<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 20 May 2026 23:27:49 +0530</lastBuildDate>
        <atom:link href="https://kannada.asianetnews.com/rss/life" rel="self" type="application/rss+xml"/>
        <item>
            <title><![CDATA[ಬ್ರಾಯ್ಲರ್ ಕೋಳಿಗಳು 45 ದಿನದಲ್ಲಿ ಬೆಳೆಯೋ ರಹಸ್ಯವೇನು? ಕಾರಣ ತಿಳಿದ್ರೆ ಶಾಕ್ ಆಗ್ತೀರಾ!]]></title>
            <link>https://kannada.asianetnews.com/gallery/life/broiler-chicken-growth-hormones-myth-vs-fact-gvd-svg437l</link>
            <guid isPermaLink="true">https://kannada.asianetnews.com/gallery/life/broiler-chicken-growth-hormones-myth-vs-fact-gvd-svg437l</guid>
            <pubDate>Wed, 20 May 2026 23:27:43 +0530</pubDate>
            <description><![CDATA[&lt;p&gt;ಬ್ರಾಯ್ಲರ್ ಕೋಳಿಗಳು ತುಂಬಾನೇ ವೇಗವಾಗಿ ಬೆಳೆಯುತ್ತವೆ. ಹಾಗಾಗಿ, ಇವುಗಳಿಗೆ ಗ್ರೋತ್ ಹಾರ್ಮೋನ್ ಇಂಜೆಕ್ಷನ್ ಕೊಡ್ತಾರೆ, ಇದನ್ನು ತಿಂದರೆ ಆರೋಗ್ಯಕ್ಕೆ ಕೆಟ್ಟದ್ದು ಅಂತ ಜನ ಹೆದರುತ್ತಾರೆ. ಇದರಲ್ಲಿ ನಿಜವೆಷ್ಟು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks36rkp497yantk6s8mrrbrv,imgname-1-1779297963716.png" type="image/jpeg" height="390" width="690"/>
            <content:encoded><![CDATA[&lt;p&gt;ಬ್ರಾಯ್ಲರ್ ಕೋಳಿಗಳು ತುಂಬಾನೇ ವೇಗವಾಗಿ ಬೆಳೆಯುತ್ತವೆ. ಹಾಗಾಗಿ, ಇವುಗಳಿಗೆ ಗ್ರೋತ್ ಹಾರ್ಮೋನ್ ಇಂಜೆಕ್ಷನ್ ಕೊಡ್ತಾರೆ, ಇದನ್ನು ತಿಂದರೆ ಆರೋಗ್ಯಕ್ಕೆ ಕೆಟ್ಟದ್ದು ಅಂತ ಜನ ಹೆದರುತ್ತಾರೆ. ಇದರಲ್ಲಿ ನಿಜವೆಷ್ಟು?&lt;/p&gt;&lt;img&gt;&lt;p&gt;ಆರೋಗ್ಯವಾಗಿರಲು ನಮಗೆ ಪ್ರತಿದಿನ ಪ್ರೋಟೀನ್ ಬೇಕು. ಚಿಕನ್&zwnj;ನಲ್ಲಿ ಇದು ಹೇರಳವಾಗಿದೆ. ಆದರೆ, ಬ್ರಾಯ್ಲರ್ ಚಿಕನ್ ತಿನ್ನಬಾರದು, ನಾಟಿ ಕೋಳಿ ಮಾತ್ರ ತಿನ್ನಬೇಕು ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಬ್ರಾಯ್ಲರ್ ಕೋಳಿಗಳಿಗೆ ಗ್ರೋತ್ ಹಾರ್ಮೋನ್ ನೀಡುತ್ತಾರೆ, ಇದರಿಂದಾಗಿ 8 ವರ್ಷಕ್ಕೇ ಹೆಣ್ಣುಮಕ್ಕಳು ದೊಡ್ಡವರಾಗುತ್ತಾರೆ, ಬೇರೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಹಲವರು ನಂಬುತ್ತಾರೆ. ಇದರಲ್ಲಿ ಸತ್ಯವಿದೆಯೇ? ಈ ಕೋಳಿಗಳು ಅಷ್ಟು ಬೇಗ ಹೇಗೆ ಬೆಳೆಯುತ್ತವೆ? ತಿಳಿಯೋಣ ಬನ್ನಿ.&lt;/p&gt;&lt;img&gt;&lt;p&gt;ಬ್ರಾಯ್ಲರ್ ಕೋಳಿಗಳು ವೇಗವಾಗಿ ಬೆಳೆಯಲು ಗ್ರೋತ್ ಹಾರ್ಮೋನ್ ನೀಡುತ್ತಾರೆ ಎನ್ನುವುದು ಕೇವಲ ಒಂದು ಸುಳ್ಳು ಸುದ್ದಿ ಎಂದು ಹ್ಯೂಮನ್ ಲೀಗ್ ವರದಿ ಹೇಳುತ್ತದೆ. ಲಕ್ಷಾಂತರ ಕೋಳಿಗಳಿಗೆ ಹಾರ್ಮೋನ್ ಚುಚ್ಚುಮದ್ದು ನೀಡುವುದು ಅಸಾಧ್ಯದ ಮಾತು. ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪಳನಿಯಪ್ಪನ್ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ, 'ಬ್ರಾಯ್ಲರ್ ಕೋಳಿಗಳ ಬಗ್ಗೆ ಜನರಲ್ಲಿರುವುದು ಕೇವಲ ಭಯ. ಅವುಗಳ ವೇಗದ ಬೆಳವಣಿಗೆಗೆ ಯಾವುದೇ ಕೃತಕ ಹಾರ್ಮೋನ್ ಬಳಸುವುದಿಲ್ಲ.&lt;/p&gt;&lt;img&gt;&lt;p&gt;ಪ್ರತಿ ಕೋಳಿಗೆ ಪ್ರತಿದಿನ ಇಂಜೆಕ್ಷನ್ ನೀಡುವುದು ಸಾಧ್ಯವಿಲ್ಲ. ಒಂದು ವೇಳೆ ಆಹಾರದ ಮೂಲಕ ಹಾರ್ಮೋನ್ ನೀಡಿದರೂ, ಜೀರ್ಣಾಂಗ ವ್ಯವಸ್ಥೆಯು ಅದನ್ನು ಸಾಮಾನ್ಯ ಪ್ರೋಟೀನ್&zwnj;ನಂತೆ ಜೀರ್ಣಿಸಿಕೊಳ್ಳುತ್ತದೆ. ಇದರಿಂದ ಯಾವುದೇ ಪರಿಣಾಮ ಇರುವುದಿಲ್ಲ' ಎಂದು ವಿವರಿಸಿದ್ದಾರೆ. ಹಾಗಾದರೆ, ಯಾವುದೇ ಇಂಜೆಕ್ಷನ್ ಇಲ್ಲದೆ ಬ್ರಾಯ್ಲರ್ ಕೋಳಿಗಳು ಇಷ್ಟು ವೇಗವಾಗಿ ಹೇಗೆ ಬೆಳೆಯುತ್ತವೆ ಎಂಬ ಅನುಮಾನ ಬರಬಹುದು.&lt;/p&gt;&lt;img&gt;&lt;p&gt;'ಆರ್ಗಾನಿಕ್ ಫೀಡ್ಸ್' ಪ್ರಕಾರ, ಬ್ರಾಯ್ಲರ್ ಕೋಳಿಗಳು ಸಾಮಾನ್ಯ ನಾಟಿ ಕೋಳಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ತಳಿ. ಈ ತಳಿಯ ಕೋಳಿಗಳು ವೇಗವಾಗಿ, ಅಂದರೆ ಸುಮಾರು 45 ದಿನಗಳಲ್ಲಿಯೇ ಸಂಪೂರ್ಣವಾಗಿ ಬೆಳೆಯುತ್ತವೆ. ದಶಕಗಳಿಂದ ಪೌಲ್ಟ್ರಿ ತಜ್ಞರು ಆರೋಗ್ಯಕರ ಮತ್ತು ವೇಗವಾಗಿ ಬೆಳೆಯುವ ಕೋಳಿಗಳನ್ನೇ ಆಯ್ದು ಸಾಕುತ್ತಿದ್ದಾರೆ (Selective breeding). ಇವುಗಳಿಗೆ ಪ್ರೋಟೀನ್, ವಿಟಮಿನ್&zwnj;ಗಳು ಮತ್ತು ಖನಿಜಾಂಶಗಳು ಹೆಚ್ಚಿರುವ ಸಮತೋಲಿತ ಆಹಾರವನ್ನು ನೀಡುತ್ತಾರೆ.&lt;/p&gt;&lt;img&gt;&lt;p&gt;ಇದೇ ಕಾರಣಕ್ಕೆ ಅವು ಬೇಗನೆ ತೂಕ ಹೆಚ್ಚಿಸಿಕೊಳ್ಳುತ್ತವೆ. ಆದರೆ, ಕೆಲವು ಫಾರ್ಮ್&zwnj;ಗಳಲ್ಲಿ ರೋಗ ಬರದಂತೆ ತಡೆಯಲು ಆ್ಯಂಟಿಬಯೋಟಿಕ್&zwnj;ಗಳನ್ನು ನೀಡುತ್ತಾರೆ. ಇದು ಕೂಡ ಅಪಾಯಕಾರಿ. ಆದರೆ, ಆ್ಯಂಟಿಬಯೋಟಿಕ್&zwnj; ನೀಡದೆ ಬೆಳೆಸಿದ ಕೋಳಿಗಳನ್ನು ನಾವು ತಿನ್ನಬಹುದು. ಒಂದು ವೇಳೆ ಆ್ಯಂಟಿಬಯೋಟಿಕ್&zwnj; ನೀಡಿದ್ದರೂ, ಮಾರುಕಟ್ಟೆಗೆ ಕಳುಹಿಸುವ ಕೆಲವು ದಿನಗಳ ಮೊದಲು ಅದನ್ನು ನಿಲ್ಲಿಸಬೇಕು. ಅಂತಹ ಚಿಕನ್ ತಿಂದರೆ ಯಾವುದೇ ಸಮಸ್ಯೆ ಇರುವುದಿಲ್ಲ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/life/broiler-chicken-growth-hormones-myth-vs-fact-gvd-svg437l"/>
        </item>
        <item>
            <title><![CDATA[Trisha: 'ಮೇ ಮ್ಯಾಜಿಕ್, ಇನ್ನೊಂದು ಗೆಲುವಿಗೆ' ಎಂದ ತ್ರಿಷಾ.. 'ದಳಪತಿ' ಗೆಲುವಿಗೆ ಕನೆಕ್ಟ್ ಮಾಡಿಕೊಂಡು ನೆಟ್ಟಿಗರು ಹೇಳ್ತಿರೋದೇನು?]]></title>
            <link>https://kannada.asianetnews.com/cine-world/trisha-krishan-post-my-magical-may-said-one-more-for-the-win-just-god-things-becomes-viral/articleshow-6si9grq</link>
            <guid isPermaLink="true">https://kannada.asianetnews.com/cine-world/trisha-krishan-post-my-magical-may-said-one-more-for-the-win-just-god-things-becomes-viral/articleshow-6si9grq</guid>
            <pubDate>Wed, 20 May 2026 23:12:27 +0530</pubDate>
            <description><![CDATA[&lt;p&gt;ತ್ರಿಶಾ ಅವರ ಈ 'ಗಾಡ್ ಥಿಂಗ್ಸ್' ಹಿಂದೆ ನಿಜಕ್ಕೂ ವಿಜಯ್ ಇದ್ದಾರಾ? ಅಥವಾ ಇದು ಕೇವಲ ಅಭಿಮಾನಿಗಳ ಕಲ್ಪನೆಯಾ? ಕಾಲವೇ ಉತ್ತರಿಸಬೇಕು! ಆದರೆ ಸದ್ಯಕ್ಕಂತೂ ತ್ರಿಶಾ ಕೃಷ್ಣನ್ ಬಾಕ್ಸ್ ಆಫೀಸ್ ಹಾಗೂ ಸೋಷಿಯಲ್ ಮೀಡಿಯಾ &lsquo;ಕ್ವೀನ್&rsquo; &amp;nbsp;ಆಗಿ ಮೆರೆಯುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krrck9e8che6x7hbw04g4d3t,imgname-vijay-joseph-trisha-krishnan-1778934982088.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಶುರುವಾಯ್ತು ವಿಜಯ್-ತ್ರಿಶಾ ಹೊಸ ಪುರಾಣ!&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದ 'ಎವರ್&zwnj;ಗ್ರೀನ್ ಬ್ಯೂಟಿ' ತ್ರಿಶಾ ಕೃಷ್ಣನ್ (Trisha Krishnan) ಈಗ ಕೇವಲ ಸುದ್ದಿಯಲ್ಲಷ್ಟೇ ಇಲ್ಲ, ಇಡೀ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಸಿನೆಸೇಷನ್ ಆಗಿದ್ದಾರೆ! ಒಂದು ಕಡೆ ಅವರ ಹೊಸ ಸಿನಿಮಾ 'ಕರುಪ್ಪು' (Karuppu) ಬಾಕ್ಸ್ ಆಫೀಸ್&zwnj;ನಲ್ಲಿ ಸುನಾಮಿ ಎಬ್ಬಿಸುತ್ತಿದ್ದರೆ, ಇನ್ನೊಂದು ಕಡೆ ಅವರು ಹಾಕಿದ ಒಂದೇ ಒಂದು ಇನ್&zwnj;ಸ್ಟಾಗ್ರಾಮ್ ಪೋಸ್ಟ್ ಈಗ ಕಾಲಿವುಡ್&zwnj;ನಿಂದ ಸ್ಯಾಂಡಲ್&zwnj;ವುಡ್&zwnj;ವರೆಗೂ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್!&lt;/p&gt;&lt;p&gt;&lt;img&gt;&lt;/p&gt;&lt;h2&gt;ಬಾಕ್ಸ್ ಆಫೀಸ್ ಧೂಳೆಬ್ಬಿಸಿದ 'ಕರುಪ್ಪು'!&lt;/h2&gt;&lt;p&gt;ಮೊದಲಿಗೆ ಸಿನಿಮಾ ವಿಚಾರಕ್ಕೆ ಬರೋಣ. ತ್ರಿಶಾ ಮುಖ್ಯ ಭೂಮಿಕೆಯಲ್ಲಿರುವ 'ಕರುಪ್ಪು' ಸಿನಿಮಾ ಮೇ 15 ರಂದು ತೆರೆಕಂಡು ಚಿತ್ರಮಂದಿರಗಳಲ್ಲಿ ಹಬ್ಬ ಮಾಡುತ್ತಿದೆ. ಬಿಡುಗಡೆಯಾದ ಕೇವಲ ಮೂರೇ ದಿನಕ್ಕೆ ಈ ಚಿತ್ರ ಬರೋಬ್ಬರಿ ₹120 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದೆ. 2026ರ ಸಾಲಿನ ಅತಿದೊಡ್ಡ ಹಿಟ್ ಚಿತ್ರಗಳ ಪಟ್ಟಿಗೆ ಈ ಸಿನಿಮಾ ಈಗಾಗಲೇ ಸೇರ್ಪಡೆಯಾಗಿದೆ. ತ್ರಿಶಾ ಅವರ ನಟನೆಗೆ ವಿಮರ್ಶಕರು ಫಿದಾ ಆಗಿದ್ದು, ಅಭಿಮಾನಿಗಳಂತೂ ಥಿಯೇಟರ್ ಮುಂದೆ ಹಬ್ಬ ಮಾಡುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ತ್ರಿಶಾ ಪೋಸ್ಟ್ ಮತ್ತು ಆ 'ಮಿಸ್ಟರಿಯಸ್' ಕ್ಯಾಪ್ಷನ್!&lt;/p&gt;&lt;p&gt;ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದ್ದಂತೆಯೇ, ತ್ರಿಶಾ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಆರ್ ಜೆ ಬಾಲಾಜಿ ಮತ್ತು ಸೂರ್ಯ ಅವರ ಜೊತೆಗಿನ ಕೆಲವು 'ಬಿಹೈಂಡ್ ದ ಸೀನ್ಸ್' ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗಿಂತ ಹೆಚ್ಚಾಗಿ ಜನರು ಗಮನಿಸಿದ್ದು ಅದಕ್ಕೆ ನೀಡಿದ ಕ್ಯಾಪ್ಷನ್! &quot;ಇನ್ನೊಂದು ಗೆಲುವಿಗೆ! ಇದೆಲ್ಲಾ ಜಸ್ಟ್ ಗಾಡ್ ಥಿಂಗ್ಸ್ (Just God Things)&quot; ಎಂದು ತ್ರಿಶಾ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಬಸ್.. ಈ ಒಂದು ಸಾಲು ಸಾಕಿತ್ತು ಅಭಿಮಾನಿಗಳ ಕಲ್ಪನಾ ಲೋಕಕ್ಕೆ ರೆಕ್ಕೆ ಬರಲು! ಅಭಿಮಾನಿಗಳು ಈ 'ಗೆಲುವನ್ನು' ಕೇವಲ ಸಿನಿಮಾಗೆ ಮಾತ್ರ ಸೀಮಿತಗೊಳಿಸುತ್ತಿಲ್ಲ. ಬದಲಾಗಿ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ನಟ ಜೋಸೆಫ್ ವಿಜಯ್ (Vijay Joseph) ಅವರ ಯಶಸ್ಸಿಗೆ ತ್ರಿಶಾ ಪರೋಕ್ಷವಾಗಿ ವಿಶ್ ಮಾಡುತ್ತಿದ್ದಾರೆ ಎಂದು ಫ್ಯಾನ್ಸ್ ಕಾಮೆಂಟ್ ಸೆಕ್ಷನ್&zwnj;ನಲ್ಲಿ ಹಬ್ಬ ಮಾಡುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಏನಿದು ವಿಜಯ್-ತ್ರಿಶಾ ಕನೆಕ್ಷನ್?&lt;/h3&gt;&lt;p&gt;ತ್ರಿಶಾ ಮತ್ತು ವಿಜಯ್ ನಡುವೆ ಏನೋ ನಡೆಯುತ್ತಿದೆ ಎಂಬ ವದಂತಿ ಇಂದು ನಿನ್ನೆಯದಲ್ಲ. ಈಗ ಅದು ಮತ್ತಷ್ಟು ಗಟ್ಟಿಯಾಗಲು ಕಾರಣ ಮೇ 4ರ ಆ ದಿನ! ಅಂದು ತ್ರಿಶಾ ಅವರ 43ನೇ ಹುಟ್ಟುಹಬ್ಬವಾಗಿತ್ತು, ಅದೇ ದಿನ ವಿಜಯ್ ಅವರ 'ಟಿವಿಕೆ' ಪಕ್ಷ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಂತರ ಮೇ 10 ರಂದು ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ತ್ರಿಶಾ ತಮ್ಮ ಪೋಸ್ಟ್&zwnj;ನಲ್ಲಿ &quot;ಇನ್ನೊಂದು ಗೆಲುವು&quot; (Another Win) ಎಂದು ಉಲ್ಲೇಖಿಸಿರುವುದು ವಿಜಯ್ ಅವರ ರಾಜಕೀಯ ವಿಜಯವನ್ನೇ ಎಂದು ಫ್ಯಾನ್ಸ್ ಡಿಕೋಡ್ ಮಾಡುತ್ತಿದ್ದಾರೆ. &quot;ಒಂದು ಗೆಲುವು ಟಿಎನ್ ಚುನಾವಣೆ, ಇನ್ನೊಂದು ಗೆಲುವು ಕರುಪ್ಪು ಸಿನಿಮಾ&quot; ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಾ ಖುಷಿ ಪಡುತ್ತಿದ್ದಾರೆ.&lt;/p&gt;&lt;p&gt;ಎವರ್&zwnj;ಗ್ರೀನ್ ಜೋಡಿಯ ಮ್ಯಾಜಿಕ್!&lt;/p&gt;&lt;p&gt;'ಗಿಲ್ಲಿ', 'ತಿರುಪಾಚಿ' ಅಂತಹ ಬ್ಲಾಕ್&zwnj;ಬಸ್ಟರ್ ಸಿನಿಮಾಗಳಲ್ಲಿ ಈ ಜೋಡಿಯ ಕೆಮಿಸ್ಟ್ರಿ ನೋಡುವುದೇ ಒಂದು ಚಂದ. ತೆರೆಯ ಮೇಲೆ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಇವರು ಒಂದಾಗಲಿ ಎಂಬುದು ಲಕ್ಷಾಂತರ ಅಭಿಮಾನಿಗಳ ಆಸೆ. ಒಟ್ಟಿನಲ್ಲಿ, ತ್ರಿಶಾ ಅವರ ಸಿನಿಮಾ ಯಶಸ್ಸು ಮತ್ತು ಈ ರಹಸ್ಯಮಯ ಪೋಸ್ಟ್ ಈಗ ಕಾಲಿವುಡ್&zwnj;ನ ಹಾಟ್ ಟಾಪಿಕ್ ಆಗಿರುವುದಂತೂ ನಿಜ.&lt;/p&gt;&lt;p&gt;ತ್ರಿಶಾ ಅವರ ಈ 'ಗಾಡ್ ಥಿಂಗ್ಸ್' ಹಿಂದೆ ನಿಜಕ್ಕೂ ವಿಜಯ್ ಇದ್ದಾರಾ? ಅಥವಾ ಇದು ಕೇವಲ ಅಭಿಮಾನಿಗಳ ಕಲ್ಪನೆಯಾ? ಕಾಲವೇ ಉತ್ತರಿಸಬೇಕು! ಆದರೆ ಸದ್ಯಕ್ಕಂತೂ ತ್ರಿಶಾ ಕೃಷ್ಣನ್ ಬಾಕ್ಸ್ ಆಫೀಸ್ 'ಕ್ವೀನ್' ಆಗಿ ಮೆರೆಯುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/trisha-krishan-post-my-magical-may-said-one-more-for-the-win-just-god-things-becomes-viral/articleshow-6si9grq"/>
        </item>
        <item>
            <title><![CDATA[ಭಾರತದ ಮೊದಲ ಪೆಟ್ರೋಲ್ ಬಂಕ್ ಎಲ್ಲಿ, ಯಾವಾಗ ಆರಂಭವಾಯ್ತು? ಬೆಂಗಳೂರಿನಿಂದ ಮುಂಬೈಗೆ ಹೋಗಲು 3 ರೂ. ಪೆಟ್ರೋಲ್ ಸಾಕು!]]></title>
            <link>https://kannada.asianetnews.com/india-news/bengaluru-to-mumbai-for-just-3-rupees-shocking-reality-of-india-s-first-petrol-pump-prices-sat/articleshow-hfbete5</link>
            <guid isPermaLink="true">https://kannada.asianetnews.com/india-news/bengaluru-to-mumbai-for-just-3-rupees-shocking-reality-of-india-s-first-petrol-pump-prices-sat/articleshow-hfbete5</guid>
            <pubDate>Wed, 20 May 2026 21:55:07 +0530</pubDate>
            <description><![CDATA[&lt;p&gt;1928ರಲ್ಲಿ ಪೆಟ್ರೋಲ್ ಬೆಲೆ ಕೇವಲ 6 ಪೈಸೆ ಇದ್ದು, 3 ರೂಪಾಯಿಯಲ್ಲಿ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸಬಹುದಿತ್ತು. ಭಾರತದ ಮೊದಲ ಪೆಟ್ರೋಲ್ ಬಂಕ್ 'ಬರ್ಮಾ ಶೆಲ್' ನಿಂದ ಮುಂಬೈನಲ್ಲಿ ಸ್ಥಾಪನೆಯಾಯಿತು, ನಂತರ ಇದು 'ಭಾರತ್ ಪೆಟ್ರೋಲಿಯಂ' ಆಗಿ ರಾಷ್ಟ್ರೀಕರಣಗೊಂಡಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks3352vrdkjsqthzq82xekkg,imgname-india-s-first-petrol-pump-1779294178167.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಕಾಲದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೂರು ರೂಪಾಯಿಯ ಗಡಿ ದಾಟಿ ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಲೀಟರ್&zwnj;ಗೆ ಒಂದು ರೂಪಾಯಿ ಹೆಚ್ಚಾದರೂ ನಾವು ಬಜೆಟ್ ಲೆಕ್ಕಾಚಾರ ಮಾಡುತ್ತೇವೆ. ಆದರೆ, ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ನೀವು ನಂಬಲಸಾಧ್ಯವಾದ ಒಂದು ಸತ್ಯಾಂಶ ಹೊರಬರುತ್ತದೆ. ಅದೇನೆಂದರೆ, ಅಂದು ಕೇವಲ 3 ರೂಪಾಯಿ ಜೇಬಿನಲ್ಲಿದ್ದರೆ ಸಾಕಿತ್ತು, ನೀವು ಬೆಂಗಳೂರಿನಿಂದ ಮುಂಬೈಗೆ ಕಾರ್&zwnj;ನಲ್ಲಿ ಹೋಗಿ ಬರಬಹುದಿತ್ತು!&lt;/p&gt;&lt;h3&gt;&lt;strong&gt;ಏನಿದು 3 ರೂಪಾಯಿ ಲೆಕ್ಕಾಚಾರ?&lt;/strong&gt;&lt;/h3&gt;&lt;p&gt;ಬೆಂಗಳೂರಿನಿಂದ ಮುಂಬೈ ನಗರಕ್ಕೆ ಇರುವ ದೂರ ಸುಮಾರು 950 ಕಿಲೋಮೀಟರ್&zwnj;ಗಳು. ಇಂದಿನ ಸಾಮಾನ್ಯ ಕಾರುಗಳು ಸರಾಸರಿ ಒಂದು ಲೀಟರ್&zwnj;ಗೆ 20 ಕಿ.ಮೀ ಮೈಲೇಜ್ ನೀಡುತ್ತವೆ ಎಂದು ಅಂದುಕೊಳ್ಳೋಣ. ಹಾಗಾದರೆ, ಬೆಂಗಳೂರಿನಿಂದ ಮುಂಬೈ ತಲುಪಲು ಸುಮಾರು 48 ಲೀಟರ್ ಪೆಟ್ರೋಲ್ ಅಗತ್ಯವಿರುತ್ತದೆ. ಇಂದಿನ 108 ರೂಪಾಯಿ ದರದಲ್ಲಿ ಈ ಪ್ರಯಾಣಕ್ಕೆ ಸುಮಾರು 5,184 ರೂಪಾಯಿ ವೆಚ್ಚವಾಗುತ್ತದೆ. ಆದರೆ, 1928ರಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 6 ಪೈಸೆ ಇತ್ತು! ಆ ದರದಂತೆ ಲೆಕ್ಕ ಹಾಕಿದರೆ, 48 ಲೀಟರ್ ಪೆಟ್ರೋಲ್&zwnj;ಗೆ ತಗಲುವ ವೆಚ್ಚ ಕೇವಲ 2.88 ರೂಪಾಯಿಗಳು, ಅಂದರೆ ಅಂದಾಜು 3 ರೂಪಾಯಿ! ಇಂದು ಒಂದು ಕಿಚಡಿ ಪ್ಯಾಕೆಟ್ ಕೂಡ ಸಿಗದ ಆ ಹಣದಲ್ಲಿ ಅಂದು ಮಹಾನಗರಗಳ ನಡುವೆ ಸುದೀರ್ಘ ಪ್ರಯಾಣ ಮಾಡಬಹುದಿತ್ತು.&lt;/p&gt;&lt;h2&gt;&lt;strong&gt;ಭಾರತದ ಮೊದಲ ಪೆಟ್ರೋಲ್ ಬಂಕ್ ಆರಂಭವಾಗಿದ್ದು ಎಲ್ಲಿ?&lt;/strong&gt;&lt;/h2&gt;&lt;p&gt;ಭಾರತದಲ್ಲಿ ಮೊಟ್ಟ ಮೊದಲ ಪೆಟ್ರೋಲ್ ಬಂಕ್ ಆರಂಭವಾಗಿದ್ದು 1928ರಲ್ಲಿ. ಅಂದಿನ ಬಾಂಬೆ (ಈಗಿನ ಮುಂಬೈ) ನಗರದ ಹ್ಯೂಸ್ ರಸ್ತೆಯಲ್ಲಿ (ಈಗಿನ ಅನ್ನಿ ಬೆಸೆಂಟ್ ರಸ್ತೆ) ಈ ಐತಿಹಾಸಿಕ ಪೆಟ್ರೋಲ್ ಕೇಂದ್ರವನ್ನು ತೆರೆಯಲಾಗಿತ್ತು. 'ಬರ್ಮಾ ಶೆಲ್' ಕಂಪನಿಯು ಈ ಬಂಕ್ ಸ್ಥಾಪಿಸಿತ್ತು. ಆ ಕಾಲದಲ್ಲಿ 1 ರೂಪಾಯಿ ನೀಡಿದರೆ ಬರೋಬ್ಬರಿ 16 ಲೀಟರ್ ಪೆಟ್ರೋಲ್ ಸಿಗುತ್ತಿತ್ತು. ಆಗಿನ ವಾಹನಗಳು ಬಹುತೇಕ ಪೆಟ್ರೋಲ್ ಇಂಜಿನ್ ಆಧಾರಿತವಾಗಿದ್ದವು.&lt;/p&gt;&lt;h3&gt;&lt;strong&gt;ವಿದೇಶದಿಂದ ಬರುತ್ತಿತ್ತು ಇಂಧನ:&lt;/strong&gt;&lt;/h3&gt;&lt;p&gt;ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಪೆಟ್ರೋಲ್ ಉತ್ಪಾದನೆಯಾಗುತ್ತಿರಲಿಲ್ಲ. ಇಂಧನವನ್ನು ಬರ್ಮಾ, ಇರಾನ್ ಮತ್ತು ಪಶ್ಚಿಮ ಏಷ್ಯಾದ ದೇಶಗಳಿಂದ ಹಡಗುಗಳ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಂದರುಗಳಿಗೆ ಬಂದ ತೈಲವನ್ನು ಕಬ್ಬಿಣದ ಡ್ರಮ್&zwnj;ಗಳಲ್ಲಿ ತುಂಬಿಸಿ, ಎತ್ತಿನ ಬಂಡಿ ಅಥವಾ ಟ್ರಕ್&zwnj;ಗಳ ಮೂಲಕ ಬಂಕ್&zwnj;ಗಳಿಗೆ ತಲುಪಿಸಲಾಗುತ್ತಿತ್ತು. ಇಂದಿನಂತೆ ಆಟೋಮ್ಯಾಟಿಕ್ ಯಂತ್ರಗಳಿರಲಿಲ್ಲ, ಕೈಯಿಂದ ಪಂಪ್ ಮಾಡಿ ವಾಹನಗಳಿಗೆ ಇಂಧನ ತುಂಬಿಸುವ ಸಾಹಸ ಮಾಡಬೇಕಿತ್ತು.&lt;/p&gt;&lt;h3&gt;&lt;strong&gt;6 ಪೈಸೆ ಪೆಟ್ರೋಲ್ ಕೂಡ ಅಂದು ದುಬಾರಿಯೇ!&lt;/strong&gt;&lt;/h3&gt;&lt;p&gt;3 ರೂಪಾಯಿಗೆ ಮುಂಬೈಗೆ ಹೋಗಬಹುದಿತ್ತು ಎಂದು ಇಂದು ನಮಗೆ ಖುಷಿ ನೀಡಬಹುದು. ಆದರೆ, 1928ರ ಕಾಲಘಟ್ಟದಲ್ಲಿ ಸಾಮಾನ್ಯ ಜನರ ಸರಾಸರಿ ದೈನಂದಿನ ಆದಾಯವೇ ಒಂದು ರೂಪಾಯಿಗಿಂತ ಕಡಿಮೆ ಇತ್ತು. ಹಾಗಾಗಿ, ಅಂದಿನ ಕಾಲದ ಜನರಿಗೆ ಆ 6 ಪೈಸೆ ಕೂಡ ದೊಡ್ಡ ಮೊತ್ತವಾಗಿಯೇ ಕಾಣುತ್ತಿತ್ತು. ವಾಹನಗಳ ಸಂಖ್ಯೆಯೂ ಬೆರಳೆಣಿಕೆಯಷ್ಟು ಇದ್ದಿದ್ದರಿಂದ ಪೆಟ್ರೋಲ್ ಬಳಕೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು.&lt;/p&gt;&lt;h2&gt;&lt;strong&gt;ಬರ್ಮಾ ಶೆಲ್ ಟು ಬಿಪಿಸಿಎಲ್:&lt;/strong&gt;&lt;/h2&gt;&lt;p&gt;ಸುಮಾರು ಐದು ದಶಕಗಳ ಕಾಲ ಭಾರತದಲ್ಲಿ ಸೇವೆ ಸಲ್ಲಿಸಿದ 'ಬರ್ಮಾ ಶೆಲ್' ಕಂಪನಿಯನ್ನು 1976 ರಲ್ಲಿ ಭಾರತ ಸರ್ಕಾರವು ರಾಷ್ಟ್ರೀಕೀಕರಣಗೊಳಿಸಿತು. ಆನಂತರವೇ ಅದು 'ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್' (BPCL) ಎಂದು ನಾಮಕರಣಗೊಂಡಿತು. ಮುಂಬೈನ ಹ್ಯೂಸ್ ರಸ್ತೆಯಲ್ಲಿ ಅಂದು ಸಣ್ಣದಾಗಿ ಆರಂಭವಾದ ಆ ಪಯಣ ಇಂದು ದೇಶದ ಮೂಲೆ ಮೂಲೆಗೂ ವ್ಯಾಪಿಸಿದೆ.&lt;/p&gt;&lt;p&gt;ಕಾಲ ಬದಲಾದಂತೆ ಪೆಟ್ರೋಲ್ ಬೆಲೆ 6 ಪೈಸೆಯಿಂದ 108 ರೂಪಾಯಿಗೆ ಏರಿದೆ. ಅಂದು 3 ರೂಪಾಯಿಯಲ್ಲಿ ಮುಂಬೈ ತಲುಪುತ್ತಿದ್ದ ನಮಗೆ ಇಂದು ಅದೇ ಹಣಕ್ಕೆ ಪೆಟ್ರೋಲ್ ಪಂಪ್&zwnj;ನ ನಳಿಕೆಯಿಂದ ಪೆಟ್ರೋಲ್ ಹೊರಬರುವುದನ್ನೂ ನೋಡಲು ಸಾಧ್ಯವಿಲ್ಲ ಎನ್ನುವುದು ವಿಪರ್ಯಾಸವೇ ಸರಿ!&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/bengaluru-to-mumbai-for-just-3-rupees-shocking-reality-of-india-s-first-petrol-pump-prices-sat/articleshow-hfbete5"/>
        </item>
        <item>
            <title><![CDATA[Modi Meloni: ಇಂಟರ್‌ನೆಟ್‌ ಟ್ರೆಂಡಿಂಗ್ ಮೋದಿ-ಮೆಲೋನಿ 10 ವೈರಲ್ ಫೋಟೋಗಳು!]]></title>
            <link>https://kannada.asianetnews.com/webstories/india-news/pm-modi-and-giorgia-meloni-unforgettable-moments-in-rome-sat-30r9xke</link>
            <guid isPermaLink="true">https://kannada.asianetnews.com/webstories/india-news/pm-modi-and-giorgia-meloni-unforgettable-moments-in-rome-sat-30r9xke</guid>
            <pubDate>Wed, 20 May 2026 21:48:57 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರವಾಸದಲ್ಲಿದ್ದು, ರೋಮ್ ತಲುಪಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮೋದಿಯನ್ನ ಸ್ವಾಗತಿಸಿದರು. ಇಬ್ಬರೂ ನಾಯಕರು ಡಿನ್ನರ್ ಮೀಟಿಂಗ್, ಕೊಲೋಸಿಯಂಗೆ ಭೇಟಿ ಹಾಗೂ ಭಾರತ-ಇಟಲಿ ವ್ಯೂಹಾತ್ಮಕ ಪಾಲುದಾರಿಕೆ ಬಲಪಡಿಸುವ ಬಗ್ಗೆ ಚರ್ಚಿಸಿದರು. 10 ವಿಶೇಷ ಫೋಟೋ ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2bq1ehcxkzt50wb4vjch99,imgname-pm-modi-meloni-viral-moments-10-photos-breaking-the-internet-from-rome-1779269600721.png" type="image/jpeg" height="390" width="690"/>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/india-news/pm-modi-and-giorgia-meloni-unforgettable-moments-in-rome-sat-30r9xke"/>
        </item>
        <item>
            <title><![CDATA[Cumin Water: ರಾತ್ರಿ ಮಲಗುವ ಮುನ್ನ ಜೀರಿಗೆ ನೀರು ಕುಡಿದರೆ ಏನಾಗುತ್ತೆ ಗೊತ್ತಾ?]]></title>
            <link>https://kannada.asianetnews.com/webstories/health-life/health-benefits-of-drinking-cumin-water-before-bed-gvd-vqt8rng</link>
            <guid isPermaLink="true">https://kannada.asianetnews.com/webstories/health-life/health-benefits-of-drinking-cumin-water-before-bed-gvd-vqt8rng</guid>
            <pubDate>Wed, 20 May 2026 19:41:17 +0530</pubDate>
            <description><![CDATA[ಜೀರಿಗೆ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೆಚ್ಚಿನವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುತ್ತಾರೆ. ಆದರೆ, ರಾತ್ರಿ ಮಲಗುವ ಮುನ್ನ ಇದನ್ನು ಕುಡಿದರೆ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?]]></description>
            <media:content url="https://static.asianetnews.com/images/w-1280,h-720,format-jpg,imgid-01jxftvefesmzgp860chg2ygvm,imgname-fotojet--15--1749656910318.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/health-life/health-benefits-of-drinking-cumin-water-before-bed-gvd-vqt8rng"/>
        </item>
        <item>
            <title><![CDATA[ಬಳೆ ಮತ್ತು ಮ್ಯಾಚಿಂಗ್ ಕಿವಿಯೋಲೆಗಳ ಹೊಸ ಟ್ರೆಂಡ್: ನೋಡಿ 7 ಸ್ಟೈಲಿಶ್ ಡಿಸೈನ್ಸ್!]]></title>
            <link>https://kannada.asianetnews.com/webstories/fashion/stylish-matching-bangle-and-earring-sets-for-festive-season-gvd-7gpkh21</link>
            <guid isPermaLink="true">https://kannada.asianetnews.com/webstories/fashion/stylish-matching-bangle-and-earring-sets-for-festive-season-gvd-7gpkh21</guid>
            <pubDate>Wed, 20 May 2026 19:34:54 +0530</pubDate>
            <description><![CDATA[ಶ್ರಾವಣ, ತೀಜ್, ರಾಖಿಯಂತಹ ಹಬ್ಬಗಳ ಸೀಸನ್ ಶುರುವಾಗಿದೆ. ಈ ಹಬ್ಬದ ಪಾರ್ಟಿಗಳಿಗೆ, ಪ್ರತಿ ಸಮಾರಂಭಕ್ಕೂ ಹೊಂದುವಂತಹ ವಿಭಿನ್ನ ಸ್ಟೈಲ್&zwnj;ನ ಬಳೆ ಮತ್ತು ಮ್ಯಾಚಿಂಗ್ ಕಿವಿಯೋಲೆ ಸೆಟ್&zwnj;ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇಲ್ಲಿವೆ 7 ಹೊಸ ಡಿಸೈನ್&zwnj;ಗಳು.]]></description>
            <media:content url="https://static.asianetnews.com/images/w-1280,h-720,format-jpg,imgid-01ks27feaxrdstdn96hb9s0a2k,imgname-bagels-and-earrings-set-new-trend-1779265157469.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stylish-matching-bangle-and-earring-sets-for-festive-season-gvd-7gpkh21"/>
        </item>
        <item>
            <title><![CDATA[Divorce-Shocking: ಡಿವೋರ್ಸ್ ಸುದ್ದಿ ಬೆನ್ನಲ್ಲೇ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೊರಟ ʻಜಯಂʼ ರವಿ; ಮುಂದೇನು..?]]></title>
            <link>https://kannada.asianetnews.com/cine-world/divorce-controversy-with-his-wife-aarti-actor-jayam-ravi-has-donned-the-ayyappa-maala-and-set-off-for-sabarimala/articleshow-frk8wkx</link>
            <guid isPermaLink="true">https://kannada.asianetnews.com/cine-world/divorce-controversy-with-his-wife-aarti-actor-jayam-ravi-has-donned-the-ayyappa-maala-and-set-off-for-sabarimala/articleshow-frk8wkx</guid>
            <pubDate>Wed, 20 May 2026 18:59:04 +0530</pubDate>
            <description><![CDATA[&lt;p&gt;ಪತ್ನಿ ಆರತಿಯೊಂದಿಗಿನ ಕಾನೂನು ಹೋರಾಟದ ನಡುವೆ ಜಯಂ ರವಿ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಮಾನಸಿಕ ಕಿರುಕುಳ ಮತ್ತು ಆರ್ಥಿಕ ನಿರ್ಬಂಧಗಳ ಆರೋಪ ಮಾಡಿರುವ ಅವರು, ಈಗ ಮನಸ್ಸಿನ ಶಾಂತಿಗಾಗಿ ಶಬರಿಮಲೆ ಯಾತ್ರೆಗೆ ಹೊರಟಿದ್ದಾರೆ. ಮುಂದೇನು ಗತಿ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2s3szqz5smn72f7gb5y695,imgname-jayam-ravi-aarti-ravi-1779283650551.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಸಾರದ ಜಂಜಾಟದಿಂದ ಅಯ್ಯಪ್ಪನ ಸನ್ನಿಧಿಗೆ 'ಜಯಂ' ರವಿ: ಕಣ್ಣೀರು ಹಾಕಿದ್ದ ನಟ ಈಗ ಕಠಿಣ ವ್ರತದಲ್ಲಿ!&lt;/strong&gt;&lt;/p&gt;&lt;p&gt;ಬೆಳ್ಳಿಪರದೆಯ ಮೇಲೆ ಶತ್ರುಗಳನ್ನು ಸದೆಬಡಿಯುವ 'ಮಾಸ್ ಹೀರೋ' ಜಯಂ ರವಿ (Jayam Ravi), ರಿಯಲ್ ಲೈಫ್&zwnj;ನಲ್ಲಿ ಮಾತ್ರ ವಿಧಿಯ ಆಟಕ್ಕೆ ಕಂಗಾಲಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪತ್ನಿ ಆರತಿ (Aarti Ravi) ಮತ್ತು ತಮ್ಮ ನಡುವಿನ ದಾಂಪತ್ಯ ಕಲಹದಿಂದಲೇ (Divorce Controversy) ಸುದ್ದಿಯಾಗುತ್ತಿದ್ದ ಈ ತಮಿಳು ನಟ, ಈಗ ಎಲ್ಲವನ್ನೂ ಮರೆತು ಆಧ್ಯಾತ್ಮದ ಹಾದಿ ಹಿಡಿದಿದ್ದಾರೆ. ಹೌದು, ಸಂಸಾರದ ಜಗಳ, ವಿಚ್ಛೇದನದ ನೋವು ಮತ್ತು ಮಕ್ಕಳನ್ನು ನೋಡಲಾಗದ ಹತಾಶೆಯ ನಡುವೆ ಜಯಂ ರವಿ ಈಗ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಶಾಂತಿಯ ಹುಡುಕಾಟದಲ್ಲಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಕಣ್ಣೀರು ಹಾಕಿದ್ದ ನಟ ಈಗ ಅಯ್ಯಪ್ಪನ ಶರಣು!&lt;/h2&gt;&lt;p&gt;ಇತ್ತೀಚೆಗಷ್ಟೇ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಜಯಂ ರವಿ ಅಕ್ಷರಶಃ ಕುಸಿದು ಹೋಗಿದ್ದರು. &quot;ನನ್ನ ಮಕ್ಕಳನ್ನು ನೋಡಲು ಬಿಡುತ್ತಿಲ್ಲ, ನನ್ನದೇ ಹಣವನ್ನು ಬಳಸಲು ನನಗೆ ಸ್ವಾತಂತ್ರ್ಯವಿಲ್ಲ,&quot; ಎಂದು ಕಣ್ಣೀರು ಹಾಕಿದ್ದ ಅವರು, ಮಾನಸಿಕ ನೆಮ್ಮದಿಗಾಗಿ ಮುಂಬೈಗೆ ವಲಸೆ ಹೋಗಿದ್ದಾಗಿ ತಿಳಿಸಿದ್ದರು. ಈಗ ಆ ಎಲ್ಲಾ ಗದ್ದಲಗಳಿಂದ ದೂರವಿರಲು ನಿರ್ಧರಿಸಿರುವ ರವಿ, ಕಪ್ಪು ವಸ್ತ್ರ ಧರಿಸಿ, ಅಯ್ಯಪ್ಪನ ಕಠಿಣ ವ್ರತ ಕೈಗೊಂಡಿದ್ದಾರೆ. ಶಬರಿಮಲೆ ಯಾತ್ರೆಗಾಗಿ ಮಾಲೆ ಧರಿಸಿರುವ ಅವರ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, &quot;ಸ್ವಾಮಿಯೇ ಶರಣಂ ಅಯ್ಯಪ್ಪ&quot; ಎನ್ನುತ್ತಾ ಈ ಸಂಕಷ್ಟದಿಂದ ಪಾರು ಮಾಡುವಂತೆ ಅಯ್ಯಪ್ಪನಲ್ಲಿ ಮೊರೆ ಇಟ್ಟಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಹಣ ಮತ್ತು ಸ್ವಾತಂತ್ರ್ಯದ ಹಗ್ಗಜಗ್ಗಾಟ!&lt;/p&gt;&lt;p&gt;ಜಯಂ ರವಿ ಅವರ ವಿಚ್ಛೇದನ ಪ್ರಕರಣ ಕೇವಲ ಮನಸ್ತಾಪಕ್ಕೆ ಸೀಮಿತವಾಗಿಲ್ಲ. ಅವರು ಮಾಡಿರುವ ಆರ್ಥಿಕ ಕಿರುಕುಳದ ಆರೋಪಗಳು ಸಂಚಲನ ಮೂಡಿಸಿವೆ. &quot;ನಮ್ಮದು ಜಂಟಿ ಬ್ಯಾಂಕ್ ಖಾತೆ ಇತ್ತು. ನಾನು ಸಣ್ಣ ಮೊತ್ತದ ಹಣವನ್ನು ಡ್ರಾ ಮಾಡಿದರೂ ಅದಕ್ಕೆ ನೂರು ಪ್ರಶ್ನೆಗಳನ್ನು ಎದುರಿಸಬೇಕಿತ್ತು,&quot; ಎಂದು ಅವರು ಅಳಲು ತೋಡಿಕೊಂಡಿದ್ದರು. ಅವರ ಈ ಹೇಳಿಕೆಗೆ ಪುರುಷರ ಹಕ್ಕುಗಳ ಪರ ಹೋರಾಟಗಾರರು ಬೆಂಬಲ ನೀಡಿದ್ದರೆ, ಮಹಿಳಾ ಸಂಘಟನೆಗಳು ಮತ್ತು ನಟಿ ಖುಷ್ಬೂ ಸುಂದರ್ ಅವರು ಪತ್ನಿ ಆರತಿ ಪರವಾಗಿ ನಿಂತಿದ್ದಾರೆ. ಇದರಿಂದಾಗಿ ಈ ಪ್ರಕರಣ ಈಗ ಸಾಮಾಜಿಕ ಜಾಲತಾಣಗಳಲ್ಲಿ 'ಪುರುಷ ವರ್ಸಸ್ ಮಹಿಳೆ' ಎಂಬ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಸಿನಿಮಾಗೂ ಬ್ರೇಕ್, ಹೊಸ ಪಯಣದತ್ತ ಗುರಿ!&lt;/h3&gt;&lt;p&gt;ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ನಟನೆಯಿಂದ ವಿರಾಮ ಪಡೆಯುವುದಾಗಿ ಘೋಷಿಸಿರುವ ರವಿ, ಕೇವಲ ನಟನಾಗಿ ಉಳಿಯದೆ ನಿರ್ದೇಶಕ ಮತ್ತು ನಿರ್ಮಾಪಕನಾಗಿಯೂ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸಿರುವ ಅವರು, 'ಆನ್ ಆರ್ಡಿನರಿ ಮ್ಯಾನ್' ಎಂಬ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ 'ಜೀನಿ' ಮತ್ತು 'ಕರಾಟೆ ಬಾಬು' ಚಿತ್ರಗಳು ಈಗಾಗಲೇ ಅವರ ಕೈಯಲ್ಲಿವೆ.&lt;/p&gt;&lt;p&gt;ಕೊನೆಯ ಮಾತು:&lt;/p&gt;&lt;p&gt;ಸಿನಿಮಾದ ಕ್ಲೈಮ್ಯಾಕ್ಸ್&zwnj;ನಲ್ಲಿ ನಾಯಕ ಗೆಲ್ಲುವುದು ಸುಲಭ, ಆದರೆ ಜೀವನದ ಕ್ಲೈಮ್ಯಾಕ್ಸ್ ಅಷ್ಟು ಸುಲಭವಲ್ಲ. ಅಯ್ಯಪ್ಪನ ದರ್ಶನ ಮಾಡಿ ಬರಲಿರುವ ಜಯಂ ರವಿ ಅವರಿಗೆ ಅವರ ಜೀವನದ ಬಿಕ್ಕಟ್ಟುಗಳು ಬೇಗನೆ ಬಗೆಹರಿಯಲಿ ಮತ್ತು ಅವರಿಗೆ ಅವರು ಬಯಸಿದ ನೆಮ್ಮದಿ ಸಿಗಲಿ ಎಂಬುದು ಅಭಿಮಾನಿಗಳ ಹಾರೈಕೆ.&lt;/p&gt;&lt;p&gt;ಸಾರಾಂಶ:&lt;/p&gt;&lt;p&gt;ಪತ್ನಿ ಆರತಿಯೊಂದಿಗಿನ ಕಾನೂನು ಹೋರಾಟದ ನಡುವೆ ಜಯಂ ರವಿ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಮಾನಸಿಕ ಕಿರುಕುಳ ಮತ್ತು ಆರ್ಥಿಕ ನಿರ್ಬಂಧಗಳ ಆರೋಪಗಳನ್ನು ಮಾಡಿರುವ ಅವರು, ಸದ್ಯಕ್ಕೆ ಚಿತ್ರರಂಗದಿಂದ ಸಣ್ಣ ವಿರಾಮ ಪಡೆದು ಮನಸ್ಸಿನ ಶಾಂತಿಗಾಗಿ ಶಬರಿಮಲೆ ಯಾತ್ರೆಗೆ ಸಜ್ಜಾಗುತ್ತಿದ್ದಾರೆ. ಇತ್ತೀಚಿನ ವಿವಾದಗಳು ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಮೇಲೆ ದೊಡ್ಡ ಪ್ರಭಾವ ಬೀರಿದ್ದು, ಅಯ್ಯಪ್ಪನ ದರ್ಶನ ಅವರಿಗೆ ಹೊಸ ಚೈತನ್ಯ ನೀಡಲಿ ಎಂಬುದು ಎಲ್ಲರ ಆಶಯ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/divorce-controversy-with-his-wife-aarti-actor-jayam-ravi-has-donned-the-ayyappa-maala-and-set-off-for-sabarimala/articleshow-frk8wkx"/>
        </item>
        <item>
            <title><![CDATA[Shocking: ಬಾಲ್ಯದ ' *** ' ಕಿರುಕುಳ, ಗ್ಲಾಮರ್ ಲೋಕದ ಕರಾಳ ಮುಖ ಬಿಚ್ಚಿಟ್ಟ ಡಾ. ಅದಿತಿ ಗೋವಿತ್ರಿಕರ್!]]></title>
            <link>https://kannada.asianetnews.com/gallery/cine-world/dr-aditi-govitrikar-opens-up-about-dark-side-of-the-glamour-world-and-the-horrific-abuse-she-faced-during-her-childhood-hdwtyg8</link>
            <guid isPermaLink="true">https://kannada.asianetnews.com/gallery/cine-world/dr-aditi-govitrikar-opens-up-about-dark-side-of-the-glamour-world-and-the-horrific-abuse-she-faced-during-her-childhood-hdwtyg8</guid>
            <pubDate>Wed, 20 May 2026 18:23:02 +0530</pubDate>
            <description><![CDATA[&lt;p&gt;ಪವನ್ ಕಲ್ಯಾಣ್ ಅಭಿನಯದ 'ತಮ್ಮುಡು' ಸಿನಿಮಾದಲ್ಲಿ 'ಲವ್ಲಿ' ಹೆಸರಿನ ಪಾತ್ರದಲ್ಲಿ ಮಿಂಚಿದ್ದ ನಟಿ ಅದಿತಿ ಗೋವಿತ್ರಿಕರ್. &quot;ವಯ್ಯಾರಿ ಭಾಮ ನೀ ಹಂಸ ನಡಕ..&quot; ಹಾಡಿನಲ್ಲಿ ತಮ್ಮ ಅದ್ಭುತ ಸೌಂದರ್ಯದಿಂದ ರಾತ್ರೋರಾತ್ರಿ ಯುವಕರ ಹೃದಯ ಕದ್ದಿದ್ದ ಈ ನಟಿ, ಬಾಲ್ಯದಲ್ಲಿ ಲೈಂ*ಗಿಕ ಕಿರುಕುಳ ಅನುಭವಿಸಿದ್ದರಂತೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2nz79fzpcehgrbx3w5v9xj,imgname-dr-aditi-govitrikar-1779280354606.jpg" type="image/jpeg" height="390" width="690"/>
            <content:encoded><![CDATA[&lt;p&gt;ಪವನ್ ಕಲ್ಯಾಣ್ ಅಭಿನಯದ 'ತಮ್ಮುಡು' ಸಿನಿಮಾದಲ್ಲಿ 'ಲವ್ಲಿ' ಹೆಸರಿನ ಪಾತ್ರದಲ್ಲಿ ಮಿಂಚಿದ್ದ ನಟಿ ಅದಿತಿ ಗೋವಿತ್ರಿಕರ್. &quot;ವಯ್ಯಾರಿ ಭಾಮ ನೀ ಹಂಸ ನಡಕ..&quot; ಹಾಡಿನಲ್ಲಿ ತಮ್ಮ ಅದ್ಭುತ ಸೌಂದರ್ಯದಿಂದ ರಾತ್ರೋರಾತ್ರಿ ಯುವಕರ ಹೃದಯ ಕದ್ದಿದ್ದ ಈ ನಟಿ, ಬಾಲ್ಯದಲ್ಲಿ ಲೈಂ*ಗಿಕ ಕಿರುಕುಳ ಅನುಭವಿಸಿದ್ದರಂತೆ.&amp;nbsp;&lt;/p&gt;&lt;img&gt;&lt;p&gt;ಗ್ಲಾಮರ್ ಲೋಕದ ಕರಾಳ ಮುಖ: ಬಾಲ್ಯದ ಭೀಕರ ಕಿರುಕುಳ ನೆನೆದು ಕಣ್ಣೀರಿಟ್ಟ 'ವಯ್ಯಾರಿ ಭಾಮ' ಅದಿತಿ ಗೋವಿತ್ರಿಕರ್!&lt;/p&gt;&lt;p&gt;ಬೆಳ್ಳಿಪರದೆಯ ಮೇಲೆ ಮಿನುಗುವ ತಾರೆಯರ ಬದುಕು ಯಾವಾಗಲೂ ಹೂವಿನ ಹಾಸಿಗೆಯಂತೆ ಇರುತ್ತದೆ ಎಂದು ನಾವು ಭಾವಿಸುತ್ತೇವೆ. ಅವರ ಸೌಂದರ್ಯ, ಗ್ಲಾಮರ್ ಮತ್ತು ಜನಪ್ರಿಯತೆಯ ಹಿಂದೆ ಬೆಚ್ಚಿಬೀಳಿಸುವ ನೋವಿನ ಕಥೆಗಳೂ ಇರುತ್ತವೆ ಎಂಬುದಕ್ಕೆ ಈಗ ನಟಿ ಅದಿತಿ ಗೋವಿತ್ರಿಕರ್ (Dr Aditi Govitrikar) ಸಾಕ್ಷಿಯಾಗಿದ್ದಾರೆ. ದಶಕಗಳ ಕಾಲ ತಮ್ಮ ನೋವನ್ನು ಎದೆಯಲ್ಲೇ ಹೂತುಹಾಕಿದ್ದ ಈ ಸುಂದರಿ, ಇತ್ತೀಚೆಗೆ ತಮ್ಮ ಬಾಲ್ಯದಲ್ಲಿ ನಡೆದ ಆ ಕರಾಳ ಘಟನೆಗಳನ್ನು ಬಿಚ್ಚಿಡುವ ಮೂಲಕ ಇಡೀ ಚಿತ್ರರಂಗವೇ ಮರುಗುವಂತೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;'ತಮ್ಮುಡು' ಸಿನಿಮಾದ ಲವ್ಲಿ ಹುಡುಗಿ!&lt;/p&gt;&lt;p&gt;ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಸಾರ್ವಕಾಲಿಕ ಹಿಟ್ ಸಿನಿಮಾ 'ತಮ್ಮುಡು' ನೆನಪಿದೆಯೇ? ಆ ಸಿನಿಮಾದಲ್ಲಿ 'ಲವ್ಲಿ' ಎಂಬ ಹೆಸರಿನ ಪಾತ್ರದಲ್ಲಿ ಮಿಂಚಿದ್ದವರು ಅದಿತಿ ಗೋವಿತ್ರಿಕರ್. ವಿಶೇಷವಾಗಿ &quot;ವಯ್ಯಾರಿ ಭಾಮ ನೀ ಹಂಸ ನಡಕ..&quot; ಹಾಡಿನಲ್ಲಿ ತಮ್ಮ ಅದ್ಭುತ ಸೌಂದರ್ಯದಿಂದ ರಾತ್ರೋರಾತ್ರಿ ಯುವಕರ ಹೃದಯ ಕದಿದ್ದ ಈ ನಟಿ, ತೆಲುಗು ಪ್ರೇಕ್ಷಕರಿಗೆ ಇಂದಿಗೂ ಆಪ್ತರು. ಆದರೆ ಆ ನಗುವಿನ ಹಿಂದೆ ಅದೆಷ್ಟು ಕಣ್ಣೀರು ಅಡಗಿತ್ತು ಎಂಬುದು ಯಾರಿಗೂ ತಿಳಿದಿರಲಿಲ್ಲ.&lt;/p&gt;&lt;img&gt;&lt;p&gt;ಏಳು ವರ್ಷದ ಬಾಲಕಿಯ ಮೇಲೆ ನಡೆದ ನರಕಯಾತನೆ!&lt;/p&gt;&lt;p&gt;ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯದ ಬಗ್ಗೆ ಮಾತನಾಡುತ್ತಾ ಅದಿತಿ ಭಾವುಕರಾದರು. &quot;ನಾನು ಕೇವಲ ಆರು ಅಥವಾ ಏಳು ವರ್ಷದವಳಿದ್ದಾಗ ನನ್ನ ಬಾಲ್ಯ ನರಕವಾಗಿತ್ತು,&quot; ಎಂದು ಹೇಳುತ್ತಾ ಕಣ್ಣೀರಿಟ್ಟರು. ಮುಂಬೈನ ಪನ್ವೇಲ್ ಪ್ರದೇಶದಲ್ಲಿ ವಾಸವಾಗಿದ್ದಾಗ, ತಮ್ಮ ತಂದೆಯ ಆತ್ಮೀಯ ಸ್ನೇಹಿತನೇ ಅದಿತಿ ಮೇಲೆ ಲೈಂಗಿಕ ಕಿರುಕುಳ ನೀಡಿದ್ದನಂತೆ. ನಂಬಿಕೆಗೆ ದ್ರೋಹ ಬಗೆದ ಆ ವ್ಯಕ್ತಿ ಆ ಪುಟ್ಟ ಬಾಲಕಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಜಜ್ಜಿದ್ದ. ಈ ಆಘಾತಕಾರಿ ಘಟನೆಯಿಂದ ಚೇತರಿಸಿಕೊಳ್ಳಲು ಅದಿತಿಗೆ ವರ್ಷಗಳೇ ಬೇಕಾಯಿತು. ಅಷ್ಟೇ ಅಲ್ಲದೆ, ಶಾಲಾ ದಿನಗಳಲ್ಲಿ ಲೋಕಲ್ ಬಸ್ ಮತ್ತು ಟ್ರೈನ್&zwnj;ಗಳಲ್ಲಿ ಪ್ರಯಾಣಿಸುವಾಗಲೂ ಅವರು ಅನೇಕ ಬಾರಿ ಕಿರುಕುಳಕ್ಕೆ ಒಳಗಾಗಿದ್ದರು. &quot;ಆ ಕಷ್ಟಗಳು ಮತ್ತು ಕಹಿ ನೆನಪುಗಳೇ ನಾನು ಹೇಗೆ ಗಟ್ಟಿಯಾಗಿ ಬದುಕಬೇಕು ಎಂದು ಕಲಿಸಿದವು,&quot; ಎಂದು ಅವರು ಧೈರ್ಯದಿಂದ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಗ್ಲಾಮರ್ ಮೀರಿಸಿದ ಪ್ರತಿಭೆ: ಇವರು ಕೇವಲ ನಟಿಯಲ್ಲ, ಡಾಕ್ಟರ್!&lt;/p&gt;&lt;p&gt;ಅದಿತಿ ಗೋವಿತ್ರಿಕರ್ ಅವರ ವಿಶೇಷತೆಯೆಂದರೆ ಅವರು ಕೇವಲ ಗ್ಲಾಮರ್ ಮಾಡೆಲ್ ಮಾತ್ರವಲ್ಲ. ನಟನೆಗೆ ಬರುವ ಮೊದಲೇ ಅವರು ವೈದ್ಯಕೀಯ ಪದವಿ ಪಡೆದ ಅಪ್ಪಟ ಡಾಕ್ಟರ್&zwnj; ಮತ್ತು ಪ್ರಸಿದ್ಧ ಮನಶ್ಶಾಸ್ತ್ರಜ್ಞೆ. 2001ರಲ್ಲಿ 'ಮಿಸೆಸ್ ವರ್ಲ್ಡ್' ಕಿರೀಟ ಮುಡಿಗೇರಿಸಿಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ ಅದಿತಿ, ಮಾಡೆಲಿಂಗ್ ಲೋಕದ ರಾಣಿಯಾಗಿದ್ದರೂ ತಮ್ಮ ವೈದ್ಯಕೀಯ ವೃತ್ತಿಯನ್ನು ಮರೆಯಲಿಲ್ಲ.&lt;/p&gt;&lt;img&gt;&lt;p&gt;ಈಗ ಎಲ್ಲಿದ್ದಾರೆ ಅದಿತಿ?&lt;/p&gt;&lt;p&gt;ಸಿನಿಮಾ ಲೋಕದ ವೈಭವದಿಂದ ದೂರ ಉಳಿದಿರುವ 49 ವರ್ಷದ ಅದಿತಿ ಗೋವಿತ್ರಿಕರ್, ಈಗ ಮುಂಬೈನಲ್ಲಿ ಪೂರ್ಣ ಪ್ರಮಾಣದ ಡಾಕ್ಟರ್ ಮತ್ತು ಮನಶ್ಶಾಸ್ತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಕೆಲವು ಏರಿಳಿತಗಳನ್ನು ಕಂಡರೂ (2007ರಲ್ಲಿ ವಿಚ್ಛೇದನ), ಸೋಲೊಪ್ಪದ ಅದಿತಿ ಈಗ ನೂರಾರು ಜನರಿಗೆ ಮಾನಸಿಕ ಸಮಾಲೋಚನೆ ನೀಡುವ ಮೂಲಕ ಅವರ ಬದುಕಿನಲ್ಲಿ ಬೆಳಕಾಗುತ್ತಿದ್ದಾರೆ.&lt;/p&gt;&lt;img&gt;&lt;p&gt;ಬಾಲ್ಯದಲ್ಲಿ ಕಿರುಕುಳ ನೀಡಿದವರ ವಿರುದ್ಧ ಧ್ವನಿ ಎತ್ತಲು ಅದೆಷ್ಟೋ ಧೈರ್ಯ ಬೇಕು. ಇಂದು ಅದಿತಿ ಆ ಧೈರ್ಯವನ್ನು ತೋರಿಸುವ ಮೂಲಕ ಸಾವಿರಾರು ಸಂತ್ರಸ್ತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಸಾರಾಂಶ:&lt;/p&gt;&lt;p&gt;ತೆಲುಗಿನ 'ಲವ್ಲಿ' ಹುಡುಗಿ ಅದಿತಿ ಗೋವಿತ್ರಿಕರ್ ಅವರ ಬದುಕು ಹೋರಾಟದ ಹಾದಿ. ಬಾಲ್ಯದ ಲೈಂಗಿಕ ಕಿರುಕುಳದ ನೋವನ್ನು ಮೆಟ್ಟಿ ನಿಂತು, ಇಂದು ಒಬ್ಬ ಯಶಸ್ವಿ ಡಾಕ್ಟರ್ ಆಗಿ ಸಮಾಜಕ್ಕೆ ಸೇವೆಯು ಸಲ್ಲಿಸುತ್ತಿರುವ ಅವರ ಪಯಣ ನಿಜಕ್ಕೂ ಶ್ಲಾಘನೀಯ. ಅವರ ಈ ಬಯಲು ಸತ್ಯ ಹಲವರಿಗೆ ಎಚ್ಚರಿಕೆಯ ಗಂಟೆಯೂ ಹೌದು.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/dr-aditi-govitrikar-opens-up-about-dark-side-of-the-glamour-world-and-the-horrific-abuse-she-faced-during-her-childhood-hdwtyg8"/>
        </item>
        <item>
            <title><![CDATA[ಮುಖಕ್ಕೆ ಶಾರ್ಪ್ ಲುಕ್ ಬೇಕಾ? ನಟಿ ಡಯಾನಾ ಪೆಂಟಿಯ ಈ 6 ಹೇರ್‌ಸ್ಟೈಲ್‌ ಟ್ರೈ ಮಾಡಿ!]]></title>
            <link>https://kannada.asianetnews.com/webstories/fashion/diana-penty-inspired-hairstyles-for-a-sharp-face-cut-gvd-7weapan</link>
            <guid isPermaLink="true">https://kannada.asianetnews.com/webstories/fashion/diana-penty-inspired-hairstyles-for-a-sharp-face-cut-gvd-7weapan</guid>
