<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 19 Sep 2026 14:38:15 +0530</lastBuildDate>
        <atom:link href="https://kannada.asianetnews.com/rss/life" rel="self" type="application/rss+xml"/>
        <item>
            <title><![CDATA[ಫ್ರಿಡ್ಜ್ ಬಾಗಿಲಿಗೆ ಒಂದು ಪೇಪರ್ ಸಿಕ್ಕಿಸಿ ಸಾಕು.. ಫ್ರೀಜರ್‌ನಲ್ಲಿ ಐಸ್ ಕಟ್ಟೋ ಸಮಸ್ಯೆಗೆ ಸಿಗುತ್ತೆ ಪರಿಹಾರ]]></title>
            <link>https://kannada.asianetnews.com/gallery/food/simple-paper-trick-to-fix-freezer-frost-and-ice-buildup-in-5-minutes-t5mllys</link>
            <guid isPermaLink="true">https://kannada.asianetnews.com/gallery/food/simple-paper-trick-to-fix-freezer-frost-and-ice-buildup-in-5-minutes-t5mllys</guid>
            <pubDate>Sat, 19 Sep 2026 14:38:09 +0530</pubDate>
            <description><![CDATA[&lt;p&gt;How to stop freezer frost: ಫ್ರಿಡ್ಜ್ ಫ್ರೀಜರ್&zwnj;ನಲ್ಲಿ ಇಟ್ಟ ಆಹಾರಗಳೆಲ್ಲಾ ಕಲ್ಲಿನಂತಹ ಮಂಜುಗಡ್ಡೆಯೊಳಗೆ ಸಿಲುಕಿ ಕಿರಿಕಿರಿ ಉಂಟುಮಾಡುತ್ತಿದ್ಯಾ? ಚಾಕುವಿನಿಂದ ಐಸ್ ಕೆರೆಯುವ ಮುನ್ನ ಸಮಸ್ಯೆ ಏಕೆ ಬರುತ್ತದೆ? ಕೇವಲ 5 ನಿಮಿಷದಲ್ಲಿ ಮೆಕ್ಯಾನಿಕ್ ಇಲ್ಲದೆ ಇದನ್ನು ಹೇಗೆ ಪರಿಹರಿಸಬಹುದೆಂದು ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2wecb0fkrb9tw2dyy5j3c50,imgname-thumbnail--15--1789808487438.png" type="image/jpeg" height="390" width="690"/>
            <content:encoded><![CDATA[&lt;p&gt;How to stop freezer frost: ಫ್ರಿಡ್ಜ್ ಫ್ರೀಜರ್&zwnj;ನಲ್ಲಿ ಇಟ್ಟ ಆಹಾರಗಳೆಲ್ಲಾ ಕಲ್ಲಿನಂತಹ ಮಂಜುಗಡ್ಡೆಯೊಳಗೆ ಸಿಲುಕಿ ಕಿರಿಕಿರಿ ಉಂಟುಮಾಡುತ್ತಿದ್ಯಾ? ಚಾಕುವಿನಿಂದ ಐಸ್ ಕೆರೆಯುವ ಮುನ್ನ ಸಮಸ್ಯೆ ಏಕೆ ಬರುತ್ತದೆ? ಕೇವಲ 5 ನಿಮಿಷದಲ್ಲಿ ಮೆಕ್ಯಾನಿಕ್ ಇಲ್ಲದೆ ಇದನ್ನು ಹೇಗೆ ಪರಿಹರಿಸಬಹುದೆಂದು ತಿಳಿಯೋಣ.&lt;/p&gt;&lt;img&gt;&lt;p&gt;&lt;strong&gt;ಕೇವಲ 5 ನಿಮಿಷದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ&lt;/strong&gt;ಫ್ರಿಡ್ಜ್&zwnj;ನ ಫ್ರೀಜರ್ ಬಾಗಿಲು ತೆರೆದಾಗ ಆಹಾರ ಪದಾರ್ಥಗಳೆಲ್ಲಾ ದಪ್ಪನೆಯ ಮಂಜುಗಡ್ಡೆಯೊಳಗೆ (Ice Frost) ಸಿಕ್ಕಿಹಾಕಿಕೊಂಡಿರುವುದನ್ನು ನೋಡುವುದು ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಫ್ರೀಜರ್ ತಳಭಾಗದಲ್ಲಂತೂ ಕಲ್ಲಿನಂತಹ ದಪ್ಪ ಐಸ್ ಶೀಟ್ ಜಮೆಯಾಗಿರುತ್ತದೆ. ಚಾಕು ಅಥವಾ ಚಮಚದಿಂದ ಆ ಐಸ್ ಕೆರೆಯಲು ಹೋಗಿ ಫ್ರಿಡ್ಜ್ ಹಾಳುಮಾಡಿಕೊಳ್ಳುವ ಬದಲು, ಯಾವುದೇ ಮೆಕ್ಯಾನಿಕ್ ನೆರವಿಲ್ಲದೆ ಕೇವಲ 5 ನಿಮಿಷದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.&lt;/p&gt;&lt;img&gt;&lt;p&gt;&lt;strong&gt;ಫ್ರೀಜರ್&zwnj;ನಲ್ಲಿ ಅತಿಯಾಗಿ ಐಸ್ ಕಟ್ಟಲು ಕಾರಣವೇನು?&lt;/strong&gt;&lt;strong&gt;ಹೊರಗಿನ ಬಿಸಿ ಗಾಳಿ ಒಳಹೋಗುವುದು: &lt;/strong&gt;ಕೋಣೆಯ ಬೆಚ್ಚನೆಯ ಮತ್ತು ತೇವಾಂಶವುಳ್ಳ ಗಾಳಿ ಫ್ರೀಜರ್&zwnj;ನೊಳಗಿನ ಶೀತ ವಾತಾವರಣಕ್ಕೆ ತಾಗಿದಾಗ ತಕ್ಷಣವೇ ಮಂಜುಗಡ್ಡೆಯಾಗಿ (ಐಸ್ ಕ್ರಿಸ್ಟಲ್ಸ್) ಮಾರ್ಪಡುತ್ತದೆ.&lt;/p&gt;&lt;p&gt;&lt;strong&gt;ಬಾಗಿಲಿನ ರಬ್ಬರ್ ಗ್ಯಾಸ್ಕೆಟ್ ಹಾಳಾಗಿರುವುದು: &lt;/strong&gt;ಫ್ರಿಡ್ಜ್ ಬಾಗಿಲಿನ ರಬ್ಬರ್ ಸಡಿಲವಾಗಿದ್ದರೆ ಅಥವಾ ಕೊಳಕಾಗಿದ್ದರೆ, ಹೊರಗಿನ ಗಾಳಿ ಸದಾ ಒಳಗೆ ಹೋಗುತ್ತಿರುತ್ತದೆ. ಇದರಿಂದ ಕೆಲವೇ ಗಂಟೆಗಳಲ್ಲಿ ಇಡೀ ಫ್ರೀಜರ್ ತುಂಬಾ ಬಿಳಿ ಹಿಮದಂತೆ ಐಸ್ ತುಂಬಿಕೊಳ್ಳುತ್ತದೆ.&lt;/p&gt;&lt;p&gt;&lt;strong&gt;ಬಿಸಿ ಆಹಾರವನ್ನು ಇಡುವುದು: &lt;/strong&gt;ಬಿಸಿಯಾದ ಆಹಾರವನ್ನು ತಣ್ಣಗಾಗಿಸದೆ ನೇರವಾಗಿ ಫ್ರೀಜರ್&zwnj;ನಲ್ಲಿಟ್ಟರೆ, ಅದರಿಂದ ಬರುವ ಹಬೆಯು (Steam) ತಕ್ಷಣವೇ ಮಂಜುಗಡ್ಡೆಯಾಗಿ ಬದಲಾಗುತ್ತದೆ.&lt;/p&gt;&lt;p&gt;&lt;strong&gt;ಸಾಮಗ್ರಿಗಳನ್ನು ಅತಿಯಾಗಿ ತುಂಬುವುದು: &lt;/strong&gt;ಸಾಮಗ್ರಿಗಳನ್ನು ಹಿಂಭಾಗದ ಗಾಳಿಯಾಡುವ ರಂಧ್ರಗಳಿಗೆ (Air Vents) ತಾಗಿಸಿ ಇಟ್ಟಾಗ, ತಣ್ಣನೆಯ ಗಾಳಿಯ ಸಂಚಾರಕ್ಕೆ ಅಡ್ಡಿಯಾಗಿ ತೇವಾಂಶವು ಒಂದೇ ಕಡೆ ಜಮೆಯಾಗಿ ಐಸ್ ಆಗುತ್ತದೆ.&lt;/p&gt;&lt;p&gt;&lt;strong&gt;ಡಿಫ್ರಾಸ್ಟ್ ಡ್ರೈನ್ (Drain) ಬ್ಲಾಕ್ ಆಗುವುದು: &lt;/strong&gt;ಮಾಡರ್ನ್ ಫ್ರಿಡ್ಜ್&zwnj;ಗಳಲ್ಲಿ ಐಸ್ ಕರಗಿದ ನೀರು ಹೊರಹೋಗಲು ಹಿಂಭಾಗದಲ್ಲಿ ಸಣ್ಣ ರಂಧ್ರವಿರುತ್ತದೆ. ಆ ರಂಧ್ರದಲ್ಲಿ ಧೂಳು ಅಥವಾ ಆಹಾರದ ಕಣಗಳು ಸಿಲುಕಿ ಬ್ಲಾಕ್ ಆದರೆ, ನೀರು ಹೊರಹೋಗದೆ ಫ್ರೀಜರ್ ತಳಭಾಗದಲ್ಲೇ ನಿಂತು ಕಲ್ಲಿನಂತಹ ಗಟ್ಟಿ ಐಸ್ ಆಗುತ್ತದೆ.&lt;/p&gt;&lt;img&gt;&lt;p&gt;&lt;strong&gt;5 ನಿಮಿಷದಲ್ಲಿ ಇದನ್ನು ಸರಿಪಡಿಸುವುದು ಹೇಗೆ?&lt;/strong&gt;&lt;strong&gt;1. 'ಕರೆನ್ಸಿ ನೋಟ್' ಟ್ರಿಕ್ (Dollar Bill Test)&lt;/strong&gt;ಫ್ರಿಡ್ಜ್ ಬಾಗಿಲು ಮುಚ್ಚುವಾಗ ಒಂದು ಕಾಗದ ಅಥವಾ ಕರೆನ್ಸಿ ನೋಟನ್ನು ಬಾಗಿಲಿನ ಮಧ್ಯೆ ಸಿಕ್ಕಿಸಿ ಮುಚ್ಚಿ. ನಂತರ ಆ ನೋಟನ್ನು ಎಳೆದು ನೋಡಿ. ನೋಟು ಯಾವುದೇ ಪ್ರತಿರೋಧವಿಲ್ಲದೆ ಸುಲಭವಾಗಿ ಹೊರಬಂದರೆ, ನಿಮ್ಮ ಫ್ರಿಡ್ಜ್&zwnj;ನ ರಬ್ಬರ್ ಗ್ಯಾಸ್ಕೆಟ್ ಸಡಿಲವಾಗಿದೆ ಎಂದರ್ಥ. ಅದನ್ನು ಬಿಸಿನೀರಿನಿಂದ ಒರೆಸಿ ಸ್ವಚ್ಛಗೊಳಿಸಿ ಅಥವಾ ಬದಲಾಯಿಸಿ.&lt;/p&gt;&lt;p&gt;&lt;strong&gt;2. ಬಿಸಿ ಪದಾರ್ಥಗಳನ್ನು ಎಂದಿಗೂ ಇಡಬೇಡಿ&lt;/strong&gt;ಯಾವುದೇ ಬಿಸಿ ಅಡುಗೆಯನ್ನು ಕೌಂಟರ್&zwnj;ಟಾಪ್ ಮೇಲೆ ಇಟ್ಟು ರೂಮ್ ಟೆಂಪರೇಚರ್&zwnj;ಗೆ ತಣ್ಣಗಾದ ಮೇಲೆಯೇ ಫ್ರೀಜರ್&zwnj;ನಲ್ಲಿಡಿ.&lt;/p&gt;&lt;p&gt;&lt;strong&gt;3. ಗಾಳಿಯಾಡುವ ರಂಧ್ರಗಳನ್ನು ಮುಚ್ಚಬೇಡಿ&lt;/strong&gt;ಫ್ರೀಜರ್ ಅನ್ನು ಸಂಪೂರ್ಣವಾಗಿ ಮುಕ್ಕಾಲು ಭಾಗ (75%) ಮಾತ್ರ ತುಂಬಿಸಿ. ಹಿಂಭಾಗದ ಏರ್ ವೆಂಟ್ಸ್&zwnj;ಗಳಿಂದ ಕನಿಷ್ಠ 2 ಇಂಚು ದೂರದಲ್ಲಿ ಬಾಕ್ಸ್&zwnj;ಗಳನ್ನು ಇಡಿ.&lt;/p&gt;&lt;p&gt;&lt;strong&gt;4. ಡ್ರೈನ್ ಹೋಲ್&zwnj;ಗೆ ಬಿಸಿನೀರು ಸುರಿಯಿರಿ&lt;/strong&gt;ಫ್ರೀಜರ್ ತಳದಲ್ಲಿ ಪದೇ ಪದೇ ಐಸ್ ಶೀಟ್ ಆಗುತ್ತಿದ್ದರೆ, ಫ್ರಿಡ್ಜ್ ಅನ್&zwnj;ಪ್ಲಗ್ ಮಾಡಿ. ಹಿಂಭಾಗದಲ್ಲಿರುವ ಸಣ್ಣ ರಂಧ್ರಕ್ಕೆ (Drain hole) ಒಂದು ಬಾಟಲ್&zwnj;ನಿಂದ ಸ್ವಲ್ಪ ಬಿಸಿನೀರನ್ನು ಒತ್ತಡದಿಂದ ಸುರಿಯಿರಿ. ಇದರಿಂದ ಪೈಪ್&zwnj;ನಲ್ಲಿ ಸಿಲುಕಿರುವ ಕೊಳೆ ಮತ್ತು ಐಸ್ ಕರಗಿ ನೀರು ಸರಾಗವಾಗಿ ಹೊರಹೋಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಮೆಕ್ಯಾನಿಕ್ ಅನ್ನು ಯಾವಾಗ ಕರೆಯಬೇಕು?&lt;/strong&gt;ಈ ಎಲ್ಲಾ ಟ್ರಿಕ್ಸ್ ಫಾಲೋ ಮಾಡಿದ ಮೇಲೂ ಮತ್ತೆ ಮತ್ತೆ ಐಸ್ ಕಟ್ಟುತ್ತಿದ್ದರೆ, ಫ್ರಿಡ್ಜ್&zwnj;ನ ಆಟೋಮ್ಯಾಟಿಕ್ ಡಿಫ್ರಾಸ್ಟ್ ಟೈಮರ್ ಅಥವಾ ಹೀಟಿಂಗ್ ಎಲಿಮೆಂಟ್ ಹಾಳಾಗಿರಬಹುದು. ಆಗ ಮಾತ್ರ ತಜ್ಞ ಟೆಕ್ನಿಷಿಯನ್ ಅನ್ನು ಕರೆಸಿ ದುರಸ್ತಿ ಮಾಡಿಸಿ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/simple-paper-trick-to-fix-freezer-frost-and-ice-buildup-in-5-minutes-t5mllys"/>
        </item>
        <item>
            <title><![CDATA[Animal Facts: ಈ ಹಂದಿಗಳು ಜೀವನದಲ್ಲಿ ಒಮ್ಮೆಯೂ ತಲೆ ಮೇಲಕ್ಕೆತ್ತಿ ಆಕಾಶ ನೋಡಲ್ಲ! ಏಕೆ ಗೊತ್ತಾ?]]></title>
            <link>https://kannada.asianetnews.com/gallery/life/why-can-pigs-not-look-up-at-the-sky-amazing-animal-facts-explained-sat-vs8kskk</link>
            <guid isPermaLink="true">https://kannada.asianetnews.com/gallery/life/why-can-pigs-not-look-up-at-the-sky-amazing-animal-facts-explained-sat-vs8kskk</guid>
            <pubDate>Sat, 19 Sep 2026 13:35:08 +0530</pubDate>
            <description><![CDATA[&lt;p&gt;ಹಂದಿಗಳು ಮನುಷ್ಯರಂತೆ ಅಥವಾ ಇತರೆ ಪ್ರಾಣಿಗಳಂತೆ ಜೀವನದಲ್ಲಿ ಒಮ್ಮೆಯೂ ತಲೆ ಎತ್ತಿ ಆಕಾಶ ನೋಡೋಕೆ ಆಗಲ್ಲ... ಯಾಕೆ ಗೊತ್ತಾ? ಹಂದಿಗಳ ದೇಹ ರಚನೆ ಮತ್ತು ಅವುಗಳ ದೃಷ್ಟಿಯ ಹಿಂದಿರುವ ಇಂಟರೆಸ್ಟಿಂಗ್ ವಿಚಾರಗಳನ್ನು ಇಲ್ಲಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sh8mc2afz7rqbsz262mpd5,imgname-pig-1789710848386.png" type="image/jpeg" height="390" width="690"/>
            <content:encoded><![CDATA[&lt;p&gt;ಹಂದಿಗಳು ಮನುಷ್ಯರಂತೆ ಅಥವಾ ಇತರೆ ಪ್ರಾಣಿಗಳಂತೆ ಜೀವನದಲ್ಲಿ ಒಮ್ಮೆಯೂ ತಲೆ ಎತ್ತಿ ಆಕಾಶ ನೋಡೋಕೆ ಆಗಲ್ಲ... ಯಾಕೆ ಗೊತ್ತಾ? ಹಂದಿಗಳ ದೇಹ ರಚನೆ ಮತ್ತು ಅವುಗಳ ದೃಷ್ಟಿಯ ಹಿಂದಿರುವ ಇಂಟರೆಸ್ಟಿಂಗ್ ವಿಚಾರಗಳನ್ನು ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;ಪ್ರಾಣಿ ಪ್ರಪಂಚದಲ್ಲಿ ಸಾಕಷ್ಟು ಅಚ್ಚರಿಗಳಿವೆ. ಹಸುಗಳು ಹಸಿರು ಹುಲ್ಲು ತಿಂದು ಬಿಳಿ ಹಾಲು ಕೊಡುತ್ತವೆ, ಹಾವಿನ ವಿಷಕ್ಕೆ ಕುದುರೆಗಳಿಂದ ಮದ್ದು ತಯಾರಿಸುತ್ತಾರೆ, ಕಪ್ಪೆಗಳು ಊಟ, ನೀರಿಲ್ಲದೆ ತಿಂಗಳುಗಟ್ಟಲೆ ಬದುಕುತ್ತವೆ. ಅದೇ ರೀತಿ ಒಂದು ಪ್ರಾಣಿ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಆಕಾಶ ನೋಡುವುದಿಲ್ಲ. ಅದರ ಕಣ್ಣುಗಳು ಯಾವಾಗಲೂ ನೆಲದ ಕಡೆಗೇ ಇರುತ್ತವೆ. ಇದೇನೋ ಕಾಡುಪ್ರಾಣಿ ಇರಬೇಕು ಅಂದುಕೊಂಡ್ರಾ? ಖಂಡಿತ ಅಲ್ಲ. ಇದು ನಮ್ಮ ಸುತ್ತಮುತ್ತಲೇ ಕಾಣಸಿಗುವ ಪ್ರಾಣಿ. ಅದು ಯಾವುದು ಮತ್ತು ಅದಕ್ಕೆ ಆಕಾಶ ನೋಡೋಕೆ ಯಾಕೆ ಆಗಲ್ಲ ಅಂತ ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;ಹಂದಿಗಳ ಬಗ್ಗೆ ನಮಗೆ ಬಾಲ್ಯದಿಂದಲೂ ಗೊತ್ತು. ಹಂದಿಗಳು ಸಾಮಾನ್ಯವಾಗಿ ನೆಲದ ಮೇಲೆ ಓಡಾಡಿಕೊಂಡು ಆಹಾರ ಹುಡುಕುತ್ತವೆ. ಅವು ಮೂಗಿನಿಂದ ನೆಲ ಅಗೆಯುತ್ತಾ, ವಾಸನೆ ಹಿಡಿಯುತ್ತಾ ಆಹಾರ ಪತ್ತೆ ಮಾಡುತ್ತವೆ. ಆದರೆ ಹಂದಿಗಳ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಚಾರ ಬಹಳ ಜನರಿಗೆ ಗೊತ್ತಿಲ್ಲ. ಹಂದಿಗಳು ನೇರವಾಗಿ ಆಕಾಶವನ್ನು ನೋಡಲು ಸಾಧ್ಯವೇ ಇಲ್ಲ. ಹಂದಿಗಳು ಕೇವಲ ನೆಲವನ್ನು ಮತ್ತು ನೇರವಾಗಿ ಮುಂದಿರುವ ವಸ್ತುಗಳನ್ನು ಮಾತ್ರ ನೋಡಬಲ್ಲವು. ಅವುಗಳ ತಲೆಯ ಎರಡೂ ಬದಿಯಲ್ಲಿ ಕಣ್ಣುಗಳಿರುವುದರಿಂದ ಸುತ್ತಮುತ್ತಲಿನ ದೃಶ್ಯಗಳನ್ನು ನೋಡುತ್ತವೆ. ಆದರೆ ಮನುಷ್ಯರ ಹಾಗೆ ತಲೆ ಎತ್ತಿ ಆಕಾಶ ನೋಡಲು ಅವುಗಳಿಗೆ ಆಗುವುದಿಲ್ಲ.&lt;/p&gt;&lt;p&gt;ಇದಕ್ಕೆ ಹಂದಿಗಳ ಕುತ್ತಿಗೆ ಮತ್ತು ಬೆನ್ನುಮೂಳೆಯ ರಚನೆಯೇ ಮುಖ್ಯ ಕಾರಣ. ಹಂದಿಗಳ ಕುತ್ತಿಗೆ ಮನುಷ್ಯರ ಕುತ್ತಿಗೆಯಂತೆ ಎಲ್ಲಾ ಕಡೆ ಸುಲಭವಾಗಿ ತಿರುಗುವುದಿಲ್ಲ. ಅವುಗಳ ಕುತ್ತಿಗೆಯ ಸ್ನಾಯುಗಳು ಮತ್ತು ಮೂಳೆಗಳು ತುಂಬಾ ಗಟ್ಟಿಯಾಗಿರುತ್ತವೆ. ತಲೆಯನ್ನು ಹಿಂದಕ್ಕೆ ಬಗ್ಗಿಸುವ ಸಾಮರ್ಥ್ಯ ಅವುಗಳಿಗೆ ಇರುವುದಿಲ್ಲ. ಹಾಗಾಗಿ ನೆಲದಲ್ಲಿ ಬೇರುಗಳು ಮತ್ತು ಗೆಡ್ಡೆಗಳನ್ನು ಹುಡುಕುವಾಗ ಅವುಗಳ ತಲೆ ಕೆಳಗಿರುವುದು ಸಹಜ. ಆದರೆ ತಲೆಯನ್ನು ಸಂಪೂರ್ಣವಾಗಿ ಮೇಲಕ್ಕೆತ್ತಿ ಆಕಾಶ ನೋಡುವುದು ಮಾತ್ರ ಅವುಗಳಿಗೆ ಸಾಧ್ಯವಿಲ್ಲ.&lt;/p&gt;&lt;img&gt;&lt;p&gt;ಹಂದಿಗಳ ದೇಹದ ಆಕಾರ ಗಮನಿಸಿದರೆ, ಅವುಗಳ ತಲೆ, ಕುತ್ತಿಗೆ ಮತ್ತು ಭುಜದ ರಚನೆ ಮನುಷ್ಯರಿಗಿಂತ ತುಂಬಾನೇ ಭಿನ್ನವಾಗಿರುತ್ತದೆ. ಅವುಗಳ ದೇಹ ಭಾರವಾಗಿರುವುದರಿಂದ ಮತ್ತು ಕುತ್ತಿಗೆಯ ಚಲನೆ ಸೀಮಿತವಾಗಿರುವುದರಿಂದ ತಲೆಯನ್ನು ಹಿಂದಕ್ಕೆ ಬಗ್ಗಿಸುವುದು ಕಷ್ಟ. ಹಂದಿಗಳು ಹೆಚ್ಚಾಗಿ ನೆಲದ ಮೇಲೆಯೇ ಆಹಾರ ಹುಡುಕುತ್ತವೆ. ಇವು ಗೆಡ್ಡೆಗಳು ಮತ್ತು ಬೇರುಗಳನ್ನು ಹೆಚ್ಚು ತಿನ್ನುತ್ತವೆ. ಅವುಗಳ ಮೂಗು ತುಂಬಾ ಸೂಕ್ಷ್ಮವಾಗಿರುವುದರಿಂದ, ನೆಲವನ್ನು ಮೂಸಿನೋಡುತ್ತಾ ಆಹಾರ ಪತ್ತೆ ಮಾಡುವುದು ಅವುಗಳ ಸಹಜ ಗುಣ. ಇದೇ ಕಾರಣಕ್ಕೆ ಅವುಗಳ ತಲೆ ಹೆಚ್ಚಿನ ಸಮಯ ನೆಲದ ಕಡೆಗೇ ಬಾಗಿರುತ್ತದೆ.&lt;/p&gt;&lt;img&gt;&lt;p&gt;ಹಂದಿಗಳ ಜೀವನಶೈಲಿಯಲ್ಲಿ ನೆಲದ ಜೊತೆಗಿನ ನಂಟು ಬಹಳ ಹೆಚ್ಚು. ಆಹಾರಕ್ಕಾಗಿ ಮೂಗಿನಿಂದ ನೆಲ ಅಗೆಯುವುದು, ವಾಸನೆ ಮೂಲಕ ಆಹಾರ ಅಥವಾ ಇತರ ವಸ್ತುಗಳನ್ನು ಪತ್ತೆ ಮಾಡುವುದು ಅವುಗಳ ಸಹಜ ಲಕ್ಷಣ. ಹಾಗಾಗಿ ಅವುಗಳ ತಲೆ ಹೆಚ್ಚಾಗಿ ಕೆಳಗೆ ಬಾಗಿರುತ್ತದೆ. ಈ ಕಾರಣಕ್ಕಾಗಿಯೇ ಹಂದಿಗಳನ್ನು ನೋಡಿದಾಗ ಅವು ಯಾವಾಗಲೂ ನೆಲವನ್ನೇ ನೋಡುತ್ತಿರುವಂತೆ ನಮಗೆ ಅನಿಸುತ್ತದೆ.&lt;/p&gt;&lt;p&gt;ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಾಣಿಯೂ ತನ್ನ ಜೀವನಶೈಲಿಗೆ ತಕ್ಕಂತೆ ವಿಶೇಷವಾದ ದೇಹ ರಚನೆ ಹೊಂದಿರುತ್ತದೆ. ಹಂದಿಗಳ ವಿಚಾರದಲ್ಲೂ ಅವುಗಳ ಬಲವಾದ ದೇಹ, ವಿಶೇಷವಾದ ಕುತ್ತಿಗೆಯ ರಚನೆ ಮತ್ತು ಮೂಗಿನಿಂದ ಆಹಾರ ಹುಡುಕುವ ಅಭ್ಯಾಸವು ಅವುಗಳ ಚಲನವಲನಗಳನ್ನು ನಿರ್ಧರಿಸುತ್ತವೆ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/life/why-can-pigs-not-look-up-at-the-sky-amazing-animal-facts-explained-sat-vs8kskk"/>
        </item>
        <item>
            <title><![CDATA[ಮಸಾಲೆ ರುಬ್ಬದೇ 10 ನಿಮಿಷದಲ್ಲಿ ಮಾಡಿ ಹೋಟೆಲ್ ಶೈಲಿಯ ರುಚಿಯಾದ ಚಿಕನ್ ಗ್ರೇವಿ!]]></title>
            <link>https://kannada.asianetnews.com/webstories/food/10-minute-chicken-recipe-without-grinding-masala-hotel-style-taste-at-home-sat-w2dcgpt</link>
            <guid isPermaLink="true">https://kannada.asianetnews.com/webstories/food/10-minute-chicken-recipe-without-grinding-masala-hotel-style-taste-at-home-sat-w2dcgpt</guid>
            <pubDate>Sat, 19 Sep 2026 13:24:20 +0530</pubDate>
            <description><![CDATA[&lt;p&gt;ಮಸಾಲೆ ರುಬ್ಬುವ ಅಗತ್ಯವಿಲ್ಲದೆ ಕೇವಲ 10 ನಿಮಿಷಗಳಲ್ಲಿ ಹೋಟೆಲ್ ಶೈಲಿಯ ರುಚಿಯಾದ ಚಿಕನ್ ಗ್ರೇವಿ ಮಾಡುವ ಸರಳ ವಿಧಾನ ಇದಾಗಿದೆ. ಕುಕ್ಕರ್&zwnj;ನಲ್ಲಿ ಈರುಳ್ಳಿ, ಟೊಮೆಟೊ ಮತ್ತು ಮಸಾಲೆ ಪುಡಿಗಳೊಂದಿಗೆ ಚಿಕನ್ ಸೇರಿಸಿ ಎರಡು ವಿಸಿಲ್ ಕೂಗಿಸಿದರೆ ಬಿಸಿಬಿಸಿಯಾದ ಗ್ರೇವಿ ಸಿದ್ಧವಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2w8vajc5waga0hvgn8tthea,imgname-chicken-recipe--5--1789802687052.png" type="image/jpeg" height="390" width="690"/>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/food/10-minute-chicken-recipe-without-grinding-masala-hotel-style-taste-at-home-sat-w2dcgpt"/>
        </item>
        <item>
            <title><![CDATA[ಮೂತ್ರದಲ್ಲಿ ನೊರೆ, ವಿಪರೀತ ಆಯಾಸ.. ಕಿಡ್ನಿ ಹಾಳಾಗ್ತಿದೆ ಅನ್ನೋದನ್ನು ಈ 10 ಲಕ್ಷಣಗಳು ಹೇಳುತ್ತವೆ; ಆರಂಭದಲ್ಲೇ ಎಚ್ಚರ!]]></title>
            <link>https://kannada.asianetnews.com/gallery/health-life/kidney-failure-symptoms-10-warning-signs-you-should-never-ignore-kvn-f33ggco</link>
            <guid isPermaLink="true">https://kannada.asianetnews.com/gallery/health-life/kidney-failure-symptoms-10-warning-signs-you-should-never-ignore-kvn-f33ggco</guid>
            <pubDate>Sat, 19 Sep 2026 12:45:57 +0530</pubDate>
            <description><![CDATA[&lt;p&gt;ರಕ್ತದಲ್ಲಿರುವ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡುವ ಸಾಮರ್ಥ್ಯವನ್ನು ಕಿಡ್ನಿಗಳು ಕಳೆದುಕೊಳ್ಳುವುದೇ ಕಿಡ್ನಿ ವೈಫಲ್ಯ. ಇದು ಅತ್ಯಂತ ಗಂಭೀರವಾದ ಆರೋಗ್ಯ ಸಮಸ್ಯೆ. ಕಿಡ್ನಿ ಫೇಲ್ಯೂರ್ ತಿಳಿಯೋದು ಹೇಗೆ? ಆರಂಭಿಕ ಲಕ್ಷಣಗಳೇನು ಎನ್ನುವುದನ್ನು ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9kg6z8mtw8844ak2p17mhf1,imgname-138-million-indians-living-with-kidney-disease-1762664873236.jpg" type="image/jpeg" height="390" width="690"/>
            <content:encoded><![CDATA[&lt;p&gt;ರಕ್ತದಲ್ಲಿರುವ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡುವ ಸಾಮರ್ಥ್ಯವನ್ನು ಕಿಡ್ನಿಗಳು ಕಳೆದುಕೊಳ್ಳುವುದೇ ಕಿಡ್ನಿ ವೈಫಲ್ಯ. ಇದು ಅತ್ಯಂತ ಗಂಭೀರವಾದ ಆರೋಗ್ಯ ಸಮಸ್ಯೆ. ಕಿಡ್ನಿ ಫೇಲ್ಯೂರ್ ತಿಳಿಯೋದು ಹೇಗೆ? ಆರಂಭಿಕ ಲಕ್ಷಣಗಳೇನು ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ವಿಶ್ವದಾದ್ಯಂತ ಲಕ್ಷಾಂತರ ಜನರು ದೀರ್ಘಕಾಲದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ರಕ್ತದಲ್ಲಿನ ತ್ಯಾಜ್ಯವನ್ನು ಹೊರಹಾಕುವ ಶಕ್ತಿಯನ್ನು ಕಿಡ್ನಿ ಕಳೆದುಕೊಳ್ಳುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಇದು ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ಕಿಡ್ನಿ ವೈಫಲ್ಯದ ಲಕ್ಷಣಗಳು ಆರಂಭದಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಗಂಭೀರ ಹಂತ ತಲುಪಿದ ಮೇಲೆಯೇ ಇದು ಗೊತ್ತಾಗುವುದು. ಹೀಗಾಗಿ ಆರಂಭಿಕ ಲಕ್ಷಣಗಳನ್ನು ಗುರುತಿಸಿ, ಜೀವನಶೈಲಿ ಬದಲಾಯಿಸಿಕೊಂಡರೆ ಕಿಡ್ನಿ ವೈಫಲ್ಯವನ್ನು ತಡೆಯಬಹುದು. ನೀವು ನಿರ್ಲಕ್ಷ್ಯ ಮಾಡಬಾರದ ಲಕ್ಷಣಗಳು ಇಲ್ಲಿವೆ.&lt;/p&gt;&lt;p&gt;ಕಿಡ್ನಿ ಕೆಲಸ ಮಾಡುವುದು ನಿಲ್ಲಿಸಿದಾಗ ದೇಹದಲ್ಲಿ ತ್ಯಾಜ್ಯಗಳು ಸೇರಿಕೊಳ್ಳುತ್ತವೆ. ಇದು ರಕ್ತಹೀನತೆಗೆ ಕಾರಣವಾಗುತ್ತದೆ. ಇದರಿಂದಾಗಿ ನಿಮಗೆ ವಿಪರೀತ ಆಯಾಸ, ತಲೆತಿರುಗುವಿಕೆ ಮತ್ತು ಸುಸ್ತು ಕಾಣಿಸಿಕೊಳ್ಳುತ್ತದೆ. ದೈನಂದಿನ ಕೆಲಸಗಳನ್ನು ಮಾಡಲು ಕಷ್ಟವಾಗುತ್ತದೆ.&lt;/p&gt;&lt;img&gt;&lt;p&gt;ರಕ್ತದಲ್ಲಿ ವಿಷಕಾರಿ ಅಂಶಗಳು ಹೆಚ್ಚಾದಾಗ ನಿರಂತರವಾಗಿ ವಾಕರಿಕೆ ಮತ್ತು ವಾಂತಿ ಶುರುವಾಗುತ್ತದೆ. ಇದರಿಂದ ಹಸಿವು ಕಡಿಮೆಯಾಗುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ಮತ್ತು ಶಕ್ತಿ ಸಿಗದೆ ನೀವು ಇನ್ನಷ್ಟು ದುರ್ಬಲರಾಗುತ್ತೀರಿ.&lt;/p&gt;&lt;p&gt;ಕಿಡ್ನಿ ವೈಫಲ್ಯದಿಂದಾಗಿ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತದೆ. ಇದರಿಂದ ಸಣ್ಣಪುಟ್ಟ ಕೆಲಸ ಮಾಡಿದರೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ರಕ್ತಹೀನತೆಯಿಂದ ಉಂಟಾಗುವ ಆಮ್ಲಜನಕದ ಕೊರತೆಯೂ ಈ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ.&lt;/p&gt;&lt;img&gt;&lt;p&gt;ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದಾಗ ದೇಹದಲ್ಲಿ ನೀರು ಶೇಖರಣೆಯಾಗುತ್ತದೆ. ಇದರಿಂದಾಗಿ ನಿಮ್ಮ ಪಾದ, ಕಣಕಾಲು ಮತ್ತು ಕೈಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಮುಖದ ಮೇಲೂ ಈ ಊತ ಬರಬಹುದು.&lt;/p&gt;&lt;p&gt;ಮೂತ್ರ ವಿಸರ್ಜನೆಯಲ್ಲಿ ಆಗುವ ಬದಲಾವಣೆಗಳು ಕಿಡ್ನಿ ಸಮಸ್ಯೆಯ ಪ್ರಮುಖ ಲಕ್ಷಣ. ಪದೇ ಪದೇ ಮೂತ್ರ ಬರುವುದು (ವಿಶೇಷವಾಗಿ ರಾತ್ರಿ), ಮೂತ್ರದ ಬಣ್ಣ ಕಡು ಆಗುವುದು, ನೊರೆ ಅಥವಾ ರಕ್ತ ಬರುವುದು ಇದರ ಲಕ್ಷಣಗಳು. ಸಾಕಷ್ಟು ನೀರು ಕುಡಿದರೂ ಮೂತ್ರ ಕಡಿಮೆ ಬರುವುದು ಕೂಡ ಅಪಾಯದ ಮುನ್ಸೂಚನೆ.&lt;/p&gt;&lt;img&gt;&lt;p&gt;ರಕ್ತದಲ್ಲಿನ ತ್ಯಾಜ್ಯವನ್ನು ತೆಗೆದುಹಾಕಲು ಕಿಡ್ನಿಗಳು ಸಹಾಯ ಮಾಡುತ್ತವೆ. ಅವುಗಳ ಕಾರ್ಯಚಟುವಟಿಕೆ ನಿಂತಾಗ ದೇಹದಲ್ಲಿ ವಿಷಕಾರಿ ಅಂಶಗಳು ಸೇರಿಕೊಳ್ಳುತ್ತವೆ. ಇದು ಚರ್ಮದಲ್ಲಿ ವಿಪರೀತ ಒಣಗುವಿಕೆ ಮತ್ತು ತುರಿಕೆಗೆ ಕಾರಣವಾಗುತ್ತದೆ.&lt;/p&gt;&lt;p&gt;ಕಿಡ್ನಿ ಕಾಯಿಲೆಯು ದೇಹದಲ್ಲಿನ ಎಲೆಕ್ಟ್ರೋಲೈಟ್ ಸಮತೋಲನವನ್ನು ಹಾಳುಮಾಡುತ್ತದೆ. ವಿಶೇಷವಾಗಿ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಮಟ್ಟದಲ್ಲಿ ಏರುಪೇರಾಗುತ್ತದೆ. ಇದರಿಂದಾಗಿ ವಿಪರೀತ ಸ್ನಾಯು ಸೆಳೆತ ಮತ್ತು ದೌರ್ಬಲ್ಯ ಉಂಟಾಗುತ್ತದೆ.&lt;/p&gt;&lt;img&gt;&lt;p&gt;ರಕ್ತದಲ್ಲಿರುವ ವಿಷಕಾರಿ ಅಂಶಗಳು ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತವೆ. ಇದರಿಂದ ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಗೊಂದಲ ಮತ್ತು ಏಕಾಗ್ರತೆಯ ಕೊರತೆ ಕಾಡುತ್ತದೆ. ಗಂಭೀರ ಪರಿಸ್ಥಿತಿಯಲ್ಲಿ ಇದು ಕೋಮಾಕ್ಕೂ ದಾರಿ ಮಾಡಿಕೊಡಬಹುದು.&lt;/p&gt;&lt;p&gt;ರಕ್ತದಲ್ಲಿ ತ್ಯಾಜ್ಯಗಳು ಅತಿಯಾಗಿ ಶೇಖರಣೆಯಾದಾಗ (ಯುರೇಮಿಯಾ) ಬಾಯಿಯಲ್ಲಿ ಕಬ್ಬಿಣದ ರುಚಿ ಬರುತ್ತದೆ. ಜೊತೆಗೆ ಬಾಯಿಯ ದುರ್ವಾಸನೆ ಮತ್ತು ಬಾಯಿಯಲ್ಲಿ ಹುಣ್ಣುಗಳು ಕೂಡ ಆಗಬಹುದು. ಇದು ನಿಮ್ಮ ಹಸಿವಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.&lt;/p&gt;&lt;p&gt;ಸೋಡಿಯಂ ಮತ್ತು ನೀರಿನ ಅಂಶವನ್ನು ಸಮತೋಲನದಲ್ಲಿಡುವ ಮೂಲಕ ಕಿಡ್ನಿಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಬಿಪಿ ಹೆಚ್ಚಾಗುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/health-life/kidney-failure-symptoms-10-warning-signs-you-should-never-ignore-kvn-f33ggco"/>
        </item>
        <item>
            <title><![CDATA[ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್​​ನ್ಯೂಸ್​: 33ನೇ ಕಂತಿನ ಹಣ ಬಿಡುಗಡೆ ಯಾವಾಗ? ಇಲ್ಲಿದೆ ವಿವರ]]></title>
            <link>https://kannada.asianetnews.com/karnataka-districts/good-news-for-gruhalakshmi-scheme-beneficiaries-33rd-installment-be-released-in-a-week-suc/articleshow-8qc1xq1</link>
            <guid isPermaLink="true">https://kannada.asianetnews.com/karnataka-districts/good-news-for-gruhalakshmi-scheme-beneficiaries-33rd-installment-be-released-in-a-week-suc/articleshow-8qc1xq1</guid>
            <pubDate>Sat, 19 Sep 2026 12:18:03 +0530</pubDate>
            <description><![CDATA[ಗೃಹಲಕ್ಷ್ಮಿ ಯೋಜನೆಯಡಿ ಹಣ ಸರಿಯಾಗಿ ಬರುತ್ತಿಲ್ಲ ಎಂಬ ಮಹಿಳೆಯರ ದೂರಿನ ನಡುವೆ ಸರ್ಕಾರ ಸಿಹಿಸುದ್ದಿ ನೀಡಿದೆ. ಇನ್ನೊಂದು ವಾರದಲ್ಲಿ 33ನೇ ಕಂತಿನ 2,000 ರೂ. ಹಣ ಫಲಾನುಭವಿಗಳ ಖಾತೆಗೆ ತಲುಪಲಿದೆ. ಇದರ ಜೊತೆಗೆ ರೇಷನ್ ಕಾರ್ಡ್ ಮತ್ತು ಇಂದಿರಾ ಕಿಟ್ ವಿತರಣೆ ಬಗ್ಗೆಯೂ ಮಹತ್ವದ ಮಾಹಿತಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksmy83hhvn93ye2ghwb54zs7,imgname-gruhalakshmi-1779893014065.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಪ್ರತಿ ತಿಂಗಳೂ 2 ಸಾವಿರ ರೂಪಾಯಿಗಳ ಹಣ ಸರಿಯಾಗಿ ಬರುತ್ತಿಲ್ಲ ಎನ್ನುವ ದೊಡ್ಡ ಆರೋಪವಿದೆ. ಕೆಲವೊಮ್ಮೆ 3-4 ತಿಂಗಳ ಹಣ ಒಟ್ಟಿಗೇ ಹಾಕುತ್ತಾರೆ, ಅದರಲ್ಲಿ ನಡುನಡುವೆ ಕೆಲವೊಂದು ತಿಂಗಳು ಮಿಸ್​ ಆಗಿಬಿಡುತ್ತದೆ ಎಂದು ಕೆಲವರು, ಪ್ರತಿ ತಿಂಗಳು ಕೆಲವರಿಗೆ ಮಾತ್ರ ಹಣ ಬರುತ್ತೆ, ಪಕ್ಕದ ಮನೆಗೆ ಬಂದರೂ, ನಮಗೆ ಬಂದೇ ಇಲ್ಲ ಎಂದು ಮತ್ತೆ ಕೆಲವರು... ಹೀಗೆ ಮಹಿಳೆಯರ ಗೋಳೋಟ ನಡೆದೇ ಇದೆ.&lt;/p&gt;&lt;p&gt;ಅದರ ನಡುವೆಯೇ, ಇದೀಗ ಸರ್ಕಾರ ಗೃಹಲಕ್ಷ್ಮಿ (Gruhalakshmi Scheme) ಫಲಾನುಭವಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದೆ. 33ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು, ಇನ್ನೊಂದು ವಾರದಲ್ಲಿ 33ನೇ ಕಂತಿನ 2000 ರೂ. ಹಣ ತಲುಪಲಿದೆ ಎಂದಿದ್ದಾರೆ. ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;1.24 ಕೋಟಿ ಮಹಿಳೆಯರಿಗೆ ಹಣ&lt;/strong&gt;&lt;/h2&gt;&lt;p&gt;ಗ್ಯಾರೆಂಟಿ ಯೋಜನೆ ಆರಂಭವಾದಾಗಿನಿಂದ ಅರ್ಥಾತ್​ ಕಳೆದ ಮೂರು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 1,48,454 ಕೋಟಿ ರೂ. ಹಣವನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯ ಅಡಿ 1.24 ಕೋಟಿ ಮಹಿಳೆಯರಿಗೆ 76,951.13 ಕೋಟಿ ರೂ. ನೀಡಿದಂತಾಗಿದೆ. ಇದರ ಅರ್ಥ ಪ್ರತಿ ಮಹಿಳೆಗೆ 64 ಸಾವಿರ ಹಣ ತಲುಪಿದೆ. ಗೃಹಜ್ಯೋತಿ ಯೋಜನೆಯಲ್ಲಿ 1.67 ಕೋಟಿ&zwnj; ಮನೆಗಳು ಉಚಿತ ವಿದ್ಯುತ್ ಪಡೆಯುತ್ತಿದ್ದು ಇದಕ್ಕಾಗಿ 28,759 ಕೋಟಿ ಹಣವನ್ನು ಸರ್ಕಾರ ವ್ಯಯಿಸಿದೆ. ಇನ್ನೊಂದು ವಾರದಲ್ಲಿ 33ನೇ ಕಂತಿನ 2000 ರೂ. ಹಣ ತಲುಪುವ ಮೂಲಕ 66 ಸಾವಿರ ಹಣ ತಲುಪಿದಂತಾಗಲಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;h3&gt;&lt;strong&gt;ರೇಷನ್​ ಕಾರ್ಡ್​ ಕುರಿತು ಮಾಹಿತಿ&lt;/strong&gt;&lt;/h3&gt;&lt;p&gt;ಇದೇ ವೇಳೆ ರೇಷನ್​ ಕಾರ್ಡ್​ ಕುರಿತ ಮಾಹಿತಿ ನೀಡಿದ ದಿನೇಶ್ ಗೂಳಿಗೌಡ ಅವರು, ರಾಜ್ಯದಲ್ಲಿ 1.48 ಕೋಟಿ ಲಕ್ಷ ರೇಷನ್​ ಕಾರ್ಡ್ ಫಲಾನುಭವಿಗಳು ಇದ್ದಾರೆ. ಇಲ್ಲಿಯವರೆಗೆ 4.5 ಕೋಟಿ ಸದಸ್ಯರಿಗೆ ಉಚಿತವಾಗಿ ಅಕ್ಕಿ ನೀಡಲಾಗಿದೆ. ಇದಕ್ಕಾಗಿ 19,845 ಕೋಟಿ ರೂ. ಹಣ ವೆಚ್ಚ ಮಾಡಲಾಗಿದೆ. ರಾಜ್ಯದ 24 ಸಾವಿರ ನ್ಯಾಯಬೆಲೆ ಅಂಗಡಿಗಳ ಮುಂದೆ ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಫೋಟೋ&zwnj; ಜೊತೆಗೆ ಸಮಯ ಮತ್ತು ಸ್ಟಾಕ್ ಬೋರ್ಡ್ ಫಲಕ ಹಾಕಬೇಕು. ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಬರಲಿದೆ. ಮುಂದಿನ ತಿಂಗಳ ವೇಳೆಗೆ ಇಂದಿರಾ ಕಿಟ್ ವಿತರಣೆ ಆಗಲಿದೆ ಎಂದು ಮಾಹಿತಿ ನೀಡಿದರು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/good-news-for-gruhalakshmi-scheme-beneficiaries-33rd-installment-be-released-in-a-week-suc/articleshow-8qc1xq1"/>
        </item>
        <item>
            <title><![CDATA[‘First Love is Best Love’ ಅನ್ನೋದು ಬರಿ ಮಾತಲ್ಲ; ಇದರ ಹಿಂದೆ ಇದೆ ಮನಸ್ಸಿನ ಕುತೂಹಲಕಾರಿ ರಹಸ್ಯ!]]></title>
            <link>https://kannada.asianetnews.com/relationship/why-do-people-say-first-love-is-the-best-love-here-is-the-psychology-behind-it/articleshow-4cmcp80</link>
            <guid isPermaLink="true">https://kannada.asianetnews.com/relationship/why-do-people-say-first-love-is-the-best-love-here-is-the-psychology-behind-it/articleshow-4cmcp80</guid>
            <pubDate>Sat, 19 Sep 2026 12:01:58 +0530</pubDate>
            <description><![CDATA[&lt;p&gt;ಮೊದಲ ಪ್ರೀತಿ ಏಕೆ ಅಷ್ಟು ವಿಶೇಷವಾಗಿ ನೆನಪಿನಲ್ಲಿ ಉಳಿಯುತ್ತದೆ? ಮೊದಲ ಬಾರಿಗೆ ಪ್ರೀತಿ, ಆಕರ್ಷಣೆ, ಉತ್ಸಾಹ, ನಿರೀಕ್ಷೆ ಸೇರಿದಂತೆ ಹಲವು ಭಾವನೆಗಳನ್ನು ಅನುಭವಿಸುವುದರಿಂದ ಆ ನೆನಪು ಗಾಢವಾಗಬಹುದು. ಭಾವನಾತ್ಮಕ ಘಟನೆಗಳು ಹೆಚ್ಚು ನೆನಪಾಗುವ ಸಾಧ್ಯತೆಯಿದೆ. ಆದರೆ ಮೊದಲ ಪ್ರೀತಿಯೇ ಜೀವನದ ಅತ್ಯುತ್ತಮ ಪ್ರೀತಿ ಎನ್ನುವುದು ಎಲ್ಲರಿಗೂ ಅನ್ವಯಿಸುವ ನಿಯಮವಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t08ffedcw66sw9k2xqtckz,imgname-first-love-is-best-love---psychology-behind-it--1--1789726572013.jpg" type="image/jpeg" height="390" width="690"/>
            <content:encoded><![CDATA[&lt;h2&gt;&lsquo;First Love is Best Love&rsquo; ಎನ್ನುವುದೇಕೆ?&lt;/h2&gt;&lt;p&gt;ಜೀವನದಲ್ಲಿ ಹಲವರು ತಮ್ಮ ಮೊದಲ ಪ್ರೀತಿಯನ್ನು ವಿಶೇಷವಾಗಿ ನೆನಪಿಸಿಕೊಳ್ಳುತ್ತಾರೆ. ಆ ವ್ಯಕ್ತಿ ಈಗ ಜೀವನದಲ್ಲಿ ಇಲ್ಲದಿದ್ದರೂ, ಮೊದಲ ಭೇಟಿಯ ದಿನ, ಮೊದಲ ಮಾತು, ಮೊದಲ ಮೆಸೇಜ್ ಅಥವಾ ಒಟ್ಟಿಗೆ ಕಳೆದ ಸಣ್ಣ ಸಣ್ಣ ಕ್ಷಣಗಳು ವರ್ಷಗಳ ನಂತರವೂ ನೆನಪಿಗೆ ಬರುತ್ತವೆ. ಹಾಗಾಗಿಯೇ &ldquo;First love is the best love&rdquo; ಎಂಬ ಮಾತು ಜನಪ್ರಿಯವಾಗಿದೆ.&lt;/p&gt;&lt;p&gt;ಆದರೆ ಮೊದಲ ಪ್ರೀತಿಯೇ ನಿಜವಾಗಿಯೂ ಅತ್ಯುತ್ತಮ ಪ್ರೀತಿ ಎನ್ನುವುದು ವೈಜ್ಞಾನಿಕ ನಿಯಮವಲ್ಲ. ಪ್ರತಿಯೊಬ್ಬರ ಅನುಭವವೂ ವಿಭಿನ್ನ. ಹಾಗಾದರೆ ಮೊದಲ ಪ್ರೀತಿ ಮಾತ್ರ ಏಕೆ ಇಷ್ಟು ಗಾಢವಾಗಿ ನೆನಪಿನಲ್ಲಿ ಉಳಿಯುತ್ತದೆ?&lt;/p&gt;&lt;h3&gt;ಮೊದಲ ಅನುಭವದ ವಿಶೇಷತೆ ಎಲ್ಲವೂ ಮೊದಲ ಬಾರಿಗೆ ಆಗಿರುತ್ತದೆ&lt;/h3&gt;&lt;p&gt;ಮೊದಲ ಪ್ರೀತಿಯಲ್ಲಿ ವ್ಯಕ್ತಿಯೊಬ್ಬರು ಪ್ರೀತಿ, ಆಕರ್ಷಣೆ, ಕಾಳಜಿ, ಅಸೂಯೆ, ನಿರೀಕ್ಷೆ, ಆತಂಕ ಸೇರಿದಂತೆ ಹಲವು ಹೊಸ ಭಾವನೆಗಳನ್ನು ಒಂದೇ ಸಮಯದಲ್ಲಿ ಅನುಭವಿಸಬಹುದು. ಇದು ಜೀವನದ ಮೊದಲ ದೊಡ್ಡ ಭಾವನಾತ್ಮಕ ಅನುಭವಗಳಲ್ಲಿ ಒಂದಾಗಿರುವುದರಿಂದ ಅದು ಹೆಚ್ಚು ಗಮನ ಸೆಳೆಯುತ್ತದೆ.&lt;/p&gt;&lt;p&gt;ಭಾವನೆಯ ತೀವ್ರತೆ ಹೆಚ್ಚಿದ್ದಷ್ಟೂ ಆ ಘಟನೆಗೆ ಸಂಬಂಧಿಸಿದ ನೆನಪು ಹೆಚ್ಚು ಗಾಢವಾಗಿ ಅನುಭವವಾಗಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ.&lt;/p&gt;&lt;h3&gt;ಆ ನೆನಪು ಏಕೆ ಮರೆಯಾಗುವುದಿಲ್ಲ?&lt;/h3&gt;&lt;p&gt;ಮೊದಲ ಪ್ರೀತಿಯ ಸಂದರ್ಭದಲ್ಲಿ ನಡೆದ ಘಟನೆಗಳನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಬಹುದು. ಸ್ನೇಹಿತರೊಂದಿಗೆ ಮಾತನಾಡುವುದು, ಹಳೆಯ ಫೋಟೋ ನೋಡುವುದು ಅಥವಾ ಆ ವ್ಯಕ್ತಿಯನ್ನು ನೆನಪಿಸುವ ಹಾಡು ಕೇಳುವುದು ಕೂಡ ಆ ನೆನಪುಗಳನ್ನು ಮನಸ್ಸಿನಲ್ಲಿ ಮತ್ತೆ ಸಕ್ರಿಯಗೊಳಿಸಬಹುದು.&lt;/p&gt;&lt;p&gt;ಇಂತಹ ಭಾವನಾತ್ಮಕ ಘಟನೆಗಳು ಸಾಮಾನ್ಯ ಘಟನೆಗಳಿಗಿಂತ ನಮ್ಮ ಮನಸ್ಸಿನಲ್ಲಿ ಹೆಚ್ಚು ಗಾಢವಾಗಿ ಉಳಿಯುತ್ತವೆ. ಅದಕ್ಕಾಗಿಯೇ ಅವುಗಳ ನೆನಪು ಹಲವು ವರ್ಷಗಳ ನಂತರವೂ ಸ್ಪಷ್ಟವಾಗಿ ನೆನಪಾಗಬಹುದು. ಆದರೆ ನೆನಪು ಸ್ಪಷ್ಟವಾಗಿ ಉಳಿದಿದೆ ಎಂದ ಮಾತ್ರಕ್ಕೆ ಅದರ ಪ್ರತಿಯೊಂದು ವಿವರ ಶೇ.100ರಷ್ಟು ಸರಿಯಾಗಿರುತ್ತದೆ ಎಂದರ್ಥವಲ್ಲ.&lt;/p&gt;&lt;h3&gt;ಮೊದಲ ಪ್ರೀತಿಯಲ್ಲಿ &lsquo;ಹೊಸತನ&rsquo;ದ ಪಾತ್ರ ಹೊಸ ವ್ಯಕ್ತಿ, ಹೊಸ ಅನುಭವ&lt;/h3&gt;&lt;p&gt;ಮೊದಲ ಪ್ರೀತಿಯಲ್ಲಿ ಬಹುತೇಕ ಎಲ್ಲವೂ ಹೊಸದಾಗಿರುತ್ತದೆ. ಯಾರಿಗಾದರೂ ಮೆಸೇಜ್ ಮಾಡುವಾಗ ಉಂಟಾಗುವ ಉತ್ಸಾಹ, ಭೇಟಿಯಾಗುವ ನಿರೀಕ್ಷೆ, ಸಣ್ಣ ಮಾತಿಗೂ ಹೆಚ್ಚು ಸಂತೋಷಪಡುವುದು&mdash;ಇವೆಲ್ಲವೂ ಅನುಭವವನ್ನು ಮತ್ತಷ್ಟು ವಿಶೇಷವಾಗಿಸಬಹುದು.&lt;/p&gt;&lt;p&gt;ಸಂಬಂಧಗಳಲ್ಲಿ ಹೊಸತನ ಮತ್ತು ಹೊಸ ಅನುಭವಗಳು ಆಕರ್ಷಣೆ ಹಾಗೂ ಸಂಬಂಧದ ಉತ್ಸಾಹವನ್ನು ಉಳಿಸುವಲ್ಲಿ ಪಾತ್ರವಹಿಸಬಹುದು ಎಂದು ಸಂಬಂಧಗಳ ಕುರಿತ ಸಂಶೋಧನಾ ಚರ್ಚೆಗಳು ಸೂಚಿಸುತ್ತವೆ.&lt;/p&gt;&lt;h3&gt;ಆದರೆ ಮೊದಲ ಪ್ರೀತಿಯೇ &lsquo;ಅತ್ಯುತ್ತಮ&rsquo; ಎನ್ನಲು ಸಾಧ್ಯವಿಲ್ಲ&lt;/h3&gt;&lt;p&gt;ಮೊದಲ ಪ್ರೀತಿ ವಿಶೇಷವಾಗಿರಬಹುದು. ಆದರೆ ಅದೇ ವ್ಯಕ್ತಿ ಜೀವನದ ಅತ್ಯುತ್ತಮ ಸಂಗಾತಿಯಾಗಬೇಕು ಎಂಬ ನಿಯಮವಿಲ್ಲ. ನಂತರದ ಸಂಬಂಧಗಳಲ್ಲಿ ಹೆಚ್ಚು ಪರಿಪಕ್ವತೆ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ, ನಂಬಿಕೆ ಮತ್ತು ಜವಾಬ್ದಾರಿ ಇರಬಹುದು.&lt;/p&gt;&lt;p&gt;ವಾಸ್ತವವಾಗಿ, ಸಂಬಂಧಕ್ಕೆ ಸಂಬಂಧಿಸಿದ ಸಕಾರಾತ್ಮಕ ಮತ್ತು ಭಾವನಾತ್ಮಕವಾಗಿ ಗಾಢವಾದ ನೆನಪುಗಳು ಸಂಬಂಧದ ತೃಪ್ತಿಯೊಂದಿಗೆ ಸಂಬಂಧ ಹೊಂದಿರಬಹುದು ಎಂದು ಒಂದು ಅಧ್ಯಯನ ಕಂಡುಹಿಡಿದಿದೆ. ಅಂದರೆ ಮುಖ್ಯವಾದದ್ದು &ldquo;ಮೊದಲ&rdquo; ಪ್ರೀತಿ ಎನ್ನುವುದಕ್ಕಿಂತ, ಸಂಬಂಧ ಎಷ್ಟು ಅರ್ಥಪೂರ್ಣವಾಗಿದೆ ಎಂಬುದೂ ಆಗಿರಬಹುದು.&lt;/p&gt;&lt;h3&gt;ಮೊದಲ ಪ್ರೀತಿ ಒಂದು ನೆನಪು, ಅಂತ್ಯವಲ್ಲ&lt;/h3&gt;&lt;p&gt;ಮೊದಲ ಪ್ರೀತಿ ಜೀವನದ ಒಂದು ಸುಂದರ ಅಧ್ಯಾಯವಾಗಿರಬಹುದು. ಅದು ಯಶಸ್ವಿಯಾಗಿರಬಹುದು, ಮುಗಿದಿರಬಹುದು ಅಥವಾ ನೆನಪಾಗಿ ಮಾತ್ರ ಉಳಿದಿರಬಹುದು. ಆದರೆ ಜೀವನ ಮುಂದುವರಿದಂತೆ ನಮ್ಮ ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಇರುವ ಅರ್ಥವೂ ಬದಲಾಗುತ್ತದೆ.&lt;/p&gt;&lt;p&gt;ಹೀಗಾಗಿ &ldquo;ಮೊದಲ ಪ್ರೀತಿಯೇ ಬೆಸ್ಟ್&rdquo; ಎನ್ನುವುದಕ್ಕಿಂತ &ldquo;ಮೊದಲ ಪ್ರೀತಿ ಎಂದಿಗೂ ಮರೆಯಲಾಗದ ಅನುಭವವಾಗಿರಬಹುದು&rdquo; ಎನ್ನುವುದು ಹೆಚ್ಚು ಸೂಕ್ತ. ಮೊದಲ ಪ್ರೀತಿ ನಮಗೆ ಪ್ರೀತಿಯ ಮೊದಲ ಪಾಠ ಕಲಿಸಬಹುದು; ಆದರೆ ಜೀವನದ ಅತ್ಯುತ್ತಮ ಪ್ರೀತಿ ಯಾವಾಗ ಬರುತ್ತದೆ ಎಂಬುದನ್ನು ಮೊದಲೇ ನಿರ್ಧರಿಸಲಾಗುವುದಿಲ್ಲ.&lt;/p&gt;]]></content:encoded>
            <category>life</category>
            <dc:creator>Chandrashekar GS</dc:creator>
            <atom:link href="https://kannada.asianetnews.com/relationship/why-do-people-say-first-love-is-the-best-love-here-is-the-psychology-behind-it/articleshow-4cmcp80"/>
        </item>
        <item>
            <title><![CDATA[ಡೈಲಿ ವೇರ್‌ಗೆ ಬೆಸ್ಟ್ ಈ ಲೈಟ್ ವೆಯಿಟ್ ಇಯರ್ ರಿಂಗ್ಸ್; ನೋಡಿದ್ರೆ ಫಿದಾ ಆಗ್ತೀರ!]]></title>
            <link>https://kannada.asianetnews.com/webstories/fashion/lightweight-gold-earrings-for-daily-wear-trendy-designs-must-try-kvn-5km4guz</link>
            <guid isPermaLink="true">https://kannada.asianetnews.com/webstories/fashion/lightweight-gold-earrings-for-daily-wear-trendy-designs-must-try-kvn-5km4guz</guid>
            <pubDate>Sat, 19 Sep 2026 11:33:25 +0530</pubDate>
            <description><![CDATA[&lt;p&gt;ನೀವು ಡೈಲಿ ವೇರ್&zwnj;ಗೆ ಸಿಂಪಲ್ ಮತ್ತು ಸ್ಟೈಲಿಶ್ ಆಗಿರುವ ಗೋಲ್ಡ್ ಇಯರ್ ರಿಂಗ್ಸ್ ಹುಡುಕುತ್ತಿದ್ದೀರಾ? ಕಡಿಮೆ ತೂಕ ಹಾಗೂ ಬ್ಯೂಟಿಫುಲ್ ಡಿಸೈನ್&zwnj;ನಲ್ಲಿರುವ ಈ ಕಿವಿಯೋಲೆಗಳನ್ನು ಒಮ್ಮೆ ಟ್ರೈ ಮಾಡಿ. ಇವು ನಿಮಗೆ ಖಂಡಿತ ಇಷ್ಟವಾಗುತ್ತವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cv1sqf9s0ghfhaz9x52hjy,imgname-1-gram-gold-earrings-1787137418991.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/lightweight-gold-earrings-for-daily-wear-trendy-designs-must-try-kvn-5km4guz"/>
        </item>
        <item>
            <title><![CDATA[ಶನಿ ದೇವನ ಕೃಪೆಯಿಂದ ಈ 4 ರಾಶಿಗಳಿಗೆ ಅದೃಷ್ಟ; ಹಣ, ಉದ್ಯೋಗ, ಕುಟುಂಬದಲ್ಲಿ ಶುಭಫಲ!]]></title>
            <link>https://kannada.asianetnews.com/astrology/shani-dev-blessings-these-4-zodiac-signs-may-see-career-and-financial-growth-kvn/articleshow-5gzk7cz</link>
            <guid isPermaLink="true">https://kannada.asianetnews.com/astrology/shani-dev-blessings-these-4-zodiac-signs-may-see-career-and-financial-growth-kvn/articleshow-5gzk7cz</guid>
            <pubDate>Sat, 19 Sep 2026 11:11:17 +0530</pubDate>
            <description><![CDATA[ಪುರಟಾಸಿ ಮಾಸದಲ್ಲಿ ಶನಿ ದೇವನ ಕೃಪೆಯಿಂದ ವೃಷಭ, ಮಕರ, ಮೇಷ ಮತ್ತು ತುಲಾ ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಈ ರಾಶಿಗಳ ವೃತ್ತಿಜೀವನ, ಆರ್ಥಿಕ ಸ್ಥಿತಿ ಮತ್ತು ಕುಟುಂಬದಲ್ಲಿ ಶುಭ ಫಲಗಳು ದೊರೆಯಲಿವೆ. ಶನಿಯ ಕೃಪೆ ಪಡೆಯಲು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮ ಅಗತ್ಯ ಎಂದು ಜ್ಯೋತಿಷ್ಯ ತಿಳಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cjz3pk64ygrbn2ny004cjz,imgname-shani-4-lucky-zodiac-signs-wealth-and-profit-9-october-to-8-februar-1789276425939.jpg" type="image/jpeg" height="390" width="690"/>
            <content:encoded><![CDATA[&lt;p&gt;ಶನಿ ದೇವನ ಕೃಪೆಯಿಂದ ಅದೃಷ್ಟ ಒಲಿಯಲಿರುವ 4 ರಾಶಿಗಳು ಯಾವುವು? ವೃತ್ತಿಜೀವನದ ಬೆಳವಣಿಗೆ, ಹಣದ ಹರಿವು, ಕುಟುಂಬದ ಸಂತೋಷ ಮತ್ತು ನಿರೀಕ್ಷಿತ ಬದಲಾವಣೆಗಳ ಬಗ್ಗೆ ಸಂಪೂರ್ಣ ಜ್ಯೋತಿಷ್ಯ ಫಲಗಳು ಹಾಗೂ ಪರಿಹಾರಗಳ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಶನಿ ದೇವನ ಕೃಪೆಯಿಂದ ಸಿಗುವ ಶುಭ ಫಲಗಳು&lt;/strong&gt;&lt;/h2&gt;&lt;p&gt;ಶನಿ ದೇವನ ಕೃಪೆಗೆ ಪಾತ್ರರಾಗುವ ರಾಶಿಯವರ ವೃತ್ತಿ, ಹಣ, ಕುಟುಂಬ ಸೇರಿದಂತೆ ಜೀವನದ ಹಲವು ಮಗ್ಗಲುಗಳಲ್ಲಿ ಬದಲಾವಣೆಗಳಾಗಲಿವೆ ಎಂದು ಜ್ಯೋತಿಷ್ಯ ಹೇಳುತ್ತದೆ. ಶನಿಯು ಕರ್ಮಫಲದಾತ. ಹಾಗಾಗಿ ತಾಳ್ಮೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಇಲ್ಲಿ ಹೆಚ್ಚು ಬೆಲೆ ಸಿಗುತ್ತದೆ. ಪುರಟಾಸಿ ಮಾಸದಿಂದ ಶನಿಯ ಕೃಪೆಯಿಂದ ಶುಭ ಫಲಗಳನ್ನು ನಿರೀಕ್ಷಿಸುತ್ತಿರುವ 4 ರಾಶಿಗಳ ಬಗ್ಗೆ ನಾವಿಲ್ಲಿ ತಿಳಿಯೋಣ.&lt;/p&gt;&lt;h3&gt;&lt;strong&gt;ವೃಷಭ: ಆರ್ಥಿಕತೆಯಲ್ಲಿ ಪ್ರಗತಿ&lt;/strong&gt;&lt;/h3&gt;&lt;p&gt;ವೃಷಭ ರಾಶಿಯವರು ಸ್ಥಿರ ಜೀವನ ಮತ್ತು ಆರ್ಥಿಕ ಭದ್ರತೆಯನ್ನು ಬಯಸುವವರು ಎಂದು ಜ್ಯೋತಿಷ್ಯ ಹೇಳುತ್ತದೆ. ಶನಿ ದೇವನ ಕೃಪೆಯಿಂದಾಗಿ ಉಳಿತಾಯ ಮತ್ತು ವೃತ್ತಿಪರ ಯೋಜನೆಗಳತ್ತ ಗಮನಹರಿಸಲು ಇದು ಸಕಾಲ. ಪುರಟಾಸಿ ಮಾಸವು ಇವರಿಗೆ ಅದೃಷ್ಟ, ಸಂತೋಷ ಮತ್ತು ಆರೋಗ್ಯವನ್ನು ಕರುಣಿಸಲಿದೆ. ಮುಂಬರುವ ದಿನಗಳು ಇವರಿಗೆ ಸುವರ್ಣಕಾಲ.&lt;/p&gt;&lt;p&gt;&lt;strong&gt;ವೃತ್ತಿ ಮತ್ತು ಹಣ: &lt;/strong&gt;ಕೆಲಸ ಹುಡುಕುತ್ತಿರುವವರಿಗೆ ಹೊಸ ಪ್ರಯತ್ನಗಳನ್ನು ಮಾಡಲು ಅವಕಾಶಗಳು ಸೃಷ್ಟಿಯಾಗಲಿವೆ. ವ್ಯಾಪಾರಸ್ಥರು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಮೂಲಕ ಪ್ರಗತಿ ಕಾಣಬಹುದು. ಖರ್ಚುಗಳನ್ನು ಸರಿಯಾಗಿ ಯೋಜಿಸುವುದು ಆರ್ಥಿಕ ಸ್ಥಿರತೆಗೆ ಸಹಾಯ ಮಾಡುತ್ತದೆ.&lt;/p&gt;&lt;p&gt;&lt;strong&gt;ಕುಟುಂಬ ಮತ್ತು ಪರಿಹಾರ:&lt;/strong&gt; ಮನೆಯಲ್ಲಿ ಶಾಂತಿ ಕಾಪಾಡಲು ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಗೌರವಿಸುವುದು ಅಗತ್ಯ. ಬಡವರಿಗೆ ಅನ್ನದಾನ ಮಾಡುವುದು, ಶನಿವಾರ ಕಪ್ಪು ಎಳ್ಳು ದಾನ ಮಾಡುವುದು ಸಾಂಪ್ರದಾಯಿಕ ಪರಿಹಾರಗಳಾಗಿವೆ.&lt;/p&gt;&lt;h3&gt;&lt;strong&gt;ಮಕರ: ಕಠಿಣ ಪರಿಶ್ರಮಕ್ಕೆ ಮನ್ನಣೆ&lt;/strong&gt;&lt;/h3&gt;&lt;p&gt;ಮಕರ ರಾಶಿಗೆ ಶನಿಯೇ ಅಧಿಪತಿಯಾಗಿರುವುದರಿಂದ, ಈ ರಾಶಿಯವರಿಗೆ ಶನಿ ದೇವನಿಗೆ ಸಂಬಂಧಿಸಿದ ಫಲಿತಾಂಶಗಳು ಜ್ಯೋತಿಷ್ಯದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತವೆ. ಕಠಿಣ ಪರಿಶ್ರಮದಿಂದ ಕೆಲಸ ಮಾಡುವವರು ತಮ್ಮ ಗುರಿಗಳತ್ತ ಮುನ್ನಡೆಯಲು ಪ್ರಯತ್ನಿಸಬಹುದು. ಪುರಟಾಸಿ ಮಾಸವು ಇವರಿಗೆ ಅನಿರೀಕ್ಷಿತ ಸಿಹಿಸುದ್ದಿಗಳನ್ನು ನೀಡಲಿದೆ.&lt;/p&gt;&lt;p&gt;&lt;strong&gt;ವೃತ್ತಿ ಮತ್ತು ಹಣ:&lt;/strong&gt; ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸುವ ಪ್ರಯತ್ನಗಳು ಯಶಸ್ವಿಯಾಗಲಿವೆ. ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಸಾಲ ಮತ್ತು ಖರ್ಚುಗಳನ್ನು ನಿಭಾಯಿಸುವಲ್ಲಿ ಹೆಚ್ಚಿನ ಗಮನ ಹರಿಸಬೇಕು.&lt;/p&gt;&lt;p&gt;&lt;strong&gt;ಕುಟುಂಬ ಮತ್ತು ಪರಿಹಾರ:&lt;/strong&gt; ಕುಟುಂಬದ ಸದಸ್ಯರ ಅಗತ್ಯಗಳನ್ನು ಅರ್ಥಮಾಡಿಕೊಂಡು ನಡೆಯುವುದು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಶನಿವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡುವುದು, ಎಳ್ಳೆಣ್ಣೆ ದೀಪ ಹಚ್ಚುವಂತಹ ಪರಿಹಾರಗಳನ್ನು ನಂಬಿಕೆಯಿಂದ ಮಾಡಬಹುದು.&lt;/p&gt;&lt;h3&gt;&lt;strong&gt;ಮೇಷ: ವೃತ್ತಿಜೀವನದಲ್ಲಿ ಹೊಸ ಅವಕಾಶಗಳು&lt;/strong&gt;&lt;/h3&gt;&lt;p&gt;ಮೇಷ ರಾಶಿಯವರಿಗೆ ಶನಿ ದೇವನ ಕೃಪೆ ಸಿಗುವ ಈ ಕಾಲಘಟ್ಟದಲ್ಲಿ ವೃತ್ತಿಗೆ ಸಂಬಂಧಿಸಿದ ಹೊಸ ಅವಕಾಶಗಳು ಒಲಿದು ಬರಲಿವೆ. ಬಹಳ ದಿನಗಳಿಂದ ಕಾಯುತ್ತಿದ್ದ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಸಿಗುವ ವಾತಾವರಣ ನಿರ್ಮಾಣವಾಗಬಹುದು. ಪುರಟಾಸಿ ಮಾಸದಲ್ಲಿ ಶನಿ ಗ್ರಹವು ಇವರಿಗೆ ಒಳ್ಳೆಯ ಫಲಗಳನ್ನು ನೀಡಲಿದ್ದು, ಲಾಭ ತಂದುಕೊಡಲಿದೆ.&lt;/p&gt;&lt;p&gt;&lt;strong&gt;ವೃತ್ತಿ ಮತ್ತು ಹಣ:&lt;/strong&gt; ಕೆಲಸದ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶಗಳು ಸಿಗಲಿವೆ. ಆದಾಯ ಹೆಚ್ಚಿಸಲು ನೀವು ಹೆಚ್ಚಿನ ಪ್ರಯತ್ನ ಹಾಕಬಹುದು. ಆದರೆ, ದೊಡ್ಡ ಹೂಡಿಕೆ ಮಾಡುವ ಮುನ್ನ ಆರ್ಥಿಕ ಸಲಹೆ ಪಡೆಯುವುದು ಬಹಳ ಮುಖ್ಯ.&lt;/p&gt;&lt;p&gt;&lt;strong&gt;ಕುಟುಂಬ ಮತ್ತು ಪರಿಹಾರ:&lt;/strong&gt; ಕುಟುಂಬದ ಸದಸ್ಯರೊಂದಿಗೆ ತಾಳ್ಮೆಯಿಂದ ಮಾತನಾಡುವುದು ಸಂಬಂಧಗಳನ್ನು ಸುಧಾರಿಸುತ್ತದೆ. ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚಿ ಶನಿ ದೇವನನ್ನು ಆರಾಧಿಸಬಹುದು.&lt;/p&gt;&lt;h3&gt;&lt;strong&gt;ತುಲಾ: ಬಡ್ತಿ ಪಡೆಯುವ ಅವಕಾಶಗಳು&lt;/strong&gt;&lt;/h3&gt;&lt;p&gt;ತುಲಾ ರಾಶಿಯವರಿಗೆ ಶನಿ ದೇವನ ಕೃಪೆ ಸಿಗುವ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಹೊಸ ಕೌಶಲ್ಯಗಳನ್ನು ಕಲಿಯುವುದು ವೃತ್ತಿಜೀವನದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪುರಟಾಸಿ ಮಾಸವು ಇವರಿಗೆ ಯಶಸ್ಸನ್ನು ತಂದುಕೊಡಲಿದೆ.&lt;/p&gt;&lt;p&gt;&lt;strong&gt;ವೃತ್ತಿ ಮತ್ತು ಹಣ:&lt;/strong&gt; ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವುದು ಮುಖ್ಯ. ಕೆಲಸದ ಸ್ಥಳದಲ್ಲಿ ಸಿಗುವ ಅವಕಾಶಗಳನ್ನು ಆತುರಪಡದೆ ವಿಶ್ಲೇಷಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಆದಾಯಕ್ಕೆ ತಕ್ಕಂತೆ ಉಳಿತಾಯ ಹೆಚ್ಚಿಸುವುದು ಭವಿಷ್ಯದ ಅಗತ್ಯಗಳಿಗೆ ನೆರವಾಗಲಿದೆ.&lt;/p&gt;&lt;p&gt;&lt;strong&gt;ಕುಟುಂಬ ಮತ್ತು ಪರಿಹಾರ: &lt;/strong&gt;ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳಿದ್ದರೆ ಶಾಂತವಾಗಿ ಮಾತನಾಡಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಶನಿವಾರದಂದು ಶನಿ ದೇವನನ್ನು ಪೂಜಿಸುವುದು ಮತ್ತು ಹಿರಿಯರಿಗೆ ಸಹಾಯ ಮಾಡುವುದು ಉತ್ತಮ ಪರಿಹಾರ.&lt;/p&gt;&lt;h3&gt;&lt;strong&gt;ಶನಿ ದೇವನ ಕೃಪೆ ಪಡೆಯಲು ಏನು ಮಾಡಬೇಕು?&lt;/strong&gt;&lt;/h3&gt;&lt;p&gt;ಶನಿ ದೇವನ ಕೃಪೆ ಪಡೆಯಲು ಜೀವನದಲ್ಲಿ ಪ್ರಾಮಾಣಿಕತೆ, ತಾಳ್ಮೆ ಮತ್ತು ಕಠಿಣ ಪರಿಶ್ರಮವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಆಧ್ಯಾತ್ಮಿಕ ನಂಬಿಕೆಗಳು ಹೇಳುತ್ತವೆ. ಅಗತ್ಯವಿರುವವರಿಗೆ ಸಹಾಯ ಮಾಡುವುದು, ಹಿರಿಯರನ್ನು ಗೌರವಿಸುವುದು ಮತ್ತು ತಪ್ಪು ಕೆಲಸಗಳಿಂದ ದೂರವಿರುವಂತಹ ಒಳ್ಳೆಯ ಅಭ್ಯಾಸಗಳು ಎಲ್ಲರಿಗೂ ಪ್ರಯೋಜನಕಾರಿಯಾಗಿವೆ.&lt;/p&gt;&lt;p&gt;ಸೂಚನೆ: ಮೇಲಿನ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳನ್ನು ಆಧರಿಸಿದ ಸಾಮಾನ್ಯ ಫಲಿತಾಂಶಗಳಾಗಿವೆ. ವೈಯಕ್ತಿಕ ಜಾತಕ ಮತ್ತು ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು. ಹಣ ಮತ್ತು ವೃತ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಪ್ರಾಯೋಗಿಕವಾಗಿ ಯೋಚಿಸಿ ತೆಗೆದುಕೊಳ್ಳಿ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/astrology/shani-dev-blessings-these-4-zodiac-signs-may-see-career-and-financial-growth-kvn/articleshow-5gzk7cz"/>
        </item>
        <item>
            <title><![CDATA[Sesame Seeds: ಎಳ್ಳನ್ನು ಪ್ರತಿದಿನ ತಿಂದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ?]]></title>
            <link>https://kannada.asianetnews.com/webstories/health-life/health-benefits-of-eating-sesame-seeds-daily-all-need-to-know-kvn-aorchy8</link>
            <guid isPermaLink="true">https://kannada.asianetnews.com/webstories/health-life/health-benefits-of-eating-sesame-seeds-daily-all-need-to-know-kvn-aorchy8</guid>
            <pubDate>Sat, 19 Sep 2026 10:34:48 +0530</pubDate>
            <description><![CDATA[&lt;p&gt;ಎಳ್ಳು ನೋಡಲು ಚಿಕ್ಕದಾಗಿದ್ದರೂ ಪೋಷಕಾಂಶಗಳ ವಿಚಾರದಲ್ಲಿ ಬಹಳ ವಿಶೇಷ. ಪ್ರತಿದಿನ ಮಿತವಾಗಿ ಎಳ್ಳನ್ನು ನಮ್ಮ ಡಯಟ್&zwnj;ನಲ್ಲಿ ಸೇರಿಸಿಕೊಂಡರೆ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಅಂತ ಇಲ್ಲಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j4hhxdqy76xrd1ewdxp3qqsm,imgname-fotojet--15-.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/health-life/health-benefits-of-eating-sesame-seeds-daily-all-need-to-know-kvn-aorchy8"/>
        </item>
        <item>
            <title><![CDATA[Gold Bracelet: ಸಿಂಪಲ್ ಆದ್ರೂ ಸಖತ್ ಸ್ಟೈಲಿಶ್; ಈ ಗೋಲ್ಡ್ ಬ್ರೇಸ್‌ಲೆಟ್‌ಗಳು ಫ್ಯಾಷನ್ ಪ್ರಿಯರಿಗಾಗಿ!]]></title>
            <link>https://kannada.asianetnews.com/webstories/fashion/elegant-gold-bracelets-with-cute-designs-for-women-gvd-gdbpoka</link>
            <guid isPermaLink="true">https://kannada.asianetnews.com/webstories/fashion/elegant-gold-bracelets-with-cute-designs-for-women-gvd-gdbpoka</guid>
            <pubDate>Sat, 19 Sep 2026 09:15:08 +0530</pubDate>
            <description><![CDATA[&lt;p&gt;ಕೈಗಳಿಗೆ ಹೊಸ ಕಳೆ ನೀಡುವ ಕ್ಯೂಟ್ ಡಿಸೈನ್&zwnj;ನ ಗೋಲ್ಡ್ ಬ್ರೇಸ್&zwnj;ಲೆಟ್&zwnj;ಗಳು ಇಲ್ಲಿವೆ. ಕಾಲೇಜು ಹುಡುಗಿಯರಿಂದ ಹಿಡಿದು ವರ್ಕಿಂಗ್ ವುಮೆನ್&zwnj;ವರೆಗೆ ಯಾರು ಬೇಕಾದರೂ ಇವುಗಳನ್ನು ಧರಿಸಬಹುದು. ತಡವೇಕೆ, ಒಮ್ಮೆ ಕಣ್ಣಾಡಿಸಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3rr6z724wv9zf91sx7sg6q,imgname-trim-gold-bracelet-9kt-6-1778243083239.png" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/elegant-gold-bracelets-with-cute-designs-for-women-gvd-gdbpoka"/>
        </item>
        <item>
            <title><![CDATA[ಸಿನಿಮಾ ಶೂಟಿಂಗ್‌ನಿಂದಲೇ ಫೇಮಸ್ ಆಯ್ತು ಈ 5 ಟಾಪ್ ತಾಣಗಳು: ಒಂದೊಂದರ ಕಥೆಯೇ ರೋಚಕ!]]></title>
            <link>https://kannada.asianetnews.com/gallery/entertainment/top-5-tamil-cinema-shooting-spots-that-became-famous-tourist-destinations-from-reel-to-real-gvd-nn9msdw</link>
            <guid isPermaLink="true">https://kannada.asianetnews.com/gallery/entertainment/top-5-tamil-cinema-shooting-spots-that-became-famous-tourist-destinations-from-reel-to-real-gvd-nn9msdw</guid>
            <pubDate>Sat, 19 Sep 2026 09:00:03 +0530</pubDate>
            <description><![CDATA[&lt;p&gt;ತಮಿಳು ಸಿನಿಮಾಗಳ ಹಾಡುಗಳು ಮತ್ತು ಬೃಹತ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಇಡೀ ಭಾರತದಲ್ಲೇ ಫೇಮಸ್ ಆದ 5 ಐತಿಹಾಸಿಕ ಶೂಟಿಂಗ್&zwnj; ತಾಣಗಳ ಹಿನ್ನೆಲೆ ಹಾಗೂ ಈಗಿನ ಸ್ಥಿತಿಯ ಬಗ್ಗೆ ನಾವಿಲ್ಲಿ ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tntpgqbbcsrvz9bat1b9hy,imgname-bjbj-1789749189143.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳು ಸಿನಿಮಾಗಳ ಹಾಡುಗಳು ಮತ್ತು ಬೃಹತ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಇಡೀ ಭಾರತದಲ್ಲೇ ಫೇಮಸ್ ಆದ 5 ಐತಿಹಾಸಿಕ ಶೂಟಿಂಗ್&zwnj; ತಾಣಗಳ ಹಿನ್ನೆಲೆ ಹಾಗೂ ಈಗಿನ ಸ್ಥಿತಿಯ ಬಗ್ಗೆ ನಾವಿಲ್ಲಿ ನೋಡೋಣ.&lt;/p&gt;&lt;img&gt;&lt;p&gt;ತಮಿಳು ಸಿನಿಮಾದ ಹಲವು ಹಿಟ್ ಚಿತ್ರಗಳ ಪ್ರಮುಖ ದೃಶ್ಯಗಳು ಮತ್ತು ಹಾಡುಗಳನ್ನು ಐತಿಹಾಸಿಕ ಹಾಗೂ ಪ್ರಕೃತಿ ಸೌಂದರ್ಯವಿರುವ ಜಾಗಗಳಲ್ಲಿ ಶೂಟ್ ಮಾಡಲಾಗಿದೆ. ತೆರೆಯ ಮೇಲೆ ಆ ಬೃಹತ್ ದೃಶ್ಯಗಳು ಮತ್ತು ಪ್ರಕೃತಿ ಸೌಂದರ್ಯವನ್ನು ನೋಡಿ ಬೆರಗಾಗುವ ಫ್ಯಾನ್ಸ್, &quot;ಈ ಜಾಗ ಎಲ್ಲಿದೆ? ಇದು ಯಾವ ಊರು?&quot; ಎಂದು ಹುಡುಕಿಕೊಂಡು ಹೋಗಿ ನೋಡಲು ಶುರುಮಾಡಿದ್ದಾರೆ. ಹೀಗೆ ಬೆಳ್ಳಿತೆರೆಯ ಮೇಲೆ ಬಂದು ಇಡೀ ಭಾರತದಲ್ಲೇ ಫೇಮಸ್ ಆಗಿ, ಈಗ ಪ್ರಮುಖ ಪ್ರವಾಸಿ ತಾಣಗಳಾಗಿ ಬದಲಾಗಿರುವ ಜಾಗಗಳು ಮತ್ತು ಅವುಗಳ ಶೂಟಿಂಗ್ ಹಿನ್ನೆಲೆಯ ಬಗ್ಗೆ ತಿಳಿಯೋಣ.&lt;/p&gt;&lt;img&gt;&lt;p&gt;ಇರುವರ್, ಬಾಂಬೆ (ಕಣ್ಣಾಲನೇ ಹಾಡು), ಗುರು (ಆರುಯಿರೇ ಹಾಡು), ಭೀಮಾ (ರಹಸ್ಯ ಕನವುಗಳ್ ಹಾಡು) ಸೇರಿದಂತೆ ಹಲವು ಸಿನಿಮಾಗಳ ದೃಶ್ಯಗಳನ್ನು ಇಲ್ಲಿ ಶೂಟ್ ಮಾಡಲಾಗಿದೆ. ಮಣಿರತ್ನಂ ನಿರ್ದೇಶನದ 'ಬಾಂಬೆ' ಸಿನಿಮಾದ 'ಕಣ್ಣಾಲನೇ' ಹಾಡಿನಲ್ಲಿ, ಬೆಳದಿಂಗಳ ರಾತ್ರಿಯಲ್ಲಿ ಬೃಹತ್ ಕಂಬಗಳ ನಡುವೆ ಮನಿಷಾ ಕೊಯಿರಾಲಾ ಡ್ಯಾನ್ಸ್ ಮಾಡುವ ದೃಶ್ಯ ತಮಿಳು ಫ್ಯಾನ್ಸ್&zwnj;ಗೆ ಸಖತ್ ಇಷ್ಟವಾಗಿತ್ತು. ಈ ಅರಮನೆಯ ವಿಶಿಷ್ಟವಾದ ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪ ಮತ್ತು ಬೃಹತ್ ಕಂಬಗಳು ಈ ಸಿನಿಮಾದ ನಂತರ ಇಡೀ ಭಾರತದಲ್ಲೇ ಫೇಮಸ್ ಆದವು. ತಮಿಳುನಾಡು ಪುರಾತತ್ವ ಇಲಾಖೆ ನಿರ್ವಹಿಸುತ್ತಿರುವ ಇಲ್ಲಿ, ಪ್ರತಿದಿನ ಸಂಜೆ ಲೈಟ್ ಅಂಡ್ ಸೌಂಡ್ ಶೋ (Light &amp;amp; Sound Show) ನಡೆಯುತ್ತದೆ. ಇಂದಿಗೂ ಇತಿಹಾಸಕಾರರು ಮತ್ತು ಸಿನಿಮಾ ಪ್ರವಾಸಿಗರ ಫೇವರಿಟ್ ತಾಣವಿದು.&lt;/p&gt;&lt;img&gt;&lt;p&gt;ಆಯುಧ ಎಳುತ್ತು, ವಾಲಿ, ಚೆನ್ನೈ 600028 ಸೇರಿದಂತೆ ಹಲವು ಸಿನಿಮಾಗಳನ್ನು ಇಲ್ಲಿ ಶೂಟ್ ಮಾಡಲಾಗಿದೆ. ಮಣಿರತ್ನಂ ಅವರ 'ಆಯುಧ ಎಳುತ್ತು' ಸಿನಿಮಾದಲ್ಲಿ ಮಾಧವನ್ (ಇನ್ಬಾ) ಮತ್ತು ಸೂರ್ಯ (ಮೈಕೇಲ್) ನಡುವಿನ ಪ್ರಮುಖ ಕ್ಲೈಮ್ಯಾಕ್ಸ್ ಫೈಟ್ ದೃಶ್ಯಗಳನ್ನು ಇಲ್ಲೇ ಚಿತ್ರೀಕರಿಸಲಾಗಿತ್ತು. ಅಡ್ಯಾರ್ ನದಿ ಮುಖಜಭೂಮಿಯಲ್ಲಿರುವ ಈ ಅರ್ಧಂಬರ್ಧ ಸೇತುವೆ, ಚೆನ್ನೈ ಯುವಕರ ಪಾಲಿಗೆ ಪ್ರೀತಿ ಮತ್ತು ಸಿನಿಮಾದ ಗುರುತಾಗಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಭದ್ರತಾ ಕಾರಣಗಳಿಗಾಗಿ ಸಾರ್ವಜನಿಕರ ಪ್ರವೇಶವನ್ನು ಇಲ್ಲಿ ಸಾಕಷ್ಟು ನಿರ್ಬಂಧಿಸಲಾಗಿದೆ. ಆದರೂ, ಫೋಟೋಗ್ರಾಫರ್&zwnj;ಗಳು ಮತ್ತು ಸಿನಿಮಾ ಪ್ರೇಮಿಗಳು ಹೊರಗಿನಿಂದಲೇ ನಿಂತು ಎಂಜಾಯ್ ಮಾಡುವ ಪ್ರಮುಖ ಜಾಗವಿದು.&lt;/p&gt;&lt;img&gt;&lt;p&gt;ಕಾದಲಿಕ್ಕ ನೇರಮಿಲೈ, ವಿನ್ನರ್, ಚಿನ್ನ ತಂಬಿ, ದೇವರ್ ಮಗನ್, ಸೂರ್ಯವಂಶಂ, ಅಮೈದಿಪ್ಪಡೈ ಸೇರಿದಂತೆ ಅಸಂಖ್ಯಾತ ಸಿನಿಮಾಗಳನ್ನು ಇಲ್ಲಿ ಶೂಟ್ ಮಾಡಲಾಗಿದೆ. 90ರ ದಶಕದ ತಮಿಳು ಸಿನಿಮಾಗಳಲ್ಲಿ ಹಳ್ಳಿ ಹಿನ್ನೆಲೆ ಎಂದರೆ ಪೊಳ್ಳಾಚಿ ಮೊದಲ ಆಯ್ಕೆಯಾಗಿತ್ತು. ಅದರಲ್ಲೂ ಆಳಿಯಾರ್ ಸರ್ಕಾರಿ ಅತಿಥಿಗೃಹ ಮತ್ತು ಅದರ ಸುತ್ತಮುತ್ತಲಿನ ಹಸಿರು ತೆಂಗಿನ ತೋಟಗಳು 'ಚಿನ್ನ ತಂಬಿ' ಸೇರಿದಂತೆ ನೂರಾರು ಸಿನಿಮಾಗಳ ಪ್ರಮುಖ ಶೂಟಿಂಗ್ ಸ್ಪಾಟ್&zwnj;ಗಳಾಗಿ ಬದಲಾದವು. ಇಂದಿಗೂ ತಮಿಳು ಸಿನಿಮಾ ಶೂಟಿಂಗ್&zwnj;ಗಳ ಪ್ರಮುಖ ತಾಣವಾಗಿ ಇದು ಗುರುತಿಸಿಕೊಂಡಿದೆ. ಇದನ್ನು ಇನ್ನಷ್ಟು ಪ್ರೋತ್ಸಾಹಿಸಲು, ತಮಿಳುನಾಡು ಪ್ರವಾಸೋದ್ಯಮ ಇಲಾಖೆ ಈ ಭಾಗವನ್ನು &quot;ಸಿನಿಮಾ ಟೂರಿಸಂ ಸರ್ಕ್ಯೂಟ್&quot; (Film Tourism Circuit) ಆಗಿ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ.&lt;/p&gt;&lt;img&gt;&lt;p&gt;ಪುನ್ನಗೈ ಮನ್ನನ್, ರಾವಣನ್ (ಉಸಿರೇ ಪೋಗುದೆ ಹಾಡು), ರಿದಮ್ (ನದಿಯೇ ನದಿಯೇ ಹಾಡು), ಪೈಯಾ (ಅಡಡಾ ಮಳೈಡಾ ಹಾಡು), ಬಾಹುಬಲಿ ಮುಂತಾದ ಹಲವು ಬೃಹತ್ ಸಿನಿಮಾಗಳನ್ನು ಇಲ್ಲಿ ಶೂಟ್ ಮಾಡಲಾಗಿದೆ. 'ಪುನ್ನಗೈ ಮನ್ನನ್' ಸಿನಿಮಾದಲ್ಲಿ ಕಮಲ್ ಹಾಸನ್ ಮತ್ತು ರೇಖಾ ಜಲಪಾತದಿಂದ ಹಾರುವ ದೃಶ್ಯವನ್ನು ಇಲ್ಲಿ ತೆಗೆದಿದ್ದರಿಂದ, ಬಹಳ ಕಾಲ ಇದನ್ನು ಜನ &quot;ಪುನ್ನಗೈ ಮನ್ನನ್ ಜಲಪಾತ&quot; ಎಂದೇ ಕರೆಯುತ್ತಿದ್ದರು. ಆಮೇಲೆ ಮಣಿರತ್ನಂ ಅವರ ರಾವಣನ್, ಕೆ.ವಿ. ಆನಂದ್ ಅವರ ರಿದಮ್ ಹಾಡುಗಳ ಮೂಲಕ ಇದರ ಸೌಂದರ್ಯ ಇಡೀ ದೇಶಾದ್ಯಂತ ಹರಡಿತು. ದಕ್ಷಿಣ ಭಾರತದ ಪ್ರಮುಖ ಪರಿಸರ ಪ್ರವಾಸೋದ್ಯಮ ತಾಣವಾಗಿ (Eco-Tourism Spot) ಬದಲಾಗಿರುವ ಈ ಜಲಪಾತಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ.&lt;/p&gt;&lt;img&gt;&lt;p&gt;ಕಂಡುಕೊಂಡೇನ್ ಕಂಡುಕೊಂಡೇನ್, ಸಾಮಿ (ಇದುತಾನಾ ಹಾಡು), ಪಿರಿವೋಮ್ ಸಂತಿಪ್ಪೋಮ್, ಸಂಡೈಕೋಳಿ ಸೇರಿದಂತೆ ಹಲವು ಸಿನಿಮಾಗಳನ್ನು ಇಲ್ಲಿ ಶೂಟ್ ಮಾಡಲಾಗಿದೆ. ರಾಜೀವ್ ಮೆನನ್ ಅವರ 'ಕಂಡುಕೊಂಡೇನ್ ಕಂಡುಕೊಂಡೇನ್' ಸಿನಿಮಾದಲ್ಲಿ ಟಬು ಮತ್ತು ಐಶ್ವರ್ಯಾ ರೈ ಕುಟುಂಬ ವಾಸಿಸುವ ಸಾಂಪ್ರದಾಯಿಕ ಅರಮನೆಯಾಗಿ ಇದನ್ನು ತೋರಿಸಲಾಗಿತ್ತು. ಆತ್ತಂಗುಡಿ ನೆಲದ ಕಲ್ಲುಗಳು ಮತ್ತು ಸೂಕ್ಷ್ಮವಾದ ತೇಗದ ಮರದ ಕೆತ್ತನೆಗಳಿಂದ ತುಂಬಿರುವ ಈ ಚೆಟ್ಟಿನಾಡು ಅರಮನೆ ಸಿನಿಮಾಗೆ ಒಂದು ಗಾಂಭೀರ್ಯವನ್ನು ತಂದುಕೊಟ್ಟಿತ್ತು. 1980ರ ದಶಕದಿಂದ ಶುರುವಾಗಿ ಇಂದಿನವರೆಗೂ ಹಲವು ಸಿನಿಮಾಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಇದು ಚೆಟ್ಟಿಯಾರ್ ಕುಟುಂಬದ ನಿಯಂತ್ರಣದಲ್ಲಿರುವ ಪಾರಂಪರಿಕ ಆಸ್ತಿಯಾಗಿದೆ. ಹೊರಗಿನ ಭಾಗಗಳನ್ನು ನೋಡಲು ಮತ್ತು ಫೋಟೋಗಳನ್ನು ತೆಗೆದುಕೊಳ್ಳಲು ಇಲ್ಲಿ ಅನುಮತಿಯಿದೆ. ಜೊತೆಗೆ, ಹಣ ಪಾವತಿಸಿ ಕೆಲವು ದಿನಗಳ ಕಾಲ ಉಳಿದುಕೊಂಡು, ಸಾಂಪ್ರದಾಯಿಕ ಚೆಟ್ಟಿನಾಡು ಊಟವನ್ನು ಸವಿಯುವ ಸೌಲಭ್ಯಗಳನ್ನೂ ಈಗ ಮಾಡಲಾಗಿದೆ. ಕಾರೈಕುಡಿ ಪಾರಂಪರಿಕ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿ ಇದು ಗುರುತಿಸಿಕೊಂಡಿದೆ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/top-5-tamil-cinema-shooting-spots-that-became-famous-tourist-destinations-from-reel-to-real-gvd-nn9msdw"/>
