. ಈ ಮನೋರೋಗತಜ್ಞನ ಜನಪ್ರಿಯ ಪುಸ್ತಕ &lsquo;ದಿ ಗಿಫ್ಟ್&zwnj; ಆಫ್&zwnj; ನಾಟ್&zwnj; ಬಿಲಾಂಗಿಂಗ್&zwnj;&rsquo; ಅನ್ನೋದು. ಅದರಲ್ಲಿ ಈ &lsquo;ಒಟ್ರಾವರ್ಟ್&zwnj;&rsquo;ಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ನೋಡೋಣ.&lt;/p&gt;&lt;h2&gt;&lt;strong&gt;ನೀನು ಒಟ್ರಾವರ್ಟಾ? ಒಮ್ಮೆ ಚೆಕ್&zwnj; ಮಾಡು&lt;/strong&gt;&lt;/h2&gt;&lt;p&gt;ವೀಕೆಂಡ್&zwnj;ನಲ್ಲಿ ಕ್ಲಾಸ್&zwnj;ನ ಒಂದಿಷ್ಟು ಜನ ಯಾರದೋ ಮನೆಯಲ್ಲಿ ಸ್ಲೀಪ್&zwnj; ಓವರ್&zwnj;ಗೆ ಹೋಗ್ತಿದ್ದಾರೆ. ನಿನಗೂ ಬರುವಂತೆ ಆಹ್ವಾನ ಬಂದಿದೆ. ಮನೆಯಲ್ಲಿ ಅಮ್ಮ ಹೋಗು, ಫ್ರೆಂಡ್ಸ್&zwnj; ಜೊತೆಗೆ ಎನ್&zwnj;ಜಾಯ್&zwnj; ಮಾಡು ಅಂತಿದ್ದಾಳೆ. ಅಪ್ಪನೂ ಅಮ್ಮನ ಮಾತನ್ನು ಅನುಮೋದಿಸುತ್ತಾನೆ. ನೀನು ಈಗ ಕಂಗಾಲಾಗಿದ್ದೀಯ. ಅರೆ, ಅಪ್ಪ, ಅಮ್ಮ ಸ್ಲೀಪ್&zwnj; ಓವರ್&zwnj;ಗೆ ಹೋಗೋದು ಬೇಡ ಅಂತಾರೆ ಅಂದುಕೊಂಡರೆ ಅವರೂ ಹೋಗು, ಎನ್&zwnj;ಜಾಯ್&zwnj; ಮಾಡು ಅಂತಿದ್ದಾರಲ್ಲ. ಈಗ ನಾನೇನು ಮಾಡಲಿ ಅಂತ ನಿನ್ನ ಒಳಗೇ ಪೇಚಾಟ ಶುರುವಾಗಿದೆ.&lt;/p&gt;&lt;p&gt;ಬುದ್ಧಿ ಬಂದಾಗಿನಿಂದಲೂ ನಿನಗೆ ಪಾರ್ಟಿಗಳು, ಸೋಷಲ್&zwnj; ಲೈಫ್&zwnj; ಅಂದರೆ ಅಷ್ಟಕ್ಕಷ್ಟೇ. ಹಾಗಂತ ನೀನು ಅಂತರ್ಮುಖಿ ಅಲ್ಲ. ಒಬ್ಬರೋ ಇಬ್ಬರೋ ಕ್ಲೋಸ್&zwnj; ಫ್ರೆಂಡ್ಸ್&zwnj; ಜೊತೆ ಸುತ್ತಾಟ, ಓಡಾಟ ನಿನಗಿಷ್ಟ. ಅದೇ ಫ್ರೆಂಡ್ಸ್&zwnj; ಟೀಮ್&zwnj; ಜೊತೆ ಸೇರ್ಕೊಂಡು, ಬಾ ಅಂತ ಕರೆದರೆ ನೀನು ಅಲ್ಲಿಂದ ಎಸ್ಕೇಪ್&zwnj; ಆಗಿ ಬಿಡುತ್ತೀಯ.&lt;/p&gt;&lt;p&gt;ನಿಂಗೆ ಫ್ರೆಂಡ್&zwnj; ಜೊತೆಗೆ ಬ್ಯಾಡ್ಮಿಂಟನ್&zwnj; ಆಡೋದು ಇಷ್ಟ. ಆದರೆ ಟೀಮ್&zwnj; ಜೊತೆ ಸೇರ್ಕೊಂಡು ಕ್ರಿಕೆಟ್&zwnj; ಅಂದರೆ ನೀನು ಹಿಂದೇಟು ಹಾಕ್ತೀಯ. ಫ್ರೆಂಡ್&zwnj; ಮನೆಗೆ ಹೋಗಿ ಅವಳ ಜೊತೆಗೆ ಓದ್ಕೊಳ್ಳೋದು ಇಷ್ಟ ಆಗುತ್ತೆ. ಅದೇ ರೀಡರ್ಸ್&zwnj; ಕ್ಲಬ್&zwnj; ಅಂತ ಒಂದಿಷ್ಟು ಜನ ಸೇರಿ ಪುಸ್ತಕದ ಬಗ್ಗೆ ಚರ್ಚೆ ಮಾಡ್ತಿದ್ರೆ ಅಲ್ಲಿ ನೀನಿರಲ್ಲ.&lt;/p&gt;&lt;p&gt;ಒಟ್ಟಾರೆ ಹೇಳೋದಾದರೆ ನಿನಗೆ ಟೀಮ್&zwnj; ವರ್ಕ್&zwnj; ಅಂದರೆ ಅಲರ್ಜಿ. ನೀನಲ್ಲಿ ಸಲೀಸಾಗಿ &lsquo;ಫಿಟ್&zwnj;&rsquo; ಆಗಲಾರೆ. ಅದೇ ನಿನಗೇ ಒಂದು ಕೆಲಸ ಕೊಟ್ಟರೆ ಬಹಳ ಚೆನ್ನಾಗಿ ಮಾಡಬಲ್ಲೆ.&lt;/p&gt;&lt;p&gt;ಕೆಲವೊಮ್ಮೆ ಸಾಮಾಜಿಕ ಸಂದರ್ಭಗಳು ಇನ್ನೊಂದು ಬಗೆಯಲ್ಲಿ ಬರುತ್ತವೆ. ನೀನು ಗ್ರೂಪ್&zwnj;ಗಳಲ್ಲಿ ಸೇರಲೇ ಬೇಕಾಗುತ್ತದೆ. ಪಾರ್ಟಿಯಲ್ಲಿ ಪಾಲ್ಗೊಳ್ಳದಿದ್ದರೆ ನಿನ್ನ ಪ್ರೊಫೆಶನಲ್&zwnj; ಬೆಳವಣಿಗೆಗೆ ಸಮಸ್ಯೆ ಆಗುತ್ತೆ. ಅಂಥಾ ಸಮಯದಲ್ಲಿ ನೀನು ಅಲ್ಲಿಗೆ ಹೋಗುತ್ತೀಯ, ಬಹಳ ಸೋಷಲ್&zwnj; ಆಗಿ ಎಲ್ಲರ ಜೊತೆಗೆ ಬೆರೆಯುತ್ತೀಯ. ಕೆಲವೊಮ್ಮೆ ಯಾವ ಲೆವೆಲ್&zwnj;ವರೆಗೂ ಹೋಗ್ತೀಯ ಅಂದರೆ ನಿನ್ನ ಈ ರೀತಿಯನ್ನು ನೋಡಿದವರು ನೀನು ಖಂಡಿತಾ ಎಕ್ಸ್ಟ್ರಾವರ್ಕ್&zwnj; ಅಂದುಕೊಳ್ಳುತ್ತಾರೆ. ಆದರೆ ನಿನ್ನೊಳಗೆ ನೀನು ಉಸಿರುಕಟ್ಟಿದವಳ ಹಾಗೆ ಚಡಪಡಿಸುತ್ತಿರುತ್ತೀಯ. ನಾನು ಇಲ್ಲಿಗೆ ಸೇರಿದವಳಲ್ಲ ಅನ್ನುವ ಭಾವನೆ ನಿನ್ನನ್ನು ಒಳಗೊಳಗೇ ಅಲ್ಲಾಡಿಸುತ್ತಿರುತ್ತದೆ.&lt;/p&gt;&lt;h3&gt;&lt;strong&gt;.. ಇವೆಲ್ಲ ಗುಣಗಳು ನಿನ್ನಲ್ಲಿವೆಯಾ, ಹಾಗಿದ್ದಲ್ಲಿ, ನೀನು ಒಟ್ರೋವರ್ಟ್ ಆಗಿರಬಹುದು.&lt;/strong&gt;&lt;/h3&gt;&lt;p&gt;ಒಟ್ರೋವರ್ಟ್&zwnj;ಗಳ ಒಂದು ಸ್ವಭಾವ ಅಂದರೆ ಅವರು ಬಾಲ್ಯದಿಂದಲೇ ಗುಂಪಿನ ಜೊತೆ ಸೇರುವವರಲ್ಲ. ಹಾಗೆಂದು ಅಂತರ್ಮುಖಿಗಳೂ ಅಲ್ಲ. ಇಂಟ್ರಾವರ್ಟ್&zwnj;ಗಳ ಸಂಕೋಚ, ನಾಚಿಕೆಯ ಪ್ರವೃತ್ತಿ ಇವರದಲ್ಲ. ಈ ಎರಡರ ಮಧ್ಯದ ಆ್ಯಂಬಿವರ್ಟ್&zwnj;ಗಳಂತೂ ಅಲ್ಲವೇ ಅಲ್ಲ. ಕ್ಲೋಸ್&zwnj; ಫ್ರೆಂಡ್ಸ್&zwnj; ಜೊತೆಗೆ ಮಾಲ್&zwnj;, ಶಾಪಿಂಗ್&zwnj;, ಔಟಿಂಗ್&zwnj; ಅಂತ ಬಿಂದಾಸ್&zwnj; ಆಗಿ ಓಡಾಡಬಲ್ಲರು. ಅದೇ ಸ್ಕೂಲ್&zwnj; ಟ್ರಿಪ್&zwnj;ಗೋ ದೊಡ್ಡ ಗುಂಪುಗಳಲ್ಲೋ ಇದ್ದಾಗ ಇವರಿಗೆ ಒಂಟಿತನ ಕಾಡುತ್ತದೆ.&lt;/p&gt;&lt;p&gt;ಇಂಥಾದ್ದೊಂದು ವ್ಯಕ್ತಿತ್ವದ ಬಗ್ಗೆ ನಮಗೆ ಅರಿವೇ ಇಲ್ಲದ ಕಾರಣ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಒಟ್ರಾವರ್ಟ್&zwnj;ಗಳನ್ನು ಒಂದು ರೀತಿ &lsquo;ಹೊರಗಿಡಲ್ಪಟ್ಟ&rsquo; ಮಾದರಿಯಾಗಿ ಮಾಡಿಬಿಟ್ಟಿದ್ದೇವೆ. ಈ ಕಾರಣಕ್ಕೇ ಅವರು ಕೆಲವೊಮ್ಮೆ ಕಷ್ಟಪಟ್ಟು ತಮ್ಮದಲ್ಲದ ಪಾತ್ರವನ್ನು ನಿಭಾಯಿಸುತ್ತಿರುತ್ತಾರೆ. ಅದು ಅವರಲ್ಲಿ ಒತ್ತಡ, ಅಸಹಾಯಕತೆ ಕೆಲವೊಮ್ಮೆ ಖಿನ್ನತೆಯಂಥಾ ಸಮಸ್ಯೆಗೂ ಕಾರಣವಾಗುತ್ತದೆ.&lt;/p&gt;&lt;p&gt;ಅವಿಭಕ್ತ ಕುಟುಂಬಗಳಲ್ಲಿ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಈ ಸ್ವಭಾವದವರು ಕಡೆಗಣನೆಗೆ ಕೆಲವೊಮ್ಮೆ ಅವಮಾನಕ್ಕೆ ಒಳಗಾಗುವುದೂ ಇದೆ.&lt;/p&gt;&lt;h3&gt;&lt;strong&gt;ಒಟ್ರಾವರ್ಟ್&zwnj; ಅನ್ನೋದರ ಅರ್ಥ ಏನು?&lt;/strong&gt;&lt;/h3&gt;&lt;h3&gt;&lsquo;ಒಟ್ರೋ&rsquo; ಅಂದರೆ ಬೇರೊಬ್ಬರು ಅಂತ ಅರ್ಥ. ವರ್ಟ್&zwnj; ಅಂದರೆ ತಿರುಗುವಿಕೆ . ಒಟ್ಟಾಗಿ &lsquo;ಒಟ್ರಾವರ್ಟ್&zwnj;&rsquo; ಅಂದರೆ ಗುಂಪಿನಿಂದ ಹೊರಗುಳಿಯಲ್ಪಟ್ಟವರು, ಬೇರ್ಪಟ್ಟವರು ಎಂದಾಗುತ್ತದೆ.&lt;/h3&gt;&lt;h3&gt;&lt;strong&gt;ಇದೊಂದು ಸಮಸ್ಯೆಯಾ?&lt;/strong&gt;&lt;/h3&gt;&lt;h3&gt;ಇದು ಸಮಸ್ಯೆ ಅಲ್ಲ. ಇದೊಂದು ವ್ಯಕ್ತಿತ್ವದ ಮಾದರಿ. ಈ ಮಾದರಿಯನ್ನು ಪತ್ತೆ ಹಚ್ಚಿದ ಅಮೆರಿಕಾ ಮೂಲದ ಸೈಕಿಯಾಟ್ರಿಸ್ಟ್&zwnj; ಡಾ ರಾಮಿ ಕಾಮಿಸ್ಕಿ ಅವರೇ ಈ ವ್ಯಕ್ತಿತ್ವ ಹೊಂದಿದವರಾಗಿದ್ದರು. ಬಾಲ್ಯದಲ್ಲಿನ ಒಂದು ಘಟನೆಯನ್ನು ಇವರು ಇತ್ತೀಚೆಗೆ ಹೇಳಿಕೊಂಡಿದ್ದಾರೆ. &lsquo;ಚಿಕ್ಕವನಿದ್ದಾಗ ನಾನು ಸ್ಕೂಲಲ್ಲಿ ಸ್ಕೌಟ್ಸ್&zwnj;ಗೆ ಸೇರಿಕೊಂಡಿದ್ದೆ. ನನಗೆ ಸ್ಕೌಟ್ಸ್&zwnj; ಯೂನಿಫಾರ್ಮ್&zwnj; ತೊಡಿಸಿ ಬೇರೆ ಮಕ್ಕಳ ಜೊತೆಗೆ ವೃತ್ತಾಕಾರದಲ್ಲಿ ಕೂರಿಸಿದ್ದರು. ಅಲ್ಲಿ ಒಂದಿಷ್ಟು ಚಟುವಟಿಕೆಗಳಿದ್ದವು. ಘೋಷಣೆ ಕೂಗಿಸುತ್ತಿದ್ದರು. ಮಕ್ಕಳೆಲ್ಲ ಉತ್ಸಾಹದಿಂದ ಜೋರು ಜೋರಾಗಿ ಘೋಷಣೆ ಕೂಗುತ್ತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ನನಗೆ ಮಾತ್ರ ಅಲ್ಲಿಂದ ಓಡಿಹೋಗಾಣ ಅಂತ ಅನಿಸುತ್ತಿತ್ತು. ನಾನು ಇವರಂಥಲ್ಲ. ಬೇರೆ ಥರ ಅನ್ನೋದೂ ಆಗ ಗೊತ್ತಾಯಿತು&rsquo; ಎಂದು ಡಾ ರಾಮಿ ವಿವರಿಸುತ್ತಾರೆ.&lt;/h3&gt;&lt;h3&gt;&lt;strong&gt;ಬ್ಲೂಟೂಥ್&zwnj; ಫೆನಾಮೆನನ್&zwnj;&lt;/strong&gt;&lt;/h3&gt;&lt;p&gt;ಒಟ್ರಾವರ್ಟ್&zwnj; ವ್ಯಕ್ತಿತ್ವವನ್ನು ಬ್ಲೂಟೂಥ್&zwnj; ಫೆನಾಮೆನನ್&zwnj; ಅಂತಾರೆ. ಯಾಕೆಂದರೆ ಈ ಒಟ್ರಾವರ್ಟ್&zwnj;ಗಳು ಕ್ಲೋಸ್&zwnj; ಇರುವ ವ್ಯಕ್ತಿತ್ವಗಳ ಜೊತೆ ಮಾತ್ರ ಸೇರಬಲ್ಲರು. ಕೆಲವೇ ಕೆಲವರಷ್ಟೇ ಇವರ ಆತ್ಮೀಯ ಬಳಗದಲ್ಲಿರುತ್ತಾರೆ.&lt;/p&gt;&lt;p&gt;&lt;strong&gt;ಒಟ್ರಾವರ್ಟ್&zwnj;ಗಳ ವಿಶೇಷತೆ ಏನು?&lt;/strong&gt;&lt;/p&gt;&lt;p&gt;ಇವರಲ್ಲಿ ಸ್ವಂತಿಕೆ ಹೆಚ್ಚು. ಇವರು ಒಂದು ಗುಂಪಿನ ಅಭಿಪ್ರಾಯಕ್ಕೆ ಬದ್ಧವಾಗಿ ಗೋಣು ಅಲ್ಲಾಡಿಸೋದಿಲ್ಲ. ಬದಲಿಗೆ ತಮ್ಮ ಸ್ವತಂತ್ರ್ಯ ವ್ಯಕ್ತಿತ್ವ ಹೊಂದಿರುತ್ತಾರೆ. ಭಾವನಾತ್ಮಕವಾಗಿಯೂ ಇವರಿಗೆ ಇತರರೊಂದಿಗೆ ಅವಲಂಬನೆ ಕಡಿಮೆ. ಸರಿಯಾದ ಕ್ರಮದಲ್ಲಿ ಈ ವ್ಯಕ್ತಿತ್ವದವರನ್ನು ಬೆಳೆಸಿದರೆ ಇವರು ದೊಡ್ಡ ಅನ್ವೇಷಕರಾಗಿ ಬೆಳೆಯಬಲ್ಲರು.&lt;/p&gt;]]></content:encoded>