            <pubDate>Wed, 20 May 2026 17:59:45 +0530</pubDate>
            <description><![CDATA[&lt;p&gt;ನಿಮ್ಮ ಮುಖಕ್ಕೆ ಶಾರ್ಪ್ ಕಟ್ ಲುಕ್ ಬೇಕು ಅನಿಸಿದ್ರೆ, ನಿಮ್ಮ ಹೇರ್&zwnj;ಸ್ಟೈಲ್ ಬದಲಾಯಿಸಿ ನೋಡಿ. ಇಲ್ಲಿ ನಟಿ ಡಯಾನಾ ಪೆಂಟಿಯ 6 ಸರಳ ಹೇರ್&zwnj;ಸ್ಟೈಲ್&zwnj;ಗಳ ಬಗ್ಗೆ ಹೇಳುತ್ತಿದ್ದೇವೆ. ಇವು ಸಿಂಪಲ್ ಆಗಿದ್ದರೂ, ಕ್ಲಾಸಿಕ್ ಲುಕ್ ಕೊಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks01c4np51kbwb1xw3ep716y,imgname-diana-penty-hairstyle-1779191648950.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/diana-penty-inspired-hairstyles-for-a-sharp-face-cut-gvd-7weapan"/>
        </item>
        <item>
            <title><![CDATA[Be Careful: ನಿಮ್ಮ ನಾಲಿಗೆಯ ಬಣ್ಣ ಬಿಚ್ಚಿಡುತ್ತೆ ಆರೋಗ್ಯದ ಗುಟ್ಟು; ಯಾವ ಬಣ್ಣ ಏನು ಹೇಳುತ್ತೆ ನೋಡಿ!]]></title>
            <link>https://kannada.asianetnews.com/health-life/color-of-a-tongue-reveals-the-secrets-of-their-health-and-find-out-what-different-tongue-colors-indicates/articleshow-hmggqhl</link>
            <guid isPermaLink="true">https://kannada.asianetnews.com/health-life/color-of-a-tongue-reveals-the-secrets-of-their-health-and-find-out-what-different-tongue-colors-indicates/articleshow-hmggqhl</guid>
            <pubDate>Wed, 20 May 2026 17:46:29 +0530</pubDate>
            <description><![CDATA[&lt;p&gt;ಪ್ರತಿದಿನ ನಾಲಿಗೆಯನ್ನು ಕ್ಲೀನರ್&zwnj;ನಿಂದ ಸ್ವಚ್ಛಗೊಳಿಸಿ, ಸಾಕಷ್ಟು ನೀರು ಕುಡಿಯಿರಿ ಮತ್ತು ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ. ಒಂದು ವೇಳೆ ನಿಮ್ಮ ನಾಲಿಗೆಯ ಬಣ್ಣ ಬದಲಾಗಿದ್ದರೆ ತಕ್ಷಣವೇ ಈ ರೀತಿಯ ಪರಿಹಾರ ಕ್ರಮ ಅನುಸರಿಸಲು ಶುರು ಮಾಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2mv64san8b8nre7anr881h,imgname-tongue-color-1779279173785.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಿಯ ಮುಂದೆ ನಿಂತು ಒಮ್ಮೆ ನಾಲಿಗೆ ಹೊರಹಾಕಿ ನೋಡಿ: ನಿಮ್ಮ ಆರೋಗ್ಯದ ಗುಟ್ಟು ಅಲ್ಲೇ ಅಡಗಿದೆ!&lt;/strong&gt;&lt;/p&gt;&lt;p&gt;ನಾವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆಯುತ್ತೇವೆ, ಹಲ್ಲುಜ್ಜುತ್ತೇವೆ. ಆದರೆ ನಮ್ಮ ನಾಲಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆಯೇ? ನಾಲಿಗೆ ಕೇವಲ ರುಚಿ ನೋಡಲು ಅಥವಾ ಮಾತನಾಡಲು ಇರುವ ಅಂಗವಲ್ಲ; ಅದು ನಮ್ಮ ದೇಹದ ಒಳಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಒಂದು 'ಆರೋಗ್ಯದ ಕನ್ನಡಿ'. ನಾವು ಅನುಸರಿಸುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ನಮ್ಮ ದೇಹದಲ್ಲಿರುವ ಪೋಷಕಾಂಶಗಳ ಮಟ್ಟವನ್ನು ನಾಲಿಗೆಯ ಬಣ್ಣವು (Tongue Color) ಬಹಳ ಸುಲಭವಾಗಿ ರಟ್ಟು ಮಾಡುತ್ತದೆ.&lt;/p&gt;&lt;p&gt;ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯು ಬಾಯಿ ಮತ್ತು ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದೆ. ಹೀಗಿರುವಾಗ, ವೈದ್ಯರ ಬಳಿ ಹೋಗುವ ಮೊದಲೇ ಮನೆಯಲ್ಲೇ ನಿಮ್ಮ ಆರೋಗ್ಯದ 'ಚೆಕಪ್' ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.&lt;/p&gt;&lt;h2&gt;1. ಗುಲಾಬಿ ಬಣ್ಣ (ಆರೋಗ್ಯದ ಸಂಕೇತ):&lt;/h2&gt;&lt;p&gt;ನಿಮ್ಮ ನಾಲಿಗೆ ತಿಳಿ ಗುಲಾಬಿ ಬಣ್ಣದಿಂದ ಕೂಡಿದ್ದು, ಅದರ ಮೇಲೆ ಸಣ್ಣ ಸಣ್ಣ ಮೊಗ್ಗುಗಳಂತಹ (Papillae) ವಿನ್ಯಾಸವಿದ್ದರೆ, ನೀವು ಸಂಪೂರ್ಣ ಆರೋಗ್ಯವಂತರು ಎಂದರ್ಥ. ಇದರರ್ಥ ನೀವು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುತ್ತಿದ್ದೀರಿ, ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಿದೆ ಮತ್ತು ನೀವು ಸಮತೋಲಿತ ಜೀವನಶೈಲಿಯನ್ನು ಹೊಂದಿದ್ದೀರಿ.&lt;/p&gt;&lt;p&gt;2. ಬಿಳಿ ಬಣ್ಣದ ಲೇಪನ (ನಿರ್ಜಲೀಕರಣದ ಎಚ್ಚರಿಕೆ):&lt;/p&gt;&lt;p&gt;ನಾಲಿಗೆಯ ಮೇಲೆ ಬಿಳಿ ಬಣ್ಣದ ಪದರ ಅಥವಾ ಕಲೆಗಳು ಕಂಡುಬಂದರೆ, ಅದು ನಿಮ್ಮ ದೇಹದಲ್ಲಿ ನೀರಿನ ಕೊರತೆ (Dehydration) ಇರುವುದನ್ನು ಸೂಚಿಸುತ್ತದೆ. ಅತಿಯಾದ ಧೂಮಪಾನ ಅಥವಾ ಬಾಯಿಯ ಸ್ವಚ್ಛತೆ ಕಾಪಾಡದಿದ್ದಾಗ ಫಂಗಲ್ ಸೋಂಕು ಉಂಟಾಗಿ ನಾಲಗೆ ಬಿಳಿಯಾಗಬಹುದು. ತಂಬಾಕು ಬಳಸುವವರಲ್ಲಿ ಕಂಡುಬರುವ ಬಿಳಿ ಕಲೆಗಳು ಮುಂದೆ 'ಲ್ಯುಕೋಪ್ಲಾಕಿಯಾ' ಎಂಬ ಗಂಭೀರ ಸ್ಥಿತಿಗೂ ಕಾರಣವಾಗಬಹುದು.&lt;/p&gt;&lt;p&gt;3. ಮಸುಕಾದ ಅಥವಾ ಪೇಲವ ಬಣ್ಣ (ರಕ್ತಹೀನತೆ):&lt;/p&gt;&lt;p&gt;ನಿಮ್ಮ ನಾಲಿಗೆ ತನ್ನ ನೈಸರ್ಗಿಕ ಗುಲಾಬಿ ಬಣ್ಣ ಕಳೆದುಕೊಂಡು ತುಂಬಾ ಮಸುಕಾಗಿ ಕಾಣುತ್ತಿದ್ದರೆ, ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶ (Iron) ಅಥವಾ ವಿಟಮಿನ್ ಬಿ12 ಕೊರತೆ ಇರಬಹುದು. ಇದನ್ನು ರಕ್ತಹೀನತೆ (Anemia) ಎನ್ನಲಾಗುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದಾಗ ನಾಲಿಗೆಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗಿ ಅದು ಮಸುಕಾಗುತ್ತದೆ.&lt;/p&gt;&lt;h3&gt;4. ಗಾಢ ಕೆಂಪು ಬಣ್ಣ (ಸ್ಟ್ರಾಬೆರಿ ನಾಲಗೆ):&lt;/h3&gt;&lt;p&gt;ನಾಲಿಗೆಯು ಸ್ಟ್ರಾಬೆರಿ ಹಣ್ಣಿನಂತೆ ಗಾಢ ಕೆಂಪು ಬಣ್ಣಕ್ಕೆ ತಿರುಗಿದ್ದರೆ, ಅದು ವಿಟಮಿನ್ ಬಿ12 ಅಥವಾ ಫೋಲಿಕ್ ಆಸಿಡ್&zwnj;ನ ತೀವ್ರ ಕೊರತೆಯನ್ನು ತೋರಿಸುತ್ತದೆ. ಕೆಲವೊಮ್ಮೆ ಜ್ವರ ಅಥವಾ ಅಲರ್ಜಿಯಾದಾಗಲೂ ನಾಲಗೆ ಹೀಗೆ ಊದಿಕೊಂಡು ಕೆಂಪಾಗಬಹುದು. ಇದು ನಿಮ್ಮ ದೇಹಕ್ಕೆ ಪೌಷ್ಟಿಕ ಆಹಾರದ ಅಗತ್ಯವಿದೆ ಎಂಬುದಕ್ಕೆ ದೊಡ್ಡ ಸಾಕ್ಷಿ.&lt;/p&gt;&lt;p&gt;5. ಹಳದಿ ಅಥವಾ ಕಿತ್ತಳೆ ಬಣ್ಣ (ಹವ್ಯಾಸಗಳ ಪ್ರತಿಬಿಂಬ):&lt;/p&gt;&lt;p&gt;ಅತಿಯಾಗಿ ಕಾಫಿ, ಟೀ ಕುಡಿಯುವವರು ಅಥವಾ ಧೂಮಪಾನ ಮಾಡುವವರಲ್ಲಿ ನಾಲಿಗೆ ಹಳದಿ ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಸೂಚಿಸುತ್ತದೆ. ಸರಿಯಾದ ಬ್ರಶಿಂಗ್ ಅಭ್ಯಾಸ ಇಲ್ಲದಿದ್ದರೂ ನಾಲಿಗೆಯ ಮೇಲೆ ಹಳದಿ ಪದರ ಕುಳಿತುಕೊಳ್ಳುತ್ತದೆ.&lt;/p&gt;&lt;p&gt;6. ನೀಲಿ ಅಥವಾ ನೇರಳೆ ಬಣ್ಣ (ತುರ್ತು ಎಚ್ಚರಿಕೆ):&lt;/p&gt;&lt;p&gt;ಇದು ಸ್ವಲ್ಪ ಗಂಭೀರವಾದ ಲಕ್ಷಣ. ರಕ್ತದಲ್ಲಿ ಆಮ್ಲಜನಕದ ಮಟ್ಟ ಕುಸಿದಾಗ ಅಥವಾ ರಕ್ತ ಪರಿಚಲನೆಯಲ್ಲಿ ಅಡಚಣೆಯಾದಾಗ ನಾಲಿಗೆ ನೀಲಿ ಅಥವಾ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದು ಹೃದಯದ ಕಾಯಿಲೆ ಅಥವಾ ಶ್ವಾಸಕೋಶದ ಸಮಸ್ಯೆಯ ಮುನ್ಸೂಚನೆಯಾಗಿರಬಹುದು.&lt;/p&gt;&lt;p&gt;ಸಲಹೆ:&lt;/p&gt;&lt;p&gt;ನಿಮ್ಮ ಜೀವನಶೈಲಿಯಲ್ಲಿ ಅಲ್ಪ ಬದಲಾವಣೆ ಮಾಡಿಕೊಳ್ಳುವ ಮೂಲಕ ನಾಲಿಗೆಯನ್ನು ಮತ್ತು ಆರೋಗ್ಯವನ್ನು ಸುಧಾರಿಸಬಹುದು. ಪ್ರತಿದಿನ ನಾಲಗೆಯನ್ನು ಕ್ಲೀನರ್&zwnj;ನಿಂದ ಸ್ವಚ್ಛಗೊಳಿಸಿ, ಸಾಕಷ್ಟು ನೀರು ಕುಡಿಯಿರಿ ಮತ್ತು ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ. ಒಂದು ವೇಳೆ ನಿಮ್ಮ ನಾಲಿಗೆಯ ಬಣ್ಣ ದೀರ್ಘಕಾಲದವರೆಗೆ ಅಸಹಜವಾಗಿದ್ದರೆ, ವೈದ್ಯರನ್ನು ಭೇಟಿ ಮಾಡಲು ಹಿಂಜರಿಯಬೇಡಿ.&lt;/p&gt;&lt;p&gt;ನೆನಪಿಡಿ, ಸಣ್ಣ ಬದಲಾವಣೆಯೂ ದೊಡ್ಡ ಆರೋಗ್ಯದ ಗುಟ್ಟನ್ನು ಹೇಳಬಹುದು!&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/color-of-a-tongue-reveals-the-secrets-of-their-health-and-find-out-what-different-tongue-colors-indicates/articleshow-hmggqhl"/>
        </item>
        <item>
            <title><![CDATA[Divorce Case: ಜಯಂ ರವಿ ಡಿವೋರ್ಸ್‌ ಕೇಸ್‌; ಹೆಂಡತಿ ಆರತಿ ಕೇಳಿರೋ ಜೀವನಾಂಶ ಎಷ್ಟು ಕೋಟಿ ಗೊತ್ತಾ?]]></title>
            <link>https://kannada.asianetnews.com/cine-world/actor-jayam-ravi-wife-aarti-has-demanded-a-monthly-alimony-of-40-lakh-rupees-in-connection-with-the-divorce-case/articleshow-g63qzii</link>
            <guid isPermaLink="true">https://kannada.asianetnews.com/cine-world/actor-jayam-ravi-wife-aarti-has-demanded-a-monthly-alimony-of-40-lakh-rupees-in-connection-with-the-divorce-case/articleshow-g63qzii</guid>
            <pubDate>Wed, 20 May 2026 16:27:51 +0530</pubDate>
            <description><![CDATA[&lt;p&gt;ಜಯಂ ರವಿ ಮತ್ತು ಆರತಿ ನಡುವಿನ ಕದನ ಈಗ ಹಣದ ಹಾದಿ ಹಿಡಿದಿದೆ. ಮಾಸಿಕ 40 ಲಕ್ಷ ರೂಪಾಯಿಗಳ ಬೇಡಿಕೆಯು ಜಯಂ ರವಿ ಅವರ ವೃತ್ತಿಜೀವನದ ಗಳಿಕೆಗಿಂತ ಹೆಚ್ಚಿರುವಂತೆ ಕಾಣುತ್ತಿದೆ. ಈ ಕೌಟುಂಬಿಕ ಕಲಹವು ಕಾನೂನಾತ್ಮಕವಾಗಿ ಹೇಗೆ ಬಗೆಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krtvff0gg86cr6qkyabq6hbs,imgname-aarti-jayam-ravi-1779017694224.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಯಂ ರವಿ ಪತ್ನಿ ಆರತಿ ಕೇಳಿರೋ ಜೀವನಾಂಸ ಎಷ್ಟು ಕೊಟಿ ರೂ.?&lt;/strong&gt;&lt;/p&gt;&lt;p&gt;ಕಾಲಿವುಡ್&zwnj;ನ 'ಜೆಂಟಲ್&zwnj;ಮನ್' ಎಂದೇ ಖ್ಯಾತರಾಗಿರುವ ನಟ ಜಯಂ ರವಿ (Jayam Ravi) ಅವರ ವೈಯಕ್ತಿಕ ಜೀವನ ಈಗ ಬೀದಿಗೆ ಬಂದಿದೆ. ಬೆಳ್ಳಿತೆರೆಯ ಮೇಲೆ ಅಬ್ಬರಿಸುವ ಈ ನಟ, ನಿಜಜೀವನದಲ್ಲಿ ಪತ್ನಿ ಮತ್ತು ಅತ್ತೆ ಮನೆಯವರಿಂದ ಅನುಭವಿಸಿದ ನರಕಯಾತನೆಯನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದು ಅಭಿಮಾನಿಗಳ ಎದೆಯನ್ನು ಚುಚ್ಚುವಂತೆ ಮಾಡಿದೆ. ಆದರೆ, ಈ ವಿಚ್ಛೇದನ ಪ್ರಕರಣ ಈಗ ಕೇವಲ ಭಾವನಾತ್ಮಕವಾಗಿ ಉಳಿದಿಲ್ಲ, ಇದು ಭಾರೀ ದೊಡ್ಡ ಮಟ್ಟದ ಆರ್ಥಿಕ ಸಮರಕ್ಕೆ ನಾಂದಿ ಹಾಡಿದೆ. ಹೌದು, ಜಯಂ ರವಿ ಪತ್ನಿ ಆರತಿ ನ್ಯಾಯಾಲಯದಲ್ಲಿ ಕೇಳಿರುವ ಜೀವನಾಂಶದ ಮೊತ್ತ ಈಗ ಸಿನೆಮಾ ಲೋಕದಲ್ಲಿ ಅತೀ ದೊಡ್ಡ ಚರ್ಚೆಯ ವಿಷಯವಾಗಿದೆ!&lt;/p&gt;&lt;h2&gt;ವರ್ಷಕ್ಕೆ 5 ಕೋಟಿ ರೂಪಾಯಿ ಜೀವನಾಂಶ!&lt;/h2&gt;&lt;p&gt;ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ಕಾನೂನು ಹೋರಾಟದಲ್ಲಿ ಆರತಿ ಅವರು ಇಟ್ಟಿರುವ ಷರತ್ತು ಕೇಳಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಜಯಂ ರವಿ ಅವರಿಂದ ಬೇರ್ಪಡಲು ಆರತಿ ಅವರು ಮಾಸಿಕ 40 ಲಕ್ಷ ರೂಪಾಯಿ ಜೀವನಾಂಶವನ್ನು ಕೇಳಿದ್ದಾರಂತೆ! ಒಂದು ತಿಂಗಳಿಗೆ 40 ಲಕ್ಷ ಅಂದರೆ, ಒಂದು ವರ್ಷಕ್ಕೆ ಬರೊಬ್ಬರಿ 4.8 ಕೋಟಿ ರೂಪಾಯಿ ಆಗುತ್ತದೆ. ಇದು ಕೇವಲ ಜೀವನ ನಿರ್ವಹಣಾ ವೆಚ್ಚಕ್ಕಾಗಿ ಎಂಬುದು ವಿಶೇಷ.&lt;/p&gt;&lt;p&gt;ಈ ಬೇಡಿಕೆ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಜಯಂ ರವಿ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. &quot;ಜಯಂ ರವಿ ಅವರು ಒಂದು ಸಿನಿಮಾ ಮಾಡಲು ವರ್ಷಗಟ್ಟಲೆ ಸಮಯ ತಗೊಳ್ತಾರೆ. ಅವರ ಸಂಭಾವನೆಯೇ 5 ರಿಂದ 6 ಕೋಟಿ ರೂಪಾಯಿ ಇರುತ್ತದೆ. ಹೀಗಿರುವಾಗ ಇಡೀ ವರ್ಷ ದುಡಿದಿದ್ದನ್ನು ಹೆಂಡತಿಗೆ ಜೀವನಾಂಶ ರೂಪದಲ್ಲೇ ಕೊಟ್ಟರೆ, ಇವರು ತಿನ್ನುವುದಾದರೂ ಏನು?&quot; ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.&lt;/p&gt;&lt;h3&gt;ಮನೆಯಿಂದಲೇ ಹೊರಹಾಕಲ್ಪಟ್ಟ 'ಚಾಂಪಿಯನ್'!&lt;/h3&gt;&lt;p&gt;ಜಯಂ ರವಿ ಅವರು ತಮ್ಮ ನೋವನ್ನು ತೋಡಿಕೊಳ್ಳುತ್ತಾ, &quot;ನನ್ನ ಕಷ್ಟಪಟ್ಟು ಸಂಪಾದಿಸಿದ ಹಣದ ಮೇಲೆ ನನಗೆ ಅಧಿಕಾರವಿಲ್ಲದಂತೆ ಮಾಡಿದರು. ಮಕ್ಕಳನ್ನು ನೋಡಲು ಬಿಡುತ್ತಿಲ್ಲ. ಅಂತಿಮವಾಗಿ ನನ್ನ ಸ್ವಂತ ಮನೆಯಿಂದಲೇ ನನ್ನನ್ನು ಹೊರಹಾಕಿದರು. ಅನಿವಾರ್ಯವಾಗಿ ನಾನು ಚೆನ್ನೈ ಬಿಟ್ಟು ಮುಂಬೈಗೆ ಹೋಗಿ ನೆಲೆಸಬೇಕಾಯಿತು,&quot; ಎಂದು ಹೇಳಿಕೊಂಡಿದ್ದಾರೆ. ಪತ್ನಿ ಆರತಿ ಮತ್ತು ಆಕೆಯ ಕುಟುಂಬದವರು ತಮಗೆ ಮಾನಸಿಕ ಮತ್ತು ಆರ್ಥಿಕವಾಗಿ ಅತೀವ ಕಿರುಕುಳ ನೀಡಿದ್ದಾರೆ ಎಂಬುದು ರವಿ ಅವರ ಗಂಭೀರ ಆರೋಪ.&lt;/p&gt;&lt;p&gt;ಆರತಿ ಅವರ ಪ್ರತಿವಾದವೇನು?&lt;/p&gt;&lt;p&gt;ಇನ್ನೊಂದೆಡೆ ಆರತಿ ಅವರ ವಾದವೇ ಬೇರೆಯಿದೆ. &quot;ನನ್ನ ಗಮನಕ್ಕೆ ತರದೆ ಏಕಪಕ್ಷೀಯವಾಗಿ ರವಿ ವಿಚ್ಛೇದನ ಘೋಷಣೆ ಮಾಡಿದ್ದಾರೆ. ಮಾತುಕತೆಗೆ ನಾನು ಸಿದ್ಧವಿದ್ದರೂ ಅವರು ಅವಕಾಶ ನೀಡುತ್ತಿಲ್ಲ,&quot; ಎಂದು ಆರತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಸಮಯದಲ್ಲಿ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗೆ ರವಿ ಹೆಸರು ತಳುಕು ಹಾಕಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ, &quot;ನಾನು ತೀವ್ರ ಖಿನ್ನತೆಯಲ್ಲಿದ್ದಾಗ ಕೆನಿಶಾ ನನಗೆ ಮಾನಸಿಕವಾಗಿ ಸಹಾಯ ಮಾಡಿದರು ಅಷ್ಟೇ, ನಮ್ಮ ನಡುವೆ ಬೇರೇನೂ ಇಲ್ಲ,&quot; ಎಂದು ಜಯಂ ರವಿ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;ಕೊನೆಯ ಮಾತು:&lt;/p&gt;&lt;p&gt;ಒಂದು ಸುಂದರ ದಾಂಪತ್ಯ ಹೀಗೆ ವಿವಾದದ ಹಾದಿ ಹಿಡಿದಿರುವುದು ನಿಜಕ್ಕೂ ಬೇಸರದ ಸಂಗತಿ. ಜೀವನಾಂಶದ ಮೊತ್ತದ ವಿಚಾರದಲ್ಲಿ ನಡೆಯುತ್ತಿರುವ ಈ ಹಗ್ಗಜಗ್ಗಾಟ ನ್ಯಾಯಾಲಯದಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಈಗ ಎಲ್ಲರ ಕುತೂಹಲ. ಜಯಂ ರವಿ ಅಭಿಮಾನಿಗಳು ಮಾತ್ರ &quot;ಸ್ಟೇ ಸ್ಟ್ರಾಂಗ್ ರವಿ ಅಣ್ಣ&quot; ಎಂದು ಸಪೋರ್ಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕಾಲಿವುಡ್&zwnj;ನ ಈ 'ಜಯಂ' ಈಗ ವಿಚ್ಛೇದನದ ಸುಳಿಯಲ್ಲಿ ಸಿಲುಕಿದ್ದಾರೆ.&lt;/p&gt;&lt;p&gt;ಸಾರಾಂಶ: ಜಯಂ ರವಿ ಮತ್ತು ಆರತಿ ನಡುವಿನ ಕದನ ಈಗ ಹಣದ ಹಾದಿ ಹಿಡಿದಿದೆ. ಮಾಸಿಕ 40 ಲಕ್ಷ ರೂಪಾಯಿಗಳ ಬೇಡಿಕೆಯು ಜಯಂ ರವಿ ಅವರ ವೃತ್ತಿಜೀವನದ ಗಳಿಕೆಗಿಂತ ಹೆಚ್ಚಿರುವಂತೆ ಕಾಣುತ್ತಿದೆ. ಈ ಕೌಟುಂಬಿಕ ಕಲಹವು ಕಾನೂನಾತ್ಮಕವಾಗಿ ಹೇಗೆ ಬಗೆಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/actor-jayam-ravi-wife-aarti-has-demanded-a-monthly-alimony-of-40-lakh-rupees-in-connection-with-the-divorce-case/articleshow-g63qzii"/>
        </item>
        <item>
            <title><![CDATA[ಕೇವಲ ₹250ಕ್ಕೆ ಕೈಗಳಿಗೆ ರಾಯಲ್ ಲುಕ್! ಇಲ್ಲಿವೆ 7 ಲೈಟ್ ವೇಟ್ ಕುಂದನ್ ಬಳೆಗಳು]]></title>
            <link>https://kannada.asianetnews.com/webstories/fashion/top-7-lightweight-kundan-kada-designs-for-a-royal-look-under-300-rupees-kvn-9o3aqtp</link>
            <guid isPermaLink="true">https://kannada.asianetnews.com/webstories/fashion/top-7-lightweight-kundan-kada-designs-for-a-royal-look-under-300-rupees-kvn-9o3aqtp</guid>
            <pubDate>Wed, 20 May 2026 16:26:29 +0530</pubDate>
            <description><![CDATA[&lt;p&gt;ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಸದಾ ಕಾಳಜಿ ವಹಿಸುತ್ತಾರೆ. ಬಟ್ಟೆಯಾಗಿರಲಿ, ಆಭರಣವೇ ಆಗಿರಲಿ, ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ತಮ್ಮ ಲುಕ್&zwnj;ಗೆ ಇನ್ನಷ್ಟು ಮೆರುಗು ನೀಡಲು, ಮಹಿಳೆಯರು ಹಗುರವಾದ ಕುಂದನ್ ಬಳೆಗಳನ್ನು ಸ್ಟೈಲ್ ಮಾಡಬಹುದು. ಇವು ಕೇವಲ 250-300 ರೂಪಾಯಿ ಬೆಲೆಯಲ್ಲಿ ಸಿಗುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzmcn1vy90m6q4y8dsgrfzp,imgname-light-weight-kundan-kada-1779178034235.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/top-7-lightweight-kundan-kada-designs-for-a-royal-look-under-300-rupees-kvn-9o3aqtp"/>
        </item>
        <item>
            <title><![CDATA[ಜಿಡ್ಡಿಲ್ಲದೆ ತುಟಿಗಳಿಗೆ ಫ್ರೆಶ್ ಲುಕ್ ನೀಡುವ 6 ನ್ಯೂಡ್ ಲಿಪ್‌ಸ್ಟಿಕ್‌ಗಳಿವು]]></title>
            <link>https://kannada.asianetnews.com/webstories/fashion/best-warm-nude-lipstick-shades-for-a-fresh-summer-look-tips-5qahxe1</link>
            <guid isPermaLink="true">https://kannada.asianetnews.com/webstories/fashion/best-warm-nude-lipstick-shades-for-a-fresh-summer-look-tips-5qahxe1</guid>
            <pubDate>Wed, 20 May 2026 16:12:06 +0530</pubDate>
            <description><![CDATA[ಬೇಸಿಗೆಯಲ್ಲಿ ಫ್ರೆಶ್ ಹಾಗೂ ಸಾಫ್ಟ್ ಮೇಕಪ್ ಲುಕ್&zwnj;ಗಾಗಿ ವಾರ್ಮ್ ನ್ಯೂಡ್ ಲಿಪ್&zwnj;ಸ್ಟಿಕ್ ಶೇಡ್&zwnj;ಗಳನ್ನು ಟ್ರೈ ಮಾಡಿ. ಸಿನಮನ್, ಮೋಕಾ ನ್ಯೂಡ್, ರೋಸಿ ಬ್ರೌನ್ ಮತ್ತು ಪೀಚ್ ನ್ಯೂಡ್&zwnj;ನಂತಹ ಬಣ್ಣಗಳು ನ್ಯಾಚುರಲ್ ಹಾಗೂ ಟ್ರೆಂಡಿ ಲುಕ್ ನೀಡುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks2ec0zmz5pssqh43f9bvjgs,imgname-warm-nude-lipstick-d-1779272385524.jpg" type="image/jpeg" height="390" width="690"/>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/fashion/best-warm-nude-lipstick-shades-for-a-fresh-summer-look-tips-5qahxe1"/>
        </item>
        <item>
            <title><![CDATA[Fish Anatomy: ಮೀನುಗಳಿಗೆ ಕಿವಿ ಇರುತ್ತಾ? 99% ಜನರಿಗೆ ಗೊತ್ತಿಲ್ಲದ ಸತ್ಯ ಇಲ್ಲಿದೆ ನೋಡಿ]]></title>
            <link>https://kannada.asianetnews.com/gallery/life/can-you-hear-me-nowthe-invisible-ears-of-the-underwater-world-gdeleg5</link>
            <guid isPermaLink="true">https://kannada.asianetnews.com/gallery/life/can-you-hear-me-nowthe-invisible-ears-of-the-underwater-world-gdeleg5</guid>
            <pubDate>Wed, 20 May 2026 16:04:04 +0530</pubDate>
            <description><![CDATA[&lt;p&gt;&lt;strong&gt;How do fish sense vibrations: &lt;/strong&gt;ಮೀನಿಗೆ ಕಣ್ಣುಗಳಿವೆ ಅಂತ ಗೊತ್ತು. ಆದರೆ ಮೀನುಗಳಿಗೆ ಕಿವಿಗಳೂ ಇರುತ್ತವೆಯೇ? ನೀವು ಎಂದಾದರೂ ನೋಡಿದ್ದೀರಾ? ನಾವು ಮಾತನಾಡುವುದು ಮೀನುಗಳಿಗೆ ಕೇಳಿಸುತ್ತದೆಯೇ? ಅಷ್ಟಕ್ಕೂ ಮೀನುಗಳು ಹೇಗೆ ಕೇಳಿಸಿಕೊಳ್ಳುತ್ತವೆ? &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdm88t6n3bg6vc2hq28c4w2,imgname-images--94--1776426427206.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;How do fish sense vibrations: &lt;/strong&gt;ಮೀನಿಗೆ ಕಣ್ಣುಗಳಿವೆ ಅಂತ ಗೊತ್ತು. ಆದರೆ ಮೀನುಗಳಿಗೆ ಕಿವಿಗಳೂ ಇರುತ್ತವೆಯೇ? ನೀವು ಎಂದಾದರೂ ನೋಡಿದ್ದೀರಾ? ನಾವು ಮಾತನಾಡುವುದು ಮೀನುಗಳಿಗೆ ಕೇಳಿಸುತ್ತದೆಯೇ? ಅಷ್ಟಕ್ಕೂ ಮೀನುಗಳು ಹೇಗೆ ಕೇಳಿಸಿಕೊಳ್ಳುತ್ತವೆ? &amp;nbsp;&lt;/p&gt;&lt;img&gt;&lt;p&gt;ನಮಗೆ ಮೀನಿನ ಕಣ್ಣುಗಳು ಸ್ಪಷ್ಟವಾಗಿ ಕಾಣುತ್ತವೆ. ಆದರೆ, ಮನುಷ್ಯರು ಮತ್ತು ಇತರ ಪ್ರಾಣಿಗಳಂತೆ ಮೀನಿನ ಕಿವಿಗಳು ಹೊರಗಿನಿಂದ ಕಾಣಿಸುವುದಿಲ್ಲ. ಮೀನುಗಳಿಗೆ ತಲೆಯ ಒಳಗೆ, ಕಣ್ಣುಗಳ ಹಿಂಭಾಗದಲ್ಲಿ ಎರಡು ಕಿವಿಗಳಿರುತ್ತವೆ. ನೀರಿನಲ್ಲಿ ಶಬ್ದ ವೇಗವಾಗಿ ಚಲಿಸುವುದರಿಂದ, ಈ ಕಿವಿಗಳು ಸಣ್ಣ ಚಲನೆ ಮತ್ತು ಶಬ್ದಗಳನ್ನು ಗ್ರಹಿಸಲು ಸಹಾಯ ಮಾಡುತ್ತವೆ. ಇದಲ್ಲದೆ, ಮೀನಿನ ದೇಹದ ಎರಡೂ ಬದಿಗಳಲ್ಲಿ 'ಲ್ಯಾಟರಲ್ ಲೈನ್' (Lateral Line) ಎಂಬ ವಿಶೇಷ ವ್ಯವಸ್ಥೆ ಇರುತ್ತದೆ. ಇದು ನೀರಿನಲ್ಲಿನ ಕಂಪನಗಳನ್ನು ಗುರುತಿಸಿ, ಶತ್ರುಗಳ ಚಲನವಲನವನ್ನು ಪತ್ತೆಹಚ್ಚಲು ನೆರವಾಗುತ್ತದೆ.&amp;nbsp;&lt;/p&gt;&lt;img&gt;ಕೆಲವು ಮೀನುಗಳು ಅತಿ ಕಡಿಮೆ ಫ್ರೀಕ್ವೆನ್ಸಿಯ ಶಬ್ದಗಳನ್ನು ಸಹ ಕೇಳಬಲ್ಲವು. ಇನ್ನು ಕೆಲವು ಮೀನುಗಳು ಅಪಾಯದ ಸಮಯದಲ್ಲಿ ವಿಶೇಷ ಕಂಪನಗಳನ್ನು ಹೊರಸೂಸಿ, ಇತರ ಮೀನುಗಳಿಗೆ ಸಂಕೇತ ನೀಡುತ್ತವೆ. ಮೀನಿನ ಕಿವಿಗಳಲ್ಲಿ 'ಒಟೊಲಿತ್ಸ್' (Otoliths) ಎಂಬ ಸಣ್ಣ ಕಲ್ಲುಗಳಂತಹ ರಚನೆಗಳಿರುತ್ತವೆ. ಮನುಷ್ಯರಲ್ಲಿ ಕಿವಿಗಳು ದೇಹದ ಸಮತೋಲನಕ್ಕೆ ಸಹಾಯ ಮಾಡುವಂತೆ, ಮೀನುಗಳಲ್ಲಿ ಈ ಒಟೊಲಿತ್ಸ್&zwnj;ಗಳು ಅದೇ ಕೆಲಸ ಮಾಡುತ್ತವೆ. ಇದರಿಂದ ಮೀನುಗಳು ನೀರಿನಲ್ಲಿ ಸುಲಭವಾಗಿ ದಿಕ್ಕು ಬದಲಿಸಿ ಈಜಲು ಸಾಧ್ಯವಾಗುತ್ತದೆ. ಹೀಗಾಗಿ, ಮೀನುಗಳಿಗೆ ಹೊರಗೆ ಕಾಣುವ ಕಿವಿಗಳಿಲ್ಲದಿದ್ದರೂ, ಅವುಗಳ ಕೇಳುವ ಶಕ್ತಿ ಅದ್ಭುತವಾಗಿದೆ.]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/can-you-hear-me-nowthe-invisible-ears-of-the-underwater-world-gdeleg5"/>
        </item>
        <item>
            <title><![CDATA[ಆಸ್ಪತ್ರೆ ಆವರಣದಲ್ಲೇ ಸಖತ್ 'ರಾಂಗ್' ಆದ ಸಲ್ಮಾನ್ ಖಾನ್; ನಟನ 'ದಬಾಂಗ್' ಅವತಾರ ಕಂಡು ಬೆಚ್ಚಿಬಿದ್ದ ಕ್ಯಾಮೆರಾ!]]></title>
            <link>https://kannada.asianetnews.com/cine-world/bollywood-star-salman-khan-gets-angry-towards-camera-in-front-of-a-hospital/articleshow-z8vmcna</link>
            <guid isPermaLink="true">https://kannada.asianetnews.com/cine-world/bollywood-star-salman-khan-gets-angry-towards-camera-in-front-of-a-hospital/articleshow-z8vmcna</guid>
            <pubDate>Wed, 20 May 2026 15:57:38 +0530</pubDate>
            <description><![CDATA[&lt;p&gt;ಆಸ್ಪತ್ರೆಯಂತಹ ಸೂಕ್ಷ್ಮ ಜಾಗದಲ್ಲಿ, ಯಾರೋ ನೋವಿನಲ್ಲಿದ್ದಾಗ ಹೀಗೆ ಸಿನೆಮಾ ಹೆಸರನ್ನು ಕೂಗಿದ್ದು ಸಲ್ಲು ಭಾಯ್&zwnj;ಗೆ ಅತಿಯಾದ ಕೋಪ ತರಿಸಿತು. ತಕ್ಷಣವೇ ಪಾಪರಾಜಿಗಳತ್ತ ನಡೆದು ಬಂದ ಸಲ್ಮಾನ್, &quot;ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಯಲ್ಲಿದ್ದಾಗ ಹೀಗೆ ಮಾಡಿದರೆ ನಿಮಗೆ ಹೇಗನಿಸುತ್ತದೆ?&quot; ಎಂದಿದ್ದಾರೆ ನಟ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krr8n5ddekf3kh9w0p7s5075,imgname-beingsalmankhan-1777791169-3888715946441365246-1547627005-1778930849197.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆಸ್ಪತ್ರೆ ಆವರಣದಲ್ಲಿ ಸಲ್ಮಾನ್ ಖಾನ್ 'ದಬಾಂಗ್' ಅವತಾರ! ಪಾಪರಾಜಿಗಳ ಮೇಲೆ ಕೆಂಡಾಮಂಡಲವಾದ ಸಲ್ಲು ಭಾಯ್; ಕಾರಣ ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ!&lt;/strong&gt;&lt;/p&gt;&lt;p&gt;ಸಲ್ಮಾನ್ ಖಾನ್ (Salman Khan) ಎಲ್ಲಿಯೇ ಹೋದರೂ ಅಲ್ಲಿ ಕ್ಯಾಮೆರಾ ಹಿಡಿದ ಪಾಪರಾಜಿಗಳ ದಂಡು ಇರುವುದೇ. ಆದರೆ, ಸದಾ ಶಾಂತವಾಗಿರುವ ಸಲ್ಮಾನ್ ಖಾನ್ ಮಂಗಳವಾರ ರಾತ್ರಿ ಮುಂಬೈನ ಹಿಂದೂಜಾ ಆಸ್ಪತ್ರೆಯ ಆವರಣದಲ್ಲಿ ಅಕ್ಷರಶಃ ಸ್ಫೋಟಗೊಂಡಿದ್ದಾರೆ! ತಮ್ಮ ಮೇಲೆ ಮುಗಿಬಿದ್ದ ಛಾಯಾಗ್ರಾಹಕರ ವಿರುದ್ಧ ಕಿಡಿಕಾರಿದ ಸಲ್ಮಾನ್, &quot;ನಿಮಗೆ ಹುಚ್ಚು ಹಿಡಿದಿದೆಯೇ?&quot; ಎಂದು ಘರ್ಜಿಸಿದ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.&lt;/p&gt;&lt;h2&gt;ಆಸ್ಪತ್ರೆ ಮುಂದೆ ಅಸಮಾಧಾನಗೊಂಡ ಸಲ್ಲು!&lt;/h2&gt;&lt;p&gt;ಮಂಗಳವಾರ ರಾತ್ರಿ ಸಲ್ಮಾನ್ ಖಾನ್ ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಅಥವಾ ಆಪ್ತರನ್ನು ಭೇಟಿ ಮಾಡಲು ಹಿಂದೂಜಾ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಗೆ ಪ್ರವೇಶಿಸುವಾಗ ಗಂಭೀರವಾಗಿದ್ದ ಸಲ್ಮಾನ್, ಏನನ್ನೂ ಮಾತನಾಡದೆ ಒಳಗೆ ಹೋದರು. ಆದರೆ, ಅವರು ಆಸ್ಪತ್ರೆಯಿಂದ ಹೊರಬರುವಾಗ ಕಥೆಯೇ ಬದಲಾಗಿತ್ತು. ಛಾಯಾಗ್ರಾಹಕರು ತಮ್ಮ ಚಿತ್ರಗಳಿಗಾಗಿ ಸಲ್ಮಾನ್ ಮೇಲೆ ಮುಗಿಬಿದ್ದರು. ಅಷ್ಟಕ್ಕೆ ಸುಮ್ಮನಾಗದ ಕೆಲವು ಪಾಪರಾಜಿಗಳು, ಸಲ್ಮಾನ್ ಅವರ ಮುಂಬರುವ ಚಿತ್ರ 'ಮಾತೃಭೂಮಿ' (Maatrubhumi) ಹೆಸರನ್ನು ಕೂಗುತ್ತಾ ಅವರ ಗಮನ ಸೆಳೆಯಲು ಯತ್ನಿಸಿದರು.&lt;/p&gt;&lt;p&gt;ಆಸ್ಪತ್ರೆಯಂತಹ ಸೂಕ್ಷ್ಮ ಜಾಗದಲ್ಲಿ, ಯಾರೋ ನೋವಿನಲ್ಲಿದ್ದಾಗ ಅಥವಾ ಚಿಕಿತ್ಸೆ ಪಡೆಯುತ್ತಿರುವಾಗ ಹೀಗೆ ಸಿನೆಮಾ ಹೆಸರನ್ನು ಕೂಗಿದ್ದು ಸಲ್ಲು ಭಾಯ್&zwnj;ಗೆ ಅತಿಯಾದ ಕೋಪ ತರಿಸಿತು. ತಕ್ಷಣವೇ ಪಾಪರಾಜಿಗಳತ್ತ ನಡೆದು ಬಂದ ಸಲ್ಮಾನ್, &quot;ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಯಲ್ಲಿದ್ದಾಗ ಹೀಗೆ ಮಾಡಿದರೆ ನಿಮಗೆ ಹೇಗನಿಸುತ್ತದೆ?&quot; ಎಂದು ನೇರವಾಗಿಯೇ ಪ್ರಶ್ನಿಸಿದರು. ಸಲ್ಮಾನ್ ಅವರ ಈ ಖಡಕ್ ಮಾತು ಕೇಳಿ ಅಲ್ಲಿ ನೆರೆದಿದ್ದ ಫೋಟೋಗ್ರಾಫರ್&zwnj;ಗಳು ಕ್ಷಣಕಾಲ ಸುಮ್ಮನಾದರು ಮತ್ತು ತಕ್ಷಣವೇ ಕ್ಷಮೆ ಕೇಳಿದರು.&lt;/p&gt;&lt;p&gt;&lt;img&gt;&lt;/p&gt;&lt;h3&gt;ಏನಿದು 'ಮಾತೃಭೂಮಿ' ಸಿನಿಮಾ ಕಥೆ?&lt;/h3&gt;&lt;p&gt;ಸಲ್ಮಾನ್ ಖಾನ್ ಅವರ ಈ ಹೊಸ ಚಿತ್ರ 'ಮಾತೃಭೂಮಿ' ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲು ಈ ಚಿತ್ರಕ್ಕೆ 'ಬ್ಯಾಟಲ್ ಆಫ್ ಗಾಲ್ವಾನ್' ಎಂದು ಹೆಸರಿಸಲಾಗಿತ್ತು. 2020ರಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಗಲ್ವಾನ್ ಕಣಿವೆಯ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಅಪೂರ್ವ ಲಖಿಯಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸಲ್ಮಾನ್ ಖಾನ್ ಅವರು ದಿವಂಗತ ಕರ್ನಲ್ ಬಿಕುಮಲ್ಲಾ ಸಂತೋಷ್ ಬಾಬು ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ವಿಶೇಷವೆಂದರೆ, ಕೇವಲ ಯುದ್ಧದ ದೃಶ್ಯಗಳನ್ನು ತೋರಿಸುವ ಬದಲು, ಈ ಸಿನಿಮಾದಲ್ಲಿ ಶಾಂತಿ, ಸಾಮರಸ್ಯ ಮತ್ತು ಯುದ್ಧದಿಂದ ಆಗುವ ಪ್ರಾಣಹಾನಿಯ ನೋವಿನ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆಯಂತೆ. ಸದ್ಯದ ರಾಜಕೀಯ ಮತ್ತು ರಾಜತಾಂತ್ರಿಕ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.&lt;/p&gt;&lt;p&gt;ಕೊನೆಯ ಮಾತು:&lt;/p&gt;&lt;p&gt;ಸೆಲೆಬ್ರಿಟಿಗಳಿಗೂ ಖಾಸಗಿತನ ಇರುತ್ತದೆ ಮತ್ತು ಆಸ್ಪತ್ರೆಯಂತಹ ಜಾಗಗಳಲ್ಲಿ ಸಂಯಮದಿಂದ ವರ್ತಿಸಬೇಕು ಎಂಬ ಸಂದೇಶವನ್ನು ಸಲ್ಮಾನ್ ಖಾನ್ ಈ ಮೂಲಕ ರಫ್ ಅಂಡ್ ಟಫ್ ಆಗಿ ನೀಡಿದ್ದಾರೆ. ಸದ್ಯಕ್ಕೆ 'ಮಾತೃಭೂಮಿ' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಅಧಿಕೃತವಾಗಿಲ್ಲದಿದ್ದರೂ, ಸಲ್ಮಾನ್ ಅವರ ಈ 'ರಿಯಲ್ ಲೈಫ್ ಆಕ್ಷನ್' ಮಾತ್ರ ಬಾಲಿವುಡ್ ಗಲ್ಲಿಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ!&lt;/p&gt;&lt;p&gt;ಸಾರಾಂಶ: ಆಸ್ಪತ್ರೆಯ ಮುಂದೆ ಅತಿರೇಕದ ವರ್ತನೆ ತೋರಿದ ಪಾಪರಾಜಿಗಳಿಗೆ ಸಲ್ಮಾನ್ ಖಾನ್ ತಕ್ಕ ಪಾಠ ಕಲಿಸಿದ್ದಾರೆ. ಮಾನವೀಯತೆ ಮತ್ತು ಸಮಯಪ್ರಜ್ಞೆ ಮರೆತಿದ್ದ ಛಾಯಾಗ್ರಾಹಕರಿಗೆ ಸಲ್ಲು ಭಾಯ್ ಕೇಳಿದ ಪ್ರಶ್ನೆಗೆ ಈಗ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮರಳಿ ಬರಲಿರುವ 'ಮಾತೃಭೂಮಿ'ಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/bollywood-star-salman-khan-gets-angry-towards-camera-in-front-of-a-hospital/articleshow-z8vmcna"/>
        </item>
        <item>
            <title><![CDATA[Indoor Plants: ಮಣ್ಣು, ನೀರು ಎರಡರಲ್ಲೂ ಬೆಳೆಯುವ 7 ಅದ್ಭುತ ಗಿಡಗಳಿವು!]]></title>
            <link>https://kannada.asianetnews.com/webstories/life/7-easy-tips-to-grow-indoor-plants-for-soil-and-water-e31867z</link>
            <guid isPermaLink="true">https://kannada.asianetnews.com/webstories/life/7-easy-tips-to-grow-indoor-plants-for-soil-and-water-e31867z</guid>
            <pubDate>Wed, 20 May 2026 15:43:42 +0530</pubDate>
            <description><![CDATA[&lt;p&gt;ಮಣ್ಣು ಹಾಗೂ ನೀರು, ಎರಡರಲ್ಲೂ ಬೆಳೆಯುವ ಇಂಡೋರ್ ಗಿಡಗಳನ್ನು ಮನೆಯೊಳಗೆ ಬೆಳೆಸುವುದು ತುಂಬಾ ಸುಲಭ. ಗ್ಲಾಸ್ ಜಾರ್ ಅಥವಾ ಮಣ್ಣಿನ ಪಾಟ್&zwnj;ಗಳಲ್ಲಿ ಇವನ್ನು ಬೆಳೆಸಿದರೆ ಮನೆಗೆ ಒಂದು ವಿಶೇಷ ಕಳೆ ಬರುತ್ತದೆ. ಆ ಗಿಡಗಳು ಯಾವುವು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgq5baxxwjrhvwy60aaxyz7h,imgname-valentine-home-decor-plant-1770303892413.jpg" type="image/jpeg" height="390" width="690"/>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/life/7-easy-tips-to-grow-indoor-plants-for-soil-and-water-e31867z"/>
        </item>
        <item>
            <title><![CDATA[ಆಪತ್ತನ್ನು ಮೈಮೇಲೆ ಎಳೆದುಕೊಳ್ಳುವುದಂದ್ರೆ ಇದೇನಾ? ವಾಷಿಂಗ್ ಮಷಿನ್ ಮುಟ್ಟಿದ್ದೇ ತಡ ರಪಕ್ಕನೆ ಕೆಳಗೆ ಬಿದ್ದ ಯುವತಿ]]></title>
            <link>https://kannada.asianetnews.com/viral/real-or-scripted-netizens-slam-viral-washing-machine-accident-video-as-poor-acting/articleshow-lvw703v</link>
            <guid isPermaLink="true">https://kannada.asianetnews.com/viral/real-or-scripted-netizens-slam-viral-washing-machine-accident-video-as-poor-acting/articleshow-lvw703v</guid>
            <pubDate>Wed, 20 May 2026 15:36:16 +0530</pubDate>
            <description><![CDATA[&lt;p&gt;&lt;strong&gt;Washing Machine Accident: &lt;/strong&gt;ಮೂವಿಂಗ್&zwnj;ನಲ್ಲಿರುವ ವಾಷಿಂಗ್ ಮಷಿನ್ ಒಳಗೆ ಕೈ ಹಾಕಿ ಆಪತ್ತನ್ನು ಮೈಮೇಲೆ ಎಳೆದುಕೊಂಡ ಯುವತಿಯ ವಿಡಿಯೋ ಈಗ ಅಂತರ್ಜಾಲದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಭಯಾನಕ ದೃಶ್ಯವನ್ನು ಕಂಡು ಒಂದೆಡೆ ನೆಟ್ಟಿಗರು ಬೆಚ್ಚಿಬಿದ್ದರೆ, ಮತ್ತೊಂದೆಡೆ ಕಿಡಿಕಾರುತ್ತಿದ್ದಾರೆ. ಯಾಕೆ ಅಂತ ಮುಂದೆ ಓದಿ...&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2d76zdvjqsyewk16sa838e,imgname-thumbnail---2026-05-20t152457.336-1779271179244.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾ&lt;/strong&gt;ಷಿಂಗ್ ಮಷಿನ್ ಇಂದು ಪ್ರತಿಯೊಬ್ಬರ ಮನೆಯಲ್ಲೂ ಅನಿವಾರ್ಯ. ಆದರೆ, ಅದರ ವೇಗ ಮತ್ತು ಶಕ್ತಿಯ ಬಗ್ಗೆ ಹೆಚ್ಚಿನವರಿಗೆ ಅರಿವಿರುವುದಿಲ್ಲ. ಹೌದು. ಇದೀಗ ಚಾಲನೆಯಲ್ಲಿರುವ ಅಂದರೆ ಮೂವಿಂಗ್&zwnj;ನಲ್ಲಿರುವ ವಾಷಿಂಗ್ ಮಷಿನ್ ಒಳಗೆ ಯುವತಿ ಕೈ ಹಾಕಿದ್ದರಿಂದ ಸಂಭವಿಸಿದ ಭೀಕರ ಅಪಘಾತದ ವಿಡಿಯೋವೊಂದು ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ವಾಷಿಂಗ್ ಮಷಿನ್ ಒಳಗೆ ಓರ್ವ ಯುವತಿ ಕೈ ಹಾಕಿದ್ದೇ ತಡ ರಪಕ್ಕನೆ ಕೆಳಗೆ ಬಿದ್ದಿದ್ದಾಳೆ. ಆ ನಂತರ ಏನಾಯ್ತು?, ಈ ಅಪಘಾತ ಹೇಗೆ ಸಂಭವಿಸಿತು? ಎಂಬ ವಿವರಗಳಿಗಾಗಿ ಮುಂದೆ ಓದಿ..&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ವಾಷಿಂಗ್ ಮಷಿನ್ ಅದರಲ್ಲೂ ವಿಶೇಷವಾಗಿ 'ಸ್ಪಿನ್ ಸೈಕಲ್' (ಬಟ್ಟೆ ಒಣಗಿಸುವ ಹಂತ) ಸಮಯದಲ್ಲಿ ನಿಮಿಷಕ್ಕೆ 800 ರಿಂದ 1600 ಬಾರಿ ಸುತ್ತುತ್ತದೆ (RPM). ಆದರೆ ಈ ಯುವತಿ ಇಂತಹ ಸಂದರ್ಭದಲ್ಲೇ ಅದರೊಳಗೆ ಕೈ ಹಾಕಿದಾಗ, ಅವಳ ಕೈ ವೇಗವಾಗಿ ಸುತ್ತುತ್ತಿದ್ದ ಒದ್ದೆಯಾದ ಬಟ್ಟೆಗಳ ನಡುವೆ ಸಿಲುಕಿಕೊಂಡಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒದ್ದೆ ಬಟ್ಟೆಗಳು ಸುತ್ತುವಾಗ ಒಂದು ಬಲಿಷ್ಠವಾದ ಹಗ್ಗದಂತೆ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಆ ಬಟ್ಟೆಗಳು ಅವಳ ಮಣಿಕಟ್ಟನ್ನು ಬಿಗಿಯಾಗಿ ಸುತ್ತಿಕೊಂಡವು. ಕೈ ಸಿಲುಕಿಕೊಂಡ ತಕ್ಷಣ, ಮಷಿನ್&zwnj;ನ ವೇಗವು ಅವಳ ಇಡೀ ದೇಹವನ್ನು ತನ್ನತ್ತ ಜೋರಾಗಿ ಎಳೆಯಿತು. ಅವಳು ತನ್ನ ಕೈಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ, ಮಷಿನ್&zwnj;ನಿಂದ ಉಂಟಾದ 'ಸೆಂಟ್ರಿಫ್ಯೂಗಲ್ ಫೋರ್ಸ್' (Centrifugal Force) ಅವಳನ್ನು ಚಕ್ರದಂತೆ ತಿರುಗಿಸಿ ದೂರಕ್ಕೆ ಎಸೆಯಿತು. ಇದರಿಂದಾಗಿ ಆಕೆ ಸಮತೋಲನ ಕಳೆದುಕೊಂಡು ತೀವ್ರ ವೇಗದಲ್ಲಿ ನೆಲಕ್ಕೆ ಅಪ್ಪಳಿಸಿದಳು. ಮಷಿನ್&zwnj;ನ ವೇಗವು ಅವಳ ತೋಳನ್ನು ಎಷ್ಟು ಬಲವಾಗಿ ತಿರುಗಿಸಿತ್ತೆಂದರೆ, ಅವಳು ನೆಲಕ್ಕೆ ಬೀಳುವ ಮುನ್ನವೇ ಅವಳ ಸ್ನಾಯುಗಳು ಮತ್ತು ನರಗಳಿಗೆ ತೀವ್ರ ಹಾನಿಯಾಗಿತ್ತು. ಕೇವಲ ಒಂದು ಸೆಕೆಂಡ್&zwnj;ನ ಅಜಾಗರೂಕತೆ ಅವಳನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬೀಳುವಂತೆ ಮಾಡಿತು.&lt;/p&gt;&lt;h2&gt;&lt;strong&gt;ನೆಟ್ಟಿಗರು ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಈ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದರೂ, ಕಮೆಂಟ್ ಸೆಕ್ಷನ್&zwnj;ನಲ್ಲಿ ಮಾತ್ರ ಪರ-ವಿರೋಧದ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಕೆಲವು ಪ್ರಮುಖ ಪ್ರತಿಕ್ರಿಯೆಗಳು ಇಲ್ಲಿವೆ..&amp;nbsp;&lt;/p&gt;&lt;p&gt;&lt;strong&gt;ಒಮ್ಮೆ ಶಾಕ್ ಹೊಡೆದರೂ ಮತ್ತೆ ಮುಟ್ಟಿದ್ದೇಕೆ?&lt;/strong&gt;&quot;ಒಮ್ಮೆ ಕರೆಂಟ್ ಶಾಕ್ ಹೊಡೆದ ಮೇಲೂ ಅರಿವಿಲ್ಲದೆ ಮತ್ತೆ ಅದೇ ತಪ್ಪನ್ನು ಮಾಡುವುದು ಹೇಗೆ ಸಾಧ್ಯ? ಇದು ಬರೀ ಅಜಾಗರೂಕತೆಯೋ ಅಥವಾ ಮೂರ್ಖತನವೋ?&quot; ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದು ನಕಲಿ ಅಥವಾ ನಟನೆ?&lt;/strong&gt;ಹಾಗೆಯೇ ಕೆಲವರು &quot;ಈ ವಿಡಿಯೋ ನೋಡಲು ನೈಜವಾಗಿ ಕಾಣುತ್ತಿಲ್ಲ. ಇದು ಕೇವಲ ವ್ಯೂಸ್ (Views) ಪಡೆಯಲು ಮಾಡಿದ ಕಳಪೆ ನಟನೆ (Fake acting)&quot; ಎಂದು ಕೆಲವು ನೆಟ್ಟಿಗರು ಕಿಡಿಕಾರಿದ್ದಾರೆ.&lt;/p&gt;&lt;p&gt;&lt;strong&gt;ನನ್ನ ಜೀವನದಲ್ಲೂ ಇದು ನಡೆದಿದೆ&lt;/strong&gt;ಇನ್ನು ಕೆಲವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, &quot;ನನಗೂ ಇಂತಹ ಅನುಭವವಾಗಿದೆ, ಇಂತಹ ಯಂತ್ರಗಳ ಬಳಿ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ&quot; ಎಂದು ತಮ್ಮ ಕಹಿಯಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಕಲ್ಪಿತ ವ್ಯಕ್ತಿ ಅಂದುಕೊಂಡಿದ್ದೆ&lt;/strong&gt;&quot;ವಿಡಿಯೋದಲ್ಲಿ ಕಾಣುವ ವ್ಯಕ್ತಿ ಅಥವಾ ಈ ಘಟನೆ ಒಂದು ಕಾಲ್ಪನಿಕ ಕಥೆ ಇರಬಹುದು ಎಂದು ಭಾವಿಸಿದ್ದೆ, ಆದರೆ ಇಷ್ಟು ಗಂಭೀರವಾಗಿ ಇದು ಸಂಭವಿಸುತ್ತದೆ ಎಂದು ಊಹಿಸಿರಲಿಲ್ಲ&quot; ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;चलती वाशिंग मशीन में हाथ डालते ही बड़ा हादसा हुआ,एक गलती लडकी को जमीन पर गिरा दिया pic.twitter.com/MBqyN7A8FF&lt;/p&gt;&lt;p&gt;&mdash; Pappu Kr Paswan (@Pappu_kumavya) May 19, 2026&lt;/p&gt;&lt;p&gt;&lt;strong&gt;ಎಚ್ಚರಿಕೆ ವಹಿಸುವುದು ಅನಿವಾರ್ಯ&lt;/strong&gt;&quot;ಘಟನೆ ನೈಜವೋ ಅಥವಾ ಕಲ್ಪಿತವೋ ಎಂಬ ಚರ್ಚೆ ಒಂದು ಕಡೆಯಾದರೆ, ಮತ್ತೊಂದು ಕಡೆ ಸುರಕ್ಷತೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. &quot;ಜಾಗರೂಕತೆ ತಪ್ಪಿದ್ದರಿಂದಲೇ ಅಪಘಾತ ಸಂಭವಿಸಿದೆ&quot; ಎಂಬ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹಳೆಯ ಮಾದರಿಯ ವಾಷಿಂಗ್ ಮಷಿನ್&zwnj;ಗಳಲ್ಲಿ ಸೆನ್ಸಾರ್&zwnj;ಗಳ ಕೊರತೆ ಇರುವುದರಿಂದ, ಅತಿ ವೇಗವಾಗಿ ಸುತ್ತುವ ಡ್ರಮ್ ಕೈಗಳನ್ನು ಎಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.&lt;/p&gt;&lt;h3&gt;&lt;strong&gt;ಕೊನೆಯ ಮಾತು&lt;/strong&gt;&lt;/h3&gt;&lt;p&gt;ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಾಗ ಒಂದಿಷ್ಟು ಸಣ್ಣ ನಿರ್ಲಕ್ಷ್ಯವೂ ದೊಡ್ಡ ಬೆಲೆ ತೆರುವಂತೆ ಮಾಡುತ್ತದೆ. ಸೋಶಿಯಲ್ ಮೀಡಿಯಾ ಕಮೆಂಟ್&zwnj;ಗಳು ಏನೇ ಇರಲಿ, ಇಂತಹ ವಿಡಿಯೋಗಳು ಜನರಲ್ಲಿ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಿ ಎನ್ನುವುದೇ ಆಶಯ.&lt;/p&gt;&lt;h3&gt;&lt;strong&gt;ಹೀಗೆ ಎಂದಿಗೂ ಮಾಡಬೇಡಿ...&lt;/strong&gt;&lt;/h3&gt;&lt;p&gt;ಮಷಿನ್&zwnj;ನ ಸುರಕ್ಷತಾ ಲಾಕ್ ಅನ್ನು ಎಂದಿಗೂ ಬಲವಂತವಾಗಿ ತೆರೆಯಬೇಡಿ.ಮಷಿನ್ ಆಫ್ ಮಾಡಿದ ನಂತರವೂ ಡ್ರಮ್ ತಿರುಗುತ್ತಿರುತ್ತದೆ. ಅದು ಸಂಪೂರ್ಣವಾಗಿ ನಿಲ್ಲುವವರೆಗೆ ಕನಿಷ್ಠ ಒಂದು ನಿಮಿಷ ಕಾಯುವುದು ಅತಿ ಮುಖ್ಯ.ಮಕ್ಕಳಿಗೆ ವಾಷಿಂಗ್ ಮಷಿನ್ ಬಳಿ ಹೋಗದಂತೆ ತಿಳಿಹೇಳಬೇಕು.ಈ ಘಟನೆಯು ನಮಗೆ ನೀಡುವ ಎಚ್ಚರಿಕೆ ಏನೆಂದರೆ, ಯಾಂತ್ರಿಕ ಉಪಕರಣಗಳ ವೇಗದ ಮುಂದೆ ಮನುಷ್ಯನ ಶಕ್ತಿ ತುಂಬಾ ನಗಣ್ಯ. ಕೇವಲ ಸಮಯ ಉಳಿಸಲು ಹೋಗಿ ಪ್ರಾಣಾಪಾಯ ತಂದುಕೊಳ್ಳಬಾರದು.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/real-or-scripted-netizens-slam-viral-washing-machine-accident-video-as-poor-acting/articleshow-lvw703v"/>
        </item>
        <item>
