<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 30 Apr 2026 19:21:23 +0530</lastBuildDate>
        <atom:link href="https://kannada.asianetnews.com/rss/life" rel="self" type="application/rss+xml"/>
        <item>
            <title><![CDATA[ಹುಬ್ಬಳ್ಳಿ ಏರ್‌ಪೋರ್ಟ್ ಮತ್ತು ರೈಲ್ವೆ ನಿಲ್ದಾಣದ ನಡುವೆ ಬಸ್‌ ಸೌಕರ್ಯ ಆರಂಭ, ಸಮಯದ ಮಾಹಿತಿ ಇಲ್ಲಿದೆ]]></title>
            <link>https://kannada.asianetnews.com/karnataka-districts/new-bus-service-launched-between-hubballi-airport-and-railway-station-gdp/articleshow-g547zul</link>
            <guid isPermaLink="true">https://kannada.asianetnews.com/karnataka-districts/new-bus-service-launched-between-hubballi-airport-and-railway-station-gdp/articleshow-g547zul</guid>
            <pubDate>Thu, 30 Apr 2026 19:21:16 +0530</pubDate>
            <description><![CDATA[ಹುಬ್ಬಳ್ಳಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ನೂತನ ಬಸ್ ಸಾರಿಗೆ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ವಿಮಾನಗಳ ಆಗಮನಕ್ಕೆ ಅನುಗುಣವಾಗಿ ಸಂಚರಿಸುವ ಈ ಬಸ್&zwnj;ಗಳು, ಪ್ರಯಾಣಿಕರಿಗೆ ಸುಲಭ ಸಂಪರ್ಕ ಕಲ್ಪಿಸುವ ಮತ್ತು ಸಮಯ ಉಳಿಸುವ ಗುರಿ ಹೊಂದಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqfa89xd7rhaacw227mn3016,imgname-hubballi-gets-direct-airport-to-railway-bus-connectivity-1777556793261.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ನಗರದಲ್ಲಿ ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವ ಉದ್ದೇಶದಿಂದ ಮಹತ್ವದ ಹೆಜ್ಜೆಯಾಗಿ, ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ನೂತನ ಬಸ್ ಸಾರಿಗೆ ಸೌಲಭ್ಯವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ಸೇವೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್&zwnj;ಡಬ್ಲ್ಯೂಕೆಆರ್&zwnj;ಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಮಂಗಳವಾರ ಚಾಲನೆ ನೀಡಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಗಾ ಎಂ ಅವರು, ಸಾರ್ವಜನಿಕ ಪ್ರಯಾಣಿಕರಿಂದ ಬಂದಿರುವ ಬೇಡಿಕೆಯನ್ನು ಪರಿಗಣಿಸಿ ಈ ಸೇವೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳ ನಡುವಿನ ಸಂಪರ್ಕವನ್ನು ಸುಗಮಗೊಳಿಸುವುದರ ಜೊತೆಗೆ, ಪ್ರಯಾಣಿಕರ ಸಮಯವನ್ನು ಉಳಿಸಿ ಅವರಿಗೆ ಸುಲಭ ಪ್ರಯಾಣದ ಅನುಭವ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.&lt;/p&gt;&lt;h2&gt;ಸಮಯಗಳು ಇಂತಿದೆ&lt;/h2&gt;&lt;p&gt;ಈ ಹೊಸ ಬಸ್ ಸೇವೆಯನ್ನು ವಿಮಾನಗಳ ಆಗಮನ ವೇಳೆಗೆ ಅನುಗುಣವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಬೆಳಗ್ಗೆ 8.05 ಮತ್ತು 11.45 ಗಂಟೆಗೆ, ಸಂಜೆ 5.05 ಹಾಗೂ 6.35 ಗಂಟೆಗೆ, ಜೊತೆಗೆ ರಾತ್ರಿ 7.10, 8.05 ಮತ್ತು 8.50 ಗಂಟೆಗೆ ಬಸ್&zwnj;ಗಳು ಸಂಚರಿಸಲಿವೆ. ಈ ಬಸ್&zwnj;ಗಳು ಗೋಕುಲ್ ರಸ್ತೆಯ ಕೇಂದ್ರೀಯ ಬಸ್ ನಿಲ್ದಾಣ, ಹೊಸೂರು ಕ್ರಾಸ್ ಹಾಗೂ ಚೆನ್ನಮ್ಮ ಸರ್ಕಲ್ ಮೂಲಕ ನಗರ ಮತ್ತು ಉಪನಗರ ಬಸ್ ನಿಲ್ದಾಣಗಳನ್ನು ಸಂಪರ್ಕಿಸಿ ಅಂತಿಮವಾಗಿ ರೈಲ್ವೆ ನಿಲ್ದಾಣ ತಲುಪಲಿವೆ.&lt;/p&gt;&lt;p&gt;ಈ ಸೇವೆಯಿಂದ ವಿಮಾನ ಪ್ರಯಾಣಿಕರಿಗೆ ರೈಲು ಸಂಪರ್ಕ ಸುಲಭವಾಗುವುದರ ಜೊತೆಗೆ, ನಗರ ಸಾರಿಗೆ ವ್ಯವಸ್ಥೆಯಲ್ಲಿಯೂ ಸಮನ್ವಯ ಹೆಚ್ಚಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಈ ಸೇವೆಯನ್ನು ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರ&lt;/h2&gt;&lt;p&gt;ಈ ಕಾರ್ಯಕ್ರಮದಲ್ಲಿ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಸಿದ್ದಲಿಂಗೇಶ, ಪ್ರತಾಪ ಬಿ.ವಿ, ಅರುಣ ಡಿ.ವಿ, ವಿಭಾಗೀಯ ಸಾರಿಗೆ ಅಧಿಕಾರಿ ಎಸ್.ಆರ್. ಮಾಟೋಳಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಪ್ರವೀಣ ಈಡೂರ, ಹುಬ್ಬಳ್ಳಿ ನಗರ ಸಾರಿಗೆ ಘಟಕ ವ್ಯವಸ್ಥಾಪಕ ವಿನಾಯಕ ಸಾಲಿಮಠ ಸೇರಿದಂತೆ ಸಂಸ್ಥೆಯ ಹಾಗೂ ವಿಮಾನ ನಿಲ್ದಾಣದ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;&lt;p&gt;ಒಟ್ಟಾರೆ, ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳ ನಡುವೆ ಆರಂಭಗೊಂಡಿರುವ ಈ ನೂತನ ಬಸ್ ಸೇವೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರವಾಗಿದ್ದು, ನಗರ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Good to see that @nw_krtc has started a bus service from the airport to the railway station. Once the new terminal is ready, I request that the @hd_brts Chigari buses already operating to the new bus stand be extended up to the airport. This will ensure seamless connectivity for&hellip; https://t.co/Q1KsLqXLYS&lt;/p&gt;&lt;p&gt;&mdash; Hublicity-eGroup (@HubliCityeGroup) April 29, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/new-bus-service-launched-between-hubballi-airport-and-railway-station-gdp/articleshow-g547zul"/>
        </item>
        <item>
            <title><![CDATA[ಹೃದಯದ ಆರೋಗ್ಯಕ್ಕೆ ಯಾವುದು ಬೆಸ್ಟ್, ರನ್ನಿಂಗಾ ಅಥವಾ ಸ್ವಿಮ್ಮಿಂಗಾ? ಹೊಸ ಅಧ್ಯಯನದಲ್ಲೇನಿದೆ?]]></title>
            <link>https://kannada.asianetnews.com/health-life/swimming-vs-running-heart-health-benefits-study-gvd/articleshow-hkxp5ny</link>
            <guid isPermaLink="true">https://kannada.asianetnews.com/health-life/swimming-vs-running-heart-health-benefits-study-gvd/articleshow-hkxp5ny</guid>
            <pubDate>Thu, 30 Apr 2026 18:35:20 +0530</pubDate>
            <description><![CDATA[&lt;p&gt;ಹೃದಯದ ಆರೋಗ್ಯಕ್ಕೆ ರನ್ನಿಂಗ್&zwnj;ಗಿಂತ ಸ್ವಿಮ್ಮಿಂಗ್ ಹೆಚ್ಚು ಪ್ರಯೋಜನಕಾರಿ ಅಂತ ಹೊಸ ಅಧ್ಯಯನವೊಂದು ಹೇಳಿದೆ. ಎರಡೂ ವ್ಯಾಯಾಮಗಳು ಫಿಟ್ನೆಸ್ ಹೆಚ್ಚಿಸಿದರೂ, ಈಜು ಹೃದಯವನ್ನು ಬಲಪಡಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqf7wfmyzrrkjhmx5m9ansc5,imgname-jffjf-1777554308766.png" type="image/jpeg" height="390" width="690"/>
            <content:encoded><![CDATA[&lt;p&gt;ಹೃದಯದ ಆರೋಗ್ಯಕ್ಕೆ ಯಾವುದು ಬೆಸ್ಟ್, ರನ್ನಿಂಗಾ ಅಥವಾ ಸ್ವಿಮ್ಮಿಂಗಾ? ಈ ಪ್ರಶ್ನೆಗೆ ಹೊಸ ಅಧ್ಯಯನವೊಂದು ಅಚ್ಚರಿಯ ಉತ್ತರ ನೀಡಿದೆ. ಓಡುವುದಕ್ಕಿಂತ ಈಜುವುದರಿಂದ ಹೃದಯಕ್ಕೆ ಹೆಚ್ಚು ಲಾಭವಿದೆ ಅಂತ ಈ ಸ್ಟಡಿ ಹೇಳಿದೆ. ಸಾವೊ ಪಾಲೊ ಫೆಡರಲ್ ಯೂನಿವರ್ಸಿಟಿಯ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದು, ರನ್ನಿಂಗ್ ಮತ್ತು ಸ್ವಿಮ್ಮಿಂಗ್ ಎರಡೂ ಫಿಟ್ನೆಸ್ ಹೆಚ್ಚಿಸಿದರೂ, ಈಜಿನಿಂದ ಹೃದಯದ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ತಜ್ಞರ ಅಭಿಪ್ರಾಯ&lt;/strong&gt;&lt;/p&gt;&lt;p&gt;UNIFESPನ ಪ್ರೊಫೆಸರ್ ಆಂಡ್ರೆ ಜಾರ್ಜ್ ಸೆರಾ ಈ ಸಂಶೋಧನೆಯ ನೇತೃತ್ವ ವಹಿಸಿದ್ದರು. ಅವರ ಪ್ರಕಾರ, ರನ್ನಿಂಗ್ ಮತ್ತು ಸ್ವಿಮ್ಮಿಂಗ್ ಎರಡೂ ಹೃದಯ ಮತ್ತು ಶ್ವಾಸಕೋಶಕ್ಕೆ ಒಳ್ಳೆಯದು. ಆದರೆ, ಸ್ವಿಮ್ಮಿಂಗ್&zwnj;ನಿಂದ ಕೆಲವು ಹೆಚ್ಚುವರಿ ಪ್ರಯೋಜನಗಳಿವೆ. ಈಜು ಕೇವಲ ಫಿಟ್ನೆಸ್ ಹೆಚ್ಚಿಸುವುದಲ್ಲದೆ, ಆಳವಾದ ಜೈವಿಕ ಮಟ್ಟದಲ್ಲಿ ಬದಲಾವಣೆಗಳನ್ನು ತರುತ್ತದೆ. ಇದರಿಂದ ಹೃದಯವು ಹೆಚ್ಚು ಬಲಶಾಲಿ ಮತ್ತು ದಕ್ಷವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಅಧ್ಯಯನದ ವಿವರಗಳು&lt;/strong&gt;&lt;/p&gt;&lt;p&gt;ಈ ಸಂಶೋಧನೆಯ ವರದಿಯನ್ನು ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್&zwnj;ನಲ್ಲಿ ಪ್ರಕಟಿಸಲಾಗಿದೆ. ಇದೊಂದು ಪ್ರಾಣಿ ಅಧ್ಯಯನವಾಗಿದ್ದು, ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ. ಎಂಟು ವಾರಗಳ ಕಾಲ, ವಾರದಲ್ಲಿ ಐದು ದಿನ, ದಿನಕ್ಕೆ ಒಂದು ಗಂಟೆ ವ್ಯಾಯಾಮ ಮಾಡಿಸಲಾಗಿದೆ.&lt;/p&gt;&lt;p&gt;ಇಲಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು: ಒಂದು ಗುಂಪು ಯಾವುದೇ ವ್ಯಾಯಾಮ ಮಾಡದೆ ಸುಮ್ಮನಿತ್ತು, ಇನ್ನೊಂದು ಗುಂಪು ಓಡುತ್ತಿತ್ತು, ಮತ್ತು ಮತ್ತೊಂದು ಗುಂಪು ಈಜುತ್ತಿತ್ತು. ಈ ಎರಡೂ ವ್ಯಾಯಾಮಗಳು ವಿಭಿನ್ನವಾಗಿರುವುದರಿಂದ, ಸಂಶೋಧಕರು VO₂ ಮ್ಯಾಕ್ಸ್ ಬಳಸಿ ಅವುಗಳನ್ನು ಹೋಲಿಸಿದ್ದಾರೆ. VO₂ ಮ್ಯಾಕ್ಸ್ ಅಂದರೆ, ವ್ಯಾಯಾಮದ ಸಮಯದಲ್ಲಿ ದೇಹವು ಆಮ್ಲಜನಕವನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತದೆ ಎಂಬುದನ್ನು ಅಳೆಯುವ ವಿಧಾನ.&lt;/p&gt;&lt;p&gt;&lt;strong&gt;ಪ್ರಮುಖ ಸಂಶೋಧನೆಗಳು&lt;/strong&gt;&lt;/p&gt;&lt;p&gt;ರನ್ನಿಂಗ್ ಮತ್ತು ಸ್ವಿಮ್ಮಿಂಗ್ ಎರಡೂ ಗುಂಪುಗಳಲ್ಲಿ ಫಿಟ್ನೆಸ್ ಮಟ್ಟ ಶೇ. 5ಕ್ಕಿಂತ ಹೆಚ್ಚು ಸುಧಾರಿಸಿತ್ತು. ಆದರೆ, ಹೃದಯದ ರಚನೆಯಲ್ಲಿ ಗಮನಾರ್ಹ ಬದಲಾವಣೆ ಕಂಡಿದ್ದು ಸ್ವಿಮ್ಮಿಂಗ್ ಮಾಡಿದ ಇಲಿಗಳಲ್ಲಿ ಮಾತ್ರ. ಈಜು ಗುಂಪಿನ ಇಲಿಗಳ ಹೃದಯದ ಒಟ್ಟಾರೆ ಗಾತ್ರ ಮತ್ತು ರಕ್ತ ಪಂಪ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಎಡ ಕುಹರದ (left ventricle) ದ್ರವ್ಯರಾಶಿ ಹೆಚ್ಚಾಗಿತ್ತು. ಆದರೆ, ಓಡಿದ ಇಲಿಗಳ ಗುಂಪಿನಲ್ಲಿ ಈ ರೀತಿಯ ಬದಲಾವಣೆಗಳು ಕಂಡುಬಂದಿಲ್ಲ. ಅವುಗಳ ಹೃದಯ, ವ್ಯಾಯಾಮ ಮಾಡದ ಗುಂಪಿನಂತೆಯೇ ಇತ್ತು.&lt;/p&gt;&lt;p&gt;&lt;strong&gt;ಆಣ್ವಿಕ ಮಟ್ಟದಲ್ಲಿ ಬದಲಾವಣೆಗಳು&lt;/strong&gt;&lt;/p&gt;&lt;p&gt;ಈ ಅಧ್ಯಯನದ ಪ್ರಮುಖ ಸಂಶೋಧನೆ ಅಂದ್ರೆ ಮೈಕ್ರೋಆರ್&zwnj;ಎನ್&zwnj;ಎ (microRNAs) ಬಗ್ಗೆ. ಇವು ಜೀನ್&zwnj;ಗಳು ಪ್ರೋಟೀನ್&zwnj;ಗಳನ್ನು ಹೇಗೆ ಸೃಷ್ಟಿಸುತ್ತವೆ ಎಂಬುದನ್ನು ನಿಯಂತ್ರಿಸುವ ಸಣ್ಣ ಅಣುಗಳು. ಈ ಅಣುಗಳ ಮೇಲೆ ಸ್ವಿಮ್ಮಿಂಗ್ ಹೆಚ್ಚು ಪರಿಣಾಮ ಬೀರಿದೆ. ಇದು ಹೃದಯದ ಜೀವಕೋಶಗಳ ಬೆಳವಣಿಗೆ, ಹೊಸ ರಕ್ತನಾಳಗಳ ರಚನೆ, ಜೀವಕೋಶದ ಹಾನಿಯಿಂದ ರಕ್ಷಣೆ ಮತ್ತು ಹೃದಯದ ಸಂಕೋಚನ ಸಾಮರ್ಥ್ಯದಂತಹ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಿದೆ. ಅಂದರೆ, ಈಜು ಹೃದಯದೊಳಗೆ ಹೆಚ್ಚು ಸುಧಾರಿತ ಹೊಂದಾಣಿಕೆಗಳನ್ನು ಪ್ರಚೋದಿಸುತ್ತದೆ.&lt;/p&gt;&lt;h2&gt;&lt;strong&gt;ಮುಂದಿನ ಸಂಶೋಧನೆ&lt;/strong&gt;&lt;/h2&gt;&lt;p&gt;ಜನರು ಸಾಮಾನ್ಯವಾಗಿ ತಮಗೆ ಇಷ್ಟವಾದ ವ್ಯಾಯಾಮವನ್ನು ಆಯ್ಕೆ ಮಾಡ್ತಾರೆ. ಆದರೆ ಈ ಸಂಶೋಧನೆ, ಹೃದಯದ ಚೇತರಿಕೆ ಮತ್ತು ಪುನರ್ವಸತಿಗೆ ಸ್ವಿಮ್ಮಿಂಗ್&zwnj;ನ ಮಹತ್ವವನ್ನು ಎತ್ತಿ ತೋರಿಸುತ್ತೆ ಅಂತ ಸೆರಾ ಹೇಳಿದ್ದಾರೆ. ಎಲ್ಲಾ ಏರೋಬಿಕ್ ವ್ಯಾಯಾಮಗಳು ಹೃದಯದ ಮೇಲೆ ಒಂದೇ ರೀತಿ ಪರಿಣಾಮ ಬೀರುತ್ತವೆ ಎಂಬ ಸಾಮಾನ್ಯ ನಂಬಿಕೆಯನ್ನು ಈ ಅಧ್ಯಯನ ಪ್ರಶ್ನಿಸಿದೆ.&lt;/p&gt;&lt;p&gt;ಆರೋಗ್ಯಕರ ಹೃದಯದ ಬೆಳವಣಿಗೆಗೆ ಸಂಬಂಧಿಸಿದ ಜೀನ್ ಚಟುವಟಿಕೆ ಮತ್ತು ಪ್ರೋಟೀನ್ ಮಾರ್ಗಗಳನ್ನು ಸಹ ತಂಡವು ತನಿಖೆ ಮಾಡಿದೆ. ಈ ಆಣ್ವಿಕ ವ್ಯತ್ಯಾಸಗಳಿಗೆ ನಿಖರವಾದ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ವ್ಯಾಯಾಮವು ಹೃದಯದ ಆರೋಗ್ಯವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದರ ಕುರಿತು ಭವಿಷ್ಯದ ಅಧ್ಯಯನಗಳಿಗೆ ಇದು ಹೊಸ ದಾರಿ ಮಾಡಿಕೊಟ್ಟಿದೆ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/swimming-vs-running-heart-health-benefits-study-gvd/articleshow-hkxp5ny"/>
        </item>
        <item>
            <title><![CDATA[ಬ್ರೇಕಪ್ ಬೆನ್ನಲ್ಲೇ ಹ್ಯಾಂಡ್‌ಸಮ್ ಹುಡ್ಗ ರೋಹನ್ ಜೊತೆ ಹೊಸ ಲವ್ ಸ್ಟೋರಿ ಶುರುಮಾಡಿಕೊಂಡ ಪೂಜಾ ಹೆಗ್ಡೆ!]]></title>
            <link>https://kannada.asianetnews.com/gallery/cine-world/rohan-mehra-starts-new-love-story-with-pooja-hegde-after-break-up-with-tara-sutaria-u4fi3i7</link>
            <guid isPermaLink="true">https://kannada.asianetnews.com/gallery/cine-world/rohan-mehra-starts-new-love-story-with-pooja-hegde-after-break-up-with-tara-sutaria-u4fi3i7</guid>
            <pubDate>Thu, 30 Apr 2026 18:13:40 +0530</pubDate>
            <description><![CDATA[&lt;p&gt;ಅಷ್ಟಕ್ಕೂ ಯಾರು ಗುರು ಈ ರೋಹನ್ ಮೆಹ್ರಾ? ನಮ್ಮ ಕರಾವಳಿ ಬೆಡಗಿಯ ಮನಸ್ಸು ಕದ್ದ ಈ ಕಳ್ಳ ಯಾರು ಅಂತ ಇಂಟರ್&zwnj;ನೆಟ್&zwnj;ನಲ್ಲಿ ಹುಡುಕಿದ್ರೆ ಸಿಗುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ, ಈತ ಬೇರೆ ಯಾರೂ ಅಲ್ಲ, ಬಾಲಿವುಡ್&zwnj;ನ ಲೆಜೆಂಡರಿ ನಟ, ದಿವಂಗತ ವಿನೋದ್ ಮೆಹ್ರಾ ಅವರ ಸುಪುತ್ರ!&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqf5ga9657s13ng81j1jb07a,imgname-pooja-hegde-1777551812902.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಷ್ಟಕ್ಕೂ ಯಾರು ಗುರು ಈ ರೋಹನ್ ಮೆಹ್ರಾ? ನಮ್ಮ ಕರಾವಳಿ ಬೆಡಗಿಯ ಮನಸ್ಸು ಕದ್ದ ಈ ಕಳ್ಳ ಯಾರು ಅಂತ ಇಂಟರ್&zwnj;ನೆಟ್&zwnj;ನಲ್ಲಿ ಹುಡುಕಿದ್ರೆ ಸಿಗುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ, ಈತ ಬೇರೆ ಯಾರೂ ಅಲ್ಲ, ಬಾಲಿವುಡ್&zwnj;ನ ಲೆಜೆಂಡರಿ ನಟ, ದಿವಂಗತ ವಿನೋದ್ ಮೆಹ್ರಾ ಅವರ ಸುಪುತ್ರ!&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕರಾವಳಿ ಬೆಡಗಿ ಪೂಜಾ ಹೆಗ್ಡೆ ಜೊತೆ ಕುಚ್&zwnj;ಕುಚ್&zwnj; ಶುರುಮಾಡಿದ್ರಾ ಬಾಲಿವುಡ್&zwnj;ನ ಈ ಹ್ಯಾಂಡ್&zwnj;ಸಮ್ ಹಂಕ್!&lt;/p&gt;&lt;p&gt;ಬಾಲಿವುಡ್ ಗಲ್ಲಿಗಳಲ್ಲಿ ಈಗ ಎಲ್ಲಿ ನೋಡಿದರೂ ಒಂದೇ ಗುಸುಗುಸು! ಸೌತ್&zwnj; ಟು ನಾರ್ತ್&zwnj; ಸಖತ್ ಸೌಂಡ್&zwnj; ಮಾಡ್ತಿರೋ ನಮ್ಮ ಬುಟ್ಟ ಬೊಮ್ಮಾ, ಕರಾವಳಿಯ ಸುಂದರಿ ಪೂಜಾ ಹೆಗ್ಡೆ ಈಗ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರಂತೆ! ಹೌದು, ಪೂಜಾ ಹೆಗ್ಡೆ ಈಗ ಬಾಲಿವುಡ್&zwnj;ನ ಹ್ಯಾಂಡ್&zwnj;ಸಮ್&zwnj; ನಟ ರೋಹನ್ ಮೆಹ್ರಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಬಿಸಿ ಬಿಸಿ ಸುದ್ದಿ ಬಿಟೌನ್&zwnj; ಅಂಗಳದಲ್ಲಿ ಹರಿದಾಡುತ್ತಿದೆ.&lt;/p&gt;&lt;img&gt;&lt;p&gt;ಇವರಿಬ್ಬರೂ ಅಧಿಕೃತವಾಗಿ &quot;ನಾವು ಜಸ್ಟ್&zwnj; ಫ್ರೆಂಡ್ಸ್&quot; ಅಂತ ಹೇಳಿಕೊಳ್ಳುತ್ತಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಇವರು ಒಬ್ಬರಿಗೊಬ್ಬರು ಮಾಡಿಕೊಳ್ಳುತ್ತಿರುವ ಹಾರ್ಟ್&zwnj; ಎಕ್ಸ್&zwnj;ಚೇಂಜ್&zwnj; ನೋಡಿದ್ರೆ, &quot;ಇಲ್ಲೇನೋ ನಡೀತಿದೆ ಗುರು&quot; ಅಂತ ಯಾರಿಗಾದ್ರೂ ಡೌಟ್ ಬರೋದು ಗ್ಯಾರಂಟಿ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಯಾರು ಗುರು ಈ ರೋಹನ್ ಮೆಹ್ರಾ? ನಮ್ಮ ಕರಾವಳಿ ಬೆಡಗಿಯ ಮನಸ್ಸು ಕದ್ದ ಈ ಕಳ್ಳ ಯಾರು ಅಂತ ಇಂಟರ್&zwnj;ನೆಟ್&zwnj;ನಲ್ಲಿ ಹುಡುಕಿದ್ರೆ ಸಿಗುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ, ಈತ ಬೇರೆ ಯಾರೂ ಅಲ್ಲ, ಬಾಲಿವುಡ್&zwnj;ನ ಲೆಜೆಂಡರಿ ನಟ, ದಿವಂಗತ ವಿನೋದ್ ಮೆಹ್ರಾ ಅವರ ಸುಪುತ್ರ!&lt;/p&gt;&lt;img&gt;&lt;p&gt;ಪಾಪ, ರೋಹನ್ ಚಿಕ್ಕವನಿದ್ದಾಗಲೇ ತಂದೆ ವಿನೋದ್ ಮೆಹ್ರಾ ಇಹಲೋಕ ತ್ಯಜಿಸಿದ್ದರು. ಆಮೇಲೆ ತಾಯಿ ಕಿರಣ್ ಜೊತೆ ಕೀನ್ಯಾದ ಮೊಂಬಾಸಾಗೆ ಹಾರಿ, ಅಲ್ಲಿಯೇ ಅಜ್ಜ-ಅಜ್ಜಿ ಪ್ರೀತಿಯಲ್ಲಿ ಬೆಳೆದು, ಯುಕೆಯಲ್ಲಿ ವ್ಯಾಸಂಗ ಮುಗಿಸಿ, ಕೊನೆಗೆ ನಟನೆಯ ಹುಚ್ಚು ಹಿಡಿದು ಮತ್ತೆ ಮುಂಬೈಗೆ ಬಂದು ಲ್ಯಾಂಡ್ ಆದರು. ಸಿನಿಮಾ ರಕ್ತದಲ್ಲೇ ಇರೋದ್ರಿಂದ, ಸುಮ್ನೆ ಕೂರೋಕೆ ಆಗುತ್ತಾ? ಮೊದಲು ಸಂಜಯ್ ಲೀಲಾ ಬನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಸೆಟ್&zwnj;ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಪಡಿಪಾಟಲು ಪಟ್ಟರು.&lt;/p&gt;&lt;img&gt;&lt;p&gt;ಆಮೇಲೆ 2018ರಲ್ಲಿ ಸೈಫ್ ಅಲಿ ಖಾನ್ ಜೊತೆ 'ಬಜಾರ್' ಸಿನಿಮಾದಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟು, ಮೊದಲ ಯತ್ನದಲ್ಲೇ ಫಿಲ್ಮ್&zwnj;ಫೇರ್ 'ಅತ್ಯುತ್ತಮ ಚೊಚ್ಚಲ ನಟ' ಪ್ರಶಸ್ತಿಯನ್ನೂ ಎತ್ತಿ ಹಿಡಿದರು! ಬರೀ ರೊಮ್ಯಾಂಟಿಕ್ ಪಾತ್ರಗಳಷ್ಟೇ ಅಲ್ಲ, '420 IPC', 'ಕಾಲಾ' (Kaala) ದಂತಹ ವೆಬ್ ಸಿರೀಸ್&zwnj;ಗಳಲ್ಲಿ ನಟಿಸಿ, ಕಂಟೆಂಟ್&zwnj; ಓರಿಯೆಂಟೆಡ್&zwnj; ನಟ ಅಂತಲೂ ಸೈ ಅನ್ನಿಸಿಕೊಂಡ ಟ್ಯಾಲೆಂಟೆಡ್ ಹುಡುಗ ಈ ರೋಹನ್. ಅಂದಹಾಗೆ ಇವರ ಅಕ್ಕ ಸೋನಿಯಾ ಮೆಹ್ರಾ ಕೂಡ ನಟಿಯೇ.&lt;/p&gt;&lt;p&gt;ಈಗ ಅಸಲಿ ಗಾಸಿಪ್&zwnj; ಕಹಾನಿಗೆ ಬರೋಣ! ಪೂಜಾ ಹೆಗ್ಡೆ ಲೈಫ್&zwnj;ಗೆ ಎಂಟ್ರಿ ಕೊಡೋಕು ಮುಂಚೆ ರೋಹನ್ ಲೈಫ್&zwnj;ನಲ್ಲಿ ಬೇರೊಬ್ಬಳು ಸುಂದರಿ ಇದ್ದಳು. ಅವಳೇ ಬಾಲಿವುಡ್ ಬ್ಯೂಟಿ ತಾರಾ ಸುತಾರಿಯಾ! ತಾರಾ ಚಿತ್ರರಂಗಕ್ಕೆ ಬರೋಕು ಮುಂಚೆ ಇವರಿಬ್ಬರೂ ಸಖತ್ ಡೀಪ್ ಲವ್&zwnj;ನಲ್ಲಿದ್ದರು. ಎಲ್ಲೆಡೆ ಕೈ ಕೈ ಹಿಡಿದು ಓಡಾಡಿಕೊಂಡಿದ್ದರು. ಆದರೆ, ಏನಾಯ್ತೋ ಏನೋ, ಇಬ್ಬರ ದಾರಿ ಬೇರೆಯಾಯ್ತು, ಬ್ರೇಕಪ್&zwnj; ಕೂಡ ಆಯ್ತು.&lt;/p&gt;&lt;img&gt;&lt;p&gt;ಹಳೆಯ ಲವ್&zwnj; ಸ್ಟೋರಿಗೆ ಎಂಡ್ ಕಾರ್ಡ್ ಹಾಕಿದ್ದ ರೋಹನ್&zwnj;ಗೆ, ಈಗ ಪೂಜಾ ಹೆಗ್ಡೆ ಸಾಥ್ ಸಿಕ್ಕಿದೆ. ಪಾರ್ಟಿ, ಔಟಿಂಗ್, ಬರ್ತ್&zwnj;ಡೇ ವಿಶ್&zwnj;ಗಳು ಅಂತ ಈ ಹೊಸ ಜೋಡಿ ಸಖತ್ ಎಂಜಾಯ್ ಮಾಡ್ತಿದೆ. ಇಬ್ಬರೂ ಪದೇ ಪದೇ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸೆರೆಸಿಗುತ್ತಿರುವುದು ಡೇಟಿಂಗ್ ವದಂತಿಗೆ ತುಪ್ಪ ಸುರಿದಂತಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಬ್ರೇಕಪ್&zwnj; ನೋವಿನಲ್ಲಿದ್ದ ರೋಹನ್&zwnj;ಗೆ ಪೂಜಾ ಹೆಗ್ಡೆ ಮೂಲಕ ಹೊಸ ಲೈಫ್ ಸಿಕ್ಕಂತಿದೆ. ಅಭಿಮಾನಿಗಳ ತಲೆಯಲ್ಲಿ ಈಗ ಒಂದೇ ಪ್ರಶ್ನೆ- ಈ ಡೇಟಿಂಗ್ ಕಹಾನಿ ಮದುವೆ ಮಂಟಪದವರೆಗೆ ಹೋಗಿ ಸಪ್ತಪದಿ ತುಳಿಯುತ್ತಾ? ಅಥವಾ ಇದೂ ಬರೀ ವದಂತಿಯಾಗಿಯೇ ಉಳಿಯುತ್ತಾ? ಕಾದು ನೋಡೋಣ! ಬಾಲಿವುಡ್&zwnj;ನ ಈ ಹೊಸ 'ಲವ್&zwnj;ಬರ್ಡ್ಸ್&zwnj;' ಕಹಾನಿ ಮುಂದೆ ಯಾವ ತಿರುವು ಪಡೆಯುತ್ತೆ ಅನ್ನೋದೇ ಈಗ ಸದ್ಯದ ಸಸ್ಪೆನ್ಸ್!&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/rohan-mehra-starts-new-love-story-with-pooja-hegde-after-break-up-with-tara-sutaria-u4fi3i7"/>
        </item>
        <item>
            <title><![CDATA[ಅಮ್ಮಂಗೆ ಸುಳ್ಳು ಹೇಳಿ ಬೆಂಗಳೂರು ಎಂಟ್ರಿ: ಕದ್ದುಮುಚ್ಚಿ ಸೀರಿಯಲ್​ನಲ್ಲಿ ನಟನೆ- ಅಣ್ಣಯ್ಯ'ರಾಣಿ' ರೋಚಕ ಸ್ಟೋರಿ]]></title>
            <link>https://kannada.asianetnews.com/gallery/tv-talk/annayya-serial-rani-urf-raghavi-aragagundagi-about-her-serial-journey-suc-z3r0u9w</link>
            <guid isPermaLink="true">https://kannada.asianetnews.com/gallery/tv-talk/annayya-serial-rani-urf-raghavi-aragagundagi-about-her-serial-journey-suc-z3r0u9w</guid>
            <pubDate>Thu, 30 Apr 2026 18:12:44 +0530</pubDate>
            <description><![CDATA['ಅಣ್ಣಯ್ಯ' ಸೀರಿಯಲ್ ಖ್ಯಾತಿಯ ರಾಣಿ, ನಿಜನಾಮ ರಾಘವಿ ಅರಳಗುಂಡಗಿ, ಕಲಬುರ್ಗಿಯಿಂದ ಯಾವುದೇ ಹಿನ್ನೆಲೆ ಇಲ್ಲದೆ ಬಣ್ಣದ ಲೋಕಕ್ಕೆ ಬಂದವರು. ನಟಿಯಾಗುವ ಆಸೆಯಿಂದ ಅಮ್ಮನಿಗೆ ಸಾಫ್ಟ್&zwnj;ವೇರ್ ಕೋರ್ಸ್ ಎಂದು ಸುಳ್ಳು ಹೇಳಿ ಬೆಂಗಳೂರು ಸೇರಿ, ಹಲವು ಕಷ್ಟಗಳನ್ನು ದಾಟಿ ಇಂದು ಕಿರುತೆರೆಯಲ್ಲಿ ಯಶಸ್ಸು ಕಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqf6eg3f2eehcm9fzgsqy5kc,imgname-raghavi-aralagundagi-1777552801903.jpg" type="image/jpeg" height="390" width="690"/>
            <content:encoded><![CDATA['ಅಣ್ಣಯ್ಯ' ಸೀರಿಯಲ್ ಖ್ಯಾತಿಯ ರಾಣಿ, ನಿಜನಾಮ ರಾಘವಿ ಅರಳಗುಂಡಗಿ, ಕಲಬುರ್ಗಿಯಿಂದ ಯಾವುದೇ ಹಿನ್ನೆಲೆ ಇಲ್ಲದೆ ಬಣ್ಣದ ಲೋಕಕ್ಕೆ ಬಂದವರು. ನಟಿಯಾಗುವ ಆಸೆಯಿಂದ ಅಮ್ಮನಿಗೆ ಸಾಫ್ಟ್&zwnj;ವೇರ್ ಕೋರ್ಸ್ ಎಂದು ಸುಳ್ಳು ಹೇಳಿ ಬೆಂಗಳೂರು ಸೇರಿ, ಹಲವು ಕಷ್ಟಗಳನ್ನು ದಾಟಿ ಇಂದು ಕಿರುತೆರೆಯಲ್ಲಿ ಯಶಸ್ಸು ಕಂಡಿದ್ದಾರೆ.&lt;img&gt;&lt;p&gt;ಅಣ್ಣಯ್ಯ ಸೀರಿಯಲ್ ರಾಣಿ ಎಂದರೆ ಸೀರಿಯಲ್​ ವೀಕ್ಷಕರಿಗೆ ಮುಖದಲ್ಲಿ ಒಂದು ನಗು ಮೂಡುತ್ತದೆ. ಅಣ್ಣಯ್ಯನ ಮುದ್ದಿನ ತಂಗಿಯಾದ ರಾಣಿ, ಮೋಸದಿಂದ ಮದುವೆಯಾದರೂ ಗಂಡನ ಬದುಕಿನಲ್ಲಿ ರಾಣಿಯೇ ಆಗಿ ಬದುಕುತ್ತಿರುವ, ತಮ್ಮ ಅಭಿನಯದಿಂದ ಅಪಾರ ಅಭಿಮಾನಿಗಳ ಗಳಿಸಿರುವ ರಾಣಿಯ ನಿಜವಾದ ಹೆಸರು ರಾಘವಿ ಅರಳಗುಂಡಗಿ.&lt;/p&gt;&lt;img&gt;&lt;p&gt;ಕಲಬುರ್ಗಿಯ ರಾಘವಿ ಅವರು, ಯಾವುದೇ ಬಣ್ಣದ ಲೋಕದ ಹಿನ್ನೆಲೆ ಇಲ್ಲದೆಯೇ ಸೀರಿಯಲ್​ಗೆ ಬಂದವರು. ಹೆಣ್ಣುಮಕ್ಕಳು ಸಿನಿಮಾದಲ್ಲಿ ನಟನೆ ಎಂದರೆ ಇಂದಿಗೂ ಬಹಳಷ್ಟು ಮನೆಯಲ್ಲಿ ಒಪ್ಪಿಗೆ ಸೂಚಿಸುವುದು ಬಲು ಕಷ್ಟ. ಕಾಲ ಎಷ್ಟೇ ಬದಲಾದರೂ ಈ ಬಣ್ಣದ ಲೋಕದ ಸಹವಾಸ ಬೇಡ ಎನ್ನುವವ ಹಲವು ಕುಟುಂಬಗಳು ಇವೆ. ಅಂಥದ್ದರಲ್ಲಿ ಒಂದು ರಾಘವಿ ಅವರ ಕುಟುಂಬ. ಆದರೆ,, ಅಮ್ಮನಿಗೆ ಸುಳ್ಳು ಹೇಳಿ ಬೆಂಗಳೂರು ಸೇರಿ, ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ ನಟಿ.&lt;/p&gt;&lt;img&gt;&lt;p&gt;ನನಗೆ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ತುಂಬಾ ಆಸೆಯಾಗಿತ್ತು. ಮನೆಯಲ್ಲಿ ಇದನ್ನು ಒಪ್ಪುವುದಿಲ್ಲ ಎಂದು ತಿಳಿದಿದ್ದರೂ ಅಮ್ಮನಿಗೆ ಒಮ್ಮೆ ಕೇಳಿದ್ದೆ. ಬೇಡ ಬೇಡ ಅದೆಲ್ಲಾ ಬೇಡ, ಮದ್ವೆಯಾಗು ಎಂದರು. ನಾನು ಇಲ್ಲಪ್ಪ, ನನ್ನ ಕಾಲ ಮೇಲೆ ನಾನುನಿಂತ ಮೇಲೆ ಮದುವೆ ಎಂದು ಅಮ್ಮನಿಗೆ ಹೇಳಿ ಬೆಂಗಳೂರಿನಲ್ಲಿ ಸಾಫ್ಟ್​ವೇರ್​ ಕೋರ್ಸ್​ ಸೇರುತ್ತೇನೆ ಎಂದು ಸುಳ್ಳು ಹೇಳಿ ಬಂದವಳು ಎಂದು ನಟಿ ರಾಘವಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ.&lt;/p&gt;&lt;img&gt;&lt;p&gt;ನನಗೆ ಇಲ್ಲಿ ಯಾರೂ ಪರಿಚಯವಿರಲಿಲ್ಲ. ಹೆಸರಿಗೆ ಒಂದು ಸಾಫ್ಟ್​ವೇರ್​ ಕೋರ್ಸ್​ಗೆ ಸೇರಿದೆ. ಆದರೆ ಆಡಿಷನ್​ ಕೊಡುತ್ತಲೇ ಇದ್ದೆ. ಕ್ಲಾಸ್​ಗೆ ಬಂಕ್​ ಹಾಕುತ್ತಿದ್ದುದರಿಂದ ಟೀಚರ್ಸ್​ ತುಂಬಾ ಬೈಯುತ್ತಿದ್ದರು. ಆದರೂ ನನ್ನ ಗಮನವೆಲ್ಲಾ ಆಡಿಷನ್​ ಕಡೆಗೇ ಇತ್ತು ಎಂದಿದ್ದಾರೆ.&lt;/p&gt;&lt;img&gt;&lt;p&gt;ಕೊನೆಗೆ ಒಂದಿಷ್ಟು ಕಾಂಟ್ಯಾಕ್ಟ್​ ಬೆಳೆಯಲಿ ಎಂದು ಅಸಿಸ್ಟಂಟ್ ಡೈರೆಕ್ಟರ್ ಆಗಿ ಸೇರಿಕೊಂಡೆ ಎಂದು ಅಂದಿನ ದಿನಗಳನ್ನು ನೆನೆದಿದ್ದಾರೆ ರಾಘವಿ.&lt;/p&gt;&lt;img&gt;&lt;p&gt;ಕೊನೆಗೆ ಜನರ ಪರಿಚಯವಾಗಿ ಆಡಿಷನ್​ ಕೊಟ್ಟು ಸೀರಿಯಲ್​ಗೆ ಸೆಲೆಕ್ಟ್​ ಆದೆ ಎಂದಿದ್ದಾರೆ. ಅಂದಹಾಗೆ ಅಣ್ಣಯ್ಯ ಸೀರಿಯಲ್​ಗೂ ಮುನ್ನ ನಟಿ ರಾಘವಿ ಅವರು, 'ಜೇನುಗೂಡು' ಧಾರಾವಾಹಿಯಲ್ಲಿ ನಯನಾ ಪಾತ್ರ ಮಾಡಿದ್ದರು. 'ಮಂಗಳಗೌರಿ ಮದುವೆ', 'ಅಂತರಪಟ' ಸೀರಿಯಲ್​ಗಳಲ್ಲಿಯೂ ಸೈ ಎನ್ನಿಸಿಕೊಂಡರು.ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/annayya-serial-rani-urf-raghavi-aragagundagi-about-her-serial-journey-suc-z3r0u9w"/>
        </item>
        <item>
            <title><![CDATA[ಮಿಕ್ಸರ್ ಗ್ರೈಂಡರಲ್ಲಿ ಈ 5 ವಸ್ತುಗಳನ್ನು ಗ್ರೈಂಡ್ ಮಾಡ್ಬೇಡಿ… ಹಾಳಾಗೋದು ಗ್ಯಾರಂಟಿ]]></title>
            <link>https://kannada.asianetnews.com/gallery/kitchen/kitchen-hacks-do-not-grind-these-things-in-mixer-grinder-eqmg3k4</link>
            <guid isPermaLink="true">https://kannada.asianetnews.com/gallery/kitchen/kitchen-hacks-do-not-grind-these-things-in-mixer-grinder-eqmg3k4</guid>
            <pubDate>Thu, 30 Apr 2026 18:02:54 +0530</pubDate>
            <description><![CDATA[&lt;p&gt;Kichen Hakcs: ಮಿಕ್ಸರ್ ಗ್ರೈಂಡರ್&zwnj;ಗಳನ್ನು ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ. ಅವು ನಿಮ್ಮ ಕೆಲಸವನ್ನು ಸುಲಭಗೊಳಿಸಲು ಸಹಾಯಕವಾಗಿವೆ. ಆದರೆ ಕೆಲವರು ಅವು ಬೇಗನೆ ಸವೆಯುತ್ತವೆ ಎಂದು ದೂರುತ್ತಾರೆ. ಮಿಕ್ಸರ್ ಹೆಚ್ಚುಕಾಲ ಬಾಳಿಕೆ ಬರಬೇಕು ಅಂದರೆ ಈ ವಸ್ತುಗಳನ್ನು ಗ್ರೈಂಡ್ ಮಾಡ್ಬೇಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k6wpzm5nykm69mn4gra6cw7p,imgname-750-wat-mixer-grinder-price-1759752736948.jpg" type="image/jpeg" height="390" width="690"/>
            <content:encoded><![CDATA[&lt;p&gt;Kichen Hakcs: ಮಿಕ್ಸರ್ ಗ್ರೈಂಡರ್&zwnj;ಗಳನ್ನು ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ. ಅವು ನಿಮ್ಮ ಕೆಲಸವನ್ನು ಸುಲಭಗೊಳಿಸಲು ಸಹಾಯಕವಾಗಿವೆ. ಆದರೆ ಕೆಲವರು ಅವು ಬೇಗನೆ ಸವೆಯುತ್ತವೆ ಎಂದು ದೂರುತ್ತಾರೆ. ಮಿಕ್ಸರ್ ಹೆಚ್ಚುಕಾಲ ಬಾಳಿಕೆ ಬರಬೇಕು ಅಂದರೆ ಈ ವಸ್ತುಗಳನ್ನು ಗ್ರೈಂಡ್ ಮಾಡ್ಬೇಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಡುಗೆ ಕೆಲಸ ಸುಲಭವಾಗಿ ಹಾಗೂ ವೇಗವಾಗಿ ಮಾಡಬೇಕು ಅಂದ್ರೆ, ಮನೆಯಲ್ಲಿ ಮಿಕ್ಸರ್ ಗ್ರೈಂಡರ್ ಇರಲೇಬೇಕು. ನಿಮ್ಮ ಮನೆಯಲ್ಲೂ ಮಿಕ್ಸರ್ ಇದ್ದೂ, ಆದರೆ ಅದು ಬೇಗನೆ ಸವೆಯುತ್ತಿದೆ ಎನ್ನುವ ದೂರು ನಿಮ್ಮದಾಗಿದ್ರೆ, ಈ ಕೆಲವು ವಿಷಯಗಳನ್ನು ನೀವು ನೆನಪಿಟ್ಟುಕೊಳ್ಳಬೇಕು. ಈ ಐದು ವಸ್ತುಗಳನ್ನು ತಪ್ಪಿಯೂ ನೀವು ಮಿಸ್ಕರ್ ನಲ್ಲಿ ಮಿಕ್ಸಿ ಮಾಡಬಾರದು.&lt;/p&gt;&lt;img&gt;&lt;p&gt;ನೀವು ಐಸ್ ಪುಡಿ ಮಾಡಲು ಮಿಕ್ಸರ್ ಗ್ರೈಂಡರ್ ಬಳಸಿದರೆ, ಹಾಗೆ ಮಾಡುವುದನ್ನು ತಪ್ಪಿಸಿ; ಇದರಿಂದ ಬ್ಲೇಡ್&zwnj;ಗಳು ಮುರಿಯಬಹುದು ಅಥವಾ ಓವರ್&zwnj;ಲೋಡ್&zwnj;ನಿಂದ ಮೋಟಾರ್ ಹಾನಿಗೊಳಗಾಗಬಹುದು. ನೀವು ಸಣ್ಣ ತುಂಡುಗಳನ್ನು ಮಿಕ್ಸಿ ಮಾಡಬಹುದು, ಆದರೆ ದೊಡ್ಡ ಐಸ್ ಕ್ಯೂಬ್ ಬಳಸಬೇಡಿ.&lt;/p&gt;&lt;img&gt;&lt;p&gt;ಮಿಕ್ಸರ್ ಗ್ರೈಂಡರ್&zwnj;ನಲ್ಲಿ ಹೆಚ್ಚು ಒಣ ಪದಾರ್ಥಗಳನ್ನು ಪುಡಿಮಾಡುವುದನ್ನು ಸಹ ತಪ್ಪಿಸಬೇಕು. ಇದು ಮಿಕ್ಸರ್ ಬ್ಲೇಡ್&zwnj;ಗಳಿಗೆ ಹಾನಿಯನ್ನುಂಟುಮಾಡಬಹುದು ಮತ್ತು ಗಟ್ಟಿಯಾದ ಪದಾರ್ಥಗಳು ಬ್ಲೇಡ್&zwnj;ಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತವೆ. ಆದ್ದರಿಂದ, ನೀವು ಪುಡಿ ಮಾಡಬೇಕಾದರೆ, ಮೊದಲು ಪದಾರ್ಥಗಳನ್ನು ನೆನೆಸಿ ನಂತರ ಪುಡಿಮಾಡಿ.&lt;/p&gt;&lt;img&gt;&lt;p&gt;ಮಿಕ್ಸರ್ ಗ್ರೈಂಡರ್&zwnj;ಗೆ ಜಿಗುಟಾದ ವಸ್ತುಗಳನ್ನು ಹಾಕುವುದರಿಂದ ಅದು ಗಂಭೀರವಾಗಿ ಹಾನಿಗೊಳಗಾಗಬಹುದು. ಇದು ಗ್ರೈಂಡಿಂಗ್ ಬ್ಲೇಡ್&zwnj;ಗಳನ್ನು ಜಾಮ್ ಮಾಡಬಹುದು. ಇದರಿಂದಾಗಿ ಬೇಗನೆ ರಿಪೇರಿ ಮಾಡಬೇಕಾಗಿ ಕೂಡ ಬರಬಹುದು.&lt;/p&gt;&lt;img&gt;&lt;p&gt;ಕೆಲವರು ತಮ್ಮ ಮಿಕ್ಸರ್ ಗ್ರೈಂಡರ್&zwnj;ನಲ್ಲಿ ತುಂಬಾ ಗಟ್ಟಿಯಾದ ವಸ್ತುಗಳನ್ನು ಪುಡಿ ಮಾಡುತ್ತಾರೆ, ಇದು ಬ್ಲೇಡ್&zwnj;ಗಳಿಗೆ ಹಾನಿಯನ್ನುಂಟುಮಾಡುತ್ತದೆ. ಮಿಕ್ಸರ್&zwnj;ಗಳನ್ನು ವಿವಿಧ ರೀತಿಯ ಪದಾರ್ಥಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಕಬ್ಬು ಮತ್ತು ತೆಂಗಿನಕಾಯಿ ಸಿಪ್ಪೆಯಂತಹ ವಸ್ತುಗಳನ್ನು ಪುಡಿ ಮಾಡುವುದನ್ನು ತಪ್ಪಿಸಿ.&lt;/p&gt;&lt;img&gt;&lt;p&gt;ಯಾವಾಗಲೂ ತುಂಬಾ ಬಿಸಿಯಾದ ವಸ್ತುಗಳನ್ನು ನೇರವಾಗಿ ಮಿಕ್ಸರ್ ಗ್ರೈಂಡರ್&zwnj;ನಲ್ಲಿ ರುಬ್ಬುವುದನ್ನು ತಪ್ಪಿಸಬೇಕು. ಇದು ನಿಮ್ಮ ಮಿಕ್ಸರ್ ಗ್ರೈಂಡರ್ ಅನ್ನು ಶೀಘ್ರದಲ್ಲಿ ಹಾನಿಗೊಳಿಸಬಹುದು, ಆದ್ದರಿಂದ ಬಿಸಿಯಾದ ವಸ್ತುಗಳನ್ನು ತಪ್ಪಿಸುವುದು ಉತ್ತಮ. ಶಾಖವು ಜಾರ್&zwnj;ನ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/kitchen/kitchen-hacks-do-not-grind-these-things-in-mixer-grinder-eqmg3k4"/>
        </item>
        <item>
            <title><![CDATA[House Lizards: ಮನೆಯಲ್ಲಿ ಹಲ್ಲಿಗಳ ಕಾಟವೇ? ಈ ಸಿಂಪಲ್ ಟ್ರಿಕ್ಸ್ ಬಳಸಿ ಓಡಿಸಿ]]></title>
            <link>https://kannada.asianetnews.com/webstories/life/simple-home-remedies-to-get-rid-of-house-lizards-b7q2y2x</link>
            <guid isPermaLink="true">https://kannada.asianetnews.com/webstories/life/simple-home-remedies-to-get-rid-of-house-lizards-b7q2y2x</guid>
            <pubDate>Thu, 30 Apr 2026 17:57:12 +0530</pubDate>
            <description><![CDATA[&lt;p&gt;How to get rid of house lizards: ಮನೆಯಲ್ಲಿ ಹಲ್ಲಿಗಳು ಪದೇ ಪದೇ ಕಾಣಿಸಿಕೊಂಡು ಕಿರಿಕಿರಿ ಉಂಟುಮಾಡುತ್ತಿವೆಯೇ? ಕೆಲವು ಸರಳ ಮನೆಮದ್ದುಗಳನ್ನು ಬಳಸಿಕೊಂಡು ಅವುಗಳನ್ನು ಸುಲಭವಾಗಿ ಓಡಿಸಬಹುದು. ಆ ಟಿಪ್ಸ್ ಇಲ್ಲಿವೆ. &amp;nbsp; &amp;nbsp; &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km2e9njekgzkbahdc2rqt6rf,imgname-fotojet---2026-03-19t122928.252-1773903599182.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/life/simple-home-remedies-to-get-rid-of-house-lizards-b7q2y2x"/>
        </item>
        <item>
            <title><![CDATA[ಸ್ಮಶಾನದಲ್ಲಿ ಭರ್ಜರಿ ಮದುವೆಯಾಗಿ ಸದ್ದು ಮಾಡಿದ ಜೋಡಿ: ಆದ್ರೆ ಕೊನೆಗೆ ಆಗಿದ್ದೇ ಬೇರೆ]]></title>
            <link>https://kannada.asianetnews.com/relationship/a-destination-wedding-held-at-a-riverside-cremation-site-in-uttarakhands-almora-suc/articleshow-yqyhfov</link>
            <guid isPermaLink="true">https://kannada.asianetnews.com/relationship/a-destination-wedding-held-at-a-riverside-cremation-site-in-uttarakhands-almora-suc/articleshow-yqyhfov</guid>
            <pubDate>Thu, 30 Apr 2026 17:40:02 +0530</pubDate>
            <description><![CDATA[ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಜೋಡಿಯೊಂದು ಸ್ಮಶಾನದಲ್ಲಿ ವಿವಾಹವಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಿತ್ರ ಮದುವೆಯು ಧಾರ್ಮಿಕ ನಂಬಿಕೆಗಳಿಗೆ ಮಾಡಿದ ಅವಮಾನ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆಡಳಿತವು ತನಿಖೆಗೆ ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqf4pwra97ycy4ntpjq0awg7,imgname-marriage-in-graveyard-1777550979850.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ಆಗುವ ಇಂದಿನ ಪೀಳಿಗೆಯವರು ವಿಭಿನ್ನ ರೀತಿಯಲ್ಲಿ ಯೋಚನೆ ಮಾಡುವವರು ಇದ್ದಾರೆ. ಎಲ್ಲರ ಮದುವೆಗಿಂತಲೂ ತಮ್ಮದು ಸ್ಪೆಷಲ್​ ಆಗಬೇಕು ಎಂದು ಬಯಸುವವರು ಹಲವರು ಇದ್ದರೆ, ತಮ್ಮ ಮದುವೆ ಸಿಕ್ಕಾಪಟ್ಟೆ ವೈರಲ್​ ಆಗಬೇಕು ಎಂದು ಹುಚ್ಚುತನಕ್ಕೆ ಕೈಹಾಕುವವರೂ ಕಮ್ಮಿಯೇನಿಲ್ಲ. ಅಂಥದ್ದೇ ಒಂದು ಮದುವೆ ಇದೀಗ ಜೋಡಿ ಅಂದುಕೊಂಡಂತೆ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಅದಕ್ಕೆ ಕಾರಣ, ಈ ಜೋಡಿ ಸ್ಮಶಾನದಲ್ಲಿ ಮದುವೆಯಾಗಿದೆ! ಹುಟ್ಟಿದ ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸೇರಬೇಕಾಗಿರುವುದು ಸ್ಮಶಾನಕ್ಕೇ ಎನ್ನುವುದು ನಿಜವಾದರೂ, ಮದುವೆಯನ್ನು ಬಹುಶಃ ಇಲ್ಲಿ ಮಾಡಿಕೊಂಡದ್ದು ಯಾರೂ ಇಲ್ಲವೇನೋ. ಆಕಾಶದಲ್ಲಿ, ನೀರಿನಲ್ಲಿ... ಹೀಗೆ ಎಲ್ಲೆಲ್ಲೋ ಮದುವೆಯಾಗಿ ಸುದ್ದಿಯಾದವರು ಇದ್ದಾರೆ. ಆದರೆ ಈ ಜೋಡಿ ಸ್ಮಶಾನದಲ್ಲಿ ಮದುವೆಯಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.&lt;/p&gt;&lt;h2&gt;&lt;strong&gt;ಎಲ್ಲಿಯ ಘಟನೆ&lt;/strong&gt;&lt;/h2&gt;&lt;p&gt;ಅಂದಹಾಗೆ, ಇದು ನಡೆದಿರುವುದು ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗಾಜಿಯಾಬಾದ್​ನ ಜೋಡಿ ಹೀಗೊಂದು ವಿವಾದ ಸೃಷ್ಟಿಸಿದೆ. ಸ್ಮಶಾನ ಸ್ಥಳವನ್ನು ವಿವಾಹ ಸ್ಥಳವನ್ನಾಗಿ ಪರಿವರ್ತಿಸಲಾಗಿದ್ದು, ಅಲ್ಲಿ ವಧು-ವರರು ಹೂಮಾಲೆ ವಿನಿಮಯ ಸೇರಿದಂತೆ ಎಲ್ಲಾ ವಿವಾಹ ವಿಧಿವಿಧಾನಗಳನ್ನು ನೆರವೇರಿಸಿಕೊಂಡಿದ್ದಾರೆ. ಇಡೀ ಕಾರ್ಯಕ್ರಮದ ವೀಡಿಯೊ ಜಾಲತಾಣದಲ್ಲಿ ವೈರಲ್​ ಆದ ತಕ್ಷಣ, ಜನರು ಆಘಾತಕ್ಕೊಳಗಾದರು ಮತ್ತು ಆಕ್ರೋಶಗೊಂಡರು. ಮಾರ್ಚುಲಾ ಪ್ರದೇಶದ ರಾಮಗಂಗಾ ಮತ್ತು ಬದನ್&zwnj;ಗಢ ನದಿಗಳ ಸಂಗಮದಲ್ಲಿ ಈ ಘಟನೆ ನಡೆದಿದೆ. ಈ ಸೂಕ್ಷ್ಮ ಸ್ಥಳದಲ್ಲಿ ವಿವಾಹ ಸಮಾರಂಭವನ್ನು ನಡೆಸಿರುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ತೀವ್ರ ಟೀಕೆ&lt;/strong&gt;&lt;/h3&gt;&lt;p&gt;ಇದು ಧಾರ್ಮಿಕ ನಂಬಿಕೆಗಳು ಮತ್ತು ಸಂಪ್ರದಾಯಗಳಿಗೆ ಮಾಡಿದ ಅವಮಾನ ಎಂದು ಕರೆಯಲಾಗುತ್ತಿದೆ. ಈ ವಿಶಿಷ್ಟ ಘಟನೆಯು ಅಂತರ್ಜಾಲದಲ್ಲಿ ಬಿಸಿ ಬಿಸಿ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಇದನ್ನು &quot;ವಿಭಿನ್ನ ಮತ್ತು ಸೃಜನಶೀಲ&quot; ಎಂದು ಕರೆಯುತ್ತಿದ್ದರೂ, ಹೆಚ್ಚಿನ ಸಂಖ್ಯೆಯ ಜನರು ಇದನ್ನು ಸಾಮಾಜಿಕ ಮತ್ತು ಧಾರ್ಮಿಕ ರೂಢಿಗಳ ಉಲ್ಲಂಘನೆ ಎಂದು ಹೇಳುತ್ತಿದ್ದಾರೆ. ಇದಕ್ಕಾಗಿ ಪ್ರತಿಭಟನೆಗಳೂ ತೀವ್ರಗೊಂಡಿವೆ. ಅಂತ್ಯಕ್ರಿಯೆಯ ಸ್ಥಳದಲ್ಲಿ ಅಂತಹ ಆಚರಣೆಯನ್ನು ನಡೆಸುವುದು ಧಾರ್ಮಿಕ ನಂಬಿಕೆಗಳನ್ನು ಉಲ್ಲಂಘಿಸುತ್ತದೆ ಮತ್ತು ಸ್ವೀಕಾರಾರ್ಹವಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಆಡಳಿತದಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಆಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಆರಂಭಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ್ಯ ಎಂದು ತಹಶೀಲ್ದಾರ್ ಅಬಿದ್ ಅಲಿ ಸ್ಪಷ್ಟವಾಗಿ ಹೇಳಿದ್ದಾರೆ ಮತ್ತು ಅನುಮತಿಯಿಲ್ಲದೆ ಅಂತ್ಯಕ್ರಿಯೆಯ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವುದು ನಿಯಮಗಳ ಉಲ್ಲಂಘನೆಯಾಗಿದೆ. ಸಂಬಂಧಿತ ಅಧಿಕಾರಿಗಳನ್ನು ಪ್ರಶ್ನಿಸಲಾಗುವುದು ಮತ್ತು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.&lt;/p&gt;&lt;h3&gt;&lt;strong&gt;ತನಿಖೆಗೆ ಆದೇಶ&lt;/strong&gt;&lt;/h3&gt;&lt;p&gt;ಮದುವೆಯ ಉಸ್ತುವಾರಿ ವಹಿಸಿಕೊಂಡಿರುವವರು, ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಂಚಿತವಾಗಿ ನೀಡಲಾಗಿತ್ತು, ಆದರೆ ಅವರೇ ಸ್ಥಳವನ್ನು ಆಯ್ಕೆ ಮಾಡಿಕೊಂಡರು ಎಂದು ರೆಸಾರ್ಟ್ ವ್ಯವಸ್ಥಾಪಕ ರಾಕೇಶ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಈ ಇಡೀ ಘಟನೆಯು ಉತ್ತರಾಖಂಡದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿವಾಹ ತಾಣದ ಪ್ರವೃತ್ತಿಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ, ಅಲ್ಲಿ ನೈಸರ್ಗಿಕ ಮತ್ತು ವಿಶಿಷ್ಟ ಸ್ಥಳಗಳ ಬಯಕೆ ಈಗ ವಿವಾದವನ್ನು ಹುಟ್ಟುಹಾಕುತ್ತಿದೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/a-destination-wedding-held-at-a-riverside-cremation-site-in-uttarakhands-almora-suc/articleshow-yqyhfov"/>
        </item>
        <item>
            <title><![CDATA[ಬಿಯರ್ ಆರೋಗ್ಯಕ್ಕೆ ಒಳ್ಳೆಯದಾ? ಇದರಲ್ಲಿ ನಿಜವಾಗಿಯೂ ವಿಟಮಿನ್ B6 ಇದೆಯಾ?]]></title>
            <link>https://kannada.asianetnews.com/gallery/life/beer-and-vitamin-b6-uncovering-the-health-facts-suh-sm0ghga</link>
            <guid isPermaLink="true">https://kannada.asianetnews.com/gallery/life/beer-and-vitamin-b6-uncovering-the-health-facts-suh-sm0ghga</guid>
            <pubDate>Thu, 30 Apr 2026 17:38:11 +0530</pubDate>
            <description><![CDATA[&lt;p&gt;Beer and Vitamin B6 ವಿಸ್ಕಿಗೆ ಹೋಲಿಸಿದರೆ ಬಿಯರ್ ಆರೋಗ್ಯಕ್ಕೆ ಉತ್ತಮ ಎಂದು ಕೆಲವರು ಭಾವಿಸುತ್ತಾರೆ. ಇದೇ ಕಾರಣಕ್ಕೆ, ಮದ್ಯಪಾನದ ಅಭ್ಯಾಸ ಇಲ್ಲದವರೂ ಕೆಲವೊಮ್ಮೆ ಬಿಯರ್ ಕುಡಿಯುತ್ತಾರೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqccp3np2yj1gfj17xdztyb2,imgname-beer--3--1777458679476.jpg" type="image/jpeg" height="390" width="690"/>
            <content:encoded><![CDATA[&lt;p&gt;Beer and Vitamin B6 ವಿಸ್ಕಿಗೆ ಹೋಲಿಸಿದರೆ ಬಿಯರ್ ಆರೋಗ್ಯಕ್ಕೆ ಉತ್ತಮ ಎಂದು ಕೆಲವರು ಭಾವಿಸುತ್ತಾರೆ. ಇದೇ ಕಾರಣಕ್ಕೆ, ಮದ್ಯಪಾನದ ಅಭ್ಯಾಸ ಇಲ್ಲದವರೂ ಕೆಲವೊಮ್ಮೆ ಬಿಯರ್ ಕುಡಿಯುತ್ತಾರೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕೆಲವು ಸಂಶೋಧನೆಗಳ ಪ್ರಕಾರ, ಆಗೊಮ್ಮೆ ಈಗೊಮ್ಮೆ ಒಂದು ಗ್ಲಾಸ್ ಬಿಯರ್ ಕುಡಿದರೆ ದೇಹಕ್ಕೆ ಕೆಲವು ಪೋಷಕಾಂಶಗಳು ಸಿಗುತ್ತವೆ. ಮುಖ್ಯವಾಗಿ, ಬಿಯರ್&zwnj;ನಲ್ಲಿ ವಿಟಮಿನ್ B6 ಸ್ವಲ್ಪ ಪ್ರಮಾಣದಲ್ಲಿ ಇರುವುದನ್ನು ಗಮನಿಸಲಾಗಿದೆ. ಮೆದುಳಿನ ಕಾರ್ಯ, ರಕ್ತ ಉತ್ಪಾದನೆ ಮತ್ತು ರೋಗನಿರೋಧಕ ಶಕ್ತಿಯಂತಹ ವಿಷಯಗಳಲ್ಲಿ ಈ ವಿಟಮಿನ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದಕ್ಕಾಗಿಯೇ ಬಿಯರ್ ಕುಡಿಯಬೇಕೇ ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ.&lt;/p&gt;&lt;img&gt;&lt;p&gt;ವಿಟಮಿನ್ B6 ನಮ್ಮ ದೇಹಕ್ಕೆ ಬೇಕಾದ ಪ್ರಮುಖ ಪೋಷಕಾಂಶಗಳಲ್ಲಿ ಒಂದು. ಇದು ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ನರಮಂಡಲವನ್ನು ಸುಸ್ಥಿತಿಯಲ್ಲಿಡುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ತಯಾರಿಕೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಪ್ರೋಟೀನ್&zwnj;ಗಳ ಬಳಕೆ ಮತ್ತು ಶಕ್ತಿ ಉತ್ಪಾದನೆಯ ಪ್ರಕ್ರಿಯೆಗಳಿಗೂ ಇದು ಅಗತ್ಯ. ನಮ್ಮ ದೇಹವು ಈ ವಿಟಮಿನ್ ಅನ್ನು ಸ್ವತಃ ತಯಾರಿಸಲು ಸಾಧ್ಯವಿಲ್ಲದ ಕಾರಣ, ನಾವು ಸೇವಿಸುವ ಆಹಾರದ ಮೇಲೆಯೇ ಅವಲಂಬಿತರಾಗಿದ್ದೇವೆ.&lt;/p&gt;&lt;img&gt;&lt;p&gt;ಬಿಯರ್ ತಯಾರಿಕೆಯಲ್ಲಿ ಬಳಸುವ ಕಚ್ಚಾ ಪದಾರ್ಥಗಳಿಂದಲೇ ಇದರಲ್ಲಿ ವಿಟಮಿನ್ B6 ಇರುತ್ತದೆ. ಬಾರ್ಲಿ, ಗೋಧಿ ಮತ್ತು ಬ್ರೂವರ್ಸ್ ಯೀಸ್ಟ್&zwnj;ನಂತಹ ಪದಾರ್ಥಗಳಲ್ಲಿ ಈ ವಿಟಮಿನ್ ನೈಸರ್ಗಿಕವಾಗಿ ಲಭ್ಯವಿದೆ. ತಯಾರಿಕೆಯ ಪ್ರಕ್ರಿಯೆಯಲ್ಲಿ ಸ್ವಲ್ಪ ನಷ್ಟವಾದರೂ, ಸಂಪೂರ್ಣವಾಗಿ ನಾಶವಾಗುವುದಿಲ್ಲ. ಹೀಗಾಗಿ, ತಯಾರಾದ ಬಿಯರ್&zwnj;ನಲ್ಲಿ ಸ್ವಲ್ಪ ಮಟ್ಟಿಗೆ ಈ ವಿಟಮಿನ್ ಉಳಿದಿರುತ್ತದೆ. ಸಂಶೋಧನೆಗಳ ಪ್ರಕಾರ, ಒಂದು ಗ್ಲಾಸ್ ಬಿಯರ್&zwnj;ನಿಂದ ದಿನಕ್ಕೆ ಬೇಕಾದ ವಿಟಮಿನ್ B6 ನ ಸ್ವಲ್ಪ ಭಾಗ ಸಿಗಬಹುದು. ಆಲ್ಕೋಹಾಲ್ ರಹಿತ ಬಿಯರ್&zwnj;ನಲ್ಲಿಯೂ ಈ ವಿಟಮಿನ್ ಇರುವುದು ಒಂದು ಕುತೂಹಲಕಾರಿ ವಿಷಯ.&lt;/p&gt;&lt;img&gt;&lt;p&gt;ವಿವಿಧ ಬಗೆಯ ಬಿಯರ್&zwnj;ಗಳನ್ನು ಪರಿಶೀಲಿಸಿದಾಗ, ಅವುಗಳಲ್ಲಿನ ವಿಟಮಿನ್ B6 ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ಸ್ಟ್ರಾಂಗ್ ಫ್ಲೇವರ್ ಇರುವ ಕೆಲವು ವಿಶೇಷ ಬಿಯರ್&zwnj;ಗಳಲ್ಲಿ ಈ ವಿಟಮಿನ್ ಮಟ್ಟ ಹೆಚ್ಚಿದ್ದರೆ, ಸಾಮಾನ್ಯ ಲಾಗರ್ ಬಿಯರ್&zwnj;ಗಳಲ್ಲಿಯೂ ಗಮನಾರ್ಹ ಪ್ರಮಾಣದಲ್ಲಿರುತ್ತದೆ. ಗೋಧಿಯಿಂದ ತಯಾರಾಗುವ ಬಿಯರ್&zwnj;ಗಳು ಕೂಡ ಈ ವಿಷಯದಲ್ಲಿ ಉತ್ತಮ ಮಟ್ಟದಲ್ಲಿವೆ. ಆದರೆ, ಅಕ್ಕಿ ಆಧಾರಿತ ಬಿಯರ್&zwnj;ಗಳಲ್ಲಿ ಈ ವಿಟಮಿನ್ ಕಡಿಮೆ ಇರುವುದು ಕಂಡುಬಂದಿದೆ. ಆಲ್ಕೋಹಾಲ್ ತೆಗೆದುಹಾಕಿದ ಬಿಯರ್&zwnj;ಗಳಲ್ಲಿ ವಿಟಮಿನ್ ಮಟ್ಟ ಸ್ವಲ್ಪ ಹೆಚ್ಚಿರುವುದು ಮತ್ತೊಂದು ವಿಶೇಷ.&lt;/p&gt;&lt;img&gt;&lt;p&gt;ತಜ್ಞರ ಪ್ರಕಾರ, ಪೋಷಕಾಂಶಗಳಿಗಾಗಿ ಬಿಯರ್ ಅನ್ನು ಮುಖ್ಯ ಮೂಲವಾಗಿ ಪರಿಗಣಿಸುವುದು ಸರಿಯಲ್ಲ. ವಿಟಮಿನ್ B6 ಅನೇಕ ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಲಭ್ಯವಿದೆ. ಮಾಂಸ, ಮೀನು, ಕಡಲೆ, ಓಟ್ಸ್ ಮತ್ತು ಆಲೂಗಡ್ಡೆಯಂತಹ ಆಹಾರಗಳ ಮೂಲಕ ಈ ವಿಟಮಿನ್ ಅನ್ನು ಸುಲಭವಾಗಿ ಪಡೆಯಬಹುದು. ಸಾಮಾನ್ಯವಾಗಿ ಸಮತೋಲಿತ ಆಹಾರ ಸೇವಿಸುವ ಜನರಲ್ಲಿ ಈ ವಿಟಮಿನ್ ಕೊರತೆ ಬಹಳ ವಿರಳವಾಗಿ ಕಂಡುಬರುತ್ತದೆ. ಆದ್ದರಿಂದ, ಬಿಯರ್ ಮೂಲಕ ವಿಟಮಿನ್ ಪಡೆಯಲು ಪ್ರಯತ್ನಿಸಬೇಕಾದ ಅಗತ್ಯವಿಲ್ಲ.&lt;/p&gt;&lt;img&gt;&lt;p&gt;ಬಿಯರ್&zwnj;ನಲ್ಲಿ ಸ್ವಲ್ಪ ವಿಟಮಿನ್ ಇದೆ ಎಂಬ ಕಾರಣಕ್ಕೆ ಆಲ್ಕೋಹಾಲ್ ಆರೋಗ್ಯಕರ ಎಂದು ಭಾವಿಸುವುದು ತಪ್ಪು. ಅತಿಯಾದ ಆಲ್ಕೋಹಾಲ್ ಸೇವನೆಯು ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ, ಆಲ್ಕೋಹಾಲ್ ಸೇವಿಸುವವರು ಮಿತಿಯನ್ನು ಪಾಲಿಸುವುದು ಬಹಳ ಮುಖ್ಯ. ವಿಶೇಷವಾಗಿ, ಆಲ್ಕೋಹಾಲ್ ಅಭ್ಯಾಸವಿರುವವರಲ್ಲಿ ಅಥವಾ ಕೆಲವು ದೀರ್ಘಕಾಲದ ಕಾಯಿಲೆಗಳಿರುವವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರದಿಂದಲೇ ಪೋಷಕಾಂಶಗಳನ್ನು ಪಡೆಯುವುದು ಉತ್ತಮ ಮಾರ್ಗ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/life/beer-and-vitamin-b6-uncovering-the-health-facts-suh-sm0ghga"/>
        </item>
        <item>
            <title><![CDATA[ಯಾರಿಗೂ ತಿಳಿಯದ ಸೀಕ್ರೆಟ್.. ವಾಷಿಂಗ್ ಮಷಿನ್‌ನಲ್ಲಿ ಕೇವಲ ಬಟ್ಟೆಗಳಲ್ಲ.. ಇವುಗಳನ್ನೂ ವಾಶ್ ಮಾಡ್ಬೋದು!]]></title>
            <link>https://kannada.asianetnews.com/gallery/life/5-amazing-washing-machine-hacks-every-home-needs-to-know-xk082k6</link>
            <guid isPermaLink="true">https://kannada.asianetnews.com/gallery/life/5-amazing-washing-machine-hacks-every-home-needs-to-know-xk082k6</guid>
            <pubDate>Thu, 30 Apr 2026 17:19:29 +0530</pubDate>
