<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 30 Jun 2026 14:24:17 +0530</lastBuildDate>
        <atom:link href="https://kannada.asianetnews.com/rss/life" rel="self" type="application/rss+xml"/>
        <item>
            <title><![CDATA[ಹೆಚ್ಚಾಗ್ತಿದೆ ಬೇಬಿಮೂನ್ ಟ್ರೆಂಡ್ ! ಯಾವಾಗ , ಎಲ್ಲಿಗೆ ಹೋಗ್ಬೇಕು ತಿಳಿದ್ಕೊಂಡಿರಿ]]></title>
            <link>https://kannada.asianetnews.com/gallery/relationship/parenting-what-is-babymoon-and-how-to-plan-it-i4gs3sb</link>
            <guid isPermaLink="true">https://kannada.asianetnews.com/gallery/relationship/parenting-what-is-babymoon-and-how-to-plan-it-i4gs3sb</guid>
            <pubDate>Tue, 30 Jun 2026 14:24:11 +0530</pubDate>
            <description><![CDATA[&lt;p&gt;ಮಕ್ಕಳಾದ್ಮೇಲೆ ಪಾಲಕರು ಸಿಕ್ಕಾಪಟ್ಟೆ ಬ್ಯುಸಿ. ಪ್ರೆಗ್ನೆನ್ಸಿ ಟೈಂನಲ್ಲಿ ಸಾಕಷ್ಟು ತಯಾರಿ ನಡಿತಿರುತ್ತೆ. ಈ ಮಧ್ಯೆ ಬಿಡುವು ಮಾಡ್ಕೊಂಡು ಈಗಿನ ಕಪಲ್ಸ್&zwnj; ಟ್ರಿಪ್&zwnj; ಹೋಗ್ತಿದ್ದಾರೆ. ಅದ್ಯಾಕೆ ಗೊತ್ತಾ?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwbvfcc34121npzr32hzwmkk,imgname-babymoon-1782809342339.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಕ್ಕಳಾದ್ಮೇಲೆ ಪಾಲಕರು ಸಿಕ್ಕಾಪಟ್ಟೆ ಬ್ಯುಸಿ. ಪ್ರೆಗ್ನೆನ್ಸಿ ಟೈಂನಲ್ಲಿ ಸಾಕಷ್ಟು ತಯಾರಿ ನಡಿತಿರುತ್ತೆ. ಈ ಮಧ್ಯೆ ಬಿಡುವು ಮಾಡ್ಕೊಂಡು ಈಗಿನ ಕಪಲ್ಸ್&zwnj; ಟ್ರಿಪ್&zwnj; ಹೋಗ್ತಿದ್ದಾರೆ. ಅದ್ಯಾಕೆ ಗೊತ್ತಾ?&amp;nbsp;&lt;/p&gt;&lt;img&gt;&lt;p&gt;ಮದುವೆ, ಮಕ್ಕಳೆಲ್ಲ ಜೀವನ ಬಹುದೊಡ್ಡ ಘಟ್ಟಗಳು. ಮಕ್ಕಳಾದ್ಮೇಲೆ ಜವಾಬ್ದಾರಿ ಹೆಚ್ಚಾಗುತ್ತೆ. ಇಲ್ಲಿ ಖುಷಿ ಜೊತೆ ಸವಾಲುಗಳು ಸಾಕಷ್ಟಿರುತ್ವೆ. ಮಕ್ಕಳಾದ್ಮೇಲೆ ಪಾಲಕರಿಗೆ ಒಟ್ಟಿಗೆ ಸಮಯ ಸಿಗೋದು ಕಷ್ಟ. ಅದಕ್ಕಾಗಿ ಹುಟ್ಟಿಕೊಂಡಿದ್ದು ಈ ಬೇಬಿಮೂನ್. ಬೇಬಿಮೂನ್ ಎಂದರೆ ನಿರೀಕ್ಷಿತ ಪೋಷಕರು ತಮ್ಮ ಮಗುವಿನ ಆಗಮನದ ಮೊದಲು ಸ್ಮರಣೀಯ ಕ್ಷಣಗಳನ್ನು ಒಟ್ಟಿಗೆ ಕಳೆಯಲು ತೆಗೆದುಕೊಳ್ಳುವ ಒಂದು ಸಣ್ಣ ಪ್ರವಾಸ. ಇದರ ಉದ್ದೇಶ ಪ್ರಯಾಣ ಮಾಡೋದು ಮಾತ್ರವಲ್ಲ ಮುಂದೆ ಬರುವ ಹೊಸ ಜವಾಬ್ದಾರಿಗಳಿಗೆ ಮಾನಸಿಕವಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳುವುದು, ಸಂಬಂಧವನ್ನು ಬಲಪಡಿಸುವುದು.&lt;/p&gt;&lt;img&gt;&lt;p&gt;ನೀವೂ ಪಾಲಕರಾಗ್ತಿದ್ದು, ಅದಕ್ಕೂ ಮುನ್ನ ಬೇಬಿ ಮೂನ್ ಪ್ಲಾನ್ ಮಾಡಿದ್ದರೆ ಸೂಕ್ತ ಸಮಯದ ಬಗ್ಗೆ ತಿಳಿದುಕೊಳ್ಳಿ. ಪ್ರೆಗ್ನೆನ್ಸಿಯ ಎರಡನೇ ತ್ರೈಮಾಸಿಕದಲ್ಲಿ, ಸರಿಸುಮಾರು 14 ಮತ್ತು 28 ನೇ ವಾರಗಳ ನಡುವೆ ಪ್ರಯಾಣವನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಆರಂಭಿಕ ತಿಂಗಳುಗಳ ಆಯಾಸ ಮತ್ತು ವಾಕರಿಕೆ ಕಡಿಮೆಯಾಗುತ್ತದೆ. ದೇಹವು ತುಲನಾತ್ಮಕವಾಗಿ ಆರೋಗ್ಯಕರವಾಗಿರುತ್ತದೆ. ಆದ್ರೆ ಯಾವುದೇ ಪ್ಲಾನ್ ಮಾಡುವ ಮೊದಲು ಡಾಕ್ಟರ್ ಸಲಹೆ ಪಡೆಯೋದು ಸೂಕ್ತ.&lt;/p&gt;&lt;img&gt;&lt;p&gt;ಪ್ರೆಗ್ನೆನ್ಸಿ ಟೈಂನಲ್ಲಿ ರಿಸ್ಕ್ ತೆಗೆದುಕೊಳ್ಳೋದು ಅಪಾಯಕಾರಿ. ಪ್ರವಾಸದ ಸ್ಥಳ ಆಯ್ಕೆ ಬಗ್ಗೆಯೂ ನೀವು ವಿಶೇಷ ಗಮನ ಹರಿಸಬೇಕು. ದೀರ್ಘ ಪ್ರಯಾಣ, ನಿರಂತರ ನಡಿಗೆ ಅಥವಾ ವಿಶ್ರಾಂತಿ ಇಲ್ಲದೆ ಪ್ರಯಾಣ ಸೂಕ್ತವಲ್ಲ. ಬೆಟ್ಟ ಹತ್ತುವುದು, ಫಾಲ್ಸ್ ನಲ್ಲಿ ಇಳಿಯುವುದು ಸೇರಿದಂತೆ ಅಪಾಯಕಾರಿ, ಮೋಜಿನ ಆಟಗಳಿಂದ ದೂರ ಇರಬೇಕು. ಶಾಂತಿಯುತ ವಾತಾವರಣ, ನೈಸರ್ಗಿಕ ಸೌಂದರ್ಯ ಮತ್ತು ಅಗತ್ಯವಿದ್ದರೆ ಆಸ್ಪತ್ರೆಗಳು ಅಥವಾ ವೈದ್ಯಕೀಯ ಸೌಲಭ್ಯಗಳಿಗೆ ಸುಲಭವಾಗಿ ಸಿಗಬಹುದಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ದಿನವಿಡಿ ಪ್ರವಾಸದಲ್ಲಿರುವ ಬದಲು ಒಂದು ಎರಡು ಚಟುವಟಿಕೆಯಲ್ಲಿ ಮಾತ್ರ ಪಾಲ್ಗೊಳ್ಳಿ. ಬೆಳಿಗ್ಗೆ ನಿಧಾನವಾಗಿ ಎದ್ದೇಳಿ. ತೆರೆದ ಗಾಳಿಯಲ್ಲಿ ನಡೆಯಿರಿ, ಸುಂದರವಾದ ಸ್ಥಳದಲ್ಲಿ ಕುಳಿತು ಸಮಯ ಕಳೆಯಿರಿ ಅಥವಾ ನಿಮ್ಮ ಸಂಗಾತಿಯೊಂದಿಗೆ ನಿಧಾನವಾಗಿ ಸಂಭಾಷಣೆ ನಡೆಸಿ. ಈ ಸಣ್ಣ ಕ್ಷಣಗಳು ಪ್ರವಾಸವನ್ನು ವಿಶೇಷಗೊಳಿಸುವುದಲ್ಲದೆ ಪರಸ್ಪರ ಇನ್ನಷ್ಟು ಅರ್ಥಮಾಡಿಕೊಂಡು ಹತ್ತಿರವಾಗಲು ಸಹಾಯವಾಗುತ್ತದೆ.&lt;/p&gt;&lt;img&gt;&lt;p&gt;ನೀವು ಹನಿಮೂನ್ ಗೆ ಹೋಗ್ತಿಲ್ಲ. ಪ್ರೆಗ್ನೆನ್ಸಿ ಟೈಂನಲ್ಲಿ ಸೂಕ್ತವಾಗಿರುವ, ಆರಾಮದಾಯಕ ಬಟ್ಟೆ, ಚಪ್ಪಲಿ ಪ್ಯಾಕ್ ಮಾಡಿ. ವೈದ್ಯರು ನೀಡಿರುವ ಔಷಧಿಯನ್ನು ತಪ್ಪದೆ ತೆಗೆದುಕೊಳ್ಳಿ. ಆಗಾಗ ನೀರು ಸೇವನೆ ಮಾಡ್ತಿರಿ. ಜೀವಸತ್ವ, ಪೋಷಕಾಂಶ ಇರುವ ಆಹಾರ ಸೇವಿಸಿ. ಸೋಂಕು ಹರಡುವ, ಸೊಳ್ಳೆ ಹೆಚ್ಚಿರುವ ಪ್ರದೇಶಕ್ಕೆ ಹೋಗ್ಬೇಡಿ. ಆಫೀಸ್ ಕೆಲ್ಸ, ಫೋನ್ ನಿಂದ ದೂರವಿದ್ದು, ಇಬ್ಬರೂ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯಲು ಪ್ರಯತ್ನಿಸಿ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/relationship/parenting-what-is-babymoon-and-how-to-plan-it-i4gs3sb"/>
        </item>
        <item>
            <title><![CDATA[ನಾವು ಹೋಗೋ ಹಾಗಿಲ್ಲ.. ವಿದೇಶಿಯರಿಗೆ ಮಾತ್ರ ಅವಕಾಶವಿರುವ ಭಾರತದ 5 ರಹಸ್ಯ ಸ್ಥಳಗಳಿವು]]></title>
            <link>https://kannada.asianetnews.com/gallery/india-news/5-places-in-india-where-indians-are-not-allowed-to-enter-but-entry-for-only-foreigners-suh-id3hkz7</link>
            <guid isPermaLink="true">https://kannada.asianetnews.com/gallery/india-news/5-places-in-india-where-indians-are-not-allowed-to-enter-but-entry-for-only-foreigners-suh-id3hkz7</guid>
            <pubDate>Tue, 30 Jun 2026 14:19:44 +0530</pubDate>
            <description><![CDATA[&lt;p&gt;ರಾಷ್ಟ್ರೀಯ ಭದ್ರತೆ, ಬುಡಕಟ್ಟು ಜನಾಂಗದ ಸಂರಕ್ಷಣೆ ಮತ್ತು ಪರಿಸರ ರಕ್ಷಣೆಯ ಕಾರಣದಿಂದ ಭಾರತದಲ್ಲಿರುವ ಕೆಲವು ಪ್ರದೇಶಗಳಿಗೆ ಸಾಮಾನ್ಯ ಭಾರತೀಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ವಿಶೇಷ ಸರ್ಕಾರಿ ಅನುಮತಿ ಪಡೆದ ಕೆಲ ವಿದೇಶಿ ಸಂಶೋಧಕರು ಹಾಗೂ ಪ್ರವಾಸಿಗರಿಗೆ ಮಾತ್ರ ಸೀಮಿತ ಪ್ರವೇಶ ನೀಡಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfss5s6p4rkz6byppweswsak,imgname-andaman-and-nicobar-islands-7-1769318048982.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರೀಯ ಭದ್ರತೆ, ಬುಡಕಟ್ಟು ಜನಾಂಗದ ಸಂರಕ್ಷಣೆ ಮತ್ತು ಪರಿಸರ ರಕ್ಷಣೆಯ ಕಾರಣದಿಂದ ಭಾರತದಲ್ಲಿರುವ ಕೆಲವು ಪ್ರದೇಶಗಳಿಗೆ ಸಾಮಾನ್ಯ ಭಾರತೀಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ವಿಶೇಷ ಸರ್ಕಾರಿ ಅನುಮತಿ ಪಡೆದ ಕೆಲ ವಿದೇಶಿ ಸಂಶೋಧಕರು ಹಾಗೂ ಪ್ರವಾಸಿಗರಿಗೆ ಮಾತ್ರ ಸೀಮಿತ ಪ್ರವೇಶ ನೀಡಲಾಗುತ್ತದೆ.&lt;/p&gt;&lt;img&gt;&lt;p&gt;&quot;ಇದು ನಮ್ಮ ದೇಶ, ಎಲ್ಲಿ ಬೇಕಾದರೂ ಹೋಗಬಹುದು&quot; ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ ಭಾರತದಲ್ಲಿ ಕೆಲವು ಅತಿಸೂಕ್ಷ್ಮ ಪ್ರದೇಶಗಳಿವೆ. ಇಲ್ಲಿ ಸಾಮಾನ್ಯ ಭಾರತೀಯರಿಗೆ ಪ್ರವೇಶವಿಲ್ಲ ಅಥವಾ ಕಠಿಣ ನಿರ್ಬಂಧಗಳಿವೆ. ಈ ನಿರ್ಬಂಧಗಳ ಹಿಂದಿನ ಪ್ರಮುಖ ಕಾರಣಗಳು ರಾಷ್ಟ್ರೀಯ ಭದ್ರತೆ, ಬುಡಕಟ್ಟು ಜನಾಂಗದ ರಕ್ಷಣೆ ಮತ್ತು ಪರಿಸರ ಸಂರಕ್ಷಣೆ.&lt;/p&gt;&lt;p&gt;ಈ ನಿರ್ಬಂಧಗಳ ಹಿಂದಿರುವ ಪ್ರಮುಖ ಕಾರಣಗಳು&lt;/p&gt;&lt;p&gt;ರಾಷ್ಟ್ರೀಯ ಭದ್ರತೆ: ಚೀನಾ ಹಾಗೂ ಪಾಕಿಸ್ತಾನದ ಗಡಿಭಾಗಗಳಲ್ಲಿರುವ ಸೂಕ್ಷ್ಮ ಪ್ರದೇಶಗಳು.&lt;/p&gt;&lt;p&gt;ಬುಡಕಟ್ಟು ಜನಾಂಗದ ಸಂರಕ್ಷಣೆ: ಹೊರಗಿನ ಸಂಪರ್ಕದಿಂದ ಬುಡಕಟ್ಟು ಜನರಿಗೆ ಸೋಂಕು ಹರಡುವ ಅಪಾಯ.&lt;/p&gt;&lt;p&gt;ಪರಿಸರ ರಕ್ಷಣೆ: ಜ್ವಾಲಾಮುಖಿ, ಅಪರೂಪದ ಜೀವಜಾತಿಗಳು ಮತ್ತು ಸೂಕ್ಷ್ಮ ಪರಿಸರ ವ್ಯವಸ್ಥೆಯ ಸಂರಕ್ಷಣೆ.&lt;/p&gt;&lt;img&gt;&lt;p&gt;1. ಉತ್ತರ ಸೆಂಟಿನೆಲ್ ದ್ವೀಪ (ಅಂಡಮಾನ್)&lt;/p&gt;&lt;p&gt;ಇದು ವಿಶ್ವದ ಅತ್ಯಂತ ಪ್ರತ್ಯೇಕವಾಗಿ ಬದುಕುತ್ತಿರುವ ಸೆಂಟಿನೆಲೀಸ್ ಬುಡಕಟ್ಟು ಜನಾಂಗದ ನೆಲೆ.&lt;/p&gt;&lt;p&gt;ದ್ವೀಪದ ಸುತ್ತ 5 ನಾಟಿಕಲ್ ಮೈಲುಗಳವರೆಗೆ ಪ್ರವೇಶ ನಿಷೇಧ.&lt;/p&gt;&lt;p&gt;2018ರಲ್ಲಿ ಅಮೆರಿಕದ ಮಿಷನರಿ ಜಾನ್ ಅಲೆನ್ ಚೌ ಇಲ್ಲಿ ಹತ್ಯೆಯಾಗಿದ್ದರು.&lt;/p&gt;&lt;p&gt;ಯಾರಿಗೂ ದ್ವೀಪಕ್ಕೆ ಇಳಿಯಲು ಅನುಮತಿ ಇಲ್ಲ.&lt;/p&gt;&lt;p&gt;2. ಬ್ಯಾರೆನ್ ದ್ವೀಪ (ಅಂಡಮಾನ್)&lt;/p&gt;&lt;p&gt;ಭಾರತದ ಏಕೈಕ ಸಕ್ರಿಯ ಜ್ವಾಲಾಮುಖಿ ಇಲ್ಲಿದೆ.&lt;/p&gt;&lt;p&gt;ಸಾಮಾನ್ಯ ಪ್ರವಾಸಿಗರಿಗೆ ದ್ವೀಪದಲ್ಲಿ ಇಳಿಯಲು ಅವಕಾಶವಿಲ್ಲ.&lt;/p&gt;&lt;p&gt;ದೂರದಿಂದ ಬೋಟ್ ಮೂಲಕ ಮಾತ್ರ ವೀಕ್ಷಿಸಬಹುದು.&lt;/p&gt;&lt;p&gt;ವೈಜ್ಞಾನಿಕ ಸಂಶೋಧನೆಗೆ ಮಾತ್ರ ವಿಶೇಷ ಅನುಮತಿ ನೀಡಲಾಗುತ್ತದೆ.&lt;/p&gt;&lt;img&gt;&lt;p&gt;3. ಚಾಂಗ್&zwnj;ಥಾಂಗ್ ವನ್ಯಜೀವಿ ಅಭಯಾರಣ್ಯ (ಲಡಾಖ್)&lt;/p&gt;&lt;p&gt;ಚೀನಾದ ಗಡಿಗೆ ಸಮೀಪವಿರುವ ಈ ಪ್ರದೇಶವು ಹಿಮ ಚಿರತೆ ಹಾಗೂ ಟಿಬೆಟಿಯನ್ ಕಾಡುಕತ್ತೆ (ಕ್ಯಾಂಗ್) ಗಳಿಗೆ ಪ್ರಸಿದ್ಧ.&lt;/p&gt;&lt;p&gt;ಕೋರ್ ವಲಯಕ್ಕೆ ಸಾಮಾನ್ಯ ಪ್ರವೇಶ ಇಲ್ಲ.&lt;/p&gt;&lt;p&gt;ಬಫರ್ ವಲಯದವರೆಗೆ ಮಾತ್ರ ಪ್ರವಾಸಕ್ಕೆ ಅವಕಾಶ.&lt;/p&gt;&lt;p&gt;4. ಗುರುಧೋಂಗ್ಮಾರ್ ಸರೋವರದ ಮಿಲಿಟರಿ ಪ್ರದೇಶ (ಸಿಕ್ಕಿಂ)&lt;/p&gt;&lt;p&gt;ಗುರುಧೋಂಗ್ಮಾರ್ ಸರೋವರ ಪ್ರವಾಸಿಗರಿಗೆ ತೆರೆಯಲ್ಪಟ್ಟಿದ್ದರೂ, ಅದರ ಸುತ್ತಲಿನ ಕೆಲವು ಸೇನಾ ಪ್ರದೇಶಗಳು ನಿರ್ಬಂಧಿತವಾಗಿವೆ.&lt;/p&gt;&lt;p&gt;ಗಡಿಯ ಭದ್ರತಾ ಕಾರಣದಿಂದ ಫೋಟೋ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ಕಠಿಣ ನಿಯಮಗಳಿವೆ.&lt;/p&gt;&lt;p&gt;ಕೆಲವು ಪ್ರದೇಶಗಳಿಗೆ ವಿಶೇಷ ಪರವಾನಗಿ ಅಗತ್ಯ.&lt;/p&gt;&lt;img&gt;&lt;p&gt;5. ಜರಾವಾ ರಿಸರ್ವ್ ಫಾರೆಸ್ಟ್ (ಅಂಡಮಾನ್)&lt;/p&gt;&lt;p&gt;ಜರಾವಾ ಬುಡಕಟ್ಟು ಜನಾಂಗದ ಸಂರಕ್ಷಿತ ಅರಣ್ಯ.&lt;/p&gt;&lt;p&gt;ಅರಣ್ಯ ಪ್ರವೇಶ ಕಾನೂನುಬಾಹಿರ.&lt;/p&gt;&lt;p&gt;ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು.&lt;/p&gt;&lt;p&gt;ಬುಡಕಟ್ಟು ಜನಾಂಗದ ಸುರಕ್ಷತೆಗಾಗಿ ಕಠಿಣ ನಿಯಮ ಜಾರಿಯಲ್ಲಿದೆ.&lt;/p&gt;&lt;p&gt;ಈ ಸ್ಥಳಗಳನ್ನು ನೋಡಲು ಸಾಧ್ಯವೇ?&lt;/p&gt;&lt;p&gt;ಹೌದು, ಆದರೆ ಕೆಲವು ಮಿತಿಗಳಿವೆ.&lt;/p&gt;&lt;p&gt;ಉತ್ತರ ಸೆಂಟಿನೆಲ್ ದ್ವೀಪ &ndash; 5 ನಾಟಿಕಲ್ ಮೈಲು ದೂರದಿಂದ ಮಾತ್ರ.&lt;/p&gt;&lt;p&gt;ಬ್ಯಾರೆನ್ ದ್ವೀಪ &ndash; ಬೋಟ್ ಮೂಲಕ ದೂರದಿಂದ ವೀಕ್ಷಣೆ.&lt;/p&gt;&lt;p&gt;ಚಾಂಗ್&zwnj;ಥಾಂಗ್ &ndash; ಬಫರ್ ವಲಯದಲ್ಲಿ ಪ್ರವಾಸ ಸಾಧ್ಯ.&lt;/p&gt;&lt;p&gt;ಗುರುಧೋಂಗ್ಮಾರ್ &ndash; ಅನುಮತಿ ಇರುವ ಭಾಗದವರೆಗೆ ಮಾತ್ರ.&lt;/p&gt;&lt;p&gt;ಜರಾವಾ ಪ್ರದೇಶ &ndash; ಸಂರಕ್ಷಿತ ರಸ್ತೆಯಲ್ಲಿ ಪ್ರಯಾಣಿಸುವಾಗ ಮಾತ್ರ ದೂರದಿಂದ ಕಾಣಬಹುದು.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/india-news/5-places-in-india-where-indians-are-not-allowed-to-enter-but-entry-for-only-foreigners-suh-id3hkz7"/>
        </item>
        <item>
            <title><![CDATA[ದೋಸೆ ಹಿಟ್ಟು ವಾರವಿಡೀ  ಫ್ರೆಶ್ ಆಗಿಡಲು 5 ಟಿಪ್ಸ್ ಫಾಲೋ ಮಾಡಿ; ಇದು ಹೋಟೆಲ್‌ಗಳ ಟ್ರಿಕ್ಸ್]]></title>
            <link>https://kannada.asianetnews.com/gallery/food/kannada-traditional-kitchen-hacks-follow-these-5-tips-to-keep-dosa-batter-fresh-all-week-these-are-hotel-tricks-mrq-fwhpbn4</link>
            <guid isPermaLink="true">https://kannada.asianetnews.com/gallery/food/kannada-traditional-kitchen-hacks-follow-these-5-tips-to-keep-dosa-batter-fresh-all-week-these-are-hotel-tricks-mrq-fwhpbn4</guid>
            <pubDate>Tue, 30 Jun 2026 14:12:43 +0530</pubDate>
            <description><![CDATA[&lt;p&gt;Dosa Batter: ದೋಸೆಹಿಟ್ಟನ್ನು ವಾರಗಟ್ಟಲೇ ಫ್ರೆಶ್ ಆಗಿ ಮತ್ತು ಹುಳಿಯಾಗದಂತೆ ಇಡಲು ಕೆಲವು ಸರಳ ವಿಧಾನಗಳಿವೆ. ಕೆಲವು ಸರಳ ವಿಧಾನಗಳ ಮೂಲಕ ದೋಸೆ ಹಿಟ್ಟನ್ನು ದೀರ್ಘಕಾಲ ಸಂಗ್ರಹಿಸಬಹುದು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkdk0qmv88j4grmvf42mhgp9,imgname-how-to-thicken-dosa-batter-3-1773203906203.jpg" type="image/jpeg" height="390" width="690"/>
            <content:encoded><![CDATA[&lt;p&gt;Dosa Batter: ದೋಸೆಹಿಟ್ಟನ್ನು ವಾರಗಟ್ಟಲೇ ಫ್ರೆಶ್ ಆಗಿ ಮತ್ತು ಹುಳಿಯಾಗದಂತೆ ಇಡಲು ಕೆಲವು ಸರಳ ವಿಧಾನಗಳಿವೆ. ಕೆಲವು ಸರಳ ವಿಧಾನಗಳ ಮೂಲಕ ದೋಸೆ ಹಿಟ್ಟನ್ನು ದೀರ್ಘಕಾಲ ಸಂಗ್ರಹಿಸಬಹುದು.&amp;nbsp;&lt;/p&gt;&lt;img&gt;&lt;p&gt;ಒಮ್ಮೆ ರುಬ್ಬಿಕೊಂಡಿರುವ ದೋಸೆಹಿಟ್ಟು ವಾರಗಟ್ಟಲೇ ಫ್ರೆಶ್ ಆಗಿಡಲು ಕೆಲವೊಂದು ವಿಧಾನಗಳನ್ನು ಫಾಲೋ ಮಾಡಬೇಕಾಗುತ್ತದೆ. ಫೈವ್ ಸ್ಟಾರ್ ಸೇರಿದಂತೆ ಹಲವು ಹೋಟೆಲ್&zwnj;ಗಳಲ್ಲಿ ಸರಳ ವಿಧಾನಗಳ ಮೂಲಕ ದೋಸೆಹಿಟ್ಟನ್ನು ದೀರ್ಘ ಸಮಯದವರೆಗೆ ಸ್ಟೋರ್ ಮಾಡಿಕೊಳ್ಳುತ್ತಾರೆ. ಪ್ರತಿದಿನವೂ ತಿಂಡಿ ಮಾಡಲು ಸಮಯ ಇಲ್ಲದಿದ್ರೆ ನೀವು ಸಹ ಸರಳ ವಿಧಾನಗಳ ಮೂಲಕ ದೋಸೆಹಿಟ್ಟನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಇದರಿಂದ ದೋಸೆಹಿಟ್ಟು ಹುಳಿ ಬರಲ್ಲ.&lt;/p&gt;&lt;img&gt;&lt;p&gt;ದೋಸೆಹಿಟ್ಟು ರುಬ್ಬುವಾಗ ಮತ್ತು ರುಬ್ಬಿದ ಕೂಡಲೇ ಉಪ್ಪು ಸೇರಿಸಿಕೊಳ್ಳಬಾರದು. ದೋಸೆ ಮಾಡಿಕೊಳ್ಳುವಾಗ ಬೇಕಾಗುವಷ್ಟು ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಉಪ್ಪು ಸೇರಿಸಿಕೊಳ್ಳಿ. ಇನ್ನುಳಿದ ಹಿಟ್ಟನ್ನು ಎತ್ತಿಟ್ಟುಕೊಳ್ಳಿ. ಈ ವಿಧಾನ ನಿಮ್ಮ ಹಿಟ್ಟನ್ನು ಫ್ರೆಶ್ ಆಗಿಡುತ್ತದೆ. ದೋಸೆ ಮಾಡಿಕೊಳ್ಳುವಾಗಲೇ ಅಡುಗೆಸೋಡಾ ಸಹ ಸೇರಿಸಿಕೊಳ್ಳಬೇಕೇ ಹೊರತು ಇಡೀ ಹಿಟ್ಟಿಗೆ ಹಾಕಿಕೊಳ್ಳಬಾರದು.&lt;/p&gt;&lt;img&gt;&lt;p&gt;ದೋಸೆಹಿಟ್ಟನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಸ್ಟೋರ್ ಮಾಡಿಕೊಳ್ಳೋದರಿಂದ ಚೆನ್ನಾಗಿ ಹುದುಗಿಕೊಳ್ಳುತ್ತದೆ. ಸ್ಟೀಲ್ ಬದಲಾಗಿ ಅಲ್ಯುಮಿನಿಯಂ ಪಾತ್ರೆಗಳನ್ನು ಬಳಕೆ ಮಾಡಿ. ಹಾಗೆಯೇ ರುಬ್ಬಿದ ಹಿಟ್ಟನ್ನು ದೊಡ್ಡಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ದೋಸೆ ಮಾಡುವಾಗ ನಿಮಗೆಷ್ಟು ಬೇಕು ಅಷ್ಟು ಹಿಟ್ಟನ್ನು ಮತ್ತೊಂದು ಚಿಕ್ಕ ಪಾತ್ರೆಗೆ ಹಾಕಿಕೊಂಡು ಬಳಸಬೇಕು. ಸ್ಟೀಲ್ ಪಾತ್ರೆಯಲ್ಲಿ ದೋಸೆಹಿಟ್ಟು ಕಡಿಮೆ ಸಮಯದಲ್ಲಿ ಹಾಳಾಗುವ ಸಾಧ್ಯತೆ ಇರುತ್ತದೆ.&lt;/p&gt;&lt;img&gt;&lt;p&gt;ದೋಸೆಹಿಟ್ಟು ರುಬ್ಬಿದ ಕೂಡಲೇ ಅದರ ಮೇಲೊಂದು ವಿಳ್ಯದೆಲೆಯನ್ನಿಡಬೇಕು. ಹಿಟ್ಟು ಹುದುಗಿದ ಮೇಲೆ ಹೊಸ ವಿಳ್ಯದೆಲೆಯನ್ನು ಇರಿಸಬೇಕು. ಹೀಗೆ ಪ್ರತಿದಿನವೂ ವಿಳ್ಯದೆಲೆಯನ್ನು ಬದಲಾಯಿಸೋದರಿಂದ ಹಿಟ್ಟು ಫ್ರೆಶ್ ಅಗಿರುತ್ತದೆ. ಹಾಗೆಯೇ ವಿಳ್ಯದೆಲೆನ್ನು ಚೆನ್ನಾಗಿ ತೊಳೆದುಕೊಂಡು ಹಿಮ್ಮುಖವಾಗಿ ಹಿಟ್ಟಿನ ಮೇಲಿಡೋದನ್ನು ಮರೆಯಬೇಡಿ.&lt;/p&gt;&lt;img&gt;&lt;p&gt;ಹಿಟ್ಟು ರುಬ್ಬಿಕೊಳ್ಳುವ ಮುನ್ನ ಸುಮಾರು 4 ರಿಂದ 5 ಗಂಟೆ ಬಳಿಕ ನೆನೆಸಿಟ್ಟುಕೊಂಡ ಮೆಂತ್ಯೆಯನ್ನು ಸೇರಿಸಿ ರುಬ್ಬಿಕೊಳ್ಳಿ. ಮೆಂತೆ ಸೇರಿಸೋದರಿಂದ ದೋಸೆ ಕ್ರಿಸ್ಪಿಯಾಗಿ ಬರುತ್ತದೆ. ಹಾಗೆಯೇ ದೋಸೆ ಗಾಢವಾದ ಬಣ್ಣ ಬರುತ್ತದೆ. ಮೆಂತೆದಲ್ಲಿನ ಅಂಶಗಳು ಹಿಟ್ಟು ಬೇಗ ಹುಳಿಯಾಗೋದನ್ನು ತಡೆಯುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಳೆಗಾಲದಲ್ಲಿ ಅಣಬೆ ಬೆಳೆದು ಲಕ್ಷ ಲಕ್ಷ ಗಳಿಸಿ: ಸುಲಭದಲ್ಲಿ ಬೆಳೆಯೋದು ಹೇಗೆ? ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ&lt;/strong&gt;&lt;/p&gt;&lt;img&gt;&lt;p&gt;ಇನ್ನು ಸಾಮಾನ್ಯವಾಗಿ ಎಲ್ಲರೂ ದೋಸೆಹಿಟ್ಟು ಮಾಡಿಕೊಳ್ಳುವಾಗ ನೆನಸಿವ ಅವಲಕ್ಕಿ ಅಥವಾ ಸಬ್ಬಕ್ಕಿಯನ್ನು ಸೇರಿಸಿಕೊಳ್ಳುತ್ತಾರೆ. ಸಬ್ಬಕ್ಕಿ ಮತ್ತು ಅವಲಕ್ಕಿಯನ್ನು ಸಹ ಕನಿಷ್ಠ ಮೂರರಿಂದ ನಾಲ್ಕು ಗಂಟೆ ನೆನೆಸಿಟ್ಟುಕೊಳ್ಳಬೇಕು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇಡ್ಲಿ ಮಾರಿ ತಿಂಗಳಿಗೆ ₹50,000 ಲಾಭ ಮಾಡ್ಬೋದು, ಈ ಬಿಸಿನೆಸ್ ಐಡಿಯಾ ತಿಳ್ಕೊಳ್ಳಿ&lt;/strong&gt;&lt;/p&gt;]]></content:encoded>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/food/kannada-traditional-kitchen-hacks-follow-these-5-tips-to-keep-dosa-batter-fresh-all-week-these-are-hotel-tricks-mrq-fwhpbn4"/>
        </item>
        <item>
            <title><![CDATA[ಎಣ್ಣೆ ಈ ರೀತಿ ಇದ್ರೆ ಹಾಳಾಗಿದೆ ಎಂದರ್ಥ! ಹಾಗಾದ್ರೆ ಬಳಸೋದು ಹೇಗೆ?, ಹೀಗೆ ಎತ್ತಿಡಿ ವೇಸ್ಟ್ ಆಗಲ್ಲ]]></title>
            <link>https://kannada.asianetnews.com/gallery/food/reusing-cooking-oil-is-it-safe-know-the-signs-of-spoiled-oil-and-health-risks-c50ovz0</link>
            <guid isPermaLink="true">https://kannada.asianetnews.com/gallery/food/reusing-cooking-oil-is-it-safe-know-the-signs-of-spoiled-oil-and-health-risks-c50ovz0</guid>
            <pubDate>Tue, 30 Jun 2026 13:14:58 +0530</pubDate>
            <description><![CDATA[&lt;p&gt;Reused cooking oil: ಪೂರಿ, ಪಕೋಡ ಅಥವಾ ಬಜ್ಜಿ ಕರಿದ ನಂತರ ಉಳಿದ ಎಣ್ಣೆ ಏನು ಮಾಡುವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಹೆಚ್ಚಿನವರು ಹಣ ಉಳಿಸುವ ಉದ್ದೇಶದಿಂದ ಆ ಎಣ್ಣೆ ಮರುಬಳಕೆ ಮಾಡುತ್ತಾರೆ. ಆದರೆ ಬಳಸಿದ ಎಣ್ಣೆ ಯಾವಾಗ ವಿಷವಾಗುತ್ತದೆ ಮತ್ತು ಯಾವಾಗ ಎಸೆಯಬೇಕು ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfj7ffbtb3r9a685hnjqvtbf,imgname-2-1769064611194.jpg" type="image/jpeg" height="390" width="690"/>
            <content:encoded><![CDATA[&lt;p&gt;Reused cooking oil: ಪೂರಿ, ಪಕೋಡ ಅಥವಾ ಬಜ್ಜಿ ಕರಿದ ನಂತರ ಉಳಿದ ಎಣ್ಣೆ ಏನು ಮಾಡುವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಹೆಚ್ಚಿನವರು ಹಣ ಉಳಿಸುವ ಉದ್ದೇಶದಿಂದ ಆ ಎಣ್ಣೆ ಮರುಬಳಕೆ ಮಾಡುತ್ತಾರೆ. ಆದರೆ ಬಳಸಿದ ಎಣ್ಣೆ ಯಾವಾಗ ವಿಷವಾಗುತ್ತದೆ ಮತ್ತು ಯಾವಾಗ ಎಸೆಯಬೇಕು ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;&lt;strong&gt;ಕ್ಯಾನ್ಸರ್&zwnj;ನಂತಹ ರೋಗಗಳಿಗೂ ಕಾರಣ&lt;/strong&gt;ನಮ್ಮಲ್ಲಿ ಹೆಚ್ಚಿನ ಮನೆಗಳಲ್ಲಿ ಎಣ್ಣೆಯನ್ನು ಒಮ್ಮೆ ಬಳಸಿದ ನಂತರ ಅದನ್ನು ಎಸೆಯಲು ಮನಸ್ಸು ಬರುವುದಿಲ್ಲ. ಅದನ್ನು ಮುಂದಿನ ಬಾರಿ ಅಡುಗೆಗೆ ಬಳಸಲು ಎತ್ತಿಡಲಾಗುತ್ತದೆ. ಮೇಲ್ನೋಟಕ್ಕೆ ಇದು ಹಣ ಉಳಿಸುವ ದಾರಿಯಂತೆ ಕಂಡರೂ, ವಾಸ್ತವದಲ್ಲಿ ಇದು ಆರೋಗ್ಯಕ್ಕೆ ಮಾರಕ. ತಜ್ಞರ ಪ್ರಕಾರ, ಎಣ್ಣೆಯನ್ನು ಪದೇ ಪದೇ ಹೆಚ್ಚಿನ ತಾಪಮಾನದಲ್ಲಿ ಕಾಯಿಸಿದಾಗ ಅದರಲ್ಲಿ ರಾಸಾಯನಿಕ ಬದಲಾವಣೆಗಳು ಉಂಟಾಗುತ್ತವೆ. ಇದು ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಗಾಗಿ ಹಾನಿಕಾರಕ ಅಂಶಗಳನ್ನು ಉತ್ಪತ್ತಿ ಮಾಡುತ್ತದೆ, ಇದು ಕ್ಯಾನ್ಸರ್&zwnj;ನಂತಹ ರೋಗಗಳಿಗೂ ಕಾರಣವಾಗಬಹುದು.&lt;/p&gt;&lt;img&gt;&lt;p&gt;&lt;strong&gt;ಉಳಿದ ಎಣ್ಣೆ ಎಷ್ಟು ದಿನ ಸುರಕ್ಷಿತ?&lt;/strong&gt;ಒಂದು ವೇಳೆ ನೀವು ಉಳಿದ ಎಣ್ಣೆಯನ್ನು ಬಳಸಲೇಬೇಕೆಂದಿದ್ದರೆ, ಅದನ್ನು ಕೇವಲ 1 ರಿಂದ 2 ದಿನಗಳ ಒಳಗಾಗಿ ಬಳಸಿ ಮುಗಿಸಬೇಕು. ಅದಕ್ಕಿಂತ ಹೆಚ್ಚು ದಿನ ಇಡುವುದು ಅಪಾಯಕಾರಿ. ಅಲ್ಲದೆ, ಒಂದೇ ಎಣ್ಣೆಯನ್ನು ಕೇವಲ ಒಂದು ಬಾರಿ ಮಾತ್ರ ಮರುಬಳಕೆ ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ. ಪ್ರತಿ ಬಾರಿ ಎಣ್ಣೆಯನ್ನು ಕಾಯಿಸಿದಾಗಲೂ ಅದರ ಗುಣಮಟ್ಟ ಕುಸಿಯುತ್ತಾ ಹೋಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಸಂಗ್ರಹಿಸುವ ಸರಿಯಾದ ವಿಧಾನ&lt;/strong&gt;ಎಣ್ಣೆ ಉಳಿದ ತಕ್ಷಣ ಅದನ್ನು ಮೊದಲು ಚೆನ್ನಾಗಿ ಸೋಸಿಕೊಳ್ಳಿ. ಎಣ್ಣೆಯಲ್ಲಿ ಉಳಿದಿರುವ ಆಹಾರದ ಕಣಗಳು ಅದನ್ನು ಬೇಗನೆ ಹಾಳು ಮಾಡುತ್ತವೆ. ನಂತರ ಅದನ್ನು ಗಾಳಿಯಾಡದ (Airtight) ಒಣಗಿದ ಡಬ್ಬಿಯಲ್ಲಿ ತುಂಬಿಸಿ, ಬಿಸಿಲು ಮತ್ತು ತೇವಾಂಶ ಇಲ್ಲದ ಕಡೆ ಇಡಿ. ಕಡಾಯಿಯಲ್ಲೇ ಎಣ್ಣೆಯನ್ನು ಬಿಡುವುದು ಸರಿಯಲ್ಲ, ಏಕೆಂದರೆ ಇದು ಧೂಳು ಮತ್ತು ಗಾಳಿಯ ಸಂಪರ್ಕಕ್ಕೆ ಬಂದು ಬೇಗನೆ ಹಾಳಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಎಣ್ಣೆ ಹಾಳಾಗಿದೆ ಎಂದು ಗುರುತಿಸುವುದು ಹೇಗೆ?&lt;/strong&gt;ಕೆಲವು ಸಂಕೇತಗಳ ಮೂಲಕ ಎಣ್ಣೆ ಇನ್ನು ಬಳಕೆಗೆ ಯೋಗ್ಯವಲ್ಲ ಎಂದು ತಿಳಿಯಬಹುದುಎಣ್ಣೆಯಿಂದ ಕೆಟ್ಟ ಅಥವಾ ಘಾಟು ವಾಸನೆ ಬರುತ್ತಿದ್ದರೆ.ಎಣ್ಣೆಯ ಬಣ್ಣ ಸಾಮಾನ್ಯಕ್ಕಿಂತ ಹೆಚ್ಚು ಕಪ್ಪಾಗಿದ್ದರೆ.ಎಣ್ಣೆಯನ್ನು ಕಾಯಿಸುವಾಗ ಅತಿಯಾಗಿ ನೊರೆ ಬರುತ್ತಿದ್ದರೆ.ಎಣ್ಣೆಯು ಅತಿಯಾಗಿ ದಪ್ಪವಾಗಿದ್ದರೆ.ಇಂತಹ ಲಕ್ಷಣಗಳು ಕಂಡುಬಂದಲ್ಲಿ ಆ ಎಣ್ಣೆಯನ್ನು ಮರುಬಳಕೆ ಮಾಡದೆ ತಕ್ಷಣ ಎಸೆಯುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅಡುಗೆಗೆ ಬೇಕಾದಷ್ಟು ಮಾತ್ರ ಎಣ್ಣೆ ಬಳಸುವುದು ಇವೆಲ್ಲದಕ್ಕಿಂತ ಉತ್ತಮವಾದ ಮಾರ್ಗವಾಗಿದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/reusing-cooking-oil-is-it-safe-know-the-signs-of-spoiled-oil-and-health-risks-c50ovz0"/>
        </item>
        <item>
            <title><![CDATA[ಇಡ್ಲಿ ಮಾರಿ ತಿಂಗಳಿಗೆ ₹50,000 ಲಾಭ ಮಾಡ್ಬೋದು, ಈ ಬಿಸಿನೆಸ್ ಐಡಿಯಾ ತಿಳ್ಕೊಳ್ಳಿ]]></title>
            <link>https://kannada.asianetnews.com/gallery/business/business-idea-small-investment-big-breakfast-make-huge-profits-selling-idli-suh-465gr5t</link>
            <guid isPermaLink="true">https://kannada.asianetnews.com/gallery/business/business-idea-small-investment-big-breakfast-make-huge-profits-selling-idli-suh-465gr5t</guid>
            <pubDate>Tue, 30 Jun 2026 12:53:47 +0530</pubDate>
            <description><![CDATA[&lt;p&gt;ಇಂದಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಅಲೆದಾಡುವವರಿಗಿಂತ ಸ್ವಂತ ಉದ್ಯಮ ಆರಂಭಿಸಿ ಉತ್ತಮ ಆದಾಯ ಗಳಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹ ಕಡಿಮೆ ಹೂಡಿಕೆಯ, ಹೆಚ್ಚು ಲಾಭದಾಯಕ ಉದ್ಯಮಗಳಲ್ಲಿ ಇಡ್ಲಿ ವ್ಯವಹಾರ. ತಿಂಗಳಿಗೆ ₹50,000 ಅಥವಾ ಅದಕ್ಕಿಂತ ಹೆಚ್ಚಿನ ಲಾಭ ಗಳಿಸುವುದು ಸಾಧ್ಯ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktnzjyb9c3ckmyejfqevrqnt,imgname-button-idli-chaat-recipe-2-1781001714025.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಅಲೆದಾಡುವವರಿಗಿಂತ ಸ್ವಂತ ಉದ್ಯಮ ಆರಂಭಿಸಿ ಉತ್ತಮ ಆದಾಯ ಗಳಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹ ಕಡಿಮೆ ಹೂಡಿಕೆಯ, ಹೆಚ್ಚು ಲಾಭದಾಯಕ ಉದ್ಯಮಗಳಲ್ಲಿ ಇಡ್ಲಿ ವ್ಯವಹಾರ. ತಿಂಗಳಿಗೆ ₹50,000 ಅಥವಾ ಅದಕ್ಕಿಂತ ಹೆಚ್ಚಿನ ಲಾಭ ಗಳಿಸುವುದು ಸಾಧ್ಯ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಹಸ್ಯ 1: ರುಚಿಯೇ ಯಶಸ್ಸಿನ ಮಂತ್ರ&lt;/p&gt;&lt;p&gt;ಗ್ರಾಹಕರು ಮತ್ತೆ ಮತ್ತೆ ಬರಬೇಕಾದರೆ ರುಚಿ ಮುಖ್ಯ. ಉತ್ತಮ ಗುಣಮಟ್ಟದ ಅಕ್ಕಿ ಮತ್ತು ಉದ್ದಿನಬೇಳೆ ಬಳಸಿ, ಸರಿಯಾದ ಪ್ರಮಾಣದಲ್ಲಿ ಹಿಟ್ಟು ತಯಾರಿಸಿ, ಮೃದುವಾದ ಇಡ್ಲಿ ನೀಡಲು ಉತ್ತಮ ಫರ್ಮೆಂಟೇಶನ್ ಇರಲಿ. ತೆಂಗಿನಕಾಯಿ, ಕಾರ ಚಟ್ನಿ, ಪುದೀನಾ, ಕೊತ್ತಂಬರಿ ಮುಂತಾದ ವಿವಿಧ ಚಟ್ನಿಗಳನ್ನು ನೀಡಿದರೆ ಗ್ರಾಹಕರ ಮೆಚ್ಚುಗೆ ಹೆಚ್ಚುತ್ತದೆ.ಸಾಂಬಾರದ ರುಚಿಯೂ ವ್ಯವಹಾರದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.&lt;/p&gt;&lt;p&gt;ರಹಸ್ಯ 2: ಸರಿಯಾದ ಸ್ಥಳವೇ ಅರ್ಧ ಯಶಸ್ಸು&lt;/p&gt;&lt;p&gt;ಈ ಪ್ರದೇಶಗಳಲ್ಲಿ ಅಂಗಡಿ ತೆರೆದರೆ ಹೆಚ್ಚಿನ ಗ್ರಾಹಕರು ಸಿಗುವ ಸಾಧ್ಯತೆ ಇದೆ.&lt;/p&gt;&lt;p&gt;ಬಸ್ ನಿಲ್ದಾಣ&lt;/p&gt;&lt;p&gt;ಕಚೇರಿ ಪ್ರದೇಶ&lt;/p&gt;&lt;p&gt;ಕಾಲೇಜುಗಳ ಸುತ್ತಮುತ್ತ&lt;/p&gt;&lt;p&gt;ಆಸ್ಪತ್ರೆ ಪ್ರದೇಶ&lt;/p&gt;&lt;p&gt;ವಸತಿ ಕಾಲೋನಿಗಳು&lt;/p&gt;&lt;p&gt;ಬೆಳಿಗ್ಗೆ 6ರಿಂದ 10 ಗಂಟೆ ನಡುವಿನ ಸಮಯದಲ್ಲಿ ಮಾರಾಟ ಅತ್ಯಧಿಕವಾಗಿರುತ್ತದೆ.&lt;/p&gt;&lt;img&gt;&lt;p&gt;ರಹಸ್ಯ 3: ಕಡಿಮೆ ವೆಚ್ಚ &ndash; ಹೆಚ್ಚು ಲಾಭ&lt;/p&gt;&lt;p&gt;ಒಂದು ಇಡ್ಲಿ ತಯಾರಿಸಲು ಸರಾಸರಿ ₹4&ndash;6 ವೆಚ್ಚ ಬರುತ್ತದೆ. ಮಾರಾಟ ಬೆಲೆ ₹12&ndash;15 ಇದ್ದರೆ ಪ್ರತಿ ಇಡ್ಲಿಗೆ ಉತ್ತಮ ಲಾಭ ದೊರೆಯುತ್ತದೆ. 500 ಇಡ್ಲಿ ಮಾರಾಟವಾದರೆ ದಿನಕ್ಕೆ ಸಾವಿರಾರು ರೂಪಾಯಿ ಲಾಭ ಗಳಿಸುವ ಸಾಧ್ಯತೆ ಇದೆ.&lt;/p&gt;&lt;p&gt;ಆರಂಭಿಕ ಹೂಡಿಕೆ ಎಷ್ಟು?&lt;/p&gt;&lt;p&gt;ಈ ಉದ್ಯಮ ಆರಂಭಿಸಲು ಸುಮಾರು ₹20,000 ರಿಂದ ₹50,000 ಸಾಕಾಗಬಹುದು.&lt;/p&gt;&lt;p&gt;ಬೇಕಾಗುವ ಸಾಮಗ್ರಿಗಳು:&lt;/p&gt;&lt;p&gt;ಇಡ್ಲಿ ಕುಕ್ಕರ್&lt;/p&gt;&lt;p&gt;ಗ್ಯಾಸ್ ಸ್ಟೌವ್&lt;/p&gt;&lt;p&gt;ಪಾತ್ರೆಗಳು&lt;/p&gt;&lt;p&gt;ಟೇಬಲ್ ಅಥವಾ ಫುಡ್ ಕಾರ್ಟ್&lt;/p&gt;&lt;p&gt;ಮಿಕ್ಸರ್/ಗ್ರೈಂಡರ್&lt;/p&gt;&lt;p&gt;ಡಿಜಿಟಲ್ ಮಾರ್ಕೆಟಿಂಗ್ ಕೂಡ ಮುಖ್ಯ&lt;/p&gt;&lt;img&gt;&lt;p&gt;ಇಂದಿನ ಕಾಲದಲ್ಲಿ ರುಚಿ ಮಾತ್ರ ಸಾಲದು.&lt;/p&gt;&lt;p&gt;WhatsApp ಮೂಲಕ ಆರ್ಡರ್ ಸ್ವೀಕರಿಸಿ&lt;/p&gt;&lt;p&gt;Instagram ಹಾಗೂ Facebook ನಲ್ಲಿ ಪ್ರಚಾರ ಮಾಡಿ&lt;/p&gt;&lt;p&gt;Google Business Profile ನೋಂದಾಯಿಸಿ&lt;/p&gt;&lt;p&gt;ಮನೆಗೆ ಉಚಿತ ಡೆಲಿವರಿ ಸೇವೆ ನೀಡಿದರೆ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು&lt;/p&gt;&lt;p&gt;ಆದಾಯವನ್ನು ಇನ್ನಷ್ಟು ಹೆಚ್ಚಿಸಬೇಕೇ?&lt;/p&gt;&lt;img&gt;&lt;p&gt;ಆದಾಯವನ್ನು ಇನ್ನಷ್ಟು ಹೆಚ್ಚಿಸಬೇಕೇ?&lt;/p&gt;&lt;p&gt;ಇಡ್ಲಿಯ ಜೊತೆಗೆ ಈ ತಿಂಡಿಗಳನ್ನು ಸೇರಿಸಿದರೆ ಲಾಭ ಮತ್ತಷ್ಟು ಹೆಚ್ಚಬಹುದು.&lt;/p&gt;&lt;p&gt;ವಡೆ ದೋಸೆ ಪೊಂಗಲ್ ಉಪ್ಮಾ ಕೇಸರಿ ಬಾತ್ ಫಿಲ್ಟರ್ ಕಾಫಿ ಯಶಸ್ಸಿಗೆ ಗಮನಿಸಬೇಕಾದ ವಿಷಯಗಳು ಆಹಾರದ ಗುಣಮಟ್ಟ ಕಾಪಾಡಿಕೊಳ್ಳಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಅಗತ್ಯವಿದ್ದರೆ FSSAI ಪರವಾನಗಿ ಪಡೆಯಿರಿ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ&lt;/p&gt;&lt;p&gt;ತಿಂಗಳಿಗೆ ₹50,000 ಲಾಭ ಸಾಧ್ಯವೇ?&lt;/p&gt;&lt;p&gt;ಹೌದು, ಸರಿಯಾದ ಸ್ಥಳ, ಉತ್ತಮ ರುಚಿ, ವೆಚ್ಚ ನಿಯಂತ್ರಣ ಮತ್ತು ನಿರಂತರ ಸೇವೆಯೊಂದಿಗೆ ಈ ಗುರಿ ಸಾಧಿಸುವುದು ಸಾಧ್ಯ. ಸಣ್ಣ ಮಟ್ಟದಲ್ಲಿ ಆರಂಭಿಸಿ, ನಂತರ ಬ್ರ್ಯಾಂಡ್ ರೂಪದಲ್ಲಿ ವಿಸ್ತರಿಸಿದರೆ ಇನ್ನಷ್ಟು ಆದಾಯ ಗಳಿಸಬಹುದು.&lt;/p&gt;&lt;img&gt;&lt;p&gt;ಇಲ್ಲಿ ಉಲ್ಲೇಖಿಸಿರುವ ಆದಾಯ ಮತ್ತು ಲಾಭದ ಅಂಕಿಅಂಗಳು ಸ್ಥಳ, ಮಾರಾಟ, ವೆಚ್ಚ, ಸ್ಪರ್ಧೆ ಹಾಗೂ ನಿರ್ವಹಣೆಯ ಆಧಾರದ ಮೇಲೆ ಬದಲಾಗಬಹುದು. ಯಾವುದೇ ವ್ಯವಹಾರ ಆರಂಭಿಸುವ ಮೊದಲು ಸ್ಥಳೀಯ ಮಾರುಕಟ್ಟೆ ಅಧ್ಯಯನ ಮತ್ತು ಆರ್ಥಿಕ ಯೋಜನೆ ಮಾಡುವುದು ಸೂಕ್ತ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/business-idea-small-investment-big-breakfast-make-huge-profits-selling-idli-suh-465gr5t"/>
        </item>
        <item>
            <title><![CDATA[Hair Growth Myth: ದಟ್ಟ ಕೂದಲಿನ ಆಸೆಗೆ ತಲೆ ಶೇವ್‌ ಮಾಡಿಸಿಕೊಳ್ಳೋದು ಎಷ್ಟು ಸರಿ?]]></title>
            <link>https://kannada.asianetnews.com/gallery/health-life/shaving-your-head-to-make-hair-grow-faster-is-myth-or-facts-mf2k6qo</link>
            <guid isPermaLink="true">https://kannada.asianetnews.com/gallery/health-life/shaving-your-head-to-make-hair-grow-faster-is-myth-or-facts-mf2k6qo</guid>
            <pubDate>Tue, 30 Jun 2026 11:27:29 +0530</pubDate>
            <description><![CDATA[&lt;p&gt;Hair growth : ದಟ್ಟ, ಕಪ್ಪನೆ ಕೂದಲು ಬಹುತೇಕರಿಗೆ ಈಗ ಕನಸು. ತಲೆ ಮೇಲೆ ನಾಲ್ಕೈದು ಕೂದಲಿದ್ರೆ ಸಾಕಪ್ಪ ಅನ್ನೋರೇ ಹೆಚ್ಚು. ತಲೆ ಕೂದಲನ್ನು ಸಂಪೂರ್ಣ ತೆಗೆದು, ಬೋಳು ತಲೆ ಮಾಡ್ಕೊಂಡ್ರೆ ಕೂದಲು ದಟ್ಟವಾಗಿ ಬೆಳೆಯುತ್ತೆ ಎನ್ನುವ ನಂಬಿಕೆ ಇದೆ. ಅದೆಷ್ಟು ಸರಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwbh4szx4k5h2wysrk6h8te5,imgname-hair-shaving-1782798510077.jpg" type="image/jpeg" height="390" width="690"/>
            <content:encoded><![CDATA[&lt;p&gt;Hair growth : ದಟ್ಟ, ಕಪ್ಪನೆ ಕೂದಲು ಬಹುತೇಕರಿಗೆ ಈಗ ಕನಸು. ತಲೆ ಮೇಲೆ ನಾಲ್ಕೈದು ಕೂದಲಿದ್ರೆ ಸಾಕಪ್ಪ ಅನ್ನೋರೇ ಹೆಚ್ಚು. ತಲೆ ಕೂದಲನ್ನು ಸಂಪೂರ್ಣ ತೆಗೆದು, ಬೋಳು ತಲೆ ಮಾಡ್ಕೊಂಡ್ರೆ ಕೂದಲು ದಟ್ಟವಾಗಿ ಬೆಳೆಯುತ್ತೆ ಎನ್ನುವ ನಂಬಿಕೆ ಇದೆ. ಅದೆಷ್ಟು ಸರಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.&lt;/p&gt;&lt;img&gt;&lt;p&gt;ಕೂದಲು ಹೆಚ್ಚು ಉದುರ್ತಿದೆ ಅಂದಾಗ ಬಹುತೇಕರು ಕೂದಲು ಕತ್ತರಿಸಲು ಮುಂದಾಗ್ತಾರೆ. ತಲೆ ಕೂದಲನ್ನು ಶೇವ್ ಮಾಡಿದ್ರೆ ಹೆಚ್ಚು ಕೂದಲು ದಟ್ಟವಾಗಿ ಬೆಳೆಯುತ್ತೆ ಅಂತ ಈಗ್ಲೂ ಅನೇಕರು ನಂಬ್ತಾರೆ. ಆದ್ರೆ ವಿಜ್ಞಾನ ಇದಕ್ಕೆ ಒಪ್ಪೋದಿಲ್ಲ. ಇದೊಂದು ನಂಬಿಕೆ ಮಾತ್ರ. ಕೂದಲಿನ ಕ್ಷೌರ ಹಾಗೂ ಕೂದಲಿನ ಬೆಳವಣಿಗೆಗೆ ಯಾವುದೇ ಸಂಬಂಧ ಇಲ್ಲ.&lt;/p&gt;&lt;img&gt;&lt;p&gt;ಮೇಯೊ ಕ್ಲಿನಿಕ್ ಪ್ರಕಾರ, ಹೇರ್ಕಟ್ ಅಥವಾ ಶೇವ್ ಮಾಡಿದ ಕೆಲ ದಿನಗಳ ನಂತ್ರ ಕೂದಲು ಮತ್ತೆ ಬೆಳೆಯಲು ಶುರುವಾಗುತ್ತದೆ. ಈ ಟೈಂನಲ್ಲಿ ಕೂದಲು ದಪ್ಪ, ಗಾಢವಾಗಿ ಕಾಣಿಸುತ್ತದೆ. ಇದಕ್ಕೆ ಸರಳ ಕಾರಣವಿದೆ. ರೇಜರ್ನಿಂದ ಕೂದಲನ್ನು ಶೇವ್ ಮಾಡಿದಾಗ ಇಲ್ಲ ಕೂದಲಿನ ತುದಿಯನ್ನು ಕತ್ತರಿಸಿದ ನಂತ್ರ ಬರುವ ಕೂದಲು ಮೊದಲಿಗಿಂತ ಸ್ವಲ್ಪ ದಪ್ಪವಾಗಿ ಕಾಣುತ್ತದೆ. ಮುಟ್ಟಲು ದಪ್ಪ ಮತ್ತು ಒರಟಾಗಿರುತ್ತವೆ. ಹಾಗಾಗಿಯೇ ಜನರು ಕೂದಲು ಕತ್ತರಿಸಿದ್ರೆ ದಟ್ಟ ಕೂದಲು ಬರುತ್ತೆ ಅಂತ ನಂಬ್ತಾರೆ.&lt;/p&gt;&lt;img&gt;&lt;p&gt;ಕ್ಲೀವ್ಲ್ಯಾಂಡ್ ಕ್ಲಿನಿಕ್ ಹೇಳುವಂತೆ ಕೂದಲಿನ ಬೆಳವಣಿಗೆ ಚರ್ಮದೊಳಗಿನ ಆಳವಾದ ಕೂದಲು ಕಿರುಚೀಲಗಳಿಂದ ಹುಟ್ಟುತ್ತದೆ. ನೆತ್ತಿಯಿಂದ ಅಲ್ಲ. ಶೇವಿಂಗ್ ಚರ್ಮದ ಮೇಲಿರುವ ಕೂದಲನ್ನು ಮಾತ್ರ ತೆಗೆದುಹಾಕುತ್ತದೆ. ರೇಜರ್ ಕೂದಲು ಬೆಳೆಯುವ ಚರ್ಮದೊಳಗಿನ ಆಳವಾದ ಕಿರುಚೀಲಗಳನ್ನು ತಲುಪಲು ಸಾಧ್ಯವಿಲ್ಲ. ಆದ್ದರಿಂದ, ಶೇವಿಂಗ್ ಕೂದಲಿನ ದಪ್ಪ ಅಥವಾ ಅದರ ಬೆಳವಣಿಗೆಯನ್ನು ಬದಲಿಸುವುದಿಲ್ಲ. ಕೂದಲಿನ ನಿಜವಾದ ಬೆಳವಣಿಗೆ ತಳಿಶಾಸ್ತ್ರ, ಆಹಾರ ಪದ್ಧತಿ, ಒತ್ತಡದ ಮಟ್ಟ ಮತ್ತು ಹಾರ್ಮೋನಿನ ಮೇಲೆ ಅವಲಂಭಿಸಿದೆ.&lt;/p&gt;&lt;img&gt;&lt;p&gt;ನಿಜವಾಗ್ಲೂ ನಿಮ್ಮ ಕೂದಲು ಕಪ್ಪಗೆ, ದಟ್ಟವಾಗಿ ಬೆಳೆಯಬೇಕು ಅಂದ್ರೆ ಶೇವಿಂಗ್ ಮಾಡಬೇಡಿ. ಶೇವಿಂಗ್ ನಿಂದ ಕಿರಿಕಿರಿ, ಕೂದಲು ಉದುರುವ ಸಮಸ್ಯೆ ಹೆಚ್ಚಾಗಬಹುದು. ನೀವು ಪ್ರೋಟಿನ್ ಇರುವ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಿ. ಒತ್ತಡ ಕಡಿಮೆ ಮಾಡಿ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/health-life/shaving-your-head-to-make-hair-grow-faster-is-myth-or-facts-mf2k6qo"/>
        </item>
        <item>