            <title><![CDATA[ಹೆಂಡ್ತಿಯೊಂದಿಗೆ ಜಗಳ; ಛದ್ಮವೇಶದಲ್ಲಿ ಫಸ್ಟ್ ಪ್ರೈಸ್ ಗೆದ್ದ 3 ವರ್ಷದ ಪುಟ್ಟ ಪೋರ; ಎಲ್ಲರಿಂದಲೂ ಚಪ್ಪಾಳೆ!]]></title>
            <link>https://kannada.asianetnews.com/viral/viral-school-fancy-dress-competition-winner-funny-husband-wife-fancy-dress-kid/articleshow-xfmtp73</link>
            <guid isPermaLink="true">https://kannada.asianetnews.com/viral/viral-school-fancy-dress-competition-winner-funny-husband-wife-fancy-dress-kid/articleshow-xfmtp73</guid>
            <pubDate>Wed, 20 May 2026 15:17:00 +0530</pubDate>
            <description><![CDATA[&lt;p&gt;Funny husband wife fancy dress kid: ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ ಇಡಲಾಗುವುದು. ಇತ್ತೀಚೆಗೆ ತಂತ್ರಜ್ಞಾನ ಕೂಡ ಮುಂದುವರೆದಿದ್ದು, ಶಾಲೆಯಲ್ಲಿ ಪ್ರಾಜೆಕ್ಟ್&zwnj; ವರ್ಕ್&zwnj;, ಛದ್ಮವೇಷ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುವುದು. ಈಗ ಪುಟ್ಟ ಪೋರ ವಿಶೇಷ ಕಾಸ್ಟ್ಯೂಮ್&zwnj; ಹಾಕಿ ಗಮನಸೆಳೆದಿದ್ದಾನೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2cehqzftqmp18yzdh8xqe3,imgname-new-project---2026-05-20t130922.283-1779270371071.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಾಲೆಯೊಂದರಲ್ಲಿ ಮಗುವಿಗೆ ಅಪಘಾತ ಆಗಿದೆ ಅಥವಾ ಹೊಡೆದು ಗಾಯ ಆಗಿದೆ ( Funny husband wife fancy dress kid ) ಎನ್ನುವ ರೀತಿಯಲ್ಲಿ ಕಾಸ್ಟ್ಯೂಮ್&zwnj; ಹಾಕಿಸಲಾಗಿದೆ. ಇದನ್ನು ನೋಡಿ ಅನೇಕರು ನಕ್ಕಿದ್ದಾರೆ. ಕೆಲವರು ಹೊಗಳಿದರೆ, ಇನ್ನೂ ಕೆಲವರು ಬೇಸರ ಹೊರಹಾಕಿದ್ದಾರೆ.&lt;/p&gt;&lt;p&gt;ಹೌದು, ಈ ಮಗು ಶಾಲೆಯ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಎಲ್ಲರ ಗಮನ ಸೆಳೆದಿದ್ದು, ಪ್ರಥಮ ಬಹುಮಾನ ಗೆದ್ದುಕೊಂಡಿದೆ. ಮಗುವಿಗೆ ಯಾರೋ ಹೊಡೆದು, ಗಾಯ ಆದ ರೀತಿಯಲ್ಲಿ ಕಾಸ್ಟ್ಯೂಮ್&zwnj; ಮಾಡಲಾಗಿದೆ. ಇದನ್ನು ನೋಡಿದರು ನಕ್ಕು, ನಕ್ಕು ಸುಸ್ತಾಗಿದ್ದಾರೆ.&lt;/p&gt;&lt;h2&gt;ಟೈಟಲ್&zwnj; ನೋಡಿ ಎಲ್ಲರಿಗೂ ಕಂಗಾಲು!&lt;/h2&gt;&lt;p&gt;ಈ ಛದ್ಮವೇಷಕ್ಕೆ &quot;ನಾನು ನನ್ನ ಹೆಂಡತಿಯೊಂದಿಗೆ ಜಗಳ ಆಡಿದೆ&quot; ಎಂಬ ಟೈಟಲ್&zwnj; ಕೊಟ್ಟಿದ್ದಾರೆ. ಇದನ್ನು ಅವನು ಬೋರ್ಡ್&zwnj; ಮಾಡಿಕೊಂಡು, ದೇಹಕ್ಕೆ ಅಂಟಿಸಿಕೊಂಡಿದ್ದಾನೆ. ಆ ಹುಡುಗ ಕೂಡ ಸಪ್ಪೆ ಮುಖ ಹಾಕಿಕೊಂಡಿದ್ದನು. ಇದನ್ನು ನೋಡಿದವರೆಲ್ಲರೂ ನಕ್ಕಿದ್ದಾರೆ. ಹೆಂಡತಿ ಜೊತೆ ಜಗಳ ಆಗಿದ್ದಕ್ಕೆ ಇಷ್ಟೆಲ್ಲ ಆಯ್ತು ಎಂದು ಅವನ ಮುಖಭಾವ ಹೇಳುತ್ತಿತ್ತು. ಒಟ್ಟಿನಲ್ಲಿ ಈ ಕ್ರಿಯೇಟಿವಿಟಿ ನೋಡಿ ಎಲ್ಲರೂ ನಕ್ಕಿದ್ದಾರೆ.&lt;/p&gt;&lt;h2&gt;ದುಬಾರಿಯಲ್ಲ&lt;/h2&gt;&lt;p&gt;ಕೆಲವೊಮ್ಮೆ ಜನರ ಹೃದಯಗಳನ್ನು ಗೆಲ್ಲಲು ತುಂಬ ಶ್ರಮ ಬೇಕಿಲ್ಲ, ಅದರ ಬದಲಿಗೆ ಸೃಜನಶೀಲತೆ, ಹಾಸ್ಯಪ್ರಜ್ಞೆ, ಪರಿಪೂರ್ಣ ಮುಖಭಾವವಿದ್ದರೆ ಸಾಕು. ಒಟ್ಟಿನಲ್ಲಿ ಈ ಕಾಸ್ಟ್ಯೂಮ್&zwnj; ಸರಳವಾಗಿದೆ, ತಮಾಷೆಯಿಂದಿದೆ, ಮರೆಯಲಾಗದಂತಿತ್ತು. ಈ ಅತ್ಯುತ್ತಮ ಆಲೋಚನೆಗಳು ದುಬಾರಿಯಾಗಿರಬೇಕಾಗಿಲ್ಲ, ಬುದ್ಧಿವಂತಿಕೆ ಇದ್ದರೆ ಸಾಕು.&lt;/p&gt;&lt;h2&gt;ಕೆಲವರಿಂದ ನೆಗೆಟಿವ್&zwnj; ಪ್ರತಿಕ್ರಿಯೆ!&lt;/h2&gt;&lt;p&gt;ಒಟ್ಟಿನಲ್ಲಿ ಇಂತಹ ಕಾರ್ಯಕ್ರಮ, ಅಥವಾ ಇಂಥಹ ವೇಷ ಮಾತ್ರ ಮಕ್ಕಳು ಮತ್ತು ಪೋಷಕರು ವರ್ಷಗಟ್ಟಲೆ ನೆನೆದು ನಗುವಂತಹ ನೆನಪುಗಳನ್ನು ಸೃಷ್ಟಿಸುತ್ತವೆ. ಹಾಸ್ಯದೊಂದಿಗೆ ಬೆರೆತ ಶುದ್ಧ ಮುಗ್ಧತೆ ಯಾವಾಗಲೂ ಗೆಲುವಿನ ಸಂಯೋಜನೆಯಾಗಿದೆ. ಆದರೆ ಮಗುವಿಗೆ ಈ ರೀತಿ ಛದ್ಮವೇಷ ಹಾಕಿಸಬಾರದಿತ್ತು, ಪತ್ನಿಯೇ ಯಾವಾಗಲೂ ದಬ್ಬಾಳಿಕೆ ಮಾಡುತ್ತಾಳೆ ಎಂದು ಬಿಂಬಿಸಬಾರದಿತ್ತು ಎಂದು ಕೆಲವರು ಹೇಳುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/viral/viral-school-fancy-dress-competition-winner-funny-husband-wife-fancy-dress-kid/articleshow-xfmtp73"/>
        </item>
        <item>
            <title><![CDATA[Shocking-Shivanand Neelannavar: ಕೋಟಿ ವಂಚಕನಿಗಿತ್ತು 'ಸ್ಯಾಂಡಲ್‌ವುಡ್' ಲಿಂಕ್; 'ಡಿಂಗರ್ ಬಿಲ್ಲಿ' ಸನ್ನಿ ಲಿಯೋನ್‌ಗೆ ಕೊಟ್ಟಿದ್ದೆಷ್ಟು ಗೊತ್ತಾ?]]></title>
            <link>https://kannada.asianetnews.com/sandalwood/shivanand-neelannavar-has-link-with-sandalwood-and-he-produced-champion-movie-and-sunny-leone-song/articleshow-8yxkwwv</link>
            <guid isPermaLink="true">https://kannada.asianetnews.com/sandalwood/shivanand-neelannavar-has-link-with-sandalwood-and-he-produced-champion-movie-and-sunny-leone-song/articleshow-8yxkwwv</guid>
            <pubDate>Wed, 20 May 2026 14:35:40 +0530</pubDate>
            <description><![CDATA[&lt;p&gt;ರಾಜ್ಯವೇ ಬೆಚ್ಚಿ ಬಿದ್ದಿರೋ ಬಹುಕೋಟಿ ಮಹಾ ವಂಚಕ, ಶಿವಂ ಅಸೋಸಿಯೇಟ್ಸ್​ ಮಾಲೀಕ, ಹುಬ್ಬಳ್ಳಿಯ ಶಿವಾನಂದ್​ ನೀಲಣ್ಣನವರ್ ಕನ್ನಡ ಚಿತ್ರರಂಗದ ಜೊತೆ ನಂಟು ಹೊಂದಿದ್ದ. 4500 ಕೋಟಿ ದೋಖಾ ಕೇಸ್ ​ರೂವಾರಿ ಈ ಶಿವಾನಂದ್​ನೀಲಣ್ಣನವರ್​, ಮಾಜಿ ನೀಲಿ ತಾರೆ ಸನ್ನಿ ಲಿಯೋನ್&zwnj;ಗೆ ಕೊಟ್ಟಿದ್ದೆಷ್ಟು ಗೊತ್ತಾ? ಈ ಸ್ಟೋರಿ ನೋಡಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2a3f7p5r0prhdjz78zqfmw,imgname-sunny-leone-shivanand-neelannavar-1779267910902.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಾಜಿ ನೀಲಿ ತಾರೆಗೆ 1 ಕೋಟಿ ಕೊಟ್ಟಿದ್ದ ನೀಲಣ್ಣನವರ್..!&lt;/strong&gt;&lt;/p&gt;&lt;p&gt;ಕನ್ನಡ ಚಿತ್ರರಂಗದ ಜೊತೆ 4500 ಕೋಟಿ ವಂಚಕನ ಲಿಂಕ್..! 4500 ಕೋಟಿ ವಂಚಕನ ಬಲೆಗೆ ಬಿದ್ದಿದ್ದ ಸನ್ನಿ ಲಿಯೋನ್​..!&lt;/p&gt;&lt;p&gt;ಸ್ಯಾಂಡಲ್​ವುಡ್​​ನಲ್ಲೂ ಶಿವಾನಂದನ ಡಿಂಗರ್​ಬಿಲ್ಲಿ ಆಟ; ಕೋಟಿ ಕೊಟ್ಟು ಸಲ್ಲಿ ಲಿಯೋನ್ ಸ್ನೇಹ ಬೆಳೆಸಿದ್ದ ವಂಚಕ..!&lt;/p&gt;&lt;p&gt;ನಟಿ ಸಲ್ಲಿ ಲಿಯೋನ್​​​ ಮೇಲೆ ದುಡ್ಡು ಸುರಿದವರು ಒಬ್ರಾ ಇಬ್ರಾ..? ಈ 4500 ಕೋಟಿ ವಂಚನೆ ಪ್ರಕರಣಲ್ಲಿ ಸಿಕ್ಕಿ ಬಿದ್ನಲ್ಲಾ ಶಿವಾನಂದ ನೀಲಣ್ಣನವರ್, ಆ ವಂಚಕ ಕೂಡ ಸನ್ನಿ ಮೇಲೆ ಕೋಟಿ ಕೋಟಿ ಸುರಿದಿದ್ದಾನೆ. ಅರೆ ನಮ್ ಸನ್ನಿ ಲೀಯೋನ್​ಗೂ ಶಿವಾನಂದ ನೀಲಣ್ಣನವರ್​ಗು ಎಲ್ಲಿಂದೆಲ್ಲಿ ಸಂಬಂಧ ಅಂತೀರಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ..&lt;/p&gt;&lt;p&gt;ಕನ್ನಡ ಚಿತ್ರರಂಗದ ಜೊತೆ 4500 ಕೋಟಿ ವಂಚಕನ ಲಿಂಕ್; ಕೋಟಿ ಕೊಟ್ಟು ಸಲ್ಲಿ ಲಿಯೋನ್ ಸ್ನೇಹ ಬೆಳೆಸಿದ್ದ ವಂಚಕ!&lt;/p&gt;&lt;p&gt;ಇವತ್ತು ಇಡೀ ರಾಜ್ಯವೇ ಬೆಚ್ಚಿ ಬೀಳೋ ಮಹಾ ವಂಚನೆಯೊಂದು ಬೆಳಕಿಗೆ ಬಂದಿದೆ. ಆ ವಂಚನೆಯ ರುವಾರಿ ಶಿವಂ ಅಸೋಸಿಯೇಟ್ಸ್​ ಮಾಲೀಕ, ಹುಬ್ಬಳ್ಳಿಯ ಶಿವಾನಂದ್​ ನೀಲಣ್ಣನವರ್. ಬರೋಬ್ಬರಿ 4500 ಕೋಟಿ ದೋಖಾ ಕೇಸ್ ​ಅನ್ನ ಮೈ ಮೇಲೆ ಎಳೆದುಕೊಂಡಿರೋ ಈ ಶಿವಾನಂದ್​ನೀಲಣ್ಣನವರ್​ಆ ದುಡ್ಡಲ್ಲೊಂದಷ್ಟನ್ನ ನೀಲಿ ತಾರೆ ಮೇಲೆ ಸುರಿದಿದ್ದ.. ಈತ 35 ಸಾವಿರ ಜನರಿಗೆ ಕೋಟಿ ಕೋಟಿ ವಂಚಿಸಿದ್ದ ಅನ್ನೋದಷ್ಟೇ ಅಲ್ಲ, ಸ್ಯಾಂಡಲ್​ವುಡ್​ ಜೊತೆಗೂ ಈ ನೀಲಣ್ಣನವರ್ ಗೆ ಲಿಂಕ್​ ಇತ್ತು ಅನ್ನೋದು ಇಂಟ್ರೆಸ್ಟಿಂಗ್...&lt;/p&gt;&lt;h2&gt;4500 ಕೋಟಿ ವಂಚಕನ ಬಲೆಗೆ ಬಿದ್ದಿದ್ದ ನಟಿ ಸನ್ನಿ ಲಿಯೋನ್; ಚಾಂಪಿಯನ್ ಪಟ್ಟಕ್ಕೆ ಸನ್ನಿ ಜೊತೆ ಶಿವಾನಂದ್​ ಡಿಂಗ್ರಿಬಿಲ್ಲಿ ಆಟ!&lt;/h2&gt;&lt;p&gt;ಯೆಸ್, ಈ ಶಿವಾನಂದ್​ನೀಲಣ್ಣನವರ್​ಗೆ ಬಡ್ಡಿ ದುಡ್ಡು ಮಾಡೋದೊಂದೇ ವ್ಯಾಪಾರ ಅಲ್ಲ. ಸಿನಿಮಾ ಫ್ಯಾಷನ್ ಕೂಡ ಇತ್ತು. ಅದು ಯಾವ್ ಮಟ್ಟದ ಫ್ಯಾಷನ್ ಅಂದ್ರೆ, ಬಾಲಿವುಡ್​ನ ಹಾಟಿ ನೀಲಿ ತಾರೆ ಅಂತಲೇ ಫೇಮಸ್ ಆಗಿದ್ದ ಸನ್ನಿ ಲಿಯೋನ್​ರನ್ನ ಎಷ್ಟೇ ದುಡ್ಡು ಖರ್ಚಾದ್ರು ಪರವಾಗಿಲ್ಲ, ಕನ್ನಡದ ಸಿನಿಮಾಕ್ಕೆ ಕರೆ ತರಬೇಕು ಅನ್ನೋ ದೊಡ್ಡ ಹಟ.. ಅದು ಚಾಂಪಿಯನ್ ಅನ್ನೋ ಸಿನಿಮಾಕ್ಕಾಗಿ ಮಾಡಿದ ಶಪಥ..&lt;/p&gt;&lt;p&gt;2023ರಲ್ಲಿ ಇದೇ ಶಿವಾನಂದ್​ ನೀಲಣ್ಣನವರ್​ಕನ್ನಡದಲ್ಲಿ ಚಾಂಪಿಯನ್ ಅನ್ನೋ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ನರ್ತಿಸೋಕೆ ನೀಲಿತಾರೆ ಸನ್ನಿ ಲಿಯೋನ್​ರನ್ನ ಕರೆಸಿದ್ದ. ಸನ್ನಿನೋ ನೀಲಣ್ಣ ಕೊಟ್ಟ ಬಿಲ್ಡಪ್​ಗೆ ಮನಸೋತು 'ಡಿಗ್ರಿಬಿಲ್ಲಿ ನಾನು..' ಅಂತ ಸಖತ್ ಆಗಿ ಡಾನ್ಸ್ ಮಾಡಿದ್ಲು..&lt;/p&gt;&lt;h3&gt;ಮಾಜಿ ನೀಲಿ ತಾರೆ ಜೊತೆ ಮಾಡಿದ್ದೇನು?&lt;/h3&gt;&lt;p&gt;ಪಡ್ಡೆ ಹುಡುಗರ ಮನದರಸಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​'ಚಾಂಪಿಯನ್' ಸಿನಿಮಾದ ಸ್ಪೆಷಲ್​ಹಾಡಿಗೆ ನರ್ತಿಸೋದಕ್ಕಾಗಿ ಭಾರಿ ಡಿಮ್ಯಾಂಡ್ ಮಾಡಿದ್ರು. ಅಂದೋ ಶಿವಾನಂದ್​ಬಳಿ ಕೈ ತುಂಬ ದುಡ್ಡು ಓಡಾಡ್ತಿದ್ದ ಕಾಲ. ಹಿಂದೆ ಮುಂದೆ ಯೋಚ್ನೆ ಮಾಡದೇ ಸನ್ನಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಕೊಟ್ಟು ಜೆಸ್ಟ್ ಒಂದೇ ಒಂದು ಹಾಡಿನಲ್ಲಿ ಡಾನ್ಸ್​ ಮಾಡಿಸಿದ್ದ.&lt;/p&gt;&lt;p&gt;ಆದ್ರೆ ಸನ್ನಿ ಕುಣಿದಿದ್ದ ಆ 'ಚಾಂಪಿಯನ್' ಸಿನಿಮಾ ಏನು ದೊಡ್ಡ ಹಿಟ್ ಆಗ್ಲಿಲ್ಲ. ಸ್ಯಾಂಡಲ್​​ವುಡ್​ನಲ್ಲಿ ಚಾಂಪಿಯನ್ ಆಗೋಕೆ ಬಂದಿದ್ದ ಶಿವಾನಂದ್​ನೀಲಣ್ಣನವರ್​ಇವತ್ತು ಕೈಗೆ ಕೋಳ ತೊಡೋ ಹಾಗಾಗಿದೆ.&lt;/p&gt;&lt;p&gt;ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/shivanand-neelannavar-has-link-with-sandalwood-and-he-produced-champion-movie-and-sunny-leone-song/articleshow-8yxkwwv"/>
        </item>
        <item>
            <title><![CDATA[ಅನಾರೋಗ್ಯವಾದ್ರೆ ಮೈಮೇಲೆ ಇರುವೆ ಬಿಟ್ಕೊಳೋ ಕಾಗೆ: ಏಕೆ ಹೀಗೆ? ರೋಮಾಂಚಕ ವಿಡಿಯೋ ವೈರಲ್​]]></title>
            <link>https://kannada.asianetnews.com/gallery/life/when-a-crow-senses-its-unwell-intentionally-find-an-anthill-spread-its-wings-wide-suc-ps5yns5</link>
            <guid isPermaLink="true">https://kannada.asianetnews.com/gallery/life/when-a-crow-senses-its-unwell-intentionally-find-an-anthill-spread-its-wings-wide-suc-ps5yns5</guid>
            <pubDate>Wed, 20 May 2026 13:50:48 +0530</pubDate>
            <description><![CDATA[&lt;p&gt;ಕಾಗೆಗಳು ಮತ್ತು ಇತರ ಪಕ್ಷಿಗಳು ಅಸ್ವಸ್ಥವಾದಾಗ ಇರುವೆಗಳನ್ನು ಬಳಸಿ ಸ್ವಯಂ-ಚಿಕಿತ್ಸೆ ಮಾಡಿಕೊಳ್ಳುತ್ತವೆ. ಇರುವೆಗೂಡನ್ನು ಕೆಣಕಿ, ಸಿಟ್ಟಾದ ಇರುವೆಗಳು ತಮ್ಮ ದೇಹದ ಮೇಲೆ ಹರಿದಾಡುವಂತೆ ಮಾಡಿ, ಅವು ಸಿಂಪಡಿಸುವ ಫಾರ್ಮಿಕ್ ಆಮ್ಲದಿಂದ ಗರಿಗಳಲ್ಲಿನ ಬ್ಯಾಕ್ಟೀರಿಯಾ ನಾಶಪಡಿಸಿಕೊಳ್ಳುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks27eh9wac58w7j6j3nqpm09,imgname-crow-1779265127739.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಗೆಗಳು ಮತ್ತು ಇತರ ಪಕ್ಷಿಗಳು ಅಸ್ವಸ್ಥವಾದಾಗ ಇರುವೆಗಳನ್ನು ಬಳಸಿ ಸ್ವಯಂ-ಚಿಕಿತ್ಸೆ ಮಾಡಿಕೊಳ್ಳುತ್ತವೆ. ಇರುವೆಗೂಡನ್ನು ಕೆಣಕಿ, ಸಿಟ್ಟಾದ ಇರುವೆಗಳು ತಮ್ಮ ದೇಹದ ಮೇಲೆ ಹರಿದಾಡುವಂತೆ ಮಾಡಿ, ಅವು ಸಿಂಪಡಿಸುವ ಫಾರ್ಮಿಕ್ ಆಮ್ಲದಿಂದ ಗರಿಗಳಲ್ಲಿನ ಬ್ಯಾಕ್ಟೀರಿಯಾ ನಾಶಪಡಿಸಿಕೊಳ್ಳುತ್ತವೆ.&lt;/p&gt;&lt;img&gt;&lt;p&gt;ಮನುಷ್ಯ ತಾನು ಎಷ್ಟೇ ಬುದ್ಧಿವಂತ, ಇಡೀ ಪ್ರಪಂಚ ನನ್ನ ಕೈಯಲ್ಲಿದೆ, ನಾನು ಏನು ಬೇಕಾದರೂ ಸಾಧಿಸಬಲ್ಲೆ, ಏನನ್ನಾದರೂ ಕಂಡುಹಿಡಿಯುವ ಬುದ್ಧಿವಂತಿಕೆ ನನ್ನಲ್ಲಿ ಇದೆ ಎಂದು ಎಷ್ಟೇ ಹೇಳಿದರೂ ಪ್ರಕೃತಿಯ ಮುಂದೆ ಅವನ ಜಾಣ್ಮೆಯೆಲ್ಲವೂ ಶೂನ್ಯ. ಇಂಥದ್ದೇ ದಿನ ಇದೇ ರೀತಿ ಸಂಭವಿಸುತ್ತದೆ ಎಂದು ಜ್ಯೋತಿಷಿಗಳು, ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ವಿಜ್ಞಾನಿಗಳು ಮುನ್ಸೂಚನೆ ಕೊಟ್ಟರೂ ಎಷ್ಟೋ ಬಾರಿ ಎಲ್ಲವೂ ಉಲ್ಟಾ ಪಲ್ಟಾ ಆಗುವುದು ಇದೆ. ಅದಕ್ಕೇ ಪ್ರಕೃತಿ ಎನ್ನುವುದು.&lt;/p&gt;&lt;img&gt;&lt;p&gt;ಅದರಲ್ಲಿಯೂ ಪಕ್ಷಿ, ಪ್ರಾಣಿ, ಕೀಟ ಪ್ರಪಂಚಗಳ ಬಗ್ಗೆ ಅರಿತಷ್ಟೂ ಕಡಿಮೆಯೇ. ಇದರ ಆಳಕ್ಕೆ ಹೋದಷ್ಟೂ ಚಿತ್ರ-ವಿಚಿತ್ರಗಳೇ ತುಂಬಿಕೊಂಡಿರುತ್ತವೆ. ಒಂದೊಂದು ಪ್ರಾಣಿ, ಒಂದೊಂದು ಪಕ್ಷಿ, ಒಂದೊಂದು ಕೀಟದಲ್ಲಿಯೂ ರೋಮಾಂಚಕಾರಿಯಾಗಿರುವ ಜೀವನ ಕ್ರಿಯೆ ಇರುತ್ತದೆ. ಅದರಲ್ಲಿ ಒಂದು ಕಾಗೆ. ಕಾಗೆಯನ್ನು ದಿನನಿತ್ಯ ನೋಡುವ ನಮಗೆ ಅದರ ಕೆಲವೊಂದು ವಿಷಯಗಳನ್ನು ಅರಿತರೆ ನಿಜಕ್ಕೂ ರೋಮಾಂಚಕವಾಗುವುದು ಇದೆ.&lt;/p&gt;&lt;img&gt;&lt;p&gt;ಕಾಗೆಗಳು ಅಸ್ವಸ್ಥವಾದಾಗ ಅಥವಾ ಅದರ ಗರಿಗಳು ಪರಾವಲಂಬಿಗಳಿಂದ ತೊಂದರೆಗೊಳಗಾದಾಗ, ಅವು ಇರುವೆಗಳನ್ನು ಮೈಮೇಲೆ ಬಿಟ್ಟುಕೊಳ್ಳುತ್ತವೆಯಂತೆ! ಅಂದಹಾಗೆ ಇದು ಕಾಗೆಯೊಂದೇ ಅಲ್ಲ, ಇತರ ಹಲವು ಪಕ್ಷಿಗಳೂ ಹೀಗೆಯೇ ಮಾಡುತ್ತವೆ. ಅನಾರೋಗ್ಯಪೀಡಿತವಾಗಿ ಈ ಪಕ್ಷಿಗಳು ಮೊದಲಿಗೆ ಇರುವೆಗಳು ಎಲ್ಲಿ ಇವೆ ಎನ್ನುವುದನ್ನು ಹುಡುಕಿ ಹೋಗುತ್ತವೆ. ಇರುವೆ ಗೂಡು ಕಂಡಾಗ ಅದರಲ್ಲಿ ಇರುವೆಗಳು ಇವೆ ಎನ್ನುವುದನ್ನು ಖಚಿತಪಡಿಸಿಕೊಂಡು ಗೂಡನ್ನು ಕೊಕ್ಕಿನಿಂದ ಕುಕ್ಕುತ್ತವೆ.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ಇರುವೆಗಳು ಸಿಟ್ಟಿನಿಂದ ಕಾಗೆಗಳ ಮೈಮೇಲೆಲ್ಲಾ ಹರಡುತ್ತವೆ. ಇದೇ ಇರುವೆಗಳಿಂದ ಕಾಗೆಗಳು ಹಾಗೂ ಆ ಪಕ್ಷಿಗಳಿಗೆ ಆಗುವ ಚಿಕಿತ್ಸಕ ಸ್ನಾನ. ಆ ಸಂದರ್ಭದಲ್ಲಿ ಕಾಗೆ ತನ್ನ ರೆಕ್ಕೆಗಳನ್ನು ಅಗಲವಾಗಿ ಹರಡುತ್ತದೆ, ಸಂಪೂರ್ಣವಾಗಿ ಸ್ಥಿರವಾಗಿ ಕುಳಿತುಕೊಳ್ಳುತ್ತದೆ ಮತ್ತು ಉದ್ರೇಕಗೊಂಡ ಇರುವೆಗಳು ತನ್ನ ದೇಹದಾದ್ಯಂತ ಮತ್ತು ಅದರ ಗರಿಗಳೊಳಗೆ ತೆವಳಲು ಅನುವು ಮಾಡಿಕೊಡುತ್ತದೆ.&lt;/p&gt;&lt;img&gt;&lt;p&gt;ರಕ್ಷಣಾ ಕಾರ್ಯವಿಧಾನವಾಗಿ, ಇರುವೆಗಳು ಹಕ್ಕಿಯ ಮೇಲೆ ಫಾರ್ಮಿಕ್ ಆಮ್ಲವನ್ನು ಸಿಂಪಡಿಸುತ್ತವೆ. ಈ ಆಮ್ಲವು ನೈಸರ್ಗಿಕ ಪ್ರತಿಜೀವಕ, ನಂಜುನಿರೋಧಕ ಮತ್ತು ಪರಾವಲಂಬಿಯಾಗಿ ಕಾರ್ಯನಿರ್ವಹಿಸುತ್ತದೆ, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಅವುಗಳ ಗರಿಗಳಲ್ಲಿ ಅಡಗಿರುವ ಹುಳಗಳನ್ನು ಕೊಲ್ಲುತ್ತದೆ.&lt;/p&gt;&lt;img&gt;&lt;p&gt;ಕೆಲವೊಮ್ಮೆ, ಪಕ್ಷಿಯು ತನ್ನ ಕೊಕ್ಕಿನಲ್ಲಿ ಪ್ರತ್ಯೇಕ ಇರುವೆಗಳನ್ನು ಹಿಡಿದು ತನ್ನ ರೆಕ್ಕೆಗಳು ಮತ್ತು ಬಾಲದ ಗರಿಗಳ ಕೆಳಗೆ ಉಜ್ಜುತ್ತವೆ. ಇದು ಮುಲಾಮಿನಂತೆ ಕಾರ್ಯನಿರ್ವಹಿಸುತ್ತದೆ. ಫಾರ್ಮಿಕ್ ಆಮ್ಲವು ಕೀಟಗಳನ್ನು ತಟಸ್ಥಗೊಳಿಸುವಲ್ಲಿ ಮತ್ತು ಅವುಗಳ ಗರಿಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ, ಕಾಗೆಯು ತಮ್ಮ ಪರಿಸರವನ್ನು ಬಿಡದೆಯೇ ಗುಣವಾಗಲು ಮತ್ತು ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/when-a-crow-senses-its-unwell-intentionally-find-an-anthill-spread-its-wings-wide-suc-ps5yns5"/>
        </item>
        <item>
            <title><![CDATA[ಸುಪ್ರೀಂ ತೀರ್ಪಿನ ಬಳಿಕ ಆತ್ಮ*ಹತ್ಯೆಗೆ ಯತ್ನಿಸಿದ್ರಾ ದರ್ಶನ್​? ಆತಂಕದಲ್ಲಿ ಫ್ಯಾನ್ಸ್​- ಡಿಜಿಪಿ ಏನು ಹೇಳಿದ್ರು]]></title>
            <link>https://kannada.asianetnews.com/gallery/sandalwood/dgp-alok-kumar-says-darshan-is-not-attempted-crime-inside-jail-suc-4cobxop</link>
            <guid isPermaLink="true">https://kannada.asianetnews.com/gallery/sandalwood/dgp-alok-kumar-says-darshan-is-not-attempted-crime-inside-jail-suc-4cobxop</guid>
            <pubDate>Wed, 20 May 2026 13:15:00 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್&zwnj;ಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ ನಂತರ, ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಇದು ಸುಳ್ಳು ಸುದ್ದಿ ಎಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದು, ದರ್ಶನ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks25bv0schz873awvnxf2scv,imgname-dgp-alok-kumar-and-darshan-1779262942233.jpg" type="image/jpeg" height="390" width="690"/>
            <content:encoded><![CDATA[&lt;p&gt;ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್&zwnj;ಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ ನಂತರ, ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಇದು ಸುಳ್ಳು ಸುದ್ದಿ ಎಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದು, ದರ್ಶನ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರೇಣುಕಾಸ್ವಾಮಿ ಕೇಸ್​ನಲ್ಲಿ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿ ಇರುವ ನಟ ದರ್ಶನ್​ಗೆ ಮೊನ್ನೆ ಸುಪ್ರೀಂಕೋರ್ಟ್​ ಜಾಮೀನು ನಿರಾಕರಿಸಿದ್ದು, ಮತ್ತೊಂದು ವರ್ಷ ಜೈಲಿನಲ್ಲಿಯೇ ಕಳೆಯುವಂತಾಗಿದೆ. ದರ್ಶನ್​ ಅವರು ಇದಾಗಲೇ ತಮಗೆ ನೀಡ್ತಿರೋ ಸೌಲಭ್ಯ ಸರಿಯಿಲ್ಲ ಎಂದು ಕೋರ್ಟ್​ ಮೊರೆ ಹೋಗಿದ್ದರು. ಅವರಿಗೆ ನೀಡ್ತಿರೋ ಐಷಾರಾಮಿ ವ್ಯವಸ್ಥೆ ಕುರಿತು ಪೊಲೀಸ್​ ಇಲಾಖೆ ಕೋರ್ಟ್​ಗೆ ಮಾಹಿತಿ ನೀಡಿತ್ತು.&lt;/p&gt;&lt;img&gt;&lt;p&gt;ಈ ಜಟಾಪಟಿಯ ನಡುವೆಯೇ, ಮೊನ್ನೆ ಸುಪ್ರೀಂಕೋರ್ಟ್​ ತೀರ್ಪಿನ ಬಳಿಕ ಖಿನ್ನತೆಗೆ ಜಾರಿದ್ದ ದರ್ಶನ್​ ಆತ್ಮ*ಹತ್ಯೆಗೆ ಯತ್ನಿಸಿದರು ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಇದು ದರ್ಶನ್​ ಅಭಿಮಾನಿಗಳನ್ನು ಶಾಕ್​ಗೊಳಿಸಿತು. ಆತಂಕದಿಂದ ಕೆಲವು ಅಭಿಮಾನಿಗಳು ಜೈಲಿಗೆ ಹೋಗಿದ್ದರು ಎಂದೂ ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ತಿಳಿದ ಬಳಿಕ ಇದೀಗ ಖುದ್ದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಡಿಜಿಪಿ ಅಲೋಕ್&zwnj; ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದೊಂದು ಶುದ್ಧ ಸುಳ್ಳು ಸುದ್ದಿ. ಯಾರೂ ಭಯಪಡಬೇಡಿ ಎಂದಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ಇದು ಗಾಳಿಸುದ್ದಿ ಎಂದಿದ್ದಾರೆ ಡಿಜಿಪಿ ಅಲೋಕ್&zwnj; ಕುಮಾರ್. ಅಂತಹ ಯಾವುದೇ ಘಟನೆ ನಡೆದಿಲ್ಲ. ಈ ಸುದ್ದಿ ಸತ್ಯಕ್ಕೆ ದೂರವಾಗಿದೆ. ದರ್ಶನ್&zwnj; ಚೆನ್ನಾಗಿದ್ದಾರೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಇದಾಗಲೇ ಮೊನ್ನೆ ದರ್ಶನ್​ ಮತ್ತು ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವದ ನಿಮಿತ್ತ ವಿಜಯಲಕ್ಷ್ಮಿ ಅವರ ಮನವಿಯ ಮೇರೆಗೆ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ನಟ ದರ್ಶನ್ ಅವರು ಪತ್ನಿ ಹಾಗೂ ಮಗನನ್ನು ಅಪ್ಪಿಕೊಂಡು ಭಾವುಕರಾಗಿದ್ದರು&lt;/p&gt;&lt;img&gt;&lt;p&gt;. ಪತ್ನಿ ವಿಜಯಲಕ್ಷ್ಮಿ ಸಹ ಕಾರಾಗೃಹ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಪತ್ರ ಬರೆದು ಪತಿ ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದರು. ಈ ಮನವಿ ಸ್ಪಂದಿಸಿದ ಜೈಲು ಅಧಿಕಾರಿಗಳು ಇಂದು ಪತ್ನಿ ಹಾಗೂ ಮಗನ ಭೇಟಿಗೆ ಅವಕಾಶ ಕಲ್ಪಿಸಿದ್ದರು.&lt;/p&gt;&lt;img&gt;&lt;p&gt;ದರ್ಶನ್ ಕೂಡ ಪತ್ನಿ ಹಾಗೂ ಪುತ್ರನ ಭೇಟಿಗೆ ಅವಕಾಶ ಕಲ್ಪಿಸುವಂತೆ ಕೋರಿ ಜೈಲಿನ ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜೈಲಿನ ನಿಯಮಾನುಸಾರ ಈ ಅನುವು ಮಾಡಿಕೊಡಲಾಗಿತ್ತು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/dgp-alok-kumar-says-darshan-is-not-attempted-crime-inside-jail-suc-4cobxop"/>
        </item>
        <item>
            <title><![CDATA[ಗ್ಯಾಸ್ ಸ್ಟೌವ್ ಉರಿ ಕಡಿಮೆಯಾಗಿದೆಯೇ? ಮನೆಲೀ ಬರ್ನರ್ ಕ್ಲೀನ್ ಮಾಡಲು ಈ 2 ಪದಾರ್ಥ ಸಾಕು]]></title>
            <link>https://kannada.asianetnews.com/gallery/kitchen/is-your-gas-stove-flame-low-clean-your-burner-at-home-with-just-2-ingredients-tq7vtde</link>
            <guid isPermaLink="true">https://kannada.asianetnews.com/gallery/kitchen/is-your-gas-stove-flame-low-clean-your-burner-at-home-with-just-2-ingredients-tq7vtde</guid>
            <pubDate>Wed, 20 May 2026 13:08:17 +0530</pubDate>
            <description><![CDATA[&lt;p&gt;Gas Stove Cleaning: ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ ಎರಡು ಪದಾರ್ಥ ಬಳಸಿ, ಹಠಮಾರಿ ಜಿಡ್ಡು ಮತ್ತು ಬ್ಲಾಕ್ ಆಗಿರುವ ಬರ್ನರ್ ರಂಧ್ರಗಳನ್ನು ಕೇವಲ 15-20 ನಿಮಿಷಗಳಲ್ಲಿ ಹೊಸದರಂತೆ ಫಳಫಳ ಹೊಳೆಯುವಂತೆ ಮಾಡಬಹುದು. ಅದು ಹೇಗೆ? ಇಲ್ಲಿದೆ ನೋಡಿ.. ಸುಲಭ ಮನೆಮದ್ದು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks23qeth2ym27zd24a8dyc8k,imgname-thumbnail---2026-05-20t124220.855-1779261225808.jpg" type="image/jpeg" height="390" width="690"/>
            <content:encoded><![CDATA[&lt;p&gt;Gas Stove Cleaning: ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ ಎರಡು ಪದಾರ್ಥ ಬಳಸಿ, ಹಠಮಾರಿ ಜಿಡ್ಡು ಮತ್ತು ಬ್ಲಾಕ್ ಆಗಿರುವ ಬರ್ನರ್ ರಂಧ್ರಗಳನ್ನು ಕೇವಲ 15-20 ನಿಮಿಷಗಳಲ್ಲಿ ಹೊಸದರಂತೆ ಫಳಫಳ ಹೊಳೆಯುವಂತೆ ಮಾಡಬಹುದು. ಅದು ಹೇಗೆ? ಇಲ್ಲಿದೆ ನೋಡಿ.. ಸುಲಭ ಮನೆಮದ್ದು&lt;/p&gt;&lt;img&gt;&lt;p&gt;ಗ್ಯಾಸ್ ಸ್ಟವ್ ಆನ್ ಮಾಡಿದ ತಕ್ಷಣ ಉರಿ ಕಡಿಮೆಯಾಗಿ ಬರುತ್ತಿದೆಯೇ? ನೀಲಿ ಬಣ್ಣದಲ್ಲಿ ಉರಿಯಬೇಕಾದ ಉರಿ ಅಲ್ಪಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದೆಯೇ? ಅನೇಕರು ಗ್ಯಾಸ್ ಮುಗಿಯುತ್ತಿರಬಹುದು ಎಂದು ಭಾವಿಸುತ್ತಾರೆ ಅಥವಾ ಬರ್ನರ್ ಹಾಳಾಗಿದೆ ಎಂದು ಹೊಸದನ್ನು ಕೊಳ್ಳಲು ಸಿದ್ಧರಾಗುತ್ತಾರೆ. ಆದರೆ ಒಂದು ರೂಪಾಯಿ ಖರ್ಚಿಲ್ಲದೆ, ಮೆಕ್ಯಾನಿಕ್ ಅನ್ನು ಕರೆಯುವ ಅಗತ್ಯವಿಲ್ಲದೆ ನಿಮ್ಮ ಮನೆಯಲ್ಲಿರುವ ವಸ್ತುಗಳಿಂದಲೇ ಬ್ಲಾಕ್ ಆಗಿರುವ ಬರ್ನರ್ ರಂಧ್ರಗಳನ್ನು ಕೆಲವೇ ನಿಮಿಷಗಳಲ್ಲಿ ಕ್ಲೀನ್ ಮಾಡಿಕೊಳ್ಳಬಹುದು.&lt;/p&gt;&lt;img&gt;&lt;p&gt;ಪ್ರತಿ ಮನೆಯಲ್ಲೂ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಯಾವುದಾದರೊಂದು ಅಗತ್ಯಕ್ಕಾಗಿ ಗ್ಯಾಸ್ ಸ್ಟವ್ ಉರಿಯುತ್ತಲೇ ಇರುತ್ತದೆ. ಆದರೆ ಕೆಲವು ದಿನ ಬಳಸಿದ ನಂತರ ಗ್ಯಾಸ್ ಬರ್ನರ್ ಮೇಲೆ ಉರಿ ಕಡಿಮೆಯಾಗುವುದು ಅಥವಾ ನೀಲಿ ಬಣ್ಣದಲ್ಲಿ ಬರಬೇಕಾದ ಉರಿ ಹಳದಿ ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಿರಬಹುದು. ಇದನ್ನು ನೋಡಿ ಕೆಲವರು ಭಯಪಟ್ಟು ತಕ್ಷಣ ಹೊಸ ಬರ್ನರ್ ಖರೀದಿಸಲು ಯೋಚಿಸುತ್ತಾರೆ, ಇನ್ನು ಕೆಲವರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಅಸಲಿ ವಿಷಯವೆಂದರೆ.. ಬರ್ನರ್&zwnj;ನಲ್ಲಿರುವ ಸಣ್ಣ ಸಣ್ಣ ರಂಧ್ರಗಳು ಕೊಳೆ ಮತ್ತು ಜಿಡ್ಡಿನಿಂದ ಮುಚ್ಚಿಹೋಗಿರುವುದರಿಂದ ಹೀಗಾಗುತ್ತದೆ. ಇದಕ್ಕಾಗಿ ಮೆಕ್ಯಾನಿಕ್ ಕರೆಯುವ ಅಗತ್ಯವಿಲ್ಲ, ಒಂದು ರೂಪಾಯಿ ಖರ್ಚಿಲ್ಲದೆ ಅಡುಗೆಮನೆಯ ವಸ್ತುಗಳಿಂದಲೇ ಕೆಲವೇ ನಿಮಿಷಗಳಲ್ಲಿ ಇದನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂದು ಈಗ ನೋಡೋಣ&hellip;&lt;/p&gt;&lt;img&gt;&lt;p&gt;ನಾವು ಪ್ರತಿದಿನ ಅಡುಗೆ ಮಾಡುವಾಗ ಹಾಲು, ಚಹಾ ಉಕ್ಕಿ ಹರಿಯುವುದು ಅಥವಾ ತರಕಾರಿಗಳ ಜಿಡ್ಡು, ಎಣ್ಣೆ, ಮಸಾಲೆಗಳು ಪದೇ ಪದೇ ಬರ್ನರ್ ಮೇಲೆ ಬೀಳುತ್ತಿರುತ್ತವೆ. ಇವು ಕ್ರಮೇಣ ಅಂಟಿಕೊಂಡು ರಂಧ್ರಗಳನ್ನು ಬ್ಲಾಕ್ ಮಾಡುತ್ತವೆ. ಇದರಿಂದ ಗ್ಯಾಸ್ ಹರಿವು ಕಡಿಮೆಯಾಗಿ, ಉರಿ ಸರಿಯಾಗಿ ಬರುವುದಿಲ್ಲ ಮತ್ತು ಅರ್ಧದಷ್ಟು ಗ್ಯಾಸ್ ವ್ಯರ್ಥವಾಗುತ್ತದೆ.&lt;/p&gt;&lt;img&gt;&lt;p&gt;ಗ್ಯಾಸ್ ಬರ್ನರ್ ಅನ್ನು ಕ್ಲೀನ್ ಮಾಡಲು ಮೊದಲು ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ನಿಂಬೆಹಣ್ಣಿನ ರಸ, ಸ್ವಲ್ಪ ಅಡುಗೆ ಸೋಡಾ (ಬೇಕಿಂಗ್ ಸೋಡಾ) ಹಾಕಿ ಚೆನ್ನಾಗಿ ಬೆರೆಸಿ. ಈಗ ಈ ದ್ರಾವಣದಲ್ಲಿ ಬರ್ನರ್ ಹಾಕಿ 15 ರಿಂದ 20 ನಿಮಿಷಗಳ ಕಾಲ ನೆನೆಯಲು ಬಿಡಿ. ಇದರಿಂದ ಬರ್ನರ್&zwnj;ನಲ್ಲಿರುವ ಹಠಮಾರಿ ಜಿಡ್ಡು ಪೂರ್ತಿಯಾಗಿ ಮೆತ್ತಗಾಗುತ್ತದೆ.&lt;/p&gt;&lt;img&gt;&lt;p&gt;ನೆನೆದ ನಂತರ ಬರ್ನರ್ ಅನ್ನು ಹೊರತೆಗೆದು, ನಿಮ್ಮ ಮನೆಯಲ್ಲಿರುವ ಹಳೆಯ ಟೂತ್ ಬ್ರಷ್ ಅಥವಾ ಸ್ಕ್ರಬ್ಬರ್&zwnj;ನಿಂದ ಸ್ವಲ್ಪ ಜೋರಾಗಿ ಉಜ್ಜಿ. ಬರ್ನರ್&zwnj;ನಲ್ಲಿರುವ ಸಣ್ಣ ರಂಧ್ರಗಳಲ್ಲಿ ಸಿಲುಕಿಕೊಂಡಿರುವ ಕಸವನ್ನು ತೆಗೆಯಲು ಪಿನ್ ಅಥವಾ ಸೂಜಿಯನ್ನು ಬಳಸಬಹುದು. ಆದರೆ ಸೂಜಿಯಿಂದ ಅತಿಯಾಗಿ ಚುಚ್ಚಬೇಡಿ.. ಹಾಗೆ ಮಾಡಿದರೆ ರಂಧ್ರಗಳು ದೊಡ್ಡದಾಗಿ ಗ್ಯಾಸ್ ಲೀಕೇಜ್ ಹೆಚ್ಚಾಗುವ ಅಪಾಯವಿದೆ.&lt;/p&gt;&lt;img&gt;&lt;p&gt;ನಿಮ್ಮ ಗ್ಯಾಸ್ ಬರ್ನರ್ ತುಂಬಾ ಕಪ್ಪಾಗಿದ್ದು, ಎಷ್ಟು ಉಜ್ಜಿದರೂ ಕಲೆ ಹೋಗುತ್ತಿಲ್ಲವೇ? ಹಾಗಿದ್ದಲ್ಲಿ ಅದರ ಮೇಲೆ ಸ್ವಲ್ಪ ಬಿಳಿ ವಿನೆಗರ್ ಸುರಿದು ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ಆಮೇಲೆ ಬ್ರಷ್&zwnj;ನಿಂದ ಹಗುರವಾಗಿ ಉಜ್ಜಿದರೆ ಸಾಕು.. ಬರ್ನರ್ ಹೊಸದರಂತೆ ಹೊಳೆಯುತ್ತದೆ. ನಂತರ ಶುದ್ಧ ನೀರಿನಿಂದ ತೊಳೆಯಿರಿ.&lt;/p&gt;&lt;img&gt;&lt;p&gt;ಬರ್ನರ್ ಅನ್ನು ತೊಳೆದ ತಕ್ಷಣ ಸ್ಟವ್ ಮೇಲೆ ಇಡಬೇಡಿ. ಮೊದಲು ಒಂದು ಒಣ ಬಟ್ಟೆಯಿಂದ ಅದನ್ನು ಒರೆಸಿ, ಸ್ವಲ್ಪ ಹೊತ್ತು ಒಣಗಲು ಬಿಡಿ. ತೇವವಿರುವ ಬರ್ನರ್ ಬಳಸಿದರೆ ಗ್ಯಾಸ್ ಸರಿಯಾಗಿ ಉರಿಯುವುದಿಲ್ಲ.&lt;/p&gt;&lt;img&gt;&lt;p&gt;ವಾರಕ್ಕೆ ಕನಿಷ್ಠ ಒಮ್ಮೆಯಾದರೂ ಬರ್ನರ್&zwnj;ಗಳನ್ನು ಹಗುರವಾಗಿ ಸ್ವಚ್ಛಗೊಳಿಸಿ.ಹಾಲು ಅಥವಾ ಆಹಾರ ಪದಾರ್ಥಗಳು ಉಕ್ಕಿದಾಗ ಕೂಡಲೇ ಒರೆಸಿ ಕ್ಲೀನ್ ಮಾಡಿ.ಬರ್ನರ್ ರಂಧ್ರಗಳನ್ನು ಸ್ವಚ್ಛಗೊಳಿಸಲು ಅತಿ ದಪ್ಪಗಿರುವ ಸೂಜಿಗಳನ್ನು ಬಳಸಬೇಡಿ.ಕ್ಲೀನಿಂಗ್ ಮುಗಿದ ನಂತರ, ಬರ್ನರ್ ಅನ್ನು ಸ್ಟವ್ ಮೇಲೆ ಸರಿಯಾದ ಜಾಗದಲ್ಲಿ ಕೂರಿಸುವುದನ್ನು ಮರೆಯಬೇಡಿ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/is-your-gas-stove-flame-low-clean-your-burner-at-home-with-just-2-ingredients-tq7vtde"/>
        </item>
        <item>
            <title><![CDATA[Kishore Mother Accident: 'ಅಮ್ಮ ಚೆನ್ನಾಗಿದ್ದಾರೆ' ಎಂದ ಕಿಶೋರ್, ನಡೆದ ಇಡೀ ಘಟನೆಗೆ ಕಾರಣ-ಕ್ಲಾರಿಟಿ ಕೊಟ್ಟಿದ್ದಾರೆ ನೋಡಿ!]]></title>
            <link>https://kannada.asianetnews.com/sandalwood/actor-kishore-mother-hospitalized-news-and-his-response-for-welwisher-voice-message/articleshow-i1k87pg</link>
            <guid isPermaLink="true">https://kannada.asianetnews.com/sandalwood/actor-kishore-mother-hospitalized-news-and-his-response-for-welwisher-voice-message/articleshow-i1k87pg</guid>
            <pubDate>Wed, 20 May 2026 12:32:45 +0530</pubDate>
            <description><![CDATA[&lt;p&gt;ನಟ ಕಿಶೋರ್ ತಾಯಿಯವರಿಗೆ ಒಂದು ಆಕಸ್ಮಿಕ ಅಪಘಾತ ಸಂಭವಿಸಿತ್ತು. ಗಾಯಗೊಂಡ ತಾಯಿಯನ್ನು ತಕ್ಷಣವೇ ಬೆಂಗಳೂರಿನ ಜೆ.ಪಿ. ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಕಿಶೋರ್&zwnj; ಫೋನ್ ರಿಸೀವ್ ಮಾಡದ ಕಾರಣ ಆತಂತ ಸೃಷ್ಟಿಯಾಗಿತ್ತು. ಆದರೆ ಈಗ ಕಿಶೋರ್ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ನೋಡಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgsq3d0j1xqbw5kpqk1npg81,imgname-kishore-03-1770389615634.jpg" type="image/jpeg" height="390" width="690"/>
            <content:encoded><![CDATA[&lt;p&gt;ತಾಯಿಗೆ ಅಪಘಾತವಾದಾಗ ನಟ ಎಲ್ಲಿದ್ರು? ಸೋಶಿಯಲ್ ಮೀಡಿಯಾದಲ್ಲಿ ದಯಾಳ್ ಪದ್ಮನಾಭನ್ ಪೋಸ್ಟ್ ಹಾಕಿದ್ದೇಕೆ?&lt;/p&gt;&lt;p&gt;ಸಿನಿಮಾದಲ್ಲಿ ಕಿಶೋರ್ ಅಂದ್ರೆ ಅಬ್ಬರಿಸುವ ನಟನೆ, ಗಂಭೀರ ಮುಖಭಾವ. ಆದರೆ ಈ &quot;ಕಟ್ಟುಮಸ್ತಾದ&quot; ನಟನ ರಿಯಲ್ ಲೈಫ್&zwnj;ನಲ್ಲಿ ಕಳೆದ ಕೆಲವು ಗಂಟೆಗಳ ಹಿಂದೆ ಒಂದು ದೊಡ್ಡ &amp;nbsp;ಘಟನೆ ನಡೆದುಹೋಗಿದೆ. ನಡೆದ ಈ ಘಟನೆ ನಟ ಕಿಶೋರ್ ಅವರ ಆತ್ಮೀಯರನ್ನು ಮತ್ತು ಅಭಿಮಾನಿಗಳನ್ನು ಬೆಚ್ಚಿಬೀಳಿಸಿತ್ತು. ಕಿಶೋರ್ ತಾಯಿಗೆ ಅಪಘಾತವಾಗಿದ್ದು ಒಂದು ಕಡೆಯಾದ್ರೆ, ಸ್ವತಃ ಕಿಶೋರ್ ಯಾರ ಕೈಗೂ ಸಿಗದೇ ಹೋದದ್ದು ಆತಂಕವನ್ನು ಇಮ್ಮಡಿಗೊಳಿಸಿತ್ತು!&lt;/p&gt;&lt;p&gt;ನಡೆದಿದ್ದೇನು? ಆತಂಕದ ಆ ಕೆಲವು ಗಂಟೆಗಳು!&lt;/p&gt;&lt;p&gt;ಸಾಮಾನ್ಯವಾಗಿ ನಟ ಕಿಶೋರ್ ಸಿನಿಮಾ ಪ್ರಪಂಚದ ಗದ್ದಲದಿಂದ ಸ್ವಲ್ಪ ದೂರವೇ ಇರುತ್ತಾರೆ. ಫೋನ್ ಕರೆಗಳಿಗೆ ಸಿಗುವುದು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದು ಅವರಿಗೆ ಸ್ವಲ್ಪ ಕಡಿಮೆ. ಇಂದು ಅವರ ತಾಯಿಯವರಿಗೆ ಒಂದು ಆಕಸ್ಮಿಕ ಅಪಘಾತ ಸಂಭವಿಸಿತ್ತು. ಗಾಯಗೊಂಡ ತಾಯಿಯನ್ನು ತಕ್ಷಣವೇ ಬೆಂಗಳೂರಿನ ಜೆ.ಪಿ. ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿ ಮತ್ತು ಹಿತೈಷಿಗಳು ಕಿಶೋರ್&zwnj;ಗೆ ಫೋನ್ ಮೇಲೆ ಫೋನ್ ಮಾಡತೊಡಗಿದರು. ಆದರೆ ಕಿಶೋರ್ ಅವರು ಕಾಲ್ ರಿಸೀವ್ ಮಾಡದೇ ಇದ್ದುದರಿಂದ ಸ್ವಲ್ಪ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.&lt;/p&gt;&lt;p&gt;ನಿರ್ದೇಶಕ ದಯಾಳ್ ಪದ್ಮನಾಭನ್ ಸೋಷಿಯಲ್ ಮೀಡಿಯಾ ಪೋಸ್ಟ್!&lt;/p&gt;&lt;p&gt;ವಿಷಯ ತಿಳಿದ ನಿರ್ದೇಶಕ ದಯಾಳ್ ಪದ್ಮನಾಭನ್ ಕೂಡ ಕಿಶೋರ್&zwnj;ಗೆ ಕರೆ ಮಾಡಲು ಪ್ರಯತ್ನಿಸಿದರು. ವಾಯ್ಸ್ ಮೆಸೇಜ್ ಕಳುಹಿಸಿದರು. ಆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಭಾವಿಸಿದ ದಯಾಳ್, ಬೇರೆ ದಾರಿಯಿಲ್ಲದೆ ಫೇಸ್&zwnj;ಬುಕ್ ಮತ್ತು ಇನ್&zwnj;ಸ್ಟಾಗ್ರಾಮ್ ಮೊರೆ ಹೋದರು. &quot;ಯಾರಿಗಾದರೂ ಕಿಶೋರ್ ಸಿಕ್ಕರೆ ತಕ್ಷಣ ಈ ವಿಷಯ ತಿಳಿಸಿ, ಅವರ ತಾಯಿ ಆಸ್ಪತ್ರೆಯಲ್ಲಿದ್ದಾರೆ&quot; ಎಂದು ಪೋಸ್ಟ್ ಹಾಕಿದರು. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿತು. ಅಭಿಮಾನಿಗಳೆಲ್ಲಾ &quot;ಕಿಶೋರ್ ಸರ್ ಎಲ್ಲಿದ್ದೀರಾ?&quot; ಎಂದು ಹುಡುಕಾಡತೊಡಗಿದರು.&lt;/p&gt;&lt;p&gt;ಹೈದರಾಬಾದ್&zwnj;ನಿಂದ ಬಂದ ಆ ಒಂದು ಮೆಸೇಜ್!&lt;/p&gt;&lt;p&gt;ಒಂದು ಕಡೆ ಆತಂಕದ ಮೋಡ ಕವಿದಿದ್ದರೆ, ಇನ್ನೊಂದು ಕಡೆ ನಟ ಕಿಶೋರ್ ಈ ಯಾವುದೂ ತಿಳಿಯದಂತೆ ಗಾಢ ನಿದ್ರೆಯಲ್ಲಿದ್ದರು! ಕಾರಣ, ನಟ ಕಿಶೋರ್ ಅವರು ಹೈದರಾಬಾದ್&zwnj;ನಲ್ಲಿ ಒಂದು ತಮಿಳು ಸಿನಿಮಾದ ಚಿತ್ರೀಕರಣದಲ್ಲಿದ್ದರು. ಇಡೀ ರಾತ್ರಿ ಶೂಟಿಂಗ್ ಮುಗಿಸಿ ಬೆಳಿಗ್ಗೆ ಸುಸ್ತಾಗಿ ಮಲಗಿದ್ದರು. ಕಾಲ್, ಮೆಸೇಕ್&zwnj; ಸದ್ದಿಗೆ ನಿದ್ದೆಯಿಂದ ಎದ್ದು ಮೊಬೈಲ್ ನೋಡಿದಾಗ ನೂರಾರು ಮಿಸ್ಡ್ ಕಾಲ್&zwnj;ಗಳು, ವೈಸ್ ಮೆಸೇಜ್&zwnj;ಗಳು.&lt;/p&gt;&lt;p&gt;ತಕ್ಷಣವೇ ಹಿತೈಷಿಯೊಬ್ಬರ ಮೆಸೇಜ್&zwnj;ಗೆ ರಿಪ್ಲೈ ಮಾಡಿದ ಕಿಶೋರ್, &quot;ಧನ್ಯವಾದಗಳು.. ಅಮ್ಮ ಈಗ ಚೆನ್ನಾಗಿದ್ದಾರೆ. ನಾನು ಹೈದರಾಬಾದ್&zwnj;ನಲ್ಲಿ ನೈಟ್ ಶೂಟಿಂಗ್ ಮುಗಿಸಿ ಮಲಗಿದ್ದೆ, ಹಾಗಾಗಿ ಫೋನ್ ನೋಡಲು ಸಾಧ್ಯವಾಗಲಿಲ್ಲ. ದಯವಿಟ್ಟು ಕ್ಷಮಿಸಿ&quot; ಎಂದು ಎಲ್ಲರಿಗೂ ಸಮಾಧಾನದ ಸುದ್ದಿ ನೀಡಿದರು.&lt;/p&gt;&lt;p&gt;ಸುಖಾಂತ್ಯ!&lt;/p&gt;&lt;p&gt;ಯಾವುದೇ ದೊಡ್ಡ ವಿಪತ್ತು ಸಂಭವಿಸುವ ಮುನ್ನವೇ ಕಿಶೋರ್ ಎಚ್ಚೆತ್ತುಕೊಂಡರು ಮತ್ತು ಅವರ ತಾಯಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ನೆಮ್ಮದಿ ತಂದಿದೆ. ಈಗ ನಟ ಕಿಶೋರ್ ಅಭಿಮಾನಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ!&lt;/p&gt;&lt;p&gt;ನಟ ಕಿಶೋರ್ ಅವರ ತಾಯಿಯ ಅಪಘಾತದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ನಿರ್ದೇಶಕ ದಯಾಳ್ ಅವರ ಸಮಯಪ್ರಜ್ಞೆ, ಹಿತೈಷಿಗಳು, ಮಾಧ್ಯಮದವರ ತಕ್ಷಣದ ಕಾರ್ಯಾಚರಣೆ ಹಾಗೂ ಪ್ರತಿಕ್ರಿಯೆಯಿಂದ ಈ ಆತಂಕ ದೂರವಾಗಿದೆ. ಸದ್ಯ ಕಿಶೋರ್ ಅವರ ತಾಯಿ ಗುಣಮುಖರಾಗುತ್ತಿದ್ದು, ನಟ ಹೈದರಾಬಾದ್&zwnj;ನಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/actor-kishore-mother-hospitalized-news-and-his-response-for-welwisher-voice-message/articleshow-i1k87pg"/>
        </item>
        <item>
            <title><![CDATA[Karna Serial: ತಾನು ಪ್ರೀತಿಸಿದ ಹುಡುಗ ಬೇರೊಬ್ಬಳ ತೆಕ್ಕೆಯಲ್ಲಿ; ನಿತ್ಯಾಳ ಮನದಲ್ಲಿ ಯುದ್ಧ? ತಂಗಿಗೆ ಅಕ್ಕನೇ ವಿಲನ್​]]></title>
            <link>https://kannada.asianetnews.com/gallery/tv-talk/karna-serial-after-marriage-of-karna-and-nidhi-what-is-the-situation-of-nithya-suc-p51kblt</link>
            <guid isPermaLink="true">https://kannada.asianetnews.com/gallery/tv-talk/karna-serial-after-marriage-of-karna-and-nidhi-what-is-the-situation-of-nithya-suc-p51kblt</guid>
            <pubDate>Tue, 19 May 2026 20:34:17 +0530</pubDate>
            <description><![CDATA[ಕರ್ಣ ಮತ್ತು ನಿಧಿ ಮದುವೆಯಾಗುತ್ತಿದ್ದು, ಇದಕ್ಕಾಗಿ ನಿತ್ಯಾ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಾಳೆ. ಆದರೆ ಕರ್ಣನ ಮೇಲೆ ಪ್ರೀತಿಯಿರುವ ನಿತ್ಯಾ, ತನ್ನ ಪ್ರೇಮಿಯನ್ನು ತಂಗಿಯೊಂದಿಗೆ ನೋಡಿ ಸಹಿಸಲಾಗದೆ ವಿಲನ್ ಆಗಿ ಬದಲಾಗುತ್ತಾಳಾ ಎಂಬ ಕುತೂಹಲ ಸದ್ಯದ ಕಥೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks0c35sp8x262x2svjsbrx68,imgname-karna-serial-1779202889526.jpg" type="image/jpeg" height="390" width="690"/>
            <content:encoded><![CDATA[ಕರ್ಣ ಮತ್ತು ನಿಧಿ ಮದುವೆಯಾಗುತ್ತಿದ್ದು, ಇದಕ್ಕಾಗಿ ನಿತ್ಯಾ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಾಳೆ. ಆದರೆ ಕರ್ಣನ ಮೇಲೆ ಪ್ರೀತಿಯಿರುವ ನಿತ್ಯಾ, ತನ್ನ ಪ್ರೇಮಿಯನ್ನು ತಂಗಿಯೊಂದಿಗೆ ನೋಡಿ ಸಹಿಸಲಾಗದೆ ವಿಲನ್ ಆಗಿ ಬದಲಾಗುತ್ತಾಳಾ ಎಂಬ ಕುತೂಹಲ ಸದ್ಯದ ಕಥೆಯಾಗಿದೆ.&lt;img&gt;&lt;p&gt;ಸದ್ಯ ಕರ್ಣ ಸೀರಿಯಲ್​ನಲ್ಲಿ (Karna Serial) ರೋಚಕ ಟ್ವಿಸ್ಟ್​ ಸಿಕ್ಕಿದೆ. ಕರ್ಣ ಮತ್ತು ನಿಧಿಯ ಮದುವೆಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಅಂತೂ ಭರ್ಜರಿ ಗುಡ್​ನ್ಯೂಸ್​​ ಸಿಕ್ಕಿದೆ. ಅಕ್ಕನಿಗಾಗಿ ತಂಗಿ, ತಂಗಿಗಾಗಿ ಅಕ್ಕ ತಮ್ಮ ಪ್ರೀತಿಯನ್ನು ತ್ಯಾಗ ಮಾಡಲು ನೋಡಿ ಕೊನೆಗೂ ಅಸಲಿ ಪ್ರೇಮಿಗಳು ಒಂದಾಗಿದ್ದಾರೆ. ಆ ಹಂತದಲ್ಲಿ ನಿಧಿ ತಂಗಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಾಳೆ.&lt;/p&gt;&lt;img&gt;&lt;p&gt;ಆದರೆ, ಆಕೆಯ ಮನಸ್ಸಿನಲ್ಲಿ ಕರ್ಣನ ಮೇಲೆ ಅದಮ್ಯ ಪ್ರೀತಿ ಇದೆ. ಅದನ್ನುತುಂಬಿದವ ಖುದ್ದು ರಮೇಶ್​. ನಿನಗೋಸ್ಕರ ಅಲ್ಲದಿದ್ದರೂ, ಮಗುವಿನ ಬಗ್ಗೆ ಯೋಚಿಸು, ಕರ್ಣನೇ ನಿನಗೆ ಬೆಸ್ಟ್​. ತಂಗಿಯ ಬಗ್ಗೆ ಯೋಚಿಸಬೇಡ ಎಂದೆಲ್ಲಾ ತಲೆತುಂಬಿದ್ದ.ಆದರೆ, ನಿತ್ಯಾ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಕರ್ಣನನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದ ನಿತ್ಯಾ, ತಂಗಿ ಮತ್ತು ಕರ್ಣನ ಪ್ರೀತಿಗಾಗಿ ಪ್ರೀತಿಯನ್ನು ತ್ಯಾಗ ಮಾಡಿದ್ಲು.&lt;/p&gt;&lt;img&gt;&lt;p&gt;ಹಾಗೆಂದು ಆ ಪ್ರೀತಿ ಹೋಗತ್ತಾ? ಮದುವೆಯಾದ ಮೇಲೆ ಕಥೆಯಂತೂ ಮುಗಿದಿಲ್ಲ. ಈಗ ಇನ್ನೊಂದು ಹಂತ ಶುರುವಾಗೋದಂತೂ ಗ್ಯಾರೆಂಟಿ. ಹಾಗೆಂದು ತೇಜಸ್​ ವಾಪಸ್​ ಬಂದು ಎಲ್ಲಾ ಸರಿಹೋಗತ್ತೆ ಎಂದರೆ ಸೀರಿಯಲ್​ ಮುಗಿಯಲ್ಲ. ಹಾಗಿದ್ರೆ ಮುಂದೇನು?&lt;/p&gt;&lt;img&gt;&lt;p&gt;ನಿತ್ಯಾಳಿಗೆ ಕರ್ಣನ ಮೇಲೆ ಲವ್​ ಆಗಿದೆ. ಆ ಕ್ಷಣದಲ್ಲಿ ತಂಗಿಗಾಗಿ ಪ್ರೀತಿಯನ್ನು ತ್ಯಾಗ ಮಾಡಿರುವ ನಿತ್ಯಾಗೆ ಅವರಿಬ್ಬರೂ ಲವ್​ ಮಾಡ್ತಿರೋದನ್ನು ಖಂಡಿತವಾಗಿಯೂ ನೋಡಲು ಆಗುವುದಿಲ್ಲ. ಏಕೆಂದರೆ ಒಂದು ಆಕೆಯ ಪ್ರೀತಿ, ಇನ್ನೊಂದು ಮಗುವಿಗಾಗಿ ಹಂಬಲ. ಅಷ್ಟಕ್ಕೂ ಮಗುವಿನ ಕೈಹಿಡಿಯುವುದಾಗಿ ಕರ್ಣ ಹೇಳಿದ್ದ. ಅಪ್ಪ ತಾನೇ ಎನ್ನುವ ಅರ್ಥದಲ್ಲಿ ಮಾತನಾಡಿ ನಿತ್ಯಾಳ ಮನಸ್ಸಿನಲ್ಲಿ ಒಂದರ್ಥದಲ್ಲಿ ಪ್ರೀತಿ ಮೂಡುವ ಹಾಗೆಯೂ ಮಾಡಿದ್ದ.&lt;/p&gt;&lt;img&gt;&lt;p&gt;ಇಷ್ಟೆಲ್ಲಾ ಆದ ಮೇಲೆ ನಿತ್ಯಾ ತನ್ನ ಕಣ್ಣೆದುರೇ ತನ್ನ ಪ್ರೇಮಿ ಬೇರೊಬ್ಬಳ ತೆಕ್ಕೆಯಲ್ಲಿ ಇರುವುದನ್ನು ನೋಡಿಯಾಳೇ? ಸೈಕಾಲಾಜಿ ಪ್ರಕಾರ ಹೋದರೂ ಇದು ನಿತ್ಯಾಳಂಥ ಹೆಣ್ಣಿಗೆ ತುಂಬಾ ಕಷ್ಟದ ಮಾತೇ. ಅಷ್ಟಕ್ಕೂ ಸೀರಿಯಲ್​ನಲ್ಲಿ ಒಬ್ಬಳು ವಿಲನ್​ ಬೇಕೇ ಬೇಕು. ಸದ್ಯ ಕರ್ಣ ಮತ್ತು ನಿಧಿಯನ್ನು ದೂರ ಮಾಡಲು ಬೇರೆ ಲೇಡಿ ವಿಲನ್​ಗಳು ಇಲ್ಲ. ಹಾಗಿದ್ರೆ ನಿತ್ಯಾಳೇ ವಿಲನ್ ಆಗ್ತಾಳಾ ಎನ್ನುವ ಅನುಮಾನವೂ ಇದೆ. ಆದರೆ ಹಾಗಾಗದಿರಲಿ ಎನ್ನುವುದು ನಿತ್ಯಾಳ ಫ್ಯಾನ್ಸ್​ ಮನವಿ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-after-marriage-of-karna-and-nidhi-what-is-the-situation-of-nithya-suc-p51kblt"/>
        </item>