            <description><![CDATA[&lt;p&gt;&lt;strong&gt;Washing machine hacks: &lt;/strong&gt;ಅಡುಗೆ ಮನೆ/ಬಾತ್&zwnj;ರೂಂನಲ್ಲಿರುವ ಕೆಲವು ವಸ್ತುಗಳನ್ನು ಗಂಟೆಗಟ್ಟಲೆ ಕೈಯಿಂದ ಉಜ್ಜಿ ತೊಳೆಯುವ ಬದಲು, ಜಸ್ಟ್ ಒಂದು ಬಟನ್ ಒತ್ತುವ ಮೂಲಕ ವಾಷಿಂಗ್ ಮಷಿನ್&zwnj;ನಲ್ಲೇ ತೊಳೆಯಬಹುದು. ಹೌದು. ನಿಮಗೇ ತಿಳಿಯದ ಈ ಕೆಲವು ಸೀಕ್ರೆಟ್ ವಾಷಿಂಗ್ ಹ್ಯಾಕ್ಸ್ ಯಾವುವು ಎಂಬ ಮಾಹಿತಿ ಇಲ್ಲಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k1wr6xcx6x0x51vtet6vj9vd,imgname-semi-automatic-washing-machine-under-8000-1754385315228.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Washing machine hacks: &lt;/strong&gt;ಅಡುಗೆ ಮನೆ/ಬಾತ್&zwnj;ರೂಂನಲ್ಲಿರುವ ಕೆಲವು ವಸ್ತುಗಳನ್ನು ಗಂಟೆಗಟ್ಟಲೆ ಕೈಯಿಂದ ಉಜ್ಜಿ ತೊಳೆಯುವ ಬದಲು, ಜಸ್ಟ್ ಒಂದು ಬಟನ್ ಒತ್ತುವ ಮೂಲಕ ವಾಷಿಂಗ್ ಮಷಿನ್&zwnj;ನಲ್ಲೇ ತೊಳೆಯಬಹುದು. ಹೌದು. ನಿಮಗೇ ತಿಳಿಯದ ಈ ಕೆಲವು ಸೀಕ್ರೆಟ್ ವಾಷಿಂಗ್ ಹ್ಯಾಕ್ಸ್ ಯಾವುವು ಎಂಬ ಮಾಹಿತಿ ಇಲ್ಲಿದೆ. &amp;nbsp;&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿರುವ ವಾಷಿಂಗ್ ಮಷಿನ್&zwnj;ನಲ್ಲಿ ಹೆಚ್ಚಿನವರು ಕೇವಲ ಬಟ್ಟೆಗಳನ್ನು ಮಾತ್ರ ತೊಳೆಯುತ್ತಾರೆ. ಬೆಡ್ ಶೀಟ್&zwnj;ಗಳು ಮತ್ತು ದೈನಂದಿನ ಬಟ್ಟೆಗಳನ್ನು ವಾಶ್ ಮಾಡುವುದನ್ನ ಬಿಟ್ಟರೆ ಬೇರೇನನ್ನೂ ಯೋಚಿಸುವುದಿಲ್ಲ. ಆದರೆ, ವಾಸ್ತವವಾಗಿ ಗಂಟೆಗಟ್ಟಲೆ ಕೈಯಿಂದ ಉಜ್ಜಿ ತೊಳೆಯುವ ಅವಶ್ಯಕತೆಯಿಲ್ಲದೆ, ನಮ್ಮ ಕೆಲಸವನ್ನು ಸುಲಭಗೊಳಿಸುವ ಮತ್ತು ವಾಷಿಂಗ್ ಮಷಿನ್&zwnj;ನಲ್ಲಿ ತೊಳೆಯಬಹುದಾದ ಕೆಲವು ಆಶ್ಚರ್ಯಕರ ವಸ್ತುಗಳಿವೆ. ಅವು ಯಾವುವು ಎಂದು ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಪಡುತ್ತೀರಿ. ಹಾಗಾದರೆ ವಾಷಿಂಗ್ ಮಷಿನ್&zwnj;ನಲ್ಲಿ ಬಟ್ಟೆಗಳಲ್ಲದೆ ಇನ್ನೇನನ್ನು ತೊಳೆಯಬಹುದು ಎಂದು ನೋಡೋಣ.&lt;/p&gt;&lt;img&gt;&lt;p&gt;ಸ್ನಾನದ ಕೋಣೆಯಲ್ಲಿರುವ ಶವರ್ ಕರ್ಟನ್&zwnj;ಗಳು ಪ್ರತಿದಿನ ನೀರಿನಿಂದ ಒದ್ದೆಯಾಗುತ್ತಿದ್ದರೂ ಸಹ, ಅವುಗಳ ಮೇಲೆ ಕೊಳೆ, ಫಂಗಸ್ ಮತ್ತು ಸೋಪಿನ ಕಲೆಗಳು ಸಂಗ್ರಹವಾಗುತ್ತವೆ. ನಿಮ್ಮ ಶವರ್ ಕರ್ಟನ್ ನೈಲಾನ್ ಅಥವಾ ಕೋಟೆಡ್ ಫ್ಯಾಬ್ರಿಕ್&zwnj;ನಿಂದ ತಯಾರಾಗಿದ್ದರೆ, ಅದನ್ನು ಯಾವುದೇ ಹಿಂಜರಿಕೆಯಿಲ್ಲದೆ ವಾಷಿಂಗ್ ಮಷಿನ್&zwnj;ನಲ್ಲಿ ಹಾಕಬಹುದು. ಬಟ್ಟೆಗಳನ್ನು ಮಷಿನ್&zwnj;ಗೆ ಹಾಕುವ ಮುನ್ನ ನೇರವಾಗಿ ಡ್ರಮ್&zwnj;ನೊಳಗೆ ಸ್ವಲ್ಪ ಬೇಕಿಂಗ್ ಸೋಡಾ ಮತ್ತು ವಿನೆಗರ್ ಬಳಸಿದರೆ ಕೊಳೆ ಹೋಗುವುದು ಮಾತ್ರವಲ್ಲದೆ, ಕರ್ಟನ್&zwnj;ಗಳು ಹೊಳೆಯುತ್ತವೆ.&lt;/p&gt;&lt;img&gt;&lt;p&gt;ಶಾಲಾ ಮಕ್ಕಳ ಬ್ಯಾಗ್&zwnj;ಗಳಿಂದ ಹಿಡಿದು ಆಫೀಸ್ ಬ್ಯಾಗ್&zwnj;ಗಳವರೆಗೆ ಧೂಳು ಮತ್ತು ಬೆವರಿನಿಂದಾಗಿ ದುರ್ವಾಸನೆ ಬರುತ್ತಿರುತ್ತದೆ. ಇವುಗಳನ್ನು ಕೈಯಿಂದ ತೊಳೆಯುವುದು ತುಂಬಾ ಕಷ್ಟ. ಆದ್ದರಿಂದ ಇವುಗಳನ್ನು ಸಹ ನಾವು ವಾಷಿಂಗ್ ಮಷಿನ್&zwnj;ನಲ್ಲಿ ಹಾಕಿ ತೊಳೆಯಬಹುದು. ಇದಕ್ಕಾಗಿ ಮೊದಲು ಬ್ಯಾಗ್ ಅನ್ನು ಖಾಲಿ ಮಾಡಿ ಧೂಳನ್ನು ಸಂಪೂರ್ಣವಾಗಿ ಕೊಡವಿ. ನಂತರ ಬ್ಯಾಗ್ ಅನ್ನು ಒಂದು ಲಾಂಡ್ರಿ ಬ್ಯಾಗ್&zwnj;ನಲ್ಲಿ ಇರಿಸಿ, ವಾಷಿಂಗ್ ಮಷಿನ್ ಅನ್ನು 'ಜೆಂಟಲ್ ಮೋಡ್'ನಲ್ಲಿ ಇಟ್ಟು ಕಡಿಮೆ ಡಿಟರ್ಜೆಂಟ್&zwnj;ನೊಂದಿಗೆ ತೊಳೆದರೆ ಬ್ಯಾಗ್ ಹೊಸದರಂತೆ ಮೆರೆಯುತ್ತದೆ.&lt;/p&gt;&lt;img&gt;&lt;p&gt;ನಾವು ಸಾಕುವ ನಾಯಿಗಳು ಅಥವಾ ಬೆಕ್ಕುಗಳ ಕೊರಳಿಗೆ ಹಾಕುವ ಬೆಲ್ಟ್&zwnj;ಗಳು (ಕಾಲರ್) ಬೇಗನೆ ಕೊಳೆಯಾಗುತ್ತವೆ ಮತ್ತು ಬ್ಯಾಕ್ಟೀರಿಯಾಗಳ ನೆಲೆಯಾಗುತ್ತವೆ. ಈ ಫ್ಯಾಬ್ರಿಕ್ ಕಾಲರ್&zwnj;ಗಳನ್ನು ಸಹ ನಾವು ವಾಷಿಂಗ್ ಮಷಿನ್&zwnj;ನಲ್ಲಿ ಸುಲಭವಾಗಿ ಸ್ವಚ್ಛಗೊಳಿಸಬಹುದು. ಆದರೆ ಇವುಗಳನ್ನು ತೊಳೆಯುವಾಗ ಮೆಟಲ್ ಬಕಲ್&zwnj;ಗಳು ಮಷಿನ್&zwnj;ಗೆ ತಗುಲಿ ಹಾನಿಯಾಗದಂತೆ ಜಾಗ್ರತೆ ವಹಿಸುವುದು ಮುಖ್ಯ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಪರಿಸರ ರಕ್ಷಣೆಗಾಗಿ ಅನೇಕರು ಬಟ್ಟೆಯ ಅಥವಾ ಸೆಣಬಿನ ಚೀಲಗಳನ್ನು ಬಳಸುತ್ತಿದ್ದಾರೆ. ಇವುಗಳಲ್ಲಿಯೇ ತರಕಾರಿಗಳು ಮತ್ತು ದಿನಸಿ ಪದಾರ್ಥಗಳನ್ನು ತರುತ್ತಾರೆ. ಇವುಗಳನ್ನು ಹೆಚ್ಚಾಗಿ ಬಳಸುವುದರಿಂದ ಬ್ಯಾಕ್ಟೀರಿಯಾಗಳು ಸೇರುವ ಸಾಧ್ಯತೆಯಿದೆ. ಆದ್ದರಿಂದ ಇವುಗಳನ್ನು ಒಳಗಿನ ಭಾಗ ಹೊರಗೆ ಬರುವಂತೆ ತಿರುಗಿಸಿ (Inside out) ಸೌಮ್ಯವಾದ ಡಿಟರ್ಜೆಂಟ್&zwnj;ನೊಂದಿಗೆ ಮಷಿನ್&zwnj;ನಲ್ಲಿ ಹಾಕಿದರೆ ಕ್ರಿಮಿಗಳು ನಶಿಸುತ್ತವೆ ಮತ್ತು ಚೀಲಗಳು ಸ್ವಚ್ಛವಾಗುತ್ತವೆ.&lt;/p&gt;&lt;img&gt;&lt;p&gt;ವ್ಯಾಯಾಮ ಮಾಡುವಾಗ ಬರುವ ಬೆವರಿನಿಂದಾಗಿ ಯೋಗ ಮ್ಯಾಟ್&zwnj;ಗಳು ಬೇಗನೆ ಕೊಳೆಯಾಗುತ್ತವೆ. ನಿಮ್ಮ ಯೋಗ ಮ್ಯಾಟ್ ವಾಟರ್-ಫ್ರೆಂಡ್ಲಿ ಮೆಟೀರಿಯಲ್ ಆಗಿದ್ದರೆ, ಅದನ್ನು ತಣ್ಣನೆಯ ನೀರಿನಲ್ಲಿ ಜೆಂಟಲ್ ಸೈಕಲ್&zwnj;ನಲ್ಲಿ ತೊಳೆಯಿರಿ. ತೊಳೆಯುವಾಗ ಕಠಿಣವಾದ ರಾಸಾಯನಿಕಗಳು ಅಥವಾ ಫ್ಯಾಬ್ರಿಕ್ ಸಾಫ್ಟನರ್&zwnj;ಗಳನ್ನು ಬಳಸಬೇಡಿ, ಏಕೆಂದರೆ ಇದು ಮ್ಯಾಟ್&zwnj;ನ ಹಿಡಿತವನ್ನು (Grip) ಹಾಳುಮಾಡಬಹುದು.&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ಯಾವುದೇ ವಸ್ತುವನ್ನು ಮಷಿನ್&zwnj;ನಲ್ಲಿ ಹಾಕುವ ಮೊದಲು ಅದರ ಮೇಲಿರುವ 'ವಾಶ್ ಕೇರ್ ಲೇಬಲ್' ಅನ್ನು ಒಮ್ಮೆ ಪರಿಶೀಲಿಸುವುದನ್ನು ಮರೆಯಬೇಡಿ.&amp;nbsp;&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/5-amazing-washing-machine-hacks-every-home-needs-to-know-xk082k6"/>
        </item>
        <item>
            <title><![CDATA[ಸಂಗೀತ ನಿರ್ದೇಶಕನ ಲೈಂ*ಗಿಕ ಕಿರುಕುಳದಿಂದ ಹಾಡುವುದನ್ನೇ ಬಿಟ್ಟೆ: ಗಾಯಕಿ ಸ್ವಾಗತಾ ಕೃಷ್ಣನ್]]></title>
            <link>https://kannada.asianetnews.com/gallery/cine-world/singer-swagatha-krishnan-alleges-harassment-and-blackmail-by-music-director-crx5yu6</link>
            <guid isPermaLink="true">https://kannada.asianetnews.com/gallery/cine-world/singer-swagatha-krishnan-alleges-harassment-and-blackmail-by-music-director-crx5yu6</guid>
            <pubDate>Thu, 30 Apr 2026 17:14:39 +0530</pubDate>
            <description><![CDATA[&lt;p&gt;ಖ್ಯಾತ ಗಾಯಕಿ ಸ್ವಾಗತಾ ಕೃಷ್ಣನ್ ಅವರು, ಓರ್ವ ಸಂಗೀತ ನಿರ್ದೇಶಕರಿಂದ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ, ಇದೇ ಕಾರಣಕ್ಕೆ ಸಂಗೀತ ಕ್ಷೇತ್ರವನ್ನೇ ತೊರೆದೆ ಎಂದು ಸ್ಫೋಟಕ ಹೇಳಿಕೆ ನೀಡಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqf2nxbakk0z1aw3c2wed8j6,imgname-swagatha-krishnan-1777548850538.jpg" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ಗಾಯಕಿ ಸ್ವಾಗತಾ ಕೃಷ್ಣನ್ ಅವರು, ಓರ್ವ ಸಂಗೀತ ನಿರ್ದೇಶಕರಿಂದ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ, ಇದೇ ಕಾರಣಕ್ಕೆ ಸಂಗೀತ ಕ್ಷೇತ್ರವನ್ನೇ ತೊರೆದೆ ಎಂದು ಸ್ಫೋಟಕ ಹೇಳಿಕೆ ನೀಡಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ, ಚಿತ್ರರಂಗದ ಅನೇಕ ನಟ-ನಟಿಯರು ಮತ್ತು ಮಹಿಳೆಯರು ತಮಗೆ ವೃತ್ತಿಪರವಾಗಿ ಆಗುವ ಅನ್ಯಾಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಅದರಲ್ಲೂ 2018-19ರಲ್ಲಿ, #MeToo ಹ್ಯಾಶ್&zwnj;ಟ್ಯಾಗ್ ಮೂಲಕ ಗಾಯಕಿ ಚಿನ್ಮಯಿ ಅವರು ಕವಿ ವೈರಮುತ್ತು ವಿರುದ್ಧ ಮಾಡಿದ ಆರೋಪಗಳು ಇಂದಿಗೂ ಚರ್ಚೆಯಲ್ಲಿದೆ.&lt;/p&gt;&lt;img&gt;&lt;p&gt;ಈ ನಡುವೆ, ಖ್ಯಾತ ಗಾಯಕಿ ಮತ್ತು ಬಿಗ್&zwnj;ಬಾಸ್ ಖ್ಯಾತಿಯ ಮಾಯಾ ಕೃಷ್ಣನ್ ಅವರ ಸಹೋದರಿ ಸ್ವಾಗತಾ ಕೃಷ್ಣನ್, ಇದೀಗ ಓರ್ವ ಪ್ರಸಿದ್ಧ ಸಂಗೀತ ನಿರ್ದೇಶಕನ ಮೇಲೆ ಗಂಭೀರ ಲೈಂಗಿಕ ಆರೋಪ ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, 'ನಾನು ಕ್ರೂರ ಲೈಂಗಿಕ ಕಿರುಕುಳಕ್ಕೆ ಬಲಿಯಾದೆ. ಈ ಕೆಟ್ಟ ಅನುಭವದಿಂದಾಗಿಯೇ ನಾನು ಸಂಗೀತ ಕ್ಷೇತ್ರದಿಂದ ಸಂಪೂರ್ಣವಾಗಿ ದೂರ ಉಳಿದೆ. ಸದ್ಯ ರಿಷಿಕೇಶದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದರೂ, ಆ ಘೋರ ಘಟನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆ ಖ್ಯಾತ ಸಂಗೀತ ನಿರ್ದೇಶಕ ಒಬ್ಬಳನ್ನಲ್ಲ, ಹಲವು ಮಹಿಳೆಯರನ್ನು ಹಾಳುಮಾಡಿದ್ದಾನೆ' ಎಂದು ಸ್ವಾಗತಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸ್ವಾಗತಾ ಮಾತು ಮುಂದುವರಿಸಿ, 'ಒಮ್ಮೆ ಆಸ್ತಿ ಮಾರಿದ ಹಣ ನನ್ನ ಬಳಿ ಇದೆ ಎಂದು ಅವನಿಗೆ ಹೇಳಿದ್ದೆ. ಆಗ ಆತ, ಬಡ್ಡಿ ಸಮೇತ ವಾಪಸ್ ಕೊಡುವುದಾಗಿ ಹೇಳಿ ಹಲವು ಕಾರಣಗಳನ್ನು ನೀಡಿ ನನ್ನಿಂದ ಹಣ ಪಡೆದ. ಆ ಹಣದಲ್ಲಿ ಮನೆ, ಐಷಾರಾಮಿ ಕಾರು ಖರೀದಿಸಿ ಎಂಜಾಯ್ ಮಾಡಿದ. ಅವನ ಹೆಂಡತಿಗೆ ಐಫೋನ್ ಕೊಡಿಸಿದ್ದೂ ನಾನೇ. ಇದಕ್ಕೆ ಪ್ರತಿಯಾಗಿ, ಆತ ನನಗೆ ಹಾಡಲು ಕೆಲವು ಹಾಡುಗಳನ್ನು ಕೊಟ್ಟ. ಈ ಎಲ್ಲವನ್ನೂ ಅವನ ಕುಟುಂಬದವರೂ ಸೇರಿಯೇ ಮಾಡಿದರು' ಎಂದು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;&lsquo;7 ವರ್ಷಗಳ ಹಿಂದೆ, ಒಂದು ದಿನ ಸ್ಟುಡಿಯೋದಲ್ಲಿಯೇ ನನ್ನ ಮೇಲೆ ಬಲವಂತವಾಗಿ ಅತ್ಯಾ*ಚಾರ ಎಸಗಿದ. ಅದನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡು, ಈ ವಿಷಯವನ್ನು ಯಾರಿಗೂ ಹೇಳಬಾರದು, ಹೇಳಿದರೆ ಎಲ್ಲರಿಗೂ ತೋರಿಸುತ್ತೇನೆ ಎಂದು ಬ್ಲ್ಯಾಕ್&zwnj;ಮೇಲ್ ಮಾಡಿದ. ಸೌಂಡ್ ಪ್ರೂಫ್ ರೂಮ್&zwnj;ನಲ್ಲಿ ಈ ಘಟನೆ ನಡೆಯಿತು. ಆತ ಹಲವು ಸೀಕ್ರೆಟ್ ಕ್ಯಾಮೆರಾಗಳನ್ನು ಇಟ್ಟಿದ್ದ. ನನ್ನ ಬಗ್ಗೆ ತಪ್ಪು ಮಾಹಿತಿ ಹಬ್ಬಿಸಿದ. ಅವನ ಹೆಂಡತಿಯೂ ಅವನೊಂದಿಗೆ ಸೇರಿ ನನಗೆ ಮೋಸ ಮಾಡಿದಳು' ಎಂದು ಸ್ವಾಗತಾ ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;&lsquo;ಅವನು ಇದೇ ರೀತಿ ಹಲವು ಮಹಿಳೆಯರ ವಿಡಿಯೋಗಳನ್ನು ನೋಡುತ್ತಿರುತ್ತಾನೆ. ಮಕ್ಕಳ ವಿಡಿಯೋಗಳನ್ನೂ ನೋಡುತ್ತಾನೆ. ಅಮೆರಿಕದಲ್ಲಿ ಎಪ್&zwnj;ಸ್ಟೀನ್ ಫೈಲ್ಸ್ ಬಗ್ಗೆ ಮಾತನಾಡುತ್ತಾರೆ. ಆದರೆ ಅದರ ರಾಜನೇ ಮದ್ರಾಸ್&zwnj;ನಲ್ಲಿದ್ದಾನೆ. ನಾನು ಕೊಟ್ಟ ಕೋಟ್ಯಂತರ ರೂಪಾಯಿ ಹಣವನ್ನು ವಾಪಸ್ ಕೇಳಿದರೆ, ನಾನು ಸೌಂಡ್ ಕಾರ್ಡ್ ಕದ್ದಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ನನಗೆ ಧೈರ್ಯವಿರಲಿಲ್ಲ. ಒಬ್ಬ ಮಹಿಳೆ ಇವನಿಂದ ಗರ್ಭಿಣಿಯಾಗಿ, ಗರ್ಭಪಾತ ಮಾಡಿಸಿಕೊಂಡಿದ್ದಾಳೆ. ಈ ವಿಷಯವನ್ನು ಆ ಮಹಿಳೆಯೇ ನನಗೆ ಮೆಸೇಜ್ ಮೂಲಕ ತಿಳಿಸಿದ್ದಳು. ಇದಕ್ಕೆಲ್ಲ ಅವನ ಹೆಂಡತಿಯೂ ಸಹಕರಿಸಿದ್ದಾಳೆ' ಎಂದು ಸ್ವಾಗತಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;&lsquo;ಇಂಥವನಿಗೆ ಪ್ರಶಸ್ತಿಗಳನ್ನು ಕೊಡುತ್ತಾರೆ. ಬೇರೆಯವರ ಕೆಲಸಕ್ಕೆ ಇವನು ಪ್ರಶಸ್ತಿ ಪಡೆಯುತ್ತಾನೆ. ಅವನಿಗೆ ಪಿಯಾನೋ ನುಡಿಸಲೂ ಬರುವುದಿಲ್ಲ. ನಂತರ ನಮ್ಮ ಮನೆಗೆ ಬಂದು ಈ ವಿಷಯವನ್ನು ಯಾರಿಗೂ ಹೇಳಬೇಡ ಎಂದು ಕಾಲಿಗೆ ಬಿದ್ದು ಅಂಗಲಾಚಿದ. ಈ ಪರಿಸ್ಥಿತಿಯಲ್ಲಿ ನನಗೆ ಬೆಂಬಲವಾಗಿ ನಿಂತು ನನ್ನನ್ನು ಕಾಪಾಡಿದ್ದು ನನ್ನ ಸಹೋದರಿ ಮಾಯಾ ಮಾತ್ರ&rsquo; ಎಂದು ಸ್ವಾಗತಾ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಸಂದರ್ಶನದಲ್ಲಿ ಸ್ವಾಗತಾ, ಜಿ.ವಿ. ಪ್ರಕಾಶ್, ಜಿಬ್ರಾನ್, ಅನಿರುದ್ಧ್, ಇಮಾನ್ ಅವರಂತಹ ಸಂಗೀತ ನಿರ್ದೇಶಕರು ಅತ್ಯಂತ ವೃತ್ತಿಪರರು ಎಂದು ಹೊಗಳಿದ್ದಾರೆ. ಹಾಗಾಗಿ ಈ ಪಟ್ಟಿಯಲ್ಲಿರುವವರು ಆರೋಪಿಗಳಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಆ ಪ್ರಮುಖ ಆರೋಪಿ ಯಾರು ಎಂಬುದೇ ಇದೀಗ ಅಭಿಮಾನಿಗಳ ಪ್ರಶ್ನೆಯಾಗಿದೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/singer-swagatha-krishnan-alleges-harassment-and-blackmail-by-music-director-crx5yu6"/>
        </item>
        <item>
            <title><![CDATA[ಬೇಸಿಗೆಯಲ್ಲಿ ಟ್ರೆಂಡ್ ಆಗಿರುವ ದೂಧ್ ಸೋಡಾ: ಕೆನೆಯುಕ್ತ ಪಾನೀಯದ ನಿಜವಾದ ಸತ್ಯ ಏನು?]]></title>
            <link>https://kannada.asianetnews.com/food/doodh-soda-benefits-side-effects-summer-drink-gvd/articleshow-gcyg874</link>
            <guid isPermaLink="true">https://kannada.asianetnews.com/food/doodh-soda-benefits-side-effects-summer-drink-gvd/articleshow-gcyg874</guid>
            <pubDate>Thu, 30 Apr 2026 16:56:38 +0530</pubDate>
            <description><![CDATA[&lt;p&gt;ಕಳೆದ ಕೆಲವು ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಬೀದಿ ಬದಿಯ ವಿಶಿಷ್ಟ ಪಾನೀಯವಾದ ದೂಧ್ ಸೋಡಾ (ಹಾಲು ಸೋಡಾ) ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವುದನ್ನು ಗಮನಿಸಬಹುದು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಟ್ರೆಂಡ್ ಆಗಿ ಮಾರ್ಪಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqf27nxmaj8phjyt077y2p7g,imgname-cvjhc-1777548384180.png" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಕೆಲವು ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಬೀದಿ ಬದಿಯ ವಿಶಿಷ್ಟ ಪಾನೀಯವಾದ ದೂಧ್ ಸೋಡಾ (ಹಾಲು ಸೋಡಾ) ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವುದನ್ನು ಗಮನಿಸಬಹುದು. 'ಧುರಂಧರ್' ಸಿನಿಮಾದ ಜನಪ್ರಿಯತೆಯಿಂದಾಗಿ ಈ ಬೇಸಿಗೆ ಪಾನೀಯವು ಮತ್ತೆ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಹಾಲು ಮತ್ತು ಕಾರ್ಬೊನೇಟೆಡ್ ನೀರಿನ (ಸೋಡಾ) ಸರಳ ಮಿಶ್ರಣವಾಗಿರುವ ಈ ಪಾನೀಯವು, ಈಗ ಪ್ರದೇಶಗಳ ಮತ್ತು ವಯಸ್ಸಿನ ಹಂಗಿಲ್ಲದೆ ಎಲ್ಲರನ್ನೂ ಆಕರ್ಷಿಸುತ್ತಿರುವ ಒಂದು ಸೆನ್ಸೇಷನ್ ಪಾನೀಯವಾಗಿದೆ.&lt;/p&gt;&lt;p&gt;ಅನೇಕರು 'ದೂಧ್ ಸೋಡಾ'ವನ್ನು ಪಾಕಿಸ್ತಾನಿ-ಪಂಜಾಬಿ ಸಂಸ್ಕೃತಿಯೊಂದಿಗೆ ಗುರುತಿಸುತ್ತಾರೆ. ಅಲ್ಲಿ ಇದು ಸುಡು ಬೇಸಿಗೆಯಲ್ಲಿ ತಂಪು ನೀಡುವ ಪ್ರಮುಖ ಪಾನೀಯವಾಗಿದೆ. ಆದರೆ ಇದರ ಬೇರುಗಳು ಉಪಖಂಡದ ಪಶ್ಚಿಮ ಭಾರತದ ಭಾಗಗಳಲ್ಲೂ ಇವೆ. ಗುಜರಾತ್&zwnj; ನ ಸ್ಥಳೀಯ ಸೋಡಾ ಅಂಗಡಿಗಳಿಂದ ಹಿಡಿದು ಮಹಾರಾಷ್ಟ್ರದ ಜನನಿಬಿಡ ರಸ್ತೆಗಳವರೆಗೆ, ದೂಧ್ ಸೋಡಾವು ಸಾಂಪ್ರದಾಯಿಕ ಡೈರಿ ಆಧಾರಿತ ಪಾನೀಯಗಳು ಮತ್ತು ಆಧುನಿಕ ಕಾರ್ಬೊನೇಶನ್ ಸಂಸ್ಕೃತಿಯ ನಡುವಿನ ಒಂದು ವಿಶಿಷ್ಟ ಸೇತುವೆಯಾಗಿದೆ.&lt;/p&gt;&lt;p&gt;&lt;strong&gt;ಪಾನೀಯದ ಮೂಲ ಮತ್ತು ಸಾಂಸ್ಕೃತಿಕ ಪಯಣ&lt;/strong&gt;&lt;/p&gt;&lt;p&gt;ಈ ಪಾನೀಯವು ಮೊದಲು ಬಳಕೆಗೆ ಬಂದಿದ್ದು ಪಶ್ಚಿಮ ಭಾರತದಲ್ಲಿ ಎಂದು ನಂಬಲಾಗುತ್ತದೆ. ಅಲ್ಲಿನ ವ್ಯಾಪಾರಿಗಳು ಬೇಸಿಗೆ ಸೆಕೆಯಿಂದ ಮುಕ್ತಿ ಪಡೆಯಲು ಮಣ್ಣಿನ ಮಡಕೆಗಳಲ್ಲಿ ಸಂಗ್ರಹಿಸಿಟ್ಟ ತಣ್ಣನೆಯ ಹಾಲನ್ನು, ಫ್ಲೇವರ್ಡ್ ಸಿರಪ್&zwnj; ಗಳು ಮತ್ತು ಸೋಡಾದೊಂದಿಗೆ ಬೆರೆಸುತ್ತಿದ್ದರು. ಸಾಂಪ್ರದಾಯಿಕ ಹಾಲಿನ ಪಾನೀಯಗಳ ಹಿತವಾದ ಅನುಭವ ಮತ್ತು ಸೋಡಾದ ಆಹ್ಲಾದಕರ ಅಂಶಗಳನ್ನು ಯಶಸ್ವಿಯಾಗಿ ಮಿಶ್ರಣ ಮಾಡಿರುವ ಕಾರಣದಿಂದ ಇದು ತಕ್ಷಣ ಜನಪ್ರಿಯವಾಯಿತು.&lt;/p&gt;&lt;p&gt;ಇದನ್ನು ತಯಾರಿಸುವುದು ಸುಲಭ ಮತ್ತು ವೆಚ್ಚವೂ ಕಡಿಮೆ ಇರುವುದರಿಂದ ಇದು ಎಲ್ಲರಿಗೂ ಲಭ್ಯವಿರುವ ಪಾನೀಯವಾಗಿದೆ. ಅಲ್ಲದೆ, ಇದನ್ನು ನಮಗೆ ಬೇಕಾದಂತೆ ಬದಲಿಸಿಕೊಳ್ಳಲು ಅವಕಾಶವಿರುವುದರಿಂದ ರೋಸ್, ಚಾಕೊಲೇಟ್ ಅಥವಾ ಪಿಸ್ತಾದಂತಹ ಜನಪ್ರಿಯ ಫ್ಲೇವರ್ ಗಳನ್ನು ಇದರಲ್ಲಿ ಕಾಣಬಹುದು. ಕುತೂಹಲಕಾರಿ ವಿಷಯವೆಂದರೆ, ದೂಧ್ ಸೋಡಾವನ್ನು ಸಾಮಾನ್ಯವಾಗಿ ಒಂದು ರೀತಿಯ ಫಲೂದಾ ಎಂದು ಹೇಳಲಾಗುತ್ತದೆ. ಶ್ಯಾವಿಗೆ ಅಥವಾ ತುಳಸಿ ಬೀಜ ಅಥವಾ ಸಬ್ಜಾ ಬೀಜಗಳಂತಹ ಪದಾರ್ಥಗಳನ್ನು ಸೇರಿಸದಿದ್ದರೂ ಇದು ಅದೇ ರೀತಿಯ ಕೆನೆಯುಕ್ತ ತೃಪ್ತಿಯನ್ನು ನೀಡುತ್ತದೆ.&lt;/p&gt;&lt;p&gt;&lt;strong&gt;ಪಾನೀಯದಲ್ಲಿ ಏನೇನಿದೆ&lt;/strong&gt;&lt;/p&gt;&lt;p&gt;ಪೌಷ್ಟಿಕಾಂಶದ ದೃಷ್ಟಿಕೋನದಿಂದ ನೋಡುವುದಾದರೆ, ಸಾಧಾರಣ 250 ಮಿಲಿ ಲೋಟದ ದೂಧ್ ಸೋಡಾವು ಸಾಕಷ್ಟು ಸಾಂದ್ರತೆಯಿಂದ ಕೂಡಿದೆ. ಇದರಲ್ಲಿ ಸಾಮಾನ್ಯವಾಗಿ 160 ರಿಂದ 220 ಕ್ಯಾಲೋರಿಗಳಿರುತ್ತವೆ. ಹಾಲು ಮತ್ತು ಫ್ಲೇವರ್ಡ್ ಸಿರಪ್&zwnj; ಗಳ ಕಾರಣದಿಂದಾಗಿ 25 ರಿಂದ 35 ಗ್ರಾಂ ಕಾರ್ಬೋಹೈಡ್ರೇಟ್ಸ್ ಮತ್ತು 20 ರಿಂದ 30 ಗ್ರಾಂನಷ್ಟು ಸಕ್ಕರೆಯ ಅಂಶ ಇದರಲ್ಲಿರುತ್ತದೆ. ಸಕಾರಾತ್ಮಕ ಅಂಶವೆಂದರೆ, ಈ ಪಾನೀಯವು ಹಾಲಿನ ಆಧಾರಿತವಾಗಿರುವುದರಿಂದ ಇದು 5 ರಿಂದ 7 ಗ್ರಾಂ ಪ್ರೋಟೀನ್ ಮತ್ತು ಸರಿಸುಮಾರು 200 ರಿಂದ 250 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ನೀಡುತ್ತದೆ. ಇದರೊಂದಿಗೆ ಸ್ವಲ್ಪ ಪ್ರಮಾಣದ ಕೊಬ್ಬು ಮತ್ತು ಸೋಡಿಯಂ ಕೂಡ ಇರುತ್ತದೆ. ಕಾರ್ಬೊನೇಟೆಡ್ ನೀರು ತನ್ನ ವಿಶಿಷ್ಟವಾದ ನೊರೆಯೊಂದಿಗೆ ಈ ಪಾನೀಯಕ್ಕೆ ಸ್ವಲ್ಪ ಪ್ರಮಾಣದ ಕ್ಯಾಲೋರಿಗಳನ್ನು ಸೇರಿಸುತ್ತದೆ.&lt;/p&gt;&lt;p&gt;&lt;strong&gt;ಸಾಧಕ-ಬಾಧಕಗಳು: ಒಂದು ಸಮತೋಲಿತ ನೋಟ&lt;/strong&gt;&lt;/p&gt;&lt;p&gt;ಹಾಲಿನಲ್ಲಿರುವ ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಆರೋಗ್ಯ ಪ್ರಯೋಜನಗಳಿಗಾಗಿ ಅನೇಕರು ಈ ಪಾನೀಯವನ್ನು ಸೇವಿಸುತ್ತಾರೆಯಾದರೂ, ಇದರಲ್ಲಿರುವ ಹೆಚ್ಚಿನ ಸಕ್ಕರೆಯ ಅಂಶವು ಮಧುಮೇಹ, ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (ಎನ್ ಎ ಎಫ್ ಎಲ್ ಡಿ) ಅಥವಾ ಬೊಜ್ಜಿನ ಸಮಸ್ಯೆ ಇರುವವರಿಗೆ ಸೂಕ್ತವಲ್ಲದ ಆಯ್ಕೆಯನ್ನಾಗಿ ಮಾಡುತ್ತದೆ. ಇದಲ್ಲದೆ, ಡೈರಿ ಮತ್ತು ಕಾರ್ಬೊನೇಶನ್&zwnj; ನ ಸಂಯೋಜನೆಯು ಕೆಲವು ವ್ಯಕ್ತಿಗಳಲ್ಲಿ ಹೊಟ್ಟೆ ಉಬ್ಬರ ಅಥವಾ ಜೀರ್ಣಕ್ರಿಯೆಯ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಇದು ಮೂಲಭೂತವಾಗಿ ಒಂದು ಎರಡು ಅಲುಗಿನ ಕತ್ತಿಯಂತೆ.&lt;/p&gt;&lt;p&gt;ಇದು ಸಾಮಾನ್ಯ ಸಾಫ್ಟ್ ಡ್ರಿಂಕ್&zwnj; ಗಿಂತ ಹೆಚ್ಚಿನ ಪೌಷ್ಟಿಕಾಂಶವನ್ನು ನೀಡುತ್ತದೆಯಾದರೂ, ಬೀದಿ ಬದಿಯ ವ್ಯಾಪಾರಿಗಳು ಸಾಮಾನ್ಯವಾಗಿ ಬಳಸುವ ಅತಿಯಾದ ಸಕ್ಕರೆಯುಕ್ತ ಸಿರಪ್&zwnj;ಗ ಳಿಂದ ಉಂಟಾಗುವ ತೊಂದರೆಗಳನ್ನೂ ಹೊಂದಿದೆ. ಇದು ಉತ್ತಮ ಸಂಯೋಜನೆಯೇ ಎಂಬುದು ನೀವು ಒಂದು ವಿಶಿಷ್ಟ ಅನುಭವವನ್ನು ಬಯಸುತ್ತಿದ್ದೀರಾ ಅಥವಾ ನಿಮ್ಮ ಹೊಟ್ಟೆಯಲ್ಲಿ ವಿಜ್ಞಾನದ ಪ್ರಯೋಗವನ್ನು ಮಾಡಲು ಬಯಸುತ್ತೀರಾ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.&lt;/p&gt;&lt;p&gt;ಸಾಂಸ್ಕೃತಿಕವಾಗಿ, ಇದನ್ನು ಬೇಸಿಗೆಯ ದಿನಗಳಲ್ಲಿ ತಂಪು ನೀಡುವ ಪಾನೀಯವೆಂದು ಪರಿಗಣಿಸಲಾಗುತ್ತದೆ ಮತ್ತು ಮದುವೆಗಳಲ್ಲಿ ಅಥವಾ ರಂಜಾನ್ ಸಮಯದಲ್ಲಿ ಹೆಚ್ಚಾಗಿ ನೀಡಲಾಗುತ್ತದೆ. ಆದರೆ ಮತ್ತೊಂದೆಡೆ, ಕೋಲಾಗಳಲ್ಲಿ ಫಾಸ್ಪರಿಕ್ ಆಮ್ಲವಿರುತ್ತದೆ. ಇದನ್ನು ಹಾಲಿಗೆ ಸೇರಿಸಿದಾಗ, ಈ ಆಮ್ಲವು ಹಾಲಿನ ಪ್ರೋಟೀನ್&zwnj; ಗಳು (ಕೆಸೀನ್) ಒಂದಕ್ಕೊಂದು ಸೇರಿಕೊಂಡು ಹೆಪ್ಪುಗಟ್ಟುವಂತೆ ಮಾಡುತ್ತದೆ. ಕಾರ್ಬೊನೇಶನ್ (ಗುಳ್ಳೆಗಳು) ಮತ್ತು ಲ್ಯಾಕ್ಟೋಸ್ (ಹಾಲಿನ ಸಕ್ಕರೆ) ಸಂಯೋಜನೆಯು ನಿಮ್ಮ ಕರಳಿನಲ್ಲಿ ಹೆಚ್ಚಿನ ಆಸ್ಮೋಟಿಕ್ ಒತ್ತಡಕ್ಕೆ ಕಾರಣವಾಗಬಹುದು. ಇದು ಸೂಕ್ಷ್ಮ ಹೊಟ್ಟೆಯ ಗುಣವುಳ್ಳವರಲ್ಲಿ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅತಿಸಾರಕ್ಕೆ ಕಾರಣವಾಗಬಹುದು.&lt;/p&gt;&lt;h2&gt;&lt;strong&gt;ಆರೋಗ್ಯಕರವಾಗಿಸುವ ವಿಧಾನ: ಆಹಾರ ತಜ್ಞರ ಮಾರ್ಗದರ್ಶನ&lt;/strong&gt;&lt;/h2&gt;&lt;p&gt;ಆರೋಗ್ಯದ ಮೇಲೆ ರಾಜಿ ಮಾಡಿಕೊಳ್ಳದೆ ಈ ಪಾನೀಯವನ್ನು ಆನಂದಿಸಲು ಬಯಸುವವರಿಗಾಗಿ, ಇದರ ಹಗುರವಾದ ಆವೃತ್ತಿಯನ್ನು ತಯಾರಿಸಬಹುದು. ಕೊಬ್ಬಿನಂಶವನ್ನು ಕಡಿಮೆ ಮಾಡಲು ಪೂರ್ಣ ಪ್ರಮಾಣದ ಕೊಬ್ಬಿನ ಹಾಲಿನ ಬದಲಿಗೆ ಕಡಿಮೆ ಕೊಬ್ಬಿನ ಅಥವಾ ಸ್ಕಿಮ್ಡ್ ಹಾಲನ್ನು ಬಳಸಿ. ಗ್ಲೈಸೆಮಿಕ್ ಪರಿಣಾಮವನ್ನು ಕಡಿಮೆ ಮಾಡಲು ಸಕ್ಕರೆಯ ಸಿರಪ್&zwnj; ಗಳ ಬದಲಿಗೆ ಸ್ಟೀವಿಯಾ ಅಥವಾ ಬೆಲ್ಲದಂತಹ ನೈಸರ್ಗಿಕ ಸಿಹಿಕಾರಕಗಳನ್ನು ಬಳಸಿ. ಕೃತಕ ಪದಾರ್ಥಗಳ ಬದಲಿಗೆ ಏಲಕ್ಕಿ ಅಥವಾ ಕೇಸರಿಯನ್ನು ಬಳಸಿ.&lt;/p&gt;&lt;p&gt;ತಜ್ಞರು ಪಾನೀಯದ ಪ್ರಮಾಣವನ್ನು ಸುಮಾರು 150 ರಿಂದ 200 ಮಿಲೀಗೆ ಸೀಮಿತಗೊಳಿಸಲು ಮತ್ತು ಇದನ್ನು ಪ್ರತಿದಿನ ಕುಡಿಯುವ ಬದಲಿಗೆ ಅಪರೂಪಕ್ಕೊಮ್ಮೆ ಆನಂದಿಸಲು ಶಿಫಾರಸು ಮಾಡುತ್ತಾರೆ. ಇಂತಹ ಜಾಗರೂಕ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ, ದೂಧ್ ಸೋಡಾ ಅನುಭವವು ಹಳೆಯ ಸವಿ ನೆನಪಿನ ಪಾನೀಯವಾಗಿಯೂ ಮತ್ತು ಆಧುನಿಕ ಆಹಾರ ಪದ್ಧತಿಯ ಸಮತೋಲಿತ ಭಾಗವಾಗಿಯೂ ಉಳಿಯಬಲ್ಲದು.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/food/doodh-soda-benefits-side-effects-summer-drink-gvd/articleshow-gcyg874"/>
        </item>
        <item>
            <title><![CDATA[ಹಾವು ಕಚ್ಚಿದ ಹಣ್ಣು-ತರಕಾರಿ ತಿಂದರೆ ಸಾವು ಬರುತ್ತಾ? ಈ ತಪ್ಪುಗಳನ್ನು ಮಾತ್ರ ಯಾವತ್ತೂ ಮಾಡ್ಲೇಬೇಡಿ!]]></title>
            <link>https://kannada.asianetnews.com/health-life/can-eating-snake-bitten-fruits-or-vegetables-lead-to-death-actual-facts-here-to-know/articleshow-6az43t8</link>
            <guid isPermaLink="true">https://kannada.asianetnews.com/health-life/can-eating-snake-bitten-fruits-or-vegetables-lead-to-death-actual-facts-here-to-know/articleshow-6az43t8</guid>
            <pubDate>Thu, 30 Apr 2026 16:31:17 +0530</pubDate>
            <description><![CDATA[&lt;p&gt;ನಮ್ಮ ಸಮಾಜದಲ್ಲಿ ಹಾವಿನ ಬಗ್ಗೆ ಇರುವಷ್ಟು ಕಟ್ಟುಕಥೆಗಳು ಮತ್ತು ಭಯ ಬಹುಶಃ ಬೇರೆ ಯಾವುದೇ ಪ್ರಾಣಿಯ ಬಗ್ಗೆ ಇಲ್ಲ. ಅದರಲ್ಲೂ ವಿಶೇಷವಾಗಿ ಹೊಲಗದ್ದೆಗಳಲ್ಲಿ ಅಥವಾ ಕೈತೋಟಗಳಲ್ಲಿ ಕೆಲಸ ಮಾಡುವವರಿಗೆ ಒಂದು ದೊಡ್ಡ ಆತಂಕವಿರುತ್ತದೆ. ಹಾವು ಕಚ್ಚಿರುವ ಹಣ್ಣು ಅಥವಾ ತರಕಾರಿಯನ್ನು ನಾವು ಸೇವಿಸಿದರೆ ಪ್ರಾಣಾಪಾಯವಾಗುತ್ತದೆಯೇ?&quot; ಎಂಬುದು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqezzsydv2ftpy1j004t4m2w,imgname-snakes-eat-fruits-1777546029005.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವಿನ ವಿಷ ಮತ್ತು ನಿಮ್ಮ ಆಹಾರ: ಹಾವು ಕಚ್ಚಿದ ಹಣ್ಣು-ತರಕಾರಿ ತಿಂದರೆ ಸಾವು ಖಚಿತವೇ?&amp;nbsp;&lt;/strong&gt;&lt;/p&gt;&lt;p&gt;ನಮ್ಮ ಸಮಾಜದಲ್ಲಿ ಹಾವಿನ ಬಗ್ಗೆ ಇರುವಷ್ಟು ಕಟ್ಟುಕಥೆಗಳು ಮತ್ತು ಭಯ ಬಹುಶಃ ಬೇರೆ ಯಾವುದೇ ಪ್ರಾಣಿಯ ಬಗ್ಗೆ ಇಲ್ಲ. ಅದರಲ್ಲೂ ವಿಶೇಷವಾಗಿ ಹೊಲಗದ್ದೆಗಳಲ್ಲಿ ಅಥವಾ ಕೈತೋಟಗಳಲ್ಲಿ ಕೆಲಸ ಮಾಡುವವರಿಗೆ ಒಂದು ದೊಡ್ಡ ಆತಂಕವಿರುತ್ತದೆ - ಅದೇನೆಂದರೆ, &quot;ಹಾವು ಯಾವುದಾದರೂ ಹಣ್ಣು ಅಥವಾ ತರಕಾರಿಯನ್ನು ಕಚ್ಚಿದ್ದರೆ, ಅಂತಹ ಪದಾರ್ಥಗಳನ್ನು ನಾವು ಸೇವಿಸಿದರೆ ಪ್ರಾಣಾಪಾಯವಾಗುತ್ತದೆಯೇ?&quot; ಎಂಬುದು. ಈ ಕುರಿತು ವಿಜ್ಞಾನ ಮತ್ತು ಆರೋಗ್ಯ ತಜ್ಞರು ಏನು ಹೇಳುತ್ತಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;h2&gt;1. ಹಾವುಗಳು ಹಣ್ಣು ತಿನ್ನುತ್ತವೆಯೇ?&lt;/h2&gt;&lt;p&gt;ಮೊದಲನೆಯದಾಗಿ, ಜೀವವಿಜ್ಞಾನದ ಪ್ರಕಾರ ಹಾವುಗಳು ಸಂಪೂರ್ಣವಾಗಿ ಮಾಂಸಾಹಾರಿ ಪ್ರಾಣಿಗಳು. ಅವುಗಳ ಆಹಾರ ಪಟ್ಟಿಯಲ್ಲಿ ಇಲಿ, ಕಪ್ಪೆ, ಹಲ್ಲಿ ಮತ್ತು ಸಣ್ಣ ಹಕ್ಕಿಗಳು ಇರುತ್ತವೆಯೇ ಹೊರತು ಹಣ್ಣು-ತರಕಾರಿಗಳಲ್ಲ. ಹಾವುಗಳಿಗೆ ಹಸಿವಾದಾಗ ಅವು ಹಣ್ಣನ್ನು ಕಚ್ಚುವುದಿಲ್ಲ. ಹಣ್ಣಿನ ಮೇಲೆ ಹಲ್ಲುಗಳ ಗುರುತು ಕಂಡರೆ ಅದು ಹೆಚ್ಚಾಗಿ ಬಾವಲಿ, ಅಳಿಲು ಅಥವಾ ಹಕ್ಕಿಗಳು ಕಚ್ಚಿದ್ದಾಗಿರುತ್ತದೆ. ಹಾಗಾಗಿ ಹಾವು ಹಣ್ಣನ್ನು ಕಚ್ಚುತ್ತದೆ ಎನ್ನುವುದೇ ಒಂದು ತಪ್ಪು ಕಲ್ಪನೆ.&lt;/p&gt;&lt;p&gt;2. 'ವೆನಮ್' ಮತ್ತು 'ಪಾಯ್ಸನ್' ನಡುವಿನ ವ್ಯತ್ಯಾಸ:&lt;/p&gt;&lt;p&gt;ವಿಜ್ಞಾನದಲ್ಲಿ ವಿಷವನ್ನು ಎರಡು ವಿಧವಾಗಿ ವಿಂಗಡಿಸಲಾಗಿದೆ. ಹಾವಿನ ವಿಷವನ್ನು 'ವೆನಮ್' (Venom) ಎಂದು ಕರೆಯಲಾಗುತ್ತದೆ. ಇದು ಅಪಾಯಕಾರಿಯಾಗುವುದು ಕೇವಲ ನಮ್ಮ ರಕ್ತಪ್ರವಾಹಕ್ಕೆ ನೇರವಾಗಿ ಸೇರಿದಾಗ ಮಾತ್ರ. ಅಂದರೆ ಹಾವು ಕಚ್ಚಿದಾಗ ಅದರ ಕೋರೆಹಲ್ಲುಗಳ ಮೂಲಕ ವಿಷವು (Snake Venom) ನೇರವಾಗಿ ದೇಹದ ಅಂಗಾಂಶ ಮತ್ತು ರಕ್ತನಾಳಗಳನ್ನು ಸೇರಿದರೆ ಮಾತ್ರ ಪ್ರಾಣಕ್ಕೆ ಸಂಚಕಾರ. ಆದರೆ 'ಪಾಯ್ಸನ್' ಎಂದರೆ ತಿಂದಾಗ ಅಥವಾ ಮುಟ್ಟಿದಾಗ ಹಾನಿ ಮಾಡುವಂತದ್ದು. ಹಾವಿನ ವಿಷವು ಈ ವರ್ಗಕ್ಕೆ ಸೇರುವುದಿಲ್ಲ.&lt;/p&gt;&lt;p&gt;3. ಹೊಟ್ಟೆಯ ಆಮ್ಲದ ಶಕ್ತಿ (The Power of Gastric Acid):&lt;/p&gt;&lt;p&gt;ಒಂದು ವೇಳೆ ಯಾವುದಾದರೂ ಹಣ್ಣಿನ ಮೇಲೆ ಹಾವಿನ ವಿಷದ ಅಂಶವಿದ್ದು, ಅದನ್ನು ಮನುಷ್ಯರು ಸೇವಿಸಿದರೂ ಸಹ, ಅದು ಜಠರವನ್ನು ತಲುಪಿದ ತಕ್ಷಣ ನಮ್ಮ ದೇಹದಲ್ಲಿರುವ ಪ್ರಬಲವಾದ ಹೈಡ್ರೋಕ್ಲೋರಿಕ್ ಆಮ್ಲವು (HCl) ಆ ವಿಷವನ್ನು ನಿರ್ವಿಷಗೊಳಿಸುತ್ತದೆ. ಹಾವಿನ ವಿಷವು ಮೂಲತಃ ಪ್ರೋಟೀನ್&zwnj;ಗಳಿಂದ ಮಾಡಲ್ಪಟ್ಟಿದೆ. ನಾವು ಸೇವಿಸುವ ಪ್ರೋಟೀನ್&zwnj;ಗಳು ಹೇಗೆ ಜೀರ್ಣವಾಗುತ್ತವೆಯೋ, ಹಾಗೆಯೇ ಹಾವಿನ ವಿಷವೂ ಜೀರ್ಣಾಂಗದಲ್ಲಿ ಜೀರ್ಣವಾಗಿ ಹೋಗುತ್ತದೆ. ಅದು ರಕ್ತಕ್ಕೆ ಸೇರುವ ಮುನ್ನವೇ ತನ್ನ ವಿಷತ್ವವನ್ನು ಕಳೆದುಕೊಳ್ಳುತ್ತದೆ.&lt;/p&gt;&lt;h3&gt;4. ಯಾವಾಗ ಅಪಾಯವಿರಬಹುದು?&lt;/h3&gt;&lt;p&gt;ಹಾವಿನ ವಿಷವನ್ನು ಸೇವಿಸಿದಾಗಲೂ ಅಪಾಯವಾಗುವ ಒಂದು ಸಂದರ್ಭವೆಂದರೆ, ವ್ಯಕ್ತಿಯ ಬಾಯಿಯಲ್ಲಿ ಹುಣ್ಣುಗಳಿದ್ದಾಗ (Mouth Ulcers) ಅಥವಾ ಜೀರ್ಣಾಂಗದಲ್ಲಿ ಗಾಯಗಳಿದ್ದಾಗ (Stomach Ulcers). ಇಂತಹ ಸಂದರ್ಭದಲ್ಲಿ ಆ ಗಾಯಗಳ ಮೂಲಕ ವಿಷವು ನೇರವಾಗಿ ರಕ್ತಕ್ಕೆ ಸೇರುವ ಸಾಧ್ಯತೆ ಇರುತ್ತದೆ. ಇದನ್ನು ಹೊರತುಪಡಿಸಿ ಸಾಮಾನ್ಯ ಆರೋಗ್ಯವಂತ ವ್ಯಕ್ತಿಗೆ ಆಹಾರದ ಮೂಲಕ ಹಾವಿನ ವಿಷ ಸೇರಿದರೆ ಪ್ರಾಣಾಪಾಯ ಸಂಭವಿಸುವುದಿಲ್ಲ.&lt;/p&gt;&lt;p&gt;ಸುರಕ್ಷಿತ ಜೀವನಶೈಲಿಗಾಗಿ ಈ ಸಲಹೆಗಳನ್ನು ಪಾಲಿಸಿ:&lt;/p&gt;&lt;p&gt;ಶುಚಿತ್ವ: ಯಾವುದೇ ಹಣ್ಣು ಅಥವಾ ತರಕಾರಿಯನ್ನು ಬಳಸುವ ಮೊದಲು ಅವುಗಳನ್ನು ಹರಿಯುವ ನೀರಿನಲ್ಲಿ ಕನಿಷ್ಠ 2-3 ಬಾರಿ ಚೆನ್ನಾಗಿ ತೊಳೆಯಿರಿ.&lt;/p&gt;&lt;p&gt;ಪರಿಶೀಲನೆ: ಅತಿಯಾಗಿ ಹಾನಿಗೊಳಗಾದ ಅಥವಾ ಅಸಹಜವಾದ ಕಡಿತದ ಗುರುತುಗಳಿರುವ ಹಣ್ಣುಗಳನ್ನು ಬಳಸಬೇಡಿ.&lt;/p&gt;&lt;p&gt;ಬೇಯಿಸುವುದು: ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ಬಳಿಕ ಸೇವಿಸುವುದು ಉತ್ತಮ. ಹೆಚ್ಚಿನ ತಾಪಮಾನದಲ್ಲಿ ಯಾವುದೇ ಬ್ಯಾಕ್ಟೀರಿಯಾ ಅಥವಾ ವಿಷಕಾರಿ ಅಂಶಗಳು ನಾಶವಾಗುತ್ತವೆ.&lt;/p&gt;&lt;p&gt;ಸತ್ಯ ಸಂಗತಿ:&lt;/p&gt;&lt;p&gt;ಹಾವು ಕಚ್ಚಿದ ಹಣ್ಣು ತಿಂದರೆ ಸಾವು ಸಂಭವಿಸುತ್ತದೆ ಎಂಬುದು ವೈಜ್ಞಾನಿಕವಾಗಿ ಒಂದು ಭ್ರಮೆಯಷ್ಟೆ. ಆದರೂ, ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಪ್ರಾಣಿ-ಪಕ್ಷಿಗಳು ಕಚ್ಚಿದ ಅಥವಾ ಹಾನಿಗೊಳಗಾದ ಹಣ್ಣುಗಳನ್ನು ತಿನ್ನದಿರುವುದು ಒಳ್ಳೆಯದು. ಈ ಲೇಖನವು ಕೇವಲ ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/can-eating-snake-bitten-fruits-or-vegetables-lead-to-death-actual-facts-here-to-know/articleshow-6az43t8"/>
        </item>
        <item>
            <title><![CDATA[ಭಾರತದ ಸೀಫುಡ್ ರಾಜಧಾನಿ ಯಾವುದು? ಇಲ್ಲಿ ಸಿಗುತ್ತೆ ರುಚಿಕರ ಮೀನು, ಹಲವು ಬಗೆ ಫಿಶ್ ಖಾದ್ಯ]]></title>
            <link>https://kannada.asianetnews.com/gallery/food/which-is-india-seafood-capital-a-paradise-for-fish-lovers-offering-variety-of-dishes-0mz6y96</link>
            <guid isPermaLink="true">https://kannada.asianetnews.com/gallery/food/which-is-india-seafood-capital-a-paradise-for-fish-lovers-offering-variety-of-dishes-0mz6y96</guid>
            <pubDate>Thu, 30 Apr 2026 16:21:06 +0530</pubDate>
            <description><![CDATA[&lt;p&gt;ಭಾರತದ ಸೀಫುಡ್ ರಾಜಧಾನಿ ಯಾವುದು? ಇಲ್ಲಿ ಸಿಗುತ್ತೆ ರುಚಿಕರ ಮೀನು, ಹಲವು ಬಗೆ ಫಿಶ್ ಖಾದ್ಯ, ಭಾರತದ ಹಲವು ಕರಾವಳಿ ಪ್ರದೇಶದಲ್ಲಿ ಸಮುದ್ರ ಆಹಾರದ ವಿಶೇಷತೆಗಳಿವೆ. ಆದರೆ ಸಮುದ್ರ ಆಹಾರ ಹಾಗೂ ಮೀನಿನ ರಾಜಧಾನಿ ಪಟ್ಟ ಒಂದು ನಗರಕ್ಕೆ ಮಾತ್ರ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-c86edd6e-5194-43bf-b231-0b78bbf91a43,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಸೀಫುಡ್ ರಾಜಧಾನಿ ಯಾವುದು? ಇಲ್ಲಿ ಸಿಗುತ್ತೆ ರುಚಿಕರ ಮೀನು, ಹಲವು ಬಗೆ ಫಿಶ್ ಖಾದ್ಯ, ಭಾರತದ ಹಲವು ಕರಾವಳಿ ಪ್ರದೇಶದಲ್ಲಿ ಸಮುದ್ರ ಆಹಾರದ ವಿಶೇಷತೆಗಳಿವೆ. ಆದರೆ ಸಮುದ್ರ ಆಹಾರ ಹಾಗೂ ಮೀನಿನ ರಾಜಧಾನಿ ಪಟ್ಟ ಒಂದು ನಗರಕ್ಕೆ ಮಾತ್ರ ಇದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಮೀನು ಸೇರಿದಂತೆ ಸಮುದ್ರ ಆಹಾರವನ್ನು ಹೆಚ್ಚಿನ ಜನ ಇಷ್ಟಪಡುತ್ತಾರೆ.ರುಚಿ, ಪೌಷ್ಠಿಕಾಂಶ ಸೇರಿದಂತೆ ಹಲವು ಕಾರಣಗಳಿಂದ ಮೀನು ಅತ್ಯಂತ ಮುಖ್ಯ ಆಹಾರವಾಗಿ ಮಾರ್ಪಟ್ಟಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಮೀನು ಅತೀ ಹೆಚ್ಚಿನ ಬೇಡಿಕೆಯ ಆಹಾರವಾಗಿದೆ. ಆದರೆ ಒಂದು ನಗರಕ್ಕೆ ಭಾರತದ ಮೀನು ಸೇರಿದಂತೆ ಸಮುದ್ರಾಹರದ ರಾಜಧಾನಿ ಅನ್ನೋ ಬಿರುದು ಇದೆ. ಅದು ಒನ್ ಆ್ಯಂಡ್ ಒನ್ಲಿ ಕೇರಳದ ಕೊಚ್ಚಿ.&lt;/p&gt;&lt;img&gt;&lt;p&gt;ಕೊಚ್ಚಿಯನ್ನು ಸೀಫುಡ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಅರೆಬಿಯನ್ ಕಡಲತೀರಕ್ಕೆ ಹೊಂದಿಕೊಂಡಿರುವ ಕೊಚ್ಚಿ ನಗರ ಭಾರತದ ಪ್ರಮುಖ ಬಂದರು ನಗರವಾಗಿ ಗುರುತಿಸಿಕೊಂಡಿದೆ. ಕೊಚ್ಚಿಯಲ್ಲಿ ಬಗೆ ಬಗೆಯ ಸಮುದ್ರ ಆಹಾರಗಳು ಲಭ್ಯವಿದೆ. ಹಲವು ಬಗೆಯ ಖಾದ್ಯಗಳು ಇಲ್ಲಿ ಲಭ್ಯ.&lt;/p&gt;&lt;img&gt;&lt;p&gt;ಕೊಚ್ಚಿಯಲ್ಲಿ ಭಾರತದಲ್ಲಿ ಸಿಗುವ ಎಲ್ಲಾ ಮೀನು ಸೇರಿದಂತೆ ಸಮುದ್ರ ಆಹಾರದ ಫ್ರೆಶ್ ಫುಡ್ ಸಿಗಲಿದೆ. ಅದರಲ್ಲೂ ಕೊಚ್ಚಿಯಲ್ಲಿ ಕೆಲ ಸೀಫುಡ್ ಅತ್ಯಂತ ಜನಪ್ರಿಯ ಹಾಗೂ ಭಾರಿ ಬೇಡಿಕೆ ಪಡೆದುಕೊಂಡಿದೆ. ಈ ಪೈಕಿ ಸಿಗಡಿ ಮೀನು, ಪರ್ಲ್ ಸ್ಪಾಟ್ ಫಿಶ್(ಕರಿಮೀನು), ಏಡಿ ಹಾಗೂ ಲಾಬ್&zwnj;ಸ್ಟರ್, ಕಿಂಗ್ ಪಿಶ್, ತುನಾ, ಸೀರ್ ಫಿಶ್, ಸ್ಕ್ವಿಡ್, ಕ್ಲಾಮ್ಸ್ ಸೇರಿದಂತೆ ಹಲವು ವಿಶೇಷ ಮೀನುಗಳು ಇಲ್ಲಿ ಲಭ್ಯವಿದೆ.&lt;/p&gt;&lt;img&gt;&lt;p&gt;ಕೊಚ್ಚಿಯಲ್ಲಿ ಫ್ರೆಶ್ ಮೀನುಗಳು ಸಿಗುತ್ತವೆ. ಬಂದರಿನಲ್ಲಿ ಪ್ರತಿ ದಿನ ಸಾವಿರಾರು ಕೋಟಿ ರೂಪಾಯಿ ಮೀನು ವ್ಯವಹಾರ ನಡೆಯುತ್ತದೆ. ಇದರ ಜೊತೆಗೆ ಕೇರಳ ಶೈಲಿಯಲ ಮಸಾಲ ಈ ಮೀನಿಗೆ ಸೇರಿಕೊಂಡಾಗ ಬಾಯಲ್ಲಿ ನೀರೂರಿಸುವ ಖಾದ್ಯ ನಿಮಗೆ ಸಿಗಲಿದೆ. ಇದೇ ಕಾರಣದಿಂದ ಕೊಚ್ಚಿ ಭಾರತದ ಸೀಫುಡ್ ರಾಜಧಾನಿಯಾಗಿ ಗುರುತಿಸಿಕೊಂಡಿದೆ.&lt;/p&gt;&lt;img&gt;&lt;p&gt;ಕೊಚ್ಚಿಯಿಂದ ಮೀನುಗಳು ವಿದೇಶಕ್ಕೂ ರಫ್ತಾಗುತ್ತದೆ. ಅರೆಬಿಯನ್ ಸಮುದ್ರದಿಂದ ಹಿಡಿಯುವ ಈ ಮೀನುಗಳು ವಿಶೇಷ ರುಚಿ ಹೊಂದಿದೆ. ಹೀಗಾಗಿ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ವಿದೇಶಕ್ಕೂ ಭಾರಿ ಪ್ರಮಾಣದಲ್ಲಿ ಈ ಮೀನಗಳು ರಫ್ತಾಗುತ್ತದೆ. ಭಾರತದ ವಿವಿಧ ನಗರಗಳಿಗೆ ಈ ಮೀನುಗಳು ಸರಬರಾಜಾಗುತ್ತದೆ.&lt;/p&gt;&lt;h2&gt;ವಿದೇಶಕ್ಕೂ ರಫ್ತು&lt;/h2&gt;]]></content:encoded>
            <category>life</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/food/which-is-india-seafood-capital-a-paradise-for-fish-lovers-offering-variety-of-dishes-0mz6y96"/>
        </item>
        <item>
            <title><![CDATA[ಜೈಪುರದ ಕೋಟೆಯ ಭಯಾನಕ ಕಹಾನಿ: ರಾಜಕುಮಾರನ ನಿಗೂಢ ಸಾವು: ಇಂದಿಗೂ ಕೇಳಿಸುತ್ತಂತೆ ಕೂಗಾಟ ಹೆಜ್ಜೆ ಸದ್ದು]]></title>
            <link>https://kannada.asianetnews.com/gallery/india-news/the-haunted-history-of-nahargarh-fort-suh-god6w2g</link>
            <guid isPermaLink="true">https://kannada.asianetnews.com/gallery/india-news/the-haunted-history-of-nahargarh-fort-suh-god6w2g</guid>
            <pubDate>Thu, 30 Apr 2026 15:59:46 +0530</pubDate>
            <description><![CDATA[&lt;p&gt;The haunted history of nahargarh fort ಜೈಪುರದ ಬೆಟ್ಟಗಳಲ್ಲಿ ನೆಲೆಗೊಂಡಿರುವ ನಹರ್&zwnj;ಗಢ ಕೋಟೆ ದೂರದಿಂದ ಎಷ್ಟೇ ಸುಂದರವಾಗಿ ಕಾಣಿಸಿದರೂ, ಇದು ನಿಗೂಢ ಕಥೆಗಳಿಂದ ಕೂಡಿದೆ. ಕೂಗು, ಹೆಜ್ಜೆ ಶಬ್ಬ ಈಗೂ ಕೇಳುತ್ತೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqewy5xe966krb039zs3tf3g,imgname-haunted-history-nahargarh-fort-1777542829998.jpeg" type="image/jpeg" height="390" width="690"/>
            <content:encoded><![CDATA[&lt;p&gt;The haunted history of nahargarh fort ಜೈಪುರದ ಬೆಟ್ಟಗಳಲ್ಲಿ ನೆಲೆಗೊಂಡಿರುವ ನಹರ್&zwnj;ಗಢ ಕೋಟೆ ದೂರದಿಂದ ಎಷ್ಟೇ ಸುಂದರವಾಗಿ ಕಾಣಿಸಿದರೂ, ಇದು ನಿಗೂಢ ಕಥೆಗಳಿಂದ ಕೂಡಿದೆ. ಕೂಗು, ಹೆಜ್ಜೆ ಶಬ್ಬ ಈಗೂ ಕೇಳುತ್ತೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಹರ್&zwnj;ಗಢ ಕೋಟೆಯಲ್ಲಿ ಪ್ರೇತಗಳ ದರ್ಶನದಿಂದಾಗಿ ಇಲ್ಲಿ ಹಲವಾರು ಪೂಜೆಗಳನ್ನು ನಡೆಸಲಾಗಿದೆ. ಕಿರೀಟ ರಾಜಕುಮಾರನ ಗೌರವಾರ್ಥವಾಗಿ ಕೋಟೆಯ ಹೆಸರನ್ನು ಸುದರ್ಶನಗಢದಿಂದ ನಹರ್&zwnj;ಗಢ ಎಂದು ಬದಲಾಯಿಸಲಾಯಿತು. ಇಂದಿಗೂ ಸಹ ಜನರು ನಹರ್ ಸಿಂಗ್ ಭೋಮಿಯಾಗೆ ಗೌರವ ಸಲ್ಲಿಸಲು ಕೋಟೆಗೆ ಭೇಟಿ ನೀಡುತ್ತಾರೆ. ನವೆಂಬರ್ 25, 2017 ರಂದು, ಚೇತನ್ ಸೈನಿ ಎಂಬ ವ್ಯಕ್ತಿಯ ದೇಹವು ನಹರ್&zwnj;ಗಢ ಕೋಟೆಯ ಅದೇ ಕೋಟೆಯಿಂದ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಚೇತನ್ ದೇಹವು ಹಗ್ಗದಿಂದ ನೇತಾಡುತ್ತಿರುವ ದೃಶ್ಯವು ಎಲ್ಲರನ್ನು ದಿಗ್ಭ್ರಮೆಗೊಳಿಸಿತು.&lt;/p&gt;&lt;img&gt;&lt;p&gt;&quot;ಸುದರ್ಶನಗಢ&quot; ಎಂದು ಹೆಸರಿಸಲಾದ ಈ ಕೋಟೆಯ ನಿರ್ಮಾಣವನ್ನು 1734 ರಲ್ಲಿ ರಾಜಾ ಜೈ ಸಿಂಗ್ II ನಿಯೋಜಿಸಿದರು. 1883 ರಲ್ಲಿ, ಸವಾಯಿ ಮಾಧೋ ಸಿಂಗ್ ಸುದರ್ಶನಗಢವನ್ನು ಪುನರ್ನಿಮಿ್ರಸಿದರು, ಐಷಾರಾಮಿ ಸಭೆ ಕೊಠಡಿಗಳನ್ನು ಸೇರಿಸಿದರು ಮತ್ತು ಬಾಗಿಲು ಮತ್ತು ಕಿಟಕಿಗಳನ್ನು ಭಿತ್ತಿಚಿತ್ರಗಳಿಂದ ಅಲಂಕರಿಸಿದರು. ಕೋಟೆಯ ನಿರ್ಮಾಣದ ಸಮಯದಲ್ಲಿ, ಎಲ್ಲರನ್ನೂ ಭಯಭೀತಗೊಳಿಸುವ ಹಲವಾರು ದುರದೃಷ್ಟಕರ ಘಟನೆಗಳು ಸಂಭವಿಸಿದವು.&lt;/p&gt;&lt;img&gt;&lt;p&gt;ಬೆಳಿಗ್ಗೆ ಈ ಕೋಟೆಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿರುವಾಗ, ಕತ್ತಲೆಯಾದ ತಕ್ಷಣ ಗೋಡೆಗಳು ಕುಸಿಯುತ್ತಿದ್ದವು ಎಂದು ಹೇಳಲಾಗುತ್ತದೆ. ಇದಲ್ಲದೆ, ಬಲವಾದ ಗಾಳಿ ಇದ್ದಕ್ಕಿದ್ದಂತೆ ಬೀಸಿ ಕಿಟಕಿಗಳು ಮತ್ತು ಬಾಗಿಲುಗಳ ಗಾಜುಗಳನ್ನು ಒಡೆದು ಹಾಕುತ್ತಿತ್ತು. ಇದರಿಂದ ಕಳವಳಗೊಂಡ ರಾಜನು ಒಬ್ಬ ಮಾಂತ್ರಿಕನಿಗೆ ತಿಳಿಸಿದನು, ಅವನು ತನ್ನ ಜ್ಞಾನದ ಮೂಲಕ, ಕೋಟೆಯು ರಾಜಕುಮಾರ ನಹರ್ ಸಿಂಗ್&zwnj;ನ ಪ್ರೇತದಿಂದ ಕಾಡುತ್ತಿದೆ ಎಂದು ಕಂಡುಹಿಡಿದನು, ಆದರೆ ಅವನು ಮೋಕ್ಷವನ್ನು ಪಡೆಯಲಿಲ್ಲ.&lt;/p&gt;&lt;img&gt;&lt;p&gt;ಇದರ ನಂತರ, ರಾಜನು ಹಲವಾರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದನು ಮತ್ತು ಕೋಟೆಯ ಒಂದು ಬದಿಯಲ್ಲಿ ಯುವರಾಜ್ ನಹರ್ ಸಿಂಗ್&zwnj;ಗೆ ಸಮರ್ಪಿತವಾದ ದೇವಾಲಯವನ್ನು ನಿರ್ಮಿಸಿದನು. ಇದಲ್ಲದೆ, ರಾಜಕುಮಾರನ ಗೌರವಾರ್ಥವಾಗಿ ಕೋಟೆಯ ಹೆಸರನ್ನು ಸುದರ್ಶನ್&zwnj;ಗಢದಿಂದ ನಹರ್&zwnj;ಗಢ ಎಂದು ಬದಲಾಯಿಸಲಾಯಿತು. ಇಂದಿಗೂ, ಜನರು ನಹರ್ ಸಿಂಗ್ ಭೋಮಿಯಾ ಜಿ ಅವರನ್ನು ಭೇಟಿ ಮಾಡಲು ಸ್ಥಳಕ್ಕೆ ಭೇಟಿ ನೀಡುತ್ತಾರೆ ಮತ್ತು ಅಲ್ಲಿ ಅನೇಕ ಸ್ಮರಣೀಯ ಐತಿಹಾಸಿಕ ಘಟನೆಗಳು ನಡೆದಿವೆ.&lt;/p&gt;&lt;p&gt;ಸ್ಥಳಿಯರ ಪ್ರಕಾರ ಇಲ್ಲಿ ಕೂಗು, ಹೆಜ್ಜೆ ಶಬ್ಬ. ದೊಡ್ಡ ಸದ್ದುಗಳು ಕೇಳಿಸುತ್ತವೆ ಎಂದು ಹೇಳುತ್ತಾರೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/india-news/the-haunted-history-of-nahargarh-fort-suh-god6w2g"/>
        </item>
        <item>
            <title><![CDATA[ಭಾರತದ 'ಐಸ್‌ಕ್ರೀಮ್ ರಾಜಧಾನಿ'ಯಾಗಿ ಹೊರಹೊಮ್ಮಿದ ಬೆಂಗಳೂರು! ತಣ್ಣಗಿನ ಆಹಾರಗಳಿಗೆ ರಾತ್ರಿ ಫುಲ್‌ ಡಿಮ್ಯಾಂಡ್‌!]]></title>
            <link>https://kannada.asianetnews.com/gallery/business/instamart-summer-trends-2026-report-declared-bengaluru-as-india-s-ice-cream-capital-gdp-124o78q</link>
            <guid isPermaLink="true">https://kannada.asianetnews.com/gallery/business/instamart-summer-trends-2026-report-declared-bengaluru-as-india-s-ice-cream-capital-gdp-124o78q</guid>
            <pubDate>Thu, 30 Apr 2026 15:17:09 +0530</pubDate>
            <description><![CDATA[&lt;p&gt;ಇನ್&zwnj;ಸ್ಟಾಮಾರ್ಟ್&zwnj;ನ ಸಮ್ಮರ್ ಟ್ರೆಂಡ್ಸ್ 2026 ವರದಿಯ ಪ್ರಕಾರ, ಬೆಂಗಳೂರು ದೇಶದ &amp;nbsp;ಐಸ್&zwnj;ಕ್ರೀಮ್ ರಾಜಧಾನಿಯಾಗಿ ಹೊರಹೊಮ್ಮಿದೆ. ಬೇಸಿಗೆಯಲ್ಲಿ ಐಸ್&zwnj;ಕ್ರೀಮ್, ತಂಪು ಪಾನೀಯಗಳು, ಮೊಸರು ಮತ್ತು ಮಾವಿನ ಹಣ್ಣುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದ್ದು, ರಾತ್ರಿ &amp;nbsp;ಹೆಚ್ಚು ಐಸ್&zwnj;ಕ್ರೀಮ್ ಆರ್ಡರ್ ಮಾಡಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6ye27va3w6gya7x3efpprk,imgname-icecream-2-1775128479994.jpg" type="image/jpeg" height="390" width="690"/>
            <content:encoded><![CDATA[&lt;p&gt;ಇನ್&zwnj;ಸ್ಟಾಮಾರ್ಟ್&zwnj;ನ ಸಮ್ಮರ್ ಟ್ರೆಂಡ್ಸ್ 2026 ವರದಿಯ ಪ್ರಕಾರ, ಬೆಂಗಳೂರು ದೇಶದ &amp;nbsp;ಐಸ್&zwnj;ಕ್ರೀಮ್ ರಾಜಧಾನಿಯಾಗಿ ಹೊರಹೊಮ್ಮಿದೆ. ಬೇಸಿಗೆಯಲ್ಲಿ ಐಸ್&zwnj;ಕ್ರೀಮ್, ತಂಪು ಪಾನೀಯಗಳು, ಮೊಸರು ಮತ್ತು ಮಾವಿನ ಹಣ್ಣುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದ್ದು, ರಾತ್ರಿ &amp;nbsp;ಹೆಚ್ಚು ಐಸ್&zwnj;ಕ್ರೀಮ್ ಆರ್ಡರ್ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಬೇಸಿಗೆಯ ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆ ತಂಪಾದ ಪಾನೀಯಗಳು ಹಾಗೂ ಐಸ್&zwnj;ಕ್ರೀಮ್&zwnj;ಗಳ ಮೊರೆ ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಪ್ರಮುಖ ಆನ್&zwnj;ಲೈನ್ ಡೆಲಿವರಿ ಪ್ಲಾಟ್&zwnj;ಫಾರ್ಮ್ 'ಇನ್&zwnj;ಸ್ಟಾಮಾರ್ಟ್' ಬಿಡುಗಡೆ ಮಾಡಿರುವ 'ಸಮ್ಮರ್ ಟ್ರೆಂಡ್ಸ್ 2026'ರ ವರದಿ. ಇದರ ಪ್ರಕಾರ, ಬೆಂಗಳೂರಿನ ಜನ ದೇಶದಲ್ಲೇ ಅತಿ ಹೆಚ್ಚು ಐಸ್&zwnj;ಕ್ರೀಮ್ ಸೇವಿಸುತ್ತಿದ್ದು, ಉದ್ಯಾನ ನಗರಿ ಈಗ 'ಭಾರತದ ಐಸ್&zwnj;ಕ್ರೀಮ್ ರಾಜಧಾನಿ'ಯಾಗಿ ಹೊರಹೊಮ್ಮಿದೆ. ಭಾರತದ ಒಟ್ಟು ಐಸ್&zwnj;ಕ್ರೀಮ್ ಬೇಡಿಕೆಯಲ್ಲಿ ಬರೋಬ್ಬರಿ ಶೇ. 14ರಷ್ಟು ಪಾಲು ಕೇವಲ ಬೆಂಗಳೂರು ನಗರವೊಂದರಿಂದಲೇ ಬರುತ್ತಿದ್ದು, ಅಚ್ಚರಿ ಮೂಡಿಸಿದೆ.&lt;/p&gt;&lt;img&gt;&lt;p&gt;ಬೇಸಿಗೆಯ ಆರಂಭದ ತಿಂಗಳುಗಳಾದ ಮಾರ್ಚ್ ಮತ್ತು ಏಪ್ರಿಲ್&zwnj;ನಲ್ಲಿ ತಂಪು ಪಾನೀಯಗಳು ಮತ್ತು ಐಸ್&zwnj;ಕ್ರೀಮ್&zwnj;ಗಳ ಆನ್&zwnj;ಲೈನ್ ಆರ್ಡರ್&zwnj;ಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇನ್&zwnj;ಸ್ಟಾಮಾರ್ಟ್ ವರದಿಯ ಪ್ರಕಾರ, ದೇಶಾದ್ಯಂತ ಹಣ್ಣುಗಳು, ತಂಪು ಪಾನೀಯಗಳು, ಕೋಲ್ಡ್ ಕಾಫಿ, ಫಿಜಿ ಡ್ರಿಂಕ್ಸ್ ಮತ್ತು ಪಾಪ್ಸಿಕಲ್&zwnj;ಗಳ ಬೇಡಿಕೆಯು ವಾರದಿಂದ ವಾರಕ್ಕೆ ಶೇ. 300ರಷ್ಟು ಏರಿಕೆಯಾಗಿದೆ. ಕೇವಲ ತಿಂಡಿ-ತಿನಿಸುಗಳು ಮಾತ್ರವಲ್ಲದೆ, ಬಿಸಿಲಿನಿಂದ ರಕ್ಷಣೆ ಪಡೆಯುವ ಸಾಧನಗಳಾದ ಫ್ಯಾನ್&zwnj;ಗಳ ಮಾರಾಟದಲ್ಲಿ ಶೇ. 280ರಷ್ಟು ಏರಿಕೆ ದಾಖಲಾಗಿದ್ದರೆ, ಸನ್&zwnj;ಗ್ಲಾಸ್&zwnj;ಗಳ ಮಾರಾಟದಲ್ಲಿ ವಾರ್ಷಿಕವಾಗಿ ಬರೋಬ್ಬರಿ ಶೇ. 650ರಷ್ಟು ವೃದ್ಧಿಯಾಗಿದೆ.&lt;/p&gt;&lt;img&gt;&lt;p&gt;ವರದಿಯಲ್ಲಿ ಉಲ್ಲೇಖಿಸಿರುವ ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ, ಭಾರತೀಯರು ಅತಿ ಹೆಚ್ಚು ಐಸ್&zwnj;ಕ್ರೀಮ್ ಸೇವಿಸುವ ಸಮಯ ರಾತ್ರಿ 9 ಗಂಟೆ! ಸಂಜೆ 6 ರಿಂದ 9 ಗಂಟೆಯ ನಡುವೆ ಐಸ್&zwnj;ಕ್ರೀಮ್ ಮತ್ತು ತಂಪು ಪಾನೀಯಗಳ ಬೇಡಿಕೆ ದುಪ್ಪಟ್ಟಾಗುತ್ತಿದೆ. ವಿಶೇಷವೆಂದರೆ ವಾರಾಂತ್ಯಗಳಲ್ಲಿ ಈ ಬೇಡಿಕೆ ಇನ್ನಷ್ಟು ತಾರಕಕ್ಕೇರುತ್ತದೆ. ಐಸ್&zwnj;ಕ್ರೀಮ್ ಫ್ಲೇವರ್&zwnj;ಗಳ ವಿಚಾರಕ್ಕೆ ಬಂದರೆ, 'ಚಾಕೊಲೇಟ್ ಐಸ್&zwnj;ಕ್ರೀಮ್' ದೇಶದ ಜನರ ಅಚ್ಚುಮೆಚ್ಚಿನ ಆಯ್ಕೆಯಾಗಿದ್ದು, ಒಟ್ಟು ಆರ್ಡರ್&zwnj;ಗಳಲ್ಲಿ ಶೇ. 28ರಷ್ಟು ಪಾಲನ್ನು ಇದು ಹೊಂದಿದೆ. ಜೊತೆಗೆ, ಕುಟುಂಬ ಸಮೇತ ಸವಿಯಲು ಅನುಕೂಲವಾಗುವ 'ಫ್ಯಾಮಿಲಿ-ಸೈಸ್ ಟಬ್' ಐಸ್&zwnj;ಕ್ರೀಮ್&zwnj;ಗಳಿಗೆ ಅತಿ ಹೆಚ್ಚು ಡಿಮ್ಯಾಂಡ್ ಇದೆ.&lt;/p&gt;&lt;img&gt;&lt;p&gt;ಬೇಸಿಗೆಯ ಈ ಉರಿಬಿಸಿಲಿನಲ್ಲಿ ಭಾರತೀಯರು ಕೇವಲ ಐಸ್&zwnj;ಕ್ರೀಮ್&zwnj;ಗೆ ಸೀಮಿತವಾಗಿಲ್ಲ. ಬದಲಾಗಿ, ಆರೋಗ್ಯಕರ ಮತ್ತು ದೇಶಿ ತಂಪು ಪಾನೀಯಗಳತ್ತಲೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಐಸ್&zwnj;ಕ್ರೀಮ್ ಮತ್ತು ಕೋಲ್ಡ್ ಡ್ರಿಂಕ್ಸ್&zwnj;ಗಳಿಗೆ ಸಮಾನವಾಗಿ ಮೊಸರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಗ್ರಾಹಕರು ಅತಿ ಹೆಚ್ಚು ಆರ್ಡರ್ ಮಾಡಿದ ಟಾಪ್ 10 ಉತ್ಪನ್ನಗಳ ಪೈಕಿ 6 ಉತ್ಪನ್ನಗಳು ಮೊಸರು ಆಧಾರಿತವಾಗಿವೆ. ಈ ಸೀಸನ್&zwnj;ನ ಪ್ರಮುಖ ಹಣ್ಣುಗಳಾದ ಕಲ್ಲಂಗಡಿ, ಕರ್ಬೂಜ ಸೇರಿದಂತೆ ತಾಜಾ ಹಣ್ಣುಗಳ ಬಳಕೆಯೂ ಗಣನೀಯವಾಗಿ ಏರಿಕೆಯಾಗಿದೆ.&lt;/p&gt;&lt;img&gt;&lt;p&gt;ಇನ್ನು ಹಣ್ಣುಗಳ ರಾಜ 'ಮಾವು' ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇನ್&zwnj;ಸ್ಟಾಮಾರ್ಟ್&zwnj;ನಲ್ಲಿ 'ಲಾಲ್&zwnj;ಬಾಗ್&zwnj; ಸಿಂಧೂರ ಮಾವು' ಅತಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಬಂಗನಪಲ್ಲಿ ಮತ್ತು ಕಾಯಿ ಮಾವಿನಕಾಯಿ ನಂತರದ ಸ್ಥಾನದಲ್ಲಿವೆ. ಕೇರಳದ ಕೋಳಿಕ್ಕೋಡ್&zwnj;, ತಮಿಳುನಾಡಿನ ಮದುರೈ, ತಿರುಚ್ಚಿ, ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ನೆಲ್ಲೂರು ನಗರಗಳಿಂದ ಮಾವಿಗೆ ಭಾರೀ ಬೇಡಿಕೆ ಬರುತ್ತಿವೆ. ಇದೇ ವೇಳೆ ಜೀರಾ ಮಸಾಲಾ ಸೋಡಾಕ್ಕೂ ಬೇಡಿಕೆ ಹೆಚ್ಚಾಗಿದ್ದು, ತಿಂಗಳಿಂದ ತಿಂಗಳಿಗೆ ಬರೋಬ್ಬರಿ ಶೇ. 900ರಷ್ಟು ಜಿಗಿತ ಕಂಡುಬಂದಿದೆ. ಕೋಲ್ಡ್ ಕಾಫಿ ಆರ್ಡರ್&zwnj;ಗಳಲ್ಲಿ ಶೇ. 700ರಷ್ಟು ಏರಿಕೆಯಾಗಿದ್ದರೆ, ಎಳನೀರು, ಮಜ್ಜಿಗೆ, ಲಸ್ಸಿ ಹಾಗೂ ಮಿಲ್ಕ್&zwnj;ಶೇಕ್&zwnj;ಗಳಿಗೆ ಸಂಜೆ 6 ರಿಂದ 9ರ ನಡುವೆ ಅತಿ ಹೆಚ್ಚು ಬೇಡಿಕೆ ಬರುತ್ತಿದೆ.&lt;/p&gt;&lt;img&gt;&lt;p&gt;ಐಸ್&zwnj;ಕ್ರೀಮ್ ಬಳಕೆಯಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಪುಣೆ ಮುಂಚೂಣಿಯಲ್ಲಿವೆ. ಇನ್ನು ಸೆಂಟ್ರಲ್ ಗೋವಾ, ತ್ರಿಶೂರ್&zwnj;, ತಿರುವಲ್ಲಿ, ನಾಗರ್&zwnj;ಕೋಯಿಲ್ ಮತ್ತು ಮಣಿಪಾಲದಲ್ಲಿ 'ಬಳಕೆದಾರರ ತಲಾ ಆರ್ಡರ್&zwnj;ʼಗಳ ಸಂಖ್ಯೆ ಹೆಚ್ಚಾಗಿದೆ. ಬೇಸಿಗೆಯ ವಸ್ತುಗಳಿಗಾಗಿ ಗ್ರಾಹಕರು ಭಾರಿ ಮೊತ್ತವನ್ನು ವ್ಯಯಿಸುತ್ತಿದ್ದು, ಬೆಂಗಳೂರಿನ ಗ್ರಾಹಕರೊಬ್ಬರು ಕೋಲ್ಡ್ ಕಾಫಿ, ಮಜ್ಜಿಗೆ, ಮಾವು, ಐಸ್&zwnj;ಕ್ರೀಮ್ ಮತ್ತು ಮೊಸರಿಗಾಗಿಯೇ ಬರೋಬ್ಬರಿ 11,000 ರೂ.ಗೂ ಹೆಚ್ಚು ಖರ್ಚು ಮಾಡಿದ್ದಾರೆ!&lt;/p&gt;&lt;img&gt;&lt;p&gt;ಅದೇ ರೀತಿ ಆಂಧ್ರಪ್ರದೇಶದ ಗುಂಟೂರಿನ ಗ್ರಾಹಕರೊಬ್ಬರು ಎನರ್ಜಿ ಡ್ರಿಂಕ್ಸ್ ಮತ್ತು ಮಿನಿ ಫ್ಯಾನ್&zwnj;ಗಳಿಗಾಗಿ 15,005 ಖರ್ಚು ಮಾಡಿದ್ದರೆ, ಸೆಂಟ್ರಲ್ ಗೋವಾದಲ್ಲಿ ಒಬ್ಬರು ಎಳನೀರು, ಕುಲ್ಫಿ, ಮಾವು ಮತ್ತು ತಂಪು ಪಾನೀಯಗಳಿಗಾಗಿ 11,672 ರೂ. ತೆತ್ತಿದ್ದಾರೆ. ಹೈದರಾಬಾದ್&zwnj;ನ ಗ್ರಾಹಕರೊಬ್ಬರಿಂದ ಐಸ್&zwnj;ಕ್ರೀಮ್, ಮಾವು, ತಂಪು ಪಾನೀಯಗಳು ಮತ್ತು ಮಜ್ಜಿಗೆಗಾಗಿ 11,000 ರೂ.ಗೂ ಹೆಚ್ಚಿನ ಮೊತ್ತದ ಆರ್ಡರ್ ಬಂದಿದ್ದರೆ, ಎಳನೀರು, ಮಾವು, ಮೊಸರು ಮತ್ತು ಐಸ್&zwnj;ಕ್ರೀಮ್&zwnj;ಗಾಗಿ ಕೋಲ್ಕತ್ತಾದವರೊಬ್ಬರು ಬರೋಬ್ಬರಿ 10,600 ರೂ.ಗೂ ಹೆಚ್ಚು ಹಣ ಖರ್ಚು ವ್ಯಯಿಸಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/instamart-summer-trends-2026-report-declared-bengaluru-as-india-s-ice-cream-capital-gdp-124o78q"/>
        </item>
        <item>
            <title><![CDATA[ತಮಿಳುನಾಡಿನಲ್ಲಿ ಬೆಳೆದ ಮಲಯಾಳಿ ನಟಿ ಸಮಂತಾ; ಓದಿನ ಜೊತೆಗೆ ಪಾರ್ಟ್‌-ಟೈಮ್ ಮಾಡೆಲಿಂಗ್ ಮಾಡಿದ್ದ ನಟಿ!]]></title>
            <link>https://kannada.asianetnews.com/gallery/cine-world/the-untold-story-of-samantha-ruth-prabus-humble-beginnings-in-her-movie-carrier-6regi4u</link>
            <guid isPermaLink="true">https://kannada.asianetnews.com/gallery/cine-world/the-untold-story-of-samantha-ruth-prabus-humble-beginnings-in-her-movie-carrier-6regi4u</guid>
            <pubDate>Thu, 30 Apr 2026 14:59:11 +0530</pubDate>