            <category>magazine</category>
            <dc:creator>Kannadaprabha News</dc:creator>
            <atom:link href="https://kannada.asianetnews.com/magazine/otravert-the-mysterious-new-personality-who-feels-lonely-in-a-group-mrq/articleshow-hshvkwe"/>
        </item>
        <item>
            <title><![CDATA[ಯಶಸ್ವಿ ಜನರು ಪಾಲಿಸುವ ದಿನಚರಿ: 2026ರಲ್ಲಿ ನೀವು ಕೂಡ ಅನುಸರಿಸಬಹುದಾದ 10  ದಾರಿಗಳು]]></title>
            <link>https://kannada.asianetnews.com/magazine/2026-new-daily-routine-habits-success-life-kannada-gvd/articleshow-invhdd3</link>
            <guid isPermaLink="true">https://kannada.asianetnews.com/magazine/2026-new-daily-routine-habits-success-life-kannada-gvd/articleshow-invhdd3</guid>
            <pubDate>Sun, 28 Dec 2025 10:30:15 +0530</pubDate>
            <description><![CDATA[&lt;p&gt;ಯಶಸ್ವಿ ವ್ಯಕ್ತಿಗಳು ಯಾರಿರುತ್ತಾರೋ ಅವರು ಕನಿಷ್ಠ ಆರು ತಿಂಗಳಿಗೊಮ್ಮೆ ಹೊಸ ಅಭ್ಯಾಸ ಶುರು ಮಾಡುತ್ತಾರೆ. ಹೊಸ ದಿನಚರಿ ಆರಂಭಿಸುತ್ತಾರೆ. ಅದು ಅವರನ್ನು ಅವರು ಹೊಸತಾಗಿಸುವ ಕ್ರಮ. ಹೊಸ ದಾರಿಗೆ ಹೊರಳುವ ಅಭ್ಯಾಸ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdhn7hj7r75n9a3sqwwchkd6,imgname-scsc-1766897993287.png" type="image/jpeg" height="390" width="690"/>
            <content:encoded><![CDATA[&lt;p&gt;ಯಶಸ್ವಿ ವ್ಯಕ್ತಿಗಳು ಯಾರಿರುತ್ತಾರೋ ಅವರು ಕನಿಷ್ಠ ಆರು ತಿಂಗಳಿಗೊಮ್ಮೆ ಹೊಸ ಅಭ್ಯಾಸ ಶುರು ಮಾಡುತ್ತಾರೆ. ಹೊಸ ದಿನಚರಿ ಆರಂಭಿಸುತ್ತಾರೆ. ಅದು ಅವರನ್ನು ಅವರು ಹೊಸತಾಗಿಸುವ ಕ್ರಮ. ಹೊಸ ದಾರಿಗೆ ಹೊರಳುವ ಅಭ್ಯಾಸ. ಹೀಗೆ ಹೊಸ ವರ್ಷದಲ್ಲಿ ಹೊಸ ದಿನಚರಿ ಆರಂಭಿಸುವ ಪದ್ಧತಿ ಬಹಳ ಮಂದಿಗಿದೆ. ಅವರಿಗೆಂದೇ ಕೆಲವು ಐಡಿಯಾಗಳು ಇಲ್ಲಿವೆ. 2026ರಲ್ಲಿ ನಿಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳಲು ಕೆಲವು ಐಡಿಯಾಗಳು:&lt;/p&gt;&lt;p&gt;&lt;strong&gt;1. ಸಮಯವನ್ನು ಆಡಿಟ್ ಮಾಡಿ: &lt;/strong&gt;ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೊದಲು ಎಲ್ಲಿ ನೀವು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ ಎಂಬುದನ್ನು ತಿಳಿಯುವುದು ಮುಖ್ಯ. ಅದಕ್ಕಾಗಿ ಒಂದು ವಾರಗಳ ಕಾಲ ಪ್ರತೀ ಗಂಟೆಯ ನಿಮ್ಮ ಚಟುವಟಿಕೆಯನ್ನು ಗಮನಿಸಿ. ಅದರಲ್ಲಿ ಯಾವುದು ಅನಗತ್ಯ ಚಟುವಟಿಕೆ ಎಂಬುದನ್ನು ಪಟ್ಟಿ ಮಾಡಿ. ಉದಾಹರಣೆಗೆ ಸೋಷಿಯಲ್ ಮೀಡಿಯಾ ಅಥವಾ ಅನಗತ್ಯ ಆಲೋಚನೆಗಳಲ್ಲಿ ಎಷ್ಟು ಸಮಯ ವ್ಯಯವಾಗುತ್ತಿದೆ ಎಂದು ತಿಳಿಯಿರಿ. ಯಾವ ಕೆಲಸಗಳು ನಿಮ್ಮನ್ನು ಮಾನಸಿಕವಾಗಿ ದಣಿಸುತ್ತಿವೆ ಎಂಬುದನ್ನು ಪಟ್ಟಿ ಮಾಡಿ. ಅದನ್ನು ಕ್ರಮೇಣ ತಿದ್ದಿಕೊಳ್ಳಿ&lt;/p&gt;&lt;p&gt;&lt;strong&gt;2. ಹ್ಯಾಬಿಟ್ ಸ್ಟ್ಯಾಕಿಂಗ್: &lt;/strong&gt;ಯಾವುದೇ ಹೊಸ ಅಭ್ಯಾಸವನ್ನು ಈಗಾಗಲೇ ಇರುವ ಹಳೆಯ ಅಭ್ಯಾಸದ ಜೊತೆಗೆ ಸೇರಿಸುವುದಕ್ಕೆ &lsquo;ಹ್ಯಾಬಿಟ್ ಸ್ಟ್ಯಾಕಿಂಗ್&rsquo; ಎನ್ನುತ್ತಾರೆ. ಈ ಕ್ರಮ ಹೊಸ ಕೆಲಸವನ್ನು ನೆನಪಿಟ್ಟುಕೊಳ್ಳಲು ಮೆದುಳಿಗೆ ಸುಲಭ ಮಾಡಿಕೊಡುತ್ತದೆ. ಈ ಪದ್ಧತಿ ಹೇಗೆಂದರೆ ಈಗ ಒಂದು ಟೈಮಲ್ಲಿ ಒಂದು ಕೆಲಸ ಮಾಡುತ್ತಿದ್ದೀರಿ, ಅದು ಮುಗಿದ ನಂತರ, ಹೊಸ ಕೆಲಸ ಆರಂಭಿಸಿ. ಉದಾಹರಣೆಗೆ ಬೆಳಿಗ್ಗೆ ಕಾಫಿ ಕುಡಿದ ತಕ್ಷಣ, ನಾನು 5 ನಿಮಿಷಗಳ ಕಾಲ ಆ ದಿನ ಮಾಡಬೇಕಾದ ಕೆಲಸಗಳ ಪಟ್ಟಿ ಸಿದ್ಧಪಡಿಸುತ್ತೇನೆ ಎಂದುಕೊಳ್ಳಿ. ಕ್ರಮೇಣ ಕಾಫಿ ಕುಡಿದ ತಕ್ಷಣ ದಿನಚರಿ ಪಟ್ಟಿ ಮಾಡುವುದು ಅಭ್ಯಾಸವಾಗುತ್ತದೆ.&lt;/p&gt;&lt;p&gt;&lt;strong&gt;3. ಡಿಜಿಟಲ್ ದಿನಚರಿ ಬದಲಾವಣೆ: &lt;/strong&gt;ಈ ಕಾಲದಲ್ಲಿ ನಮ್ಮ ಅತೀ ದೊಡ್ಡ ಶತ್ರು ಎಂದರೆ ಸ್ಕ್ರೀನ್ ಅಡಿಕ್ಷನ್. ಕ್ಷಣಕ್ಕೊಮ್ಮೆ ಮೊಬೈಲ್ ನೋಡುವುದು ಅಭ್ಯಾಸವಾಗಿಬಿಟ್ಟಿದೆ. ಇದನ್ನು ನಿಯಂತ್ರಿಸಲು ಈ ಎರಡು ಕ್ರಮಗಳನ್ನು ಅನುಸರಿಸಿ.&lt;/p&gt;&lt;p&gt;&lt;strong&gt;ಡಿಜಿಟಲ್ ಸೂರ್ಯೋದಯ: &lt;/strong&gt;ಎದ್ದ ತಕ್ಷಣ ಮೊದಲ 30 ನಿಮಿಷಗಳ ಕಾಲ ಫೋನ್ ನೋಡಬೇಡಿ. ಬದಲಿಗೆ ಸೂರ್ಯನ ಬೆಳಕಿನಲ್ಲಿ ತುಸು ಹೊತ್ತು ಕಳೆಯಿರಿ.&lt;/p&gt;&lt;p&gt;&lt;strong&gt;ಡಿಜಿಟಲ್ ಸೂರ್ಯಾಸ್ತ: &lt;/strong&gt;ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಪಕ್ಕಕ್ಕಿಡಿ. ಬಳಸಲೇಬೇಡಿ. ಗಾಢ ನಿದ್ರೆಗೆ ನೆರವಾಗುತ್ತದೆ.&lt;/p&gt;&lt;p&gt;&lt;strong&gt;4. ಗುರಿ ಜೊತೆಗೆ ಕಾರ್ಯಪ್ರವೃತ್ತರಾಗಿ: &lt;/strong&gt;ಸಾಮಾನ್ಯವಾಗಿ ಹೊಸ ವರ್ಷದಲ್ಲಿ ಬಹಳಷ್ಟು ಮಂದಿ ಹೊಸ ಗುರಿ ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ನಾನು ತೂಕ ಇಳಿಸಿಕೊಳ್ಳಬೇಕು ಎನ್ನುವುದು ಗುರಿ. ಗುರಿ ಇಟ್ಟುಕೊಳ್ಳಿ. ಅದರ ಜೊತೆಗೆ ನಾನು ಪ್ರತಿದಿನ ಬೆಳಿಗ್ಗೆಯೋ ಸಂಜೆಯೋ ಕನಿಷ್ಠ 20 ನಿಮಿಷಗಳ ಕಾಲ ನಡೆಯುತ್ತೇನೆ ಎಂಬ ಅಭ್ಯಾಸ ರೂಢಿಸಿಕೊಳ್ಳಿ. ಗುರಿ ಇಟ್ಟುಕೊಳ್ಳುವುದರಿಂದ ನೀವು ಒತ್ತಡಕ್ಕೆ ಒಳಗಾಗಬಹುದು. ಆದರೆ ಆಯಾ ದಿನ ಏನು ಮಾಡಬೇಕು ಎಂದುಕೊಳ್ಳುವುದರಿಂದ ಶಿಸ್ತುಬದ್ಧತೆ ಬರುತ್ತದೆ.&lt;/p&gt;&lt;p&gt;&lt;strong&gt;5. ಡೀಪ್ ವರ್ಕ್&zwnj;:&lt;/strong&gt; ಗಮನ ಕೇಂದ್ರೀಕರಿಸುವುದು ಈ ಕಾಲದ ಬಹುದೊಡ್ಡ ಸವಾಲು. ಮನಸ್ಸು ಚಂಚಲಗೊಳಿಸಲು ಬೇಕಾದಷ್ಟು ವಿಷಯಗಳಿವೆ. ಹಾಗಾಗಿ ನೀವು ಮಾಡಬೇಕಾದ ಅತ್ಯಂತ ಕಠಿಣ ಕೆಲಸಗಳಿಗೆ ನಿರ್ದಿಷ್ಟ ಸಮಯವನ್ನು ಮೀಸಲಿಡುವುದು ಒಳ್ಳೆಯದು.