<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 10 Apr 2026 17:10:42 +0530</lastBuildDate>
        <atom:link href="https://kannada.asianetnews.com/rss/life" rel="self" type="application/rss+xml"/>
        <item>
            <title><![CDATA[Niveditha Gowda: ಹಸಿರು ಸೀರೆಯುಟ್ಟು ನಾಚಿ ನಿಂತ ನಿವೇದಿತಾ ಗೌಡ; '2ನೇ ಮದುವೆ'ಗೆ ರೆಡಿನಾ ಎಂದ ಫ್ಯಾನ್ಸ್!]]></title>
            <link>https://kannada.asianetnews.com/gallery/tv-talk/niveditha-gowda-green-saree-photoshoot-viral-fans-reaction-second-marriage-rumors-sat-0clfetu</link>
            <guid isPermaLink="true">https://kannada.asianetnews.com/gallery/tv-talk/niveditha-gowda-green-saree-photoshoot-viral-fans-reaction-second-marriage-rumors-sat-0clfetu</guid>
            <pubDate>Fri, 10 Apr 2026 17:10:37 +0530</pubDate>
            <description><![CDATA[&lt;p&gt;ನಟಿ ನಿವೇದಿತಾ ಗೌಡ ತಮ್ಮ ಇತ್ತೀಚಿನ ಹಸಿರು ರೇಷ್ಮೆ ಸೀರೆಯ ಫೋಟೋಶೂಟ್&zwnj;ನಿಂದಾಗಿ ಸದ್ದು ಮಾಡುತ್ತಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಇದರ ಬೆನ್ನಲ್ಲೇ ನೆಟ್ಟಿಗರು ಎರಡನೇ ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knvjm9jp89vhwxv5d60rjj30,imgname-actress-niveditha-gowda-saree-photoshoot-1775820744278.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ನಿವೇದಿತಾ ಗೌಡ ತಮ್ಮ ಇತ್ತೀಚಿನ ಹಸಿರು ರೇಷ್ಮೆ ಸೀರೆಯ ಫೋಟೋಶೂಟ್&zwnj;ನಿಂದಾಗಿ ಸದ್ದು ಮಾಡುತ್ತಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಇದರ ಬೆನ್ನಲ್ಲೇ ನೆಟ್ಟಿಗರು ಎರಡನೇ ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದಾ ಒಂದಲ್ಲ ಒಂದು ವಿಷಯವಾಗಿ ಸುದ್ದಿಯಲ್ಲಿರುವ ಚಂದನದ ಗೊಂಬೆ ನಿವೇದಿತಾ ಗೌಡ, ಇದೀಗ ತಮ್ಮ ಲೇಟೆಸ್ಟ್ ಫೋಟೋಶೂಟ್ ಮೂಲಕ ಇಂಟರ್ನೆಟ್&zwnj;ನಲ್ಲಿ ಬೆಂಕಿ ಹಚ್ಚಿದ್ದಾರೆ. ಹಸಿರು ಬಣ್ಣದ ರೇಷ್ಮೆ ಸೀರೆಯಲ್ಲಿ ದೇವತೆಯಂತೆ ಕಂಗೊಳಿಸುತ್ತಿರುವ ನಿವೇದಿತಾ ಫೋಟೋಗಳು ಕಂಡ ನೆಟ್ಟಿಗರು, ಅವರ ಸೌಂದರ್ಯಕ್ಕೆ ಮನಸೋತಿದ್ದಾರೆ.&lt;/p&gt;&lt;img&gt;&lt;p&gt;ಹಸಿರು ಸೀರೆಯುಟ್ಟು ಮುಗುಳ್ನಗುತ್ತಿರುವ ನಿವೇದಿತಾ ಅವರ ಕ್ಲೋಸಪ್ ಫೋಟೋ. ಅವರ ಕಣ್ಣಿನ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. &amp;nbsp;ನಟಿ ನಿವೇದಿತಾ ಗೌಡ ಇದೀಗ ಹಸಿರು ಸೀರೆ ಹಾಗೂ ಮ್ಯಾಚಿಂಗ್ ಆಭರಣಗಳನ್ನು ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮನೆಯಲ್ಲೇ ನಿಂತು ಅವರು ನೀಡಿರುವ ಭಂಗಿಗಳು &lsquo;ಪ್ರಕೃತಿಯ ಸೌಂದರ್ಯ&rsquo;ವನ್ನೇ ನೆನಪಿಸುವಂತಿದೆ.&lt;/p&gt;&lt;img&gt;&lt;p&gt;ಇನ್ನು ನಿವೇದಿತಾ ಗೌಡ ಅವರ ಈ ಹೊಸ ಲುಕ್ ಅಭಿಮಾನಿಗಳ ಕಣ್ಣು ಕುಕ್ಕುತ್ತಿದ್ದು, ಸಾವಿರಾರು ಲೈಕ್ಸ್ ಹಾಗೂ ಕಮೆಂಟ್&zwnj;ಗಳ ಸುರಿಮಳೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.&lt;/p&gt;&lt;img&gt;&lt;p&gt;ಚಂದನ್ ಶೆಟ್ಟಿ ಅವರೊಂದಿಗೆ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ಅವರು ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಖುಷಿಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ, ಪ್ರತಿ ಬಾರಿ ಅವರು ಸುಂದರವಾಗಿ ಸಜ್ಜಾಗಿ ಫೋಟೋ ಹಾಕಿದಾಗಲೂ ನೆಟ್ಟಿಗರು ಮದುವೆಯ ಬಗ್ಗೆ ಚರ್ಚೆ ಮಾಡುವುದು ಮಾಮೂಲಿಯಾಗಿದೆ.&lt;/p&gt;&lt;img&gt;&lt;p&gt;ಈ ಹಸಿರು ಸೀರೆಯ ಫೋಟೋಗಳ ಕೆಳಗೆ ಅನೇಕರು 'ಎರಡನೇ ಮದುವೆಗೆ ರೆಡಿಯಾಗುತ್ತಿದ್ದೀರಾ?', 'ಯಾರಿದು ಅದೃಷ್ಟವಂತ?' ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು 'ನಿಮ್ಮ ಗ್ಲೋ ಸೀಕ್ರೆಟ್ ಏನು?' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಕೆಲವು ತಿಂಗಳುಗಳ ಹಿಂದೆ ನಿವೇದಿತಾ ಮತ್ತು ಚಂದನ್ ಶೆಟ್ಟಿ ಪರಸ್ಪರ ಒಪ್ಪಿಗೆಯೊಂದಿಗೆ ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದರು. ವಿಚ್ಛೇದನದ ನಂತರವೂ ನಿವೇದಿತಾ ಅವರು ಧೈರ್ಯವಾಗಿ ತಮ್ಮ ಲೈಫ್ ಎಂಜಾಯ್ ಮಾಡುತ್ತಿದ್ದು, ಪ್ರವಾಸ ಹಾಗೂ ಫ್ಯಾಷನ್ ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಸಾಮಾಜಿಕ ಜಾಲತಾಣದಲ್ಲಿ ಬರುವ ಟ್ರೋಲ್&zwnj;ಗಳ ಬಗ್ಗೆ ತಲೆಕೆಡಿಸಿಕೊಳ್ಳದ ಅವರು, ತಮ್ಮದೇ ಆದ ದಾರಿಯಲ್ಲಿ ಸಾಗುತ್ತಿದ್ದಾರೆ. ಸದ್ಯ ಈ 'ಗ್ರೀನ್ ಸ್ಯಾರಿ' ಲುಕ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/niveditha-gowda-green-saree-photoshoot-viral-fans-reaction-second-marriage-rumors-sat-0clfetu"/>
        </item>
        <item>
            <title><![CDATA[ಅಂಡಾಶಯದಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆ: ತಾಯಿಯಾಗುವ ಕನಸಿಗೆ ಅಡ್ಡಿಯಾಗಲಿದೆಯೇ ಈ ಮಾಲಿನ್ಯ?]]></title>
            <link>https://kannada.asianetnews.com/travel/microplastics-found-in-ovaries-a-growing-threat-to-reproductive-health/articleshow-newx7di</link>
            <guid isPermaLink="true">https://kannada.asianetnews.com/travel/microplastics-found-in-ovaries-a-growing-threat-to-reproductive-health/articleshow-newx7di</guid>
            <pubDate>Fri, 10 Apr 2026 17:10:32 +0530</pubDate>
            <description><![CDATA[&lt;p&gt;&lt;strong&gt;Microplastic pollution Kannada: &lt;/strong&gt;ನಾವು ಬಳಸುವ ಪ್ಲಾಸ್ಟಿಕ್ ಕೇವಲ ಪರಿಸರವನ್ನು ಮಾತ್ರವಲ್ಲ, ಈಗ ನೇರವಾಗಿ ಮನುಷ್ಯನ ದೇಹದ ಅತಿ ಸೂಕ್ಷ್ಮ ಭಾಗಗಳನ್ನೂ ತಲುಪುತ್ತಿದೆ! ಇತ್ತೀಚಿನ ಆತಂಕಕಾರಿ ಸಂಶೋಧನೆಯ ಪ್ರಕಾರ, ಮಹಿಳೆಯರ ಅಂಡಾಶಯದಲ್ಲಿಯೂ ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khk1n1fg3278nbxy2rbttrb4,imgname-pregnant-women-eclipse-rules-05-1771239540208.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ಲಾಸ್ಟಿಕ್ ಬಳಕೆ ನಮ್ಮ ಪರಿಸರಕ್ಕೆ ಎಷ್ಟು ಹಾನಿಕಾರಕ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಈ ಕುರಿತು ಪದೇ ಪದೇ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ ಈ ಪ್ಲಾಸ್ಟಿಕ್ ಅನ್ನುವ ವಿಷ ನಮ್ಮ ದೇಹದೊಳಗೂ ಪ್ರವೇಶಿಸುತ್ತದೆ ಎಂಬ ಕಹಿ ಸತ್ಯ ನಿಮಗೆ ತಿಳಿದಿದೆಯೇ?.&lt;/p&gt;&lt;p&gt;&lt;strong&gt;ಬೆಂಗಳೂರಿನ ಸೀನಿಯರ್ ಕನ್ಸಲ್ಟೆಂಟ್, ಕ್ಲಿನಿಕಲ್ ಲೀಡ್ - ಗೈನಾಕಾಲಜಿಕ್ ಆಂಕಾಲಜಿ ಡಾ. ರೋಹಿತ್ ರಘುನಾಥ್ ರಾನಡೆ ಈ ಕುರಿತು ಮಾಹಿತಿ ನೀಡಿದ್ದು, ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..&lt;/strong&gt;&lt;/p&gt;&lt;p&gt;ಸಾಮಾನ್ಯವಾಗಿ ಗೈನಾಕಾಲಜಿಕಲ್ ರಿಪ್ರೊಡಕ್ಟಿವ್ ಹೆಲ್ತ್ (ಸಂತಾನೋತ್ಪತ್ತಿ ಆರೋಗ್ಯ) ವಿಚಾರಕ್ಕೆ ಬಂದಾಗ, ವಂಶವಾಹಿ ಅಂಶಗಳು, ಹಾರ್ಮೋನುಗಳ ಅಸಮತೋಲನ, ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮದ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತದೆ. ಪಿಸಿಓಎಸ್ ಮತ್ತು ಎಂಡೊಮೆಟ್ರಿಯೊಸಿಸ್ ಎರಡೂ ಮುಟ್ಟಿನ ಸಮಯದಲ್ಲಿ ಹಾಗೂ ಲೈಂಗಿಕ ಕ್ರಿಯೆಯ ಸಮಯದಲ್ಲಿ ಅಥವಾ ನಂತರ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂಬುದು ತಿಳಿದಿರುವ ವಿಷಯ. ಆದರೆ, ಈಗ ಮಹಿಳೆಯರ ಸಂತಾನೋತ್ಪತ್ತಿ ಅಂಗಗಳ ಆರೋಗ್ಯಕ್ಕೆ ಮೈಕ್ರೋಪ್ಲಾಸ್ಟಿಕ್ಸ್ ಮತ್ತು ನ್ಯಾನೋಪ್ಲಾಸ್ಟಿಕ್ಸ್ ರೂಪದಲ್ಲಿ ಮತ್ತೊಂದು ದೊಡ್ಡ ಭೀತಿ ಎದುರಾಗಿದೆ.&lt;/p&gt;&lt;p&gt;ಇಷ್ಟು ಹೇಳಿದಾಗ, ನಿಜವಾಗಲೂ ಮೈಕ್ರೋಪ್ಲಾಸ್ಟಿಕ್ಸ್ ಮತ್ತು ನ್ಯಾನೋಪ್ಲಾಸ್ಟಿಕ್ಸ್ ಅಂಡಾಶಯವನ್ನು ಪ್ರವೇಶಿಸಿ ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟುಮಾಡಬಲ್ಲವೇ ಎಂಬ ಪ್ರಶ್ನೆ ನಿಮ್ಮ ಕಾಡಬಹುದು. ಇದರ ಉತ್ತರ 'ಹೌದು' ಎಂದೇ ಆಗಿದೆ. ಮೈಕ್ರೋಪ್ಲಾಸ್ಟಿಕ್ಸ್ ಮತ್ತು ನ್ಯಾನೋಪ್ಲಾಸ್ಟಿಕ್ಸ್ ನಿಜಕ್ಕೂ ಅಂಡಾಶಯದ ಅಂಗಾಂಶಗಳಲ್ಲಿ ಮತ್ತು ಫೋಲಿಕ್ಯುಲರ್ ದ್ರವದಲ್ಲಿ ಇರುವುದು ಈಗಾಗಲೇ ಪತ್ತೆಯಾಗಿವೆ.&lt;/p&gt;&lt;h2&gt;&lt;strong&gt;ಈ ಅಗೋಚರ ನುಸುಳುಕೋರರ ಕುರಿತು ತಿಳಿಯೋಣ&lt;/strong&gt;&lt;/h2&gt;&lt;p&gt;ಈ ಸಮಸ್ಯೆಯ ಅಗಾಧತೆಯನ್ನು ಅರ್ಥಮಾಡಿಕೊಳ್ಳಲು, ಮೊದಲು ಈ ಕಣಗಳ ಬಗ್ಗೆ ತಿಳಿಯಬೇಕು. ಮೈಕ್ರೋಪ್ಲಾಸ್ಟಿಕ್ಸ್ ಎಂದರೆ ಐದು ಮಿಲಿಮೀಟರ್&zwnj; ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್&zwnj; ನ ಸಣ್ಣ ತುಣುಕುಗಳು, ಮತ್ತು ನ್ಯಾನೋಪ್ಲಾಸ್ಟಿಕ್ಸ್ ಒಂದು ಮೈಕ್ರೋಮೀಟರ್&zwnj; ಗಿಂತಲೂ ಕಡಿಮೆ ಗಾತ್ರದವು. ಇವು ಎಷ್ಟು ಚಿಕ್ಕವೆಂದರೆ ಬರಿಗಣ್ಣಿಗೆ ಕಾಣಿಸುವುದಿಲ್ಲ ಮತ್ತು ದೇಹದ ನೈಸರ್ಗಿಕ ಜೈವಿಕ ಅಡೆತಡೆಗಳನ್ನು ಸುಲಭವಾಗಿ ದಾಟಬಲ್ಲವು. ಇವುಗಳನ್ನು ಪಾಲಿಥಿಲೀನ್ (ಪಿಇ), ಪಾಲಿಪ್ರೊಪಿಲೀನ್ (ಪಿಪಿ), ಪಾಲಿಸ್ಟೈರೀನ್ (ಪಿಎಸ್) ಮತ್ತು ಪಾಲಿಥಿಲೀನ್ ಟೆರೆಫ್ತಲೇಟ್ (ಪಿಇಟಿ) ನಂತಹ ವಿವಿಧ ಪಾಲಿಮರ್&zwnj; ಗಳೆಂದು ಗುರುತಿಸಬಹುದು, ಸಾಮಾನ್ಯವಾಗಿ ಇವುಗಳನ್ನು ಪ್ಯಾಕೇಜಿಂಗ್ ಮತ್ತು ಕೃಷಿ ಸಾಮಗ್ರಿಗಳಲ್ಲಿ ಬಳಸಲಾಗುತ್ತದೆ.&lt;/p&gt;&lt;p&gt;2024ರ 'ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್&zwnj; ಮೆಂಟ್' ಅಧ್ಯಯನವು, Py-GC/MS ತಂತ್ರಜ್ಞಾನವನ್ನು ಬಳಸಿ ಮಾನವನ ಫೋಲಿಕ್ಯುಲರ್ ದ್ರವದಲ್ಲಿ ಪಾಲಿಥಿಲೀನ್ ಮತ್ತು ಪಿವಿಸಿಯಂತಹ ಪಾಲಿಮರ್&zwnj; ಗಳು ಇರುವುದನ್ನು ಮೊದಲ ಬಾರಿಗೆ ದೃಢಪಡಿಸಿದೆ. ಈ ಸಂಶೋಧನೆಗೆ ಒಳಪಟ್ಟ 18 ಮಹಿಳೆಯರಲ್ಲಿ ಶೇ. 80 ಕ್ಕಿಂತ ಹೆಚ್ಚು ಮಹಿಳೆಯರ ಫೋಲಿಕ್ಯುಲರ್ ದ್ರವದಲ್ಲಿ ಮೈಕ್ರೋಪ್ಲಾಸ್ಟಿಕ್&zwnj; ಗಳು ಕಂಡುಬಂದಿವೆ.&lt;/p&gt;&lt;p&gt;ಅಂಡಾಶಯಗಳನ್ನು ಈ ಹಿಂದೆ ಅತ್ಯಂತ ಸುರಕ್ಷಿತ ವಲಯವೆಂದು ಭಾವಿಸಲಾಗಿತ್ತು ಮತ್ತು ಸಂಕೀರ್ಣವಾದ ಫಿಲ್ಟರೇಷನ್ ವ್ಯವಸ್ಥೆಗಳು ಇವುಗಳನ್ನು ರಕ್ಷಿಸುತ್ತವೆ ಎಂದು ನಂಬಲಾಗಿತ್ತು. ಆದರೆ ಈಗ, ಈ ಕಣಗಳು ನಾವು ಸೇವಿಸುವ ಆಹಾರ, ನೀರು ಮತ್ತು ನಾವು ಉಸಿರಾಡುವ ಗಾಳಿಯ ಮೂಲಕವೂ ರಕ್ತಪ್ರವಾಹಕ್ಕೆ ಸೇರುತ್ತವೆ ಎಂಬುದು ಸಾಬೀತಾಗಿದೆ. ರಕ್ತಪ್ರವಾಹದ ಮೂಲಕ ಇವು ನೇರವಾಗಿ ಸಂತಾನೋತ್ಪತ್ತಿ ಅಂಗಗಳಿಗೂ ಸೋರಬಹುದು. ಪ್ಲಾಸ್ಟಿಕ್ ಬ್ಯಾಗ್&zwnj; ಗಳಲ್ಲಿ ಕಂಡುಬರುವ ಪಾಲಿಥಿಲೀನ್ ಮತ್ತು ಪ್ಯಾಕೇಜಿಂಗ್&zwnj; ನಲ್ಲಿ ಬಳಸುವ ಪಾಲಿಸ್ಟೈರೀನ್&zwnj; ನಂತಹ ಸಾಮಾನ್ಯ ಪಾಲಿಮರ್&zwnj; ಗಳು, ಇದೀಗ ಮಹಿಳೆಯರ ಅಂಡಾಣುಗಳ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ನಿರ್ಧರಿಸುವ ದ್ರವದಲ್ಲಿಯೇ ಪತ್ತೆಯಾಗುತ್ತಿವೆ.&lt;/p&gt;&lt;h3&gt;&lt;strong&gt;ಟ್ರೋಜನ್ ಹಾರ್ಸ್ ಎಫೆಕ್ಟ್: ಹಾನಿ ಹೇಗೆ ಸಂಭವಿಸುತ್ತದೆ?&lt;/strong&gt;&lt;/h3&gt;&lt;p&gt;ವೈದ್ಯಕೀಯ ದೃಷ್ಟಿಕೋನದಿಂದ ನೋಡುವುದಾದರೆ, ಕೇವಲ ಪ್ಲಾಸ್ಟಿಕ್ ಕಂಡುಬಂದಿರುವುದು ಮಾತ್ರ ಇಲ್ಲಿ ಆತಂಕಕಾರಿ ವಿಷಯವಲ್ಲ; ಬದಲಾಗಿ ಅದು ಉಂಟುಮಾಡುವ &lsquo;ಟ್ರೋಜನ್ ಹಾರ್ಸ್ ಎಫೆಕ್ಟ್&rsquo; ಅತಿ ದೊಡ್ಡ ಸಮಸ್ಯೆಯಾಗಿದೆ. ಈ ಕಣಗಳು ಹೆಚ್ಚಾಗಿ ಎಂಡೋಕ್ರೈನ್ ಡಿಸ್ರಪ್ಟಿಂಗ್ ಕೆಮಿಕಲ್ಸ್ (ಇಡಿಸಿಗಳು) ಅಥವಾ ಹಾರ್ಮೋನ್ ವ್ಯತ್ಯಯ ಮಾಡುವ ರಾಸಾಯನಿಕಗಳನ್ನು ಹೊತ್ತು ತರುತ್ತವೆ. ಈ ಕಣಗಳು ಅಂಡಾಶಯದ ಅಂಗಾಂಶಗಳಲ್ಲಿ ನೆಲೆಸಿದಾಗ, ಅವು ಈ ಕೆಳಗಿನ ಹಲವಾರು ಹಾನಿಕಾರಕ ಪ್ರಕ್ರಿಯೆಗಳನ್ನು ಪ್ರಚೋದಿಸುತ್ತವೆ:&lt;/p&gt;&lt;p&gt;&lt;strong&gt;ಆಕ್ಸಿಡೇಟಿವ್ ಸ್ಟ್ರೆಸ್ ಮತ್ತು ಜೀವಕೋಶಗಳ ವಯಸ್ಸಾಗುವಿಕೆ&lt;/strong&gt;ಅಂಡಾಶಯದಲ್ಲಿ ಯಾವುದೇ ಹೊರಗಿನ ವಸ್ತು ಪತ್ತೆಯಾದಾಗ ಅದು ರಿಯಾಕ್ಟಿವ್ ಆಕ್ಸಿಜನ್ ಸ್ಪೀಷೀಸ್ (ಆಮ್ಲಜನಕದಿಂದ ಪಡೆದ ಅತಿ ಹೆಚ್ಚು ಪ್ರತಿಕ್ರಿಯಿಸುವ ಅಣುಗಳು) ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಇದು ಒಂದು ರೀತಿಯ ಜೀವಕೋಶದ ತುಕ್ಕು ಹಿಡಿಯುವಿಕೆಯಂತೆ. ಏಕೆಂದರೆ ಆಕ್ಸಿಡೇಟಿವ್ ಸ್ಟ್ರೆಸ್ ಅಂಡಾಣುಗಳ ಡಿಎನ್ಎ ಅನ್ನು ಹಾನಿಗೊಳಿಸುತ್ತದೆ. ಇದರಿಂದ ಅಂಡಾಣುಗಳು ಸರಿಯಾಗಿ ಪಕ್ವವಾಗುವುದಿಲ್ಲ ಮತ್ತು ಚಿಕ್ಕ ವಯಸ್ಸಿನಲ್ಲೇ ಅಂಡಾಣುವಿನ ಗುಣಮಟ್ಟ ಕ್ಷೀಣಿಸಲು ಕಾರಣವಾಗಬಹುದು.&lt;/p&gt;&lt;p&gt;&lt;strong&gt;ಹಾರ್ಮೋನುಗಳ ಅನುಕರಣೆ&lt;/strong&gt;ಹೆಚ್ಚಿನ ಪ್ಲಾಸ್ಟಿಕ್&zwnj; ಗಳು ಈಸ್ಟ್ರೊಜೆನ್ ಹಾರ್ಮೋನ್ ಅನ್ನು ಹೋಲುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಇವು ಫೋಲಿಕ್ಯುಲರ್ ಪರಿಸರವನ್ನು ಪ್ರವೇಶಿಸಿದಾಗ, ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್&zwnj; ನ ನೈಸರ್ಗಿಕ ಸಂಕೇತಗಳನ್ನು ಅಡ್ಡಿಪಡಿಸುತ್ತವೆ. ಇದು ಅನಿಯಮಿತ ಮುಟ್ಟಿನ ಚಕ್ರಕ್ಕೆ ಕಾರಣವಾಗಬಹುದು ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ನಂತಹ ಸಮಸ್ಯೆಗಳಿಗೆ ಸಂಬಂಧಿಸಿರಬಹುದು.&lt;/p&gt;&lt;p&gt;&lt;strong&gt;ಮೈಟೊಕಾಂಡ್ರಿಯಲ್ ಡಿಸ್ ಫಂಕ್ಷನ್&lt;/strong&gt;ನ್ಯಾನೋಪ್ಲಾಸ್ಟಿಕ್&zwnj; ಗಳು ಜೀವಕೋಶದ ಪೊರೆಗಳನ್ನು ಭೇದಿಸಬಲ್ಲ ಶಕ್ತಿ ಹೊಂದಿರುವುದರಿಂದ ಹೆಚ್ಚು ಅಪಾಯಕಾರಿ. ಒಮ್ಮೆ ಇವು ಜೀವಕೋಶದ ಒಳಗೆ ಪ್ರವೇಶಿಸಿದರೆ, ಜೀವಕೋಶದ ಶಕ್ತಿ ಕೇಂದ್ರಗಳೆಂದು ಕರೆಯಲ್ಪಡುವ ಮೈಟೊಕಾಂಡ್ರಿಯಕ್ಕೆ ಅಡ್ಡಿಪಡಿಸುತ್ತವೆ. ಅಂಡಾಣು ಅಭಿವೃದ್ಧಿ ಹೊಂದಲು ಮತ್ತು ಫಲೀಕರಣಗೊಳ್ಳಲು ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುತ್ತದೆ; ಹೀಗಾಗಿ ಶಕ್ತಿ ಉತ್ಪಾದನೆಯಲ್ಲಿ ಯಾವುದೇ ಅಡಚಣೆಯು ಫಲವತ್ತತೆಯನ್ನು ಅಥವಾ ಫರ್ಟಿಲಿಟಿ ಶಕ್ತಿಯನ್ನು ಕುಗ್ಗಿಸಬಹುದು. ಅಲ್ಲದೆ, ಪ್ಲಾಸ್ಟಿಕ್ ಶಾಶ್ವತವಾದುದು; ಮಾನವ ದೇಹಕ್ಕೆ ಅದನ್ನು ಕರಗಿಸಿ ದೇಹದಿಂದ ಹೊರಹಾಕುವುದು ತುಂಬಾ ಕಷ್ಟಕರವಾದ ಕೆಲಸ.&lt;/p&gt;&lt;p&gt;&lt;strong&gt;ಪರಿಸರದಿಂದ ಅಂಡಾಣುವಿನವರೆಗೆ&lt;/strong&gt;ಮೈಕ್ರೋಪ್ಲಾಸ್ಟಿಕ್ ಹಾವಳಿಯು ಕಾಲಕ್ರಮೇಣ ಹೆಚ್ಚಾಗುವ ಸಮಸ್ಯೆ ಎಂಬುದನ್ನು ನಾವು ಗುರುತಿಸುವುದು ಮುಖ್ಯ. ಮನುಷ್ಯರು ಪ್ರತಿನಿತ್ಯ ಈ ಕೆಳಗಿನ ವಿವಿಧ ಹಾದಿಗಳ ಮೂಲಕ ಈ ಪ್ಲಾಸ್ಟಿಕ್ ಕಣಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ:&lt;/p&gt;&lt;p&gt;&lt;strong&gt;ಆಹಾರ ಮತ್ತು ಪಾನೀಯಗಳ ಸೇವನೆ&lt;/strong&gt;ಪ್ಲಾಸ್ಟಿಕ್ ವಾಟರ್ ಬಾಟಲಿಗಳು, ವಿಶೇಷವಾಗಿ ಬಿಸಿಯಾದಾಗ ಅವುಗಳಿಂದ ಮೈಕ್ರೋಪ್ಲಾಸ್ಟಿಕ್&zwnj; ಗಳು ಬಿಡುಗಡೆಯಾಗುತ್ತವೆ. ಇವು ಅಲ್ಟ್ರಾ-ಪ್ರೊಸೆಸ್ಡ್ ಫುಡ್&zwnj; ಗಳಲ್ಲಿ ಮತ್ತು ಕೆಲವು ಸಮುದ್ರಾಹಾರಗಳಲ್ಲಿಯೂ ಕಂಡುಬರುತ್ತವೆ. ನಾವು ಆಹಾರ ಮತ್ತು ನೀರನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಕಂಟೈನರ್&zwnj; ಗಳನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಗಾಜಿನ ಪಾತ್ರೆಗಳು ಮತ್ತು ತಾಮ್ರದ ಬಾಟಲಿಗಳ ಬಳಕೆಗೆ ಬದಲಾಗುವುದು ಪರಿಸರ ಮತ್ತು ದೇಹ ಎರಡಕ್ಕೂ ಪ್ರಯೋಜನಕಾರಿ. ಶಾಖವು ಪ್ಲಾಸ್ಟಿಕ್ ಕಣಗಳು ಆಹಾರ ಮತ್ತು ನೀರನ್ನು ಸೇರಲು ಮುಖ್ಯ ಪ್ರೇರಕವಾಗಿದೆ. ಗಾಜು, ಸೆರಾಮಿಕ್ ಅಥವಾ ಸ್ಟೇನ್&zwnj; ಲೆಸ್ ಸ್ಟೀಲ್&zwnj; ಗೆ ಬದಲಾಗುವುದು ಒಂದು ಪ್ರಮುಖ ಹೆಜ್ಜೆ; ಅಲ್ಲದೆ, ಉತ್ತಮ ಗುಣಮಟ್ಟದ ಕಾರ್ಬನ್ ಅಥವಾ ಆರ್&zwnj;ಒ ಫಿಲ್ಟರ್&zwnj; ಗಳನ್ನು ಬಳಸುವುದರಿಂದ ಹೆಚ್ಚಿನ ಪ್ರಮಾಣದ ಮೈಕ್ರೋ-ಕಣಗಳನ್ನು ತಡೆಹಿಡಿಯಬಹುದು.&lt;/p&gt;&lt;p&gt;&lt;strong&gt;ಉಸಿರಾಟ: &lt;/strong&gt;ನಗರ ಪ್ರದೇಶದ ವಾತಾವರಣದಲ್ಲಿ ಜನರು ಬಟ್ಟೆಗಳು ಮತ್ತು ಕಾರ್ಪೆಟ್&zwnj; ಗಳಿಂದ ಹೊರಬರುವ ಸಿಂಥೆಟಿಕ್ ಫೈಬರ್&zwnj; ಗಳನ್ನು (ಸಂಶ್ಲೇಷಿತ ಎಳೆಗಳು) ಉಸಿರಾಡುತ್ತಾರೆ. ಇಂದಿನ ಹೆಚ್ಚಿನ ಬಟ್ಟೆಗಳ ಪ್ರಮುಖ ಅಂಶವೆಂದರೆ ಪಾಲಿಯೆಸ್ಟರ್, ಅದರಲ್ಲೂ ವಿಶೇಷವಾಗಿ ಚರ್ಮದೊಂದಿಗೆ ನೇರ ಸಂಪರ್ಕಕ್ಕೆ ಬರುವ ಬ್ಲಾಂಕೆಟ್&zwnj; ಗಳು ಮತ್ತು ಬೆಡ್ ಶೀಟ್&zwnj; ಗಳಲ್ಲಿ ಇದು ಹೆಚ್ಚಾಗಿರುತ್ತದೆ. ಪಾಲಿಯೆಸ್ಟರ್ ನೇರವಾಗಿ ನಮ್ಮ ದೇಹವನ್ನು ಪ್ರವೇಶಿಸಿ ಅಪಾರ ಹಾನಿ ಉಂಟುಮಾಡಬಲ್ಲದು.&lt;/p&gt;&lt;p&gt;&lt;strong&gt;ಚರ್ಮದ ಸಂಪರ್ಕ: &lt;/strong&gt;ಕೆಲವು ಪರ್ಸನಲ್ ಕೇರ್ ಪ್ರಾಡಕ್ಟ್&zwnj; ಗಳು ಮೈಕ್ರೋಬೀಡ್&zwnj; ಗಳು ಅಥವಾ ಪ್ಲಾಸ್ಟಿಕ್ ಆಧಾರಿತ ಥಿಕನರ್ ಗಳನ್ನು ಹೊಂದಿರುತ್ತವೆ, ಇವು ಚರ್ಮದ ಮೂಲಕ ದೇಹಕ್ಕೆ ಹೀರಲ್ಪಡುತ್ತವೆ. ಇದಕ್ಕಾಗಿ, ಉತ್ಪನ್ನಗಳನ್ನು ಖರೀದಿಸುವ ಮೊದಲು ನಾವು ಬಹಳ ಜಾಗರೂಕರಾಗಿರಬೇಕು; ಈಗ ನಾವು ಪ್ರಾಡಕ್ಟ್ ಲೇಬಲ್&zwnj; ಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು - ಉತ್ಪನ್ನವನ್ನು ಹಿಂದಕ್ಕೆ ತಿರುಗಿಸಿ ಅದರಲ್ಲಿರುವ ಪದಾರ್ಥಗಳ ಪಟ್ಟಿಯನ್ನು ಗಮನಿಸುವುದು ಇಂದಿನ ಅಗತ್ಯವಾಗಿದೆ.&lt;/p&gt;&lt;p&gt;&lt;strong&gt;ಇದು ಎಷ್ಟರ ಮಟ್ಟಿಗೆ ಹಾನಿಕಾರಕ?&lt;/strong&gt;ಅಂಡಾಶಯಗಳಲ್ಲಿ ಈ ಪ್ಲಾಸ್ಟಿಕ್&zwnj; ಗಳು ಇವೆ ಎಂಬುದಕ್ಕೆ ಬಲವಾದ ಪುರಾವೆಗಳಿದ್ದರೂ, ಫಲವತ್ತತೆಯ ಮೇಲೆ ಇವು ದೀರ್ಘಕಾಲದವರೆಗೆ ಮತ್ತು ಒಟ್ಟಾರೆ ಜನಸಂಖ್ಯೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಸಂಶೋಧಕರು ಇನ್ನೂ ಅಧ್ಯಯನ ಮಾಡುತ್ತಿದ್ದಾರೆ. ಇದು ಗಾಬರಿಪಡಬೇಕಾದ ವಿಷಯವಲ್ಲ, ಬದಲಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇರುವ ಎಚ್ಚರಿಕೆಯ ಕರೆ ಎಂದು ಭಾವಿಸಬೇಕು.&lt;/p&gt;&lt;p&gt;ಪ್ರೀ-ಕ್ಲಿನಿಕಲ್ ಮಾದರಿಗಳು ಹೆಚ್ಚಿನ ಮಟ್ಟದ ಮೈಕ್ರೋಪ್ಲಾಸ್ಟಿಕ್&zwnj; ಗಳು &lsquo;ಒವೇರಿಯನ್ ರಿಸರ್ವ್&rsquo; ಅನ್ನು ಕಡಿಮೆ ಮಾಡಬಲ್ಲವು ಎಂದು ಸೂಚಿಸುತ್ತಿವೆ. &lsquo;ಒವೇರಿಯನ್ ರಿಸರ್ವ್&rsquo; ಎಂದರೆ ಪ್ರತಿ ವರ್ಷ ಕಳೆಯುತ್ತಿದ್ದಂತೆ ಉಳಿಯುವ ಆರೋಗ್ಯಕರ ಅಂಡಾಣುಗಳ ಸಂಖ್ಯೆ. ಕ್ಲಿನಿಕಲ್ ವ್ಯವಸ್ಥೆಗಳಲ್ಲಿ, ಉಳಿದೆಲ್ಲಾ ಆರೋಗ್ಯ ವರದಿಗಳು ಉತ್ತಮವಾಗಿದ್ದರೂ ಸಹ ಐವಿಎಫ್ ಚಿಕಿತ್ಸೆಗಳು ಕೆಲವು ಬಾರಿ ಏಕೆ ವಿಫಲವಾಗುತ್ತವೆ ಎಂಬುದಕ್ಕೂ ಈ ಕಣಗಳ ಉಪಸ್ಥಿತಿಯೇ ಕಾರಣವಾಗಿರಬಹುದೇ ಎಂದು ಸಂಶೋಧಕರು ಈಗ ಸಂಶೋಧಿಸಲು ಪ್ರಾರಂಭಿಸಿದ್ದಾರೆ. ಈ ಅಪಾಯವು 'ಡೋಸ್-ಡಿಪೆಂಡೆಂಟ್' ಆಗಿದೆ ಎಂದು ಪುರಾವೆಗಳು ಬೆಟ್ಟು ಮಾಡುತ್ತಿವೆ - ಅಂದರೆ, ಈಗಿನಿಂದಲೇ ನಾವು ಪ್ಲಾಸ್ಟಿಕ್&zwnj; ಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿದರೆ, ಅದು ಮುಂದಿನ ದಿನಗಳಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ರಕ್ಷಿಸಬಹುದು.&lt;/p&gt;&lt;p&gt;&lt;strong&gt;ಮುಂದಿನ ಹಾದಿ&lt;/strong&gt;ಈ ವಿಷಯವು ಈಗ ಪರಿಸರ ವಿಜ್ಞಾನ ಮತ್ತು ಸ್ತ್ರೀರೋಗ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಬಹಳ ನಿರ್ಣಾಯಕವಾಗಿದೆ. ಬಂಜೆತನವನ್ನು ಕೇವಲ ವೈದ್ಯಕೀಯ ಸಮಸ್ಯೆಯಾಗಿ ನೋಡುವ ಬದಲು, ಅದನ್ನು ಒಂದು ಪರಿಸರ ಸಂಬಂಧಿತ ಸಮಸ್ಯೆಯಾಗಿ ನೋಡಬೇಕಾಗಿದೆ. ಅಷ್ಟೇ ಅಲ್ಲದೆ, ಆಹಾರ ಮತ್ತು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ನೀತಿ-ಮಟ್ಟದ ಬದಲಾವಣೆಗಳ ಅಗತ್ಯವಿದೆ.&lt;/p&gt;&lt;p&gt;ಅಂಡಾಶಯದಲ್ಲಿ ಮೈಕ್ರೋಪ್ಲಾಸ್ಟಿಕ್&zwnj; ಗಳು ಕಂಡು ಬಂದಿರುವುದು ಹೆಚ್ಚು ಆತಂಕಕಾರಿ ವಿಚಾರವಾಗಿದೆ. ಆದರೆ ಜಾಗೃತಿ ಮತ್ತು ಪ್ರಜ್ಞಾಪೂರ್ವಕ ಜೀವನಶೈಲಿಯ ಮೂಲಕ ಇದನ್ನು ಎದುರಿಸಬಹುದು. ಇಂದು ನಾವು ಮಾಡಿಕೊಳ್ಳುವ ಸಣ್ಣ ಬದಲಾವಣೆಗಳು ಕೇವಲ ನಮ್ಮ ಸ್ವಂತ ಆರೋಗ್ಯವನ್ನು ರಕ್ಷಿಸುವುದು ಮಾತ್ರವಲ್ಲದೆ, ಬರಲಿರುವ ಮುಂದಿನ ಪೀಳಿಗೆಯ ಬದುಕು ಮತ್ತು ಘನತೆಯನ್ನು ಕಾಪಾಡಲಿವೆ.&amp;nbsp;&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/travel/microplastics-found-in-ovaries-a-growing-threat-to-reproductive-health/articleshow-newx7di"/>
        </item>
        <item>
            <title><![CDATA['ತಮ್ಮದು ರಾಧಾಕೃಷ್ಣ ಲವ್‌ ಸ್ಟೋರಿ..' ಎಂದಿದ್ದ ಕುಂಭಮೇಳ ಗರ್ಲ್‌ ಮೋನಾಲಿಸಾ ಅಪ್ರಾಪ್ತೆ; ಮುಸ್ಲಿಂ ಪತಿಯ ವಿರುದ್ಧ ಪೋಕ್ಸೋ ಕೇಸ್]]></title>
            <link>https://kannada.asianetnews.com/relationship/mahakumbh-viral-girl-monalisa-minor-husband-farman-pocso-case-filed-san/articleshow-fokgmlf</link>
            <guid isPermaLink="true">https://kannada.asianetnews.com/relationship/mahakumbh-viral-girl-monalisa-minor-husband-farman-pocso-case-filed-san/articleshow-fokgmlf</guid>
            <pubDate>Fri, 10 Apr 2026 17:02:58 +0530</pubDate>
            <description><![CDATA[&lt;p&gt;ಕುಂಭಮೇಳದಲ್ಲಿ ಖ್ಯಾತಿ ಪಡೆದಿದ್ದ ಮೋನಾಲಿಸಾಳ ವಿವಾಹವು ಇದೀಗ ವಿವಾದಕ್ಕೆ ಕಾರಣವಾಗಿದೆ. ತನಿಖೆಯಲ್ಲಿ ಆಕೆ ಅಪ್ರಾಪ್ತೆ ಎಂದು ದೃಢಪಟ್ಟಿದ್ದು, ಆಕೆಯ ಪತಿ ಫರ್ಮಾನ್&zwnj; ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km7j42y5t8wz8mmp0yg56epc,imgname-monalisa-and-farman-khan-1774075382725.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಖಾರ್ಗೋನ್/ಮಧ್ಯಪ್ರದೇಶ (ಏ.10): &lt;/strong&gt;ಕುಂಭಮೇಳದಲ್ಲಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಮೋನಾಲಿಸಾ ಮತ್ತು ಫರ್ಮಾನ್&zwnj; ಎಂಬಾತನ ವಿವಾಹವು ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ, ಈಗ ಮೋನಾಲಿಸಾ ಅಪ್ರಾಪ್ತೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದ್ದು, ಆಕೆಯ ಪತಿ ಫರ್ಮಾನ್&zwnj; ವಿರುದ್ಧ ಮಧ್ಯಪ್ರದೇಶದ ಖಾರ್ಗೋನ್ ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.&lt;/p&gt;&lt;p&gt;ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು (NCST) ಅಧಿಕೃತ ಆಸ್ಪತ್ರೆ ದಾಖಲೆಗಳನ್ನು ಪರಿಶೀಲಿಸಿದಾಗ, ಮೋನಾಲಿಸಾ 2009 ಡಿಸೆಂಬರ್ 30 ರಂದು ಜನಿಸಿರುವುದು ಪತ್ತೆಯಾಗಿದೆ. ಇದರ ಪ್ರಕಾರ, ಈ ವರ್ಷ ಮಾರ್ಚ್ 11 ರಂದು ವಿವಾಹವಾದಾಗ ಆಕೆಗೆ ಕೇವಲ 16 ವರ್ಷ, 2 ತಿಂಗಳು, 12 ದಿನಗಳು. ಅಂದರೆ ಕಾನೂನುಬದ್ಧವಾಗಿ ಆಕೆ ಅಪ್ರಾಪ್ತೆ. ಪರ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮೋನಾಲಿಸಾಳ ಪತಿ ಫರ್ಮನ್ ವಿರುದ್ಧ ಈಗ ಪೋಕ್ಸೋ ಮಾತ್ರವಲ್ಲದೆ, ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ಅಕ್ರಮ ವಿವಾಹ ಮತ್ತು ಎಸ್&zwnj;ಸಿ/ಎಸ್&zwnj;ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ.&lt;/p&gt;&lt;h2&gt;&lt;strong&gt;ನಕಲಿ ದಾಖಲೆಗಳ ಜಾಲ: ತನಿಖೆ ನಡೆದಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಈ ವಿವಾಹವು ಕೇರಳದ ನೈನಾರ್ ದೇವ ದೇವಾಲಯದಲ್ಲಿ ನಡೆದಿತ್ತು. ದೇವಾಲಯದ ಆಡಳಿತ ಮಂಡಳಿಯು ದಂಪತಿಗಳು ನೀಡಿದ್ದ ಆಧಾರ್ ಕಾರ್ಡ್&zwnj;ಗಳಲ್ಲಿನ ವಯಸ್ಸನ್ನು ಆಧರಿಸಿ ಮದುವೆ ಮಾಡಿಸಿರುವುದಾಗಿ ತಿಳಿಸಿದೆ. ತದನಂತರ ಮಹೇಶ್ವರ ಪುರಸಭೆಯು ನೀಡಿದ ಜನನ ಪ್ರಮಾಣಪತ್ರವನ್ನು ಬಳಸಿ ಗ್ರಾಮ ಪಂಚಾಯತ್&zwnj;ನಲ್ಲಿ ವಿವಾಹವನ್ನು ನೋಂದಾಯಿಸಲಾಗಿತ್ತು.&lt;/p&gt;&lt;p&gt;ಆದರೆ, ಈ ಜನನ ಪ್ರಮಾಣಪತ್ರವು ನಕಲಿ ಎಂಬುದು ತನಿಖಾ ತಂಡಕ್ಕೆ ತಿಳಿದುಬಂದಿದೆ. ಆ ಪ್ರಮಾಣಪತ್ರದಲ್ಲಿ ಮೋನಾಲಿಸಾಳ ಜನ್ಮದಿನಾಂಕವನ್ನು ಜನವರಿ 1, 2008 ಎಂದು ನಮೂದಿಸಲಾಗಿತ್ತು. ಇದು ಆಸ್ಪತ್ರೆಯ ದಾಖಲೆಗಿಂತ ಎರಡು ವರ್ಷ ಮೊದಲಿನ ದಿನಾಂಕವಾಗಿದೆ. ಈ ನಕಲಿ ದಾಖಲೆಯನ್ನು ತಕ್ಷಣವೇ ರದ್ದುಗೊಳಿಸುವಂತೆ ಆಯೋಗವು ಸೂಚಿಸಿದೆ.&lt;/p&gt;&lt;p&gt;ಈ ಪ್ರಕರಣದಲ್ಲಿ ರಾಜಕೀಯ ಸಂಘಟನೆಗಳ ಕೈವಾಡ ಇರುವುದನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಮಾರ್ಚ್ 17 ರಂದು ಆಯೋಗದ ಮುಂದೆ ವಿಷಯ ಪ್ರಸ್ತಾಪಿಸಿದ ವಕೀಲ ಪ್ರಥಮ್ ದುಬೆ ಅವರು, ಈ ವಿವಾಹಕ್ಕೆ ಕೇರಳದ ಸಿಪಿಐ(ಎಂ) ನಾಯಕರು ಮತ್ತು ಪಿಎಫ್&zwnj;ಐ (PFI) ಸದಸ್ಯರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 'ಲವ್ ಜಿಹಾದ್' ಕಲ್ಪನೆಗೆ ವಿರುದ್ಧವಾದ ಕಥನವನ್ನು ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಈ ವಿವಾಹ ಮಾಡಿಸಲಾಗಿದೆ ಎಂದು ಅವರು ದೂರಿದ್ದಾರೆ.&lt;/p&gt;&lt;h2&gt;&lt;strong&gt;ಮುಂದಿನ ಕ್ರಮವೇನು?&lt;/strong&gt;&lt;/h2&gt;&lt;p&gt;ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಏಪ್ರಿಲ್ 22 ರಂದು ನವದೆಹಲಿಯ ಪ್ರಧಾನ ಕಚೇರಿಗೆ ಹಾಜರಾಗುವಂತೆ ಕೇರಳ ಮತ್ತು ಮಧ್ಯಪ್ರದೇಶದ ಡಿಜಿಪಿಗಳಿಗೆ ಸಮನ್ಸ್ ನೀಡಿದೆ. ಅಲ್ಲದೆ, ಪ್ರಕರಣ ಇತ್ಯರ್ಥವಾಗುವವರೆಗೆ ಪ್ರತಿ ಮೂರು ದಿನಕ್ಕೊಮ್ಮೆ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಇಬ್ಬರೂ ರಾಜ್ಯಗಳ ಡಿಜಿಪಿಗಳಿಗೆ ನಿರ್ದೇಶನ ನೀಡಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>life</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/mahakumbh-viral-girl-monalisa-minor-husband-farman-pocso-case-filed-san/articleshow-fokgmlf"/>
        </item>
        <item>
            <title><![CDATA[6-7 ಸೀಟಿ ಹೊಡೆದ್ರೂ ಕಡ್ಲೆ, ಬಟಾಣಿ ಬೇಯೋದಿಲ್ವಾ? ಕುಕ್ಕರ್ ಗೆ ಈ ವಸ್ತು ಹಾಕಿ ನೋಡಿ]]></title>
            <link>https://kannada.asianetnews.com/gallery/kitchen/must-try-these-simple-hacks-to-cook-rajma-and-chole-fast-iy702uq</link>
            <guid isPermaLink="true">https://kannada.asianetnews.com/gallery/kitchen/must-try-these-simple-hacks-to-cook-rajma-and-chole-fast-iy702uq</guid>
            <pubDate>Fri, 10 Apr 2026 16:51:49 +0530</pubDate>