            <description><![CDATA[&lt;p&gt;ಮಲಯಾಳಿ ಪೋಷಕರಿಗೆ ಹುಟ್ಟಿ ತಮಿಳುನಾಡಿನಲ್ಲಿ ಬೆಳೆದ ನಟಿ ಸಮಂತಾ; ಓದಿನ ಜೊತೆಗೆ ಪಾರ್ಟ್&zwnj;-ಟೈಮ್ ಮಾಡೆಲಿಂಗ್ ಮಾಡಿದ್ದ ನಟಿ ಸಮಂತಾ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ನಟಿಸಿರುವ ನಟಿ. ತೆಲುಗಿನ ಈಗ ಚಿತ್ರದಲ್ಲಿ ಅವರು ಸಖತ್ ಫೇಮಸ್ ಆದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqetq7wkp20eghgpckbj2tj0,imgname-samantha-ruth-prabhu-1777540505491.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಲಯಾಳಿ ಪೋಷಕರಿಗೆ ಹುಟ್ಟಿ ತಮಿಳುನಾಡಿನಲ್ಲಿ ಬೆಳೆದ ನಟಿ ಸಮಂತಾ; ಓದಿನ ಜೊತೆಗೆ ಪಾರ್ಟ್&zwnj;-ಟೈಮ್ ಮಾಡೆಲಿಂಗ್ ಮಾಡಿದ್ದ ನಟಿ ಸಮಂತಾ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ನಟಿಸಿರುವ ನಟಿ. ತೆಲುಗಿನ ಈಗ ಚಿತ್ರದಲ್ಲಿ ಅವರು ಸಖತ್ ಫೇಮಸ್ ಆದರು.&amp;nbsp;&lt;/p&gt;&lt;img&gt;&lt;p&gt;ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಬಾಲಿವುಡ್&zwnj;ನಲ್ಲೂ ಹೆಸರು ಮಾಡಿರುವ ಸಮಂತಾ ರುತ್ ಪ್ರಭು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ, ಅವರು ಬಂದಿದ್ದು ಮಾತ್ರ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ.&lt;/p&gt;&lt;img&gt;&lt;p&gt;ಸಮಂತಾ ಚೆನ್ನೈ ಮೂಲದವರು. ಮಲಯಾಳಿ ಪೋಷಕರ ಮಗಳಾದ ಇವರು, ಶಿಕ್ಷಣ ಮತ್ತು ಕಠಿಣ ಪರಿಶ್ರಮಕ್ಕೆ ಹೆಚ್ಚು ಬೆಲೆ ಕೊಡುವ ಕುಟುಂಬದಲ್ಲಿ ಬೆಳೆದರು. ಚಿತ್ರರಂಗಕ್ಕೆ ಬರುವ ಮೊದಲು, ಅವರು ತಮ್ಮ ಓದಿನ ಜೊತೆಗೆ ಪಾರ್ಟ್&zwnj;-ಟೈಮ್ ಮಾಡೆಲಿಂಗ್ ಮಾಡುತ್ತಿದ್ದರು.&lt;/p&gt;&lt;img&gt;&lt;p&gt;ಸಿನಿಮಾ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ಅನೇಕ ಸ್ಟಾರ್&zwnj;ಗಳಂತೆ ಸಮಂತಾ ಅಲ್ಲ. ಇವರು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು, ಶೂನ್ಯದಿಂದಲೇ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು. ಅವರ ಆರಂಭಿಕ ದಿನಗಳು ಅದೃಷ್ಟಕ್ಕಿಂತ ಹೆಚ್ಚಾಗಿ ಮಹತ್ವಾಕಾಂಕ್ಷೆಯಿಂದ ತುಂಬಿದ್ದವು.&lt;/p&gt;&lt;img&gt;&lt;p&gt;ಸಮಂತಾರ ಅಡ್ಡಹೆಸರು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಅವರಿಗೆ ಆಪ್ತರಾದವರು ಪ್ರೀತಿಯಿಂದ 'ಯಶೋದಾ' ಎಂದು ಕರೆಯುತ್ತಾರೆ. 2022ರಲ್ಲಿ ತೆರೆಕಂಡ 'ಯಶೋದಾ' ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ ನಂತರ ಈ ಹೆಸರು ಹೆಚ್ಚು ಜನಪ್ರಿಯವಾಯಿತು.&lt;/p&gt;&lt;img&gt;&lt;p&gt;ನಟಿ ಸಮಂತಾ ಮತ್ತು ಅವರ 'ಯಶೋದಾ' ಚಿತ್ರದ ಶೀರ್ಷಿಕೆ ನಡುವಿನ ಈ ಕಾಕತಾಳೀಯ ಸಂಬಂಧ ಅನೇಕ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇದು ಅವರ ವೈಯಕ್ತಿಕ ಜೀವನಕ್ಕೂ, ಸಿನಿಮಾಕ್ಕೂ ಇರುವ ಒಂದು ವಿಶೇಷ ಸಂಪರ್ಕವನ್ನು ತೋರಿಸುತ್ತದೆ.&lt;/p&gt;&lt;img&gt;&lt;p&gt;'ಯೇ ಮಾಯಾ ಚೇಸಾವೆ', 'ಈಗ', 'ಮೆರ್ಸಲ್', 'ಸೂಪರ್ ಡಿಲಕ್ಸ್', 'ಮಜಿಲಿ' ಮುಂತಾದ ಚಿತ್ರಗಳು ಹಾಗೂ 'ದಿ ಫ್ಯಾಮಿಲಿ ಮ್ಯಾನ್ 2' ಮತ್ತು 'ಸಿಟಾಡೆಲ್: ಹನಿ ಬನ್ನಿ'ಯಂತಹ ವೆಬ್ ಸಿರೀಸ್&zwnj;ಗಳ ಮೂಲಕ ಸಮಂತಾ ಇಂದು ಭಾರತದಾದ್ಯಂತ ಮನೆಮಾತಾಗಿದ್ದಾರೆ. ಇಷ್ಟೆಲ್ಲಾ ಯಶಸ್ಸಿನ ನಡುವೆಯೂ ಅವರು ತಮ್ಮ ಸರಳತೆ ಮತ್ತು ಪರಿಶ್ರಮವನ್ನು ಉಳಿಸಿಕೊಂಡಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/the-untold-story-of-samantha-ruth-prabus-humble-beginnings-in-her-movie-carrier-6regi4u"/>
        </item>
        <item>
            <title><![CDATA[ಎಲ್ಲರೂ ಇದ್ದೂ ಯಾರೂ ಇಲ್ಲದ ಸ್ಥಿತಿ, 40 ದಾಟಿದ್ಮೇಲೆ ಪುರುಷರನ್ನು ಕಾಡುತ್ತೆ ಒಂಟಿತನ]]></title>
            <link>https://kannada.asianetnews.com/relationship/42-year-old-techie-has-55-lakh-salary-dream-home-and-family-but-this-painful-truth-is-breaking-the-internet/articleshow-dqdx6qk</link>
            <guid isPermaLink="true">https://kannada.asianetnews.com/relationship/42-year-old-techie-has-55-lakh-salary-dream-home-and-family-but-this-painful-truth-is-breaking-the-internet/articleshow-dqdx6qk</guid>
            <pubDate>Thu, 30 Apr 2026 13:33:59 +0530</pubDate>
            <description><![CDATA[&lt;p&gt;ನಾವು ಮಕ್ಕಳಿದ್ದಾಗ ನಮಗೆ ಓದು ಮುಖ್ಯ. ಎಜ್ಯುಕೇಷನ್ ಮುಗಿತಾ ಇದ್ದಂಗೆ ಕೆಲ್ಸದ ಒತ್ತಡ ಶುರುವಾಗುತ್ತೆ. ಒಂದು ವಯಸ್ಸಿಗೆ ಕೈತುಂಬಾ ಸಂಬಳ, ಮದುವೆ, ಮಕ್ಕಳಾದ್ರೆ ಆತನನ್ನು ಪರ್ಫೆಕ್ಟ್ ಮ್ಯಾನ್ ಅಂತ ಈ ಸಮಾಜ ಗುರುತಿಸುತ್ತೆ. ಆದ್ರೆ ಆ ಪರ್ಫೆಕ್ಟ್ ವ್ಯಕ್ತಿಯಾಗಲು ಹೋಗಿ ಆತ ಏನೆಲ್ಲ ನೋವು ತಿಂತಾನೆ ಅನ್ನೋದು ಯಾರಿಗೂ ಗೊತ್ತಾಗೋದಿಲ್ಲ. ಈಗ ಎಕ್ಸ್ ನಲ್ಲಿ ಒಂದು ಪೋಸ್ಟ್ ವೈರಲ್ ಆಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqepmvwkc2418g1hkqygcfxq,imgname-perfect-man-1777536233363.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ತಪ್ಪೊಪ್ಪಿಗೆಗಳು ಮತ್ತು ವಾಸ್ತವಗಳು ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಸ್ಟೋರಿ ಒಬ್ಬ ಪರ್ಫೆಕ್ಟ್ ವ್ಯಕ್ತಿಯಾಗಲು ಓಡುವ ಪುರುಷನ ಭಾವನೆಗಳನ್ನು ತೆರೆದಿಡ್ತಿದೆ. ಮಧ್ಯವಯಸ್ಸಿನಲ್ಲಿ ಪುರುಷ ಏನೆಲ್ಲ ಸಮಸ್ಯೆ ಎದುರಿಸಬಲ್ಲ ಎಂಬುದನ್ನು ಇದು ಸ್ಪಷ್ಟಡಿಸಿದೆ.&lt;/p&gt;&lt;h2&gt;ಆಫೀಸ್ ನಲ್ಲಿ ಬಾಸ್ &ndash; ಮನೆಯಲ್ಲಿ ಡ್ಯಾಡಿ, ಎಲ್ಲ ಇದ್ದೂ ಪರ್ಫೆಕ್ಟ್ ಮ್ಯಾನ್ ಒಂಟಿ&lt;/h2&gt;&lt;p&gt;42 ವರ್ಷದ ವ್ಯಕ್ತಿ ಬಳಿ ಏನೆಲ್ಲ ಇದೆ, ಏನೆಲ್ಲ ಇಲ್ಲ ಎಂಬುದನ್ನು ಅವರು ವಿವರಿಸಿದ್ದಾರೆ. ಪೋಸ್ಟ್ ಪ್ರಕಾರ ಚೆನ್ನೈನಲ್ಲಿ ಐಟಿ ವಲಯದಲ್ಲಿ ಹಿರಿಯ ಹುದ್ದೆಯಲ್ಲಿ ಅವರು ಕೆಲ್ಸ ಮಾಡ್ತಿದ್ದಾರೆ. ಅವರ ಹೆಂಡತಿ ಅವರಿಗೆ ಸಪೋರ್ಟ್ ಮಾಡ್ತಿದ್ದಾರೆ. ಇಬ್ಬರು ಮುದ್ದಾದ ಮಕ್ಕಳಿದ್ದಾರೆ. 55 ಲಕ್ಷ ಸಂಬಳ ಬರ್ತಿದೆ. ಎಲ್ಲರೂ ಅವರನ್ನು ಪರ್ಫೆಕ್ಟ್ ಜೀವನ ನಡೆಸುತ್ತಿರುವ ವ್ಯಕ್ತಿ ಅಂತ ಭಾವಿಸ್ತಾರೆ. ಸಮಾಜದ ಅನೇಕ ಪುರುಷರಿಗೆ ಇವರು ಮಾದರಿ ವ್ಯಕ್ತಿಯಂತೆ ಕಾಣ್ತಿದ್ದಾರೆ. ಸಮಾಜ ಬಯಸುವ ಎಲ್ಲವನ್ನೂ ಈ ವ್ಯಕ್ತಿ ಪಡೆದಿದ್ದಾರೆ. ಆದ್ರೆ ಒಳಗೊಳಗೆ ನೋವು ತಿನ್ನುತ್ತಿದ್ದಾರೆ.&lt;/p&gt;&lt;p&gt;ಮೇಲ್ಜಾತಿ ಅಥವಾ 80 ಲಕ್ಷದ ವೇತನ: ವರನಿಗಿರಬೇಕಾದ ಅರ್ಹತೆ ಬಗ್ಗೆ IPS ಅಧಿಕಾರಿ ಪುತ್ರಿಯ ಬೇಡಿಕೆ ಬಗ್ಗೆ ಭಾರಿ ಚರ್ಚೆ&lt;/p&gt;&lt;p&gt;ಅವರ 20ನೇ ವಯಸ್ಸು ಭಿನ್ನವಾಗಿತ್ತು, ಸಮಯ ಕಳೆಯಲು ಸ್ನೇಹಿತರಿದ್ರು. ಮರೀನಾ ಬೀಚ್ನಿಂದ ಬಸಂತ್ ನಗರ ಬೀಚ್ಗೆ ಒಟ್ಟಿಗೆ ಓಡಾಡ್ತಿದ್ದರು. ರೋಹಿಣಿ, ಉದಯಂ ಮತ್ತು ಕಾಶಿ ಚಿತ್ರಮಂದಿರಗಳಲ್ಲಿ ಒಟ್ಟಿಗೆ ಸಿನಿಮಾ ನೋಡುತ್ತಿದ್ದರು. RX100 ಕಾರಿನಲ್ಲಿ ಮೌಂಟ್ ರಸ್ತೆಯಲ್ಲಿ ಓಡಾಡ್ತಿದ್ದರು. 30 ವರ್ಷದಲ್ಲಿ ಜೀವನ ಭಿನ್ನವಾಗಿತ್ತು. ಕೆಲ್ಸದ ಬಿಡುವಿನಲ್ಲಿ ಸ್ನೇಹಿತರು, ಸಹೋದ್ಯೋಗಿಗಳ ಜೊತೆ ಮಾತನಾಡ್ತಿದ್ದರು. ಆದ್ರೆ ಈಗ 42 ವರ್ಷ ಸಂಪೂರ್ಣ ಭಿನ್ನವಾಗಿದೆ ಜೀವನ ಎನ್ನುತ್ತಾರೆ ಅವರು.&lt;/p&gt;&lt;h3&gt;40 ರ ದಿನ ಹೀಗಿದೆ&lt;/h3&gt;&lt;p&gt;ಈಗ ಫೋನ್ನಲ್ಲಿ ವೈಯಕ್ತಿಕ ಕರೆ ಬರೋದೇ ಅಪರೂಪ. ಒಂದು ಆಫೀಸ್ ನಿಂದ ಇಲ್ಲ ಬ್ಯಾಂಕ್ ಗಳಿಂದ. ಅಪರೂಪಕ್ಕೆ ಹೆಂಡ್ತಿ ಫೋನ್ ಮಾಡಿ ಹಾಲು ತರುವಂತೆ ಹೇಳ್ತಾರೆ. ಈ ಒಂಟಿತನ ವಿಚಿತ್ರವಾಗಿದೆ. ನಾನು ದೈಹಿಕವಾಗಿ ಒಂಟಿಯಲ್ಲ, ಯಂತ್ರವಾಗಿದ್ದೇನೆ ಅಂತ ಅವರು ಬರೆದಿದ್ದಾರೆ. ಆಫೀಸ್ ನಲ್ಲಿ ಎಲ್ಲರೂ ಅವರನ್ನು ಬಾಸ್ ರೀತಿ ನೋಡ್ತಾರೆ. ಎಲ್ಲ ಸಮಸ್ಯೆಗೆ ಇವರ ಬಳಿ ಉತ್ತರ ಇದೆ ಅಂದ್ಕೊಂಡಿದ್ದಾರೆ. ಹೊಸ ಟೆಕ್ನಾಲಜಿ ಜೊತೆ ಹೋರಾಟ ಕಷ್ಟವಾಗ್ತಿದ್ರೂ ಹೇಳಿಕೊಳ್ಳುವಂತಿಲ್ಲ. ಸುಸ್ತಾಗಿದೆ ಅಂತ ಟೀಂಗೆ ಹೇಳೋಹಾಗೂ ಇಲ್ಲ. ಭವಿಷ್ಯದ ಬಗ್ಗೆ ಚಿಂತೆ ಇದ್ರೂ ಎಲ್ಲರ ಮುಂದೆ ಆತ್ಮವಿಶ್ವಾಸ ತೋರಿಸ್ಬೇಕು. ಇನ್ನು ಮನೆಗೆ ಬಂದ್ರೆ ಅಪ್ಪನ ಸ್ಥಾನ ತುಂಬಬೇಕು. ಮನೆಯಲ್ಲಿ ಮಕ್ಕಳು ಪ್ರೀತಿ ತೋರಿಸ್ತಾರೆ ಆದ್ರೆ ಅವರ ಸ್ಕೂಲ್ ಶುಲ್ಕ ತುಂಬೋದು, ವೈ ಫೈ ರಿಪೇರಿ ಇಂಥ ಕೆಲ್ಸ ಮಾಡ್ಬೇಕು. ಮಕ್ಕಳು ಟಿನೇಜರ್ ಆಗಿರೋದ್ರಿಂದ ಅವರ ರೂಮಿನಲ್ಲಿ ಬ್ಯುಸಿ. ಹೆಂಡ್ತಿ ಮಕ್ಕಳನ್ನು ನೋಡಿಕೊಳ್ಳೋದ್ರಲ್ಲಿ ಬ್ಯುಸಿ. ನಾನು ಕುಟುಂಬಕ್ಕೆ ಸೌಕರ್ಯ ಒದಗಿಸುವ ವ್ಯಕ್ತಿ.&lt;/p&gt;&lt;p&gt;&amp;nbsp;ನಾನು ಪ್ರೆಗ್ನೆಂಟ್ ಆದಾಗಲೇ ನನಗೆ ಲವ್ ಇರೋದು ಗೊತ್ತಾಗಿದ್ದು! ನೇಹಾ ಧೂಪಿಯಾ ವಿಚಿತ್ರ ಲವ್ ಸ್ಟೋರಿ ಹೇಗಿತ್ತು?!&lt;/p&gt;&lt;p&gt;ಈಗ ಸ್ನೇಹಿತರಿಲ್ಲ. ಅಪರೂಪಕ್ಕೆ ಸಿಗುವ ಅವರ ಮಾತು, ಮಕ್ಕಳು, ಕೆಲ್ಸದ ಮೇಲಿರುತ್ತೆ. ಮದುವೆ, ಬರ್ತ್ ಡೇ ಗೆ ವಾಟ್ಸ್ ಅಪ್ ನಲ್ಲಿ ವಿಶ್ ಮಾಡಲಷ್ಟೇ ಸ್ನೇಹ ಸೀಮಿತವಾಗಿದೆ. ಆಪೀಸ್ ನಿಂದ ಮನೆಗೆ ಬರುವಾಗ ನಿಧಾನವಾಗಿ ಕಾರು ಓಡಿಸೋ ನಾನು ನನಗಾಗಿ ಸಮಯ ತೆಗೆದಿಡ್ತಿದ್ದೇನೆ. ನನ್ನಿಷ್ಟದ ಹಾಡು ಕೇಳ್ತಾ ಅಪ್ಪನಾಗ್ದೆ, ಬಾಸ್ ಆಗ್ದೆ ನಾನು ನಾನಾಗಿರ್ತೇನೆ. ಈ ವಿಷ್ಯವನ್ನು ಮನೆಯಲ್ಲಿ ಹೇಳಿದ್ರೆ ಅವರು ಅಚ್ಚರಿಗೊಳ್ತಾರೆ. ನಾವೆಲ್ಲ ಇದ್ದೇವಲ್ಲ ಎನ್ನುತ್ತಾರೆ. ಎಲ್ಲರೂ ಇದ್ದು ನಿರ್ಜನ ದ್ವೀಪದಲ್ಲಿ ನಾನಿದ್ದೇನೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳೋದಿಲ್ಲ. ಕುಟುಂಬಕ್ಕೆ ಹಣ, ಭದ್ರತೆ ಒದಗಿಸಿದ್ರೆ ನೀನು ಪರ್ಫೆಕ್ಟ್ ಎನ್ನುವ ಸಮಾಜ, ಈ ಜೀವನದಲ್ಲಿ ಬರುವ ಮೌನ ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿಲ್ಲ ಅಂತ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/relationship/42-year-old-techie-has-55-lakh-salary-dream-home-and-family-but-this-painful-truth-is-breaking-the-internet/articleshow-dqdx6qk"/>
        </item>
        <item>
            <title><![CDATA[ಇವು ಜಗತ್ತಿನ 5 ಅತ್ಯಂತ ಅಪಾಯಕಾರಿ ಹಾವುಗಳು; ಕಚ್ಚಿದರೆ ಸಾವು ಕಟ್ಟಿಟ್ಟ ಬುತ್ತಿ!]]></title>
            <link>https://kannada.asianetnews.com/gallery/life/top-5-most-venomous-snakes-on-earth-all-you-need-to-know-kvn-xss0ha7</link>
            <guid isPermaLink="true">https://kannada.asianetnews.com/gallery/life/top-5-most-venomous-snakes-on-earth-all-you-need-to-know-kvn-xss0ha7</guid>
            <pubDate>Thu, 30 Apr 2026 14:31:38 +0530</pubDate>
            <description><![CDATA[ಕೆಲವು ಹಾವುಗಳು ನೋಡೋಕೆ ಸಾಮಾನ್ಯ ಅನಿಸಿದ್ರೂ, ಅವುಗಳ ವಿಷ ಮಾತ್ರ ಸಖತ್ ಡೇಂಜರ್. ಒಂದೇ ಒಂದು ಕಡಿತ ಮನುಷ್ಯನ ಪ್ರಾಣವನ್ನೇ ತೆಗೆಯಬಲ್ಲದು. ಅಂತಹ 5 ಭಯಾನಕ ಹಾವುಗಳ ಬಗ್ಗೆ ಇಲ್ಲಿ ತಿಳಿಯೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01kar7he293frn5hy7khmfa8wp,imgname-snake9-1763897292871.jpg" type="image/jpeg" height="390" width="690"/>
            <content:encoded><![CDATA[ಕೆಲವು ಹಾವುಗಳು ನೋಡೋಕೆ ಸಾಮಾನ್ಯ ಅನಿಸಿದ್ರೂ, ಅವುಗಳ ವಿಷ ಮಾತ್ರ ಸಖತ್ ಡೇಂಜರ್. ಒಂದೇ ಒಂದು ಕಡಿತ ಮನುಷ್ಯನ ಪ್ರಾಣವನ್ನೇ ತೆಗೆಯಬಲ್ಲದು. ಅಂತಹ 5 ಭಯಾನಕ ಹಾವುಗಳ ಬಗ್ಗೆ ಇಲ್ಲಿ ತಿಳಿಯೋಣ.&lt;img&gt;ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಇನ್&zwnj;ಲ್ಯಾಂಡ್ ತೈಪಾನ್. ಇದನ್ನು 'ಫಿಯರ್ಸ್ ಸ್ನೇಕ್' ಅಂತಾನೂ ಕರೆಯುತ್ತಾರೆ. ಇದು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಇದರ ವಿಷ ಎಷ್ಟು ಶಕ್ತಿಯುತ ಅಂದ್ರೆ, ಒಂದೇ ಕಡಿತಕ್ಕೆ ನೂರಾರು ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ಆದರೆ ಆಶ್ಚರ್ಯದ ವಿಷಯವೆಂದರೆ, ಇದು ಮನುಷ್ಯರ ಮೇಲೆ ದಾಳಿ ಮಾಡುವುದು ತೀರಾ ಅಪರೂಪ.&lt;img&gt;ಕಿಂಗ್ ಕೋಬ್ರಾ ವಿಶ್ವದಲ್ಲೇ ಅತಿ ಉದ್ದದ ವಿಷಪೂರಿತ ಹಾವು. ಇದು ಮುಖ್ಯವಾಗಿ ಭಾರತ ಮತ್ತು ದಕ್ಷಿಣ ಏಷ್ಯಾದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕಿಂಗ್ ಕೋಬ್ರಾದ ವಿಷವು ನ್ಯೂರೋಟಾಕ್ಸಿಕ್ ಆಗಿ ಕೆಲಸ ಮಾಡುತ್ತದೆ. ಅಂದರೆ, ಇದು ನರಮಂಡಲದ ಮೇಲೆ ಪರಿಣಾಮ ಬೀರಿ ಉಸಿರಾಟವನ್ನು ನಿಲ್ಲಿಸಬಲ್ಲದು. ತನ್ನ ಗೂಡು ಮತ್ತು ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಇದು ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತದೆ.&lt;img&gt;ಬ್ಲ್ಯಾಕ್ ಮಾಂಬಾ ಮತ್ತೊಂದು ಅಪಾಯಕಾರಿ ಹಾವು. ಇದು ಆಫ್ರಿಕಾದಲ್ಲಿ ಕಂಡುಬರುತ್ತದೆ. ಅತ್ಯಂತ ವೇಗವಾಗಿ ಚಲಿಸುವ ಹಾವುಗಳಲ್ಲಿ ಬ್ಲ್ಯಾಕ್ ಮಾಂಬಾ ಕೂಡ ಒಂದು. ಇದರ ವಿಷವು ಬಹಳ ಬೇಗನೆ ಪರಿಣಾಮ ಬೀರುತ್ತದೆ. ಚಿಕಿತ್ಸೆ ಸಿಗದಿದ್ದರೆ ಕೆಲವೇ ಗಂಟೆಗಳಲ್ಲಿ ಪ್ರಾಣ ಹೋಗುವ ಅಪಾಯವಿರುತ್ತದೆ. ಬ್ಲ್ಯಾಕ್ ಮಾಂಬಾ ದಾಳಿ ಮಾಡಿದಾಗ, ಒಂದರ ಹಿಂದೆ ಒಂದರಂತೆ ಹಲವು ಬಾರಿ ಕಚ್ಚಬಲ್ಲದು. ಅದಕ್ಕಾಗಿಯೇ ಇದನ್ನು ಅತ್ಯಂತ ಅಪಾಯಕಾರಿ ಹಾವು ಎಂದು ಹೇಳುತ್ತಾರೆ.&lt;img&gt;ಈ ಹಾವು ನೋಡಲು ಚಿಕ್ಕದಾಗಿದ್ದರೂ, ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಗರಗಸ ಮಂಡಲ (Saw-scaled Viper) ಭಾರತ ಸೇರಿದಂತೆ ಏಷ್ಯಾ ಮತ್ತು ಆಫ್ರಿಕಾದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದರ ವಿಷವು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಹಾವು ಕಡಿತದ ಸಾವುಗಳಿಗೆ ಇದೇ ಹಾವು ಕಾರಣ ಎಂದು ಸಂಶೋಧನೆಗಳು ಹೇಳುತ್ತವೆ. ಇದು ಬಹಳ ಬೇಗನೆ ಪ್ರತಿಕ್ರಿಯಿಸುವ ಹಾವು, ಸಣ್ಣ ಶಬ್ದಕ್ಕೂ ದಾಳಿ ಮಾಡುವ ಸ್ವಭಾವ ಹೊಂದಿದೆ.&lt;img&gt;ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಅತ್ಯಂತ ವಿಷಕಾರಿ ಹಾವುಗಳಲ್ಲಿ ರಕ್ತಮಂಡಲ (Russell's Viper) ಕೂಡ ಒಂದು. ಇದರ ಕಡಿತವು ತೀವ್ರವಾದ ನೋವು, ಊತ ಮತ್ತು ಆಂತರಿಕ ರಕ್ತಸ್ರಾವವನ್ನು ಉಂಟುಮಾಡುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದಿದ್ದರೆ ಇದು ಮಾರಣಾಂತಿಕವಾಗಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುವವರಿಗೆ ಈ ಹಾವಿನ ಕಡಿತದ ಅಪಾಯ ಹೆಚ್ಚಾಗಿರುತ್ತದೆ.]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/life/top-5-most-venomous-snakes-on-earth-all-you-need-to-know-kvn-xss0ha7"/>
        </item>
        <item>
            <title><![CDATA[ಮುಖದ ಜೊತೆ ಕೈಗಳೂ ಶೈನ್‌ ಆಗಬೇಕಾ? ಟ್ರೈ ಮಾಡಿ ಈ 6 ಮಿರರ್‌ ಬಳೆ ಡಿಸೈನ್]]></title>
            <link>https://kannada.asianetnews.com/webstories/fashion/latest-mirror-bangle-designs-for-a-traditional-look-must-try-once-kvn-6s6mn08</link>
            <guid isPermaLink="true">https://kannada.asianetnews.com/webstories/fashion/latest-mirror-bangle-designs-for-a-traditional-look-must-try-once-kvn-6s6mn08</guid>
            <pubDate>Thu, 30 Apr 2026 14:00:41 +0530</pubDate>
            <description><![CDATA[&lt;p&gt;ಕೈಗಳ ಅಂದ ಹೆಚ್ಚಿಸಲು ಮಲ್ಟಿಕಲರ್ ಮಿರರ್ ಬಳೆ, ಬಾಟಲ್ ಬ್ಯಾಂಗಲ್ಸ್ ಮತ್ತು ಮಿರರ್ ಬ್ಯಾಂಗಲ್ಸ್ ಬೆಸ್ಟ್ ಆಯ್ಕೆ. ಮುತ್ತು, ದಾರ ಹಾಗೂ ಮೆಟಲ್ ವರ್ಕ್ ಇರುವ ಫ್ಯಾನ್ಸಿ ಮಿರರ್ ಬಳೆಗಳು ನಿಮ್ಮ ಟ್ರೆಡಿಷನಲ್ ಲುಕ್&zwnj;ಗೆ ಹೊಸ ಮೆರುಗು ನೀಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqegztyb2pbnq5teeqxdve5s,imgname-sheeshe-ka-kada-design-z-1777530301387.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/latest-mirror-bangle-designs-for-a-traditional-look-must-try-once-kvn-6s6mn08"/>
        </item>
        <item>
            <title><![CDATA[ಪ್ರತಿದಿನ ತುಳಸಿ ಗಿಡದ ಒಂದು ಎಲೆ ಜಗಿದರೆ ಸಾಕು, ಈ ಎಲ್ಲ ಉಪಯೋಗಗಳು ನಿಮಗೆ ಸಿಗಲಿವೆ!]]></title>
            <link>https://kannada.asianetnews.com/health-life/chewing-a-single-tulsi-leaf-daily-in-morning-ensures-your-blood-sugar-levels-remain-stable-all-day-long/articleshow-p3d42av</link>
            <guid isPermaLink="true">https://kannada.asianetnews.com/health-life/chewing-a-single-tulsi-leaf-daily-in-morning-ensures-your-blood-sugar-levels-remain-stable-all-day-long/articleshow-p3d42av</guid>
            <pubDate>Thu, 30 Apr 2026 13:51:53 +0530</pubDate>
            <description><![CDATA[&lt;p&gt;ಯಾವುದೇ ತಯಾರಿ ಮಾಡಲು ಸಮಯವಿಲ್ಲದಿದ್ದರೆ, ಪ್ರತಿದಿನ ಬೆಳಿಗ್ಗೆ ಹಸಿ ತುಳಸಿ ಎಲೆಯನ್ನು ಚೆನ್ನಾಗಿ ಜಗಿದು ಅದರ ರಸವನ್ನು ನುಂಗಿ. ಒಂದು ಅಧ್ಯಯನದ ಪ್ರಕಾರ, ನಿಯಮಿತವಾಗಿ ತುಳಸಿ ಎಲೆಯನ್ನು ಸೇವಿಸುವವರಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ. ಆದರೆ, ಉಪಯೋಗಿಸುವ ಮೊದಲು ಈ ಸ್ಟೋರಿಯನ್ನು ಪೂರ್ತಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqeq5dyqddqnncyqg198pqkq,imgname-tulsi-plant-1777536776151.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಿಮ್ಮ ಬ್ಲಡ್ ಶುಗರ್ ಕಂಟ್ರೋಲ್&zwnj;ನಲ್ಲಿಡಲು 'ತುಳಸಿ' ರಾಮಬಾಣ: ಮಧುಮೇಹಿಗಳಿಗೆ ಇಲ್ಲಿದೆ ನೈಸರ್ಗಿಕ ಸಂಜೀವಿನಿ!&lt;/strong&gt;&lt;/p&gt;&lt;p&gt;ಇಂದಿನ ಧಾವಂತದ ಜೀವನದಲ್ಲಿ ಆರೋಗ್ಯ ಎಂಬುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಭಾರತವು ಇಂದು 'ವಿಶ್ವದ ಮಧುಮೇಹದ ರಾಜಧಾನಿ' ಎಂಬ ಹಣೆಪಟ್ಟಿಯನ್ನು ಪಡೆಯುತ್ತಿದೆ. ಅಂಕಿಅಂಶಗಳ ಪ್ರಕಾರ, ಸುಮಾರು 101 ಮಿಲಿಯನ್ ಭಾರತೀಯರು ಮಧುಮೇಹದಿಂದ ಬಳಲುತ್ತಿದ್ದಾರೆ. ಕಳಪೆ ಆಹಾರ ಪದ್ಧತಿ, ಮಾನಸಿಕ ಒತ್ತಡ, ಕುಳಿತಲ್ಲೇ ಕೆಲಸ ಮಾಡುವ ಜೀವನಶೈಲಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ (Blood Sugar) ಏರುಪೇರಾಗುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಬರೀ ಔಷಧಿಗಳನ್ನೇ ಅವಲಂಬಿಸುವ ಬದಲು, ನಮ್ಮ ಅಂಗಳದಲ್ಲಿರುವ 'ತುಳಸಿ' ಎಂಬ ನೈಸರ್ಗಿಕ ಔಷಧಿಯನ್ನು ಬಳಸಿಕೊಂಡು ಸಕ್ಕರೆ ಮಟ್ಟವನ್ನು ಹೇಗೆ ನಿಯಂತ್ರಿಸಬಹುದು ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;p&gt;ಮೂಲಿಕೆಗಳ ರಾಣಿ 'ತುಳಸಿ'ಯ ಶಕ್ತಿ&lt;/p&gt;&lt;p&gt;ಶತಮಾನಗಳಿಂದಲೂ ಭಾರತೀಯ ಆಯುರ್ವೇದದಲ್ಲಿ ತುಳಸಿಯನ್ನು (Tulsi) 'ಔಷಧಿಗಳ ರಾಣಿ' ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಉರಿಯೂತ ವಿರೋಧಿ (Anti-inflammatory) ಗುಣಗಳು ಮತ್ತು ಆ್ಯಂಟಿ-ಆಕ್ಸಿಡೆಂಟ್&zwnj;ಗಳು ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಮೇದೋಜ್ಜೀರಕ ಗ್ರಂಥಿಯ (Pancreas) ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಇದು ಇನ್ಸುಲಿನ್ ಉತ್ಪಾದನೆಯನ್ನು ಸುಗಮಗೊಳಿಸಿ ರಕ್ತದಲ್ಲಿನ ಸಕ್ಕರೆಯನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.&lt;/p&gt;&lt;p&gt;ಮಧುಮೇಹ ನಿಯಂತ್ರಣಕ್ಕೆ ತುಳಸಿ ಬಳಸುವ 3 ಸುಲಭ ವಿಧಾನಗಳು:&lt;/p&gt;&lt;h2&gt;ತುಳಸಿ ಚಹಾ ಅಥವಾ ಕಷಾಯ:&lt;/h2&gt;&lt;p&gt;ನಿಮ್ಮ ದಿನವನ್ನು ಒಂದು ಕಪ್ ತುಳಸಿ ಚಹಾದೊಂದಿಗೆ ಆರಂಭಿಸಿ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ 5-6 ತುಳಸಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ನೀರು ಕುದಿಯಲು ಆರಂಭಿಸಿದ ನಂತರ ಉರಿಯನ್ನು ಆರಿಸಿ, ಪಾತ್ರೆಯನ್ನು ಮುಚ್ಚಿ 2-3 ನಿಮಿಷ ಬಿಡಿ. ನಂತರ ಈ ಕಷಾಯವನ್ನು ಸೋಸಿಕೊಂಡು ಕುಡಿಯಿರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.&lt;/p&gt;&lt;p&gt;ರಾತ್ರಿ ನೆನೆಸಿದ ತುಳಸಿ ನೀರು:&lt;/p&gt;&lt;p&gt;ಇದು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದು. ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿನಲ್ಲಿ 4-5 ತುಳಸಿ ಎಲೆಗಳನ್ನು ಹಾಕಿಡಿ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತೆಗೆದು ಆ ನೀರನ್ನು ಕುಡಿಯಿರಿ. ಈ ನೀರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದಲ್ಲದೆ (Detox), ದಿನವಿಡೀ ಸಕ್ಕರೆ ಮಟ್ಟ ಏರದಂತೆ ತಡೆಯುತ್ತದೆ.&lt;/p&gt;&lt;p&gt;ನೇರವಾಗಿ ಎಲೆಗಳನ್ನು ಜಗಿಯುವುದು:&lt;/p&gt;&lt;p&gt;ಯಾವುದೇ ತಯಾರಿ ಮಾಡಲು ಸಮಯವಿಲ್ಲದಿದ್ದರೆ, ಪ್ರತಿದಿನ ಬೆಳಿಗ್ಗೆ ಹಸಿ ತುಳಸಿ ಎಲೆಯನ್ನು ಚೆನ್ನಾಗಿ ಜಗಿದು ಅದರ ರಸವನ್ನು ನುಂಗಿ. ಒಂದು ಅಧ್ಯಯನದ ಪ್ರಕಾರ, ನಿಯಮಿತವಾಗಿ ತುಳಸಿ ಎಲೆಯನ್ನು ಸೇವಿಸುವವರಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ.&lt;/p&gt;&lt;h3&gt;ಜೀವನಶೈಲಿಯಲ್ಲಿ ಬದಲಾವಣೆ ಅಗತ್ಯ:&lt;/h3&gt;&lt;p&gt;ಕೇವಲ ತುಳಸಿ ಸೇವನೆಯಿಂದ ಮಾತ್ರ ಮಧುಮೇಹ ನಿಯಂತ್ರಣ ಸಾಧ್ಯವಿಲ್ಲ. ಇದರೊಂದಿಗೆ ಸಮತೋಲಿತ ಆಹಾರ, ದಿನಕ್ಕೆ ಕನಿಷ್ಠ 30 ನಿಮಿಷಗಳ ನಡಿಗೆ ಮತ್ತು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಸಂಸ್ಕರಿಸಿದ ಸಕ್ಕರೆ ಮತ್ತು ಜಂಕ್ ಫುಡ್&zwnj;ಗಳಿಂದ ದೂರವಿದ್ದರೆ ತುಳಸಿಯ ಪ್ರಭಾವ ಇನ್ನೂ ಹೆಚ್ಚಾಗಿರುತ್ತದೆ.&lt;/p&gt;&lt;p&gt;ವಿಶೇಷ ಸೂಚನೆ:&lt;/p&gt;&lt;p&gt;ಪೂಜ್ಯ ಓದುಗರೇ, ತುಳಸಿ ಒಂದು ಅದ್ಭುತ ಮನೆಮದ್ದಾಗಿದ್ದರೂ, ಇದು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ. ನೀವು ಈಗಾಗಲೇ ಮಧುಮೇಹಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅಥವಾ ಇನ್ಸುಲಿನ್ ಪಡೆಯುತ್ತಿದ್ದರೆ, ನಿಮ್ಮ ಆಹಾರದಲ್ಲಿ ತುಳಸಿಯನ್ನು ಸೇರಿಸುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ಪಡೆಯಿರಿ. ಏಕೆಂದರೆ ತುಳಸಿ ಸಕ್ಕರೆ ಮಟ್ಟವನ್ನು ವೇಗವಾಗಿ ಕಡಿಮೆ ಮಾಡುವ ಗುಣ ಹೊಂದಿರುವುದರಿಂದ, ಅದು ನಿಮ್ಮ ಸಕ್ಕರೆ ಮಟ್ಟವನ್ನು ತುಂಬಾ ಕೆಳಕ್ಕೆ (Hypoglycemia) ಕೊಂಡೊಯ್ಯುವ ಸಾಧ್ಯತೆಯೂ ಇರುತ್ತದೆ. ನಿಮ್ಮ ವೈದ್ಯರ ಮಾರ್ಗದರ್ಶನದೊಂದಿಗೆ ನೈಸರ್ಗಿಕ ಹಾದಿಯನ್ನು ಅಳವಡಿಸಿಕೊಳ್ಳಿ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/chewing-a-single-tulsi-leaf-daily-in-morning-ensures-your-blood-sugar-levels-remain-stable-all-day-long/articleshow-p3d42av"/>
        </item>
        <item>
            <title><![CDATA[ರಿಯಲ್‌ ಆಗಿ ಮದುವೆಗೆ ರೆಡಿಯಾದ Amruthadhaare Serial ದಿಯಾ; ಹಳ್ಳಿ ಸ್ಟೈಲ್‌ನಲ್ಲಿ ಭರ್ಜರಿ ಫೋಟೋಶೂಟ್!]]></title>
            <link>https://kannada.asianetnews.com/tv-talk/amruthadhaare-kannada-serial-diya-real-name-shwetha-gowda-pre-wedding-photoshoot/articleshow-726o3f2</link>
            <guid isPermaLink="true">https://kannada.asianetnews.com/tv-talk/amruthadhaare-kannada-serial-diya-real-name-shwetha-gowda-pre-wedding-photoshoot/articleshow-726o3f2</guid>
            <pubDate>Thu, 30 Apr 2026 11:55:54 +0530</pubDate>
            <description><![CDATA[&lt;p&gt;Amruthadhaare Kannada Serial Shwetha Gowda: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ದಿಯಾ ಮನೆ ಬಿಟ್ಟು ಹೋಗಿದ್ದಾಳೆ, ಜಯದೇವ್&zwnj;ಗೆ ಚಂಬು ಕೊಟ್ಟಿದ್ದಾಳೆ. ಆದರೆ ರಿಯಲ್&zwnj; ಲೈಫ್&zwnj;ನಲ್ಲಿ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಮದುವೆ ಆಗುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqegnasw78t7d5j0x3rzszsh,imgname-new-project---2026-04-30t114731.541-1777529957180.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Kannada Serial ) ದಿಯಾ ಪಾತ್ರದಲ್ಲಿ ಶ್ವೇತಾ ಗೌಡ ಅವರು ( Shwetha Gowda ) ನಟಿಸುತ್ತಿದ್ದಾರೆ. ಸದ್ಯ ಅವರು ಧಾರಾವಾಹಿಯಲ್ಲಿ ವಿದೇಶಕ್ಕೆ ಹಾರಿದ್ದಾರೆ, ರಿಯಲ್&zwnj; ಲೈಫ್&zwnj;ನಲ್ಲಿ ಮದುವೆ ಆಗುತ್ತಿದ್ದಾರೆ. ಹೌದು, ಸೋಶಿಯಲ್&zwnj; ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಗುಡ್&zwnj;ನ್ಯೂಸ್&zwnj; ನೀಡಿದ್ದಾರೆ.&lt;/p&gt;&lt;h2&gt;ಮಲ್ಲಿ ಜೀವನ ಹಾಳು ಮಾಡಿದಳು&lt;/h2&gt;&lt;p&gt;ಶ್ವೇತಾ ಗೌಡ ಅವರು ಈ ಧಾರಾವಾಹಿಯಲ್ಲಿ ನೆಗೆಟಿವ್&zwnj; ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮದುವೆ ಆಗಿರುವ ಜಯದೇವ್&zwnj; ದಿವಾನ್&zwnj;ನನ್ನು ಪ್ರೀತಿಸಿದಂತೆ ನಾಟಕ ಮಾಡಿ, ಯಾರು ಎಷ್ಟೇ ಹೇಳಿದರೂ ಕೂಡ ಕೇಳದೆ, ಅವನನ್ನೇ ಮದುವೆ ಆಗುತ್ತಾಳೆ. ಇದರಿಂದ ಜಯದೇವ್&zwnj; ಮೊದಲ ಪತ್ನಿ ಮಲ್ಲಿ ಜೀವನ ಹಾಳಾಯಿತು. ಆರಂಭದಲ್ಲಿ ಜಯದೇವ್&zwnj; ತನ್ನ ಲವ್&zwnj;, ಜೀವನ ಎಂದು ಹೇಳಿ, ಆಮೇಲೆ ಅವನಿಗೆ ಬತ್ತಿ ಇಟ್ಟಳು.&lt;/p&gt;&lt;p&gt;&lt;img&gt;&lt;/p&gt;&lt;h2&gt;ಮನೆಯಿಂದ ಓಡಿ ಹೋದ ದಿಯಾ&lt;/h2&gt;&lt;p&gt;ಹೌದು, ಜಯದೇವ್&zwnj; ಈಗ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ, ಅವನು ಒಂದಿಷ್ಟು ಹಣ, ಬಂಗಾರವನ್ನು ಇಟ್ಟುಕೊಂಡಿದ್ದು, ಅದನ್ನು ಬಳಸಿ ಅವನು ವಿದೇಶಕ್ಕೆ ಹೋಗಿ ಸೆಟಲ್&zwnj; ಆಗಬೇಕು ಎಂದುಕೊಂಡಿದ್ದನು. ಆದರೆ ದಿಯಾ ಅವನಿಗೆ ಸಿಕ್ಕಾಪಟ್ಟೆ ಮದ್ಯ ಕುಡಿಸಿ, ಅವನಿಗೆ ನಶೆಯಲ್ಲಿ ತೇಲಾಡುವಂತೆ ಮಾಡಿ, ಮನೆಯಲ್ಲಿದ್ದ ಹಣ, ಬಂಗಾರ ಎಲ್ಲವನ್ನು ತಗೊಂಡು ಮನೆ ಬಿಟ್ಟು ಹೋಗಿದ್ದಾಳೆ. ಅವಳೀಗ ವಿದೇಶದಲ್ಲಿದ್ದಾಳೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಮದುವೆ ಆಗಲು ರೆಡಿ&lt;/h2&gt;&lt;p&gt;ದಿಯಾ ಪಾತ್ರಧಾರಿ ಈಗ ಸೀರಿಯಲ್&zwnj;ಗೆ ಬರ್ತಾರಾ? ಇಲ್ಲವಾ ಎನ್ನುವ ಸಂದೇಹ ಶುರು ಆಗಿದೆ. ಹೌದು, ದಿಯಾ ವಿದೇಶಕ್ಕೆ ಹೋದಳು ಎಂದು ತೋರಿಸಲಾಗಿದೆ. ಇನ್ನೊಂದು ಕಡೆ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಎಂಗೇಜ್&zwnj; ಆಗಿದ್ದಾರೆ, ಮದುವೆ ಆಗಲು ರೆಡಿ ಆಗಿದ್ದಾರೆ. ಪ್ರಿ ವೆಡ್ಡಿಂಗ್&zwnj; ಫೋಟೋಶೂಟ್&zwnj; ಕೂಡ ಮಾಡಿಸಿಕೊಂಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಯಾವಾಗ ಮದುವೆ ಆಗಲಿದೆ?&lt;/h2&gt;&lt;p&gt;ಮೇ 14ರಂದು ಇವರು ಮದುವೆ ಆಗಲಿದ್ದಾರೆ. ಯದುವೀರ್&zwnj; ಸುನೀಲ್&zwnj; ಚಂದ್ರ ಜೊತೆ ಇವರು ಎಂಗೇಜ್&zwnj; ಆಗಿದ್ದಾರೆ ಎನ್ನಲಾಗಿದೆ. ಇದು ಅರೇಂಜ್?&zwnj; ಲವ್&zwnj; ಎಂಬ ಬಗ್ಗೆ ಮಾಹಿತಿ ಇಲ್ಲ. ಅಂದಹಾಗೆ ಯದುವೀರ್&zwnj; ಯಾರು? ವೃತ್ತಿ ಏನು ಎನ್ನೋದು ಕೂಡ ರಿವೀಲ್&zwnj; ಆಗಿಲ್ಲ. ಈ ಬಗ್ಗೆ ಶ್ವೇತಾ ಅವರೇ ಮಾಹಿತಿ ಕೊಡಬೇಕಿದೆ. ಇನ್ನೊಂದು ಕಡೆ ಮದುವೆ ಬಳಿಕ ಅವರು ನಟಿಸ್ತಾರಾ? ಇಲ್ಲವಾ ಎಂದು ಕೂಡ ಮಾಹಿತಿ ಇಲ್ಲ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/tv-talk/amruthadhaare-kannada-serial-diya-real-name-shwetha-gowda-pre-wedding-photoshoot/articleshow-726o3f2"/>
        </item>
        <item>
            <title><![CDATA[ಅಮ್ಮನಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್, 6 ಬನಾರಸಿ ಸೀರೆ ಡಿಸೈನ್‌ಗಳನ್ನು ನೋಡಿ!]]></title>
            <link>https://kannada.asianetnews.com/webstories/fashion/top-6-beautiful-banarasi-saree-designs-for-mothers-day-gift-kvn-8wrrsoy</link>
            <guid isPermaLink="true">https://kannada.asianetnews.com/webstories/fashion/top-6-beautiful-banarasi-saree-designs-for-mothers-day-gift-kvn-8wrrsoy</guid>
            <pubDate>Thu, 30 Apr 2026 13:40:28 +0530</pubDate>
            <description><![CDATA[&lt;p&gt;ತಾಯಂದಿರ ದಿನಕ್ಕೆ ಅಮ್ಮನಿಗೆ ಬನಾರಸಿ ಸೀರೆ ಗಿಫ್ಟ್ ಕೊಡುವುದು ಒಂದು ಉತ್ತಮ ಆಯ್ಕೆ. ಈ ಸೀರೆಗಳ ಜೊತೆ ಮಹಿಳೆಯರಿಗೆ ಒಂದು ಭಾವನಾತ್ಮಕ ಸಂಬಂಧ ಇರುತ್ತದೆ. ಹಾಗಾದ್ರೆ ಈ ಬಾರಿ ತಾಯಂದಿರ ದಿನಕ್ಕೆ ಅಮ್ಮನಿಗೆ ಬನಾರಸಿ ಸೀರೆಯನ್ನೇ ಯಾಕೆ ಉಡುಗೊರೆಯಾಗಿ ನೀಡಬಾರದು? ಕೆಲವು ಆಯ್ಕೆಗಳನ್ನು ಇಲ್ಲಿ ನೀಡಿದ್ದೇವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqdzmntt3jjkmng6yn3y7t0q,imgname-banarasi-sarees-2-1777512109914.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/top-6-beautiful-banarasi-saree-designs-for-mothers-day-gift-kvn-8wrrsoy"/>
        </item>
        <item>
            <title><![CDATA[ಮದ್ವೆ ಮನೆಯ ಡಿಜೆ ಅಬ್ಬರಕ್ಕೆ 140 ಕೋಳಿ ಸಾವು! ಪೋಸ್ಟ್​ ಮಾರ್ಟಮ್​ ವರದಿಯಲ್ಲಿ ಆಘಾತಕಾರಿ ವಿಷ್ಯ ರಿವೀಲ್​]]></title>
            <link>https://kannada.asianetnews.com/india-news/wedding-dj-noise-blamed-for-death-of-140-chickens-in-up-case-filed-suc/articleshow-8ucmxkm</link>
            <guid isPermaLink="true">https://kannada.asianetnews.com/india-news/wedding-dj-noise-blamed-for-death-of-140-chickens-in-up-case-filed-suc/articleshow-8ucmxkm</guid>
            <pubDate>Thu, 30 Apr 2026 13:22:07 +0530</pubDate>
            <description><![CDATA[ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದ ಮದುವೆ ಮೆರವಣಿಗೆಯೊಂದರ ಡಿಜೆ ಅಬ್ಬರಕ್ಕೆ ಕೋಳಿ ಸಾಕಣೆ ಕೇಂದ್ರವೊಂದರ 140 ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಕೋಳಿ ಫಾರಂ ಮಾಲೀಕರು ಡಿಜೆ ಆಪರೇಟರ್ ವಿರುದ್ಧ ದೂರು ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯು ಸಾವಿಗೆ ಜೋರಾದ ಶಬ್ದವೇ ಕಾರಣ ಎಂದು ದೃಢಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqenyvs8xeas0sw9q42dcnvy,imgname-chickens-death-1777535512360.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ಅಥವಾ ಹಬ್ಬದ ದಿನಗಳನ್ನು ಡಿಜೆ ಅಬ್ಬರ ಹೇಳುವುದೇ ಬೇಡ. ಎಲ್ಲವೂ ಲಿಮಿಟ್​ನಲ್ಲಿ ಇದ್ದರೆ ಚೆಂದ. ಡಿಜೆಯ ಸಂಗೀತವನ್ನು ಸವಿಯುವ, ಅದಕ್ಕೆ ನರ್ತಿಸುವ ದೊಡ್ಡ ವರ್ಗವೇ ಇದೆ. ಆದರೆ ಕೆಲವರು ಡಿಜೆ ಹೆಸರಿನಲ್ಲಿ ಕರ್ಕಶವಾಗಿ ನಡುಸುವುದೋ ಅಥವಾ ವಾದ್ಯದ ಸೌಂಡ್​ ಸಿಕ್ಕಾಪಟ್ಟೆ ಇಟ್ಟು ಸುತ್ತಲಿನ ಜನರಿಗೆ ಹಿಂಸೆ ಕೊಡುವುದೂ ನಡೆದೇ ಇರುತ್ತದೆ. ಇದರಿಂದಾಗಿ ಸಮೀಪ ಇರುವ ವೃದ್ಧರು, ರೋಗಿಗಳು, ಮಕ್ಕಳ ಸ್ಥಿತಿ ಮಾತ್ರ ಆ ದೇವರಿಗೇ ಪ್ರೀತಿ ಎಂದು ಕೆಲವೊಮ್ಮೆ ಅನ್ನಿಸುವುದು ಇದೆ. ಆದರೆ ಇಂಥ ಡಿಜೆ ಅಬ್ಬರ ಕೇವಲ ಮನುಷ್ಯರ ಜೀವಕ್ಕೆ ಕುತ್ತು ತರುವುದು ಮಾತ್ರವಲ್ಲದೇ, ಇದೀಗ ಕೋಳಿಗಳ ಪ್ರಾಣಕ್ಕೂ ಕುತ್ತು ತಂದಿರುವ ಘಟನೆಯೊಂದು ನಡೆದಿದೆ.&lt;/p&gt;&lt;h2&gt;&lt;strong&gt;ಕೋಳಿಗಳ ಸಾವು&lt;/strong&gt;&lt;/h2&gt;&lt;p&gt;ಉತ್ತರ ಪ್ರದೇಶದ ಸುಲ್ತಾನಪುರಲ್ಲಿ ಈ ಘಟನೆ ನಡೆದಿದೆ. ಮದುವೆ ಮೆರವಣಿಗೆಯಲ್ಲಿ ನುಡಿಸಲಾದ ಜೋರಾದ ಡಿಜೆ ಸಂಗೀತವು ಹತ್ತಿರದ ಕೋಳಿ ಸಾಕಣೆ ಕೇಂದ್ರದಲ್ಲಿ ವ್ಯಾಪಕ ಭೀತಿಯನ್ನು ಉಂಟುಮಾಡಿತು, ಇದರ ಪರಿಣಾಮವಾಗಿ 140 ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ. ಮರಣೋತ್ತರ ವರದಿಯ ನಂತರ, ಪೊಲೀಸರು ಡಿಜೆ ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಏಪ್ರಿಲ್ 25 ರಂದು ಕುಡ್ವಾರ್ ಪ್ರದೇಶದ ಪೂರ್ವ ರಾಮ್ ಭದ್ರ ಪೂರ್ವದಿಂದ ಮದುವೆ ಮೆರವಣಿಗೆ ಬಂದ ಸುಲ್ತಾನಪುರದ ದರಿಯಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮದುವೆ ಮೆರವಣಿಗೆಯಲ್ಲಿ ಹಾಜರಿದ್ದ ಡಿಜೆ ಆಪರೇಟರ್ ಕವಿ ಯಾದವ್ ಅವರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಂಗೀತ ನುಡಿಸಿದರು, ಸುತ್ತಮುತ್ತಲಿನ ಪ್ರದೇಶವನ್ನು ಶಬ್ದ ಮತ್ತು ಕಂಪನಗಳಿಂದ ತುಂಬಿಸಿದರು ಎಂದು ಆರೋಪಿಸಲಾಗಿದೆ.&lt;/p&gt;&lt;h3&gt;&lt;strong&gt;ಮರಣೋತ್ತರ ಪರೀಕ್ಷೆಯಲ್ಲಿ ದೃಢ&lt;/strong&gt;&lt;/h3&gt;&lt;p&gt;ಮದುವೆ ಮೆರವಣಿಗೆಯ ಡಿಜೆ ಸಂಗೀತ ಕೋಳಿ ಸಾಕಣೆ ಕೇಂದ್ರದ ಬಳಿ ಹಾದುಹೋದಾಗ, ಜೋರಾದ ಶಬ್ದ ಮತ್ತು ಕಂಪನಗಳು ಅಲ್ಲಿದ್ದ ಕೋಳಿಗಳನ್ನು ಹೆದರಿಸಿದವು. ಕೋಳಿ ಸಾಕಣೆ ಕೇಂದ್ರದ ಮಾಲೀಕ ಸಬೀರ್ ಅಲಿ ಅವರ ಪ್ರಕಾರ, ಹಠಾತ್ ಭಯವು ಕೋಳಿಗಳನ್ನು ಭಯಭೀತರನ್ನಾಗಿ ಮಾಡಿತು ಮತ್ತು 140 ಕೋಳಿಗಳು ನಿಮಿಷಗಳಲ್ಲಿ ಸಾವನ್ನಪ್ಪಿದವು. ಈ ವಿಷಯವನ್ನು ತನಿಖೆ ಮಾಡಿದ ನಂತರ, ಮುಖ್ಯ ಪಶುವೈದ್ಯ ಅಧಿಕಾರಿ (ಸಿವಿಒ) ಪ್ರಮೋದ್ ಶರ್ಮಾ ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ ಎಂದು ದೃಢಪಡಿಸಿದರು. ವರದಿಯು ಜೋರಾದ ಶಬ್ದ ಮತ್ತು ಒತ್ತಡದ ವಾತಾವರಣವು ಇದಕ್ಕೆ ಕಾರಣವಾಗಿರಬಹುದು ಎಂದು ಸೂಚಿಸಿದೆ.&lt;/p&gt;&lt;h3&gt;&lt;strong&gt;ಪೊಲೀಸರಿಗೆ ದೂರು&lt;/strong&gt;&lt;/h3&gt;&lt;p&gt;ಘಟನೆಯ ನಂತರ, ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಕುಡ್ವಾರ್ ನಿವಾಸಿ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜೋರಾದ ಶಬ್ದದ ಮಟ್ಟವು ಸಾವಿಗೆ ಪ್ರಾಥಮಿಕ ಕಾರಣವೇ ಅಥವಾ ಇತರ ಅಂಶಗಳು ಒಳಗೊಂಡಿವೆಯೇ ಎಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/wedding-dj-noise-blamed-for-death-of-140-chickens-in-up-case-filed-suc/articleshow-8ucmxkm"/>
        </item>
        <item>
            <title><![CDATA[Goa Trip Package: ಈ ವಿಷ್ಯಗಳೆಲ್ಲ ಗೊತ್ತಿದ್ರೆ, ತುಂಬ ಕಡಿಮೆ ದುಡ್ಡಿನಲ್ಲಿ ಗೋವಾ ಪ್ರವಾಸ ಮಾಡಬಹುದು!]]></title>
            <link>https://kannada.asianetnews.com/travel/goa-trip-food-vehicle-hotel-room-package-for-family-price-from-bengaluru-karnataka/articleshow-7pvglfx</link>
            <guid isPermaLink="true">https://kannada.asianetnews.com/travel/goa-trip-food-vehicle-hotel-room-package-for-family-price-from-bengaluru-karnataka/articleshow-7pvglfx</guid>
            <pubDate>Thu, 30 Apr 2026 12:45:19 +0530</pubDate>
            <description><![CDATA[&lt;p&gt;Goa trip places: ಅನೇಕರಿಗೆ ಪ್ರವಾಸ ಹೋಗೋದು ಅಂದ್ರೆ ತುಂಬ ಇಷ್ಟ. ಇನ್ನೂ ಕೆಲವರಿಗೆ ಗೋವಾ ಪ್ರವಾಸಕ್ಕೆ ಹೋಗಲು ತುಂಬ ಹಣ ಬೇಕಾಗುವುದು ಎಂಬ ಆಲೋಚನೆ ಇರಬಹುದು, ಅಷ್ಟೆಲ್ಲ ಖರ್ಚು ಆಗೋದಿಲ್ಲ. ಹಾಗಾದರೆ ಏನೇನು ಟಿಪ್ಸ್&zwnj; ಪಾಲಿಸಬೇಕು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqekmpqc0k0dqxckdyjjpswx,imgname-new-project---2026-04-30t124027.378-1777533082348.jpg" type="image/jpeg" height="390" width="690"/>
            <content:encoded><![CDATA[&lt;p&gt;ಅನೇಕರು ಗೋವಾ ( Goa trip places ) ಹೋಗಬೇಕು ಎಂದುಕೊಳ್ತಾರೆ. ಅನೇಕರಿಗೆ ಪ್ರವಾಸ ಮಾಡಬೇಕು ಎನ್ನೋದು ಸುಂದರ ಕನಸು ಆಗಿರುತ್ತದೆ. ಒಂದು ಕಡೆ ಬೀಚ್&zwnj;, ಇನ್ನೊಂದು ಕಡೆ ರೆಸ್ಟೋರೆಂಟ್&zwnj;, ಮತ್ತೊಂದು ಕಡೆ ಮದ್ಯ. ಒಟ್ಟಿನಲ್ಲಿ ಮೋಜು-ಮಸ್ತಿಗೆ ಗೋವಾ ಮಾತ್ರ ಹೆಸರುವಾಸಿ. ಹಾಗಾದರೆ ಗೋವಾ ಪ್ರವಾಸಕ್ಕೆ ಮಿನಿಮಮ್&zwnj; ಎಷ್ಟು ಹಣ ಖರ್ಚು ಆಗುವುದು?&lt;/p&gt;&lt;h2&gt;ಗೋವಾ ಪ್ರವಾಸದ ಅಂದಾಜು ವೆಚ್ಚ (Budget)&lt;/h2&gt;&lt;p&gt;3 ರಿಂದ 4 ದಿನಗಳ ಪ್ರವಾಸಕ್ಕೆ ಎಷ್ಟು ಖರ್ಚು ಆಗುವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಆದರೆ ನೀವು ಯಾವ ಲೆವೆಲ್&zwnj;ಗೆ ಸೌಲಭ್ಯ ಬಯಸ್ತೀರಿ ಎನ್ನೋದರ ಮೇಲೆ ಡಿಪೆಂಡ್&zwnj; ಆಗುವುದು.&lt;/p&gt;&lt;h2&gt;ಒಬ್ಬರಿಗೆ ಅಂದಾಜು ವೆಚ್ಚ&lt;/h2&gt;&lt;p&gt;ಪ್ರಯಾಣ (ಬಸ್/ಟ್ರೈನ್) ₹1,500 - ₹3,000&lt;/p&gt;&lt;p&gt;ಹೋಟೆಲ್/ಹೋಮ್ ಸ್ಟೇ ₹2,000 - ₹5,000&lt;/p&gt;&lt;p&gt;ಊಟ ತಿಂಡಿ ₹2,500 - ₹5,000&lt;/p&gt;&lt;p&gt;ವಾಹನ ಬಾಡಿಗೆ (ಸ್ಕೂಟರ್/ಕಾರ್) ₹1,500 - ₹2,500&lt;/p&gt;&lt;p&gt;ಒಟ್ಟು ಅಂದಾಜು ₹7,500 - ₹15,000&lt;/p&gt;&lt;p&gt;ಕಡಿಮೆ ಖರ್ಚಿನಲ್ಲಿ ಪ್ರವಾಸ ಮುಗಿಸಬೇಕು ಎಂಬ ಯೋಚನೆಯಿದ್ದ ಜೂನ್&zwnj;ನಿಂದ ಸೆಪ್ಟೆಂಬರ್ ಒಳಗಡೆ ಹೋಗಿ ಬನ್ನಿ, ಸೀಸನ್&zwnj; ಟೈಮ್&zwnj;ನಲ್ಲಿ ಎಲ್ಲ ಖರ್ಚು ಜಾಸ್ತಿ ಆಗಿರುತ್ತದೆ.&lt;/p&gt;&lt;h2&gt;ನೋಡಲೇಬೇಕಾದ ಪ್ರಮುಖ ಸ್ಥಳಗಳು&lt;/h2&gt;&lt;p&gt;ಕಲಂಗುಟ್ ಮತ್ತು ಬಾಗಾ ಬೀಚ್-ಇಲ್ಲಿ ವಾಟರ್ ಸ್ಪೋರ್ಟ್ಸ್, ನೈಟ್ ಲೈಫ್ ತುಂಬ ಫೇಮಸ್ ಆಗಿದೆ.&lt;/p&gt;&lt;p&gt;ಅಂಜುನಾ ಬೀಚ್- ಇಲ್ಲಿನ ಬುಧವಾರದ ಸಂತೆ (Flea Market) ಪ್ರಸಿದ್ಧ.&lt;/p&gt;&lt;p&gt;ಅಗುಡಾ ಕೋಟೆ (Aguada Fort)-ಸಮುದ್ರದ ಸುಂದರ ನೋಟವನ್ನು ನೋಡಬಹುದು&lt;/p&gt;&lt;p&gt;ಚಪೋರಾ ಕೋಟೆ-ಇದನ್ನು 'ದಿಲ್ ಚಾಹ್ತಾ ಹೈ' ಕೋಟೆ ಎಂದೂ ಕರೆಯುತ್ತಾರೆ.&lt;/p&gt;&lt;p&gt;ಪಾಲೋಲೆಮ್ ಬೀಚ್- ತುಂಬಾ ಶಾಂತವಾಗಿರುವ ಜಾಗ ಇದಾಗಿದೆ.&lt;/p&gt;&lt;p&gt;ಕೋಲ್ವಾ ಬೀಚ್- ಬಿಳಿ ಮರಳಿನ ಸುಂದರ ತೀರವಾಗಿದೆ&lt;/p&gt;&lt;p&gt;ದೂದ್ ಸಾಗರ್ ಜಲಪಾತ-ಹಾಲಿನಂತೆ ಕಾಣುವ ಜಲಪಾತವನ್ನು ನೋಡಲು ಟ್ರೆಕ್ಕಿಂಗ್ ಅಥವಾ ಜೀಪ್ ಸಫಾರಿ ಮಾಡಬೇಕು.&lt;/p&gt;&lt;h2&gt;ಐತಿಹಾಸಿಕ ಸ್ಥಳಗಳು&lt;/h2&gt;&lt;p&gt;ಬೆಸಿಲಿಕಾ ಆಫ್ ಬಾಮ್ ಜೀಸಸ್- ಇದು ಯುನೆಸ್ಕೋ ಮಾನ್ಯತೆ ಪಡೆದ ಪುರಾತನ ಚರ್ಚ್.&lt;/p&gt;&lt;p&gt;ಮಂಗೇಶಿ ದೇವಸ್ಥಾನ-ಗೋವಾದ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದು.&lt;/p&gt;&lt;h2&gt;ಈ ಟಿಪ್ಸ್&zwnj; ಫಾಲೋ ಮಾಡಿ&lt;/h2&gt;&lt;p&gt;ವಾಹನ ಬಾಡಿಗೆ&lt;/p&gt;&lt;p&gt;ಗೋವಾದಲ್ಲಿ ಓಡಾಡಲು ಸ್ಕೂಟರ್ ಬಾಡಿಗೆಗೆ ಪಡೆಯುವುದು ಅತ್ಯಂತ ಲಾಭದಾಯಕ. ದಿನಕ್ಕೆ ₹400 ರಿಂದ ₹600 ರವರೆಗೆ ಬಾಡಿಗೆ ಇರುತ್ತದೆ.&lt;/p&gt;&lt;p&gt;ಗೋವಾ ಬಿಸಿಲು ಹೆಚ್ಚಿರುವುದರಿಂದ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ, ಹಗುರವಾದ ಕಾಟನ್ ಬಟ್ಟೆ ಹಾಕಿಕೊಳ್ಳಿ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/travel/goa-trip-food-vehicle-hotel-room-package-for-family-price-from-bengaluru-karnataka/articleshow-7pvglfx"/>
        </item>
        <item>
            <title><![CDATA[ಮೇಲ್ಜಾತಿ ಅಥವಾ 80 ಲಕ್ಷದ ವೇತನ: ವರನಿಗಿರಬೇಕಾದ ಅರ್ಹತೆ ಬಗ್ಗೆ IPS ಅಧಿಕಾರಿ ಪುತ್ರಿಯ ಬೇಡಿಕೆ ಬಗ್ಗೆ ಭಾರಿ ಚರ್ಚೆ]]></title>
            <link>https://kannada.asianetnews.com/relationship/different-shades-of-indian-marriage-brides-demands-about-groom-caste-and-money/articleshow-0zb8ptf</link>
            <guid isPermaLink="true">https://kannada.asianetnews.com/relationship/different-shades-of-indian-marriage-brides-demands-about-groom-caste-and-money/articleshow-0zb8ptf</guid>
            <pubDate>Thu, 30 Apr 2026 13:00:59 +0530</pubDate>
            <description><![CDATA[&lt;p&gt;ವಿವಾಹವಾಗುವ ವರನಿಗೆ ಅಥವಾ ವಧುವಿಗೆ ತಾನು ಮದುವೆಯಾಗುವ ಹುಡುಗಿ ಅಥವಾ ಹುಡುಗ ಹೀಗೆಯೇ ಇರಬೇಕೆಂಬ ಹಲವು ಬೇಡಿಕೆಗಳಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿ ತಾನು ವಿವಾಹವಾಗಬೇಕಾದ ಗಂಡು ಹೀಗೆಯೇ ಇರಬೇಕು ಎಂದು ನೀಡಿದ ಮಾನದಂಡಗಳು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqemmxfyzmny0261mm9zfjme,imgname-brides-demand-1777534137854.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮೇಲ್ವರ್ಗದ ವರ ಅಥವಾ ಕೋಟಿ ಹತ್ತಿರದ ಆದಾಯ&lt;/strong&gt;&lt;/h2&gt;&lt;p&gt;ವಿವಾಹ ವೇದಿಕೆಯೊಂದರ ಸಿಇಒ ಆಗಿರುವ ಒಂಡ್ರಿಲಾ ಕಪೂರ್ ಅವರು ಇತ್ತೀಚೆಗಷ್ಟೇ ಮದುವೆಯಾಗುವುದಕ್ಕೆ ವಿಚ್ಚೇದಿತ ವ್ಯಕ್ತಿಯೊಬ್ಬ ಟ್ಟ ವಿಭಿನ್ನ ಬೇಡಿಕೆಯ ಬಗ್ಗೆ ಹೇಳಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು. ಅವರು ಮಾಡಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಅವರು ಯುವತಿಯೊಬ್ಬಳ ವಿಚಿತ್ರ ಬೇಡಿಕೆ ಬಗ್ಗೆ ಹೇಳಿಕೊಂಡಿದ್ದು, ಈ ವಿಚಾರವೂ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ವಿವಾಹವಾಗುವ ವರನಿಗೆ ಅಥವಾ ವಧುವಿಗೆ ತಾನು ಮದುವೆಯಾಗುವ ಹುಡುಗಿ ಅಥವಾ ಹುಡುಗ ಹೀಗೆಯೇ ಇರಬೇಕೆಂಬ ಹಲವು ಬೇಡಿಕೆಗಳಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿ ತಾನು ವಿವಾಹವಾಗಬೇಕಾದ ಗಂಡು ಹೀಗೆಯೇ ಇರಬೇಕು ಎಂದು ನೀಡಿದ ಮಾನದಂಡಗಳು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿವಾಹ ವೇದಿಕೆಯ ಸಿಇಒ ಆದ ಒಂಡ್ರಿಲಾ ಅವರೇ ಈ ವಿಚಿತ್ರ ಬೇಡಿಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲ ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಹಾಗಿದ್ದರೆ ವರನ ಬಗ್ಗೆ ಆಕೆಗಿದ್ದ ಬೇಡಿಕೆ ಏನು?&lt;/strong&gt;&lt;/p&gt;&lt;p&gt;ಆಕೆಯನ್ನು ಮದುವೆಯಾಗುವ ವರ ಮೇಲ್ವರ್ಗದ ಜಾತಿಯವನಾಗಿರಬೇಕು ಅಥವಾ ಆತನಿಗೆ 80 ಲಕ್ಷ ರೂಪಾಯಿ ಆದಾಯ ಇರಬೇಕು ಎಂಬುದು ಆಕೆಯ ಬೇಡಿಕೆ ಆಗಿತ್ತು. ಆಕೆ ತನ್ನ ಜಾತಿಯ ಹೊರಗೆ ಮದುವೆಯಾಗಲು ಸಿದ್ಧಳಿದ್ದಾಳೆ ಆದರೆ ಅದು ಯಾವಾಗ ಎಂದರೆ ವರ ಉನ್ನತ ಜಾತಿಯವನಾಗಿದ್ದಾಗ ಅಥವಾ ಆತ 80 ಲಕ್ಷ ವೇತನ ಗಳಿಸುತ್ತಿದ್ದರೆ ಮಾತ್ರ.&lt;/p&gt;&lt;p&gt;ಡೇಟ್ ಕ್ರೀವ್ ಎಂಬ ವಿವಾಹ ವೇದಿಕೆಯನ್ನು ನಡೆಸುತ್ತಿರುವ ಒಂಡ್ರಿಲಾ ಕಪೂರ್ ಅವರು ಈ ವಿಚಾರವನ್ನು ತಮ್ಮ ಲಿಂಕ್ಡಿನ್&zwnj;ನಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಹೀಗೆ ವಿಚಿತ್ರ ಬೇಡಿಕೆ ಇಟ್ಟ ವಧು ಐಪಿಎಸ್ ಅಧಿಕಾರಿ ತಂದೆ ಹಾಗೂ ಶಿಕ್ಷಕಿಯೊಬ್ಬರ ಪುತ್ರಿಯಾಗಿದ್ದಳು. ಆಕೆಯ ಕೌಟುಂಬಿಕ ಹಿನ್ನೆಲೆ ಶೈಕ್ಷಣಿಕವಾಗಿ ತುಂಬಾ ಚೆನ್ನಾಗಿಯೇ ಇತ್ತು. ಆದರೆ ಇಷ್ಟೊಂದು ಮುಂದುವರೆದಿದ್ದರೂ ವರನ ಬಗ್ಗೆ ಅವರಿಟ್ಟ ಬೇಡಿಕೆಗಳು ತುಂಬಾ ಬಾಲಿಶವೆನಿಸಿವೆ ಎಂಬುದು ಅನೇಕರ ಅಭಿಪ್ರಾಯವಾಗಿದೆ. ಆಕೆ ತಾನು ಮೇಲ್ವರ್ಗದ ಜಾತಿಗಳಾದ ಬ್ರಾಹ್ಮಣ ಹಾಗೂ ರಾಜಪೂತ್ ಸಮುದಾಯದ ವರರನ್ನು ಮಾತ್ರ ಮದುವೆಯಾಗುವುದಕ್ಕೆ ಸಿದ್ಧಳಿದ್ದೇನೆ ಎಂದು ಹೇಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದರ ಹೊರತಾಗಿ ವರನಿಗೆ 80 ಲಕ್ಷ ವೇತನವಿದ್ದರೂ ಆಕೆ ಮದುವೆಗೆ ಸಿದ್ಧಳಿದ್ದಳು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅತ್ಯಂತ ವೇಗದ ಪ್ರಾಣಿ ಚೀತಾ ಜೀವಿತಾವಧಿಯ ಶೇಕಡಾ 90ರಷ್ಟು ಕಾಲ ವಿಶ್ರಾಂತಿಯಲ್ಲೇ ಕಳೆಯೋದೇಕೆ?&lt;/strong&gt;&lt;/p&gt;&lt;p&gt;32 ವರ್ಷದ ತಮ್ಮದೇ ಫ್ಯಾಷನ್ ಕಂಪನಿ ನಡೆಸುತ್ತಿರುವ ಮಹಿಳೆ ಈ ರೀತಿ ಹೇಳಿದ್ದಾಳೆ ಎಂದು ಒಂಡ್ರಿಲಾ ಹೇಳಿದ್ದಾರೆ. ಪೇಪರ್&zwnj;ನಲ್ಲಿ ನೋಡುವುದಕ್ಕೆ ಆಕೆ ಸುಶಿಕ್ಷಿತ ಕುಟುಂಬದಿಂದ ಬಂದಿದ್ದಾಳೆ. ತಂದೆ ಐಪಿಎಸ್ ತಾಯಿ ಟೀಚರ್, ಆದರೂ ಆಕೆ ರೀತಿಯ ಕಂಡೀಷನ್&zwnj;ಗಳನ್ನು ನಮ್ಮ ಮುಂದಿಟ್ಟಿದ್ದಾಳೆ. ಬ್ರಾಹ್ಮಿನ್, ರಾಜಪೂತ್ ಹಾಗೂ ಕೇವಲ ಉನ್ನತಮಟ್ಟದ ಜಾತಿಗಳನ್ನಷ್ಟೇ ಆಕೆ ಮದುವೆ ಆಗುವುದಕ್ಕೆ ಬಯಸಿದ್ದಾಳೆ ಎಂದು ಒಂಡ್ರಿಲಾ ಹೇಳಿಕೊಂಡಿದ್ದಾಳೆ.&lt;/p&gt;&lt;p&gt;ಜಾತಿ ಅಥವಾ ಹಣ ಯಾವುದಾದರೂ ಒಂದು ಪ್ರಬಲವಾಗಿರಬೇಕು ಎಂಬುದು ಆಕೆಯ ಅಭಿಪ್ರಾಯವಾಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಆಕೆಯ ಬೇಡಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಮದುವೆ ಕೇವಲ ಹಣದ ವರ್ಗಾವಣೆಯಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಇದು ಭಾರತದಲ್ಲಿ ಅರೆಂಜ್ ಮದುವೆಗಳಲ್ಲಿ ಹೀಗೆಯೇ ಇರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಪ್ರೀತಿಗಾಗಿ ಮದುವೆ ಆಗುವುದು ಪಶ್ಚಿಮದ ಸಂಪ್ರದಾಯ. ಆದರೆ ಭಾರತದಲ್ಲಿ ಇದು ವಿಭಿನ್ನ, ಇದು ಎರಡು ಕುಟುಂಬಗಳ ನಡುವಿನ ಆರ್ಥಿಕ, ಸಾಮಾಜಿಕ ಸ್ಥಾನಮಾನದ ಮೇಲೆ ನಿಂತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ ಕೆಲವರು ಈ ವಿವಾಹ ವೇದಿಕೆಯ ಒಂಡ್ರಿಲಾ ಅವರನ್ನೇ ಬೈದಾಡಿದ್ದು, ತಮ್ಮ ಸೈಟ್ ಬಗ್ಗೆ ಪ್ರಮೋಟ್ ಮಾಡುವುದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಜೈಲಿನಲ್ಲಿ ಕೈದಿ ಸಾವು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೇರ್ ಟೇಕರ್ ಮಹಿಳೆಯಿಂದ ಹನಿಟ್ರ್ಯಾಪ್ ಆರೋಪ!&lt;/strong&gt;&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Anusha Kb</dc:creator>