        </item>
        <item>
            <title><![CDATA[ಸಿಕ್ಕಿಂ ಗಡಿ ದೇಶದಲ್ಲೇ ಅತಿ ವಿಭಿನ್ನ ಟೂರಿಸಂ ತಾಣ, ಅನ್ಯ ಕಾರಣಕ್ಕೂ ಪ್ರಸಿದ್ಧಿ, ಇಲ್ಲಿ ಅದೃಶ್ಯ ಯೋಧನೇ ದೇವರು!]]></title>
            <link>https://kannada.asianetnews.com/india-news/nathu-la-pass-experience-thrilling-border-tourism-military-valour-and-sacred-legends-in-sikkim-gdp/articleshow-91la7za</link>
            <guid isPermaLink="true">https://kannada.asianetnews.com/india-news/nathu-la-pass-experience-thrilling-border-tourism-military-valour-and-sacred-legends-in-sikkim-gdp/articleshow-91la7za</guid>
            <pubDate>Sat, 19 Sep 2026 08:37:08 +0530</pubDate>
            <description><![CDATA[ಸಿಕ್ಕಿಂನ ನಾಥೂ ಲಾ ಪಾಸ್ ಕೇವಲ ಪ್ರವಾಸಿ ತಾಣವಲ್ಲ, ಬದಲಾಗಿ ಭಾರತದ ಗಡಿ ಭದ್ರತೆ ಮತ್ತು ಸೈನಿಕರ ಶೌರ್ಯವನ್ನು ಸಾರುವ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿನ ಬಾಬಾ ಹರ್ಭಜನ್ ಮಂದಿರದಲ್ಲಿ ಅದೃಶ್ಯ ಯೋಧನೊಬ್ಬ ಗಡಿ ಕಾಯುತ್ತಿದ್ದಾನೆ ಎಂಬ ನಂಬಿಕೆ ರೋಚಕವಾಗಿದೆ. ಇದರೊಂದಿಗೆ ತ್ಸ್ಯಾಂಗೋ ಸರೋವರ ಮತ್ತು ಗಡಿ ರಾಜತಾಂತ್ರಿಕತೆಯು ಈ ತಾಣದ ಪ್ರಮುಖ ಆಕರ್ಷಣೆಗಳಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khzrrfdy9eyxjtr7fmhrahbn,imgname-sikkim-travel-package-price-1771666423230.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಥೂ ಲಾ ಪಾಸ್ (ಸಿಕ್ಕಿಂ): &lt;/strong&gt;ವಿಶ್ವದ ಪ್ರವಾಸೋದ್ಯಮದಲ್ಲಿ ಕೃಷಿ, ಧಾರ್ಮಿಕ, ಆರೋಗ್ಯ, ಪರಿಸರ, ಕಡಲ ಪ್ರವಾಸೋದ್ಯಮ ಹೀಗೆ ಹಲವು ಪ್ರವಾಸೋದ್ಯಮ ಆಯ್ಕೆಗಳಿವೆ. ಆದರೆ, ಗಡಿಯನ್ನೇ ಪ್ರವಾಸದ ರೋಚಕ ಅನುಭವವನ್ನಾಗಿ ಉಣಬಡಿಸುವ ರಮಣೀಯ ಹಾಗೂ ರೋಮಾಂಚನ ಪ್ರವಾಸಿ ತಾಣಗಳು ವಿರಳ. ಅಂತಹ ಅಪರೂಪದ ಗಡಿ ಪ್ರವಾಸೋದ್ಯಮ ಸ್ಥಳವೇ ಸಿಕ್ಕಿಂನ &lsquo;ನಾಥೂ ಲಾ ಪಾಸ್&zwnj;&rsquo;.&lt;/p&gt;&lt;p&gt;ಸಮುದ್ರ ಮಟ್ಟದಿಂದ ಸುಮಾರು 14 ಸಾವಿರ ಅಡಿ ಎತ್ತರದಲ್ಲಿರುವ ನಾಥೂ ಲಾ ಕೇವಲ ಹಿಮಾಲಯದ ಸೌಂದರ್ಯ ಹೊದ್ದು ನಿಂತಿರುವ ಪ್ರವಾಸಿ ತಾಣವಲ್ಲ. ಇದು ಭಾರತದ ಗಡಿ ಭದ್ರತೆ, ಸೈನಿಕರ ಶೌರ್ಯ, ತ್ಯಾಗ, ಇತಿಹಾಸ ಮತ್ತು ರಾಜತಾಂತ್ರಿಕತೆಯನ್ನು ಒಂದೇ ಕಡೆ ಕಣ್ಣಿಗೆ ಕಟ್ಟಿದಂತೆ ತೋರಿಸುವ ಅದ್ಭುತ ತಾಣ, ಅದೊಂದು ರೋಚಕ ಅನುಭವ.&lt;/p&gt;&lt;p&gt;ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಈ ಪ್ರದೇಶ ಸದಾ ಬಿಗುವಿನ ವಾತಾವರಣದಿಂದ ಕೂಡಿರುವ ಸೂಕ್ಷ್ಮ ಗಡಿ. ಮೌನ, ಭಯ, ಅನಿಶ್ಚಿತತೆ, ಕ್ರೌರ್ಯ, ಸೇನಾ ಸಾಮರ್ಥ್ಯ, ಭದ್ರತೆ ಒದಗಿಸುವ ಸೈನಿಕರ ಶ್ರಮ, ಗಡಿ ಶಿಷ್ಟಾಚಾರ ಎಲ್ಲಾ ರೀತಿಯ ಗಡಿ ಪ್ರವಾಸೋದ್ಯಮ ಅರಿಯಲು ನಾಥೂ ಲಾ ಒಂದು ಆದರ್ಶ ಪಾಠ ಶಾಲೆ.&lt;/p&gt;&lt;p&gt;ಸಿಕ್ಕಿಂಗೆ ಪ್ರತಿ ವರ್ಷ 17 ಲಕ್ಷ ಮಂದಿ ಪ್ರವಾಸಿಗರು ಬಂದರೆ ಅದರಲ್ಲಿ ಸುಮಾರು 15 ಲಕ್ಷ ನಾಥೂ ಲಾ ಪಾಸ್&zwnj;ಗೆ ಭೇಟಿ ನೀಡುವುದು ಖಚಿತ. ಎದುರಲ್ಲೇ ಇರುವ ಚೀನಾ ಗಡಿ, ಅಲ್ಲಿನ ಗಡಿ ಭದ್ರತೆ, ಸೈನಿಕರ ಶ್ರಮ, ತ್ಯಾಗ, ವಿರೋಚಿತ ಕಥೆಗಳು, ಕಠಿಣ ಹವಾಮಾನ ಹಾಗೂ ಗಡಿನಲ್ಲಿನ ರಾಜತಾಂತ್ರಿಕ ಪ್ರಕ್ರಿಯೆ ಅರಿಯುವ ಸದವಕಾಶ ಇಲ್ಲಿದೆ.&lt;/p&gt;&lt;p&gt;ಈ ಪರ್ವತ ಪಾಸ್ ಟಿಬೆಟ್ ಮತ್ತು ಭಾರತ ಸಂಪರ್ಕಿಸುವ ಅತ್ಯಂತ ಹಳೆಯ ವ್ಯಾಪಾರ ಗಡಿ ಪೋಸ್ಟ್&zwnj;ಗಳಲ್ಲಿ ಒಂದು. ರೇಷ್ಮೆ ಮಾರ್ಗ, ಪ್ರಾಚೀನ ವ್ಯಾಪಾರ ಮಾರ್ಗವಿದು. ಇಲ್ಲಿ ನೋಡಲು ಪ್ರಕೃತಿ, ರಮಣೀಯ ದೃಶ್ಯಗಳ ಜತೆಗೆ ಮೂರ್ನಾಲ್ಕು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿವೆ.&lt;/p&gt;&lt;h2&gt;ಬಾಬಾ ಹರ್ಭಜನ್ ಮಂದಿರ, ಅದೃಶ್ಯ ಆತ್ಮವಿಲ್ಲಿ ಯೋಧ!&lt;/h2&gt;&lt;p&gt;ಬಾಬಾ ಹರ್ಭಜನ್&zwnj; ಮಂದಿರ. ಇದು ಸಿಕ್ಕಿಂ ಅದರಲ್ಲೂ ನಾಥೂ ಲಾ ಪಾಸ್&zwnj;ನ ಅತ್ಯಂತ ನಂಬಿಕೆಯ ಬಾಬಾ ಮಂದಿರ. ಯೋಧರು ನಮಗೆಲ್ಲಾ ದೇವರಿದ್ದಂತೆ ಎಂದು ಸದಾ ನೆನೆಯುತ್ತೇವೆ. ಆದರೆ, ಇಲ್ಲಿ ನಿಜಾರ್ಥದಲ್ಲಿ ಯೋಧ ದೇವರಾಗಿದ್ದಾರೆ. ಆತ್ಮದ ರೂಪದಲ್ಲಿ ಇವರು ಎಲ್ಲರನ್ನೂ ಕಾಯುತ್ತಿದ್ದಾರಂತೆ ಎಂಬ ನಂಬಿಕೆ ಇಲ್ಲಿನ ಜನರದ್ದು, ಸೈನಿಕರದ್ದು ಮಾತ್ರವಲ್ಲ ಚೀನಾ ಸೈನಿಕರದ್ದೂ ಕೂಡ.&lt;/p&gt;&lt;p&gt;ಹರ್ಭಜನ್ ಬಾಬಾ ಮಂದಿರ ಸೈನಿಕರಿಗೆ ಒಂದು ಶಕ್ತಿಕೇಂದ್ರ. ಮೊದಲ ಬಾರಿಗೆ ಇಲ್ಲಿ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸೈನಿಕರು ಪ್ರಥಮವಾಗಿ ಬಾಬಾ ಮಂದಿರಕ್ಕೆ ಬಂದು ಪ್ರಾರ್ಥಿಸುವುದು ವಾಡಿಕೆ. ಇಷ್ಟಕ್ಕೂ ಇವರು ಬಾಬಾ ಅಲ್ಲ. ಇವರೂ ಕೂಡ ಯೋಧರಾಗಿದ್ದವರು. ಸೇವೆಯಲ್ಲಿದ್ದಾಗ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟಿದ್ದರು. ಬಳಿಕ ತನ್ನ ಸ್ನೇಹಿತ ಯೋಧನ ಕನಸಿಗೆ ಬಂದಿದ್ದ ಹರ್ಭಜನ್&zwnj;, ತನ್ನ ಮೃತದೇಹ ಇರುವ ಸ್ಥಳ ತಿಳಿಸಿದ್ದರು. ಹುಡುಕಿದಾಗ ಮೃತದೇಹ ಪತ್ತೆಯಾಗಿತ್ತು. ಮತ್ತೊಮ್ಮೆ `ನನ್ನ ದೇಹಾಂತ್ಯ ಆಗಿರಬಹುದು. ಆದರೆ, ಆತ್ಮ ಸದಾ ಕರ್ತವ್ಯದಲ್ಲಿರುತ್ತದೆ'''''''' ಎಂದು ಹೇಳಿದ್ದರಂತೆ. ಆರಂಭದಲ್ಲಿ ಇವೆಲ್ಲ ಭ್ರಮೆ ಎಂದು ಯಾರೂ ಈ ಕನಸಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ದಿನಕಳೆದಂತೆ ಯೋಧರಿಗೆ ಬೇರೆ ಬೇರೆ ಅನುಭವ ಆಗುವುದಕ್ಕೆ ಆರಂಭವಾಯಿತಂತೆ. ಭವಿಷ್ಯದಲ್ಲಿ ಏನಾದರೂ ಘಟನೆ, ಸಮಸ್ಯೆ ಸಂಭವಿಸುವುದಿದ್ದರೆ ಇದನ್ನು ಮುಂಚಿತವಾಗಿಯೇ ಹರ್ಭಜನ್ ಕನಸಿನ ರೂಪದಲ್ಲಿ ಬಂದು ಹೇಳುತ್ತಿದ್ದರಂತೆ.&lt;/p&gt;&lt;p&gt;ಈ ರೀತಿ ಗಾಢವಾಗುತ್ತಾ ಹೋದ ನಂಬಿಕೆ ಇದೀಗ ಅಲ್ಲಿನ ಸೈನಿಕರನ್ನು ಆತ್ಮರೂಪಿ ಯೋಧ, ಹರ್ಭಜನ್&zwnj; ಬಾಬಾ ಅವರೇ ರಕ್ಷಿಸುತ್ತಿದ್ದಾರೆ ಎಂಬಂತೆ ಭಕ್ತಿ ರೂಪ ತಾಳಿದೆ. ಅವರಿಗಾಗಿ ಮಂದಿರ ನಿರ್ಮಿಸಿದ್ದಾರೆ. ಸೇನೆಯಲ್ಲಿ ಅವರು ಸೇವಾ ನಿರತರಾಗಿರುವಂತೆ ಬಂಕರ್&zwnj; ನಿರ್ಮಿಸಿದ್ದು, ಇಲ್ಲಿ ಬಾಬಾರ ಸಮವಸ್ತ್ರ, ಶೂ, ಹಾಸಿಗೆ ಸೇರಿದಂತೆ ಅವರು ಬಳಸುತ್ತಿದ್ದ ವಸ್ತುಗಳನ್ನೆಲ್ಲಾ ತಂದಿಡಲಾಗಿದೆ. ಬಾಬಾ ಅವರ ಈ ಕಚೇರಿಗೆ ಜನರು, ಸೈನಿಕರು ತಮ್ಮ ಬೇಡಿಕೆ, ಪ್ರಾರ್ಥನೆಗಳನ್ನೂ ಸಲ್ಲಿಸುವುದುಂಟು.&lt;/p&gt;&lt;h2&gt;ಕಾಲಕಾಲಕ್ಕೆ ಸಿಗುತ್ತಿತ್ತು ಹರ್ಭಜನ್&zwnj; ಆತ್ಮಕ್ಕೆ ಬಡ್ತಿ:&lt;/h2&gt;&lt;p&gt;ಹರ್ಭಜನ್&zwnj; ಸಿಂಗ್&zwnj; ಬದುಕಿರುವಂತೆ ಸೇನೆಯ ನಿಯಮದಂತೆ ಬಡ್ತಿ ಕೂಡಾ ನೀಡಲಾಗುತ್ತದೆ. ಅದರಂತೆ 2006ರಲ್ಲಿ ಹರ್ಭಜನ್ ಸಿಂಗ್ ಅವರನ್ನು ಸೇನೆಯಿಂದ ನಿವೃತ್ತಿಗೊಳಿಸಲಾಗಿತ್ತು. ಜೊತೆಗೆ, ಕರ್ತವ್ಯದಲ್ಲಿ ಇರುವ ತನಕ ಪ್ರತಿವರ್ಷ ಊರಿಗೆ ತೆರಳುವ ಎರಡು ತಿಂಗಳು ರಜೆ ಕೂಡಾ ಕೊಡಲಾಗುತ್ತಿತ್ತು. ಆಗ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ ಇವರ ಫೋಟೋವನ್ನು ಊರಿಗೆ ಸಂಭ್ರಮದಿಂದ ಕೊಂಡೊಯ್ಯಲಾಗುತ್ತಿತ್ತು. ಊರಿನ ಜನ ಕೂಡಾ ಈ ಫೋಟೋವನ್ನು ಭರ್ಜರಿಯಾಗಿ ಸ್ವಾಗತಿಸಿ ಹಬ್ಬ ಆಚರಿಸುತ್ತಿದ್ದರಂತೆ.&lt;/p&gt;&lt;h2&gt;ಚೀನಾ-ಭಾರತ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಜಾಗ:&lt;/h2&gt;&lt;p&gt;1967ರಲ್ಲಿ ಭಾರತೀಯ ಪಡೆಗಳು ಗಡಿಯಲ್ಲಿ ತಂತಿ ಬೇಲಿ ಹಾಕುತ್ತಿದ್ದಾಗ ಚೀನಾ ಪಡೆಗಳು ದಾಳಿ ನಡೆಸಿದ್ದರು. ಚೀನಿಯರು ಭೌಗೋಳಿಕ ಅನುಕೂಲ ಹೊಂದಿದ್ದರೂ ಸಹ ಭಾರತೀಯ ಸೇನೆಯು ಭೀಕರ ಪ್ರತಿ ದಾಳಿ ನಡೆಸಿ 400 ಸೈನಿಕರನ್ನು ಮಟ್ಟ ಹಾಕಿತ್ತು. ಈ ನಿರ್ಣಾಯಕ ವಿಜಯವು ಚೀನಾ ಆಕ್ರಮಣ ತಡೆಯಲು ಯಶಸ್ವಿಯಾಗಿತ್ತು.&lt;/p&gt;&lt;h2&gt;ತ್ಸ್ಯಾಂಗೋ ಸರೋವರ:&lt;/h2&gt;&lt;p&gt;ಇಲ್ಲಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ತ್ಸ್ಯಾಂಗೋ ಸರೋವರ ಕೂಡ ಒಂದು. ಈ ಶಾಂತಿಯುತ ಸರೋವರವು ಗ್ಯಾಂಗ್ಟಾಕ್-ನಾಥು ಲಾ ಹೆದ್ದಾರಿಯಲ್ಲಿ ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿದೆ. ಇದು ನಿರ್ಬಂಧಿತ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಅನುಮತಿ ಕಡ್ಡಾಯ. ಚಳಿಗಾಲದಲ್ಲಿ ಇದುಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ನೀಲಿ ಬಣ್ಣದ ಈ ಸರೋವರ ಪ್ರವಾಸಿಗರ ಪ್ರಮುಖ ಆಕರ್ಷಣೆ.&lt;/p&gt;&lt;h2&gt;ತ್ಸ್ಯಾಂಗೋ ರೋಪ್&zwnj; ವೇ:&lt;/h2&gt;&lt;p&gt;14,000 ಅಡಿ ಎತ್ತರದಲ್ಲಿರುವ ಏಷ್ಯಾದ ಮೊದಲ ಕೇಬಲ್&zwnj; ಕಾರ್&zwnj; ಮಾರ್ಗ ಈ ತ್ಸ್ಯಾಂಗೋ ರೋಪ್ ವೇ. ರೋಪ್&zwnj;ವೇಯಲ್ಲಿ ಪ್ರಯಾಣಿಸುವಾಗ ಹಿಮದಿಂದ ಆವೃತವಾದ ಹಿಮಾಲಯದ ಪರ್ವತಗಳು, ಕಣಿವೆಗಳು ಮತ್ತು ಇಡೀ ತ್ಸ್ಯಾಂಗೋ ಸರೋವರದ ಅದ್ಭುತ ವೈಮಾನಿಕ ನೋಟ ಗಮನ ಸೆಳೆಯುತ್ತದೆ.&lt;/p&gt;&lt;h2&gt;ರಾಜತಾಂತ್ರಿಕತೆಯ ಪ್ರಮುಖ ಕೇಂದ್ರ:&lt;/h2&gt;&lt;p&gt;ನಾಥೂ ಲಾ ಪಾಸ್&zwnj; ರಕ್ಷಣೆ ಮತ್ತು ರಾಜತಾಂತ್ರಿಕತೆಯ ಪ್ರಮುಖ ಕೇಂದ್ರ. ಉಭಯ ದೇಶಗಳ ನಡುವೆ ಶಾಂತಿ ಕಾಪಾಡಿಕೊಳ್ಳಲು ಭಾರತ ಮತ್ತು ಚೀನಾ ನಡುವೆ ವರ್ಷಕ್ಕೆ ಎಂಟು ಬಾರಿ ಗಡಿ ಸಿಬ್ಬಂದಿ ಸಭೆಗಳು ನಡೆಯುತ್ತವೆ. ಬೈಸಾಖಿ, ಗಣರಾಜ್ಯೋತ್ಸವ ಮತ್ತು ದೀಪಾವಳಿಯಂತಹ ಪ್ರಮುಖ ಸಂದರ್ಭಗಳಲ್ಲಿ ಭಾರತವು ಈ ಪೈಕಿ ಐದು ಸಭೆಗಳನ್ನು ಆಯೋಜಿಸಿದರೆ, ಚೀನಾ ತನ್ನ ಪಿಎಲ್ಎ ಸಂಸ್ಥಾಪನಾ ದಿನ ಸೇರಿದಂತೆ ಮೂರು ಸಭೆ ಆಯೋಜಿಸುತ್ತದೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/nathu-la-pass-experience-thrilling-border-tourism-military-valour-and-sacred-legends-in-sikkim-gdp/articleshow-91la7za"/>
        </item>
        <item>
            <title><![CDATA[ನೀತಾ ಅಂಬಾನಿ ರಾಯಲ್‌ ನೆಕ್ಲೆಸ್‌ ವೈರಲ್, 14 ಅಕ್ಕಸಾಲಿಗರು 3 ವರ್ಷದಿಂದ ಮಾಡಿರೋ ಬೃಹತ್‌ ಹಾರ! ಬೆಲೆ ಎಷ್ಟು?]]></title>
            <link>https://kannada.asianetnews.com/life/nita-ambanis-amrapali-bharatam-necklace-goes-viral-price-design-history-and-what-makes-it-special/articleshow-v4gg1ve</link>
            <guid isPermaLink="true">https://kannada.asianetnews.com/life/nita-ambanis-amrapali-bharatam-necklace-goes-viral-price-design-history-and-what-makes-it-special/articleshow-v4gg1ve</guid>
            <pubDate>Sat, 19 Sep 2026 08:13:13 +0530</pubDate>
            <description><![CDATA[&lt;p&gt;ಗಣೇಶ ಹಬ್ಬದಲ್ಲಿ ನೀತಾ ಅಂಬಾನಿ ಅವರು ಧರಿಸಿದ್ದ 'ಆಮ್ರಪಾಲಿ ಭಾರತಂ' ಎಂಬ ವಿಶೇಷ ನೆಕ್ಲೆಸ್ ಎಲ್ಲರ ಗಮನ ಸೆಳೆದಿದೆ. ದೇಶದ ವಿವಿಧ ಭಾಗಗಳ ಪ್ರಾಚೀನ ಆಭರಣಗಳನ್ನು3 ವರ್ಷಗಳ ಕಾಲ ಸಂಗ್ರಹಿಸಿ ಈ ಅಪರೂಪದ ಹಾರವನ್ನು ತಯಾರಿಸಲಾಗಿದೆ. ಇದರ ಬೆಲೆ ಬಹಿರಂಗವಾಗಿಲ್ಲದಿದ್ದರೂ, ಇದು ಲಕ್ಷಾಂತರ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2vqw43sm53qfcnhyymg101q,imgname-nita-ambani-wear-royal-necklace-1789784887417.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಗರ್ಭ ಶ್ರೀಮಂತ ಮುಕೇಶ್&zwnj; ಅಂಬಾನಿ ಪತ್ನಿ ನೀತಾ ಅಂಬಾನಿ ಮತ್ತೆ ಟ್ರೆಂಡಿಂಗ್&zwnj;ನಲ್ಲಿದ್ದಾರೆ. ಕಾರಣ ಇಷ್ಟೇ, ಅವರು ಈ ಬಾರಿ ಗಣೇಶ ಹಬ್ಬದಲ್ಲಿನ ಉಡುಗೆ ವಿಚಾರಕ್ಕೆ. ರಾಯಲ್&zwnj; ಲುಕ್&zwnj;ನಲ್ಲಿ ಮಿಂಚಿದರು&zwnj;. ಈ ವೇಳೆ ಅವರು ರಾಯಲ್&zwnj; ನೆಕ್ಸೆಸ್&zwnj; ತೊಟ್ಟಿದ್ದರು. ಆ ಫೋಟೋವೀಗ ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗ್ತಿದೆ. ನೆಟ್ಟಿಗರ ಕಣ್ಣು ಅವರು ತೊಟ್ಟಿದ್ದ ನೆಕ್ಲೆಸ್&zwnj; ಮೇಲೆ ಬಿದ್ದಿದೆ..&lt;/p&gt;&lt;h2&gt;&lt;strong&gt;ಹೇಗಿತ್ತು ಲುಕ್?&zwnj;&lt;/strong&gt;&lt;/h2&gt;&lt;p&gt;ನೀತಾ ಅಂಬಾನಿ ಲುಕ್ ಅದ್ಭುತವಾಗಿತ್ತು. 60ನೇ ವಯಸ್ಸಿನಲ್ಲೂ ತುಂಬಾ ಚೆನ್ನಾಗಿ ಕಾಣುತ್ತಿದ್ದರು. ಅವರು ಕಿತ್ತಳೆ ಮತ್ತು ಗುಲಾಬಿ ಬಣ್ಣದ ಓಂಬ್ರೆ ರೇಷ್ಮೆ ಸೀರೆ ಧರಿಸಿದ್ದರು. ಅವರು ಸೀರೆಯನ್ನು ದೊಡ್ಡ ಗಾತ್ರದ ಹಾರದೊಂದಿಗೆ ಜೋಡಿಸಿದ್ದರು. ಇದು ಎಲ್ಲರ ಗಮನಸೆಳೆಯಿತು. ಚಿನ್ನದಿಂದ ಮಾಡಲ್ಪಟ್ಟ ಹಾರವು ತುಂಬಾ ಅದ್ಭುತವಾಗಿತ್ತು.&lt;/p&gt;&lt;h2&gt;&lt;strong&gt;ನೆಕ್ಲೆಸ್&zwnj;ನ ವಿಶೇಷತೆ ಏನು?&lt;/strong&gt;&lt;/h2&gt;&lt;p&gt;ಕೆಲವು ವರದಿಗಳ ಪ್ರಕಾರ.. ಈ ಹಾರವನ್ನು ʼಆಮ್ರಪಾಲಿ ಭಾರತಂʼ ಎಂದು ಕರೆಯುತ್ತಾರೆ. ಇದನ್ನು ಆಮ್ರಪಾಲಿ ಜ್ಯುವೆಲ್ಸ್ ರಚಿಸಿದೆ. ಅಂದ್ಹಾಗೆ ಇದು ಸಾಮಾನ್ಯ ಸರವಲ್ಲ. ಇದನ್ನ ಮತ್ತೆ ಮರುಸೃಷ್ಟಿ ಮಾಡೋದು ಸುಲಭವಿಲ್ಲ. ವಿಶೇಷತೆ ಏನು ಅಂದರೆ ದೇಶದ ವಿವಿಧ ಭಾಗಗಳಿಂದ ವಿಂಟೇಜ್ ಮತ್ತು ಪ್ರಾಚೀನ ಆಭರಣಗಳನ್ನು ಸಂಗ್ರಹಿಸಿ ತಯಾರಿಸಲಾಗಿದೆ. ಈ ಆಭರಣಗಳನ್ನ ಸಂಗ್ರಹಿಸಲು 3 ವರ್ಷಗಳು ಬೇಕಾಯಿತು. ನಂತರ ಹದಿನಾಲ್ಕು ನುರಿತ ಕುಶಲಕರ್ಮಿಗಳು ಜೋಡಿಸಲು ಹಲವಾರು ತಿಂಗಳುಗಳ ಕಾಲ ಕೆಲಸ ಮಾಡಿದರು ಎಂದು ವರದಿಯಾಗಿದೆ.&lt;/p&gt;&lt;p&gt;ಆಭರಣದಲ್ಲಿ ಕೇರಳದ ಹಾರಗಳು, ನಾಥ್, ಜುಮರ್, ಜುಮ್ಕಾಸ್, ಬದ್ಲಾ ಮತ್ತು ಚಾಂದ್&zwnj;ಬಾಲಿ ಮುಂತಾದ ಪ್ರಾಚೀನ ದಕ್ಷಿಣ ಭಾರತದ ಆಭರಣಗಳು ಸೇರಿವೆ. ಮುತ್ತುಗಳು, ವರ್ಣರಂಜಿತ ರತ್ನದ ಕಲ್ಲುಗಳು ಮತ್ತು ವಜ್ರಗಳನ್ನು ಸಹ ಇದರಲ್ಲಿ ಸೇರಿಸಲಾಗಿದೆ. ಹೀಗಾಗಿ ಇದನ್ನು ಸೃಷ್ಟಿಸೋದು ಸುಲಭ ಆಗಿರಲಿಲ್ಲ. ಚೆನ್ನಾಗಿ ಮೂಡಿಬರಲಿ ಎಂದು ವಿನ್ಯಾಸವನ್ನು ಪದೇ ಪದೇ ಪರೀಕ್ಷೆ ಮಾಡುತ್ತಿದ್ದರು. ಈ ವಿಂಟೇಜ್ ಆಭರಣಗಳ ನಡುವಿನ ಖಾಲಿ ಜಾಗವನ್ನು ತುಂಬಲು ಅಮೂಲ್ಯವಾದ ಮುತ್ತುಗಳು, ವಜ್ರಗಳು, ಕೆಂಪು ಮತ್ತು ಹಸಿರು ರತ್ನಗಳನ್ನು ಬಳಸಲಾಗಿದೆ.&lt;/p&gt;&lt;h2&gt;&lt;strong&gt;ಬೆಲೆ ಎಷ್ಟು?&lt;/strong&gt;&lt;/h2&gt;&lt;p&gt;ಪ್ರಾಚೀನ ಆಭರಣವು ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದೆ. ಹೀಗಾಗಿ ಹಾರದ ವಿನ್ಯಾಸ ಒಂದೇ ರೀತಿ ಇಲ್ಲ. ಭಿನ್ನಭಿನ್ನವಾಗಿದೆ. ಇನ್ನು ಈ ಹಾರವು ವಸ್ತು ಸಂಗ್ರಾಲಯದಲ್ಲಿರುವ ಪ್ರಾಚೀನ ಮತ್ತು ಅಪರೂಪದ ಆಭರಣಗಳ ಸಂಗ್ರಹ ಹೋಲುತ್ತದೆ. ಇದರ ಬೆಲೆಯನ್ನ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಅದನ್ನು ತಯಾರಿಸಿದ ರೀತಿ ಮತ್ತು ಅದರ ಮೇಲಿನ ವಜ್ರಗಳು ಮತ್ತು ಮುತ್ತುಗಳು ಲಕ್ಷಾಂತರ ಮೌಲ್ಯದ್ದಾಗಿರಬಹುದೆಂದು ಹೇಳುತ್ತವೆ. ಆಮ್ರಪಾಲಿ ಭಾರತಂ (Amrapali Bharatam) ಎಂಬುದು ಭಾರತದ ಪ್ರಸಿದ್ಧ ಆಭರಣ ಸಂಸ್ಥೆ. ಆಮ್ರಪಾಲಿ ಜ್ಯುವೆಲ್ಸ್ ವಿನ್ಯಾಸಗೊಳಿಸಿದ ಅತ್ಯಂತ ಅಪರೂಪದ ಮತ್ತು ಭವ್ಯವಾದ ನೆಕ್ಲೇಸ್ (ಹಾರ) ಆಗಿದೆ. ಉದ್ಯಮಿ ನೀತಾ ಅಂಬಾನಿ ಅವರು ತಮ್ಮ ಮನೆಯ ಗಣೇಶ ಚತುರ್ಥಿ ಆಚರಣೆಯ ಸಂದರ್ಭದಲ್ಲಿ ಧರಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.&lt;/p&gt;&lt;p&gt;ನೀತಾ ಅಂಬಾನಿ ಅವರಿಗಿಂತ ಮೊದಲು, ಬಾಲಿವುಡ್ ನಟಿ ಸೋನಂ ಕಪೂರ್ ಅವರು ನವೆಂಬರ್ 2025 ರಲ್ಲಿ ತಮ್ಮ ಗರ್ಭಾವಸ್ಥೆಯ ಫೋಟೋಶೂಟ್ ಒಂದಕ್ಕಾಗಿ ಇದೇ 'ಆಮ್ರಪಾಲಿ ಭಾರತಂ' ನೆಕ್ಲೇಸ್ ಅನ್ನು ಧರಿಸಿದ್ದರು.&lt;/p&gt;]]></content:encoded>
            <category>life</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/life/nita-ambanis-amrapali-bharatam-necklace-goes-viral-price-design-history-and-what-makes-it-special/articleshow-v4gg1ve"/>
        </item>
        <item>
            <title><![CDATA[ಕಡಿಮೆ ಬಜೆಟ್‌ನಲ್ಲಿ ಬಾಲ್ಕನಿಗೆ ಕೊಡಿ ಸ್ಟೈಲಿಶ್ ಲುಕ್: ಈ ಸಿಂಪಲ್ ಐಡಿಯಾಗಳನ್ನು ಟ್ರೈ ಮಾಡಿ!]]></title>
            <link>https://kannada.asianetnews.com/gallery/kitchen/budget-friendly-balcony-decor-ideas-make-your-balcony-beautiful-without-spending-much-8lwcq07</link>
            <guid isPermaLink="true">https://kannada.asianetnews.com/gallery/kitchen/budget-friendly-balcony-decor-ideas-make-your-balcony-beautiful-without-spending-much-8lwcq07</guid>
            <pubDate>Fri, 18 Sep 2026 21:53:28 +0530</pubDate>
            <description><![CDATA[&lt;p&gt;Balcony Decor: ಬಾಲ್ಕನಿಯನ್ನು ಸುಂದರವಾಗಿಸಲು ದುಬಾರಿ ಫರ್ನಿಚರ್ ಅಗತ್ಯವಿಲ್ಲ. ಗಿಡಗಳು, ಹಳೆಯ ವಸ್ತುಗಳ ಮರುಬಳಕೆ, ಫೇರಿ ಲೈಟ್ಸ್ ಮತ್ತು ಸಣ್ಣ ಸಿಟ್ಟಿಂಗ್ ಕಾರ್ನರ್&zwnj;ನಂತಹ ಸರಳ ಐಡಿಯಾಗಳಿಂದ ನಿಮ್ಮ ಬಾಲ್ಕನಿಗೆ ಆಕರ್ಷಕ ಲುಕ್ ನೀಡಬಹುದು. ಅದು ಹೇಗೆ ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzp7782pfa6tr4v7y0m6kchc,imgname-monsoon-balcony-decor-1786378428502.jpg" type="image/jpeg" height="390" width="690"/>
            <content:encoded><![CDATA[&lt;p&gt;Balcony Decor: ಬಾಲ್ಕನಿಯನ್ನು ಸುಂದರವಾಗಿಸಲು ದುಬಾರಿ ಫರ್ನಿಚರ್ ಅಗತ್ಯವಿಲ್ಲ. ಗಿಡಗಳು, ಹಳೆಯ ವಸ್ತುಗಳ ಮರುಬಳಕೆ, ಫೇರಿ ಲೈಟ್ಸ್ ಮತ್ತು ಸಣ್ಣ ಸಿಟ್ಟಿಂಗ್ ಕಾರ್ನರ್&zwnj;ನಂತಹ ಸರಳ ಐಡಿಯಾಗಳಿಂದ ನಿಮ್ಮ ಬಾಲ್ಕನಿಗೆ ಆಕರ್ಷಕ ಲುಕ್ ನೀಡಬಹುದು. ಅದು ಹೇಗೆ ನೋಡೋಣ.&lt;/p&gt;&lt;img&gt;&lt;p&gt;ಮನೆಯ ಬಾಲ್ಕನಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರವಲ್ಲ, ಅದನ್ನು ಸುಂದರವಾಗಿ ಅಲಂಕರಿಸುವುದೂ ಮುಖ್ಯ. ಬಾಲ್ಕನಿ ಮನೆಯ ಲುಕ್&zwnj;ಗೆ ವಿಶೇಷ ಮೆರುಗು ನೀಡುವುದರಿಂದ ಅದನ್ನು ಚೆಂದಗೊಳಿಸಲು ಹೆಚ್ಚು ಹಣ ಖರ್ಚು ಮಾಡಬೇಕೆಂದಿಲ್ಲ. ಸ್ವಲ್ಪ ಕ್ರಿಯೇಟಿವಿಟಿ ಹಾಗೂ ಬಜೆಟ್&zwnj; ಫ್ರೆಂಡ್ಲಿ ವಸ್ತುಗಳ ಸಹಾಯದಿಂದ ಬಾಲ್ಕನಿಯನ್ನು ಆರಾಮದಾಯಕ ಮತ್ತು ಸುಂದರವಾದ ಕಾರ್ನರ್ ಆಗಿ ಬದಲಾಯಿಸಬಹುದು. ಇದಕ್ಕಾಗಿ ದುಬಾರಿ ಫರ್ನಿಚರ್ ಅಥವಾ ದೊಡ್ಡ ಬದಲಾವಣೆಗಳ ಅಗತ್ಯವಿಲ್ಲ.&lt;/p&gt;&lt;img&gt;&lt;p&gt;ಬಾಲ್ಕನಿಯನ್ನು ಹಸಿರಿನಿಂದ ತುಂಬಿಸುವುದು ಸುಂದರವಾಗಿ ಕಾಣಲು ಸುಲಭವಾದ ಮಾರ್ಗ. ಮನಿ ಪ್ಲಾಂಟ್, ಅಲೋವೆರಾ, ಸ್ನೇಕ್ ಪ್ಲಾಂಟ್ ಸೇರಿದಂತೆ ವಿವಿಧ ಸಸ್ಯಗಳನ್ನು ಸಣ್ಣ ಕುಂಡಗಳಲ್ಲಿ ಬೆಳೆಸಬಹುದು. ಜಾಗ ಕಡಿಮೆ ಇದ್ದರೆ ನೆಲದ ಮೇಲೆ ಗಿಡಗಳನ್ನು ಇಡುವ ಬದಲು ಹ್ಯಾಂಗಿಂಗ್ ಪ್ಲಾಂಟರ್ ಅಥವಾ ವರ್ಟಿಕಲ್ ಪ್ಲಾಂಟ್ ಸ್ಟ್ಯಾಂಡ್ ಬಳಸಬಹುದು.&lt;/p&gt;&lt;img&gt;&lt;p&gt;ಮನೆಯಲ್ಲಿರುವ ಹಳೆಯ ಬಾಟಲಿಗಳು, ಮರದ ಬಾಕ್ಸ್&zwnj;ಗಳು, ಬುಟ್ಟಿಗಳು ಅಥವಾ ಸಣ್ಣ ಡಬ್ಬಿಗಳನ್ನು ಎಸೆಯುವ ಬದಲು ಬಾಲ್ಕನಿ ಡೆಕೋರ್&zwnj;ಗೆ ಬಳಸಬಹುದು. ಅವುಗಳಿಗೆ ಬಣ್ಣ ಹಚ್ಚಿ ಸುಂದರವಾದ ಪ್ಲಾಂಟರ್&zwnj;ಗಳಾಗಿ ಪರಿವರ್ತಿಸಬಹುದು. ಇದರಿಂದ ಬಾಲ್ಕನಿಗೆ ಯೂನಿಕ್ ಲುಕ್ ಸಿಗುವುದರ ಜೊತೆಗೆ ಅಲಂಕಾರದ ಖರ್ಚೂ ಕಡಿಮೆಯಾಗುತ್ತದೆ.&lt;/p&gt;&lt;img&gt;&lt;p&gt;ಸಂಜೆ ವೇಳೆ ಬಾಲ್ಕನಿಗೆ ಸುಂದರವಾದ ವಾತಾವರಣ ಬೇಕೆಂದರೆ ಫೇರಿ ಲೈಟ್ಸ್ ಉತ್ತಮ ಆಯ್ಕೆ. ಇವುಗಳನ್ನು ಬಾಲ್ಕನಿ ರೇಲಿಂಗ್, ಗೋಡೆ ಅಥವಾ ಗಿಡಗಳ ಸುತ್ತಲೂ ಅಲಂಕರಿಸಬಹುದು. ಮೃದುವಾದ ಬೆಳಕು ಬಾಲ್ಕನಿಗೆ ಕೋಝಿ ಮತ್ತು ಆಕರ್ಷಕ ಲುಕ್ ನೀಡುತ್ತದೆ.&lt;/p&gt;&lt;img&gt;&lt;p&gt;ಬಾಲ್ಕನಿಯಲ್ಲಿ ಸ್ವಲ್ಪ ಜಾಗವಿದ್ದರೆ ಒಂದು ಸಣ್ಣ ಫೋಲ್ಡಿಂಗ್ ಚೇರ್, ಫ್ಲೋರ್ ಕುಶನ್ ಅಥವಾ ಮ್ಯಾಟ್ ಇಟ್ಟು ಕುಳಿತುಕೊಳ್ಳುವ ಜಾಗ ಮಾಡಿಕೊಳ್ಳಬಹುದು. ದುಬಾರಿ ಸೋಫಾ ಸೆಟ್ ಖರೀದಿಸುವ ಬದಲು ಮನೆಯಲ್ಲಿರುವ ಕುಶನ್&zwnj;ಗಳು ಹಾಗೂ ಹಳೆಯ ಬಟ್ಟೆಗಳಿಂದ ತಯಾರಿಸಿದ ಕವರ್&zwnj;ಗಳನ್ನು ಬಳಸಬಹುದು.&lt;/p&gt;&lt;img&gt;&lt;p&gt;ಬಾಲ್ಕನಿಯ ಗೋಡೆಯ ಮೇಲೆ ಖಾಲಿ ಜಾಗವಿದ್ದರೆ ಸಣ್ಣ ವಾಲ್ ಪ್ಲಾಂಟರ್&zwnj;ಗಳು, ಫೋಟೋ ಫ್ರೇಮ್&zwnj;ಗಳು, ಮಿರರ್&zwnj;ಗಳು ಅಥವಾ ಹ್ಯಾಂಡ್&zwnj;ಮೇಡ್ ಡೆಕೋರೇಟಿವ್ ಪೀಸ್&zwnj;ಗಳನ್ನು ಹಾಕಬಹುದು. ಆದರೆ ಗೋಡೆಯ ಮೇಲೆ ಯಾವುದೇ ವಸ್ತುವನ್ನು ಅಳವಡಿಸುವಾಗ ಅದು ಗಟ್ಟಿಯಾಗಿ ಮತ್ತು ಸುರಕ್ಷಿತವಾಗಿ ಫಿಕ್ಸ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/kitchen/budget-friendly-balcony-decor-ideas-make-your-balcony-beautiful-without-spending-much-8lwcq07"/>
        </item>
        <item>
            <title><![CDATA[₹26ರ ಆರ್ಡರ್‌ಗೆ ₹30 GST? Swiggy ಬಿಲ್ ನೋಡಿ ಕಂಗಾಲಾದ ಗ್ರಾಹಕ; ಕಂಪನಿ ಕೊಟ್ಟ ಉತ್ತರವೇನು?]]></title>
            <link>https://kannada.asianetnews.com/business/swiggy-bill-sparks-confusion-customer-questions-rs-30-gst-on-rs-26-order/articleshow-1mtk0kn</link>
            <guid isPermaLink="true">https://kannada.asianetnews.com/business/swiggy-bill-sparks-confusion-customer-questions-rs-30-gst-on-rs-26-order/articleshow-1mtk0kn</guid>
            <pubDate>Fri, 18 Sep 2026 21:47:17 +0530</pubDate>
            <description><![CDATA[&lt;p&gt;₹26ರ ಫುಡ್ ಆರ್ಡರ್&zwnj;ಗೆ ₹30 GST ವಿಧಿಸಿರುವುದನ್ನು ಪ್ರಶ್ನಿಸಿದ ಗ್ರಾಹಕನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. &lsquo;ಇಷ್ಟು GST ಹೇಗೆ?&rsquo; ಎಂಬ ಪ್ರಶ್ನೆಗೆ Swiggy, ತೆರಿಗೆ ಲೆಕ್ಕಾಚಾರವನ್ನು original price ಆಧರಿಸಿ ಮಾಡಲಾಗಿದೆ ಎಂದು ವಿವರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tmtrs7kw2ngkxwe4kv93p2,imgname-swiggy-customer-spots-rs-30-gst-on-rs-26-order--company-gives-clarification--1--1789748142886.jpg" type="image/jpeg" height="390" width="690"/>
            <content:encoded><![CDATA[&lt;h2&gt;₹26ರ ಆರ್ಡರ್&zwnj;ಗೆ ₹30 GST ಹೇಗೆ?&lt;/h2&gt;&lt;p&gt;ಆನ್&zwnj;ಲೈನ್ ಫುಡ್ ಡೆಲಿವರಿ ಆರ್ಡರ್&zwnj;ಗಳಲ್ಲಿ ಕಾಣಿಸುವ ವಿವಿಧ ಶುಲ್ಕಗಳು ಆಗಾಗ್ಗೆ ಗ್ರಾಹಕರ ಗಮನ ಸೆಳೆಯುತ್ತವೆ. ಇದೀಗ ₹26ರ ಆರ್ಡರ್&zwnj;ಗೆ ₹30 GST ವಿಧಿಸಿರುವುದನ್ನು ಪ್ರಶ್ನಿಸಿದ ಗ್ರಾಹಕನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಗ್ರಾಹಕ ತನ್ನ ಬಿಲ್&zwnj;ನಲ್ಲಿರುವ ತೆರಿಗೆ ಲೆಕ್ಕಾಚಾರವನ್ನು ಗಮನಿಸಿ, ಆರ್ಡರ್&zwnj;ನ ಮೂಲ ಬೆಲೆಗಿಂತ GST ಮೊತ್ತವೇ ಹೆಚ್ಚಾಗಿರುವುದು ಹೇಗೆ ಎಂದು Swiggyಯನ್ನು ಪ್ರಶ್ನಿಸಿದ್ದಾನೆ. ಈ ಪ್ರಶ್ನೆಗೆ ಕಂಪನಿಯ ಪ್ರತಿಕ್ರಿಯೆಯೂ ಇದೀಗ ಗಮನ ಸೆಳೆದಿದೆ.&lt;/p&gt;&lt;h3&gt;&lsquo;GST ಲೆಕ್ಕಾಚಾರ ಹೇಗೆ?'&lt;/h3&gt;&lt;p&gt;ಗ್ರಾಹಕನ ಪ್ರಶ್ನೆಯ ಮುಖ್ಯ ಅಂಶವೆಂದರೆ, ಆರ್ಡರ್&zwnj;ಗೆ ಸಂಬಂಧಿಸಿದ ಬೆಲೆ ₹26 ಆಗಿದ್ದರೆ ತೆರಿಗೆ ಮೊತ್ತ ₹30 ಆಗಿರುವುದು ಹೇಗೆ ಎಂಬುದು. ಸಾಮಾನ್ಯವಾಗಿ ಗ್ರಾಹಕರು ಬಿಲ್&zwnj;ನಲ್ಲಿ ಕಾಣುವ ಅಂತಿಮ ಮೊತ್ತವನ್ನು ಆಧರಿಸಿ ತೆರಿಗೆ ಲೆಕ್ಕ ಹಾಕುತ್ತಾರೆ. ಆದರೆ ಡೆಲಿವರಿ ಪ್ಲಾಟ್&zwnj;ಫಾರ್ಮ್&zwnj;ಗಳ ಬಿಲ್&zwnj;ನಲ್ಲಿ ಆಹಾರದ ಬೆಲೆಯ ಜೊತೆಗೆ ವಿವಿಧ ಶುಲ್ಕಗಳು ಮತ್ತು ಅವುಗಳಿಗೆ ಅನ್ವಯಿಸುವ ತೆರಿಗೆಗಳೂ ಇರಬಹುದು.&lt;/p&gt;&lt;p&gt;Swiggy ತನ್ನ ನಿಯಮಗಳಲ್ಲಿ, ಆರ್ಡರ್ ಮಾಡುವ ಮುನ್ನ checkout ಹಂತದಲ್ಲಿ ಅನ್ವಯಿಸುವ charges ಅನ್ನು ಗ್ರಾಹಕರಿಗೆ ತೋರಿಸಲಾಗುತ್ತದೆ ಎಂದು ತಿಳಿಸಿದೆ. ಇದರಲ್ಲಿ delivery fee, handling fee, convenience fee, platform fee, packaging fee ಸೇರಿದಂತೆ ವಿವಿಧ ಶುಲ್ಕಗಳು ಇರಬಹುದು.&lt;/p&gt;&lt;h3&gt;Swiggy ಕೊಟ್ಟ ಉತ್ತರವೇನು?&lt;/h3&gt;&lt;p&gt;ಗ್ರಾಹಕ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ Swiggy, ತೆರಿಗೆ ಲೆಕ್ಕಾಚಾರವನ್ನು original price ಆಧರಿಸಿ ಮಾಡಲಾಗಿದೆ ಎಂದು ವಿವರಿಸಿದೆ.&lt;/p&gt;&lt;p&gt;ಅಂದರೆ, ಗ್ರಾಹಕನಿಗೆ ಕಾಣುವ ಅಂತಿಮವಾಗಿ ಕಡಿಮೆಯಾದ ಅಥವಾ discount ಬಳಿಕದ ಮೊತ್ತವನ್ನೇ ತೆರಿಗೆ ಲೆಕ್ಕಕ್ಕೆ ನೇರವಾಗಿ ಬಳಸಲಾಗಿದೆ ಎಂದು ಊಹಿಸುವುದು ಸರಿಯಾಗುವುದಿಲ್ಲ. ಆರ್ಡರ್&zwnj;ನಲ್ಲಿರುವ ಮೂಲ ಬೆಲೆ ಮತ್ತು ಅನ್ವಯಿಸುವ ವಿವಿಧ charges ಆಧರಿಸಿ ತೆರಿಗೆ ಲೆಕ್ಕಾಚಾರ ಬದಲಾಗಬಹುದು.&lt;/p&gt;&lt;p&gt;ಇದೇ ಕಾರಣಕ್ಕೆ ಬಿಲ್&zwnj;ನಲ್ಲಿ ಕಾಣುವ ಆರ್ಡರ್ ಮೊತ್ತ ಮತ್ತು GST ಮೊತ್ತವನ್ನು ನೇರವಾಗಿ ಹೋಲಿಸಿದಾಗ ಗೊಂದಲ ಉಂಟಾಗಬಹುದು.&lt;/p&gt;&lt;h3&gt;ಆಹಾರದ ಬೆಲೆಯಷ್ಟೇ ಅಲ್ಲ, ಇತರ ಶುಲ್ಕಗಳೂ ಇರುತ್ತವೆ&lt;/h3&gt;&lt;p&gt;Swiggyಯ ಅಧಿಕೃತ terms ಪ್ರಕಾರ, ಆರ್ಡರ್&zwnj;ಗೆ delivery, handling, convenience, platform, packaging ಮತ್ತು ಇತರ charges ಅನ್ವಯಿಸಬಹುದು. ಈ charges ಆರ್ಡರ್&zwnj;ನ checkout ಹಂತದಲ್ಲಿ ತೋರಿಸಲಾಗುತ್ತದೆ. ಅಂತಿಮ tax bill ಅನ್ನು ಸಂಬಂಧಿತ merchant ಅಥವಾ delivery partner ನೀಡಬಹುದು ಎಂದು ಕಂಪನಿ ತಿಳಿಸಿದೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ Swiggy ಬಿಲ್&zwnj;ಗಳಲ್ಲಿನ ಹೆಚ್ಚುವರಿ ಶುಲ್ಕಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಚರ್ಚೆಯಾಗುತ್ತಿವೆ. ಉದಾಹರಣೆಗೆ, ಸೆಪ್ಟೆಂಬರ್ 2026ರಲ್ಲಿ ರೆಸ್ಟೋರೆಂಟ್&zwnj;ನಲ್ಲಿ ₹230 ಇದ್ದ ಊಟ Swiggyನಲ್ಲಿ ₹436 ಆಗಿರುವುದನ್ನು ಹೋಲಿಸಿದ ಪೋಸ್ಟ್ ಕೂಡ ವೈರಲ್ ಆಗಿತ್ತು.&lt;/p&gt;&lt;h3&gt;ವೈರಲ್ ಪೋಸ್ಟ್ ಮತ್ತೆ ಹುಟ್ಟಿಸಿದ ಪ್ರಶ್ನೆ&lt;/h3&gt;&lt;p&gt;₹26ರ ಆರ್ಡರ್&zwnj;ಗೆ ₹30 GST ಎಂಬ ಲೆಕ್ಕಾಚಾರ ಗ್ರಾಹಕರಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಆದರೆ ಫುಡ್ ಡೆಲಿವರಿ ಬಿಲ್&zwnj;ನಲ್ಲಿ ಆಹಾರದ ಬೆಲೆ ಮಾತ್ರವಲ್ಲದೆ ಅನ್ವಯಿಸುವ ಇತರ charges ಮತ್ತು ಅವುಗಳ ತೆರಿಗೆಗಳೂ ಸೇರಿರಬಹುದಾದ್ದರಿಂದ, ಕೇವಲ ಒಂದು ಮೊತ್ತವನ್ನು ನೋಡಿ ಸಂಪೂರ್ಣ ತೆರಿಗೆ ಲೆಕ್ಕವನ್ನು ನಿರ್ಧರಿಸಲು ಸಾಧ್ಯವಿಲ್ಲ.&lt;/p&gt;&lt;p&gt;ಈ ಘಟನೆ ಮತ್ತೊಮ್ಮೆ ಆನ್&zwnj;ಲೈನ್ ಆರ್ಡರ್ ಮಾಡುವ ಮುನ್ನ checkoutನಲ್ಲಿ item price, discount, delivery fee, platform fee ಮತ್ತು tax breakup ಅನ್ನು ಪರಿಶೀಲಿಸುವುದು ಏಕೆ ಮುಖ್ಯ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;p&gt;Hey @Swiggy @SwiggyCares&amp;nbsp;how is GST 30/-, if items itself cost 26/-? pic.twitter.com/piPG9zQyDd&lt;/p&gt;&lt;p&gt;&mdash; Aditya Daga (@adi_daga) September 17, 2026&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Chandrashekar GS</dc:creator>
            <atom:link href="https://kannada.asianetnews.com/business/swiggy-bill-sparks-confusion-customer-questions-rs-30-gst-on-rs-26-order/articleshow-1mtk0kn"/>
        </item>
        <item>
            <title><![CDATA[ಬೆಂಗಳೂರಿನ ಪ್ರಸಿದ್ಧ ಮಿಲಿಟರಿ ಹೋಟೆಲ್ ಶೈಲಿಯ ಮಶ್ರೂಮ್ ದೊನ್ನೆ ಬಿರಿಯಾನಿ ಈಗ ಮನೆಯಲ್ಲೇ ಮಾಡಿ]]></title>
            <link>https://kannada.asianetnews.com/food/military-hotel-style-mushroom-donne-biryani-recipe-easy-sunday-special-at-home/articleshow-qzfp1c6</link>
            <guid isPermaLink="true">https://kannada.asianetnews.com/food/military-hotel-style-mushroom-donne-biryani-recipe-easy-sunday-special-at-home/articleshow-qzfp1c6</guid>
            <pubDate>Fri, 18 Sep 2026 21:41:39 +0530</pubDate>
            <description><![CDATA[&lt;p&gt;&lt;strong&gt;Mushroom donne biryani recipe: &lt;/strong&gt;ಸದಾ ಅದೇ ಚಿಕನ್, ಮಟನ್ ಬಿರಿಯಾನಿ ತಿಂದು ಬೋರ್ ಆಗಿದ್ದರೆ, ಈ ಬಾರಿ ನಾನ್&zwnj;ವೆಜ್&zwnj; ಮೀರಿಸುವಂತಹ ಟೇಸ್ಟಿ 'ಮಶ್ರೂಮ್ ದೊನ್ನೆ ಬಿರಿಯಾನಿ' ಟ್ರೈ ಮಾಡಿ ನೋಡಿ. ಜೀರಿಗೆ ಸಾಂಬಾ ಅಕ್ಕಿಯ ಸುವಾಸನೆ ಮತ್ತು ಹಸಿರು ಮಸಾಲೆಯ ಘಮವಿರುವ ಈ ಬೆಂಗಳೂರು ಮಿಲಿಟರಿ ಹೋಟೆಲ್ ಶೈಲಿಯ ಬಿರಿಯಾನಿ ಮಾಡುವ ಸುಲಭ ವಿಧಾನ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tmk128t1rwp1b9n0dkbz13,imgname-thumbnail--9--1789747889223.png" type="image/jpeg" height="390" width="690"/>
            <content:encoded><![CDATA[&lt;p&gt;ಬಿರಿಯಾನಿ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಚಿಕನ್ ಅಥವಾ ಮಟನ್ ಬಿರಿಯಾನಿ. ಆದರೆ ಸದಾ ಅದೇ ಮಾಂಸಾಹಾರಿ ಬಿರಿಯಾನಿ ತಿಂದು ಬೋರ್ ಆಗಿದ್ದರೆ ಅಥವಾ ಶುದ್ಧ ಸಸ್ಯಾಹಾರಿಗಳಿಗೆ ನಾನ್&zwnj;ವೆಜ್ ಬಿರಿಯಾನಿಯನ್ನೇ ಮೀರಿಸುವಂತಹ ಟೇಸ್ಟ್ ಬೇಕಿದ್ದರೆ ಈ ಬಾರಿ ಘಮಘಮಿಸುವ &lsquo;ಮಶ್ರೂಮ್ ದೊನ್ನೆ ಬಿರಿಯಾನಿ&rsquo; (Mushroom Donne Biryani) ಟ್ರೈ ಮಾಡಿ ನೋಡಿ.&lt;/p&gt;&lt;p&gt;ಬೆಂಗಳೂರಿನ ಪ್ರಸಿದ್ಧ ಮಿಲಿಟರಿ ಹೋಟೆಲ್ ಶೈಲಿಯಲ್ಲಿ, ಜೀರಿಗೆ ಸಾಂಬಾ ಅಕ್ಕಿ ಮತ್ತು ಅಣಬೆ (ಮಶ್ರೂಮ್) ಬಳಸಿ ಮಾಡುವ ಈ ಬಿರಿಯಾನಿ ರುಚಿಗೆ ಮಕ್ಕಳು ಮಾತ್ರವಲ್ಲ, ದೊಡ್ಡವರೂ ಫಿದಾ ಆಗುತ್ತಾರೆ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ..&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;p&gt;ಜೀರಿಗೆ ಸಾಂಬಾ ಅಕ್ಕಿ (Jeera Samba Rice) &ndash; 1 ಕಪ್ಅಣಬೆ (ಮಶ್ರೂಮ್) &ndash; 200 ಗ್ರಾಂಗಟ್ಟಿ ಮೊಸರು &ndash; ಕಾಲು ಕಪ್ಅಚ್ಚ ಖಾರದ ಪುಡಿ &ndash; ಅರ್ಧ ಚಮಚಅರಿಶಿನ ಪುಡಿ &ndash; ಕಾಲು ಚಮಚಧನಿಯಾ ಪುಡಿ &ndash; ಅರ್ಧ ಚಮಚಅಡುಗೆ ಎಣ್ಣೆ ಮತ್ತು ತುಪ್ಪ &ndash; ತಲಾ 2 ಚಮಚನೀರು &ndash; 2 ಕಪ್ಉಪ್ಪು &ndash; ರುಚಿಗೆ ತಕ್ಕಷ್ಟು&lt;/p&gt;&lt;h2&gt;&lt;strong&gt;ರುಬ್ಬಿಕೊಳ್ಳಲು ಹಸಿರು ಮಸಾಲೆಗೆ&lt;/strong&gt;&lt;/h2&gt;&lt;p&gt;ಲವಂಗ &ndash; 2ಚಕ್ಕೆ &ndash; 1 ಇಂಚುಕಾಳುಮೆಣಸು &ndash; ಕಾಲು ಚಮಚಹಸಿರು ಮೆಣಸಿನಕಾಯಿ &ndash; 2 ರಿಂದ 3ಹೆಚ್ಚಿದ ಈರುಳ್ಳಿ &ndash; ಅರ್ಧ ಕಪ್ಬೆಳ್ಳುಳ್ಳಿ ಎಸಳು &ndash; 5 ರಿಂದ 6ಶುಂಠಿ &ndash; ಸಣ್ಣ ತುಂಡುಕೊತ್ತಂಬರಿ ಸೊಪ್ಪು &ndash; 1 ಕಪ್ಪುದೀನಾ ಸೊಪ್ಪು &ndash; 1 ಕಪ್ಜೀರಿಗೆ &ndash; ಅರ್ಧ ಚಮಚ&lt;/p&gt;&lt;h2&gt;&lt;strong&gt;ಒಗ್ಗರಣೆಗೆ&lt;/strong&gt;&lt;/h2&gt;&lt;p&gt;ಏಲಕ್ಕಿ, ಮರಾಠಿ ಮೊಗ್ಗು, ಪಲಾವ್ ಎಲೆಉದ್ದಕ್ಕೆ ಹೆಚ್ಚಿದ ಈರುಳ್ಳಿ &ndash; ಅರ್ಧ ಕಪ್&lt;/p&gt;&lt;h2&gt;&lt;strong&gt;ಮಾಡುವ ಸರಳ ವಿಧಾನ&lt;/strong&gt;&lt;/h2&gt;&lt;p&gt;&lt;strong&gt;ನೆನೆಯಲು ಬಿಡಿ&lt;/strong&gt;&lt;/p&gt;&lt;p&gt;*ಜೀರಿಗೆ ಸಾಂಬಾ ಅಕ್ಕಿಯನ್ನು ಎರಡು ಬಾರಿ ತೊಳೆದು, ಕೇವಲ 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.*ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಳ್ಳಿ.*ಒಂದು ಬಟ್ಟಲಿನಲ್ಲಿ ಮಶ್ರೂಮ್ ತುಂಡುಗಳು, ಮೊಸರು, ಅರಿಶಿನ, ಖಾರದ ಪುಡಿ ಮತ್ತು ಧನಿಯಾ ಪುಡಿ ಹಾಕಿ ಚೆನ್ನಾಗಿ ಬೆರೆಸಿ 10 ನಿಮಿಷಗಳ ಕಾಲ ಮ್ಯಾರಿನೇಟ್ (Marinate) ಆಗಲು ಬಿಡಿ.&lt;/p&gt;&lt;p&gt;&lt;strong&gt;ಹಸಿರು ಮಸಾಲೆ ಪೇಸ್ಟ್&lt;/strong&gt;*ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ ಲವಂಗ, ಚಕ್ಕೆ, ಕಾಳು ಮೆಣಸು, ಹಸಿಮೆಣಸು, ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.*ನಂತರ ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆ ಹಾಕಿ ಕೆಲವೇ ಸೆಕೆಂಡು ಬಾಡಿಸಿ ಗ್ಯಾಸ್ ಆಫ್ ಮಾಡಿ.*ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿ ಜಾರ್&zwnj;ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.&lt;/p&gt;&lt;p&gt;&lt;strong&gt;ಈಗ ಬಿರಿಯಾನಿ ಮಾಡಲು ಶುರು ಮಾಡಿ&lt;/strong&gt;&lt;/p&gt;&lt;p&gt;*ದಪ್ಪ ತಳದ ಪಾತ್ರೆ ಅಥವಾ ಕುಕ್ಕರ್&zwnj;ನಲ್ಲಿ ಎಣ್ಣೆ ಮತ್ತು 1 ಚಮಚ ತುಪ್ಪ ಕಾಯಿಸಿ.*ಇದಕ್ಕೆ ಪಲಾವ್ ಎಲೆ, ಏಲಕ್ಕಿ, ಮರಾಠಿ ಮೊಗ್ಗು ಹಾಕಿ, ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ.*ಈಗ ರುಬ್ಬಿದ ಹಸಿರು ಮಸಾಲೆ ಪೇಸ್ಟ್ ಮತ್ತು ಮ್ಯಾರಿನೇಟ್ ಮಾಡಿದ ಮಶ್ರೂಮ್ ಹಾಕಿ ಎಣ್ಣೆ ಬಿಡುವವರೆಗೆ 2-3 ನಿಮಿಷ ಮಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ.&lt;/p&gt;&lt;p&gt;&lt;strong&gt;ದಮ್ ಕಟ್ಟಿ&lt;/strong&gt;&lt;/p&gt;&lt;p&gt;*ಇದಕ್ಕೆ 2 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಿ.*ನೀರು ಕುದಿಯುತ್ತಿದ್ದಂತೆ, ನೆನೆಸಿದ ಜೀರಿಗೆ ಸಾಂಬಾ ಅಕ್ಕಿ ಹಾಕಿ ಲಘುವಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ.*ನಂತರ ಮುಚ್ಚಳ ತೆಗೆದು ಮೇಲೆ 1 ಚಮಚ ತುಪ್ಪ ಹಾಕಿ ಅಕ್ಕಿ ಮುರಿಯದಂತೆ ನಿಧಾನವಾಗಿ ಕಲಸಿ.*ಈಗ ಉರಿಯನ್ನು ಸಂಪೂರ್ಣ ಸಿಮ್ (ಲೋ ಫ್ಲೇಮ್) ಮಾಡಿ, ಮುಚ್ಚಳ ಮುಚ್ಚಿ ಅದರ ಮೇಲೆ ತೂಕವಾದ ವಸ್ತುವನ್ನಿಟ್ಟು (ಅಥವಾ ಭಾರವಾದ ನೀರಿನ ಪಾತ್ರೆ ಇಟ್ಟು) 15 ನಿಮಿಷಗಳ ಕಾಲ 'ದಮ್' (Dum) ಕಟ್ಟಿ.&lt;/p&gt;&lt;p&gt;15 ನಿಮಿಷದ ನಂತರ ಗ್ಯಾಸ್ ಆಫ್ ಮಾಡಿ, 10 ನಿಮಿಷ ಹಾಗೆಯೇ ಬಿಟ್ಟು ನಂತರ ತೆರೆಯಿರಿ.&lt;/p&gt;&lt;p&gt;ಘಮಘಮಿಸುವ ಮಿಲಿಟರಿ ಹೋಟೆಲ್ ಸ್ಟೈಲ್ ಮಶ್ರೂಮ್ ದೊನ್ನೆ ಬಿರಿಯಾನಿ ರೆಡಿ! ಇದನ್ನು ಈರುಳ್ಳಿ ರಾಯತಾದೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/food/military-hotel-style-mushroom-donne-biryani-recipe-easy-sunday-special-at-home/articleshow-qzfp1c6"/>
        </item>
        <item>
            <title><![CDATA[Fashion Hacks: ಇನ್ಮುಂದೆ ಡ್ರೆಸ್‌ನಿಂದ ಬ್ರಾ ಸ್ಟ್ರ್ಯಾಪ್ ಹೊರಗೆ ಕಾಣಲ್ಲ! ಈ 5 ಟ್ರಿಕ್ಸ್ ಗೊತ್ತಿರಲಿ]]></title>
            <link>https://kannada.asianetnews.com/gallery/fashion/bra-strap-showing-through-clothes-try-these-easy-hacks-for-a-perfect-fit-cwm86zz</link>
            <guid isPermaLink="true">https://kannada.asianetnews.com/gallery/fashion/bra-strap-showing-through-clothes-try-these-easy-hacks-for-a-perfect-fit-cwm86zz</guid>
            <pubDate>Fri, 18 Sep 2026 21:39:03 +0530</pubDate>
            <description><![CDATA[&lt;p&gt;Fashion Hacks: ಡ್ರೆಸ್ ಅಥವಾ ಟಾಪ್ ಧರಿಸಿದಾಗ ಬ್ರಾ ಸ್ಟ್ರ್ಯಾಪ್ ಹೊರಗೆ ಕಾಣಿಸುತ್ತಿದೆಯೇ? ಬ್ರಾ ಸ್ಟ್ರ್ಯಾಪ್ ಕ್ಲಿಪ್, ಸೇಫ್ಟಿ ಪಿನ್, ಸರಿಯಾದ ಸ್ಟ್ರ್ಯಾಪ್ ಫಿಟ್ ಸೇರಿದಂತೆ ಈ ಸರಳ ಟ್ರಿಕ್ಸ್ ಮೂಲಕ ನಿಮ್ಮ ಲುಕ್ ಅನ್ನು ಹೆಚ್ಚು ನೀಟ್ ಆಗಿ ಕಾಣುವಂತೆ ಮಾಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tkz2pjwf9q2kkgb64jgzyc,imgname-bra-strap-hacks-4-1789747235530.jpg" type="image/jpeg" height="390" width="690"/>
            <content:encoded><![CDATA[&lt;p&gt;Fashion Hacks: ಡ್ರೆಸ್ ಅಥವಾ ಟಾಪ್ ಧರಿಸಿದಾಗ ಬ್ರಾ ಸ್ಟ್ರ್ಯಾಪ್ ಹೊರಗೆ ಕಾಣಿಸುತ್ತಿದೆಯೇ? ಬ್ರಾ ಸ್ಟ್ರ್ಯಾಪ್ ಕ್ಲಿಪ್, ಸೇಫ್ಟಿ ಪಿನ್, ಸರಿಯಾದ ಸ್ಟ್ರ್ಯಾಪ್ ಫಿಟ್ ಸೇರಿದಂತೆ ಈ ಸರಳ ಟ್ರಿಕ್ಸ್ ಮೂಲಕ ನಿಮ್ಮ ಲುಕ್ ಅನ್ನು ಹೆಚ್ಚು ನೀಟ್ ಆಗಿ ಕಾಣುವಂತೆ ಮಾಡಬಹುದು.&lt;/p&gt;&lt;img&gt;&lt;p&gt;ನಿಮಗೆ ಇಷ್ಟವಾದ ಡ್ರೆಸ್ ಅಥವಾ ಟಾಪ್ ಧರಿಸಿದಾಗ ಬ್ರಾ ಸ್ಟ್ರ್ಯಾಪ್ ಪದೇಪದೇ ಹೊರಗೆ ಕಾಣಿಸಿಕೊಳ್ಳುತ್ತದೆಯೇ? ವಿಶೇಷವಾಗಿ ಸ್ಲೀವ್&zwnj;ಲೆಸ್, ಆಫ್-ಶೋಲ್ಡರ್ ಅಥವಾ ಡೀಪ್ ನೆಕ್ ಇರುವ ಬಟ್ಟೆಗಳಲ್ಲಿ ಈ ಸಮಸ್ಯೆ ಸಾಮಾನ್ಯ. ಇದರಿಂದ ಒಟ್ಟಾರೆ ಲುಕ್ ಕೂಡ ಸ್ವಲ್ಪ ಹಾಳಾಗಬಹುದು. ಆದರೆ ಇದಕ್ಕಾಗಿ ಪ್ರತಿಬಾರಿ ಹೊಸ ಬ್ರಾ ಖರೀದಿಸುವ ಅಗತ್ಯವಿಲ್ಲ. ಕೆಲವು ಸರಳ ಟ್ರಿಕ್ಸ್ ಮೂಲಕ ಬ್ರಾ ಸ್ಟ್ರ್ಯಾಪ್&zwnj;ಗಳನ್ನು ಸರಿಯಾದ ಜಾಗದಲ್ಲಿ ಫಿಕ್ಸ್ ಮಾಡಬಹುದು.&lt;/p&gt;&lt;img&gt;&lt;p&gt;ಮಾರುಕಟ್ಟೆಯಲ್ಲಿ ಸಿಗುವ ಸಣ್ಣ ಬ್ರಾ ಸ್ಟ್ರ್ಯಾಪ್ ಕ್ಲಿಪ್&zwnj;ಗಳನ್ನು ಬಳಸಬಹುದು. ಬ್ರಾದ ಹಿಂಭಾಗದಲ್ಲಿ ಎರಡೂ ಸ್ಟ್ರ್ಯಾಪ್&zwnj;ಗಳನ್ನು ಒಟ್ಟಿಗೆ ಹಿಡಿಯುವಂತೆ ಕ್ಲಿಪ್ ಹಾಕಿದರೆ ಅವು ಕುತ್ತಿಗೆಯ ಮಧ್ಯಭಾಗದತ್ತ ಬರುತ್ತವೆ. ಇದರಿಂದ ತೆರೆದ ಭುಜಗಳಿರುವ ಡ್ರೆಸ್&zwnj;ಗಳಲ್ಲಿ ಸ್ಟ್ರ್ಯಾಪ್ ಕಾಣಿಸುವ ಸಾಧ್ಯತೆ ಕಡಿಮೆಯಾಗುತ್ತದೆ.&lt;/p&gt;&lt;img&gt;&lt;p&gt;ಸ್ಟ್ರ್ಯಾಪ್ ಕ್ಲಿಪ್ ಇಲ್ಲದಿದ್ದರೆ ಸಣ್ಣ ಸೇಫ್ಟಿ ಪಿನ್ ಸಹಾಯ ಮಾಡಬಹುದು. ಬಟ್ಟೆಯ ಒಳಭಾಗದಲ್ಲಿ ಬ್ರಾ ಸ್ಟ್ರ್ಯಾಪನ್ನು ನಿಧಾನವಾಗಿ ಫಿಕ್ಸ್ ಮಾಡಬಹುದು. ಆದರೆ ಪಿನ್ ಚರ್ಮಕ್ಕೆ ಚುಚ್ಚದಂತೆ ಹಾಗೂ ಬಟ್ಟೆಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ.&lt;/p&gt;&lt;img&gt;&lt;p&gt;ಬ್ರಾ ಸ್ಟ್ರ್ಯಾಪ್ ಹೊರಗೆ ಕಾಣಲು ತಪ್ಪಾದ ಫಿಟ್ ಕೂಡ ಕಾರಣವಾಗಬಹುದು. ಸ್ಟ್ರ್ಯಾಪ್ ತುಂಬಾ ಸಡಿಲವಾಗಿದ್ದರೆ ಅದು ಭುಜದಿಂದ ಜಾರಬಹುದು. ಆದ್ದರಿಂದ ಬ್ರಾ ಧರಿಸಿದ ನಂತರ ಆರಾಮದಾಯಕವಾಗಿರುವಂತೆ ಸ್ಟ್ರ್ಯಾಪ್&zwnj;ನ ಉದ್ದವನ್ನು ಸರಿಯಾಗಿ ಹೊಂದಿಸಿ.&lt;/p&gt;&lt;img&gt;&lt;p&gt;ನೀವು ಹೆಚ್ಚಾಗಿ ಸ್ಲೀವ್&zwnj;ಲೆಸ್ ಅಥವಾ ವಿಭಿನ್ನ ನೆಕ್&zwnj;ಲೈನ್ ಇರುವ ಬಟ್ಟೆಗಳನ್ನು ಧರಿಸುತ್ತಿದ್ದರೆ ಕನ್ವರ್ಟಿಬಲ್ ಬ್ರಾ ಉಪಯುಕ್ತವಾಗಬಹುದು. ಇದರ ಸ್ಟ್ರ್ಯಾಪ್&zwnj;ಗಳನ್ನು ಡ್ರೆಸ್&zwnj;ಗೆ ಅನುಗುಣವಾಗಿ ಬೇರೆ ಬೇರೆ ರೀತಿಯಲ್ಲಿ ಹೊಂದಿಸಬಹುದು.&lt;/p&gt;&lt;img&gt;&lt;p&gt;ಕೆಲವು ಡ್ರೆಸ್ ಮತ್ತು ಟಾಪ್&zwnj;ಗಳಲ್ಲಿ ಒಳಭಾಗದಲ್ಲೇ ಸಣ್ಣ ಸ್ಟ್ರ್ಯಾಪ್ ಹೋಲ್ಡರ್&zwnj;ಗಳು ಅಥವಾ ಲೂಪ್&zwnj;ಗಳು ಇರುತ್ತವೆ. ನಿಮ್ಮ ಬಟ್ಟೆಯಲ್ಲಿ ಇವು ಇಲ್ಲದಿದ್ದರೆ ಟೈಲರ್ ಮೂಲಕ ಸಣ್ಣ ಹೂಕ್ ಅಥವಾ ಲೂಪ್ ಹಾಕಿಸಬಹುದು. ಇದರಿಂದ ಬ್ರಾ ಸ್ಟ್ರ್ಯಾಪ್ ಬಟ್ಟೆಯ ಒಳಗೇ ಉಳಿಯಲು ಸಹಾಯವಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/fashion/bra-strap-showing-through-clothes-try-these-easy-hacks-for-a-perfect-fit-cwm86zz"/>
        </item>
        <item>
            <title><![CDATA['ಕುಷ್ಠರೋಗ'ವೇ ಈಕೆಗೆ ವರವಾಯ್ತು.. ಸ್ಟಾರ್ ನಟಿಯಾಗಿ ಮೆರೆದ ಈ ಸುಂದರಿ ಕನ್ನಡದಲ್ಲೂ ನಟಿಸಿದ್ದರು!]]></title>
            <link>https://kannada.asianetnews.com/news-entertainment/dimple-kapadia-from-battling-leprosy-during-her-childhood-to-becoming-a-bollywood-star-story-revealed-here/articleshow-zxmz477</link>
            <guid isPermaLink="true">https://kannada.asianetnews.com/news-entertainment/dimple-kapadia-from-battling-leprosy-during-her-childhood-to-becoming-a-bollywood-star-story-revealed-here/articleshow-zxmz477</guid>
            <pubDate>Fri, 18 Sep 2026 20:16:16 +0530</pubDate>
            <description><![CDATA[&lt;p&gt;ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಈ ನಟಿಯ ವೈಯಕ್ತಿಕ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ಬಾಲಿವುಡ್ ಸೂಪರ್&zwnj;ಸ್ಟಾರ್ ಒಬ್ಬರೊಂದಿಗೆ ವಿವಾಹವಾದ ಅವರು, ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರು. ಆದರೆ ಈಗ ಮತ್ತೆ ಸಿನಿಮಾಗೆ ಮರಳಿದ್ದಾರೆ. ಯಾರು ಈಕೆ ಗೊತ್ತಾಯ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tf5jzak8p2h66vqytvb8gd,imgname-dimple-kapadia-1789742205930.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;15ನೇ ವಯಸ್ಸಿನಲ್ಲೇ ಸ್ಟಾರ್ ಪಟ್ಟ: ಮದುವೆ ಬಳಿಕ ಸಿನಿಮಾ ನಟನೆ ಬಿಟ್ಟ ನಟಿ, ಮತ್ತೆ ಕಮ್&zwnj;ಬ್ಯಾಕ್!&lt;/strong&gt;&lt;/p&gt;&lt;p&gt;ಕೆಲವರ ಸಿನಿಮಾ ಪಯಣವೇ ಒಂದು ರೋಚಕ ಕಥೆಯಂತೆ ಇರುತ್ತದೆ. ಅದಕ್ಕೆ ಸೂಕ್ತ ಉದಾಹರಣೆ ಹಿರಿಯ ನಟಿ ಡಿಂಪಲ್ ಕಪಾಡಿಯಾ. ಕೇವಲ 15ನೇ ವಯಸ್ಸಿನಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಮೊದಲ ಸಿನಿಮಾದಲ್ಲೇ ದೇಶಾದ್ಯಂತ ಸಂಚಲನ ಮೂಡಿಸಿದ ನಟಿ ಅವರು. ಈಕೆ ಕನ್ನಡದಲ್ಲಿ ನಟ ರವಿಚಂದ್ರನ್ ನಾಯಕತ್ವದ 'ಯುಗಪುರುಷ' ಚಿತ್ರದಲ್ಲೂ ನಟಿಸಿದ್ದಾರೆ.&lt;/p&gt;&lt;p&gt;1973ರಲ್ಲಿ ರಾಜ್ ಕಪೂರ್ ನಿರ್ದೇಶನದ &lsquo;ಬಾಬಿ&rsquo; ಸಿನಿಮಾ ಬಿಡುಗಡೆಯಾಯಿತು. ಈ ಚಿತ್ರದ ಮೂಲಕ ಡಿಂಪಲ್ ಕಪಾಡಿಯಾ (Dimple Kapadia) ಮತ್ತು ರಿಷಿ ಕಪೂರ್ ಹೊಸ ತಲೆಮಾರಿನ ಜನಪ್ರಿಯ ಜೋಡಿಯಾಗಿ ಪ್ರೇಕ್ಷಕರ ಮನ ಗೆದ್ದರು. ವಿಶೇಷವೆಂದರೆ, ಡಿಂಪಲ್ ಅವರಿಗೆ ಸ್ಕ್ರೀನ್ ಟೆಸ್ಟ್ ನೀಡುವಾಗ ಕೇವಲ 14 ವರ್ಷ. ಅವರ ಸೌಂದರ್ಯ, ಸಹಜ ಅಭಿನಯ ಮತ್ತು ವ್ಯಕ್ತಿತ್ವ ರಾಜ್ ಕಪೂರ್ ಅವರ ಗಮನ ಸೆಳೆದಿದ್ದು, ಅಂತಿಮವಾಗಿ &lsquo;ಬಾಬಿ&rsquo; ನಾಯಕಿಯಾಗಿ ಆಯ್ಕೆಯಾದರು.&lt;/p&gt;&lt;p&gt;&lsquo;ಬಾಬಿ&rsquo; ಬಾಕ್ಸ್ ಆಫೀಸ್&zwnj;ನಲ್ಲಿ ಯಶಸ್ಸು ಕಾಣುತ್ತಿದ್ದಂತೆ ಡಿಂಪಲ್ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು. ಮೊದಲ ಸಿನಿಮಾದಲ್ಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಅವರು, ಬಾಲಿವುಡ್&zwnj;ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದರು.&lt;/p&gt;&lt;h2&gt;ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಡಿಂಪಲ್ ಮದುವೆ!&lt;/h2&gt;&lt;p&gt;ಆದರೆ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಡಿಂಪಲ್ ಅವರ ವೈಯಕ್ತಿಕ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ಬಾಲಿವುಡ್ ಸೂಪರ್&zwnj;ಸ್ಟಾರ್ ರಾಜೇಶ್ ಖನ್ನಾ ಅವರೊಂದಿಗೆ ವಿವಾಹವಾದ ಅವರು, ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರು. ದಂಪತಿಗೆ ಟ್ವಿಂಕಲ್ ಖನ್ನಾ ಮತ್ತು ರಿಂಕೆ ಖನ್ನಾ ಎಂಬ ಇಬ್ಬರು ಪುತ್ರಿಯರು ಜನಿಸಿದರು.&lt;/p&gt;&lt;p&gt;ಮದುವೆಯ ಬಳಿಕ ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಗಳಿಗೆ ಆದ್ಯತೆ ನೀಡಿದ ಡಿಂಪಲ್, ಸಿನಿಮಾಗಳಿಂದ ದೂರವಿದ್ದರು. ಈ ನಡುವೆ ರಾಜೇಶ್ ಖನ್ನಾ ಅವರ ವೃತ್ತಿಜೀವನದಲ್ಲೂ ಏರಿಳಿತಗಳು ಕಾಣಿಸಿಕೊಂಡವು. ಕ್ರಮೇಣ ದಾಂಪತ್ಯದಲ್ಲಿ ಬಿರುಕು ಮೂಡಿ, ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು.&lt;/p&gt;&lt;p&gt;ನಂತರ ಡಿಂಪಲ್ ಮತ್ತೆ ಬೆಳ್ಳಿತೆರೆಗೆ ಮರಳಲು ನಿರ್ಧರಿಸಿದರು. ಸುಮಾರು 25ನೇ ವಯಸ್ಸಿನಲ್ಲಿ &lsquo;ಸಾಗರ್&rsquo; ಚಿತ್ರದ ಮೂಲಕ ನಾಯಕಿಯಾಗಿ ಕಮ್&zwnj;ಬ್ಯಾಕ್ ಮಾಡಿದರು. ಮತ್ತೊಂದು ವಿಶೇಷವೆಂದರೆ, ಈ ಸಿನಿಮಾದಲ್ಲಿ ತಮ್ಮ ಮೊದಲ ಚಿತ್ರದ ನಾಯಕ ರಿಷಿ ಕಪೂರ್ ಅವರೊಂದಿಗೇ ಮತ್ತೆ ತೆರೆ ಹಂಚಿಕೊಂಡರು.&lt;/p&gt;&lt;p&gt;ಹೀಗೆ ಬಾಲನಟಿಯಾಗಿ ಅಲ್ಲ, ಕೇವಲ 15ನೇ ವಯಸ್ಸಿನಲ್ಲಿ ನಾಯಕಿಯಾಗಿ ಬಂದ ಡಿಂಪಲ್ ಕಪಾಡಿಯಾ ಅವರ ಸಿನಿಮಾ ಪಯಣ, ಖ್ಯಾತಿ, ವೈಯಕ್ತಿಕ ನಿರ್ಧಾರಗಳು ಮತ್ತು ಕಮ್&zwnj;ಬ್ಯಾಕ್&zwnj;ನಿಂದ ಕೂಡಿದ ವಿಭಿನ್ನ ಕಥೆಯಾಗಿ ಉಳಿದಿದೆ.&lt;/p&gt;&lt;h3&gt;ಆದರೆ.. ಕುಷ್ಠರೋಗವೇ ಈಕೆಗೆ ವರವಾಗಿದ್ದು ಹೇಗೆ? ಈ ರೋಚಕ ಸ್ಟೋರಿ ನೊಡಿ..&lt;/h3&gt;&lt;p&gt;ಹೌದು, ಬಾಲಿವುಡ್&zwnj;ನ ಹಿರಿಯ ನಟಿ ಡಿಂಪಲ್ ಕಪಾಡಿಯಾ ಅವರು ಬಾಲ್ಯದಲ್ಲಿ ಕುಷ್ಠರೋಗದಿಂದ (Leprosy) ಬಳಲುತ್ತಿದ್ದರು.ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ ಅವರು, ತಮಗೆ 12 ವರ್ಷ ವಯಸ್ಸಾಗಿದ್ದಾಗ ಮೊಣಕೈ ಭಾಗದಲ್ಲಿ ಕುಷ್ಠರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ತಿಳಿಸಿದ್ದಾರೆ. ಆ ಸಮಯದಲ್ಲಿ ಅವರ ಕುಟುಂಬಕ್ಕೆ ಆಪ್ತರಾಗಿದ್ದ ಪ್ರಸಿದ್ಧ ನಿರ್ದೇಶಕರೊಬ್ಬರು, ಈ ಕಾಯಿಲೆಯ ಕಾರಣದಿಂದ ಅವರನ್ನು ಶಾಲೆಯಿಂದ ಬಹಿಷ್ಕರಿಸುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆ ವಯಸ್ಸಿನಲ್ಲಿ ತಮಗೆ ಆ ಪದದ ಅರ್ಥವಾಗಲಿ ಅಥವಾ ಅದರ ಹಿಂದಿರುವ ಸಾಮಾಜಿಕ ಅಪಪ್ರಚಾರದ (Stigma) ಬಗ್ಗೆಯಾಗಲಿ ಯಾವುದೇ ಅರಿವಿರಲಿಲ್ಲ ಎಂದು ಡಿಂಪಲ್ ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಆದರೆ, ಈ ಕಾಯಿಲೆಯೇ ಅವರ ಸಿನಿಮಾ ರಂಗದ ಪ್ರವೇಶಕ್ಕೆ ಕಾರಣವಾಯಿತು ಎಂಬುದೂ ಅಷ್ಟೇ ಸತ್ಯ.. ಡಿಂಪಲ್ ಅವರ ತಂದೆ ಚುನ್ನಿಭಾಯ್ ಕಪಾಡಿಯಾ ಅವರು ಚಿತ್ರರಂಗದ ಪ್ರಮುಖರೊಂದಿಗೆ ಒಡನಾಟ ಹೊಂದಿದ್ದರು.&quot;ಒಬ್ಬ ಅತ್ಯಂತ ಸುಂದರ ಹುಡುಗಿ ಕುಷ್ಠರೋಗದಿಂದ ಬಳಲುತ್ತಿದ್ದಾಳೆ&quot; ಎಂಬ ವಿಷಯ ತಿಳಿದ ಖ್ಯಾತ ನಿರ್ದೇಶಕ ರಾಜ್ ಕಪೂರ್ ಅವರು ಡಿಂಪಲ್ ಅವರನ್ನು ಭೇಟಿಯಾಗಲು ಬಯಸಿದರು. ಈ ಭೇಟಿಯ ಬಳಿಕವೇ ರಾಜ್ ಕಪೂರ್ ಅವರು ಡಿಂಪಲ್ ಕಪಾಡಿಯಾ ಅವರನ್ನು ತಮ್ಮ ಐತಿಹಾಸಿಕ ಸೂಪರ್&zwnj;ಹಿಟ್ ಚಿತ್ರ 'ಬಾಬಿ' (1973) ಮೂಲಕ ಬಾಲಿವುಡ್&zwnj;ಗೆ ಪರಿಚಯಿಸಿದರು. ಅದೇ ಸಮಯದಲ್ಲಿ ನೀಡಿದ ಚಿಕಿತ್ಸೆಯ ನಂತರ ಅವರು ಈ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾದರು.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/dimple-kapadia-from-battling-leprosy-during-her-childhood-to-becoming-a-bollywood-star-story-revealed-here/articleshow-zxmz477"/>
        </item>
        <item>
            <title><![CDATA[ಉಸಿರಾಡುವ ವಿಷಗಾಳಿಗೂ ಆತ್ಮ*ತ್ಯೆಗೂ ಇದೆ ಸಂಬಂಧ? ಸಂಶೋಧನೆಯಲ್ಲಿ ಬೆಚ್ಚಿಬೀಳೀಸುವ ಸತ್ಯ ಬಯಲು]]></title>
            <link>https://kannada.asianetnews.com/health-life/air-pollution-may-be-linked-to-higher-risk-of-severe-mental-health-new-study-finds/articleshow-51boaac</link>
            <guid isPermaLink="true">https://kannada.asianetnews.com/health-life/air-pollution-may-be-linked-to-higher-risk-of-severe-mental-health-new-study-finds/articleshow-51boaac</guid>
            <pubDate>Fri, 18 Sep 2026 20:18:53 +0530</pubDate>
            <description><![CDATA[&lt;p&gt;ವಾಯುಮಾಲಿನ್ಯ ಕೇವಲ ಶ್ವಾಸಕೋಶದ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಸಂಬಂಧಿಸಿರಬಹುದು ಎಂದು ಕ್ವೀನ್ಸ್ ಯೂನಿವರ್ಸಿಟಿ ಬೆಲ್ಫಾಸ್ಟ್&zwnj;ನ ಹೊಸ ಅಧ್ಯಯನ ಸೂಚಿಸಿದೆ. 29 ಅಧ್ಯಯನಗಳ ವಿಶ್ಲೇಷಣೆಯಲ್ಲಿ PM2.5, PM10 ಮತ್ತು NO₂ ಮಾಲಿನ್ಯಕ್ಕೂ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಗಮನಾರ್ಹ ಸಂಬಂಧ ಕಂಡುಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tfv6qx9kxnq1s1g93f99wp,imgname-air-pollution-1789742914298.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಉಸಿರಾಡುವ ಗಾಳಿಗೂ ಆತ್ಮಹತ್ಯೆಗೂ ಇದೆ ಸಂಬಂಧ&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ವ್ಯಕ್ತಿಯ ಮಾನಸಿಕ ಒತ್ತಡ, ಕುಟುಂಬದ ಸಮಸ್ಯೆಗಳು, ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಕಾರಣಗಳು ಆತ್ಮಹತ್ಯೆಯಂತಹ ಆಲೋಚನೆಗಳಿಗೆ ಕಾರಣವಾಗಬಹುದು. ಆದರೆ ಬ್ರಿಟನ್&zwnj;ನ ಕ್ವೀನ್ಸ್ ಯೂನಿವರ್ಸಿಟಿ ಬೆಲ್ಫಾಸ್ಟ್&zwnj;ನ ಸಂಶೋಧಕರು ನಡೆಸಿದ ಹೊಸ ಅಧ್ಯಯನವು ವಾಯುಮಾಲಿನ್ಯ ಮತ್ತು ಇಂತಹ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧದ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಈ ಅಧ್ಯಯನವನ್ನು Journal of Epidemiology &amp;amp; Community Healthನಲ್ಲಿ ಪ್ರಕಟಿಸಲಾಗಿದೆ. ಸಂಶೋಧಕರು 2010ರಿಂದ 2024ರ ನಡುವೆ ಪ್ರಕಟವಾದ ವಿವಿಧ ಅಧ್ಯಯನಗಳನ್ನು ಪರಿಶೀಲಿಸಿದ್ದು, ಒಟ್ಟು 45 ಅಧ್ಯಯನಗಳನ್ನು ವಿಮರ್ಶೆಗೆ ಒಳಪಡಿಸಲಾಗಿದೆ. ಈ ಪೈಕಿ 29 ಅಧ್ಯಯನಗಳ ಮಾಹಿತಿಯನ್ನು ಒಟ್ಟುಗೂಡಿಸಿ ವಿಶ್ಲೇಷಣೆ ನಡೆಸಲಾಗಿದೆ.&lt;/p&gt;&lt;h3&gt;&lt;strong&gt;ಯಾವ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ?&lt;/strong&gt;&lt;/h3&gt;&lt;p&gt;ವಾಯುಮಾಲಿನ್ಯ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಕ್ವೀನ್ಸ್ ಯೂನಿವರ್ಸಿಟಿ ಬೆಲ್ಫಾಸ್ಟ್&zwnj;ನ ಸಾರ್ವಜನಿಕ ಆರೋಗ್ಯ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಗಾಳಿ, ನೀರು, ಶಬ್ದ ಮತ್ತು ಬೆಳಕಿನ ಮಾಲಿನ್ಯಗಳು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಅಧ್ಯಯನದಲ್ಲಿ ಮುಖ್ಯವಾಗಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಸಂಶೋಧನೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ವಿವಿಧ ದೇಶಗಳು ಮತ್ತು ಪ್ರದೇಶಗಳಲ್ಲಿನ ಮಾಹಿತಿಯನ್ನು ಒಳಗೊಂಡ ಅಧ್ಯಯನಗಳನ್ನು ಪರಿಶೀಲಿಸಲಾಗಿದೆ.&lt;/p&gt;&lt;p&gt;&lt;strong&gt;ಯಾವ ಮಾಲಿನ್ಯಕಾರಕಗಳು ಹೆಚ್ಚು ಆತಂಕಕಾರಿ?&lt;/strong&gt;&lt;/p&gt;&lt;p&gt;ಸಂಶೋಧನೆಯಲ್ಲಿ PM2.5 ಮತ್ತು PM10 ಎಂಬ ಅತಿ ಸಣ್ಣ ಕಣಗಳ ಜೊತೆಗೆ ನೈಟ್ರೋಜನ್ ಡೈಆಕ್ಸೈಡ್ (NO₂) ಕುರಿತು ವಿಶೇಷ ಗಮನ ಹರಿಸಲಾಗಿದೆ. ಅಧ್ಯಯನದ ಸಂಯೋಜಿತ ವಿಶ್ಲೇಷಣೆಯ ಪ್ರಕಾರ, PM2.5 ಮತ್ತು PM10ಗೆ ಅಲ್ಪಾವಧಿಯಲ್ಲಿ ಒಡ್ಡಿಕೊಳ್ಳುವುದು ಹಾಗೂ PM2.5 ಮತ್ತು NO₂ಗೆ ದೀರ್ಘಾವಧಿಯಲ್ಲಿ ಒಡ್ಡಿಕೊಳ್ಳುವುದರಿಂದ ಆತ್ಮಹತ್ಯೆಗೆ ಸಂಬಂಧಿಸಿದ ಘಟನೆಗಳು, ಪ್ರಯತ್ನಗಳು ಮತ್ತು ಗಂಭೀರ ಆಲೋಚನೆಗಳು ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದರ ಜೊತೆಗೆ ಸಲ್ಫರ್ ಡೈಆಕ್ಸೈಡ್ (SO₂), ಓಜೋನ್ (O₃) ಮತ್ತು ಶಬ್ದ ಮಾಲಿನ್ಯಕ್ಕೂ ಇಂತಹ ಸಮಸ್ಯೆಗಳೊಂದಿಗೆ ಸಂಬಂಧ ಇರಬಹುದೆಂಬ ಸೂಚನೆ ಅಧ್ಯಯನದಲ್ಲಿ ಕಂಡುಬಂದಿದೆ. ಆದರೆ ನೀರು ಮತ್ತು ಬೆಳಕಿನ ಮಾಲಿನ್ಯದ ಬಗ್ಗೆ ಲಭ್ಯವಿರುವ ಸಾಕ್ಷ್ಯಗಳು ಸ್ಪಷ್ಟವಾಗಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಮೆದುಳಿನ ಮೇಲೂ ಪರಿಣಾಮ ಬೀರುತ್ತದೆಯೇ?&lt;/strong&gt;&lt;/p&gt;&lt;p&gt;ವಾಯುಮಾಲಿನ್ಯದಲ್ಲಿರುವ ಕೆಲವು ಅಂಶಗಳು ದೇಹದಲ್ಲಿ ದೀರ್ಘಕಾಲದ ಉರಿಯೂತ ಮತ್ತು ನರಗಳಿಗೆ ಹಾನಿಯಂತಹ ಪರಿಣಾಮಗಳನ್ನು ಉಂಟುಮಾಡಬಹುದು. ಇಂತಹ ಬದಲಾವಣೆಗಳು ಮೆದುಳಿನ ಕಾರ್ಯವೈಖರಿ, ಮನಸ್ಥಿತಿ ಮತ್ತು ಒತ್ತಡವನ್ನು ಎದುರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ಆರ್ಸೆನಿಕ್, ಸೀಸ ಮತ್ತು ಲಿಥಿಯಂನಂತಹ ಅಂಶಗಳಿಂದ ಕಲುಷಿತವಾದ ನೀರು ಹಾಗೂ ಪರಿಸರದ ಶಬ್ದವೂ ನರಮಂಡಲ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಧ್ಯಯನ ಪರಿಶೀಲಿಸಿದೆ.&lt;/p&gt;&lt;p&gt;&lt;strong&gt;ಯುವಕರಿಗೂ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ&lt;/strong&gt;&lt;/p&gt;&lt;p&gt;ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಪ್ರತಿ ವರ್ಷ 7.2 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 15ರಿಂದ 29 ವರ್ಷದ ಯುವಕರಲ್ಲಿ ಇದು ಪ್ರಮುಖ ಸಾವಿನ ಕಾರಣಗಳಲ್ಲಿ ಒಂದಾಗಿದೆ ಎಂದು ವರದಿ ತಿಳಿಸುತ್ತದೆ. ಮಾಲಿನ್ಯವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲು ಅಸಾಧ್ಯ. ಆದರೆ ಇದರಿಂದಲೂ ಮಾನಸಿಕ ಸಮಸ್ಯೆ ಸಾಧ್ಯತೆ ಇದೆ. ಹೀಗಾಗಿ ವಾಯುಮಾಲಿನ್ಯವನ್ನು ಕೇವಲ ಶ್ವಾಸಕೋಶ ಮತ್ತು ಹೃದಯದ ಆರೋಗ್ಯದ ಸಮಸ್ಯೆಯಾಗಿ ನೋಡದೆ, ಮಾನಸಿಕ ಆರೋಗ್ಯದ ಮೇಲೂ ಅದರ ಸಂಭವನೀಯ ಪರಿಣಾಮಗಳನ್ನು ಪರಿಗಣಿಸುವ ಅಗತ್ಯವಿದೆ ಎಂದು ಸಂಶೋಧಕರು ಒತ್ತಿಹೇಳಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/health-life/air-pollution-may-be-linked-to-higher-risk-of-severe-mental-health-new-study-finds/articleshow-51boaac"/>
        </item>
        <item>
            <title><![CDATA[Gut cleanse foods: ಕರುಳಿನಲ್ಲಿ ಶೇಖರಣೆಯಾದ ಹಳೇ ಕೊಳೆಯನ್ನು ಹೊರಹಾಕುವ 10 ಸೂಪರ್ ಆಹಾರಗಳಿವು!]]></title>
            <link>https://kannada.asianetnews.com/gallery/health-life/how-to-clean-intestines-naturally-in-kannada-3osdrxr</link>
            <guid isPermaLink="true">https://kannada.asianetnews.com/gallery/health-life/how-to-clean-intestines-naturally-in-kannada-3osdrxr</guid>
            <pubDate>Fri, 18 Sep 2026 19:43:53 +0530</pubDate>
            <description><![CDATA[&lt;p&gt;Home remedies for constipation: ಕರುಳು ಆರೋಗ್ಯವಾಗಿದ್ದರೆ ಮಾತ್ರ ಮನುಷ್ಯ ಯಾವುದೇ ಕಾಯಿಲೆಗಳಿಲ್ಲದೆ ನೂರು ಕಾಲ ಬದುಕಲು ಸಾಧ್ಯ. ಕರುಳಿನಲ್ಲಿ ಶೇಖರಣೆಯಾಗುವ ಹಳೆಯ ತ್ಯಾಜ್ಯವೇ ಕ್ಯಾನ್ಸರ್, ಬೊಜ್ಜು ಮತ್ತು ಮಲಬದ್ಧತೆಗೆ ಪ್ರಮುಖ ಕಾರಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tcxcr79tf8xc0ak80kxnq7,imgname-thumbnail---2026-09-18t192638.590-1789739840262.jpg" type="image/jpeg" height="390" width="690"/>