            <title><![CDATA[ಪುರುಷರಿಗಿಂತ ಮಹಿಳೆಯರಿಗೆ ಆಯಸ್ಸು ಜಾಸ್ತಿ… ಯಾಕೆ ಗೊತ್ತಾ?]]></title>
            <link>https://kannada.asianetnews.com/gallery/health-life/longevity-health-reason-behind-why-women-live-longer-than-men-2rqhwvs</link>
            <guid isPermaLink="true">https://kannada.asianetnews.com/gallery/health-life/longevity-health-reason-behind-why-women-live-longer-than-men-2rqhwvs</guid>
            <pubDate>Sun, 28 Jun 2026 22:27:21 +0530</pubDate>
            <description><![CDATA[&lt;p&gt;Longevity Health: ಪುರುಷರಿಗಿಂತ ಮಹಿಳೆಯರಿಗೆ ಆಯಸ್ಸು ಜಾಸ್ತಿ. ಇತ್ತೀಚಿನ ವರ್ಷಗಳಲ್ಲಿ, ಹಲವಾರು ವೈದ್ಯಕೀಯ ಮತ್ತು ಜೈವಿಕ ಅಧ್ಯಯನಗಳು ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸಿವೆ. ಇದರ ಹಿಂದಿನ ವಿಜ್ಞಾನ ಏನು? ಮಹಿಳೆಯರಿಗೆ ದೀರ್ಘಾಯಸ್ಸು ಯಾಕೆ ಜಾಸ್ತಿ ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khbefcvp82n9y75qzjbq68a3,imgname-women-health-1770984551286.jpg" type="image/jpeg" height="390" width="690"/>
            <content:encoded><![CDATA[&lt;p&gt;Longevity Health: ಪುರುಷರಿಗಿಂತ ಮಹಿಳೆಯರಿಗೆ ಆಯಸ್ಸು ಜಾಸ್ತಿ. ಇತ್ತೀಚಿನ ವರ್ಷಗಳಲ್ಲಿ, ಹಲವಾರು ವೈದ್ಯಕೀಯ ಮತ್ತು ಜೈವಿಕ ಅಧ್ಯಯನಗಳು ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸಿವೆ. ಇದರ ಹಿಂದಿನ ವಿಜ್ಞಾನ ಏನು? ಮಹಿಳೆಯರಿಗೆ ದೀರ್ಘಾಯಸ್ಸು ಯಾಕೆ ಜಾಸ್ತಿ ನೋಡೋಣ.&lt;/p&gt;&lt;img&gt;&lt;p&gt;ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎನ್ನುವ ಮಾಹಿತಿ ವರದಿಯಾಗಿದೆ. ಅನೇಕ ರಾಷ್ಟ್ರಗಳಲ್ಲಿ, ಈ ಅಂತರವು ನಾಲ್ಕರಿಂದ ಏಳು ವರ್ಷಗಳವರೆಗೆ ಇರುತ್ತದೆ. ಇದು ಏಕೆ ಸಂಭವಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಇದು ಕೇವಲ ಜೀವನಶೈಲಿಯ ಪರಿಣಾಮವೇ ಅಥವಾ ದೇಹದ ಸಂಯೋಜನೆ, ಹಾರ್ಮೋನುಗಳು ಮತ್ತು ಜೀನ್ಸ್ ನಂತಹ ಆಳವಾದ ಜೈವಿಕ ಅಂಶಗಳು ಪಾತ್ರವಹಿಸುತ್ತವೆಯೇ? ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕಲು ಕಾರಣಗಳು ಏನು ತಿಳಿಯೋಣ.&lt;/p&gt;&lt;img&gt;&lt;p&gt;ವಿಜ್ಞಾನಿಗಳ ಪ್ರಕಾರ, ಮಹಿಳೆಯರ ರೋಗನಿರೋಧಕ ಶಕ್ತಿ ಪುರುಷರಿಗಿಂತ ಹೆಚ್ಚು ಸಕ್ರಿಯವಾಗಿರುತ್ತದೆ. ಇದರರ್ಥ ಅವರ ದೇಹವು ಸೋಂಕುಗಳು ಮತ್ತು ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಲು ಉತ್ತಮವಾಗಿ ಸಜ್ಜಾಗಿದೆ. ವೈಜ್ಞಾನಿಕ ಅಧ್ಯಯನವು ಮಹಿಳೆಯರ ದೇಹವು ಎಲ್ಲಾ ವಯಸ್ಸಿನಲ್ಲೂ ಪುರುಷರಿಗಿಂತ ಬಲವಾಗಿರುತ್ತದೆ ಎಂದು ಕಂಡುಹಿಡಿದಿದೆ. ಅದಕ್ಕಾಗಿಯೇ ಪುರುಷರರಿಗಿಂತ ಮಹಿಳೆಯರ ಆಯಸ್ಸು ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಮಹಿಳೆಯರ ದೇಹದಲ್ಲಿ ಕಂಡುಬರುವ ಈಸ್ಟ್ರೊಜೆನ್ ಎಂಬ ಹಾರ್ಮೋನ್ ಹೃದಯ ಮತ್ತು ರಕ್ತನಾಳಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಈ ಹಾರ್ಮೋನ್ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ . ಅದಕ್ಕಾಗಿಯೇ ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತದ ಅಪಾಯ ಕಡಿಮೆ.&lt;/p&gt;&lt;img&gt;&lt;p&gt;ಮಹಿಳೆಯರು ಎರಡು X ಕ್ರೋಮೋಸೋಮ್&zwnj;ಗಳನ್ನು (XX) ಹೊಂದಿದ್ದರೆ, ಪುರುಷರು XY ಹೊಂದಿರುತ್ತಾರೆ. ಎರಡು X ಕ್ರೋಮೋಸೋಮ್&zwnj;ಗಳನ್ನು ಹೊಂದಿರುವುದು ಮಹಿಳೆಯರ ದೇಹಕ್ಕೆ ಒಂದು ರೀತಿಯ ಆನುವಂಶಿಕ ರಕ್ಷಣೆಯನ್ನು ಒದಗಿಸುತ್ತದೆ. ಒಂದು X ಕ್ರೋಮೋಸೋಮ್ ದೋಷಯುಕ್ತ ಜೀನ್ ಅನ್ನು ಹೊಂದಿದ್ದರೆ, ಇನ್ನೊಂದು X ಅದನ್ನು ಸರಿದೂಗಿಸಬಹುದು. ಈ ಆನುವಂಶಿಕ ಬ್ಯಾಕಪ್ ಅವರನ್ನು ವಿವಿಧ ಆನುವಂಶಿಕ ಅಸ್ವಸ್ಥತೆಗಳಿಂದ ರಕ್ಷಿಸುತ್ತದೆ.&lt;/p&gt;&lt;img&gt;&lt;p&gt;ಜೀವನಶೈಲಿಯು ಗಮನಾರ್ಹ ಪಾತ್ರವನ್ನು ವಹಿಸುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಪುರುಷರು ಧೂಮಪಾನ, ಮದ್ಯಪಾನ ಮತ್ತು ಅಪಾಯಕಾರಿ ಚಟುವಟಿಕೆಗಳು ಅಥವಾ ಅಪಘಾತಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚು, ಇದು ಅವರ ಮರಣ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಮಹಿಳೆಯರು ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ ಮತ್ತು ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಾರೆ.&lt;/p&gt;&lt;img&gt;&lt;p&gt;ಪುರುಷರು ಹೃದಯ ಕಾಯಿಲೆ ಅಥವಾ ಶ್ವಾಸಕೋಶದ ಕಾಯಿಲೆಯಂತಹ ಮಾರಕ ಸ್ಥಿತಿಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ಸಂಶೋಧನೆ ಸೂಚಿಸುತ್ತದೆ, ಆದರೆ ಮಹಿಳೆಯರು ಮುಖ್ಯವಾಗಿ ಮಾರಕವಲ್ಲದ ಆದರೆ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದರೆ ಪುರುಷರು ಮಾರಕ ಕಾಯಿಲೆಗಳಿಂದ ಸಾವಿನ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/health-life/longevity-health-reason-behind-why-women-live-longer-than-men-2rqhwvs"/>
        </item>
        <item>
            <title><![CDATA[ಚಿನ್ನ ಲೇಪದ ಲೆಹಂಗಾ ಧರಿಸಿ ಕಣ್ಮನ ಸೆಳೆದ ಮುಖ್ಯಮಂತ್ರಿ ಪತ್ನಿ: ಜಾಲತಾಣದಲ್ಲಿ ಭಾರಿ ಡಿಮಾಂಡ್​]]></title>
            <link>https://kannada.asianetnews.com/gallery/fashion/cm-devindra-fadnavis-wife-amruta-fadnavis-flaunts-desi-beauty-in-orange-lehenga-saree-suc-x98shnn</link>
            <guid isPermaLink="true">https://kannada.asianetnews.com/gallery/fashion/cm-devindra-fadnavis-wife-amruta-fadnavis-flaunts-desi-beauty-in-orange-lehenga-saree-suc-x98shnn</guid>
            <pubDate>Mon, 29 Jun 2026 14:23:05 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್​ಗೆ ಹೆಸರುವಾಸಿ. ಇತ್ತೀಚೆಗೆ ಭಕ್ತಿ ಸಂಗೀತ ಕಚೇರಿಯೊಂದರಲ್ಲಿ ಅವರು ಧರಿಸಿದ್ದ ಕಿತ್ತಳೆ ಬಣ್ಣದ ಲೆಹೆಂಗಾ-ಸೀರೆ ಎಲ್ಲರ ಗಮನ ಸೆಳೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw992m4dx4sa58jk8rjhy7zy,imgname-amruta-fadnavis-00-1782722941069.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್​ಗೆ ಹೆಸರುವಾಸಿ. ಇತ್ತೀಚೆಗೆ ಭಕ್ತಿ ಸಂಗೀತ ಕಚೇರಿಯೊಂದರಲ್ಲಿ ಅವರು ಧರಿಸಿದ್ದ ಕಿತ್ತಳೆ ಬಣ್ಣದ ಲೆಹೆಂಗಾ-ಸೀರೆ ಎಲ್ಲರ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಲೆಹಂಗಾ ಎನ್ನುವುದು ಹೊಸ ಡ್ರೆಸ್​​ ಏನಲ್ಲ. ಆದರೆ, ಇದನ್ನು ಕೆಲವು ಸೆಲೆಬ್ರಿಟಿಗಳು ವಿಭಿನ್ನ ರೀತಿಯಲ್ಲಿ ತೊಟ್ಟಾಗ ಅದಕ್ಕೆ ಅದರದ್ದೇ ಆದ ಡಿಮಾಂಡ್​ ಕುದುರುತ್ತದೆ. ಅದಕ್ಕೆ ಬೇಡಿಕೆಯೂ ಅಷ್ಟೇ ಪ್ರಮಾಣದಲ್ಲಿ ಬರುತ್ತದೆ. ಅಷ್ಟಕ್ಕೂ ಜೂನ್​ 21ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಬಳಿಕ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್​ ಅವರ ಪತ್ನಿ ಅಮೃತಾ ಫಡ್ನವೀಸ್&zwnj; ಫೇಮಸ್​ ಆಗಿದ್ದಾರೆ. ಅವರು ಯೋಗ ಮಾಡಿದ ವಿಡಿಯೋ ವೈರಲ್​ ಆಗಿದ್ದರಿಂದ ಅವರ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲ ಉಂಟಾಗಿದೆ.&lt;/p&gt;&lt;img&gt;&lt;p&gt;ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್, ರಾಜಕೀಯ ಮತ್ತು ಸಾಮಾಜಿಕ ಕೂಟಗಳಲ್ಲಿ ತಮ್ಮ ಶೈಲಿ ಮತ್ತು ಉಪಸ್ಥಿತಿಗೆ ಹೆಸರುವಾಸಿಯಾಗಿದ್ದಾರೆ. ಕೆಲವೊಮ್ಮೆ ಅವರ ಪಾಶ್ಚಿಮಾತ್ಯ ನೋಟವು ಚರ್ಚೆಯ ವಿಷಯವಾಗುತ್ತದೆ, ಆದರೆ ಕೆಲವೊಮ್ಮೆ ಅವರ ದೇಸಿ ಅವತಾರವು ಗಮನ ಸೆಳೆಯುತ್ತದೆ. ಈಗ, ಕಿತ್ತಳೆ ಬಣ್ಣದ ಲೆಹೆಂಗಾ ಧರಿಸಿ, ತಮ್ಮ ಕ್ಲಾಸಿ ಅವತಾರವನ್ನು ಪ್ರದರ್ಶಿಸಿದ್ದಾರೆ.&lt;/p&gt;&lt;img&gt;&lt;p&gt;ತನ್ನ ಲುಕ್&zwnj;ಗಳೊಂದಿಗೆ ಯಾವಾಗಲೂ ಪ್ರಯೋಗ ಮಾಡುವ ಅಮೃತಾ, ವಿಶಿಷ್ಟವಾದ ಫ್ಯಾಷನ್ ಸೆನ್ಸ್ ಹೊಂದಿದ್ದಾರೆ. ಅದಕ್ಕಾಗಿಯೇ ಅವರ ಉಡುಪುಗಳು ಪ್ರತಿ ಸಾರ್ವಜನಿಕ ಪ್ರದರ್ಶನದಲ್ಲೂ ಯಾವಾಗಲೂ ಪಟ್ಟಣದ ಚರ್ಚೆಯಾಗಿರುತ್ತವೆ. ಉದಾಹರಣೆಗೆ, ಈ ವಿಶೇಷ ಸಂದರ್ಭದಲ್ಲಿ, ಅವರು ವಧುವಿನ ಕಿತ್ತಳೆ ಬಣ್ಣದ ಲೆಹೆಂಗಾ-ಸೀರೆಯನ್ನು ಧರಿಸಿದ್ದರು, ಇದು ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಗಳ ಸುಂದರವಾದ ಮಿಶ್ರಣವನ್ನು ಪ್ರದರ್ಶಿಸಿದೆ. ದೇಶದ ಅತಿದೊಡ್ಡ ಭಕ್ತಿ ಸಂಗೀತ ಕಚೇರಿ ಎಂದು ಕರೆಯಲ್ಪಡುವ &quot;ಆನಂದಂ - ದಿ ಸಿಂಫನಿ ಆಫ್ ಡಿವೊಷನ್&quot; ಎಂಬ ಭಕ್ತಿ ಸಂಗೀತ ಕಚೇರಿಗೆ ಹಾಜರಾದಾಗ ಅವರು ಎಲ್ಲರ ಗಮನ ಸೆಳೆದರು.&lt;/p&gt;&lt;img&gt;&lt;p&gt;ಲೆಹೆಂಗಾ ಬಗ್ಗೆ ಮಾತನಾಡುವುದಾದರೆ, ಪಲ್ಲುವನ್ನು ಚಿನ್ನದ ಗಡಿಯಿಂದ ಅಲಂಕರಿಸಲಾಗಿತ್ತು. ಇದು ಸಂಪೂರ್ಣ ಲುಕ್&zwnj;ಗೆ ರಾಯಲ್ ಭಾವನೆಯನ್ನು ನೀಡಿತ್ತು. ಪಲ್ಲುವಿನ ಮೇಲಿನ ಟಸೆಲ್&zwnj;ಗಳು ಮತ್ತು ಸೀಕ್ವಿನ್ ಕೆಲಸವು ಇನ್ನಷ್ಟು ಆಕರ್ಷಕ ಸ್ಪರ್ಶವನ್ನು ನೀಡಿತು. ಸ್ಕರ್ಟ್ ಭಾಗವನ್ನು ನೆರಿಗೆಗಳಿಲ್ಲದೆ ಮತ್ತು ಫ್ಲೇರ್&zwnj;ಗಳನ್ನು ಸೇರಿಸಲಾಗಿತ್ತು. ನಿಯಮಿತ ಮಧ್ಯಂತರದಲ್ಲಿ ಚಿನ್ನದ ಸೀಕ್ವಿನ್&zwnj;ಗಳನ್ನು ಇರಿಸಲಾಗಿದೆ. ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಪಲ್ಲುವನ್ನು ಹೊದಿಸಿ ಸೀರೆಯಂತೆ ಧರಿಸಿದರು.&lt;/p&gt;&lt;img&gt;&lt;p&gt;ಅಮೃತಾ ಸೀರೆಯನ್ನು ಹೊಂದಾಣಿಕೆಯ ಕಿತ್ತಳೆ ಬ್ಲೌಸ್&zwnj;ನೊಂದಿಗೆ ಜೋಡಿಸಿದರು. ಈ ಬ್ಲೌಸ್&zwnj;ನಲ್ಲಿ ದಪ್ಪವಾದ ಚಿನ್ನದ ಕಸೂತಿ ಮತ್ತು ಮಣಿಗಳ ಕೆಲಸವಿದ್ದು, ಒಟ್ಟಾರೆ ಉಡುಪಿಗೆ ಸುಂದರವಾಗಿ ಪೂರಕವಾದ ಮಾದರಿಯನ್ನು ಸೃಷ್ಟಿಸಿತು. ಅರ್ಧ ತೋಳುಗಳು ಮತ್ತು ಆಳವಾದ ಕಂಠರೇಖೆಯು ಸಾಂಪ್ರದಾಯಿಕ ನೋಟಕ್ಕೆ ಆಧುನಿಕ ಸ್ಪರ್ಶವನ್ನು ನೀಡಿದರೆ, ಫಿಟ್ಟಿಂಗ್ ಒಟ್ಟಾರೆ ಸೊಬಗನ್ನು ಹೆಚ್ಚಿಸಿತು. ತೋಳಿನ ಗಡಿಗಳಲ್ಲಿರುವ ಪಲ್ಲು ತರಹದ ಟಸೆಲ್&zwnj;ಗಳು ನೋಟವನ್ನು ಮತ್ತಷ್ಟು ಹೆಚ್ಚಿಸಿದವು.&lt;/p&gt;&lt;img&gt;&lt;p&gt;ಅಮೃತಾ ಸೀರೆಗೆ ತಕ್ಕಂತೆ ಆಭರಣಗಳನ್ನು ಸರಳ ಮತ್ತು ಸೊಗಸಾಗಿ ಹಾಕಿಕೊಂಡಿದ್ದರು. ಸುಂದರವಾದ ಚಿನ್ನದ ಕಿವಿಯೋಲೆಗಳನ್ನು ಧರಿಸಿದ್ದರು ಮತ್ತು ಚಿನ್ನದ ಬಳೆಗಳನ್ನು ಧರಿಸಿದ್ದರು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/fashion/cm-devindra-fadnavis-wife-amruta-fadnavis-flaunts-desi-beauty-in-orange-lehenga-saree-suc-x98shnn"/>
        </item>
        <item>
            <title><![CDATA[ಹೊಸ ಪಾತ್ರೆಯಲ್ಲಿನ ಸ್ಟಿಕ್ಕರ್ ತೆಗೆಯೋಕ್ಕೆ ಒದ್ದಾಡಬೇಡಿ… ಇಲ್ಲಿದೆ ಸಿಂಪಲ್ ಟ್ರಿಕ್ಸ್]]></title>
            <link>https://kannada.asianetnews.com/kitchen/tricks-and-tips-try-these-tips-to-remove-stickers-from-vessels/articleshow-8xgv4ld</link>
            <guid isPermaLink="true">https://kannada.asianetnews.com/kitchen/tricks-and-tips-try-these-tips-to-remove-stickers-from-vessels/articleshow-8xgv4ld</guid>
            <pubDate>Mon, 29 Jun 2026 17:10:47 +0530</pubDate>
            <description><![CDATA[&lt;p&gt;Tricks &amp;amp; Tips: ಹೊಸ ಪಾತ್ರೆಗಳಿಂದ ಸ್ಟಿಕ್ಕರ್&zwnj;ಗಳು ಮತ್ತು ಅವುಗಳ ಜಿಗುಟಾದ ಅಂಟು ತೆಗೆಯುವುದು ಕಷ್ಟ. ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಸುಲಭವಾದ ಮನೆಮದ್ದುಗಳು ನಿಮ್ಮ ಪಾತ್ರೆಗಳನ್ನು ನಿಮಿಷಗಳಲ್ಲಿ ಸಂಪೂರ್ಣವಾಗಿ ಸ್ವಚ್ಛ ಮತ್ತು ಹೊಳೆಯುವಂತೆ ಮಾಡುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k6wj7zchf5ax37104bc18mpc,imgname-steel-dinner-set-price-1-1759747767697.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸ್ಟಿಕ್ಕರ್&zwnj;ಗಳನ್ನು ತೆಗೆಯಲು ಸಿಂಪಲ್ ಟ್ರಿಕ್ಸ್&lt;/strong&gt;&lt;/h2&gt;&lt;p&gt;ಕಾಲಕಾಲಕ್ಕೆ, ನಾವು ಹೊಸ ಪಾತ್ರೆಗಳು, ಗ್ಲಾಸ್&zwnj;ಗಳು, ಪ್ಲೇಟ್&zwnj;ಗಳು ಅಥವಾ ಪ್ರೆಶರ್ ಕುಕ್ಕರ್&zwnj;ಗಳನ್ನು ಖರೀದಿಸುತ್ತೇವೆ. ಆದರೆ, ಹೊಸ ಪಾತ್ರೆಯಲ್ಲಿರುವ ಸ್ಟಿಕ್ಕರ್&zwnj;ಗಳು ಸುಲಭವಾಗಿ ಹೊರಬರದಿದ್ದಾಗ ಸಮಸ್ಯೆ ಉದ್ಭವಿಸುತ್ತದೆ. ನೀವು ಅವುಗಳನ್ನು ತೆಗೆದುಹಾಕಲು ಪ್ರಯತ್ನಿಸಿದರೆ, ಅದರ ಮಾರ್ಕ್ ಮಾತ್ರ ಹಾಗೆ ಉಳಿಯುತ್ತದೆ. ಹೆಚ್ಚು ಶ್ರಮವಿಲ್ಲದೆ ಸ್ಟಿಕ್ಕರ್&zwnj;ಗಳನ್ನು ಸುಲಭವಾಗಿ ತೆಗೆದುಹಾಕಲು ಬಯಸಿದರೆ ನೀವು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಬಹುದು.&lt;/p&gt;&lt;h3&gt;&lt;strong&gt;ಸ್ಟಿಕ್ಕರ್ ತೆಗೆಯಲು ಸುಲಭ ವಿಧಾನ&lt;/strong&gt;&lt;/h3&gt;&lt;p&gt;ಪಾತ್ರೆಗಳಿಂದ ಸ್ಟಿಕ್ಕರ್&zwnj;ಗಳನ್ನು ತೆಗೆದುಹಾಕಲು ಸುಲಭವಾದ ಮಾರ್ಗವೆಂದರೆ ಬೆಚ್ಚಗಿನ ನೀರು ಮತ್ತು ಸೋಪ್. ಇದನ್ನು ಮಾಡಲು ನಿಮಗೆ ಹೆಚ್ಚು ಅಗತ್ಯವಿಲ್ಲ; ಪಾತ್ರೆಗಳನ್ನು ಬೆಚ್ಚಗಿನ ನೀರಿನಲ್ಲಿ 10-15 ನಿಮಿಷಗಳ ಕಾಲ ನೆನೆಸಿ, ನಂತರ ಮೃದುವಾದ ಸ್ಪಾಂಜ್ ಅಥವಾ ಬಟ್ಟೆಯಿಂದ ನಿಧಾನವಾಗಿ ಉಜ್ಜಿ. ಸ್ಟಿಕ್ಕರ್&zwnj;ಗಳು ಸುಲಭವಾಗಿ ತೆಗೆಯಬಹುದು.&lt;/p&gt;&lt;h3&gt;&lt;strong&gt;ಎಣ್ಣೆ&lt;/strong&gt;&lt;/h3&gt;&lt;p&gt;ನೀವು ಎಣ್ಣೆಯನ್ನು ಬಳಸಿ ಸ್ಟಿಕ್ಕರ್&zwnj;ಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಸ್ಟಿಕ್ಕರ್&zwnj;ಗೆ ಸ್ವಲ್ಪ ವೆಜಿಟೇಬಲ್ ಎಣ್ಣೆ, ಸಾಸಿವೆ ಎಣ್ಣೆ ಅಥವಾ ಬೇಬಿ ಆಯಿಲ್ ಹಚ್ಚಿ. ಗಮ್ ಮೃದುಗೊಳಿಸಲು 5-10 ನಿಮಿಷಗಳ ಕಾಲ ಬಿಡಿ. ನಂತರ, ಹಳೆಯ ಕಾರ್ಡ್ ಅಥವಾ ಉಗುರನ್ನು ಬಳಸಿ ಸ್ಟಿಕ್ಕರ್ ಅನ್ನು ಮೇಲಕ್ಕೆತ್ತಿ, ಉಳಿದಿರುವ ಜಿಗುಟಾದ ಪ್ರದೇಶಕ್ಕೆ ಎಣ್ಣೆಯನ್ನು ಮತ್ತೆ ಹಚ್ಚಿ, ನಂತರ ಅದನ್ನು ಸ್ವಚ್ಛಗೊಳಿಸಿ. ಕೊನೆಯದಾಗಿ, ಬೆಚ್ಚಗಿನ ನೀರು ಮತ್ತು ಡಿಶ್ ವಾಶಿಂಗ್ ಲಿಕ್ವಿಡ್ ಬಳಸಿ ಅದನ್ನು ತೊಳೆಯಿರಿ. ಅದು ಹೊರಬರುತ್ತದೆ.&lt;/p&gt;&lt;h3&gt;&lt;strong&gt;ಅಡಿಗೆ ಸೋಡಾ + ಎಣ್ಣೆ ಪೇಸ್ಟ್&lt;/strong&gt;&lt;/h3&gt;&lt;p&gt;ಈ ವಿಧಾನವು ಸ್ಟಿಕ್ಕರ್&zwnj;ಗಳ ಮೇಲೂ ಚೆನ್ನಾಗಿ ಕೆಲಸ ಮಾಡುತ್ತದೆ. 2 ಟೀ ಚಮಚ ಅಡಿಗೆ ಸೋಡಾವನ್ನು ಸ್ವಲ್ಪ ಎಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಸ್ಟಿಕ್ಕರ್&zwnj;ಗೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ. ನಂತರ, ಬ್ರಷ್ ಅಥವಾ ಸ್ಪಂಜಿನೊಂದಿಗೆ ಸ್ಕ್ರಬ್ ಮಾಡಿ. ಈ ವಿಧಾನವು ತುಂಬಾ ಪರಿಣಾಮಕಾರಿಯಾಗಿದೆ ಮತ್ತು ತ್ವರಿತವಾಗಿ ಕೆಲಸ ಮಾಡುತ್ತದೆ.&lt;/p&gt;&lt;h3&gt;&lt;strong&gt;ವಿನೆಗರ್ ಬಳಸಿ&lt;/strong&gt;&lt;/h3&gt;&lt;p&gt;ಸ್ಟಿಕ್ಕರ್&zwnj; ತೆಗೆದುಹಾಕಲು ನೀವು ವಿನೆಗರ್ ಸಹ ಬಳಸಬಹುದು. ಸಾದಾ ಬಿಳಿ ವಿನೆಗರ್ ಬಿಸಿ ಮಾಡಿ ಸ್ಟಿಕ್ಕರ್&zwnj;ಗೆ ಹಚ್ಚಿ. 5 ನಿಮಿಷಗಳ ನಂತರ, ಸ್ಟಿಕ್ಕರ್ ಸುಲಭವಾಗಿ ಹೊರಬರುತ್ತದೆ. ಈ ವಿಧಾನವು ಸ್ಟೇನ್&zwnj;ಲೆಸ್ ಸ್ಟೀಲ್ ಪಾತ್ರೆಗಳ ಮೇಲೆ ಬೇಗನೆ ಕೆಲಸ ಮಾಡುತ್ತದೆ.&lt;/p&gt;&lt;h3&gt;&lt;strong&gt;ಹೇರ್ ಡ್ರೈಯರ್&lt;/strong&gt;&lt;/h3&gt;&lt;p&gt;ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ಬಳಸುತ್ತೇವೆ, ಆದರೆ ನೀವು ಅದನ್ನು ಸ್ಟಿಕ್ಕರ್&zwnj;ಗಳನ್ನು ತೆಗೆದುಹಾಕಲು ಸಹ ಬಳಸಬಹುದು. ಹೇರ್ ಡ್ರೈಯರ್&zwnj;ನಿಂದ ಬಿಸಿ ಗಾಳಿಯನ್ನು ಸ್ಟಿಕ್ಕರ್ ಮೇಲೆ 1-2 ನಿಮಿಷಗಳ ಕಾಲ ಬೀಸಿ. ಅಂಟು ಮೃದುವಾಗುತ್ತದೆ, ತೆಗೆದುಹಾಕಲು ಸುಲಭವಾಗುತ್ತದೆ. ಉಳಿದಿರುವ ಯಾವುದೇ ಅಂಟನ್ನು ಆಲ್ಕೋಹಾಲ್ ಅಥವಾ ನೇಲ್ ಪಾಲಿಶ್ ರಿಮೂವರ್&zwnj;ನಿಂದ ಒರೆಸಿ ತೆಗೆಯಿರಿ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/kitchen/tricks-and-tips-try-these-tips-to-remove-stickers-from-vessels/articleshow-8xgv4ld"/>
        </item>
        <item>
            <title><![CDATA[ಮನೆ ಕೆಲಸ ಎಲ್ಲಾ ಮಾಡಿದ್ರೂ ಪತ್ನಿ ಕಿರುಕುಳ, ಥಳಿತ: ಶಾಕಿಂಗ್​ ವಿಡಿಯೋ ಮಾಡಿ ಜೀವ ಕಳೆದುಕೊಂಡ ಉದ್ಯಮಿ]]></title>
            <link>https://kannada.asianetnews.com/relationship/swept-washed-utensils-businessman-ends-life-blames-wife-for-harassment-in-video-suc/articleshow-k6s6pxk</link>
            <guid isPermaLink="true">https://kannada.asianetnews.com/relationship/swept-washed-utensils-businessman-ends-life-blames-wife-for-harassment-in-video-suc/articleshow-k6s6pxk</guid>
            <pubDate>Mon, 29 Jun 2026 18:00:32 +0530</pubDate>
            <description><![CDATA[ಹರಿಯಾಣದ ಫರಿದಾಬಾದ್&zwnj;ನಲ್ಲಿ 28 ವರ್ಷದ ಬಟ್ಟೆ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಡಿಯೋ ಮಾಡಿ, ತಮ್ಮ ಪತ್ನಿ ಮತ್ತು ಅತ್ತೆಯ ಕಡೆಯವರಿಂದ ತೀವ್ರ ಮಾನಸಿಕ ಹಿಂಸೆ ಅನುಭವಿಸಿರುವುದಾಗಿ ಆರೋಪಿಸಿದ್ದಾರೆ. ಈ ವಿಡಿಯೋ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw9nhv0ddv7htg4yw7nex2mk,imgname-suicide-1782736022541.jpg" type="image/jpeg" height="390" width="690"/>
            <content:encoded><![CDATA[&lt;p&gt;ಫರಿದಾಬಾದ್: ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. 28 ವರ್ಷದ ಬಟ್ಟೆ ಉದ್ಯಮಿಯೊಬ್ಬರು ತಮ್ಮ ಅಂಗಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಭಯಾನಕ ಹೆಜ್ಜೆ ಇಡುವ ಮೊದಲು, ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಭಾವನಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, ಅವರು ತಮ್ಮ ಪತ್ನಿ ಮತ್ತು ಅತ್ತೆಯ ಮೇಲೆ ತೀವ್ರ ಮಾನಸಿಕ ಹಿಂಸೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.&lt;/p&gt;&lt;h2&gt;&lt;strong&gt;ಎರಡು ವರ್ಷಗಳ ಹಿಂದೆ ಪ್ರೇಮ ವಿವಾಹ&lt;/strong&gt;&lt;/h2&gt;&lt;p&gt;ಮೃತರನ್ನು ಸೆಕ್ಟರ್ 3 ರ ಹೌಸಿಂಗ್ ಬೋರ್ಡ್ ನಿವಾಸಿ 28 ವರ್ಷದ ರಾಹುಲ್ ಎಂದು ಗುರುತಿಸಲಾಗಿದೆ. ರಾಹುಲ್ ಸುಮಾರು ನಾಲ್ಕು ತಿಂಗಳ ಹಿಂದೆ ಸೆಕ್ಟರ್ 3 ರಲ್ಲಿ ಬಟ್ಟೆ ಅಂಗಡಿ ತೆರೆದಿದ್ದರು. ಕುಟುಂಬ ಸದಸ್ಯರ ಪ್ರಕಾರ, ರಾಹುಲ್ ಸುಮಾರು ಎರಡು ವರ್ಷಗಳ ಹಿಂದೆ ಪ್ರೇಮ ವಿವಾಹದಲ್ಲಿ ಜ್ಯೋತಿಯನ್ನು ವಿವಾಹವಾಗಿದ್ದರು. ಮದುವೆಯ ನಂತರ ರಾಹುಲ್ ತನ್ನ ಹೆತ್ತವರೊಂದಿಗೆ ವಾಸಿಸುವುದನ್ನು ಜ್ಯೋತಿ ಬಯಸಲಿಲ್ಲ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಈ ಕೌಟುಂಬಿಕ ಕಲಹವು ಅವರನ್ನು ಕುಟುಂಬದಿಂದ ಬೇರ್ಪಡಿಸಲು ಕಾರಣವಾಯಿತು.&lt;/p&gt;&lt;p&gt;ರಾಹುಲ್ ಆತ್ಮಹತ್ಯೆಗೆ ಸ್ವಲ್ಪ ಮೊದಲು ಸಾಮಾಜಿಕ ಮಾಧ್ಯಮ ವೇದಿಕೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದರು. ವಿಡಿಯೋದಲ್ಲಿ, ಅವರು ಕಣ್ಣೀರಿನಿಂದ ತಮ್ಮ ಪತ್ನಿ ಜ್ಯೋತಿ, ಅತ್ತೆ ವೀಣಾ, ಮಾವ ಬಿಟ್ಟು ಮತ್ತು ಅತ್ತಿಗೆ ನೀತು ಅವರ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. &quot;ನನ್ನ ಹೆಂಡತಿಯ ಮನೆಕೆಲಸಗಳನ್ನು ನಾನು ಗುಡಿಸುವುದರಿಂದ ಹಿಡಿದು ಪಾತ್ರೆಗಳನ್ನು ಸ್ವಚ್ಛಗೊಳಿಸುವವರೆಗೆ ಮಾಡುತ್ತಿದ್ದೆ. ಇಷ್ಟೆಲ್ಲಾ ಆದರೂ, ನನ್ನನ್ನು ಥಳಿಸಿ, ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ನು ಮುಂದೆ ನನಗೆ ಮಾನಸಿಕ ಒತ್ತಡ ಸಹಿಸಲು ಸಾಧ್ಯವಿಲ್ಲ&quot; ಎಂದು ರಾಹುಲ್ ವೀಡಿಯೊದಲ್ಲಿ ಹೇಳಿದ್ದಾರೆ. ತಮ್ಮ ಮರಣದ ನಂತರ ತಮ್ಮ ಅತ್ತೆ-ಮಾವಂದಿರಿಗೆ ಕಾನೂನಿನಿಂದ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಅವರ ಆಸ್ತಿಯನ್ನು ಅವರ ತಾಯಿ, ಸಹೋದರಿ ಮತ್ತು ಸಹೋದರರಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.&lt;/p&gt;&lt;h3&gt;&lt;strong&gt;ಪೋಷಕರನ್ನು ಭೇಟಿಯಾಗಲು ನಿರ್ಬಂಧ, ಪ್ರಕರಣ ದಾಖಲು&lt;/strong&gt;&lt;/h3&gt;&lt;p&gt;ಮೃತರ ಸಂಬಂಧಿ ಅಮಿತ್, ರಾಹುಲ್&zwnj;ಗೆ ತಮ್ಮ ತಾಯಿ ಮತ್ತು ಕುಟುಂಬವನ್ನು ಭೇಟಿಯಾಗಲು ಸಹ ಅವಕಾಶವಿಲ್ಲ ಎಂದು ಹೇಳಿದರು. ಭಾನುವಾರ ಬೆಳಿಗ್ಗೆ, ಅವರು ರಹಸ್ಯವಾಗಿ ತಮ್ಮ ತಾಯಿಯನ್ನು ಭೇಟಿ ಮಾಡಿ ಅಂಗಡಿಗೆ ಹೋದರು. ರಾಹುಲ್ ವಿರುದ್ಧ ಅವರ ಪತ್ನಿ ಪೊಲೀಸ್ ದೂರು ದಾಖಲಿಸಿದ್ದಾರೆ, ನಂತರ ಅವರು ತೀವ್ರ ಮಾನಸಿಕ ಒತ್ತಡದಿಂದ ಬಳಲಲು ಪ್ರಾರಂಭಿಸಿದರು ಎಂದು ಕುಟುಂಬ ಆರೋಪಿಸಿದೆ.&lt;/p&gt;&lt;p&gt;ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವವನ್ನು ಸ್ವಾಧೀನಪಡಿಸಿಕೊಂಡು ಬಿಕೆ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ತನಿಖಾಧಿಕಾರಿ ಸಂಜಯ್ ಕುಮಾರ್ ಮಾತನಾಡಿ, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊ ತನಿಖೆಯ ಪ್ರಮುಖ ಭಾಗವಾಗಿದೆ. ವೀಡಿಯೊದ ಸತ್ಯಾಸತ್ಯತೆ ಮತ್ತು ಕುಟುಂಬದ ಆರೋಪಗಳ ಆಧಾರದ ಮೇಲೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/swept-washed-utensils-businessman-ends-life-blames-wife-for-harassment-in-video-suc/articleshow-k6s6pxk"/>
        </item>
        <item>
            <title><![CDATA[ಅಡುಗೆ ಮನೆಯಲ್ಲಿ ಅಡಗಿದೆ ವಿಷ: ದಿನನಿತ್ಯ ನೀವು ಮಾಡುವ ಈ ನಾಲ್ಕು ತಪ್ಪು ಎಂದಾದ್ರೂ ಗಮನಿಸಿರುವಿರಾ]]></title>
            <link>https://kannada.asianetnews.com/gallery/kitchen/these-four-dirty-kitchen-items-that-may-spread-bacteria-food-poisoning-suc-ad5vclc</link>
            <guid isPermaLink="true">https://kannada.asianetnews.com/gallery/kitchen/these-four-dirty-kitchen-items-that-may-spread-bacteria-food-poisoning-suc-ad5vclc</guid>
            <pubDate>Mon, 29 Jun 2026 18:13:02 +0530</pubDate>
            <description><![CDATA[ಹೊರಗಿನ ಆಹಾರ ಮಾತ್ರವಲ್ಲ, ನಿಮ್ಮ ಮನೆಯ ಅಡುಗೆಮನೆಯೇ ಆಹಾರ ವಿಷಕ್ಕೆ ಕಾರಣವಾಗಬಹುದು. ಸರಿಯಾಗಿ ಸ್ವಚ್ಛಗೊಳಿಸದ ತರಕಾರಿ ಹೆಚ್ಚುವ ಮಣೆ, ಲಟ್ಟಣಿಗೆ, ಸಿಂಕ್ ಮತ್ತು ಸ್ಪಾಂಜ್&zwnj;ಗಳು ಫಂಗಸ್ ಹಾಗೂ ಬ್ಯಾಕ್ಟೀರಿಯಾಗಳ ತಾಣವಾಗಿ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kw9pdrsqk5qqj5m39bvrjtce,imgname-kitchen-poision-1782736937783.jpg" type="image/jpeg" height="390" width="690"/>
            <content:encoded><![CDATA[ಹೊರಗಿನ ಆಹಾರ ಮಾತ್ರವಲ್ಲ, ನಿಮ್ಮ ಮನೆಯ ಅಡುಗೆಮನೆಯೇ ಆಹಾರ ವಿಷಕ್ಕೆ ಕಾರಣವಾಗಬಹುದು. ಸರಿಯಾಗಿ ಸ್ವಚ್ಛಗೊಳಿಸದ ತರಕಾರಿ ಹೆಚ್ಚುವ ಮಣೆ, ಲಟ್ಟಣಿಗೆ, ಸಿಂಕ್ ಮತ್ತು ಸ್ಪಾಂಜ್&zwnj;ಗಳು ಫಂಗಸ್ ಹಾಗೂ ಬ್ಯಾಕ್ಟೀರಿಯಾಗಳ ತಾಣವಾಗಿ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು.&lt;img&gt;&lt;p&gt;ಆಹಾರ ವಿಷ ಅಥವಾ ಸೋಂಕು ಯಾವಾಗಲೂ ಹೊರಗೆ ತಿನ್ನುವುದರಿಂದ ಉಂಟಾಗುವುದಿಲ್ಲ; ಮೂಲ ಕಾರಣ ನಿಮ್ಮ ಮನೆಯೊಳಗೆ ಇರಬಹುದು. ಸರಿಯಾಗಿ ಸ್ವಚ್ಛಗೊಳಿಸದ ಅಡುಗೆಮನೆಯು ಇದಕ್ಕೆ ಕಾರಣವಾಗಬಹುದು. ಅಡುಗೆಮನೆಯ ಕೊಳಕು ನಿಮ್ಮನ್ನು ಹೇಗೆ ಅನಾರೋಗ್ಯಕ್ಕೆ ಒಳಪಡಿಸುತ್ತದೆ ಮತ್ತು ನೀವು ಏನು ಗಮನ ಹರಿಸಬೇಕು ಎಂಬುದನ್ನು ತಿಳಿಯಿರಿ.&lt;/p&gt;&lt;img&gt;&lt;p&gt;ಚಾಪಿಂಗ್ ಬೋರ್ಡ್&zwnj; ಅಂದರೆ ತರಕಾರಿ ಹೆಚ್ಚುವ ಮಣೆಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಮರದ ಹಲಗೆ ಒದ್ದೆಯಾಗಿದ್ದರೆ ಅಥವಾ ಸರಿಯಾಗಿ ಒಣಗದಿದ್ದರೆ, ಅಲ್ಲಿ ಫಂಗಸ್​ ಬೆಳೆಯಬಹುದು. ಅದು ಸ್ವಲ್ಪ ಬಿಳಿಯಾಗಿ ಕಾಣುವಂತೆ ಮಾಡುತ್ತದೆ, ಆದರೆ ಇದು ಹೆಚ್ಚಾಗಿ ಗಮನಿಸುವುದಿಲ್ಲ. ಬೋರ್ಡ್ ಅನ್ನು ಸ್ವಚ್ಛಗೊಳಿಸದೆ ತರಕಾರಿಗಳನ್ನು ಕತ್ತರಿಸಿದರೆ, ಫಂಗಸ್​ ಆಹಾರಕ್ಕೆ ಹೋಗಬಹುದು, ಇದು ಆಹಾರ ವಿಷಕ್ಕೆ ಕಾರಣವಾಗುತ್ತದೆ. ಪ್ರತಿ ಬಳಕೆಯ ನಂತರ ಬಿಸಿ ನೀರು ಮತ್ತು ಪಾತ್ರೆ ತೊಳೆಯುವ ದ್ರವದಿಂದ ಕತ್ತರಿಸುವ ಬೋರ್ಡ್ ಅನ್ನು ಸ್ವಚ್ಛಗೊಳಿಸಿ. ಅದು ಸಂಪೂರ್ಣವಾಗಿ ಒಣಗಿದ ನಂತರ ಮಾತ್ರ ಅದನ್ನು ಒಳಾಂಗಣದಲ್ಲಿ ಸಂಗ್ರಹಿಸಿ.&lt;/p&gt;&lt;img&gt;&lt;p&gt;ಮರದ ಲಟ್ಟಣಗೆ, ಹಿಟ್ಟು ಮತ್ತು ತೇವಾಂಶವನ್ನು ಹೀರಿಕೊಳ್ಳುತ್ತದೆ. ಅನುಚಿತ ಶುಚಿಗೊಳಿಸುವಿಕೆಯಿಂದಾಗಿ, ಒದ್ದೆಯಾದ ಹಿಟ್ಟು ಕೊಳೆಯಬಹುದು. ಅಚ್ಚು ಮತ್ತು ಬ್ಯಾಕ್ಟೀರಿಯಾಗಳು ಅದರಲ್ಲಿ ಬೆಳೆದು ಬ್ರೆಡ್ ಮೂಲಕ ದೇಹವನ್ನು ಪ್ರವೇಶಿಸಬಹುದು. ಬಳಕೆಯ ನಂತರ, ಅಗತ್ಯವಿದ್ದರೆ ಸೌಮ್ಯವಾದ ಸೋಪಿನಿಂದ ಸ್ವಚ್ಛಗೊಳಿಸಿ ಮತ್ತು ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಿ.&lt;/p&gt;&lt;img&gt;&lt;p&gt;ಸಣ್ಣ ಆಹಾರ ಕಣಗಳು, ಎಣ್ಣೆ ಮತ್ತು ತೇವಾಂಶವು ಅಡುಗೆಮನೆಯ ಸಿಂಕ್&zwnj;ನಲ್ಲಿ ಕ್ರಮೇಣ ಸಂಗ್ರಹಗೊಳ್ಳುತ್ತದೆ. ಇದು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಯ ಸ್ಥಳವಾಗಬಹುದು ಮತ್ತು ವಾಸನೆಯನ್ನು ಹೆಚ್ಚಿಸಬಹುದು. ಪ್ರತಿದಿನ ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರ ಸಿಂಕ್ ಅನ್ನು ಸ್ವಚ್ಛಗೊಳಿಸಲು ಮರೆಯದಿರಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಉಗುರು ಬೆಚ್ಚಗಿನ ನೀರಿನಿಂದ ಡ್ರೈನ್ ಅನ್ನು ಫ್ಲಶ್ ಮಾಡುವುದರಿಂದ ಅದು ಸ್ವಚ್ಛಗೊಳಿಸಲ್ಪಡುತ್ತದೆ.&lt;/p&gt;&lt;img&gt;&lt;p&gt;ಸ್ಪಾಂಜ್ ಅಥವಾ ಪಾತ್ರೆ ತೊಳೆಯುವ ಬಟ್ಟೆ ನಿರಂತರವಾಗಿ ಒದ್ದೆಯಾಗಿದ್ದರೆ, ಅದು ಆಹಾರ ವಿಷ ಅಥವಾ ಸೋಂಕಿನ ಹರಡುವಿಕೆಗೆ ಕಾರಣವಾಗಬಹುದು. ಸ್ಪಾಂಜ್ ಅನ್ನು ಆಗಾಗ್ಗೆ ಬದಲಾಯಿಸಿ ಮತ್ತು ತೇವಾಂಶವನ್ನು ಆವಿಯಾಗಿಸಲು ಅದನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/kitchen/these-four-dirty-kitchen-items-that-may-spread-bacteria-food-poisoning-suc-ad5vclc"/>
        </item>
        <item>
            <title><![CDATA[ಮಳೆಗಾಲದಲ್ಲಿ ಅಣಬೆ ಬೆಳೆದು ಲಕ್ಷ ಲಕ್ಷ ಗಳಿಸಿ: ಸುಲಭದಲ್ಲಿ ಬೆಳೆಯೋದು ಹೇಗೆ? ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/gallery/life/how-to-grow-mushrooms-at-home-during-rainy-season-suc-nyvky93</link>
            <guid isPermaLink="true">https://kannada.asianetnews.com/gallery/life/how-to-grow-mushrooms-at-home-during-rainy-season-suc-nyvky93</guid>
            <pubDate>Mon, 29 Jun 2026 18:35:32 +0530</pubDate>
            <description><![CDATA[ಮಳೆಗಾಲದಲ್ಲಿ ಮನೆಯಲ್ಲಿಯೇ ಅಣಬೆಗಳನ್ನು ಬೆಳೆಸುವುದು ಲಾಭದಾಯಕ ಆಯ್ಕೆಯಾಗಿದೆ. ಒಣಹುಲ್ಲು, ಅಣಬೆ ಬೀಜಗಳು ಮತ್ತು ಗ್ರೋ ಬ್ಯಾಗ್&zwnj;ಗಳನ್ನು ಬಳಸಿ, ಸರಿಯಾದ ತೇವಾಂಶವನ್ನು ಕಾಪಾಡಿಕೊಳ್ಳುವ ಮೂಲಕ ಸಿಂಪಿ ಅಣಬೆಗಳನ್ನು 2-3 ವಾರಗಳಲ್ಲಿ ಸುಲಭವಾಗಿ ಬೆಳೆಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kw9qpw0ejyf7nzmw31gmj07s,imgname-mushroom-at-home-1782738284557.jpg" type="image/jpeg" height="390" width="690"/>
            <content:encoded><![CDATA[ಮಳೆಗಾಲದಲ್ಲಿ ಮನೆಯಲ್ಲಿಯೇ ಅಣಬೆಗಳನ್ನು ಬೆಳೆಸುವುದು ಲಾಭದಾಯಕ ಆಯ್ಕೆಯಾಗಿದೆ. ಒಣಹುಲ್ಲು, ಅಣಬೆ ಬೀಜಗಳು ಮತ್ತು ಗ್ರೋ ಬ್ಯಾಗ್&zwnj;ಗಳನ್ನು ಬಳಸಿ, ಸರಿಯಾದ ತೇವಾಂಶವನ್ನು ಕಾಪಾಡಿಕೊಳ್ಳುವ ಮೂಲಕ ಸಿಂಪಿ ಅಣಬೆಗಳನ್ನು 2-3 ವಾರಗಳಲ್ಲಿ ಸುಲಭವಾಗಿ ಬೆಳೆಸಬಹುದು.&lt;img&gt;&lt;p&gt;ಮಳೆಗಾಲವನ್ನು ಕೃಷಿ ಮಾಡಲು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಋತುವಿನಲ್ಲಿ, ನೀವು ನಿಮ್ಮ ಮನೆಯಲ್ಲಿ ಹೊಸ ಸಸ್ಯಗಳನ್ನು ನೆಡುವುದು ಮಾತ್ರವಲ್ಲದೆ ನಿಮ್ಮ ಇಳುವರಿಯನ್ನು ಹೆಚ್ಚಿಸಬಹುದು. ಮಳೆಗಾಲದಲ್ಲಿ ಅಣಬೆಗಳನ್ನು ನೆಡುವುದು ಉತ್ತಮ ಆಯ್ಕೆಯಾಗಿದೆ ಏಕೆಂದರೆ ಅವು ತೇವಾಂಶವನ್ನು ಪ್ರೀತಿಸುತ್ತವೆ ಮತ್ತು ಸಣ್ಣ ಜಾಗದಲ್ಲಿ ಸುಲಭವಾಗಿ ಬೆಳೆಯುತ್ತವೆ. ಸ್ವಲ್ಪ ಕಾಳಜಿಯಿಂದ, ನೀವು ಮನೆಯಲ್ಲಿ ತಾಜಾ ಅಣಬೆಗಳನ್ನು ಬೆಳೆಸಬಹುದು. ನಿಮಗೆ ಏನು ಬೇಕು ಎಂದು ತಿಳಿಯಿರಿ.&lt;/p&gt;&lt;img&gt;&lt;ul&gt; &lt;li&gt;ಆಯ್ಸ್ಟರ್ ಮಶ್ರೂಮ್ ಸ್ಪಾನ್ ಅಥವಾ ಬೀಜಗಳು&lt;/li&gt; &lt;li&gt;ಶುದ್ಧ ಮತ್ತು ಒಣಗಿದ ಹುಲ್ಲು (ಗೋಧಿ ಅಥವಾ ಅಕ್ಕಿ)&lt;/li&gt; &lt;li&gt;ಪ್ಲಾಸ್ಟಿಕ್ ಗ್ರೋ ಬ್ಯಾಗ್&lt;/li&gt; &lt;li&gt;ಸ್ಪ್ರೇ ಬಾಟಲ್&lt;/li&gt; &lt;li&gt;ಶುದ್ಧ ಮತ್ತು ಗಾಳಿ ಇರುವ ಕೋಣೆ&lt;/li&gt;&lt;/ul&gt;&lt;img&gt;&lt;p&gt;ಒಣಹುಲ್ಲಿನ ಶುದ್ಧ ನೀರಿನಲ್ಲಿ ನೆನೆಸಿ ನಂತರ ಅದನ್ನು ಲಘುವಾಗಿ ಕುದಿಸಿ ಅಥವಾ ಬಿಸಿ ನೀರಿನಿಂದ ತೇವಗೊಳಿಸಿ. ಇದು ಸೂಕ್ಷ್ಮಜೀವಿಗಳನ್ನು ಕಡಿಮೆ ಮಾಡುತ್ತದೆ ಮತ್ತು ಅಣಬೆಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನಂತರ, ಹೆಚ್ಚುವರಿ ನೀರನ್ನು ಹರಿಸುತ್ತವೆ ಮತ್ತು ಒಣಹುಲ್ಲಿನ ತಣ್ಣಗಾಗಲು ಬಿಡಿ. ಗ್ರೋ ಬ್ಯಾಗ್&zwnj;ನಲ್ಲಿ ಒಣಹುಲ್ಲಿನ ಪದರದ ಮೇಲೆ ಸಣ್ಣ ಪ್ರಮಾಣದ ಬೀಜಗಳನ್ನು ಹರಡಿ. ಚೀಲಗಳನ್ನು ಅದೇ ರೀತಿಯಲ್ಲಿ, ಪದರ ಪದರವಾಗಿ ಜೋಡಿಸಿ. ಹೀಗೆ ಮಾಡುವುದರಿಂದ ಅನೇಕ ಅಣಬೆಗಳು ಸಣ್ಣ ಜಾಗದಲ್ಲಿ ಬೆಳೆಯಲು ಅನುವು ಮಾಡಿಕೊಡುತ್ತದೆ. ನೀವು ಖಾಲಿ ಕೂಲರ್&zwnj;ನಲ್ಲಿ ಒಣಹುಲ್ಲಿನ ಹರಡಿ ಬೀಜಗಳಲ್ಲಿ ಇಡಬಹುದು.&lt;/p&gt;&lt;img&gt;&lt;p&gt;ಪರಿಸರದಲ್ಲಿ ತೇವಾಂಶ ಹೆಚ್ಚಾದಷ್ಟೂ ಅಣಬೆಗಳು ವೇಗವಾಗಿ ಬೆಳೆಯುತ್ತವೆ. ಪ್ರತಿದಿನ ನೀರಿನಿಂದ ಲಘುವಾಗಿ ಸಿಂಪಡಿಸಿ. ಚೀಲವು ಒಣಹುಲ್ಲಿನಿಂದ ತುಂಬಿದ್ದರೆ, ಅದರಲ್ಲಿ ರಂಧ್ರ ಮಾಡಿ ಅದೇ ಸ್ಥಳದಿಂದ ಸಿಂಪಡಿಸಲು ಮರೆಯದಿರಿ. ಸಿಂಪಿ ಅಣಬೆಗಳು ಸಾಮಾನ್ಯವಾಗಿ 2-3 ವಾರಗಳಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ.&lt;/p&gt;&lt;img&gt;&lt;p&gt;ಪ್ರಸಿದ್ಧ ಮೂಲದಿಂದ ಖಾದ್ಯ ಮಶ್ರೂಮ್ ಸ್ಪಾನ್ ಅನ್ನು ಖರೀದಿಸಲು ಮರೆಯದಿರಿ. ತಪ್ಪಾದ ಅಥವಾ ವಿಷಕಾರಿ ಮಶ್ರೂಮ್ ಸ್ಪಾನ್ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅತಿಯಾಗಿ ನೀರುಹಾಕುವುದು ಅಚ್ಚು ಮತ್ತು ಸೋಂಕಿಗೆ ಕಾರಣವಾಗಬಹುದು.&amp;nbsp;&lt;/p&gt;&lt;img&gt;&lt;p&gt;ಸಿಂಪಿ ಅಣಬೆಗಳು, ಬಟನ್ ಅಣಬೆಗಳು, ಹಾಲಿನ ಅಣಬೆಗಳು, ಶಿಟೇಕ್ ಅಣಬೆಗಳು ಮತ್ತು ಸಿಂಹದ ಮೇನ್ ಅಣಬೆಗಳಂತಹ ಪ್ರಭೇದಗಳನ್ನು ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು ಮತ್ತು ತಿನ್ನಬಹುದು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/how-to-grow-mushrooms-at-home-during-rainy-season-suc-nyvky93"/>
        </item>
        <item>
            <title><![CDATA[ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ವಾ? ಹೀಗೆ ಮಾಡಿ… ಮನೆಯ ಒಳಗಡೆಯೇ ಫಟಾ ಫಟ್ ಒಣಗುತ್ತೆ]]></title>
            <link>https://kannada.asianetnews.com/gallery/fashion/easy-tricks-to-dry-clothes-in-monsoon-season-inside-house-zee5n1g</link>
            <guid isPermaLink="true">https://kannada.asianetnews.com/gallery/fashion/easy-tricks-to-dry-clothes-in-monsoon-season-inside-house-zee5n1g</guid>
            <pubDate>Mon, 29 Jun 2026 18:42:04 +0530</pubDate>
            <description><![CDATA[&lt;p&gt;Clothes Drying Tips: ಮಳೆಗಾಲದಲ್ಲಿ, ದಿನವಿಡೀ ಮೋಡ ಕವಿದು ವಾತಾವರಣ ಇರುತ್ತದೆ. ಇದರಿಂದ ಬಟ್ಟೆಗಳನ್ನು ಒಣಗಿಸೋದು ತುಂಬಾನೆ ಕಷ್ಟ. ಮಳೆಗಾಲದಲ್ಲಿ ಬೇಗನೆ ಬಟ್ಟೆ ಒಣಗಬೇಕೆಂದು ಬಯಸಿದ್ದರೆ ನೀವು ಈ ಟ್ರಿಕ್ಸ್ ಟ್ರೈ ಮಾಡಬಹುದು. ಇದರಿಂದ ಸುಲಭವಾಗಿ ಬಟ್ಟೆ ಒಣಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jwjmx9p8nf0ky5cwzgrz34a9,imgname-how-to-dry-clothes-quickly-in-rainy-season-2-1748677600967.jpg" type="image/jpeg" height="390" width="690"/>