        <item>
            <title><![CDATA[ರಾಯ್ತಾ, ಲಸ್ಸಿ ಬಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ತಿಂದು ನೋಡಿ]]></title>
            <link>https://kannada.asianetnews.com/food/eat-curd-empty-stomach-help-to-get-rid-of-these-problems/articleshow-uoep6uo</link>
            <guid isPermaLink="true">https://kannada.asianetnews.com/food/eat-curd-empty-stomach-help-to-get-rid-of-these-problems/articleshow-uoep6uo</guid>
            <pubDate>Wed, 20 May 2026 11:36:56 +0530</pubDate>
            <description><![CDATA[&lt;p&gt;curd benefits : ಮೊಸರು ಆರೋಗ್ಯಕರ ಆಹಾರ. ಆದ್ರೆ ಎಲ್ಲ ಸಮಯದಲ್ಲೂ, ಎಲ್ಲರೂ ಸೇವನೆ ಮಾಡುವಂತಹದ್ದಲ್ಲ. ಖಾಲಿ ಹೊಟ್ಟೆಯಲ್ಲಿ ಮೊಸರು ತಿಂದ್ರೆ ಏನಾಗುತ್ತೆ? ಲಾಭ ಏನು? ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks1zv9rnbayannz28sqkeres,imgname-curd-1779257157397.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯರ ಅತಿ ಅಚ್ಚುಮೆಚ್ಚಿನ ಆಹಾರದಲ್ಲಿ ಮೊಸರು ಸೇರಿದೆ. ಊಟದ ಕೊನೆಯಲ್ಲಿ ಅನ್ನದ ಜೊತೆ ಮೊಸರಿಲ್ಲ ಅಂದ್ರೆ ಊಟ ಪೂರ್ಣಗೊಳ್ಳೋದಿಲ್ಲ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಜನರು ಮೊಸರು ಸೇವನೆ ಮಾಡ್ತಾರೆ. ಬೇಸಿಗೆ ಬರ್ತಿದ್ದಂತೆ ಮೊಸರಿನ ಬಳಕೆ ಹೆಚ್ಚಾಗುತ್ತೆ. ಮಜ್ಜಿಗೆ, ಲಸ್ಸಿ,ರಾಯ್ತಾ ಅಂತ ನಾನಾ ರೀತಿಯಲ್ಲಿ ಜನರು ಮೊಸರು ಸೇವನೆ ಮಾಡ್ತಾರೆ. ಮೊಸರನ್ನು ಯಾವುದೇ ರೀತಿಯಲ್ಲಿ ಸೇವನೆ ಮಾಡಿದ್ರೂ ಪ್ರಯೋಜನಕಾರಿ. ಆದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರನ್ನು ಸೇವನೆ ಮಾಡಿದ್ರೆ ಏನಾಗುತ್ತೆ?&lt;/p&gt;&lt;h2&gt;ಖಾಲಿ ಹೊಟ್ಟೆಯಲ್ಲಿ ಮೊಸರು ಸೇವನೆ&lt;/h2&gt;&lt;p&gt;ಮೊಸರು (curd) ದೇಹಕ್ಕೆ ಪ್ರಯೋಜನಕಾರಿ. ಆದ್ರೆ ಅದನ್ನು ಸರಿಯಾದ ಸಮಯದಲ್ಲಿ ತಿನ್ನಬೇಕು. ಕೆಲವರು ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನಲು ಇಷ್ಟಪಡ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ಸೇವನೆ ಮಾಡೋದ್ರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮೊಸರಿನಲ್ಲಿ ಕಂಡುಬರುವ ಪ್ರೋಬಯಾಟಿಕ್ಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅವು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತವೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ.&lt;/p&gt;&lt;p&gt;ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೇಹದಲ್ಲಿನ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಇರುವವರು ತಮ್ಮ ಉಪಾಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳಬೇಕು. ಇದರಲ್ಲಿ ಮೆಗ್ನೀಸಿಯಮ್ ಇದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ರಂಜಕದಂತಹ ಪೋಷಕಾಂಶಗಳು ಸಮೃದ್ಧವಾಗಿವೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆ ಮತ್ತು ದೇಹವನ್ನು ತಂಪಾಗಿಸುತ್ತದೆ.&lt;/p&gt;&lt;p&gt;ಅನ್ನ ಉಳಿತಾ? ಒಂದು ಪೈಸೆ ಖರ್ಚು ಮಾಡದೆ ಗರಿಗರಿಯಾದ ಸಂಡಿಗೆ ಮಾಡಿ.. ಅಜ್ಜಿ ಕಾಲದ ಉಳಿತಾಯದ ಉಪಾಯವಿದು&lt;/p&gt;&lt;p&gt;ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದು ಎಲ್ಲರಿಗೂ ಸೂಕ್ತವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ವಿಶೇಷವಾಗಿ ಶೀತ, ಸೈನುಟಿಸ್ ಮತ್ತು ಆಮ್ಲೀಯತೆಯಿಂದ ಬಳಲುತ್ತಿರುವವರು ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡ್ಬೇಕು.&lt;/p&gt;&lt;h3&gt;ಮೊಸರು ಸೇವನೆ ವಿಧಾನ&lt;/h3&gt;&lt;p&gt;ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಿತವಾಗಿ ಮೊಸರು ಸೇವಿಸುವುದರಿಂದ ಯಾವುದೇ ಹಾನಿ ಇಲ್ಲ. ಮೊಸರಿಗೆ ಹೆಚ್ಚು ಸಕ್ಕರೆ ಸೇರಿಸುವುದು ಅನಾರೋಗ್ಯಕ್ಕೆ ದಾರಿಮಾಡಿ ಕೊಡುತ್ತದೆ. ಖಾಲಿ ಮೊಸರು ಸೇವನೆ ಇಷ್ಟವಿಲ್ಲ ಎನ್ನುವವರು ಅದಕ್ಕೆ ಹಣ್ಣು ಅಥವಾ ಫ್ರೈ ಮಾಡಿದ ಜೀರಿಗೆ ಸೇರಿಸಿ ಸೇವನೆ ಮಾಡಬೇಕು. ತುಂಬಾ ಹುಳಿ ಇರುವ ಮೊಸರನ್ನು ಸೇವನೆ ಮಾಡಬಾರದು. ಹಳಸಿದ ಹಾಗೂ ಹುಳಿ ಮೊಸರು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಆರೋಗ್ಯಕ ದೇಹಕ್ಕೆ ಪ್ರತಿಯೊಬ್ಬರು ತಾಜಾ ಮೊಸರನ್ನು ತಿನ್ನಬೇಕು.&lt;/p&gt;&lt;p&gt;ಮಜ್ಜಿಗೆಗೆ ಈ ಒಂದು ಪುಡಿ ಹಾಕಿ ಕುಡಿದು ನೋಡಿ, ಶುಗರ್&zwnj; ಲೆವಲ್ ಕಂಟ್ರೋಲ್ ಜೊತೆಗೆ ಯಂಗ್ ಆಗ್ತೀರಾ!&lt;/p&gt;&lt;p&gt;&lt;strong&gt;ಮೊಸರಿನಲ್ಲಿರುವ ಪೋಷಕಾಂಶಗಳು&lt;/strong&gt;&lt;/p&gt;&lt;p&gt;ಮೊಸರಿನಲ್ಲಿ ವಿಟಮಿನ್ಗಳು, ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ, ರಂಜಕ, ಮೆಗ್ನೀಸಿಯಮ್ ಮತ್ತು ಫೋಲಿಕ್ ಆಮ್ಲದಂತಹ ಅನೇಕ ಪೋಷಕಾಂಶಗಳಿವೆ. ಈ ಎಲ್ಲಾ ಅಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ನಮ್ಮ ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಗಮನಾರ್ಹ ಪ್ರಮಾಣದ ಪ್ರೋಬಯಾಟಿಕ್ಗಳನ್ನು ಸಹ ಹೊಂದಿದೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/food/eat-curd-empty-stomach-help-to-get-rid-of-these-problems/articleshow-uoep6uo"/>
        </item>
        <item>
            <title><![CDATA[ಮನೆ ಮುಂದೆಯೇ ಟ್ರೈನ್ ಪಾರ್ಕಿಂಗ್! ದೇಶದಲ್ಲೇ ಸ್ವಂತ ರೈಲ್ವೆ ಸ್ಟೇಷನ್ ಹೊಂದಿದ್ದ ಏಕೈಕ ವ್ಯಕ್ತಿ ಈತ!]]></title>
            <link>https://kannada.asianetnews.com/gallery/life/the-indian-nawab-who-owned-a-private-railway-station-and-luxury-train-kvn-2tq7y7z</link>
            <guid isPermaLink="true">https://kannada.asianetnews.com/gallery/life/the-indian-nawab-who-owned-a-private-railway-station-and-luxury-train-kvn-2tq7y7z</guid>
            <pubDate>Wed, 20 May 2026 12:17:04 +0530</pubDate>
            <description><![CDATA[ಐಷಾರಾಮಿ ಪ್ರಯಾಣಕ್ಕಾಗಿ ಕಾರು, ಬಸ್ಸು ಖರೀದಿಸುವುದನ್ನು ನೋಡಿದ್ದೇವೆ. ಇನ್ನೂ ಶ್ರೀಮಂತರಾದರೆ ಪ್ರೈವೇಟ್ ಜೆಟ್ ಖರೀದಿಸುತ್ತಾರೆ. ಆದರೆ, ಸ್ವಂತ ರೈಲು, ಅದನ್ನು ಪಾರ್ಕ್ ಮಾಡಲು ಮನೆಯಲ್ಲೇ ರೈಲ್ವೆ ನಿಲ್ದಾಣ ಹೊಂದಿದ್ದ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ?]]></description>
            <media:content url="https://static.asianetnews.com/images/w-1280,h-720,format-jpg,imgid-01ks1zdvb5mqxs5ezyqcsqxwwb,imgname-d7d900ea-b348-4fff-bfd1-c9d7a4db4647-1779256716645.jpg" type="image/jpeg" height="390" width="690"/>
            <content:encoded><![CDATA[ಐಷಾರಾಮಿ ಪ್ರಯಾಣಕ್ಕಾಗಿ ಕಾರು, ಬಸ್ಸು ಖರೀದಿಸುವುದನ್ನು ನೋಡಿದ್ದೇವೆ. ಇನ್ನೂ ಶ್ರೀಮಂತರಾದರೆ ಪ್ರೈವೇಟ್ ಜೆಟ್ ಖರೀದಿಸುತ್ತಾರೆ. ಆದರೆ, ಸ್ವಂತ ರೈಲು, ಅದನ್ನು ಪಾರ್ಕ್ ಮಾಡಲು ಮನೆಯಲ್ಲೇ ರೈಲ್ವೆ ನಿಲ್ದಾಣ ಹೊಂದಿದ್ದ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ?&lt;img&gt;&lt;p&gt;ಶ್ರೀಮಂತರು ತಮ್ಮ ಅರಮನೆಯಂತಹ ಮನೆಯ ಮುಂದೆ ರೋಲ್ಸ್ ರಾಯ್ಸ್, ಟೆಸ್ಲಾ, ಬಿಎಂಡಬ್ಲ್ಯು ಮುಂತಾದ ದುಬಾರಿ ಕಾರುಗಳನ್ನು ನಿಲ್ಲಿಸಲು ಇಷ್ಟಪಡುತ್ತಾರೆ. ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವುದು ಮಾತ್ರವಲ್ಲ, ಅದನ್ನು ಮನೆಯ ಮುಂದೆ ನಿಲ್ಲಿಸುವುದನ್ನೂ ಅವರು ಪ್ರತಿಷ್ಠೆಯ ಸಂಕೇತವೆಂದು ಭಾವಿಸುತ್ತಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಇಂತಹ ಹತ್ತಾರು ಕಾರುಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಮತ್ತು ದೊಡ್ಡ ಉದ್ಯಮಿಗಳು ಅನೇಕರಿದ್ದಾರೆ. ಅಷ್ಟೇ ಏಕೆ, ಐಷಾರಾಮಿ ಬಸ್ಸುಗಳು (ಕ್ಯಾರವಾನ್&zwnj;ಗಳು) ಮತ್ತು ಖಾಸಗಿ ಜೆಟ್&zwnj;ಗಳನ್ನು ಹೊಂದಿರುವ ಶ್ರೀಮಂತರೂ ಇದ್ದಾರೆ.&lt;/p&gt;&lt;img&gt;&lt;p&gt;ಆದರೆ, ಆ ಕಾಲದಲ್ಲೇ ಒಬ್ಬ ಭಾರತೀಯ ನವಾಬ, ತನಗಾಗಿ ಒಂದು ಐಷಾರಾಮಿ ರೈಲನ್ನು ನಿರ್ವಹಿಸುತ್ತಿದ್ದ. ಅಷ್ಟೇ ಅಲ್ಲ, ಆ ರೈಲು ನೇರವಾಗಿ ತನ್ನ ಅರಮನೆಯ ಬಳಿ ನಿಲ್ಲುವಂತೆ ಮಾಡಲು ಸ್ವಂತ ರೈಲ್ವೆ ನಿಲ್ದಾಣವನ್ನೇ ನಿರ್ಮಿಸಿದ್ದ. ಹೀಗೆ ಭಾರತದಲ್ಲಿ ಸ್ವಂತ ರೈಲು ಮತ್ತು ಅದನ್ನು ನಿಲ್ಲಿಸಲು ಮನೆಯ ಬಳಿಯೇ ರೈಲ್ವೆ ನಿಲ್ದಾಣವನ್ನು ನಿರ್ಮಿಸಿಕೊಂಡಿದ್ದ ಆ ಏಕೈಕ ವ್ಯಕ್ತಿಯ ಬಗ್ಗೆ ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;ನವಾಬ್ ಫೈಜ್ ಉಲ್ಲಾ ಖಾನ್ ಅವರು 1774ರಲ್ಲಿ ಉತ್ತರ ಪ್ರದೇಶದ ರಾಂಪುರ ಸಂಸ್ಥಾನವನ್ನು ಸ್ಥಾಪಿಸಿದರು. ಬ್ರಿಟಿಷರ ಆಳ್ವಿಕೆಯಲ್ಲೂ ಈ ಸಂಸ್ಥಾನವು ಸ್ವತಂತ್ರವಾಗಿತ್ತು ಮತ್ತು ತನ್ನ ಶ್ರೀಮಂತ ಸಂಸ್ಕೃತಿ ಹಾಗೂ ಸಾಹಿತ್ಯಿಕ ವೈಭವಕ್ಕೆ ಹೆಸರುವಾಸಿಯಾಗಿತ್ತು. ಹೈದರಾಬಾದ್ ನಿಜಾಮರಂತೆಯೇ, ಈ ಸಂಸ್ಥಾನವನ್ನು ಆಳಿದ ನವಾಬರು ಕೂಡ ಅಪಾರ ಸಿರಿ ಸಂಪತ್ತನ್ನು ಹೊಂದಿದ್ದರು. ಅವರು ಅತ್ಯಂತ ವಿಲಾಸಿ ಜೀವನವನ್ನು ನಡೆಸುತ್ತಿದ್ದರು.&amp;nbsp;&lt;/p&gt;&lt;img&gt;&lt;p&gt;ಈ ರಾಂಪುರ ಸಂಸ್ಥಾನವನ್ನು ಆಳಿದ ಒಂಬತ್ತನೇ ನವಾಬ ಹಮೀದ್ ಅಲಿ ಖಾನ್ ಅವರ ಜೀವನವು ಐಷಾರಾಮಕ್ಕೆ ಮತ್ತೊಂದು ಹೆಸರಾಗಿತ್ತು. ಅವರು ಬ್ರಿಟಿಷರ ಸಹಾಯದಿಂದ ತಮ್ಮದೇ ಆದ ರೈಲ್ವೆ ನಿಲ್ದಾಣವನ್ನು ನಿರ್ಮಿಸಿಕೊಂಡರು. ಇದನ್ನು ಮುಖ್ಯ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸಲು, ತಮ್ಮ ಸ್ವಂತ ಹಣದಿಂದ 40 ಕಿಲೋಮೀಟರ್ ಉದ್ದದ ರೈಲ್ವೆ ಮಾರ್ಗವನ್ನು ಹಾಕಿಸಿದರು. ಅವರ ಅರಮನೆಯ ಬಳಿಯ ರೈಲ್ವೆ ನಿಲ್ದಾಣದಲ್ಲಿ ಯಾವಾಗಲೂ ಒಂದು ಐಷಾರಾಮಿ ರೈಲು ಸಿದ್ಧವಾಗಿರುತ್ತಿತ್ತು. ಈ ರೈಲ್ವೆ ನಿಲ್ದಾಣದ ನಿರ್ಮಾಣಕ್ಕಾಗಿಯೇ ನವಾಬ ಹಮೀದ್ ಅಲಿ ಖಾನ್ ಅಂದಿನ ಕಾಲದಲ್ಲಿ ಬರೋಬ್ಬರಿ 113 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರಂತೆ. ಅಂದರೆ, ಇಂದಿನ ಮೌಲ್ಯದಲ್ಲಿ ಇದು ಸಾವಿರಾರು ಕೋಟಿ ರೂಪಾಯಿ ಆಗುತ್ತದೆ. ಹೀಗೆ, ದೇಶದಲ್ಲಿ ಸ್ವಂತ ರೈಲ್ವೆ ನಿಲ್ದಾಣವನ್ನು ಹೊಂದಿದ್ದ ಏಕೈಕ ವ್ಯಕ್ತಿ ಈ ಹಮೀದ್ ಅಲಿ ಖಾನ್.&lt;/p&gt;&lt;img&gt;ರಾಂಪುರದ ನವಾಬ ಹಮೀದ್ ಅಲಿ ಖಾನ್, ಅರಮನೆಯನ್ನೇ ಮೀರಿಸುವಂತಹ ರೈಲೊಂದನ್ನು ತಯಾರಿಸಿದ್ದರು. 1925ರಲ್ಲಿ 'ಬರೋಡಾ ಸ್ಟೇಟ್ ರೈಲ್ ಬಿಲ್ಡರ್ಸ್' ಈ ಐಷಾರಾಮಿ ರೈಲನ್ನು ನಿರ್ಮಿಸಿತು. ಈ ರೈಲಿನಲ್ಲಿ ನಾಲ್ಕು ಬೋಗಿಗಳಿದ್ದವು. ಇದರಲ್ಲಿ ನವಾಬ ಮತ್ತು ಅವರ ಕುಟುಂಬ ಸದಸ್ಯರು ಪ್ರಯಾಣಿಸಲು ಬೇಕಾದ ಎಲ್ಲಾ ಸೌಕರ್ಯಗಳಿದ್ದವು. ಪರ್ಷಿಯನ್ ಕಾರ್ಪೆಟ್&zwnj;ಗಳು, ಸುಂದರವಾದ ಫರ್ನಿಚರ್&zwnj;ಗಳು, ಕಿಟಕಿಗಳಿಗೆ ದುಬಾರಿ ಕರ್ಟನ್&zwnj;ಗಳು ಮತ್ತು ಬೃಹತ್ ಗೊಂಚಲುಗಳು ಈ ರೈಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು. ರಾಜಮನೆತನಕ್ಕಾಗಿ ವಿಶೇಷ ಮಲಗುವ ಕೋಣೆ ಮತ್ತು ಅಡುಗೆಮನೆಯೂ ಇತ್ತು. ನವಾಬರ ಕುಟುಂಬ ಮಾತ್ರವಲ್ಲದೆ, ಅವರ ಸೇವೆಗಾಗಿ ಪ್ರತ್ಯೇಕ ಕೋಚ್&zwnj;ಗಳೂ ಇದ್ದವು. ಇದಕ್ಕಾಗಿಯೇ ರಾಂಪುರದ ನವಾಬರು 'ದಿ ಸಲೂನ್' ಟ್ರೈನ್ ಅನ್ನು 'ಚಲಿಸುವ ಅರಮನೆ' ಎಂದು ಕರೆಯುತ್ತಿದ್ದರು. ಹೀಗೆ, ಕೇವಲ ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಒಂದು ರೈಲ್ವೆ ನಿಲ್ದಾಣ ಮತ್ತು ಐಷಾರಾಮಿ ರೈಲನ್ನು ವ್ಯವಸ್ಥೆ ಮಾಡಿಕೊಂಡಿದ್ದ ವ್ಯಕ್ತಿ ನವಾಬ್ ಹಮೀದ್ ಅಲಿ ಖಾನ್.]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/life/the-indian-nawab-who-owned-a-private-railway-station-and-luxury-train-kvn-2tq7y7z"/>
        </item>
        <item>
            <title><![CDATA[Amruthadhaare: ವೀಕ್ಷಕರು ಕಾಯ್ತಿದ್ದ ಆ ದಿನ ಬಂದಾಯ್ತು; ಗೌತಮ್​-ಭೂಮಿ ಅಸಲಿ ಮಗಳು ಪತ್ತೆಯಾಯ್ತು]]></title>
            <link>https://kannada.asianetnews.com/gallery/tv-talk/amruthadhaare-serial-lakshmikant-came-to-know-that-minchu-is-real-daughter-suc-ca0prvt</link>
            <guid isPermaLink="true">https://kannada.asianetnews.com/gallery/tv-talk/amruthadhaare-serial-lakshmikant-came-to-know-that-minchu-is-real-daughter-suc-ca0prvt</guid>
            <pubDate>Wed, 20 May 2026 12:04:13 +0530</pubDate>
            <description><![CDATA[ಅಮೃತಧಾರೆ ಸೀರಿಯಲ್&zwnj;ನಲ್ಲಿ ರೋಚಕ ತಿರುವು ಸಿಕ್ಕಿದ್ದು, ಗೌತಮ್-ಭೂಮಿಕಾಳ ಮಗಳು ಮಿಂಚು ಎಂಬ ಸತ್ಯ ಮಚ್ಚೆಯ ಗುರುತಿನಿಂದ ಶಕುನಿಮಾಮಾಗೆ ತಿಳಿದಿದೆ. ಇದೇ ಸತ್ಯ ಜೈದೇವ್&zwnj;ಗೂ ಗೊತ್ತಾಗಿದ್ದು, ಗೌತಮ್&zwnj;ಗೆ ಇನ್ನೂ ವಿಷಯ ತಲುಪಿಲ್ಲ, ಇದು ಕಥೆಯಲ್ಲಿ ಹೊಸ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks219ev3ap09t4ayrjsamkcb,imgname-amruthadhaare-1779258669923.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಸೀರಿಯಲ್&zwnj;ನಲ್ಲಿ ರೋಚಕ ತಿರುವು ಸಿಕ್ಕಿದ್ದು, ಗೌತಮ್-ಭೂಮಿಕಾಳ ಮಗಳು ಮಿಂಚು ಎಂಬ ಸತ್ಯ ಮಚ್ಚೆಯ ಗುರುತಿನಿಂದ ಶಕುನಿಮಾಮಾಗೆ ತಿಳಿದಿದೆ. ಇದೇ ಸತ್ಯ ಜೈದೇವ್&zwnj;ಗೂ ಗೊತ್ತಾಗಿದ್ದು, ಗೌತಮ್&zwnj;ಗೆ ಇನ್ನೂ ವಿಷಯ ತಲುಪಿಲ್ಲ, ಇದು ಕಥೆಯಲ್ಲಿ ಹೊಸ ಕುತೂಹಲ ಮೂಡಿಸಿದೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare Serial) ರೋಚಕ ಟ್ವಿಸ್ಟ್​ ಸಿಕ್ಕಿದೆ. ಭೂಮಿಕಾ ಮತ್ತು ಗೌತಮ್​ ಮಗಳು ಯಾರು, ಮಿಂಚುನೇ ಅವರ ಮಗಳಾ ಅಥವಾ ಬೇರೆ ಯಾರಾದ್ರೂ ಇದ್ದಾರಾ ಎನ್ನುವ ಬಗ್ಗೆ ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಿಂದ ಇದ್ದರು.&lt;/p&gt;&lt;img&gt;&lt;p&gt;ಇದೀಗ ಅಖಿಲಾಂಡೇಶ್ವರಿ ಗೌತಮ್​ ಪುತ್ರಿಯನ್ನು ಕಂಡುಹಿಡಿದಿದ್ದಾಳೆ. ಈ ಬಗ್ಗೆ ಗೌತಮ್​ಗೆ ಹೇಳೋಣ ಎಂದ್ರೆ ಅವನು ಕಾಲ್​ ಪಿಕ್​ ಮಾಡಲಿಲ್ಲ ಎನ್ನೋ ಕಾರಣಕ್ಕೆ ಶಕುನಿಮಾಮಾಗೆ ಹೇಳಿದ್ದಾಳೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ ಜೈದೇವ್​ಗೂ ಈ ವಿಷಯ ಗೊತ್ತಾಗಿಬಿಟ್ಟಿದೆ. ಭೂಮಿಕಾ ಮಗಳು ಎಲ್ಲಿದ್ದಾಳೆ ಎನ್ನುವ ಸತ್ಯದ ಅರಿವಾಗಿದ್ದು, ಅವಳ ವಿಳಾಸ ಸಿಕ್ಕಿದೆ.&lt;/p&gt;&lt;img&gt;&lt;p&gt;ಸದ್ಯ ಶಕುನಿಮಾಮಾ ಕಲೆಕ್ಟ್​ ಮಾಡಿರುವ ಮಾಹಿತಿಯ ಪ್ರಕಾರ, ಮಿಂಚುನೇ ಅವರ ಪುತ್ರಿ. ಕೈಮೇಲೆ ತ್ರಿಶೂಲ ಆಕೃತಿಯ ಮಚ್ಚೆ ಇರುವ ಡಿಟೇಲ್ಸ್​ ಎಲ್ಲಾ ಪಡೆದುಕೊಂಡಿರುವ ಲಕ್ಷ್ಮೀಕಾಂತನಿಗೆ ಮಿಂಚುನೇ ಅಸಲಿ ಪುತ್ರಿ ಎನ್ನುವುದು ತಿಳಿದಿದೆ.&lt;/p&gt;&lt;img&gt;&lt;p&gt;ಅತ್ತ ಜೈದೇವ ಮಗುವಿನ ಹುಡುಕಾಟದಲ್ಲಿ ಇದ್ದಾನೆ. ಇತ್ತ ಶಕುನಿಮಾಮಾ ವಿಷಯವನ್ನು ಗೌತಮ್​ಗೆ ತಿಳಿಸಿಲ್ಲ. ಸದ್ಯದ ಪ್ರಕಾರ, ಮಚ್ಚೆ ಆಧಾರ ಹಾಗೂ ಮಿಂಚು ಸಿಕ್ಕಿರುವ ರೀತಿಯೆಲ್ಲಾ ನೋಡಿದ ಮೇಲೆ ಲಕ್ಷ್ಮೀಕಾಂತಗೆ ಮಿಂಚುನೇ ಮಗಳು ಎನ್ನುವ ಸತ್ಯ ತಿಳಿಯುವ ಮೂಲಕ, ವೀಕ್ಷಕರ ಬಹು ದಿನಗಳ ಆಸೆ ನೆರವೇರಿದೆ. ಆದರೆ ಮುಂದೇನು?&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-serial-lakshmikant-came-to-know-that-minchu-is-real-daughter-suc-ca0prvt"/>
        </item>
        <item>
            <title><![CDATA[ವಡೋದರಾ-ದಿಲ್ಲಿ ಇಂಡಿಗೋದಲ್ಲಿ ಏಕಾಏಕಿ ವಿದ್ಯುತ್‌ ವ್ಯತ್ಯಯ, 25 ನಿಮಿಷ ಪರದಾಡಿದ ಪ್ರಯಾಣಿಕರು]]></title>
            <link>https://kannada.asianetnews.com/india-news/indigo-flight-power-outage-passengers-stranded-in-dark-without-ac-at-vadodara-gdp/articleshow-cz4olqw</link>
            <guid isPermaLink="true">https://kannada.asianetnews.com/india-news/indigo-flight-power-outage-passengers-stranded-in-dark-without-ac-at-vadodara-gdp/articleshow-cz4olqw</guid>
            <pubDate>Wed, 20 May 2026 12:08:27 +0530</pubDate>
            <description><![CDATA[ವಡೋದರಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷದಿಂದ ವಿದ್ಯುತ್ ವ್ಯತ್ಯಯ ಉಂಟಾಯಿತು. ಇದರಿಂದಾಗಿ ಸುಮಾರು ಅರ್ಧ ಗಂಟೆಗಳ ಕಾಲ ಎಸಿ ಮತ್ತು ಲೈಟ್&zwnj;ಗಳಿಲ್ಲದೆ ಪ್ರಯಾಣಿಕರು ಕತ್ತಲೆ ಹಾಗೂ ಸೆಕೆಯಲ್ಲಿ ಪರದಾಡಿದರು. ಈ ಘಟನೆಯಿಂದ ವಿಮಾನ ಹಾರಾಟವು ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01khdb8gz2r7sv5ez1g3ztm4ha,imgname-image-3fc11551-7ed4-4a16-999a-6e31ec7e4d62-1771048289250.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ:&lt;/strong&gt; ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಏಕಾಏಕಿ ಸಂಭವಿಸಿದ ತಾಂತ್ರಿಕ ದೋಷದಿಂದಾಗಿ, ಪ್ರಯಾಣಿಕರು ವಿಮಾನದೊಳಗೆ ಸುಮಾರು ಅರ್ಧ ಗಂಟೆಯ ಕಾಲ ತೀವ್ರ ಸೆಕೆ ಹಾಗೂ ಕತ್ತಲಲ್ಲಿ ಪರದಾಡಿದ ಘಟನೆ ನಡೆದಿದೆ. ಇಂಡಿಗೋ ಸಂಸ್ಥೆಯ 6E657 ವಿಮಾನದಲ್ಲಿ ಈ ಆತಂಕಕಾರಿ ವಿದ್ಯುತ್ ವ್ಯತ್ಯಯ ಸಂಭವಿಸಿದ್ದು, ಸೀಲ್ ಮಾಡಲಾದ ಕ್ಯಾಬಿನ್ ಒಳಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಇದು ಪ್ರಯಾಣಿಕರಲ್ಲಿ ಭೀತಿ ಮತ್ತು ಆಕ್ರೋಶಕ್ಕೆ ಕಾರಣವಾಯಿತು.&lt;/p&gt;&lt;h2&gt;ಘಟನೆಗೆ ಅಸಲಿ ಕಾರಣವೇನು?&lt;/h2&gt;&lt;p&gt;ವಿಮಾನ ನಿಲ್ದಾಣದ ಅಧಿಕೃತ ಮೂಲಗಳ ಪ್ರಕಾರ, ವಿಮಾನವು ಟರ್ಮಿನಲ್&zwnj;ನಲ್ಲಿ ನಿಂತಿದ್ದಾಗ ಅದರ ಮುಖ್ಯ ಇಂಜಿನ್&zwnj;ಗಳನ್ನು ಆಫ್ ಮಾಡಲಾಗಿತ್ತು. ಈ ಸಮಯದಲ್ಲಿ ವಿಮಾನದ ಒಳಾಂಗಣ ದೀಪಗಳು, ಹವಾನಿಯಂತ್ರಣ (AC) ಮತ್ತು ಕಾಕ್&zwnj;ಪಿಟ್ ಉಪಕರಣಗಳಿಗೆ ವಿದ್ಯುತ್ ಪೂರೈಸುವ ಪ್ರಮುಖ ಮೂಲವಾದ ಗ್ರೌಂಡ್ ಪವರ್ ಯೂನಿಟ್ (GPU - ನೆಲದ ವಿದ್ಯುತ್ ಘಟಕ) ತಾಂತ್ರಿಕ ದೋಷದಿಂದಾಗಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಪರಿಣಾಮವಾಗಿ, ಇಡೀ ವಿಮಾನವು ಸಂಪೂರ್ಣ ಕತ್ತಲೆಯಲ್ಲಿ ಮುಳುಗಿತು ಮತ್ತು ಎಸಿ ವ್ಯವಸ್ಥೆಯು ಸಂಪೂರ್ಣವಾಗಿ ಬಂದ್ ಆಯಿತು.&lt;/p&gt;&lt;h2&gt;ವಿಮಾನದೊಳಗೆ ಸೃಷ್ಟಿಯಾದ ನರಕಸದೃಶ ವಾತಾವರಣ:&lt;/h2&gt;&lt;p&gt;ರಾತ್ರಿ 8:50 ರಿಂದ 9:15 ರವರೆಗೆ ಅಂದರೆ ಸುಮಾರು 25 ನಿಮಿಷಗಳ ಕಾಲ ಈ ಬಿಕ್ಕಟ್ಟು ಮುಂದುವರಿದಿತ್ತು. ಬೇಸಿಗೆಯ ಬಿಸಿಲಿನ ಝಳದ ನಡುವೆ, ಎಸಿ ಕೂಡ ಇಲ್ಲದೆ ಸೀಲ್ ಮಾಡಿದ ಕ್ಯಾಬಿನ್ ಒಳಗೆ ಸಿಲುಕಿಕೊಂಡ ಪ್ರಯಾಣಿಕರು ಬೆವತು ಹೋದರು. ಗಾಳಿಯಿಲ್ಲದೆ ಹತಾಶರಾದ ಪ್ರಯಾಣಿಕರು ತಮಗೆ ಸಿಕ್ಕ ಫೈಲ್&zwnj;ಗಳು, ಪತ್ರಿಕೆಗಳು ಮತ್ತು ಕೈಯಲ್ಲಿದ್ದ ವಸ್ತುಗಳನ್ನೇ ಬೀಸಣಿಗೆಯನ್ನಾಗಿ ಮಾಡಿಕೊಂಡು ಬೀಸಿಕೊಳ್ಳಲು ಮುಂದಾದರು. ವಿಮಾನದೊಳಗಿನ ಈ ಭೀಕರ ದೃಶ್ಯವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್&zwnj;ನಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ ಹಾಗೂ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ತಂತ್ರಜ್ಞರ ತ್ವರಿತ ಕಾರ್ಯಾಚರಣೆ - ನಿಟ್ಟುಸಿರು ಬಿಟ್ಟ ಪ್ರಯಾಣಿಕರು:&lt;/h2&gt;&lt;p&gt;ವಿದ್ಯುತ್ ಕೈಕೊಟ್ಟ ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನಯಾನ ಸಂಸ್ಥೆಯ ತಂತ್ರಜ್ಞರ ತಂಡವು ಯುದ್ಧೋಪಾದಿಯಲ್ಲಿ ದುರಸ್ತಿ ಕಾರ್ಯವನ್ನು ಕೈಗೊಂಡಿತು. ಜಿಪಿಯು ದೋಷವನ್ನು ಯಶಸ್ವಿಯಾಗಿ ಪರಿಹರಿಸಿ, ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸಲಾಯಿತು. ವಿಮಾನದಲ್ಲಿ ದೀಪಗಳು ಮತ್ತು ಹವಾನಿಯಂತ್ರಣ ವ್ಯವಸ್ಥೆ ಮತ್ತೆ ಆನ್ ಆಗುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.&lt;/p&gt;&lt;h2&gt;ವಿಮಾನ ಹಾರಾಟ 1 ಗಂಟೆಗೂ ಹೆಚ್ಚು ಕಾಲ ವಿಳಂಬ:&lt;/h2&gt;&lt;p&gt;ಈ ತಾಂತ್ರಿಕ ದೋಷದಿಂದಾಗಿ ವಿಮಾನದ ನಿರ್ಗಮನದ ವೇಳಾಪಟ್ಟಿಯಲ್ಲಿ ಭಾರಿ ವ್ಯತ್ಯಯ ಉಂಟಾಯಿತು. ನಿಗದಿತ ವೇಳಾಪಟ್ಟಿಯ ಪ್ರಕಾರ ಈ ವಿಮಾನವು ರಾತ್ರಿ 8:40 ಕ್ಕೆ ವಡೋದರಾದಿಂದ ಹೊರಡಬೇಕಿತ್ತು. ಆದರೆ ಈ ಹಠಾತ್ ಜಿಪಿಯು ವೈಫಲ್ಯ ಮತ್ತು ದುರಸ್ತಿ ಕಾರ್ಯದಿಂದಾಗಿ, ವಿಮಾನವು ಸುಮಾರು 1 ಗಂಟೆ 20 ನಿಮಿಷ ತಡವಾಗಿ, ಅಂದರೆ ರಾತ್ರಿ 10:00 ಗಂಟೆಗೆ ದೆಹಲಿಯತ್ತ ಪ್ರಯಾಣ ಬೆಳೆಸಿತು.&lt;/p&gt;&lt;h2&gt;ಇಂಡಿಗೋ ಸಂಸ್ಥೆಯ ಸ್ಪಷ್ಟನೆ:&lt;/h2&gt;&lt;p&gt;ಘಟನೆಯ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿರುವ ಇಂಡಿಗೋ ಏರ್&zwnj;ಲೈನ್ಸ್, &quot;ತಾಂತ್ರಿಕ ದೋಷದ ಕಾರಣದಿಂದಾಗಿ ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ. ತೊಂದರೆ ಕಂಡುಬಂದ ತಕ್ಷಣವೇ ನಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ&quot; ಎಂದು ತಿಳಿಸುವ ಮೂಲಕ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/indigo-flight-power-outage-passengers-stranded-in-dark-without-ac-at-vadodara-gdp/articleshow-cz4olqw"/>
        </item>
        <item>
            <title><![CDATA[ಆಗ 90 ಲಕ್ಷದ ಮಾವು, ಈಗ ಚಿನ್ನದ ಬಟ್ಟೆ: ಲೇಡಿ ಗಾಗಾ ಡ್ರೆಸ್​ನಲ್ಲಿ ಮಿಂಚಿದ ಇಶಾ ಅಂಬಾನಿ ಲುಕ್​ಗೆ ಸುಸ್ತಾದ ಫ್ಯಾಷನ್​ ಲೋಕ]]></title>
            <link>https://kannada.asianetnews.com/gallery/fashion/isha-ambani-iconic-chanel-1996-couture-golden-pantsuit-with-gripoix-belt-wore-by-lady-gaga-in-2011-suc-27pomdq</link>
            <guid isPermaLink="true">https://kannada.asianetnews.com/gallery/fashion/isha-ambani-iconic-chanel-1996-couture-golden-pantsuit-with-gripoix-belt-wore-by-lady-gaga-in-2011-suc-27pomdq</guid>
            <pubDate>Tue, 19 May 2026 21:05:53 +0530</pubDate>
            <description><![CDATA[&lt;p&gt;ಉದ್ಯಮಿ ಇಶಾ ಅಂಬಾನಿ, ಕಾರ್ಲ್ ಲ್ಯಾಗರ್&zwnj;ಫೆಲ್ಡ್ ಅವರ 1996ರ ಚಾನೆಲ್ ಹಾಟ್ ಕೌಚರ್ ಸಂಗ್ರಹದ ಅಪರೂಪದ ಗೋಲ್ಡನ್ ಪ್ಯಾಂಟ್-ಸೂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 2011ರಲ್ಲಿ ಪಾಪ್ ತಾರೆ ಲೇಡಿ ಗಾಗಾ ಇದೇ ಉಡುಪನ್ನು ಧರಿಸಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks0dtbaepechvs9yksz5pgkq,imgname-isha-ambani-03-1779204697421.jpg" type="image/jpeg" height="390" width="690"/>
            <content:encoded><![CDATA[&lt;p&gt;ಉದ್ಯಮಿ ಇಶಾ ಅಂಬಾನಿ, ಕಾರ್ಲ್ ಲ್ಯಾಗರ್&zwnj;ಫೆಲ್ಡ್ ಅವರ 1996ರ ಚಾನೆಲ್ ಹಾಟ್ ಕೌಚರ್ ಸಂಗ್ರಹದ ಅಪರೂಪದ ಗೋಲ್ಡನ್ ಪ್ಯಾಂಟ್-ಸೂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 2011ರಲ್ಲಿ ಪಾಪ್ ತಾರೆ ಲೇಡಿ ಗಾಗಾ ಇದೇ ಉಡುಪನ್ನು ಧರಿಸಿದ್ದರು.&lt;/p&gt;&lt;img&gt;&lt;p&gt;ವಿಶ್ವದ ಅತಿದೊಡ್ಡ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಒಂದಾದ ಮೆಟ್ ಗಾಲಾ 2026 ರಲ್ಲಿ ಈ ಮೇಲೆ ಸೀರೆ ಧರಿಸಿ ಈಚೆಗೆ ಉದ್ಯಮಿ ಮಕೇಶ್​ ಅಂಬಾನಿ ಪತ್ರಿ ಇಶಾ ಅಂಬಾನಿ 90 ಲಕ್ಷ ರೂಪಾಯಿಯ ಮಾವಿನ ಹಣ್ಣು ಕೈಯಲ್ಲಿಟ್ಟು ಫ್ಯಾಷನ್​ ಜಗತ್ತನ್ನು ದಿಗ್ಭ್ರಮೆಗೊಳಿಸಿದ್ದರು. ಆದರೆ ಇದೀಗ, ಕಾರ್ಲ್ ಲ್ಯಾಗರ್&zwnj;ಫೆಲ್ಡ್ ಅವರ 1996 ರ ಚಾನೆಲ್ ಹಾಟ್ ಕೌಚರ್ ಸಂಗ್ರಹದ ಅಪರೂಪದ ಚಿನ್ನದ ಉಡುಪಿನಲ್ಲಿ ಕಾಣಿಸಿಕೊಂಡರು.&lt;/p&gt;&lt;img&gt;&lt;p&gt;ಪಾಪ್ ತಾರೆ ಲೇಡಿ ಗಾಗಾ ಈಗಾಗಲೇ ವರ್ಷಗಳ ಹಿಂದೆಯೇ ಅದನ್ನು ಧರಿಸುವ ಮೂಲಕ ಸುದ್ದಿ ಮಾಡಿದ್ದರು. ಈಗ, ಮುಖೇಶ್ ಅಂಬಾನಿ ಅವರ ಮಗಳ &quot;ಕಾಪಿ-ಅಂಡ್-ಪೇಸ್ಟ್&quot; ಶೈಲಿಯನ್ನು ನೋಡಿ ಫ್ಯಾಷನ್​ ದಿಗ್ಗಜರು ಸುಸ್ತಾದರು. ಸದಾ ಹೊಸ ಹೊಸ ಪ್ರಯೋಗ ಮಾಡುತ್ತಿರುವ ಇಶಾ ಅವರು ಇದೀಗ, ಫ್ಯಾಷನ್ ಇತಿಹಾಸದಿಂದ ಐಕಾನಿಕ್ ಲುಕ್ ಅನ್ನು ಮರುಸೃಷ್ಟಿಸಿದರು. ಫ್ಯಾಷನ್ ಪ್ರಿಯರ ಹೃದಯಗಳನ್ನು ಗೆದ್ದಿದ್ದಾರೆ.&lt;/p&gt;&lt;img&gt;&lt;p&gt;ಗೋಲ್ಡನ್ ಪ್ಯಾಂಟ್-ಸೂಟ್ ಧರಿಸಿ, ನಟಿ ವಿಂಟೇಜ್ ಗ್ಲಾಮರ್ ಅನ್ನು ಎಷ್ಟು ಸೊಗಸಾಗಿ ಪ್ರಸ್ತುತಪಡಿಸಿದರು ಎಂದರೆ ಅವರ ಲುಕ್ ಫ್ಯಾಷನ್ ಜಗತ್ತಿನಲ್ಲಿ ಆ ಕ್ಷಣದ ಚರ್ಚೆಯಾಗುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ತಮ್ಮ ಕ್ಲಾಸಿ ಲುಕ್&zwnj;ಗಳಿಗೆ ಹೆಸರುವಾಸಿಯಾದ 34 ವರ್ಷದ ಇಶಾ ಅವರ ಈ ಗೋಲ್ಡನ್ ಗರ್ಲ್ ಲುಕ್ ಸಂಪೂರ್ಣವಾಗಿ ಕ್ಲಾಸಿಯಾಗಿ ಕಾಣುತ್ತದೆ. ಇದನ್ನು ಪಾಪ್​ ತಾರೆ ಲೇಡಿ ಗಾಗಾ 2011 ರಲ್ಲಿ ಇದನ್ನು ಧರಿಸಿರುವುದು ಕಂಡುಬಂದಿದೆ.&lt;/p&gt;&lt;img&gt;&lt;p&gt;ಇಶಾ ಅವರ ಉಡುಪಿನ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ಭಾರವಾದ ಕ್ವಿಲ್ಟೆಡ್ ಕಸೂತಿ ಮತ್ತು ತೀಕ್ಷ್ಣವಾದ ರಚನೆ. ಎತ್ತರದ ಕಂಠರೇಖೆಯನ್ನು ಹೊಂದಿರುವ ಫಿಟ್ ಮಾಡಿದ ಜಾಕೆಟ್ ಅನ್ನು ಅವರ ಧರಿಸಿದ್ದದರು. ಇದು ಇಶಾಗೆ ರಾಜಮನೆತನದ ಲುಕ್​ ನೀಡಿತು. ಜಾಕೆಟ್&zwnj;ನಲ್ಲಿರುವ ಚಿನ್ನದ ಥ್ರೆಡ್&zwnj;ವರ್ಕ್ ಮತ್ತು ವರ್ಣರಂಜಿತ ಕಲ್ಲಿನ ಅಲಂಕಾರಗಳು ಐಷಾರಾಮಿ ಸ್ಪರ್ಶ ನೀಡಿದವು. ಅವರು ಮ್ಯಾಚಿಂಗ್ ಪ್ಯಾಂಟ್&zwnj; ಧರಿಸಿದ್ದರು. ಅದರಲ್ಲಿ ಚಿನ್ನದ ಟೆಕ್ಸ್ಚರ್&zwnj;ಗಳು ಮತ್ತು ಕಸೂತಿ ಮಾದರಿಗಳು ಸಹ ಇದ್ದವು, ಒಟ್ಟಾರೆಯಾಗಿ ಕ್ಲಾಸಿಯಾಗಿ ಕಾಣುವಂತೆ ಮಾಡಿತು.&lt;/p&gt;&lt;img&gt;&lt;p&gt;ಸಂಕೀರ್ಣವಾದ ಕಸೂತಿಯು ಪ್ರಸಿದ್ಧ ಫ್ರೆಂಚ್ ಕಸೂತಿ ಮನೆ ಮನೋನ್ ಲೆಸೇಜ್&zwnj;ನ ದಶಕಗಳಷ್ಟು ಹಳೆಯದಾದ ಕರಕುಶಲತೆಯನ್ನು ಪ್ರದರ್ಶಿಸಿತು. ಅಪರೂಪದ ಮೊಘಲ್ ಶೈಲಿಯ ಗ್ರಿಪೊಯಿಕ್ಸ್ ಬಟನ್&zwnj;ಗಳು ಸಹ ಕ್ಲಾಸಿಕ್ ವೈಬ್&zwnj;ಗಳನ್ನು ಹೆಚ್ಚಿಸಿದವು. ಇದು ಪ್ರಸಿದ್ಧ ಪಾಪ್ ಐಕಾನ್ ಲೇಡಿ ಗಾಗಾ ಅವರಿಂದ ಸ್ಫೂರ್ತಿ ಪಡೆದಿದೆ. ಅವರು 2011 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅದನ್ನು ಧರಿಸಿದ್ದರು, ಆಗ ಅದನ್ನು ಫ್ಯಾಷನ್ ಹೇಳಿಕೆಯನ್ನಾಗಿ ಮಾಡಿತು ಮತ್ತು ಈಗ ಅದು ಮತ್ತೆ ಟ್ರೆಂಡಿಂಗ್ ಆಗಿದೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/fashion/isha-ambani-iconic-chanel-1996-couture-golden-pantsuit-with-gripoix-belt-wore-by-lady-gaga-in-2011-suc-27pomdq"/>
        </item>
        <item>
            <title><![CDATA[ಫ್ರಿಡ್ಜ್‌ ಬಳಸುವಾಗ ಮರೆತೂ ಈ ತಪ್ಪು ಮಾಡ್ಬೇಡಿ, ಇಲ್ಲದಿದ್ರೆ ಕೂಲಿಂಗ್ ಕಡಿಮೆಯಾಗಿ ಕರೆಂಟ್ ಬಿಲ್ ಹೆಚ್ಚಾಗುತ್ತೆ]]></title>
            <link>https://kannada.asianetnews.com/gallery/kitchen/is-your-fridge-not-cooling-enough-change-these-daily-habits-right-away-2ttznge</link>
            <guid isPermaLink="true">https://kannada.asianetnews.com/gallery/kitchen/is-your-fridge-not-cooling-enough-change-these-daily-habits-right-away-2ttznge</guid>
            <pubDate>Wed, 20 May 2026 11:45:14 +0530</pubDate>
            <description><![CDATA[&lt;p&gt;Refrigerator Maintenance Tips: ಇಂದಿನ ದಿನಗಳಲ್ಲಿ ಫ್ರಿಡ್ಜ್ ಪ್ರತಿಯೊಬ್ಬರ ಅಡುಗೆಮನೆಯ ಅವಿಭಾಜ್ಯ ಅಂಗ. ಆದರೆ ಫ್ರಿಡ್ಜ್ ಮೊದಲಿನಂತೆ ಕೂಲಿಂಗ್ ನೀಡುತ್ತಿಲ್ಲವೇ? ವಿದ್ಯುತ್ ಬಿಲ್ ದಿನದಿಂದ ದಿನಕ್ಕೆ ಏರುತ್ತಿದೆಯೇ? ಇದಕ್ಕೆ ಕಾರಣ ಯಂತ್ರದ ದೋಷವಲ್ಲ, ಬದಲಾಗಿ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jp9m1jbvs9p5zs00z89ey9rd,imgname-fridge2.jpg" type="image/jpeg" height="390" width="690"/>
            <content:encoded><![CDATA[&lt;p&gt;Refrigerator Maintenance Tips: ಇಂದಿನ ದಿನಗಳಲ್ಲಿ ಫ್ರಿಡ್ಜ್ ಪ್ರತಿಯೊಬ್ಬರ ಅಡುಗೆಮನೆಯ ಅವಿಭಾಜ್ಯ ಅಂಗ. ಆದರೆ ಫ್ರಿಡ್ಜ್ ಮೊದಲಿನಂತೆ ಕೂಲಿಂಗ್ ನೀಡುತ್ತಿಲ್ಲವೇ? ವಿದ್ಯುತ್ ಬಿಲ್ ದಿನದಿಂದ ದಿನಕ್ಕೆ ಏರುತ್ತಿದೆಯೇ? ಇದಕ್ಕೆ ಕಾರಣ ಯಂತ್ರದ ದೋಷವಲ್ಲ, ಬದಲಾಗಿ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು.&amp;nbsp;&lt;/p&gt;&lt;img&gt;&lt;p&gt;ಇಂದಿನ ದಿನಗಳಲ್ಲಿ ಫ್ರಿಡ್ಜ್&zwnj; ಪ್ರತಿಯೊಂದು ಮನೆಯ ಅಗತ್ಯ ವಸ್ತುವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಹಾಲು, ಬ್ರೆಡ್&zwnj;ನಿಂದ ಹಿಡಿದು ಅಡುಗೆ ಅಥವಾ ತರಕಾರಿಗಳವರೆಗೆ ಯಾವುದೂ ಹಾಳಾಗದಂತೆ ತಡೆಯಲು ನಮಗೆ ಫ್ರಿಡ್ಜ್&zwnj; ಅಗತ್ಯವಿರುತ್ತದೆ. ಆದರೆ ಕೆಲವು ವರ್ಷಗಳ ನಂತರ, ಫ್ರಿಡ್ಜ್&zwnj; ಈಗ ಮೊದಲಿನಂತೆ ಕೂಲಿಂಗ್ ನೀಡುತ್ತಿಲ್ಲ ಎಂದು ಅನೇಕರು ದೂರುತ್ತಾರೆ. ಇದಕ್ಕೆ ಯಂತ್ರದ ದೋಷವೇ ಕಾರಣ ಎಂದು ಅವರು ಭಾವಿಸುತ್ತಾರೆ, ಆದರೆ ನಿಜವಾದ ಕಾರಣ ಅವರ ಅಭ್ಯಾಸಗಳೇ ಆಗಿರುತ್ತವೆ. ನಿಮ್ಮ ದೈನಂದಿನ ಅಭ್ಯಾಸಗಳನ್ನು ಸುಧಾರಿಸಿಕೊಳ್ಳುವ ಮೂಲಕ ಫ್ರಿಡ್ಜ್&zwnj; ಅನ್ನು ಮೊದಲಿನಂತೆಯೇ ಕೂಲ್ ಆಗಿ ಹೇಗೆ ಇಟ್ಟುಕೊಳ್ಳಬಹುದು ಎಂದು ಈ ಲೇಖನದಲ್ಲಿ ನೋಡೋಣ..&lt;/p&gt;&lt;img&gt;&lt;p&gt;ತಿಳಿಯದೆಯೇ ಅನೇಕರು ಮಾಡುವ ಕೆಲವು ತಪ್ಪುಗಳು ಕ್ರಮೇಣ ಫ್ರಿಡ್ಜ್&zwnj;ನ ಕೂಲಿಂಗ್ ಸಾಮರ್ಥ್ಯ ಹಾಳುಮಾಡುತ್ತವೆ. ಆರಂಭದಲ್ಲಿ ಈ ಸಮಸ್ಯೆ ಚಿಕ್ಕದಾಗಿ ಕಂಡರೂ, ನಂತರ ವಿದ್ಯುತ್ ಬಿಲ್ ಹೆಚ್ಚಾಗುವುದು, ಕೂಲಿಂಗ್ ಕಡಿಮೆಯಾಗುವುದು ಮತ್ತು ದುಬಾರಿ ರಿಪೇರಿ ವೆಚ್ಚದಂತಹ ಸಮಸ್ಯೆಗಳು ಎದುರಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಹೊಸ ಫ್ರಿಡ್ಜ್&zwnj; ಖರೀದಿಸುವ ಅನಿವಾರ್ಯತೆಯೂ ಬರಬಹುದು. ನಿಮ್ಮ ಫ್ರಿಡ್ಜ್&zwnj; ದೀರ್ಘಕಾಲದವರೆಗೆ ಸರಿಯಾಗಿ ಕೆಲಸ ಮಾಡಬೇಕೆಂದು ನೀವು ಬಯಸಿದರೆ, ಕೂಡಲೇ ಈ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ.&lt;/p&gt;&lt;img&gt;&lt;p&gt;ಅನೇಕರು ಅವಸರದಲ್ಲಿ ಬಿಸಿ ಬೇಳೆ ಸಾರು, ಕರಿ ಅಥವಾ ಆಹಾರವನ್ನು ನೇರವಾಗಿ ಫ್ರಿಡ್ಜ್&zwnj; ನಲ್ಲಿ ಇಡುತ್ತಾರೆ. ಹೀಗೆ ಮಾಡುವುದರಿಂದ ಫ್ರಿಡ್ಜ್&zwnj; ನ ಒಳಗಿನ ತಾಪಮಾನವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ ಮತ್ತು ಕಂಪ್ರೆಸರ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಎಂಬ ಅರಿವು ಅವರಿಗೆ ಇರುವುದಿಲ್ಲ. ಇದರಿಂದ ಫ್ರಿಡ್ಜ್&zwnj; ಹೆಚ್ಚು ಕೆಲಸ ಮಾಡಬೇಕಾಗುತ್ತದೆ, ಇದು ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಕೂಲಿಂಗ್ ಸಿಸ್ಟಮ್ ಅನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಯಾವಾಗಲೂ ಆಹಾರ ಅಥವಾ ಹಾಲನ್ನು ಮೊದಲು ಸಾಮಾನ್ಯ ತಾಪಮಾನಕ್ಕೆ ಬರಲು ಬಿಡಿ, ಆ ನಂತರವಷ್ಟೇ ಫ್ರಿಡ್ಜ್&zwnj; ನಲ್ಲಿ ಇಡಿ.&lt;/p&gt;&lt;img&gt;&lt;p&gt;ಜಾಗದ ಕೊರತೆಯಿಂದಾಗಿ ಅನೇಕರು ಫ್ರಿಡ್ಜ್&zwnj; ಅನ್ನು ಗೋಡೆಗೆ ತೀರಾ ಅಂಟಿಸಿ ಇಡುತ್ತಾರೆ. ಇದರಿಂದ ಫ್ರಿಡ್ಜ್&zwnj;ನ ಹಿಂಭಾಗದಲ್ಲಿರುವ ಕಂಡೆನ್ಸರ್ ಕಿರಣಗಳಿಗೆ ಗಾಳಿ ಸಿಗುವುದಿಲ್ಲ ಮತ್ತು ಯಂತ್ರದ ಉಷ್ಣತೆ ಹೊರಹೋಗಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ಫ್ರಿಡ್ಜ್&zwnj; ಸದಾ ಬಿಸಿಯಾಗಿರುತ್ತದೆ ಮತ್ತು ಅದರ ಕೂಲಿಂಗ್ ಸಾಮರ್ಥ್ಯ ಕ್ರಮೇಣ ಕುಸಿಯುತ್ತದೆ. ಆದ್ದರಿಂದ ಫ್ರಿಡ್ಜ್&zwnj; ಮತ್ತು ಗೋಡೆಯ ನಡುವೆ ಕನಿಷ್ಠ ಆರು ಇಂಚುಗಳಷ್ಟು ಅಂತರವಿರುವಂತೆ ನೋಡಿಕೊಳ್ಳಿ.&lt;/p&gt;&lt;img&gt;&lt;p&gt;ನೀವು ಪದೇ ಪದೇ ಫ್ರಿಡ್ಜ್&zwnj; ಬಾಗಿಲು ತೆರೆಯುತ್ತಿದ್ದರೆ ಅಥವಾ ದೀರ್ಘಕಾಲದವರೆಗೆ ಅದನ್ನು ತೆರೆದೇ ಬಿಟ್ಟರೆ ಅಥವಾ ಬಾಗಿಲು ಮುಚ್ಚಲು ಮರೆತರೆ, ಅದರ ಒಳಗಿನ ತಣ್ಣನೆಯ ಗಾಳಿ ಅಥವಾ ಗ್ಯಾಸ್ ಹೊರಹೋಗುತ್ತದೆ. ಇದು ಪದೇ ಪದೇ ಸಂಭವಿಸಿದಾಗ, ಫ್ರಿಡ್ಜ್&zwnj; ತಾಪಮಾನವನ್ನು ಮತ್ತೆ ಕಡಿಮೆ ಮಾಡಲು ಕಷ್ಟಪಡಬೇಕಾಗುತ್ತದೆ. ಇದು ಕೂಲಿಂಗ್ ಸಿಸ್ಟಮ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಿದ್ಯುತ್ ಬಿಲ್ ಕೂಡ ಹೆಚ್ಚಾಗಬಹುದು. ಆದ್ದರಿಂದ ಅಗತ್ಯವಿದ್ದಾಗ ಮಾತ್ರ ಫ್ರಿಡ್ಜ್&zwnj; ತೆರೆಯಿರಿ ಮತ್ತು ಬಳಸಿದ ತಕ್ಷಣ ಮುಚ್ಚಿ.&lt;/p&gt;&lt;img&gt;&lt;p&gt;ಅನೇಕರು ಫ್ರಿಡ್ಜ್&zwnj;ನಲ್ಲಿ ಅಗತ್ಯಕ್ಕಿಂತ ಹೆಚ್ಚು ಸಾಮಾನುಗಳನ್ನು ತುಂಬುತ್ತಾರೆ. ಇದರಿಂದ ಪದಾರ್ಥಗಳು ಹಾಳಾಗುವುದರಿಂದ ಪಾರಾಗಬಹುದು, ಆದರೆ ಫ್ರಿಡ್ಜ್&zwnj; ಹಾಳಾಗಲು ಶುರುವಾಗುತ್ತದೆ. ಏಕೆಂದರೆ ಅತಿಯಾಗಿ ತುಂಬಿದಾಗ ಒಳಗೆ ತಣ್ಣನೆಯ ಗಾಳಿ ಸರಿಯಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಕೆಲವು ಭಾಗಗಳು ಅತಿಯಾಗಿ ತಣ್ಣಗಿದ್ದರೆ, ಇನ್ನು ಕೆಲವು ಭಾಗಗಳು ಕಡಿಮೆ ತಣ್ಣಗಿರುತ್ತವೆ. ಸದಾ ಓವರ್&zwnj;ಲೋಡ್ ಆಗಿರುವುದರಿಂದ ಕಂಪ್ರೆಸರ್ ಮೇಲೂ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ಸಾಮಾನುಗಳನ್ನು ಇಡುವಾಗ ಗಾಳಿಯ ಸಂಚಾರಕ್ಕೆ ಜಾಗವಿರುವುದನ್ನು ಖಚಿತಪಡಿಸಿಕೊಳ್ಳಿ.&lt;/p&gt;&lt;img&gt;&lt;p&gt;ಫ್ರಿಡ್ಜ್&zwnj; ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಹಿಂಭಾಗದ ಕಾಯಿಲ್ಸ್ ಮತ್ತು ಒಳಗಿನ ಟ್ರೇಗಳ ಮೇಲೆ ಧೂಳು ಜಮೆಯಾಗುತ್ತದೆ. ಇದರಿಂದ ಯಂತ್ರದ ಕೂಲಿಂಗ್ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ಮೋಟಾರ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರೊಂದಿಗೆ ಕೆಟ್ಟ ವಾಸನೆ ಮತ್ತು ಬ್ಯಾಕ್ಟೀರಿಯಾಗಳು ಕೂಡ ಹೆಚ್ಚಾಗಬಹುದು. ಆದ್ದರಿಂದ ಕನಿಷ್ಠ ತಿಂಗಳಿಗೊಮ್ಮೆ ಫ್ರಿಡ್ಜ್&zwnj; ಅನ್ನು ಒಳಗಿನಿಂದ ಮತ್ತು ಹೊರಗಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸಿದ ನಂತರ ಫ್ರಿಡ್ಜ್&zwnj; ಹೊಳೆಯುವುದಷ್ಟೇ ಅಲ್ಲದೆ, ಕೆಲಸವೂ ಉತ್ತಮವಾಗುತ್ತದೆ ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು.&lt;/p&gt;&lt;img&gt;&lt;p&gt;ತುಂಬಾ ಕಡಿಮೆ ತಾಪಮಾನ ಅಥವಾ ಅತಿಯಾದ ಕೂಲಿಂಗ್ ಸೆಟ್ ಮಾಡುವುದು ಎರಡೂ ಹಾನಿಕಾರಕ. ಅತಿಯಾದ ತಂಪು ತಾಪಮಾನವು ವಿದ್ಯುತ್ ಬಳಕೆಯನ್ನು ಹೆಚ್ಚಿಸಿದರೆ, ಕಡಿಮೆ ಕೂಲಿಂಗ್&zwnj;ನಿಂದ ಆಹಾರ ಪದಾರ್ಥಗಳು ಬೇಗನೆ ಹಾಳಾಗಬಹುದು. ಆದ್ದರಿಂದ ಹವಾಮಾನಕ್ಕೆ ಅನುಗುಣವಾಗಿ ಮತ್ತು ಅಗತ್ಯಕ್ಕೆ ತಕ್ಕಂತೆ ಸಮತೋಲಿತ ತಾಪಮಾನದ ಸೆಟ್ಟಿಂಗ್ ಅನ್ನು ಬಳಸಿ.&lt;/p&gt;&lt;img&gt;&lt;p&gt;ಅನೇಕ ಪ್ರದೇಶಗಳಲ್ಲಿ ವಿದ್ಯುತ್ ವೋಲ್ಟೇಜ್ ಸ್ಥಿರವಾಗಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸ್ಟೆಬಿಲೈಸರ್ ಇಲ್ಲದೆ ಫ್ರಿಡ್ಜ್&zwnj; ನಡೆಸುವುದರಿಂದ ಕಂಪ್ರೆಸರ್ ಮತ್ತು ಎಲೆಕ್ಟ್ರಾನಿಕ್ ಭಾಗಗಳು ಹಾಳಾಗಬಹುದು. ಕ್ರಮೇಣ ಕೂಲಿಂಗ್ ದುರ್ಬಲಗೊಳ್ಳುತ್ತದೆ ಮತ್ತು ರಿಪೇರಿ ವೆಚ್ಚ ಹೆಚ್ಚಾಗಬಹುದು. ಆದ್ದರಿಂದ ನಿಮ್ಮ ಪ್ರದೇಶದಲ್ಲಿ ವೋಲ್ಟೇಜ್ ಏರಿಳಿತ ಹೆಚ್ಚಿದ್ದರೆ, ಫ್ರಿಡ್ಜ್&zwnj; ಜೊತೆಗೆ ಸ್ಟೆಬಿಲೈಸರ್ ಬಳಸಿ. ವೋಲ್ಟೇಜ್ ಸಮಸ್ಯೆ ಇಲ್ಲದಿದ್ದರೂ ಸಹ, ಎಲೆಕ್ಟ್ರಾನಿಕ್ ವಸ್ತುಗಳ ಸುರಕ್ಷತೆಗಾಗಿ ಸ್ಟೆಬಿಲೈಸರ್ ಬಳಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/is-your-fridge-not-cooling-enough-change-these-daily-habits-right-away-2ttznge"/>
        </item>
        <item>
            <title><![CDATA['ಸತ್ತ ವ್ಯಕ್ತಿಗೆ ಮತ್ತೆ ಜೀವ ಬಂತು'.. ಶವಾಗಾರದಲ್ಲಿ ಎದ್ದ ಕೂತ ಮೃತ ಯುವಕ; ಏನಿದು ಪವಾಡ?]]></title>
            <link>https://kannada.asianetnews.com/viral/young-man-who-reached-death-door-due-to-excessive-alcohol-consumption-and-came-back-to-life/articleshow-1n21dqb</link>
            <guid isPermaLink="true">https://kannada.asianetnews.com/viral/young-man-who-reached-death-door-due-to-excessive-alcohol-consumption-and-came-back-to-life/articleshow-1n21dqb</guid>
            <pubDate>Wed, 20 May 2026 11:41:23 +0530</pubDate>