            <atom:link href="https://kannada.asianetnews.com/relationship/different-shades-of-indian-marriage-brides-demands-about-groom-caste-and-money/articleshow-0zb8ptf"/>
        </item>
        <item>
            <title><![CDATA[ನಾನು ಪ್ರೆಗ್ನೆಂಟ್ ಆದಾಗಲೇ ನನಗೆ ಲವ್ ಇರೋದು ಗೊತ್ತಾಗಿದ್ದು! ನೇಹಾ ಧೂಪಿಯಾ ವಿಚಿತ್ರ ಲವ್ ಸ್ಟೋರಿ ಹೇಗಿತ್ತು?!]]></title>
            <link>https://kannada.asianetnews.com/cine-world/neha-dhupia-and-angad-bedi-different-love-story-becomes-viral-after-podcast/articleshow-5hpon9b</link>
            <guid isPermaLink="true">https://kannada.asianetnews.com/cine-world/neha-dhupia-and-angad-bedi-different-love-story-becomes-viral-after-podcast/articleshow-5hpon9b</guid>
            <pubDate>Thu, 30 Apr 2026 12:59:31 +0530</pubDate>
            <description><![CDATA[&lt;p&gt;ನೇಹಾ ಜೊತೆ ಸಮಯ ಕಳೆಯಬೇಕು ಎಂಬ ಹಠಕ್ಕೆ ಬಿದ್ದಿದ್ದ ಅಂಗದ್, ಅದಕ್ಕಾಗಿ ನೇಹಾ ನಟಿಸುತ್ತಿದ್ದ ಸಿನಿಮಾದಲ್ಲೇ ಒಂದು ಪಾತ್ರ ಗಿಟ್ಟಿಸಿಕೊಂಡರಂತೆ. ಆದರೆ ಸೆಟ್&zwnj;ನಲ್ಲಿ ನೇಹಾ ಜೊತೆ ಸದಾ ಅವರ ತಾಯಿ ಇರುತ್ತಿದ್ದರು. ಆಗ ಅಂಗದ್ ಬುದ್ಧಿವಂತಿಕೆ ಪ್ರದರ್ಶಿಸಿ, ನೇಹಾ ಬದಲಿಗೆ ಅವರ ತಾಯಿಯ ಜೊತೆ ಹೆಚ್ಚು ಹರಟೆ ಹೊಡೆಯಲು ಶುರು ಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqembryb3gafszsqzxwn2w56,imgname-neha-dhupia-angad-bedi-1777533838283.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನೇಹಾ ಧೂಪಿಯಾ ವಿಚಿತ್ರ ಪ್ರೇಮ ಪುರಾಣ!&lt;/strong&gt;&lt;/p&gt;&lt;p&gt;ಸಿನಿಮಾ ತೆರೆಯ ಮೇಲಿನ ಪ್ರೇಮ ಕಥೆಗಳಿಗಿಂತ ತೆರೆಯ ಹಿಂದಿನ ನಟ-ನಟಿಯರ ಅಸಲಿ ಲವ್ ಸ್ಟೋರಿಗಳೇ ಹೆಚ್ಚು ಮಸಾಲೆಯುಕ್ತವಾಗಿರುತ್ತವೆ. ಅಂತಹದ್ದೇ ಒಂದು 'ಬೋಲ್ಡ್ ಅಂಡ್ ಬ್ಯೂಟಿಫುಲ್' ಲವ್ ಸ್ಟೋರಿ ಈಗ ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದು ಬೇರಾರದ್ದೂ ಅಲ್ಲ, ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನೇಹಾ ಧೂಪಿಯಾ (Neha Dhupia) ಮತ್ತು ಹ್ಯಾಂಡ್ಸಮ್ ಹಂಕ್ ಅಂಗದ್ ಬೇಡಿ (Angad Bedi) ಅವರದ್ದು.&lt;/p&gt;&lt;p&gt;8 ವರ್ಷಗಳ ಗೆಳೆತನ, ಸೈಲೆಂಟ್ ಲವ್!&lt;/p&gt;&lt;p&gt;ನೇಹಾ ಮತ್ತು ಅಂಗದ್ ಸುಮಾರು 8 ವರ್ಷಗಳ ಕಾಲ ಒಬ್ಬರಿಗೊಬ್ಬರು ಪರಿಚಯವಿದ್ದರು. ಆದರೆ ಅದು ಕೇವಲ ಸ್ನೇಹವೋ ಅಥವಾ ಪ್ರೀತಿಯೋ ಎಂಬ ಗೊಂದಲ ಇಬ್ಬರಲ್ಲೂ ಇತ್ತು. ಇತ್ತೀಚೆಗೆ ಕಾಮಿಡಿ ಕ್ವೀನ್ ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರ ಪಾಡ್&zwnj;ಕಾಸ್ಟ್&zwnj;ನಲ್ಲಿ ಅತಿಥಿಯಾಗಿ ಬಂದಿದ್ದ ಈ ಜೋಡಿ, ತಮ್ಮ ಜೀವನದ ಅತೀ ದೊಡ್ಡ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅಂಗದ್ ಬೇಡಿ ಹೇಳುವ ಪ್ರಕಾರ, ನೇಹಾಗೆ ಹತ್ತಿರವಾಗಲು ಅವರು ಹೂಡಿದ ಪ್ಲಾನ್&zwnj;ಗಳೇ ಬೇರೆ!&lt;/p&gt;&lt;h2&gt;ಅತ್ತೆಯನ್ನು ಇಂಪ್ರೆಸ್ ಮಾಡಿದ ಅಳಿಯ!&lt;/h2&gt;&lt;p&gt;ನೇಹಾ ಜೊತೆ ಸಮಯ ಕಳೆಯಬೇಕು ಎಂಬ ಹಠಕ್ಕೆ ಬಿದ್ದಿದ್ದ ಅಂಗದ್, ಅದಕ್ಕಾಗಿ ನೇಹಾ ನಟಿಸುತ್ತಿದ್ದ ಸಿನಿಮಾದಲ್ಲೇ ಒಂದು ಪಾತ್ರ ಗಿಟ್ಟಿಸಿಕೊಂಡರಂತೆ. ಆದರೆ ಸೆಟ್&zwnj;ನಲ್ಲಿ ನೇಹಾ ಜೊತೆ ಸದಾ ಅವರ ತಾಯಿ ಇರುತ್ತಿದ್ದರು. ಆಗ ಅಂಗದ್ ಬುದ್ಧಿವಂತಿಕೆ ಪ್ರದರ್ಶಿಸಿ, ನೇಹಾ ಬದಲಿಗೆ ಅವರ ತಾಯಿಯ ಜೊತೆ ಹೆಚ್ಚು ಹರಟೆ ಹೊಡೆಯಲು ಶುರು ಮಾಡಿದರು. &quot;ಅತ್ತೆಯನ್ನು ಬುಟ್ಟಿಗೆ ಹಾಕಿಕೊಂಡರೆ ಮಗಳನ್ನು ಪಡೆಯುವುದು ಸುಲಭ&quot; ಎಂಬ ಫಾರ್ಮುಲಾವನ್ನು ಅಂಗದ್ ಅಕ್ಷರಶಃ ಪಾಲಿಸಿದ್ದರು!&lt;/p&gt;&lt;p&gt;ಪ್ರೆಗ್ನೆನ್ಸಿ ತಂದ ಪ್ರೇಮದ ತಿರುವು!&lt;/p&gt;&lt;p&gt;ಇವರ ಕಥೆಯಲ್ಲಿ ಅಸಲಿ ಟ್ವಿಸ್ಟ್ ಸಿಕ್ಕಿದ್ದೇ ನೇಹಾ ಗರ್ಭಿಣಿಯಾದಾಗ. ಮದುವೆಗೂ ಮುನ್ನವೇ ಗರ್ಭಿಣಿಯಾದ ವಿಷಯ ತಿಳಿದಾಗ ಇಬ್ಬರಿಗೂ ಒಂದು ಕ್ಷಣ ಆತಂಕವಾದರೂ, ಅದೇ ಕ್ಷಣದಲ್ಲಿ ಅವರಿಗೆ ಅರಿವಾಗಿದ್ದು 'ನಮ್ಮಿಬ್ಬರ ನಡುವೆ ಇರುವುದು ಕೇವಲ ಸ್ನೇಹವಲ್ಲ, ಅಪ್ಪಟ ಪ್ರೀತಿ' ಎಂದು. ನೇಹಾ ಹೇಳುವಂತೆ, &quot;ನಾನು ಪ್ರೆಗ್ನೆಂಟ್ ಆದ ಮೇಲೆಯೇ ನಮಗೆ ನಮ್ಮ ನಡುವಿನ ಪ್ರೀತಿಯ ತೀವ್ರತೆ ಅರ್ಥವಾಗಿದ್ದು. ನಾವು ಪ್ರೀತಿಗಾಗಿ ಹೊರಗಡೆ ಹುಡುಕುತ್ತಿದ್ದೆವು, ಆದರೆ ಅದು ನಮ್ಮೊಳಗೆ ಇತ್ತು ಎಂಬುದು ಆ ಅನಿರೀಕ್ಷಿತ ಘಟನೆಯಿಂದ ತಿಳಿಯಿತು.&quot;&lt;/p&gt;&lt;h3&gt;ಆತುರದ ಮದುವೆ, ಸುಖದ ಸಂಸಾರ&lt;/h3&gt;&lt;p&gt;ಈ ವಿಚಾರ ಮನೆಯವರಿಗೆ ತಿಳಿದಾಗ ದೊಡ್ಡ ಹಂಗಾಮವೇ ನಡೆದಿತ್ತು. ಅಂಗದ್ ಬೇಡಿ ಧೈರ್ಯ ಮಾಡಿ ನೇಹಾ ಪೋಷಕರಲ್ಲಿ ವಿಷಯ ತಿಳಿಸಿ, 2018ರಲ್ಲಿ ಅತ್ಯಂತ ಗುಟ್ಟಾಗಿ ಮತ್ತು ಆತುರವಾಗಿ ಮದುವೆಯಾದರು. ಇಂದು ಈ ಜೋಡಿ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಅತ್ಯಂತ ಸುಖಿ ಸಂಸಾರ ನಡೆಸುತ್ತಿದ್ದಾರೆ. &quot;ದೇವರ ದಯೆಯಿಂದ ನಾನು ಗರ್ಭಿಣಿಯಾದೆ, ಅದರಿಂದಲೇ ನಮ್ಮ ಲವ್ ಸ್ಟೋರಿ ಅಧಿಕೃತವಾಗಿ ಶುರುವಾಯ್ತು&quot; ಎಂದು ನೇಹಾ ಈಗಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.&lt;/p&gt;&lt;p&gt;ಒಟ್ಟಿನಲ್ಲಿ, ನೇಹಾ ಧೂಪಿಯಾ ಅವರ ಈ 'ವಿಚಿತ್ರ' ಪ್ರೇಮ ಕಥೆ ಕೇಳಿದ ಅಭಿಮಾನಿಗಳು ಮಾತ್ರ &quot;ಪ್ರೀತಿ ಎಲ್ಲಿ, ಹೇಗೆ, ಯಾವಾಗ ಹುಟ್ಟುತ್ತೆ ಅಂತ ಯಾರೂ ಹೇಳೋಕೆ ಆಗಲ್ಲ&quot; ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಅವರ ಪಾಡ್&zwnj;ಕ್ಯಾಸ್ಟ್&zwnj;ನಲ್ಲಿ ಸ್ವತಃ ನಟಿ ನೇಹಾ ಧೂಪಿಯಾ ಹಾಗೂ ಅಂಗದ್ ಬೇಡಿ ಜೋಡಿ ಈ ಎಲ್ಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/neha-dhupia-and-angad-bedi-different-love-story-becomes-viral-after-podcast/articleshow-5hpon9b"/>
        </item>
        <item>
            <title><![CDATA[Goa Food: ಗೋವಾದ ಫೇಮಸ್ ರೋಸ್ ಆಮ್ಲೆಟ್, ತಿಂದವ್ರೇ ಬಲ್ಲ ಅದರ ಮಜಾ!]]></title>
            <link>https://kannada.asianetnews.com/food/why-ros-omelette-is-goas-most-loved-street-food-authentic-goan-eats-rav/articleshow-bsohwzt</link>
            <guid isPermaLink="true">https://kannada.asianetnews.com/food/why-ros-omelette-is-goas-most-loved-street-food-authentic-goan-eats-rav/articleshow-bsohwzt</guid>
            <pubDate>Thu, 30 Apr 2026 12:40:26 +0530</pubDate>
            <description><![CDATA[ಗೋವಾ ಅಂದ್ರೆ ಬರೀ ಬೀಚ್, ನೈಟ್&zwnj;ಲೈಫ್ ಅಷ್ಟೇ ಅಲ್ಲ. ಅಲ್ಲಿನ ಅಸಲಿ ಮಜಾ ಇರೋದೇ ಸ್ಟ್ರೀಟ್ ಫುಡ್&zwnj;ನಲ್ಲಿ ಅಂತಾರೆ ಸ್ಥಳೀಯರು. ಅದರಲ್ಲೂ, ಖಾರ ಖಾರವಾದ, ಬಿಸಿ ಬಿಸಿಯಾದ ರೋಸ್ ಆಮ್ಲೆಟ್ ಜನರ ಮನಸ್ಸು ಗೆದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqefp1zvz3tgtcrmzrqtqanw,imgname-chatgpt-image-apr-30--2026--11-31-33-am-1777528932347.png" type="image/jpeg" height="390" width="690"/>
            <content:encoded><![CDATA[&lt;p&gt;ಗೋವಾದ ಅಸಲಿ ರುಚಿ ಮತ್ತು ಅಲ್ಲಿನ ಸಂಸ್ಕೃತಿಯನ್ನು ಒಂದೇ ತಟ್ಟೆಯಲ್ಲಿ ಹಿಡಿದಿಡುವ ಖಾದ್ಯ ಯಾವುದು ಅಂತ ಕೇಳಿದ್ರೆ, ಅದಕ್ಕೆ ಉತ್ತರ ಫೇಮಸ್ ರೋಸ್ ಆಮ್ಲೆಟ್. ರಾಜ್ಯದ ಪ್ರತಿಯೊಂದು ರಸ್ತೆಬದಿಯಲ್ಲೂ, ಸಣ್ಣಪುಟ್ಟ ಹೋಟೆಲ್&zwnj;ಗಳಲ್ಲೂ ಇದು ಸಿಗುತ್ತೆ. ಗೋವಾದ ಬೀದಿಗಳಲ್ಲಿ ಸಂಜೆ ಹೊತ್ತು ಅಡ್ಡಾಡುತ್ತಾ, ಬಿಸಿ ಬಿಸಿಯಾದ ರೋಸ್ ಆಮ್ಲೆಟ್ ತಿನ್ನುವುದೇ ಒಂದು ಅದ್ಭುತ ಅನುಭವ.&lt;/p&gt;&lt;h2&gt;ರೋಸ್ ಆಮ್ಲೆಟ್ ಯಾಕಿಷ್ಟು ಸ್ಪೆಷಲ್?&lt;/h2&gt;&lt;p&gt;ರೋಸ್ ಆಮ್ಲೆಟ್ ಅಂದ್ರೆ, ಬಿಸಿ ಬಿಸಿಯಾದ ಆಮ್ಲೆಟ್ ಮೇಲೆ ಖಾರವಾದ ಚಿಕನ್ ಗ್ರೇವಿ ಸುರಿದು ಕೊಡುವ ಒಂದು ತಿಂಡಿ. ಇಲ್ಲಿ 'ರೋಸ್' ಅಂದ್ರೆ ಸ್ಥಳೀಯ ಭಾಷೆಯಲ್ಲಿ ಗ್ರೇವಿ ಅಥವಾ ಸಾರು. ಮೃದುವಾದ ಪಾವ್ ಅಥವಾ ಬ್ರೆಡ್ ಸ್ಲೈಸ್ ಮೇಲೆ ಮೊದಲು ಆಮ್ಲೆಟ್ ಇಟ್ಟು, ಅದರ ಮೇಲೆ ಈ ಖಾರವಾದ ಗ್ರೇವಿಯನ್ನು ಸುರಿಯುತ್ತಾರೆ. ಮೊಟ್ಟೆಯ ಮೆತ್ತನೆಯ ರುಚಿ, ಗ್ರೇವಿಯ ಖಾರ ಮತ್ತು ಪಾವ್&zwnj;ನ ಮೃದುತ್ವ ಸೇರಿ, ಬಾಯಲ್ಲಿ ನೀರೂರಿಸುವ ಒಂದು ಅದ್ಭುತ ಕಾಂಬಿನೇಷನ್ ಇದು.&lt;/p&gt;&lt;p&gt;ಸಾಮಾನ್ಯ ಆಮ್ಲೆಟ್&zwnj;ಗೂ, ಗೋವಾದ ರೋಸ್ ಆಮ್ಲೆಟ್&zwnj;ಗೂ ಇರುವ ವ್ಯತ್ಯಾಸವೇ ಅದರ ಗ್ರೇವಿ. ಸ್ಥಳೀಯ ಮಸಾಲೆ, ಈರುಳ್ಳಿ, ಟೊಮ್ಯಾಟೊ ಮತ್ತು ಮೆತ್ತಗೆ ಬೆಂದ ಚಿಕನ್ ತುಂಡುಗಳನ್ನು ಬಳಸಿ ಈ ಗ್ರೇವಿಯನ್ನು ತಯಾರಿಸುತ್ತಾರೆ. ಪ್ರತಿಯೊಂದು ಅಂಗಡಿಯಲ್ಲೂ ತಮ್ಮದೇ ಆದ ಸೀಕ್ರೆಟ್ ರೆಸಿಪಿ ಇರುವುದರಿಂದ, ಬೇರೆ ಬೇರೆ ಕಡೆಗಳಲ್ಲಿ ಇದರ ರುಚಿ ವಿಭಿನ್ನವಾಗಿರುತ್ತದೆ.&lt;/p&gt;&lt;h3&gt;ಸ್ಥಳೀಯರು ಎಲ್ಲಿ ತಿನ್ನಲು ಇಷ್ಟಪಡುತ್ತಾರೆ?&lt;/h3&gt;&lt;p&gt;ದೊಡ್ಡ ದೊಡ್ಡ ಕೆಫೆಗಳಿಗಿಂತ, ರಸ್ತೆಬದಿಯ ಸಣ್ಣ ಸಣ್ಣ ಅಂಗಡಿಗಳಲ್ಲೇ ಅಸಲಿ ರೋಸ್ ಆಮ್ಲೆಟ್ ಸಿಗುತ್ತೆ ಅನ್ನೋದು ಸ್ಥಳೀಯರ ಮಾತು. ಪಣಜಿ, ಮಾಪುಸ ಮತ್ತು ಮಾರ್ಗಾವ್&zwnj; ನಗರಗಳಲ್ಲಿ ಸಂಜೆ ಹೊತ್ತಲ್ಲಿ ಈ ಅಂಗಡಿಗಳ ಮುಂದೆ ಜನ ಜಮಾಯಿಸಿರುತ್ತಾರೆ.&lt;/p&gt;&lt;p&gt;ಕೆಲವು ಜನಪ್ರಿಯ ಅಂಗಡಿಗಳು ದಪ್ಪನೆಯ, ಖಾರವಾದ ರೋಸ್, ಬೆಣ್ಣೆ ಸವರಿದ ಪಾವ್ ಮತ್ತು ಸರಿಯಾಗಿ ಬೆಂದ ಆಮ್ಲೆಟ್&zwnj;ಗೆ ಹೆಸರುವಾಸಿಯಾಗಿವೆ. ಇದರ ಜೊತೆ ತಣ್ಣನೆಯ ಸಾಫ್ಟ್ ಡ್ರಿಂಕ್ ಅಥವಾ ಒಂದು ಕಪ್ ಚಹಾ ಕುಡಿದರೆ, ಆ ಅನುಭವವೇ ಬೇರೆ.&lt;/p&gt;&lt;p&gt;&lt;strong&gt;ಗೋವಾದ ಮಿಸ್ ಮಾಡಲೇಬಾರದ ಕಂಫರ್ಟ್ ಫುಡ್&lt;/strong&gt;&lt;/p&gt;&lt;p&gt;ಕೈಗೆಟಕುವ ಬೆಲೆ, ಹೊಟ್ಟೆ ತುಂಬಿಸುತ್ತೆ, ಜೊತೆಗೆ ರುಚಿಯೋ ಅದ್ಭುತ. ಹೀಗಾಗಿ ಗೋವಾದ ಜನರಿಗೆ ಇದು ಕೇವಲ ಒಂದು ತಿಂಡಿಯಲ್ಲ, ಅದೊಂದು ಎಮೋಶನ್. ಗೋವಾಗೆ ಹೋದರೆ, ಒಮ್ಮೆಯಾದರೂ ಈ ಐಕಾನಿಕ್ ಖಾದ್ಯವನ್ನು ಟೇಸ್ಟ್ ಮಾಡದಿದ್ದರೆ ನಿಮ್ಮ ಪ್ರವಾಸ ಅಪೂರ್ಣ.&lt;/p&gt;]]></content:encoded>
            <category>life</category>
            <dc:creator>Ravi Janekal</dc:creator>
            <atom:link href="https://kannada.asianetnews.com/food/why-ros-omelette-is-goas-most-loved-street-food-authentic-goan-eats-rav/articleshow-bsohwzt"/>
        </item>
        <item>
            <title><![CDATA[ನಾಲ್ಕು ಹೆಂಡಿರ ಗಂಡನ ಜೊತೆ ಲಿವ್​-ಇನ್​: ಮಗುವಾದ್ಮೇಲೆ ರೇ*ಪ್​ ಕೇಸ್​- 'ಸುಪ್ರೀಂ' ಮಹತ್ವದ ತೀರ್ಪು]]></title>
            <link>https://kannada.asianetnews.com/india-news/they-had-child-together-now-she-says-illegal-supreme-court-on-live-in-relationship-suc/articleshow-4lhve68</link>
            <guid isPermaLink="true">https://kannada.asianetnews.com/india-news/they-had-child-together-now-she-says-illegal-supreme-court-on-live-in-relationship-suc/articleshow-4lhve68</guid>
            <pubDate>Wed, 29 Apr 2026 18:03:33 +0530</pubDate>
            <description><![CDATA[&lt;p&gt;ಯುವಕನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದು, ಮಗುವಾದ ಬಳಿಕ ಆತ ಮದುವೆಗೆ ನಿರಾಕರಿಸಿದಾಗ ಯುವತಿ ಅ*ತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಒಪ್ಪಿಗೆಯ ಸಹಬಾಳ್ವೆಯಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಅಂತಹ ಸಂಬಂಧದಿಂದ ಜನಿಸಿದ ಮಗುವಿಗೆ ಜೀವನಾಂಶ ಪಡೆಯುವ ಹಕ್ಕಿದೆ ಎಂದು ನ್ಯಾಯಾಲಯ ತಿಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq70m9sznxfj14v540rmzfc9,imgname-live-in-relation-1777278265151.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವ ಮಾತು ಕೇಳಿಬರುತ್ತಿರುವುದು ಒಂದೆಡೆಯಾದರೆ, ಮದುವೆ ಬೇಡ, ಲಿವ್​-ಇನ್​ನಲ್ಲಿ ಇರೋಣ ಎಂದುಕೊಂಡು ಇರುವವರು ಹಲವರು. ವಿದೇಶದಲ್ಲಿ ಅಷ್ಟೇ ಇದ್ದ ಈ ಪರಿಯ ವಿವಾಹೇತರ ಸಂಬಂಧ ಸಿನಿಮಾ ತಾರೆಯರಿಂದ ಪ್ರಚಾರ​ಗೊಂಡು, ಅವರಿಂದ ಪ್ರೇರೇಪಿತರಾಗಿರುವ ಹಲವು ಹುಡುಗಿಯರು ಲಿವ್​ ಇನ್​ ಸಂಬಂಧದಲ್ಲಿ ಇರುವುದು ಮಾಮೂಲಾಗಿದೆ. ಮಹಿಳೆಯರೇ ಇಂಥ ಸಂಬಂಧಕ್ಕೆ ಒಪ್ಪಿಕೊಂಡು ಮುಂದೆ ಬಂದಾಗ ಇನ್ನು ಪುರುಷರೇನು ಸುಮ್ಮನೇ ಇರ್ತಾರಾ? ಅಷ್ಟಕ್ಕೂ ಅಂತಿಮ ಫಲಿತಾಂಶದಲ್ಲಿ ಬಳಲುವಾಕೆ ಹೆಣ್ಣೇ ಎನ್ನುವ ಸತ್ಯ ಅವರಿಗೂ ಗೊತ್ತಿದ್ದದ್ದೇ. ಅದಕ್ಕಾಗಿ ಹೆಣ್ಣುಮಕ್ಕಳು ಇಂಥ ಸಂಬಂಧ ಹೊಂದುವಾಗ ಭವಿಷ್ಯದ ಯೋಚನೆ ಮಾಡಿ ಎಂದು ಹಲವರು ಹೇಳಿದರೂ ಅದು ಆ ಪ್ರಾಯದಲ್ಲಿ ಅವರ ಕಿವಿಗೆ, ತಲೆಗೆ ಎಲ್ಲಿಯೂ ಹೋಗುವುದೇ ಇಲ್ಲ.&lt;/p&gt;&lt;h2&gt;&lt;strong&gt;ಸುಪ್ರೀಂಕೋರ್ಟ್​ ಬಾಗಿಲಿಗೆ&lt;/strong&gt;&lt;/h2&gt;&lt;p&gt;ಇದೀಗ ಅಂಥದ್ದೇ ಒಂದು ಕೇಸ್​ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಇಲ್ಲಿ ಯುವತಿಯೊಬ್ಬಳು ಯುವಕನ ಜೊತೆ ಲಿವ್​ ಇನ್​ ಸಂಬಂಧದಲ್ಲಿ ಇದ್ದಳು. ಮಗುವೂ ಆಯಿತು. ಕೊನೆಗೆ ಅವನು ಮದುವೆಗೆ ನಿರಾಕರಿಸಿದ. ಏಕೆಂದರೆ ಅಲ್ಲಿಗೆ ಅವನ ಕೆಲಸ ಮುಗಿದಿತ್ತು. ಈಗ ಏನಿದ್ದರೂ ಸವಾಲು ಈ ಯುವತಿಯದ್ದು ಅಷ್ಟೇ. ಬೇರೆ ದಾರಿ ಕಾಣದೇ ರೇ*ಪ್ ಕೇಸ್​ ಹಾಕಿದಳು. ಅದು ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಅದು ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರ ಪೀಠದ ಮುಂದೆ ವಿಚಾರಣೆ ಬಂದಿತ್ತು. ಇಂಥ ಸಂಬಂಧಗಳ ಬಗ್ಗೆ ನ್ಯಾಯಮೂರ್ತಿಗಳು ಏನು ಹೇಳಿದ್ದಾರೆ ನೋಡಿ.&lt;/p&gt;&lt;p&gt;ವಿವಾಹ ಬಂಧವಿಲ್ಲದೆಯೇ ಲಿವ್-ಇನ್ ಸಂಬಂಧದಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿವಾಹದ ಸುಳ್ಳು ನೆಪದಲ್ಲಿ ಪುರುಷನೊಬ್ಬ ತನ್ನ ಮೇಲೆ ಅ*ತ್ಯಾಚಾರ ಮತ್ತು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಪ್ಪಿಗೆಯ ಲಿವ್-ಇನ್ ಸಂಬಂಧಗಳು ಮತ್ತು ಕ್ರಿಮಿನಲ್ ಲೈಂ*ಗಿಕ ಅಪರಾಧಗಳ ನಡುವಿನ ವ್ಯತ್ಯಾಸಗಳನ್ನು ಕೋರ್ಟ್ ಒತ್ತಿಹೇಳಿದೆ.&lt;/p&gt;&lt;p&gt;ವಯಸ್ಕರು ವಿವಾಹದ ಹೊರಗೆ ಒಟ್ಟಿಗೆ ವಾಸಿಸಲು ಆಯ್ಕೆ ಮಾಡಿದಾಗ, ಅಂತಹ ಸಂಬಂಧಗಳು ಹೆಚ್ಚಾಗಿ ಅಂತರ್ಗತ ಅಪಾಯಗಳನ್ನು ಹೊಂದಿರುತ್ತವೆ. ಇದನ್ನು ಇಂಥ ಸಂಬಂಧ ಹೊಂದುವವರು ತಿಳಿದುಕೊಳ್ಳಬೇಕು ಎಂದಿದೆ ಕೋರ್ಟ್​. ಈ ಪ್ರಕರಣದಲ್ಲಿ ಲಿವ್-ಇನ್ ಸಂಬಂಧ ಎನ್ನುತ್ತೀರಾ,ಮದುವೆಯಾಗಲೇ ಪುರುಷನ ಮಗುವನ್ನೂ ಪಡೆಯುತ್ತೀರಾ, ಅವನು ಮದುವೆಗೆ ಒಪ್ಪಲಿಲ್ಲ ಅಂದ ಮಾತ್ರಕ್ಕೆ ಅದು ಅ*ತ್ಯಾಚಾರ ಮತ್ತು ಹಲ್ಲೆ ಎಂದು ಹೇಗೆ ಹೇಳುತ್ತೀರಾ ಎಂದು ಕೋರ್ಟ್​ ಪ್ರಶ್ನಿಸಿದೆ. ಒಮ್ಮತದ ಸಂಬಂಧವು ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಹೇಗೆ ಕಾರಣವಾಗುತ್ತದೆ? ಒಮ್ಮತದ ಸಂಬಂಧವಿದ್ದಾಗ ಅಪರಾಧದ ಪ್ರಶ್ನೆ ಎಲ್ಲಿದೆ?&quot; ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;&lt;strong&gt;ವಿವಾಹದ ಹೊರಗಿನ ಸಂಬಂಧಗಳ ವೈಪರೀತ್ಯಗಳು&lt;/strong&gt;&lt;/h3&gt;&lt;p&gt;&quot;ಲಿವ್-ಇನ್ ಸಂಬಂಧಗಳಲ್ಲಿ ಹೀಗಾಗುತ್ತದೆ. ವರ್ಷಗಳ ಕಾಲ ಅವರು ಒಟ್ಟಿಗೆ ವಾಸಿಸುತ್ತಿದ್ದರು. ಅವರು ಬೇರ್ಪಟ್ಟಾಗ, ಮಹಿಳೆ ಪುರುಷನ ವಿರುದ್ಧ ಲೈಂ*ಗಿಕ ದೌರ್ಜನ್ಯದ ದೂರು ದಾಖಲಿಸುತ್ತಾಳೆ. ಇವೆಲ್ಲವೂ ವಿವಾಹದ ಹೊರಗಿನ ಸಂಬಂಧಗಳ ವೈಪರೀತ್ಯಗಳು&quot; ಎಂದು ನ್ಯಾಯಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ. ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಆರೋಪಿಯು 18 ವರ್ಷದ ವಿಧವೆಯನ್ನು ಭೇಟಿಯಾಗಿ ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆ ಸಮಯದಲ್ಲಿ ಆರೋಪಿಗೆ ಈಗಾಗಲೇ ವಿವಾಹವಾಗಿತ್ತು ಮತ್ತು ನಾಲ್ಕು ಹೆಂಡತಿಯರಿದ್ದರು, ಆದರೆ ಮಹಿಳೆಗೆ ಅದರ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದರು. ಅದಕ್ಕೆ ಕೋರ್ಟ್​, ಮೊದಲು ಮದುವೆಯಾಗದೆ ಪುರುಷನೊಂದಿಗೆ ವಾಸಿಸಲು ಮತ್ತು ಮಗುವನ್ನು ಹೊಂದಲು ಏಕೆ ಆಯ್ಕೆ ಮಾಡಿಕೊಂಡರು ಎಂದು ಪ್ರಶ್ನಿಸಿದರು. ಆರೋಪಿಯು ಇತರರೊಂದಿಗೆ ಸಹ ಇದನ್ನು ಮಾಡಿದ್ದಾನೆ ಎಂದು ವಕೀಲರು ಹೇಳಿಕೊಂಡಾಗ, ಕೋರ್ಟ್​ನಲ್ಲಿ ಸದ್ಯ ಇರುವುದು ಅರ್ಜಿದಾರರ ಕೇಸ್​ ಮಾತ್ರ ಎಂದರು.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಮಗು ಅಕ್ರಮ ಆಗಲಾರದು&lt;/strong&gt;&lt;/h3&gt;&lt;p&gt;ಮಹಿಳೆಯ ಸ್ಥಿತಿಗೆ ಇದೇ ವೇಳೆ ಮರುಕ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಮಗುವಿಗೆ ಜೀವನಾಂಶವನ್ನು ಪಡೆಯಬಹುದು, ಆದರೆ ಲಿವ್-ಇನ್ ಸಂಬಂಧದ ಸ್ಥಗಿತವು ಕ್ರಿಮಿನಲ್ ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂದಿದ್ದಾರೆ. &quot;ಅಕ್ರಮ ಸಂಬಂಧವಿರಬಹುದು, ಆದರೆ ಅಂತಹ ಸಂಬಂಧದಿಂದ ಜನಿಸಿದ ಮಗು ಅಕ್ರಮವಾಗಿರಲು ಸಾಧ್ಯವಿಲ್ಲ. ಮದುವೆ ಆಗಿದ್ದರೆ, ಆಕೆಯ ಹಕ್ಕುಗಳು ಉತ್ತಮವಾಗಿರುತ್ತಿದ್ದವು&quot; ಎಂದರು. ಮಧ್ಯಸ್ಥಿಕೆಯ ಮೂಲಕ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳುವಂತೆಯೂ ನ್ಯಾಯಾಲಯವು ಕಕ್ಷಿದಾರರಿಗೆ ಸಲಹೆ ನೀಡಿತು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/they-had-child-together-now-she-says-illegal-supreme-court-on-live-in-relationship-suc/articleshow-4lhve68"/>
        </item>
        <item>
            <title><![CDATA[ಪತ್ರಕರ್ತರ ಆ ಪ್ರಶ್ನೆಗೆ ಉತ್ತರಿಸಲಾಗದೇ 'ಹೆಡ್​ಬುಷ್'​ ನಟಿ ಕಣ್ಣೀರು: ಸ್ಟೇಜ್ ಬಿಟ್ಟು ಹೋದ ಪಾಯಲ್​]]></title>
            <link>https://kannada.asianetnews.com/gallery/cine-world/heartbroken-payal-rajput-exits-press-conference-midway-suc-6zwvuxf</link>
            <guid isPermaLink="true">https://kannada.asianetnews.com/gallery/cine-world/heartbroken-payal-rajput-exits-press-conference-midway-suc-6zwvuxf</guid>
            <pubDate>Wed, 29 Apr 2026 18:24:05 +0530</pubDate>
            <description><![CDATA[&lt;p&gt;'ಹೆಡ್ ಬುಷ್' ಖ್ಯಾತಿಯ ನಟಿ ಪಾಯಲ್ ರಜಪೂತ್ ತಮ್ಮ ಹೊಸ ಸಿನಿಮಾ ಪ್ರಚಾರದ ವೇಳೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೆ ಕಣ್ಣೀರಿಟ್ಟಿದ್ದಾರೆ. ಕ್ಯಾನ್ಸರ್&zwnj;ನಿಂದ ನಿಧನರಾದ ತಮ್ಮ ತಂದೆಯನ್ನು ನೆನೆದು ಅವರು ಭಾವುಕರಾದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqbj3za5h4hztkg2x8sjkrkm,imgname-2-1777430822213.jpg" type="image/jpeg" height="390" width="690"/>
            <content:encoded><![CDATA[&lt;p&gt;'ಹೆಡ್ ಬುಷ್' ಖ್ಯಾತಿಯ ನಟಿ ಪಾಯಲ್ ರಜಪೂತ್ ತಮ್ಮ ಹೊಸ ಸಿನಿಮಾ ಪ್ರಚಾರದ ವೇಳೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೆ ಕಣ್ಣೀರಿಟ್ಟಿದ್ದಾರೆ. ಕ್ಯಾನ್ಸರ್&zwnj;ನಿಂದ ನಿಧನರಾದ ತಮ್ಮ ತಂದೆಯನ್ನು ನೆನೆದು ಅವರು ಭಾವುಕರಾದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ&lt;/p&gt;&lt;img&gt;&lt;p&gt;2022ರಲ್ಲಿ ರಿಲೀಸ್​ ಆಗಿದ್ದ ಡಾಲಿ ಧನಂಜಯ್ ನಟಿಸಿ, ನಿರ್ಮಿಸಿರುವ ಬಹುನಿರೀಕ್ಷಿತ 'ಹೆಡ್ ಬುಷ್' (Head Bush) ಸಿನಿಮಾದಲ್ಲಿ ಎಲ್ಲರ ಮನಸ್ಸನ್ನು ಗೆದ್ದವರು ಪಾಯಲ್​ ರಜಪೂತ್​. ಅವರು ಹಿಂದಿ, ತೆಲುಗು ಮತ್ತು ಪಂಜಾಬಿ ಸಿನಿ ಪ್ರಿಯರಿಗೂ ಚಿರಪರಿಚಿತರು. ಅವರಿಗೆ ಹೆಸರು ತಂದುಕೊಟ್ಟ ಚಿತ್ರ 2018ರ &lsquo;ಆರ್​ಎಕ್ಸ್ 100&rsquo; ಸಿನಿಮಾ. ಈ ಸಿನಿಮಾದಲ್ಲಿ ಅವರು ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.&lt;/p&gt;&lt;img&gt;&lt;p&gt;ಸದಸ್ಯ ನಟಿ, &lsquo;ಫಸ್ಟ್ ಟೈಮ್&rsquo; ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಆದರೆ ಈ ಸಿನಿಮಾ ಪ್ರಮೋಷನ್​ ವೇಳೆ ಅವರಿಗೆ ತುಂಬಾ ನೋವಿನ ಪ್ರಶ್ನೆಯೊಂದು ಎದುರಾಯಿತು. ಅದಕ್ಕೆ ಉತ್ತರಿಸಲಾಗದೇ ನಟಿ ಕಣ್ಣೀರಿಟ್ಟರು. ಕೊನೆಗೆ ಅಲ್ಲಿಂದ ಹೊರಕ್ಕೆ ಹೋಗಿಯೇ ಬಿಟ್ಟರು.&lt;/p&gt;&lt;img&gt;&lt;p&gt;ಇದಕ್ಕೆ ಕಾರಣ, ಅವರಿಗೆ ಕೇಳಿದ್ದು ಅವರ ಪ್ರೀತಿಯ ತಂದೆಯ ಕುರಿತಾದ ಪ್ರಶ್ನೆ. ವೈಯಕ್ತಿಕ ಹೋರಾಟದ ಕುರಿತು ಅವರು ಹೇಳುವಾಗ, ತಮ್ಮ ತಂದೆಯ ಕ್ಯಾನ್ಸರ್​ನಿಂದ ಸಾವನ್ನಪ್ಪಿರುವ ಬಗ್ಗೆ ಹಾಗೂ ಅದನ್ನೂ ಮುಂಚೆ ಅವರು ನಡೆಸಿದ ಹೋರಾಟದ ಬಗ್ಗೆ ಮಾತನಾಡುತ್ತಾ ಭಾವುಕರಾದರು.&lt;/p&gt;&lt;img&gt;&lt;p&gt;&ldquo;ನನ್ನ ತಂದೆಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ, ಅದು ಇಡೀ ಕುಟುಂಬ ತತ್ತರಿಸಿ ಹೋಗಿತ್ತು. ನನ್ನ ತಾಯಿಯನ್ನು ನೋಡಲು ಆಗುತ್ತಿರಲಿಲ್ಲ. ನಾನು ಕೂಡ ಸಂಪೂರ್ಣವಾಗಿ ಛಿದ್ರಗೊಂಡಿದ್ದೆ. ನನ್ನ ತಾಯಿ ಅಥವಾ ನನ್ನನ್ನು ಹೇಗೆ ಸಮಾಧಾನಪಡಿಸಬೇಕೆಂದು ನನಗೆ ತಿಳಿದಿರಲಿಲ್ಲ. ಅವರು ನನ್ನ ಜೀವನದ ನಾಯಕ ಆಗಿದ್ದರು. ಆದರೆ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದರು ನಟಿ.&lt;/p&gt;&lt;img&gt;&lt;p&gt;ನನ್ನ RX 100 ಚಿತ್ರವು ತುಂಬಾ ಬೋಲ್ಡ್​ನಿಂದ ಕೂಡಿತ್ತು. ನನ್ನ ತಂದೆ ನನ್ನ ದೊಡ್ಡ ವಿಮರ್ಶಕ. ಇಷ್ಟು ಬೋಲ್ಡ್​ ಆಗಿದ್ದರೂ ಅವರಿಗೆ ಅದು ತುಂಬಾ ಇಷ್ಟವಾಗಿತ್ತು. ನೀನು ಒಬ್ಬ ಅದ್ಭುತ ನಟಿ ಎಂದು ಹೊಗಳಿದ್ದರು. ಆದರೆ ಅವರು ಈಗ ನಮ್ಮೊಂದಿಗೆ ಇಲ್ಲ ಎಂದರು ನಟಿ. 2016 ರಲ್ಲಿ ನಟಿಯ ಸಹೋದರ ಕಾಣೆಯಾದಾಗ ಅವರ ಕುಟುಂಬದಲ್ಲಿ ಸಾಕಷ್ಟು ಸವಾಲು ಎದುರಾಗಿತ್ತು. ಅದಾದ ಬಳಿಕ ತಂದೆಯ ಅಗಲಿಕೆ ಸಹಿಸಿಕೊಳ್ಳಲು ಆಗಲಿಲ್ಲ ನಟಿಗೆ.&lt;/p&gt;&lt;img&gt;&lt;p&gt;ಇದರ ವಿಡಿಯೋ ವೈರಲ್​ ಆಗುತ್ತಲೇ ಇಂಥ ಪ್ರಶ್ನೆ ಕೇಳುವವರ ಮೇಲೆ ನೆಟ್ಟಿಗರು ಹರಿಹಾಯ್ದಿದ್ದಾರೆ. ಎಲ್ಲಿ ಏನು ಪ್ರಶ್ನೆ ಕೇಳಬೇಕು ಎನ್ನುವುದು ತಿಳಿಯುವುದಿಲ್ಲ. ವೈಯಕ್ತಿಕ ಜೀವನವನ್ನು ಹೀಗೆ ಕೆದಕಿ ಕೆದಕಿ ಕೇಳುವುದು ಯಾಕಿಷ್ಟು ವಿಕೃತ ಸಂತೋಷ ಕೊಡುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/cine-world/heartbroken-payal-rajput-exits-press-conference-midway-suc-6zwvuxf"/>
        </item>
        <item>
            <title><![CDATA[Viral Video: ಮಗನ ಉಳಿಸಲು ರೈಲ್ವೆ ಹಳಿ ಮೇಲೆ ಜಿಗಿದ ಅಪ್ಪ- ಸಿನಿಮಾದಲ್ಲೂ ತೋರಿಸದ ಕ್ಲೈಮ್ಯಾಕ್ಸ್​]]></title>
            <link>https://kannada.asianetnews.com/viral/father-jumped-into-railway-track-to-save-his-son-video-gone-viral-suc/articleshow-bxb19h7</link>
            <guid isPermaLink="true">https://kannada.asianetnews.com/viral/father-jumped-into-railway-track-to-save-his-son-video-gone-viral-suc/articleshow-bxb19h7</guid>
            <pubDate>Wed, 29 Apr 2026 22:36:20 +0530</pubDate>
            <description><![CDATA[ರೈಲ್ವೆ ಹಳಿಯ ಮೇಲೆ ಆಕಸ್ಮಿಕವಾಗಿ ಬಿದ್ದ ಮಗುವನ್ನು, ವೇಗವಾಗಿ ಬರುತ್ತಿದ್ದ ರೈಲಿನಿಂದ ರಕ್ಷಿಸಲು ತಂದೆಯೊಬ್ಬರು ಪ್ರಾಣ ಪಣಕ್ಕಿಟ್ಟಿದ್ದಾರೆ. ಅರೆಕ್ಷಣವೂ ಯೋಚಿಸದೆ ಹಳಿಗೆ ಜಿಗಿದು ಮಗುವನ್ನು ಅಪ್ಪಿಕೊಂಡು ಮಲಗಿದ್ದರಿಂದ, ಇಬ್ಬರೂ ಪವಾಡಸದೃಶವಾಗಿ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqd32sh4r6grwa4pt3e06swd,imgname-train-incident-1777482163748.jpg" type="image/jpeg" height="390" width="690"/>
            <content:encoded><![CDATA[&lt;p&gt;ಅದೃಷ್ಟವೊಂದು ಚೆನ್ನಾಗಿದ್ದರೆ, ಆಯಸ್ಸು ಗಟ್ಟಿಯಾಗಿದ್ದರೆ ಯಮನೇ ಬಂದು ಎದುರಿಗೆ ನಿಂತರೂ ಅವನಿಂದಲೂ ಏನೂ ಮಾಡಲು ಆಗುವುದಿಲ್ಲ, ಆದರೆ ಆಯಸ್ಸು ಇಂತಿಷ್ಟೇ ಎಂದು ನಿಗದಿಯಾಗಿದ್ದರೆ, ನಗುನಗುತ್ತಾ ಇದ್ದವರೇ ಅದೇ ಕ್ಷಣ ಅಲ್ಲಿಯೇ ಇಹಲೋಕ ತ್ಯಜಿಸುತ್ತಾರೆ. ಇದು ವಾಸ್ತವ. ಅಂಥ ಎಷ್ಟೋ ಘಟನೆಗಳು ನಿಜ ಜೀವನದಲ್ಲಿ ನಡೆಯುತ್ತಲೇ ಇರುತ್ತವೆ. ವೈಯಕ್ತಿಕವಾಗಿಯೂ ಹಲವು ಬಾರಿ ಇಂಥ ವಾಸ್ತವಗಳ ಅರಿವು ಆಗಿರುತ್ತದೆ. ಸ್ವಲ್ಪದರಲ್ಲಿಯೇ ಬಚಾವಾದೆ ಎನ್ನುವ ಮಾತು ನಮ್ಮಷ್ಟಕ್ಕೆ ನಾವು ಅದೆಷ್ಟೋ ಬಾರಿ ಅಂದುಕೊಂಡಿರುತ್ತೇವೆ.&lt;/p&gt;&lt;h2&gt;&lt;strong&gt;ರೈಲಿನ ಅಪಘಾತ&lt;/strong&gt;&lt;/h2&gt;&lt;p&gt;ಅದೇ ರೀತಿ ಅದೃಷ್ಟ ಒಂದು ಸರಿಯಿದ್ದರೆ, ಮೃತ್ಯುವನ್ನೂ ಜಯಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ವೈರಲ್​ ಆಗಿದೆ ಈ ಒಂದು ವಿಡಿಯೋ. ಅಷ್ಟಕ್ಕೂ ರೈಲ್ವೆಗಳಿಂದ ಆಗುವ ಅಪಘಾತಗಳು ಲೆಕ್ಕವಿಲ್ಲ. ಅವಕ್ಕೆಲ್ಲವೂ ಕಾರಣ, ಖುದ್ದು ಜನರೇ. ಅತ್ತ ರೈಲು ಬರುತ್ತಿರುವುದು ತಿಳಿದರೂ ಲಗುಬಗೆಯಿಂದ ಕ್ರಾಸ್ ಮಾಡಲು ಹೋಗುವುದು, ವಾಹನವನ್ನು ಫಾಸ್ಟ್​ ಆಗಿ ಅತ್ತ ಕಡೆ ತಿರುಗಿಸುವುದು, ಚಲಿಸುತ್ತಿರುವ ರೈಲನ್ನು ಹತ್ತಲು ಹೋಗುವುದು... ಇಂಥ ಅದೆಷ್ಟೋ ಘಟನೆಗಳು ದಿನನಿತ್ಯವೂ ನಡೆಯುತ್ತಲೇ ಇರುತ್ತದೆ.&lt;/p&gt;&lt;h3&gt;&lt;strong&gt;ವೈರಲ್ ವಿಡಿಯೋ&lt;/strong&gt;&lt;/h3&gt;&lt;p&gt;ಅಂಥದ್ದೇ ಒಂದು ವಿಡಿಯೋ ಇದಾಗಿದೆ. ಇದರಲ್ಲಿ ಚಿಕ್ಕ ಮಗುವೊಂದು ಆಕಸ್ಮಿಕವಾಗಿ ರೈಲಿನ ಹಳಿಗಳ ಮೇಲೆ ಬಿದ್ದುಬಿಟ್ಟಿದೆ. ಅತ್ತ ಕಡೆಯಿಂದ ರೈಲು ಬರುತ್ತಿದೆ. ಇಂಥ ಸಂದರ್ಭದಲ್ಲಿ ಒಂದೇ ಕ್ಷಣದ ನಿರ್ಧಾರ ಇಡೀ ಜೀವನವನ್ನೇ ಅವಲಂಬಿಸಿರುತ್ತದೆ. ಅಲ್ಲಿ ಎರಡನೆಯ ಸೆಕೆಂಡ್​ ಯೋಚನೆ ಮಾಡುವಷ್ಟು ಟೈಮೇ ಇರುವುದಿಲ್ಲ. ಇಂಥ ಸನ್ನಿವೇಶದಲ್ಲಿ ಆ ಮಗುವಿನ ಅಪ್ಪ ಅರೆಕ್ಷಣವೂ ಯೋಚಿಸದೇ ಮಗುವನ್ನು ಬಚಾವ್​ ಮಾಡಲು ಹಳಿಯ ಮೇಲೆ ಜಿಗಿದಿದ್ದಾನೆ. ಊಹಿಸಿ ಅತ್ತ ಕಡೆಯಿಂದ ವೇಗದಲ್ಲಿ ರೈಲು ಬರುತ್ತಿದೆ. ಹಳಿಯ ಮೇಲೆ ಮಗ ಬಿದ್ದಿದ್ದಾನೆ. ಆತನನ್ನು ಎತ್ತಲು ಹೋದರೆ ಇಬ್ಬರ ಜೀವಕ್ಕೂ ಅಪಾಯ.&lt;/p&gt;&lt;h3&gt;&lt;strong&gt;ಕ್ಲೈಮ್ಯಾಕ್ಸ್​ ಏನಾಯ್ತು?&lt;/strong&gt;&lt;/h3&gt;&lt;p&gt;ಆದರೆ, ಆ ತಂದೆ, ಮಗನನ್ನು ಹೇಗೋ ಬಿಗಿದಪ್ಪಿಕೊಂಡು ಹಳಿಯ ಸೈಡ್​ನಲ್ಲಿ ಮಲಗಿದ್ದಾನೆ. ಮಗನಿಗೆ ಏಟು ಆಗದಂತೆ, ರೈಲಿನ ಯಾವುದೇ ಭಾಗಗಳು ಆತನಿಗೆ ತಗುಲದಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ರೈಲು ಸಂಪೂರ್ಣವಾಗಿ ಹೋಗುವವರೆಗೂ ಮೇಲೆ ಇದ್ದವರಿಗೆ ಅಲ್ಲಿ ಏನಾಗಿದೆ ಎಂದು ತಿಳಿಯಲು ಆಗುವುದೇ ಇಲ್ಲ. ಹಾಗೆ ಯಾರೇ ಈ ದೃಶ್ಯವನ್ನು ನೋಡುತ್ತಿದ್ದರೂ, ಅಪ್ಪ-ಮಗ ಇಬ್ಬರೂ ಬದುಕಿಲ್ಲ ಎಂದೇ ಅಂದುಕೊಳ್ಳಬೇಕು. ಆದರೆ, ಮೊದಲೇ ಹೇಳಿದ ಹಾಗೆ ಯಮನೇ ಬಂದು ನಿಂತರೂ ಮೃತ್ಯು ಬರುವುದಿಲ್ಲ ಎನ್ನುವಂತೆ, ರೈಲು ಹೋದಮೇಲೆ ಅಪ್ಪ ಮಗನನ್ನು ಅಪ್ಪಿಕೊಂಡು ಎದ್ದಿದ್ದಾನೆ. ಅಮ್ಮ ಮಗುವನ್ನು ಬಿಗಿದಪ್ಪಿ ಕಣ್ಣೀರು ಹಾಕಿದ್ದಾಳೆ. ಒಟ್ಟಿನಲ್ಲಿ ಇದರ ಕ್ಲೈಮ್ಯಾಕ್ಸ್​ ಮಾತ್ರ ಸಿನಿಮಾಕ್ಕಿಂತಲೂ ಮಿಗಿಲಾದಂತಿದೆ. ಇಲ್ಲಿದೆ ನೋಡಿ ವಿಡಿಯೋ&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Headline Haalchaal (@headlinehaalchaal)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/viral/father-jumped-into-railway-track-to-save-his-son-video-gone-viral-suc/articleshow-bxb19h7"/>
        </item>
        <item>
            <title><![CDATA[ಹಾಸನ: ಹಸೆಮಣೆ ಏರಲು 10 ದಿನ ಇರುವಾಗಲೇ ವರ ಮೃತ್ಯು, ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದಾಗ ಭೀಕರ ಅಪಘಾತ!]]></title>
            <link>https://kannada.asianetnews.com/karnataka-districts/groom-to-be-dies-in-tragic-sakleshpura-road-accident-in-hassan-days-before-wedding-gdp/articleshow-i8hln10</link>
            <guid isPermaLink="true">https://kannada.asianetnews.com/karnataka-districts/groom-to-be-dies-in-tragic-sakleshpura-road-accident-in-hassan-days-before-wedding-gdp/articleshow-i8hln10</guid>
            <pubDate>Thu, 30 Apr 2026 11:38:04 +0530</pubDate>
            <description><![CDATA[ಹಾಸನ ಜಿಲ್ಲೆಯಲ್ಲಿ ಮದುವೆಗೆ ಕೇವಲ 10 ದಿನಗಳಿರುವಾಗ ಭೀಕರ ದುರಂತವೊಂದು ಸಂಭವಿಸಿದೆ. ಬೇಲೂರು ತಾಲ್ಲೂಕಿನ ಮನು ಎಂಬ ಯುವಕ, ಪ್ರೀ-ವೆಡ್ಡಿಂಗ್ ಶೂಟ್&zwnj;ಗೆ ತೆರಳುತ್ತಿದ್ದಾಗ ಸಕಲೇಶಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqefyb61rb5fz0aw18e2fshr,imgname-hassan-road-accident-1777529203905.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಮದುವೆ ಸಂಭ್ರಮದ ನಡುವೆ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಹಸೆಮಣೆ ಏರಬೇಕಿದ್ದ ವರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ &amp;nbsp;ನಡೆದಿದೆ &amp;nbsp;ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದ ಬಳಿ ಇಂದು ಬೆಳಿಗ್ಗೆ ಈ ಭೀಕರ ಅಪಘಾತ ಸಂಭವಿಸಿ ವರ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು. ಎಲ್&zwnj;.ಎನ್&zwnj;. (29) ಅಲಿಯಾಸ್ ಗಿರೀಶ್ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;ಮದುವೆಗಿನ್ನು 10 ದಿನವಷ್ಟೇ ಇತ್ತು&lt;/h2&gt;&lt;p&gt;ಮನು. ಎಲ್&zwnj;.ಎನ್&zwnj;. ಅವರ ವಿವಾಹ ಮೇ 10, 2026ರಂದು ನಿಗದಿಯಾಗಿತ್ತು. ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ, ಪ್ರೀ-ವೆಡ್ಡಿಂಗ್ ಶೂಟ್&zwnj;ಗೆ ವಧುವನ್ನು ಕರೆತರಲು ಅವರು ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ.&lt;/p&gt;&lt;p&gt;ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ಜಜ್ಜಿಹೋಗಿದ್ದು, ಮನು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ಕುಟುಂಬದವರನ್ನು ಹಾಗೂ ಗ್ರಾಮಸ್ಥರನ್ನು ಶೋಕ ಸಾಗರದಲ್ಲಿ &amp;nbsp;ಮುಳುಗುವಂತೆ ಮಾಡಿದೆ. ಕೆಲವೇ ದಿನಗಳಲ್ಲಿ ಮದುವೆ ನಡೆಯಬೇಕಿದ್ದ ಮನೆಯಲ್ಲೀಗ ಸಂತಸದ ಬದಲಿಗೆ ಸೂತಕದ ಛಾಯೆ ಆವರಿಸಿದೆ. ಸಂಬಂಧಿಕರು ಹಾಗೂ ಸ್ನೇಹಿತರು ಈ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ&lt;/h2&gt;&lt;p&gt;ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ದುರಂತವು ಮತ್ತೊಮ್ಮೆ ರಸ್ತೆ ಸುರಕ್ಷತೆಯ ಮಹತ್ವವನ್ನು ನೆನಪಿಸುತ್ತಿದ್ದು, ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕೆಂಬ ಸಂದೇಶವನ್ನು ಸಾರುತ್ತಿದೆ&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/groom-to-be-dies-in-tragic-sakleshpura-road-accident-in-hassan-days-before-wedding-gdp/articleshow-i8hln10"/>
        </item>
        <item>
            <title><![CDATA[ಈ ಒಂದು ಪದಾರ್ಥ ಬಳಸಿದ್ರೆ ಎರಡೇ ನಿಮಿಷದಲ್ಲಿ ಹಳೆಯ ಮಿಕ್ಸರ್ ಜಾರ್ ಬ್ಲೇಡ್ ಕೂಡ ಹೊಸದರಂತೆ ಶಾರ್ಪ್ ಆಗುತ್ತೆ]]></title>
            <link>https://kannada.asianetnews.com/kitchen/5-simple-kitchen-hacks-to-sharpen-your-mixer-blades-at-home/articleshow-g69oiwq</link>
            <guid isPermaLink="true">https://kannada.asianetnews.com/kitchen/5-simple-kitchen-hacks-to-sharpen-your-mixer-blades-at-home/articleshow-g69oiwq</guid>
            <pubDate>Thu, 30 Apr 2026 11:31:39 +0530</pubDate>
            <description><![CDATA[&lt;p&gt;&lt;strong&gt;Sharpen mixer blades at home: &lt;/strong&gt;ನಿಮ್ಮ ಮಿಕ್ಸರ್ ಗ್ರೈಂಡರ್ ಮಸಾಲೆ ಅರೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ, ಅದರ ಬ್ಲೇಡ್&zwnj;ಗಳ ಹರಿತ (Sharpness) ಕಡಿಮೆಯಾಗಿದೆ ಎಂದು ಅರ್ಥ ಮಾಡಿಕೊಳ್ಳಿ. ಮೆಕ್ಯಾನಿಕ್ ಬಳಿ ಹೋಗುವ ಬದಲಿಗೆ ಮನೆಯಲ್ಲಿಯೇ ಇರುವ ಉಪ್ಪು, ಐಸ್ ಮತ್ತು ಮೊಟ್ಟೆಯ ಸಿಪ್ಪೆಗಳನ್ನು ಬಳಸಿ ನಿಮಿಷಗಳಲ್ಲಿ ಅದನ್ನು ಹೊಸದರಂತೆ ಮಾಡಬಹುದು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqefdgypnr8qx445vk096w9k,imgname-thumbnail---2026-04-30t112552.402-1777528652756.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅ&lt;/strong&gt;ಡುಗೆ ಮನೆಯ ಗಂಟೆಗಟ್ಟಲೆ ಕೆಲಸವನ್ನು ನಿಮಿಷಗಳಲ್ಲಿ ಮುಗಿಸುವ ಮಿಕ್ಸರ್ ಗ್ರೈಂಡರ್ ಪ್ರತಿಯೊಬ್ಬರ ಮನೆಯಲ್ಲಿಯೂ ಇರುತ್ತದೆ. ಇದು ಅಡುಗೆ ಕೆಲಸವನ್ನು ಸುಲಭಗೊಳಿಸುವಲ್ಲಿ ಮಹಿಳೆಯರ ಉತ್ತಮ ಸಂಗಾತಿಯಾಗಿದೆ. ಪ್ರತಿದಿನದ ಮಸಾಲೆ ಅರೆಯಲು, ಚಟ್ನಿ ಮಾಡಲು ಅಥವಾ ಸ್ಮೂಥಿ ತಯಾರಿಸಲು ಮಿಕ್ಸರ್ ಗ್ರೈಂಡರ್ ಸಹಾಯ ಮಾಡುತ್ತದೆ. ಆದರೆ ಹಲವು ಬಾರಿ ಇದು ಮೋಸ ಮಾಡುತ್ತದೆ. ಅಂದರೆ, ಮಿಕ್ಸರ್ ಬ್ಲೇಡ್&zwnj;ಗಳ ಹರಿತ ಕಡಿಮೆಯಾದಾಗ ಅದು ಪದಾರ್ಥಗಳನ್ನು ಸರಿಯಾಗಿ ಅರೆಯುವುದಿಲ್ಲ. ಇದು ಸರಿಯಾಗಿ ಕೆಲಸ ಮಾಡದಿದ್ದರೆ ಅಡುಗೆ ಕೆಲಸ ಎರಡರಷ್ಟು ಕಷ್ಟವಾಗುತ್ತದೆ.&lt;/p&gt;&lt;p&gt;ಇಂತಹ ಸಮಯದಲ್ಲಿ ಜನರು ಹೆಚ್ಚಾಗಿ ಹೊಸ ಜಾರ್ ಖರೀದಿಸಲು ಅಥವಾ ಮೆಕ್ಯಾನಿಕ್ ಬಳಿ ಹೋಗಲು ಯೋಚಿಸುತ್ತಾರೆ. ಒಂದು ವೇಳೆ ನೀವು ಕೂಡ ಹಾಗೆಯೇ ಮಾಡುತ್ತಿದ್ದರೆ ಸ್ವಲ್ಪ ನಿಲ್ಲಿ. ಕೆಲವು ಸಣ್ಣ ಪದಾರ್ಥಗಳನ್ನು ಬಳಸಿಕೊಂಡು ನೀವು ಮನೆಯಲ್ಲಿಯೇ ನಿಮ್ಮ ಮಿಕ್ಸರ್ ಬ್ಲೇಡ್&zwnj;ಗಳಿಗೆ ಕತ್ತಿಯಂತಹ ಹರಿತ ನೀಡಬಹುದು. ನಿಮ್ಮ ಹಳೆಯ ಮಿಕ್ಸರ್ ಅನ್ನು ಮತ್ತೆ ಹೊಸದರಂತೆ ಮಾಡುವ ಆ ಸುಲಭ ಮತ್ತು ದೇಸಿ ಜುಗಾಡ್&zwnj;ಗಳು ಯಾವುವು ಎಂದು ತಿಳಿಯೋಣ ಬನ್ನಿ.&lt;/p&gt;&lt;h2&gt;&lt;strong&gt;1. ಮೊಟ್ಟೆಯ ಸಿಪ್ಪೆಗಳ ಬಳಕೆ&lt;/strong&gt;&lt;/h2&gt;&lt;p&gt;ಒಂದು ವೇಳೆ ನಿಮ್ಮ ಮನೆಯಲ್ಲಿ ಮೊಟ್ಟೆಗಳನ್ನು ಬಳಸುತ್ತಿದ್ದರೆ, ಅವುಗಳ ಸಿಪ್ಪೆಗಳ ಸಹಾಯದಿಂದ ಮಿಕ್ಸರ್ ಬ್ಲೇಡ್&zwnj;ಗಳನ್ನು ಹರಿತಗೊಳಿಸಬಹುದು. ಮೊದಲು ಮೊಟ್ಟೆಯ ಸಿಪ್ಪೆಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ (ಇದರಿಂದ ಗಲೀಜು ಅಥವಾ ವಾಸನೆ ಇರುವುದಿಲ್ಲ). ನಂತರ ಇವುಗಳನ್ನು ಮಿಕ್ಸರ್ ಜಾರ್&zwnj;ಗೆ ಹಾಕಿ ಕೆಲವು ಸೆಕೆಂಡುಗಳ ಕಾಲ ಮಿಕ್ಸರ್ ಚಲಾಯಿಸಿ. ಸಿಪ್ಪೆಗಳ ಒರಟುತನವು ಬ್ಲೇಡ್&zwnj;ಗಳ ಮೇಲಿರುವ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಬ್ಲೇಡ್&zwnj;ಗಳ ಹರಿತ ಕೂಡ ಉತ್ತಮವಾಗಿ ಮಿಕ್ಸರ್ ಮೊದಲಿನಂತೆ ಕೆಲಸ ಮಾಡಲು ಆರಂಭಿಸುತ್ತದೆ.&lt;/p&gt;&lt;h3&gt;&lt;strong&gt;2. ಕಲ್ಲು ಉಪ್ಪು ಕೂಡ ಸಹಕಾರಿ&lt;/strong&gt;&lt;/h3&gt;&lt;p&gt;ಮಿಕ್ಸರ್ ಬ್ಲೇಡ್&zwnj;ಗಳನ್ನು ಸ್ವಚ್ಛಗೊಳಿಸಲು ಮತ್ತು ಸ್ವಲ್ಪ ಶಾರ್ಪ್ ಮಾಡಲು ಕಲ್ಲು ಉಪ್ಪಿನ ಬಳಕೆ ಎರಡನೇ ಅಗ್ಗದ ಮಾರ್ಗವಾಗಿದೆ. ಈ ವಿಧಾನವು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ಜಾರ್&zwnj;ಗೆ ಒಂದು ಚಮಚ ಕಲ್ಲು ಉಪ್ಪನ್ನು ಹಾಕಿ ಮಿಕ್ಸರ್ ಅನ್ನು ಕೆಲವು ಸೆಕೆಂಡುಗಳ ಕಾಲ ಚಲಾಯಿಸಿ. ಉಪ್ಪಿನ ಹರಳುಗಳು ಒರಟಾಗಿರುವುದರಿಂದ ಬ್ಲೇಡ್ ಮೇಲಿರುವ ಮಂದವಾದ ಪದರವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಮಿಕ್ಸರ್ ಮೊದಲಿಗಿಂತ ಹೆಚ್ಚು ಚೆನ್ನಾಗಿ ಅರೆಯುತ್ತದೆ.&lt;/p&gt;&lt;p&gt;&lt;strong&gt;3. ಐಸ್ ತುಂಡುಗಳ ಕಮಾಲು&lt;/strong&gt;ಫ್ರೀಜರ್&zwnj;ನಲ್ಲಿರುವ ಐಸ್ ಕ್ಯೂಬ್&zwnj;ಗಳು ಕೂಡ ನಿಮಗೆ ಕೆಲಸಕ್ಕೆ ಬರಬಹುದು. ಇದು ಮಿಕ್ಸರ್ ಬ್ಲೇಡ್&zwnj;ಗಳನ್ನು ಸರಿಪಡಿಸಲು ಸುಲಭವಾದ ಮತ್ತು ಅಗ್ಗದ ದಾರಿಯಾಗಿದೆ. ಇದರ ಸಹಾಯದಿಂದ ಬ್ಲೇಡ್ ಹರಿತಗೊಳಿಸಲು ಕೇವಲ 3-4 ಐಸ್ ಕ್ಯೂಬ್&zwnj;ಗಳನ್ನು ಜಾರ್&zwnj;ಗೆ ಹಾಕಿ ಕೆಲವು ಸೆಕೆಂಡುಗಳ ಕಾಲ ಬ್ಲೆಂಡ್ ಮಾಡಬೇಕು. ಮಂಜುಗಡ್ಡೆಯು ಬ್ಲೇಡ್ ಮೇಲಿರುವ ಕೊಳೆಯನ್ನು ಮತ್ತು ಸಿಲುಕಿಕೊಂಡಿರುವ ಸಣ್ಣ ಕಣಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ಬ್ಲೇಡ್ ಸ್ವಚ್ಛವಾಗುತ್ತದೆ ಮತ್ತು ಅದರ ಹರಿತವೂ ಸುಧಾರಿಸುತ್ತದೆ.&lt;/p&gt;&lt;p&gt;&lt;strong&gt;4. ಬೇಕಿಂಗ್ ಸೋಡಾ&lt;/strong&gt;ಅಡುಗೆ ಮನೆಯಲ್ಲಿರುವ ಬೇಕಿಂಗ್ ಸೋಡಾ ಕೇವಲ ಬೇಕಿಂಗ್ ಕೆಲಸಕ್ಕೆ ಮಾತ್ರವಲ್ಲ, ಬ್ಲೇಡ್&zwnj;ಗಳ ಸ್ವಚ್ಛತೆಗೂ ಸಹಾಯ ಮಾಡುತ್ತದೆ. ಒಂದು ವೇಳೆ ಬ್ಲೇಡ್&zwnj;ಗಳ ಮೇಲೆ ಹೆಚ್ಚು ಜಿಡ್ಡು ಅಥವಾ ಕೊಳೆ ಸಂಗ್ರಹವಾಗಿದ್ದರೆ ಬೇಕಿಂಗ್ ಸೋಡಾ ಬಳಸಬಹುದು. ಇದಕ್ಕಾಗಿ ಬೇಕಿಂಗ್ ಸೋಡಾಕ್ಕೆ ಸ್ವಲ್ಪ ನೀರು ಬೆರೆಸಿ ದಪ್ಪವಾದ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಬ್ರಷ್ ಸಹಾಯದಿಂದ ಬ್ಲೇಡ್&zwnj;ಗಳಿಗೆ ಹಚ್ಚಿ ಸುಮಾರು 5 ನಿಮಿಷ ಬಿಡಿ. ನಂತರ ಹಗುರವಾಗಿ ಸ್ವಚ್ಛಗೊಳಿಸಿ. ಇದು ಬ್ಲೇಡ್&zwnj;ಗಳನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಮಿಕ್ಸರ್ ಚೆನ್ನಾಗಿ ಕೆಲಸ ಮಾಡುತ್ತದೆ.&lt;/p&gt;&lt;p&gt;&lt;strong&gt;5. ಅಲ್ಯೂಮಿನಿಯಂ ಫಾಯಿಲ್ ಬಳಕೆ&lt;/strong&gt;ಅಲ್ಯೂಮಿನಿಯಂ ಫಾಯಿಲ್ ಬಳಸಿಯೂ ನೀವು ಮಿಕ್ಸರ್ ಬ್ಲೇಡ್&zwnj;ಗಳನ್ನು ಶಾರ್ಪ್ ಮಾಡಬಹುದು. ಅಲ್ಯೂಮಿನಿಯಂ ಫಾಯಿಲ್&zwnj;ನ ಒಂದು ಸಣ್ಣ ತುಂಡನ್ನು ತೆಗೆದುಕೊಂಡು ಅದನ್ನು ಮಡಚಿ ಸಣ್ಣ ಬಾಲ್&zwnj;ನಂತೆ ಮಾಡಿಕೊಳ್ಳಿ. ನಂತರ ಇದನ್ನು ಮಿಕ್ಸರ್ ಜಾರ್&zwnj;ಗೆ ಹಾಕಿ ಕೆಲವು ಸೆಕೆಂಡು ಚಲಾಯಿಸಿ. ಫಾಯಿಲ್ ಸ್ವಲ್ಪ ಒರಟಾಗಿರುವುದರಿಂದ ಬ್ಲೇಡ್&zwnj;ಗಳಲ್ಲಿರುವ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by MasterChef Pankaj Bhadouria (@masterchefpankajbhadouria)&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/kitchen/5-simple-kitchen-hacks-to-sharpen-your-mixer-blades-at-home/articleshow-g69oiwq"/>
        </item>
        <item>
            <title><![CDATA[ಮನದಲ್ಲಿ ಪ್ರಿಯಕರನ ನೆನಪು, ಟವರ್ ಏಣಿ ಹತ್ತಿದ ವಿವಾಹಿತ ಮಹಿಳೆ; ಉತ್ತರ ಪ್ರದೇಶದಲ್ಲೊಂದು ಭಾರೀ ಹೈಡ್ರಾಮಾ!]]></title>
            <link>https://kannada.asianetnews.com/relationship/married-woman-climbs-mobile-tower-demanding-to-be-with-her-lover-instead-of-her-husband-in-uttar-pradesh/articleshow-xnhwana</link>
            <guid isPermaLink="true">https://kannada.asianetnews.com/relationship/married-woman-climbs-mobile-tower-demanding-to-be-with-her-lover-instead-of-her-husband-in-uttar-pradesh/articleshow-xnhwana</guid>
            <pubDate>Thu, 30 Apr 2026 11:06:24 +0530</pubDate>
            <description><![CDATA[&lt;p&gt;ಈ ಹೈಡ್ರಾಮಾ ಈಗ ಅಂತ್ಯಗೊಂಡಿದ್ದರೂ, ದಾಂಪತ್ಯ ಮತ್ತು ಪ್ರೇಮದ ನಡುವೆ ಸಿಲುಕಿ ಒದ್ದಾಡುವ ನೂರಾರು ಜೀವಗಳಿಗೆ ಪೂಜಾಳ ಈ ಕಥೆ ಒಂದು ಕನ್ನಡಿಯಂತಿದೆ. ಪ್ರೀತಿ ಕೆಲವೊಮ್ಮೆ ಮನುಷ್ಯನನ್ನು ಆಕಾಶದ ಎತ್ತರಕ್ಕೆ ಕೊಂಡೊಯ್ಯುತ್ತದೆ, ಆದರೆ ವಾಸ್ತವದ ನೆಲದ ಮೇಲೆ ಬಂದಾಗ ಸಮಾಜದ ಕಟ್ಟುಪಾಡುಗಳೇ ದೊಡ್ಡ ಗೋಡೆಯಾಗಿ ನಿಲ್ಲುತ್ತವೆ. ಇಲ್ಲಿ ಬದಲಾಗುಬೇಕಾಗಿರುವುದು ಏನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq3krtqhdewzksgkp1zv43nb,imgname-people-born-on-these-dates-are-more-likely-to-have-illicit-relationships-be-careful-with-them-1777164118769.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರೀತಿಗಾಗಿ ಪ್ರಾಣದ ಹಂಗು ತೊರೆದ ಪತ್ನಿ: ವೈವಾಹಿಕ ಬಂಧನಕ್ಕಿಂತ ಪ್ರಿಯಕರನ ಒಲವೇ ಮಿಗಿಲಾಯಿತೇ?&lt;/strong&gt;&lt;/p&gt;&lt;p&gt;ಬಂಧನ ಅತಿಯಾದಾಗ ಬಂಡಾಯ ಶುರುವಾಗುತ್ತದೆ ಎಂಬ ಮಾತಿದೆ. ಅದು ಕೇವಲ ದೇಶದ ಹೋರಾಟಕ್ಕಷ್ಟೇ ಅಲ್ಲ, ಮನಸ್ಸಿನ ಒಳಗಿನ ಪ್ರೀತಿಗೂ ಅನ್ವಯಿಸುತ್ತದೆ. ಕೆಲವೊಮ್ಮೆ ಮನುಷ್ಯ ತನ್ನ ಮನದಾಸೆಯನ್ನು ಪೂರೈಸಿಕೊಳ್ಳಲು ಸಮಾಜದ ಕಟ್ಟುಪಾಡುಗಳನ್ನು ಮೀರಿ, ಪ್ರಾಣವನ್ನೂ ಲೆಕ್ಕಿಸದೆ ಹಠಕ್ಕೆ ಬೀಳುತ್ತಾನೆ. ಇಂತಹದ್ದೇ ಒಂದು ಭಾವನಾತ್ಮಕ ಹಾಗೂ ಅಷ್ಟೇ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ.&lt;/p&gt;&lt;p&gt;ಸುಖವಿಲ್ಲದ ಸಂಸಾರ, ಬಾಡದ ಪ್ರೀತಿ&lt;/p&gt;&lt;p&gt;ಪೂಜಾ ಎಂಬ 30 ವರ್ಷದ ಮಹಿಳೆಗೆ ಸುಮಾರು ಎರಡು ವರ್ಷಗಳ ಹಿಂದೆ ಬರ್ಮಾನೆ ಗ್ರಾಮದ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಸಮಾಜದ ಕಣ್ಣಲ್ಲಿ ಅವಳೊಬ್ಬಳು ವಿವಾಹಿತೆ, ಗೃಹಿಣಿ. ಆದರೆ ಅವಳ ಮನಸ್ಸಿನ ಅಂತರಾಳದಲ್ಲಿ ಬೇರೆಯದೇ ಕಥೆಯಿತ್ತು. ತನ್ನ ಪತಿಯೊಂದಿಗೆ ಸುಖದ ಜೀವನ ನಡೆಸಲು ಅವಳಿಗೆ ಸಾಧ್ಯವಾಗಿರಲಿಲ್ಲ. ವೈವಾಹಿಕ ಜೀವನದಲ್ಲಿ ಅತೃಪ್ತಳಾಗಿದ್ದ ಪೂಜಾಳ ಹೃದಯ ಮಾತ್ರ ಸಮೀಪದ ಹಳ್ಳಿಯಲ್ಲಿದ್ದ ತನ್ನ ಹಳೆಯ ಪ್ರಿಯಕರನಿಗಾಗಿ ಹಂಬಲಿಸುತ್ತಿತ್ತು. ಈ ಅತೃಪ್ತಿ ಮತ್ತು ಪ್ರೇಮದ ನಡುವಿನ ಸಂಘರ್ಷವೇ ಅವಳನ್ನು ಒಂದು ದುಸ್ಸಾಹಸಕ್ಕೆ ಪ್ರೇರೇಪಿಸಿತು.&lt;/p&gt;&lt;h2&gt;ಟವರ್ ಏರಿದ 'ಪ್ರೇಮದ ಪ್ರತಿಭಟನೆ'&lt;/h2&gt;&lt;p&gt;ಮಂಗಳವಾರ ಮಧ್ಯಾಹ್ನ ತನ್ನ ಅತ್ತೆ ಮನೆಯಿಂದ ಹೊರಬಂದ ಪೂಜಾ, ನೇರವಾಗಿ ಹೋಗಿ ಮೊಬೈಲ್ ಟವರ್ ಏರಿದ್ದಾಳೆ. ಅದು ಸಾಮಾನ್ಯ ಎತ್ತರವಲ್ಲ, ಸುಮಾರು ನೂರಾರು ಅಡಿ ಎತ್ತರದ ಟವರ್&zwnj;ನ ತುತ್ತತುದಿಗೆ ಅವಳು ಹೋಗಿ ನಿಂತಾಗ ಇಡೀ ಊರೇ ಬೆಚ್ಚಿಬಿದ್ದಿತ್ತು. ಅತ್ತ ಪ್ರಿಯಕರನನ್ನು ಸೇರಲಾಗದ ನೋವು, ಇತ್ತ ಇಷ್ಟವಿಲ್ಲದ ಸಂಸಾರದಲ್ಲಿ ಬೇಯುತ್ತಿರುವ ಸಂಕಟ &ndash; ಇವೆಲ್ಲವೂ ಅವಳನ್ನು ಆ ಎತ್ತರಕ್ಕೆ ಕೊಂಡೊಯ್ದಿದ್ದವು. &quot;ನನಗೆ ನನ್ನ ಪ್ರಿಯಕರನೇ ಬೇಕು, ಅವನ ಜೊತೆ ಇರಲು ಬಿಡಿ&quot; ಎಂದು ಅವಳು ಅಲ್ಲಿಂದಲೇ ಕಿರುಚಾಡುತ್ತಿದ್ದರೆ, ಕೆಳಗಿದ್ದವರಿಗೆ ಪ್ರಾಣವೇ ಹೋದಂತಾಗಿತ್ತು.&lt;/p&gt;&lt;p&gt;ಮೂರು ಗಂಟೆಗಳ ಕಾಲ ನಡೆದ ಭಾವನಾತ್ಮಕ ಸಂಘರ್ಷ&lt;/p&gt;&lt;p&gt;ಸಾಸಿನಿ ಪೊಲೀಸ್ ಠಾಣಾಧಿಕಾರಿ ವಿಪಿನ್ ಚೌಧರಿ ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದಾಗ ಅವರಿಗೆ ದೊಡ್ಡ ಸವಾಲು ಎದುರಾಗಿತ್ತು. ಇದು ಕೇವಲ ಕಾನೂನಿನ ಸಮಸ್ಯೆಯಾಗಿರಲಿಲ್ಲ, ಬದಲಿಗೆ ಒಬ್ಬ ಮಹಿಳೆಯ ಭಾವನೆಗಳ ಪ್ರಶ್ನೆಯಾಗಿತ್ತು. ಸುಡುವ ಉರಿಬಿಸಿಲನ್ನೂ ಲೆಕ್ಕಿಸದೆ ಪೂಜಾ ಅಲ್ಲಿಯೇ ಕುಳಿತು ಹಠ ಹಿಡಿದಿದ್ದಳು. ಪೊಲೀಸರು ಆಕೆಯನ್ನು ಬಲವಂತವಾಗಿ ಕೆಳಗಿಳಿಸಲು ಸಾಧ್ಯವಿರಲಿಲ್ಲ, ಏಕೆಂದರೆ ಸಣ್ಣ ತಪ್ಪು ನಡೆದರೂ ಅವಳು ಪ್ರಾಣ ಕಳೆದುಕೊಳ್ಳುವ ಸಂಭವವಿತ್ತು. ಸುಮಾರು ಮೂರು ಗಂಟೆಗಳ ಕಾಲ ಪೊಲೀಸರು ಆಕೆಯೊಂದಿಗೆ ಸಮಾಲೋಚನೆ ನಡೆಸಿದರು. ಪ್ರೀತಿಯ ಮಾತುಗಳ ಮೂಲಕ ಆಕೆಗೆ ಸಾಂತ್ವನ ಹೇಳಿ, ಕೆಳಗೆ ಬರುವಂತೆ ಮನವೊಲಿಸಿದರು.&lt;/p&gt;&lt;h3&gt;ಸಮಾಜ ಮತ್ತು ವೈಯಕ್ತಿಕ ಬಯಕೆಗಳ ನಡುವಿನ ಹೋರಾಟ&lt;/h3&gt;&lt;p&gt;ಅಂತಿಮವಾಗಿ ಪೂಜಾ ಕೆಳಗಿಳಿದರೂ, ಅವಳು ಎತ್ತಿದ ಪ್ರಶ್ನೆ ಹಾಗೆಯೇ ಉಳಿದಿದೆ. ಕೇವಲ ಎರಡು ವರ್ಷಗಳ ದಾಂಪತ್ಯದಲ್ಲಿ ಆಕೆ ಅನುಭವಿಸಿದ ಸಂಕಟ ಎಷ್ಟು ದೊಡ್ಡದಿರಬಹುದು? ತನ್ನ ಪ್ರಿಯಕರನನ್ನು ಸೇರಲು ಜೀವವನ್ನೇ ಪಣಕ್ಕಿಟ್ಟು ಟವರ್ ಏರುವಂತಹ ನಿರ್ಧಾರಕ್ಕೆ ಬರಲು ಅವಳ ಮನಸ್ಸಿನಲ್ಲಿದ್ದ ಪ್ರೇಮದ ತೀವ್ರತೆ ಎಂತಹದ್ದಿರಬಹುದು? ಎಂಬ ಚರ್ಚೆ ಈಗ ಶುರುವಾಗಿದೆ.&lt;/p&gt;&lt;p&gt;ಸದ್ಯ ಪೊಲೀಸರು ಆಕೆಗೆ ಕೌನ್ಸೆಲಿಂಗ್ ಕೊಡಿಸುತ್ತಿದ್ದಾರೆ. ಈ ಹೈಡ್ರಾಮಾ ಅಂತ್ಯಗೊಂಡಿದ್ದರೂ, ದಾಂಪತ್ಯ ಮತ್ತು ಪ್ರೇಮದ ನಡುವೆ ಸಿಲುಕಿ ಒದ್ದಾಡುವ ನೂರಾರು ಜೀವಗಳಿಗೆ ಪೂಜಾಳ ಈ ಕಥೆ ಒಂದು ಕನ್ನಡಿಯಂತಿದೆ. ಪ್ರೀತಿ ಕೆಲವೊಮ್ಮೆ ಮನುಷ್ಯನನ್ನು ಆಕಾಶದ ಎತ್ತರಕ್ಕೆ ಕೊಂಡೊಯ್ಯುತ್ತದೆ, ಆದರೆ ವಾಸ್ತವದ ನೆಲದ ಮೇಲೆ ಬಂದಾಗ ಸಮಾಜದ ಕಟ್ಟುಪಾಡುಗಳೇ ದೊಡ್ಡ ಗೋಡೆಯಾಗಿ ನಿಲ್ಲುತ್ತವೆ.&lt;/p&gt;&lt;p&gt;ಇತ್ತೀಚೆಗೆ ಭಾರತದ ಸಮಾಜದಲ್ಲಿ ಅನೈತಿಕ ಸಂಬಂಧ ಮಿತಿಮೀರಿ ಹೆಚ್ಚಾಗುತ್ತಿದೆ. ಆದರೆ, ವಿವಾಹಿತರು ಗಂಟೆಗೊಮ್ಮೆ ಗಳಿಗೆಗೊಮ್ಮೆ ಮನಸ್ಸು ಬದಲಾಯಿಸಿ ಹುಚ್ಚಾಟ ಆಡಬಹುದೇ? ಈ ಪ್ರಶ್ನೆಗೆ ಆದಷ್ಟೂ ಬೇಗ ಉತ್ತರ ಸಿಗಬೇಕಾಗಿದೆ. ಇಲ್ಲದಿದ್ದರೆ 'ಮದುವೆ-ಸಂಸಾರ' ಎನ್ನುವ ಸಮಾಜದ ಕಾನ್ಸೆಪ್ಟ್ ಅರ್ಥ ಕಳೆದುಕೊಳ್ಳುವುದು ಗ್ಯಾರಂಟಿ ಎನ್ನಬಹುದು.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/relationship/married-woman-climbs-mobile-tower-demanding-to-be-with-her-lover-instead-of-her-husband-in-uttar-pradesh/articleshow-xnhwana"/>