&lt;/p&gt;&lt;p&gt;&lt;strong&gt;ಫೋಕಸ್ ಅವರ್: &lt;/strong&gt;ದಿನದಲ್ಲಿ ಯಾವುದಾದರೂ 90 ನಿಮಿಷಗಳನ್ನು &lsquo;ಡೀಪ್ ವರ್ಕ್&rsquo; ಸಮಯವೆಂದು ಘೋಷಿಸಿ. ಆ ಸಮಯದಲ್ಲಿ ಇಂಟರ್ನೆಟ್ ಆಫ್ ಮಾಡಿ ಅಥವಾ ಎಲ್ಲಾ ನೋಟಿಫಿಕೇಶನ್&zwnj;ಗಳನ್ನು ಆಫ್ ಮಾಡಿ. ಯಾವುದೇ ಡಿಸ್ಟರ್ಬೆನ್ಸ್ ಇರದೆ ಕೆಲಸದಲ್ಲಿ ತೊಡಗಿಕೊಳ್ಳಿ.&lt;/p&gt;&lt;p&gt;&lt;strong&gt;ಬ್ಯಾಚಿಂಗ್: &lt;/strong&gt;ಇಮೇಲ್ ನೋಡುವುದು ಅಥವಾ ಮೆಸೇಜ್&zwnj;ಗಳಿಗೆ ಪ್ರತಿಕ್ರಿಯಿಸುವುದನ್ನು ದಿನದಲ್ಲಿ ಕೇವಲ ಎರಡು ಬಾರಿ ಮಾತ್ರ ಮಾಡಿ. ಉದಾಹರಣೆಗೆ ಬೆಳಿಗ್ಗೆ 11ಕ್ಕೆ ಮತ್ತು ಸಂಜೆ 4ಕ್ಕೆ ಮಾತ್ರ ಇಮೇಲ್ ನೋಡುತ್ತೇನೆ ಅಥವಾ ಮೆಸೇಜ್&zwnj;ಗೆ ರಿಪ್ಲೈ ಮಾಡುತ್ತೇನೆ ಅಂದುಕೊಳ್ಳಿ.&lt;/p&gt;&lt;p&gt;&lt;strong&gt;6. ಆಹಾರ ಶಿಸ್ತು: &lt;/strong&gt;ನಾವು ಏನು ತಿನ್ನುತ್ತೇವೆ ಎನ್ನುವುದಕ್ಕಿಂತ ಹೇಗೆ ತಿನ್ನುತ್ತೇವೆ ಎಂಬುದು ಮುಖ್ಯ. ಸಾಮಾನ್ಯವಾಗಿ ಊಟ ಮಾಡುವಾಗಲೂ ಮೊಬೈಲ್ ನೋಡುವುದು ರೂಢಿಯಾಗಿಬಿಟ್ಟಿದೆ. ಮೊಬೈಲ್ ನೋಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ. ಇದರಿಂದ ಅತಿಯಾಗಿ ತಿನ್ನುವುದು ಕಡಿಮೆ ಮಾಡಬಹುದು. ಅಲ್ಲದೇ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು. ಜೊತೆಗೆ ಪ್ರತೀ ಬಾರಿ ನೀರು ಕುಡಿಯುವಾಗಲೂ ಒಂದು ನಿಮಿಷ ಶಾಂತವಾಗಿ ಕುಳಿತುಕೊಳ್ಳಿ. ನಿಮ್ಮನ್ನು ನೀವು ಗಮನಿಸಿ. ಇದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.&lt;/p&gt;&lt;p&gt;&lt;strong&gt;7. ಎಐ ಸದ್ಬಳಕೆ: &lt;/strong&gt;ದಿನಕ್ಕೊಂದು ಹೊಸ ತಂತ್ರಜ್ಞಾನ ಬರುತ್ತಿದೆ. ಅದಕ್ಕೆ ತಕ್ಕಂತೆ ಸಿದ್ಧಗೊಳ್ಳುವುದು ಅನಿವಾರ್ಯ. ತಂತ್ರಜ್ಞಾನವನ್ನು ಅದರಲ್ಲೂ ಎಐ ಅನ್ನು ಕಲಿತು ನಿಮ್ಮ ಕೌಶಲವನ್ನಾಗಿ ಮಾಡಿಕೊಳ್ಳಿ. ಹೊಸ ಭಾಷೆ ಅಥವಾ ಕೌಶಲ್ಯ ಕಲಿಯಲು ಎಐ ಟೂಲ್&zwnj;ಗಳನ್ನು ದಿನಕ್ಕೆ 15 ನಿಮಿಷ ಬಳಸಿ. ವಾರದ ಅಡುಗೆಯ ಪಟ್ಟಿ ಅಥವಾ ವ್ಯಾಯಾಮದ ಚಾರ್ಟ್ ತಯಾರಿಸಲು ತಂತ್ರಜ್ಞಾನದ ಸಹಾಯ ಪಡೆದು ನಿಮ್ಮ ಸಮಯ ಉಳಿಸಿಕೊಳ್ಳಿ.&lt;/p&gt;&lt;p&gt;&lt;strong&gt;8. ಆಫ್&zwnj;ಲೈನ್&zwnj; ಬಂಧವನ್ನು ಗಟ್ಟಿಮಾಡಿಕೊಳ್ಳಿ: &lt;/strong&gt;ಡಿಜಿಟಲ್ ಜಗತ್ತಿನಲ್ಲಿ ನಮಗೆ ಆನ್&zwnj;ಲೈನ್&zwnj; ಸಂಬಂಧ ಗಟ್ಟಿಯಾಗುತ್ತಿದೆ. ಆದರೆ ಆಫ್&zwnj;ಲೈನ್&zwnj;ನಲ್ಲಿ ಆತ್ಮೀಯರಿಂದ ದೂರವಾಗುತ್ತಿದ್ದೇವೆ. ಇದನ್ನು ಸರಿಪಡಿಸಲು ವಾರಕ್ಕೊಮ್ಮೆ ಒಬ್ಬ ಹಳೆಯ ಸ್ನೇಹಿತ ಅಥವಾ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿ. ನಿಮ್ಮ ಬಡಾವಣೆಯಲ್ಲಿ, ಕುಟುಂಬದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಿಂಗಳಿಗೊಮ್ಮೆ ಭಾಗವಹಿಸಿ.&lt;/p&gt;&lt;p&gt;&lt;strong&gt;9. ಶಟ್-ಡೌನ್:&lt;/strong&gt; ಕೆಲಸದ ಒತ್ತಡವನ್ನು ಮನೆಗೆ ತರಬಾರದು. ಆ ಒತ್ತಡ ಬೇರೆಯವರಿಗೆ ದಾಟಿಸಬಾರದು. ಅದನ್ನು ತಡೆಯಲು ಈ ಎರಡು ಪದ್ಧತಿ ರೂಢಿಸಿಕೊಳ್ಳಿ.&lt;/p&gt;&lt;p&gt;&lt;strong&gt;ರಿವ್ಯೂ: &lt;/strong&gt;ಮಲಗುವ ಮುನ್ನ ಇಂದು ಮಾಡಿದ ಕೆಲಸಗಳನ್ನು ಒಮ್ಮೆ ನೆನಪಿಸಿಕೊಳ್ಳಿ.&lt;/p&gt;&lt;p&gt;&lt;strong&gt;ಪ್ರಿಪರೇಶನ್: &lt;/strong&gt;ಮರುದಿನ ಧರಿಸುವ ಬಟ್ಟೆ ಮತ್ತು ಕೆಲಸದ ಫೈಲ್&zwnj;ಗಳನ್ನು ಹಿಂದಿನ ರಾತ್ರಿಯೇ ಸಿದ್ಧಪಡಿಸಿಟ್ಟುಕೊಳ್ಳಿ. ಇದು ಬೆಳಗಿನ ಗೊಂದಲ ಮತ್ತು ನಿರ್ಧಾರ ತೆಗೆದುಕೊಳ್ಳುವ ತೊಂದರೆಯನ್ನು ಕಡಿಮೆ ಮಾಡುತ್ತದೆ.&lt;/p&gt;&lt;p&gt;&lt;strong&gt;10. ಮೈಕ್ರೋ ಲರ್ನಿಂಗ್: &lt;/strong&gt;ದೊಡ್ಡ ಕೋರ್ಸ್&zwnj;ಗಳನ್ನು ಮಾಡಲಾಗದಿದ್ದರೂ, ಸಣ್ಣ ಸಣ್ಣ ಕಲಿಕೆ ಇರಲಿ. ಪ್ರಯಾಣದ ಸಮಯದಲ್ಲಿ ಕೇವಲ ಹಾಡು ಕೇಳುವ ಬದಲು ಜ್ಞಾನ ಹೆಚ್ಚಿಸುವ ಪಾಡ್&zwnj;ಕಾಸ್ಟ್&zwnj;ಗಳನ್ನು ಕೇಳಿ. ಒಂದು ಹೊಸ ಹವ್ಯಾಸವನ್ನು ಉದಾಹರಣೆಗೆ ಗಿಟಾರ್ ಕಲಿಕೆ, ಅಡುಗೆ ಅಥವಾ ಕೋಡಿಂಗ್ ಅನ್ನು ಕಲಿಯಲು ನಿರ್ಧರಿಸಿ.&lt;/p&gt;&lt;p&gt;&lt;strong&gt;ಹೊಸ ದಿನಚರಿಯನ್ನು ಪಾಲಿಸಲು ಸಣ್ಣ ಟಿಪ್ಸ್: &lt;/strong&gt;ದಿನಚರಿ ಬದಲಿಸಬೇಕು ಅಂತ ಒಂದೇ ಸಮಯದಲ್ಲಿ ಎಲ್ಲವನ್ನೂ ಪಾಲಿಸಲು ಹೋಗದಿರಿ. ವಾರಕ್ಕೆ ಕೇವಲ ಒಂದು ಹೊಸ ಹವ್ಯಾಸವನ್ನು ಮಾತ್ರ ಶುರು ಮಾಡಿ. ಒಂದು ದಿನ ದಿನಚರಿ ತಪ್ಪಿದರೆ ಪರವಾಗಿಲ್ಲ, ಮರುದಿನ ಮತ್ತೆ ಪ್ರಯತ್ನಿಸಿ. ಪರಿಪೂರ್ಣತೆಗಿಂತ ನಿರಂತರತೆ ಬಹಳ ಮುಖ್ಯ.&lt;/p&gt;&lt;p&gt;&lt;strong&gt;2026ರ ಹೊಸ ಆರಂಭ: ಮಾದರಿ ವೇಳಾಪಟ್ಟಿ&lt;/strong&gt;&lt;strong&gt;ಸಮಯ ಚಟುವಟಿಕೆ ವಿವರಣೆ&lt;/strong&gt;ಬೆಳಿಗ್ಗೆ 6:00 - 6:30 ಡಿಜಿಟಲ್ ಮುಕ್ತ ಆರಂಭ ಎದ್ದ ತಕ್ಷಣ ಫೋನ್ ನೋಡಬೇಡಿ. ಸ್ವಲ್ಪ ನೀರು ಕುಡಿದು, ಕಿಟಕಿ ಹೊರಗೆ ನೈಸರ್ಗಿಕ ಬೆಳಕನ್ನು ನೋಡಿ.&lt;/p&gt;&lt;p&gt;ಬೆಳಿಗ್ಗೆ 6:30 - 7:15 ದೈಹಿಕ ಚಟುವಟಿಕೆ ಯೋಗ, ವೇಗದ ನಡಿಗೆ ಅಥವಾ ಜಿಮ್. ದಿನವಿಡೀ ಚೈತನ್ಯದಿಂದಿರಲು ಇದು ಮುಖ್ಯ.&lt;/p&gt;&lt;p&gt;ಬೆಳಿಗ್ಗೆ 7:15 - 8:00 ವೈಯಕ್ತಿಕ ಕಲಿಕೆ/ ಧ್ಯಾನ 10 ನಿಮಿಷ ಧ್ಯಾನ ಮತ್ತು 20 ನಿಮಿಷ ಯಾವುದಾದರೂ ಪುಸ್ತಕ ಓದಿ.&lt;/p&gt;&lt;p&gt;ಬೆಳಿಗ್ಗೆ 9:00 - 11:00 ಡೀಪ್ ವರ್ಕ್ ನಿಮ್ಮ ದಿನದ ಅತ್ಯಂತ ಕಠಿಣ ಅಥವಾ ಪ್ರಮುಖ ಕೆಲಸವನ್ನು ಈ ಸಮಯದಲ್ಲಿ ಮುಗಿಸಿ. ನೋಟಿಫಿಕೇಶನ್&zwnj; ಆಫ್ ಇರಲಿ.&lt;/p&gt;&lt;p&gt;ಮಧ್ಯಾಹ್ನ 1:00 - 2:00 ಸೊಗಸಾದ ಊಟ ಫೋನ್ ಬಳಸದೆ ಊಟ ಮಾಡಿ. ಊಟದ ನಂತರ 5-10 ನಿಮಿಷ ಸುಮ್ಮನೆ ಕುಳಿತುಕೊಳ್ಳಿ.&lt;/p&gt;&lt;p&gt;ಸಂಜೆ 5:00 - 6:00 ಕೌಶಲ್ಯ ಅಭಿವೃದ್ಧಿ ನಿಮ್ಮ ಹವ್ಯಾಸ ಅಥವಾ ಹೊಸ ಕೌಶಲ್ಯ (ಎಐ ಬಳಕೆ, ಭಾಷೆ ಕಲಿಕೆ ಇತ್ಯಾದಿ) ಕಲಿಯಲು ಮೀಸಲಿಡಿ.&lt;/p&gt;&lt;p&gt;ಸಂಜೆ 7:00 - 8:30 ಕುಟುಂಬ ಮತ್ತು ವಿರಾಮ ಡಿಜಿಟಲ್ ಸಾಧನಗಳಿಂದ ದೂರವಿದ್ದು ಕುಟುಂಬದವರ ಜೊತೆ ಕಾಲ ಕಳೆಯಿರಿ.&lt;/p&gt;&lt;p&gt;ರಾತ್ರಿ 9:00 - 9:30 ಶಟ್-ಡೌನ್ ಮರುದಿನ ಮಾಡಬೇಕಾದ ಕೆಲಸಗಳ ಪಟ್ಟಿ ಸಿದ್ಧಪಡಿಸಿ. ಬಟ್ಟೆಗಳನ್ನು ರೆಡಿ ಮಾಡಿಟ್ಟುಕೊಳ್ಳಿ.&lt;/p&gt;&lt;p&gt;ರಾತ್ರಿ 10:00 ನಿದ್ರೆ ಫೋನ್ ಪಕ್ಕಕ್ಕಿಟ್ಟು ಮಲಗಿ.