            <content:encoded><![CDATA[&lt;p&gt;Clothes Drying Tips: ಮಳೆಗಾಲದಲ್ಲಿ, ದಿನವಿಡೀ ಮೋಡ ಕವಿದು ವಾತಾವರಣ ಇರುತ್ತದೆ. ಇದರಿಂದ ಬಟ್ಟೆಗಳನ್ನು ಒಣಗಿಸೋದು ತುಂಬಾನೆ ಕಷ್ಟ. ಮಳೆಗಾಲದಲ್ಲಿ ಬೇಗನೆ ಬಟ್ಟೆ ಒಣಗಬೇಕೆಂದು ಬಯಸಿದ್ದರೆ ನೀವು ಈ ಟ್ರಿಕ್ಸ್ ಟ್ರೈ ಮಾಡಬಹುದು. ಇದರಿಂದ ಸುಲಭವಾಗಿ ಬಟ್ಟೆ ಒಣಗುತ್ತದೆ.&lt;/p&gt;&lt;img&gt;&lt;p&gt;ಮಳೆಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಹೆಚ್ಚುತ್ತದೆ, ಇದು ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮಳೆಗಾಲದಲ್ಲಿ ಈ ಹೆಚ್ಚಿದ ಆರ್ದ್ರತೆಯಿಂದಾಗಿ, ಬಟ್ಟೆಗಳು ಬೇಗನೆ ಒಣಗುವುದಿಲ್ಲ. ಕೆಲವೊಮ್ಮೆ, ದಿನವಿಡೀ ಮನೆಯೊಳಗೆ ಬಟ್ಟೆಯನ್ನು ನೇತುಹಾಕಿದರೂ, ಅವು ತೇವವಾಗಿರುತ್ತವೆ, ಇದರಿಂದಾಗಿ ವಾಸನೆ ಬರುತ್ತದೆ. ಬಟ್ಟೆಗಳನ್ನು ದೀರ್ಘಕಾಲದವರೆಗೆ ಒದ್ದೆಯಾಗಿ ಬಿಡುವುದರಿಂದ ಅಚ್ಚು ಬರುವ ಅಪಾಯವೂ ಹೆಚ್ಚಾಗುತ್ತದೆ. ಕೆಲವು ಸರಳ ಟ್ರಿಕ್ಸ್ ಮೂಲಕ ಮನೆಯೊಳಗಡೆ ಸುಲಭವಾಗಿ ಬಟ್ಟೆಯನ್ನು ಒಣಗಿಸಬಹುದು. ಹೇಗೆ ಅನ್ನೋದನ್ನು ನೋಡಿ.&lt;/p&gt;&lt;img&gt;&lt;p&gt;ಬಟ್ಟೆಗಳನ್ನು ತೊಳೆದ ನಂತರ ಕಡಿಮೆ ನೀರು ಉಳಿದಷ್ಟೂ ಅವು ವೇಗವಾಗಿ ಒಣಗುತ್ತವೆ. ನಿಮ್ಮ ಬಟ್ಟೆ ವಾಷಿಂಗ್ ಮಷಿನ್ ಗೆ ಎಕ್ಸ್ಟ್ರಾ ಸ್ಪಿನ್ ಆಯ್ಕೆ ಇದ್ದರೆ, ಅದನ್ನು ಬಳಸಿ. ಕೈಯಿಂದ ತೊಳೆದ ಬಟ್ಟೆಗಳನ್ನು ಚೆನ್ನಾಗಿ ಹಿಂಡಬೇಕು ಮತ್ತು ಸಾಧ್ಯವಾದರೆ, ವಾಷಿಂಗ್ ಮಷಿನ್ ಡ್ರೈಯರ್&zwnj;ನಲ್ಲಿ ಒಣಗಿಸಬೇಕು. ದಪ್ಪ ಟವಲ್&zwnj;ನಲ್ಲಿ ಬಟ್ಟೆಗಳನ್ನು ಸುತ್ತಿ ಲಘುವಾಗಿ ಒತ್ತುವುದರಿಂದ ಹೆಚ್ಚುವರಿ ತೇವಾಂಶವನ್ನು ತೆಗೆದುಹಾಕಬಹುದು, ಮತ್ತು ಒಣಗಿಸುವ ಸಮಯವನ್ನು ಕಡಿಮೆ ಮಾಡಬಹುದು. ಒಣಗಿದ ಬಟ್ಟೆಗಳು ಮಳೆಯಲ್ಲೂ ವೇಗವಾಗಿ ಒಣಗುತ್ತವೆ.&lt;/p&gt;&lt;img&gt;&lt;p&gt;ಚೆನ್ನಾಗಿ ಗಾಳಿ ಇರುವ ಕೋಣೆಯಲ್ಲಿ ಬಟ್ಟೆಗಳನ್ನು ನೇತುಹಾಕಿ. ಸೀಲಿಂಗ್ ಫ್ಯಾನ್ ಅಥವಾ ಟೇಬಲ್ ಫ್ಯಾನ್ ಚಲಾಯಿಸುವುದರಿಂದ ಬಟ್ಟೆಗಳ ಸುತ್ತಲೂ ಗಾಳಿಯ ಹರಿವು ಹೆಚ್ಚಾಗುತ್ತದೆ, ಇದರಿಂದಾಗಿ ಅವು ತೇವಾಂಶವನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಸಾಧ್ಯವಾದರೆ, ತಾಜಾ ಗಾಳಿ ಒಳಗೆ ಹರಿಯುವಂತೆ ಕಿಟಕಿಗಳನ್ನು ಸ್ವಲ್ಪ ತೆರೆದಿಡಿ. ಗಾಳಿಯು ಪ್ರತಿಯೊಂದು ಭಾಗವನ್ನು ತಲುಪುವಂತೆ ಬಟ್ಟೆಗಳನ್ನು ಪರಸ್ಪರ ದೂರದಲ್ಲಿ ನೇತುಹಾಕಿ. ಫ್ಯಾನ್&zwnj;ನ ತಂಗಾಳಿಯು ಬಟ್ಟೆಗಳು ವೇಗವಾಗಿ ಒಣಗಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ಮನೆಯಲ್ಲಿ ಡಿಹ್ಯೂಮಿಡಿಫೈಯರ್ ಇದ್ದರೆ, ನೀವು ಬಟ್ಟೆಗಳನ್ನು ಒಣಗಿಸುತ್ತಿರುವ ಕೋಣೆಯಲ್ಲಿ ಇದನ್ನು ಬಳಸಬಹುದು. ಇದು ಗಾಳಿಯಲ್ಲಿ ಹೆಚ್ಚುವರಿ ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಇಲ್ಲದವರು, ನಎಸಿಯ ಡ್ರೈ ಮೋಡ್ ಸಹ ಉಪಯುಕ್ತವಾಗಬಹುದು. ಎಸಿಯ ಡ್ರೈ ಮೋಡ್ ಕೋಣೆಯಲ್ಲಿ ಆರ್ದ್ರತೆಯನ್ನು ಕಡಿಮೆ ಮಾಡುತ್ತದೆ, ಇದು ಬಟ್ಟೆಯನ್ನು ಬೇಗ ಒಣಗುವಂತೆ ಮಾಡುತ್ತದೆ.&lt;/p&gt;&lt;img&gt;&lt;p&gt;ಒದ್ದೆಯಾದ ಬಟ್ಟೆಗಳನ್ನು ಒಂದರ ಮೇಲೊಂದು ಅಥವಾ ತುಂಬಾ ಹತ್ತಿರ ನೇತು ಹಾಕಬೇಡಿ, ಏಕೆಂದರೆ ಇದು ಗಾಳಿಯ ಹರಿವನ್ನು ನಿರ್ಬಂಧಿಸುತ್ತದೆ. ಗಾಳಿಯ ಹರಿವು ಇಲ್ಲದೆ ಮುಚ್ಚಿದ ಕೋಣೆಯಲ್ಲಿ ಬಟ್ಟೆಗಳನ್ನು ಒಣಗಿಸುವುದರಿಂದ ಅವುಗಳಿಂದ ಕೊಳೆತ ವಾಸನೆ ಬರಬಹುದು. ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸದೆ ಕ್ಲೋಸೆಟ್&zwnj;ನಲ್ಲಿ ಸಂಗ್ರಹಿಸುವುದರಿಂದ ವಾಸನೆ ಮತ್ತು ಅಚ್ಚು ಉಂಟಾಗುತ್ತದೆ. ಮಳೆಗಾಲದಲ್ಲಿ ಬಟ್ಟೆಗಳನ್ನು ಒಣಗಿಸುವುದು ಕಷ್ಟವಾಗಬಹುದು. ಆದರೆ ಸರಿಯಾದ ವಿಧಾನಗಳನ್ನು ಬಳಸುವುದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/fashion/easy-tricks-to-dry-clothes-in-monsoon-season-inside-house-zee5n1g"/>
        </item>
        <item>
            <title><![CDATA[ಫ್ರಿಜ್ ಬದಲು  ಟೊಮೆಟೊವನ್ನು ಹೀಗೆ ಇಟ್ನೋಡಿ, ರುಚಿ ಹಾಳಾಗೋದಿಲ್ಲ- ಬೇಗ ಕೊಳೆಯೋದಿಲ್ಲ]]></title>
            <link>https://kannada.asianetnews.com/gallery/food/how-to-keep-tomatoes-fresh-without-refrigerator-a2x3o34</link>
            <guid isPermaLink="true">https://kannada.asianetnews.com/gallery/food/how-to-keep-tomatoes-fresh-without-refrigerator-a2x3o34</guid>
            <pubDate>Mon, 29 Jun 2026 19:05:29 +0530</pubDate>
            <description><![CDATA[&lt;p&gt;fresh tomatoes tips: ತರಕಾರಿ ಏನೂ ಇಲ್ಲ ಎಂದಾಗ ನೆನಪಾಗೋದೇ ಟೊಮೆಟೊ. ಫಟಾ ಫಟ್ ಅಂತ ಟೊಮೆಟೊ ರಸಂ ಮಾಡಿದ್ರೆ ಮುಗೀತು. ಮಾರ್ಕೆಟ್ ನಿಂದ ತಂದ ಟೊಮೆಟೊ ಬೇಗ ಹಾಳಾಗ್ಬಾರದು ಅಂದ್ರೆ ಈ ಟ್ರಿಕ್ಸ್ ಫಾಲೋ ಮಾಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9s6975dz8xhm7tb5nf62xp,imgname-tomato-1782739838181.jpg" type="image/jpeg" height="390" width="690"/>
            <content:encoded><![CDATA[&lt;p&gt;fresh tomatoes tips: ತರಕಾರಿ ಏನೂ ಇಲ್ಲ ಎಂದಾಗ ನೆನಪಾಗೋದೇ ಟೊಮೆಟೊ. ಫಟಾ ಫಟ್ ಅಂತ ಟೊಮೆಟೊ ರಸಂ ಮಾಡಿದ್ರೆ ಮುಗೀತು. ಮಾರ್ಕೆಟ್ ನಿಂದ ತಂದ ಟೊಮೆಟೊ ಬೇಗ ಹಾಳಾಗ್ಬಾರದು ಅಂದ್ರೆ ಈ ಟ್ರಿಕ್ಸ್ ಫಾಲೋ ಮಾಡಿ.&lt;/p&gt;&lt;img&gt;&lt;p&gt;ಟೊಮೆಟೊ ಬಹುತೇಕ ಎಲ್ಲಾ ಭಾರತೀಯ ಅಡುಗೆಮನೆಯ ಅತ್ಯಗತ್ಯ ತರಕಾರಿ. ಸಲಾಡ್ ನಿಂದ ಹಿಡಿದು ಚಟ್ನಿ ಸೇರಿದಂತೆ ನಾನಾ ಭಕ್ಷ್ಯ ತಯಾರಿಸೋಕೆ ಟೊಮೆಟೊ ಇರ್ಲೇಬೇಕು. ಟೊಮೆಟೊ ಖರೀದಿಸಿ ಮನೆಗೆ ತಂದ್ರೆ ಒಂದು ವಾರ ಕೂಡ ಟೊಮೆಟೊ ಚೆನ್ನಾಗಿರೋದಿಲ್ಲ. ಬೇಗ ಹಾಳಾಗೋಕೆ ಶುರುವಾಗುತ್ತೆ. ಟೊಮೆಟೊ ಹಾಳಾಗ್ಬಾರದು ಅಂತ ನಾವು ಫ್ರಿಜ್ ನಲ್ಲಿ ಅದನ್ನಿಟ್ತೇವೆ.&lt;/p&gt;&lt;img&gt;&lt;p&gt;ತಜ್ಞರ ಪ್ರಕಾರ, ಟೊಮೆಟೊ ಫ್ರಿಜ್ ನಲ್ಲಿ ಇಡುವಂತ ತರಕಾರಿ ಅಲ್ಲ. ನೀವು ತುಂಬಾ ದಿನ ಟೊಮೆಟೊ ಹಾಳಾಗ್ದೆ ಇರಲಿ ಎನ್ನುವ ಉದ್ದೇಶಕ್ಕೆ ಅದನ್ನು ಫ್ರಿಜ್ ನಲ್ಲಿ ಇಡ್ತೀರಿ. ಆದ್ರೆ ನೈಸರ್ಗಿಕ ಸುವಾಸನೆ ಮತ್ತು ಟೊಮೆಟೊ ಆಕಾರದ ಮೇಲೆ ಪರಿಣಾಮ ಬೀರುತ್ತೆ. ಫ್ರಿಜ್ ವಾತಾವರಣ ಟೊಮೆಟೊ ಹಣ್ಣಾಗುವ ಪ್ರಕ್ರಿಯೆಯನ್ನು ನಿಲ್ಲಿಸುತ್ತೆ. ಇದರಿಂದ ಟೊಮೆಟೊ ಪರಿಮಳ ಕಳೆದುಕೊಳ್ಳುತ್ತೆ. ಟೊಮೆಟೊ ಪೂರ್ತಿ ಹಣ್ಣಾಗಿಲ್ಲ ಅಂದ್ರೆ ನೀವದನ್ನು ರೂಮ್ ಉಷ್ಣಾಂಶದಲ್ಲಿ ಇಡ್ಬಹುದು. ಟೊಮೆಟೊ ತುಂಬಾ ಹಣ್ಣಾಗಿದ್ದಲ್ಲಿ ಮಾತ್ರ ಅದನ್ನು ಫ್ರಿಜ್ ನಲ್ಲಿಡಿ.&lt;/p&gt;&lt;img&gt;&lt;p&gt;ದೀರ್ಘಕಾಲದವರೆಗೆ ಟೊಮೆಟೊಗಳನ್ನು ತಾಜಾವಾಗಿಡಲು ಸುಲಭವಾದ ಮಾರ್ಗವೆಂದರೆ ಕಾಂಡದ ಬದಿಯನ್ನು ಕೆಳಗೆ ಇಡುವುದು. ಟೊಮೆಟೊಗಳಲ್ಲಿನ ಹೆಚ್ಚಿನ ತೇವಾಂಶವು ಕಾಂಡದಿಂದ ಆವಿಯಾಗುತ್ತದೆ. ಕಾಂಡವನ್ನು ಕೆಳಗೆ ಇಟ್ಟಾಗ ತೇವಾಂಶ ನಷ್ಟ ಕಡಿಮೆಯಾಗುತ್ತದೆ ಮತ್ತು ಟೊಮೆಟೊಗಳು ಹೆಚ್ಚು ಕಾಲ ಹಾಳಾಗದೆ ಉಳಿಯುತ್ತದೆ.&lt;/p&gt;&lt;img&gt;&lt;p&gt;ಟೊಮೆಟೊಗಳನ್ನು ಸಂಗ್ರಹಿಸುವಾಗ, ಅವುಗಳನ್ನು ನೇರ ಸೂರ್ಯನ ಬೆಳಕಿನಿಂದ ದೂರವಿಡಿ. ಅತಿಯಾದ ಶಾಖ ಅಥವಾ ಸೂರ್ಯನ ಬೆಳಕು ಅವುಗಳನ್ನು ತ್ವರಿತವಾಗಿ ಮೃದುಗೊಳಿಸುತ್ತದೆ. ಬಾಳೆಹಣ್ಣು ಮತ್ತು ಸೇಬಿನಂತಹ ಹಣ್ಣುಗಳ ಜೊತೆ ಟೊಮೆಟೊಗಳನ್ನು ಇಡಬೇಡಿ. ಈ ಹಣ್ಣುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದು ಹಣ್ಣಾಗುವಿಕೆ ಮತ್ತು ಹಾಳಾಗುವಿಕೆಯನ್ನು ವೇಗಗೊಳಿಸುತ್ತದೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/food/how-to-keep-tomatoes-fresh-without-refrigerator-a2x3o34"/>
        </item>
        <item>
            <title><![CDATA[ಈ ವಿಷ್ಯ ಗಂಡ-ಹೆಂಡತಿ ಮಧ್ಯದಲ್ಲೇ ಇರಬೇಕು… ಹೊರ ಬಂದ್ರೆ ದಾಂಪತ್ಯ ಜೀವನವೇ ಫಿನಿಶ್]]></title>
            <link>https://kannada.asianetnews.com/gallery/relationship/husband-and-wife-should-keep-these-secret-by-themself-0bs6ix7</link>
            <guid isPermaLink="true">https://kannada.asianetnews.com/gallery/relationship/husband-and-wife-should-keep-these-secret-by-themself-0bs6ix7</guid>
            <pubDate>Mon, 29 Jun 2026 21:16:26 +0530</pubDate>
            <description><![CDATA[&lt;p&gt;ದಾಂಪತ್ಯ ಜೀವನ ಸುಂದರವಾಗಿರಬೇಕು ಅಂದ್ರೆ, ಗಂಡ ಮತ್ತು ಹೆಂಡತಿಯ ನಡುವಿನ ಐದು ರಹಸ್ಯಗಳ ಬಗ್ಗೆ ತಿಳಿಯಿರಿ, ಅವುಗಳನ್ನು ಬೇರೆಯವರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು, ಇಲ್ಲದಿದ್ದರೆ ಸಂತೋಷದ ಸಂಬಂಧವೂ ಹಾಳಾಗಬಹುದು. ಹಾಗಿದ್ರೆ ಆ ಸೀಕ್ರೆಟ್ ಏನು ತಿಳಿಯಿರಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5gpwerh0rhgn5az0dc2mzrc,imgname-relationship-tips-1758276238096.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾಂಪತ್ಯ ಜೀವನ ಸುಂದರವಾಗಿರಬೇಕು ಅಂದ್ರೆ, ಗಂಡ ಮತ್ತು ಹೆಂಡತಿಯ ನಡುವಿನ ಐದು ರಹಸ್ಯಗಳ ಬಗ್ಗೆ ತಿಳಿಯಿರಿ, ಅವುಗಳನ್ನು ಬೇರೆಯವರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು, ಇಲ್ಲದಿದ್ದರೆ ಸಂತೋಷದ ಸಂಬಂಧವೂ ಹಾಳಾಗಬಹುದು. ಹಾಗಿದ್ರೆ ಆ ಸೀಕ್ರೆಟ್ ಏನು ತಿಳಿಯಿರಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ದಾಂಪತ್ಯ ಜೀವನ ಸುಂದರವಾಗಿರಬೇಕು ಅಂದ್ರೆ, ಇಬ್ಬರ ನಡುವೆ ಅರ್ಹಮಾಡಿಕೊಳ್ಳುವ ಭಾವನೆ ಇರಬೇಕು ನಿಜ. ಇದರ ಜೊತೆಗೆ ಗಂಡ-ಹೆಂಡತಿ ನಡುವಿನ ಸೀಕ್ರೆಟ್, ಸೀಕ್ರೆಟ್ ಆಗಿಟ್ಟುಕೊಳ್ಳುವುದೂ ಕೂಡ ಗೊತ್ತಿರಬೇಕು. ಮುಖ್ಯವಾಗಿ ಈ ಐದು ವಿಷಯಗಳನ್ನು ಗಂಡ-ಹೆಂಡತಿ ಹೊರಗಿನವರಿಗೆ ಹೇಳಲೇಬಾರದು. ಹೇಳಿದ್ದೆ ಆದರೆ ಸಂಬಂಧ ಹಾಳಾಗುವುದು ಖಚಿತಾ.&lt;/p&gt;&lt;img&gt;&lt;p&gt;ಇದು ನಿಮ್ಮ ಸಂಬಂಧದ ಅತ್ಯಂತ ಸೂಕ್ಷ್ಮ ಮತ್ತು ವೈಯಕ್ತಿಕ ಭಾಗವಾಗಿದೆ. ನಿಮ್ಮ ಫಿಸಿಕಲ್ ಕೆಮೆಸ್ಟ್ರಿ, ಬೆಡ್ ರೂಮ್ ಮಾತುಕತೆ ಮತ್ತು ನಿಮ್ಮ ಸಂಗಾತಿಯ ಇಷ್ಟಾನಿಷ್ಟಗಳು ನಿಮ್ಮಿಬ್ಬರ ನಡುವೆಯೇ ಇರಬೇಕು.&lt;/p&gt;&lt;p&gt;&lt;strong&gt;ಕಾರಣ: &lt;/strong&gt;ನಿಮ್ಮ ಇಂಟಿಮೆಟ್ ಜೀವನದ ವಿವರಗಳನ್ನು ನೀವು ಹಂಚಿಕೊಂಡಾಗ, ನೀವು ನಿಮ್ಮ ಸಂಗಾತಿಯ ಸ್ವಾಭಿಮಾನ ಮತ್ತು ನಂಬಿಕೆಗೆ ದ್ರೋಹ ಮಾಡಿದಂತೆ. ಇದರಿಂದ ಇಬ್ಬರ ನಡುವಿನ ಸೀಕ್ರೆಟ್ ನಷ್ಟವಾಗುತ್ತೆ, ಜೊತೆಗೆ ಇಬ್ಬರ ನಡುವೆ ಮಾತುಕತೆ ಕಡಿಮೆಯಾಗಬಹುದು.&lt;/p&gt;&lt;img&gt;&lt;p&gt;ಎಲ್ಲರೂ ಪರ್ಫೆಕ್ಟ್ ಆಗಿರುವುದಿಲ್ಲ, ಮತ್ತು ಎಲ್ಲರಿಗೂ ಒಂದು ಪಾಸ್ಟ್ ಲೈಫ್ ಇರುತ್ತದೆ. ನಿಮ್ಮ ಸಂಗಾತಿ ತಮ್ಮ ಹಿಂದಿನ ತಪ್ಪು ಅಥವಾ ವೀಕ್ ನೆಸ್ ಬಗ್ಗೆ ನಿಮ್ಮಲ್ಲಿ ಹೇಳಿಕೊಂಡಿದ್ದರೆ, ಅದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ.&lt;/p&gt;&lt;p&gt;&lt;strong&gt;ಕಾರಣ: &lt;/strong&gt;ನೀವು ನಿಮ್ಮ ಸಂಗಾತಿಯ ನ್ಯೂನತೆಗಳನ್ನು ಇತರರಿಗೆ ಹೇಳಿದಾಗ, ಅವರು ತಮ್ಮ ದೃಷ್ಟಿಕೋನದಿಂದ ನಿಮ್ಮ ಸಂಗಾತಿಯನ್ನು ಜಡ್ಜ್ ಮಾಡುತ್ತಾರೆ. ನೀವು ಕೆಲವು ಸಮಯದ ಬಳಿಕ ಅವರನ್ನು ಸ್ವೀಕರಿಸಬಹುದು, ಆದರೆ ಇತರರು ಯಾವುದೇ ಅವಕಾಶದಲ್ಲಿ ನಿಮ್ಮ ಸಂಗಾತಿಯನ್ನು ಅವಮಾನಿಸಲು ಅಥವಾ ಅಪಹಾಸ್ಯ ಮಾಡಲು ಹಿಂಜರಿಯುವುದಿಲ್ಲ.&lt;/p&gt;&lt;img&gt;&lt;p&gt;ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಹೇಗಿದೆ - ನೀವಿಬ್ಬರೂ ಎಷ್ಟು ಸಂಪಾದಿಸುತ್ತೀರಿ, ಎಷ್ಟು ಖರ್ಚು ಮಾಡುತ್ತೀರಿ ಅಥವಾ ಎಷ್ಟು ಸಾಲ ಹೊಂದಿದ್ದೀರಿ ಎಂಬುದು ಸಂಪೂರ್ಣವಾಗಿ ಆಂತರಿಕ ವಿಷಯವಾಗಿದೆ.&lt;/p&gt;&lt;p&gt;&lt;strong&gt;ಕಾರಣ: &lt;/strong&gt;ಹಣವು ಮಾನವ ನಡವಳಿಕೆಯನ್ನು ತಕ್ಷಣವೇ ಬದಲಾಯಿಸುವ ವಿಷಯ. ನೀವು ನಿಮ್ಮ ಸಂಪತ್ತನ್ನು ಪ್ರದರ್ಶಿಸಿದರೆ, ಜನರು ಅಸೂಯೆಪಡಬಹುದು ಅಥವಾ ಲಾಭ ಪಡೆಯಲು ಪ್ರಯತ್ನಿಸಬಹುದು. ನೀವು ನಿಮ್ಮ ಕಷ್ಟಗಳನ್ನು ಅಥವಾ ಸಾಲಗಳನ್ನು ಹಂಚಿಕೊಂಡರೆ, ಜನರು ನಿಮ್ಮನ್ನು ದುರ್ಬಲರೆಂದು ಗ್ರಹಿಸುತ್ತಾರೆ ಮತ್ತು ನಿಮ್ಮ ಗೌರವವನ್ನು ಕಡಿಮೆ ಮಾಡಬಹುದು.&lt;/p&gt;&lt;img&gt;&lt;p&gt;ಗಂಡ-ಹೆಂಡತಿಯ ನಡುವೆ ವಾದಗಳು ನಡೆಯುವುದು ಸಹಜ. ಬೆಳಿಗ್ಗೆ ಜಗಳವಾದರೆ, ಸಂಜೆ ಚಹಾ ಕುಡಿದು ನೀವು ಅದನ್ನು ಮರೆತುಬಿಡುವ ಸಾಧ್ಯತೆ ಹೆಚ್ಚು. ಆದರೆ ಇದನ್ನು ಇನ್ನೊಬ್ಬರ ಬಳಿ ಹೇಳಬೇಡಿ.&lt;/p&gt;&lt;p&gt;&lt;strong&gt;ಕಾರಣ: &lt;/strong&gt;ನೀವು ನಿಮ್ಮ ಜಗಳವನ್ನು ನಿಮ್ಮ ಹೆತ್ತವರೊಂದಿಗೆ ಅಥವಾ ಆತ್ಮೀಯ ಸ್ನೇಹಿರೊಂದಿಗೆ ಹಂಚಿಕೊಂಡಾಗ, ಅವರು ನಿಮ್ಮ ಸಂಗಾತಿಯ ಬಗ್ಗೆ ಕೆಟ್ಟ ಭಾವನೆ ಅಥವಾ ಕೋಪವನ್ನು ಹೊಂದಿರುತ್ತಾರೆ. ನಿಮ್ಮ ಸಂಗಾತಿಯ ಮನವೊಲಿಸಿ ಮುಂದುವರಿಯಲು ನಿಮಗೆ ಸಾಧ್ಯವಾಗಬಹುದು, ಆದರೆ ನಿಮ್ಮ ಹತ್ತಿರ ಇರುವವರು ಅದನ್ನು ಮರೆಯುವುದಿಲ್ಲ. ಪರಿಣಾಮವಾಗಿ, ನಿಮ್ಮ ಸಂಗಾತಿಯ ಮೇಲಿನ ಅವರ ಗೌರವ ಶಾಶ್ವತವಾಗಿ ಕಡಿಮೆಯಾಗುತ್ತದೆ.&lt;/p&gt;&lt;img&gt;&lt;p&gt;ಅದು ನಿಮ್ಮ ಅತ್ತೆ ಮತ್ತು ಸೊಸೆಯ ನಡುವಿನ ಭಿನ್ನಾಭಿಪ್ರಾಯವಾಗಿರಬಹುದು, ನಿಮ್ಮ ಅತ್ತಿಗೆಯ ನಿಂದನೆಯಾಗಿರಬಹುದು ಅಥವಾ ನಿಮ್ಮ ಮಾವ ಹೇಳುವಂತಹದ್ದೇ ಆಗಿರಬಹುದು, ಪ್ರತಿ ಕುಟುಂಬದಲ್ಲಿಯೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಆದರೆ ನಿಮ್ಮ ಅತ್ತೆ-ಮಾವನ ನ್ಯೂನತೆಗಳನ್ನು ನಿಮ್ಮ ಹೆತ್ತವರಿಗೆ ಅಥವಾ ಸ್ನೇಹಿತರಿಗೆ ಎಂದಿಗೂ ಹೇಳಬೇಡಿ.&lt;/p&gt;&lt;p&gt;&lt;strong&gt;ಕಾರಣ: &lt;/strong&gt;ನೀವು ನಿಮ್ಮ ಸಂಗಾತಿಯ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ, ಅದು ಅವರ ಪ್ರತಿಷ್ಠೆಯನ್ನು ನೇರವಾಗಿ ಹಾಳು ಮಾಡುತ್ತದೆ. ನೀವು ಅವರ ಪೋಷಕರು ಅಥವಾ ಒಡಹುಟ್ಟಿದವರ ಬಗ್ಗೆ ತಪ್ಪು ಹೇಳಿದ್ದೀರಿ ಎಂದು ನಿಮ್ಮ ಸಂಗಾತಿಗೆ ತಿಳಿದರೆ, ಅವರು ನಿಮ್ಮ ಬಗ್ಗೆ ಬೇಸರಪಡುತ್ತಾರೆ. ನೆನಪಿಡಿ, ಕುಟುಂಬದ ಗೌರವವು ಸಂಬಂಧಗಳ ಗೌರವಕ್ಕೆ ನೇರವಾಗಿ ಸಂಬಂಧಿಸಿದೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/relationship/husband-and-wife-should-keep-these-secret-by-themself-0bs6ix7"/>
        </item>
        <item>
            <title><![CDATA[ಭಾರತದ ಮೊಟ್ಟಮೊದಲ ‘ಕಡಲ ಏರ್ಪೋರ್ಟ್’: ಮುಂಬೈ ಸಮುದ್ರದಲ್ಲೇ ತಲೆಯೆತ್ತಲಿದೆ ಅತ್ಯಾಧುನಿಕ ವಿಮಾನ ನಿಲ್ದಾಣ!]]></title>
            <link>https://kannada.asianetnews.com/india-news/india-s-first-offshore-airport-coming-up-near-mumbai-palghar-kore-beach-gdp/articleshow-6kp9ksm</link>
            <guid isPermaLink="true">https://kannada.asianetnews.com/india-news/india-s-first-offshore-airport-coming-up-near-mumbai-palghar-kore-beach-gdp/articleshow-6kp9ksm</guid>
            <pubDate>Tue, 30 Jun 2026 08:44:53 +0530</pubDate>
            <description><![CDATA[ಭಾರತದ ಮೊಟ್ಟಮೊದಲ 'ಆಫ್&zwnj;ಶೋರ್&zwnj; ಏರ್ಪೋರ್ಟ್&zwnj;' ಮಹಾರಾಷ್ಟ್ರದ ಪಾಲ್ಘರ್&zwnj; ಜಿಲ್ಲೆಯ ಕಡಲಿನಲ್ಲಿ ನಿರ್ಮಾಣವಾಗಲಿದೆ. ವಾಧ್ವಾನ್&zwnj; ಬಂದರು ಯೋಜನೆಯ ಭಾಗವಾಗಿರುವ ಈ ನಿಲ್ದಾಣವು, ಬುಲೆಟ್ ಟ್ರೈನ್ ಹಾಗೂ ಸೀ ಲಿಂಕ್ ಸಂಪರ್ಕದೊಂದಿಗೆ ವಾರ್ಷಿಕ 9 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwb8a4avfhx2qh33wve95cy9,imgname-offshore-airport-come-up-in-maharashtra-1782789247323.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: &lt;/strong&gt;ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಲು ವೇದಿಕೆ ಸಿದ್ಧವಾಗಿದೆ. ಭಾರತದ ಮೊಟ್ಟಮೊದಲ &lsquo;ಆಫ್&zwnj;ಶೋರ್&zwnj; ಏರ್ಪೋರ್ಟ್&zwnj;&rsquo; (ಕಡಲಲ್ಲಿನ ವಿಮಾನ ನಿಲ್ದಾಣ) ಮಹಾರಾಷ್ಟ್ರದಲ್ಲಿ ನಿರ್ಮಾಣವಾಗಲಿದ್ದು, ವಾಣಿಜ್ಯ ನಗರಿ ಮುಂಬೈಗೆ ಜಾಗತಿಕ ಮಟ್ಟದ ಮತ್ತೊಂದು ಗರಿ ಸಿಗಲಿದೆ.&lt;/p&gt;&lt;p&gt;ಮಹಾರಾಷ್ಟ್ರದ ಪಾಲ್ಘರ್&zwnj; ಜಿಲ್ಲೆಯ ಕೋರೆ ಬೀಚ್&zwnj;ನ ಸಮುದ್ರ ಭಾಗದಲ್ಲಿ ಈ ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣ ತಲೆಯೆತ್ತಲಿದ್ದು, ಯೋಜನೆಗೆ ಸಂಬಂಧಿಸಿದ ಪೂರ್ವ ಕಾರ್ಯಸಾಧ್ಯತಾ ವರದಿ (Pre-Feasibility Report) ಈಗಾಗಲೇ ಹಸಿರು ನಿಶಾನೆ ನೀಡಿದೆ.&lt;/p&gt;&lt;h2&gt;ಮುಖ್ಯಮಂತ್ರಿ ಸೂಚನೆ: ವಿಸ್ತೃತ ಯೋಜನಾ ವರದಿ (DPR) ಸಿದ್ಧತೆಗೆ ಆದೇಶ&lt;/h2&gt;&lt;p&gt;ಈ ದಿಕ್ಸೂಚಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್&zwnj; ಅವರ ಮುಂದೆ ಈಗಾಗಲೇ ಸವಿವರವಾದ ಪ್ರಾತ್ಯಕ್ಷಿಕೆ (Presentation) ನೀಡಿದ್ದಾರೆ. ಪೂರ್ವ ಕಾರ್ಯಸಾಧ್ಯತಾ ವರದಿಯಲ್ಲಿ ಯೋಜನೆ ಅನುಷ್ಠಾನ ಸಾಧ್ಯ ಎಂದು ಸ್ಪಷ್ಟತೆ ಸಿಕ್ಕಿರುವ ಹಿನ್ನೆಲೆಯಲ್ಲಿ, ತಕ್ಷಣವೇ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.&lt;/p&gt;&lt;p&gt;ಪ್ರಸ್ತಾವಿತ ಈ ವಿಮಾನ ನಿಲ್ದಾಣವು ಮಹಾರಾಷ್ಟ್ರದ ಪ್ರಮುಖ ಯೋಜನೆಯಾದ 'ವಾಧ್ವಾನ್&zwnj; ಬಂದರು' (Wadhwan Port) ಅಭಿವೃದ್ಧಿಯ ಭಾಗವಾಗಿರಲಿದ್ದು, ಇದರ ಸಂಪೂರ್ಣ ಮೇಲುಸ್ತುವಾರಿಯನ್ನು ಮಹಾರಾಷ್ಟ್ರ ಏರ್ಪೋರ್ಟ್&zwnj; ಡೆವಲಪ್&zwnj;ಮೆಂಟ್&zwnj; ಕಾರ್ಪೊರೇಷನ್&zwnj; (MADC) ವಹಿಸಿಕೊಳ್ಳಲಿದೆ.&lt;/p&gt;&lt;h2&gt;ಸಾರಿಗೆ ಸಂಪರ್ಕದ ಮಹಾಸಂಗಮ: ಬುಲೆಟ್ ಟ್ರೈನ್ ಹಾಗೂ ಸೀ ಲಿಂಕ್ ಹತ್ತಿರದಲ್ಲೇ ಲಭ್ಯ&lt;/h2&gt;&lt;p&gt;ಈ ಆಫ್&zwnj;ಶೋರ್&zwnj; ಏರ್ಪೋರ್ಟ್&zwnj; ಕೇವಲ ವಿಮಾನ ನಿಲ್ದಾಣವಷ್ಟೇ ಅಲ್ಲದೆ, ಭವಿಷ್ಯದ ಅತ್ಯಾಧುನಿಕ ಸಾರಿಗೆ ಸಂಪರ್ಕದ ಕೇಂದ್ರಬಿಂದುವಾಗಲಿದೆ. ಪ್ರಸ್ತಾವಿತ ವಿಮಾನ ನಿಲ್ದಾಣವು ಉತ್ತನ್&zwnj;-ವಿರಾರ್&zwnj; ಸೀ ಲಿಂಕ್&zwnj;ನಿಂದ ಕೇವಲ 4.75 ಕಿ.ಮೀ. ದೂರದಲ್ಲಿದೆ. ಭವಿಷ್ಯದಲ್ಲಿ ಈ ಸೀ ಲಿಂಕ್&zwnj; ಅಭಿವೃದ್ಧಿಗೊಂಡರೆ, ವಿಮಾನ ನಿಲ್ದಾಣಕ್ಕೆ ನೇರ ಮತ್ತು ತಡೆರಹಿತ ರಸ್ತೆ ಸಂಪರ್ಕ ಸಿಗಲಿದೆ.&lt;/p&gt;&lt;p&gt;ಬುಲೆಟ್ ಟ್ರೈನ್ ಲಾಭ: ದೇಶದ ಹೆಮ್ಮೆಯ ಮುಂಬೈ-ಅಹಮದಾಬಾದ್&zwnj; ಬುಲೆಟ್&zwnj; ಟ್ರೈನ್&zwnj; ಯೋಜನೆಯು ಸಹ ಇದೇ ಸೀ ಲಿಂಕ್&zwnj;ನ ಸಮೀಪದಲ್ಲೇ ಹಾದುಹೋಗುವುದರಿಂದ, ಪ್ರಯಾಣಿಕರಿಗೆ ಅದ್ಭುತ ಮಲ್ಟಿ-ಮೋಡಲ್ ಸಾರಿಗೆ ವ್ಯವಸ್ಥೆ ಸಿಗಲಿದೆ. ಈ ವಿಮಾನ ನಿಲ್ದಾಣವು ಬೃಹತ್ ಗಾತ್ರದ ವಿಮಾನಗಳ ಸುಗಮ ಕಾರ್ಯಾಚರಣೆಗಾಗಿ ಎರಡು ರನ್&zwnj;ವೇಗಳನ್ನು ಹೊಂದಿರಲಿದೆ.&lt;/p&gt;&lt;h2&gt;ಮುಂಬೈ ಮೇಲಿನ ಒತ್ತಡಕ್ಕೆ ಮುಕ್ತಿ: 2050ರ ಭವಿಷ್ಯದ ಯೋಜನೆ&lt;/h2&gt;&lt;p&gt;ಪ್ರಸ್ತುತ ಮುಂಬೈನಲ್ಲಿರುವ ಎರಡು ವಿಮಾನ ನಿಲ್ದಾಣಗಳು ಅತಿಯಾದ ಪ್ರಯಾಣಿಕರ ದಟ್ಟಣೆಯನ್ನು ಎದುರಿಸುತ್ತಿವೆ. ಕೋರೆ ಬೀಚ್&zwnj;ನಲ್ಲಿ ನಿರ್ಮಾಣವಾಗಲಿರುವ ಈ ಹೊಸ ಏರ್&zwnj;ಪೋರ್ಟ್, 2050ರ ವೇಳೆಗೆ ಮುಂಬೈನ ವಾಯು ಸಾರಿಗೆ ಮೇಲಿನ ಒತ್ತಡವನ್ನು ಗಣನೀಯವಾಗಿ ತಗ್ಗಿಸಲಿದೆ. ಈ ಬೃಹತ್ ನಿಲ್ದಾಣವು ವಾರ್ಷಿಕವಾಗಿ ಬರೊಬ್ಬರಿ 90 ದಶಲಕ್ಷ (9 ಕೋಟಿ) ಪ್ರಯಾಣಿಕರನ್ನು ನಿರ್ವಹಿಸುವ ಬೃಹತ್ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;h2&gt;ಏನಿದು &lsquo;ಕಡಲಲ್ಲಿನ ವಿಮಾನ ನಿಲ್ದಾಣ&rsquo; (Offshore Airport)?&lt;/h2&gt;&lt;p&gt;ಸಾಮಾನ್ಯವಾಗಿ ನಾವು ನೋಡುವ ವಿಮಾನ ನಿಲ್ದಾಣಗಳು ಪ್ರಕೃತಿ ಸಹಜವಾದ ಭೂಮಿಯ ಮೇಲಿರುತ್ತವೆ. ಆದರೆ, ಭೂಮಿಯ ಕೊರತೆ ಇರುವ ಹಾಗೂ ದಟ್ಟಣೆ ಹೆಚ್ಚಿರುವ ಕರಾವಳಿ ನಗರಗಳಲ್ಲಿ ಸಮುದ್ರದ ಮಧ್ಯೆ ಕೃತಕ ದ್ವೀಪಗಳನ್ನು (Artificial Islands) ನಿರ್ಮಿಸಿ, ಅಥವಾ ಸಮುದ್ರದ ಭಾಗವನ್ನು ವಶಪಡಿಸಿಕೊಂಡು (Reclamation) ಅಲ್ಲಿ ರನ್&zwnj;ವೇ ಹಾಗೂ ಟರ್ಮಿನಲ್&zwnj;ಗಳನ್ನು ನಿರ್ಮಿಸಲಾಗುತ್ತದೆ. ಇದನ್ನೇ ಆಫ್&zwnj;ಶೋರ್&zwnj; ಅಥವಾ ಕಡಲಲ್ಲಿನ ವಿಮಾನ ನಿಲ್ದಾಣ ಎನ್ನಲಾಗುತ್ತದೆ. ಜಪಾನ್&zwnj;ನ ಕನ್ಸಾಯ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಹಾಗೂ ಹಾಂಗ್ ಕಾಂಗ್ ಏರ್ಪೋರ್ಟ್&zwnj;ಗಳು ಇದಕ್ಕೆ ಜಾಗತಿಕ ಉದಾಹರಣೆಗಳಾಗಿದ್ದು, ಈಗ ಭಾರತದಲ್ಲೂ ಇಂತಹದ್ದೇ ಅದ್ಭುತ ಸೃಷ್ಟಿಯಾಗಲಿದೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/india-s-first-offshore-airport-coming-up-near-mumbai-palghar-kore-beach-gdp/articleshow-6kp9ksm"/>
        </item>
        <item>
            <title><![CDATA[Mangalsutra Pendant: ಕಪ್ಪು ಮಣಿಗಳ ಜೊತೆ ಧರಿಸಬಹುದಾದ 5 ಫ್ಯಾನ್ಸಿ ಮಾಂಗಲ್ಯ ಪೆಂಡೆಂಟ್ ಡಿಸೈನ್]]></title>
            <link>https://kannada.asianetnews.com/webstories/fashion/5-stylish-mangalsutra-pendant-ideas-for-a-modern-look-gvd-gghk40e</link>
            <guid isPermaLink="true">https://kannada.asianetnews.com/webstories/fashion/5-stylish-mangalsutra-pendant-ideas-for-a-modern-look-gvd-gghk40e</guid>
            <pubDate>Tue, 30 Jun 2026 00:28:19 +0530</pubDate>
            <description><![CDATA[&lt;p&gt;Mangalsutra Pendant: ಮಾಂಗಲ್ಯವು ವಿವಾಹಿತ ಮಹಿಳೆಯ ಸೌಭಾಗ್ಯದ ಸಂಕೇತ. ನಿಮ್ಮ ಸೌಭಾಗ್ಯದ ಸಂಕೇತವಾದ ಮಾಂಗಲ್ಯ ಸರಕ್ಕೆ ಹೊಸ ಮೆರುಗು ನೀಡಲು ಇಲ್ಲಿವೆ ಕೆಲವು ಸುಂದರವಾದ ಪೆಂಡೆಂಟ್ ವಿನ್ಯಾಸಗಳು. ಇವುಗಳನ್ನು ನೀವು ಚೈನ್, ಮಣಿಗಳು ಅಥವಾ ದಾರದ ಜೊತೆಗೂ ಧರಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw451rr527b6wabj2f03bvcm,imgname-stylish-mangalsutra-pendant-1782550946565.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/5-stylish-mangalsutra-pendant-ideas-for-a-modern-look-gvd-gghk40e"/>
        </item>
        <item>
            <title><![CDATA[Silver Bangles: ಪ್ರತಿಯೊಂದು ಡ್ರೆಸ್‌ಗೂ ಸಖತ್ ಲುಕ್ ನೀಡುವ ಸಿಲ್ವರ್ ಬಳೆಗಳ ಲೇಟೆಸ್ಟ್ ಡಿಸೈನ್ಸ್]]></title>
            <link>https://kannada.asianetnews.com/webstories/fashion/latest-silver-bangle-designs-to-elevate-your-style-gvd-rsmdyyk</link>
            <guid isPermaLink="true">https://kannada.asianetnews.com/webstories/fashion/latest-silver-bangle-designs-to-elevate-your-style-gvd-rsmdyyk</guid>
            <pubDate>Mon, 29 Jun 2026 23:45:31 +0530</pubDate>
            <description><![CDATA[&lt;p&gt;Silver Bangles: ನಿಮ್ಮ ಪ್ರತಿಯೊಂದು ಉಡುಪನ್ನೂ ಸ್ಟೈಲಿಶ್ ಮತ್ತು ಎಲಿಗೆಂಟ್ ಆಗಿ ಕಾಣುವಂತೆ ಮಾಡಬೇಕಾ? ಹಾಗಿದ್ರೆ ಸಿಲ್ವರ್ ಬಳೆಗಳು ಒಂದು ಅದ್ಭುತ ಆಯ್ಕೆ. ಮಿನಿಮಲ್, ಸ್ಟೋನ್ ವರ್ಕ್, ಆಕ್ಸಿಡೈಸ್ಡ್ ಮತ್ತು ಕಫ್ ಸ್ಟೈಲ್&zwnj;ನಂತಹ ಲೇಟೆಸ್ಟ್ ಡಿಸೈನ್&zwnj;ಗಳು ನಿಮ್ಮ ಅಂದವನ್ನು ಹೆಚ್ಚಿಸುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw49t8ehtt17v3wr5451v6b6,imgname-sliver-bangals-8-1782555943377.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/latest-silver-bangle-designs-to-elevate-your-style-gvd-rsmdyyk"/>
        </item>
        <item>
            <title><![CDATA[ದೇಹಕ್ಕೆ ಪ್ರೋಟೀನ್‌ ಬೇಕೆಂದು ಊರ್ತುಂಬಾ ಸುತ್ತಬೇಡಿ, ಮನೆ ಟೇರಸ್ ಮೇಲೆಯೇ ಬೆಳೆಸಿ ಪೌಷ್ಠಿಕ ಗೆಣಸು!]]></title>
            <link>https://kannada.asianetnews.com/gallery/life/how-to-grow-sweet-potato-on-terrace-in-grow-bags-simple-tips-fyagar9</link>
            <guid isPermaLink="true">https://kannada.asianetnews.com/gallery/life/how-to-grow-sweet-potato-on-terrace-in-grow-bags-simple-tips-fyagar9</guid>
            <pubDate>Mon, 29 Jun 2026 23:17:15 +0530</pubDate>
            <description><![CDATA[&lt;p&gt;ನಮ್ಮ ಮನೆಯ ಟೆರೆಸ್ ಮೇಲೆ ಗ್ರೋ ಬ್ಯಾಗ್&zwnj;ಗಳಲ್ಲಿ ಸಿಹಿ ಗೆಣಸು ಸುಲಭವಾಗಿ ಬೆಳೆಸಬಹುದು. ಆರೋಗ್ಯಕರ ಬಳ್ಳಿಗಳನ್ನು ನೆಟ್ಟು, ಸರಿಯಾದ ಆರೈಕೆ ಮಾಡಿದರೆ, ಸುಮಾರು 3.5 ರಿಂದ 4 ತಿಂಗಳೊಳಗೆ ಗೆಣಸು ಕೊಯ್ಲಿಗೆ ಸಿದ್ಧವಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyyjm9x32kth60yq4scbv3a,imgname-new-project---2026-05-31t172752.303-1780228903229.jpg" type="image/jpeg" height="390" width="690"/>
            <content:encoded><![CDATA[&lt;p&gt;ನಮ್ಮ ಮನೆಯ ಟೆರೆಸ್ ಮೇಲೆ ಗ್ರೋ ಬ್ಯಾಗ್&zwnj;ಗಳಲ್ಲಿ ಸಿಹಿ ಗೆಣಸು ಸುಲಭವಾಗಿ ಬೆಳೆಸಬಹುದು. ಆರೋಗ್ಯಕರ ಬಳ್ಳಿಗಳನ್ನು ನೆಟ್ಟು, ಸರಿಯಾದ ಆರೈಕೆ ಮಾಡಿದರೆ, ಸುಮಾರು 3.5 ರಿಂದ 4 ತಿಂಗಳೊಳಗೆ ಗೆಣಸು ಕೊಯ್ಲಿಗೆ ಸಿದ್ಧವಾಗುತ್ತದೆ.&lt;/p&gt;&lt;img&gt;&lt;p&gt;ನಮ್ಮ ಮನೆಯ ಟೆರೆಸ್ ಮೇಲಿನ ಗ್ರೋ ಬ್ಯಾಗ್&zwnj;ಗಳಲ್ಲಿ ಸಿಹಿ ಗೆಣಸನ್ನು ತುಂಬಾ ಸುಲಭವಾಗಿ ಬೆಳೆಸಬಹುದು. ಇದಕ್ಕೆ ಹೆಚ್ಚು ಆರೈಕೆ ಬೇಕಿಲ್ಲ ಮತ್ತು ರೋಗ ನಿರೋಧಕ ಶಕ್ತಿಯೂ ಹೆಚ್ಚು.&lt;/p&gt;&lt;img&gt;&lt;p&gt;ಗೆಡ್ಡೆಗಳು ಮಣ್ಣಿನೊಳಗೆ ಇಳಿದು ಬೆಳೆಯುವುದರಿಂದ 16x16 ಇಂಚು ಅಥವಾ ಅದಕ್ಕಿಂತ ದೊಡ್ಡ ಗಾತ್ರದ ಬ್ಯಾಗ್&zwnj;ಗಳನ್ನು ಬಳಸಿ. ಗೆಡ್ಡೆ ಚೆನ್ನಾಗಿ ಕೆಳಗೆ ಬೆಳೆಯಲು ಮಣ್ಣು ಯಾವಾಗಲೂ ಸಡಿಲವಾಗಿರಬೇಕು.&lt;/p&gt;&lt;img&gt;&lt;p&gt;ಮೇಲ್ಮಣ್ಣು, ಕೊಟ್ಟಿಗೆ ಗೊಬ್ಬರ ಮತ್ತು ತೆಂಗಿನ ನಾರಿನ ಪುಡಿಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಬ್ಯಾಗ್&zwnj;ನ ಮುಕ್ಕಾಲು ಭಾಗದಷ್ಟು ತುಂಬಿಸಿ. ನರ್ಸರಿಯಿಂದ ತಂದ ಆರೋಗ್ಯಕರ ಬಳ್ಳಿಗಳನ್ನು ನೆಡಬೇಕು.&lt;/p&gt;&lt;img&gt;&lt;p&gt;ಬಳ್ಳಿಗಳನ್ನು 20-30 ಸೆಂಟಿಮೀಟರ್ ಉದ್ದಕ್ಕೆ ಕತ್ತರಿಸಿಕೊಳ್ಳಿ. ಪ್ರತಿ ತುಂಡಿನಲ್ಲಿ ಸುಮಾರು 3-4 ಗಣ್ಣುಗಳು (nodes) ಇರುವಂತೆ ನೋಡಿಕೊಳ್ಳಿ.&lt;/p&gt;&lt;img&gt;&lt;p&gt;ಬಳ್ಳಿಯ ಕೆಳಭಾಗದ 1-2 ಎಲೆಗಳನ್ನು ತೆಗೆದುಹಾಕಿ. ಎರಡು ಗಣ್ಣುಗಳು ಮಣ್ಣಿನೊಳಗೆ ಹೋಗುವಂತೆ ಬಳ್ಳಿಯನ್ನು ನೆಡಬೇಕು.&lt;/p&gt;&lt;p&gt;ಒಂದು ದೊಡ್ಡ ಗ್ರೋ ಬ್ಯಾಗ್&zwnj;ನಲ್ಲಿ ಗರಿಷ್ಠ ಎರಡರಿಂದ ಮೂರು ಬಳ್ಳಿಗಳನ್ನು ಮಾತ್ರ ನೆಡಿ. ಸಿಹಿ ಗೆಣಸಿನ ಬೆಳೆಗೆ ಚೆನ್ನಾಗಿ ಸೂರ್ಯನ ಬೆಳಕು ಬೇಕು.&lt;/p&gt;&lt;img&gt;&lt;p&gt;ಬಳ್ಳಿಗಳು ಚಿಗುರುವವರೆಗೆ ಆರಂಭದಲ್ಲಿ ಪ್ರತಿದಿನ ನೀರು ಹಾಕಿ. ಬಳ್ಳಿಗಳು ಹಬ್ಬಿದ ನಂತರ, ಮಣ್ಣು ಒಣಗಿದಾಗ ಮಾತ್ರ (2-3 ದಿನಗಳಿಗೊಮ್ಮೆ) ನೀರು ಹಾಕಿದರೆ ಸಾಕು.&lt;/p&gt;&lt;img&gt;&lt;p&gt;ಟೆರೆಸ್ ಮೇಲೆ ಬೆಳೆಸುವಾಗ ಬಳ್ಳಿಗಳು ತುಂಬಾ ಉದ್ದವಾಗಿ ಹಬ್ಬಲು ಬಿಡಬೇಡಿ. ಬಳ್ಳಿಗಳನ್ನು ಸುರುಳಿ ಸುತ್ತಿ ಗ್ರೋ ಬ್ಯಾಗ್ ಮೇಲೆಯೇ ಅಂದವಾಗಿ ಇಡುವುದು ಉತ್ತಮ.&lt;/p&gt;&lt;img&gt;&lt;p&gt;ಬಳ್ಳಿ ನೆಟ್ಟ 3.5 ರಿಂದ 4 ತಿಂಗಳೊಳಗೆ ಸಿಹಿ ಗೆಣಸು ಕೊಯ್ಲಿಗೆ ಸಿದ್ಧವಾಗುತ್ತದೆ. ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಇದರ ಸ್ಪಷ್ಟ ಸೂಚನೆ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/life/how-to-grow-sweet-potato-on-terrace-in-grow-bags-simple-tips-fyagar9"/>
        </item>
        <item>
            <title><![CDATA[ಆರೋಗ್ಯಕ್ಕೆ ಬೆಸ್ಟ್, ಬೆಳಗಿನ ತಿಂಡಿಗೆ ಓಟ್ಸ್;  ತಿನ್ನೋ ವಿಧಾನ ಹೇಗೆ ಗೊತ್ತಾ?]]></title>
            <link>https://kannada.asianetnews.com/webstories/food/health-benefits-of-eating-oats-for-breakfast-wc92u7g</link>
            <guid isPermaLink="true">https://kannada.asianetnews.com/webstories/food/health-benefits-of-eating-oats-for-breakfast-wc92u7g</guid>
            <pubDate>Mon, 29 Jun 2026 21:45:36 +0530</pubDate>
            <description><![CDATA[ಬೆಳಗಿನ ಉಪಾಹಾರಕ್ಕೆ ಓಟ್ಸ್&zwnj;ನಿಂದ ಮಾಡಿದ ತಿಂಡಿಗಳನ್ನು ತಿನ್ನುವುದನ್ನು ರೂಢಿ ಮಾಡಿಕೊಳ್ಳಿ. ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j4kg2kc70969m7sft82b0wmb,imgname-fotojet--15-.jpg" type="image/jpeg" height="390" width="690"/>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/food/health-benefits-of-eating-oats-for-breakfast-wc92u7g"/>
        </item>
        <item>
            <title><![CDATA[Garden Safety: ಮಳೆಗಾಲದಲ್ಲಿ ಹಾವುಗಳ ಕಾಟವೇ? ಈ ಗಿಡಗಳು ಮತ್ತು ಪರಿಸ್ಥಿತಿಗಳೇ ಕಾರಣ!]]></title>
            <link>https://kannada.asianetnews.com/life/garden-safety-tips-to-keep-snakes-away-during-rainy-season-gvd/articleshow-78mn6q0</link>
            <guid isPermaLink="true">https://kannada.asianetnews.com/life/garden-safety-tips-to-keep-snakes-away-during-rainy-season-gvd/articleshow-78mn6q0</guid>
            <pubDate>Mon, 29 Jun 2026 21:35:52 +0530</pubDate>
            <description><![CDATA[&lt;p&gt;Snake Around Plants: ಮಳೆಗಾಲದಲ್ಲಿ ಮನೆ, ಬಾಲ್ಕನಿ ಅಥವಾ ಗಾರ್ಡನ್&zwnj;ನಲ್ಲಿ ಹಾವುಗಳು ಕಾಣಿಸುತ್ತಿವೆಯೇ? ಯಾವ ಗಿಡಗಳು ಮತ್ತು ಪರಿಸ್ಥಿತಿಗಳಿಂದ ಹಾವುಗಳು ಬರುತ್ತವೆ, ಹಾವುಗಳನ್ನು ದೂರವಿಡಲು ಏನು ಮಾಡಬೇಕು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwa1z73kmzee8p555nwes57r,imgname-cgh-1782749043827.png" type="image/jpeg" height="390" width="690"/>