        </item>
        <item>
            <title><![CDATA[ಸರ್ಕಾರಿ ಕೆಲಸ, 25 ನೇ ವಯಸ್ಸಿಗೆ ಮದುವೆ, ಚಿಕ್ಕ ವಯಸ್ಸಿನಲ್ಲಿ ಸಂಪತ್ತು ಈ 3 ರಾಶಿಗೆ]]></title>
            <link>https://kannada.asianetnews.com/gallery/relationship/astrology-government-job-marriage-before-25-3-zodiac-signs-that-settle-early-in-life-suh-gysdc7a</link>
            <guid isPermaLink="true">https://kannada.asianetnews.com/gallery/relationship/astrology-government-job-marriage-before-25-3-zodiac-signs-that-settle-early-in-life-suh-gysdc7a</guid>
            <pubDate>Thu, 30 Apr 2026 10:32:15 +0530</pubDate>
            <description><![CDATA[&lt;p&gt;zodiac signs ಜ್ಯೋತಿಷ್ಯ ಶಾಸ್ತ್ರದ ಈ ರಾಶಿಯವರಿಗೆ ಚಿಕ್ಕ ವಯಸ್ಸಿನಲ್ಲಿಯೇ ರಾಜಯೋಗ ಬರುವ ಸಾಧ್ಯತೆಯಿದೆ. ಕಠಿಣ ಪರಿಶ್ರಮದ ಮೂಲಕ ಅವರು 25 ನೇ ವಯಸ್ಸಿನಲ್ಲಿ ಸರ್ಕಾರಿ ಉದ್ಯೋಗಗಳು, ಮದುವೆ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸುತ್ತಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jw0c28berkwggbq0a7mnpyzw,imgname-your-paragraph-text--74--1748064346478.jpg" type="image/jpeg" height="390" width="690"/>
            <content:encoded><![CDATA[&lt;p&gt;zodiac signs ಜ್ಯೋತಿಷ್ಯ ಶಾಸ್ತ್ರದ ಈ ರಾಶಿಯವರಿಗೆ ಚಿಕ್ಕ ವಯಸ್ಸಿನಲ್ಲಿಯೇ ರಾಜಯೋಗ ಬರುವ ಸಾಧ್ಯತೆಯಿದೆ. ಕಠಿಣ ಪರಿಶ್ರಮದ ಮೂಲಕ ಅವರು 25 ನೇ ವಯಸ್ಸಿನಲ್ಲಿ ಸರ್ಕಾರಿ ಉದ್ಯೋಗಗಳು, ಮದುವೆ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸುತ್ತಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮಕರ ರಾಶಿಯವರು ಬಹಳ ಶಿಸ್ತುಬದ್ಧರು, ಜವಾಬ್ದಾರಿಯುತರು ಮತ್ತು ಕಠಿಣ ಪರಿಶ್ರಮಿಗಳು. ಅವರು ತಮ್ಮ ಜೀವನವನ್ನು ವ್ಯವಸ್ಥಿತ ರೀತಿಯಲ್ಲಿ ಯೋಜಿಸುತ್ತಾರೆ. ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಸರ್ಕಾರಿ ಕೆಲಸ ಅಥವಾ ಶಾಶ್ವತ ಕೆಲಸ ಸಿಗುವ ಸಾಧ್ಯತೆ ಹೆಚ್ಚು. ಮಕರ ರಾಶಿಯವರು ಸಮಯಕ್ಕಾಗಿ ಕಾಯುವ ಪ್ರವೃತ್ತಿಯನ್ನು ಹೊಂದಿರುತ್ತಾರೆ - ಆದ್ದರಿಂದ ಅವರ ಪ್ರಯತ್ನಗಳು ಸರಿಯಾದ ಸಮಯದಲ್ಲಿ ಫಲ ನೀಡುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮನೋಭಾವವನ್ನು ಹೊಂದಿರುವುದರಿಂದ 23&ndash;25 ವರ್ಷಗಳ ನಡುವೆ ಮದುವೆ ನಡೆಯುವ ಸಾಧ್ಯತೆ ಹೆಚ್ಚು.&lt;/p&gt;&lt;img&gt;&lt;p&gt;ಕನ್ಯಾ ರಾಶಿಯವರು ತಮ್ಮ ಉತ್ತಮ ಜ್ಞಾನ, ಯೋಜನಾ ಕೌಶಲ್ಯ ಮತ್ತು ನಿರಾತಂಕ ಮನೋಭಾವದಿಂದ ಜೀವನದಲ್ಲಿ ಮುನ್ನಡೆಯುತ್ತಾರೆ. ಅವರು ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ ಮತ್ತು ಉತ್ತಮ ಹೂಡಿಕೆಗಳನ್ನು ಮಾಡುತ್ತಾರೆ. ಅವರು ಪ್ರಾಮಾಣಿಕತೆ ಮತ್ತು ಸತ್ಯತೆಯಿಂದ ವರ್ತಿಸುತ್ತಾರೆ ಮತ್ತು ಯಾವಾಗಲೂ ಕಠಿಣ ಪರಿಶ್ರಮಿಗಳು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಅವರಿಗೆ ಹೆಚ್ಚಿನ ಸಾಮರ್ಥ್ಯವಿದೆ. ಆದ್ದರಿಂದ, ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಸರ್ಕಾರಿ ಉದ್ಯೋಗಗಳು ಸಿಗುತ್ತವೆ. ಅವರ ಸಮತೋಲಿತ ಜೀವನಶೈಲಿ ಅವರ ಕುಟುಂಬದ ವಿಶ್ವಾಸವನ್ನು ಗಳಿಸುತ್ತದೆ. ಇದರಿಂದಾಗಿ, ಮದುವೆ ಕೂಡ ಬೇಗನೆ ಆಗುತ್ತದೆ.&lt;/p&gt;&lt;img&gt;&lt;p&gt;ವೃಷಭ ರಾಶಿಯವರು ಆರಾಮದಾಯಕ ಜೀವನವನ್ನು ಬಯಸುತ್ತಾರೆ. ಆದರೆ ಅದಕ್ಕಾಗಿ ಅವರು ಕಷ್ಟಪಟ್ಟು ಕೆಲಸ ಮಾಡಲು ಹಿಂಜರಿಯುವುದಿಲ್ಲ. ಅವರು ತಮ್ಮ ಪ್ರಯತ್ನಗಳಲ್ಲಿ ಸ್ಥಿರವಾಗಿರುತ್ತಾರೆ. ಆದ್ದರಿಂದ, ಅವರಿಗೆ ಶೀಘ್ರದಲ್ಲೇ ಉದ್ಯೋಗಾವಕಾಶಗಳು ಸಿಗುತ್ತವೆ. ಅವರು ಕುಟುಂಬ ಜೀವನವನ್ನು ಮುಖ್ಯವೆಂದು ಪರಿಗಣಿಸುವುದರಿಂದ, ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಮಕರ, ಕನ್ಯಾ ಮತ್ತು ವೃಷಭ ರಾಶಿಯ ಈ ಮೂರು ರಾಶಿಗಳು ತಮ್ಮ ಜೀವನವನ್ನು ಮುಂಚಿತವಾಗಿಯೇ ನಿರ್ಧರಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದು ಜ್ಯೋತಿಷ್ಯ ಹೇಳುತ್ತದೆ. ಆದರೆ, ರಾಶಿಚಕ್ರ ಚಿಹ್ನೆ ಮಾತ್ರ ಎಲ್ಲವನ್ನೂ ನಿರ್ಧರಿಸುವುದಿಲ್ಲ. ಕಠಿಣ ಪರಿಶ್ರಮ, ಪ್ರಯತ್ನ ಮತ್ತು ಸರಿಯಾದ ನಿರ್ಧಾರಗಳು - ಇವೆಲ್ಲವೂ ನಿಜವಾದ ಯಶಸ್ಸಿನ ರಹಸ್ಯಗಳು. &quot;ಅದೃಷ್ಟವು ಬಾಗಿಲನ್ನು ತೆರೆಯುತ್ತದೆ ... ಆದರೆ ಕಠಿಣ ಪರಿಶ್ರಮವು ಬಾಗಿಲನ್ನು ಒಳಗೆ ತೆಗೆದುಕೊಳ್ಳುತ್ತದೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/astrology-government-job-marriage-before-25-3-zodiac-signs-that-settle-early-in-life-suh-gysdc7a"/>
        </item>
        <item>
            <title><![CDATA[ಕರಾವಳಿ ಕನ್ಯೆ ಹೃದಯ ಕದ್ದ ಬಾಲಿವುಡ್ ಹ್ಯಾಂಡ್‌ಸಮ್ ಹಂಕ್; ಪೂಜಾ ಹೆಗ್ಡೆ-ರೋಹನ್ ಮೆಹ್ರಾ ಮದುವೆ ಆಗ್ತಾರಾ?!]]></title>
            <link>https://kannada.asianetnews.com/cine-world/pooja-hegde-and-rohan-mehra-love-story-becomes-real-talk-of-bollywood-now/articleshow-snboakm</link>
            <guid isPermaLink="true">https://kannada.asianetnews.com/cine-world/pooja-hegde-and-rohan-mehra-love-story-becomes-real-talk-of-bollywood-now/articleshow-snboakm</guid>
            <pubDate>Thu, 30 Apr 2026 10:23:05 +0530</pubDate>
            <description><![CDATA[&lt;p&gt;ರೋಹನ್ ಹೆಸರು ಕೇಳಿದ ತಕ್ಷಣ ನೆಟ್ಟಿಗರು ಗೂಗಲ್&zwnj;ನಲ್ಲಿ ಇವರ ಜಾತಕ ಜಾಲಾಡಲು ಶುರುಮಾಡಿದ್ದಾರೆ. ಈ ರೋಹನ್ ಬೇರೆ ಯಾರೂ ಅಲ್ಲ, 70-80ರ ದಶಕದಲ್ಲಿ ಬಾಲಿವುಡ್ ಆಳಿದ್ದ ದಂತಕಥೆ, ಹಿರಿಯ ನಟ ದಿವಂಗತ ವಿನೋದ್ ಮೆಹ್ರಾ ಅವರ ಸುಪುತ್ರ. ರೋಹನ್ ಇನ್ನೂ ಪುಟ್ಟ ಪೋರನಾಗಿದ್ದಾಗಲೇ ತಂದೆ ವಿನೋದ್ ಮೆಹ್ರಾ ಇಹಲೋಕ ತ್ಯಜಿಸಿದ್ದರು.ಈಗ ಈ ಕಥೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqeb9m3h1rv8aa61dyz6rae5,imgname-pooja-hegde-rohan-mehra-1777524330609.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪೂಜಾ ಹೆಗ್ಡೆ-ರೋಹನ್ ಮೆಹ್ರಾ ಪ್ರೇಮ ಪುರಾಣ!&lt;/strong&gt;&lt;/p&gt;&lt;p&gt;ಹಲೋ ಸಿನಿಮಾ ಪ್ರೇಮಿಗಳೇ! ಇವತ್ತು ಬಿ-ಟೌನ್ ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯ ಗಲ್ಲಿಗಳಲ್ಲಿ ಭಾರಿ ಸೌಂಡ್ ಮಾಡುತ್ತಿರುವ ಒಂದು ಬಿಸಿ ಬಿಸಿ ಗಾಸಿಪ್&zwnj;ನ ನಿಮ್ಮ ಮುಂದಿಡುತ್ತಿದ್ದೇವೆ. ನಮ್ಮ ಕರಾವಳಿ ಬೆಡಗಿ, ಟಾಲಿವುಡ್&zwnj;ನ 'ಬುಟ್ಟಬೊಮ್ಮ' ಪೂಜಾ ಹೆಗ್ಡೆ ಅವರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರಂತೆ! ಹೌದು, ಲಕ್ಷಾಂತರ ಪಡ್ಡೆಹುಡುಗರ ನಿದ್ದೆ ಕದ್ದಿದ್ದ ಈ ಕ್ಯೂಟ್ ಸುಂದರಿ ಈಗ ಬಾಲಿವುಡ್&zwnj;ನ ಹ್ಯಾಂಡ್&zwnj;ಸಮ್ ಹಂಕ್&zwnj;ವೊಬ್ಬರಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.&lt;/p&gt;&lt;p&gt;ಅಷ್ಟಕ್ಕೂ ನಮ್ಮ ಪೂಜಾ ಅವರ ಮನಸ್ಸು ಕದ್ದ ಆ 'ಲಕ್ಕಿ ಫೆಲೋ' ಯಾರು ಅಂತೀರಾ? ಅವರೇ ಬಿ-ಟೌನ್&zwnj;ನ ಉದಯೋನ್ಮುಖ ನಟ ರೋಹನ್ ಮೆಹ್ರಾ!&lt;/p&gt;&lt;p&gt;ಯಾರಿವರಪ್ಪಾ ಈ ರೋಹನ್ ಮೆಹ್ರಾ?&lt;/p&gt;&lt;p&gt;ರೋಹನ್ ಹೆಸರು ಕೇಳಿದ ತಕ್ಷಣ ನೆಟ್ಟಿಗರು ಗೂಗಲ್&zwnj;ನಲ್ಲಿ ಇವರ ಜಾತಕ ಜಾಲಾಡಲು ಶುರುಮಾಡಿದ್ದಾರೆ. ಈ ರೋಹನ್ ಬೇರೆ ಯಾರೂ ಅಲ್ಲ, 70-80ರ ದಶಕದಲ್ಲಿ ಬಾಲಿವುಡ್ ಆಳಿದ್ದ ದಂತಕಥೆ, ಹಿರಿಯ ನಟ ದಿವಂಗತ ವಿನೋದ್ ಮೆಹ್ರಾ ಅವರ ಸುಪುತ್ರ. ರೋಹನ್ ಇನ್ನೂ ಪುಟ್ಟ ಪೋರನಾಗಿದ್ದಾಗಲೇ ತಂದೆ ವಿನೋದ್ ಮೆಹ್ರಾ ಇಹಲೋಕ ತ್ಯಜಿಸಿದ್ದರು. ಆನಂತರ ತಾಯಿ ಕಿರಣ್ ಮೆಹ್ರಾ ಅವರ ಜೊತೆ ಕೀನ್ಯಾದ ಮೊಂಬಾಸಾಗೆ ಹಾರಿದ ರೋಹನ್, ಅಲ್ಲಿಯೇ ಅಜ್ಜ-ಅಜ್ಜಿಯ ಮುದ್ದಿನ ಮರಿಯಾಗಿ ಬೆಳೆದರು. ನಂತರ ಲಂಡನ್&zwnj;ನಲ್ಲಿ (ಯುಕೆ) ತಮ್ಮ ವಿದ್ಯಾಭ್ಯಾಸ ಮುಗಿಸಿ, ಅಪ್ಪನಂತೆಯೇ ತಾನೂ ಬಣ್ಣ ಹಚ್ಚಬೇಕು ಎಂಬ ದೊಡ್ಡ ಕನಸಿನೊಂದಿಗೆ ಮುಂಬೈ ವಿಮಾನ ಹತ್ತಿದರು. ಅಂದಹಾಗೆ, ರೋಹನ್&zwnj;ಗೆ ಸೋನಿಯಾ ಮೆಹ್ರಾ ಎಂಬ ಅಕ್ಕ ಕೂಡ ಇದ್ದಾರೆ. ಅವರು 2007ರಲ್ಲೇ 'ವಿಕ್ಟೋರಿಯಾ ನಂ. 203' ಚಿತ್ರದ ಮೂಲಕ ಬಾಲಿವುಡ್&zwnj;ಗೆ ಎಂಟ್ರಿ ಕೊಟ್ಟಿದ್ದರು.&lt;/p&gt;&lt;h2&gt;ಕ್ಯಾಮೆರಾ ಹಿಂದಿನಿಂದ ಸ್ಕ್ರೀನ್ ಮುಂದಕ್ಕೆ!&lt;/h2&gt;&lt;p&gt;ಸ್ಟಾರ್ ಕಿಡ್ ಆಗಿದ್ದರೂ ರೋಹನ್ ನೇರವಾಗಿ ಹೀರೋ ಆಗಲಿಲ್ಲ. ಬದಲಿಗೆ ಸಂಜಯ್ ಲೀಲಾ ಬನ್ಸಾಲಿ ಅವರ ಬ್ಲಾಕ್ ಬಸ್ಟರ್ 'ಬಾಜಿರಾವ್ ಮಸ್ತಾನಿ' ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕ್ಯಾಮೆರಾ ಹಿಂದೆ ಬೆವರು ಸುರಿಸಿದರು. ಆಮೇಲೆ 2018ರಲ್ಲಿ ಸೈಫ್ ಅಲಿ ಖಾನ್ ಜೊತೆ 'ಬಜಾರ್' ಚಿತ್ರದ ಮೂಲಕ ಗ್ರ್ಯಾಂಡ್ ಆಗಿ ಹೀರೋ ಆಗಿ ಎಂಟ್ರಿ ಕೊಟ್ಟರು. ಮೊದಲ ಚಿತ್ರದಲ್ಲೇ ತಮ್ಮ ಅದ್ಭುತ ನಟನೆಗೆ ಫಿಲ್ಮ್&zwnj;ಫೇರ್&zwnj;ನ 'ಅತ್ಯುತ್ತಮ ಚೊಚ್ಚಲ ನಟ' ಪ್ರಶಸ್ತಿ ಎತ್ತಿಹಿಡಿದ ಪ್ರತಿಭಾವಂತ ಈತ. ಕೇವಲ ರೊಮ್ಯಾಂಟಿಕ್ ಹೀರೋ ಆಗಿ ಮಾತ್ರವಲ್ಲ, '420 IPC' ಎಂಬ ಲೀಗಲ್ ಡ್ರಾಮಾದಲ್ಲಿ ವಕೀಲನಾಗಿ, 'ಕಾಲಾ' (Kaala) ಎಂಬ ವೆಬ್ ಸೀರೀಸ್&zwnj;ನಲ್ಲಿ ವಿಭಿನ್ನ ಪಾತ್ರದ ಮೂಲಕ ತಾನೊಬ್ಬ ಕಂಟೆಂಟ್ ಪ್ರಿಯ ನಟ ಎಂಬುದನ್ನು ಸಾಬೀತು ಮಾಡಿದ್ದಾರೆ.&lt;/p&gt;&lt;h3&gt;ಪ್ರೀತಿ, ಬ್ರೇಕಪ್... ಈಗ ಪೂಜಾ ಜೊತೆ ಸೆಟಪ್!&lt;/h3&gt;&lt;p&gt;ಇಲ್ಲೊಂದು ಇಂಟರೆಸ್ಟಿಂಗ್ ಟ್ವಿಸ್ಟ್ ಇದೆ. ರೋಹನ್ ಮೆಹ್ರಾ ಹೆಸರು ಈ ಹಿಂದೆ ಬಾಲಿವುಡ್&zwnj;ನ ಮತ್ತೊಬ್ಬ ಗ್ಲಾಮರಸ್ ನಟಿ ತಾರಾ ಸುತಾರಿಯಾ ಜೊತೆ ತಳುಕುಹಾಕಿಕೊಂಡಿತ್ತು. ತಾರಾ ಸಿನಿಮಾಗೆ ಬರುವ ಮುನ್ನವೇ ಇವರಿಬ್ಬರ ಲವ್ ಸ್ಟೋರಿ ಶುರುವಾಗಿತ್ತು. ಪಾರ್ಟಿ, ಇವೆಂಟ್ ಅಂತ ಎಲ್ಲೆಡೆ ಕೈ-ಕೈ ಹಿಡಿದು ಓಡಾಡುತ್ತಿದ್ದ ಈ ಜೋಡಿ ದಿಢೀರ್ ಅಂತ ಬ್ರೇಕಪ್ ಮಾಡಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿತ್ತು.&lt;/p&gt;&lt;p&gt;ತಾರಾ ಜೊತೆಗಿನ ಬ್ರೇಕಪ್ ನಂತರ ಸಿಂಗಲ್ ಆಗಿದ್ದ ರೋಹನ್ ಕಣ್ಣು ಈಗ ನಮ್ಮ ಪೂಜಾ ಹೆಗ್ಡೆ ಮೇಲೆ ಬಿದ್ದಿದೆ. ಇಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ, ಸೋಶಿಯಲ್ ಮೀಡಿಯಾದಲ್ಲಿ ಒಬ್ಬರಿಗೊಬ್ಬರು ಹಾರ್ಟ್ ಎಮೋಜಿಗಳನ್ನು ಕಳುಹಿಸುತ್ತಾ, ಬರ್ತ್&zwnj;ಡೇ ವಿಶ್ ಮಾಡುತ್ತಾ ಪರೋಕ್ಷವಾಗಿ ಪ್ರೇಮಕಾವ್ಯ ಬರೆಯುತ್ತಿದ್ದಾರೆ. &quot;ನಾವು ರಿಲೇಶನ್&zwnj;ಶಿಪ್&zwnj;ನಲ್ಲಿದ್ದೀವಿ&quot; ಅಂತ ಇವರಿಬ್ಬರೂ ಕ್ಯಾಮೆರಾ ಮುಂದೆ ಅಧಿಕೃತವಾಗಿ ಒಪ್ಪಿಕೊಳ್ಳದಿದ್ದರೂ, ಇವರ ಕಣ್ಣುಗಳ ಭಾಷೆ, ಬಾಡಿ ಲಾಂಗ್ವೇಜ್ ನೋಡಿದ ಅಭಿಮಾನಿಗಳು, &quot;ಇದೇನಿದು ಹೊಸ ಪ್ರೇಮಲೋಕದ ಪಯಣವಾ?&quot; ಎಂದು ಉದ್ಗರಿಸುತ್ತಿದ್ದಾರೆ.&lt;/p&gt;&lt;p&gt;ಸದ್ಯಕ್ಕಂತೂ ಇವರ ಡೇಟಿಂಗ್ ವದಂತಿ ಬಿ-ಟೌನ್&zwnj;ನ ಹಾಟ್ ಟಾಪಿಕ್. ಈ ಪ್ರೀತಿಯ ಪಯಣ ಮದುವೆ ಮಂಟಪದವರೆಗೆ ಹೋಗುತ್ತಾ? ಅಥವಾ ಇದೂ ಕೂಡ ಮತ್ತೊಂದು ಗಾಸಿಪ್ ಆಗಿಯೇ ಉಳಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ!&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/pooja-hegde-and-rohan-mehra-love-story-becomes-real-talk-of-bollywood-now/articleshow-snboakm"/>
        </item>
        <item>
            <title><![CDATA[ದಾಂಪತ್ಯದ ಕಲಹದ ನಂತರ ಸಂಧಾನಕ್ಕೆ ಬಂದು ಇಬ್ಬರು ಪುಟ್ಟ ಮಕ್ಕಳನ್ನು ಠಾಣೆಯಲ್ಲೇ ಬಿಟ್ಟು ಹೋದ ಪೋಷಕರು]]></title>
            <link>https://kannada.asianetnews.com/relationship/marital-dispute-parents-left-their-two-young-daughters-at-police-station/articleshow-lpvt09i</link>
            <guid isPermaLink="true">https://kannada.asianetnews.com/relationship/marital-dispute-parents-left-their-two-young-daughters-at-police-station/articleshow-lpvt09i</guid>
            <pubDate>Thu, 30 Apr 2026 10:22:05 +0530</pubDate>
            <description><![CDATA[&lt;p&gt;ದಾಂಪತ್ಯ ಸರಿ ಇಲ್ಲದೇ ಹೋದರೆ ಅದರ ಪರಿಣಾಮ ದಂಪತಿಗೆ ಜನಿಸಿದ ಮಕ್ಕಳ ಮೇಲೆ ಅದೆಂತಹ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದಕ್ಕೆ ಹೈದರಾಬಾದ್&zwnj;ನಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಗಂಡ ಹೆಂಡತಿ ಜಗಳದಿಂದ ಕೂಸು ಬಡವಾಯ್ತು ಎಂಬ ಗಾದೆಯಂತೆ ಇಲ್ಲಿ ಗಂಡ ಹೆಂಡತ ಜಗಳದಿಂದ ಮಕ್ಕಳು ಅನಾಥರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqeb6hr65254ygjkh5xqv2s8,imgname-telangana-couple-leaves-daughters-at-police-station-1777524229894.jpg" type="image/jpeg" height="390" width="690"/>
            <content:encoded><![CDATA[&lt;h3&gt;&lt;strong&gt;ಗಂಡ ಹೆಂಡತಿ ಜಗಳದಿಂದ ಬಡವಾದ ಮಕ್ಕಳು&lt;/strong&gt;&lt;/h3&gt;&lt;p&gt;ತೆಲಂಗಾಣ: ದಾಂಪತ್ಯ ಸರಿ ಇಲ್ಲದೇ ಹೋದರೆ ಅದರ ಪರಿಣಾಮ ದಂಪತಿಗೆ ಜನಿಸಿದ ಮಕ್ಕಳ ಮೇಲೆ ಅದೆಂತಹ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದಕ್ಕೆ ಹೈದರಾಬಾದ್&zwnj;ನಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಗಂಡ ಹೆಂಡತಿ ಜಗಳದಿಂದ ಕೂಸು ಬಡವಾಯ್ತು ಎಂಬ ಗಾದೆಯಂತೆ ಇಲ್ಲಿ ಗಂಡ ಹೆಂಡತ ಜಗಳದಿಂದ ಮಕ್ಕಳು ಅನಾಥರಾಗಿದ್ದು, ಮಕ್ಕಳ ಸ್ಥಿತಿಗೆ ಪೊಲೀಸರೇ ಮರುಗಿದ್ದಾರೆ. ನೆರೆಯ ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.&lt;/p&gt;&lt;p&gt;&lt;strong&gt;ಆಗಿದ್ದೇನು?&lt;/strong&gt;&lt;/p&gt;&lt;p&gt;ಅಂಗಡಿಯೊಂದನ್ನು ಹೊಂದಿದ್ದ ರವಿಕುಮಾರ್ ಹಾಗೂ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ಲಲಿತಾ ಎಂಬುವವರು ದಶಕಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಾಂಪತ್ಯದಲ್ಲಿ ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಆದರೆ ವರ್ಷಗಳುರುಳುತ್ತಿದ್ದಂತೆ ಇಬ್ಬರ ಮಧ್ಯೆ ಗಲಾಟೆಗಳಾಗುವುದಕ್ಕೆ ಶುರುವಾಗಿದೆ. ಅವರ ಸಂಬಂಧ ಹದಗೆಡುತ್ತಾ ಬಂದಿದ್ದು, ಜಗಳಗಳು ಪ್ರತಿದಿನ ಸಾಮಾನ್ಯ ಎಂಬಂತಾಗಿತ್ತು. ಇಬ್ಬರ ಮಧ್ಯೆ ಸಣ್ಣಪುಟ್ಟ ವಿಚಾರಗಳಿಗೆ ಜಗಳಗಳು ನಡೆಯುತ್ತಲೇ ಇದ್ದವು.&lt;/p&gt;&lt;p&gt;ಹೀಗಾಗಿ ಕೆಲ ಸಮಯದ ಹಿಂದೆ ಲಲಿತಾ ಅವರು ಗಂಡ ರವಿಕುಮಾರ್ ವಿರುದ್ಧ ಕೌಟುಂಬಿಕ ಕಲಹದ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಪೊಲೀಸರು ದಂಪತಿಯನ್ನು ಕರೆಸಿ ಕೌನ್ಸೆಲಿಂಗ್(ಸಂಧಾನ) ಮಾಡುವುದಕ್ಕೆ ಇದು ಕಾರಣವಾಗಿತ್ತು. ಅದೇ ರೀತಿ ಗಂಡ ಹೆಂಡತಿ ಮಧ್ಯೆ ಏಪ್ರಿಲ್ 28ರಂದು ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಲಲಿತಾ ತನ್ನ ಕತ್ತಿನಲ್ಲಿದ್ದ ತಾಳಿ ಹಾಗೂ ಕಾಲುಂಗುರವನ್ನು ಬಿಚ್ಚಿ ಟೇಬಲ್ ಮೇಲೆ ಇರಿಸಿದ್ದಾಳೆ. ಬಳಿಕ ತಾನು ಯಾವುದೇ ಕಾರಣಕ್ಕೂ ಈ ಸಂಬಂಧದಲ್ಲಿ ಮುಂದುವರೆಯುವುದಿಲ್ಲ ಹಾಗೂ ಮಕ್ಕಳ ಆರೈಕೆ ಮಾಡುವುದಿಲ್ಲ ಎಂದು ಹೇಳಿ ಠಾಣೆಯಿಂದ ಹೊರಟು ಹೋಗಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅತ್ಯಂತ ವೇಗದ ಪ್ರಾಣಿ ಚೀತಾ ಜೀವಿತಾವಧಿಯ ಶೇಕಡಾ 90ರಷ್ಟು ಕಾಲ ವಿಶ್ರಾಂತಿಯಲ್ಲೇ ಕಳೆಯೋದೇಕೆ?&lt;/strong&gt;&lt;/p&gt;&lt;p&gt;ಆಕೆ ಹೋದ ನಂತರ ರವಿ ಕೂಡ ಆಕೆಯ ದಾರಿಯನ್ನೇ ಹಿಡಿದಿದ್ದಾನೆ. ಮಕ್ಕಳನ್ನು ಠಾಣೆಯಲ್ಲೇ ಬಿಟ್ಟು ಆತ ಹೊರ ನಡೆದಿದ್ದಾನೆ. ಕರೀಂ ನಗರ ಜಿಲ್ಲೆಯ ಲೋವರ್ ಮನೈರ್ ಡ್ಯಾಮ್&zwnj; ಪೊಲೀಸ್ ಠಾಣೆಯೊಳಗೆ ಈ ಘಟನೆ ನಡೆದಿದೆ. ಅಪ್ಪ ಅಮ್ಮ ತಮ್ಮನ್ನು ಠಾಣೆಗೆ ಕರೆದುಕೊಂಡು ಹೋಗಿ ಅಲ್ಲೇ ಬಿಟ್ಟು ಒಬ್ಬರಾದ ಮೇಲೆ ಒಬ್ಬರು ಹೋಗಿದ್ದರಿಂದ ಆಘಾತಗೊಂಡ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಭಯ ಆತಂಕದಿಂದ ಕಣ್ಣೀರಿಟ್ಟಿದ್ದಾರೆ. ಪೊಲೀಸರು ಕರೆ ಮಾಡಿದರೆ ಗಂಡನಾಗಲಿ ಅಥವಾ ಹೆಂಡತಿಯಾಗಲಿ ಪೊಲೀಸರ ಕರೆ ಸ್ವೀಕರಿಸಿಲ್ಲ.&lt;/p&gt;&lt;p&gt;ನಂತರ ಪೊಲೀಸ್ ಸಿಬ್ಬಂದಿ ಹಾಗೂ ಸಬ್ ಇನ್ಸ್&zwnj;ಪೆಕ್ಟರ್ ಅನ್ವರ್ ಅವರು ಮಕ್ಕಳಿಗೆ ಸುರಕ್ಷತೆಯ ಭರವಸೆ ನೀಡಿ ಅವರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದ್ದಾರೆ. ಮಕ್ಕಳ ಪೋಷಕರನ್ನು ವಾಪಸ್ ಕರೆಸುವುದಕ್ಕೆ ಪೊಲೀಸರು ಮಾಡಿದ ಹಲವು ಪ್ರಯತ್ನಗಳು ವಿಫಲಗೊಂಡ ನಂತರ ಪೊಲೀಸ್ ಅಧಿಕಾರಿಗಳು ಮಕ್ಕಳ ತಂದೆಯ ಕಡೆಯ ಅಜ್ಜಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ಅವರು ಬಂದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಪ್ರಕರಣ ದಾಖಲಿಸಿದ್ದು, ಅವರು ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಜೈಲಿನಲ್ಲಿ ಕೈದಿ ಸಾವು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೇರ್ ಟೇಕರ್ ಮಹಿಳೆಯಿಂದ ಹನಿಟ್ರ್ಯಾಪ್ ಆರೋಪ!&lt;/strong&gt;&lt;/p&gt;]]></content:encoded>
            <category>life</category>
            <dc:creator>Anusha Kb</dc:creator>
            <atom:link href="https://kannada.asianetnews.com/relationship/marital-dispute-parents-left-their-two-young-daughters-at-police-station/articleshow-lpvt09i"/>
        </item>
        <item>
            <title><![CDATA[ಬೆಂಡೆಕಾಯಿ ಪಲ್ಯ ಅಥವಾ ಕರಿ ಮಾಡುವಾಗ ಉಪ್ಪು ಯಾವಾಗ ಹಾಕ್ಬೇಕು? 90% ಜನರು ಈ ತಪ್ಪು ಮಾಡ್ತಾರೆ!]]></title>
            <link>https://kannada.asianetnews.com/food/the-right-time-to-add-salt-in-bhindi-sabzi-for-perfect-crispiness/articleshow-9b2fnov</link>
            <guid isPermaLink="true">https://kannada.asianetnews.com/food/the-right-time-to-add-salt-in-bhindi-sabzi-for-perfect-crispiness/articleshow-9b2fnov</guid>
            <pubDate>Thu, 30 Apr 2026 08:36:36 +0530</pubDate>
            <description><![CDATA[&lt;p&gt;&lt;strong&gt;How to make crispy bhindi: &lt;/strong&gt;ಬೆಂಡೆಕಾಯಿ ಪಲ್ಯ ಅಥವಾ ಕರಿ ಮಾಡುವಾಗ ನಾವು ಮಾಡುವ ಒಂದು ಸಣ್ಣ ತಪ್ಪು ಇಡೀ ಅಡುಗೆಯ ರುಚಿಯನ್ನೇ ಹಾಳು ಮಾಡಬಹುದು. ಅದರಲ್ಲೂ ಮುಖ್ಯವಾಗಿ ಉಪ್ಪು ಹಾಕುವ ಸರಿಯಾದ ಸಮಯ ಯಾವುದು ಎಂಬುದು 90% ಜನರಿಗೆ ತಿಳಿದಿಲ್ಲ! ಬೆಂಡೆಕಾಯಿಯನ್ನು ಹೋಟೆಲ್ ಶೈಲಿಯಲ್ಲಿ ರುಚಿಕರವಾಗಿ ತಯಾರಿಸಲು ಕೆಲವು ಸುಲಭ ಟಿಪ್ಸ್ ಇಲ್ಲಿದೆ ನೋಡಿ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jzmeczqns586nkbek1z8xs7h,imgname-crispy-bhindi-tips-1751959109365.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅ&lt;/strong&gt;ನೇಕ ಬಾರಿ ಬೆಂಡೆಕಾಯಿಯ ಅಡುಗೆ ಮಾಡುವಾಗ ಅದು ಅಂಟಂಟಾಗಿ (ಜಿಗುಟಾಗಿ) ಆಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ತಪ್ಪು ಸಮಯದಲ್ಲಿ ಉಪ್ಪು ಹಾಕುವುದು. ಆದ್ದರಿಂದ ಬೆಂಡೆಕಾಯಿ ಕ್ರಂಚಿಯಾಗಿ ಬರಲು ಉಪ್ಪನ್ನು ಯಾವಾಗ ಹಾಕಬೇಕು ಎಂಬ ಸರಿಯಾದ ಸಮಯವನ್ನು ಇಲ್ಲಿ ತಿಳಿಯಿರಿ. ಇದನ್ನು ತಿಳಿದುಕೊಂಡರೆ ನೀವು ಮುಂದೆಂದೂ ಅಂಟಂಟಾದ ಪಲ್ಯ ಅಥವಾ ಕರಿ ಮಾಡುವುದಿಲ್ಲ.&lt;/p&gt;&lt;p&gt;&lt;strong&gt;ನೀರು ಹಾಕದಿದ್ದರೂ ಪಲ್ಯ ಅಂಟಂಟಾಗಿ ಬರುತ್ತೆ&lt;/strong&gt;ಬೇಸಿಗೆ ಕಾಲದಲ್ಲಿ ಹೀರೆಕಾಯಿ, ಕುಂಬಳಕಾಯಿ ಮತ್ತು ಬೆಂಡೆಕಾಯಿ ಪಲ್ಯವನ್ನು ಹೆಚ್ಚಾಗಿ ಮಾಡಲಾಗುತ್ತದೆ. ಈ ಋತುವಿನಲ್ಲಿ ಬೆಂಡೆಕಾಯಿ ಪಲ್ಯ ಪ್ರತಿಯೊಬ್ಬ ಭಾರತೀಯರ ಮನೆಯಲ್ಲಿಯೂ ಇರುತ್ತದೆ. ಆದರೆ ಅದೆಷ್ಟೋ ಜನರು ಬೆಂಡೆಕಾಯಿ ಜಿಗುಟಾಗುತ್ತದೆ ಮತ್ತು ರುಚಿ ಕೆಡುತ್ತದೆ ಎಂಬ ದೂರು ಹೇಳುತ್ತಾರೆ. ನೀವು ಮಾಡುವ ಒಂದು ಸಣ್ಣ ತಪ್ಪು, ನೀರು ಹಾಕದಿದ್ದರೂ ಪಲ್ಯವನ್ನು ಅಂಟಂಟಾಗಿ ಮಾಡುತ್ತದೆ.&lt;/p&gt;&lt;p&gt;&lt;strong&gt;90 ಪ್ರತಿಶತ ಜನರಿಗೆ ಸರಿಯಾದ ಸಮಯ ಗೊತ್ತಿಲ್ಲ&lt;/strong&gt;ಪ್ರತಿ ತರಕಾರಿಯನ್ನು ಬೇಯಿಸುವ ವಿಧಾನ ಬೇರೆ ಬೇರೆ ಇರುತ್ತದೆ. ಆದರೆ ಕೆಲವೊಮ್ಮೆ ಜನರು ಎಲ್ಲ ತರಕಾರಿಗಳನ್ನು ಒಂದೇ ರೀತಿ ಬೇಯಿಸುವ ತಪ್ಪು ಮಾಡುತ್ತಾರೆ. ಬೆಂಡೆಕಾಯಿ ತುಂಬಾ ಸುಲಭವಾಗಿ ಮಾಡುವ ತರಕಾರಿ, ಆದರೆ ಉಪ್ಪು ಹಾಕುವ ವಿಚಾರದಲ್ಲಿ 90 ಪ್ರತಿಶತ ಜನರಿಗೆ ಸರಿಯಾದ ಸಮಯ ಯಾವುದು ಎಂದು ತಿಳಿದಿಲ್ಲ.&lt;/p&gt;&lt;p&gt;&lt;strong&gt;ಉಪ್ಪು ಹಾಕಲು ಸರಿಯಾದ ಸಮಯ ಯಾವುದು?&lt;/strong&gt;ಬೆಂಡೆಕಾಯಿ ಪಲ್ಯ ಮಾಡುವಾಗ ಉಪ್ಪನ್ನು ಯಾವಾಗಲೂ ಕೊನೆಯಲ್ಲಿ ಅಥವಾ ಪಲ್ಯ ಬಹುತೇಕ ಬೆಂದ ಮೇಲೆ ಹಾಕಬೇಕು. ಬೆಂಡೆಕಾಯಿಯನ್ನು ಹೆಚ್ಚಿ ನೇರವಾಗಿ ಕಡಾಯಿಗೆ ಹಾಕಿದ ತಕ್ಷಣ ಉಪ್ಪು ಹಾಕಿದರೆ, ಬೆಂಡೆಕಾಯಿ ನೀರು ಬಿಡಲು ಆರಂಭಿಸುತ್ತದೆ. ಇದೇ ನೀರು ಪಲ್ಯವನ್ನು ಅಂಟಂಟಾಗಿ ಮಾಡುತ್ತದೆ. ಆದ್ದರಿಂದ ಬೆಂಡೆಕಾಯಿ ಬೆಂದ ನಂತರವೇ ಉಪ್ಪು ಹಾಕಿ, ಸ್ವಲ್ಪ ಸಮಯದ ನಂತರ ಗ್ಯಾಸ್ ಆಫ್ ಮಾಡಿ.&lt;/p&gt;&lt;h2&gt;&lt;strong&gt;ಆರಂಭದಲ್ಲೇ ಉಪ್ಪು ಏಕೆ ಹಾಕಬಾರದು?&lt;/strong&gt;&lt;/h2&gt;&lt;p&gt;ಉಪ್ಪು ತರಕಾರಿಯಲ್ಲಿರುವ ತೇವಾಂಶವನ್ನು ಹೊರಹಾಕುವ ಗುಣ ಹೊಂದಿದೆ. ಬೆಂಡೆಕಾಯಿಯಲ್ಲಿ ಮೊದಲೇ ಜಿಗುಟು ಅಂಶವಿರುತ್ತದೆ, ಆರಂಭದಲ್ಲೇ ಉಪ್ಪು ಹಾಕಿದಾಗ ತೇವಾಂಶ ಹೆಚ್ಚಾಗಿ ಪಲ್ಯ ಅಂಟಂಟಾಗುತ್ತದೆ. ಇದರಿಂದ ಬೆಂಡೆಕಾಯಿ ಕ್ರಂಚಿಯಾಗಿರಲ್ಲ ಮತ್ತು ರುಚಿಯೂ ಸಪ್ಪೆಯಾಗುತ್ತದೆ.&lt;/p&gt;&lt;p&gt;&lt;strong&gt;ಬೆಂಡೆಕಾಯಿಯನ್ನು ಕ್ರಂಚಿಯಾಗಿ ಮಾಡಲು ಸುಲಭ ಟಿಪ್ಸ್&lt;/strong&gt;ಬೆಂಡೆಕಾಯಿಯನ್ನು ತೊಳೆದ ನಂತರ ಪೂರ್ತಿಯಾಗಿ ಒಣಗಿಸಿ, ನೀರು ಇರಬಾರದು.ಹೆಚ್ಚಿದ ತಕ್ಷಣ ಕಡಾಯಿಗೆ ಹಾಕಿ, ದೀರ್ಘಕಾಲ ತೆರೆದಿಡಬೇಡಿ.ಆರಂಭದಲ್ಲಿ ಹೆಚ್ಚಿನ ಉರಿಯಲ್ಲಿ (high flame) ಬೆಂಡೆಕಾಯಿಯನ್ನು ಸ್ವಲ್ಪ ಹುರಿಯಿರಿ.ಉಪ್ಪನ್ನು ಯಾವಾಗಲೂ ಕೊನೆಯಲ್ಲಿ ಹಾಕಿ.ಬೇಕಿದ್ದರೆ ಸ್ವಲ್ಪ ಲಿಂಬೆ ರಸ ಅಥವಾ ಆಮ್&zwnj;ಚೂರ್ ಪುಡಿಯನ್ನು ಬಳಸಬಹುದು, ಇದು ಜಿಗುಟುತನವನ್ನು ಕಡಿಮೆ ಮಾಡುತ್ತದೆ.&lt;/p&gt;&lt;p&gt;&lt;strong&gt;ಒಂದು ಸಣ್ಣ ತಪ್ಪು, ದೊಡ್ಡ ವ್ಯತ್ಯಾಸ&lt;/strong&gt;ಅನೇಕ ಜನರು ಅವಸರದಲ್ಲಿ ಎಲ್ಲಾ ಮಸಾಲೆಗಳನ್ನು ಉಪ್ಪಿನೊಂದಿಗೆ ಒಟ್ಟಿಗೆ ಹಾಕುತ್ತಾರೆ. ಆದರೆ ಬೆಂಡೆಕಾಯಿ ವಿಷಯದಲ್ಲಿ ಈ ಸಣ್ಣ ತಪ್ಪು ಇಡೀ ಪಲ್ಯದ ವಿನ್ಯಾಸವನ್ನು (texture) ಹಾಳು ಮಾಡುತ್ತದೆ. ನೀವು ಸರಿಯಾದ ಸಮಯದಲ್ಲಿ ಉಪ್ಪು ಹಾಕಿದರೆ, ಬೆಂಡೆಕಾಯಿ ಪಲ್ಯ ನೋಡಲು ಚೆನ್ನಾಗಿರುವುದು ಮಾತ್ರವಲ್ಲದೆ ತಿನ್ನಲು ಕುರು ಕುರು ಅಂತ ರುಚಿಯಾಗಿರುತ್ತದೆ.&lt;/p&gt;&lt;h3&gt;&lt;strong&gt;ಇದು ಗಮನದಲ್ಲಿರಲಿ&lt;/strong&gt;&lt;/h3&gt;&lt;p&gt;&lt;strong&gt;ದಪ್ಪ ತಳದ ಕಡಾಯಿ ಬಳಸಿ: &lt;/strong&gt;ಬೆಂಡೆಕಾಯಿ ಪಲ್ಯ ಮಾಡುವಾಗ ಯಾವಾಗಲೂ ಕಬ್ಬಿಣದ ಅಥವಾ ದಪ್ಪ ತಳವಿರುವ ಕಡಾಯಿ ಬಳಸಿ. ತೆಳುವಾದ ಪಾತ್ರೆ ಬಳಸಿದರೆ ಬೆಂಡೆಕಾಯಿ ಬೇಗನೆ ಸೀದು ಹೋಗುತ್ತದೆ ಮತ್ತು ಕ್ರಂಚಿಯಾಗುವ ಮೊದಲೇ ಮೃದುವಾಗಿಬಿಡುತ್ತದೆ.&lt;/p&gt;&lt;p&gt;&lt;strong&gt;ಮುಚ್ಚಳ ಮುಚ್ಚಬೇಡಿ:&lt;/strong&gt; ಬೆಂಡೆಕಾಯಿ ಬೇಯಿಸುವಾಗ ಪಾತ್ರೆಯ ಮೇಲೆ ಮುಚ್ಚಳ ಮುಚ್ಚಬಾರದು. ಮುಚ್ಚಳ ಮುಚ್ಚಿದರೆ ಆವಿಯಾದ ನೀರು ಒಳಗೆ ಬಿದ್ದು ಬೆಂಡೆಕಾಯಿ ಅಂಟಂಟಾಗುತ್ತದೆ. ತೆರೆದ ಕಡಾಯಿಯಲ್ಲೇ ಬೇಯಿಸಿದರೆ ಅದು ಚೆನ್ನಾಗಿ ಫ್ರೈ ಆಗುತ್ತದೆ.&lt;/p&gt;&lt;p&gt;&lt;strong&gt;ಮೊಸರು ಅಥವಾ ಮಜ್ಜಿಗೆಯ ಬಳಕೆ: &lt;/strong&gt;ಬೆಂಡೆಕಾಯಿ ತುಂಬಾ ಜಿಗುಟಾಗುತ್ತಿದೆ ಎಂದು ಅನಿಸಿದರೆ, ಬೇಯುವಾಗ ಒಂದು ಚಮಚ ಗಟ್ಟಿ ಮೊಸರು ಅಥವಾ ಸ್ವಲ್ಪ ಮಜ್ಜಿಗೆ ಹಾಕಿ. ಇದು ಜಿಗುಟನ್ನು ತಕ್ಷಣವೇ ಹೋಗಲಾಡಿಸಿ ಪಲ್ಯಕ್ಕೆ ಒಳ್ಳೆಯ ಬಣ್ಣ ನೀಡುತ್ತದೆ.&lt;/p&gt;&lt;p&gt;&lt;strong&gt;ಹೆಚ್ಚುವ ಮುನ್ನ ಎಣ್ಣೆ ಹಚ್ಚಿ: &lt;/strong&gt;ಬೆಂಡೆಕಾಯಿ ಹೆಚ್ಚುವಾಗ ಚಾಕುವಿಗೆ ಸ್ವಲ್ಪ ಲಿಂಬೆ ರಸ ಅಥವಾ ಎಣ್ಣೆ ಹಚ್ಚಿಕೊಂಡರೆ, ಬೆಂಡೆಕಾಯಿಯ ಲೋಳೆ ಚಾಕುವಿಗೆ ಅಂಟುವುದಿಲ್ಲ ಮತ್ತು ಹೆಚ್ಚುವುದು ಸುಲಭವಾಗುತ್ತದೆ.&lt;/p&gt;&lt;p&gt;&lt;strong&gt;ಕರಿಬೇವು ಮತ್ತು ಜೀರಿಗೆ: &lt;/strong&gt;ಒಗ್ಗರಣೆಗೆ ಸ್ವಲ್ಪ ಹೆಚ್ಚು ಜೀರಿಗೆ ಮತ್ತು ಕರಿಬೇವಿನ ಸೊಪ್ಪು ಬಳಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಒಳ್ಳೆಯ ಪರಿಮಳ ಬರುತ್ತದೆ.&lt;/p&gt;&lt;p&gt;&lt;strong&gt;ಮಸಾಲೆಗಳನ್ನು ಕೊನೆಯಲ್ಲಿ ಹಾಕಿ:&lt;/strong&gt; ಕೇವಲ ಉಪ್ಪು ಮಾತ್ರವಲ್ಲ, ಅರಿಶಿನ ಮತ್ತು ಖಾರದ ಪುಡಿಯನ್ನು ಸಹ ಪಲ್ಯ ಮುಕ್ಕಾಲು ಭಾಗ ಬೆಂದ ನಂತರ ಹಾಕಿದರೆ ಮಸಾಲೆಗಳು ಸೀದುಹೋಗದೆ ಪಲ್ಯದ ಬಣ್ಣ ಹಸಿರಾಗಿಯೇ ಇರುತ್ತದೆ.&amp;nbsp;&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/food/the-right-time-to-add-salt-in-bhindi-sabzi-for-perfect-crispiness/articleshow-9b2fnov"/>
        </item>
        <item>
            <title><![CDATA[ಸಂಗಾತಿಯನ್ನ ಕೊಂ*ದವರನ್ನು ನೆನಪಿಟ್ಟುಕೊಂಡ ಹಾವು  ಸೇಡು ತೀರಿಸಿಕೊಳ್ಳುತ್ತಾ? ಶೇ.99 ರಷ್ಟು ಜನರಿಗೆ ಈ ರಹಸ್ಯ ತಿಳಿದಿಲ್ಲ!]]></title>
            <link>https://kannada.asianetnews.com/gallery/life/do-snakes-really-seek-vengeance-science-reveals-the-truth-57b3r9g</link>
            <guid isPermaLink="true">https://kannada.asianetnews.com/gallery/life/do-snakes-really-seek-vengeance-science-reveals-the-truth-57b3r9g</guid>
            <pubDate>Thu, 30 Apr 2026 07:38:29 +0530</pubDate>
            <description><![CDATA[&lt;p&gt;&lt;strong&gt;Do snakes take revenge: &lt;/strong&gt;ಸಿನಿಮಾಗಳಲ್ಲಿ ನೋಡುವಂತೆ ಹಾವಿನ ಕಣ್ಣುಗಳಲ್ಲಿ ಹಂತಕನ ಚಿತ್ರ ಅಚ್ಚಾಗಿರುತ್ತದೆಯೇ? ಇಂತಹ ನೂರಾರು ಪ್ರಶ್ನೆ ಮತ್ತು ನಂಬಿಕೆಗಳು ನಮ್ಮ ಜನರಲ್ಲಿ ದಶಕಗಳಿಂದ ಮನೆಮಾಡಿವೆ. ಆದರೆ ಈ ಸೇಡಿನ ಕಥೆಗಳ ಹಿಂದೆ ಅಡಗಿರುವ ಅಸಲಿ ವೈಜ್ಞಾನಿಕ ಸತ್ಯವೇನು? ಆಸಕ್ತಿದಾಯಕ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k8557dv2qdrkbewfdy8xzhhe,imgname-snake--1--1761109849954.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Do snakes take revenge: &lt;/strong&gt;ಸಿನಿಮಾಗಳಲ್ಲಿ ನೋಡುವಂತೆ ಹಾವಿನ ಕಣ್ಣುಗಳಲ್ಲಿ ಹಂತಕನ ಚಿತ್ರ ಅಚ್ಚಾಗಿರುತ್ತದೆಯೇ? ಇಂತಹ ನೂರಾರು ಪ್ರಶ್ನೆ ಮತ್ತು ನಂಬಿಕೆಗಳು ನಮ್ಮ ಜನರಲ್ಲಿ ದಶಕಗಳಿಂದ ಮನೆಮಾಡಿವೆ. ಆದರೆ ಈ ಸೇಡಿನ ಕಥೆಗಳ ಹಿಂದೆ ಅಡಗಿರುವ ಅಸಲಿ ವೈಜ್ಞಾನಿಕ ಸತ್ಯವೇನು? ಆಸಕ್ತಿದಾಯಕ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹಾವು ತನ್ನ ಸಂಗಾತಿ ಸಾವಿಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳುತ್ತೆ ಎಂಬ ನಂಬಿಕೆ ಅನೇಕ ಜನರಲ್ಲಿದೆ. ಆದರೆ ಇದು ನಿಜವಾಗಿಯೂ ನಡೆಯುತ್ತದೆಯೇ?, ಸತ್ತ ಹಾವಿನ ಕಣ್ಣುಗಳನ್ನು ನೋಡಿ, ತನ್ನ ಸಂಗಾತಿಯ ಸಾವಿಗೆ ಕಾರಣ ಯಾರು ಎಂದು ತಿಳಿದುಕೊಂಡು ಹಾವುಗಳು ಪ್ರತೀಕಾರ ತೀರಿಸಿಕೊಳ್ಳುತ್ತವೆಯೇ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂದು ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;ಹಾವುಗಳ ಬಗ್ಗೆ ಅನೇಕ ಕುತೂಹಲಕಾರಿ ವಿಷಯಗಳು ಪ್ರಚಾರದಲ್ಲಿವೆ. ಉದಾಹರಣೆಗೆ, ಒಬ್ಬನೇ ವ್ಯಕ್ತಿಯನ್ನು ಹಾವು ಪದೇ ಪದೇ ಕಚ್ಚಿರುವುದನ್ನು ನೀವು ಪತ್ರಿಕೆಗಳಲ್ಲಿ ಅಥವಾ ಟಿವಿಯಲ್ಲಿ ನೋಡಿರಬಹುದು. ಇದು ಏಕೆ ಸಂಭವಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?.&lt;/p&gt;&lt;img&gt;&lt;p&gt;ಹಾವುಗಳು ದ್ವೇಷ ಸಾಧಿಸುತ್ತವೆಯೇ? ಮನುಷ್ಯನ ಮೇಲೆ ಸೇಡು ತೀರಿಸಿಕೊಳ್ಳಬಲ್ಲವೇ? ಎಂಬ ಪ್ರಶ್ನೆಗೆ ಉತ್ತರ 'ಇಲ್ಲ' ಎಂದೇ ಹೇಳಬಹುದು. ವಿಜ್ಞಾನಿಗಳ ಪ್ರಕಾರ, ಹಾವುಗಳ ಮೆದುಳು ಅಷ್ಟೊಂದು ಅಭಿವೃದ್ಧಿ ಹೊಂದಿಲ್ಲ. ಆದ್ದರಿಂದ, ಅವು ಯಾವುದೇ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳುವ ಸಾಧ್ಯತೆಯೇ ಇಲ್ಲ.&lt;/p&gt;&lt;img&gt;&lt;p&gt;ಆದುದರಿಂದ ಹಾವು ಯಾರ ಮೇಲೆಯೂ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ. ಆದರೆ ನೀವು ಅದರ ದಾರಿಗೆ ಅಡ್ಡ ಬಂದರೆ ಅಥವಾ ಅದಕ್ಕೆ ಅಪಾಯವಿದೆ ಎಂದು ಅನಿಸಿದರೆ ಮಾತ್ರ ಅದು ಕಚ್ಚುತ್ತದೆ. ಆದರೆ ಸತ್ತ ಹಾವಿನ ಸುತ್ತಮುತ್ತ ಮತ್ತೊಂದು ಹಾವು ಸುರುಳಿ ಸುತ್ತಿಕೊಂಡು ಇರುವುದನ್ನು ನೀವು ಹಲವು ಬಾರಿ ನೋಡಿರಬಹುದು. ಹೀಗೆ ಏಕೆ ಸಂಭವಿಸುತ್ತದೆ ಎಂದರೆ..?&lt;/p&gt;&lt;img&gt;&lt;p&gt;ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಹಾವು ಸತ್ತಾಗ ಅದರ ದೇಹದಿಂದ ಒಂದು ವಿಶೇಷವಾದ ವಾಸನೆ ಬರಲು ಪ್ರಾರಂಭವಾಗುತ್ತದೆ. ಈ ವಾಸನೆಯು ಅದರ ಸಂಗಾತಿ ಹಾವನ್ನು ತನ್ನತ್ತ ಆಕರ್ಷಿಸುತ್ತದೆ.&lt;/p&gt;&lt;img&gt;&lt;p&gt;ಆದ್ದರಿಂದ ಯಾವಾಗಲೂ ನೆನಪಿಡಬೇಕಾದ ಒಂದು ವಿಷಯವೆಂದರೆ, ಹಾವು ಯಾರ ಮೇಲೆಯೂ ಸೇಡು ತೀರಿಸಿಕೊಳ್ಳುವುದಿಲ್ಲ. ತನಗೆ ಅಪಾಯವಿದೆ ಎಂದು ಭಾವಿಸಿದಾಗ ಮಾತ್ರ ಅದು ದಾಳಿ ಮಾಡಿ ಕಚ್ಚುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/do-snakes-really-seek-vengeance-science-reveals-the-truth-57b3r9g"/>
        </item>
        <item>
            <title><![CDATA[ಡ್ರೆಸ್‌ಗೆ ಮ್ಯಾಚ್ ಆಗೋ 6 ಹೇರ್ ಆಕ್ಸೆಸರೀಸ್: ಸೌಂದರ್ಯ ಡಬಲ್ ಆಗೋದು ಗ್ಯಾರಂಟಿ!]]></title>
            <link>https://kannada.asianetnews.com/webstories/fashion/6-dress-matching-hair-accessories-for-a-stunning-look-gvd-p2ax2ya</link>
            <guid isPermaLink="true">https://kannada.asianetnews.com/webstories/fashion/6-dress-matching-hair-accessories-for-a-stunning-look-gvd-p2ax2ya</guid>
            <pubDate>Thu, 30 Apr 2026 00:25:40 +0530</pubDate>
            <description><![CDATA[Dress matching Hair Accessories: ನಿಮ್ಮ ಡ್ರೆಸ್&zwnj;ಗೆ ಮ್ಯಾಚ್ ಆಗೋ 6 ಹೇರ್ ಆಕ್ಸೆಸರೀಸ್ ಐಡಿಯಾಗಳನ್ನು ಇಲ್ಲಿ ತಿಳಿಯಿರಿ. ಬೋ, ಕ್ಲಿಪ್, ರಬ್ಬರ್ ಬ್ಯಾಂಡ್ ಮತ್ತು ಬನ್ ಲಟಕನ್ ಬಳಸಿ ನಿಮ್ಮ ಲುಕ್ ಇನ್ನಷ್ಟು ಸ್ಟೈಲಿಶ್ ಹಾಗೂ ಆಕರ್ಷಕ ಮಾಡಿಕೊಳ್ಳಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kpb3k413wwsr0qb0zehfkjtt,imgname-dress-matching-hair-accessories--aq-1776341848099.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/6-dress-matching-hair-accessories-for-a-stunning-look-gvd-p2ax2ya"/>
        </item>
        <item>
            <title><![CDATA[Saree Reuse: ಹರಿದ ಹಳೆಯ ಕಾಟನ್ ಸೀರೆಯಿಂದ 100 ರೂ.ಗೆ ಹೊಲಿಸಿ ಸಮ್ಮರ್ ಡ್ರೆಸ್!]]></title>
            <link>https://kannada.asianetnews.com/webstories/fashion/reuse-old-cotton-saree-to-stitch-stylish-summer-dresses-under-100-rupees-gvd-rtyphi5</link>
            <guid isPermaLink="true">https://kannada.asianetnews.com/webstories/fashion/reuse-old-cotton-saree-to-stitch-stylish-summer-dresses-under-100-rupees-gvd-rtyphi5</guid>
            <pubDate>Wed, 29 Apr 2026 23:26:03 +0530</pubDate>
            <description><![CDATA[&lt;p&gt;ಕಬೋರ್ಡ್&zwnj;ನಲ್ಲಿರೋ ಹಳೆಯ ಅಥವಾ ಸ್ವಲ್ಪ ಹರಿದ ಕಾಟನ್ ಸೀರೆ ಬಿಸಾಡಬೇಡಿ. ಅದರಿಂದ ನೀವು ಸಖತ್ ಸ್ಟೈಲಿಶ್ ಸಮ್ಮರ್ ಡ್ರೆಸ್&zwnj;ಗಳನ್ನು ಹೊಲಿಸಬಹುದು. ಕೇವಲ 100 ರೂಪಾಯಿ ಖರ್ಚಿನಲ್ಲಿ, ನಿಮ್ಮ ಹತ್ತಿರದ ಟೈಲರ್ ಬಳಿ ಹೊಸ ಡ್ರೆಸ್ ರೆಡಿ ಮಾಡಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jtqhyj6qbx251wejd3tc5ead,imgname-cotton-midi-dress-stitching-idea-3-1746694785239.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/reuse-old-cotton-saree-to-stitch-stylish-summer-dresses-under-100-rupees-gvd-rtyphi5"/>
        </item>
        <item>
            <title><![CDATA[ಬೇಸಿಗೆಗೆ ಪರ್ಫೆಕ್ಟ್ ಫರ್ಶಿ ಸಲ್ವಾರ್ ಸೂಟ್: ಇಲ್ಲಿವೆ 8 ಸ್ಟೈಲಿಶ್ ಡಿಸೈನ್‌ಗಳು!]]></title>
            <link>https://kannada.asianetnews.com/webstories/fashion/8-stylish-farshi-salwar-suit-designs-for-summer-gvd-07y4n4l</link>
            <guid isPermaLink="true">https://kannada.asianetnews.com/webstories/fashion/8-stylish-farshi-salwar-suit-designs-for-summer-gvd-07y4n4l</guid>
            <pubDate>Wed, 29 Apr 2026 22:55:21 +0530</pubDate>
            <description><![CDATA[&lt;p&gt;ಬೇಸಿಗೆಯಲ್ಲಿ ಫರ್ಶಿ ಸಲ್ವಾರ್ ಸೂಟ್ ಒಂದು ಅದ್ಭುತ ಆಯ್ಕೆಯಾಗಿದೆ. ಇದರ ಫ್ಲೋಯಿ ಫಿಟ್ಟಿಂಗ್, ಆರಾಮದಾಯಕ ಸಲ್ವಾರ್ ಮತ್ತು ಕುರ್ತಾ ಡಿಸೈನ್, ಹಗಲಿನ ಔಟಿಂಗ್&zwnj;ಗಳಿಗೆ ಪರ್ಫೆಕ್ಟ್ ಆಗಿದೆ. ಇಲ್ಲಿ 8 ಡಿಸೈನ್&zwnj;ಗಳನ್ನು ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jrczfw9285141tzhy0vbj30g,imgname-20-1744192401698.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/8-stylish-farshi-salwar-suit-designs-for-summer-gvd-07y4n4l"/>
        </item>
        <item>
            <title><![CDATA[ಮಗನ ಬರ್ತ್‌ಡೇಗೆ ಸ್ಪೆಷಲ್ ಗಿಫ್ಟ್: ಬೆಳ್ಳಿ ಚೈನ್‌ನ ಫ್ಯಾನ್ಸಿ ಡಿಸೈನ್ಸ್ ಇಲ್ಲಿವೆ]]></title>
            <link>https://kannada.asianetnews.com/webstories/fashion/stylish-silver-chain-designs-for-men-perfect-birthday-gift-idea-gvd-qkr01rt</link>
            <guid isPermaLink="true">https://kannada.asianetnews.com/webstories/fashion/stylish-silver-chain-designs-for-men-perfect-birthday-gift-idea-gvd-qkr01rt</guid>
            <pubDate>Wed, 29 Apr 2026 21:30:34 +0530</pubDate>
            <description><![CDATA[&lt;p&gt;ಮಗನ ಹುಟ್ಟುಹಬ್ಬಕ್ಕೆ ವಿಶೇಷ ಹಾಗೂ ಸ್ಟೈಲಿಶ್ ಗಿಫ್ಟ್ ಕೊಡಬೇಕಾ? ಹಾಗಿದ್ರೆ ಲೇಟೆಸ್ಟ್ ಮೆನ್ಸ್ ಸಿಲ್ವರ್ ಚೈನ್ ಡಿಸೈನ್&zwnj;ಗಳನ್ನು ನೋಡಿ. ಇವು ನೋಡಲು ಟ್ರೆಂಡಿ, ಧರಿಸಲು ಆರಾಮದಾಯಕ ಮತ್ತು ನಿಮ್ಮ ಬಜೆಟ್&zwnj;ಗೂ ಸರಿಹೊಂದುತ್ತವೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq7gkp813whx3rjybng3zpxz,imgname-fashion-silver-chain-for-boys-1777295022336.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stylish-silver-chain-designs-for-men-perfect-birthday-gift-idea-gvd-qkr01rt"/>
        </item>
        <item>
            <title><![CDATA[Beer: ಬಿಯರ್ ಕುಡಿದರೆ ಬೋಳು ತಲೆಯಲ್ಲೂ ಕೂದಲು ಬೆಳೆಯುತ್ತಾ? ಈ ಡ್ರಿಂಕ್ಸ್ ಬಗ್ಗೆ ಗೊತ್ತಿಲ್ಲದ ಸತ್ಯಗಳು ಇಲ್ಲಿವೆ ನೋಡಿ!]]></title>
            <link>https://kannada.asianetnews.com/gallery/health-life/beer-and-health-surprising-facts-about-vitamin-b6-and-hair-growth-to-know-here-gnthi3a</link>
            <guid isPermaLink="true">https://kannada.asianetnews.com/gallery/health-life/beer-and-health-surprising-facts-about-vitamin-b6-and-hair-growth-to-know-here-gnthi3a</guid>
            <pubDate>Wed, 29 Apr 2026 19:42:53 +0530</pubDate>
            <description><![CDATA[&lt;p&gt;ಪೋಷಕಾಂಶಕ್ಕಾಗಿ ಬಿಯರ್ ಅನ್ನು ಒಂದು ಮುಖ್ಯ ಮೂಲವೆಂದು ಪರಿಗಣಿಸುವುದು ಸರಿಯಲ್ಲ ಎಂದು ತಜ್ಞರು ಹೇಳುತ್ತಾರೆ. ವಿಟಮಿನ್ ಬಿ6 ಅನೇಕ ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಲಭ್ಯವಿದೆ. ಆದರೆ ಕೂದಲು ಬೆಳವಣಿಗೆಯಲ್ಲಿ ಬಿಯರ್ ಪಾತ್ರವೇನು? ಈ ಸ್ಟೋರಿ ನೋಡಿ..&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcrtfs3qf7f2kxsy8zges19,imgname-beer-benefits-1777471405859.jpg" type="image/jpeg" height="390" width="690"/>
            <content:encoded><![CDATA[&lt;p&gt;ಪೋಷಕಾಂಶಕ್ಕಾಗಿ ಬಿಯರ್ ಅನ್ನು ಒಂದು ಮುಖ್ಯ ಮೂಲವೆಂದು ಪರಿಗಣಿಸುವುದು ಸರಿಯಲ್ಲ ಎಂದು ತಜ್ಞರು ಹೇಳುತ್ತಾರೆ. ವಿಟಮಿನ್ ಬಿ6 ಅನೇಕ ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಲಭ್ಯವಿದೆ. ಆದರೆ ಕೂದಲು ಬೆಳವಣಿಗೆಯಲ್ಲಿ ಬಿಯರ್ ಪಾತ್ರವೇನು? ಈ ಸ್ಟೋರಿ ನೋಡಿ..&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕೆಲವು ಅಧ್ಯಯನಗಳ ಪ್ರಕಾರ, ಆಗಾಗ ಒಂದು ಗ್ಲಾಸ್ ಬಿಯರ್ ಕುಡಿದರೆ ದೇಹಕ್ಕೆ ಕೆಲವು ಪೋಷಕಾಂಶಗಳು ಸಿಗುತ್ತವೆ. ವಿಶೇಷವಾಗಿ, ಬಿಯರ್&zwnj;ನಲ್ಲಿ ವಿಟಮಿನ್ ಬಿ6 ಸ್ವಲ್ಪ ಪ್ರಮಾಣದಲ್ಲಿ ಇರುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಮೆದುಳಿನ ಕಾರ್ಯ, ರಕ್ತ ಉತ್ಪಾದನೆ ಮತ್ತು ರೋಗನಿರೋಧಕ ಶಕ್ತಿಗೆ ಈ ವಿಟಮಿನ್ ಬಹಳ ಮುಖ್ಯ. ಆದರೆ, ಇದಕ್ಕಾಗಿಯೇ ಬಿಯರ್ ಕುಡಿಯಬಹುದೇ ಎನ್ನುವುದು ಇಲ್ಲಿನ ಪ್ರಶ್ನೆ.&lt;/p&gt;&lt;img&gt;&lt;p&gt;ನಮ್ಮ ದೇಹಕ್ಕೆ ವಿಟಮಿನ್ ಬಿ6 ಅತ್ಯಗತ್ಯ ಪೋಷಕಾಂಶವಾಗಿದೆ. ಇದು ಮೆದುಳು ಸರಿಯಾಗಿ ಕೆಲಸ ಮಾಡಲು ಮತ್ತು ನರಮಂಡಲವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಕೂದಲು ಬೆಳವಣಿಗೆಯಲ್ಲೂ ವಿಟಮಿನ್ ಬಿ6 ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಗೆ ಇದು ಮುಖ್ಯ. ದೇಹದಲ್ಲಿ ಪ್ರೋಟೀನ್ ಬಳಕೆ ಮತ್ತು ಶಕ್ತಿ ಉತ್ಪಾದನೆಗೂ ಇದು ಬೇಕು. ನಮ್ಮ ದೇಹವು ಈ ವಿಟಮಿನ್ ಅನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ, ನಾವು ಇದನ್ನು ಆಹಾರದಿಂದಲೇ ಪಡೆಯಬೇಕು.&lt;/p&gt;&lt;img&gt;&lt;p&gt;ಬಿಯರ್ ತಯಾರಿಸಲು ಬಳಸುವ ಕಚ್ಚಾ ವಸ್ತುಗಳಲ್ಲಿ ವಿಟಮಿನ್ ಬಿ6 ಇರುತ್ತದೆ. ಬಾರ್ಲಿ, ಗೋಧಿ, ಬ್ರೂವರ್ಸ್ ಯೀಸ್ಟ್&zwnj;ನಂತಹ ಪದಾರ್ಥಗಳಲ್ಲಿ ಈ ವಿಟಮಿನ್ ನೈಸರ್ಗಿಕವಾಗಿ ಕಂಡುಬರುತ್ತದೆ. ತಯಾರಿಕೆಯ ಪ್ರಕ್ರಿಯೆಯಲ್ಲಿ ಸ್ವಲ್ಪ ಪೋಷಕಾಂಶ ನಾಶವಾದರೂ, ಸಂಪೂರ್ಣವಾಗಿ ಹೋಗುವುದಿಲ್ಲ. ಹಾಗಾಗಿ, ಸಿದ್ಧವಾದ ಬಿಯರ್&zwnj;ನಲ್ಲಿ ಈ ವಿಟಮಿನ್ ಸ್ವಲ್ಪ ಪ್ರಮಾಣದಲ್ಲಿ ಉಳಿದಿರುತ್ತದೆ. ಒಂದು ಗ್ಲಾಸ್ ಬಿಯರ್&zwnj;ನಲ್ಲಿ ದಿನಕ್ಕೆ ಬೇಕಾದ ವಿಟಮಿನ್ ಬಿ6ನ ಒಂದು ಭಾಗ ಸಿಗಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಆಲ್ಕೋಹಾಲ್ ಇಲ್ಲದ ಬಿಯರ್&zwnj;ನಲ್ಲಿಯೂ ಈ ವಿಟಮಿನ್ ಇರುವುದು ಒಂದು ಅಚ್ಚರಿಯ ವಿಷಯ. ಆಲ್ಕೋಹಾಲ್ ರಹಿತ ಬಿಯರ್&zwnj;ಗಳಲ್ಲಿ ಪೋಷಕಾಂಶಗಳು ಹೆಚ್ಚಿರುತ್ತವೆ.&lt;/p&gt;&lt;img&gt;&lt;p&gt;ಎಲ್ಲಾ ಬಿಯರ್&zwnj;ಗಳಲ್ಲಿ ವಿಟಮಿನ್ ಬಿ6 ಒಂದೇ ಪ್ರಮಾಣದಲ್ಲಿ ಇರುವುದಿಲ್ಲ. ದಟ್ಟವಾದ, ಸ್ಟ್ರಾಂಗ್ ರುಚಿಯಿರುವ ಕೆಲವು ವಿಶೇಷ ಬಿಯರ್&zwnj;ಗಳಲ್ಲಿ ಈ ವಿಟಮಿನ್ ಪ್ರಮಾಣ ಹೆಚ್ಚಾಗಿರುತ್ತದೆ. ಸಾಮಾನ್ಯ ಲಾಗರ್ ಬಿಯರ್&zwnj;ನಲ್ಲಿಯೂ ಗಣನೀಯ ಪ್ರಮಾಣದಲ್ಲಿರುತ್ತದೆ. ಗೋಧಿಯಿಂದ ತಯಾರಿಸುವ ಬಿಯರ್&zwnj;ನಲ್ಲೂ ಉತ್ತಮ ಪ್ರಮಾಣದಲ್ಲಿರುತ್ತದೆ. ಆದರೆ, ಅಕ್ಕಿಯನ್ನು ಬಳಸಿ ಮಾಡುವ ಬಿಯರ್&zwnj;ನಲ್ಲಿ ಈ ವಿಟಮಿನ್ ತುಂಬಾ ಕಡಿಮೆ ಇರುವುದನ್ನು ಗಮನಿಸಲಾಗಿದೆ. ಆಲ್ಕೋಹಾಲ್ ತೆಗೆದುಹಾಕಿದ ಬಿಯರ್&zwnj;ನಲ್ಲಿ ವಿಟಮಿನ್ ಪ್ರಮಾಣ ಸ್ವಲ್ಪ ಹೆಚ್ಚಿರುವುದು ಮತ್ತೊಂದು ಅಚ್ಚರಿ.&lt;/p&gt;&lt;img&gt;&lt;p&gt;ಪೋಷಕಾಂಶಕ್ಕಾಗಿ ಬಿಯರ್ ಅನ್ನು ಒಂದು ಮುಖ್ಯ ಮೂಲವೆಂದು ಪರಿಗಣಿಸುವುದು ಸರಿಯಲ್ಲ ಎಂದು ತಜ್ಞರು ಹೇಳುತ್ತಾರೆ. ವಿಟಮಿನ್ ಬಿ6 ಅನೇಕ ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಲಭ್ಯವಿದೆ. ಮಾಂಸ, ಮೀನು, ಕಡಲೆಕಾಳು, ಓಟ್ಸ್, ಆಲೂಗಡ್ಡೆಯಂತಹ ಆಹಾರಗಳ ಮೂಲಕ ಈ ವಿಟಮಿನ್ ಅನ್ನು ಸುಲಭವಾಗಿ ಪಡೆಯಬಹುದು. ಸಾಮಾನ್ಯವಾಗಿ, ಸಮತೋಲಿತ ಆಹಾರ ಸೇವಿಸುವವರಿಗೆ ಈ ವಿಟಮಿನ್ ಕೊರತೆ ಬರುವುದು ಬಹಳ ಅಪರೂಪ. ಆದ್ದರಿಂದ, ಬಿಯರ್ ಮೂಲಕ ವಿಟಮಿನ್ ಪಡೆಯಲು ಪ್ರಯತ್ನಿಸುವ ಅಗತ್ಯವಿಲ್ಲ.&lt;/p&gt;&lt;img&gt;&lt;p&gt;ಬಿಯರ್&zwnj;ನಲ್ಲಿ ಸಿಲಿಕಾನ್ (Silicon) ಮತ್ತು ವಿಟಮಿನ್ ಬಿ6 ನಂತಹ ಪೋಷಕಾಂಶಗಳಿದ್ದರೂ, ಆಲ್ಕೋಹಾಲ್ ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ (Dehydration). ಇದು ಕೂದಲಿನ ಬುಡವನ್ನು ದುರ್ಬಲಗೊಳಿಸಿ, ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಕೂದಲಿನ ಬೆಳವಣಿಗೆಗಾಗಿ ಬಿಯರ್ ಕುಡಿಯುವುದು ಒಳ್ಳೆಯ ಆಲೋಚನೆಯಲ್ಲ.&amp;nbsp;&lt;/p&gt;&lt;p&gt;ಬಿಯರ್ ಉತ್ತಮ ಪರ್ಯಾಯವಲ್ಲ. ಬಿಯರ್&zwnj;ನಲ್ಲಿ ಸ್ವಲ್ಪ ವಿಟಮಿನ್ ಇರುವುದರಿಂದ, ಆಲ್ಕೋಹಾಲ್ ದೇಹಕ್ಕೆ ಒಳ್ಳೆಯದು ಎಂದು ಭಾವಿಸಬಾರದು. ಅತಿಯಾಗಿ ಆಲ್ಕೋಹಾಲ್ ಸೇವಿಸಿದರೆ ದೇಹದಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ, ಕುಡಿಯುವವರು ಮಿತವಾಗಿ ಕುಡಿಯುವುದು ಬಹಳ ಮುಖ್ಯ. ವಿಶೇಷವಾಗಿ, ಕುಡಿತದ ಚಟ ಇರುವವರಿಗೂ, ಕೆಲವು ದೀರ್ಘಕಾಲದ ಕಾಯಿಲೆಗಳಿರುವವರಿಗೂ ಪೌಷ್ಟಿಕಾಂಶದ ಕೊರತೆ ಉಂಟಾಗುವ ಸಾಧ್ಯತೆಯಿದೆ. ಹಾಗಾಗಿ, ಆಹಾರದಿಂದಲೇ ಪೋಷಕಾಂಶಗಳನ್ನು ಪಡೆಯುವುದು ಉತ್ತಮ ಮಾರ್ಗ.&amp;nbsp;&lt;/p&gt;&lt;p&gt;*(ಗಮನಿಸಿ: ಬಿಯರ್&zwnj;ನಲ್ಲಿ ವಿಟಮಿನ್ ಬಿ6 ಇರುವುದು ನಿಜ. ಆದರೆ, ಅದು ಆರೋಗ್ಯಕ್ಕೆ ಮುಖ್ಯ ಆಧಾರವಲ್ಲ. ಆದ್ದರಿಂದ, ಬಿಯರ್ ದೇಹಕ್ಕೆ ಒಳ್ಳೆಯದು ಎಂದು 100% ಹೇಳಲು ಸಾಧ್ಯವಿಲ್ಲ. ಈ ಮಾಹಿತಿಯನ್ನು ಕೇವಲ ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ ಪರಿಗಣಿಸಬೇಕು. ಆರೋಗ್ಯ ಸಂಬಂಧಿತ ವಿಷಯಗಳಿಗೆ ವೈದ್ಯರ ಸಲಹೆಯನ್ನು ಪಾಲಿಸುವುದೇ ಉತ್ತಮ.)*&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/health-life/beer-and-health-surprising-facts-about-vitamin-b6-and-hair-growth-to-know-here-gnthi3a"/>