            <content:encoded><![CDATA[&lt;p&gt;Home remedies for constipation: ಕರುಳು ಆರೋಗ್ಯವಾಗಿದ್ದರೆ ಮಾತ್ರ ಮನುಷ್ಯ ಯಾವುದೇ ಕಾಯಿಲೆಗಳಿಲ್ಲದೆ ನೂರು ಕಾಲ ಬದುಕಲು ಸಾಧ್ಯ. ಕರುಳಿನಲ್ಲಿ ಶೇಖರಣೆಯಾಗುವ ಹಳೆಯ ತ್ಯಾಜ್ಯವೇ ಕ್ಯಾನ್ಸರ್, ಬೊಜ್ಜು ಮತ್ತು ಮಲಬದ್ಧತೆಗೆ ಪ್ರಮುಖ ಕಾರಣ.&lt;/p&gt;&lt;img&gt;&lt;p&gt;&quot;ಹೊಟ್ಟೆ ಸರಿಯಾಗಿದ್ದರೆ ಯಾವುದೇ ರೋಗ ಬರುವುದಿಲ್ಲ&quot; ಎಂದು ನಮ್ಮ ಹಿರಿಯರು ಹಿಂದಿನಿಂದಲೂ ಹೇಳುತ್ತಾ ಬಂದಿದ್ದಾರೆ. ವೈದ್ಯಕೀಯ ವಿಜ್ಞಾನದ ಪ್ರಕಾರ, ನಮ್ಮ ಜೀರ್ಣಾಂಗ ವ್ಯವಸ್ಥೆಯು (ಕರುಳು) ದೇಹದ 'ಎರಡನೇ ಮೆದುಳು' ಇದ್ದಂತೆ. ನಾವು ಆರೋಗ್ಯವಾಗಿರಬೇಕಾದರೆ ಮೊದಲು ನಮ್ಮ ಕರುಳು ಶುದ್ಧವಾಗಿರಬೇಕು.&lt;/p&gt;&lt;p&gt;ಕರುಳಿನಲ್ಲಿ ಜೀರ್ಣವಾಗದೆ ಉಳಿದುಕೊಳ್ಳುವ ಹಳೆಯ ಮಲ ಮತ್ತು ಕಲ್ಮಷಗಳೇ (ವಿಷಕಾರಿ ಅಂಶಗಳು) ಕ್ರಮೇಣ ಮಲಬದ್ಧತೆ, ಅಸಿಡಿಟಿ, ಬೊಜ್ಜು, ಚರ್ಮದ ಕಾಯಿಲೆಗಳು ಮತ್ತು ಕ್ಯಾನ್ಸರ್&zwnj;ನಂತಹ ಗಂಭೀರ ರೋಗಗಳಿಗೆ ಮೂಲ ಕಾರಣವಾಗುತ್ತವೆ. ಕರುಳಿನಲ್ಲಿ ಶೇಖರಣೆಯಾದ ಈ ಕೊಳೆಯನ್ನು ನೈಸರ್ಗಿಕವಾಗಿ ಹೊರಹಾಕಿ, ಕರುಳಿನ ಆರೋಗ್ಯವನ್ನು (Gut Health) ಕಾಪಾಡುವ 10 ಅದ್ಭುತ ಆಹಾರಗಳು ಇಲ್ಲಿವೆ..&lt;/p&gt;&lt;img&gt;&lt;p&gt;&lt;strong&gt;1. ಹಿಂದಿನ ದಿನದ ಗಂಜಿ ಅನ್ನ&lt;/strong&gt;ರಾತ್ರಿ ಉಳಿದ ಅನ್ನಕ್ಕೆ ನೀರು ಹಾಕಿಟ್ಟು, ಬೆಳಗ್ಗೆ ಮಜ್ಜಿಗೆ ಅಥವಾ ಈರುಳ್ಳಿ ಬೆರೆಸಿ ತಿನ್ನುವ ಗಂಜಿ ಅನ್ನ ಕರುಳಿಗೆ ಅಮೃತವಿದ್ದಂತೆ. ಇದರಲ್ಲಿ ನೈಸರ್ಗಿಕವಾಗಿ ಕೋಟ್ಯಂತರ ಪ್ರೋಬಯೋಟಿಕ್ಸ್ (ಒಳ್ಳೆಯ ಬ್ಯಾಕ್ಟೀರಿಯಾಗಳು) ಇರುತ್ತವೆ. ಇವು ಕರುಳಿನ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ.&lt;/p&gt;&lt;p&gt;&lt;strong&gt;2. ಮಜ್ಜಿಗೆ&lt;/strong&gt;ಮಜ್ಜಿಗೆ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ತಂಪಾಗಿಸುತ್ತದೆ. ಆಹಾರ ಸುಲಭವಾಗಿ ಜೀರ್ಣವಾಗಲು ನೆರವಾಗುವುದರ ಜೊತೆಗೆ ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ, ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ.&lt;/p&gt;&lt;p&gt;&lt;strong&gt;3. ಬೂದುಕುಂಬಳಕಾಯಿ ರಸ (Ash Gourd Juice)&lt;/strong&gt;ಪ್ರಕೃತಿ ನಮಗೆ ಕೊಟ್ಟಿರುವ ಅತ್ಯುತ್ತಮ 'ನ್ಯಾಚುರಲ್ ಡಿಟಾಕ್ಸ್ ಡ್ರಿಂಕ್' ಎಂದರೆ ಅದು ಬೂದುಕುಂಬಳಕಾಯಿ ರಸ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ಜ್ಯೂಸ್ ಕುಡಿದರೆ ಕರುಳಿನಲ್ಲಿ ವರ್ಷಗಳಿಂದ ಅಂಟಿಕೊಂಡಿರುವ ಕೊಳೆ ಮತ್ತು ವಿಷಕಾರಿ ಅಂಶಗಳು ಸಂಪೂರ್ಣವಾಗಿ ಹೊರಬರುತ್ತವೆ.&lt;/p&gt;&lt;img&gt;&lt;p&gt;&lt;strong&gt;4. ಅಗಸೆ ಬೀಜಗಳು (Flaxseeds)&lt;/strong&gt;ಅಗಸೆ ಬೀಜಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ಕರಗುವ ನಾರಿನಂಶ (Fiber) ಹೇರಳವಾಗಿದೆ. ಇದು ಮಲವನ್ನು ಮೃದುಗೊಳಿಸಿ, ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ಬೇರುಸಹಿತ ನಿವಾರಿಸುತ್ತದೆ.&lt;/p&gt;&lt;p&gt;&lt;strong&gt;5. ರಾಗಿ (ಮುದ್ದೆ ಅಥವಾ ಅಂಬಲಿ)&lt;/strong&gt;ನಾರಿನಂಶದ ಭಂಡಾರವೇ ರಾಗಿ. ದಿನನಿತ್ಯ ರಾಗಿ ಮುದ್ದೆ ಅಥವಾ ರಾಗಿ ಗಂಜಿ (ಅಂಬಲಿ) ಸೇವಿಸುವುದರಿಂದ ಹೊಟ್ಟೆ ಹಗುರವಾಗಿರುತ್ತದೆ ಮತ್ತು ಕರುಳು ಸದಾ ಸ್ವಚ್ಛವಾಗಿರುತ್ತದೆ.&lt;/p&gt;&lt;p&gt;&lt;strong&gt;6. ನೆನೆಸಿದ ಅಂಜೂರ (Figs / Anjeer)&lt;/strong&gt;ತೀವ್ರ ಮಲಬದ್ಧತೆಯಿಂದ ಬಳಲುವವರಿಗೆ ಅಂಜೂರ ರಾಮಬಾಣ. ರಾತ್ರಿ 2-3 ಒಣ ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಕರುಳಿನಲ್ಲಿ ಗಟ್ಟಿಯಾಗಿ ಸಿಕ್ಕಿಹಾಕಿಕೊಂಡಿರುವ ಮಲವೂ ಸರಾಗವಾಗಿ ಹೊರಹೋಗುತ್ತದೆ.&lt;/p&gt;&lt;img&gt;&lt;p&gt;&lt;strong&gt;7. ಬೆಟ್ಟದ ನೆಲ್ಲಿಕಾಯಿ (Amla)&lt;/strong&gt;ವಿಟಮಿನ್ 'ಸಿ' ಸಮೃದ್ಧವಾಗಿರುವ ನೆಲ್ಲಿಕಾಯಿ ಜೀರ್ಣರಸಗಳನ್ನು ಸಮತೋಲನದಲ್ಲಿಡುತ್ತದೆ. ಅಸಿಡಿಟಿ, ಗ್ಯಾಸ್ಟ್ರಿಕ್ ಕಡಿಮೆ ಮಾಡಿ ಕರುಳಿನ ಒಳಪದರವನ್ನು ಆರೋಗ್ಯವಾಗಿಡಲು ನೆಲ್ಲಿಕಾಯಿ ಬೆಸ್ಟ್.&lt;/p&gt;&lt;p&gt;&lt;strong&gt;8. ಉಗುರುಬೆಚ್ಚನೆಯ ನಿಂಬೆ ನೀರು&lt;/strong&gt;ಬೆಳಗ್ಗೆ ಎದ್ದ ತಕ್ಷಣ ಉಗುರುಬೆಚ್ಚನೆಯ ನೀರಿಗೆ ಅರ್ಧ ನಿಂಬೆಹಣ್ಣಿನ ರಸ ಹಿಂಡಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಚುರುಕಾಗುತ್ತದೆ ಮತ್ತು ಕರುಳಿನ ತ್ಯಾಜ್ಯ ಕರಗಿ ಸುಲಭವಾಗಿ ಹೊರಹೋಗುತ್ತದೆ.&lt;/p&gt;&lt;p&gt;&lt;strong&gt;9. ಸೌತೆಕಾಯಿ (Cucumber)&lt;/strong&gt;ಇದರಲ್ಲಿ ನೀರಿನಂಶ ಮತ್ತು ಫೈಬರ್ ಹೆಚ್ಚಾಗಿರುತ್ತದೆ. ಇದು ಹೊಟ್ಟೆಯ ಉರಿಯನ್ನು ಕಡಿಮೆ ಮಾಡಿ ಕರುಳಿಗೆ ತಂಪು ನೀಡುತ್ತದೆ.&lt;/p&gt;&lt;img&gt;&lt;p&gt;&lt;strong&gt;10. ಶುದ್ಧ ನೀರು (Water)&lt;/strong&gt;ಎಲ್ಲಕ್ಕಿಂತ ಮುಖ್ಯವಾದದ್ದು ನೀರು. ನಾವು ಸೇವಿಸುವ ನಾರಿನಂಶ ಸರಿಯಾಗಿ ಕೆಲಸ ಮಾಡಿ ಮಲ ಸರಾಗವಾಗಿ ಹೊರಹೋಗಬೇಕಾದರೆ ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರು ಕುಡಿಯುವುದು ಕಡ್ಡಾಯ.&lt;/p&gt;&lt;p&gt;(&lt;strong&gt;ಗಮನಿಸಿ: &lt;/strong&gt;ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಗಂಭೀರ ಜೀರ್ಣಾಂಗ ಸಮಸ್ಯೆಗಳಿದ್ದಲ್ಲಿ ವೈದ್ಯರ ಸಲಹೆ ಪಡೆಯಿರಿ).&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/how-to-clean-intestines-naturally-in-kannada-3osdrxr"/>
        </item>
        <item>
            <title><![CDATA[Viral: ಚಿನ್ನದಂತ ಹೆಂಡ್ತಿಗೆ, ಚಿನ್ನ ಮಾರಿ ಐಪೋನ್‌ 18 ಪ್ರೋ ಖರೀದಿ ಮಾಡಿದ ಗಂಡ!]]></title>
            <link>https://kannada.asianetnews.com/relationship/husband-sells-gold-jewellery-to-buy-new-iphone-18-pro-for-wife-apple-fans-craze-in-india-noida-apple-bmk/articleshow-vex1wfk</link>
            <guid isPermaLink="true">https://kannada.asianetnews.com/relationship/husband-sells-gold-jewellery-to-buy-new-iphone-18-pro-for-wife-apple-fans-craze-in-india-noida-apple-bmk/articleshow-vex1wfk</guid>
            <pubDate>Fri, 18 Sep 2026 19:31:19 +0530</pubDate>
            <description><![CDATA[ಭಾರತದಲ್ಲಿ ಆಪಲ್ ಐಫೋನ್ 18 ಪ್ರೋ ಬಿಡುಗಡೆಯಾಗಿದ್ದು, ಜನರ ಹುಚ್ಚಾಟ ಮಿತಿಮೀರಿದೆ. ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಈ ಫೋನ್ ಕೊಡಿಸಲು ಚಿನ್ನವನ್ನೇ ಮಾರಿದ್ದಾರೆ. ಪಂಜಾಬ್&zwnj;ನ ಯುವಕನೊಬ್ಬ ನಿಶ್ಚಿತಾರ್ಥಕ್ಕಾಗಿ 3.5 ಲಕ್ಷ ರೂ. ಖರ್ಚು ಮಾಡಿದ್ದು, ಬೆಲೆ ಏರಿಕೆಯ ನಡುವೆಯೂ ಐಫೋನ್ ಕ್ರೇಜ್ ಕಡಿಮೆಯಾಗಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01m2td35t31c50mcgw0qr755q9,imgname-relationship-1789740029762.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರತಿ ವರ್ಷ ಆಪಲ್ ಹೊಸ ಐಫೋನ್ ಸರಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗಲೂ ದೇಶಾದ್ಯಂತ ಆಪಲ್ ಪ್ರಿಯರ ಹುಚ್ಚಾಟ ಮತ್ತು ಕ್ರೇಜ್ ಮುಗಿಲು ಮುಟ್ಟುವುದು ಹೊಸದೇನಲ್ಲ. ಆದರೆ ಈ ಬಾರಿ ನೂತನ 'ಐಫೋನ್ 18 ಪ್ರೊ' (iPhone 18 Pro) ಭಾರತೀಯ ಮಾರುಕಟ್ಟೆಗೆ ಕಾಲಿಡುತ್ತಿದ್ದಂತೆ ಆಪಲ್ ಅಭಿಮಾನಿಗಳ ಹುಚ್ಚಾಟ ಎಲ್ಲ ಗಡಿಗಳನ್ನೂ ದಾಟಿದೆ! ಬೆಳಗಿನ ಜಾವ ಅಂಗಡಿ ಬಾಗಿಲು ತೆರೆಯುವ ಮುನ್ನವೇ ಕಿಲೋಮೀಟರ್&zwnj;ಗಟ್ಟಲೆ ಉದ್ದದ ಸಾಲಿನಲ್ಲಿ ನಿಂತಿದ್ದ ಜನರು, ಐಫೋನ್ ಪಡೆಯಲು ಮಾಡಿದ ಗೀಳು ಮತ್ತು ಖರ್ಚು ಮಾಡಿದ ರೀತಿ ಕೇಳಿದರೆ ಎಂಥವರೂ ಹುಬ್ಬೇರಿಸುವುದು ಖಂಡಿತ.&lt;/p&gt;&lt;h2&gt;&lt;strong&gt;ವಿಚಿತ್ರ ಸ್ಟೋರಿ!&lt;/strong&gt;&lt;/h2&gt;&lt;p&gt;ದೆಹಲಿ, ಪಂಜಾಬ್, ಹರಿಯಾಣ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಜನರು ನೋಯ್ಡಾದ ಡಿಎಲ್ಎಫ್ ಮಾಲ್ ಆಫ್ ಇಂಡಿಯಾದಲ್ಲಿರುವ ಆಪಲ್ ಸ್ಟೋರ್&zwnj;ಗೆ ಧಾವಿಸಿದ್ದರು. ಈ ವೇಳೆ ಇಂಡಿಯಾ ಟುಡೇ ಟೆಕ್ ತಂಡ ನಡೆಸಿದ ವಿಶೇಷ ಸಂವಾದದಲ್ಲಿ ಹಲವು ಕುತೂಹಲಕಾರಿ, ಆಶ್ಚರ್ಯಕರ ಮತ್ತು ತಮಾಷೆಯ ಕಥೆಗಳು ಹೊರಬಂದಿವೆ.&lt;/p&gt;&lt;h3&gt;&lt;strong&gt;ಹೆಂಡತಿಯ ಪ್ರೀತಿಗಾಗಿ ಒಡವೆ ಮಾರಿದ ಗಂಡ!&lt;/strong&gt;&lt;/h3&gt;&lt;p&gt;ಈ ಎಲ್ಲ ಘಟನೆಗಳ ಪೈಕಿ ಅತ್ಯಂತ ಗಮನಸೆಳೆದದ್ದು ದೆಹಲಿಯ ವ್ಯಕ್ತಿಯೊಬ್ಬರ ಕಥೆ. ಬೆಳಿಗ್ಗೆ 8 ಗಂಟೆಗೆ ಅಂಗಡಿ ತೆರೆಯುವ ಮುನ್ನವೇ ಸಾಲಿನಲ್ಲಿ ನಿಂತಿದ್ದ ಇವರು, ತಮ್ಮ ಪತ್ನಿಗೆ ಬಿಡುಗಡೆಯಾಗಿರುವ ನೂತನ 'ಬರ್ಗಂಡಿ' (Burgundy) ಬಣ್ಣದ ಐಫೋನ್ 18 ಪ್ರೊ ಉಡುಗೊರೆಯಾಗಿ ನೀಡಲು ಬಂದಿದ್ದರು. ಅವರ ಪತ್ನಿ ಇದುವರೆಗೆ ಐಫೋನ್ ಬಳಸಿಯೇ ಇರಲಿಲ್ಲವಂತೆ! ತಮ್ಮ ಪತ್ನಿಗೆ ಈ ಬಾರಿಯಾದರೂ ಐಫೋನ್ ಕೊಡಿಸಲೇಬೇಕೆಂಬ ಹಠಕ್ಕೆ ಬಿದ್ದ ಇವರು ಮಾಡಿದ ಕೆಲಸವೇನು ಗೊತ್ತಾ? ತಮ್ಮ ಬಳಿಯಿದ್ದ ಚಿನ್ನವನ್ನು ಮಾರಿ ಫೋನ್ ಖರೀದಿಸಿದ್ದಾರೆ!&lt;/p&gt;&lt;h3&gt;&lt;strong&gt;ಈ ಬಗ್ಗೆ ಅವರು ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಈ ಬಗ್ಗೆ ಮಾತನಾಡಿದ ಅವರು, ಹಿಂದೆ ನನ್ನ ಬಳಿ ಸಾಕಷ್ಟು ಹಣವಿರಲಿಲ್ಲ. ಆದರೆ ಇಂದು ಹಣವಿದೆ, ನಾಳೆ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ. ಹಾಗಾಗಿ ಇಂದು ಲೈಫ್ ಎಂಜಾಯ್ ಮಾಡಬೇಕು. ಚಿನ್ನಕ್ಕಿಂತ ಹೆಂಡತಿಯ ಸಂತೋಷವೇ ಮುಖ್ಯ, ಹಾಗಾಗಿ ಚಿನ್ನ ಮಾರಿ ಫೋನ್ ತಂದಿದ್ದೇನೆ&quot; ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ನಿಶ್ಚಿತಾರ್ಥಕ್ಕಾಗಿ 3.5 ಲಕ್ಷ ರೂ. ಖರ್ಚು ಮಾಡಿದ ಪಂಜಾಬ್ ಯುವಕ!&lt;/strong&gt;&lt;/h3&gt;&lt;p&gt;ಐಫೋನ್ ಕ್ರೇಜ್ ಕೇವಲ ದೆಹಲಿಗೆ ಸೀಮಿತವಾಗಿರಲಿಲ್ಲ. ಪಂಜಾಬ್&zwnj;ನ ಗುರುದಿತಾ ಸಿಂಗ್ ಎಂಬ ಯುವಕ ತನಗಾಗಲಿರುವ ಭಾವಿ ಪತ್ನಿಗೆ ನಿಶ್ಚಿತಾರ್ಥದ ಉಡುಗೊರೆಯಾಗಿ ಐಫೋನ್ 18 ಪ್ರೊ ನೀಡಲು ಬೆಳಗಿನ ಜಾವ ೬ ಗಂಟೆಗೇ ನೋಯ್ಡಾ ತಲುಪಿದ್ದ. ಭಾವಿ ಪತ್ನಿಗೆ ಒಂದು ಐಫೋನ್ 18 ಪ್ರೊ ಹಾಗೂ ತನಗೆ ಐಫೋನ್ 18 ಪ್ರೊ ಮ್ಯಾಕ್ಸ್ &ndash; ಹೀಗೆ ಎರಡು ಹೈ-ಎಂಡ್ ಫೋನ್&zwnj;ಗಳಿಗಾಗಿ ಆತ ಬರೋಬ್ಬರಿ ೩.೫ ಲಕ್ಷ ರೂಪಾಯಿಗೂ ಹೆಚ್ಚು ಹಣ ಚೆಲ್ಲಿದ್ದಾನೆ! ಬೆಳಿಗ್ಗೆ ಫೋನ್ ಪಡೆದು ೧೧ ಗಂಟೆಯ ರೈಲಿಗೆ ಪಂಜಾಬ್&zwnj;ಗೆ ವಾಪಸ್ ಹೋಗುವ ಯೋಜನೆ ಆತನದ್ದಾಗಿತ್ತು.&lt;/p&gt;&lt;h3&gt;&lt;strong&gt;ಬೆಲೆ ಏರಿದರೂ ಕಮ್ಮಿಯಾಗದ ಕ್ರೇಜ್!&lt;/strong&gt;&lt;/h3&gt;&lt;p&gt;ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಐಫೋನ್ 18 ಪ್ರೊ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಆದರೂ ಅಭಿಮಾನಿಗಳ ಉತ್ಸಾಹ ಕುಗ್ಗಿಲ್ಲ. ತಮ್ಮ ಪತಿಯೊಂದಿಗೆ ಎರಡು ಐಫೋನ್ ಖರೀದಿಸಲು ಬಂದಿದ್ದ ಮಹಿಳೆಯೊಬ್ಬರು, &quot;ಬೆಲೆ ಹೆಚ್ಚಾಗಿರುವುದು ನಿಜ, ಆದರೆ ಐಫೋನ್ ಪ್ರಿಯರು ಎಷ್ಟು ಬೆಲೆಯಿದ್ದರೂ ಪಾವತಿಸಲು ಸಿದ್ಧರಿರುತ್ತಾರೆ&quot; ಎಂದು ಸಮರ್ಥಿಸಿಕೊಂಡರು. ಅಷ್ಟೇ ಅಲ್ಲದೆ, ಹಾಂಗ್ ಕಾಂಗ್&zwnj;ನಲ್ಲಿರುವ ತಮ್ಮ ಸ್ನೇಹಿತನ ಮೂಲಕ ಅಕ್ಟೋಬರ್&zwnj;ನಲ್ಲಿ ಬರಲಿರುವ 'ಐಫೋನ್ ಡ್ಯುಯೊ' (iPhone Duo) ತರಿಸಿಕೊಳ್ಳುವುದಾಗಿಯೂ ಅವರು ತಿಳಿಸಿದರು. ಇತ್ತ ಹರಿಯಾಣದ ವಿಶಾಲ್ ಎಂಬ ಗ್ರಾಹಕ ಕೂಡ, &quot;ಬೆಲೆ ಹೆಚ್ಚಾದರೆ ಏನಂತೆ, ಮ್ಯಾನೇಜ್ ಮಾಡಿಕೊಳ್ಳುತ್ತೇವೆ&quot; ಎಂದು ಕೂಲ್ ಆಗಿ ಉತ್ತರಿಸಿದರು.&lt;/p&gt;&lt;h3&gt;&lt;strong&gt;ಆರ್ಡರ್ ಮಾಡದೆ ಪರದಾಡಿದ ಗ್ರಾಹಕರು!&lt;/strong&gt;&lt;/h3&gt;&lt;p&gt;ಆದರೆ, ಮುಂಗಡ ಕಾಯ್ದಿರಿಸುವಿಕೆ (Pre-order) ಮಾಡದೆ ನೇರವಾಗಿ ಸ್ಟೋರ್&zwnj;ಗೆ ಬಂದ ಹಲವರು ಫೋನ್ ಸಿಗದೆ ನಿರಾಶೆಗೊಂಡರು. ಪ್ರೀ-ಆರ್ಡರ್ ನಿಯಮ ತಿಳಿಯದ ವ್ಯಕ್ತಿಯೊಬ್ಬರು, &quot;ಫೋನ್ ಪಡೆಯಲು ಅಂಗಡಿಯೊಳಗೆ ಹೋಗಲು ಲಂಚ ನೀಡಲು ಸಿದ್ಧ ಎಂದು ತಮಾಷೆಯಾಗಿ ಹೇಳಿದ್ದು ಆಪಲ್ ಫೋನ್&zwnj;ಗಳ ಮೇಲಿರುವ ಹುಚ್ಚಾಟಕ್ಕೆ ಹಿಡಿದ ಕನ್ನಡಿಯಾಗಿದೆ. ಒಟ್ಟಿನಲ್ಲಿ, ಐಫೋನ್ 18 ಪ್ರೊ ಬಿಡುಗಡೆಯು ದೇಶದಲ್ಲಿ ಕೇವಲ ಟೆಕ್ ಹವಾ ಸೃಷ್ಟಿಸಿಲ್ಲ, ಬದಲಿಗೆ ಜನರ ಜೇಬು ಮತ್ತು ಭಾವನೆಗಳ ಜೊತೆ ಹೊಸ ಕಥೆಗಳನ್ನು ಸೃಷ್ಟಿಸಿದೆ.&lt;/p&gt;]]></content:encoded>
            <category>life</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/relationship/husband-sells-gold-jewellery-to-buy-new-iphone-18-pro-for-wife-apple-fans-craze-in-india-noida-apple-bmk/articleshow-vex1wfk"/>
        </item>
        <item>
            <title><![CDATA[Tatto ಕಥೆ, ಸೌಂದರ್ಯ ಜೊತೆ: ಮೈಮೇಲಿನ ಒಂದೊಂದು ಹಚ್ಚೆಗೂ ಒಂದೊಂದು ಕಥೆ ಹೇಳಿದ Bigg Boss ಬೋಲ್ಡ್ ಬ್ಯೂಟಿ]]></title>
            <link>https://kannada.asianetnews.com/gallery/entertainment/bigg-boss-bold-beauty-soundarya-shetty-told-a-story-behind-each-tattoo-on-her-body-suc-ugqlkuf</link>
            <guid isPermaLink="true">https://kannada.asianetnews.com/gallery/entertainment/bigg-boss-bold-beauty-soundarya-shetty-told-a-story-behind-each-tattoo-on-her-body-suc-ugqlkuf</guid>
            <pubDate>Fri, 18 Sep 2026 19:07:29 +0530</pubDate>
            <description><![CDATA[&lt;p&gt;ಬಿಗ್&zwnj;ಬಾಸ್ 13ರ ಸ್ಪರ್ಧಿ ಸೌಂದರ್ಯ ಶೆಟ್ಟಿ ತಮ್ಮ ಮೈಮೇಲಿರುವ ಟ್ಯಾಟೂಗಳ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಉಸಿರಿನ ಸಂಕೇತ, ಬುದ್ಧ ಮತ್ತು ನೃತ್ಯದ ಶ್ರೇಷ್ಠತೆಯನ್ನು ಸಾರುವ ಸಂಸ್ಕೃತ ಶ್ಲೋಕದ ಟ್ಯಾಟೂಗಳ ಅರ್ಥವನ್ನು ಅವರು ವಿವರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tbhrc82t4qn6s6pxpf7jjd,imgname-soundarya-shetty-1789738410376.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ 13ರ ಸ್ಪರ್ಧಿ ಸೌಂದರ್ಯ ಶೆಟ್ಟಿ ತಮ್ಮ ಮೈಮೇಲಿರುವ ಟ್ಯಾಟೂಗಳ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಉಸಿರಿನ ಸಂಕೇತ, ಬುದ್ಧ ಮತ್ತು ನೃತ್ಯದ ಶ್ರೇಷ್ಠತೆಯನ್ನು ಸಾರುವ ಸಂಸ್ಕೃತ ಶ್ಲೋಕದ ಟ್ಯಾಟೂಗಳ ಅರ್ಥವನ್ನು ಅವರು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​ 13 (Bigg Boss 13)ರ ಪ್ರೊಮೋ ರಿಲೀಸ್​ ಆದಾಗ, ಟ್ಯಾಟೂ ಮೂಲಕವೇ ಇಂಟ್ರಡ್ಯೂಸ್​ ಮಾಡಿದ್ದ ಬ್ಯೂಟಿಯೇ ಮಂದಳೂರು ಮೂಲದ, ಸೌಂದರ್ಯ ಶೆಟ್ಟಿ. ಸಖತ್ ಬೋಲ್ಡ್ ಆಗಿರೋ ಸೌಂದರ್ಯ, ಫಿಟ್&zwnj;ನೆಸ್ ಪ್ರೇಮಿಯೂ ಹೌದು. ಈಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಇವರ ಮೈತುಂಬಾ ಇರುವ ಹಚ್ಚೆಯ ಗುಟ್ಟನ್ನು ಬಿಚ್ಚಿಡಲಾಗಿದೆ.&lt;/p&gt;&lt;img&gt;&lt;p&gt;Tatto ಕಥೆ, ಸೌಂದರ್ಯ ಜೊತೆ ಎನ್ನುವ ಕ್ಯಾಪ್ಷನ್​ ನೀಡಿ, ಸೌಂದರ್ಯ ಅವರ ಟ್ಯಾಟೂ ಕಥೆಯನ್ನು ತೋರಿಸಲಾಗಿದೆ. ಕೈತುಂಬಾ ಇರುವ ಟ್ಯಾಟೂಗಳಲ್ಲಿ ಕೆಲವೊಂದು ಟೈಮ್​ಪಾಸ್​ ಟ್ಯಾಟೂ ಅಂದಿದ್ದಾರೆ. ಬಲಗೈಯಲ್ಲಿ ಇರುವ ಟ್ಯಾಟೂ ಒಂದು ಉಸಿರಿನ ಸಂಕೇತ. ನಾವು ಎಂದಿಗೂ ಉಸಿರಿನ ಜೊತೆ ಇರುತ್ತೇವೆ ಎನ್ನುವುದರ ಸಂಕೇತ ಎಂದಿದ್ದಾರೆ.&lt;/p&gt;&lt;img&gt;&lt;p&gt;ಒಂದು ಬುದ್ಧನನ್ನು ಪ್ರತಿನಿಧಿಸುವ ಟ್ಯಾಟೂ ಎಂದಿದ್ದರೆ, ಸೊಂಟದ ಮೇಲಿನ ಟ್ಯಾಟೂ ಒಂದನ್ನು ತೋರಿಸಿ ಸಂಸ್ಕೃತ ಶ್ಲೋಕವನ್ನು ಹೇಳಿದ್ದಾರೆ. ಸೌಂದರ್ಯಂಗೆ ನೃತ್ಯವೇ ಸುಂದರ ಎನ್ನುವುದು ಇದರ ತಾತ್ಪರ್ಯ. ಆದ್ದರಿಂದ ಸೌಂದರ್ಯ ಹೆಸರಿನ ನನಗೆ ನೃತ್ಯವೇ ಶ್ರೇಷ್ಠ ಎನ್ನುವುದನ್ನು ಈ ಟ್ಯಾಟೂ ತೋರಿಸುತ್ತದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಸೌಂದರ್ಯ ಶೆಟ್ಟಿ (Bigg Boss Soundarya Shetty) ಕುರಿತು ಹೇಳುವುದಾದರೆ, ಅವರೇ ತಮ್ಮನ್ನು ಬಿಗ್​ಬಾಸ್​ನಲ್ಲಿ ಹೀಗೆ ಇಂಟ್ರಡ್ಯೂಸ್​ ಮಾಡಿಕೊಂಡಿದ್ದರು. ನಾನು ತುಂಬಾ ಕನ್ಫಿಡೆಂಟ್, ಸ್ಟೈಲಿಶ್ ಹುಡುಗಿ. ನಾನು ಹುಟ್ಟಿದ್ದು ಮಸ್ಕಟ್&zwnj;ನಲ್ಲಿ. ಬೆಳೆದಿದ್ದು ಮಂಗಳೂರಿನಲ್ಲಿ. ಸದ್ಯ ನಾನು ಇರೋದು ಮುಂಬೈನಲ್ಲಿ. ನಾನು ಕರ್ನಾಟಕದವಳು. ನನಗೆ ಕನ್ನಡಿಗರ ಸಪೋರ್ಟ್ ಬೇಕು. ಕನ್ನಡಿಗರ ಪ್ರೀತಿ ಬೇಕು. ನನ್ನನ್ನ ಕನ್ನಡಿಗರು ಇಷ್ಟ ಪಡ್ತಾರೆ ಅಂದುಕೊಳ್ತೀನಿ&rsquo;&rsquo; ಎಂದಿದ್ದರು.&lt;/p&gt;&lt;img&gt;&lt;p&gt;&lsquo;&rsquo;ನನಗೆ ಚಿಕ್ಕವಯಸ್ಸಿನಿಂದಲೂ ಡ್ಯಾನ್ಸ್, ಸ್ಟೈಲಿಂಗ್ ಅಂದ್ರೆ ಇಷ್ಟ. ವೀಕೆಂಡ್&zwnj; ಬಂತೂಂದ್ರೆ ಪಾರ್ಟಿ, ನೈಟ್ ಲೈಫ್, ಮ್ಯೂಸಿಕ್, ಡ್ಯಾನ್ಸ್ ನನ್ನ ವೈಬ್&zwnj; ಎಂದಿದ್ದರು. ನನಗೆ ಟ್ರಾವೆಲ್ ಮಾಡೋದು ಇಷ್ಟ. ಎಲ್ಲೇ ಟ್ರಾವೆಲ್ ಮಾಡಿದರೂ, ಅಲ್ಲಿಂದ ಒಂದು ಮೆಮೊರಿ ತರ್ತೀನಿ. ನನ್ನ ಮೈಮೇಲೆ ಇರುವ ಒಂದೊಂದು ಟ್ಯಾಟೂಗೂ ಒಂದೊಂದು ಸ್ಟೋರಿ ಇದೆ&rsquo;&rsquo; ಎಂದಿದ್ದರು ಸೌಂದರ್ಯ ಶೆಟ್ಟಿ.&lt;/p&gt;&lt;img&gt;&lt;p&gt;&lsquo;&rsquo;ನಾನು ಅನಿಸಿದ್ದನ್ನ ನೇರವಾಗಿ ಹೇಳಿಬಿಡ್ತೀನಿ. ಮೈಂಡ್&zwnj;ನಿಂದ ಆಡೋಕೆ ಇಳಿದರೆ, ಎಲ್ಲರನ್ನ ಖಂಡಿತ ಮ್ಯೂನಿಪುಲೇಟ್ ಮಾಡ್ತೀನಿ. ನಾನು ಇದ್ದ &lsquo;ಸ್ಪ್ಲಿಟ್ಸ್ ವಿಲ್ಲಾ ಸೀಸನ್ 16&rsquo; ಬ್ಲಾಕ್ ಬಸ್ಟರ್ ಆಯ್ತು. ಈಗ ಕರ್ನಾಟಕದಲ್ಲೂ ನನಗೆ ಜನರ ಪ್ರೀತಿ ಬೇಕಿದೆ&rsquo;&rsquo; ಅಂತಂದಿದ್ದಾರೆ ಸೌಂದರ್ಯ ಶೆಟ್ಟಿ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/bigg-boss-bold-beauty-soundarya-shetty-told-a-story-behind-each-tattoo-on-her-body-suc-ugqlkuf"/>
        </item>
        <item>
            <title><![CDATA[ಸ್ವಂತ 'ಐಲ್ಯಾಂಡ್' ಹೊಂದಿರೋ ಈ ನಟಿ ಕನ್ನಡದಲ್ಲೂ ನಟಿಸಿದ್ದಾರೆ.. ಈಕೆಯ ಒಟ್ಟೂ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!]]></title>
            <link>https://kannada.asianetnews.com/gallery/news-entertainment/jacqueline-fernandez-who-acted-with-kiccha-sudeep-in-kannada-cinema-reportedly-owns-a-private-island-in-sri-lanka-mi7fck1</link>
            <guid isPermaLink="true">https://kannada.asianetnews.com/gallery/news-entertainment/jacqueline-fernandez-who-acted-with-kiccha-sudeep-in-kannada-cinema-reportedly-owns-a-private-island-in-sri-lanka-mi7fck1</guid>
            <pubDate>Fri, 18 Sep 2026 18:57:19 +0530</pubDate>
            <description><![CDATA[&lt;p&gt;ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್&zwnj;ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2taa53rmf7spn2s2h0zsv7e,imgname-jacqueline-fernandez-1789737112696.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್&zwnj;ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ.&lt;/p&gt;&lt;img&gt;&lt;p&gt;ಜಾಕ್ವೆಲಿನ್ ಫರ್ನಾಂಡಿಸ್: ಮನೆ, ಕಾರು ಅಲ್ಲ... ನಟಿಯ ಬಳಿ ಇದೆ ಒಂದು ಖಾಸಗಿ ದ್ವೀಪ!&lt;/p&gt;&lt;p&gt;ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್&zwnj;ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ ಎಂಬ ಕಾರಣಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಆಗಾಗ್ಗೆ ಸುದ್ದಿಯಾಗುತ್ತಾರೆ.&lt;/p&gt;&lt;img&gt;&lt;p&gt;ಶ್ರೀಲಂಕಾದ ಕೊಲಂಬೊದಲ್ಲಿ ಜನಿಸಿದ ಜಾಕ್ವೆಲಿನ್, ಮಾಡೆಲಿಂಗ್ ಕ್ಷೇತ್ರದಿಂದ ತಮ್ಮ ವೃತ್ತಿಜೀವನ ಆರಂಭಿಸಿ ಬಳಿಕ ಬಾಲಿವುಡ್&zwnj;ನಲ್ಲಿ ಗುರುತಿಸಿಕೊಂಡರು. 2006ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟ ಗೆದ್ದ ಅವರು, 2009ರಲ್ಲಿ &lsquo;ಅಲ್ಲಾದೀನ್&rsquo; ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು.&lt;/p&gt;&lt;img&gt;&lt;p&gt;ಆರಂಭದ ದಿನಗಳ ಬಳಿಕ &lsquo;ಮರ್ಡರ್ 2&rsquo;, &lsquo;ಹೌಸ್&zwnj;ಫುಲ್ 2&rsquo;, &lsquo;ರೇಸ್ 2&rsquo; ಮತ್ತು &lsquo;ಕಿಕ್&rsquo; ಸಿನಿಮಾಗಳ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ವಿಶೇಷವಾಗಿ ಗ್ಲಾಮರ್ ಮತ್ತು ಡ್ಯಾನ್ಸ್&zwnj; ಮೂಲಕ ಬಾಲಿವುಡ್&zwnj;ನಲ್ಲಿ ಜನಪ್ರಿಯತೆ ಪಡೆದರು. ಕನ್ನಡದಲ್ಲಿ ಸ್ಟಾರ್ ನಟ ಕಿಚ್ಚ ಸುದೀಪ್ ಎದುರು 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಟಿಸಿದ್ದಾರೆ. ಕಿಚ್ಚ-ಜಾಕ್ವೆಲಿನ್ ಜೋಡಿಯ 'ರಾ ರಾ ರುಕ್ಕಮ್ಮ..' ಹಾಡು ಸಖತ್ ಫೇಮಸ್ ಆಗಿದ್ದು, ಇಂದಿಗೂ ಆ ಹಾಡು ಜನಮೆಚ್ಚುಗೆ ಕಳೆದುಕೊಂಡಿಲ್ಲ.&lt;/p&gt;&lt;img&gt;&lt;p&gt;ಜಾಕ್ವೆಲಿನ್ ಅವರ ಆಸ್ತಿಗಳ ಪೈಕಿ ಅತ್ಯಂತ ಕುತೂಹಲ ಮೂಡಿಸುವುದು ಅವರ ಹೆಸರಿನೊಂದಿಗೆ ಕೇಳಿಬರುವ ಖಾಸಗಿ ದ್ವೀಪದ ಕಥೆ. 2012ರಲ್ಲಿ ಶ್ರೀಲಂಕಾ ಸಮೀಪ ಸುಮಾರು 5 ಎಕರೆ ವಿಸ್ತೀರ್ಣದ ದ್ವೀಪವನ್ನು ಖರೀದಿಸಿದ್ದಾರೆ ಎಂದು ಹಲವು ವರದಿಗಳು ಹೇಳುತ್ತವೆ. ಅದರ ಬೆಲೆ ಸುಮಾರು 3 ಕೋಟಿ ರೂಪಾಯಿ ಎಂದು ವರದಿಯಾಗಿತ್ತು. ಹಸಿರಿನಿಂದ ಆವೃತವಾಗಿರುವ ಈ ದ್ವೀಪವೇ ನಟಿಯ ಐಷಾರಾಮಿ ಜೀವನಶೈಲಿಯ ಮತ್ತೊಂದು ಉದಾಹರಣೆಯಾಗಿ ಚರ್ಚೆಯಾಗುತ್ತದೆ.&lt;/p&gt;&lt;img&gt;&lt;p&gt;ಕನ್ನಡ ಪ್ರೇಕ್ಷಕರಿಗೂ ಜಾಕ್ವೆಲಿನ್ ಪರಿಚಿತ ಮುಖ. ಕಿಚ್ಚ ಸುದೀಪ್ ಅಭಿನಯದ &lsquo;ವಿಕ್ರಾಂತ್ ರೋಣ&rsquo; ಸಿನಿಮಾದ &lsquo;ರಕ್ಕಮ್ಮ&rsquo; ಪಾತ್ರದ ಮೂಲಕ ಅವರು ಸ್ಯಾಂಡಲ್&zwnj;ವುಡ್&zwnj;ನಲ್ಲೂ ಗಮನ ಸೆಳೆದಿದ್ದರು.&lt;/p&gt;&lt;img&gt;&lt;p&gt;ಇಷ್ಟೇ ಅಲ್ಲ, ಮುಂಬೈನ ಪಾಲಿ ಹಿಲ್&zwnj;ನಲ್ಲಿ ಐಷಾರಾಮಿ 5 BHK ಅಪಾರ್ಟ್&zwnj;ಮೆಂಟ್, ಕೊಲಂಬೊದಲ್ಲಿ ರೆಸ್ಟೋರೆಂಟ್ ಹಾಗೂ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಹೊಂದಿದ್ದಾರೆ ಎಂಬ ವರದಿಗಳಿವೆ. ಸಿನಿಮಾಗಳ ಸಂಭಾವನೆ, ಜಾಹೀರಾತುಗಳು ಮತ್ತು ಇತರ ವಾಣಿಜ್ಯ ಚಟುವಟಿಕೆಗಳಿಂದಲೂ ಅವರು ಆದಾಯ ಗಳಿಸುತ್ತಾರೆ ಎನ್ನಲಾಗಿದೆ. ಒಂದು ವರ್ಷಕ್ಕೆ ಇವರ ಆದಾಯ 12 ಕೋಟಿಗೂ ಅಧಿಕ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಜಾಕ್ವೆಲಿನ್ ಫರ್ನಾಂಡಿಸ್ ಅವರ ಸಿನಿಮಾ ಜರ್ನಿಯಷ್ಟೇ ಅವರ ಐಷಾರಾಮಿ ಆಸ್ತಿ ಮತ್ತು ಉದ್ಯಮದ ಕುರಿತ ಸುದ್ದಿಗಳೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿವೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/news-entertainment/jacqueline-fernandez-who-acted-with-kiccha-sudeep-in-kannada-cinema-reportedly-owns-a-private-island-in-sri-lanka-mi7fck1"/>
        </item>
        <item>
            <title><![CDATA[ಅಮ್ಮನಾದ ಮೇಲೆ ದೇಹ ಬದಲಾವಣೆ: ಕತ್ರಿನಾ ಕೈಫ್​ ಬಾಡಿ ಷೇಮಿಂಗ್​ ಮಾಡ್ತಿರೋರ ಚಳಿ ಬಿಡಿಸಿದ ನಟಿ ರಮ್ಯಾ]]></title>
            <link>https://kannada.asianetnews.com/women/actress-katrina-kaif-body-shamed-by-netizens-actress-ramya-outraged-suc/articleshow-vf91c58</link>
            <guid isPermaLink="true">https://kannada.asianetnews.com/women/actress-katrina-kaif-body-shamed-by-netizens-actress-ramya-outraged-suc/articleshow-vf91c58</guid>
            <pubDate>Fri, 18 Sep 2026 18:44:18 +0530</pubDate>
            <description><![CDATA[ಗಣೇಶ ಚತುರ್ಥಿ ಆಚರಣೆಯಲ್ಲಿ ಕಾಣಿಸಿಕೊಂಡ ನಟಿ ಕತ್ರಿನಾ ಕೈಫ್ ಅವರ ತೂಕ ಹೆಚ್ಚಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬಾಡಿ ಷೇಮಿಂಗ್ ಮಾಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಟಿ ರಮ್ಯಾ, ಮಹಿಳೆಯ ದೇಹದ ಬದಲಾವಣೆ ಸಹಜ ಪ್ರಕ್ರಿಯೆ ಎಂದು ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2tae832jhsnq86pje5jj840,imgname-katrina-kaif-and-ramya-1789737246818.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿಯರು ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು ಎಂದು ಬಯಸುವವರೇ ಬಹುತೇಕ ಮಂದಿ. ಇದೇ ಕಾರಣಕ್ಕೆ ಹಲವಾರು ನಟಿಯರು ಬಾಡಿಷೇಮಿಂಗ್​ ಅನುಭವಿಸುವುದು ಇದೆ. ಓರ್ವ ಮಹಿಳೆ ಅಮ್ಮನಾದ ಮೇಲೆ ಸಹಜವಾಗಿ ತೂಕ ಹೆಚ್ಚಾಗುತ್ತದೆ. ಕಾಲ ಕ್ರಮೇಣ ಕೆಲವರು, ಯೋಗ, ಧ್ಯಾನ, ಡಯೆಟ್​ ಇತ್ಯಾದಿಗಳ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಇದೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗದ ಮಾತು. ಆದರೆ ಓರ್ವ ಹೆಣ್ಣಿನ ದೇಹದ ಬಗ್ಗೆ ಅದರಲ್ಲಿಯೂ ಸೆಲೆಬ್ರಿಟಿಗಳ ಬಗ್ಗೆ ಟೀಕೆ ಮಾಡಿ ವಿಕೃತ ಸಂತೋಷ ಅನುಭವಿಸುವವರು ಕೆಲವರು. ಅದೇ ರೀತಿ ಇದೀಗ, ನಟಿ ಕತ್ರಿನಾ ಕೈಫ್​ಗೂ ಆಗಿದೆ.&lt;/p&gt;&lt;p&gt;ಇತ್ತೀಚೆಗೆ ನಡೆದ ಮುಕೇಶ್​ ಅಂಬಾನಿ ಕುಟುಂಬದ ಗಣೇಶ ಚತುರ್ಥಿ ಆಚರಣೆಯಲ್ಲಿ ಕತ್ರಿನಾ ಕೈಫ್ ಅವರು ತಮ್ಮ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಭಾಗವಹಿಸಿದ್ದರು. 2025ರ ನವೆಂಬರ್​ನಲ್ಲಿ ಗಂಡು ಮಗು ವಿಹಾನ್​ಗೆ ಜನ್ಮ ನೀಡಿದ್ದ ಕತ್ರಿನಾ ಅವರ ತೂಕ ಸಹಜವಾಗಿ ಹೆಚ್ಚಾಗಿದೆ. ಮುಖದ ಬದಲಾವಣೆಯೂ ಆಗಿದೆ. ಇದರಿಂದಾಗಿ ಕೆಲವು ವಿಕೃತ ಮನಸ್ಸುಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಅವರ 'ಹಳೆಯ ಮತ್ತು ಇಂದಿನ' ಫೋಟೋಗಳನ್ನು ಹೋಲಿಸಿ ಅವಹೇಳನಕಾರಿ ಕಮೆಂಟ್&zwnj;ಗಳನ್ನು ಮಾಡುತ್ತಿದ್ದಾರೆ. ಬೇರೆಯವರನ್ನು ಟೀಕೆ ಮಾಡುತ್ತಲೇ, ಅವರ ಬಾಡಿ ಷೇಮಿಂಗ್​ ಮಾಡುತ್ತಲೇ ತಮ್ಮ ಕೆಟ್ಟ ಮನಸ್ಥಿತಿಯನ್ನು ತೋರುವ ಇಂಥವರಿಂದ ಅದೆಷ್ಟೋ ಮಂದಿ ನೋವು ಅನುಭವಿಸುವುದು ಇದೆ.&lt;/p&gt;&lt;h2&gt;&lt;strong&gt;ರಮ್ಯಾ ಕಿಡಿ&lt;/strong&gt;&lt;/h2&gt;&lt;p&gt;ಇದೀಗ, ಕತ್ರಿನಾ ಕೈಫ್​ ಅವರನ್ನು ಟ್ರೋಲ್​ ಮಾಡುತ್ತಿರುವವರ ಬಗ್ಗೆ ಇದಾಗಲೇ ವಿವಿಧ ಕ್ಷೇತ್ರಗಳ ದಿಗ್ಗಜರು ಛೀಮಾರಿ ಹಾಕಿದ್ದಾರೆ. ಇದೀಗ ನಟಿ ನಟಿ ಮತ್ತು ಮಾಜಿ ಸಂಸದೆ ರಮ್ಯಾ ಟೀಕೆ ಮಾಡುತ್ತಿರುವವರ ಚಳಿ ಬಿಡಿಸಿದ್ದಾರೆ. ಕತ್ರಿನಾ ಕೈಫ್​ ಅವರ ಫೋಟೋ ಶೇರ್​ ಮಾಡಿದ್ದ ಹಲವರು ʻಪ್ರೈಮ್ ಹಂತʼ (ಅತ್ಯುತ್ತಮ ಹಂತ) ಮತ್ತು ʻಮುಕ್ತಾಯದ ಹಂತʼ ಎಂದು ವಿಂಗಡಿಸಿ ಪೋಸ್ಟ್ ಹಾಕಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯ ಮೂಲಕ ಆಕ್ರೋಶ ಹೊರಹಾಕಿರುವ ನಟಿ, ಮಹಿಳೆಯ ಅತ್ಯುತ್ತಮ ಹಂತ ಎನ್ನುವ ಮಾತು ಆಕೆಗೆ ಮುಕ್ತಾಯದ ದಿನ ಇದೆ ಎನ್ನುವಂತೆ ಬಿಂಬಿಸುತ್ತದೆ. ಅತ್ಯುತ್ತಮ ಹಂತವೆಂದರೆ ಕೇವಲ ಮ್ಯಾಗಜೀನ್ ಮುಖಪುಟದ ಮಾಡೆಲ್&zwnj;ನಂತೆ ಕಾಣುವ ಕೆಲವೇ ವರ್ಷಗಳು ಎಂದು ನಿರ್ಧರಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;&lt;strong&gt;ವಿವಿಧ ಘಟ್ಟಗಳಲ್ಲಿ ದೇಹ ಬದಲಾವಣೆ&lt;/strong&gt;&lt;/h3&gt;&lt;p&gt;ಮಹಿಳೆಗೆ ಗರ್ಭಧಾರಣೆ, ಋತುಬಂಧದ ಪೂರ್ವದ ಹಂತ ಹಾಗೂ ಜೀವನದ ವಿವಿಧ ಘಟ್ಟಗಳಲ್ಲಿ ದೇಹ ಬದಲಾಗುತ್ತದೆ. ಅದು ಅವನತಿಯಲ್ಲ, ಬದಲಿಗೆ ಅದು ಬದುಕುವ ಕ್ರಮವಾಗಿದೆ. ʼಅತ್ಯುತ್ತಮ ಹಂತʼ ಎಂದರೆ ಕೇವಲ ಸಣ್ಣ ಸೊಂಟದ ಅಳತೆಯಲ್ಲ; ಅದು ಶಕ್ತಿ, ವಿವೇಕ, ಕೆಲಸ, ಸಂತೋಷ ಮತ್ತು ಆಕೆ ಕಟ್ಟಿಕೊಂಡಿರುವ ಎಲ್ಲವೂ ಆಗಿದೆ. ಕತ್ರಿನಾ ಸದ್ಯ ತಮ್ಮ ಅತ್ಯುತ್ತಮ ಹಂತದಲ್ಲಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಹುಟ್ಟಿದ ದಿನದಿಂದ ಹಿಡಿದು ಜೀವನದ ಕೊನೆಯ ದಿನದವರೆಗೂ ಅತ್ಯುತ್ತಮ ಹಂತದಲ್ಲಿಯೇ ಇರುತ್ತಾಳೆ ಎಂದಿದ್ದಾರೆ.&lt;/p&gt;&lt;p&gt;ಇನ್ನು, &quot;ಆಕೆಯ ಬ್ಯಾಂಕ್ ಬ್ಯಾಲೆನ್ಸ್ ನೋಡಿ&quot; ಎಂದು ಹೇಳುವವರಿಗೆ ಕೇಳುತ್ತೇನೆ: ಹಾಗಾದರೆ ಕಡಿಮೆ ಹಣವಿರುವ ಮಹಿಳೆಯನ್ನು ದೇಹದ ಆಕಾರದ ಕಾರಣಕ್ಕೆ ಅವಮಾನಿಸಬಹುದೇ? ಅಥವಾ &quot;ಆಕೆಗೆ ಮಗುವಾಗಿದೆ, ಹಾಗಾಗಿ ಆ ತೂಕ ಸರಿ&quot; ಎನ್ನುವವರು, ಮಗುವಾಗದಿದ್ದರೆ ಆ ತೂಕ ಸರಿಯಲ್ಲ ಎಂದು ಭಾವಿಸುತ್ತಾರೆಯೇ? ಇದ್ಯಾವ ರೀತಿಯ ಅರ್ಥಹೀನ ಸಮರ್ಥನೆ? ಎಂದು ಕಿಡಿಕಾರಿದ್ದಾರೆ.&lt;/p&gt;&lt;p&gt;ಒಬ್ಬ ಮಹಿಳೆಯ ದೇಹವನ್ನು ಅವಮಾನಿಸಬಾರದು ಎನ್ನಲು ಬ್ಯಾಂಕ್ ಬ್ಯಾಲೆನ್ಸ್&zwnj;ನ ಅಗತ್ಯವಿಲ್ಲ ಅಥವಾ ಅದಕ್ಕೊಂದು ನಿರ್ದಿಷ್ಟ ಕಾರಣವೂ ಬೇಕಿಲ್ಲ. ಇದಕ್ಕೆ ಯಾವುದೇ ಷರತ್ತುಗಳಾಗಲಿ, ವಿನಾಯಿತಿಗಳಾಗಲಿ ಇಲ್ಲ. ದೇಹದ ಆಕಾರವನ್ನು ನೋಡಿ ಅವಮಾನಿಸುವುದು ತಪ್ಪು. ಅಷ್ಟೇ ಎಂದು ರಮ್ಯಾ ತಮ್ಮ ಪೋಸ್ಟ್ ನಲ್ಲಿ ಸ್ಪಷ್ಪಪಡಿಸಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/women/actress-katrina-kaif-body-shamed-by-netizens-actress-ramya-outraged-suc/articleshow-vf91c58"/>
        </item>
        <item>
            <title><![CDATA[Earrings: ಕೇವಲ 1 ಗ್ರಾಂ ತೂಕದ ಬ್ಯೂಟಿಫುಲ್ ಡೈಲಿ ವೇರ್ ಇಯರ್ ರಿಂಗ್ಸ್]]></title>
            <link>https://kannada.asianetnews.com/webstories/fashion/beautiful-and-trendy-one-gram-daily-wear-earrings-for-women-kvn-0ymfr5b</link>
            <guid isPermaLink="true">https://kannada.asianetnews.com/webstories/fashion/beautiful-and-trendy-one-gram-daily-wear-earrings-for-women-kvn-0ymfr5b</guid>
            <pubDate>Fri, 18 Sep 2026 18:41:34 +0530</pubDate>
            <description><![CDATA[&lt;p&gt;ಕ್ಯೂಟ್ ಆಗಿರುವ ಸಿಂಪಲ್ ಇಯರ್ ರಿಂಗ್ಸ್ ಡೈಲಿ ವೇರ್&zwnj;ಗೆ ಹೇಳಿ ಮಾಡಿಸಿದಂತಿವೆ. ಅದರಲ್ಲೂ ಕೇವಲ 1 ಗ್ರಾಂ ತೂಕದಲ್ಲಿ ಸಿಗುವ ಈ ಕ್ಯೂಟ್ ಕಿವಿಯೋಲೆಗಳು ದಿನನಿತ್ಯದ ಬಳಕೆಗೆ ತುಂಬಾ ಚೆನ್ನಾಗಿರುತ್ತವೆ. ಇವು ನಿಮಗೆ ಸಿಂಪಲ್ ಹಾಗೂ ಬ್ಯೂಟಿಫುಲ್ ಲುಕ್ ನೀಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t4y8zjhnfsmrepcm80ar4f,imgname-whatsapp-image-2026-09-18-at-5.03.53-pm--1--1789731480562.jpeg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/beautiful-and-trendy-one-gram-daily-wear-earrings-for-women-kvn-0ymfr5b"/>
        </item>
        <item>
            <title><![CDATA[ವಾಹನ ಯಾವುದೇ ಬಣ್ಣದಲ್ಲಿದ್ದರೂ ಟೈರ್ ಮಾತ್ರ ಕಪ್ಪಾಗಿ ಇರೋದ್ಯಾಕೆ? ಇದರ ಹಿಂದಿದೆ ಜನರ ಪ್ರಾಣ ಉಳಿಸೋ ಬಿಗ್ ಸೀಕ್ರೆಟ್!]]></title>
            <link>https://kannada.asianetnews.com/life/why-are-vehicle-tires-always-black-the-life-saving-science-behind-it/articleshow-vglrheq</link>
            <guid isPermaLink="true">https://kannada.asianetnews.com/life/why-are-vehicle-tires-always-black-the-life-saving-science-behind-it/articleshow-vglrheq</guid>
            <pubDate>Fri, 18 Sep 2026 18:30:15 +0530</pubDate>
            <description><![CDATA[&lt;p&gt;&lt;strong&gt;Why tires are not colorful: &lt;/strong&gt;ಕಾರು, ಬೈಕುಗಳು ನೂರಾರು ಆಕರ್ಷಕ ಬಣ್ಣಗಳಲ್ಲಿ ಸಿಗುತ್ತವೆ, ಆದರೆ ಅವುಗಳ ಟೈರ್&zwnj;ಗಳು ಮಾತ್ರ ಸದಾ ಕಪ್ಪು ಬಣ್ಣದಲ್ಲೇ ಇರುವುದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t9jr5janbsgh3qpx1fs2k9,imgname-thumbnail---2026-09-18t182432.558-1789736345778.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Why Are Vehicle Tires Always Black:&lt;/strong&gt; ಸೈಕಲ್&zwnj;ನಿಂದ ಹಿಡಿದು ಆಗಸದಲ್ಲಿ ಹಾರುವ ವಿಮಾನಗಳವರೆಗೆ ಪ್ರತಿಯೊಂದು ವಾಹನದ ಟೈರ್&zwnj;ಗಳು ಕಪ್ಪು ಬಣ್ಣದಲ್ಲೇ ಇರುತ್ತವೆ. ಕಾರು, ಬೈಕುಗಳು ಕೆಂಪು, ಬಿಳಿ, ಹಳದಿ ಹೀಗೆ ನಾನಾ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದರೂ, ಅವುಗಳ ಟೈರ್&zwnj;ಗಳು ಮಾತ್ರ ಏಕೆ ಬೇರೆ ಬಣ್ಣದಲ್ಲಿರುವುದಿಲ್ಲ? &quot;ಟೈರ್&zwnj;ಗಳು ಕಪ್ಪಾಗಿಯೇ ಏಕೆ ಇರುತ್ತವೆ?&quot; ಎಂಬ ಅನುಮಾನ ನಿಮಗೂ ಎಂದಾದರೂ ಬಂದಿದೆಯೇ? ಇದರ ಹಿಂದೆ ಕೇವಲ ಬಣ್ಣ ಮಾತ್ರವಲ್ಲ, ಜನರ ಜೀವ ಉಳಿಸುವ ಅದ್ಭುತವಾದ ವೈಜ್ಞಾನಿಕ ಕಾರಣವಿದೆ!&lt;/p&gt;&lt;h2&gt;&lt;strong&gt;ಬೆಳ್ಳಗಿರುವ ರಬ್ಬರ್ ಕಪ್ಪಾಗುವುದು ಹೇಗೆ?&lt;/strong&gt;&lt;/h2&gt;&lt;p&gt;ವಾಸ್ತವವಾಗಿ, ಟೈರ್ ತಯಾರಿಸಲು ಮರಗಳಿಂದ ತೆಗೆಯುವ ನೈಸರ್ಗಿಕ ರಬ್ಬರ್ (Natural Rubber) ತಿಳಿ ಬಿಳಿ ಅಥವಾ ಹಳದಿ ಬಣ್ಣದಲ್ಲಿರುತ್ತದೆ. ಆದರೆ ಆ ಬಿಳಿ ರಬ್ಬರ್&zwnj;ನಿಂದ ನೇರವಾಗಿ ಟೈರ್ ಮಾಡಿದರೆ ಅದು ಕೆಲವೇ ದಿನಗಳಲ್ಲಿ ಕರಗಿ ಅಥವಾ ಸವೆದು ಹಾಳಾಗಿಬಿಡುತ್ತದೆ. ಅದಕ್ಕಾಗಿ ಟೈರ್ ತಯಾರಕರು ಒಂದು ವಿಶೇಷ ತಂತ್ರಜ್ಞಾನವನ್ನು ಬಳಸುತ್ತಾರೆ. ರಬ್ಬರ್ ತಯಾರಿಕೆಯ ಸಮಯದಲ್ಲಿ ಅದಕ್ಕೆ 'ಕಾರ್ಬನ್ ಬ್ಲಾಕ್' (Carbon Black) ಎಂಬ ವಿಶೇಷ ರಾಸಾಯನಿಕ ವಸ್ತುವನ್ನು ಬೆರೆಸುತ್ತಾರೆ. ಈ ಕಾರ್ಬನ್ ಬ್ಲಾಕ್&zwnj;ನಿಂದಾಗಿಯೇ ಟೈರ್&zwnj;ಗಳು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತವೆ.&lt;/p&gt;&lt;h2&gt;&lt;strong&gt;ಕಪ್ಪು ಬಣ್ಣ ಕೇವಲ ಸ್ಟೈಲ್&zwnj;ಗಾಗಿ ಅಲ್ಲ, ಇದರ ಹಿಂದಿರುವ ವೈಜ್ಞಾನಿಕ ಕಾರಣಗಳಿವು..&lt;/strong&gt;&lt;/h2&gt;&lt;h2&gt;&lt;strong&gt;1. ಉಕ್ಕಿನಂತಹ ಬಲ ಮತ್ತು ದೀರ್ಘಾಯುಷ್ಯ&lt;/strong&gt;&lt;/h2&gt;&lt;p&gt;ಕಾರ್ಬನ್ ಬ್ಲಾಕ್ ಬೆರೆಸುವುದರಿಂದ ಮೃದುವಾದ ರಬ್ಬರ್&zwnj;ಗೆ ಉಕ್ಕಿನಂತಹ ಶಕ್ತಿ ಬರುತ್ತದೆ. ಕೇವಲ ನೈಸರ್ಗಿಕ ರಬ್ಬರ್&zwnj;ನಿಂದ ಮಾಡಿದ ಟೈರ್ ಕೇವಲ 8,000 ಕಿ.ಮೀ ಓಡಿದರೆ ಸವೆದುಹೋಗುತ್ತದೆ. ಆದರೆ ಕಾರ್ಬನ್ ಬ್ಲಾಕ್ ಬೆರೆಸಿದ ಕಪ್ಪು ಟೈರ್ ಬರೋಬ್ಬರಿ 50,000 ದಿಂದ 1 ಲಕ್ಷ ಕಿ.ಮೀ ವರೆಗೂ ಸುಲಭವಾಗಿ ಬಾಳಿಕೆ ಬರುತ್ತದೆ!&lt;/p&gt;&lt;h2&gt;&lt;strong&gt;2. ಅತಿಯಾದ ಶಾಖದಿಂದ ರಕ್ಷಣೆ (ಟೈರ್ ಬ್ಲಾಸ್ಟ್ ಆಗಲ್ಲ)&lt;/strong&gt;&lt;/h2&gt;&lt;p&gt;ವಾಹನಗಳು ರಸ್ತೆಯಲ್ಲಿ ಅತಿ ವೇಗವಾಗಿ ಚಲಿಸುವಾಗ ರಸ್ತೆ ಮತ್ತು ಟೈರ್ ನಡುವಿನ ಘರ್ಷಣೆಯಿಂದಾಗಿ (Friction) ವಿಪರೀತ ಶಾಖ ಹುಟ್ಟಿಕೊಳ್ಳುತ್ತದೆ. ಸಾಮಾನ್ಯ ರಬ್ಬರ್ ಆಗಿದ್ದರೆ ಆ ಶಾಖಕ್ಕೆ ಕರಗಿ ಅಥವಾ ಸಿಡಿದು (Burst) ಹೋಗುತ್ತಿತ್ತು. ಆದರೆ ಈ ಕಾರ್ಬನ್ ಬ್ಲಾಕ್ ಶಾಖವನ್ನು ಒಂದೇ ಕಡೆ ಉಳಿಯಲು ಬಿಡದೆ, ಟೈರ್&zwnj;ನಾದ್ಯಂತ ಸಮಾನವಾಗಿ ಹರಡುತ್ತದೆ. ಇದರಿಂದ ಟೈರ್ ಕರಗದೆ, ಬ್ಲಾಸ್ಟ್ ಆಗದಂತೆ ರಕ್ಷಣೆ ಸಿಗುತ್ತದೆ.&lt;/p&gt;&lt;h2&gt;&lt;strong&gt;3. ಸೂರ್ಯನ ಯುವಿ ಕಿರಣಗಳಿಂದ ರಕ್ಷಣೆ (UV Protection)&lt;/strong&gt;&lt;/h2&gt;&lt;p&gt;ಬಿಸಿಲಿನಲ್ಲಿರುವ ಅಪಾಯಕಾರಿ ಯುವಿ ಕಿರಣಗಳು (UV Rays) ಮತ್ತು ಓಝೋನ್ ಅನಿಲವು ಸಾಮಾನ್ಯ ರಬ್ಬರ್ ಅನ್ನು ಬಿರುಕು ಬಿಡುವಂತೆ ಮಾಡುತ್ತವೆ. ಆದರೆ ಕಾರ್ಬನ್ ಬ್ಲಾಕ್ ಈ ಕಿರಣಗಳನ್ನು ಹಿಮ್ಮೆಟ್ಟಿಸಿ, ಟೈರ್ ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ.&lt;/p&gt;&lt;h2&gt;&lt;strong&gt;4. ರಸ್ತೆಯ ಸವೆತ ತಡೆಯಲು ಮತ್ತು ಸುರಕ್ಷಿತ ಪ್ರಯಾಣಕ್ಕೆ&lt;/strong&gt;&lt;/h2&gt;&lt;p&gt;ಗುಂಡಿ ಬಿದ್ದ ರಸ್ತೆಗಳು, ಹಠಾತ್ ಬ್ರೇಕ್ ಮತ್ತು ವಾಹನದ ಸಂಪೂರ್ಣ ತೂಕವನ್ನು ಹೊರುವ ಶಕ್ತಿ ಟೈರ್&zwnj;ಗಳಿಗೆ ಇರಬೇಕು. ಕಾರ್ಬನ್ ಬ್ಲಾಕ್ ಟೈರ್&zwnj;ಗೆ ಅತ್ಯುತ್ತಮ ರೋಡ್ ಗ್ರಿಪ್ (Grip) ನೀಡಿ, ಜಾರದಂತೆ ನಿಯಂತ್ರಣ ನೀಡುತ್ತದೆ.&lt;/p&gt;&lt;h3&gt;&lt;strong&gt;ಆಧುನಿಕ ಟೈರ್&zwnj;ಗಳು ತಂತ್ರಜ್ಞಾನದ ಅದ್ಭುತ&lt;/strong&gt;&lt;/h3&gt;&lt;p&gt;ಇಂದಿನ ಕಾಲದ ಟೈರ್&zwnj;ಗಳನ್ನು ಕೇವಲ ರಬ್ಬರ್ ಮತ್ತು ಕಾರ್ಬನ್ ಬ್ಲಾಕ್&zwnj;ನಿಂದ ಮಾತ್ರ ಮಾಡುತ್ತಿಲ್ಲ. ಇದರಲ್ಲಿ ಸಿಂಥೆಟಿಕ್ ರಬ್ಬರ್, ಸ್ಟೀಲ್ ವೈರ್&zwnj;ಗಳು, ಪಾಲಿಯೆಸ್ಟರ್ ನೂಲುಗಳು ಮತ್ತು ಸಿಲಿಕಾದಂತಹ ಹಲವು ಅತ್ಯಾಧುನಿಕ ವಸ್ತುಗಳನ್ನು ಬಳಸಿ ಸಂಪೂರ್ಣ ಸುರಕ್ಷಿತವಾಗಿ ತಯಾರಿಸಲಾಗುತ್ತಿದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/life/why-are-vehicle-tires-always-black-the-life-saving-science-behind-it/articleshow-vglrheq"/>
        </item>
        <item>
            <title><![CDATA[ಮೊಟ್ಟೆ 100% ಸಸ್ಯಾಹಾರಿಯೇ? ಮೊಟ್ಟೆ ತಿನ್ನುವವರು ಈ ಸತ್ಯ ತಿಳಿದಿರಲೇಬೇಕು]]></title>
            <link>https://kannada.asianetnews.com/gallery/food/is-egg-vegetarian-or-non-vegetarian-know-about-it-z7he9np</link>
            <guid isPermaLink="true">https://kannada.asianetnews.com/gallery/food/is-egg-vegetarian-or-non-vegetarian-know-about-it-z7he9np</guid>
            <pubDate>Fri, 18 Sep 2026 18:12:19 +0530</pubDate>
            <description><![CDATA[&lt;p&gt;Is Egg Vegetarian: ಮೊಟ್ಟೆ ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ ಎಂಬ ಗೊಂದಲ ನಿಮಗಿದೆಯೇ? ಹಾಗಿದ್ರೆ ಈ ಮಾಹಿತಿ ನಿಮಗಾಗಿ. ನೀವು ವೆಜಿಟೇರಿಯನ್ ಆಗಿದ್ದು, ಮೊಟ್ಟೆ ತಿನ್ನಬೇಕೆ? ಬೇಡವೇ? ಎನ್ನುವ ಯೋಚನೆಯಲ್ಲಿ ನೀವಿದ್ದರೆ, ಇಲ್ಲಿದೆ ಆ ಕುರಿತು ಸಂಪೂರ್ಣ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t8b2jj5dqyg13653hcd6c2,imgname-is-egg-vegetarian-1789735045712.jpg" type="image/jpeg" height="390" width="690"/>
            <content:encoded><![CDATA[&lt;p&gt;Is Egg Vegetarian: ಮೊಟ್ಟೆ ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ ಎಂಬ ಗೊಂದಲ ನಿಮಗಿದೆಯೇ? ಹಾಗಿದ್ರೆ ಈ ಮಾಹಿತಿ ನಿಮಗಾಗಿ. ನೀವು ವೆಜಿಟೇರಿಯನ್ ಆಗಿದ್ದು, ಮೊಟ್ಟೆ ತಿನ್ನಬೇಕೆ? ಬೇಡವೇ? ಎನ್ನುವ ಯೋಚನೆಯಲ್ಲಿ ನೀವಿದ್ದರೆ, ಇಲ್ಲಿದೆ ಆ ಕುರಿತು ಸಂಪೂರ್ಣ ಮಾಹಿತಿ.&lt;/p&gt;&lt;img&gt;&lt;p&gt;ಪ್ರತಿಯೊಂದು ಮೊಟ್ಟೆಯಲ್ಲೂ ಒಂದು ಮರಿ ಇರುತ್ತದೆ ಎಂದು ನೀವು ನಂಬುತ್ತೀರಾ? ಹಾಗಿದ್ದಲ್ಲಿ, ಈ ಮಾಹಿತಿ ನಿಮಗೆ ಅಚ್ಚರಿ ನೀಡುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಮೊಟ್ಟೆಗಳು ಮರಿ ಎಂದಿಗೂ ಹೊರಬರುವುದಿಲ್ಲ. ಅದಕ್ಕಾಗಿಯೇ ಜನರು ಇನ್ನೂ ಮೊಟ್ಟೆಗಳು ಸಸ್ಯಾಹಾರಿಯೋ ಅಥವಾ ಮಾಂಸಾಹಾರಿಯೋ ಎಂಬ ಸಂಶಯದಲ್ಲಿದ್ದಾರೆ. ನಮ್ಮ ದೇಶದಲ್ಲಿ, ಮೊಟ್ಟೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿರುತ್ತದೆ. ಒಂದು ಕಡೆ ಕೋಳಿಗಳು ಮೊಟ್ಟೆಗಳನ್ನು ಇಡುವುದರಿಂದ ಅವು ಮಾಂಸಾಹಾರ ಎನ್ನುತ್ತಾರೆ. ಮತ್ತೊಂದೆಡೆ, ಜಿಮ್&zwnj;ಗೆ ಹೋಗುವವರು ಮತ್ತು ಹೊಸ ಪೀಳಿಗೆ ಅವುಗಳನ್ನು ಸೂಪರ್&zwnj;ಫುಡ್ ಎನ್ನುತ್ತಾರೆ. ಇನ್ನೂ ಕೆಲವರು ಮೊಟ್ಟೆ ಸಸ್ಯಹಾರಿ ಎನ್ನುತ್ತಾರೆ.&lt;/p&gt;&lt;img&gt;&lt;p&gt;ವೈಜ್ಞಾನಿಕವಾಗಿ, ಫಲವತ್ತಾಗಿಸದ ಮೊಟ್ಟೆಯಲ್ಲಿ ಭ್ರೂಣ ಅಥವಾ ಯಾವುದೇ ಜೀವಂತ ರಚನೆ ಇರುವುದಿಲ್ಲ. ಈ ಕಾರಣಕ್ಕಾಗಿ, ಕೆಲವರು ಇದನ್ನು ಸಸ್ಯಾಹಾರಿ ಎಂದು ಪರಿಗಣಿಸುತ್ತಾರೆ. ಆದಾಗ್ಯೂ, ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಯಕ್ತಿಕ ನಂಬಿಕೆಗಳ ಆಧಾರದ ಮೇಲೆ ಅನೇಕ ಜನರು ಇದನ್ನು ಇನ್ನೂ ಮಾಂಸಾಹಾರಿ ಎಂದು ಪರಿಗಣಿಸುತ್ತಾರೆ. ಪ್ರತಿಯೊಂದು ಮೊಟ್ಟೆಯು ಮರಿಯನ್ನು ಉತ್ಪಾದಿಸಬಹುದೇ? ಎಂದು ಕೇಳಿದರೆ ಅದಕ್ಕೆ ಉತ್ತರ ಖಂಡಿತಾ ಇಲ್ಲ. ವಾಣಿಜ್ಯಿಕವಾಗಿ ಲಭ್ಯವಿರುವ ಹೆಚ್ಚಿನ ಮೊಟ್ಟೆಗಳು ಬಹುತೇಕ 100% ಫಲವತ್ತಾಗಿರದವು ಮತ್ತು ಮರಿಯನ್ನು ಉತ್ಪಾದಿಸಲು ಸಾಧ್ಯವಿಲ್ಲ. ಸರಿಯಾದ ತಾಪಮಾನ ಮತ್ತು ಪರಿಸ್ಥಿತಿಗಳನ್ನು ಪಡೆದರೆ ಮಾತ್ರ ಮರಿಯು ಫಲವತ್ತಾದ ಮೊಟ್ಟೆಯಿಂದ ಹೊರಬರಬಹುದು.&lt;/p&gt;&lt;img&gt;&lt;p&gt;ವೈಜ್ಞಾನಿಕ ಮತ್ತು ತಾರ್ಕಿಕ ದೃಷ್ಟಿಕೋನದಿಂದ, ಮೊಟ್ಟೆಗಳನ್ನು ಸಸ್ಯಾಹಾರಿ ಎಂದು ಪರಿಗಣಿಸಲು ಒಂದು ಸರಳ ಕಾರಣವಿದೆ. ಹಸು ಅಥವಾ ಎಮ್ಮೆಯಿಂದ ಹಾಲು ಬರುತ್ತದೆ ಮತ್ತು ಅದಕ್ಕಾಗಿ ಪ್ರಾಣಿಯನ್ನು ಕೊಲ್ಲುವುದಿಲ್ಲ, ಕೋಳಿ ಕೂಡ ಮೊಟ್ಟೆಗಳನ್ನು ಇಡುತ್ತದೆ. ಭಾರತೀಯ ಸಂಪ್ರದಾಯ ಮತ್ತು ಧಾರ್ಮಿಕ ಚಿಂತನೆಯಲ್ಲಿ, ಮೊಟ್ಟೆಗಳನ್ನು ಮಾಂಸ ಎಂದು ವರ್ಗೀಕರಿಸಲಾಗಿದೆ ಏಕೆಂದರೆ ಅವು ಪಕ್ಷಿಗಳ ದೇಹದ ಭಾಗವಾಗಿದೆ. ಆದಾಗ್ಯೂ, ಪಾಶ್ಚಿಮಾತ್ಯ ದೇಶಗಳಲ್ಲಿ, ಅವುಗಳನ್ನು ಮಾಂಸವಲ್ಲ, ಪ್ರಾಣಿ ಉತ್ಪನ್ನವೆಂದು ಪರಿಗಣಿಸಲಾಗುತ್ತದೆ. ಅಲ್ಲಿ, ಅವುಗಳನ್ನು ಸಸ್ಯಾಹಾರಿ ಆಹಾರದ ಭಾಗವೆಂದು ಪರಿಗಣಿಸುವುದು ಸಾಮಾನ್ಯ.&lt;/p&gt;&lt;img&gt;&lt;p&gt;ಭಾರತದಲ್ಲಿ ಮೊಟ್ಟೆಗಳನ್ನು ಸಾಮಾನ್ಯವಾಗಿ ಮಾಂಸಾಹಾರಿ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಹೆಚ್ಚಿನ ಸಸ್ಯಾಹಾರಿ ಕುಟುಂಬಗಳು ಅವುಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದಿಲ್ಲ. ಆದರೆ, ಕೆಲವು ಜನರು ತಮ್ಮನ್ನು ತಾವು &quot;ಎಗಿಟೇರಿಯನ್&quot; ಅಥವಾ &quot;ಓವೋ ವೆಜಿಟೇರಿಯನ್&quot; ಎಂದು ಪರಿಗಣಿಸುತ್ತಾರೆ ಮತ್ತು ಮೊಟ್ಟೆಗಳನ್ನು ತಿನ್ನುತ್ತಾರೆ.&lt;/p&gt;&lt;img&gt;&lt;p&gt;ಖಂಡಿತ. ಸೋಯಾಬೀನ್, ತೋಫು, ಪನೀರ್, ಮಸೂರ, ಹಾಲು, ಮೊಸರು, ಕಡಲೆ, ಬೀನ್ಸ್ ಮತ್ತು ಇತರ ಹೆಚ್ಚಿನ ಪ್ರೋಟೀನ್ ಸಸ್ಯಾಹಾರಿ ಆಹಾರಗಳಿಂದ ಮಸಲ್ ಬಿಲ್ಡ್ ಮಾಡಬಹುದು ಅನೇಕ ಕ್ರೀಡಾಪಟುಗಳು ಮತ್ತು ಫಿಟ್ನೆಸ್ ಫ್ರೀಕ್ಸ್ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರದ ಸೇವಿಸಿ ಮಸಲ್ ಬಿಲ್ಡ್ ಮಾಡುತ್ತಾರೆ.&lt;/p&gt;&lt;img&gt;&lt;p&gt;ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಸಸ್ಯಾಹಾರಿ ಮೊಟ್ಟೆಗಳು ಕೂಡ ಮಾರ್ಕೆಟ್ ನಲ್ಲಿ ಲಭ್ಯವಿದೆ. ಇವು ಸಂಪೂರ್ಣವಾಗಿ ಸಸ್ಯಹಾರಿಯಾಗಿವೆ. ಸಸ್ಯಾಹಾರಿ ಮೊಟ್ಟೆಗಳನ್ನು ಸಾಮಾನ್ಯವಾಗಿ ಮುಂಗ್ ಬೀನ್ಸ್, ಸೋಯಾ, ಚಿಯಾ ಬೀಜಗಳು ಮತ್ತು ಇತರ ಸಸ್ಯಗಳಿಂದ ತಯಾರಿಸಲಾಗುತ್ತದೆ. ಅವು ಯಾವುದೇ ಪ್ರಾಣಿ ಅಥವಾ ಪಕ್ಷಿ ಉತ್ಪನ್ನಗಳನ್ನು ಹೊಂದಿರುವುದಿಲ್ಲ, ಇದು 100% ಸಸ್ಯಾಹಾರಿಯಾಗಿದೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/food/is-egg-vegetarian-or-non-vegetarian-know-about-it-z7he9np"/>
        </item>
        <item>
            <title><![CDATA[ಏಲಕ್ಕಿಯನ್ನು ಕುಂಡದಲ್ಲೇ ಸುಲಭವಾಗಿ ಬೆಳೆಯೋದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ]]></title>
            <link>https://kannada.asianetnews.com/gallery/life/how-to-easily-grow-cardamom-in-a-pot-here-is-a-step-by-step-guide-suc-mhongpi</link>
            <guid isPermaLink="true">https://kannada.asianetnews.com/gallery/life/how-to-easily-grow-cardamom-in-a-pot-here-is-a-step-by-step-guide-suc-mhongpi</guid>
            <pubDate>Fri, 18 Sep 2026 18:01:17 +0530</pubDate>
            <description><![CDATA[ಭಾರತೀಯ ಅಡುಗೆಮನೆಯಲ್ಲಿ ದುಬಾರಿ ಏಲಕ್ಕಿಗೆ ಹೆಚ್ಚಿನ ಬೇಡಿಕೆಯಿದೆ. ಸರಿಯಾದ ವಿಧಾನವನ್ನು ಅನುಸರಿಸಿದರೆ ಮನೆಯ ಕುಂಡದಲ್ಲಿಯೇ ಏಲಕ್ಕಿಯನ್ನು ಸುಲಭವಾಗಿ ಬೆಳೆಯಬಹುದು. ಪಕ್ವವಾದ ಬೀಜಗಳನ್ನು ಬಳಸಿ, ಮಣ್ಣು ಸಿದ್ಧಪಡಿಸಿ ಸಾಧಾರಣ ಬಿಸಿಲಿನಲ್ಲಿಟ್ಟರೆ ಗಿಡ ಬೆಳೆಯುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2t7pxmd9f0akfas8z21p3xz,imgname-cardomom-01-1789734385293.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ಅಡುಗೆಮನೆಯಲ್ಲಿ ದುಬಾರಿ ಏಲಕ್ಕಿಗೆ ಹೆಚ್ಚಿನ ಬೇಡಿಕೆಯಿದೆ. ಸರಿಯಾದ ವಿಧಾನವನ್ನು ಅನುಸರಿಸಿದರೆ ಮನೆಯ ಕುಂಡದಲ್ಲಿಯೇ ಏಲಕ್ಕಿಯನ್ನು ಸುಲಭವಾಗಿ ಬೆಳೆಯಬಹುದು. ಪಕ್ವವಾದ ಬೀಜಗಳನ್ನು ಬಳಸಿ, ಮಣ್ಣು ಸಿದ್ಧಪಡಿಸಿ ಸಾಧಾರಣ ಬಿಸಿಲಿನಲ್ಲಿಟ್ಟರೆ ಗಿಡ ಬೆಳೆಯುತ್ತದೆ.&lt;img&gt;&lt;p&gt;ಭಾರತೀಯರ ಅಡುಗೆ ಮನೆಯಲ್ಲಿ ಏಲಕ್ಕಿಗೆ ಸಿಕ್ಕಾಪಟ್ಟೆ ಡಿಮಾಂಡ್​ ಇದೆ. ಇದೇ ಕಾರಣಕ್ಕೆ ಅಸಲಿ ಏಲಕ್ಕಿ ಸಕತ್​ ದುಬಾರಿಯೂ ಆಗಿದೆ. ಏಲಕ್ಕಿಯಲ್ಲಿ ಇರುವ ಆರೋಗ್ಯವರ್ಧಕ ಪ್ರಯೋಜನಗಳಿಂದಾಗಿ ಇದಕ್ಕೆ ಸದಾ ಬೇಡಿಕೆ ಇದ್ದೇ ಇರುತ್ತದೆ.&lt;/p&gt;&lt;img&gt;&lt;p&gt;ಏಲಕ್ಕಿಯನ್ನು ಮನೆಯಲ್ಲಿ ಅದರಲ್ಲಿಯೂ ಕುಂಡದಲ್ಲಿ ಸುಲಭದಲ್ಲಿ ಬೆಳೆಯಬಹುದಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತದೆ. ಇದಕ್ಕೆ ಉತ್ತರ ಹೌದು. ಏಲಕ್ಕಿಯನ್ನು ಸರಿಯಾದ ರೀತಿಯಲ್ಲಿ ಬೆಳೆದರೆ, ಮನೆಯಲ್ಲಿ ಬೆಳೆಯಬಹುದು. ಮನೆಯ ಆವರಣದಲ್ಲಿ ಅರ್ಥಾತ್​ ನೇರವಾಗಿ ಭೂಮಿಯ ಮೇಲೆ ಬೆಳೆಯಲು ಜಾಗ ಇಲ್ಲದೇ ಹೋದರೆ, ಕುಂಡದಲ್ಲಿಯೂ ಬೆಳೆಯಬಹುದು.&lt;/p&gt;&lt;img&gt;&lt;p&gt;ಮೊದಲಿಗೆ ಏಲಕ್ಕಿಯಲ್ಲಿರುವ ಪಕ್ವವಾಗಿರುವ ಬೀಜಗಳನ್ನು ತೆಗೆಯಿರಿ. ಬಳಿಕ ಕುಂಡದಲ್ಲಿ ಮಣ್ಣನ್ನು, ನೈಸರ್ಗಿಕ ಗೊಬ್ಬರ ಸೇರಿಸಿ ಚೆನ್ನಾಗಿ ಹುಡಿಹುಡಿಯಾಗುವಂತೆ ಮಣ್ಣನ್ನು ಸಿದ್ಧಪಡಿಸಿಕೊಳ್ಳಬೇಕು.&lt;/p&gt;&lt;img&gt;&lt;p&gt;ಬಳಿಕ ಚೂರೇ ಚೂರು ಹೊಂಡ ಮಾಡಿ. ಬೆರಳಿನಿಂದ ಸ್ವಲ್ಪ ಕದಡಿದರೂ ಸಾಕು. ಅಲ್ಲಿ ಬೀಜವನ್ನು ಹಾಕಿ ಮಣ್ಣನ್ನು ಮುಚ್ಚಿ.&lt;/p&gt;&lt;img&gt;&lt;p&gt;ಬಳಿಕ ಸಾಧಾರಣ ಬಿಸಿಲು ಬೀಳುವಲ್ಲಿ ಆ ಕುಂಡವನ್ನು ಇಡಬೇಕು. ಬಿರುಬಿಸಿಲಾಗಲೀ, ತುಂಬಾ ತಂಪಾದ ಸ್ಥಳದಲ್ಲಿ ಇಡಬಾರದು. ಸಾಧಾರಣ ಬಿಸಿಲು ಬೀಳುವಲ್ಲಿ ಇಡಬೇಕು.&lt;/p&gt;&lt;img&gt;&lt;p&gt;ಇಷ್ಟಾದರೆ ಕ್ರಮೇಣ, ಅದರಲ್ಲಿ ಗಿಡ ಹುಟ್ಟಿ, ಏಲಕ್ಕಿ ಬೆಳೆಯಬಹುದಾಗಿದೆ. ಇಲ್ಲಿ ಮಹತ್ವದ ಅಂಶ ಎಂದರೆ, ಮಣ್ಣನ್ನು ಸಿದ್ಧಪಡಿಸುವುದು ಹಾಗೂ ಮೇಲ್ಭಾಗದಲ್ಲಿಯೇ ಏಲಕ್ಕಿ ಬೀಜವನ್ನು ಹಾಕುವುದು. ಇದು ಸರಿಯಾಗಿ ಮಾಡಿಲ್ಲವೆಂದರೆ ನೀವು ಏನು ಮಾಡಿದರೂ ವೇಸ್ಟ್​.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/how-to-easily-grow-cardamom-in-a-pot-here-is-a-step-by-step-guide-suc-mhongpi"/>
        </item>
        <item>
            <title><![CDATA[ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಹಾಕುವಾಗ ಇದೊಂದು ವಸ್ತುವನ್ನು ಹಾಕಿ ಸಾಕು.. ನಂತ್ರ ಮ್ಯಾಜಿಕ್ ನೋಡಿ]]></title>
            <link>https://kannada.asianetnews.com/gallery/life/tired-of-tangled-clothes-in-washing-machine-try-these-silicone-laundry-balls-c8oi4eu</link>
            <guid isPermaLink="true">https://kannada.asianetnews.com/gallery/life/tired-of-tangled-clothes-in-washing-machine-try-these-silicone-laundry-balls-c8oi4eu</guid>
            <pubDate>Fri, 18 Sep 2026 17:43:32 +0530</pubDate>
            <description><![CDATA[&lt;p&gt;Laundry tips kannada: ವಾಷಿಂಗ್ ಮಷಿನ್&zwnj;ನಲ್ಲಿ ಬಟ್ಟೆಗಳು ಜಡೆ ಕಟ್ಟಿದಂತೆ ಸಿಕ್ಕಿಹಾಕಿಕೊಂಡು ಬಟನ್&zwnj;ಗಳು ಕಿತ್ತುಬರುತ್ತಿವೆಯೇ? ಬಟ್ಟೆ ಸುಕ್ಕುಗಟ್ಟದೆ, ಗೋಜಲಾಗದೆ ಪ್ರತ್ಯೇಕವಾಗಿ ಹೊರಬರಲು ನೆರವಾಗುವ ಆ ಪುಟ್ಟ ಮ್ಯಾಜಿಕ್ ಏನು? ಪ್ರತಿಯೊಬ್ಬ ಗೃಹಿಣಿ ತಿಳಿದುಕೊಳ್ಳಬೇಕಾದ ಬೆಸ್ಟ್ ಟ್ರಿಕ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj7w9x9yw9e6x6cbzjbmjeqn,imgname-1-1771938575678.jpg" type="image/jpeg" height="390" width="690"/>
            <content:encoded><![CDATA[&lt;p&gt;Laundry tips kannada: ವಾಷಿಂಗ್ ಮಷಿನ್&zwnj;ನಲ್ಲಿ ಬಟ್ಟೆಗಳು ಜಡೆ ಕಟ್ಟಿದಂತೆ ಸಿಕ್ಕಿಹಾಕಿಕೊಂಡು ಬಟನ್&zwnj;ಗಳು ಕಿತ್ತುಬರುತ್ತಿವೆಯೇ? ಬಟ್ಟೆ ಸುಕ್ಕುಗಟ್ಟದೆ, ಗೋಜಲಾಗದೆ ಪ್ರತ್ಯೇಕವಾಗಿ ಹೊರಬರಲು ನೆರವಾಗುವ ಆ ಪುಟ್ಟ ಮ್ಯಾಜಿಕ್ ಏನು? ಪ್ರತಿಯೊಬ್ಬ ಗೃಹಿಣಿ ತಿಳಿದುಕೊಳ್ಳಬೇಕಾದ ಬೆಸ್ಟ್ ಟ್ರಿಕ್ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಬಟ್ಟೆ ಹರಿದುಹೋಗುತ್ತೆ, ಬಟನ್&zwnj;ಗಳು ಕಿತ್ತುಬರುತ್ತೆ&lt;/strong&gt;ವಾಷಿಂಗ್ ಮಷಿನ್&zwnj;ನಲ್ಲಿ ಬಟ್ಟೆ ಒಗೆಯುವುದು ಸುಲಭ ನಿಜ, ಆದರೆ ಒಗೆದ ನಂತರ ಬಟ್ಟೆಗಳನ್ನು ಹೊರತೆಗೆಯುವುದು ಮಾತ್ರ ದೊಡ್ಡ ಕಿರಿಕಿರಿ! ಶರ್ಟ್, ಪ್ಯಾಂಟ್, ಚೂಡಿದಾರ್ ವೇಲ್&zwnj;ಗಳು ಒಂದಕ್ಕೊಂದು ಜಡೆ ಕಟ್ಟಿದಂತೆ ಗೋಜಲಾಗಿ ಸಿಕ್ಕಿಹಾಕಿಕೊಂಡಿರುತ್ತವೆ. ಅವುಗಳನ್ನು ಎಳೆದು ಬಿಡಿಸುವಾಗ ಬಟ್ಟೆ ಹರಿದುಹೋಗುವುದು, ಬಟನ್&zwnj;ಗಳು ಕಿತ್ತುಬರುವುದು ಅಥವಾ ಅತಿಯಾಗಿ ಸುಕ್ಕುಗಟ್ಟುವುದು ಸಾಮಾನ್ಯ.&lt;/p&gt;&lt;img&gt;&lt;p&gt;&lt;strong&gt;ಸಮಸ್ಯೆಗೆ ಪರಿಹಾರ ಸುಲಭ&lt;/strong&gt;ಈ ಸಮಸ್ಯೆಗೂ ಸುಲಭ ಪರಿಹಾರವಿದೆ. ಅದೇ &lsquo;ಸಿಲಿಕಾನ್ ಲಾಂಡ್ರಿ ಬಾಲ್ಸ್&rsquo; (Silicone Laundry Balls). ಇವು ನಿಜಕ್ಕೂ ಕೆಲಸ ಮಾಡುತ್ತವೆಯೇ? ಇವುಗಳನ್ನು ಹೇಗೆ ಬಳಸಬೇಕು? ಎಲ್ಲಿ ಸಿಗುತ್ತದೆ? ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.&lt;/p&gt;&lt;img&gt;&lt;p&gt;&lt;strong&gt;ಸಿಲಿಕಾನ್ ಲಾಂಡ್ರಿ ಬಾಲ್ ಹೇಗೆ ಕೆಲಸ ಮಾಡುತ್ತದೆ?&lt;/strong&gt;ಇವು ಮೃದುವಾದ ಸಿಲಿಕಾನ್ ಅಥವಾ ರಬ್ಬರ್&zwnj;ನಿಂದ ಮಾಡಲ್ಪಟ್ಟ ಸಣ್ಣ ಬಾಲ್&zwnj;ಗಳಾಗಿರುತ್ತವೆ.ಬಟ್ಟೆಗಳನ್ನು ವಾಷಿಂಗ್ ಮಷಿನ್&zwnj;ಗೆ ಹಾಕುವಾಗ, ಆ ಬಟ್ಟೆಗಳ ಜೊತೆಗೆ 4 ರಿಂದ 6 ಸಿಲಿಕಾನ್ ಲಾಂಡ್ರಿ ಬಾಲ್&zwnj;ಗಳನ್ನು ಒಳಗೆ ಹಾಕಿ ಮಷಿನ್ ಆನ್ ಮಾಡಿ.ವಾಷಿಂಗ್ ಮಷಿನ್ ತಿರುಗುವಾಗ ಈ ಬಾಲ್&zwnj;ಗಳು ಬಟ್ಟೆಗಳ ನಡುವೆ ನಿರಂತರವಾಗಿ ಚಲಿಸುತ್ತವೆ.ಇದರಿಂದ ಬಟ್ಟೆಗಳು ಒಂದಕ್ಕೊಂದು ಹತ್ತಿರ ಬಂದು ಸುತ್ತಿಕೊಳ್ಳುವುದನ್ನು ಮತ್ತು ಗಂಟು ಬೀಳುವುದನ್ನು ಈ ಬಾಲ್&zwnj;ಗಳು ನೈಸರ್ಗಿಕವಾಗಿ ತಡೆಯುತ್ತವೆ.&lt;/p&gt;&lt;img&gt;&lt;p&gt;ಇದರ ಪ್ರಮುಖ ಪ್ರಯೋಜನಗಳು&lt;strong&gt;ಬಟ್ಟೆಗಳು ಸುಲಭವಾಗಿ ಪ್ರತ್ಯೇಕಗೊಳ್ಳುತ್ತವೆ: &lt;/strong&gt;ವಾಶ್ ಮುಗಿದ ನಂತರ ಬಟ್ಟೆಗಳನ್ನು ಹೊರತೆಗೆಯುವಾಗ ಒಂದೊಂದೇ ಬಟ್ಟೆ ತುಂಬಾ ಸುಲಭವಾಗಿ ಯಾವುದೇ ಗೋಜಲಿಲ್ಲದೆ ಹೊರಬರುತ್ತವೆ.&lt;/p&gt;&lt;p&gt;&lt;strong&gt;ಕಡಿಮೆ ಸುಕ್ಕು (Wrinkle-Free): &lt;/strong&gt;ಬಟ್ಟೆಗಳು ಒಂದಕ್ಕೊಂದು ಸುತ್ತಿಕೊಳ್ಳದ ಕಾರಣ, ಬಟ್ಟೆಯ ಮೇಲೆ ಹೆಚ್ಚು ಸುಕ್ಕುಗಳು ಬೀಳುವುದಿಲ್ಲ. ಇದರಿಂದ ಇಸ್ತ್ರಿ (Iron) ಮಾಡುವ ಕೆಲಸವೂ ಸುಲಭವಾಗುತ್ತದೆ.&lt;/p&gt;&lt;p&gt;&lt;strong&gt;ಉತ್ತಮ ಶುಚಿತ್ವ: &lt;/strong&gt;ಈ ಬಾಲ್&zwnj;ಗಳು ಬಟ್ಟೆಯ ಮೇಲೆ ಉಜ್ಜಿಕೊಳ್ಳುವುದರಿಂದ ಕೊಳೆ ಮತ್ತು ಕಲೆಗಳು ಬೇಗನೆ ಸ್ವಚ್ಛವಾಗಲು ಸಹಾಯವಾಗುತ್ತದೆ.&lt;/p&gt;&lt;p&gt;&lt;strong&gt;ಬಟ್ಟೆಯ ಹಾನಿ ತಪ್ಪುತ್ತದೆ: &lt;/strong&gt;ಬಟ್ಟೆಗಳನ್ನು ಬಲವಂತವಾಗಿ ಎಳೆದು ಬಿಡಿಸುವ ಪ್ರಮೇಯವೇ ಬರುವುದಿಲ್ಲವಾದ್ದರಿಂದ ಬಟ್ಟೆಯ ಬಾಳಿಕೆ ಹೆಚ್ಚುತ್ತದೆ.&lt;/p&gt;&lt;img&gt;&lt;p&gt;&lt;strong&gt;ಎಲ್ಲಿ ಸಿಗುತ್ತೆ?&lt;/strong&gt;&lt;strong&gt;1. ಆನ್&zwnj;ಲೈನ್&zwnj;ನಲ್ಲಿ (ಅತ್ಯಂತ ಸುಲಭವಾಗಿ ಸಿಗುತ್ತೆ)&lt;/strong&gt;&lt;strong&gt;Amazon (ಅಮೆಜಾನ್), Flipkart (ಫ್ಲಿಪ್&zwnj;ಕಾರ್ಟ್) ಮತ್ತು Meesho (ಮೀಶೋ):&lt;/strong&gt; ಇವುಗಳಲ್ಲಿ ನೀವು &quot;Silicone Laundry Balls&quot; ಅಥವಾ &quot;Washing Machine Cleaning Balls&quot; ಎಂದು ಸರ್ಚ್ ಮಾಡಿದರೆ ಸಾಕು, ತಕ್ಷಣ ಸಿಗುತ್ತವೆ.&lt;/p&gt;&lt;p&gt;&lt;strong&gt;Blinkit / Zepto / Instamart: &lt;/strong&gt;ಕೆಲವು ನಗರಗಳಲ್ಲಿ ಇಂತಹ ಕ್ವಿಕ್ ಕಾಮರ್ಸ್ ಆಪ್&zwnj;ಗಳ 'Home Needs' ವಿಭಾಗದಲ್ಲೂ ಇವು ಸಿಗುತ್ತವೆ.&lt;/p&gt;&lt;p&gt;&lt;strong&gt;2. ಆಫ್&zwnj;ಲೈನ್ ಅಂಗಡಿಗಳಲ್ಲಿ&lt;/strong&gt;ಡಿ-ಮಾರ್ಟ್ (D-Mart) ಅಥವಾ ರಿಲಯನ್ಸ್ ಸ್ಮಾರ್ಟ್ ಬಜಾರ್: ದೊಡ್ಡ ಸೂಪರ್&zwnj;ಮಾರ್ಕೆಟ್&zwnj;ಗಳ 'ಪ್ಲಾಸ್ಟಿಕ್ / ಕ್ಲೀನಿಂಗ್ ಐಟಮ್ಸ್' ಸೆಕ್ಷನ್&zwnj;ನಲ್ಲಿ ಸಿಗುತ್ತವೆ. ಸ್ಥಳೀಯ ಪ್ಲಾಸ್ಟಿಕ್ ಸಾಮಗ್ರಿಗಳ ಅಂಗಡಿಗಳು ಮತ್ತು ಹೋಮ್ ಯುಟಿಲಿಟಿ ಅಂಗಡಿಗಳಲ್ಲೂ ಸಿಗುತ್ತವೆ.&lt;/p&gt;&lt;img&gt;&lt;p&gt;&lt;strong&gt;ಬೆಲೆ ಎಷ್ಟು?&lt;/strong&gt;ಇದು ತುಂಬಾ ಅಗ್ಗವಾಗಿದ್ದು, ಸಾಮಾನ್ಯವಾಗಿ 4 ರಿಂದ 8 ಬಾಲ್&zwnj;ಗಳ ಒಂದು ಪ್ಯಾಕ್&zwnj;ಗೆ ₹99 ರಿಂದ ₹200 ರೂಪಾಯಿ ಇರುತ್ತದೆ. ಇವು ರಬ್ಬರ್/ಸಿಲಿಕಾನ್ ಆಗಿರುವುದರಿಂದ ದೀರ್ಘಕಾಲ (ವರ್ಷಗಟ್ಟಲೆ) ಮರುಬಳಕೆ ಮಾಡಬಹುದು.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/tired-of-tangled-clothes-in-washing-machine-try-these-silicone-laundry-balls-c8oi4eu"/>
        </item>
        <item>
            <title><![CDATA[ಲೇಟ್ ನೈಟ್ ಹೊಟ್ಟೆ ಬಿರಿಯುವಷ್ಟು ಊಟ ಮಾಡ್ತೀರಾ? ಹಾಗಿದ್ರೆ ನಿಮ್ಮನ್ನು ಆ ದೇವ್ರೇ ಕಾಪಾಡ್ಬೇಕು..!]]></title>
            <link>https://kannada.asianetnews.com/food/eating-dinner-late-at-night-or-overeating-until-your-stomach-feels-overly-full-is-not-good-for-your-health/articleshow-dgq6lf0</link>
            <guid isPermaLink="true">https://kannada.asianetnews.com/food/eating-dinner-late-at-night-or-overeating-until-your-stomach-feels-overly-full-is-not-good-for-your-health/articleshow-dgq6lf0</guid>
            <pubDate>Fri, 18 Sep 2026 17:18:49 +0530</pubDate>