&lt;/p&gt;&lt;h2&gt;&lt;strong&gt;5 ಜೀವನಶೈಲಿ ಬದಲಾವಣೆಗಳು&lt;/strong&gt;&lt;/h2&gt;&lt;p&gt;&lt;strong&gt;1. ಝೋನ್ 2 ವಾಕಿಂಗ್:&lt;/strong&gt; ಇದೊಂದು ಲಯಬದ್ಧವಾದ ವ್ಯಾಯಾಮದಂತಹ ವಾಕಿಂಗ್. ನಿಮ್ಮ ಹೃದಯದ ಆರೋಗ್ಯಕ್ಕೆ ಮತ್ತು ಕೊಬ್ಬು ಕರಗಿಸಲು ತುಂಬಾ ಸಹಕಾರಿ. ಈ ವಾಕಿಂಗ್&zwnj;ನಲ್ಲಿ ನೀವು ವೇಗವಾಗಿ ನಡೆಯಬೇಕು. ಎಷ್ಟು ವೇಗವೆಂದರೆ ನಡೆಯುವಾಗ ಪಕ್ಕದಲ್ಲಿರುವವರ ಜೊತೆ ಮಾತನಾಡಲು ಸಾಧ್ಯವಿರಬೇಕು. ಆದರೆ ಹಾಡಲು ಹೋದರೆ ಸುಸ್ತಾಗಬೇಕು. ಈ ವಾಕಿಂಗ್ ಶೈಲಿ ನಿಮ್ಮ ದೇಹದ ಜೀವಕೋಶಗಳಿಗೆ ಹೆಚ್ಚು ಶಕ್ತಿ ನೀಡುತ್ತದೆ.&lt;/p&gt;&lt;p&gt;&lt;strong&gt;2. ಅನಲಾಗ್ ಪ್ಲೇ:&lt;/strong&gt; ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯಲ್ಲೇ ಮುಳುಗಿರುವುದನ್ನು ತಡೆಯಲು &lsquo;ಅನಲಾಗ್ ಪ್ಲೇ&rsquo; ಅತ್ಯಗತ್ಯ. ಅನಲಾಗ್ ಪ್ಲೇ ಎಂದರೆ ಮೊಬೈಲ್, ಇಂಟರ್ನೆಟ್ ಇಲ್ಲದೆ ಮಾಡಬಹುದಾದ ಕೆಲಸ ಮಾಡುವುದು. ಉದಾಹರಣೆಗೆ ಪಜಲ್ ಬಿಡಿಸುವುದು, ಚಿತ್ರ ಬಿಡಿಸುವುದು, ಬೋರ್ಡ್ ಗೇಮ್ಸ್ (ಕ್ಯಾರಂ, ಚೆಸ್) ಆಡುವುದು ಅಥವಾ ಪುಸ್ತಕ ಓದುವುದು ಇತ್ಯಾದಿ. ಇದರಿಂದ ನಿಮ್ಮ ಮೆದುಳಿಗೆ ವಿಶ್ರಾಂತಿ ದೊರಕುತ್ತದೆ ಮತ್ತು ಒತ್ತಡ ಕಡಿಮೆ ಮಾಡುತ್ತದೆ.&lt;/p&gt;&lt;p&gt;&lt;strong&gt;3. 20-20-20 ನಿಯಮ: &lt;/strong&gt;ನಾವು ಅತಿ ಹೆಚ್ಚು ಸಮಯ ಮೊಬೈಲ್ ಅಥವಾ ಲ್ಯಾಪ್&zwnj;ಟಾಪ್ ನೋಡುವುದರಿಂದ ಕಣ್ಣುಗಳು ಸುಸ್ತಾಗುತ್ತವೆ. ಇದನ್ನು ತಡೆಯಲು ಪ್ರತೀ 20 ನಿಮಿಷಕ್ಕೊಮ್ಮೆ, 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಿ. ಇದು ಕಣ್ಣಿನ ಒತ್ತಡವನ್ನು ತಕ್ಷಣ ಕಡಿಮೆ ಮಾಡುತ್ತದೆ.&lt;/p&gt;&lt;p&gt;&lt;strong&gt;4. ಟೂ-ಮಿನಿಟ್ ರೂಲ್: &lt;/strong&gt;ಯಾವುದಾದರೂ ಕೆಲಸ ಮಾಡಲು ತುಂಬಾ ಸೋಮಾರಿತನ ಎನಿಸುತ್ತಿದ್ದರೆ ಈ ನಿಯಮ ಬಳಸಿ. ಯಾವುದೇ ಕೆಲಸ ಮಾಡಲು ಎರಡು ನಿಮಿಷಕ್ಕಿಂತ ಕಡಿಮೆ ಸಮಯ ಸಾಕಾಗುತ್ತಿದ್ದರೆ ಅದನ್ನು ತಕ್ಷಣ ಮಾಡಿ ಮುಗಿಸಿ. ಉದಾಹರಣೆಗೆ ತಟ್ಟೆ ತೊಳೆಯುವುದು ಅಥವಾ ಬಟ್ಟೆ ಮಡಚುವುದು ಇತ್ಯಾದಿ. ಇದು ಕೆಲಸಗಳು ಬಾಕಿ ಉಳಿಯದಂತೆ ನೋಡಿಕೊಳ್ಳುತ್ತದೆ.&lt;/p&gt;&lt;p&gt;&lt;strong&gt;5. ಪ್ರೋಟೀನ್-ಯುಕ್ತ ಉಪಹಾರ:&lt;/strong&gt; ಬೆಳಿಗ್ಗೆ ಕೇವಲ ಕಾರ್ಬೋಹೈಡ್ರೇಟ್ (ದೋಸೆ, ಇಡ್ಲಿ ಮಾತ್ರ) ತಿನ್ನುವ ಬದಲು ಪ್ರೋಟೀನ್ ಇರುವಂತೆ ನೋಡಿಕೊಳ್ಳಿ. ನಿಮ್ಮ ಉಪಾಹಾರದಲ್ಲಿ ಮೊಟ್ಟೆ, ಮೊಳಕೆ ಕಾಳು ಅಥವಾ ಪನೀರ್ ಇರುವಂತೆ ನೋಡಿಕೊಳ್ಳಿ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಟ್ಟು, ಮಧ್ಯಾಹ್ನದವರೆಗೆ ನೀವು ಹಸಿವಿನಿಂದ ಸುಸ್ತಾಗದಂತೆ ತಡೆಯುತ್ತದೆ.&lt;/p&gt;]]></content:encoded>
            <category>magazine</category>
            <dc:creator>Govindaraj S</dc:creator>
            <atom:link href="https://kannada.asianetnews.com/magazine/2026-new-daily-routine-habits-success-life-kannada-gvd/articleshow-invhdd3"/>
        </item>
        <item>
            <title><![CDATA[ಸಾಹಿತಿ ಅಮರೇಶ ನುಗಡೋಣಿ ಅವರ 'ದಡ ಸೇರಿಸು ತಂದೆ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ]]></title>
            <link>https://kannada.asianetnews.com/state/amaresh-nugadoni-dada-serisu-tande-kendra-sahitya-akademi-award-2025-san/articleshow-ksvmzfw</link>
            <guid isPermaLink="true">https://kannada.asianetnews.com/state/amaresh-nugadoni-dada-serisu-tande-kendra-sahitya-akademi-award-2025-san/articleshow-ksvmzfw</guid>
            <pubDate>Mon, 16 Mar 2026 15:30:54 +0530</pubDate>
            <description><![CDATA[ಖ್ಯಾತ ಸಾಹಿತಿ ಅಮರೇಶ ನುಗಡೋಣಿ ಅವರ &lsquo;ದಡ ಸೇರಿಸು ತಂದೆ&rsquo; ಕಥಾ ಸಂಕಲನಕ್ಕೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಕೃತಿಯು ಗ್ರಾಮೀಣ ಭಾರತದ ಮರ್ಯಾದಾ ಹತ್ಯೆ ಮತ್ತು ಗುಂಪು ಹಿಂಸಾಚಾರದಂತಹ ಜ್ವಲಂತ ಸಮಸ್ಯೆಗಳನ್ನು ನೈಜವಾಗಿ ಚಿತ್ರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkv18xny9rf4bn9jjber1kmj,imgname-amaresh-nugadoni-sahitya-academy-award-1773655062206.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮಾ.16):&lt;/strong&gt; ಕನ್ನಡದ ಖ್ಯಾತ ಸಾಹಿತಿ ಅಮರೇಶ ನುಗಡೋಣಿ ಅವರ &lsquo;ದಡ ಸೇರಿಸು ತಂದೆ&rsquo; ಕಥಾ ಸಂಕಲನಕ್ಕೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕನ್ನಡದ ಗಟ್ಟಿಯಾದ ಕಥಾ ಲೋಕಕ್ಕೆ ರಾಷ್ಟ್ರಮಟ್ಟದ ಮನ್ನಣೆ ದೊರೆತಂತಾಗಿದೆ. ಈ ಪ್ರಶಸ್ತಿಯು ₹1,00,000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಜಯಲಲಿತ ಮತ್ತು ಸಹನಾ ಕಾಂತಬೈಲು ಅವರಿದ್ದ ತಜ್ಞರ ಸಮಿತಿಯು ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. 2025ರ ಜನವರಿ 30ರಂದು ಆರಂಭವಾದ ಸುದೀರ್ಘ ಆಯ್ಕೆ ಪ್ರಕ್ರಿಯೆಯ ನಂತರ ಈ ಅಧಿಕೃತ ಘೋಷಣೆ ಹೊರಬಿದ್ದಿದೆ.&lt;/p&gt;&lt;h2&gt;&lt;strong&gt;&lsquo;ದಡ ಸೇರಿಸು ತಂದೆ&rsquo; ಕೃತಿಯ ಹೂರಣ&lt;/strong&gt;&lt;/h2&gt;&lt;p&gt;ಇದು ಅಮರೇಶ ನುಗಡೋಣಿ ಅವರ 6ನೇ ಕಥಾ ಸಂಕಲನವಾಗಿದ್ದು, ಇದರಲ್ಲಿ ಒಟ್ಟು ಎಂಟು ಕಥೆಗಳಿವೆ. ಈ ಕೃತಿಯು ಇಂದಿನ ಗ್ರಾಮೀಣ ಭಾರತದ ಜ್ವಲಂತ ಸಮಸ್ಯೆಗಳನ್ನು ಕನ್ನಡಿ ಹಿಡಿದಿದೆ. ಹಳ್ಳಿಗಳಲ್ಲಿ ನಡೆಯುತ್ತಿರುವ ಮರ್ಯಾದಾ ಹತ್ಯೆಗಳು ಮತ್ತು ಗುಂಪು ಹಿಂಸಾಚಾರದ (Mob Violence) ಕ್ರೌರ್ಯವನ್ನು ಇಲ್ಲಿ ಅತ್ಯಂತ ನೈಜವಾಗಿ ಚಿತ್ರಿಸಲಾಗಿದೆ. ಬದುಕಿನ ವೈವಿಧ್ಯತೆ ಹಾಗೂ ಸಮಕಾಲೀನ ಸಮಾಜದ ವಿಘಟನೆಗಳನ್ನು ಈ ಸಂಕಲನವು ಓದುಗರ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. 2020ರ ಜನವರಿ 19 ರಂದು ರಾಯಚೂರಿನಲ್ಲಿ ಈ ಕೃತಿ ಲೋಕಾಪರ್ಣೆಯಾಗಿತ್ತು. ಪುಸ್ತಕವನ್ನು ಪಲ್ಲವ ಪ್ರಕಾಶನವು ಹೊರತಂದಿದೆ.&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>magazine</category>
            <dc:creator>Santosh Naik</dc:creator>
            <atom:link href="https://kannada.asianetnews.com/state/amaresh-nugadoni-dada-serisu-tande-kendra-sahitya-akademi-award-2025-san/articleshow-ksvmzfw"/>
        </item>
        <item>