        </item>
        <item>
            <title><![CDATA[ಕೀಟನಾಶಕಗಳ ಬಳಕೆ ಕ್ಯಾನ್ಸರ್ ರಿಸ್ಕ್ 150% ಹೆಚ್ಚಿಸುತ್ತೆ: ಹೊಸ ಅಧ್ಯಯನದಿಂದ ಎಚ್ಚರಿಕೆ]]></title>
            <link>https://kannada.asianetnews.com/health-life/pesticides-cancer-risk-150-percent-study-nature-health-gvd/articleshow-yx3sgau</link>
            <guid isPermaLink="true">https://kannada.asianetnews.com/health-life/pesticides-cancer-risk-150-percent-study-nature-health-gvd/articleshow-yx3sgau</guid>
            <pubDate>Wed, 29 Apr 2026 19:32:31 +0530</pubDate>
            <description><![CDATA[&lt;p&gt;ನಾವು ತಿನ್ನುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿಯಲ್ಲಿ ಬೆರೆತುಹೋಗಿರುವ ಈ ಕೀಟನಾಶಕಗಳು ನಮ್ಮ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಈ ಅಧ್ಯಯನ ಹೆಚ್ಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcqtyv0exkgftm4w4jd257x,imgname-chh-1777470372704.png" type="image/jpeg" height="390" width="690"/>
            <content:encoded><![CDATA[&lt;p&gt;ಕೀಟನಾಶಕಗಳ ನಿರಂತರ ಬಳಕೆಯು ಕ್ಯಾನ್ಸರ್ ಬರುವ ಅಪಾಯವನ್ನು 150% ವರೆಗೆ ಹೆಚ್ಚಿಸಬಹುದು ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ. 2014 ರಿಂದ 2019ರ ನಡುವೆ ಈ ರಾಸಾಯನಿಕಗಳು ಹೇಗೆ ಹರಡುತ್ತವೆ ಎಂಬುದನ್ನು ಸಂಶೋಧಕರು ಟ್ರ್ಯಾಕ್ ಮಾಡಿದ್ದಾರೆ. ನಂತರ, 2007 ರಿಂದ 2020ರ ನಡುವಿನ 1.5 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳ ಆರೋಗ್ಯ ದಾಖಲೆಗಳೊಂದಿಗೆ ಈ ಡೇಟಾವನ್ನು ಹೋಲಿಸಿದ್ದಾರೆ.&lt;/p&gt;&lt;p&gt;ಕೀಟನಾಶಕಗಳ ಜೊತೆಗಿನ ನಿರಂತರ ಸಂಪರ್ಕವು ಕ್ಯಾನ್ಸರ್ ಬರುವ ಅಪಾಯವನ್ನು 150% ವರೆಗೆ ಹೆಚ್ಚಿಸಬಹುದು ಎಂದು ಹೊಸ ಅಧ್ಯಯನವೊಂದು ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದೆ. ನಾವು ತಿನ್ನುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿಯಲ್ಲಿ ಬೆರೆತುಹೋಗಿರುವ ಈ ಕೀಟನಾಶಕಗಳು ನಮ್ಮ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಈ ಅಧ್ಯಯನ ಹೆಚ್ಚಿಸಿದೆ.&lt;/p&gt;&lt;p&gt;ನೇಚರ್ ಹೆಲ್ತ್ (Nature Health) ಜರ್ನಲ್&zwnj;ನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಕೀಟನಾಶಕಗಳ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಕೆಲವು ರೀತಿಯ ಕ್ಯಾನ್ಸರ್ ಬರುವ ಸಾಧ್ಯತೆ 150% ವರೆಗೆ ಹೆಚ್ಚು ಎಂದು ಸಂಶೋಧನೆ ಹೇಳಿದೆ. ಸಾಮಾನ್ಯವಾಗಿ ನಾವು ಬಳಸುವ ಆಹಾರ, ನೀರು ಮತ್ತು ಗಾಳಿಯಲ್ಲಿ ಕೀಟನಾಶಕಗಳು ಇದ್ದೇ ಇರುತ್ತವೆ. ಆದರೆ, ಈ ಹಿಂದಿನ ಹೆಚ್ಚಿನ ಅಧ್ಯಯನಗಳು ಕೇವಲ ಒಂದೊಂದು ರಾಸಾಯನಿಕದ ಮೇಲೆ ಮಾತ್ರ ಗಮನ ಹರಿಸಿದ್ದವು.&lt;/p&gt;&lt;h2&gt;&lt;strong&gt;ಹೆಚ್ಚು ನಿಖರ&lt;/strong&gt;&lt;/h2&gt;&lt;p&gt;ಆದರೆ ಈ ಹೊಸ ಅಧ್ಯಯನವು ವಿಭಿನ್ನವಾದ ಮಾರ್ಗವನ್ನು ಅನುಸರಿಸಿದೆ. ಒಂದಕ್ಕಿಂತ ಹೆಚ್ಚು ಕೀಟನಾಶಕಗಳು ಒಟ್ಟಿಗೆ ಸೇರಿದಾಗ ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿಶ್ಲೇಷಿಸಿದೆ. ಇದು ನಿಜ ಜೀವನದ ಸನ್ನಿವೇಶವನ್ನು ಹೆಚ್ಚು ನಿಖರವಾಗಿ ತೋರಿಸುತ್ತದೆ. ವಿಜ್ಞಾನಿಗಳು ದೇಶದಾದ್ಯಂತ ಸಾಮಾನ್ಯವಾಗಿ ಬಳಸಲಾಗುವ 31 ಬಗೆಯ ಕೀಟನಾಶಕಗಳನ್ನು ವಿಶ್ಲೇಷಿಸಿದ್ದಾರೆ. ವಿಶೇಷ ಅಂದರೆ, ವಿಶ್ವ ಆರೋಗ್ಯ ಸಂಸ್ಥೆ (WHO) ಈ ಪೈಕಿ ಯಾವುದನ್ನೂ ಕ್ಯಾನ್ಸರ್ ಕಾರಕ ಎಂದು ಇನ್ನೂ ವರ್ಗೀಕರಿಸಿಲ್ಲ.&lt;/p&gt;&lt;p&gt;2014 ರಿಂದ 2019 ರ ನಡುವೆ ಈ ರಾಸಾಯನಿಕಗಳು ಹೇಗೆ ಹರಡುತ್ತವೆ ಎಂಬುದನ್ನು ಸಂಶೋಧಕರ ತಂಡವು ಆಧುನಿಕ ಮಾಡೆಲಿಂಗ್ ತಂತ್ರಜ್ಞಾನ ಬಳಸಿ ಟ್ರ್ಯಾಕ್ ಮಾಡಿದೆ. ನಂತರ, 2007 ರಿಂದ 2020 ರ ನಡುವಿನ 1,50,000 ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳ ಆರೋಗ್ಯ ದಾಖಲೆಗಳೊಂದಿಗೆ ಈ ಡೇಟಾವನ್ನು ಹೋಲಿಕೆ ಮಾಡಿದೆ. ಕೀಟನಾಶಕಗಳ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿರುವುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸಿವೆ.&lt;/p&gt;&lt;p&gt;ಈ ಅಧ್ಯಯನದಲ್ಲಿನ ಅತ್ಯಂತ ಆತಂಕಕಾರಿ ವಿಷಯವೆಂದರೆ, ಕೀಟನಾಶಕಗಳ ಪರಿಣಾಮ ಎಷ್ಟು ಬೇಗನೆ ಶುರುವಾಗಬಹುದು ಎಂಬುದು. ಕ್ಯಾನ್ಸರ್ ಕಾಣಿಸಿಕೊಳ್ಳುವ ಬಹಳ ಸಮಯಕ್ಕೂ ಮುಂಚೆಯೇ ಈ ರಾಸಾಯನಿಕಗಳು ದೇಹದ ಸಾಮಾನ್ಯ ಜೀವಕೋಶಗಳ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನಿಜ ಜೀವನದ ಪರಿಸ್ಥಿತಿಗಳಲ್ಲಿ ಕೀಟನಾಶಕಗಳ ಬಳಕೆಯು ಕ್ಯಾನ್ಸರ್ ಅಪಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂದು ಈ ಅಧ್ಯಯನವು ಒತ್ತಿ ಹೇಳಿದೆ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/pesticides-cancer-risk-150-percent-study-nature-health-gvd/articleshow-yx3sgau"/>
        </item>
        <item>
            <title><![CDATA[ಅತ್ಯಂತ ವೇಗದ ಪ್ರಾಣಿ ಚೀತಾ ಜೀವಿತಾವಧಿಯ ಶೇಕಡಾ 90ರಷ್ಟು ಕಾಲ ವಿಶ್ರಾಂತಿಯಲ್ಲೇ ಕಳೆಯುವುದೇಕೆ?]]></title>
            <link>https://kannada.asianetnews.com/life/why-cheetahs-spend-90-percent-of-its-life-resting/articleshow-s37xm6n</link>
            <guid isPermaLink="true">https://kannada.asianetnews.com/life/why-cheetahs-spend-90-percent-of-its-life-resting/articleshow-s37xm6n</guid>
            <pubDate>Wed, 29 Apr 2026 18:27:41 +0530</pubDate>
            <description><![CDATA[&lt;p&gt;ಭೂಮಿಯ ಮೇಲಿನ ಅತಿ ವೇಗದ ಪ್ರಾಣಿಯಾದ ಚೀತಾ, ತನ್ನ ಬೇಟೆಯ ನಂತರ ದೀರ್ಘಕಾಲ ವಿಶ್ರಾಂತಿ ಪಡೆಯುತ್ತದೆ. ಈ ಚೇತರಿಕೆಯ ಸಮಯವು ಅದರ ಮುಂದಿನ ಯಶಸ್ವಿ ಬೇಟೆಗೆ ಅತ್ಯಗತ್ಯವಾಗಿದೆ. ಇದೇ ರೀತಿ, ಮನುಷ್ಯರು ಕೂಡ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಸೋಲಿನ ನಂತರ ಚೇತರಿಸಿಕೊಳ್ಳುವುದು ಎಷ್ಟು ಮುಖ್ಯ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01fm9s5xq3dm9y9h596xe8jhfp,imgname-new-project--34-.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಭೂಮಿ ಮೇಲಿನ ಅತೀ ವೇಗದ ಪ್ರಾಣಿ ಚೀತಾ&lt;/strong&gt;&lt;/h2&gt;&lt;p&gt;ಚೀತಾ ಭೂಮಿ ಮೇಲಿನ ಅತೀ ವೇಗದಲ್ಲಿ ಬೇಟೆಯಾಡುವ ಪ್ರಾಣಿಗಳಲ್ಲಿ ಒಂದು. ಆದರೆ ಅದು ತನ್ನ ಜೀವನದ ಹೆಚ್ಚಿನ ಸಮಯವನ್ನು ಏನು ಮಾಡದೇ ಕಳೆಯುವುದು. ಆದರೆ ಅದಕ್ಕೂ ಒಂದು ಕಾರಣವಿದೆ. ಚೀತಾ ಬೇಟೆಗಿಳಿದರೆ ತನ್ನ ವೇಗವನ್ನು ಕೇವಲ 3 ಸೆಕೆಂಡ್&zwnj;ನಲ್ಲಿ ತನ್ನ ವೇಗವನ್ನು ಶೂನ್ಯದಿಂದ ಪ್ರತಿ ಗಂಟೆಗೆ 112 ಕಿಲೋ ಮೀಟರ್&zwnj;ಗೆ ಹೆಚ್ಚಿಸಬಲ್ಲದು. ಇದರ ಒಂದು ಸಾಮಾನ್ಯ ಬೆನ್ನಟ್ಟುವಿಕೆಯ ಅವಧಿ 20 ರಿಂದ 30 ಸೆಕೆಂಡ್&zwnj;.&lt;/p&gt;&lt;h3&gt;&lt;strong&gt;ಸೋಲಿನ ನಂತರ ಚೀತಾ ಏನು ಮಾಡುತ್ತೆ ಗೊತ್ತಾ?&lt;/strong&gt;&lt;/h3&gt;&lt;p&gt;ಆದರೆ ಹೀಗೆ ಚೇಸ್ ಮಾಡುವುದು ಅಥವಾ ಬೆನ್ನಟ್ಟಿದ ನಂತರ ಅದು ತನ್ನ ಬೇಟೆಯಲ್ಲಿ ಯಶಸ್ಸು ಗಳಿಸಿದರೆ ಅಥವಾ ಸೋತು ಹೋದರೆ ಇವೆರಡರಲ್ಲಿ ಏನೇ ಆದರೂ ಮುಂದಿನ 30 ನಿಮಿಷಗಳ ಕಾಲ ಅದು ಏನನ್ನೂ ಮಾಡುವುದಿಲ್ಲ. ಇನ್ನು ಚೀತಾದ ಓಟ ಅಥವಾ ಬೆನ್ನಟ್ಟುವಿಕೆಯ ವೇಳೆ ಚೀತಾದ ದೇಹದ ತಾಪಮಾನ ಎಷ್ಟು ಹೆಚ್ಚಾಗುವುದು ಎಂದರೆ ಒಂದು ವೇಳೆ ಅದು ನಿರಂತರ ಬೆನ್ನಟ್ಟಿದರೆ ಅವುಗಳ ಮೆದುಳಿಗೆ ಹಾನಿ ಉಂಟು ಮಾಡುವಷ್ಟು. ಈ ಸಮಯದಲ್ಲಿ ಅವುಗಳ ಹೃದಯದ ಬಡಿತ ಪ್ರತಿ ನಿಮಿಷಕ್ಕೆ 250 ಬಾರಿ ಬಡಿದುಕೊಳ್ಳುವುದು. ಅವುಗಳ ಸ್ನಾಯುಗಳು ಭೂಮಿ ಮೇಲಿರುವ ಇತರ ಯಾವುದೇ ಪ್ರಾಣಿಗಳಿಗಿಂತ ವೇಗವಾಗಿ ಲ್ಯಾಕ್ಟಿಕ್ ಆಸಿಡ್&zwnj; ಅನ್ನು ಉತ್ಪತಿ ಮಾಡುವುದು. ಹೀಗಾಗಿ ಅವುಗಳಿಗೆ ಓಟ ಅಥವಾ ಬೆನ್ನಟ್ಟುವಿಕೆ ದೈಹಿಕವಾಗಿ ಅತ್ಯಂತ ಅಪಾಯಕಾರಿ. ಹೀಗಾಗಿ ಅವುಗಳು ಚೇತರಿಕೆಗೆ ಸಮಯ ಕೊಡುವುದು ಅತ್ಯಂತ ಅಗತ್ಯವಾಗಿದೆ.&lt;/p&gt;&lt;p&gt;ಚೀತಾಗಳು ತಮ್ಮ ಬೇಟೆಯಲ್ಲಿ ಶೇಕಡಾ 50ರಷ್ಟು ಮಾತ್ರ ಯಶಸ್ವಿಯಾಗುತ್ತವೆ. ಉಳಿದವು ಬಹುತೇಕ ಸೋಲೇ ಆಗಿರುತ್ತದೆ. ಆದರೆ ಪ್ರತಿ ಸೋಲಿನ ಓಟದ ಬಳಿಕವೂ ಅವುಗಳು ವಿಶ್ರಾಂತಿಗೆ ಸಮಯ ನೀಡುತ್ತವೆ. ಹಾಗೂ ಹೊಸ ಪ್ರಯತ್ನ ಮಾಡುವ ಮೊದಲು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತವೆ. ಇದು ಸೋತೇ ಎಂದು ಚೇತರಿಸಿಕೊಳ್ಳುವ ಮೊದಲೇ ಮತ್ತೆ ಮತ್ತೆ ಪ್ರಯತ್ನಿಸುವುದಿಲ್ಲ, ಆದರೆ ಒಮ್ಮೆ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೇ ಅದು ಹೊಸ ಬೇಟೆಗೆ ಇಳಿಯುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಜೈಲಿನಲ್ಲಿ ಕೈದಿ ಸಾವು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೇರ್ ಟೇಕರ್ ಮಹಿಳೆಯಿಂದ ಹನಿಟ್ರ್ಯಾಪ್ ಆರೋಪ!&lt;/p&gt;&lt;p&gt;ಆದರೆ ಮನುಷ್ಯರಾದ ನಾವು ಏನು ಮಾಡುತ್ತೇವೆ. ಅನೇಕರು ಒಮ್ಮೆ ಸೋತರೆ ಚೀತಾಗೆ ತದ್ವಿರುದ್ಧವಾಗಿ ಮಾಡುತ್ತಾರೆ. ಜನ ಚೇತರಿಸಿಕೊಳ್ಳುವುದಕ್ಕೆ ಸಮಯ ಕೊಡುವುದೇ ಇಲ್ಲ. ಕೂಡಲೇ ಮತ್ತೆ ಪ್ರಯತ್ನಿಸುತ್ತಾರೆ. ಪರಿಣಾಮ ಎರಡನೆಯ ಪ್ರಯತ್ನದಲ್ಲಿ ಮೊದಲನೆಯದಕ್ಕಿಂತ ಹೆಚ್ಚು ಆಯಾಸ ಉಂಟಾಗುತ್ತದೆ. 3ನೇ ಪ್ರಯತ್ನದಲ್ಲಿ ಮತ್ತದೇ ಆಯಾಸ ಮನುಷ್ಯರುಈ ಪ್ರಯತ್ನವನ್ನು ಬದ್ಧತೆ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಚೀತಾ ಯಾವುದನ್ನೂ ತಪ್ಪಾಗಿ ಗ್ರಹಿಸುವುದಿಲ್ಲ. ಅದರ ಮೊದಲ ಆದ್ಯತೆ ಚೇತರಿಕೆ.&lt;/p&gt;&lt;p&gt;ಚೀತಾವೂ ತನ್ನ ಜೀವಿತಾವಧಿಯ 90ರಷ್ಟು ಸಮಯವನ್ನು ವಿಶ್ರಾಂತಿಯಲ್ಲೇ ಕಳೆಯುತ್ತದೆ. ಕೇವಲ 10 ಶೇಕಡಾ ಮಾತ್ರ ಸಕ್ರಿಯ ಹುಡುಕಾಟದಲ್ಲಿರುತ್ತದೆ. ಆದರೆ ಅದು ತೆಗೆದುಕೊಳ್ಳುವ 90 ಪ್ರತಿಶತದಷ್ಟು ವಿಶ್ರಾಂತಿ ಅದರ ಶೇಕಡಾ 10 ರ ಸಕ್ರಿಯತೆಗೆ ಕಾರಣವಾಗುತ್ತದೆ. ನಿಮ್ಮ ಅತ್ಯಂತ ಉತ್ಪಾದಕ ಅವಧಿಗಳು ನೀವು ಸಂಗ್ರಹಿಸಿದ ಚೇತರಿಕೆಯಿಂದ ನಿರ್ಧರಿಸುತ್ತವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಶೋರೂಮ್ ಟ್ರೇಡ್ ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ: ಕೊಪ್ಪಳ RTO ಕಚೇರಿಯ SDA ಲೋಕಾಯುಕ್ತ ಬಲೆಗೆ&lt;/p&gt;]]></content:encoded>
            <category>life</category>
            <dc:creator>Anusha Kb</dc:creator>
            <atom:link href="https://kannada.asianetnews.com/life/why-cheetahs-spend-90-percent-of-its-life-resting/articleshow-s37xm6n"/>
        </item>
        <item>
            <title><![CDATA[ಮನೆಯ ಡ್ರಾಯರ್‌ನಲ್ಲಿದ್ದ ಚಿನ್ನದ ಉಂಗುರ ಕದ್ದು ಮೈಗೆ ಹಾಕಿಕೊಂಡ ಹಾವು; ಬಳಿಕ ನಡೆದಿದ್ದೇ ರಣ ರೋಚಕ ಕಥೆ!]]></title>
            <link>https://kannada.asianetnews.com/viral/a-gold-ring-kept-in-a-table-drawer-at-a-house-in-kasaragod-got-stuck-around-the-body-of-a-rat-snake/articleshow-zwthr71</link>
            <guid isPermaLink="true">https://kannada.asianetnews.com/viral/a-gold-ring-kept-in-a-table-drawer-at-a-house-in-kasaragod-got-stuck-around-the-body-of-a-rat-snake/articleshow-zwthr71</guid>
            <pubDate>Wed, 29 Apr 2026 18:56:55 +0530</pubDate>
            <description><![CDATA[&lt;p&gt;ಕಾಸರಗೋಡಿನ ಮನೆಯೊಂದರ ಟೇಬಲ್ ಡ್ರಾಯರ್&zwnj;ನಲ್ಲಿ ಇಟ್ಟಿದ್ದ ಚಿನ್ನದ ಉಂಗುರ, ಅಲ್ಲಿಗೆ ಬಂದಿದ್ದ ಕೇರೆ ಹಾವಿನ ಮೈಗೆ ಸಿಕ್ಕಿಹಾಕಿಕೊಂಡಿತ್ತು. ಮಕ್ಕಳು ಡ್ರಾಯರ್ ತೆರೆದಾಗ ಹಾವು ಕಂಡರೂ, ಅದೃಷ್ಟವಶಾತ್ ಏನೂ ಅನಾಹುತ ಆಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcpaezeqzbexgdwyq2xndkb,imgname-whatsapp-image-2026-04-29-at-6.44.55-pm-1777468783598.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮನೆಯ ಡ್ರಾಯರ್&zwnj;ನಲ್ಲಿ ಚಿನ್ನದ ಉಂಗುರ ತೊಟ್ಟು ಕುಳಿತಿದ್ದ ಅತಿಥಿ! ಕೇರಳದ ಕಾಸರಗೋಡಿನಲ್ಲಿ ನಡೆದ ಈ ರೋಚಕ ಘಟನೆ ನಿಮಗೇನು ಕಲಿಸುತ್ತದೆ?&lt;/strong&gt;&lt;/p&gt;&lt;p&gt;ನಮ್ಮ ದೈನಂದಿನ ಜೀವನದಲ್ಲಿ ನಾವು ಎಷ್ಟೇ ಜಾಗರೂಕರಾಗಿದ್ದರೂ, ಕೆಲವೊಮ್ಮೆ ಪ್ರಕೃತಿ ನಮಗೆ ಅನಿರೀಕ್ಷಿತ ಅಚ್ಚರಿಗಳನ್ನು ನೀಡುತ್ತದೆ. ಅಂತಹದ್ದೇ ಒಂದು ಮೈನವಿರೇಳಿಸುವ ಮತ್ತು ವಿಚಿತ್ರವಾದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಅಡೂರ್ ಎಂಬಲ್ಲಿ ನಡೆದಿದೆ. ಇದು ಕೇವಲ ಒಂದು ಸುದ್ದಿಯಲ್ಲ, ನಮ್ಮ ಜೀವನಶೈಲಿಯಲ್ಲಿ ನಾವು ಎಂತಹ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬುದಕ್ಕೆ ಒಂದು ಪಾಠವೂ ಹೌದು.&lt;/p&gt;&lt;p&gt;ಅಡೂರ್ ನಿವಾಸಿ ರವಿ ಎಂಬುವವರ ಮನೆಯಲ್ಲಿ ಅಂದು ಎಲ್ಲರಂತೆ ದಿನಚರಿ ಆರಂಭವಾಗಿತ್ತು. ಮಕ್ಕಳು ಮನೆಯೊಳಗೆ ಆಟವಾಡುತ್ತಾ ಆಕಸ್ಮಿಕವಾಗಿ ಟೇಬಲ್ ಒಂದರ ಡ್ರಾಯರ್ ಅನ್ನು ತೆರೆದಿದ್ದಾರೆ. ಅಲ್ಲಿ ಕಂಡ ದೃಶ್ಯ ಕಂಡು ಮಕ್ಕಳು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಆ ಡ್ರಾಯರ್&zwnj;ನೊಳಗೆ ಸುರುಳಿ ಸುತ್ತಿಕೊಂಡು ಒಂದು ಕೇರೆ ಹಾವು ಕುಳಿತಿತ್ತು! ಆದರೆ ಇಲ್ಲಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದ್ದು ಹಾವಿನ ಉಪಸ್ಥಿತಿಯಲ್ಲ, ಬದಲಾಗಿ ಆ ಹಾವಿನ ಮೈಗೆ ಬಿಗಿಯಾಗಿ ಸಿಲುಕಿಕೊಂಡಿದ್ದ ಒಂದು ಚಿನ್ನದ ಉಂಗುರ.&lt;/p&gt;&lt;p&gt;ಹೌದು, ಡ್ರಾಯರ್&zwnj;ನಲ್ಲಿದ್ದ ಚಿನ್ನದ ಉಂಗುರವು ಆ ಕೇರೆ ಹಾವಿನ ದೇಹದ ಮಧ್ಯಭಾಗದಲ್ಲಿ ಹೇಗೋ ಸಿಕ್ಕಿಹಾಕಿಕೊಂಡಿತ್ತು. ಬಹುಶಃ ಹಸಿವಿನಿಂದ ಆಹಾರ ಹುಡುಕುತ್ತಾ ಬಂದ ಹಾವು, ಡ್ರಾಯರ್&zwnj;ನ ಸಣ್ಣ ಕಿಂಡಿಯ ಮೂಲಕ ಒಳಹೋಗುವಾಗ ಈ ಅಚಾತುರ್ಯ ನಡೆದಿದೆ ಎಂದು ಊಹಿಸಲಾಗಿದೆ. ಉಂಗುರವು ಹಾವಿನ ಮೈಗೆ ಎಷ್ಟು ಬಿಗಿಯಾಗಿತ್ತೆಂದರೆ, ಅದು ಹಾವಿನ ಚಲನೆಗೂ ಅಡ್ಡಿಪಡಿಸುತ್ತಿತ್ತು. ಅದೃಷ್ಟವಶಾತ್, ಮಕ್ಕಳು ಹಾವನ್ನು ಮುಟ್ಟಲು ಹೋಗದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.&lt;/p&gt;&lt;p&gt;ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆಯ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅತ್ಯಂತ ಜಾಗರೂಕತೆಯಿಂದ ಹಾವನ್ನು ಡ್ರಾಯರ್&zwnj;ನಿಂದ ಹೊರತೆಗೆದ ಸಿಬ್ಬಂದಿ, ನಂತರ ಹಾವಿಗೆ ಯಾವುದೇ ಗಾಯವಾಗದಂತೆ ಚಿನ್ನದ ಉಂಗುರವನ್ನು ಕತ್ತರಿಸಿ ಅದನ್ನು ಬಿಡುಗಡೆಗೊಳಿಸಿದರು. ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.&lt;/p&gt;&lt;h2&gt;ಈ ಘಟನೆಯಿಂದ ನಾವು ಕಲಿಯಬೇಕಾದ ಲೈಫ್&zwnj;ಸ್ಟೈಲ್ ಪಾಠಗಳೇನು?&lt;/h2&gt;&lt;p&gt;1. ಶೇಖರಣಾ ಜಾಗಗಳ ಬಗ್ಗೆ ಎಚ್ಚರ: ಮನೆಯಲ್ಲಿ ಹಳೆಯ ಟೇಬಲ್&zwnj;ಗಳು ಅಥವಾ ಹೆಚ್ಚು ಬಳಸದ ಡ್ರಾಯರ್&zwnj;ಗಳಿದ್ದರೆ, ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಮತ್ತು ಸರಿಯಾಗಿ ಲಾಕ್ ಮಾಡುವುದು ಅವಶ್ಯಕ.&lt;/p&gt;&lt;p&gt;2. ಮಕ್ಕಳ ಮೇಲೆ ನಿಗಾ: ಮಕ್ಕಳು ಆಟವಾಡುವಾಗ ಯಾವ ವಸ್ತುಗಳನ್ನು ಮುಟ್ಟುತ್ತಿದ್ದಾರೆ ಮತ್ತು ಎಲ್ಲಿ ಹೋಗುತ್ತಿದ್ದಾರೆ ಎಂಬ ಅರಿವು ಪೋಷಕರಿಗೆ ಇರಬೇಕು.&lt;/p&gt;&lt;p&gt;3. ಬೆಲೆಬಾಳುವ ವಸ್ತುಗಳ ಸುರಕ್ಷತೆ: ಚಿನ್ನಾಭರಣಗಳನ್ನು ತೆರೆದ ಡ್ರಾಯರ್&zwnj;ಗಳಲ್ಲಿ ಅಥವಾ ಸುಲಭವಾಗಿ ಪ್ರಾಣಿಗಳು ಪ್ರವೇಶಿಸಬಹುದಾದ ಜಾಗಗಳಲ್ಲಿ ಇಡಬಾರದು.&lt;/p&gt;&lt;p&gt;4. ವನ್ಯಜೀವಿಗಳ ಬಗ್ಗೆ ಜಾಗೃತಿ: ಮನೆಯೊಳಗೆ ಹಾವು ಅಥವಾ ಇತರ ಪ್ರಾಣಿಗಳು ಬಂದಾಗ ಗಾಬರಿಯಾಗಿ ಅವುಗಳನ್ನು ಕೊಲ್ಲುವ ಬದಲು, ತಜ್ಞರನ್ನು ಅಥವಾ ಅರಣ್ಯ ಇಲಾಖೆಯನ್ನು ಸಂಪರ್ಕಿಸುವುದು ಉತ್ತಮ ನಾಗರಿಕನ ಲಕ್ಷಣ.&lt;/p&gt;&lt;h3&gt;ಜೀವನವು ಅನಿರೀಕ್ಷಿತ ತಿರುವುಗಳಿಂದ ಕೂಡಿದೆ ಎಂಬುದಕ್ಕೆ ಈ 'ಉಂಗುರ ತೊಟ್ಟ ಹಾವು' ಒಂದು ಸಾಕ್ಷಿ! ನಿಮ್ಮ ಮನೆಯಲ್ಲಿಯೂ ಡ್ರಾಯರ್&zwnj;ಗಳನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ!&lt;/h3&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/viral/a-gold-ring-kept-in-a-table-drawer-at-a-house-in-kasaragod-got-stuck-around-the-body-of-a-rat-snake/articleshow-zwthr71"/>
        </item>
        <item>
            <title><![CDATA[ಹತ್ತೇ ನಿಮಿಷದಲ್ಲಿ ರೆಡಿ ನೀವು ಯಾವತ್ತೂ ತಿಂದಿರದ ಉಡುಪಿ ಸ್ಟೈಲ್‌ ಕೊಬ್ಬರಿ ಚಟ್ನಿ]]></title>
            <link>https://kannada.asianetnews.com/gallery/food/udupi-style-coconut-coriander-chutney-a-flavorful-twist-to-your-breakfast-1aifhei</link>
            <guid isPermaLink="true">https://kannada.asianetnews.com/gallery/food/udupi-style-coconut-coriander-chutney-a-flavorful-twist-to-your-breakfast-1aifhei</guid>
            <pubDate>Wed, 29 Apr 2026 18:23:26 +0530</pubDate>
            <description><![CDATA[&lt;p&gt;Udupi style coconut chutney: ದೋಸೆ ಅಥವಾ ಇಡ್ಲಿಗೆ ಪ್ರತಿದಿನ ಮಾಡುವ ಸಾಧಾರಣ ಚಟ್ನಿ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಉಡುಪಿ ಹೋಟೆಲ್&zwnj;ಗಳಲ್ಲಿ ಸಿಗುವ ಆ ವಿಶಿಷ್ಟ ರುಚಿಯ ಚಟ್ನಿಯನ್ನು ನೀವೇಕೆ ಮನೆಯಲ್ಲಿ ಪ್ರಯತ್ನಿಸಬಾರದು?.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcm7byrny5w3cpf6sva5039,imgname-thumbnail---2026-04-29t181231.514-1777466585048.jpg" type="image/jpeg" height="390" width="690"/>
            <content:encoded><![CDATA[&lt;p&gt;Udupi style coconut chutney: ದೋಸೆ ಅಥವಾ ಇಡ್ಲಿಗೆ ಪ್ರತಿದಿನ ಮಾಡುವ ಸಾಧಾರಣ ಚಟ್ನಿ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಉಡುಪಿ ಹೋಟೆಲ್&zwnj;ಗಳಲ್ಲಿ ಸಿಗುವ ಆ ವಿಶಿಷ್ಟ ರುಚಿಯ ಚಟ್ನಿಯನ್ನು ನೀವೇಕೆ ಮನೆಯಲ್ಲಿ ಪ್ರಯತ್ನಿಸಬಾರದು?.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಡ್ಲಿ, ದೋಸೆಗೆ ಯಾವಾಗಲೂ ಒಂದೇ ರೀತಿಯ ಚಟ್ನಿ ತಿಂದು ಬೇಜಾರಾಗಿದ್ದರೆ, ಈ ಬಾರಿ ಸ್ವಲ್ಪ ವಿಭಿನ್ನವಾದ ರುಚಿ ಹೊಂದಿರುವ ಉಡುಪಿ ಸ್ಟೈಲ್ ಚಟ್ನಿ ಪ್ರಯತ್ನಿಸಿ. ಇದರಲ್ಲಿ ಗೋಡಂಬಿ, ಪುದೀನಾ ಮತ್ತು ಬೆಳ್ಳುಳ್ಳಿ ಬಳಸುವುದರಿಂದ ಇದಕ್ಕೆ ವಿಶೇಷವಾದ ಸುವಾಸನೆ ಮತ್ತು ರುಚಿ ಸಿಗುತ್ತದೆ.&lt;/p&gt;&lt;img&gt;&lt;p&gt;ತುರಿದ ಹಸಿ ಕೊಬ್ಬರಿ: 1/2 ಕಪ್ಗೋಡಂಬಿ: 1/4 ಕಪ್ಕೊತ್ತಂಬರಿ ಸೊಪ್ಪು: ಒಂದು ಹಿಡಿಯಷ್ಟುಪುದೀನಾ ಎಲೆಗಳು: 8&ndash;10ಹಸಿಮೆಣಸಿನಕಾಯಿ: 4&ndash;5ಬೆಳ್ಳುಳ್ಳಿ ಎಸಳು: 4&ndash;5ಶುಂಠಿ: ಒಂದು ಸಣ್ಣ ತುಂಡುಹುಣಸೆಹಣ್ಣು: ಸ್ವಲ್ಪಉಪ್ಪು: ರುಚಿಗೆ ತಕ್ಕಷ್ಟುನೀರು: ಅವಶ್ಯಕತೆಗೆ ತಕ್ಕಂತೆ&lt;/p&gt;&lt;img&gt;&lt;p&gt;ಎಣ್ಣೆ:2 ಟೇಬಲ್ ಚಮಚಸಾಸಿವೆ:1/2 ಟೀ ಚಮಚಉದ್ದಿನ ಬೇಳೆ:1 ಟೀ ಚಮಚಒಣ ಮೆಣಸಿನಕಾಯಿ:1&lt;/p&gt;&lt;img&gt;&lt;p&gt;ಮೊದಲು ಹಸಿ ಕೊಬ್ಬರಿಯನ್ನು ತುರಿದು ಇಟ್ಟುಕೊಳ್ಳಿ. ಕೊತ್ತಂಬರಿ ಮತ್ತು ಪುದೀನಾ ಎಲೆಗಳನ್ನು ಸ್ವಚ್ಛವಾಗಿ ತೊಳೆದಿಡಿ. ಶುಂಠಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ.ಒಂದು ಮಿಕ್ಸಿ ಜಾರ್&zwnj;ಗೆ ಕೊಬ್ಬರಿ ತುರಿ, ಗೋಡಂಬಿ, ಕೊತ್ತಂಬರಿ ಸೊಪ್ಪು, ಪುದೀನಾ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.ಇದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ (ಸ್ಮೂತ್ ಆಗಿ) ರುಬ್ಬಿಕೊಳ್ಳಿ.ರುಬ್ಬಿದ ಮಿಶ್ರಣವನ್ನು ಒಂದು ಬೌಲ್&zwnj;ಗೆ ವರ್ಗಾಯಿಸಿ. ನಿಮಗೆ ಬೇಕಾದ ಹದಕ್ಕೆ ತಕ್ಕಂತೆ ಸ್ವಲ್ಪ ನೀರು ಸೇರಿಸಿ ಸರಿಪಡಿಸಿಕೊಳ್ಳಿ.&lt;/p&gt;&lt;img&gt;&lt;p&gt;ಒಂದು ಸಣ್ಣ ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ.ಎಣ್ಣೆ ಕಾದ ನಂತರ ಸಾಸಿವೆ ಹಾಕಿ, ಅದು ಸಿಡಿದ ಮೇಲೆ ಉದ್ದಿನ ಬೇಳೆ ಮತ್ತು ಒಣ ಮೆಣಸಿನಕಾಯಿ ಸೇರಿಸಿ ಕೆಂಪಾಗುವವರೆಗೆ ಹುರಿಯಿರಿ.ಈ ಒಗ್ಗರಣೆಯನ್ನು ಚಟ್ನಿಗೆ ಸೇರಿಸಿ ಚೆನ್ನಾಗಿ ಬೆರೆಸಿ.ಈಗ ರುಚಿಕರವಾದ ಉಡುಪಿ ಸ್ಟೈಲ್ ಕೊಬ್ಬರಿ ಚಟ್ನಿ ಸಿದ್ಧ! ಇದು ಇಡ್ಲಿ, ದೋಸೆ, ವಡೆ ಅಥವಾ ಉಪ್ಪಿಟ್ಟಿನ ಜೊತೆಗೆ ತಿನ್ನಲು ತುಂಬಾ ಅದ್ಭುತವಾಗಿರುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/udupi-style-coconut-coriander-chutney-a-flavorful-twist-to-your-breakfast-1aifhei"/>
        </item>
        <item>
            <title><![CDATA[ವಿಚ್ಛೇದನಕ್ಕಾಗಿ  ಗಂಡನ ಸಹೋದರಿಯನ್ನೇ 'ಸವತಿ' ಮಾಡಿದ ಕಿಲಾಡಿ ಪತ್ನಿ! ಹೈಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಕೇಸ್!]]></title>
            <link>https://kannada.asianetnews.com/relationship/woman-identifies-sister-in-law-as-husbands-second-wife-for-divorce-in-gwalior-san/articleshow-nyu2q4v</link>
            <guid isPermaLink="true">https://kannada.asianetnews.com/relationship/woman-identifies-sister-in-law-as-husbands-second-wife-for-divorce-in-gwalior-san/articleshow-nyu2q4v</guid>
            <pubDate>Wed, 29 Apr 2026 18:05:59 +0530</pubDate>
            <description><![CDATA[&lt;p&gt;ಗ್ವಾಲಿಯರ್&zwnj;ನಲ್ಲಿ ಮಹಿಳೆಯೊಬ್ಬರು ವಿಚ್ಛೇದನ ಪಡೆಯಲು, ಪತಿಯ ತಂಗಿಯನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ನ್ಯಾಯಾಲಯಕ್ಕೆ ದಾರಿ ತಪ್ಪಿಸಿದ್ದಾರೆ. ಕೌಟುಂಬಿಕ ಫೋಟೋವನ್ನು ಸುಳ್ಳು ಸಾಕ್ಷ್ಯವಾಗಿ ಬಳಸಿ ಏಕಪಕ್ಷೀಯ ವಿಚ್ಛೇದನ ಪಡೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqckj1nnp8385m5b10haaef2,imgname-divorce-case-1777465886389.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗ್ವಾಲಿಯರ್ (ಏ.29): &lt;/strong&gt;ವಿಚ್ಛೇದನಕ್ಕಾಗಿ ದಂಪತಿಗಳು ನ್ಯಾಯಾಲಯದ ಮೆಟ್ಟಿಲೇರಿದಾಗ ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ ಅಥವಾ ಪರಸ್ಪರ ಭಿನ್ನಾಭಿಪ್ರಾಯಗಳ ಆರೋಪ ಮಾಡುವುದು ಸಾಮಾನ್ಯ. ಆದರೆ, ಮಧ್ಯಪ್ರದೇಶದ ಮಹಿಳೆಯೊಬ್ಬರು ವಿಚ್ಛೇದನ ಪಡೆಯಲು ಯಾರೂ ಊಹಿಸಲೂ ಸಾಧ್ಯವಾಗದ ಮಾರ್ಗವೊಂದನ್ನು ಅನುಸರಿಸಿದ್ದಾರೆ. ತನ್ನ ಪತಿಯಿಂದ ದೂರವಾಗಲು ಪತಿಯ ತಂಗಿಯನ್ನೇ ಆತನ 'ಎರಡನೇ ಹೆಂಡತಿ' ಎಂದು ಬಿಂಬಿಸಿ ಕೋರ್ಟ್ ಹಾದಿ ತಪ್ಪಿಸಿದ್ದಾರೆ!&lt;/p&gt;&lt;p&gt;ಗ್ವಾಲಿಯರ್ ನಿವಾಸಿಯಾದ ಈ ಮಹಿಳೆ 1998ರಲ್ಲಿ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ವಿವಾಹವಾಗಿದ್ದರು. ಪತಿಯ ಕೆಲಸದ ನಿಮಿತ್ತ ಆತ ಮನೆಯಿಂದ ದೂರವಿರುತ್ತಿದ್ದದ್ದು ದಂಪತಿಗಳ ನಡುವೆ ಜಗಳಕ್ಕೆ ಕಾರಣವಾಗಿತ್ತು. 2015 ರಿಂದ ಈ ಮಹಿಳೆ ಪತಿಯಿಂದ ಬೇರೆಯಾಗಿ ವಾಸಿಸಲು ಆರಂಭಿಸಿದ್ದರು.&lt;/p&gt;&lt;h2&gt;&lt;strong&gt;ಹಠಕ್ಕೆ ಬಿದ್ದ ಪತ್ನಿ, ಒಪ್ಪದ ಪತಿ&lt;/strong&gt;&lt;/h2&gt;&lt;p&gt;ಮಹಿಳೆಗೆ ಯಾವುದೇ ಬೆಲೆ ತೆತ್ತಾದರೂ ವಿಚ್ಛೇದನ ಬೇಕಿತ್ತು. ಆದರೆ ಪತಿಗೆ ವಿಚ್ಛೇದನ ನೀಡಲು ಇಷ್ಟವಿರಲಿಲ್ಲ. ಹೀಗಾಗಿ, 2021ರಲ್ಲಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ ಮಹಿಳೆ, &quot;ತನ್ನ ಪತಿ ಎರಡನೇ ಮದುವೆಯಾಗಿದ್ದಾನೆ&quot; ಎಂಬ ಗಂಭೀರ ಆರೋಪ ಮಾಡಿದರು.&lt;/p&gt;&lt;p&gt;ತನ್ನ ಆರೋಪಕ್ಕೆ ಪುರಾವೆಯಾಗಿ ಮಹಿಳೆಯು ನ್ಯಾಯಾಲಯಕ್ಕೆ ಒಂದು ಕೌಟುಂಬಿಕ ಗ್ರೂಪ್ ಫೋಟೋವನ್ನು ಸಲ್ಲಿಸಿದರು. ಆ ಫೋಟೋದಲ್ಲಿ ಪತಿಯ ಪಕ್ಕದಲ್ಲಿ ನಿಂತಿದ್ದ ಮಹಿಳೆಯನ್ನು ಆತನ 'ಎರಡನೇ ಹೆಂಡತಿ' ಎಂದು ಗುರುತಿಸಿದರು. ಈ ಫೋಟೋವನ್ನೇ ಪ್ರಬಲ ಸಾಕ್ಷ್ಯ ಎಂದು ನಂಬಿದ ಕೌಟುಂಬಿಕ ನ್ಯಾಯಾಲಯವು ಮಹಿಳೆಯ ಪರವಾಗಿ ಏಕಪಕ್ಷೀಯ (One-sided) ವಿಚ್ಛೇದನ ಆದೇಶವನ್ನು ನೀಡಿತು. ಈ ಪ್ರಕ್ರಿಯೆಯಲ್ಲಿ ಪತಿಗೆ ತನ್ನ ವಾದ ಮಂಡಿಸಲು ಅವಕಾಶವೇ ಸಿಕ್ಕಿರಲಿಲ್ಲ.&lt;/p&gt;&lt;h2&gt;&lt;strong&gt;ಸತ್ಯ ಬೆಳಕಿಗೆ ಬಂದಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಏಪ್ರಿಲ್ ಮೊದಲ ವಾರದಲ್ಲಿ ಪತಿಗೆ ತನಗೆ ವಿಚ್ಛೇದನ ನೀಡಲಾಗಿರುವ ವಿಷಯ ತಿಳಿಯಿತು. ತಕ್ಷಣವೇ ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದ ಆತ ಬೆಚ್ಚಿಬಿದ್ದಿದ್ದಾನೆ. ತನ್ನ ಪತ್ನಿ ನೀಡಿದ ಫೋಟೋದಲ್ಲಿ 'ಎರಡನೇ ಹೆಂಡತಿ' ಎಂದು ಬಿಂಬಿತವಾಗಿದ್ದವರು ಬೇರಾರೂ ಅಲ್ಲ, ಆತನ ಸ್ವಂತ ಸಹೋದರಿ!&lt;/p&gt;&lt;h2&gt;&lt;strong&gt;ಹೈಕೋರ್ಟ್ ಮೆಟ್ಟಿಲೇರಿದ ಪತಿ&lt;/strong&gt;&lt;/h2&gt;&lt;p&gt;ಸರ್ಕಾರಿ ವಕೀಲ ಧರ್ಮೇಂದ್ರ ಶರ್ಮಾ ಅವರು ತಿಳಿಸಿರುವಂತೆ, &quot;ಪತ್ನಿಯು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ, ಸುಳ್ಳು ಪುರಾವೆಗಳ ಮೂಲಕ ವಿಚ್ಛೇದನ ಪಡೆದಿದ್ದಾರೆ&quot; ಎಂದು ಆರೋಪಿಸಿ ಪತಿ ಈಗ ಮಧ್ಯಪ್ರದೇಶ ಹೈಕೋರ್ಟ್&zwnj;ನ ಗ್ವಾಲಿಯರ್ ಬೆಂಚ್&zwnj;ನಲ್ಲಿ ಈ ಆದೇಶವನ್ನು ಪ್ರಶ್ನಿಸಿದ್ದಾರೆ. ಪತ್ನಿ ದಾರಿ ತಪ್ಪಿಸಿ ಪಡೆದ ಈ ವಿಚ್ಛೇದನ ಆದೇಶವನ್ನು ರದ್ದುಗೊಳಿಸುವಂತೆ ಪತಿ ಮನವಿ ಮಾಡಿದ್ದು, ಹೈಕೋರ್ಟ್ ಈಗ ಈ ವಿಚಿತ್ರ ಪ್ರಕರಣದ ವಿಚಾರಣೆ ನಡೆಸುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>life</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/woman-identifies-sister-in-law-as-husbands-second-wife-for-divorce-in-gwalior-san/articleshow-nyu2q4v"/>
        </item>
        <item>
            <title><![CDATA['ಆ ನಟನಿಗೆ ನನ್ನ ಹೃದಯದಲ್ಲಿ ಸ್ಪೆಷಲ್ ಸ್ಥಾನ ಇದೆ'.. ಸ್ವತಃ ತಾವೇ ಗುಟ್ಟು ಬಿಟ್ಟುಕೊಟ್ಟ ನಟಿ ಅನುಷ್ಕಾ ಶೆಟ್ಟಿ!]]></title>
            <link>https://kannada.asianetnews.com/gallery/cine-world/bahubali-fame-actress-anushka-shetty-says-nagarjuna-akkineni-has-special-place-in-her-heart-y0mqn42</link>
            <guid isPermaLink="true">https://kannada.asianetnews.com/gallery/cine-world/bahubali-fame-actress-anushka-shetty-says-nagarjuna-akkineni-has-special-place-in-her-heart-y0mqn42</guid>
            <pubDate>Wed, 29 Apr 2026 17:59:40 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ಹೊಸ ನಟಿಯರು ಚಿತ್ರರಂಗಕ್ಕೆ ಕಾಲಿಡುವಾಗ ಬಣ್ಣ ಬಣ್ಣದ ಪೋರ್ಟ್&zwnj;ಫೋಲಿಯೋ, ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡು ನಿರ್ದೇಶಕರ ಮುಂದೆ ನಿಲ್ಲುತ್ತಾರೆ. ಆದರೆ ಅನುಷ್ಕಾ ಕಥೆಯೇ ಬೇರೆ! ಚಿತ್ರರಂಗಕ್ಕೆ ಬರುವ ಮೊದಲು ಅವರು ಮುಂಬೈನಲ್ಲಿ ಇದ್ದರು. ಮುಂದೇನಾಯ್ತು ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcjw8wwyzxze2t2m160grca,imgname-anushka-shetty-1777465172892.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಹೊಸ ನಟಿಯರು ಚಿತ್ರರಂಗಕ್ಕೆ ಕಾಲಿಡುವಾಗ ಬಣ್ಣ ಬಣ್ಣದ ಪೋರ್ಟ್&zwnj;ಫೋಲಿಯೋ, ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡು ನಿರ್ದೇಶಕರ ಮುಂದೆ ನಿಲ್ಲುತ್ತಾರೆ. ಆದರೆ ಅನುಷ್ಕಾ ಕಥೆಯೇ ಬೇರೆ! ಚಿತ್ರರಂಗಕ್ಕೆ ಬರುವ ಮೊದಲು ಅವರು ಮುಂಬೈನಲ್ಲಿ ಇದ್ದರು. ಮುಂದೇನಾಯ್ತು ನೋಡಿ..&lt;/p&gt;&lt;img&gt;&lt;p&gt;ಅನುಷ್ಕಾ ಶೆಟ್ಟಿ ಸಿನಿ ಜರ್ನಿಯ ರೋಚಕ ಕಥೆ: ಆಡಿಷನ್&zwnj;ನಲ್ಲಿ ನಟಿ ಕೊಟ್ಟಿದ್ದು ಬರೀ ಪಾಸ್&zwnj;ಪೋರ್ಟ್ ಫೋಟೋ! ನಾಗಾರ್ಜುನ ಬಗ್ಗೆ 'ಸ್ವೀಟಿ' ಹೇಳಿದ್ದೇನು?&lt;/p&gt;&lt;p&gt;ಬೆಂಗಳೂರು: ದಕ್ಷಿಣ ಭಾರತದ 'ಲೇಡಿ ಸೂಪರ್ ಸ್ಟಾರ್' ಅಥವಾ ಅಭಿಮಾನಿಗಳ ಪ್ರೀತಿಯ 'ಸ್ವೀಟಿ' ಅನುಷ್ಕಾ ಶೆಟ್ಟಿ ಅಂದ ಕೂಡಲೇ ನೆನಪಾಗುವುದು 'ಅರುಂಧತಿ'ಯ ಗಾಂಭೀರ್ಯ ಮತ್ತು 'ಬಾಹುಬಲಿ'ಯ ದೇವಸೇನೆಯ ಅಬ್ಬರ. ಇಂದಿಗೂ ಸೌತ್ ಸಿನಿ ದುನಿಯಾದಲ್ಲಿ ಮೋಸ್ಟ್ ಡಿಮ್ಯಾಂಡಿಂಗ್ ನಟಿಯಾಗಿದ್ದಾರೆ ಅನುಷ್ಕಾ.&lt;/p&gt;&lt;img&gt;&lt;p&gt;ನಟಿ ಅನುಷ್ಕಾ ಅವರ ವೈಯಕ್ತಿಕ ಜೀವನ ಮತ್ತು ಮದುವೆ ಬಗ್ಗೆ ಸದಾ ಗಾಸಿಪ್&zwnj;ಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಅನುಷ್ಕಾ ತಮ್ಮ ಚಿತ್ರರಂಗದ ಎಂಟ್ರಿ ಬಗ್ಗೆ ಬಿಚ್ಚಿಟ್ಟಿರುವ ಸತ್ಯಗಳು ಈಗ ಸಿನಿ ಪ್ರೇಮಿಗಳ ನಡುವೆ ಭಾರಿ ಚರ್ಚೆಗೆ ಕಾರಣವಾಗಿವೆ.&lt;/p&gt;&lt;img&gt;&lt;p&gt;ಪಾಸ್&zwnj;ಪೋರ್ಟ್ ಫೋಟೋ ನೀಡಿದ್ದ ಮುಗ್ಧ ಸುಂದರಿ:&lt;/p&gt;&lt;p&gt;ಸಾಮಾನ್ಯವಾಗಿ ಹೊಸ ನಟಿಯರು ಚಿತ್ರರಂಗಕ್ಕೆ ಕಾಲಿಡುವಾಗ ಬಣ್ಣ ಬಣ್ಣದ ಪೋರ್ಟ್&zwnj;ಫೋಲಿಯೋ, ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡು ನಿರ್ದೇಶಕರ ಮುಂದೆ ನಿಲ್ಲುತ್ತಾರೆ. ಆದರೆ ಅನುಷ್ಕಾ ಕಥೆಯೇ ಬೇರೆ! ಚಿತ್ರರಂಗಕ್ಕೆ ಬರುವ ಮೊದಲು ಅವರು ಮುಂಬೈನಲ್ಲಿ ಯೋಗ ತರಬೇತುದಾರರಾಗಿದ್ದರು.&lt;/p&gt;&lt;img&gt;&lt;p&gt;ಸಿನಿಮಾಗಳ ಬಗ್ಗೆ ಅಷ್ಟಾಗಿ ಅರಿವಿಲ್ಲದ ಅನುಷ್ಕಾ ಅವರಿಗೆ ನಿರ್ದೇಶಕ ಪುರಿ ಜಗನ್ನಾಥ್ ಅವರನ್ನು ಭೇಟಿಯಾಗುವಂತೆ ಆಪ್ತರು ಸಲಹೆ ನೀಡಿದರು. ಮೊದಮೊದಲು ನಾಚಿಕೆಯಿಂದ ನಿರಾಕರಿಸಿದರೂ, ನಂತರ ಎಲ್ಲರ ಒತ್ತಾಯಕ್ಕೆ ಮಣಿದು ಪುರಿ ಅವರನ್ನು ಭೇಟಿಯಾದರು. ಆಗ ಪುರಿ ಜಗನ್ನಾಥ್ ಅವರು &quot;ನಿಮ್ಮ ಫೋಟೋಗಳಿವೆಯೇ?&quot; ಎಂದು ಕೇಳಿದಾಗ, ಅನುಷ್ಕಾ ತಮ್ಮ ಪರ್ಸ್&zwnj;ನಲ್ಲಿದ್ದ ಪುಟ್ಟ 'ಪಾಸ್&zwnj;ಪೋರ್ಟ್ ಸೈಜ್' ಫೋಟೋವನ್ನು ಕೈಗಿಟ್ಟಿದ್ದರಂತೆ! ಈ ಮುಗ್ಧತೆಯನ್ನು ಕಂಡು ದಂಗಾದ ಪುರಿ, ಮರುದಿನವೇ ಹೈದರಾಬಾದ್&zwnj;ಗೆ ಬರುವಂತೆ ಆಹ್ವಾನ ನೀಡಿದರು.&lt;/p&gt;&lt;img&gt;&lt;p&gt;ಯೋಗ ತರಗತಿಗಾಗಿ ಆಡಿಷನ್ ಮುಂದೂಡಿಕೆ!&lt;/p&gt;&lt;p&gt;ಯಾವುದೇ ಹೊಸಬರಿಗೆ ಸ್ಟಾರ್ ನಿರ್ದೇಶಕರು ಕರೆದರೆ ಎಲ್ಲವನ್ನೂ ಬಿಟ್ಟು ಓಡುತ್ತಾರೆ. ಆದರೆ ಅನುಷ್ಕಾ ಮಾತ್ರ, &quot;ನನಗೆ ಯೋಗ ತರಗತಿಗಳಿವೆ, ಶುಕ್ರವಾರದವರೆಗೆ ಬರಲು ಸಾಧ್ಯವಿಲ್ಲ&quot; ಎಂದು ಖಡಕ್ ಆಗಿ ಹೇಳಿದ್ದರಂತೆ. ನಂತರ ಹೈದರಾಬಾದ್&zwnj;ಗೆ ಹೋದಾಗ ಅಲ್ಲಿ 'ಕಿಂಗ್' ನಾಗಾರ್ಜುನ ಅವರ 'ಮಾಸ್' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು.&lt;/p&gt;&lt;img&gt;&lt;p&gt;ನಾಗಾರ್ಜುನ ಅವರ ಎದುರೇ ಅನುಷ್ಕಾ ಅವರ ಮೇಕಪ್ ಟೆಸ್ಟ್ ನಡೆಯಿತು. ಪಕ್ಕದಲ್ಲೇ ಇದ್ದ ಮಿಸ್ ಇಂಡಿಯಾ ಸ್ಪರ್ಧಿ ಫೋಟೋಶೂಟ್&zwnj;ಗೆ ಸ್ಟೈಲಿಶ್ ಆಗಿ ಪೋಸ್ ನೀಡುತ್ತಿದ್ದರೆ, ಅನುಷ್ಕಾ ಮಾತ್ರ ಅಲ್ಲಿನ ಮ್ಯೂಸಿಕ್ ಮತ್ತು ತಂಗಾಳಿ ಸೃಷ್ಟಿಸುವ ಫ್ಯಾನ್ ನೋಡಿ &quot;ಎಲ್ಲಿ ನನ್ನನ್ನು ಡ್ಯಾನ್ಸ್ ಮಾಡಲು ಹೇಳುತ್ತಾರೋ&quot; ಎಂದು ಬೆವತು ಹೋಗಿದ್ದರಂತೆ!&lt;/p&gt;&lt;img&gt;&lt;p&gt;ನಾಗಾರ್ಜುನ: ಅನುಷ್ಕಾ ಪಾಲಿನ 'ಗಾಡ್&zwnj;ಫಾದರ್'&lt;/p&gt;&lt;p&gt;ಬಾಲ್ಯದಿಂದಲೂ ಫೋಟೋಗೆ ಪೋಸ್ ನೀಡಲು ಹಿಂಜರಿಯುತ್ತಿದ್ದ ತಮಗೆ ನಾಗಾರ್ಜುನ ಅವರು ನೀಡಿದ ಪ್ರೋತ್ಸಾಹವನ್ನು ಅನುಷ್ಕಾ ಭಾವುಕರಾಗಿ ಸ್ಮರಿಸಿದ್ದಾರೆ. &quot;ನನ್ನಲ್ಲಿ ಏನೋ ಇದೆ ಎಂದು ನಂಬಿ ಅಂದು ನಾಗಾರ್ಜುನ ಸರ್ ನನಗೆ ಅವಕಾಶ ನೀಡಿದರು. ಅವರ ನಂಬಿಕೆಯಿಂದಲೇ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾಗಾರ್ಜುನ ಸರ್ ನನ್ನ ಜೀವನದ ಗಾಡ್&zwnj;ಫಾದರ್ ಮತ್ತು ನನ್ನ ಹೃದಯದಲ್ಲಿ ಅವರಿಗೆ ಸದಾ ವಿಶೇಷ ಸ್ಥಾನವಿರುತ್ತದೆ&quot; ಎಂದು ಅನುಷ್ಕಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಒಂದು ಪಾಸ್&zwnj;ಪೋರ್ಟ್ ಫೋಟೋದಿಂದ ಆರಂಭವಾದ ಅನುಷ್ಕಾ ಅವರ ಈ ಪ್ರಯಾಣ ಇಂದು ಅವರನ್ನು ಭಾರತದಾದ್ಯಂತ ಮನೆಮಾತಾಗಿಸಿದೆ. 'ಸೂಪರ್' ಚಿತ್ರದ ಮೂಲಕ ಆರಂಭವಾದ ಈ ಯಶೋಗಾಥೆ ಇಂದಿಗೂ ಕೋಟ್ಯಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ. ಇಂದಿಗೂ ಸ್ಟಿಲ್ ಕ್ಯಾಮೆರಾಗಳ ಮುಂದೆ ನಿಲ್ಲಲು ತಮಗೆ ಭಯವಾಗುತ್ತದೆ ಎಂದು ಹೇಳುವ ಈ ನಟಿಯ ಸರಳತೆ ಮತ್ತು ಮುಗ್ಧತೆಯೇ ಅವರ ಯಶಸ್ಸಿನ ಗುಟ್ಟು ಎನ್ನಬಹುದು.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/bahubali-fame-actress-anushka-shetty-says-nagarjuna-akkineni-has-special-place-in-her-heart-y0mqn42"/>
        </item>
        <item>
            <title><![CDATA[ಮುದ್ದೇನಹಳ್ಳಿಯ ಉಚಿತ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ಗುಣಮಟ್ಟದ ಗರಿ; ಶ್ರೀ ಮಧುಸೂದನ ಸಾಯಿ ಸಂಸ್ಥೆಗೆ NABH ಮಾನ್ಯತೆ]]></title>
            <link>https://kannada.asianetnews.com/health-life/free-medical-college-muddenahalli-national-quality-recognition-suh/articleshow-u7htbgz</link>
            <guid isPermaLink="true">https://kannada.asianetnews.com/health-life/free-medical-college-muddenahalli-national-quality-recognition-suh/articleshow-u7htbgz</guid>
            <pubDate>Wed, 29 Apr 2026 17:51:52 +0530</pubDate>
            <description><![CDATA[&lt;p&gt;ಮುದ್ದೇನಹಳ್ಳಿಯ Sri Madhusudan Sai Institute of Medical Sciences and Research ಗೆ National Accreditation Board for Hospitals &amp;amp; Healthcare Providers ಆರಂಭಿಕ ಮಾನ್ಯತೆ ಲಭಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcjxnqpwm179krzn6545xjf,imgname-medical-college-1777465218806.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ:&lt;/strong&gt; ಮುದ್ದೇನಹಳ್ಳಿಯಲ್ಲಿರುವ Sri Madhusudan Sai Institute of Medical Sciences and Research (SMSIMSR) ಗೆ ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಮಾನ್ಯತಾ ಮಂಡಳಿ National Accreditation Board for Hospitals &amp;amp; Healthcare Providers (NABH) ಆರಂಭಿಕ ಹಂತದ ಮಾನ್ಯತೆ ದೊರೆತಿದೆ. ಇದರೊಂದಿಗೆ ಗ್ರಾಮೀಣ ಪ್ರದೇಶದ ಉಚಿತ ಆರೋಗ್ಯ ಸೇವೆಗೆ ಮತ್ತೊಂದು ದೊಡ್ಡ ಮಾನ್ಯತೆ ಸಿಕ್ಕಂತಾಗಿದೆ.&lt;/p&gt;&lt;p&gt;ಈ ಮಾನ್ಯತೆಯ ಮೂಲಕ ಸಂಸ್ಥೆಯು ರೋಗಿಯ ಸುರಕ್ಷತೆ, ಗುಣಮಟ್ಟದ ಚಿಕಿತ್ಸೆ ಹಾಗೂ ಆಸ್ಪತ್ರೆ ನಿರ್ವಹಣೆಯ ರಾಷ್ಟ್ರೀಯ ಮಾನದಂಡಗಳನ್ನು ಸಮರ್ಥವಾಗಿ ಪಾಲಿಸುತ್ತಿದೆ ಎಂಬುದು ದೃಢಪಟ್ಟಿದೆ. ಸಂಪೂರ್ಣ ಉಚಿತ ಸೇವೆಗಳನ್ನು ನೀಡುತ್ತಿರುವ ಗ್ರಾಮೀಣ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾದ ಸಂಸ್ಥೆಗೆ ಇದು ಹೊಸ ಗರಿಮೆಯನ್ನು ತಂದಿದೆ.&lt;/p&gt;&lt;h2&gt;ಒಂದು ವರ್ಷದ ಪರಿಶ್ರಮಕ್ಕೆ ಫಲ&lt;/h2&gt;&lt;p&gt;ಸದ್ಗುರು Sri Madhusudan Sai ಅವರ ಮಾರ್ಗದರ್ಶನದಲ್ಲಿ 2025ರ ಜನವರಿಯಲ್ಲಿ ಆರಂಭವಾದ ಗುಣಮಟ್ಟ ಸುಧಾರಣಾ ಪ್ರಕ್ರಿಯೆ, ಒಂದು ವರ್ಷದ ನಿರಂತರ ಪರಿಶ್ರಮ, ಶಿಸ್ತು ಹಾಗೂ ತಂಡದ ಕಾರ್ಯದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ.&lt;/p&gt;&lt;p&gt;ವೈದ್ಯರು, ನರ್ಸಿಂಗ್ ಸಿಬ್ಬಂದಿ ಹಾಗೂ ಆಡಳಿತ ವರ್ಗದ ಸಮನ್ವಯದಿಂದ ಕ್ಲಿನಿಕಲ್ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳನ್ನು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಿ ಜಾರಿಗೊಳಿಸಲಾಗಿದೆ.&lt;/p&gt;&lt;h2&gt;NABH ಪರಿಶೀಲನೆಯಲ್ಲಿ ಯಶಸ್ಸು&lt;/h2&gt;&lt;p&gt;ಆಂತರಿಕ ಹಾಗೂ ಬಾಹ್ಯ ಲೆಕ್ಕಪರಿಶೋಧನೆಗಳನ್ನು ಹಲವು ಹಂತಗಳಲ್ಲಿ ನಡೆಸಿ, ಕಾರ್ಯವಿಧಾನಗಳಲ್ಲಿ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. 2026ರ ಜನವರಿ 12ರಂದು ನಡೆದ NABH ಪರಿಶೀಲನೆಯಲ್ಲಿ ಸಂಸ್ಥೆ ಯಶಸ್ವಿಯಾಗಿ ಉತ್ತೀರ್ಣವಾಗಿದೆ.&lt;/p&gt;&lt;h2&gt;ಡಾ. ಪದ್ಮಶ್ರೀ ಪ್ರತಿಕ್ರಿಯೆ&lt;/h2&gt;&lt;p&gt;ಸಂಸ್ಥೆಯ ಮೆಡಿಕಲ್ ಸೂಪರಿಂಟೆಂಡೆಂಟ್ Dr. Padmashree ಮಾತನಾಡಿ, &ldquo;ದೇಶದಲ್ಲಿನ ಸಾವಿರಾರು ಆಸ್ಪತ್ರೆಗಳ ಪೈಕಿ ಅತಿ ಕಡಿಮೆ ಆಸ್ಪತ್ರೆಗಳು ಮಾತ್ರ NABH ಸಂಪೂರ್ಣ ಮಾನ್ಯತೆ ಪಡೆದಿವೆ. ನಮ್ಮ ಸಂಸ್ಥೆಗೆ ಆರಂಭಿಕ ಹಂತದ ಮಾನ್ಯತೆ ಸಿಕ್ಕಿರುವುದು ಮೊದಲ ಹೆಜ್ಜೆ. ಶೀಘ್ರದಲ್ಲೇ ಸಂಪೂರ್ಣ ಮಾನ್ಯತೆ ಪಡೆಯುವ ವಿಶ್ವಾಸವಿದೆ&rdquo; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಗ್ರಾಮೀಣ ಆರೋಗ್ಯ ಸೇವೆಗೆ ಹೊಸ ದಿಕ್ಕು&lt;/h2&gt;&lt;p&gt;ಸಂಪೂರ್ಣ ಉಚಿತ ಸೇವೆಗಳನ್ನು ನೀಡುವ ಖಾಸಗಿ ಗ್ರಾಮೀಣ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಪೈಕಿ SMSIMSR ಈಗ ಪ್ರಮುಖ ಸ್ಥಾನ ಪಡೆದಿದೆ. ಗ್ರಾಮೀಣ ಪ್ರದೇಶದಲ್ಲಿಯೇ ಉಚಿತ ಸೇವೆಗಳೊಂದಿಗೆ ಗುಣಮಟ್ಟದ ಚಿಕಿತ್ಸೆ ನೀಡಬಹುದು ಎಂಬುದನ್ನು ಸಂಸ್ಥೆ ಸಾಬೀತುಪಡಿಸಿದೆ.&lt;/p&gt;&lt;h2&gt;ಮಾನ್ಯತೆಗೆ ಕಾರಣವಾದ ಅಂಶಗಳು&lt;/h2&gt;&lt;p&gt;ರೋಗಿಯ ಸುರಕ್ಷತೆಗೆ ಆದ್ಯತೆ&lt;/p&gt;&lt;p&gt;ಪರಿಣಾಮಕಾರಿ ಸೋಂಕು ನಿಯಂತ್ರಣ&lt;/p&gt;&lt;p&gt;ಪ್ರಮಾಣಿತ ವೈದ್ಯಕೀಯ ಕ್ರಮಗಳು&lt;/p&gt;&lt;p&gt;ಪಾರದರ್ಶಕ ಆಡಳಿತ ವ್ಯವಸ್ಥೆ&lt;/p&gt;&lt;p&gt;ಸಮಗ್ರ ದಾಖಲೆ ನಿರ್ವಹಣೆ&lt;/p&gt;&lt;p&gt;ಈ ಎಲ್ಲ ಅಂಶಗಳ ಸಮರ್ಪಕ ಅನುಷ್ಠಾನದಿಂದ ಸಂಸ್ಥೆಗೆ NABH ಮಾನ್ಯತೆ ಲಭಿಸಿದೆ.&lt;/p&gt;&lt;h2&gt;&lsquo;ಒನ್ ವರ್ಲ್ಡ್, ಒನ್ ಫ್ಯಾಮಿಲಿ&rsquo; ಧ್ಯೇಯಕ್ಕೆ ಬಲ&lt;/h2&gt;&lt;p&gt;ಆರ್ಥಿಕ ಸ್ಥಿತಿ ಯಾವುದಾದರೂ ಇರಲಿ, ಎಲ್ಲರಿಗೂ ಸಮಾನ ಆರೋಗ್ಯ ಸೇವೆ ಸಿಗಬೇಕು ಎಂಬ ಮಾನವೀಯ ಮೌಲ್ಯವನ್ನು ಈ ಸಾಧನೆ ಪ್ರತಿಬಿಂಬಿಸುತ್ತದೆ. ಉಚಿತ ಸೇವೆಗಳೊಂದಿಗೆ ರಾಷ್ಟ್ರೀಯ ಮಟ್ಟದ ಗುಣಮಟ್ಟ ಕಾಪಾಡಿಕೊಂಡಿರುವ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಮಾದರಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/health-life/free-medical-college-muddenahalli-national-quality-recognition-suh/articleshow-u7htbgz"/>
        </item>
        <item>
            <title><![CDATA[ಭಾರತದ ಈ ರಾಜ್ಯದಲ್ಲಿದೆ ಏಷ್ಯಾದ ಮೊದಲ ಮೆಡಿಕಲ್ ಕಾಲೇಜು]]></title>
            <link>https://kannada.asianetnews.com/webstories/travel/goa-home-to-indias-first-printing-press-and-medical-college-sr8xv5d</link>
            <guid isPermaLink="true">https://kannada.asianetnews.com/webstories/travel/goa-home-to-indias-first-printing-press-and-medical-college-sr8xv5d</guid>
            <pubDate>Wed, 29 Apr 2026 17:19:32 +0530</pubDate>
            <description><![CDATA[&lt;p&gt;India's first printing press: ಭಾರತದ ಮೊದಲ ಮುದ್ರಣಾಲಯ (Printing Press) ಮತ್ತು ವೈದ್ಯಕೀಯ ಶಾಲೆ ಎಲ್ಲಿತ್ತು ಎಂಬ ವಿಷಯ ನಿಮಗೆ ಗೊತ್ತೇ?.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngssygzhxr3wpnef22n5b8k,imgname-new-project---2026-04-06t123545.134-1775459170847.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/travel/goa-home-to-indias-first-printing-press-and-medical-college-sr8xv5d"/>
        </item>
        <item>
            <title><![CDATA[ಚಾಣಕ್ಯ ಪ್ರಕಾರ ಯಶಸ್ಸು ಮತ್ತು ಶ್ರೀಮಂತಿಕೆ ಬರುವುದನ್ನು ತಡೆಯುತ್ತೆ ಈ ವಿಷಯ]]></title>
            <link>https://kannada.asianetnews.com/gallery/relationship/chanakya-neeti-against-bad-habits-that-will-keep-you-away-from-success-in-life-suh-24q7aud</link>
            <guid isPermaLink="true">https://kannada.asianetnews.com/gallery/relationship/chanakya-neeti-against-bad-habits-that-will-keep-you-away-from-success-in-life-suh-24q7aud</guid>
            <pubDate>Wed, 29 Apr 2026 17:02:25 +0530</pubDate>
            <description><![CDATA[&lt;p&gt;Chanakya neeti ಜೀವನದಲ್ಲಿ ಯಶಸ್ಸನ್ನು ಸಾಧಿಸಲು ತಡೆಯುವ ಕೆಲವು ತಪ್ಪುಗಳನ್ನು ತಪ್ಪಿಸುವಂತೆ ಚಾಣಕ್ಯ ಎಚ್ಚರಿಸುತ್ತಾನೆ. ನೀವು ಯಶಸ್ವಿ ಜೀವನವನ್ನು ನಡೆಸಲು ಬಯಸಿದರೆ ಈ ತಪ್ಪುಗಳನ್ನು ಅರ್ಥಮಾಡಿಕೊಳ್ಳಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx1eq6stsa93m41nte57fsam,imgname-chanakya-1749174426425.jpg" type="image/jpeg" height="390" width="690"/>
            <content:encoded><![CDATA[&lt;p&gt;Chanakya neeti ಜೀವನದಲ್ಲಿ ಯಶಸ್ಸನ್ನು ಸಾಧಿಸಲು ತಡೆಯುವ ಕೆಲವು ತಪ್ಪುಗಳನ್ನು ತಪ್ಪಿಸುವಂತೆ ಚಾಣಕ್ಯ ಎಚ್ಚರಿಸುತ್ತಾನೆ. ನೀವು ಯಶಸ್ವಿ ಜೀವನವನ್ನು ನಡೆಸಲು ಬಯಸಿದರೆ ಈ ತಪ್ಪುಗಳನ್ನು ಅರ್ಥಮಾಡಿಕೊಳ್ಳಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕುಟುಂಬ ಮತ್ತು ಸ್ನೇಹಿತರು ಜೀವನದಲ್ಲಿ ಬಹಳ ಮುಖ್ಯ. ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಯಾರೂ ಒಬ್ಬಂಟಿಯಾಗಿ ಸಂತೋಷವಾಗಿರಲು ಸಾಧ್ಯವಿಲ್ಲ. ನಿಮ್ಮ ನಿಕಟ ಸಂಬಂಧಗಳಿಗೆ ನೀವು ಸಮಯ ನೀಡದಿದ್ದರೆ, ಕಷ್ಟದ ಸಮಯದಲ್ಲಿ ನೀವು ಒಂಟಿತನವನ್ನು ಅನುಭವಿಸಬಹುದು. ಸಂಬಂಧಗಳಲ್ಲಿ ಅಂತರಗಳು ಮತ್ತು ತಪ್ಪುಗ್ರಹಿಕೆಗಳು ಬೆಳೆಯಲು ಬಿಡುವುದು ನಿಮ್ಮ ಜೀವನದಲ್ಲಿ ನೀವು ಮಾಡುವ ದೊಡ್ಡ ತಪ್ಪುಗಳಲ್ಲಿ ಒಂದಾಗಿರಬಹುದು. ಆದ್ದರಿಂದ, ನೀವು ಪ್ರೀತಿಸುವ ಜನರೊಂದಿಗೆ ಸಮಯ ಕಳೆಯುವುದು ಮತ್ತು ಬಲವಾದ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.&lt;/p&gt;&lt;img&gt;&lt;p&gt;ಒಬ್ಬ ವ್ಯಕ್ತಿಯು ಕಲಿಯುವುದನ್ನು ನಿಲ್ಲಿಸಿದ ದಿನ ಅವನ ಪ್ರಗತಿಯೂ ನಿಲ್ಲುತ್ತದೆ ಎಂದು ಚಾಣಕ್ಯ ನಂಬಿದ್ದರು. ಯಾವುದೇ ಕಠಿಣ ಪರಿಸ್ಥಿತಿಯನ್ನು ನಿವಾರಿಸಲು ನಿಮಗೆ ಸಹಾಯ ಮಾಡುವ ಏಕೈಕ ಶಕ್ತಿ ಜ್ಞಾನ. ಜೀವನದಲ್ಲಿ ಯಾವಾಗಲೂ ಹೊಸ ವಿಷಯಗಳನ್ನು ಕಲಿಯುವ ಕುತೂಹಲವನ್ನು ಹೊಂದಿರಿ. ಇತರರ ಅನುಭವಗಳಿಂದ ಕಲಿಯಲು ಪ್ರಯತ್ನಿಸಿ.&lt;/p&gt;&lt;img&gt;&lt;p&gt;ಯಶಸ್ಸು ಮತ್ತು ಸಂಪತ್ತಿಗಾಗಿ ಜನರು ಹೆಚ್ಚಾಗಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಚಾಣಕ್ಯನ ಪ್ರಕಾರ, ಇದು ನಿಮ್ಮ ಜೀವನಕ್ಕೆ ಅಡ್ಡಿಯಾಗುವ ದೊಡ್ಡ ತಪ್ಪು. ನಿಮ್ಮ ಆರೋಗ್ಯ ಚೆನ್ನಾಗಿಲ್ಲದಿದ್ದರೆ, ನಿಮ್ಮ ಸಾಧನೆಗಳು ಅಥವಾ ಪ್ರಗತಿಯನ್ನು ಆನಂದಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಕೆಲಸದ ಜೊತೆಗೆ, ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಸಂಪೂರ್ಣ ಗಮನ ಹರಿಸಬೇಕು.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/chanakya-neeti-against-bad-habits-that-will-keep-you-away-from-success-in-life-suh-24q7aud"/>