            <description><![CDATA[&lt;p&gt;ಬಟಾಣಿ, ರಾಜ್ಮಾ ಮತ್ತು ಕಡ್ಲೆ ತಿನ್ನೋದಕ್ಕೆ ತುಂಬಾ ರುಚಿಕರವಾಗಿರುತ್ತದೆ, ಆದರೆ ಕೆಲವೊಮ್ಮೆ, ಪದೇ ಪದೇ ಕುಕ್ಕರ್ ನಲ್ಲಿ ವಿಸಿಲ್ ಹೊಡೆದರೂ, ಅವು ಸರಿಯಾಗಿ ಬೆಂದಿರೋದಿಲ್ಲ, ಇದರಿಂದ ರುಚಿಯೇ ಹಾಳಾಗಿ ಹೋಗುತ್ತದೆ. ರಾಜ್ಮಾ, ಕಡ್ಲೆ, ಬಟಾಣಿಯನ್ನು ಸುಲಭವಾಗಿ ಬೇಯಿಸುವ ಟ್ರಿಕ್ಸ್ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knvhx8vwg3zmm3e4hy0khxn6,imgname-cooker-1775819989879.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಟಾಣಿ, ರಾಜ್ಮಾ ಮತ್ತು ಕಡ್ಲೆ ತಿನ್ನೋದಕ್ಕೆ ತುಂಬಾ ರುಚಿಕರವಾಗಿರುತ್ತದೆ, ಆದರೆ ಕೆಲವೊಮ್ಮೆ, ಪದೇ ಪದೇ ಕುಕ್ಕರ್ ನಲ್ಲಿ ವಿಸಿಲ್ ಹೊಡೆದರೂ, ಅವು ಸರಿಯಾಗಿ ಬೆಂದಿರೋದಿಲ್ಲ, ಇದರಿಂದ ರುಚಿಯೇ ಹಾಳಾಗಿ ಹೋಗುತ್ತದೆ. ರಾಜ್ಮಾ, ಕಡ್ಲೆ, ಬಟಾಣಿಯನ್ನು ಸುಲಭವಾಗಿ ಬೇಯಿಸುವ ಟ್ರಿಕ್ಸ್ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹೆಚ್ಚಿನ ಜನರಿಗೆ ತಮ್ಮ ಪ್ರತಿದಿನದ ಅಡುಗೆಯಲ್ಲಿ ಕಡಲೆ, ರಾಜ್ಮಾ, ಬಟಾಣಿಯನ್ನು ಬಳಸಲು ತುಂಬಾನೆ ಇಷ್ಟ. ಅವುಗಳನ್ನು ಬಳಸಿ ಬಗೆ ಬಗೆಯ ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಖಾದ್ಯಗಳನ್ನು ಮಾಡಿ ತಿನ್ನುತ್ತೇವೆ. ಆದರೆ ಅವುಗಳನ್ನು ಸರಿಯಾಗಿ ಬೇಯಿಸದಿದ್ದರೆ, ಅವು ಅಡುಗೆಯ ರುಚಿಯೇ ಹಾಳಾಗುತ್ತದೆ ಅಲ್ವಾ?&lt;/p&gt;&lt;img&gt;&lt;p&gt;ಕೆಲವೊಮ್ಮೆ, ಅವುಗಳನ್ನು ರಾತ್ರಿಯಿಡೀ ನೆನೆಸಿಟ್ಟು, ಮರುದಿನ ಕುಕ್ಕರ್ ನಲ್ಲಿ ಆರರಿಂದ ಏಳು ಬಾರಿ ವಿಸಿಲ್ ಹಾಕಿ, ಬೇಯಿಸಿದರೂ ಅವು ಬೇಯೋದಿಲ್ಲ. ಇದರಿಂದ ಮಾಡಿದ ಅಡುಗೆಯೂ ಚೆನ್ನಾಗಿರೋದಿಲ್ಲ, ಜೊತೆಗೆ ಅವುಗಳನ್ನು ತಿಂದ ನಂತರ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಹೊಟ್ಟೆಯಲ್ಲಿ ಭಾರ ಮೊದಲಾದ ಸಮಸ್ಯೆ ಕಾಡುತ್ತೆ.&lt;/p&gt;&lt;img&gt;&lt;p&gt;ನಿಮಗೂ ಕೂಡ ಕಡ್ಲೆ, ಬಟಾಣಿಯನ್ನು ಬೇಯಿಸೋದೆ ಒಂದು ತಲೆಬಿಸಿ ಆಗಿದ್ಯಾ? ನೀವು ಇನ್ನು ಚಿಂತಿಸಬೇಕಾಗಿಲ್ಲ. ಯಾಕಂದ್ರೆ, ಕಡ್ಲೆ, ಬಟಾಣಿ, ರಾಜ್ಮಾ ಕಾಳನ್ನು ಕೇವಲ 1-2 ಸೀಟಿಗಳಲ್ಲಿ ಬೇಯಿಸಲು ಸಹಾಯ ಮಾಡುವ ಟ್ರಿಕ್ ಇಲ್ಲಿದೆ. ಈ ಟ್ರಿಕ್ ಇನ್&rsquo;ಸ್ಟಾಗ್ರಾಂ ಪೇಜ್ ಒಂದರಲ್ಲಿ ವೈರಲ್ ಆಗಿತ್ತು. ನೀವು ಟ್ರೈ ಮಾಡಿ ನೋಡಿ, ಉಪಯೋಗಕ್ಕೆ ಬರಬಹುದು.&lt;/p&gt;&lt;img&gt;&lt;p&gt;ಇದು ತುಂಬಾ ಸರಳ ಮತ್ತು ಅಗ್ಗದ ವಿಧಾನ. ಇದಕ್ಕೆ ಹೆಚ್ಚಿನ ಶ್ರಮ ಅಗತ್ಯವಿಲ್ಲ. ನಿಮಗೆ ಬೇಕಾಗಿರುವುದು ಶುಂಠಿ ಅಷ್ಟೇ. ಕಡ್ಲೆ, ಬಟಾಣಿಯನ್ನು ಬೇಯಿಸಲು ನೀರನ್ನು ಕುದಿಸುವಾಗ ಒಂದು ಸಣ್ಣ ತುಂಡು ಶುಂಠಿಯನ್ನು ಆ ನೀರಿಗೆ ಸೇರಿಸಿ. ಈ ಹಳೆಯ ಮನೆಮದ್ದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಶುಂಠಿ ಧಾನ್ಯಗಳು ಬೇಗನೆ ಬೇಯುವಂತೆ ಮಾಡುತ್ತದೆ.&lt;/p&gt;&lt;img&gt;&lt;p&gt;ಶುಂಠಿ ಹಾಕೋದರಿಂದ ಧಾನ್ಯಗಳು ಬೇಗನೆ ಬೇಯುವ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಕಡ್ಲೆ, ಬೀನ್ಸ್, ರಾಜ್ಮಾ, ಬಟಾಣಿ ಕಾಳುಗಳಲ್ಲಿ ಆಲಿಗೋಸ್ಯಾಕರೈಡ್&zwnj; ಎಂಬ ಸಂಕೀರ್ಣ ಸಕ್ಕರೆ ಇರುತ್ತವೆ, ಇವುಗಳನ್ನು ನಮ್ಮ ಜೀರ್ಣಾಂಗ ವ್ಯವಸ್ಥೆಯು ಸುಲಭವಾಗಿ ಒಡೆಯಲು ಸಾಧ್ಯವಿಲ್ಲ. ಈ ಸಕ್ಕರೆಗಳು ಕರುಳಿನಲ್ಲಿ ಹುದುಗುವಿಕೆಗೆ ಕಾರಣವಾಗುತ್ತವೆ, ಇದು ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತದೆ. ಶುಂಠಿಯಲ್ಲಿರುವ ಜಿಂಜರಾಲ್ ಈ ಸಂಕೀರ್ಣ ಸಕ್ಕರೆಗಳನ್ನು ವೇಗವಾಗಿ ಒಡೆಯಲು ಸಹಾಯ ಮಾಡುತ್ತದೆ. ಇದರಿಂದ ದ್ವಿದಳ ಧಾನ್ಯಗಳು ಬೇಗನೆ ಮೃದುವಾಗುತ್ತವೆ, ಹೊಟ್ಟೆಯಲ್ಲಿ ಅನಿಲ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.&lt;/p&gt;&lt;img&gt;&lt;p&gt;ಕಡ್ಲೆ, ರಾಜ್ಮಾವನ್ನು ಚೆನ್ನಾಗಿ ತೊಳೆದು 6-8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೀರಲ್ಲಿ ನೆನೆಸಿಡಿ. ನೆನೆಸಿದ ಕಡಲೆ/ರಾಜ್ಮಾವನ್ನು ಕುಕ್ಕರ್&zwnj;ಗೆ ಸೇರಿಸಿ. 1 ಇಂಚಿನ ಶುಂಠಿಯನ್ನು ಸೇರಿಸಿ. ನೀವು ಅದನ್ನು ಜಜ್ಜಿ ಕೂಡ ಹಾಕಬಹುದು. ಈಗ ಅದಕ್ಕೆ ಉಪ್ಪು, ಅರಿಶಿನ ಮತ್ತು ಸ್ವಲ್ಪ ನೀರು ಸೇರಿಸಿ. ಕುಕ್ಕರ್ 4-5 ಬಾರಿ ಸೀಟಿ ಹೊಡೆಯಲು ಬಿಡಿ. ಧಾನ್ಯಗಳು ನಿಮಿಷದಲ್ಲಿ ಬೆಂದಿರುತ್ತೆ ನೀವೆ ನೋಡಿ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/kitchen/must-try-these-simple-hacks-to-cook-rajma-and-chole-fast-iy702uq"/>
        </item>
        <item>
            <title><![CDATA[ಉದ್ದು-ಅವಲಕ್ಕಿ ಬೇಡವೇ ಬೇಡ: ಹತ್ತಿಯಂಥ ಮೃದು ದೋಸೆಗೆ ಈ ಒಂದೇ ಒಂದು ಪದಾರ್ಥ ಸಾಕು!]]></title>
            <link>https://kannada.asianetnews.com/webstories/kitchen/simple-dosa-recipe-in-kannada-with-rice-flour-lm8uvfa</link>
            <guid isPermaLink="true">https://kannada.asianetnews.com/webstories/kitchen/simple-dosa-recipe-in-kannada-with-rice-flour-lm8uvfa</guid>
            <pubDate>Fri, 10 Apr 2026 17:01:39 +0530</pubDate>
            <description><![CDATA[&lt;p&gt;What is the secret to making soft dosa: ಹತ್ತಿಯಾದ ಮೃದುವಾದ ದೋಸೆ ಮಾಡುವುದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knvjdqq4j5zkppzqezv2gj6x,imgname-dosa--3--1775820529380.jpg" type="image/jpeg" height="390" width="690"/>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/kitchen/simple-dosa-recipe-in-kannada-with-rice-flour-lm8uvfa"/>
        </item>
        <item>
            <title><![CDATA[ಈ ಟ್ರಿಕ್ಸ್ ಟ್ರೈ ಮಾಡಿದ್ರೆ… ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರೋದೇ ಇಲ್ಲ]]></title>
            <link>https://kannada.asianetnews.com/gallery/kitchen/tips-for-cutting-onion-without-tears-g3kew37</link>
            <guid isPermaLink="true">https://kannada.asianetnews.com/gallery/kitchen/tips-for-cutting-onion-without-tears-g3kew37</guid>
            <pubDate>Fri, 10 Apr 2026 16:40:58 +0530</pubDate>
            <description><![CDATA[&lt;p&gt;ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರೋದು ಸಾಮಾನ್ಯ. ಅದಕ್ಕಾಗಿಯೇ ಹೆಚ್ಚಿನ ಜನರಿಗೆ ಈರುಳ್ಳಿ ಕತ್ತರಿಸೋದಕ್ಕೆ ಇಷ್ಟ ಆಗಲ್ಲ. ನೀವು ಕೂಡ ಇದರಿಂದ ತೊಂದರೆಗೊಳಗಾಗಿದ್ದರೆ, ಇಲ್ಲಿ ಹೇಳಿರೋ ಟ್ರಿಕ್ಸ್ ನೀವು ಟ್ರೈ ಮಾಡಿ. ಇದರಿಂದ ಈರುಳ್ಳಿ ಕತ್ತರಿಸೋವಾಗ ಕಣ್ಣೀರು ಬರೋದಕ್ಕೆ ಗುಡ್ ಬೈ ಹೇಳಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gv5fzet1wvp1j27rg8qm0gjc,imgname-how-to-get-rid-of-tears-while-cutting-onion-1678443002684.jpg" type="image/jpeg" height="390" width="690"/>
            <content:encoded><![CDATA[&lt;p&gt;ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರೋದು ಸಾಮಾನ್ಯ. ಅದಕ್ಕಾಗಿಯೇ ಹೆಚ್ಚಿನ ಜನರಿಗೆ ಈರುಳ್ಳಿ ಕತ್ತರಿಸೋದಕ್ಕೆ ಇಷ್ಟ ಆಗಲ್ಲ. ನೀವು ಕೂಡ ಇದರಿಂದ ತೊಂದರೆಗೊಳಗಾಗಿದ್ದರೆ, ಇಲ್ಲಿ ಹೇಳಿರೋ ಟ್ರಿಕ್ಸ್ ನೀವು ಟ್ರೈ ಮಾಡಿ. ಇದರಿಂದ ಈರುಳ್ಳಿ ಕತ್ತರಿಸೋವಾಗ ಕಣ್ಣೀರು ಬರೋದಕ್ಕೆ ಗುಡ್ ಬೈ ಹೇಳಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಈರುಳ್ಳಿಯನ್ನು ಕತ್ತರಿಸುವ ವಿಷಯಕ್ಕೆ ಬಂದಾಗಲೆಲ್ಲಾ, ಹರಿದು ಬರೋ ಕಣ್ಣೀರು ನೆನಪಾಗಿ, ಈರುಳ್ಳಿ ಕತ್ತರಿಸೋದೆ ಬೇಡ ಎನಿಸಿ ಬಿಡುತ್ತೆ. ಇದೇ ಕಾರಣಕ್ಕೆ ಕೆಲವರು ಈರುಳ್ಳಿ ಕತ್ತರಿಸೋದೆ ಇಲ್ಲ. ನಿಮಗೂ ಕೂಡ ಈರುಳ್ಳಿಯನ್ನು ಕತ್ತರಿಸುವುದರಿಂದ ಕಣ್ಣುಗಳಲ್ಲಿ ಉರಿ, ಕಣ್ಣೀರು ಮತ್ತು ಮೂಗು ಸೋರುವಿಕೆ ಉಂಟಾಗುತ್ತದೆ. ಇದಕ್ಕೆ ಕಾರಣ ಏನು? ಹೇಗೆ ಕಣ್ಣು ಉರಿ ಆಗೋದನ್ನು ತಡೆಯಬಹುದು ನೋಡೋಣ.&lt;/p&gt;&lt;img&gt;&lt;p&gt;ಈರುಳ್ಳಿ ಕತ್ತರಿಸುವಾಗ ಕಣ್ಣು ಉರಿ ಅಥವಾ ಕಣ್ಣಿರು ಬರಲು ಮುಖ್ಯ ಕಾರಣ ಈರುಳ್ಳಿಯಲ್ಲಿರುವ ಸಲ್ಫರ್ ಹೊಂದಿರುವ ಸಂಯುಕ್ತಗಳು. ನಾವು ಈರುಳ್ಳಿಯನ್ನು ಕತ್ತರಿಸಿದಾಗ, ಅವು ಗಾಳಿಯಲ್ಲಿ ಹರಡಿ ಕಣ್ಣೀರು ಹರಿಯುವಂತೆ ಮಾಡುತ್ತದೆ. ಆದರೆ, ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ. ಇವತ್ತು, ಈ ಸಮಸ್ಯೆಯನ್ನು ತಪ್ಪಿಸಲು ನೀವು ಬಳಸಬಹುದಾದ ಕೆಲವು ತಂತ್ರಗಳನ್ನು ನಿಮಗೆ ತಿಳಿಸುತ್ತೇವೆ.&lt;/p&gt;&lt;img&gt;&lt;p&gt;ಈ ವಿಧಾನವು ಅತ್ಯಂತ ಪರಿಣಾಮಕಾರಿಯಾಗಿದೆ. ನೀವು ಈರುಳ್ಳಿಯನ್ನು ಕತ್ತರಿಸಬೇಕಾಗಿ ಬಂದಾಗ, ಕತ್ತರಿಸುವ ಕನಿಷ್ಠ 10 ರಿಂದ 30 ನಿಮಿಷಗಳ ಮೊದಲು ರೆಫ್ರಿಜರೇಟರ್&zwnj;ನಲ್ಲಿ ಇರಿಸಿ, ಅಥವಾ 5-10 ನಿಮಿಷಗಳ ಕಾಲ ಫ್ರೀಜರ್&zwnj;ನಲ್ಲಿ ಇರಿಸಿ. ಈರುಳ್ಳಿ ತಂಪಾಗುವುದರಿಂದ ಕಣ್ಣೀರು ಉತ್ಪಾದಿಸುವ ಅನಿಲಗಳನ್ನು ಬಿಡುಗಡೆ ಮಾಡುವ ಕಿಣ್ವಗಳನ್ನು ನಿಧಾನಗೊಳ್ಳುತ್ತದೆ. ಇದು ಕಣ್ಣೀರು ಬರೋದನ್ನು ತಡೆಯುತ್ತದೆ.&lt;/p&gt;&lt;img&gt;&lt;p&gt;ನಿಮಗೆ ರೆಫ್ರಿಜರೇಟರ್&zwnj;ನಲ್ಲಿ ಇಡಲು ಸಮಯವಿಲ್ಲದಿದ್ದರೆ, ಯಾವಾಗಲೂ ಹರಿಯುವ ನೀರಿನ ಅಡಿಯಲ್ಲಿ ಅಥವಾ ನೀರಿನಲ್ಲಿ ಇಟ್ಟು ಈರುಳ್ಳಿಯನ್ನು ಕತ್ತರಿಸಿ. ಅಂದರೆ ಈರುಳ್ಳಿಯನ್ನು ಸಿಪ್ಪೆ ತೆಗೆದು ನೀರು ತುಂಬಿದ ಬಟ್ಟಲಿನಲ್ಲಿ ಕತ್ತರಿಸಿ. ಇದು ಕಣ್ಣೀರನ್ನು ತಡೆಯುತ್ತದೆ.&lt;/p&gt;&lt;img&gt;&lt;p&gt;ಇದು ವಿಚಿತ್ರವೆನಿಸಬಹುದು, ಆದರೆ ಇದು ನಿಜ. ಯಾವಾಗಲೂ ಹರಿತವಾದ ಚಾಕು ಬಳಸಿ ಈರುಳ್ಳಿಯನ್ನು ಕತ್ತರಿಸಿ. ಹರಿತವಾದ ಚಾಕು ಕ್ಲೀನ್ ಕಟ್ ಮಾಡುತ್ತದೆ ಮತ್ತು ಕತ್ತರಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ, ಇದು ಕಣ್ಣೀರು ಬರದಂತೆ ತಡೆಯುತ್ತದೆ.&lt;/p&gt;&lt;img&gt;&lt;p&gt;ಈರುಳ್ಳಿಯ ಬೇರಿನ ತುದಿಯನ್ನು, ಕೆಳಭಾಗವನ್ನು, ಕೊನೆಯಲ್ಲಿ ಕತ್ತರಿಸಿ; ಇದು ಹೆಚ್ಚು ಕಣ್ಣೀರು ಉತ್ಪಾದಿಸುವ ಸಂಯುಕ್ತಗಳನ್ನು ಹೊಂದಿರುತ್ತದೆ. ಮೊದಲು ಮೇಲಿನ ತುದಿಯನ್ನು ಕತ್ತರಿಸಿ ಬೇರಿನ ತುದಿಯನ್ನು ಬಿಡಿ. ಇದು ಅನಿಲವನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣೀರನ್ನು ತಡೆಯುತ್ತದೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/kitchen/tips-for-cutting-onion-without-tears-g3kew37"/>
        </item>
        <item>
            <title><![CDATA[ಎಣ್ಣೆ ಹೊಡೆದು ಡ್ಯಾಮೇಜ್‌ ಆಗಿರುವ ಲಿವರ್‌ಗೆ ಮರು ಜೀವ ಕೊಡುವ ಈ ಹಣ್ಣು; ಯಾವುದು?]]></title>
            <link>https://kannada.asianetnews.com/gallery/special/repairing-damaged-liver-here-is-a-fruits-nz5yrbm</link>
            <guid isPermaLink="true">https://kannada.asianetnews.com/gallery/special/repairing-damaged-liver-here-is-a-fruits-nz5yrbm</guid>
            <pubDate>Fri, 10 Apr 2026 16:29:29 +0530</pubDate>
            <description><![CDATA[&lt;p&gt;Alcoholic Liver Damage: ಕೆಲವರಂತೂ ಅತಿಯಾದ ಮದ್ಯಪಾನ ಮಾಡುತ್ತಾರೆ. ಖುಷಿಗೂ, ದುಃಖಕ್ಕೂ ಇವರಿಗೆ ಮದ್ಯ ಬೇಕು. ಆದರೆ ಇದರಿಂದ ಲಿವರ್&zwnj;ನಲ್ಲಿ ಕಿಣ್ವಗಳ (enzymes) ವ್ಯತ್ಯಯ ಉಂಟಾಗುವುದು. ಅಂಜೂರ ಈ ಕಿಣ್ವಗಳನ್ನು ಸಮತೋಲನಕ್ಕೆ ತರಲು ಸಹಾಯ ಮಾಡುವುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knvfn4r7ry7wgmf6r4209prh,imgname-new-project--64--1775817626375.jpg" type="image/jpeg" height="390" width="690"/>
            <content:encoded><![CDATA[&lt;p&gt;Alcoholic Liver Damage: ಕೆಲವರಂತೂ ಅತಿಯಾದ ಮದ್ಯಪಾನ ಮಾಡುತ್ತಾರೆ. ಖುಷಿಗೂ, ದುಃಖಕ್ಕೂ ಇವರಿಗೆ ಮದ್ಯ ಬೇಕು. ಆದರೆ ಇದರಿಂದ ಲಿವರ್&zwnj;ನಲ್ಲಿ ಕಿಣ್ವಗಳ (enzymes) ವ್ಯತ್ಯಯ ಉಂಟಾಗುವುದು. ಅಂಜೂರ ಈ ಕಿಣ್ವಗಳನ್ನು ಸಮತೋಲನಕ್ಕೆ ತರಲು ಸಹಾಯ ಮಾಡುವುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಂಜೂರದಲ್ಲಿರುವ ಸಮೃದ್ಧ ಆಂಟಿ-ಆಕ್ಸಿಡೆಂಟ್&zwnj;ಗಳಿಂದಾಗಿ ಲಿವರ್ ಕೋಶಗಳನ್ನು ಹಾನಿಯಿಂದ ರಕ್ಷಣೆ ಮಾಡುತ್ತದೆ, ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಲಿವರ್&zwnj;ನಲ್ಲಿ ಶೇಖರಣೆಯಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು, 'ಫ್ಯಾಟಿ ಲಿವರ್' ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುವುದು&lt;/p&gt;&lt;img&gt;&lt;p&gt;2-3 ಒಣ ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ತಾಜಾ ಅಂಜೂರದ ಹಣ್ಣನ್ನು ನೇರವಾಗಿ ತಿನ್ನಲೂಬಹುದು.&lt;/p&gt;&lt;img&gt;&lt;p&gt;ಅಂಜೂರ ಹಣ್ಣು ಲಿವರ್ ರಿಪೇರಿ ಮಾಡಲು ಸಹಾಯ ಮಾಡುವುದು, ಆದರೆ ನೀವು ಮದ್ಯಪಾನವನ್ನು ಮುಂದುವರಿಸುತ್ತ, ಹಣ್ಣು ತಿಂದರೆ ಅದರಿಂದ ಪ್ರಯೋಜನ ಸಿಗುವುದಿಲ್ಲ. ಲಿವರ್ ಸರಿಯಾಗಲು ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.&lt;/p&gt;&lt;p&gt;&lt;strong&gt;ಗಮನಿಸಿ: ಈ ಮಾಹಿತಿಯು ಕೇವಲ ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ಹೆಚ್ಚಿನ ಮಾಹಿತಿಗಾಗಿ ಅಥವಾ ಸಮಸ್ಯೆಗಳಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.&lt;/strong&gt;&lt;/p&gt;]]></content:encoded>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/special/repairing-damaged-liver-here-is-a-fruits-nz5yrbm"/>
        </item>
        <item>
            <title><![CDATA[ಕಡಿಮೆ ಖರ್ಚು, ಹೆಚ್ಚು ಮಸ್ತಿ! ಬೆಂಗಳೂರಿಗೆ ಸಮೀಪದಲ್ಲೇ ಇವೆ ಈ 3 ತಾಣಗಳು]]></title>
            <link>https://kannada.asianetnews.com/webstories/travel/3-stunning-hill-stations-just-a-short-trip-from-bangalore-nbcm092</link>
            <guid isPermaLink="true">https://kannada.asianetnews.com/webstories/travel/3-stunning-hill-stations-just-a-short-trip-from-bangalore-nbcm092</guid>
            <pubDate>Fri, 10 Apr 2026 16:10:15 +0530</pubDate>
            <description><![CDATA[&lt;p&gt;Best hill stations near Bangalore: ಟ್ರಾಫಿಕ್ ಇರಲ್ಲ, ಡ್ರೈವಿಂಗ್ ಟೆನ್ಷನ್&zwnj;ನಂತೂ ಇಲ್ವೆ ಇಲ್ಲ. ಮತ್ಯಾಕೆ ತಡ.. ಈ ವಾರಾಂತ್ಯದಲ್ಲಿ ಬೆಂಗಳೂರಿಗೆ ಸಮೀಪದಲ್ಲಿರುವ ಈ ಸುಂದರ ತಾಣಗಳಿಗೆ ಭೇಟಿ ನೀಡಿ ಆರಾಮವಾಗಿ ಕಾಲ ಕಳೆಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k6ynexhbehzeh0qcpzkt3hf2,imgname-sakleshpur-1759818249771.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/travel/3-stunning-hill-stations-just-a-short-trip-from-bangalore-nbcm092"/>
        </item>
        <item>
            <title><![CDATA[ಸ್ಪ್ರೇ  ಬೇಕಾಗಿಲ್ಲ, ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ]]></title>
            <link>https://kannada.asianetnews.com/gallery/kitchen/how-to-get-rid-of-cockroaches-from-the-kitchen-try-these-easy-methods-27iw1u1</link>
            <guid isPermaLink="true">https://kannada.asianetnews.com/gallery/kitchen/how-to-get-rid-of-cockroaches-from-the-kitchen-try-these-easy-methods-27iw1u1</guid>
            <pubDate>Fri, 10 Apr 2026 15:56:00 +0530</pubDate>
            <description><![CDATA[&lt;p&gt;kitchen home remedies for cockroaches : ಅಡುಗೆ ಮನೆಗೆ ಯಾವಾಗ ಜಿರಳೆ ನುಗ್ಗುತ್ತೆ ಗೊತ್ತೇ ಆಗೋದಿಲ್ಲ. ಬಂದ ಒಂದು ಜಿರಳೆ, ಮೂರು, ನೂರು ಆಗೋದಿದೆ. ಅದ್ರಿಂದ ಮುಕ್ತಿಬೇಕು ಅಂದ್ರೆ ಸಿಂಪಲ್ ಟಿಪ್ಸ್ ಫಾಲೋ ಮಾಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knve2ycqr57qvvq1t7gbaf2s,imgname-cockroaches-1775815981463.jpg" type="image/jpeg" height="390" width="690"/>
            <content:encoded><![CDATA[&lt;p&gt;kitchen home remedies for cockroaches : ಅಡುಗೆ ಮನೆಗೆ ಯಾವಾಗ ಜಿರಳೆ ನುಗ್ಗುತ್ತೆ ಗೊತ್ತೇ ಆಗೋದಿಲ್ಲ. ಬಂದ ಒಂದು ಜಿರಳೆ, ಮೂರು, ನೂರು ಆಗೋದಿದೆ. ಅದ್ರಿಂದ ಮುಕ್ತಿಬೇಕು ಅಂದ್ರೆ ಸಿಂಪಲ್ ಟಿಪ್ಸ್ ಫಾಲೋ ಮಾಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಡುಗೆ ಮನೆ ಆಹಾರ ತಯಾರಿಸುವ ಜಾಗ ಮಾತ್ರವಲ್ಲ, ಇಡೀ ಮನೆಯವರ ಆರೋಗ್ಯ ಅಡುಗೆ ಮನೆಯಲ್ಲಿದೆ. ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಕಸವಿದ್ರೂ ಜಿರಳೆ ಕಾಟ ಶುರುವಾಗುತ್ತದೆ. ಈ ಜಿರಳೆ ಸದ್ದಿಲ್ಲದೆ ನಾನಾ ಖಾಯಿಲೆ ಹರಡುತ್ತದೆ. ಜಿರಳೆ ಆಹಾರವನ್ನು ವಿಷಗೊಳಿಸುವುದಲ್ಲದೆ ಟೈಪಾಯಿಡ್, ಅಲರ್ಜಿಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ಮಾರ್ಕೆಟ್ ನಲ್ಲಿ ಜಿರಳೆ ಸ್ಪ್ರೇ ಸಾಕಷ್ಟಿದೆ. ಆದ್ರೆ ಅವು ರಾಸಾಯನಿಕವಾಗಿರೋದ್ರಿಂದ ಬಳಕೆ ಬಹಳ ಅಪಾಯಕಾರಿ. ನೀವು ಮನೆಯಲ್ಲೇ ನೈಸರ್ಗಿಕ ಪದಾರ್ಥ ಬಳಸಿ ಜಿರಳೆ ಓಡಿಸಬಹುದು.&lt;/p&gt;&lt;img&gt;&lt;p&gt;ಅಡುಗೆಮನೆಯಲ್ಲಿರುವ ಲವಂಗಗಳು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಜಿರಳೆಗಳನ್ನು ಹೊಡೆದೋಡಿಸುತ್ತದೆ. ಜಿರಳೆಗಳು ಲವಂಗಗಳ ಬಲವಾದ ವಾಸನೆಯನ್ನು ಸಹಿಸುವುದಿಲ್ಲ. ಅಡುಗೆಮನೆಯ ಡ್ರಾಯರ್ಗಳು ಮತ್ತು ಕ್ಯಾಬಿನೆಟ್ಗಳಲ್ಲಿ 8-10 ಲವಂಗಗಳನ್ನು ಇರಿಸಿ. ಅವುಗಳ ವಾಸನೆಗೆ ಜಿರಳೆ ಬರೋದಿಲ್ಲ.&lt;/p&gt;&lt;img&gt;&lt;p&gt;ಬೇಕಿಂಗ್ ಸೋಡಾವನ್ನು ಜಿರಳೆ ತಿನ್ನುತ್ತಿದ್ದಂತೆ ಅದು ಸಾಯುತ್ತದೆ. ಅಡಿಗೆ ಸೋಡಾ ಮತ್ತು ಪುಡಿಮಾಡಿದ ಸಕ್ಕರೆಯನ್ನು ಸಮಾನ ಭಾಗದಲ್ಲಿ ಮಿಕ್ಸ್ ಮಾಡಿ ಅಡುಗೆಮನೆಯ ಮೂಲೆಗಳಲ್ಲಿ, ಸಿಂಕ್ ಅಡಿಯಲ್ಲಿ ಮತ್ತು ಕ್ಯಾಬಿನೆಟ್ಗಳ ಹಿಂದೆ ಹಾಕಬೇಕು. ಸಕ್ಕರೆ ವಾಸನೆಗೆ ಅಲ್ಲಿಗೆ ಬರುವ ಜಿರಳೆ ಬೇಕಿಂಗ್ ಸೋಡಾ ತಿಂದು ಸಾಯುತ್ತದೆ.&lt;/p&gt;&lt;img&gt;&lt;p&gt;ನಮ್ಮ ಆಹಾರದ ಪರಿಮಳನವನ್ನು ಬೇವಿನ ಎಲೆ ಹೆಚ್ಚಿಸುತ್ತೆ. ಆದ್ರೆ ಜಿರಳೆಗಳು ಅವುಗಳ ವಾಸನೆಯನ್ನು ಇಷ್ಟಪಡುವುದಿಲ್ಲ. 5-6 ಬೇವಿನ ಎಲೆಗಳನ್ನು ಪುಡಿ ಮಾಡಿ ಅವುಗಳನ್ನು ಅಡುಗೆಮನೆಯ ಮೂಲೆಗಳಲ್ಲಿ ಇರಿಸಿ. ಈ ವಾಸನೆಗೆ ತಕ್ಷಣವೇ ಜಿರಳೆಗಳನ್ನು ಓಡುತ್ತವೆ.&lt;/p&gt;&lt;img&gt;&lt;p&gt;ನಿಮ್ಮ ಮನೆಯಲ್ಲಿ ಜಿರಳೆ ಸಂಖ್ಯೆ ಹೆಚ್ಚಾಗಿದ್ದರೆ ನೀವು ಬೇವಿನ ಎಣ್ಣೆಯನ್ನು ಬಳಸಬಹುದು. ಬೇವಿನ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಅದನ್ನು ಜಿರಳೆ ಇರುವ ಜಾಗಕ್ಕೆ ಸ್ಪ್ರೇ ಮಾಡಿ. ನೀವು ಬೇವಿನ ಪುಡಿಯನ್ನು ಕೂಡ ಜಿರಳೆ ಇರುವ ಜಾಗಕ್ಕೆ ಸಿಂಪಡಿಸಬಹುದು.&lt;/p&gt;&lt;img&gt;&lt;p&gt;ಅಡುಗೆಮನೆಯಿಂದ ಜಿರಳೆಗಳನ್ನು ಓಡಿಸಲು ವಿನೆಗರ್ ಕೂಡ ಅತ್ಯುತ್ತಮ ಮತ್ತು ಸುಲಭವಾದ ಮಾರ್ಗವಾಗಿದೆ. ಬಿಳಿ ವಿನೆಗರ್ ಮತ್ತು ನೀರನ್ನು ಸ್ಪ್ರೇ ಬಾಟಲಿಯಲ್ಲಿ ಸಮಾನ ಪ್ರಮಾಣದಲ್ಲಿ ಮಿಕ್ಸ್ ಮಾಡಿ. ರಾತ್ರಿ ಅಡುಗೆಮನೆ ಸ್ವಚ್ಛಗೊಳಿಸಿದ ನಂತ್ರ, ಗ್ಯಾಸ್ ಸ್ಟೌವ್ ಮತ್ತು ಸಿಂಕ್ ಸುತ್ತಲೂ ಸಿಂಪಡಿಸಿ.&lt;/p&gt;&lt;img&gt;&lt;p&gt;ದಾಲ್ಚಿನಿ ಕೇವಲ ಮಸಾಲೆ ಪದಾರ್ಥವಲ್ಲ. ಜಿರಳೆಗಳಿಗೆ ನಿರೋಧಕವಾಗಿಯೂ ಕೆಲ್ಸ ಮಾಡುತ್ತದೆ. ಅಡುಗೆಮನೆಯ ಮೂಲೆಗಳಲ್ಲಿ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ. ಇದರ ಬಲವಾದ ವಾಸನೆಯು ಜಿರಳೆ ಬರೋದನ್ನು ತಡೆಯುತ್ತದೆ.&lt;/p&gt;&lt;img&gt;&lt;p&gt;ನಿಂಬೆ ರಸ ಕ್ಲೀನಿಂಗ್ ಎಜೆಂಟ್ ಆಗಿ ಕೆಲ್ಸ ಮಾಡುತ್ತದೆ. ನೀವು ಕೆಮಿಕಲ್ ಇಲ್ಲದ ಈ ನಿಂಬೆ ರಸವನ್ನು ಜಿರಳೆ ಓಡಿಸಲು ಬಳಸಬಹುದು. ಎರಡು ನಿಂಬೆಹಣ್ಣಿನ ರಸವನ್ನು ಬಕೆಟ್ ನೀರಿನಲ್ಲಿ ಬೆರೆಸಿ ಅಡುಗೆಮನೆಯ ನೆಲವನ್ನು ಒರೆಸಿ. ನಿಂಬೆಯ ಸಿಟ್ರಸ್ ವಾಸನೆ ಮತ್ತು ಶುಚಿತ್ವ ಜಿರಳೆಗಳ ಸಂತಾನೋತ್ಪತ್ತಿಯನ್ನು ತಡೆಯುತ್ತದೆ.&lt;/p&gt;&lt;img&gt;&lt;p&gt;ಪುದೀನಾ ಎಣ್ಣೆ ವಾಸನೆಯನ್ನು ಜಿರಳೆಗಳು ಸಹಿಸೋದಿಲ್ಲ. ನೀರಿಗೆ ಕೆಲವು ಹನಿ ಪುದೀನಾ ಎಣ್ಣೆಯನ್ನು ಬೆರೆಸಿ ಸಿಂಪಡಿಸಿ. ಅಡುಗೆ ಮನೆಯಲ್ಲಿ ಪುದೀನಾ ಎಣ್ಣೆ ಹಾಕ್ತಿದ್ದಂತೆ ಜಿರಳೆ ಅಲ್ಲಿಂದ ಕಾಲ್ಕೀಳುತ್ತವೆ.&lt;/p&gt;&lt;img&gt;&lt;p&gt;ಸೌತೆಕಾಯಿ ಸಿಪ್ಪೆಯನ್ನು ನಾವು ಕಸಕ್ಕೆ ಹಾಕ್ತೇವೆ. ಆದ್ರೆ ಈ ಸೌತೆಕಾಯಿ ಸಿಪ್ಪೆ ಕೂಡ ಜಿರಳೆ ಓಡಿಸಲು ಸಹಾಯ ಮಾಡುತ್ತದೆ. ಸೌತೆಕಾಯಿ ಸಿಪ್ಪೆಗಳನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಹಾಕಿ ರಾತ್ರಿಯಿಡೀ ಬಿಡಿ. ಸೌತೆಕಾಯಿ ಮತ್ತು ಅಲ್ಯೂಮಿನಿಯಂನ ಪ್ರತಿಕ್ರಿಯೆ ಜಿರಳೆ ಸಹಿಸಲಾಗದ ವಾಸನೆಯನ್ನು ಉಂಟುಮಾಡುತ್ತದೆ. ಇದನ್ನು ನೀವು ಕಿಚನ್ ನಲ್ಲಿ ಸಿಂಪಡಿಸಿ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/kitchen/how-to-get-rid-of-cockroaches-from-the-kitchen-try-these-easy-methods-27iw1u1"/>
        </item>
        <item>
            <title><![CDATA[ಬಟ್ಟೆಗಳನ್ನು ವಾಷಿಂಗ್ ಮಷಿನ್‌ನಲ್ಲಿ ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಎಂದಿಗೂ ಮಾಡ್ಬೇಡಿ!]]></title>
            <link>https://kannada.asianetnews.com/gallery/life/washing-machine-maintenance-avoid-these-5-common-mistakes-to-save-your-machine-9w5qhb0</link>
            <guid isPermaLink="true">https://kannada.asianetnews.com/gallery/life/washing-machine-maintenance-avoid-these-5-common-mistakes-to-save-your-machine-9w5qhb0</guid>
            <pubDate>Fri, 10 Apr 2026 15:05:00 +0530</pubDate>
            <description><![CDATA[&lt;p&gt;&lt;strong&gt;Washing machine care tips Kannada: &lt;/strong&gt;ವಾಷಿಂಗ್ ಮಷಿನ್&zwnj;ಗೆ ಅತಿ ಹೆಚ್ಚು ಬಟ್ಟೆಗಳನ್ನು ಒಟ್ಟಿಗೆ ಹಾಕುವುದು ಅಥವಾ ಜೇಬುಗಳನ್ನು ಪರೀಕ್ಷಿಸದೆ ಬಟ್ಟೆ ಒಗೆಯುವುದು ನಿಮ್ಮ ಮಷಿನ್ ಅನ್ನು ಕಸದ ಬುಟ್ಟಿಗೆ ಸೇರಿಸಬಹುದು! ಮಷಿನ್ ದೀರ್ಘಕಾಲ ಹೊಸದರಂತೆ ಇರಲು ಇಲ್ಲಿವೆ ಸಿಂಪಲ್ ಟಿಪ್ಸ್.. &amp;nbsp;&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj7wahgzva4g3rm3ppk9cma5,imgname-2-1771938596382.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Washing machine care tips Kannada: &lt;/strong&gt;ವಾಷಿಂಗ್ ಮಷಿನ್&zwnj;ಗೆ ಅತಿ ಹೆಚ್ಚು ಬಟ್ಟೆಗಳನ್ನು ಒಟ್ಟಿಗೆ ಹಾಕುವುದು ಅಥವಾ ಜೇಬುಗಳನ್ನು ಪರೀಕ್ಷಿಸದೆ ಬಟ್ಟೆ ಒಗೆಯುವುದು ನಿಮ್ಮ ಮಷಿನ್ ಅನ್ನು ಕಸದ ಬುಟ್ಟಿಗೆ ಸೇರಿಸಬಹುದು! ಮಷಿನ್ ದೀರ್ಘಕಾಲ ಹೊಸದರಂತೆ ಇರಲು ಇಲ್ಲಿವೆ ಸಿಂಪಲ್ ಟಿಪ್ಸ್.. &amp;nbsp;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂದಿನ ಧಾವಂತದ ಜೀವನದಲ್ಲಿ ವಾಷಿಂಗ್ ಮಷಿನ್ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಬಟ್ಟೆಗಳನ್ನು ಮಷಿನ್ ಒಳಗೆ ಹಾಕಿ ಬಟನ್ ಒತ್ತಿದರೆ ಕೆಲಸ ಮುಗಿಯಿತು ಎಂದು ನಾವು ಭಾವಿಸುತ್ತೇವೆ. ಆದರೆ ನಾವು ಮಾಡುವ ಸಣ್ಣ ತಪ್ಪುಗಳು ಮಷಿನ್ ಆಯಸ್ಸನ್ನು ಕಡಿಮೆ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ?, ಮಷಿನ್ ಪದೇ ಪದೇ ರಿಪೇರಿಗೆ ಬರುತ್ತಿದೆ ಎಂದರೆ ಅದಕ್ಕೆ ಕಾರಣ ಕಂಪನಿಯ ಲೋಪವಲ್ಲ, ನಾವು ಬಳಸುವ ತಪ್ಪಾದ ವಿಧಾನ ಎಂದು ತಜ್ಞರು ಎಚ್ಚರಿಸುತ್ತಾರೆ.&lt;/p&gt;&lt;img&gt;&lt;p&gt;ಕಡಿಮೆ ಸಮಯದಲ್ಲಿ ಹೆಚ್ಚು ಬಟ್ಟೆ ಒಗೆಯುವ ಆತುರದಲ್ಲಿ ಮಷಿನ್ ಸಾಮರ್ಥ್ಯಕ್ಕಿಂತ ಹೆಚ್ಚು ಲೋಡ್ ಮಾಡುವುದು ನಾವು ಮಾಡುವ ದೊಡ್ಡ ತಪ್ಪು. ಸಾಮರ್ಥ್ಯ ಮೀರಿ ಬಟ್ಟೆ ಹಾಕುವುದರಿಂದ ಮೋಟಾರ್ ಮೇಲೆ ಒತ್ತಡ ಬಿದ್ದು ಅದು ಸುಟ್ಟು ಹೋಗುವ ಅಪಾಯವಿರುತ್ತದೆ. ಅಲ್ಲದೆ ಬಟ್ಟೆಗಳು ಸರಿಯಾಗಿ ಸ್ವಚ್ಛವಾಗುವುದಿಲ್ಲ.&lt;/p&gt;&lt;img&gt;&lt;p&gt;ಪ್ರತಿಯೊಂದು ಬಟ್ಟೆಗೂ ಅದರದ್ದೇ ಆದ 'ವಾಷಿಂಗ್ ಮೋಡ್' ಇರುತ್ತದೆ. ಸರಿಯಾದ ಸೆಟ್ಟಿಂಗ್ ಆರಿಸದಿದ್ದರೆ ಬಟ್ಟೆಯ ಬಣ್ಣ ಮಸುಕಾಗುವುದು ಅಥವಾ ಬಟ್ಟೆ ಹರಿದುಹೋಗುವ ಸಾಧ್ಯತೆ ಇರುತ್ತದೆ. ಮಷಿನ್ ಜೊತೆಗೆ ಸಿಗುವ 'ಯೂಸರ್ ಮ್ಯಾನುಯಲ್' ಓದುವುದು ಉತ್ತಮ.&lt;/p&gt;&lt;img&gt;&lt;p&gt;ಬಟ್ಟೆಗಳನ್ನು ಮಷಿನ್ ಒಳಗೆ ಹಾಕುವ ಮೊದಲು ಜೇಬುಗಳನ್ನು ಪರೀಕ್ಷಿಸುವುದು ಬಹಳ ಮುಖ್ಯ. ಜೇಬುಗಳಲ್ಲಿ ಮರೆತ ನಾಣ್ಯಗಳು, ಕೀಲಿ ಕೈಗಳು ಅಥವಾ ಪಿನ್&zwnj;ಗಳು ವಾಷಿಂಗ್ ಡ್ರಮ್ ಅಥವಾ ಪೈಪ್&zwnj;ಗಳಲ್ಲಿ ಸಿಕ್ಕಿಹಾಕಿಕೊಂಡು ಮಷಿನ್&zwnj;ಗೆ ಭಾರಿ ಹಾನಿ ಉಂಟುಮಾಡಬಹುದು.&lt;/p&gt;&lt;img&gt;&lt;p&gt;ಬಟ್ಟೆ ಹೆಚ್ಚು ಕೊಳೆಯಾಗಿದೆ ಎಂದು ಜಾಸ್ತಿ ಸರ್ಫ್ ಅಥವಾ ಲಿಕ್ವಿಡ್ ಬಳಸುವುದು ತಪ್ಪು. ಅವಶ್ಯಕತೆಗಿಂತ ಹೆಚ್ಚು ಡಿಟರ್ಜೆಂಟ್ ಬಳಸಿದರೆ ಅದು ನೀರಿನಲ್ಲಿ ಸರಿಯಾಗಿ ಕರಗದೆ ಪೈಪ್&zwnj;ಗಳಲ್ಲಿ ಶೇಖರಣೆಯಾಗುತ್ತದೆ. ಇದರಿಂದ ಮಷಿನ್ ಒಳಗಿನಿಂದ ದುರ್ವಾಸನೆ ಬರಲು ಶುರುವಾಗುತ್ತದೆ.&lt;/p&gt;&lt;img&gt;&lt;p&gt;ಬಟ್ಟೆ ಸ್ವಚ್ಛ ಮಾಡುವ ಮಷಿನ್ ಅನ್ನು ಕೂಡ ನಾವು ಸ್ವಚ್ಛ ಮಾಡಬೇಕು! ಬಟ್ಟೆಯಿಂದ ಬಂದ ಕೊಳೆ ಮತ್ತು ನೂಲುಗಳು ಮಷಿನ್ ಒಳಗೆ ಉಳಿದುಕೊಳ್ಳುತ್ತವೆ. ತಿಂಗಳಿಗೊಮ್ಮೆ 'ಟಬ್ ಕ್ಲೀನ್' ಆಪ್ಷನ್ ಬಳಸಿ ಮಷಿನ್ ಸ್ವಚ್ಛಗೊಳಿಸದಿದ್ದರೆ ಅದು ಬ್ಯಾಕ್ಟೀರಿಯಾಗಳ ತಾಣವಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/washing-machine-maintenance-avoid-these-5-common-mistakes-to-save-your-machine-9w5qhb0"/>
        </item>
        <item>
            <title><![CDATA[ಅಪ್ಪು ಮೆಸೇಜ್‌ ತೋರಿಸಿ ಗಿಲ್ಲಿ ಸ್ಟೈಲ್‌ನಲ್ಲಿ ಟ್ರೋಲರ್ಸ್‌ಗೆ ಹೇಗೆ ತಿರುಗೇಟು ಕೊಟ್ರು ನೋಡಿ Anchor Anushree]]></title>
            <link>https://kannada.asianetnews.com/gallery/tv-talk/anchor-anushree-against-trollers-who-says-about-puneeth-rajkumar-and-her-relationship-suc-wkcbvr7</link>
            <guid isPermaLink="true">https://kannada.asianetnews.com/gallery/tv-talk/anchor-anushree-against-trollers-who-says-about-puneeth-rajkumar-and-her-relationship-suc-wkcbvr7</guid>
            <pubDate>Thu, 09 Apr 2026 19:46:57 +0530</pubDate>
            <description><![CDATA[ಖ್ಯಾತ ನಿರೂಪಕಿ ಅನುಶ್ರೀ, ತಮ್ಮ ಜರ್ನಿ ಹಾಗೂ ಪುನೀತ್ ರಾಜ್&zwnj;ಕುಮಾರ್ ಅವರ ಹೆಸರಿನಲ್ಲಿ ಟ್ರೋಲ್ ಮಾಡುವವರ ಬಗ್ಗೆ ಮಾತನಾಡಿದ್ದಾರೆ. ಅಪ್ಪು ತಮಗೆ ಕಳುಹಿಸಿದ್ದ ವೈಯಕ್ತಿಕ ಮೆಸೇಜ್ ತೋರಿಸುವ ಮೂಲಕ, ಟ್ರೋಲಿಗರಿಗೆ 'ಗಿಲ್ಲಿ' ಸ್ಟೈಲ್&zwnj;ನಲ್ಲಿ ಖಡಕ್ ಉತ್ತರ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kns9kayw34jqnqtty0a1gb5k,imgname-anchor-anushree-1775744166876.jpg" type="image/jpeg" height="390" width="690"/>