            <title><![CDATA[ಸೀರಿಯಲ್‌ ಕಿಲ್ಲರ್ಸ್‌ ಕಡಿಮೆ ಆಗಿದ್ದಾರೆ, ಕ್ರೈಂ ಕಾದಂಬರಿ ಬರೆಯೋದು ಕಷ್ಟವಂತೆ!]]></title>
            <link>https://kannada.asianetnews.com/crime/weird-claim-by-crime-writer-writing-decent-novels-is-difficult-because-of-shortage-of-serial-killers-roo-sejyq1</link>
            <guid isPermaLink="true">https://kannada.asianetnews.com/crime/weird-claim-by-crime-writer-writing-decent-novels-is-difficult-because-of-shortage-of-serial-killers-roo-sejyq1</guid>
            <pubDate>Tue, 04 Jun 2024 16:33:37 +0530</pubDate>
            <description><![CDATA[&lt;p&gt;ನೈಜ ಘಟನೆ ಆಧಾರಿತ ಸಿನಿಮಾ, ಕಾದಂಬರಿ ನೋಡುವ, ಓದುವ ಜನ ಹೆಚ್ಚಿದ್ರೂ ಕಾಲ್ಪನಿಕ ಕಥೆ ಕುತೂಹಲದಿಂದ ಕೂಡಿದ್ದರೆ ಜನ ಆಸಕ್ತಿಯಿಂದ ಓದುತ್ತಾರೆ. ಎಲ್ಲ ಕಥೆಗಳು ನೈಜಘಟನೆ ಆಧಾರಿತವಾಗಿರಬೇಕೆಂದೇನೂ ಇಲ್ಲ. ಆದ್ರೆ ಕ್ರೈಂ ಕಾದಂಬರಿಗಾರರೊಬ್ಬರ ಮಾತು ಈಗ ಅಚ್ಚರಿ ಹುಟ್ಟಿಸಿದೆ. &amp;nbsp; &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hzhckft3sdgsy9p7w57w9x13,imgname-weird-claim-by-crime-writer-writing-decent-novels-is-difficult-because-of-shortage-of-serial-killers.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಹಣ್ಣಿನ ರುಚಿ ಹೇಗಿದೆ ಎಂಬುದು ಆ ಹಣ್ಣು ತಿಂದವನಿಗೆ ಮಾತ್ರ ಗೊತ್ತು. ಯಾವುದೇ ವಿಷ್ಯದಲ್ಲಿ ನಮಗೆ ಅನುಭವ ಇದ್ದಾಗ ನಾವು ಅದನ್ನು ಮುಂದಿನವರಿಗೆ ಅರ್ಥವಾಗುವಂತೆ ವಿವರಿಸಬಹುದು. ಅದೇ ನಿಮಗೆ ಆ ಹಣ್ಣಿನ ರುಚಿಯೇ ತಿಳಿದಿಲ್ಲ ಎಂದಾಗ ಅದು ಹುಳಿ ಇದ್ರೂ ಮೇಲೆ ಅಂದವಾಗಿ ಕಂಡ್ರೆ ಅದು ಸಿಹಿ ಇದೆ ಅಂತ ಹೇಳಿರ್ತೇವೆ. ಬರಹಗಾರರು ಕೂಡ ಎಂದೂ ನಡೆಯದ ಕಥೆಯನ್ನು ನೈಜ ಘಟನೆಯಂತೆ ನಮ್ಮ ಮುಂದೆ ಇಡ್ತಾರೆ. ಕಲ್ಪನೆಯನ್ನು ವಾಸ್ತವದಂತೆ ಬಿಂಬಿಸೋದು ಸವಾಲಿನ ಕೆಲಸ. ಎಲ್ಲರಿಗೂ ಇದು ಸಾಧ್ಯವಿಲ್ಲ. ಕವಿ, ಬರಹಗಾರನಿಗೆ ಮಾತ್ರ ಮಣ್ಣನ್ನು ಹೊನ್ನಿಗೆ ಹೋಲಿಸುವ ಸಾಮರ್ಥ್ಯವಿರುತ್ತದೆ. ಅನೇಕ ಕಥೆ, ಕಾದಂಬರಿಗಳನ್ನು ಓದಿದಾಗ ನಾವು ಬರಹಗಾರನ ಕಲ್ಪನೆ ಹಾಗೂ ಜ್ಞಾನವನ್ನು ಮೆಚ್ಚುತ್ತೇವೆ. ಹೊಸ ಹೊಸ ಐಡಿಯಾ, ಮಾಹಿತಿಯನ್ನು ಎಲ್ಲಿಂದ ಸಂಗ್ರಹ ಮಾಡುತ್ತಾರೆ ಎನ್ನುವ ಪ್ರಶ್ನೆ ಕೂಡ ಕಾಡುತ್ತದೆ. ಪ್ರೇಮ ಕಥೆಗಳನ್ನು ಹೆಣೆಯೋದು ಕ್ರೈಂ ಕಥೆಗಳನ್ನು ಹೆಣೆದಷ್ಟು ಸುಲಭವಲ್ಲ. &amp;nbsp;ಕ್ರೈಂ ಕಥೆಗಳು ಮುಂದೇನಿದೆ ಎಂಬ ಕುತೂಹಲ ಹುಟ್ಟಿಸಿದಾಗ ಮಾತ್ರ ಓಡುತ್ತವೆ.&amp;nbsp;&lt;/p&gt; &lt;p&gt;ಬಹುತೇಕ ಬರಹಗಾರರು (Writers) ಮೊದಲು ನೈಜ ಘಟನೆಗೆ ಆದ್ಯತೆ ನೀಡ್ತಾರೆ. ಅದಕ್ಕೆ ಒಂದಿಷ್ಟು ಸೇರಿಸಿ ಅದನ್ನು ಕಾದಂಬರಿ (Novel) ಯಾಗಿ ನಮ್ಮ ಮುಂದೆ ಇಡ್ತಾರೆ. ನಿಮ್ಮ ಮುಂದೆ ಹಣ್ಣೇ ಇಲ್ಲದೆ ಅದ್ರ ರುಚಿ ಹೇಳಲು ಹೇಗೆ ಸಾಧ್ಯ ಇಲ್ಲವೋ ಅದೇ ರೀತಿ ಕ್ರೈಂ (Crime) ಘಟನೆಗಳು ನಡೆಯದೆ ಎಲ್ಲವನ್ನೂ ಕಲ್ಪನೆಯಲ್ಲಿ ಹೇಳಿ ಅಂದ್ರೆ ಕಷ್ಟವಾಗುತ್ತದೆ. ಹೀಗಂತ ನಾವು ಹೇಳ್ತಿಲ್ಲ. ಬರಹಗಾರರೊಬ್ಬರು, ಸೀರಿಯಲ್ ಕಿಲ್ಲರ್ ಗಳ ಸಂಖ್ಯೆ ಕಡಿಮೆ ಆಗಿರುವ ಕಾರಣ ಕಾದಂಬರಿ ಬರೆಯೋದು ಕಷ್ಟ ಎಂದಿದ್ದಾರೆ.&amp;nbsp;  ಮತ್ತೆ ಮತ್ತೆ ಕಾಳಿದಾಸ, ಮೇಘದೂತವೆಂಬ ಎಲ್ಲೆ ಮೀರಿದ ವಿರಹದ ಧ್ಯಾನದಲ್ಲಿ&lt;/p&gt; &lt;p&gt;ಪ್ರಸಿದ್ಧ ಅಪರಾಧ ಬರಹಗಾರರಾದ ಹರ್ಲಾನ್ ಕೋಬೆನ್ &amp;nbsp;ಹೀಗೆ ಹೇಳಿದ್ದಾರೆ. ಹರ್ಲಾನ್ ಕೋಬೆನ್, ಸೀರಿಯಲ್ ಕಿಲ್ಲರ್ಸ್ ಬಗ್ಗೆ ಅನೇಕ ಪುಸ್ತಕ ಬರೆದು ಓದುಗರ ಮನಸ್ಸು ಗೆದ್ದಿದ್ದಾರೆ. ಫೂಲ್ ಮಿ ಒನ್ಸ್ ಮತ್ತು ದಿ ಸ್ಟ್ರೇಂಜರ್ ಸೇರಿದಂತೆ ಕೆಲ ಕಾದಂಬರಿ ಟಿವಿ ನಾಟಕಗಳಾಗಿ ಪರಿವರ್ತನೆಯಾಗಿವೆ. 62 ವರ್ಷದ ಕೋಬೈನ್ ಥಿಂಕ್ ಟ್ವೈಸ್ ಎಂಬ ಹೊಸ ಕಾದಂಬರಿಯನ್ನು ಬರೆದಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಅವರು, ಆಧುನಿಕ ಪೋಲೀಸಿಂಗ್ ನಿಂದಾಗಿ ಕಥೆಗಳನ್ನು ಹಣೆಯಲು ಕಷ್ಟವಾಗ್ತಿದೆ ಎಂದಿದ್ದಾರೆ.&amp;nbsp;&lt;/p&gt; &lt;p&gt;ಸೀರಿಯಲ್ ಕಿಲ್ಲರ್ ಸಂಖ್ಯೆ ಈಗಿನ ದಿನಗಳಲ್ಲಿ ಬಹಳ ಕಡಿಮೆ ಆಗಿದೆ ಎನ್ನುತ್ತಾರೆ ಹರ್ಲಾನ್ ಕೋಬೆನ್. ಈಗ ಸೀರಿಯಲ್ ಕಿಲ್ಲರ್ಸ್ ತಪ್ಪಿಸಿಕೊಳ್ಳೋದು ಸುಲಭವಲ್ಲ. ಎಲ್ಲರ ಕೈನಲ್ಲಿ ಮೊಬೈಲ್ ಇದೆ, ಸಿಸಿಟಿವಿ ಇದೆ. ಎಲ್ಲ ಅಪರಾಧಿ ಮೇಲೆ ನಿಗಾ ಇಡಲಾಗ್ತಿದೆ ಎನ್ನುವ ಕೋರ್ಬೆನ್, ಇದ್ರಿಂದ ಕಿಲ್ಲರ್ ಗಳ ಸಂಖ್ಯೆ ಕಡಿಮೆ ಎನ್ನುತ್ತಾರೆ. ನನ್ನಿಷ್ಟದಂತೆ ಒಬ್ಬ ಸೀರಿಯಲ್ ಕಥೆಯನ್ನು ಹೇಗೆ ಬರೆಯಬೇಕು, ಅಮೆರಿಕಾದಲ್ಲಿ ಸಿರಿಯಲ್ ಕಿಲ್ಲರ್ ಸಂಖ್ಯೆ ಹಿಂದೆ ಬಹಳ ಹೆಚ್ಚಿತ್ತು. 1970ರ ದಶಕದಲ್ಲಿ 300 ಸಿರಿಯಲ್ ಕಿಲ್ಲರ್ಸ್ ಇದ್ರು. 2010ರ ಸಮಯದಲ್ಲಿ ಅವರ ಸಂಖ್ಯೆ 50ಕ್ಕೆ ಇಳಿದಿತ್ತು. ಪೊಲೀಸರು ಬೇಗ ಕಿಲ್ಲರ್ಸ್ ಪತ್ತೆ ಮಾಡ್ತಿದ್ದಾರೆ. ಇದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ನಾವೆಲ್ಲ ನೆಮ್ಮದಿಯಾಗಿದ್ದೇವೆ. ಆದ್ರೆ ಕಾದಂಬರಿಯಲ್ಲಿ ನೈಜತೆ ತರಲು ಕಷ್ಟವಾಗ್ತಿದೆ ಎಂದು ಹರ್ಲಾನ್ ಕೋಬೆನ್ ಹೇಳಿದ್ದಾರೆ. ಹರ್ಲಾನ್ ಕೋಬೆನ್ ಪ್ರಕಾರ, ಬ್ರಿಟನ್ ನಲ್ಲೂ ಕ್ರೈಂ ಸಂಖ್ಯೆ ಕಡಿಮೆ ಆಗಿದೆ.&amp;nbsp;ಹರ್ಲಾನ್ ಕೋಬೆನ್ ಮಾತು ಕೇಳಿದ ನಂತ್ರ, ನೈಜ ಘಟನೆ ಆಧರಿಸಿದ್ದಾಗ ಮಾತ್ರವೇ ಅಪರಾಧಕ್ಕೆ ಸಂಬಂಧಿಸಿದ ಕಾದಂಬರಿ ಪ್ರಸಿದ್ಧಿ ಪಡೆಯೋದಾ ಎನ್ನುವ ಪ್ರಶ್ನೆ ಹುಟ್ಟಿಕೊಳ್ತಿದೆ.&amp;nbsp;  ಸಾಹಿತಿಗಳ ಮೌನವನ್ನು ಹಗುರವಾಗಿ ನೋಡಬೇಡಿ-ವೈದೇಹಿ&lt;/p&gt;]]></content:encoded>
            <category>magazine</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/weird-claim-by-crime-writer-writing-decent-novels-is-difficult-because-of-shortage-of-serial-killers-roo-sejyq1"/>
        </item>
        <item>
            <title><![CDATA[ಮಾತಾಡಿ ಮಾತಾಡಿ ಕಾಸು ಮಾಡಿ.. ಹೇಗೆ ಅಂತೀರಾ? ಪಾಡ್‌ಕಾಸ್ಟ್‌ ಅಲ್ಲ ವೋಡ್‌ಕಾಸ್ಟ್‌]]></title>
            <link>https://kannada.asianetnews.com/magazine/podcast-vodcast-growth-india-market-analysis-explained-gvd/articleshow-nccigfo</link>
            <guid isPermaLink="true">https://kannada.asianetnews.com/magazine/podcast-vodcast-growth-india-market-analysis-explained-gvd/articleshow-nccigfo</guid>