        </item>
        <item>
            <title><![CDATA[ಲವ್ ಮಾಡಿದ ಜೋಡಿಗೆ ಮದುವೆ ಮಾತುಕತೆಗೆ ಬಂದವರು ಚಾಕು, ಚೂರಿ, ಚೇರಿನಿಂದ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದರು!]]></title>
            <link>https://kannada.asianetnews.com/gallery/karnataka-districts/chamarajanagar-kollegala-wedding-house-violence-knife-stabbing-5-injured-sat-p09g7es</link>
            <guid isPermaLink="true">https://kannada.asianetnews.com/gallery/karnataka-districts/chamarajanagar-kollegala-wedding-house-violence-knife-stabbing-5-injured-sat-p09g7es</guid>
            <pubDate>Wed, 29 Apr 2026 16:48:26 +0530</pubDate>
            <description><![CDATA[ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆಯಬೇಕಿದ್ದ ಮದುವೆಯೊಂದು ವಧು-ವರರ ಕುಟುಂಬಗಳ ನಡುವಿನ ಗಲಾಟೆಯಿಂದ ರಣರಂಗವಾಗಿದೆ. ಚಿನ್ನಾಭರಣ ಮತ್ತು ಕಾರಿನ ಬೇಡಿಕೆ ವಿಚಾರವಾಗಿ ನಡೆದ ಸಂಘರ್ಷದಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಪ್ರೀತಿ ಮದುವೆ ಮುರಿದುಬಿದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqcdbprjg48vexjxaga4sf87,imgname-greater-bengaluru-govt-building-tax--5--1777459387153.jpg" type="image/jpeg" height="390" width="690"/>
            <content:encoded><![CDATA[ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆಯಬೇಕಿದ್ದ ಮದುವೆಯೊಂದು ವಧು-ವರರ ಕುಟುಂಬಗಳ ನಡುವಿನ ಗಲಾಟೆಯಿಂದ ರಣರಂಗವಾಗಿದೆ. ಚಿನ್ನಾಭರಣ ಮತ್ತು ಕಾರಿನ ಬೇಡಿಕೆ ವಿಚಾರವಾಗಿ ನಡೆದ ಸಂಘರ್ಷದಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಪ್ರೀತಿ ಮದುವೆ ಮುರಿದುಬಿದ್ದಿದೆ.&lt;img&gt;&lt;p&gt;&lt;strong&gt;ಚಾಮರಾಜನಗರ (ಏ.29): ಮ&lt;/strong&gt;ದುವೆ ಎಂದರೆ ಅಲ್ಲಿ ಸಂಭ್ರಮ, ಸಡಗರ ಇರಬೇಕು. ಆದರೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದ ಮದುವೆಯೊಂದು ರಣಾಂಗಣವಾಗಿ ಮಾರ್ಪಟ್ಟಿದೆ. ವಧು-ವರನ ಕುಟುಂಬಸ್ಥರ ನಡುವೆ ನಡೆದ ಭೀಕರ ಗಲಾಟೆಯಲ್ಲಿ ಪರಸ್ಪರ ಚಾಕು ಇರಿತ ನಡೆದಿದ್ದು, ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಕೊಳ್ಳೇಗಾಲ ಪಟ್ಟಣದ ಆರ್&zwnj;ಎಂ (RM) ಛತ್ರದಲ್ಲಿ ಮುದಾಸಿರ್ ಹಾಗೂ ಗುಲ್ನಾಜ್ ಭಾನು ಎಂಬುವವರ ವಿವಾಹ ನಿಗದಿಯಾಗಿತ್ತು. ಆದರೆ ಮದುವೆಯ ಶಾಸ್ತ್ರಗಳ ನಡುವೆಯೇ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ವಧುವಿಗೆ ಮಾತಿನಂತೆ ಚಿನ್ನಾಭರಣ ನೀಡಿಲ್ಲ ಎಂಬ ಆರೋಪದ ಮೇಲೆ ಮಾತುಕತೆ ನಡೆಸಲು ವರನ ಕಡೆಯವರು ವಧುವಿನ ಮನೆಗೆ ಹೋಗಿದ್ದರು. ಈ ವೇಳೆ ಮಾತುಕತೆ ವಿಕೋಪಕ್ಕೆ ತಿರುಗಿ, ಪರಸ್ಪರ ಚಾಕು ಮತ್ತು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಭೀಕರ ಸಂಘರ್ಷದಲ್ಲಿ ವರನ ಸೋದರ ಸಂಬಂಧಿಗಳಾದ ಸಮೀರ್ ಮತ್ತು ಶೋಯೆಬ್ ಹಾಗೂ ವಧುವಿನ ಸಂಬಂಧಿಕರಾದ ಪೈರೋಜ್ ಪಾಷಾ, ಅಬ್ದುಲ್ ವಾಯಿದ್ ಮತ್ತು ಅಬ್ದುಲ್ ಆರೀಪ್ ಎಂಬುವವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆಯ ದೃಶ್ಯಗಳು ಮೊಬೈಲ್&zwnj;ನಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕುಟುಂಬಸ್ಥರು ಕುರ್ಚಿ ಹಾಗೂ ಚಾಕುಗಳನ್ನು ಹಿಡಿದು ಪರಸ್ಪರ ದಾಳಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.&lt;/p&gt;&lt;img&gt;&lt;p&gt;ಈ ಘಟನೆಯ ಬಗ್ಗೆ ವಧು ಗುಲ್ನಾಜ್ ಭಾನು ಹಾಗೂ ಆಕೆಯ ತಮ್ಮ ಅನ್ವರ್ ಪಾಷಾ ಗಂಭೀರ ಆರೋಪ ಮಾಡಿದ್ದಾರೆ. 'ನಾವು ಚಿನ್ನಾಭರಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ವರನ ಕಡೆಯವರು ಬೈಕ್ ಬದಲು 15 ಲಕ್ಷ ರೂಪಾಯಿ ಬೆಲೆಬಾಳುವ ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದ ಕಾರಣ ನಾವು ಮದುವೆ ಬೇಡ ಎಂದು ನಿರ್ಧರಿಸಿದ್ದೆವು. ಆದರೆ ಅವರು ಮಾತುಕತೆಗೆಂದು ಬಂದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ' ಎಂದು ವಧುವಿನ ಕಡೆಯವರು ದೂರಿದ್ದಾರೆ.&lt;/p&gt;&lt;img&gt;&lt;p&gt;ಮದುವೆ ಮುರಿದು ಬಿದ್ದಿರುವುದು ಮಾತ್ರವಲ್ಲದೆ, ಬೀದಿಯಲ್ಲಿ ಹೊಡೆದಾಟ ನಡೆಸಿದ ಈ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ಆತಂಕ ಮೂಡಿಸಿದೆ. ಸದ್ಯ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪ್ರೀತಿಯ ಮದುವೆಯು ಕಾರು ಮತ್ತು ಚಿನ್ನದ ಆಸೆಗೆ ಬಲಿಯಾಗಿ, ರಕ್ತಪಾತದಲ್ಲಿ ಅಂತ್ಯಗೊಂಡಿರುವುದು ವಿಷಾದನೀಯ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chamarajanagar-kollegala-wedding-house-violence-knife-stabbing-5-injured-sat-p09g7es"/>
        </item>
        <item>
            <title><![CDATA[ಪ್ರತಿದಿನ ಬೇಳೆ ರುಬ್ಬೋ ಕೆಲಸವಿರಲ್ಲ, ಇಡ್ಲಿ-ದೋಸೆ ಹಿಟ್ಟು ತಯಾರಿಸುವ ತೀರಾ ಸುಲಭ ವಿಧಾನವಿದು]]></title>
            <link>https://kannada.asianetnews.com/gallery/kitchen/no-more-grinding-make-instant-idli-dosa-batter-with-urad-dal-flour-in-minutes-ya5gwxr</link>
            <guid isPermaLink="true">https://kannada.asianetnews.com/gallery/kitchen/no-more-grinding-make-instant-idli-dosa-batter-with-urad-dal-flour-in-minutes-ya5gwxr</guid>
            <pubDate>Wed, 29 Apr 2026 16:32:42 +0530</pubDate>
            <description><![CDATA[&lt;p&gt;Instant idli dosa batter recipe: ಬೆಳಗ್ಗೆ ಎದ್ದ ತಕ್ಷಣ ಇಡ್ಲಿ-ದೋಸೆ ಮಾಡಲು ಬೇಳೆ ನೆನೆಸಿ, ರುಬ್ಬುವ ಜಂಜಾಟ ಇನ್ನು ಸಾಕು! ಕೆಲಸದ ಒತ್ತಡದಲ್ಲಿರುವ ಉದ್ಯೋಗಸ್ಥ ಮಹಿಳೆಯರಿಗೆ ಮತ್ತು ಹಿರಿಯರಿಗೆ ಸಮಯ ಉಳಿಸಲು ಇಲ್ಲಿದೆ ಒಂದು ಸ್ಮಾರ್ಟ್ ಐಡಿಯಾ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjc9w94nsrstbbvzwvkhtjnp,imgname-dosa--1--1772087026837.jpg" type="image/jpeg" height="390" width="690"/>
            <content:encoded><![CDATA[&lt;p&gt;Instant idli dosa batter recipe: ಬೆಳಗ್ಗೆ ಎದ್ದ ತಕ್ಷಣ ಇಡ್ಲಿ-ದೋಸೆ ಮಾಡಲು ಬೇಳೆ ನೆನೆಸಿ, ರುಬ್ಬುವ ಜಂಜಾಟ ಇನ್ನು ಸಾಕು! ಕೆಲಸದ ಒತ್ತಡದಲ್ಲಿರುವ ಉದ್ಯೋಗಸ್ಥ ಮಹಿಳೆಯರಿಗೆ ಮತ್ತು ಹಿರಿಯರಿಗೆ ಸಮಯ ಉಳಿಸಲು ಇಲ್ಲಿದೆ ಒಂದು ಸ್ಮಾರ್ಟ್ ಐಡಿಯಾ.&lt;/p&gt;&lt;img&gt;&lt;p&gt;ಬೆಳಗ್ಗೆ ಆಫೀಸ್&zwnj;ಗೆ ಹೋಗುವ ಗಡಿಬಿಡಿಯಲ್ಲಿ ಬೇಳೆ ನೆನೆಸಿ, ಸಂಜೆ ಬಂದು ಗ್ರೈಂಡರ್&zwnj;ನಲ್ಲಿ ರುಬ್ಬುವುದು ದೊಡ್ಡ ಕೆಲಸವೇ ಸರಿ. ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರಿಗೆ ಮತ್ತು ವಯಸ್ಸಾದವರಿಗೆ ಇದು ತುಂಬಾ ಕಷ್ಟದ ಕೆಲಸ. ಇದಕ್ಕೆ ಒಂದು ಅದ್ಭುತವಾದ ಪರಿಹಾರ ಇಲ್ಲಿದೆ.&lt;/p&gt;&lt;img&gt;&lt;p&gt;ಪ್ರತಿದಿನ ಬೇಳೆ ರುಬ್ಬುವ ಬದಲು, ಒಂದೇ ಬಾರಿಗೆ ಉದ್ದಿನ ಬೇಳೆಯನ್ನು ಗಿರಣಿಯಲ್ಲಿ (Mill) ಹಿಟ್ಟು ಮಾಡಿಸಿ ಸಂಗ್ರಹಿಸಿಡಬಹುದು.&lt;/p&gt;&lt;img&gt;&lt;p&gt;ಉತ್ತಮ ಗುಣಮಟ್ಟದ ಉದ್ದಿನ ಬೇಳೆಯನ್ನು ತೆಗೆದುಕೊಳ್ಳಿ.ಅದನ್ನು ತೊಳೆಯದೆಯೇ ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿ ಹಿಟ್ಟು ಮಾಡಿಸಿ.ಈ ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ (Air-tight container) ಸಂಗ್ರಹಿಸಿಟ್ಟರೆ ಎರಡು ಮೂರು ತಿಂಗಳವರೆಗೆ ಕೆಡುವುದಿಲ್ಲ.&lt;/p&gt;&lt;img&gt;&lt;p&gt;* ಒಂದು ಗ್ಲಾಸ್ ಉದ್ದಿನ ಹಿಟ್ಟಿಗೆ ಮೂರು ಗ್ಲಾಸ್ ಅಕ್ಕಿ ಹಿಟ್ಟನ್ನು ಬೆರೆಸಬೇಕು. ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ, ಗಂಟಿಲ್ಲದಂತೆ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. (ಒಂದು ಸೌಟು ಹಳೆಯ ಇಡ್ಲಿ ಅಥವಾ ದೋಸೆ ಹಿಟ್ಟನ್ನು ಇದಕ್ಕೆ ಬೆರೆಸಿದರೆ ಹುದುಗುವ ಪ್ರಕ್ರಿಯೆ ವೇಗವಾಗುತ್ತದೆ ಮತ್ತು ರುಚಿ ಹೆಚ್ಚುತ್ತದೆ)*ಈ ಮಿಶ್ರಣವನ್ನು ರಾತ್ರಿಯಿಡೀ ಹುದುಗಲು (Fermentation) ಬಿಟ್ಟರೆ ಹೋಟೆಲ್ ಶೈಲಿಯ ದೋಸೆಗಳನ್ನು ಮನೆಯಲ್ಲೇ ಸವಿಯಬಹುದು.&lt;/p&gt;&lt;img&gt;&lt;p&gt;ಹೆಂಚು ಚೆನ್ನಾಗಿ ಕಾದ ನಂತರ ಸ್ವಲ್ಪ ನೀರು ಚಿಮುಕಿಸಿ ಶಾಖವನ್ನು ಕಡಿಮೆ ಮಾಡಿ. ಉರಿಯನ್ನು ಮಧ್ಯಮ ಹಂತದಲ್ಲಿಟ್ಟು ದೋಸೆ ಮಾಡಿದರೆ ಅವು ಉತ್ತಮ ಬಣ್ಣ ಮತ್ತು ಕ್ರಿಸ್ಪಿಯಾಗಿ ಬರುತ್ತವೆ. ಇದು ನೆನೆಸಿ ರುಬ್ಬಿದ ಹಿಟ್ಟಿನ ದೋಸೆಗಿಂತ ಯಾವುದೇ ಗುಣದಲ್ಲೂ ಕಡಿಮೆ ಇರುವುದಿಲ್ಲ.&lt;/p&gt;&lt;img&gt;&lt;p&gt;ಒಂದು ಕಪ್ ಉದ್ದಿನ ಹಿಟ್ಟಿಗೆ ಎರಡು ಕಪ್ ಸಣ್ಣ ಇಡ್ಲಿ ರವೆಯನ್ನು ಬೆರೆಸಿದರೆ ಸರಿಯಾದ ಹದ ಸಿಗುತ್ತದೆ.ಕೆಲಸದ ಒತ್ತಡದಲ್ಲಿರುವ ಶಿಕ್ಷಕಿಯರಿಗೆ, ಐಟಿ ಉದ್ಯೋಗಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಈ ವಿಧಾನವು ಒಂದು ವರವೆಂದೇ ಹೇಳಬಹುದು. ಇದರಿಂದ ಶ್ರಮ ಕಡಿಮೆಯಾಗುವುದಲ್ಲದೆ ಆರೋಗ್ಯವೂ ಲಭಿಸುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/no-more-grinding-make-instant-idli-dosa-batter-with-urad-dal-flour-in-minutes-ya5gwxr"/>
        </item>
        <item>
            <title><![CDATA[ಹೆಂಡ್ತಿಗೆ 40 ವರ್ಷವಾದರೆ ಗಂಡ ಮತ್ತೊಂದು ಮದ್ವೆಯಾಗ್ಬಹುದು, ಪಾಕ್ ನಟಿ ಹೇಳಿಕೆಗೆ ಹೆಣ್ ಹೈಕ್ಳು ಶಾಕ್]]></title>
            <link>https://kannada.asianetnews.com/cine-world/if-wife-is-over-40-man-can-marry-second-time-says-pakistani-actress-shamin-khan/articleshow-60raqri</link>
            <guid isPermaLink="true">https://kannada.asianetnews.com/cine-world/if-wife-is-over-40-man-can-marry-second-time-says-pakistani-actress-shamin-khan/articleshow-60raqri</guid>
            <pubDate>Wed, 29 Apr 2026 15:27:00 +0530</pubDate>
            <description><![CDATA[&lt;p&gt;Second Marriage : ಗಂಡ ಬೇರೆ ಹುಡುಗಿನ ವಾರೆಗಣ್ಣಲ್ಲಿ ನೋಡಿದ್ರೂ ಕೋಪ ನೆತ್ತಿಗೇರುತ್ತೆ. ಆದ್ರೆ ಈ ನಟಿ ಪುರುಷರು ಇನ್ನೊಂದು ಮದುವೆ ಆಗ್ಬಹುದು. ಅದಕ್ಕೆ ನನ್ನ ಒಪ್ಪಿಗೆ ಇದೆ ಅಂತಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಆಕೆ ಹೇಳಿಕೆ ವೈರಲ್ ಆಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcaj877cggyw27g07wv61ky,imgname-shamin-khan-1777456455911.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೀವನಪೂರ್ತಿ ಜೊತೆಗಿರ್ತೇವೆ ಅಂತ ಪ್ರಮಾಣ ಮಾಡಿ ಮದುವೆ ಆಗ್ತಾರೆ. ಮದುವೆ ಆದ್ಮೇಲೆ ಇನ್ನೊಂದು ಹುಡುಗಿ ಜೊತೆ ಪ್ರೀತಿ ಶುರು ಮಾಡಿ ಆಕೆಯನ್ನೂ ಮದುವೆಯಾಗಿ ಮನೆಗೆ ಕರೆತಂದ್ರೆ ಮೊದಲ ಹೆಂಡತಿ ಜೀವನ ಬೀದಿಗೆ ಬರುತ್ತೆ. ಮದುವೆ, ನಂಬಿಕೆಯಲ್ಲಿ ಮಹಾ ಮೋಸವಾಗುತ್ತೆ. ಬಹುತೇಕ ಯಾವುದೇ ಮಹಿಳೆ ಗಂಡನ ಎರಡನೇ ಮದುವೆಯನ್ನು ಒಪ್ಪಿಕೊಳ್ಳೋದಿಲ್ಲ. ಆದ್ರೆ ಮದುವೆಗೆ ಸಂಬಂಧಿಸಿದಂತೆ ಪಾಕಿಸ್ತಾನಿ ನಟಿ ಶಮಿನ್ ಖಾನ್ ಹೇಳಿಕೆ ಅಚ್ಚರಿ ಮೂಡಿಸಿದೆ. ಒಬ್ಬ ಪುರುಷ ಎರಡು ಮದುವೆ ಆಗ್ಬಹುದು ಅಂತ ನಟಿ ಹೇಳಿದ್ದಾರೆ. ನಟಿ ಶಮಿನ್ ಖಾನ್ ಪ್ರಕಾರ ಎರಡನೇ ಮದುವೆ ಆಗೋದ್ರಲ್ಲಿ ಯಾವುದೇ ತಪ್ಪಿಲ್ಲವಂತೆ. ಆದ್ರೆ ಶಮಿನ್ ಖಾನ್ ಹೇಳಿಕೆ ಎಲ್ಲರ ಕೋಪಕ್ಕೆ ಕಾರಣವಾಗಿದ್ದು ಸುಳ್ಳಲ್ಲ.&lt;/p&gt;&lt;h2&gt;ಪತ್ನಿಗೆ 40 ವರ್ಷವಾದ್ಮೇಲೆ ಇನ್ನೊಂದು ಮದುವೆ ಆಗ್ಬಹುದು!&emsp;&lt;/h2&gt;&lt;p&gt;ಪಾಡ್ ಕ್ಯಾಸ್ಟ್ ನಲ್ಲಿ ಪಾಕಿಸ್ತಾನಿ ನಟಿ ಶಮಿನ್ ಖಾನ್ ಗೆ ಎರಡನೇ ಮದುವೆ ಬಗ್ಗೆ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಶಮಿನ್ ಖಾನ್, ಮೊದಲ ಹೆಂಡತಿಯನ್ನು ಬಿಡಬಾರದು. ಆಕೆ ವಂಶಾವಳಿಯನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕೆ ಸಹಾಯ ಮಾಡ್ತಾಳೆ. ಆದ್ರಿಂದ ಮೊದಲ ಹೆಂಡತಿಯನ್ನು ಬಿಡುವುದು ತಪ್ಪು ಅಂತ ಶಮಿನಾ ಹೇಳಿದ್ದಾರೆ. ಮಾತು ಮುಂದುವರೆಸಿದ ಆಂಕರ್, ಹಾಗಿದ್ರೆ ಮರುಮದುವೆಗೆ ಒಪ್ಪಿಗೆ ಇದ್ಯಾ ಅಂತ ಕೇಳಿದ್ದಾರೆ. ಅದಕ್ಕೆ ಶಮಿನ್ ಖಾನ್, ಒಬ್ಬ ಮಹಿಳೆ 40 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದರೆ ಮತ್ತು ಅವಳ ಪತಿ ಇನ್ನೂ ಸಂಬಂಧವನ್ನು ಅರ್ಥಮಾಡಿಕೊಳ್ಳದಿದ್ದರೆ, ತನ್ನ ಹೆಂಡತಿಯೊಂದಿಗೆ ಅತೃಪ್ತನಾಗಿದ್ದರೆ ಅವನು ಮರುಮದುವೆಯಾಗಬೇಕೆಂದು ನಾನು ಭಾವಿಸ್ತೇನೆ ಎಂದಿದ್ದಾರೆ. ಇದ್ರಲ್ಲಿ ಯಾವುದೇ ತಪ್ಪಿಲ್ಲ. ಆದ್ರೆ ಪುರುಷರು ತಮ್ಮ ಮೊದಲ ಹೆಂಡತಿಯಿಂದ ಅನುಮತಿ ಪಡೆದ ನಂತರ ಮರುಮದುವೆಯಾಗಬಹುದು ಎಂದು ಶಮಿನ್ ಖಾನ್ ಹೇಳಿದ್ದಾರೆ. ಆದ್ರೆ ವಿವಾಹೇತರ ಸಂಬಂಧವನ್ನು ನಾನು ಒಪ್ಪುವುದಿಲ್ಲ ಅಂತ ಶಮಿನ್ ಖಾನ್ ಹೇಳಿದ್ದಾರೆ.&lt;/p&gt;&lt;p&gt;ದರ್ಶನ್&zwnj;ಗೆ ಮತ್ತೆ ಸಿಗುತ್ತಾ ರಿಲೀಫ್? ಜಾಮೀನಿಗೆ ಅರ್ಜಿ ಸಲ್ಲಿಸ್ತಿರೋದು ಇದು ಎಷ್ಟನೇ ಬಾರಿ&lt;/p&gt;&lt;h3&gt;ಶಮಿನ್ ಖಾನ್ ಟ್ರೋಲ್&lt;/h3&gt;&lt;p&gt;ಪಾಡ್ಕ್ಯಾಸ್ಟ್ನ ಶಮಿನ್ ಖಾನ್ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ಯಾನ್ಸ್ ಶಮಿನ್ ಖಾನ್ ಅವರನ್ನು ಟೀಕಿಸಿದ್ದಾರೆ. ಮದುವೆ ಮೋಜಿನ ವಿಷ್ಯವಲ್ಲ, ಅದು ಜವಾಬ್ದಾರಿ ಎಂದಿದ್ದಾರೆ. ಮತ್ತೊಬ್ಬರು, ಪುರುಷನನ್ನು ಇಷ್ಟಪಡದಿದ್ದರೆ ಮಹಿಳೆ ಏನು ಮಾಡಬೇಕು? ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಇಂಥ ಹೇಳಿಕೆ ನೀಡಿದ ಶಮಿನ್ ಖಾನ್ ಅವರನ್ನು ಜೈಲಿಗೆ ಹಾಕಬೇಕು ಎಂದಿದ್ದಾರೆ.&lt;/p&gt;&lt;p&gt;ಮರೀಬೇಡಿ, ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ: ಕಿಚ್ಚ ಸುದೀಪ್​ ಉತ್ತರ ಕೇಳಿ ಇದ್ದವರು ಸುಸ್ತು&lt;/p&gt;&lt;p&gt;&lt;strong&gt;ಶಮಿನ್ ಖಾನ್ ಯಾರು?&lt;/strong&gt;&lt;/p&gt;&lt;p&gt;30 ವರ್ಷದ ಶಮಿನ್ ಖಾನ್ ಪಾಕಿಸ್ತಾನಿ ಟಿವಿ ನಟಿ. ಅವರು ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2019 ರಲ್ಲಿ ಅವರು ಗಮ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಗೋಹರ್-ಎ-ನಯಾಬ್, ಹಿನಾ ಕಿ ಖುಷ್ಬೂ, ಧಡ್ಕನ್, ಭರೋಸಾ ಪ್ಯಾರ್ ತೇರಾ, ಮತ್ತು ಖುದಾ ಔರ್ ಮೊಹಬ್ಬತ್ 3 ನಂತಹ ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/cine-world/if-wife-is-over-40-man-can-marry-second-time-says-pakistani-actress-shamin-khan/articleshow-60raqri"/>
        </item>
        <item>
            <title><![CDATA[ಪತ್ನಿಗೆ ಬೇರೊಬ್ಬ ವ್ಯಕ್ತಿಯ ಜತೆ ಅಫೇರ್‌ ಇದೆ, ಆದ್ರೂ ಜೊತೆಗಿದೀನಿ ಎಂದ ಪತಿ: ಕಾರಣ ಕೇಳಿದ್ರೆ.. OMG..!]]></title>
            <link>https://kannada.asianetnews.com/relationship/one-person-shares-that-his-wife-has-affair-with-another-then-also-he-is-with-wife-video-viral/articleshow-khk94lb</link>
            <guid isPermaLink="true">https://kannada.asianetnews.com/relationship/one-person-shares-that-his-wife-has-affair-with-another-then-also-he-is-with-wife-video-viral/articleshow-khk94lb</guid>
            <pubDate>Wed, 29 Apr 2026 15:35:11 +0530</pubDate>
            <description><![CDATA[&lt;p&gt;ಜೀವನಶೈಲಿ ಎಂಬುದು ಕೇವಲ ಬಟ್ಟೆ ಅಥವಾ ಮನೆಗೆ ಸೀಮಿತವಲ್ಲ, ನಾವು ತೆಗೆದುಕೊಳ್ಳುವ ಕಠಿಣ ನಿರ್ಧಾರಗಳ ಮೇಲೆ ಅದು ನಿಂತಿರುತ್ತದೆ. ಈ ಪತಿಯ ಮುಂದಿರುವ ಪ್ರಶ್ನೆ ದೊಡ್ಡದಿದೆ: ಮಕ್ಕಳಿಗಾಗಿ ತನ್ನ ಸುಖವನ್ನು ಬಲಿ ಕೊಡಬೇಕೇ? ಅಥವಾ ಹೊಸ ಪ್ರೀತಿಯ ಬೆನ್ನೇರಿ ತನ್ನ ದಾರಿ ತಾನು ನೋಡಬೇಕೇ? ಈ ಕಥೆ ನಮಗೆ ಕಲಿಸುವ ಪಾಠವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcb5v010dcsqr90a91p163m,imgname-relationships-1777457097729.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರೀತಿ ಇಲ್ಲದ ಸಂಸಾರದಲ್ಲಿ ಮಕ್ಕಳಿಗಾಗಿ ಉಳಿಯಬೇಕೇ? ದ್ರೋಹ ಮತ್ತು ಅನಿವಾರ್ಯತೆಯ ನಡುವೆ ಸಿಲುಕಿದ ಪತಿಯ 'ಲೈಫ್&zwnj;ಸ್ಟೈಲ್' ಕಥೆ&lt;/strong&gt;&lt;/p&gt;&lt;p&gt;ಆಧುನಿಕ ಜೀವನಶೈಲಿಯಲ್ಲಿ ಸಂಬಂಧಗಳು ಎಷ್ಟು ನಾಜೂಕಾಗಿರುತ್ತವೆಯೋ ಅಷ್ಟೇ ಜಟಿಲವಾಗಿರುತ್ತವೆ. ಹೊರಗಿನ ಜಗತ್ತಿಗೆ ಸುಂದರವಾಗಿ, ಪರಿಪೂರ್ಣವಾಗಿ ಕಾಣುವ ಸಂಸಾರಗಳ ಹಿಂದೆ ಅನೇಕಾನೇಕ ನೋವಿನ ಪದರಗಳಿರುತ್ತವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಬ್ಬ ಪತಿಯ ಅಳಲು, ಇಂದಿನ ದಾಂಪತ್ಯ ಜೀವನದಲ್ಲಿ ಎದುರಾಗುತ್ತಿರುವ ಭಾವನಾತ್ಮಕ ಬಿಕ್ಕಟ್ಟುಗಳಿಗೆ ಹಿಡಿದ ಕನ್ನಡಿಯಂತಿದೆ. ಇದು ಕೇವಲ ಒಂದು ಸುದ್ದಿಯಲ್ಲ, ಬದಲಾಗಿ &quot;ಸರಿ-ತಪ್ಪು&quot;ಗಳ ನಡುವಿನ ದೊಡ್ಡ ಜೀವನ ಪಾಠ.&lt;/p&gt;&lt;h2&gt;ಒಡೆದ ಕನ್ನಡಿ ಮತ್ತು ಒಂಟಿ ಪಯಣ:&lt;/h2&gt;&lt;p&gt;ಕಥೆಯ ನಾಯಕನಿಗೆ ತನ್ನ ಪತ್ನಿ ಮೂರು ವರ್ಷಗಳ ಹಿಂದೆಯೇ ದ್ರೋಹ ಮಾಡಿದ್ದಾಳೆ ಎಂಬ ಕಹಿ ಸತ್ಯ ತಿಳಿದಿದೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಆಕ್ರೋಶ ಅಥವಾ ವಿಚ್ಛೇದನ ಮೊದಲ ಪ್ರತಿಕ್ರಿಯೆಯಾಗಿರುತ್ತದೆ. ಆದರೆ ಈ ವ್ಯಕ್ತಿ ಆರಿಸಿಕೊಂಡಿದ್ದು ಮಾತ್ರ ಅತ್ಯಂತ ಕಠಿಣವಾದ ದಾರಿ. ಅದು 'ಮಕ್ಕಳಿಗಾಗಿ ಸಹಬಾಳ್ವೆ'. ಆದರೆ ಈ ಸಹಬಾಳ್ವೆಯಲ್ಲಿ ಪ್ರೀತಿ ಇಲ್ಲ, ಕೇವಲ ಜವಾಬ್ದಾರಿ ಮಾತ್ರ ಇದೆ. ಒಂದೇ ಸೂರಿನಡಿ ವಾಸಿಸುತ್ತಿದ್ದರೂ, ಮಾನಸಿಕವಾಗಿ ಅವರಿಬ್ಬರ ನಡುವೆ ನೂರಾರು ಮೈಲಿಗಳ ಅಂತರವಿದೆ. ತನ್ನ ಪತ್ನಿಯ ಬಗ್ಗೆ ಯಾವುದೇ ಪ್ರೀತಿ ಅಥವಾ ಗೌರವ ಉಳಿದಿಲ್ಲ ಎಂದು ಆತ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ.&lt;/p&gt;&lt;p&gt;ಜೀವನಶೈಲಿಯ ಮೇಲೆ ಇದರ ಪ್ರಭಾವ:&lt;/p&gt;&lt;p&gt;ಪ್ರೀತಿಯಿಲ್ಲದ ಮನೆಯಲ್ಲಿ ವಾಸಿಸುವುದು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಯಾಂತ್ರಿಕವಾಗಿ ದಿನ ಕಳೆಯುವುದು, ಕೇವಲ ಮಕ್ಕಳ ಮುಂದೆ ಸುಳ್ಳು ಸುಖದ ನಾಟಕವಾಡುವುದು ದಂಪತಿಗಳಿಬ್ಬರನ್ನೂ ಒಳಗಿನಿಂದಲೇ ದಹಿಸುತ್ತದೆ. ಈ ಪತಿ ಕೂಡ ತನ್ನ ಜೀವನ ನಿರರ್ಥಕ ಎನಿಸುತ್ತಿದ್ದ ಸಮಯದಲ್ಲಿ, ಮತ್ತೊಬ್ಬ ಮಹಿಳೆಯನ್ನು ಭೇಟಿಯಾಗುತ್ತಾನೆ. ಆಕೆಯ ಪ್ರೀತಿ ಮತ್ತು ನೀಡುವ ಗೌರವದಿಂದ ತಾನು ಮತ್ತೆ 'ಜೀವಂತವಾಗಿದ್ದೇನೆ' ಎಂಬ ಭಾವನೆ ಆತನಲ್ಲಿ ಮೂಡಿದೆ. ಇದು ಜೀವನದ ಒಂದು ವಿಚಿತ್ರ ತಿರುವು&mdash;ಒಂದೆಡೆ ಸುಳ್ಳು ಸಂಸಾರ, ಇನ್ನೊಂದೆಡೆ ಹೊಸ ಜೀವನದ ಆಸೆ.&lt;/p&gt;&lt;h3&gt;ಮಕ್ಕಳ ಹಿತದೃಷ್ಟಿ ಎಂದರೆ ನಿಜವಾಗಿಯೂ ಏನು?&lt;/h3&gt;&lt;p&gt;&quot;ಮಕ್ಕಳಿಗಾಗಿ ಒಂದಾಗಿದ್ದೇವೆ&quot; ಎನ್ನುವ ದಂಪತಿಗಳು ಒಂದು ವಿಷಯವನ್ನು ಮರೆಯುತ್ತಾರೆ. ಮಕ್ಕಳು ತಮ್ಮ ಪೋಷಕರ ನಡುವಿನ ಅಸಮಾಧಾನ ಮತ್ತು ಪ್ರೀತಿಯ ಕೊರತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಜಗಳ ಅಥವಾ ಮಾತುಕತೆ ಇಲ್ಲದ ವಾತಾವರಣದಲ್ಲಿ ಬೆಳೆಯುವ ಮಕ್ಕಳ ವ್ಯಕ್ತಿತ್ವದ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುದು ಮನೋವಿಜ್ಞಾನಿಗಳ ಅಭಿಪ್ರಾಯ. ಕೇವಲ ತಂದೆ-ತಾಯಿ ಜೊತೆಗಿದ್ದಾರೆ ಎಂಬ ಕಾರಣಕ್ಕೆ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ ಎಂದು ಹೇಳಲಾಗದು; ಅಲ್ಲಿ ನೆಮ್ಮದಿಯ ವಾತಾವರಣವೂ ಮುಖ್ಯವಾಗಿರುತ್ತದೆ.&lt;/p&gt;&lt;p&gt;ನೆಟ್ಟಿಗರ ಚರ್ಚೆ ಮತ್ತು ತೀರ್ಮಾನ:&lt;/p&gt;&lt;p&gt;ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಗುಂಪುಗಳಾಗಿ ವಿಭಜನೆಗೊಂಡಿದ್ದಾರೆ. ಕೆಲವರು &quot;ಮಕ್ಕಳಿಗಾಗಿ ತ್ಯಾಗ ಮಾಡುವುದು ಶ್ರೇಷ್ಠ&quot; ಎಂದರೆ, ಇನ್ನು ಕೆಲವರು &quot;ದ್ರೋಹ ಮಾಡಿದ ಪತ್ನಿಯ ಜೊತೆ ಇರುವುದು ಆತ್ಮಗೌರವಕ್ಕೆ ಧಕ್ಕೆ. ಇಂತಹ ಪರಿಸರದಲ್ಲಿ ಮಕ್ಕಳು ಬೆಳೆಯುವುದು ತಪ್ಪು&quot; ಎಂದು ವಾದಿಸಿದ್ದಾರೆ.&lt;/p&gt;&lt;p&gt;ಜೀವನಶೈಲಿ ಎಂಬುದು ಕೇವಲ ಬಟ್ಟೆ ಅಥವಾ ಮನೆಗೆ ಸೀಮಿತವಲ್ಲ, ನಾವು ತೆಗೆದುಕೊಳ್ಳುವ ಕಠಿಣ ನಿರ್ಧಾರಗಳ ಮೇಲೆ ಅದು ನಿಂತಿರುತ್ತದೆ. ಈ ಪತಿಯ ಮುಂದಿರುವ ಪ್ರಶ್ನೆ ದೊಡ್ಡದಿದೆ: ಮಕ್ಕಳಿಗಾಗಿ ತನ್ನ ಸುಖವನ್ನು ಬಲಿ ಕೊಡಬೇಕೇ? ಅಥವಾ ಹೊಸ ಪ್ರೀತಿಯ ಬೆನ್ನೇರಿ ತನ್ನ ದಾರಿ ತಾನು ನೋಡಬೇಕೇ? ಈ ಕಥೆ ನಮಗೆ ಕಲಿಸುವ ಪಾಠವೊಂದೇ&mdash;ಸಂಬಂಧಗಳಲ್ಲಿ ನಂಬಿಕೆ ಹೋದ ಮೇಲೆ ಉಳಿಯುವುದೆಲ್ಲವೂ ಕೇವಲ 'ಅನಿವಾರ್ಯತೆ' ಮಾತ್ರ. ಅದು ಬದುಕಲ್ಲ, ಕೇವಲ ಉಸಿರಾಟ!&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/relationship/one-person-shares-that-his-wife-has-affair-with-another-then-also-he-is-with-wife-video-viral/articleshow-khk94lb"/>
        </item>
        <item>
            <title><![CDATA[ಈ ಸರಳ ಟಿಪ್ಸ್‌ನಿಂದ ತವಾದ ತುಕ್ಕು, ಜಿಗುಟು ಕೆಲವೇ ನಿಮಿಷದಲ್ಲಿ ಮಾಯ.. ಹೊಸದರಂತೆ ಹೊಳೆಯುತ್ತೆ]]></title>
            <link>https://kannada.asianetnews.com/gallery/kitchen/cleaning-a-rusted-tawa-easy-home-remedies-maintenance-tips-and-seasoning-guide-fwvk13l</link>
            <guid isPermaLink="true">https://kannada.asianetnews.com/gallery/kitchen/cleaning-a-rusted-tawa-easy-home-remedies-maintenance-tips-and-seasoning-guide-fwvk13l</guid>
            <pubDate>Wed, 29 Apr 2026 15:20:21 +0530</pubDate>
            <description><![CDATA[&lt;p&gt;How to clean rusty iron tawa: ಅಡುಗೆಮನೆಯಲ್ಲಿ ಕಬ್ಬಿಣದ ಹಂಚು (ತವ) ಎಷ್ಟು ಮುಖ್ಯವೋ, ಅದನ್ನು ತುಕ್ಕು ಹಿಡಿಯದಂತೆ ಕಾಪಾಡಿಕೊಳ್ಳುವುದು ಅಷ್ಟೇ ಸವಾಲಿನ ಕೆಲಸ. ಕೇವಲ ಐದೇ ನಿಮಿಷದಲ್ಲಿ ನಿಮ್ಮ ಹಳೆಯ ಹಂಚನ್ನು ಹೊಸದರಂತೆ ಹೊಳೆಯುವಂತೆ ಮಾಡುವ 5 ಅದ್ಭುತ ಮನೆಮದ್ದುಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqc9yjzhddenks52zgx0qc1x,imgname-thumbnail---2026-04-29t151124.585-1777455811569.jpg" type="image/jpeg" height="390" width="690"/>
            <content:encoded><![CDATA[&lt;p&gt;How to clean rusty iron tawa: ಅಡುಗೆಮನೆಯಲ್ಲಿ ಕಬ್ಬಿಣದ ಹಂಚು (ತವ) ಎಷ್ಟು ಮುಖ್ಯವೋ, ಅದನ್ನು ತುಕ್ಕು ಹಿಡಿಯದಂತೆ ಕಾಪಾಡಿಕೊಳ್ಳುವುದು ಅಷ್ಟೇ ಸವಾಲಿನ ಕೆಲಸ. ಕೇವಲ ಐದೇ ನಿಮಿಷದಲ್ಲಿ ನಿಮ್ಮ ಹಳೆಯ ಹಂಚನ್ನು ಹೊಸದರಂತೆ ಹೊಳೆಯುವಂತೆ ಮಾಡುವ 5 ಅದ್ಭುತ ಮನೆಮದ್ದುಗಳು ಇಲ್ಲಿವೆ.&lt;/p&gt;&lt;img&gt;&lt;p&gt;ಅಡುಗೆಮನೆಯಲ್ಲಿ ಬಳಸುವ ಕಬ್ಬಿಣದ ಹಂಚು ದಿನನಿತ್ಯದ ಅಗತ್ಯದ ವಸ್ತುಗಳಲ್ಲಿ ಒಂದಾಗಿದೆ. ರೊಟ್ಟಿ, ಚಪಾತಿ, ದೋಸೆ ಎಲ್ಲವನ್ನೂ ಇದರ ಮೇಲೆಯೇ ಮಾಡಲಾಗುತ್ತದೆ. ಆದರೆ ಸತತ ಬಳಕೆ, ಸರಿಯಾದ ಸ್ವಚ್ಛತೆಯ ಕೊರತೆ ಮತ್ತು ತೇವಾಂಶದ ಕಾರಣದಿಂದ ಹಂಚಿನ ಮೇಲೆ ತುಕ್ಕು ಹಿಡಿಯಲು ಪ್ರಾರಂಭವಾಗುತ್ತದೆ. ತುಕ್ಕು ಹಿಡಿದ ಹಂಚಿನ ಮೇಲೆ ಅಡುಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಹಂಚನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಇದಕ್ಕಾಗಿ ದುಬಾರಿ ಉತ್ಪನ್ನಗಳ ಅಗತ್ಯವಿಲ್ಲ, ಮನೆಯಲ್ಲಿರುವ ಸಾಮಾನ್ಯ ವಸ್ತುಗಳಿಂದಲೇ ಹಂಚನ್ನು ಪುನಃ ಹೊಳೆಯುವಂತೆ ಮಾಡಬಹುದು.&lt;/p&gt;&lt;img&gt;&lt;p&gt;&lt;strong&gt;ಉಪ್ಪು, ಅಡುಗೆ ಸೋಡಾ ಮತ್ತು ವಿನೆಗರ್ ಚಮತ್ಕಾರ&lt;/strong&gt;ಹಂಚಿನ ಮೇಲೆ ಜಿಗುಟಾದ ತುಕ್ಕು ಇದ್ದರೆ, ಇದು ಅತ್ಯಂತ ಪರಿಣಾಮಕಾರಿ ವಿಧಾನ. ಹಂಚಿನ ಮೇಲೆ ತಲಾ ಒಂದು ಚಮಚ ಉಪ್ಪು ಮತ್ತು ಅಡುಗೆ ಸೋಡಾ (Baking Soda) ಹಾಕಿ ಹರಡಿ. ಇದರ ಮೇಲೆ ಸ್ವಲ್ಪ ವಿನೆಗರ್ ಹಾಕಿದ ತಕ್ಷಣ ನೊರೆ ಬರಲಾರಂಭಿಸುತ್ತದೆ. ಈ ಪ್ರಕ್ರಿಯೆಯು ತುಕ್ಕಿನ ಪದರವನ್ನು ಸಡಿಲಗೊಳಿಸುತ್ತದೆ. ಕೆಲವು ನಿಮಿಷಗಳ ನಂತರ ಸ್ಕ್ರಬ್ಬರ್&zwnj;ನಿಂದ ಉಜ್ಜಿದರೆ ಕೊಳೆ ಸುಲಭವಾಗಿ ಹೊರಬರುತ್ತದೆ.&lt;/p&gt;&lt;img&gt;&lt;p&gt;ಹಂಚಿನ ಮೇಲೆ ಉಪ್ಪು ಸಿಂಪಡಿಸಿ ನಿಂಬೆ ರಸವನ್ನು ಹಾಕಿ ಮತ್ತು ಅದೇ ನಿಂಬೆ ಸಿಪ್ಪೆಯಿಂದ ಹಂಚನ್ನು ಚೆನ್ನಾಗಿ ಉಜ್ಜಿ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ತುಕ್ಕು ಮತ್ತು ಜಿಡ್ಡನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸುಮಾರು 10 ನಿಮಿಷ ಉಜ್ಜಿದ ನಂತರ ಹಂಚು ಸ್ವಚ್ಛವಾಗುತ್ತದೆ.&lt;/p&gt;&lt;img&gt;&lt;p&gt;ತುಕ್ಕು ತುಂಬಾ ಹೆಚ್ಚಾಗಿದ್ದರೆ, ಹಂಚಿನ ಮೇಲೆ ವಿನೆಗರ್ ಹಾಕಿ 1 ರಿಂದ 2 ಗಂಟೆಗಳ ಕಾಲ ಬಿಡಿ. ಇದರ ನಂತರ ಸ್ಕ್ರಬ್ಬರ್&zwnj;ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. ಹಳೆಯ ಮತ್ತು ದಪ್ಪನೆಯ ತುಕ್ಕು ಕೂಡ ನಿಧಾನವಾಗಿ ಹೊರಬರಲು ಪ್ರಾರಂಭಿಸುತ್ತದೆ.&lt;/p&gt;&lt;img&gt;&lt;p&gt;ಹಂಚಿನ ಮೇಲೆ ಹಗುರವಾದ ತುಕ್ಕು ಅಥವಾ ಕೊಳೆ ಇದ್ದರೆ, ಅಡುಗೆ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ. ಇದನ್ನು ಹಂಚಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ನಂತರ ಸ್ಕ್ರಬ್ ಮಾಡಿ. ಇದರಿಂದ ಹಂಚಿನ ಮೇಲ್ಮೈ ಸ್ವಚ್ಛ ಮತ್ತು ನಯವಾಗುತ್ತದೆ.&lt;/p&gt;&lt;img&gt;&lt;p&gt;ಇದು ಸ್ವಲ್ಪ ವಿಭಿನ್ನವಾದರೂ ಅಷ್ಟೇ ಪರಿಣಾಮಕಾರಿ ವಿಧಾನ. ಒಂದು ಆಲೂಗಡ್ಡೆಯನ್ನು ಅರ್ಧಕ್ಕೆ ಕತ್ತರಿಸಿ, ಅದರ ಮೇಲೆ ಸ್ವಲ್ಪ ಡಿಶ್ ಸೋಪ್ (ಪಾತ್ರೆ ತೊಳೆಯುವ ಲಿಕ್ವಿಡ್) ಹಚ್ಚಿ ಹಂಚಿನ ಮೇಲೆ ಉಜ್ಜಿ. ಆಲೂಗಡ್ಡೆಯಲ್ಲಿರುವ ನೈಸರ್ಗಿಕ ಆಮ್ಲವು ತುಕ್ಕನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಹಲವರು ಹಂಚನ್ನು ತೊಳೆದ ನಂತರ ಅದನ್ನು ಒದ್ದೆಯಾಗಿಯೇ ಬಿಡುತ್ತಾರೆ. ತುಕ್ಕು ಹಿಡಿಯಲು ಇದೇ ಮುಖ್ಯ ಕಾರಣ. ನೀರಿನ ತೇವಾಂಶದಿಂದ ಕಬ್ಬಿಣದಲ್ಲಿ ಆಕ್ಸಿಡೀಕರಣ ಪ್ರಕ್ರಿಯೆ ಪ್ರಾರಂಭವಾಗಿ, ನಿಧಾನವಾಗಿ ಕಿತ್ತಳೆ ಬಣ್ಣದ ತುಕ್ಕಿನ ಪದರ ಕಾಣಿಸಿಕೊಳ್ಳುತ್ತದೆ.&lt;/p&gt;&lt;p&gt;&lt;strong&gt;ಹಂಚನ್ನು ಸ್ವಚ್ಛಗೊಳಿಸಿದ ನಂತರ ಏನು ಮಾಡಬೇಕು?&lt;/strong&gt;ಹಂಚನ್ನು ತೊಳೆದ ನಂತರ ಅದನ್ನು ಸ್ವಲ್ಪ ಬಿಸಿ ಮಾಡಿ. ಅದರ ಮೇಲೆ ಸ್ವಲ್ಪ ಎಣ್ಣೆ ಹಚ್ಚಿ 5 ರಿಂದ 10 ನಿಮಿಷಗಳ ಕಾಲ ಬಿಸಿ ಮಾಡಿ. ಇದರಿಂದ ಹಂಚಿನ ಮೇಲೆ ಒಂದು ರಕ್ಷಣಾತ್ಮಕ ಪದರ (Protective layer) ನಿರ್ಮಾಣವಾಗುತ್ತದೆ ಮತ್ತು ತುಕ್ಕು ಬೇಗನೆ ಹಿಡಿಯುವುದಿಲ್ಲ.&lt;/p&gt;&lt;p&gt;ಈ ಸುಲಭ ವಿಧಾನಗಳನ್ನು ನಿಯಮಿತವಾಗಿ ಅನುಸರಿಸಿದರೆ, ಕಬ್ಬಿಣದ ಹಂಚನ್ನು ತುಕ್ಕು ಇಲ್ಲದೆ ವರ್ಷಗಳ ಕಾಲ ಬಳಸಬಹುದು ಮತ್ತು ಆರೋಗ್ಯಕರ ಅಡುಗೆಯನ್ನು ಸವಿಯಬಹುದು.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/cleaning-a-rusted-tawa-easy-home-remedies-maintenance-tips-and-seasoning-guide-fwvk13l"/>
        </item>
        <item>
            <title><![CDATA[ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ಡಾಲಿ ಧನಂಜಯ್-ಧನ್ಯತಾ:‌ ಪಕ್ಕಾ ಗಂಡು ಮಗುನೇ ಎಂದ ಫ್ಯಾನ್ಸ್]]></title>
            <link>https://kannada.asianetnews.com/gallery/entertainment/actor-daali-dhananjay-and-dhanyatha-share-adorable-baby-bump-photos-couple-soon-to-welcome-their-first-child-tpq885k</link>
            <guid isPermaLink="true">https://kannada.asianetnews.com/gallery/entertainment/actor-daali-dhananjay-and-dhanyatha-share-adorable-baby-bump-photos-couple-soon-to-welcome-their-first-child-tpq885k</guid>
            <pubDate>Wed, 29 Apr 2026 15:09:16 +0530</pubDate>
            <description><![CDATA[&lt;p&gt;Daali Dhananjay Dhanyatha baby bump photos: ಸ್ಯಾಂಡಲ್&zwnj;ವುಡ್&zwnj;ನ ಜನಪ್ರಿಯ ನಟ 'ಡಾಲಿ' ಧನಂಜಯ್ ಹಾಗೂ ಧನ್ಯತಾ ದಂಪತಿ ಈಗ ಹೊಸ ಅತಿಥಿಯ ಆಗಮನದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ಈ ದಂಪತಿ ಮಾಡಿಸಿಕೊಂಡಿರುವ ಕ್ಯೂಟ್ 'ಬೇಬಿ ಬಂಪ್' ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqc9f5gzh184wacbx7rvq111,imgname-thumbnail---2026-04-29t145554.948-1777455306271.jpg" type="image/jpeg" height="390" width="690"/>
            <content:encoded><![CDATA[&lt;p&gt;Daali Dhananjay Dhanyatha baby bump photos: ಸ್ಯಾಂಡಲ್&zwnj;ವುಡ್&zwnj;ನ ಜನಪ್ರಿಯ ನಟ 'ಡಾಲಿ' ಧನಂಜಯ್ ಹಾಗೂ ಧನ್ಯತಾ ದಂಪತಿ ಈಗ ಹೊಸ ಅತಿಥಿಯ ಆಗಮನದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ಈ ದಂಪತಿ ಮಾಡಿಸಿಕೊಂಡಿರುವ ಕ್ಯೂಟ್ 'ಬೇಬಿ ಬಂಪ್' ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.&amp;nbsp;&lt;/p&gt;&lt;img&gt;&lt;p&gt;ಪರಸ್ಪರ ಪ್ರೀತಿಸಿ ಮದುವೆಯಾದ ನಟ ಡಾಲಿ ಧನಂಜಯ್ ಮತ್ತು ಧನ್ಯತಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಬೇಬಿ ಬಂಪ್ (Baby Bump) ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇದನ್ನು ಡಾಲಿ ತಮ್ಮ ಸೋಷಿಯಲ್&zwnj; ಮೀಡಿಯಾ ಪೇಜ್&zwnj; ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.&lt;/p&gt;&lt;img&gt;&lt;p&gt;ಈ ಫೋಟೋದಲ್ಲಿ ದಂಪತಿ ಖುಷ್ ಖುಷಿಯಾಗಿ ಇರುವುದನ್ನ ನೀವೂ ನೋಡಬಹುದು. ಡಾಲಿ ಹೆಂಡತಿ ಧನ್ಯತಾ ಅವರನ್ನ ಅಪ್ಪಿಕೊಂಡು ಸೋಫಾದ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಹಾಗೂ ಕೈ ಹಿಡಿದು ನಡೆಯುತ್ತಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುವಾಗ ಡಾಲಿ Our universe is expanding ಎಂದು ಶೀರ್ಷಿಕೆ ನೀಡಿದ್ದು, ಫೋಟೋ ಅಪಪಲೋಡ್ ಆಗಿ ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆಯೇ ಹರಿದು ಬರುತ್ತಿದೆ.&lt;/p&gt;&lt;img&gt;&lt;p&gt;ಕೆಲವು ತಿಂಗಳ ಹಿಂದೆಯಷ್ಟೇ ಉದಯ ಕನ್ನಡಿಗ ಕಾರ್ಯಕ್ರಮದಲ್ಲಿ &quot;ಒಂದು ಗುಲಾಬಿ ನನ್ನ ಹೆಂಡ್ತಿಗೆ, ಇನ್ನೊಂದು ನನ್ನ ಅಪ್ಪ ಅಂತ ಕರಿಯೋಕೆ ಬರ್ತಿರೋ ಮಗುಗೆ&quot; ಎಂದು ಹೇಳುವ ಮೂಲಕ ತಂದೆ ಆಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು.&lt;/p&gt;&lt;img&gt;&lt;p&gt;ಧನಂಜಯ್ ಮತ್ತು ಡಾಕ್ಟರ್ ಆಗಿರುವ ಧನ್ಯತಾ ಹಲವು ವರ್ಷಗಳಿಂದ ಪ್ರೀತಿಸಿ, ಪರಸ್ಪರ ಒಪ್ಪಿ ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, 2025ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಈ ವಿವಾಹ ಮಹೋತ್ಸವದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಅಭಿಮಾನಿಗಳು ಭಾಗವಹಿಸಿದ್ದರು.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/entertainment/actor-daali-dhananjay-and-dhanyatha-share-adorable-baby-bump-photos-couple-soon-to-welcome-their-first-child-tpq885k"/>
        </item>
        <item>
            <title><![CDATA[ಕಾಲ್ಗೆಜ್ಜೆ-ಕಾಲುಂಗುರ ಜೋಡಿಯ ಹೊಸ ಟ್ರೆಂಡ್, ಬೆಳ್ಳಿಯ 7 ಅದ್ಭುತ ಡಿಸೈನ್‌ಗಳಿವು]]></title>
            <link>https://kannada.asianetnews.com/webstories/fashion/latest-barefoot-anklet-designs-silver-toe-ring-anklet-combo-for-stylish-look-kvn-pmbt06l</link>
            <guid isPermaLink="true">https://kannada.asianetnews.com/webstories/fashion/latest-barefoot-anklet-designs-silver-toe-ring-anklet-combo-for-stylish-look-kvn-pmbt06l</guid>
            <pubDate>Wed, 29 Apr 2026 14:27:23 +0530</pubDate>
            <description><![CDATA[&lt;p&gt;ಬೇರ್&zwnj;ಫೂಟ್ ಆಂಕ್ಲೆಟ್ ಅಂದರೆ ಕಾಲುಂಗುರ ಮತ್ತು ಕಾಲ್ಗೆಜ್ಜೆಯ ಕಾಂಬಿನೇಷನ್ ಈಗ ಹೊಸ ಟ್ರೆಂಡ್ ಆಗಿದೆ. ಈ ಲೇಖನದಲ್ಲಿ ಪಾದಗಳಿಗೆ ಸ್ಟೈಲಿಶ್ ಮತ್ತು ಆಕರ್ಷಕ ಲುಕ್ ನೀಡುವ 7 ಸುಂದರ ಬೆಳ್ಳಿಯ ವಿನ್ಯಾಸಗಳನ್ನು ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpz96mx0vsk95f68k0918kpn,imgname-foot-1-1777018819488.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/latest-barefoot-anklet-designs-silver-toe-ring-anklet-combo-for-stylish-look-kvn-pmbt06l"/>
        </item>
        <item>
            <title><![CDATA[ನಿಮ್ಮ ವಾರ್ಡ್ರೋಬ್ ನಲ್ಲಿರೋ ಎಲ್ಲ ಸಿಲ್ಕ್ ಸೀರೆ ಅಸಲಿನಾ? ಹೀಗೆ ಚೆಕ್ ಮಾಡಿ]]></title>
            <link>https://kannada.asianetnews.com/gallery/fashion/silk-saree-hacks-here-is-how-to-easily-identify-it-right-at-home-1zp6ggb</link>
            <guid isPermaLink="true">https://kannada.asianetnews.com/gallery/fashion/silk-saree-hacks-here-is-how-to-easily-identify-it-right-at-home-1zp6ggb</guid>
            <pubDate>Wed, 29 Apr 2026 13:24:12 +0530</pubDate>
            <description><![CDATA[&lt;p&gt;ಸೀರೆ ಮೇಲೆ ಮಹಿಳೆಯರಿಗೆ ಮೋಹ ಜಾಸ್ತಿ. ಅದ್ರಲ್ಲೂ ಸಿಲ್ಕ್ ಸಾರಿ ಅಂದ್ರೆ ಹೆಚ್ಚಿನ ಆಸಕ್ತಿ ತೋರಿಸ್ತಾರೆ. ಮಾರ್ಕೆಟ್ ನಲ್ಲಿ ನಕಲಿ ಸಿಲ್ಕ್ ಸಾರಿಗಳ ಹಾವಳಿ ಹೆಚ್ಚಾಗಿದೆ. &amp;nbsp;ನಿಜವಾದ ಸಿಲ್ಕ್ ಸಾರಿ ಯಾವ್ದು ಅಂತ ನೀವು ಸುಲಭವಾಗಿ ಪತ್ತೆ ಮಾಡ್ಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqc307mw4de7ey858ft0fay0,imgname-silk-saree-1777448525468.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೀರೆ ಮೇಲೆ ಮಹಿಳೆಯರಿಗೆ ಮೋಹ ಜಾಸ್ತಿ. ಅದ್ರಲ್ಲೂ ಸಿಲ್ಕ್ ಸಾರಿ ಅಂದ್ರೆ ಹೆಚ್ಚಿನ ಆಸಕ್ತಿ ತೋರಿಸ್ತಾರೆ. ಮಾರ್ಕೆಟ್ ನಲ್ಲಿ ನಕಲಿ ಸಿಲ್ಕ್ ಸಾರಿಗಳ ಹಾವಳಿ ಹೆಚ್ಚಾಗಿದೆ. &amp;nbsp;ನಿಜವಾದ ಸಿಲ್ಕ್ ಸಾರಿ ಯಾವ್ದು ಅಂತ ನೀವು ಸುಲಭವಾಗಿ ಪತ್ತೆ ಮಾಡ್ಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಸಿಲ್ಕ್ ಸಾರಿ ಮಹಿಳೆಯರ ಸೌಂದರ್ಯ ಡಬಲ್ ಮಾಡೋದಲ್ದೆ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತೆ. ಮದುವೆಯಲ್ಲಿ ಮಾತ್ರವಲ್ಲ ವಿಶೇಷ ಸಂದರ್ಭಗಳಲ್ಲಿ, ಹಬ್ಬ &ndash; ಪೂಜೆಯಲ್ಲಿ ಮಹಿಳೆಯರು ಹೆಚ್ಚಾಗಿ ಸಿಲ್ಕ್ ಸಾರಿ ಆಯ್ಕೆ ಮಾಡ್ಕೊಳ್ತಾರೆ. ಮಹಿಳೆಯರ ವಾರ್ಡ್ರೋಬ್ ನಲ್ಲಿ ಸೀರೆ ರಾಶಿ ಇರುತ್ತೆ. ದುಬಾರಿ ಹಣಕೊಟ್ಟೂ ಅನೇಕ ಬಾರಿ ರಾಂಗ್ ರೇಷ್ಮೆ ಸೀರೆ ಖರೀದಿ ಮಾಡ್ತೇವೆ. ಇತ್ತೀಚಿನ ದಿನಗಳಲ್ಲಿ ರೇಷ್ಮೆ ಸೀರೆ ಮೀರಿಸುವಂತ ನಕಲಿ ಸೀರೆ ಸಿದ್ಧವಾಗ್ತಿದೆ.&lt;/p&gt;&lt;img&gt;&lt;p&gt;ಸೀರೆಯ ಅಂಚಿನಿಂದ ಸಣ್ಣ ದಾರವನ್ನು ಹೊರತೆಗೆದು ಅದನ್ನು ಸುಡಬೇಕು. ಅದು ಸುಟ್ಟ ಕೂದಲಿನಂತೆ ವಾಸನೆ ಬಂದ್ರೆ ಮತ್ತು ಕಪ್ಪು, ಪುಡಿಪುಡಿಯಾದ ಬೂದಿ ಕಾಣಿಸಿದ್ರೆ ನೀವು ನಿಜವಾದ ರೇಷ್ಮೆ ಸೀರೆ ಖರೀದಿ ಮಾಡಿದ್ದೀರಿ ಎಂದರ್ಥ. ಅದೇ ನೀವು ಖರೀದಿ ಮಾಡಿದ ಸೀರೆ ನಕಲಿಯಾಗಿದ್ರೆ ಅದು ಕರಗಿ, ಪ್ಲಾಸ್ಟಿಕ್ ನಂತೆ ಉಂಡೆಯಾಗುತ್ತೆ.&lt;/p&gt;&lt;img&gt;&lt;p&gt;ರೇಷ್ಮೆ ಸೀರೆಯನ್ನು ಉಜ್ಜಿ ಪರೀಕ್ಷೆ ಮಾಡ್ಬಹುದು. ಅಂಗೈ ಸಹಾಯದಿಂದ ನೀವು ಸೀರೆಯನ್ನು ಉಜ್ಜಿದಾಗ ಅದು ಬಿಸಿಯಾದ್ರೆ ಅಸಲಿ ಸಿಲ್ಕ್ ಎಂದರ್ಥ. ಅದೇ ಅದು ತಂಪಾಗಿದ್ದರೆ ನಕಲಿ ಎಂದರ್ಥ. ರೇಷ್ಮೆ ನೈಸರ್ಗಿಕ ನಾರಾಗಿರೋದ್ರಿಂದ ಅದು ಬಿಸಿಯಾಗುತ್ತದೆ.&lt;/p&gt;&lt;img&gt;&lt;p&gt;ಚೈನೀಸ್ ರೇಷ್ಮೆ ಅಥವಾ ಕ್ರೇಪ್ನಂತಹ ಹಗುರವಾದ ಸೀರೆಗಳಿಗೆ ಇದು ಉತ್ತಮವಾಗಿದೆ. ಸೀರೆಯ ಒಂದು ಭಾಗವನ್ನು ನಿಮ್ಮ ಉಂಗುರದೊಳಗೆ ಹಾಕಿ. ನಿಜವಾದ ರೇಷ್ಮೆ ತುಂಬಾ ಮೃದು ಮತ್ತು ಹೊಂದಿಕೊಳ್ಳುವಂತಿದ್ದು ಅದು ಸುಲಭವಾಗಿ ಉಂಗುರದ ಮೂಲಕ ಹಾದುಹೋಗುತ್ತದೆ. ನಕಲಿ ರೇಷ್ಮೆ ಹೆಚ್ಚಾಗಿ ಸಿಲುಕಿಕೊಳ್ಳುತ್ತದೆ.&lt;/p&gt;&lt;img&gt;&lt;p&gt;ನಕಲಿ ರೇಷ್ಮೆ ಸಮತಟ್ಟಾದ, ಬಿಳಿ ಬಣ್ಣದ ಹೊಳಪನ್ನು ಹೊಂದಿರುತ್ತದೆ. ಅದೇ ರೇಷ್ಮೆ ಸೀರೆ ಹಾಗಲ್ಲ. ಅದನ್ನು ನೀವು ಬೇರೆ ಬೇರೆ ಕೋನದಿಂದ ನೋಡಿದಾಗ ಅದರ ಬಣ್ಣ ಭಿನ್ನವಾಗಿ ಕಾಣಿಸುತ್ತದೆ. ನೈಸರ್ಗಿಕ ಹೊಳಪು ಶುದ್ಧ ರೇಷ್ಮೆಯ ಪ್ರಾಥಮಿಕ ವಿಶಿಷ್ಟ ಲಕ್ಷಣವಾಗಿದೆ.&lt;/p&gt;&lt;img&gt;&lt;p&gt;ರೇಷ್ಮೆ ಹುಳುಗಳಿಂದ ನೂಲು ಉತ್ಪಾದಿಸುವ ಪ್ರಕ್ರಿಯೆಯು ದುಬಾರಿ ಮತ್ತು ಶ್ರಮದ ಕೆಲ್ಸ. ಯಾರಾದರೂ ನಿಮಗೆ ಶುದ್ಧ ಬನಾರಸಿ ಅಥವಾ ಕಾಂಜೀವರಂ ರೇಷ್ಮೆಯನ್ನು ಕೇವಲ 1000-1500 ರೂಪಾಯಿಗಳಿಗೆ ನೀಡ್ತೇನೆ ಅಂದ್ರೆ ಅದು ಬಹುಶಃ ನಕಲಿಯಾಗಿರುತ್ತೆ. ನಿಜವಾದ ರೇಷ್ಮೆ ತುಂಬಾನಯ ಮತ್ತು ಮೃದುವಾಗಿದ್ದು, ಮುಷ್ಟಿಯಲ್ಲಿ ಹಿಂಡಿದಾಗ, ಅದು ಹತ್ತಿಯಂತೆ ಸುಕ್ಕುಗಟ್ಟುವುದಿಲ್ಲ.&lt;/p&gt;&lt;img&gt;&lt;p&gt;ರೇಷ್ಮೆಯ ಒಂದು ಮೂಲೆಯಲ್ಲಿ ನೀರಿನ ಹನಿಯನ್ನು ಹಾಕಿ. ನಿಜವಾದ ರೇಷ್ಮೆ ನೀರನ್ನು ತಕ್ಷಣವೇ ಹೀರಿಕೊಳ್ಳುತ್ತದೆ. ಆದ್ರೆ ಬೇರೆ ಬಟ್ಟೆಗಳು ದೀರ್ಘಕಾಲದವರೆಗೆ ನೀರನ್ನು ಹಿಡಿದಿಟ್ಟುಕೊಳ್ಳಬಹುದು ಅಥವಾ ಜಾರಿಸಬಹುದು. ನೀವು ರೇಷ್ಮೆ ಸೀರೆ ಖರೀದಿಗೆ ಹೋದಾಗ ಈ ಎಲ್ಲ ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಿ. ಸರಿಯಾಗಿ ಪರೀಕ್ಷೆ ಮಾಡಿ ಸೀರೆ ಖರೀದಿ ಮಾಡಿ. ಇಲ್ಲ ಅಂದ್ರೆ ನಿಮ್ಮ ಶ್ರಮದ ಹಣ ವ್ಯರ್ಥವಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/fashion/silk-saree-hacks-here-is-how-to-easily-identify-it-right-at-home-1zp6ggb"/>
        </item>
        <item>
            <title><![CDATA[ಬೆಂಗಳೂರು ಟೆಕ್ಕಿ ಪೂಜಾ ದತ್ತ ಸಾವು ಪ್ರಕರಣ: ಗೋಡೆ ಮೇಲಿದ್ದ ಆ ಪದಗಳೇ ನಿಗೂಢ ಸಾವಿಗೆ ಕಾರಣ ಹೇಳ್ತಿದೆಯಾ?]]></title>
            <link>https://kannada.asianetnews.com/karnataka-districts/techie-pooja-dutta-mysterious-death-in-bengaluru-police-probe-deepens-gdp/articleshow-h8eu51e</link>
            <guid isPermaLink="true">https://kannada.asianetnews.com/karnataka-districts/techie-pooja-dutta-mysterious-death-in-bengaluru-police-probe-deepens-gdp/articleshow-h8eu51e</guid>
            <pubDate>Wed, 29 Apr 2026 13:41:00 +0530</pubDate>
            <description><![CDATA[ಬೆಂಗಳೂರಿನಲ್ಲಿ ಟೆಕ್ಕಿ ಪೂಜಾ ದತ್ತ ಅವರ ಅನುಮಾನಾಸ್ಪದ ಸಾವು ಸಂಭವಿಸಿದೆ. ಒಂದು ವರ್ಷದ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ, ಎಲ್ಲರಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದ ಅವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಕೊಠಡಿಯ ಗೋಡೆಗಳ ಮೇಲೆ ಅಂಟಿಸಲಾಗಿದ್ದ ವಿಚಿತ್ರ ಪದಗಳು ಮತ್ತು ಅವರ ಖಿನ್ನತೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqc4k6fnbct6vb538r0vzg5a,imgname-techie-pooja-dutta-1777450195445.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು: &lt;/strong&gt;ನಗರದಲ್ಲಿ ಟೆಕ್ಕಿ ಪೂಜಾ ದತ್ತ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಹಲವು ಮಹತ್ವದ ಹಾಗೂ ಕುತೂಹಲಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ.&lt;/p&gt;&lt;p&gt;ಜಾರ್ಖಂಡ್ ಮೂಲದ ಪೂಜಾ ದತ್ತ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್&zwnj;ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಸುಮಾರು ಒಂದು ವರ್ಷ ಹಿಂದೆ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಬಳಿಕ ಮೊಬೈಲ್ ಫೋನ್&zwnj;ನ್ನು ಆಫ್ ಮಾಡಿಕೊಂಡಿದ್ದರು. ಹಳೆಯ ಸಿಮ್ ಕಾರ್ಡ್ ತೆಗೆದು ಹೊಸ ಸಿಮ್ ಬಳಸಿದರೂ, ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಕೂಡ ಕಳೆದ ಒಂದು ವರ್ಷದಿಂದ ಯಾವುದೇ ಸಂಪರ್ಕ ಹೊಂದಿರಲಿಲ್ಲ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.&lt;/p&gt;&lt;p&gt;ಮೂರು ತಿಂಗಳ ಹಿಂದೆ ಅವರು ಬಳಸುತ್ತಿದ್ದ ಹೊಸ ಸಿಮ್&zwnj;ನ ವ್ಯಾಲಿಡಿಟಿ ಕೂಡ ಮುಗಿದು ಹೋಗಿದ್ದು, ಅದರ ಬಳಿಕ ಅವರ ಮೊಬೈಲ್ ಸಂಪೂರ್ಣವಾಗಿ ಆಫ್ ಆಗಿದೆ. ಕಳೆದ ಮೂರು ತಿಂಗಳಿನಿಂದ ಪೂಜಾ ದತ್ತ ಅವರು ಹೊರಗೆ ಕಾಣಿಸಿಕೊಂಡಿಲ್ಲ ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ತೀವ್ರ ಖಿನ್ನತಗೆ ಒಳಗಾಗಿ ಇದ್ದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.&lt;/p&gt;&lt;p&gt;ಪೊಲೀಸರು ಪರಿಶೀಲಿಸಿದಾಗ, ಪೂಜಾ ದತ್ತ ಅವರ ಕೊಠಡಿಯಲ್ಲಿ ಅನೇಕ ಕಾಗದಗಳ ಮೇಲೆ &ldquo;Peace&rdquo;, &ldquo;Ego&rdquo;, &ldquo;Trust&rdquo;, &ldquo;Satisfaction&rdquo;, &ldquo;Love&rdquo;, &ldquo;Solo Love&rdquo; ಎಂಬ ಪದಗಳನ್ನು ಬರೆದು ಗೋಡೆಗಳಿಗೆ ಅಂಟಿಸಿರುವುದು ಕಂಡುಬಂದಿದೆ. ಇದು ಅವರ ಮಾನಸಿಕ ಸ್ಥಿತಿಯ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಕೊಲೆ ಬಗ್ಗೆ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿಲ್ಲ&lt;/h2&gt;&lt;p&gt;ಪ್ರಸ್ತುತ ತನಿಖೆಯಲ್ಲಿ ಕೊಲೆ ನಡೆದಿರುವುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೂ ಸಾವಿನ ನಿಜಸ್ವರೂಪ ಪತ್ತೆಹಚ್ಚಲು ಪೊಲೀಸರು ವಿವಿಧ ಕೋಣಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಪ್ರೀತಿ ವೈಫಲ್ಯ, ಕೌಟುಂಬಿಕ ಸಮಸ್ಯೆ ಅಥವಾ ವೈಯಕ್ತಿಕ ಕಾರಣಗಳೇನಾದರೂ ಇದಕ್ಕಿದ್ದೆಯೇ ಎಂಬುದರ ಕುರಿತು ಆಡುಗೋಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಪೂಜಾ ದತ್ತ ಅವರು ಕಳೆದ ಒಂದು ವರ್ಷದಲ್ಲಿ ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ತಿಳಿಯಲು, ಅವರ ಮೊಬೈಲ್ ನಂಬರಿನ ಕಾಲ್ ಡೀಟೇಲ್ ರೆಕಾರ್ಡ್ (CDR) ಅನ್ನು ಒಂದು ವರ್ಷದ ಅವಧಿಗೆ ಸಂಗ್ರಹಿಸಲು ಪೊಲೀಸರು ನಿರ್ಧರಿಸಿದ್ದಾರೆ. ಜೊತೆಗೆ, ಅವರು ಕೆಲಸ ಬಿಟ್ಟ ನಂತರ ಜೀವನ ನಿರ್ವಹಣೆಗೆ ಹಣ ಎಲ್ಲಿಂದ ಬರುತ್ತಿತ್ತು, ಬಾಡಿಗೆ ಹೇಗೆ ಪಾವತಿಸುತ್ತಿದ್ದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.&lt;/p&gt;&lt;p&gt;ಇದಕ್ಕಾಗಿ ಪೂಜಾ ದತ್ತ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡಿದ್ದು, ಸಂಬಂಧಿತ ಬ್ಯಾಂಕ್&zwnj;ಗೆ ನೋಟಿಸ್ ನೀಡಲಾಗಿದೆ. ಕಳೆದ ಒಂದು ವರ್ಷದ ಹಣಕಾಸು ವಹಿವಾಟಿನ ವಿವರಗಳನ್ನು ಕೂಡ ಪೊಲೀಸರು ಕೇಳಿದ್ದಾರೆ. ಇದೇ ವೇಳೆ, ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಗೂ ನೋಟಿಸ್ ಜಾರಿ ಮಾಡಿದ್ದು, ಯಾವ ಕಾರಣಕ್ಕೆ ಅವರು ಕೆಲಸ ತೊರೆದರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.&lt;/p&gt;&lt;h2&gt;ಕೊರೋನಾ ಅವಧಿಯಲ್ಲಿ ವಿವಾಹ, ಪತಿ ನಿಧನ&lt;/h2&gt;&lt;p&gt;ಇದರ ಮಧ್ಯೆ, ಪೂಜಾ ದತ್ತ ಅವರು ಕಳೆದ ನಾಲ್ಕು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಸಂಗತಿ ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೊರೋನಾ ಅವಧಿಯಲ್ಲಿ ಅವರ ವಿವಾಹವಾಗಿದ್ದು, ನಂತರ ಅವರ ಪತಿ ನಿಧನರಾಗಿದ್ದಾರೆ. ಪತಿಯ ಸಾವಿನ ಬಳಿಕ ಅವರು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.&lt;/p&gt;&lt;p&gt;ಬಳಿಕ 2023ರಲ್ಲಿ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಪೂಜಾ, ಖಾಸಗಿ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದರು. ಆದರೂ ಕುಟುಂಬದವರೊಂದಿಗೆ ಹೆಚ್ಚು ಸಂಪರ್ಕದಲ್ಲಿರಲಿಲ್ಲ. ನಂತರ ಒಂಟಿಯಾಗಿ ವಾಸಿಸಲು ಪ್ರಾರಂಭಿಸಿದ್ದು, ಇದೇ ಒಂಟಿತನ ಮತ್ತು ಖಿನ್ನತೆಯ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.&lt;/p&gt;&lt;p&gt;ಪೂಜಾ ದತ್ತ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಈ ಪ್ರಕರಣವು ಮಾನಸಿಕ ಆರೋಗ್ಯದ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿಯುತ್ತಿದ್ದು, ಒಂಟಿತನ ಮತ್ತು ಖಿನ್ನತೆ ಎದುರಿಸುವವರಿಗೆ ಸಮಯೋಚಿತ ಸಹಾಯ ಹಾಗೂ ಬೆಂಬಲ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತಿದೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/techie-pooja-dutta-mysterious-death-in-bengaluru-police-probe-deepens-gdp/articleshow-h8eu51e"/>