            <description><![CDATA[&lt;p&gt;ಆರೋಗ್ಯ ಕಾಪಾಡಿಕೊಳ್ಳಲು ಆಹಾರದ ಗುಣಮಟ್ಟದಷ್ಟೇ ಅದರ ಸಮಯಕ್ಕೂ ಗಮನ ನೀಡುವುದು ಮುಖ್ಯ. ತಡರಾತ್ರಿ ಊಟ ಮಾಡುವ ಅಭ್ಯಾಸವನ್ನು ಹೊಂದಿರುವವರು ತಮ್ಮ ದಿನಚರಿಯನ್ನು ಪರಿಶೀಲಿಸಿ, ಸಾಧ್ಯವಾದಷ್ಟು ನಿಯಮಿತ ಸಮಯದಲ್ಲಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.. ಇಲ್ಲದಿದ್ದರೆ ಅಪಾಯ ಎದುರಾಗಬಹುದು, ಎಚ್ಚರ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t51dpz012nmf7h409pm8sn,imgname-gemini-generated-image-kahem5kahem5kahe-1789731583711.png" type="image/jpeg" height="390" width="690"/>
            <content:encoded><![CDATA[&lt;p&gt;ಆರೋಗ್ಯಕರ ಜೀವನಶೈಲಿ ಎಂದರೆ ಕೇವಲ ಪೌಷ್ಟಿಕ ಆಹಾರ ಸೇವಿಸುವುದಷ್ಟೇ ಅಲ್ಲ. ಏನು ತಿನ್ನುತ್ತೇವೆ, ಎಷ್ಟು ತಿನ್ನುತ್ತೇವೆ ಮತ್ತು ಯಾವ ಸಮಯದಲ್ಲಿ ತಿನ್ನುತ್ತೇವೆ ಎಂಬ ಮೂರು ಅಂಶಗಳಿಗೂ ಸಮಾನ ಪ್ರಾಮುಖ್ಯತೆ ಇದೆ. ಆದರೆ ಇಂದಿನ ಬ್ಯುಸಿ ಜೀವನದಲ್ಲಿ ಊಟದ ಸಮಯವನ್ನು ನಿರ್ಲಕ್ಷಿಸುವವರ ಸಂಖ್ಯೆ ಹೆಚ್ಚಾಗಿದೆ. ಆಫೀಸ್ ಕೆಲಸ, ನೈಟ್ ಶಿಫ್ಟ್, ತಡವಾಗಿ ಮನೆಗೆ ಬರುವುದು ಅಥವಾ ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸದಿಂದಾಗಿ ಹಲವರು ರಾತ್ರಿ 10, 11 ಅಥವಾ ಕೆಲವೊಮ್ಮೆ 12 ಗಂಟೆಯ ನಂತರವೂ ಊಟ ಮಾಡುತ್ತಾರೆ.&lt;/p&gt;&lt;p&gt;ತಡರಾತ್ರಿ ಊಟ ಮಾಡಿದ ನಂತರ ಕೆಲವರು ತಕ್ಷಣವೇ ಮಲಗುವ ಅಭ್ಯಾಸವನ್ನೂ ಹೊಂದಿರುತ್ತಾರೆ. ಈ ರೀತಿಯ ದಿನಚರಿ ಪದೇಪದೇ ಮುಂದುವರಿದರೆ ದೇಹದ ನೈಸರ್ಗಿಕ ಲಯ ಮತ್ತು ಆಹಾರ ಸೇವನೆಗೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.&lt;/p&gt;&lt;h2&gt;ತಡರಾತ್ರಿ ಊಟ ಮಾಡಿದರೆ ಏನೆಲ್ಲಾ ಸಮಸ್ಯೆ ಆಗಬಹುದು?&lt;/h2&gt;&lt;p&gt;ನಮ್ಮ ದೇಹದಲ್ಲಿ ಹಸಿವು ಮತ್ತು ಹೊಟ್ಟೆ ತುಂಬಿದ ಅನುಭವವನ್ನು ನಿಯಂತ್ರಿಸುವಲ್ಲಿ ಲೆಪ್ಟಿನ್ ಮತ್ತು ಗ್ರೆಲಿನ್ ಸೇರಿದಂತೆ ಕೆಲವು ಹಾರ್ಮೋನ್&zwnj;ಗಳು ಪಾತ್ರವಹಿಸುತ್ತವೆ. ಆಹಾರ ಸೇವನೆಯ ಸಮಯ ಮತ್ತು ನಿದ್ರೆಯ ಸಮಯದಲ್ಲಿ ಆಗುವ ಬದಲಾವಣೆಗಳು ಈ ಹಾರ್ಮೋನ್&zwnj;ಗಳ ನಿಯಂತ್ರಣದ ಮೇಲೂ ಪರಿಣಾಮ ಬೀರಬಹುದು. ಅಷ್ಟೇ ಅಲ್ಲ, ತಡವಾಗಿ ಊಟ ಮಾಡುವ ಸಂದರ್ಭದಲ್ಲಿ ಹೊಟ್ಟೆ ತುಂಬಿದ ಅನುಭವಕ್ಕೆ ಸಂಬಂಧಿಸಿದ ಲೆಪ್ಟಿನ್ ಮಟ್ಟದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು. ಇದರಿಂದ ಕೆಲವರಿಗೆ ಮತ್ತೆ ಹಸಿವಾಗುವ ಸಾಧ್ಯತೆ ಅಥವಾ ಹೆಚ್ಚು ತಿನ್ನುವ ಪ್ರವೃತ್ತಿ ಉಂಟಾಗಬಹುದು.&lt;/p&gt;&lt;p&gt;ಇದರಿಂದ ಒಂದು ಸಣ್ಣ ಅಭ್ಯಾಸ ಕ್ರಮೇಣ ಆಹಾರದ ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದು. ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಹೆಚ್ಚಿನ ಕ್ಯಾಲೊರಿ, ಸಕ್ಕರೆ ಅಥವಾ ಕೊಬ್ಬು ಹೊಂದಿರುವ ಆಹಾರಗಳನ್ನು ಪದೇಪದೇ ಸೇವಿಸುವುದರಿಂದ ತೂಕ ನಿಯಂತ್ರಣ ಕಷ್ಟವಾಗಬಹುದು. ಜೊತೆಗೆ, ಬೊಜ್ಜು, ಮಧುಮೇಹ, ಮಧುಮೇಹದಿಂದ ಉಂಟಾಗುವ ಹೃದಯ ಸಮಸ್ಯೆಗಳು ಕಾಡಬಹುದು. ಜೊತೆಗೆ, ತಡರಾತ್ರಿ ಊಟ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಗ್ಯಾಸ್ ಹಾಗೂ ಆಮ್ಲೀಯತೆಯಂತಹ ಸಮಸ್ಯೆಗಳು ತಲೆದೋರಬಹುದು.&lt;/p&gt;&lt;p&gt;ಕ್ಯಾಲೊರಿ ಸುಡುವ ಪ್ರಕ್ರಿಯೆಯ ಮೇಲೂ ಪರಿಣಾಮ?&lt;/p&gt;&lt;p&gt;ತಡವಾಗಿ ಆಹಾರ ಸೇವಿಸುವುದು ದೇಹದ ಶಕ್ತಿಯ ಬಳಕೆ ಮತ್ತು ಚಯಾಪಚಯಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರಬಹುದು ಎಂಬುದನ್ನು ಕೆಲವು ಸಂಶೋಧನೆಗಳು ಸೂಚಿಸಿವೆ. ದಿನದ ಆರಂಭದಲ್ಲಿ ಆಹಾರ ಸೇವಿಸುವುದಕ್ಕೆ ಹೋಲಿಸಿದರೆ, ದಿನದ ಕೊನೆಯಲ್ಲಿ ತಡವಾಗಿ ತಿನ್ನುವಾಗ ದೇಹದ ಶಕ್ತಿಯ ಬಳಕೆಯಲ್ಲಿ ವ್ಯತ್ಯಾಸ ಕಂಡುಬರಬಹುದು.&lt;/p&gt;&lt;p&gt;ಇದರ ಜೊತೆಗೆ ಕೊಬ್ಬಿನ ಅಂಗಾಂಶಗಳ ಕಾರ್ಯನಿರ್ವಹಣೆಯಲ್ಲೂ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರತಿದಿನ ತಡರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುವ ಅಭ್ಯಾಸವನ್ನು ಆರೋಗ್ಯಕರ ದಿನಚರಿ ಎಂದು ಪರಿಗಣಿಸಲಾಗುವುದಿಲ್ಲ.&lt;/p&gt;&lt;p&gt;ಆದರೆ ಇಲ್ಲಿ ಒಂದು ವಿಷಯ ಗಮನಿಸಬೇಕು. ತಡವಾಗಿ ಊಟ ಮಾಡಿದರೆ ಎಲ್ಲರಿಗೂ ತೂಕ ಹೆಚ್ಚಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಟ್ಟು ಕ್ಯಾಲೊರಿ ಸೇವನೆ, ಆಹಾರದ ಗುಣಮಟ್ಟ, ವ್ಯಾಯಾಮ, ನಿದ್ರೆ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿ ಸೇರಿದಂತೆ ಹಲವು ಅಂಶಗಳು ತೂಕದ ಮೇಲೆ ಪರಿಣಾಮ ಬೀರುತ್ತವೆ.&lt;/p&gt;&lt;h3&gt;ಜೀರ್ಣಕ್ರಿಯೆ ಮತ್ತು ನಿದ್ರೆಯ ಮೇಲೂ ಪರಿಣಾಮ&lt;/h3&gt;&lt;p&gt;ರಾತ್ರಿ ತುಂಬಾ ತಡವಾಗಿ ಊಟ ಮಾಡಿ ತಕ್ಷಣ ಮಲಗುವುದರಿಂದ ಕೆಲವರಿಗೆ ಅಜೀರ್ಣ, ಹೊಟ್ಟೆ ಭಾರವಾಗಿರುವ ಅನುಭವ ಅಥವಾ ಎದೆಯುರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಆಸಿಡ್ ರಿಫ್ಲಕ್ಸ್ ಸಮಸ್ಯೆ ಇರುವವರು ಮಲಗುವ ಸಮಯದ ಹತ್ತಿರದಲ್ಲಿ ದೊಡ್ಡ ಪ್ರಮಾಣದ ಊಟ ಮಾಡುವುದನ್ನು ತಪ್ಪಿಸುವುದು ಸಾಮಾನ್ಯವಾಗಿ ಸಹಾಯಕವಾಗುತ್ತದೆ.&lt;/p&gt;&lt;p&gt;ಹೊಟ್ಟೆ ತುಂಬಿರುವಾಗ ಮಲಗುವುದರಿಂದ ನಿದ್ರೆಯ ಗುಣಮಟ್ಟವೂ ಕೆಲವರಲ್ಲಿ ಹದಗೆಡಬಹುದು. ನಿದ್ರೆ ಸರಿಯಾಗಿ ಆಗದಿದ್ದರೆ ಮುಂದಿನ ದಿನ ಆಯಾಸ ಮತ್ತು ಹಸಿವಿನ ನಿಯಂತ್ರಣದಲ್ಲೂ ತೊಂದರೆ ಉಂಟಾಗಬಹುದು.&lt;/p&gt;&lt;p&gt;ಹಾಗಾದರೆ ಊಟದ ಸಮಯ ಹೇಗಿರಬೇಕು?&lt;/p&gt;&lt;p&gt;ಪ್ರತಿಯೊಬ್ಬರ ಜೀವನಶೈಲಿ ಮತ್ತು ಕೆಲಸದ ಸಮಯ ಒಂದೇ ರೀತಿಯಾಗಿರುವುದಿಲ್ಲ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ರಾತ್ರಿ 7 ಅಥವಾ 8 ಗಂಟೆಗೆ ಊಟ ಮಾಡಲೇಬೇಕು ಎಂಬ ಒಂದೇ ನಿಯಮವನ್ನು ಅನ್ವಯಿಸುವುದು ಸೂಕ್ತವಲ್ಲ. ಆದರೆ ಮಲಗುವ ಸಮಯಕ್ಕೆ ತುಂಬಾ ಹತ್ತಿರದಲ್ಲಿ ಭಾರವಾದ ಊಟ ಮಾಡದಿರುವುದು ಉತ್ತಮ ಅಭ್ಯಾಸ.&lt;/p&gt;&lt;p&gt;ಸಾಧ್ಯವಾದರೆ ರಾತ್ರಿ ಊಟವನ್ನು ನಿಯಮಿತ ಸಮಯದಲ್ಲಿ, ಮಿತವಾದ ಪ್ರಮಾಣದಲ್ಲಿ ಸೇವಿಸಿ. ಹೆಚ್ಚು ಎಣ್ಣೆ, ಸಕ್ಕರೆ ಮತ್ತು ಕ್ಯಾಲೊರಿ ಹೊಂದಿರುವ ಆಹಾರಕ್ಕಿಂತ ತರಕಾರಿಗಳು, ಸೂಕ್ತ ಪ್ರಮಾಣದ ಪ್ರೋಟೀನ್ ಮತ್ತು ಸಮತೋಲಿತ ಆಹಾರವನ್ನು ಆಯ್ಕೆ ಮಾಡಬಹುದು.&lt;/p&gt;&lt;p&gt;ಒಟ್ಟಿನಲ್ಲಿ, ಆರೋಗ್ಯ ಕಾಪಾಡಿಕೊಳ್ಳಲು ಆಹಾರದ ಗುಣಮಟ್ಟದಷ್ಟೇ ಅದರ ಸಮಯಕ್ಕೂ ಗಮನ ನೀಡುವುದು ಮುಖ್ಯ. ತಡರಾತ್ರಿ ಊಟ ಮಾಡುವ ಅಭ್ಯಾಸವನ್ನು ಹೊಂದಿರುವವರು ತಮ್ಮ ದಿನಚರಿಯನ್ನು ಪರಿಶೀಲಿಸಿ, ಸಾಧ್ಯವಾದಷ್ಟು ನಿಯಮಿತ ಸಮಯದಲ್ಲಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬಹುದು. ಪದೇಪದೇ ಎದೆಯುರಿ, ಅಜೀರ್ಣ, ಹೊಟ್ಟೆನೋವು ಅಥವಾ ನಿದ್ರೆಯ ಸಮಸ್ಯೆಗಳು ಕಾಣಿಸಿಕೊಂಡರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಬದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/food/eating-dinner-late-at-night-or-overeating-until-your-stomach-feels-overly-full-is-not-good-for-your-health/articleshow-dgq6lf0"/>
        </item>
        <item>
            <title><![CDATA["ನನ್ನ ಹೆತ್ತವರ ಪ್ರೀತಿಯೇ ನನಗೆ ಆಸ್ತಿ": ಕಣ್ಣೀರಿಡುವಂತಿದೆ ರೈಲ್ವೇ ಸ್ಟೇಷನ್‌ನ ಈ ಬೀಳ್ಕೊಡುಗೆಯ ದೃಶ್ಯ!]]></title>
            <link>https://kannada.asianetnews.com/india-news/parents-wave-goodbye-to-daughter-until-train-disappears-viral-video-wins-hearts/articleshow-4h5avgn</link>
            <guid isPermaLink="true">https://kannada.asianetnews.com/india-news/parents-wave-goodbye-to-daughter-until-train-disappears-viral-video-wins-hearts/articleshow-4h5avgn</guid>
            <pubDate>Fri, 18 Sep 2026 17:18:46 +0530</pubDate>
            <description><![CDATA[&lt;p&gt;ರೈಲು ನಿಲ್ದಾಣದಲ್ಲಿ ಮಗಳನ್ನು ಬೀಳ್ಕೊಡುವಾಗ ಅಪ್ಪ-ಅಮ್ಮ ತೋರಿದ ಅಪಾರ ಪ್ರೀತಿಯ ವಿಡಿಯೋ ವೈರಲ್ ಆಗಿದೆ. ರೈಲು ಕಣ್ಮರೆಯಾಗುವವರೆಗೂ ನಗುತ್ತಾ ಕೈಬೀಸಿದ ಪೋಷಕರ ದೃಶ್ಯ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. &lsquo;ನನ್ನ ಪೋಷಕರೇ ನನ್ನ ನಿಜವಾದ ಶ್ರೀಮಂತಿಕೆ&rsquo; ಎಂಬ ಖುಷಿ ಸೋಲಂಕಿ ಅವರ ಮಾತು ಹಲವರ ಮನ ಗೆದ್ದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t29v7hxa9m0sz098e224ms,imgname-woman-shares-emotional-farewell-video-parents-wave-till-train-vanishes-video-warms-hearts-4e027abbd22845da8f566c7b302e130b-1789728713969.png" type="image/jpeg" height="390" width="690"/>
            <content:encoded><![CDATA[&lt;h2&gt;ರೈಲು ಹೊರಟರೂ ಕೈಬೀಸುವುದನ್ನು ನಿಲ್ಲಿಸದ ಅಪ್ಪ-ಅಮ್ಮ&lt;/h2&gt;&lt;p&gt;ರೈಲು ನಿಲ್ದಾಣದಲ್ಲಿ ಮಗಳನ್ನು ಬೀಳ್ಕೊಡುವಾಗ ಪೋಷಕರು ತೋರಿದ ಅಪಾರ ಪ್ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲು ಕಣ್ಮರೆಯಾಗುವವರೆಗೂ ನಗುತ್ತಾ ಕೈಬೀಸಿದ ಅಪ್ಪ-ಅಮ್ಮನ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.&lt;/p&gt;&lt;p&gt;ಖುಷಿ ಸೋಲಂಕಿ ಅವರು ಈ ಸುಂದರ ಕ್ಷಣವನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿದ್ದಾರೆ. ರೈಲು ಹೊರಡಲು ಸಿದ್ಧವಾಗಿದ್ದಾಗ ಕಿಟಕಿಯಿಂದ ತಮ್ಮ ಪೋಷಕರನ್ನು ಅವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ರೈಲು ಚಲಿಸಲು ಆರಂಭಿಸುತ್ತಿದ್ದಂತೆ ಪ್ಲಾಟ್&zwnj;ಫಾರ್ಮ್ ಮೇಲೆ ನಿಂತಿದ್ದ ಇಬ್ಬರೂ ಖುಷಿಯತ್ತ ನೋಡಿ ಕೈಬೀಸಿದ್ದಾರೆ.&lt;/p&gt;&lt;h3&gt;ಅಪ್ಪನ ಕ್ಯಾಮೆರಾದಲ್ಲಿ ವಿದಾಯದ ಕ್ಷಣ, ಅಮ್ಮನ ಮುಖದಲ್ಲಿ ಪ್ರೀತಿಯ ನಗು&lt;/h3&gt;&lt;p&gt;ರೈಲು ಮುಂದೆ ಸಾಗುತ್ತಿದ್ದರೂ ಪೋಷಕರ ಮುಖದಲ್ಲಿದ್ದ ನಗು ಮಾತ್ರ ಮಾಯವಾಗಲಿಲ್ಲ. ಅಪ್ಪ ತಮ್ಮ ಮೊಬೈಲ್&zwnj;ನಲ್ಲಿ ಮಗಳು ದೂರ ಹೋಗುತ್ತಿರುವ ಕ್ಷಣವನ್ನು ಫೋಟೋ ಅಥವಾ ವಿಡಿಯೋ ಮಾಡುತ್ತಿರುವುದು ಕಂಡುಬಂದರೆ, ತಾಯಿ ರೈಲಿನತ್ತ ನೋಡುತ್ತಾ ನಿರಂತರವಾಗಿ ಕೈಬೀಸುತ್ತಿದ್ದರು.&lt;/p&gt;&lt;p&gt;ರೈಲು ಪ್ಲಾಟ್&zwnj;ಫಾರ್ಮ್&zwnj;ನಿಂದ ಸಾಕಷ್ಟು ದೂರ ಸಾಗಿದ ನಂತರವೂ ಇಬ್ಬರೂ ಅಲ್ಲಿಂದ ಕದಲದೆ ಮಗಳನ್ನೇ ನೋಡುತ್ತಾ ನಿಂತಿದ್ದರು. ರೈಲು ಸಂಪೂರ್ಣವಾಗಿ ಕಣ್ಮರೆಯಾಗುವವರೆಗೂ ಅವರ ವಿದಾಯ ಮುಂದುವರಿದಿತ್ತು.&lt;/p&gt;&lt;h3&gt;&lsquo;ನನ್ನ ಪೋಷಕರೇ ನನ್ನ ನಿಜವಾದ ಶ್ರೀಮಂತಿಕೆ&rsquo;&lt;/h3&gt;&lt;p&gt;ಈ ಭಾವುಕ ಕ್ಷಣಕ್ಕೆ ಖುಷಿ, &ldquo;ನನ್ನ ಪೋಷಕರು ನನ್ನನ್ನು ಬೀಳ್ಕೊಡುವ ರೀತಿಯೇ ನನ್ನ ನಿಜವಾದ ಶ್ರೀಮಂತಿಕೆ&rdquo; ಎಂಬ ಅರ್ಥದ ಭಾವನಾತ್ಮಕ ಕ್ಯಾಪ್ಷನ್ ನೀಡಿದ್ದಾರೆ.&lt;/p&gt;&lt;p&gt;ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಪೋಷಕರೊಂದಿಗಿನ ಇದೇ ರೀತಿಯ ವಿದಾಯದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಕೆಲವರು ಅಮ್ಮ ಕೈಬೀಸುತ್ತಿದ್ದರೆ ಅಪ್ಪ ಆ ಕ್ಷಣವನ್ನು ಮೊಬೈಲ್&zwnj;ನಲ್ಲಿ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿದ್ದಾರೆ.&lt;/p&gt;&lt;h3&gt;ನೆಟ್ಟಿಗರಿಗೂ ತಮ್ಮದೇ ನೆನಪುಗಳನ್ನು ತಂದ ವಿಡಿಯೋ&lt;/h3&gt;&lt;p&gt;&ldquo;ಇವತ್ತು ನಾನು ನೋಡಿದ ಅತ್ಯುತ್ತಮ ವಿಡಿಯೋ ಇದು&rdquo; ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪೋಷಕರನ್ನು ಹೀಗೆ ಒಟ್ಟಿಗೆ ಸಂತೋಷದಿಂದ ನೋಡುವುದೇ ದೊಡ್ಡ ಅದೃಷ್ಟ ಎಂದು ಕೆಲವರು ಭಾವುಕರಾಗಿದ್ದಾರೆ.&lt;/p&gt;&lt;p&gt;ಮತ್ತೊಬ್ಬರು, ತಮ್ಮ ಪೋಷಕರು ಕೂಡ ಮುಂಬೈಗೆ ತೆರಳುವಾಗ ಇದೇ ರೀತಿಯಲ್ಲಿ ಬೀಳ್ಕೊಟ್ಟಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಇನ್ನೊಬ್ಬರು, ಅಪ್ಪ ತಮ್ಮ ಕಣ್ಣೀರನ್ನು ಮರೆಮಾಚಲು ಮೊಬೈಲ್&zwnj;ನಲ್ಲಿ ವಿಡಿಯೋ ಮಾಡುತ್ತಿರಬಹುದು ಎಂದು ಭಾವುಕವಾಗಿ ಊಹಿಸಿದ್ದಾರೆ.&lt;/p&gt;&lt;h3&gt;ಪುಟ್ಟ ವಿದಾಯದಲ್ಲೇ ಕಾಣಿಸಿದ ದೊಡ್ಡ ಪ್ರೀತಿ&lt;/h3&gt;&lt;p&gt;ಕೆಲವೊಮ್ಮೆ ದೊಡ್ಡ ಮಾತುಗಳ ಅಗತ್ಯವೇ ಇರುವುದಿಲ್ಲ. ಒಂದು ನಗು, ಒಂದು ಕೈಬೀಸು, ದೂರವಾಗುವ ರೈಲನ್ನು ಕೊನೆಯವರೆಗೂ ನೋಡುವ ಆ ಕ್ಷಣವೇ ಪೋಷಕರ ಪ್ರೀತಿಯ ಆಳವನ್ನು ಹೇಳಿಬಿಡುತ್ತದೆ. ಖುಷಿ ಹಂಚಿಕೊಂಡ ಈ ವಿಡಿಯೋ ಕೂಡ ಅಂಥದ್ದೇ ಒಂದು ಸರಳ, ಆದರೆ ಮನಮುಟ್ಟುವ ವಿದಾಯದ ಕ್ಷಣವಾಗಿ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.&lt;/p&gt;View this post on Instagram&lt;p&gt;A post shared by Khushi Solanki (@alwayskhushinevergam)&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/parents-wave-goodbye-to-daughter-until-train-disappears-viral-video-wins-hearts/articleshow-4h5avgn"/>
        </item>
        <item>
            <title><![CDATA[ಚಿನ್ನದಂತೆಯೇ ಕಾಣುವ ನೆಕ್ಲೇಸ್‌ಗಳು; ಬೆಲೆ ಕೂಡ ತುಂಬಾನೇ ಕಡಿಮೆ!]]></title>
            <link>https://kannada.asianetnews.com/webstories/fashion/stunning-gold-look-necklaces-at-affordable-prices-must-buy-kvn-og6vk1d</link>
            <guid isPermaLink="true">https://kannada.asianetnews.com/webstories/fashion/stunning-gold-look-necklaces-at-affordable-prices-must-buy-kvn-og6vk1d</guid>
            <pubDate>Fri, 18 Sep 2026 17:06:46 +0530</pubDate>
            <description><![CDATA[&lt;p&gt;ಚಿನ್ನದ ಬೆಲೆ ಗಗನಕ್ಕೇರಿದೆ. ಎಲ್ಲರಿಗೂ ಚಿನ್ನ ಖರೀದಿಸಲು ಸಾಧ್ಯವಾಗದಿರಬಹುದು. ಅಂಥವರು ಕಡಿಮೆ ಬೆಲೆಗೆ ಸಿಗುವ ಈ ನೆಕ್ಲೇಸ್&zwnj;ಗಳನ್ನು ಟ್ರೈ ಮಾಡಬಹುದು. ಇವು ನೋಡಲು ಅಚ್ಚುಮೆಚ್ಚು ಚಿನ್ನದಂತೆಯೇ ಕಾಣುತ್ತವೆ. ತಡವೇಕೆ, ಒಮ್ಮೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k91zve5s7k01nas8je838azq,imgname-artificial-necklace-for-women-1-1762077292729.png" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/stunning-gold-look-necklaces-at-affordable-prices-must-buy-kvn-og6vk1d"/>
        </item>
        <item>
            <title><![CDATA[ಈ ರೋಗಕ್ಕೆ ರಾಮಬಾಣ 'ಮಖಾನ'.. ಹೇಗೆ, ಎಷ್ಟು ತಿನ್ನಬೇಕು? ಎಷ್ಟೋ ಜನರಿಗೆ ಈ ಸೀಕ್ರೆಟ್ ಗೊತ್ತಿಲ್ಲ!]]></title>
            <link>https://kannada.asianetnews.com/health-life/consuming-makhana-every-day-is-considered-very-important-for-people-with-thyroid-problems/articleshow-ku8b8zs</link>
            <guid isPermaLink="true">https://kannada.asianetnews.com/health-life/consuming-makhana-every-day-is-considered-very-important-for-people-with-thyroid-problems/articleshow-ku8b8zs</guid>
            <pubDate>Fri, 18 Sep 2026 16:37:21 +0530</pubDate>
            <description><![CDATA[&lt;p&gt;ಮಾರುಕಟ್ಟೆಯಲ್ಲಿ ದೊರೆಯುವ ಫ್ಲೇವರ್ಡ್ ಮಖಾನ ಖರೀದಿಸುವಾಗ ಪ್ಯಾಕೆಟ್&zwnj;ನಲ್ಲಿರುವ ಪದಾರ್ಥಗಳ ಪಟ್ಟಿಯನ್ನು ಪರಿಶೀಲಿಸಿ. ಹೆಚ್ಚು ಉಪ್ಪು, ಸಕ್ಕರೆ ಅಥವಾ ಅನಗತ್ಯ ಕೊಬ್ಬು ಹೊಂದಿರುವ ಉತ್ಪನ್ನಗಳ ಬದಲು ಸರಳವಾದ ಮಖಾನವನ್ನು ಆಯ್ಕೆ ಮಾಡಬಹುದು. ಇದು ಯಾವ ರೋಗಕ್ಕೆ ಪರಿಹಾರ ಅಂತ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t2pxtmyesfvd2cnh3pr080,imgname-makhana-1789729142612.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಖಾನ ಯಾವ ರೋಗಕ್ಕೆ ಪರಿಹಾರ ನೀಡುತ್ತೆ? ಇಲ್ಲಿದೆ ನೋಡಿ ಮಖಾನದ ಆರೋಗ್ಯ ಪ್ರಯೋಜನಗಳು!&lt;/strong&gt;&lt;/p&gt;&lt;p&gt;ಥೈರಾಯ್ಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ದೇಹದಲ್ಲಿ ಥೈರಾಯ್ಡ್ ಹಾರ್ಮೋನ್&zwnj;ಗಳ ಪ್ರಮಾಣದಲ್ಲಿ ವ್ಯತ್ಯಾಸವಾದಾಗ ಆಯಾಸ, ತೂಕದಲ್ಲಿ ಬದಲಾವಣೆ, ಚಳಿಯನ್ನು ಹೆಚ್ಚು ಅನುಭವಿಸುವುದು, ಚರ್ಮ ಒಣಗುವುದು, ಮನಸ್ಥಿತಿಯಲ್ಲಿ ಬದಲಾವಣೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಔಷಧಿಗಳ ಜೊತೆಗೆ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಮೇಲೂ ಗಮನ ಹರಿಸುವುದು ಮುಖ್ಯವಾಗುತ್ತದೆ.&lt;/p&gt;&lt;p&gt;ಥೈರಾಯ್ಡ್ ಸಮಸ್ಯೆ ಇರುವವರು ತಮ್ಮ ದಿನನಿತ್ಯದ ಆಹಾರದಲ್ಲಿ ಯಾವ ತಿಂಡಿಗಳನ್ನು ಸೇರಿಸಿಕೊಳ್ಳಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಈ ಪಟ್ಟಿಯಲ್ಲಿ ಮಖಾನ ಅಥವಾ ಫಾಕ್ಸ್ ನಟ್ಸ್ ಕೂಡ ಒಂದು ಉತ್ತಮ ಆಯ್ಕೆಯಾಗಬಹುದು. ಹಗುರವಾಗಿ ಹುರಿದು ಸೇವಿಸಬಹುದಾದ ಮಖಾನದಲ್ಲಿ (Makhana) ಕೆಲವು ಪ್ರಮುಖ ಪೋಷಕಾಂಶಗಳು ಇರುವುದರಿಂದ, ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಇದು ಸಮತೋಲಿತ ಆಹಾರದ ಭಾಗವಾಗಬಹುದು.&lt;/p&gt;&lt;h2&gt;ಮಖಾನ ಮತ್ತು ಥೈರಾಯ್ಡ್ ಆರೋಗ್ಯ&lt;/h2&gt;&lt;p&gt;ಥೈರಾಯ್ಡ್ ಆರೋಗ್ಯದ ಬಗ್ಗೆ ಮಾತನಾಡುವಾಗ ಗಾಯ್ಟ್ರೋಜೆನ್ ಎಂಬ ಪದವನ್ನು ಹೆಚ್ಚಾಗಿ ಕೇಳುತ್ತೇವೆ. ಕೆಲವು ಆಹಾರಗಳಲ್ಲಿ ಕಂಡುಬರುವ ಈ ಸಂಯುಕ್ತಗಳು ಅಯೋಡಿನ್ ಬಳಕೆಯ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಥೈರಾಯ್ಡ್ ಕಾರ್ಯದಲ್ಲಿ ತೊಂದರೆ ಇರುವವರು ಇಂತಹ ಆಹಾರಗಳನ್ನು ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತಾರೆ ಎಂಬುದರ ಬಗ್ಗೆ ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆಯುವುದು ಸೂಕ್ತ.&lt;/p&gt;&lt;p&gt;ಮಖಾನವು ಸಾಮಾನ್ಯವಾಗಿ ಗಾಯ್ಟ್ರೋಜೆನ್&zwnj;ಗಳ ಪ್ರಮುಖ ಮೂಲವಾಗಿ ಪರಿಗಣಿಸಲ್ಪಡುವುದಿಲ್ಲ. ಹಾಗಾಗಿ ಇದನ್ನು ಪ್ರಮಾಣಬದ್ಧವಾಗಿ ಸೇವಿಸುವುದು ಹೆಚ್ಚಿನ ಜನರಿಗೆ ಆರೋಗ್ಯಕರ ತಿಂಡಿಯ ಆಯ್ಕೆಯಾಗಬಹುದು. ಆದರೆ ಮಖಾನ ತಿನ್ನುವುದರಿಂದ ಥೈರಾಯ್ಡ್ ಹಾರ್ಮೋನ್&zwnj;ಗಳು ನೇರವಾಗಿ ಸಮತೋಲನವಾಗುತ್ತವೆ ಎಂದು ಹೇಳಲು ಸಾಕಷ್ಟು ವೈಜ್ಞಾನಿಕ ಆಧಾರವಿಲ್ಲ.&lt;/p&gt;&lt;p&gt;ತೂಕ ನಿಯಂತ್ರಣಕ್ಕೆ ಸಹಾಯವಾಗಬಹುದೇ?&lt;/p&gt;&lt;p&gt;ಥೈರಾಯ್ಡ್ ಸಮಸ್ಯೆಯ ಕೆಲವು ರೂಪಗಳಲ್ಲಿ ತೂಕ ಹೆಚ್ಚಾಗುವ ಸಮಸ್ಯೆ ಎದುರಾಗಬಹುದು. ತೂಕ ನಿಯಂತ್ರಣದ ಸಂದರ್ಭದಲ್ಲಿ ಹೆಚ್ಚು ಸಕ್ಕರೆ, ಉಪ್ಪು ಮತ್ತು ಎಣ್ಣೆ ಹೊಂದಿರುವ ತಿಂಡಿಗಳ ಬದಲು ಪೌಷ್ಟಿಕಾಂಶವಿರುವ ಆಹಾರವನ್ನು ಆಯ್ಕೆ ಮಾಡುವುದು ಮುಖ್ಯ.&lt;/p&gt;&lt;p&gt;ಮಖಾನವನ್ನು ಹೆಚ್ಚು ಎಣ್ಣೆ ಬಳಸದೆ ಹುರಿದು ಸೇವಿಸಿದರೆ ಅದು ಕ್ರಿಸ್ಪಿ ಹಾಗೂ ರುಚಿಕರವಾದ ತಿಂಡಿಯಾಗುತ್ತದೆ. ಇದರಲ್ಲಿರುವ ಆಹಾರದ ನಾರಿನಂಶ ಹೊಟ್ಟೆ ತುಂಬಿದ ಅನುಭವ ನೀಡಲು ಸಹಾಯ ಮಾಡಬಹುದು. ಇದರಿಂದ ಅನಗತ್ಯ ತಿಂಡಿಗಳನ್ನು ಕಡಿಮೆ ಮಾಡಲು ನೆರವಾಗಬಹುದು. ಆದರೆ ತೂಕ ಇಳಿಕೆಗೆ ಮಖಾನ ಮಾತ್ರವೇ ಪರಿಹಾರವಲ್ಲ. ಒಟ್ಟಾರೆ ಆಹಾರ ಕ್ರಮ, ದೈಹಿಕ ಚಟುವಟಿಕೆ ಮತ್ತು ನಿದ್ರೆಯೂ ಸಮಾನವಾಗಿ ಮುಖ್ಯ.&lt;/p&gt;&lt;p&gt;ಆಂಟಿಆಕ್ಸಿಡೆಂಟ್&zwnj;ಗಳೂ ಇವೆ&lt;/p&gt;&lt;p&gt;ಮಖಾನದಲ್ಲಿ ಕೆಲವು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಸಸ್ಯ ಸಂಯುಕ್ತಗಳು ಕಂಡುಬರುತ್ತವೆ. ಅವು ದೇಹದ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸುವಲ್ಲಿ ಪಾತ್ರವಹಿಸಬಹುದು. ಈ ಕಾರಣದಿಂದ ಮಖಾನವನ್ನು ಆರೋಗ್ಯಕರ ಆಹಾರದ ಭಾಗವಾಗಿ ಸೇರಿಸಿಕೊಳ್ಳಬಹುದು.&lt;/p&gt;&lt;p&gt;ಆದರೆ &ldquo;ಮಖಾನ ದೇಹದಲ್ಲಿನ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ&rdquo; ಅಥವಾ &ldquo;ದೇಹದ ನೀರಿನ ಶೇಖರಣೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ&rdquo; ಎಂಬಂತಹ ಹೇಳಿಕೆಗಳನ್ನು ವೈದ್ಯಕೀಯ ಸತ್ಯವೆಂದು ಪರಿಗಣಿಸಬಾರದು. ಮುಖ ಅಥವಾ ದೇಹದಲ್ಲಿ ನಿರಂತರವಾಗಿ ಊತ ಕಾಣಿಸಿಕೊಂಡರೆ ಅದರ ಕಾರಣವನ್ನು ವೈದ್ಯರಿಂದ ಪರಿಶೀಲಿಸಿಕೊಳ್ಳುವುದು ಅಗತ್ಯ.&lt;/p&gt;&lt;h3&gt;ಮೂಳೆಗಳ ಆರೋಗ್ಯಕ್ಕೂ ಪೋಷಕಾಂಶ&lt;/h3&gt;&lt;p&gt;ಮಖಾನದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಸೇರಿದಂತೆ ಕೆಲವು ಖನಿಜಾಂಶಗಳಿವೆ. ಇವು ಮೂಳೆ ಮತ್ತು ದೇಹದ ಸಾಮಾನ್ಯ ಕಾರ್ಯಗಳಿಗೆ ಅಗತ್ಯವಾದ ಪೋಷಕಾಂಶಗಳಾಗಿವೆ. ಆದರೆ ರಕ್ತಹೀನತೆಯನ್ನು ತಡೆಯಲು ಮಖಾನವೇ ಸಾಕು ಎಂದು ಹೇಳಲು ಸಾಧ್ಯವಿಲ್ಲ.&lt;/p&gt;&lt;p&gt;ರಕ್ತಹೀನತೆ ಸಾಮಾನ್ಯವಾಗಿ ಕಬ್ಬಿಣ, ವಿಟಮಿನ್ B12 ಅಥವಾ ಫೋಲೇಟ್ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗಬಹುದು. ಹೀಗಾಗಿ ಹಿಮೋಗ್ಲೋಬಿನ್ ಕಡಿಮೆಯಿದ್ದರೆ ವೈದ್ಯರ ಸಲಹೆಯಂತೆ ಸೂಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಬೇಕು.&lt;/p&gt;&lt;p&gt;ಮಖಾನ ಸೇವಿಸುವ ಸರಿಯಾದ ವಿಧಾನ ಯಾವುದು?&lt;/p&gt;&lt;p&gt;ಮಖಾನವನ್ನು ಆರೋಗ್ಯಕರವಾಗಿ ಸೇವಿಸಲು ಮನೆಯಲ್ಲೇ ಸ್ವಲ್ಪ ತುಪ್ಪ ಅಥವಾ ಸೂಕ್ತ ಪ್ರಮಾಣದ ಎಣ್ಣೆಯಲ್ಲಿ ಹುರಿದುಕೊಳ್ಳಬಹುದು. ಹೆಚ್ಚು ಉಪ್ಪು, ಬೆಣ್ಣೆ ಅಥವಾ ಮಸಾಲೆ ಸೇರಿಸುವುದನ್ನು ತಪ್ಪಿಸುವುದು ಉತ್ತಮ.&lt;/p&gt;&lt;p&gt;ಮಾರುಕಟ್ಟೆಯಲ್ಲಿ ದೊರೆಯುವ ಫ್ಲೇವರ್ಡ್ ಮಖಾನ ಖರೀದಿಸುವಾಗ ಪ್ಯಾಕೆಟ್&zwnj;ನಲ್ಲಿರುವ ಪದಾರ್ಥಗಳ ಪಟ್ಟಿಯನ್ನು ಪರಿಶೀಲಿಸಿ. ಹೆಚ್ಚು ಉಪ್ಪು, ಸಕ್ಕರೆ ಅಥವಾ ಅನಗತ್ಯ ಕೊಬ್ಬು ಹೊಂದಿರುವ ಉತ್ಪನ್ನಗಳ ಬದಲು ಸರಳವಾದ ಮಖಾನವನ್ನು ಆಯ್ಕೆ ಮಾಡಬಹುದು.&lt;/p&gt;&lt;p&gt;ಥೈರಾಯ್ಡ್ ಮಾತ್ರೆ ತೆಗೆದುಕೊಳ್ಳುವವರು ಗಮನಿಸಿ&lt;/p&gt;&lt;p&gt;ಥೈರಾಯ್ಡ್ ಔಷಧಿ ಸೇವಿಸುವವರು ಆಹಾರದ ಸಮಯದ ಬಗ್ಗೆ ವಿಶೇಷ ಗಮನ ನೀಡಬೇಕು. ಲೆವೊಥೈರಾಕ್ಸಿನ್&zwnj;ನಂತಹ ಔಷಧಿಗಳನ್ನು ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ ಮತ್ತು ನಂತರ ಆಹಾರ ಸೇವಿಸಲು ನಿರ್ದಿಷ್ಟ ಸಮಯದ ಅಂತರ ಇರಬಹುದು. ಆದ್ದರಿಂದ ಮಾತ್ರೆ ತೆಗೆದುಕೊಂಡ ತಕ್ಷಣ ಮಖಾನ ಸೇರಿದಂತೆ ಯಾವುದೇ ಆಹಾರ ಸೇವಿಸುವ ಮೊದಲು ವೈದ್ಯರು ಅಥವಾ ಔಷಧಿಯ ಸೂಚನೆಯಲ್ಲಿ ನೀಡಿರುವ ನಿಯಮವನ್ನು ಪಾಲಿಸಿ.&lt;/p&gt;&lt;p&gt;ಒಟ್ಟಿನಲ್ಲಿ, ಮಖಾನವನ್ನು ಥೈರಾಯ್ಡ್&zwnj;ಗೆ ಔಷಧಿ ಅಥವಾ ನೇರ ಚಿಕಿತ್ಸೆಯಂತೆ ನೋಡಬಾರದು. ಬದಲಾಗಿ, ಕಡಿಮೆ ಎಣ್ಣೆಯಲ್ಲಿ ತಯಾರಿಸಿದ ಮಖಾನವನ್ನು ಸಮತೋಲಿತ ಆಹಾರದ ಒಂದು ಭಾಗವಾಗಿ ಬಳಸಬಹುದು. ಥೈರಾಯ್ಡ್ ಸಮಸ್ಯೆ ಇರುವವರು ನಿಯಮಿತವಾಗಿ ವೈದ್ಯರ ಸಲಹೆ ಪಡೆಯುವುದರ ಜೊತೆಗೆ, ತಮ್ಮ ಆಹಾರ, ವ್ಯಾಯಾಮ ಮತ್ತು ಔಷಧಿ ಸೇವನೆಯ ಸಮಯದ ಬಗ್ಗೆ ಶಿಸ್ತನ್ನು ಪಾಲಿಸುವುದು ಆರೋಗ್ಯ ನಿರ್ವಹಣೆಗೆ ಹೆಚ್ಚು ಮುಖ್ಯವಾಗಿದೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/consuming-makhana-every-day-is-considered-very-important-for-people-with-thyroid-problems/articleshow-ku8b8zs"/>
        </item>
        <item>
            <title><![CDATA[ಕೊಬ್ಬರಿ ಎಣ್ಣೆ ಜೊತೆ ಇದೊಂದು ಕ್ಯಾಪ್ಸುಲ್ ಹಾಕಿ ಹಚ್ಚಿದ್ರೆ ಕೂದಲು ಡಬಲ್ ವೇಗದಲ್ಲಿ ಬೆಳೆಯುತ್ತೆ]]></title>
            <link>https://kannada.asianetnews.com/gallery/fashion/coconut-oil-and-vitamin-e-for-hair-growth-does-this-viral-remedy-really-work-9ixprkv</link>
            <guid isPermaLink="true">https://kannada.asianetnews.com/gallery/fashion/coconut-oil-and-vitamin-e-for-hair-growth-does-this-viral-remedy-really-work-9ixprkv</guid>
            <pubDate>Fri, 18 Sep 2026 16:27:39 +0530</pubDate>
            <description><![CDATA[&lt;p&gt;Hair Growth Remedy: ಕೂದಲನ್ನು ಉದ್ದ, ದಪ್ಪ ಮತ್ತು ಬಲವಾಗಿ ಬೆಳೆಯಲು ತೆಂಗಿನ ಎಣ್ಣೆ ಮತ್ತು ವಿಟಮಿನ್ ಇ ಬಳಸುವ ವಿಧಾನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಕೂದಲನ್ನು ಕಂಡೀಷನ್ ಮಾಡಲು ಮತ್ತು ಒಡೆಯುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗುತ್ತಿದೆ. ನೀವು ಟ್ರೈ ಮಾಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t2f1fdf87jjf460y2nejgx,imgname-hair-growth-remedy-1789728884201.jpg" type="image/jpeg" height="390" width="690"/>
            <content:encoded><![CDATA[&lt;p&gt;Hair Growth Remedy: ಕೂದಲನ್ನು ಉದ್ದ, ದಪ್ಪ ಮತ್ತು ಬಲವಾಗಿ ಬೆಳೆಯಲು ತೆಂಗಿನ ಎಣ್ಣೆ ಮತ್ತು ವಿಟಮಿನ್ ಇ ಬಳಸುವ ವಿಧಾನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಕೂದಲನ್ನು ಕಂಡೀಷನ್ ಮಾಡಲು ಮತ್ತು ಒಡೆಯುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗುತ್ತಿದೆ. ನೀವು ಟ್ರೈ ಮಾಡಿ.&lt;/p&gt;&lt;img&gt;&lt;p&gt;ಪ್ರತಿಯೊಬ್ಬ ಹುಡುಗಿಯೂ ಉದ್ದ, ದಪ್ಪ ಮತ್ತು ಬಲವಾದ ಕೂದಲನ್ನು ಹೊಂದಲು ಬಯಸುತ್ತಾಳೆ. ಆದರೆ, ಕಳಪೆ ಜೀವನಶೈಲಿ ಮತ್ತು ಮಾಲಿನ್ಯದಿಂದಾಗಿ, ಕೂದಲು ಉದುರುವಿಕೆ ಮತ್ತು ಶುಷ್ಕತೆ ಸಾಮಾನ್ಯ ಸಮಸ್ಯೆಗಳಾಗಿವೆ, ಇದು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳುವುದನ್ನು ಒಂದು ಸವಾಲಾಗಿ ಮಾಡಿದೆ, ಕೂದಲನ್ನು ಬೆಳೆಸುವುದಂತೂ ಕಷ್ಟ. ಆದರೆ ಇದೀಗ ಈ ಒಂದು ರೆಮೆಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ಜನರು ಈ ಪರಿಹಾರವು ಮ್ಯಾಜಿಕ್&zwnj;ನಂತೆ ಕೆಲಸ ಮಾಡುತ್ತದೆ ಎಂದು ಹೇಳುತ್ತಿದ್ದಾರೆ. ಇದು ಕೂದಲನ್ನು ಆರೋಗ್ಯಕರವಾಗಿಡುವುದಲ್ಲದೆ, ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಈ ಪರಿಹಾರದಲ್ಲಿ ತೆಂಗಿನ ಎಣ್ಣೆಯನ್ನು ವಿಟಮಿನ್ ಇ ಕ್ಯಾಪ್ಸುಲ್&zwnj;ಗಳೊಂದಿಗೆ ಬೆರೆಸಿ ಕೂದಲಿಗೆ ಹಚ್ಚಲಾಗುತ್ತೆ, ಇದರಿಂದ ಅತ್ಯುತ್ತಮ ರಿಸಲ್ಟ್ ಬರುತ್ತಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ನಾವು ನೂರಾರು ವರ್ಷಗಳಿಂದ ಕೊಬ್ಬರಿ ಎಣ್ಣೆ ಬಳಸುತ್ತಿದ್ದೇವೆ, ನಮ್ಮ ಅಜ್ಜಿಯರು ಸಹ ಇದನ್ನು ಬಳಸುತ್ತಿದ್ದರು. ನಾವು ಬಳಸುತ್ತಿದ್ದೆವು. ಈ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಕೂದಲಿನ ಕೋಶಕದೊಳಗೆ ಆಳವಾಗಿ ತೂರಿಕೊಂಡು ಪ್ರೋಟೀನ್ ನಷ್ಟವನ್ನು ತಡೆಯುತ್ತದೆ. ಇದು ಕೂದಲು ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ, ಮೃದುವಾಗಿರಿಸುತ್ತದೆ ಮತ್ತು ತೇವಾಂಶವನ್ನು ನೀಡುತ್ತದೆ. ಇದು ನೆತ್ತಿಯನ್ನು ಹೈಡ್ರೇಟ್ ಮಾಡುತ್ತದೆ.&lt;/p&gt;&lt;img&gt;&lt;ul&gt; &lt;li&gt;ನಿಮಗೆ 2-3 ಚಮಚ ಶುದ್ಧ ತೆಂಗಿನ ಎಣ್ಣೆ (ಕೋಲ್ಡ್-ಪ್ರೆಸ್ಡ್ ಅಥವಾ ವರ್ಜಿನ್)&lt;/li&gt; &lt;li&gt;1-2 ವಿಟಮಿನ್ ಇ ಕ್ಯಾಪ್ಸುಲ್&zwnj;ಗಳು ( ಎವಿಯಾನ್ 400).&lt;/li&gt; &lt;li&gt;ಇವೆರಡು ಜೊತೆಯಾಗಿ ಸೇರಿಸಿದರೆ ನಿಮ್ಮ ಕೂದಲು ಆರೋಗ್ಯಯುತವಾಗಿ ಜೊತೆಗೆ ಡಬಲ್ ವೇಗದಲ್ಲಿ ಬೆಳೆಯುತ್ತದೆ.&lt;/li&gt;&lt;/ul&gt;&lt;img&gt;&lt;p&gt;ಮೊದಲು, ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಅದು ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ. ಎಣ್ಣೆಯನ್ನು ಹೊರತೆಗೆಯಲು ಕ್ಯಾಪ್ಸುಲ್ ಅನ್ನು ಸ್ವಚ್ಛವಾದ ಪಿನ್&zwnj;ನಿಂದ ಚುಚ್ಚಿ ತೆಂಗಿನ ಎಣ್ಣೆಗೆ ಸೇರಿಸಿ, ನಂತರ ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮ್ಮ ಕೂದಲನ್ನು ಭಾಗಗಳಾಗಿ ವಿಂಗಡಿಸಿ ಮತ್ತು ನಿಮ್ಮ ಬೆರಳುಗಳಿಂದ ವೃತ್ತಾಕಾರವಾಗಿ ನಿಮ್ಮ ನೆತ್ತಿಯನ್ನು ಸುಮಾರು 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.&lt;/p&gt;&lt;img&gt;&lt;p&gt;ಉಳಿದ ಪೇಸ್ಟ್ ಕೂದಲು ಮತ್ತು ನೆತ್ತಿಯ ಉದ್ದಕ್ಕೂ ಹಚ್ಚಿ. 30-60 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಅಗತ್ಯವಿದ್ದರೆ, ಎಲ್ಲಾ ಎಣ್ಣೆಯನ್ನು ತೆಗೆದುಹಾಕಲು ಎರಡು ಬಾರಿ ತೊಳೆಯಿರಿ. ನೀವು ವಾರಕ್ಕೆ ಎರಡು ಬಾರಿ ಇದನ್ನು ಹಚ್ಚಬಹುದು. ಉದ್ದ ಅಥವಾ ದಪ್ಪ ಕೂದಲಿಗೆ, ಸರಿಯಾದ ಪ್ರಮಾಣದಲ್ಲಿ ಹಚ್ಚಿ. ಮೊದಲ ಬಾರಿಗೆ ಹಚ್ಚುವ ಮೊದಲು, ಕೈಯಲ್ಲಿ ಅಥವಾ ಕಿವಿಯ ಹಿಂದೆ ಪ್ಯಾಚ್ ಟೆಸ್ಟ್ ಮಾಡಿ. ಗರ್ಭಿಣಿಯರು ಅಥವಾ ಮೆಡಿಕಲ್ ಕಂಡೀಶನ್ ಇರುವವರು ಇದನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/fashion/coconut-oil-and-vitamin-e-for-hair-growth-does-this-viral-remedy-really-work-9ixprkv"/>
        </item>
        <item>
            <title><![CDATA[ರಾಹುಲ್ ದ್ರಾವಿಡ್ ತಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕದ್ದುಮುಚ್ಚಿ ಮ್ಯಾಚ್ ನೋಡುತ್ತಿದ್ದದ್ದು ಯಾಕೆ? ಆ ಸತ್ಯ ಬಿಚ್ಚಿಟ್ಟ ಗಂಗೂಲಿ]]></title>
            <link>https://kannada.asianetnews.com/gallery/cricket-sports/rahul-dravid-father-secretly-watched-his-matches-at-chinnaswamy-sourav-ganguly-reveals-why-kvn-s9d6oig</link>
            <guid isPermaLink="true">https://kannada.asianetnews.com/gallery/cricket-sports/rahul-dravid-father-secretly-watched-his-matches-at-chinnaswamy-sourav-ganguly-reveals-why-kvn-s9d6oig</guid>
            <pubDate>Fri, 18 Sep 2026 16:11:07 +0530</pubDate>
            <description><![CDATA[&lt;p&gt;ಬೆಂಗಳೂರು: 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ ಕಂಡ ಅತ್ಯಂತ ಯಶಸ್ವಿ ಬ್ಯಾಟರ್&zwnj;ಗಳಲ್ಲಿ ಒಬ್ಬರು. ಆದರೆ ರಾಹುಲ್ ದ್ರಾವಿಡ್ ತಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕದ್ದುಮುಚ್ಚಿ ಮಗನ ಮ್ಯಾಚ್ ನೋಡುತ್ತಿದ್ದರಂತೆ. ಈ ಬಗ್ಗೆ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m122zejyewr1v78qmsp8j4ra,imgname-sourav-ganguly-and-rahul-dravid-1787850373726.jpeg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ ಕಂಡ ಅತ್ಯಂತ ಯಶಸ್ವಿ ಬ್ಯಾಟರ್&zwnj;ಗಳಲ್ಲಿ ಒಬ್ಬರು. ಆದರೆ ರಾಹುಲ್ ದ್ರಾವಿಡ್ ತಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕದ್ದುಮುಚ್ಚಿ ಮಗನ ಮ್ಯಾಚ್ ನೋಡುತ್ತಿದ್ದರಂತೆ. ಈ ಬಗ್ಗೆ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಭಾರತ ಕ್ರಿಕೆಟ್&zwnj;ನ ಅತ್ಯಂತ ನಂಬಿಗಸ್ಥ ಬ್ಯಾಟರ್ ಎಂದೇ ಗುರುತಿಸಿಕೊಂಡಿದ್ದ ರಾಹುಲ್ ದ್ರಾವಿಡ್, ಏಕಾಂಗಿಯಾಗಿ ಟೀಂ ಇಂಡಿಯಾಗೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ದ್ರಾವಿಡ್ ಕೇವಲ ಬ್ಯಾಟರ್ ಮಾತ್ರವಲ್ಲದೇ ವಿಕೆಟ್ ಕೀಪರ್ ಆಗಿ, ಸ್ಲಿಪ್ ಫೀಲ್ಡರ್ ಆಗಿ ಹಾಗೆಯೇ ನಾಯಕನಾಗಿಯೂ ಸೈ ಎನಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ರಾಹುಲ್ ದ್ರಾವಿಡ್ ತಂದೆಯ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಇಂಟ್ರೆಸ್ಟಿಂಗ್ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ದ್ರಾವಿಡ್ ತಂದೆ ಗುಟ್ಟಾಗಿ ಬಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಗನ ಮ್ಯಾಚ್ ನೋಡುತ್ತಿದ್ದರಂತೆ. ಇದು ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೀಡಾಗುವಂತೆ ಮಾಡಿದೆ.&lt;/p&gt;&lt;img&gt;&lt;p&gt;ರಾಹುಲ್ ದ್ರಾವಿಡ್ ತಂದೆ, ಶರದ್ ದ್ರಾವಿಡ್ ಅವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೆಸ್ಟ್&zwnj; ಪಂದ್ಯಗಳು ನಡೆಯುವಾಗಲೆಲ್ಲಾ ಗುಟ್ಟಾಗಿ ಬಂದು ಮಗನ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದರಂತೆ. ನಾನು ಆಗ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದೆ. ಅಂಕಲ್ ನೀವ್ಯಾಕೆ ತುಂಬಾ ಸಾಧಾರಣವಾಗಿ ಬಂದು, ಎಲ್ಲೋ ಮೂಲೆಯಲ್ಲಿ ಕುಳಿತು ಮ್ಯಾಚ್ ನೋಡುತ್ತೀರಾ ಎಂದು ಸೌರವ್ ಗಂಗೂಲಿ ಕೇಳಿದ್ದರಂತೆ.&lt;/p&gt;&lt;img&gt;&lt;p&gt;ಅದಕ್ಕೆ ದ್ರಾವಿಡ್ ತಂದೆ, ಯಾವಾಗಲೆಲ್ಲಾ ಬೆಂಗಳೂರಿನಲ್ಲಿ ಟೆಸ್ಟ್ ಮ್ಯಾಚ್ ನಡೆಯುತ್ತೋ, ನಾನು ಗುಟ್ಟಾಗಿಯೇ ಮ್ಯಾಚ್ ನೋಡಲು ಬಯಸುತ್ತೇನೆ. ಯಾಕೆಂದರೆ ಸ್ಟೇಡಿಯಂನ ವಿಐಪಿ ಸ್ಟ್ಯಾಂಡ್&zwnj;ನಲ್ಲಿ ನನ್ನ ಮುಖವನ್ನು ನೋಡಿದರೆ ದ್ರಾವಿಡ್ ಒತ್ತಡಕ್ಕೆ ಒಳಗಾಗುತ್ತಿದ್ದರು. ಇದೇ ಕಾರಣಕ್ಕೆ ಆತ ಒತ್ತಡವಿಲ್ಲದೇ ಆಡಬೇಕೆಂದರೆ ನಾನು ಆತನಿಗೆ ಕಾಣದಂತೆ ಎಲ್ಲೋ ಮೂಲೆಯಲ್ಲಿ ಕುಳಿತು ಮ್ಯಾಚ್ ನೋಡಲು ಇಷ್ಟಪಡುತ್ತೇನೆ ಎಂದಿದ್ದರಂತೆ.&lt;/p&gt;&lt;img&gt;&lt;p&gt;ಇನ್ನು ರಾಹುಲ್ ದ್ರಾವಿಡ್ ಪುತ್ರರಾದ ಸಮಿತ್ ಹಾಗೂ ಅನ್ವಯ್ ಕೂಡಾ ಯುವ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದು, ಸಮಯ ಸಿಕ್ಕಾಗಲೆಲ್ಲಾ ತಮ್ಮ ಮಕ್ಕಳ ಆಟವನ್ನು ರಾಹುಲ್ ದ್ರಾವಿಡ್ ದಂಪತಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಮೈದಾನದಲ್ಲಿ ಆಟವನ್ನು ಕಣ್ತುಂಬಿಕೊಳ್ಳುವುದನ್ನು ನಾವು ನೋಡಿದ್ದೇವೆ. ದ್ರಾವಿಡ್ ಕೂಡಾ ತಮ್ಮ ಸಿಂಪ್ಲಿಸಿಟಿಗೆ ಹೆಸರುವಾಸಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಭಾರತ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್&zwnj;ನಲ್ಲಿ 10,000+ ರನ್ ಬಾರಿಸಿದ ಕೆಲವೇ ಕೆಲವು ಭಾರತೀಯ ಬ್ಯಾಟರ್&zwnj;ಗಳಲ್ಲಿ ರಾಹುಲ್ ದ್ರಾವಿಡ್ ಕೂಡಾ ಒಬ್ಬರಾಗಿದ್ದಾರೆ. ರಾಹುಲ್ ದ್ರಾವಿಡ್ ಅವರ ಯಾವ ಇನ್ನಿಂಗ್ಸ್&zwnj; ನಿಮಗೆ ಇಷ್ಟ ಎನ್ನುವುದನ್ನು ಕಮೆಂಟ್ ಮಾಡಿ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/rahul-dravid-father-secretly-watched-his-matches-at-chinnaswamy-sourav-ganguly-reveals-why-kvn-s9d6oig"/>
        </item>
        <item>
            <title><![CDATA[ಕೇವಲ ಒಂದು ಹಾಗಲಕಾಯಿ ಸಾಕು.. ಇಲಿ, ಜಿರಳೆ, ಹಲ್ಲಿ, ಸೊಳ್ಳೆಗಳ ಕಾಟಕ್ಕೆ ಶಾಶ್ವತ ಪರಿಹಾರ ಸಿಗುತ್ತೆ]]></title>
            <link>https://kannada.asianetnews.com/life/how-to-get-rid-of-rats-cockroaches-and-lizards-using-bitter-gourd/articleshow-ksnlb45</link>
            <guid isPermaLink="true">https://kannada.asianetnews.com/life/how-to-get-rid-of-rats-cockroaches-and-lizards-using-bitter-gourd/articleshow-ksnlb45</guid>
            <pubDate>Fri, 18 Sep 2026 16:00:25 +0530</pubDate>
            <description><![CDATA[&lt;p&gt;&lt;strong&gt;Rat killer home remedy:&lt;/strong&gt; ಮನೆಯಲ್ಲಿ ಕಾಡುವ ಇಲಿ, ಜಿರಳೆ, ಹಲ್ಲಿ ಮತ್ತು ಸೊಳ್ಳೆಗಳನ್ನು ಕೊಲ್ಲಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಪಾಯಕಾರಿ ವಿಷಕಾರಿ ಕೆಮಿಕಲ್&zwnj;ಗಳು ಬೇಕಿಲ್ಲ! ನಮ್ಮ ಅಡುಗೆಮನೆಯಲ್ಲಿರುವ ಸಾಮಾನ್ಯ ಹಾಗಲಕಾಯಿ ಸಾಕು. ಇದನ್ನು ಬಳಸಿ ಕೀಟಗಳನ್ನು ಮನೆಯಿಂದ ಶಾಶ್ವತವಾಗಿ ಓಡಿಸುವುದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jvc59s9yh9mxw38fzhf7ve4s,imgname-uses-of-bitter-gourd-peel-3-1747386164542.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮ&lt;/strong&gt;ನೆಯಲ್ಲಿ ಇಲಿ, ಜಿರಳೆ, ಹಲ್ಲಿ ಮತ್ತು ಸೊಳ್ಳೆಗಳ ಕಾಟ ಶುರುವಾದರೆ ಸಾಕು, ಮನೆಯ ನೆಮ್ಮದಿಯೇ ಹಾಳಾಗುತ್ತದೆ. ಇವುಗಳನ್ನು ಓಡಿಸಲು ಮಾರುಕಟ್ಟೆಯಿಂದ ತರುವ ವಿಷಕಾರಿ ಕೀಟನಾಶಕಗಳು ಆರೋಗ್ಯಕ್ಕೆ ಮತ್ತು ಮಕ್ಕಳಿಗೆ ಅತ್ಯಂತ ಅಪಾಯಕಾರಿ. ಆದರೆ, ನಮಗೆ ಕಹಿಯೆನಿಸುವ ಹಾಗಲಕಾಯಿ ಈ ಕೀಟಗಳಿಗೂ ಕಿಂಚಿತ್ತೂ ಇಷ್ಟವಾಗುವುದಿಲ್ಲ! ಹಾಗಲಕಾಯಿಯ ಕಹಿ ಗುಣವನ್ನು ಬಳಸಿಕೊಂಡು ಯಾವುದೇ ವಿಷವಿಲ್ಲದೆ ಇಡೀ ಮನೆಯನ್ನು ಕೀಟಮುಕ್ತ ಮಾಡುವ 2 ಸರಳ ವಿಧಾನಗಳು ಇಲ್ಲಿವೆ ನೋಡಿ..&lt;/p&gt;&lt;h2&gt;&lt;strong&gt;ಹಾಗಲಕಾಯಿ ತಂದ ತಕ್ಷಣ ಇಷ್ಟು ಮಾಡಿ..&lt;/strong&gt;&lt;/h2&gt;&lt;p&gt;*ಒಂದು ತಾಜಾ ಹಾಗಲಕಾಯಿಯನ್ನು ತೆಗೆದುಕೊಂಡು, ಅದರ ಒಳಗಿನ ಬೀಜಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ.*ನೀರು ಹಾಕದೆ ಮಿಕ್ಸಿ ಜಾರ್&zwnj;ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.*ನಂತರ ಒಂದು ಜರಡಿಯಿಂದ ಸೋಸಿ, ಹಾಗಲಕಾಯಿಯ ತಿರುಳು (Pulp) ಮತ್ತು ಹಾಗಲಕಾಯಿಯ ರಸವನ್ನು (Juice) ಪ್ರತ್ಯೇಕವಾಗಿ ಬೇರ್ಪಡಿಸಿಟ್ಟುಕೊಳ್ಳಿ.&lt;/p&gt;&lt;h2&gt;&lt;strong&gt;ಪರಿಹಾರ 1: ಇಲಿ ಮತ್ತು ಜಿರಳೆಗಳನ್ನು ಓಡಿಸಲು 'ಸ್ಪೆಷಲ್ ಉಂಡೆಗಳು' (Pulp Balls)&lt;/strong&gt;&lt;/h2&gt;&lt;p&gt;&lt;strong&gt;ಇದಕ್ಕೆ ಬೇಕಾಗಿರುವುದು&lt;/strong&gt;ಬೇರ್ಪಡಿಸಿದ ಹಾಗಲಕಾಯಿ ತಿರುಳುತುರಿದ ಸೋಪು (ಬಟ್ಟೆ ಅಥವಾ ಪಾತ್ರೆ ತೊಳೆಯುವ ಸೋಪು) - 2 ಚಮಚಅಚ್ಚ ಖಾರದ ಪುಡಿ - 1.5 ಚಮಚಗೋಧಿ ಹಿಟ್ಟು - 3 ಚಮಚ&lt;/p&gt;&lt;h3&gt;&lt;strong&gt;ಏನು ಮಾಡಬೇಕು?&lt;/strong&gt;&lt;/h3&gt;&lt;p&gt;*ಹಾಗಲಕಾಯಿ ತಿರುಳಿಗೆ ತುರಿದ ಸೋಪು ಮತ್ತು ಖಾರದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇಡಿ.*ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟಿಗೆ ಸ್ವಲ್ಪ ನೀರು ಮತ್ತು ಎಣ್ಣೆ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.*ಈ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಮಧ್ಯದಲ್ಲಿ ಗುಳಿ ಮಾಡಿ ನಾವು ತಯಾರಿಸಿದ ಹಾಗಲಕಾಯಿ-ಸೋಪು-ಖಾರದ ಮಿಶ್ರಣವನ್ನು ಒಳಗೆ ಇಟ್ಟು ಮುಚ್ಚಿ (ಕಡುಬಿನಂತೆ ಅಥವಾ ಉಂಡೆಯಂತೆ ಕಟ್ಟಿ).&lt;strong&gt;ಬಳಸುವ ವಿಧಾನ: &lt;/strong&gt;ಇಲಿ ಮತ್ತು ಜಿರಳೆಗಳು ಹೆಚ್ಚಾಗಿ ಓಡಾಡುವ ಕಿಚನ್ ಸಿಂಕ್ ಕೆಳಗೆ, ಗ್ಯಾಸ್ ಸ್ಟೌವ್ ಹತ್ತಿರ ಮತ್ತು ಮನೆಯ ಮೂಲೆ ಮೂಲೆಗಳಲ್ಲಿ ಈ ಉಂಡೆಗಳನ್ನು ಇಡಿ.&lt;/p&gt;&lt;h3&gt;&lt;strong&gt;ಹೇಗೆ ಕೆಲಸ ಮಾಡುತ್ತದೆ?&lt;/strong&gt;&lt;/h3&gt;&lt;p&gt;ಗೋಧಿ ಹಿಟ್ಟಿನ ವಾಸನೆಗೆ ಆಕರ್ಷಿತವಾಗಿ ಬರುವ ಇಲಿ-ಜಿರಳೆಗಳು ಇದನ್ನು ತಿಂದ ತಕ್ಷಣ, ಒಳಗಿರುವ ಹಾಗಲಕಾಯಿಯ ಕಹಿ, ಖಾರ ಮತ್ತು ಸೋಪಿನ ಅಂಶವು ಅವುಗಳ ಜೀರ್ಣಾಂಗಕ್ಕೆ ಹಾನಿ ಮಾಡುತ್ತದೆ. ಇದರಿಂದ ತೀವ್ರ ಉರಿಯುಂಟಾಗಿ ಮನೆಯಿಂದ ಹೊರಗೆ ಓಡಿಹೋಗುತ್ತವೆ!&lt;/p&gt;&lt;p&gt;&lt;strong&gt;(ಎಚ್ಚರಿಕೆ: ಮಕ್ಕಳ ಕೈಗೆ ಸಿಗದಂತೆ ಇಡಿ)&lt;/strong&gt;&lt;/p&gt;&lt;h2&gt;&lt;strong&gt;ಪರಿಹಾರ 2: ಹಲ್ಲಿ, ಸೊಳ್ಳೆ ಮತ್ತು ನೊಣಗಳನ್ನು ಓಡಿಸಲು 'ಮ್ಯಾಜಿಕ್ ಸ್ಪ್ರೇ' (Liquid Spray)&lt;/strong&gt;&lt;/h2&gt;&lt;p&gt;&lt;strong&gt;ಇದಕ್ಕೆ ಬೇಕಾಗಿರುವುದು&lt;/strong&gt;ಹಾಗಲಕಾಯಿ ರಸ (ಹಿಂದೆ ತೆಗೆದಿಟ್ಟಿದ್ದು)ಶುಂಠಿ ರಸ - 2 ಚಮಚನೀರು - 1 ಲೋಟಸ್ಪ್ರೇ ಬಾಟಲ್&lt;/p&gt;&lt;h3&gt;&lt;strong&gt;ಏನು ಮಾಡಬೇಕು?&lt;/strong&gt;&lt;/h3&gt;&lt;p&gt;*ಹಾಗಲಕಾಯಿ ರಸಕ್ಕೆ ತುರಿದ ಶುಂಠಿಯ ರಸವನ್ನು ಹಿಂಡಿ ಹಾಕಿ.*ಇದಕ್ಕೆ ಒಂದು ಲೋಟ ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿಗೆ ತುಂಬಿಸಿ.&lt;/p&gt;&lt;h3&gt;&lt;strong&gt;ಬಳಸುವ ವಿಧಾನ&lt;/strong&gt;&lt;/h3&gt;&lt;p&gt;&lt;strong&gt;ಹಲ್ಲಿಗಳ ಕಾಟಕ್ಕೆ: &lt;/strong&gt;ಹಲ್ಲಿಗಳು ಓಡಾಡುವ ಗೋಡೆ, ಕಿಟಕಿ, ಬಲ್ಬ್&zwnj;ಗಳ ಬಳಿ ಈ ಲಿಕ್ವಿಡ್ ಅನ್ನು ಸ್ಪ್ರೇ ಮಾಡಿ. ಇದರ ಘಾಟು ಮತ್ತು ಕಹಿ ವಾಸನೆಗೆ ಹಲ್ಲಿಗಳು ಆ ಜಾಗಕ್ಕೆ ಮತ್ತೆ ಸುಳಿಯುವುದಿಲ್ಲ.&lt;strong&gt;ಸೊಳ್ಳೆ ಮತ್ತು ನೊಣಗಳಿಗೆ: &lt;/strong&gt;ಸಂಜೆಯ ಸಮಯದಲ್ಲಿ ಬಾಗಿಲು, ಕಿಟಕಿಗಳ ಪರದೆಗಳ ಮೇಲೆ ಸ್ಪ್ರೇ ಮಾಡಿದರೆ ಸೊಳ್ಳೆ ಮತ್ತು ನೊಣಗಳ ಕಾಟ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/life/how-to-get-rid-of-rats-cockroaches-and-lizards-using-bitter-gourd/articleshow-ksnlb45"/>
        </item>
        <item>
            <title><![CDATA[ವಿಜಯ್-ರಶ್ಮಿಕಾ ವಿವಾಹಕ್ಕೂ ನಟಿ ನೀನಾ ಗುಪ್ತಾಗೂ ಏನ್ ಸಂಬಂಧ? ಈ ಸುದ್ದಿ ತಿಳಿದು 'ಚೀ.. ಥೂ..' ಅಂತ ಉಗಿತೀರಾ ನೋಡಿ!]]></title>
            <link>https://kannada.asianetnews.com/news-entertainment/neena-gupta-talks-about-criticism-over-the-years-regarding-her-personal-life-as-well-as-the-pregnancy-rumours/articleshow-ae3mplp</link>
            <guid isPermaLink="true">https://kannada.asianetnews.com/news-entertainment/neena-gupta-talks-about-criticism-over-the-years-regarding-her-personal-life-as-well-as-the-pregnancy-rumours/articleshow-ae3mplp</guid>
            <pubDate>Fri, 18 Sep 2026 15:36:31 +0530</pubDate>
            <description><![CDATA[&lt;p&gt;ನೀನಾ ಗುಪ್ತಾ ಅವರ ಜೀವನದಲ್ಲಿ ಇಂತಹ ಸಾರ್ವಜನಿಕ ಚರ್ಚೆಗಳು ಇದೇ ಮೊದಲೇನಲ್ಲ. ವಿವಿಯನ್ ರಿಚರ್ಡ್ಸ್ ಜೊತೆಗಿನ ಸಂಬಂಧ, ಮಸಾಬಾಳನ್ನು ಏಕಾಂಗಿ ತಾಯಿಯಾಗಿ ಬೆಳೆಸಿದ ನಿರ್ಧಾರ ಹೀಗೆ ಹಲವು ಬಾರಿ ಈ ನಟಿ ಟೀಕೆ ಎದುರಿಸಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆಗೂ ನೀನಾ ಗುಪ್ತಾಗೂ ಏನು ಸಂಬಂಧ? ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sz19e7b21yjvtbvnq9v6zf,imgname-neena-gupta-rashmika-vijay-1789725287877.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Neena Gupta personal life Gossips- ನೀನಾ ಗುಪ್ತ ವೈಯಕ್ತಿಕ ಜೀವನದ ಸುದ್ದಿ!&lt;/strong&gt;&lt;/p&gt;&lt;p&gt;ಬಾಲಿವುಡ್&zwnj;ನ ಹಿರಿಯ ಹಾಗೂ ಪ್ರತಿಭಾವಂತ ನಟಿ ನೀನಾ ಗುಪ್ತಾ (Neena Gupta) ತಮ್ಮ ವೈಯಕ್ತಿಕ ಜೀವನದ ಕುರಿತು ವರ್ಷಗಳಿಂದ ಎದುರಿಸುತ್ತಿರುವ ನಿರಂತರ ಕುತೂಹಲ ಮತ್ತು ಟೀಕೆಗಳ ಬಗ್ಗೆ ಮತ್ತೊಮ್ಮೆ ಮನಬಿಚ್ಚಿ ಮಾತನಾಡಿದ್ದಾರೆ. ಈ ವರ್ಷ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ನೀನಾ ಗುಪ್ತಾ ಕಾಣಿಸಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಗರ್ಭಧಾರಣೆಯ ವದಂತಿಗಳ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ನೀನಾ ಗುಪ್ತಾ ಅವರ ವೈಯಕ್ತಿಕ ಬದುಕು ಆರಂಭದಿಂದಲೂ ಸಾರ್ವಜನಿಕ ಚರ್ಚೆಯ ವಿಷಯವಾಗುತ್ತಲೇ ಬಂದಿದೆ. ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರೊಂದಿಗಿನ ಸಂಬಂಧ ಹಾಗೂ ವಿವಾಹವಾಗದೆ ಮಗಳು ಮಸಾಬಾ ಗುಪ್ತಾಗೆ ಜನ್ಮ ನೀಡಿದ ನಿರ್ಧಾರದ ಬಗ್ಗೆ ಅವರು ಸಾಕಷ್ಟು ಪ್ರಶ್ನೆಗಳನ್ನು ಎದುರಿಸಿದ್ದಾರೆ. ಮಸಾಬಾಳನ್ನು ಅವರು ಏಕಾಂಗಿಯಾಗಿ ಬೆಳೆಸಿದ್ದು, ಆ ಸಂದರ್ಭದಲ್ಲಿ ಸಮಾಜದಿಂದ ಬಂದ ಟೀಕೆ ಮತ್ತು ತೀರ್ಪುಗಳ ಬಗ್ಗೆಯೂ ಹಲವು ಬಾರಿ ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;p&gt;ಇಷ್ಟೇ ಅಲ್ಲದೆ, ತಮ್ಮ ಉಡುಗೆ-ತೊಡುಗೆಗಳ ವಿಚಾರದಲ್ಲಿಯೂ ನೀನಾ ಗುಪ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ವಯಸ್ಸಿಗೆ ತಕ್ಕಂತೆ ಉಡುಪು ಧರಿಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ತಮ್ಮ ಇಷ್ಟದಂತೆ ಬದುಕುವ ಹಕ್ಕು ತಮಗಿದೆ ಎಂಬ ನಿಲುವನ್ನು ಅವರು ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಸಂದರ್ಶನವೊಂದರಲ್ಲಿ ತಮ್ಮ ಜೀವನದುದ್ದಕ್ಕೂ ಎದುರಿಸಿದ ವೈಯಕ್ತಿಕ ಪ್ರಶ್ನೆಗಳನ್ನು ನೆನಪಿಸಿಕೊಂಡ ನೀನಾ ಗುಪ್ತಾ, ಮದುವೆಯ ಬಗ್ಗೆ ಜನರು ಪದೇಪದೇ ಕೇಳುತ್ತಿದ್ದುದನ್ನು ವಿವರಿಸಿದ್ದಾರೆ. &ldquo;ನಾನು ಯಾವಾಗ ಮದುವೆಯಾಗುತ್ತೇನೆ ಎಂದು ಜನರು ಕೇಳುತ್ತಿದ್ದರು. ನಾನು, &lsquo;ನಾನು ನಿಮ್ಮ ತಂದೆಯ ದುಡ್ಡಿನಲ್ಲಿ ಬದುಕುತ್ತಿಲ್ಲ, ನನ್ನ ತಂದೆಯ ದುಡ್ಡಿನಲ್ಲಿ ಬದುಕುತ್ತಿದ್ದೇನೆ, ಹಾಗಿದ್ದರೆ ನಿಮಗೆ ಸಮಸ್ಯೆ ಏನು?&rsquo; ಎಂದು ಹೇಳುತ್ತಿದ್ದೆ,&rdquo; ಎಂದು ಅವರು ಹೇಳಿದ್ದಾರೆ. ನೆರೆಹೊರೆಯವರಿಂದಲೂ ಟೀಕೆ ಎದುರಿಸಬೇಕಾಗಿತ್ತು ಎಂದು ನಟಿ ತಿಳಿಸಿದ್ದಾರೆ. ಒಮ್ಮೆ ತಮ್ಮ ವಿರುದ್ಧ ದೂರು ನೀಡಿದ್ದ ವ್ಯಕ್ತಿ ಯಾರೆಂದು ತಿಳಿದುಬಂದ ಬಳಿಕ, ಅವರೊಂದಿಗೆ ತಾನು ಮೊದಲಿನಂತೆ ಮಾತನಾಡುವುದಿಲ್ಲ ಎಂದೂ ಹೇಳಿದ್ದಾರೆ.&lt;/p&gt;&lt;h2&gt;ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ವಿವಾಹ- ಆರತಕ್ಷತೆ ಕಾರ್ಯಕ್ರಮದ ಬಳಿಕ ಈ ವದಂತಿ!&lt;/h2&gt;&lt;p&gt;ಈ ವರ್ಷದ ಆರಂಭದಲ್ಲಿ ಹೈದರಾಬಾದ್&zwnj;ನಲ್ಲಿ ನಡೆದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ನೀನಾ ಗುಪ್ತಾ ಭಾಗವಹಿಸಿದ್ದರು. ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದವು.&lt;/p&gt;&lt;p&gt;ಆ ಚಿತ್ರಗಳಲ್ಲಿ ನೀನಾ ಗುಪ್ತಾ ಅವರ ಹೊಟ್ಟೆಯ ಭಾಗದಲ್ಲಿ ಸ್ವಲ್ಪ ಉಬ್ಬಿದಂತೆ ಕಾಣಿಸಿಕೊಂಡಿದ್ದು, ಕೆಲವರು ಅದನ್ನು ಗಮನಿಸಿ ಅವರು ಗರ್ಭಿಣಿಯಾಗಿರಬಹುದು ಎಂದು ಊಹಿಸಲು ಆರಂಭಿಸಿದರು. ಯಾವುದೇ ದೃಢವಾದ ಮಾಹಿತಿಯಿಲ್ಲದೆ ಈ ರೀತಿಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದವು.&lt;/p&gt;&lt;p&gt;ಇದೀಗ ಆ ವಿಚಿತ್ರ ವದಂತಿಗೆ ಕಾರಣವೇನು ಎಂಬುದನ್ನು ಸ್ವತಃ ನೀನಾ ಗುಪ್ತಾ ವಿವರಿಸಿದ್ದಾರೆ. ಕಾರ್ಯಕ್ರಮಕ್ಕೆ ತಾವು ಧರಿಸಿದ್ದ ಸೀರೆ ದಪ್ಪ ಬಟ್ಟೆಯಿಂದ ತಯಾರಾಗಿತ್ತು ಎಂದು ಅವರು ಹೇಳಿದ್ದಾರೆ. ಸೀರೆಯ ಒಂದು ನೆರಿಗೆ ಹೊಟ್ಟೆಯ ಮೇಲೆ ಬಿದ್ದ ರೀತಿಯಿಂದಾಗಿ ಅಲ್ಲಿ ಉಬ್ಬಿದಂತೆ ಕಾಣಿಸಿತ್ತು. ಇದೇ ದೃಶ್ಯ ಜನರಲ್ಲಿ ಗರ್ಭಧಾರಣೆಯ ಕುರಿತಾದ ಊಹಾಪೋಹಕ್ಕೆ ಕಾರಣವಾಯಿತು ಎಂದು ನಟಿ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h3&gt;ನನ್ನ 60ರ ವಯಸ್ಸಿನಲ್ಲಿ ಗರ್ಭಿಣಿಯಾದೆ&lt;/h3&gt;&lt;p&gt;ಈ ವಿಚಾರದ ಬಗ್ಗೆ ಮಾತನಾಡುವಾಗ ನೀನಾ ಗುಪ್ತಾ ಹಾಸ್ಯಮಯವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಜನರು ತಮ್ಮನ್ನು 60ರ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾರೆ ಎಂದು ಹೇಳಲು ಆರಂಭಿಸಿದ್ದನ್ನು ಕೇಳಿ ತಮಗೆ ಆಶ್ಚರ್ಯವಾಯಿತು ಎಂದಿದ್ದಾರೆ. ಕೊನೆಗೆ ಯಾರಾದರೂ ಈ ಬಗ್ಗೆ ಪ್ರಶ್ನಿಸಿದಾಗ, ತಾವು ಕೂಡ ಹಾಸ್ಯವಾಗಿ &ldquo;ಹೌದು, ನಾನು ಗರ್ಭಿಣಿ&rdquo; ಎಂದು ಹೇಳಲು ಆರಂಭಿಸಿದ್ದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಅಷ್ಟೇ ಅಲ್ಲದೆ, 70ರ ಹರೆಯದ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿಯನ್ನು ತಾವು ಕೇಳಿರುವುದಾಗಿ ಹೇಳಿದ ನೀನಾ ಗುಪ್ತಾ, &ldquo;ಹಾಗಾದರೆ ನನಗೂ ಇನ್ನೂ ಅವಕಾಶವಿದೆ&rdquo; ಎಂಬರ್ಥದಲ್ಲಿ ತಮಾಷೆ ಮಾಡಿದ್ದಾರೆ. ಈ ಮಾತಿನೊಂದಿಗೆ ಅವರು ನಕ್ಕಿರುವುದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಆದರೆ ನಿರಂತರವಾಗಿ ಇದೇ ಪ್ರಶ್ನೆಗಳನ್ನು ಕೇಳುತ್ತಿದ್ದದ್ದು ತಮಗೆ ಕಿರಿಕಿರಿ ಉಂಟುಮಾಡಿತ್ತು ಎಂಬುದನ್ನೂ ನಟಿ ಸ್ಪಷ್ಟಪಡಿಸಿದ್ದಾರೆ. &ldquo;ಇದರಿಂದ ನನಗೆ ಬೇಸರವಾಗಿತ್ತು&rdquo; ಎಂದು ನೀನಾ ಗುಪ್ತಾ ಹೇಳಿದ್ದಾರೆ.&lt;/p&gt;&lt;p&gt;ನೀನಾ ಗುಪ್ತಾ ಅವರ ಜೀವನದಲ್ಲಿ ಇಂತಹ ಸಾರ್ವಜನಿಕ ಚರ್ಚೆಗಳು ಇದೇ ಮೊದಲೇನಲ್ಲ. ಸಮಾಜದ ಸಾಂಪ್ರದಾಯಿಕ ನಿರೀಕ್ಷೆಗಳಿಗೆ ಭಿನ್ನವಾಗಿ ತಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡ ಸಂದರ್ಭಗಳಲ್ಲಿ ಅವರು ಸಾರ್ವಜನಿಕ ಟೀಕೆಯನ್ನು ಎದುರಿಸಿದ್ದಾರೆ. ವಿವಿಯನ್ ರಿಚರ್ಡ್ಸ್ ಅವರೊಂದಿಗಿನ ಸಂಬಂಧ, ಮಸಾಬಾಳನ್ನು ಏಕಾಂಗಿ ತಾಯಿಯಾಗಿ ಬೆಳೆಸಿದ ನಿರ್ಧಾರ ಹಾಗೂ ತಮ್ಮ ಫ್ಯಾಷನ್ ಆಯ್ಕೆಗಳ ಕುರಿತು ಬಂದ ಟೀಕೆಗಳ ಬಗ್ಗೆ ಅವರು ಹಲವು ಬಾರಿ ಮಾತನಾಡಿದ್ದಾರೆ.&lt;/p&gt;&lt;p&gt;ತಮ್ಮ ವೈಯಕ್ತಿಕ ಜೀವನದ ಬಗ್ಗೆ ಜನರು ನಿರಂತರವಾಗಿ ಕುತೂಹಲ ತೋರಿಸುವುದನ್ನು ನೀನಾ ಗುಪ್ತಾ ಹಲವು ಸಂದರ್ಭಗಳಲ್ಲಿ ನೇರವಾಗಿ ಎದುರಿಸಿದ್ದಾರೆ. ಈ ಬಾರಿಯೂ ಗರ್ಭಧಾರಣೆಯ ವದಂತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಬದಲು ಹಾಸ್ಯದ ಮೂಲಕವೇ ಪ್ರತಿಕ್ರಿಯಿಸಿರುವುದು ಅವರ ವಿಶಿಷ್ಟ ಶೈಲಿಗೆ ಮತ್ತೊಂದು ಉದಾಹರಣೆಯಾಗಿದೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/neena-gupta-talks-about-criticism-over-the-years-regarding-her-personal-life-as-well-as-the-pregnancy-rumours/articleshow-ae3mplp"/>
        </item>
        <item>
            <title><![CDATA[DMart Offers: ಡಿ-ಮಾರ್ಟ್‌ನಲ್ಲಿ ಅತಿ ಕಡಿಮೆ ದರಕ್ಕೆ ಸಿಗುವ 10 ಬೆಸ್ಟ್ ವಸ್ತುಗಳಿವು!]]></title>
            <link>https://kannada.asianetnews.com/gallery/life/10-best-things-to-buy-massive-discounts-in-dmart-groceries-household-items-low-price-sat-xw9l4vo</link>
            <guid isPermaLink="true">https://kannada.asianetnews.com/gallery/life/10-best-things-to-buy-massive-discounts-in-dmart-groceries-household-items-low-price-sat-xw9l4vo</guid>
            <pubDate>Fri, 18 Sep 2026 15:37:28 +0530</pubDate>
            <description><![CDATA[&lt;p&gt;ಮನೆಗೆ ಬೇಕಾಗುವ ದಿನಸಿ ವಸ್ತುಗಳಿಂದ ಹಿಡಿದು ಅಲಂಕಾರಿಕ ಸಾಮಗ್ರಿಗಳವರೆಗೆ ಎಲ್ಲವನ್ನೂ ಖರೀದಿಸಲು ಹೆಚ್ಚಿನ ಜನರು ಡಿಮಾರ್ಟ್ (DMart) ಮೊರೆ ಹೋಗುತ್ತಾರೆ. ಡಿಮಾರ್ಟ್&zwnj;ನಲ್ಲಿ ಯಾವೆಲ್ಲಾ ವಸ್ತುಗಳು MRPಗಿಂತ ಕಡಿಮೆ ದರಕ್ಕೆ ಲಭ್ಯವಿವೆ, ಯಾವುದರಿಂದ ಹಣ ಉಳಿತಾಯ ಮಾಡಬಹುದೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky21dythmc2p07m5gzxw2pmj,imgname-dmart-1784627526480.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆಗೆ ಬೇಕಾಗುವ ದಿನಸಿ ವಸ್ತುಗಳಿಂದ ಹಿಡಿದು ಅಲಂಕಾರಿಕ ಸಾಮಗ್ರಿಗಳವರೆಗೆ ಎಲ್ಲವನ್ನೂ ಖರೀದಿಸಲು ಹೆಚ್ಚಿನ ಜನರು ಡಿಮಾರ್ಟ್ (DMart) ಮೊರೆ ಹೋಗುತ್ತಾರೆ. ಡಿಮಾರ್ಟ್&zwnj;ನಲ್ಲಿ ಯಾವೆಲ್ಲಾ ವಸ್ತುಗಳು MRPಗಿಂತ ಕಡಿಮೆ ದರಕ್ಕೆ ಲಭ್ಯವಿವೆ, ಯಾವುದರಿಂದ ಹಣ ಉಳಿತಾಯ ಮಾಡಬಹುದೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;1. ದಿನಸಿ ವಸ್ತುಗಳ ಮೇಲೆ ಭರ್ಜರಿ ಉಳಿತಾಯ:&lt;/strong&gt;&lt;/p&gt;&lt;p&gt;ನಾವು ನಿತ್ಯ ಬಳಸುವ ಗೋಧಿ ಹಿಟ್ಟು, ಬೇಳೆಕಾಳುಗಳು ಮತ್ತು ಅಕ್ಕಿ ಮೇಲೆ ಸಾಕಷ್ಟು ಹಣ ಉಳಿಸಬಹುದು.&lt;/p&gt;&lt;p&gt;&lt;strong&gt;ಆಶೀರ್ವಾದ್ ಗೋಧಿ ಹಿಟ್ಟು (10 ಕೆಜಿ): &lt;/strong&gt;ಇದರ ಎಂಆರ್&zwnj;ಪಿ ₹612 ಇದ್ದರೆ, ಡಿಮಾರ್ಟ್&zwnj;ನಲ್ಲಿ ₹545ಕ್ಕೆ ಸಿಗಲಿದೆ. ಇದರಿಂದ ನೇರವಾಗಿ ₹67 ಉಳಿಯುತ್ತದೆ.&lt;/p&gt;&lt;p&gt;&lt;strong&gt;ಬೇಳೆಕಾಳುಗಳು (1 ಕೆಜಿ - DMart Premia): &lt;/strong&gt;ಇದರ ಎಂಆರ್&zwnj;ಪಿ ₹197 ಇದ್ದು, ಡಿಮಾರ್ಟ್&zwnj;ನಲ್ಲಿ ಕೇವಲ ₹155ಕ್ಕೆ ಲಭ್ಯವಿದೆ. ಅಂದರೆ ₹42 ಉಳಿತಾಯವಾಗುತ್ತದೆ.&lt;/p&gt;&lt;p&gt;ಹೀಗೆ ಸಣ್ಣಪುಟ್ಟ ವಸ್ತುಗಳ ಮೇಲೂ ಸಿಗುವ ಡಿಸ್ಕೌಂಟ್ ನಿಮ್ಮ ತಿಂಗಳ ಬಜೆಟ್&zwnj;ನಲ್ಲಿ ದೊಡ್ಡ ಮೊತ್ತವನ್ನು ಉಳಿಸುತ್ತದೆ.&lt;/p&gt;&lt;img&gt;&lt;p&gt;ಮನೆಗೆ ಸದಾ ಬೇಕಾಗುವ ಡಿಟರ್ಜೆಂಟ್ ಪೌಡರ್ ಹಾಗೂ ಲಿಕ್ವಿಡ್&zwnj;ಗಳನ್ನು ಡಿಮಾರ್ಟ್&zwnj;ನಲ್ಲಿ ದೊಡ್ಡ ಪ್ಯಾಕ್&zwnj;ಗಳಲ್ಲಿ ಖರೀದಿಸುವುದು ಲಾಭದಾಯಕ.&lt;/p&gt;&lt;p&gt;&lt;strong&gt;ರಿನ್ ವಾಷಿಂಗ್ ಪೌಡರ್ (7 ಕೆಜಿ): &lt;/strong&gt;ಎಂಆರ್&zwnj;ಪಿ ₹760 ಇದ್ದು, ಡಿಮಾರ್ಟ್&zwnj;ನಲ್ಲಿ ₹570ಕ್ಕೆ ಸಿಗುತ್ತದೆ (ಉಳಿತಾಯ ₹190).&lt;/p&gt;&lt;p&gt;&lt;strong&gt;ಸರ್ಫ್ ಎಕ್ಸೆಲ್ ಮ್ಯಾಟಿಕ್ లిಕ್ವಿಡ್ (4 ಕೆಜಿ):&lt;/strong&gt; ಎಂಆರ್&zwnj;ಪಿ ₹770 ಇದ್ದರೆ, ಡಿಮಾರ್ಟ್ ಬೆಲೆ ₹515 (ಉಳಿತಾಯ ₹255).&lt;/p&gt;&lt;p&gt;ನಿಮ್ಮ ವಾಷಿಂಗ್ ಮೆಷಿನ್&zwnj;ಗೆ ತಕ್ಕಂತೆ (Top load ಅಥವಾ Front load) ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.&lt;/p&gt;&lt;img&gt;&lt;p&gt;&lt;strong&gt;ಪ್ಯಾರಾಚೂಟ್ ಕೊಬ್ಬರಿ ಎಣ್ಣೆ (1 ಲೀಟರ್): &lt;/strong&gt;ಎಂಆರ್&zwnj;ಪಿ ₹575, ಡಿಮಾರ್ಟ್ ಬೆಲೆ ₹455 (ಉಳಿತಾಯ ₹120).&lt;/p&gt;&lt;p&gt;&lt;strong&gt;ಕೋಲ್ಗೇಟ್ ಮ್ಯಾಕ್ಸ್&zwnj;ಫ್ರೆಶ್ (300 ಗ್ರಾಂ):&lt;/strong&gt; ಎಂಆರ್&zwnj;ಪಿ ₹280, ಡಿಮಾರ್ಟ್ ಬೆಲೆ ₹181 (ಉಳಿತಾಯ ₹99).&lt;/p&gt;&lt;p&gt;&lt;strong&gt;ನೆಸ್ಕಾಫೆ ಕ್ಲಾಸಿಕ್ (45 ಗ್ರಾಂ): &lt;/strong&gt;ಎಂಆರ್&zwnj;ಪಿ ₹230, ಡಿಮಾರ್ಟ್ ಬೆಲೆ ₹179 (ಉಳಿತಾಯ ₹51).&lt;/p&gt;&lt;p&gt;(ಗಮನಿಸಿ: ಬ್ರಾಂಡ್ ಮತ್ತು ಪ್ಯಾಕಿಂಗ್ ನೋಡಿ ಖರೀದಿಸುವುದು ಒಳ್ಳೆಯದು)&lt;/p&gt;&lt;img&gt;&lt;p&gt;ಕೇವಲ ದಿನಸಿ ಮಾತ್ರವಲ್ಲದೆ, ಹೋಮ್ ಟೆಕ್ಸ್&zwnj;ಟೈಲ್ಸ್ ಸೆಕ್ಷನ್&zwnj;ನಲ್ಲಿ ಬೆಡ್&zwnj;ಶೀಟ್&zwnj;ಗಳು ಅತಿ ಕಡಿಮೆ ಬೆಲೆಗೆ ಸಿಗುತ್ತವೆ.&lt;/p&gt;&lt;p&gt;&lt;strong&gt;ಡಬಲ್ ಬೆಡ್&zwnj;ಶೀಟ್: &lt;/strong&gt;ಎಂಆರ್&zwnj;ಪಿ ₹2,399 ಇದ್ದು, ಡಿಮಾರ್ಟ್&zwnj;ನಲ್ಲಿ ₹849ಕ್ಕೆ ಲಭ್ಯವಿದೆ (ಭರ್ಜರಿ ಉಳಿತಾಯ ₹1,550).&lt;/p&gt;&lt;p&gt;&lt;strong&gt;ಬಾತ್ ಟವಲ್: &lt;/strong&gt;ಎಂಆರ್&zwnj;ಪಿ ₹299 ಇದ್ದು, ಡಿಮಾರ್ಟ್&zwnj;ನಲ್ಲಿ ಕೇವಲ ₹99ಕ್ಕೆ ಸಿಗುತ್ತದೆ (ಉಳಿತಾಯ ₹200).&lt;/p&gt;&lt;p&gt;ಖರೀದಿಸುವಾಗ ಕ್ಲಾತ್ ಕ್ವಾಲಿಟಿ, ಕಾಟನ್ ಶೇಕಡಾವಾರು ಗಮನಿಸುವುದು ಉತ್ತಮ.&lt;/p&gt;&lt;img&gt;&lt;p&gt;ಅಡುಗೆಮನೆಗೆ ಬೇಕಾಗುವ ಡಬ್ಬಾಗಳು ಹಾಗೂ ಕಂಟೇನರ್ ಸೆಟ್&zwnj;ಗಳ ಮೇಲೆ ಡಿಮಾರ್ಟ್&zwnj;ನಲ್ಲಿ ಭಾರಿ ರಿಯಾಯಿತಿ ಇರುತ್ತದೆ.&lt;/p&gt;&lt;p&gt;18 ಡಬ್ಬಾಗಳ ಸ್ಟೀಲೋ ಸೈಟಿಎರ್ ಸೆಟ್ ಎಂಆರ್&zwnj;ಪಿ ₹1,701 ಇದ್ದು, ಡಿಮಾರ್ಟ್&zwnj;ನಲ್ಲಿ ಕೇವಲ ₹549ಕ್ಕೆ ಲಭ್ಯವಿದೆ. ಇದರಿಂದ ಸುಮಾರು ₹1,152 ಉಳಿತಾಯವಾಗುತ್ತದೆ. ಆದರೆ ಮನೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಮಾತ್ರ ಖರೀದಿಸುವುದು ಬುದ್ಧಿವಂತಿಕೆ.&lt;/p&gt;&lt;img&gt;&lt;p&gt;ಎಲ್ಲಾ ವಸ್ತುಗಳು ಹೊರಗಿನ ಅಂಗಡಿಗಳಿಗಿಂತ ಅಂಚು ಕಡಿಮೆ ಇರುತ್ತವೆ ಎಂದು ಹೇಳಲಾಗದು. ಬೆಲೆಗಳು ನಗರ ಮತ್ತು ಪಿನ್&zwnj;ಕೋಡ್&zwnj;ಗೆ ತಕ್ಕಂತೆ ಬದಲಾಗಬಹುದು. ಖರೀದಿಸುವ ಮುನ್ನ ಎಂಆರ್&zwnj;ಪಿ, ಮಾರಾಟದ ಬೆಲೆ, ಪ್ಯಾಕೆಟ್ ತೂಕ ಮತ್ತು ನಿಜವಾಗಿಯೂ ಆ ವಸ್ತು ಮನೆಗೆ ಅಗತ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.&lt;/p&gt;&lt;p&gt;(&lt;strong&gt;ಗಮನಿಸಿ&lt;/strong&gt;: ಮೇಲೆ ನೀಡಲಾದ ಬೆರಳೆಣಿಕೆಯ ಉದಾಹರಣೆಗಳು ಡಿಮಾರ್ಟ್ ಆ್ಯಪ್ ಆಧಾರಿತವಾಗಿದ್ದು, ಪ್ರದೇಶಕ್ಕೆ ತಕ್ಕಂತೆ ಬದಲಾಗಬಹುದು).&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/life/10-best-things-to-buy-massive-discounts-in-dmart-groceries-household-items-low-price-sat-xw9l4vo"/>