            <pubDate>Sun, 30 Nov 2025 10:42:24 +0530</pubDate>
            <description><![CDATA[&lt;p&gt;ಅದೊಂದು ಹಳ್ಳಿ. ಕಟ್ಟೆ ಮೇಲೆ ಕುಳಿತ ಮೂವರು ಗೆಳೆಯರು ವಾದ ಮಾಡುತ್ತಿದ್ದರು. ಜೋರು ಜೋರು ವಾದ ನಡೆಯುತ್ತಿತ್ತು. ಮೂವರದೂ ಬೇರೆ ಅಭಿಪ್ರಾಯಗಳು. ಒಬ್ಬರೂ ಮತ್ತೊಬ್ಬರ ವಾದ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kb9jt55sbtj1cxammtkew4gb,imgname-ffb-1764479538361.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ರಾಜ್&zwnj;&lt;/strong&gt;&lt;/p&gt;&lt;p&gt;ಅದೊಂದು ಹಳ್ಳಿ. ಕಟ್ಟೆ ಮೇಲೆ ಕುಳಿತ ಮೂವರು ಗೆಳೆಯರು ವಾದ ಮಾಡುತ್ತಿದ್ದರು. ಜೋರು ಜೋರು ವಾದ ನಡೆಯುತ್ತಿತ್ತು. ಮೂವರದೂ ಬೇರೆ ಅಭಿಪ್ರಾಯಗಳು. ಒಬ್ಬರೂ ಮತ್ತೊಬ್ಬರ ವಾದ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅರ್ಧಗಂಟೆಯಿಂದ ಮಾತುಕತೆ ನಡೆಯುತ್ತಿತ್ತು. ಅದೇ ವೇಳೆ ಅಲ್ಲೊಬ್ಬರು ಸನ್ಯಾಸಿ ಬಂದರು. ಅವರ ತಲೆಮೇಲೆ ಮಣ್ಣಿನ ಮಡಕೆ. ಜೊತೆಗೆ ಜೋಳಿಗೆಯಲ್ಲಿ ಮಣ್ಣಿನ ಲೋಟಗಳು. ಅವರು ಬರುತ್ತಿದ್ದಂತೆ ಆ ಮೂವರು ತಲೆ ಮೇಲೆ ಏನು ಹೊತ್ತಿದ್ದೀರಿ ಸನ್ಯಾಸಿಗಳೇ ಎಂದು ಕೇಳಿದರು. ಸನ್ಯಾಸಿ ಮಡಕೆಯನ್ನು ಕೆಳಗಿಳಿಸಿ ಅದರೊಳಗಿದ್ದ ಬಿಸಿ ಚಹಾವನ್ನು ಮೂರು ಲೋಟಕ್ಕೆ ಸುರಿದು ಕೊಟ್ಟರು. ಆ ಮೂವರು ಮಾತೇ ಆಡದೆ ತನ್ಮಯರಾಗಿ ಚಹಾ ಕುಡಿದರು.&lt;/p&gt;&lt;p&gt;ನಂತರ ಮತ್ತೆ ಮಡಕೆ ಹೊತ್ತು ಹೊರಟರು. ಆಗ ಗೆಳೆಯರು ನೀವು ಒಂದೂ ಮಾತಾಡಲಿಲ್ಲವಲ್ಲ ಎಂದರು. ಈಗ ಅವರು ಶಾಂತಚಿತ್ತರಾಗಿದ್ದರು. ಸನ್ಯಾಸಿ ನಗುತ್ತಾ, &lsquo;ನಾನು ನಿಮ್ಮ ಜೊತೆ ಒಂದು ಲೋಟ ಚಹಾದ ಮೂಲಕ ಮಾತಾಡಿದೆ. ನೀವು ಸಾಕಷ್ಟು ಮಾತನಾಡಿದಿರಿ, ಆದರೆ ಒಮ್ಮತಕ್ಕೆ ಬರಲಿಲ್ಲ. ಒಂದು ಚಹಾ ನಿಮ್ಮ ಜಗಳವನ್ನು ನಿಲ್ಲಿಸಿತು&rsquo; ಎಂದರು. ಅಲ್ಲಿಂದ ಹೊರಡುತ್ತಾ ಮತ್ತೊಂದು ಮಾತು ಹೇಳಿದರು, &lsquo;ಒಳ್ಳೆಯ ಮಾತು ಎಂದರೆ ನೇರವಾಗಿ ಹೃದಯಕ್ಕೆ ತಲುಪುವಂಥದ್ದು, ಕಿವಿಗೆ ಜೋರಾಗಿ ಅಪ್ಪಳಿಸುವಂಥದ್ದಲ್ಲ&rsquo;.&lt;/p&gt;&lt;p&gt;ಇದೊಂದು ಜೆನ್&zwnj; ಕತೆ. ಈ ಕಾಲಕ್ಕೆ ಸರಿಯಾಗಿ ಹೊಂದಿಕೊಳ್ಳುವಂಥದ್ದು. ಜಗತ್ತಲ್ಲಿ ಬಹಳಷ್ಟು ಮಾತುಕತೆಗಳು ನಡೆಯುತ್ತವೆ. ಸಂವಾದ ನಡೆಯುತ್ತವೆ. ಅಲ್ಲೆಲ್ಲಾ ಬಹಳಷ್ಟು ಸದ್ದುಗದ್ದಲ ತುಂಬಿರುತ್ತದೆ. ಕಿವಿಗೆ ಅಪ್ಪಳಿಸುತ್ತಿರುತ್ತವೆ. ಭಿನ್ನ ಪಕ್ಷಗಳವರ ಮಾತುಕಗಳನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು. ಅಲ್ಲಿ ಹೃದಯಕ್ಕೆ ತಲುಪುವಂತದ್ದು ಏನೂ ಇಲ್ಲ. ಕಿವಿಗೆ ಅಪ್ಪಳಿಸುವುದಷ್ಟೇ. ಈ ಮಧ್ಯೆ ಈ ಡಿಜಿಟಲ್&zwnj; ಕಾಲದಲ್ಲಿ ಹೃದಯಕ್ಕೆ ನೇರವಾಗಿ ತಲುಪುತ್ತಿರುವುದು ಪಾಡ್&zwnj;ಕಾಸ್ಟ್&zwnj;ಗಳು. ಅಥವಾ ವೋಡ್&zwnj;ಕಾಸ್ಟ್&zwnj;ಗಳು.&lt;/p&gt;&lt;p&gt;&lt;strong&gt;ಪಾಡ್&zwnj;ಕಾಸ್ಟ್&zwnj; ವರ್ಸಸ್&zwnj; ವೋಡ್&zwnj;ಕಾಸ್ಟ್&zwnj;: &lt;/strong&gt;ಈ ಹೊಸ ಕಾಲಘಟ್ಟದಲ್ಲಿ ಓದಿಗಿಂತ ಜಾಸ್ತಿ ವೀಡಿಯೋ ಫಾರ್ಮ್ಯಾಟ್&zwnj; ಹತ್ತಿರವಾಗಿದೆ. ಯಾವುದೋ ಮಾಹಿತಿಯನ್ನು ಓದುವ ಬದಲಾಗಿ ಕಚೇರಿಗೆ ಹೋಗುವಾಗಲೋ, ಕೆಲಸ ಮಾಡುತ್ತಿರುವಾಗಲೋ ಕೇಳುವುದು ಒಳ್ಳೆಯದು ಎಂಬ ಭಾವನೆ ಬಂದಿದೆ. ಹೆಚ್ಚು ಜನರು ಆ ಭಾವನೆ ಹೊಂದಿದಂತೆಲ್ಲಾ ಪಾಡ್&zwnj;ಕಾಸ್ಟ್&zwnj;ಗಳು ಜನಪ್ರಿಯವಾದವು. ಸ್ಪೋಟಿಫೈ ಮುಂತಾದ ಕಡೆಗಳಲ್ಲಿ ಜನ ಆಡಿಯೋ ಪಾಡ್&zwnj;ಕಾಸ್ಟ್&zwnj;ಗಳನ್ನು ಕೇಳಿಕೊಂಡು ಮಾಹಿತಿಯನ್ನೋ, ಮನರಂಜನೆಯನ್ನೋ ಪಡೆಯತೊಡಗಿದರು. ಇದೀಗ ಅದು ವೋಡ್&zwnj;ಕಾಸ್ಟ್&zwnj; ಆಗಿದೆ. ವೀಡಿಯೋ ಸ್ವರೂಪದಲ್ಲಿ ಮಾತುಕತೆ. ಕೇಳಲೂ ಬಹುದು, ನೋಡಲೂಬಹುದು.&lt;/p&gt;&lt;p&gt;ಇಡೀ ಜಗತ್ತಿನಲ್ಲಿ ಇದೊಂದು ದೊಡ್ಡ ಮಾರುಕಟ್ಟೆಯಾಗಿ ಬೆಳೆದು ನಿಂತಿದೆ. ಅದರಲ್ಲಿ ನಮ್ಮ ಭಾರತ ವೋಡ್&zwnj;ಕಾಸ್ಟ್&zwnj; ಪ್ರೇಕ್ಷಕರ ವಿಚಾರದಲ್ಲಿ ಅಮೆರಿಕಾ, ಚೀನಾ ಬಿಟ್ಟರೆ ಮೂರನೇ ಸ್ಥಾನದಲ್ಲಿದೆ. ಅಷ್ಟು ಮಂದಿ ವೋಡ್&zwnj;ಕಾಸ್ಟ್&zwnj; ನೋಡುತ್ತಾರೆ ಅಥವಾ ಪಾಡ್&zwnj;ಕಾಸ್ಟ್&zwnj; ಕೇಳುತ್ತಾರೆ. 2020ರಲ್ಲಿ ಭಾರತ ದೇಶವೊಂದರಲ್ಲಿಯೇ ಸುಮಾರು 5 ಕೋಟಿ ಎಪ್ಪತ್ತು ದಶಲಕ್ಷ ಮಂದಿ ಒಂದು ತಿಂಗಳಲ್ಲಿ ಈ ಪಾಡ್&zwnj;ಕಾಸ್ಟ್&zwnj;ಗಳನ್ನು ಕೇಳುತ್ತಿದ್ದರು ಎಂದು ಒಂದು ಅಧ್ಯಯನ ಹೇಳುತ್ತದೆ. ಇದೀಗ ಆ ಸಂಖ್ಯೆ ತಿಂಗಳಿಗೆ 10 ಕೋಟಿಗೆ ತಲುಪಿದೆ. ಯೂಟ್ಯೂಬ್&zwnj;ನಲ್ಲಿಯೇ ತಿಂಗಳಿಗೆ 10 ಕೋಟಿ ಮಂದಿ ಪಾಡ್&zwnj;ಕಾಸ್ಟ್&zwnj; ವೀಕ್ಷಣೆ ಮಾಡುತ್ತಾರೆ ಎಂದು ಇತ್ತೀಚೆಗೆ ಒಂದು ಅಧ್ಯಯನ ಬಹಿರಂಗ ಪಡಿಸಿದೆ.&lt;/p&gt;&lt;p&gt;&lt;strong&gt;ಯಾರು ಕೇಳುತ್ತಿದ್ದಾರೆ?: &lt;/strong&gt;ಪಾಡ್&zwnj;ಕಾಸ್ಟ್&zwnj;ಗಳನ್ನು ಜಾಸ್ತಿ ಕೇಳುತ್ತಿರುವುದು ಜೆನ್&zwnj; ಜೀ ಪ್ರೇಕ್ಷಕರು. 35 ವರ್ಷದೊಳಗಿನ ಪಾಡ್&zwnj;ಕಾಸ್ಟ್&zwnj; ಪ್ರೇಕ್ಷಕರ ಸಂಖ್ಯೆ ಜಾಸ್ತಿ ಇದೆ. ಅವರು ಪಾಡ್&zwnj;ಕಾಸ್ಟ್&zwnj;ಗಳನ್ನು ನಂಬುತ್ತಿದ್ದಾರೆ. ಅದರಿಂದ ಮಾಹಿತಿ ಪಡೆಯುತ್ತಿದ್ದಾರೆ. ಜೆರೋಧಾ ಕಂಪನಿಯ ಸ್ಥಾಪಕರಲ್ಲೊಬ್ಬರಾದ ನಿತಿನ್&zwnj; ಕಾಮತ್&zwnj; ಅವರು ಅವರದೇ ಹೆಸರಿನ ಪಾಡ್&zwnj;ಕಾಸ್ಟ್&zwnj; ಅನ್ನು ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡೇ ನಡೆಸುತ್ತೇನೆ ಎನ್ನುತ್ತಾರೆ. ಸಾಧಕರ ಕತೆಯನ್ನು, ಅವರು ನಡೆದು ಬಂದ ಹಾದಿಯನ್ನು ತಿಳಿಸುವ ಮೂಲಕ ಯುವಪೀಳಿಗೆಗೆ ಅವರ ದಾರಿ ಸ್ಪಷ್ಟಗೊಳಿಸುವುದು ಅವರ ಉದ್ದೇಶ. ಅದಕ್ಕೆ ತಕ್ಕಂತೆ ಯುವಪೀಳಿಗೆ ಕೂಡ ತಮಗೆ ಬೇಕಾದ ವಿಚಾರಗಳನ್ನು ಯೂಟ್ಯೂಬ್&zwnj;ನಲ್ಲಿ ಹುಡುಕುತ್ತಿದೆ. ಓದುವ ಬದಲಾಗಿ, ಕೇಳುವುದೇ ಸುಖ ಅಂದುಕೊಳ್ಳುತ್ತಿದೆ. ಜೀವನ ಕತೆ, ಉದ್ಯಮ, ಆರೋಗ್ಯ, ಹಣಕಾಸು ಇತ್ಯಾದಿ ವಿಚಾರಗಳು ಅದರಿಂದಾಗಿಯೇ ಜನಪ್ರಿಯವಾಗಿದೆ. ಇನ್ನೊಂದು ದೊಡ್ಡ ವರ್ಗ ಎಂದರೆ 35 ವರ್ಷದಿಂದ 50 ವರ್ಷ ಒಳಗಿನವರು. ಈ ವರ್ಗದಲ್ಲಿಯೂ ಪಾಡ್&zwnj;ಕಾಸ್ಟ್&zwnj;ಗಳು ಭಾರಿ ಜನಪ್ರಿಯವಾಗಿವೆ. ಅದರ ನಂತರದ ಪೀಳಿಗೆ ಸ್ವಲ್ಪ ದೂರವೇ ಉಳಿದಿದೆ. ಹಾಗಂತ ಯಾರೂ ಕೇಳಲ್ಲ ಅಂತೇನೂ ಇಲ್ಲ. ಅವರಲ್ಲೂ ಬಹಳಷ್ಟು ಮಂದಿ ಪಾಡ್&zwnj;ಕಾಸ್ಟ್&zwnj; ಕೇಳುತ್ತಾರೆ. ಆದರೆ ಸಂಖ್ಯೆ ಕಡಿಮೆ.