            <content:encoded><![CDATA[ಖ್ಯಾತ ನಿರೂಪಕಿ ಅನುಶ್ರೀ, ತಮ್ಮ ಜರ್ನಿ ಹಾಗೂ ಪುನೀತ್ ರಾಜ್&zwnj;ಕುಮಾರ್ ಅವರ ಹೆಸರಿನಲ್ಲಿ ಟ್ರೋಲ್ ಮಾಡುವವರ ಬಗ್ಗೆ ಮಾತನಾಡಿದ್ದಾರೆ. ಅಪ್ಪು ತಮಗೆ ಕಳುಹಿಸಿದ್ದ ವೈಯಕ್ತಿಕ ಮೆಸೇಜ್ ತೋರಿಸುವ ಮೂಲಕ, ಟ್ರೋಲಿಗರಿಗೆ 'ಗಿಲ್ಲಿ' ಸ್ಟೈಲ್&zwnj;ನಲ್ಲಿ ಖಡಕ್ ಉತ್ತರ ನೀಡಿದ್ದಾರೆ.&lt;img&gt;&lt;p&gt;ಅತ್ಯಂತ ಕಷ್ಟದಿಂದ ಮೇಲಕ್ಕೆ ಬಂದು, ಇಂದು ನಿರೂಪಣಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು ಆ್ಯಂಕರ್ ಅನುಶ್ರೀ (Anchor Anushree). ಇವರು ನಿರೂಪಣೆಗೆ ನಿಂತರು ಎಂದರೆ ಅಲ್ಲಿ ಹಾಸ್ಯಗಳ ಸುರಿಮಳೆ ಇರುತ್ತದೆ, ಎಷ್ಟು ಮಾತನಾಡಿದರೂ ಮತ್ತಷ್ಟು ಮಾತು ಕೇಳಬೇಕು ಎನ್ನುವ ವಾತಾವರಣವೂ ನಿರ್ಮಾಣವಾಗಿರುತ್ತದೆ. ಇದೇ ಕಾರಣಕ್ಕೆ ಅನುಶ್ರೀ ಅವರಿಗೆ ಅಷ್ಟೊಂದು ಡಿಮಾಂಡ್&zwnj;.&lt;/p&gt;&lt;img&gt;&lt;p&gt;ಸದ್ಯ ಅನುಶ್ರೀ ಅವರು ರೋಷನ್&zwnj; ಜೊತೆ ದಾಂಪತ್ಯ ಜೀವನವನ್ನು ಎಂಜಾಯ್&zwnj; ಮಾಡುತ್ತಿದ್ದಾರೆ. ಆದರೆ ಇದೇ ವೇಳೆ ತಮ್ಮ ಸಂಪೂರ್ಣ ಜರ್ನಿ ಹಾಗೂ ಫೇಮಸ್&zwnj; ಆಗುತ್ತಿದ್ದಂತೆಯೇ ಟ್ರೋಲಿಗರಿಂದ ಆಗುತ್ತಿರುವ ಮಾನಸಿಕ ಹಿಂಸೆಗಳ ಬಗ್ಗೆಯೂ ಗೋಲ್ಡನ್ ಕ್ಲಾಸ್ ವಿತ್ ಮಯೂರ&rsquo; ಯೂಟ್ಯೂಬ್ ಚಾನೆಲ್​​ನಲ್ಲಿ ಮಾತನಾಡಿದ್ದಾರೆ ಅನುಶ್ರೀ.&lt;/p&gt;&lt;img&gt;&lt;p&gt;ಅನುಶ್ರೀ ಅವರನ್ನು ನೋಡಿರುವವರಿಗೆ ಇದಾಗಲೇ ಅವರು ಪುನೀತ್&zwnj; ರಾಜ್&zwnj;ಕುಮಾರ್&zwnj; ಅವರ ಅದೆಷ್ಟು ದೊಡ್ಡ ಅಭಿಮಾನಿ ಎನ್ನುವುದು ಗೊತ್ತಿದೆ. ಇದಾಗಲೇ ಹಲವಾರು ಬಾರಿ ಅವರು ತಮ್ಮ ಅಭಿಮಾನದ ಬಗ್ಗೆ ಮಾತನಾಡಿದ್ದಾರೆ. ಪುನೀತ್ ಫೋಟೋ ಇಟ್ಟು ಪೂಜಿಸುತ್ತಾರೆ. ಅಪ್ಪು ನಿಧನದ ಬಳಿಕ ಅವರಿಗಾಗಿ ಕಣ್ಣೀರು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಪುನೀತ್&zwnj; ರಾಜ್&zwnj; ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಅವರ ಹೆಸರು ಹೇಳಿಕೊಂಡು ದುಡ್ಡು ಮಾಡುತ್ತಾರೆ. ಅವರದ್ದು ಮೊಸಳೆ ಕಣ್ಣೀರು ಹೀಗೆ ಏನೇನೋ ಬಾಯಿಗೆ ಬಂದಂಥ ಕಮೆಂಟ್ಸ್&zwnj; ಮಾಡುತ್ತಲೇ ಇದ್ದಾರೆ. ಅದಕ್ಕೆ ಈಗ ಅನುಶ್ರೀ ಅವರು ಅಪ್ಪು ಅವರ ಮೆಸೇಜ್&zwnj; ತೋರಿಸುತ್ತಾ, ಗಿಲ್ಲಿ ಸ್ಟೈಲ್&zwnj;ನಲ್ಲಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.&lt;/p&gt;&lt;img&gt;&lt;p&gt;ಪುನೀತ್&zwnj; ರಾಜ್&zwnj; ಅನುಶ್ರೀ ಅವರಿಗೆ ಕಳಹಿಸಿದ್ದ ಮೆಸೇಜ್&zwnj;ನಲ್ಲಿ, &lsquo;ನೀವು ತುಂಬಾನೇ ಸ್ವೀಟ್. ನಿಮ್ಮಂಥ ಅಭಿಮಾನಿ ಹೊಂದಲು ನಿಜಕ್ಕೂ ಖುಷಿ ಆಗುತ್ತದೆ. ದೇವರು ಒಳ್ಳೆಯದು ಮಾಡಲಿ&rsquo; ಎಂದಿದ್ದಾರೆ.&lt;/p&gt;&lt;img&gt;&lt;p&gt;ಅದನ್ನು ತೋರಿಸಿದ ಅನುಶ್ರೀ, &lsquo;ನಾನು ಯಾವ ರೀತಿಯ ಫ್ಯಾನ್ ಎನ್ನೋದು ಅವರಿಗೆ ಗೊತ್ತಿತ್ತು. ಹೀಗಿರುವಾಗ ಇಂಥವರಿಗೆ ಯಾಕೆ ಉತ್ತರಿಸಬೇಕು ಎಂದು ಪ್ರಶ್ನಿಸಿದ್ದಾರೆ. ಬಳಿಕ ಗಿಲ್ಲಿ ಸ್ಟೈಲ್ ಅಲ್ಲಿ ಹೇಳ್ತೀನಿ, ಜಸ್ಟ್ ಲೀವ್ ಇಟ್&rsquo; ಎಂದು action ಮಾಡಿ ತೋರಿಸಿದ್ದಾರೆ ನಟಿ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/anchor-anushree-against-trollers-who-says-about-puneeth-rajkumar-and-her-relationship-suc-wkcbvr7"/>
        </item>
        <item>
            <title><![CDATA[ಹಳೆ ಕಾಲ ನೆನಪಿಸುವ ಖುರ್ಚಿ, ರುಚಿಯಾದ ಆಹಾರ – ಬೆಂಗಳೂರಿನಲ್ಲಿದೆ ಮೈಸೂರು ಡೈನಿಂಗ್ ಹಾಲ್]]></title>
            <link>https://kannada.asianetnews.com/travel/new-mysore-dining-hall-in-bengaluru-is-all-about-hearty-karnataka-fare/articleshow-aghfxub</link>
            <guid isPermaLink="true">https://kannada.asianetnews.com/travel/new-mysore-dining-hall-in-bengaluru-is-all-about-hearty-karnataka-fare/articleshow-aghfxub</guid>
            <pubDate>Fri, 10 Apr 2026 13:39:55 +0530</pubDate>
            <description><![CDATA[&lt;p&gt;ಪ್ರತಿ ಬಾರಿ ಒಂದೇ ಹೊಟೇಲ್, ಒಂದೇ ರುಚಿ ಬೋರಾಗಿದೆ ಎನ್ನುವವರು ಹೊಸ ರೆಸ್ಟೋರೆಂಟ್ ಹುಡುಕಾಡ್ತಾರೆ. ನೀವೂ ಇವ್ರಲ್ಲಿ ಒಬ್ಬರಾಗಿದ್ರೆ ತುಂಬಾ ಶಾಂತವಾದ, ಹಳೆ ದಿನ ನೆನಪಿಸುವ ಹೊಟೇಲ್ ಟ್ರೈ ಮಾಡ್ಬಹುದು. ಅದು ಎಲ್ಲಿದೆ? ಮೆನುವಿನಲ್ಲಿ ಏನಿದೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knv6x11fbdn2q8rnnzc3wjt9,imgname-mysore-dining-hall-1775808447535.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಸಹಕಾರ ನಗರದಲ್ಲಿ ಇರುವ ಮೈಸೂರು ಡೈನಿಂಗ್ ಹಾಲ್ ಗೆ ಹೋದಾಗ ಒಂದು ಕ್ಷಣ ನಾವು ಬಾಲ್ಯಕ್ಕೆ ಮರಳಿದ ಅನುಭವವಾಗುತ್ತದೆ. ಬಿಳಿ ಗೋಡೆ, ಮರದ ಕಿಟಕಿಗಳು ನಮ್ಮನ್ನು ಹಳೆ ಕಾಲಕ್ಕೆ ಕರೆದೊಯ್ಯುತ್ತೆ. ಮಧ್ಯಾಹ್ನದ ವೇಳೆಗೆ ಈ ಹೊಟೇಲ್ ನಲ್ಲಿ ಜನ ತುಂಬಿರ್ತಾರೆ. ಇದು ಬರೀ ಊಟ ಬಡಿಸುವ, ಹೊಟ್ಟೆ ತುಂಬಿಸುವ ಜಾಗವಲ್ಲ. ಒಂದು ಅದ್ಭುತ ಅನುಭವ. ಇದು ಕರ್ನಾಟಕದ ಸಾಂಪ್ರದಾಯಿಕ ಮಿಲಿಟರಿ ಹೋಟೆಲ್ ಶೈಲಿಯ ಊಟಕ್ಕೆ ಪ್ರಸಿದ್ಧವಾಗಿದೆ.&lt;/p&gt;&lt;h2&gt;ಬೆಂಗಳೂರಿನಲ್ಲೊಂದು ಶಾಂತ ಹೊಟೇಲ್&lt;/h2&gt;&lt;p&gt;ಇದು ಬಾಯಗ್ ವೆಂಚರ್ಸ್ ಹಾಸ್ಪಿಟಾಲಿಟಿ ಗ್ರೂಪ್ನ ಹೊಸ ರೆಸ್ಟೋರೆಂಟ್. ಆದ್ರೆ ಯಾಕಾಯ, ಬಾಬ್ಸ್ ಬಾರ್ಗಳಂತಿಲ್ಲ. ಇಲ್ಲಿ ಸಿಂಪ್ಲಿಸಿಟಿಯೇ ಹೆಚ್ಚು ಸ್ಪೇಷಲ್. ಆರಂಭದಲ್ಲಿ ಬ್ಲ್ಯಾಕ್ಬೋರ್ಡ್ ಮೇಲೆ ಬರೆದಿರುವ ಮೆನು ಗಮನ ಸೆಳೆಯುತ್ತದೆ. ಇಲ್ಲಿ ಯಾವುದೇ ಶೋ ಆಫ್ ಇಲ್ದೆ ಸಿಂಪಲ್ ಆಗಿ ಬರೆಯಲಾಗಿದೆ. ಸಿಂಪಲ್ಲಿಸಿಟಿಗೆ ಆದ್ಯತೆ ನೀಡಿರುವ ರೆಸ್ಟೋರೆಂಟ್ ನಲ್ಲಿ ರುಚಿಯಲ್ಲಿ ರಾಜಿ ಇಲ್ಲ. ಆಹಾರದ ರುಚಿ ಸೂಪರ್.&lt;/p&gt;&lt;p&gt;ಇಲ್ಲಿ ಸಿಗೋ ಊಟ ನಿಜವಾದ ಕರ್ನಾಟಕದ ಸವಿಯ ಅನುಭವ ಕೊಡುತ್ತದೆ. ಇದು ಮಿಲಿಟ್ರಿ ಹೊಟೇಲ್ ಸ್ಟೈಲ್ ನಲ್ಲಿದೆ. ಬೆಳಿಗ್ಗೆ ಬ್ರೇಕ್ಫಾಸ್ಟ್ನಿಂದ, ಮಧ್ಯಾಹ್ನ ಊಟ, ಸಂಜೆ ಸ್ನ್ಯಾಕ್ಸ್, ರಾತ್ರಿ ಸ್ಪೆಷಲ್ ಡಿನ್ನರ್ ಎಲ್ಲವೂ ಇಲ್ಲಿ ಲಭ್ಯ. ಇಲ್ಲಿನ ಇನ್ನೊಂದು ಖುಷಿ ವಿಷ್ಯ ಅಂದ್ರೆ ಪಾರ್ಕಿಂಗ್ ಸಮಸ್ಯೆ ಇಲ್ದಿರೋದು. ರೆಸ್ಟೋರೆಂಟ್ ಹಿಂಭಾಗದಲ್ಲಿ ದೊಡ್ಡ ಪಾರ್ಕಿಂಗ್ ಜಾಗವಿದೆ. ಕಿಟಕಿ ಬಳಿ ಕುಳಿದ್ರೆ ಮುಂದಿರುವ ಕನ್ನಡಿ ನಮ್ಮನ್ನು ಆಕರ್ಷಿಸುತ್ತದೆ.&lt;/p&gt;&lt;p&gt;Forbidden Places: ಭಾರತದಲ್ಲಿವೆ 5 ನಿಗೂಢ ಸ್ಥಳಗಳು.. ಕೋಟಿ ಕೊಟ್ಟರೂ ಇಲ್ಲಿಗೆ ಹೋಗೋಕೆ ಆಗಲ್ಲ.. ಯಾಕೆ?&lt;/p&gt;&lt;h3&gt;ಮೆನುವಿನಲ್ಲಿ ಏನಿದೆ?&lt;/h3&gt;&lt;p&gt;ನೀವು ಕ್ಯೂ ಆರ್ ಕೋಡ್ ಸಹಾಯದಿಂದ ಮೆನು ಸರ್ಚ್ ಮಾಡ್ಬೇಕು. ಅಲ್ಲಿನ ಸಿಬ್ಬಂದಿ ಮೆನು ಪತ್ತೆಗೆ ಸಹಾಯ ಮಾಡ್ತಾರೆ. ಒಂದು ಪ್ಲೇಟ್ ನಲ್ಲಿ ಹತ್ತಾರು ಐಟಂ ನೀವು ತಿನ್ಬಹುದು. ರಾಗಿ ಮುದ್ದೆ,ಅನ್ನ, ಬೆಬಿ ಕಾರ್ನ್ ಪೆಪ್ಪರ್ ಫ್ರೈ, ಮಟನ್ ಕರೀ, ಪಲಾವ್, ದಹಿ, ಪಾಪಡ್, ಗುಲಾಬ್ ಜಾಮೂನ್ ಸೇರಿದಂತೆ ಎಲ್ಲವೂ ಒಂದೇ ಪ್ಲೇಟ್ ನಲ್ಲಿ ಸಿಗುತ್ತದೆ. ಊಟ ಮುಗಿದ್ಮೇಲೆ ನೀವು ಸಿಹಿ ತಿಂದು ಹೊರಗೆ ಬರ್ಬಹುದು. ಫೇಣಿ ಇಲ್ಲಿನ ವಿಶೇಷ. ಈ ಫೇಣಿಯನ್ನು ಒಮ್ಮೆ ತಿಂದ್ರೆ ಪದೇ ಪದೇ ತಿನ್ಬೇಕು ಅನ್ನಿಸುತ್ತೆ.&lt;/p&gt;&lt;p&gt;ಡೈನಿಂಗ್ ಹಾಲ್ ಕಾಂಬೊಗಳಲ್ಲಿ ತಟ್ಟೆ ಇಡ್ಲಿ, ದೋಸೆ, ಶಾವಿಗೆ, ನೂಲ್ ಪರೋಟಾ, ನಾಟಿ ಕೋಳಿ ಸಾರು, ಮಟನ್ ಕೈಮಾ ಗೊಜ್ಜು, ಅವರೆ ಕಾಳು ಗೊಜ್ಜು ಮತ್ತು ಚಿಕನ್ ಕೈಮಾ ಉಂಡೆ ಕರಿ ಸೇರಿದಂತೆ ಅನೇಕ ಖಾದ್ಯ ಇಲ್ಲಿ ಲಭ್ಯವಿದೆ. ಒಂದು ತಾಲಿ ಬೆಲೆ ಇಬ್ಬರಿಗೆ 400 ರೂಪಾಯಿ.&lt;/p&gt;&lt;p&gt;ನೀವು ಈ ಐಸ್&zwnj;ಕ್ರೀಂ ತಿಂತೀರಾ?, ಹಾಗಾದ್ರೆ ಪಕ್ಕಾ ಪ್ಲಾನ್ ಮಾಡೋದು ಇವ್ರ ಕ್ಯಾರೆಕ್ಟರ್ ಅಂತೆ&lt;/p&gt;&lt;p&gt;ಫಾಸ್ಟ್ ಜೀವನದಲ್ಲಿ ಸಮಯ ಕಳೆದಿದ್ದೇ ತಿಳಿಯೋದಿಲ್ಲ. ಹಾಗಿರುವಾಗ ಇಂಥ ಜಾಗಗಳು ಬರೀ ಹೊಟ್ಟೆ ತುಂಬಿಸೋದಲ್ಲದೆ ಓಡ್ತಿರುವ ನಮ್ಮ ದೇಹ, ಮನಸ್ಸನ್ನು ಶಾಂತಗೊಳಿಸುತ್ತದೆ. ನಮ್ಮ ಮನಸ್ಸಿಗೆ ಬ್ರೇಕ್ ನೀಡುತ್ತದೆ. ಹಳೆ ಕಾಲದ ಶೈಲಿ ನಿಮಗೆ ಇಷ್ಟವಾಗುತ್ತೆ, ಹೊಸ ರುಚಿಗಳನ್ನು ನೀವು ಟೇಸ್ಟ್ ಮಾಡ ಬಯಸ್ತೀರಿ ಅಂದ್ರೆ ಇಲ್ಲಿಗೆ ಭೇಟಿ ನೀಡ್ಬಹುದು.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/travel/new-mysore-dining-hall-in-bengaluru-is-all-about-hearty-karnataka-fare/articleshow-aghfxub"/>
        </item>
        <item>
            <title><![CDATA[90% ಜನರು ಮಿಕ್ಸಿ ಬಳಸುವಾಗ ಈ ತಪ್ಪು ಮಾಡ್ತಾರೆ! ಸರಿಯಾದ ಮಾರ್ಗ ಇದೇ]]></title>
            <link>https://kannada.asianetnews.com/webstories/kitchen/stop-making-these-common-mixer-mistakes-aivb5sw</link>
            <guid isPermaLink="true">https://kannada.asianetnews.com/webstories/kitchen/stop-making-these-common-mixer-mistakes-aivb5sw</guid>
            <pubDate>Fri, 10 Apr 2026 11:30:12 +0530</pubDate>
            <description><![CDATA[&lt;p&gt;Mixer grinder maintenance tips: ಮಿಕ್ಸಿ ಮೋಟಾರ್ ಸುಟ್ಟು ಹೋಗಬಾರದು ಮತ್ತು ಅದರ ಬ್ಲೇಡ್&zwnj;ಗಳು ದೀರ್ಘಕಾಲ ಬಾಳಿಕೆ ಬರಬೇಕೆಂದರೆ ಬಳಸುವ ಸರಿಯಾದ ಕ್ರಮ ಯಾವುದು? ನಿತ್ಯ ನಾವು ಮಾಡುವ ಸಾಮಾನ್ಯ ತಪ್ಪುಗಳೇನು? ಎಂಬ ಪೂರ್ಣ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kntz5w3ady6b1ts20h01srzt,imgname-untitled-design--84--1775800348778.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/kitchen/stop-making-these-common-mixer-mistakes-aivb5sw"/>
        </item>
        <item>
            <title><![CDATA[ಕೈಗಳಿಗೆ ಗ್ಯಾಂಡ್ ಲುಕ್ ಬೇಕಾ? 2 ಗ್ರಾಂ.ನ ಗೋಲ್ಡ್-ಡೈಮಂಡ್ ಮಿಕ್ಸ್ ಉಂಗುರ ಧರಿಸಿ!]]></title>
            <link>https://kannada.asianetnews.com/webstories/fashion/lightweight-solitaire-diamond-gold-mix-ring-designs-2-to-3-grams-sat-fnrai9m</link>
            <guid isPermaLink="true">https://kannada.asianetnews.com/webstories/fashion/lightweight-solitaire-diamond-gold-mix-ring-designs-2-to-3-grams-sat-fnrai9m</guid>
            <pubDate>Thu, 09 Apr 2026 22:31:32 +0530</pubDate>
            <description><![CDATA[&lt;p&gt;ಚಿನ್ನದ ಉಂಗುರವನ್ನು ಎಲ್ಲರೂ ಧರಿಸುತ್ತಾರೆ. ಆದರೆ ಅದಕ್ಕೆ ಸ್ವಲ್ಪ ರಾಯಲ್ ಟಚ್ ನೀಡಲು ಸಾಲಿಟೇರ್ ಡೈಮಂಡ್ ಸೇರಿಸಿದರೆ ಹೇಗಿರುತ್ತೆ? ಕೇವಲ 2-3 ಗ್ರಾಂ ಚಿನ್ನದಲ್ಲಿ ಮಾಡಿಸಬಹುದಾದ ಲೇಟೆಸ್ಟ್ ಗೋಲ್ಡ್-ಡೈಮಂಡ್ ರಿಂಗ್ ಡಿಸೈನ್&zwnj;ಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrvwsw226j0gg7hexn33s9f,imgname-solitaire-diamond-gold-ring-7-1775729796994.png" type="image/jpeg" height="390" width="690"/>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/fashion/lightweight-solitaire-diamond-gold-mix-ring-designs-2-to-3-grams-sat-fnrai9m"/>
        </item>
        <item>
            <title><![CDATA[ಅಡುಗೆ ಮಾಡುವಾಗ ಪರದಾಡಬೇಡಿ, ಮನೆ ಪಾಟ್‌ನಲ್ಲೇ ಸುಲಭವಾಗಿ ಬೆಳೆಯಿರಿ ತಾಜಾ ಶುಂಠಿ!]]></title>
            <link>https://kannada.asianetnews.com/webstories/kitchen/how-to-grow-ginger-at-home-in-pots-simple-gardening-tips-sat-slgtw6g</link>
            <guid isPermaLink="true">https://kannada.asianetnews.com/webstories/kitchen/how-to-grow-ginger-at-home-in-pots-simple-gardening-tips-sat-slgtw6g</guid>
            <pubDate>Thu, 09 Apr 2026 22:22:03 +0530</pubDate>
            <description><![CDATA[ಮಾರುಕಟ್ಟೆಯ ಶುಂಠಿಗಿಂತ ಮನೆಯಲ್ಲೇ ತಾಜಾ ಶುಂಠಿ ಬೆಳೆಯುವುದು ಸುಲಭ. ಮೊಳಕೆ ಇರುವ ಶುಂಠಿಯನ್ನು ಆರಿಸಿ, ಸಾವಯವ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಪಾಟ್&zwnj;ನಲ್ಲಿ ನಾಟಿ ಮಾಡಿ, ಸರಿಯಾದ ಆರೈಕೆಯೊಂದಿಗೆ 8-10 ತಿಂಗಳಲ್ಲಿ ತಾಜಾ ಶುಂಠಿಯನ್ನು ಕೊಯ್ಲು ಮಾಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kk0yadwr9mfdzx3p7tskw5rs,imgname-iran-israel-war--6--1772779550615.jpg" type="image/jpeg" height="390" width="690"/>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/kitchen/how-to-grow-ginger-at-home-in-pots-simple-gardening-tips-sat-slgtw6g"/>
        </item>
        <item>
            <title><![CDATA[ನೇಹಾ ಕೊ*ಲೆ ಹಿಂದೆಯೂ ಇದೇ ಸಮೀರ್? ಅಪ್ಪನ ಶಾಕಿಂಗ್​ ಹೇಳಿಕೆ- ಜಿಮ್​ಗಳೇ Love Jihad ಸೆಂಟರ್​?]]></title>
            <link>https://kannada.asianetnews.com/karnataka-districts/same-sameer-mulla-behind-nehas-death-says-father-are-gyms-love-jihad-centers-suc/articleshow-l129xmd</link>
            <guid isPermaLink="true">https://kannada.asianetnews.com/karnataka-districts/same-sameer-mulla-behind-nehas-death-says-father-are-gyms-love-jihad-centers-suc/articleshow-l129xmd</guid>
            <pubDate>Thu, 09 Apr 2026 20:38:48 +0530</pubDate>
            <description><![CDATA[&lt;p&gt;ಹುಬ್ಬಳ್ಳಿ ನೇಹಾ ಹಿರೇಮಠ ಹ*ತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಜಿಮ್ ಟ್ರೈನರ್ ಸಮೀರ್ ಮುಲ್ಲಾನಿಗೂ ಈ ಹತ್ಯೆಗೂ ಸಂಬಂಧವಿದೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಆರೋಪಿಸಿದ್ದಾರೆ. ಹಂತಕ ಫಯಾಜ್ ಕೂಡ ಅದೇ ಜಿಮ್&zwnj;ನಲ್ಲಿದ್ದ ಮತ್ತು ತಮ್ಮನ್ನು ಬಲೆಗೆ ಬೀಳಿಸುವ ಸಂಚು ನಡೆದಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knscjq0m1pzp2z0fdc1atz1a,imgname-neha-hiremath-case-1775747292180.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಏಪ್ರಿಲ್ 2024ರಲ್ಲಿ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಆರೋಪಿ ಫಯಾಜ್&zwnj;ನಿಂದ ಹತ್ಯೆಗೀಡಾದ ನೇಹಾಳ ಪ್ರಕರಣವು ಲವ್ ಜಿಹಾದ್ ಶಂಕೆ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ನೇಹಾಳ ತಂದೆ ನಿರಂಜನ್ ಹಿರೇಮಠ ಲವ್ ಜಿಹಾದ್ ಆಯಾಮದಡಿ ತನಿಖೆಗೆ ಒತ್ತಾಯಿಸಿದ್ದರು. ಈ ಪ್ರಕರಣವು ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಟ್ಟಿತ್ತು, ಬಿಜೆಪಿ ನಾಯಕರು ತನಿಖೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ನೇಹಾಳ ಕುಟುಂಬದ ಅಳಲು ಮತ್ತು ಲವ್ ಜಿಹಾದ್ ಆರೋಪಗಳ ಕುರಿತಾಗಿ ಏಷ್ಯಾನೆಟ್​ ಸುವರ್ಣ ನ್ಯೂಸ್​ ನಿರಂತರ ಅಪ್​ಡೇಟ್​ ಒದಗಿಸಿದ್ದು ನೆನಪಿರಬಹುದು. ಇದೀಗ ಈ ಪ್ರಕರಣ ಮತ್ತಷ್ಟು ಮುನ್ನೆಲೆಗೆ ಬರಲು ಕಾರಣ, ಹುಬ್ಬಳ್ಳಿಯಲ್ಲಿ ಈಗ ಭಾರಿ ಸಂಚಲನ ಮೂಡಿಸಿರುವ ಜಿಮ್​ ಟ್ರೈನರ್​ಗಳಾದ ಸಮೀರ್​ ಮುಲ್ಲಾ ಮತ್ತು ಮುಫೀಸ್ ಮಿಯಾನ್ನಾವರ್​.&lt;/p&gt;&lt;h2&gt;&lt;strong&gt;ಜಿಮ್​ ಟ್ರೈನರ್ ​ಸಮೀರ್ ಮುಲ್ಲಾ&lt;/strong&gt;&lt;/h2&gt;&lt;p&gt;ಹುಬ್ಬಳ್ಳಿ ಜಿಮ್ ಟ್ರೈನರ್​ ಸಮೀರ್ ಮುಲ್ಲಾ, ಹಿಂದೂ ಯುವತಿಯರನ್ನು ಪ್ರೀತಿಯ ನಾಟಕವಾಡಿ ವಂಚಿಸುತ್ತಿದ್ದ ಪ್ರಕರಣ ಬಯಲಾಗಿದೆ. ಆತನ ಮೊಬೈಲ್​ನಲ್ಲಿ ಹಿಂದೂ ಯುವತಿಯರ ಫೋಟೋಗಳು ಪತ್ತೆಯಾಗಿದ್ದು, ಇದೇ ವೇಳೆ ಆತನ ಸಹಚರನ ಮೇಲೂ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಈ ಕೇಸ್​ ಇನ್ನೂ ನಡೆಯುತ್ತಿರುವಾಗಲೇ ಇನ್ನೊಂದು ಲವ್​ ಜಿಹಾದ್​ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮುಫೀಸ್ ಮಿಯಾನ್ನಾವರ್ ಎಂಬಾತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆತನ ಮೇಲೆ ಯುವತಿ ದೂರು ದಾಖಲು ಮಾಡಿದ್ದಾಳೆ. ಈತ ಕೂಡ ಇನ್ನೊಂದು ಜಿಮ್​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಯುವತಿ ಹೇಳಿರುವ ಪ್ರಕಾರ, ಈತ ತನ್ನನ್ನು ಪ್ರೀತಿಸುವುದಾಗಿ ಹೇಳಿದ್ದ. ಆಮೇಲೆ ಅದು ನಾಟಕ ಎನ್ನುವುದು ಗೊತ್ತಾಯಿತು. ಈತ ಪ್ರೀತಿಸಿರುವುದಾಗಿ ನಂಬಿಕ ರೇ*ಪ್​ ಮಾಡಿದ್ದಾನೆ ಎಂದಿದ್ದಾಳೆ.&lt;/p&gt;&lt;h3&gt;&lt;strong&gt;ಯುವತಿಯರಿಂದಲೇ ಪರಿಚಯ&lt;/strong&gt;&lt;/h3&gt;&lt;p&gt;ಇಂಥ ಹಲವು ಲವ್​ ಜಿಹಾದ್ ಎನ್ನುವ ಪ್ರಕರಣಗಳಲ್ಲಿ ಒಂದೇ ಒಂದು ಸಾಮ್ಯತೆ ಇರುವುದು ಯಾವುದೋ ಒಬ್ಬಳು ಈ ಯುವಕರನ್ನು ಪರಿಚಯ ಮಾಡಿಸುವುದು! ನನ್ನ ಸ್ನೇಹಿತೆಯೊಬ್ಬಳು ಈತನನ್ನು ಪರಿಚಯ ಮಾಡಿಸಿದ್ಲು. ಅಲ್ಲಿಂದ ಲವ್​ ಶುರುವಾಯ್ತು. ಆಮೇಲೆ ಪ್ರೀತಿ ಮಾಡ್ತೇನೆ ಎಂದಿದ್ದ. ನಾನೂ ನಂಬಿದ್ದೆ ಎನ್ನುವುದು ಪ್ರತಿಯೊಂದು ಯುವತಿಯರ ಮಾತು. ಥಿಯೇಟ್​ ಈ ಎಲ್ಲಾ ಪ್ರಕರಣಗಳಲ್ಲಿ ಆಗಿರುವುದು ದಿ ಕೇರಳ ಸ್ಟೋರಿ ಮಾದರಿಯದ್ದೇ ಘಟನೆ. ಆದರೆ ಇದೀಗ ಇನ್ನೊಂದು ಶಾಕಿಂಗ್ ವಿಷಯ ಬಹಿರಂಗಗೊಂಡಿದೆ. ಅದೇನೆಂದರೆ, ತಮ್ಮ ಮಗಳನ್ನು ಲವ್​ ಜಿಹಾದ್​ ಎಂದು ಮೊದಲಿನಿಂದಲೂ ಹೇಳಿಕೊಂಡೇ ಬಂದಿರುವ ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ಇದೀಗ ತಮ್ಮ ಮಗಳ ಸಾವಿಗೂ ಸಮೀರ್ ಮುಲ್ಲಾಗೂ ಸಂಬಂಧಿ ಇದೆ ಎನ್ನುತ್ತಿದ್ದಾರೆ.&lt;/p&gt;&lt;h3&gt;&lt;strong&gt;ನೇಹಾ ಸಾಯಿಸಿದವನೂ ಇದೇ ಜಿಮ್​ ಟ್ರೈನರ್​&lt;/strong&gt;&lt;/h3&gt;&lt;p&gt;ತಮ್ಮ ಮಗಳನ್ನು ಸಾಯಿಸಿದವ ಒಂದು ಅದೇ ಜಿಮ್ ಟ್ರೈನರ್&zwnj; ಆಗಿದ್ದ. ಪ್ರಕರಣದಲ್ಲಿ ಈತನ ಕೈವಾಡ ಇದೆ. ನನ್ನ ಮಗಳು ನೇಹಾ ಹಿರೇಮಠ ಅನ್ನು ಸಾಯಿಸಿದ ಫಯಾಜ್ ಖೋಂಡುನಾಕ್ ಅಲ್ಲಿಯೇ ತರಬೇತಿದಾರನಾಗಿದ್ದ. ಘಟನೆ ಬಳಿಕ ನಮ್ಮನ್ನು ಟ್ರ್ಯಾಪ್ ಮಾಡುವ ಪ್ಲಾನ್ ನಡೆದಿತ್ತು ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ನಾನು ಕಾರ್ಪೋರೇಟರ್&zwnj; ಇದ್ದ ಹಿನ್ನೆಲೆ ನನ್ನ ವಾರ್ಡ್&zwnj;ಗೆ ಸಮೀರ್ ಮುಲ್ಲಾ ಅವರ ತಂದೆ ಪದೇ ಪದೇ ಬಂದು ಬಾಡಿ ಬಿಲ್ಡಿಂಗ್ ಕಾಂಪಿಟೇಷನ್&zwnj; ಮಾಡಲು ಒತ್ತಡ ಹಾಕುತ್ತಿದ್ದರು. ಅವರಿಗೆ ಏನೆಲ್ಲಾ ಸಾಕ್ಷಿ ಬೇಕೋ ಅದನ್ನೆಲ್ಲಾ ರೆಡಿ ಮಾಡಿಕೊಳ್ಳುತ್ತಿದ್ದರು. ಹತ್ತೂ ಅಧಿಕ ಬಾರಿ ನನಗೆ ಕೇಳಿ ಒತ್ತಾಯ ಮಾಡಿದ್ದರು. ನಮ್ಮ ವಾರ್ಡ್&zwnj;ನಲ್ಲಿ ದೇವಸ್ಥಾನ, ಮಠಗಳೇ ಇವೆ ಇಂತಹ ಸ್ಪರ್ಧೆಗಳು ಬೇಡ ಎಂದು ಹೇಳಿದ್ದೆ. ನಮ್ಮನ್ನು ಟ್ರ್ಯಾಪ್ ಮಾಡುವ ಪ್ಲಾನ್ ಇದ್ದಿರಬಹುದು ಎಂದು ಸಂಶಯ ಇತ್ತು. ಹೀಗಾಗಿ ಹೋಗಿರಲಿಲ್ಲ ಎಂದಿದ್ದಾರೆ ನಿರಂಜನ್​.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/same-sameer-mulla-behind-nehas-death-says-father-are-gyms-love-jihad-centers-suc/articleshow-l129xmd"/>
        </item>
        <item>
            <title><![CDATA[ಈಗಲ್‌ಟನ್ ರೆಸಾರ್ಟ್‌ನಲ್ಲಿ ವಿಂಗ್ ಕಮಾಂಡರ್ ದಂಪತಿ ಹತ್ಯಾಕಾಂಡ: 4 ವರ್ಷದ ಬಳಿಕ ಸಿಕ್ಕ ಸುಳಿವು, ಗುಜರಾತ್‌ನಲ್ಲಿ ಆರೋಪಿ ಅರೆಸ್ಟ್!]]></title>
            <link>https://kannada.asianetnews.com/karnataka-districts/bengaluru-eagleton-the-golf-resort-double-murder-case-bihar-man-arrested-in-ahmedabad-after-4-year-gdp/articleshow-1b699xy</link>
            <guid isPermaLink="true">https://kannada.asianetnews.com/karnataka-districts/bengaluru-eagleton-the-golf-resort-double-murder-case-bihar-man-arrested-in-ahmedabad-after-4-year-gdp/articleshow-1b699xy</guid>
            <pubDate>Thu, 09 Apr 2026 20:15:55 +0530</pubDate>
            <description><![CDATA[ರಾಮನಗರದ ಈಗಲ್&zwnj;ಟನ್ ರೆಸಾರ್ಟ್&zwnj;ನಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಎರಡನೇ ಪ್ರಮುಖ ಆರೋಪಿಯನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಹಣದ ಆಸೆಗಾಗಿ ಮನೆಗೆಲಸದವನು ತನ್ನ ಸಂಬಂಧಿಯೊಂದಿಗೆ ಸೇರಿ ಈ ಕೃತ್ಯ ಎಸಗಿದ್ದು, ಗುಜರಾತ್&zwnj;ನಲ್ಲಿ ಅಡಗಿದ್ದ ಆರೋಪಿಯನ್ನು ಇದೀಗ ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knsb6ns937vq31g5bg6emqhv,imgname-eagleton-resort-double-murder-case-1775745849129.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ: &lt;/strong&gt;ಈಗಲ್&zwnj;ಟನ್ ರೆಸಾರ್ಟ್&zwnj;ನ ವಿಲ್ಲಾದಲ್ಲಿ ನಡೆದಿದ್ದ ವೃದ್ಧ ದಂಪತಿ ರಘುರಾಜನ್ ಹಾಗೂ ಆಶಾ ಅವರ ಭೀಕರ ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಬಳಿಕ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಿಡದಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;ಬಂಧಿತ ಆರೋಪಿಯನ್ನು ಬಿಹಾರ ರಾಜ್ಯದ ಬಂಕಾ ಜಿಲ್ಲೆಯ ಜಿತ್ತಿಯಜೋರ್ ಗ್ರಾಮದ ರವಿಕುಮಾರ್ ಯಾದವ್ ಅಲಿಯಾಸ್ ರವಿ ಯಾದವ್ (29) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಜೋಗೀಂದರ್ ಯಾದವ್ ಅನ್ನು ಕೊಲೆ ನಡೆದ ಮರುದಿನವೇ, ಅಂದರೆ 2022ರ ಫೆಬ್ರವರಿ 9ರಂದು ಪೊಲೀಸರು ಬಂಧಿಸಿದ್ದರು.&lt;/p&gt;&lt;h2&gt;ಘಟನೆ ಹಿನ್ನೆಲೆ&lt;/h2&gt;&lt;p&gt;ಇಂಡಿಯನ್ ಏರ್ ಫೋರ್ಸ್&zwnj;ನ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ರಘುರಾಜನ್, ಪತ್ನಿ ಆಶಾ ಅವರೊಂದಿಗೆ ಈಗಲ್&zwnj;ಟನ್ ರೆಸಾರ್ಟ್&zwnj;ನ ಸಿ-21 ವಿಲ್ಲಾದಲ್ಲಿ ವಾಸವಿದ್ದರು. ಅವರು ಹೊಸ ಮನೆಯನ್ನು ನಿರ್ಮಿಸುತ್ತಿದ್ದರೂ, ಮಕ್ಕಳಿಬ್ಬರೂ ದೆಹಲಿಯಲ್ಲಿ ಉದ್ಯೋಗದಲ್ಲಿದ್ದ ಕಾರಣ ದಂಪತಿ ಇಬ್ಬರೇ ಅಲ್ಲಿದ್ದುಕೊಂಡಿದ್ದರು.&lt;/p&gt;&lt;p&gt;ಮನೆಯ ಕೆಲಸ ಹಾಗೂ ಸಾಕು ನಾಯಿಯ ಆರೈಕೆಗೆ ಬಿಹಾರ ಮೂಲದ ಜೋಗೀಂದರ್ ಯಾದವ್ ಅನ್ನು ಕೆಲಸಕ್ಕೆ ನೇಮಿಸಲಾಗಿತ್ತು. ಜೋಗೀಂದರ್ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಸಿಬ್ಬಂದಿಗಾಗಿ ನೀಡಲಾಗಿದ್ದ ವಸತಿಗೃಹದಲ್ಲಿ ವಾಸವಿದ್ದನು. ಅವನ ತಂದೆ-ತಾಯಿ ಕೂಡ ಇದೇ ರೆಸಾರ್ಟ್&zwnj;ನಲ್ಲಿ ಕೆಲಸ ಮಾಡುತ್ತಿದ್ದರಿಂದ, ಆ ಪರಿಚಯದ ಆಧಾರದ ಮೇಲೆ ಅವನಿಗೆ ಈ ಕೆಲಸ ದೊರಕಿತ್ತು.&lt;/p&gt;&lt;h2&gt;ಹಣದ ಲಾಲಸೆಯಿಂದ ಕೊಲೆಗೆ ಸಂಚು&lt;/h2&gt;&lt;p&gt;ಒಮ್ಮೆ ಜೋಗೀಂದರ್ ತನ್ನ ಸಾಲ ತೀರಿಸಲು ರಘುರಾಜನ್ ಅವರ ಮೊಬೈಲ್ ನೆಟ್ ಬ್ಯಾಂಕಿಂಗ್ ಮೂಲಕ ಸುಮಾರು ₹70 ಸಾವಿರ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದನು. ನಂತರ, ಅವರ ಗಮನಕ್ಕೆ ಬಾರದೇ ಇನ್ನೂ ಕೆಲವು ಹಣ ವರ್ಗಾವಣೆ ಮಾಡಲು ಯತ್ನಿಸಿದ್ದಾನೆ. ಬ್ಯಾಂಕ್ ಖಾತೆಯಿಂದ ಹಣ ಕಡಿಮೆಯಾಗಿರುವುದು ತಿಳಿದಿದ್ದರೂ, ರಘುರಾಜನ್ ಹೆಚ್ಚಿನ ಕ್ರಮ ಕೈಗೊಂಡಿರಲಿಲ್ಲ.&lt;/p&gt;&lt;p&gt;ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಜೋಗೀಂದರ್, ದಂಪತಿಯ ಬಳಿ ಹೆಚ್ಚಿನ ಹಣವಿದೆ ಎಂಬ ಭ್ರಮೆಯಿಂದ ಅದನ್ನು ಕಳವು ಮಾಡಲು ಯೋಜನೆ ರೂಪಿಸಿದ್ದಾನೆ. ಈ ಕೃತ್ಯಕ್ಕೆ ತನ್ನ ಸಂಬಂಧಿ ರವಿಕುಮಾರ್ ಯಾದವ್&zwnj;ನನ್ನು ಸಹಚರನಾಗಿ ಸೇರಿಸಿಕೊಂಡು ಕೊಲೆಗೆ ಸ್ಕೆಚ್ ಹಾಕಿದ್ದಾನೆ.&lt;/p&gt;&lt;h2&gt;ಹತ್ಯೆಯ ರೋಚಕ ವಿವರ&lt;/h2&gt;&lt;p&gt;2022ರ ಫೆಬ್ರವರಿ 7ರಂದು ರಾತ್ರಿ ಸುಮಾರು 7 ಗಂಟೆಗೆ, ಮನೆಯ ಮೇಲ್ಮಹಡಿಯ ಬಾಗಿಲನ್ನು ತೆರೆಯಿಟ್ಟು ನಾಯಿಗೆ ಆಹಾರ ನೀಡುತ್ತೇನೆ ಎಂದು ಹೇಳಿ ಹೊರಟ ಜೋಗೀಂದರ್, ಮನೆಯ ಹಿಂದಿನ ಮೆಟ್ಟಿಲುಗಳ ಮೂಲಕ ಮತ್ತೆ ಒಳನುಗ್ಗಿದ್ದಾನೆ. ಬಳಿಕ ತನ್ನ ಸಂಬಂಧಿ ರವಿಕುಮಾರ್ ಯಾದವ್&zwnj;ನನ್ನು ಮನೆಗೆ ಕರೆಸಿಕೊಂಡಿದ್ದಾನೆ.&lt;/p&gt;&lt;p&gt;ರಾತ್ರಿ 1 ಗಂಟೆ ಸುಮಾರಿಗೆ, ರಘುರಾಜನ್ ಮಲಗಿದ್ದ ವೇಳೆ ಇಬ್ಬರೂ ಆರೋಪಿಗಳು ಅವರ ಬಾಯಿಗೆ ಬೆಡ್&zwnj;ಶೀಟ್ ತುರುಕಿ, ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ನಂತರ ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಆಶಾ ಅವರನ್ನೂ ಇದೇ ರೀತಿ ಹತ್ಯೆಗೈದಿದ್ದಾರೆ.&lt;/p&gt;&lt;h2&gt;ಕಳವು ಮತ್ತು ತಪ್ಪಿಸಿಕೊಳ್ಳುವ ಯತ್ನ&lt;/h2&gt;&lt;p&gt;ಕೊಲೆಗೈದ ಬಳಿಕ ಆರೋಪಿಗಳು ಮನೆಯಲ್ಲಿದ್ದ ₹56 ಸಾವಿರ ನಗದು ಕದ್ದುಕೊಂಡು, ಬೆಳಗ್ಗೆ 6 ಗಂಟೆಯವರೆಗೆ ಮನೆಯಲ್ಲೇ ಉಳಿದಿದ್ದರು. ಬಳಿಕ ಬೆಳಗ್ಗೆ 8 ಗಂಟೆಗೆ ಜೋಗೀಂದರ್ ತನ್ನ ವಸತಿಗೃಹಕ್ಕೆ ತೆರಳಿ ಉಪಾಹಾರ ಸೇವಿಸಿ ಮತ್ತೆ ಮನೆಗೆ ಬಂದಿದ್ದಾನೆ.&lt;/p&gt;&lt;p&gt;ಆ ಸಮಯದಲ್ಲಿ ಮತ್ತೊಮ್ಮೆ ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡಲು ಪ್ರಯತ್ನಿಸಿದ್ದರೂ, ಅದು ಯಶಸ್ವಿಯಾಗಲಿಲ್ಲ.&lt;/p&gt;&lt;h2&gt;ಕೊಲೆ ಬಯಲಿಗೆ ಬಂದದ್ದು ಹೇಗೆ?&lt;/h2&gt;&lt;p&gt;ದೆಹಲಿಯಲ್ಲಿ ಇದ್ದ ದಂಪತಿಯ ಪುತ್ರ-ಪುತ್ರಿಯರು ಪ್ರತಿದಿನ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು. ಆದರೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ ಕರೆ ಸ್ವೀಕರಿಸದಿದ್ದರಿಂದ ಅನುಮಾನಗೊಂಡ ಪುತ್ರ, ರೆಸಾರ್ಟ್&zwnj;ನ ಭದ್ರತಾ ಸಿಬ್ಬಂದಿಯನ್ನು ಮನೆಗೆ ಹೋಗಿ ಪರಿಶೀಲಿಸಲು ಸೂಚಿಸಿದ್ದಾನೆ.&lt;/p&gt;&lt;p&gt;ಭದ್ರತಾ ಸಿಬ್ಬಂದಿ ಮನೆಗೆ ಬಂದಾಗ ಜೋಗೀಂದರ್ ದಂಪತಿ ಬೆಂಗಳೂರಿಗೆ ತೆರಳಿದ್ದಾರೆಂದು ಸುಳ್ಳು ಹೇಳಿದ್ದಾನೆ. ಆದರೆ ಮಗನ ಸೂಚನೆಯಂತೆ ಮನೆಯೊಳಗೆ ಪರಿಶೀಲನೆ ನಡೆಸಿದಾಗ, ಬೆಡ್&zwnj;ರೂಮ್&zwnj;ನಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾಗಿವೆ.&lt;/p&gt;&lt;p&gt;ಈ ವೇಳೆ ಜೋಗೀಂದರ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರೂ, ಆತ ಸಿಕ್ಕಿಬಿದ್ದಿದ್ದಾನೆ. ಆದರೆ ರವಿಕುಮಾರ್ ಯಾದವ್ ತಪ್ಪಿಸಿಕೊಂಡು ಪರಾರಿಯಾಗಿದ್ದನು.&lt;/p&gt;&lt;h2&gt;ನಾಲ್ಕು ವರ್ಷಗಳ ಬಳಿಕ ಬಂಧನ&lt;/h2&gt;&lt;p&gt;ಪ್ರಕರಣದ ತನಿಖೆಯನ್ನು ಮುಂದುವರಿಸಿದ ಬಿಡದಿ ಪೊಲೀಸ್ ಠಾಣೆಯ ಪಿಎಸ್ಸೈ ಅಣ್ಣಯ್ಯ ಅವರ ನೇತೃತ್ವದ ತಂಡ, ನಾಲ್ಕು ವರ್ಷಗಳ ಬಳಿಕ ಗುಜರಾತ್ ರಾಜ್ಯದ ಅಹಮದಾಬಾದ್ ಜಿಲ್ಲೆಯಲ್ಲಿ ಅಡಗಿದ್ದ ರವಿಕುಮಾರ್ ಯಾದವ್&zwnj;ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.&lt;/p&gt;&lt;p&gt;ಅಹಮದಾಬಾದ್&zwnj;ನ ಘಿಕಾಂತ ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜರುಪಡಿಸಿ ಟ್ರಾನ್ಸಿಟ್ ವಾರಂಟ್ ಪಡೆದು, ಬಳಿಕ ಬಿಡದಿ ಪೊಲೀಸ್ ಠಾಣೆಗೆ ಕರೆತರಲಾಗಿದೆ.&lt;/p&gt;&lt;h2&gt;ಪೊಲೀಸ್ ತಂಡದ ಕಾರ್ಯಾಚರಣೆ&lt;/h2&gt;&lt;p&gt;ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಎಎಸ್ಸೈ ಏಕಾಂಬರೇಶ್ವರ, ಮುಖ್ಯ ಪೇದೆ ಲಿಂಗರಾಜು, ಪೇದೆ ಕಾಂತರಾಜು ಹಾಗೂ ತನಿಖಾ ಸಹಾಯಕ ಅನ್ವರ್ ಭಾಗವಹಿಸಿದ್ದರು.&lt;/p&gt;&lt;p&gt;ನಾಲ್ಕು ವರ್ಷಗಳ ಕಾಲ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವ ಮೂಲಕ ಪೊಲೀಸರು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ್ದು, ನ್ಯಾಯದ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಈ ಪ್ರಕರಣವು ಹಣದ ಲಾಲಸೆ ಹೇಗೆ ಭೀಕರ ಅಪರಾಧಕ್ಕೆ ಕಾರಣವಾಗಬಹುದು ಎಂಬುದಕ್ಕೆ ನಿದರ್ಶನವಾಗಿದೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-eagleton-the-golf-resort-double-murder-case-bihar-man-arrested-in-ahmedabad-after-4-year-gdp/articleshow-1b699xy"/>
        </item>
        <item>
            <title><![CDATA[ಜಿಡ್ಡು ಹಿಡಿದ ಗಾಜಿನ ಬಾಟಲಿ ಒಳಭಾಗ ಕ್ಲೀನ್ ಆಗ್ತಿಲ್ವಾ?, ಈ ಮ್ಯಾಜಿಕ್ ಟ್ರಿಕ್ ಬಳಸಿ ನೋಡಿ]]></title>
            <link>https://kannada.asianetnews.com/gallery/women/best-home-remedies-for-sparkling-glassware-aooi5f1</link>
            <guid isPermaLink="true">https://kannada.asianetnews.com/gallery/women/best-home-remedies-for-sparkling-glassware-aooi5f1</guid>
            <pubDate>Thu, 09 Apr 2026 19:35:13 +0530</pubDate>