        </item>
        <item>
            <title><![CDATA[Birthday's Special: ಕನ್ನಡದ 3 ದಿಗ್ಗಜರ ಜನ್ಮದಿನ- ವಿಷ್ಣುವರ್ಧನ್-ಉಪೇಂದ್ರ-ಶ್ರುತಿ..  ಈ ತ್ರಿಮೂರ್ತಿಗಳ ಹುಟ್ಟುಹಬ್ಬದಂದು ಇವೆಲ್ಲಾ ವಿಶೇಷತೆಗಳಿವೆ ನೋಡಿ!]]></title>
            <link>https://kannada.asianetnews.com/sandalwood/dr-vishnuvardhan-actor-upendra-and-actress-shruti-birthday-celebration-on-18th-september-going-on/articleshow-wpix7ru</link>
            <guid isPermaLink="true">https://kannada.asianetnews.com/sandalwood/dr-vishnuvardhan-actor-upendra-and-actress-shruti-birthday-celebration-on-18th-september-going-on/articleshow-wpix7ru</guid>
            <pubDate>Fri, 18 Sep 2026 14:36:15 +0530</pubDate>
            <description><![CDATA[&lt;p&gt;ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ವಿಶೇಷವಾದ ವಿಡಿಯೋ ಸರಣಿಯನ್ನು ಅನಾವರಣ ಮಾಡಿದೆ. 'ನಾ ಕಂಡ ವಿಷ್ಣು' ಶೀರ್ಷಿಕೆಯಡಿಯಲ್ಲಿ ನಟ ವಿಷ್ಣುವರ್ಧನ್ ಕುಟುಂಬ, ಆಪ್ತರು ಹಾಗೂ ಅವರ ಜೊತೆಯಲ್ಲಿ ನಟಿಸಿರುವ ಕಲಾವಿದರು ಮಾತನಾಡಿರು ವಿಡಿಯೋ ಇದಾಗಿದೆ. ಇದನ್ನು ಬೆಂಗಳೂರು ಬಜ್ (Bengaluru Buzz)' ಯೂಟ್ಯೂಬ್ ಲಿಂಕ್ ಮೂಲಕ ನೋಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sveb0ttfx0b9ftvd10vj2c,imgname-vishnuvardhan-upendra-shruti-1789721521178.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದನವನದಲ್ಲಿ ಸಿನಿಸಂಭ್ರಮದ ತ್ರಿವೇಣಿ ಸಂಗಮ: ವಿಷ್ಣುದಾದಾ ಅಮೃತ ಮಹೋತ್ಸವ, ಉಪ್ಪಿ-ಶ್ರುತಿ ಬರ್ತ್&zwnj;ಡೇ ಧಮಾಕಾ! Dr Vishnuvardhan 75th Birthday- Upendra Birtgday- Shruti Birthday&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ಇತಿಹಾಸದಲ್ಲೇ ಸೆಪ್ಟೆಂಬರ್ ತಿಂಗಳು ಎಂದರೆ ಕೇವಲ ದಿನಾಂಕವಲ್ಲ, ಅದೊಂದು ಬೃಹತ್ ಸಿನಿಸಂಭ್ರಮ! ಏಕೆಂದರೆ, ಈ ದಿನ ಕನ್ನಡ ಚಿತ್ರರಂಗವನ್ನು ಆಳಿದ, ಆಳುತ್ತಿರುವ ದಿಗ್ಗಜರ ಜನ್ಮದಿನದ ತ್ರಿವೇಣಿ ಸಂಗಮ. ಸಾಹಸಸಿಂಹ ಡಾ. ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಅವರ ಹುಟ್ಟುಹಬ್ಬದ ಸಂಭ್ರಮ ಒಂದೇ ದಿನ. ಅವರೆಲ್ಲರ ಅಭಿಮಾನಿಗಳು ಗಲ್ಲಿಗಲ್ಲಿಯಿಂದ ಗಾಂಧಿನಗರದವರೆಗೆ ತಮ್ಮ ಮೆಚ್ಚಿನ ಕಲಾವಿದರ ಪ್ರೀತಿ-ಅಭಿಮಾನಗಳಿಗೆ ಹಬ್ಬದ ವಾತಾವರಣ ಸೃಷ್ಟಿಮಾಡಿದ್ದಾರೆ. ಈ ವರ್ಷ ಪ್ರತಿಯೊಬ್ಬರ ಆಚರಣೆಯಲ್ಲೂ ಸಾಕಷ್ಟು ವಿಶೇಷತೆಗಳಿವೆ! ಅದೇನು ನೋಡಿ..&lt;/p&gt;&lt;p&gt;ಈ ವಿಶೇ&zwj;ಷ ಸಂದರ್ಭದಲ್ಲಿ ಅವರ ಹುಟ್ಟೂರಾದ ಮೈಸೂರಿನಲ್ಲಿ, ನಟಿ ಹಾಗೂ ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ನಟ ಹಾಗೂ ವಿಷ್ಣು ಅಳಿಯ ಅನಿರುದ್ಧ ಸೇರಿದಂತೆ ಇಡೀ ಕುಟುಂಬ ಹಾಗೂ ಅಭಿಮಾನಿಗಳು ಇಂದು ಹತ್ತುಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.&lt;/p&gt;&lt;h2&gt;ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ&lt;/h2&gt;&lt;p&gt;ಮುಖ್ಯವಾಗಿ, ಇಂದು ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಗಳು ಇಂದು ಮೈಸೂರಿನಲ್ಲಿ ಸೇರಿದ್ದು, ಅನ್ನದಾನ, ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಮೈಸೂರನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಮಾಡಲಿದ್ದಾರೆ.&lt;/p&gt;&lt;p&gt;ಜೊತೆಗೆ, ಬೆಂಗಳೂರಿನಲ್ಲೂ ಅಭಿಮಾನಿಗಳು ನಟ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅನೇಕ ಕಡೆಗಳಲ್ಲಿ ಆಚರಿಸುತ್ತಿದ್ದಾರೆ. ಒಟ್ಟಿನಲ್ಲಿ, ಇಂದು ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ.&lt;/p&gt;&lt;h3&gt;ವಿಷ್ಣುದಾದಾ ಅಮೃತ ಮಹೋತ್ಸವ: 18 ಗಂಟೆಗಳ ಬೃಹತ್ ಮಹಾಸಂಭ್ರಮ&lt;/h3&gt;&lt;p&gt;ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ (ಅಮೃತ ಮಹೋತ್ಸವ) ಪ್ರಯುಕ್ತ ಅಭಿಮಾನಿಗಳು ಅಭೂತಪೂರ್ವ ಪ್ಲಾನ್ ಮಾಡಿಕೊಂಡಿದ್ದಾರೆ. ವಿಷ್ಣು ಸೇನಾ ಸಮಿತಿಯು ಈ ಬಾರಿಯ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಜ್ಜಾಗಿದ್ದು, ಸೆಪ್ಟೆಂಬರ್-18ರ ಬದಲಾಗಿ ಸೆಪ್ಟೆಂಬರ್-27ರಂದು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ. ಬರೋಬ್ಬರಿ 18 ಗಂಟೆಗಳ ಕಾಲ ಸುದೀರ್ಘವಾಗಿ ನಡೆಯಲಿರುವ ಈ ಮೆಗಾ ಈವೆಂಟ್&zwnj;ನಲ್ಲಿ ಬೃಹತ್ ಧ್ವಜದ ಮೆರವಣಿಗೆ ಹಾಗೂ ಸಾಂಸ್ಕೃತಿಕ ವೈಭವ ಕಣ್ಮನ ಸೆಳೆಯಲಿದೆ. ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಅಭಿಮಾನಿಗಳು ಈ ದಿನ ಜಮಾಯಿಸಿ 'ವಿಷ್ಣುದಾದಾ' ಸ್ಮರಣೆಯಲ್ಲಿ ಮುಳುಗೇಳಲಿದ್ದಾರೆ.&lt;/p&gt;&lt;p&gt;ರಿಯಲ್ ಸ್ಟಾರ್ ಉಪೇಂದ್ರಗೆ 58ನೇ ವಸಂತ: ನೆಕ್ಸ್ಟ್ ಲೆವೆಲ್ ಸರ್ಪ್ರೈಸ್&lt;/p&gt;&lt;p&gt;ಇನ್ನೊಂದೆಡೆ, 'ಬುದ್ಧಿವಂತ' ಖ್ಯಾತಿಯ ರಿಯಲ್ ಸ್ಟಾರ್ ಉಪೇಂದ್ರ ಇಂದು ತಮ್ಮ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಉಪ್ಪಿ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಸದಾ ಹೊಸತನದ ಹಬ್ಬ! ಎಂದಿನಂತೆ ತಮ್ಮ ನಿವಾಸದ ಮುಂದೆ ನೆರೆದಿರುವ ಅಭಿಮಾನಿ ಸಾಗರವನ್ನು ಭೇಟಿಯಾಗಿ, ಪ್ರೀತಿಯ ಶುಭಾಶಯ ಸ್ವೀಕರಿಸುತ್ತಿದ್ದಾರೆ. ಈ ಶುಭ ದಿನದ ಅಂಗವಾಗಿ ಬೆಳಗ್ಗೆ 11:01 ಗಂಟೆಗೆ ಉಪ್ಪಿ ಅವರ ಹೊಸ ಚಿತ್ರದ ಧಮಾಕಾ ಪೋಸ್ಟರ್ ಬಿಡುಗಡೆಯಾಗಿದೆ. ಅರವಿಂದ್ ಕೌಶಿಕ್ ನಿರ್ದೇಶನದ ಹಾಗೂ ತರುಣ್ ಶಿವಪ್ಪ ನಿರ್ಮಾಣದ ಈ 'ನೆಕ್ಸ್ಟ್ ಲೆವೆಲ್' ಸಿನಿಮಾದಲ್ಲಿ ಒಂದು ದೊಡ್ಡ ವಿಶೇಷತೆಯಿದೆ&mdash;ಇಲ್ಲಿ ರಿಯಲ್ ಸ್ಟಾರ್ ಜೊತೆ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ತೆರೆ ಹಂಚಿಕೊಳ್ಳುತ್ತಿದ್ದು, ಚಿಕ್ಕಪ್ಪ-ಮಗನ ಕಾಂಬಿನೇಶನ್ ಸಿನಿಕಲಾಸಕ್ತರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ಈ ಚಿತ್ರಕ್ಕೆ ನಾಯಕಿಯಾಗಿದ್ದು, ಸ್ಯಾಂಡಲ್&zwnj;ವುಡ್&zwnj;ನಲ್ಲಿ ಹೊಸ ಹವಾ ಸೃಷ್ಟಿಸಲು ಸಜ್ಜಾಗಿದೆ.&lt;/p&gt;&lt;p&gt;ನಟಿ ಶ್ರುತಿ 'ಮದರ್' ಸ್ಪೆಷಲ್: ಮೈಸೂರು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ&lt;/p&gt;&lt;p&gt;ಕನ್ನಡದ ಫೇಮಸ್ ಹಿರಿಯ ನಟಿ ಶ್ರುತಿ ಅವರಿಗೂ ಇಂದು ಅತ್ಯಂತ ವಿಶೇಷವಾದ ದಿನ. ಪ್ರತಿವರ್ಷದಂತೆ ಈ ಬಾರಿಯೂ ಅವರ ಮಗಳು ಗೌರಿ ತಮ್ಮ ತಾಯಿಯ ಬರ್ತ್&zwnj;ಡೇಗಾಗಿ ಸ್ಪೆಷಲ್ ಪ್ಲಾನ್ ರೂಪಿಸಿದ್ದಾರೆ. ಈ ವರ್ಷ ಶ್ರುತಿ ಅವರ ಕುಟುಂಬ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡಿದೆ. ಇನ್ನು ಶ್ರುತಿ ಅವರ ವೃತ್ತಿಜೀವನದ 175ನೇ ಚಿತ್ರ ಸೆಟ್ಟೇರಿದ್ದು, 'ಮದರ್' ಎಂಬ ಶೀರ್ಷಿಕೆಯ ಈ ಸಿನಿಮಾವನ್ನು ರಾಕೇಶ್ ಸೋಮಣ್ಣ ನಿರ್ದೇಶಿಸುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ಶುಭ ಸಂದರ್ಭದಲ್ಲೂ ಈ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿತ್ತು.&lt;/p&gt;&lt;p&gt;ಒಟ್ಟಿನಲ್ಲಿ, ಸಾಹಸ ಸಿಂಹನ ಅಮೃತ ಮಹೋತ್ಸವದ ಸ್ಮರಣೆ, ರಿಯಲ್ ಸ್ಟಾರ್&zwnj;ನ ಮಾಸ್ ಸಿನಿಮಾ ಅಪ್&zwnj;ಡೇಟ್ ಹಾಗೂ ಹಿರಿಯ ನಟಿ ಶ್ರುತಿಯ ಮೈಲಿಗಲ್ಲಿನ 'ಮದರ್' ಸಿನಿಮಾ ಆಚರಣೆ ಸೇರಿ ಚಂದನವನದಲ್ಲಿ ಹಬ್ಬದ ಕಳೆ ಕಟ್ಟಿರುವುದಂತೂ ಸತ್ಯ!&lt;/p&gt;&lt;p&gt;ಇನ್ನೂ ಒಂದು ಭಾರೀ ವಿಶೇಷತೆ ನಿಮಗಾಗಿ ಕಾದಿದೆ!&lt;/p&gt;&lt;p&gt;ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಈ ವಿಶೇ&zwj;ಷ ಸಂದರ್ಭದಲ್ಲಿ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ವಿಶೇಷವಾದ ಒಂದು ಸರಣಿಯನ್ನು ಪೋಸ್ಟ್ ಮಾಡುತ್ತಿದೆ. 'ನಾ ಕಂಡ ವಿಷ್ಣು' ಶೀರ್ಷಿಕೆಯಡಿಯಲ್ಲಿ ನಟ ವಿಷ್ಣುವರ್ಧನ್ ಕುಟುಂಬ, ಆಪ್ತರು ಹಾಗೂ ಅವರ ಜೊತೆಯಲ್ಲಿ ನಟಿಸಿರುವ ಕಲಾವಿದರ ಮಾತುಗಳನ್ನು ವಿಡಿಯೋ ರೂಪದಲ್ಲಿ ಅನಾವರಣ ಮಾಡಿದೆ. ಇದನ್ನು 'ಏಷ್ಯಾನೆಟ್ ಸುವರ್ಣ'ದ 'ಬೆಂಗಳೂರು ಬಜ್ (Bengaluru Buzz)' ಯೂಟ್ಯೂಬ್ ಲಿಂಕ್ ಮೂಲಕ ನೋಡಬಹುದು.&lt;/p&gt;&lt;p&gt;Link: ಈ ಲಿಂಕ್ ಕ್ಲಿಕ್ ಮಾಡಿ- https://www.youtube.com/results?search_query=Bengaluru+Buzz&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/dr-vishnuvardhan-actor-upendra-and-actress-shruti-birthday-celebration-on-18th-september-going-on/articleshow-wpix7ru"/>
        </item>
        <item>
            <title><![CDATA[ದಳಪತಿ ವಿಜಯ್​-ತ್ರಿಶಾ ಫಿಲ್ಮ್​ ರೀ-ರಿಲೀಸ್​: ಮಗನ ಸಿನಿಮಾಕ್ಕೇ ಪೈಪೋಟಿ? ಬಾಕ್ಸ್​ ಆಫೀಸ್​ ಕ್ಲ್ಯಾಶ್​?]]></title>
            <link>https://kannada.asianetnews.com/entertainment/cm-vijay-and-trisha-krishnan-film-re-release-competition-for-sons-film-box-office-clash-suc/articleshow-cvwzv3h</link>
            <guid isPermaLink="true">https://kannada.asianetnews.com/entertainment/cm-vijay-and-trisha-krishnan-film-re-release-competition-for-sons-film-box-office-clash-suc/articleshow-cvwzv3h</guid>
            <pubDate>Fri, 18 Sep 2026 13:13:31 +0530</pubDate>
            <description><![CDATA[ದಳಪತಿ ವಿಜಯ್ ಅವರ 'ತಿರುಪಾಚಿ' ಮರು-ಬಿಡುಗಡೆ ಮತ್ತು ಪುತ್ರ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಆದರೆ, ಮುಖ್ಯಮಂತ್ರಿಯಾಗಿರುವ ತಮ್ಮ ತಂದೆಯ ಸಮಯವನ್ನು ಪ್ರಚಾರಕ್ಕಾಗಿ ವ್ಯರ್ಥ ಮಾಡಲು ಇಷ್ಟವಿಲ್ಲ ಎಂದು ಜೇಸನ್ ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2sqfv2yx5e3a8zdvmn47mda,imgname-joseph-vijay--trisha-krishnan-and-jason-sanjay-1789717376094.jpg" type="image/jpeg" height="390" width="690"/>
            <content:encoded><![CDATA[&lt;p&gt;ಸದ್ಯ ತಮಿಳುನಾಡಿನ ರಾಜಕೀಯಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿ ದಳಪತಿ ವಿಜಯ್​ ಹಾಗೂ ಅವರ ಪುತ್ರ ಜೇಸನ್ ಸಂಜಯ್ ಸಿನಿಮಾ ಈಗ ಸಕತ್​ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ವಿಜಯ್ ಅವರ ಮಗ ಜೇಸನ್ ಸಂಜಯ್ ತಮ್ಮ ಮುಂಬರುವ ಚಿತ್ರ ಸಿಗ್ಮಾದ ಪ್ರಚಾರ ಕಾರ್ಯದಲ್ಲಿ ಇದ್ದರೆ, ಅತ್ತ ದಳಪತಿ ವಿಜಯ್​ ಮತ್ತು ತ್ರಿಶಾ ಕೃಷ್ಣನ್​ ಅವರ ಬ್ಲಾಕ್​ಬಸ್ಟರ್​ ಸಿನಿಮಾ ತಿರುಪಾಚಿ ರೀ-ರಿಲೀಸ್​ ಆಗಲಿದೆ. ಈ ಹಿನ್ನೆಲೆಯಲ್ಲಿ, ಬಾಕ್ಸ್​ ಆಫೀಸ್​ನಲ್ಲಿ ಅಪ್ಪ-ಮಗಳ ಫಿಲ್ಮ್​ ಕ್ಲ್ಯಾಶ್​ ಆಗತ್ತಾ ಎನ್ನುವ ಗುಮಾನಿ ಶುರುವಾಗಿದೆ. ಇತ್ತ ಪುತ್ರ ಜೇಸನ್​ ಸಂಜಯ್ ನಿರ್ದೇಶನದ ಚೊಚ್ಚಲ ಸಿಗ್ಮಾದ ಪ್ರಚಾರದಲ್ಲಿ ಬಿಜಿಯಾಗಿದ್ದರೂ, ಅಪ್ಪ ವಿಜಯ್ ಅವರು ಈ ಪ್ರಚಾರ ಕಾರ್ಯಕ್ಕೆ ಬಾರದೇ ಇದ್ದುದು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಅಪ್ಪನ ಬಗ್ಗೆ ಮಗನ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ಅಷ್ಟಕ್ಕೂ, ಅಪ್ಪ ತಮ್ಮ ಸಿನಿಮಾದ ಪ್ರಚಾರಕ್ಕೆ ಬಾರದೇ ಇರುವ ಬಗ್ಗೆ ಸ್ಪಷ್ಟನೆ ನೀಡಿರುವ ಜೇಸನ್ ಸಂಜಯ್, ತಮ್ಮ ಅಪ್ಪ ಸಿನಿಮಾ ಬಿಡುಗಡೆಗೆ ಉತ್ಸುಕರಾಗಿದ್ದಾರೆ. ಆದರೆ ಸಿನಿಮಾ ಪ್ರಚಾರದ ಸಮಯದಲ್ಲಿ ಬೇರೆ ಯಾವುದೇ ರೀತಿಯ ಪ್ರಚಾರ ನಾನು ಇಷ್ಟಪಡುವುದಿಲ್ಲ. ಅದು ಕೇವಲ ಚಿತ್ರದ ಪ್ರಚಾರ ಮಾತ್ರ ಆಗಬೇಕು. ಇಂದು ನನ್ನ ಅಪ್ಪ ಮುಖ್ಯಮಂತ್ರಿಯಾಗಿದ್ದು, ಅವರಿಗೆ ತುಂಬಾ ಜವಾಬ್ದಾರಿಗಳು ಇವೆ. ಸಿನಿಮಾ ಪ್ರಚಾರಕ್ಕೆ ಬಂದು ಅವರ ಸಮಯವನ್ನು ವ್ಯರ್ಥ ಮಾಡಿಸುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಅಂದಹಾಗೆ, ವಿಜಯ್ ಅವರ ಮಗ ಜೇಸನ್ ಸಂಜಯ್ ನಿರ್ದೇಶಕನಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ನಟನೆಗೆ ಪದಾರ್ಪಣೆ ಮಾಡುವ ಬದಲು, ಅವರು ಸಿಗ್ಮಾ ಜೊತೆ ನಿರ್ದೇಶಕರಾಗಿ ತಮ್ಮ ಮೊದಲ ಚಲನಚಿತ್ರ ಮಾಡುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಅದರ ಹೆಚ್ಚಿನ ಕಥೆಯನ್ನು ರಹಸ್ಯವಾಗಿಟ್ಟಿದ್ದಾರೆ.&lt;/p&gt;&lt;p&gt;ಜೇಸನ್ ಸಂಜಯ್ ಸಿಗ್ಮಾ ಚಿತ್ರದ ಮೂಲಕ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ, ಇದರಲ್ಲಿ ಸುಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಇದೇ ವೇಳೆ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಭವಿಷ್ಯದ ಯೋಜನೆಗಳಿಗೆ ಈಗಾಗಲೇ ಅವರ ಬಳಿ ಆಲೋಚನೆಗಳಿವೆ ಎಂದು ಅವರು ಬಹಿರಂಗಪಡಿಸಿದರು. &quot;ನನ್ನ ಮನಸ್ಸಿನಲ್ಲಿ ಎರಡು ಅಥವಾ ಮೂರು ಒಳ್ಳೆಯ ಕಥೆಯ ಕಲ್ಪನೆಗಳಿವೆ. ಸಿಗ್ಮಾ ಬಿಡುಗಡೆಯಾದ ನಂತರ ನಾನು ಅವುಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸುತ್ತೇನೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ವಿಜಯ್​-ತ್ರಿಶಾ ಸಿನಿಮಾ ಕುರಿತು&lt;/strong&gt;&lt;/h3&gt;&lt;p&gt;ಇನ್ನು, ದಳಪತಿ ವಿಜಯ್​ ಅವರ ಸಿನಿಮಾ ಕುರಿತು ಹೇಳುವುದಾದರೆ, ವಿಜಯ್ ಅವರೊಂದಿಗೆ ತ್ರಿಶಾ ಜೋಡಿಯಾಗಿ ನಟಿಸಿದ 2005 ರ ಚಿತ್ರ ಇದಾಗಿದೆ. ತಿರುಪಾಚಿ ಚಿತ್ರವು ಅಕ್ಟೋಬರ್ 1-2, 2026 ರ ಸುಮಾರಿಗೆ ಮರು-ಬಿಡುಗಡೆಗೆ ಸಿದ್ಧವಾಗಿದೆ ಎಂದು ವರದಿಯಾಗಿದೆ. ಆದರೆ ದಿನಾಂಕ ಇನ್ನೂ ಫಿಕ್ಸ್​ ಮಾಡಲಿಲ್ಲ. ಇದು ಪೋಸ್ಟ್​ಪೋನ್​ ಆಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಪೆರರಸು ನಿರ್ದೇಶನದ ಮೊದಲ ಚಿತ್ರ ತಿರುಪಾಚಿ ಆಗಿದೆ. ವಿಜಯ್&zwnj; ಅವರು ಈ ಸಿನಿಮಾದಲ್ಲಿ ಶಿವಗಿರಿ ಎಂಬ ರಕ್ಷಣಾತ್ಮಕ ಅಣ್ಣನ ಪಾತ್ರ ನಿರ್ವಹಿಸಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/cm-vijay-and-trisha-krishnan-film-re-release-competition-for-sons-film-box-office-clash-suc/articleshow-cvwzv3h"/>
        </item>
        <item>
            <title><![CDATA[ಪತ್ನಿ ತವರಿಗೆ ಹೋದಳೆಂದು ಕಾಲ್​ಗರ್ಲ್​ ಬುಕ್​  ಮಾಡಿದ ಗಂಡ! ಪರಸ್ಪರ ಮುಖ ನೋಡಿದಾಗ ಆಗಿದ್ದೇ ಬೇರೆ]]></title>
            <link>https://kannada.asianetnews.com/relationship/husband-calls-call-girl-as-his-wife-not-in-home-but-that-woman-was-his-own-wife-suc/articleshow-87u4026</link>
            <guid isPermaLink="true">https://kannada.asianetnews.com/relationship/husband-calls-call-girl-as-his-wife-not-in-home-but-that-woman-was-his-own-wife-suc/articleshow-87u4026</guid>
            <pubDate>Fri, 18 Sep 2026 13:36:19 +0530</pubDate>
            <description><![CDATA[ಭೋಪಾಲ್&zwnj;ನಲ್ಲಿ ಪತ್ನಿ ತವರಿಗೆ ಹೋದಾಗ ಪತಿಯೊಬ್ಬ ಹೋಟೆಲ್&zwnj;ಗೆ ಕಾಲ್ ಗರ್ಲ್ ಬುಕ್ ಮಾಡಿದ್ದನು. ಆದರೆ ಆತನ ಬಳಿ ಬಂದ ಕಾಲ್ ಗರ್ಲ್ ಬೇರಾರೂ ಆಗಿರದೆ ಆತನ ಸ್ವಂತ ಪತ್ನಿಯೇ ಆಗಿದ್ದಳು. ಈ ವಿಚಿತ್ರ ಘಟನೆಯ ಕಥೆ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2srs0vk8xwtd9fxs9sbxmny,imgname-call-girl-story-1789718725491.jpg" type="image/jpeg" height="390" width="690"/>
            <content:encoded><![CDATA[&lt;p&gt;ಭೋಪಾಲ್​: ಆತನ ಪತ್ನಿ ತವರಿಗೆ ಹೋಗುತ್ತೇನೆಂದು ಹೋದಳು. ಒಂಟಿಯಾದ ಪತಿ ಮಹಾಶಯನಿಗೆ ತುಂಬಾ ಬೇಸರವಾಗತೊಡಗಿತು. ಹೇಳಿಕೇಳಿ ಪತ್ನಿ ಮನೆಯಲ್ಲಿ ಇಲ್ಲ. ತವರಿಗೆ ಹೋಗಿದ್ದಾಳೆ ಎಂದರೆ, ಅಷ್ಟು ಬೇಗ ವಾಪಸ್​ ಕೂಡ ಬರಲ್ಲ ಎನ್ನುವುದು ಖಚಿತವಾಗಿತ್ತು. ಏಕೆಂದರೆ ಅವಳು ಹೋಗುವಾಗಲೂ ಒಂದಷ್ಟು ದಿನ ಅಲ್ಲಿಯೇ ಇದ್ದು ಬರುತ್ತೇನೆ ಎಂದು ಹೋಗಿದ್ದಳು. ಆಕೆಯನ್ನು ಖುಷಿಯಿಂದ ಬೀಳ್ಕೊಟ್ಟಿದ್ದ ಈ ಪತಿರಾಯ. ಅದಕ್ಕೆ ಕಾರಣ ಬೇರೆನೇ ಇತ್ತು. ಪತ್ನಿ ಅತ್ತ ಹೋಗುತ್ತಿದ್ದಂತೆಯೇ ಕಾಲ್​ ಗರ್ಲ್​ಗಾಗಿ ಹುಡುಕಾಟ ನಡೆಸಿದ ಈತ. ಆದರೆ ಮುಂದಾಗಿದ್ದು ಮಾತ್ರ ಯಾವ ಸಿನಿಮಾದಲ್ಲಿಯೂ ತೋರಿಸದ ಸ್ಟೋರಿ!&lt;/p&gt;&lt;p&gt;ಇದು ಭೋಪಾಲ್​ನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಈ ಪತಿ ಮಹಾಶಯನ ಹೆಸರನ್ನು ಪ್ರಮೋದ್​ ಎನ್ನಲಾಗಿದ್ದು, ಪತ್ನಿಯ ಹೆಸರನ್ನು ಸೀಕ್ರೇಟ್​ ಆಗಿ ಇಡಲಾಗಿದೆ. ಪತ್ನಿ ಅತ್ತ ತವರಿಗೆ ಹೋಗುತ್ತಿದ್ದಂತೆಯೇ ಕಾಲ್​ ಗರ್ಲ್​ಗಾಗಿ ಸರ್ಚ್​ ಮಾಡಿದ ಪ್ರಮೋದ್​. ಇಂಥವರಿಗಾಗಿಯೇ ಇರುವ ಸೆಂಟರ್​ಗೆ ಕರೆ ಮಾಡಿ, ತನಗೆ ಇಂಥವಳು ಬೇಕೆಂದು ಹೇಳಿದಾಗ, ಒಬ್ಬಳನ್ನು ಅವರು ಕಳುಹಿಸಿಕೊಟ್ಟರು. ಅದಕ್ಕಾಗಿ ಈತ 3 ಸಾವಿರ ರೂಪಾಯಿಗಳನ್ನು ಪಾವತಿ ಮಾಡಿದ. ಇಂತಿಷ್ಟು ಗಂಟೆಗಳ 'ಸೇವೆ'ಗೆ ಫಿಕ್ಸ್​ ಮಾಡಿಕೊಂಡು 3 ಸಾವಿರ ಪೇ ಮಾಡಿದ.&lt;/p&gt;&lt;h2&gt;&lt;strong&gt;ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತಿದ್ದ ಪತಿರಾಯ&lt;/strong&gt;&lt;/h2&gt;&lt;p&gt;ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತಿದ್ದ ಈ ಪತಿರಾಯ. ತವರಿಗೆ ಹೋದ ಪತ್ನಿಯನ್ನು ಮನಸ್ಸಿನಲ್ಲಿಯೇ ಕೊಂಡಾಡಿದ. ಅವಳು ಅಲ್ಲಿಗೆ ಹೋದ ಕಾರಣಕ್ಕೇನೇ ತನಗೆ ಈ ಒಂದು ಛಾನ್ಸ್​ ಸಿಕ್ಕಿತು ಎಂದು ಆಕೆಗೆ ಧನ್ಯವಾದ ಕೂಡ ಸಲ್ಲಿಸಿದ. ಈ ಹಿಂದೆ ಅದೆಷ್ಟು ಸಲ ಹೀಗೆ ಮಾಡಿದ್ನೋ ಗೊತ್ತಿಲ್ಲ. ಆದರೆ ಈ ಸಲ ಆಗಿದ್ದು ಮಾತ್ರ ಯಾರೂ ಊಹಿಸದ ಟ್ವಿಸ್ಟ್​. ತಮ್ಮ ಈ ಭೇಟಿಯಾಗಿ ಒಂದು ಹೋಟೆಲ್​ ಕೂಡ ಬುಕ್​ ಮಾಡಿ, ಅಲ್ಲಿಯೇ ಬರುವಂತೆ ಕಾಲ್​ ಗರ್ಲ್​ಗೆ ವಿಳಾಸ ವಿನಿಮಯವನ್ನೂ ಮಾಡಿದ. ಆ ಸುಂದರಿಯ ಬರುವಿಕೆಗಾಗಿ ಕಾಯುತ್ತಾ ಕುಳಿತ ಪ್ರಮೋದ್​.&lt;/p&gt;&lt;h3&gt;&lt;strong&gt;ಕಾಲ್​ಗರ್ಲ್​ ಎಂಟ್ರಿ ಆದಾಗ...&lt;/strong&gt;&lt;/h3&gt;&lt;p&gt;ನಿರೀಕ್ಷೆಯಂತೆ ಹೇಳಿದ ಟೈಮ್​ಗೆ ಕರೆಕ್ಟಾಗಿ ಅವಳ ಎಂಟ್ರಿ ಆಯಿತು. ಖುಷಿಯಿಂದ ಬಾಗಿಲ ಬಳಿ ಅವಳಿಗಾಗಿ ಸ್ವಾಗತಕ್ಕೆ ಕಾಯುತ್ತಿದ್ದ ಪ್ರಮೋದ್​ ಅವಳನ್ನು ನೋಡಿ ಕಕ್ಕಾಬಿಕ್ಕಿಯಾದ. ಅಲ್ಲಿ ಬಂದ ಕಾಲ್​​ಗರ್ಲ್​ಗೂ ಇವನನ್ನು ನೋಡಿ ತಲೆತಿರುಗಿ ಹೋಯ್ತು. ಏಕೆಂದ್ರೆ, ಅಲ್ಲಿಗೆ ಬಂದಿದ್ದ ಕಾಲ್​ಗರ್ಲ್​ ಬೇರೆ ಮಹಿಳೆಯಲ್ಲ, ಬದಲಿಗೆ ಇವನ ಧರ್ಮಪತ್ನಿಯೇ ಆಗಿದ್ದಳು! ಇಬ್ಬರೂ ಸಿಕ್ಕಿಬಿದ್ದಿದ್ದರು. ಪರಸ್ಪರ ದೂಷಿಸಿಕೊಳ್ಳುವಂತೆ ಇರಲೇ ಇಲ್ಲ. ಇವನೂ ಮಾಡಬಾರದ ಕೆಲಸ ಮಾಡಿದ್ದ, ಅವಳೂ ಅದನ್ನೇ ಮಾಡಿದ್ದಳು. ತವರಿಗೆ ಹೋಗುತ್ತೇನೆ ಎಂದು ಒಂದಿಷ್ಟು ಹಣ ಸಂಪಾದನೆ ಮಾಡಲು ಈ ಹಾದಿ ತುಳಿದಿದ್ದಳು ಪತ್ನಿ! ಈ ಸ್ಟೋರಿ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಆದರೆ ಇದರ ಸತ್ಯಾಸತ್ಯತೆ ಮಾತ್ರ ತಿಳಿದವರೇ ಹೇಳಬೇಕು. ಮುಂದೇನಾಯ್ತು ಎನ್ನುವುದು ಮಾತ್ರ ಸದ್ಯ ಗೊತ್ತಿಲ್ಲ!&lt;/p&gt;&lt;p&gt;ಆದ್ದರಿಂದ ಹಲವರು ಒಂದೇ ಬೇಡಿಕೆ ಇಡುತ್ತಿದ್ದಾರೆ. ಅದೇನಂದರೆ ಕಾಲ್​ ಗರ್ಲ್​ ಕಳುಹಿಸುವಂತೆ ಹೇಳುವಾಗ ಅವರ ಫೋಟೋ ಕಡ್ಡಾಯ ಮಾಡಬೇಕು ಎನ್ನುವುದು ಈ ಎಲ್ಲರ ಬೇಡಿಕೆಯಾಗಿದೆ! ಇಲ್ಲದಿದ್ದರೆ ಹೀಗೆಯೇ ಎಡವಟ್ಟಾಗುತ್ತದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ತಮಾಷೆಯ ಕಮೆಂಟ್ಸ್​ ಬರುತ್ತಿವೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/husband-calls-call-girl-as-his-wife-not-in-home-but-that-woman-was-his-own-wife-suc/articleshow-87u4026"/>
        </item>
        <item>
            <title><![CDATA[ದುಬಾರಿಯಾದ ನಿಂಬೆ ಹಣ್ಣು, ಮನೆಯಲ್ಲೇ ಸಣ್ಣ ಕುಂಡದಲ್ಲಿ ಫ್ರೆಶ್ ಲೆಮನ್ ಬೆಳೆಯುವುದು ಹೇಗೆ?]]></title>
            <link>https://kannada.asianetnews.com/gallery/life/lemons-turn-expensive-how-to-grow-fresh-lemons-at-home-in-a-small-pot-3v7gh19</link>
            <guid isPermaLink="true">https://kannada.asianetnews.com/gallery/life/lemons-turn-expensive-how-to-grow-fresh-lemons-at-home-in-a-small-pot-3v7gh19</guid>
            <pubDate>Fri, 18 Sep 2026 14:11:00 +0530</pubDate>
            <description><![CDATA[&lt;p&gt;ನಿಂಬೆ ಹಣ್ಣಿನ ಬೆಲೆ ಭಾರಿ ಏರಿಕೆಯಾಗುತ್ತಿದೆ. ಹೀಗಾಗಿ ತಾಜಾ ಹಾಗೂ ರಾಸಾಯನಿ ಮುಕ್ತ ನಿಂಬೆ ಹಣ್ಣನ್ನು ಮನೆಯಲ್ಲೇ ಬೆಳೆಯಲು ಸಾಧ್ಯವಿದೆ. ಸಣ್ಣ ಕುಂಡದಲ್ಲಿ , ಹೆಚ್ಚಿನ ಶ್ರಮವಿಲ್ಲದೆ, ಅತೀ ಕಡಿಮೆ ಸಮಯದಲ್ಲಿ ಫ್ರೆಶ್ ಲೆಮೆನ್ ಬೆಳೆಯುವುದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2stdk4pjrjrvx1er9ay3as3,imgname-easy-guide-to-growing-fresh-lemons-1789720448149.png" type="image/jpeg" height="390" width="690"/>
            <content:encoded><![CDATA[&lt;p&gt;ನಿಂಬೆ ಹಣ್ಣಿನ ಬೆಲೆ ಭಾರಿ ಏರಿಕೆಯಾಗುತ್ತಿದೆ. ಹೀಗಾಗಿ ತಾಜಾ ಹಾಗೂ ರಾಸಾಯನಿ ಮುಕ್ತ ನಿಂಬೆ ಹಣ್ಣನ್ನು ಮನೆಯಲ್ಲೇ ಬೆಳೆಯಲು ಸಾಧ್ಯವಿದೆ. ಸಣ್ಣ ಕುಂಡದಲ್ಲಿ , ಹೆಚ್ಚಿನ ಶ್ರಮವಿಲ್ಲದೆ, ಅತೀ ಕಡಿಮೆ ಸಮಯದಲ್ಲಿ ಫ್ರೆಶ್ ಲೆಮೆನ್ ಬೆಳೆಯುವುದು ಹೇಗೆ?&lt;/p&gt;&lt;img&gt;&lt;p&gt;ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಕರ್ನಾಟಕದಲ್ಲಿ ನಿಂಬೆ ಹಣ್ಣಿನ ಬೆಲೆಯೂ ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ನಿಂಬೆ ಹಣ್ಣಿನ ಬೆಲೆ ಸರಿಸುಮಾರು 350 ರೂಪಾಯಿಗೆ ಏರಿಕೆಯಾಗಿದೆ. ಈ ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿನ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. ಹೀಗಾಗಿ ಮನೆಯಲ್ಲೇ ಅತೀ ಸುಲಭವಾಗಿ, ಅತೀ ಕಡಿಮೆ ಸಮಯದಲ್ಲಿ ನಿಂಬೆ ಬೆಳೆಯಲು ಸಾಧ್ಯವಿದೆ.&lt;/p&gt;&lt;img&gt;&lt;p&gt;ಫ್ರೆಶ್ ಲೆಮೆನ್ ಮನೆಯಲ್ಲೇ ಬೆಳೆಯಲು ಸಣ್ಣ ಕುಂಡ ಆಯ್ಕೆ ಮಾಡಬೇಕು. ಕನಿಷ್ಠ 12 ರಿಂದ 18 ಇಂಚು ಅಥವಾ 18 ರಿಂದ 24 ಇಂಚಿನ ಅಗಲ ಹಾಗೂ ಆಳವಿರಬೇಕು. ಪ್ಲಾಸ್ಟಿಕ್ ಕುಂಡಗಳಿಗಿಂತ ಮಣ್ಣಿನ ಕುಂಡ ಹೆಚ್ಚು ಸೂಕ್ತ. ಕಾರಣ ಮಣ್ಣಿನ ಕುಂಡದಲ್ಲಿ ನೀರು ನಿಲ್ಲುವುದಿಲ್ಲ. ನಿಂಬೆ ಗಿಡಕ್ಕೆ ನೀರು ನಿಲ್ಲುವುದು ಉತ್ತಮವಲ್ಲ.&lt;/p&gt;&lt;img&gt;&lt;p&gt;ಉತ್ತಮ ಮಣ್ಣು ಅಂದರೆ ಆಮ್ಲೀಯ ಮಣ್ಣು ಬಳಕೆ ಮಾಡಬೇಕು. ಸಾವಯವ, ನೈಸರ್ಗಿಕ ಗೊಬ್ಬರದ ಮಣ್ಣು ಬಳಸಿ, ನೀರು ಹರಿಯುವಂತ ಮಿಶ್ರೆ ಬಳಸಬೇಕು. ಮಣ್ಣು ಇತರ ಸಾವಯ ವಸ್ತುಗಳಿಂದ ಕೂಡಿದ ಮಣ್ಣಿನ ಮಿಶ್ರಣ ಬಳಸಬೇಕು. ಬಳಿಕ ನಿಂಬೆ ಗಿಡಗಳನ್ನು ಈ ಕುಂಡದಲ್ಲಿ ನಡಬೇಕು. ಉತ್ತಮ ಇಳುವರಿಯ ನಿಂಬೆ ಗಿಡಗಳು ನರ್ಸರಿಯಿಂದ ತಂದು ಅಥವಾ ಮನೆಯಲ್ಲೇ ಬೆಳೆಯಬಹುದು.&lt;/p&gt;&lt;img&gt;&lt;p&gt;ಸೂರ್ಯನ ಬೆಳಕು ನಿಂಬೆ ಗಿಡಕ್ಕೆ ಅತ್ಯಂತ ಅವಶ್ಯಕ. ಕನಿಷ್ಠ 6 ರಿಂದ 8 ಗಂಟೆ ಸೂರ್ಯ ಬೆಳಕಿನಲ್ಲಿರಬೇಕು. ಮನೆಯ ಒಳಗೆ, ಟರೇಸ್ ಮೇಲೆ ಕುಂಡಗಳನ್ನು ಇಟ್ಟರೆ, ಸರಿಯಾಗಿ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಬೇಕು. ಇನ್ನು ಒಂದೇ ಭಾಗಕ್ಕೆ ಬೆಳಕು ಬೀಳದಂತೆ ನೋಡಿಕೊಳ್ಳಲು ಕುಂಡವನ್ನು ಸರಿಯಾಗಿ ತಿರುಗಿಸಬೇಕು.&lt;/p&gt;&lt;img&gt;&lt;p&gt;ಬೇಸಿಗೆಯಲ್ಲಿ ನಿಂಬೆ ಗಿಡಕ್ಕೆ ನೀರಿನ ಅವಶ್ಯಕತೆ ಇದೆ. ಆದರೆ ಮಳೆಗಾಲ, ಚಳಿಗಾಲದಲ್ಲಿ ಹೆಚ್ಚಿನ ನೀರು ಹಾಕುವುದು ಉತ್ತಮವಲ್ಲ. ನಿಂಬೆಯ ರೂಟ್ ನೀರು ಹೇರಿಕೊಳ್ಳುವಷ್ಟು ನೀರು ಹಾಕಬೇಕು. ಗಿಡದ ಬೆಳವಣಿಗೆಯಲ್ಲಿ 2 ರಿಂದ 4 ವಾರಕ್ಕೊಮ್ಮೆ ಗೊಬ್ಬರ ಹಾಕಬೇಕು. ಇದರಿಂದ ಗಿಡ ಉತ್ತಮವಾಗಿ ಬೆಳೆಯುವುದು ಮಾತ್ರವಲ್ಲ, ಇಳುವರಿಗೂ ನೆರವಾಗುತ್ತದೆ. ನಿಂಬೆ ಕೊಂಬೆಗಳು ಸತ್ತು ಹೋದರೆ, ಒಣಗಿದರೆ ಕತ್ತರಿಸಿ, ಎಲೆಗಳು ಚಿಗುರುವಂತೆ ಮಾಡಬೇಕು. ಇದರಿಂದ ನಿಮ್ಮ ಮನೆಯಲ್ಲೇ ಫ್ರೆಶ್ ಲೆಮೆನ್ ಬೆಳೆಯಲು ಸಾಧ್ಯವಿದೆ. ಕೆಲವೇ ತಿಂಗಳಲ್ಲಿ ಇಳುವರಿ ನೀಡಲಿದೆ.&lt;/p&gt;]]></content:encoded>
            <category>life</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/life/lemons-turn-expensive-how-to-grow-fresh-lemons-at-home-in-a-small-pot-3v7gh19"/>
        </item>
        <item>
            <title><![CDATA[ಹಾವುಗಳಿಗೆ ಹೂವಿನ ಕುಂಡ ಅಂದ್ರೆ ಏಕಿಷ್ಟ? ಗಾರ್ಡನ್‌ನಲ್ಲೇ ಮನೆ ಮಾಡುವ 5 ಅಪಾಯಕಾರಿ ಹಾವುಗಳಿವು!]]></title>
            <link>https://kannada.asianetnews.com/life/found-a-snake-around-your-flower-pots-these-5-species-could-be-visiting-suh/articleshow-olub3pe</link>
            <guid isPermaLink="true">https://kannada.asianetnews.com/life/found-a-snake-around-your-flower-pots-these-5-species-could-be-visiting-suh/articleshow-olub3pe</guid>
            <pubDate>Fri, 18 Sep 2026 13:24:01 +0530</pubDate>
            <description><![CDATA[&lt;p&gt;ಮನೆ ಮುಂದೆ ಹೂವಿನ ಗಿಡಗಳು, ಹಸಿರು ಗಿಡಮರಗಳು, ಕುಂಡಿಗಳ ಸಾಲು... ಇಂತಹ ಸುಂದರ ವಾತಾವರಣದ ನಡುವೆ ಏಕಾಏಕಿ ಹಾವು ಕಾಣಿಸಿಕೊಂಡರೆ ಸಹಜವಾಗಿಯೇ ಭಯವಾಗುತ್ತದೆ. ಆದರೆ, ಹೂವಿನ ಕುಂಡಿಗಳ ಬಳಿ ಹಾವುಗಳು ಕಾಣಿಸಿಕೊಳ್ಳುವುದಕ್ಕೆ ಗಿಡಗಳೇ ನೇರ ಕಾರಣವಾಗಬೇಕೆಂದಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sqx4jm5127ywkyw2q95qr5,imgname-found-a-snake-around-your-flower-pots-these-5-species-could-be-visiting-1789717811795.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆ ಮುಂದೆ ಹೂವಿನ ಗಿಡಗಳು, ಹಸಿರು ಗಿಡಮರಗಳು, ಕುಂಡಿಗಳ ಸಾಲು... ಇಂತಹ ಸುಂದರ ವಾತಾವರಣದ ನಡುವೆ ಏಕಾಏಕಿ ಹಾವು ಕಾಣಿಸಿಕೊಂಡರೆ ಸಹಜವಾಗಿಯೇ ಭಯವಾಗುತ್ತದೆ. ಆದರೆ, ಹೂವಿನ ಕುಂಡಿಗಳ ಬಳಿ ಹಾವುಗಳು ಕಾಣಿಸಿಕೊಳ್ಳುವುದಕ್ಕೆ ಗಿಡಗಳೇ ನೇರ ಕಾರಣವಾಗಬೇಕೆಂದಿಲ್ಲ. ಕುಂಡಿಯಲ್ಲಿರುವ ತೇವಾಂಶ, ತಂಪಾದ ಮಣ್ಣು, ನೆರಳು ಮತ್ತು ಅಲ್ಲಿ ಬೆಳೆಯುವ ಸಣ್ಣ ಕೀಟಗಳು ಹಾಗೂ ಸರೀಸೃಪಗಳು ಹಾವುಗಳನ್ನು ಆಕರ್ಷಿಸಬಹುದು. ವಿಶೇಷವಾಗಿ ಸಡಿಲವಾದ ಮಣ್ಣು, ನಿರಂತರ ತೇವಾಂಶ ಮತ್ತು ಸಣ್ಣ ಜೀವಿಗಳಿಗೆ ಸೂಕ್ತ ವಾತಾವರಣವಿರುವ ಹೂವಿನ ಕುಂಡಿಗಳು ಚಿಕ್ಕ ಹಾವುಗಳಿಗೆ ಸಣ್ಣ ಪರಿಸರ ವ್ಯವಸ್ಥೆಯಂತಾಗಬಹುದು. ಹಾಗಾಗಿ ನಿಮ್ಮ ಮನೆಯ ಗಾರ್ಡನ್&zwnj;ನಲ್ಲೂ ಹಾವು ಕಾಣಿಸಿಕೊಂಡರೆ ಗಾಬರಿಯಾಗುವ ಮೊದಲು ಅದು ಯಾವ ಜಾತಿಗೆ ಸೇರಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.&lt;/p&gt;&lt;h2&gt;1. ಬ್ರಾಹ್ಮಿಣಿ ಬ್ಲೈಂಡ್ ಸ್ನೇಕ್&lt;/h2&gt;&lt;p&gt;ಹೂವಿನ ಕುಂಡಿಗಳಲ್ಲಿ ಕಾಣಿಸಿಕೊಳ್ಳುವ ಹಾವುಗಳ ಪೈಕಿ ಬ್ರಾಹ್ಮಿಣಿ ಬ್ಲೈಂಡ್ ಸ್ನೇಕ್ ಪ್ರಮುಖವಾದದ್ದು. ಇದನ್ನು ಕೆಲವೊಮ್ಮೆ &lsquo;ಫ್ಲವರ್&zwnj;ಪಾಟ್ ಸ್ನೇಕ್&rsquo; ಎಂದೂ ಕರೆಯಲಾಗುತ್ತದೆ. ಇದು ತುಂಬಾ ಸಣ್ಣದಾಗಿದ್ದು, ಸಾಮಾನ್ಯವಾಗಿ ಸುಮಾರು 15 ಸೆಂಟಿಮೀಟರ್&zwnj;ಗಿಂತ ಹೆಚ್ಚು ಬೆಳೆಯುವುದಿಲ್ಲ. ಕಪ್ಪು ಅಥವಾ ಹೊಳೆಯುವ ದೇಹವಿರುವುದರಿಂದ ಹಲವರು ಇದನ್ನು ಎರೆಹುಳವೆಂದು ತಪ್ಪಾಗಿ ಭಾವಿಸುತ್ತಾರೆ. ಸಡಿಲವಾದ ತೇವಾಂಶಭರಿತ ಮಣ್ಣಿನಲ್ಲಿ ಬಿಲ ಮಾಡಿಕೊಳ್ಳುವ ಈ ಹಾವು ಇರುವೆ ಮತ್ತು ಗೆದ್ದಲುಗಳ ಮೊಟ್ಟೆ ಹಾಗೂ ಲಾರ್ವಾಗಳನ್ನು ಆಹಾರವಾಗಿ ಸೇವಿಸುತ್ತದೆ. ಮುಖ್ಯವಾಗಿ ಇದು ವಿಷರಹಿತ ಹಾವು.&lt;/p&gt;&lt;h2&gt;2. ಕಾಮನ್ ವುಲ್ಫ್ ಸ್ನೇಕ್&lt;/h2&gt;&lt;p&gt;ಮನೆಗಳ ಗಾರ್ಡನ್&zwnj;ಗಳು ಹಾಗೂ ಹೂವಿನ ಕುಂಡಿಗಳ ಸುತ್ತ ಕಾಣಿಸಿಕೊಳ್ಳುವ ಮತ್ತೊಂದು ಹಾವು ಕಾಮನ್ ವುಲ್ಫ್ ಸ್ನೇಕ್. ಕಂದು ಅಥವಾ ಬೂದು ಬಣ್ಣದ ದೇಹದ ಮೇಲೆ ತಿಳಿ ಬಣ್ಣದ ಪಟ್ಟೆಗಳಿರುವ ಈ ಹಾವನ್ನು ಕೆಲವೊಮ್ಮೆ ಕಾಳಿಂಗ ಸರ್ಪದ ಮರಿಯೆಂದು ತಪ್ಪಾಗಿ ಗುರುತಿಸಲಾಗುತ್ತದೆ. ಇದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮೂಡುತ್ತದೆ. ಆದರೆ ಕಾಮನ್ ವುಲ್ಫ್ ಸ್ನೇಕ್ ವಿಷರಹಿತವಾಗಿದ್ದು, ಹಲ್ಲಿಗಳು, ಗೆಕ್ಕೊಗಳು ಸೇರಿದಂತೆ ಸಣ್ಣ ಸರೀಸೃಪಗಳನ್ನು ಬೇಟೆಯಾಡುತ್ತದೆ. ಹಗಲಿನಲ್ಲಿ ತಂಪಾದ, ನೆರಳಿನ ಸ್ಥಳಗಳಲ್ಲಿ, ವಿಶೇಷವಾಗಿ ಕುಂಡಿಗಳ ಕೆಳಗೆ ಅಥವಾ ದಟ್ಟವಾದ ಗಿಡಗಳ ನಡುವೆ ಅಡಗಿರುತ್ತದೆ.&lt;/p&gt;&lt;h2&gt;3. ಕಾಮನ್ ವೈನ್ ಸ್ನೇಕ್&lt;/h2&gt;&lt;p&gt;ಹಸಿರು ಬಣ್ಣದ ತೆಳ್ಳಗಿನ ದೇಹ ಹಾಗೂ ಚೂಪಾದ ಮೂಗಿನ ಕಾರಣಕ್ಕೆ ವೈನ್ ಸ್ನೇಕ್ ಅನ್ನು ಸುಲಭವಾಗಿ ಗುರುತಿಸಬಹುದು. ಹೆಚ್ಚಾಗಿ ಎತ್ತರಕ್ಕೆ ಬೆಳೆದಿರುವ ಗಿಡಗಳು ಅಥವಾ ಬಳ್ಳಿಗಳ ಮೇಲೆ ಇದು ಕಾಣಿಸಿಕೊಳ್ಳುತ್ತದೆ. ಗಿಡಗಳ ನಡುವೆ ತನ್ನ ಬಣ್ಣವನ್ನು ಮರೆಮಾಚಿಕೊಂಡು ಸಣ್ಣ ಹಲ್ಲಿಗಳು ಹಾಗೂ ಕಪ್ಪೆಗಳನ್ನು ಬೇಟೆಯಾಡುತ್ತದೆ. ಇದು ತಾಂತ್ರಿಕವಾಗಿ ಸ್ವಲ್ಪ ವಿಷ ಹೊಂದಿರುವ ಹಾವಾದರೂ, ಮನುಷ್ಯರಿಗೆ ಸಾಮಾನ್ಯವಾಗಿ ಕಡಿಮೆ ಅಪಾಯಕಾರಿಯಾಗಿದೆ ಎಂದು ವರದಿ ವಿವರಿಸುತ್ತದೆ. ಇದರ ಹಲ್ಲುಗಳು ಬಾಯಿಯ ಹಿಂಭಾಗದಲ್ಲಿರುವುದರಿಂದ ಮನುಷ್ಯನಿಗೆ ಪರಿಣಾಮಕಾರಿ ಕಚ್ಚು ನೀಡುವುದು ಕಷ್ಟ. ಆದರೂ ಯಾವುದೇ ಹಾವನ್ನೂ ಕೈಯಿಂದ ಹಿಡಿಯುವುದು ಸುರಕ್ಷಿತವಲ್ಲ.&lt;/p&gt;&lt;h2&gt;4. ಚೆಕ್ಕರ್ಡ್ ಕೀಲ್&zwnj;ಬ್ಯಾಕ್&lt;/h2&gt;&lt;p&gt;ನಿರಂತರವಾಗಿ ನೀರು ಹಾಕುವ ಹೂವಿನ ಕುಂಡಿಗಳು, ಹತ್ತಿರದ ಚರಂಡಿ ಅಥವಾ ಸಣ್ಣ ನೀರಿನ ಪ್ರದೇಶಗಳಿರುವ ಗಾರ್ಡನ್&zwnj;ಗಳಲ್ಲಿ ಚೆಕ್ಕರ್ಡ್ ಕೀಲ್&zwnj;ಬ್ಯಾಕ್ ಕಾಣಿಸಿಕೊಳ್ಳಬಹುದು. ದೇಹದ ಮೇಲಿನ ಚೆಕರ್&zwnj;ಬೋರ್ಡ್ ರೀತಿಯ ವಿನ್ಯಾಸದಿಂದ ಇದನ್ನು ಗುರುತಿಸಬಹುದು. ತೇವಾಂಶ ಇರುವ ಪ್ರದೇಶಗಳನ್ನು ಇಷ್ಟಪಡುವ ಈ ಹಾವು ಕಪ್ಪೆಗಳು, ಗೊದಮೊಟ್ಟೆಗಳು ಹಾಗೂ ಸಣ್ಣ ಮೀನುಗಳನ್ನು ಆಹಾರವಾಗಿ ಸೇವಿಸುತ್ತದೆ. ಇದು ವಿಷರಹಿತ ಹಾವಾಗಿದ್ದರೂ, ಹೆದರಿದಾಗ ಕುತ್ತಿಗೆಯನ್ನು ಅಗಲಿಸಿ ಜೋರಾಗಿ ಹಿಸ್ ಮಾಡುವುದರಿಂದ ನಾಗರಹಾವಿನಂತೆ ಕಾಣಿಸಿಕೊಳ್ಳಬಹುದು. ಇದರಿಂದ ಜನರು ತಪ್ಪಾಗಿ ಗುರುತಿಸುವ ಸಾಧ್ಯತೆಯಿದೆ.&lt;/p&gt;&lt;h2&gt;5. ಇಂಡಿಯನ್ ರ್ಯಾಟ್ ಸ್ನೇಕ್&lt;/h2&gt;&lt;p&gt;ದೊಡ್ಡ ಗಾರ್ಡನ್&zwnj;ಗಳು, ಖಾಲಿ ಜಾಗ ಅಥವಾ ಪೊದೆಗಳಿಂದ ಕೂಡಿದ ಪ್ರದೇಶಗಳ ಪಕ್ಕದಲ್ಲಿರುವ ಮನೆಗಳಲ್ಲಿ ಇಂಡಿಯನ್ ರ್ಯಾಟ್ ಸ್ನೇಕ್, ಅಂದರೆ ಧಾಮನ್, ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದು ಇತರ ಹಾವುಗಳಿಗಿಂತ ದೊಡ್ಡದಾಗಿದ್ದು ವೇಗವಾಗಿ ಚಲಿಸುತ್ತದೆ. ಸಾಮಾನ್ಯವಾಗಿ ಒಂದೇ ಹೂವಿನ ಕುಂಡಿಯ ಬಳಿ ಉಳಿಯುವುದಿಲ್ಲ. ಬದಲಾಗಿ ಇಲಿಗಳು, ಹಲ್ಲಿಗಳು ಮತ್ತು ಪಕ್ಷಿಗಳಂತಹ ಆಹಾರವನ್ನು ಹುಡುಕುತ್ತಾ ಆ ಪ್ರದೇಶದಲ್ಲಿ ಸಂಚರಿಸಬಹುದು. ಇಂಡಿಯನ್ ರ್ಯಾಟ್ ಸ್ನೇಕ್ ಕೂಡ ವಿಷರಹಿತ ಹಾವಾಗಿದೆ.&lt;/p&gt;&lt;h2&gt;ಗಾರ್ಡನ್&zwnj;ನಲ್ಲಿ ಹಾವು ಕಂಡರೆ ಏನು ಮಾಡಬೇಕು?&lt;/h2&gt;&lt;p&gt;ಹಾವು ಕಂಡ ತಕ್ಷಣ ಗಾಬರಿಯಿಂದ ಅದನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಬೇಡಿ. ಅದು ವಿಷರಹಿತ ಹಾವೆಂದು ನಿಮಗೆ ಖಚಿತವಾಗಿದ್ದರೂ ನೇರವಾಗಿ ಕೈ ಹಾಕುವುದು ಸುರಕ್ಷಿತವಲ್ಲ. ಹಾವಿಗೆ ಸ್ವಲ್ಪ ಜಾಗ ನೀಡಿ. ಗುರುತಿಸಲು ಸಾಧ್ಯವಾಗದಿದ್ದರೆ ಸ್ಥಳೀಯ ಸ್ನೇಕ್ ರೆಸ್ಕ್ಯೂ ತಂಡ ಅಥವಾ ವನ್ಯಜೀವಿ ಸಹಾಯವಾಣಿಯನ್ನು ಸಂಪರ್ಕಿಸುವುದು ಉತ್ತಮ. ಗಾರ್ಡನ್&zwnj;ನಲ್ಲಿ ಕೆಲಸ ಮಾಡುವಾಗ ಕೈಗವಸು ಧರಿಸುವುದು, ಹೂವಿನ ಕುಂಡಿಯನ್ನು ಎತ್ತುವ ಮೊದಲು ಅದರ ಕೆಳಭಾಗವನ್ನು ಪರಿಶೀಲಿಸುವುದು ಮತ್ತು ಗಿಡಗಳನ್ನು ಸ್ಥಳಾಂತರಿಸುವಾಗ ಎಚ್ಚರಿಕೆ ವಹಿಸುವುದು ಕೂಡ ಸಹಾಯ ಮಾಡುತ್ತದೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/life/found-a-snake-around-your-flower-pots-these-5-species-could-be-visiting-suh/articleshow-olub3pe"/>
        </item>
        <item>
            <title><![CDATA[ಪ್ರಧಾನಿ ನರೇಂದ್ರ ಮೋದಿಯ ಹೈ-ಎನರ್ಜಿ, ಉತ್ತಮ ಆರೋಗ್ಯದ ಸೀಕ್ರೆಟ್ ಹೊರಬಿತ್ತು.. ಇದೊಂದನ್ನು ಮೋದಿ ತಪ್ಪದೇ ತಿಂತಾರೆ!]]></title>
            <link>https://kannada.asianetnews.com/food/india-prime-minister-narendra-modi-is-a-vegetarian-and-consumes-khichdi-daily-for-his-health/articleshow-g0loyei</link>
            <guid isPermaLink="true">https://kannada.asianetnews.com/food/india-prime-minister-narendra-modi-is-a-vegetarian-and-consumes-khichdi-daily-for-his-health/articleshow-g0loyei</guid>
            <pubDate>Fri, 18 Sep 2026 13:13:38 +0530</pubDate>
            <description><![CDATA[&lt;p&gt;ಭಾರತದ ಪ್ರಧಾನಿ ನರೇಂದ್ರ ಮೋದಿಯುವರು ತಮ್ಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಲು ವರ್ಷದ 365 ದಿನಗಳಲ್ಲಿ ಕನಿಷ್ಠ 300 ದಿನಗಳಲ್ಲಿ &lsquo;ಇದನ್ನು&rsquo; ಸೇವಿಸುತ್ತಾರೆ. ಈ ಸೀಕ್ರೆಟ್&zwnj;ಅನ್ನು ಅವರೇ ಹಲವು ಪಾಡ್&zwnj;ಕಾಸ್ಟ್&zwnj;ಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sq9ga5ey8er34hdd7pkk45,imgname-narendra-modi-1789717168453.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Prime Minister Narendra Modi Health Secrets-ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ರಹಸ್ಯ!&lt;/strong&gt;&lt;/p&gt;&lt;p&gt;ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ನಿನ್ನೆ, ಅಂದರೆ ಸೆಪ್ಟೆಂಬರ್ 17 ರಂದು ಇಡೀ ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ನರೇಂದ್ರ ಮೋದಿಯವರು ಸ್ವತಃ ತಮ್ಮ ಹುಟ್ಟುಹಬ್ಬವನ್ನು ಸಿಂಪಲ್ ಅಗಿ ಪ್ರತಿ ವರ್ಷ ಆಚರಿಸಿಕೊಳ್ಳುತ್ತಾರೆ. ಗುಜರಾತ್&zwnj;ನ ವಡ್&zwnj;ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 17, 1950ರದಲ್ಲಿ ಜನಿಸಿದ್ದಾರೆ. ಮೋದಿಯವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ದೇಶಾದ್ಯಂತ 'ಸೇವಾ ದಿವಸ್' ಅಥವಾ ಸೇವಾ ಸಂಕಲ್ಪ ಅಭಿಯಾನವಾಗಿ ವಿವಿಧ ಸಾಮಾಜಿಕ ಕಾರ್ಯಗಳೊಂದಿಗೆ ಆಚರಿಸಲಾಗುತ್ತದೆ.&lt;/p&gt;&lt;h2&gt;ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿಶೇಷವಾದ ಫಿಟ್&zwnj;ನೆಸ್ &amp;amp; ಆರೋಗ್ಯದ ರಹಸ್ಯ!&lt;/h2&gt;&lt;p&gt;ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿಶೇಷವಾದ ಫಿಟ್&zwnj;ನೆಸ್, ಆರೋಗ್ಯ ಹಾಗೂ ಆಧ್ಯಾತ್ಮಿಕ ಅಚರಣೆಗಳ ಬಗ್ಗೆ ಇಡೀ ಜಗತ್ತಿನಾದ್ಯಂತ ಚರ್ಚೆ ಆಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅವರು ಸಂಪೂರ್ಣವಾಗಿ ಸಸ್ಯಾಹಾರಿ ಎಂಬುದನ್ನು ಅವರೇ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಜೊತೆಗೆ, ಅವರ ದಿನಚರಿಯಲ್ಲಿ ವಯಸ್ಸಿಗೆ ತಕ್ಕ ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನ ಸೇರಿದಂತೆ ದೇಹ ಹಾಗೂ ಮನಸ್ಸಿನ ಉತ್ತಮ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಂಗತಿಗಳಿಗೆ ವಿಶೇಷ ಸ್ಥಾನವಿದೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಮುಖ್ಯವಾಗಿ ಪ್ರಧಾನಿ ಮೋದಿಯವರು ನವರಾತ್ರಿಯ ಆ ಒಂಬತ್ತು ದಿವಸಗಳು ಕೇವಲ ನೀರು ಕುಡಿದು ವೃತ ಆಚರಿಸುತ್ತಾರೆ ಎಂಬುದೂ ಕೂಡ ಜಗಜ್ಜಾಹೀರಾಗಿರುವ ಸಂಗತಿ.&lt;/p&gt;&lt;h3&gt;ರಾಜಕೀಯ, ಪಕ್ಷಗಳ ಭಿನ್ನತೆ ಏನೇ ಇದ್ದರೂ ಮೋದಿಯವರ ಉತ್ತಮ ಆರೋಗ್ಯದ ಬಗ್ಗೆ ಜಗತ್ತಿಗೆ ತಿಳಿದಿದೆ!&lt;/h3&gt;&lt;p&gt;ದೇಶ, ಕಾಲ ಹಾಗೂ ರಾಜಕೀಯ, ಪಕ್ಷಗಳ ಭಿನ್ನತೆ ಏನೇ ಇದ್ದರೂ ಮೋದಿಯವರ ಉತ್ತಮ ಆರೋಗ್ಯವನ್ನು, ದಿನಚರಿಯನ್ನು ಜಗತ್ತು ಹಾಡಿಹೊಗಳುತ್ತದೆ. ಇಂಥ ಮೋದಿಯವರು ತಮ್ಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಲು 'ಆ ಒಂದು ಪದಾರ್ಥ'ವನ್ನು ತಪ್ಪದೇ ತಿನ್ನುತ್ತಾರೆ. ಅದನ್ನು ಅವರೇ ಸ್ವತಃ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ?&lt;/p&gt;&lt;p&gt;ಹೌದು, ಭಾರತದ ಪ್ರಧಾನಿ ಮೋದಿಯುವರು ತಮ್ಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಲು ವರ್ಷದ 365 ದಿನಗಳಲ್ಲಿ ಕನಿಷ್ಠ 300 ದಿನಗಳಲ್ಲಿ ಕಿಚಡಿಯನ್ನು ಸೇವಿಸುತ್ತಾರೆ. ಇದು ಸೀಕ್ರೆಟ್ ಏನೂ ಅಲ್ಲ. ಅವರೇ ಅದನ್ನು ಹಲವು ಪಾಡ್&zwnj;ಕಾಸ್ಟ್&zwnj;ಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಕಿಚಡಿಯಲ್ಲಿ ಅಂಥ ವಿಶೇಷತೆ ಏನಿದೆ? ಅದರಲ್ಲಿ ಯಾವೆಲ್ಲ ಪರ್ದಾರ್ಥಗಳು ಸೇರಿಕೊಂಡಿವೆ? ಈ ಸ್ಟೋರಿ ನೋಡಿ..&lt;/p&gt;&lt;p&gt;ಕಿಚಡಿ&lt;/p&gt;&lt;p&gt;ಕಿಚಡಿಯಲ್ಲಿ ಏನೇನಿದೆ? ಮಾಡುವುದು ಹೇಗೆ?&lt;/p&gt;&lt;p&gt;ಹೊಟ್ಟೆಗೆ ಹಿತ ನೀಡುವ, ಮನಸ್ಸಿಗೆ ಮುದ ನೀಡುವ ಅತ್ಯುತ್ತಮ ಆಹಾರವೆಂದರೆ ಅದು ಆರೋಗ್ಯಕರ ಹೆಸರುಬೇಳೆ ಕಿಚಡಿ. ಹೆಸರುಬೇಳೆ ಕಿಚಡಿ ಎಂದರೆ ಅದು ಮಾತ್ರವಲ್ಲ, ಹೆಸರುಬೇಳೆ ಜೊತೆಗೆ ಇನ್ನೂ ಹಲವು ಪದಾರ್ಥಗಳು ಮಿಕ್ಸ್ ಆಗಿರುತ್ತವೆ. ಇದನ್ನು ತಯಾರಿಸುವುದು ಅತ್ಯಂತ ಸರಳವಾದರೂ, ಇದರ ಪೌಷ್ಟಿಕಾಂಶದ ಮೌಲ್ಯ ಅಪಾರ. ಭಾರತೀಯ ಪ್ರತಿಯೊಂದು ಮನೆಯಲ್ಲೂ ನೆಮ್ಮದಿಯ ಸಂಕೇತವಾಗಿರುವ ಈ ಸರಳ ಹಾಗೂ ರುಚಿಕರವಾದ ಕಿಚಡಿ ತಯಾರಿಸುವ ವಿಧಾನ ಇಲ್ಲಿದೆ ನೋಡಿ..&lt;/p&gt;&lt;p&gt;ಮೊದಲಿಗೆ, ಸಮಪ್ರಮಾಣದಲ್ಲಿ ಅಕ್ಕಿ ಮತ್ತು ಹೆಸರು ಬೇಳೆಯನ್ನು ತೆಗೆದುಕೊಳ್ಳಿ. ಹೆಸರು ಬೇಳೆಯು ಜೀರ್ಣಕ್ರಿಯೆಗೆ ಅತ್ಯುತ್ತಮ ಹಾಗೂ ಪ್ರೋಟೀನ್&zwnj;ಗಳಿಂದ ಸಮೃದ್ಧವಾಗಿದೆ. ಇವೆರಡನ್ನೂ ಮೂರ್ನಾಲ್ಕು ಬಾರಿ ಸ್ವಚ್ಛವಾಗಿ ತೊಳೆದು, ಕನಿಷ್ಠ ಇಪ್ಪತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಈ ಸಮಯದಲ್ಲಿ ನಿಮ್ಮಿಷ್ಟದ ಪೌಷ್ಟಿಕ ತರಕಾರಿಗಳಾದ ಕ್ಯಾರೆಟ್, ಹಸಿ ಬಟಾಣಿ, ಬೀನ್ಸ್ ಮತ್ತು ಆಲೂಗಡ್ಡೆಗಳನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.&lt;/p&gt;&lt;p&gt;ಈಗ ಪ್ರೆಷರ್ ಕುಕ್ಕರ್ ಅನ್ನು ಒಲೆಯ ಮೇಲಿಟ್ಟು, ಒಂದೆರಡು ಚಮಚ ಶುದ್ಧ ಹಸುವಿನ ತುಪ್ಪ ಹಾಕಿ. ತುಪ್ಪ ಕರಗಿ ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ ಚಿಟಪಟ ಎನ್ನಲು ಬಿಡಿ. ಜೀರಿಗೆಯ ಸುವಾಸನೆ ಹರಡುತ್ತಿದ್ದಂತೆ ಜೀರ್ಣಶಕ್ತಿ ಹೆಚ್ಚಿಸುವ ಸಣ್ಣಗೆ ಹೆಚ್ಚಿದ ಶುಂಠಿ, ಸ್ವಲ್ಪ ಇಂಗು ಹಾಗೂ ಹಸಿಮೆಣಸಿನಕಾಯಿ ಸೇರಿಸಿ ಸಾಟಿ ಮಾಡಿ. ನಂತರ ಹೆಚ್ಚಿಟ್ಟುಕೊಂಡ ಬಣ್ಣಬಣ್ಣದ ತರಕಾರಿಗಳನ್ನು ಹಾಕಿ, ಒಂದೆರಡು ನಿಮಿಷಗಳ ಕಾಲ ಲಘುವಾಗಿ ಹುರಿಯಿರಿ. ಈ ತರಕಾರಿಗಳು ಕಿಚಡಿಗೆ ವಿಟಮಿನ್, ಖನಿಜಾಂಶ ಮತ್ತು ನಾರಿನಂಶದ ಬಲ ನೀಡುತ್ತವೆ.&lt;/p&gt;&lt;p&gt;ಇದಾದ ನಂತರ, ನೆನೆಸಿದ ಅಕ್ಕಿ ಮತ್ತು ಹೆಸರು ಬೇಳೆಯನ್ನು ನೀರು ಬಸಿಯುವಂತೆ ಮಾಡಿ ಕುಕ್ಕರ್&zwnj;ಗೆ ಸೇರಿಸಿ. ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಕಿಚಡಿ ಬೆಣ್ಣೆಯಂತೆ ಮೃದುವಾಗಿ ಬರಲು, ನೀವು ತೆಗೆದುಕೊಂಡ ಅಕ್ಕಿ-ಬೇಳೆಯ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ನೀರು ಸೇರಿಸುವುದು ಪ್ರಮುಖ ರಹಸ್ಯ.&lt;/p&gt;&lt;p&gt;ಕುಕ್ಕರ್ ಮುಚ್ಚಳ ಮುಚ್ಚಿ, ಮಧ್ಯಮ ಉರಿಯಲ್ಲಿ ಮೂರರಿಂದ ನಾಲ್ಕು ವಿಸಿಲ್ ಬರಿಸಿಕೊಳ್ಳಿ. ಪ್ರೆಷರ್ ಪೂರ್ತಿಯಾಗಿ ಆರಿದ ನಂತರ ಮುಚ್ಚಳ ತೆಗೆದು, ಮೇಲಿಂದ ತಾಜಾ ಕೊತ್ತಂಬರಿ ಸೊಪ್ಪು ಮತ್ತು ಇನ್ನೊಂದು ಚಮಚ ಹಸುವಿನ ತುಪ್ಪ ಬೆರೆಸಿ. ಘಮಘಮಿಸುವ, ಬಿಸಿಬಿಸಿಯಾದ ಸಾತ್ವಿಕ ಕಿಚಡಿ ಈಗ ಸವಿಯಲು ಸಿದ್ಧ! ಇದನ್ನು ತಾಜಾ ಮೊಸರು, ಹರಳೆಕಾಯಿ ಉಪ್ಪಿನಕಾಯಿ ಅಥವಾ ಹಪ್ಪಳದ ಜೊತೆ ಸೇವಿಸಿದರೆ ದೇಹಕ್ಕೂ ಮನಸ್ಸಿಗೂ ಸಿಗುವ ತೃಪ್ತಿ ಅದ್ಭುತ. ಸರಳತೆ ಮತ್ತು ಆರೋಗ್ಯದ ಪರಿಪೂರ್ಣ ಸಂಗಮವೇ ಈ ಪೌಷ್ಟಿಕ ಕಿಚಡಿ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/food/india-prime-minister-narendra-modi-is-a-vegetarian-and-consumes-khichdi-daily-for-his-health/articleshow-g0loyei"/>
        </item>
        <item>
            <title><![CDATA[ಮದುವೆ ಸಂಭ್ರಮದಲ್ಲಿ Karna Serial ಭವ್ಯಾ ಗೌಡ: ಮೆಹಂದಿ ಶಾಸ್ತ್ರದಲ್ಲಿ ಮಿಂಚಿದ ನಟಿ- ಪತಿ ಯಾರು]]></title>
            <link>https://kannada.asianetnews.com/gallery/relationship/wedding-celebrations-at-karna-serial-fame-bhavya-gowdas-house-divya-gowda-getting-married-suc-8ky38nu</link>
            <guid isPermaLink="true">https://kannada.asianetnews.com/gallery/relationship/wedding-celebrations-at-karna-serial-fame-bhavya-gowdas-house-divya-gowda-getting-married-suc-8ky38nu</guid>
            <pubDate>Fri, 18 Sep 2026 12:30:42 +0530</pubDate>
            <description><![CDATA[&lt;p&gt;'ಕರ್ಣ' ಸೀರಿಯಲ್ ನಟಿ ಭವ್ಯಾ ಗೌಡ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಬಿಗ್ ಬಾಸ್ ಕಾಸ್ಟಿಂಗ್ ಡೈರೆಕ್ಟರ್ ಹೇಮಂತ್ ಕುಮಾರ್ ಜೊತೆ ಅಕ್ಕ ದಿವ್ಯಾ ಗೌಡ ಅವರ ಮೆಹಂದಿ ಶಾಸ್ತ್ರ ಅದ್ಧೂರಿಯಾಗಿ ನೆರವೇರುತ್ತಿದೆ. ಕಿರುತೆರೆಯ ಹಲವು ಗಣ್ಯರು ಭಾಗವಹಿಸಿ ನವಜೋಡಿಗೆ ಶುಭಕೋರಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2smmyrv86jqmwbenfckdgcm,imgname-bhavya-gowda-01-1789714397979.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕರ್ಣ' ಸೀರಿಯಲ್ ನಟಿ ಭವ್ಯಾ ಗೌಡ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಬಿಗ್ ಬಾಸ್ ಕಾಸ್ಟಿಂಗ್ ಡೈರೆಕ್ಟರ್ ಹೇಮಂತ್ ಕುಮಾರ್ ಜೊತೆ ಅಕ್ಕ ದಿವ್ಯಾ ಗೌಡ ಅವರ ಮೆಹಂದಿ ಶಾಸ್ತ್ರ ಅದ್ಧೂರಿಯಾಗಿ ನೆರವೇರುತ್ತಿದೆ. ಕಿರುತೆರೆಯ ಹಲವು ಗಣ್ಯರು ಭಾಗವಹಿಸಿ ನವಜೋಡಿಗೆ ಶುಭಕೋರಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಕರ್ಣ ಸೀರಿಯಲ್​ನಲ್ಲಿ ನಿಧಿ ಪಾತ್ರ ಮಾಡ್ತಿರೋ ನಟಿ ಭವ್ಯಾ ಗೌಡ, ಸೀರಿಯಲ್​ನಲ್ಲಿ ಗಂಡ ಕರ್ಣನ ಜೊತೆ ಹನಿಮೂನ್​ಗೆ ಹೋಗಿದ್ದಾಳೆ. ಅಲ್ಲಿ ನಯನತಾರಾ ಕುತಂತ್ರದಿಂದ ಜೋಡಿ ಸಂಕಷ್ಟಕ್ಕೆ ಸಿಲುಕಿದೆ.&lt;/p&gt;&lt;img&gt;&lt;p&gt;ಆದರೆ, ಅಸಲಿಗೆ ಇತ್ತ ನಟಿ ಭವ್ಯಾ ಗೌಡ, ತಮ್ಮ ಅಕ್ಕ ದಿವ್ಯಾ ಗೌಡ ಅವರ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ದಿವ್ಯಾ ಗೌಡ ಅವರು, ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಮದುವೆ ಪೂರ್ವ ಶಾಸ್ತ್ರಗಳು ಅತ್ಯಂತ ಅದ್ಧೂರಿಯಾಗಿ ನೆರವೇರುತ್ತಿವೆ.&lt;/p&gt;&lt;img&gt;&lt;p&gt;ಹಳದಿ ಶಾಸ್ತ್ರದ ಬೆನ್ನಲ್ಲೇ, ಇದೀಗ ದಿವ್ಯಾ ಗೌಡ ಅವರ ಮೆಹಂದಿ ಶಾಸ್ತ್ರವೂ ವೈಭವದಿಂದ ಜರುಗಿದೆ. ಮದುವೆ ಪೂರ್ವ ಶಾಸ್ತ್ರಗಳು ಗ್ರ್ಯಾಂಡ್&zwnj; ಆಗಿ ನೆರವೇರುತ್ತಿದೆ. ಇದೀಗ ಮೆಹಂದಿ ಶಾಸ್ತ್ರವೂ ಅದ್ದೂರಿಯಾಗಿ ಜರುಗುತ್ತಿವೆ.&lt;/p&gt;&lt;img&gt;&lt;p&gt;ʻಬಿಗ್ ಬಾಸ್ʼ ಕಾಸ್ಟಿಂಗ್ ಡೈರೆಕ್ಟರ್ ಆಗಿರುವ ವರ ಹೇಮಂತ್ ಕುಮಾರ್ ಅವರ ಜೊತೆ ದಿವ್ಯಾ ಗೌಡ ಮದುವೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭವ್ಯಾ ಗೌಡ ಅವರು ಕೂಡ ಕೈಗೆ ಮೆಹಂದಿ ಹಚ್ಚಿ ಸಂಭ್ರಮಿಸುತ್ತಿದ್ದು, ಇದರ ಫೋಟೋ, ವಿಡಿಯೋಗಳು ವೈರಲ್​ ಆಗುತ್ತಿವೆ.&lt;/p&gt;&lt;img&gt;&lt;p&gt;ಈ ಅದ್ಧೂರಿ ಮೆಹಂದಿ ಕಾರ್ಯಕ್ರಮಕ್ಕೆ ನಟಿ ಹಾಗೂ ʻಬಿಗ್&zwnj; ಬಾಸ್&zwnj;ʼ ಮಾಜಿ ಸ್ಪರ್ಧಿ ಯಮುನಾ ಶ್ರೀನಿಧಿ ಸೇರಿದಂತೆ ಕಿರುತೆರೆಯ ಹಲವು ಗಣ್ಯರು, ಆಪ್ತರು ಹಾಗೂ ಸ್ನೇಹಿತರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಭವ್ಯಾ ಗೌಡ ಅವರು ಬಿಗ್​ಬಾಸ್​ನಲ್ಲಿಯೂ ಈ ಹಿಂದೆ ಮಿಂಚಿದ್ದದರು. ದಿವ್ಯಾ ಗೌಡ ಅವರು, ಬಿಗ್​ಬಾಸ್​ಗೆ ಹೋಗಿದ್ದ ಸಂದರ್ಭದಲ್ಲಿ, ಫ್ಯಾಮಿಲಿ ರೌಂಡ್​ನಲ್ಲಿ ಭವ್ಯಾ ಎಂಟ್ರಿ ಕೊಟ್ಟಾಗ, ಆಗ ಹನುಮಂತು ಜೊತೆ ದಿವ್ಯಾ ಗೌಡ ಮಾತುಕತೆ ವೈರಲ್&zwnj; ಆಗಿತ್ತು. ಭವ್ಯಾಗಿಂತ ದಿವ್ಯಾನೇ ಸೂಪರ್​ ಎಂದು ಹಲವರು ತಮಾಷೆ ಮಾಡಿದ್ದುಂಟು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/wedding-celebrations-at-karna-serial-fame-bhavya-gowdas-house-divya-gowda-getting-married-suc-8ky38nu"/>
        </item>
        <item>
            <title><![CDATA[Dr Vishnuvardhan 75th Birthday: ವಿಷ್ಣುವರ್ಧನ್ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲದ ಹಲವು ಸೀಕ್ರೆಟ್‌ಗಳು ಇಲ್ಲಿವೆ ನೋಡಿ!]]></title>
            <link>https://kannada.asianetnews.com/sandalwood/legendary-actor-dr-vishnuvardhan-75th-birthday-special-story-including-mysuru-today-programmes/articleshow-0r9feqt</link>
            <guid isPermaLink="true">https://kannada.asianetnews.com/sandalwood/legendary-actor-dr-vishnuvardhan-75th-birthday-special-story-including-mysuru-today-programmes/articleshow-0r9feqt</guid>
            <pubDate>Fri, 18 Sep 2026 11:55:56 +0530</pubDate>
            <description><![CDATA[&lt;p&gt;ಇಂದು ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಗಳು ಇಂದು ಮೈಸೂರಿನಲ್ಲಿ ಸೇರಿದ್ದು, ಅನ್ನದಾನ, ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಮೈಸೂರನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಮಾಡಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sjrk9kbfy4s6ctnhqj1neh,imgname-dr-vishnuvardhan-1789712420147.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Dr Vishnuvardhan 75th Birthday grand celebration-ಸಾಹಸಸಿಂಹ ನಟ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬದ ಆಚರಣೆ&lt;/strong&gt;&lt;/p&gt;&lt;p&gt;ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ (Dr Vishnuvardhan) ಅವರ 75ನೇ ಹುಟ್ಟುಹಬ್ಬವನ್ನು ಇಂದು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ, ನಟ ವಿಷ್ಣುವರ್ಧನ್ ಹುಟ್ಟೂರಾದ ಮೈಸೂರಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡಿಗರ ದೌಭಾಗ್ಯ ಎಂಬಂತೆ, ನಟ ವಿಷ್ಣುವರ್ಧನ್ ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ದಿವ್ಯ ಚೇತನದ ರೂಪದಲ್ಲಿ, ಅವರ ಸಿನಿಮಾದ ಮೂಲಕ ಜಗತ್ತು ಇರುವವರೆಗೂ ಬದುಕಿರಲಿದ್ದಾರೆ, ಬಹಳಷ್ಟು ಜನರ ಪಾಲಿಗೆ ಸ್ಪೂರ್ತಿಯ ಸೆಲೆಯಾಗಲಿದ್ದಾರೆ.&lt;/p&gt;&lt;h2&gt;18 ಸೆಪ್ಟೆಂಬರ್ 1950ರಂದು ಮೈಸೂರಿನಲ್ಲಿ ಜನನ&lt;/h2&gt;&lt;p&gt;ಹೌದು, ನಟ ವಿಷ್ಣುವರ್ಧನ್ ಅವರು 18 ಸೆಪ್ಟೆಂಬರ್ 1950ರಂದು ಮೈಸೂರಿನಲ್ಲಿ ಜನಿಸಿದ್ದಾರೆ. ಸಂಪತ್ ಕುಮಾರ್ ಎಂಬ ಮೂಲ ಹೆಸರಿನ ಈ ನಟ ಅದೇ ಹೆಸರಿನಲ್ಲಿ 1972ರಲ್ಲಿ ತೆರೆಗೆ ಬಂದ 'ವಂಶವೃಕ್ಷ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ, ಅದೇ ವರ್ಷ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾದ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದರು. ಬಳಿಕ ಅವರು 5 ಬಾಷೆಗಳ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡದ ಮೇರುನಟರಲ್ಲಿ ಒಬ್ಬರಾದರು. ಕರ್ನಾಟಕ ರತ್ನ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ನಟ ವಿಷ್ಣುವರ್ಧನ್ ಭಾಜನರಾಗಿದ್ದಾರೆ.&lt;/p&gt;&lt;p&gt;ವಿಷ್ಣುವರ್ಧನ್ ನಟನೆಯ ನಾಗರಹಾವು, ಮುತ್ತಿನ ಹಾರ, ಯಜಮಾನ, ಬಂಧನ, ಆಪ್ತಮಿತ್ರ ಹಾಗೂ ಆಪ್ತರಕ್ಷಕ ಸೇರಿದಂತೆ ಹಲವಾರು ಸಿನಿಮಾಗಳು ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ ಅವರನ್ನು ಕನ್ನಡದ ಜನತೆ ಎಂದೆಂದೂ ಮರೆಯಲಾಗದಂತೆ ಮಾಡಿಬಿಟ್ಟಿವೆ. ತಮ್ಮ 59ನೆಯ ವಯಸ್ಸಿನಲ್ಲಿ (30 ಡಿಸೆಂಬರ್ 2009) ಇಹಲೋಕ ಯಾತ್ರೆ ಮುಗಿಸಿರುವ ನಟ ವಿಷ್ಣುವರ್ಧನ್ ಹುಟ್ಟಿ ಇಂದಿಗೆ 75 ವರ್ಷ. ಈ ವಿಶೇ&zwj;ಷ ಸಂದರ್ಭದಲ್ಲಿ ಅವರ ಹುಟ್ಟೂರಾದ ಮೈಸೂರಿನಲ್ಲಿ, ನಟಿ ಹಾಗೂ ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ನಟ ಹಾಗೂ ವಿಷ್ಣು ಅಳಿಯ ಅನಿರುದ್ಧ ಸೇರಿದಂತೆ ಇಡೀ ಕುಟುಂಬ ಹಾಗೂ ಅಭಿಮಾನಿಗಳು ಇಂದು ಹತ್ತುಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.&lt;/p&gt;&lt;h3&gt;ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ&lt;/h3&gt;&lt;p&gt;ಮುಖ್ಯವಾಗಿ, ಇಂದು ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಗಳು ಇಂದು ಮೈಸೂರಿನಲ್ಲಿ ಸೇರಿದ್ದು, ಅನ್ನದಾನ, ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಮೈಸೂರನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಮಾಡಲಿದ್ದಾರೆ. ಜೊತೆಗೆ, ಬೆಂಗಳೂರಿನಲ್ಲೂ ಅಭಿಮಾನಿಗಳು ನಟ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅನೇಕ ಕಡೆಗಳಲ್ಲಿ ಆಚರಿಸುತ್ತಿದ್ದಾರೆ. ಒಟ್ಟಿನಲ್ಲಿ, ಇಂದು ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ.&lt;/p&gt;&lt;p&gt;ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಈ ವಿಶೇ&zwj;ಷ ಸಂದರ್ಭದಲ್ಲಿ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ವಿಶೇಷವಾದ ಒಂದು ಸರಣಿಯನ್ನು ಪೋಸ್ಟ್ ಮಾಡುತ್ತಿದೆ. 'ನಾ ಕಂಡ ವಿಷ್ಣು' ಶೀರ್ಷಿಕೆಯಡಿಯಲ್ಲಿ ನಟ ವಿಷ್ಣುವರ್ಧನ್ ಕುಟುಂಬ, ಆಪ್ತರು ಹಾಗೂ ಅವರ ಜೊತೆಯಲ್ಲಿ ನಟಿಸಿರುವ ಕಲಾವಿದರ ಮಾತುಗಳನ್ನು ವಿಡಿಯೋ ರೂಪದಲ್ಲಿ ಅನಾವರಣ ಮಾಡಿದೆ. ಇದನ್ನು 'ಏಷ್ಯಾನೆಟ್ ಸುವರ್ಣ'ದ 'ಬೆಂಗಳೂರು ಬಜ್ (Bengaluru Buzz)' ಲಿಂಕ್ ಮೂಲಕ ನೋಡಬಹುದು.&lt;/p&gt;&lt;p&gt;ಈ ಲಿಂಕ್&zwnj;ನಲ್ಲಿರುವ &lsquo;ನಾ ಕಂಡ ವಿಷ್ಣು&rsquo; ಸರಣಿ ವಿಡಿಯೋಗಳಲ್ಲಿ ನಟ ವಿಷ್ಣುವರ್ಧನ್ ಅವರ ಬಗ್ಗೆ ಹಲವರಿಗೆ ಇನ್ನೂ ಗೊತ್ತಿಲ್ಲದ ಸೀಕ್ರೆಟ್&zwnj;ಗಳನ್ನು ತಿಳಿದುಕೊಳ್ಳಬಹುದು. ಸಾಹಸ ಸಿಂಹನ ಜೊತೆ ತೆರೆ ಹಂಚಿಕೊಂಡ ಹಲವರು ನಟ ವಿಷ್ಣುವರ್ಧನ್ ಬಗೆಗಿನ ಹಲವು ವಿಶೇಷ ಸಂಗತಿಗಳನ್ನು, ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಅವೆಲ್ಲವೂ ಅದರಲ್ಲಿದೆ ನೋಡಿ..&lt;/p&gt;&lt;p&gt;Link: ಈ ಲಿಂಕ್ ಕ್ಲಿಕ್ ಮಾಡಿ- https://www.youtube.com/results?search_query=Bengaluru+Buzz&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/legendary-actor-dr-vishnuvardhan-75th-birthday-special-story-including-mysuru-today-programmes/articleshow-0r9feqt"/>
        </item>
        <item>
            <title><![CDATA[Fatty Liver: ನಿರ್ಲಕ್ಷಿಸಬೇಡಿ.. ಲಿವರ್ ಅಪಾಯದಲ್ಲಿದೆ ಎನ್ನಲು ಮುಖ ನೀಡುವ 4 ಎಚ್ಚರಿಕೆಗಳಿವು!]]></title>
            <link>https://kannada.asianetnews.com/gallery/health-life/dont-ignore-a-dark-neck-4-facial-signs-that-indicate-your-liver-is-in-trouble-bd4aydu</link>
            <guid isPermaLink="true">https://kannada.asianetnews.com/gallery/health-life/dont-ignore-a-dark-neck-4-facial-signs-that-indicate-your-liver-is-in-trouble-bd4aydu</guid>
            <pubDate>Fri, 18 Sep 2026 11:47:10 +0530</pubDate>
            <description><![CDATA[&lt;p&gt;Liver damage warning signs: ಈ ಕೆಳಗೆ ಕೊಟ್ಟಿರುವುದು ಮಾರಣಾಂತಿಕ ಫ್ಯಾಟಿ ಲಿವರ್ ಕಾಯಿಲೆಯ ಆರಂಭಿಕ ಎಚ್ಚರಿಕೆಯ ಲಕ್ಷಣವಾಗಿರಬಹುದು ಎಂಬುದು ನಿಮಗೆ ಗೊತ್ತಾ? ಮದ್ಯಪಾನ ಮಾಡದವರಿಗೂ ಕಾಡುವ ಈ ಕಾಯಿಲೆಯ ಆರಂಭಿಕ ಸೂಚನೆಗಳನ್ನು ಮುಖದ ಮೂಲಕ ಹೇಗೆ ಗುರುತಿಸುವುದು? ಇಲ್ಲಿದೆ ವೈದ್ಯಕೀಯ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0aafhf7anqx03zhx14e0tsc,imgname-face-slimmer-1787052934631.jpg" type="image/jpeg" height="390" width="690"/>