            <description><![CDATA[&lt;p&gt;ಕಮಿಲ್&zwnj;ನ ದೇಹವನ್ನು ಆಸ್ಪತ್ರೆಯ ಶವಾಗಾರದ ಕೋಲ್ಡ್ ಸ್ಟೋರೇಜ್ (ಫ್ರೀಜರ್) ಒಳಗೆ ಇರಿಸಲಾಗಿತ್ತು. ಆದರೆ, ಅಂದು ರಾತ್ರಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ಫ್ರೀಜರ್&zwnj;ನ ಒಳಗಿನಿಂದ ವಿಚಿತ್ರ ಶಬ್ದಗಳು ಕೇಳಿಬರತೊಡಗಿದವು. ಯಾವುದೋ ಪ್ರೇತಾತ್ಮ ಇರಬಹುದೆಂದು ಮೊದಲು ಭಯಬಿದ್ದರು ಸಿಬ್ಬಂದಿ.. ಮುಂದೇನಾಯ್ತು ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jd1en3jgvhb362anntt17ygp,imgname-dead-man-alive-1731994488400.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶವಾಗಾರದಿಂದ ಮರಳಿ ಬಂದ ಯುವಕ: ಇದು ಪವಾಡವೋ ಅಥವಾ ಇನ್ನೇನೋ?&lt;/strong&gt;&lt;/p&gt;&lt;p&gt;ಇಂದಿನ ವೇಗದ ಜಗತ್ತಿನಲ್ಲಿ 'ಪಾರ್ಟಿ' ಮತ್ತು 'ಮೋಜು-ಮಸ್ತಿ' ಎಂಬುದು ಯುವಜನತೆಯ ಜೀವನಶೈಲಿಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ವಾರಾಂತ್ಯ ಬಂತೆಂದರೆ ಸಾಕು, ಗೆಳೆಯರೊಂದಿಗೆ ಕುಡಿದು ಕುಪ್ಪಳಿಸುವುದು ಅದೆಷ್ಟೋ ಜನಕ್ಕೆ ಒತ್ತಡ ನಿವಾರಣೆಯ ದಾರಿ. ಆದರೆ, ಈ ಮೋಜು ಮಿತಿಮೀರಿದರೆ ಏನಾಗಬಹುದು ಎಂಬುದಕ್ಕೆ ಪೋಲೆಂಡ್&zwnj;ನ ಕಮಿಯೆನ್ನಾ ಗೋರಾ ಪಟ್ಟಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇದು ಕೇವಲ ಒಂದು ಸುದ್ದಿಯಲ್ಲ, ಬದಲಿಗೆ ಮನುಷ್ಯನ ದೇಹದ ವಿಚಿತ್ರ ವರ್ತನೆ ಮತ್ತು ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸಿದ ವಿದ್ಯಮಾನ.&lt;/p&gt;&lt;p&gt;ಘಟನೆಯ ಹಿನ್ನೆಲೆ:&lt;/p&gt;&lt;p&gt;25 ವರ್ಷದ ಕಮಿಲ್ ಎಂಬ ಯುವಕ ತನ್ನ ಗೆಳೆಯರೊಂದಿಗೆ ಪಾರ್ಟಿಗೆ ತೆರಳಿದ್ದಾಗ ಅತಿಯಾದ ಮದ್ಯಸೇವನೆ ಮಾಡಿದ್ದ. ಈ 'ಅತಿಯಾದ ಹವ್ಯಾಸ' ಆತನನ್ನು ಸಾವಿನ ಮನೆಗೆ ತಲುಪಿಸಿತ್ತು. ಇದ್ದಕ್ಕಿದ್ದಂತೆ ಕುಸಿದು ಬಿದ್ದ ಕಮಿಲ್&zwnj;ನನ್ನು ಪರೀಕ್ಷಿಸಿದ ವೈದ್ಯರು, ಆತನಲ್ಲಿ ಉಸಿರಾಟ ಮತ್ತು ನಾಡಿಮಿಡಿತ ಇಲ್ಲದಿರುವುದನ್ನು ಕಂಡು 'ಹೃದಯಾಘಾತದಿಂದ ಸಾವು' ಎಂದು ಘೋಷಿಸಿದರು. ಜೀವನಶೈಲಿಯ ಅಶಿಸ್ತು ಹೇಗೆ ಕ್ಷಣಾರ್ಧದಲ್ಲಿ ಜೀವವನ್ನೇ ಬಲಿಪಡೆಯಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿತ್ತು.&lt;/p&gt;&lt;h2&gt;ಶವಾಗಾರದ ಆ ಭಯಾನಕ ಕ್ಷಣಗಳು:&lt;/h2&gt;&lt;p&gt;ಕಮಿಲ್&zwnj;ನ ದೇಹವನ್ನು ಆಸ್ಪತ್ರೆಯ ಶವಾಗಾರದ ಕೋಲ್ಡ್ ಸ್ಟೋರೇಜ್ (ಫ್ರೀಜರ್) ಒಳಗೆ ಇರಿಸಲಾಗಿತ್ತು. ಆದರೆ, ಅಂದು ರಾತ್ರಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ಫ್ರೀಜರ್&zwnj;ನ ಒಳಗಿನಿಂದ ವಿಚಿತ್ರ ಶಬ್ದಗಳು ಕೇಳಿಬರತೊಡಗಿದವು. ಯಾವುದೋ ಪ್ರೇತಾತ್ಮ ಇರಬಹುದೆಂದು ಮೊದಲು ಭಯಬಿದ್ದ ಸಿಬ್ಬಂದಿ, ಧೈರ್ಯ ಮಾಡಿ ಬಾಗಿಲು ತೆರೆದಾಗ ಕಂಡ ದೃಶ್ಯ ಅವರ ಕಣ್ಣುಗಳನ್ನೇ ನಂಬದಂತೆ ಮಾಡಿತು. ಸಾಕ್ಷಾತ್ 'ಸತ್ತಿದ್ದ' ವ್ಯಕ್ತಿ ಅಲ್ಲಿ ನಡುಗುತ್ತಾ ಕುಳಿತಿದ್ದ! ಮಂಜುಗಡ್ಡೆಯಂತಹ ಚಳಿಯಲ್ಲೂ ಆತನಿಗೆ ಪ್ರಾಣ ಬಂದಿತ್ತು.&lt;/p&gt;&lt;p&gt;ವೈದ್ಯಕೀಯ ವಿಜ್ಞಾನದ ವಿಶ್ಲೇಷಣೆ:&lt;/p&gt;&lt;p&gt;ಜೀವನಶೈಲಿಯ ತಜ್ಞರು ಮತ್ತು ವೈದ್ಯರ ಪ್ರಕಾರ, ಇಂತಹ ಘಟನೆಗಳು ಅತ್ಯಂತ ಅಪರೂಪ. ಅತಿಯಾದ ಆಲ್ಕೋಹಾಲ್ ಸೇವನೆಯಿಂದ ದೇಹದ ಉಷ್ಣತೆ ತೀವ್ರವಾಗಿ ಕುಸಿಯಬಹುದು ಅಥವಾ ದೇಹದ ಎಲ್ಲಾ ಅಂಗಾಂಗಗಳ ಚಟುವಟಿಕೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಂತೆ ಭಾಸವಾಗಬಹುದು (Suspended Animation). ವೈದ್ಯಕೀಯ ತಪಾಸಣೆಯಲ್ಲೂ ನಾಡಿಮಿಡಿತ ಪತ್ತೆಯಾಗದಷ್ಟು ನಿಧಾನವಾಗಿಬಿಡುವ ಈ ಸ್ಥಿತಿಯನ್ನು 'ಸಾವಿನ ಸುಳ್ಳು ಸಂಕೇತ' ಎನ್ನಬಹುದು.&lt;/p&gt;&lt;h3&gt;ಆಘಾತಕಾರಿ ಅಂತ್ಯ:&lt;/h3&gt;&lt;p&gt;ಈ ಘಟನೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಆಶ್ಚರ್ಯ ತರುವ ವಿಚಾರವೆಂದರೆ ಕಮಿಲ್&zwnj;ನ ಮುಂದಿನ ನಡೆ. ಶವಾಗಾರದಿಂದ ಬಿಡುಗಡೆಯಾಗಿ, ಸಾವಿನ ದವಡೆಯಿಂದ ಮರಳಿ ಬಂದ ಮೇಲೆ ಆತ ಮನೆಗೆ ಹೋಗಿ ವಿಶ್ರಾಂತಿ ಪಡೆಯಲಿಲ್ಲ. ಬದಲಿಗೆ, ನೇರವಾಗಿ ಅದೇ ಪಬ್&zwnj;ಗೆ ತೆರಳಿ ಮತ್ತೆ ಕುಡಿಯಲು ಶುರು ಮಾಡಿದ ಎನ್ನಲಾಗಿದೆ! ಇದು ಇಂದಿನ ಪೀಳಿಗೆಯ ಹಠಮಾರಿ ಜೀವನಶೈಲಿ ಮತ್ತು ವ್ಯಸನದ ಭೀಕರತೆಯನ್ನು ಎತ್ತಿ ತೋರಿಸುತ್ತದೆ.&lt;/p&gt;&lt;p&gt;ಸಾರಾಂಶ:&lt;/p&gt;&lt;p&gt;ಆರೋಗ್ಯಕರ ಜೀವನಶೈಲಿಗೆ ಮಿತಿ ಎಂಬುದು ಬಹಳ ಮುಖ್ಯ. ಕಮಿಲ್&zwnj; ಅದೃಷ್ಟವಂತನಾಗಿದ್ದಕ್ಕೆ ಮರಳಿ ಬಂದ, ಆದರೆ ಪ್ರತಿಯೊಬ್ಬರೂ ಅಷ್ಟು ಅದೃಷ್ಟವಂತರಾಗಿರುವುದಿಲ್ಲ. ನಮ್ಮ ದೇಹ ನೀಡುವ ಸಣ್ಣ ಸಣ್ಣ ಎಚ್ಚರಿಕೆಗಳನ್ನು ನಿರ್ಲಕ್ಷಿಸುವುದು ಮತ್ತು ವ್ಯಸನಕ್ಕೆ ಬಲಿಯಾಗುವುದು ಜೀವನವನ್ನೇ ಶವಾಗಾರದ ಬಾಗಿಲಿಗೆ ತಲುಪಿಸಬಹುದು ಎಂಬುದು ಈ ಘಟನೆಯಿಂದ ನಾವು ಕಲಿಯಬೇಕಾದ ದೊಡ್ಡ ಪಾಠ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/viral/young-man-who-reached-death-door-due-to-excessive-alcohol-consumption-and-came-back-to-life/articleshow-1n21dqb"/>
        </item>
        <item>
            <title><![CDATA[ಕಡಿಮೆ ತೂಕದ ಚೈನ್‌ಗೆ ಇನ್ನಷ್ಟು ಅಂದ, ಟ್ರೈ ಮಾಡಿ 2g ಫ್ಲವರ್ ಪೆಂಡೆಂಟ್]]></title>
            <link>https://kannada.asianetnews.com/webstories/fashion/lightweight-2-gram-gold-flower-pendant-designs-for-chains-kvn-samne20</link>
            <guid isPermaLink="true">https://kannada.asianetnews.com/webstories/fashion/lightweight-2-gram-gold-flower-pendant-designs-for-chains-kvn-samne20</guid>
            <pubDate>Wed, 20 May 2026 11:21:23 +0530</pubDate>
            <description><![CDATA[&lt;p&gt;ಕೇವಲ 2 ರಿಂದ 3 ಗ್ರಾಂ ಚಿನ್ನದಲ್ಲಿ ಸುಂದರವಾದ ಹೂವಿನ ಡಿಸೈನ್ ಪೆಂಡೆಂಟ್&zwnj;ಗಳನ್ನು ಮಾಡಿಸಬಹುದು. ಕಟ್ ವರ್ಕ್, ನವರತ್ನ, ಸ್ಟೋನ್ ಹಾಗೂ ಡಬಲ್ ಲೇಯರ್ ಡಿಸೈನ್&zwnj;ನ ಈ ಪೆಂಡೆಂಟ್&zwnj;ಗಳು ದಿನನಿತ್ಯದ ಬಳಕೆಗೆ ರಾಯಲ್ ಹಾಗೂ ಸಿಂಪಲ್ ಲುಕ್ ಕೊಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks1s4wqcev540p5v5k221apw,imgname-2-gram-gold-flower-chain-pendent-1779250131692.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/lightweight-2-gram-gold-flower-pendant-designs-for-chains-kvn-samne20"/>
        </item>
        <item>
            <title><![CDATA[ರಿಯಾ ಸುಂದರಿಗೆ ಗಂಡು ಹುಡುಕಾಟ: ಜೇಬು-ಜಾಬು ಇಲ್ಲದಿದ್ರೂ ಪರವಾಗಿಲ್ಲ, ಮೋ-ಮೋ ರೀಲ್ಸ್ ಮಾಡೋ ಬ್ರೌನಿ ಹುಡಗ ಬೇಕು!]]></title>
            <link>https://kannada.asianetnews.com/gallery/relationship/influencer-search-for-reel-partner-plus-groom-turns-matrimonial-ad-viral-suh-x672mr9</link>
            <guid isPermaLink="true">https://kannada.asianetnews.com/gallery/relationship/influencer-search-for-reel-partner-plus-groom-turns-matrimonial-ad-viral-suh-x672mr9</guid>
            <pubDate>Tue, 19 May 2026 16:27:14 +0530</pubDate>
            <description><![CDATA[&lt;p&gt;ಕ್ಯಾಮೆರಾ ಮುಂದೆ ನಾಚಿಕೆ ಇಲ್ಲದ, ನನ್ನ ಜೊತೆ reels ಮಾಡೋ future husband ಬೇಕು!&rdquo; ಅನ್ನೋ ಯುವತಿಯ ವಿಚಿತ್ರ ಮ್ಯಾಟ್ರಿಮೋನಿ ಜಾಹೀರಾತು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzxg459p39nh6g6dt8m4t6g,imgname-reel-partner-1779187585193.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ಯಾಮೆರಾ ಮುಂದೆ ನಾಚಿಕೆ ಇಲ್ಲದ, ನನ್ನ ಜೊತೆ reels ಮಾಡೋ future husband ಬೇಕು!&rdquo; ಅನ್ನೋ ಯುವತಿಯ ವಿಚಿತ್ರ ಮ್ಯಾಟ್ರಿಮೋನಿ ಜಾಹೀರಾತು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್&lt;/p&gt;&lt;img&gt;&lt;p&gt;ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಮ್ಯಾಟ್ರಿಮೋನಿ ಜಾಹೀರಾತು ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಮದುವೆ ಜಾಹೀರಾತುಗಳಲ್ಲಿ ಉದ್ಯೋಗ, ಸಂಬಳ, ಕುಟುಂಬ ಹಿನ್ನೆಲೆ ಇತ್ಯಾದಿ ವಿಷಯಗಳನ್ನು ಕೇಳುತ್ತಾರೆ. ಆದರೆ ಇಲ್ಲಿ ಕಥೆಯೇ ಬೇರೆ!&lt;/p&gt;&lt;img&gt;&lt;p&gt;ರಿಯಾ ಎಂಬ ಯುವತಿ ತನ್ನ ಮದುವೆ ಜಾಹೀರಾತಿನಲ್ಲಿ &ldquo;ನನಗೆ ಗಂಡ ಮಾತ್ರ ಬೇಡ&hellip; Reel Partner ಕೂಡ ಬೇಕು&rdquo; ಎಂದು ಬರೆದು ನೆಟ್ಟಿಗರ ಗಮನ ಸೆಳೆದಿದ್ದಾಳೆ.&lt;/p&gt;&lt;p&gt;ಅವಳು ಹುಡುಕುತ್ತಿರುವ ಹುಡುಗ &ldquo;ಕ್ಯಾಮೆರಾ shy ಆಗಿರಬಾರದು&rdquo;, &ldquo;Relationship reels ಮಾಡೋಕೆ ready ಇರಬೇಕು&rdquo;, &ldquo;ಟ್ರೆಂಡಿಂಗ್ ಸಾಂಗ್&zwnj;ಗಳಿಗೆ reels ಮಾಡಬೇಕು&rdquo; ಎಂಬ ಶರತ್ತುಗಳನ್ನು ಹಾಕಿದ್ದಾಳೆ.&lt;/p&gt;&lt;img&gt;&lt;p&gt;ಇಷ್ಟೇ ಅಲ್ಲ, &ldquo;Brown boys preferred&rdquo;, &ldquo;MO-MO-MO trend ಗೊತ್ತಿರಬೇಕು&rdquo; ಅನ್ನೋ ಡೀಟೇಲ್ಸ್ ಸೇರಿಸಿದ್ದೇ ಪೋಸ್ಟ್&zwnj;ನ್ನು ಮತ್ತಷ್ಟು ವೈರಲ್ ಮಾಡಿದೆ.&lt;/p&gt;&lt;p&gt;ಈ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಹಲವರು &ldquo;ಇದು ಮದುವೆ ಜಾಹೀರಾತಾ ಅಥವಾ influencer hiringನಾ?&rdquo; ಎಂದು ಫನ್ನಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು &ldquo;ಇಂದಿನ generationಗೆ loveಗಿಂತ content ಮುಖ್ಯ&rdquo; ಎಂದು ಟ್ರೋಲ್ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಈ ವಿಚಿತ್ರ matrimonial ad ಈಗ ಇಂಟರ್ನೆಟ್&zwnj;ನಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರಿಗೆ ಸಾಕಷ್ಟು entertainment ಕೊಡುತ್ತಿದೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/influencer-search-for-reel-partner-plus-groom-turns-matrimonial-ad-viral-suh-x672mr9"/>
        </item>
        <item>
            <title><![CDATA[ಹಾಳಾದ ಎಲ್‌ಇಡಿ ಬಲ್ಬ್ ಎಸೆಯಬೇಡಿ, ನೀವು 5 ಮಿನಿ ಪ್ಲಾಂಟರ್ ಮಾಡಿ ನೋಡಿ!]]></title>
            <link>https://kannada.asianetnews.com/webstories/life/diy-craft-ideas-turn-old-led-bulbs-into-5-creative-mini-planters-all-need-to-know-kvn-e38ghma</link>
            <guid isPermaLink="true">https://kannada.asianetnews.com/webstories/life/diy-craft-ideas-turn-old-led-bulbs-into-5-creative-mini-planters-all-need-to-know-kvn-e38ghma</guid>
            <pubDate>Wed, 20 May 2026 10:40:05 +0530</pubDate>
            <description><![CDATA[ನಿಮ್ಮ ಮನೆಯಲ್ಲೂ ಹಾಳಾದ ಎಲ್&zwnj;ಇಡಿ ಬಲ್ಬ್&zwnj; ಇದೆಯಾ? ಹಾಗಿದ್ರೆ ಅದನ್ನು ಕಸಕ್ಕೆ ಎಸೆಯೋ ಬದಲು, ಸ್ವಲ್ಪ ಕ್ರಿಯೇಟಿವಿಟಿ ಬಳಸಿ ಅದ್ಭುತವಾದ ಮಿನಿ ಪ್ಲಾಂಟರ್&zwnj;ಗಳನ್ನಾಗಿ ಬದಲಿಸಬಹುದು. ಇಲ್ಲಿವೆ 5 DIY ಎಲ್&zwnj;ಇಡಿ ಬಲ್ಬ್ ಪ್ಲಾಂಟರ್ ಐಡಿಯಾಗಳು.]]></description>
            <media:content url="https://static.asianetnews.com/images/w-1280,h-720,format-jpg,imgid-01ks00g8dwmf9mbqwsrf89v569,imgname-led-bulb-diy-planter-1779190735292.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/life/diy-craft-ideas-turn-old-led-bulbs-into-5-creative-mini-planters-all-need-to-know-kvn-e38ghma"/>
        </item>
        <item>
            <title><![CDATA[ಕೇವಲ 30 ನಿಮಿಷದಲ್ಲಿ ನಡೆದ ಮದುವೆಗೆ 42 ವರ್ಷದ ಸಂಭ್ರಮ, ಆ ದಿನಗಳನ್ನು ಬಿಚ್ಚಿಟ್ಟ ಅನಿಲ್ ಕಪೂರ್]]></title>
            <link>https://kannada.asianetnews.com/cine-world/anil-kapoor-30-minute-marriage-with-sunita-no-honeymoon/articleshow-llbbpng</link>
            <guid isPermaLink="true">https://kannada.asianetnews.com/cine-world/anil-kapoor-30-minute-marriage-with-sunita-no-honeymoon/articleshow-llbbpng</guid>
            <pubDate>Wed, 20 May 2026 08:22:28 +0530</pubDate>
            <description><![CDATA[&lt;p&gt;ಬಾಲಿವುಡ್ ದಂತಕಥೆ ಅನಿಲ್ ಕಪೂರ್ ದಾಂಪತ್ಯ ಎಲ್ಲರಿಗೂ ಸ್ಪೂರ್ತಿ. 53 ವರ್ಷಗಳಿಂದ ಸುನೀತಾ ಜೊತೆಗಿರುವ ಅನಿಲ್ ಕಪೂರ್, 42ನೇ ಮದುವೆ ವಾರ್ಷಿಕೋತ್ಸವದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks1mnqvaefg3kx0cbmmjvx6t,imgname-anil-kapoor-1779245440874.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ಎವರ್ ಗ್ರೀನ್ ಆಕ್ಟರ್, ದಂತಕಥೆ ಅನಿಲ್ ಕಪೂರ್ ತಮ್ಮ 42 ನೇ ವೆಡ್ಡಿಂಗ್ ಆನಿವರ್ಸರಿ ಸಂಭ್ರಮದಲ್ಲಿದ್ದಾರೆ. ಅನಿಲ್ ಕಪೂರ್ ಮತ್ತು ಸುನೀತಾ ಕಪೂರ್ ಮದುವೆಯಾಗಿ ಮೂರು ದಶಕಗಳು ಕಳೆದಿವೆ. ಈ ಖುಷಿ ಸಮಯದಲ್ಲಿ ಅನಿಲ್ ಕಪೂರ್ ತಮ್ಮ ಮದುವೆಯ ಬಗ್ಗೆ ಇಂಟರೆಸ್ಟಿಂಗ್ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಅವರ ಮ್ಯಾರೇಜ್ ಕಥೆ ಸಿನಿಮಾ ಕಥೆಗಿಂತ ಭಿನ್ನವಾಗಿಲ್ಲ.&lt;/p&gt;&lt;h2&gt;30 ನಿಮಿಷದಲ್ಲಿ ನಡೆದಿತ್ತು ಅನಿಲ್ ಕಪೂರ್ ಮದುವೆ&lt;/h2&gt;&lt;p&gt;ಬಾಲಿವುಡ್ ಆಕ್ಟರ್ ಅನಿಲ್ ಕಪೂರ್ ತಮ್ಮ 42 ನೇ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೆಲವು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ, ಅನಿಲ್ ಮತ್ತು ಸುನೀತಾ ಮದುವೆಯಾಗ್ತಿರೋದನ್ನು ಕಾಣ್ಬಹುದು. ಉಳಿದ ಅಪರೂಪದ ಕೆಲ ಫೋಟೋಗಳನ್ನು ಅನಿಲ್ ಕಪೂರ್ ಪೋಸ್ಟ್ ಮಾಡಿದ್ದಾರೆ.&lt;/p&gt;&lt;p&gt;ಪೆದ್ದಿ&rsquo;ಗಾಗಿ ಭರ್ಜರಿ ಟ್ರಾನ್ಸ್&zwnj;ಫಾರ್ಮೇಷನ್: ಸಲ್ಮಾನ್, ಅಮೀರ್&zwnj; ಬಗ್ಗೆ ಯಾಕ್ ಹೀಗಂದ್ರು ರಾಮ್ ಚರಣ್!&lt;/p&gt;&lt;p&gt;ಅನಿಲ್ ಕಪೂರ್ ಹಾಗೂ ಸುನೀತಾ ಕಪೂರ್ ಲವ್ ಸ್ಟೋರಿ ಆಸಕ್ತಿಕರವಾಗಿದೆ. ಸುನೀತಾ, ಧ್ವನಿ ಕೇಳಿಯೇ ಅನಿಲ್ ಕಪೂರ್ ಲವ್ ನಲ್ಲಿ ಬಿದ್ದಿದ್ದರು. 11 ವರ್ಷಗಳ ಕಾಲ ಇಬ್ಬರೂ ಡೇಟ್ ಮಾಡಿದ್ರು. ಒಂದು ದಿನ ಸುನೀತಾ ಅವರಿಗೆ ಫೋನ್ ಮಾಡಿದ್ದ ಅನಿಲ್ ಕಪೂರ್, ನಾಳೆ ಮದುವೆ ಆಗೋಣ ಅಂದಿದ್ರು. ಸುನೀತಾ ಎರಡು ಮಾತನಾಡದೆ ಅದಕ್ಕೆ ಒಪ್ಪಿದ್ದರು. ಮರುದಿನ 30 ನಿಮಿಷದಲ್ಲಿ ಮದುವೆ ನಡೆದಿತ್ತು. ಹತ್ತು ಜನರು ಮದುವೆಯಲ್ಲಿ ಪಾಲ್ಗೊಂಡಿದ್ದರು.&lt;/p&gt;&lt;p&gt;ನಾವು 42 ವರ್ಷಗಳ ಹಿಂದೆ ಮದುವೆಯಾಗಿದ್ದೇವೆ, 53 ವರ್ಷಗಳಿಂದ ಒಟ್ಟಿಗಿದ್ದೇವೆ. ನಮ್ಮ ಮದುವೆ ತುಂಬಾ ಸರಳವಾಗಿತ್ತು. ಇದು ಸುಮಾರು 30 ನಿಮಿಷಗಳಲ್ಲಿ ನಡೆದುಹೋಯ್ತು. ಹನಿಮೂನ್ ಇಲ್ಲ, ಡ್ರಮ್ಸ್ ಇಲ್ಲ, ನಮ್ಮ ಪೋಷಕರು, ಕೆಲವು ಆಪ್ತರು ಮತ್ತು ನಾವಿಬ್ಬರು ಮಾತ್ರ ಅಂತ ಅನಿಲ್ ಕಪೂರ್ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮದುವೆ ಕಥೆ ಬರೆದಿದ್ದಾರೆ. ಆ 30 ನಿಮಿಷಗಳು 53 ವರ್ಷವಾಗುತ್ತವೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ, ಇದು ನಮ್ಮ ಜೀವನದಲ್ಲಿ ನಿಜವಾಗಿದೆ ಎಂದು ಅನಿಲ್ ಕಪೂರ್ ಬರೆದಿದ್ದಾರೆ.&lt;/p&gt;&lt;h3&gt;ಪತ್ನಿಯನ್ನು ಹೊಗಳಿದ ಅನಿಲ್ ಕಪೂರ್&lt;/h3&gt;&lt;p&gt;ಅನಿಲ್ ಕಪೂರ್ ಪತ್ನಿ ಮೇಲಿರುವ ಪ್ರೀತಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ನಾನು ಮತ್ತೊಮ್ಮೆ ಹೇಳುತ್ತೇನೆ, ನನ್ನ ಎಲ್ಲ ಕೆಲಸಕ್ಕೂ ನೀವೇ ಕಾರಣ. ನಿಮ್ಮ ಕಾರಣದಿಂದಾಗಿ, ನನ್ನ ಪ್ರತಿ ಕನಸು ಈಡೇರಿತು. ಸವಾಳುಗಳನ್ನು ಎದುರಿಸಲು, ಪ್ರತಿ ಸೆಟ್ ನಲ್ಲಿ ಶಾಂತವಾಗಿರಲು ಸಾಧ್ಯವಾಯ್ತು. ನೀವು ಎಲ್ಲವನ್ನೂ ಮೃದುವಾಗಿ, ಪ್ರೀತಿಯಿಂದ ನಿಭಾಯಿಸಿದ್ದೀರಿ. 53 ವರ್ಷಗಳಿಂದ ನೀವು ನನ್ನನ್ನು ಆಯ್ಕೆ ಮಾಡಿದ ಪ್ರತಿ ದಿನಕ್ಕೂ ಧನ್ಯವಾದಗಳು. ನಾನು ಒಂದೇ ಒಂದು ದಿನವನ್ನು ಎಂದಿಗೂ ಹಗುರವಾಗಿ ಪರಿಗಣಿಸಿಲ್ಲ. ನನ್ನ ಆತ್ಮೀಯ ಸ್ನೇಹಿತೆ, ನನ್ನ ಸಂಗಾತಿ, ನನ್ನ ಎಲ್ಲವೂ ಆದ ನಿಮಗೆ ವಾರ್ಷಿಕೋತ್ಸವದ ಶುಭಾಶಯಗಳು, ನನ್ನ ಪ್ರೀತಿ ಎಂದು ಅನಿಲ್ ಕಪೂರ್ ಬರೆದಿದ್ದಾರೆ.&lt;/p&gt;&lt;p&gt;'ಖತ್ರೋನ್ ಕೆ ಖಿಲಾಡಿ' ಶೋಗಾಗಿ ಬಿಕಿನಿ ವ್ಯಾಕ್ಸ್ ಮಾಡಿಸಿಕೊಂಡ ಓರಿ: ಅಷ್ಟಕ್ಕೂ ಯಾರೀತ?&lt;/p&gt;&lt;p&gt;ಅನಿಲ್ ಕಪೂರ್ ಮದುವೆ&lt;/p&gt;&lt;p&gt;ಅನಿಲ್ ಕಪೂರ್ ಮತ್ತು ಸುನೀತಾ ಮೇ 19, 1984 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅನಿಲ್ ಕಪೂರ್ ಸಿನಿಮಾದಲ್ಲಿ ಬದುಕು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾಗ ಸುನೀತಾ ಯಶಸ್ವಿ ಮಾಡೆಲ್ ಆಗಿದ್ದರು. ಮದುವೆಗಿಂತ ಮೊದಲು ಕೆಲ್ಸವಿಲ್ಲದೆ ಖಾಲಿಯಿದ್ದ ಅನಿಲ್ ಕಪೂರ್ ಮದುವೆ ಆಗ್ತಿದ್ದಂತೆ ಬ್ಯುಸಿ ಆದ್ರು. ಮದುವೆ ಮರುದಿನ ಕೆಲಸಕ್ಕೆ ಹೋದವರು ಮೂರು ದಿನ ಬಿಟ್ಟು ಮನೆಗೆ ಬಂದ್ರು. ಆದ್ರೆ ಆಗ ಸುನೀತಾ ವಿದೇಶಕ್ಕೆ ಒಬ್ಬರೇ ಹನಿಮೂನ್ ಹೋಗಿದ್ರು.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by anilskapoor (@anilskapoor)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/cine-world/anil-kapoor-30-minute-marriage-with-sunita-no-honeymoon/articleshow-llbbpng"/>
        </item>
        <item>
            <title><![CDATA[ಇಷ್ಟು ಸಖತ್‌ ಆಗಿ ಕ್ರಿಕೆಟ್‌ ಆಡ್ತಿದ್ರೂ, ಬೆಂಗಳೂರಿನಲ್ಲಿ ತನಗಿರೋ ಕಾಯಿಲೆ ಬಗ್ಗೆ ಹೇಳಿದ Virat Kohli!]]></title>
            <link>https://kannada.asianetnews.com/gallery/cricket-sports/cricket-virat-kohli-on-imposter-syndrome-in-bengaluru-w2innhg</link>
            <guid isPermaLink="true">https://kannada.asianetnews.com/gallery/cricket-sports/cricket-virat-kohli-on-imposter-syndrome-in-bengaluru-w2innhg</guid>
            <pubDate>Wed, 20 May 2026 09:30:09 +0530</pubDate>
            <description><![CDATA[&lt;p&gt;Cricketer Virat Kohli On Imposter Syndrome: ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ವಿರಾಟ್&zwnj; ಕೊಹ್ಲಿ ಅವರು ಇಂದು ಕೂಡ ಟಾಪ್&zwnj; ಲೆವೆಲ್&zwnj; ಪ್ರದರ್ಶನವನ್ನು ಕೊಡುತ್ತಾರೆ. ಈಗ ಅವರು ತಮಗೆ ಇರುವ ಕಾಯಿಲೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krhj2cjk4nafh14qsq3fs81d,imgname-20260510472l-1778705838675.jpg" type="image/jpeg" height="390" width="690"/>
            <content:encoded><![CDATA[&lt;p&gt;Cricketer Virat Kohli On Imposter Syndrome: ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ವಿರಾಟ್&zwnj; ಕೊಹ್ಲಿ ಅವರು ಇಂದು ಕೂಡ ಟಾಪ್&zwnj; ಲೆವೆಲ್&zwnj; ಪ್ರದರ್ಶನವನ್ನು ಕೊಡುತ್ತಾರೆ. ಈಗ ಅವರು ತಮಗೆ ಇರುವ ಕಾಯಿಲೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿ ನಡೆದ RCB ಇನೋವೇಶನ್&zwnj; ಲ್ಯಾಬ್&zwnj; ಇಂಡಿಯನ್&zwnj; ಸ್ಪೋರ್ಟ್ಸ್&zwnj; ಸಮಿತ್&zwnj; ಕಾರ್ಯಕ್ರಮದಲ್ಲಿ ವಿರಾಟ್&zwnj; ಕೊಹ್ಲಿ ಅವರು ತಮಗಿರುವ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. 20 ವರ್ಷಗಳಿಂದ ಕ್ರಿಕೆಟ್&zwnj; ಲೋಕದಲ್ಲಿ ಟಾಪ್&zwnj; ಲೆವೆಲ್ ಪ್ರದರ್ಶನ ಕೊಟ್ಟರೂ ಈ ಸಮಸ್ಯೆ ಕಾಡಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;&quot;ಕ್ರಿಕೆಟರ್&zwnj; ಆಗಿ ನೀವು ಪ್ರಜ್ಞಾವಂತರಾಗಿ ಅಥವಾ ಕೀಳರಿಮೆಯ ಮಧ್ಯದ ಒಂದು ಲೈನ್&zwnj;ನಲ್ಲಿ ಓಡಾಡುತ್ತೀರಿ. ನೀವು ಮಾಡಿದ ಕೆಲಸ ನಿಮಗೆ ಸಾಕಾಗೋದಿಲ್ಲ. ಇಂಪೋಸ್ಟರ್&zwnj; ಸಿಂಡ್ರಮ್&zwnj; ಯಾವಾಗಲೂ ಇದ್ದೇ ಇರುತ್ತದೆ&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;&quot;ಇಂದು ಕೂಡ, ನಾನು ನೆಟ್&zwnj;ಗೆ ಹೋದಾಗ ಹೊಸಬರು ಕ್ರಿಕೆಟ್&zwnj; ನೋಡುತ್ತಿರುತ್ತಾರೆ ಎಂದು ಯೋಚನೆ ಮಾಡುತ್ತೇನೆ. ನಾನು ಕೆಟ್ಟದಾಗಿ ಆಡಿದರೆ, ಇಪ್ಪತ್ತು ವರ್ಷಗಳಿಂದ ಆಟ ಆಡುತ್ತಿರುವ ಆಟಗಾರ ಇವರೇನಾ ಎಂದುಕೊಳ್ತಾರೆ ಎಂದು ನಾನು ಯೋಚನೆ ಮಾಡ್ತೀನಿ&quot; ಎಂದು ವಿರಾಟ್&zwnj; ಕೊಹ್ಲಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮಾಜಿ ಇಂಡಿಯಾ ಹೆಡ್&zwnj; ಕೋಚ್&zwnj; ರಾಹುಲ್&zwnj; ದ್ರಾವಿಡ್&zwnj;, ಬ್ಯಾಟಿಂಗ್&zwnj; ಕೋಚ್&zwnj; ವಿಕ್ರಮ್&zwnj; ರಾಥೋರ್&zwnj; ಅವರು ಮಾನಸಿಕವಾಗಿ ಗಟ್ಟಿಯಾಗಲು ತುಂಬ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಕ್ಯಾಪ್ಟನ್&zwnj; ಆಗಿ ಇಂಡಿಯಾ ಟೀಂ ನಡೆಸುವಾಗ ಮಾನಸಿಕವಾಗಿ ನಾನು ಕುಗ್ಗಿಹೋಗಿದ್ದೆ, ಅದರಲ್ಲಿಯೂ 2020-2022 ರಲ್ಲಿ ಕಷ್ಟ ಆಗಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;&quot;ಹೈಯೆಸ್ಟ್&zwnj; ಲೆವೆಲ್&zwnj;ನಲ್ಲಿ ರಾಹುಲ್&zwnj; ಅವರು ಕೂಡ ಇದನ್ನು ಅರ್ಥ ಮಾಡಿಕೊಂಡಿದ್ದರು. ನಾಲ್ಕು ವರ್ಷ ವಿಕ್ರಮ್&zwnj; ಕೂಡ ನಿಭಾಯಿಸಿದ್ದರು. ನಾನು ಮಾನಸಿಕವಾಗಿ ಹೇಗೆ ಆಗಿದ್ದೇನೆ ಎಂದು ಅವರು ಅರ್ಥ ಮಾಡಿಕೊಂಡಿದ್ದರು, ಮಾನಸಿಕವಾಗಿ ನನ್ನನ್ನು ಆರೈಕೆ ಮಾಡಿದರು. ನನ್ನ ಕ್ರಿಕೆಟ್&zwnj;ನ್ನು ನಾನು ಎಂಜಾಯ್&zwnj; ಮಾಡೋ ಹಾಗೆ ಅವರು ಮಾಡಿದರು. ಕ್ಯಾಪ್ಟನ್&zwnj;ಗಳು ಯಾವಾಗಲೂ ಟೀಂ ಬಗ್ಗೆ ಯೋಚನೆ ಮಾಡುತ್ತಾರೆಯೇ ವಿನಃ ತಮ್ಮ ಬಗ್ಗೆ ಯೋಚಿಸೋದಿಲ್ಲ. ಕಳೆದ ಒಂಭತ್ತು ವರ್ಷಗಳಲ್ಲಿ ನೀನು ಹೇಗಿದ್ದೀಯಾ ಎಂದು ಯಾರೂ ಕೇಳಿಲ್ಲ. ಹೊಸಬರಿಗೂ ಕೂಡ ಕೆಲಸದ ಒತ್ತಡದ ಬಗ್ಗೆ ಅಷ್ಟು ಯೋಚನೆ ಮಾಡಿ, ಲಿಮಿಟ್&zwnj; ಸತ್ಯ ಅರ್ಥ ಮಾಡಿಕೊಳ್ಳಿ&quot; ಎಂದು ಅವರು ಹೇಳಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/cricket-virat-kohli-on-imposter-syndrome-in-bengaluru-w2innhg"/>
        </item>
        <item>
            <title><![CDATA[Bengaluru: ವಿಜಯಪುರದಿಂದ ಮೆಜೆಸ್ಟಿಕ್‌ಗೆ ಬಿಎಂಟಿಸಿ ವೇಗದೂತ ವಾಯುವಜ್ರ ಬಸ್ ಸಂಚಾರ ಆರಂಭ]]></title>
            <link>https://kannada.asianetnews.com/bengaluru-urban/bengaluru-bmtc-vegadjootha-bus-service-from-vijayapura-to-majestic-station-begins-mrq/articleshow-onamfq9</link>
            <guid isPermaLink="true">https://kannada.asianetnews.com/bengaluru-urban/bengaluru-bmtc-vegadjootha-bus-service-from-vijayapura-to-majestic-station-begins-mrq/articleshow-onamfq9</guid>
            <pubDate>Wed, 20 May 2026 08:59:00 +0530</pubDate>
            <description><![CDATA[ವಿಜಯಪುರದಿಂದ ಬೆಂಗಳೂರಿನ ಮೆಜೆಸ್ಟಿಕ್&zwnj;ಗೆ ಬಿಎಂಟಿಸಿ ವೇಗದೂತ ಬಸ್ ಸಂಚಾರ ಆರಂಭವಾಗಿದ್ದು, ಇದು ವಿದ್ಯಾರ್ಥಿಗಳು ಮತ್ತು ನೌಕರರು ಎದುರಿಸುತ್ತಿದ್ದ ದಟ್ಟಣೆಯ ಸಮಸ್ಯೆಗೆ ಪರಿಹಾರ ನೀಡಿದೆ. ಇದರೊಂದಿಗೆ, ನಾಗರಿಕರು ಈಗ ವಾಯುವಜ್ರ ಬಸ್ ಸೇವೆಗೂ ಒತ್ತಾಯಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks1phncw9hpx80hvck92c856,imgname-bmtc--bus-1779247404444.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ&lt;/strong&gt;: ಪಟ್ಟಣ ನಾಗರಿಕರ ಬೇಡಿಕೆ ಬಹುದಿನಗಳ ಬಳಿಕ ಪಟ್ಟಣದಿಂದ ದೇವನಹಳ್ಳಿ, ಯಲಹಂಕ ಮಾರ್ಗವಾಗಿ ಬೆಂಗಳೂರಿನ ಮೆಜೆಸ್ಟಿಕ್&zwnj;ಗೆ ಬಿಎಂಟಿಸಿ ವೇಗದೂತ ಬಸ್&zwnj;ಗಳ ಸಂಚಾರ ಪ್ರಾರಂಭಿಸಿದೆ.&lt;/p&gt;&lt;p&gt;ಪಟ್ಟಣದಿಂದ ಪ್ರತಿದಿನ ಬೆಳಗ್ಗೆ ೭ರಿಂದ ೧೦ರೊಳಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧೆಡೆಗೆ ಪ್ರಯಾಣಿಸುವ ಖಾಸಗಿ, ಸರ್ಕಾರಿ ನೌಕರರಿಂದ ಬಸ್ಸುಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಇದರಿಂದಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಬಸ್ ಹತ್ತಲು ಸಾಧ್ಯವಾಗದೆ ತೀವ್ರ ಪರದಾಡುವಂತಾಗಿತ್ತು. ಈ ಸಾರ್ವಜನಿಕ ಸಮಸ್ಯೆ ಕುರಿತು ಪ್ರಮುಖ ಪತ್ರಿಕೆಗಳಲ್ಲಿ ಸರಣಿ ವರದಿಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.&lt;/p&gt;&lt;h2&gt;&lt;strong&gt;ವಾಯುವಜ್ರ ಬಸ್&zwnj;ಗಳಿಗೂ ಹೆಚ್ಚಿದ ಬೇಡಿಕೆ&lt;/strong&gt;&lt;/h2&gt;&lt;p&gt;ಪ್ರಸ್ತುತ ಆರಂಭಿಸಿರುವ ಎಕ್ಸ್&zwnj;ಪ್ರೆಸ್ ಬಸ್ಸುಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಇದರೊಂದಿಗೆ, ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕಾರ್ಯಾಚರಣೆ ನಡೆಸುತ್ತಿರುವ ಮಾದರಿಯಲ್ಲೇ ಇಲ್ಲೂ ಸಹ ವಾಯುವಜ್ರ ಬಸ್ಸುಗಳನ್ನು ಬಿಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.&lt;/p&gt;&lt;p&gt;ಸದ್ಯ ಬೆಂಗಳೂರು ಮೆಜೆಸ್ಟಿಕ್&zwnj;ನಿಂದ ನಂದಿ ಕ್ರಾಸ್&zwnj;ವರೆಗೆ ಸಂಚರಿಸುವ ಬಿಎಂಟಿಸಿ ಬಸ್ಸುಗಳನ್ನು ಚಿಕ್ಕಬಳ್ಳಾಪುರ ರಸ್ತೆ ಮೂಲಕ ವಿಜಯಪುರಕ್ಕೆ ವಿಸ್ತರಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಹೀಗೆ ಮಾಡಿದರೆ ದೇವನಹಳ್ಳಿ ಮತ್ತು ವಿಜಯಪುರದಿಂದ ನಾಗಾರ್ಜುನ ಕಾಲೇಜು ಹಾಗೂ ಬಿಜಿಎಸ್ ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ವಿಜಯಪುರದಿಂದ ಮುದ್ದೇನಹಳ್ಳಿ, ನಾರಾಯಣಪುರ, ಬಿಜ್ಜವಾರ, ಹೊಲೆರಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಉತ್ತಮ ಸಾರಿಗೆ ಸಂಪರ್ಕ ಸಿಗುತ್ತದೆ.&lt;/p&gt;&lt;p&gt;ಹೊಸ ಬಸ್ಸುಗಳ ಚಾಲನೆ ಸಂದರ್ಭದಲ್ಲಿ ಬಿಎಂಟಿಸಿ ಸಂಚಾರ ನಿಯಂತ್ರಕರಾದ ರಂಗಪ್ಪ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>life</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-bmtc-vegadjootha-bus-service-from-vijayapura-to-majestic-station-begins-mrq/articleshow-onamfq9"/>
        </item>
        <item>
            <title><![CDATA[Vastu Tips: ಮನೆಯಲ್ಲಿ ಹಣದ ಮಳೆ ಆಗಬೇಕಂದ್ರೆ ಈ 5 ವಾಸ್ತು ಟಿಪ್ಸ್ ಪಾಲಿಸಿ]]></title>
            <link>https://kannada.asianetnews.com/webstories/astrology/simple-vastu-tips-for-wealth-and-prosperity-at-home-all-you-need-to-know-kvn-pfsg1zb</link>
            <guid isPermaLink="true">https://kannada.asianetnews.com/webstories/astrology/simple-vastu-tips-for-wealth-and-prosperity-at-home-all-you-need-to-know-kvn-pfsg1zb</guid>
            <pubDate>Wed, 20 May 2026 08:49:05 +0530</pubDate>
            <description><![CDATA[ಮನೆಯಲ್ಲಿ ಹಣ ನಿಲ್ಲುತ್ತಿಲ್ವಾ? ಪದೇ ಪದೇ ಆರ್ಥಿಕ ಸಂಕಷ್ಟ ಎದುರಾಗುತ್ತಿದೆಯೇ? ಹಾಗಿದ್ರೆ ವಾಸ್ತು ಶಾಸ್ತ್ರದ ಈ ಸರಳ ಉಪಾಯಗಳು ನಿಮಗೆ ಸಹಾಯ ಮಾಡಬಲ್ಲವು. ತಿಜೋರಿ, ಮುಖ್ಯ ದ್ವಾರ, ಉತ್ತರ ದಿಕ್ಕು ಮತ್ತು ಸಕಾರಾತ್ಮಕ ಶಕ್ತಿಗೆ ಸಂಬಂಧಿಸಿದ 5 ಪರಿಣಾಮಕಾರಿ ವಾಸ್ತು ಟಿಪ್ಸ್&zwnj;ಗಳ ಬಗ್ಗೆ ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01ks04bemctz9sbhvhqysa70td,imgname-money-saving-vastu-tips-1779194772108.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/astrology/simple-vastu-tips-for-wealth-and-prosperity-at-home-all-you-need-to-know-kvn-pfsg1zb"/>
        </item>
        <item>
            <title><![CDATA[ಮಳೆಗಾಲದಲ್ಲಿ ನಿಮ್ಮ ಕೈತೋಟ ಹಾಳಾಗಬಾರದು ಅಂದ್ರೆ ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ]]></title>
            <link>https://kannada.asianetnews.com/webstories/life/monsoon-kitchen-gardening-tips-for-healthy-plants-all-need-to-know-kvn-vouyitp</link>
            <guid isPermaLink="true">https://kannada.asianetnews.com/webstories/life/monsoon-kitchen-gardening-tips-for-healthy-plants-all-need-to-know-kvn-vouyitp</guid>
            <pubDate>Wed, 20 May 2026 08:31:41 +0530</pubDate>
            <description><![CDATA[&lt;p&gt;ಮಳೆಗಾಲ ಶುರುವಾಗಿದೆ. ನಿಮ್ಮ ಮನೆಯ ಕೈತೋಟದಲ್ಲಿ ತರಕಾರಿ ಬೆಳೆಯುತ್ತಿದ್ದರೆ, ಕೆಲವು ವಿಷಯಗಳ ಬಗ್ಗೆ ನೀವು ಹೆಚ್ಚು ಗಮನ ಕೊಡಬೇಕು. ಆ ಟಿಪ್ಸ್&zwnj;ಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j5t0dny8pjtdnvqkrrsd3zw9,imgname-new-project--30-.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/life/monsoon-kitchen-gardening-tips-for-healthy-plants-all-need-to-know-kvn-vouyitp"/>
        </item>
        <item>
            <title><![CDATA[ಅನ್ನ ಉಳಿತಾ? ಒಂದು ಪೈಸೆ ಖರ್ಚು ಮಾಡದೆ ಗರಿಗರಿಯಾದ ಸಂಡಿಗೆ ಮಾಡಿ.. ಅಜ್ಜಿ ಕಾಲದ ಉಳಿತಾಯದ ಉಪಾಯವಿದು]]></title>
            <link>https://kannada.asianetnews.com/food/dont-waste-leftover-rice-make-crispy-rice-sandige-at-zero-cost/articleshow-8g2pnb5</link>
            <guid isPermaLink="true">https://kannada.asianetnews.com/food/dont-waste-leftover-rice-make-crispy-rice-sandige-at-zero-cost/articleshow-8g2pnb5</guid>
            <pubDate>Wed, 20 May 2026 08:17:49 +0530</pubDate>
            <description><![CDATA[&lt;p&gt;&lt;strong&gt;How to use leftover rice: &lt;/strong&gt;ರಾತ್ರಿ ಉಳಿದ ಅನ್ನ ಎಸೆಯುವ ಬದಲು ಅಥವಾ ದಿನವೂ ಚಿತ್ರಾನ್ನ ಮಾಡುವ ಬದಲು ಮನೆಯಲ್ಲೇ ಸಂಡಿಗೆಯನ್ನೇಕೆ ಮಾಡಬಾರದು? ಹಳೆಯ ಕಾಲದ ಈ ಅದ್ಭುತ ಕಿಚನ್ ಟ್ರಿಕ್ ಬಳಸಿ, ಒಂದು ರೂಪಾಯಿ ಖರ್ಚಿಲ್ಲದೆ ವರ್ಷವಿಡೀ ಬಾಳಿಕೆ ಬರುವ ರುಚಿಕರವಾದ ಅನ್ನದ ಸಂಡಿಗೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks1mes79yr6zv1bwkv2ct2ff,imgname-thumbnail---2026-05-20t080625.290-1779245212905.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನ&lt;/strong&gt;ಮ್ಮ ಮನೆಗಳಲ್ಲಿ ರಾತ್ರಿ ಮಾಡಿದ ಅನ್ನ ಸ್ವಲ್ಪ ಉಳಿಯುವುದು ಸಾಮಾನ್ಯ. ಆ ಅನ್ನವನ್ನು ಅನೇಕರು ಎಸೆಯುತ್ತಾರೆ ಅಥವಾ ಮರುದಿನ ಬೆಳಗ್ಗೆ ಚಿತ್ರಾನ್ನ, ಎಗ್ ರೈಸ್&zwnj;ನಂತಹವುಗಳನ್ನು ಮಾಡುತ್ತಾರೆ. ಆದರೆ, ಇವೆಲ್ಲಕ್ಕಿಂತ ಭಿನ್ನವಾಗಿ ಉಳಿದ ಅನ್ನದಿಂದ ದೀರ್ಘಕಾಲ ಬಾಳಿಕೆ ಬರುವಂತೆ ಅತ್ಯಂತ ರುಚಿಕರವಾದ, ಕ್ರಿಸ್ಪಿಯಾಗಿರುವ ಅನ್ನದ ಸಂಡಿಗೆ ತಯಾರಿಸಬಹುದು. ಇದು ನಮ್ಮ ಅಜ್ಜಿ ಕಾಲದ ಉಳಿತಾಯದ ಉಪಾಯ. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಸ್ನಾಕ್ಸ್ ಕೊಳ್ಳುವ ಬದಲು, ಮನೆಯಲ್ಲೇ ರೂಪಾಯಿ ಖರ್ಚಿಲ್ಲದೆ ಇವುಗಳನ್ನು ಸಿದ್ಧಪಡಿಸಬಹುದು.&lt;/p&gt;&lt;p&gt;ರಾತ್ರಿ ಹೊತ್ತು ಅನ್ನ ಉಳಿದರೆ ಎಸೆಯದೆ ಅಥವಾ ರೊಟೀನ್ ಆಗಿ ಚಿತ್ರಾನ್ನ ಮಾಡದೆ, ಅತ್ಯಂತ ರುಚಿಕರವಾದ ಅನ್ನದ ಸಂಡಿಗೆ ತಯಾರಿಸಬಹುದು. ಇದು ಒಂದು ರೂಪಾಯಿ ಖರ್ಚಿಲ್ಲದೆ ಮನೆಯಲ್ಲೇ ಸ್ನಾಕ್ಸ್ ತಯಾರಿಸುವ ಅದ್ಭುತ ಉಪಾಯ. ಬೇಳೆ ಸಾರು, ಸಾಂಬಾರ್ ಅನ್ನದ ಜೊತೆ ನೆಂಚಿಕೊಳ್ಳಲು ಅಥವಾ ಸಾಯಂಕಾಲದ ಸ್ನಾಕ್ ಆಗಿ ಎಣ್ಣೆಯಲ್ಲಿ ಕರಿದು ತಿನ್ನಲು ಈ ಸಂಡಿಗೆಗಳು ಅದ್ಭುತವಾಗಿರುತ್ತವೆ. ತಯಾರಿಸುವ ವಿಧಾನ ಮತ್ತು ಬೇಕಾಗುವ ಪದಾರ್ಥಗಳ ಪೂರ್ಣ ವಿವರವನ್ನು ತಿಳಿಯೋಣ.&lt;/p&gt;&lt;h2&gt;&lt;strong&gt;ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;ಉಳಿದ ಅನ್ನ-1 ಕಪ್ನೀರು-1 ಕಪ್ಟೊಮೆಟೊ ಪೇಸ್ಟ್-ಅರ್ಧ ಕಪ್ಜೀರಿಗೆ-ಕಾಲು ಟೀ ಚಮಚಎಳ್ಳು-ಅರ್ಧ ಟೀ ಚಮಚಕಾರದ ಪುಡಿ-ಅರ್ಧ ಟೀ ಚಮಚಅರಿಶಿನ ಸ್ವಲ್ಪಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು.&lt;/p&gt;&lt;h3&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h3&gt;&lt;p&gt;ಮೊದಲು ಸ್ಟವ್ ಮೇಲೆ ಒಂದು ಪಾತ್ರೆ ಇಟ್ಟು ಒಂದು ಕಪ್ ನೀರು ಹಾಕಿ ಕುದಿಸಬೇಕು. ನೀರು ಕುದಿಯಲು ಆರಂಭಿಸಿದಾಗ ಅದರಲ್ಲಿ ಒಂದು ಕಪ್ ಉಳಿದ ಅನ್ನ ಹಾಕಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಬೇಕು. ಅನ್ನ ಮೆತ್ತಗಾದ ನಂತರ ಅದಕ್ಕೆ ಅರ್ಧ ಕಪ್ ಟೊಮೆಟೊ ಪೇಸ್ಟ್ ಹಾಕಿ ಚೆನ್ನಾಗಿ ಬೆರೆಸಬೇಕು.&lt;/p&gt;&lt;p&gt;ಆ ನಂತರ ಅದರಲ್ಲಿಯೇ ಸ್ವಲ್ಪ ಅರಿಶಿನ, ಜೀರಿಗೆ, ಎಳ್ಳು, ಖಾರದ ಪುಡಿ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸುತ್ತಾ ಇನ್ನೆರಡು ನಿಮಿಷಗಳ ಕಾಲ ಬೇಯಿಸಬೇಕು. ಈ ಅನ್ನದ ಮಿಶ್ರಣವು ಚೆನ್ನಾಗಿ ಗಟ್ಟಿಯಾದ ಮೇಲೆ ಸ್ಟವ್ ಆಫ್ ಮಾಡಿ ಆರಲು ಬಿಡಬೇಕು.&lt;/p&gt;&lt;p&gt;ಈಗ ಒಂದು ಪಾಲಿಥಿನ್ ಕವರ್ ಅನ್ನು ಬಿಸಿಲಿನಲ್ಲಿ ಹರಡಿ, ಕೈಗೆ ಸ್ವಲ್ಪ ನೀರು ಹಚ್ಚಿಕೊಳ್ಳುತ್ತಾ, ಈ ಅನ್ನದ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಹಪ್ಪಳ ಅಥವಾ ಸಂಡಿಗೆಯಂತೆ ಕವರ್ ಮೇಲೆ ಒತ್ತಬೇಕು. ಇವುಗಳನ್ನು ಕಡು ಬಿಸಿಲಿನಲ್ಲಿ ಎರಡು ಮೂರು ದಿನಗಳ ಕಾಲ ಎರಡೂ ಬದಿ ತಿರುಗಿಸುತ್ತಾ ಚೆನ್ನಾಗಿ ಒಣಗಿಸಬೇಕು. ಗಲಗಲ ಎಂದು ಶಬ್ದ ಬರುವಂತೆ ಒಣಗಿದ ಸಂಡಿಗೆಗಳನ್ನು ಏರ್ ಟೈಟ್ ಡಬ್ಬದಲ್ಲಿ ಶೇಖರಿಸಿಟ್ಟರೆ ವರ್ಷಪೂರ್ತಿ ಬಳಸಬಹುದು.&lt;/p&gt;&lt;h3&gt;&lt;strong&gt;ಉತ್ತಮ ರುಚಿಗಾಗಿ ಟಿಪ್ಸ್&lt;/strong&gt;&lt;/h3&gt;&lt;p&gt;&lt;strong&gt;ಮಿಕ್ಸಿ ಬಳಕೆ: &lt;/strong&gt;ಅನ್ನವನ್ನು ನೀರಿನಲ್ಲಿ ಬೇಯಿಸುವ ಮೊದಲು, ಮಿಕ್ಕಿದ ಅನ್ನಕ್ಕೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಆಮೇಲೆ ಬಿಸಿ ನೀರಿನಲ್ಲಿ ಕುದಿಸಿದರೆ ಸಂಡಿಗೆಗಳು ಇನ್ನು ಸಾಫ್ಟ್ ಆಗಿ ಬರುತ್ತವೆ.&lt;strong&gt;ಟೊಮೆಟೊ ಫ್ಲೇವರ್: &lt;/strong&gt;ನೀವು ಹಾಕುವ ಟೊಮೆಟೊ ಪೇಸ್ಟ್ ಜೊತೆಗೆ ಒಂದು ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಶುಂಠಿ ಸೇರಿಸಿ ರುಬ್ಬಿಕೊಂಡರೆ ಹೋಟೆಲ್ ಶೈಲಿಯ ರುಚಿ ಸಂಡಿಗೆ ಸಿಗುತ್ತದೆ.&lt;strong&gt;ಇಂಗು ಬಳಸಿ: &lt;/strong&gt;ಜೀರಿಗೆ ಜೊತೆಗೆ ಒಂದು ಚಿಟಿಕೆ ಇಂಗು ಸೇರಿಸಿದರೆ ಸಂಡಿಗೆಯ ಪರಿಮಳ ಅದ್ಭುತವಾಗಿರುತ್ತದೆ ಮತ್ತು ಇದು ಜೀರ್ಣಶಕ್ತಿಗೂ ಒಳ್ಳೆಯದು.&lt;/p&gt;&lt;h3&gt;&lt;strong&gt;ಒಣಗಿಸುವ ಮತ್ತು ಶೇಖರಿಸುವ ಟಿಪ್ಸ್&lt;/strong&gt;&lt;/h3&gt;&lt;p&gt;&lt;strong&gt;ಎಣ್ಣೆ ಹಚ್ಚಬೇಡಿ: &lt;/strong&gt;ಪ್ಲಾಸ್ಟಿಕ್ ಕವರ್ ಮೇಲೆ ಸಂಡಿಗೆ ಹಾಕುವಾಗ ಎಣ್ಣೆ ಹಚ್ಚಬೇಡಿ. ಎಣ್ಣೆ ಹಚ್ಚಿದರೆ ಕೆಲವು ತಿಂಗಳ ನಂತರ ಸಂಡಿಗೆಯಿಂದ ಕೆಟ್ಟ ವಾಸನೆ ಬರಲು ಪ್ರಾರಂಭವಾಗುತ್ತದೆ. ಬದಲಾಗಿ ಕವರ್ ಅನ್ನು ಸ್ವಲ್ಪ ನೀರಿನಿಂದ ಒದ್ದೆ ಮಾಡಿ ಸಾಕು.&lt;strong&gt;ಸರಿಯಾಗಿ ಒಣಗಿಸಿ: &lt;/strong&gt;ಸಂಡಿಗೆಗಳು ಮೇಲ್ನೋಟಕ್ಕೆ ಒಣಗಿದಂತೆ ಕಂಡರೂ, ಕನಿಷ್ಠ 3 ದಿನಗಳ ಕಾಲ ಕಡು ಬಿಸಿಲಿನಲ್ಲಿ ಒಣಗಿಸಬೇಕು. ಇಲ್ಲದಿದ್ದರೆ ಡಬ್ಬದಲ್ಲಿ ಇಟ್ಟಾಗ ಬೂಸ್ಟ್ (fungus) ಬರುವ ಸಾಧ್ಯತೆ ಇರುತ್ತದೆ.&lt;strong&gt;ಸಣ್ಣ ಸೈಜ್:&lt;/strong&gt; ಸಂಡಿಗೆಗಳನ್ನು ತುಂಬಾ ದಪ್ಪಗೆ ಹಾಕಬೇಡಿ. ಒಣಗಿದ ಮೇಲೆ ಅವು ಸಣ್ಣದಾಗುತ್ತವೆ, ಆದರೆ ಎಣ್ಣೆಯಲ್ಲಿ ಕರಿದಾಗ ಚೆನ್ನಾಗಿ ಉಬ್ಬುತ್ತವೆ. ದಪ್ಪಗಿದ್ದರೆ ಒಳಭಾಗ ಸರಿಯಾಗಿ ಒಣಗುವುದಿಲ್ಲ.&lt;/p&gt;&lt;h3&gt;&lt;strong&gt;ಗಮನಿಸಿ&lt;/strong&gt;&lt;/h3&gt;&lt;p&gt;ಒಂದು ವೇಳೆ ನಿಮಗೆ ಟೊಮೆಟೊ ಇಷ್ಟವಿಲ್ಲದಿದ್ದರೆ, ಕೇವಲ ಬಿಳಿ ಎಳ್ಳು ಮತ್ತು ಓಂ ಕಾಳು (Ajwain) ಹಾಕಿ ಕೂಡ ಮಾಡಬಹುದು. ಇದು ಅನ್ನದ ಜೊತೆ ನೆಂಚಿಕೊಳ್ಳಲು ಬಹಳ ರುಚಿಯಾಗಿರುತ್ತದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Anitha&rsquo;s Kitchen (@anithakomaravelly)&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/food/dont-waste-leftover-rice-make-crispy-rice-sandige-at-zero-cost/articleshow-8g2pnb5"/>
        </item>
        <item>
            <title><![CDATA[ಮಧ್ಯಾಹ್ನ ಸ್ವಲ್ಪ ಹೊತ್ತು ಮಲಗಿದ್ರೆ ಏನಾಗುತ್ತೆ ಗೊತ್ತಾ? ತಜ್ಞರು ಹೇಳೋದೇನು!]]></title>
            <link>https://kannada.asianetnews.com/webstories/health-life/health-benefits-of-a-short-afternoon-nap-gvd-88zf3g1</link>
            <guid isPermaLink="true">https://kannada.asianetnews.com/webstories/health-life/health-benefits-of-a-short-afternoon-nap-gvd-88zf3g1</guid>
            <pubDate>Wed, 20 May 2026 00:26:55 +0530</pubDate>
            <description><![CDATA[ಮಧ್ಯಾಹ್ನದ ನಿದ್ದೆ ದೇಹಕ್ಕೆ ಬಹಳ ಮುಖ್ಯ. ಒಂದು ಸಣ್ಣ ನಿದ್ದೆ ಕೂಡ ನಿಮ್ಮ ಮೆದುಳಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದು ನಿಮ್ಮ ಎನರ್ಜಿ, ಮೂಡ್ ಎಲ್ಲವನ್ನೂ ಸುಧಾರಿಸುತ್ತದೆ. ಈ ಬಗ್ಗೆ ತಜ್ಞರು ಹೇಳುವ ಕೆಲವು ಆಸಕ್ತಿದಾಯಕ ವಿಷಯಗಳು ಇಲ್ಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k82pn6tfhxegz1dzt18fjgnd,imgname-sleeping--4--1761027464015.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/health-life/health-benefits-of-a-short-afternoon-nap-gvd-88zf3g1"/>
        </item>
        <item>
            <title><![CDATA[ಗುಂಗುರು ಕೂದಲಿಗೆ ಸಿಂಪಲ್ & ಸ್ಟೈಲಿಶ್ ಲುಕ್ ನೀಡುವ 6 ಹೇರ್ ಚೈನ್ ಡಿಸೈನ್ಸ್!]]></title>