            <description><![CDATA[&lt;p&gt;&lt;strong&gt;How to make glassware sparkle at home: &lt;/strong&gt;ನಿಮ್ಮ ಮನೆಯಲ್ಲಿ ಗಾಜಿನ ಸಾಮಾನುಗಳಿವೆಯೇ? ಅವು ಜಿಡ್ಡು ಹಿಡಿದು ಹಳೆಯದರಂತೆ ಕಾಣುತ್ತಿವೆಯೇ? ಎಷ್ಟೇ ಕ್ಲೀನ್ ಮಾಡಿದ್ರೂ ಜಿಡ್ಡು ಹೋಗುತ್ತಿಲ್ವಾ? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಖಂಡಿತವಾಗಿಯೂ ನಿಮಗಾಗಿಯೇ ಇದೆ. &amp;nbsp; &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3vga22nnb0g2a7abxhnmndz,imgname-easy-tips-to-clean-stains-from-glass-utensils-without-scratches-1756490958933.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;How to make glassware sparkle at home: &lt;/strong&gt;ನಿಮ್ಮ ಮನೆಯಲ್ಲಿ ಗಾಜಿನ ಸಾಮಾನುಗಳಿವೆಯೇ? ಅವು ಜಿಡ್ಡು ಹಿಡಿದು ಹಳೆಯದರಂತೆ ಕಾಣುತ್ತಿವೆಯೇ? ಎಷ್ಟೇ ಕ್ಲೀನ್ ಮಾಡಿದ್ರೂ ಜಿಡ್ಡು ಹೋಗುತ್ತಿಲ್ವಾ? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಖಂಡಿತವಾಗಿಯೂ ನಿಮಗಾಗಿಯೇ ಇದೆ. &amp;nbsp; &amp;nbsp;&amp;nbsp;&lt;/p&gt;&lt;img&gt;&lt;p&gt;ಪ್ರತಿಯೊಬ್ಬರ ಮನೆಯಲ್ಲೂ ಗಾಜಿನ ಬಾಟಲಿಗಳು ಇದ್ದೇ ಇರುತ್ತವೆ. ಕೆಲವರು ಮನೆಯ ಅಲಂಕಾರಕ್ಕಾಗಿಯೂ ಗಾಜಿನ ವಸ್ತುಗಳನ್ನು ಬಳಸುತ್ತಾರೆ. ಆದರೆ, ನಾವು ಬಳಸಿದರೂ, ಬಳಸದಿದ್ದರೂ ಅವುಗಳ ಮೇಲೆ ಕಲೆಗಳು ಉಂಟಾಗುತ್ತವೆ. ಜೊತೆಗೆ ಅವುಗಳ ಹೊಳಪು ಕೂಡ ಕಡಿಮೆಯಾಗುತ್ತದೆ. ಇದಕ್ಕೆ ಗಡಸು ನೀರು (ಹಾರ್ಡ್ ವಾಟರ್) ಒಂದು ಕಾರಣ. ಈ ನೀರಿನಿಂದ ಗಾಜಿನ ಪಾತ್ರೆಗಳನ್ನು ತೊಳೆದಾಗ, ಅದರಲ್ಲಿನ ಲವಣಾಂಶಗಳು ಶೇಖರವಾಗಿ ಕ್ರಮೇಣ ಹೊಳಪನ್ನು ಕಡಿಮೆ ಮಾಡುತ್ತವೆ. ಈ ಕಲೆಗಳನ್ನು ಸಾಮಾನ್ಯ ಸೋಪು ಮತ್ತು ನೀರಿನಿಂದ ತೆಗೆಯುವುದು ಕಷ್ಟ. ಇದರಿಂದ ಪಾತ್ರೆಗಳು ಕೊಳಕಾಗಿ, ಹಳೆಯದಾಗಿ ಕಾಣಿಸುತ್ತವೆ. ಆದರೆ, ಯಾವುದೇ ಖರ್ಚಿಲ್ಲದೆ ನಿಮ್ಮ ಗಾಜಿನ ಪಾತ್ರೆಗಳನ್ನು ಮತ್ತೆ ಹೊಸದರಂತೆ ಮಾಡಬಹುದು. ಅದು ಹೇಗೆಂದು ನೋಡೋಣ ಬನ್ನಿ. &amp;nbsp; &amp;nbsp;&amp;nbsp;&lt;/p&gt;&lt;img&gt;&lt;p&gt;ಗಾಜಿನ ಬಾಟಲಿಗಳು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಲು ನೀವು ವಿನೆಗರ್ ಬಳಸಬಹುದು. ಇದಕ್ಕಾಗಿ, ಅರ್ಧ ಕಪ್ ವೈಟ್ ವಿನೆಗರ್ ಅನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ, ಗಾಜಿನ ಪಾತ್ರೆಗಳನ್ನು ಅದರಲ್ಲಿ 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ. ನಂತರ ಬ್ರಷ್&zwnj;ನಿಂದ ನಿಧಾನವಾಗಿ ಉಜ್ಜಿ. ವಿನೆಗರ್&zwnj;ನಲ್ಲಿರುವ ಆಸಿಡ್, ಗಾಜಿನ ಪಾತ್ರೆಗಳ ಮೇಲಿನ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಪಾತ್ರೆಗಳು ಹೊಸದರಂತೆ ಹೊಳೆಯುತ್ತವೆ.&amp;nbsp;&lt;strong&gt;2. ಅಡುಗೆ ಸೋಡಾ ಮತ್ತು ನಿಂಬೆ ರಸ:&lt;/strong&gt; ಕಲೆಗಳು ಹಳೆಯದಾಗಿದ್ದರೆ ಮತ್ತು ತುಂಬಾ ಜಿಡ್ಡಾಗಿದ್ದರೆ, ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಬಳಸಬಹುದು. ಇದಕ್ಕಾಗಿ, ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ. ಹತ್ತು ನಿಮಿಷಗಳ ನಂತರ, ಸ್ಪಾಂಜ್ ಅಥವಾ ಬ್ರಷ್&zwnj;ನಿಂದ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಜಿಡ್ಡು ಕಲೆಗಳು ಸುಲಭವಾಗಿ ಹೋಗುತ್ತವೆ. &amp;nbsp; &amp;nbsp;&lt;/p&gt;&lt;img&gt;&lt;p&gt;ಗಾಜಿನ ಪಾತ್ರೆಗಳ ಹೊರಭಾಗವನ್ನು ಸ್ವಚ್ಛಗೊಳಿಸುವುದು ಸುಲಭ. ಆದರೆ ಒಳಭಾಗವನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಯಾಕೆಂದರೆ, ಒಳಗೆ ಸ್ವಚ್ಛಗೊಳಿಸಲು ನಮ್ಮ ಕೈ ಹೋಗುವುದಿಲ್ಲ. ಅಂತಹ ಸಮಯದಲ್ಲಿ ಈ ಮ್ಯಾಜಿಕ್ ಟ್ರಿಕ್ ಬಳಸಿ. ಬಾಟಲಿಯೊಳಗೆ ಸ್ವಲ್ಪ ಅಕ್ಕಿ, ಉಪ್ಪು ಮತ್ತು ಕೆಲವು ಹನಿ ಡಿಶ್ ಸೋಪ್ ಹಾಕಿ. ನಂತರ, ಸ್ವಲ್ಪ ನೀರು ಹಾಕಿ ಬಾಟಲಿಯನ್ನು ಚೆನ್ನಾಗಿ ಅಲ್ಲಾಡಿಸಿ. ಅಕ್ಕಿ ಕಾಳುಗಳು ನೈಸರ್ಗಿಕ ಸ್ಕ್ರಬ್ಬರ್&zwnj;ನಂತೆ ಕೆಲಸ ಮಾಡಿ, ಯಾವುದೇ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತವೆ. ಇದರಿಂದ ಬಾಟಲಿಯ ಒಳಭಾಗವೂ ಸುಲಭವಾಗಿ ಸ್ವಚ್ಛವಾಗುತ್ತದೆ. &amp;nbsp;&amp;nbsp;&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/women/best-home-remedies-for-sparkling-glassware-aooi5f1"/>
        </item>
        <item>
            <title><![CDATA[ಊಟದ ನಂತರ ಸೋಂಪು ಜಗಿಯುವುದರಿಂದ ಸಿಗುವ ಆರೋಗ್ಯ ಲಾಭಗಳಿವು!]]></title>
            <link>https://kannada.asianetnews.com/webstories/health-life/health-benefits-of-fennel-seeds-after-meals-wxwhzga</link>
            <guid isPermaLink="true">https://kannada.asianetnews.com/webstories/health-life/health-benefits-of-fennel-seeds-after-meals-wxwhzga</guid>
            <pubDate>Thu, 09 Apr 2026 18:49:43 +0530</pubDate>
            <description><![CDATA[&lt;p&gt;&lt;strong&gt;Ayurvedic benefits of fennel seeds: &lt;/strong&gt;ಊಟದ ನಂತರ ಸ್ವಲ್ಪ ಸೋಂಪು ಜಗಿದು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jn92repnajzjwwj0qfyfyq7k,imgname-fennel-seed-u-1740840385236.png" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/health-life/health-benefits-of-fennel-seeds-after-meals-wxwhzga"/>
        </item>
        <item>
            <title><![CDATA[Kitchen Sink: ಅಡುಗೆಮನೆ ಸಿಂಕ್‌ನ ಕಲೆ ತೆಗೆಯೋಕೆ ಇಲ್ಲಿದೆ ಸುಲಭ ಟಿಪ್ಸ್]]></title>
            <link>https://kannada.asianetnews.com/webstories/life/say-goodbye-to-kitchen-sink-stains-with-these-5-simple-tips-d9oz5uz</link>
            <guid isPermaLink="true">https://kannada.asianetnews.com/webstories/life/say-goodbye-to-kitchen-sink-stains-with-these-5-simple-tips-d9oz5uz</guid>
            <pubDate>Thu, 09 Apr 2026 18:24:06 +0530</pubDate>
            <description><![CDATA[&lt;p&gt;Kitchen sink cleaning: ಅಡುಗೆಮನೆಯ ಸಿಂಕ್&zwnj;ನಲ್ಲಿರುವ ಕಲೆಗಳನ್ನು ತೆಗೆಯುವುದು ದೊಡ್ಡ ತಲೆನೋವು. ಆದರೆ ಚಿಂತೆ ಬೇಡ, ಈ ಐದು ಸುಲಭ ವಿಧಾನಗಳನ್ನು ಬಳಸಿ ನಿಮ್ಮ ಸಿಂಕ್ ಅನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jxmmf1p3aa3vy6fsj0abej5t,imgname-sink-1749817984707.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/life/say-goodbye-to-kitchen-sink-stains-with-these-5-simple-tips-d9oz5uz"/>
        </item>
        <item>
            <title><![CDATA[Dosa Tips: ದೋಸೆ ಹಿಟ್ಟಿಗೆ ಬೇಳೆ, ಅಕ್ಕಿ ಹೀಗೆ ರುಬ್ಬುತ್ತೀರಾ? ಹಾಗಿದ್ರೆ ನೀವು ಮಾಡೋ ದೊಡ್ಡ ತಪ್ಪೇ ಇದು]]></title>
            <link>https://kannada.asianetnews.com/gallery/food/avoid-these-5-common-dosa-mistakes-for-better-taste-and-health-vnpf6cb</link>
            <guid isPermaLink="true">https://kannada.asianetnews.com/gallery/food/avoid-these-5-common-dosa-mistakes-for-better-taste-and-health-vnpf6cb</guid>
            <pubDate>Thu, 09 Apr 2026 18:02:51 +0530</pubDate>
            <description><![CDATA[&lt;p&gt;Dosa Making Tips: ಮನೆಯಲ್ಲೇ ದೋಸೆ ಮಾಡುತ್ತೀರಾ?, ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳಿಂದ ಆರೋಗ್ಯಕರ ಎಂದು ನೀವು ಭಾವಿಸುವ ದೋಸೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ?.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jewdzcph2qdy6hvkfr3v40ae,imgname-dosa-batter--1-.jpg" type="image/jpeg" height="390" width="690"/>
            <content:encoded><![CDATA[&lt;p&gt;Dosa Making Tips: ಮನೆಯಲ್ಲೇ ದೋಸೆ ಮಾಡುತ್ತೀರಾ?, ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳಿಂದ ಆರೋಗ್ಯಕರ ಎಂದು ನೀವು ಭಾವಿಸುವ ದೋಸೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ?.&lt;/p&gt;&lt;img&gt;&lt;p&gt;ಬೆಳಗಿನ ಉಪಾಹಾರಕ್ಕೆ ದೋಸೆ ಎಂದರೆ ಹೆಚ್ಚಿನವರಿಗೆ ಬಲು ಇಷ್ಟ. ಅಲ್ಲದೆ, ದೋಸೆ ಮಾಡುವುದು ತುಂಬಾ ಸುಲಭ ಎಂದು ಮನೆಯಲ್ಲೇ ತಯಾರಿಸುತ್ತಾರೆ. ಆದರೆ, ದೋಸೆ ಮಾಡುವಾಗ ಅನೇಕರು ಹಲವು ತಪ್ಪುಗಳನ್ನು ಮಾಡುತ್ತಾರೆ. ತಾವು ತಪ್ಪು ಮಾಡುತ್ತಿದ್ದೇವೆ ಎಂದು ತಿಳಿಯದೆಯೇ ಈ ತಪ್ಪುಗಳನ್ನು ಮಾಡುತ್ತಾರೆ. ಆದರೆ, ಈ ಕಾರಣಗಳಿಂದಾಗಿ ನೀವು ತಿನ್ನುವ ದೋಸೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ?. ಹಾಗಾದರೆ, ಯಾವ ತಪ್ಪುಗಳನ್ನು ಮಾಡಬಾರದು ಎಂದು ಈಗ ತಿಳಿಯೋಣ.&lt;/p&gt;&lt;img&gt;&lt;p&gt;ದೋಸೆ ತಯಾರಿಸಲು, ಮೊದಲು ಬೇಳೆ ಮತ್ತು ಅಕ್ಕಿಯನ್ನು ರುಬ್ಬಿ ಹುದುಗಲು ಬಿಡಬೇಕು. ಹೆಚ್ಚಿನವರು ಈ ಪ್ರಕ್ರಿಯೆಯಲ್ಲಿಯೇ ತಪ್ಪು ಮಾಡುತ್ತಾರೆ. ಹಿಟ್ಟನ್ನು ರುಬ್ಬಿದ ನಂತರ, ಅದನ್ನು ಹೆಚ್ಚು ಹೊತ್ತು ಬೆಚ್ಚಗಿನ ಸ್ಥಳದಲ್ಲಿ ಅಥವಾ ಹೊರಗೆ ಇಡುವುದರಿಂದ ಅನಾರೋಗ್ಯಕರ ಬ್ಯಾಕ್ಟೀರಿಯಾಗಳು ಬೆಳೆದು ಕೆಟ್ಟ ವಾಸನೆ ಬರಲು ಕಾರಣವಾಗುತ್ತದೆ. ಬೇಸಿಗೆಯಲ್ಲಿ ಹಿಟ್ಟು ಬೇಗನೆ ಹುದುಗುತ್ತದೆ. ಚಳಿಗಾಲದಲ್ಲಿ, ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ, ಋತುವಿಗೆ ಅನುಗುಣವಾಗಿ ಹಿಟ್ಟನ್ನು ಎಷ್ಟು ಹೊತ್ತು ಹುದುಗಲು ಬಿಡಬೇಕು ಎಂಬುದರ ಬಗ್ಗೆ ಜಾಗರೂಕರಾಗಿರಬೇಕು. ಬೇಸಿಗೆಯಲ್ಲಿ ದೋಸೆ ಹಿಟ್ಟನ್ನು 6 ರಿಂದ 8 ಗಂಟೆಗಳಿಗಿಂತ ಹೆಚ್ಚು ಕಾಲ ಹೊರಗೆ ಇಡಬಾರದು. ಚಳಿಗಾಲದಲ್ಲಿ 12 ಗಂಟೆಗಳ ಕಾಲ ಇಟ್ಟರೂ ಪರವಾಗಿಲ್ಲ. ಈ ಸಣ್ಣ ವಿಷಯ ತಿಳಿಯದಿದ್ದರೆ ದೋಸೆ ರುಚಿಯಾಗಿ ಬರುವುದಿಲ್ಲ.&lt;/p&gt;&lt;img&gt;&lt;p&gt;ಮಸಾಲಾ ದೋಸೆಯಲ್ಲಿ ಆಲೂಗಡ್ಡೆ ಪಲ್ಯವನ್ನು ಹಾಕುತ್ತಾರೆ. ಆದರೆ ಅನೇಕರು ತಾವು ಯಾವ ರೀತಿಯ ಆಲೂಗಡ್ಡೆ ಬಳಸುತ್ತಿದ್ದೇವೆ ಎಂಬುದರ ಬಗ್ಗೆ ಗಮನ ಹರಿಸುವುದಿಲ್ಲ. ಮೊಳಕೆ ಬಂದ ಅಥವಾ ಅಲ್ಲಲ್ಲಿ ಹಸಿರು ಬಣ್ಣಕ್ಕೆ ತಿರುಗಿದ ಆಲೂಗಡ್ಡೆಯನ್ನು ಪಲ್ಯಕ್ಕೆ ಬಳಸಬಾರದು. ಅಂತಹ ಆಲೂಗಡ್ಡೆಗಳು ಆರೋಗ್ಯಕ್ಕೆ ಹಾನಿಕಾರಕ. ಹಾಗೆಯೇ, ಈ ಪಲ್ಯವನ್ನು ಹೆಚ್ಚು ಹೊತ್ತು ಕೋಣೆಯ ಉಷ್ಣಾಂಶದಲ್ಲಿ ಇಡಬಾರದು. ಏಕೆಂದರೆ, ಬೇಯಿಸಿದ ಆಲೂಗಡ್ಡೆ ಬೇಗನೆ ಹಾಳಾಗುತ್ತದೆ ಮತ್ತು ಫುಡ್ ಪಾಯಿಸನಿಂಗ್&zwnj;ಗೆ ಕಾರಣವಾಗಬಹುದು.&lt;/p&gt;&lt;img&gt;&lt;p&gt;ದೋಸೆಗಾಗಿ ಅಕ್ಕಿ ಮತ್ತು ಬೇಳೆಗಳನ್ನು ಖರೀದಿಸುವಾಗ, ಅವು ತುಂಬಾ ಹಳೆಯದಲ್ಲ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ, ತುಂಬಾ ಹಳೆಯದನ್ನು ಆರಿಸುವುದರಿಂದ ಅವುಗಳ ಮೇಲೆ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವಿದೆ. ಇದಲ್ಲದೆ, ಅನೇಕರು ಹೊರಗಿನಿಂದ ರೆಡಿಮೇಡ್ ದೋಸೆ ಹಿಟ್ಟನ್ನು ತಂದು ಮನೆಯಲ್ಲಿ ದೋಸೆ ಮಾಡುತ್ತಾರೆ. ಅದರಲ್ಲಿ ಅವರು ಗುಣಮಟ್ಟದ ಬೇಳೆ, ಅಕ್ಕಿ ಬಳಸದೇ ಇರಬಹುದು. ಆದ್ದರಿಂದ, ಮನೆಯಲ್ಲೇ ನೀವೇ ಹಿಟ್ಟು ಸಿದ್ಧಪಡಿಸಿಕೊಳ್ಳುವುದು ಉತ್ತಮ. ಒಂದು ವೇಳೆ, ನೀವು ರುಬ್ಬಿದ ಹಿಟ್ಟು ಹುಳಿ ವಾಸನೆ ಬರುತ್ತಿದ್ದರೆ, ಅದನ್ನು ಎಸೆಯುವುದೇ ಒಳ್ಳೆಯದು.&lt;/p&gt;&lt;img&gt;&lt;p&gt;ನೀವು ದೋಸೆ ಮಾಡಲು ನಾನ್&zwnj;ಸ್ಟಿಕ್ ಪ್ಯಾನ್ ಬಳಸುತ್ತಿದ್ದರೆ, ಅದರ ಕೋಟಿಂಗ್ ಅನ್ನು ಖಂಡಿತವಾಗಿ ಪರಿಶೀಲಿಸಿ. ಟೆಫ್ಲಾನ್ ಕೋಟಿಂಗ್ ಕಿತ್ತು ಬರುತ್ತಿದ್ದರೆ, ಬಿಸಿ ಮಾಡಿದಾಗ ಅದು ನೀವು ಮಾಡುವ ದೋಸೆಯೊಳಗೆ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ, ಇದು ಆರೋಗ್ಯಕ್ಕೆ ಹಾನಿಕರ. ಆದ್ದರಿಂದ, ನಾನ್-ಸ್ಟಿಕ್ ಪ್ಯಾನ್&zwnj;ಗಿಂತ ಕಬ್ಬಿಣದ ತವಾ ಅಥವಾ ಸಂಪೂರ್ಣವಾಗಿ ಹಾಳಾಗದ ಕೋಟಿಂಗ್ ಇರುವ ನಾನ್&zwnj;ಸ್ಟಿಕ್ ಪ್ಯಾನ್ ಬಳಸಲು ಪ್ರಯತ್ನಿಸಿ.&lt;/p&gt;&lt;img&gt;&lt;p&gt;ದೋಸೆ ಹಿಟ್ಟಿನಲ್ಲಿ ಬೆರೆಸುವ ನೀರು ಮತ್ತು ದೋಸೆ ಮಾಡಲು ಬಳಸುವ ಎಣ್ಣೆ ಶುದ್ಧವಾಗಿರಬೇಕು. ದೋಸೆ ಹಿಟ್ಟನ್ನು ಯಾವಾಗಲೂ ಶುದ್ಧ ನೀರಿನಿಂದಲೇ ಕಲೆಸಿ. ಬಳಸುವ ಎಣ್ಣೆಯೂ ಉತ್ತಮ ಗುಣಮಟ್ಟದ್ದಾಗಿರಬೇಕು. ಇಲ್ಲದಿದ್ದರೆ, ಆರೋಗ್ಯ ಸಮಸ್ಯೆಗಳು ಬರುವ ಅಪಾಯ ಹೆಚ್ಚು.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/avoid-these-5-common-dosa-mistakes-for-better-taste-and-health-vnpf6cb"/>
        </item>
        <item>
            <title><![CDATA['ಪುಟ್ನಂಜ'ನ ಸುಂದರಿ ಮೀನಾ ಮಾಡಿದ್ರು ರಿಯಲ್ ಎಸ್ಟೇಟ್‌ನಲ್ಲಿ ಸುನಾಮಿ; ನಟಿಯ ಬಂಗಲೆಗೆ ಭಾರೀ ರೇಟ್‌!]]></title>
            <link>https://kannada.asianetnews.com/gallery/cine-world/kannada-movie-putnanja-actress-meena-sells-her-bunglow-for-rs-100-crores-ddish0k</link>
            <guid isPermaLink="true">https://kannada.asianetnews.com/gallery/cine-world/kannada-movie-putnanja-actress-meena-sells-her-bunglow-for-rs-100-crores-ddish0k</guid>
            <pubDate>Thu, 09 Apr 2026 17:19:23 +0530</pubDate>
            <description><![CDATA[&lt;p&gt;ಬಂದ ಹಣವನ್ನು ಮೀನಾ ಅವರು ತಮ್ಮ ಮಗಳು ನೈನಿಕಾ ಅವರ ಭವಿಷ್ಯಕ್ಕಾಗಿ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರರಂಗದಲ್ಲಿ ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಇಂದು ಕೋಟಿ ಕೋಟಿ ಲಾಭ ಗಳಿಸಿರುವ ಮೀನಾ ಜಾಣ್ಮೆಗೆ &lsquo;ಜೈ&rsquo; ಅಂತಿದಾರೆ ಫ್ಯಾನ್ಸ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knryw8fyq2ncjsr1phpkemer,imgname-meena-1775732924926.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಂದ ಹಣವನ್ನು ಮೀನಾ ಅವರು ತಮ್ಮ ಮಗಳು ನೈನಿಕಾ ಅವರ ಭವಿಷ್ಯಕ್ಕಾಗಿ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರರಂಗದಲ್ಲಿ ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಇಂದು ಕೋಟಿ ಕೋಟಿ ಲಾಭ ಗಳಿಸಿರುವ ಮೀನಾ ಜಾಣ್ಮೆಗೆ &lsquo;ಜೈ&rsquo; ಅಂತಿದಾರೆ ಫ್ಯಾನ್ಸ್.&lt;/p&gt;&lt;img&gt;&lt;p&gt;ರಿಯಲ್ ಎಸ್ಟೇಟ್&zwnj;ನಲ್ಲಿ &lsquo;ಸಿಂಹಾದ್ರಿಯ ಸಿಂಹ&rsquo; ನಟಿ ಮೀನಾ ಮಾಸ್ಟರ್ ಸ್ಟ್ರೋಕ್!&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದ &lsquo;ಎವರ್&zwnj;ಗ್ರೀನ್&rsquo; ಸುಂದರಿ ಮೀನಾ (Meena) ಈಗ ಸಿನಿಮಾಗಿಂತ ಹೆಚ್ಚಾಗಿ ತಮ್ಮ ಒಂದು ಬೃಹತ್ ಆಸ್ತಿ ವ್ಯವಹಾರದ ಮೂಲಕ ಸುದ್ದಿಯಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ದಶಕಗಳ ಕಾಲ ಸ್ಟಾರ್ ನಟಿಯಾಗಿ ಮಿಂಚಿದ ಮೀನಾ, ಈಗ ರಿಯಲ್ ಎಸ್ಟೇಟ್ ಲೋಕದಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದ್ದಾರೆ.&lt;/p&gt;&lt;img&gt;&lt;p&gt;ಏನಿದು 100 ಕೋಟಿಯ ಡೀಲ್?&lt;/p&gt;&lt;p&gt;ವರದಿಗಳ ಪ್ರಕಾರ, ನಟಿ ಮೀನಾ ಅವರು ಚೆನ್ನೈನ ಪ್ರಮುಖ ಪ್ರದೇಶವೊಂದರಲ್ಲಿ ಭವ್ಯವಾದ ಬಂಗಲೆಯನ್ನು ಹೊಂದಿದ್ದರು. ಈ ಆಸ್ತಿಯನ್ನು ಅವರು ಬಹಳ ವರ್ಷಗಳ ಹಿಂದೆಯೇ ಖರೀದಿಸಿದ್ದರು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಆ ಪ್ರದೇಶದಲ್ಲಿ ಭೂಮಿಯ ಬೆಲೆ ಗಗನಕ್ಕೇರಿರುವ ಕಾರಣ, ಮೀನಾ ಅವರು ಈ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.&lt;/p&gt;&lt;img&gt;&lt;p&gt;ಒಬ್ಬ ದೊಡ್ಡ ಉದ್ಯಮಿಯೊಬ್ಬರು ಈ ಬಂಗಲೆಯನ್ನು ಬರೋಬ್ಬರಿ 100 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿಯಾಗಿ ಸಕ್ಸಸ್ ಕಂಡ ಮೀನಾ, ಈಗ ಆರ್ಥಿಕ ವ್ಯವಹಾರದಲ್ಲೂ &lsquo;ಮಾಸ್ಟರ್ ಸ್ಟ್ರೋಕ್&rsquo; ನೀಡಿದ್ದಾರೆ ಎಂದು ಸಿನಿರಂಗದಲ್ಲಿ ಚರ್ಚೆಯಾಗುತ್ತಿದೆ.&lt;/p&gt;&lt;img&gt;&lt;p&gt;ಕನ್ನಡಿಗರ ಪ್ರೀತಿಯ &lsquo;ಪುಟ್ನಂಜ&rsquo;ನ ಸುಂದರಿ!&lt;/p&gt;&lt;p&gt;ಕನ್ನಡ ಚಿತ್ರರಂಗದೊಂದಿಗೆ ಮೀನಾ ಅವರಿಗೆ ಅವಿನಾಭಾವ ಸಂಬಂಧವಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ &lsquo;ಪುಟ್ನಂಜ&rsquo;, ಸಾಹಸಸಿಂಹ ವಿಷ್ಣುವರ್ಧನ್ ಅವರ &lsquo;ಸಿಂಹಾದ್ರಿಯ ಸಿಂಹ&rsquo; ಮತ್ತು ಶಿವರಾಜ್&zwnj;ಕುಮಾರ್ ಅವರೊಂದಿಗೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನೆಮಾತಾಗಿದ್ದಾರೆ.&lt;/p&gt;&lt;img&gt;&lt;p&gt;ಪತಿ ವಿದ್ಯಾಸಾಗರ್ ಅವರ ನಿಧನದ ನಂತರ ಮೀನಾ ಅವರು ಸಣ್ಣ ಬ್ರೇಕ್ ತೆಗೆದುಕೊಂಡಿದ್ದರೂ, ಈಗ ಮತ್ತೆ ಸಿನಿಮಾಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿದ್ದಾರೆ.&lt;/p&gt;&lt;img&gt;&lt;p&gt;ಮಗಳ ಭವಿಷ್ಯಕ್ಕಾಗಿ ದೊಡ್ಡ ಹೂಡಿಕೆ?&lt;/p&gt;&lt;p&gt;ಈ ಬೃಹತ್ ಮೊತ್ತವನ್ನು ಮೀನಾ ಅವರು ತಮ್ಮ ಮಗಳು ನೈನಿಕಾ ಅವರ ಭವಿಷ್ಯಕ್ಕಾಗಿ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರರಂಗದಲ್ಲಿ ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಇಂದು ಕೋಟಿ ಕೋಟಿ ಲಾಭ ಗಳಿಸಿರುವ ಮೀನಾ ಅವರ ಈ ಜಾಣ್ಮೆಯ ನಿರ್ಧಾರಕ್ಕೆ ಅಭಿಮಾನಿಗಳು &lsquo;ಫುಲ್ ಮಾರ್ಕ್ಸ್&rsquo; ನೀಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಬೆಳ್ಳಿತೆರೆಯ ಮೇಲೆ ರಾಣಿಯಂತೆ ಮಿಂಚಿದ ಮೀನಾ, ಈಗ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ &lsquo;ಧನಲಕ್ಷ್ಮಿ&rsquo;ಯನ್ನು ವರಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;100 ಕೋಟಿ ರೂಪಾಯಿಗಳ ಈ ಭಾರಿ ಡೀಲ್ ಸದ್ಯಕ್ಕೆ ಇಡೀ ಸೌತ್ ಸಿನಿ ಇಂಡಸ್ಟ್ರಿಯ ಹಾಟ್ ಟಾಪಿಕ್ ಆಗಿದೆ!&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/kannada-movie-putnanja-actress-meena-sells-her-bunglow-for-rs-100-crores-ddish0k"/>
        </item>
        <item>
            <title><![CDATA[ಬಿಗ್‌ ಬಾಸ್ ಮನೆಯಲ್ಲಿ ಲಿಪ್ ಕಿಸ್ ಆಯ್ತು, ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ ನಟಿ ಆಕಾಂಕ್ಷಾ]]></title>
            <link>https://kannada.asianetnews.com/gallery/entertainment/akanksha-puri-controversy-trolled-for-bikini-blouse-with-traditional-saree-lcgwzi0</link>
            <guid isPermaLink="true">https://kannada.asianetnews.com/gallery/entertainment/akanksha-puri-controversy-trolled-for-bikini-blouse-with-traditional-saree-lcgwzi0</guid>
            <pubDate>Thu, 09 Apr 2026 17:02:04 +0530</pubDate>
            <description><![CDATA[&lt;p&gt;Akanksha Puri reacts to trolls: ಒಂದು ಫ್ಯಾಷನ್ ಪ್ರಯೋಗ ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಆಕಾಂಕ್ಷಾ ಪುರಿ ಮಹಾರಾಷ್ಟ್ರದ ಸಾಂಪ್ರದಾಯಿಕ 'ಪೈಥಾನಿ' ಸೀರೆಗೆ ಬಿಕಿನಿ ಬ್ಲೌಸ್ ತೊಟ್ಟು ರಾಂಪ್ ವಾಕ್ ಮಾಡಿದ್ದರು. ಇದು ಸಂಪ್ರದಾಯಕ್ಕೆ ಮಾಡಿದ ಅವಮಾನ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knpg9asqkdzd5267e9hxt4z5,imgname-akanksha-puri-saree-controversy-1775650515767.jpg" type="image/jpeg" height="390" width="690"/>
            <content:encoded><![CDATA[&lt;p&gt;Akanksha Puri reacts to trolls: ಒಂದು ಫ್ಯಾಷನ್ ಪ್ರಯೋಗ ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಆಕಾಂಕ್ಷಾ ಪುರಿ ಮಹಾರಾಷ್ಟ್ರದ ಸಾಂಪ್ರದಾಯಿಕ 'ಪೈಥಾನಿ' ಸೀರೆಗೆ ಬಿಕಿನಿ ಬ್ಲೌಸ್ ತೊಟ್ಟು ರಾಂಪ್ ವಾಕ್ ಮಾಡಿದ್ದರು. ಇದು ಸಂಪ್ರದಾಯಕ್ಕೆ ಮಾಡಿದ ಅವಮಾನ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. &amp;nbsp;&lt;/p&gt;&lt;img&gt;&lt;p&gt;ಬಾಲಿವುಡ್, ಕಿರುತೆರೆ ಮತ್ತು ಭೋಜಪುರಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಆಕಾಂಕ್ಷಾ ಪುರಿ ಸದ್ಯ ತಮ್ಮ ಉಡುಪಿನ ಕಾರಣಕ್ಕೆ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ನಡೆದ 'ಬಾಂಬೆ ಟೈಮ್ಸ್ ಫ್ಯಾಷನ್ ವೀಕ್'ನಲ್ಲಿ ಆಕಾಂಕ್ಷಾ ಅವರು ಮಹಾರಾಷ್ಟ್ರದ ಹೆಮ್ಮೆಯ ಪೈಥಾನಿ (Paithani) ಸೀರೆಯನ್ನು ಉಟ್ಟು ರ&zwj;್ಯಾಂಪ್ ವಾಕ್&zwnj; ಮಾಡಿದ್ದರು. ಆದರೆ ಈ ಸೀರೆಯ ಜೊತೆಗೆ ಅವರು ಬಿಕಿನಿ ಶೈಲಿಯ ಬ್ಲೌಸ್ ಧರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಪೈಥಾನಿ ಸೀರೆಯನ್ನು ಮಹಾರಾಷ್ಟ್ರದ 'ಮಹಾವಸ್ತ್ರ' ಮತ್ತು ಅತ್ಯಂತ ಪವಿತ್ರ ಹಾಗೂ ಸಾಂಪ್ರದಾಯಿಕ ಉಡುಗೆ ಎಂದು ಪರಿಗಣಿಸಲಾಗುತ್ತದೆ. ಆಕಾಂಕ್ಷಾ ಅವರು ಇದಕ್ಕೆ ಬಿಕಿನಿ ಬ್ಲೌಸ್ ತೊಡುವ ಮೂಲಕ ಮಹಾರಾಷ್ಟ್ರದ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Mahesh Kumar Dangodra (@mahesh_videojournalist)&lt;/p&gt;&lt;p&gt;&lt;/p&gt;&lt;img&gt;&lt;p&gt;ತನ್ನ ಮೇಲಿನ ಆರೋಪಗಳಿಗೆ ನೇರ ಉತ್ತರ ನೀಡಿರುವ ಆಕಾಂಕ್ಷಾ ಪುರಿ ಹೀಗೆ ಹೇಳಿದ್ದಾರೆ.. &quot;ಫ್ಯಾಷನ್ ವೀಕ್&zwnj;ನಲ್ಲಿ ನಾನು ಧರಿಸಿದ್ದ ಈ ಉಡುಪು ಸಂಪೂರ್ಣವಾಗಿ ಹಿರಿಯ ಡಿಸೈನರ್ ರೋಹಿತ್ ವರ್ಮಾ ಅವರ ಪರಿಕಲ್ಪನೆಯಾಗಿತ್ತು. ಇದರಲ್ಲಿ ನನ್ನ ವೈಯಕ್ತಿಕ ಹಸ್ತಕ್ಷೇಪವೇನೂ ಇರಲಿಲ್ಲ&quot; ಎಂದಿದ್ದಾರೆ.&lt;/p&gt;&lt;img&gt;&lt;p&gt;&quot;ರೋಹಿತ್ ವರ್ಮಾ ಅವರ ಪ್ರತಿಭೆಯ ಮೇಲೆ ನನಗೆ ಅಪಾರ ನಂಬಿಕೆಯಿದೆ. ಅವರು ಈ ಉಡುಪನ್ನು ವಿನ್ಯಾಸಗೊಳಿಸಿದ್ದಾರೆ ಎಂದರೆ ಖಂಡಿತವಾಗಿಯೂ ಅದರ ಹಿಂದೆ ಒಂದು ಸ್ಪಷ್ಟವಾದ ಆಲೋಚನೆ ಇರುತ್ತದೆ. ಒಬ್ಬ ಕಲಾವಿದೆಯಾಗಿ ನಾನು ಅವರ ದೃಷ್ಟಿಕೋನವನ್ನು ಗೌರವಿಸಿ, ಪೂರ್ಣ ಆತ್ಮವಿಶ್ವಾಸದಿಂದ ಆ ಉಡುಪನ್ನು ಧರಿಸಿದ್ದೇನೆ. ಟೀಕೆಗಳ ನಡುವೆಯೂ ಅನೇಕರು ಈ ಹೊಸ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ ಎಂದು ಆಕಾಂಕ್ಷಾ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಆಕಾಂಕ್ಷಾ ಪುರಿ ಮತ್ತು ಅಶ್ಮಿತ್ ಪಟೇಲ್ ಅಭಿನಯದ 'ಸಾಡಿ ಫರ್ಮಾಯಿಶ್' ಎಂಬ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಅಷ್ಟೇ ಅಲ್ಲದೆ, ಶೀಘ್ರದಲ್ಲೇ ಅವರು ಭೋಜಪುರಿ ಸೂಪರ್ ಸ್ಟಾರ್ ಖೇಸರಿ ಲಾಲ್ ಯಾದವ್ ಅವರೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/entertainment/akanksha-puri-controversy-trolled-for-bikini-blouse-with-traditional-saree-lcgwzi0"/>
        </item>
        <item>
            <title><![CDATA[ಕರ್ನಾಟಕದಲ್ಲಿ ಗಂಡ, ಆಂಧ್ರದಲ್ಲಿ ಏವಂಡಿ, ಉಳಿದ 20 ರಾಜ್ಯದಲ್ಲಿ ಪತಿಗೆ ಎನಂತಾರೆ?]]></title>
            <link>https://kannada.asianetnews.com/webstories/relationship/how-husbands-are-addressed-in-different-indian-states-suh-b1qfab4</link>
            <guid isPermaLink="true">https://kannada.asianetnews.com/webstories/relationship/how-husbands-are-addressed-in-different-indian-states-suh-b1qfab4</guid>
            <pubDate>Thu, 09 Apr 2026 16:20:17 +0530</pubDate>
            <description><![CDATA[ಭಾರತದ ವಿವಿಧ ರಾಜ್ಯಗಳಲ್ಲಿ ಪತ್ನಿಯರು ತಮ್ಮ ಗಂಡನನ್ನು ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಬಿಹಾರದಲ್ಲಿ 'ಸೈಯಾನ್', ರಾಜಸ್ಥಾನದಲ್ಲಿ 'ಬೀಂದ್' ಮತ್ತು ಕರ್ನಾಟಕದಲ್ಲಿ 'ಗಂಡ' ಎಂದು ಕರೆಯುವಂತೆ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ವಿಶಿಷ್ಟ ಮತ್ತು ಪ್ರೀತಿಯ ಸಂಬೋಧನೆಯನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jj94qynb58eq46thnazwnymz,imgname-Live-in-relationship-1737621240491.jpg" type="image/jpeg" height="390" width="690"/>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/webstories/relationship/how-husbands-are-addressed-in-different-indian-states-suh-b1qfab4"/>
        </item>
        <item>
            <title><![CDATA[ಕಣ್ಣು ಕಾಣದ ಪ್ರಯಾಣಿಕಳು, ಕಿವಿ ಕೇಳದ ಡ್ರೈವರ್: 5 ಸ್ಟಾರ್ ರೇಟಿಂಗ್‌ನೊಂದಿಗೆ ಮನಸ್ಸು ಗೆದ್ದ ಊಬರ್ ಪಯಣದ ಕಥೆ]]></title>
            <link>https://kannada.asianetnews.com/india-news/visually-impaired-passenger-deaf-uber-driver-inspiring-viral-story-hyderabad-sat/articleshow-wszbkoq</link>
            <guid isPermaLink="true">https://kannada.asianetnews.com/india-news/visually-impaired-passenger-deaf-uber-driver-inspiring-viral-story-hyderabad-sat/articleshow-wszbkoq</guid>
            <pubDate>Thu, 09 Apr 2026 16:04:49 +0530</pubDate>
            <description><![CDATA[&lt;p&gt;ದೃಷ್ಟಿ ಸವಾಲು ಎದುರಿಸುತ್ತಿರುವ ಐಶ್ವರ್ಯ ಎಂಬ ಮಹಿಳೆ, ಶ್ರವಣದೋಷವಿರುವ ಕ್ಯಾಬ್ ಚಾಲಕನೊಂದಿಗೆ ಪ್ರಯಾಣಿಸುತ್ತಾರೆ. ಸಂವಹನದ ಸವಾಲುಗಳ ನಡುವೆಯೂ, ಸನ್ನೆ ಮತ್ತು ಮೆಸೇಜ್ ಮೂಲಕ ಪ್ರಯಾಣ ಯಶಸ್ವಿಯಾಗುತ್ತದೆ. ಕೊನೆಯಲ್ಲಿ, ಚಾಲಕನು ಆಕೆಯನ್ನು ಸುರಕ್ಷಿತವಾಗಿ ಕಟ್ಟಡದೊಳಗೆ ತಲುಪಿಸಲು ಸಹಾಯ ಮಾಡಿದನು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrww69wp92te7ttja8fmpma,imgname-uber-driver-blind-passenger-1775730825532.jpg" type="image/jpeg" height="390" width="690"/>