            <content:encoded><![CDATA[&lt;p&gt;ಮಳೆಗಾಲದಲ್ಲಿ ನಿಮ್ಮ ಮನೆ, ಬಾಲ್ಕನಿ ಅಥವಾ ಗಾರ್ಡನ್ ಸುತ್ತಮುತ್ತ ಹಾವುಗಳು ಕಾಣಿಸಿಕೊಳ್ಳುತ್ತಿವೆಯೇ? ಕೆಲವು ಗಿಡಗಳು ಹಾವುಗಳನ್ನು ಆಕರ್ಷಿಸಬಹುದು. ಇದಕ್ಕೆ ಕಾರಣ ಏನು ಮತ್ತು ಹಾವುಗಳಿಂದ ದೂರವಿರಲು ಸುಲಭವಾದ ಉಪಾಯಗಳೇನು? ಮಳೆಗಾಲ ಬಂತು ಅಂದ್ರೆ ಸಾಕು, ಕೆಲವರ ಮನೆ, ಬಾಲ್ಕನಿ ಅಥವಾ ಅಂಗಳದಲ್ಲಿ ಹಾವುಗಳು ಕಾಣಿಸಿಕೊಳ್ಳೋದು ಕಾಮನ್.&lt;/p&gt;&lt;p&gt;ಇದ್ರಿಂದ, ಕೆಲವೊಂದು ಗಿಡಗಳು ಹಾವುಗಳನ್ನು ಆಕರ್ಷಿಸುತ್ತವೆ ಅಂತ ಜನ ಅಂದುಕೊಂಡಿದ್ದಾರೆ. ಆದರೆ, ಯಾವುದೇ ಗಿಡದ ವಾಸನೆಗೆ ಹಾವುಗಳು ಆಕರ್ಷಿತವಾಗುತ್ತವೆ ಅನ್ನೋದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ನಿಜ ಹೇಳಬೇಕು ಅಂದ್ರೆ, ಹಾವುಗಳು ದಟ್ಟವಾದ ಪೊದೆ, ತೇವಾಂಶ, ತಂಪು ಮತ್ತು ಆಹಾರ ಸಿಗುವ ಜಾಗಗಳಿಗೆ ಬರುತ್ತವೆ. ಯಾವ ಗಿಡಗಳು ಅಥವಾ ಗಾರ್ಡನ್&zwnj;ನ ಯಾವ ಪರಿಸ್ಥಿತಿಗಳಿಂದ ಹಾವುಗಳು ಕಾಣಿಸಿಕೊಳ್ಳಬಹುದು ಅಂತ ನೋಡೋಣ.&lt;/p&gt;&lt;p&gt;&lt;strong&gt;ದಟ್ಟವಾದ ಪೊದೆಗಳು&lt;/strong&gt;&lt;/p&gt;&lt;p&gt;ಡುರಾಂಟಾ, ಬಾಕ್ಸ್&zwnj;ವುಡ್, ಫೈಕಸ್&zwnj;ನಂತಹ ದಟ್ಟವಾದ ಗಿಡಗಳು ಹಾವುಗಳಿಗೆ ಅಡಗಿಕೊಳ್ಳಲು ಸುರಕ್ಷಿತ ಜಾಗ ಕೊಡುತ್ತವೆ. ಈ ಗಿಡಗಳ ಕೆಳಗೆ ತೇವಾಂಶ ಮತ್ತು ತಂಪು ಇರುತ್ತದೆ. ಅಷ್ಟೇ ಅಲ್ಲ, ಇಲ್ಲಿ ಹಲ್ಲಿ, ಕಪ್ಪೆ ಮತ್ತು ಇಲಿಗಳು ಸುಲಭವಾಗಿ ಸಿಗುತ್ತವೆ. ಇವುಗಳನ್ನು ಬೇಟೆಯಾಡಲು ಹಾವುಗಳು ಇಲ್ಲಿಗೆ ಬರುತ್ತವೆ.&lt;img&gt;&lt;/p&gt;&lt;p&gt;&lt;strong&gt;ಬಿದಿರಿನ ಪೊದೆಗಳು (Bamboo)&lt;/strong&gt;&lt;/p&gt;&lt;p&gt;ಮನೆ ಹತ್ತಿರ ದಟ್ಟವಾದ ಬಿದಿರು ಬೆಳೆದಿದ್ದರೆ, ಅದರ ಸುತ್ತಮುತ್ತ ಹಾವುಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಇದಕ್ಕೆ ಕಾರಣ, ಬಿದಿರಿನ ದಟ್ಟವಾದ ನೆರಳು, ತಂಪಾದ ವಾತಾವರಣ ಮತ್ತು ಒಣ ಎಲೆಗಳ ರಾಶಿ. ಇವೆಲ್ಲವೂ ಹಾವುಗಳಿಗೆ ಅಡಗಿಕೊಳ್ಳಲು ಜಾಗ ಮಾಡಿಕೊಡುತ್ತವೆ.&lt;/p&gt;&lt;p&gt;&lt;strong&gt;ಉದ್ದ ಮತ್ತು ಕತ್ತರಿಸದ ಹುಲ್ಲು&lt;/strong&gt;&lt;/p&gt;&lt;p&gt;ನಿಮ್ಮ ಲಾನ್ ಅಥವಾ ಅಂಗಳದಲ್ಲಿ ಹುಲ್ಲು ತುಂಬಾ ಉದ್ದ ಬೆಳೆದಿದ್ದರೆ, ಅದನ್ನು ಆಗಾಗ ಕತ್ತರಿಸುತ್ತಾ ಇರಿ. ಉದ್ದವಾದ ಹುಲ್ಲು ಹಾವುಗಳಿಗೆ ಅಡಗಿಕೊಳ್ಳಲು ಮತ್ತು ಬೇಟೆಯಾಡಲು ಸೇಫ್ ಜಾಗ ಕೊಡುತ್ತದೆ.&lt;/p&gt;&lt;p&gt;&lt;strong&gt;ಹಣ್ಣಿನ ಗಿಡಗಳು&lt;/strong&gt;&lt;/p&gt;&lt;p&gt;ಪೇರಳೆ, ಬಾಳೆ, ಪಪ್ಪಾಯಿಯಂತಹ ಹಣ್ಣಿನ ಗಿಡಗಳ ಸುತ್ತಮುತ್ತ ಇಲಿ, ಅಳಿಲು ಮತ್ತು ಇತರ ಸಣ್ಣ ಜೀವಿಗಳು ಹೆಚ್ಚಾಗಿ ಬರುತ್ತವೆ. ಇದೇ ಪ್ರಾಣಿಗಳನ್ನು ಬೇಟೆಯಾಡಲು ಹಾವುಗಳು ಕೂಡ ಆ ಜಾಗಕ್ಕೆ ಬರುತ್ತವೆ.&lt;/p&gt;&lt;p&gt;&lt;strong&gt;ಗಾರ್ಡನ್ ಸುರಕ್ಷಿತವಾಗಿಡಲು ಹೀಗೆ ಮಾಡಿ&lt;/strong&gt;-ಪೊದೆಗಳನ್ನು ನಿಯಮಿತವಾಗಿ ಕತ್ತರಿಸಿ.-ಲಾನ್&zwnj;ನಲ್ಲಿರುವ ಹುಲ್ಲನ್ನು ಆಗಾಗ ಕತ್ತರಿಸುತ್ತಾ ಇರಿ.-ಒಣ ಎಲೆಗಳು ಮತ್ತು ಕಟ್ಟಿಗೆಗಳ ರಾಶಿ ಹಾಕಬೇಡಿ.-ಇಲಿಗಳನ್ನು ಓಡಿಸಲು ಸ್ಪ್ರೇ ಬಳಸಿ.&lt;/p&gt;&lt;p&gt;&lt;strong&gt;ಮನೆಯ ಸುತ್ತಮುತ್ತ ಸ್ವಚ್ಛತೆ ಮತ್ತು ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳಿ.&lt;/strong&gt;&lt;/p&gt;&lt;p&gt;ತುಳಸಿ, ಲೆಮನ್&zwnj;ಗ್ರಾಸ್, ಚೆಂಡು ಹೂವು ಅಥವಾ ಸ್ನೇಕ್ ಪ್ಲಾಂಟ್&zwnj;ನಂತಹ ಗಿಡಗಳು ಹಾವುಗಳನ್ನು ದೂರ ಇಡುತ್ತವೆ ಅಂತ ಹಲವರು ನಂಬುತ್ತಾರೆ. ಆದರೆ, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಹಾಗಾಗಿ, ಕೇವಲ ಈ ಗಿಡಗಳನ್ನು ನಂಬಿಕೊಳ್ಳುವ ಬದಲು, ಸ್ವಚ್ಛತೆ ಮತ್ತು ಗಾರ್ಡನ್ ನಿರ್ವಹಣೆ ಮೇಲೆ ಹೆಚ್ಚು ಗಮನ ಕೊಡಿ.&lt;/p&gt;&lt;p&gt;&amp;nbsp;&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಅತಿ ಹೆಚ್ಚು ಕೇಳಲಾಗುವ ಪ್ರಶ್ನೆಗಳು&lt;/strong&gt;&lt;/h2&gt;&lt;p&gt;&lt;strong&gt;1. ಯಾವುದೇ ಗಿಡದ ವಾಸನೆಗೆ ಹಾವುಗಳು ಆಕರ್ಷಿತವಾಗುತ್ತವೆಯೇ?:&lt;/strong&gt; ಸಾಮಾನ್ಯವಾಗಿ ಹಾವುಗಳು ಅಡಗಿಕೊಳ್ಳುವ ಜಾಗ ಮತ್ತು ಬೇಟೆಗಾಗಿ ಹುಡುಕಾಟ ನಡೆಸುತ್ತವೆ.&lt;/p&gt;&lt;p&gt;&lt;strong&gt;2. ಮಳೆಗಾಲದಲ್ಲಿ ಹಾವುಗಳು ಯಾಕೆ ಹೆಚ್ಚು ಕಾಣಿಸಿಕೊಳ್ಳುತ್ತವೆ?: &lt;/strong&gt;ಮಳೆಗಾಲದಲ್ಲಿ ಹುತ್ತಗಳಿಗೆ ನೀರು ತುಂಬುವುದರಿಂದ, ತೇವಾಂಶ ಹೆಚ್ಚಾಗುವುದರಿಂದ ಮತ್ತು ಆಹಾರ ಹುಡುಕುತ್ತಾ ಹಾವುಗಳು ಹೆಚ್ಚು ಹೊರಗೆ ಬರುತ್ತವೆ.&lt;/p&gt;&lt;p&gt;&lt;strong&gt;3. ಮನೆ ಸುತ್ತಮುತ್ತ ಹಾವುಗಳು ಬರದಂತೆ ತಡೆಯುವುದು ಹೇಗೆ?: &lt;/strong&gt;ಹುಲ್ಲನ್ನು ಚಿಕ್ಕದಾಗಿಡಿ, ಪೊದೆಗಳನ್ನು ಕತ್ತರಿಸಿ, ಒಣ ಎಲೆಗಳನ್ನು ತೆಗೆದುಹಾಕಿ ಮತ್ತು ಮನೆಯ ಸುತ್ತ ಇಲಿಗಳು ಬರದಂತೆ ನೋಡಿಕೊಳ್ಳಿ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/life/garden-safety-tips-to-keep-snakes-away-during-rainy-season-gvd/articleshow-78mn6q0"/>
        </item>
        <item>
            <title><![CDATA[Trisha Krishnan Honey: ತ್ರಿಷಾಗೆ 'ಹನಿ' ಎಂದು ಕರೆಯೋದು ಯಾರು? ಅವರಾ or ಇವರಾ? ನಿಮ್ಮ ಊಹೆ ಸರಿನಾ, ತಪ್ಪಾ?]]></title>
            <link>https://kannada.asianetnews.com/entertainment/who-calls-trisha-krishan-as-honey-what-she-herself-revealed-in-kapil-sharma-show-to-know-here/articleshow-r8b3fnt</link>
            <guid isPermaLink="true">https://kannada.asianetnews.com/entertainment/who-calls-trisha-krishan-as-honey-what-she-herself-revealed-in-kapil-sharma-show-to-know-here/articleshow-r8b3fnt</guid>
            <pubDate>Mon, 29 Jun 2026 20:42:40 +0530</pubDate>
            <description><![CDATA[&lt;p&gt;ಒಂದು ಸಂಗತಿಯನ್ನು ತ್ರಿಷಾ ಮುಚ್ಚುಮರೆ ಇಲ್ಲದೇ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ? ಆ ಒಬ್ಬ ವ್ಯಕ್ತಿ, ತ್ರಿಷಾ ಜೀವನದ ಮಹಾನ್ ವ್ಯಕ್ತಿ ಮಾತ್ರ ಅವರನ್ನು 'ಹನಿ' ಎಂದು ಕರೆಯುತ್ತಾರೆ. ಆದರೆ ಈಗ ಬಹಳಷ್ಟು ಜನ, ಅಂದರೆ ತ್ರಿಷಾ ಸ್ನೇಹಿತರ ಬಳಗ ಅವರನ್ನು ಮತ್ತೊಂದು ಹೆಸರಿನಿಂದ ಕರೆಯುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9yzzjs15p9heybjc6mmkrt,imgname-trisha-krishnan-1782745923160.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತ್ರಿಷಾರನ್ನು ಹನಿ ಅಂತ ಕರೆಯೋದು ಯಾರು ಗೊತ್ತಾ?&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಸುಂದರಿ ನಟಿ ತ್ರಿಷಾ ಕೃಷ್ಣನ್ (Trisha Krishnan) ಅಂದರೆ ಯಾರಿಗೆ ಗೊತ್ತಿಲ್ಲ? ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸೌತ್ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ತ್ರಿಶಾ, ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಸೆನ್ಸೇಷನ್ ಸೃಷ್ಟಿಸುತ್ತಿರುವ ನಟಿ. ಇತ್ತೀಚೆಗೆ ತಮಿಳುನಾಡು ಸಿಎಂ ಆಗಿರುವ ನಟ ದಳಪತಿ ವಿಜಯ್ ಅವರ ಆಪ್ತ ಸ್ನೇಹಿತೆ ಎಂದೇ ನಟಿ ತ್ರಿಷಾ ಅವರನ್ನು ಬಿಂಬಿಸಲಾಗುತ್ತಿದೆ. ಈ ವಿಷಯವನ್ನು ತ್ರಿಷಾ ಆಗಲಿ ಅಥವಾ ವಿಜಯ್ ಆಗಲೀ ಅಧಿಕೃತ ಎಂದು ಯಾವತ್ತೂ ದೃಢೀಕರಿಸಿಲ್ಲ. ಆದರೆ, ಅವರಿಬ್ಬರ ಆಪ್ತರು ಎನಿಸುವ ಒಡನಾಟ ಹಾಗೂ ವಿಜಯ್ ಪತ್ನಿ ಸಂಗೀತಾ ಕೊಟ್ಟಿರುವ ಡಿವೋರ್ಸ್&zwnj; ಅರ್ಜಿ ವಿಜಯ್-ತ್ರಿಷಾ ಸಂಬಂಧಕ್ಕೆ ಪುಷ್ಟಿ ಕೊಡುವ ಸಂಗತಿ ಎಂದೇ ಎಲ್ಲರೂ ಭಾವಿಸಿದ್ದಾರೆ.&lt;/p&gt;&lt;h2&gt;ಗೆಸ್ ಮಾಡ್ತೀರಾ?&lt;/h2&gt;&lt;p&gt;ಅದಿರಲಿ, ನಟಿ ತ್ರಿಷಾ ಅವರಿಗೆ ಇನ್ನೊಂದು ಹೆಸರಿದೆ. ಅದು ಏನು ಗೊತ್ತಾ? ನಿಮಗೆ ಅಚ್ಚರಿ ಆಗಬಹುದು, ತ್ರಿಷಾರಿಗೆ 'ಹನಿ' ಎಂದು ಒಬ್ಬರು ಕರೆಯುತ್ತಾರೆ. ಯಾರು ಎಂದು ಕೆಲವರು ತಿಳಿದಿರಬಹುದು, ಕೆಲವರು ಗೆಸ್ ಮಾಡಬಹುದು. ಆದರೆ, ಬಹಳಷ್ಟು ತ್ರಿಷಾರನ್ನು 'Honey' ಎಂದು ಕರೆಯುವವರು 'ಅವರೇ' ಆಗಿರುತ್ತಾರೆ ಎಂದು ಅರ್ಥೈಸಬಹುದು. ಆದರೆ, ಈ ಸಂಗತಿಯನ್ನು ಸ್ವತಃ ನಟಿ ತ್ರಿಷಾ ಕೃಷ್ಣನ್ ಒಪ್ಪಿಕೊಂಡಿದ್ದಾರೆ. ಜೊತೆಗೆ, 'ಹೌದು' ಅವರು ನನ್ನನ್ನು 'ಹನಿ' ಎಂದು ಕರೆಯುತ್ತಾರೆ ಎಂದು ಕಪಲ್ ಶೋ ಶರ್ಮಾ ಶೋದಲ್ಲಿ ಎಲ್ಲರೆದುರು ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಜೊತೆಗೆ, ಇನ್ನೂ ಒಂದು ಸಂಗತಿಯನ್ನು ತ್ರಿಷಾ ಮುಚ್ಚುಮರೆ ಇಲ್ಲದೇ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ? ಆ ಒಬ್ಬ ವ್ಯಕ್ತಿ, ತ್ರಿಷಾ ಜೀವನದ ಮಹಾನ್ ವ್ಯಕ್ತಿ ಮಾತ್ರ ಅವರನ್ನು 'ಹನಿ' ಎಂದು ಕರೆಯುತ್ತಾರೆ. ಆದರೆ ಈಗ ಬಹಳಷ್ಟು ಜನ, ಅಂದರೆ ತ್ರಿಷಾ ಸ್ನೇಹಿತರ ಬಳಗ ಅವರನ್ನು ಮತ್ತೊಂದು ಹೆಸರಿನಿಮದ ಕರೆಯುತ್ತಾರೆ. ಅದು ಅಚ್ಚರಿ ಎನ್ನಿಸುವಂತಿದ್ದರೂ ನಿಜ. ಅದೇನು ಗೊತ್ತಾ?&lt;/p&gt;&lt;h3&gt;ಇದು ಅಚ್ಚರಿ, ಆದ್ರೂ ಸತ್ಯ!&lt;/h3&gt;&lt;p&gt;ಕಪಿಲ್ ಶೋದಲ್ಲಿ ಸ್ವತಃ ನಟಿ ತ್ರಿಷಾ ಹೇಳಿಕೊಂಡಂತೆ. ಅವರನ್ನು ಬಹಳಷ್ಟು ಆಪ್ತರು ಟ್ರಾಷ್ (Trash) ಎಂದು ಕರೆಯುತ್ತಾರೆ. ಆ ಶೋದಲ್ಲಿ ಎಲ್ಲರೂ ತ್ರಿಷಾ ಮಾತನ್ನು ಕೇಳಿ ನಕ್ಕಿದ್ದು, ಅಲ್ಲೇ ಇದ್ದ ನಟಿ ವಿಕ್ರಮ್ ಅವರು ತ್ರಿಷಾರನ್ನು ಕಾಲೆಳೆದಿದ್ದೂ ಆಯ್ತು. ಆದರೂ ಕೂಡ, ತ್ರಿಷಾ ಅವರು ಯಾವುದೇ ಸಂಕೋಷ ಇಲ್ಲದೇ, ಹೌದು ಇತ್ತೀಚೆಗೆ ನನ್ನ ಕ್ಲೋಸ್ ಸರ್ಕಲ್ ನನ್ನನ್ನು ಟ್ರಾಷ್ ಎಂದೇ ಕರೆಯುತ್ತಾರೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಹೌದು, ಈಗ ಮತ್ತೆ ಮೊದಲಿನ ವಿಷಯಕ್ಕೆ ಬರುವುದಾದರೆ.. ನಟಿ ತ್ರಿಷಾರನ್ನು 'ಹನಿ' ಎಂದು ಕರೆಯವುದು ಬೇರೆ ಯಾರೂ ಅಲ್ಲ, ಅವರ ಅಪ್ಪ (Father) ಅಂತ ಅವರೇ ಹೇಳಿದ್ದಾರೆ. ನನ್ನ ಅಪ್ಪ ನನ್ನನ್ನು ಹನಿ (Honey) ಎಂದೇ ಯಾವತ್ತೂ ಕರೆಯುತ್ತಿದ್ದರು ಎಂದಿದ್ದಾರೆ. ಇದು ನೀವು ಅಂದುಕೊಂಡಿದ್ದಕ್ಕಿಂತ ಭಿನ್ನವಾಗಿರಬಹುದು, ನಿಮಗೆ ಶಾಕ್ ಆಗಿರಬಹುದು. ಆದರೆ, ಇದೇ ಸತ್ಯ ಸಂಗತಿ. ತ್ರಿಷಾರನ್ನು ಹನಿ ಎಂದು ಕರೆಯುವುದು ಅವರ ಅಪ್ಪ ಮಾತ್ರ, ಬೇರೆ ಯಾರೂ ಅಲ್ಲ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/who-calls-trisha-krishan-as-honey-what-she-herself-revealed-in-kapil-sharma-show-to-know-here/articleshow-r8b3fnt"/>
        </item>
        <item>
            <title><![CDATA[ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಕೇಂದ್ರದ ತೀವ್ರ ಎಚ್ಚರಿಕೆ, ನೇಪಾಳದಲ್ಲಿ 52 ಭಾರತೀಯರು ತ್ರಿಶಂಕು ಸ್ಥಿತಿ!]]></title>
            <link>https://kannada.asianetnews.com/india-news/kailash-mansarovar-yatra-advisory-52-indians-stranded-in-nepal-mea-issues-strict-warning-gdp/articleshow-ssifufy</link>
            <guid isPermaLink="true">https://kannada.asianetnews.com/india-news/kailash-mansarovar-yatra-advisory-52-indians-stranded-in-nepal-mea-issues-strict-warning-gdp/articleshow-ssifufy</guid>
            <pubDate>Mon, 29 Jun 2026 20:40:16 +0530</pubDate>
            <description><![CDATA[ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಭಾರತೀಯರಿಗೆ ವಿದೇಶಾಂಗ ಸಚಿವಾಲಯವು ತುರ್ತು ಎಚ್ಚರಿಕೆ ನೀಡಿದೆ. ಅನಧಿಕೃತ ಪ್ರವಾಸ ಆಯೋಜಕರ ವಂಚನೆಗೆ ಒಳಗಾಗಿ, ಸೂಕ್ತ ದಾಖಲೆಗಳಿಲ್ಲದೆ ನೇಪಾಳದಲ್ಲಿ ಸಿಲುಕಿರುವ 52 ಯಾತ್ರಿಕರ ಸಂಕಷ್ಟದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಾತ್ರಿಕರು ಅಧಿಕೃತ ಮಾರ್ಗಗಳನ್ನೇ ಬಳಸುವಂತೆ ಮತ್ತು ಪ್ರಯಾಣದ ಮೊದಲು ಎಲ್ಲಾ ದಾಖಲೆಗಳನ್ನು ಖಚಿತಪಡಿಸಿಕೊಳ್ಳುವಂತೆ ಸಚಿವಾಲಯವು ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jjnf9w338vnx15gdex9kt8jm,imgname-Kailash-Mansarovar-Yatra-1738034966627.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೊಸದಿಲ್ಲಿ: ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಭಾರತೀಯ ನಾಗರಿಕರಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ತುರ್ತು ಹಾಗೂ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದೆ. ಖಾಸಗಿ ಮತ್ತು ಅನಧಿಕೃತ ಪ್ರವಾಸ ಆಯೋಜಕರ (Tour Operators) ಆಮಿಷಗಳಿಗೆ ಒಳಗಾಗಿ ಸೂಕ್ತ ದಾಖಲೆಗಳಿಲ್ಲದೆ ಪ್ರಯಾಣ ಬೆಳೆಸದಂತೆ ಯಾತ್ರಿಕರಿಗೆ ಸೂಚಿಸಲಾಗಿದೆ. ಪ್ರಸ್ತುತ ನಕಲಿ ಆಪರೇಟರ್&zwnj;ಗಳ ವಂಚನೆಗೆ ಸಿಲುಕಿ ನೇಪಾಳದಲ್ಲಿ ಕಷ್ಟಪಡುತ್ತಿರುವ ಹಲವು ಭಾರತೀಯರಿಂದ ನೆರವು ಕೋರಿ ಸರಣಿ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಠಿಣ ಹೆಜ್ಜೆ ಇಟ್ಟಿದೆ.&lt;/p&gt;&lt;h2&gt;ಕಠ್ಮಂಡುವಿನಲ್ಲಿ ಸಿಲುಕಿದ 52 ಭಾರತೀಯರು&lt;/h2&gt;&lt;p&gt;ಚೀನಾಕ್ಕೆ ಪ್ರವೇಶಿಸಲು ಅಗತ್ಯವಿರುವ ಅಧಿಕೃತ 'ಪ್ರವೇಶ ಪರವಾನಗಿ' (Entry Permit) ಮತ್ತು 'ಚೀನಾ ವೀಸಾ' (China Visa) ಇಲ್ಲದ ಕಾರಣ, ಕೈಲಾಸ ಮಾನಸ ಸರೋವರಕ್ಕೆ ಖಾಸಗಿ ಆಪರೇಟರ್&zwnj;ಗಳ ಮೂಲಕ ತೆರಳಿದ್ದ ಸುಮಾರು 52 ಭಾರತೀಯ ಯಾತ್ರಿಕರು ಪ್ರಸ್ತುತ ನೇಪಾಳದ ಕಠ್ಮಂಡುವಿನಲ್ಲಿ ಸಿಲುಕಿಕೊಂಡಿದ್ದಾರೆ. ತಾವು ತಲುಪಬೇಕಾದ ಸ್ಥಳಕ್ಕೂ ಹೋಗಲಾಗದೆ, ಮರಳಿ ಬರಲಾಗದ ತ್ರಿಶಂಕು ಸ್ಥಿತಿಯಲ್ಲಿರುವ ಈ ಪ್ರವಾಸಿಗರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ತುರ್ತು ಸಹಾಯವನ್ನು ಕೋರುತ್ತಿದ್ದಾರೆ.&lt;/p&gt;&lt;h2&gt;ರಾಜಕೀಯ ವಲಯದಲ್ಲಿ ಧ್ವನಿ:&lt;/h2&gt;&lt;p&gt;ಈ ಗಂಭೀರ ವಿಷಯದ ಕುರಿತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಶರದ್ಚಂದ್ರ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ಅವರು ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. ಈ ಕುರಿತು 'X' (ಟ್ವಿಟರ್) ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಅವರು, ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಯಾತ್ರಿಕರಿಗೆ ತಕ್ಷಣದ ಬೆಂಬಲ ನೀಡಲು ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಸಂಘಟಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;h2&gt;ವಿದೇಶಾಂಗ ಸಚಿವಾಲಯದ (MEA) ಪ್ರಮುಖ ಮಾರ್ಗಸೂಚಿಗಳು&lt;/h2&gt;&lt;p&gt;ಶನಿವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಯಾತ್ರಿಕರು ಪ್ರಯಾಣ ಆರಂಭಿಸುವ ಮುನ್ನ ಪಾಲಿಸಲೇಬೇಕಾದ ನಿಯಮಗಳನ್ನು ಸ್ಪಷ್ಟಪಡಿಸಿದೆ:&lt;/p&gt;&lt;p&gt;ದಾಖಲೆಗಳಿಲ್ಲದೆ ಪ್ರಯಾಣಿಸಬೇಡಿ: ಸಂಪೂರ್ಣ ತೀರ್ಥಯಾತ್ರೆಗೆ ಅಗತ್ಯವಿರುವ ಎಲ್ಲಾ ಕಾನೂನುಬದ್ಧ ಪ್ರಯಾಣ ದಾಖಲೆಗಳು ಮತ್ತು ವೀಸಾಗಳು ಕೈಸೇರುವವರೆಗೆ ಭಾರತದಿಂದ ಯಾರೂ ಪ್ರಯಾಣವನ್ನು ಪ್ರಾರಂಭಿಸಬಾರದು ಎಂದು ಸಚಿವಾಲಯ ನಾಗರಿಕರಿಗೆ ಕಟ್ಟುನಿಟ್ಟಿನ ಸಲಹೆ ನೀಡಿದೆ.&lt;/p&gt;&lt;p&gt;ನಂತರ ಸಿಗುವ ನಿರೀಕ್ಷೆ ಬೇಡ: ದೃಢಪಡಿಸಿದ ದಾಖಲೆಗಳಿಲ್ಲದೆ ಕೇವಲ &quot;ಮುಂದೆ ವೀಸಾ ಸಿಗಬಹುದು&quot; ಎಂಬ ಆಪರೇಟರ್&zwnj;ಗಳ ಆಶ್ವಾಸನೆ ನಂಬಿ ಪ್ರಯಾಣ ಬೆಳೆಸಿದರೆ, ವಿದೇಶಿ ನೆಲದಲ್ಲಿ ಸಿಕ್ಕಿಹಾಕಿಕೊಳ್ಳುವ ಮತ್ತು ಕಾನೂನು ಕ್ರಮ ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಎಚ್ಚರಿಸಲಾಗಿದೆ.&lt;/p&gt;&lt;p&gt;ಅಧಿಕೃತತೆ ಪರಿಶೀಲಿಸಿ: ಖಾಸಗಿ ಪ್ರವಾಸ ಆಯೋಜಕರು ಅಧಿಕೃತವಾಗಿ ಸರ್ಕಾರದಿಂದ ನೋಂದಣಿ ಮತ್ತು ಅನುಮೋದನೆ ಪಡೆದಿದ್ದಾರೆಯೇ ಎಂಬುದನ್ನು ಯಾತ್ರಿಕರು ಸ್ವಯಂ ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.&lt;/p&gt;&lt;h2&gt;2026ರ ಯಾತ್ರೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಗಡಿ ಮಾರ್ಗಗಳು&lt;/h2&gt;&lt;p&gt;ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನ ರಾಜತಾಂತ್ರಿಕ ಸಂಬಂಧಗಳು ಹಾಗೂ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020 ರಿಂದ ಸ್ಥಗಿತಗೊಂಡಿದ್ದ ಈ ಪವಿತ್ರ ಯಾತ್ರೆಯನ್ನು ಕಳೆದ ವರ್ಷವಷ್ಟೇ ಪುನರಾರಂಭಿಸಲಾಗಿತ್ತು. ಪ್ರಸ್ತುತ ವರ್ಷ ಜೂನ್&zwnj;ನಿಂದ ಆಗಸ್ಟ್ ಅವಧಿಯಲ್ಲಿ ಉತ್ತರಾಖಂಡದ ಲಿಪುಲೇಖ್ ಪಾಸ್ (Lipulekh Pass) ಹಾಗೂ ಸಿಕ್ಕಿಂನ ನಾಥು ಲಾ ಪಾಸ್ (Nathu La Pass) ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಧಿಕೃತವಾಗಿ ನಡೆಸುತ್ತಿದೆ.&lt;/p&gt;&lt;h2&gt;ಸಿಕ್ಕಿಂನ ನಾಥು ಲಾ ಪಾಸ್ ಮೂಲಕ ಮೊದಲ ತಂಡದ ಯಶಸ್ವಿ ಪ್ರಯಾಣ:&lt;/h2&gt;&lt;p&gt;ಕೇಂದ್ರದ ಎಚ್ಚರಿಕೆಯ ನಡುವೆಯೇ, ಸರ್ಕಾರದ ಅಧಿಕೃತ ಮಾರ್ಗಸೂಚಿಗಳ ಅಡಿಯಲ್ಲಿ ಜೂನ್ 20 ರಂದು ಕೈಲಾಸ ಮಾನಸ ಸರೋವರ ಯಾತ್ರೆ 2026 ರ ಯಾತ್ರಿಕರ ಮೊದಲ ಯಶಸ್ವಿ ತಂಡವು ನಾಥು ಲಾ ಪಾಸ್&zwnj;ನಲ್ಲಿರುವ ಭಾರತ-ಚೀನಾ ಗಡಿಯ ಮೂಲಕ ಚೀನಾವನ್ನು ಪ್ರವೇಶಿಸಿದೆ. ಸಿಕ್ಕಿಂ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರು, ಪ್ರವಾಸೋದ್ಯಮ ಸಚಿವ ತ್ಸೆರಿಂಗ್ ಥೆಂಡುಪ್ ಭೂಟಿಯಾ ಮತ್ತು ಸಿಕ್ಕಿಂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (STDC) ಅಧಿಕಾರಿಗಳ ಸಮ್ಮುಖದಲ್ಲಿ ಈ ಮೊದಲ ಬ್ಯಾಚ್&zwnj;ಗೆ ಹಸಿರು ನಿಶಾನೆ ತೋರಿ ಶುಭ ಹಾರೈಸಿದ್ದರು.&lt;/p&gt;&lt;p&gt;ಅಧಿಕೃತ ಗಡಿ ಮಾರ್ಗಗಳು ನಾಥು ಲಾ ಪಾಸ್ (ಸಿಕ್ಕಿಂ) ಮತ್ತು ಲಿಪುಲೇಖ್ ಪಾಸ್ (ಉತ್ತರಾಖಂಡ)&lt;/p&gt;&lt;p&gt;2026ರ ನಿರೀಕ್ಷಿತ ತಂಡಗಳು ಈ ವರ್ಷ ಕನಿಷ್ಠ 10 ತಂಡಗಳು (ಬ್ಯಾಚ್&zwnj;ಗಳು) ಪ್ರಯಾಣಿಸಲಿವೆ&lt;/p&gt;&lt;p&gt;ಪ್ರವಾಸೋದ್ಯಮದ ಮೌಲ್ಯ 5 ವರ್ಷಗಳ ಸುದೀರ್ಘ ವಿರಾಮದ ನಂತರ ಯಾತ್ರೆ ಆರಂಭವಾಗಿರುವುದು ಸಿಕ್ಕಿಂ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿದೆ&lt;/p&gt;&lt;p&gt;ವಿದೇಶಾಂಗ ಸಚಿವಾಲಯವು ಪ್ರಸ್ತುತ ನೇಪಾಳದಲ್ಲಿ ಸಿಲುಕಿರುವ 52 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನಧಿಕೃತ ದಲ್ಲಾಳಿಗಳ ಮಾತು ಕೇಳಿ ಮೋಸ ಹೋಗಬಾರದು ಎಂದು ಮತ್ತೊಮ್ಮೆ ವಿನಂತಿಸಲಾಗಿದೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/kailash-mansarovar-yatra-advisory-52-indians-stranded-in-nepal-mea-issues-strict-warning-gdp/articleshow-ssifufy"/>
        </item>
        <item>
            <title><![CDATA['ಗಂಡನಿಗೆ ಬರುವ ಸಂಬಳಕ್ಕಿಂತ ಹೆಂಡತಿ ಸಂಬಳವೇ ಹೆಚ್ಚು', ಪತ್ನಿಗೆ ಕೊಡ್ತಿದ್ದ ಜೀವನಾಂಶ ರದ್ದುಗೊಳಿಸಿದ ಹೈಕೋರ್ಟ್!]]></title>
            <link>https://kannada.asianetnews.com/gallery/relationship/high-court-major-ruling-husband-no-need-to-pay-maintenance-to-wife-earning-more-salary-rbo6oei</link>
            <guid isPermaLink="true">https://kannada.asianetnews.com/gallery/relationship/high-court-major-ruling-husband-no-need-to-pay-maintenance-to-wife-earning-more-salary-rbo6oei</guid>
            <pubDate>Mon, 29 Jun 2026 18:59:04 +0530</pubDate>
            <description><![CDATA[&lt;p&gt;ಪತಿಗಿಂತ ಹೆಚ್ಚು ಸಂಬಳ ಪಡೆಯುವ ಮತ್ತು ಯಾವುದೇ ಆರ್ಥಿಕ ಹೊಣೆಗಾರಿಕೆಗಳಿಲ್ಲದ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ, ಪತ್ನಿಯು ಪತಿಗಿಂತ ಹೆಚ್ಚು ಗಳಿಸುತ್ತಿದ್ದು, ಕೆಳಹಂತದ ಕೋರ್ಟ್&zwnj;ನ ಜೀವನಾಂಶ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9r96d65bep6kda4csxr9hm,imgname-divorce-court-order-1782738885030.jpg" type="image/jpeg" height="390" width="690"/>
            <content:encoded><![CDATA[&lt;p&gt;ಪತಿಗಿಂತ ಹೆಚ್ಚು ಸಂಬಳ ಪಡೆಯುವ ಮತ್ತು ಯಾವುದೇ ಆರ್ಥಿಕ ಹೊಣೆಗಾರಿಕೆಗಳಿಲ್ಲದ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ, ಪತ್ನಿಯು ಪತಿಗಿಂತ ಹೆಚ್ಚು ಗಳಿಸುತ್ತಿದ್ದು, ಕೆಳಹಂತದ ಕೋರ್ಟ್&zwnj;ನ ಜೀವನಾಂಶ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.&lt;/p&gt;&lt;img&gt;&lt;p&gt;ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ ವಿಚ್ಛೇದನ ಅಥವಾ ಪ್ರತ್ಯೇಕವಾಗಿ ವಾಸಿಸುವ ಸಂದರ್ಭ ಬಂದಾಗ ಪತಿಯು ಪತ್ನಿಗೆ ಜೀವನಾಂಶ (Maintenance) ನೀಡಬೇಕು ಎಂಬುದು ಸಾಮಾನ್ಯ ನಿಯಮ. ಆದರೆ, ಪತ್ನಿಯು ಪತಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದರೆ ಮತ್ತು ಆಕೆಗೆ ಯಾವುದೇ ಹೆಚ್ಚಿನ ಹೊಣೆಗಾರಿಕೆಗಳಿಲ್ಲದಿದ್ದರೆ, ಪತಿಯು ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಕರಣದ ಹಿನ್ನೆಲೆ:&lt;/strong&gt;&lt;/p&gt;&lt;p&gt;2024 ರಲ್ಲಿ ವಿವಾಹವಾಗಿದ್ದ ದಂಪತಿಗಳು ವೈಮನಸ್ಸಿನ ಕಾರಣದಿಂದ ಕೇವಲ ಕೆಲವೇ ತಿಂಗಳುಗಳಲ್ಲಿ ಪ್ರತ್ಯೇಕವಾಗಿದ್ದರು. ಈ ಸಂದರ್ಭದಲ್ಲಿ ಪತ್ನಿಯು ತನ್ನ ನಿರ್ವಹಣೆಗಾಗಿ ಜೀವನಾಂಶ ನೀಡುವಂತೆ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯನ್ನು ಆಲಿಸಿದ್ದ ವಿಚಾರಣಾ ನ್ಯಾಯಾಲಯವು, ಪತ್ನಿಗೆ ಪ್ರತಿ ತಿಂಗಳು 20,000 ರೂಪಾಯಿ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.&lt;/p&gt;&lt;img&gt;&lt;p&gt;&lt;strong&gt;ಆದಾಯದ ವ್ಯತ್ಯಾಸವೇ ಪತಿಗೆ ವರವಾಯಿತು:&lt;/strong&gt;&lt;/p&gt;&lt;p&gt;ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಪೀಠವು ದಂಪತಿಗಳಿಬ್ಬರ ಆದಾಯವನ್ನು ಪರಿಶೀಲಿಸಿತು. ಪತಿಯ ಮಾಸಿಕ ಸಂಬಳ 60,646 ರೂಪಾಯಿಗಳಾಗಿದ್ದರೆ, ಪತ್ನಿಯು ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದರು. ಅಂದರೆ ಪತಿಗಿಂತ ಪತ್ನಿಯೇ ಸುಮಾರು 40 ಸಾವಿರ ರೂಪಾಯಿ ಹೆಚ್ಚು ಗಳಿಸುತ್ತಿದ್ದರು.&lt;/p&gt;&lt;img&gt;&lt;p&gt;&lt;strong&gt;ಹೈಕೋರ್ಟ್ ನೀಡಿದ ತರ್ಕವೇನು?&lt;/strong&gt;&lt;/p&gt;&lt;p&gt;&lt;strong&gt;ಸ್ವಾವಲಂಬನೆ: &lt;/strong&gt;ಪತ್ನಿಯು ತಿಂಗಳಿಗೆ 1 ಲಕ್ಷ ರೂಪಾಯಿ ಗಳಿಸುತ್ತಿರುವುದರಿಂದ ಆಕೆ ತನ್ನ ಜೀವನ ನಿರ್ವಹಣೆಯನ್ನು ತಾನೇ ಮಾಡಿಕೊಳ್ಳಲು ಸಮರ್ಥಳಾಗಿದ್ದಾಳೆ.&lt;/p&gt;&lt;p&gt;&lt;strong&gt;ಹೊಣೆಗಾರಿಕೆಗಳಿಲ್ಲ: &lt;/strong&gt;ಪತ್ನಿಗೆ ಮಕ್ಕಳ ಜವಾಬ್ದಾರಿ ಅಥವಾ ಇತರ ಯಾವುದೇ ಆರ್ಥಿಕ ಹೊಣೆಗಾರಿಕೆಗಳು (Liabilities) ಸದ್ಯಕ್ಕೆ ಇಲ್ಲದಿರುವುದನ್ನು ಕೋರ್ಟ್ ಗಮನಿಸಿತು.&lt;/p&gt;&lt;p&gt;&lt;strong&gt;ಪತಿಯ ಸ್ಥಿತಿ: ಪ&lt;/strong&gt;ತಿಯ ಸಂಬಳವೇ ಪತ್ನಿಗಿಂತ ಕಡಿಮೆ ಇರುವಾಗ, ಆತ ಪತ್ನಿಯ ನಿರ್ವಹಣೆಗೆ ಹಣ ನೀಡುವುದು ತರ್ಕಬದ್ಧವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.&lt;/p&gt;&lt;img&gt;&lt;p&gt;ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ನೀಡಿದ್ದ 20 ಸಾವಿರ ರೂಪಾಯಿ ಜೀವನಾಂಶದ ಆದೇಶವನ್ನು ರದ್ದುಪಡಿಸಿತು. ಈ ಮೂಲಕ ಆರ್ಥಿಕವಾಗಿ ಸ್ವತಂತ್ರರಾಗಿರುವ ಮತ್ತು ಪತಿಗಿಂತ ಹೆಚ್ಚು ಗಳಿಸುವ ಪತ್ನಿಯರಿಗೆ ಜೀವನಾಂಶ ನೀಡುವ ಬಾಧ್ಯತೆ ಪತಿಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ತೀರ್ಪು ಜೀವನಾಂಶಕ್ಕೆ ಸಂಬಂಧಿಸಿದ ಕಾನೂನು ಹೋರಾಟಗಳಲ್ಲಿ ಹೊಸ ದಿಕ್ಸೂಚಿಯಾಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/relationship/high-court-major-ruling-husband-no-need-to-pay-maintenance-to-wife-earning-more-salary-rbo6oei"/>
        </item>
        <item>
            <title><![CDATA[ಅಂಗೈಯಲ್ಲಿರುವ ಈ ರೇಖೆ ಚಿಕ್ಕದಾಗಿದ್ದರೆ ಸಾವು ಬೇಗ]]></title>
            <link>https://kannada.asianetnews.com/gallery/relationship/short-life-line-in-hand-early-death-myth-or-truth-suh-re17lbd</link>
            <guid isPermaLink="true">https://kannada.asianetnews.com/gallery/relationship/short-life-line-in-hand-early-death-myth-or-truth-suh-re17lbd</guid>
            <pubDate>Mon, 29 Jun 2026 16:28:05 +0530</pubDate>
            <description><![CDATA[&lt;p&gt;Short life line in hand early death myth or truth ನಿಮ್ಮ ಅಂಗೈಯಲ್ಲಿರುವ ಜೀವನ ರೇಖೆಯು ನಿಮ್ಮ ವಯಸ್ಸಿನ ಬಗ್ಗೆ ಏನನ್ನಾದರೂ ಹೇಳುತ್ತದೆ. ಜೀವನ ರೇಖೆ ಚಿಕ್ಕದಾಗಿದ್ದರೆ, ನೀವು ಶೀಘ್ರದಲ್ಲೇ ಸಾಯುತ್ತೀರಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kne2b1bgdewp3gcwjybjdzjb,imgname-2-1775367456112.jpg" type="image/jpeg" height="390" width="690"/>
            <content:encoded><![CDATA[&lt;p&gt;Short life line in hand early death myth or truth ನಿಮ್ಮ ಅಂಗೈಯಲ್ಲಿರುವ ಜೀವನ ರೇಖೆಯು ನಿಮ್ಮ ವಯಸ್ಸಿನ ಬಗ್ಗೆ ಏನನ್ನಾದರೂ ಹೇಳುತ್ತದೆ. ಜೀವನ ರೇಖೆ ಚಿಕ್ಕದಾಗಿದ್ದರೆ, ನೀವು ಶೀಘ್ರದಲ್ಲೇ ಸಾಯುತ್ತೀರಾ?&lt;/p&gt;&lt;img&gt;&lt;p&gt;ಅಂಗೈಯಲ್ಲಿರುವ ರೇಖೆಗಳು ವ್ಯಕ್ತಿಯ ಭವಿಷ್ಯ, ಆರೋಗ್ಯ ಮತ್ತು ಜೀವನದ ಬಗ್ಗೆ ಹಲವು ಮಾಹಿತಿಗಳನ್ನು ತಿಳಿಸುತ್ತವೆ ಎಂಬ ನಂಬಿಕೆ ಇದೆ. ಅವುಗಳಲ್ಲಿ ಜೀವನ ರೇಖೆ (Life Line) ಅತ್ಯಂತ ಪ್ರಮುಖವಾದದ್ದು. ಅನೇಕರು ಜೀವನ ರೇಖೆ ಚಿಕ್ಕದಾಗಿದ್ದರೆ ವ್ಯಕ್ತಿಯ ಆಯುಷ್ಯವೂ ಕಡಿಮೆಯಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ಹಸ್ತಸಾಮುದ್ರಿಕ ಶಾಸ್ತ್ರ ಇದನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ.&lt;/p&gt;&lt;p&gt;ಜೀವನ ರೇಖೆ ಎಲ್ಲಿರುತ್ತದೆ?&lt;/p&gt;&lt;p&gt;ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಜೀವನ ರೇಖೆಯು ಹೆಬ್ಬೆರಳು ಮತ್ತು ತೋರುಬೆರಳಿನ ನಡುವಿನಿಂದ ಆರಂಭವಾಗಿ ಶುಕ್ರ ಪರ್ವತದ ಸುತ್ತ ಮಣಿಕಟ್ಟಿನ ಕಡೆಗೆ ಸಾಗುತ್ತದೆ. ಕೆಲವರಲ್ಲಿ ಈ ರೇಖೆ ಉದ್ದವಾಗಿರುತ್ತದೆ, ಕೆಲವರಲ್ಲಿ ಚಿಕ್ಕದಾಗಿರುತ್ತದೆ. ಕೆಲವರಲ್ಲಿ ಎರಡು ಭಾಗಗಳಾಗಿ ವಿಭಜನೆಯಾಗಿರಬಹುದು ಅಥವಾ ಸ್ಪಷ್ಟವಾಗಿ ಕಾಣಿಸದೇ ಇರಬಹುದು.&lt;/p&gt;&lt;img&gt;&lt;p&gt;ಹಸ್ತಸಾಮುದ್ರಿಕ ತಜ್ಞರ ಪ್ರಕಾರ, ಜೀವನ ರೇಖೆಯ ಉದ್ದವನ್ನು ಮಾತ್ರ ನೋಡಿ ವ್ಯಕ್ತಿಯ ಆಯುಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ರೇಖೆ ಚಿಕ್ಕದಾಗಿದ್ದರೂ ಅದು ಸ್ಪಷ್ಟವಾಗಿ, ಆಳವಾಗಿ ಕಂಡುಬಂದರೆ ಉತ್ತಮ ಆರೋಗ್ಯ, ಚೈತನ್ಯ ಮತ್ತು ದೀರ್ಘಾಯುಷ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ಇದೇ ವೇಳೆ, ಕೆಲವರಲ್ಲಿ ಉದ್ದವಾದ ಜೀವನ ರೇಖೆ ಇದ್ದರೂ ಆರೋಗ್ಯ ಸಮಸ್ಯೆಗಳು ಅಥವಾ ಇತರ ಕಾರಣಗಳಿಂದ ಕಡಿಮೆ ವಯಸ್ಸಿನಲ್ಲಿ ಮರಣ ಸಂಭವಿಸಬಹುದು. ಆದ್ದರಿಂದ ಜೀವನ ರೇಖೆಯ ಉದ್ದವೇ ಎಲ್ಲವನ್ನೂ ನಿರ್ಧರಿಸುವುದಿಲ್ಲ.&lt;/p&gt;&lt;img&gt;&lt;p&gt;ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಆಯುಷ್ಯ ಅಥವಾ ಜೀವನದ ಏರಿಳಿತಗಳನ್ನು ಅಂದಾಜು ಮಾಡಲು ಕೇವಲ ಜೀವನ ರೇಖೆಯನ್ನು ಮಾತ್ರ ನೋಡುವುದಿಲ್ಲ.&lt;/p&gt;&lt;p&gt;ಇದರ ಜೊತೆಗೆ ಈ ರೇಖೆಗಳನ್ನೂ ಪರಿಗಣಿಸಲಾಗುತ್ತದೆ:&lt;/p&gt;&lt;p&gt;ಮನಸ್ಸಿನ ರೇಖೆ (Head Line)&lt;/p&gt;&lt;p&gt;ಹೃದಯ ರೇಖೆ (Heart Line)&lt;/p&gt;&lt;p&gt;ವಿಧಿ ರೇಖೆ (Fate Line)&lt;/p&gt;&lt;p&gt;ಸೂರ್ಯ ರೇಖೆ (Sun Line)&lt;/p&gt;&lt;p&gt;ಈ ಎಲ್ಲ ಅಂಶಗಳನ್ನು ಒಟ್ಟಾಗಿ ಪರಿಶೀಲಿಸಿದ ಬಳಿಕವೇ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.&lt;/p&gt;&lt;img&gt;&lt;p&gt;ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಜೀವನ ರೇಖೆ ಮುಖ್ಯವಾಗಿ:&lt;/p&gt;&lt;p&gt;ದೈಹಿಕ ಶಕ್ತಿ&lt;/p&gt;&lt;p&gt;ಆರೋಗ್ಯದ ಸ್ಥಿತಿ&lt;/p&gt;&lt;p&gt;ಜೀವನದ ಪ್ರಮುಖ ಬದಲಾವಣೆಗಳು&lt;/p&gt;&lt;p&gt;ಚೈತನ್ಯ ಮತ್ತು ಉತ್ಸಾಹ&lt;/p&gt;&lt;p&gt;ಜೀವನದಲ್ಲಿ ಎದುರಾಗುವ ಏರಿಳಿತಗಳು&lt;/p&gt;&lt;p&gt;ಇವುಗಳ ಬಗ್ಗೆ ಸೂಚನೆ ನೀಡುತ್ತದೆ.&lt;/p&gt;&lt;p&gt;&lt;strong&gt;ಹಕ್ಕುತ್ಯಾಗ&lt;/strong&gt;&lt;/p&gt;&lt;p&gt;ಈ ಲೇಖನದಲ್ಲಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು, ಹಸ್ತಸಾಮುದ್ರಿಕ ಶಾಸ್ತ್ರ ಮತ್ತು ಜ್ಯೋತಿಷ್ಯ ಆಧಾರಿತವಾಗಿದೆ. ಇದಕ್ಕೆ ವೈಜ್ಞಾನಿಕ ದೃಢೀಕರಣ ಇರುವುದಿಲ್ಲ. ಓದುಗರು ಇದನ್ನು ಕೇವಲ ಮಾಹಿತಿ ಮತ್ತು ನಂಬಿಕೆಯ ದೃಷ್ಟಿಯಿಂದ ಮಾತ್ರ ಪರಿಗಣಿಸಬೇಕು.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/short-life-line-in-hand-early-death-myth-or-truth-suh-re17lbd"/>
        </item>
        <item>
            <title><![CDATA[ಗಂಡಸರಿಗಿಂತ ಹೆಂಗಸರು ಹೆಚ್ಚು ಕಾಲ ಬದುಕಲು ಕಾರಣವೇನು ಗೊತ್ತಾ?]]></title>
            <link>https://kannada.asianetnews.com/gallery/relationship/longevity-explained-why-women-live-longer-than-men-suh-yf3ss2r</link>
            <guid isPermaLink="true">https://kannada.asianetnews.com/gallery/relationship/longevity-explained-why-women-live-longer-than-men-suh-yf3ss2r</guid>
            <pubDate>Mon, 29 Jun 2026 16:03:36 +0530</pubDate>
            <description><![CDATA[&lt;p&gt;ಪ್ರಪಂಚದ ಬಹುತೇಕ ದೇಶಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ಸರಾಸರಿಯಾಗಿ ಮಹಿಳೆಯರ ಜೀವಿತಾವಧಿ ಪುರುಷರಿಗಿಂತ 4 ರಿಂದ 7 ವರ್ಷಗಳಷ್ಟು ಹೆಚ್ಚಿರುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಆದರೆ ಇದಕ್ಕೆ ಕಾರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jzcmhashbnv5q1ta8k5krfy8,imgname-your-paragraph-text---2025-07-05t120118.058-1751697107761.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಪಂಚದ ಬಹುತೇಕ ದೇಶಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ಸರಾಸರಿಯಾಗಿ ಮಹಿಳೆಯರ ಜೀವಿತಾವಧಿ ಪುರುಷರಿಗಿಂತ 4 ರಿಂದ 7 ವರ್ಷಗಳಷ್ಟು ಹೆಚ್ಚಿರುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಆದರೆ ಇದಕ್ಕೆ ಕಾರಣವೇನು?&lt;/p&gt;&lt;img&gt;&lt;p&gt;ಮಹಿಳೆಯರ ರೋಗನಿರೋಧಕ ವ್ಯವಸ್ಥೆ ಪುರುಷರಿಗಿಂತ ಹೆಚ್ಚು ಸಕ್ರಿಯವಾಗಿರುತ್ತದೆ. ಇದರಿಂದ ಸೋಂಕುಗಳು ಮತ್ತು ಹಲವು ರೋಗಗಳ ವಿರುದ್ಧ ಅವರ ದೇಹ ಉತ್ತಮವಾಗಿ ಹೋರಾಡುತ್ತದೆ. ಈ ಬಲವಾದ ರೋಗನಿರೋಧಕ ಶಕ್ತಿಯೇ ಮಹಿಳೆಯರ ದೀರ್ಘಾಯುಷ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.&lt;/p&gt;&lt;img&gt;&lt;p&gt;ಮಹಿಳೆಯರ ದೇಹದಲ್ಲಿ ಉತ್ಪತ್ತಿಯಾಗುವ ಈಸ್ಟ್ರೊಜೆನ್ (Estrogen) ಹಾರ್ಮೋನ್ ಹೃದಯ ಮತ್ತು ರಕ್ತನಾಳಗಳ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವು ಪುರುಷರಿಗಿಂತ ಕಡಿಮೆ ಇರುತ್ತದೆ.&lt;/p&gt;&lt;img&gt;&lt;p&gt;ಮಹಿಳೆಯರಲ್ಲಿ ಎರಡು X ಕ್ರೋಮೋಸೋಮ್&zwnj;ಗಳು (XX) ಇರುತ್ತವೆ, ಆದರೆ ಪುರುಷರಲ್ಲಿ ಒಂದು X ಮತ್ತು ಒಂದು Y (XY) ಇರುತ್ತದೆ. ಒಂದು X ಕ್ರೋಮೋಸೋಮ್&zwnj;ನಲ್ಲಿ ದೋಷವಿದ್ದರೂ ಮತ್ತೊಂದು ಅದನ್ನು ಸರಿಪಡಿಸುವಂತೆ ಕಾರ್ಯನಿರ್ವಹಿಸಬಹುದು. ಈ ಆನುವಂಶಿಕ ರಕ್ಷಣೆಯು ಹಲವು ಗಂಭೀರ ಕಾಯಿಲೆಗಳಿಂದ ಮಹಿಳೆಯರನ್ನು ರಕ್ಷಿಸುತ್ತದೆ.&lt;/p&gt;&lt;img&gt;&lt;p&gt;ಸಂಶೋಧನೆಗಳ ಪ್ರಕಾರ ಪುರುಷರು ಧೂಮಪಾನ, ಮದ್ಯಪಾನ ಮತ್ತು ಅಪಾಯಕಾರಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ.&lt;/p&gt;&lt;img&gt;&lt;p&gt;ಪುರುಷರಲ್ಲಿ ಹೃದಯ ಮತ್ತು ಶ್ವಾಸಕೋಶ ಸಂಬಂಧಿತ ಗಂಭೀರ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಹಿಳೆಯರು ಸಾಮಾನ್ಯವಾಗಿ ದೀರ್ಘಕಾಲೀನ ಆದರೆ ಜೀವಕ್ಕೆ ಅಪಾಯಕಾರಿಯಲ್ಲದ ಕಾಯಿಲೆಗಳಿಂದ ಬಳಲುವ ಸಾಧ್ಯತೆ ಹೆಚ್ಚು. ಇದರಿಂದ ಪುರುಷರಲ್ಲಿ ಅಕಾಲಿಕ ಮರಣದ ಅಪಾಯ ಹೆಚ್ಚಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/longevity-explained-why-women-live-longer-than-men-suh-yf3ss2r"/>
        </item>
        <item>
            <title><![CDATA[Crunchy Bhindi Chips: ಕ್ರಿಸ್ಪಿ ಬೆಂಡೆಕಾಯಿ ಚಿಪ್ಸ್ ಮಾಡೋದು ಸಖತ್‌ ಸುಲಭ; ರುಚಿಯಂತೂ ಅಬ್ಬಬ್ಬಾ..!]]></title>
            <link>https://kannada.asianetnews.com/gallery/food/a-healthy-easy-snack-crispy-okra-chips-in-kannada-recipe-0xczaeg</link>
            <guid isPermaLink="true">https://kannada.asianetnews.com/gallery/food/a-healthy-easy-snack-crispy-okra-chips-in-kannada-recipe-0xczaeg</guid>
            <pubDate>Mon, 29 Jun 2026 12:11:55 +0530</pubDate>