            <link>https://kannada.asianetnews.com/webstories/fashion/stylish-hair-chain-designs-for-curly-and-wavy-hair-gvd-bgtt0no</link>
            <guid isPermaLink="true">https://kannada.asianetnews.com/webstories/fashion/stylish-hair-chain-designs-for-curly-and-wavy-hair-gvd-bgtt0no</guid>
            <pubDate>Tue, 19 May 2026 23:50:49 +0530</pubDate>
            <description><![CDATA[&lt;p&gt;ಗುಂಗುರು ಕೂದಲಿಗೆ ಸ್ಟೈಲಿಶ್ ಹಾಗೂ ಫ್ಯಾನ್ಸಿ ಲುಕ್ ನೀಡಲು ಹೇರ್ ಚೈನ್ ಆಕ್ಸೆಸರೀಸ್ ಟ್ರೈ ಮಾಡಿ. ಹೂವು, ಮುತ್ತು ಹಾಗೂ ಜುಮ್ಕಾ ಇರುವ ಹೇರ್ ಚೈನ್&zwnj;ಗಳು 400 ರೂಪಾಯಿಯೊಳಗೆ ನಿಮ್ಮ ಹೇರ್&zwnj;ಸ್ಟೈಲ್&zwnj;ಗೆ ರಾಯಲ್ ಟಚ್ ನೀಡಬಲ್ಲವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzcjrtfmj0vn8102s3y5gtj,imgname-hair-chains-design-v-1779169846095.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stylish-hair-chain-designs-for-curly-and-wavy-hair-gvd-bgtt0no"/>
        </item>
        <item>
            <title><![CDATA[Summer Health: ಬೇಸಿಗೆಯಲ್ಲಿ ಟೀ-ಕಾಫಿ ಕುಡಿಯೋರು ಈ ತಪ್ಪು ಮಾಡ್ಬೇಡಿ? ಇಲ್ಲಿದೆ ಆರೋಗ್ಯಕ್ಕಾಗಿ 6 ಟಿಪ್ಸ್!]]></title>
            <link>https://kannada.asianetnews.com/gallery/health-life/summer-health-tips-how-much-tea-coffee-is-safe-to-drink-gvd-gw6xzgh</link>
            <guid isPermaLink="true">https://kannada.asianetnews.com/gallery/health-life/summer-health-tips-how-much-tea-coffee-is-safe-to-drink-gvd-gw6xzgh</guid>
            <pubDate>Tue, 19 May 2026 23:28:45 +0530</pubDate>
            <description><![CDATA[&lt;p&gt;ಬಿಸಿಲು 40&deg;C ದಾಟಿದ್ರೂ ನಮ್ಮ ಟೀ ಅಂಗಡಿಗಳಲ್ಲಿ ಜನ ಕಮ್ಮಿ ಆಗಲ್ಲ. 'ಈ ಸುಡು ಬಿಸಿಲಲ್ಲೂ ಒಂದು ಟೀ ಕುಡಿದ್ರೇನೇ ಚೈತನ್ಯ' ಅನ್ನೋರ ಪೈಕಿ ನೀವೂ ಒಬ್ಬರಾ? ಹಾಗಿದ್ರೆ ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ನೀವು ತಿಳಿಯಲೇಬೇಕಾದ 6 ಪ್ರಮುಖ ಸಲಹೆಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkxdhvbcjczw78e8yc3wmdpv,imgname-fotojet---2026-03-17t133925.269-1773735046508.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಸಿಲು 40&deg;C ದಾಟಿದ್ರೂ ನಮ್ಮ ಟೀ ಅಂಗಡಿಗಳಲ್ಲಿ ಜನ ಕಮ್ಮಿ ಆಗಲ್ಲ. 'ಈ ಸುಡು ಬಿಸಿಲಲ್ಲೂ ಒಂದು ಟೀ ಕುಡಿದ್ರೇನೇ ಚೈತನ್ಯ' ಅನ್ನೋರ ಪೈಕಿ ನೀವೂ ಒಬ್ಬರಾ? ಹಾಗಿದ್ರೆ ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ನೀವು ತಿಳಿಯಲೇಬೇಕಾದ 6 ಪ್ರಮುಖ ಸಲಹೆಗಳು ಇಲ್ಲಿವೆ.&lt;/p&gt;&lt;img&gt;&lt;p&gt;ಬೇಸಿಗೆಯಲ್ಲಿ ದಿನಕ್ಕೆ ಗರಿಷ್ಠ 1 ಅಥವಾ 2 ಸಣ್ಣ ಕಪ್&zwnj;ಗಳಷ್ಟು ಮಾತ್ರ ಟೀ ಅಥವಾ ಕಾಫಿ ಕುಡಿಯಿರಿ. ಇದಕ್ಕಿಂತ ಹೆಚ್ಚು ಸೇವಿಸಿದರೆ, ಅದರಲ್ಲಿರುವ ಕೆಫೀನ್ (Caffeine) ದೇಹದ ಉಷ್ಣಾಂಶವನ್ನು ಮತ್ತಷ್ಟು ಹೆಚ್ಚಿಸಿ, ನಿಮ್ಮನ್ನು ಬೇಗನೆ ಸುಸ್ತು ಮಾಡುತ್ತದೆ.&lt;/p&gt;&lt;img&gt;&lt;p&gt;ಟೀ ಅಥವಾ ಕಾಫಿ ಕುಡಿದ 15 ನಿಮಿಷಗಳ ನಂತರ ಒಂದು ಗ್ಲಾಸ್ ಸಾಮಾನ್ಯ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಕೆಫೀನ್, ಮೂತ್ರದ ಮೂಲಕ ದೇಹದ ನೀರನ್ನು ಹೊರಹಾಕಿ ನಿರ್ಜಲೀಕರಣ ಉಂಟುಮಾಡುತ್ತದೆ. ಈ 'ವಾಟರ್ ಪಾರ್ಟ್ನರ್' ನಿಯಮವು ದೇಹದ ನೀರಿನಂಶವನ್ನು ಸಮತೋಲನಗೊಳಿಸುತ್ತದೆ.&lt;/p&gt;&lt;img&gt;&lt;p&gt;ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಬಿಸಿಲು ಹೆಚ್ಚಿರುವಾಗ ಬಿಸಿ ಬಿಸಿ ಟೀ, ಕಾಫಿ ಕುಡಿಯುವುದನ್ನು ತಪ್ಪಿಸಿ. ಇದು ಎದೆ ಉರಿ ಮತ್ತು ಅಸಿಡಿಟಿಯನ್ನು (Acidity) ತಕ್ಷಣವೇ ಪ್ರಚೋದಿಸುತ್ತದೆ. ಬೆಳಗ್ಗೆ 8 ಗಂಟೆಗೆ ಅಥವಾ ಸಂಜೆ 5 ಗಂಟೆಯ ನಂತರ ಕುಡಿಯುವುದು ಸುರಕ್ಷಿತ.&lt;/p&gt;&lt;img&gt;&lt;p&gt;ಬೇಸಿಗೆ ಶುರುವಾದ ತಕ್ಷಣ ಹಲವರು 'ಐಸ್ ಟೀ' (Ice Tea), 'ಕೋಲ್ಡ್ ಕಾಫಿ' (Cold Coffee) ಕಡೆಗೆ ವಾಲುತ್ತಾರೆ. 'ಇದು ತಂಪಾಗಿದೆ' ಎಂದು ನೀವು ಭಾವಿಸಿದರೆ, ಮೋಸ ಹೋಗುತ್ತೀರಿ. ಇದರಲ್ಲಿ ಸೇರಿಸುವ ಅಧಿಕ ಸಕ್ಕರೆಯು ದೇಹದ ತೂಕವನ್ನು ಹೆಚ್ಚಿಸುವುದಲ್ಲದೆ, ಬಾಯಾರಿಕೆಯನ್ನು ನೀಗಿಸದೆ ದೇಹವನ್ನು ಮತ್ತಷ್ಟು ಒಣಗಿಸುತ್ತದೆ.&lt;/p&gt;&lt;img&gt;&lt;p&gt;ಈ ಸುಡು ಬಿಸಿಲು ಮುಗಿಯುವವರೆಗೂ ಹಾಲಿನ ಟೀ, ಕಾಫಿ ಬದಲು ಲೆಮನ್ ಟೀ (Lemon Tea), ಪುದೀನಾ ಟೀ (Mint Tea) ಅಥವಾ ಗ್ರೀನ್ ಟೀ (Green Tea) ಕುಡಿಯಬಹುದು. ಇದು ದೇಹಕ್ಕೆ ಚೈತನ್ಯ ನೀಡುವುದರ ಜೊತೆಗೆ ಕ್ಯಾಲೊರಿಗಳನ್ನೂ ಕಡಿಮೆ ಮಾಡುತ್ತದೆ.&lt;/p&gt;&lt;img&gt;&lt;p&gt;ಬೇಸಿಗೆಯಲ್ಲಿ ಮುಂಜಾನೆ ದೇಹದ ಉಷ್ಣತೆ ಹೆಚ್ಚಿರುತ್ತದೆ. ಆ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದರೆ, ಅದು ಹೊಟ್ಟೆಯ ಹುಣ್ಣಿಗೆ (Ulcer) ಕಾರಣವಾಗಬಹುದು. ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ನೀರು ಅಥವಾ ಮಜ್ಜಿಗೆ ಕುಡಿದು, ನಂತರ ಟೀ ಸೇವಿಸಿ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/health-life/summer-health-tips-how-much-tea-coffee-is-safe-to-drink-gvd-gw6xzgh"/>
        </item>
        <item>
            <title><![CDATA[ರಾತ್ರಿ ಈ ಕೆಲಸ ಮಾಡಿದರೆ ಸಾಕು, ನೀವೇ ಕೋಟ್ಯಾಧಿಪತಿಗಳಂತೆ!]]></title>
            <link>https://kannada.asianetnews.com/webstories/relationship/chanakya-niti-5-nighttime-habits-that-can-make-you-successful-and-rich-meee0r7</link>
            <guid isPermaLink="true">https://kannada.asianetnews.com/webstories/relationship/chanakya-niti-5-nighttime-habits-that-can-make-you-successful-and-rich-meee0r7</guid>
            <pubDate>Tue, 19 May 2026 22:31:19 +0530</pubDate>
            <description><![CDATA[&lt;p&gt;Chanakya niti for money and success: ಒಬ್ಬ ವ್ಯಕ್ತಿ ಧನವಂತನಾಗಬೇಕೆಂದರೆ ರಾತ್ರಿಯ ಸಮಯದಲ್ಲಿ ಈ ಕೆಲಸಗಳನ್ನು ತಪ್ಪದೇ ಮಾಡಬೇಕು ಎಂದು ಚಾಣಕ್ಯರು ತಿಳಿಸಿದ್ದಾರೆ. ಅವು ಯಾವುವು ಎಂದು ತಿಳಿಯೋಣ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k71pvj7zxq9q8v2et5p6489j,imgname-chankya-niti-03-1759920376063.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/relationship/chanakya-niti-5-nighttime-habits-that-can-make-you-successful-and-rich-meee0r7"/>
        </item>
        <item>
            <title><![CDATA[Hoop Earrings: 150 ರೂ.ಗೆ ಚಿನ್ನದಂತಹ ಓಲೆ! ಮನಸೆಳೆಯುವ 6 ಡಿಸೈನ್ಸ್ ಇಲ್ಲಿವೆ]]></title>
            <link>https://kannada.asianetnews.com/webstories/fashion/top-budget-friendly-gold-plated-hoops-to-level-up-your-style-game-k9wm6oc</link>
            <guid isPermaLink="true">https://kannada.asianetnews.com/webstories/fashion/top-budget-friendly-gold-plated-hoops-to-level-up-your-style-game-k9wm6oc</guid>
            <pubDate>Tue, 19 May 2026 19:54:10 +0530</pubDate>
            <description><![CDATA[&lt;p&gt;Gold look jewelry: ಚಿನ್ನ ದುಬಾರಿ ಆಯ್ತು ಅಂತ ಬೇಜಾರ್ ಯಾಕೆ? ಚಿನ್ನದಷ್ಟೇ ಹೊಳೆಯುವ ಇಯರಿಂಗ್ಸ್ ಹಾಕಿಕೊಳ್ಳಬಹುದು. ಇಲ್ಲಿ ನಾವು 150 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವ, ಚಿನ್ನದ ಹೊಳಪಿರುವ 6 ಹೂಪ್ ಇಯರಿಂಗ್ಸ್ ಡಿಸೈನ್&zwnj;ಗಳನ್ನು ತೋರಿಸುತ್ತಿದ್ದೇವೆ. &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzx4m5nm9hpfvke82s95vrb,imgname-gold-bali-designs-6-1779187208373.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/fashion/top-budget-friendly-gold-plated-hoops-to-level-up-your-style-game-k9wm6oc"/>
        </item>
        <item>
            <title><![CDATA[ಭಾರತೀಯ ರೈಲುಗಳಲ್ಲಿ ಸೀಟುಗಳು ನೀಲಿ ಬಣ್ಣದಲ್ಲೇ ಏಕಿರುತ್ತವೆ? ಇದರ ಹಿಂದಿದೆ ವೈಜ್ಞಾನಿಕ ಮತ್ತು ಮಾನಸಿಕ ತರ್ಕ]]></title>
            <link>https://kannada.asianetnews.com/gallery/life/why-are-indian-railway-seats-always-blue-the-fascinating-science-behind-it-uw43qfi</link>
            <guid isPermaLink="true">https://kannada.asianetnews.com/gallery/life/why-are-indian-railway-seats-always-blue-the-fascinating-science-behind-it-uw43qfi</guid>
            <pubDate>Tue, 19 May 2026 19:12:52 +0530</pubDate>
            <description><![CDATA[&lt;p&gt;Indian Railways: ಗಮನಿಸಿದ್ದೀರಾ? ಭಾರತೀಯ ರೈಲ್ವೆಯ ಬಹುತೇಕ ಎಲ್ಲಾ ಕೋಚ್&zwnj;ಗಳಲ್ಲಿ ಸೀಟುಗಳು ನೀಲಿ ಬಣ್ಣದಲ್ಲೇ ಇರುತ್ತವೆ. ಇದು ಕೇವಲ ಕಾಕತಾಳೀಯವಲ್ಲ! ಇದರ ಹಿಂದೆ ವಿಜ್ಞಾನ ಮತ್ತು ಪ್ರಯಾಣಿಕರ ಮಾನಸಿಕ ನೆಮ್ಮದಿಗೆ ಸಂಬಂಧಿಸಿದ ಆಸಕ್ತಿದಾಯಕ ಕಾರಣಗಳಿವೆ. ಆ 'ಬ್ಲೂ ಮ್ಯಾಜಿಕ್' ರಹಸ್ಯ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks07azf6mg6tsjryxrxbrnwz,imgname-thumbnail---2026-05-19t190802.156-1779197902310.jpg" type="image/jpeg" height="390" width="690"/>
            <content:encoded><![CDATA[&lt;p&gt;Indian Railways: ಗಮನಿಸಿದ್ದೀರಾ? ಭಾರತೀಯ ರೈಲ್ವೆಯ ಬಹುತೇಕ ಎಲ್ಲಾ ಕೋಚ್&zwnj;ಗಳಲ್ಲಿ ಸೀಟುಗಳು ನೀಲಿ ಬಣ್ಣದಲ್ಲೇ ಇರುತ್ತವೆ. ಇದು ಕೇವಲ ಕಾಕತಾಳೀಯವಲ್ಲ! ಇದರ ಹಿಂದೆ ವಿಜ್ಞಾನ ಮತ್ತು ಪ್ರಯಾಣಿಕರ ಮಾನಸಿಕ ನೆಮ್ಮದಿಗೆ ಸಂಬಂಧಿಸಿದ ಆಸಕ್ತಿದಾಯಕ ಕಾರಣಗಳಿವೆ. ಆ 'ಬ್ಲೂ ಮ್ಯಾಜಿಕ್' ರಹಸ್ಯ ಇಲ್ಲಿದೆ.&amp;nbsp;&lt;/p&gt;&lt;img&gt;&lt;p&gt;ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅದು ದೂರದ ಪ್ರಯಾಣದ ಎಕ್ಸ್&zwnj;ಪ್ರೆಸ್ ರೈಲಾಗಿರಲಿ ಅಥವಾ ದೈನಂದಿನ ಪ್ಯಾಸೆಂಜರ್ ರೈಲಾಗಿರಲಿ, ಬಹುತೇಕ ಪ್ರತಿ ಕೋಚ್&zwnj;ನಲ್ಲಿ ಒಂದು ವಿಷಯ ಸಾಮಾನ್ಯವಾಗಿ ಕಂಡುಬರುತ್ತದೆ. ಅದೇ ಸೀಟುಗಳ ನೀಲಿ ಬಣ್ಣ. ಬಹುಶಃ ನೀವು ರೈಲಿನಲ್ಲಿ ಪ್ರಯಾಣಿಸುವಾಗ, ರೈಲ್ವೆ ತನ್ನ ಸೀಟುಗಳಿಗೆ ನೀಲಿ ಬಣ್ಣವನ್ನೇ ಏಕೆ ಆಯ್ಕೆ ಮಾಡಿದೆ ಎಂದು ಹಲವು ಬಾರಿ ಯೋಚಿಸಿರಬಹುದು. ಇದು ಕೇವಲ ವಿನ್ಯಾಸ ಅಥವಾ ನೋಟಕ್ಕಾಗಿ ಮಾತ್ರವೇ ಅಥವಾ ಇದರ ಹಿಂದೆ ಏನಾದರೂ ವಿಶೇಷ ಕಾರಣವಿದೆಯೇ?&lt;/p&gt;&lt;img&gt;&lt;p&gt;ಸ್ಲೀಪರ್ ಕ್ಲಾಸ್&zwnj;ನಿಂದ ಹಿಡಿದು ಥರ್ಡ್ ಎಸಿ, ಸೆಕೆಂಡ್ ಎಸಿ ವರೆಗೆ ಬಹುತೇಕ ಎಲ್ಲಾ ರೈಲುಗಳಲ್ಲಿ ಸೀಟುಗಳು ಅಥವಾ ಬರ್ತ್&zwnj;ಗಳು ನೀಲಿ ಬಣ್ಣದಲ್ಲೇ (Blue Color) ಇರುತ್ತವೆ. ಕೇವಲ ಭಾರತೀಯ ರೈಲ್ವೆ ಮಾತ್ರವಲ್ಲ, ವಿಶ್ವದಾದ್ಯಂತ ಇರುವ ಅನೇಕ ಪ್ರಸಿದ್ಧ ಏರ್&zwnj;ಲೈನ್ಸ್&zwnj;ಗಳು ಕೂಡ ತಮ್ಮ ವಿಮಾನದ ಸೀಟುಗಳಿಗೆ ನೀಲಿ ಬಣ್ಣವನ್ನೇ ಬಳಸುತ್ತವೆ. ರೈಲ್ವೆ ಇಲಾಖೆಯು ಕೇವಲ ಯಾವುದೋ ಒಂದು ಬಣ್ಣ ಹಾಕಬೇಕು ಎಂದು ಈ ಬಣ್ಣ ಆರಿಸಿಲ್ಲ, ಬದಲಾಗಿ ಇದರ ಹಿಂದೆ ವೈಜ್ಞಾನಿಕ ಮತ್ತು ಮಾನಸಿಕ ತರ್ಕವಿದೆ (Scientific and Psychological Logic). ಬಣ್ಣಗಳ ಮನೋವಿಜ್ಞಾನದ (Color Psychology) ಪ್ರಕಾರ ಇದರ ಹಿಂದಿರುವ ಅಸಲಿ ಕಾರಣವೇನು ಎಂಬುದರ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ರೈಲು ಪ್ರಯಾಣಗಳು ಕೆಲವು ಗಂಟೆಗಳಿಂದ ದಿನಗಳವರೆಗೆ ಇರುತ್ತವೆ. ದೀರ್ಘಕಾಲ ಪ್ರಯಾಣಿಸುವುದರಿಂದ ಪ್ರಯಾಣಿಕರಲ್ಲಿ ಆಯಾಸ ಮತ್ತು ಕಿರಿಕಿರಿ ಉಂಟಾಗುವುದು ಸಹಜ. ಬಣ್ಣಗಳ ಮನೋವಿಜ್ಞಾನದ ಪ್ರಕಾರ, ನೀಲಿ ಬಣ್ಣವು ಮನುಷ್ಯನ ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಪ್ರಯಾಣಿಕರು ಒತ್ತಡಕ್ಕೆ ಒಳಗಾಗದೆ ಪ್ರಶಾಂತವಾಗಿ ಪ್ರಯಾಣಿಸಲು ಈ ಬಣ್ಣ ಬಹಳ ಸಹಕಾರಿಯಾಗಿದೆ.&lt;/p&gt;&lt;img&gt;&lt;p&gt;ಭಾರತೀಯ ರೈಲುಗಳಲ್ಲಿ ಪ್ರತಿದಿನ ಕೋಟ್ಯಂತರ ಜನರು ಪ್ರಯಾಣಿಸುತ್ತಾರೆ. ಪ್ರಯಾಣದ ಸಮಯದಲ್ಲಿ ಸೀಟುಗಳ ಮೇಲೆ ಕುಳಿತುಕೊಳ್ಳುವುದು, ಮಲಗುವುದು, ಆಹಾರ ಪದಾರ್ಥಗಳು ಅಥವಾ ಟೀ/ಕಾಫಿ ಚೆಲ್ಲುವುದು ಸಾಮಾನ್ಯ. ಒಂದು ವೇಳೆ ಸೀಟುಗಳು ಬಿಳಿ ಅಥವಾ ಇತರ ತಿಳಿ ಬಣ್ಣದಲ್ಲಿದ್ದರೆ ಸಣ್ಣ ಕಲೆ ಬಿದ್ದರೂ ಅಸಹ್ಯವಾಗಿ ಕಾಣಿಸುತ್ತದೆ. ಆದರೆ ನೀಲಿ ಬಣ್ಣವು ಗಾಢ ಬಣ್ಣವಾದ್ದರಿಂದ, ಇದರ ಮೇಲೆ ಧೂಳು ಮತ್ತು ಕೊಳಕು ಅಷ್ಟು ಬೇಗ ಪ್ರಯಾಣಿಕರ ಕಣ್ಣಿಗೆ ಬೀಳುವುದಿಲ್ಲ. ಇದು ರೈಲ್ವೆಗೆ ನಿರ್ವಹಣೆಯ (Maintenance) ಹೊರೆಯನ್ನೂ ಕಡಿಮೆ ಮಾಡುತ್ತದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ರೈಲು ಬೋಗಿಗಳು ಹೆಚ್ಚಾಗಿ ಪ್ರಯಾಣಿಕರಿಂದ ತುಂಬಿರುತ್ತವೆ. ಕಡಿಮೆ ಜಾಗದಲ್ಲಿ ಹೆಚ್ಚು ಜನರು ಇದ್ದಾಗ ಕೆಲವರಿಗೆ ಉಸಿರುಗಟ್ಟಿದಂತೆ ಅಥವಾ ಆತಂಕವಾದಂತೆ ಭಾಸವಾಗುತ್ತದೆ. ವಿಜ್ಞಾನಿಗಳ ಪ್ರಕಾರ, ನೀಲಿ ಬಣ್ಣವು ಕಣ್ಣುಗಳಿಗೆ ವಿಶಾಲವಾದ ಅನುಭೂತಿಯನ್ನು (ಆಕಾಶ ಅಥವಾ ಸಮುದ್ರದಂತಹ ದೊಡ್ಡ ಜಾಗವನ್ನು) ನೆನಪಿಸುತ್ತದೆ. ಇದು ಬೋಗಿಯ ಒಳಗೆ ಇಕ್ಕಟ್ಟಾಗಿದೆ ಎಂಬ ಭಾವನೆಯನ್ನು ಮಾನಸಿಕವಾಗಿ ಕಡಿಮೆ ಮಾಡುತ್ತದೆ.&lt;/p&gt;&lt;img&gt;&lt;p&gt;ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲದೆ, ಪ್ರಯಾಣಿಕರ ಮಾನಸಿಕ ಆರೋಗ್ಯ, ಸುರಕ್ಷತೆ ಮತ್ತು ರೈಲ್ವೆ ನಿರ್ವಹಣೆಯ ಅನುಕೂಲ ಹೀಗೆ ಎಲ್ಲಾ ಕೋನಗಳಿಂದ ಯೋಚಿಸಿ ಭಾರತೀಯ ರೈಲ್ವೆ ನೀಲಿ ಬಣ್ಣವನ್ನು ಪ್ರಮಾಣಿತ (Standard) ಬಣ್ಣವಾಗಿ ಬದಲಿಸಿದೆ. ಈ ಬಣ್ಣದ ಕಾರಣದಿಂದಾಗಿ ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಸೀಟುಗಳು ದೀರ್ಘಕಾಲದವರೆಗೆ ಸ್ವಚ್ಛವಾಗಿ ಕಾಣಿಸುತ್ತವೆ. ಅದಕ್ಕಾಗಿಯೇ ರೈಲ್ವೆ ಮತ್ತು ವಿಮಾನಯಾನ ಸಂಸ್ಥೆಗಳು ಈ ಬಣ್ಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/why-are-indian-railway-seats-always-blue-the-fascinating-science-behind-it-uw43qfi"/>
        </item>
        <item>
            <title><![CDATA[Bell Gold Earrings:  ಕೇವಲ 1 ಗ್ರಾಂ ಚಿನ್ನದಲ್ಲಿ 7 ಫ್ಯಾನ್ಸಿ ಪ್ಯಾಟರ್ನ್‌ಗಳು]]></title>
            <link>https://kannada.asianetnews.com/webstories/fashion/latest-1-gram-gold-bell-earring-designs-for-women-must-try-once-kvn-9byekzn</link>
            <guid isPermaLink="true">https://kannada.asianetnews.com/webstories/fashion/latest-1-gram-gold-bell-earring-designs-for-women-must-try-once-kvn-9byekzn</guid>
            <pubDate>Tue, 19 May 2026 18:39:52 +0530</pubDate>
            <description><![CDATA[ಹೊಸ ಡಿಸೈನ್&zwnj;ನ ಚಿನ್ನದ ಓಲೆಗಾಗಿ ಹುಡುಕುತ್ತಿದ್ದೀರಾ? 1 ರಿಂದ 3 ಗ್ರಾಂ ತೂಕದಲ್ಲಿ ಲಭ್ಯವಿರುವ ಲೇಟೆಸ್ಟ್ ಗೋಲ್ಡ್ ಬೆಲ್ ಇಯರಿಂಗ್ಸ್ ಡಿಸೈನ್&zwnj;ಗಳು ಇಲ್ಲಿವೆ. ಹಳೆ ಡಿಸೈನ್&zwnj;ಗಳನ್ನು ಬಿಟ್ಟು, ಈ 7 ಹೊಸ ವೆರೈಟಿಗಳನ್ನು ಟ್ರೈ ಮಾಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01krzgch2efg93g17w56cjtn8y,imgname-gold-bell-earrings-7-1779173835854.png" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/latest-1-gram-gold-bell-earring-designs-for-women-must-try-once-kvn-9byekzn"/>
        </item>
        <item>
            <title><![CDATA[ಬೀದರ್-ಬೆಂಗಳೂರು ನೇರ ವಿಮಾನಯಾನ ಜೂನ್ 1 ರಿಂದ ಆರಂಭ, ವೇಳಾಪಟ್ಟಿ ಬಿಡುಗಡೆ, ಚೆಕ್ ಮಾಡಿಕೊಳ್ಳಿ]]></title>
            <link>https://kannada.asianetnews.com/karnataka-districts/good-news-for-kalyana-karnataka-bengaluru-bidar-star-air-flights-resume-from-june-1st-check-out-airline-timings-gdp/articleshow-xlsh34k</link>
            <guid isPermaLink="true">https://kannada.asianetnews.com/karnataka-districts/good-news-for-kalyana-karnataka-bengaluru-bidar-star-air-flights-resume-from-june-1st-check-out-airline-timings-gdp/articleshow-xlsh34k</guid>
            <pubDate>Tue, 19 May 2026 18:20:57 +0530</pubDate>
            <description><![CDATA[ಜೂನ್ 1 ರಿಂದ ಬೀದರ್-ಬೆಂಗಳೂರು ನಡುವಿನ ನೇರ ವಿಮಾನ ಸೇವೆ ಸ್ಟಾರ್ ಏರ್ ಮೂಲಕ ಪುನರಾರಂಭಗೊಳ್ಳಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಮತ್ತು ಬೀದರ್&zwnj;ನಿಂದ 8:15ಕ್ಕೆ ವಿಮಾನಗಳು ಹೊರಡಲಿದ್ದು, ಈ ಸೇವೆಯು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jj8hkaw4djebaykbmsng1vq7,imgname-star-air.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ನಿರೀಕ್ಷೆಯಾಗಿದ್ದ ಬೀದರ್&ndash;ಬೆಂಗಳೂರು ನಡುವಿನ ನೇರ ವಿಮಾನ ಸೇವೆ ಜೂನ್ 1ರಿಂದ ಪುನರಾರಂಭಗೊಳ್ಳಲಿದ್ದು, ನೂತನ ವೇಳಾಪಟ್ಟಿ ಯನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಹೊರಡಲಿರುವ ವಿಮಾನ 7:45ಕ್ಕೆ ಬೀದರ್ ತಲುಪಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದ್ದಾರೆ.&lt;/p&gt;&lt;h2&gt;ವಿಮಾನ ವೇಳಾಪಟ್ಟಿ ಇಲ್ಲಿದೆ&lt;/h2&gt;&lt;p&gt;ಈ ಕುರಿತು ಪ್ರಕಟಣೆ ನೀಡಿರುವ ಸಚಿವರು, ಸ್ಟಾರ್ ಏರ್ ವತಿಯಿಂದ ಆರಂಭವಾಗುತ್ತಿರುವ ಈ ವಿಮಾನ ಸೇವೆಯ ವೇಳಾಪಟ್ಟಿಯಂತೆ ಬೀದರ್&zwnj;ನಿಂದ ಬೆಳಿಗ್ಗೆ 8:15ಕ್ಕೆ ಹೊರಡುವ ವಿಮಾನ 9:30ಕ್ಕೆ ಬೆಂಗಳೂರು ತಲುಪಲಿದ್ದು, ಕೇವಲ 1 ಗಂಟೆ 15 ನಿಮಿಷಗಳಲ್ಲಿ ಉಭಯ ನಗರಗಳ ನಡುವೆ ಪ್ರಯಾಣಿಸಬಹುದಾಗಿದೆ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಈ ವಿಮಾನ ಸೇವೆ ಪುನರಾರಂಭಗೊಳ್ಳಲು ನಿರಂತರ ಪ್ರಯತ್ನ ಮಾಡಲಾಗಿದ್ದು, ಇದರ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮತ್ತೆ ವಾಯು ಸಂಪರ್ಕ ಸೌಲಭ್ಯ ಲಭ್ಯವಾಗುತ್ತಿದೆ. ಇದರಿಂದ ಜಿಲ್ಲೆಯ ವ್ಯಾಪಾರ, ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಪ್ರಗತಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಈ ಮಹತ್ವದ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್, ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳು, ಕೆಕೆಆರ್&zwnj;ಡಿಬಿ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ನೀಡಿದ ಸಹಕಾರಕ್ಕೆ ಸಚಿವ ಈಶ್ವರ ಖಂಡ್ರೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗೆಯೇ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾದ ಸಾಗರ್ ಖಂಡ್ರೆ, ಸಚಿವರಾದ ರಹೀಂ ಖಾನ್ ಹಾಗೂ ಜಿಲ್ಲೆಯ ಎಲ್ಲಾ ಮುಖಂಡರ ಸಹಕಾರವೂ ಶ್ಲಾಘನೀಯ ವಾಗಿದೆ ಎಂದು ಅವರು ತಿಳಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮತ್ತು ಜನರ ಸೌಲಭ್ಯಕ್ಕಾಗಿ ಸರ್ಕಾರ ಇನ್ನಷ್ಟು ಪ್ರಗತಿಪರ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/good-news-for-kalyana-karnataka-bengaluru-bidar-star-air-flights-resume-from-june-1st-check-out-airline-timings-gdp/articleshow-xlsh34k"/>
        </item>
        <item>
            <title><![CDATA[ಕೊಳಕಾಗಿರುವ ಕಪ್ಪು ಮಣೆ-ಲಟ್ಟಣಿಗೆ ಹೊಳಿಬೇಕಾ? ನೀರಿನಲ್ಲಿ ಈ 2 ವಸ್ತು ಬೆರೆಸಿ ಕ್ಲೀನ್ ಮಾಡಿ]]></title>
            <link>https://kannada.asianetnews.com/gallery/kitchen/how-to-clean-dirty-rolling-boards-and-pins-using-just-two-simple-ingredients-f3hddkp</link>
            <guid isPermaLink="true">https://kannada.asianetnews.com/gallery/kitchen/how-to-clean-dirty-rolling-boards-and-pins-using-just-two-simple-ingredients-f3hddkp</guid>
            <pubDate>Tue, 19 May 2026 17:49:35 +0530</pubDate>
            <description><![CDATA[&lt;p&gt;&lt;strong&gt;How to remove black stains from rolling board: &lt;/strong&gt;ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಲಟ್ಟಣಿಗೆ ಮತ್ತು ಮಣೆಗಳು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಕಪ್ಪಾಗಿ, ಜಿಡ್ಡಿನಿಂದ ಕೂಡಿ ಹಳೆಯದಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಅವುಗಳ ಮೇಲೆ ಬ್ಯಾಕ್ಟೀರಿಯಾಗಳು ಜಮೆಯಾಗಿ ಆರೋಗ್ಯಕ್ಕೂ ಅಪಾಯಕಾರಿ ಆಗಬಹುದು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks02ejp50jjh6nn7qg35kwd7,imgname-thumbnail---2026-05-19t173952.473-1779192777412.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;How to remove black stains from rolling board: &lt;/strong&gt;ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಲಟ್ಟಣಿಗೆ ಮತ್ತು ಮಣೆಗಳು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಕಪ್ಪಾಗಿ, ಜಿಡ್ಡಿನಿಂದ ಕೂಡಿ ಹಳೆಯದಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಅವುಗಳ ಮೇಲೆ ಬ್ಯಾಕ್ಟೀರಿಯಾಗಳು ಜಮೆಯಾಗಿ ಆರೋಗ್ಯಕ್ಕೂ ಅಪಾಯಕಾರಿ ಆಗಬಹುದು. &amp;nbsp;&lt;/p&gt;&lt;img&gt;&lt;p&gt;ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಲಟ್ಟಣಿಗೆ ಮತ್ತು ಮಣೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅದರ ಮೇಲೆ ಹಿಟ್ಟಿನ ಪದರ ಜಮೆಯಾಗಲು ಪ್ರಾರಂಭಿಸುತ್ತದೆ. ಮೆಲ್ಲಮೆಲ್ಲನೆ ಈ ಗಲೀಜು ಕಪ್ಪು ಕಲೆಗಳಾಗಿ ಬದಲಾಗುತ್ತದೆ. ಇದರಿಂದ ಮಣೆ-ಲಟ್ಟಣಿಗೆ ಹಳೆಯದಾಗಿ ಮತ್ತು ಹಾಳಾದಂತೆ ಕಾಣಲಾರಂಭಿಸುತ್ತದೆ. ಅಷ್ಟೇ ಅಲ್ಲ, ಹಳೆಯ ಹಿಟ್ಟು ಮತ್ತು ತೇವಾಂಶದ ಕಾರಣದಿಂದ ಬ್ಯಾಕ್ಟೀರಿಯಾ ಹಾಗೂ ಇನ್ಫೆಕ್ಷನ್ ಅಪಾಯವೂ ಹೆಚ್ಚಾಗಬಹುದು. ನಿಮ್ಮ ಮಣೆ-ಲಟ್ಟಣಿಗೆ ಮರದ್ದಾಗಿರಲಿ ಅಥವಾ ಕಲ್ಲಿನದಾಗಿರಲಿ, ಅದನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಒಂದು ವೇಳೆ ನೀವು ಕೂಡ ಕಪ್ಪು ಮತ್ತು ಕೊಳಕಾದ ಮಣೆ-ಲಟ್ಟಣಿಗೆಯನ್ನು ಹೊಸದರಂತೆ ಹೊಳೆಯುವಂತೆ ಮಾಡಲು ಬಯಸಿದರೆ, ಈ ಸುಲಭ ಕಿಚನ್ ಟಿಪ್ಸ್ ನಿಮಗೆ ತುಂಬಾ ಉಪಯೋಗಕ್ಕೆ ಬರುತ್ತವೆ.&lt;/p&gt;&lt;img&gt;&lt;p&gt;ಅವಶ್ಯಕತೆ ಬಿದ್ದಾಗ ಮೊದಲು ನಿಮ್ಮ ಮಣೆ-ಲಟ್ಟಣಿಗೆಯನ್ನು 10-15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನೀರಿನಲ್ಲಿ ನೆನೆಸಿಡುವುದರಿಂದ ಅದರ ಮೇಲೆ ಜಮೆಯಾದ ಗಲೀಜು ಮೆತ್ತಗಾಗಿ ಸುಲಭವಾಗಿ ಹೊರಬರಲು ಪ್ರಾರಂಭಿಸುತ್ತದೆ. ನೀವು ಬೇಕಿದ್ದರೆ ಉಗುರುಬೆಚ್ಚಗಿನ ನೀರಿನಲ್ಲಿ ಮುಳುಗಿಸಿ ಇಡಬಹುದು. ಅಂದಹಾಗೆ ನಿಮಗೆ ಮಣೆ-ಲಟ್ಟಣಿಗೆ ಸ್ವಚ್ಛಗೊಳಿಸಲು ನಿಂಬೆ ರಸ, ಡಿಟರ್ಜೆಂಟ್ ಮತ್ತು ವಿನೆಗರ್ (Sirka) ಬೇಕಾಗುತ್ತದೆ.&lt;/p&gt;&lt;img&gt;&lt;p&gt;ಮಣೆ-ಲಟ್ಟಣಿಗೆಯ ಕಪ್ಪು ಕಲೆಗಳು ಮತ್ತು ಜಮೆಯಾದ ಗಲೀಜನ್ನು ಹೋಗಲಾಡಿಸಲು ನಿಂಬೆ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ಮೊದಲು ಸ್ವಲ್ಪ ನೀರನ್ನು ಉಗುರುಬೆಚ್ಚಗೆ ಮಾಡಿಕೊಳ್ಳಿ ಮತ್ತು ಅದರಲ್ಲಿ 1 ನಿಂಬೆ ಹಣ್ಣಿನ ರಸವನ್ನು ಹಿಂಡಿ. ಈಗ ಇದೇ ನೀರಿಗೆ ಸ್ವಲ್ಪ ಡಿಟರ್ಜೆಂಟ್ ಪೌಡರ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ಪಂಜ್ ಅಥವಾ ಸ್ಕ್ರಬ್ಬರ್ ಅನ್ನು ಈ ಮಿಶ್ರಣದಲ್ಲಿ ಅದ್ದಿ ಮಣೆ ಮತ್ತು ಲಟ್ಟಣಿಗೆಯನ್ನು ಉಜ್ಜಿ ಸ್ವಚ್ಛಗೊಳಿಸಿ. ಕಲೆಗಳು ತುಂಬಾ ಹಳೆಯದಾಗಿದ್ದರೆ ಮತ್ತು ಹಠಮಾರಿಯಾಗಿದ್ದರೆ ಸ್ಟೀಲ್ ಸ್ಕ್ರಬ್ಬರ್ (Steel scrubber) ಕೂಡ ಬಳಸಬಹುದು. ನಿಂಬೆಯಲ್ಲಿರುವ ನೈಸರ್ಗಿಕ ಆಮ್ಲವು ಕಪ್ಪು ಕಲೆ ಮತ್ತು ಜಿಡ್ಡನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ, ಹಾಗೆಯೇ ಡಿಟರ್ಜೆಂಟ್ ಜಮೆಯಾದ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಕೆಲವೇ ನಿಮಿಷಗಳಲ್ಲಿ ನಿಮ್ಮ ಹಳೆಯ ಮತ್ತು ಕೊಳಕಾದ ಮಣೆ-ಲಟ್ಟಣಿಗೆ ಸ್ವಚ್ಛವಾಗಿ ಹೊಳೆಯಲು ಪ್ರಾರಂಭಿಸುತ್ತದೆ.&lt;/p&gt;&lt;img&gt;&lt;p&gt;ಮಣೆ-ಲಟ್ಟಣಿಗೆ ಸ್ವಚ್ಛಗೊಳಿಸಲು ಎರಡನೇ ಸುಲಭ ಮತ್ತು ಪರಿಣಾಮಕಾರಿ ಮಾರ್ಗವೆಂದರೆ ವಿನೆಗರ್ ಬಳಕೆ. ಇದಕ್ಕಾಗಿ ಉಗುರುಬೆಚ್ಚಗಿನ ನೀರಿಗೆ 2-3 ಚಮಚ ವಿನೆಗರ್ ಬೆರೆಸಿ ಮತ್ತು ಈ ಮಿಶ್ರಣದಲ್ಲಿ ಮಣೆ-ಲಟ್ಟಣಿಗೆಯನ್ನು ಸುಮಾರು 5 ನಿಮಿಷಗಳ ಕಾಲ ಮುಳುಗಿಸಿಡಿ. ವಿನೆಗರ್ ಹಳೆಯ ಕಲೆಗಳು, ಜಿಡ್ಡು ಮತ್ತು ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರ ನಂತರ ಸ್ಪಂಜ್, ಬ್ರಷ್ ಅಥವಾ ಸ್ಕ್ರಬ್ಬರ್ ಸಹಾಯದಿಂದ ಮಣೆ-ಲಟ್ಟಣಿಗೆಯನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಕಲೆಗಳು ತುಂಬಾ ಜಾಸ್ತಿ ಇದ್ದರೆ ಈ ನೀರಿಗೆ ಸ್ವಲ್ಪ ಉಪ್ಪನ್ನು ಕೂಡ ಬೆರೆಸಿ. ಉಪ್ಪು ನೈಸರ್ಗಿಕ ಕ್ಲೀನರ್ ಆಗಿ ಕೆಲಸ ಮಾಡುತ್ತದೆ ಮತ್ತು ಹಠಮಾರಿ ಕಲೆಗಳನ್ನು ಬೇಗನೆ ತೆಗೆಯಲು ಸಹಾಯ ಮಾಡುತ್ತದೆ. ಜೊತೆಗೆ ಇದು ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಕೂಡ ಪರಿಣಾಮಕಾರಿ ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;ಸ್ವಚ್ಛಗೊಳಿಸಿದ ನಂತರ ಮಣೆ-ಲಟ್ಟಣಿಗೆಯನ್ನು ಶುದ್ಧ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ ಮತ್ತು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಡಿ. ಇದರಿಂದ ತೇವಾಂಶ ಸಂಪೂರ್ಣವಾಗಿ ಇಲ್ಲವಾಗುತ್ತದೆ ಮತ್ತು ಮಣೆ-ಲಟ್ಟಣಿಗೆ ದೀರ್ಘಕಾಲದವರೆಗೆ ಸ್ವಚ್ಛವಾಗಿ ಹಾಗೂ ಸುರಕ್ಷಿತವಾಗಿರುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/how-to-clean-dirty-rolling-boards-and-pins-using-just-two-simple-ingredients-f3hddkp"/>
        </item>
        <item>
            <title><![CDATA[ಜ್ವಾಲಾ ಗುಟ್ಟಾ 60 ಲೀಟರ್ ಎದೆಹಾಲು ದಾನ ಮಾಡಿದ್ಧೇಕೆ? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಮಾಜಿ ಬ್ಯಾಡ್ಮಿಂಟನ್ ತಾರೆ]]></title>
            <link>https://kannada.asianetnews.com/gallery/life/former-badminton-star-jwala-gutta-donates-60-litres-of-breast-milk-to-help-nicu-babies-kvn-n0vs4da</link>
            <guid isPermaLink="true">https://kannada.asianetnews.com/gallery/life/former-badminton-star-jwala-gutta-donates-60-litres-of-breast-milk-to-help-nicu-babies-kvn-n0vs4da</guid>
            <pubDate>Tue, 19 May 2026 17:07:22 +0530</pubDate>
            <description><![CDATA[&lt;p&gt;ಬೆಂಗಳೂರು: ಭಾರತದ ಮಾಜಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಇದೀಗ ತಮ್ಮ ಅದ್ಭುತ ಕಾರ್ಯದ ಮೂಲಕ ಸುದ್ದಿಯಾಗಿದ್ದಾರೆ. ಜ್ವಾಲಾ ಗುಟ್ಟಾ ಸುಮಾರು 60 ಲೀಟರ್ ಎದೆಹಾಲನ್ನು ದಾನ ಮಾಡಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಜ್ವಾಲಾ ಹೀಗೆ ಮಾಡಿದ್ದೇಕೆ ಎನ್ನುವುದನ್ನು ನೋಡೋಣ ಬನ್ನಿ&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-4ef9992d-f139-4e26-9522-1233af02fd01,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತದ ಮಾಜಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಇದೀಗ ತಮ್ಮ ಅದ್ಭುತ ಕಾರ್ಯದ ಮೂಲಕ ಸುದ್ದಿಯಾಗಿದ್ದಾರೆ. ಜ್ವಾಲಾ ಗುಟ್ಟಾ ಸುಮಾರು 60 ಲೀಟರ್ ಎದೆಹಾಲನ್ನು ದಾನ ಮಾಡಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಜ್ವಾಲಾ ಹೀಗೆ ಮಾಡಿದ್ದೇಕೆ ಎನ್ನುವುದನ್ನು ನೋಡೋಣ ಬನ್ನಿ&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನವಜಾತ ಶಿಶುಗಳಿಗೆ ಎದೆ ಹಾಲು ಪ್ರಾಥಮಿಕ ಪೋಷಣೆಯ ಮೂಲವಾಗಿದೆ. ಇದು ಕೊಬ್ಬುಗಳು, ಕಾರ್ಬೋಹೈಡ್ರೇಟ್&zwnj;ಗಳು, ಖನಿಜಗಳು ಮತ್ತು ಪ್ರೋಟೀನ್&zwnj;ಗಳನ್ನು ಒಳಗೊಂಡಿದ್ದು, ಶಿಶುಗಳ ಬೆಳವಣಿಗೆಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ.&lt;/p&gt;&lt;img&gt;&lt;p&gt;ಆದರೆ ವಿವಿಧ ಕಾರಣಗಳಿಂದಾಗಿ, ಅದರಲ್ಲೂ ವಿಶೇಷವಾಗಿ ಅವರು NICU ನಲ್ಲಿದ್ದರೆ ಅನೇಕ ಶಿಶುಗಳಿಗೆ ತಮ್ಮ ತಾಯಿಯ ಹಾಲು ಸಿಗುವುದೇ ಇಲ್ಲ. ನವಜಾತ ಶಿಶುಗಳ ತೀವ್ರ ನಿಗಾ ಘಟಕವು ಯಾವುದೇ ಆಸ್ಪತ್ರೆಯಲ್ಲಿ ವಿಶೇಷ ವಿಭಾಗವಾಗಿದ್ದು, ಇದು ಅಕಾಲಿಕ ಶಿಶುಗಳು, ತೀವ್ರವಾಗಿ ಅಸ್ವಸ್ಥರಾದ ಮತ್ತು ಕಡಿಮೆ ತೂಕದ ನವಜಾತ ಶಿಶುಗಳನ್ನು ನೋಡಿಕೊಳ್ಳುತ್ತದೆ.&lt;/p&gt;&lt;img&gt;&lt;p&gt;ಇದನ್ನು ಗಮನಿಸಿದ, ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ತಮ್ಮ ಪ್ರಸವಾನಂತರದ ಮೊದಲ ವರ್ಷದಲ್ಲಿ 60 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ, ಅವರು ಏಕೆ ಎದೆಹಾಲು ದಾನ ಮಾಡಿದೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನನ್ನ ಮೊದಲ ವರ್ಷದ ಡೆಲಿವರಿ ಬಳಿಕ ನಾನು ಚೆನ್ನೈ ಹಾಗೂ ಹೈದರಾಬಾದ್&zwnj;ನ ಸರ್ಕಾರಿ ಆಸ್ಪತ್ರೆಗೆ ಸುಮಾರು 60 ಲೀಟರ್ ಎದೆಹಾಲನ್ನು ದಾನ ಮಾಡಿದ್ದೇನೆ. ಅದರಿಂದ ಏನಾಗುತ್ತೆ ಅಂತೀರಾ?. ಕೇವಲ 100 ಎಂಎಲ್ ಎದೆಹಾಲು ಒಂದು ಕೆಜಿ ತೂಕದ ನವಜಾತ ಶಿಶುವಿಗೆ ಕೆಲವು ದಿನಗಳ ಕಾಲ ಆಹಾರವಾಗುತ್ತದೆ. ಈ ರೀತಿ ಎದೆಹಾಲು ದಾನ ಮಾಡುವುದರಿಂದ NICU ನಲ್ಲಿರುವ ಡಜನ್&zwnj;ಗಟ್ಟಲೆ ಶಿಶುಗಳಿಗೆ ಅನುಕೂಲವಾಗಲಿದೆ ಎಂದು ಜ್ವಾಲಾ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ರೀತಿ ಎದೆಹಾಲು ದಾನ ಮಾಡುವುದು ಸುರಕ್ಷಿತ ಹಾಗೂ ಸ್ಕ್ರೀನಿಂಗ್&zwnj;ಗೆ ಒಳಪಟ್ಟಿರುತ್ತದೆ. ನವಜಾತ ಶಿಶುಗಳಿಗೆ ಇದು ಅತ್ಯಗತ್ಯ. ಒತ್ತಡ, ಅನಾರೋಗ್ಯ, ಅಪೌಷ್ಟಿಕತೆ ಮತ್ತು ಅಕಾಲಿಕ ಜನನದಿಂದಾಗಿ ಹಾಲುಣಿಸುವಿಕೆ ವಿಳಂಬವಾಗಬಹುದಾದ ತಾಯಂದಿರಿಗೆ ಇದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಎದೆಹಾಲು ದಾನದ ಮಹತ್ವದ ಬಗ್ಗೆ ಜ್ವಾಲಾ ಒತ್ತಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಕಾಲಿಕ ಶಿಶುಗಳಲ್ಲಿ ನೆಕ್ರೋಟೈಸಿಂಗ್ ಎಂಟರೊಕೊಲೈಟಿಸ್ (ಜೀವಕ್ಕೆ ಅಪಾಯಕಾರಿ ಕರುಳಿನ ಸ್ಥಿತಿ) ಸಂಭವಿಸುವುದನ್ನು ದಾನಿ ಮಾನವ ಹಾಲು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ವೈದ್ಯಕೀಯವಾಗಿ ಸಾಬೀತಾಗಿದೆ ಎಂದು ಜ್ವಾಲಾ ಹೇಳಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/life/former-badminton-star-jwala-gutta-donates-60-litres-of-breast-milk-to-help-nicu-babies-kvn-n0vs4da"/>
        </item>
        <item>
            <title><![CDATA[ಟ್ರೆಂಡಿಂಗ್‌ನಲ್ಲಿ ಕೊರಿಯನ್ ಸ್ಟಡ್ ಇಯರಿಂಗ್ಸ್: ಸ್ಟೈಲಿಶ್ ಡಿಸೈನ್‌ಗಳು ಇಲ್ಲಿವೆ]]></title>
            <link>https://kannada.asianetnews.com/webstories/fashion/trendy-korean-stud-earring-designs-for-casual-and-office-wear-gvd-vbwgl20</link>
            <guid isPermaLink="true">https://kannada.asianetnews.com/webstories/fashion/trendy-korean-stud-earring-designs-for-casual-and-office-wear-gvd-vbwgl20</guid>
            <pubDate>Tue, 19 May 2026 16:53:00 +0530</pubDate>
            <description><![CDATA[&lt;p&gt;Korean Stud Earrings Design: ಇತ್ತೀಚೆಗೆ ಕೊರಿಯನ್ ಸ್ಟಡ್ ಇಯರಿಂಗ್ಸ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಕ್ಯಾಶುವಲ್ ಲುಕ್ ಇರಲಿ, ಆಫೀಸ್ ವೇರ್ ಇರಲಿ, ಎಲ್ಲದಕ್ಕೂ ಇದು ಸಖತ್ ಆಗಿ ಮ್ಯಾಚ್ ಆಗುತ್ತೆ. ಹಾರ್ಟ್ ಶೇಪ್, ಬಟರ್&zwnj;ಫ್ಲೈ, ಟುಲಿಪ್, ಪರ್ಲ್ ಸ್ಟಡ್&zwnj;ಗಳ ಲೇಟೆಸ್ಟ್ ಡಿಸೈನ್&zwnj;ಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krznpeqz09jth4gwte6826yd,imgname-cute-korean-ear-studs-1779179404031.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/trendy-korean-stud-earring-designs-for-casual-and-office-wear-gvd-vbwgl20"/>
        </item>
        <item>
            <title><![CDATA[ಯುರೋಪ್‌ ಈಗ ಮತ್ತಷ್ಟು ಹತ್ತಿರ: ಬೆಂಗಳೂರು - ಜ್ಯೂರಿಕ್‌ ನೇರ ವಿಮಾನ ಆರಂಭ, ಸ್ವಿಸ್ ಏರ್‌ಲೈನ್ಸ್‌ ಸಿಹಿ ಸುದ್ದಿ]]></title>
            <link>https://kannada.asianetnews.com/business/direct-to-europe-swiss-air-launches-bengaluru-to-zurich-direct-flights-gdp/articleshow-abrheap</link>
            <guid isPermaLink="true">https://kannada.asianetnews.com/business/direct-to-europe-swiss-air-launches-bengaluru-to-zurich-direct-flights-gdp/articleshow-abrheap</guid>
            <pubDate>Tue, 19 May 2026 16:48:15 +0530</pubDate>
            <description><![CDATA[ಸ್ವಿಸ್ ಇಂಟರ್&zwnj;ನ್ಯಾಷನಲ್ ಏರ್&zwnj;ಲೈನ್ಸ್, 2026ರ ಅಕ್ಟೋಬರ್&zwnj;ನಿಂದ ಬೆಂಗಳೂರು ಮತ್ತು ಜ್ಯೂರಿಕ್ ನಡುವೆ ಹೊಸ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ವಾರದಲ್ಲಿ ಐದು ದಿನ ಲಭ್ಯವಿರುವ ಈ ಸೇವೆಯು, ದಕ್ಷಿಣ ಭಾರತದ ಪ್ರಯಾಣಿಕರಿಗೆ ಯುರೋಪ್ ಮತ್ತು ಉತ್ತರ ಅಮೆರಿಕಾಗೆ ಸುಲಭ ಸಂಪರ್ಕ ಕಲ್ಪಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzz4qf07z9434f01b6wnmpx,imgname-swiss-air-1779189308895.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದಕ್ಷಿಣ ಭಾರತದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನ ನಗರಿ ಬೆಂಗಳೂರಿಗರಿಗೆ ಸ್ವಿಸ್ ಇಂಟರ್&zwnj;ನ್ಯಾಷನಲ್ ಏರ್&zwnj;ಲೈನ್ಸ್ (ಸ್ವಿಸ್&zwnj;) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಭಾರತ ಮತ್ತು ಸ್ವಿಟ್ಜರ್&zwnj;ಲ್ಯಾಂಡ್ ನಡುವಿನ ವಿಮಾನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ, ಬೆಂಗಳೂರು ಹಾಗೂ ಸ್ವಿಸ್&zwnj;ನ ಪ್ರಮುಖ ನಗರ ಜ್ಯೂರಿಕ್ ನಡುವೆ ಹೊಸದಾಗಿ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಸಂಸ್ಥೆ ಘೋಷಿಸಿದೆ.&lt;/p&gt;&lt;p&gt;2026ರ ಅಕ್ಟೋಬರ್&zwnj;ನಿಂದ ಈ ಹೊಸ ಮಾರ್ಗದಲ್ಲಿ ವಿಮಾನ ಹಾರಾಟ ಶುರುವಾಗಲಿದ್ದು, ವಾರದಲ್ಲಿ ಐದು ದಿನ ಈ ಸೇವೆ ಲಭ್ಯವಿರಲಿದೆ. ಇದರಿಂದಾಗಿ ದಕ್ಷಿಣ ಭಾರತದ ಪ್ರಯಾಣಿಕರು ಜ್ಯೂರಿಕ್ ತಲುಪುವುದು ಮಾತ್ರವಲ್ಲದೆ, ಲುಫ್ತಾನ್ಸಾ ಸಮೂಹದ ಬೃಹತ್ ವಿಮಾನಜಾಲದ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕಾದ ಹಲವು ನಗರಗಳಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ.&lt;/p&gt;&lt;h2&gt;ಬೆಂಗಳೂರನ್ನೇ ಆಯ್ದುಕೊಂಡಿದ್ದೇಕೆ ಸ್ವಿಸ್&zwnj;?&lt;/h2&gt;&lt;p&gt;ಭಾರತದಲ್ಲಿ ಸ್ವಿಸ್ ಏರ್&zwnj;ಲೈನ್ಸ್&zwnj;ನ ಹೊಸ ತಾಣವಾಗಿ ಈಗ ಬೆಂಗಳೂರು ಸೇರ್ಪಡೆಯಾಗಿದೆ. ಕಾರ್ಪೊರೇಟ್ ಪ್ರಯಾಣಿಕರು, ಐಟಿ ತಂತ್ರಜ್ಞರು, ಪ್ರೀಮಿಯಂ ಪ್ರವಾಸಿಗರು ಮತ್ತು ಯುರೋಪ್-ಅಮೆರಿಕಾಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರಿಂದ ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ಹೊಸ ಮಾರ್ಗವನ್ನು ಪರಿಚಯಿಸಲಾಗಿದೆ.&lt;/p&gt;&lt;p&gt;ಈ ಬಗ್ಗೆ ಮಾತನಾಡಿರುವ ಸ್ವಿಸ್&zwnj;ನ ಮಾಲೀಕ ಸಂಸ್ಥೆ ಲುಫ್ತಾನ್ಸಾ ಗ್ರೂಪ್&zwnj;ನ ದಕ್ಷಿಣ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ ಕೆವಿನ್ ಮಾರ್ಕೆಟ್ಟೆ, ಲುಫ್ತಾನ್ಸಾ ಗ್ರೂಪ್&zwnj;ಗೆ ಭಾರತವು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಜಾಗತಿಕ ಟೆಕ್ ಹಬ್ ಆಗಿರುವ ಬೆಂಗಳೂರಿನಿಂದ ಸ್ವಿಸ್ ಏರ್ ಲೈನ್ಸ್ ಸೇವೆಯನ್ನು ಆರಂಭಿಸುತ್ತಿರುವುದು ನಮಗೆ ಅತೀವ ಸಂತಸ ತಂದಿದೆ. ಜರ್ಮನಿಯ ಫ್ರಾಂಕ್&zwnj;ಫರ್ಟ್ ಮತ್ತು ಮ್ಯೂನಿಕ್ ನಗರಗಳ ಬಳಿಕ, ಬೆಂಗಳೂರಿನಿಂದ ಲುಫ್ತಾನ್ಸಾ ಗ್ರೂಪ್&zwnj;ನ ಮೂರನೇ ಪ್ರಮುಖ ಮಾರ್ಗ ಇದಾಗಲಿದೆ. ಪ್ರಯಾಣಿಕರು ಫಸ್ಟ್ ಕ್ಲಾಸ್ ಸೇರಿದಂತೆ ಅತ್ಯುತ್ತಮ ಸ್ವಿಸ್ ಆತಿಥ್ಯದ ಅನುಭವ ಪಡೆಯಲಿದ್ದಾರೆ ಎಂದು ತಿಳಿಸಿದರು.&lt;/p&gt;&lt;p&gt;ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್&zwnj;) ಮುಖ್ಯ ಕಾರ್ಯಾಚರಣಾಧಿಕಾರಿ ಗಿರೀಶ್ ನಾಯರ್ ಪ್ರತಿಕ್ರಿಯಿಸಿ, ಭಾರತದ ಸಿಲಿಕಾನ್ ಸಿಟಿಯನ್ನು ಜಾಗತಿಕ ಆರ್ಥಿಕ ಕೇಂದ್ರವಾದ ಜ್ಯೂರಿಕ್ ಜೊತೆ ಬೆಸೆಯುವ ಈ ಸೇವೆ, ನಮ್ಮ ಮಾರುಕಟ್ಟೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶದ 78 ನಗರಗಳಿಗೆ ಕನೆಕ್ಷನ್ ಇರುವುದರಿಂದ, ಟಯರ್-2 ಹಾಗೂ ಟಯರ್-3 ನಗರಗಳಿಂದ ಬರುವವರಿಗೂ ಒಂದೇ ಟಿಕೆಟ್&zwnj;ನಲ್ಲಿ ಯುರೋಪ್&zwnj;ಗೆ ಸುಲಭ ಸಂಪರ್ಕ ಸಿಗಲಿದೆ ಎಂದರು.&lt;/p&gt;&lt;h2&gt;ಅತ್ಯುತ್ತಮ ಸೌಲಭ್ಯ&lt;/h2&gt;&lt;p&gt;ಬೆಂಗಳೂರು-ಜ್ಯೂರಿಕ್ ನಡುವಿನ ಈ ವಿಮಾನದಲ್ಲಿ ಪ್ರಯಾಣಿಕರು ಫಸ್ಟ್ ಕ್ಲಾಸ್, ಬಿಸಿನೆಸ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅತ್ಯುತ್ತಮ ಊಟ, ಪ್ರೀಮಿಯಂ ಲೌಂಜ್ ಸೇರಿದಂತೆ ಉತ್ತಮ ಆತಿಥ್ಯವನ್ನು ಸಂಸ್ಥೆ ನೀಡಲಿದೆ. ಹೊಸ ಮಾರ್ಗದ ಟಿಕೆಟ್ ಬುಕ್ಕಿಂಗ್ ಇಂದಿನಿಂದಲೇ ಸ್ವಿಸ್ ಸಂಸ್ಥೆಯ ಅಧಿಕೃತ ವೆಬ್&zwnj;ಸೈಟ್ ಹಾಗೂ ಟ್ರಾವೆಲ್ ಏಜೆನ್ಸಿಗಳ ಮೂಲಕ ಲಭ್ಯವಿದೆ.&lt;/p&gt;&lt;p&gt;ಇನ್ನು ಈ ವಿಮಾನಯಾನ ಸೇವೆಯನ್ನು ನೀಡುತ್ತಿರುವ ಲುಫ್ತಾನ್ಸಾ ಜಗತ್ತಿನ ಮುಂಚೂಣಿ ವಿಮಾನಯಾನ ಸಮೂಹವಾಗಿದ್ದು, 164 ದೇಶಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಸಂಸ್ಥೆ ಕೇವಲ 2025ರಲ್ಲಿ 13.5 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದ್ದು 39.6 ಬಿಲಿಯನ್ ಯುರೋ (ಸರಿಸುಮಾರು 3.6 ಲಕ್ಷ ಕೋಟಿ ರೂ.) ಆದಾಯ ಗಳಿಸಿದೆ. ಪ್ರಯಾಣಿಕರ ಸೇವೆ ಮಾತ್ರವಲ್ಲದೆ ಲಾಜಿಸ್ಟಿಕ್ಸ್, ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ (ಎಂಆರ್&zwnj;ಒ) ಕ್ಷೇತ್ರಗಳಲ್ಲೂ ಈ ಸಂಸ್ಥೆ ಬಲಿಷ್ಠವಾಗಿದೆ. ಸ್ವಿಸ್ ಏರ್&zwnj;ಲೈನ್ಸ್ ಕೂಡ ಲುಫ್ತಾನ್ಸಾ ಗ್ರೂಪ್&zwnj;ನ ಪ್ರಮುಖ ಅಂಗಸಂಸ್ಥೆಯಾಗಿದೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/business/direct-to-europe-swiss-air-launches-bengaluru-to-zurich-direct-flights-gdp/articleshow-abrheap"/>