            <content:encoded><![CDATA[&lt;p&gt;Liver damage warning signs: ಈ ಕೆಳಗೆ ಕೊಟ್ಟಿರುವುದು ಮಾರಣಾಂತಿಕ ಫ್ಯಾಟಿ ಲಿವರ್ ಕಾಯಿಲೆಯ ಆರಂಭಿಕ ಎಚ್ಚರಿಕೆಯ ಲಕ್ಷಣವಾಗಿರಬಹುದು ಎಂಬುದು ನಿಮಗೆ ಗೊತ್ತಾ? ಮದ್ಯಪಾನ ಮಾಡದವರಿಗೂ ಕಾಡುವ ಈ ಕಾಯಿಲೆಯ ಆರಂಭಿಕ ಸೂಚನೆಗಳನ್ನು ಮುಖದ ಮೂಲಕ ಹೇಗೆ ಗುರುತಿಸುವುದು? ಇಲ್ಲಿದೆ ವೈದ್ಯಕೀಯ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ವೇಗವಾಗಿ ಹೆಚ್ಚುತ್ತಿದೆ &lsquo;ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್&rsquo;&lt;/strong&gt;ಇಂದಿನ ಧಾವಂತದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ 'ಫ್ಯಾಟಿ ಲಿವರ್' (Fatty Liver - ಯಕೃತ್ತಿನಲ್ಲಿ ಕೊಬ್ಬು ಶೇಖರಣೆ) ಎಂಬುದು ಅತ್ಯಂತ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಹಿಂದೆ ಕೇವಲ ಅತಿಯಾಗಿ ಮದ್ಯಪಾನ ಮಾಡುವವರಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಕೆಟ್ಟ ಕೊಲೆಸ್ಟ್ರಾಲ್&zwnj;ನಿಂದಾಗಿ ಮದ್ಯಪಾನ ಮುಟ್ಟದವರಲ್ಲೂ 'ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್' (NAFLD) ಅಪಾಯ ವೇಗವಾಗಿ ಹೆಚ್ಚುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಆರಂಭಿಕ ಲಕ್ಷಣಗಳು&hellip;&lt;/strong&gt;ಫ್ಯಾಟಿ ಲಿವರ್&zwnj;ನ ಅತ್ಯಂತ ಅಪಾಯಕಾರಿ ಅಂಶವೆಂದರೆ ಇದು ಒಂದು 'ಸೈಲೆಂಟ್ ಕಿಲ್ಲರ್'. ಆರಂಭದಲ್ಲಿ ಇದು ಯಾವುದೇ ಗಂಭೀರ ನೋವನ್ನು ತೋರಿಸದೆ ಒಳಗೊಳಗೇ ಯಕೃತ್ತನ್ನು (ಲಿವರ್) ಹಾನಿ ಮಾಡುತ್ತದೆ. ಇದನ್ನು ನಿರ್ಲಕ್ಷಿಸಿದರೆ ಲಿವರ್ ಊತ, ಲಿವರ್ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್&zwnj;ಗೆ ಕಾರಣವಾಗಬಹುದು. ಆದರೆ ಅದೃಷ್ಟವಶಾತ್, ಲಿವರ್ ಅಪಾಯದಲ್ಲಿದೆ ಎಂಬುದನ್ನು ನಮ್ಮ ಮುಖ ಮತ್ತು ಕತ್ತಿನ ಭಾಗದಲ್ಲಿ ಕಂಡುಬರುವ ಕೆಲವು ಆರಂಭಿಕ ಲಕ್ಷಣಗಳ ಮೂಲಕ ಪತ್ತೆಹಚ್ಚಬಹುದು. ಆ ಮುಖ್ಯ ಲಕ್ಷಣಗಳು ಇಲ್ಲಿವೆ&hellip;&lt;/p&gt;&lt;img&gt;&lt;p&gt;&lt;strong&gt;1. ಮುಖ ಮತ್ತು ಕಣ್ಣಿನ ಸುತ್ತ ಊತ (Puffy Face)&lt;/strong&gt;ಲಿವರ್ ಸರಿಯಾಗಿ ಕೆಲಸ ಮಾಡದಿದ್ದಾಗ, ದೇಹದಲ್ಲಿ ಪ್ರೋಟೀನ್ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹದಲ್ಲಿ ದ್ರವಗಳ ಸಮತೋಲನ (Fluid Balance) ಮತ್ತು ರಕ್ತಪರಿಚಲನೆ ತಪ್ಪಿ ಮುಖದಲ್ಲಿ ನೀರು ತುಂಬಿಕೊಂಡು ಊದಿಕೊಳ್ಳುತ್ತದೆ. ಯಾವುದೇ ಕಾರಣವಿಲ್ಲದೆ ಮುಖ, ಕೆನ್ನೆ ಮತ್ತು ಕಣ್ಣಿನ ಕೆಳಭಾಗ ಊದಿಕೊಂಡಂತೆ (Puffy) ಕಂಡರೆ ಅದು ಲಿವರ್ ನೀಡುತ್ತಿರುವ ಆರಂಭಿಕ ಎಚ್ಚರಿಕೆಯಾಗಿರಬಹುದು.&lt;/p&gt;&lt;img&gt;&lt;p&gt;&lt;strong&gt;2. ಕತ್ತಿನ ಸುತ್ತ ಕಪ್ಪಾಗುವುದು (Dark Neck)&lt;/strong&gt;ಕತ್ತಿನ ಸುತ್ತ ಚರ್ಮ ಕಪ್ಪಾಗಿದ್ದರೆ, ಹಲವರು ಅದನ್ನು ಬಿಸಿಲಿನಿಂದ ಅಥವಾ ಕೊಳೆಯಿಂದಾಗಿದೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಇದು ಇನ್ಸುಲಿನ್ ಪ್ರತಿರೋಧದಿಂದ (Insulin Resistance) ಬರುವ ಫ್ಯಾಟಿ ಲಿವರ್&zwnj;ನ ಪ್ರಮುಖ ಸಂಕೇತವಾಗಿದೆ. ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾದಾಗ ಮೆಲನಿನ್ ಪಿಗ್ಮೆಂಟೇಶನ್ ಹೆಚ್ಚಾಗಿ ಮೊದಲು ಕತ್ತಿನ ಹಿಂಭಾಗ ಮತ್ತು ಪಕ್ಕದಲ್ಲಿ ಕಪ್ಪು ಪಟ್ಟಿಗಳಂತೆ (Acanthosis Nigricans) ಬದಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;3. ಮುಖ ಕೆಂಪಾಗುವುದು ಮತ್ತು ಬಾಯಿಯ ಸುತ್ತ ದದ್ದುಗಳು (Redness &amp;amp; Rashes)&lt;/strong&gt;ಲಿವರ್ ಸಮಸ್ಯೆ ದೀರ್ಘಕಾಲದವರೆಗೆ ಇದ್ದರೆ ಮುಖವು ಕೆಂಪಾಗುವುದು ಅಥವಾ ಸಣ್ಣ ಸಣ್ಣ ಗುಳ್ಳೆಗಳು ಏಳುವುದು ಸಾಮಾನ್ಯ. ಲಿವರ್ ಹಾನಿಯಾದಾಗ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ಕಳೆದುಕೊಂಡು ಜಿಂಕ್ (ಸತು) ಕೊರತೆ ಉಂಟಾಗುತ್ತದೆ. ಇದರಿಂದ ಬಾಯಿಯ ಸುತ್ತ ಕಿರಿಕಿರಿ, ಒಣ ಚರ್ಮ ಮತ್ತು ದದ್ದುಗಳು ಉಂಟಾಗುತ್ತವೆ.&lt;/p&gt;&lt;img&gt;&lt;p&gt;&lt;strong&gt;4. ಕಣ್ಣುಗಳು ಹಳದಿಯಾಗುವುದು &amp;amp; ಮುಖದಲ್ಲಿ ತೀವ್ರ ತುರಿಕೆ&lt;/strong&gt;ಫ್ಯಾಟಿ ಲಿವರ್ ಸಮಸ್ಯೆ ಉಲ್ಬಣಗೊಂಡಾಗ ರಕ್ತದಲ್ಲಿ 'ಬಿಲಿರುಬಿನ್' (Bilirubin) ಪ್ರಮಾಣ ಹೆಚ್ಚಾಗಿ ಕಾಮಾಲೆಯ ಲಕ್ಷಣಗಳು (ಕಣ್ಣು ಮತ್ತು ಚರ್ಮ ಹಳದಿಯಾಗುವುದು) ಕಾಣಿಸಿಕೊಳ್ಳುತ್ತವೆ. ಜೊತೆಗೆ ರಕ್ತದಲ್ಲಿ ಪಿತ್ತರಸದ ಲವಣಗಳು (Bile salts) ಶೇಖರಣೆಯಾಗುವುದರಿಂದ ಮುಖ ಮತ್ತು ದೇಹದ ಚರ್ಮದಲ್ಲಿ ತೀವ್ರ ತುರಿಕೆ ಉಂಟಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ವೈದ್ಯರ ಸಲಹೆ&lt;/strong&gt;ನಿಮ್ಮ ಮುಖ ಅಥವಾ ಕತ್ತಿನ ಭಾಗದಲ್ಲಿ ಯಾವುದೇ ಕಾರಣವಿಲ್ಲದೆ ಈ ಬದಲಾವಣೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ ಲಿವರ್ ಫಂಕ್ಷನ್ ಟೆಸ್ಟ್ (LFT) ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಜಾಣತನ.&lt;strong&gt;(ಗಮನಿಸಿ: &lt;/strong&gt;ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ರೋಗ ಲಕ್ಷಣಗಳಿದ್ದಲ್ಲಿ ಸ್ವಯಂ ಚಿಕಿತ್ಸೆ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ).&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/dont-ignore-a-dark-neck-4-facial-signs-that-indicate-your-liver-is-in-trouble-bd4aydu"/>
        </item>
        <item>
            <title><![CDATA[Gold Earrings: ಕೇವಲ ಒಂದು ಗ್ರಾಂ ಚಿನ್ನದ ಕಿವಿಯೋಲೆಗಳು; ಡೈಲಿ ವೇರ್‌ಗೆ ಬೆಸ್ಟ್]]></title>
            <link>https://kannada.asianetnews.com/webstories/fashion/1-gram-gold-earrings-designs-for-daily-wear-must-try-kvn-uwsveo8</link>
            <guid isPermaLink="true">https://kannada.asianetnews.com/webstories/fashion/1-gram-gold-earrings-designs-for-daily-wear-must-try-kvn-uwsveo8</guid>
            <pubDate>Fri, 18 Sep 2026 11:44:17 +0530</pubDate>
            <description><![CDATA[&lt;p&gt;ಡೈಲಿ ವೇರ್&zwnj;ಗೆ ಚಿಕ್ಕದಾದ, ಕೇವಲ ಒಂದು ಗ್ರಾಂ ತೂಕದ ಚಿನ್ನದ ಓಲೆಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ಈ ಡಿಸೈನ್&zwnj;ಗಳು ನಿಮಗಾಗಿಯೇ ಇವೆ. ಪ್ರತಿದಿನ ಧರಿಸಲು ಸೂಕ್ತವಾದ ಲೇಟೆಸ್ಟ್ ಚಿನ್ನದ ಕಿವಿಯೋಲೆಗಳ ಕಲೆಕ್ಷನ್ ಇಲ್ಲಿದೆ, ಒಮ್ಮೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jnk5mp6re34wmd2nca51cr65,imgname-mini-earrings-3-1741178951896.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/1-gram-gold-earrings-designs-for-daily-wear-must-try-kvn-uwsveo8"/>
        </item>
        <item>
            <title><![CDATA[ಬೇರೆಯವರು ಆಕಳಿಸಿದರೆ ನಮಗೂ ಯಾಕೆ ಆಕಳಿಕೆ ಬರುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಕಾರಣ]]></title>
            <link>https://kannada.asianetnews.com/life/why-do-you-yawn-when-someone-else-yawns-the-science-behind-contagious-yawning-kvn/articleshow-a1ce2fb</link>
            <guid isPermaLink="true">https://kannada.asianetnews.com/life/why-do-you-yawn-when-someone-else-yawns-the-science-behind-contagious-yawning-kvn/articleshow-a1ce2fb</guid>
            <pubDate>Fri, 18 Sep 2026 11:21:13 +0530</pubDate>
            <description><![CDATA[ಆಕಳಿಕೆ ಕೇವಲ ನಿದ್ದೆ ಅಥವಾ ಸುಸ್ತಿನ ಲಕ್ಷಣವಲ್ಲ, ಇದು ಮೆದುಳಿನ ಉಷ್ಣಾಂಶವನ್ನು ನಿಯಂತ್ರಿಸುವ ಸಹಜ ಪ್ರಕ್ರಿಯೆಯಾಗಿದೆ. ಬೇರೆಯವರು ಆಕಳಿಸುವುದನ್ನು ನೋಡಿದಾಗ ನಮಗೂ ಆಕಳಿಕೆ ಬರುವುದಕ್ಕೆ 'ಮಿರರ್ ನ್ಯೂರಾನ್&zwnj;ಗಳು' ಮತ್ತು ಸಾಮಾಜಿಕ ಬಾಂಧವ್ಯ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2qzx3pmscrs62qw64jf4mk5,imgname-3-1789659090644.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಕಳಿಕೆ ಅನ್ನೋದು ಎಲ್ಲರಿಗೂ ಬರುವ ಸಹಜ ಪ್ರಕ್ರಿಯೆ. ನಿದ್ದೆ ಬಂದಾಗ, ಸುಸ್ತಾದಾಗ ಆಕಳಿಕೆ ಬರುವುದು ಮಾಮೂಲಿ. ಆದರೆ, ನಮ್ಮ ಎದುರಿಗಿರುವವರು ಆಕಳಿಸಿದರೆ ತಕ್ಷಣ ನಮಗೂ ಆಕಳಿಕೆ ಬರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ?&lt;/p&gt;&lt;h2&gt;&lt;strong&gt;ಆಕಳಿಕೆ ಅಂದರೆ ನಿದ್ದೆ ಬರುತ್ತಿದೆ ಅಂತ ಮಾತ್ರವಲ್ಲ&lt;/strong&gt;&lt;/h2&gt;&lt;p&gt;ಬಹಳಷ್ಟು ಜನ ಆಕಳಿಕೆ ಬಂದರೆ ನಿದ್ದೆ ಅಥವಾ ಸುಸ್ತು ಎಂದು ಅಂದುಕೊಳ್ಳುತ್ತಾರೆ. ಆದರೆ, ಆಕಳಿಕೆ ಬರಲು ಇವು ಮಾತ್ರ ಕಾರಣವಲ್ಲ. ನಾವು ರಿಲ್ಯಾಕ್ಸ್ ಆಗಿರುವಾಗ, ಏಕಾಗ್ರತೆ ಕಡಿಮೆಯಾದಾಗ ಅಥವಾ ಒಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಬದಲಾಗುವಾಗಲೂ ಆಕಳಿಕೆ ಬರಬಹುದು. ಇದು ಮೆದುಳು ಮತ್ತು ದೇಹದ ಸ್ನಾಯುಗಳ ಹೊಂದಾಣಿಕೆಯಿಂದ ನಡೆಯುವ ಸಹಜ ಪ್ರಕ್ರಿಯೆ. ಆಕಳಿಕೆ ಬಂದಾಗ ಬಾಯಿ ದೊಡ್ಡದಾಗಿ ತೆರೆದುಕೊಳ್ಳುತ್ತದೆ, ಆಳವಾಗಿ ಉಸಿರು ಎಳೆದುಕೊಳ್ಳುತ್ತೇವೆ ಮತ್ತು ನಿಧಾನವಾಗಿ ಉಸಿರು ಬಿಡುತ್ತೇವೆ.&lt;/p&gt;&lt;p&gt;ಈ ಸಮಯದಲ್ಲಿ ಮುಖ, ದವಡೆ ಮತ್ತು ಉಸಿರಾಟದ ಸ್ನಾಯುಗಳು ಕೆಲಸ ಮಾಡುತ್ತವೆ. ಆದರೆ, ಆಕಳಿಕೆ ಯಾಕೆ ಬರುತ್ತದೆ ಅನ್ನೋದಕ್ಕೆ ವಿಜ್ಞಾನಿಗಳು ಈವರೆಗೂ ಒಂದೇ ಕಾರಣವನ್ನು ಖಚಿತಪಡಿಸಿಲ್ಲ. ಮೆದುಳಿನ ಉಷ್ಣಾಂಶವನ್ನು ನಿಯಂತ್ರಿಸುವುದು, ಎಚ್ಚರಿಕೆಯ ಮಟ್ಟದಲ್ಲಿನ ಬದಲಾವಣೆ ಮತ್ತು ದೇಹದ ಸಹಜ ಪ್ರತಿಕ್ರಿಯೆಗಳು ಇದಕ್ಕೆ ಕಾರಣವಾಗಿರಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ಹಾಗಾಗಿ, ಪ್ರತಿ ಬಾರಿ ಆಕಳಿಕೆ ಬಂದಾಗ ನಿದ್ದೆ ಬರುತ್ತಿದೆ ಎಂದುಕೊಳ್ಳುವುದು ಸರಿಯಲ್ಲ. ಇದು ಸಹಜ ಪ್ರಕ್ರಿಯೆಯಾದರೂ, ವಿಪರೀತವಾಗಿ ಆಕಳಿಕೆ ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.&lt;/p&gt;&lt;p&gt;ಆಕಳಿಕೆ ಬಗ್ಗೆ ನಡೆದ ಸಂಶೋಧನೆಗಳಲ್ಲಿ ಮೆದುಳಿನ ಉಷ್ಣಾಂಶದ ವಿಚಾರ ಸಾಕಷ್ಟು ಚರ್ಚೆಯಾಗಿದೆ. ಅಮೆರಿಕದ ಪ್ರಿನ್ಸ್&zwnj;ಟನ್ ವಿಶ್ವವಿದ್ಯಾಲಯದ ಸಂಶೋಧಕರು ಆಕಳಿಕೆ ಮತ್ತು ಸುತ್ತಮುತ್ತಲಿನ ಉಷ್ಣಾಂಶದ ನಡುವಿನ ಸಂಬಂಧವನ್ನು ಅಧ್ಯಯನ ಮಾಡಿದ್ದಾರೆ. ಮೆದುಳಿನ ಉಷ್ಣಾಂಶವನ್ನು ನಿಯಂತ್ರಿಸುವಲ್ಲಿ ಆಕಳಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಈ ಸಂಶೋಧನೆ ಹೇಳಿದೆ.&lt;/p&gt;&lt;p&gt;ಈ ಸಿದ್ಧಾಂತದ ಪ್ರಕಾರ, ಆಕಳಿಸುವಾಗ ಮುಖ ಮತ್ತು ತಲೆಯ ಸುತ್ತ ಆಗುವ ಚಲನೆ ಹಾಗೂ ಉಸಿರಾಟದಿಂದ ಮೆದುಳು ತಂಪಾಗಲು ಸಹಾಯವಾಗುತ್ತದೆ. ಆದರೆ, ಕೇವಲ ಮೆದುಳನ್ನು ತಂಪಾಗಿಸಲು ಮಾತ್ರ ಆಕಳಿಕೆ ಬರುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇದು ಆಕಳಿಕೆಗೆ ಸಂಬಂಧಿಸಿದ ಒಂದು ವೈಜ್ಞಾನಿಕ ವಿವರಣೆ ಮಾತ್ರ.&lt;/p&gt;&lt;p&gt;ಬೇಸಿಗೆ ಮತ್ತು ಚಳಿಗಾಲದಲ್ಲಿ ಆಕಳಿಕೆ ಬರುವ ರೀತಿಯನ್ನು ಸಂಶೋಧಕರು ಗಮನಿಸಿದ್ದಾರೆ. ವಾತಾವರಣದ ಉಷ್ಣಾಂಶದಲ್ಲಿನ ಬದಲಾವಣೆಗಳು ಆಕಳಿಕೆಯ ಮೇಲೆ ಪ್ರಭಾವ ಬೀರಬಹುದು ಎಂದು ಕೆಲವು ಫಲಿತಾಂಶಗಳು ಸೂಚಿಸಿವೆ. ವಿಶೇಷವಾಗಿ ಹೊರಗಿನ ಉಷ್ಣಾಂಶ ತುಂಬಾ ಹೆಚ್ಚಿದ್ದಾಗ ಅಥವಾ ತುಂಬಾ ಕಡಿಮೆಯಿದ್ದಾಗ ಆಕಳಿಕೆ ಬರುವ ಸಾಧ್ಯತೆಗಳು ಬದಲಾಗಬಹುದು. ಆದರೆ, ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚು ಆಕ್ಸಿಜನ್ ಬೇಕಾಗುವುದರಿಂದಲೇ ಹೆಚ್ಚು ಆಕಳಿಕೆ ಬರುತ್ತದೆ ಎಂದು ಹೇಳಲು ಯಾವುದೇ ಸೂಕ್ತ ಆಧಾರಗಳಿಲ್ಲ.&lt;/p&gt;&lt;h3&gt;&lt;strong&gt;ಎದುರಿನವರು ಆಕಳಿಸಿದರೆ ನಮಗೂ ಯಾಕೆ ಬರುತ್ತೆ?&lt;/strong&gt;&lt;/h3&gt;&lt;p&gt;ಒಬ್ಬ ವ್ಯಕ್ತಿ ಆಕಳಿಸುವುದನ್ನು ನೋಡಿದಾಗ, ನಮಗೂ ಆಕಳಿಸಬೇಕು ಅನ್ನಿಸುವುದನ್ನು 'ಕಾಂಟೇಜಿಯಸ್ ಯಾನಿಂಗ್' (Contagious Yawning) ಅಥವಾ 'ಅಂಟಿಕೊಳ್ಳುವ ಆಕಳಿಕೆ' ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಕಂಡುಬರುವ ಕುತೂಹಲಕಾರಿ ನಡವಳಿಕೆ. ನಾವು ಇತರರ ಮುಖದ ಚಲನೆಗಳನ್ನು ಗಮನಿಸಿದಾಗ, ಅವರ ಕ್ರಿಯೆಗಳಿಗೆ ನಮ್ಮ ಮೆದುಳು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಜೊತೆ ಇದು ಸಂಬಂಧ ಹೊಂದಿರಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.&lt;/p&gt;&lt;p&gt;ಬೇರೆಯವರು ಆಕಳಿಸುವ ವಿಡಿಯೋಗಳನ್ನು ನೋಡಿದಾಗಲೂ ಕೆಲವರಿಗೆ ಆಕಳಿಕೆ ಬರುವುದನ್ನು ಸಂಶೋಧನೆಗಳಲ್ಲಿ ಗಮನಿಸಲಾಗಿದೆ. 2004ರಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ, ಇತರರ ಆಕಳಿಕೆಯನ್ನು ನೋಡಿ ಮನುಷ್ಯರು ಹೇಗೆ ಆಕಳಿಸುತ್ತಾರೆ ಎಂಬುದರ ಮೇಲೆ ಸಂಶೋಧಕರು ಗಮನಹರಿಸಿದ್ದರು. ಆಕಳಿಕೆ ಕೇವಲ ದೈಹಿಕ ಕ್ರಿಯೆ ಮಾತ್ರವಲ್ಲ, ಇತರರ ನಡವಳಿಕೆಯನ್ನು ಗಮನಿಸುವುದರಿಂದಲೂ ಇದು ಪ್ರಚೋದನೆಗೊಳ್ಳಬಹುದು ಎಂದು ಇಂತಹ ಅಧ್ಯಯನಗಳು ಸೂಚಿಸುತ್ತವೆ.&lt;/p&gt;&lt;p&gt;ಇಲ್ಲಿ ಮತ್ತೊಂದು ಕುತೂಹಲಕಾರಿ ವಿಚಾರ ಎಂದರೆ, ಆಕಳಿಕೆಯನ್ನು ನಾವು ನೇರವಾಗಿ ನೋಡಲೇಬೇಕು ಎಂದೇನಿಲ್ಲ. ಕೆಲವೊಮ್ಮೆ ಆಕಳಿಕೆ ಬಗ್ಗೆ ಓದಿದರೂ ಅಥವಾ ಅದರ ಬಗ್ಗೆ ಮಾತನಾಡಿದರೂ ನಮಗೆ ಆಕಳಿಸಬೇಕು ಅನ್ನಿಸುತ್ತದೆ. ಅಂದರೆ ನಮ್ಮ ಮೆದುಳಿನ ಆಲೋಚನೆಗಳು ಮತ್ತು ನಾವು ಗಮನಿಸುವ ವಿಚಾರಗಳು ಕೂಡ ಈ ಸಹಜ ಪ್ರತಿಕ್ರಿಯೆಯ ಮೇಲೆ ಪ್ರಭಾವ ಬೀರಬಹುದು. ಅಷ್ಟೇಕೆ, ನೀವು ಈ ಲೇಖನವನ್ನು ಓದುತ್ತಿರುವಾಗಲೂ ನಿಮಗೆ ಆಕಳಿಕೆ ಬರುವ ಸಾಧ್ಯತೆಗಳಿವೆ.&lt;/p&gt;&lt;h3&gt;&lt;strong&gt;ಮಿರರ್ ನ್ಯೂರಾನ್&zwnj;ಗಳು ಮತ್ತು ಸಾಮಾಜಿಕ ಬಾಂಧವ್ಯದ ಸಂಬಂಧವೇನು?&lt;/strong&gt;&lt;/h3&gt;&lt;p&gt;ಇತರರನ್ನು ನೋಡಿ ನಾವು ಕೂಡ ಕೆಲವು ಕೆಲಸಗಳನ್ನು ಮಾಡಲು ಮೆದುಳಿನ ನರಮಂಡಲ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ 'ಮಿರರ್ ನ್ಯೂರಾನ್&zwnj;ಗಳು' ಎಂಬ ನರಕೋಶಗಳ ಬಗ್ಗೆ ಸಂಶೋಧಕರು ಹೇಳುತ್ತಾರೆ. ನಾವು ಒಂದು ಕೆಲಸವನ್ನು ಮಾಡಿದಾಗ ಅಥವಾ ಬೇರೆಯವರು ಆ ಕೆಲಸವನ್ನು ಮಾಡುತ್ತಿರುವಾಗ ಮೆದುಳಿನ ಕೆಲವು ಭಾಗಗಳು ಪ್ರತಿಕ್ರಿಯಿಸುತ್ತವೆ ಎಂಬ ವಿಚಾರಕ್ಕೆ ಈ ಸಂಶೋಧನೆಗಳು ಸಂಬಂಧಿಸಿವೆ.&lt;/p&gt;&lt;p&gt;ಆದರೆ, ಇತರರನ್ನು ನೋಡಿ ಬರುವ ಆಕಳಿಕೆಗೆ ಮಿರರ್ ನ್ಯೂರಾನ್&zwnj;ಗಳೇ ಏಕೈಕ ಕಾರಣ ಎಂದು ಇನ್ನೂ ಖಚಿತವಾಗಿಲ್ಲ. ಆಕಳಿಕೆ ಅಂಟಿಕೊಳ್ಳುವ ಪ್ರಕ್ರಿಯೆಯಲ್ಲಿ ಮೆದುಳಿನ ಅನೇಕ ವ್ಯವಸ್ಥೆಗಳು, ಏಕಾಗ್ರತೆ ಮತ್ತು ವೈಯಕ್ತಿಕ ಮಾನಸಿಕ ಸ್ಥಿತಿ ಒಟ್ಟಾಗಿ ಕೆಲಸ ಮಾಡಿರಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ಇನ್ನು ಸಾಮಾಜಿಕ ಬಾಂಧವ್ಯದ ವಿಚಾರಕ್ಕೆ ಬಂದರೆ, ನಮಗೆ ಹತ್ತಿರವಾದವರು ಆಕಳಿಸಿದಾಗ ನಮಗೂ ಆಕಳಿಕೆ ಬರುವ ಸಾಧ್ಯತೆ ಹೆಚ್ಚು ಎಂದು ಕೆಲವು ಅಧ್ಯಯನಗಳು ಹೇಳಿವೆ.&lt;/p&gt;&lt;p&gt;ಸ್ನೇಹಿತರು ಮತ್ತು ಕುಟುಂಬದವರ ಜೊತೆಗಿನ ನಮ್ಮ ಒಡನಾಟ ಈ ಪ್ರತಿಕ್ರಿಯೆಯ ಮೇಲೆ ಪ್ರಭಾವ ಬೀರಬಹುದು ಎಂದು ಸಂಶೋಧಕರು ಗಮನಿಸಿದ್ದಾರೆ. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ನಡವಳಿಕೆಗೆ ಸ್ಪಂದಿಸುವಂತಹ ಸಾಮಾಜಿಕ ಗುಣಗಳ ಜೊತೆ ಇದು ಸಂಬಂಧ ಹೊಂದಿರಬಹುದು. ಆದರೆ, ಆಕಳಿಕೆ ಬರುತ್ತಿದೆ ಎಂದರೆ ಎದುರಿನವರ ಮೇಲೆ ನಮಗೆ ಹೆಚ್ಚು ಪ್ರೀತಿ ಇದೆ ಅಥವಾ ಅವರೊಂದಿಗೆ ಬಲವಾದ ಬಾಂಧವ್ಯ ಇದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಬಾಂಧವ್ಯವು ಈ ನಡವಳಿಕೆಯ ಮೇಲೆ ಪ್ರಭಾವ ಬೀರುವ ಅನೇಕ ಅಂಶಗಳಲ್ಲಿ ಒಂದು ಮಾತ್ರ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/life/why-do-you-yawn-when-someone-else-yawns-the-science-behind-contagious-yawning-kvn/articleshow-a1ce2fb"/>
        </item>
        <item>
            <title><![CDATA[₹15 ಕೋಟಿ ಸಾಲದಲ್ಲಿ ಪೋಷಕರು! 'ಅವರನ್ನ ಕಳೆದುಕೊಳ್ಳೋಕೆ ಆಗಲ್ಲ' ಯುವಕನ ಭಾವುಕ ಪೋಸ್ಟ್ ವೈರಲ್!]]></title>
            <link>https://kannada.asianetnews.com/relationship/parents-are-in-rupees-15-crore-debt-i-cant-lose-them-reddit-user-seeks-help/articleshow-w1kcx0t</link>
            <guid isPermaLink="true">https://kannada.asianetnews.com/relationship/parents-are-in-rupees-15-crore-debt-i-cant-lose-them-reddit-user-seeks-help/articleshow-w1kcx0t</guid>
            <pubDate>Fri, 18 Sep 2026 11:15:13 +0530</pubDate>
            <description><![CDATA[&lt;p&gt;₹15 ಕೋಟಿ ಸಾಲದ ಹೊರೆಗೆ ಸಿಲುಕಿರುವ ಕುಟುಂಬದ ಬಗ್ಗೆ ಯುವಕನೊಬ್ಬ Redditನಲ್ಲಿ ಸಹಾಯ ಕೋರಿದ್ದಾನೆ. ಹಲವು ವ್ಯವಹಾರಗಳ ನಷ್ಟ, ಜಮೀನು ವಿವಾದ ಮತ್ತು ತಾಯಿಯ ಆರೋಗ್ಯ ಸಮಸ್ಯೆಯಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದು ಆತ ಹೇಳಿದ್ದಾನೆ. ಪೋಷಕರನ್ನು ಕಳೆದುಕೊಳ್ಳುವ ಭಯವಿದೆ ಎಂದಿರುವ ಆತ, ಸಾಲದಿಂದ ಹೊರಬರಲು ಕಾನೂನು ಮತ್ತು ಹಣಕಾಸಿನ ಮಾರ್ಗಗಳ ಬಗ್ಗೆ ಸಲಹೆ ಕೇಳಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2r0n9324yke1q3xgzgcjtm0,imgname--parents-are-in--15-crore-debt--i-can-t-lose-them----reddit-user-seeks-help-1789659882594.jpg" type="image/jpeg" height="390" width="690"/>
            <content:encoded><![CDATA[&lt;h2&gt;₹15 ಕೋಟಿ ಸಾಲದ ಹೊರೆ; ಪೋಷಕರಿಗಾಗಿ Redditನಲ್ಲಿ ಸಹಾಯ ಕೇಳಿದ ಮಗ&lt;/h2&gt;&lt;p&gt;ಕೋಟ್ಯಂತರ ರೂಪಾಯಿ ಸಾಲ, ವ್ಯವಹಾರದಲ್ಲಿ ಸತತ ನಷ್ಟ ಮತ್ತು ಕುಟುಂಬದ ಗಂಭೀರ ಆರ್ಥಿಕ ಸಂಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಸಿಲುಕಿರುವ ಕುಟುಂಬದ ಬಗ್ಗೆ ವ್ಯಕ್ತಿಯೊಬ್ಬರು Redditನಲ್ಲಿ ಸಹಾಯ ಕೋರಿರುವ ಪೋಸ್ಟ್ ಇದೀಗ ಗಮನ ಸೆಳೆದಿದೆ. ತನ್ನ ಪೋಷಕರನ್ನು ಕಳೆದುಕೊಳ್ಳುವ ಭಯವಿದೆ ಎಂದು ಹೇಳಿರುವ ಅವರು, ಸಾಲದಿಂದ ಹೊರಬರಲು ಪ್ರಾಯೋಗಿಕ ಮಾರ್ಗಗಳ ಬಗ್ಗೆ ಸಲಹೆ ಕೇಳಿದ್ದಾರೆ.&lt;/p&gt;&lt;h3&gt;ಒಂದಾದ ಮೇಲೊಂದು ವ್ಯವಹಾರ; ಕುಟುಂಬದ ಸಾಲದ ಹೊರೆ ಮಾತ್ರ ಹೆಚ್ಚುತ್ತಲೇ ಹೋಯಿತು&lt;/h3&gt;&lt;p&gt;Reddit ಪೋಸ್ಟ್ ಪ್ರಕಾರ, ಕುಟುಂಬದ ಆರ್ಥಿಕ ಸಂಕಷ್ಟ ಹಲವು ವರ್ಷಗಳಿಂದ ಮುಂದುವರಿದಿದೆ. ಯುವಕನ ತಂದೆ ಮುಂಬೈನ ಬಟ್ಟೆ ವ್ಯಾಪಾರದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿದ್ದ ಬಳಿಕ ಹಲವು ವ್ಯವಹಾರಗಳನ್ನು ಆರಂಭಿಸಿದ್ದರು. ಟ್ಯೂಬ್&zwnj;ಲೈಟ್ ತಯಾರಿಕೆ, ಹೊಲಿಗೆ, ಬೇಕರಿ, ಸಿವಿಲ್ ಕಾಂಟ್ರಾಕ್ಟಿಂಗ್, ರೆಸ್ಟೋರೆಂಟ್, ವೈನ್ ಶಾಪ್ ಮತ್ತು ಗ್ರಾನೈಟ್ ವ್ಯವಹಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಪ್ರಯತ್ನಿಸಿದ್ದರು.&lt;/p&gt;&lt;h3&gt;ಪಾಲುದಾರಿಕೆ ಮುರಿದು ನಷ್ಟ, ಜಮೀನು ವಿವಾದವೂ ಸಂಕಷ್ಟಕ್ಕೆ ಕಾರಣ&lt;/h3&gt;&lt;p&gt;ಪೋಸ್ಟ್&zwnj;ನಲ್ಲಿನ ಹೇಳಿಕೆಯಂತೆ, ಒಂದು ವ್ಯವಹಾರ ಪಾಲುದಾರಿಕೆ ವಿಫಲವಾದ ಬಳಿಕ ಕುಟುಂಬದ ಹಣಕಾಸಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಜಮೀನಿನಲ್ಲಿ ಹೂಡಿಕೆ ಮಾಡಿದ್ದ ಹಣವೂ ವಿವಾದದಿಂದ ನಷ್ಟವಾಯಿತು ಎಂದು ಯುವಕ ಆರೋಪಿಸಿದ್ದಾರೆ.&lt;/p&gt;&lt;p&gt;ನಂತರ ತಂದೆ ಕಾಂಟ್ರಾಕ್ಟ್ ಮತ್ತು ಟೆಂಡರ್&zwnj;ಗಳ ಮೂಲಕ ಮತ್ತೆ ಆದಾಯ ಗಳಿಸಲು ಪ್ರಯತ್ನಿಸಿದ್ದರು. ಕಾಳೇಶ್ವರಂ ಯೋಜನೆ ಸೇರಿದಂತೆ ಕೆಲವು ಕಾಮಗಾರಿಗಳಿಗೆ ಸಂಬಂಧಿಸಿದ ಕೆಲಸಗಳನ್ನು ಅವರು ಮಾಡಿದ್ದರು ಎಂದು ಪೋಸ್ಟ್&zwnj;ನಲ್ಲಿ ಹೇಳಲಾಗಿದೆ. ಆದರೆ ಕಳೆದ ಒಂದು ವರ್ಷದಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತೆ ಗಂಭೀರವಾಗಿ ಹದಗೆಟ್ಟಿದೆ ಎಂದು ಯುವಕ ವಿವರಿಸಿದ್ದಾರೆ.&lt;/p&gt;&lt;h3&gt;ತಾಯಿಯ ಆರೋಗ್ಯ ಸಮಸ್ಯೆಯೂ ಹೆಚ್ಚುವರಿ ಹೊರೆ&lt;/h3&gt;&lt;p&gt;ಕುಟುಂಬದ ಸಾಲದ ಜೊತೆಗೆ ತಾಯಿಯ ಆರೋಗ್ಯ ಸಮಸ್ಯೆಯೂ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ ಎಂದು ಪೋಸ್ಟ್&zwnj;ನಲ್ಲಿ ಹೇಳಲಾಗಿದೆ. ಮಧುಮೇಹಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ವೆಚ್ಚವೂ ಕುಟುಂಬಕ್ಕೆ ಮತ್ತಷ್ಟು ಹೊರೆಯಾಗಿದೆ ಎಂದು ಯುವಕ ತಿಳಿಸಿದ್ದಾರೆ.&lt;/p&gt;&lt;p&gt;ಕೆಲವು ಸಾಲದಾತರಿಂದ ಪೋಷಕರಿಗೆ ಒತ್ತಡ ಮತ್ತು ಕಿರುಕುಳ ಎದುರಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ತಮ್ಮ ಆದಾಯದಿಂದಲೇ ₹15 ಕೋಟಿ ಸಾಲವನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ಸಾಲ ಪುನರ್&zwnj;ರಚನೆ, ಕಾನೂನು ಮಾರ್ಗಗಳು, ಡೆಟ್ ಕೌನ್ಸೆಲಿಂಗ್ ಮತ್ತು ನೆರವು ನೀಡಬಹುದಾದ ಸಂಸ್ಥೆಗಳ ಬಗ್ಗೆ ಮಾಹಿತಿ ಕೇಳಿದ್ದಾರೆ.&lt;/p&gt;&lt;h3&gt;Redditನಲ್ಲಿ ಸಲಹೆಗಳ ಮಹಾಪೂರ&lt;/h3&gt;&lt;p&gt;ಪೋಸ್ಟ್&zwnj;ಗೆ ಪ್ರತಿಕ್ರಿಯಿಸಿದ ಕೆಲವರು ನಿರ್ಮಾಣ ಕ್ಷೇತ್ರ ಮತ್ತು ಸರ್ಕಾರಿ ಟೆಂಡರ್&zwnj;ಗಳಲ್ಲಿ ಎದುರಾಗುವ ಹಣಕಾಸಿನ ಸವಾಲುಗಳ ಬಗ್ಗೆ ಚರ್ಚಿಸಿದ್ದಾರೆ. ಸಾಲದ ಸ್ವರೂಪ, ಕುಟುಂಬದ ಆಸ್ತಿ ಮತ್ತು ಸಾಲಕ್ಕೆ ನೀಡಿರುವ ಭದ್ರತೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಕೆಲವರು ಹೇಳಿದ್ದಾರೆ.&lt;/p&gt;&lt;p&gt;ಇನ್ನು ಕೆಲವರು ಕಾನೂನು ಮತ್ತು ಹಣಕಾಸು ತಜ್ಞರ ನೆರವು ಪಡೆಯುವಂತೆ ಸಲಹೆ ನೀಡಿದ್ದಾರೆ. ಆದರೆ ಈ ಸಂಪೂರ್ಣ ಕಥೆ Reddit ಬಳಕೆದಾರರ ಹೇಳಿಕೆಯನ್ನೇ ಆಧರಿಸಿದ್ದು, ಅದರಲ್ಲಿರುವ ಆರೋಪಗಳು ಮತ್ತು ಹಣಕಾಸಿನ ವಿವರಗಳನ್ನು ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ.&lt;/p&gt;&lt;p&gt;Parents has debt of 1.5crby Anonymous in personalfinanceindia&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Chandrashekar GS</dc:creator>
            <atom:link href="https://kannada.asianetnews.com/relationship/parents-are-in-rupees-15-crore-debt-i-cant-lose-them-reddit-user-seeks-help/articleshow-w1kcx0t"/>
        </item>
        <item>
            <title><![CDATA[ಪ್ರಸಿದ್ಧ ಗಡಾಯಿಕಲ್ಲು ಚಾರಣಿಗರಿಗೆ ಮುಕ್ತ, ದಿನಕ್ಕೆ ಕೇವಲ 500 ಮಂದಿಗೆ ಮಾತ್ರ ಪ್ರವೇಶ, ಈ ನಿಯಮ ನೆಟ್ಟಗೆ ಪಾಲಿಸಿ!]]></title>
            <link>https://kannada.asianetnews.com/dakshina-kannada/mangaluru-news-gadaikallu-known-as-jamalabad-fort-reopens-for-trekking-entry-rules-limits-and-details-gdp/articleshow-2q2p40h</link>
            <guid isPermaLink="true">https://kannada.asianetnews.com/dakshina-kannada/mangaluru-news-gadaikallu-known-as-jamalabad-fort-reopens-for-trekking-entry-rules-limits-and-details-gdp/articleshow-2q2p40h</guid>
            <pubDate>Fri, 18 Sep 2026 10:29:56 +0530</pubDate>
            <description><![CDATA[ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಐತಿಹಾಸಿಕ ಜಮಲಾಬಾದ್ ಕೋಟೆ (ಗಡಾಯಿಕಲ್ಲು) ಮಳೆಗಾಲದ ನಿರ್ಬಂಧದ ಬಳಿಕ ಇದೀಗ ಮತ್ತೆ ಚಾರಣಿಗರಿಗೆ ಮುಕ್ತವಾಗಿದೆ. ದಿನವೊಂದಕ್ಕೆ ಕೇವಲ 500 ಮಂದಿಗೆ ಮಾತ್ರ ಪ್ರವೇಶವಿದ್ದು, ಮುಂಗಡ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಸಮೀಪದ ಜಲಪಾತಗಳ ವೀಕ್ಷಣೆಗೂ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2sd4ag2vrtv90w90ee792v2,imgname-gadaikallu-known-as-jamalabad-fort-1789706512898.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಜಮಲಾಬಾದ್ ಕೋಟೆ ಅಥವಾ ನರಸಿಂಹ ಗಡ (ಗಡಾಯಿಕಲ್ಲು) 17ರಿಂದ ಪ್ರವಾಸಿಗರ ವೀಕ್ಷಣೆ ಮತ್ತು ಚಾರಣಕ್ಕೆ ಮುಕ್ತವಾಗಲಿದೆ. ಮಳೆಗಾಲದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಪ್ರವೇಶ ನಿರ್ಬಂಧ ವನ್ನು ಬೆಳ್ತಂಗಡಿ ವನ್ಯಜೀವಿ ವಿಭಾಗ ತೆರವುಗೊಳಿಸಿದೆ.&lt;/p&gt;&lt;p&gt;ಗಡಾಯಿಕಲ್ಲು ಪ್ರದೇಶದಲ್ಲಿ ಮಳೆಗಾಲದ ಸಂದರ್ಭ ಬಂಡೆ ಹಾಗೂ ಚಾರಣದ ಹಾದಿಗಳು ಜಾರುವ ಸ್ಥಿತಿ ಇರುವುದರಿಂದ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರವೇಶ ನಿರ್ಬಂಧಿಸಲಾಗಿತ್ತು. ಬೇಸಿಗೆ ಅವಧಿಯಲ್ಲಿ ಕಾಡಿಚ್ಚು ಹಾಗೂ ಬೆಂಕಿ ಅವಘಡಗಳ ಸಾಧ್ಯತೆ, ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಗಣತಿ ಸೇರಿದಂತೆ ವಿವಿಧ ಕಾರಣ ಗಳಿಂದಲೂ ಪ್ರವಾಸಿಗರ ಪ್ರವೇಶವನ್ನು ಹಂತಹಂತವಾಗಿ ನಿರ್ಬಂಧಿಸಲಾಗಿತ್ತು.&lt;/p&gt;&lt;p&gt;ಈ ಹಿಂದೆ ಜೂ.1ರಿಂದ ಗಡಾಯಿಕಲ್ಲು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು. ಪ್ರವೇಶ ಆರಂಭವಾದ ಒಂದೇ ವಾರದಲ್ಲಿ ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ ಜೂ.14ರಿಂದ ಮತ್ತೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ಮಳೆ ಇಲ್ಲದ ಕಾರಣ ಮತ್ತೆ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಜು.8ರಿಂದ ಚಾರಣಕ್ಕೆ ಮುಂದುವರಿಸಲಾಗಿತ್ತು. ಮಧ್ಯೆ ಮತ್ತೆ ಮಳೆ ಸುರಿದ ಹಿನ್ನಲೆಯಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಈಗ ಮಳೆ ಕಡಿಮೆಯಾಗಿದ್ದು, ಚಾರಣದ ಹಾದಿ ಹಾಗೂ ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದ ಬಳಿಕ 17ರಿಂದ ಮತ್ತೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ವನ್ಯಜೀವಿ ವಿಭಾಗ ತಿಳಿಸಿದೆ.&lt;/p&gt;&lt;p&gt;ಗಡಾಯಿಕಲ್ಲು ಕರ್ನಾಟಕದ ಅತ್ಯಂತ ವಿಶಿಷ್ಟ ಐತಿಹಾಸಿಕ ಹಾಗೂ ನೈಸರ್ಗಿಕ ತಾಣಗಳಲ್ಲಿ ಒಂದಾಗಿದೆ. ಸಮುದ್ರಮಟ್ಟದಿಂದ ಸುಮಾರು 3,600 ಅಡಿ ಎತ್ತರದಲ್ಲಿರುವ ಈ ಕೋಟೆ ತನ್ನ ಐತಿಹಾಸಿಕ ಹಿನ್ನೆಲೆ, ನೈಸರ್ಗಿಕ ಸೌಂದರ್ಯ, ವಿಶಿಷ್ಟ ಭೌಗೋಳಿಕ ವೈಶಿಷ್ಟ್ಯಗಳಿಂದ ಅಪಾರ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ.ಕೋಟೆಯ ಶಿಖರ ತಲುಪಲು ಸುಮಾರು 2 ಸಾವಿರ ಕಲ್ಲಿನ ಮೆಟ್ಟಿಲುಗಳನ್ನು ಏರಬೇಕಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳು ಹಾಗೂ ದೈಹಿಕವಾಗಿ ಮೆಟ್ಟಿಲುಗಳನ್ನು ಏರಲು ಸಾಧ್ಯವಾಗದ ಅನೇಕ ಪ್ರವಾಸಿಗರಿಗೆ ಈ ಐತಿಹಾಸಿಕ ತಾಣವನ್ನು ವೀಕ್ಷಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಈ ಐತಿಹಾಸಿಕ ತಾಣವನ್ನು ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಘೋಷಿಸುವುದರೊಂದಿಗೆ, ಸಾರ್ವಜನಿಕರಿಗೆ ಸುಲಭವಾಗಿ ತಲುಪುವಂತೆ ರೋಪ್&zwnj;ವೇ ಯೋಜನೆ ಅನುಷ್ಢಾನಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ ಎಂಬ ಒತ್ತಾಯವೂ ಸರ್ಕಾರದ ಮುಂದಿದೆ.&lt;/p&gt;&lt;h2&gt;ಜಲಪಾತ ವೀಕ್ಷಣೆಗೂ ಅವಕಾಶ:&lt;/h2&gt;&lt;p&gt;ಪ್ರಸ್ತುತ ಮಳೆ ಇಲ್ಲದಿರುವ ಕಾರಣ ತಾಲೂಕಿನ ಕಡಮಗುಂಡಿ, ಎರ್ಮಾಯಿ ಮೊದಲಾದ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಜಲಪಾತಗಳು ಸಾಮಾನ್ಯ ಸ್ಥಿತಿಯಲ್ಲಿ ಧಮ್ಮಿಕ್ಕುತ್ತಿವೆ. ಚಾರ್ಮಾಡಿ ಘಾಟಿಯ ತಾತ್ಕಾಲಿಕ ಜಲಪಾತಗಳಲ್ಲಿ ನೀರಿನ ಧುಮ್ಮಿಕ್ಕುವಿಕೆ ದುರ್ಬಲಗೊಂಡಿದೆ.&lt;/p&gt;&lt;h2&gt;ನೋಂದಣಿ ಕಡ್ಡಾಯ:&lt;/h2&gt;&lt;p&gt;ಪ್ರವಾಸಿಗರ ಸಂಖ್ಯೆ ನಿಯಂತ್ರಿಸುವ ಉದ್ದೇಶದಿಂದ ದಿನವೊಂದಕ್ಕೆ ಗರಿಷ್ಠ 500 ಮಂದಿಗೆ ಮಾತ್ರ ಗಡಾಯಿಕಲ್ಲು ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಮುಂಗಡವಾಗಿ ಪೂರ್ವ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ವನ್ಯಜೀವಿ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/mangaluru-news-gadaikallu-known-as-jamalabad-fort-reopens-for-trekking-entry-rules-limits-and-details-gdp/articleshow-2q2p40h"/>
        </item>
        <item>
            <title><![CDATA[Coin Earrings: ಉದ್ದ ಕೂದಲಿನ ಬ್ಯೂಟಿ ಮತ್ತಷ್ಟು ಹೆಚ್ಚಿಸೋ ಈ 6 ಕಾಯಿನ್ ಇಯರಿಂಗ್ಸ್ ನೋಡಿದ್ರಾ?]]></title>
            <link>https://kannada.asianetnews.com/webstories/fashion/best-coin-earrings-for-long-hair-professional-look-gvd-mmetczg</link>
            <guid isPermaLink="true">https://kannada.asianetnews.com/webstories/fashion/best-coin-earrings-for-long-hair-professional-look-gvd-mmetczg</guid>
            <pubDate>Fri, 18 Sep 2026 09:15:54 +0530</pubDate>
            <description><![CDATA[&lt;p&gt;ಉದ್ದನೆಯ ಕೂದಲಿಗೆ ಒಪ್ಪುವ ಗೋಲ್ಡ್ ಕಾಯಿನ್ ಟಾಸೆಲ್, ಪರ್ಲ್ ಕಾಯಿನ್ ಸ್ಟಡ್ ಹಾಗೂ ಫ್ಲೋರಲ್ ಡಿಸೈನ್ ಸಿಲ್ವರ್ ಇಯರಿಂಗ್ಸ್ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkp2z6n1z46p99e7m5gssrvv,imgname-latest-coin-earrings-designs-v-1773489068705.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/best-coin-earrings-for-long-hair-professional-look-gvd-mmetczg"/>
        </item>
        <item>
            <title><![CDATA[ಅಲೋವೆರಾವನ್ನು ಹೀಗೆ ಬಳಸಿದರೆ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗುವುದು ಗ್ಯಾರಂಟಿ!]]></title>
            <link>https://kannada.asianetnews.com/webstories/fashion/best-aloe-vera-face-packs-for-glowing-skin-at-home-all-need-to-know-kvn-m5qksg2</link>
            <guid isPermaLink="true">https://kannada.asianetnews.com/webstories/fashion/best-aloe-vera-face-packs-for-glowing-skin-at-home-all-need-to-know-kvn-m5qksg2</guid>
            <pubDate>Fri, 18 Sep 2026 08:44:15 +0530</pubDate>
            <description><![CDATA[&lt;p&gt;ಅಲೋವೆರಾ ನಮ್ಮ ತ್ವಚೆಗೆ ತುಂಬಾನೇ ಒಳ್ಳೆಯದು. ಅಲೋವೆರಾ ಜೊತೆ ಕೆಲವು ಮನೆಮದ್ದುಗಳನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ, ಚರ್ಮದ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ಮುಖದ ಕಾಂತಿ ಕೂಡ ಹೆಚ್ಚಾಗುತ್ತದೆ. ಆ ಬೆಸ್ಟ್ ಫೇಸ್ ಪ್ಯಾಕ್&zwnj;ಗಳು ಯಾವುವು ಅಂತ ಇಲ್ಲಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2p32mcmzbm3h882y3k9g87a,imgname-fotojet---2025-08-15t103038.879-1755235570067.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/best-aloe-vera-face-packs-for-glowing-skin-at-home-all-need-to-know-kvn-m5qksg2"/>
        </item>
        <item>
            <title><![CDATA[2027ಕ್ಕೆ ಭಾರತೀಯರ ಕನಸಿನ ರೈಲು ಮಾರ್ಗ ಲೋಕಾರ್ಪಣೆ; ಇಲ್ಲಿದೆ ದೇಶದ ಮೊದಲ ಸುರಂಗ ರೈಲು ನಿಲ್ದಾಣ!]]></title>
            <link>https://kannada.asianetnews.com/india-news/indian-railway-sivok-rangpo-railway-line-80-percent-complete-sikkim-train-2027-sat/articleshow-5ceoret</link>
            <guid isPermaLink="true">https://kannada.asianetnews.com/india-news/indian-railway-sivok-rangpo-railway-line-80-percent-complete-sikkim-train-2027-sat/articleshow-5ceoret</guid>
            <pubDate>Fri, 18 Sep 2026 08:26:15 +0530</pubDate>
            <description><![CDATA[&lt;p&gt;ಈಶಾನ್ಯ ಭಾರತದ ಸಿಕ್ಕಿಂ ಗಡಿಯಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ 44.96 ಕಿ.ಮೀ. ಉದ್ದದ 'ಸಿವಾಕ್&zwnj; ರಾಂಗ್ಪೋ ರೈಲು ಮಾರ್ಗ' ನಿರ್ಮಾಣವಾಗುತ್ತಿದೆ. 17,146 ಕೋಟಿ ರೂ. ವೆಚ್ಚದ ಈ ಯೋಜನೆಯ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, 2027ರ ಡಿಸೆಂಬರ್&zwnj;ಗೆ ಲೋಕಾರ್ಪಣೆಯಾಗಲಿದೆ. ಇದರಲ್ಲಿ ಭಾರತದ ಮೊದಲ ಸುರಂಗ ರೈಲು ನಿಲ್ದಾಣವೂ ಸೇರಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2s6nwzn52ah756sfbpgq9bp,imgname-indians-dream-sikkim-railway-1789699748852.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಶಾನ್ಯ ಭಾರತದ ಸಿಕ್ಕಿಂ ಗಡಿಯಲ್ಲಿ ಚೀನಾ ಆರ್ಭಟಕ್ಕೆ ಸೆಡ್ಡು ಹೊಡೆಯಲು ಸೇನಾ ಪಡೆಗಳ ನಿಯೋಜನೆ, ಗಡಿ ಪ್ರದೇಶಗಳ ಮೂಲಸೌಕರ್ಯ ಸುಧಾರಣೆ, ಪ್ರವಾಸೋದ್ಯಮ, ಸ್ಥಳೀಯ ಆರ್ಥಿಕತೆಗೆ ಹೊಸ ಅವಕಾಶ ಸೃಷ್ಟಿಸುವ ಮಹತ್ವಾಕಾಂಕ್ಷಿ &lsquo;ಸಿವಾಕ್&zwnj; ರಾಂಗ್ಪೋ ರೈಲು ಮಾರ್ಗ&rsquo; ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದ್ದು, 2027ರ ಡಿಸೆಂಬರ್&zwnj;ಗೆ ಲೋಕಾರ್ಪಣೆಗೆ ಸಜ್ಜಾಗಲಿದೆ.&lt;/p&gt;&lt;p&gt;ಹಿಮಾಲಯದ ದುರ್ಗಮ ಬೆಟ್ಟ-ಕಣಿವೆಗಳ ನಡುವೆ ನಿರ್ಮಾಣವಾಗುತ್ತಿರುವ 44.96 ಕಿ.ಮೀ. ಉದ್ದದ ಈ ಸವಾಲಿನ ರೈಲು ಮಾರ್ಗ ಮೂಲಕ ಸಿಕ್ಕಿಂಗೆ ಮೊದಲ ಬಾರಿಗೆ ರೈಲು ಸಂಪರ್ಕ ದೊರೆಯಲಿದೆ. ತನ್ಮೂಲಕ ಹಿಮಾಲಯ ಮಡಿಲಲ್ಲಿ ಹೊಸ ರೈಲ್ವೆ ಕ್ರಾಂತಿ ನಡೆಯಲಿದ್ದು, ದೇಶದ ಇತರ ರಾಜ್ಯಗಳು ಹಾಗೂ ಸಿಕ್ಕಿಂ ನಡುವಿನ ಸಂಪರ್ಕದಲ್ಲಿ ಐತಿಹಾಸಿಕ ಬದಲಾವಣೆಗೆ ರೈಲ್ವೆ ಇಲಾಖೆ ನಾಂದಿ ಹಾಡಲಿದೆ.&lt;/p&gt;&lt;p&gt;ಹಿಮಾಲಯದಲ್ಲಿರುವ ಸಿಕ್ಕಿಂಗೆ ಸಂಪರ್ಕ ಅವಕಾಶಗಳ ಕೊರತೆಯಿಂದಾಗಿ ಗಡಿಯಲ್ಲಿ ಸೇನಾಪಡೆಗಳ ನಿಯೋಜನೆ, ಗಡಿ ಭಾಗದ ಮೂಲಸೌಕರ್ಯ ಸುಧಾರಣೆ, ದೇಶದ ಭದ್ರತೆಗೆ ಒತ್ತು ನೀಡುವಂಥ ಚಟುವಟಿಕೆಗೆ ಹಿನ್ನಡೆ ಆಗುತ್ತಿತ್ತು. ಜತೆಗೆ ಭೂಲೋಕದ ಸ್ವರ್ಗದಂತಿರುವ ಸಿಕ್ಕಿಂ ರಾಜ್ಯದ ಪ್ರವಾಸೋದ್ಯಮ, ವ್ಯಾಪಾರ, ಕೈಗಾರಿಕೆ ಹಾಗೂ ಸ್ಥಳೀಯ ಆರ್ಥಿಕತೆಗೆ ಹೊಸ ಅವಕಾಶ ಸೃಷ್ಟಿಸಲು ಸಹ ಸಂಪರ್ಕದ ಕೊರತೆ ಕಾಡುತ್ತಿತ್ತು.&lt;/p&gt;&lt;p&gt;ಇದೀಗ ಡಿಸೆಂಬರ್ 2027ರ ವೇಳೆಗೆ ಭಾರತದ ಮೊದಲ ಸುರಂಗ ರೈಲು ನಿಲ್ದಾಣ ''ತೀಸ್ತಾ ಬಜಾರ್'' ಸೇರಿ ಸಿವಾಕ್-ರಾಂಗ್ಪೋ ರೈಲು ಮಾರ್ಗ ಪೂರ್ಣಗೊಳ್ಳುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಸಿಕ್ಕಿಂನಲ್ಲಿ ಹೊಸ ರೈಲು ಕ್ರಾಂತಿ: ಮೋಹಿಂದರ್&zwnj; ಸಿಂಗ್&zwnj;&lt;/strong&gt;&lt;/h2&gt;&lt;p&gt;ಕರ್ನಾಟಕದಿಂದ ಯೋಜನೆ ಪ್ರಗತಿ ವೀಕ್ಷಣೆಗೆ ತೆರಳಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಯೋಜನೆ ಸಲಹೆಗಾರ ಮೋಹಿಂದರ್ ಸಿಂಗ್ ಅವರು, &lt;strong&gt;ಸಿವಾಕ್&zwnj; ರಾಂಗ್ಪೋ ರೈಲು ಮಾರ್ಗ&lt;/strong&gt;ದ ಮೂಲಕ ಸಿಕ್ಕಿಂನ ಮಂಜಿನಿಂದ ಆವೃತವಾದ ಬೆಟ್ಟಗಳು ಮತ್ತು ಆಳವಾದ ಕಣಿವೆಗಳಲ್ಲಿ ಉಕ್ಕಿನ ಹಳಿಗಳ ಮೇಲೆ ಒಂದು ಹೊಸ ರೈಲು ಕ್ರಾಂತಿ ಶುರುವಾಗಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಅತ್ಯಂತ ದುರ್ಗಮ ಭೂಪ್ರದೇಶವಾದ ಈ ಕಣಿವೆ ಪ್ರದೇಶದಲ್ಲಿ 44.96 ಕಿ.ಮೀ. ಉದ್ದದ ರೈಲ್ವೆ ಯೋಜನೆ ಮೂಲಕ ಸಿಕ್ಕಿಂ ಅನ್ನು ರೈಲ್ವೆ ಸಂಪರ್ಕ ಇಡೀ ದೇಶದ ಜತೆಗೆ ಬೆಸೆಯಲಿದೆ. ಇದು ಭಾರತದ ಈಶಾನ್ಯ ಗಡಿ ಭಾಗಕ್ಕೆ ಕೇವಲ ಸಂಪರ್ಕ ಸಾಧನೆಗೆ ಮಾತ್ರವಲ್ಲದೆ ವಾಣಿಜ್ಯ, ಸಾರಿಗೆ, ಪ್ರವಾಸೋದ್ಯಮ ಸೇರಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;17,146 ಕೋಟಿ ರು. ವೆಚ್ಚದ ಯೋಜನೆ:&lt;/strong&gt;&lt;/h2&gt;&lt;p&gt;ರೈಲ್ವೆ ಇಲಾಖೆಯು ₹17,146 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಯೋಜನೆ ದೇಶದ ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯಂತ ಸವಾಲಿನ ಹಾದಿಯಲ್ಲಿ ಯೋಜನೆ ಕಾಮಗಾರಿ ನಡೆಯತ್ತಿದ್ದು, ಪ್ರಾಕೃತಿಕ ಹಾಗೂ ಭೌಗೋಳಿಕ ಸವಾಲುಗಳನ್ನು ಮೆಟ್ಟಿ ನಿಂತು ಎಂಜಿನಿಯರ್&zwnj;ಗಳು ಹಾಗೂ ಕಾರ್ಮಿಕರು ಹಗಲಿರುಳು ಯೋಜನೆ ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ ಎಂದು ಯೋಜನೆ ಹಿಂದಿನ ಶ್ರಮದ ಬಗ್ಗೆ ಮೋಹಿಂದರ್&zwnj; ಸಿಂಗ್&zwnj; ವಿವರಿಸಿದರು. ಯೋಜನೆಯ ಶೇ.80 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಯೋಜನೆಯಡಿ ಒಟ್ಟು 14 ಸುರಂಗ, 23 ಸೇತುವೆ ಮತ್ತು 5 ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಮೋಹಿಂದರ್&zwnj;ಸಿಂಗ್&zwnj; ಮಾಹಿತಿ ನೀಡಿದರು.&lt;/p&gt;&lt;h2&gt;&lt;strong&gt;ಮೊದಲ ಸುರಂಗ ರೈಲು ನಿಲ್ದಾಣ:&lt;/strong&gt;&lt;/h2&gt;&lt;p&gt;ಮುಖ್ಯವಾಗಿ ಭಾರತದ ಮೊದಲ ಸುರಂಗ ರೈಲು ನಿಲ್ದಾಣವಾದ ರಂಗ್ಪೂ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಯೋಜನೆಯಲ್ಲಿ 5.3 ಕಿ.ಮೀ.ಉದ್ದದ ಅತಿ ಉದ್ದದ ಸುರಂಗವೂ ಸೇರಿದ್ದು, ಅತ್ಯಂತ ಕಿರಿದಾದ ಸುರಂಗದ ಉದ್ದ 542 ಮೀಟರ್&zwnj; ಆಗಿದೆ. ಯೋಜನೆಗೆ ಈಗ ವೇಗ ದೊರೆತಿದ್ದು, ಈ ಪ್ರಮುಖ ರೈಲು ಮಾರ್ಗ ಪೂರ್ಣಗೊಳ್ಳುವ ಮೂಲಕ ಸಿಕ್ಕಿಂ ರಾಜ್ಯ ದೇಶದ ಇತರ ಭಾಗಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಅತ್ಯುತ್ತಮ ಮತ್ತು ಸುರಕ್ಷಿತ ಮಾರ್ಗ ತೆರೆದುಕೊಳ್ಳಲಿದೆ.&lt;/p&gt;&lt;p&gt;ಈ ವೇಳೆ ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕ ಎಂ.ಮಧು, ಪಿಐಬಿ ಸಿಕ್ಕಿಂನ ಮೋಹಿನಾಕ್&zwnj; ಚಟರ್ಜಿ, ಸತ್ಯೇಂದ್ರ ಕುಮಾರ್, ಯೋಜನೆಯ ಮುಖ್ಯ ವ್ಯವಸ್ಥಾಪಕರಾದ ರೆನಿಯಾ ಎಟೆ ಸೇರಿ ಹಲವರು ಹಾಜರಿದ್ದರು.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/indian-railway-sivok-rangpo-railway-line-80-percent-complete-sikkim-train-2027-sat/articleshow-5ceoret"/>
        </item>
        <item>
            <title><![CDATA[ನಿದ್ದೆ ಮಾಡುವಾಗ ಯಾಕೆ ಗೊಣಗುತ್ತಾರೆ? ನಿರ್ಲಕ್ಷ್ಯ ಮಾಡುವಂತಿಲ್ಲ, ಆತಂಕದ ವಿಚಾರ ರಿವೀಲ್]]></title>
            <link>https://kannada.asianetnews.com/life/why-do-people-mumble-while-sleeping/articleshow-ww42lx9</link>
            <guid isPermaLink="true">https://kannada.asianetnews.com/life/why-do-people-mumble-while-sleeping/articleshow-ww42lx9</guid>
            <pubDate>Thu, 17 Sep 2026 22:07:45 +0530</pubDate>
            <description><![CDATA[&lt;p&gt;ನಿದ್ರೆ ಮಾಡುವಾಗ ಗೊಣಗುವ ಅಭ್ಯಾಸ ಅನೇಕರಲ್ಲಿದೆ. ಅಂತವರು ಅದನ್ನು ನಿರ್ಲಕ್ಷ್ಯ ಮಾಡಬಾರದು. ಸಮಸ್ಯೆಯ ಮೂಲ ಏನು ಎಂದು ತಿಳಿದುಕೊಂಡು ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ಅನಾಹುತಕ್ಕೆ ಕಾರಣವಾಗಬಹುದು. ಈ ಕುರಿತ ಒಂದು ವರದಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2b7vw7cgz9rgfdggdfrq6zq,imgname-sleep-at-night-1789231231212.png" type="image/jpeg" height="390" width="690"/>
            <content:encoded><![CDATA[&lt;p&gt;ನಾವು ವಿಶ್ರಾಂತಿಗಾಗಿ ನಿದ್ದೆಗೆ ಜಾರುತ್ತೇವೆ. ಕೆಲವರ ನಿದ್ರೆ ಮಾತ್ರ ತುಂಬಾ ಚಿತ್ರ, ವಿಚಿತ್ರ. ನಿದ್ದೆಯಲ್ಲಿ ಹಲವು ಮಂದಿ ಕನಸು ಕಾಣ್ತಾರೆ, ಗೊಣಗುತ್ತಾರೆ, ಮಾತನ್ನಾಡುತ್ತಾರೆ, ನಗಾಡುತ್ತಾರೆ, ಇನ್ನೂ ಕೆಲವರು ಎದ್ದು ಓಡಾಡುತ್ತಾರೆ! ಒಬ್ಬಬ್ಬರದ್ದೂ ಒಂದೊಂದು ವಿಚಿತ್ರ.&lt;/p&gt;&lt;p&gt;ನಿಮಗೆ ಗೊತ್ತಾ ನಿದ್ದೆಯಲ್ಲಿದ್ದಾಗಲೂ ನಮ್ಮ ಮೆದುಳು ಸಕ್ರಿಯವಾಗಿರುತ್ತದೆ.. ಇದೇ ಕಾರಣಕ್ಕೆ ನಿದ್ರೆ ಮಾಡ್ತಿರುವಾಗ ಜನ ಕನಸು ಕಾಣ್ತಾರೆ. ಈ ಕನಸು ಕಾಣುವುದು, ಗೊಣಗುವುದು, ಮಾತನಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನ ಸಾಮಾನ್ಯ ಎಂದು ಭಾವಿಸುವಂತಿಲ್ಲ. ನಿರ್ಲಕ್ಷಿಸುವಂತೆಯೂ ಇಲ್ಲ. ರಾತ್ರಿ ವೇಳೆ ನೀವು ಗೊಣಗಿದ್ರೆ ಅದು ಅನಾರೋಗ್ಯದ ಸಂಕೇತ. ಈ ವಿಚಾರ ಮೊದಲು ನೆನಪಿಟ್ಟುಕೊಳ್ಳಿ.&lt;/p&gt;&lt;p&gt;ನಿದ್ರೆಯಲ್ಲಿ ಮಾತನಾಡುವುದನ್ನು ಸೊಮ್ನಿಲೋಕ್ವಿ ಎನ್ನುತ್ತಾರೆ. ಇದು ಒಂದು ರೀತಿಯ ನಿದ್ರಾಹೀನತೆ. ಗೊಣಗುವುದು ನಿದ್ರೆಯ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಕನಸಿನಲ್ಲಿ ವಿವಿಧ ಚಟುವಟಿಕೆಗಳನ್ನ ನೋಡಿದ ನಂತರ ಮಾತನ್ನಾಡುತ್ತಾರೆ. ಅಲ್ಲದೇ ಪ್ರತಿಕ್ರಿಯಿಸಲು ಮುಂದಾಗಿ ಒದೆಯುವುದು, ಕೈಗಳನ್ನು ಬೀಸುತ್ತಾರೆ.&lt;/p&gt;&lt;h2&gt;&lt;strong&gt;ಗೊಣಗಲು ಕಾರಣವೇನು?&lt;/strong&gt;&lt;/h2&gt;&lt;p&gt;ನಿದ್ರೆಯಲ್ಲಿ ಗೊಣಗುವುದಕ್ಕೆ ಅನೇಕ ಕಾರಣಗಳಿವೆ. ಇದು ಸಾಮಾನ್ಯವಾಗಿ ಕನಸು ಕಾಣುವುದು, ಭಾವನೆಗಳನ್ನು ಸಂಸ್ಕರಿಸುವುದು ಮತ್ತು ನಿದ್ರೆಗೆ ಸಂಬಂಧಿಸಿದ ಇತರ ಪ್ರಕ್ರಿಯೆಗಳಿಂದ ಉಂಟಾಗುತ್ತದೆ. ನಿದ್ರೆಯಲ್ಲಿ ಮಾತನಾಡುವುದಕ್ಕೆ ಸಾಮಾನ್ಯ ಕಾರಣ ಒತ್ತಡ ಮತ್ತು ಆತಂಕ. ನಿದ್ದೆ ಮಾಡುವಾಗ ಒಬ್ಬ ವ್ಯಕ್ತಿಯು ದಿನದ ಒತ್ತಡ ಮತ್ತು ಆತಂಕವನ್ನು ಪ್ರತಿಬಿಂಬಿಸುತ್ತಾನೆ. ನಂತರ ಮೆದುಳು ದಿನದ ಘಟನೆಗಳು ಮತ್ತು ನೆನಪುಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಇದು ನಿದ್ರೆಯಲ್ಲಿ ಮಾತನಾಡಲು ಕಾರಣವಾಗುತ್ತದೆ. ಕೆಲವು ಜನರು ಭಯ, ಆತಂಕ ಅಥವಾ ಹಠಾತ್ ಒತ್ತಡದಿಂದ ಉಂಟಾಗಬಹುದಾದ ದುಃಸ್ವಪ್ನಗಳನ್ನು ನೋಡುತ್ತಾ ನಿದ್ರೆಯಲ್ಲಿ ಮಾತನಾಡುತ್ತಾರೆ.&lt;/p&gt;&lt;h2&gt;&lt;strong&gt;ನಮಗೆ ಏನು ಗೊತ್ತಿರಬೇಕು?&lt;/strong&gt;&lt;/h2&gt;&lt;p&gt;ನಿದ್ರೆಯಲ್ಲಿ ಗೊಣಗುವುದು ಸಾಮಾನ್ಯ. ದೈನಂದಿನ ನಿದ್ರೆಯಲ್ಲಿ ಗೊಣಗುವುದು ಅಥವಾ ದುಃಸ್ವಪ್ನಗಳು ಕಳವಳಕ್ಕೆ ಕಾರಣವಾಗಬಹುದು. ಕೆಲವು ಅಭ್ಯಾಸಗಳನ್ನು ಮಾಡೋದ್ರಿಂದ ಇದನ್ನ ತಡೆಯಬಹುದು.&lt;/p&gt;&lt;ul&gt; &lt;li&gt;ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ, ಇದೇ ಗೊಣಗಲು ಪ್ರಮುಖ ಕಾರಣ&lt;/li&gt; &lt;li&gt;ಮಲಗುವ ಮುನ್ನ ಮದ್ಯ, ಚಹಾ ಅಥವಾ ಕಾಫಿಯನ್ನು ತಪ್ಪಿಸಿ&lt;/li&gt; &lt;li&gt;ಈ ರೀತಿಯ ಅಭ್ಯಾದ ನಿದ್ದೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ&lt;/li&gt; &lt;li&gt;ಮಲಗುವ ಕೋಣೆಯ ವಾತಾವರಣವನ್ನು ಶಾಂತವಾಗಿಡಿ&lt;/li&gt; &lt;li&gt;ಮಲಗುವ ಮುನ್ನ ಪುಸ್ತಕ ಓದುವುದು, ಸಂಗೀತವನ್ನು ಕೇಳುವುದು ಒಳ್ಳೆಯದು&lt;/li&gt;&lt;/ul&gt;&lt;p&gt;ನಿದ್ದೆ ಎಂಬುದು ಮಾನವ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ನೈಸರ್ಗಿಕ ಪ್ರಕ್ರಿಯೆ. ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಪೌಷ್ಟಿಕ ಆಹಾರ ಮತ್ತು ವ್ಯಾಯಾಮ ಎಷ್ಟು ಮುಖ್ಯವೋ, ಸರಿಯಾದ ನಿದ್ದೆಯೂ ಅಷ್ಟೇ ಪ್ರಮುಖ ಆಗಿದೆ. ಸಮಾನವಾಗಿ ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಗಾಢ ನಿದ್ದೆ ಮಾಡುವುದು ಆರೋಗ್ಯಕರ ಜೀವನಶೈಲಿಗೆ ಅತ್ಯಗತ್ಯ. ಇನ್ಮುಂದೆ ಯಾವುತ್ತೂ ನಿದ್ದೆಯನ್ನ ತಪ್ಪಿಸಿಕೊಳ್ಳಬೇಡಿ. ಒಂದು ವೇಳೆ ನಿಮ್ಮ ನಿದ್ದೆಯಲ್ಲಿ ಏರುಪೇರು ಆಗಿದೆ ಅಂದ್ರೆ ಆರೋಗ್ಯದಲ್ಲಿ ಏರುಪೇರು ಆಗಲಿದೆ ಎಂದರ್ಥ.&lt;/p&gt;]]></content:encoded>
            <category>life</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/life/why-do-people-mumble-while-sleeping/articleshow-ww42lx9"/>
        </item>
        <item>
            <title><![CDATA[ಚಿಕನ್ ಖರೀದಿಸಿ ಫ್ರಿಜ್‌ನಲ್ಲಿ ಇಡ್ತೀರಾ? ಎಷ್ಟು ದಿನದೊಳಗೆ ತಿನ್ನಬೇಕು ಗೊತ್ತೇ?]]></title>
            <link>https://kannada.asianetnews.com/kitchen/how-long-does-chicken-stay-safe-in-the-refrigerator-know-the-right-storage-rules/articleshow-xxr6eaq</link>
            <guid isPermaLink="true">https://kannada.asianetnews.com/kitchen/how-long-does-chicken-stay-safe-in-the-refrigerator-know-the-right-storage-rules/articleshow-xxr6eaq</guid>
            <pubDate>Thu, 17 Sep 2026 22:05:28 +0530</pubDate>
            <description><![CDATA[&lt;p&gt;Chicken Storage Tips: ಚಿಕನ್ ಖರೀದಿಸಿ ಫ್ರಿಜ್&zwnj;ನಲ್ಲಿ ಇಟ್ಟರೆ ಸಾಕೇ? ಕಚ್ಚಾ ಚಿಕನ್ ಅನ್ನು ಎಷ್ಟು ದಿನಗಳವರೆಗೆ ಫ್ರಿಜ್&zwnj;ನಲ್ಲಿ ಸುರಕ್ಷಿತವಾಗಿ ಇಡಬಹುದು, ಫ್ರಿಜ್&zwnj;ನ ತಾಪಮಾನ ಎಷ್ಟಿರಬೇಕು ಮತ್ತು ಫ್ರೀಜ್ ಮಾಡಿದ ಚಿಕನ್ ಅನ್ನು ಹೇಗೆ ಕರಗಿಸಬೇಕು ಎಂಬುದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ. ಇಲ್ಲಿನ ಆ ಸಂಪೂರ್ಣ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2r3hk3e4yz0359tzr31wc32,imgname-chicken-storage-tips-1789662907501.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಚಿಕನ್ ಖರೀದಿಸಿ ಫ್ರಿಜ್&zwnj;ನಲ್ಲಿ ಇಡ್ತೀರಾ?&lt;/strong&gt;&lt;/h2&gt;&lt;p&gt;ಚಿಕನ್ ಖರೀದಿಸಿ ಫ್ರಿಜ್&zwnj;ನಲ್ಲಿ ಇಡುವುದು ಮಾತ್ರ ಸಾಕಾಗುವುದಿಲ್ಲ. ಸರಿಯಾದ ತಾಪಮಾನ, ಪ್ಯಾಕಿಂಗ್ ಮತ್ತು ಸ್ವಚ್ಛತೆ ಕೂಡ ಮುಖ್ಯ. ತಪ್ಪಾಗಿ ಸಂಗ್ರಹಿಸಿದರೆ ಫ್ರಿಜ್&zwnj;ನಲ್ಲಿದ್ದರೂ ಚಿಕನ್ ಬೇಗ ಹಾಳಾಗಬಹುದು. ವಿಶೇಷವಾಗಿ ಹೆಚ್ಚು ಪ್ರಮಾಣದಲ್ಲಿ ಚಿಕನ್ ಖರೀದಿಸುವವರು ಈ ನಿಯಮಗಳನ್ನು ತಿಳಿದುಕೊಳ್ಳಬೇಕು.&lt;/p&gt;&lt;h3&gt;&lt;strong&gt;ಫ್ರಿಜ್&zwnj;ನ ತಾಪಮಾನ ಎಷ್ಟಿರಬೇಕು?&lt;/strong&gt;&lt;/h3&gt;&lt;p&gt;ಕಚ್ಚಾ ಚಿಕನ್ ಇಡುವ ಫ್ರಿಜ್&zwnj;ನ ತಾಪಮಾನ 5&deg;C ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಸಾಧ್ಯವಾದರೆ ಫ್ರಿಜ್ ಥರ್ಮಾಮೀಟರ್ ಬಳಸಿ ನಿಜವಾದ ತಾಪಮಾನ ಪರಿಶೀಲಿಸಿ. ಫ್ರಿಜ್ ಅನ್ನು ಪದೇಪದೆ ತೆರೆಯುವುದು ಅಥವಾ ಹೆಚ್ಚು ತುಂಬಿರುವುದರಿಂದ ತಾಪಮಾನ ಬದಲಾಗಬಹುದು. ಚಿಕನ್ ಅನ್ನು ಯಾವಾಗಲೂ ಕೆಳಗಿನ ಶೆಲ್ಫ್&zwnj;ನಲ್ಲಿ ಇಡಿ. ಸೀಲ್ ತೆರೆದಿದ್ದರೆ ಏರ್&zwnj;ಟೈಟ್ ಡಬ್ಬಿಯಲ್ಲಿ ಇಡುವುದು ಉತ್ತಮ.&lt;/p&gt;&lt;p&gt;&lt;strong&gt;ಕಚ್ಚಾ ಚಿಕನ್ ಎಷ್ಟು ದಿನ ಇಡಬಹುದು?&lt;/strong&gt;&lt;/p&gt;&lt;p&gt;ಸಾಮಾನ್ಯವಾಗಿ ಕಚ್ಚಾ ಚಿಕನ್ ಅನ್ನು ಖರೀದಿಸಿದ 1&ndash;2 ದಿನಗಳೊಳಗೆ ಬಳಸುವುದು ಉತ್ತಮ. ಇದು ಥೈಸ್, ವಿಂಗ್ಸ್, ಡ್ರಮ್&zwnj;ಸ್ಟಿಕ್ಸ್ ಮತ್ತು ಇಡೀ ಚಿಕನ್&zwnj;ಗೂ ಅನ್ವಯಿಸುತ್ತದೆ. ಆ ಅವಧಿಯಲ್ಲಿ ಅಡುಗೆ ಮಾಡಲು ಸಾಧ್ಯವಾಗದಿದ್ದರೆ ಫ್ರೀಜರ್&zwnj;ನಲ್ಲಿ ಇಡುವುದು ಉತ್ತಮ. ಸೀಲ್ ಮಾಡಿರುವ ವ್ಯಾಕ್ಯೂಮ್ ಪ್ಯಾಕ್ ಚಿಕನ್ ಹೆಚ್ಚು ಕಾಲ ಉಳಿಯಬಹುದು; ಆದರೆ ಪ್ಯಾಕೆಟ್ ತೆರೆದ ನಂತರ ಬೇಗ ಬಳಸಬೇಕು.&lt;/p&gt;&lt;p&gt;&lt;strong&gt;ಮ್ಯಾರಿನೇಟ್ ಮಾಡಿದ ಚಿಕನ್ ಹೆಚ್ಚು ದಿನ ಉಳಿಯುತ್ತಾ?&lt;/strong&gt;&lt;/p&gt;&lt;p&gt;ಇಲ್ಲ. ಮಸಾಲೆ ಅಥವಾ ಮ್ಯಾರಿನೇಷನ್ ಮಾಡಿದರೆ ಚಿಕನ್&zwnj;ನ ರುಚಿ ಮತ್ತು ಮೃದುತ್ವ ಹೆಚ್ಚಬಹುದು, ಆದರೆ ಅದರ ಸುರಕ್ಷಿತ ಸಂಗ್ರಹಣಾ ಅವಧಿ ಹೆಚ್ಚುವುದಿಲ್ಲ. ಮನೆಯಲ್ಲಿ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಕೂಡ 2 ದಿನಗಳೊಳಗೆ ಬೇಯಿಸುವುದು ಉತ್ತಮ.&lt;/p&gt;&lt;p&gt;&lt;strong&gt;ಚಿಕನ್ ಅನ್ನು ಹೇಗೆ ಪ್ಯಾಕ್ ಮಾಡಬೇಕು?&lt;/strong&gt;&lt;/p&gt;&lt;p&gt;ಸೀಲ್ ಸರಿಯಾಗಿರುವ ಪ್ಯಾಕೆಟ್ ಅನ್ನು ಹಾಗೆಯೇ ಫ್ರಿಜ್&zwnj;ನಲ್ಲಿ ಇಡಬಹುದು. ಪ್ಯಾಕೆಟ್ ತೆರೆದಿದ್ದರೆ ಏರ್&zwnj;ಟೈಟ್ ಡಬ್ಬಿ, ಕ್ಲಿಂಗ್ ಫಿಲ್ಮ್ ಅಥವಾ ಜಿಪ್&zwnj;ಲಾಕ್ ಬ್ಯಾಗ್ ಬಳಸಿ. ಹೆಚ್ಚು ದಿನ ಫ್ರೀಜ್ ಮಾಡಬೇಕಾದರೆ ಚಿಕನ್ ಅನ್ನು ಸಣ್ಣ ಭಾಗಗಳಾಗಿ ಪ್ಯಾಕ್ ಮಾಡಿ, ಅದರ ಮೇಲೆ ಫ್ರೀಜ್ ಮಾಡಿದ ದಿನಾಂಕ ಬರೆಯಿರಿ.&lt;/p&gt;&lt;p&gt;&lt;strong&gt;ಫ್ರೀಜ್ ಮಾಡಿದ ಚಿಕನ್ ಹೇಗೆ ಕರಗಿಸಬೇಕು?&lt;/strong&gt;&lt;/p&gt;&lt;p&gt;ಚಿಕನ್ ಕರಗಿಸಲು ಅತ್ಯಂತ ಸುರಕ್ಷಿತ ವಿಧಾನವೆಂದರೆ ರಾತ್ರಿ ಫ್ರಿಜ್&zwnj;ನಲ್ಲೇ ಇಡುವುದು. ಕೆಳಗಿನ ಶೆಲ್ಫ್&zwnj;ನಲ್ಲಿ ಮುಚ್ಚಿದ ಡಬ್ಬಿಯಲ್ಲಿ ಇಡಿ. ಬೇಗ ಕರಗಿಸಬೇಕಾದರೆ ಸೀಲ್ ಮಾಡಿದ ಬ್ಯಾಗ್&zwnj;ನಲ್ಲಿ ತಣ್ಣೀರಿನಲ್ಲಿ ಇಟ್ಟು, ಸುಮಾರು 30 ನಿಮಿಷಕ್ಕೊಮ್ಮೆ ನೀರು ಬದಲಾಯಿಸಿ. ಬಿಸಿ ಅಥವಾ ಉಗುರುಬೆಚ್ಚಗಿನ ನೀರು ಬಳಸಬೇಡಿ. ಮೈಕ್ರೋವೇವ್&zwnj;ನಲ್ಲಿ ಡಿಫ್ರಾಸ್ಟ್ ಮಾಡಿದರೆ ತಕ್ಷಣವೇ ಬೇಯಿಸಿ. ಕೋಣೆಯ ತಾಪಮಾನದಲ್ಲಿ ಚಿಕನ್ ಕರಗಿಸಬೇಡಿ.&lt;/p&gt;&lt;p&gt;&lt;strong&gt;ಕ್ರಾಸ್-ಕಂಟಾಮಿನೇಷನ್ ತಪ್ಪಿಸುವುದು ಹೇಗೆ?&lt;/strong&gt;&lt;/p&gt;&lt;p&gt;ಕಚ್ಚಾ ಚಿಕನ್ ಅನ್ನು ಬೇಯಿಸಿದ ಆಹಾರ ಮತ್ತು ನೇರವಾಗಿ ತಿನ್ನುವ ವಸ್ತುಗಳಿಂದ ದೂರವಿಡಿ. ಕೆಳಗಿನ ಶೆಲ್ಫ್&zwnj;ನಲ್ಲಿ ಇಡುವುದರಿಂದ ಚಿಕನ್&zwnj;ನ ದ್ರವ ಇತರ ಆಹಾರದ ಮೇಲೆ ಬೀಳುವುದನ್ನು ತಡೆಯಬಹುದು. ಚಿಕನ್&zwnj;ಗೆ ಪ್ರತ್ಯೇಕ ಚಾಪಿಂಗ್ ಬೋರ್ಡ್ ಬಳಸಿ ಮತ್ತು ಬಿಸಿ ನೀರು-ಸಾಬೂನಿನಿಂದ ಸ್ವಚ್ಛಗೊಳಿಸಿ. ಚಿಕನ್ ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯಿರಿ. ತರಕಾರಿ ಮತ್ತು ಚಿಕನ್ ಎರಡನ್ನೂ ತಯಾರಿಸುತ್ತಿದ್ದರೆ ಮೊದಲು ತರಕಾರಿ ಕತ್ತರಿಸಿ, ನಂತರ ಕಚ್ಚಾ ಚಿಕನ್ ಕೈಗೆತ್ತಿಕೊಳ್ಳಿ.&lt;/p&gt;&lt;p&gt;&lt;strong&gt;ಚಿಕನ್ ಹಾಳಾಗಿರುವುದು ಹೇಗೆ ಗೊತ್ತಾಗುತ್ತದೆ?&lt;/strong&gt;&lt;/p&gt;&lt;p&gt;ಬಳಸುವ ಮೊದಲು ಚಿಕನ್&zwnj;ನ ವಾಸನೆ, ಬಣ್ಣ ಮತ್ತು ರಚನೆ ಗಮನಿಸಿ. ಹುಳಿ ಅಥವಾ ಅಸಹಜ ವಾಸನೆ ಬರುತ್ತಿದ್ದರೆ, ಅಥವಾ ಚಿಕನ್ ಅತಿಯಾಗಿ ಜಿಗುಟಾಗಿ ಅಥವಾ ಸ್ಲೈಮಿ ಆಗಿದ್ದರೆ ಬಳಸಬೇಡಿ. ಅನುಮಾನವಿದ್ದರೆ ಅದನ್ನು ಎಸೆಯುವುದೇ ಸುರಕ್ಷಿತ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/kitchen/how-long-does-chicken-stay-safe-in-the-refrigerator-know-the-right-storage-rules/articleshow-xxr6eaq"/>
        </item>
        <item>
            <title><![CDATA[ಪರ್ಫೆಕ್ಟ್ ಸಂಗಾತಿಯನ್ನು ಹುಡುಕಬೇಡಿ; ಯಶಸ್ವಿ ದಾಂಪತ್ಯ ಜೀವನದ ಬಗ್ಗೆ ಸುಧಾ ಮೂರ್ತಿ ತಿಳಿಸಿದ ಸೀಕ್ರೆಟ್ಸ್]]></title>
            <link>https://kannada.asianetnews.com/relationship/sudha-murty-shares-5-marriage-tips-for-a-strong-and-healthy-relationship/articleshow-kq4a4s1</link>
            <guid isPermaLink="true">https://kannada.asianetnews.com/relationship/sudha-murty-shares-5-marriage-tips-for-a-strong-and-healthy-relationship/articleshow-kq4a4s1</guid>
            <pubDate>Thu, 17 Sep 2026 21:49:01 +0530</pubDate>
            <description><![CDATA[&lt;p&gt;ವೈವಾಹಿಕ ಜೀವನದಲ್ಲಿ ಜಗಳ, ಭಿನ್ನಾಭಿಪ್ರಾಯಗಳು ಸಹಜ. ಆದರೆ ಅವುಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಗಂಡ-ಹೆಂಡತಿ ನಡುವೆ ಪರಸ್ಪರ ಅರ್ಥಮಾಡಿಕೊಳ್ಳುವಿಕೆ, ಗೌರವ, ಹೊಂದಾಣಿಕೆ ಮತ್ತು ಜವಾಬ್ದಾರಿಗಳ ಹಂಚಿಕೆ ಏಕೆ ಮುಖ್ಯ ಎಂಬುದನ್ನು ಸುದಾ ಮೂರ್ತಿ ತಮ್ಮ ಸಲಹೆಗಳ ಮೂಲಕ ವಿವರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2r2hnc5e590xhdb8ez6725g,imgname-sudha-murthy-1789661861251.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸುಖ ದಾಂಪತ್ಯ ಜೀವನಕ್ಕೆ ಸೂತ್ರಗಳು&lt;/strong&gt;&lt;/h2&gt;&lt;p&gt;ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಒಡನಾಟ ಎಷ್ಟು ಮುಖ್ಯವೋ, ಪರಸ್ಪರ ಅರ್ಥಮಾಡಿಕೊಳ್ಳುವುದು ಮತ್ತು ಸಮಾನತೆಯೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಆದಾಗ್ಯೂ, ಯಶಸ್ವಿ ದಾಂಪತ್ಯ ಎಂದರೆ ಪತಿ ಮತ್ತು ಪತ್ನಿ ಎಂದಿಗೂ ಜಗಳವಾಡುವುದಿಲ್ಲ ಅಥವಾ ವಾದಿಸುವುದಿಲ್ಲ ಎಂದು ಅನೇಕ ಜನರು ಭಾವಿಸುವ ತಪ್ಪನ್ನು ಮಾಡುತ್ತಾರೆ. ಈ ಆಲೋಚನೆಯು ಹೆಚ್ಚಾಗಿ ದಾಂಪತ್ಯವನ್ನು ಇನ್ನಷ್ಟು ತೊಂದರೆಗೆ ಸಿಲುಕಿಸುತ್ತದೆ. ಜನರು ತಮ್ಮ ಸ್ವಂತ ದಾಂಪತ್ಯಕ್ಕಿಂತ ಇತರ ದಂಪತಿಗಳ ಮೇಲೆ ಹೆಚ್ಚು ಗಮನಹರಿಸಲು ಪ್ರಾರಂಭಿಸುತ್ತಾರೆ, ಉದಾಹರಣೆಗೆ, ಅವರ ಗುಣಗಳನ್ನು ತಮ್ಮ ಸಂಗಾತಿಯೊಂದಿಗೆ ಹೋಲಿಸುತ್ತಾರೆ, ಆದರೆ ವಾಸ್ತವವು ತುಂಬಾ ಭಿನ್ನವಾಗಿದೆ. ಪರ್ಫೆಕ್ಟ್ ಕಪಲ್ಸ್ ತಮ್ಮ ಸಂಘರ್ಷಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ.&lt;/p&gt;&lt;p&gt;ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮತ್ತು ಇನ್ಫೋಸೀಸ್ ನ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ವಿಮದುವೆಯ ಬಗ್ಗೆ ಹೇಳಿರುವ ವಿಷಯ ಕೇಳಿದ್ರೆ ನಿಮ್ಮ ದಾಂಪತ್ಯ ಜೀವನ ಸೂಪರ್ ಆಗಿರುತ್ತೆ.&lt;/p&gt;&lt;h3&gt;&lt;strong&gt;ದಾಂಪತ್ಯ ಜೀವನ ಯಶಸ್ವಿಗೊಳಿಸಲು ಸೂತ್ರಗಳು&lt;/strong&gt;&lt;/h3&gt;&lt;ol&gt; &lt;li&gt;ಮದುವೆ ಯಶಸ್ವಿಯಾಗಲು, ಪರ್ಫೆಕ್ಟ್ ಆಗಿರುವುದು ಅನಿವಾರ್ಯವಲ್ಲ ಎಂದು ಸುಧಾ ಮೂರ್ತಿ ಹೇಳುತ್ತಾರೆ. ಬದಲಿಗೆ, ಪರಸ್ಪರರ ನ್ಯೂನತೆಗಳನ್ನು ಒಪ್ಪಿಕೊಳ್ಳುವುದು ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಹೆಚ್ಚು ಮುಖ್ಯ. ಆದ್ದರಿಂದ, ನೀವು ಪರಿಪೂರ್ಣ ವ್ಯಕ್ತಿಯನ್ನು ಹುಡುಕುತ್ತಿದ್ದರೆ ಅಥವಾ ನಿಮ್ಮ ಸಂಗಾತಿಯನ್ನು ಪರಿಪೂರ್ಣವಾಗಿಸಲು ಪ್ರಯತ್ನಿಸುತ್ತಿದ್ದರೆ, ಅದು ನಿಮ್ಮ ಮದುವೆಗೆ ಹಾನಿಕಾರಕವಾಗಬಹುದು.&lt;/li&gt; &lt;li&gt;ಗಂಡ ಹೆಂಡತಿ ಸಾಂದರ್ಭಿಕವಾಗಿ ಜಗಳವಾಡುವುದು ಸಹಜ ಎನ್ನುತ್ತಾರೆ ಸುಧಾ ಮೂರ್ತಿ. ತಾವು ಎಂದಿಗೂ ಜಗಳವಾಡಿಲ್ಲ ಎಂದು ದಂಪತಿಗಳು ಹೇಳಿಕೊಳ್ಳುವುದು ಅಸಾಮಾನ್ಯವೆನಿಸಬಹುದು. ಅವರ ಪ್ರಕಾರ, ನಿಜವಾದ ಸಮಸ್ಯೆ ಜಗಳ ಸಂಭವಿಸುತ್ತದೆಯೋ ಇಲ್ಲವೋ ಅಲ್ಲ, ಆದರೆ ಅದನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದು.&lt;/li&gt; &lt;li&gt;ಪತಿ ಮತ್ತು ಪತ್ನಿ ಒಂದೇ ಸಮಯದಲ್ಲಿ ಕೋಪಗೊಳ್ಳಬಾರದು ಎನ್ನುತ್ತಾರೆ ಸುಧಾ ಮೂರ್ತಿ. ಒಬ್ಬರು ಕೋಪಗೊಂಡರೆ, ಇನ್ನೊಬ್ಬರು ಶಾಂತವಾಗಿರಲು ಪ್ರಯತ್ನಿಸಬೇಕು. ಅವರ ಸ್ವಂತ ವೈವಾಹಿಕ ಜೀವನದ ಉದಾಹರಣೆಯನ್ನು ಉಲ್ಲೇಖಿಸಿ, ನಾರಾಯಣ ಮೂರ್ತಿ ಕೋಪಗೊಂಡಾಗ, ನಾನು ಶಾಂತವಾಗಿರುತ್ತೇನೆ ಮತ್ತು ನಾನು ಕೋಪಗೊಂಡಾಗ, ಪತಿ ತಾಳ್ಮೆಯನ್ನು ಕಾಪಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಇದು ಸಣ್ಣ ವಿಷಯಗಳು ದೊಡ್ಡ ವಿವಾದಗಳಾಗಿ ಬೆಳೆಯುವುದನ್ನು ತಡೆಯುತ್ತದೆ.&lt;/li&gt; &lt;li&gt;ಕೆಲಸ ಮಾಡುವ ದಂಪತಿಗಳ ಬಗ್ಗೆ ಮಾತನಾಡಿದ ಸುಧಾ ಮೂರ್ತಿ, ಗಂಡ ಮತ್ತು ಹೆಂಡತಿ ಇಬ್ಬರೂ ಕೆಲಸ ಮಾಡುತ್ತಿದ್ದರೆ, ಮನೆಯ ಜವಾಬ್ದಾರಿಗಳನ್ನು ಇಬ್ಬರೂ ಹಂಚಿಕೊಳ್ಳಬೇಕು. ಅಡುಗೆ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಇತರ ಮನೆಕೆಲಸಗಳು ಮಹಿಳೆಯ ಏಕೈಕ ಜವಾಬ್ದಾರಿಯಾಗಿರಬಾರದು ಎಂದು ಹೇಳಿದರು.&lt;/li&gt; &lt;li&gt;ಸುಧಾ ಮೂರ್ತಿಯವರ ಪ್ರಕಾರ, ಗೌರವ, ಸಹಕಾರ ಮತ್ತು ತಿಳುವಳಿಕೆ ಸ್ಟ್ರಾಂಗ್ ಮತ್ತು ಸಂತೋಷದ ದಾಂಪತ್ಯದ ನಿಜವಾದ ಅಡಿಪಾಯ. ಆದ್ದರಿಂದ, ಹೆಂಡತಿಯನ್ನು ತನ್ನ ಸ್ವಂತ ತಾಯಿಗೆ ಹೋಲಿಸುವುದು ಸರಿಯಲ್ಲ. ಹಿಂದೆ, ಅನೇಕ ಮಹಿಳೆಯರು ಗೃಹಿಣಿಯರಾಗಿದ್ದರು, ಆದರೆ ಇಂದು, ಅನೇಕ ಮಹಿಳೆಯರು ಸಹ ಕೆಲಸ ಮಾಡುತ್ತಾರೆ. ಆದ್ದರಿಂದ, ಇಂದು ಪತ್ನಿಯರಿಂದ, ತಮ್ಮ ತಾಯಿಯ ರೀತಿಯ ಆರೈಕೆ, ಅಡುಗೆ ನಿರೀಕ್ಷಿಸುವುದು ಸರಿಯಲ್ಲ. ಅವರು ಹೇಗಿದ್ದಾರೋ ಹಾಗೆ ಒಪ್ಪಿ, ಗೌರವಿಸಿ ಎನ್ನುತ್ತಾರೆ ಸುಧಾ ಮೂರ್ತಿ.&lt;/li&gt;&lt;/ol&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/relationship/sudha-murty-shares-5-marriage-tips-for-a-strong-and-healthy-relationship/articleshow-kq4a4s1"/>