            <content:encoded><![CDATA[&lt;p&gt;ದೈನಂದಿನ ಜಂಜಾಟಗಳ ನಡುವೆ ಆಗಾಗ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು ನಮ್ಮ ಹೃದಯವನ್ನು ಸ್ಪರ್ಶಿಸುತ್ತವೆ. ಮನುಷ್ಯತ್ವ ಮತ್ತು ಪರಾನುಭೂತಿಗೆ ಯಾವುದೇ ಭಾಷೆ ಅಥವಾ ಶಬ್ದಗಳ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸುವ ಇಂತಹದ್ದೇ ಒಂದು ಅದ್ಭುತ ಘಟನೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ದೃಷ್ಟಿ ಸವಾಲು ಎದುರಿಸುತ್ತಿರುವ ಮಹಿಳೆ ಮತ್ತು ಶ್ರವಣದೋಷವಿರುವ ಕ್ಯಾಬ್ ಚಾಲಕನ ನಡುವಿನ ಈ ಪ್ರಯಾಣದ ಕಥೆ ನೆಟ್ಟಿಗರ ಕಣ್ಣಂಚು ಒದ್ದೆಯಾಗಿಸುತ್ತಿದೆ.&lt;/p&gt;&lt;p&gt;ಹೈದರಾಬಾದ್&zwnj;ನ 'ಗ್ರೇಲ್&zwnj;ಮೇಕರ್ ಇನ್ನೋವೇಶನ್ಸ್' ಸಂಸ್ಥೆಯ ಸಹ-ಸಂಸ್ಥಾಪಕಿ ಐಶ್ವರ್ಯ ಟಿ.ವಿ. ಪಿಳ್ಳೆ ಅವರು ಲಿಂಕ್ಡ್&zwnj;ಇನ್&zwnj;ನಲ್ಲಿ (LinkedIn) ಹಂಚಿಕೊಂಡಿರುವ ಈ ಘಟನೆ ಎಲ್ಲರ ಗಮನ ಸೆಳೆದಿದೆ.&lt;/p&gt;&lt;h2&gt;&lt;strong&gt;ಕ್ಯಾನ್ಸಲ್ ಮಾಡಬೇಕೆಂಬ ಗೊಂದಲ:&lt;/strong&gt;&lt;/h2&gt;&lt;p&gt;ದೃಷ್ಟಿ ಸವಾಲು ಎದುರಿಸುತ್ತಿರುವ ಐಶ್ವರ್ಯ ಅವರು ತಮ್ಮ ದಿನನಿತ್ಯದ ಓಡಾಟಕ್ಕಾಗಿ ಊಬರ್ (Uber) ಕ್ಯಾಬ್ ಬುಕ್ ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲಿ ಕ್ಯಾಬ್ ಬಂತು. ಆದರೆ ಆ ಕ್ಯಾಬ್ ಅನ್ನು ಓಡಿಸುತ್ತಿದ್ದ ಚಾಲಕನಿಗೆ ಕಿವಿ ಕೇಳಿಸುತ್ತಿರಲಿಲ್ಲ (ಶ್ರವಣದೋಷವಿತ್ತು) ಎಂಬ ವಿಚಾರ ಐಶ್ವರ್ಯ ಅವರಿಗೆ ತಿಳಿಯಿತು. ಈ ವಿಷಯ ತಿಳಿದ ಕೂಡಲೇ ಅವರಿಗೆ ಒಂದು ಕ್ಷಣ ಗೊಂದಲವಾಯಿತು. ಈ ಬಗ್ಗೆ ಬರೆದುಕೊಂಡಿರುವ ಐಶ್ವರ್ಯ, 'ಒಂದು ಕ್ಷಣ ನಾನು ರೈಡ್ ಕ್ಯಾನ್ಸಲ್ ಮಾಡೋಣ ಅಂತ ಯೋಚಿಸಿದೆ. ಆದರೆ ಅದು ಚಾಲಕನ ಸಾಮರ್ಥ್ಯದ ಮೇಲಿನ ಅನುಮಾನದಿಂದಲ್ಲ. ನನಗೆ ಕಣ್ಣು ಕಾಣಿಸುವುದಿಲ್ಲ, ಅವರಿಗೆ ಕಿವಿ ಕೇಳಿಸುವುದಿಲ್ಲ. ಹೀಗಿರುವಾಗ ನಮ್ಮಿಬ್ಬರ ನಡುವೆ ಸಂವಹನ ಹೇಗೆ ಸಾಧ್ಯ? ಎಂಬ ಆತಂಕದಿಂದಷ್ಟೇ. ಆದರೆ, ಆ ಸವಾಲನ್ನು ಸ್ವೀಕರಿಸಿ ಪ್ರಯಾಣ ಮುಂದುವರಿಸಲು ನಿರ್ಧರಿಸಿದೆ' ಎಂದಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಬೆರಳುಗಳು ಮತ್ತು ಮೆಸೇಜ್ ಮೂಲಕವೇ ಸಂವಹನ:&lt;/strong&gt;&lt;/h3&gt;&lt;p&gt;ಕ್ಯಾಬ್ ಹತ್ತಿದ ನಂತರ ಪ್ರಯಾಣದ ಆರಂಭಕ್ಕೆ OTP ಹೇಳಬೇಕಿತ್ತು. ಐಶ್ವರ್ಯ ಅವರು ಮಾತನಾಡಿದರೆ ಚಾಲಕನಿಗೆ ಕೇಳಿಸುತ್ತಿರಲಿಲ್ಲ. ಹೀಗಾಗಿ ಅವರು ತಮ್ಮ ಬೆರಳುಗಳ ಮೂಲಕ ಸನ್ನೆ ಮಾಡಿ OTP ಸಂಖ್ಯೆಯನ್ನು ವಿವರಿಸಿದರು. ಚಾಲಕ ಕೂಡ ಯಾವುದೇ ಗೊಂದಲವಿಲ್ಲದೆ ಅದನ್ನು ಅರ್ಥಮಾಡಿಕೊಂಡು ಪ್ರಯಾಣ ಶುರು ಮಾಡಿದರು. ಐಶ್ವರ್ಯ ಇಳಿಯಬೇಕಾದ ಸ್ಥಳ ಸಮೀಪಿಸುತ್ತಿದ್ದಂತೆ, ಅವರು ಆ್ಯಪ್&zwnj;ನಲ್ಲಿನ ಮೆಸೇಜ್ ಆಯ್ಕೆಯನ್ನು ಬಳಸಿ 'ನಿಖರವಾಗಿ ಗೇಟ್&zwnj;ನ ಮುಂದೆಯೇ ವಾಹನ ನಿಲ್ಲಿಸಿ' ಎಂದು ಸಂದೇಶ ಕಳುಹಿಸಿದರು. ಚಾಲಕ ಅದನ್ನು ಓದಿ, ಅಚ್ಚುಕಟ್ಟಾಗಿ ಐಶ್ವರ್ಯ ಹೇಳಿದ ಜಾಗದಲ್ಲೇ ಕ್ಯಾಬ್ ನಿಲ್ಲಿಸಿದರು.&lt;/p&gt;&lt;h2&gt;&lt;strong&gt;ಮನುಷ್ಯತ್ವ ಮೆರೆದ ಚಾಲಕನಿಗೆ ಸಲಾಂ:&lt;/strong&gt;&lt;/h2&gt;&lt;p&gt;ಅಸಲಿ ಅಚ್ಚರಿ ಕಾದಿದ್ದು ಪ್ರಯಾಣ ಮುಗಿದ ಮೇಲೆಯೇ. ನಿಖರವಾದ ಜಾಗದಲ್ಲಿ ಕ್ಯಾಬ್ ನಿಲ್ಲಿಸಿದ ಚಾಲಕ, ಕೇವಲ ತನ್ನ ಡ್ಯೂಟಿ ಮುಗಿಯಿತು ಎಂದು ಸುಮ್ಮನೆ ಕೂರಲಿಲ್ಲ. ತನ್ನ ಕಾರಿನಲ್ಲಿ ಬಂದಿರುವ ಮಹಿಳೆಗೆ ದೃಷ್ಟಿ ದೋಷವಿದೆ ಎಂಬುದನ್ನು ಅರಿತಿದ್ದ ಆತ, ತಾನೇ ಕಾರಿನಿಂದ ಕೆಳಗಿಳಿದು ಹೋದ. ಅಲ್ಲಿಯೇ ಇದ್ದ ಸೆಕ್ಯುರಿಟಿ ಗಾರ್ಡ್ ಒಬ್ಬರನ್ನು ಕರೆತಂದು, ಐಶ್ವರ್ಯ ಅವರನ್ನು ಸುರಕ್ಷಿತವಾಗಿ ಕಟ್ಟಡದೊಳಗೆ ತಲುಪಿಸುವಂತೆ ನೋಡಿಕೊಂಡ.&lt;/p&gt;&lt;p&gt;ಚಾಲಕನ ಈ ಕಾಳಜಿ ಐಶ್ವರ್ಯ ಅವರ ಮನಸ್ಸನ್ನು ಆಳವಾಗಿ ಮುಟ್ಟಿತು. 'ನಾವು ಇಡೀ ಪ್ರಯಾಣದಲ್ಲಿ ಒಂದು ಮಾತನ್ನೂ ಆಡಲಿಲ್ಲ. ಆದರೆ ಎಲ್ಲವನ್ನೂ ಅರ್ಥಮಾಡಿಕೊಂಡೆವು. ಈ ಅದ್ಭುತ ಪ್ರಯಾಣಕ್ಕಾಗಿ ನಾವಿಬ್ಬರೂ 5 ಸ್ಟಾರ್ ರೇಟಿಂಗ್&zwnj;ಗೆ ಅರ್ಹರು' ಎಂದು ಐಶ್ವರ್ಯ ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಪ್ರಸ್ತುತ ಇಂಟರ್ನೆಟ್&zwnj;ನಲ್ಲಿ ವೈರಲ್ ಆಗುತ್ತಿದ್ದು, 'ಶಾರೀರಿಕ ನ್ಯೂನತೆಗಳು ಮನುಷ್ಯತ್ವಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ' ಎಂದು ನೆಟ್ಟಿಗರು ಕಾಮೆಂಟ್ಗಳ ಮೂಲಕ ಈ ಇಬ್ಬರನ್ನೂ ಶ್ಲಾಘಿಸುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/visually-impaired-passenger-deaf-uber-driver-inspiring-viral-story-hyderabad-sat/articleshow-wszbkoq"/>
        </item>
        <item>
            <title><![CDATA[ಕಿಚನ್ ಸಿಂಕ್ ಕೆಳಗೆ ಕಸದ ರಾಶಿ, ಟೆನ್ಷನ್ ಬೇಡ ನಿಮಿಷದಲ್ಲಿ ಹೀಗೆ ಸೆಟ್ ಮಾಡಿ]]></title>
            <link>https://kannada.asianetnews.com/gallery/kitchen/kitchen-tips-sink-under-area-organization-ideas-easy-hacks-to-declutter-cabinet-zowfcmg</link>
            <guid isPermaLink="true">https://kannada.asianetnews.com/gallery/kitchen/kitchen-tips-sink-under-area-organization-ideas-easy-hacks-to-declutter-cabinet-zowfcmg</guid>
            <pubDate>Thu, 09 Apr 2026 15:56:20 +0530</pubDate>
            <description><![CDATA[&lt;p&gt;Kitchen Tips : ಕಿಚನ್ ಸಿಂಕ್ ಕೆಳಭಾಗ ತುಂಬಾ ಕೊಳಕಾಗಿದ್ಯಾ? ಆ ಡಬ್ಬ ಈ ಬಾಟಲ್ ತುಂಬಿ ಹೋಗಿದ್ಯಾ? ಹಾಕಿದ್ರೆ ಈ ಸೂಪರ್ ಹ್ಯಾಕ್ಸ್ ಟ್ರೈ ಮಾಡಿ ಸಿಂಕ್ ಕ್ಯಾಬಿನೆಟ್ ಗೆ ಸ್ಪೇಷಲ್ ಹೊಳಪು ನೀಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrvkteng4cvndh4gckzk1yn,imgname-kitchen-sink-cabinet-1775729502677.jpg" type="image/jpeg" height="390" width="690"/>
            <content:encoded><![CDATA[&lt;p&gt;Kitchen Tips : ಕಿಚನ್ ಸಿಂಕ್ ಕೆಳಭಾಗ ತುಂಬಾ ಕೊಳಕಾಗಿದ್ಯಾ? ಆ ಡಬ್ಬ ಈ ಬಾಟಲ್ ತುಂಬಿ ಹೋಗಿದ್ಯಾ? ಹಾಕಿದ್ರೆ ಈ ಸೂಪರ್ ಹ್ಯಾಕ್ಸ್ ಟ್ರೈ ಮಾಡಿ ಸಿಂಕ್ ಕ್ಯಾಬಿನೆಟ್ ಗೆ ಸ್ಪೇಷಲ್ ಹೊಳಪು ನೀಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮನೆ ಸುಂದರವಾಗಿ ಕಾಣ್ಬೇಕು ಅಂತ ಹಾಲ್, ಕಿಚನ್, ಬೆಡ್ ರೂಮ್ ಎಲ್ಲ ಕ್ಲೀನ್ ಮಾಡ್ತೇವೆ. ಆದ್ರೆ ಕಿಚನ್ ಸಿಂಕ್ ಕೆಳಗಿರುವ ಜಾಗ ಮರೆತು ಬಿಡ್ತೇವೆ. ಬಹುತೇಕರ ಮನೆಯಲ್ಲಿ ಸಿಂಕ್ ಕೆಳಗಿನ ಜಾಗ ಕಸದ ತೊಟ್ಟಿಯಾಗಿರುತ್ತೆ. ಅಲ್ಲಿ ಖಾಲಿಯಾದ ಅನೇಕ ಬಾಟಲಿ, ಬಾಕ್ಸ್ ಗಳ ರಾಶಿ ಇರುತ್ತೆ. ಸಿಂಕ್ ಅಡಿಯಲ್ಲಿರುವ ಕ್ಯಾಬಿನೆಟ್ ಜಂಕ್ಯಾರ್ಡ್ನಂತಾಗಿರುತ್ತೆ. ಅದನ್ನು ಸುಲಭವಾಗಿ ಕ್ಲೀನ್ ಮಾಡಿ, ಅದನ್ನು ಹೊಳೆಯುವಂತೆ ಮಾಡ್ಬಹುದು.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಕಿಚನ್ ಸಿಂಕ್ ಕೆಳಗೆ ಜಾಗ ಚಿಕ್ಕದಾಗಿರುತ್ತೆ. ನೀವು ವರ್ಟಿಕಲ್ ಜಾಗ ಬಳಸಿಕೊಳ್ಬೇಕು. ಒಂದರ ಮೇಲೆ ಒಂದು ಇಡಬಲ್ಲ ಡಬ್ಬವನ್ನು ನೀವು ಇಲ್ಲಿ ಇಡ್ಬಹುದು. ಮೊದಲು ಸಿಂಕ್ ಕೆಳ ಭಾಗದಲ್ಲಿರುವ ಎಲ್ಲ ಅನುಪಯುಕ್ತ ವಸ್ತುಗಳನ್ನು ಕಸಕ್ಕೆ ಎಸೆದು ಜಾಗ ಕ್ಲೀನ್ ಮಾಡಿ. ಆ ನಂತ್ರ ಡಬ್ಬವನ್ನು ಇಡಿ. ಅದ್ರೊಳಗೆ ನಿಮಗೆ ಉಪಯೋಗವಾಗುವ ವಸ್ತುಗಳನ್ನು ಇಡ್ಬಹುದು.&lt;/p&gt;&lt;img&gt;&lt;p&gt;ಸಿಂಕ್ ಕೆಳಗಿರುವ ಅಗತ್ಯ ವಸ್ತು ಹುಡುಕೋದು ಕಷ್ಟ. ಎಲ್ಲ ವಸ್ತು ತೆಗೆದು ನಂತ್ರ ನಿಮಗೆ ಬೇಕಾದ ವಸ್ತು ಹುಡುಕ್ಬೇಕು. ಆದ್ರೆ ಪುಲ್-ಔಟ್ ಸ್ಲೈಡಿಂಗ್ ಡ್ರಾಯರ್ ಬಳಕೆ ಬಹಳ ಬೆಸ್ಟ್. ನೀವು ಅವುಗಳನ್ನು ಸುಲಭವಾಗಿ ಹೊರತೆಗೆದು ಎಲ್ಲಾ ವಸ್ತುಗಳನ್ನು ತೆಗೆದುಹಾಕಬಹುದು.&lt;/p&gt;&lt;img&gt;&lt;p&gt;ಇದು ತುಂಬಾ ಅಗ್ಗದ ಮತ್ತು ಸ್ಮಾರ್ಟ್ ಹ್ಯಾಕ್. ಸಿಂಕ್ ಒಳಗೆ ರಾಡ್ ಅಳವಡಿಸಿ ಮತ್ತು ಅದರ ಮೇಲೆ ಸ್ಪ್ರೇ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ನೇತುಹಾಕಿ. ಇದು ಕೆಳಗೆ ಜಾಗವನ್ನು ಫ್ರೀಗೊಳಿಸುತ್ತೆ.&lt;/p&gt;&lt;img&gt;&lt;p&gt;ಕ್ಯಾಬಿನೆಟ್ ಎತ್ತರವಾಗಿದ್ರೆ, ಶೆಲ್ಫ್ ರೈಸರ್ಗಳನ್ನು ಬಳಸಬಹುದು. ಅವು ಮಿನಿ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತವೆ. ಒಂದೇ ಸ್ಥಳದಲ್ಲಿ ಎರಡು ಲೇಯರ್ ನಲ್ಲಿ ವಸ್ತುಗಳನ್ನು ಇಡ್ಬಹುದು.&lt;/p&gt;&lt;img&gt;&lt;p&gt;ಟ್ರಾರ್ನ್ಪರೆಂಟ್ ಪಾತ್ರೆಗಳನ್ನು ಬಳಸೋದ್ರಿಂದ ವಸ್ತು ಯಾವ ಪಾತ್ರೆಯಲ್ಲಿದೆ ಎಂಬುದನ್ನು ಆರಾಮವಾಗಿ ಪತ್ತೆ ಮಾಡ್ಬುಹುದು. ಇದು ಸಮಯ ಉಳಿಸುತ್ತೆ. ಪಾತ್ರೆಗಳನ್ನು ತೆಗೆಯುವ ಟೈಂ ಉಳಿಸುತ್ತೆ.&lt;/p&gt;&lt;img&gt;&lt;p&gt;ಸಿಂಕ್ ಅಡಿಯಲ್ಲಿರುವ ಕ್ಯಾಬಿನೆಟ್ ಬಾಗಿಲುಗಳ ಹಿಂಭಾಗಕ್ಕೆ ಸ್ಟ್ಯಾಂಡ್ ಹಾಕಿ. ಅದ್ರ ಮೇಲೆ ನಿಮಗೆ ಅಗತ್ಯವಿರುವ ವಸ್ತುಗಳನ್ನು ಇಡ್ಬಹುದು. ಧೂಳು ತೆಗೆಯುವ ಬಟ್ಟೆ, ಸ್ಕ್ರಬ್ ಪ್ಯಾಡ್ ಇಲ್ಲಿ ಹಾಕ್ಬಹುದು.&lt;/p&gt;&lt;img&gt;&lt;p&gt;ಪ್ರತಿ ಪಾತ್ರೆಗೆ ಸಣ್ಣ ಲೇಬಲ್ ಅಂಟಿಸಿ. ಇದು ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಪ್ರತಿ ವಸ್ತುವನ್ನು ಎಲ್ಲಿ ಇಡಬೇಕೆಂದು, ಎಲ್ಲಿದೆ ಎಂಬುದನ್ನು ತಿಳಿಸುತ್ತೆ.&lt;/p&gt;&lt;img&gt;&lt;p&gt;ಸಿಂಕ್ ಕೆಳಗಿನ ಕ್ಯಾಬಿನೆಟ್ ನಲ್ಲಿ ನೀರು ತೊಟ್ಟಿಕ್ಕುವ ಸಾಧ್ಯತೆ ಇರುತ್ತೆ. ಅದು ಸದಾ ಡ್ರೈ ಆಗಿರ್ಬೇಕು ಅಂದ್ರೆ ಕ್ಯಾಬಿನೆಸ್ ಕೆಳಗೆ ವಾಟರ್ ಪ್ರೂಫ್ ಮ್ಯಾಟ್ ಹಾಕಿ.&lt;/p&gt;&lt;img&gt;&lt;p&gt;ನೀವು ಪಾತ್ರೆಗಳನ್ನು ಸಿಂಕ್ ಕೆಳಗಿರುವ ಕ್ಯಾಬಿನೆಟ್ ನಲ್ಲಿಡಲು ಬಯಸಿದ್ರೆ ಅಗತ್ಯವಿರುವ ಪಾತ್ರೆಗಳನ್ನು ಮುಂದೆ ಇಟ್ಕೊಳ್ಳಿ. ಅತಿ ಕಡಿಮೆ ಬಳಸುವ ಪಾತ್ರೆಗಳನ್ನು ಹಿಂದಿಡಿ. ನಿತ್ಯ ಬಳಕೆ ಇದ್ರಿಂದ ಸುಲಭವಾಗುತ್ತದೆ. ಸಿಂಕ್ ಕೆಳಗಿನ ಜಾಗವನ್ನು ನೀವು ಸುಂದರ ಸ್ಟ್ಯಾಂಡ್, ವಸ್ತುಗಳಿಂದ ತುಂಬಿಸಿದ್ರೆ ಅದು ಜಂಕ್ ಬಾಕ್ಸ್ ಆಗೋದು ತಪ್ಪುತ್ತದೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/kitchen/kitchen-tips-sink-under-area-organization-ideas-easy-hacks-to-declutter-cabinet-zowfcmg"/>
        </item>
        <item>
            <title><![CDATA[ಈ 5 ಸಂಕೇತಗಳಿಂದ ಆಕೆ ನಿಮ್ಮ ಲವ್ವಲ್ಲಿ ಬಿದ್ದಿದ್ದಾಳೆ ಎಂದು ಫಟ್ ಅಂತ ಕಂಡುಹಿಡಿಬೋದು]]></title>
            <link>https://kannada.asianetnews.com/relationship/is-she-interested-5-instant-signals-that-reveal-her-true-feelings/articleshow-lbxsgkn</link>
            <guid isPermaLink="true">https://kannada.asianetnews.com/relationship/is-she-interested-5-instant-signals-that-reveal-her-true-feelings/articleshow-lbxsgkn</guid>
            <pubDate>Thu, 09 Apr 2026 15:46:00 +0530</pubDate>
            <description><![CDATA[&lt;p&gt;&lt;strong&gt;Relationship tips for boys: &lt;/strong&gt;ಪ್ರೀತಿಯ ವಿಷಯಕ್ಕೆ ಬಂದಾಗ ಎದುರಿಗಿರುವ ಹುಡುಗಿಯ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ಅಷ್ಟು ಸುಲಭವಲ್ಲ. &quot;ಆಕೆ ನನ್ನನ್ನು ಪ್ರೀತಿಸುತ್ತಿದ್ದಾಳೆಯೇ ಅಥವಾ ಕೇವಲ ಗೆಳೆಯನಂತೆ ನೋಡುತ್ತಿದ್ದಾಳೆಯೇ?&quot; ಎಂಬ ಗೊಂದಲ ಪ್ರತಿಯೊಬ್ಬ ಹುಡುಗನನ್ನೂ ಕಾಡುತ್ತದೆ. ಈ ಗೊಂದಲಕ್ಕೆ ತೆರೆ ಎಳೆಯಲು ಪ್ರಸಿದ್ಧ ಡೇಟಿಂಗ್ ಕೋಚ್ ಬ್ಲೇನ್ ಆಂಡರ್ಸನ್ &amp;nbsp;ಕೆಲವು ಇಂಟರೆಸ್ಟಿಂಗ್ ಸಿಕ್ರೆಟ್ಸ್&zwnj; ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kecxckvf5ws5515dm155bcm0,imgname-relation-1767812517743.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರೀ&lt;/strong&gt;ತಿಯಲ್ಲಿ ಬಿದ್ದಾಗ ಅಥವಾ ಒಬ್ಬ ಹುಡುಗಿಯನ್ನು ಗಾಢವಾಗಿ ಇಷ್ಟಪಡುತ್ತಿರುವಾಗ ಹುಡುಗರ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ.. &quot;ಆಕೆಗೆ ಕೂಡ ನನ್ನ ಮೇಲೆ ಇಷ್ಟವಿದೆಯೇ? ಅಥವಾ ನನ್ನನ್ನು ಕೇವಲ ಸಾಮಾನ್ಯ ಸ್ನೇಹಿತನಂತೆ ನೋಡುತ್ತಿದ್ದಾಳೆಯೇ?&quot;. ಈ ಗೊಂದಲದಿಂದಾಗಿ ಅನೇಕ ಹುಡುಗರು ತಮ್ಮ ಮನಸ್ಸಿನ ಮಾತನ್ನು ಹೇಳಲಾಗದೆ, ಅವಕಾಶ ಕೈತಪ್ಪಿ ಹೋಗಬಹುದು ಎಂಬ ಭಯದಿಂದ ತೊಳಲಾಡುತ್ತಿರುತ್ತಾರೆ.&lt;/p&gt;&lt;p&gt;ಈ ಸಮಸ್ಯೆಗೆ ಉತ್ತಮ ಪರಿಹಾರವನ್ನು ನೀಡುತ್ತಾ, ಪ್ರಸಿದ್ಧ ಡೇಟಿಂಗ್ ಕೋಚ್ ಬ್ಲೇನ್ ಆಂಡರ್ಸನ್ ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಆಸಕ್ತಿದಾಯಕ ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ, ಒಬ್ಬ ಹುಡುಗಿಗೆ ನೀವು ನಿಜವಾಗಿಯೂ ಇಷ್ಟವಾದರೆ, ಆಕೆಯ ನಡವಳಿಕೆಯಲ್ಲಿ ತಕ್ಷಣವೇ ಕಂಡುಬರುವ 5 ಸಂಕೇತಗಳನ್ನು ಅವರು ವಿವರಿಸಿದ್ದಾರೆ. ನೀವು ಇಷ್ಟಪಡುವ ಹುಡುಗಿಯ ಮನಸ್ಸಿನಲ್ಲಿ ಏನಿದೆ ಎಂದು ಕಂಡುಹಿಡಿಯುವ ಆ ಐದು ಅದ್ಭುತ ರಹಸ್ಯಗಳು ಇಲ್ಲಿವೆ..&lt;/p&gt;&lt;h2&gt;&lt;strong&gt;ನೀವು ಮೆಸೇಜ್ ಮಾಡಿದ ತಕ್ಷಣ ರಿಪ್ಲೈ&lt;/strong&gt;&lt;/h2&gt;&lt;p&gt;ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್&zwnj;ಫೋನ್ ಇರುತ್ತದೆ. ನೀವು ಆಕೆಗೆ ಮೆಸೇಜ್ ಮಾಡಿದಾಗ, ಆಕೆ ಅದಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು ನೋಡಿ ಆಕೆಯ ಮನಸ್ಸನ್ನು ಸುಲಭವಾಗಿ ಅಳೆಯಬಹುದು. ಆಕೆಗೆ ನಿಮ್ಮ ಮೇಲೆ ನಿಜವಾಗಿಯೂ ಆಸಕ್ತಿ ಇದ್ದರೆ, ನೀವು ಮೆಸೇಜ್ ಮಾಡಿದ ಕೂಡಲೇ ರಿಪ್ಲೈ ನೀಡುತ್ತಾಳೆ. ಬೇಕಂತಲೇ ಗಂಟೆಗಟ್ಟಲೆ ನಿಮ್ಮನ್ನು ಕಾಯುವಂತೆ ಮಾಡುವುದು ಅಥವಾ ಕೇವಲ 'ಹ್ಮ್', 'ಓಕೆ' ಅಂತಹ ಸಣ್ಣ ಪದಗಳೊಂದಿಗೆ ಚಾಟಿಂಗ್ ಮುಗಿಸುವುದು ಮಾಡುವುದಿಲ್ಲ. ನಿಮ್ಮೊಂದಿಗೆ ಮಾತನಾಡಲು ಆಕೆ ತುಂಬಾ ಉತ್ಸಾಹ ತೋರಿಸುತ್ತಾಳೆ.&lt;/p&gt;&lt;p&gt;&lt;strong&gt;ಹಗ್ ಮಾಡಿದಾಗ ಗಟ್ಟಿಯಾಗಿ ಅಪ್ಪಿಕೊಳ್ತಾಳೆ&lt;/strong&gt;ಒಂದು ಸಣ್ಣ ಸ್ಪರ್ಶ ನೂರು ಮಾತುಗಳಿಗೆ ಸಮಾನ. ಸ್ನೇಹಿತರ ನಡುವೆ ನೀಡುವ ಹಗ್ ಒಂದು ಫಾರ್ಮ್ಯಾಲಿಟಿಯಂತೆ ಇರುತ್ತದೆ. ಆದರೆ ನೀವು ಆಕೆಯನ್ನು ಹತ್ತಿರಕ್ಕೆ ಕರೆದುಕೊಂಡಾಗ, ಆಕೆ ನಿಮ್ಮನ್ನು ಮತ್ತಷ್ಟು ಗಟ್ಟಿಯಾಗಿ ಮತ್ತು ಆತ್ಮೀಯವಾಗಿ ತಬ್ಬಿಕೊಂಡರೆ, ಅದರಲ್ಲಿ ಪ್ರೀತಿ ಅಡಗಿದೆ ಎಂದು ಅರ್ಥ. ನಿಮ್ಮ ತೋಳುಗಳಲ್ಲಿ ಆಕೆ ತುಂಬಾ ಸುರಕ್ಷಿತವಾಗಿ ಮತ್ತು ಪ್ರಶಾಂತವಾಗಿ ಫೀಲ್ ಆಗುತ್ತಿದ್ದಾಳೆ ಎನ್ನುವುದಕ್ಕೆ ಆ ಆಲಿಂಗನವೇ ದೊಡ್ಡ ಸಾಕ್ಷಿ.&lt;/p&gt;&lt;p&gt;&lt;strong&gt;ನೀವು ಮಾತನಾಡುವಾಗ ಶ್ರದ್ಧೆಯಿಂದ ಕೇಳಿಸಿಕೊಳ್ತಾಳೆ&lt;/strong&gt;ನಾವು ಮಾತನಾಡುವಾಗ ಎದುರಿಗಿರುವವರು ಗಮನ ಕೊಡದಿದ್ದರೆ ಬೇಸರವಾಗುತ್ತದೆ. ಆದರೆ ನೀವು ಇಷ್ಟಪಡುವ ಹುಡುಗಿ ನಿಮ್ಮ ಮಾತುಗಳನ್ನು ತುಂಬಾ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಿದ್ದಾಳೆ ಎಂದರೆ, ಆಕೆಯ ದೃಷ್ಟಿಯಲ್ಲಿ ನೀವು ತುಂಬಾ 'ಸ್ಪೆಷಲ್' ಎಂದು ಅರ್ಥ. ಫೋನ್ ನೋಡುತ್ತಾ ಅಥವಾ ಬೇರೆ ಕಡೆ ಗಮನ ಹರಿಸದೆ, ನಿಮ್ಮ ಕಣ್ಣುಗಳನ್ನು ನೇರವಾಗಿ ನೋಡುತ್ತಾ ನೀವು ಹೇಳುವ ಪ್ರತಿಯೊಂದು ಸಣ್ಣ ವಿಷಯವನ್ನು ಆಕೆ ಮನಸ್ಸಿಟ್ಟು ಕೇಳುತ್ತಾಳೆ.&lt;/p&gt;&lt;p&gt;&lt;strong&gt;ನೀವು ಜೋಕ್ ಮಾಡಿದಾಗ ಮನಃಪೂರ್ವಕವಾಗಿ ನಗುತ್ತಾಳೆ&lt;/strong&gt;ಪ್ರತಿಯೊಬ್ಬ ಹುಡುಗನೂ ದೊಡ್ಡ ಕಾಮಿಡಿಯನ್ ಆಗಿರಲು ಸಾಧ್ಯವಿಲ್ಲ. ಒಮ್ಮೊಮ್ಮೆ ನೀವು ಮಾಡುವ ಜೋಕ್&zwnj;ಗಳು ಅಷ್ಟೊಂದು ನಗು ತರಿಸದೆಯೂ ಇರಬಹುದು. ಆದರೆ ಆಕೆಗೆ ನಿಮ್ಮ ಮೇಲೆ ಇಷ್ಟವಿದ್ದರೆ, ನಿಮ್ಮ ಸಣ್ಣಪುಟ್ಟ ಜೋಕ್&zwnj;ಗಳಿಗೂ ಆಕೆ ಬಿದ್ದು ಬಿದ್ದು ನಗುತ್ತಾಳೆ. ಇಲ್ಲಿ ಆಕೆ ಆನಂದಿಸುತ್ತಿರುವುದು ನಿಮ್ಮ ಜೋಕ್ ಅಲ್ಲ, ಬದಲಾಗಿ ನಿಮ್ಮೊಂದಿಗೆ ಕಳೆಯುತ್ತಿರುವ ಸಮಯವನ್ನು. ನಿಮ್ಮ ಮುಖದಲ್ಲಿ ಸಂತೋಷ ನೋಡಲು ಆಕೆ ಕೂಡ ಮುಗುಳ್ನಗುತ್ತಾಳೆ.&lt;/p&gt;&lt;h3&gt;&lt;strong&gt;ಹೊರಗೆ ಹೋಗೋಣ ಅಂದ್ರೆ ತಕ್ಷಣ 'ಯೆಸ್' ಅಂತಾಳೆ&lt;/strong&gt;&lt;/h3&gt;&lt;p&gt;ಇದು ಎಲ್ಲಕ್ಕಿಂತ ಪ್ರಮುಖವಾದ 'ಫೈನಲ್ ಟೆಸ್ಟ್'. ನೀವು ಕಾಫಿಗೋ ಅಥವಾ ಸಿನಿಮಾಗೋ ಹೊರಗೆ ಹೋಗೋಣ ಎಂದು ಕೇಳಿದಾಗ, ಆಕೆ ಯಾವುದೇ ನೆಪಗಳನ್ನು ಹೇಳುವುದಿಲ್ಲ. &quot;ನನಗೆ ಸಮಯವಿಲ್ಲ&quot;, &quot;ಬ್ಯುಸಿ ಇದ್ದೇನೆ&quot; ಅಂತಹ ಮಾತುಗಳು ಆಕೆಯಿಂದ ಬರುವುದಿಲ್ಲ. ಆನಂದದಿಂದ ತಕ್ಷಣ 'ಯೆಸ್' ಎಂದು ಹೇಳುತ್ತಾಳೆ. ಒಂದು ವೇಳೆ ಆ ಸಮಯದಲ್ಲಿ ನಿಜವಾಗಿಯೂ ಕೆಲಸವಿದ್ದರೂ, &quot;ಮತ್ತೊಂದು ದಿನ ಹೋಗೋಣವೇ?&quot; ಎಂದು ಪರ್ಯಾಯ ಸಮಯವನ್ನು ಸೂಚಿಸುತ್ತಾಳೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/relationship/is-she-interested-5-instant-signals-that-reveal-her-true-feelings/articleshow-lbxsgkn"/>
        </item>
        <item>
            <title><![CDATA[ಮದುವೆ ರಿಂಗ್ ಬೆರಳಲ್ಲಿದ್ದರೆ ಕ್ಯಾನ್ಸರ್ ಅಪಾಯ ಕಡಿಮೆ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅಧ್ಯಯನ]]></title>
            <link>https://kannada.asianetnews.com/gallery/relationship/study-reveals-why-married-individuals-have-significantly-lower-cancer-risks-rx6nx9h</link>
            <guid isPermaLink="true">https://kannada.asianetnews.com/gallery/relationship/study-reveals-why-married-individuals-have-significantly-lower-cancer-risks-rx6nx9h</guid>
            <pubDate>Thu, 09 Apr 2026 15:11:44 +0530</pubDate>
            <description><![CDATA[&lt;p&gt;ಮದುವೆ ರಿಂಗ್ ಬೆರಳಲ್ಲಿದ್ದರೆ ಕ್ಯಾನ್ಸರ್ ಅಪಾಯ ಕಡಿಮೆ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅಧ್ಯಯನ, ಯೂನಿವರ್ಸಿ ಅಧ್ಯಯನದಲ್ಲಿ ಮದುವೆ ಹಾಗೂ ದಾಂಪತ್ಯ ಜೀವನದಿಂದಲೂ ಕ್ಯಾನ್ಸರ್ ಅಪಾಯ ತಗ್ಗಿಸಲು ಸಾಧ್ಯ ಎಂದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrsbv6p7wdfvvgz99pc9pvs,imgname-marriage-and-health-1775727144150.png" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ರಿಂಗ್ ಬೆರಳಲ್ಲಿದ್ದರೆ ಕ್ಯಾನ್ಸರ್ ಅಪಾಯ ಕಡಿಮೆ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅಧ್ಯಯನ, ಯೂನಿವರ್ಸಿ ಅಧ್ಯಯನದಲ್ಲಿ ಮದುವೆ ಹಾಗೂ ದಾಂಪತ್ಯ ಜೀವನದಿಂದಲೂ ಕ್ಯಾನ್ಸರ್ ಅಪಾಯ ತಗ್ಗಿಸಲು ಸಾಧ್ಯ ಎಂದಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಸೆಲ್ವೆಸ್ಟರ್ ಹಾಗೂ ಮಿಯಾಮಿ ವಿಶ್ವವಿದ್ಯಾಲಯ ನಡೆಸದ ಅಧ್ಯಯನ ಹಲವು ರೋಚಕ ಮಾಹಿತಿ ನೀಡಿದೆ. ಪ್ರಮುಖವಾಗಿ ದಾಂಪತ್ಯ ಜೀವನದಲ್ಲಿರುವವರಿಗೆ ಕ್ಯಾನ್ಸರ್ ಮಹಾಮಾರಿ ಅಪಾಯ ಕಡಿಮೆ, ಇಷ್ಟೇ ಅಲ್ಲ ಮದುವೆ ರಿಂಗ್ ಬೆರಳಲ್ಲಿದ್ದರೆ ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯ ಕಡಿಮೆ ಅನ್ನೋ ಸ್ಫೋಟಕ ಮಾಹಿತಿ ಈ ಅಧ್ಯಯನ ವರದಿ ನೀಡಿದೆ.&lt;/p&gt;&lt;img&gt;&lt;p&gt;ಯೂನಿವರ್ಸಿಟಿ ಅಧ್ಯಯನದಲ್ಲಿ 40 ಲಕ್ಷ ಕ್ಯಾನ್ಸರ್ ಪ್ರಕರಣಗಳನ್ನು ಅಧ್ಯಯನ ನಡೆಸಿ ಈ ವರದಿ ನೀಡಲಾಗಿದೆ. ವಿಶೇಷ ಅಂದರೆ ಮದುವೆ ರಿಂಗ್ ಧರಿಸಿದ ಹಿಳೆಯರಲ್ಲಿ ಕ್ಯಾನ್ಸರ್ ಮೊದಲ ಹಂತದಲ್ಲೇ ಪತ್ತೆಯಾಗುತ್ತದೆ. ಇದರಿಂದ ಆರಂಭದಲ್ಲೇ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿದೆ ಎಂದು ಅಧ್ಯಯನ ವರದಿ ಹೇಳುತ್ತದೆ. ಇದೇ ವೇಳೆ ಸ್ಮಾರ್ಟ್ ರಿಂಗ್ ಕೂಡ ಲಭ್ಯವಿದೆ. ಈ ಸ್ಮಾರ್ಟ್ ರಿಂಗ್ ದೇಹದಲ್ಲಿನ ಬದಲಾವಣೆ, ರಕ್ತದ ಏರಿಳಿತ, ಹಾರ್ಮೋನ್ ಬದಲಾವಣೆಗಳನ್ನು ಪತ್ತೆ ಹಚ್ಚುತ್ತದೆ. ಯಾವುದೇ ರೀತಿಯ ಕ್ಯಾನ್ಸರ್ ರೋಗ ಆರಂಭದಲ್ಲೇ ಪತ್ತೆ ಹಚ್ಚಿ ಸೂಚನೆ ನೀಡುತ್ತಿದೆ.&lt;/p&gt;&lt;img&gt;&lt;p&gt;ಮದುವೆಯಾದ ದಂಪತಿಗಳು ಕ್ಯಾನ್ಸರ್ ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಆರಂಭಿಕ ಹಂತದಲ್ಲೇ ನೀಡುವ ಸಣ್ಣ ಸಣ್ಣ ಬದಲಾವಣೆಯನ್ನು ವಿವಾಹಿತ ಸಂಗಾತಿಗಳು ಪತ್ತೆ ಹಚ್ಚುತ್ತಾರೆ. ದೇಹದಲ್ಲಿ ಯಾವುದೇ ಭಾಗದಲ್ಲಿ ಆಗುವ ಸಣ್ಣ ಗಂಟು ಹಾಗೂ ಬದಲಾವಣೆಯನ್ನು ಸಂಗಾತಿಗಳು ಪತ್ತೆ ಹಚ್ಚಿ ಆರಂಭಿಕ ಹಂತದಲ್ಲೇ ವೈದ್ಯರ ಸಂಪರ್ಕಿಸಲು ನೆರವಾಗುತ್ತಾರೆ.&lt;/p&gt;&lt;h2&gt;ಅಧ್ಯಯನ ವರದಿ ನೀಡಿದ ಅಂಕಿ ಅಂಶ&lt;/h2&gt;&lt;ul&gt; &lt;li&gt;ಅವಿವಾಹಿತ ಪುರುಷರಲ್ಲಿ ಆ್ಯನಲ್ ಕ್ಯಾನ್ಸರ್ ಅಪಾಯ ವಿವಾಹಿತರಿಗಿಂತ 5 ಪಟ್ಟು ಹೆಚ್ಚು&lt;/li&gt; &lt;li&gt;ಅವಿವಾಹಿತಿ ಮಹಿಳೆಯರಲ್ಲಿ ಸರ್ವಿಕಲ್ ಕ್ಯಾನ್ಸರ್ ಅಪಾಯ ವಿವಾಹಿತ ಮಹಿಳೆಯರಿಗಿಂತ 3 ಪಟ್ಟು ಹೆಚ್ಚು&lt;/li&gt; &lt;li&gt;ಸುರಕ್ಷಿತ ಸಂಬಂಧ ಹಾಗೂ ಲೈಂಗಿಕ ಶಿಸ್ತು ಇದಕ್ಕೆ ಕಾರಣ ಎಂದು ಅಧ್ಯಯನ ವರದಿ ಹೇಳುತ್ತಿದೆ.&lt;/li&gt;&lt;/ul&gt;&lt;img&gt;&lt;p&gt;ಬ್ಯಾಚುಲರ್ಸ್ ಆರೋಗ್ಯದ ಮೇಲೆ ಉದಾಸೀನಾ ಮಾಡುತ್ತಾರೆ. ಶೇಕಡಾವಾರು ನೋಡಿದರೆ ಬಹುತೇಕ ಬ್ಯಾಚುಲರ್ಸ್ ಯುವಕರ ಲೈಫ್ ಸ್ಟೈಲ್ ಆರೋಗ್ಯಕರವಾಗಿರುವುದಿಲ್ಲ. ಮದುವೆಯಾಗಿ ಸಂಸಾರ ನಡೆಸುವ ಪುರುಷರಲ್ಲಿ ಕ್ಯಾನ್ಸರ್ ಹಾಗೂ ಕ್ಯಾನ್ಸರ್&zwnj;ನಿಂದ ಸಾವನ್ನಪ್ಪು ಪ್ರಮಾಣ ಶೇಕಡಾ 70ರಷ್ಟು ಕಡಿಮೆ ಎಂದು ವರದಿ ಹೇಳುತ್ತಿದೆ.ಪತ್ನಿಯ ಒತ್ತಾಯ, ಕಾಳಜಿ, ಆರೋಗ್ಯ ಶಿಸ್ತು ಇದಕ್ಕೆ ಮುಖ್ಯ ಕಾರಣ ಎಂದು ಅಧ್ಯಯನ ಹೇಳುತ್ತಿದೆ.&lt;/p&gt;&lt;img&gt;&lt;p&gt;ವಿವಾಹವಾಗಿರುವ ಮಹಿಳೆಯರಿಗೆ ಗರ್ಭಕಂಠ ಕ್ಯಾನ್ಸರ್ ಅಪಾಯ ಕಡಿಮೆ. ಗರ್ಭಧಾರಣೆ ಹಾಗೂ ಹಾರ್ಮೋನ್ ಚಕ್ರಗಳು ಸ್ವಾಭಾವಿಕವಾಗಿ ವಿವಾಹಿತ ಮಹಿಳೆಯರಿಗೆ ರಕ್ಷಣೆ ನೀಡುತ್ತದೆ. ಸಂಗಾತಿ ಇಲ್ಲದ ಹಾಗೂ ಸಂಸಾರದಲ್ಲಿನ ಲೈಂಗಿಕತೆ ತೃಪ್ತಿ ಹಾಗೂ ಶಿಸ್ತಿನ ಜೀವನ ಅನುಭವಿಸಿದ ಮಹಿಳೆಯರಲ್ಲಿ ಕ್ರಾನಿಕ್ ಸ್ಟ್ರೆಸ್ ಸೃಷ್ಟಿಸುತ್ತದೆ. ಇದರಿಂದ ದೇಹದಲ್ಲಿ ಉರಿಯೂತ ಸೇರಿದಂತೆ ಇತರ ಅಪಾಯಕಾರಿ ಹಾರ್ಮೋನ್&zwnj;ಗಳ ಏರಿಳಿತಗಳಿಗೆ ಕಾರಣವಾಗುತ್ತದೆ. ಇದು ಕ್ಯಾನ್ಸರ್ ಜೀವಕೋಶಗಳು ವೇಗವಾಗಿ ಬೆಳೆಯಲು ಪೂರಕ ವಾತಾವರಣ ಕಲ್ಪಿಸಿಕೊಡುತ್ತದೆ.&lt;/p&gt;&lt;img&gt;&lt;p&gt;ಕ್ಯಾನ್ಸರ್ ಚಿಕಿತ್ಸೆ ಅತೀ ನೋವಿನ ಹಾಗೂ ಮನೋಬಲ ಕುಗ್ಗಿಸುವ ಚಿಕಿತ್ಸೆಗಳಾಗಿದೆ. ಸಂಗಾತಿ ಜೊತೆಗಿದ್ದರೆ ಅವರು ನೀಡುವ ಆತ್ಮವಿಶ್ವಾಸ, ಬೆಂಬಲ ರೋಗಿಯನ್ನು ವೇಗವಾಗಿ ಚೇತರಿಸಿಕೊಳ್ಳುವಂತೆ ಮಾಡಲಿದೆ. ಮದುವೆ ಕೇವಲ ಒಂದು ಸಂಬಂಧವಲ್ಲ. ಅದು ಆರೋಗ್ಯಕರ ದೃಷ್ಟಿಯಿಂದಲೂ ರಕ್ಷಾ ಕವಚ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ.&lt;/p&gt;]]></content:encoded>
            <category>life</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/relationship/study-reveals-why-married-individuals-have-significantly-lower-cancer-risks-rx6nx9h"/>
        </item>
        <item>
            <title><![CDATA[58ರ ಮಹಿಳೆ ಸೀನಿದಾಗ ಮೂಗಿನಿಂದ ಹೊರಬಿತ್ತು 1 ಇಂಚಿನ ಜೀವಂತ ಹುಳು! ಚಿಕಿತ್ಸೆಗೆ ಹೋದರೆ ವೈದ್ಯರೇ ಶಾಕ್!]]></title>
            <link>https://kannada.asianetnews.com/world-news/greece-woman-sneezes-out-live-worms-sheep-botfly-larvae-medical-case-sat/articleshow-2u2kk1z</link>
            <guid isPermaLink="true">https://kannada.asianetnews.com/world-news/greece-woman-sneezes-out-live-worms-sheep-botfly-larvae-medical-case-sat/articleshow-2u2kk1z</guid>
            <pubDate>Thu, 09 Apr 2026 14:55:32 +0530</pubDate>
            <description><![CDATA[&lt;p&gt;58 ವರ್ಷದ ಮಹಿಳೆಯೊಬ್ಬರು ಸೀನಿದಾಗ ಅವರ ಮೂಗಿನಿಂದ ಜೀವಂತ ಹುಳು ಹೊರಬಿದ್ದಿದೆ. ವೈದ್ಯರು ಪರೀಕ್ಷಿಸಿದಾಗ, ಅದು ಕುರಿಗಳ ಮೂಗಿನಲ್ಲಿ ಬೆಳೆಯುವ 'ಶೀಪ್ ಬಾಟ್ ಫ್ಲೈ' ಲಾರ್ವಾ ಎಂದು ತಿಳಿದುಬಂದಿದ್ದು, ಶಸ್ತ್ರಚಿಕಿತ್ಸೆ ಮೂಲಕ ಇನ್ನೂ 10 ಲಾರ್ವಾಗಳನ್ನು ಹೊರತೆಗೆಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrryfhg85ysnfk464ktz92c,imgname-sneee-worm-in-women-nose-1775726706223.jpg" type="image/jpeg" height="390" width="690"/>
            <content:encoded><![CDATA[&lt;p&gt;ಗ್ರೀಸ್&zwnj;ನಲ್ಲಿ 58 ವರ್ಷದ ಮಹಿಳೆಯೊಬ್ಬರು ಸೀನಿದಾಗ, ಅವರ ಮೂಗಿನಿಂದ ಸುಮಾರು ಒಂದು ಇಂಚು ಉದ್ದದ ಜೀವಂತ ಹುಳುಗಳು ಹೊರಬಿದ್ದಿವೆ. ಈ ಘಟನೆ ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸಿದೆ.&lt;/p&gt;&lt;p&gt;ಕಳೆದ ಸೆಪ್ಟೆಂಬರ್&zwnj;ನಲ್ಲಿ, ಈ ಮಹಿಳೆ ಕುರಿಗಳು ಮೇಯುತ್ತಿದ್ದ ಜಾಗದ ಬಳಿ ಕೆಲಸ ಮಾಡುತ್ತಿದ್ದರು. ಆಗ ತಮ್ಮ ಮುಖದ ಸುತ್ತ ಸಾಕಷ್ಟು ನೊಣಗಳು ಹಾರಾಡುತ್ತಿರುವುದನ್ನು ಅವರು ಗಮನಿಸಿದ್ದರು. ಆದರೆ, ಅದನ್ನವರು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಒಂದು ವಾರದ ನಂತರ, ಅವರಿಗೆ ತೀವ್ರವಾದ ಸೈನಸ್ ನೋವು ಮತ್ತು ಕೆಮ್ಮು ಶುರುವಾಯಿತು. ಬೇರೆ ಯಾವುದೇ ರೋಗಲಕ್ಷಣಗಳು ಇಲ್ಲದ ಕಾರಣ, ಅವರು ಇದನ್ನೂ ನಿರ್ಲಕ್ಷಿಸಿದ್ದರು.&lt;/p&gt;&lt;h3&gt;&lt;strong&gt;10 ಲಾರ್ವಾ ಮತ್ತು ಒಂದು ಪ್ಯೂಪಾ ಹೊರತೆಗೆದ ವೈದ್ಯರು&lt;/strong&gt;&lt;/h3&gt;&lt;p&gt;ಆದರೆ, ಅಕ್ಟೋಬರ್ 15 ರಂದು ಅವರು ಜೋರಾಗಿ ಸೀನಿದಾಗ, ಮೂಗಿನಿಂದ ಒಂದು ಹುಳು ಹೊರಗೆ ಬಂತು. ಇದರಿಂದ ಗಾಬರಿಗೊಂಡ ಅವರು ತಕ್ಷಣ ಇಎನ್&zwnj;ಟಿ ತಜ್ಞರನ್ನು ಭೇಟಿಯಾದರು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಅವರ ಮೂಗಿನೊಳಗಿನಿಂದ 10 ಲಾರ್ವಾಗಳನ್ನು ಮತ್ತು ಒಂದು ಪ್ಯೂಪಾವನ್ನು ಹೊರತೆಗೆದರು. ಪರೀಕ್ಷೆ ನಡೆಸಿದಾಗ, ಇವು 'ಓಸ್ಟ್ರಸ್ ಓವಿಸ್' ಅಥವಾ 'ಶೀಪ್ ಬಾಟ್ ಫ್ಲೈ' ಎಂಬ ನೊಣಗಳ ಲಾರ್ವಾಗಳು ಎಂದು ಪತ್ತೆಯಾಯಿತು. ಸಾಮಾನ್ಯವಾಗಿ ಈ ನೊಣಗಳು ಕುರಿಗಳ ಮೂಗಿನಲ್ಲಿ ಬೆಳೆಯುತ್ತವೆ. ಮನುಷ್ಯರಲ್ಲಿ ಇವು ಬೆಳೆಯುವುದು ತುಂಬಾನೇ ಅಪರೂಪ.&lt;/p&gt;&lt;h2&gt;&lt;strong&gt;ಮನುಷ್ಯನ ದೇಹದಲ್ಲಿ ಲಾರ್ವಾ ಬೆಳೆಯಲ್ಲ&lt;/strong&gt;&lt;/h2&gt;&lt;p&gt;ಮನುಷ್ಯರ ದೇಹವನ್ನು ಈ ಲಾರ್ವಾಗಳು ಪ್ರವೇಶಿಸಿದರೂ, ಅವುಗಳಿಗೆ ಬೆಳೆಯಲು ಬೇಕಾದ ವಾತಾವರಣ ಸಿಗುವುದಿಲ್ಲ. ಆದರೆ ಈ ಮಹಿಳೆಯ ಮೂಗಿನ ಒಳಭಾಗದ ಮೂಳೆಯೊಂದು ಬಾಗಿದ್ದರಿಂದ, ಲಾರ್ವಾಗಳಿಗೆ ಬೆಳೆಯಲು ಜಾಗ ಸಿಕ್ಕಿದೆ. ಸಾಮಾನ್ಯವಾಗಿ ಮನುಷ್ಯರ ದೇಹದೊಳಗೆ ಈ ಲಾರ್ವಾಗಳು ಸತ್ತುಹೋಗುತ್ತವೆ. ಆದರೆ, ಅನುಕೂಲಕರ ವಾತಾವರಣ ಸಿಕ್ಕಿದ್ದರಿಂದ ಇವು ಪ್ಯೂಪಾ ಹಂತದವರೆಗೂ ಬೆಳೆದಿವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದಿದ್ದರಿಂದ, ಲಾರ್ವಾಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಯಿತು. ಮಹಿಳೆ ಈಗ ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/greece-woman-sneezes-out-live-worms-sheep-botfly-larvae-medical-case-sat/articleshow-2u2kk1z"/>
        </item>
        <item>
            <title><![CDATA[5 ರೂ.ಗೆ ಸಿಗುವ ಈ ವಸ್ತುವನ್ನ ಯಾವುದೇ ಗಿಡಕ್ಕೆ ಹಾಕಿದ್ರೂ  ರಾಶಿ ರಾಶಿ ಹೂವು, ಹಣ್ಣು ಬಿಡುತ್ತವೆ]]></title>
            <link>https://kannada.asianetnews.com/gallery/women/lime-for-plants-a-cheap-and-effective-way-to-boost-growth-and-yield-q4xpq2k</link>
            <guid isPermaLink="true">https://kannada.asianetnews.com/gallery/women/lime-for-plants-a-cheap-and-effective-way-to-boost-growth-and-yield-q4xpq2k</guid>
            <pubDate>Thu, 09 Apr 2026 14:26:18 +0530</pubDate>
            <description><![CDATA[&lt;p&gt;₹5 plant fertilizer hack: ಗಾರ್ಡನಿಂಗ್ ಮಾಡುವ ಪ್ರತಿಯೊಬ್ಬರಿಗೂ ಗಿಡಗಳಲ್ಲಿ ಹಣ್ಣು-ಹೂವುಗಳು ರಾಶಿ ರಾಶಿಯಾಗಿ ಬಿಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಪೋಷಕಾಂಶಗಳ ಕೊರತೆಯಿಂದ ಹೂವು ಬಿಡದೆ ಬಾಡಬಹುದು. ಇನ್ಮೇಲೆ ದುಬಾರಿ ಗೊಬ್ಬರ ಬಳಸುವ ಮೊದಲು ಕೇವಲ 5 ರೂ.ನ ಈ ಮ್ಯಾಜಿಕ್ ವಸ್ತು ಬಳಸಿ ನೋಡಿ&hellip;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk5tfgqhb69tyrh6nfw61wh5,imgname-summer-gardening-tips-2-1772943295217.jpg" type="image/jpeg" height="390" width="690"/>