&lt;/p&gt;&lt;p&gt;&lt;strong&gt;ಯಾವ ಸಮಯ ಮತ್ತು ಎಷ್ಟು ಸಮಯ: &lt;/strong&gt;ಪಾಡ್&zwnj;ಕಾಸ್ಟ್&zwnj; ಯಾವ ಸಮಯದಲ್ಲಿ ಹೆಚ್ಚು ಕೇಳುತ್ತಾರೆ ಎಂಬ ಕುರಿತೂ ಸಮೀಕ್ಷೆಗಳು ನಡೆದಿವೆ. ಪಾಡ್&zwnj;ಕಾಸ್ಟ್&zwnj; ಪರಿಣತರೊಬ್ಬರ ಪ್ರಕಾರ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ, ಸಂಜೆ 5 ಗಂಟೆಯಿಂದ 8 ಗಂಟೆವರೆಗೆ ಜಾಸ್ತಿ ಮಂದಿ ಈ ಪಾಡ್&zwnj;ಕಾಸ್ಟ್&zwnj; ಕೇಳುತ್ತಾರೆ. ಆ ಸಮಯದಲ್ಲಿ ಬಹುತೇಕರು ಕಚೇರಿಗೋ, ಕಚೇರಿಯಿಂದ ಮನೆಗೋ ತೆರಳುತ್ತಿರುತ್ತಾರೆ. ಕಾರ್&zwnj;ನಲ್ಲಿ ಪಾಡ್&zwnj;ಕಾಸ್ಟ್&zwnj; ಹಾಕಿಕೊಂಡು ಕೇಳುವ ಸಾಧ್ಯತೆ ಹೆಚ್ಚು. ಜೊತೆಗೆ ಒಂದು ವೋಡ್&zwnj;ಕಾಸ್ಟ್&zwnj; ಅಥವಾ ಪಾಡ್&zwnj;ಕಾಸ್ಟ್&zwnj; ಎಷ್ಟು ಅವಧಿ ಇರಬೇಕು ಎಂಬ ಕುರಿತೂ ಚರ್ಚೆ ನಡೆದಿದೆ. ಅದಕ್ಕೆ ಸ್ಪಷ್ಟ ಉತ್ತರ ಲಭ್ಯವಿಲ್ಲ. ಜನರ ಅಟೆನ್ಷನ್&zwnj; ಸ್ಪಾನ್&zwnj; ಕಡಿಮೆ ಆಗಿರುವುದರಿಂದ ಕಡಿಮೆ ಅವಧಿಯಲ್ಲಿ ಕಂಟೆಂಟ್&zwnj; ಕೊಡಬೇಕು ಎಂಬ ವಿಚಾರ ಮುನ್ನೆಲೆಗೆ ಬಂದಿದ್ದರೂ ಯೂಟ್ಯೂಬ್&zwnj;ನಲ್ಲಿ ಆ ವಿಚಾರ ಸ್ಪಷ್ಟವಿಲ್ಲ. ಅಲ್ಲಿ ಕೆಲವರು ಅರ್ಧಗಂಟೆಯ ವೀಡಿಯೋ ಮಾಡುತ್ತಾರೆ. ಇನ್ನು ಕೆಲವರು ಎರಡೂವರೆ ಗಂಟೆಯ ವೀಡಿಯೋ ಅಪ್&zwnj;ಲೋಡ್&zwnj; ಮಾಡುವುದೂ ಇದೆ. ಅದಕ್ಕೆ ವೀಕ್ಷಕರೊಬ್ಬರು, &lsquo;ನಾನು ಎರಡೂವರೆ ಗಂಟೆಯೂ ವೀಡಿಯೋ ನೋಡುತ್ತೇನೆ ಅಂತ ಹೇಳುವುದಿಲ್ಲ. ನನ್ನ ಇಷ್ಟದ ಟಾಪಿಕ್&zwnj; ಕೇಳಿ ಫಾರ್ವರ್ಡ್&zwnj; ಮಾಡುವುದೂ ಇದೆ&rsquo; ಎನ್ನುತ್ತಾರೆ. ಹಾಗಾಗಿ ಅವರವರ ಇಷ್ಟದ ಪ್ರಕಾರ ಪಾಡ್&zwnj;ಕಾಸ್ಟ್&zwnj; ಅವಧಿ ನಿರ್ಧಾರವಾಗುತ್ತದೆ.&lt;/p&gt;&lt;p&gt;&lt;strong&gt;ಜನಪ್ರಿಯ ಪಾಡ್&zwnj;ಕಾಸ್ಟ್&zwnj;ಗಳು: &lt;/strong&gt;ಅಂತಾರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರೀಯ ನೂರಾರು ಜನಪ್ರಿಯ ವೋಡ್&zwnj;ಕಾಸ್ಟ್&zwnj; ಚಾನಲ್&zwnj;ಗಳಿವೆ. ಟಾಪ್&zwnj; 5 ಪಾಡ್&zwnj;ಕಾಸ್ಟರ್&zwnj; ಅಂತ ಗೂಗಲ್&zwnj; ಮಾಡಿದರೆ ಅವರೆಲ್ಲರ ಚಾನಲ್&zwnj; ಹೆಸರುಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ನರೇಂದ್ರ ಮೋದಿಯವರು ಸಂದರ್ಶನ ನೀಡಿದ ನಿಖಿಲ್&zwnj; ಕಾಮತ್&zwnj;, ವಿಜಯಮಲ್ಯ ಸಂದರ್ಶನ ನೀಡಿದ ರಾಜ್&zwnj; ಶಮಾನಿ, ವಿವಾದಕ್ಕೊಳಗಾದ ಬೀರ್&zwnj; ಬೈಸಿಪ್ಸ್&zwnj;ನ ರಣವೀರ್&zwnj; ಅಲಾಹಾಬಾದಿಯಾ ಕುರಿತು ಹೆಚ್ಚಿನ ಜನಕ್ಕೆ ಪರಿಚಯ ಇದೆ. ಜಿಯೋ ಪಾಲಿಟಿಕ್ಸ್&zwnj;, ಕ್ರೈಮ್&zwnj;, ಕಾಮಿಡಿ, ಲೈಫ್&zwnj; ಸ್ಟೋರಿ, ಫೈನಾನ್ಸ್&zwnj; ಮುಂತಾದ ವಿಚಾರಗಳಲ್ಲಿ ಸಾಕಷ್ಟು ಪಾಡ್&zwnj;ಕಾಸ್ಟ್&zwnj;ಗಳಿವೆ. ಆರಂಭದಲ್ಲಿ ಇಂಗ್ಲಿಷ್&zwnj;ನಲ್ಲಿ ಮಾತ್ರ ಪಾಡ್&zwnj;ಕಾಸ್ಟ್&zwnj;ಗಳಿದ್ದವು. ನಂತರ ಹಿಂದಿಯಲ್ಲಿ ಸಾಕಷ್ಟು ಶುರುವಾದವು. ಅದರ ಬೆನ್ನಲ್ಲಿ ತಮಿಳು ಪಾಡ್&zwnj;ಕಾಸ್ಟ್&zwnj; ಸ್ಥಾನ ಪಡೆದಿವೆ. ಈ ಭಾಷೆಗಳ ಹೊರತಾಗಿ ಮರಾಠಿ, ಬೆಂಗಾಲಿ, ಗುಜರಾತಿ ಭಾಷೆಯ ಪಾಡ್&zwnj;ಕಾಸ್ಟ್&zwnj;ಗಳು ಜನಪ್ರಿಯತೆಯಲ್ಲಿ ಮುಂದಿವೆ ಎಂದು ತಜ್ಞರು ಹೇಳುತ್ತಾರೆ.&lt;/p&gt;&lt;p&gt;ವಿಶೇಷ ಎಂದರೆ ನ್ಯೂಸ್&zwnj; ಪಾಡ್&zwnj;ಕಾಸ್ಟ್&zwnj;ಗಳಿಗೂ ಈಗ ಬೇಡಿಕೆ ಇದೆ. 2023ರ ವರದಿಯ ಪ್ರಕಾರ ಶೇ.63ರಷ್ಟು ಜೆನ್&zwnj; ಜೀಗಳು ಸುದ್ದಿಯನ್ನು ತಿಳಿದುಕೊಳ್ಳಲು ಪಾಡ್&zwnj;ಕಾಸ್ಟ್&zwnj;ಗಳನ್ನು ಅವಲಂಬಿಸಿದ್ದಾರೆ. ಎಲ್ಲಿ ಬೇಕಾದರೂ ಸುದ್ದಿ ತಿಳಿದುಕೊಳ್ಳಬಹುದು, ಬೇರೇನಾದರೂ ಮಾಡುವಾಗಲೂ ಸುದ್ದಿ ತಿಳಿಯಬಹುದು ಎಂಬುದೇ ಅದಕ್ಕೆ ಕಾರಣವಾಗಿದೆ. ಕನ್ನಡದಲ್ಲಿಯೂ ಜೋರಾಗಿವೆ ಕನ್ನಡದಲ್ಲಿ ಕೂಡ ಬಹಳಷ್ಟು ಪಾಡ್&zwnj;ಕಾಸ್ಟ್&zwnj;ಗಳಿವೆ. ಕೀರ್ತಿ ನಾರಾಯಣ ಅವರ ಕೀರ್ತಿಇನ್&zwnj;ಟಿ ಕ್ಲಿನಿಕ್&zwnj; ಅವರ ಮಾತುಕತೆ ಶೈಲಿ, ತಮಾಷೆಯಿಂದ ಜನಪ್ರಿಯವಾಗಿದೆ. ರ್&zwj;ಯಾಪಿಡ್&zwnj; ರಶ್ಮಿ ಅವರ ಜಸ್ಟ್&zwnj;ಕ್ಯೂರಿಯಸ್&zwnj;, ಮಯೂರ ರಾಘವೇಂದ್ರ ಅವರ ಗೋಲ್ಡ್&zwnj;ಕ್ಲಾಸ್&zwnj;, ಸ್ಕ್ಯಾಂಡಿಮ್ಯಾನ್&zwnj; ಮುಂತಾದ ಪಾಡ್&zwnj;ಕಾಸ್ಟ್&zwnj;ಗಳು ಮೆಚ್ಚುಗೆ ಗಳಿಸಿವೆ. ಕೀರ್ತಿ ನಾರಾಯಣ ಅವರು ಪ್ರೇಕ್ಷಕರು ಹೇಗಿದ್ದಾರೆ ಎಂದು ಮಾತನಾಡುತ್ತಾ, &lsquo;ಪ್ರೇಕ್ಷಕರು ನಮ್ಮನ್ನು ಬಹಳ ಗಮನಿಸುತ್ತಾರೆ. ಧ್ವನಿಯಲ್ಲಿ ಏರುಪೇರಾದರೂ ಕಮೆಂಟ್&zwnj; ಮಾಡುತ್ತಾರೆ. ಪ್ರಶ್ನೆ ಇಷ್ಟವಾಗದಿದ್ದರೂ ಹೇಳುತ್ತಾರೆ. ಹಾಗಾಗಿ ನಮ್ಮ ಜವಾಬ್ದಾರಿ ಹೆಚ್ಚು ಮತ್ತು ತುಂಬಾ ಸಿದ್ಧತೆ ಬೇಕು&rsquo; ಎನ್ನುತ್ತಾರೆ.&lt;/p&gt;&lt;h2&gt;&lt;strong&gt;ದೊಡ್ಡ ಮಾರುಕಟ್ಟೆ&lt;/strong&gt;&lt;/h2&gt;&lt;p&gt;ವೋಡ್&zwnj;ಕಾಸ್ಟ್&zwnj; ಮಾರುಕಟ್ಟೆ ಬಹಳ ದೊಡ್ಡದಾಗಿದೆ. ಇದರಿಂದಲೇ ಬದುಕು ಕಟ್ಟಿಕೊಂಡವರಿದ್ದಾರೆ. ದೊಡ್ಡ ಸಾಮ್ರಾಜ್ಯ ನಿರ್ಮಿಸಿದವರೂ ಇದ್ದಾರೆ. ಅವರವರ ಶ್ರಮಕ್ಕೆ ತಕ್ಕ ಫಲ ದೊರಕಿದೆ. ಈಗೀಗ ಸೆಲೆಬ್ರಿಟಿಗಳೂ ಈ ಪಾಡ್&zwnj;ಕಾಸ್ಟ್&zwnj; ವಿಭಾಗಕ್ಕೆ ಕಾಲಿಟ್ಟಿದ್ದಾರೆ. ಯಾರು ನೇರವಾಗಿ ಹೃದಯ ತಲುಪಿದ್ದಾರೋ ಅವರು ಗೆದ್ದಿದ್ದಾರೆ.ವಾಣಿಜ್ಯ ವಿಚಾರಕ್ಕೆ ಬರುವುದಾದರೆ ಇದೊಂದು ಬಹಳ ದೊಡ್ಡ ಮಾರುಕಟ್ಟೆ. ಬಹುತೇಕ ಬ್ರಾಂಡ್&zwnj;ಗಳು ಈಗ ಡಿಜಿಟಲ್&zwnj;ಗೆ ಶಿಫ್ಟ್&zwnj; ಆಗಿವೆ. ಅವರೆಲ್ಲರೂ ಡಿಜಿಟಲ್&zwnj; ಕಂಟೆಂಟ್&zwnj;ಗೆ ಪ್ರಾಯೋಜಕತ್ವ ಒದಗಿಸುತ್ತಾರೆ. ಯಾಕೆಂದರೆ ಅವರಿಗೆ ಅವರ ಟಾರ್ಗೆಟ್&zwnj; ಆಡಿಯನ್ಸ್&zwnj; ಅನ್ನು ಈ ಮೂಲಕ ತಲುಪುವುದು ಸುಲಭವಾಗುತ್ತದೆ. ಈ ಕ್ಷೇತ್ರ ಇನ್ನೂ ಬೆಳೆಯಲಿದೆ ಎಂದು ತಜ್ಞರು ಹೇಳುತ್ತಾರೆ. ಒಂದು ವರದಿಯ ಪ್ರಕಾರ 2023ರ ವೇಳೆಗೆ ವೋಡ್&zwnj;ಕಾಸ್ಟ್&zwnj; ಮಾರುಕಟ್ಟೆ 23 ಸಾವಿರಕೋಟಿವರೆಗೆ ಬೆಳೆಯಲಿದೆ. ಹಾಗಾಗಿ ಈ ವೋಡ್&zwnj;ಕಾಸ್ಟ್&zwnj; ಇನ್ನೂ ಆಗಾಧವಾಗಿ ಬೆಳೆಯುವ ಸಾಧ್ಯತೆ ಇದೆ. ಆಗ ಏನೇನೋ ಬದಲಾವಣೆಗಳು ಜರುಗಲಿವೆ ಎಂಬುದು ಸದ್ಯದ ಕುತೂಹಲ.&lt;/p&gt;]]></content:encoded>
            <category>magazine</category>
            <dc:creator>Govindaraj S</dc:creator>
            <atom:link href="https://kannada.asianetnews.com/magazine/podcast-vodcast-growth-india-market-analysis-explained-gvd/articleshow-nccigfo"/>
        </item>
        <item>
            <title><![CDATA[ಸಾಹತ್ಯಕ್ಕೆ ನೋಬೆಲ್ ಪ್ರಶಸ್ತಿ ಬಂದಾಗ ಹಾನ್ ಕಾಂಗ್ ಸಂಭ್ರಮಿಸಿದ್ದು ಹೇಗೆ?]]></title>
            <link>https://kannada.asianetnews.com/special/korean-nobel-prize-winner-han-kang-celebrates-with-having-cup-of-tea-with-son-slg09h</link>