        </item>
        <item>
            <title><![CDATA[ಈ ಆಹಾರಗಳನ್ನು ಅತಿಯಾಗಿ ತಿಂತೀರಾ? ಸೂಚನೆ ಕೊಡದೆ ಕಿಡ್ನಿ ಹಾಳಾಗುತ್ತೆ!]]></title>
            <link>https://kannada.asianetnews.com/webstories/health-life/health-tips-foods-that-can-damage-your-kidneys-when-eaten-in-excess-iqat20v</link>
            <guid isPermaLink="true">https://kannada.asianetnews.com/webstories/health-life/health-tips-foods-that-can-damage-your-kidneys-when-eaten-in-excess-iqat20v</guid>
            <pubDate>Tue, 19 May 2026 16:01:24 +0530</pubDate>
            <description><![CDATA[ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿಯೂ ಒಂದು. ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವುದು, ರಕ್ತವನ್ನು ಶುದ್ಧೀಕರಿಸುವುದು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವುದು ಕಿಡ್ನಿಯ ಪ್ರಮುಖ ಕೆಲಸ. ನಿಮ್ಮ ಕಿಡ್ನಿ ಆರೋಗ್ಯವಾಗಿರಲು ಯಾವ ಆಹಾರಗಳಿಂದ ದೂರವಿರಬೇಕು ಎಂದು ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01krzcfj3x8fd3wbgqhysbpdqr,imgname-fotojet---2026-05-19t111704.898-1779169740925.jpg" type="image/jpeg" height="390" width="690"/>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/health-life/health-tips-foods-that-can-damage-your-kidneys-when-eaten-in-excess-iqat20v"/>
        </item>
        <item>
            <title><![CDATA[ಕುಕ್ಕರ್ ಹ್ಯಾಂಡಲ್ ಪದೇ ಪದೇ ಲೂಸ್ ಆಗ್ತಿದ್ಯಾ? ನೇಲ್ ಪಾಲಿಶ್ ಟ್ರಿಕ್ ಬಳಸಿ, ಸಮಸ್ಯೆ ಮತ್ತೆ ಬರಲ್ಲ!]]></title>
            <link>https://kannada.asianetnews.com/gallery/kitchen/fix-loose-cooker-handles-permanently-with-this-simple-nail-polish-hack-3zec8vl</link>
            <guid isPermaLink="true">https://kannada.asianetnews.com/gallery/kitchen/fix-loose-cooker-handles-permanently-with-this-simple-nail-polish-hack-3zec8vl</guid>
            <pubDate>Tue, 19 May 2026 15:25:12 +0530</pubDate>
            <description><![CDATA[&lt;p&gt;Kitchen hacks: ಪ್ರೆಶರ್ ಕುಕ್ಕರ್&zwnj;ಗಳು ಅತಿ ಹೆಚ್ಚು ಬಳಕೆಯಾಗುವ ವಸ್ತುಗಳಲ್ಲಿ ಒಂದು. ಆದರೆ, ಪದೇ ಪದೇ ಕುಕ್ಕರ್ ಹ್ಯಾಂಡಲ್&zwnj;ಗಳು ಲೂಸ್ ಆಗುವ ಸಮಸ್ಯೆ ಎಲ್ಲರನ್ನೂ ಕಾಡುತ್ತದೆ. ಇದರಿಂದ ಅಡುಗೆ ಮಾಡುವಾಗ ತುಂಬಾ ತೊಂದರೆಯಾಗುತ್ತದೆ. ಈ ಸಮಸ್ಯೆಗೆ ಒಂದು ಸಿಂಪಲ್ ಟ್ರಿಕ್&zwnj;ನಿಂದ ಪರಿಹಾರ ಕಂಡುಕೊಳ್ಳಬಹುದು.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krztf3r5tz2npsqhgad4p9wb,imgname-gemini-generated-image-kx0nolkx0nolkx0n-1779184406277.png" type="image/jpeg" height="390" width="690"/>
            <content:encoded><![CDATA[&lt;p&gt;Kitchen hacks: ಪ್ರೆಶರ್ ಕುಕ್ಕರ್&zwnj;ಗಳು ಅತಿ ಹೆಚ್ಚು ಬಳಕೆಯಾಗುವ ವಸ್ತುಗಳಲ್ಲಿ ಒಂದು. ಆದರೆ, ಪದೇ ಪದೇ ಕುಕ್ಕರ್ ಹ್ಯಾಂಡಲ್&zwnj;ಗಳು ಲೂಸ್ ಆಗುವ ಸಮಸ್ಯೆ ಎಲ್ಲರನ್ನೂ ಕಾಡುತ್ತದೆ. ಇದರಿಂದ ಅಡುಗೆ ಮಾಡುವಾಗ ತುಂಬಾ ತೊಂದರೆಯಾಗುತ್ತದೆ. ಈ ಸಮಸ್ಯೆಗೆ ಒಂದು ಸಿಂಪಲ್ ಟ್ರಿಕ್&zwnj;ನಿಂದ ಪರಿಹಾರ ಕಂಡುಕೊಳ್ಳಬಹುದು.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪ್ರೆಶರ್ ಕುಕ್ಕರ್ ಹ್ಯಾಂಡಲ್&zwnj;ಗಳು ಲೂಸ್ ಆಗುವುದು ಹೆಚ್ಚಿನ ಮನೆಗಳಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆ. ಹ್ಯಾಂಡಲ್ ಸಡಿಲವಾದಾಗ ಅಡುಗೆ ಮಾಡುವುದು ಕಷ್ಟವಾಗುವುದಲ್ಲದೆ, ಕೆಲವೊಮ್ಮೆ ಬಿಸಿ ಪದಾರ್ಥಗಳು ಕೆಳಗೆ ಬಿದ್ದು ಅಪಾಯ ಸಂಭವಿಸಬಹುದು. ನಾವು ಎಷ್ಟೇ ಗಟ್ಟಿಯಾಗಿ ಸ್ಕ್ರೂ ಬಿಗಿದರೂ, ಕೆಲವೇ ದಿನಗಳಲ್ಲಿ ಅದು ಮತ್ತೆ ಸಡಿಲಗೊಂಡು ಹ್ಯಾಂಡಲ್ ಅಲುಗಾಡಲು ಶುರುವಾಗುತ್ತದೆ. ಈ ಸಮಸ್ಯೆ ಗೃಹಿಣಿಯರಿಗೆ ಯಾವಾಗಲೂ ತಲೆನೋವು ತರಿಸುತ್ತದೆ.&lt;/p&gt;&lt;img&gt;&lt;p&gt;ಈ ಸಮಸ್ಯೆಗೆ ಪರಿಹಾರವಾಗಿ ಒಂದು ಟ್ರಿಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕುಕ್ಕರ್ ಹ್ಯಾಂಡಲ್ ಸ್ಕ್ರೂಗಳು ಪದೇ ಪದೇ ಲೂಸ್ ಆಗುವುದನ್ನು ತಡೆಯಲು ನಮ್ಮ ಮನೆಯಲ್ಲಿರುವ 'ನೇಲ್ ಪಾಲಿಶ್' ಅದ್ಭುತವಾಗಿ ಕೆಲಸ ಮಾಡುತ್ತದೆ ಎನ್ನುವುದೇ ಈ ವಿಡಿಯೋದ ಸಾರಾಂಶ. ಸಡಿಲವಾದ ಸ್ಕ್ರೂ ಅನ್ನು ಸಂಪೂರ್ಣವಾಗಿ ತೆಗೆದು, ಅದರ ತಿರುವುಗಳ (threads) ಮೇಲೆ ಸ್ವಲ್ಪ ನೇಲ್ ಪಾಲಿಶ್ ಹಚ್ಚಬೇಕು. ಅದು ಒಣಗುವ ಮುನ್ನವೇ ಮತ್ತೆ ಹ್ಯಾಂಡಲ್&zwnj;ಗೆ ಹಾಕಿ ಗಟ್ಟಿಯಾಗಿ ಬಿಗಿಗೊಳಿಸಬೇಕು. ನೇಲ್ ಪಾಲಿಶ್ ಒಣಗಿದ ನಂತರ ಸ್ಕ್ರೂ ಅನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ, ಇದರಿಂದ ಹ್ಯಾಂಡಲ್ ಬೇಗನೆ ಲೂಸ್ ಆಗುವುದಿಲ್ಲ. ಇದು ತುಂಬಾ ಸುಲಭವಾದ ಟ್ರಿಕ್. &amp;nbsp;&amp;nbsp;&lt;/p&gt;&lt;img&gt;&lt;p&gt;ನೇಲ್ ಪಾಲಿಶ್ ಜೊತೆಗೆ 'M-ಸೀಲ್' ಬಳಸಿ ಇನ್ನಷ್ಟು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಇದಕ್ಕೆ ಬೇಕಾದ ಮುಖ್ಯ ವಸ್ತು M-ಸೀಲ್. ಇದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕೇವಲ ಹತ್ತು ರೂಪಾಯಿ ಪ್ಯಾಕೆಟ್&zwnj;ಗಳಲ್ಲಿ ಸಿಗುತ್ತದೆ. M-ಸೀಲ್&zwnj;ನಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಎರಡು ಭಾಗಗಳಿರುತ್ತವೆ. ಇವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಕೈಗಳಿಂದ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣ ಸಂಪೂರ್ಣವಾಗಿ ಬೆರೆತು, ಒಂದು ಗಟ್ಟಿ ಪೇಸ್ಟ್&zwnj;ನಂತೆ ಆದ ನಂತರ ಬಳಸಲು ಸಿದ್ಧವಾಗಿರುತ್ತದೆ.&lt;/p&gt;&lt;img&gt;&lt;p&gt;ಹ್ಯಾಂಡಲ್ ಗಟ್ಟಿಯಾಗಿರಲು, ಮೊದಲು ಲೂಸ್ ಆದ ಹ್ಯಾಂಡಲನ್ನು ಕುಕ್ಕರ್&zwnj;ನಿಂದ ಸಂಪೂರ್ಣವಾಗಿ ಬೇರ್ಪಡಿಸಿ. ಇದಕ್ಕಾಗಿ ಫ್ಲಾಟ್ ಸ್ಕ್ರೂಡ್ರೈವರ್ ಬಳಸಿ ಹ್ಯಾಂಡಲ್ ಒಳಗಿರುವ ಸ್ಕ್ರೂ ಅನ್ನು ಪೂರ್ತಿಯಾಗಿ ಹೊರತೆಗೆಯಿರಿ. ಹ್ಯಾಂಡಲ್ ತೆಗೆದ ನಂತರ, ಸ್ಕ್ರೂ ಅನ್ನು ಸ್ವಚ್ಛಗೊಳಿಸಿ.&lt;/p&gt;&lt;p&gt;ನಂತರ, ಸಿದ್ಧಪಡಿಸಿಕೊಂಡ M-ಸೀಲ್ ಮಿಶ್ರಣವನ್ನು ಸ್ಕ್ರೂನ ತಿರುವುಗಳಿಗೆ (threads) ಎಚ್ಚರಿಕೆಯಿಂದ ಹಚ್ಚಿ. M-ಸೀಲ್ ಸ್ಕ್ರೂಗೆ ಮೇಲಿನಿಂದ ಕೆಳಗಿನವರೆಗೆ ಪೂರ್ತಿಯಾಗಿ ಹತ್ತುವಂತೆ ನೋಡಿಕೊಳ್ಳಿ. ಇದು ಸ್ಕ್ರೂ ಮತ್ತು ಹ್ಯಾಂಡಲ್ ನಡುವೆ ಗಟ್ಟಿ ಬಂಧವನ್ನು ಉಂಟುಮಾಡುತ್ತದೆ. M-ಸೀಲ್ ಹಚ್ಚಿದ ಸ್ಕ್ರೂ ಅನ್ನು ಮತ್ತೆ ಹ್ಯಾಂಡಲ್&zwnj;ನ ರಂಧ್ರಕ್ಕೆ ಹಾಕಿ, ಹ್ಯಾಂಡಲ್ ಸರಿಯಾದ ಜಾಗದಲ್ಲಿರುವಂತೆ ನೋಡಿಕೊಂಡು ಗಟ್ಟಿಯಾಗಿ ಬಿಗಿಗೊಳಿಸಿ. ಸ್ಕ್ರೂ ಅನ್ನು ಪೂರ್ತಿ ಬಿಗಿಯಾಗಿ ತಿರುಗಿಸುವುದು ಬಹಳ ಮುಖ್ಯ. ಸ್ಕ್ರೂ ಬಿಗಿದ ನಂತರ, ಸ್ವಲ್ಪ M-ಸೀಲ್ ಮಿಶ್ರಣ ಉಳಿದಿದ್ದರೆ, ಅದನ್ನು ಹ್ಯಾಂಡಲ್&zwnj;ನ ಒಳಭಾಗದಲ್ಲಿ ಕಾಣುವ ಬೋಲ್ಟ್ ಮೇಲೆ ಹಚ್ಚಿ. ಬೋಲ್ಟ್ ಸಂಪೂರ್ಣವಾಗಿ ಮುಚ್ಚುವಂತೆ ಎಚ್ಚರಿಕೆಯಿಂದ ಹಚ್ಚಿ, ಗಟ್ಟಿಯಾಗಿ ಒತ್ತಿ. ಇದು ಬೋಲ್ಟ್ ಅಲುಗಾಡದಂತೆ ಮತ್ತಷ್ಟು ಸ್ಥಿರತೆಯನ್ನು ನೀಡುತ್ತದೆ.&lt;/p&gt;&lt;img&gt;&lt;p&gt;M-ಸೀಲ್ ಗಟ್ಟಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮಿಶ್ರಣ ಸಂಪೂರ್ಣವಾಗಿ ಒಣಗಿ ಗಟ್ಟಿಯಾದ ನಂತರ, ಹ್ಯಾಂಡಲ್ ಶಾಶ್ವತವಾಗಿ ಬಿಗಿಯಾಗಿರುತ್ತದೆ. ಕೆಲವರಿಗೆ M-ಸೀಲ್ ಬಿಸಿಗೆ ಕಳಚಿ ಬರಬಹುದು ಎಂಬ ಅನುಮಾನ ಇರಬಹುದು. ಆದರೆ, M-ಸೀಲ್ ಅನ್ನು ಅಧಿಕ ತಾಪಮಾನವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ, ಕುಕ್ಕರ್ ಎಷ್ಟೇ ಬಿಸಿಯಾದರೂ ಇದು ಹಾಳಾಗುವುದಿಲ್ಲ, ಹ್ಯಾಂಡಲ್ ಅನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/fix-loose-cooker-handles-permanently-with-this-simple-nail-polish-hack-3zec8vl"/>
        </item>
        <item>
            <title><![CDATA[ಪ್ರತಿದಿನ ಧರಿಸಲು ಸಿಂಪಲ್ ಮತ್ತು ಸ್ಟೈಲಿಶ್ ಚಿನ್ನದ ಮೂಗುತಿ ಡಿಸೈನ್ಸ್ ಇಲ್ಲಿವೆ]]></title>
            <link>https://kannada.asianetnews.com/webstories/fashion/latest-gold-nose-pin-designs-for-daily-wear-must-try-once-kvn-vucn3cx</link>
            <guid isPermaLink="true">https://kannada.asianetnews.com/webstories/fashion/latest-gold-nose-pin-designs-for-daily-wear-must-try-once-kvn-vucn3cx</guid>
            <pubDate>Tue, 19 May 2026 15:36:43 +0530</pubDate>
            <description><![CDATA[&lt;p&gt;ಪ್ರತಿದಿನ ಧರಿಸಲು ಸೂಕ್ತವಾದ ಲೇಟೆಸ್ಟ್ ಮೂಗುತಿ ಡಿಸೈನ್&zwnj;ಗಳು ಇಲ್ಲಿವೆ. ಚಿನ್ನ, ಹೂವಿನ ವಿನ್ಯಾಸ, ಮಿನಿಮಲ್ ಹಾಗೂ ಸ್ಟೋನ್ ವರ್ಕ್ ಇರುವ ಟ್ರೆಂಡಿ ಮೂಗುತಿಗಳು ನಿಮ್ಮ ಪ್ರತಿ ಲುಕ್&zwnj;ಗೂ ಸ್ಟೈಲಿಶ್ ಮತ್ತು ಸುಂದರ ಟಚ್ ನೀಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzk3xxz3vn3p43qcz87172q,imgname-latest-gold-nose-pin-designs-1779176699839.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/latest-gold-nose-pin-designs-for-daily-wear-must-try-once-kvn-vucn3cx"/>
        </item>
        <item>
            <title><![CDATA[ಪದೇ ಪದೇ ಕಾಡುವ ಶೀತ, ಕೆಮ್ಮಿಗೆ ಹವಾಮಾನ ಕಾರಣವಲ್ಲ,  ಡಾಕ್ಟರ್‌ ನೀಡುವ ಎಚ್ಚರಿಕೆ ಏನು?]]></title>
            <link>https://kannada.asianetnews.com/gallery/health-life/weak-immunity-cough-cold-sore-throat-not-just-change-of-season-it-is-deficiency-in-your-body-avesq1t</link>
            <guid isPermaLink="true">https://kannada.asianetnews.com/gallery/health-life/weak-immunity-cough-cold-sore-throat-not-just-change-of-season-it-is-deficiency-in-your-body-avesq1t</guid>
            <pubDate>Tue, 19 May 2026 15:11:52 +0530</pubDate>
            <description><![CDATA[&lt;p&gt;ಆಗಾಗ ಶೀತ, ಕೆಮ್ಮು, ಆಯಾಸ ಆಗ್ತಿದ್ಯಾ? ಹವಾಮಾನ ಬದಲಾಗ್ತಿದೆ, ಮಳೆ &ndash; ಬಿಸಿಲಿಗೆ ಹೀಗಾಗ್ತಿದೆ ಅಂತ ನೀವಂದ್ಕೊಂಡಿದ್ದೀರಾ? ಹವಾಮಾನದಿಂದ ಹೀಗೆಲ್ಲ ಆಗೋದೇ ಇಲ್ಲ ಅಂತಿದ್ದಾರೆ ವೈದ್ಯರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzsgjq2wxc9r4g30yrsyd1m,imgname-illness-1779183405794.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಗಾಗ ಶೀತ, ಕೆಮ್ಮು, ಆಯಾಸ ಆಗ್ತಿದ್ಯಾ? ಹವಾಮಾನ ಬದಲಾಗ್ತಿದೆ, ಮಳೆ &ndash; ಬಿಸಿಲಿಗೆ ಹೀಗಾಗ್ತಿದೆ ಅಂತ ನೀವಂದ್ಕೊಂಡಿದ್ದೀರಾ? ಹವಾಮಾನದಿಂದ ಹೀಗೆಲ್ಲ ಆಗೋದೇ ಇಲ್ಲ ಅಂತಿದ್ದಾರೆ ವೈದ್ಯರು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ವಾತಾವರಣ ಬದಲಾಗ್ತಿದೆ. ಬೆಳಿಗ್ಗೆ ಬಿಸಿಲಿದ್ರೆ ಸಂಜೆ ಮಳೆ. ಇದ್ರಿಂದಾಗಿ ಜನರ ಆರೋಗ್ಯದಲ್ಲೂ ಏರುಪೇರಾಗ್ತಿದೆ. ಕೆಮ್ಮು, ನೆಗಡಿ, ಜ್ವರ ಅಂತ ಜನರು ಹಾಸಿಗೆ ಹಿಡಿತಿದ್ದಾರೆ. ಶೀತ, ಗಂಟಲು ನೋವು, ಆಯಾಸ ಕಾಣಿಸಿಕೊಳ್ತಿದ್ದಂತೆ ನಾವು ಆರೋಪ ಮಾಡೋದು ವಾತಾವರಣವನ್ನು. ಋತು ಬದಲಾಗ್ತಿದೆ ಹಾಗಾಗಿ ಅನಾರೋಗ್ಯ ಕಾಡ್ತಿದೆ ಅಂತ ಆರೋಪ ಮಾಡಿ ಸುಮ್ಮನಾಗ್ತೇವೆ. ಆದ್ರೆ ಆಗಾಗ ನಿಮಗೆ ಶೀತ, ಆಯಾಸ, ಕೆಮ್ಮು ಕಾಣಿಸಿಕೊಳ್ತಿದ್ದರೆ ಅದಕ್ಕೆ ವಾತಾವರಣ ಬದಲಾವಣೆ ಕಾರಣವಲ್ಲ. ನಿಮ್ಮ ಅಭ್ಯಾಸಗಳೇ ನಿಮಗೆ ಶತ್ರು.&lt;/p&gt;&lt;img&gt;&lt;p&gt;ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗಲು ಹವಾಮಾನ ಕಾರಣ ಅಲ್ವೇ ಅಲ್ಲ ಅಂತ ತಜ್ಞರು ಹೇಳ್ತಾರೆ. ಇದಕ್ಕೆ ನಿಮ್ಮ ನಿತ್ಯದ ಅಭ್ಯಾಸ ಕಾರಣವಾಗುತ್ತೆ. ನೀವು ಪ್ರತಿ ದಿನ ಮಾಡುವ ಅನೇಕ ಕೆಲಸಗಳು ನಿಧಾನವಾಗಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ರೋಗನಿರೋಧಕ ಶಕ್ತಿ ಕಡಿಮೆಯಾದಂತೆ ಅನಾರೋಗ್ಯ ಹೆಚ್ಚು.&lt;/p&gt;&lt;img&gt;&lt;p&gt;ನೀವು ಎಷ್ಟು ಗಂಟೆ ನಿದ್ರೆ ಮಾಡ್ತೀರಿ ಎಂಬುದು ಮಾತ್ರ ಮುಖ್ಯವಲ್ಲ, ಯಾವ ಪ್ರಮಾಣದಲ್ಲಿ ನಿದ್ರೆ ಮಾಡ್ತೀರಿ ಎಂಬುದು ಕೂಡ ಅಗತ್ಯ. ಕೆಲವರು ಪ್ರತಿ ದಿನ ಆರರಿಂದ ಏಳು ಗಂಟೆ ನಿದ್ರೆ ಮಾಡ್ತಾರೆ. ಆದ್ರೆ ನಿದ್ರೆ ಗಾಢವಾಗಿರೋದಿಲ್ಲ. ಅಸಮರ್ಪಕ ನಿದ್ರೆ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಅಂಥವರು ಪದೇ ಪದೇ ಶೀತ, ಕೆಮ್ಮು ಮತ್ತು ಆಸ್ತಮಾದಿಂದ ಬಳಲುತ್ತಾರೆ. ರಾತ್ರಿ ಆಗಾಗ್ಗೆ ಎಚ್ಚರಗೊಳ್ಳುತ್ತಿದ್ದರೆ, ಗೊರಕೆ ಹೊಡೆಯುತ್ತಿದ್ದರೆ ಅಥವಾ ನಿದ್ರೆ ಮಾಡುವ ಮುನ್ನ ಮೊಬೈಲ್ ನೋಡ್ತಿದ್ದರೆ ಇದೆಲ್ಲವೂ ದೇಹವನ್ನು ದುರ್ಬಲಗೊಳಿಸುತ್ತದೆ.&lt;/p&gt;&lt;img&gt;&lt;p&gt;ನಿದ್ರಾಹೀನತೆ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವುದು ಮಾತ್ರವಲ್ಲ ಹೃದ್ರೋಗ, ಬೊಜ್ಜು ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಳವಾದ ನಿದ್ರೆಯ ಸಮಯದಲ್ಲಿ ದೇಹ ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ಪ್ರೋಟೀನ್ಗಳನ್ನು ಉತ್ಪಾದಿಸುತ್ತದೆ. ನಿದ್ರೆ ಕಡಿಮೆಯಾದ್ರೆ ಇದ್ರ ಉತ್ಪಾದನೆ ಕಡಿಮೆಯಾಗುತ್ತದೆ.&lt;/p&gt;&lt;img&gt;&lt;p&gt;ರೋಗನಿರೋಧಕ ಶಕ್ತಿ ದುರ್ಬಲಗೊಳ್ಳಲು ಜೀವನ ಶೈಲಿ ಕೂಡ ಕಾರಣ. ಕಳಪೆ ಆಹಾರ ಪದ್ಧತಿ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಸಂಸ್ಕರಿಸಿದ ಆಹಾರ ಸೇವನೆ, ಫಾಸ್ಟ್ ಫುಡ್ ಸೇವನೆ ಜನರನ್ನು ಬೇಗ ಅಸ್ವಸ್ಥಗೊಳಿಸುತ್ತದೆ. ದೇಹಕ್ಕೆ ಅಗತ್ಯ ಪೋಷಕಾಂಶ ಸಿಗುವುದಿಲ್ಲ. ಪ್ರೋಟೀನ್, ಕಬ್ಬಿಣ, ಸತು, ವಿಟಮಿನ್ಗಳು, ಫೈಬರ್ ಮತ್ತು ಸಾಕಷ್ಟು ನೀರು ದೇಹಕ್ಕೆ ಅಗತ್ಯ.&lt;/p&gt;&lt;img&gt;&lt;p&gt;ಕಡಿಮೆ ನೀರು ಸೇವನೆ ದೊಡ್ಡ ಸಮಸ್ಯೆಯಾಗಿದೆ. ಇದು ರೋಗನಿರೋಧಕ ಶಕ್ತಿ ಮತ್ತು ಉರಿಯೂತದ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ವೈದ್ಯರ ಪ್ರಕಾರ, ಸಾಕಷ್ಟು ನೀರು ಕುಡಿಯದಿರುವುದು ದೇಹದಲ್ಲಿ ಲೋಳೆಯನ್ನು ದಪ್ಪವಾಗಿಸುತ್ತದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.&lt;/p&gt;&lt;img&gt;&lt;p&gt;ಮನೆ ಅಥವಾ ಕಚೇರಿಯಲ್ಲಿ ಮುಚ್ಚಿದ ಕೋಣೆಗಳಲ್ಲಿ ದೀರ್ಘಕಾಲ ಇರುವುದು ಕೂಡ ಆರೋಗ್ಯಕ್ಕೆ ಹಾನಿಕರ. ಹವಾನಿಯಂತ್ರಿತ ಕೊಠಡಿಗಳು, ಧೂಳು, ಕಳಪೆ ಗಾಳಿ ಮತ್ತು ಕಿಕ್ಕಿರಿದ ಒಳಾಂಗಣ ಸ್ಥಳಗಳಲ್ಲಿ ವೈರಸ್ಗಳು ಮತ್ತು ಅಲರ್ಜಿನ್ಗಳು ಹೆಚ್ಚು ಕಾಲ ಉಳಿಯುತ್ತವೆ. ಅದ್ರ ಸ್ವಚ್ಛತೆ ಜೊತೆ ಶುದ್ಧಗಾಳಿ, ವಾಕಿಂಗ್ ಬಹಳ ಮುಖ್ಯ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/health-life/weak-immunity-cough-cold-sore-throat-not-just-change-of-season-it-is-deficiency-in-your-body-avesq1t"/>
        </item>
        <item>
            <title><![CDATA[ಭಾರತದಲ್ಲಿ ನಾವೀನ್ಯತೆ ಮತ್ತು ಸಂಶೋಧನೆಗೆ ಬಲ: ಗೇಟ್ಸ್ ಫೌಂಡೇಶನ್ ಜೊತೆ ವಾಧ್ವಾನಿ ಫೌಂಡೇಶನ್ ಮಹತ್ವದ ಒಪ್ಪಂದ]]></title>
            <link>https://kannada.asianetnews.com/health-life/boosting-innovation-wadhwani-foundation-partners-with-gates-foundation-gdp/articleshow-gnszm5n</link>
            <guid isPermaLink="true">https://kannada.asianetnews.com/health-life/boosting-innovation-wadhwani-foundation-partners-with-gates-foundation-gdp/articleshow-gnszm5n</guid>
            <pubDate>Tue, 19 May 2026 14:51:25 +0530</pubDate>
            <description><![CDATA[ವಾಧ್ವಾನಿ ಫೌಂಡೇಶನ್ ಮತ್ತು ಗೇಟ್ಸ್ ಫೌಂಡೇಶನ್ ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಒಪ್ಪಂದ ಮಾಡಿಕೊಂಡಿವೆ. ಈ ಸಹಭಾಗಿತ್ವವು 'ನ್ಯಾಷನಲ್ ಇನ್ನೋವೇಶನ್ ನೆಟ್&zwnj;ವರ್ಕ್' (NIN) ಮೂಲಕ ಆರೋಗ್ಯ, ಪೌಷ್ಟಿಕಾಂಶದಂತಹ ಕ್ಷೇತ್ರಗಳಲ್ಲಿನ ಶೈಕ್ಷಣಿಕ ಸಂಶೋಧನೆಗಳನ್ನು ಸಮಾಜಮುಖಿ ಪರಿಹಾರಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzradhyf3pvfg8tde3t5jdm,imgname-wadhwani-foundation-1779182155324.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಭಾರತದ ಸಂಶೋಧನಾ ಮತ್ತು ನಾವೀನ್ಯತಾ ರಂಗದಲ್ಲಿ ಹೊಸ ಸಂಚಲನ ಮೂಡಿಸುವ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದೇಶದ ಶೈಕ್ಷಣಿಕ ಸಂಶೋಧನೆಗಳನ್ನು ಸಮಾಜಮುಖಿ ಪರಿಹಾರಗಳನ್ನಾಗಿ ಪರಿವರ್ತಿಸುವ ಉದ್ದೇಶದಿಂದ 'ವಾಧ್ವಾನಿ ಫೌಂಡೇಶನ್' ಮತ್ತು 'ಗೇಟ್ಸ್ ಫೌಂಡೇಶನ್' ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿವೆ. ವಾಧ್ವಾನಿ ಇನ್ನೋವೇಶನ್ ನೆಟ್&zwnj;ವರ್ಕ್&zwnj;ನ (ಡಬ್ಲ್ಯೂಐಎನ್&zwnj;) ರಾಷ್ಟ್ರೀಯ ವಿಸ್ತರಣೆಯಾದ 'ನ್ಯಾಷನಲ್ ಇನ್ನೋವೇಶನ್ ನೆಟ್&zwnj;ವರ್ಕ್' (ಎನ್&zwnj;ಐಎಣ್&zwnj;) ಮೂಲಕ ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.&lt;/p&gt;&lt;h2&gt;ಯಾವೆಲ್ಲಾ ಕ್ಷೇತ್ರಗಳಿಗೆ ಆದ್ಯತೆ?&lt;/h2&gt;&lt;p&gt;ಮುಖ್ಯವಾಗಿ ಆರೋಗ್ಯ, ಪೌಷ್ಟಿಕಾಂಶ, ಜೈವಿಕ ತಂತ್ರಜ್ಞಾನ, ಜೀನೋಮಿಕ್ಸ್, ಮೆಡ್&zwnj;ಟೆಕ್ ಹಾಗೂ ಭಾರತದ ಅಭಿವೃದ್ಧಿಗೆ ಪೂರಕವಾಗಿರುವ ಇತರ ಉದಯೋನ್ಮುಖ ಕ್ಷೇತ್ರಗಳ ಮೇಲೆ ಎರಡೂ ಸಂಸ್ಥೆಗಳು ಗಮನ ಹರಿಸಲಿವೆ.&lt;/p&gt;&lt;h2&gt;ಗೇಟ್ಸ್ ಫೌಂಡೇಶನ್&zwnj;ನ ಪಾತ್ರವೇನು?&lt;/h2&gt;&lt;p&gt;ಈ ಒಪ್ಪಂದದ ಭಾಗವಾಗಿ, ಗೇಟ್ಸ್ ಫೌಂಡೇಶನ್ ಮುಂದಿನ ಐದು ವರ್ಷಗಳಲ್ಲಿ ಐದು ಎನ್&zwnj;ಐಎನ್&zwnj; 'ಸೆಂಟರ್ಸ್ ಆಫ್ ಎಕ್ಸಲೆನ್ಸ್'ಗಳಿಗೆ ಬೆಂಬಲ ನೀಡಲಿದೆ. ಈ ವರ್ಷವೇ ಎರಡು ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.&lt;/p&gt;&lt;p&gt;ಈ ಕೇಂದ್ರಗಳು ಸಂಶೋಧಕರಿಗೆ ತಮ್ಮ ಪ್ರಯೋಗಾಲಯದ ಐಡಿಯಾಗಳನ್ನು ವಾಸ್ತವಿಕ ಜಗತ್ತಿಗೆ ತರಲು ಸಹಾಯ ಮಾಡಲಿವೆ. ಮೂಲಮಾದರಿಗಳ ಅಭಿವೃದ್ಧಿ, ಮೌಲ್ಯೀಕರಣ, ಪೇಟೆಂಟ್ ಪಡೆಯುವುದು, ವಾಣಿಜ್ಯೀಕರಣ, ಹೊಸ ಸ್ಟಾರ್ಟ್&zwnj;ಅಪ್&zwnj;ಗಳ ಸೃಷ್ಟಿ ಹಾಗೂ ಕೈಗಾರಿಕೆಗಳ ಜೊತೆ ಪಾಲುದಾರಿಕೆ ಬೆಳೆಸಲು ಈ ಕೇಂದ್ರಗಳು ನೆರವಾಗಲಿವೆ.&lt;/p&gt;&lt;h2&gt;ಪ್ರಧಾನಿ ಮೋದಿಯವರಿಂದ ಚಾಲನೆ ಪಡೆದಿದ್ದ 'ಡಬ್ಯೂಐಎನ್&zwnj;'&lt;/h2&gt;&lt;p&gt;ಕಳೆದ ವರ್ಷ, ಅಂದರೆ ಏಪ್ರಿಲ್ 29, 2025 ರಂದು ಪ್ರಧಾನಿ ನರೇಂದ್ರ ಮೋದಿ ಅವರು 'ವಾಧ್ವಾನಿ ಇನ್ನೋವೇಶನ್ ನೆಟ್&zwnj;ವರ್ಕ್' (ಡಬ್ಯೂಐಎನ್&zwnj;) ಗೆ ಚಾಲನೆ ನೀಡಿದ್ದರು. ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು ಮತ್ತು ಹೂಡಿಕೆದಾರರನ್ನು ಒಂದೇ ವೇದಿಕೆಯಡಿ ತಂದು, ಸಂಶೋಧನೆಗಳನ್ನು ಮಾರುಕಟ್ಟೆಗೆ ತರುವ ಮಾರ್ಗವನ್ನು ಸುಗಮಗೊಳಿಸಲು ವಾಧ್ವಾನಿ ಫೌಂಡೇಶನ್ ಇದನ್ನು ಸ್ಥಾಪಿಸಿತ್ತು. ಇದೀಗ 'ಎನ್&zwnj;ಐಎನ್&zwnj;' ಮೂಲಕ ಈ ಮಾದರಿಯನ್ನು ಇಡೀ ದೇಶಾದ್ಯಂತ ವಿಸ್ತರಿಸಲಾಗುತ್ತಿದೆ.&lt;/p&gt;&lt;h2&gt;50ಕ್ಕೂ ಹೆಚ್ಚು ಯೋಜನೆಗಳಿಗೆ ಬೆಂಬಲ&lt;/h2&gt;&lt;p&gt;ಪ್ರಾರಂಭವಾದಾಗಿನಿಂದ 'ಡಬ್ಲ್ಯೂಐಎನ್&zwnj;' ಈಗಾಗಲೇ ಹೆಲ್ತ್&zwnj;ಟೆಕ್, ಮೆಡ್&zwnj;ಟೆಕ್, ಬಯೋಟೆಕ್ನಾಲಜಿ ಮತ್ತು ಕ್ವಾಂಟಮ್ ತಂತ್ರಜ್ಞಾನದ 50ಕ್ಕೂ ಹೆಚ್ಚು ಉನ್ನತ ಯೋಜನೆಗಳಿಗೆ ಬೆಂಬಲ ನೀಡಿದೆ.&lt;/p&gt;&lt;p&gt;ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಕಾನ್ಪುರ, ಐಐಟಿ ಹೈದರಾಬಾದ್, ಐಐಟಿ ಧನ್&zwnj;ಬಾದ್, ಬೆಂಗಳೂರಿನ 'ಇಂಡಿಯನ್ ಇನ್&zwnj;ಸ್ಟಿಟ್ಯೂಟ್ ಆಫ್ ಸೈನ್ಸ್' (ಐಐಎಸ್&zwnj;ಸಿ) ಹಾಗೂ ಸಿ-ಕ್ಯಾಂಪ್&zwnj;ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿದೆ. ಮುಂಬರುವ ದಿನಗಳಲ್ಲಿ ಐಐಟಿ ಕಾನ್ಪುರದಲ್ಲಿ 'ವಾಧ್ವಾನಿ ಸ್ಕೂಲ್ ಆಫ್ ಎಐ' ಮತ್ತು ಐಐಟಿ ಬಾಂಬೆಯಲ್ಲಿ 'ವಾಧ್ವಾನಿ ಹೆಲ್ತ್ ಅಂಡ್ ಬಯೋ ಹಬ್' ಎಂಬ ಎರಡು ಬೃಹತ್ ಸೂಪರ್ ಹಬ್&zwnj;ಗಳು ತಲೆಎತ್ತಲಿವೆ.&lt;/p&gt;&lt;p&gt;ಎನ್&zwnj;ಐಎನ್&zwnj;ನ ಪ್ರಮುಖ ಗುರಿಯೆಂದರೆ, ಮುಂದಿನ 3-5 ವರ್ಷಗಳಲ್ಲಿ ಪಾಲುದಾರ ಸಂಸ್ಥೆಗಳ ಮೂಲಕ ದೇಶಾದ್ಯಂತ 250ಕ್ಕೂ ಹೆಚ್ಚು ಉತ್ಕೃಷ್ಟತಾ ಕೇಂದ್ರಗಳನ್ನು (ಸಿಒಇ) ಸ್ಥಾಪಿಸುವುದು. ಈ ಮೂಲಕ ಪ್ರತಿವರ್ಷ ಸಾವಿರಾರು ಸಂಶೋಧನಾ ಐಡಿಯಾಗಳನ್ನು ಲ್ಯಾಬ್&zwnj;ನಿಂದ ಮಾರುಕಟ್ಟೆಗೆ ತರುವುದು ಹಾಗೂ ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಇದರ ಅಂತಿಮ ಗುರಿಯಾಗಿದೆ.&lt;/p&gt;&lt;p&gt;ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ವಾಧ್ವಾನಿ ಫೌಂಡೇಶನ್&zwnj;ನ ಸಿಇಒ ಮತ್ತು ಬೋರ್ಡ್ ಮೆಂಬರ್ ಡಾ. ಅಜಯ್ ಕೆಲಾ, &quot;ಸಂಶೋಧಕರು, ಸಂಸ್ಥೆಗಳು, ಉದ್ದಿಮೆಗಳು ಮತ್ತು ಬಂಡವಾಳ ಒಂದೇ ಗುರಿಯೊಂದಿಗೆ ಸೇರಿದಾಗ ಭಾರತದ ನಾವೀನ್ಯತಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಬಹುದು ಎಂಬುದನ್ನು ಡಬ್ಯೂಐಎನ್&zwnj; ಸಾಬೀತುಪಡಿಸಿದೆ. ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಗೇಟ್ಸ್ ಫೌಂಡೇಶನ್ ಜೊತೆ ಕೈಜೋಡಿಸಿರುವುದು ನಮಗೆ ಸಂತಸ ತಂದಿದೆ. ಜಾಗತಿಕ ನಾವೀನ್ಯತಾ ವಲಯದಲ್ಲಿ ಭಾರತವನ್ನು ನಾಯಕನನ್ನಾಗಿ ಮಾಡುವುದೇ ನಮ್ಮ ಗುರಿ,&quot; ಎಂದರು.&lt;/p&gt;&lt;p&gt;ಗೇಟ್ಸ್ ಫೌಂಡೇಶನ್&zwnj;ನ ಭಾರತೀಯ ನಿರ್ದೇಶಕಿ ಅರ್ಚನಾ ವ್ಯಾಸ್ ಪ್ರತಿಕ್ರಿಯಿಸಿ, &quot;ಮುಂಬರುವ ದಶಕದ ಅತ್ಯಂತ ಪ್ರಮುಖ ಆರೋಗ್ಯ ಮತ್ತು ಪೌಷ್ಟಿಕಾಂಶದ ಆವಿಷ್ಕಾರಗಳು ಭಾರತೀಯ ಸಂಸ್ಥೆಗಳಿಂದಲೇ ಹೊರಹೊಮ್ಮಲಿವೆ. ಭಾರತೀಯ ಸಂಶೋಧಕರ ಐಡಿಯಾಗಳನ್ನು ಅಗ್ಗದ ಹಾಗೂ ಸುಲಭವಾಗಿ ಎಲ್ಲರಿಗೂ ಸಿಗುವಂತಹ ಪರಿಹಾರಗಳನ್ನಾಗಿ ಬದಲಾಯಿಸಲು ನಾವು ವಾಧ್ವಾನಿ ಫೌಂಡೇಶನ್ ಜೊತೆ ಈ ಹೂಡಿಕೆ ಮಾಡುತ್ತಿದ್ದೇವೆ,&quot; ಎಂದು ತಿಳಿಸಿದರು.&lt;/p&gt;&lt;p&gt;ಸಿಲಿಕಾನ್ ವ್ಯಾಲಿಯ ಉದ್ಯಮಿ ಡಾ. ರೋಮೇಶ್ ವಾಧ್ವಾನಿ ಅವರು ಸ್ಥಾಪಿಸಿರುವ ವಾಧ್ವಾನಿ ಫೌಂಡೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಹಾಗೂ ನಾವೀನ್ಯತೆಯ ಮೂಲಕ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆಯಾಗಿದೆ.&lt;/p&gt;&lt;p&gt;ಇನ್ನು ಗೇಟ್ಸ್ ಫೌಂಡೇಶನ್ ಬಿಲ್ ಗೇಟ್ಸ್ ಅವರ ಮಾರ್ಗದರ್ಶನದಲ್ಲಿ, ಸಿಇಒ ಮಾರ್ಕ್ ಸುಜ್ಮನ್ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, 'ಪ್ರತಿಯೊಂದು ಜೀವಕ್ಕೂ ಸಮಾನ ಮೌಲ್ಯವಿದೆ' ಎಂಬ ನಂಬಿಕೆಯೊಂದಿಗೆ ಜಗತ್ತಿನಾದ್ಯಂತ ಜನರ ಆರೋಗ್ಯ ಮತ್ತು ಭವಿಷ್ಯವನ್ನು ಉತ್ತಮಗೊಳಿಸಲು ಶ್ರಮಿಸುತ್ತಿದೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/health-life/boosting-innovation-wadhwani-foundation-partners-with-gates-foundation-gdp/articleshow-gnszm5n"/>
        </item>
        <item>
            <title><![CDATA[ತಿಳಿದೋ ತಿಳಿಯದೆಯೋ ಈ 5 ಅಭ್ಯಾಸವಿದ್ರೆ ಇಂದೇ ಬಿಟ್ಟುಬಿಡಿ, ಇಲ್ಲವೆಂದ್ರೆ ಹಾವು ಕಚ್ಚೋಕೆ ನಾವೇ ಆಹ್ವಾನಿಸಿದಂತೆ!]]></title>
            <link>https://kannada.asianetnews.com/life/snake-safety-tips-common-habits-that-increase-the-risk-of-snake-bites/articleshow-w0yt3as</link>
            <guid isPermaLink="true">https://kannada.asianetnews.com/life/snake-safety-tips-common-habits-that-increase-the-risk-of-snake-bites/articleshow-w0yt3as</guid>
            <pubDate>Tue, 19 May 2026 14:12:26 +0530</pubDate>
            <description><![CDATA[&lt;p&gt;&lt;strong&gt;How to avoid snake bites in summer: &lt;/strong&gt;ಬೇಸಿಗೆ ಮತ್ತು ಮಳೆಗಾಲ ಆರಂಭವಾಯಿತೆಂದರೆ ಸಾಕು, ಹಾವುಗಳ ಓಡಾಟ ಹೆಚ್ಚಾಗುತ್ತದೆ. ಆದರೆ ನಿಮಗೆ ಗೊತ್ತೇ? ನಮ್ಮ ಕೆಲವು ಸಣ್ಣ ತಪ್ಪುಗಳು ಅಥವಾ ಅಜಾಗರೂಕತೆಯ ಅಭ್ಯಾಸಗಳೇ ಹಾವುಗಳು ನಮ್ಮ ಹತ್ತಿರ ಬರಲು ಪ್ರಚೋದನೆ ನೀಡುತ್ತವೆ. ಹಾವಿನ ಕಚ್ಚುವಿಕೆಯಿಂದ ಪಾರಾಗಲು ಮತ್ತು ನಿಮ್ಮ ಪರಿಸರವನ್ನು ಸುರಕ್ಷಿತವಾಗಿರಿಸಲು ನೀವು ಪಾಲಿಸಬೇಕಾದ ಅಗತ್ಯ ಮುನ್ನೆಚ್ಚರಿಕೆಗಳ ಕುರಿತಾದ ಮಾಹಿತಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzpa4r35xjg91jt9wbcg8re,imgname-thumbnail---2026-05-19t140922.244-1779180049155.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೇ&lt;/strong&gt;ಸಿಗೆಯಲ್ಲಿ ನಗರ ಪ್ರದೇಶಗಳ ಸುತ್ತಮುತ್ತ ಹಾವಿನ ಓಡಾಟ ಹೆಚ್ಚಾಗುತ್ತದೆ ಮತ್ತು ಎಲ್ಲಿಯಾದರೂ ಹಾವು ಕಂಡುಬಂದರೆ ಎಂತಹ ಧೈರ್ಯವಂತರಿಗೂ ಬೆವರುವಂತಾಗುತ್ತದೆ. ಅದೇ ರೀತಿ ಪ್ರತಿದಿನ ಹಾವು ಕಚ್ಚುವ ಸುದ್ದಿಗಳನ್ನು ಕೇಳಿದ ನಂತರ ಜನರ ಮನಸ್ಸಿನಲ್ಲಿ ತಮ್ಮ ಸುತ್ತಮುತ್ತ, ಮನೆ ಅಥವಾ ಗಾರ್ಡನ್&zwnj;ನಲ್ಲಿ ಹಾವು ಇರಬಹುದೇ ಎಂಬ ಭಯ ಉಂಟಾಗುತ್ತದೆ. ಆದರೆ ನಿಮಗೆ ಗೊತ್ತೇ? ಹಲವು ಬಾರಿ ನೀವೇ ಸ್ವತಃ ಹಾವುಗಳನ್ನು ನಿಮ್ಮ ಹತ್ತಿರಕ್ಕೆ ಬರುವಂತೆ ಆಹ್ವಾನ ನೀಡುತ್ತೀರಿ. ತಿಳಿದೋ ತಿಳಿಯದೆಯೋ ಮಾಡುವ ಕೆಲವು ಅಭ್ಯಾಸಗಳು ಹಾವು ಕಚ್ಚಲು ಕಾರಣವಾಗುತ್ತವೆ. ತಜ್ಞರ ಪ್ರಕಾರ, ಹಾವುಗಳು ಮನುಷ್ಯರ ಬಳಿ ತಮ್ಮ ಇಚ್ಛೆಯಿಂದ ಬರುವುದಿಲ್ಲ, ಬದಲಾಗಿ ಆಹಾರ, ನೀರು ಮತ್ತು ಅಡಗಿಕೊಳ್ಳುವ ಜಾಗ ಅವುಗಳನ್ನು ಅಲ್ಲಿಗೆ ಸೆಳೆಯುತ್ತವೆ. ನಿಮ್ಮ ಮನೆ ಮತ್ತು ಗಾರ್ಡನ್ ಅನ್ನು ಸುರಕ್ಷಿತವಾಗಿಡಲು ಯಾವ ವಿಷಯಗಳು ಹಾವುಗಳನ್ನು ನಿಮ್ಮತ್ತ ಆಕರ್ಷಿಸುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.&lt;/p&gt;&lt;h2&gt;&lt;strong&gt;ಕಲ್ಲಿರುವ ಪ್ರದೇಶಗಳಲ್ಲಿ ನಡೆದಾಡುವುದು&lt;/strong&gt;&lt;/h2&gt;&lt;p&gt;WebMD ಪ್ರಕಾರ, ಹಾವುಗಳು ಹೆಚ್ಚಾಗಿ ಎತ್ತರದ ಹುಲ್ಲು, ಕಲ್ಲುಗಳ ಕೆಳಗೆ ಅಥವಾ ಕಟ್ಟಿಗೆಯ ರಾಶಿಗಳಲ್ಲಿ ಅಡಗಿರುತ್ತವೆ. ಏಕೆಂದರೆ ಅಲ್ಲಿ ಅವುಗಳಿಗೆ ಸುಲಭವಾಗಿ ಆಹಾರ ಸಿಗುತ್ತದೆ.&lt;/p&gt;&lt;p&gt;ಹಲವು ಬಾರಿ ಜನರು ಕಲ್ಲಿನ ಪ್ರದೇಶಗಳಿಗೆ ಹೋದಾಗ, ನಿರ್ಮಿಸಲಾದ ರಸ್ತೆ ಅಥವಾ ಕಾಲುದಾರಿ ಬಿಟ್ಟು ಪೊದೆಗಳು ಅಥವಾ ಕಲ್ಲುಗಳ ನಡುವೆ ನಡೆದರೆ ಹಾವು ಕಚ್ಚುವ ಅಪಾಯ ಅತಿ ಹೆಚ್ಚಾಗಿರುತ್ತದೆ. ಕಾಲುದಾರಿ ಇಲ್ಲದೆ ನಡೆಯುವಾಗ ನಿಮ್ಮ ಕಾಲು ಅರಿಯದಂತೆ ಅವುಗಳನ್ನ ತುಳಿಯಬಹುದು. ಇದರಿಂದ ಅವು ರಕ್ಷಣಾತ್ಮಕವಾಗಿ ದಾಳಿ ಮಾಡುತ್ತವೆ.&lt;/p&gt;&lt;h2&gt;&lt;strong&gt;ಸರಿಯಾದ ಪಾದರಕ್ಷೆ ಧರಿಸದಿರುವುದು &amp;nbsp;&lt;/strong&gt;&lt;/h2&gt;&lt;p&gt;ಕಾಡು ಅಥವಾ ಹುಲ್ಲುಗಾವಲು ಪ್ರದೇಶಗಳಿಗೆ ಹೋಗುವಾಗ ಚಪ್ಪಲಿ ಅಥವಾ ಸ್ಯಾಂಡಲ್ ಧರಿಸುವುದು ತುಂಬಾ ಅಪಾಯಕಾರಿ. CDC ಪ್ರಕಾರ, ಇಂತಹ ಪ್ರದೇಶಗಳಲ್ಲಿ ಯಾವಾಗಲೂ ಎತ್ತರವಾದ ಮತ್ತು ಬಲವಾದ ಬೂಟುಗಳನ್ನು ಧರಿಸಬೇಕು. ಹಾವಿನ ಹಲ್ಲುಗಳು ತೆಳುವಾದ ಬಟ್ಟೆ ಅಥವಾ ಚಪ್ಪಲಿಯನ್ನು ಸುಲಭವಾಗಿ ಚುಚ್ಚಬಲ್ಲವು, ಆದರೆ ಚರ್ಮದ ಅಥವಾ ದಪ್ಪ ರಬ್ಬರ್&zwnj;ನ ಬೂಟುಗಳು ನಿಮಗೆ ಹಾವಿನ ವಿಷಕಾರಿ ಹಲ್ಲಿನಿಂದ ಸಾಕಷ್ಟು ಮಟ್ಟಿಗೆ ರಕ್ಷಣೆ ನೀಡುತ್ತವೆ.&lt;/p&gt;&lt;h2&gt;&lt;strong&gt;ದಟ್ಟವಾದ ಗಾರ್ಡನ್&zwnj; ಮಧ್ಯೆ ಕೈ ಹಾಕೋದು&lt;/strong&gt;&lt;/h2&gt;&lt;p&gt;ನ್ಯಾಷನಲ್ ವೈಲ್ಡ್ ಲೈಫ್ ಫೆಡರೇಶನ್ ಪ್ರಕಾರ, ಗಾರ್ಡನ್ ಸ್ವಚ್ಛಗೊಳಿಸುವಾಗ ನೇರವಾಗಿ ಕೈಗಳನ್ನು ಪೊದೆ ಅಥವಾ ದಟ್ಟವಾದ ಗಿಡಗಳ ನಡುವೆ ಹಾಕುವುದು ಅಪಾಯಕಾರಿ. ತಜ್ಞರ ಅಭಿಪ್ರಾಯದಂತೆ ಹಾವುಗಳು ಹೆಚ್ಚಾಗಿ ತಂಪು ಮತ್ತು ತೇವಾಂಶವಿರುವ ಜಾಗಗಳಲ್ಲಿ ಸುರುಳಿ ಸುತ್ತಿ ಕುಳಿತಿರುತ್ತವೆ. ನೀವು ಕೈಗವಸು (gloves) ಧರಿಸದೆ ಅಥವಾ ನೋಡದೆ ಅಂತಹ ಜಾಗಗಳಿಗೆ ಕೈ ಹಾಕಿದರೆ, ಹಾವು ಅದನ್ನು ದಾಳಿ ಎಂದು ಭಾವಿಸಿ ಕಚ್ಚಬಹುದು.&lt;/p&gt;&lt;h3&gt;&lt;strong&gt;ನಡೆಯುವಾಗ ಕೆಳಗೆ ನೋಡದಿರುವುದು&lt;/strong&gt;&lt;/h3&gt;&lt;p&gt;ಅನೇಕ ಬಾರಿ ಜನರು ಫೋನ್ ನೋಡುತ್ತಾ ಅಥವಾ ಮಾತನಾಡುತ್ತಾ ನಡೆಯುತ್ತಾರೆ ಮತ್ತು ಕೆಳಗೆ ಗಮನ ಕೊಡುವುದಿಲ್ಲ. ಹಾವುಗಳು ಸುತ್ತಮುತ್ತಲಿನ ಪರಿಸರಕ್ಕೆ ತಕ್ಕಂತೆ ತಮ್ಮನ್ನು ತಾವು ಬಹಳ ಚೆನ್ನಾಗಿ ಹೊಂದಿಸಿಕೊಳ್ಳುತ್ತವೆ (camouflage). ಮಾಯೊ ಕ್ಲಿನಿಕ್&zwnj;ನ ವರದಿಯ ಪ್ರಕಾರ, ಅನೇಕ ಜನರು ಹಾವನ್ನು ನೆಲದ ಮೇಲೆ ಬಿದ್ದಿರುವ ಒಣಗಿದ ಕೊಂಬೆ ಅಥವಾ ಹಗ್ಗ ಎಂದು ಭಾವಿಸಿ ಅದರ ಮೇಲೆ ಕಾಲಿಡುತ್ತಾರೆ. ಜಾಗರೂಕತೆಯ ಕೊರತೆಯೇ ಸ್ನೇಕ್ ಬೈಟ್ (ಹಾವು ಕಚ್ಚುವಿಕೆ) ಗೆ ಮುಖ್ಯ ಕಾರಣವಾಗುತ್ತದೆ.&lt;/p&gt;&lt;h3&gt;&lt;strong&gt;ಸ್ನೇಕ್ ಸೀಸನ್&zwnj;ನಲ್ಲಿ ಹೊರಗೆ ಹೆಚ್ಚು ಸಮಯ ಕಳೆಯುವುದು&lt;/strong&gt;&lt;/h3&gt;&lt;p&gt;ಹಾವುಗಳು ಶೀತ ರಕ್ತದ ಪ್ರಾಣಿಗಳಾಗಿರುವುದರಿಂದ ಅವು ಬೇಸಿಗೆ ಮತ್ತು ಮಳೆಗಾಲದಲ್ಲಿ ಅತಿ ಹೆಚ್ಚು ಸಕ್ರಿಯವಾಗಿರುತ್ತವೆ. ತಾಪಮಾನ ಹೆಚ್ಚಾದಂತೆ ಹಾವುಗಳು ಸಂತಾನೋತ್ಪತ್ತಿ ಮತ್ತು ಆಹಾರದ ಹುಡುಕಾಟದಲ್ಲಿ ಹೊರಬರುತ್ತವೆ. ಈ ಸಮಯದಲ್ಲಿ ಬಯಲು ಪ್ರದೇಶಗಳು, ಹೊಲಗಳು ಅಥವಾ ಕಾಡುಗಳಲ್ಲಿ ಎಚ್ಚರಿಕೆ ಇಲ್ಲದೆ ತಿರುಗುವುದು ಅಪಾಯದಿಂದ ಮುಕ್ತವಾಗಿರುವುದಿಲ್ಲ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/life/snake-safety-tips-common-habits-that-increase-the-risk-of-snake-bites/articleshow-w0yt3as"/>
        </item>
        <item>
            <title><![CDATA[ಈ ಜಾಗಗಳಲ್ಲಿ ರಾತ್ರಿ ಆತ್ಮಗಳು ಸಂಚರಿಸುತ್ತಂತೆ, ಬಾಲಿವುಡ್ ಸಿಟಿಯಲ್ಲೇ ಇದೆ ಭಯಾನಕ ಲೋಕ]]></title>
            <link>https://kannada.asianetnews.com/gallery/life/list-of-the-most-haunted-places-in-mumbai-where-people-are-afraid-to-go-people-get-scared-just-by-hearing-the-names-suh-7b18vmg</link>
            <guid isPermaLink="true">https://kannada.asianetnews.com/gallery/life/list-of-the-most-haunted-places-in-mumbai-where-people-are-afraid-to-go-people-get-scared-just-by-hearing-the-names-suh-7b18vmg</guid>
            <pubDate>Tue, 19 May 2026 12:40:47 +0530</pubDate>
            <description><![CDATA[&lt;p&gt;ಮಾಯಾನಗರಿ ಮುಂಬೈ ಅಂದ್ರೆ ಬಾಲಿವುಡ್&zwnj;, ಸೀ ಲಿಂಕ್&zwnj;, ತಾಜ್ ಹೋಟೆಲ್&zwnj;, ಫುಲ್ ನೈಟ್&zwnj;ಲೈಫ್ ಅಂತಲೇ ಜನರಿಗೆ ಗೊತ್ತು. ಆದರೆ ಇದೇ ಮುಂಬೈನಲ್ಲಿ ರಾತ್ರಿ ಹೊತ್ತಿಗೆ ಜನರನ್ನು ಬೆಚ್ಚಿಬೀಳಿಸುವ ಕೆಲ ಭಯಾನಕ ಜಾಗಗಳೂ ಇವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzggzabbshb745qe5dq9zvy,imgname-mosthauntedplacesinmumbai-1779173981514.jpeg" type="image/jpeg" height="390" width="690"/>
            <content:encoded><![CDATA[&lt;p&gt;ಮಾಯಾನಗರಿ ಮುಂಬೈ ಅಂದ್ರೆ ಬಾಲಿವುಡ್&zwnj;, ಸೀ ಲಿಂಕ್&zwnj;, ತಾಜ್ ಹೋಟೆಲ್&zwnj;, ಫುಲ್ ನೈಟ್&zwnj;ಲೈಫ್ ಅಂತಲೇ ಜನರಿಗೆ ಗೊತ್ತು. ಆದರೆ ಇದೇ ಮುಂಬೈನಲ್ಲಿ ರಾತ್ರಿ ಹೊತ್ತಿಗೆ ಜನರನ್ನು ಬೆಚ್ಚಿಬೀಳಿಸುವ ಕೆಲ ಭಯಾನಕ ಜಾಗಗಳೂ ಇವೆ.&lt;/p&gt;&lt;img&gt;&lt;p&gt;ಕೊಲಾಬಾದ ಸಮುದ್ರ ತೀರದ ಬಳಿ ಇರುವ ಮುಕೆಶ್ ಮಿಲ್ಸ್&zwnj; ಅನ್ನು ಮುಂಬೈನ ಅತ್ಯಂತ ಹಾಂಟೆಡ್ ಜಾಗಗಳಲ್ಲಿ ಒಂದೆಂದು ಕರೆಯಲಾಗುತ್ತದೆ. ಅನೇಕ ಬಾಲಿವುಡ್ ಸಿನಿಮಾಗಳ ಶೂಟಿಂಗ್ ಇಲ್ಲಿ ನಡೆದಿದ್ರೂ, ರಾತ್ರಿ ಹೊತ್ತಿಗೆ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬ ಮಾತುಗಳು ವರ್ಷಗಳಿಂದ ಕೇಳಿಬರುತ್ತಿವೆ. ಕೆಲವರು ಶೂಟಿಂಗ್ ವೇಳೆ ಕಾಣದ ಶಕ್ತಿ ಅನುಭವಿಸಿದ್ದೇವೆ ಎಂದೂ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಮಾಹಿಮ್&zwnj;ನಲ್ಲಿರುವ ಡಿ&rsquo;ಸೋಜಾ ಚಾಲ್ ಬಗ್ಗೆ ಹಲವು ಭಯಾನಕ ಕಥೆಗಳು ಹರಿದಾಡುತ್ತವೆ. ಈ ಜಾಗದಲ್ಲಿ ಮೃತಪಟ್ಟ ಮಹಿಳೆಯ ಆತ್ಮ ರಾತ್ರಿ ಸುಳಿದಾಡುತ್ತೆ ಎಂದು ಸ್ಥಳೀಯರು ಹೇಳುತ್ತಾರೆ. ರಾತ್ರಿ ಹೊತ್ತಿಗೆ ಹೆಜ್ಜೆ ಸದ್ದು, ಪಿಸುಮಾತು ಕೇಳಿಸುತ್ತದೆ ಎಂಬ ವದಂತಿಯಿಂದ ಈ ಚಾಲ್ ಭಯಾನಕ ಸ್ಥಳಗಳ ಪಟ್ಟಿಗೆ ಸೇರಿದೆ.&lt;/p&gt;&lt;img&gt;&lt;p&gt;ಹಗಲು ಪ್ರವಾಸಿಗರಿಂದ ಕಿಕ್ಕಿರಿದಿರುವ ಈ ರಾಷ್ಟ್ರೀಯ ಉದ್ಯಾನ, ರಾತ್ರಿ ಹೊತ್ತಿಗೆ ಸಂಪೂರ್ಣ ವಿಭಿನ್ನ ವಾತಾವರಣ ಪಡೆಯುತ್ತದೆ. ಕಾಡಿನೊಳಗೆ ವಿಚಿತ್ರ ಶಬ್ದಗಳು, ನೆರಳುಗಳು ಕಾಣುತ್ತವೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಅಲ್ಲಿನ ಸಿಬ್ಬಂದಿಯೇ ಕೆಲ ಭಾಗಗಳಿಗೆ ರಾತ್ರಿ ಹೋಗೋದನ್ನ ತಪ್ಪಿಸುತ್ತಾರೆ ಎನ್ನಲಾಗುತ್ತದೆ.&lt;/p&gt;&lt;img&gt;&lt;p&gt;ಪಾರ್ಸಿ ಸಮುದಾಯದ ಅಂತ್ಯಕ್ರಿಯೆಗಾಗಿ ಬಳಸಲಾಗುತ್ತಿದ್ದ ಈ ಸ್ಥಳದ ಸುತ್ತ ಹಲವು ಅಲೌಕಿಕ ಕಥೆಗಳು ಕೇಳಿಬರುತ್ತವೆ. ರಾತ್ರಿ ಹೊತ್ತಿಗೆ ಅಲ್ಲಿ ವಿಚಿತ್ರ ಅನುಭವವಾಗುತ್ತದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಇದರಿಂದಲೇ ಈ ಜಾಗವನ್ನು ಮುಂಬೈನ ಭಯಾನಕ ಸ್ಥಳಗಳಲ್ಲಿ ಒಂದೆಂದು ಕರೆಯಲಾಗುತ್ತದೆ.&lt;/p&gt;&lt;img&gt;&lt;p&gt;ಮುಂಬೈನ ಐಕಾನಿಕ್ ತಾಜ್ ಪ್ಯಾಲೆಸ್ ಹೋಟೆಲ್ ಕೂಡ ದೆವ್ವದ ಕಥೆಗಳಿಂದ ಸುದ್ದಿಯಾಗಿತ್ತು. ಹೋಟೆಲ್ ವಿನ್ಯಾಸ ಮಾಡಿದ ವಾಸ್ತುಶಿಲ್ಪಿ ಕಟ್ಟಡ ತನ್ನ ಪ್ಲಾನ್ ಪ್ರಕಾರ ನಿರ್ಮಾಣವಾಗಿಲ್ಲ ಅನ್ನೋ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂಬ ದಂತಕಥೆ ಇಂದಿಗೂ ವೈರಲ್ ಆಗುತ್ತಲೇ ಇದೆ. ಕೆಲವರು ಹೋಟೆಲ್&zwnj;ನಲ್ಲಿ ವಿಚಿತ್ರ ಅನುಭವಗಳ ಬಗ್ಗೆ ಮಾತನಾಡುತ್ತಾರೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/life/list-of-the-most-haunted-places-in-mumbai-where-people-are-afraid-to-go-people-get-scared-just-by-hearing-the-names-suh-7b18vmg"/>
        </item>
        <item>
            <title><![CDATA[ಸಾಯುವ ವ್ಯಕ್ತಿಗೆ ತಾನು ಸಾಯುತ್ತಿದ್ದೇನೆಂದು ತಿಳಿಯುತ್ತದೆಯೇ? ಗರುಡ ಪುರಾಣ ಹೇಳೋದೇನು?]]></title>
            <link>https://kannada.asianetnews.com/gallery/life/signs-of-dying-understanding-the-final-moments-of-life-all-need-to-know-kvn-bdv8mqn</link>
            <guid isPermaLink="true">https://kannada.asianetnews.com/gallery/life/signs-of-dying-understanding-the-final-moments-of-life-all-need-to-know-kvn-bdv8mqn</guid>
            <pubDate>Tue, 19 May 2026 12:36:41 +0530</pubDate>