            <content:encoded><![CDATA[&lt;p&gt;₹5 plant fertilizer hack: ಗಾರ್ಡನಿಂಗ್ ಮಾಡುವ ಪ್ರತಿಯೊಬ್ಬರಿಗೂ ಗಿಡಗಳಲ್ಲಿ ಹಣ್ಣು-ಹೂವುಗಳು ರಾಶಿ ರಾಶಿಯಾಗಿ ಬಿಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಪೋಷಕಾಂಶಗಳ ಕೊರತೆಯಿಂದ ಹೂವು ಬಿಡದೆ ಬಾಡಬಹುದು. ಇನ್ಮೇಲೆ ದುಬಾರಿ ಗೊಬ್ಬರ ಬಳಸುವ ಮೊದಲು ಕೇವಲ 5 ರೂ.ನ ಈ ಮ್ಯಾಜಿಕ್ ವಸ್ತು ಬಳಸಿ ನೋಡಿ&hellip;&amp;nbsp;&lt;/p&gt;&lt;img&gt;&lt;p&gt;ಅನೇಕ ಜನರು ತಮ್ಮ ಗಿಡಗಳಲ್ಲಿ ಹೂವು ಅಥವಾ ಹಣ್ಣುಗಳು ಬಿಡದಿದ್ದಾಗ ದುಬಾರಿ ಗೊಬ್ಬರ ಅಥವಾ ಔಷಧಿ ಬಳಸುತ್ತಾರೆ. ಆದರೆ ಅಂತಹ ಸಂದರ್ಭದಲ್ಲಿ ಕೇವಲ 5 ರೂಪಾಯಿಯ ಈ ಒಂದು ಪುಟ್ಟ ವಸ್ತು ನಿಮ್ಮ ಗಿಡದ ಲಕ್ ಬದಲಾಯಿಸಬಹುದು. ಅದು ಟೊಮೆಟೊ, ಮೆಣಸಿನಕಾಯಿ ಅಥವಾ ಗುಲಾಬಿ ಗಿಡವೇ ಆಗಿರಲಿ, ಈ ವಸ್ತುವನ್ನು ಹಾಕುವುದರಿಂದ ಗಿಡದಲ್ಲಿ ಭರಪೂರ ಇಳುವರಿ ಪಡೆಯಬಹುದು.&lt;/p&gt;&lt;img&gt;&lt;p&gt;ಈಗ ನಾವು ಹೇಳುತ್ತಿರುವ ಆ ವಸ್ತು'ಸುಣ್ಣ'. ಕೇವಲ 5 ರೂಪಾಯಿಗೆ ಸಿಗುವ ಈ ಸುಣ್ಣವು ಗಿಡಗಳಿಗೆ ಕೇವಲ ಗೊಬ್ಬರವಷ್ಟೇ ಅಲ್ಲ, ಒಂದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ.&lt;/p&gt;&lt;img&gt;&lt;p&gt;ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆಯಾದಾಗ ಗಿಡಗಳು ಬಾಡುತ್ತವೆ. ಸುಣ್ಣವು ಗಿಡಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ನೀಡುತ್ತದೆ.&lt;/p&gt;&lt;img&gt;&lt;p&gt;ಬಿಳಿ ಸುಣ್ಣವು ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಮಣ್ಣಿಗೆ ಸುಣ್ಣ ಸೇರಿಸುವುದರಿಂದ ಶಿಲೀಂಧ್ರ ಮತ್ತು ಸಣ್ಣಪುಟ್ಟ ಕೀಟಗಳು ಸಾಯುತ್ತವೆ. ಮುಖ್ಯವಾಗಿ ಟೊಮೆಟೊ ಮತ್ತು ಮೆಣಸಿನಕಾಯಿ ಗಿಡದ ಕಾಯಿಗಳು ಕೆಳಗಿನಿಂದ ಕೊಳೆಯುವುದನ್ನು ಇದು ತಡೆಯುತ್ತದೆ.&lt;/p&gt;&lt;img&gt;&lt;p&gt;ತರಕಾರಿಗಳ ಪೈಕಿ ಟೊಮೆಟೊ, ಮೆಣಸು, ಬದನೆ ಮತ್ತು ನಿಂಬೆ ಗಿಡಗಳಿಗೆ ಇದು ಬಹಳ ಉಪಯುಕ್ತ. ಹೂವಿನ ಗಿಡಗಳಾದ ಗುಲಾಬಿ, ದಾಸವಾಳ ಮತ್ತು ಮಲ್ಲಿಗೆ ಗಿಡಗಳಿಗೆ ಹಾಕಿದರೆ ಹೂವುಗಳು ದೊಡ್ಡದಾಗಿ ಮತ್ತು ಹೊಳೆಯುವಂತೆ ಅರಳುತ್ತವೆ.&lt;/p&gt;&lt;img&gt;&lt;p&gt;ಸುಮಾರು 4 ಲೀಟರ್ ನೀರಿಗೆ ಒಂದು ಚಮಚ ಸುಣ್ಣ ಹಾಕಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಗಿಡದ ಬೇರುಗಳ ಭಾಗಕ್ಕೆ ಹಾಕಿ. ತಿಂಗಳಿಗೆ ಒಮ್ಮೆ ಅಥವಾ ಅಗತ್ಯವಿದ್ದಾಗ ಮಾತ್ರ ಇದನ್ನು ಬಳಸಿ.&lt;/p&gt;&lt;img&gt;&lt;p&gt;ಹಸಿ ಸುಣ್ಣವನ್ನು ನೇರವಾಗಿ ಗಿಡಕ್ಕೆ ಹಾಕಬೇಡಿ. ಅದು ಬೇರುಗಳನ್ನು ಸುಡಬಹುದು. ಅತಿಯಾದ ಪ್ರಮಾಣದಲ್ಲಿ ಬಳಸಬೇಡಿ. ವರ್ಷದಲ್ಲಿ 2-3 ಬಾರಿ ಈ ರೀತಿ ಮಾಡುವುದರಿಂದ ಗಿಡದ ಆರೋಗ್ಯ ಚೆನ್ನಾಗಿರುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/women/lime-for-plants-a-cheap-and-effective-way-to-boost-growth-and-yield-q4xpq2k"/>
        </item>
        <item>
            <title><![CDATA[Sonu Srinivas Gowda: ನನ್ ಲವರ್ ನರಕ ತೋರಿಸಿದ, ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್‌ ಗೌಡ ಕಣ್ಣೀರು]]></title>
            <link>https://kannada.asianetnews.com/tv-talk/bigg-boss-ott-fame-sonu-srinivas-gowda-breaks-down-trolls-ruined-my-family-life-and-toxic-love-sat/articleshow-k2ow67m</link>
            <guid isPermaLink="true">https://kannada.asianetnews.com/tv-talk/bigg-boss-ott-fame-sonu-srinivas-gowda-breaks-down-trolls-ruined-my-family-life-and-toxic-love-sat/articleshow-k2ow67m</guid>
            <pubDate>Wed, 08 Apr 2026 22:46:37 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ, ತಮ್ಮ ಇನ್&zwnj;ಸ್ಟಾಗ್ರಾಂನಲ್ಲಿ ಲವ್ ಸ್ಟೋರಿಯ ನೋವನ್ನು ಹಂಚಿಕೊಂಡಿದ್ದಾರೆ. ಟ್ರೋಲ್&zwnj;ಗಳಿಂದಾಗಿ ತನ್ನ ಪ್ರೀತಿ ಮತ್ತು ಕುಟುಂಬದಲ್ಲಿ ಜಗಳಗಳು ಉಂಟಾದವು ಹಾಗೂ ತನ್ನ ಪ್ರೇಮಿಯಿಂದ ಅನುಭವಿಸಿದ ಸಂಕಟವನ್ನು ವಿವರಿಸಿ ಕಣ್ಣೀರಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knq1g38m7a0h4yt9xm4ks0b5,imgname-bigg-boss-sonu-srinivas-gowda-1775668563218.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಒಟಿಟಿ ಸೀಸನ್ 1ರ ಸ್ಪರ್ಧಿಯಾಗಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ ಗೌಡ ಇದೀಗ ತಮ್ಮ ನೋವಿನ ಕಥೆಯೊಂದನ್ನು ತನ್ನ ಇನ್&zwnj;ಸ್ಟಾಗ್ರಾಂ ಫಾಲೋವರ್ಸ್&zwnj;ಗಳ ಮುಂದೆ ಹಂಚಿಕೊಂಡಿದ್ದಾರೆ. ಈಗಾಗಲೇ ತಾನು ಎಲ್ಲಿ ಹುಟ್ಟಿದೆ, ಹೇಗೆ ಬೆಳೆದೆ ಎಂಬುದನ್ನು ಮೂರು ಎಪಿಸೋಡ್ ವಿಡಿಯೋಗಳ ಮೂಲಕ ಹಂಚಿಕೊಂಡಿದ್ದ ಸೋನು, ಇದೀಗ 4ನೇ ಎಪಿಸೋಡ್ ವಿಡಿಯೋದಲ್ಲಿ ತನ್ನ ಲವರ್&zwnj;ನಿಂದ ಅನುಭವಿಸಿದ ನೋವು, ಸಂಕಟವನ್ನು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ಅದರಲ್ಲೂ ಟ್ರೋಲ್&zwnj;ಗಳು ಇಡೀ ನನ್ನ ಜೀವನವನ್ನೇ ಸರ್ವನಾಶ ಮಾಡಿದವು ಎಂಬುದನ್ನೂ ಬಿಚ್ಚಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ನಮ್ಮಮ್ಮ 6 ತಿಂಗಳು ಮಾತನಾಡಿರಲಿಲ್ಲ&lt;/strong&gt;&lt;/h2&gt;&lt;p&gt;ಇನ್&zwnj;ಸ್ಟಾ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಸೋನು ಶ್ರೀನಿವಾಸ್ ಗೌಡ, 'ಈ ಟ್ರೋಲ್&zwnj;ಗಳೆನ್ನೆಲ್ಲಾ ನೋಡಿ, ನನ್ನ ಲವ್&zwnj;ನಲ್ಲೂ ಜಗಳ ಸ್ಟಾರ್ಟ್ ಆಯಿತು. ಜೊತೆಗೆ ನಮ್ಮ ಕುಟುಂಬದಲ್ಲೂ ತುಂಬಾ ಜಗಳ ಸ್ಟಾರ್ಟ್ ಆಯ್ತು. ನಮ್ಮ ಅಮ್ಮ ಅಂತೂ ನಂಜೊತೆ 6 ತಿಂಗಳ ಕಾಲ ಒಂದೂ ಮಾತನಾಡಿರಲಿಲ್ಲ ಗೊತ್ತಾ?, ಆಗ ನಾನಿನ್ನೂ ಚಿಕ್ಕ ಹುಡುಗಿ ಅಲ್ವಾ, ಪರವಾಗಿಲ್ಲ ಬಿಡು ಮಾತಾಡ್ಲಿಲ್ಲ ಅಂದ್ರೆ ಏನು ಅಂತಾ ಸುಮ್ಮನಿದ್ದೆ. ಬಟ್ ನನ್ನ ಲವ್ ಅಂತೂ ಹದಗೆಟ್ಟು ಹೋಗಿತ್ತು. ನನ್ನ ತಮ್ಮ ಸಾಗರ. ಸಿಕ್ಕಾಪಟ್ಟೆ ಸಪೋರ್ಟ್ ಮಾಡ್ತಿದ್ದ ಎಲ್ಲದಕ್ಕೂ. ಯೆಸ್.., ನೀನು ಮಾಡೇ ಮಾಡ್ತೀಯ ಏನಾದ್ರೂನೂ, ಏನಾದ್ರೂ ಮಾಡು ಎಂದು ಹೇಳುತ್ತಿದ್ದನು. ಓಕೆ ಅಂತಾ ಹೇಳಿ ನಾನು ನನ್ನ ಜರ್ನಿ ಸ್ಟಾರ್ಟ್ ಮಾಡಿದೆ'.&lt;/p&gt;&lt;h2&gt;&lt;strong&gt;ನನ್ನ ಹತ್ತಿರ ಶಕ್ತಿನೇ ಇರಲಿಲ್ಲ&lt;/strong&gt;&lt;/h2&gt;&lt;p&gt;'ನಿಮಗೆ ಗೊತ್ತಿಲ್ಲ.., ನನ್ನ ಲವ್ವಲ್ಲಿ ಎಷ್ಟು ನೊಂದು, ಬೆಂದಿದ್ದೀನಿ ಅಂತಾ. ನಿಜವಾದ ಜೀವನ ಇವಾಗಿನಿಂದ ಸ್ಟಾರ್ಟ್ ಆಯ್ತು ಅಂತಾ. ತುಂಬಾ ನೋವು ಕೊಟ್ಟಿದ್ದಾನೆ, ನನ್ನ ಲವ್ವರ್ ಎನಿಸಿಕೊಂಡೋನು. ಎಷ್ಟು ನೋವು ಕೊಟ್ಟಿದ್ದಾನೆ ಎಂದರೆ ಹೇಳೋಕಾಗಲ್ಲ. ಅಷ್ಟು ನೋವು ಕೊಟ್ಟಿದ್ದಾನೆ. ದಿನವೂ ನೆಗೆಟಿವ್, ಚುಚ್ಚಿ-ಚುಚ್ಚಿ ಮಾತನಾಡೋದು ಮಾಡ್ತಿದ್ದ. ಒಂದು ಹುಡುಗನ ಜೊತೆಗೆ ಮಾತನಾಡಂಗಿಲ್ಲ. ನನ್ನ ಬಗ್ಗೆ ಎಲ್ಲಾ ಗೊತ್ತಿದ್ದರೂ ಅವನೇ ನೆಗಟಿವ್ ಮಾತನಾಡುತ್ತಿದ್ದ. ಸಹಿಸಿಕೊಂಡು ಸಹಿಸಿಕೊಂಡು ನನಗೂ ಸಾಕಾಗಿ ಹೋಗಿತ್ತು. ಏಕೆಂದರೆ ಡೈಲಿ ಜಗಳ ಮಾಡೋದಕ್ಕೆ ನನ್ನ ಹತ್ತಿರ ಶಕ್ತಿನೇ ಇರಲಿಲ್ಲ'.&lt;/p&gt;&lt;h3&gt;&lt;strong&gt;ಒಂದು ದಿನ ಅವನನ್ನ ಬಿಟ್ಟುಬಿಟ್ಟೆ&lt;/strong&gt;&lt;/h3&gt;&lt;p&gt;ನಾನು ಅಷ್ಟೆಲ್ಲಾ ಬೈಸಿಕೊಂಡರೂ ಪರವಾಗಿಲ್ಲ ಅಂತಾ ಹೇಳಿ, ನೀನು ನಂಗೆ ಬೇಡ್ವೇ ಬೇಡ ಅಂತೇಳಿ ಒಂದು ದಿನ ಅವನನ್ನ ಬಿಟ್ಟುಬಿಟ್ಟೆ. ಆದ್ರೆ, ಮತ್ತೆ ಪ್ಯಾಚಪ್ ಆಗೋಯ್ತು. ನಮ್ ಲವ್ ಮತ್ತೆ ಪ್ಯಾಚಪ್ ಆದಮೇಲೆ ಏನೆಲ್ಲಾ ಸ್ಟಾರ್ಟ್ ಆಯ್ತು ರಗಳೆಗಳು ಎಂಬುದನ್ನು ಮುಂದಿನ ಎಪಿಸೋಡ್&zwnj;ನಲ್ಲಿ ಹೇಳ್ತೀನಿ' ಎಂದು ಸೋನು ಶ್ರೀನಿವಾಸ್ ಗೌಡ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.&lt;/p&gt;&lt;p&gt;&lt;strong&gt;ವಿಡಿಯೋ ನೋಡಲು &lt;/strong&gt;&lt;strong&gt;ಇಲ್ಲಿ ಕ್ಲಿಕ್ ಮಾಡಿ&lt;/strong&gt;&lt;/p&gt;&lt;h3&gt;&lt;strong&gt;ಟ್ರೋಲಿಗರಿಗೆ ಕೆಟ್ಟದಾಗೇ ಉತ್ತರ ಕೊಡ್ತಿದ್ದ ಸೋನು&lt;/strong&gt;&lt;/h3&gt;&lt;p&gt;ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿ ಫೋಟೋ, ಬೀಚ್ ಫೋಟೋ ಹಂಚಿಕೊಳ್ಳುತ್ತಿದ್ದ ಹಾಗೂ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಅವರದ್ದೇ ಸ್ಟೈಲ್&zwnj;ನಲ್ಲಿ ಕೆಟ್ಟದಾಗಿಯೇ ಉತ್ತರ ನೀಡುತ್ತಿದ್ದ ಸೋನು ಶ್ರೀನಿವಾಸ ಗೌಡ ಭಾರೀ ಟ್ರೋಲ್ ಆಗುತ್ತಿದ್ದರು. ಸಾಮಾಜಿಕ ಜಾಲತಾಣದಿಂದ ಒಳ್ಳೆಯ ಖ್ಯಾತಿ ಬಂದಿದ್ದಕ್ಕಿಂತ ಅಪಖ್ಯಾತಿಯೇ ಹೆಚ್ಚಾಗಿ ಬಂತೆಂದು ಕೆಲವರು ಹೇಳುತ್ತಾರೆ. ಇತ್ತೀಚೆಗೆ ಕಿರುಚಿತ್ರಗಳಲ್ಲಿಯೂ ಸೋನು ಪೊಲೀಸ್ ಪಾತ್ರವೊಂದನ್ನು ಮಾಡಿದ್ದಾರೆ.&amp;nbsp;&lt;/p&gt;&lt;p&gt;ಪ್ರಸ್ತುತವಾಗಿ ಸೋನು ಶ್ರೀನಿವಾಸ್ ಗೌಡ ಇನ್&zwnj;ಸ್ಟಾಗ್ರಾಂ ಖಾತೆಗೆ ಬರೋಬ್ಬರಿ 1.1 ಮಿಲಿಯನ್ ಫಾಲೋವರ್ಸ್&zwnj;ಗಳಿದ್ದಾರೆ. ರೀಲ್ಸ್ ಹಾಗೂ ಪ್ರಮೋಷನ್&zwnj;ನಿಂದ ಹಣ ಬರುತ್ತಿದ್ದರೂ ನೆಮ್ಮದಿಯಾಗಿ ಜೀವನ ಮಾಡಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/tv-talk/bigg-boss-ott-fame-sonu-srinivas-gowda-breaks-down-trolls-ruined-my-family-life-and-toxic-love-sat/articleshow-k2ow67m"/>
        </item>
        <item>
            <title><![CDATA[ಉಜ್ಜೋದು ಬೇಡ, ಇವೆರೆಡನ್ನು ಡಿಟರ್ಜೆಂಟ್ ಪೌಡರ್ ಜೊತೆ ಬೆರೆಸಿ ಹಿಂಡಿ ಹಠಮಾರಿ ಕೊಳೆ ಬಿಟ್ಟು ಹೋಗುತ್ತೆ!]]></title>
            <link>https://kannada.asianetnews.com/gallery/women/how-to-restore-your-white-clothes-grandmas-secret-cleaning-tips-io41d06</link>
            <guid isPermaLink="true">https://kannada.asianetnews.com/gallery/women/how-to-restore-your-white-clothes-grandmas-secret-cleaning-tips-io41d06</guid>
            <pubDate>Thu, 09 Apr 2026 12:51:24 +0530</pubDate>
            <description><![CDATA[&lt;p&gt;Laundry tips Kannada: ಕೇವಲ ಎರಡು ಬಾರಿ ಧರಿಸಿದರೂ ಸಾಕು, ಬೆಳ್ಳಗಿದ್ದ ಶರ್ಟ್ ಅಥವಾ ಕುರ್ತಾಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಿಮ್ಮ ಮನೆಯ ಕಿಚನ್&zwnj;ನಲ್ಲಿರುವ ಮೂರೇ ಪದಾರ್ಥಗಳನ್ನು ಬಳಸಿದರೆ ಸಾಕು, ಬಿಳಿ ಬಟ್ಟೆಗಳು ಮತ್ತೆ ಹೊಚ್ಚ ಹೊಸತರಂತೆ ಹೊಳೆಯುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k560wjg4qb9a95kyp598z3bx,imgname-gettyimages-918818642-1757917628932.jpg" type="image/jpeg" height="390" width="690"/>
            <content:encoded><![CDATA[&lt;p&gt;Laundry tips Kannada: ಕೇವಲ ಎರಡು ಬಾರಿ ಧರಿಸಿದರೂ ಸಾಕು, ಬೆಳ್ಳಗಿದ್ದ ಶರ್ಟ್ ಅಥವಾ ಕುರ್ತಾಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಿಮ್ಮ ಮನೆಯ ಕಿಚನ್&zwnj;ನಲ್ಲಿರುವ ಮೂರೇ ಪದಾರ್ಥಗಳನ್ನು ಬಳಸಿದರೆ ಸಾಕು, ಬಿಳಿ ಬಟ್ಟೆಗಳು ಮತ್ತೆ ಹೊಚ್ಚ ಹೊಸತರಂತೆ ಹೊಳೆಯುತ್ತವೆ.&lt;/p&gt;&lt;img&gt;&lt;p&gt;ನಮಗೆಲ್ಲರಿಗೂ ಬೆಳ್ಳಗೆ ಪಳಪಳ ಹೊಳೆಯುವ ಬಟ್ಟೆಗಳನ್ನು ಧರಿಸುವುದೆಂದರೆ ಇಷ್ಟ. ಆದರೆ ಕೆಲವೇ ದಿನಗಳಲ್ಲಿ ಬಿಳಿ ಶರ್ಟ್ ಅಥವಾ ಕುರ್ತಾಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇಂತಹ ಹಠಮಾರಿ ಹಳದಿ ಕಲೆಗಳನ್ನು ಮತ್ತು ಗುರುತುಗಳನ್ನು ಹೋಗಲಾಡಿಸಲು ಅಜ್ಜಿ ಕಾಲದ ಕೆಲವು ಅದ್ಭುತ ಮನೆಮದ್ದುಗಳು ಇಲ್ಲಿವೆ.&amp;nbsp;&lt;/p&gt;&lt;img&gt;&lt;p&gt;ಕೇವಲ ಡಿಟರ್ಜೆಂಟ್ ಪೌಡರ್&zwnj;ನಿಂದ ಬಿಳಿ ಬಟ್ಟೆಯ ಹಳದಿ ಬಣ್ಣ ಹೋಗುವುದಿಲ್ಲ. ಅದಕ್ಕಾಗಿ ಈ ಹ್ಯಾಕ್ ಬಳಸಿ..*ಒಂದು ಬಕೆಟ್&zwnj;ನಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ನಿಮ್ಮ ರೆಗ್ಯುಲರ್ ಡಿಟರ್ಜೆಂಟ್ ಪುಡಿ, ಒಂದು ಚಮಚ ಅಡುಗೆ ಸೋಡಾ ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು ಬೆರೆಸಿ.*ಈ ಮಿಶ್ರಣದಲ್ಲಿ ಬಟ್ಟೆಗಳನ್ನು 1-2 ಗಂಟೆ ಅಥವಾ ಇಡೀ ರಾತ್ರಿ ನೆನೆಸಿಡಿ. ನಂತರ ಮಾಮೂಲಿ ತೊಳೆಯಿರಿ. ಇದರಿಂದ ಬಟ್ಟೆಯ ಹಳದಿ ಬಣ್ಣ ಮಾಯವಾಗಿ, ಬಟ್ಟೆಗಳು ಮತ್ತೆ ಬೆಳ್ಳಗಾಗುತ್ತವೆ.&amp;nbsp;&lt;/p&gt;&lt;img&gt;&lt;p&gt;ಒಮ್ಮೊಮ್ಮೆ ಒಟ್ಟಿಗೆ ಬಟ್ಟೆ ಒಗೆಯುವಾಗ ಬೇರೆ ಬಣ್ಣದ ಬಟ್ಟೆಯ ಬಣ್ಣ ಬಿಳಿ ಬಟ್ಟೆಗೆ ಅಂಟಿಕೊಳ್ಳುತ್ತದೆ. ಇದನ್ನು ತೆಗೆಯುವುದು ಸಹ ಸುಲಭ..*ಉಗುರು ಬೆಚ್ಚಗಿನ ನೀರಿಗೆ ಒಂದು ಪ್ಯಾಕೆಟ್ ಈನೋ (Eno), ಒಂದು ನಿಂಬೆ ಹಣ್ಣಿನ ರಸ ಮತ್ತು ಸ್ವಲ್ಪ ಡಿಟರ್ಜೆಂಟ್ ಸೇರಿಸಿ.*ಇದರಲ್ಲಿ ಬಣ್ಣ ಅಂಟಿದ ಬಿಳಿ ಬಟ್ಟೆಯನ್ನು ಒಂದೂವರೆ ಗಂಟೆ ನೆನೆಸಿಡಿ. ನಂತರ ಕೈಯಿಂದ ಲಘುವಾಗಿ ಹಿಂಡಿದರೆ ಅಂಟಿಕೊಂಡ ಬಣ್ಣ ತಾನಾಗಿಯೇ ಹೊರಬರುತ್ತದೆ.&amp;nbsp;&lt;/p&gt;&lt;img&gt;&lt;p&gt;ಕಾಲರ್ ಅಥವಾ ತೋಳುಗಳ ಮೇಲೆ ಅಂಟಿಕೊಂಡಿರುವ ಜಿಡ್ಡು ಮತ್ತು ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಈ ಪೇಸ್ಟ್ ತಯಾರಿಸಿ..*ಒಂದು ಬಟ್ಟಲಿನಲ್ಲಿ ಸ್ವಲ್ಪ ಅಡುಗೆ ಸೋಡಾ, ನಿಂಬೆ ರಸ, ಬಿಳಿ ವಿನೆಗರ್ ಮತ್ತು ಸ್ವಲ್ಪ ಡಿಟರ್ಜೆಂಟ್ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. &amp;nbsp;*ಈ ಪೇಸ್ಟ್ ಅನ್ನು ಕಲೆ ಇರುವ ಜಾಗಕ್ಕೆ ಹಚ್ಚಿ 1-2 ಗಂಟೆ ಬಿಡಿ. ನಂತರ ಬ್ರಷ್&zwnj;ನಿಂದ ಲಘುವಾಗಿ ಉಜ್ಜಿದರೆ ಕಲೆಗಳು ಪೂರ್ತಿಯಾಗಿ ಮಾಯವಾಗುತ್ತವೆ. &amp;nbsp;&lt;/p&gt;&lt;img&gt;&lt;p&gt;ಬಿಳಿ ಬಟ್ಟೆಗಳನ್ನು ತೊಳೆದ ನಂತರ ನೇರ ಸೂರ್ಯನ ಬಿಸಿಲಿನಲ್ಲಿ ಒಣಗಿಸುವುದರಿಂದ ಅವುಗಳ ಬಿಳುಪು ಹಾಗೆಯೇ ಉಳಿಯುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/women/how-to-restore-your-white-clothes-grandmas-secret-cleaning-tips-io41d06"/>
        </item>
        <item>
            <title><![CDATA[ಸಾವನ್ನು ಮಡಿಲಲ್ಲಿಟ್ಟು, ದೇಶಕ್ಕಾಗಿ ಪಾಕ್​ನ ಸೊಸೆಯಾದ ಭಾರತದ ರಾ ಏಜೆಂಟ್​ ಮೈನವಿರೇಳಿಸುವ ಸ್ಟೋರಿ]]></title>
            <link>https://kannada.asianetnews.com/india-news/a-woman-spy-who-helped-india-defeat-pakistan-in-1971-suc/articleshow-4v3r1n1</link>
            <guid isPermaLink="true">https://kannada.asianetnews.com/india-news/a-woman-spy-who-helped-india-defeat-pakistan-in-1971-suc/articleshow-4v3r1n1</guid>
            <pubDate>Wed, 08 Apr 2026 19:01:31 +0530</pubDate>
            <description><![CDATA[&lt;p&gt;1970ರ ದಶಕದಲ್ಲಿ, ಸೆಹ್ಮತ್ ಖಾನ್ ಎಂಬ ಭಾರತೀಯ ಯುವತಿ ದೇಶಕ್ಕಾಗಿ ತನ್ನೆಲ್ಲಾ ಕನಸುಗಳನ್ನು ತ್ಯಜಿಸಿ ಪಾಕಿಸ್ತಾನಿ ಸೇನಾಧಿಕಾರಿಯನ್ನು ವಿವಾಹವಾದರು. ಶತ್ರುದೇಶದಲ್ಲಿ ಪತ್ನಿಯಾಗಿ ನಟಿಸುತ್ತಾ, ಭಾರತಕ್ಕೆ ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ರವಾನಿಸಿದ , 1971ರ ಇಂಡೋ-ಪಾಕ್​ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಹಿಳಾ ಗೂಢಚಾರಿಯ ರೋಚಕ ಕಥೆಯಿದು. ಇವರ ಜೀವನಗಾಥೆಯೇ 'ರಾಝಿ' ಸಿನಿಮಾಗೆ ಸ್ಪೂರ್ತಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knpmb5b025sm9759wtxq646b,imgname-sehamat-khan-1775654770016.jpg" type="image/jpeg" height="390" width="690"/>
            <content:encoded><![CDATA[&lt;p&gt;ದುರಂಧರ್ 1 ಮತ್ತು 2 ಚಿತ್ರ ನೋಡಿದವರಿಗೆ ಭಾರತದ ಗೂಢಾಚಾರರು ಅರ್ಥಾತ್​ ಸ್ಪೈ (Spy) ರಾ ಏಜೆಂಟ್ಸ್​ (RAW Agents) ಯಾವ ರೀತಿಯಲ್ಲಿ ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ದರು. ಅವರಿಂದ ಹೇಗೆ ಭಾರತ ಬಚಾವ್​ ಆಯಿತು. ಯಾವ ರೀತಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟುಕೊಂಡು ಈ ಏಜೆಂಟ್​ಗಳು ಕೆಲಸ ಮಾಡುತ್ತಾರೆ, ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಪಾಕಿಸ್ತಾನದಂಥ ಪಾಪಿಯ ನೆಲೆಯಲ್ಲಿ ಅವರಿಗೆ ಆದ ಘನಘೋರ ಶಿಕ್ಷೆ, ಯಾರೂ ಊಹಿಸಲು ಸಾಧ್ಯವಿಲ್ಲದ ಕಠೋರ ಚಿತ್ರಹಿಂಸೆ ನೀಡುತ್ತಾರೆ ಎನ್ನುವುದು ತಿಳಿದಿದೆ. ಇದರ ಹೊರತಾಗಿಯೂ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು ಹಲವರು. ಹಾಗೆಂದು ರಾ ಏಜೆಂಟ್ಸ್​ ಎಂದ ಮಾತ್ರಕ್ಕೆ ಅವರು ಪುರುಷರೇ ಎಂದೇನಲ್ಲ. ಕೆಲವು ಸ್ತ್ರೀಯರು ಕೂಡ ದೇಶಕ್ಕಾಗಿ ಇದೇ ರೀತಿ ಹೋರಾಟ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಸೆಹ್ಮತ್ ಖಾನ್&zwnj; ರೋಚಕ ಸ್ಟೋರಿ&lt;/strong&gt;&lt;/h2&gt;&lt;p&gt;ಅವರಲ್ಲಿ ಒಬ್ಬರು ಸೆಹ್ಮತ್ ಖಾನ್&zwnj;. ಈಕೆಯ ಕಥೆಯೇ ಮೈ ನವಿರೇಳುವಂಥದ್ದಾಗಿದೆ. 1970ರ ದಶಕದ ಸ್ಟೋರಿ ಇದು. 1971ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಯುದ್ಧದಲ್ಲಿ ಭಾರತದ ಗೆಲುವಿನ ಹಿಂದೆ ಇವರದ್ದೇ ಕೈ ಇದೆ. ಅವರ ತಂದೆ ಕಾಶ್ಮೀರಿ ಮುಸ್ಲಿಂ ಮತ್ತು ಅವರ ತಾಯಿ ಪಂಜಾಬಿ ಹಿಂದೂ. ಭಾರತವು ಧರ್ಮ ಅಥವಾ ವೈಯಕ್ತಿಕ ಗುರುತಿಗಿಂತ ಮೊದಲು ಎಂದು ಅವರು ಕಲಿತು ಬೆಳೆದರು. ಈ ನಂಬಿಕೆಯು ನಂತರದ ಜೀವನದಲ್ಲಿ ಅವರ ಆಯ್ಕೆಗಳನ್ನು ರೂಪಿಸಿತು. ಪಾಕಿಸ್ತಾನಿ ಅಧಿಕಾರಿಯ ಪತ್ನಿಯ ವೇಷ ಧರಿಸಿ ಪಾಕಿಸ್ತಾನಕ್ಕೆ ಹೋಗಿ ಭಾರತಕ್ಕೆ ಸಹಾಯ ಮಾಡಿದ್ದ ಇವರ ಕಥೆ ರೋಚಕವಾಗಿದೆ. ಸೆಹ್ಮತ್ ದೆಹಲಿಯಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗ ಆಕೆಯ ಜೀವನ ಶಾಶ್ವತವಾಗಿ ಬದಲಾಯಿತು. ಕ್ಯಾನ್ಸರ್ ನಿಂದ ಸಾಯುತ್ತಿದ್ದ ಆಕೆಯ ತಂದೆ ಭಾರತೀಯ ಗುಪ್ತಚರ ಇಲಾಖೆಯೊಂದಿಗಿನ ತಮ್ಮ ರಹಸ್ಯ ಸಂಪರ್ಕಗಳನ್ನು ಬಹಿರಂಗಪಡಿಸಿದರು. ಅಲ್ಲಿಯವರೆಗೆ ಅವರೊಬ್ಬ ಏಜೆಂಟ್​ ಎನ್ನುವುದು ಯಾರಿಗೂ ತಿಳಿದಿಲಿಲ್ಲ. ಅವರು ಸೆಹ್ಮತ್ ಗೆ ಅಪಾಯದ ಬಗ್ಗೆ ತಿಳಿಸಿದರು. ಕೊನೆಗೆ ಆಯ್ಕೆಯನ್ನು ಅವಳಿಗೇ ಬಿಟ್ಟರು.&lt;/p&gt;&lt;h3&gt;&lt;strong&gt;ಪ್ರೀತಿಯನ್ನೂ ತ್ಯಜಿಸಿ ಪಾಕಿಯನ್ನು ಮದ್ವೆಯಾದ್ರು&lt;/strong&gt;&lt;/h3&gt;&lt;p&gt;ಆದರೆ ದೇಶಪ್ರೇಮ ಎನ್ನುವುದು ರಕ್ತದಲ್ಲಿಯೇ ಇತ್ತ. ಅದಕ್ಕಾಗಿ ಅವರು ದೇಶ ಸೇವೆ ಮಾಡಲು ಮುನ್ನುಗ್ಗಿದರು. ತಮ್ಮ ಶಿಕ್ಷಣ, ಕನಸುಗಳನ್ನು ಬಿಟ್ಟರು. ಅವರು ಆಗ ಒಬ್ಬರನ್ನು ಪ್ರೀತಿಸುತ್ತಿದ್ದರು. ಆದರೆ ದೇಶಕ್ಕಾಗಿ ಪ್ರೇಮವನ್ನೂ ತ್ಯಾಗ ಮಾಡಿ, ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಯ ಮಗ ಇಕ್ಬಾಲ್ ಸೈಯದ್ ಅವರನ್ನು ಅವರು ವಿವಾಹವಾದರು. ಈ ಮದುವೆಯು ಆಕೆಗೆ ಪ್ರಮುಖ ಮಿಲಿಟರಿ ಮಾಹಿತಿಗೆ ಪ್ರವೇಶವನ್ನು ನೀಡಿತು. ಇದು ನಕಲಿ ಪಾತ್ರವಾಗಿರಲಿಲ್ಲ, ಇದು ನಿಜವಾದ ವಿವಾಹವಾಗಿತ್ತು. ಆದರೆ ಸ್ವಲ್ಪವೇ ಅನುಮಾನ ಬಂದರೂ ಆಕೆಯ ಮೃತ್ಯು ಮಾತ್ರ ಯಾರೂ ಊಹಿಸುವ ರೀತಿಯಲ್ಲಿ ಇರಲಿಲ್ಲ.&lt;/p&gt;&lt;h2&gt;&lt;strong&gt;ಸಾಕ್ಷಿ ಕಳುಹಿಸುತ್ತಿದ್ದ ಸೆಹ್ಮತ್​&lt;/strong&gt;&lt;/h2&gt;&lt;p&gt;ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾಗ, ಸೆಹ್ಮತ್ ರಹಸ್ಯವಾಗಿ ಮಾಹಿತಿಯನ್ನು ಸಂಗ್ರಹಿಸುತ್ತಾ ಪತ್ನಿ ಮತ್ತು ಸೊಸೆಯಾಗಿ ತನ್ನ ಪಾತ್ರವನ್ನು ಸಮತೋಲನಗೊಳಿಸಿಕೊಂಡರು. ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಯಾಹ್ಯಾ ಖಾನ್ ಅವರ ಮೊಮ್ಮಕ್ಕಳಿಗೂ ಅವರು ಪಾಠಗಳನ್ನು ಹೇಳುತ್ತಿದ್ದರು, ಇದು ಅವರನ್ನು ಪ್ರಬಲ ವಲಯಗಳಿಗೆ ಹತ್ತಿರವಾಗಿಸಿತು. ಅವರು ಭಾರತಕ್ಕೆ ಕಳುಹಿಸಿದ ಪ್ರತಿಯೊಂದು ಸಂದೇಶವೂ ನಿಖರವಾಗಿ ಸಾಬೀತಾಯಿತು. ಆಕೆಯನ್ನು ಮತ್ತು ಕುಟುಂಬವನ್ನು ರಕ್ಷಿಸಲು ಎಲ್ಲವೂ ರಹಸ್ಯವಾಗಿಡಲಾಗಿತ್ತು. ಸಾವಿನ ಭೀತಿ ಕ್ಷಣ ಕ್ಷಣಕ್ಕೆ ಇದ್ದರೂ, ಭಾರತದ ಪರವಾಗಿ ಆಕೆ ಎಲ್ಲವನ್ನೂ ಮಾಡಿದರು. ಅವರು ಹೋದ ಕೆಲಸ ಯಶಸ್ವಿಯಾಗಿತ್ತು. ಮಿಷನ್​ ಮುಗಿದ ಬಳಿಕ ಭಾರತಕ್ಕೆ ವಾಪಸಾದರು. ಅವರು ಪಾಕಿಸ್ತಾನದಿಂದ ಹಿಂದಿರುಗಿದ ನಂತರ ಜನಿಸಿದ ಮತ್ತು ಭಾರತೀಯ ಸೇನಾ ಅಧಿಕಾರಿಯಿಂದ ದತ್ತು ಪಡೆದ ಅವರ ಮಗ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಿನಿಮಾ ಆದ ಸ್ಟೋರಿ&lt;/strong&gt;&lt;/h3&gt;&lt;p&gt;2018 ರಲ್ಲಿ ಬಿಡುಗಡೆಯಾದ ರಾಝಿ ಚಲನಚಿತ್ರವು ಲೇಖಕ ಹರಿಂದರ್ ಸಿಕ್ಕಾ ಅವರ &quot;ಕಾಲಿಂಗ್ ಸೆಹ್ಮತ್&quot; ಕಾದಂಬರಿಯನ್ನು ಆಧರಿಸಿದೆ. ಹರಿಂದರ್ ಸಿಕ್ಕಾ ಅವರ ಪ್ರಕಾರ, ಇದು ಒಬ್ಬ ಮಹಿಳಾ ಗೂಢಚಾರರ ಕಥೆ, ಕಾಲ್ಪನಿಕವಲ್ಲ, ನಿಜವಾದ ಪಾತ್ರ. ಹರಿಂದರ್ ಸಿಕ್ಕಾ ಸ್ವತಃ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದರು ಮತ್ತು ಕಾರ್ಗಿಲ್ ಬಗ್ಗೆ ಸಂಶೋಧನೆ ನಡೆಸುವಾಗ ಸೆಹ್ಮತ್ ಖಾನ್ ಅವರ ಮಗನನ್ನು ಭೇಟಿಯಾದರು. ಮಹಿಳಾ ಗೂಢಚಾರರಾದ ಸೆಹ್ಮತ್ ಖಾನ್ ಅವರ ನಿಜವಾದ ಗುರುತನ್ನು ಪುಸ್ತಕದಲ್ಲಿ ಮರೆಮಾಡಲಾಗಿದೆ. ಈ ಸಿನಿಮಾದಲ್ಲಿ ಸೆಹ್ಮತ್​ ಅವರ ಪಾತ್ರವನ್ನು ಆಲಿಯಾ ಭಟ್​ ನಿರ್ವಹಿಸಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/a-woman-spy-who-helped-india-defeat-pakistan-in-1971-suc/articleshow-4v3r1n1"/>
        </item>
        <item>
            <title><![CDATA['ಪ್ರೇಮಲೋಕ'ದಿಂದ ಜಾರಿಬಿದ್ದ ಸಿತಾರ್ ವಾದಕ-ನಟಿ ಜೋಡಿ; ಬ್ರೇಕಪ್ ಸುದ್ದಿಗೆ ಸಾಕ್ಷಿನೂ ಸಿಕ್ತು.. ಆದ್ರೆ ರೀಸನ್?]]></title>
            <link>https://kannada.asianetnews.com/cine-world/rishab-rikhiram-sharma-and-sanya-malhotra-love-break-up-news-becomes-viral-in-social-media-now/articleshow-79g6oc2</link>
            <guid isPermaLink="true">https://kannada.asianetnews.com/cine-world/rishab-rikhiram-sharma-and-sanya-malhotra-love-break-up-news-becomes-viral-in-social-media-now/articleshow-79g6oc2</guid>
            <pubDate>Thu, 09 Apr 2026 12:37:41 +0530</pubDate>
            <description><![CDATA[&lt;p&gt;ಆದರೆ ರಿಷಬ್ ಅವರ ಸಂಗೀತ ಕಚೇರಿಗಳಲ್ಲಿ ಸಾನ್ಯಾ ಕಾಣಿಸಿಕೊಳ್ಳುತ್ತಿದ್ದ ರೀತಿ ಇಬ್ಬರ ನಡುವೆ &lsquo;ಏನೋ ನಡೀತಿದೆ&rsquo; ಅನ್ನೋದಕ್ಕೆ ಸಾಕ್ಷಿಯಾಗಿತ್ತು. 2025ರ ಜನವರಿಯಲ್ಲಿ ರೆಡ್ಡಿಟ್&zwnj;ನಲ್ಲಿ ವೈರಲ್ ಆಗಿದ್ದ ಕೆಲವು ಫೋಟೋಗಳು ಇವರಿಬ್ಬರ ಆತ್ಮೀಯತೆಯನ್ನು ಜಗಜ್ಜಾಹೀರು ಮಾಡಿದ್ದವು. ಆದರೆ ಈಗ ಕೇಳಿಬರುತ್ತಿರುವ ಸುದ್ದಿ ಬೇರೇನೇ ಇದೆ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrfkhsmaqy80trf7y6fswc5,imgname-rishab-rikhiram-sharma-sanya-malhotra-1775716910899.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರೇಮಲೋಕದಿಂದ ಹೊರಬಂದ್ರ &lsquo;ದಂಗಲ್&rsquo; ಬೆಡಗಿ?&amp;nbsp;&lt;/strong&gt;&lt;/p&gt;&lt;p&gt;ಬಾಲಿವುಡ್&zwnj;ನ ಪ್ರತಿಭಾವಂತ ನಟಿ, 'ದಂಗಲ್' ಬೆಡಗಿ ಸಾನ್ಯಾ ಮಲ್ಹೋತ್ರಾ (Sanya Malhotra) ಈಗ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸಿನಿಮಾದಿಂದಲ್ಲ, ಬದಲಾಗಿ ತಮ್ಮ ಪರ್ಸನಲ್ ಲೈಫ್&zwnj;ನ ಗುಸುಗುಸುವಿನಿಂದ! ಹೌದು, ಕಳೆದ ಕೆಲವು ಸಮಯದಿಂದ ಸಿತಾರ್ ವಾದಕ ರಿಷಬ್ ರಿಖಿರಾಮ್ ಶರ್ಮಾ (Rishab Rikhiram Sharma) ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದ್ದ ಸಾನ್ಯಾ, ಈಗ ಅವರ ಜೊತೆಗಿನ ಸಂಬಂಧಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಬಿಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.&lt;/p&gt;&lt;h2&gt;ಸೋಷಿಯಲ್ ಮೀಡಿಯಾದಲ್ಲಿ &lsquo;ಅನ್&zwnj;ಫಾಲೋ&rsquo; ಅಸ್ತ್ರ!&lt;/h2&gt;&lt;p&gt;ಇಂದಿನ ಕಾಲದಲ್ಲಿ ಒಂದು ಸಂಬಂಧ ಮುಗಿಯಿತು ಅನ್ನೋದಕ್ಕೆ ದೊಡ್ಡ ಸಾಕ್ಷಿ ಅಂದ್ರೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಒಬ್ಬರನ್ನೊಬ್ಬರು &lsquo;ಅನ್&zwnj;ಫಾಲೋ&rsquo; ಮಾಡುವುದು. ಸಾನ್ಯಾ ಮತ್ತು ರಿಷಬ್ ಕೂಡ ಈಗ ಅದೇ ಹಾದಿ ಹಿಡಿದಿದ್ದಾರೆ. ಇಬ್ಬರೂ ಸದ್ದಿಲ್ಲದೆ ಪರಸ್ಪರ ಅನ್&zwnj;ಫಾಲೋ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇಬ್ಬರೂ ಎಂದೂ ಕೂಡ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಬಾಯಿ ಬಿಟ್ಟಿರಲಿಲ್ಲ.&lt;/p&gt;&lt;p&gt;ಆದರೆ ರಿಷಬ್ ಅವರ ಸಂಗೀತ ಕಚೇರಿಗಳಲ್ಲಿ ಸಾನ್ಯಾ ಕಾಣಿಸಿಕೊಳ್ಳುತ್ತಿದ್ದ ರೀತಿ ಇಬ್ಬರ ನಡುವೆ &lsquo;ಏನೋ ನಡೀತಿದೆ&rsquo; ಅನ್ನೋದಕ್ಕೆ ಸಾಕ್ಷಿಯಾಗಿತ್ತು. 2025ರ ಜನವರಿಯಲ್ಲಿ ರೆಡ್ಡಿಟ್&zwnj;ನಲ್ಲಿ ವೈರಲ್ ಆಗಿದ್ದ ಕೆಲವು ಫೋಟೋಗಳು ಇವರಿಬ್ಬರ ಆತ್ಮೀಯತೆಯನ್ನು ಜಗಜ್ಜಾಹೀರು ಮಾಡಿದ್ದವು. ಆದರೆ ಈಗ ಕೇಳಿಬರುತ್ತಿರುವ ಸುದ್ದಿಯೆಂದರೆ, ರಿಷಬ್ ಈಗ ಬೇರೆಯವರ ಜೊತೆ ಡೇಟಿಂಗ್ ಆರಂಭಿಸಿದ್ದಾರಂತೆ!&lt;/p&gt;&lt;p&gt;ಬ್ರೇಕಪ್ ನೋವಿನ ನಡುವೆಯೂ ಹೊಸ ಮನೆ ಖರೀದಿ!&lt;/p&gt;&lt;p&gt;ಪರ್ಸನಲ್ ಲೈಫ್&zwnj;ನಲ್ಲಿ ಕೊಂಚ ಬೇಸರದ ಸಂಗತಿ ಎದುರಾಗಿದ್ದರೂ, ವೃತ್ತಿ ಬದುಕಿನಲ್ಲಿ ಮಾತ್ರ ಸಾನ್ಯಾ ಸಖತ್ ಸಕ್ಸಸ್ ಕಾಣುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಮಾಯಾನಗರಿ ಮುಂಬೈನಲ್ಲಿ ಒಂದು ಸುಂದರವಾದ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಅದರ ಗೃಹಪ್ರವೇಶದ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದ ಸಾನ್ಯಾ, &quot;ಯಶಸ್ಸಿನ ಮೆಟ್ಟಿಲೇರುತ್ತಿದ್ದೇನೆ&quot; ಎಂಬ ಸಂದೇಶ ನೀಡಿದ್ದರು. ಒಂದು ಕಡೆ ಪ್ರೀತಿಯ ಮನೆಯಿಂದ ಹೊರಬಂದರೂ, ಸ್ವಂತ ಮನೆಯ ಒಡತಿಯಾಗಿ ಸಾನ್ಯಾ ಸಂಭ್ರಮಿಸುತ್ತಿದ್ದಾರೆ.&lt;/p&gt;&lt;h3&gt;ಸಿನಿಮಾ ಜಗತ್ತಿನಲ್ಲಿ ಸಾನ್ಯಾ ಹವಾ!&lt;/h3&gt;&lt;p&gt;ಸಾನ್ಯಾ ಮಲ್ಹೋತ್ರಾ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಅನುರಾಗ್ ಕಶ್ಯಪ್ ನಿರ್ದೇಶನದ 'ಬಂದರ್' ಸಿನಿಮಾದಲ್ಲಿ ಮೊದಲ ಬಾರಿಗೆ ಬಾಬಿ ಡಿಯೋಲ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಇದರ ಜೊತೆಗೆ ರಾಜಕುಮಾರ್ ರಾವ್ ಜೊತೆ 'ಟೋಸ್ಟರ್' ಎಂಬ ಚಿತ್ರದಲ್ಲೂ ಸಾನ್ಯಾ ನಟಿಸುತ್ತಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಬ್ರೇಕಪ್ ವದಂತಿಗಳ ನಡುವೆಯೂ ಸಾನ್ಯಾ ತನ್ನ ವೃತ್ತಿಜೀವನದ ಮೇಲೆ ಫೋಕಸ್ ಮಾಡುತ್ತಿದ್ದಾರೆ. &quot;ಲವ್ ಬ್ರೇಕಪ್ ಆದ್ರೇನಂತೆ, ಲೈಫ್ ಇನ್ನು ಬಾಕಿ ಇದೆ&quot; ಎನ್ನುವಂತೆ ಹೊಸ ಹೊಸ ಪ್ರಾಜೆಕ್ಟ್&zwnj;ಗಳ ಮೂಲಕ ಮಿಂಚಲು ರೆಡಿಯಾಗಿದ್ದಾರೆ ಈ ಸುಂದರಿ. ಸಾನ್ಯಾ ಅವರ ಈ ಆತ್ಮವಿಶ್ವಾಸಕ್ಕೆ ಫ್ಯಾನ್ಸ್ ಮಾತ್ರ ಫುಲ್ ಫಿದಾ ಆಗಿದ್ದಾರೆ!&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/rishab-rikhiram-sharma-and-sanya-malhotra-love-break-up-news-becomes-viral-in-social-media-now/articleshow-79g6oc2"/>
        </item>
        <item>
            <title><![CDATA[ಪತಿ ನಾಪತ್ತೆ, ತಮ್ಮನ ಜೊತೆ ಪತ್ನಿ ಮದ್ವೆ: 25 ವರ್ಷಗಳ ಬಳಿಕ ವಾಪಸಾದ ಗಂಡ- ಮುಂದೇನಾಯ್ತು?]]></title>
            <link>https://kannada.asianetnews.com/india-news/missing-for-25-years-man-returns-home-wife-now-married-to-his-brother-family-in-shock-suc/articleshow-hzoe06q</link>
            <guid isPermaLink="true">https://kannada.asianetnews.com/india-news/missing-for-25-years-man-returns-home-wife-now-married-to-his-brother-family-in-shock-suc/articleshow-hzoe06q</guid>
            <pubDate>Wed, 08 Apr 2026 19:26:05 +0530</pubDate>