        </item>
        <item>
            <title><![CDATA[ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ 7 ಸೂಪರ್ ಫುಡ್‌ಗಳು]]></title>
            <link>https://kannada.asianetnews.com/webstories/health-life/7-best-superfoods-to-boost-immunity-in-kids-naturally-avib6l9</link>
            <guid isPermaLink="true">https://kannada.asianetnews.com/webstories/health-life/7-best-superfoods-to-boost-immunity-in-kids-naturally-avib6l9</guid>
            <pubDate>Thu, 17 Sep 2026 20:41:43 +0530</pubDate>
            <description><![CDATA[&lt;p&gt;Child healthcare tips: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಅವರನ್ನು ಪದೇ ಪದೇ ಕಾಡುವ ಕಾಯಿಲೆಗಳಿಂದ ದೂರವಿಡಲು ಸಹಾಯ ಮಾಡುವ 7 ಪ್ರಮುಖ ಸೂಪರ್ ಫುಡ್&zwnj;ಗಳ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq6r3zh1a8sw9sd8e6yg2xy2,imgname-citrus-fruits--1--1777269341729.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/health-life/7-best-superfoods-to-boost-immunity-in-kids-naturally-avib6l9"/>
        </item>
        <item>
            <title><![CDATA[ಗಣೇಶ ವಿಸರ್ಜನೆ ವೇಳೆ ಪುಟ್ಟ ಮಗುವಿನಂತೆ ಕಣ್ಣೀರಿಟ್ಟ ಯಜುವೇಂದ್ರ ಚಾಹಲ್‌ ಮಾಜಿ ಪತ್ನಿ ಧನಶ್ರೀ ವರ್ಮಾ]]></title>
            <link>https://kannada.asianetnews.com/relationship/dhanashree-verma-emotional-ganpati-visarjan-yuzvendra-chahal-san/articleshow-ptgqy90</link>
            <guid isPermaLink="true">https://kannada.asianetnews.com/relationship/dhanashree-verma-emotional-ganpati-visarjan-yuzvendra-chahal-san/articleshow-ptgqy90</guid>
            <pubDate>Thu, 17 Sep 2026 20:17:56 +0530</pubDate>
            <description><![CDATA[&lt;p&gt;ಟೀಮ್ ಇಂಡಿಯಾ ಕ್ರಿಕೆಟರ್ ಯಜುವೇಂದ್ರ ಚಹಾಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಗಣಪತಿ ವಿಸರ್ಜನೆ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರು ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2q005kjysbrrjaemxdak9hz,imgname-dhanashree-verma-ganpati-visarjan.jpg-1789625636466.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟೀ&lt;/strong&gt;ಮ್ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ (Yuzvendra Chahal) ಅವರ ಮಾಜಿ ಪತ್ನಿ ಹಾಗೂ ಖ್ಯಾತ ಕೊರಿಯೋಗ್ರಾಫರ್ ಧನಶ್ರೀ ವರ್ಮಾ (Dhanashree Verma), ಗಣಪತಿ ವಿಸರ್ಜನೆಯ (Ganpati Visarjan) ವೇಳೆ ತೀವ್ರ ಭಾವುಕರಾಗಿ ಕಣ್ಣೀರಿಟ್ಟಿರುವ ಘಟನೆ ನಡೆದಿದೆ. ಗಣೇಶೋತ್ಸವದ ಕೊನೆಯ ದಿನದಂದು ಗಣಪತಿಗ ವಿದಾಯ ಹೇಳುವ ಕ್ಷಣದಲ್ಲಿ ಧನಶ್ರೀ ತಮ್ಮ ಕಣ್ಣೀರನ್ನು ತಡೆದುಕೊಳ್ಳಲಾಗದೆ ಭಾವುಕರಾಗಿದ್ದು, ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಕಳೆದ ವರ್ಷದ ಮಾರ್ಚ್&zwnj;ನಲ್ಲಿ (ಮಾರ್ಚ್ 2025) ಕಾನೂನುಬದ್ಧವಾಗಿ ವಿಚ್ಛೇದನ (Divorce) ಪಡೆದು ಬೇರೆಯಾಗಿದ್ದರು.&lt;/p&gt;&lt;h2&gt;&lt;strong&gt;ಕ್ಯಾಮೆರಾದಲ್ಲಿ ಸೆರೆಯಾಯ್ತು ಭಾವುಕ ಕ್ಷಣ&lt;/strong&gt;&lt;/h2&gt;&lt;p&gt;ಗಣಪತಿ ವಿಸರ್ಜನೆಯ ಪ್ರತಿಯೊಂದು ಕ್ಷಣವೂ ಭಕ್ತರಿಗೆ ಅತ್ಯಂತ ಭಾವನಾತ್ಮಕವಾಗಿರುತ್ತದೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್&zwnj;ನಲ್ಲಿ ಧನಶ್ರೀ ವರ್ಮಾ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಿಯಾಗಿದ್ದು, ಅವರ ಸುತ್ತಲೂ ನೂರಾರು ಭಕ್ತಾದಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಕ್ಯಾಮೆರಾಗಳಿದ್ದವು. ಮೂರ್ತಿಯನ್ನು ನೀರಿಗೆ ವಿಸರ್ಜನೆ ಮಾಡುವಾಗ ಧನಶ್ರೀ ಇದ್ದಕ್ಕಿದ್ದಂತೆ ಭಾವುಕರಾಗಿದ್ದು, ಅವರ ಕಣ್ಣುಗಳಿಂದ ನೀರು ಹರಿಯುತ್ತಿರುವುದು ಹಾಗೂ ಮುಖದಲ್ಲಿ ಬೇಸರದ ಭಾವನೆ ಎದ್ದು ಕಾಣುತ್ತಿತ್ತು. ಜನಸಂದಣಿಯ ನಡುವೆ ನಡೆದ ಈ ಭಾವನಾತ್ಮಕ ಕ್ಷಣ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದೆ.&lt;/p&gt;&lt;h2&gt;&lt;strong&gt;ಕೋವಿಡ್&zwnj; ಕಾಲದ ಪ್ರೇಮಕಥೆ - ಮಾರ್ಚ್ 2025 ರಲ್ಲಿ ಡಿವೋರ್ಸ್!&lt;/strong&gt;&lt;/h2&gt;&lt;p&gt;ಧನಶ್ರೀ ವರ್ಮಾ ಅವರ ವೈಯಕ್ತಿಕ ಜೀವನವು ಕ್ರಿಕೆಟರ್ ಯಜುವೇಂದ್ರ ಚಹಾಲ್ ಅವರೊಂದಿಗಿನ ಸಂಬಂಧದ ವಿಚಾರವಾಗಿ ದೀರ್ಘಕಾಲದಿಂದ ಮಾಧ್ಯಮಗಳಲ್ಲಿ ಸುದ್ದಿಯಲ್ಲಿತ್ತು. ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಇಬ್ಬರ ನಡುವೆ ಮೊದಲ ಭೇಟಿಯಾಗಿತ್ತು. ಚಹಾಲ್ ಅವರು ಧನಶ್ರೀ ಬಳಿ ಡ್ಯಾನ್ಸ್ ಕಲಿಯಲು ಸಂಪರ್ಕಿಸಿದ್ದರು. ಆ ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೇಮಕ್ಕೆ ತಿರುಗಿ ಡಿಸೆಂಬರ್ 2020 ರಲ್ಲಿ ಗುರುಗ್ರಾಮದಲ್ಲಿ ವಿಜೃಂಭಣೆಯಿಂದ ವಿವಾಹವಾಗಿದ್ದರು.&lt;/p&gt;&lt;p&gt;ಆದರೆ ಈ ವೈವಾಹಿಕ ಜೀವನ ಹೆಚ್ಚು ಕಾಲ ಬಾಳಿಕೆ ಬರಲಿಲ್ಲ. ವಿಚ್ಛೇದನದ ಅರ್ಜಿಯಲ್ಲಿ ಇಬ್ಬರೂ ಜೂನ್ 2022 ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಅಂತಿಮವಾಗಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡು ಮಾರ್ಚ್ 2025 ರಲ್ಲಿ ಇಬ್ಬರಿಗೂ ಅಧಿಕೃತವಾಗಿ ವಿಚ್ಛೇದನ ಸಿಕ್ಕಿತ್ತು.&lt;/p&gt;&lt;h2&gt;&lt;strong&gt;ಡಿವೋರ್ಸ್ ನಂತರದ ಚರ್ಚೆಗಳು ಹಾಗೂ 'ರೈಸ್&zwnj; ಅಂಡ್ ಫಾಲ್' ರಿಯಾಲಿಟಿ ಶೋ&lt;/strong&gt;&lt;/h2&gt;&lt;p&gt;ಯಜುವೇಂದ್ರ ಚಹಾಲ್ ಅವರಿಂದ ಬೇರ್ಪಟ್ಟ ನಂತರವೂ ಧನಶ್ರೀ ಅವರ ವೈಯಕ್ತಿಕ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಚರ್ಚೆಗಳು ನಡೆಯುತ್ತಲೇ ಇವೆ. ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್ ಪಂದ್ಯದ ವೇಳೆ ಚಹಾಲ್ ಅವರು ದುಬೈನಲ್ಲಿ ಆರ್&zwnj;ಜೆ ಮಹವಶ್ (RJ Mahvash) ಅವರೊಂದಿಗೆ ಕಾಣಿಸಿಕೊಂಡಿದ್ದರು. ಇದು ಇಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ವದಂತಿಗಳಿಗೆ ಕಾರಣವಾಗಿತ್ತು. ಆದರೆ ಆರ್&zwnj;ಜೆ ಮಹವಶ್ ನಾವು ಕೇವಲ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದರು. ತದನಂತರ ಚಹಾಲ್ ಮತ್ತು ಮಹವಶ್ ನಡುವಿನ ಸ್ನೇಹವೂ ಮುರಿದುಬಿದ್ದಿತ್ತು.&lt;/p&gt;&lt;p&gt;ಮತ್ತೊಂದೆಡೆ, ಧನಶ್ರೀ ವರ್ಮಾ ತಮ್ಮ ಮದುವೆ ಹಾಗೂ ವೈಯಕ್ತಿಕ ಜೀವನದ ಅನುಭವಗಳ ಬಗ್ಗೆ ಹಲವು ಬಾರಿ ಮುಕ್ತವಾಗಿ ಮಾತನಾಡಿದ್ದಾರೆ. ಅವರು 'ರೈಸ್ ಅಂಡ್ ಫಾಲ್' (Rise and Fall) ರಿಯಾಲಿಟಿ ಶೋನ ಮೊದಲ ಸೀಸನ್&zwnj;ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆ ಶೋನಲ್ಲಿ ಚಹಾಲ್ ಅವರೊಂದಿಗಿನ ತಮ್ಮ ಮದುವೆ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಧನಶ್ರೀ ಹಂಚಿಕೊಂಡಿದ್ದ ವಿಚಾರಗಳು ಭಾರಿ ಸುದ್ದಿಯಾಗಿದ್ದವು.&lt;/p&gt;&lt;h2&gt;&lt;strong&gt;ಟೀಮ್ ಇಂಡಿಯಾದಿಂದ ದೂರ ಉಳಿದಿರುವ ಚಹಾಲ್&lt;/strong&gt;&lt;/h2&gt;&lt;p&gt;ಇನ್ನು ಯಜುವೇಂದ್ರ ಚಹಾಲ್ ಕಳೆದ ಸುದೀರ್ಘ ಸಮಯದಿಂದ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ದೂರವೇ ಉಳಿದಿದ್ದಾರೆ. ಚಹಾಲ್ ಭಾರತ ತಂಡದ ಪರ ಕೊನೆಯ ಪಂದ್ಯವನ್ನು ಆಗಸ್ಟ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಲಾಡರ್&zwnj;ಹಿಲ್&zwnj;ನಲ್ಲಿ ಆಡಿದ್ದರು. ಚಹಾಲ್ ಭಾರತ ತಂಡದ ಪರ ಇದುವರೆಗೆ 72 ಏಕದಿನ (ODI) ಮತ್ತು 80 ಟಿ20 (T20I) ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್&zwnj;ನಲ್ಲಿ 121 ವಿಕೆಟ್ ಹಾಗೂ ಟಿ20 ಕ್ರಿಕೆಟ್&zwnj;ನಲ್ಲಿ 96 ವಿಕೆಟ್&zwnj;ಗಳನ್ನು ಕಬಳಿಸಿದ ದಾಖಲೆ ಹೊಂದಿದ್ದಾರೆ.&lt;/p&gt;&lt;p&gt;Yuzvendra Chahal&rsquo;s ex-wife Dhanashree Verma getting emotional and crying during Ganpati Bappa&rsquo;s farewell.❤️ pic.twitter.com/4N7n9pWlEZ&lt;/p&gt;&lt;p&gt;&mdash; ⁴⁵ (@rushiii_12) September 16, 2026&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/dhanashree-verma-emotional-ganpati-visarjan-yuzvendra-chahal-san/articleshow-ptgqy90"/>
        </item>
        <item>
            <title><![CDATA[Health Tips: ಮಂಡಿ ನೋವು, ಹಲ್ಲಿನ ಸಮಸ್ಯೆ, ಕಫ ದೂರವಿಡಲು ಈ 5 ಟಿಪ್ಸ್ ಫಾಲೋ ಮಾಡಿ]]></title>
            <link>https://kannada.asianetnews.com/gallery/health-life/5-daily-health-habits-for-a-healthy-body-from-drinking-water-to-morning-bath-cmpqlgl</link>
            <guid isPermaLink="true">https://kannada.asianetnews.com/gallery/health-life/5-daily-health-habits-for-a-healthy-body-from-drinking-water-to-morning-bath-cmpqlgl</guid>
            <pubDate>Thu, 17 Sep 2026 20:15:56 +0530</pubDate>
            <description><![CDATA[&lt;p&gt;Health Tips: ನೀರು ಕುಡಿಯುವ ವಿಧಾನದಿಂದ ಹಿಡಿದು ಬೆಳಗ್ಗಿನ ಸ್ನಾನದವರೆಗೆ ದಿನನಿತ್ಯ ಮಾಡುವ ಸಣ್ಣ ಸಣ್ಣ ಕೆಲಸಗಳೇ ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಮಂಡಿ ನೋವು ಬರದಂತೆ ತಡೆಯಲು, ಹಲ್ಲುಗಳನ್ನು ಗಟ್ಟಿಯಾಗಿಡಲು ಮತ್ತು ಕಫ, ಕೆಮ್ಮಿನಿಂದ ದೂರವಿರಲು ಎಲ್ಲರೂ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು&hellip;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k972j99qr7mzne8a4fkvdzzh,imgname-gettyimages-1178256148-1762247910711.jpg" type="image/jpeg" height="390" width="690"/>
            <content:encoded><![CDATA[&lt;p&gt;Health Tips: ನೀರು ಕುಡಿಯುವ ವಿಧಾನದಿಂದ ಹಿಡಿದು ಬೆಳಗ್ಗಿನ ಸ್ನಾನದವರೆಗೆ ದಿನನಿತ್ಯ ಮಾಡುವ ಸಣ್ಣ ಸಣ್ಣ ಕೆಲಸಗಳೇ ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಮಂಡಿ ನೋವು ಬರದಂತೆ ತಡೆಯಲು, ಹಲ್ಲುಗಳನ್ನು ಗಟ್ಟಿಯಾಗಿಡಲು ಮತ್ತು ಕಫ, ಕೆಮ್ಮಿನಿಂದ ದೂರವಿರಲು ಎಲ್ಲರೂ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು&hellip;&lt;/p&gt;&lt;img&gt;&lt;p&gt;&lt;strong&gt;ಆರೋಗ್ಯ ತಜ್ಞರು ಶಿಫಾರಸು ಮಾಡುವ 5 ಪ್ರಮುಖ ನಿಯಮ&lt;/strong&gt;ದಿನನಿತ್ಯದ ಸಣ್ಣಪುಟ್ಟ ಅಭ್ಯಾಸಗಳೇ ನಮ್ಮ ಆಯುಷ್ಯ ಮತ್ತು ಆರೋಗ್ಯವನ್ನು ನಿರ್ಧರಿಸುತ್ತವೆ. ನಾವು ಮಾಡುವ ಸಣ್ಣ ತಪ್ಪುಗಳು ದೊಡ್ಡ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು. ಆದ್ದರಿಂದ ಆಯುರ್ವೇದ ಮತ್ತು ಆರೋಗ್ಯ ತಜ್ಞರು ಶಿಫಾರಸು ಮಾಡುವ 5 ಪ್ರಮುಖ ನಿಯಮಗಳು ಇಲ್ಲಿವೆ..&lt;/p&gt;&lt;img&gt;&lt;p&gt;&lt;strong&gt;1. ಕುಳಿತುಕೊಂಡೇ ನೀರು ಕುಡಿಯಿರಿ (ಮಂಡಿ ನೋವು ಬರಲ್ಲ)&lt;/strong&gt;ಯಾವಾಗಲೂ ನೀರನ್ನು ನಿಂತುಕೊಂಡು ಅಥವಾ ಅವಸರದಲ್ಲಿ ಕುಡಿಯಬೇಡಿ. ಬದಲಿಗೆ ಶಾಂತವಾಗಿ ಕುಳಿತುಕೊಂಡು ಗುಟುಕು ಗುಟುಕಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಕೀಲುಗಳ ಮೇಲೆ ಒತ್ತಡ ಬೀಳುವುದಿಲ್ಲ ಮತ್ತು ಭವಿಷ್ಯದಲ್ಲಿ ಮಂಡಿ ನೋವಿನ (Knee Pain) ಸಮಸ್ಯೆ ಎಂದಿಗೂ ಕಾಡುವುದಿಲ್ಲ.&lt;/p&gt;&lt;img&gt;&lt;p&gt;&lt;strong&gt;2. ಅತಿಯಾಗಿ ಚಹಾ ಕುಡಿದರೆ ಹಲ್ಲುಗಳು ದುರ್ಬಲ!&lt;/strong&gt;ದಿನಕ್ಕೆ 3-4 ಬಾರಿಗಿಂತ ಅತಿಯಾಗಿ ಟೀ ಕುಡಿಯುವ ಅಭ್ಯಾಸವಿದ್ದರೆ ಎಚ್ಚರ. ಚಹಾದಲ್ಲಿರುವ ಆಮ್ಲೀಯತೆ ಮತ್ತು ಕೆಫಿನ್ ಅಂಶವು ಹಲ್ಲಿನ ಎನಾಮಲ್ ಅನ್ನು ಹಾಳುಮಾಡುತ್ತದೆ. ಇದರಿಂದ ಹಲ್ಲುಗಳು ಬೇಗನೆ ಸವೆಯುತ್ತವೆ ಮತ್ತು ದುರ್ಬಲಗೊಳ್ಳುತ್ತವೆ.&lt;/p&gt;&lt;img&gt;&lt;p&gt;&lt;strong&gt;3. ಅತಿಯಾದ ಸಕ್ಕರೆ ಬೆರೆಸಿದ ಹಾಲು ಕಫಕ್ಕೆ ಕಾರಣ&lt;/strong&gt;ಹಾಲಿಗೆ ಅತಿಯಾಗಿ ಸಕ್ಕರೆ ಹಾಕಿ ಕುಡಿಯುವುದರಿಂದ ದೇಹದಲ್ಲಿ ಕಫ (Mucus/ಬಲ್ಗಮ್) ಉತ್ಪತ್ತಿಯಾಗುತ್ತದೆ. ಇದು ಗಂಟಲು ಕಟ್ಟುವಿಕೆ, ಶೀತ ಮತ್ತು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಹಾಲಿಗೆ ಸಕ್ಕರೆ ಬದಲು ಬೆಲ್ಲ ಅಥವಾ ಜೇನುತುಪ್ಪ ಬಳಸುವುದು ಉತ್ತಮ.&lt;/p&gt;&lt;img&gt;&lt;p&gt;&lt;strong&gt;4. ಬಿಸಿ ಹಾಲು ಕುಡಿದ ನಂತರ ತಕ್ಷಣ ನೀರು ಕುಡಿಯಬೇಡಿ&lt;/strong&gt;ಬಿಸಿಯಾದ ಹಾಲು ಕುಡಿದ ತಕ್ಷಣವೇ ನೀರು ಕುಡಿಯುವ ತಪ್ಪು ಮಾಡಬೇಡಿ. ಬಿಸಿ ಹಾಲಿನ ಮೇಲೆ ತಣ್ಣೀರು ಕುಡಿದರೆ ಗಂಟಲಿನಲ್ಲಿ ತಾಪಮಾನದ ವ್ಯತ್ಯಾಸವಾಗಿ ತೀವ್ರ ಕೆಮ್ಮು (Cough) ಮತ್ತು ಗಂಟಲು ಕೆರತ ಶುರುವಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;5. ಮುಂಜಾನೆಯ ಸ್ನಾನ ಚರ್ಮದ ತುರಿಕೆಗೆ ರಾಮಬಾಣ&lt;/strong&gt;ಬೆಳಗ್ಗೆ ಬೇಗ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡರೆ ದೇಹದಲ್ಲಿ ರಕ್ತಸಂಚಾರ ಸುಗಮವಾಗುತ್ತದೆ. ಅಲ್ಲದೆ, ರಾತ್ರಿ ಬೆವರಿನಿಂದ ಚರ್ಮದ ಮೇಲಾದ ಬ್ಯಾಕ್ಟೀರಿಯಾಗಳು ಸ್ವಚ್ಛವಾಗಿ, ದೇಹದಲ್ಲಿ ತುರಿಕೆ (Itching), ಅಲರ್ಜಿ ಮತ್ತು ಕಜ್ಜಿ ಸಮಸ್ಯೆಗಳು ಬರುವುದಿಲ್ಲ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/5-daily-health-habits-for-a-healthy-body-from-drinking-water-to-morning-bath-cmpqlgl"/>
        </item>
        <item>
            <title><![CDATA[ಪೃಥ್ವಿ ಶಾ ವೈಯಕ್ತಿಕ ಬದುಕೂ ಬರ್ಬಾದ್; ಮುರಿದುಬಿದ್ದ ನಿಶ್ಚಿತಾರ್ಥ, ಕಾರಣ ರಿವೀಲ್ ಮಾಡಿದ ಆಕೃತಿ]]></title>
            <link>https://kannada.asianetnews.com/cricket-sports/cricketer-prithvi-shaws-engagement-has-been-called-off-akriti-agarwal-has-revealed-the-reason/articleshow-gytrihl</link>
            <guid isPermaLink="true">https://kannada.asianetnews.com/cricket-sports/cricketer-prithvi-shaws-engagement-has-been-called-off-akriti-agarwal-has-revealed-the-reason/articleshow-gytrihl</guid>
            <pubDate>Thu, 17 Sep 2026 19:38:53 +0530</pubDate>
            <description><![CDATA[ಕ್ರಿಕೆಟಿಗ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಅವರ ನಿಶ್ಚಿತಾರ್ಥ ಮುರಿದುಬಿದ್ದಿದೆ. ಇದರ ಬೆನ್ನಲ್ಲೇ ಪೃಥ್ವಿ ಶಾ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನ ಹಳೆಯ ಪೋಸ್ಟ್&zwnj;ಗಳನ್ನು ಡಿಲೀಟ್ ಮಾಡಿದ್ದಾರೆ. ಇತ್ತ ಕ್ರಿಕೆಟ್&zwnj;ನಲ್ಲೂ ಅವಕಾಶ ವಂಚಿತರಾಗಿರುವ ಅವರು ಸದ್ಯ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2qtwd4bmzrv756fe4zvq2yb,imgname-prithvi-shaw-akriti-agarwal-1789653824651.jpg" type="image/jpeg" height="390" width="690"/>
            <content:encoded><![CDATA[&lt;p&gt;ಬದುಕಲ್ಲಿ, ವೃತ್ತಿ ಬದುಕಲ್ಲಿ ಶಿಸ್ತು ಇಲ್ಲದಿದ್ದರೆ ಜೀವನ ಹೇಗೆ ಬರ್ಬಾದ್ ಆಗಿ ಹೋಗುತ್ತದೆ ಅನ್ನೋದಕ್ಕೆ ಕ್ರಿಕೆಟಿಗ ಪೃಥ್ವಿ ಶಾ ಸಾಕ್ಷಿಯಾಗಿ ನಿಲ್ಲುತ್ತಾರೆ. ವೃತ್ತಿ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡಿರುವ ಅವರ ಬದುಕಲ್ಲಿ ಈಗ ಮತ್ತೊಂದು ಕೆಟ್ಟ ತಿರುವು ಪಡೆದಿದೆ.&lt;/p&gt;&lt;h2&gt;&lt;strong&gt;ಏನಾಯ್ತು?&lt;/strong&gt;&lt;/h2&gt;&lt;p&gt;ಪೃಥ್ವಿ ಶಾ ಈ ಹಿಂದೆ ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಆಕೃತಿ ಅಗರ್ವಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಅವರಿಬ್ಬರ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ರದ್ದಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಬೆನ್ನಲ್ಲೇ ಪೃಥ್ವಿ ಶಾ ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿದ್ದ ಹಳೆಯ ಪೋಸ್ಟ್&zwnj;ಗಳನ್ನು ಡಿಲೀಟ್ ಮಾಡಿದ್ದಾರೆ. ಫೋಟೋ, ವಿಡಿಯೋ ಸೇರಿದಂತೆ ಬಹುತೇಕ ಎಲ್ಲಾ ಪೋಸ್ಟ್&zwnj;ಗಳನ್ನು ಡಿಲೀಟ್ ಮಾಡಿದ್ದಾರೆ. ಆ ಮೂಲಕ ಕ್ರಿಕೆಟಿಗ ಮತ್ತೊಮ್ಮೆ ಬದುಕಲ್ಲಿ ಹಿನ್ನಡೆ ಅನುಭವಿಸಿದ್ದಾರೆ.&lt;/p&gt;&lt;p&gt;ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಎಲ್ಲವನ್ನೂ ಅಳಿಸಿಹಾಕಿರುವ ಶಾ, 10 ವರ್ಷಗಳ ಹಿಂದೆ ಹಾಕಿದ್ದ ಒಂದೇ ಒಂದು ಹಳೆಯ ಪೋಸ್ಟ್&zwnj; ಉಳಿಸಿಕೊಂಡಿದ್ದಾರೆ. ಅದರಲ್ಲಿ ಏನಿದೆ ಅಂತಾ ನೋಡೋದಾದರೆ, ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವ ಅಗತ್ಯವಿಲ್ಲದ ಹಂತಕ್ಕೆ ತಲುಪುವವರೆಗೆ ಕಷ್ಟಪಟ್ಟು ಕೆಲಸ ಮಾಡಿ. (Work until you no longer have to introduce yourself) ಎಂಬ ಪ್ರೇರಣಾದಾಯಕ ಸಾಲುಗಳಿವೆ. ಈ ಮೂಲಕ ಅವರು ಮತ್ತೆ ತಮ್ಮ ಕ್ರಿಕೆಟ್ ಕಡೆಗೆ ಗಮನ ಹರಿಸುವ ಸುಳಿವು ನೀಡಿದ್ದಾರೆ ಎಂದು ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ.&lt;/p&gt;&lt;h2&gt;&lt;strong&gt;ಯಾಕೆ ಹೀಗೆ ಆಯಿತು?&lt;/strong&gt;&lt;/h2&gt;&lt;p&gt;ಆಕೃತಿ ಹೇಳಿರುವ ಪ್ರಕಾರ.. ತುಂಬಾ ಭಾರವಾದ ಹೃದಯದಿಂದ ಈ ವಿಷಯ ಹಂಚಿಕೊಳ್ಳುತ್ತಿದ್ದೇನೆ. ನಾವಿಬ್ಬರೂ ನಮ್ಮ ಭವಿಷ್ಯದ ಗುರಿಗಳ ದೃಷ್ಟಿಯಿಂದ ಬೇರೆ ಆಗುತ್ತಿದ್ದೇವೆ. ಪ್ರಸ್ತುತ ಎದುರಾಗಿರುವ ಸನ್ನಿವೇಶಗಳ ಕಾರಣದಿಂದ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮಿಬ್ಬರ ನಡುವೆ ಪ್ರೀತಿ ಮತ್ತು ಕಾಳಜಿ ಇದೆ. ಆದರೆ ಜೀವನದ ದಾರಿಗಳು ಒಂದಾಗಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ, ಯಾವುದೇ ವದಂತಿಗಳನ್ನು ಹಬ್ಬಿಸಬೇಡಿ ಎಂದು ಕೋರುತ್ತೇನೆ ಎಂದು ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಮಾರ್ಚ್&zwnj;ನಲ್ಲಿ ನಿಶ್ಚಿತಾರ್ಥ&lt;/strong&gt;&lt;/h2&gt;&lt;p&gt;ಪೃಥ್ವಿ ಶಾ ಮತ್ತು ಆಕೃತಿ ನಿಶ್ಚಿತಾರ್ಥ ಕಳೆದ ಮಾರ್ಚ್&zwnj;ನಲ್ಲಿ ನಡೆದಿತ್ತು. ನಿಶ್ಚಿತಾರ್ಥ ಮಾಡಿಕೊಂಡ ಬೆನ್ನಲ್ಲೇ ಕ್ರಿಕೆಟಿಗ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಳೆದ ಜುಲೈ ತಿಂಗಳಲ್ಲಿ ಆಕೃತಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಕೆಲವು ನಿಗೂಢ ಪೋಸ್ಟ್&zwnj;ಗಳು ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿರುವ ಬಗ್ಗೆ ಅನುಮಾನ ಹುಟ್ಟುಹಾಕಿದ್ದವು. ಇದೀಗ ಆ ಅನುಮಾನ ನಿಜವಾಗಿದೆ.&lt;/p&gt;&lt;p&gt;ಮೈದಾನದ ಹೊರಗಷ್ಟೇ ಅಲ್ಲದೆ.. ಕ್ರಿಕೆಟ್ ಮೈದಾನದಲ್ಲೂ ಪೃಥ್ವಿ ಶಾ ಸದ್ಯ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. 2021ರ ನಂತರ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿಲ್ಲ. ದೇಶಿ ಕ್ರಿಕೆಟ್&zwnj;ನಲ್ಲಿ ಅಲ್ಲೊಂದು ಇಲ್ಲೊಂದು ಉತ್ತಮ ಇನ್ನಿಂಗ್ಸ್ ಆಡಿದರೂ ರಾಷ್ಟ್ರೀಯ ತಂಡಕ್ಕೆ ಮರಳುವುದು ಸವಾಲಾಗಿದೆ. ಐಪಿಎಲ್&zwnj;ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರೂ ಪ್ಲೇಯಿಂಗ್ ಇಲೆವೆನ್&zwnj;ನಲ್ಲಿ ಅವಕಾಶ ಸಿಕ್ಕಿಲ್ಲ. ಬೆಂಚ್&zwnj;ಗೆ ಸೀಮಿತರಾಗಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/cricketer-prithvi-shaws-engagement-has-been-called-off-akriti-agarwal-has-revealed-the-reason/articleshow-gytrihl"/>
        </item>
        <item>
            <title><![CDATA[ಅರಿಶಿಣದ  ಸಂಪೂರ್ಣ ಲಾಭ ಪಡೆಯಬೇಕೆಂದ್ರೆ ಈ ತಪ್ಪು ಎಂದಿಗೂ ಮಾಡಬೇಡಿ: 90% ಜನರಿಗೆ ತಿಳಿಯದ ರಹಸ್ಯವಿದು]]></title>
            <link>https://kannada.asianetnews.com/gallery/health-life/turmeric-is-100-percent-beneficial-only-if-consumed-with-black-pepper-suc-a69kwrx</link>
            <guid isPermaLink="true">https://kannada.asianetnews.com/gallery/health-life/turmeric-is-100-percent-beneficial-only-if-consumed-with-black-pepper-suc-a69kwrx</guid>
            <pubDate>Thu, 17 Sep 2026 19:20:26 +0530</pubDate>
            <description><![CDATA[ಅರಿಶಿಣವು ಆರೋಗ್ಯ, ಸೌಂದರ್ಯ ಮತ್ತು ಕೀಟನಾಶಕವಾಗಿ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೇವಲ ಅರಿಶಿಣವನ್ನು ಮಾತ್ರ ಬಳಸಿದರೆ ಅದರ ಸಂಪೂರ್ಣ ಲಾಭ ದೇಹಕ್ಕೆ ಸಿಗುವುದಿಲ್ಲ. ತಜ್ಞರ ಪ್ರಕಾರ, ಇದರ 100% ಪ್ರಯೋಜನ ಪಡೆಯಲು ಕಾಳುಮೆಣಸಿನ ಪುಡಿಯೊಂದಿಗೆ ಬೆರೆಸಿ ಬಳಸಬೇಕು.]]></description>
            <media:content url="https://static.asianetnews.com/images/w-1280,h-720,format-jpg,imgid-01m2qsv6e3b6z22eymk4qk929b,imgname-turmeric-and-black-pepper-1789652736451.jpg" type="image/jpeg" height="390" width="690"/>
            <content:encoded><![CDATA[ಅರಿಶಿಣವು ಆರೋಗ್ಯ, ಸೌಂದರ್ಯ ಮತ್ತು ಕೀಟನಾಶಕವಾಗಿ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೇವಲ ಅರಿಶಿಣವನ್ನು ಮಾತ್ರ ಬಳಸಿದರೆ ಅದರ ಸಂಪೂರ್ಣ ಲಾಭ ದೇಹಕ್ಕೆ ಸಿಗುವುದಿಲ್ಲ. ತಜ್ಞರ ಪ್ರಕಾರ, ಇದರ 100% ಪ್ರಯೋಜನ ಪಡೆಯಲು ಕಾಳುಮೆಣಸಿನ ಪುಡಿಯೊಂದಿಗೆ ಬೆರೆಸಿ ಬಳಸಬೇಕು.&lt;img&gt;&lt;p&gt;ಭಾರತೀಯ ಅಡುಗೆ ಮನೆಯಲ್ಲಿ ಅರಿಶಿಣ ಪುಡಿಗೆ ವಿಶೇಷ ಸ್ಥಾನ ಇದ್ದೇ ಇದೆ. ಅರಿಶಿಣ ಹಿಂದೂ ಸಂಪ್ರದಾಯಗಳಲ್ಲಿ ಪೂಜೆಗಳಲ್ಲಿಯೂ ಪ್ರಸಿದ್ಧ ಸ್ಥಾನ ಪಡೆದಿರುವುದಕ್ಕೆ ಕಾರಣ, ಅದರ ಆರೋಗ್ಯವರ್ಧಕ ಗುಣಗಳು. ಅರಿಶಿಣದ ಸೇವನೆಯಿಂದ ನೂರೆಂಟು ಪ್ರಯೋಜನಗಳು ಇರುವ ಕಾರಣದಿಂದಲೇ ಅದಕ್ಕೆ ಅಷ್ಟು ಮಹತ್ವ ಇದೆ.&lt;/p&gt;&lt;img&gt;&lt;p&gt;ಅರಿಶಿಣಕ್ಕೆ ವಿಶೇಷವಾಗಿ ನಂಜುನಿರೋಧಕ ಗುಣ ಇರುವ ಕಾರಣದಿಂದ ಇದು ಅಡುಗೆಗೆ ಆಗಲಿ, ಔಷಧಿಯ ಬಳಕೆಗೆ ಆಗಲಿ, ಸೌಂದರ್ಯ ವರ್ಧಕಕ್ಕೆ ಆಗಲಿ ಎಲ್ಲಾದಕ್ಕೂ ದಿವ್ಯ ಔಷಧಿಯಾಗಿ ಬಳಕೆಯಾಗುತ್ತಿದೆ. ಇದು ಆಹಾರಗಳಿಗೆ ಉತ್ತಮವಾದ ಬಣ್ಣವನ್ನು ನೀಡುವುದಲ್ಲದೇ, ಆರೋಗ್ಯವನ್ನೂ ಕಾಪಾಡುತ್ತದೆ.&lt;/p&gt;&lt;img&gt;&lt;p&gt;ಅರಿಶಿಣವು, ಆಂಟಿಮೈಕ್ರೊಬಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಮುಖ್ಯವಾಗಿ ಅರಿಶಿಣವು ಜ್ವರ ಅಥವಾ ಶೀತ ಜ್ವರಕ್ಕೆ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಅರಿಶಿಣವನ್ನು ನಮ್ಮ ಹಿರಿಯರು ಗಾಯಗಳಿಂದ ಉಂಟಾಗುತ್ತಿದ್ದ, ರಕ್ತ ಸ್ರವಿಕೆಯನ್ನು ತಡೆಗಟ್ಟಲು ಹಾಗು ಸೋಂಕು ರಹಿತವಾಗಿಸಲು ಬಳಸುತ್ತಿದ್ದರು. ಅರಿಶಿಣವು ಅದರ ಗುಣಪಡಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ.&lt;/p&gt;&lt;img&gt;&lt;p&gt;ಇರುವೆ, ಜಿರಲೆ ಸೇರಿದಂತೆ ಹಲವು ಕೀಟಗಳ ಹಾವಳಿಯಿಂದ ರಕ್ಷಣೆಗೂ ಅರಿಶಿಣ ಪ್ರಯೋಜನಕಾರಿಯಾಗಿದೆ. ಸಣ್ಣದಾದ ಸ್ಪ್ರೇ ಬಾಟಲಿಯಲ್ಲಿ ಒಂದು ಚಮಚ ಅರಿಶಿಣ ಬೆರಸಿದ ನೀರನ್ನು ನೇರವಾಗಿ ಸಸ್ಯಗಳ ಮೇಲೆ ಸಿಂಪಡಿಸಿ. ಕೀಟಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಈ ಕಾರ್ಯವನ್ನು ಮೂರರಿಂದ ನಾಲ್ಕು ದಿನಗಳವರೆಗೆ ಪುನರಾವರ್ತಿಸಿದರೆ ಸಸ್ಯಗಳನ್ನು ಬಾಧಿಸುವ ಕೀಟಗಳು ನಾಶವಾಗುತ್ತವೆ.&lt;/p&gt;&lt;img&gt;&lt;p&gt;ಇವೆಲ್ಲಾ ಸರಿ. ಆದರೆ ನೀವು ಅರಿಶಿಣವನ್ನು ಪ್ರತಿನಿತ್ಯ ಸೇವಿಸುತ್ತಿದ್ದರೂ ಇದರ ಪ್ರಯೋಜನ ನಿಮಗೆ 100% ಸಿಕ್ತಿಲ್ಲ ಎನ್ನೋದು ಗೊತ್ತಿದ್ಯಾ? ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ಅರಿಶಿಣವನ್ನು ಬಹುತೇಕ ಮಂದಿ ಸರಿಯಾದ ಪ್ರಮಾಣದಲ್ಲಿ ಸೇವಿಸುತ್ತಲೇ ಇಲ್ಲ. ಆದ್ದರಿಂದ ಇದರ ಪ್ರಯೋಜನ ನಿಮಗೆ ಸಿಗುತ್ತಿಲ್ಲ.&lt;/p&gt;&lt;img&gt;&lt;p&gt;ಇದಕ್ಕೆ ಕಾರಣ, ಯಾವಾಗಲೂ ಅರಿಶಿಣದ ಪುಡಿ ಬಳಸುವಾಗ, ಅದೊಂದನ್ನೇ ಬಳಸಬಾರದು. ಹೀಗೆ ಒಂದನ್ನೇ ಬಳಸಿದರೆ, ಅದು ದೇಹದ ಮೇಲೆ ನಿಮಗೆ ಅಗತ್ಯ ಇರುವಷ್ಟು ಪರಿಣಾಮ ಬೀರುವುದೇ ಇಲ್ಲ ಎನ್ನುತ್ತಾರೆ ತಜ್ಞರು. ಆದ್ದರಿಂದ ನೀವು ಅರಿಶಿಣ ಬಳಸುವಾಗ ಅದರ ಜೊತೆಗೆ ಕಾಳುಮೆಣಸಿನ ಪುಡಿಯನ್ನು ಮಿಕ್ಸ್​ ಮಾಡಿಯೇ ಬಳಸಬೇಕು ಎನ್ನುವುದು ಅವರ ಮಾತು. ಹೀಗೆ ಅರಿಶಿಣದ ಪುಡಿ ಮತ್ತು ಕಾಳು ಮೆಣಸಿನ ಪೌಡರ್​ ಮಿಕ್ಸ್​ ಆದರೆ ಮಾತ್ರ ಅರಿಶಿಣದ ಪುಡಿಯ 100% ಲಾಭವನ್ನು ನೀವು ಪಡೆದುಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/health-life/turmeric-is-100-percent-beneficial-only-if-consumed-with-black-pepper-suc-a69kwrx"/>
        </item>
        <item>
            <title><![CDATA[ಮ್ಯಾಚ್​ಬಾಕ್ಸ್​ಗೆ ನೀರು ತಗುಲಿ ಬೆಂಕಿ ಹತ್ತುತ್ತಿಲ್ವಾ? ಈ ಟಿಪ್ಸ್​ ​ ಫಾಲೋ ಮಾಡಿ 2 ನಿಮಿಷದಲ್ಲಿ ಮ್ಯಾಜಿಕ್​ ನೋಡಿ]]></title>
            <link>https://kannada.asianetnews.com/gallery/kitchen/can-a-matchbox-cannot-catch-fire-if-it-gets-wet-follow-this-easy-hacks-suc-9ykl8zc</link>
            <guid isPermaLink="true">https://kannada.asianetnews.com/gallery/kitchen/can-a-matchbox-cannot-catch-fire-if-it-gets-wet-follow-this-easy-hacks-suc-9ykl8zc</guid>
            <pubDate>Thu, 17 Sep 2026 19:01:56 +0530</pubDate>
            <description><![CDATA[ಮಳೆಗಾಲದಲ್ಲಿ ಅಥವಾ ನೀರು ತಾಗಿ ಬೆಂಕಿ ಪೊಟ್ಟಣ ತಂಪಾದಾಗ ಕಡ್ಡಿ ಗೀರಿದರೂ ಬೆಂಕಿ ಹೊತ್ತಿಕೊಳ್ಳುವುದಿಲ್ಲ. ಇಂತಹ ಸಮಯದಲ್ಲಿ ಬೆಂಕಿ ಪೊಟ್ಟಣದ ಎರಡೂ ಬದಿಗಳಿಗೆ ಪೌಡರ್ ಸವರಿದರೆ ಅದು ತೇವವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದರಿಂದ ಸುಲಭವಾಗಿ ಬೆಂಕಿ ಕಡ್ಡಿ ಉರಿಯುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k47ss6gft1cp68kwwj3px6p7,imgname-girl-using-match-box-1756903545359.png" type="image/jpeg" height="390" width="690"/>
            <content:encoded><![CDATA[ಮಳೆಗಾಲದಲ್ಲಿ ಅಥವಾ ನೀರು ತಾಗಿ ಬೆಂಕಿ ಪೊಟ್ಟಣ ತಂಪಾದಾಗ ಕಡ್ಡಿ ಗೀರಿದರೂ ಬೆಂಕಿ ಹೊತ್ತಿಕೊಳ್ಳುವುದಿಲ್ಲ. ಇಂತಹ ಸಮಯದಲ್ಲಿ ಬೆಂಕಿ ಪೊಟ್ಟಣದ ಎರಡೂ ಬದಿಗಳಿಗೆ ಪೌಡರ್ ಸವರಿದರೆ ಅದು ತೇವವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದರಿಂದ ಸುಲಭವಾಗಿ ಬೆಂಕಿ ಕಡ್ಡಿ ಉರಿಯುತ್ತದೆ.&lt;img&gt;&lt;p&gt;ಮ್ಯಾಚ್​ಬಾಕ್ಸ್​ ಅಥವಾ ಬೆಂಕಿ ಪೊಟ್ಟಣ ಎಲ್ಲ ಮನೆಗಳಲ್ಲಿಯೂ ಬೇಕೇ ಬೇಕು. ಗ್ಯಾಸ್​​ ಇದ್ದ ಮನೆಗಳಲ್ಲಿ ಗ್ಯಾಸ್​ ಲೈಟರ್​ ಇದ್ದರೂ, ಮ್ಯಾಚ್​ಬಾಕ್ಸ್​ ಮಹತ್ವವೇನೂ ಕಡಿಮೆಯಾಗಿಲ್ಲ. ಗ್ಯಾಸ್​ ಹಚ್ಚಲು ಮಾತ್ರವಲ್ಲದೇ, ದೇವರ ಮನೆಯ ದೀಪ ಹಚ್ಚುವುದರಿಂದ ಹಿಡಿದು, ಕರೆಂಟ್​ ಹೋದಾಗ ಮೋಂಬತ್ತಿ ಹಚ್ಚುವವರೆಗೆ ಮ್ಯಾಚ್​ ಬಾಕ್ಸ್​ ಇರಲೇಬೇಕು.&lt;/p&gt;&lt;img&gt;&lt;p&gt;ಆದರೆ ಮಳೆಗಾಲದಲ್ಲಿ ಹೆಚ್ಚಾಗಿ ಮ್ಯಾಚ್​ಬಾಕ್ಸ್​ ತಂಪಾಗಿ ಕಡ್ಡಿ ಗೀರಿದಾಗ ಬೆಂಕಿ ಹೊತ್ತಿಕೊಳ್ಳುವುದೇ ಇಲ್ಲ. ಇದು ಮಳೆಗಾಲದ ಸಮಸ್ಯೆ ಅಲ್ಲ. ಕೆಲವೊಮ್ಮೆ ನೀರು ಚೆಲ್ಲಿಯೋ ಅಥವಾ ತಂಪಾದ ಪ್ರದೇಶದಲ್ಲಿ ಇಟ್ಟಾಗಲೋ ಬೆಂಕಿ ತಗಲುವುದೇ ಇಲ್ಲ.&lt;/p&gt;&lt;img&gt;&lt;p&gt;ಹೆಚ್ಚಾಗಿ ಮ್ಯಾಚ್​ಬಾಕ್ಸ್​ಗಳು ಒಂದೇ ಇರುವ ಕಾರಣದಿಂದ ಇಂಥ ಸಂದರ್ಭ ಬಂದಾಗ, ತುಂಬಾ ಸಮಸ್ಯೆಯಾಗುವುದು ಉಂಟು. ಬೆಂಕಿ ಪೊಟ್ಟಣದ ಎರಡೂ ಕಡೆಗಳನ್ನು ಉಜ್ಜಿ ಉಜ್ಜಿ ಕಡ್ಡಿ ಗೀರಿದರೂ ಬೆಂಕಿ ಬರದೇ ಎಷ್ಟೋ ಮಂದಿ ಪರದಾಡುವುದು ಇದೆ.&lt;/p&gt;&lt;img&gt;&lt;p&gt;ಇದಕ್ಕೆ ಸುಲಭದ ಉಪಾಯ ಒಂದಿದೆ. ಅದೇನೆಂದರೆ, ನೀರಿಗೆ ಬಿದ್ದ ಅಥವಾ ಇನ್ನಾವುದಾದರೂ ಕಾರಣಕ್ಕೆ ಬೆಂಕಿ ಪೊಟ್ಟಣವು ತಂಪಾಗಿದ್ದರೆ, ಎರಡೂ ಭಾಗಕ್ಕೆ ನೀವು ಬಳಸುವ ಯಾವುದಾದರೂ ಪೌಡರ್​ ಹಾಕಿ ಸವರಿ.&lt;/p&gt;&lt;img&gt;&lt;p&gt;ಹೀಗೆ ಸವರಿ ಕೆಲ ಹೊತ್ತು ಬಿಟ್ಟಾಗ ಪೌಡರ್​ ನೀರನ್ನು ಸಂಪೂರ್ಣವಾಗಿ ಹೀರಿಕೊಂಡಿರುತ್ತದೆ. ಆಗ ಸುಲಭದಲ್ಲಿ ಕಡ್ಡಿ ಗೀರಬಹುದು, ಆಗ ಸುಲಭದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/kitchen/can-a-matchbox-cannot-catch-fire-if-it-gets-wet-follow-this-easy-hacks-suc-9ykl8zc"/>
        </item>
        <item>
            <title><![CDATA[ಕೆಟ್ಟ ದೃಷ್ಟಿಯಿಂದ ಪಾರಾಗಬೇಕಾ? ಕಿವಿ, ಹಣೆಗಲ್ಲ 21 ದಿನ ಇಲ್ಲಿ ಕಪ್ಪು ಮಸಿ ಇಡಿ]]></title>
            <link>https://kannada.asianetnews.com/astrology/easy-kajal-remedy-to-protect-from-evil-eye-on-leg/articleshow-vs7ewak</link>
            <guid isPermaLink="true">https://kannada.asianetnews.com/astrology/easy-kajal-remedy-to-protect-from-evil-eye-on-leg/articleshow-vs7ewak</guid>
            <pubDate>Thu, 17 Sep 2026 18:54:03 +0530</pubDate>
            <description><![CDATA[&lt;p&gt;Bad evil eye : ಕೆಲವರ ಕಣ್ಣು ಕೆಟ್ಟದಾಗಿರುತ್ತೆ, ಅವರು ನೋಡ್ತಿದ್ದಂತೆ ದೃಷ್ಟಿ ಬೀಳುತ್ತೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಈ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸುಲಭ ಉಪಾಯ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qrjvvev5n2c43vm7gzz59t,imgname-evil-eye-1789651414894.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಟ್ಟ ದೃಷ್ಟಿ ಬೀಳಬಾರದು ಎನ್ನುವ ಕಾರಣಕ್ಕೆ ಸಾಮಾನ್ಯವಾಗಿ ಮಕ್ಕಳ ಹಣೆಗೆ, ಕಿವಿಯ ಹಿಂದೆ ಅಥವಾ ಕೆನ್ನೆಗೆ ಕಪ್ಪು ಕಾಜಲ್ ಇಡುವುದನ್ನು ನೀವು ನೋಡಿರಬಹುದು. ಜೊತೆಗೆ ಕಾಲಿಗೂ ಕಪ್ಪು ದಾರ ಕಟ್ಟುತ್ತಾರೆ. ಆದರೆ ಈ ಬಾರಿ ಹೇಳಲಾಗುತ್ತಿರುವ ವಿಧಾನ ಸ್ವಲ್ಪ ವಿಭಿನ್ನವಾಗಿದೆ.&lt;/p&gt;&lt;h2&gt;ಪಾದದ ಕೆಳಭಾಗದಲ್ಲಿ ಕಾಜಲ್&lt;/h2&gt;&lt;p&gt;ಕೆಟ್ಟ ದೃಷ್ಟಿ ತಗುಲಬಾರದು, ಶುರು ಮಾಡಿದ ಕೆಲಸ ಅರ್ಧಕ್ಕೆ ನಿಲ್ಲಬಾರದು, ಜೀವನದಲ್ಲಿ ಎಲ್ಲವೂ ಸುಗಮವಾಗಿ ಸಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅದಕ್ಕಾಗಿಯೇ ನಮ್ಮಲ್ಲಿ ಹಲವರು ಕಪ್ಪು ದಾರ ಕಟ್ಟುವುದು, ಕಪ್ಪು ಕಾಜಲ್ ಇಡುವುದು ಸೇರಿದಂತೆ ಹಲವು ರೀತಿಯ ಪರಿಹಾರಗಳನ್ನು ಮಾಡುತ್ತಾರೆ. ಟ್ಯಾರೋ ರೀಡರ್ ಸಾಕ್ಷಿ ಸಿಂಘಲ್ ಹೇಳುವ ಪ್ರಕಾರ, ಕೆಟ್ಟ ದೃಷ್ಟಿಯಿಂದ ರಕ್ಷಣೆ ಪಡೆಯಲು ನೀವು ಪಾದದ ಕೆಳ ಭಾಗದಲ್ಲಿ ನೀವು ಕಾಜಲ್&zwnj; ಇಡಬೇಕು. ಮಕ್ಕಳಷ್ಟೇ ಅಲ್ಲ, ಮಹಿಳೆಯರು ಮತ್ತು ಪುರುಷರೂ ಇದನ್ನು ಅನುಸರಿಸಬಹುದು.&lt;/p&gt;&lt;h3&gt;ಏನು ಮಾಡ್ಬೇಕು?&lt;/h3&gt;&lt;p&gt;ಪ್ರತಿದಿನ ಸ್ವಲ್ಪ ಕಾಜಲ್ ಅಥವಾ ಕಪ್ಪನ್ನು ರಿಂಗ್ ಫಿಂಗರ್ ನಿಂದ ತೆಗೆದುಕೊಂಡು ಪಾದಕ್ಕೆ ಹಚ್ಚಬೇಕು. ಪಾದದ ಮಧ್ಯಭಾಗದ ತಳದಲ್ಲಿ ಸಣ್ಣದಾಗಿ ಕಾಜಲ್ ಇಡಬೇಕು. ಇದು ಹೊರಗಿನಿಂದ ಎಲ್ಲರಿಗೂ ಸುಲಭವಾಗಿ ಕಾಣುವುದಿಲ್ಲ. ಹಾಗಾಗಿ ಅನೇಕರು ಈ ವಿಧಾನವನ್ನು ಫಾಲೋ ಮಾಡ್ತಾರೆ.&lt;/p&gt;&lt;p&gt;&lt;strong&gt;ಹೊಸ ಕೆಲಸ ಆರಂಭಿಸುವಾಗ&lt;/strong&gt;&lt;/p&gt;&lt;p&gt;ಹೊಸ ಕೆಲಸ, ಹೊಸ ಪ್ರಾಜೆಕ್ಟ್ ಅಥವಾ ಹೊಸ ಪ್ರಯತ್ನ ಆರಂಭಿಸುವ ಮುನ್ನ ಕಾಜಲ್ ಇಡುವುದರಿಂದ ಕೆಟ್ಟ ದೃಷ್ಟಿಯಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಈಗಾಗಲೇ ಶುರುಮಾಡಿರುವ ಕೆಲಸಗಳಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ, ಈ ವಿಧಾನವನ್ನು 21 ದಿನಗಳ ಕಾಲ ನಿರಂತರವಾಗಿ ಅನುಸರಿಸಿ ಬದಲಾವಣೆ ಗಮನಿಸಬಹುದು. ನಿಮ್ಮ ಪಾದಕ್ಕೆ ಪ್ರತಿ ದಿನ ಕಾಜಲ್&zwnj; ಹಚ್ಚುತ್ತ ಬರಬೇಕು.&lt;/p&gt;&lt;p&gt;&lt;strong&gt;21 ದಿನಗಳ ಕಾಲ ಏಕೆ?&lt;/strong&gt;&lt;/p&gt;&lt;p&gt;ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಪದ್ಧತಿಗಳಲ್ಲಿ 21 ದಿನಗಳ ಕಾಲ ಯಾವುದಾದರೂ ಒಂದು ಅಭ್ಯಾಸವನ್ನು ನಿರಂತರವಾಗಿ ಮಾಡುವುದಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ಅದಕ್ಕಾಗಿಯೇ ಈ ಕಾಜಲ್ ವಿಧಾನವನ್ನೂ 21 ದಿನಗಳ ಕಾಲ ಪಾಲಿಸುವಂತೆ ಹೇಳಲಾಗಿದೆ.&lt;/p&gt;&lt;p&gt;&lt;strong&gt;ಕಾಜಲ್&zwnj; ಗೆ ಇಷ್ಟೊಂದು ಮಹತ್ವ ಏಕೆ?&lt;/strong&gt;&lt;/p&gt;&lt;p&gt;ನಮ್ಮ ಸಂಪ್ರದಾಯದಲ್ಲಿ ಕಪ್ಪು ಬಣ್ಣವನ್ನು ಕೆಟ್ಟ ದೃಷ್ಟಿ ಅಥವಾ ನಕಾರಾತ್ಮಕತೆಯನ್ನು ದೂರ ಮಾಡುವ ಸಂಕೇತವಾಗಿ ಕೆಲವರು ನೋಡುತ್ತಾರೆ. ಮಕ್ಕಳಿಗೆ ಕಪ್ಪು ಚುಕ್ಕೆ ಇಡುವುದು, ವಾಹನಗಳಿಗೆ ಕಪ್ಪು ದಾರ ಕಟ್ಟುವುದು, ಮನೆ ಬಾಗಿಲಿಗೆ ದೃಷ್ಟಿ ಬೊಂಬೆ ಹಾಕುವುದು ಹೀಗೆ ಹಲವು ಆಚರಣೆಗಳು ಇದಕ್ಕೆ ಸಂಬಂಧಿಸಿವೆ. ಇನ್ನೂ ಕೆಲವರು ಹೊಸ ಮನೆಗೆ ಪ್ರವೇಶಿಸುವಾಗ ಅಥವಾ ಹೊಸ ವಾಹನ ಖರೀದಿಸಿದಾಗ ದೃಷ್ಟಿ ತಾಗಬಾರದು ಎಂದು ವಿವಿಧ ರೀತಿಯ ಆಚರಣೆಗಳನ್ನು ಮಾಡುತ್ತಾರೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/astrology/easy-kajal-remedy-to-protect-from-evil-eye-on-leg/articleshow-vs7ewak"/>
        </item>
        <item>
            <title><![CDATA[ತಾಮ್ರದ ತಟ್ಟೆ ಕಂಡರೆ ಸಾಕು ಎಲ್ಲಿದ್ದರೂ ಓಡೋಡಿ ಬರುತ್ತವೆ ಹಾವುಗಳು.. ಸದ್ಗುರು ಬಿಚ್ಚಿಟ್ಟ ರೋಚಕ ಸತ್ಯ!]]></title>
            <link>https://kannada.asianetnews.com/gallery/life/copper-and-cobras-the-secret-link-to-life-energy-explained-by-sadhguru-sil1t0f</link>
            <guid isPermaLink="true">https://kannada.asianetnews.com/gallery/life/copper-and-cobras-the-secret-link-to-life-energy-explained-by-sadhguru-sil1t0f</guid>
            <pubDate>Thu, 17 Sep 2026 18:45:21 +0530</pubDate>
            <description><![CDATA[&lt;p&gt;Why cobras like copper: ದೇವರ ಪೂಜೆಗೆ, ನೀರು ಕುಡಿಯಲು ತಾಮ್ರದ ಪಾತ್ರೆಗಳನ್ನು ಬಳಸುವುದು ಸಾಮಾನ್ಯ. ಆದರೆ ನಿರ್ಜನ ಜಾಗದಲ್ಲಿ ತಾಮ್ರದ ಪಾತ್ರೆ ಅಥವಾ ತಟ್ಟೆ ಇಟ್ಟರೆ, ಅಲ್ಲಿಗೆ ನಾಗರಹಾವುಗಳು ತಾವಾಗಿಯೇ ಬಂದು ಸುರುಳಿ ಸುತ್ತಿ ಮಲಗಿಕೊಳ್ಳುತ್ತವೆ ಎಂಬ ಅಚ್ಚರಿಯ ವಿಷಯ ನಿಮಗೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qqrq9tqje47vhhaj06494p,imgname-thumbnail---2026-09-17t183841.027-1789650558266.jpg" type="image/jpeg" height="390" width="690"/>
            <content:encoded><![CDATA[&lt;p&gt;Why cobras like copper: ದೇವರ ಪೂಜೆಗೆ, ನೀರು ಕುಡಿಯಲು ತಾಮ್ರದ ಪಾತ್ರೆಗಳನ್ನು ಬಳಸುವುದು ಸಾಮಾನ್ಯ. ಆದರೆ ನಿರ್ಜನ ಜಾಗದಲ್ಲಿ ತಾಮ್ರದ ಪಾತ್ರೆ ಅಥವಾ ತಟ್ಟೆ ಇಟ್ಟರೆ, ಅಲ್ಲಿಗೆ ನಾಗರಹಾವುಗಳು ತಾವಾಗಿಯೇ ಬಂದು ಸುರುಳಿ ಸುತ್ತಿ ಮಲಗಿಕೊಳ್ಳುತ್ತವೆ ಎಂಬ ಅಚ್ಚರಿಯ ವಿಷಯ ನಿಮಗೆ ಗೊತ್ತಾ?&lt;/p&gt;&lt;img&gt;&lt;p&gt;&lt;strong&gt;ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದೇನು?&lt;/strong&gt;ಭಾರತೀಯ ಸನಾತನ ಸಂಪ್ರದಾಯ ಹಾಗೂ ಆಧ್ಯಾತ್ಮಿಕ ಸಾಧನೆಯಲ್ಲಿ 'ತಾಮ್ರ'ಕ್ಕೆ (Copper) ಅತ್ಯಂತ ಪವಿತ್ರ ಸ್ಥಾನವಿದೆ. ನೀರು ಕುಡಿಯುವುದರಿಂದ ಹಿಡಿದು ಪೂಜೆ-ಪುನಸ್ಕಾರಗಳವರೆಗೂ ತಾಮ್ರದ ಪಾತ್ರೆಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ತಾಮ್ರಕ್ಕೂ, ನಾಗರಹಾವುಗಳಿಗೂ (Cobra) ನಂಬಲಸಾಧ್ಯವಾದ ಒಂದು ನಂಟಿದೆ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ! ತಾಮ್ರದ ಪಾತ್ರೆ ಇಟ್ಟಲ್ಲಿ ನಾಗರಹಾವುಗಳು ಯಾಕೆ ಆಕರ್ಷಿತವಾಗುತ್ತವೆ ಎಂಬುದರ ರಹಸ್ಯವನ್ನು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಆಧ್ಯಾತ್ಮಿಕ ಸಾಧನೆ ಮಾಡುವವರಿಗೆ ತಾಮ್ರವೇ ಪ್ರಮುಖ ಲೋಹ&lt;/strong&gt;ಸದ್ಗುರುಗಳ ಪ್ರಕಾರ, ಲೋಹಗಳು ಜೀವದ ವಿವಿಧ ಆಯಾಮಗಳೊಂದಿಗೆ ವಿಭಿನ್ನವಾಗಿ ವರ್ತಿಸುತ್ತವೆ. ತಾಮ್ರವು ಕೇವಲ ವಿದ್ಯುತ್ ವಾಹಕ ಮಾತ್ರವಲ್ಲ, ಅದು ಮನುಷ್ಯನ ಒಳಗಿರುವ &lsquo;ಪ್ರಾಣಶಕ್ತಿ&rsquo;ಗೆ (Life Energies) ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ. ಆದ್ದರಿಂದಲೇ ಪ್ರಾಚೀನ ಕಾಲದಿಂದಲೂ ಆಧ್ಯಾತ್ಮಿಕ ಸಾಧನೆ ಮಾಡುವವರಿಗೆ ತಾಮ್ರವೇ ಪ್ರಮುಖ ಲೋಹವಾಗಿದೆ.&lt;/p&gt;&lt;img&gt;&lt;p&gt;&lt;strong&gt;ತಾಮ್ರದ ಪಾತ್ರೆ ಇದ್ದಲ್ಲಿ ನಾಗರಹಾವು ಬರುವುದೇಕೆ?&lt;/strong&gt;ಯಾರೂ ಓಡಾಡದ ಒಂದು ನಿರ್ಜನ ಜಾಗದಲ್ಲಿ ಅಥವಾ ತೋಟದ ಮೂಲೆಯಲ್ಲಿ ಒಂದು ತಾಮ್ರದ ಪಾತ್ರೆ ಅಥವಾ ತಾಮ್ರದ ತಟ್ಟೆಯನ್ನು ಇಟ್ಟು ನೋಡಿ, ಅಕಸ್ಮಾತ್ ಆ ಪರಿಸರದಲ್ಲಿ ನಾಗರಹಾವು ಬಂದರೆ, ಅದು ನೇರವಾಗಿ ಆ ತಾಮ್ರದ ಪಾತ್ರೆಯ ಬಳಿ ಬಂದು ಅದರೊಳಗೆ ಸುರುಳಿ ಸುತ್ತಿಕೊಂಡು (Coil up) ಕುಳಿತುಕೊಳ್ಳುತ್ತದೆ! ಇದು ಕಾಡಿನ ಹಾವುಗಳಲ್ಲೂ ಸ್ವಾಭಾವಿಕವಾಗಿ ಕಂಡುಬರುವ ನಡವಳಿಕೆ ಎನ್ನುತ್ತಾರೆ ಸದ್ಗುರು.&lt;/p&gt;&lt;img&gt;&lt;p&gt;&lt;strong&gt;ಹಾವು ಹಿಡಿಯುವ ಬುಡಕಟ್ಟು ಜನಾಂಗದ ಸೀಕ್ರೆಟ್&lt;/strong&gt;ಹಾವು ಹಿಡಿಯುವ ಬುಡಕಟ್ಟು ಜನರಿಗೆ (Snake charmers) ಈ ರಹಸ್ಯ ಮೊದಲಿನಿಂದಲೂ ಚೆನ್ನಾಗಿ ತಿಳಿದಿದೆ. ಕಾಡುಗಳಲ್ಲಿ ಹಾವುಗಳನ್ನು ಹಿಡಿಯಲು ಅವರು ಕೇವಲ ಒಂದು ತಾಮ್ರದ ತಟ್ಟೆಯನ್ನು ನೆಲದ ಮೇಲೆ ಇಡುತ್ತಾರೆ. ನಾಗರಹಾವು ತಾನಾಗಿಯೇ ಬಂದು ಆ ತಾಮ್ರದ ತಟ್ಟೆಯ ಮೇಲೆ ಕುಳಿತುಕೊಳ್ಳುತ್ತದೆ. ನಂತರ ಅವರು ಹಾವಿಗೆ ಯಾವುದೇ ಹಾನಿ ಮಾಡದೆ ಸುಲಭವಾಗಿ ಹಿಡಿದುಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;&lt;strong&gt;ಇದರ ಹಿಂದಿರುವ ಅಸಲಿ ರಹಸ್ಯವೇನು?&lt;/strong&gt;ನಾಗರಹಾವು ಮತ್ತು ತಾಮ್ರ&mdash; ಇವೆರಡೂ ಪ್ರಕೃತಿಯಲ್ಲಿನ 'ಜೀವಶಕ್ತಿಯ ತೀವ್ರತೆಗೆ' (Life Intensity) ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುವ ಗುಣವನ್ನು ಹೊಂದಿವೆ. ಒಬ್ಬ ವ್ಯಕ್ತಿಯಲ್ಲಿ ಅಥವಾ ಒಂದು ಜಾಗದಲ್ಲಿ ಪ್ರಾಣಶಕ್ತಿಯು ಉನ್ನತ ಮಟ್ಟದಲ್ಲಿದ್ದಾಗ (High Pitch / Intensity), ತಾಮ್ರ ಮತ್ತು ಹಾವುಗಳು ಸ್ವಾಭಾವಿಕವಾಗಿಯೇ ಆ ದಿಕ್ಕಿನತ್ತ ಆಕರ್ಷಿತವಾಗುತ್ತವೆ. ಅದಕ್ಕಾಗಿಯೇ ಯೋಗ ಮತ್ತು ಆಧ್ಯಾತ್ಮಿಕ ಸಾಧನೆಯಲ್ಲಿ ತಾಮ್ರದ ಬಳಕೆ ಮತ್ತು ಹಾವಿನ ಸಂಕೇತಕ್ಕೆ ಅಷ್ಟು ಮಹತ್ವವಿದೆ ಎಂದು ಸದ್ಗುರು ವಿವರಿಸಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/copper-and-cobras-the-secret-link-to-life-energy-explained-by-sadhguru-sil1t0f"/>
        </item>
        <item>
            <title><![CDATA[ನಿಮ್ಮ ಮುಖ ಹೀಗ್ಯಾಕೆ? ಜಾಹೀರಾತು ನೋಡಿ ಮಗ ಕೇಳಿದ ಪ್ರಶ್ನೆಗೆ  Kareena Kapoor​ ಕಕ್ಕಾಬಿಕ್ಕಿ: ನಟಿ ಓಪನ್​ ಮಾತು]]></title>
            <link>https://kannada.asianetnews.com/relationship/kareena-kapoor-says-she-finds-sons-taimur-ali-khan-and-jeh-watching-her-ads-weird-suc/articleshow-upb73lv</link>
            <guid isPermaLink="true">https://kannada.asianetnews.com/relationship/kareena-kapoor-says-she-finds-sons-taimur-ali-khan-and-jeh-watching-her-ads-weird-suc/articleshow-upb73lv</guid>
            <pubDate>Thu, 17 Sep 2026 18:43:53 +0530</pubDate>
            <description><![CDATA[ವಿಮಾನ ನಿಲ್ದಾಣದಲ್ಲಿರುವ ತಮ್ಮ ಬೃಹತ್ ಜಾಹೀರಾತುಗಳನ್ನು ನೋಡಿ ಮಗ ತೈಮೂರ್ ಕೇಳಿದ ಪ್ರಶ್ನೆಗೆ ನಟಿ ಕರೀನಾ ಕಪೂರ್ ಮುಜುಗರಕ್ಕೊಳಗಾಗಿದ್ದಾರೆ. ಜಾಹೀರಾತಿನಲ್ಲಿ ಮುಖ ಗಂಟಿಕ್ಕಿರುವುದು ಏಕೆ ಎಂಬ ಮಗನ ಪ್ರಶ್ನೆಗೆ ಉತ್ತರಿಸಲಾಗದೆ ಅವರು ಪರದಾಡಿದ್ದಾರೆ. ಅಲ್ಲದೆ, ಮಕ್ಕಳ ಮೊಬೈಲ್ ಬಳಕೆಯ ಬಗ್ಗೆ ತಾವು ಕಟ್ಟುನಿಟ್ಟಾಗಿರುವುದಾಗಿ ಅವರು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2qr04q5r1c4zypexdrvkdqs,imgname-kareena-kapoor-family-1789650801381.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ (Kareena Kapoor Khan) ಅವರು ತಮ್ಮ ಪುತ್ರರಾದ ತೈಮೂರ್ ಮತ್ತು ಜೆಹ್ ಬಗ್ಗೆ ಸ್ವಾರಸ್ಯಕರ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಮ್ಮ ಒಂದು ಜಾಹೀರಾತಿನ ಬಗ್ಗೆ ಹಿರಿಯ ಮಗ ತೈಮೂರ್ ಪ್ರಶ್ನಿಸಿದ್ದನ್ನು ನೋಡಿ ಬೇಸ್ತು ಬಿದ್ದ ನಟಿ ಕರೀನಾ ಕಪೂರ್ ಅವರು, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ಆಗದೆ ತಾವು ಪರದಾಡಿದ ಪರಿಸ್ಥಿತಿಯ ಬಗ್ಗೆ ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ರಸ್ತೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಇರುವ ತಮ್ಮ ಬೃಹತ್ ಜಾಹೀರಾತುಗಳನ್ನು ಮಕ್ಕಳು ನೋಡಿದಾಗ ತಮಗೆ ಸಂಕಟ ಮತ್ತು ಮುಜುಗರವಾಗುತ್ತದೆ ಎಂದು ನಟಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ತುಂಬಾ ಮುಜುಗರವಾಗುತ್ತದೆ&lt;/strong&gt;&lt;/h2&gt;&lt;p&gt;ಸ್ಕ್ರೀನ್&zwnj;ಗೆ ನೀಡಿದ ಸಂದರ್ಶನದಲ್ಲಿ, ತೈಮೂರ್ ಮತ್ತು ಜೆಹ್ ತಮ್ಮ ಜಾಹೀರಾತುಗಳನ್ನು ಎಲ್ಲೆಡೆ ನೋಡುತ್ತಿರುವುದನ್ನು ನೋಡಿ ನನಗೆ ತುಂಬಾ ವಿಚಿತ್ರ ಹಾಗೂ ಮುಜುಗರವಾಗುತ್ತದೆ. ಈಗ ಮಕ್ಕಳು ನಿರಂತರವಾಗಿ ಜಾಹೀರಾತುಗಳನ್ನು ನೋಡುತ್ತಿದ್ದಾರೆ. ನನ್ನ ಜಾಹೀರಾತುಗಳು ಅವರ ಮುಂದೆ ಕಾಣಿಸಿಕೊಂಡಾಗ ನನ್ನೊಳಗೆ ತುಮುಲ ಶುರುವಾಗುತ್ತದೆ. ಅವೆಲ್ಲಾ ಅವರಿಗೆ ತೋರಿಸಬೇಕೋ, ಬೇಡವೋ ಎಂದು ಕನ್​ಫ್ಯೂಷನ್​ ಆಗುತ್ತದೆ. ಈ ನಿಟ್ಟಿನಲ್ಲಿ ನನ್ನೊಳಗೆ ನಿರಂತರ ಯುದ್ಧ ನಡೆಯುತ್ತಿರುತ್ತದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಗಂಟಿಕ್ಕುವ ಮುಖದ ಪ್ರಶ್ನೆ&lt;/strong&gt;&lt;/h3&gt;&lt;p&gt;&lsquo;ನನ್ನ ಮಕ್ಕಳು ಈಗ ಜಾಹೀರಾತುಗಳನ್ನು ಜಾಸ್ತಿ ಗಮನಿಸುತ್ತಿದ್ದಾರೆ. ನನ್ನ ಜಾಹೀರಾತುಗಳು ಅವರ ಕಣ್ಣಿಗೆ ಬಿದ್ದಾಗ ನನಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಅವರು ಅದನ್ನು ನೋಡಬೇಕೋ ಬೇಡವೋ ಎಂಬ ಗೊಂದಲ ನನ್ನಲ್ಲಿ ಸದಾ ಇರುತ್ತದೆ&rsquo; ಎಂದಿದ್ದಾರೆ ನಟಿ. ವಿಮಾನ ನಿಲ್ದಾಣದಲ್ಲಿ ನನ್ನ ಜಾಹೀರಾತನ್ನು ನೋಡಿದ ತೈಮೂರ್&zwnj;, ನೀವ್ಯಾಕೆ ಎಲ್ಲಾ ಜಾಹೀರಾತಿನಲ್ಲಿ ಮುಖ ಗಂಟಿಕ್ಕಿಕೊಂಡು ಇರುತ್ತೀರಿ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಏನು ಹೇಳಬೇಕು ಎಂದು ನನಗೆ ತಿಳಿಯುವುದಿಲ್ಲ. ಕೊನೆಗೆ ಅದು ಕೇವಲ ಜಾಹೀರಾತು ಎನ್ನುತ್ತೇನೆಯೇ ವಿನಾ, ಆ ರೀತಿ ನಾನು ಅದನ್ನು ಏಕೆ ಮಾಡುತ್ತಿದ್ದೇನೆ ಎಂದು ಅವನು ಮೇಲಿಂದ ಮೇಲೆ ಪ್ರಶ್ನೆ ಕೇಳಿದಾಗ, ಪ್ಲೀಸ್​ ನನ್ನನ್ನು ಬಿಟ್ಟುಬಿಡು ಎಂದಷ್ಟೇ ಹೇಳುತ್ತೇನೆ ಎಂದಿದ್ದಾರೆ.&lt;/p&gt;&lt;p&gt;ಇದೇ ವೇಳೆ, ತಮ್ಮ ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ತಾನು ಸ್ವಲ್ಪ ಕಟ್ಟುನಿಟ್ಟಾಗಿರುತ್ತೇನೆ ಎಂದು ನಟಿ ಹೇಳಿಕೊಂಡಿದ್ದಾರೆ, ಆದರೆ ಸೈಫ್ ಹೆಚ್ಚು ಶಾಂತ ವಿಧಾನವನ್ನು ಹೊಂದಿದ್ದಾರೆ. ಫೋನ್&zwnj;ಗಳು ಮತ್ತು ಡಿಜಿಟಲ್ ಪ್ರಪಂಚದ ಬಗ್ಗೆ ನಾನು ತುಂಬಾ ಕಟ್ಟುನಿಟ್ಟಾಗಿರುತ್ತೇನೆ ಎಂದು ಹೇಳಿದ್ದಾರೆ. ತೈಮೂರ್ ಮತ್ತು ಜೆಹ್ ಅವರ ಫೋನ್ ಮತ್ತು ಲ್ಯಾಪ್&zwnj;ಟಾಪ್ ಬಳಕೆಯ ಬಗ್ಗೆ ನಾನು ತುಂಬಾ ಜಾಗರೂಕಳಾಗಿದ್ದೇನೆ ಎಂದು ಕರೀನಾ ಕಪೂರ್ ಬಹಿರಂಗಪಡಿಸಿದ್ದಾರೆ. &quot;ಅವರ ಬಳಿ ಫೋನ್&zwnj;ಗಳಿಲ್ಲ. ತೈಮೂರ್&zwnj;ನ ದಾದಿ ಬಳಿ ಫೋನ್ ಇದೆ, ಅದನ್ನು ಅವನು ತನ್ನದಾಗಿ ಕರೆಯುತ್ತಾನೆ. ನನ್ನ ಬಳಿ ಫೋನ್​ ಇಲ್ಲ ಎಂದು ಸ್ನೇಹಿತರಿಗೆ ಹೇಳಲೇ ಎಂದು ಕೇಳುತ್ತಾನೆ. ಆದರೆ ನಾನು ಅದೆಲ್ಲಾ ಹೇಳಬಾರದು ಎನ್ನುತ್ತೇನೆ ಎಂದಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/kareena-kapoor-says-she-finds-sons-taimur-ali-khan-and-jeh-watching-her-ads-weird-suc/articleshow-upb73lv"/>
        </item>
        <item>
            <title><![CDATA[ಭಾರತದ ಈ ಏಕೈಕ ಗಂಡು ನದಿ… ಬಾಂಗ್ಲಾದೇಶದಲ್ಲಿ ಹೆಣ್ಣಾಗಿ ಹರಿಯುತ್ತೆ… ಯಾವ ನದಿ ಗೊತ್ತಾ?]]></title>
            <link>https://kannada.asianetnews.com/travel/brahmaputra-in-india-jamuna-in-bangladesh-why-does-this-river-have-different-names/articleshow-r2bihtq</link>
            <guid isPermaLink="true">https://kannada.asianetnews.com/travel/brahmaputra-in-india-jamuna-in-bangladesh-why-does-this-river-have-different-names/articleshow-r2bihtq</guid>
            <pubDate>Thu, 17 Sep 2026 18:25:51 +0530</pubDate>
            <description><![CDATA[&lt;p&gt;ಭಾರತದಲ್ಲಿ ಬ್ರಹ್ಮಪುತ್ರ ಎಂದು ಕರೆಯಲಾಗುವ ಈ ಪ್ರಸಿದ್ಧ ನದಿ ಬಾಂಗ್ಲಾದೇಶ ಪ್ರವೇಶಿಸಿದ ಬಳಿಕ ಜಮುನಾ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಟಿಬೆಟ್&zwnj;ನಿಂದ ಆರಂಭವಾಗಿ ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹರಿಯುವ ಈ ನದಿಯ ಹೆಸರು ಏಕೆ ಬದಲಾಗುತ್ತದೆ? ಇದರ ವಿಶೇಷತೆ ಏನು? ಬ್ರಹ್ಮಪುತ್ರ-ಜಮುನಾ ನದಿಯ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzwqmjmrn0p9j8ges2ev117s,imgname-3-1786596969112.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಭಾರತದಲ್ಲಿ ನದಿಗಳನ್ನು ಪೂಜಿಸಲಾಗುತ್ತದೆ&lt;/strong&gt;&lt;/h2&gt;&lt;p&gt;ಭಾರತವು ನದಿಗಳ ನಾಡು ಎಂದು ಪ್ರಸಿದ್ಧವಾಗಿದ್ದು, ಒಂದೆರಡಲ್ಲ, ಹಲವಾರು ನದಿಗಳು ಇಲ್ಲಿ ಹರಿಯುತ್ತವೆ. ಭಾರತದಲ್ಲಿ, ನದಿಗಳು ನೀರಿನ ಮೂಲಗಳಷ್ಟೇ ಅಲ್ಲ, ಧಾರ್ಮಿಕ ನಂಬಿಕೆಗಳೊಂದಿಗೆ ಸಹ ಸಂಬಂಧ ಹೊಂದಿವೆ. ಅದಕ್ಕಾಗಿಯೇ ಜನರು ಗಂಗಾ ಮತ್ತು ಯಮುನಾದಂತಹ ನದಿಗಳನ್ನು ಪೂಜಿಸುತ್ತಾರೆ ಮತ್ತು ಅವುಗಳನ್ನು ತಾಯಂದಿರೆಂದು ಪರಿಗಣಿಸುತ್ತಾರೆ. ಬ್ರಹ್ಮಪುತ್ರ ನದಿಯನ್ನು ವಿಶೇಷವಾದ ನದಿ ಎಂದು ಪರಿಗಣಿಸಲಾಗಿದೆ. ಯಾಕಂದ್ರೆ ಭಾರತದಲ್ಲಿ ಹರಿಯುವ ಏಕೈಕ ಗಂಡು ನದಿ.&lt;/p&gt;&lt;h3&gt;&lt;strong&gt;ಬ್ರಹ್ಮಪುತ್ರ ನದಿ&lt;/strong&gt;&lt;/h3&gt;&lt;p&gt;ಕೈಲಾಶ್ ಶ್ರೇಣಿಯ ಚೆಮಾಯುಂಗ್&zwnj;ಡಂಗ್ ಹಿಮನದಿಯಿಂದ ಹುಟ್ಟುವ ಬ್ರಹ್ಮಪುತ್ರ ನದಿ ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. 2,900 ಕಿಲೋಮೀಟರ್ ಉದ್ದದ ಈ ನದಿಯನ್ನು ಬಾಂಗ್ಲಾದೇಶಕ್ಕೆ ಮಾತ್ರವಲ್ಲದೆ ಭಾರತಕ್ಕೂ, ವಿಶೇಷವಾಗಿ ಅರುಣಾಚಲ ಪ್ರದೇಶ ಮತ್ತು ಅಸರ್&zwnj;ಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ, ಬ್ರಹ್ಮಪುತ್ರ ನದಿಯನ್ನು ಕೇವಲ ಒಂದು ಹೆಸರಿನಿಂದ ಅಲ್ಲ, ವಿಶ್ವದ ಅತಿ ಎತ್ತರದ ಪರ್ವತ ಶ್ರೇಣಿಯ ಮೂಲಕ ಹರಿಯುವುದರಿಂದ ಸ್ಕೈ ರಿವರ್ (&quot;ಆಕಾಶದ ನದಿ&quot;) ಸೇರಿದಂತೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಕೆಂಪು ನದಿ ಎಂದೂ ಕರೆಯುತ್ತಾರೆ.&lt;/p&gt;&lt;p&gt;&lt;strong&gt;ಈ ನದಿ ಭಾರತದ ಹಲವು ರಾಜ್ಯಗಳಿಗೆ ಜೀವಾಳ&lt;/strong&gt;&lt;/p&gt;&lt;p&gt;ಟಿಬೆಟ್&zwnj;ನಲ್ಲಿ ಹುಟ್ಟುವ ಈ ನದಿ ಭಾರತದ ಹಲವಾರು ರಾಜ್ಯಗಳ ಮೂಲಕ ಹರಿಯುತ್ತದೆ. ಅದರ ಮಾರ್ಗದಿಂದಾಗಿ, ಇದು ಅನೇಕ ಜನರ, ವಿಶೇಷವಾಗಿ ರೈತರು ಮತ್ತು ಮೀನುಗಾರರ ಜೀವನದೊಂದಿಗೆ ಹೆಣೆದುಕೊಂಡಿದೆ. ಬ್ರಹ್ಮಪುತ್ರದ ಮಾರ್ಗವು ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳನ್ನು ಒಳಗೊಂಡಿದೆ. ನಂತರ ಅದು ಬಾಂಗ್ಲಾದೇಶವನ್ನು ಪ್ರವೇಶಿಸಿ ಬಂಗಾಳಕೊಲ್ಲಿಯನ್ನು ಸೇರುತ್ತದೆ.&lt;/p&gt;&lt;p&gt;&lt;strong&gt;ಭಾರತದ ಈ ಗಂಡು ನದಿ ಬಾಂಗ್ಲಾದೇಶದಲ್ಲಿ ಹೆಣ್ಣಾಗಿ ಹರಿಯುತ್ತಾಳೆ&lt;/strong&gt;&lt;/p&gt;&lt;p&gt;ಭಾರತದಲ್ಲಿ, ಈ ನದಿಗೆ ಬ್ರಹ್ಮಪುತ್ರ ಎಂದು ಹೆಸರಿಸಲಾಗಿದೆ, ಇದು ಭಾರತದ ಏಕೈಕ ಗಂಡು ನದಿ ಎನ್ನುವ ಹೆಸರನ್ನು ಕೂಡ ಹೊಂದಿದೆ. ಆದರೆ, ಇದು ಬಾಂಗ್ಲಾದೇಶವನ್ನು ಪ್ರವೇಶಿಸಿದಾಗ, ಅದರ ಹೆಸರು ಬದಲಾಗುತ್ತದೆ. ಬಾಂಗ್ಲಾದೇಶದಲ್ಲಿ, ಇದನ್ನು ಜಮುನಾ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಇದು ಭಾರತದಲ್ಲಿ ಪುಲ್ಲಿಂಗ ಮತ್ತು ಬಾಂಗ್ಲಾದೇಶದಲ್ಲಿ ಸ್ತ್ರೀಲಿಂಗವಾಗುತ್ತದೆ.&lt;/p&gt;&lt;p&gt;&lt;strong&gt;ಬ್ರಹ್ಮಪುತ್ರ ನದಿಯನ್ನು ಎಷ್ಟು ಪ್ರಮುಖ ನದಿಗಳು ಸೇರುತ್ತವೆ?&lt;/strong&gt;&lt;/p&gt;&lt;p&gt;ವರದಿಗಳ ಪ್ರಕಾರ, ಬ್ರಹ್ಮಪುತ್ರ ನದಿ ವ್ಯವಸ್ಥೆಯ ಉಪನದಿಗಳೆಂದರೆ ಲಾಸಾ ನದಿ, ನ್ಯಾಂಗ್ ನದಿ, ಪರ್ಲುಂಗ್ ಜಾಂಗ್ಬೋ ನದಿ, ಲೋಹಿತ್ ನದಿ, ಧನ್ಶ್ರೀ ನದಿ, ಕೊಲಾಂಗ್ ನದಿ, ಕಾಮೆಂಗ್ ನದಿ, ಮಾನಸ್ ನದಿ, ಬೆಕಿ ನದಿ, ರೈದಕ್ ನದಿ, ಜಲಧಕ ನದಿ, ತೀಸ್ತಾ ನದಿ ಮತ್ತು ಸುಬನ್ಸಿರಿ ನದಿ. ಇನ್ನು ಬ್ರಹ್ಮಪುತ್ರ ನದಿಯ ವಿಶೇಷತೆ ಏನಂದ್ರೆ, ಇದು ಭಾರತದ ಅತ್ಯಂತ ಆಳವಾದ ನದಿಯಾಗಿದೆ. ಕೆಲವು ವರದಿಗಳ ಪ್ರಕಾರ, ಇದರ ಸರಾಸರಿ ಆಳ ಸುಮಾರು 124 ಅಡಿ (38 ಮೀಟರ್) ಮತ್ತು ಗರಿಷ್ಠ ಆಳ 380 ರಿಂದ 450 ಅಡಿ (ಸುಮಾರು 115 ರಿಂದ 135 ಮೀಟರ್) ವರೆಗೆ ಇದೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/travel/brahmaputra-in-india-jamuna-in-bangladesh-why-does-this-river-have-different-names/articleshow-r2bihtq"/>
        </item>
        <item>
            <title><![CDATA[ನೀವು ಸಿಕ್ಕಾಪಟ್ಟೆ ಬಿಸಿಯಾಗಿರುವ ಚಹಾ, ಕಾಫಿ ಕುಡಿತೀರಾ? ಕ್ಯಾನ್ಸರ್ ಬರುತ್ತೆ ಜೋಕೆ!]]></title>
            <link>https://kannada.asianetnews.com/gallery/health-life/can-drinking-very-hot-tea-or-coffee-increase-cancer-risk-what-research-says-7malvsg</link>
            <guid isPermaLink="true">https://kannada.asianetnews.com/gallery/health-life/can-drinking-very-hot-tea-or-coffee-increase-cancer-risk-what-research-says-7malvsg</guid>
            <pubDate>Thu, 17 Sep 2026 18:04:00 +0530</pubDate>
            <description><![CDATA[&lt;p&gt;Cancer Risk: ನೀವು ಬಿಸಿ ಚಹಾ ಕುಡಿಯಲು ಇಷ್ಟಪಡುವವರಾಗಿದ್ದರೆ, ಈ ಅಭ್ಯಾಸವನ್ನು ಬದಲಾಯಿಸುವುದು ಉತ್ತಮ. ಏಕೆಂದರೆ ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಮಾಹಿತಿ ಕೇಂದ್ರದ ಸಂಶೋಧನೆಯು ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಬಹಿರಂಗಪಡಿಸಿದೆ. ಬಿಸಿ ಬಿಸಿ ಚಹಾ ಯಾಕೆ ಕುಡಿಯಬಾರದು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qnmcav77jc5kdnqtrgn3c6,imgname-esophageal-cancer-1789648318810.jpg" type="image/jpeg" height="390" width="690"/>