            <description><![CDATA[&lt;p&gt;&lt;strong&gt;Crispy Okra Chips&lt;/strong&gt;: ಏನಾದ್ರೂ ಹೊಸ ಮತ್ತು ಹೆಲ್ದಿ ಸ್ನ್ಯಾಕ್ಸ್&zwnj; ಟ್ರೈ ಮಾಡ್ಬೇಕು ಅನ್ಸಿದ್ರೆ, ಬೆಂಡೆಕಾಯಿ ಚಿಪ್ಸ್ ಮಾಡಿ. ಇದು ಹೊರಗಿನಿಂದ ಗರಿಗರಿಯಾಗಿ, ಹಗುರವಾಗಿ ಮತ್ತು ಸಖತ್ ರುಚಿಯಾಗಿರುತ್ತೆ. ಇದನ್ನು ನೀವು ಡೀಪ್ ಫ್ರೈ ಅಥವಾ ಏರ್ ಫ್ರೈಯರ್ ಎರಡರಲ್ಲೂ ಮಾಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw91jn2grtvh7ytqy3fxtr4b,imgname-new-project---2026-06-29t120713.921-1782715077712.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Crispy Okra Chips&lt;/strong&gt;: ಏನಾದ್ರೂ ಹೊಸ ಮತ್ತು ಹೆಲ್ದಿ ಸ್ನ್ಯಾಕ್ಸ್&zwnj; ಟ್ರೈ ಮಾಡ್ಬೇಕು ಅನ್ಸಿದ್ರೆ, ಬೆಂಡೆಕಾಯಿ ಚಿಪ್ಸ್ ಮಾಡಿ. ಇದು ಹೊರಗಿನಿಂದ ಗರಿಗರಿಯಾಗಿ, ಹಗುರವಾಗಿ ಮತ್ತು ಸಖತ್ ರುಚಿಯಾಗಿರುತ್ತೆ. ಇದನ್ನು ನೀವು ಡೀಪ್ ಫ್ರೈ ಅಥವಾ ಏರ್ ಫ್ರೈಯರ್ ಎರಡರಲ್ಲೂ ಮಾಡಬಹುದು.&lt;/p&gt;&lt;img&gt;&lt;p&gt;250 ಗ್ರಾಂ ತಾಜಾ ಬೆಂಡೆಕಾಯಿ&lt;/p&gt;&lt;p&gt;2 ದೊಡ್ಡ ಚಮಚ ಕಡಲೆ ಹಿಟ್ಟು&lt;/p&gt;&lt;p&gt;1 ದೊಡ್ಡ ಚಮಚ ಅಕ್ಕಿ ಹಿಟ್ಟು&lt;/p&gt;&lt;p&gt;&frac12; ಚಿಕ್ಕ ಚಮಚ ಅರಿಶಿನ&lt;/p&gt;&lt;p&gt;1 ಚಿಕ್ಕ ಚಮಚ ಕೆಂಪು ಮೆಣಸಿನ ಪುಡಿ&lt;/p&gt;&lt;p&gt;1 ಚಿಕ್ಕ ಚಮಚ ಧನಿಯಾ ಪುಡಿ&lt;/p&gt;&lt;p&gt;&frac12; ಚಿಕ್ಕ ಚಮಚ ಜೀರಿಗೆ ಪುಡಿ&lt;/p&gt;&lt;p&gt;ರುಚಿಗೆ ತಕ್ಕಷ್ಟು ಉಪ್ಪು&lt;/p&gt;&lt;p&gt;1&ndash;2 ದೊಡ್ಡ ಚಮಚ ಎಣ್ಣೆ&lt;/p&gt;&lt;p&gt;ಕರಿಯಲು ಬೇಕಾದಷ್ಟು ಎಣ್ಣೆ&lt;/p&gt;&lt;img&gt;&lt;p&gt;ಮೊದಲು, ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು, ಸಂಪೂರ್ಣವಾಗಿ ಒಣಗಲು ಬಿಡಿ. ಬೆಂಡೆಕಾಯಿಯಲ್ಲಿ ತೇವಾಂಶ ಉಳಿದರೆ, ಅದು ಜಿಡ್ಡುಜಿಡ್ಡಾಗಬಹುದು. ಈಗ, ಎರಡೂ ತುದಿಗಳನ್ನು ಕತ್ತರಿಸಿ, ಬೆಂಡೆಕಾಯಿಯನ್ನು ಉದ್ದಕ್ಕೆ ಅಥವಾ ದುಂಡಗೆ ತೆಳುವಾದ ಸ್ಲೈಸ್&zwnj;ಗಳಾಗಿ ಕತ್ತರಿಸಿಕೊಳ್ಳಿ.&lt;/p&gt;&lt;img&gt;&lt;p&gt;ಒಂದು ದೊಡ್ಡ ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.&lt;/p&gt;&lt;img&gt;&lt;p&gt;ಕತ್ತರಿಸಿದ ಬೆಂಡೆಕಾಯಿಗೆ 1&ndash;2 ಚಮಚ ಎಣ್ಣೆ ಹಾಕಿ, ನಿಧಾನವಾಗಿ ಕೈಯಿಂದ ಕಲಸಿ. ಈಗ, ಸಿದ್ಧಪಡಿಸಿದ ಒಣ ಮಸಾಲೆಯನ್ನು ಹಾಕಿ ಚೆನ್ನಾಗಿ ಟಾಸ್ ಮಾಡಿ. ಹೀಗೆ ಮಾಡುವುದರಿಂದ ಪ್ರತಿ ಸ್ಲೈಸ್&zwnj;ಗೂ ಮಸಾಲೆ ಸಮನಾಗಿ ಹತ್ತಿಕೊಳ್ಳುತ್ತದೆ.&lt;/p&gt;&lt;img&gt;&lt;p&gt;&lt;strong&gt;ಡೀಪ್ ಫ್ರೈ&lt;/strong&gt;: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಮಧ್ಯಮ ಉರಿಯಲ್ಲಿ ಸ್ವಲ್ಪ ಸ್ವಲ್ಪವೇ ಬೆಂಡೆಕಾಯಿ ಹಾಕಿ, ಗೋಲ್ಡನ್ ಬಣ್ಣ ಬಂದು ಗರಿಗರಿಯಾಗುವವರೆಗೆ ಕರಿಯಿರಿ. ನಂತರ ಟಿಶ್ಯೂ ಪೇಪರ್ ಮೇಲೆ ಹಾಕಿ.&lt;/p&gt;&lt;p&gt;&lt;strong&gt;ಏರ್ ಫ್ರೈಯರ್&lt;/strong&gt;: ಏರ್ ಫ್ರೈಯರ್ ಅನ್ನು 180&deg;C ನಲ್ಲಿ ಪ್ರಿಹೀಟ್ ಮಾಡಿ. ಬೆಂಡೆಕಾಯಿಯನ್ನು 10&ndash;15 ನಿಮಿಷಗಳ ಕಾಲ ಏರ್ ಫ್ರೈ ಮಾಡಿ. ಮಧ್ಯದಲ್ಲಿ 1&ndash;2 ಬಾರಿ ಬಾಸ್ಕೆಟ್ ಅನ್ನು ಅಲ್ಲಾಡಿಸುತ್ತಿರಿ, ಇದರಿಂದ ಎಲ್ಲಾ ಕಡೆಯಿಂದಲೂ ಸಮನಾಗಿ ಗರಿಗರಿಯಾಗುತ್ತದೆ.&lt;/p&gt;&lt;img&gt;&lt;p&gt;ಸಿದ್ಧವಾದ ಬೆಂಡೆಕಾಯಿ ಚಿಪ್ಸ್ ಮೇಲೆ ಚಾಟ್ ಮಸಾಲಾ ಅಥವಾ ಆಮ್&zwnj;ಚೂರ್ ಪುಡಿಯನ್ನು ಉದುರಿಸಿ. ಇದನ್ನು ಟೊಮೆಟೊ ಸಾಸ್, ಗ್ರೀನ್ ಚಟ್ನಿ ಅಥವಾ ಮೊಸರು ಡಿಪ್ ಜೊತೆ ಬಿಸಿಬಿಸಿಯಾಗಿ ಸರ್ವ್ ಮಾಡಿ. ಚಿಪ್ಸ್ ಸಂಪೂರ್ಣವಾಗಿ ತಣ್ಣಗಾದ ನಂತರ, ಗಾಳಿಯಾಡದ ಡಬ್ಬದಲ್ಲಿ ಹಾಕಿ ಸುಮಾರು ಒಂದು ವಾರ ಸಂಗ್ರಹಿಸಬಹುದು.&lt;/p&gt;&lt;h2&gt;ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು&lt;/h2&gt;&lt;p&gt;&lt;strong&gt;1. ಬೆಂಡೆಕಾಯಿ ಚಿಪ್ಸ್ ಅನ್ನು ಎಣ್ಣೆ ಇಲ್ಲದೆ ಮಾಡಬಹುದೇ?&lt;/strong&gt;&lt;/p&gt;&lt;p&gt;ಹೌದು, ಏರ್ ಫ್ರೈಯರ್&zwnj;ನಲ್ಲಿ ಅತಿ ಕಡಿಮೆ ಎಣ್ಣೆ ಬಳಸಿ ಗರಿಗರಿಯಾದ ಬೆಂಡೆಕಾಯಿ ಚಿಪ್ಸ್ ಅನ್ನು ಸುಲಭವಾಗಿ ಮಾಡಬಹುದು.&lt;/p&gt;&lt;p&gt;&lt;strong&gt;2. ಬೆಂಡೆಕಾಯಿ ಚಿಪ್ಸ್ ಗರಿಗರಿಯಾಗಿ ಮಾಡುವುದು ಹೇಗೆ?&lt;/strong&gt;&lt;/p&gt;&lt;p&gt;ಬೆಂಡೆಕಾಯಿಯನ್ನು ಚೆನ್ನಾಗಿ ಒಣಗಿಸಿ, ತೆಳುವಾದ ಸ್ಲೈಸ್&zwnj;ಗಳಾಗಿ ಕತ್ತರಿಸಿ ಮತ್ತು ಅಕ್ಕಿ ಹಿಟ್ಟಿನೊಂದಿಗೆ ಕೋಟಿಂಗ್ ಮಾಡಿ.&lt;/p&gt;&lt;p&gt;&lt;strong&gt;3. ಬೆಂಡೆಕಾಯಿ ಚಿಪ್ಸ್ ಅನ್ನು ಎಷ್ಟು ದಿನಗಳವರೆಗೆ ಸಂಗ್ರಹಿಸಬಹುದು?&lt;/strong&gt;&lt;/p&gt;&lt;p&gt;ಚಿಪ್ಸ್ ಸಂಪೂರ್ಣವಾಗಿ ತಣ್ಣಗಾದ ನಂತರ, ಗಾಳಿಯಾಡದ ಡಬ್ಬದಲ್ಲಿ 5&ndash;7 ದಿನಗಳವರೆಗೆ ಸಂಗ್ರಹಿಸಬಹುದು.&lt;/p&gt;]]></content:encoded>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/food/a-healthy-easy-snack-crispy-okra-chips-in-kannada-recipe-0xczaeg"/>
        </item>
        <item>
            <title><![CDATA[ಕಿಸ್​ ಕೊಡುತ್ತಲೇ ಹೋಟೆಲ್​ ರೂಮೊಳಗೆ ಹೋದಳು: ಬರುವಾಗ ಸೂಟ್​ಕೇಸ್​​ ಜೊತೆ ಒಬ್ಬಳೇ ಬಂದಳು- ಆಗಿದ್ದೇನು]]></title>
            <link>https://kannada.asianetnews.com/viral/airport-security-officer-in-argentina-has-been-arrested-for-dating-app-scam-suc/articleshow-fxtf7ah</link>
            <guid isPermaLink="true">https://kannada.asianetnews.com/viral/airport-security-officer-in-argentina-has-been-arrested-for-dating-app-scam-suc/articleshow-fxtf7ah</guid>
            <pubDate>Mon, 29 Jun 2026 12:20:30 +0530</pubDate>
            <description><![CDATA[ಡೇಟಿಂಗ್ ಆ್ಯಪ್​ನಲ್ಲಿ ಪರಿಚಯವಾದ ಯುವತಿಯೊಬ್ಬಳು, ಪುರುಷನಿಗೆ ಮುತ್ತು ಕೊಟ್ಟು ಕೋಣೆಯೊಳಗೆ ಹೋಗುತ್ತಾಳೆ. ಆದರೆ, ವಾಪಸ್ ಬರುವಾಗ ಆತನನ್ನು ಪ್ರಜ್ಞೆ ತಪ್ಪಿಸಿ, ಅವನ ವಸ್ತುಗಳನ್ನು ಸೂಟ್&zwnj;ಕೇಸ್&zwnj;ನಲ್ಲಿ ತುಂಬಿಕೊಂಡು ಪರಾರಿಯಾಗುತ್ತಾಳೆ. ಅರ್ಜೆಂಟೀನಾದಲ್ಲಿ ನಡೆದ ಈ ಘಟನೆ, ಡೇಟಿಂಗ್ ಆ್ಯಪ್ ವಂಚನೆಯ ಜಾಲವನ್ನು ಬಯಲಿಗೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw9214ph7fepsjtxrrk9z3fe,imgname-viral-video-1782715552465.jpg" type="image/jpeg" height="390" width="690"/>
            <content:encoded><![CDATA[&lt;p&gt;ಡೇಟಿಂಗ್​ ಆ್ಯಪ್​ನಲ್ಲಿಯೋ ಅಥವಾ ಇನ್ನಾವುದರ ಮೂಲಕವೋ ಸುಲಭದಲ್ಲಿ ಹುಡುಗಿ ಸಿಕ್ಕಳು ಎಂದಾಕ್ಷಣ ಆಕೆಯ ಹಿಂದೆ ಬಾಯಿ ಚಪ್ಪರಿಸಿಕೊಂಡು ಹೋಗುವವರು ಕೆಲವರಿದ್ದಾರೆ. ಅದು ಭಾರತ ಆಗಲಿ, ಇನ್ನಾವುದೇ ದೇಶ ಆಗಲಿ. ಹೆಣ್ಣು ಮಾಯೆ ಎನ್ನುವುದು ತಿಳಿದಿದ್ದರೂ, ಆ ಕ್ಷಣದಲ್ಲಿ ಅವೆಲ್ಲವೂ ಅವರಿಗೆ ತಿಳಿಯುವುದೇ ಇಲ್ಲ. ತಾನು ಹೆಣ್ಣೊಬ್ಬಳನ್ನು ಬುಟ್ಟಿಗೆ ಹಾಕಿಕೊಂಡೆ ಎಂದುಕೊಂಡು ಬಿಡುತ್ತಾರೆ. ಆದರೆ ಅಸಲಿಗೆ ಅಲ್ಲಿರುವ ಉದ್ದೇಶವೇ ಬೇರೆ ಇರುತ್ತದೆ. ಬುಟ್ಟಿಗೆ ಹಾಕಿಕೊಳ್ಳುವುದು ಇವರಲ್ಲ, ಬದಲಿಗೆ ಅವರು ಎನ್ನುವುದು ತಿಳಿಯುವ ಹೊತ್ತಿಗೆ ಎಲ್ಲವನ್ನೂ ಕಳೆದುಕೊಂಡಿರುತ್ತಾರೆ, ಕೆಲವೊಮ್ಮೆ ಜೀವವನ್ನೂ ಕಳೆದುಕೊಳ್ಳುತ್ತಾರೆ.&lt;/p&gt;&lt;p&gt;ಹೆಣ್ಣಿನ ಹಿಂದೆ ಬಿದ್ದು ಇದಾಗಲೇ ಲಕ್ಷಾಂತರ ಮಂದಿ ಮೋಸ ಹೋಗಿದ್ದರೂ, ತಮಗೇನೂ ಆಗುವುದಿಲ್ಲ ಎಂದು ಅಂದುಕೊಳ್ಳುವ ಪುರುಷರಿಗೆ ಈ ಘಟನೆ ಮತ್ತೊಂದು ಪಾಠವಾಗಿದೆ. ಡೇಟಿಂಗ್​ ಆ್ಯಪ್​ ಎನ್ನುವುದು ಈಗ ಕೆಲವು ಹೆಣ್ಣುಮಕ್ಕಳಿಗೆ ಬಹುದೊಡ್ಡ ಬಿಜಿನೆಸ್​ ಆಗಿಬಿಟ್ಟಿದೆ. ಆದರೆ ಇದನ್ನು ಅರಿಯದೇ ಹೆಣ್ಣು ಸಿಕ್ಕಳು ಎಂದುಕೊಂಡು ಆಕೆಯ ಹಿಂದೆ ಹೋಗುವವರು ಅಷ್ಟೇ ಪ್ರಮಾಣದಲ್ಲಿ ಇದ್ದಾರೆ. ಅಂಥದ್ದೊಂದು ಶಾಕಿಂಗ್​ ವಿಡಿಯೋ ಇದೀಗ ವೈರಲ್​ ಆಗಿದೆ. ಡೇಟಿಂಗ್​ ಆ್ಯಪ್​ನಲ್ಲಿ ಸಿಕ್ಕ ಬಕರಾ ಒಬ್ಬನಿಗೆ ಕಿಸ್​ ಕೊಡುತ್ತಲೇ ಲಿಫ್ಟ್​ನಲ್ಲಿ ಬಂದ ಯುವತಿ, ಕೊಠಡಿಯೊಳಕ್ಕೆ ಹೋಗಿದ್ದಾಳೆ. ಆದರೆ ವಾಪಸ್​ ಬರುವಾಗ ಮಾತ್ರ ಸೂಟ್​ಕೇಸ್​ ಜೊತೆ ಒಬ್ಬಳೇ ಬಂದಿದ್ದಾಳೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಒಳಗೆ ಹೋದ ಆಸಾಮಿ ಸೂಟ್​ಕೇಸ್​ನಲ್ಲಿ ಬಂದನಾ ಎನ್ನುವ ಸಂದೇಹ ಕೂಡ ಕೆಲವರನ್ನು ಕಾಡಿತ್ತು.&lt;/p&gt;&lt;h2&gt;&lt;strong&gt;ಸೂಟ್​ಕೇಸ್​ನಲ್ಲಿ ಏನಿತ್ತು?&lt;/strong&gt;&lt;/h2&gt;&lt;p&gt;ಅಸಲಿಗೆ ವಿಷ್ಯ ಇರೋದೇ ಬೇರೆ. ಅವಳೇನು ಆತನನ್ನು ಕೊಂದು ಸೂಟ್​ಕೇಸ್​ನಲ್ಲಿ ಹಾಕಿಕೊಂಡು ಬರಲಿಲ್ಲ. ಆದರೆ ಕಿಸ್​ ಕೊಡುತ್ತಲೇ ಆತನ ಮತ್ತನ್ನು ಏರಿಸಿದ ಈ ಮಹಿಳೆ, ಒಳಗೆ ಹೋಗಿ ಪ್ರಜ್ಞೆ ತಪ್ಪಿಸುವ ಮಾತ್ರೆ ಕೊಟ್ಟು ಆತನ ಪ್ರಜ್ಞೆ ತಪ್ಪಿಸಿ, ಆತನ ಬಳಿ ಇರುವುದನ್ನೆಲ್ಲಾ ದೋಚಿಕೊಂಡು ಸೂಟ್​ಕೇಸ್​​ನಲ್ಲಿ ಹಾಕಿಕೊಂಡು ಬಂದಿದ್ದಾಳೆ. ಮುತ್ತಿನ ಮತ್ತಿನಲ್ಲಿದ್ದ ವ್ಯಕ್ತಿಗೆ ಎಚ್ಚರವಾದಾಗ ತಾನು ಮೋಸ ಹೋಗಿರುವುದು ತಿಳಿದಿದೆ. ಬಳಿಕ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ. ಸಿಸಿಟಿವಿ ಫುಟೇಜ್​ ನೋಡಿದಾಗ, ಮಹಿಳೆಯ ಮೋಸ ಬಯಲಿಗೆ ಬಂದಿದೆ.&lt;/p&gt;&lt;p&gt;ಅಂದಹಾಗೆ ಇದು ನಡೆದಿರುವುದು ಅರ್ಜೆಂಟೀನಾದಲ್ಲಿ. 31 ವರ್ಷದ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯಾಗಿರುವ ಮಹಿಳೆ ಈ ಮೋಸದ ಜಾಲದ ರೂವಾರಿ. ಶ್ರೀಮಂತ ಪುರುಷರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತ ಡೇಟಿಂಗ್ ಆ್ಯಪ್ ವಂಚನೆ ನಡೆಸುತ್ತಿದ್ದ ಈ ಮಹಿಳೆಯ ಗ್ಯಾಂಗ್​ ಅನ್ನು ಅಲ್ಲಿಯ ಪೊಲೀಸರು ಬಂಧಿಸಿದ್ದಾರೆ. ಲೂಸಿಯಾ ಫೆರ್ನಾಂಡಾ ಡಿಯಾಜ್ ಡಾ ಮೋಟಾ ಎಂಬಾಕೆ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಮೊದಲಿಗೆ ಶ್ರೀಮಂತ ಪುರುಷರಿಗೆ ಡೇಟಿಂಗ್​ ಆ್ಯಪ್​ ಮೂಲಕ ಗಾಳ ಹಾಕಿ ಅವರನ್ನು ತಾವೇ ಊಟಕ್ಕೆ ಕರೆದುಕೊಂಡು ಹೋಗಿ ಬಳಿಕ ಹೋಟೆಲ್​ ರೂಮ್​ ಬುಕ್​ ಮಾಡಿ ಅಲ್ಲಿ ಮುತ್ತಿನ ಮಳೆಗೈದು ಇಂಥ ಕೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಪ್ರಜ್ಞಾಹೀನರನ್ನಾಗಿ ಮಾಡಿ ನಗದು, ಬೆಲೆ ಬಾಳುವ ವಾಚ್ ಇತ್ಯಾದಿಗಳನ್ನು ಲಪಟಾಯಿಸಿಕೊಂಡು ಹೋಗುವ ಗ್ಯಾಂಗ್​ ಇದಾಗಿದೆ.&lt;/p&gt;&lt;h3&gt;&lt;strong&gt;ದೂರು ಕೊಡಲು ಹಿಂದೇಟು&lt;/strong&gt;&lt;/h3&gt;&lt;p&gt;ಅಲ್ಲೇನೋ ಪೊಲೀಸರು ಆಕೆಯನ್ನು ಹಿಡಿದರು. ಆದರೆ ನಮ್ಮಲ್ಲಿ ಅದೇ ರೀತಿ ಆಗುತ್ತದೆ ಎಂದು ಹೇಳಲು ಆಗದು. ಜೊತೆಗೆ, ಇಂಥ ಪ್ರಕರಣಗಳಲ್ಲಿ ಮದುವೆಯಾಗಿ, ಮಕ್ಕಳಿರೋ ಪುರುಷರೇ ಬೇರೆ ಯುವತಿಯರನ್ನು ಅರಸಿ ಹೋಗುವ ಕಾರಣ, ದೂರು ಕೂಡ ನೀಡಲು ಹಿಂಜರಿಯುವುದು ಇಂಥವರಿಗೆ ತಿಳಿದಿದ್ದರಿಂದಲೇ ಅಂಥವರನ್ನು ಬಲೆಗೆ ಬೀಸಿಕೊಳ್ಳುತ್ತಾರೆ. ಆದ್ದರಿಂದ ಸುಲಭದಲ್ಲಿ ಹೆಣ್ಣು ಸಿಕ್ಕಳು ಎಂದು ಆಕೆ ಜೊತೆ ಹೋಗುವ ಮುನ್ನ ನೂರೆಂಟು ಬಾರಿ ಪುರುಷರು ಯೋಚಿಸಿ ಎಂದು ಪೊಲೀಸರು ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/viral/airport-security-officer-in-argentina-has-been-arrested-for-dating-app-scam-suc/articleshow-fxtf7ah"/>
        </item>
        <item>
            <title><![CDATA[Fan Cleaning: 2 ನಿಮಿಷದಲ್ಲಿ ಮನೆಯಲ್ಲೇ ಫ್ಯಾನ್‌ ರೆಕ್ಕೆ ಕ್ಲೀನ್‌ ಮಾಡೋದು ಹೇಗೆ?]]></title>
            <link>https://kannada.asianetnews.com/gallery/life/how-to-clean-ceiling-fan-without-ladder-tips-hwn8gew</link>
            <guid isPermaLink="true">https://kannada.asianetnews.com/gallery/life/how-to-clean-ceiling-fan-without-ladder-tips-hwn8gew</guid>
            <pubDate>Mon, 29 Jun 2026 12:58:05 +0530</pubDate>
            <description><![CDATA[&lt;p&gt;How to clean ceiling fan without ladder: ಮನೆಯ ಸೀಲಿಂಗ್ ಫ್ಯಾನ್&zwnj;ಗೆ ಅಂಟಿಕೊಂಡಿರುವ ಧೂಳನ್ನು ಸ್ವಚ್ಛಗೊಳಿಸುವುದು ಹಲವರಿಗೆ ದೊಡ್ಡ ತಲೆನೋವು. ಕೇವಲ 2 ನಿಮಿಷದಲ್ಲಿ ಸೀಲಿಂಗ್ ಫ್ಯಾನ್ ಕ್ಲೀನ್ ಮಾಡಿ, ಧೂಳಿಲ್ಲದೆ ಫಳಫಳ ಹೊಳೆಯುವಂತೆ ಮಾಡಲು ಕೆಲವು ಸೂಪರ್ ಟಿಪ್ಸ್&zwnj; ಇಲ್ಲಿದೆ!&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt6jrxxkgnbv25pzfk08rz52,imgname-ceiling-fan-easy-cleaning-tips-5--1--1780484962226.jpg" type="image/jpeg" height="390" width="690"/>
            <content:encoded><![CDATA[&lt;p&gt;How to clean ceiling fan without ladder: ಮನೆಯ ಸೀಲಿಂಗ್ ಫ್ಯಾನ್&zwnj;ಗೆ ಅಂಟಿಕೊಂಡಿರುವ ಧೂಳನ್ನು ಸ್ವಚ್ಛಗೊಳಿಸುವುದು ಹಲವರಿಗೆ ದೊಡ್ಡ ತಲೆನೋವು. ಕೇವಲ 2 ನಿಮಿಷದಲ್ಲಿ ಸೀಲಿಂಗ್ ಫ್ಯಾನ್ ಕ್ಲೀನ್ ಮಾಡಿ, ಧೂಳಿಲ್ಲದೆ ಫಳಫಳ ಹೊಳೆಯುವಂತೆ ಮಾಡಲು ಕೆಲವು ಸೂಪರ್ ಟಿಪ್ಸ್&zwnj; ಇಲ್ಲಿದೆ!&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇದು ತುಂಬಾ ಸುಲಭ ಹಾಗೂ ಪರಿಣಾಮಕಾರಿ ವಿಧಾನ. ನಿಮ್ಮ ಮನೆಯಲ್ಲಿರುವ ಹಳೆಯ ದಿಂಬಿನ ಕವರ್ ತೆಗೆದುಕೊಳ್ಳಿ. ಮೊದಲು, ಫ್ಯಾನ್ ಸ್ವಿಚ್ ಆಫ್ ಮಾಡಿ, ಅದು ಸಂಪೂರ್ಣವಾಗಿ ನಿಂತಿರುವುದನ್ನು ಖಚಿತಪಡಿಸಿಕೊಳ್ಳಿ.&amp;nbsp;&lt;/p&gt;&lt;p&gt;ಫ್ಯಾನ್&zwnj;ನ ಒಂದು ಬ್ಲೇಡ್&zwnj;ಗೆ ದಿಂಬಿನ ಕವರ್ ಅನ್ನು ಹಾಕಿ, ಬ್ಲೇಡ್&zwnj;ನ ಪೂರ್ತಿ ಉದ್ದವನ್ನು ಕವರ್ ಒಳಗೆ ಸೇರಿಸಿ. ನಿಧಾನವಾಗಿ ಕವರ್ ಅನ್ನು ಹೊರಗೆ ಎಳೆದಾಗ, ಬ್ಲೇಡ್&zwnj;ನಲ್ಲಿರುವ ಎಲ್ಲಾ ಧೂಳು ಕವರ್&zwnj;ನೊಳಗೆ ಸಿಕ್ಕಿಹಾಕಿಕೊಳ್ಳುತ್ತದೆ. ಇದರಿಂದ ಧೂಳು ಕೋಣೆಯ ತುಂಬಾ ಹರಡುವುದಿಲ್ಲ.&amp;nbsp;&lt;/p&gt;&lt;p&gt;ಪ್ರತಿ ಬ್ಲೇಡ್&zwnj;ಗೂ ಇದೇ ರೀತಿ ಮಾಡಿ. ಕ್ಲೀನಿಂಗ್ ಮುಗಿದ ನಂತರ, ದಿಂಬಿನ ಕವರ್ ಅನ್ನು ಹೊರಗೆ ಹಾಕಿ, ತೊಳೆಯಲು ಹಾಕಿ. ಈ ವಿಧಾನವು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ಯಾವುದೇ ಗಡಿಬಿಡಿ ಇಲ್ಲದೆ ಧೂಳನ್ನು ತೆಗೆದುಹಾಕುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ಬಳಿ ಹಳೆಯ ಸಾಕ್ಸ್ ಇದ್ದರೆ, ಅದನ್ನೂ ಈ ಕೆಲಸಕ್ಕೆ ಬಳಸಬಹುದು. ಒಂದು ಹಳೆಯ ಸಾಕ್ಸ್ ತೆಗೆದುಕೊಂಡು, ಅದನ್ನು ನಿಮ್ಮ ಕೈಗೆ ಹಾಕಿಕೊಳ್ಳಿ. ಒಂದು ಸ್ಟೂಲ್ ಅಥವಾ ಏಣಿಯ ಸಹಾಯದಿಂದ ಫ್ಯಾನ್ ಬಳಿ ಹೋಗಿ. ಸಾಕ್ಸ್ ಅನ್ನು ಸ್ವಲ್ಪ ಒದ್ದೆ ಮಾಡಿ, ಪ್ರತಿ ಬ್ಲೇಡ್ ಅನ್ನು ಒರೆಸಿ.&amp;nbsp;&lt;/p&gt;&lt;p&gt;ಸಾಕ್ಸ್&zwnj;ನ ಮೃದುವಾದ ರಚನೆ ಧೂಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದೇ ರೀತಿ, ಮೈಕ್ರೋಫೈಬರ್ ಬಟ್ಟೆಯೂ ಧೂಳನ್ನು ಪರಿಣಾಮಕಾರಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ.&amp;nbsp;&lt;/p&gt;&lt;p&gt;ಒಂದು ಮೈಕ್ರೋಫೈಬರ್ ಬಟ್ಟೆಯನ್ನು, ಸಮ ಪ್ರಮಾಣದ ನೀರು ಮತ್ತು ಬಿಳಿ ವಿನೆಗರ್ ಮಿಶ್ರಣದಲ್ಲಿ ಅದ್ದಿ (ಚೆನ್ನಾಗಿ ಹಿಂಡಿ), ಫ್ಯಾನ್ ಬ್ಲೇಡ್&zwnj;ಗಳನ್ನು ಒರೆಸಬಹುದು. ಇದು ಧೂಳನ್ನು ತೆಗೆದುಹಾಕುವುದರ ಜೊತೆಗೆ, ಕಲೆಗಳನ್ನು ತೆಗೆದು ಫಳಫಳ ಹೊಳೆಯುವಂತೆ ಮಾಡುತ್ತದೆ.&lt;/p&gt;&lt;img&gt;&lt;p&gt;ಫ್ಯಾನ್ ಒರೆಸಿ ಮುಗಿದ ನಂತರ, ಒಂದು ಸ್ಪ್ರೇ ಬಾಟಲಿಯಲ್ಲಿ ಸ್ವಲ್ಪ ನೀರು ಮತ್ತು ಕೆಲವು ಹನಿ ಬಟ್ಟೆಗಳಿಗೆ ಬಳಸುವ ಫ್ಯಾಬ್ರಿಕ್ ಸಾಫ್ಟ್&zwnj;ನರ್ (ಅಥವಾ Lucas Oil Slick Mist ನಂತಹ ಕಾರ್ ಸ್ಪ್ರೇ) ಮಿಶ್ರಣ ಮಾಡಿ. ಇದನ್ನು ಫ್ಯಾನ್ ರೆಕ್ಕೆಗಳ ಮೇಲೆ ಸ್ಪ್ರೇ ಮಾಡಿ ಒರೆಸಿ.&amp;nbsp;&lt;/p&gt;&lt;p&gt;ಇದು 'ಆಂಟಿ-ಸ್ಟ್ಯಾಟಿಕ್' (Anti-static layer) ಪದರವನ್ನು ಸೃಷ್ಟಿಸಿ, ಗಾಳಿಯಲ್ಲಿರುವ ಧೂಳು ಸುಲಭವಾಗಿ ಫ್ಯಾನ್&zwnj;ಗೆ ಅಂಟಿಕೊಳ್ಳದಂತೆ ತಡೆಯುತ್ತದೆ. ಇದರಿಂದ ಮುಂದಿನ ಕೆಲವು ತಿಂಗಳುಗಳ ಕಾಲ ಫ್ಯಾನ್ ಸ್ವಚ್ಛವಾಗಿರುತ್ತದೆ!&lt;/p&gt;&lt;img&gt;&lt;p&gt;ಫ್ಯಾನ್ ಸ್ವಚ್ಛಗೊಳಿಸುವ ಮೊದಲು, ಖಂಡಿತವಾಗಿಯೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡುವಾಗ, ಗಟ್ಟಿಯಾದ ಸ್ಟೂಲ್ ಅಥವಾ ಏಣಿಯನ್ನು ಬಳಸಿ. ನಿಮ್ಮ ಮುಖಕ್ಕೆ ಧೂಳು ಬೀಳದಂತೆ ಬಟ್ಟೆ ಅಥವಾ ಮಾಸ್ಕ್ ಧರಿಸುವುದು ಒಳ್ಳೆಯದು.&lt;/p&gt;]]></content:encoded>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/life/how-to-clean-ceiling-fan-without-ladder-tips-hwn8gew"/>
        </item>
        <item>
            <title><![CDATA[Conjunctivitis Prevention: ಮಳೆಗಾಲದಲ್ಲಿ ಕಾಡುವ ಕಣ್ಣಿನ ಸಮಸ್ಯೆ… ರೋಗ ಲಕ್ಷಣ, ಪರಿಹಾರ ತಿಳಿಯಿರಿ]]></title>
            <link>https://kannada.asianetnews.com/health-life/protect-your-eyes-from-conjunctivitis-infection-in-monsoon/articleshow-gqz42f6</link>
            <guid isPermaLink="true">https://kannada.asianetnews.com/health-life/protect-your-eyes-from-conjunctivitis-infection-in-monsoon/articleshow-gqz42f6</guid>
            <pubDate>Mon, 29 Jun 2026 13:39:03 +0530</pubDate>
            <description><![CDATA[&lt;p&gt;Conjunctivitis: ಮಳೆಗಾಲದಲ್ಲಿ ಕಾಂಜಂಕ್ಟಿವಿಟಿಸ್ (ಕಣ್ಣಿನ ಜ್ವರ ಅಥವಾ ಕಣ್ಣಿನ ಇನ್ಫೆಕ್ಷನ್) ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಈ ಕಣ್ಣಿನ ಇನ್ಫೆಕ್ಷನ್ ಲಕ್ಷಣಗಳೇನು? ಹಾಗೂ ನಿಮ್ಮ ಕಣ್ಣುಗಳನ್ನು ಹೇಗೆ ಆರೋಗ್ಯವಾಗಿರಿಸಿಕೊಳ್ಳಬಹುದು ಎನ್ನುವ ಕುರಿತಾಗಿ ಸಂಪೂರ್ಣ ಮಾಹಿತಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h6kf6007kckrdvdxf5c6ymts,imgname-Conjunctivitis-in-kids-1690723090439.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮಳೆಗಾಲದಲ್ಲಿ ಕಾಡುವ ಕಾಂಜಂಕ್ಟಿವಿಟಿಸ್&lt;/strong&gt;&lt;/h2&gt;&lt;p&gt;ಹೆಚ್ಚಿನ ಜನರು ಮಳೆಗಾಲವನ್ನು ಇಷ್ಟಪಡುತ್ತಾರೆ, ಆದರೆ ಇದು ಹಲವಾರು ಸಮಸ್ಯೆಗಳನ್ನು ಸಹ ತರುವುದು ಈ ಮಳೆಗಾಲ. ಈ ಸಮಯದಲ್ಲಿ ಹಲವಾರು ಕಾಯಿಲೆಗಳು ದೇಹವನ್ನು ಕಾಡುತ್ತವೆ. ವಿವಿಧ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ಅಪಾಯವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇವುಗಳಲ್ಲಿ ಒಂದು ಕಾಂಜಂಕ್ಟಿವಿಟಿಸ್ ಅಪಾಯವಾಗಿದ್ದು, ಇದು ಎಲ್ಲರೂ ಕಾಳಜಿ ವಹಿಸಬೇಕಾದ ಒಂದು ಸಮಸ್ಯೆಯಾಗಿದೆ.&lt;/p&gt;&lt;p&gt;ಮಳೆಗಾಲದಲ್ಲಿ, ಹೆಚ್ಚಿದ ಆರ್ದ್ರತೆ, ಕೊಳಕು ನೀರು ಮತ್ತು ಸಾಂಕ್ರಾಮಿಕ ವೈರಸ್&zwnj;ಗಳು ಮತ್ತು ಬ್ಯಾಕ್ಟೀರಿಯಾಗಳು ಕಣ್ಣುಗಳನ್ನು ವೇಗವಾಗಿ ಪ್ರವೇಶಿಸುತ್ತವೆ, ಕಣ್ಣಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ. ಅನೇಕ ಜನರು ಇದಕ್ಕೆ ಬಲಿಯಾಗುತ್ತಾರೆ ಮತ್ತು ಸಮಸ್ಯೆ ಇನ್ನಷ್ಟು ಹದಗೆಡುತ್ತಲೇ ಇರುತ್ತದೆ. ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಈ ಸಮಸ್ಯೆ ಉಲ್ಬಣಗೊಳ್ಳಬಹುದು. ಮಳೆಗಾಲದಲ್ಲಿ ಕಣ್ಣುಗಳನ್ನು ಸ್ವಚ್ಛಗೊಳಿಸಲು ಮತ್ತು ರಕ್ಷಿಸಲು ಯಾವ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ತಿಳಿಯಿರಿ.&lt;/p&gt;&lt;h3&gt;&lt;strong&gt;ಕಾಂಜಂಕ್ಟಿವಿಟಿಸ್ ಎಂದರೇನು?&lt;/strong&gt;&lt;/h3&gt;&lt;p&gt;ಮಳೆಗಾಲದಲ್ಲಿ ಕಾಂಜಂಕ್ಟಿವಿಟಿಸ್ ತೀವ್ರವಾಗಿ ಹೆಚ್ಚಾಗುತ್ತದೆ, ಇದು ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಕಣ್ಣಿನ ಹೊರ ಪದರದ ಉರಿಯೂತ ಅಥವಾ ಸೋಂಕಾಗಿದ್ದು, ಇದು ವೈರಲ್, ಬ್ಯಾಕ್ಟೀರಿಯಾ ಅಥವಾ ಅಲರ್ಜಿಯ ಪ್ರತಿಕ್ರಿಯೆಗಳಿಂದ ಉಂಟಾಗಬಹುದು. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದ ಮೂಲಕ ಈ ಸಮಸ್ಯೆ ಸುಲಭವಾಗಿ ಹರಡಬಹುದು.&lt;/p&gt;&lt;h3&gt;&lt;strong&gt;ಕಾಂಜಂಕ್ಟಿವಿಟಿಸ್&zwnj;ನ ಸಾಮಾನ್ಯ ಲಕ್ಷಣಗಳು&lt;/strong&gt;&lt;/h3&gt;&lt;p&gt;ಕಾಂಜಂಕ್ಟಿವಿಟಿಸ್&zwnj;ನ ಲಕ್ಷಣಗಳು ತುಂಬಾನೆ ಸಾಮಾನ್ಯವಾಗಿದೆ, ಮತ್ತು ಹೆಚ್ಚಿನ ಜನರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ಕೆಳಗಿನ ಲಕ್ಷಣಗಳು ಕಂಡು ಬಂದರೆ, ನಿರ್ಲಕ್ಷಿಸುವ ತಪ್ಪು ಮಾಡಬೇಡಿ.&lt;/p&gt;&lt;ul&gt; &lt;li&gt;ಕಣ್ಣುಗಳು ಕೆಂಪಾಗುವುದು&lt;/li&gt; &lt;li&gt;ಕಣ್ಣುಗಳಲ್ಲಿ ತುರಿಕೆ ಅಥವಾ ಉರಿ&lt;/li&gt; &lt;li&gt;ನಿರಂತರ ನೀರು ಬರುವುದು&lt;/li&gt; &lt;li&gt;ಕಣ್ಣುಗಳಿಂದ ಬಿಳಿ ಅಥವಾ ಹಳದಿ ಜಿಗುಟಾದ ಸ್ರಾವ&lt;/li&gt; &lt;li&gt;ಬೆಳಿಗ್ಗೆ ಎದ್ದ ತಕ್ಷಣ ಕಣ್ಣುರೆಪ್ಪೆಗಳು ಜಿಗುಟಾಗಿರುವುದು&lt;/li&gt; &lt;li&gt;ಬೆಳಿಗ್ಗೆ ಕಣ್ಣು ತೆರೆಯಲು ಕಷ್ಟವಾಗುವುದು.&lt;/li&gt;&lt;/ul&gt;&lt;h3&gt;&lt;strong&gt;ಮಳೆಗಾಲದ ಸೋಂಕಿನಿಂದ ನಿಮ್ಮ ಕಣ್ಣುಗಳನ್ನು ಹೇಗೆ ರಕ್ಷಿಸಿಕೊಳ್ಳುವುದು?&lt;/strong&gt;&lt;/h3&gt;&lt;ul&gt; &lt;li&gt;ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ&lt;/li&gt; &lt;li&gt;ಕಾಂಟ್ಯಾಕ್ಟ್ ಲೆನ್ಸ್&zwnj;ಗಳನ್ನು ಧರಿಸುವುದನ್ನು ತಪ್ಪಿಸಿ&lt;/li&gt; &lt;li&gt;ಐ ಮೇಕಪ್ ಮಾಡಿಕೊಳ್ಳಬೇಡಿ&lt;/li&gt; &lt;li&gt;ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಮುಟ್ಟುವುದನ್ನು ತಪ್ಪಿಸಿ&lt;/li&gt; &lt;li&gt;ವೈದ್ಯರನ್ನು ಸಂಪರ್ಕಿಸದೆ ಐ ಡ್ರಾಪ್ಸ್ ಬಳಸಬೇಡಿ&lt;/li&gt;&lt;/ul&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/health-life/protect-your-eyes-from-conjunctivitis-infection-in-monsoon/articleshow-gqz42f6"/>
        </item>
        <item>
            <title><![CDATA[Vijay Joseph Trisha Krishnan Viral News: ತ್ರಿಶಾ ಡಿಸಿಎಂ ಆಗ್ತಾರಾ? ಮಾಜಿ ಸಚಿವರ ಸೆನ್ಸೇಷನಲ್ ಹೇಳಿಕೆ ಭಾರೀ ವೈರಲ್; ನಟಿ ಫ್ಯಾನ್ಸ್‌ಗೆ ಸಖತ್ ಖುಷಿ!]]></title>
            <link>https://kannada.asianetnews.com/entertainment/former-aiadmk-minister-udhayakumar-sensational-statement-about-vijay-and-trisha-is-currently-going-viral/articleshow-exprp2q</link>
            <guid isPermaLink="true">https://kannada.asianetnews.com/entertainment/former-aiadmk-minister-udhayakumar-sensational-statement-about-vijay-and-trisha-is-currently-going-viral/articleshow-exprp2q</guid>
            <pubDate>Mon, 29 Jun 2026 13:11:54 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯದ ಮಿಕ್ಸ್ ಇತ್ತೀಚಿನ ದಿನಗಳಲ್ಲಿ ಹೊಸ ಹಂತಕ್ಕೆ ತಲುಪಿದೆ. ಮಾಜಿ ಸಚಿವರ ಈ 'ತ್ರಿಶಾ ಡಿಸಿಎಂ' ಹೇಳಿಕೆಗೆ ವಿಜಯ್ ಅವರ ಪಕ್ಷ ಯಾವ ರೀತಿ ತಿರುಗೇಟು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ತ್ರಿಶಾ ನಿಜವಾಗಿಯೂ ರಾಜಕೀಯಕ್ಕೆ ಬಂದರೆ, ಅದೊಂದು ದೊಡ್ಡ ತಿರುವು ಆಗುವುದರಲ್ಲಿ ಸಂಶಯವಿಲ್ಲ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsxx9wnsgq9kwscgsnsf0a8,imgname-actor-trisha-unfollows-vijay-1782207915925.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಟಿ ತ್ರಿಶಾ ಈಗ ಉಪಮುಖ್ಯಮಂತ್ರಿ? ಸಂಚಲನ ಮೂಡಿಸಿದ ಮಾಜಿ ಸಚಿವರ ಶಾಕಿಂಗ್ ಹೇಳಿಕೆ!&lt;/strong&gt;&lt;/p&gt;&lt;p&gt;ತಮಿಳುನಾಡು ಅಂದ್ರೇನೇ ಅಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧ. ಎಂಜಿಆರ್, ಜಯಲಲಿತಾ ಕಾಲದಿಂದಲೂ ನಟ-ನಟಿಯರು ರಾಜ್ಯವನ್ನಾಳುತ್ತಾ ಬಂದಿದ್ದಾರೆ. ಈಗ ಈ ಸಾಲಿಗೆ ದಕ್ಷಿಣ ಭಾರತದ ಕನಸಿನ ಕನ್ಯೆ ತ್ರಿಶಾ ಕೃಷ್ಣನ್ (Trisha Krishnan) ಅವರ ಹೆಸರು ಸೇರ್ಪಡೆಯಾಗುತ್ತಿದೆಯೇ? ಹೌದು, ತಮಿಳುನಾಡು ರಾಜಕೀಯದಲ್ಲಿ ಈಗ 'DCM ತ್ರಿಶಾ' ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ! ಇದು ನಿಜವೋ ಅಥವಾ ಕೇವಲ ರಾಜಕೀಯ ಗಿಮಿಕ್ಕೋ? ಈ ಸ್ಟೋರಿ ನೋಡಿ..&lt;/p&gt;&lt;p&gt;ಬೆಳ್ಳಿತೆರೆಯಿಂದ ಸಚಿವಾಲಯಕ್ಕೆ ತ್ರಿಶಾ ಎಂಟ್ರಿ?&lt;/p&gt;&lt;p&gt;ಕಳೆದ ಎರಡು ದಶಕಗಳಿಂದ ತಮಿಳು ಚಿತ್ರರಂಗವನ್ನು ಆಳುತ್ತಿರುವ ತ್ರಿಶಾ (Trisha Krishnan), ಇಂದಿಗೂ ಟಾಪ್ ಹೀರೋಯಿನ್. ಇತ್ತೀಚೆಗೆ 'ದಳಪತಿ' ವಿಜಯ್ (Thalapathy Vijay) ಜೊತೆ 'ಲಿಯೋ' ಚಿತ್ರದಲ್ಲಿ ಮಿಂಚಿದ್ದ ತ್ರಿಶಾ ಹೆಸರು ಈಗ ದಿಢೀರನೆ ರಾಜಕೀಯ ಅಖಾಡದಲ್ಲಿ ಕೇಳಿಬರುತ್ತಿದೆ. ಅದಕ್ಕೆ ಕಾರಣವಾಗಿದ್ದು ಎಐಎಡಿಎಂಕೆ (AIADMK) ಮಾಜಿ ಸಚಿವ ಉದಯಕುಮಾರ್ ಅವರು ನೀಡಿದ ಒಂದು ಸೆನ್ಸೇಷನಲ್ ಹೇಳಿಕೆ. &quot;ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾಳೆ ನಟಿ ತ್ರಿಶಾ ತಮಿಳುನಾಡಿನ ಉಪಮುಖ್ಯಮಂತ್ರಿಯಾದರೂ ಆಶ್ಚರ್ಯವಿಲ್ಲ&quot; ಎಂದು ಅವರು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ. ಅವರ ಈ ಹೇಳಿಕೆ ಸಖತ್ ವೈರಲ್ ಆಗಿದೆ. ಜೊತೆಗೆ, ತ್ರಿಷಾ ಫ್ಯಾನ್ಸ್ ಸಖತ್ ಖುಷಿಗೆ ಕಾರಣವಾಗಿದೆ.&lt;/p&gt;&lt;h2&gt;ವಿಜಯ್ ನಿರ್ಧಾರಕ್ಕೆ ವಿರೋಧ ಪಕ್ಷಗಳ ಕೆಂಗಣ್ಣು:&lt;/h2&gt;&lt;p&gt;ತಮಿಳು ಸೂಪರ್ ಸ್ಟಾರ್ ವಿಜಯ್ ಅವರು ತಮ್ಮದೇ ಆದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವನ್ನು ಸ್ಥಾಪಿಸಿ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದಾರೆ. ಇತ್ತೀಚೆಗೆ ವಿಜಯ್ ಅವರು ಕರ್ನಾಟಕದ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಕೆವಿಎನ್ (KVN) ಪ್ರೊಡಕ್ಷನ್ಸ್ ಮುಖ್ಯಸ್ಥ ವೆಂಕಟ ನಾರಾಯಣ ಅವರನ್ನು ದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಿಸುವಂತೆ ಶಿಫಾರಸು ಮಾಡಿದ್ದರು ಎನ್ನಲಾದ ಸುದ್ದಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವಿಜಯ್ ಅಭಿನಯದ ಕೊನೆಯ ಚಿತ್ರವನ್ನು ನಿರ್ಮಿಸುತ್ತಿರುವ ಕಾರಣಕ್ಕಾಗಿ ನೆರೆಯ ರಾಜ್ಯದ ವ್ಯಕ್ತಿಗೆ ಇಂತಹ ದೊಡ್ಡ ಹುದ್ದೆ ನೀಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಈ ಸಂಗತಿ ತಮಿಳುನಾಡು ರಾಜಕಾರಣದಲ್ಲಿ, ಅದರಲ್ಲೂ ವಿರೋಧಪಕ್ಷಗಳ ಪಡಸಾಲೆಯಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸುತ್ತಿದೆ.&lt;/p&gt;&lt;p&gt;ವಿಡಂಬನೆಯೋ ಅಥವಾ ಭವಿಷ್ಯದ ಮುನ್ಸೂಚನೆಯೋ?&lt;/p&gt;&lt;p&gt;ಇದೇ ವಿಚಾರವನ್ನು ಇಟ್ಟುಕೊಂಡು ವಿಜಯ್ ಅವರನ್ನು ಕಾಲೆಳೆದಿರುವ ಮಾಜಿ ಸಚಿವ ಉದಯಕುಮಾರ್, &quot;ವಿಜಯ್ ಅವರಿಗೆ ಕೇವಲ ಸಿನಿಮಾ ಗೆಳೆತನ ಮತ್ತು ಸಂಪರ್ಕಗಳೇ ಮುಖ್ಯವಾಗಿದೆ. 8 ಕೋಟಿ ಜನರಿರುವ ತಮಿಳುನಾಡಿನಲ್ಲಿ ಅವರಿಗೆ ಒಬ್ಬ ತಮಿಳಿಗ ಸಿಗಲಿಲ್ಲವೇ? ಸಿನಿಮಾ ಮಂದಿಗೆ ಹೀಗೆಯೇ ಪ್ರಮುಖ ಹುದ್ದೆಗಳನ್ನು ಹಂಚುತ್ತಾ ಹೋದರೆ, ಮುಂದಿನ ದಿನಗಳಲ್ಲಿ ನಟಿ ತ್ರಿಶಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಪಕ್ಕದಲ್ಲಿ ಕೂರಿಸಿಕೊಂಡರೂ ಆಶ್ಚರ್ಯವಿಲ್ಲ&quot; ಎಂದು ಕುಟುಕಿದ್ದಾರೆ. ಈ ಮಾತು ಇಡೀ ದೇಶದ ತುಂಬಾ ಪ್ರಚಾರ ಪಡೆಯುತ್ತಿದೆ.&lt;/p&gt;&lt;h3&gt;ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ&lt;/h3&gt;&lt;p&gt;ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ವಿಜಯ್ ಮತ್ತು ತ್ರಿಶಾ ಜೋಡಿ ಬೆಳ್ಳಿತೆರೆಯ ಮೇಲೆ ಎಷ್ಟು ಫೇಮಸ್ಸೋ, ಈಗ ರಾಜಕೀಯವಾಗಿಯೂ ಅಷ್ಟೇ ಸದ್ದು ಮಾಡುತ್ತಿದೆ. ಅಭಿಮಾನಿಗಳಂತೂ &quot;ಜಯಲಲಿತಾ ಅವರಂತೆ ತ್ರಿಶಾ ಕೂಡ ರಾಜಕೀಯಕ್ಕೆ ಬಂದರೆ ಅಡ್ಡಿಯಿಲ್ಲ&quot; ಎಂದು ಕಾಮೆಂಟ್ ಮಾಡುತ್ತಿದ್ದರೆ, ರಾಜಕೀಯ ವಿಶ್ಲೇಷಕರು ಇದೊಂದು ಕೇವಲ ಟೀಕೆ ಅಷ್ಟೇ ಎನ್ನುತ್ತಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯದ ಮಿಕ್ಸ್ ಇತ್ತೀಚಿನ ದಿನಗಳಲ್ಲಿ ಹೊಸ ಹಂತಕ್ಕೆ ತಲುಪಿದೆ. ಮಾಜಿ ಸಚಿವರ ಈ 'ತ್ರಿಶಾ ಡಿಸಿಎಂ' ಹೇಳಿಕೆಗೆ ವಿಜಯ್ ಅವರ ಪಕ್ಷ ಯಾವ ರೀತಿ ತಿರುಗೇಟು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ತ್ರಿಶಾ ನಿಜವಾಗಿಯೂ ರಾಜಕೀಯಕ್ಕೆ ಬಂದರೆ, ದಕ್ಷಿಣ ಭಾರತದ ರಾಜಕೀಯ ಇತಿಹಾಸದಲ್ಲೇ ಅದೊಂದು ದೊಡ್ಡ ತಿರುವು ಆಗುವುದರಲ್ಲಿ ಸಂಶಯವಿಲ್ಲ! ಆದರೆ, ಸದ್ಯಕ್ಕೆ ಈ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ, ಕಾದು ನೋಡಬೇಕಷ್ಟೇ!&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/former-aiadmk-minister-udhayakumar-sensational-statement-about-vijay-and-trisha-is-currently-going-viral/articleshow-exprp2q"/>
        </item>
        <item>
            <title><![CDATA[ಫ್ರಿಡ್ಜ್‌ನಲ್ಲಿ ಟಿಶ್ಯೂ ಪೇಪರ್ ಇಟ್ಟು ಮ್ಯಾಜಿಕ್ ನೋಡಿ! ಈ ಸೀಕ್ರೆಟ್ ಟ್ರಿಕ್ ಗೊತ್ತಾ?]]></title>
            <link>https://kannada.asianetnews.com/gallery/kitchen/simple-fridge-hack-using-tissue-paper-to-keep-food-fresh-mrq-v0l6n5u</link>
            <guid isPermaLink="true">https://kannada.asianetnews.com/gallery/kitchen/simple-fridge-hack-using-tissue-paper-to-keep-food-fresh-mrq-v0l6n5u</guid>
            <pubDate>Mon, 29 Jun 2026 12:45:11 +0530</pubDate>
            <description><![CDATA[&lt;p&gt;ಒಂದು ಸಾಮಾನ್ಯ ಟಿಶ್ಯೂ ಪೇಪರ್ ನಿಮ್ಮ ಫ್ರಿಡ್ಜ್&zwnj;ನಲ್ಲಿನ ಹಲವು ಸಮಸ್ಯೆಗಳಿಗೆ ಸೂಪರ್&zwnj; ಹೀರೋ ರೀತಿ ಪರಿಹಾರ ನೀಡುತ್ತೆ ಅಂದ್ರೆ ನಂಬ್ತೀರಾ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw93b85ec2sqvayppz7k7a6z,imgname-frdige-1782716932270.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಸಾಮಾನ್ಯ ಟಿಶ್ಯೂ ಪೇಪರ್ ನಿಮ್ಮ ಫ್ರಿಡ್ಜ್&zwnj;ನಲ್ಲಿನ ಹಲವು ಸಮಸ್ಯೆಗಳಿಗೆ ಸೂಪರ್&zwnj; ಹೀರೋ ರೀತಿ ಪರಿಹಾರ ನೀಡುತ್ತೆ ಅಂದ್ರೆ ನಂಬ್ತೀರಾ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ನಾವು ಸೊಪ್ಪು ಅಥವಾ ಕೊತ್ತಂಬರಿ ಸೊಪ್ಪನ್ನು ಫ್ರಿಡ್ಜ್&zwnj;ನಲ್ಲಿಟ್ಟರೆ, ಎರಡೇ ದಿನದಲ್ಲಿ ಅದು ಕೊಳೆತು ಹೋಗಿರುವುದನ್ನು ನೋಡಿರುತ್ತೇವೆ. ಇದಕ್ಕೆ ಮುಖ್ಯ ಕಾರಣ ಫ್ರಿಡ್ಜ್&zwnj;ನಲ್ಲಿರುವ ಹೆಚ್ಚಿನ ತೇವಾಂಶ (Moisture).&lt;/p&gt;&lt;p&gt;ಫ್ರಿಡ್ಜ್&zwnj;ನ ತಣ್ಣನೆಯ ಗಾಳಿ, ತರಕಾರಿಗಳಿಂದ ಬರುವ ಹಬೆಯನ್ನು ಮತ್ತೆ ನೀರಾಗಿ (Condensation) ಪರಿವರ್ತಿಸಿ ಅವುಗಳ ಮೇಲೆ ಕೂರುವಂತೆ ಮಾಡುತ್ತದೆ. ಇದರಿಂದ ಬ್ಯಾಕ್ಟೀರಿಯಾ ಮತ್ತು ಫಂಗಸ್ (Mold) ಬೆಳೆದು, ತರಕಾರಿಗಳು ಬೇಗನೆ ಕೊಳೆಯುತ್ತವೆ.&lt;/p&gt;&lt;p&gt;ವೈಜ್ಞಾನಿಕ ಸತ್ಯ: ನೀವು ತರಕಾರಿ ಇಡುವ ಬ್ಯಾಗ್ ಅಥವಾ ಫ್ರಿಡ್ಜ್&zwnj;ನ ಡ್ರಾಯರ್&zwnj;ನಲ್ಲಿ (Crisper Drawer) ಒಂದು ಟಿಶ್ಯೂ ಪೇಪರ್ ಇಟ್ಟರೆ, ಅದು ಸ್ಪಾಂಜ್&zwnj;ನಂತೆ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (FDA) ಪ್ರಕಾರ, ಈ ತೇವಾಂಶ ನಿಯಂತ್ರಣವು ತರಕಾರಿಗಳು ಕೊಳೆಯುವ ಸಾಧ್ಯತೆಯನ್ನು 68% ರಷ್ಟು ಕಡಿಮೆ ಮಾಡುತ್ತದೆ!&lt;/p&gt;&lt;img&gt;&lt;p&gt;ಕೆಲವೊಮ್ಮೆ ಫ್ರಿಡ್ಜ್ ತೆರೆದ ತಕ್ಷಣ ಮೀನು, ಈರುಳ್ಳಿ ಅಥವಾ ಯಾವುದೋ ಹಳಸಿದ ಆಹಾರದ ಕೆಟ್ಟ ವಾಸನೆ ಬರುತ್ತದೆ. ಟಿಶ್ಯೂ ಪೇಪರ್&zwnj;ನಲ್ಲಿರುವ ಸೆಲ್ಯುಲೋಸ್ ಫೈಬರ್&zwnj;ಗಳು (Cellulose Fibers) ಗಾಳಿಯಲ್ಲಿನ ತೇವಾಂಶ ಮಾತ್ರವಲ್ಲ, ಕೆಟ್ಟ ವಾಸನೆಗೆ ಕಾರಣವಾಗುವ ಆವಿಯಾಗುವ ಸಂಯುಕ್ತಗಳನ್ನು (Volatile Compounds) ಕೂಡ ಹೀರಿಕೊಳ್ಳುತ್ತವೆ. ಫ್ರಿಡ್ಜ್&zwnj;ನ ಮೂಲೆಯಲ್ಲಿ ಹೊಸ ಟಿಶ್ಯೂ ಪೇಪರ್ ರೋಲ್ ಇಡುವುದು ಹೋಟೆಲ್&zwnj;ಗಳಲ್ಲಿ ಬಳಸುವ ಒಂದು ಸೀಕ್ರೆಟ್ ಟ್ರಿಕ್.&lt;/p&gt;&lt;img&gt;&lt;p&gt;ಜಾಮ್ ಬಾಟಲಿ ಸೋರುವುದು, ಹಾಲಿನ ಹನಿಗಳು ಅಥವಾ ತರಕಾರಿಗಳ ಎಲೆಗಳು ಉದುರಿ ಫ್ರಿಡ್ಜ್&zwnj;ನ ಶೆಲ್ಫ್&zwnj;ಗಳು ಯಾವಾಗಲೂ ಕಲೆಯಾಗುತ್ತವೆ. ಶೆಲ್ಫ್&zwnj;ಗಳ ಮೇಲೆ ಟಿಶ್ಯೂ ಪೇಪರ್&zwnj;ಗಳನ್ನು ಹರಡಿಟ್ಟರೆ, ಈ ಸೋರಿಕೆಯನ್ನು ಅದೇ ಹೀರಿಕೊಳ್ಳುತ್ತದೆ. ವಾರಕ್ಕೊಮ್ಮೆ ಆ ಪೇಪರ್ ತೆಗೆದು ಹೊಸ ಪೇಪರ್ ಹಾಕಿದರೆ ಸಾಕು. ಫ್ರಿಡ್ಜ್ ಅನ್ನು ಕಷ್ಟಪಟ್ಟು ಉಜ್ಜಿ ತೊಳೆಯುವ ಕೆಲಸ ತಪ್ಪುತ್ತದೆ!&lt;/p&gt;&lt;img&gt;&lt;p&gt;ಫ್ರಿಡ್ಜ್&zwnj;ನಲ್ಲಿ ಟಿಶ್ಯೂ ಪೇಪರ್ ಇಡಲು ಒಂದು ಸರಿಯಾದ ವಿಧಾನವಿದೆ. ಅದನ್ನು ಈ ಕೆಳಗಿನ ಹಂತಗಳ ಮೂಲಕ ಮಾಡಬಹುದು:&lt;/p&gt;&lt;p&gt;&lt;strong&gt;1. ತರಕಾರಿಗಳನ್ನು ತೊಳೆದು, ಚೆನ್ನಾಗಿ ಒಣಗಿಸಿ:&lt;/strong&gt; ತರಕಾರಿಗಳನ್ನು ತಂದ ತಕ್ಷಣ ತೊಳೆದು, ಸ್ವಲ್ಪವೂ ನೀರಿಲ್ಲದಂತೆ ಸಂಪೂರ್ಣವಾಗಿ ಒಣಗಿಸಬೇಕು. ಒದ್ದೆಯಾದ ತರಕಾರಿಗಳ ಮೇಲೆ ಟಿಶ್ಯೂ ಪೇಪರ್ ಇಟ್ಟರೆ ಅದು ಬೇಗ ಹರಿದುಹೋಗುತ್ತದೆ.&lt;/p&gt;&lt;p&gt;&lt;strong&gt;2. ಟಿಶ್ಯೂ ಪೇಪರ್ ಲೈನಿಂಗ್ ಮಾಡಿ:&lt;/strong&gt; ತರಕಾರಿ ಇಡುವ ಪ್ಲಾಸ್ಟಿಕ್ ಕವರ್ ಅಥವಾ ಫ್ರಿಡ್ಜ್&zwnj;ನ ಕೆಳಗಿರುವ ತರಕಾರಿ ಡ್ರಾಯರ್ (Crisper Drawer) ಒಳಗೆ ಎರಡು ಪದರ ಟಿಶ್ಯೂ ಪೇಪರ್ ಹರಡಿ.&lt;/p&gt;&lt;p&gt;&lt;strong&gt;3. ಆಗಾಗ ಪರಿಶೀಲಿಸಿ ಮತ್ತು ಬದಲಾಯಿಸಿ:&lt;/strong&gt; ಪ್ರತಿ 3-4 ದಿನಗಳಿಗೊಮ್ಮೆ ಟಿಶ್ಯೂ ಪೇಪರ್ ಮುಟ್ಟಿ ನೋಡಿ. ಅದು ಹೆಚ್ಚು ತೇವಾಂಶ ಹೀರಿಕೊಂಡು ಒದ್ದೆಯಾಗಿದ್ದರೆ, ಅದನ್ನು ತೆಗೆದು ಹೊಸ ಒಣ ಟಿಶ್ಯೂ ಪೇಪರ್ ಇಡಿ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಾರ್ಡ್&zwnj;ಬೋರ್ಡ್, ಕ್ಲೇ ಬಳಸಿ ಫ್ರಿಡ್ಜ್&zwnj;ಗೆ ಮಾಡಿ ಸುಂದರವಾದ ಯೂನಿಕ್ ಮ್ಯಾಗ್ನೆಟ್ಸ್&lt;/strong&gt;&lt;/p&gt;&lt;img&gt;&lt;p&gt;ಫ್ರಿಡ್ಜ್&zwnj;ನ ವಾಸನೆ ತೆಗೆಯಲು ಬಳಸುವ ಟಿಶ್ಯೂ ಪೇಪರ್ ರೋಲ್, ಸಂಪೂರ್ಣ ಹೊಸದಾಗಿರಬೇಕು ಮತ್ತು ವಾಸನೆ ರಹಿತವಾಗಿರಬೇಕು (Unscented). ಅಣಬೆ (Mushrooms) ಮತ್ತು ಟೊಮ್ಯಾಟೊಗಳಿಗೆ ಈ ಟ್ರಿಕ್ ಅಗತ್ಯವಿಲ್ಲ; ಅವುಗಳನ್ನು ಕಾಗದದ ಚೀಲಗಳಲ್ಲಿ (Paper bags) ಇಡುವುದು ಉತ್ತಮ.&lt;/p&gt;&lt;p&gt;ಒಂದು ಸಣ್ಣ ಟಿಶ್ಯೂ ಪೇಪರ್, ನಿಮ್ಮ ಮನೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುತ್ತದೆ ಮತ್ತು ಹಣವನ್ನೂ ಉಳಿಸುತ್ತದೆ. ಇಂದೇ ನಿಮ್ಮ ಫ್ರಿಡ್ಜ್&zwnj;ನಲ್ಲಿ ಟಿಶ್ಯೂ ಪೇಪರ್ ಇಟ್ಟು ನೋಡಿ, ಬದಲಾವಣೆಯನ್ನು ನೀವೇ ಗಮನಿಸುವಿರಿ!&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಮಗ ದೂರ ಹೋದದ್ದಕ್ಕೆ ಮೆದುಳೇ ಕೆಲಸ ಮಾಡ್ತಿಲ್ಲ ಅಂದ್ರು ಈ ತಾಯಿ! ಫ್ರಿಡ್ಜ್&zwnj;ನಲ್ಲಿ ಏನಿಟ್ಟಿದ್ದಾರೆ ನೋಡಿ&lt;/strong&gt;&lt;/p&gt;]]></content:encoded>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/kitchen/simple-fridge-hack-using-tissue-paper-to-keep-food-fresh-mrq-v0l6n5u"/>