            <description><![CDATA[25 ವರ್ಷಗಳ ಹಿಂದೆ ಕಾಣೆಯಾಗಿದ್ದ ಪಂಜಾಬ್&zwnj;ನ ಹಂಸಾ ಸಿಂಗ್ ಎಂಬ ವ್ಯಕ್ತಿ ಈಗ ಜೀವಂತವಾಗಿ ಪತ್ತೆಯಾಗಿದ್ದಾರೆ. ಆತ ಸತ್ತಿದ್ದಾನೆಂದು ಭಾವಿಸಿ, ಕುಟುಂಬದವರು ಆತನ ಪತ್ನಿಯನ್ನು ಆತನ ತಮ್ಮನಿಗೆ ಕೊಟ್ಟು ಮದುವೆ ಮಾಡಿದ್ದರು. 25 ವರ್ಷಗಳ ನಂತರ ಹಂಸಾ ಸಿಂಗ್ ಮನೆಗೆ ಮರಳಿದ್ದು, ಇದು ಕುಟುಂಬದಲ್ಲಿ ಸಂತೋಷದ ಜೊತೆಗೆ ಪತ್ನಿ ಮತ್ತು ಕುಟುಂಬಕ್ಕೆ ದೊಡ್ಡ ಸಾಮಾಜಿಕ ಮತ್ತು ಭಾವನಾತ್ಮಕ ಸಂದಿಗ್ಧತೆಯನ್ನು ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knpp18fmbr80p5ayd0s2wge9,imgname-husband-returned-1775656542708.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂಬಂಧಗಳು, ಸಂಪ್ರದಾಯಗಳು ಮತ್ತು ಕಾನೂನಿನ ವಿಷಯದಲ್ಲಿ ಸಂದಿಗ್ಧತೆಯನ್ನು ಸೃಷ್ಟಿಸುವ ಘಟನೆಯೊಂದು ಉತ್ತರ ಪ್ರದೇಶದ ಪಂಜಾಬ್&zwnj;ನ ಕಪುರ್ತಲಾದಲ್ಲಿ ನಡೆದಿದೆ. 25 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಜೀವಂತವಾಗಿ ಪತ್ತೆಯಾಗಿದ್ದಾನೆ. ಆತ ಮನೆಗೆ ಮರಳಿದ್ದಾನೆ. 25 ವರ್ಷಗಳ ಬಳಿಕ ಮನೆಗೆ ವ್ಯಕ್ತಿ ಬಂದಾಗ ಕುಟುಂಬದಲ್ಲಿ ಅದೆಷ್ಟು ಸಂತೋಷ ಆಗುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ಇಲ್ಲಿ ಆದದ್ದೇ ಬೇರೆ. ಸಂತೋಷ ಒಂದೆಡೆಯಾದರೆ, ಅದರ ಹಿಂದೆ ನೂರೆಂಟು ಸಮಸ್ಯೆಗಳು ಹುಟ್ಟುಕೊಂಡವು. ಅದಕ್ಕೆ ಕಾರಣ, ಆತ ಸತ್ತಿದ್ದಾನೆಂದು ಭಾವಿಸಿ ಆತನ ಪತ್ನಿಯನ್ನು ಅವನ ತಮ್ಮನಿಗೇ ಕೊಟ್ಟು ಮದುವೆ ಮಾಡಿದ್ದರು ಮನೆಯವರು!&lt;/p&gt;&lt;h2&gt;&lt;strong&gt;ಇದ್ದಕ್ಕಿದ್ದಂತೆಯೇ ಕಣ್ಮರೆ&lt;/strong&gt;&lt;/h2&gt;&lt;p&gt;ಪಂಜಾಬ್&zwnj;ನ ಕಪುರ್ತಲಾ ಜಿಲ್ಲೆಯ ನಿವಾಸಿ ಹಂಸಾ ಸಿಂಗ್ 25 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಕುಟುಂಬವು ಅವರನ್ನು ಎಲ್ಲೆಡೆ ಹುಡುಕಿದೆ. ಆದರೆ ಏನೂ ಪತ್ತೆಯಾಗಿಲ್ಲ. ಮೂರು ವರ್ಷಗಳ ಕಾಯುವಿಕೆಯ ನಂತರ, ಕುಟುಂಬವು ಅವರನ್ನು ಸತ್ತರೆಂದು ಪರಿಗಣಿಸಿತು. ಇದಾದ ನಂತರ, ಸಾಮಾಜಿಕ ಸಂಪ್ರದಾಯದ ಪ್ರಕಾರ, ಅವರ ಪತ್ನಿ ವಿಮಲಾ ದೇವಿ ಅವರು ಹಂಸಾ ಸಿಂಗ್ ಅವರ ತಮ್ಮ ಸುಖ ಸಿಂಗ್ ಅವರ ವಿವಾಹ ಮಾಡಲಾಯಿತು. ಮದುವೆಯಾಗಿ ಈಗ 22 ವರ್ಷಗಳಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಖುಷಿಯಿಂದ ಸಂಸಾರ ಸಾಗುತ್ತಿದ್ದಾಗಲೇ ಕುಟುಂಬಕ್ಕೆ ಆಘಾತ ಎದುರಾಗಿದ್ದು, ಕಾಣೆಯಾದ ಹಂಸಾ ಸಿಂಗ್​ 25 ವರ್ಷಗಳ ಬಳಿಕ ಮನೆಗೆ ಬಂದಾಗ!&lt;/p&gt;&lt;h3&gt;&lt;strong&gt;ಭಿಕ್ಷುಕನಾಗಿ ಅಲೆದಾಟ&lt;/strong&gt;&lt;/h3&gt;&lt;p&gt;ನಾಥೌರ್&zwnj;ನ ನಯಾ ಬಜಾರ್&zwnj;ನಲ್ಲಿ ಹರಿದ ಬಟ್ಟೆಗಳಲ್ಲಿ ಮತ್ತು ಉದ್ದನೆಯ ಗಡ್ಡದೊಂದಿಗೆ ಒಬ್ಬ ವ್ಯಕ್ತಿ ಅಲೆದಾಡುತ್ತಿರುವುದು ಕಂಡುಬಂದಿತು. ಅವನನ್ನು ನೋಡಿದ ನಂತರ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಪೊಲೀಸ್ ಠಾಣೆಯ ಉಸ್ತುವಾರಿ ರವೀಂದ್ರ ಪ್ರತಾಪ್ ಸಿಂಗ್ ಸ್ಥಳಕ್ಕೆ ಬಂದರು. ಅವರು ಆ ವ್ಯಕ್ತಿಯನ್ನು ಪ್ರಶ್ನಿಸಿದರು. ಆರಂಭದಲ್ಲಿ, ಅವರು ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಆದರೆ ಕ್ರಮೇಣ, ಅವರು ತಮ್ಮ ಹೆಸರನ್ನು ಹಂಸಾ ಸಿಂಗ್ ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಪೊಲೀಸರಿಂದ ತನಿಖೆ&lt;/strong&gt;&lt;/h3&gt;&lt;p&gt;ಪೊಲೀಸರು ಗಂಭೀರ ತನಿಖೆಯನ್ನು ಪ್ರಾರಂಭಿಸಿದರು ಮತ್ತು ಸ್ಥಳೀಯರ ಸಹಾಯವನ್ನು ಪಡೆದರು. ಅವರನ್ನು ಗುರುತಿಸಲು ಪ್ರಯತ್ನಿಸಲಾಯಿತು. ಪಂಜಾಬ್ ಪೊಲೀಸರನ್ನು ಸಂಪರ್ಕಿಸಲಾಯಿತು. ಇದರ ನಂತರ, ಹಂಸಾ ಸಿಂಗ್ ಅವರ ಕುಟುಂಬ ಸದಸ್ಯರು ಮುಂದಿನ 72 ಗಂಟೆಗಳಲ್ಲಿ ನಾಥೌರ್ ತಲುಪಿದರು. ಆರಂಭದಲ್ಲಿ, ಗುರುತು ದೃಢೀಕರಿಸಲಾಗಿಲ್ಲ. ಏಕೆಂದರೆ ಅವರು 25 ವರ್ಷಗಳ ನಂತರ ಭೇಟಿಯಾಗಿದ್ದರು. ಹಂಸಾ ಸಿಂಗ್ ಸಂಪೂರ್ಣವಾಗಿ ಬದಲಾಗಿದ್ದರು. ಆದರೆ ಅವರ ಸಹೋದರರು ಮತ್ತು ಗ್ರಾಮದ ಸರಪಂಚರು ಬಾಲ್ಯದ ಘಟನೆಗಳು ಮತ್ತು ಕುಟುಂಬಕ್ಕೆ ಸಂಬಂಧಿಸಿದ ನೆನಪುಗಳ ಬಗ್ಗೆ ಹೇಳಿದಾಗ, ಅವರು ಭಾವುಕರಾದರು. ಅವರ ಕಣ್ಣಲ್ಲಿ ನೀರು ಬಂತು.&lt;/p&gt;&lt;p&gt;&lt;strong&gt;ಸಮಸ್ಯೆ ತಂದ ಘಟನೆ&lt;/strong&gt;&lt;/p&gt;&lt;p&gt;ಈ ಕ್ಷಣ ಕುಟುಂಬಕ್ಕೆ ತುಂಬಾ ಸಂತೋಷವಾಯಿತು. ಕುಟುಂಬ ಸದಸ್ಯರು 25 ವರ್ಷಗಳ ನಂತರ ಹಿಂತಿರುಗಿದ್ದರು. ಆದರೆ ಇದು ಒಂದು ಸಮಸ್ಯೆಯನ್ನು ಸೃಷ್ಟಿಸಿತು. ವಿಮಲಾ ದೇವಿ ಎದುರಿಸಿದ ದೊಡ್ಡ ಸಂದಿಗ್ಧತೆ. ಈಗ ಯಾರಿಗೆ ಆದ್ಯತೆ ನೀಡಬೇಕೆಂಬುದೇ ಪ್ರಶ್ನೆ. ಒಂದು ಕಡೆ ಅವರ ಪತಿ ಹಂಸ ಸಿಂಗ್. ಅವರು 25 ವರ್ಷಗಳ ನಂತರ ಹಿಂತಿರುಗಿದ್ದಾರೆ. ಮತ್ತೊಂದೆಡೆ ಸುಖ ಸಿಂಗ್. ಅವರು 22 ವರ್ಷಗಳಿಂದ ಅವರನ್ನು ಪತಿಯಾಗಿ ಬೆಂಬಲಿಸಿದ್ದಾರೆ. ಇಬ್ಬರಿಗೆ ಈಗ 3 ಮಕ್ಕಳಿದ್ದಾರೆ.&lt;/p&gt;&lt;p&gt;&lt;strong&gt;ಮಾನಸಿಕ ಸ್ಥಿತಿ ಅಲ್ಲೋಲ ಕಲ್ಲೋಲ&lt;/strong&gt;&lt;/p&gt;&lt;p&gt;ಈ ಘಟನೆಯು ಭಾವನಾತ್ಮಕತೆಯನ್ನು ಮಾತ್ರವಲ್ಲದೆ ಸಾಮಾಜಿಕ ಮತ್ತು ಕಾನೂನು ಸಂದಿಗ್ಧತೆಯನ್ನು ಸೃಷ್ಟಿಸಿದೆ. ಕುಟುಂಬವು ತುಂಬಾ ಕಠಿಣ ಪರಿಸ್ಥಿತಿಯಲ್ಲಿದೆ. ಈ ಎಲ್ಲದರಲ್ಲೂ ನಾಥೌರ್ ಪೊಲೀಸರ ಪಾತ್ರ ಶ್ಲಾಘನೀಯ. ಜನರು ಭಿಕ್ಷುಕ ಎಂದು ಭಾವಿಸಿದ ವ್ಯಕ್ತಿಯನ್ನು ಗುರುತಿಸುವಲ್ಲಿ ಪೊಲೀಸರು ಬಹಳ ಸೂಕ್ಷ್ಮವಾದ ಕೆಲಸವನ್ನು ಮಾಡಿದರು. ಪೊಲೀಸರು ಹಂಸ ಸಿಂಗ್ ಅವರನ್ನು ಗೌರವದಿಂದ ನಡೆಸಿಕೊಂಡರು. ಅವರು ಅವರಿಗೆ ಸ್ನಾನ ಮಾಡಿಸಿದ್ದರು, ಹೊಸ ಬಟ್ಟೆಗಳನ್ನು ನೀಡಿದರು. ಅವರು ಅವರೊಂದಿಗೆ ತಾಳ್ಮೆಯಿಂದ ಸಂವಹನ ನಡೆಸಿದರು. ಅವರು ಅವರ ಕುಟುಂಬವನ್ನು ಭೇಟಿ ಮಾಡುವಂತೆ ಮಾಡಿದರು. ಆದರೆ ಸದ್ಯ ಕುಟುಂಬದಲ್ಲಿ ಮಾತ್ರ ಅದರಲ್ಲಿಯೂ ಪತ್ನಿಯ ಮಾನಸಿಕ ಸ್ಥಿತಿ ಮಾತ್ರ ಅಲ್ಲೋಲ ಕಲ್ಲೋಲವಾಗಿದೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/missing-for-25-years-man-returns-home-wife-now-married-to-his-brother-family-in-shock-suc/articleshow-hzoe06q"/>
        </item>
        <item>
            <title><![CDATA[ಒಂದು ರಾತ್ರಿಗೆ 50 ಲಕ್ಷ; ಷರತ್ತು ನಿನ್ನದು, ಸ್ಥಳ ನನ್ನದು- Bigg Boss ಬೆಡಗಿ ಹೇಳಿಕೆಗೆ ಬಣ್ಣದ ಲೋಕ ಶೇಕ್​]]></title>
            <link>https://kannada.asianetnews.com/gallery/relationship/was-offered-rs-50-lakh-to-sleep-with-businessman-claims-bigg-boss-vada-pav-girl-chandrika-dixit-suc-6tm50tl</link>
            <guid isPermaLink="true">https://kannada.asianetnews.com/gallery/relationship/was-offered-rs-50-lakh-to-sleep-with-businessman-claims-bigg-boss-vada-pav-girl-chandrika-dixit-suc-6tm50tl</guid>
            <pubDate>Wed, 08 Apr 2026 19:44:12 +0530</pubDate>
            <description><![CDATA[&lt;p&gt;ಬಿಗ್​ಬಾಸ್​ ಖ್ಯಾತಿಯ 'ವಡಾ ಪಾವ್ ಗರ್ಲ್' ಚಂದ್ರಿಕಾ ದೀಕ್ಷಿತ್, ತಮಗೆ ಉದ್ಯಮಿಯೊಬ್ಬರು ಒಂದು ರಾತ್ರಿ ಕಳೆಯಲು 50 ಲಕ್ಷ ರೂಪಾಯಿ ಆಫರ್ ಮಾಡಿದ್ದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪತಿಯ ವಿವಾಹೇತರ ಸಂಬಂಧದ ಬಗ್ಗೆಯೂ ಆರೋಪ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knppxp9tsh8sk0xp54k6zjr6,imgname-chandrika-dixit-1775657474362.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್​ಬಾಸ್​ ಖ್ಯಾತಿಯ 'ವಡಾ ಪಾವ್ ಗರ್ಲ್' ಚಂದ್ರಿಕಾ ದೀಕ್ಷಿತ್, ತಮಗೆ ಉದ್ಯಮಿಯೊಬ್ಬರು ಒಂದು ರಾತ್ರಿ ಕಳೆಯಲು 50 ಲಕ್ಷ ರೂಪಾಯಿ ಆಫರ್ ಮಾಡಿದ್ದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪತಿಯ ವಿವಾಹೇತರ ಸಂಬಂಧದ ಬಗ್ಗೆಯೂ ಆರೋಪ ಮಾಡಿದ್ದಾರೆ.&lt;/p&gt;&lt;img&gt;&lt;p&gt;&quot;ವಡಾ ಪಾವ್ ಗರ್ಲ್&quot; ಎಂದು ಕರೆಯಲ್ಪಡುವ ಬಿಗ್​ಬಾಸ್​ ಖ್ಯಾತಿಯ ಚಂದ್ರಿಕಾ ದೀಕ್ಷಿತ್ (Chandrika Dixit) ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಪತಿ ಯುಗಮ್ ಗೆರಾ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಅವರು ಈ ಹಿಂದೆ ಬಹಿರಂಗಪಡಿಸಿದ್ದರು. &quot;ಅವನು ತನ್ನ ಕೆಲಸದ ಬಗ್ಗೆ ಗಮನ ಹರಿಸುವುದಿಲ್ಲ ಅಥವಾ ನನ್ನನ್ನು ನೋಡಿಕೊಳ್ಳುವುದಿಲ್ಲ&quot; ಎಂದಿದ್ದರು. ನಂತರ ನಾನು ಬೇರೆಯಾಗುತ್ತಿದ್ದೇನೆ ಎಂದರು. ಆ ಬಳಿಕ ಅವರು ನಿಗೂಢ ವ್ಯಕ್ತಿಯೊಂದಿಗೆ ಕಾಣಿಸಿಕೊಂಡರು. ಚಂದ್ರಿಕಾ ಮರುಮದುವೆಯಾದರು ಎಂಬ ವರದಿಗಳೂ ಇದ್ದವು.&lt;/p&gt;&lt;img&gt;&lt;p&gt;ಇದರ ನಡುವೆಯೇ, ಚಂದ್ರಿಕಾ ಇತ್ತೀಚೆಗೆ ಒಬ್ಬ ಉದ್ಯಮಿ ಅವನೊಂದಿಗೆ ಒಂದು ರಾತ್ರಿ ಮಲಗಲು 50 ಲಕ್ಷ ರೂಪಾಯಿಗಳ ಆಫರ್​ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಸಿದ್ಧಾರ್ಥ್ ಕಣ್ಣನ್ ಅವರ ಪಾಡ್&zwnj;ಕ್ಯಾಸ್ಟ್&zwnj;ನಲ್ಲಿ ಚಂದ್ರಿಕಾ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಸಿದ್ಧಾರ್ಥ್ ಅವರಿಗೆ ನಿಜವಾಗಿಯೂ 50 ಲಕ್ಷ ರೂಪಾಯಿಗಳ ಆಫರ್ ನೀಡಲಾಗಿದೆಯೇ ಎಂದು ಕೇಳಿದರು. ಚಂದ್ರಿಕಾ, &quot;ಹೌದು, ಅವರು ಶ್ರೀಮಂತ ಉದ್ಯಮಿ. ನಾನು ನಿಮಗೆ ಇಮೇಲ್&zwnj;ನ ಸ್ಕ್ರೀನ್&zwnj;ಶಾಟ್ ಅನ್ನು ಸಹ ನೀಡಬಲ್ಲೆ. ಅವರು ರೆಸಾರ್ಟ್&zwnj;ಗೆ ಹೋಗುತ್ತಿದ್ದಾಗ, 'ಪರಿಸ್ಥಿತಿ ಮತ್ತು ಷರತ್ತು ನಿಮ್ಮದು, ಸ್ಥಳ ನನ್ನದು. ಚಂದ್ರಿಕಾ, ನಾನು ನಿಮಗೆ 50 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇನೆ. ಉಳಿದದ್ದನ್ನು ನೀವು ನನಗೆ ಹೇಳಿ' ಎಂದು ಆಫರ್​ ಮಾಡಿದ್ದರು ಎಂದಿದ್ದಾರೆ.&lt;/p&gt;&lt;img&gt;&lt;p&gt;ತನಗೆ ಇ-ಮೇಲ್ ಮೂಲಕ ಈ ಆಫರ್ ಬಂದಿದೆ. ಇಷ್ಟೇ ಅಲ್ಲದೇ, ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಸಹ ತನಗೆ ಕರೆ ಮಾಡಿ ಆಫರ್&zwnj;ಗಳನ್ನು ನೀಡಿದ್ದಾರೆ ಎಂದು ಚಂದ್ರಿಕಾ ಹೇಳಿದರು. ಒಬ್ಬರು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಬಯಸಿದರೆ, ಅವರು ರಾಜಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಚಂದ್ರಿಕಾ, &quot;ಇಂಡಸ್ಟ್ರಿ ಭ್ರಷ್ಟವಾಗಿದೆ&quot; ಎಂದು ಹೇಳಿದರು.&lt;/p&gt;&lt;img&gt;&lt;p&gt;ಚಂದ್ರಿಕಾ ಕೆಲವು ಸಮಯದಿಂದ ಸಾಮಾಜಿಕ ಮಾಧ್ಯಮದಲ್ಲಿ ನಿಗೂಢ ವ್ಯಕ್ತಿಯೊಂದಿಗೆ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ತಮ್ಮ ಇತ್ತೀಚಿನ ವೀಡಿಯೊದಲ್ಲಿ, ಅವರು ಸೈಫ್ ಅವರನ್ನು ಮದುವೆಯಾಗುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. &quot;ಸಾಕಿಬ್ ಮತ್ತು ಕನಿಕಾ ಮದುವೆಯಾಗಲು ಸಾಧ್ಯವಾದರೆ, ನಾವು ಯಾಕೆ ಮದುವೆಯಾಗಲು ಸಾಧ್ಯವಿಲ್ಲ?&quot; ನಂತರ ಸೈಫ್, &quot;ಅವಳು ನಾನಿಲ್ಲದೆ ಬದುಕಲು ಸಾಧ್ಯವಿಲ್ಲ, ಮತ್ತು ನಾನು ಅವಳಿಲ್ಲದೆ ಬದುಕಲು ಸಾಧ್ಯವಿಲ್ಲ. ಈ ಬಗ್ಗೆ ಜಗತ್ತು ಏನು ಹೇಳುತ್ತದೆ ಎಂಬುದು ನನಗೆ ಮುಖ್ಯವಲ್ಲ&quot; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಚಂದ್ರಿಕಾ ಸಂದರ್ಶನವೊಂದರಲ್ಲಿ ತನ್ನ ಅತ್ತೆ ತನ್ನ ಮತ್ತು ಯುಗಮ್ ಮದುವೆಯನ್ನು ಒಪ್ಪಲಿಲ್ಲ ಎಂದು ಬಹಿರಂಗಪಡಿಸಿದ್ದರು. &quot;ನಾನು ನನ್ನ 15 ದಿನಗಳ ಮಗುವನ್ನು ಶಿಶುವಿಹಾರದಲ್ಲಿ ಬಿಟ್ಟಿದ್ದೆ. ಆ ಸಮಯದಲ್ಲಿ, ನಾನು ಮದುವೆಯಾಗಿದ್ದರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ನನ್ನ ಅತ್ತೆ ಮೊದಲು ನನ್ನನ್ನು ನನ್ನ ಸ್ವಂತ ಕಾಲಿನ ಮೇಲೆ ತೋರಿಸಿಕೊಳ್ಳುವಂತೆ ಹೇಳಿದ್ದರು, ನಂತರ ನಾನು ನಿಮ್ಮನ್ನು ಒಪ್ಪಿಕೊಳ್ಳಬಹುದು. ನಾನು ಹಲ್ದಿರಾಮ್ಸ್&zwnj;ನಲ್ಲಿ ದಿನಕ್ಕೆ 12-13 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ಆಗ, ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಎಂದು ಯಾರೂ ಹೇಳುತ್ತಿರಲಿಲ್ಲ. ಇಂದು, ನನ್ನ ಕೆಲಸವನ್ನು ಪ್ರಶ್ನಿಸಲಾಗುತ್ತಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;&quot;ವಡಾ ಪಾವ್ ಗರ್ಲ್&quot; ಎಂದೂ ಕರೆಯಲ್ಪಡುವ ಚಂದ್ರಿಕಾ ದೀಕ್ಷಿತ್ ಸೋಷಿಯಲ್&zwnj; ಮೀಡಿಯಾ ಇನ್ಫ್ಲುಯೆನ್ಸರ್&zwnj;.ದೆಹಲಿಯಲ್ಲಿ ವಡಾ ಪಾವ್ ಸ್ಟಾಲ್ ತೆರೆದ ನಂತರ ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಖ್ಯಾತಿ ಗಳಿಸಿದರು. ನಂತರ ಆಕೆ &quot;ಬಿಗ್ ಬಾಸ್ OTT 3&quot; ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿದ್ದರು. ಇತ್ತೀಚೆಗೆ ಈಕೆ ತನ್ನ ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಸೋಶಿಯಲ್&zwnj; ಮೀಡಿಯಾದಲ್ಲಿ ಆರೋಪ ಹೊರಿಸಿದ್ದರು. ಕೊನೆಗೆ ಮಕ್ಕಳಿಗಾಗಿ ನಾನು ಯಾರ ಜೊತೆ ಬೇಕಾದರೂ ಮಲಗಲು ರೆಡಿ ಎಂದೂ ಹೇಳಿದ್ದರು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/was-offered-rs-50-lakh-to-sleep-with-businessman-claims-bigg-boss-vada-pav-girl-chandrika-dixit-suc-6tm50tl"/>
        </item>
        <item>
            <title><![CDATA[ಪಕೋಡ ಎಣ್ಣೆ ಹೀರದಂತೆ ಬಹಳ ಹೊತ್ತಿನವರೆಗೆ ಗರಿಗರಿಯಾಗಿರಬೇಕೆಂದರೆ ಕೊನೆಯಲ್ಲಿ ಇಷ್ಟು ಮಾಡಿ]]></title>
            <link>https://kannada.asianetnews.com/gallery/food/crunchy-pakoras-add-these-now-5442fey</link>
            <guid isPermaLink="true">https://kannada.asianetnews.com/gallery/food/crunchy-pakoras-add-these-now-5442fey</guid>
            <pubDate>Thu, 09 Apr 2026 11:53:14 +0530</pubDate>
            <description><![CDATA[&lt;p&gt;&lt;strong&gt;Crispy Pakora Secret: &lt;/strong&gt;ನೀವು ಪಕೋಡ ಮಾಡುತ್ತಿದ್ದರೆ ಇವುಗಳನ್ನು ಕಡಲೆ ಹಿಟ್ಟಿಗೆ ಸೇರಿಸಿ.. ಅವು 100% ಗರಿಗರಿಯಾಗಿರುತ್ತವೆ ಮತ್ತು ರುಚಿ ಸೂಪರ್ ಆಗಿರುತ್ತೆ. ಈ ಟಿಪ್ಸ್ ಬಳಸಿ ನೀವು ಆಲೂಗಡ್ಡೆ, ಈರುಳ್ಳಿ, ಕೋಸು ಅಥವಾ ಬಾಳೆಕಾಯಿ.. ಹೀಗೆ ಯಾವುದೇ ತರಕಾರಿಯ ಪಕೋಡ ಅದ್ಭುತವಾಗಿ ಮಾಡಬಹುದು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrdkth0k6txvbvp7fmsmdqs,imgname-thumbnail---2026-04-09t112847.756-1775714822687.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Crispy Pakora Secret: &lt;/strong&gt;ನೀವು ಪಕೋಡ ಮಾಡುತ್ತಿದ್ದರೆ ಇವುಗಳನ್ನು ಕಡಲೆ ಹಿಟ್ಟಿಗೆ ಸೇರಿಸಿ.. ಅವು 100% ಗರಿಗರಿಯಾಗಿರುತ್ತವೆ ಮತ್ತು ರುಚಿ ಸೂಪರ್ ಆಗಿರುತ್ತೆ. ಈ ಟಿಪ್ಸ್ ಬಳಸಿ ನೀವು ಆಲೂಗಡ್ಡೆ, ಈರುಳ್ಳಿ, ಕೋಸು ಅಥವಾ ಬಾಳೆಕಾಯಿ.. ಹೀಗೆ ಯಾವುದೇ ತರಕಾರಿಯ ಪಕೋಡ ಅದ್ಭುತವಾಗಿ ಮಾಡಬಹುದು. &amp;nbsp;&lt;/p&gt;&lt;img&gt;&lt;p&gt;ಸಂಜೆ ಚಹಾದ ಜೊತೆಗೆ ಗರಂ ಗರಂ ಪಕೋಡ ತಿಂದ್ರೆ ಎಷ್ಟು ಮಜಾ ಇರುತ್ತೆ ಅಲ್ವಾ?, ಆದರೆ ಪಕೋಡ ಹೋಟೆಲ್&zwnj;ನಲ್ಲಿ ಸಿಗುವಂತೆ ಗರಿಗರಿಯಾಗಿ ಬರದಿದ್ದರೆ ತಿನ್ನಲು ಅಷ್ಟು ರುಚಿಸುವುದಿಲ್ಲ. ಫುಡ್ ಕ್ರಿಯೇಟರ್ ಶಿಲ್ಪಿ ಪಕೋಡ 100% ಗರಿಗರಿಯಾಗಿ ಬರಲು ಮತ್ತು ಟೇಸ್ಟಿಯಾಗಿ ಮಾಡಲು ಕೆಲವು ಅದ್ಭುತ ಹ್ಯಾಕ್ಸ್ ಹಂಚಿಕೊಂಡಿದ್ದು, ಅವು ಇಲ್ಲಿವೆ..&lt;/p&gt;&lt;img&gt;&lt;p&gt;ಬರಿ ಕಡಲೆ ಹಿಟ್ಟು ಮತ್ತು ನೀರು ಹಾಕಿದರೆ ಪಕೋಡ ಅಷ್ಟು ಗರಿಗರಿಯಾಗುವುದಿಲ್ಲ. ಕಡಲೆ ಹಿಟ್ಟಿನ ಜೊತೆಗೆ ಸ್ವಲ್ಪ ಅಕ್ಕಿ ಹಿಟ್ಟನ್ನು ಸೇರಿಸಿ. 2 ಕಪ್ ಕಡಲೆ ಹಿಟ್ಟಿಗೆ 1/4 ಕಪ್ ಅಕ್ಕಿ ಹಿಟ್ಟು ಬಳಸಿ ಸಾಕು. ಇದು ತೇವಾಂಶವನ್ನು ಕಡಿಮೆ ಮಾಡಿ ಪಕೋಡಕ್ಕೆ ಹೆಚ್ಚಿನ ಗರಿಗರಿತನ ನೀಡುತ್ತದೆ.&lt;/p&gt;&lt;img&gt;&lt;p&gt;ಪಕೋಡ ರುಚಿ ಹೆಚ್ಚಿಸಲು ಹಿಟ್ಟಿನ ಮಿಶ್ರಣಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ (ಅಥವಾ ಚಿಲ್ಲಿ ಫ್ಲೇಕ್ಸ್), ಒಂದು ಚಿಟಿಕೆ ಇಂಗು, ಕೈಯಿಂದ ಸ್ವಲ್ಪ ಉಜ್ಜಿದ ಓಂ ಕಾಳು (ಅಜ್ವೈನ್) ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ ಇಮ್ಮಡಿಯಾಗುತ್ತದೆ.&lt;/p&gt;&lt;img&gt;&lt;p&gt;ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಂಟಿಲ್ಲದಂತೆ ಕಲಸಿಕೊಳ್ಳಿ. ಮಿಶ್ರಣವು ಹೆಚ್ಚು ತೆಳ್ಳಗಿರಬಾರದು, ಸ್ವಲ್ಪ ಗಟ್ಟಿಯಾಗಿ ಮತ್ತು ನಯವಾಗಿರಲಿ. ಹಿಟ್ಟು ಕಲಸಿದ ತಕ್ಷಣ ಪಕೋಡ ಹಾಕಬೇಡಿ. ಅದನ್ನು ಮುಚ್ಚಿಟ್ಟು ಕನಿಷ್ಠ 10 ನಿಮಿಷ ಸೆಟ್ ಆಗಲು ಬಿಡಿ.&lt;/p&gt;&lt;img&gt;&lt;p&gt;ಆಲೂಗಡ್ಡೆ, ಈರುಳ್ಳಿ ಅಥವಾ ಯಾವುದೇ ತರಕಾರಿಗಳನ್ನು ತೊಳೆದ ತಕ್ಷಣ ಹಿಟ್ಟಿಗೆ ಹಾಕಬೇಡಿ. ತೊಳೆದ ನಂತರ ಒಂದು ಬಟ್ಟೆಯ ಮೇಲೆ ಹರಡಿ ಅವುಗಳ ಮೇಲಿರುವ ನೀರನ್ನು ಒಣಗಲು ಬಿಡಿ. ಇಲ್ಲದಿದ್ದರೆ ತರಕಾರಿಯಲ್ಲಿರುವ ನೀರು ಹಿಟ್ಟನ್ನು ತೆಳ್ಳಗೆ ಮಾಡಿಬಿಡುತ್ತದೆ.&lt;/p&gt;&lt;img&gt;&lt;p&gt;ಪಕೋಡ ಹಾಕುವ ಮುನ್ನ ಸಿದ್ಧಪಡಿಸಿದ ಹಿಟ್ಟಿನ ಮಿಶ್ರಣಕ್ಕೆ 2 ಚಮಚ ಕುದಿಯುವ ಬಿಸಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಪಕೋಡಗಳು ಎಣ್ಣೆ ಕುಡಿಯುವುದಿಲ್ಲ ಮತ್ತು ಬಹಳ ಹೊತ್ತಿನವರೆಗೆ ಗರಿಗರಿಯಾಗಿರುತ್ತವೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Shilpi Agarwal (@foodsandflavorsbyshilpi)&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/crunchy-pakoras-add-these-now-5442fey"/>
        </item>
        <item>
            <title><![CDATA[ಹುಣ್ಣಿಮೆ ರಾತ್ರಿಲೀ ವಿಚಿತ್ರ ನೆರಳು, ಭಯಾನಕ ಧ್ವನಿ ಕೇಳಿಬರುತ್ತದೆ.. ಯಾರದ್ದು ಅಂತೀರಾ?]]></title>
            <link>https://kannada.asianetnews.com/gallery/astrology/up-haunted-railway-station-where-people-scared-to-go-full-moon-night-is-scariest-suh-fbnp8ab</link>
            <guid isPermaLink="true">https://kannada.asianetnews.com/gallery/astrology/up-haunted-railway-station-where-people-scared-to-go-full-moon-night-is-scariest-suh-fbnp8ab</guid>
            <pubDate>Thu, 09 Apr 2026 11:33:46 +0530</pubDate>
            <description><![CDATA[&lt;p&gt;Haunted railway station ಈ ಪ್ರದೇಶವು ದೇಶದ ಅತಿದೊಡ್ಡ ರಾಜ್ಯವಾಗಿದ್ದು, ಅತ್ಯಂತ ವಿಸ್ತಾರವಾದ ರೈಲು ಜಾಲವನ್ನು ಹೊಂದಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇಲ್ಲಿ ದೆವ್ವ ಹಿಡಿದ ರೈಲು ನಿಲ್ದಾಣವಿದೆ ಗೊತ್ತಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrd73hy60pgwy0bjpdv7ze8,imgname-up-1775714405950.jpeg" type="image/jpeg" height="390" width="690"/>
            <content:encoded><![CDATA[&lt;p&gt;Haunted railway station ಈ ಪ್ರದೇಶವು ದೇಶದ ಅತಿದೊಡ್ಡ ರಾಜ್ಯವಾಗಿದ್ದು, ಅತ್ಯಂತ ವಿಸ್ತಾರವಾದ ರೈಲು ಜಾಲವನ್ನು ಹೊಂದಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇಲ್ಲಿ ದೆವ್ವ ಹಿಡಿದ ರೈಲು ನಿಲ್ದಾಣವಿದೆ ಗೊತ್ತಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನೀವು ದೆವ್ವ ಹಿಡಿದ ಕೋಟೆಗಳು, ಅರಮನೆಗಳು ಮತ್ತು ಇತರ ಸ್ಥಳಗಳ ಬಗ್ಗೆ ಕೇಳಿರಬಹುದು, ಆದರೆ ಉತ್ತರ ಪ್ರದೇಶದ ಒಂದು ರೈಲು ನಿಲ್ದಾಣವನ್ನು &quot;ದೆವ್ವ ಹಿಡಿದ ರೈಲ್ವೆ ನಿಲ್ದಾಣ&quot; ಎಂದು ಕರೆಯಲಾಗುತ್ತದೆ. ಇದರ ಕಥೆ ನಿಜಕ್ಕೂ ಭಯಾನಕವಾಗಿದೆ. ಈ ರೈಲು ನಿಲ್ದಾಣ ಎಲ್ಲಿದೆ ಮತ್ತು ಅದನ್ನು ಏನೆಂದು ಕರೆಯುತ್ತಾರೆ ಎಂಬುದನ್ನು ನೋಡಿ.&lt;/p&gt;&lt;img&gt;&lt;p&gt;ಈ ರೈಲು ನಿಲ್ದಾಣವನ್ನು ನೈನಿ ಜಂಕ್ಷನ್ ಎಂದು ಕರೆಯಲಾಗುತ್ತದೆ, ಇದು ಉತ್ತರ ಪ್ರದೇಶದ ಪ್ರಯಾಗ್&zwnj;ರಾಜ್ ಜಿಲ್ಲೆಯಲ್ಲಿದೆ. ಇದು ನಗರ ಕೇಂದ್ರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಈ ರೈಲು ನಿಲ್ದಾಣವು ಜನರಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.&lt;/p&gt;&lt;img&gt;&lt;p&gt;ನೈನಿ ಜೈಲು ರೈಲ್ವೆ ನಿಲ್ದಾಣದ ಬಳಿ ಇದೆ. ಈ ಜೈಲಿನ ಬಗ್ಗೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಬ್ರಿಟಿಷ್ ಆಳ್ವಿಕೆಯಲ್ಲಿ, ಬ್ರಿಟಿಷ್ ಅಧಿಕಾರಿಗಳ ದೌರ್ಜನ್ಯದಿಂದಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇಲ್ಲಿ ಸಾವನ್ನಪ್ಪಿದರು ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ನೈನಿ ಜೈಲಿನಲ್ಲಿ ಮಡಿದ ಸ್ವಾತಂತ್ರ್ಯ ಹೋರಾಟಗಾರರ ಆತ್ಮಗಳು ರಾತ್ರಿಯಲ್ಲಿ ನೈನಿ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುತ್ತಾಡುತ್ತವೆ ಎಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ಈ ಪ್ರದೇಶದಲ್ಲಿ ವಿಚಿತ್ರ ವಿದ್ಯಮಾನಗಳು ಸಂಭವಿಸುತ್ತವೆ, ವಿಶೇಷವಾಗಿ ಹುಣ್ಣಿಮೆಯ ರಾತ್ರಿಗಳಲ್ಲಿ, ವಿಚಿತ್ರ ನೆರಳುಗಳು ಮತ್ತು ಧ್ವನಿಗಳು ಕೇಳಿಬರುತ್ತವೆ ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ರಾತ್ರಿಯಲ್ಲಿ ಇಲ್ಲಿ ಕೆಲವೊಮ್ಮೆ ವಿಚಿತ್ರ ಧ್ವನಿಗಳು ಕೇಳಿಬರುತ್ತವೆ ಎಂದು ಪ್ರಯಾಣಿಕರು ಮತ್ತು ನಿವಾಸಿಗಳು ಹೇಳಿಕೊಳ್ಳುತ್ತಾರೆ, ಇವು ಬ್ರಿಟಿಷ್ ಅಧಿಕಾರಿಗಳಿಂದ ಕೊಲ್ಲಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರ ಧ್ವನಿಗಳು ಎಂದು ಹೇಳಲಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/up-haunted-railway-station-where-people-scared-to-go-full-moon-night-is-scariest-suh-fbnp8ab"/>
        </item>
        <item>
            <title><![CDATA[Old Curtains Reuse ಹಳೆ ಕರ್ಟನ್‌ ಬಿಸಾಡಬೇಡಿ, ಮನೆಗೆ ಸ್ಟೈಲಿಶ್ ಲುಕ್ ಕೊಡಿ]]></title>
            <link>https://kannada.asianetnews.com/gallery/life/creative-diy-ideas-to-upcycle-old-curtains-for-home-decor-budget-friendly-erkz80v</link>
            <guid isPermaLink="true">https://kannada.asianetnews.com/gallery/life/creative-diy-ideas-to-upcycle-old-curtains-for-home-decor-budget-friendly-erkz80v</guid>
            <pubDate>Wed, 08 Apr 2026 23:23:44 +0530</pubDate>
            <description><![CDATA[&lt;p&gt;Old Curtains Reuse ಹಳೆ ಕರ್ಟನ್&zwnj; ಬಿಸಾಡಬೇಡಿ, ಮನೆಗೆ ಸ್ಟೈಲಿಶ್ ಲುಕ್ ಕೊಡಿ, ಹಣ ಖರ್ಚು ಮಾಡದೆ ಮನೆಯನ್ನು ಸ್ಟೈಲಿಶ್ ವಸ್ತುಗಳನ್ನು ನೀವೇ ತಯಾರಿಸಬಹುದು. ಈ ಸುಲಭ DIY ಐಡಿಯಾಗಳು ನಿಮ್ಮ ಮನೆಗೆ ಹೊಸ ಲುಕ್ ಕೊಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knpawh59ag3wyd72gg7c3bna,imgname-old-curtains-reuse-1-1775644853417.jpg" type="image/jpeg" height="390" width="690"/>
            <content:encoded><![CDATA[&lt;p&gt;Old Curtains Reuse ಹಳೆ ಕರ್ಟನ್&zwnj; ಬಿಸಾಡಬೇಡಿ, ಮನೆಗೆ ಸ್ಟೈಲಿಶ್ ಲುಕ್ ಕೊಡಿ, ಹಣ ಖರ್ಚು ಮಾಡದೆ ಮನೆಯನ್ನು ಸ್ಟೈಲಿಶ್ ವಸ್ತುಗಳನ್ನು ನೀವೇ ತಯಾರಿಸಬಹುದು. ಈ ಸುಲಭ DIY ಐಡಿಯಾಗಳು ನಿಮ್ಮ ಮನೆಗೆ ಹೊಸ ಲುಕ್ ಕೊಡುತ್ತವೆ.&lt;/p&gt;&lt;img&gt;ಮನೆಯಲ್ಲಿರುವ ಹಳೆ ಕರ್ಟನ್&zwnj;ಗಳನ್ನು ನಾವು ಸಾಮಾನ್ಯವಾಗಿ ವೇಸ್ಟ್ ಎಂದು ಬದಿಗಿಡುತ್ತೇವೆ ಅಥವಾ ಬಿಸಾಡುತ್ತೇವೆ. ಆದರೆ, ಸ್ವಲ್ಪ ಕ್ರಿಯೇಟಿವಿಟಿ ಬಳಸಿದರೆ ಅವುಗಳಿಗೆ ಹೊಸ ರೂಪ ಕೊಡಬಹುದು. ಈ ಕರ್ಟನ್&zwnj;ಗಳು ನಿಮ್ಮ ಮನೆಯ ಅಲಂಕಾರವನ್ನು ಸುಂದರಗೊಳಿಸುವುದಲ್ಲದೆ, ಹಲವು ಉಪಯುಕ್ತ ವಸ್ತುಗಳಾಗಿಯೂ ಬದಲಾಗಬಹುದು. ನಿಮ್ಮ ಹಳೆ ಕರ್ಟನ್&zwnj;ಗಳನ್ನು ಮತ್ತೆ ವಿಶೇಷವಾಗಿಸುವ 5 ಸುಲಭ ಐಡಿಯಾಗಳನ್ನು ನೋಡೋಣ.&lt;img&gt;ಹಳೆ ಕರ್ಟನ್&zwnj;ಗಳ ಬಟ್ಟೆಯನ್ನು ಬಳಸಿ ನೀವು ಸುಲಭವಾಗಿ ಸುಂದರವಾದ ಕುಶನ್ ಕವರ್&zwnj;ಗಳನ್ನು ಮಾಡಬಹುದು. ಬಟ್ಟೆಯನ್ನು ಸರಿಯಾದ ಸೈಜ್&zwnj;ಗೆ ಕತ್ತರಿಸಿ ಹೊಲಿದರೆ ಸಾಕು. ಕರ್ಟನ್&zwnj; ಮೇಲೆ ಆಕರ್ಷಕ ಪ್ರಿಂಟ್ ಇದ್ದರೆ, ನಿಮ್ಮ ಕುಶನ್ ಕವರ್&zwnj;ಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ. ನಿಮ್ಮ ಲಿವಿಂಗ್ ರೂಮ್&zwnj;ಗೆ ಹೊಸ ಲುಕ್ ನೀಡಲು ಇದು ಸುಲಭ ಹಾಗೂ ಅಗ್ಗದ ವಿಧಾನ.&lt;img&gt;ಬಟ್ಟೆಯ ಟೋಟ್ ಬ್ಯಾಗ್&zwnj;ಗಳು ಈಗಿನ ಟ್ರೆಂಡ್. ಹಳೆ ಕರ್ಟನ್&zwnj;ಗಳನ್ನು ಬಳಸಿ ನೀವು ಇವನ್ನು ಸುಲಭವಾಗಿ ಮಾಡಬಹುದು. ಕರ್ಟನ್&zwnj; ಬಟ್ಟೆ ಗಟ್ಟಿಯಾಗಿರುವುದರಿಂದ, ಬ್ಯಾಗ್ ಮಾಡಲು ಇದು ಪರ್ಫೆಕ್ಟ್ ಮೆಟೀರಿಯಲ್. ಇದು ನೋಡಲು ಸ್ಟೈಲಿಶ್ ಆಗಿ ಕಾಣುವುದಲ್ಲದೆ, ಪರಿಸರ ಸ್ನೇಹಿ ಆಯ್ಕೆಯೂ ಹೌದು.&lt;img&gt;&lt;p&gt;ಹಳೆ ಕರ್ಟನ್&zwnj;ಗಳನ್ನು ಕತ್ತರಿಸಿ ನೀವು ಅದ್ಭುತವಾದ ಟೇಬಲ್ ರನ್ನರ್ ಅಥವಾ ಟೇಬಲ್ ಕವರ್ ಮಾಡಬಹುದು. ಇದು ನಿಮ್ಮ ಡೈನಿಂಗ್ ಟೇಬಲ್&zwnj;ಗೆ &amp;nbsp;ಹೊಸ ಮತ್ತು ಕ್ಲಾಸಿ ಲುಕ್ ನೀಡುತ್ತದೆ. ಕರ್ಟನ್&zwnj; ಮೇಲೆ ಎಥ್ನಿಕ್ ಅಥವಾ ಹೂವಿನ ಡಿಸೈನ್ ಇದ್ದರೆ, ಇದು ಮನೆಯ ಅಲಂಕಾರದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.&lt;/p&gt;&lt;img&gt;ಹಳೆ ಕರ್ಟನ್&zwnj;ಗಳನ್ನು ಬಳಸಿ ನಿಮ್ಮ ಬಾಗಿಲು ಅಥವಾ ಗೋಡೆಗಳಿಗೆ ಅಲಂಕಾರಿಕ ಹ್ಯಾಂಗರ್&zwnj;ಗಳನ್ನು ಮಾಡಬಹುದು. ನೀವು ಇವುಗಳನ್ನು ಬೇರೆ ಬೇರೆ ಕಟೌಟ್&zwnj;, ಲೇಸ್ ಅಥವಾ ಇತರ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಬಹುದು. ಇದು ನಿಮ್ಮ ಮನೆಯ ಪ್ರವೇಶಕ್ಕೆ ಒಂದು ವಿಶೇಷ ಹಾಗೂ ಆಕರ್ಷಕ ಲುಕ್ ನೀಡಿ, ಅತಿಥಿಗಳ ಗಮನ ಸೆಳೆಯುತ್ತದೆ.&lt;img&gt;ಕರ್ಟನ್&zwnj;ಗಳ ಗಟ್ಟಿಯಾದ ಬಟ್ಟೆಯನ್ನು ಬಳಸಿ ಕಿಚನ್ ಏಪ್ರನ್ ಅಥವಾ ಸ್ವಚ್ಛಗೊಳಿಸುವ ಬಟ್ಟೆಗಳನ್ನು ಸಹ ಮಾಡಬಹುದು. ಇವು ದಿನನಿತ್ಯದ ಕೆಲಸಗಳಿಗೆ ತುಂಬಾ ಉಪಯೋಗಕ್ಕೆ ಬರುತ್ತವೆ. ಇದರಿಂದ ನಿಮ್ಮ ಹಳೆ ಕರ್ಟನ್&zwnj;ಗಳು ವ್ಯರ್ಥವಾಗದೆ, ಒಳ್ಳೆಯ ಕೆಲಸಕ್ಕೆ ಬಳಕೆಯಾದಂತೆಯೂ ಆಗುತ್ತದೆ.]]></content:encoded>
            <category>life</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/life/creative-diy-ideas-to-upcycle-old-curtains-for-home-decor-budget-friendly-erkz80v"/>
        </item>
        <item>
            <title><![CDATA[ತಿಂಗಳಿಗೆ 5,000 ರೂ.ಉಳಿಸಬೇಕೇ? ಈ  2 ಆಪ್‌ಗಳಿಗೆ 30 ದಿನ ಬೈ-ಬೈ ಹೇಳಿ ನೋಡಿ]]></title>
            <link>https://kannada.asianetnews.com/life/stop-scrolling-start-saving-the-hidden-truth-of-your-daily-online-orders/articleshow-1rigxpt</link>
            <guid isPermaLink="true">https://kannada.asianetnews.com/life/stop-scrolling-start-saving-the-hidden-truth-of-your-daily-online-orders/articleshow-1rigxpt</guid>
            <pubDate>Wed, 08 Apr 2026 21:56:20 +0530</pubDate>
            <description><![CDATA[&lt;p&gt;&lt;strong&gt;How to stop impulse buying on apps: &lt;/strong&gt;ಫೋನ್&zwnj;ನಲ್ಲಿರೋ ಆ ಎರಡು ಆಪ್ ನಿಮ್ಮ ಜೇಬಿಗೆ ಕನ್ನ ಹಾಕುತ್ತಿದೆಯೇ? ದಿನಕ್ಕೆ ಕೇವಲ 100 ರೂಪಾಯಿ ಅಂತ ನಾವು ಮಾಡುವ ಸಣ್ಣ ಖರ್ಚು, ತಿಂಗಳ ಕೊನೆಯಲ್ಲಿ ಸಾವಿರಾರು ರೂಪಾಯಿಗಳ ನಷ್ಟಕ್ಕೆ ಕಾರಣವಾಗುತ್ತಿದೆ ಎಂದರೆ ನೀವು ನಂಬುತ್ತೀರಾ?.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jg8wn41wawbxkftyet0yrj99,imgname-moblie-watching.jpg" type="image/jpeg" height="390" width="690"/>