            <guid isPermaLink="true">https://kannada.asianetnews.com/special/korean-nobel-prize-winner-han-kang-celebrates-with-having-cup-of-tea-with-son-slg09h</guid>
            <pubDate>Sat, 23 Nov 2024 10:56:42 +0530</pubDate>
            <description><![CDATA[&lt;p&gt;ನೊಬೆಲ್ ಪ್ರಶಸ್ತಿ ವಿಜೇತೆ ಹಾನ್ ಕಾಂಗ್, ಜೆನ್ನಿ ರೈಡನ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ, ಅವರ ಬರವಣಿಗೆಯ ಪ್ರೇರಣೆ, 'ದಿ ವೆಜಿಟೇರಿಯನ್' ಕಾದಂಬರಿಯ ಹಿಂದಿನ ಕಥೆ ಮತ್ತು ಪ್ರಶಸ್ತಿ ಗೆದ್ದ ಸುದ್ದಿ ತಿಳಿದಾಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ja29k1942dys1y8x1m8sgm0n,imgname-bhanuprabha-honkong-article.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಲೋ.. ಹಾನ್ ಕಾಂಗ್ ಮಾತಾಡ್ತಿರೋದಾ?&lt;/strong&gt; -ಹೌದು&lt;/p&gt; &lt;p&gt;&lt;strong&gt;ನಾನು ಜೆನ್ನಿ ರೈಡನ್, ನೊಬೆಲ್ ಪ್ರೈಜ್&zwnj;ನಿಂದ. ಅಭಿನಂದನೆ.&lt;/strong&gt; -ಥ್ಯಾಂಕ್ಸ್&lt;/p&gt; &lt;p&gt;&lt;strong&gt;ಈಗ ಏನನ್ನಿಸುತ್ತಿದೆ?&lt;/strong&gt; -ಸಿಕ್ಕಾಪಟ್ಟೆ ಆಶ್ಚರ್ಯವಾಗಿದೆ, absolutely. I&rsquo;m honoured.&lt;/p&gt; &lt;p&gt;&lt;strong&gt;ಬಹುಮಾನ ಬಂದಿದ್ದು ಹೇಗೆ ಗೊತ್ತಾಯ್ತು?&lt;/strong&gt; -ಯಾರೋ ಫೋನ್ ಮಾಡಿ ಹೇಳಿದ್ದರು. ಸುದ್ದಿ ಕೇಳಿದಾಗ ಆಶ್ಚರ್ಯವಾಯ್ತು. ನಾನು ಆಗಷ್ಟೇ ನನ್ನ ಮಗನ ಜತೆ ಊಟ ಮುಗಿಸಿದ್ದೆ. ಈಗಿನ್ನೂ ಕೊರಿಯಾದಲ್ಲಿ ರಾತ್ರಿ ಎಂಟು ಗಂಟೆ. ತಣ್ಣಗಿನ ಶಾಂತ ರಾತ್ರಿ. ನಿಜಕ್ಕೂ ಅಚ್ಚರಿ ನನಗೆ.&lt;/p&gt; &lt;p&gt;&lt;strong&gt;ನಿಮ್ಮನೆ ಸಿಯೋಲ್&zwnj;ನಲ್ಲಿದೆ ಅಲ್ವಾ.. ಇವತ್ತಿಡೀ ಏನು ಮಾಡಿದೆ?&lt;/strong&gt; -ಇವತ್ತೇನೂ ಕೆಲಸ ಮಾಡಲಿಲ್ಲ, ಒಂದಷ್ಟು ಓದು, ಒಂಚೂರು ವಾಕಿಂಗ್. ಸರಳವಾಗಿ ಸಾಗಿದ ದಿನ ಇದು.&lt;/p&gt; &lt;p&gt;&lt;strong&gt;ಈ ಸುದ್ದಿ ಕೇಳಿ ಮಗ ಏನಂದ?&lt;/strong&gt; -ಅವನಿಗೂ ಅಚ್ಚರಿಯಾಯಿತು. ನಾವು ಹೆಚ್ಚಿಗೇನೂ ಮಾತಾಡಿಕೊಳ್ಳಲಿಲ್ಲ. ಅಷ್ಟು ಸಮಯ ಇರಲಿಲ್ಲ.&lt;/p&gt; &lt;p&gt;&lt;strong&gt;ಈ ಪ್ರಶಸ್ತಿ ಪಡೆದ ಮೊದಲ ಕೊರಿಯನ್ ನೀವು, ಹೇಗನ್ನಿಸುತ್ತಿದೆ?&lt;/strong&gt; -ನಾನು ಪುಸ್ತಕ ಓದುತ್ತಾ ಬೆಳೆದವಳು. ಬಾಲ್ಯದಿಂದಲೂ ಕೊರಿಯನ್ ಮತ್ತು ಅನುವಾದಗೊಂಡ ಪುಸ್ತಕಗಳನ್ನು ಸಾಕಷ್ಟು ಓದಿದ್ದೀನಿ. ಕೊರಿಯನ್ ಸಾಹಿತ್ಯ ನನ್ನ ಮನಸ್ಸಿಗೆ ಹತ್ತಿರವಾಗಿದೆ. ಈ ಸುದ್ದಿ ನನ್ನಂತೆ ಕೊರಿಯನ್ ಸಾಹಿತ್ಯ ಓದುವ ಎಲ್ಲರಿಗೂ ಆಪ್ತವಾಗುತ್ತದೆ.&lt;/p&gt; &lt;p&gt;&lt;strong&gt;ನಿಮ್ಮ ಸ್ಫೂರ್ತಿಯ ಸೆಲೆ ಯಾವುದು?&lt;/strong&gt; -ಎಲ್ಲಾ ಲೇಖಕರೂ ಬಾಲ್ಯದಿಂದಲೇ ನನಗೆ ಸ್ಫೂರ್ತಿ. ಅವರು ಬದುಕಿನ ಅರ್ಥ ಅರಸುತ್ತಿರುತ್ತಾರೆ. ಕೆಲವೊಮ್ಮೆ ಸೋಲುತ್ತಾ, ಕೆಲವೊಮ್ಮೆ ಹಟಬಿಡದೇ ಮುನ್ನುಗ್ಗುತ್ತಾ ಇರುವ ಅವರ ಪ್ರಯತ್ನ ಮತ್ತು ಶಕ್ತಿಯೇ ನನಗೆ ಸ್ಫೂರ್ತಿ. ಕೆಲವು ಹೆಸರುಗಳನ್ನು ಹೇಳುವುದು ನನಗೆ ಸಾಧ್ಯವಿಲ್ಲ.&lt;/p&gt; &lt;p&gt;&lt;strong&gt;ಸ್ವೀಡಿಷ್ ಲೇಖಕಿ ಆಸ್ಟ್ರಿಡ್ ಲಿಂಡ್&zwnj;ಗ್ರೆನ್ ನಿಮಗೆ ಸ್ಫೂರ್ತಿ ಅಂತ ಕೇಳಿದ್ದೆ.&lt;/strong&gt; -ಬಾಲ್ಯದಲ್ಲಿ ಅವಳ ಪುಸ್ತಕ ಓದುತ್ತಿದ್ದೆ. ಲಯನ್&zwnj;ಹಾರ್ಟ್ ಬ್ರದರ್ಸ್ ನನ್ನಿಷ್ಟದ ಪುಸ್ತಕವಾಗಿತ್ತು. ಅವಳೊಬ್ಬಳೇ ನನಗೆ ಪ್ರೇರಣೆ ಆಗಿದ್ದಳು ಅಂತ ಈಗ ಹೇಳಲಾರೆ. ಆ ಪುಸ್ತಕ ಓದಿದಾಗ ನನ್ನಲ್ಲಿದ್ದ ಸಾವು ಬದುಕಿನ ಕುರಿತ ಪ್ರಶ್ನೆಗಳು ಅಲ್ಲೂ ಕಂಡವು.&lt;/p&gt; &lt;p&gt;&lt;strong&gt;ಈಗಷ್ಟೇ ನಿನ್ನ ಪುಸ್ತಕ ಓದಲು ಆರಂಭಿಸುವವರು ಯಾವುದರಿಂದ ಶುರುಮಾಡಬಹುದು?&lt;/strong&gt; -ಎಲ್ಲಾ ಲೇಖಕರೂ ತಮ್ಮ ಇತ್ತೀಚಿನ ಪುಸ್ತಕವನ್ನು ಹೆಚ್ಚು ಇಷ್ಟಪಡುತ್ತಾರೆ. ನನ್ನ ಹೊಸ ಪುಸ್ತಕ ವಿ ಡು ನಾಟ್ ಪಾರ್ಟ್&zwnj;. ಅದರಿಂದ ಓದು ಶುರುಮಾಡಬಹುದು ಅನ್ನಿಸುತ್ತೆ. ವೈಟ್ ಬುಕ್ ಕೂಡ ಓದಬಹುದು. ಅದು ನನ್ನ ಖಾಸಗಿ ಪುಸ್ತಕ, ಆತ್ಮಕಥನದ ಅಂಶವೂ ಇದೆ. ಹೇಗೂ ದಿ ವೆಜಿಟೇರಿಯನ್ ಇದ್ದೇ ಇದೆ.&lt;/p&gt; &lt;p&gt;&lt;strong&gt;ಹೊರನಾಡಿನವರಿಗೆ ಈಗ ದಿ ವೆಜಿಟೇರಿಯನ್ ಪರಿಚಯವಾಗುತ್ತಿದೆ. ಆ ಪುಸ್ತಕದ ಬಗ್ಗೆ ಏನಾದರೂ ಹೇಳಿ&lt;/strong&gt; -ಅದನ್ನು ನಾನು ಮೂರು ವರ್ಷ ಬರೆದೆ. ನನಗೆ ವೈಯಕ್ತಿಕವಾಗಿ ಬೇರೆ ಬೇರೆ ಕಾರಣಕ್ಕೆ ಅವು ಬಲು ಕಷ್ಟದ ವರ್ಷಗಳು. ಅದರ ನಾಯಕಿಯ ಚಿತ್ರ, ಅವಳ ಸುತ್ತಲಿನ ಮಂದಿ, ಸೂರ್ಯನ ಬೆಳಕು, ಮರಗಳ ಚಿತ್ರಗಳನ್ನೆಲ್ಲ ಕಟ್ಟಿಕೊಡಲು ಒದ್ದಾಡುತ್ತಿದ್ದೆ. ಆ ಮೂರು ವರ್ಷಗಳಲ್ಲಿ ಅವೆಲ್ಲವೂ ನನ್ನ ಮನಸ್ಸಿಗೆ ಸ್ಪಷ್ಟವಾಗಿದ್ದವು.&lt;/p&gt; &lt;p&gt;&lt;strong&gt;ಈ ಸಂಭ್ರಮವನ್ನು ಹೇಗೆ ಆಚರಿಸೋ ಯೋಚನೆಯಿದೆ?&lt;/strong&gt; -ಈ ಫೋನ್ ಮುಗಿದ ತಕ್ಷಣ ಟೀ ಕುಡೀತೀನಿ. ಸಾಮಾನ್ಯವಾಗಿ ನಾನು ಟೀ ಕುಡಿಯಲ್ಲ. ಈಗ ಮಗನ ಜತೆ ಟೀ ಕುಡೀತಾ ತಣ್ಣಗೆ ಇದನ್ನು ಸೆಲೆಬ್ರೇಟ್ ಮಾಡ್ತೀನಿ.&lt;/p&gt; &lt;p&gt;&lt;strong&gt;ಮಾಂಸಾಹಾರ ಬಿಟ್ಟವಳ ಕತೆ&lt;/strong&gt; ನೊಬೆಲ್ ಪುರಸ್ಕಾರ ಪಡೆದ The Vegetarian ಕಾದಂಬರಿಗೆ 2016ರಲ್ಲೇ ಬೂಕರ್ ಕೂಡ ಬಂದಿತ್ತು. ಇದು ಮಧ್ಯವಯಸ್ಕ ಕೊರಿಯನ್ ಮಹಿಳೆಯ ಕತೆ. ಒಂದು ರಾತ್ರಿ ಆಕೆ ಇದ್ದಕ್ಕಿದ್ದಂತೆ ಮಾಂಸಾಹಾರ ಬಿಟ್ಟು ಬಿಡುತ್ತಾಳೆ. ಇನ್ನು ಮೇಲೆ ಮಾಂಸ ತಿನ್ನೋದಿಲ್ಲ ಅಂತ ತೀರ್ಮಾನಿಸುತ್ತಾಳೆ. ಅವಳ ಈ ಕತೆಯಲ್ಲಿ ಆಕೆಯೇ ಪ್ರಮುಖ ಪಾತ್ರವಾಗಿದ್ದರೂ, ಕತೆ ಸಾಗುವುದು ಅವಳ ಗಂಡ, ಭಾವ ಮತ್ತು ದೊಡ್ಡಕ್ಕನ ಮಾತುಗಳಲ್ಲಿ. ಅವರ ಪ್ರತಿಕ್ರಿಯೆ, ಆಕ್ರೋಶ, ಆಕರ್ಷಣೆ, ಮತ್ಸರಗಳ ನಡುವೆಯೇ ತನ್ನ ನಿರ್ಧಾರದಿಂದ ಕುಟುಂಬದಲ್ಲಾದ ಆಘಾತಕ್ಕೆ ಮಣಿಯದೇ ಇರಲು ನಿರ್ಧರಿಸುವ ಆಕೆಯ ಛಲದ ಕತೆ ಇದು. ಈ ಮೂರು ಪಾತ್ರಗಳ ಪ್ರತಿಕ್ರಿಯೆಯಲ್ಲಿದೇ ಪಿತೃ ಪ್ರಧಾನ ಸಮಾಜದ ಕಟು ಚಿತ್ರ ದೊರಕುತ್ತಾ ಹೋಗುತ್ತದೆ. ಉದ್ಯೋಗದ ಬೆನ್ನುಹತ್ತಿದ ಸಮಾಜದ ನಿಲುವುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. &amp;nbsp;&lt;/p&gt;]]></content:encoded>
            <category>magazine</category>
            <dc:creator>Suvarna News</dc:creator>
            <atom:link href="https://kannada.asianetnews.com/special/korean-nobel-prize-winner-han-kang-celebrates-with-having-cup-of-tea-with-son-slg09h"/>
        </item>
    </channel>
</rss>