        </item>
        <item>
            <title><![CDATA[Jaggery-Respiratory Issues: ಬೆಲ್ಲ ತಿಂದರೆ ಉಸಿರಾಟದ ಸಮಸ್ಯೆ ನಿವಾರಣೆ ಆಗುತ್ತಾ? ತಜ್ಞರು ಈ ಬಗ್ಗೆ ಹೇಳೋದೇನು?]]></title>
            <link>https://kannada.asianetnews.com/health-life/eating-jaggery-eliminate-respiratory-issues-and-the-surprising-health-secret-behind-this-tradition-are-here-to-know/articleshow-g7uvccp</link>
            <guid isPermaLink="true">https://kannada.asianetnews.com/health-life/eating-jaggery-eliminate-respiratory-issues-and-the-surprising-health-secret-behind-this-tradition-are-here-to-know/articleshow-g7uvccp</guid>
            <pubDate>Mon, 29 Jun 2026 12:03:07 +0530</pubDate>
            <description><![CDATA[&lt;p&gt;ಕೆಮ್ಮು ಅಥವಾ ಗಂಟಲು ನೋವಿನಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಅಥವಾ ದಿನದ ಮಾಲಿನ್ಯದ ಪ್ರಭಾವವನ್ನು ಕಡಿಮೆ ಮಾಡಲು ಊಟವಾದ ನಂತರ ಒಂದು ಸಣ್ಣ ತುಂಡು ಬೆಲ್ಲ ತಿನ್ನುವುದು ಉತ್ತಮ ಅಭ್ಯಾಸ. ಆದರೆ ಉಸಿರಾಟದ ತೊಂದರೆ ತೀವ್ರವಾಗಿದ್ದರೆ ಏನು ಮಾಡಬೇಕು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kc1fjh0te860htsfssv6tsz7,imgname-mixcollage-09-dec-2025-05-27-pm-6136-1765281448986.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಸಿರಾಟದ ತೊಂದರೆಗೆ ಬೆಲ್ಲ ಮದ್ದು!?&lt;/strong&gt;&lt;/p&gt;&lt;p&gt;ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಜೀವನಶೈಲಿಯಲ್ಲಿ ಅಡುಗೆಮನೆ ಎನ್ನುವುದು ಕೇವಲ ಆಹಾರ ತಯಾರಿಸುವ ಸ್ಥಳವಲ್ಲ, ಅದು ಒಂದು ಪುಟ್ಟ ಔಷಧಾಲಯವೂ ಹೌದು. ಹಳೆಯ ಕಾಲದಿಂದಲೂ ಮನೆಗೆ ಬಂದ ಅತಿಥಿಗಳಿಗೆ ಒಂದು ತುಂಡು ಬೆಲ್ಲ ಮತ್ತು ನೀರು ಕೊಟ್ಟು ಸತ್ಕರಿಸುವ ಸಂಪ್ರದಾಯವಿದೆ. ಆದರೆ ಈ ಸರಳ ಸಂಪ್ರದಾಯದ ಹಿಂದೆ ಆರೋಗ್ಯದ ದೊಡ್ಡ ರಹಸ್ಯವೇ ಅಡಗಿದೆ ಎಂಬುದು ನಿಮಗೆ ತಿಳಿದಿದೆಯೇ? ಅದರಲ್ಲೂ ಇಂದಿನ ಮಾಲಿನ್ಯಭರಿತ ಜಗತ್ತಿನಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿರುವಾಗ, 'ಬೆಲ್ಲ' ನಿಜಕ್ಕೂ ರಾಮಬಾಣವೇ ಎಂಬ ಪ್ರಶ್ನೆಗೆ ತಜ್ಞರು ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.&lt;/p&gt;&lt;h2&gt;ಬೆಲ್ಲ: ಸಿಹಿಯಲ್ಲ ಮಾತ್ರವಲ್ಲ, ಆರೋಗ್ಯದ ಗಣಿ!&lt;/h2&gt;&lt;p&gt;ಜೀವನಶೈಲಿಯ ದೃಷ್ಟಿಯಿಂದ ನೋಡುವುದಾದರೆ, ಬೆಲ್ಲವು ಬಿಳಿ ಸಕ್ಕರೆಗಿಂತ ಸಾವಿರ ಪಟ್ಟು ಉತ್ತಮ. ಇದರಲ್ಲಿ ಮೆಗ್ನಿಷಿಯಂ, ಪೊಟಾಷ್ಯಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್&zwnj; ಮತ್ತು ಸತು (Zinc) ನಂತಹ ಅವಶ್ಯಕ ಖನಿಜಾಂಶಗಳಿವೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತವೆ. ಆದರೆ ಉಸಿರಾಟದ ವ್ಯವಸ್ಥೆಯ ಮೇಲೆ ಇದರ ಪ್ರಭಾವವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..&lt;/p&gt;&lt;p&gt;ನೈಸರ್ಗಿಕ ಕ್ಲೆನ್ಸರ್ ಆಗಿ ಬೆಲ್ಲ:&lt;/p&gt;&lt;p&gt;ಕೆಲವು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಬೆಲ್ಲವು ಒಂದು ಅದ್ಭುತವಾದ 'ನ್ಯಾಚುರಲ್ ಕ್ಲೆನ್ಸರ್' ಮತ್ತು 'ಕಫ ನಿವಾರಕ'ವಾಗಿ ಕಾರ್ಯನಿರ್ವಹಿಸುತ್ತದೆ. ನೀವು ದೀರ್ಘಕಾಲ ಧೂಳು ಅಥವಾ ಹೊಗೆ ಇರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ, ಪ್ರತಿದಿನ ಸಣ್ಣ ತುಂಡು ಬೆಲ್ಲ ತಿನ್ನುವುದು ಗಂಟಲನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. ಇದು ಶ್ವಾಸನಾಳದಲ್ಲಿ ಸಂಗ್ರಹವಾಗಿರುವ ಲೋಳೆಯನ್ನು (Mucus) ತೆರವುಗೊಳಿಸಲು ಮತ್ತು ಉಸಿರಾಡುವಾಗ ಒಳಹೋಗುವ ಮಾಲಿನ್ಯಕಾರಕಗಳನ್ನು ಹೊರಹಾಕಲು ಶ್ವಾಸಕೋಶಕ್ಕೆ ಪ್ರಚೋದನೆ ನೀಡುತ್ತದೆ. ಇದರಿಂದಾಗಿ ಒಣ ಕೆಮ್ಮು ಮತ್ತು ಗಂಟಲು ಕಿರಿಕಿರಿ ಇರುವವರಿಗೆ ಸ್ವಲ್ಪ ಬೆಲ್ಲ ತಿಂದರೆ ತಕ್ಷಣಕ್ಕೆ ಆರಾಮ ಸಿಗುತ್ತದೆ.&lt;/p&gt;&lt;p&gt;ವಿಜ್ಞಾನ ಮತ್ತು ನಂಬಿಕೆಗಳ ನಡುವಿನ ವ್ಯತ್ಯಾಸ:&lt;/p&gt;&lt;p&gt;ಬೆಲ್ಲ ತಿನ್ನುವುದರಿಂದ ಗಂಟಲು ಮತ್ತು ಶ್ವಾಸನಾಳಕ್ಕೆ ತಾತ್ಕಾಲಿಕ ಉಪಶಮನ ನೀಡುತ್ತದೆ ಎಂಬುದು ಸತ್ಯ. ಆದರೆ, ಇದನ್ನು 'ಸಂಪೂರ್ಣ ಚಿಕಿತ್ಸೆ' ಎಂದು ಪರಿಗಣಿಸುವುದು ತಪ್ಪು. ಆಸ್ತಮಾ, ತೀವ್ರವಾದ ಶ್ವಾಸಕೋಶದ ಸೋಂಕು ಅಥವಾ ಉಸಿರಾಟದ ಗಂಭೀರ ಕಾಯಿಲೆಗಳಿಗೆ ಇದು ಪೂರಕವಾಗಿ ಕೆಲಸ ಮಾಡುತ್ತದೆ ಹೊರತೂ ಬೆಲ್ಲವೊಂದೇ ಮದ್ದಲ್ಲ. ಆಂಟಿ-ಆಕ್ಸಿಡೆಂಟ್&zwnj;ಗಳ ಸಮೃದ್ಧವಾಗಿರುವ ಬೆಲ್ಲವು ಶ್ವಾಸಕೋಶದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಗಳು ತೋರಿಸಿವೆ. ಆದರೆ ಮನುಷ್ಯರಲ್ಲಿ ಗಂಭೀರ ರೋಗಗಳನ್ನು ಇದು ಗುಣಪಡಿಸುತ್ತದೆ ಎನ್ನಲು ಇನ್ನೂ ಹೆಚ್ಚಿನ ವೈಜ್ಞಾನಿಕ ಪುರಾವೆಗಳ ಅಗತ್ಯವಿದೆ.&lt;/p&gt;&lt;h3&gt;ಯಾರು ಎಚ್ಚರದಿಂದಿರಬೇಕು?&lt;/h3&gt;&lt;p&gt;ಬೆಲ್ಲ ಆರೋಗ್ಯಕರ ಎಂಬ ಕಾರಣಕ್ಕೆ ಇದನ್ನು ಅತಿಯಾಗಿ ತಿನ್ನುವುದು ಕೂಡ ಸರಿಯಲ್ಲ. ನೆನಪಿರಲಿ, ಬೆಲ್ಲವು ಕೂಡ ಸಕ್ಕರೆಯ ಇನ್ನೊಂದು ರೂಪವೇ. ಇದರಲ್ಲಿ ಕ್ಯಾಲೋರಿಗಳು ಹೆಚ್ಚಿರುತ್ತವೆ ಮತ್ತು ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಲ್ಲದು. ಆದ್ದರಿಂದ ಮಧುಮೇಹದಿಂದ (Diabetes) ಬಳಲುತ್ತಿರುವವರು ಅಥವಾ ತೂಕ ಇಳಿಸುವ ಪ್ರಯತ್ನದಲ್ಲಿರುವವರು ಬೆಲ್ಲವನ್ನು ಮಿತಿಯಲ್ಲಿ ಸೇವನೆ ಮಾಡುವುದು ಉತ್ತಮ. ಅದಕ್ಕಾಗಿ ನಿಮ್ಮ ಕುಟುಂಬವೈದ್ಯರ ಸಲಹೆ ಪಡೆಯುವುದು ಉತ್ತಮ.&lt;/p&gt;&lt;p&gt;ಕೊನೆಯ ಮಾತು:&lt;/p&gt;&lt;p&gt;ಒಟ್ಟಿನಲ್ಲಿ, ಕೆಮ್ಮು ಅಥವಾ ಗಂಟಲು ನೋವಿನಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಅಥವಾ ದಿನದ ಮಾಲಿನ್ಯದ ಪ್ರಭಾವವನ್ನು ಕಡಿಮೆ ಮಾಡಲು ಊಟವಾದ ನಂತರ ಒಂದು ಸಣ್ಣ ತುಂಡು ಬೆಲ್ಲ ತಿನ್ನುವುದು ಉತ್ತಮ ಅಭ್ಯಾಸ. ಆದರೆ ಉಸಿರಾಟದ ತೊಂದರೆ ತೀವ್ರವಾಗಿದ್ದರೆ ಅಥವಾ ಎದೆ ಬಿಗಿತದಂತಹ ಲಕ್ಷಣಗಳಿದ್ದರೆ, ಕೇವಲ ಮನೆಮದ್ದನ್ನು ನಂಬಿ ಕಾಲಹರಣ ಮಾಡದೆ ತಜ್ಞ ವೈದ್ಯರ ಸಲಹೆ ಪಡೆಯಬೇಕು. ಆರೋಗ್ಯವೇ ನಿಜವಾದ ಭಾಗ್ಯ, ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದೇ!&lt;/p&gt;&lt;p&gt;ಸೂಚನೆ: ಸೋಷಿಯಲ್ ಮಿಡಿಯಾ ಹಾಗು ಸಾಂಪ್ರದಾಯಿಕ ಔಷಧ ಮೂಲಗಳಿಂದ ಆಯ್ದ ಲೇಖನಗಳನ್ನು ಇಲ್ಲಿ ಪ್ರಕಟಿಸಲಾಗುತ್ತದೆ. ಅನಾರೋಗ್ಯ ಸಮಸ್ಯೆ ಹೆಚ್ಚಿದ್ದಲ್ಲಿ ಹೆಚ್ಚಿನ ಮಾಹಿತಿಗೆ ಹಾಗೂ ಸಲಹೆಗೆ ತಜ್ಞವೈದ್ಯರನ್ನು ಸಂಪರ್ಕಿಸುವುದು ಉತ್ತಮ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/eating-jaggery-eliminate-respiratory-issues-and-the-surprising-health-secret-behind-this-tradition-are-here-to-know/articleshow-g7uvccp"/>
        </item>
        <item>
            <title><![CDATA[ಮಿಕ್ಕ ಅನ್ನದಲ್ಲಿ ಚಿತ್ರಾನ್ನ ಮಾಡೋದು ಬಿಟ್ಬಿಡಿ, ಮಳೆಗಾಲಕ್ಕೆ ಬಿಸಿ ಬಿಸಿ ಕೆಫೆ ಸ್ಟೈಲ್ ಕಟ್ಲೆಟ್ ತಯಾರಿಸಿ]]></title>
            <link>https://kannada.asianetnews.com/gallery/food/rice-cutlet-recipe-turn-leftover-rice-into-crispy-cafe-style-cutlets-pimt5r8</link>
            <guid isPermaLink="true">https://kannada.asianetnews.com/gallery/food/rice-cutlet-recipe-turn-leftover-rice-into-crispy-cafe-style-cutlets-pimt5r8</guid>
            <pubDate>Mon, 29 Jun 2026 12:00:43 +0530</pubDate>
            <description><![CDATA[&lt;p&gt;rice cutlet recipe : ರಾತ್ರಿ ಮಿಕ್ಕ ಅನ್ನದಲ್ಲಿ ನಮ್ಗೆ ಚಿತ್ರಾನ್ನ ಮಾಡೋಕೆ ಮಾತ್ರ ಗೊತ್ತು. ಆದ್ರೆ ಈ ಅನ್ನದಲ್ಲಿ ನೀವು ಇನ್ನೂ ಅನೇಕ ರುಚಿ ರುಚಿ ರೆಸಿಪಿ ಮಾಡ್ಬಹುದು. ಇವತ್ತು ಕೆಫೆ ಸ್ಟೈಟ್ ಕಟ್ಲೆಟ್ ಹೇಗೆ ಮಾಡೋದು ಅಂತ ನಾವು ಹೇಳ್ತೇವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw90qc10psq36eyjcf8nrkra,imgname-cutlet-recipe-1782714183712.png" type="image/jpeg" height="390" width="690"/>
            <content:encoded><![CDATA[&lt;p&gt;rice cutlet recipe : ರಾತ್ರಿ ಮಿಕ್ಕ ಅನ್ನದಲ್ಲಿ ನಮ್ಗೆ ಚಿತ್ರಾನ್ನ ಮಾಡೋಕೆ ಮಾತ್ರ ಗೊತ್ತು. ಆದ್ರೆ ಈ ಅನ್ನದಲ್ಲಿ ನೀವು ಇನ್ನೂ ಅನೇಕ ರುಚಿ ರುಚಿ ರೆಸಿಪಿ ಮಾಡ್ಬಹುದು. ಇವತ್ತು ಕೆಫೆ ಸ್ಟೈಟ್ ಕಟ್ಲೆಟ್ ಹೇಗೆ ಮಾಡೋದು ಅಂತ ನಾವು ಹೇಳ್ತೇವೆ.&lt;/p&gt;&lt;img&gt;&lt;p&gt;ರಾತ್ರಿ ಇಲ್ಲ ಬೆಳಿಗ್ಗೆ ಮಾಡಿದ ಅನ್ನ ಸಂಪೂರ್ಣ ಖಾಲಿ ಆಗೋದು ಕಷ್ಟ. ಕೆಲವೊಮ್ಮೆ ಗೆಸ್ಟ್ ಕೈಕೊಟ್ಟಾಗ ಅನ್ನ ಹಾಗೆ ಉಳಿಯುತ್ತೆ. ಅದನ್ನು ವೇಸ್ಟ್ ಮಾಡೋದು ಸಾಧ್ಯವಿಲ್ಲದ ಮಾತು. ಬಹುತೇಕ ಮಹಿಳೆಯರು ಅದನ್ನು ಬೆಳಿಗ್ಗೆ ಚಿತ್ರಾನ್ನವಾಗಿ ಬದಲಿಸ್ತಾರೆ. ಅದೇ ಚಿತ್ರಾನ್ನ ಮಾಡಿ ನಿಮಗೆ ಮಾತ್ರ ಅಲ್ಲ ಅದನ್ನು ತಿಂದು ಮನೆಯವರಿಗೂ ಬೋರ್ ಆಗಿರುತ್ತೆ. ಇನ್ಮುಂದೆ ಹೊಸ ರೆಸಿಪಿ ಟ್ರೈ ಮಾಡಿ.&lt;/p&gt;&lt;img&gt;&lt;p&gt;ಮನೆಯವರೆಲ್ಲ ಬಾಯಿ ಚಪ್ಪರಿಸಿ ನೀವು ಮಾಡಿದ ತಿಂಡಿ ತಿನ್ಬೇಕು ಅಂದ್ರೆ ನೀವು ಕೆಫೆ ಸ್ಟೈಲ್ ಕಟ್ಲೆಟ್ ತಯಾರಿಸಿ. ಇದನ್ನು ತಯಾರಿಸೋದು ಸುಲಭ. ಕೆಲವೇ ನಿಮಿಷದಲ್ಲಿ ರುಚಿಯಾದ ಕಟ್ಲೆಟ್ ರೆಡಿಯಾಗುತ್ತೆ.&lt;/p&gt;&lt;img&gt;&lt;p&gt;2 ಕಪ್ ಅನ್ನ, 2 ಬೇಯಿಸಿ ಹಿಸುಕಿದ ಆಲೂಗಡ್ಡೆ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, 1-2 ಹಸಿರು ಮೆಣಸಿನಕಾಯಿ, ಸ್ವಲ್ಪ ತುರಿದ ಕ್ಯಾರೆಟ್, 1 ಟೀಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1/2 ಟೀ ಚಮಚ ಕೆಂಪು ಮೆಣಸಿನ ಪುಡಿ, 1/2 ಟೀ ಚಮಚ ಗರಂ ಮಸಾಲ, 1/2 ಟೀ ಚಮಚ ಚಾಟ್ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, 2-3 ಟೀ ಚಮಚ ಕಾರ್ನ್ಫ್ಲೋರ್ ಅಥವಾ ಬ್ರೆಡ್ ಕ್ರಂಬ್ಸ್ ಮತ್ತು ಬ್ರೆಡ್ ಕ್ರಂಬ್ಸ್ ಬಳಸಿ. ಸ್ವಲ್ಪ ಎಣ್ಣೆ ಫ್ರೈ ಮಾಡಲು.&lt;/p&gt;&lt;img&gt;&lt;p&gt;ಅನ್ನದ ಜೊತೆ ಉಳಿದ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಎಲ್ಲಾ ಮಸಾಲೆಗಳು ಮತ್ತು ಕಾರ್ನ್ಫ್ಲೋರ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ಮೃದುವಾಗಿದ್ದರೆ ನೀವು ಬ್ರೆಡ್ ತುಂಡುಗಳನ್ನು ಇದಕ್ಕೆ ಸೇರಿಸ್ಬಹುದು. ನಂತ್ರ ನಿಮಗೆ ಬೇಕಾದ ಆಕಾರ ನೀಡಿ, ಬ್ರೆಡ್ ಪುಡಿಯಲ್ಲಿ ಹೊರಳಾಡಿಸಿ. ಒಂದು ಬಾಣೆಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಇದನ್ನು ಹಾಕಿ ಫ್ರೈ ಮಾಡಿ. ನೀವು ಸ್ವಲ್ಪ ಎಣ್ಣೆ ಬಳಸಿ ಏರ್ ಫ್ರೈಯರ್ ನಲ್ಲಿ ಫ್ರೈ ಕೂಡ ಮಾಡಬಹುದು.&lt;/p&gt;&lt;img&gt;&lt;p&gt;ಹೊರಗೆ ಗರಿಯಾದ ಒಳಗಿ ಮೃದುವಾಗಿರುವ ಕಟ್ಲೆಟ್ ಸವಿಯಲು ಸಿದ್ಧವಾಗುತ್ತದೆ. ನೀವಿದನ್ನು ಪುದೀನಾ ಚಟ್ನಿ ಅಥವಾ ಕೆಚಪ್ ಜೊತೆ ಸರ್ವ್ ಮಾಡಬಹುದು. ನೀವು ಚೀಸ್ ಕ್ಯೂಬ್ ಅಥವಾ ಬೇಯಿಸಿದ ಬಟಾಣಿ, ನಿಮ್ಮಷ್ಟದ ತರಕಾರಿಯನ್ನು ಹಾಕಿಯೂ ಇದನ್ನು ತಯಾರಿಸ್ಬಹುದು.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/food/rice-cutlet-recipe-turn-leftover-rice-into-crispy-cafe-style-cutlets-pimt5r8"/>
        </item>
        <item>
            <title><![CDATA[ಕಾರ್ಟೂನ್‌ ನೋಡೋಕೆ ಮೊಬೈಲ್‌ ಕೊಟ್ರೆ ಟಿವಿ ಬುಕ್‌ ಮಾಡಿದ ಮಗ, ಡೆಲಿವರಿ ಬಾಯ್‌ ಪಾರ್ಸಲ್‌ ನೋಡಿ ಕಂಗಾಲಾದ ಅಮ್ಮ!]]></title>
            <link>https://kannada.asianetnews.com/viral/boy-secretly-orders-43-inch-google-tv-using-mom-phone-delivery-sparks-viral-drama-suh/articleshow-ef0tptl</link>
            <guid isPermaLink="true">https://kannada.asianetnews.com/viral/boy-secretly-orders-43-inch-google-tv-using-mom-phone-delivery-sparks-viral-drama-suh/articleshow-ef0tptl</guid>
            <pubDate>Mon, 29 Jun 2026 11:26:05 +0530</pubDate>
            <description><![CDATA[&lt;p&gt;Boy Secretly Orders 43 Inch Google TV ಅಮ್ಮನ ಮೊಬೈಲ್&zwnj;ನಲ್ಲಿ 43 ಇಂಚಿನ ಗೂಗಲ್ ಟಿವಿ ಆರ್ಡರ್ ಮಾಡಿದ ಬಾಲಕನ ಕೃತ್ಯ, ಡೆಲಿವರಿ ಬಂದಾಗ ನಡೆದ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw8yxsmana741dxg85w8dht1,imgname-boy-orders-google-tv-1782712297098.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಮಕ್ಕಳು ತಂತ್ರಜ್ಞಾನವನ್ನು ಎಷ್ಟು ಬೇಗ ಕಲಿಯುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಅಮ್ಮನ ಮೊಬೈಲ್ ಫೋನ್ ಬಳಸಿ ಪುಟ್ಟ ಬಾಲಕನೊಬ್ಬ ಬರೋಬ್ಬರಿ 43 ಇಂಚಿನ ಗೂಗಲ್ ಟಿವಿಯನ್ನು ಆನ್&zwnj;ಲೈನ್&zwnj;ನಲ್ಲಿ ಆರ್ಡರ್ ಮಾಡಿದ್ದಾನೆ.&lt;/p&gt;&lt;p&gt;ಕೆಲವು ದಿನಗಳ ನಂತರ ಡೆಲಿವರಿ ಸಿಬ್ಬಂದಿ ದೊಡ್ಡ ಟಿವಿ ಬಾಕ್ಸ್ ಹಿಡಿದು ಮನೆ ಬಾಗಿಲಿಗೆ ಬಂದಾಗ ಕುಟುಂಬದವರಿಗೆ ಭಾರಿ ಶಾಕ್ ಕಾದಿತ್ತು. ಆಗ ಮಗನನ್ನು ಪ್ರಶ್ನಿಸಿದ ತಾಯಿ, ಡೆಲಿವರಿ ಏಜೆಂಟ್ ಎದುರಲ್ಲೇ ಅವನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಈ ವಿಡಿಯೋ ನೋಡಿ ನೆಟ್ಟಿಗರು ಎರಡು ಭಾಗಗಳಾಗಿದ್ದಾರೆ. ಕೆಲವರು &quot;ಮಕ್ಕಳು ಈಗ ತಂತ್ರಜ್ಞಾನದಲ್ಲಿ ತುಂಬಾ ಚಾಣಾಕ್ಷರಾಗಿದ್ದಾರೆ&quot; ಎಂದು ನಗುತ್ತಿದ್ದರೆ, ಮತ್ತಷ್ಟು ಮಂದಿ &quot;ಪೋಷಕರು ತಮ್ಮ ಮೊಬೈಲ್ ಮತ್ತು ಆನ್&zwnj;ಲೈನ್ ಪಾವತಿ ವ್ಯವಸ್ಥೆಗಳನ್ನು ಸುರಕ್ಷಿತವಾಗಿಡಬೇಕು&quot; ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಆನ್&zwnj;ಲೈನ್ ಶಾಪಿಂಗ್, ಡಿಜಿಟಲ್ ಪಾವತಿ ಮತ್ತು ಮೊಬೈಲ್ ಆ್ಯಪ್&zwnj;ಗಳ ಬಳಕೆ ಮಕ್ಕಳಿಗೂ ಸುಲಭವಾಗುತ್ತಿರುವ ಈ ಕಾಲದಲ್ಲಿ, ಪೋಷಕರು ತಮ್ಮ ಫೋನ್&zwnj;ಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಬೇಕೇ ಎಂಬ ಚರ್ಚೆ ಮತ್ತೆ ಶುರುವಾಗಿದೆ.&lt;/p&gt;&lt;p&gt;ಒಟ್ಟಾರೆ, ಒಂದು ಟಿವಿ ಆರ್ಡರ್ ಮಾಡಿದ ಬಾಲಕನ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಗು ಮತ್ತು ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/boy-secretly-orders-43-inch-google-tv-using-mom-phone-delivery-sparks-viral-drama-suh/articleshow-ef0tptl"/>
        </item>
        <item>
            <title><![CDATA[ಸಿಂಪಲ್ ಸೀರೆಯಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸೋ 200 ರೂ.ಗೆ ಸಿಗುವ ಕಿವಿಯೋಲೆಗಳು]]></title>
            <link>https://kannada.asianetnews.com/webstories/fashion/affordable-trending-earrings-for-rs-200-that-will-enhance-your-beauty-in-a-simple-saree-for-office-look-mrq-lftv9xh</link>
            <guid isPermaLink="true">https://kannada.asianetnews.com/webstories/fashion/affordable-trending-earrings-for-rs-200-that-will-enhance-your-beauty-in-a-simple-saree-for-office-look-mrq-lftv9xh</guid>
            <pubDate>Mon, 29 Jun 2026 11:10:35 +0530</pubDate>
            <description><![CDATA[&lt;p&gt;ಪಾರ್ಟಿ ಅಥವಾ ಫಂಕ್ಷನ್&zwnj;ಗಳಿಗೆ ಸೀರೆ ಉಟ್ಟಾಗ, ಅದಕ್ಕೆ ಯಾವ ಜ್ಯುವೆಲ್ಲರಿ ಹಾಕಿಕೊಳ್ಳಬೇಕು ಅನ್ನೋ ಗೊಂದಲ ಹಲವು ಮಹಿಳೆಯರನ್ನು ಕಾಡುತ್ತೆ. ಅಂಥ ಸಮಯದಲ್ಲಿ ಸೀರೆ ಮೇಲೆ ಧರಿಸಲು ಸಿಂಪಲ್ ಹಾಗೂ ಟ್ರೆಂಡಿಯಾಗಿರುವ ಕಿವಿಯೋಲೆಗಳನ್ನು ನೀವು ಖರೀದಿ ಮಾಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvwdsznxkyhq34nv8k1ke6cq,imgname-gold-branch-earrings-new-designs-4-1782291693245.jpg" type="image/jpeg" height="390" width="690"/>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/fashion/affordable-trending-earrings-for-rs-200-that-will-enhance-your-beauty-in-a-simple-saree-for-office-look-mrq-lftv9xh"/>
        </item>
        <item>
            <title><![CDATA[ಫುಟ್ಬಾಲ್​ ಪಂದ್ಯದಲ್ಲಿ ನಿಗೂಢ ಬ್ಯೂಟಿ​: ಕೆಲವೇ ಕ್ಷಣಗಳ ವೈರಲ್ ವಿಡಿಯೋಗೆ ವಿಶ್ವಾದ್ಯಂತ ಇನ್ನಿಲ್ಲದ ಡಿಮಾಂಡ್​- ಯಾರೀಕೆ]]></title>
            <link>https://kannada.asianetnews.com/football-sports/few-seconds-of-video-showing-a-lady-in-the-crowd-during-a-football-match-gone-viral-suc/articleshow-egh02x7</link>
            <guid isPermaLink="true">https://kannada.asianetnews.com/football-sports/few-seconds-of-video-showing-a-lady-in-the-crowd-during-a-football-match-gone-viral-suc/articleshow-egh02x7</guid>
            <pubDate>Mon, 29 Jun 2026 10:48:56 +0530</pubDate>
            <description><![CDATA[ಇರಾಕ್&zwnj;ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದ ಯುವತಿಯೊಬ್ಬಳು ತನ್ನ ಸಹಜ ಸೌಂದರ್ಯ ಮತ್ತು ಮುಗುಳ್ನಗುವಿನಿಂದ ರಾತ್ರೋರಾತ್ರಿ ವೈರಲ್ ಆಗಿದ್ದಾಳೆ. ಈಕೆಯ ಕೆಲವೇ ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಈಕೆ ಯಾರೆಂದು ತಿಳಿಯಲು ನೆಟ್ಟಿಗರು ಹುಡುಕಾಟ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw8wz6aaq3rwfj32m6d0787v,imgname-viral-beauty-1782710245706.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವೊಮ್ಮೆ ಅದ್ಯಾವ ಗ್ರಹ ಅದೆಲ್ಲಿ ಬಂದಿರುತ್ತೋ ಗೊತ್ತಿಲ್ಲ. ಏಕಾಏಕಿಯಾಗಿ ಯಾರ್ಯಾರೋ ವೈರಲ್​ ಆಗಿ ಬಿಡುತ್ತಾರೆ. ಕೆಲವೊಮ್ಮೆ ಅವರಲ್ಲಿ ಟ್ಯಾಲೆಂಟ್​ ಇರುವುದು ನಿಜವಾದರೂ, ಮತ್ತೆ ಕೆಲವೊಮ್ಮೆ ಏನೂ ಟ್ಯಾಲೆಂಟ್​ ಇಲ್ಲದಿದ್ದರೂ, ನೆಗೆಟಿವ್​ ರೀತಿಯಾಗಿ ಟ್ರೋಲ್​ ಆಗಿಯಾದರೂ ವೈರಲ್​ ಆಗಿ ರಾಜ್ಯ, ದೇಶ, ವಿಶ್ವದ ಗಮನವನ್ನೇ ಸೆಳೆದು ಬಿಡುತ್ತಾರೆ. ಯಾರಿಗೂ ಇಲ್ಲದ ಅದೃಷ್ಟ ಪಾಸಿಟಿವ್​ ಆಗಿ ಇಲ್ಲವೇ ನೆಗೆಟಿವ್​ ಆಗಿ ಅವರಿಗೆ ಸಿಕ್ಕು, ಅವರ ಜೀವನದ ದಿಕ್ಕನ್ನೇ ಬದಲಾಯಿಸಿರುವ ಸಾಕಷ್ಟು ಘಟನೆಗಳನ್ನು ಇದಾಗಲೇ ಎಲ್ಲರೂ ನೋಡಿರುತ್ತೇವೆ. ಇದೀಗ ಫುಟ್​ಬಾಲ್​ ಪಂದ್ಯದ ವೇಳೆ ಸಹಜ ಸುಂದರಿಯೊಬ್ಬಳು ವೈರಲ್​ ಆಗಿದ್ದು, ಜಾಲತಾಣದ ನಾಯಕಿಯಾಗಿ ಮೆರೆಯುತ್ತಿದ್ದಾಳೆ.&lt;/p&gt;&lt;p&gt;ಸಾಮಾನ್ಯವಾಗಿ ಯಾವುದೇ ಪಂದ್ಯ ನಡೆದರೂ ಅದರಲ್ಲಿ ಲಕ್ಷಾಂತರ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಬರುವುದು ಇದೆ. ಅವರಲ್ಲಿ ಸುಂದರ, ಸುಂದರಿಯರು ಬೇಕಾದಷ್ಟು ಮಂದಿ ಇರುತ್ತಾರೆ. ಅಂಥವರ ನಡುವೆ ಈ ಸುಂದರಿ ಎಲ್ಲರ ಕ್ರಷ್​ ಆಗಿದ್ದಾಳೆ. ಸಾಮಾನ್ಯವಾಗಿ ಯಾವುದಾದರೂ ಸೆಲೆಬ್ರಿಟಿ ಬಂದರೆ ಕ್ಯಾಮೆರಾ ಕಣ್ಣು ಅವರ ಮೇಲೆ ನೆಟ್ಟು ಅವರು ಎಲ್ಲರ ಗಮನ ಸೆಳೆಯುವುದು ಇದೆ. ಇದು ಸರ್ವೇ ಸಾಮಾನ್ಯ. ಆದರೆ ಸಾಮಾನ್ಯ ಯುವತಿಯೊಬ್ಬಳು ಕ್ಯಾಮೆರಾ ಕಣ್ಣಿಗೆ ಕಂಡು ವೈರಲ್​ ಆಗಿದ್ದು ಆಕೆಯನ್ನು ನೋಡಿದವರೆಲ್ಲರೂ ವ್ಹಾವ್ಹ್​ ಎನ್ನುತ್ತಿದ್ದಾರೆ. ಬಹುಶಃ ಈಕೆಗೂ ಇಷ್ಟೊಂದು ವೈರಲ್​ ಆಗುವುದು ತಿಳಿದಿರಲಿಲ್ಲ ಎನ್ನಿಸುತ್ತದೆ.&lt;/p&gt;&lt;h2&gt;&lt;strong&gt;ಕೆಲವೇ ಸೆಕೆಂಡ್​ಗಳ ವಿಡಿಯೋ&lt;/strong&gt;&lt;/h2&gt;&lt;p&gt;ಕೆಲವೇ ಸೆಕೆಂಡುಗಳ ಕಾಲದಲ್ಲಿ ಕಂಡ ಈ ಯುವತಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವ್ಯೂವ್ಸ್​ಕಂಡಿದೆ. ಅಂದಹಾಗೆ ಇದು ಕಂಡುಬಂದಿದ್ದು ಭಾರತದಲ್ಲಿ ಅಲ್ಲ, ಬದಲಿಗೆ ಇರಾಕ್&zwnj;ನ ಎರ್ಬಿಲ್&zwnj;ನಲ್ಲಿ ಎರ್ಬಿಲ್ ಮತ್ತು ಅಲ್-ನಾಫ್ಟ್ ನಡುವಿನ ಸ್ಥಳೀಯ ಲೀಗ್ ಪಂದ್ಯದ ಸಂದರ್ಭದಲ್ಲಿ ಕಂಡುಬಂದಿರುವ ಯುವತಿ ಈಕೆ. ಕ್ರೀಡಾಂಗಣದ ಕ್ಯಾಮೆರಾ ಪ್ರೇಕ್ಷಕರ ಕಡೆಗೆ ತಿರುಗಿದಾಗ, ಆ ಯುವತಿ ಕ್ಯಾಮೆರಾವನ್ನು ನೋಡಿ ಮುಗುಳ್ನಕ್ಕಳು, ಮತ್ತು ಆ ಸಂಕ್ಷಿಪ್ತ ಕ್ಷಣವು X, Facebook, Instagram ಮತ್ತು TikTok ಸೇರಿದಂತೆ ಎಲ್ಲಾ ವೇದಿಕೆಗಳಲ್ಲಿ ತ್ವರಿತವಾಗಿ ಹರಡಿದೆ. ಅನೇಕ ಬಳಕೆದಾರರು ಯುವತಿಯ ನೈಸರ್ಗಿಕ ನೋಟ ಮತ್ತು ಬೆಚ್ಚಗಿನ ನಗುವನ್ನು ಕಂಡು ಖುಷಿಪಡುತ್ತಿದ್ದಾರೆ. ಕೆಜಿಗಟ್ಟಲೆ ಮೇಕಪ್​ ಹಾಕಿಕೊಂಡು ಬರುವ ಸೆಲೆಬ್ರಿಟಿಗಳಿಗೆ ಸೆಡ್ಡು ಹೊಡೆಯುವ ಈಕೆಯ ನೈಜ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತಿದೆ.&lt;/p&gt;&lt;h3&gt;&lt;strong&gt;ಫ್ಯಾಕ್ಟ್​ ಚೆಕ್​&lt;/strong&gt;&lt;/h3&gt;&lt;p&gt;ಕೆಲವರು ಇದನ್ನು ಎಐ ವಿಡಿಯೋ ಎಂದೂ ಊಹಿಸಿದ್ದಾರೆ. ಅದು ಎಷ್ಟರಮಟ್ಟಿಗೆ ವೈರಲ್​ ಆಯಿತು ಎಂದರೆ, ಈಕೆಯ ಫ್ಯಾಕ್ಟ್​ ಚೆಕ್​ ಕೂಡ ಮಾಡಲಾಯಿತು. ಕೊನೆಗೆ ಇದ್ಯಾವ ಎಐ ಅಲ್ಲ, ಬದಲಿಗೆ ನಿಜವಾದ ಯುವತಿ ಎಂದು ಕಂಡುಕೊಂಡಿದ್ದಾರೆ. ಈಕೆ ಸೆಲೆಬ್ರಿಟಿ, ಮಾಡೆಲ್ ಅಥವಾ ಸಾಮಾಜಿಕ ಮಾಧ್ಯಮ ಪ್ರಭಾವಿ ಕೂಡ ಅಲ್ಲ ಎನ್ನುವುದು ತಿಳಿದಿದೆ. ಈಕೆ ಯಾರು ಎನ್ನುವ ಬಗ್ಗೆ ಅಭಿಮಾನಿಗಳು ಇನ್ನೂ ಪತ್ತೆ ಹಚ್ಚುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/football-sports/few-seconds-of-video-showing-a-lady-in-the-crowd-during-a-football-match-gone-viral-suc/articleshow-egh02x7"/>
        </item>
        <item>
            <title><![CDATA[Toilet Cleaning Shocking Tips: ಕೇವಲ 5 ರೂಪಾಯಿಗೆ ಟಾಯ್ಲೆಟ್ ಹೊಚ್ಚಹೊಸದರಂತೆ ಆಗುತ್ತೆ; ಇಂದೇ ಟ್ರೈ ಮಾಡಿ!]]></title>
            <link>https://kannada.asianetnews.com/kitchen/here-are-some-simple-tips-to-make-your-toilet-shine-like-brand-new-for-just-5-rupees/articleshow-whzy9s1</link>
            <guid isPermaLink="true">https://kannada.asianetnews.com/kitchen/here-are-some-simple-tips-to-make-your-toilet-shine-like-brand-new-for-just-5-rupees/articleshow-whzy9s1</guid>
            <pubDate>Mon, 29 Jun 2026 10:13:09 +0530</pubDate>
            <description><![CDATA[&lt;p&gt;ದಿನವೊಂದಕ್ಕೆ ಕೇವಲ ಐದೇ ಐದು ನಿಮಿಷದ ಶ್ರಮ ಹಾಗೂ 5 ರೂಪಾಯಿಗಳ ಖರ್ಚಿನಲ್ಲಿ ನಿಮ್ಮ ಶೌಚಾಲಯವನ್ನು ರಾಸಾಯನಿಕಗಳಿಲ್ಲದೆ ಸ್ವಚ್ಛವಾಗಿಟ್ಟುಕೊಳ್ಳಬಹುದು. ಈ ಸ್ಮಾರ್ಟ್ ಜೀವನಶೈಲಿಯ ಸಲಹೆಯನ್ನು ಇಂದೇ ಪಾಲಿಸಿ ಮತ್ತು ನಿಮ್ಮ ಮನೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw8twgxm9bsj79zwew5w4afz,imgname-toilet-1782708061107.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟಾಯ್ಲೆಟ್ ಕ್ಲೀನಿಂಗ್ ಟಿಪ್ಸ್&lt;/strong&gt;&lt;/p&gt;&lt;p&gt;ನಮ್ಮ ಜೀವನಶೈಲಿಯಲ್ಲಿ ಮನೆಯ ಅಂದಚೆಂದಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ, ಅಷ್ಟೇ ಮನೆಯ ನೈರ್ಮಲ್ಯಕ್ಕೂ ನೀಡಬೇಕು. ಎಷ್ಟೇ ಸುಂದರವಾದ ಸೋಫಾ, ಪರದೆ ಅಥವಾ ಪೀಠೋಪಕರಣಗಳನ್ನು ಹೊಂದಿದ್ದರೂ, ಮನೆಯ ಶೌಚಾಲಯ ಅಥವಾ ಸ್ನಾನಗೃಹವು ಅಶುಚಿಯಾಗಿದ್ದರೆ ಇಡೀ ಮನೆಯ ಸಂಭ್ರಮವೇ ಹಾಳಾಗುತ್ತದೆ. ಶೌಚಾಲಯವು ಕೇವಲ ಮನೆಯ ಒಂದು ಭಾಗವಲ್ಲ, ಅದು ನಮ್ಮ ಜೀವನದ ಶಿಸ್ತು ಮತ್ತು ನೈರ್ಮಲ್ಯದ ಪ್ರತಿಬಿಂಬವೂ ಹೌದು.&lt;/p&gt;&lt;p&gt;ಮುಖ್ಯವಾಗಿ, ಮನೆಗೆ ಅತಿಥಿಗಳು ಬಂದಾಗ ಶೌಚಾಲಯವು ಗಲೀಜಾಗಿದ್ದರೆ ಅಥವಾ ದುರ್ವಾಸನೆ ಬರುತ್ತಿದ್ದರೆ, ನಮ್ಮ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಕ್ಷಣಾರ್ಧದಲ್ಲಿ ಮಣ್ಣುಪಾಲಾಗುವುದು ಖಂಡಿತ. ಇದು ಅನೇಕರ ನೆಮ್ಮದಿಗೆ ಭಂಗ ತರುವ ಸಂಗತಿ ಎಂಬುದು ಗುಟ್ಟಿನ ಸಂಗತಿಯೇನೂ ಅಲ್ಲ.&lt;/p&gt;&lt;p&gt;ಅನೇಕರು ಶೌಚಾಲಯ ಶುಚಿಗೊಳಿಸುವುದು ಒಂದು ದೊಡ್ಡ ಕಷ್ಟದ ಕೆಲಸ ಎಂದು ಭಾವಿಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಮತ್ತು ಘಾಟು ವಾಸನೆಯ ರಾಸಾಯನಿಕ ದ್ರವಗಳನ್ನು (Chemical cleaners) ಖರೀದಿಸಿ ಸಾವಿರಾರು ರೂಪಾಯಿಗಳನ್ನು ವ್ಯಯಿಸುತ್ತಾರೆ. ಆದರೆ ಇಂತಹ ರಾಸಾಯನಿಕಗಳು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ, ಪರಿಸರಕ್ಕೂ ಹಾನಿಕಾರಕ. ಆದರೆ, ಕೇವಲ 5 ರೂಪಾಯಿ ಖರ್ಚಿನಲ್ಲಿ, ನಿಮ್ಮ ಅಡುಗೆಮನೆಯಲ್ಲಿಯೇ ಇರುವ ಮೂರು ನೈಸರ್ಗಿಕ ವಸ್ತುಗಳನ್ನು ಬಳಸಿ ನಿಮ್ಮ ಟಾಯ್ಲೆಟ್ ಅನ್ನು ಪಂಚತಾರಾ ಹೋಟೆಲ್&zwnj;ನ ಶೌಚಾಲಯದಂತೆ ಮಿರಮಿರ ಮಿಂಚಿಸಬಹುದು! ಆ ಅದ್ಭುತ ಕಿಚನ್ ಟಿಪ್ಸ್ ಇಲ್ಲಿದೆ ನೋಡಿ..&lt;/p&gt;&lt;h2&gt;1. ಅಡುಗೆ ಸೋಡಾ (Baking Soda): ಕಲೆಗಳನ್ನು ಹೋಗಲಾಡಿಸೋ ಕಿಂಗ್&lt;/h2&gt;&lt;p&gt;ಹೌದು, ಕಿಚನ್&zwnj;ನಲ್ಲಿ ಇರುವ ಅಡುಗೆ ಸೋಡಾವನ್ನು ಬಳಸಿರಿ. ಇದು ಟಾಯ್ಲೆಟ್ ಬೌಲ್&zwnj;ನ ಒಳಭಾಗದಲ್ಲಿ ಅಂಟಿಕೊಂಡಿರುವ ಗಟ್ಟಿ ಕಲೆಗಳು ಮತ್ತು ಜಿಡ್ಡಿನಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಎರಡರಿಂದ ಮೂರು ಚಮಚ ಅಡುಗೆ ಸೋಡಾವನ್ನು ತೆಗೆದುಕೊಂಡು ಅದನ್ನು ಟಾಯ್ಲೆಟ್ ಬೌಲ್&zwnj;ನ ಒಳಭಾಗದಲ್ಲಿ ಎಲ್ಲಾ ಕಡೆ ಹರಡುವಂತೆ ಸಿಂಪಡಿಸಿ. ಇದನ್ನು ಸುಮಾರು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಡುಗೆ ಸೋಡಾ ತನ್ನ ಸ್ವಚ್ಛಗೊಳಿಸುವ ಗುಣದಿಂದಾಗಿ ಕೊಳೆಯನ್ನು ಸಡಿಲಗೊಳಿಸುತ್ತದೆ.&lt;/p&gt;&lt;p&gt;2. ಬಿಳಿ ವಿನೆಗರ್ (White Vinegar): ಹೊಳಪು ನೀಡುವ ಮಾಂತ್ರಿಕ&lt;/p&gt;&lt;p&gt;ಉಪ್ಪು ನೀರಿನಿಂದಾಗಿ ಶೌಚಾಲಯದ ಮೇಲೆ ಬಿಳಿ ಗೆರೆಗಳು ಅಥವಾ ಕಲೆಗಳು ಉಂಟಾಗುವುದು ಸಹಜ. ಇವುಗಳನ್ನು ಹೋಗಲಾಡಿಸಲು ವಿನೆಗರ್ ಅತ್ಯುತ್ತಮ. ಸೋಡಾ ಸಿಂಪಡಿಸಿದ 20 ನಿಮಿಷಗಳ ನಂತರ, ಒಂದು ಕಪ್ ಬಿಳಿ ವಿನೆಗರ್ ಅನ್ನು ಅದರ ಮೇಲೆ ಸುರಿಯಿರಿ. ವಿನೆಗರ್ ಸೋಡಾದ ಮೇಲೆ ಬಿದ್ದ ತಕ್ಷಣ ರಾಸಾಯನಿಕ ಕ್ರಿಯೆ ನಡೆದು ಗುಳ್ಳೆಗಳು ಏಳುತ್ತವೆ. ಇದು ಹಠಮಾರಿ ಕಲೆಗಳನ್ನು ಬುಡ ಸಮೇತ ಕಿತ್ತು ಹಾಕುತ್ತದೆ. ಸ್ವಲ್ಪ ಸಮಯದ ಬಳಿಕ ಟಾಯ್ಲೆಟ್ ಬ್ರಷ್&zwnj;ನಿಂದ ಸ್ವಲ್ಪ ಉಜ್ಜಿದರೆ, ಬೌಲ್ ಮೇಲೆ ಸಂಗ್ರಹವಾಗಿದ್ದ ಕಲೆಗಳು ಮಾಯವಾಗಿ ಬಿಳಿಯ ಅಥವಾ ಬೌಲ್ ಸಹಜ ಬಣ್ಣ ಮರಳುತ್ತದೆ.&lt;/p&gt;&lt;h3&gt;3. ನಿಂಬೆ ಹಣ್ಣು (Lemon): ನೈಸರ್ಗಿಕ ಸುಗಂಧ ಮತ್ತು ಬ್ಯಾಕ್ಟೀರಿಯಾ ನಾಶಕ&lt;/h3&gt;&lt;p&gt;ಇನ್ನು, ಶೌಚಾಲಯದಲ್ಲಿನ ಬ್ಯಾಕ್ಟೀರಿಯಾಗಳನ್ನು ಸಂಪೂರ್ಣವಾಗಿ ನಾಶಮಾಡಲು ಮತ್ತು ಅದ್ಭುತವಾದ ಪರಿಮಳವನ್ನು ನೀಡಲು ನಿಂಬೆ ಹಣ್ಣನ್ನು ಬಳಸಿ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ನೈಸರ್ಗಿಕ ಕ್ಲೀನರ್ ಆಗಿ ಕೆಲಸ ಮಾಡುತ್ತದೆ. ಒಂದು ನಿಂಬೆ ಹಣ್ಣಿನ ರಸವನ್ನು ಬೌಲ್&zwnj;ನ ಒಳಭಾಗಕ್ಕೆ ಸಿಂಪಡಿಸಿ ನಂತರ ನೀರು ಫ್ಲಶ್ ಮಾಡಿ. ಇದು ಶೌಚಾಲಯದ ದುರ್ವಾಸನೆಯನ್ನು ಹೋಗಲಾಡಿಸಿ ಇಡೀ ಬಾತ್&zwnj;ರೂಮ್ ಸಾಕಷ್ಟು ಫ್ರೆಶ್ ಆಗಿರುವಂತೆ ಮಾಡುತ್ತದೆ.&lt;/p&gt;&lt;p&gt;ಹೀಗೆ ದಿನವೊಂದಕ್ಕೆ ಕೇವಲ ಐದೇ ಐದು ನಿಮಿಷದ ಶ್ರಮ ಹಾಗೂ 5 ರೂಪಾಯಿಗಳ ಖರ್ಚಿನಲ್ಲಿ ನಿಮ್ಮ ಶೌಚಾಲಯವನ್ನು ರಾಸಾಯನಿಕಗಳಿಲ್ಲದೆ ಸ್ವಚ್ಛವಾಗಿಟ್ಟುಕೊಳ್ಳಬಹುದು. ಈ ಸ್ಮಾರ್ಟ್ ಜೀವನಶೈಲಿಯ ಸಲಹೆಯನ್ನು ಇಂದೇ ಪಾಲಿಸಿ ಮತ್ತು ನಿಮ್ಮ ಮನೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ!&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/kitchen/here-are-some-simple-tips-to-make-your-toilet-shine-like-brand-new-for-just-5-rupees/articleshow-whzy9s1"/>
        </item>
        <item>
            <title><![CDATA[Salman Khan-Aishwarya Rai Secret: ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್ ಸೀಕ್ರೆಟ್ ಬಿಚ್ಚಿಟ್ಟ ಸಾದಿಯಾ ಸಿದ್ದಿಕಿ; ಇಲ್ಲಿರೋದು ಹೊಸ ವಿಷಯ!]]></title>
            <link>https://kannada.asianetnews.com/entertainment/sadiya-siddiqui-who-is-aishwarya-rai-shabd-says-she-always-came-fully-prepared-even-after-breakup-with-salman-khan/articleshow-xrwf81g</link>
            <guid isPermaLink="true">https://kannada.asianetnews.com/entertainment/sadiya-siddiqui-who-is-aishwarya-rai-shabd-says-she-always-came-fully-prepared-even-after-breakup-with-salman-khan/articleshow-xrwf81g</guid>
            <pubDate>Mon, 29 Jun 2026 09:17:15 +0530</pubDate>