            <content:encoded><![CDATA[&lt;p&gt;Cancer Risk: ನೀವು ಬಿಸಿ ಚಹಾ ಕುಡಿಯಲು ಇಷ್ಟಪಡುವವರಾಗಿದ್ದರೆ, ಈ ಅಭ್ಯಾಸವನ್ನು ಬದಲಾಯಿಸುವುದು ಉತ್ತಮ. ಏಕೆಂದರೆ ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಮಾಹಿತಿ ಕೇಂದ್ರದ ಸಂಶೋಧನೆಯು ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಬಹಿರಂಗಪಡಿಸಿದೆ. ಬಿಸಿ ಬಿಸಿ ಚಹಾ ಯಾಕೆ ಕುಡಿಯಬಾರದು ಗೊತ್ತಾ?&lt;/p&gt;&lt;img&gt;&lt;p&gt;ಬೆಳಗಿನ ಚಹಾ ಆಗಿರಲಿ ಅಥವಾ ಸಂಜೆಯ ಕಾಫಿ ಆಗಿರಲಿ, ಭಾರತದಲ್ಲಿ ಅನೇಕ ಜನರು ದಿನವನ್ನು ಅದಿಲ್ಲದೇ ಪ್ರಾರಂಭಿಸುವುದಿಲ್ಲ. ಆದರೆ ನೀವು ಚಹಾ ಅಥವಾ ಕಾಫಿಯನ್ನು ತುಂಬಾ ಬಿಸಿಯಾಗಿ ಕುಡಿದರೆ, ಅದನ್ನು ಕುಡಿಯುವಾಗ ಬಾಯಿ ಮತ್ತು ಗಂಟಲಿನಲ್ಲಿ ಶಾಖ ಅಥವಾ ಸುಡುವ ಸಂವೇದನೆ ಕಂಡುಬಂದರೆ, ಈ ಅಭ್ಯಾಸದ ಬಗ್ಗೆ ಗಮನ ಹರಿಸುವುದು ಮುಖ್ಯ. ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಮಾಹಿತಿ ಕೇಂದ್ರದ ಸಂಶೋಧನೆಯು ತುಂಬಾ ಬಿಸಿಯಾದ ವಸ್ತುಗಳನ್ನು ಕುಡಿಯುವುದು ಮತ್ತು ತಿನ್ನುವುದರಿಂದ ಆಹಾರ ಕೊಳವೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸಿದೆ.&lt;/p&gt;&lt;img&gt;&lt;p&gt;942 ಆರೋಗ್ಯವಂತ ಜನರ ಮೇಲೆ NCBI ನಡೆಸಿದ ಸಂಶೋಧನೆಯು 65 ಡಿಗ್ರಿ ಸೆಲ್ಸಿಯಸ್&zwnj;ಗಿಂತ ಹೆಚ್ಚು ಬಿಸಿಯಾದ ಪಾನೀಯಗಳನ್ನು ಕುಡಿಯುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು ಎಂದು ಬಹಿರಂಗಪಡಿಸಿದೆ. ಈ ವ್ಯಕ್ತಿಗಳು ಕ್ಯಾನ್ಸರ್&zwnj;ಗೆ 1.68 ಪಟ್ಟು ಹೆಚ್ಚಿನ ಅಪಾಯವನ್ನು ಹೊಂದಿದ್ದರು, ಆದರೆ ಮದ್ಯಪಾನ ಮಾಡದವರು ಕಡಿಮೆ ಅಪಾಯವನ್ನು ಹೊಂದಿದ್ದರು. ಮತ್ತೊಂದು ಪ್ರಮುಖ ಅಧ್ಯಯನವು ಸುಮಾರು 50,000 ಇರಾನಿನ ವ್ಯಕ್ತಿಗಳನ್ನು ಒಳಗೊಂಡಿತ್ತು ಮತ್ತು ಅವರನ್ನು 10 ವರ್ಷಗಳ ಕಾಲ ಮೇಲ್ವಿಚಾರಣೆ ಮಾಡಿತು.&lt;/p&gt;&lt;img&gt;&lt;p&gt;ಒಬ್ಬ ವ್ಯಕ್ತಿಯು ತುಂಬಾ ಬಿಸಿಯಾದ ಚಹಾ ಅಥವಾ ಕಾಫಿ ಕುಡಿದಾಗ, ಅದು ನೇರವಾಗಿ ಬಾಯಿ, ಗಂಟಲು ಮತ್ತು ಅನ್ನನಾಳದ ಮೇಲೆ ಪರಿಣಾಮ ಬೀರುತ್ತದೆ. ತುಂಬಾ ಬಿಸಿಯಾದ ಆಹಾರವನ್ನು ಪದೇ ಪದೇ ಸೇವಿಸುವುದರಿಂದ ಅನ್ನನಾಳದ ಒಳಪದರವು ಹಾನಿಗೊಳಗಾಗಬಹುದು. ಅಂತಹ ಶಾಖಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಜೀವಕೋಶಗಳು ಹಾನಿಗೊಳಗಾಗಬಹುದು ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.&lt;/p&gt;&lt;img&gt;&lt;p&gt;ಅತಿಯಾದ ಬಿಸಿ ಆಹಾರಗಳು ಅನ್ನನಾಳವನ್ನು ಹಾನಿಗೊಳಿಸುತ್ತವೆ ಎಂದು ಸಂಶೋಧನೆ ತೋರಿಸಿದೆ, ಆದರೆ ಇದು ಕ್ಯಾನ್ಸರ್&zwnj; ಉಂಟು ಮಾಡುವ ಅಂಶ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಪರಿಣಾಮಗಳು ಎಲ್ಲರಿಗೂ ಬದಲಾಗುತ್ತವೆ. ಆದ್ದರಿಂದ, ಚಹಾವನ್ನು ತ್ಯಜಿಸುವುದು ಒಂದೇ ಪರಿಹಾರವಲ್ಲ; ಕಡಿಮೆ ಬಿಸಿ ಹೊಂದಿರುವ ಚಹಾವನ್ನು ಸೇವಿಸಬಹುದು. ಇದು ಕ್ಯಾನ್ಸರ್ ಅಥವಾ ಅನ್ನನಾಳಕ್ಕೆ ಅಷ್ಟೊಂದು ಹಾನಿಯನ್ನುಂಟುಮಾಡುವುದಿಲ್ಲ.&lt;/p&gt;&lt;img&gt;&lt;p&gt;IARC ಸಂಶೋಧನೆಯು 65 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನವನ್ನು ತುಂಬಾ ಬಿಸಿಯಾಗಿ ಪರಿಗಣಿಸಲಾಗುತ್ತದೆ ಎಂದು ಸೂಚಿಸುತ್ತದೆ. ಮನೆಯಲ್ಲಿ, ಚಹಾ ಅಥವಾ ಕಾಫಿಯ ತಾಪಮಾನವನ್ನು ಸಾಮಾನ್ಯವಾಗಿ ಥರ್ಮಾಮೀಟರ್&zwnj;ನಿಂದ ಅಳೆಯಲಾಗುವುದಿಲ್ಲ. ಆದ್ದರಿಂದ, ಅದನ್ನು ನೋಡುವ ಮೂಲಕ ಹೇಳುವುದು ಕಷ್ಟ. ಆದ್ದರಿಂದ, ಚಹಾ ಅಥವಾ ಕಾಫಿ ತುಂಬಾ ಬಿಸಿಯಾಗಿದ್ದರೆ ಅದು ನಿಮ್ಮ ಬಾಯಿ ಅಥವಾ ಗಂಟಲನ್ನು ಸುಡುತ್ತದೆಯೇ ಎಂದು ನೋಡಿದರೆ, ಅದನ್ನು ಸ್ವಲ್ಪ ತಣ್ಣಗಾಗಲು ಬಿಡುವುದು ಉತ್ತಮ.&lt;/p&gt;&lt;img&gt;&lt;p&gt;ಕೇವಲ ಒಂದು ಅಥವಾ ಎರಡು ಬಾರಿ ಬಿಸಿ ಚಹಾ ಕುಡಿಯುವುದರಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಸಂಶೋಧನೆ ಸೂಚಿಸುವುದಿಲ್ಲ. ನೀವು ದೀರ್ಘಕಾಲದವರೆಗೆ ತುಂಬಾ ಬಿಸಿಯಾದ ವಸ್ತುಗಳನ್ನು ಕುಡಿಯುವುದನ್ನು ಮುಂದುವರಿಸಿದರೆ ಸಮಸ್ಯೆ ಉದ್ಭವಿಸಬಹುದು. ಬಿಸಿ ಚಹಾ ಕುಡಿಯುವುದು ಮತ್ತು ಅನ್ನನಾಳದ ಕ್ಯಾನ್ಸರ್ ನಡುವೆ ಸಂಬಂಧ ಕಂಡುಬಂದಿದೆ. ಆದರೆ, ಹೊಟ್ಟೆಗೆ ಹಾನಿ ಮಾಡದ ಬೆಚ್ಚಗಿನ ಚಹಾವನ್ನು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/health-life/can-drinking-very-hot-tea-or-coffee-increase-cancer-risk-what-research-says-7malvsg"/>
        </item>
        <item>
            <title><![CDATA[ಮುತ್ತು ಮತ್ತು ಮಣಿಗಳ ಈ ನೆಕ್ಲೇಸ್ ಡಿಸೈನ್‌ಗಳು ನಿಮಗೆ ರಾಯಲ್ ಲುಕ್ ನೀಡುತ್ತೆ..!]]></title>
            <link>https://kannada.asianetnews.com/webstories/fashion/latest-trendy-pearl-and-bead-necklace-designs-for-a-royal-look-kvn-73pk9t5</link>
            <guid isPermaLink="true">https://kannada.asianetnews.com/webstories/fashion/latest-trendy-pearl-and-bead-necklace-designs-for-a-royal-look-kvn-73pk9t5</guid>
            <pubDate>Thu, 17 Sep 2026 17:56:42 +0530</pubDate>
            <description><![CDATA[&lt;p&gt;ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಇಂತಹ ಸಮಯದಲ್ಲಿ ಕಡಿಮೆ ತೂಕದ ನೆಕ್ಲೇಸ್ ಮಾಡಿಸಬೇಕೆಂದರೆ ಮುತ್ತು ಮತ್ತು ಮಣಿಗಳ ಡಿಸೈನ್ ಬೆಸ್ಟ್ ಚಾಯ್ಸ್. ಕಡಿಮೆ ಚಿನ್ನ ಬಳಸಿ, ಮುತ್ತು-ಮಣಿಗಳ ಕಾಂಬಿನೇಷನ್&zwnj;ನಲ್ಲಿ ಮಾಡಿಸಬಹುದಾದ ಕೆಲವು ಸುಂದರ ನೆಕ್ಲೇಸ್ ಡಿಸೈನ್&zwnj;ಗಳು ಇಲ್ಲಿವೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qjs3p17q3k6y09zjzxzj6y,imgname-whatsapp-image-2026-09-17-at-5.09.24-pm--1--1789645328065.jpeg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/latest-trendy-pearl-and-bead-necklace-designs-for-a-royal-look-kvn-73pk9t5"/>
        </item>
        <item>
            <title><![CDATA[ಎರಡೇ ಎರಡು ಪದಾರ್ಥಗಳಿಂದ ಬಿಳಿಗೂದಲಿಗೆ ಶಾಶ್ವತ ಮುಕ್ತಿ: ಗುರೂಜಿ ಹೇಳಿಕೊಟ್ಟ ಟಿಪ್ಸ್​ ಕೇಳಿ]]></title>
            <link>https://kannada.asianetnews.com/life/get-rid-of-white-hairs-with-just-two-ingredients-what-are-the-tips-taught-by-guruji-suc/articleshow-u2g9fhb</link>
            <guid isPermaLink="true">https://kannada.asianetnews.com/life/get-rid-of-white-hairs-with-just-two-ingredients-what-are-the-tips-taught-by-guruji-suc/articleshow-u2g9fhb</guid>
            <pubDate>Thu, 17 Sep 2026 17:53:17 +0530</pubDate>
            <description><![CDATA[ರಾಸಾಯನಿಕ ಹೇರ್ ಡೈಗಳಿಂದ ಕ್ಯಾನ್ಸರ್ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಆದರೆ, ಸಂತ ಇಂದ್ರದೇವಜಿ ಮಹಾರಾಜ್ ಅವರು ಸೂಚಿಸಿರುವಂತೆ ಅಡುಗೆಮನೆಯಲ್ಲಿರುವ ಚಹಾ ಮತ್ತು ಕಾಫಿ ಪುಡಿಯನ್ನು ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಈ ವಿಧಾನದಿಂದ ಕನಿಷ್ಠ ಆರು ತಿಂಗಳವರೆಗೆ ಕೂದಲು ಬೆಳ್ಳಗಾಗುವುದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01m2qn2pt570ngaxhdear6jajq,imgname-white-hair-remedy-1789647739717.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಳಿಯ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಲಕ್ಷಾಂತರ ಮಂದಿ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿಕೂದಲು ಆಗುವುದು ಮಾಮೂಲು. ಅದಕ್ಕಾಗಿಯೇ ಹೇರ್&zwnj; ಡೈ ಎನ್ನುವುದು ಬಲು ದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸಿದೆ. ಹೇರ್​ ಕಲರ್​ನಿಂದ ಕ್ಯಾನ್ಸರ್​ ಬರುತ್ತಿವೆ. ಬ್ಲಡ್​ ಕ್ಯಾನ್ಸರ್ ಹೆಚ್ಚುತ್ತಿದೆ ಎನ್ನಲಾಗಿದೆ. ಚರ್ಮದ ಕ್ಯಾನ್ಸರ್​, ಗರ್ಭಾಶಯದ ಕ್ಯಾನ್ಸರ್​, ಸ್ತನ ಕ್ಯಾನ್ಸರ್​ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್​ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ. ಇವೆಲ್ಲಾ ಕೆಲವರಿಗೆ ಗೊತ್ತಿದ್ದರೂ ವಯಸ್ಸಾಗದಂತೆ ಕಾಣಬೇಕು ಎನ್ನುವ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವ ಅನಿವಾರ್ಯತೆಯೂ ಇದೆ.&lt;/p&gt;&lt;h2&gt;&lt;strong&gt;ಫೇಕ್​ ವಿಡಿಯೋಸ್​&lt;/strong&gt;&lt;/h2&gt;&lt;p&gt;ಇದಕ್ಕಾಗಿಯೇ, ಸುಲಭದಲ್ಲಿ ತಲೆಗೂದಲನ್ನು ಕಪ್ಪಗಾಗಿಸಿ ಎಂದು ಹಲವಾರು ಯೂಟ್ಯೂಬರ್​ಗಳು ಟಿಪ್ಸ್​ ಕೊಡುತ್ತಿರುವುದು ಹೆಚ್ಚುತ್ತಿದೆ. ಅದನ್ನು ನಂಬಿ ಪ್ರಯೋಗ ಮಾಡಿದರೆ ಅದರಲ್ಲಿ ಹೆಚ್ಚಿನವು ಫೇಕ್​ ಆಗಿರುತ್ತದೆ. ಒಂದಿಷ್ಟು ಲೈಕ್ಸ್​, ವ್ಯೂಸ್​​ಗೋಸ್ಕರ್​ ಇಷ್ಟಬಂದ ರೀತಿಯಲ್ಲಿ ವಿಡಿಯೋ ಮಾಡಲಾಗುತ್ತದೆ. ಅದಕ್ಕೆ ಬರುವ ಕಮೆಂಟ್ಸ್​ಗಳನ್ನು ನೋಡಿದರೆ, ಎಷ್ಟು ಮಂದಿ ಮೋಸ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.&lt;/p&gt;&lt;p&gt;ಅದೇನೇ ಇದ್ದರೂ, ಬಿಳಿಗೂದಲು ಕಾಣಿಸುವುದು ಬಹುತೇಕ ಯಾರಿಗೂ ಇಷ್ಟವಾಗುವುದಿಲ್ಲ. ಇದು ಸಾಮಾನ್ಯ ಜನರ ಮಾತಾದರೆ, ಇನ್ನು ಸೆಲೆಬ್ರಿಟಿಗಳಿಗೆ ಅಂತೂ ಕಪ್ಪು ಕೂದಲು ಮಸ್ಟ್&zwnj;. ಒಂದೇ ಒಂದು ಬಿಳಿ ಕೂದಲು ಕಂಡರೂ, ಅವರ ಘನತೆಗೇ ಕುಂದು ಬರುತ್ತದೆ, ಬಣ್ಣದ ಲೋಕದಲ್ಲಿ ಬೇಡಿಕೆ ಕುಸಿಯುತ್ತದೆ ಎನ್ನುವ ಮಾತಿದೆ. ಇದೇ ಕಾರಣಕ್ಕೆ ಮುಖಕ್ಕೆ ಬಣ್ಣ ಬಳಿದುಕೊಳ್ಳಲು, ಮುಖವನ್ನು ಅಂದಗೊಳಿಸಲು ಹೇಗೆ ಕೆಜಿಗಟ್ಟಲೆ ಮೇಕಪ್&zwnj; ಮೊರೆ ಹೋಗುತ್ತಾರೆಯೋ, ಅದೇ ರೀತಿ ಕೂದಲನ್ನು ಸುಂದರಗೊಳಿಸಲೂ ಅಷ್ಟೇ ಸರ್ಕಸ್&zwnj; ಮಾಡುತ್ತಾರೆ.&lt;/p&gt;&lt;h3&gt;&lt;strong&gt;ನೀವು ಮಾಡಬೇಕಿರುವುದು ಇಷ್ಟು...&lt;/strong&gt;&lt;/h3&gt;&lt;p&gt;ಇದೀಗ ಅಡುಗೆ ಮನೆಯಲ್ಲಿಯೇ ಸಿಗುವ ಎರಡೇ ಎರಡು ಪದಾರ್ಥಗಳನ್ನು ಬಳಸಿ, ಕನಿಷ್ಠ ಆರು ತಿಂಗಳು ಕೂದಲು ಬೆಳ್ಳಗಾಗದೇ ಇರುವಂಥ ಟಿಪ್ಸ್​ ಒಂದನ್ನು ಸಂತ ಇಂದ್ರದೇವಜಿ ಮಹಾರಾಜ್​ ಅವರು ತಮ್ಮ santindradevjimaharaj ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. ಅವರ ಪ್ರಕಾರ, ಕೆಫೆನ್​ ಅಂಶ ಹೆಚ್ಚಿಗೆ ಇದ್ದು ಕೂದಲನ್ನು ಬುಡಸಹಿತ ಸ್ಟ್ರಾಂಗ್​ ಮಾಡುವ ಚಹಾದ ಪುಡಿ ಹಾಗೂ ಕಾಫಿ ಪೌಡರ್​. ಎರಡೇ ಇದಕ್ಕೆ ಸಾಕು. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟು. ಎರಡು ಚಮಚ ಟೀ ಪೌಡರ್​ ತೆಗೆದುಕೊಂಡು ಅದನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ ಮಂದ ಉರಿಯಲ್ಲಿ ತುಂಬಾ ಹೊತ್ತು ಬೇಯಿಸಬೇಕು. ಅದು ಎಷ್ಟು ಎಂದರೆ, ನೀರು ಅರ್ಧಕ್ಕಿಂತ ಕಡಿಮೆ ಮಟ್ಟಕ್ಕೆ ಬರಬೇಕು. ಇದಾದ ಬಳಿಕ ಅದಕ್ಕೆ ಅರ್ಧ ಚಮಚ ಕಾಫಿ ಪೌಡರ್​ ಸೇರಿಸಬೇಕು. ಬಳಿಕ ಒಂದು ಹತ್ತಿಯ ಉಂಡೆಯ ಸಹಾಯದಿಂದ ಎಲ್ಲೆಲ್ಲಿ ಬಿಳಿಗೂದಲು ಇವೆಯೋ ಅಲ್ಲಿ ಹಚ್ಚಬೇಕು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/life/get-rid-of-white-hairs-with-just-two-ingredients-what-are-the-tips-taught-by-guruji-suc/articleshow-u2g9fhb"/>
        </item>
        <item>
            <title><![CDATA[ಲವ್ ಮಾಡಲಿಲ್ಲ, ಬ್ರೇಕಪ್ ಕೂಡ ಆಗಲಿಲ್ಲ.. ಆದರೂ ಮರೆಯೋಕೆ ಆಗ್ತಿಲ್ವಾ? ಯಾಕೆ ಹೀಗೆ?]]></title>
            <link>https://kannada.asianetnews.com/relationship/why-does-a-situationship-hurt-more-than-a-love-breakup/articleshow-ezbn8mk</link>
            <guid isPermaLink="true">https://kannada.asianetnews.com/relationship/why-does-a-situationship-hurt-more-than-a-love-breakup/articleshow-ezbn8mk</guid>
            <pubDate>Thu, 17 Sep 2026 17:43:20 +0530</pubDate>
            <description><![CDATA[&lt;p&gt;ಕೆಲವು ಸಂಬಂಧಗಳೇ ಹಾಗೆ.. ಅವರು ಪ್ರೀತಿಸುತ್ತಿರಲಿಲ್ಲ.. ಆದರೆ ಸ್ನೇಹಿತರಗಿಂತ ಹೆಚ್ಚಾಗಿದ್ದರು. ಇವತ್ತು ಜೊತೆಗಿಲ್ಲ. ಮನಸ್ಸಿಗೆ ಆಗುತ್ತಿರುವ ಗಾಯ ಮಾತ್ರ ಅಷ್ಟಿಷ್ಟಲ್ಲ, ಮರೆಯಲು ಸಾಧ್ಯವೇ ಆಗುತ್ತಿಲ್ಲ.. ಹೌದು, ಈ ಲವ್ ಬ್ರೇಕ್&zwnj; ಅಪ್ ಆದವರಿಗಿಂತ ಅರ್ಧಂಬರ್ಧ ಸಂಬಂಧದಲ್ಲಿದ್ದವರು ಕೊರಗುವುದೇ ಹೆಚ್ಚು. ಹಾಗಿದ್ದರೆ ಯಾಕಿರಬಹುದು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qmh9za4dqm72gngsp8zv52,imgname-situationship-break-up-and-love-break-1789647169514.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರೀತಿಸಿ ಆ ಪ್ರೀತಿ ಮುರಿದು ಬಿದ್ದರೆ ಜಗಳವಾಗಿರುತ್ತದೆ. ಸಹವಾಸವೇ ಬೇಡ ಎಂದು ದೂರ ಆಗಿರುತ್ತಾರೆ. ಆದರೆ ಯಾವುದೇ ಹೆಸರಿಲ್ಲ ಸಂಬಂಧಗಳು ಹಾಗಲ್ಲ. ದಿನವೀಡಿ ಚಾಟ್ ಮಾಡುತ್ತ, ನಗುತ್ತಾ, ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದವರು ದೂರವಾಗಿ ಬಿಟ್ಟರೆ ಹೇಗೆ? ಅವರನ್ನು ಮರೆಯಲು ಆಗದೇ ಕೊರಗುವವರು ಅನೇಕರಿದ್ದಾರೆ. ಅದು ಯಾಕೆ ಹಾಗೆ ಆಗುತ್ತದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.&lt;/p&gt;&lt;h2&gt;&lt;strong&gt;ಹೇಗೆ ದೂರ ಆದರು ಅನ್ನೋದೇ ಗೊತ್ತಾಗಲ್ಲ&lt;/strong&gt;&lt;/h2&gt;&lt;p&gt;ಅವರದ್ದು ಅಧಿಕೃತ ಲವ್ ಆಗಿದ್ದರೆ, ಸಂಬಂಧದಲ್ಲಿ ಸರಿ ಬರದಿದ್ದರೆ.. ನಾವಿಬ್ಬರು ದೂರ ಆಗಿಬಿಡೋಣ ಎಂದು ಅಲ್ಲಿಗೆ ಫುಲ್ ಸ್ಟಾಪ್ ಇಡ್ತಾರೆ. ಇಲ್ಲಿ ಹಾಗಲ್ಲ. ನಿಮ್ಮೊಂದಿಗೆ ಹತ್ತಿರ ಆಗೋದು ಕಡಿಮೆ ಮಾಡ್ತಾರೆ. ಆರಂಭಲ್ಲಿ ಮೆಸೇಜ್ ಕಮ್ಮಿ ಮಾಡ್ತಾರೆ, ಕಾಲ್ ರಿಸೀವ್ ಮಾಡಲ್ಲ.. ಕೊನೆಗೆ ಒಂದು ದಿನ ಸದ್ದಿಲ್ಲದೇ ಮಾಯವಾಗಿ ಬಿಡುತ್ತಾರೆ.. ನಾನು ಏನು ತಪ್ಪು ಮಾಡಿದೆ? ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರವೇ ಸಿಗಲ್ಲ. ಈ ವಿಷಯ ಮನಸ್ಸಿಗೆ ಹೆಚ್ಚು ಕಾಡುತ್ತದೆ..&lt;/p&gt;&lt;h2&gt;&lt;strong&gt;ಪ್ರೀತಿಗೆ ಯಾವ ಹೆಸರೂ ಬೇಕಾಗಿಲ್ಲ&lt;/strong&gt;&lt;/h2&gt;&lt;p&gt;ಇಲ್ಲಿ ನಾವು ಜನರಿಗೆ ಪ್ರೇಮಿಗಳು ಎಂದು ಹೇಳಿಕೊಳ್ಳದೆ ಇರಬಹುದು. ಆದರೆ ದಿನಾ ಬೆಳಗ್ಗೆಯಿಂದ ರಾತ್ರಿವರೆಗೂ ಮಾತಾಡಿದಾಗ..ಕಷ್ಟ-ಸುಖ ಹಂಚಿಕೊಂಡಾಗ ಸಹಜವಾಗಿಯೇ ಪ್ರೀತಿ ಹುಟ್ಟಿಕೊಳ್ಳುತ್ತದೆ. ಅದು ನಿಮಗೆ ಪ್ರೀತಿ ಅಲ್ಲ ಎಂದೆನಿಸಿರಬಹುದು. ಆದ್ರೆ ಮನಸ್ಸಲ್ಲಿ ಹುಟ್ಟಿದ ಭಾವನೆ ಮಾತ್ರ ನೂರಕ್ಕೆ ನೂರು ನಿಜವಾಗಿರುತ್ತದೆ.&lt;/p&gt;&lt;h2&gt;&lt;strong&gt;ಕನಸುಗಳು ಕಾಡುತ್ತವೆ&lt;/strong&gt;&lt;/h2&gt;&lt;p&gt;ಬಹುತೇಕ ಇಂಥ ಸಂಬಂಧಗಳು ಹೆಚ್ಚು ದಿನ ಒಟ್ಟಿಗೆ ಇರೋಕೆ ಆಗೋದಿಲ್ಲ. ಹಾಗಾಗಿ ಅವರ ಕೆಟ್ಟ ಗುಣಗಳಾಗಲಿ ಅಥವಾ ಜಗಳಗಳಾಗಲಿ ಕಣ್ಣಿಗೆ ಬಿದ್ದಿರಲ್ಲ. ಅವರು ತುಂಬಾ ಒಳ್ಳೆಯವರು, ಅವರ ಜೊತೆ ಜೀವನ ಚೆನ್ನಾಗಿರುತ್ತೆ ಎಂಬ ಕಲ್ಪನೆ ಇರುತ್ತದೆ. ಅಲ್ಲಿ ಕೈತಪ್ಪಿ ಹೋಗಿರೋದು ಆ ವ್ಯಕ್ತಿ ಮಾತ್ರವಲ್ಲ ಅವರ ಜೊತೆಗೆ ನಿಮ್ಮ ಕನಸು ಕೂಡ ಹೌದು.&lt;/p&gt;&lt;h2&gt;&lt;strong&gt;ಛೇ.. ಒಂದಾಗಿದ್ರೆ ಎಂಬ ಕೊರಗು..&lt;/strong&gt;&lt;/h2&gt;&lt;p&gt;ಇಲ್ಲಿ ನಾವು ಇಷ್ಟಪಟ್ಟ ವ್ಯಕ್ತಿ ದೂರವಾದಾಗ ಕೊರಗೋದು ನಿಜ. ಛೇ ನಾವಿಬ್ಬರೂ ಜೊತೆಯಾಗಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ಎಂಬ ಯೋಚನೆ ದಿನಕ್ಕೆ ನೂರಾರು ಬಾರಿ ಬಂತು ತಲೆಯನ್ನ ಕೆರೆಯುತ್ತಿರುತ್ತದೆ.&lt;/p&gt;&lt;h2&gt;&lt;strong&gt;ನಿವೇದನೆಗೂ ಇಲ್ಲ ಅವಕಾಶ&lt;/strong&gt;&lt;/h2&gt;&lt;p&gt;ಇನ್ನೊಂದು ವಿಚಾರ ಅಂದ್ರೆ ಆ ವ್ಯಕ್ತಿ ನಿಮ್ಮಿಂದ ದೂರ ಆದ್ಮೇಲೆ ನಾವು ಅದನ್ನು ಬೇರೆಯವರ ಹತ್ತಿರ ಹೇಳಿಕೊಳ್ಳುವ ಹಾಗೆಯೂ ಇಲ್ಲ. ಒಂದು ವೇಳೆ ಹಂಚಿಕೊಂಡರೆ ನೀವಿಬ್ಬರೂ ಲವ್ ಮಾಡ್ತಿರಲಿಲ್ಲ. ಮತ್ಯಾಕೆ ಅಂತ ಕೊರಗು ಎಂದು ಜನ ಹಗುವರಾಗಿ ಮಾತಾಡ್ತಾರೆ. ಇನ್ನೊಂದು ನಿಮ್ಮ ಬಗ್ಗೆ ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.. ಹೀಗಾಗಿ ಬಿಸಿತುಪ್ಪ ಬಾಯಲ್ಲಿ ಇಟ್ಕೊಂಡ ಪರಿಸ್ಥಿತಿ ಆಗಿರುತ್ತದೆ..&lt;/p&gt;&lt;p&gt;ನೀವೇ ಯೋಚಿಸಿ ಯಾಗೆ ಹೀಗೆ ಆಗುತ್ತದೆ.. ನಿಮ್ಮ ಆ ಸಂಬಂಧಕ್ಕೆ ಹೆಸರಿಲ್ಲದಿದ್ದರೂ, ನಿಮ್ಮ ಕಣ್ಣೀರಂತೂ ಸುಳ್ಳಲ್ಲ. ಅಲ್ಲಿ ನಿಮ್ಮ ಭಾವನೆಗಳು ನಿಜವಾಗಿದ್ದವು. ಅದಕ್ಕೆ ಬೇರೆಯವರ ಮಾತು ಕೇಳಿ ನಿಮ್ಮನ್ನು ನೀವು ದೂಷಿಸಿಕೊಳ್ಳಬೇಡಿ. ಇಂಥ ನೋವಿನಿಂದ ಹೊರಬರಲು ಸ್ವಲ್ಪ ಸಮಯ ಬೇಕಾಗಬಹುದು.. ನಿಧಾನವಾಗಿ ನೀವೇ ಸರಿಯಾಗ್ತೀರಿ.. ಚಿಂತೆ ಮಾಡಬೇಡಿ..!&lt;/p&gt;]]></content:encoded>
            <category>life</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/relationship/why-does-a-situationship-hurt-more-than-a-love-breakup/articleshow-ezbn8mk"/>
        </item>
        <item>
            <title><![CDATA[ಬೆಂಡೇಕಾಯಿ ಬೀಜದಿಂದ ಫಳಫಳ ಹೊಳೆದ ತ್ಚಚೆ: ಕೋರಿಯನ್​ ಬ್ಯೂಟಿಷಿಯನ್​ ಹೇಳಿಕೊಟ್ಟ ಟಿಪ್ಸ್​]]></title>
            <link>https://kannada.asianetnews.com/gallery/life/glowing-skin-with-okra-seeds-tips-from-a-korean-beautician-suc-g96x815</link>
            <guid isPermaLink="true">https://kannada.asianetnews.com/gallery/life/glowing-skin-with-okra-seeds-tips-from-a-korean-beautician-suc-g96x815</guid>
            <pubDate>Thu, 17 Sep 2026 17:32:03 +0530</pubDate>
            <description><![CDATA[ಬೆಂಡೇಕಾಯಿಯು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯ ವೃದ್ಧಿಗೂ ಅತ್ಯಂತ ಉಪಯುಕ್ತವಾಗಿದೆ. ಕೊರಿಯನ್ ಬ್ಯೂಟಿಷಿಯನ್ ತಿಳಿಸಿರುವಂತೆ, ಬೆಂಡೇಕಾಯಿ ಬೀಜದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ಇದು ರಕ್ತದ ಸಕ್ಕರೆ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2qkrx996p2r0tpy2fvqandk,imgname-okra-beauty-01-1789646370089.jpg" type="image/jpeg" height="390" width="690"/>
            <content:encoded><![CDATA[ಬೆಂಡೇಕಾಯಿಯು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯ ವೃದ್ಧಿಗೂ ಅತ್ಯಂತ ಉಪಯುಕ್ತವಾಗಿದೆ. ಕೊರಿಯನ್ ಬ್ಯೂಟಿಷಿಯನ್ ತಿಳಿಸಿರುವಂತೆ, ಬೆಂಡೇಕಾಯಿ ಬೀಜದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ಇದು ರಕ್ತದ ಸಕ್ಕರೆ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.&lt;img&gt;&lt;p&gt;ಬೆಂಡೇಕಾಯಿಯಿಂದ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳು ಇವೆ. ಇವು ಲೋಳೆ ಲೋಳೆ ಎನ್ನಿಸಿದರೂ, ಇವುಗಳಿಂದ ಮಾಡುವ ಖಾದ್ಯಗಳು ಹಲವರಿಗೆ ಪ್ರಿಯವಾಗಿವೆ. ಬೆಂಡೇಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ1, ಮ್ಯಾಗ್ನೀಸಿಯಮ್, ಫೋಲೇಟ್ ಮತ್ತು ನಾರಿನಾಂಶ ಸಾಕಷ್ಟು ಪ್ರಮಾಣದಲ್ಲಿದೆ.&lt;/p&gt;&lt;img&gt;&lt;p&gt;ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.&lt;/p&gt;&lt;img&gt;&lt;p&gt;ಆದರೆ ಬೆಂಡೇಕಾಯಿಯಿಂದ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಬಹುದು ಎನ್ನೋದು ನಿಮಗೆ ಗೊತ್ತಾ? ಕೋರಿಯನ್​ ಯುವತಿಯರು ಫಳಫಳ ಹೊಳೆಯುವ ತ್ವಚೆಗೆ ಫೇಮಸ್​ ಆದವರು. ಇದೇ ಕಾರಣಕ್ಕೆ ಕೋರಿಯನ್​ ಬ್ಯೂಟಿ ಟಿಪ್ಸ್​ಗೆ ಅದರದ್ದೇ ಆದ ಮಹತ್ವವಿದೆ.&lt;/p&gt;&lt;img&gt;&lt;p&gt;ಇದೀಗ ಕೋರಿಯನ್​ ಬ್ಯೂಟಿಷಿಯನ್​ ಒಬ್ಬಾಕೆ ಬೆಂಡೇಕಾಯಿ ಬೀಜದಿಂದ ಬ್ಯೂಟಿ ಹೆಚ್ಚಿಸಿಕೊಳ್ಳುವ ಟಿಪ್ಸ್​ ಕೊಟ್ಟಿದ್ದಾಳೆ. ಮೊದಲಿಗೆ ಬೆಂಡೇಕಾಯಿಯನ್ನು ಸ್ಟೀಮ್​ನಲ್ಲಿ ಹಾಕಿ ಬೇಯಿಸಬೇಕು. ಬಳಿಕ ಅದರ ಎರಡೂ ತುದಿಗಳನ್ನು ಕತ್ತರಿಸಬೇಕು.&lt;/p&gt;&lt;img&gt;&lt;p&gt;ಇಷ್ಟಾದ ಬಳಿಕ ಮಧ್ಯೆ ಸೀಳಿದರೆ ಬೀಜ ಕಾಣಿಸುತ್ತದೆ. ಆ ಬೀಜವನ್ನು ತೆಗೆದು ಚಮಚದ ಸಹಾಯದಿಂದ ಸ್ಮ್ಯಾಷ್​ ಮಾಡಬೇಕು. ಕ್ವಾಲಿಟಿ ಹೆಚ್ಚಾಗಿದ್ದರೆ ಮಿಕ್ಸಿಯಲ್ಲಿ ಬೇಕಿದ್ದರೆ ರುಬ್ಬಿಕೊಳ್ಳಬಹುದು.&lt;/p&gt;&lt;img&gt;&lt;p&gt;ಬಳಿಕ ಈ ಪೇಸ್ಟ್​ ಅನ್ನು ಮುಖಕ್ಕೆ ಹಚ್ಚಬೇಕು. ಅದನ್ನು ಮುಖದ ಮೇಲೆ 15 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ತೊಳೆಯಬೇಕು. ಹೀಗೆ ಪದೇ ಪದೇ ಮಾಡುತ್ತಿದ್ದರೆ ಮುಖದ ಕಾಂತಿ ಹೆಚ್ಚುತ್ತದೆ&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/glowing-skin-with-okra-seeds-tips-from-a-korean-beautician-suc-g96x815"/>
        </item>
        <item>
            <title><![CDATA[ಗ್ಯಾಸ್ ಮೇಲೆ ಕ್ಯಾಪ್ಸಿಕಂ ಸುಟ್ಟು ಮೊಸರು ಸೇರಿಸಿ ಮಾಡಿದ ಈ ಚಟ್ನಿ ರೊಟ್ಟಿ, ಚಪಾತಿ, ದೋಸೆ, ಇಡ್ಲಿಗೆ ಬೆಸ್ಟ್ ಕಾಂಬಿನೇಶನ್]]></title>
            <link>https://kannada.asianetnews.com/food/roasted-capsicum-curd-chutney-easy-creamy-and-smoky-chutney-recipe/articleshow-kob0oil</link>
            <guid isPermaLink="true">https://kannada.asianetnews.com/food/roasted-capsicum-curd-chutney-easy-creamy-and-smoky-chutney-recipe/articleshow-kob0oil</guid>
            <pubDate>Thu, 17 Sep 2026 17:28:51 +0530</pubDate>
            <description><![CDATA[&lt;p&gt;&lt;strong&gt;Easy chutney recipes kannada: &lt;/strong&gt;ದಿನನಿತ್ಯ ಮಾಡುವ ಚಟ್ನಿಗಳನ್ನು ತಿಂದು ಬೇಸರವಾಗಿದ್ದರೆ, ಹೋಟೆಲ್ ಶೈಲಿಯ ಡಿಫರೆಂಟ್ ರುಚಿ ನೀಡುವ 'ಕ್ಯಾಪ್ಸಿಕಂ ಮೊಸರು ಚಟ್ನಿ' ಒಮ್ಮೆ ಟ್ರೈ ಮಾಡಿ. ಗ್ಯಾಸ್ ಮೇಲೆ ಕ್ಯಾಪ್ಸಿಕಂ ಸುಟ್ಟು, ಮೊಸರಿನೊಂದಿಗೆ ಬೆರೆಸಿ ಮಾಡುವ ಈ ಕ್ರೀಮಿ ಚಟ್ನಿ ಚಪಾತಿ, ರೊಟ್ಟಿ ಮತ್ತು ಸ್ಯಾಂಡ್&zwnj;ವಿಚ್&zwnj;ಗೆ ಬೆಸ್ಟ್ ಕಾಂಬಿನೇಷನ್. ಮಾಡುವ ಸುಲಭ ವಿಧಾನ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qkpdxjp14qv7fm9cz0z3y6,imgname-thumbnail---2026-09-17t171816.447-1789646288818.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಿನಾ&lt;/strong&gt; ಅದೇ ಟೊಮ್ಯಾಟೊ, ಕಾಯಿ ಚಟ್ನಿ ಅಥವಾ ಕಡಲೆಕಾಯಿ ಚಟ್ನಿ ತಿಂದು ಬೋರ್ ಆಗಿದ್ಯಾ? ಹಾಗಾದರೆ ಈ ಬಾರಿ ಕೊಂಚ ಡಿಫರೆಂಟ್ ಆಗಿ, ಅದ್ಭುತ ರುಚಿ ನೀಡುವ &lsquo;ಕ್ಯಾಪ್ಸಿಕಂ ಮೊಸರು ಚಟ್ನಿ&rsquo; (Roasted Capsicum Curd Chutney) ಟ್ರೈ ಮಾಡಿ ನೋಡಿ. ಅಡುಗೆ ಮಾಡಲು ಹೆಚ್ಚು ಸಮಯವಿಲ್ಲದಿದ್ದಾಗ ಕ್ಷಣಾರ್ಧದಲ್ಲಿ ಮಾಡಬಹುದಾದ ಅತ್ಯಂತ ರುಚಿಕರವಾದ ರೆಸಿಪಿ ಇದು.&lt;/p&gt;&lt;p&gt;ಕ್ಯಾಪ್ಸಿಕಂ ಅನ್ನು ನೇರವಾಗಿ ಬೆಂಕಿಯ ಮೇಲೆ ಸುಡುವುದರಿಂದ ಬರುವ ಘಮಘಮಿಸುವ ಸ್ಮೋಕಿ ಫ್ಲೇವರ್ (Smoky Flavor) ಮತ್ತು ಮೊಸರು ನೀಡುವ ಕ್ರೀಮಿ ಟೆಕ್ಸ್ಚರ್ ಈ ಚಟ್ನಿಯ ರುಚಿಯನ್ನು ದುಪ್ಪಟ್ಟು ಮಾಡುತ್ತದೆ. ಈ ಚಟ್ನಿಯನ್ನು ಬಿಸಿ ಬಿಸಿ ರೊಟ್ಟಿ, ಚಪಾತಿ, ಪರೋಟ ಜೊತೆ ಸವಿಯಬಹುದು, ಬ್ರೆಡ್ ಸ್ಯಾಂಡ್&zwnj;ವಿಚ್&zwnj;ಗೆ ಸ್ಪ್ರೆಡ್ ಆಗಿ ಹಚ್ಚಬಹುದು ಅಥವಾ ಈವ್ನಿಂಗ್ ಸ್ನ್ಯಾಕ್ಸ್&zwnj;ಗೆ ಡಿಪ್ (Dip) ರೀತಿಯಲ್ಲೂ ಬಳಸಬಹುದು!&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;p&gt;ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ) - 1 ಅಥವಾ 2ಎಣ್ಣೆ - 1 ಚಮಚಈರುಳ್ಳಿ - ಅರ್ಧ ಕಪ್ (ಕತ್ತರಿಸಿದ್ದು)ಬೆಳ್ಳುಳ್ಳಿ ಎಸಳು - 4 ರಿಂದ 5ಹಸಿರು ಮೆಣಸಿನಕಾಯಿ - 3 ರಿಂದ 4 (ಖಾರಕ್ಕೆ ತಕ್ಕಷ್ಟು)ಕಡಲೆಕಾಯಿ ಬೀಜ (ಶೇಂಗಾ) - 2 ಚಮಚಕೊತ್ತಂಬರಿ ಸೊಪ್ಪು - ಒಂದು ಹಿಡಿಗಟ್ಟಿ ಮೊಸರು (ಹುಳಿಯಿಲ್ಲದ ಕಮ್ಮನೆಯ ಮೊಸರು) - ಅರ್ಧ ಕಪ್ಕಾಳುಮೆಣಸು - 5 ರಿಂದ 6ಉಪ್ಪು - ರುಚಿಗೆ ತಕ್ಕಷ್ಟು&lt;/p&gt;&lt;h2&gt;&lt;strong&gt;ಮಾಡುವ ಸರಳ ವಿಧಾನ&lt;/strong&gt;&lt;/h2&gt;&lt;p&gt;&lt;strong&gt;ಕ್ಯಾಪ್ಸಿಕಂ ಸುಟ್ಟಿಕೊಳ್ಳಿ&lt;/strong&gt;ಮೊದಲಿಗೆ ಕ್ಯಾಪ್ಸಿಕಂ ಅನ್ನು ನೇರವಾಗಿ ಗ್ಯಾಸ್ ಸ್ಟೌವ್ ಉರಿಯ ಮೇಲೆ ಇಟ್ಟು ಎಲ್ಲಾ ಕಡೆ ತಿರುಗಿಸುತ್ತಾ ಸುಟ್ಟುಕೊಳ್ಳಿ. ಅದರ ಮೇಲ್ಮೈ ಕಪ್ಪಾಗುವವರೆಗೆ ಚೆನ್ನಾಗಿ ಸುಡಬೇಕು. (ಹೀಗೆ ಮಾಡುವುದರಿಂದ ಚಟ್ನಿಗೆ ಅದ್ಭುತವಾದ ಸ್ಮೋಕಿ ಫ್ಲೇವರ್ ಸಿಗುತ್ತದೆ). ನಂತರ ಅದನ್ನು ತೆಗೆದಿಟ್ಟು ಪೂರ್ತಿ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಮೇಲಿನ ಕಪ್ಪು ಸಿಪ್ಪೆಯನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.&lt;/p&gt;&lt;p&gt;&lt;strong&gt;ಮಸಾಲೆ ಹುರಿಯಿರಿ&lt;/strong&gt;ಈಗ ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವವರೆಗೆ 2-3 ನಿಮಿಷ ಹುರಿಯಿರಿ.&lt;/p&gt;&lt;p&gt;ನಂತರ ಅದಕ್ಕೆ ಕಡಲೆಕಾಯಿ ಬೀಜಗಳನ್ನು ಹಾಕಿ ಇನ್ನೆರಡು ನಿಮಿಷ ಫ್ರೈ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಕೆಲವೇ ಸೆಕೆಂಡು ಬಾಡಿಸಿ ಗ್ಯಾಸ್ ಆಫ್ ಮಾಡಿ, ಮಿಶ್ರಣವನ್ನು ತಣ್ಣಗಾಗಲು ಬಿಡಿ.&lt;/p&gt;&lt;p&gt;&lt;strong&gt;ರುಬ್ಬುವ ವಿಧಾನ&lt;/strong&gt;ಮಿಕ್ಸಿ ಜಾರ್&zwnj;ಗೆ ಹುರಿದ ಈರುಳ್ಳಿ-ಶೇಂಗಾ ಮಿಶ್ರಣ, ಸುಟ್ಟು ಕತ್ತರಿಸಿದ ಕ್ಯಾಪ್ಸಿಕಂ ತುಂಡುಗಳು, ಮೊಸರು, ಕಾಳುಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಹಾಕದೆ ಎಲ್ಲವನ್ನೂ ನುಣ್ಣಗೆ ಬೆಣ್ಣೆಯಂತೆ ಕ್ರೀಮಿಯಾಗಿ ರುಬ್ಬಿಕೊಳ್ಳಿ.&lt;/p&gt;&lt;p&gt;ಅಷ್ಟೇ, ಬಾಯಲ್ಲಿ ನೀರೂರಿಸುವ ಘಮಘಮಿಸುವ ಕ್ಯಾಪ್ಸಿಕಂ ಮೊಸರು ಚಟ್ನಿ ಸವಿಯಲು ಸಿದ್ಧ!&lt;/p&gt;&lt;h2&gt;&lt;strong&gt;ಇದು ಗಮನದಲ್ಲಿರಲಿ&lt;/strong&gt;&lt;/h2&gt;&lt;p&gt;&lt;strong&gt;ಸುಟ್ಟ ಕ್ಯಾಪ್ಸಿಕಂ ನೀರಿನಲ್ಲಿ ತೊಳೆಯಬೇಡಿ&lt;/strong&gt;ಕ್ಯಾಪ್ಸಿಕಂ ಸುಟ್ಟ ನಂತರ ಅದರ ಕಪ್ಪು ಸಿಪ್ಪೆ ತೆಗೆಯಲು ನೀರಿನಲ್ಲಿ ತೊಳೆಯುವ ತಪ್ಪು ಮಾಡಬೇಡಿ. ನೀರಿನಲ್ಲಿ ತೊಳೆದರೆ ಅದರ ನೈಜ ಸ್ಮೋಕಿ ಫ್ಲೇವರ್ (ಹೊಗೆಯ ಘಮ) ಹೊರಟುಹೋಗುತ್ತದೆ. ಕೈಯಿಂದ ಅಥವಾ ಟಿಶ್ಯೂ ಪೇಪರ್&zwnj;ನಿಂದ ಸಿಪ್ಪೆ ಸುಲಿದುಕೊಳ್ಳಿ.&lt;/p&gt;&lt;p&gt;&lt;strong&gt;ಕ್ಯಾಪ್ಸಿಕಂಗೆ ಎಣ್ಣೆ ಸವರಿ ಸುಡಿ&lt;/strong&gt;ಗ್ಯಾಸ್ ಮೇಲೆ ಇಡುವ ಮುನ್ನ ಕ್ಯಾಪ್ಸಿಕಂಗೆ ಒಂದೆರಡು ಹನಿ ಎಣ್ಣೆ ಸವರಿ ನಂತರ ಸುಟ್ಟರೆ, ಸಿಪ್ಪೆ ತುಂಬಾ ಸುಲಭವಾಗಿ ಮತ್ತು ವೇಗವಾಗಿ ಸುಲಿದು ಬರುತ್ತದೆ.&lt;/p&gt;&lt;p&gt;&lt;strong&gt;ಹುಳಿ ಮೊಸರು ಬಳಸಬೇಡಿ&lt;/strong&gt;ಈ ಚಟ್ನಿಗೆ ಅತಿಯಾಗಿ ಹುಳಿಯಾದ ಮೊಸರು ಹಾಕಿದರೆ ಚಟ್ನಿ ರುಚಿ ಕೆಡುತ್ತದೆ. ಸದಾ ತಾಜಾ, ಗಟ್ಟಿಯಾದ ಮೊಸರನ್ನೇ ಬಳಸಿ. ಆಗಲೇ ಚಟ್ನಿ ಕ್ರೀಮಿಯಾಗಿ ಬರುತ್ತದೆ.&lt;/p&gt;&lt;p&gt;&lt;strong&gt;ಬಿಸಿ ಇರುವಾಗ ಮೊಸರು ಸೇರಿಸಬೇಡಿ&lt;/strong&gt;ಹುರಿದ ಈರುಳ್ಳಿ-ಶೇಂಗಾ ಮಿಶ್ರಣ ಮತ್ತು ಸುಟ್ಟ ಕ್ಯಾಪ್ಸಿಕಂ ಸಂಪೂರ್ಣವಾಗಿ ತಣ್ಣಗಾದ ಮೇಲೆಯೇ ಮೊಸರು ಹಾಕಿ ರುಬ್ಬಬೇಕು. ಸ್ವಲ್ಪ ಬಿಸಿ ಇದ್ದರೂ ಮೊಸರು ಒಡೆದು ಹೋಗಿ (Curdle ಆಗಿ) ಚಟ್ನಿ ನೀರಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/food/roasted-capsicum-curd-chutney-easy-creamy-and-smoky-chutney-recipe/articleshow-kob0oil"/>
        </item>
        <item>
            <title><![CDATA[ಯಾವುದೇ ಸೀರೆಗಾದರೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಬ್ಲೌಸ್ ಡಿಸೈನ್ಸ್; ಟ್ರೈ ಮಾಡಿ]]></title>
            <link>https://kannada.asianetnews.com/webstories/fashion/trendy-blouse-back-neck-designs-to-elevate-your-saree-look-must-try-once-kvn-ywfh7zy</link>
            <guid isPermaLink="true">https://kannada.asianetnews.com/webstories/fashion/trendy-blouse-back-neck-designs-to-elevate-your-saree-look-must-try-once-kvn-ywfh7zy</guid>
            <pubDate>Thu, 17 Sep 2026 17:25:01 +0530</pubDate>
            <description><![CDATA[&lt;p&gt;ನಾವು ಎಷ್ಟೇ ದುಬಾರಿ ಸೀರೆ ಖರೀದಿಸಿದರೂ, ಅದಕ್ಕೆ ತಕ್ಕಂತೆ ಪರ್ಫೆಕ್ಟ್ ಬ್ಲೌಸ್ ಹಾಕಿದಾಗಲೇ ಸೀರೆಗೆ ಕಳೆ ಬರೋದು. ರೆಗ್ಯುಲರ್ ಬ್ಲೌಸ್ ಡಿಸೈನ್ಸ್ ಹಾಕಿ ಬೋರ್ ಆಗಿದ್ದರೆ, ಈ ಟ್ರೆಂಡಿ ಬ್ಯಾಕ್ ನೆಕ್ ಡಿಸೈನ್ಸ್ ಟ್ರೈ ಮಾಡಿ. ಇದು ನಿಮ್ಮ ಲುಕ್ ಅನ್ನೇ ಬದಲಾಯಿಸುತ್ತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qbczwx1jekghnsyeg5k0hq,imgname-screenshot-2026-09-17-145352-fotor-2026091715032-1789637590941.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/trendy-blouse-back-neck-designs-to-elevate-your-saree-look-must-try-once-kvn-ywfh7zy"/>
        </item>
        <item>
            <title><![CDATA[ಉಪ್ಪು ಅಥವಾ ಸಕ್ಕರೆ: ಈ ಎರಡರಲ್ಲಿ ಹೃದಯಕ್ಕೆ ಯಾವುದು ಹೆಚ್ಚು ಡೇಂಜರ್? ಇಲ್ಲಿದೆ ವೈದ್ಯರ ಉತ್ತರ!]]></title>
            <link>https://kannada.asianetnews.com/gallery/health-life/should-you-cut-salt-or-sugar-for-a-healthy-heart-heres-what-doctors-say-eqs1uz7</link>
            <guid isPermaLink="true">https://kannada.asianetnews.com/gallery/health-life/should-you-cut-salt-or-sugar-for-a-healthy-heart-heres-what-doctors-say-eqs1uz7</guid>
            <pubDate>Thu, 17 Sep 2026 16:54:55 +0530</pubDate>
            <description><![CDATA[&lt;p&gt;Salt vs sugar for heart: ಆರೋಗ್ಯಕರ ಹೃದಯಕ್ಕಾಗಿ ಡಯಟ್ ಮಾಡುವಾಗ ಎಲ್ಲರಲ್ಲೂ ಮೂಡುವ ಸಾಮಾನ್ಯ ಪ್ರಶ್ನೆಯೆಂದರೆ ಉಪ್ಪು ಬಿಡಬೇಕಾ ಅಥವಾ ಸಕ್ಕರೆ ಬಿಡಬೇಕಾ? ಈ ಎರಡರಲ್ಲಿ ಹೃದಯಕ್ಕೆ ಅತಿ ಹೆಚ್ಚು ಹಾನಿ ಮಾಡುವುದು ಯಾವುದು ಮತ್ತು ಮೊದಲು ಯಾವುದನ್ನು ಕಡಿಮೆ ಮಾಡಬೇಕು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2j807c5twg9stxnmakzf1pz,imgname-heart-1789466254718.jpg" type="image/jpeg" height="390" width="690"/>
            <content:encoded><![CDATA[&lt;p&gt;Salt vs sugar for heart: ಆರೋಗ್ಯಕರ ಹೃದಯಕ್ಕಾಗಿ ಡಯಟ್ ಮಾಡುವಾಗ ಎಲ್ಲರಲ್ಲೂ ಮೂಡುವ ಸಾಮಾನ್ಯ ಪ್ರಶ್ನೆಯೆಂದರೆ ಉಪ್ಪು ಬಿಡಬೇಕಾ ಅಥವಾ ಸಕ್ಕರೆ ಬಿಡಬೇಕಾ? ಈ ಎರಡರಲ್ಲಿ ಹೃದಯಕ್ಕೆ ಅತಿ ಹೆಚ್ಚು ಹಾನಿ ಮಾಡುವುದು ಯಾವುದು ಮತ್ತು ಮೊದಲು ಯಾವುದನ್ನು ಕಡಿಮೆ ಮಾಡಬೇಕು?&lt;/p&gt;&lt;img&gt;&lt;p&gt;&lt;strong&gt;ಯಾವುದನ್ನು ಮೊದಲು ಕಡಿಮೆ ಮಾಡಬೇಕು?&lt;/strong&gt;ನಮ್ಮ ದೇಹದಲ್ಲಿ ಒಂದು ಕ್ಷಣವೂ ವಿಶ್ರಾಂತಿ ತೆಗೆದುಕೊಳ್ಳದೆ ಸದಾ ಕೆಲಸ ಮಾಡುವ ಏಕೈಕ ಅದ್ಭುತ ಅಂಗ ಎಂದರೆ ಅದು ಹೃದಯ. ಹೃದಯ ಆರೋಗ್ಯವಾಗಿದ್ದರೆ ಮಾತ್ರ ಮನುಷ್ಯ ದೀರ್ಘಕಾಲ ಮತ್ತು ಉತ್ಸಾಹದಿಂದ ಬದುಕಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೃದಯವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಪ್ರತಿಯೊಬ್ಬರೂ ತಮ್ಮ ಆಹಾರ ಪದ್ಧತಿಯ ಬಗ್ಗೆ ಎಚ್ಚರ ವಹಿಸುತ್ತಿದ್ದಾರೆ. ಆದರೆ, ಆಹಾರ ಪದ್ಧತಿಯಲ್ಲಿ ಬದಲಾವಣೆ ತರಲು ಹೊರಟಾಗ ಹಲವರಿಗೆ ಕಾಡುವ ದೊಡ್ಡ ಪ್ರಶ್ನೆ ಒಂದೇ&mdash; ಹೃದಯಕ್ಕೆ ಉಪ್ಪು ಹೆಚ್ಚು ಅಪಾಯಕಾರಿಯೇ? ಅಥವಾ ಸಕ್ಕರೆ ಅಪಾಯಕಾರಿಯೇ? ಇವೆರಡರಲ್ಲಿ ಯಾವುದನ್ನು ಮೊದಲು ಕಡಿಮೆ ಮಾಡಬೇಕು? ಈ ಬಗ್ಗೆ ಹೃದ್ರೋಗ ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಎರಡೂ ಅಪಾಯಕಾರಿಯೇ!&lt;/strong&gt;ಹೃದಯದ ಆರೋಗ್ಯದ ದೃಷ್ಟಿಯಿಂದ ನೋಡಿದರೆ ಉಪ್ಪು ಮತ್ತು ಸಕ್ಕರೆ ಎರಡೂ ಅಪಾಯಕಾರಿಯೇ. ಯಾವುದೋ ಒಂದನ್ನು ಮಾತ್ರ ಕಡಿಮೆ ಮಾಡಿ, ಇನ್ನೊಂದನ್ನು ಬೇಕಾಬಿಟ್ಟಿ ತಿನ್ನುವುದರಿಂದ ಯಾವುದೇ ಪ್ರಯೋಜನವಿಲ್ಲ. ಆರೋಗ್ಯಕರ ಹೃದಯಕ್ಕಾಗಿ ಇವೆರಡರ ಸಮತೋಲನ ಅತ್ಯಗತ್ಯ ಎನ್ನುತ್ತಾರೆ ತಜ್ಞರು.&lt;/p&gt;&lt;img&gt;&lt;p&gt;&lt;strong&gt;1. ಉಪ್ಪಿನಿಂದ ಬರುವ ಆಪತ್ತು&lt;/strong&gt;ದೇಹದ ನೈಸರ್ಗಿಕ ಕ್ರಿಯೆಗೆ ಉಪ್ಪು (ಸೋಡಿಯಂ) ಅತ್ಯಗತ್ಯ ನಿಜ, ಆದರೆ ಅದು ಮಿತಿ ಮೀರಿದಾಗಲೇ ಅಸಲಿ ಸಮಸ್ಯೆ ಶುರುವಾಗುತ್ತದೆ.&lt;/p&gt;&lt;p&gt;&lt;strong&gt;ಹೃದಯಕ್ಕೆ ಹೊರೆ: &lt;/strong&gt;ಅತಿಯಾಗಿ ಉಪ್ಪು ತಿಂದರೆ ದೇಹದಲ್ಲಿ ನೀರಿನಂಶ ಹೆಚ್ಚಾಗಿ ರಕ್ತದೊತ್ತಡ (High BP) ದಿಢೀರ್ ಏರುತ್ತದೆ. ದೀರ್ಘಕಾಲದ ಅಧಿಕ ರಕ್ತದೊತ್ತಡವು ಹೃದಯದ ರಕ್ತನಾಳಗಳ ಮೇಲೆ ತೀವ್ರ ಒತ್ತಡ ಹೇರುತ್ತದೆ.&lt;/p&gt;&lt;p&gt;&lt;strong&gt;ಹೃದಯಾಘಾತದ ಅಪಾಯ: &lt;/strong&gt;ಇದು ಕ್ರಮೇಣ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ಮುಂತಾದ ಮಾರಣಾಂತಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.&lt;/p&gt;&lt;p&gt;&lt;strong&gt;WHO ನಿಯಮ: &lt;/strong&gt;ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂ ಗಿಂತ ಕಡಿಮೆ (ಅಂದಾಜು 1 ಟೀಸ್ಪೂನ್) ಉಪ್ಪನ್ನು ಮಾತ್ರ ಸೇವಿಸಬೇಕು. ಅಡುಗೆಯ ಉಪ್ಪು ಮಾತ್ರವಲ್ಲದೆ ಉಪ್ಪಿನಕಾಯಿ, ಹಪ್ಪಳ, ಸಾಸ್, ಇನ್&zwnj;ಸ್ಟಂಟ್ ನೂಡಲ್ಸ್ ಮತ್ತು ಪ್ಯಾಕ್ ಮಾಡಿದ ಆಹಾರಗಳಲ್ಲಿರುವ ಅಡಗಿರುವ ಸೋಡಿಯಂ ಬಗ್ಗೆಯೂ ಜಾಗರೂಕರಾಗಿರಬೇಕು.&lt;/p&gt;&lt;img&gt;&lt;p&gt;&lt;strong&gt;2. ಸಿಹಿ ವಿಷ&lt;/strong&gt;ಸಕ್ಕರೆ ಎಂದರೆ ಕೇವಲ ಸಿಹಿತಿಂಡಿಗಳು ಮಾತ್ರವಲ್ಲ, ಕೂಲ್ ಡ್ರಿಂಕ್ಸ್ ಮತ್ತು ಪ್ಯಾಕೇಜ್ಡ್ ಫುಡ್&zwnj;ಗಳಲ್ಲಿರುವ 'ಹಿಡನ್ ಶುಗರ್' (Hidden Sugar) ಹೃದಯಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ.&lt;/p&gt;&lt;p&gt;&lt;strong&gt;ಬೊಜ್ಜು ಮತ್ತು ಮಧುಮೇಹ: &lt;/strong&gt;ಸಕ್ಕರೆಯಲ್ಲಿ ಬರೀ 'ಖಾಲಿ ಕ್ಯಾಲೊರಿ'ಗಳಿರುತ್ತವೆ (Empty Calories). ಇದು ದೇಹದ ತೂಕವನ್ನು ವೇಗವಾಗಿ ಹೆಚ್ಚಿಸಿ ಬೊಜ್ಜಿಗೆ (Obesity) ಕಾರಣವಾಗುತ್ತದೆ. ಬೊಜ್ಜು ಹೆಚ್ಚಾದಂತೆ ಟೈಪ್-2 ಮಧುಮೇಹ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಬಂದು ಹೃದಯದ ಕಾಯಿಲೆಗಳು ಆವರಿಸುತ್ತವೆ.&lt;/p&gt;&lt;p&gt;&lt;strong&gt;WHO ನಿಯಮ: &lt;/strong&gt;ದಿನನಿತ್ಯ ತೆಗೆದುಕೊಳ್ಳುವ ಕ್ಯಾಲೊರಿಗಳಲ್ಲಿ ಸಕ್ಕರೆಯ ಪ್ರಮಾಣ 10% ಗಿಂತ ಕಡಿಮೆ (ಸುಮಾರು 50 ಗ್ರಾಂ) ಇರಬೇಕು. ಇದನ್ನು 5% ಗೆ (25 ಗ್ರಾಂ / 5-6 ಚಮಚ) ಇಳಿಸಿದರೆ ಹೃದಯಕ್ಕೆ ಅತ್ಯುತ್ತಮ.&lt;/p&gt;&lt;img&gt;&lt;p&gt;&lt;strong&gt;ಹಾಗಾದರೆ ಮೊದಲು ಯಾವುದನ್ನು ಕಡಿಮೆ ಮಾಡಬೇಕು?&lt;/strong&gt;ಇದಕ್ಕೆ ಪ್ರತಿಯೊಬ್ಬರಿಗೂ ಒಂದೇ ರೀತಿಯ ಉತ್ತರವಿಲ್ಲ. ನಿಮ್ಮ ದೇಹದ ಆರೋಗ್ಯ ಸ್ಥಿತಿಗೆ ತಕ್ಕಂತೆ ನೀವು ನಿರ್ಧಾರ ತೆಗೆದುಕೊಳ್ಳಬೇಕು..&lt;/p&gt;&lt;p&gt;&lt;strong&gt;ನಿಮಗೆ ಈಗಾಗಲೇ ಹೈ ಬಿಪಿ (ಅಧಿಕ ರಕ್ತದೊತ್ತಡ) ಇದ್ದರೆ:&lt;/strong&gt; ನೀವು ತಕ್ಷಣವೇ ಉಪ್ಪಿನ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಬೇಕು.&lt;/p&gt;&lt;p&gt;&lt;strong&gt;ನಿಮಗೆ ಸಿಹಿ, ಬೇಕರಿ ತಿನಿಸುಗಳು, ಜಂಕ್ ಫುಡ್, ಕೂಲ್ ಡ್ರಿಂಕ್ಸ್ ಅಭ್ಯಾಸ ಹೆಚ್ಚಿದ್ದರೆ: &lt;/strong&gt;ನೀವು ಮೊದಲು ಸಕ್ಕರೆಯನ್ನು ಕಂಟ್ರೋಲ್ ಮಾಡಬೇಕು.&lt;/p&gt;&lt;p&gt;&lt;strong&gt;ಗಮನಿಸಿ (Disclaimer): &lt;/strong&gt;ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ತಿಳುವಳಿಕೆಗಾಗಿ ಮಾತ್ರ. ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆಗಳಿದ್ದರೆ ಅಥವಾ ಡಯಟ್ ಬದಲಾಯಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/should-you-cut-salt-or-sugar-for-a-healthy-heart-heres-what-doctors-say-eqs1uz7"/>
        </item>
        <item>
            <title><![CDATA[ಚಾಣಕ್ಯ ನೀತಿ: ನಿಮ್ಮ ಯಶಸ್ಸು ನೋಡಿ ಹೊಟ್ಟೆಕಿಚ್ಚು ಪಡೋರನ್ನು ಗುರುತಿಸೋದು ಹೇಗೆ? ಈ 3 ಲಕ್ಷಣ ನೋಡಿ]]></title>
            <link>https://kannada.asianetnews.com/life/chanakya-niti-3-signs-someone-is-jealous-of-your-success-kvn/articleshow-nkwm508</link>
            <guid isPermaLink="true">https://kannada.asianetnews.com/life/chanakya-niti-3-signs-someone-is-jealous-of-your-success-kvn/articleshow-nkwm508</guid>
            <pubDate>Thu, 17 Sep 2026 16:24:09 +0530</pubDate>
            <description><![CDATA[ನಮ್ಮ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುವವರು ಮೇಲ್ನೋಟಕ್ಕೆ ಒಳ್ಳೆಯವರಂತೆ ನಟಿಸುತ್ತಾರೆ. ಇಂತಹವರು ಕಷ್ಟದಲ್ಲಿ ಸಹಾಯ ಮಾಡದೆ, ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುತ್ತಾ ನಮ್ಮ ಸಾಧನೆಯನ್ನು ಕಡೆಗಣಿಸುತ್ತಾರೆ. ಚಾಣಕ್ಯ ನೀತಿಯ ಪ್ರಕಾರ ಇಂಥವರಿಂದ ದೂರವಿದ್ದು ನಮ್ಮ ಗುರಿಯತ್ತ ಗಮನಹರಿಸುವುದು ಜಾಣತನ.]]></description>
            <media:content url="https://static.asianetnews.com/images/w-1280,h-720,format-jpg,imgid-01m1e3bhxw6bcpm875cpt18z8k,imgname-chanakya-niti-four-people-never-share-income-personal-problems-1788253423548.jpg" type="image/jpeg" height="390" width="690"/>
            <content:encoded><![CDATA[&lt;p&gt;ನಮ್ಮ ಬೆಳವಣಿಗೆ ನೋಡಿ ಖುಷಿಪಡುವವರು ಕೆಲವರಾದರೆ, ಒಳಗೊಳಗೆ ಹೊಟ್ಟೆಕಿಚ್ಚು ಪಡುವವರು ಇನ್ನೂ ಕೆಲವರು ಇರ್ತಾರೆ. ಇಂಥವರು ಮೇಲ್ನೋಟಕ್ಕೆ ತುಂಬಾ ಒಳ್ಳೆಯವರ ತರಾನೇ ನಾಟಕ ಮಾಡ್ತಾರೆ. ಹಾಗಾದ್ರೆ ಇವರನ್ನು ಕಂಡುಹಿಡಿಯೋದು ಹೇಗೆ? ಈ ಬಗ್ಗೆ ಚಾಣಕ್ಯ ನೀತಿ ಏನು ಹೇಳುತ್ತೆ ಅಂತ ನಾವಿಲ್ಲಿ ನೋಡೋಣ.&lt;/p&gt;&lt;h2&gt;&lt;strong&gt;ಚಾಣಕ್ಯ ನೀತಿ ಸೂತ್ರಗಳು&lt;/strong&gt;&lt;/h2&gt;&lt;p&gt;ನಮ್ಮ ಯಶಸ್ಸು ನೋಡಿ ಖುಷಿಪಡುವವರು ಎಷ್ಟು ಜನ ಇರ್ತಾರೋ, ನಮ್ಮ ಬೆಳವಣಿಗೆ ನೋಡಿ ಒಳಗೊಳಗೆ ಹೊಟ್ಟೆಕಿಚ್ಚು ಪಡುವವರು ಕೂಡ ಅಷ್ಟೇ ಜನ ಇರ್ತಾರೆ. ನಾವು ಸಾಧಿಸಿದಾಗ ಹೊಗಳಿದರೂ, ನಮ್ಮ ಬೆನ್ನ ಹಿಂದೆ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಕೆಲವರು ಇರ್ತಾರೆ. ಮುಖ್ಯವಾಗಿ ನಾವು ಬೆಳೆಯುತ್ತಿರುವಾಗ ಇಂಥವರ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಚಾಣಕ್ಯನ ಪ್ರಕಾರ ನಿಮ್ಮ ಮೇಲೆ ಅಸೂಯೆ ಇರುವವರು ಯಾವ ರೀತಿ ನಡೆದುಕೊಳ್ತಾರೆ ಅಂತ ಇಲ್ಲಿ ತಿಳಿಯೋಣ.&lt;/p&gt;&lt;h3&gt;&lt;strong&gt;ಅಗತ್ಯವಿದ್ದಾಗ ಸಹಾಯ ಮಾಡದೆ ಅಡ್ಡಿಪಡಿಸುವುದು&lt;/strong&gt;&lt;/h3&gt;&lt;p&gt;ನಿಮ್ಮ ಖುಷಿಯಲ್ಲಿ ಭಾಗಿಯಾಗುವವರನ್ನು ಗುರುತಿಸುವುದು ಸುಲಭ. ಆದರೆ ನಿಮಗೆ ಕಷ್ಟ ಬಂದಾಗ ಯಾರು ನಿಜವಾಗಿಯೂ ನಿಮ್ಮ ಜೊತೆ ನಿಲ್ಲುತ್ತಾರೆ ಅಂತ ತಿಳಿದುಕೊಳ್ಳುವುದು ಕಷ್ಟ. ಹೊಟ್ಟೆಕಿಚ್ಚು ಇರುವ ವ್ಯಕ್ತಿ ನಿಮಗೆ ಬೇಕಾದ ಮಾಹಿತಿ ಕೊಡದೆ ಇರುವುದು, ನಿಮ್ಮ ಅವಕಾಶಗಳನ್ನು ಹಾಳು ಮಾಡುವುದು ಅಥವಾ ನೀವು ಮುಂದೆ ಹೋಗದಂತೆ ನಿರುತ್ಸಾಹ ಮಾಡುವ ಮಾತುಗಳನ್ನು ಆಡಬಹುದು. ಆದರೆ ಪ್ರತಿ ನಿರುತ್ಸಾಹದ ಮಾತಿನ ಹಿಂದೆಯೂ ಅಸೂಯೆ ಇರಲೇಬೇಕು ಅಂತೇನಿಲ್ಲ. ಕೆಲವು ಬಾರಿ ನಿಜವಾದ ಅಪಾಯಗಳನ್ನು ಗುರುತಿಸಿ ಎಚ್ಚರಿಸುವವರು ಕೂಡ ಇರ್ತಾರೆ. ಅದಕ್ಕೆ ವ್ಯಕ್ತಿಯ ಮಾತಿಗಿಂತ, ಅವರ ಉದ್ದೇಶ ಮತ್ತು ಹಿಂದಿನ ನಡವಳಿಕೆಯನ್ನು ಗಮನಿಸುವುದು ಮುಖ್ಯ.&lt;/p&gt;&lt;h3&gt;&lt;strong&gt;ಬೇರೆಯವರ ಬಳಿ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದು&lt;/strong&gt;&lt;/h3&gt;&lt;p&gt;ನಮ್ಮ ಎದುರಿಗೆ ಇದ್ದಾಗ ಒಂದು ರೀತಿ, ನಾವು ಇಲ್ಲದಿದ್ದಾಗ ಇನ್ನೊಂದು ರೀತಿ ನಡೆದುಕೊಳ್ಳುವವರನ್ನು ನಾವು ಜೀವನದಲ್ಲಿ ತುಂಬಾ ಬಾರಿ ನೋಡಿರ್ತೀವಿ. ಅಸೂಯೆ ಇರುವ ವ್ಯಕ್ತಿ ನಿಮ್ಮಲ್ಲಿರುವ ತಪ್ಪುಗಳನ್ನು ಮಾತ್ರ ಬೇರೆಯವರಿಗೆ ಹೇಳುವುದು, ನಿಮ್ಮ ಯಶಸ್ಸಿನ ಬಗ್ಗೆ ಅನುಮಾನ ಮೂಡಿಸುವುದು ಅಥವಾ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾತನಾಡಬಹುದು. ಮುಖ್ಯವಾಗಿ ನೀವು ಸಾಮಾಜಿಕವಾಗಿ, ಉದ್ಯೋಗದಲ್ಲಿ ಅಥವಾ ವ್ಯಾಪಾರದಲ್ಲಿ ಬೆಳೆಯುತ್ತಿರುವಾಗ ಇಂಥವರ ನಡವಳಿಕೆ ಸಮಸ್ಯೆಗಳನ್ನು ಸೃಷ್ಟಿಸಬಹುದು. ಆದರೆ ಯಾರೋ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಅಂತ ಕೇಳಿದ ತಕ್ಷಣ ಅವರನ್ನು ಶತ್ರುಗಳು ಅಂತ ನಿರ್ಧರಿಸುವ ಬದಲು, ಆ ಮಾಹಿತಿ ನಿಜಾನಾ ಅಲ್ವಾ ಅಂತ ಪರಿಶೀಲಿಸಿ, ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ.&lt;/p&gt;&lt;h3&gt;&lt;strong&gt;ನಿಮ್ಮ ಯಶಸ್ಸನ್ನು ಕಡೆಗಣಿಸಿ ಮಾತನಾಡುವುದು&lt;/strong&gt;&lt;/h3&gt;&lt;p&gt;ನೀವು ಏನಾದರೂ ಸಾಧಿಸಿದಾಗ ನಿಜವಾಗಿಯೂ ಖುಷಿಪಡುವ ವ್ಯಕ್ತಿ ನಿಮ್ಮ ಕಷ್ಟವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ. ಆದರೆ ಹೊಟ್ಟೆಕಿಚ್ಚು ಇರುವ ವ್ಯಕ್ತಿ ನಿಮ್ಮ ಯಶಸ್ಸಿಗೆ ಬೆಲೆ ಇಲ್ಲದಂತೆ ಮಾತನಾಡುವ ಪ್ರಯತ್ನ ಮಾಡ್ತಾನೆ. ನೀವು ಸಾಧಿಸಿದ ಯಶಸ್ಸಿನ ಹಿಂದಿನ ಶ್ರಮವನ್ನು ಗುರುತಿಸದೆ, ಅದಕ್ಕೆ ಕಾರಣ ಅದೃಷ್ಟ ಅಥವಾ ಬೇರೆಯವರ ಸಹಾಯ ಅಂತ ಹೇಳಬಹುದು. ಈ ರೀತಿ ಮಾತನಾಡುವ ಮೂಲಕ ನಿಮ್ಮ ಯಶಸ್ಸಿನ ಮೇಲಿರುವ ನಿಮ್ಮ ಖುಷಿಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡ್ತಾರೆ.&lt;/p&gt;&lt;h3&gt;&lt;strong&gt;ಹೀಗೆ ಮಾಡುವುದು ಒಳ್ಳೆಯದು&lt;/strong&gt;&lt;/h3&gt;&lt;p&gt;ನಮ್ಮ ಜೀವನದಲ್ಲಿ ಅಸೂಯೆಯನ್ನು ಸಂಪೂರ್ಣವಾಗಿ ತಡೆಯುವುದು ಸಾಧ್ಯವಾಗದೇ ಇರಬಹುದು. ಆದರೆ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲೇ ಇರುತ್ತೆ. ನಮ್ಮ ಬಗ್ಗೆ ಯಾರು ಏನಂದುಕೊಳ್ತಾರೆ ಅನ್ನೋದರ ಬಗ್ಗೆ ಹೆಚ್ಚು ಗಮನ ಕೊಡುವ ಬದಲು, ನಮ್ಮ ಗುರಿಗಳ ಕಡೆ ಗಮನ ಹರಿಸುವುದು ಒಳ್ಳೆಯದು. ಯಾರಾದರೂ ನಮ್ಮ ಮೇಲೆ ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಅಂತ ಅನಿಸಿದಾಗ ಅವರ ಜೊತೆ ಅನಗತ್ಯವಾಗಿ ಜಗಳವಾಡುವ ಬದಲು ಸ್ವಲ್ಪ ದೂರ ಇರುವುದು, ಅಗತ್ಯ ಮಿತಿಗಳನ್ನು ಹಾಕಿಕೊಳ್ಳುವುದು ಜಾಣತನದ ನಿರ್ಧಾರ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/life/chanakya-niti-3-signs-someone-is-jealous-of-your-success-kvn/articleshow-nkwm508"/>
        </item>
        <item>
            <title><![CDATA[ಹೊಟೇಲ್‌ನಂತೆ ಪರ್ಫೆಕ್ಟ್‌ ಆಗಿ ಪನ್ನೀರ್‌ ಕಟ್‌ ಆಗ್ಬೇಕಾ? ಈ ಟ್ರಿಕ್ಸ್‌ ಫಾಲೋ ಮಾಡಿ]]></title>
            <link>https://kannada.asianetnews.com/kitchen/paneer-cutting-tips-does-the-paneer-break-when-cut-now-cut-in-such-pinches/articleshow-l75ai9q</link>
            <guid isPermaLink="true">https://kannada.asianetnews.com/kitchen/paneer-cutting-tips-does-the-paneer-break-when-cut-now-cut-in-such-pinches/articleshow-l75ai9q</guid>
            <pubDate>Thu, 17 Sep 2026 14:55:30 +0530</pubDate>
            <description><![CDATA[&lt;p&gt;Paneer Cutting Tips : ಚಾಕುವಿನಿಂದ ಪನ್ನೀರ್&zwnj; ಕತ್ತರಿಸೋದು ಕಷ್ಟ. ಪುಡಿಯಾಗದೆ ಪನ್ನೀರ್&zwnj; ಸುಂದರವಾಗಿ ಕಟ್&zwnj; ಆಗ್ಬೇಕು ಅಂದ್ರೆ ನೀವು ಚಾಕು ಬದಲು ಇದನ್ನು ಬಳಸಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qaw0c3w11a0qkp2m2spdve,imgname-paneer-cutting-tips-1789637034371.jpg" type="image/jpeg" height="390" width="690"/>
            <content:encoded><![CDATA[&lt;p&gt;ಪನ್ನೀರ್&zwnj; ನಿಂದ ಮಾಡಿದ ಡಿಶ್&zwnj; ತಿನ್ನೋಕೆ ಖುಷಿ. ಆದ್ರೆ ಅದನ್ನು ಸರಿಯಾಗಿ ಕತ್ತರಿಸೋದು ದೊಡ್ಡ ತಲೆಬಿಸಿ. ಚಾಕುವಿನಿಂದ ಪನ್ನೀರ್&zwnj; ಕತ್ತರಿಸೋದು ಕಷ್ಟ. ಚಾಕು ಟಚ್&zwnj; ಆಗ್ತಿದ್ದಂತೆ ಪನ್ನೀರ್&zwnj; ಪುಡಿಯಾಗುತ್ತೆ. ಅದರಲ್ಲೂ ಪನೀರ್ ತುಂಬಾ ಸಾಫ್ಟ್ ಆಗಿದ್ದರೆ ಒಂದೇ ಗಾತ್ರದ ತುಂಡುಗಳನ್ನು ಮಾಡೋದು ಕಷ್ಟ. ಪನ್ನೀರ್&zwnj; ಸುಲಭವಾಗಿ ಕಟ್&zwnj; ಆಗ್ಬೇಕು ಅಂದ್ರೆ ಈ ಟ್ರಿಕ್ಸ್&zwnj; ಫಾಲೋ ಮಾಡಿ.&lt;/p&gt;&lt;h2&gt;ಚಾಕು ಬದಲು ದಾರ ಬಳಸಿ&lt;/h2&gt;&lt;p&gt;ನೀವು ಪನ್ನೀರನ್ನು ಒಂದೇ ಶೇಪ್&zwnj; ನಲ್ಲಿ ಕತ್ತರಿಸಲು ಪ್ರಯತ್ನಿಸುತ್ತಿದ್ದರೆ ಚಾಕು ಬದಲು ದಾರವನ್ನು ಬಳಸಿ. ಮೊದಲು ಪನೀರ್ ಅನ್ನು ಒಂದು ಪ್ಲೇಟ್ ಅಥವಾ ಚಾಪಿಂಗ್ ಬೋರ್ಡ್ ಮೇಲೆ ಇಟ್ಟುಕೊಳ್ಳಿ. ಈಗ ಒಂದು ಸ್ವಚ್ಛವಾದ, ಗಟ್ಟಿಯಾದ ದಾರ ತೆಗೆದುಕೊಳ್ಳಿ. ಎಲ್ಲಿ ಕಟ್ ಮಾಡಬೇಕು ಅಂದ್ಕೊಂಡಿದ್ದೀರೋ ಆ ಜಾಗದ ಕೆಳಗಿನಿಂದ ದಾರವನ್ನು ಹಾಯಿಸಿ. ನಂತರ ದಾರದ ಎರಡೂ ತುದಿಗಳನ್ನು ಮೇಲಕ್ಕೆ ತಂದು ಕ್ರಾಸ್ ಮಾಡಿ ನಿಧಾನವಾಗಿ ಎಳೆಯಿರಿ. ದಾರ ಪನೀರ್ನ ಮಧ್ಯದಿಂದ ಹಾದುಹೋಗಿ ಅದನ್ನು ಕಟ್ ಮಾಡುತ್ತೆ. ಚಾಕುವಿನಂತೆ ಹೆಚ್ಚು ಒತ್ತಡ ಹಾಕಬೇಕಾಗಿಲ್ಲ. ನಿಮಗೆ ಬೇಕಾದಷ್ಟು ದಪ್ಪದ ತುಂಡುಗಳನ್ನು ಇದೇ ರೀತಿ ಕತ್ತರಿಸಿಕೊಳ್ಳಬಹುದು.&lt;/p&gt;&lt;p&gt;ಇನ್ನು ದಾರದಿಂದ ಕತ್ತರಿಸಿದಾಗ ಪನೀರ್ ಯಾಕೆ ಕಡಿಮೆ ಪುಡಿಯಾಗುತ್ತೆ ಅಂದ್ರೆ ಚಾಕುವಿನಿಂದ ಕತ್ತರಿಸುವಾಗ ಪನೀರ್ ಮೇಲೆ ಒತ್ತಡ ಬೀಳುತ್ತೆ. ಅದರಲ್ಲೂ ಮೃದುವಾದ ಪನೀರ್ ಅನ್ನು ಚಾಕುವಿನಿಂದ ಮುಂದೆ-ಹಿಂದೆ ಆಡಿಸಿ ಕತ್ತರಿಸಿದಾಗ ಅದು ಒತ್ತಡಕ್ಕೆ ಸಿಕ್ಕಿ ಪುಡಿಯಾಗುತ್ತದೆ. ಆದರೆ ದಾರದಿಂದ ಕತ್ತರಿಸುವಾಗ ಒಂದೇ ಜಾಗದಲ್ಲಿ ನಿಧಾನವಾಗಿ ಕಟ್ ಆಗುವುದರಿಂದ ಪನೀರ್ ಮೇಲೆ ಹೆಚ್ಚಿನ ಒತ್ತಡ ಬೀಳೋದಿಲ್ಲ.&lt;/p&gt;&lt;p&gt;ಆದ್ರೆ ಪನೀರ್ ಪುಡಿಪುಡಿಯಾಗೋದಕ್ಕೆ ಕತ್ತರಿಸುವ ವಿಧಾನ ಮಾತ್ರ ಕಾರಣ ಅಲ್ಲ. ಪನೀರ್ ಎಷ್ಟು ಸಾಫ್ಟ್ ಇದೆ, ಅದರಲ್ಲಿ ಎಷ್ಟು ನೀರಿದೆ ಅನ್ನೋದೂ ಮುಖ್ಯ. ಪನೀರ್ ತುಂಬಾ ಸಾಫ್ಟ್ ಆಗಿದ್ದರೆ ಕತ್ತರಿಸುವ ಮೊದಲು ಸ್ವಲ್ಪ ಹೊತ್ತು ಫ್ರಿಜ್ನಲ್ಲಿ ಇಡಬಹುದು. ಇದರಿಂದ ಪನೀರ್ ಸ್ವಲ್ಪ ಸೆಟ್ ಆಗಿ ಕತ್ತರಿಸಲು ಸುಲಭವಾಗುತ್ತೆ. ಪನೀರ್ ಮೇಲಿರುವ ಹೆಚ್ಚುವರಿ ನೀರನ್ನು ಕಿಚನ್ ಪೇಪರ್ ಅಥವಾ ಸ್ವಚ್ಛವಾದ ಬಟ್ಟೆಯಿಂದ ನಿಧಾನವಾಗಿ ಒರೆಸಿಕೊಳ್ಳಬಹುದು.&lt;/p&gt;&lt;p&gt;ಇನ್ನು ದಾರ ಬಳಸುವಾಗ ಅದು ಸ್ವಚ್ಛವಾಗಿರಬೇಕು ಮತ್ತು ಗಟ್ಟಿಯಾಗಿರಬೇಕು. ಕತ್ತರಿಸುವಾಗ ದಾರ ತುಂಡಾಗದಂತೆ ನೋಡಿಕೊಳ್ಳಿ. ಪನೀರ್ ಟಿಕ್ಕಾ, ಫ್ರೈ ಪನೀರ್ ಅಥವಾ ಗ್ರಿಲ್ ಮಾಡಲು ಒಂದೇ ಗಾತ್ರದ ತುಂಡುಗಳು ಬೇಕಾದಾಗ ಈ ವಿಧಾನ ಉಪಯೋಗಕ್ಕೆ ಬರುತ್ತದೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/kitchen/paneer-cutting-tips-does-the-paneer-break-when-cut-now-cut-in-such-pinches/articleshow-l75ai9q"/>
        </item>
        <item>
            <title><![CDATA[ಪ್ರಾಣ ತೆಗೆಯೋ ಹಾವಿನ ವಿಷವೇ ಸಂಜೀವಿನಿ! ಈ ವಿಷದಿಂದ ತಯಾರಾಗುತ್ತೆ ಜೀವ ಉಳಿಸುವ ಔಷಧಿ..! ಹಾರ್ಟ್ ಅಟ್ಯಾಕ್‌ಗೂ ರಾಮಬಾಣ]]></title>
            <link>https://kannada.asianetnews.com/gallery/life/snake-venom-to-life-saving-medicine-how-deadly-poison-is-used-to-make-drugs-kvn-drox9zf</link>
            <guid isPermaLink="true">https://kannada.asianetnews.com/gallery/life/snake-venom-to-life-saving-medicine-how-deadly-poison-is-used-to-make-drugs-kvn-drox9zf</guid>
            <pubDate>Thu, 17 Sep 2026 14:56:19 +0530</pubDate>
            <description><![CDATA[&lt;p&gt;ಹಾವು ಕಚ್ಚಿದರೆ ಪ್ರಾಣ ಹೋಗುತ್ತೆ ಅನ್ನೋ ಭಯ ಎಲ್ಲರಿಗೂ ಇರುತ್ತೆ. ಆದ್ರೆ ಅದೇ ಹಾವಿನ ವಿಷ ಈಗ ಎಷ್ಟೋ ಜನರ ಪ್ರಾಣ ಉಳಿಸೋ ಸಂಜೀವಿನಿಯಾಗಿ ಬದಲಾಗಿದೆ. ವೈದ್ಯಕೀಯ ಲೋಕದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಗಳಿಂದ ಹಾವಿನ ವಿಷ ಬಳಸಿ ಹಲವು ಕಾಯಿಲೆಗಳಿಗೆ ಮದ್ದು ತಯಾರಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2jpeqbpj7py82r062jgp3ng,imgname-snake-milker--1--1789481409910.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವು ಕಚ್ಚಿದರೆ ಪ್ರಾಣ ಹೋಗುತ್ತೆ ಅನ್ನೋ ಭಯ ಎಲ್ಲರಿಗೂ ಇರುತ್ತೆ. ಆದ್ರೆ ಅದೇ ಹಾವಿನ ವಿಷ ಈಗ ಎಷ್ಟೋ ಜನರ ಪ್ರಾಣ ಉಳಿಸೋ ಸಂಜೀವಿನಿಯಾಗಿ ಬದಲಾಗಿದೆ. ವೈದ್ಯಕೀಯ ಲೋಕದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಗಳಿಂದ ಹಾವಿನ ವಿಷ ಬಳಸಿ ಹಲವು ಕಾಯಿಲೆಗಳಿಗೆ ಮದ್ದು ತಯಾರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಹಾವಿನ ವಿಷದಿಂದ ತಯಾರಾದ ಅತ್ಯಂತ ಫೇಮಸ್ ಔಷಧಿ ಅಂದ್ರೆ ಕ್ಯಾಪ್ಟೋಪ್ರಿಲ್ (Captopril). ಬ್ರೆಜಿಲ್ ವೈಪರ್ (Brazil viper) ಎಂಬ ಹಾವಿನ ವಿಷದಲ್ಲಿರುವ ಬ್ರಾಡಿಕಿನಿನ್-ಪೊಟೆನ್ಷಿಯೇಟಿಂಗ್ ಪೆಪ್ಟೈಡ್ಸ್ ಬಳಸಿ ಇದನ್ನು ತಯಾರಿಸಿದ್ದಾರೆ. 1981ರಲ್ಲಿ ಎಫ್&zwnj;ಡಿಎ (FDA) ಅನುಮೋದನೆ ಪಡೆದ ಈ ಔಷಧಿ, ಹೈ ಬಿಪಿ ಕಡಿಮೆ ಮಾಡಲು ಮತ್ತು ಹಾರ್ಟ್ ಫೇಲ್ಯೂರ್ ತಡೆಯಲು ಸೂಪರ್ ಆಗಿ ಕೆಲಸ ಮಾಡುತ್ತೆ. ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (Myocardial infarction) ನಂತರ ಹೃದಯವನ್ನು ಕಾಪಾಡಲು ಇದು ತುಂಬಾ ಉಪಯುಕ್ತ. ಇದೇ ಮಾದರಿಯನ್ನು ಇಟ್ಟುಕೊಂಡು ಎನಾಲಾಪ್ರಿಲ್ (Enalapril) ನಂತಹ ಇತರ ಬಿಪಿ ಔಷಧಿಗಳನ್ನು ಕೂಡ ಅಭಿವೃದ್ಧಿಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಹಾರ್ಟ್ ಅಟ್ಯಾಕ್ ಅಥವಾ ಹೃದಯದ ಗಂಭೀರ ಸಮಸ್ಯೆಗಳು ಎದುರಾದಾಗ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಇದನ್ನು ತಡೆಯಲು ಪಿಗ್ಮಿ ರ್ಯಾಟಲ್&zwnj;ಸ್ನೇಕ್ (Pygmy rattlesnake) ವಿಷದಲ್ಲಿರುವ ಬಾರ್ಬೌರಿನ್ (Barbourin) ಎಂಬ ಡಿಸಿಂಟಿಗ್ರಿನ್ ಬಳಸಿ ಎಪ್ಟಿಫಿಬಾಟೈಡ್ (Eptifibatide) ಎಂಬ ಔಷಧಿ ತಯಾರಿಸಿದ್ದಾರೆ. ಇದು 1998ರಲ್ಲಿ ಎಫ್&zwnj;ಡಿಎ (FDA) ಅನುಮೋದನೆ ಪಡೆದಿದೆ. ಆಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟ್ ಹಾಕುವಾಗ ಇದು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತೆ. ಹಾಗೆಯೇ, ಆಫ್ರಿಕನ್ ಸಾ ಸ್ಕೇಲ್ಡ್ ವೈಪರ್ (African saw-scaled viper) ವಿಷದಲ್ಲಿರುವ ಎಕಿಸ್ಟಾಟಿನ್ (Echistatin) ಪ್ರೋಟೀನ್ ಬಳಸಿ ಟಿರೋಫಿಬಾನ್ (Tirofiban) ಎಂಬ ಔಷಧಿಯನ್ನು ಕೂಡ ತಯಾರಿಸಿದ್ದಾರೆ.&lt;/p&gt;&lt;img&gt;&lt;p&gt;ಕೆಲವು ಜಾತಿಯ ಹಾವುಗಳ ವಿಷ ರಕ್ತವನ್ನು ಹೆಪ್ಪುಗಟ್ಟಿಸುವ ಗುಣವನ್ನು ಕೂಡ ಹೊಂದಿರುತ್ತೆ. ಬೋಥ್ರಾಪ್ಸ್ ಅಟ್ರಾಕ್ಸ್ (Bothrops atrox) ನಂತಹ ಹಾವುಗಳ ವಿಷದಿಂದ ಶುದ್ಧೀಕರಿಸಿದ ಬ್ಯಾಟ್ರಾಕ್ಸೋಬಿನ್ (Batroxobin) ಎಂಬ ಎಂಜೈಮ್ ರಕ್ತದಲ್ಲಿರುವ ಫೈಬ್ರಿನೊಜೆನ್ ಮೇಲೆ ಕೆಲಸ ಮಾಡುತ್ತೆ. ಸರ್ಜರಿ ಮಾಡುವಾಗ ಅಥವಾ ತುರ್ತು ರಕ್ತಸ್ರಾವದ ಸಮಸ್ಯೆಗಳಿದ್ದಾಗ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಯಂತ್ರಿಸಲು ಕೆಲವು ದೇಶಗಳಲ್ಲಿ ಇದನ್ನು ಹೆಮೋಸ್ಟಾಟಿಕ್ ಆಗಿ ಬಳಸುತ್ತಿದ್ದಾರೆ. ಇದರ ಜೊತೆಗೆ, ನಾಗರಹಾವಿನ ವಿಷದಿಂದ ನೇರವಾಗಿ ಶುದ್ಧೀಕರಿಸಿದ ಕೋಬ್ರಾಟೈಡ್ (Cobratide) ಎಂಬ ಕಾಂಪೌಂಡ್ ನರಗಳ ನೋವು ಮತ್ತು ರಕ್ತನಾಳಗಳ ಸಮಸ್ಯೆಗಳ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿದೆ.&lt;/p&gt;&lt;img&gt;&lt;p&gt;ಪ್ರಸ್ತುತ ಹಾವಿನ ವಿಷದ ಮೇಲೆ ನಡೆಯುತ್ತಿರುವ ಸಂಶೋಧನೆಗಳು ಕ್ಯಾನ್ಸರ್ ಥೆರಪಿಯಲ್ಲಿ ಹೊಸ ಭರವಸೆ ಮೂಡಿಸಿವೆ. ವಿಷದಲ್ಲಿರುವ ಕೆಲವು ಪೆಪ್ಟೈಡ್&zwnj;ಗಳು ಮತ್ತು ಪ್ರೋಟೀನ್&zwnj;ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವುದಲ್ಲದೆ, ಅವು ದೇಹದಾದ್ಯಂತ ಹರಡದಂತೆ ತಡೆಯುತ್ತವೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಉದಾಹರಣೆಗೆ, ಕಾಪರ್&zwnj;ಹೆಡ್ (Copperhead) ಹಾವಿನ ವಿಷದಲ್ಲಿರುವ ಕಾಂಟೋರ್ಟ್ರೋಸ್ಟಾಟಿನ್ (Contortrostatin) ಎಂಬ ಪ್ರೋಟೀನ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಂಶೋಧನಾ ಹಂತದಲ್ಲಿದೆ. ಅಷ್ಟೇ ಅಲ್ಲದೆ, ಮಾರ್ಫಿನ್&zwnj;ಗಿಂತ ಶಕ್ತಿಶಾಲಿ ಹಾಗೂ ಚಟವಾಗದ ನೋವು ನಿವಾರಕಗಳಾಗಿ, ನರಗಳ ಕಾಯಿಲೆ, ಮಧುಮೇಹ ಮತ್ತು ಪಾರ್ಶ್ವವಾಯು ಚಿಕಿತ್ಸೆಗಳಲ್ಲೂ ಈ ವಿಷದ ಪೆಪ್ಟೈಡ್&zwnj;ಗಳು ಭವಿಷ್ಯದ ಔಷಧಿಗಳಾಗಿ ಬದಲಾಗುತ್ತಿವೆ.&lt;/p&gt;&lt;img&gt;&lt;p&gt;ಬಹಳಷ್ಟು ಜನ ಹಾವಿನ ವಿಷವನ್ನು ನೇರವಾಗಿ ಇಂಜೆಕ್ಷನ್ ಮೂಲಕ ಕೊಡುತ್ತಾರೆ ಎಂದು ಅಂದುಕೊಂಡಿದ್ದಾರೆ. ಆದರೆ ಅದು ತಪ್ಪು. ಹಾವಿನ ವಿಷದಲ್ಲಿ ನೂರಾರು ಜೈವಿಕ ಸಕ್ರಿಯ ಅಣುಗಳಿರುತ್ತವೆ. ವಿಜ್ಞಾನಿಗಳು ಲ್ಯಾಬ್&zwnj;ನಲ್ಲಿ ವಿಷದ ನಿರ್ದಿಷ್ಟ ಅಣುಗಳನ್ನು ಬೇರ್ಪಡಿಸಿ, ಅವುಗಳ ರಚನೆಯನ್ನು ಅಧ್ಯಯನ ಮಾಡುತ್ತಾರೆ. ಮನುಷ್ಯನ ದೇಹಕ್ಕೆ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಅವುಗಳನ್ನು ಸಿಂಥೆಟಿಕ್ ಅಥವಾ ಮಾರ್ಪಡಿಸಿದ ರೂಪದಲ್ಲಿ ತಯಾರಿಸುತ್ತಾರೆ. ಕ್ಯಾಪ್ಟೋಪ್ರಿಲ್ (Captopril) ಸಂಪೂರ್ಣವಾಗಿ ಲ್ಯಾಬ್&zwnj;ನಲ್ಲಿ ತಯಾರಾದ ಸಿಂಥೆಟಿಕ್ ಔಷಧಿ, ಆದರೆ ಅದರ ಡಿಸೈನ್ ಬ್ಲೂಪ್ರಿಂಟ್ ಮಾತ್ರ ಬ್ರೆಜಿಲಿಯನ್ ವೈಪರ್ (Brazilian viper) ಹಾವಿನ ವಿಷವೇ. ಹಾಗೆಯೇ ಹಾವು ಕಚ್ಚಿದವರನ್ನು ಕಾಪಾಡುವ ಆಂಟಿ-ವೆನಮ್ ಅನ್ನು ಕುದುರೆ ಅಥವಾ ಕುರಿಗಳ ದೇಹಕ್ಕೆ ಹಾವಿನ ವಿಷವನ್ನು ಸೇರಿಸಿ, ಅಲ್ಲಿ ಉತ್ಪತ್ತಿಯಾಗುವ ಆಂಟಿಬಾಡಿಗಳಿಂದ ಸಂಗ್ರಹಿಸುತ್ತಾರೆ.&lt;/p&gt;&lt;img&gt;&lt;p&gt;ಹಾವಿನ ವಿಷದಿಂದ ತಯಾರಾಗುವ ಔಷಧಿಗಳು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿವೆ. ಪ್ರಾಣ ತೆಗೆಯುವ ವಿಷವೇ ಇಂದು ಲಕ್ಷಾಂತರ ಜನರ ಪ್ರಾಣ ಉಳಿಸುವ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಶೋಧನೆಗಳು ಇನ್ನಷ್ಟು ಹೊಸ ಔಷಧಿಗಳನ್ನು ಪರಿಚಯಿಸುವ ಸಾಧ್ಯತೆ ಇದೆ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/life/snake-venom-to-life-saving-medicine-how-deadly-poison-is-used-to-make-drugs-kvn-drox9zf"/>
        </item>
    </channel>
</rss>