            <content:encoded><![CDATA[&lt;p&gt;&quot;ಇಂದಿನ ಡಿಜಿಟಲ್ ಯುಗದಲ್ಲಿ ಬ್ಲಿಂಕಿಟ್ (Blinkit) ಮತ್ತು ಇನ್&zwnj;ಸ್ಟಾಮಾರ್ಟ್ (Instamart) ನಂತಹ ಆಪ್&zwnj;ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಒಂದು ಕ್ಲಿಕ್ ಮಾಡಿದರೆ ಸಾಕು, ಹತ್ತೇ ನಿಮಿಷದಲ್ಲಿ ಸಾಮಾನುಗಳು ಮನೆ ಬಾಗಿಲಿಗೆ ಬರುತ್ತವೆ. ಈ 'ಅನುಕೂಲ' ನಮಗೆ ವರ ಎಂದುಕೊಂಡಿದ್ದೆ. ಆದರೆ, ಈ ಸೌಲಭ್ಯದ ಹಿಂದೆ ನಾವು ಎಷ್ಟು ಹಣ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ತಿಳಿಯಲು ನಾನು ಒಂದು ತಿಂಗಳು ಈ ಆಪ್&zwnj;ಗಳನ್ನು ಬಳಸುವುದನ್ನು ನಿಲ್ಲಿಸಿದೆ. ಈ 30 ದಿನಗಳ ಪ್ರಯೋಗ ನನ್ನ ಕಣ್ಣು ತೆರೆಸುವಂತಿತ್ತು&quot; ಎಂದು ಲೇಖಕರೊಬ್ಬರು ಬರೆದುಕೊಂಡಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಸದ್ದಿಲ್ಲದೆ ಹಣ ಸೋರುವ ಹಾದಿ&lt;/strong&gt;&lt;/h2&gt;&lt;p&gt;ಈ ಆಪ್&zwnj;ಗಳಲ್ಲಿರುವ ಅತಿ ದೊಡ್ಡ ಮೈನಸ್ ಪಾಯಿಂಟ್ ಎಂದರೆ 'ಮಿನಿಮಮ್ ಆರ್ಡರ್ ವ್ಯಾಲ್ಯೂ' (Minimum Order Value). ನನಗೆ ಕೇವಲ 70 ರೂಪಾಯಿಯ ಹಾಲಿನ ಪ್ಯಾಕೆಟ್ ಅಥವಾ ಮೊಸರು ಬೇಕಿದ್ದರೂ, ಡೆಲಿವರಿ ಚಾರ್ಜ್ ತಪ್ಪಿಸಲು ನಾನು ಸುಮ್ಮನೆ ಬೇಕಿಲ್ಲದ ಸ್ನ್ಯಾಕ್ಸ್, ಬಿಸ್ಕೆಟ್ ಅಥವಾ ಚಾಕಲೇಟ್ ಸೇರಿಸಿ ಬಿಲ್ ಅನ್ನು 200 ರೂಪಾಯಿಗೆ ಏರಿಸುತ್ತಿದ್ದೆ. ಹೀಗೆ ಪ್ರತಿ ಆರ್ಡರ್ ಮೇಲೆ ಅನಗತ್ಯವಾಗಿ ವ್ಯರ್ಥವಾಗುತ್ತಿದ್ದ 120-150 ರೂಪಾಯಿಗಳು ತಿಂಗಳ ಕೊನೆಯಲ್ಲಿ ಬರೋಬ್ಬರಿ 4,000 ದಿಂದ 5,500 ರೂಪಾಯಿಗಳ ದೊಡ್ಡ ಮೊತ್ತವಾಗುತ್ತಿತ್ತು! ನಾನು ಆಪ್ ಬಿಟ್ಟು ನೇರವಾಗಿ ಹತ್ತಿರದ ಅಂಗಡಿಗೆ ಹೋದಾಗ, ಬೇಕಾದ್ದನ್ನು ಮಾತ್ರ ಕೊಳ್ಳುವ ಶಿಸ್ತು ಮರಳಿ ಬಂತು. ಇದರಿಂದ ನನ್ನ ಜೇಬಿನಲ್ಲಿ ಹಣ ಉಳಿಯಲಾರಂಭಿಸಿತು.&lt;/p&gt;&lt;p&gt;&lt;strong&gt;ಆರೋಗ್ಯ ಮತ್ತು ನಡಿಗೆ&lt;/strong&gt;ಎಲ್ಲವೂ ಮನೆ ಬಾಗಿಲಿಗೆ ಬರುವಾಗ ನಮ್ಮ ದೈಹಿಕ ನಡಿಗೆ ಸಂಪೂರ್ಣವಾಗಿ ನಿಂತುಹೋಗಿತ್ತು. ಈಗ ಸಣ್ಣ ಪುಟ್ಟ ವಸ್ತುಗಳಿಗೂ ಗಲ್ಲಿಯ ಕೊನೆಯಲ್ಲಿರುವ ಅಂಗಡಿಗೆ ನಡೆದು ಹೋಗುವುದು ಅನಿವಾರ್ಯವಾಯಿತು. ಜಿಮ್ ಅಥವಾ ವರ್ಕ್&zwnj;ಔಟ್ ಹೊರತಾಗಿ ಈ ಸಣ್ಣ ನಡಿಗೆಯು ನನ್ನ ದೇಹಕ್ಕೆ ಅಗತ್ಯವಾದ ಚಟುವಟಿಕೆ ನೀಡಿತು. ಜೊತೆಗೆ, ಮಧ್ಯರಾತ್ರಿಯಲ್ಲಿ ಹಠಾತ್ತನೆ ಹಸಿವಾದಾಗ (Cravings) ತಕ್ಷಣ ಆಪ್ ಓಪನ್ ಮಾಡಿ ಐಸ್&zwnj;ಕ್ರೀಮ್ ಅಥವಾ ಜಂಕ್ ಫುಡ್ ಆರ್ಡರ್ ಮಾಡುವ ಅಭ್ಯಾಸ ತಪ್ಪಿತು. ಆಪ್ ಇಲ್ಲದಿದ್ದಾಗ ಮನಸ್ಸನ್ನು ನಿಯಂತ್ರಿಸುವುದು ಸುಲಭವಾಯಿತು, ಇದು ನನ್ನ ಉತ್ತಮ ಆರೋಗ್ಯಕ್ಕೆ ಹಾದಿ ಮಾಡಿಕೊಟ್ಟಿತು. ಅನಗತ್ಯ ಕ್ಯಾಲೋರಿ ಸೇವನೆಯಿಂದ ನಾನು ಪಾರಾದೆ.&lt;/p&gt;&lt;h3&gt;&lt;strong&gt;ಮರಳಿ ಬಂದ ಯೋಜನೆ ಮತ್ತು ತಾಜಾತನ&lt;/strong&gt;&lt;/h3&gt;&lt;p&gt;ಈ ಆಪ್&zwnj;ಗಳಿದ್ದಾಗ ಯಾವುದನ್ನೂ ಪ್ಲಾನ್ ಮಾಡದೆ ಬೇಕಾದಾಗ ಆರ್ಡರ್ ಮಾಡುತ್ತಿದ್ದೆ. ಆದರೆ ಆಪ್ ಬಿಟ್ಟ ಮೇಲೆ ವಾರಕ್ಕೆ ಬೇಕಾದ ಸಾಮಾನುಗಳ ಪಟ್ಟಿ ಮಾಡುವುದು ಮತ್ತು ಮಾರುಕಟ್ಟೆಗೆ ಹೋಗಿ ತಾಜಾ ತರಕಾರಿಗಳನ್ನು ಆರಿಸುವುದು ಮತ್ತೆ ರೂಢಿಯಾಯಿತು. ಮಾರುಕಟ್ಟೆಯಲ್ಲಿ ರೈತರಿಂದ ನೇರವಾಗಿ ತರಕಾರಿ ಕೊಳ್ಳುವುದು ಆಪ್&zwnj;ಗಿಂತ ಅಗ್ಗವಷ್ಟೇ ಅಲ್ಲ, ಹೆಚ್ಚು ತಾಜಾ ಕೂಡ ಆಗಿತ್ತು. ಚೌಕಾಸಿ ಮಾಡುವ ಆ ಹಳೆಯ ಭಾರತೀಯ ಅಭ್ಯಾಸ ಮತ್ತು ಸ್ಥಳೀಯ ಜನರೊಡನೆ ಬೆರೆಯುವುದು ನನಗೆ ಸಖತ್ ಖುಷಿ ನೀಡಿತು. ಇದು ಕೇವಲ ವ್ಯಾಪಾರವಲ್ಲ, ಒಂದು ಸಾಮಾಜಿಕ ಸಂಬಂಧದಂತೆಯೂ ಕೆಲಸ ಮಾಡಿತು.&lt;/p&gt;&lt;p&gt;&lt;strong&gt;ಕೊನೆಯ ಮಾತು..&lt;/strong&gt;ಈ ಆಪ್&zwnj;ಗಳು ನಮ್ಮ ಸಮಯ ಉಳಿಸುತ್ತವೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಇವು ನಮ್ಮ ಅತಿಯಾದ ಸೋಮಾರಿತನಕ್ಕೆ ಮತ್ತು ಅನಗತ್ಯ ಖರ್ಚಿಗೆ ದಾರಿಯಾಗಬಾರದು. 30 ದಿನಗಳ ನಂತರ ನಾನು ಈಗ ಅನಿವಾರ್ಯವಿದ್ದಾಗ ಮಾತ್ರ ಈ ಆಪ್&zwnj;ಗಳನ್ನು ಬಳಸುತ್ತಿದ್ದೇನೆ. ಜೀವನ ಸೌಲಭ್ಯದಿಂದ ಮಾತ್ರವಲ್ಲ, ನಾವು ಮಾಡುವ ಸಣ್ಣ ಸಣ್ಣ ಶಿಸ್ತಿನ ನಿರ್ಧಾರಗಳಿಂದ ಸುಂದರವಾಗುತ್ತದೆ. ನಮ್ಮ ಜೇಬು ಮತ್ತು ಆರೋಗ್ಯ ಎರಡೂ ನಮ್ಮ ಕೈಯಲ್ಲೇ ಇದೆ!&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/life/stop-scrolling-start-saving-the-hidden-truth-of-your-daily-online-orders/articleshow-1rigxpt"/>
        </item>
        <item>
            <title><![CDATA[ಮಧ್ಯಪ್ರಾಚ್ಯ ಯುದ್ಧದಿಂದ ಕರಾವಳಿ ಜಿಲ್ಲೆಯಲ್ಲಿ ಮದುವೆಗಳೇ ಕ್ಯಾನ್ಸಲ್‌! ವಿವಾಹ ನಿಶ್ಚಯ ಆದವರಿಗೆ ಆತಂಕ]]></title>
            <link>https://kannada.asianetnews.com/relationship/middle-east-conflict-impacts-weddings-in-coastal-karnataka-several-events-postponed-gdp/articleshow-13sce5l</link>
            <guid isPermaLink="true">https://kannada.asianetnews.com/relationship/middle-east-conflict-impacts-weddings-in-coastal-karnataka-several-events-postponed-gdp/articleshow-13sce5l</guid>
            <pubDate>Wed, 08 Apr 2026 19:18:12 +0530</pubDate>
            <description><![CDATA[ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ದಕ್ಷಿಣ ಕನ್ನಡದಲ್ಲಿ ನಡೆಯಬೇಕಿದ್ದ ಹಲವು ಮದುವೆಗಳು ಮುಂದೂಡಿಕೆಯಾಗಿವೆ. ವಿದೇಶದಲ್ಲಿರುವ ಕುಟುಂಬ ಸದಸ್ಯರಿಗೆ ಭಾರತಕ್ಕೆ ಬರಲು ಸಾಧ್ಯವಾಗದಿರುವುದು ಮತ್ತು ಆರ್ಥಿಕ ಅನಿಶ್ಚಿತತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಬೆಳವಣಿಗೆಯು ಕ್ಯಾಟರಿಂಗ್, ಡೆಕೋರೇಷನ್ ಸೇರಿದಂತೆ ಹಲವು ಸ್ಥಳೀಯ ಉದ್ಯಮಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kes8c9xjzcyf09mzz6nytf7s,imgname-nupur-sanon-stebin-ben-hindu-wedding-photos-3-1768226695090.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಮೌನೇಶ ವಿಶ್ವಕರ್ಮ&lt;/p&gt;&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಉದ್ವಿಗ್ನ ಪರಿಸ್ಥಿತಿ ಮದುವೆ ಹಾಗೂ ಶುಭ ಸಮಾರಂಭಗಳ ಮೇಲೆ ಗಂಭೀರ ಪರಿಣಾಮ ಬೀರಿವೆ. ತುಳುನಾಡಿನ ಅನೇಕ ಕುಟುಂಬಗಳು ಮಧ್ಯಪ್ರಾಚ್ಯ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಸದಸ್ಯರ ಮೇಲೆ ಅವಲಂಬಿತವಾಗಿವೆ. ಯುದ್ಧದ ಪರಿಣಾಮವಾಗಿ ಮದುವೆಗಳು ಮುಂದೂಡುವುದು, ಸರಳೀಕರಣ ಮಾಡುವುದು ಅಥವಾ ಕೆಲವೊಮ್ಮೆ ರದ್ದಾಗುವ ಪರಿಸ್ಥಿತಿ ಎದುರಾಗುತ್ತಿದೆ.&lt;/p&gt;&lt;h2&gt;ಮದುವೆಗಳು ಮುಂದೂಡಿಕೆ:&lt;/h2&gt;&lt;p&gt;ಕಳೆದ&zwnj; ಒಂದು ತಿಂಗಳ&zwnj; ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಯಬೇಕಿದ್ದ ಹದಿನೈದಕ್ಕೂ ಅಧಿಕ ಮದುವೆಗಳು ಯುದ್ಧದ ಕಾರಣಕ್ಕೆ ಮುಂದೂಡಲ್ಪಟ್ಟಿದೆ. ಇದರಲ್ಲಿ ಹೆಚ್ಚಿನ ಮದುವೆಗಳು ಕ್ರೈಸ್ತ ಸಮುದಾಯಕ್ಕೆ ಸೇರಿದ್ದು ಎನ್ನುವುದು ಇಲ್ಲಿ ಉಲ್ಲೇಖನೀಯ.&lt;/p&gt;&lt;h2&gt;ಮದುವೆಗಳು ಮುಂದೂಡಲು ಪ್ರಮುಖ ಕಾರಣ:&lt;/h2&gt;&lt;p&gt;ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿರುವ ವರನಿಗೆ ಸಮಯಕ್ಕೆ ಸರಿಯಾಗಿ ಭಾರತಕ್ಕೆ ಬರಲಾಗದ ಪರಿಸ್ಥಿತಿ ಉಂಟಾಗಿದೆ. ವಿಮಾನ ಸೇವೆಗಳ ಅಸ್ತವ್ಯಸ್ತತೆ, ವೀಸಾ ಸಮಸ್ಯೆ ಮದುವೆಯನ್ನು ಮುಂದೂಡಲು ಕಾರಣವಾಗಿದೆ. ಮತ್ತೊಂದೆಡೆ ಕುಟುಂಬದ ಪ್ರಮುಖ ಸದಸ್ಯರು ವಿದೇಶದಲ್ಲಿದ್ದು, ಅವರು ಬರದೇ ಮದುವೆ ಮಾಡುವುದನ್ನು ಹಲವರು ಒಪ್ಪಿಕೊಳ್ಳುತ್ತಿಲ್ಲ. ವಿಮಾನ ಟಿಕೆಟ್ ದರಗಳ ಏರಿಕೆಯೂ ಸಾಮಾನ್ಯ ಕುಟುಂಬಗಳಿಗೆ ಇದು ದೊಡ್ಡ ಭಾರವಾಗಿ ಪರಿಣಮಿಸಿದೆ. ಮದುವೆಗಾಗಿ ಭಾರತಕ್ಕೆ ಬಂದರೆ, ಮರಳಿ ಹಿಂದಿರುಗಲು ಆಗುತ್ತದೆಯೇ? ಎಂಬ ಭಯ ವಿದೇಶದಲ್ಲಿರುವವರಲ್ಲೂ, ಅವರ ಕುಟುಂಬಗಳಲ್ಲೂ ಇದೆ. ಕೆಲವರು ರಜೆ ತೆಗೆದುಕೊಂಡು ಭಾರತಕ್ಕೆ ಬಂದರೆ, ಮತ್ತೆ ಹೋಗಲು ಸಾಧ್ಯವಾಗದೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಮದುವೆಗೆ ಬರುವುದನ್ನು ಬಿಟ್ಟು ಉದ್ಯೋಗವನ್ನು ಉಳಿಸಿಕೊಳ್ಳಲು ಆದ್ಯತೆ ಕೊಡುತ್ತಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ ವೇತನ ತಡವಾಗುವುದು ಅಥವಾ ಕಡಿಮೆಯಾಗುವುದು ಕಂಡುಬರುತ್ತಿದೆ. ಇದರಿಂದ ಮದುವೆ ಖರ್ಚು ನಿರ್ವಹಣೆ ಕಷ್ಟಕರವಾಗಿದೆ. ಈ ಎಲ್ಲ ಅನಿಶ್ಚಿತತೆ ಮದುವೆ ಸಹಿತ ಹುಟ್ಟುಹಬ್ಬ ಆಚರಣೆ, ವಿವಾಹ ವಾರ್ಷಿಕೋತ್ಸವದಂತಹ ಕಾರ್ಯಗಳಿಗೆ ತಡೆಯಾಗುತ್ತಿದೆ.&lt;/p&gt;&lt;h2&gt;ಹಲವು ಉದ್ಯಮಗಳ ಮೇಲೆ ಪರಿಣಾಮ:&lt;/h2&gt;&lt;p&gt;ಮದುವೆ ಎಂದರೆ ಒಂದು ದೊಡ್ಡ ಆರ್ಥಿಕ ಚಕ್ರ. ಆದರೆ ಮದುವೆಗಳು ಮುಂದೂಡುವುದು ಮತ್ತು ಸಣ್ಣಮಟ್ಟಕ್ಕೆ ಇಳಿಯುವುದರಿಂದ ಅನೇಕ ವಲಯಗಳಿಗೆ ಹೊಡೆತ ಬಿದ್ದಿದೆ. ಡೆಕೋರೇಷನ್&zwnj; ಉದ್ಯಮ ಮಾಡುವವರಿಗೆ ಭಾರೀ ಅಲಂಕಾರ, ಥೀಮ್ ಸೆಟ್&zwnj;ಗಳು ಕಡಿಮೆಯಾಗುತ್ತಿವೆ. ಇದರಿಂದ ಡೆಕೋರೇಟರ್&zwnj;ಗಳಿಗೆ ಆದಾಯ ಕುಸಿತವಾಗಿದೆ. ಹೂವಿನ ಬಳಕೆ ಕಡಿಮೆಯಾಗುವುದರಿಂದ ಹೂವಿನ ವ್ಯಾಪಾರಿಗಳಿಗೆ ನಷ್ಟ. ಸಣ್ಣ ಕಾರ್ಯಕ್ರಮಗಳಲ್ಲಿ ಎಂಸಿ ಅಗತ್ಯವಿಲ್ಲವೆಂದು ಕೆಲವರು ನಿರ್ಧರಿಸುತ್ತಿರುವುದರಿಂದ ಅವಕಾಶಗಳು ಕಡಿಮೆಯಾಗಿವೆ. ಡಿಜೆ ಮತ್ತು ಸಂಗೀತ ತಂಡಗಳು ಸಂಗೀತ ಕಾರ್ಯಕ್ರಮಗಳನ್ನು ಕೈಬಿಡುವುದರಿಂದ ಕಲಾವಿದರಿಗೆ ಕೆಲಸದ ಕೊರತೆ. ಅಡುಗೆ ಅನಿಲದ&zwnj; ಸಿಲಿಂಡರ್ ಗಳ&zwnj; ಕೊರತೆ, ಬೆಲೆಏರಿಕೆ ಬಿಸಿಯ&zwnj; ನಡುವೆ ಅತಿಥಿಗಳ ಸಂಖ್ಯೆ ಕಡಿಮೆಯಾಗುವುದರಿಂದ ಊಟದ ವ್ಯವಸ್ಥೆಯ ಪ್ರಮಾಣ ಕಡಿಮೆಯಾಗಿ, ಕ್ಯಾಟರಿಂಗ್&zwnj; ಸೇವೆಗಳಿಗೂ ಹೊಡೆತ ಬಿದ್ದಿದೆ. ಫೋಟೋಗ್ರಫಿ, ವೀಡಿಯೋಗ್ರಫಿಯಲ್ಲಿಯೂ ಗ್ರಾಹಕರು, ದೊಡ್ಡ ಪ್ಯಾಕೇಜ್&zwnj;ಗಳ ಬದಲು ಸಣ್ಣ ಪ್ಯಾಕೇಜ್&zwnj;ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಮೇಕಪ್&zwnj;, ಇವೆಂಟ್&zwnj; ಪ್ಲ್ಯಾನರ್&zwnj;ಗಳು ಪೂರ್ಣ ಮದುವೆ ಪ್ಲ್ಯಾನಿಂಗ್&zwnj; ಸೇವೆಗಳನ್ನು ಕೆಲವರು ಕೈಬಿಡುತ್ತಿದ್ದು, ಸರಳತೆಗೆ ಜೈ ಎನ್ನುವ ಅನಿವಾರ್ಯ ಸ್ಥಿತಿ ಎದುರಾಗಿದೆ.&lt;/p&gt;&lt;p&gt;ಏಪ್ರಿಲ್ ಮೇ ತಿಂಗಳು ಕ್ರೈಸ್ತ ಸಮುದಾಯದ ಅತೀ ಹೆಚ್ಚು ಮದುವೆ ಸಮಾರಂಭಗಳು ನಡೆಯುತ್ತವೆ. ಆದರೆ ಈ ಬಾರಿ ನನ್ನ ಆ್ಯಂಕರಿಂಗ್ ನಿಗದಿಯಾಗಿದ್ದ 8 ಮದುವೆ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದೆ. ಇದೆಲ್ಲವೂ ಯುದ್ಧ ತಂದಿರುವ ಸಂಕಷ್ಟ&lt;/p&gt;&lt;p&gt;ವಿಜೆ ಡಿಕ್ಸನ್ ಖ್ಯಾತ ನಿರೂಪಕರು&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/relationship/middle-east-conflict-impacts-weddings-in-coastal-karnataka-several-events-postponed-gdp/articleshow-13sce5l"/>
        </item>
        <item>
            <title><![CDATA[ಬೆಂಡೆಕಾಯಿ ಹೆಚ್ಚುವಾಗ ಕೈ ಜಿಗುಟಾಗದಂತೆ ತಡೆಯಲು ಈ ಎಣ್ಣೆ ಬಳಸಿ!]]></title>
            <link>https://kannada.asianetnews.com/webstories/kitchen/3-easy-hacks-to-cut-okra-without-stickiness-5gcbvy2</link>
            <guid isPermaLink="true">https://kannada.asianetnews.com/webstories/kitchen/3-easy-hacks-to-cut-okra-without-stickiness-5gcbvy2</guid>
            <pubDate>Wed, 08 Apr 2026 19:15:54 +0530</pubDate>
            <description><![CDATA[&lt;p&gt;Cooking hacks for beginners: ಬೆಂಡೆಕಾಯಿ ಪಲ್ಯ ಎಲ್ಲರಿಗೂ ಇಷ್ಟ, ಆದ್ರೆ ಅದನ್ನು ಹೆಚ್ಚುವಾಗ ಕೈಯೆಲ್ಲ ಜಿಗುಟಾಗುತ್ತೆ ಅಂತ ಅನೇಕರು ಬೇಜಾರು ಮಾಡ್ಕೊಳ್ತಾರೆ. ಈ ಲೋಳೆ ಅಂಶ ಕೈಗೆ ಅಂಟದಂತೆ ತಡೆಯಲು ಇಲ್ಲಿವೆ ಕೆಲವು ಅದ್ಭುತ ಕಿಚನ್ ಟಿಪ್ಸ್.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jt81xnhrqemt6c07n90e736c,imgname-worst-cooking-oils-for-health-2-1746174662200.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/kitchen/3-easy-hacks-to-cut-okra-without-stickiness-5gcbvy2"/>
        </item>
        <item>
            <title><![CDATA[ಈ ಎಲೆಯಿಂದ ಒಂದೇ ರಾತ್ರಿಯಲ್ಲಿ ಬಿಳಿ ಕೂದಲು ಕಪ್ಪಾಗುವುದು ಗ್ಯಾರಂಟಿ!]]></title>
            <link>https://kannada.asianetnews.com/gallery/fashion/bhringraj-the-secret-to-naturally-black-hair-a1hzwgi</link>
            <guid isPermaLink="true">https://kannada.asianetnews.com/gallery/fashion/bhringraj-the-secret-to-naturally-black-hair-a1hzwgi</guid>
            <pubDate>Wed, 08 Apr 2026 18:11:00 +0530</pubDate>
            <description><![CDATA[&lt;p&gt;Bhringraj for grey hair: ಇಂತಹ ಸಮಯದಲ್ಲಿ ನಮ್ಮ ಪೂರ್ವಜರು ಬಳಸುತ್ತಿದ್ದ ಈ ಸೊಪ್ಪು ಪವಾಡದಂತೆ ಕೆಲಸ ಮಾಡುತ್ತದೆ. ಕೂದಲಿನ ನೈಸರ್ಗಿಕ ಬಣ್ಣವನ್ನು ಮರಳಿ ತರುವ ಈ ಅದ್ಭುತ ಮನೆಮದ್ದಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0c024k4mnxfskdr7kgrnpph,imgname-bhringraj-oil--1--1752749380196.jpg" type="image/jpeg" height="390" width="690"/>
            <content:encoded><![CDATA[&lt;p&gt;Bhringraj for grey hair: ಇಂತಹ ಸಮಯದಲ್ಲಿ ನಮ್ಮ ಪೂರ್ವಜರು ಬಳಸುತ್ತಿದ್ದ ಈ ಸೊಪ್ಪು ಪವಾಡದಂತೆ ಕೆಲಸ ಮಾಡುತ್ತದೆ. ಕೂದಲಿನ ನೈಸರ್ಗಿಕ ಬಣ್ಣವನ್ನು ಮರಳಿ ತರುವ ಈ ಅದ್ಭುತ ಮನೆಮದ್ದಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂದಿನ ವೇಗದ ಜೀವನದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ 'ಅಕಾಲಿಕ ನರೆ' (ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು). 25 ವರ್ಷ ತುಂಬುವ ಮೊದಲೇ ತಲೆ ಕೂದಲು ಬಿಳಿಯಾಗುತ್ತಿದ್ದರೆ, ಜನರು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಪ್ರಾಡಕ್ಟ್&zwnj;ಗಳ ಮೊರೆ ಹೋಗುತ್ತಾರೆ. ಇವು ತಾತ್ಕಾಲಿಕವಾಗಿ ಬಣ್ಣ ನೀಡಿದರೂ, ಚರ್ಮದ ಅಲರ್ಜಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.&lt;/p&gt;&lt;img&gt;&lt;p&gt;ಈ ಹಿನ್ನೆಲೆಯಲ್ಲಿ, ನಮ್ಮ ಪೂರ್ವಜರು ಬಳಸುತ್ತಿದ್ದ ಹಳೆಯದಾದ ಒಂದು ಆಯುರ್ವೇದ ಚಿಕಿತ್ಸೆ ಈಗ ಮತ್ತೆ ಸಖತ್ ಟ್ರೆಂಡ್ ಆಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು, ಕೇವಲ ಒಂದು ಎಲೆಯಿಂದಲೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು.&lt;/p&gt;&lt;img&gt;&lt;p&gt;ಹೌದು. ಆಯುರ್ವೇದ ಶಾಸ್ತ್ರದಲ್ಲಿ 'ಭೃಂಗರಾಜ' ಎಂದು ಕರೆಯಲ್ಪಡುವ ಇದು ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಲ್ಲದು. ಇದರಲ್ಲಿರುವ ಅಂಶಗಳು ನೈಸರ್ಗಿಕವಾಗಿ ಕೂದಲಿಗೆ ಕಪ್ಪು ಬಣ್ಣ ನೀಡುವ 'ಮೆಲನಿನ್' ಉತ್ಪತ್ತಿಯನ್ನು ಹೆಚ್ಚಿಸುತ್ತವೆ. ಸಂಶೋಧನೆಗಳ ಪ್ರಕಾರ, ಈ ಗಿಡದ ಹಳದಿ ಹೂವುಗಳು ಕೂದಲಿನ ಸಂರಕ್ಷಣೆಯಲ್ಲಿ ತುಂಬಾ ಸಹಕಾರಿ.&lt;/p&gt;&lt;img&gt;&lt;p&gt;ಈ ಸೊಪ್ಪಿನ ಜೊತೆಗೆ ಸ್ವಲ್ಪ ಗೋರಂಟಿ ಮತ್ತು ಆಮ್ಲಾ ಪುಡಿಯನ್ನು ಸೇರಿಸಿ ಮೆತ್ತಗೆ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಒಂದು ದಿನ ಪೂರ್ತಿ ಹಾಗೆಯೇ ಬಿಡಿ. ಮರುದಿನ ಇದನ್ನು ತಲೆಗೆ ಹಚ್ಚಿ, ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ. ನೆನಪಿರಲಿ, ಇದನ್ನು ಕೇವಲ ಮೇಲೆ ಮೇಲೆ ಹಚ್ಚದೆ, ಕೂದಲಿನ ಬುಡಕ್ಕೆ ತಲುಪುವಂತೆ ಹಚ್ಚಬೇಕು. ಆಗಲೇ ಉತ್ತಮ ಬದಲಾವಣೆ ಕಾಣಲು ಸಾಧ್ಯ.&lt;/p&gt;&lt;img&gt;&lt;p&gt;&quot;ಇದು ನೈಸರ್ಗಿಕ ಮದ್ದಾದ್ದರಿಂದ ಉತ್ತಮ ಫಲಿತಾಂಶಕ್ಕೆ ಕೆಲವು ದಿನಗಳ ಕಾಲ ಬಳಸಬೇಕು&quot; &amp;nbsp;ಈ ಮಾಹಿತಿಯು ಕೇವಲ ಅರಿವಿಗಾಗಿ ಮಾತ್ರ. ತಜ್ಞರು ನೀಡಿದ ಮಾಹಿತಿಯ ಆಧಾರದ ಮೇಲೆ ಇದನ್ನು ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆಗಳಿದ್ದರೆ ನೇರವಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.&amp;nbsp;&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/fashion/bhringraj-the-secret-to-naturally-black-hair-a1hzwgi"/>
        </item>
        <item>
            <title><![CDATA[ಕೇಳಿದ್ದೆಲ್ಲವನ್ನೂ ಕೊಡ್ತಿದ್ದ 57ರ ಸರ್ಕಾರಿ ಶಾಲಾ ಶಿಕ್ಷಕಿಯ 27ರ ಹರೆಯದ ಪ್ರೇಮಿ: ಏಕಾಏಕಿ ಸುಟ್ಟು ಹಾಕಿದ್ದೇಕೆ?]]></title>
            <link>https://kannada.asianetnews.com/relationship/20-year-age-gap-kalaburagi-57-year-old-jyoti-teacher-murder-case-27-year-old-amar-guddalli-arrested-sat/articleshow-b22l1y0</link>
            <guid isPermaLink="true">https://kannada.asianetnews.com/relationship/20-year-age-gap-kalaburagi-57-year-old-jyoti-teacher-murder-case-27-year-old-amar-guddalli-arrested-sat/articleshow-b22l1y0</guid>
            <pubDate>Wed, 08 Apr 2026 17:34:50 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ 57 ವರ್ಷದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮಗನ ವಯಸ್ಸಿನ ಯುವಕನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಆರೋಪಿ ಆಕೆಯನ್ನು ಕೊಲೆ ಮಾಡಿ ಶವವನ್ನು ಸುಟ್ಟುಹಾಕಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knpff7ybcznn98k5td84rdte,imgname-kalaburagi-teacher-1775649660875.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಏ.08): &lt;/strong&gt;ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಆದರೆ ಅದೇ ಪ್ರೀತಿ ಹಾದಿ ತಪ್ಪಿದಾಗ, ಹಣದ ವ್ಯಾಮೋಹ ಬೆರೆತಾಗ ಎಂತಹ ಭೀಕರ ಅಂತ್ಯ ಕಾಣುತ್ತದೆ ಎಂಬುದಕ್ಕೆ ಕಲಬುರಗಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮಗನ ವಯಸ್ಸಿನ ಯುವಕನೊಂದಿಗೆ ಸಲ್ಲದ ಸಂಬಂಧ ಬೆಳೆಸಿದ್ದ 57 ವರ್ಷದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಅದೇ ಯುವಕನ ಕೈಯಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. ಕೊಲೆ ಮಾಡಿದ ಬಳಿಕ ಶವವನ್ನು ಸುಟ್ಟು ಹಾಕಿದ್ದ ಕಿರಾತಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.&lt;/p&gt;&lt;h2&gt;&lt;strong&gt;ಸುಟ್ಟು ಕರಕಲಾಗಿದ್ದ ಶವದ ರಹಸ್ಯ:&lt;/strong&gt;&lt;/h2&gt;&lt;p&gt;ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲಮೂಡ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಅರ್ಧಮರ್ದ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಶವ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ತನಿಖೆ ಚುರುಕುಗೊಳಿಸಿದ ಕಮಲಾಪುರ ಪೊಲೀಸರಿಗೆ ಇದು ಕಲಬುರಗಿ ನಿವಾಸಿ ಜ್ಯೋತಿ ಕಪಾಳೆ (57) ಅವರ ಶವ ಎಂದು ತಿಳಿದುಬಂದಿದೆ. ಜ್ಯೋತಿ ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಾಂಜರಖೇಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.&lt;/p&gt;&lt;h2&gt;&lt;strong&gt;ಅಕ್ರಮ ಸಂಬಂಧ ಮತ್ತು ಹಣದ ವ್ಯವಹಾರ:&lt;/strong&gt;&lt;/h2&gt;&lt;p&gt;ಅವಿವಾಹಿತೆಯಾಗಿದ್ದ ಜ್ಯೋತಿ ಅವರು ಭಾಲ್ಕಿಯಲ್ಲಿ ವಾಸವಿದ್ದರು. ರಜೆ ದಿನಗಳಲ್ಲಿ ಕಲಬುರಗಿಯ ಆನಂದ ನಗರದಲ್ಲಿರುವ ತಾಯಿ ಮನೆಗೆ ಬರುತ್ತಿದ್ದರು. ಈ ವೇಳೆ ಅವರಿಗೆ ನೆರೆಯ ನಿವಾಸಿ ಅಮರ ಗುಡ್ಡಳ್ಳಿ (27) ಎಂಬಾತನ ಪರಿಚಯವಾಗಿತ್ತು. ಕಳೆದ ಐದು ವರ್ಷಗಳಿಂದ ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು. 27ರ ಹರೆಯದ ಅಮರನಿಗೆ ಮದುವೆಯಾಗಿ ಹೆಂಡತಿ ಮಕ್ಕಳಿದ್ದರೂ, ಟೀಚರ್ ಜ್ಯೋತಿ ನೀಡುತ್ತಿದ್ದ ಹಣದ ಆಮಿಷಕ್ಕೆ ಬಿದ್ದು ಆಕೆಯೊಂದಿಗೆ ಸಂಬಂಧ ಮುಂದುವರಿಸಿದ್ದ. ಜ್ಯೋತಿ ನೀಡಿದ್ದ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣದಲ್ಲಿ ಅಮರ್ ಐಷಾರಾಮಿ 'ಥಾರ್' ಕಾರನ್ನು ಕೂಡ ಖರೀದಿಸಿದ್ದ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;40 ವರ್ಷದ ಗಂಡ ಬೇಡ, ಪ್ರಿಯತಮ ಬೇಕು: ಯುವತಿ ಕೋರಿಕೆಗೆ ನ್ಯಾಯಾಲಯದಿಂದ ಮಹತ್ವದ ತೀರ್ಪು&lt;/strong&gt;&lt;/p&gt;&lt;h3&gt;&lt;strong&gt;ಕೊಲೆಗೆ ಕಾರಣವಾಯ್ತು ಹಣದ ಒತ್ತಡ:&lt;/strong&gt;&lt;/h3&gt;&lt;p&gt;ಇತ್ತೀಚಿನ ದಿನಗಳಲ್ಲಿ ಜ್ಯೋತಿ ಅವರು ತಾನು ನೀಡಿದ್ದ ಹಣವನ್ನು ಮರಳಿ ನೀಡುವಂತೆ ಅಮರನಿಗೆ ಒತ್ತಡ ಹೇರಲಾರಂಭಿಸಿದ್ದರು. ಇದರಿಂದ ಆಕ್ರೋಶಗೊಂಡ ಅಮರ್, ಜ್ಯೋತಿಯನ್ನು ಹಾದಿಯಿಂದ ತಪ್ಪಿಸಲು ಸಂಚು ರೂಪಿಸಿದ್ದಾನೆ. ಏಪ್ರಿಲ್ 3 ರಂದು ಜ್ಯೋತಿಯನ್ನು ತನ್ನ ಥಾರ್ ಕಾರಿನಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಸುತ್ತಾಡಿಸಿದ್ದಾನೆ. ರಾತ್ರಿ ವೇಳೆಗೆ ಕಲಮೂಡ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮೊದಲೇ ಸಿದ್ಧಪಡಿಸಿಕೊಂಡಿದ್ದ ಹರಿತವಾದ ಆಯುಧದಿಂದ ಜ್ಯೋತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸಲು ಕಾರಿನ ಡಿಕ್ಕಿಯಲ್ಲಿ ತಂದಿದ್ದ ಪೆಟ್ರೋಲ್ ಸುರಿದು ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.&lt;/p&gt;&lt;h2&gt;&lt;strong&gt;ಪೊಲೀಸರ ಬಲೆಗೆ ಬಿದ್ದ ಕಿರಾತಕ:&lt;/strong&gt;&lt;/h2&gt;&lt;p&gt;ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಅಮರನ ಮೇಲೆ ಅನುಮಾನ ಬಂದಿತ್ತು. ತಲೆಮರೆಸಿಕೊಂಡಿದ್ದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಯಿಂದ ಕೊಲೆಗೆ ಬಳಸಿದ ಆಯುಧ, ಪೆಟ್ರೋಲ್ ಕ್ಯಾನ್ ಹಾಗೂ ಥಾರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಹಂತಕ ಅಮರ ಕಲಬುರಗಿ ಕೇಂದ್ರ ಕಾರಾಗೃಹ ಸೇರಿದ್ದಾನೆ. ಒಟ್ಟಿನಲ್ಲಿ, ಸಲ್ಲದ ಸಂಬಂಧ ಮತ್ತು ಹಣದ ಹಪಾಹಪಿ ಒಬ್ಬ ಶಿಕ್ಷಕಿಯ ಪ್ರಾಣವನ್ನು ಬಲಿ ಪಡೆದರೆ, ಒಬ್ಬ ಯುವಕನ ಜೀವನವನ್ನು ಜೈಲು ಪಾಲಾಗುವಂತೆ ಮಾಡಿದೆ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/20-year-age-gap-kalaburagi-57-year-old-jyoti-teacher-murder-case-27-year-old-amar-guddalli-arrested-sat/articleshow-b22l1y0"/>
        </item>
        <item>
            <title><![CDATA[ಮಲೆನಾಡಿನ ಮಳೆ, ಮಣ್ಣಿನ ಘಮ ಹೊತ್ತ ಆ ಮುಳ್ಳು ಮುಳ್ಳಿನ 'ಮಡಹಾಗಲಕಾಯಿ' ಎಂಬ ಅದ್ಭುತ; ಚಟ್ನಿ ಹೀಗೆ ಮಾಡಿ!]]></title>
            <link>https://kannada.asianetnews.com/food/here-is-the-perfect-chutney-recipe-of-spiny-gourd-called-malnad-rainy-season-marvel-the-spiky-madahagalakayi/articleshow-i6qfg6l</link>
            <guid isPermaLink="true">https://kannada.asianetnews.com/food/here-is-the-perfect-chutney-recipe-of-spiny-gourd-called-malnad-rainy-season-marvel-the-spiky-madahagalakayi/articleshow-i6qfg6l</guid>
            <pubDate>Wed, 08 Apr 2026 17:22:05 +0530</pubDate>
            <description><![CDATA[&lt;p&gt;ನಿಸರ್ಗ ನಮಗೆ ಕಾಲಕಾಲಕ್ಕೆ ತಕ್ಕಂತೆ ಅಗೆಯದ ನಿಧಿಗಳನ್ನು ನೀಡುತ್ತಾ ಇರುತ್ತದೆ. ಮಡಹಾಗಲಕಾಯಿ ಕೇವಲ ಒಂದು ತರಕಾರಿಯಲ್ಲ, ಅದು ಮಲೆನಾಡಿನ ಸಂಸ್ಕೃತಿ ಮತ್ತು ಆರೋಗ್ಯಕರ ಜೀವನಶೈಲಿಯ ಒಂದು ಭಾಗ. ವರ್ಷ ಪೂರ್ತಿ ಸಿಗದ ಈ ಅಪರೂಪದ ತರಕಾರಿ ಮಾರುಕಟ್ಟೆಯಲ್ಲಿ ಕಂಡರೆ ಖಂಡಿತ ಬಿಡಬೇಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knpexes0reetn11g6vyx4wnd,imgname-spiny-gourd-chutney-1775649078048.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಹಾಗಲಕಾಯಿ ಮ್ಯಾಜಿಕ್ ನೋಡಿ&lt;/strong&gt;&lt;/p&gt;&lt;p&gt;ಮಲೆನಾಡು ಅಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಜಿನುಗುವ ಮಳೆ, ಹಸಿರು ಹೊದ್ದ ಬೆಟ್ಟಗಳು ಮತ್ತು ಅಲ್ಲಿನ ವಿಶಿಷ್ಟ ಅಡುಗೆಗಳು. ಈ ಮಳೆಗಾಲದ ಸಮಯದಲ್ಲಿ ಮಲೆನಾಡಿನ ಮಾರುಕಟ್ಟೆಗಳಲ್ಲಿ ಅಥವಾ ಹಳ್ಳಿಗಳ ಬೇಲಿಯ ಬದಿಯಲ್ಲಿ ಒಂದು ವಿಚಿತ್ರವಾಗಿ ಕಾಣುವ ಪುಟ್ಟ ತರಕಾರಿ ಕಾಣಸಿಗುತ್ತದೆ. ಅದೇ ನಮ್ಮ ಇಂದಿನ ಕಥಾನಾಯಕ&mdash; 'ಮಡಹಾಗಲಕಾಯಿ' (Spiny Gourd).&lt;/p&gt;&lt;p&gt;ನೋಡಲು ಪುಟ್ಟ ಮುಳ್ಳುಹಂದಿಯಂತೆ ಕಾಣುವ ಈ ತರಕಾರಿ, ತನ್ನ ಮೈಮೇಲೆಲ್ಲಾ ಮೃದುವಾದ ಮುಳ್ಳುಗಳನ್ನು ಹೊದ್ದುಕೊಂಡಿರುತ್ತದೆ. ಮೊದಲ ಬಾರಿ ನೋಡುವವರಿಗೆ ಇದು 'ಹಾಗಲಕಾಯಿ'ಯ ಜಾತಿಗೆ ಸೇರಿರುವುದರಿಂದ &quot;ಅಬ್ಬಾ! ಇದು ಎಷ್ಟು ಕಹಿ ಇರಬಹುದು?&quot; ಎಂಬ ಭಯ ಕಾಡುವುದು ಸಹಜ. ಆದರೆ ಇಲ್ಲೇ ಇದೆ ಅಸಲಿ ಟ್ವಿಸ್ಟ್! ಹೆಸರಿನಲ್ಲಿ ಮಾತ್ರ 'ಹಾಗಲಕಾಯಿ' ಇದೆಯೇ ಹೊರತು, ರುಚಿಯಲ್ಲಿ ಇದು ಕಹಿಯೇ ಅಲ್ಲ. ಬದಲಿಗೆ ಒಂದು ರೀತಿಯ ಮಣ್ಣಿನ ಸೊಗಡಿನ, ಮೃದುವಾದ ಮತ್ತು ಅದ್ಭುತ ರುಚಿಯನ್ನು ಹೊಂದಿರುವ ತರಕಾರಿ ಇದು.&lt;/p&gt;&lt;h2&gt;ಆರೋಗ್ಯದ ಗಣಿ ಈ ಮಡಹಾಗಲಕಾಯಿ:&lt;/h2&gt;&lt;p&gt;ನಮ್ಮ ಇಂದಿನ ವೇಗದ ಜೀವನಶೈಲಿಯಲ್ಲಿ (Lifestyle) ನಮಗೆ ಬೇಕಾಗಿರುವುದು ಇಂತಹ ನೈಸರ್ಗಿಕ ಸೂಪರ್-ಫುಡ್&zwnj;ಗಳು. ಇದರಲ್ಲಿ ನಾರಿನಂಶ (Fiber) ಹೇರಳವಾಗಿದೆ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಆಂಟಿಆಕ್ಸಿಡೆಂಟ್&zwnj;ಗಳು ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ, ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ವಿಶೇಷವಾಗಿ ಮಧುಮೇಹ (Diabetes) ಇರುವವರಿಗೆ ಇದು ಪ್ರಕೃತಿ ನೀಡಿದ ವರದಾನವಿದ್ದಂತೆ. ಮಳೆಗಾಲದಲ್ಲಿ ಕಾಡುವ ಸಣ್ಣಪುಟ್ಟ ಕಾಯಿಲೆಗಳಿಗೆ ಈ ತರಕಾರಿ ಒಂದು ನೈಸರ್ಗಿಕ ಗುರಾಣಿಯಾಗಿ ಕೆಲಸ ಮಾಡುತ್ತದೆ.&lt;/p&gt;&lt;p&gt;ಅಡುಗೆ ಮನೆಯಲ್ಲಿ ಇದರ ಮ್ಯಾಜಿಕ್:&lt;/p&gt;&lt;p&gt;ಮಡಹಾಗಲಕಾಯಿಯಿಂದ ಮಾಡುವ ಪಲ್ಯ ಅದರ ಕ್ರಂಚಿ ಸ್ವಭಾವದಿಂದಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಇನ್ನು ಬಿಸಿ ಬಿಸಿ ಅನ್ನಕ್ಕೆ ಈ ಕಾಯಿಯ ಸಾಂಬಾರ್ ಇದ್ದರೆ ಆ ಮಳೆಯ ಸಂಜೆ ಇನ್ನಷ್ಟು ಸುಂದರವಾಗುತ್ತದೆ. ಆದರೆ, ನಿಜವಾದ ಮಲೆನಾಡಿನ ರುಚಿಯನ್ನು ಸವಿಯಬೇಕೆಂದರೆ ನೀವು ಇದರ 'ಚಟ್ನಿ' ಮಾಡಲೇಬೇಕು.&lt;/p&gt;&lt;p&gt;ಇಲ್ಲಿ ನಿಮಗಾಗಿ ಒಂದು ಸಣ್ಣ 'ಸೀಕ್ರೆಟ್ ಟಿಪ್': ಮಡಹಾಗಲಕಾಯಿಯನ್ನು ಹುರಿದು ಚಟ್ನಿ ಮಾಡುವಾಗ, ಅದಕ್ಕೆ ಸ್ವಲ್ಪ ಬಿಳಿ ಎಳ್ಳು ಮತ್ತು ಜೀರಿಗೆಯನ್ನು ಸೇರಿಸಿ ನೋಡಿ. ಆ ಎಳ್ಳಿನ ನಟ್ಟಿ (Nutty) ರುಚಿ ಮತ್ತು ಜೀರಿಗೆಯ ಪರಿಮಳ ಚಟ್ನಿಯ ಸ್ವಾದವನ್ನು ಎಲ್ಲಿಗೋ ಕೊಂಡೊಯ್ಯುತ್ತದೆ. ಬಿಸಿ ಅನ್ನಕ್ಕೆ ಒಂದು ಚಮಚ ತುಪ್ಪ ಮತ್ತು ಈ ಚಟ್ನಿ ಸೇರಿಸಿ ತಿಂದರೆ, ಆ ಕ್ಷಣಕ್ಕೆ ನೀವು ಯಾವುದೇ ಪಂಚತಾರಾ ಹೋಟೆಲ್ ಅಡುಗೆಯನ್ನು ಮರೆತುಬಿಡುತ್ತೀರಿ!&lt;/p&gt;&lt;h3&gt;ಕೊನೆಯ ಮಾತು:&lt;/h3&gt;&lt;p&gt;ನಿಸರ್ಗ ನಮಗೆ ಕಾಲಕಾಲಕ್ಕೆ ತಕ್ಕಂತೆ ಅಗೆಯದ ನಿಧಿಗಳನ್ನು ನೀಡುತ್ತಾ ಇರುತ್ತದೆ. ಮಡಹಾಗಲಕಾಯಿ ಕೇವಲ ಒಂದು ತರಕಾರಿಯಲ್ಲ, ಅದು ಮಲೆನಾಡಿನ ಸಂಸ್ಕೃತಿ ಮತ್ತು ಆರೋಗ್ಯಕರ ಜೀವನಶೈಲಿಯ ಒಂದು ಭಾಗ. ವರ್ಷ ಪೂರ್ತಿ ಸಿಗದ ಈ ಅಪರೂಪದ ತರಕಾರಿ ಮಾರುಕಟ್ಟೆಯಲ್ಲಿ ಕಂಡರೆ ಖಂಡಿತ ಬಿಡಬೇಡಿ. ಅದನ್ನು ಮನೆಗೆ ತಂದು, ಪ್ರೀತಿಯಿಂದ ಅಡುಗೆ ಮಾಡಿ, ಆರೋಗ್ಯದ ಜೊತೆಗೆ ರುಚಿಯನ್ನೂ ಆಸ್ವಾದಿಸಿ.&lt;/p&gt;&lt;p&gt;ನೆನಪಿಡಿ, ಪ್ರಕೃತಿಯ ಜೊತೆಗಿನ ನಂಟು ನಮ್ಮನ್ನು ಸದಾ ಲವಲವಿಕೆಯಿಂದ ಇಟ್ಟಿರುತ್ತದೆ!&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/food/here-is-the-perfect-chutney-recipe-of-spiny-gourd-called-malnad-rainy-season-marvel-the-spiky-madahagalakayi/articleshow-i6qfg6l"/>
        </item>
    </channel>
</rss>