            <description><![CDATA[&lt;p&gt;ವಿಶ್ವಸುಂದರಿ ಪಟ್ಟ ಪಡೆದಿದ್ದ ಐಶ್ವರ್ಯಾ ರೈ ಕೇವಲ ಸುಂದರಿ ಮಾತ್ರವಲ್ಲ, ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಅದೇನು ಮಾಡಿದ್ದರು ಎಂಬ ಸೀಕ್ರೆಟ್ ಇಲ್ಲಿ ರಿವೀಲ್ ಆಗಿದೆ. ಈ ಸಂಗತಿಯನ್ನು ಸಹನಟಿ ಸಾದಿಯಾ ಹೇಳಿದ್ದಾರೆ. ಮುಂದೆ 2007ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw8q5e64xvatftw072hexs4d,imgname-sadiya-siddiqui-aishwarya-rai-1782704158916.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್-ಬ್ರೇಕಪ್ ಸೀಕ್ರೆಟ್!&lt;/strong&gt;&lt;/p&gt;&lt;p&gt;ಬಾಲಿವುಡ್ ಲೋಕದಲ್ಲಿ ಪ್ರೇಮಕಥೆಗಳಿಗೆ, ಗಾಸಿಪ್&zwnj;ಗಳಿಗೆ ಯಾವತ್ತೂ ಬರ ಇಲ್ಲ. ಕೆಲವೊಮ್ಮೆ ಅದು ಸಾಕಷ್ಟು ವಿವಾದಗಳ ಲೋಕ ಕೂಡ. ಅದರಲ್ಲೂ ವಿಶ್ವಸುಂದರಿ ಐಶ್ವರ್ಯಾ ರೈ (Aishwarya Rai) ಮತ್ತು ಸುಲ್ತಾನ್ ಸಲ್ಮಾನ್ ಖಾನ್ (Salman Khan) ಅವರ ಪ್ರೇಮಕಥೆ ಹಾಗೂ ಬ್ರೇಕಪ್ ಇಂದಿಗೂ ಸಿನಿಪ್ರೆಮಿಗಳ ಮೆಚ್ಚಿನ ಚರ್ಚೆಯ ವಿಷಯ. ಈಗ ಇದೇ ವಿಚಾರವಾಗಿ ಐಶ್ವರ್ಯಾ ರೈ ಅವರ ವೃತ್ತಿಪರತೆಯನ್ನು ಕೊಂಡಾಡಿರುವ ನಟಿ ಸಾದಿಯಾ ಸಿದ್ದಿಕಿ, ಅಂದಿನ ಕಾಲದ ಹಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;ವೈಯಕ್ತಿಕ ನೋವಿನ ನಡುವೆಯೂ ಐಶ್ವರ್ಯಾ ವೃತ್ತಿಪರತೆ:&lt;/h2&gt;&lt;p&gt;2005ರಲ್ಲಿ ಬಿಡುಗಡೆಯಾದ 'ಶಬ್ದ್' (Shabd) ಸಿನಿಮಾದಲ್ಲಿ ಐಶ್ವರ್ಯಾ ರೈ ಜೊತೆ ಕೆಲಸ ಮಾಡಿದ ಅನುಭವವನ್ನು ಸಾದಿಯಾ ಸಿದ್ದಿಕಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ನೆನಪು ಮಾಡಿಕೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಆ ಕಹಿ ಘಟನೆ ಮತ್ತು ಕಠಿಣ ಬ್ರೇಕಪ್ ಬಗ್ಗೆ ನಂತರದ ದಿನಗಳಲ್ಲಿ ಐಶ್ವರ್ಯಾ ತಮ್ಮ ವೈಯಕ್ತಿಕ ನೋವನ್ನು ಎಲ್ಲಿಯೂ ತೋರ್ಪಡಿಸಲಿಲ್ಲವಂತೆ. &quot;ಅವರು ತಮ್ಮ ಭಾವನೆಗಳನ್ನು ತುಂಬಾ ಚೆನ್ನಾಗಿ ಮರೆಮಾಚುತ್ತಿದ್ದರು&quot; ಎಂದು ಸಾದಿಯಾ ಹೇಳಿದ್ದಾರೆ.&lt;/p&gt;&lt;p&gt;ಸಾದಿಯಾ ಹೇಳುವ ಪ್ರಕಾರ, ಐಶ್ವರ್ಯಾ ಎಂದಿಗೂ ಸೆಟ್&zwnj;ಗೆ ತಯಾರಿಯಿಲ್ಲದೆ ಬರುತ್ತಿರಲಿಲ್ಲ. &quot;ಅವರು ಯಾವಾಗಲೂ ಸಂಪೂರ್ಣ ಸಿದ್ಧತೆಯೊಂದಿಗೆ ಬರುತ್ತಿದ್ದರು. ಸ್ಕ್ರಿಪ್ಟ್ ಅನ್ನು ವಿವರವಾಗಿ ಓದುತ್ತಿದ್ದರು ಮತ್ತು ತಮ್ಮ ಪಾತ್ರವನ್ನು ಹೆಣೆದಿರುವ ರೀತಿ, ಅಲ್ಲಿನ ಮನೋವಿಜ್ಞಾನದ ಬಗ್ಗೆ ಚರ್ಚಿಸುತ್ತಿದ್ದರು. ಅವರ ವೃತ್ತಿಪರತೆ ಕಂಡು ನಾನು ಬೆರಗಾಗಿದ್ದೆ,&quot; ಎಂದು ಸಾದಿಯಾ ಹೇಳಿದ್ದಾರೆ.&lt;/p&gt;&lt;p&gt;ಸಲ್ಮಾನ್-ಐಶ್ವರ್ಯಾ ಸಂಬಂಧದ ಆ ಕಹಿ ದಿನಗಳು:&lt;/p&gt;&lt;p&gt;ಸಂಜಯ್ ಲೀಲಾ ಭನ್ಸಾಲಿಯವರ 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದ ಚಿತ್ರೀಕರಣದ ವೇಳೆ ಐಶ್ವರ್ಯಾ ಮತ್ತು ಸಲ್ಮಾನ್ ಪ್ರೀತಿಸತೊಡಗಿದ್ದರು. ಇಡೀ ಬಾಲಿವುಡ್ ಇವರ ಮದುವೆಯ ನಿರೀಕ್ಷೆಯಲ್ಲಿತ್ತು. ಆದರೆ 2002ರಲ್ಲಿ ಈ ಸಂಬಂಧ ಅಧಿಕೃತವಾಗಿ ಮುಕ್ತಾಯವಾಯಿತು. ಸಲ್ಮಾನ್ ಅವರ ದುವರ್ತನೆಯೇ ಈ ಬ್ರೇಕಪ್&zwnj;ಗೆ ಕಾರಣ ಎಂದು ಐಶ್ವರ್ಯಾ ಆಗ ಹೇಳಿದ್ದರು. ಇದರ ನಂತರ 2003ರಲ್ಲಿ ವಿವೇಕ್ ಒಬೆರಾಯ್ ನಡೆಸಿದ ಪತ್ರಿಕಾಗೋಷ್ಠಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇಷ್ಟೆಲ್ಲಾ ಮಾನಸಿಕ ಒತ್ತಡಗಳ ನಡುವೆಯೂ ಐಶ್ವರ್ಯಾ 'ಶಬ್ದ್' ಚಿತ್ರದ ಶೂಟಿಂಗ್&zwnj;ನಲ್ಲಿ ಭಾಗವಹಿಸಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿದ್ದರು.&lt;/p&gt;&lt;h3&gt;ಸಂಜಯ್ ದತ್ ಅವರ ವಿಭಿನ್ನ ಶೈಲಿ:&lt;/h3&gt;&lt;p&gt;ಇದೇ ಇಂಟರ್&zwnj;ವ್ಯೂದಲ್ಲಿ ಸಾದಿಯಾ ಅವರು ಸಂಜಯ್ ದತ್ ಅವರ ಬಗ್ಗೆಯೂ ಮಾತನಾಡಿದ್ದಾರೆ. &quot;ಸಂಜಯ್ ದತ್ ಅವರೊಂದಿಗೆ ನನ್ನ ಮೊದಲ ದೃಶ್ಯ ಅಡುಗೆ ಮನೆಯಲ್ಲಿತ್ತು. ನಾನು ಸಂಭಾಷಣೆಗಳನ್ನು ರಿಹರ್ಸಲ್ ಮಾಡೋಣವೇ ಎಂದು ಕೇಳಿದಾಗ, ನಿರ್ದೇಶಕಿ ಲೀನಾ ಯಾದವ್ ಬಂದು, 'ಸಂಜು ಬಾಬಾ ರಿಹರ್ಸಲ್ ಮಾಡಲು ಅಷ್ಟಾಗಿ ಇಷ್ಟಪಡುವುದಿಲ್ಲ, ನೀವು ನಿಮ್ಮ ತಯಾರಿ ಮಾಡಿಕೊಳ್ಳಿ' ಎಂದರು. ಇದು ನನಗೆ ಸ್ವಲ್ಪ ಅಚ್ಚರಿ ತಂದಿತು, ಆದರೆ ಸಂಜಯ್ ದತ್ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಅದ್ಭುತವಾಗಿ ನಟಿಸುತ್ತಿದ್ದರು. ಅದನ್ನು ನೋಡಿ ನಾನು ನಿಜವಾಗಿಯೂ ಬೆರಗಾಗಿದ್ದೆ,&quot; ಎಂದಿದ್ದಾರೆ.&lt;/p&gt;&lt;p&gt;'ಶಬ್ದ್' ಚಿತ್ರದ ಬಗ್ಗೆ:&lt;/p&gt;&lt;p&gt;ಲೀನಾ ಯಾದವ್ ನಿರ್ದೇಶನದ 'ಶಬ್ದ್' ಚಿತ್ರದಲ್ಲಿ ಸಂಜಯ್ ದತ್, ಐಶ್ವರ್ಯಾ ರೈ ಮತ್ತು ಜಾಯೆದ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವು ಒಬ್ಬ ಬರಹಗಾರನ ಕಲ್ಪನೆ ಮತ್ತು ವಾಸ್ತವದ ನಡುವಿನ ಸಂಘರ್ಷದ ಕಥೆಯಾಗಿತ್ತು. ಐಶ್ವರ್ಯಾ ಈ ಚಿತ್ರದಲ್ಲಿ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದರು. ಜೊತೆಗೆ ಅವರ ನಟನೆಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.&lt;/p&gt;&lt;p&gt;ಒಟ್ಟಾರೆಯಾಗಿ, ವಿಶ್ವಸುಂದರಿ ಪಟ್ಟ ಪಡೆದಿದ್ದ ಐಶ್ವರ್ಯಾ ರೈ ಕೇವಲ ಸುಂದರಿ ಮಾತ್ರವಲ್ಲ, ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಕೆಲಸಕ್ಕೆ ಮೊದಲ ಆದ್ಯತೆ ನೀಡುವ ಗಟ್ಟಿ ಮನಸ್ಸಿನ ಮಹಿಳೆ ಎಂಬುದನ್ನು ಸಹನಟಿ ಸಾದಿಯಾ ಮಾತುಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ಮುಂದೆ 2007ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದ ಐಶ್ವರ್ಯಾ ರೈ, ಈಗ ಆರಾಧನಾ ತಾಯಿಯಾಗಿ ಲೈಫ್ ಲೀಡ್ ಮಾಡುತ್ತಿದ್ದಾರೆ. ಸಿನಿಮಾದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ ಐಶ್ವರ್ಯಾ ರೈ. ಆದರೆ ಸಲ್ಮಾನ್ ಖಾನ್ ಇಂದಿಗೂ ಸಿಂಗಲ್ ಆಗಿಯೇ ಉಳಿದಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/sadiya-siddiqui-who-is-aishwarya-rai-shabd-says-she-always-came-fully-prepared-even-after-breakup-with-salman-khan/articleshow-xrwf81g"/>
        </item>
        <item>
            <title><![CDATA[Earring Designs: ಸ್ಟೋನ್ ವರ್ಕ್ ಇರೋ 5 ಸುಂದರ ಬಾಲಿ ಡಿಸೈನ್‌ಗಳು, ಆಫೀಸ್ ವೇರ್‌ಗೆ ಬೆಸ್ಟ್ ಈ ಫ್ಯಾನ್ಸಿ ಪೀಸ್‌ಗಳು]]></title>
            <link>https://kannada.asianetnews.com/webstories/fashion/5-beautiful-stone-work-hoop-earring-designs-for-office-wear-gvd-1vp3d7x</link>
            <guid isPermaLink="true">https://kannada.asianetnews.com/webstories/fashion/5-beautiful-stone-work-hoop-earring-designs-for-office-wear-gvd-1vp3d7x</guid>
            <pubDate>Mon, 29 Jun 2026 00:27:04 +0530</pubDate>
            <description><![CDATA[&lt;p&gt;Earring Designs: ಕಲ್ಲಿನ ಕುಸುರಿ ಕೆಲಸವಿರುವ ಕೆಲವು ಅದ್ಭುತ ಹೂಪ್ ಬಾಲಿ ಡಿಸೈನ್&zwnj;ಗಳನ್ನು ನಾವಿಲ್ಲಿ ನಿಮಗಾಗಿ ತಂದಿದ್ದೇವೆ. ಎಡಿ ಸ್ಟೋನ್, ಡೈಮಂಡ್, ಸಿಲ್ವರ್ ಮತ್ತು ಗೋಲ್ಡನ್ ಸ್ಟೈಲ್&zwnj;ನಲ್ಲಿರುವ ಸುಂದರ ಡಿಸೈನ್&zwnj;ಗಳನ್ನು ನಿಮ್ಮ ಆಫೀಸ್ ವೇರ್&zwnj;ಗಾಗಿ ಆಯ್ಕೆ ಮಾಡಿಕೊಳ್ಳಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw1y39bb00pfwm70aerk581g,imgname-trendy-office-wear-earrings-1782476547434.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/5-beautiful-stone-work-hoop-earring-designs-for-office-wear-gvd-1vp3d7x"/>
        </item>
        <item>
            <title><![CDATA[Backless Blouse: ಮದುವೆ ಸೀಸನ್‌ನಲ್ಲಿ ಮಿಂಚಿಂಗ್: 7 ಟ್ರೆಂಡಿ ಬ್ಯಾಕ್‌ಲೆಸ್ ಡೋರಿ ಬ್ಲೌಸ್ ಡಿಸೈನ್ಸ್]]></title>
            <link>https://kannada.asianetnews.com/webstories/fashion/trendy-backless-dori-blouse-designs-for-wedding-season-gvd-1n17mhk</link>
            <guid isPermaLink="true">https://kannada.asianetnews.com/webstories/fashion/trendy-backless-dori-blouse-designs-for-wedding-season-gvd-1n17mhk</guid>
            <pubDate>Sun, 28 Jun 2026 23:42:37 +0530</pubDate>
            <description><![CDATA[&lt;p&gt;Backless Blouse: ಮದುವೆ ಸೀಸನ್&zwnj;ನಲ್ಲಿ ಎಲ್ಲರಿಗಿಂತ ಭಿನ್ನವಾಗಿ, ಗ್ಲಾಮರಸ್ ಆಗಿ ಕಾಣಬೇಕಾ? ಹಾಗಿದ್ರೆ ಬೇಸಿಕ್ ಡಿಸೈನ್ ಬ್ಲೌಸ್ ಬದಲು ಬ್ಯಾಕ್&zwnj;ಲೆಸ್ ಡೋರಿ ಬ್ಲೌಸ್ ಟ್ರೈ ಮಾಡಿ. ನಿಮ್ಮ ಸೌಂದರ್ಯ ಹೆಚ್ಚಿಸುವ 7 ಡಿಸೈನ್&zwnj;ಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdjce6w3ehfgvjtz10d56ksf,imgname-backless-blouse-trends-2026-1766922328963.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/trendy-backless-dori-blouse-designs-for-wedding-season-gvd-1n17mhk"/>
        </item>
        <item>
            <title><![CDATA[Princess Cut Blouse: ಸೀರೆಗಳಿಗೆ ಸೂಪರ್ ಲುಕ್ ಕೊಡುವ ಟ್ರೆಂಡಿ ಪ್ರಿನ್ಸೆಸ್ ಕಟ್ ಬ್ಲೌಸ್ ಡಿಸೈನ್ಸ್!]]></title>
            <link>https://kannada.asianetnews.com/webstories/fashion/latest-princess-cut-blouse-designs-for-sarees-and-lehengas-gvd-bk2izxg</link>
            <guid isPermaLink="true">https://kannada.asianetnews.com/webstories/fashion/latest-princess-cut-blouse-designs-for-sarees-and-lehengas-gvd-bk2izxg</guid>
            <pubDate>Sun, 28 Jun 2026 21:42:14 +0530</pubDate>
            <description><![CDATA[&lt;p&gt;Princess Cut Blouse: ಈಗಿನ ಟ್ರೆಂಡ್&zwnj;ಗೆ ತಕ್ಕಂತೆ ಮಹಿಳೆಯರು ಪ್ರಿನ್ಸೆಸ್ ಕಟ್ ಬ್ಲೌಸ್&zwnj;ಗಳನ್ನು ಧರಿಸಲು ಹೆಚ್ಚು ಇಷ್ಟಪಡುತ್ತಾರೆ. ಸೀರೆಗಳಿಗೆ ಮಾತ್ರವಲ್ಲದೆ, ಲೆಹೆಂಗಾಗಳಿಗೂ ಸಖತ್ ಆಗಿ ಕಾಣುವ ಕೆಲವು ಪ್ರಿನ್ಸೆಸ್ ಕಟ್ ಬ್ಲೌಸ್ ಡಿಸೈನ್&zwnj;ಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsg9ve1rtk0vzfrqnhgw25h,imgname-princess-blouse-design-1-1782193647041.gif" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/latest-princess-cut-blouse-designs-for-sarees-and-lehengas-gvd-bk2izxg"/>
        </item>
        <item>
            <title><![CDATA[ಮಹಿಳೆಯರೇ ಎಚ್ಚರ! ಈ 4 ಉತ್ಪನ್ನ ಅತಿಯಾಗಿ ಬಳಸ್ಬೇಡಿ; ಎಚ್ಚರಿಸಿದ ಡಾ. ಹಂಸ ಯೋಗೇಂದ್ರ]]></title>
            <link>https://kannada.asianetnews.com/gallery/health-life/dr-hansa-yogendra-warns-women-against-using-these-4-personal-care-products-know-why-bfrq9db</link>
            <guid isPermaLink="true">https://kannada.asianetnews.com/gallery/health-life/dr-hansa-yogendra-warns-women-against-using-these-4-personal-care-products-know-why-bfrq9db</guid>
            <pubDate>Sun, 28 Jun 2026 19:49:39 +0530</pubDate>
            <description><![CDATA[&lt;p&gt;Dr. Hansa Yogendra Health Tips: ಮಹಿಳೆಯರು ಬಳಸುವ ಕೆಲವು ಉತ್ಪನ್ನಗಳು ಆರೋಗ್ಯಕ್ಕೆ ಹೇಗೆ ಮಾರಕವಾಗಬಹುದು ಎಂದು ಡಾ. ಹಂಸಾ ಯೋಗೇಂದ್ರ ವಿವರಿಸಿದ್ದಾರೆ. ಪೂರ್ಣ ವಿವರ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw79bvgfy0feyd9wsgm381ys,imgname-thumbnail--40--1782656134671.jpg" type="image/jpeg" height="390" width="690"/>
            <content:encoded><![CDATA[&lt;p&gt;Dr. Hansa Yogendra Health Tips: ಮಹಿಳೆಯರು ಬಳಸುವ ಕೆಲವು ಉತ್ಪನ್ನಗಳು ಆರೋಗ್ಯಕ್ಕೆ ಹೇಗೆ ಮಾರಕವಾಗಬಹುದು ಎಂದು ಡಾ. ಹಂಸಾ ಯೋಗೇಂದ್ರ ವಿವರಿಸಿದ್ದಾರೆ. ಪೂರ್ಣ ವಿವರ ಇಲ್ಲಿದೆ ನೋಡಿ..&lt;/p&gt;&lt;img&gt;&lt;p&gt;ಸೌಂದರ್ಯವರ್ಧಕಗಳು ಮತ್ತು ಪರ್ಸನಲ್ ಕೇರ್ ಉತ್ಪನ್ನಗಳ ಮಾರುಕಟ್ಟೆ ಇಂದು ಬೃಹತ್ ಆಗಿ ಬೆಳೆದಿದೆ. ಆದರೆ ಇವುಗಳಲ್ಲಿ ಬಳಸುವ ರಾಸಾಯನಿಕಗಳು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಡಾ. ಹಂಸ ಯೋಗೇಂದ್ರ ಅವರ ಪ್ರಕಾರ ಮಹಿಳೆಯರು ಈ ಕೆಳಗಿನ ನಾಲ್ಕು ಉತ್ಪನ್ನಗಳಿಂದ ದೂರವಿರುವುದು ಉತ್ತಮ.&lt;/p&gt;&lt;img&gt;&lt;p&gt;&lt;strong&gt;1. ಸುವಾಸನೆಯುಕ್ತ ಸ್ಯಾನಿಟರಿ ಪ್ಯಾಡ್&zwnj;ಗಳು (Scented Sanitary Pads)&lt;/strong&gt;ಅನೇಕ ಮಹಿಳೆಯರು ಋತುಸ್ರಾವದ ಸಮಯದಲ್ಲಿ ಸುವಾಸನೆ ಬರುವ ಸ್ಯಾನಿಟರಿ ಪ್ಯಾಡ್&zwnj;ಗಳನ್ನು ಬಳಸಲು ಇಷ್ಟಪಡುತ್ತಾರೆ. ಆದರೆ ಸಂಶೋಧನೆಗಳ ಪ್ರಕಾರ, ಈ ಪ್ಯಾಡ್&zwnj;ಗಳಲ್ಲಿ ಬಳಸುವ ಕೃತಕ ಸುಗಂಧ ದ್ರವ್ಯಗಳು (Fragrance Chemicals) ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು. ಅಲ್ಲದೆ, ಇದು ಜನನಾಂಗದ ಸೂಕ್ಷ್ಮ ಚರ್ಮದ ಮೇಲೆ ಕಿರಿಕಿರಿ ಮತ್ತು ಸೋಂಕನ್ನು ಉಂಟುಮಾಡಬಹುದು.&lt;/p&gt;&lt;img&gt;&lt;p&gt;&lt;strong&gt;2. ಸ್ಕಿನ್ ವೈಟ್ನಿಂಗ್ ಕ್ರೀಮ್&zwnj;ಗಳು (Skin Whitening Creams)&lt;/strong&gt;ಬೆಳ್ಳಗಾಗಲು ಬಳಸುವ ಕ್ರೀಮ್&zwnj;ಗಳಿಗೆ ಭಾರತದಲ್ಲಿ ದೊಡ್ಡ ಮಾರುಕಟ್ಟೆಯಿದೆ. ಆದರೆ ಇವುಗಳನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ಪದರವು ತೆಳುವಾಗುತ್ತದೆ (Skin Thining). ಅತಿಯಾದ ಬಳಕೆಯಿಂದ ಮುಖದ ಮೇಲೆ ಪಿಗ್ಮೆಂಟೇಶನ್ ಸಮಸ್ಯೆ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಮತ್ತು ಚರ್ಮವು ತನ್ನ ನೈಸರ್ಗಿಕ ರಕ್ಷಣಾ ಶಕ್ತಿಯನ್ನು ಕಳೆದುಕೊಳ್ಳುತ್ತದೆ.&lt;/p&gt;&lt;img&gt;&lt;p&gt;&lt;strong&gt;3. ರಾಸಾಯನಿಕಯುಕ್ತ ಹೇರ್ ಡೈಗಳು (Chemical Hair Dyes)&lt;/strong&gt;ಕೂದಲನ್ನು ಕಪ್ಪಾಗಿಸಲು ಅಥವಾ ಬಣ್ಣ ಬದಲಿಸಲು ಬಳಸುವ ಡೈಗಳಲ್ಲಿ ಅಮೋನಿಯಾ (Ammonia) ಇರುತ್ತದೆ. ಇದು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ನೆತ್ತಿಯಲ್ಲಿ (Scalp) ಊತ ಅಥವಾ ಉರಿಯೂತವನ್ನು ಉಂಟುಮಾಡಬಹುದು. ದೀರ್ಘಕಾಲದವರೆಗೆ ಕೆಮಿಕಲ್ ಡೈಗಳನ್ನು ಬಳಸುವ ಬದಲು ನೈಸರ್ಗಿಕ ಮೆಹಂದಿಯಂತಹ ವಸ್ತುಗಳನ್ನು ಬಳಸುವುದು ಉತ್ತಮ.&lt;/p&gt;&lt;img&gt;&lt;p&gt;&lt;strong&gt;4. ಇಂಟಿಮೇಟ್ ಹೈಜೀನ್ ಲಿಕ್ವಿಡ್&zwnj;ಗಳು (Intimate Hygiene Liquids)&lt;/strong&gt;ಖಾಸಗಿ ಭಾಗಗಳ ಶುಚಿತ್ವಕ್ಕಾಗಿ ಇಂದು ಮಾರುಕಟ್ಟೆಯಲ್ಲಿ ವಿಶೇಷ ಲಿಕ್ವಿಡ್&zwnj;ಗಳು ಸಿಗುತ್ತವೆ. ಇವುಗಳಲ್ಲಿ ಕೃತಕ ಸುಗಂಧ ಮತ್ತು ಕೆಮಿಕಲ್&zwnj;ಗಳಿರುತ್ತವೆ. ಡಾ. ಹಂಸಾ ಅವರ ಪ್ರಕಾರ, ಜನನಾಂಗದ ಶುಚಿತ್ವಕ್ಕೆ ಇಂತಹ ಕೃತಕ ದ್ರವಗಳ ಅಗತ್ಯವಿಲ್ಲ. ಕೇವಲ ಸಾಧಾರಣ ಶುದ್ಧ ನೀರನ್ನು ಬಳಸುವುದು ಅತ್ಯಂತ ಸುರಕ್ಷಿತ ಮತ್ತು ಆರೋಗ್ಯಕರ ವಿಧಾನವಾಗಿದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/dr-hansa-yogendra-warns-women-against-using-these-4-personal-care-products-know-why-bfrq9db"/>
        </item>
        <item>
            <title><![CDATA[Chanakya Niti: ತಂದೆ, ತಾಯಿ, ಹೆಂಡತಿ, ಮಗ... ಇವ್ರೇ ನಿಮಗೆ ಶತ್ರುಗಳಾಗೋದು ಯಾವಾಗ? ಚಾಣಕ್ಯ ಹೇಳೋದೇನು?]]></title>
            <link>https://kannada.asianetnews.com/relationship/chanakya-niti-explains-when-your-own-family-can-become-your-enemy-gvd/articleshow-uug64au</link>
            <guid isPermaLink="true">https://kannada.asianetnews.com/relationship/chanakya-niti-explains-when-your-own-family-can-become-your-enemy-gvd/articleshow-uug64au</guid>
            <pubDate>Sun, 28 Jun 2026 19:13:21 +0530</pubDate>
            <description><![CDATA[&lt;p&gt;Chanakya Niti for Family: ಆಚಾರ್ಯ ಚಾಣಕ್ಯರು ತಮ್ಮ ಒಂದು ನೀತಿಯಲ್ಲಿ, ಕೆಲವು ವಿಶೇಷ ಸಂದರ್ಭಗಳಲ್ಲಿ ತಂದೆ-ತಾಯಿ, ಮಗ ಮತ್ತು ಹೆಂಡತಿಯೇ ಶತ್ರುಗಳಾಗುತ್ತಾರೆ ಎಂದು ಹೇಳಿದ್ದಾರೆ. ಆ ನೀತಿ ಏನು ಹೇಳುತ್ತೆ? ಇಲ್ಲಿದೆ ವಿವರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw77byax52j2bgxxf5c3e18g,imgname-hcv-1782654040413.png" type="image/jpeg" height="390" width="690"/>
            <content:encoded><![CDATA[&lt;p&gt;ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ, ಜೀವನದಲ್ಲಿ ಸುಖಕ್ಕಿಂತ ಹೆಚ್ಚು ದುಃಖ ಮತ್ತು ಸಮಸ್ಯೆಗಳಿಗೆ ಕಾರಣವಾಗುವ ಜನರ ಬಗ್ಗೆ ವಿವರಿಸಿದ್ದಾರೆ. ಚಾಣಕ್ಯರ ನೀತಿಗಳು ಇಂದಿಗೂ ನಮ್ಮ ಜೀವನಕ್ಕೆ ಸರಿಯಾದ ದಾರಿ ತೋರಿಸುತ್ತವೆ ಎಂದು ನಂಬಲಾಗಿದೆ. ಅವರು ಸಂಬಂಧಗಳು, ಹಣ, ಶಿಕ್ಷಣ ಮತ್ತು ಕುಟುಂಬಕ್ಕೆ ಸಂಬಂಧಿಸಿದಂತೆ ಅನೇಕ ಪ್ರಮುಖ ಸೂತ್ರಗಳನ್ನು ನೀಡಿದ್ದಾರೆ. ಅವರ ಒಂದು ಪ್ರಸಿದ್ಧ ಶ್ಲೋಕ ಇಂದಿಗೂ ಜನರಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸ್ಫೂರ್ತಿ ನೀಡುತ್ತದೆ. ಚಾಣಕ್ಯ ನೀತಿಯ ಆ ಪ್ರಸಿದ್ಧ ಶ್ಲೋಕ ಹೀಗಿದೆ...&lt;/p&gt;&lt;p&gt;&lt;strong&gt;ಶ್ಲೋಕ&lt;/strong&gt;ಋಣಕರ್ತಾ ಪಿತಾ ಶತ್ರುರ್ಮಾತಾ ಚ ವ್ಯಭಿಚಾರಿಣೀ |ಭಾರ್ಯಾ ರೂಪವತೀ ಶತ್ರುಃ ಪುತ್ರಃ ಶತ್ರುರಪಂಡಿತಃ ||&lt;/p&gt;&lt;p&gt;&lt;strong&gt;ಅರ್ಥ&lt;/strong&gt;- ಸಾಲ ಮಾಡಿದ ತಂದೆ ತನ್ನ ಮಗನಿಗೆ, ಕೆಟ್ಟ ನಡತೆಯ ತಾಯಿ ತನ್ನ ಮಕ್ಕಳಿಗೆ, ಅತಿಯಾದ ಸೌಂದರ್ಯವತಿ ಪತ್ನಿ ತನ್ನ ಪತಿಗೆ ಮತ್ತು ಮೂರ್ಖ ಮಗ ತನ್ನ ತಂದೆ-ತಾಯಿಗೆ ಶತ್ರುಗಳಿಗೆ ಸಮಾನ.&lt;/p&gt;&lt;p&gt;&lt;strong&gt;ಸಾಲದಲ್ಲಿ ಮುಳುಗಿದ ತಂದೆ ಮಗನಿಗೆ ಶತ್ರು&lt;/strong&gt;&lt;/p&gt;&lt;p&gt;ಚಾಣಕ್ಯರ ಪ್ರಕಾರ, ತಂದೆ ವಿಪರೀತ ಸಾಲ ಮಾಡಿ, ಅದನ್ನು ತೀರಿಸುವ ಜವಾಬ್ದಾರಿ ಮಗನ ಮೇಲೆ ಬಿದ್ದರೆ, ಮಗನ ಇಡೀ ಜೀವನ ಆರ್ಥಿಕ ಸಂಕಷ್ಟದಲ್ಲೇ ಕಳೆದುಹೋಗಬಹುದು. ಇಂತಹ ಪರಿಸ್ಥಿತಿಯಲ್ಲಿ ತಂದೆಯೇ ತನ್ನ ಮಗನ ಪಾಲಿಗೆ ಶತ್ರುವಾಗಿಬಿಡುತ್ತಾನೆ. ಹೀಗಾಗಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ಮಾಡಬೇಕು ಮತ್ತು ಅದನ್ನು ಸಮಯಕ್ಕೆ ಸರಿಯಾಗಿ ತೀರಿಸಬೇಕು.&lt;/p&gt;&lt;p&gt;&lt;strong&gt;ಕೆಟ್ಟ ನಡತೆಯ ತಾಯಿ ಮಕ್ಕಳಿಗೆ ಶತ್ರು&lt;/strong&gt;&lt;/p&gt;&lt;p&gt;ಯಾವ ಮಹಿಳೆ ತನ್ನ ಕುಲ ಮತ್ತು ಕುಟುಂಬದ ಮರ್ಯಾದೆಯನ್ನು ಬದಿಗಿಟ್ಟು ಕೆಟ್ಟ ನಡತೆಯಲ್ಲಿ ತೊಡಗುತ್ತಾಳೋ, ಆಕೆ ತನ್ನ ಮಕ್ಕಳಿಗೆ ಶತ್ರುವಿಗೆ ಸಮಾನ ಎಂದು ಪರಿಗಣಿಸಲಾಗಿದೆ. ಯಾಕೆಂದರೆ, ತಾಯಿಯ ತಪ್ಪಿನಿಂದಾಗಿ ಸಮಾಜವು ಮಕ್ಕಳನ್ನೂ ಕೆಟ್ಟ ದೃಷ್ಟಿಯಿಂದ ನೋಡುತ್ತದೆ ಮತ್ತು ಅವರನ್ನು ಗೇಲಿ ಮಾಡುತ್ತದೆ. ಇದು ಮಕ್ಕಳ ಭವಿಷ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು.&lt;/p&gt;&lt;p&gt;&lt;strong&gt;ಸುಂದರ ಪತ್ನಿ ತನ್ನ ಪತಿಗೆ ಶತ್ರು&lt;/strong&gt;&lt;/p&gt;&lt;p&gt;ಇಲ್ಲಿ ಚಾಣಕ್ಯರು ಕೇವಲ ಸುಂದರ ಪತ್ನಿಯ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ, ಕುಟುಂಬದ ಜವಾಬ್ದಾರಿಗಳನ್ನು ಬಿಟ್ಟು ಕೇವಲ ತನ್ನ ಸೌಂದರ್ಯದ ಬಗ್ಗೆಯೇ ಗಮನ ಹರಿಸುವ ಮಹಿಳೆಯ ಬಗ್ಗೆ ಸೂಚಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಗಂಡನ ಮೇಲೆ ಮನೆಯ ಕೆಲಸದ ಹೊರೆ ಹೆಚ್ಚಾಗಿ, ದಾಂಪತ್ಯ ಜೀವನದಲ್ಲಿ ಒತ್ತಡದ ಸನ್ನಿವೇಶ ನಿರ್ಮಾಣವಾಗುತ್ತದೆ. ಇದೇ ಕಾರಣಕ್ಕೆ ಸುಂದರ ಪತ್ನಿಯನ್ನು ಪತಿಯ ಶತ್ರು ಎಂದು ಪರಿಗಣಿಸಲಾಗಿದೆ.&lt;/p&gt;&lt;p&gt;&lt;strong&gt;ಮೂರ್ಖ ಸಂತಾನ ಪೋಷಕರಿಗೆ ಶತ್ರು&lt;/strong&gt;&lt;/p&gt;&lt;p&gt;ಆಚಾರ್ಯ ಚಾಣಕ್ಯರ ಪ್ರಕಾರ, ಶಿಕ್ಷಣ ಎಂದರೆ ಕೇವಲ ಪದವಿ ಪಡೆಯುವುದಲ್ಲ, ಬದಲಾಗಿ ಸರಿ ಮತ್ತು ತಪ್ಪುಗಳನ್ನು ಗುರುತಿಸುವ ಜ್ಞಾನ. ಮಕ್ಕಳು ಶಿಕ್ಷಣ ಮತ್ತು ಉತ್ತಮ ಸಂಸ್ಕಾರಗಳಿಂದ ದೂರ ಉಳಿದರೆ, ಅವರು ಭವಿಷ್ಯದಲ್ಲಿ ತಮ್ಮ ಜೊತೆಗೆ ಇಡೀ ಕುಟುಂಬಕ್ಕೂ ಕಷ್ಟವನ್ನು ತರಬಹುದು. ಇಂತಹ ಮಕ್ಕಳನ್ನು ಪೋಷಕರಿಗೆ ಶತ್ರು ಸಮಾನ ಎಂದು ಪರಿಗಣಿಸಲಾಗಿದೆ.&lt;/p&gt;&lt;h2&gt;&lt;strong&gt;Disclaimer (ಹಕ್ಕುತ್ಯಾಗ)&lt;/strong&gt;&lt;/h2&gt;&lt;p&gt;ಈ ಲೇಖನದಲ್ಲಿರುವ ಮಾಹಿತಿಯನ್ನು ಜ್ಯೋತಿಷಿಗಳು ಹಂಚಿಕೊಂಡಿದ್ದಾರೆ. ನಾವು ಈ ಮಾಹಿತಿಯನ್ನು ನಿಮ್ಮವರೆಗೆ ತಲುಪಿಸುವ ಮಾಧ್ಯಮವಷ್ಟೇ. ಓದುಗರು ಇದನ್ನು ಕೇವಲ ಮಾಹಿತಿಯೆಂದು ಪರಿಗಣಿಸಬೇಕು.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/relationship/chanakya-niti-explains-when-your-own-family-can-become-your-enemy-gvd/articleshow-uug64au"/>
        </item>
        <item>
            <title><![CDATA['ಕಾಳಿಂಗ ಸರ್ಪಗಳ ರಾಜಧಾನಿ', 'ದಕ್ಷಿಣದ ಚಿರಾಪುಂಜಿ' ಖ್ಯಾತಿಯ ಕರ್ನಾಟಕದ ಈ ಪುಟ್ಟ ಹಳ್ಳಿ ಬಗ್ಗೆ ನಿಮಗೆಷ್ಟು ಗೊತ್ತು?]]></title>
            <link>https://kannada.asianetnews.com/gallery/travel/agumbe-guide-discover-south-indias-cherrapunji-and-its-hidden-gems-duas2do</link>
            <guid isPermaLink="true">https://kannada.asianetnews.com/gallery/travel/agumbe-guide-discover-south-indias-cherrapunji-and-its-hidden-gems-duas2do</guid>
            <pubDate>Sun, 28 Jun 2026 18:15:28 +0530</pubDate>
            <description><![CDATA[&lt;p&gt;Travel Guide Kannada: ಕರ್ನಾಟಕದ ಈ ಪುಟ್ಟ ಗ್ರಾಮ ಅತಿ ಹೆಚ್ಚು ಮಳೆಗೆ ಮಾತ್ರವಲ್ಲ, ಕಾಳಿಂಗ ಸರ್ಪಗಳು ಮತ್ತು ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕೂ ಪ್ರಸಿದ್ಧ. ಈ ಸುಂದರ ತಾಣದ ಬಗ್ಗೆ ಹೆಚ್ಚಿನ ಮಾಹಿತಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbq7vw9z5kzz2tfephnk02v2,imgname-akumbe-1764937822527.jpg" type="image/jpeg" height="390" width="690"/>
            <content:encoded><![CDATA[&lt;p&gt;Travel Guide Kannada: ಕರ್ನಾಟಕದ ಈ ಪುಟ್ಟ ಗ್ರಾಮ ಅತಿ ಹೆಚ್ಚು ಮಳೆಗೆ ಮಾತ್ರವಲ್ಲ, ಕಾಳಿಂಗ ಸರ್ಪಗಳು ಮತ್ತು ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕೂ ಪ್ರಸಿದ್ಧ. ಈ ಸುಂದರ ತಾಣದ ಬಗ್ಗೆ ಹೆಚ್ಚಿನ ಮಾಹಿತಿ ಓದಿ.&lt;/p&gt;&lt;img&gt;&lt;p&gt;&lt;strong&gt;&lsquo;ದಕ್ಷಿಣ ಭಾರತದ ಚಿರಾಪುಂಜಿ&rsquo;&lt;/strong&gt;ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಆಗುಂಬೆ ಪ್ರಕೃತಿ ಪ್ರೇಮಿಗಳ ಪಾಲಿನ ಸ್ವರ್ಗ. ಮಂಜಿನಿಂದ ಆವೃತವಾದ ಬೆಟ್ಟಗಳು, ಧುಮ್ಮಿಕ್ಕುವ ಜಲಪಾತಗಳು ಮತ್ತು ದಟ್ಟವಾದ ಮಳೆಕಾಡುಗಳನ್ನು ಹೊಂದಿರುವ ಈ ಸುಂದರ ತಾಣವನ್ನು 'ದಕ್ಷಿಣ ಭಾರತದ ಚಿರಾಪುಂಜಿ' ಎಂದೇ ಕರೆಯಲಾಗುತ್ತದೆ. ಅತಿ ಹೆಚ್ಚು ಮಳೆ ಮತ್ತು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರಾದ ಆಗುಂಬೆಯ ಸೌಂದರ್ಯದ ಪರಿಚಯ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಕೃತಿಯನ್ನು ಇಷ್ಟಪಡುವವರಿಗೆ ಬೆಸ್ಟ್&lt;/strong&gt;ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಆಗುಂಬೆ, ಪಶ್ಚಿಮ ಘಟ್ಟಗಳ ರಮಣೀಯ ತಾಣಗಳಲ್ಲಿ ಒಂದು. ಭಾರತದಲ್ಲೇ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಒಂದಾಗಿರುವ ಕಾರಣ ಇದಕ್ಕೆ 'ದಕ್ಷಿಣ ಭಾರತದ ಚೆರಾಪುಂಜಿ' ಎಂಬ ಹೆಗ್ಗಳಿಕೆ ಇದೆ. ಜನದಟ್ಟಣೆಯ ಗಿರಿಧಾಮಗಳಿಗಿಂತ ಭಿನ್ನವಾಗಿರುವ ಆಗುಂಬೆ, ಪ್ರಕೃತಿಯ ಶಾಂತತೆಯನ್ನು ಬಯಸುವವರಿಗೆ ಅತ್ಯುತ್ತಮ ಆಯ್ಕೆ.&lt;/p&gt;&lt;img&gt;&lt;p&gt;&lt;strong&gt;ಜಲಪಾತಗಳ ತಾಣ&lt;/strong&gt;ಮಳೆಗಾಲದಲ್ಲಿ ಆಗುಂಬೆ ಹಸಿರು ಹೊದಿಕೆಯನ್ನು ಹೊದ್ದಂತೆ ಕಂಗೊಳಿಸುತ್ತದೆ. ಇಲ್ಲಿನ ಬರ್ಕಣ ಜಲಪಾತ ಭಾರತದ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಇದರೊಂದಿಗೆ ಜೋಗಿಗುಂಡಿ, ಒನಕೆ ಅಬ್ಬಿ ಮತ್ತು ಕೂಡ್ಲು ತೀರ್ಥ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತವೆ. ದಟ್ಟ ಕಾಡುಗಳ ನಡುವೆ ಇರುವ ಈ ಜಲಪಾತಗಳನ್ನು ತಲುಪಲು ಇರುವ ಟ್ರೆಕ್ಕಿಂಗ್ ಹಾದಿಗಳು ಸಾಹಸ ಪ್ರಿಯರಿಗೆ ಸಖತ್ ಇಷ್ಟವಾಗುತ್ತವೆ.&lt;/p&gt;&lt;img&gt;&lt;p&gt;&lt;strong&gt;ಕಾಳಿಂಗ ಸರ್ಪಗಳ ರಾಜಧಾನಿ&lt;/strong&gt;ಆಗುಂಬೆಯನ್ನು &quot;ಭಾರತದ ಕಾಳಿಂಗ ಸರ್ಪಗಳ ರಾಜಧಾನಿ&quot; (Cobra Capital of India) ಎಂದೂ ಕರೆಯಲಾಗುತ್ತದೆ. ಪ್ರಸಿದ್ಧ ಉರಗ ತಜ್ಞ ರೋಮುಲಸ್ ವಿಟೇಕರ್ ಸ್ಥಾಪಿಸಿದ 'ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ' (ARRS) ಇಲ್ಲಿನ ಪರಿಸರ ವ್ಯವಸ್ಥೆ ಮತ್ತು ಕಾಳಿಂಗ ಸರ್ಪಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿನ ಸೋಮೇಶ್ವರ ವನ್ಯಜೀವಿ ಅಭಯಾರಣ್ಯವು ಅಪರೂಪದ ಪಕ್ಷಿಗಳು, ಚಿಟ್ಟೆಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.&lt;/p&gt;&lt;img&gt;&lt;p&gt;&lt;strong&gt;ಸೂರ್ಯಾಸ್ತದ ಸೊಬಗು ಮತ್ತು ಮಾಲ್ಗುಡಿ ಡೇಸ್&lt;/strong&gt;ಆಗುಂಬೆಯ 'ಸನ್&zwnj;ಸೆಟ್ ಪಾಯಿಂಟ್' ಅತ್ಯಂತ ಜನಪ್ರಿಯ ಸ್ಥಳ. ಇಲ್ಲಿಂದ ಕಣಿವೆಯ ಆಳದಲ್ಲಿ ಸೂರ್ಯ ಮುಳುಗುವ ದೃಶ್ಯ ಮತ್ತು ಅರಬ್ಬಿ ಸಮುದ್ರದ ಕಡೆಗೆ ಚಾಚಿಕೊಂಡಿರುವ ಕಾಡುಗಳ ನೋಟ ಅದ್ಭುತವಾಗಿರುತ್ತದೆ. ಅಲ್ಲದೆ, ಪ್ರಸಿದ್ಧ ದೂರದರ್ಶನ ಸರಣಿ 'ಮಾಲ್ಗುಡಿ ಡೇಸ್'ನ ಚಿತ್ರೀಕರಣ ಇಲ್ಲಿನ ದೊಡ್ಡಮನೆಯಲ್ಲಿ ನಡೆದಿದ್ದು, ಇಂದಿಗೂ ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಸುತ್ತಾಡಲು ಉತ್ತಮ ಸಮಯ&lt;/strong&gt;ಕುಂದಾದ್ರಿ ಬೆಟ್ಟ ಮತ್ತು ನಿಶಾನಿ ಮೊಟ್ಟೆ ಇಲ್ಲಿನ ಇತರ ಪ್ರಮುಖ ಟ್ರೆಕ್ಕಿಂಗ್ ತಾಣಗಳು. ಜೂನ್&zwnj;ನಿಂದ ಸೆಪ್ಟೆಂಬರ್&zwnj;ವರೆಗೆ ಮಳೆಗಾಲದ ಸೌಂದರ್ಯ ಸವಿಯಲು ಸೂಕ್ತ ಸಮಯವಾದರೆ, ಅಕ್ಟೋಬರ್&zwnj;ನಿಂದ ಫೆಬ್ರವರಿವರೆಗೆ ಹಿತವಾದ ವಾತಾವರಣದಲ್ಲಿ ಸುತ್ತಾಡಲು ಉತ್ತಮ ಸಮಯ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/travel/agumbe-guide-discover-south-indias-cherrapunji-and-its-hidden-gems-duas2do"/>
        </item>
        <item>
            <title><![CDATA[Gardening Tips: ಮೆಣಸಿನ ಗಿಡಕ್ಕೆ ಕೀಟಗಳ ಕಾಟವೇ? ದುಬಾರಿ ಸ್ಪ್ರೇ ಬೇಡ, ಈ ಮನೆಮದ್ದು ಟ್ರೈ ಮಾಡಿ!]]></title>
            <link>https://kannada.asianetnews.com/life/protect-your-chilli-plants-from-pests-with-these-easy-diy-hacks-gvd/articleshow-lnmykyn</link>
            <guid isPermaLink="true">https://kannada.asianetnews.com/life/protect-your-chilli-plants-from-pests-with-these-easy-diy-hacks-gvd/articleshow-lnmykyn</guid>
            <pubDate>Sun, 28 Jun 2026 18:14:24 +0530</pubDate>
            <description><![CDATA[&lt;p&gt;Gardening Tips: ನಿಮ್ಮ ಮೆಣಸಿನ ಗಿಡದ ಎಲೆಗಳು ಇದ್ದಕ್ಕಿದ್ದಂತೆ ಮುದುಡಿಕೊಳ್ಳುತ್ತಿವೆಯೇ? ಹೊಸ ಚಿಗುರುಗಳು ಕುಗ್ಗಿವೆಯೇ? ಅಥವಾ ಎಲೆಗಳ ಕೆಳಗೆ ಸಣ್ಣಗೆ ಹಸಿರು, ಕಪ್ಪು ಅಥವಾ ಬಿಳಿ ಬಣ್ಣದ ಹುಳುಗಳು ಕಾಣಿಸುತ್ತಿವೆಯೇ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw73xan7n1cjj3h65rn364vy,imgname-gcg-1782650415783.png" type="image/jpeg" height="390" width="690"/>
            <content:encoded><![CDATA[&lt;p&gt;ಮೆಣಸಿನ ಗಿಡಗಳಲ್ಲಿ ರಸ ಹೀರುವ ಕೀಟಗಳು ಹೆಚ್ಚಾಗಲು ಬಿಸಿಲು, ತೇವಾಂಶ, ಗಿಡಗಳನ್ನು ಒತ್ತೊತ್ತಾಗಿ ನೆಡುವುದು ಮತ್ತು ಸರಿಯಾದ ಆರೈಕೆ ಇಲ್ಲದಿರುವುದೇ ಮುಖ್ಯ ಕಾರಣ. ದುಬಾರಿ ಖರ್ಚಿಲ್ಲದೆ, ಮನೆಯಲ್ಲೇ ಮಾಡಬಹುದಾದ ಕೆಲವು ಸುಲಭ ಉಪಾಯಗಳಿಂದ ಗಿಡಗಳನ್ನು ಆರೋಗ್ಯವಾಗಿಡುವುದು ಹೇಗೆಂದು ತಿಳಿಯಿರಿ. ನಿಮ್ಮ ಮೆಣಸಿನ ಗಿಡದ ಎಲೆಗಳು ಇದ್ದಕ್ಕಿದ್ದಂತೆ ಮುದುಡಿಕೊಳ್ಳುತ್ತಿವೆಯೇ? ಹೊಸ ಚಿಗುರುಗಳು ಕುಗ್ಗಿವೆಯೇ? ಅಥವಾ ಎಲೆಗಳ ಕೆಳಗೆ ಸಣ್ಣಗೆ ಹಸಿರು, ಕಪ್ಪು ಅಥವಾ ಬಿಳಿ ಬಣ್ಣದ ಹುಳುಗಳು ಕಾಣಿಸುತ್ತಿವೆಯೇ?&lt;/p&gt;&lt;p&gt;ಹಾಗಿದ್ದರೆ, ನಿಮ್ಮ ಗಿಡದ ಮೇಲೆ ರಸ ಹೀರುವ ಕೀಟಗಳು (Sap-Sucking Pests) ದಾಳಿ ಮಾಡಿವೆ ಎಂದೇ ಅರ್ಥ. ಈ ಕೀಟಗಳು ಗಿಡದ ರಸವನ್ನು ಹೀರಿ ಅದನ್ನು ದುರ್ಬಲಗೊಳಿಸುತ್ತವೆ. ಇದರಿಂದ ಗಿಡದ ಬೆಳವಣಿಗೆ ನಿಂತುಹೋಗುತ್ತದೆ ಮತ್ತು ಕಾಯಿಗಳು ಕೂಡಾ ಸಣ್ಣದಾಗಿ ಅಥವಾ ಸೊಟ್ಟಗಾಗುತ್ತವೆ. ಆದರೆ ಒಳ್ಳೆಯ ವಿಷಯವೆಂದರೆ, ಆರಂಭದಲ್ಲೇ ಈ ಕೀಟಗಳನ್ನು ಗುರುತಿಸಿದರೆ, ದುಬಾರಿ ರಾಸಾಯನಿಕಗಳಿಲ್ಲದೆ ಕೆಲವು ಸುಲಭ ಮನೆಮದ್ದುಗಳಿಂದಲೇ ಗಿಡಗಳನ್ನು ಉಳಿಸಿಕೊಳ್ಳಬಹುದು.&lt;/p&gt;&lt;p&gt;&lt;strong&gt;ಮೆಣಸಿನ ಗಿಡಕ್ಕೆ ರಸ ಹೀರುವ ಕೀಟಗಳು ಯಾಕೆ ಬರುತ್ತವೆ?&lt;/strong&gt;&lt;/p&gt;&lt;p&gt;ಮೆಣಸಿನ ಗಿಡದ ಮೇಲೆ ಹೆಚ್ಚಾಗಿ ಏಫಿಡ್ಸ್ (Aphids), ವೈಟ್&zwnj;ಫ್ಲೈಸ್ (Whiteflies), ಥ್ರಿಪ್ಸ್ (Thrips) ಮತ್ತು ಸ್ಪೈಡರ್ ಮೈಟ್ಸ್ (Spider Mites) ನಂತಹ ಕೀಟಗಳು ದಾಳಿ ಮಾಡುತ್ತವೆ. ಬಿಸಿಲು ಮತ್ತು ತೇವಾಂಶವಿರುವ ವಾತಾವರಣದಲ್ಲಿ ಈ ಕೀಟಗಳು ವೇಗವಾಗಿ ಬೆಳೆಯುತ್ತವೆ. ಗಿಡಗಳನ್ನು ತುಂಬಾ ಹತ್ತಿರದಲ್ಲಿ ನೆಟ್ಟಿದ್ದರೆ, ಗಾಳಿಯಾಡಲು ಜಾಗವಿಲ್ಲದಿದ್ದರೆ ಅಥವಾ ಸಾರಜನಕಯುಕ್ತ ಗೊಬ್ಬರವನ್ನು ಹೆಚ್ಚು ಹಾಕಿದರೆ, ಹೊಸದಾಗಿ ಬರುವ ಎಲೆಗಳು ಮೃದುವಾಗಿರುತ್ತವೆ. ಇಂತಹ ಎಲೆಗಳ ಮೇಲೆ ಕೀಟಗಳು ಸುಲಭವಾಗಿ ದಾಳಿ ಮಾಡುತ್ತವೆ.&lt;img&gt;&lt;/p&gt;&lt;p&gt;&lt;strong&gt;ರಸ ಹೀರುವ ಕೀಟಗಳನ್ನು ಗುರುತಿಸುವುದು ಹೇಗೆ?&lt;/strong&gt;&lt;/p&gt;&lt;p&gt;ಮೆಣಸಿನ ಗಿಡದ ಹೊಸ ಎಲೆಗಳು ಒಳಮುಖವಾಗಿ ಮುದುಡಿಕೊಳ್ಳುತ್ತಿದ್ದರೆ, ಎಲೆಗಳ ಮೇಲೆ ಜಿಪ್ ದ್ರವ ಕಾಣಿಸುತ್ತಿದ್ದರೆ ಅಥವಾ ಗಿಡದ ಮೇಲೆ ಸಣ್ಣ ಇರುವೆಗಳು ಓಡಾಡುತ್ತಿದ್ದರೆ, ಅದು ರಸ ಹೀರುವ ಕೀಟಗಳ ಇರುವಿಕೆಯ ಸಂಕೇತ. ಕೆಲವೊಮ್ಮೆ ಎಲೆಗಳ ಬಣ್ಣ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ, ಹೂವು ಮತ್ತು ಕಾಯಿಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.&lt;/p&gt;&lt;p&gt;&lt;strong&gt;DIY ಬೇವಿನ ಎಣ್ಣೆ ಸ್ಪ್ರೇ ಅತ್ಯಂತ ಪರಿಣಾಮಕಾರಿ&lt;/strong&gt;&lt;/p&gt;&lt;p&gt;ಬೇವಿನ ಎಣ್ಣೆ ಒಂದು ನೈಸರ್ಗಿಕ ಕೀಟನಾಶಕ. ಒಂದು ಲೀಟರ್ ನೀರಿಗೆ 5-7 ಮಿ.ಲೀ. ಬೇವಿನ ಎಣ್ಣೆ ಮತ್ತು ಕೆಲವು ಹನಿ ಲಿಕ್ವಿಡ್ ಸೋಪ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ದ್ರಾವಣವನ್ನು ಬೆಳಿಗ್ಗೆ ಅಥವಾ ಸಂಜೆ ಹೊತ್ತು ಎಲೆಗಳ ಮೇಲೆ ಮತ್ತು ಕೆಳಗೆ ಚೆನ್ನಾಗಿ ಸಿಂಪಡಿಸಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಹೀಗೆ ಮಾಡಿದರೆ ಕೀಟಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.&lt;/p&gt;&lt;p&gt;&lt;strong&gt;ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಸ್ಪ್ರೇ&lt;/strong&gt;&lt;/p&gt;&lt;p&gt;10-12 ಬೆಳ್ಳುಳ್ಳಿ ಎಸಳು ಮತ್ತು 2-3 ಹಸಿ ಮೆಣಸಿನಕಾಯಿಯನ್ನು ರುಬ್ಬಿ, ಒಂದು ಲೀಟರ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಮರುದಿನ ಅದನ್ನು ಸೋಸಿ ಸ್ಪ್ರೇ ಬಾಟಲಿಗೆ ತುಂಬಿಕೊಳ್ಳಿ. ಈ ಸ್ಪ್ರೇನ ಘಾಟು ವಾಸನೆಗೆ ಅನೇಕ ರಸ ಹೀರುವ ಕೀಟಗಳು ಗಿಡಗಳಿಂದ ದೂರ ಓಡಿಹೋಗುತ್ತವೆ.&lt;/p&gt;&lt;p&gt;&lt;strong&gt;ಮೈಲ್ಡ್ ಸೋಪಿನ ನೀರಿನ ಬಳಕೆ&lt;/strong&gt;&lt;/p&gt;&lt;p&gt;ಗಿಡದ ಮೇಲೆ ಕೀಟಗಳ ಸಂಖ್ಯೆ ಕಡಿಮೆ ಇದ್ದರೆ, ಒಂದು ಲೀಟರ್ ನೀರಿಗೆ ಅರ್ಧ ಚಮಚ ಮೈಲ್ಡ್ ಲಿಕ್ವಿಡ್ ಸೋಪ್ ಬೆರೆಸಿ ಸ್ಪ್ರೇ ಮಾಡಿ. ಈ ದ್ರಾವಣವು ಕೀಟಗಳ ಹೊರಪದರದ ಮೇಲೆ ಪರಿಣಾಮ ಬೀರಿ, ಅವುಗಳನ್ನು ನಿಧಾನವಾಗಿ ನಾಶಪಡಿಸುತ್ತದೆ. ಆದರೆ ಡಿಟರ್ಜೆಂಟ್ ಪೌಡರ್ ಬಳಸಬೇಡಿ, ಯಾಕೆಂದರೆ ಅದರಿಂದ ಎಲೆಗಳು ಸುಟ್ಟುಹೋಗಬಹುದು.&lt;/p&gt;&lt;p&gt;&lt;strong&gt;ನೀರಿನ ಜೋರಾದ ಸ್ಪ್ರೇ ಕೂಡಾ ಉಪಯುಕ್ತ&lt;/strong&gt;&lt;/p&gt;&lt;p&gt;ಆರಂಭಿಕ ಹಂತದಲ್ಲಿ, ಬೆಳಿಗ್ಗೆ ಹೊತ್ತು ನೀರಿನ ಪೈಪ್&zwnj;ನಿಂದ ಜೋರಾಗಿ ಸ್ಪ್ರೇ ಮಾಡಿ ಎಲೆಗಳ ಕೆಳಗಿರುವ ಕೀಟಗಳನ್ನು ಓಡಿಸಬಹುದು. ನಂತರ, ಗಿಡಕ್ಕೆ ಚೆನ್ನಾಗಿ ಬಿಸಿಲು ಮತ್ತು ಗಾಳಿ ಸಿಗುವಂತೆ ನೋಡಿಕೊಳ್ಳಿ. ಇದರಿಂದ ತೇವಾಂಶ ಹೆಚ್ಚು ಹೊತ್ತು ಉಳಿಯುವುದಿಲ್ಲ.&lt;img&gt;&lt;/p&gt;&lt;p&gt;&lt;strong&gt;ಹಳದಿ ಬಣ್ಣದ ಅಂಟು ಬಲೆಗಳನ್ನು ಬಳಸಿ&lt;/strong&gt;&lt;/p&gt;&lt;p&gt;ವೈಟ್&zwnj;ಫ್ಲೈಸ್ ಮತ್ತು ಇತರ ಹಾರುವ ಕೀಟಗಳು ಹಳದಿ ಬಣ್ಣಕ್ಕೆ ಹೆಚ್ಚು ಆಕರ್ಷಿತವಾಗುತ್ತವೆ. ಗಿಡಗಳ ಮಧ್ಯೆ ಹಳದಿ ಬಣ್ಣದ ಅಂಟು ಬಲೆಗಳನ್ನು (yellow sticky trap) ಇಡುವುದರಿಂದ ಈ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಮತ್ತು ಸೋಂಕು ಹರಡುವುದನ್ನು ತಡೆಯಬಹುದು.&lt;/p&gt;&lt;p&gt;&lt;strong&gt;ಗಿಡಗಳ ನಿಯಮಿತ ಸ್ವಚ್ಛತೆ ಅಗತ್ಯ&lt;/strong&gt;&lt;/p&gt;&lt;p&gt;ಒಣಗಿದ ಎಲೆಗಳು, ಸೋಂಕಿತ ಕೊಂಬೆಗಳು ಮತ್ತು ಕಳೆಯನ್ನು ಕಾಲಕಾಲಕ್ಕೆ ತೆಗೆದುಹಾಕುತ್ತಿರಿ. ತೋಟವನ್ನು ಸ್ವಚ್ಛವಾಗಿಟ್ಟರೆ ಕೀಟಗಳು ಬೆಳೆಯಲು ಅವಕಾಶ ಸಿಗುವುದಿಲ್ಲ. ಜೊತೆಗೆ, ಗಿಡಗಳ ನಡುವೆ ಸರಿಯಾದ ಅಂತರವಿರಲಿ, ಆಗ ಗಾಳಿಯಾಡಲು ಅನುಕೂಲವಾಗುತ್ತದೆ.&lt;/p&gt;&lt;h2&gt;&lt;strong&gt;ಇರುವೆಗಳನ್ನೂ ನಿಯಂತ್ರಿಸಿ&lt;/strong&gt;&lt;/h2&gt;&lt;p&gt;ಏಫಿಡ್ಸ್&zwnj;ನಂತಹ ಕೀಟಗಳಿಗೂ ಇರುವೆಗಳಿಗೂ ಹತ್ತಿರದ ಸಂಬಂಧವಿದೆ. ಈ ಕೀಟಗಳು ಸ್ರವಿಸುವ ಸಿಹಿ ದ್ರವ ಇರುವೆಗಳಿಗೆ ಇಷ್ಟ. ಹೀಗಾಗಿ ಇರುವೆಗಳು ಈ ಕೀಟಗಳನ್ನು ರಕ್ಷಿಸುತ್ತವೆ. ಹಾಗಾಗಿ, ಗಿಡದ ಕುಂಡ ಅಥವಾ ಬುಡದಲ್ಲಿ ಇರುವೆಗಳ ಸಂಖ್ಯೆಯನ್ನು ನಿಯಂತ್ರಿಸಿದರೆ, ಏಫಿಡ್ಸ್ ಹಾವಳಿಯೂ ಬಹಳಷ್ಟು ಕಡಿಮೆಯಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/life/protect-your-chilli-plants-from-pests-with-these-easy-diy-hacks-gvd/articleshow-lnmykyn"/>