            <description><![CDATA[&lt;p&gt;ಮರಣವು ಒಂದೇ ಬಾರಿಗೆ ಸಂಭವಿಸುವ ಪ್ರಕ್ರಿಯೆಯಲ್ಲ. ಇದು ಕ್ರಮೇಣ ಆತ್ಮವು ದೇಹವನ್ನು ತೊರೆಯುವ ವಿವಿಧ ಹಂತಗಳ ಸಂಗ್ರಹ ಎಂದು ಆಧ್ಯಾತ್ಮಿಕ ಗ್ರಂಥಗಳು ಹೇಳುತ್ತವೆ. ಸಾವಿಗೆ ಹತ್ತಿರವಾದ ವ್ಯಕ್ತಿಗೆ ಯಾವ ರೀತಿಯ ಸೂಚನೆಗಳು ಕಾಣಿಸುತ್ತವೆ ಎಂಬುದನ್ನು ಗರುಡ ಪುರಾಣವು ವಿವರಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kga1gr4jve8q236tf7ceqsa2,imgname-garuda-purana-1769863667858.jpg" type="image/jpeg" height="390" width="690"/>
            <content:encoded><![CDATA[&lt;p&gt;ಮರಣವು ಒಂದೇ ಬಾರಿಗೆ ಸಂಭವಿಸುವ ಪ್ರಕ್ರಿಯೆಯಲ್ಲ. ಇದು ಕ್ರಮೇಣ ಆತ್ಮವು ದೇಹವನ್ನು ತೊರೆಯುವ ವಿವಿಧ ಹಂತಗಳ ಸಂಗ್ರಹ ಎಂದು ಆಧ್ಯಾತ್ಮಿಕ ಗ್ರಂಥಗಳು ಹೇಳುತ್ತವೆ. ಸಾವಿಗೆ ಹತ್ತಿರವಾದ ವ್ಯಕ್ತಿಗೆ ಯಾವ ರೀತಿಯ ಸೂಚನೆಗಳು ಕಾಣಿಸುತ್ತವೆ ಎಂಬುದನ್ನು ಗರುಡ ಪುರಾಣವು ವಿವರಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಸಾಯಲೇಬೇಕು ಎಂದು ಭಗವದ್ಗೀತೆಯಲ್ಲಿ ಈಗಾಗಲೇ ಹೇಳಲಾಗಿದೆ. ಸಾವು ದೇಹದ ಒಂದು ಸಹಜ ಪ್ರಕ್ರಿಯೆ. ಅಪಘಾತಗಳು, ಹಠಾತ್ ಅವಘಡಗಳನ್ನು ಹೊರತುಪಡಿಸಿ, ಸಹಜವಾಗಿ ಸಾವಿಗೆ ಹತ್ತಿರವಾದ ವ್ಯಕ್ತಿಗೆ ಆ ಕೊನೆಯ ಕ್ಷಣಗಳಲ್ಲಿ ಯಾವ ರೀತಿಯ ಅನುಭವವಾಗುತ್ತದೆ? ತಾನು ಸಾಯುತ್ತಿದ್ದೇನೆ ಎಂಬುದು ಅವರಿಗೆ ತಿಳಿಯುವುದೇ? ಇಲ್ಲವೇ? ಎಂಬಂತಹ ಅನೇಕ ಸಂದೇಹಗಳಿರುತ್ತವೆ.&amp;nbsp;&lt;/p&gt;&lt;img&gt;&lt;p&gt;ಗರುಡ ಪುರಾಣದ ಪ್ರಕಾರ, ಸಾಯುತ್ತಿರುವ ವ್ಯಕ್ತಿಗೆ ಸಾವು ಸಮೀಪಿಸುತ್ತಿದೆ ಎಂಬುದು ಸಹಜವಾಗಿಯೇ ಅರ್ಥವಾಗುವ ಸಾಧ್ಯತೆ ಇರುತ್ತದೆ. ಸಾವಿಗೆ ಸ್ವಲ್ಪ ಸಮಯದ ಮೊದಲು ತನಗೆ ಏನೋ ಆಗುತ್ತಿದೆ ಎಂಬ ಭಾವನೆ ಬರುತ್ತದೆ ಎಂದು ಪುರಾಣ ವಿವರಿಸುತ್ತದೆ. ಆಧುನಿಕ ವೈದ್ಯಕೀಯ ವಿಜ್ಞಾನದ ಪ್ರಕಾರ, ಕೆಲವು ಸಂಶೋಧನೆಗಳಲ್ಲಿಯೂ ಇದೇ ರೀತಿಯ ವಿಷಯಗಳು ಬಹಿರಂಗಗೊಂಡಿವೆ.&lt;/p&gt;&lt;img&gt;&lt;p&gt;ಗರುಡ ಪುರಾಣದ ಪ್ರಕಾರ, ಸಾವು ಸಮೀಪಿಸಿದಾಗ ಮೊದಲು ಪಂಚೇಂದ್ರಿಯಗಳು ಒಂದೊಂದಾಗಿ ದುರ್ಬಲಗೊಳ್ಳುತ್ತವೆ. ಮೊದಲು ಮಾತು ಕಡಿಮೆಯಾಗುತ್ತದೆ. ವ್ಯಕ್ತಿ ಏನನ್ನಾದರೂ ಹೇಳಲು ಬಯಸಿದರೂ ನಾಲಿಗೆ ಸಹಕರಿಸುವುದಿಲ್ಲ. ನಂತರ ದೃಷ್ಟಿ ಮಂದವಾಗುತ್ತದೆ. ಎದುರಿಗಿರುವವರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಕೈ-ಕಾಲುಗಳು ತಣ್ಣಗಾಗಿ, ದೇಹವು ಅತ್ಯಂತ ದುರ್ಬಲವಾಗುತ್ತದೆ. ಆದರೆ, ಶ್ರವಣ ಶಕ್ತಿ ಸ್ವಲ್ಪ ಮಟ್ಟಿಗೆ ಕಾರ್ಯನಿರ್ವಹಿಸುತ್ತದೆ ಎಂದು ಗರುಡ ಪುರಾಣ ವಿವರಿಸುತ್ತದೆ. ಅದಕ್ಕಾಗಿಯೇ ಸಾಯುತ್ತಿರುವ ವ್ಯಕ್ತಿಯ ಬಳಿ ಒಳ್ಳೆಯ ಮಾತುಗಳನ್ನಾಡಬೇಕೆಂದು ಹಿರಿಯರು ಹೇಳುತ್ತಾರೆ. ಕೊನೆಯ ಕ್ಷಣದಲ್ಲಿ ವ್ಯಕ್ತಿಯ ಕಣ್ಣ ಮುಂದೆ ಅವರ ಇಡೀ ಜೀವನವು ಒಂದು ಚಲನಚಿತ್ರದಂತೆ ಕಾಣಿಸಿಕೊಳ್ಳುತ್ತದೆ ಮತ್ತು ಅವರು ಮಾಡಿದ ಕಾರ್ಯಗಳನ್ನು ನೆನಪಿಸಿಕೊಂಡು ಭಯ ಅಥವಾ ಶಾಂತಿ ಉಂಟಾಗುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ.&lt;/p&gt;&lt;img&gt;&lt;p&gt;ಆಧುನಿಕ ವೈದ್ಯಕೀಯ ವಿಜ್ಞಾನದ ಪ್ರಕಾರ, ಸಾವಿನ ಪ್ರಕ್ರಿಯೆಯ ಬಗ್ಗೆ ಈಗಾಗಲೇ ಅನೇಕ ಸಂಶೋಧನೆಗಳು ನಡೆದಿವೆ. ಆ ಸಂಶೋಧನೆಗಳಲ್ಲಿ ಆಸಕ್ತಿದಾಯಕ ವಿಷಯಗಳು ಬಹಿರಂಗಗೊಂಡಿವೆ. ವೈದ್ಯರ ಪ್ರಕಾರ, ಹೃದಯ ಬಡಿತ ನಿಂತ ನಂತರವೂ ಮೆದುಳು ಕೆಲವು ನಿಮಿಷಗಳ ಕಾಲ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಆ ಸಮಯದಲ್ಲಿ ಮೆದುಳಿನಲ್ಲಿ ವಿದ್ಯುತ್ ತರಂಗಗಳು ವೇಗವಾಗಿ ಚಲಿಸುವ ಸಾಧ್ಯತೆಯಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಆ ಸಮಯದಲ್ಲಿ ಕೆಲವರಿಗೆ ಬೆಳಕು ಕಾಣುವುದು, ತಮ್ಮ ದೇಹವನ್ನು ಹೊರಗಿನಿಂದ ನೋಡಿದಂತೆ ಭಾಸವಾಗುವುದು, ಸುತ್ತಮುತ್ತಲಿನವರ ಮಾತುಗಳು ಕೇಳಿಸುವುದು ಮುಂತಾದ ಅನುಭವಗಳಾಗುತ್ತವೆ. ಇವೆಲ್ಲವೂ ಎಲ್ಲರಿಗೂ ಒಂದೇ ರೀತಿ ಆಗಬೇಕೆಂದೇನಿಲ್ಲ.&lt;/p&gt;&lt;img&gt;&lt;p&gt;ಸಾವಿನ ಬಗ್ಗೆ ಆಧ್ಯಾತ್ಮಿಕ ಗ್ರಂಥಗಳು ಮತ್ತು ವಿಜ್ಞಾನ ಹೇಳುವ ವಿಷಯಗಳು ಸ್ವಲ್ಪ ಮಟ್ಟಿಗೆ ಒಂದಕ್ಕೊಂದು ಹತ್ತಿರವಾಗಿವೆ. ಆದರೆ, ಸಂಪೂರ್ಣ ಮಾಹಿತಿ ಇನ್ನೂ ಎಲ್ಲಿಯೂ ಲಭ್ಯವಿಲ್ಲ. ಗರುಡ ಪುರಾಣವು ಇದನ್ನು ಆತ್ಮದ ಪ್ರಯಾಣ ಎಂದು ಹೇಳಿದರೆ, ವೈದ್ಯಕೀಯ ವಿಜ್ಞಾನವು ದೇಹದ ವ್ಯವಸ್ಥೆಗಳು ಕ್ರಮೇಣ ನಿಲ್ಲುವುದರಿಂದ ಉಂಟಾಗುವ ಪ್ರಕ್ರಿಯೆ ಎಂದು ವಿವರಿಸುತ್ತದೆ.&lt;/p&gt;&lt;img&gt;&lt;p&gt;ಆದರೆ ಸಾಯುವ ಮೊದಲು ವ್ಯಕ್ತಿಗೆ ತಾನು ಹೋಗುತ್ತಿದ್ದೇನೆ ಎಂಬ ಭಾವನೆ ಇರುತ್ತದೆ ಎಂದು ಅನೇಕ ನಂಬಿಕೆಗಳು ಹೇಳುತ್ತವೆ. ಅದಕ್ಕಾಗಿಯೇ ಮರಣಶಯ್ಯೆಯಲ್ಲಿರುವವರೊಂದಿಗೆ ಪ್ರೀತಿಯಿಂದ ಮಾತನಾಡಬೇಕು ಮತ್ತು ಅವರಿಗೆ ಧೈರ್ಯ ಹೇಳಬೇಕು ಎಂದು ಹಿರಿಯರು ವಿವರಿಸುತ್ತಾರೆ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/life/signs-of-dying-understanding-the-final-moments-of-life-all-need-to-know-kvn-bdv8mqn"/>
        </item>
        <item>
            <title><![CDATA[ಫಳ ಫಳ ಹೊಳೆಯುತ್ತೆ ಅಂತ ಯಾಮಾರ್ಬೇಡಿ, ಟಾಯ್ಲೆಟ್ ಸೀಟ್‌ಗಿಂತಲೂ ಗಲೀಜಾಗಿರುತ್ತೆ ಹೋಟೆಲ್‌ನ ಈ ವಸ್ತುಗಳು!]]></title>
            <link>https://kannada.asianetnews.com/gallery/life/hotel-safety-tips-these-items-are-dirtier-than-a-toilet-seat-know-before-you-use-them-he50dfx</link>
            <guid isPermaLink="true">https://kannada.asianetnews.com/gallery/life/hotel-safety-tips-these-items-are-dirtier-than-a-toilet-seat-know-before-you-use-them-he50dfx</guid>
            <pubDate>Tue, 19 May 2026 12:14:22 +0530</pubDate>
            <description><![CDATA[&lt;p&gt;Dirtiest things in a hotel room: ಶುಭ್ರವಾದ ಬೆಡ್&zwnj;ಶೀಟ್, ಹೊಳೆಯುವ ಕನ್ನಡಿ, ಅಚ್ಚುಕಟ್ಟಾಗಿ ಇಟ್ಟಿರುವ ಟವೆಲ್&zwnj;ಗಳು ಮತ್ತು ಹಿತವಾದ ಸುಗಂಧವನ್ನು ನೋಡಿ ಹೋಟೆಲ್ ಕೊಠಡಿ ಸಂಪೂರ್ಣ ಹೈಜಿನಿಕ್ ಆಗಿದೆ ಎಂದು ಜನರು ಭಾವಿಸುತ್ತಾರೆ. ಆದರೆ ವಾಸ್ತವ ಹಲವು ಬಾರಿ ಇದಕ್ಕಿಂತ ಭಿನ್ನವಾಗಿರುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzf1azjrdm9cs4jdyvyfswd,imgname-thumbnail---2026-05-19t120303.489-1779172420594.jpg" type="image/jpeg" height="390" width="690"/>
            <content:encoded><![CDATA[&lt;p&gt;Dirtiest things in a hotel room: ಶುಭ್ರವಾದ ಬೆಡ್&zwnj;ಶೀಟ್, ಹೊಳೆಯುವ ಕನ್ನಡಿ, ಅಚ್ಚುಕಟ್ಟಾಗಿ ಇಟ್ಟಿರುವ ಟವೆಲ್&zwnj;ಗಳು ಮತ್ತು ಹಿತವಾದ ಸುಗಂಧವನ್ನು ನೋಡಿ ಹೋಟೆಲ್ ಕೊಠಡಿ ಸಂಪೂರ್ಣ ಹೈಜಿನಿಕ್ ಆಗಿದೆ ಎಂದು ಜನರು ಭಾವಿಸುತ್ತಾರೆ. ಆದರೆ ವಾಸ್ತವ ಹಲವು ಬಾರಿ ಇದಕ್ಕಿಂತ ಭಿನ್ನವಾಗಿರುತ್ತದೆ.&lt;/p&gt;&lt;img&gt;&lt;p&gt;ಹೋಟೆಲ್ ಕೊಠಡಿಯು ಹೊರಗಿನಿಂದ ಎಷ್ಟೇ ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಕಂಡರೂ, ಅಲ್ಲಿ ಅತಿ ಹೆಚ್ಚು ಗಲೀಜು ಅಡಗಿರುವ ಕೆಲವು ವಸ್ತುಗಳಿರುತ್ತವೆ. ಆಶ್ಚರ್ಯಕರ ವಿಷಯವೆಂದರೆ, ಹೋಟೆಲ್&zwnj;ನ ಬಾತ್&zwnj;ರೂಂ ಯಾವಾಗಲೂ ಕೊಳಕಾಗಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ಅತಿಥಿಯೂ ಮುಟ್ಟುವ ಆದರೆ ಸರಿಯಾಗಿ ಸ್ವಚ್ಛವಾಗದ ಕೆಲವು ವಸ್ತುಗಳ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಹೋಟೆಲ್ ಕೊಠಡಿಯಲ್ಲಿ ಅತಿ ಹೆಚ್ಚು ಬಳಕೆಯಾಗುವ ವಸ್ತುಗಳಲ್ಲಿ ಟಿವಿ ರಿಮೋಟ್ ಮೊದಲನೆಯದು. ಪ್ರತಿಯೊಬ್ಬ ಅತಿಥಿಯೂ ಇದನ್ನು ಬಳಸುತ್ತಾರೆ, ಆದರೆ ಎಲ್ಲರೂ ಕೈ ತೊಳೆದುಕೊಂಡೇ ಇದನ್ನು ಮುಟ್ಟುವುದಿಲ್ಲ. ರಿಮೋಟ್&zwnj;ನ ಸಣ್ಣ ಬಟನ್&zwnj;ಗಳು ಮತ್ತು ಮೂಲೆಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಕಷ್ಟ. ಹೌಸ್&zwnj;ಕೀಪಿಂಗ್ ಸಿಬ್ಬಂದಿ ಅವಸರದಲ್ಲಿ ಕೇವಲ ಮೇಲ್ಭಾಗವನ್ನು ಬಟ್ಟೆಯಿಂದ ಒರೆಸಿ ಬಿಡಬಹುದು. ಇದರಿಂದಾಗಿ ಆಹಾರದ ಕಲೆಗಳು, ಸೀನು, ಕೆಮ್ಮು ಮತ್ತು ಗಲೀಜು ಕೈಗಳ ಬ್ಯಾಕ್ಟೀರಿಯಾಗಳು ಅದರ ಮೇಲೆ ದೀರ್ಘಕಾಲ ಉಳಿಯಬಹುದು. ಈ ಕಾರಣಕ್ಕಾಗಿಯೇ ಅನುಭವಿ ಪ್ರಯಾಣಿಕರು ರೂಮ್&zwnj;ಗೆ ಬಂದ ತಕ್ಷಣ ರಿಮೋಟ್ ಅನ್ನು ಟಿಶ್ಯೂ ಅಥವಾ ಸ್ಯಾನಿಟೈಸರ್&zwnj;ನಿಂದ ಸ್ವಚ್ಛಗೊಳಿಸುತ್ತಾರೆ.&lt;/p&gt;&lt;img&gt;&lt;p&gt;ಹೋಟೆಲ್ ಬೆಡ್ ಮೇಲಿರುವ ಆಕರ್ಷಕ ಅಲಂಕಾರಿಕ ಕುಶನ್&zwnj;ಗಳು ಮತ್ತು ಕಲರ್&zwnj;ಫುಲ್ ಬೆಡ್ ರನ್ನರ್&zwnj;ಗಳು ನೋಡುವುದಕ್ಕೆ ಅಂದವಾಗಿ ಕಂಡರೂ, ಅವು ಬ್ಯಾಕ್ಟೀರಿಯಾಗಳ ಅತಿ ದೊಡ್ಡ ತಾಣಗಳಾಗಿವೆ. ಬಿಳಿ ಬೆಡ್&zwnj;ಶೀಟ್&zwnj;ಗಳನ್ನು ಪ್ರತಿ ಅತಿಥಿಯ ನಂತರ ಬದಲಾಯಿಸಲಾಗುತ್ತದೆ, ಆದರೆ ಈ ಕುಶನ್&zwnj;ಗಳನ್ನು ತಿಂಗಳುಗಟ್ಟಲೆ ತೊಳೆಯುವುದೇ ಇಲ್ಲ. ಅತಿಥಿಗಳು ಇವುಗಳ ಮೇಲೆ ಧೂಳಿನಿಂದ ಕೂಡಿದ ಬ್ಯಾಗ್&zwnj;ಗಳನ್ನು, ಶೂಗಳನ್ನು ಇಡುವುದರಿಂದ ಮತ್ತು ಹೊರಗಿನ ಬಟ್ಟೆಯಲ್ಲೇ ಕುಳಿತುಕೊಳ್ಳುವುದರಿಂದ ಇವು ಅತ್ಯಂತ ಅಶುಚಿಯಾಗಿರುತ್ತವೆ. ಆದ್ದರಿಂದ, ಕೊಠಡಿ ಪ್ರವೇಶಿಸಿದ ಕೂಡಲೇ ಇವುಗಳನ್ನು ಹಾಸಿಗೆಯಿಂದ ಕೆಳಗಿಳಿಸಿ ದೂರವಿಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ.&lt;/p&gt;&lt;img&gt;&lt;p&gt;ಹೋಟೆಲ್ ಕೊಠಡಿಯಲ್ಲಿರುವ ಎಲೆಕ್ಟ್ರಿಕ್ ಕೆಟಲ್ ಕೂಡ ಬ್ಯಾಕ್ಟೀರಿಯಾಗಳ ತಾಣವಾಗಿರಬಹುದು. ನೀರು ಕುದಿಯುವುದರಿಂದ ಎಲ್ಲವೂ ಸ್ವಚ್ಛವಾಗುತ್ತದೆ ಎಂದು ಜನರು ಭಾವಿಸುತ್ತಾರೆ, ಆದರೆ ಮಷೀನ್&zwnj;ನ ಒಳಗಿನ ಸ್ವಚ್ಛತೆ ಮುಖ್ಯವಾಗಿರುತ್ತದೆ. ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಅದರಲ್ಲಿ ಬ್ಯಾಕ್ಟೀರಿಯಾ ಅಥವಾ ಫಂಗಸ್ (ಶಿಲೀಂಧ್ರ) ಬೆಳೆಯಬಹುದು. ಕೆಲವು ಪ್ರಯಾಣಿಕರು ಬಳಸುವ ಮುನ್ನ ಕೆಟಲ್ ಅನ್ನು ಚೆನ್ನಾಗಿ ತೊಳೆಯುತ್ತಾರೆ, ಇನ್ನು ಕೆಲವರು ಹೋಟೆಲ್ ಕೆಟಲ್ ಬಳಸುವುದನ್ನೇ ತಪ್ಪಿಸುತ್ತಾರೆ.&lt;/p&gt;&lt;img&gt;&lt;p&gt;ಬಾತ್&zwnj;ರೂಮ್ ಬಳಿ ಇಟ್ಟಿರುವ ನೀರಿನ ಗ್ಲಾಸ್ ಕೂಡ ಸಂಪೂರ್ಣ ಸುರಕ್ಷಿತವಲ್ಲ. ಕೆಲವು ವರದಿಗಳ ಪ್ರಕಾರ, ಗ್ಲಾಸ್&zwnj;ಗಳನ್ನು ಸರಿಯಾಗಿ ಡಿಸ್&zwnj;ಇನ್&zwnj;ಫೆಕ್ಟ್ ಮಾಡುವ ಬದಲಿಗೆ ಕೇವಲ ನೀರಿನಿಂದ ತೊಳೆದಿಡಲಾಗುತ್ತದೆ. ಕೆಲವೊಮ್ಮೆ ಬೇರೆ ವಸ್ತುಗಳನ್ನು ಒರೆಸಿದ ಬಟ್ಟೆಯಿಂದಲೇ ಗ್ಲಾಸ್ ಅನ್ನೂ ಒರೆಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗ್ಲಾಸ್ ಬಳಸುವ ಮೊದಲು ಸ್ವತಃ ತೊಳೆಯುವುದು ಅಥವಾ ಸೀಲ್ ಮಾಡಿದ ಬಾಟಲಿ ನೀರನ್ನು ಕುಡಿಯುವುದು ಉತ್ತಮ.&lt;/p&gt;&lt;img&gt;&lt;p&gt;ಇವುಗಳಲ್ಲದೆ ಲೈಟ್ ಸ್ವಿಚ್&zwnj;ಗಳು, ಡೋರ್ ಹ್ಯಾಂಡಲ್&zwnj;ಗಳು, ಫೋನ್, ಸ್ಕ್ರೀನ್&zwnj; ಹ್ಯಾಂಡಲ್&zwnj;ಗಳು ಮತ್ತು ಬೆಡ್ ಬಳಿ ಇರುವ ಬಟನ್&zwnj;ಗಳು ಕೂಡ ಅತಿ ಹೆಚ್ಚು ಸ್ಪರ್ಶಕ್ಕೆ ಒಳಗಾಗುತ್ತವೆ, ಆದರೆ ಇವುಗಳ ಸ್ವಚ್ಛತೆಯನ್ನು ನಿರ್ಲಕ್ಷಿಸಲಾಗುತ್ತದೆ. ಕೊರೊನಾ ಸಾಂಕ್ರಾಮಿಕದ ನಂತರ, ಈಗ ಅನೇಕ ಪ್ರಯಾಣಿಕರು ತಮ್ಮೊಂದಿಗೆ ಡಿಸ್&zwnj;ಇನ್&zwnj;ಫೆಕ್ಟಂಟ್ ವೈಪ್ಸ್ (Disinfectant Wipes) ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/hotel-safety-tips-these-items-are-dirtier-than-a-toilet-seat-know-before-you-use-them-he50dfx"/>
        </item>
        <item>
            <title><![CDATA[ಹಾವರಾಣಿ ಕಚ್ಚುತ್ತಾ? ಮನುಷ್ಯರು ಸಾಯುತ್ತಾರಾ? ಅದರ ಮೈಯಲ್ಲಿ ವಿಷ ಇದೆಯಾ? ಇಲ್ಲಿದೆ ರಾಣಿಯ ಉತ್ತರ!]]></title>
            <link>https://kannada.asianetnews.com/gallery/life/farmer-friendly-importance-of-common-indian-skink-havrani-in-gardens-myths-vs-facts-sat-wipyuao</link>
            <guid isPermaLink="true">https://kannada.asianetnews.com/gallery/life/farmer-friendly-importance-of-common-indian-skink-havrani-in-gardens-myths-vs-facts-sat-wipyuao</guid>
            <pubDate>Tue, 19 May 2026 12:00:09 +0530</pubDate>
            <description><![CDATA[ಹಾವರಾಣಿ ವಿಷಕಾರಿ ಎಂಬುದು ಕೇವಲ ಮೌಢ್ಯವಾಗಿದ್ದು, ವಾಸ್ತವದಲ್ಲಿ ಇದು ಹಾನಿಕಾರಕವಲ್ಲದ ಹಲ್ಲಿಯ ಪ್ರಭೇದವಾಗಿದೆ. ಇದು ಜಿರಳೆ, ಮಿಡತೆಗಳಂತಹ ಕೀಟಗಳನ್ನು ತಿಂದು ನಮ್ಮ ತೋಟ ಮತ್ತು ಮನೆಯನ್ನು ನೈಸರ್ಗಿಕವಾಗಿ ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ, ಹೀಗಾಗಿ ಇದೊಂದು ರೈತಮಿತ್ರ.]]></description>
            <media:content url="https://static.asianetnews.com/images/w-1280,h-720,format-jpg,imgid-01krze918f0czyss280zeywz6q,imgname-indian-skink-haavurani--4--1779171624206.jpg" type="image/jpeg" height="390" width="690"/>
            <content:encoded><![CDATA[ಹಾವರಾಣಿ ವಿಷಕಾರಿ ಎಂಬುದು ಕೇವಲ ಮೌಢ್ಯವಾಗಿದ್ದು, ವಾಸ್ತವದಲ್ಲಿ ಇದು ಹಾನಿಕಾರಕವಲ್ಲದ ಹಲ್ಲಿಯ ಪ್ರಭೇದವಾಗಿದೆ. ಇದು ಜಿರಳೆ, ಮಿಡತೆಗಳಂತಹ ಕೀಟಗಳನ್ನು ತಿಂದು ನಮ್ಮ ತೋಟ ಮತ್ತು ಮನೆಯನ್ನು ನೈಸರ್ಗಿಕವಾಗಿ ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ, ಹೀಗಾಗಿ ಇದೊಂದು ರೈತಮಿತ್ರ.&lt;img&gt;&lt;p&gt;ನಮ್ಮ ಮನೆ ಅಥವಾ ತೋಟದ ಸುತ್ತಮುತ್ತ ಹಸಿರು ಗಿಡಗಂಟೆಗಳ ನಡುವೆ, ಕಲ್ಲುಗಳ ಮೇಲೆ ಸರಸರನೆ ಓಡುವ ಹೊಳೆಯುವ ಮೈಬಣ್ಣದ ಒಂದು ಜೀವಿಯನ್ನು ನಾವೆಲ್ಲರೂ ನೋಡಿರುತ್ತೇವೆ. ಅದರ ಹೆಸರೇ 'ಹಾವರಾಣಿ'. ಇಂಗ್ಲಿಷ್&zwnj;ನಲ್ಲಿ ಇದನ್ನು 'ಕಾಮನ್ ಇಂಡಿಯನ್ ಸ್ಕಿಂಕ್' (Common Indian Skink - Eutropis carinata) ಎಂದು ಕರೆಯುತ್ತಾರೆ. ನೋಡುವುದಕ್ಕೆ ಹಾವಿನ ಮರಿಯಂತೆ ಕಂಡರೂ, ವಾಸ್ತವದಲ್ಲಿ ಇದು ಹಲ್ಲಿಯ ವರ್ಗಕ್ಕೆ ಸೇರಿದ ಅತ್ಯಂತ ಉಪಕಾರಿ ಜೀವಿ.&lt;/p&gt;&lt;img&gt;&lt;p&gt;ಗ್ರಾಮೀಣ ಭಾಗಗಳಲ್ಲಿ ಹಾವರಾಣಿಯ ಬಗ್ಗೆ ಒಂದು ದೊಡ್ಡ ಮೌಢ್ಯವಿದೆ. ಇದರ ಹೆಸರಿನಲ್ಲಿ 'ಹಾವು' ಇರುವುದರಿಂದ ಅನೇಕರು ಇದು ಹಾವಿನ ಜಾತಿ ಅಥವಾ ಇದಕ್ಕೆ ತೀವ್ರವಾದ ವಿಷವಿದೆ ಎಂದು ಹೆದರುತ್ತಾರೆ. ಆದರೆ ಇದು ಸಂಪೂರ್ಣ ಸುಳ್ಳು. ಹಾವರಾಣಿಗೆ ಯಾವುದೇ ರೀತಿಯ ವಿಷವಿಲ್ಲ. ಇದು ಮನುಷ್ಯರಿಗೆ ಕಚ್ಚುವುದೂ ಇಲ್ಲ. ಈ ಸರೀಸೃಪ ಸಂಪೂರ್ಣವಾಗಿ ಅಹಿಂಸಾಕಾರಿ ಜೀವಿಯಾಗಿದೆ. ಇದನ್ನು ಕೆಣಕದ ಹೊರತು ಇದು ಯಾರಿಗೂ ತೊಂದರೆ ನೀಡುವುದಿಲ್ಲ ಎಂದು &lt;strong&gt;ಉರಗ ತಜ್ಞ ಗೌರಿ ಕಾಳಿಂಗ &lt;/strong&gt;ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹಾವರಾಣಿ ಕೇವಲ ಸುಂದರ ಜೀವಿಯಲ್ಲ, ಇದು ನಮ್ಮ ತೋಟದ 'ನೈಸರ್ಗಿಕ ಕೀಟನಾಶಕ' ಕೂಡ ಹೌದು. ಇವು ಜಿರಳೆಗಳು, ಮಿಡತೆಗಳು, ಗೆದ್ದಲುಗಳು ಮತ್ತು ಗಿಡಗಳಿಗೆ ಹಾನಿ ಮಾಡುವ ಇತರೆ ಸಣ್ಣ ಕೀಟಗಳನ್ನು ತಿಂದು ಬದುಕುತ್ತವೆ. ಯಾವುದೇ ಕೆಮಿಕಲ್ ಬಳಸದೆ ನಮ್ಮ ಮನೆಯ ಅಂಗಳ ಮತ್ತು ಅಡುಗೆಮನೆಯನ್ನು ಜಿರಳೆ ಮುಕ್ತವಾಗಿಡಲು ಇವು ನಮಗೆ ಅರಿವಿಲ್ಲದೆಯೇ ಸಹಾಯ ಮಾಡುತ್ತವೆ. ಹೀಗಾಗಿ ಇವುಗಳನ್ನು ರೈತಮಿತ್ರ ಎಂದು ಕರೆದರೂ ತಪ್ಪಾಗಲಾರದು.&lt;/p&gt;&lt;p&gt;&lt;strong&gt;ವಿಶಿಷ್ಟ ಜೀವನಶೈಲಿ ಮತ್ತು ರಕ್ಷಣಾ ತಂತ್ರ:&lt;/strong&gt;&lt;/p&gt;&lt;p&gt;ಹಾವರಾಣಿಗಳು ಬಿಸಿಲನ್ನು ತುಂಬಾ ಇಷ್ಟಪಡುತ್ತವೆ. ಬೆಳಗಿನ ಸಮಯದಲ್ಲಿ ಕಲ್ಲುಗಳ ಮೇಲೆ ಅಥವಾ ಒಣಗಿದ ಎಲೆಗಳ ಮೇಲೆ ಬಿಸಿಲು ಕಾಯಿಸಿಕೊಳ್ಳುತ್ತಾ (Basking) ಇರುವುದನ್ನು ನೀವು ಗಮನಿಸಬಹುದು. ಇವು ಹೆಚ್ಚಾಗಿ ಒಣ ಎಲೆಗಳ ರಾಶಿ ಅಥವಾ ಮರದ ದಿಮ್ಮಿಗಳ ಕೆಳಗೆ ವಾಸಿಸುತ್ತವೆ.&lt;/p&gt;&lt;img&gt;&lt;p&gt;ಇವುಗಳ ರಕ್ಷಣಾ ತಂತ್ರ ಬಹಳ ಆಕರ್ಷಕವಾಗಿದೆ. ಯಾವುದಾದರೂ ಪ್ರಾಣಿ ಅಥವಾ ಮನುಷ್ಯ ಇವುಗಳನ್ನು ಹಿಡಿಯಲು ಬಂದಾಗ, ಇವು ತಕ್ಷಣವೇ ತಮ್ಮ ಬಾಲವನ್ನು ತಾವೇ ಕತ್ತರಿಸಿಕೊಂಡು ತಪ್ಪಿಸಿಕೊಳ್ಳುತ್ತವೆ! ಶತ್ರುವು ಕತ್ತರಿಸಿದ ಬಾಲವನ್ನು ನೋಡುತ್ತಿರುವಾಗ ಹಾವರಾಣಿ ಅಲ್ಲಿಂದ ಓಡಿಹೋಗಿರುತ್ತದೆ. ಅಚ್ಚರಿಯ ವಿಷಯವೆಂದರೆ, ಕತ್ತರಿಸಿದ ಬಾಲವು ಕೆಲವು ದಿನಗಳ ನಂತರ ಮತ್ತೆ ಬೆಳೆಯುತ್ತದೆ.&lt;/p&gt;&lt;img&gt;&lt;p&gt;ಇವು ಮೊಟ್ಟೆ ಇಡುವ ಜೀವಿಗಳು. ಸುರಕ್ಷಿತ ಜಾಗದಲ್ಲಿ ಸುಮಾರು 2 ರಿಂದ 20 ಮೊಟ್ಟೆಗಳನ್ನು ಇಟ್ಟು ವಂಶಾಭಿವೃದ್ಧಿ ಮಾಡುತ್ತವೆ. ಪಶ್ಚಿಮ ಘಟ್ಟಗಳ ಅಂಚಿನಲ್ಲಿ ಮತ್ತು ಬಯಲು ಸೀಮೆಯ ತೋಟಗಳಲ್ಲಿ ಇವು ಯಥೇಚ್ಛವಾಗಿ ಕಂಡುಬರುತ್ತವೆ.&lt;/p&gt;&lt;p&gt;&lt;strong&gt;ನಮ್ಮದೊಂದು ಮನವಿ:&lt;/strong&gt;&lt;/p&gt;&lt;p&gt;ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಇಂತಹ ಪುಟ್ಟ ಜೀವಿಗಳ ಪಾತ್ರ ಬಹಳ ದೊಡ್ಡದಿದೆ. ನಿಮ್ಮ ಮನೆಯ ಹತ್ತಿರ ಇವುಗಳನ್ನು ಕಂಡರೆ ದಯವಿಟ್ಟು ಹೆದರಬೇಡಿ ಅಥವಾ ಮೌಢ್ಯಕ್ಕೆ ಒಳಗಾಗಿ ಇವುಗಳನ್ನು ಸಾಯಿಸಬೇಡಿ. ಇವು ವಿಷಕಾರಿಯಲ್ಲದ ಮತ್ತು ನಮಗೆ ಉಪಕಾರ ಮಾಡುವ ಜೀವಿಗಳು. ಹಸಿರು ಪ್ರಪಂಚದ ಈ ಅಚ್ಚರಿಯ ಅತಿಥಿಗಳನ್ನು ಗೌರವಿಸೋಣ ಮತ್ತು ಅವುಗಳ ಇರುವಿಕೆಯನ್ನು ಆನಂದಿಸೋಣ.&lt;/p&gt;&lt;p&gt;ವಿಡಿಯೋ ನೋಡಲು &lt;strong&gt;ಇಲ್ಲಿ ಕ್ಲಿಕ್ ಮಾಡಿ&lt;/strong&gt;&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/life/farmer-friendly-importance-of-common-indian-skink-havrani-in-gardens-myths-vs-facts-sat-wipyuao"/>
        </item>
        <item>
            <title><![CDATA[ಬಾಬಾ ವಂಗಾ ಭವಿಷ್ಯ ಪ್ರಕಾರ ಈ 5 ರಾಶಿಗೆ ಮೇ ನಾಲ್ಕನೇ ವಾರ ಲಾಟರಿ, ಕೈ ತುಂಬಾ ಸಂಪತ್ತಿನ ಜೊತೆ ಅದೃಷ್ಟ]]></title>
            <link>https://kannada.asianetnews.com/gallery/relationship/baba-vanga-prediction-weekly-lucky-zodiacs-4th-week-of-may-lucky-zodiacs-prediction-according-to-baba-venga-suh-w09mvwa</link>
            <guid isPermaLink="true">https://kannada.asianetnews.com/gallery/relationship/baba-vanga-prediction-weekly-lucky-zodiacs-4th-week-of-may-lucky-zodiacs-prediction-according-to-baba-venga-suh-w09mvwa</guid>
            <pubDate>Tue, 19 May 2026 11:50:14 +0530</pubDate>
            <description><![CDATA[&lt;p&gt;Baba vanga prediction ಜ್ಯೋತಿಷ್ಯದ ಪ್ರಕಾರ ಮೇ ತಿಂಗಳ ನಾಲ್ಕನೇ ವಾರ ಮೇ 18 ರಿಂದ 24 ರವರೆಗೆ ಇರುತ್ತದೆ. ಈ ವಾರ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತವೆ. ಬಾಬಾ ವಂಗಾ ಅವರ ಭವಿಷ್ಯವಾಣಿಯನ್ನು ತಿಳಿದುಕೊಳ್ಳಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp04kc9g3vcjpfv11c8k9576,imgname-baba-vanga-prediction-1775973806384.jpg" type="image/jpeg" height="390" width="690"/>
            <content:encoded><![CDATA[&lt;p&gt;Baba vanga prediction ಜ್ಯೋತಿಷ್ಯದ ಪ್ರಕಾರ ಮೇ ತಿಂಗಳ ನಾಲ್ಕನೇ ವಾರ ಮೇ 18 ರಿಂದ 24 ರವರೆಗೆ ಇರುತ್ತದೆ. ಈ ವಾರ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತವೆ. ಬಾಬಾ ವಂಗಾ ಅವರ ಭವಿಷ್ಯವಾಣಿಯನ್ನು ತಿಳಿದುಕೊಳ್ಳಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಭವಿಷ್ಯವಾಣಿಗಳ ಪ್ರಕಾರ, ಕನ್ಯಾ ರಾಶಿಯವರಿಗೆ ಹೊಸ ವಾರದ ಆರಂಭವು ಶುಭವಾಗಿರುತ್ತದೆ. ಈ ಅವಧಿಯಲ್ಲಿ, ನೀವು ಹೊಸ ವಿಷಯಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಹಳೆಯ ಸಮಸ್ಯೆಗಳಿದ್ದರೆ, ಅವು ಕ್ರಮೇಣ ಮಾಯವಾಗುತ್ತವೆ. ಅಲ್ಲದೆ, ನಿಮ್ಮ ವೃತ್ತಿಪರ ಜೀವನವು ತುಂಬಾ ಚೆನ್ನಾಗಿರುತ್ತದೆ. ನೀವು ಹೊಸದನ್ನು ಸಹ ಪ್ರಾರಂಭಿಸಬಹುದು. ಅಲ್ಲದೆ, ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಹೊಸ ವಾರದಲ್ಲಿ ನಿಮ್ಮ ಸಂವಹನ ಕೌಶಲ್ಯ ಉತ್ತಮವಾಗಿರುತ್ತದೆ. ನೀವು ಹೊಸ ಜನರನ್ನು ಭೇಟಿಯಾಗುತ್ತೀರಿ. ಅಲ್ಲದೆ, ಅನೇಕ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ನಿಮ್ಮ ಹಣವನ್ನು ನೀವು ಪಡೆಯುತ್ತೀರಿ. ನೀವು ಹೂಡಿಕೆ ಮಾಡಲು ಬಯಸಿದರೆ, ಇದು ಅದಕ್ಕೆ ಒಳ್ಳೆಯ ಸಮಯವಾಗಿರುತ್ತದೆ. ಕಾರ್ಮಿಕ ವರ್ಗದ ಜನರು ಸಹ ಪ್ರಯೋಜನ ಪಡೆಯುತ್ತಾರೆ.&lt;/p&gt;&lt;img&gt;&lt;p&gt;ತುಲಾ ರಾಶಿಯವರಿಗೆ ಈ ಹೊಸ ವಾರ ಸಮತೋಲನ ಮತ್ತು ಯಶಸ್ಸಿನ ವಾರವಾಗಿರುತ್ತದೆ. ಈ ಅವಧಿಯಲ್ಲಿ, ನಿಮ್ಮ ಮನೆಯಲ್ಲಿ ವಾತಾವರಣವು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ ಸಿಗುತ್ತದೆ. ಅಲ್ಲದೆ, ಹೊಸ ಆದಾಯದ ಮೂಲಗಳು ನಿಮಗಾಗಿ ತೆರೆದುಕೊಳ್ಳುತ್ತವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಈ ಅವಧಿಯು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸೂಕ್ತವಾಗಿದೆ.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಮೇ ಹೊಸ ವಾರವು ನಿಮಗೆ ಬದಲಾವಣೆಯ ಸಮಯವಾಗಿರುತ್ತದೆ. ಈ ಅವಧಿಯಲ್ಲಿ, ನೀವು ಸಮಾಜದಲ್ಲಿ ಗೌರವ ಮತ್ತು ಗೌರವವನ್ನು ಪಡೆಯುತ್ತೀರಿ. ನಿಮ್ಮ ವೈಯಕ್ತಿಕ ಪ್ರಗತಿಯನ್ನು ನೀವು ನೋಡುತ್ತೀರಿ. ಅಲ್ಲದೆ, ಸರ್ಕಾರಿ ಯೋಜನೆಗಳಿಂದ ನೀವು ಪ್ರಯೋಜನ ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.&lt;/p&gt;&lt;img&gt;&lt;p&gt;ಮಕರ ರಾಶಿಯವರಿಗೆ ಹೊಸ ವಾರ ಶುಭಕರವಾಗಿರಲಿದೆ. ಗ್ರಹಗಳ ಶುಭ ಸ್ಥಾನವು ನಿಮಗೆ ಒಳ್ಳೆಯದಾಗಿರುತ್ತದೆ. ಅಲ್ಲದೆ, ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನೀವು ಅನೇಕ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಅಲ್ಲದೆ, ನಿಮ್ಮ ಪ್ರೇಮ ಜೀವನವು ತುಂಬಾ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಉತ್ತಮ ಬೆಂಬಲ ಸಿಗುತ್ತದೆ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುತ್ತೀರಿ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/baba-vanga-prediction-weekly-lucky-zodiacs-4th-week-of-may-lucky-zodiacs-prediction-according-to-baba-venga-suh-w09mvwa"/>
        </item>
        <item>
            <title><![CDATA[ಈ ಡೇಟ್‌ನಲ್ಲಿ ಹುಟ್ಟಿದ ಹುಡುಗರ ಮೇಲೆ ಹುಡುಗೀರು ಬೇಗ ಫಿದಾ ಆಗ್ತಾರಂತೆ!]]></title>
            <link>https://kannada.asianetnews.com/relationship/numerology-secrets-which-birth-dates-make-boys-more-attractive-to-girls-suh/articleshow-7izwxb3</link>
            <guid isPermaLink="true">https://kannada.asianetnews.com/relationship/numerology-secrets-which-birth-dates-make-boys-more-attractive-to-girls-suh/articleshow-7izwxb3</guid>
            <pubDate>Tue, 19 May 2026 10:27:59 +0530</pubDate>
            <description><![CDATA[ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಹುಟ್ಟಿದ ದಿನಾಂಕ ನಿಮ್ಮ ವ್ಯಕ್ತಿತ್ವದ ಗುಟ್ಟನ್ನು ಹೇಳುತ್ತದೆ. ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಹುಟ್ಟಿದ ಹುಡುಗರು ಪಾರ್ಟಿಗಳ ಜೀವಾಳ ಆಗಿರುತ್ತಾರೆ ಮತ್ತು ಹುಡುಗಿಯರನ್ನು ಬೇಗನೇ ಇಂಪ್ರೆಸ್ ಮಾಡುತ್ತಾರೆ ಎಂದು ನಂಬಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krz9df6q0cwzhjmtwks9ymt0,imgname-boys-more-attractive-1779166526679.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;DOB ರಹಸ್ಯಗಳು:&lt;/strong&gt; ಸಂಖ್ಯಾಶಾಸ್ತ್ರ ಅಥವಾ ನ್ಯೂಮರಾಲಜಿಯಲ್ಲಿ, ಹುಟ್ಟಿದ ದಿನಾಂಕದ ಆಧಾರದ ಮೇಲೆ ಒಬ್ಬರ ವ್ಯಕ್ತಿತ್ವ, ಆಕರ್ಷಣೆ ಮತ್ತು ಸಂಬಂಧಗಳ ಬಗ್ಗೆ ತಿಳಿದುಕೊಳ್ಳಬಹುದು. ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಹುಟ್ಟಿದ ಹುಡುಗರಲ್ಲಿ ಒಂದು ವಿಶೇಷವಾದ ಆಕರ್ಷಣೆ ಮತ್ತು ಆತ್ಮವಿಶ್ವಾಸ ಇರುತ್ತದೆ ಎಂದು ನಂಬಲಾಗಿದೆ. ಇದರಿಂದ ಜನರು, ಅದರಲ್ಲೂ ವಿಶೇಷವಾಗಿ ಹುಡುಗಿಯರು ಇವರ ಮಾತು, ಸ್ಟೈಲ್&zwnj;ಗೆ ಬೇಗನೇ ಮರುಳಾಗುತ್ತಾರೆ. ಹಾಗಾದರೆ, ಸಂಖ್ಯಾಶಾಸ್ತ್ರದ ಪ್ರಕಾರ ಹೆಚ್ಚು ಆಕರ್ಷಕ ಎಂದು ಪರಿಗಣಿಸಲಾದ ಆ 4 ದಿನಾಂಕಗಳು ಯಾವುವು ಎಂದು ನೋಡೋಣ ಬನ್ನಿ&hellip;&amp;nbsp;&lt;/p&gt;&lt;h2&gt;1, 10, 19 ಮತ್ತು 28ನೇ ತಾರೀಖಿನಂದು ಜನಿಸಿದ ಹುಡುಗರು&lt;/h2&gt;&lt;p&gt;ಈ ದಿನಾಂಕಗಳಲ್ಲಿ ಹುಟ್ಟಿದವರ ಜನ್ಮಸಂಖ್ಯೆ (ಮೂಲಾಂಕ) 1 ಆಗಿರುತ್ತದೆ. ಸಂಖ್ಯಾಶಾಸ್ತ್ರದಲ್ಲಿ 1ನೇ ಸಂಖ್ಯೆಯನ್ನು ಸೂರ್ಯನಿಗೆ ಹೋಲಿಸಲಾಗುತ್ತದೆ. ಇವರು ತುಂಬಾನೇ ಆತ್ಮವಿಶ್ವಾಸಿ, ಸ್ಮಾರ್ಟ್ ಮತ್ತು ನಾಯಕತ್ವದ ಗುಣ ಹೊಂದಿದವರಾಗಿರುತ್ತಾರೆ. ಇವರ ವ್ಯಕ್ತಿತ್ವ ತುಂಬಾ ಸ್ಟ್ರಾಂಗ್ ಇರುವುದರಿಂದ, ಎಲ್ಲಿಗೆ ಹೋದರೂ ಎಲ್ಲರ ಗಮನ ಸೆಳೆಯುತ್ತಾರೆ. ಹುಡುಗಿಯರು ಇವರ ಕಾನ್ಫಿಡೆನ್ಸ್ ಮತ್ತು ಸ್ಟೈಲ್&zwnj;ಗೆ ಬೇಗನೇ ಇಂಪ್ರೆಸ್ ಆಗುತ್ತಾರೆ.&lt;/p&gt;&lt;h2&gt;3, 12, 21 ಮತ್ತು 30ನೇ ತಾರೀಖಿನಂದು ಜನಿಸಿದ ಹುಡುಗರು&lt;/h2&gt;&lt;p&gt;ಈ ದಿನಾಂಕಗಳಲ್ಲಿ ಹುಟ್ಟಿದವರ ಜನ್ಮಸಂಖ್ಯೆ 3. ಇದನ್ನು ಗುರು ಗ್ರಹಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಇವರು ತುಂಬಾ ಕ್ರಿಯೇಟಿವ್, ಬುದ್ಧಿವಂತ ಮತ್ತು ಸದಾ ಚೈತನ್ಯದಿಂದ ಇರುತ್ತಾರೆ. ಇವರ ಮಾತಾಡುವ ಶೈಲಿ ಮತ್ತು ಸಕಾರಾತ್ಮಕ ಸ್ವಭಾವ ಜನರನ್ನು ಬೇಗ ಆಕರ್ಷಿಸುತ್ತದೆ. ತಮ್ಮ ಆತ್ಮವಿಶ್ವಾಸ ಮತ್ತು ಪ್ರತಿಭೆಯಿಂದಲೇ ಇವರು ಎಲ್ಲರ ನಡುವೆ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ.&lt;/p&gt;&lt;h2&gt;5, 14 ಮತ್ತು 23ನೇ ತಾರೀಖಿನಂದು ಜನಿಸಿದ ಹುಡುಗರು&lt;/h2&gt;&lt;p&gt;ಇವರ ಜನ್ಮಸಂಖ್ಯೆ 5 ಆಗಿದ್ದು, ಇದನ್ನು ಬುಧ ಗ್ರಹಕ್ಕೆ ಹೋಲಿಸಲಾಗುತ್ತದೆ. ಇವರು ಮಾತಿನಲ್ಲೇ ಜನರನ್ನು ಇಂಪ್ರೆಸ್ ಮಾಡುವುದರಲ್ಲಿ ಎಕ್ಸ್&zwnj;ಪರ್ಟ್. ಇವರ ಹಾಸ್ಯಪ್ರಜ್ಞೆ ಕೂಡಾ ಚೆನ್ನಾಗಿರುತ್ತದೆ ಮತ್ತು ಎಲ್ಲರ ಜೊತೆ ಬೇಗ ಬೆರೆಯುತ್ತಾರೆ. ಇದೇ ಕಾರಣಕ್ಕೆ ಇವರ ಸುತ್ತಮುತ್ತ ಯಾವಾಗಲೂ ಹುಡುಗಿಯರು ಇರುತ್ತಾರೆ.&lt;/p&gt;&lt;h2&gt;6, 15 ಮತ್ತು 24ನೇ ತಾರೀಖಿನಂದು ಜನಿಸಿದ ಹುಡುಗರು&lt;/h2&gt;&lt;p&gt;ಜನ್ಮಸಂಖ್ಯೆ 6 ಅನ್ನು ಪ್ರೀತಿ ಮತ್ತು ಆಕರ್ಷಣೆಯ ಕಾರಕನಾದ ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ. ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗರು ರೊಮ್ಯಾಂಟಿಕ್, ಕೇರಿಂಗ್ ಮತ್ತು ಸ್ಟೈಲಿಶ್ ಆಗಿರುತ್ತಾರೆ. ಇವರ ವ್ಯಕ್ತಿತ್ವ ತುಂಬಾ ಚಾರ್ಮಿಂಗ್ ಆಗಿದ್ದು, ಸಂಬಂಧಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಹುಡುಗಿಯರು ಇವರ ಮೃದು ಸ್ವಭಾವ ಮತ್ತು ಕಾಳಜಿಯ ಮನೋಭಾವಕ್ಕೆ ಬೇಗ ಮರುಳಾಗುತ್ತಾರೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/relationship/numerology-secrets-which-birth-dates-make-boys-more-attractive-to-girls-suh/articleshow-7izwxb3"/>
        </item>
        <item>
            <title><![CDATA[ಗಂಡು ಮಕ್ಕಳ ಕೈಬೆರಳಿಗೆ ಚಂದ ಕಾಣುವ 7 ಚಿನ್ನದ ಉಂಗುರಗಳ ಡಿಸೈನ್‌ಗಳು ಇಲ್ಲಿವೆ]]></title>
            <link>https://kannada.asianetnews.com/webstories/fashion/top-7-stylish-gold-ring-designs-for-baby-boys-must-buy-kvn-6eciidy</link>
            <guid isPermaLink="true">https://kannada.asianetnews.com/webstories/fashion/top-7-stylish-gold-ring-designs-for-baby-boys-must-buy-kvn-6eciidy</guid>
            <pubDate>Tue, 19 May 2026 10:03:13 +0530</pubDate>
            <description><![CDATA[&lt;p&gt;ಗಂಡು ಮಕ್ಕಳಿಗೆ ಹಗುರವಾದ ಹಾಗೂ ಸ್ಟೈಲಿಶ್ ಚಿನ್ನದ ಉಂಗುರಗಳು ಈಗ ಸಖತ್ ಟ್ರೆಂಡ್&zwnj;ನಲ್ಲಿವೆ. ಸ್ಟಾರ್, ಕ್ರೌನ್, ಕಾರ್ಟೂನ್ ಹಾಗೂ ಹೆಸರು ಕೆತ್ತಿದ ಡಿಸೈನ್&zwnj;ಗಳು ಮಕ್ಕಳ ಕೈಯಲ್ಲಿ ಮುದ್ದಾಗಿ, ಆಕರ್ಷಕವಾಗಿ ಕಾಣಿಸುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxbfcmtm1ncp4z47xvrbv4j,imgname-ring-3--5--1779101577882.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/top-7-stylish-gold-ring-designs-for-baby-boys-must-buy-kvn-6eciidy"/>
        </item>
        <item>
            <title><![CDATA[ಬೇಸಿಗೆಯಲ್ಲಿ ನಿಮ್ಮ ಗಾರ್ಡನ್‌ ಘಮಘಮಿಸಲು ಈ 10 ಬಿಳಿ ಹೂವಿನ ಗಿಡಗಳನ್ನು ನೆಡಿ]]></title>
            <link>https://kannada.asianetnews.com/webstories/life/top-10-fragrant-white-flowers-for-a-beautiful-summer-terrace-garden-kvn-s1u5nlh</link>
            <guid isPermaLink="true">https://kannada.asianetnews.com/webstories/life/top-10-fragrant-white-flowers-for-a-beautiful-summer-terrace-garden-kvn-s1u5nlh</guid>
            <pubDate>Tue, 19 May 2026 09:54:47 +0530</pubDate>
            <description><![CDATA[&lt;p&gt;ಬೇಸಿಗೆಯಲ್ಲಿ ನಿಮ್ಮ ಟೆರೇಸ್ ಗಾರ್ಡನ್ ಬೆಳಗ್ಗೆ ಮತ್ತು ಸಂಜೆ ಸುವಾಸನೆಯಿಂದ ತುಂಬಿರಬೇಕೇ? ಹಾಗಿದ್ರೆ ಈ 10 ಬಿಳಿ ಹೂವಿನ ಗಿಡಗಳು ನಿಮ್ಮ ಮನೆಗೆ ಸೌಂದರ್ಯದ ಜೊತೆಗೆ ನೈಸರ್ಗಿಕ ಪರಿಮಳವನ್ನೂ ನೀಡುತ್ತವೆ. ಆ 10 ಸುವಾಸನೆ ಭರಿತ ಬಿಳಿ ಹೂವುಗಳ ಬಗ್ಗೆ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqr6qjwpy59efdygrxr17xt,imgname-best-fragrant-white-flower-plants-1778913599068.png" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/life/top-10-fragrant-white-flowers-for-a-beautiful-summer-terrace-garden-kvn-s1u5nlh"/>
        </item>
        <item>
            <title><![CDATA[ಕೇರಳದ ಸೆ*ಕ್ಸ್ ರಾಕೆಟ್ ಬಯಲು: ದುಬೈನಲ್ಲಿ ಮಾಡೆಲ್‌ಗಳಿಗೆ ಕೆಲಸ ಆಮಿಷವೊಡ್ಡಿ ಅತ್ಯಾ*ಚಾರ; ಅಲೀನಾ, ಸಿಂಧು ಅರೆಸ್ಟ್!]]></title>
            <link>https://kannada.asianetnews.com/india-news/kerala-modeling-illicit-adult-business-model-aleena-sindhu-arrested-dubai-blackmail-sat/articleshow-13o63sc</link>
            <guid isPermaLink="true">https://kannada.asianetnews.com/india-news/kerala-modeling-illicit-adult-business-model-aleena-sindhu-arrested-dubai-blackmail-sat/articleshow-13o63sc</guid>
            <pubDate>Tue, 19 May 2026 09:22:54 +0530</pubDate>
            <description><![CDATA[&lt;p&gt;ವಿದೇಶದಲ್ಲಿ ಮಾಡೆಲಿಂಗ್ ಕೆಲಸದ ಆಮಿಷವೊಡ್ಡಿ ಯುವತಿಯರನ್ನು ಲೈಂಗಿಕ ದಂಧೆಗೆ ತಳ್ಳುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಅಲೀನಾ ಮತ್ತು ಸಿಂಧು ಎಂಬ ಇಬ್ಬರನ್ನು ಬಂಧಿಸಲಾಗಿದ್ದು, ಇವರು ಯುವತಿಯರಿಗೆ ಡ್ರಗ್ಸ್ ನೀಡಿ, ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿ ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kryvjjg35kb6rk6zhy0mz2f0,imgname-fotojet---2026-05-19t062308.387-1779152013827.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿದೇಶದಲ್ಲಿ ಮಾಡೆಲಿಂಗ್ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕ ಯುವತಿಯರನ್ನು ಲೈಂಗಿಕ ದಂಧೆಯ ಕೂಪಕ್ಕೆ ತಳ್ಳುತ್ತಿದ್ದ ಬೃಹತ್ ಜಾಲವೊಂದನ್ನು ಪೊಲೀಸರು ಬೇಧಿಸಿದ್ದಾರೆ.&lt;/p&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಲಾಡಿ ಮಾಡೆಲ್ ಅಲೀನಾ ಎಂಬಾಕೆಯನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದ್ದು, ಈ ದಂಧೆಯ ಮತ್ತೊಬ್ಬ ಪ್ರಮುಖ ಸೂತ್ರಧಾರಿ ಸಿಂಧು ಎಂಬಾಕೆಯನ್ನು ಮುಂಬೈನಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಇಬ್ಬರು ಮಹಿಳೆಯರ ಬಂಧನದಿಂದಾಗಿ ಕೇರಳದ ಗ್ಲಾಮರ್ ಲೋಕದ ಕರಾಳ ಮುಖ ಬಯಲಾಗಿದೆ.&lt;/p&gt;&lt;h3&gt;&lt;strong&gt;ಹೇಗೆ ನಡೆಯುತ್ತಿತ್ತು ಈ ದಂಧೆ?&lt;/strong&gt;&lt;/h3&gt;&lt;p&gt;ಆರೋಪಿಗಳಾದ ಅಲೀನಾ ಮತ್ತು ಸಿಂಧು ಅವರು ವಿದೇಶದಲ್ಲಿ, ವಿಶೇಷವಾಗಿ ದುಬೈನಲ್ಲಿ ದೊಡ್ಡ ದೊಡ್ಡ ಬ್ರ್ಯಾಂಡ್&zwnj;ಗಳ ಮಾಡೆಲಿಂಗ್ ಅವಕಾಶ ಕೊಡಿಸುವುದಾಗಿ ಯುವತಿಯರನ್ನು ನಂಬಿಸುತ್ತಿದ್ದರು. ಉಜ್ವಲ ಭವಿಷ್ಯದ ಕನಸು ಹೊತ್ತ ಮಾಡೆಲ್&zwnj;ಗಳನ್ನು ದುಬೈಗೆ ಕರೆದೊಯ್ದ ಮೇಲೆ ಇವರ ಅಸಲಿ ಬಣ್ಣ ಬಯಲಾಗುತ್ತಿತ್ತು. ಅಲ್ಲಿ ಯುವತಿಯರಿಗೆ ಬಲವಂತವಾಗಿ ಡ್ರಗ್ಸ್ (ಮಾದಕ ದ್ರವ್ಯ) ನೀಡಿ ಪ್ರಜ್ಞೆ ತಪ್ಪಿಸಲಾಗುತ್ತಿತ್ತು. ಆ ಸ್ಥಿತಿಯಲ್ಲಿ ಅವರ ಮೇಲೆ ಅಮಾನವೀಯವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಬ್ಲ್ಯಾಕ್&zwnj;ಮೇಲ್ ಅಸ್ತ್ರ:&lt;/strong&gt;&lt;/h2&gt;&lt;p&gt;ಈ ಜಾಲದ ಕ್ರೌರ್ಯ ಇಲ್ಲಿಗೆ ನಿಲ್ಲುತ್ತಿರಲಿಲ್ಲ. ಯುವತಿಯರ ಮೇಲೆ ಅತ್ಯಾ*ಚಾರ ಎಸಗುವ ದೃಶ್ಯಗಳನ್ನು ಗುಟ್ಟಾಗಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಆ ವಿಡಿಯೋಗಳನ್ನೇ ಇಟ್ಟುಕೊಂಡು, &lsquo;ನಾವು ಹೇಳಿದಂತೆ ಕೇಳದಿದ್ದರೆ ಈ ವಿಡಿಯೋಗಳನ್ನು ಇಂಟರ್ನೆಟ್&zwnj;ನಲ್ಲಿ ಹರಿಬಿಡುತ್ತೇವೆ ಅಥವಾ ನಿಮ್ಮ ಕುಟುಂಬಕ್ಕೆ ಕಳುಹಿಸುತ್ತೇವೆ&rsquo; ಎಂದು ಬೆದರಿಕೆ ಹಾಕುತ್ತಿದ್ದರು. ಈ ಬ್ಲ್ಯಾಕ್&zwnj;ಮೇಲ್&zwnj;ಗೆ ಹೆದರಿ ಅನೇಕ ಯುವತಿಯರು ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಪೊಲೀಸರ ತನಿಖೆಯ ವೇಳೆ ಯುವತಿಯರು ಅನುಭವಿಸಿರುವ ಚಿತ್ರಹಿಂಸೆಯ ಕಥೆಗಳು ಕೇಳಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.&lt;/p&gt;&lt;h3&gt;&lt;strong&gt;ಕ್ರಿಮಿನಲ್ ಹಿನ್ನೆಲೆಯ ಅಲೀನಾ:&lt;/strong&gt;&lt;/h3&gt;&lt;p&gt;ಬಂಧಿತ ಅಲೀನಾ ಸಾಮಾನ್ಯ ಹುಡುಗಿಯಲ್ಲ. ಈಕೆ ಈ ಹಿಂದೆಯೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಕೆಗೆ ಕೇರಳದ ಕೆಲವು ಕುಖ್ಯಾತ ಗೂಂಡಾ ಗ್ಯಾಂಗ್&zwnj;ಗಳ ಜೊತೆಗೆ ನೇರ ಸಂಪರ್ಕವಿದೆ. ಸಂತ್ರಸ್ತ ಯುವತಿಯರನ್ನು ಬೆದರಿಸಲು ಈಕೆ ಈ ಗ್ಯಾಂಗ್&zwnj;ಗಳ ಸಹಾಯ ಪಡೆಯುತ್ತಿದ್ದಳು ಎನ್ನಲಾಗಿದೆ. ಸದ್ಯ ಕೊಚ್ಚಿಯಲ್ಲಿ ಅಲೀನಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಮುಂಬೈನಲ್ಲಿ ಸಿಕ್ಕಿಬಿದ್ದಿರುವ ಸಿಂಧುಳನ್ನು ಇಂದು ಕೇರಳಕ್ಕೆ ಕರೆತರಲಾಗುತ್ತಿದೆ.&lt;/p&gt;&lt;h3&gt;&lt;strong&gt;ದೂರು ನೀಡಲು ಹಿಂಜರಿಯುತ್ತಿರುವ ಸಂತ್ರಸ್ತರು:&lt;/strong&gt;&lt;/h3&gt;&lt;p&gt;ಈ ಜಾಲದ ಮೂಲಕ ನೂರಾರು ಯುವತಿಯರು ವಂಚನೆಗೊಳಗಾಗಿರುವ ಶಂಕೆ ಇದೆ. ಆದರೆ, ಮಾನಹಾನಿಯಾಗುವ ಭೀತಿಯಿಂದ ಮತ್ತು ಆರೋಪಿಗಳ ಬೆದರಿಕೆಗೆ ಹೆದರಿ ಈವರೆಗೆ ಕೇವಲ ಮೂರು ಮಂದಿ ಮಾತ್ರ ಧೈರ್ಯ ಮಾಡಿ ದೂರು ನೀಡಿದ್ದಾರೆ. ಪೊಲೀಸರು ಹೆಚ್ಚಿನ ಯುವತಿಯರಿಗೆ ದೂರು ನೀಡಲು ಪ್ರೇರೇಪಿಸುತ್ತಿದ್ದು, ಈ ದಂಧೆಯ ಹಿಂದೆ ಇನ್ನು ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿರುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಇನ್ನೂ ಹಲವು ಬಂಧನಗಳಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/kerala-modeling-illicit-adult-business-model-aleena-sindhu-arrested-dubai-blackmail-sat/articleshow-13o63sc"/>
        </item>
        <item>
            <title><![CDATA[ಗಾಜಿನ ಬಳೆಗಳಿಗೆ ಹೊಸ ಲುಕ್: ಟ್ರೈ ಮಾಡಿ ಈ 6 ಬಗೆಯ ಗಜ್ರಾ ಬ್ರೇಸ್ಲೆಟ್!]]></title>
            <link>https://kannada.asianetnews.com/webstories/fashion/stylish-gajra-bracelet-designs-to-elevate-your-glass-bangles-gvd-076gvb4</link>
            <guid isPermaLink="true">https://kannada.asianetnews.com/webstories/fashion/stylish-gajra-bracelet-designs-to-elevate-your-glass-bangles-gvd-076gvb4</guid>
            <pubDate>Mon, 18 May 2026 23:49:33 +0530</pubDate>
            <description><![CDATA[ಸಾದಾ ಗಾಜಿನ ಬಳೆಗಳನ್ನು ಸ್ಟೈಲಿಶ್ ಆಗಿ, ಹಬ್ಬದ ಸೀಸನ್&zwnj;ಗೆ ತಕ್ಕಂತೆ ಕಾಣುವಂತೆ ಮಾಡಲು ಗಜ್ರಾ ಬ್ರೇಸ್ಲೆಟ್ ಟ್ರೈ ಮಾಡಿ. ಕೆಂಪು-ಬಿಳಿ, ಮಲ್ಟಿಕಲರ್, ಲ್ಯಾವೆಂಡರ್ ಬಣ್ಣದ ಬ್ರೇಸ್ಲೆಟ್&zwnj;ಗಳು ಸೀರೆಯ ಅಂದವನ್ನು ಹೆಚ್ಚಿಸುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krwz2q2vq2v384gpmgp9f04s,imgname-gajra-bracelet-cr-1779088579675.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stylish-gajra-bracelet-designs-to-elevate-your-glass-bangles-gvd-076gvb4"/>
        </item>
    </channel>
</rss>