        </item>
        <item>
            <title><![CDATA[Tomato Varieties: ಟೊಮೆಟೊದಲ್ಲಿ ಇಷ್ಟೊಂದು ವೆರೈಟಿ ಇದ್ಯಾ? ವರ್ಷಪೂರ್ತಿ ಫಸಲು ಕೊಡುವ ಬೆಸ್ಟ್ ತಳಿ ಯಾವುದು?]]></title>
            <link>https://kannada.asianetnews.com/life/best-tomato-varieties-for-year-round-harvest-and-gardening-tips-gvd/articleshow-6shgvef</link>
            <guid isPermaLink="true">https://kannada.asianetnews.com/life/best-tomato-varieties-for-year-round-harvest-and-gardening-tips-gvd/articleshow-6shgvef</guid>
            <pubDate>Sun, 28 Jun 2026 17:54:06 +0530</pubDate>
            <description><![CDATA[&lt;p&gt;Tomato Varieties: ಎಲ್ಲಾ ಟೊಮೆಟೊ ಒಂದೇ ರೀತಿ ಇರಲ್ಲ. ಚೆರಿ, ದೇಸಿ, ರೋಮಾ ಮತ್ತು ಹೈಬ್ರಿಡ್ ಟೊಮೆಟೊಗಳದ್ದೇ ಆದ ಪ್ರತ್ಯೇಕ ವಿಶೇಷತೆಗಳಿವೆ. ಯಾವ ತಳಿಯ ಟೊಮೆಟೊ ಹೆಚ್ಚು ಕಾಲ ಫಸಲು ಕೊಡುತ್ತದೆ ಮತ್ತು ಭರ್ಜರಿ ಇಳುವರಿಗಾಗಿ ಅದರ ಆರೈಕೆ ಹೇಗೆ ಮಾಡಬೇಕು? ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw72xms0ar5dgbf2a9eenc9j,imgname-xg-1782649377568.png" type="image/jpeg" height="390" width="690"/>
            <content:encoded><![CDATA[&lt;p&gt;ಬಹುತೇಕ ಎಲ್ಲಾ ಭಾರತೀಯ ಅಡುಗೆಮನೆಗಳಲ್ಲಿ ಟೊಮೆಟೊ ಒಂದು ಪ್ರಮುಖ ತರಕಾರಿ. ಈಗ ಇದನ್ನು ಕೇವಲ ಹೊಲಗಳಲ್ಲಿ ಮಾತ್ರವಲ್ಲ, ಮನೆಯ ಟೆರೇಸ್, ಬಾಲ್ಕನಿ ಅಥವಾ ಸಣ್ಣ ಪಾಟ್&zwnj;ಗಳಲ್ಲಿಯೂ ಸುಲಭವಾಗಿ ಬೆಳೆಯಬಹುದು ಎಂಬುದು ಖುಷಿಯ ವಿಚಾರ. ಮಾರುಕಟ್ಟೆಯಲ್ಲಿ ಹಲವು ಬಗೆಯ ಟೊಮೆಟೊ ತಳಿಗಳು ಲಭ್ಯವಿವೆ, ಆದರೆ ಪ್ರತಿಯೊಂದು ತಳಿಯ ರುಚಿ, ಗಾತ್ರ, ಇಳುವರಿ ಮತ್ತು ಆರೈಕೆಯ ವಿಧಾನ ಬೇರೆ ಬೇರೆಯಾಗಿರುತ್ತದೆ. ನೀವು ವರ್ಷಪೂರ್ತಿ ಫ್ರೆಶ್ ಟೊಮೆಟೊ ಕೀಳಲು ಬಯಸಿದರೆ, ಸರಿಯಾದ ತಳಿಯನ್ನು ಆಯ್ಕೆ ಮಾಡುವುದರ ಜೊತೆಗೆ ಗಿಡದ ಆರೈಕೆಯನ್ನೂ ಅಚ್ಚುಕಟ್ಟಾಗಿ ಮಾಡಬೇಕು. ಬನ್ನಿ, ಟೊಮೆಟೊದ ಪ್ರಮುಖ ತಳಿಗಳು ಮತ್ತು ಅವುಗಳನ್ನು ಆರೋಗ್ಯವಾಗಿಡುವ ಸುಲಭ ವಿಧಾನಗಳ ಬಗ್ಗೆ ತಿಳಿಯೋಣ.&lt;/p&gt;&lt;p&gt;&lt;strong&gt;ಟೊಮೆಟೊದಲ್ಲಿ ಎಷ್ಟು ವಿಧಗಳಿವೆ?&lt;/strong&gt;&lt;/p&gt;&lt;p&gt;&lt;strong&gt;ಚೆರಿ ಟೊಮೆಟೊ (Cherry Tomato): &lt;/strong&gt;ಗಾತ್ರದಲ್ಲಿ ಸಣ್ಣದಾಗಿದ್ದು, ತಿನ್ನಲು ಸ್ವಲ್ಪ ಸಿಹಿಯಾಗಿರುತ್ತದೆ. ಪಾಟ್&zwnj;ಗಳು ಅಥವಾ ಬಾಲ್ಕನಿ ಗಾರ್ಡನ್&zwnj;ಗೆ ಇದು ಬೆಸ್ಟ್ ಆಯ್ಕೆ.&lt;/p&gt;&lt;p&gt;&lt;strong&gt;ದೇಸಿ ಟೊಮೆಟೊ: &lt;/strong&gt;ಹುಳಿ-ಸಿಹಿ ಮಿಶ್ರಿತ ರುಚಿಯನ್ನು ಹೊಂದಿರುವ ಈ ತಳಿಯನ್ನು ದಿನನಿತ್ಯದ ಅಡುಗೆ, ಸಲಾಡ್ ಮತ್ತು ಚಟ್ನಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.&lt;/p&gt;&lt;p&gt;&lt;strong&gt;ರೋಮಾ ಟೊಮೆಟೊ (Roma Tomato): &lt;/strong&gt;ಇದರಲ್ಲಿ ತಿರುಳು ಹೆಚ್ಚು ಮತ್ತು ಬೀಜಗಳು ಕಡಿಮೆ ಇರುತ್ತವೆ. ಸಾಸ್, ಪ್ಯೂರಿ ಮತ್ತು ಕೆಚಪ್ ತಯಾರಿಸಲು ಇದು ಅತ್ಯುತ್ತಮ.&lt;/p&gt;&lt;p&gt;&lt;strong&gt;ಹೈಬ್ರಿಡ್ ಟೊಮೆಟೊ: &lt;/strong&gt;ಹೆಚ್ಚು ಇಳುವರಿ ನೀಡುವ ಈ ತಳಿ, ರೋಗಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ. ವಾಣಿಜ್ಯ ಕೃಷಿಯಲ್ಲಿ ಇದು ಹೆಚ್ಚು ಜನಪ್ರಿಯ.&lt;/p&gt;&lt;p&gt;&lt;strong&gt;ಬೀಫ್&zwnj;ಸ್ಟೇಕ್ ಟೊಮೆಟೊ (Beefsteak Tomato): &lt;/strong&gt;ದೊಡ್ಡ ಗಾತ್ರ, ದಪ್ಪನೆಯ ತಿರುಳು. ಸ್ಯಾಂಡ್&zwnj;ವಿಚ್, ಬರ್ಗರ್ ಮತ್ತು ಸಲಾಡ್&zwnj;ಗಳಿಗೆ ಸೂಕ್ತವಾಗಿದೆ.&lt;/p&gt;&lt;p&gt;&lt;strong&gt;ಗ್ರೇಪ್ ಟೊಮೆಟೊ (Grape Tomato): &lt;/strong&gt;ದ್ರಾಕ್ಷಿಯಂತೆ ಸಣ್ಣ ಗಾತ್ರದಲ್ಲಿರುವ ಈ ಟೊಮೆಟೊ, ಸ್ನ್ಯಾಕ್ಸ್, ಸಲಾಡ್ ಮತ್ತು ಗಾರ್ನಿಶಿಂಗ್&zwnj;ಗೆ ಚೆನ್ನಾಗಿರುತ್ತದೆ.&lt;/p&gt;&lt;p&gt;&lt;strong&gt;ಯಾವ ತಳಿ ವರ್ಷಪೂರ್ತಿ ಫಸಲು ಕೊಡುತ್ತದೆ?&lt;/strong&gt;&lt;/p&gt;&lt;p&gt;ನೀವು ದೀರ್ಘಕಾಲದವರೆಗೆ ಟೊಮೆಟೊ ಫಸಲು ಪಡೆಯಲು ಬಯಸಿದರೆ, 'ಇಂಡಿಟರ್ಮಿನೇಟ್' (Indeterminate) ತಳಿಗಳು ಅತ್ಯುತ್ತಮ ಆಯ್ಕೆ. ಈ ಮಾದರಿಯ ಗಿಡಗಳು ನಿರಂತರವಾಗಿ ಬೆಳೆಯುತ್ತಲೇ ಇರುತ್ತವೆ ಮತ್ತು ಸರಿಯಾದ ಆರೈಕೆ ಮಾಡಿದರೆ ಹಲವು ತಿಂಗಳುಗಳ ಕಾಲ ಹಣ್ಣು ಕೊಡುತ್ತವೆ. ಚೆರಿ ಟೊಮೆಟೊ ಮತ್ತು ಹಲವು ಹೈಬ್ರಿಡ್ ತಳಿಗಳು ವರ್ಷಪೂರ್ತಿ ಇಳುವರಿ ನೀಡುವ ಸಾಮರ್ಥ್ಯ ಹೊಂದಿವೆ. ಆದರೆ, 'ಡಿಟರ್ಮಿನೇಟ್' (Determinate) ತಳಿಗಳು ನಿರ್ದಿಷ್ಟ ಸಮಯದವರೆಗೆ ಮಾತ್ರ ಹಣ್ಣು ನೀಡಿ, ನಂತರ ಇಳುವರಿ ನಿಲ್ಲಿಸುತ್ತವೆ. ಹೀಗಾಗಿ, ಹೋಮ್ ಗಾರ್ಡನಿಂಗ್&zwnj;ಗೆ ಇಂಡಿಟರ್ಮಿನೇಟ್ ತಳಿ ಹೆಚ್ಚು ಲಾಭದಾಯಕ.&lt;/p&gt;&lt;p&gt;&lt;strong&gt;ಭರ್ಜರಿ ಫಸಲಿಗೆ ಈ ಕೇರ್ ಟಿಪ್ಸ್ ಫಾಲೋ ಮಾಡಿ&lt;/strong&gt;&lt;/p&gt;&lt;p&gt;ಟೊಮೆಟೊ ಗಿಡಕ್ಕೆ ಪ್ರತಿದಿನ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಬಿಸಿಲು ಬೇಕು. ಮಣ್ಣಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಮತ್ತು ನಿಯಮಿತವಾಗಿ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಸೇರಿಸುತ್ತಿರಿ. ಗಿಡದಲ್ಲಿ ಹೂವು ಬಂದ ನಂತರ ಪೊಟ್ಯಾಶ್ ಯುಕ್ತ ಗೊಬ್ಬರವನ್ನು ನೀಡಿದರೆ ಹಣ್ಣುಗಳು ಹೆಚ್ಚು ಬಿಡುತ್ತವೆ. ಕಾಲಕಾಲಕ್ಕೆ ಒಣಗಿದ ಎಲೆಗಳನ್ನು ಕತ್ತರಿಸಿ ತೆಗೆಯಿರಿ. ಗಿಡಕ್ಕೆ ಆಸರೆಯಾಗಿ ಕೋಲು ಅಥವಾ ಟ್ರೆಲ್ಲಿಸ್ ಬಳಸಿ. ಅಗತ್ಯಕ್ಕೆ ತಕ್ಕಂತೆ ಮಾತ್ರ ನೀರುಣಿಸಿ, ಏಕೆಂದರೆ ಹೆಚ್ಚು ನೀರು ಹಾಕಿದರೆ ಬೇರುಗಳು ಕೊಳೆತು ಗಿಡಕ್ಕೆ ರೋಗ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ.&lt;/p&gt;&lt;h2&gt;&lt;strong&gt;ಈ ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಡಿ&lt;/strong&gt;&lt;/h2&gt;&lt;p&gt;ಟೊಮೆಟೊ ಗಿಡವನ್ನು ಆರೋಗ್ಯವಾಗಿಡಲು ಕೀಟ ಮತ್ತು ಶಿಲೀಂಧ್ರಗಳಿಂದ ರಕ್ಷಿಸುವುದು ಕೂಡಾ ಮುಖ್ಯ. ಕಾಲಕಾಲಕ್ಕೆ ಬೇವಿನ ಎಣ್ಣೆಯನ್ನು ಸಿಂಪಡಿಸುವುದರಿಂದ ಸಾಮಾನ್ಯ ಕೀಟಗಳಿಂದ ರಕ್ಷಣೆ ಸಿಗುತ್ತದೆ. ಒಂದು ವೇಳೆ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ, ಗೊಬ್ಬರ ಮತ್ತು ನೀರಿನ ಪ್ರಮಾಣವನ್ನು ಪರಿಶೀಲಿಸಿ. ಸರಿಯಾದ ತಳಿಯ ಆಯ್ಕೆ, ಸಾಕಷ್ಟು ಬಿಸಿಲು, ಸಮತೋಲಿತ ಗೊಬ್ಬರ ಮತ್ತು ನಿಯಮಿತ ಆರೈಕೆಯೊಂದಿಗೆ ನಿಮ್ಮ ಮನೆಯಲ್ಲೇ ವರ್ಷಪೂರ್ತಿ ತಾಜಾ, ರಸಭರಿತ ಮತ್ತು ರುಚಿಕರವಾದ ಟೊಮೆಟೊಗಳನ್ನು ಬೆಳೆಯಬಹುದು.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/life/best-tomato-varieties-for-year-round-harvest-and-gardening-tips-gvd/articleshow-6shgvef"/>
        </item>
        <item>
            <title><![CDATA[SRH ಒಡತಿ ಕಾವ್ಯ ಮಾರನ್ ಮದುವೆ ಗುಟ್ಟು ಬಿಚ್ಚಿಟ್ಟ ನಟ ಮಹೇಂದ್ರ, ಮ್ಯೂಸಿಕ್ ಡೈರೆಕ್ಟರ್ ಕೈ ಹಿಡಿತಾರ?]]></title>
            <link>https://kannada.asianetnews.com/gallery/relationship/srh-owner-kavya-maran-wedding-buzz-actor-mahendra-drops-big-hint-ggmwpbl</link>
            <guid isPermaLink="true">https://kannada.asianetnews.com/gallery/relationship/srh-owner-kavya-maran-wedding-buzz-actor-mahendra-drops-big-hint-ggmwpbl</guid>
            <pubDate>Sun, 28 Jun 2026 17:28:39 +0530</pubDate>
            <description><![CDATA[&lt;p&gt;ಸನ್&zwnj;ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಮದುವೆ ಕುರಿತು ಹಲವು ಸುದ್ದಿಗಳು ಹರಿದಾಡಿದೆ. ಇದೀಗ ನಟ ಮಹೇಂದ್ರ ಕಾವ್ಯ ಮಾರನ್ ಮದುವೆ ಕುರಿತು ಗುಟ್ಟು ಬಿಚ್ಚಿಟ್ಟಿದ್ದಾರೆ. ಸಂದರ್ಶನ ಒಂದರಲ್ಲಿ ಸ್ಫೋಟಕ ಮಾತುಗಳನ್ನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw716t935fqyjmzraqqnmsve,imgname-kavya-maran-relationship-1782647580962.png" type="image/jpeg" height="390" width="690"/>
            <content:encoded><![CDATA[&lt;p&gt;ಸನ್&zwnj;ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಮದುವೆ ಕುರಿತು ಹಲವು ಸುದ್ದಿಗಳು ಹರಿದಾಡಿದೆ. ಇದೀಗ ನಟ ಮಹೇಂದ್ರ ಕಾವ್ಯ ಮಾರನ್ ಮದುವೆ ಕುರಿತು ಗುಟ್ಟು ಬಿಚ್ಚಿಟ್ಟಿದ್ದಾರೆ. ಸಂದರ್ಶನ ಒಂದರಲ್ಲಿ ಸ್ಫೋಟಕ ಮಾತುಗಳನ್ನಾಡಿದ್ದಾರೆ.&lt;/p&gt;&lt;img&gt;&lt;p&gt;ಸನ್&zwnj;ರೈಸರ್ಸ್ ಹೈದರಾಬಾದ್ ತಂಡ ಒಡತಿ ಕಾವ್ಯ ಮಾರನ್ ಗುಟ್ಟಾಗಿ ಮ್ಯೂಸಿಕ್ ಡೈರೆಕ್ಟರ್ ಅನಿರುದ್ ಜೊತೆ ರಿಲೇಶನ್&zwnj;ಶಿಪ್&zwnj;ನಲ್ಲಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಕಾವ್ಯಾ, ಅನಿರುದ್ , ಕುಟುಂಬಸ್ಥರಾಗಲಿ ಯಾರೂ ಕೂಡ ಈ ಕುರಿತು ಸ್ಪಷ್ಟನೆ ನೀಡಲಿಲ್ಲ. ಸುಳಿವು ಕೊಡಲಿಲ್ಲ. ಇದೀಗ ನಟ ಮಹೇಂದ್ರ ಗುಟ್ಟು ಬಿಟ್ಟಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಮ್ಯೂಸಿಕ್ ಡೈರೆಕ್ಟರ್ ಅನಿರುದ್ ಸಂಬಂಧಿ, ನಟ ವೈಜಿ ಮಹೇಂದ್ರ ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೆಲ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಅನಿರುದ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹೇಂದ್ರ , ಆತ ಒಳ್ಳೆ ಹುಡುಗ, ನಾನು ಆತನನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಆತ ಮದುವೆಯಾಗುತ್ತಿದ್ದಾನೆ ಅನ್ನೋ ಮಾಹಿತಿಯೂ ನನಗೆ ಸಿಕ್ಕಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅನಿರುದ್ ಮದುವೆಯಾಗುತ್ತಿರುವ ಹುಡುಗಿ ಸಾಮಾನ್ಯ ಹುಡುಗಿಯಲ್ಲ. ಆಕೆಯ ಉತ್ತಮ ಸಾಮರ್ಥ್ಯದ ಹುಡುಗಿ, ಒಂದು ದೊಡ್ಡ ಕ್ರೀಡಾ ತಂಡವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿರುವ ಹುಡುಗಿ. ಕುಟುಂಬದಿಂದ ಬಂದ ಉದ್ಯಮದ ಪ್ರಮುಖ ಜವಾಬ್ದಾರಿ ಹೊತ್ತಿರುವ ಹುಡುಗಿ ಎಂದು ಹೆಸರು ಹೇಳದೆ ಮಾಹಿತಿ ನೀಡಿದ್ದಾರೆ.ಈ ಮೂಲಕ ಅನಿರುದ್ ಹಾಗೂ ಕಾವ್ಯಾ ಮಾರನ್ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂದು ಸೂಚನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಖಾಸಗಿ ಟಿವಿ ನೆಟ್&zwnj;ವರ್ಕ್ ಕಾರ್ಯಕಾರಿ ನಿರ್ದೇಶಕಿಯಾಗಿರುವ ಕಾವ್ಯಾ ಮಾರನ್ ಮದುವೆ, ರಿಲೇಶನ್&zwnj;ಶಿಪ್ ಕುರಿತು ಹಲವು ಬಾರಿ ಸುದ್ದಿಗಳು ಹರಿದಾಡಿದೆ. ಅನಿರುದ್ ಜೊತೆ ಕಾವ್ಯಾ ಮಾರನ್ ಮದುವೆ ನಡೆಯಲಿದೆ. ಇಲ್ಲೀವರೆಗೂ ಈ ಕುರಿತು ಕಾವ್ಯಾ ಮಾರನ್ ಹಾಗೂ ಅನಿರುದ್ ಯಾವುದೇ ಸ್ಪಷ್ಟನೆ ನೀಡಿಲ್ಲ, ಸುಳಿವೂ ನೀಡಿಲ್ಲ. ಆದರೆ ಅನಿರುದ್ ಸಂಬಂಧಿಯೇ ಇದೀಗ ಮದುವೆ ಸುಳಿವು ನೀಡಿರುವುದು ಕುತೂಹಲ ಮೂಡಿಸಿದೆ.&lt;/p&gt;&lt;img&gt;&lt;p&gt;ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಾವ್ಯ ಮಾರನ್ ಮಾಲೀಕತ್ವದ ಸನ್&zwnj;ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಪ್ ಪ್ರವೇಶಿಸಿತ್ತು. ಆದರೆ ಪ್ಲೇಆಫ್ &zwnj;ನಿಂದ ಹೊರಬಿದ್ದು ನಿರಾಸೆ ಅನುಭವಿಸಿತ್ತು. ಐಪಿಎಲ್ ಟೂರ್ನಿ ಆರಂಭದಿಂದ ಅಂತ್ಯದವರೆಗೆ ಹೈದರಾಬಾದ್ ತಂಡದ ಜೊತೆ ನಿಂತು ಆಟಗಾರರನ್ನು ಹುರಿದುಂಬಿಸುತ್ತಾ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/relationship/srh-owner-kavya-maran-wedding-buzz-actor-mahendra-drops-big-hint-ggmwpbl"/>
        </item>
        <item>
            <title><![CDATA[ಡಬ್ಬದಲ್ಲಿಟ್ಟ ಬೆಲ್ಲ ನೀರಾಗಿದ್ಯಾ? ಈ ಟ್ರಿಕ್ಸ್ ಮೂಲಕ ವರ್ಷ ಪೂರ್ತಿ ಫ್ರೆಶ್ ಆಗಿರಿಸಿ]]></title>
            <link>https://kannada.asianetnews.com/webstories/kitchen/kitchen-tricks-how-to-store-jaggery-for-long-time-votsmr9</link>
            <guid isPermaLink="true">https://kannada.asianetnews.com/webstories/kitchen/kitchen-tricks-how-to-store-jaggery-for-long-time-votsmr9</guid>
            <pubDate>Sun, 28 Jun 2026 15:41:49 +0530</pubDate>
            <description><![CDATA[&lt;p&gt;Kitchen Tricks: ಡಬ್ಬದಲ್ಲಿ ಇಟ್ಟಂತಹ ಬೆಲ್ಲ ಕರಗಿ, ಅಂಟಾಗಿದ್ದರೆ, ಅವುಗಳ ಮೇಲೆ ಫಂಗಸ್ ಬೆಳೆದಿದ್ದರೆ? ನೀವು ಈ ಸುಲಭ ಕಿಚನ್ ಟ್ರಿಕ್ಸ್ ಬಳಸಿ, ದೀರ್ಘ ಕಾಲದವರೆಗೆ ನೀವು ಬೆಲ್ಲವನ್ನು ಬಳಕೆ ಮಾಡಬಹುದು. ಜೊತೆಗೆ ಅವುಗಳನ್ನು ಫ್ರೆಶ್ ಆಗಿ ಇಟ್ಟುಕೊಳ್ಳಬಹುದು. ಹೇಗೆ ಎನ್ನುವುದನ್ನು ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqvj5jx5sw7n10njk8w2ar03,imgname-benefits-of-jaggery--2--1777967745957.jpg" type="image/jpeg" height="390" width="690"/>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/webstories/kitchen/kitchen-tricks-how-to-store-jaggery-for-long-time-votsmr9"/>
        </item>
        <item>
            <title><![CDATA[ಕಡಿಮೆ ಬೆಲೆಯಲ್ಲಿ ಸಿಗುವ ಸ್ಟೈಲಿಶ್ ಚಪ್ಪಲಿಗಳಿವು! ನೋಡೋಕೆ ಎಷ್ಟು ಚೆಂದ!]]></title>
            <link>https://kannada.asianetnews.com/webstories/fashion/affordable-stylish-footwear-designs-for-women-price-ydgqc0r</link>
            <guid isPermaLink="true">https://kannada.asianetnews.com/webstories/fashion/affordable-stylish-footwear-designs-for-women-price-ydgqc0r</guid>
            <pubDate>Sun, 28 Jun 2026 15:34:25 +0530</pubDate>
            <description><![CDATA[&lt;p&gt;ಕಡಿಮೆ ಬೆಲೆಯಲ್ಲಿ ಸಿಗುವ ಸ್ಟೈಲಿಶ್ ಚಪ್ಪಲಿಗಳಿಗಾಗಿ ಹುಡುಕುತ್ತಿದ್ದೀರಾ? ಹಾಗಿದ್ರೆ ಈ ಡಿಸೈನ್&zwnj;ಗಳು ನಿಮಗಾಗಿಯೇ ಇವೆ. ಇಲ್ಲಿ ಯಾವುದೇ ಸಂದರ್ಭಕ್ಕೂ ಸರಿಹೊಂದುವಂತಹ ಬೆಸ್ಟ್ ಫುಟ್&zwnj;ವೇರ್ ಡಿಸೈನ್&zwnj;ಗಳಿವೆ. ಒಮ್ಮೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jpepbmheprv798bprccyxpm1,imgname-summer-footwear-for-womens-1742102450734.jpg" type="image/jpeg" height="390" width="690"/>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/fashion/affordable-stylish-footwear-designs-for-women-price-ydgqc0r"/>
        </item>
        <item>
            <title><![CDATA[10 ಕೆಜಿ ಚಿಕನ್‌ನಿಂದ 15 ಕೆಜಿಯಷ್ಟು ಅಡುಗೆ ಮಾಡಿ! ಅತಿಥಿಗಳಿಗೆ ಬಡಿಸಲು ಅಜ್ಜಿಯರ ಕಾಲದ ಫೇಮಸ್ ಟ್ರಿಕ್]]></title>
            <link>https://kannada.asianetnews.com/gallery/food/how-to-make-10kg-chicken-serve-like-15kg-grandmothers-secret-cooking-tips-8as918r</link>
            <guid isPermaLink="true">https://kannada.asianetnews.com/gallery/food/how-to-make-10kg-chicken-serve-like-15kg-grandmothers-secret-cooking-tips-8as918r</guid>
            <pubDate>Sun, 28 Jun 2026 15:08:13 +0530</pubDate>
            <description><![CDATA[&lt;p&gt;Chicken Curry Tips: ಮನೆಯಲ್ಲಿ ಸಣ್ಣ ಫಂಕ್ಷನ್ ಇದ್ದಾಗ ಚಿಕನ್ ಪ್ರಮಾಣ ಮತ್ತು ಗ್ರೇವಿ ಹೆಚ್ಚಿಸಲು ಅಜ್ಜಿಯರ ಕಾಲದ ಈ ಸುಲಭ ಉಪಾಯಗಳನ್ನು ಅನುಸರಿಸಿ. 10 ಕೆಜಿ ಚಿಕನ್ 15 ಕೆಜಿಯಷ್ಟು ಆಗಲಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-b59c7ff0-f13d-4f34-b597-b8e3c75fe364,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;Chicken Curry Tips: ಮನೆಯಲ್ಲಿ ಸಣ್ಣ ಫಂಕ್ಷನ್ ಇದ್ದಾಗ ಚಿಕನ್ ಪ್ರಮಾಣ ಮತ್ತು ಗ್ರೇವಿ ಹೆಚ್ಚಿಸಲು ಅಜ್ಜಿಯರ ಕಾಲದ ಈ ಸುಲಭ ಉಪಾಯಗಳನ್ನು ಅನುಸರಿಸಿ. 10 ಕೆಜಿ ಚಿಕನ್ 15 ಕೆಜಿಯಷ್ಟು ಆಗಲಿದೆ!&lt;/p&gt;&lt;img&gt;&lt;p&gt;&lt;strong&gt;ಅಜ್ಜಿಯರ ಕಾಲದ ಕೆಲವು ಅದ್ಭುತ ಕಿಚನ್ ಟಿಪ್ಸ್&zwnj;&lt;/strong&gt;ಮನೆಯಲ್ಲಿ ಏನಾದರೂ ಪುಟ್ಟ ಸಮಾರಂಭ ಅಥವಾ ಫಂಕ್ಷನ್ ಇದ್ದಾಗ ಅತಿಥಿಗಳ ದಂಡೇ ಬರುತ್ತದೆ. ಅಂತಹ ಸಮಯದಲ್ಲಿ ಮಾಂಸಾಹಾರಿ ಪ್ರಿಯರಿಗೆ ಚಿಕನ್ ಸಾಂಬಾರ್ ಅಥವಾ ಕರಿ ಮಾಡುವುದು ಸಾಮಾನ್ಯ. ಆದರೆ, ಅತಿಥಿಗಳ ಸಂಖ್ಯೆ ಹೆಚ್ಚಾದಾಗ ತಂದಿರುವ ಚಿಕನ್ ಸಾಲುತ್ತದೆಯೇ ಎಂಬ ಆತಂಕ ಗೃಹಿಣಿಯರಲ್ಲಿ ಮೂಡುವುದು ಸಹಜ. ಕೇವಲ ಮಾಂಸದ ತುಂಡುಗಳಿದ್ದರೆ ಸಾಲದು, ಅದರ ಜೊತೆಗೆ ರುಚಿಕರವಾದ ದಪ್ಪಗಿನ ಗ್ರೇವಿ (ಸಾಂಬಾರ್) ಕೂಡ ಇರಬೇಕು. 10 ಕೆಜಿ ಚಿಕನ್ ತಂದಾಗ ಅದು 15 ಕೆಜಿಯಷ್ಟು ಪ್ರಮಾಣದಲ್ಲಿ ಅತಿಥಿಗಳಿಗೆ ಸಾಕಾಗುವಂತೆ ಮಾಡಲು ನಮ್ಮ ಅಜ್ಜಿಯರ ಕಾಲದ ಕೆಲವು ಅದ್ಭುತ ಕಿಚನ್ ಟಿಪ್ಸ್&zwnj;ಗಳು ಇಲ್ಲಿವೆ..&lt;/p&gt;&lt;img&gt;&lt;p&gt;&lt;strong&gt;ಈರುಳ್ಳಿ&lt;/strong&gt;ನೀವು 10 ಕೆಜಿ ಚಿಕನ್ ತಂದಿದ್ದರೆ, ಅದಕ್ಕೆ ಕನಿಷ್ಠ 1 ಕೆಜಿ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಈರುಳ್ಳಿಯನ್ನು ಬಳಸಿ. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಚೆನ್ನಾಗಿ ಹುರಿಯುವುದರಿಂದ ಗ್ರೇವಿ ದಪ್ಪನಾಗಿ ಬರುತ್ತದೆ. ಇದು ಮಸಾಲೆಯ ತೀಕ್ಷ್ಣತೆಯನ್ನು ಕಡಿಮೆ ಮಾಡುವುದಲ್ಲದೆ, ಕರಿಯ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಈರುಳ್ಳಿಯನ್ನು ಪೇಸ್ಟ್ ಮಾಡಿ ಬಳಸುವುದರಿಂದ ಗ್ರೇವಿ ಮತ್ತಷ್ಟು ಗಟ್ಟಿಯಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಟೊಮೆಟೊ&lt;/strong&gt;10 ಕೆಜಿ ಚಿಕನ್&zwnj;ಗೆ ಕನಿಷ್ಠ 1.5 ಕೆಜಿ ಟೊಮೆಟೊ ಬಳಸುವುದು ಸೂಕ್ತ. ಟೊಮೆಟೊಗಳನ್ನು ಚೆನ್ನಾಗಿ ಬೇಯಿಸಿ ಅವು ಮೃದುವಾಗುವಂತೆ ಮಾಡಬೇಕು. ಇದು ಅಡುಗೆಗೆ ಉತ್ತಮ ಕೆಂಪು ಬಣ್ಣ ನೀಡುವುದಲ್ಲದೆ, ಗ್ರೇವಿಯ ರುಚಿಯನ್ನು ಹೆಚ್ಚಿಸುತ್ತದೆ. ಟೊಮೆಟೊದಿಂದ ಬರುವ ರಸವು ಚಿಕನ್ ಕರಿಯ ಪ್ರಮಾಣವನ್ನು ಅಧಿಕವಾಗಿ ತೋರಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ತೆಂಗಿನ ಹಾಲು&lt;/strong&gt;ಚಿಕನ್ ಬೇಯುತ್ತಿರುವಾಗ ಅದಕ್ಕೆ ತೆಂಗಿನ ಹಾಲನ್ನು ಸೇರಿಸುವುದು ಅಜ್ಜಿಯರ ಕಾಲದ ಪ್ರಸಿದ್ಧ ಟ್ರಿಕ್. ತೆಂಗಿನ ಹಾಲು ಸೇರಿಸುವುದರಿಂದ ಗ್ರೇವಿ ತುಂಬಾ ದಪ್ಪವಾಗಿ (Thick) ಬರುತ್ತದೆ ಮತ್ತು ಅಡುಗೆಗೆ ರಾಜಮನೆತನದ ರುಚಿ ಸಿಗುತ್ತದೆ. ಇದು ಕೇವಲ ಗ್ರೇವಿಯನ್ನಷ್ಟೇ ಅಲ್ಲದೆ, ಚಿಕನ್ ಪಾತ್ರೆಯು ತುಂಬಿದಂತೆ ಕಾಣುವಂತೆ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ಆಲೂಗಡ್ಡೆ&lt;/strong&gt;ಚಿಕನ್ ಕರಿಗೆ ನಾಲ್ಕೈದು ದೊಡ್ಡ ಆಲೂಗಡ್ಡೆಗಳನ್ನು ಕತ್ತರಿಸಿ ಹಾಕುವುದರಿಂದ ಮಾಂಸದ ಪ್ರಮಾಣ ಹೆಚ್ಚಾದಂತೆ ಕಾಣುತ್ತದೆ. ಅನೇಕರಿಗೆ ಚಿಕನ್ ಜೊತೆ ಬೆಂದ ಆಲೂಗಡ್ಡೆ ತಿನ್ನುವುದು ತುಂಬಾ ಇಷ್ಟ. ಇದು ಸಾಂಬಾರನ್ನು ದಪ್ಪವಾಗಿಸಲು ಕೂಡ ಸಹಾಯ ಮಾಡುತ್ತದೆ.&lt;/p&gt;&lt;p&gt;ಈ ಸರಳ ಮತ್ತು ಹಳೆಯ ಕಾಲದ ಟಿಪ್ಸ್&zwnj;ಗಳನ್ನು ಬಳಸಿದರೆ, ನೀವು ತಂದಿರುವ ಮಾಂಸದ ಪ್ರಮಾಣ ಕಡಿಮೆಯಿದ್ದರೂ ಸಹ ಅತಿಥಿಗಳಿಗೆ ಯಾವುದೇ ಕೊರತೆಯಿಲ್ಲದೆ ರುಚಿಕರವಾದ ಊಟವನ್ನು ಬಡಿಸಬಹುದು.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/how-to-make-10kg-chicken-serve-like-15kg-grandmothers-secret-cooking-tips-8as918r"/>
        </item>
        <item>
            <title><![CDATA[ಟ್ರಿಪ್ ಹೋಗುವಾಗ ಇರಲಿ ಎಚ್ಚರ, ಪ್ಯಾಂಗಾಂಗ್ ಲೇಕ್‍ನಲ್ಲಿ ಕಾರು ಇಳಿಸಿದ ಪ್ರವಾಸಿಗರಿಗೆ 2 ಲಕ್ಷ ರೂ ದಂಡ]]></title>
            <link>https://kannada.asianetnews.com/travel/planning-a-trip-tourists-penalized-rs-2-lakh-for-taking-car-into-pangong-lake/articleshow-d4pynb8</link>
            <guid isPermaLink="true">https://kannada.asianetnews.com/travel/planning-a-trip-tourists-penalized-rs-2-lakh-for-taking-car-into-pangong-lake/articleshow-d4pynb8</guid>
            <pubDate>Sun, 28 Jun 2026 14:57:43 +0530</pubDate>
            <description><![CDATA[&lt;p&gt;ಸರಂಕ್ಷಿತ ಅರಣ್ಯ, ವನ್ಯಜೀವಿಗಳ ತಾಣ, ಸಂರಕ್ಷಿತ ಕೆರೆ, ನದಿ ಸೇರಿದಂತೆ ಕೆಲ ಪ್ರದೇಶಗಳಿಗೆ ಟ್ರಿಪ್ ಹೋಗುವ ಮಂದಿ ಎಚ್ಚರವಹಿಸುವುದು ಅಗತ್ಯ. ಇದೀಗ ಹೀಗೆ ಪ್ಯಾಂಗಾಂಗ್ ಲೇಕ್&zwnj;ನಲ್ಲಿ ಕಾರು ಇಳಿಸಿದ ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6rvvcxz1fyskk57edc1sxj,imgname-tourists-fined-rs-2-lakh-after-driving-into-pangong-lake-1782638833053.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಡಾಕ್ (ಜೂ.28)&lt;/strong&gt; ಪ್ರವಾಸ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾಗಿದೆ. ಇತ್ತೀಚೆಗೆ ಅತೀ ಹೆಚ್ಚಿನ ಮಂದಿ ಪ್ರವಾಸ ತೆರಳುತ್ತಾರೆ. ಹೀಗೆ ಪ್ರವಾಸಕ್ಕೆ ತೆರಳುವಾಗ ನಿಯಮಗಳ ಬಗ್ಗೆ ಎಚ್ಚರವಿರಲಿ. ಕೆಲ ಸೂಕ್ಷ್ಮ ಪ್ರದೇಶಗಲ್ಲಿ ಹುಚ್ಚಾಟ ಮೆರೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಲಡಾಕ್&zwnj;ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಪ್ಯಾಂಗಾಂಗ್ ಲೇಕ್&zwnj;ನಲ್ಲಿ ಕಾರು ಇಳಿಸಿ ಹುಚ್ಚಾಟ ಮೆರೆದ ನಾಲ್ವರು ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಮೂಲಕ ಎಲ್ಲಾ ಪ್ರವಾಸಿಗರಿಗೆ ಲಡಖ್ ಪ್ರವೋಸೋದ್ಯಮ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ.&lt;/p&gt;&lt;h2&gt;ಕೆರೆಗೆ ಕಾರು ಇಳಿಸಿ ಹುಚ್ಚಾಟ, ನಾಲ್ವರಿಗೆ 2 ಲಕ್ಷ ರೂ ದಂಡ&lt;/h2&gt;&lt;p&gt;ನಾಲ್ವರು ಗೆಳೆಯರು ಲಡಾಕ್&zwnj;ಗೆ ಪ್ರವಾಸ ತೆರಳಿದ್ದಾರೆ. ತಮ್ಮ ಮಹೀಂದ್ರ ಥಾರ್ ಕಾರಿನ ಮೂಲಕ ಲಡಾಖ್&zwnj;ನ ವಿವಿಧ ಪ್ರವಾಸಿ ತಾಣಗಳನ್ನು ಸಂದರ್ಶಿಸಿದ್ದಾರೆ. ಈ ನಾಲ್ವರು ಬಹುತೇಕ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪ್ರವಾಸ ಮಾಡಿದ್ದಾರೆ. ಈ ಪೈಕಿ ಪ್ಯಾಂಗಾಂಗ್ ಲೇಕ್&zwnj;ನಲ್ಲಿ ಕಾರು ಇಳಿಸಿದ್ದಾರೆ. ಇದು ಇಕೋ ಸೆನ್ಸಿಟೀವ್ ಝೋನ್. ಅತ್ಯಂತ ಸುಂದರ ಹಾಗ ಸ್ವಚ್ಚ ನೀರಿನ ಈ ಕೆರೆಯಲ್ಲಿ ಕಾರು ಇಳಿಸುವುದು, ನೀರಿನಲ್ಲಿ ಆಟವಾಡುವುದು, ಕಸ ಕಡ್ಡಿ ಎಸೆಯುವುದು ಸೇರಿದಂತೆ ಎಲ್ಲಾ ಚಟುವಟಿಕೆ ನಿಷೇಧ ಹೇರಲಾಗಿದೆ. 1972ರ ವೈಲ್ಡ್ ಲೈಫ್ ಪ್ರೊಟೆಕ್ಷನ್ ಕಾಯ್ದೆ ಈ ಪ್ರದೇಶ ಇಕೋ ಸೆನ್ಸಿಟೀವ್ ಝೋನ್ ಎಂದು ಘೋಷಿಸಲಾಗಿದೆ. ಇಲ್ಲಿ ಕಾರು ಇಳಿಸು ಹುಚ್ಚಾಟ ಮೆರೆದಿದ್ದಾರೆ. ಹೀಗಾಗಿ ನಾಲ್ವರು ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.&lt;/p&gt;&lt;p&gt;ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಚಂಡೀಘಡ ಹಾಗೂ ಪಂಜಾಬ್ ಮೂಲದ ನಾಲ್ವರ ಕಾರು ವಶಕ್ಕೆ ಪಡೆದ ಲಡಾಖ್ ಅಧಿಕಾರಿಗಳು ದಂಡ ಕಟ್ಟಿ ಕಾರು ರಿಲೀಸ್ ಮಾಡಿಸಿಕೊಳ್ಳಲು ಸೂಚಿಸಿದ್ದಾರೆ. ಇದರಂತೆ ನಾಲ್ವರು ಪ್ರವಾಸಿದರು ಕ್ಷಮಾಪಣೆ ಪತ್ರ ಬರೆದು 2 ಲಕ್ಷ ರೂಪಾಯಿ ದಂಡ ಪಾವತಿಸಿದ್ದಾರೆ. ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿ ನಾಲ್ವರು ಹಾಗೂ ಕಾರನ್ನು ರಿಲೀಸ್ ಮಾಡಿದ್ದಾರೆ.&lt;/p&gt;&lt;h2&gt;ಪ್ರವಾಸಿಗರಿಗೆ ಖಡಕ್ ವಾರ್ನಿಂಗ್&lt;/h2&gt;&lt;p&gt;ಜೂನ್ 23 ರಂದು ಪ್ರವಾಸಕ್ಕೆ ಬಂದ ಈ ನಾಲ್ವರು ನಿಯಮ ಉಲ್ಲಂಘಿಸಿ ಕಾರು ಪ್ಯಾಂಗಾಂಗ್ ಲೇಕ್&zwnj;ಗೆ ಇಳಿಸಿದ್ದಾರೆ. ಬಳಿಕ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತ ಗಸ್ತು ತಿರುಗುತ್ತಿದ್ದ ಅಧಿಕಾರಿಗಳಿಗೂ ಈ ಕುರಿತು ಕೆಲ ಸೂಚನೆ ಸಿಕ್ಕಿದೆ. ಹೀಗಾಗಿ ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಇತ್ತ ಸೋಶಿಯಲ್ ಮೀಡಿಾಯದಲ್ಲೂ ಈ ಕುರಿತು ಫೋಟೋಗಳು ವೈರಲ್ ಆಗಿತ್ತು. ಹೀಗಾಗಿ ಲಡಾಖ್ ಅಧಿಕಾರಿಗಳು ತನಿಖೆ ನಡೆಸಿ ಪ್ರವಾಸಿಗರಿಗೆ ದಂಡ ವಿಧಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Acting strictly against rising menace of illegal off-roading, including cases of tourists driving cars in the ecologically sensitive lakes and river streams in Ladakh, the Ladakh Administration, on the directions of Lt. Governor Shri VK Saxena, has for the first time, begun&hellip; pic.twitter.com/zTr6x8p2TB&lt;/p&gt;&lt;p&gt;&mdash; ANI (@ANI) June 28, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>life</category>
            <dc:creator>Chethan Kumar</dc:creator>
            <atom:link href="https://kannada.asianetnews.com/travel/planning-a-trip-tourists-penalized-rs-2-lakh-for-taking-car-into-pangong-lake/articleshow-d4pynb8"/>
        </item>
        <item>
            <title><![CDATA[ಯಾವ ಗೊಬ್ಬರ ಬೇಕಾಗಿಲ್ಲ, ಮೊಸರಿದ್ದರೆ ಸಾಕು.. ಹೂ ಉದುರಲ್ಲ, ಬುಟ್ಟಿಗಟ್ಟಲೇ ತರಕಾರಿ ಸಿಗುತ್ತೆ]]></title>
            <link>https://kannada.asianetnews.com/life/homemade-organic-fertilizer-for-terrace-garden-how-curd-and-black-salt-boost-plant-growth/articleshow-tystniz</link>
            <guid isPermaLink="true">https://kannada.asianetnews.com/life/homemade-organic-fertilizer-for-terrace-garden-how-curd-and-black-salt-boost-plant-growth/articleshow-tystniz</guid>
            <pubDate>Sun, 28 Jun 2026 14:28:40 +0530</pubDate>
            <description><![CDATA[&lt;p&gt;&lt;strong&gt;Kannada Gardening News: &lt;/strong&gt;ನಿಮ್ಮ ಮನೆಯ ಗಿಡಗಳಲ್ಲಿ ಹೂವು ಉದುರುತ್ತಿದ್ದರೆ ಈ ಮೊಸರು ಮತ್ತು ಕಪ್ಪು ಉಪ್ಪಿನ ದ್ರಾವಣ ಬಳಸಿ. ಇದು ಗಿಡಗಳಿಗೆ ಹೊಸ ಶಕ್ತಿ ನೀಡಿ ಅಧಿಕ ಇಳುವರಿ ನೀಡುತ್ತದೆ. ಸಂಪೂರ್ಣ ವಿಧಾನ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6q5esm2cem511jpxmkpx0z,imgname-thumbnail--37--1782637050676.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Terrace Gardening Tips: &lt;/strong&gt;ನಿಮ್ಮ ಮನೆಯ ಟೆರೇಸ್ ಅಥವಾ ತೋಟದಲ್ಲಿ ಹೂವುಗಳು ಉದುರುತ್ತಿವೆಯೇ ಅಥವಾ ಕಾಯಿಗಳು ಸರಿಯಾಗಿ ಬರುತ್ತಿಲ್ಲವೇ? ಹಾಗಿದ್ದರೆ ದುಬಾರಿ ಗೊಬ್ಬರಗಳ ಮೊರೆ ಹೋಗುವ ಮೊದಲು ನಿಮ್ಮ ಅಡುಗೆ ಮನೆಯಲ್ಲಿರುವ ಮೊಸರು ಮತ್ತು ಕಪ್ಪು ಉಪ್ಪಿನಿಂದ ಈ ಅದ್ಭುತ ಸಾವಯವ ಗೊಬ್ಬರವನ್ನು ತಯಾರಿಸಿ ನೋಡಿ. ಗಿಡಗಳಿಗೆ ಹೊಸ ಚೈತನ್ಯ ನೀಡುವ ಈ ಸುಲಭ ಮನೆಮದ್ದಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;&lt;p&gt;ಇಂದಿನ ದಿನಗಳಲ್ಲಿ ಟೆರೇಸ್ ಗಾರ್ಡನಿಂಗ್ ಕೇವಲ ಹವ್ಯಾಸವಾಗಿ ಉಳಿದಿಲ್ಲ, ಅದು ಆರೋಗ್ಯಕರ ಜೀವನಶೈಲಿಯ ಭಾಗವಾಗಿದೆ. ತಮ್ಮ ಮನೆಯ ಛಾವಣಿಯ ಮೇಲೆ ಟೊಮೆಟೊ, ಮೆಣಸಿನಕಾಯಿ, ಸೌತೆಕಾಯಿ ಮತ್ತು ಸೋರೆಕಾಯಿಯಂತಹ ತರಕಾರಿಗಳನ್ನು ಬೆಳೆಸಿ ಕೆಮಿಕಲ್ ಮುಕ್ತ ಆಹಾರ ಸೇವಿಸಲು ಬಯಸುತ್ತಾರೆ. ಆದರೆ, ಅನೇಕ ಬಾರಿ ಗಿಡಗಳಲ್ಲಿ ಹೂವುಗಳು ಬಂದರೂ ಅವು ಕಾಯಿ ಆಗುವ ಮೊದಲೇ ಉದುರಿ ಹೋಗುತ್ತವೆ ಅಥವಾ ಬಳ್ಳಿಗಳು ಚೆನ್ನಾಗಿ ಬೆಳೆದರೂ ಫಸಲು ನೀಡುವುದಿಲ್ಲ. ಇಂತಹ ಸಮಸ್ಯೆಗಳಿಗೆ ಅಡುಗೆ ಮನೆಯಲ್ಲಿರುವ ಮೊಸರು ಮತ್ತು ಕಪ್ಪು ಉಪ್ಪು ರಾಮಬಾಣವಾಗಿ ಕೆಲಸ ಮಾಡುತ್ತವೆ.&lt;/p&gt;&lt;h3&gt;&lt;strong&gt;ಗೊಬ್ಬರ ತಯಾರಿಸಲು ಬೇಕಾಗುವ ಪದಾರ್ಥಗಳು (Homemade fertilizer)&lt;/strong&gt;&lt;/h3&gt;&lt;p&gt;1 ಲೀಟರ್ ಹುಳಿ ಮೊಸರು ಅಥವಾ ಮಜ್ಜಿಗೆ.ಕಾಲು ಟೀ ಚಮಚ ಕಪ್ಪು ಉಪ್ಪು (Black Salt).&lt;/p&gt;&lt;h3&gt;&lt;strong&gt;ಗೊಬ್ಬರ ತಯಾರಿಸುವ ವಿಧಾನ (Step-by-Step Guide to Making Organic Fertilizer)&lt;/strong&gt;&lt;/h3&gt;&lt;p&gt;ಮೊದಲಿಗೆ ಒಂದು ಪ್ಲಾಸ್ಟಿಕ್ ಬಕೆಟ್ ತೆಗೆದುಕೊಳ್ಳಿ . ಅದಕ್ಕೆ 1 ಲೀಟರ್ ಮೊಸರು ಅಥವಾ ಮಜ್ಜಿಗೆ ಹಾಕಿ, 1 ಲೀಟರ್ ನೀರು ಮತ್ತು ಕಾಲು ಚಮಚ ಕಪ್ಪು ಉಪ್ಪನ್ನೂ ಸೇರಿಸಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಒಂದು ಬಟ್ಟೆಯಿಂದ ಮುಚ್ಚಿ ನೆರಳಿನ ಜಾಗದಲ್ಲಿ ಇಡಿ. ಮುಂದಿನ 10 ದಿನಗಳವರೆಗೆ ಪ್ರತಿದಿನ ಒಮ್ಮೆ ಮರದ ಕೋಲಿನಿಂದ ಈ ಮಿಶ್ರಣವನ್ನು ಕಲಕುತ್ತಿರಿ. ಈ 10 ದಿನಗಳಲ್ಲಿ ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳು ಸಕ್ರಿಯಗೊಂಡು ಗಿಡಗಳಿಗೆ ಬೇಕಾದ ಪೋಷಕಾಂಶಗಳನ್ನು ಸಿದ್ಧಪಡಿಸುತ್ತವೆ.&lt;/p&gt;&lt;h2&gt;&lt;strong&gt;ಬಳಸುವ ಸರಿಯಾದ ಕ್ರಮ&lt;/strong&gt;&lt;/h2&gt;&lt;p&gt;10 ದಿನಗಳ ನಂತರ ಸಿದ್ಧವಾದ 2 ಲೀಟರ್ ದ್ರಾವಣಕ್ಕೆ 10 ಲೀಟರ್ ಶುದ್ಧ ನೀರನ್ನು ಬೆರೆಸಿ ತೆಳುಗೊಳಿಸಿ. ಇದನ್ನು ನೇರವಾಗಿ ಗಿಡಗಳಿಗೆ ಹಾಕಬಾರದು, ನೀರು ಬೆರೆಸುವುದು ಕಡ್ಡಾಯ. ಸಣ್ಣ ಗಿಡಗಳಿಗೆ ಅರ್ಧ ಲೀಟರ್ ಮತ್ತು ದೊಡ್ಡ ಬಳ್ಳಿಗಳಿಗೆ 1 ಲೀಟರ್&zwnj;ನಷ್ಟು ದ್ರಾವಣವನ್ನು ಗಿಡದ ಬುಡಕ್ಕೆ ಹಾಕಿ. ಈ ಪ್ರಕ್ರಿಯೆಯನ್ನು ಬೆಳಗ್ಗೆ ಬೇಗ ಅಥವಾ ಸಂಜೆ ಸೂರ್ಯ ಮುಳುಗಿದ ನಂತರ ಮಾಡುವುದು ಉತ್ತಮ. 10 ರಿಂದ 15 ದಿನಗಳಿಗೊಮ್ಮೆ ಈ ದ್ರಾವಣವನ್ನು ಬಳಸುವುದರಿಂದ ಅತ್ಯುತ್ತಮ ಫಲಿತಾಂಶ ಪಡೆಯಬಹುದು.&lt;/p&gt;&lt;h3&gt;&lt;strong&gt;ಬಳ್ಳಿ ತರಕಾರಿಗಳಿಗೆ ಇದು ವರದಾನ&lt;/strong&gt;&lt;/h3&gt;&lt;p&gt;ಈ ಸಾವಯವ ದ್ರಾವಣವು ವಿಶೇಷವಾಗಿ ಸೋರೆಕಾಯಿ, ಹೀರೆಕಾಯಿ, ಹಾಗಲಕಾಯಿ ಮತ್ತು ಸೌತೆಕಾಯಿಯಂತಹ ಬಳ್ಳಿ ತರಕಾರಿಗಳಿಗೆ ಹೆಚ್ಚು ಪ್ರಯೋಜನಕಾರಿ. ಮೊಸರಿನಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕವು ಗಿಡದ ಬೇರುಗಳನ್ನು ಬಲಪಡಿಸುತ್ತದೆ ಮತ್ತು ಕಪ್ಪು ಉಪ್ಪು ಮಣ್ಣಿನಲ್ಲಿರುವ ಪೋಷಕಾಂಶಗಳು ಗಿಡಕ್ಕೆ ಸುಲಭವಾಗಿ ಸಿಗುವಂತೆ ಮಾಡುತ್ತದೆ. ಇದರಿಂದ ಹೂವು ಉದುರುವುದು ನಿಂತು ಅಧಿಕ ಇಳುವರಿ ಸಿಗುತ್ತದೆ.&lt;/p&gt;&lt;h3&gt;&lt;strong&gt;ಮುನ್ನೆಚ್ಚರಿಕೆಗಳು (Safety Precautions)&lt;/strong&gt;&lt;/h3&gt;&lt;p&gt;ಲೋಹದ ಪಾತ್ರೆಗಳನ್ನು ಬಳಸಬೇಡಿ, ಏಕೆಂದರೆ ಮೊಸರು ಲೋಹದೊಂದಿಗೆ ಪ್ರತಿಕ್ರಿಯಿಸಬಹುದು.ಬಿಸಿಲಿನಲ್ಲಿ ಈ ಗೊಬ್ಬರವನ್ನು ಹಾಕಬೇಡಿ.ಯಾವಾಗಲೂ ನೀರು ಬೆರೆಸಿ ತೆಳುಗೊಳಿಸಿದ ನಂತರವೇ ಗಿಡಗಳಿಗೆ ನೀಡಿ.&lt;/p&gt;&lt;p&gt;&lt;strong&gt;ಇಲ್ಲಿದೆ ನೋಡಿ ವಿಡಿಯೋ..&lt;/strong&gt;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Abhishek Raja | Gardening (@gardening_aasaanhai)&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/life/homemade-organic-fertilizer-for-terrace-garden-how-curd-and-black-salt-boost-plant-growth/articleshow-tystniz"/>
        </item>
    </channel>
</rss>