        </item>
        <item>
            <title><![CDATA[ಕದಿಯಲು ಹೋದವನಿಗೆ ಕಂಡಿದ್ದೇನು? : ಕಿರುಚಿ ಹೊರಗೋಡಿ ಬಂದಿದ್ದೇಕೆ? ಹೈದರಾಬಾದ್‌ನ ಹಂಟೆಡ್ ಹೌಸ್‌ನ ಭಯಾನಕ ಕತೆ]]></title>
            <link>https://kannada.asianetnews.com/gallery/relationship/hyderabad-kundanbagh-haunted-bungalow-horror-story-suh-snchtlg</link>
            <guid isPermaLink="true">https://kannada.asianetnews.com/gallery/relationship/hyderabad-kundanbagh-haunted-bungalow-horror-story-suh-snchtlg</guid>
            <pubDate>Wed, 29 Apr 2026 13:04:21 +0530</pubDate>
            <description><![CDATA[&lt;p&gt;Haunted bungalow horror story ಬಂಗಲೆಯ ಸುತ್ತಲೂ ಮೇಣದಬತ್ತಿ ಹಿಡಿದ ಆತ್ಮಗಳು ಸುತ್ತಾಟ ಜೊತೆ ರಾತ್ರಿಯಲ್ಲಿ ವಿಚಿತ್ರ ಶಬ್ದ, ಹೈದರಾಬಾದ್&zwnj;ನಲ್ಲಿರುವ ಕುಂದನ್&zwnj;ಬಾಗ್ ಬಂಗಲೆಯನ್ನು ದೇಶದ ಅತ್ಯಂತ ದೆವ್ವ ಮತ್ತು ನಿಗೂಢ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqc21p7dsn5kvndff0eycgd6,imgname-bungalow-horror-story-1777447524589.jpeg" type="image/jpeg" height="390" width="690"/>
            <content:encoded><![CDATA[&lt;p&gt;Haunted bungalow horror story ಬಂಗಲೆಯ ಸುತ್ತಲೂ ಮೇಣದಬತ್ತಿ ಹಿಡಿದ ಆತ್ಮಗಳು ಸುತ್ತಾಟ ಜೊತೆ ರಾತ್ರಿಯಲ್ಲಿ ವಿಚಿತ್ರ ಶಬ್ದ, ಹೈದರಾಬಾದ್&zwnj;ನಲ್ಲಿರುವ ಕುಂದನ್&zwnj;ಬಾಗ್ ಬಂಗಲೆಯನ್ನು ದೇಶದ ಅತ್ಯಂತ ದೆವ್ವ ಮತ್ತು ನಿಗೂಢ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.&lt;/p&gt;&lt;img&gt;&lt;p&gt;ಹೈದರಾಬಾದ್&zwnj;ನಲ್ಲಿರುವ ಕುಂದನ್&zwnj;ಬಾಗ್ ಬಂಗಲೆಯನ್ನು ದೇಶದ ಅತ್ಯಂತ ದೆವ್ವ ಮತ್ತು ನಿಗೂಢ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬಂಗಲೆಯ ಸುತ್ತಲೂ ಮೇಣದಬತ್ತಿಗಳನ್ನು ಹಿಡಿದ ಆತ್ಮಗಳು ಸುತ್ತಾಡುವುದನ್ನು ಕಾಣಬಹುದು ಮತ್ತು ರಾತ್ರಿಯಲ್ಲಿ ವಿಚಿತ್ರ ಶಬ್ದಗಳು ಕೇಳಿಬರುತ್ತವೆ ಎಂದು ಹೇಳಲಾಗುತ್ತದೆ. ಸ್ಥಳೀಯರ ಪ್ರಕಾರ, ಇಲ್ಲಿ ಅನೇಕ ಅಲೌಕಿಕ ಘಟನೆಗಳು ಸಂಭವಿಸಿವೆ, ಅದಕ್ಕಾಗಿಯೇ ಜನರು ಸೂರ್ಯಾಸ್ತದ ನಂತರ ಈ ಪ್ರದೇಶವನ್ನು ತಪ್ಪಿಸುತ್ತಾರೆ. ಕುಂದನ್&zwnj;ಬಾಗ್&zwnj;ನ ಕಥೆ ಇನ್ನೂ ಜನರನ್ನು ನಡುಗಿಸುತ್ತದೆ.&lt;/p&gt;&lt;img&gt;&lt;p&gt;ಹೈದರಾಬಾದ್&zwnj;ನ ಐಷಾರಾಮಿ ಪ್ರದೇಶದಲ್ಲಿರುವ ಕುಂದನ್&zwnj;ಬಾಗ್ ಹೌಸ್&zwnj;ನ ಕಥೆ ಕೇವಲ ಕಥೆಯಲ್ಲ, ಇದು ಭಯಾನಕವಾಗಿದ್ದು, ನಿಗೂಢತೆಯನ್ನು ಹೊಂದಿದೆ. 2002 ರಲ್ಲಿ ಕುಂದನ್&zwnj;ಬಾಗ್&zwnj;ನ ಕಥೆಯು ಸುದ್ದಿಯಾಯಿತು ಎರಡು ಅಂತಸ್ತಿನ ಬಂಗಲೆಯಲ್ಲಿ ವಾಸಿಸುತ್ತಿದ್ದ ಮಹಿಳೆ ಮತ್ತು ಅವಳ ಇಬ್ಬರು ಹೆಣ್ಣುಮಕ್ಕಳ ವಿಚಿತ್ರ ವರ್ತನೆಯು ಅಕ್ಕಪಕ್ಕದವರನ್ನು ಹೆದರಿಸಲು ಪ್ರಾರಂಭಿಸಿತು.&lt;/p&gt;&lt;img&gt;&lt;p&gt;ಸ್ಥಳೀಯರ ಪ್ರಕಾರ ಮಹಿಳೆಯರು ಹೆಚ್ಚಾಗಿ ರಾತ್ರಿಯ ವೇಳೆ ತಮ್ಮ ಮನೆಯ ಬಾಲ್ಕನಿಯಲ್ಲಿ ಕಪ್ಪು ಬಟ್ಟೆಗಳನ್ನು ಧರಿಸಿ ಮತ್ತು ಮೇಣದಬತ್ತಿಗಳನ್ನು ಹಿಡಿದು ಅಲೆದಾಡುತ್ತಿದ್ದರು. ಅವರು ಕೆಲವೊಮ್ಮೆ ಮನೆಯ ಹೊರಗಿನ ಕಸದ ಬುಟ್ಟಿಗಳಿಗೆ ರಕ್ತದ ಬಾಟಲಿಗಳನ್ನು ಎಸೆದು ವಿಚಿತ್ರ ಶಬ್ದಗಳನ್ನು ಮಾಡುತ್ತಿದ್ದರು, ಇದು ಮಾಟಮಂತ್ರದ ವದಂತಿಗಳಿಗೆ ಕಾರಣವಾಯಿತು.&lt;/p&gt;&lt;img&gt;&lt;p&gt;ಈ ಕಥೆಯಲ್ಲಿ ದೊಡ್ಡ ತಿರುವು ಬಂದದ್ದು ಕಳ್ಳನೊಬ್ಬ ಕದಿಯುವ ಉದ್ದೇಶದಿಂದ ಮನೆಗೆ ಪ್ರವೇಶಿಸಿದಾಗ. ಒಳಗೆ ಹೋದ ನಂತರ ಅವನು ಹೆದರಿ ಕಿರುಚುತ್ತಾ ಹೊರಗೆ ಓಡಿಹೋದನು. ಪೊಲೀಸರು ಬಾಗಿಲು ಒಡೆದು ಒಳಗೆ ಹೋದಾಗ ದೃಶ್ಯ ಭಯಾನಕವಾಗಿತ್ತು. ತಾಯಿ ಮತ್ತು ಅವಳ ಇಬ್ಬರು ಹೆಣ್ಣುಮಕ್ಕಳ ಕೊಳೆತ ದೇಹಗಳು ಹಾಸಿಗೆಯ ಮೇಲೆ ಬಿದ್ದಿದ್ದವು.&lt;/p&gt;&lt;img&gt;&lt;p&gt;ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ವಿಧಿವಿಜ್ಞಾನ ವರದಿಯು ಮೂವರೂ ಸುಮಾರು ಆರು ತಿಂಗಳ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಆದಾಗ್ಯೂ ಅಕ್ಕ ಪಕ್ಕದವರು ಅವರು ಸಾವಿನ ದಿನಾಂಕದ ನಂತರ ಹಲವಾರು ತಿಂಗಳುಗಳ ಕಾಲ ಮಹಿಳೆಯರು ತಮ್ಮ ಬಾಲ್ಕನಿಯಲ್ಲಿ ಮೇಣದಬತ್ತಿಗಳನ್ನು ಬೆಳಗಿಸುವುದನ್ನು ನೋಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇಂದಿಗೂ ಈ ಬಂಗಲೆ ಪಾಳುಬಿದ್ದಿದೆ. ರಾತ್ರಿಯಲ್ಲಿ ಕೂಗು ಕೇಳಿಸುತ್ತದೆ ಮತ್ತು ಮಂದ ಮೇಣದಬತ್ತಿಯ ಬೆಳಕನ್ನು ನೋಡುತ್ತದೆ ಎಂದು ಜನರು ಹೇಳುತ್ತಾರೆ. ಕುಂದನ್&zwnj;ಬಾಗ್ ಮನೆಯೊಂದಿಗೆ ಸಂಬಂಧಿಸಿದ ರಹಸ್ಯವು ಇನ್ನೂ ಬಗೆಹರಿಯದೆ ಉಳಿದಿದೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/hyderabad-kundanbagh-haunted-bungalow-horror-story-suh-snchtlg"/>
        </item>
        <item>
            <title><![CDATA[ಬೆಚ್ಚಿಬೀಳಿಸೋ ಘಟನೆ.. ಕುಡಿಯೋ ನೀರಿನ ಟ್ಯಾಂಕನ್ನು ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಜೋಡಿ; ಇಡೀ ಊರಿಗೇ ಗಂಡಾಂತರ!]]></title>
            <link>https://kannada.asianetnews.com/india-news/a-shocking-video-of-village-drinking-water-tank-and-using-it-as-a-swimming-pool-in-muzaffarnagar/articleshow-09ckrda</link>
            <guid isPermaLink="true">https://kannada.asianetnews.com/india-news/a-shocking-video-of-village-drinking-water-tank-and-using-it-as-a-swimming-pool-in-muzaffarnagar/articleshow-09ckrda</guid>
            <pubDate>Wed, 29 Apr 2026 12:49:17 +0530</pubDate>
            <description><![CDATA[&lt;p&gt;ಇಷ್ಟು ಎತ್ತರದ ಟ್ಯಾಂಕ್ ಏರುವಾಗ ಅಕಸ್ಮಾತ್ ಕಾಲು ಜಾರಿದ್ದರೆ ಭೀಕರ ದುರಂತ ಸಂಭವಿಸುತ್ತಿತ್ತು. ಇಂತಹ ಕೃತ್ಯಗಳು ಕೇವಲ ಕಿಡಿಗೇಡಿಗಳ ಪ್ರಾಣಕ್ಕೆ ಅಪಾಯ ತರುವುದಲ್ಲದೆ, ಇಡೀ ಸಮುದಾಯದ ನೆಮ್ಮದಿಯನ್ನು ಕೆಡಿಸುತ್ತವೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರು ಕೋಪಗೊಂಡಿದ್ದಾರೆ.. ಮುಂದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqc1a8sm9y29tbgwz3py8fwx,imgname-swimming-fool-video-1777446757172.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಪ್ರದೇಶದಲ್ಲಿ ಶಾಕಿಂಗ್ ಘಟನೆ!&lt;/strong&gt;&lt;/p&gt;&lt;p&gt;ಮುಜಾಫರ್&zwnj;ನಗರ: ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಎಂತಹ ಸಾಹಸಕ್ಕೂ ಕೈಹಾಕುತ್ತಿದ್ದಾರೆ. ಆದರೆ, ಈ ಸಾಹಸಗಳು ಕೆಲವೊಮ್ಮೆ ಮಿತಿ ಮೀರಿ, ಸಾರ್ವಜನಿಕರ ಜೀವದ ಜೊತೆ ಆಟವಾಡುವ ಹಂತಕ್ಕೆ ತಲುಪುತ್ತಿವೆ. ಇಂತಹದ್ದೇ ಒಂದು ಮೈನವಿರೇಳಿಸುವ ಮತ್ತು ಅತೀ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಮುಜಾಫರ್&zwnj;ನಗರ ಜಿಲ್ಲೆಯ ಬುಧಾನಾ ಎಂಬಲ್ಲಿ ನಡೆದಿದೆ. ಸದ್ಯ ಈ ಘಟನೆಯ ವಿಡಿಯೋ ಇಡೀ ಇಂಟರ್ನೆಟ್ ಲೋಕದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.&lt;/p&gt;&lt;h2&gt;ಏನಿದು ಘಟನೆ?&lt;/h2&gt;&lt;p&gt;ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಬ್ಬರು ಯುವಕರು ಸುಮಾರು 200 ಅಡಿ ಎತ್ತರದ ಬೃಹತ್ ಕುಡಿಯುವ ನೀರಿನ ಟ್ಯಾಂಕ್ ಅನ್ನು ಏರಿದ್ದಾರೆ. ಕೇವಲ ಏರುವುದು ಮಾತ್ರವಲ್ಲದೆ, ಇಡೀ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಆ ಟ್ಯಾಂಕ್&zwnj;ನೊಳಗೆ ಇಳಿದು ಅದನ್ನು 'ಸ್ವಿಮ್ಮಿಂಗ್ ಪೂಲ್' ನಂತೆ ಬಳಸುತ್ತಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಅಷ್ಟು ಎತ್ತರದಲ್ಲಿ ಅವರು ಮಾಡುತ್ತಿರುವ ಈ ಹುಚ್ಚಾಟ ನೋಡುಗರ ಎದೆ ನಡುಗಿಸುವಂತಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಟ್ಯಾಂಕ್ ಸರಿಸುಮಾರು 200 ರಿಂದ 300 ಅಡಿ ಎತ್ತರವಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;ಆರೋಗ್ಯದ ಮೇಲೆ ಗಂಭೀರ ಪರಿಣಾಮ:&lt;/p&gt;&lt;p&gt;ಈ ಘಟನೆ ಕೇವಲ ಪ್ರಾಣಾಪಾಯದ ವಿಷಯವಷ್ಟೇ ಅಲ್ಲ, ಇಡೀ ಹಳ್ಳಿಯ ಜನರ ಆರೋಗ್ಯದ ಪ್ರಶ್ನೆಯೂ ಹೌದು. ಕುಡಿಯುವ ನೀರಿನ ಮೂಲವನ್ನು ಈ ರೀತಿ ಮಲಿನಗೊಳಿಸುವುದು ಅಕ್ಷಮ್ಯ ಅಪರಾಧ. ಹಳ್ಳಿಯ ನೂರಾರು ಕುಟುಂಬಗಳು ಇದೇ ಟ್ಯಾಂಕ್&zwnj;ನ ನೀರನ್ನು ಕುಡಿಯಲು ಮತ್ತು ಅಡುಗೆ ಮಾಡಲು ಬಳಸುತ್ತವೆ. ಹೀಗಿರುವಾಗ, ಕಿಡಿಗೇಡಿಗಳು ಅದರಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಕಾಯಿಲೆಗಳು, ಸೋಂಕುಗಳು ಮತ್ತು ಇತರ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸಾರ್ವಜನಿಕ ಸಂಪನ್ಮೂಲವನ್ನು ಇಷ್ಟು ಬೇಜವಾಬ್ದಾರಿಯಿಂದ ಬಳಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h3&gt;ಸಾರ್ವಜನಿಕ ಸುರಕ್ಷತೆಗೆ ಸವಾಲು:&lt;/h3&gt;&lt;p&gt;ಇಷ್ಟು ಎತ್ತರದ ಟ್ಯಾಂಕ್ ಏರುವಾಗ ಅಕಸ್ಮಾತ್ ಕಾಲು ಜಾರಿದ್ದರೆ ಭೀಕರ ದುರಂತ ಸಂಭವಿಸುತ್ತಿತ್ತು. ಇಂತಹ ಕೃತ್ಯಗಳು ಕೇವಲ ಕಿಡಿಗೇಡಿಗಳ ಪ್ರಾಣಕ್ಕೆ ಅಪಾಯ ತರುವುದಲ್ಲದೆ, ಇಡೀ ಸಮುದಾಯದ ನೆಮ್ಮದಿಯನ್ನು ಕೆಡಿಸುತ್ತವೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರು ಆಡಳಿತ ಮಂಡಳಿಯ ವಿರುದ್ಧವೂ ಕಿಡಿಕಾರುತ್ತಿದ್ದಾರೆ. ಅಷ್ಟು ದೊಡ್ಡ ನೀರಿನ ಟ್ಯಾಂಕ್&zwnj;ಗೆ ಸರಿಯಾದ ಭದ್ರತೆ ಇಲ್ಲದಿರುವುದು ಮತ್ತು ಯಾರೇ ಆಗಲಿ ಸುಲಭವಾಗಿ ಮೇಲೆ ಹತ್ತಲು ಅವಕಾಶ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.&lt;/p&gt;&lt;p&gt;ಕಠಿಣ ಕ್ರಮಕ್ಕೆ ಆಗ್ರಹ:&lt;/p&gt;&lt;p&gt;ಈಗಾಗಲೇ ಈ ವಿಡಿಯೋ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಸರ್ಕಾರಿ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆ ತಂದಿದ್ದಕ್ಕಾಗಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನೀರಿನ ಟ್ಯಾಂಕ್&zwnj;ಗಳ ಸುತ್ತ ಬೇಲಿ ಅಳವಡಿಸಲು ಮತ್ತು ಭದ್ರತೆಯನ್ನು ಹೆಚ್ಚಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಕ್ಷಣಿಕ ಸುಖಕ್ಕಾಗಿ ಅಥವಾ ಸಾಮಾಜಿಕ ಜಾಲತಾಣದ 'ಲೈಕ್ಸ್' ಗಳಿಗಾಗಿ ಮಾಡುವ ಇಂತಹ ಕೆಲಸಗಳು ಸಮಾಜಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿವೆ. ಈ ಕಿಡಿಗೇಡಿಗಳಿಗೆ ಕಾನೂನು ತಕ್ಕ ಪಾಠ ಕಲಿಸಲಿ ಎಂಬುದೇ ಎಲ್ಲರ ಆಶಯ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/india-news/a-shocking-video-of-village-drinking-water-tank-and-using-it-as-a-swimming-pool-in-muzaffarnagar/articleshow-09ckrda"/>
        </item>
        <item>
            <title><![CDATA[ಕ್ರಿಯೇಟಿವಿಟಿ ಇದ್ರೆ ಸಾಕು, ಮನೆಗೆ ಬರುತ್ತೆ ಸಖತ್ ಲುಕ್! 6 ಸಿಂಪಲ್ ಐಡಿಯಾಸ್]]></title>
            <link>https://kannada.asianetnews.com/webstories/life/6-simple-diy-ideas-for-an-aesthetic-home-makeover-mrq-esk8eeu</link>
            <guid isPermaLink="true">https://kannada.asianetnews.com/webstories/life/6-simple-diy-ideas-for-an-aesthetic-home-makeover-mrq-esk8eeu</guid>
            <pubDate>Wed, 29 Apr 2026 12:45:47 +0530</pubDate>
            <description><![CDATA[&lt;p&gt;&lt;strong&gt;DIY home decor 6 simple ways:&lt;/strong&gt; ಹಳೆ ಟೈರ್, ಕನ್ನಡಿ, ಜಾರ್, ಬಾಟಲಿ ಮತ್ತು ಜೀನ್ಸ್&zwnj;ನಂತಹ ವೇಸ್ಟ್ ವಸ್ತುಗಳನ್ನು ಬಳಸಿ ನಿಮ್ಮ ಮನೆಗೆ ಅದ್ಭುತ ಲುಕ್ ನೀಡಿ. ಮನೆಗೆ ಸಖತ್ ಮತ್ತು ಕ್ಲಾಸಿ ಲುಕ್ ನೀಡುವ 6 ಸುಲಭ ಐಡಿಯಾಗಳನ್ನು ಇಲ್ಲಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqbqb7pyp17p0xmeaykc548q,imgname-diy-home-decor-6-simple-ways-b-1777436303070.jpg" type="image/jpeg" height="390" width="690"/>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/life/6-simple-diy-ideas-for-an-aesthetic-home-makeover-mrq-esk8eeu"/>
        </item>
        <item>
            <title><![CDATA[Indian Railways: ಟಿಕೆಟ್ ಇದ್ರೆ ಸಾಕು, ರೈಲಲ್ಲಿ ಈ 5 ಸೇವೆಗಳು ಫ್ರೀ! ಈ ಸೀಕ್ರೆಟ್ ನಿಮಗೂ ಗೊತ್ತಿರಲಿ]]></title>
            <link>https://kannada.asianetnews.com/gallery/travel/top-5-free-services-you-get-with-an-indian-railway-ticket-you-did-not-know-about-kvn-cf62ee9</link>
            <guid isPermaLink="true">https://kannada.asianetnews.com/gallery/travel/top-5-free-services-you-get-with-an-indian-railway-ticket-you-did-not-know-about-kvn-cf62ee9</guid>
            <pubDate>Wed, 29 Apr 2026 12:45:34 +0530</pubDate>
            <description><![CDATA[&lt;p&gt;ರೈಲು ಟಿಕೆಟ್ ತೆಗೆದರೆ ಬರೀ ಪ್ರಯಾಣ ಮಾಡಬಹುದು ಅಷ್ಟೇ ಅಂದ್ಕೊಂಡಿದ್ದೀರಾ? ಆದರೆ ಆ ಟಿಕೆಟ್ ಜೊತೆಗೆ ನಮಗೆ ಗೊತ್ತಿಲ್ಲದ ಎಷ್ಟೋ ಉಚಿತ ಸೇವೆಗಳೂ ಸಿಗುತ್ತವೆ. ಅವು ಯಾವುವು ಅಂತ ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k83f9xjp1g3xvngsjycjbk7x,imgname-rail-1761053308502.jpg" type="image/jpeg" height="390" width="690"/>
            <content:encoded><![CDATA[&lt;p&gt;ರೈಲು ಟಿಕೆಟ್ ತೆಗೆದರೆ ಬರೀ ಪ್ರಯಾಣ ಮಾಡಬಹುದು ಅಷ್ಟೇ ಅಂದ್ಕೊಂಡಿದ್ದೀರಾ? ಆದರೆ ಆ ಟಿಕೆಟ್ ಜೊತೆಗೆ ನಮಗೆ ಗೊತ್ತಿಲ್ಲದ ಎಷ್ಟೋ ಉಚಿತ ಸೇವೆಗಳೂ ಸಿಗುತ್ತವೆ. ಅವು ಯಾವುವು ಅಂತ ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭಾರತದಲ್ಲಿ ಪ್ರತಿದಿನ ಕೋಟ್ಯಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಕಡಿಮೆ ಖರ್ಚಿನಲ್ಲಿ, ಆರಾಮವಾಗಿ ದೂರದ ಊರುಗಳಿಗೆ ಹೋಗಲು ರೈಲು ಪ್ರಯಾಣವೇ ಅನೇಕರಿಗೆ ಮೊದಲ ಆಯ್ಕೆ. ಆದರೆ, ರೈಲು ಟಿಕೆಟ್ ಖರೀದಿಸಿದ ಪ್ರಯಾಣಿಕರಿಗೆ ಕೆಲವು ಉಚಿತ ಸೌಲಭ್ಯಗಳೂ ಸಿಗುತ್ತವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಭಾರತೀಯ ರೈಲ್ವೆ ನೀಡುವ ಈ ಸೇವೆಗಳು ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಲಭ ಹಾಗೂ ಸುರಕ್ಷಿತವಾಗಿಸುತ್ತವೆ.&lt;/p&gt;&lt;img&gt;&lt;p&gt;ರೈಲ್ವೆ ನಿಲ್ದಾಣಗಳಲ್ಲಿ ಸಿಗುವ ಪ್ರಮುಖ ಸೌಲಭ್ಯವೇ 'ವೇಟಿಂಗ್ ರೂಮ್'. ರೈಲು ತಡವಾದರೆ ಅಥವಾ ನೀವು ನಿಲ್ದಾಣಕ್ಕೆ ಬೇಗ ಬಂದರೆ, ಇಲ್ಲಿ ಉಚಿತವಾಗಿ ಕುಳಿತು ವಿಶ್ರಾಂತಿ ಪಡೆಯಬಹುದು. ಹೆಚ್ಚಿನ ಪ್ರಮುಖ ನಿಲ್ದಾಣಗಳಲ್ಲಿ ಎಸಿ ಮತ್ತು ನಾನ್-ಎಸಿ ವೇಟಿಂಗ್ ಹಾಲ್&zwnj;ಗಳು ಲಭ್ಯವಿವೆ. ಇದು ಪ್ರಯಾಣಿಕರಿಗೆ ಬಹಳ ಉಪಯುಕ್ತ.&lt;/p&gt;&lt;img&gt;&lt;p&gt;ಈಗಿನ ಕಾಲದಲ್ಲಿ ಇಂಟರ್&zwnj;ನೆಟ್ ಅತ್ಯಗತ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರ ಮೂಲಕ ನಿಮ್ಮ ಮೊಬೈಲ್ ಡೇಟಾ ಬಳಸದೆಯೇ ರೈಲಿನ ಸ್ಟೇಟಸ್ ಚೆಕ್ ಮಾಡಬಹುದು, ಆನ್&zwnj;ಲೈನ್ ಕೆಲಸಗಳನ್ನು ಪೂರ್ಣಗೊಳಿಸಬಹುದು. ಮುಖ್ಯವಾಗಿ ಸಿಗ್ನಲ್ ಸರಿಯಾಗಿ ಇಲ್ಲದ ಕಡೆ ಇದು ತುಂಬಾ ಉಪಯೋಗಕ್ಕೆ ಬರುತ್ತದೆ.&lt;/p&gt;&lt;img&gt;&lt;p&gt;ಎಸಿ ಕೋಚ್&zwnj;ಗಳಲ್ಲಿ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯು ಬೆಡ್&zwnj;ಶೀಟ್, ದಿಂಬು ಮತ್ತು ಹೊದಿಕೆಯನ್ನು ಉಚಿತವಾಗಿ ನೀಡುತ್ತದೆ. ಇದಕ್ಕಾಗಿ ಹೆಚ್ಚುವರಿ ಹಣ ಪಾವತಿಸಬೇಕಾದ ಅಗತ್ಯವಿಲ್ಲ. ವಿಶೇಷವಾಗಿ ರಾತ್ರಿ ಪ್ರಯಾಣದಲ್ಲಿ, ಚಳಿಗಾಲ ಅಥವಾ ಮಳೆಗಾಲದಲ್ಲಿ ಈ ಸೌಲಭ್ಯಗಳು ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸುತ್ತವೆ.&lt;/p&gt;&lt;img&gt;&lt;p&gt;ಪ್ರಯಾಣದ ಸಮಯದಲ್ಲಿ ಆರೋಗ್ಯ ಹದಗೆಟ್ಟರೆ, ರೈಲ್ವೆ ಇಲಾಖೆ ಸಹಾಯ ಮಾಡಲು ಸಿದ್ಧವಿರುತ್ತದೆ. ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ನೀಡಲಾಗುತ್ತದೆ. ಅಗತ್ಯವಿದ್ದರೆ, ಮುಂದಿನ ನಿಲ್ದಾಣದಲ್ಲಿ ವೈದ್ಯರನ್ನು ಸಹ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣಿಸಬಹುದು.&lt;/p&gt;&lt;img&gt;&lt;p&gt;ಇದಲ್ಲದೆ, ಪ್ರಯಾಣದಲ್ಲಿ ಯಾವುದೇ ಸಮಸ್ಯೆ ಎದುರಾದರೆ ಟಿಟಿಇ, ಕೋಚ್ ಅಟೆಂಡೆಂಟ್ ಅಥವಾ ರೈಲ್ವೆ ಸಹಾಯವಾಣಿ ಮೂಲಕ ಸಹಾಯ ಪಡೆಯಬಹುದು. ವಿಶೇಷವಾಗಿ ಮಹಿಳೆಯರು, ವೃದ್ಧರು ಮತ್ತು ಮಕ್ಕಳಿಗೆ ಈ ಸೇವೆಗಳು ಬಹಳ ಮುಖ್ಯ. ಈ ಉಚಿತ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು, ಬಳಸಿಕೊಂಡರೆ ನಿಮ್ಮ ರೈಲು ಪ್ರಯಾಣವು ಇನ್ನಷ್ಟು ಶಾಂತಿಯುತ ಮತ್ತು ಸುರಕ್ಷಿತವಾಗಿರುತ್ತದೆ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/travel/top-5-free-services-you-get-with-an-indian-railway-ticket-you-did-not-know-about-kvn-cf62ee9"/>
        </item>
        <item>
            <title><![CDATA[ಬಾಡಿಹೀಟ್ ಕಡಿಮೆ ಮಾಡಲು ನಿಂಬೆಹಣ್ಣು-ಕಾಮಕಸ್ತೂರಿ ಬೀಜದ ಈ ಸ್ಪೆಷಲ್ ಜ್ಯೂಸ್ ಕುಡೀರಿ]]></title>
            <link>https://kannada.asianetnews.com/food/how-to-make-sabja-lemon-juice-benefits-recipe-and-summer-health-tips/articleshow-f3aq5l8</link>
            <guid isPermaLink="true">https://kannada.asianetnews.com/food/how-to-make-sabja-lemon-juice-benefits-recipe-and-summer-health-tips/articleshow-f3aq5l8</guid>
            <pubDate>Wed, 29 Apr 2026 12:32:25 +0530</pubDate>
            <description><![CDATA[&lt;p&gt;&lt;strong&gt;Sabja lemon drink recipe: &lt;/strong&gt;ಮನೆಯಲ್ಲೇ ಕೇವಲ 5 ನಿಮಿಷಗಳಲ್ಲಿ ತಯಾರಿಸಬಹುದಾದ 'ಸಬ್ಜಾ ಲೆಮನ್ ಡ್ರಿಂಕ್' ದೇಹಕ್ಕೆ ತಕ್ಷಣದ ತಂಪು ಮತ್ತು ಚೈತನ್ಯ ನೀಡುತ್ತದೆ. ದೇಹದ ಆಂತರಿಕ ಶಾಖವನ್ನು ಕಡಿಮೆ ಮಾಡಿ, ನಿಮ್ಮನ್ನು ದಿನವಿಡೀ ಲವಲವಿಕೆಯಿಂದ ಇರಿಸುವ ಈ ಅದ್ಭುತ ನೈಸರ್ಗಿಕ ಪಾನೀಯದ ರೆಸಿಪಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g1fyaw8977nbnv2fzq3be7km,imgname-images-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾ&lt;/strong&gt;ಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಅತಿಯಾಗಿ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್&zwnj; ಗಡಿ ದಾಟುತ್ತಿದ್ದು, ಹವಾಮಾನ ಇಲಾಖೆಯು ಹೀಟ್ ವೇವ್ ಅಥವಾ ಬಿಸಿಗಾಳಿಯ ಮುನ್ನೆಚ್ಚರಿಕೆಯನ್ನು ನೀಡಿದೆ. ಇಂತಹ ಸುಡುವ ಬಿಸಿಲಿನಲ್ಲಿ ನಮ್ಮ ದೇಹವು ಅತಿಯಾದ ಉಷ್ಣತೆಗೆ ಒಳಗಾಗಿ ನಿರ್ಜಲೀಕರಣ (Dehydration) ಸಂಭವಿಸುವುದು ಸಾಮಾನ್ಯ. ಈ ಬಿಸಿಲಿನ ಆಘಾತದಿಂದ ಪಾರಾಗಲು ಮತ್ತು ದೇಹಕ್ಕೆ ತಕ್ಷಣದ ಚೈತನ್ಯ ನೀಡಲು 'ಸಬ್ಜಾ ಲೆಮನ್ ಡ್ರಿಂಕ್' ಒಂದು ಅತ್ಯುತ್ತಮ ನೈಸರ್ಗಿಕ ಆಯ್ಕೆಯಾಗಿದೆ.&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;p&gt;ಸಬ್ಜಾ ಬೀಜಗಳು (ಕಾಮಕಸ್ತೂರಿ ಬೀಜ): 2 ಟೀ ಚಮಚನಿಂಬೆಹಣ್ಣು: 2 (ಮಧ್ಯಮ ಗಾತ್ರದವು)ಕಲ್ಲು ಸಕ್ಕರೆ ಪುಡಿ : 3-4 ಚಮಚ (ರುಚಿಗೆ ತಕ್ಕಂತೆ)ಕಪ್ಪು ಉಪ್ಪು (Black Salt): ಅರ್ಧ ಚಮಚಮಣ್ಣಿನ ಮಡಕೆ ನೀರು: 2 ದೊಡ್ಡ ಗ್ಲಾಸ್&lt;/p&gt;&lt;h3&gt;&lt;strong&gt;ಸಬ್ಜಾ ಬೀಜಗಳನ್ನು 20 ನಿಮಿಷಗಳ ಕಾಲ ನೆನೆಸಿ&lt;/strong&gt;&lt;/h3&gt;&lt;p&gt;ಮೊದಲು ಒಂದು ಸಣ್ಣ ಪಾತ್ರೆಯಲ್ಲಿ ಎರಡು ಟೀ ಚಮಚ ಸಬ್ಜಾ ಬೀಜಗಳನ್ನು ತೆಗೆದುಕೊಳ್ಳಿ. ಅದಕ್ಕೆ ಮುಕ್ಕಾಲು ಕಪ್ ನೀರು ಸೇರಿಸಿ ಸುಮಾರು 20 ನಿಮಿಷಗಳ ಕಾಲ ನೆನೆಯಲು ಬಿಡಿ. ಸಬ್ಜಾ ಬೀಜಗಳು ನೀರನ್ನು ಹೀರಿಕೊಂಡು ಮೃದುವಾದ ಜೆಲ್ ರೀತಿ ಉಬ್ಬುತ್ತವೆ. ಈ ಬೀಜಗಳು ದೇಹದ ಆಂತರಿಕ ಉಷ್ಣತೆಯನ್ನು ಹೀರಿಕೊಂಡು ಹೊರಹಾಕುವ ಅದ್ಭುತ ನೈಸರ್ಗಿಕ ಗುಣವನ್ನು ಹೊಂದಿವೆ.&lt;/p&gt;&lt;h3&gt;&lt;strong&gt;ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ&lt;/strong&gt;&lt;/h3&gt;&lt;p&gt;ಒಂದು ದೊಡ್ಡ ಪಾತ್ರೆಯಲ್ಲಿ ಎರಡು ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಬೇಸಿಗೆಯಲ್ಲಿ ಫ್ರಿಡ್ಜ್ ನೀರಿನ ಬದಲು ಮಣ್ಣಿನ ಮಡಕೆಯ ನೈಸರ್ಗಿಕ ತಂಪು ನೀರನ್ನು ಬಳಸುವುದು ಆರೋಗ್ಯಕ್ಕೆ ಅತ್ಯಂತ ಶ್ರೇಷ್ಠ. ಈ ನೀರಿಗೆ ಗುಣಮಟ್ಟದ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಕಿ. ಸಾಮಾನ್ಯ ಸಕ್ಕರೆಗಿಂತ ಕಲ್ಲು ಸಕ್ಕರೆಯು ದೇಹದ ಉಷ್ಣತೆಯನ್ನು ಅತಿ ವೇಗವಾಗಿ ತಗ್ಗಿಸಲು ಸಹಾಯ ಮಾಡುತ್ತದೆ.&lt;/p&gt;&lt;h3&gt;&lt;strong&gt;ನಿಂಬೆ ಮತ್ತು ಉಪ್ಪನ್ನೂ ಸೇರಿಸಿ&lt;/strong&gt;&lt;/h3&gt;&lt;p&gt;ಈಗ ಮಿಶ್ರಣಕ್ಕೆ ಅರ್ಧ ಚಮಚ ಕಪ್ಪು ಉಪ್ಪನ್ನು ಸೇರಿಸಿ. ಇದು ಪಾನೀಯಕ್ಕೆ ವಿಶೇಷ ರುಚಿ ನೀಡುವುದಲ್ಲದೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನಂತರ ಎರಡು ನಿಂಬೆಹಣ್ಣಿನ ರಸವನ್ನು ಇದಕ್ಕೆ ಹಿಂಡಿ. ನಿಂಬೆರಸದಲ್ಲಿರುವ ವಿಟಮಿನ್ ಸಿ ದೇಹಕ್ಕೆ ಕ್ಷಣಾರ್ಧದಲ್ಲಿ ತಾಜಾತನ ಮತ್ತು ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.&lt;/p&gt;&lt;h3&gt;&lt;strong&gt;ಈಗ ಸೇವಿಸುವ ಸಮಯ&lt;/strong&gt;&lt;/h3&gt;&lt;p&gt;ಕೊನೆಯದಾಗಿ, ಮೊದಲೇ ನೆನೆಸಿಟ್ಟುಕೊಂಡ ಸಬ್ಜಾ ಬೀಜಗಳನ್ನು ಈ ಪಾನೀಯಕ್ಕೆ ಸೇರಿಸಿ. ಎಲ್ಲಾ ಸಾಮಗ್ರಿಗಳು ಒಂದಕ್ಕೊಂದು ಬೆರೆಯುವಂತೆ ಚೆನ್ನಾಗಿ ಕಲಕಿ. ಸಕ್ಕರೆ ಸಂಪೂರ್ಣವಾಗಿ ಕರಗಿದ ಮೇಲೆ ಗ್ಲಾಸ್&zwnj;ಗಳಿಗೆ ಸುರಿದು ತಕ್ಷಣವೇ ಸೇವಿಸಿ.&lt;/p&gt;&lt;p&gt;&lt;strong&gt;ಈ ಪಾನೀಯದ ಪ್ರಯೋಜನಗಳು&lt;/strong&gt;&lt;/p&gt;&lt;p&gt;&lt;strong&gt;ತಕ್ಷಣದ ಶಕ್ತಿ&lt;/strong&gt;ಬಿಸಿಲಿನಿಂದ ಉಂಟಾಗುವ ಆಯಾಸ, ತಲೆಸುತ್ತು ಮತ್ತು ಸುಸ್ತನ್ನು ಇದು ಕ್ಷಣಾರ್ಧದಲ್ಲಿ ದೂರ ಮಾಡಿ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ.&lt;/p&gt;&lt;p&gt;&lt;strong&gt;ನೈಸರ್ಗಿಕ ತಂಪು&lt;/strong&gt;ಸಬ್ಜಾ ಮತ್ತು ಕಲ್ಲು ಸಕ್ಕರೆಯ ಸಂಯೋಜನೆಯು ಹೊಟ್ಟೆಯ ಉರಿ, ಎದೆಯುರಿ ಮತ್ತು ಪಿತ್ತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.&lt;/p&gt;&lt;p&gt;&lt;strong&gt;ಎಲೆಕ್ಟ್ರೋಲೈಟ್ ಸಮತೋಲನ&lt;/strong&gt;ಬೆವರಿನ ಮೂಲಕ ದೇಹದಿಂದ ನಷ್ಟವಾಗುವ ಲವಣಾಂಶಗಳನ್ನು ಸರಿದೂಗಿಸಲು ಇದು ಮಾರುಕಟ್ಟೆಯ ಡ್ರಿಂಕ್&zwnj;ಗಳಿಗಿಂತ ಅತ್ಯುತ್ತಮ ಎಲೆಕ್ಟ್ರೋಲೈಟ್ ಪಾನೀಯವಾಗಿದೆ.&lt;/p&gt;&lt;p&gt;ಮಾರುಕಟ್ಟೆಯಲ್ಲಿ ಸಿಗುವ ಕೃತಕ ಬಣ್ಣ ಮತ್ತು ರಾಸಾಯನಿಕ ಮಿಶ್ರಿತ ಪಾನೀಯಗಳಿಗಿಂತ ಮನೆಯಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಾಗುವ ಈ ನೈಸರ್ಗಿಕ ಜ್ಯೂಸ್ ಆರೋಗ್ಯಕ್ಕೆ ರಾಮಬಾಣ. ಪ್ರತಿದಿನ ಮಧ್ಯಾಹ್ನದ ಸುಡುವ ಬಿಸಿಲಿನ ಸಮಯದಲ್ಲಿ ಈ ಪಾನೀಯ ಕುಡಿಯುವುದರಿಂದ ಬೇಸಿಗೆಯ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.&amp;nbsp;&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/food/how-to-make-sabja-lemon-juice-benefits-recipe-and-summer-health-tips/articleshow-f3aq5l8"/>
        </item>
        <item>
            <title><![CDATA[ಮಕ್ಕಳನ್ನು ಎತ್ತಿಕೊಳ್ಳಬೇಕಾ? ಹಾಗಿದ್ರೆ ಈ ಹಗುರ ಪೋಚಂಪಲ್ಲಿ ಸೀರೆ ನಿಮಗಾಗಿ ಇದೆ!]]></title>
            <link>https://kannada.asianetnews.com/webstories/women/easy-to-carry-light-weight-pochampalli-sarees-for-new-mother-with-kids-mrq-s4vluub</link>
            <guid isPermaLink="true">https://kannada.asianetnews.com/webstories/women/easy-to-carry-light-weight-pochampalli-sarees-for-new-mother-with-kids-mrq-s4vluub</guid>
            <pubDate>Wed, 29 Apr 2026 12:23:41 +0530</pubDate>
            <description><![CDATA[&lt;p&gt;ನಿಮಗೂ ಚಿಕ್ಕ ಮಕ್ಕಳಿದ್ದಾರಾ? ಅವರನ್ನು ಎತ್ತಿಕೊಂಡು ಓಡಾಡಬೇಕಾದ ಅನಿವಾರ್ಯತೆ ಇದೆಯಾ? ಜೊತೆಗೆ ಸೀರೆ ಉಡಬೇಕು ಅನ್ನೋ ಆಸೆಯೂ ಇದೆಯಾ? ಹಾಗಿದ್ರೆ ನಿಮಗಾಗಿ ಇದೆ ಈ ಸಾಂಪ್ರದಾಯಿಕ ಪೋಚಂಪಲ್ಲಿ ಸೀರೆ. ನೋಡೋಕೆ ಭಾರೀ ಅನ್ಸಿದ್ರೂ, ಇದು ತುಂಬಾನೇ ಹಗುರ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqbzx1azq2vxvd4mzw4sy3zw,imgname-saree-1777445274975.jpg" type="image/jpeg" height="390" width="690"/>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/women/easy-to-carry-light-weight-pochampalli-sarees-for-new-mother-with-kids-mrq-s4vluub"/>
        </item>
        <item>
            <title><![CDATA[Amruthadhaare ದಿಯಾ ಎಸ್ಕೇಪ್​! ನಟನೆ ಮುಗಿಸಿ, ಎಲ್ಲಾ ಬಿಟ್ಟು ರಾತ್ರೋರಾತ್ರಿ ಮನೆ ತೊರೆದ ಜೈದೇವನ ಬೇಬಿ]]></title>
            <link>https://kannada.asianetnews.com/gallery/tv-talk/amruthadhare-serial-diya-left-home-taking-all-amount-and-jewellery-suc-gksyyin</link>
            <guid isPermaLink="true">https://kannada.asianetnews.com/gallery/tv-talk/amruthadhare-serial-diya-left-home-taking-all-amount-and-jewellery-suc-gksyyin</guid>
            <pubDate>Wed, 29 Apr 2026 12:11:20 +0530</pubDate>
            <description><![CDATA[ಅಮೃತಧಾರೆ ಧಾರಾವಾಹಿಯು ಮುಕ್ತಾಯದ ಹಂತದಲ್ಲಿದ್ದು, ಶಕುಂತಲಾ ತನ್ನ ತಪ್ಪಿಗೆ ಕ್ಷಮೆ ಕೇಳಿ ಗೌತಮ್ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಮತ್ತೊಂದೆಡೆ, ಜೈದೇವ್&zwnj;ಗೆ ಮೋಸ ಮಾಡಿ ದಿಯಾ ಆಸ್ತಿ ಮತ್ತು ವೀಸಾದೊಂದಿಗೆ ಪರಾರಿಯಾಗಿದ್ದು, ದೇಶ ಬಿಟ್ಟು ಹೋಗಲು ಯತ್ನಿಸಿದ ಜೈದೇವ್&zwnj;ನನ್ನು ಪೊಲೀಸರು ಬಂಧಿಸಲು ಬಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbz81s5ab7eq7bfn42rsc7m,imgname-diya-01-1777444587301.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಧಾರಾವಾಹಿಯು ಮುಕ್ತಾಯದ ಹಂತದಲ್ಲಿದ್ದು, ಶಕುಂತಲಾ ತನ್ನ ತಪ್ಪಿಗೆ ಕ್ಷಮೆ ಕೇಳಿ ಗೌತಮ್ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಮತ್ತೊಂದೆಡೆ, ಜೈದೇವ್&zwnj;ಗೆ ಮೋಸ ಮಾಡಿ ದಿಯಾ ಆಸ್ತಿ ಮತ್ತು ವೀಸಾದೊಂದಿಗೆ ಪರಾರಿಯಾಗಿದ್ದು, ದೇಶ ಬಿಟ್ಟು ಹೋಗಲು ಯತ್ನಿಸಿದ ಜೈದೇವ್&zwnj;ನನ್ನು ಪೊಲೀಸರು ಬಂಧಿಸಲು ಬಂದಿದ್ದಾರೆ.&lt;img&gt;&lt;p&gt;ಅಮೃತಧಾರೆ (Amruthadhaare serial) ಸದ್ಯ ಮುಗಿಯುವ ಹಂತ ತಲುಪಿದಂತಿದೆ. ಏಕೆಂದರೆ ಇದಾಗಲೇ ಶಕುಂತಲಾ ಬೀದಿ ಪಾಲಾಗಿದ್ದು, ಗೌತಮ್​ನ ಮನೆಯಲ್ಲಿ ಆಸರೆ ಪಡೆದಿದ್ದಾಳೆ. ಅಮ್ಮ ತನಗೆ ಏನೆಲ್ಲಾ ಕಂಟಕ ತಂದಿದ್ದರೂ ಗೌತಮ್​ ತಾಯಿಯೆಂಬ ಮಮಕಾರದಿಂದ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಕ್ಷಮಯಾಧರಿತ್ರಿ ಭೂಮಿಕಾ ಕೂಡ ಅತ್ತೆಯನ್ನು ಕ್ಷಮಿಸಿದ್ದಾಳೆ.&lt;/p&gt;&lt;img&gt;&lt;p&gt;ತನ್ನಿಂದ ಆಗಿರೋ ತಪ್ಪನ್ನು ಕ್ಷಮಿಸುವಂತೆ ಶಕುಂತಲಾ ಗೌತಮ್​ ಕಾಲಿಗೆ ಬಿದ್ದಿದ್ದಾಳೆ. ಅಷ್ಟಕ್ಕೂ ಅವಳಿಗೆ ಈಗ ಬೇರೆ ಏನೂ ಗತಿಯನೇ ಇಲ್ಲ ಎನ್ನಿ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ, ಸೀರಿಯಲ್​ ರೋಚಕ ಟ್ವಿಸ್ಟ್​ ಪಡೆದುಕೊಂಡಿದೆ. ಜೈದೇವ್​ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿಕೊಂಡು ಅದನ್ನು ತೀರಿಸಲು ಸಾಧ್ಯವಾಗದ ಕಾರಣ, ದೇಶ ಬಿಟ್ಟು ಹೋಗುವ ಪ್ಲ್ಯಾನ್ ಮಾಡಿದ್ದ. ಅದಕ್ಕಾಗಿ ಎರಡು ವೀಸಾ ಕೂಡ ತರಿಸಿ ಇಟ್ಟಿದ್ದ.&lt;/p&gt;&lt;img&gt;&lt;p&gt;ಆದರೆ ಆಗಿದ್ದೇ ಬೇರೆ. ಜೈದೇವನ ಆಸ್ತಿಯ ಮೇಲಷ್ಟೇ ಕಣ್ಣು ಹಾಕಿದ್ದ ದಿಯಾಗೆ ಈಗ ತನ್ನ ಹೆಸರಿನಲ್ಲಿ ಒಂದುಷ್ಟು ಆಸ್ತಿ ಸಿಕ್ಕಿದೆ, ಜೊತೆಗೆ ವಿದೇಶ ಹೋಗಲು ಜೈದೇವನಿಂದ ವೀಸಾನೂ ರೆಡಿಯಾಗಿದೆ.&lt;/p&gt;&lt;img&gt;&lt;p&gt;ರಾತ್ರೋರಾತ್ರಿ ಎಲ್ಲವನ್ನೂ ತೆಗೆದುಕೊಂಡು ದಿಯಾ ಮನೆಬಿಟ್ಟು ಹೋಗಿದ್ದಾಳೆ. ಇಲ್ಲಿಯವರೆಗೆ ತಾನು ಆ ಮನೆಯಲ್ಲಿ ಇದ್ದುಕೊಂಡು ಜೈದೇವನನ್ನು ಪ್ರೀತಿಸುವ ನಟನೆ ಮಾಡಿದ ದಿಯಾ, ನಟನೆ ಮುಗಿಸಿ ಗುಡ್​ಬೈ ಹೇಳಿದ್ದಾಳೆ. ಜೈದೇವನಿಗೆ ದಿಕ್ಕೇ ತೋಚದಾಗಿದೆ. ಅಷ್ಟರಲ್ಲಿಯೇ ಪೊಲೀಸರು ಬಂದು ದೇಶ ಬಿಟ್ಟು ಹೋಗುವ ಪ್ಲ್ಯಾನ್ ಮಾಡಿದ ಕಾರಣಕ್ಕಾಗಿ ಜೈದೇವನನ್ನು ಅರೆಸ್ಟ್ ಮಾಡಲು ಬಂದಿದ್ದಾರೆ.&lt;/p&gt;&lt;img&gt;&lt;p&gt;ಆದ್ದರಿಂದ ಇರೋ ಹೆಂಡ್ತಿಯನ್ನು ಬಿಟ್ಟು ದಿಯಾಳಂಥವಳನ್ನು ನಂಬಿಕೊಂಡ್ರೆ ಹೀಗೇ ಆಗೋದು ಎಂದು ಕಮೆಂಟಿಗರು ಗಂಡಸರಿಗೆ ಬುದ್ಧಿ ಮಾತು ಹೇಳುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhare-serial-diya-left-home-taking-all-amount-and-jewellery-suc-gksyyin"/>
        </item>
        <item>
            <title><![CDATA[ಈ ಆಹಾರಗಳು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವುದರ ಜೊತೆಗೆ…ಆರೋಗ್ಯವಾಗಿರಿಸುತ್ತೆ]]></title>
            <link>https://kannada.asianetnews.com/health-life/must-add-these-summer-food-to-keep-your-body-healthy-and-cool/articleshow-bdgc54p</link>
            <guid isPermaLink="true">https://kannada.asianetnews.com/health-life/must-add-these-summer-food-to-keep-your-body-healthy-and-cool/articleshow-bdgc54p</guid>
            <pubDate>Wed, 29 Apr 2026 11:49:33 +0530</pubDate>
            <description><![CDATA[&lt;p&gt;Summer food: ಇವತ್ತಿನ ಬೇಸಿಗೆಯ ಬಿಸಿ ಹೇಗಿದೆ ಅಂದ್ರೆ, ಪ್ರತಿ ನಿಮಿಷಕ್ಕೊಮ್ಮೆ ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಆಗಿ ಇಡಲೇಬೇಕು. ಅಷ್ಟೇ ಅಲ್ಲ ದೇಹವನ್ನು ತಂಪಾಗಿಡಲು ಸಹಾಯ ಮಾಡುವಂತಹ ಆಹಾರಗಳನ್ನು ಸಹ ಸೇವಿಸಬೇಕು. ಅಂತಹ ಆಹಾರಗಳು ಯಾವುವು ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfz5tdbxdn7gt3h80fhhm9j,imgname-vegetables-1776504990123.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ದೇಹವನ್ನು ತಂಪಾಗಿಡಲು ಸೂಕ್ತವಾದ ಆಹಾರಗಳು&lt;/strong&gt;&lt;/h2&gt;&lt;p&gt;ಬೇಸಿಗೆ ಬಿಸಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಆಯಾಸ, ಕಿರಿಕಿರಿ, ಬೆವರುವುದು, ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ ನಂತಹ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ತಂಪಾದ ನೀರು ಕುಡಿಯುವುದು ಸಾಕಾಗುವುದಿಲ್ಲ; ನಿಮ್ಮ ಆಹಾರದಲ್ಲಿ ಸರಿಯಾದ ತಂಪಾಗಿಸುವ ಮತ್ತು ನೀರಿನಂಶವಿರುವ ಆಹಾರಗಳನ್ನು ಸೇರಿಸುವುದು ಸಹ ಅತ್ಯಗತ್ಯ. ಈ ಆಹಾರಗಳು ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಡಲು ಸೂಕ್ತವಾದ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.&lt;/p&gt;&lt;p&gt;&lt;strong&gt;ಸೌತೆಕಾಯಿ&lt;/strong&gt;&lt;/p&gt;&lt;p&gt;ಸೌತೆಕಾಯಿಯು ಸುಮಾರು 95% ನೀರಿನಿಂದ ಕೂಡಿದೆ. ಇದು ದೇಹವನ್ನು ಹೈಡ್ರೇಟ್ ಆಗಿಡುತ್ತದೆ ಮತ್ತು ಹೊಟ್ಟೆಯನ್ನು ತಂಪಾಗಿಸುತ್ತದೆ. ಸೌತೆಕಾಯಿಯನ್ನು ಪ್ರತಿದಿನ ಸಲಾಡ್ ಅಥವಾ ರೈತಾ ರೂಪದಲ್ಲಿ ತಿನ್ನುವುದರಿಂದ ಶಾಖದಿಂದ ಪರಿಹಾರ ಸಿಗುತ್ತದೆ.&lt;/p&gt;&lt;p&gt;&lt;strong&gt;ಕಲ್ಲಂಗಡಿ&lt;/strong&gt;&lt;/p&gt;&lt;p&gt;ಕಲ್ಲಂಗಡಿಯನ್ನು ಬೇಸಿಗೆಯ ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ನೀರು, ನಾರು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹವನ್ನು ತಂಪಾಗಿಡುವುದು ಮಾತ್ರವಲ್ಲದೆ ನಿರ್ಜಲೀಕರಣವನ್ನು ತಡೆಯುತ್ತದೆ.&lt;/p&gt;&lt;p&gt;&lt;strong&gt;ಮೊಸರು ಮತ್ತು ಮಜ್ಜಿಗೆ&lt;/strong&gt;&lt;/p&gt;&lt;p&gt;ಮೊಸರು ಮತ್ತು ಅದರ ಮಜ್ಜಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಮಧ್ಯಾಹ್ನ ಊಟದ ಜೊತೆಗೆ ಮಜ್ಜಿಗೆ ಕುಡಿಯುವುದರಿಂದ ಶಾಖದ ಹೊಡೆತವನ್ನು ತಡೆಗಟ್ಟಲು ಸಹಾಯವಾಗುತ್ತದೆ.&lt;/p&gt;&lt;p&gt;&lt;strong&gt;ಎಳನೀರು&lt;/strong&gt;&lt;/p&gt;&lt;p&gt;ಎಳ ನೀರನ್ನು ನೈಸರ್ಗಿಕ ಶಕ್ತಿ ಪಾನೀಯವೆಂದು ಪರಿಗಣಿಸಲಾಗುತ್ತದೆ. ಇದು ಎಲೆಕ್ಟ್ರೋಲೈಟ್&zwnj;ಗಳಲ್ಲಿ ಸಮೃದ್ಧವಾಗಿದೆ ಮತ್ತು ದೇಹವನ್ನು ಬೇಗನೆ ತಂಪಾಗಿಸುತ್ತದೆ. ಪ್ರತಿದಿನ ಒಂದು ಲೋಟ ತೆಂಗಿನ ನೀರನ್ನು ಕುಡಿಯುವುದು ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿ.&lt;/p&gt;&lt;p&gt;&lt;strong&gt;ಪುದೀನ&lt;/strong&gt;&lt;/p&gt;&lt;p&gt;ಪುದೀನವು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಪುದೀನ ಚಟ್ನಿ, ಜಲ್ಜೀರಾ ಅಥವಾ ಪುದೀನ ನೀರನ್ನು ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಉಲ್ಲಾಸದಿಂದ ಇರುತ್ತದೆ.&lt;/p&gt;&lt;p&gt;&lt;strong&gt;ಸೌತೆಕಾಯಿ ಮತ್ತು ಸೋರೆಕಾಯಿ&lt;/strong&gt;&lt;/p&gt;&lt;p&gt;ಸೌತೆಕಾಯಿ ಮತ್ತು ಸೋರೆಕಾಯಿ ಎರಡೂ ನೀರಿನಿಂದ ಸಮೃದ್ಧವಾಗಿರುವ ಮತ್ತು ಹಗುರವಾದ ತರಕಾರಿಗಳಾಗಿವೆ. ಅವು ಜೀರ್ಣಿಸಿಕೊಳ್ಳಲು ಸುಲಭ ಮತ್ತು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.&lt;/p&gt;&lt;p&gt;&lt;strong&gt;ಆಮ್ ಪನ್ನಾ&lt;/strong&gt;&lt;/p&gt;&lt;p&gt;ಹಸಿ ಮಾವಿನಿಂದ ತಯಾರಿಸಿದ ಆಮ್ ಪನ್ನಾ ಶಾಖದ ಹೊಡೆತವನ್ನು ತಡೆಗಟ್ಟುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದು ದೇಹದಲ್ಲಿ ಉಪ್ಪು ಮತ್ತು ನೀರಿನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.&lt;/p&gt;&lt;p&gt;&lt;strong&gt;ಏನನ್ನು ತಿನ್ನಬಾರದು?&lt;/strong&gt;&lt;/p&gt;&lt;p&gt;ಬೇಸಿಗೆಯಲ್ಲಿ ಅತಿಯಾಗಿ ಹುರಿದ, ಮಸಾಲೆಯುಕ್ತ ಆಹಾರಗಳು, ಕೆಫೀನ್ ಮತ್ತು ಆಲ್ಕೋಹಾಲ್ ಅನ್ನು ತಪ್ಪಿಸುವುದು ಉತ್ತಮ, ಏಕೆಂದರೆ ಇವು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಬೇಸಿಗೆಯಲ್ಲಿ ನೀವು ಆರೋಗ್ಯವಾಗಿ, ಸಕ್ರಿಯವಾಗಿ ಮತ್ತು ತಂಪಾಗಿರಲು ಬಯಸಿದರೆ, ಈ ಆಹಾರಗಳನ್ನು ಅವಾಯ್ಡ್ ಮಾಡಿ, ಮೇಲೆ ತಿಳಿಸಿದ ಆಹಾರಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಮರೆಯದಿರಿ. ಸರಿಯಾಗಿ ತಿನ್ನುವುದರಿಂದ ಶಾಖದ ಪರಿಣಾಮಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/health-life/must-add-these-summer-food-to-keep-your-body-healthy-and-cool/articleshow-bdgc54p"/>
        </item>
        <item>
            <title><![CDATA[ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ಸೌಲಭ್ಯ, ಮೇಕ್‌ ಮೈ ಟ್ರಿಪ್‌ ಮೂಲಕ ಆನ್‌ಲೈನ್‌ನಲ್ಲೇ ಡ್ಯೂಟಿ-ಫ್ರೀ, ಪ್ರೀ-ಬುಕಿಂಗ್!]]></title>
            <link>https://kannada.asianetnews.com/travel/adani-airport-holdings-limited-partners-with-makemytrip-to-launch-online-duty-free-pre-booking-gdp/articleshow-aynfw9v</link>
            <guid isPermaLink="true">https://kannada.asianetnews.com/travel/adani-airport-holdings-limited-partners-with-makemytrip-to-launch-online-duty-free-pre-booking-gdp/articleshow-aynfw9v</guid>
            <pubDate>Wed, 29 Apr 2026 11:38:23 +0530</pubDate>
            <description><![CDATA[ಅದಾನಿ ಏರ್&zwnj;ಪೋರ್ಟ್ ಹೋಲ್ಡಿಂಗ್ಸ್ ಲಿ. ಮತ್ತು ಮೇಕ್&zwnj; ಮೈ ಟ್ರಿಪ್ ಹೊಸ ಒಪ್ಪಂದ ಮಾಡಿಕೊಂಡಿವೆ. ಈ ಮೂಲಕ ಮಂಗಳೂರು ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು 'ಡ್ಯೂಟಿ-ಫ್ರೀ' ಉತ್ಪನ್ನಗಳನ್ನು ಆನ್&zwnj;ಲೈನ್&zwnj;ನಲ್ಲಿ ಮುಂಗಡವಾಗಿ ಕಾಯ್ದಿರಿಸಬಹುದು. ಇದು ಪ್ರಯಾಣಿಕರ ಸಮಯ ಉಳಿತಾಯ ಮಾಡುವುದಲ್ಲದೆ, ವಿಶೇಷ ರಿಯಾಯಿತಿಗಳನ್ನು ಸಹ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfn9wk9fq0gyjw73aqcc3nz6,imgname----------------------45--1769167801647.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕದಿಂದ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸುವವರಿಗೆ ಹಾಗೂ ವಿದೇಶದಿಂದ ಮರಳುವವರಿಗೆ ಒಂದು ಭರ್ಜರಿ ಸಿಹಿಸುದ್ದಿ. ವಿಮಾನ ನಿಲ್ದಾಣಗಳಲ್ಲಿ ಶಾಪಿಂಗ್ ಮಾಡುವುದನ್ನು ಇನ್ನಷ್ಟು ಸುಲಭವಾಗಿಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ 'ಅದಾನಿ ಏರ್&zwnj;ಪೋರ್ಟ್ ಹೋಲ್ಡಿಂಗ್ಸ್ ಲಿ.' (ಎಎಎಚ್&zwnj;ಎಲ್&zwnj;) ಮತ್ತು ಪ್ರಮುಖ ಆನ್&zwnj;ಲೈನ್ ಟ್ರಾವೆಲ್ ಕಂಪನಿ 'ಮೇಕ್&zwnj; ಮೈ ಟ್ರಿಪ್' ಹೊಸ ಒಪ್ಪಂದವೊಂದನ್ನು ಮಾಡಿಕೊಂಡಿವೆ.&lt;/p&gt;&lt;h2&gt;'ಆನ್&zwnj;ಲೈನ್ ಡ್ಯೂಟಿ-ಫ್ರೀ ಪ್ರೀ-ಬುಕಿಂಗ್' ಸೇವೆ&lt;/h2&gt;&lt;p&gt;ಈ ಪಾಲುದಾರಿಕೆಯ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 'ಆನ್&zwnj;ಲೈನ್ ಡ್ಯೂಟಿ-ಫ್ರೀ ಪ್ರೀ-ಬುಕಿಂಗ್' ಸೇವೆಯನ್ನು ಆರಂಭಿಸಲಾಗಿದೆ.ಇದರ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನವೇ ಅಥವಾ ನಿರ್ಗಮಿಸುವ ಮೊದಲು ತಮ್ಮ ನೆಚ್ಚಿನ 'ಡ್ಯೂಟಿ-ಫ್ರೀ' ಉತ್ಪನ್ನಗಳನ್ನು ಮೇಕ್&zwnj; ಮೈ ಟ್ರಿಪ್&zwnj; ಆ್ಯಪ್ ಅಥವಾ ವೆಬ್&zwnj;ಸೈಟ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು. ಕರ್ನಾಟಕದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಅದಾನಿ ಗ್ರೂಪ್ ನಿರ್ವಹಿಸುತ್ತಿರುವ ಏರ್&zwnj;ಪೋರ್ಟ್&zwnj;ಗಳಲ್ಲಿ ಈ ಸೌಲಭ್ಯ ಲಭ್ಯವಿರಲಿದೆ.&lt;/p&gt;&lt;h2&gt;100ಕ್ಕೂ ಹೆಚ್ಚು ಬ್ರ್ಯಾಂಡ್&zwnj;&lt;/h2&gt;&lt;p&gt;ಪ್ರಯಾಣಿಕರು ಈಗ 10ಕ್ಕೂ ಹೆಚ್ಚು ವಿಭಾಗಗಳಲ್ಲಿ ಲಭ್ಯವಿರುವ 100ಕ್ಕೂ ಅಧಿಕ ಬ್ರ್ಯಾಂಡ್&zwnj;ಗಳ, 14,000ಕ್ಕೂ ಹೆಚ್ಚು ಉತ್ಪನ್ನಗಳನ್ನು ಆನ್&zwnj;ಲೈನ್&zwnj;ನಲ್ಲಿ ವೀಕ್ಷಿಸಬಹುದು. ಆನ್&zwnj;ಲೈನ್ ಮೂಲಕ ಪ್ರೀ-ಬುಕ್ ಮಾಡುವವರಿಗೆ ವಿಶೇಷ ರಿಯಾಯಿತಿಗಳು ಹಾಗೂ ಆಫರ್&zwnj;ಗಳು ಕೂಡ ಸಿಗಲಿವೆ. ಈ ಮೂಲಕ ಪ್ರಯಾಣಿಕರು ತಮ್ಮ ಶಾಪಿಂಗ್ ಅನ್ನು ಮೊದಲೇ ಪ್ಲಾನ್ ಮಾಡಿಕೊಳ್ಳಬಹುದು.&lt;/p&gt;&lt;h2&gt;ಸುಲಭ ಶಾಪಿಂಗ್, ಉಳಿಯಲಿದೆ ಸಮಯ&lt;/h2&gt;&lt;p&gt;ವಿಮಾನ ನಿಲ್ದಾಣಗಳಲ್ಲಿ ವಸ್ತುಗಳನ್ನು ಹುಡುಕುತ್ತಾ ಸರತಿಯ ಸಾಲಿನಲ್ಲಿ ನಿಲ್ಲುವ ಕಿರಿಕಿರಿಯನ್ನು ತಪ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪ್ರಯಾಣಿಕರು ತಮ್ಮ ಪ್ರವಾಸವನ್ನು ಯೋಜಿಸುವಾಗಲೇ ಶಾಪಿಂಗ್ ಕೂಡ ಮಾಡುವುದರಿಂದ, ಏರ್&zwnj;ಪೋರ್ಟ್&zwnj;ನಲ್ಲಿ ಚೆಕ್-ಇನ್ ಹಾಗೂ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಯ ಉಳಿತಾಯವಾಗಲಿದೆ.&lt;/p&gt;&lt;p&gt;ಆನ್&zwnj;ಲೈನ್&zwnj;ನಲ್ಲಿ ಬುಕ್ ಮಾಡಿದ ಉತ್ಪನ್ನಗಳನ್ನು ಅದಾನಿ ನಿರ್ವಹಿಸುವ ವಿಮಾನ ನಿಲ್ದಾಣಗಳ ಪಿಕ್-ಅಪ್ ಪಾಯಿಂಟ್&zwnj;ಗಳಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದು.&lt;/p&gt;&lt;p&gt;ಪ್ರಸ್ತುತ ಅದಾನಿ ಏರ್&zwnj;ಪೋರ್ಟ್ ಹೋಲ್ಡಿಂಗ್ಸ್ ಲಿ. ಮುಂಬೈ, ಅಹಮದಾಬಾದ್, ಲಕ್ನೋ, ಮಂಗಳೂರು, ಜೈಪುರ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಲ್ಲಿ ಡ್ಯೂಟಿ-ಫ್ರೀ ಮಳಿಗೆಗಳನ್ನು ನಿರ್ವಹಿಸುತ್ತಿದೆ. ಮೇಕ್&zwnj; ಮೈ ಟ್ರಿಪ್ ಜೊತೆಗಿನ ಈ ಒಪ್ಪಂದವು ಭಾರತೀಯ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮತ್ತಷ್ಟು ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಲು ನೆರವಾಗಲಿದೆ.&lt;/p&gt;&lt;p&gt;&quot;ಮೇಕ್ ಮೈ&zwnj; ಟ್ರಿಪ್ ಮೂಲಕ ಡ್ಯೂಟಿ-ಫ್ರೀ ಪ್ರೀ-ಬುಕಿಂಗ್ ಸೌಲಭ್ಯವನ್ನು ಒದಗಿಸುವ ಮೂಲಕ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದ್ದೇವೆ. ಪ್ರಯಾಣಿಕರು ಮುಂಚಿತವಾಗಿಯೇ ಶಾಪಿಂಗ್ ಪ್ಲಾನ್ ಮಾಡಿಕೊಳ್ಳಬಹುದು, ವಿಮಾನ ನಿಲ್ದಾಣದಲ್ಲಿ ಸಮಯ ಉಳಿಸಬಹುದು ಮತ್ತು ವಿಶೇಷ ಆಫರ್&zwnj;ಗಳನ್ನು ಪಡೆಯಬಹುದು&quot; ಎಂದು ಅದಾನಿ ಏರ್&zwnj;ಪೋರ್ಟ್ ಹೋಲ್ಡಿಂಗ್ಸ್ ಲಿ.ನ ಸಿಇಒ ಅರುಣ್ ಬನ್ಸಾಲ್ ಹೇಳಿದ್ದಾರೆ.&lt;/p&gt;&lt;p&gt;&quot;ಈ ಒಪ್ಪಂದವು ನಮ್ಮ 'ಕನೆಕ್ಟೆಡ್ ಟ್ರಿಪ್ಸ್' ತಂತ್ರದ ಒಂದು ಭಾಗವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಡ್ಯೂಟಿ-ಫ್ರೀ ಖರೀದಿಗಳನ್ನು ಮುಂಚಿತವಾಗಿಯೇ ಕಾಯ್ದಿರಿಸುವ ಮೂಲಕ ಸ್ಮಾರ್ಟ್ ಆಗಿ ಪ್ಲಾನ್ ಮಾಡಬಹುದು, ಉತ್ತಮ ಆಯ್ಕೆಗಳನ್ನು ಮಾಡಬಹುದು ಮತ್ತು ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು&quot; ಎಂದು ಮೇಕ್&zwnj; ಮೈ ಟ್ರಿಪ್&zwnj;ನ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸೇವೆಯಡಿ ಹಂತ - ಹಂತವಾಗಿ ಇನ್ನಷ್ಟು ಹೊಸ ಸೌಲಭ್ಯಗಳನ್ನು ಪರಿಚಯಿಸಲು ಎರಡು ಸಂಸ್ಥೆಗಳು ತೀರ್ಮಾನಿಸಿವೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/travel/adani-airport-holdings-limited-partners-with-makemytrip-to-launch-online-duty-free-pre-booking-gdp/articleshow-aynfw9v"/>
        </item>
        <item>
            <title><![CDATA[ನೀವು ಖರೀದಿಸುವ ಮಟನ್ ತಾಜಾವೇ? ಮೋಸ ಹೋಗುವ ಮೊದಲು ಈ 4 ವಿಧಾನದಿಂದ ಸುಲಭವಾಗಿ ಪತ್ತೆಹಚ್ಚಿ!]]></title>
            <link>https://kannada.asianetnews.com/gallery/food/how-to-identify-fresh-vs-stale-mutton-simple-tips-to-avoid-food-poisoning-kvn-mfwkzft</link>
            <guid isPermaLink="true">https://kannada.asianetnews.com/gallery/food/how-to-identify-fresh-vs-stale-mutton-simple-tips-to-avoid-food-poisoning-kvn-mfwkzft</guid>
            <pubDate>Wed, 29 Apr 2026 11:36:15 +0530</pubDate>
            <description><![CDATA[&lt;p&gt;ಮಾಂಸ: ತಾಜಾ ಮಟನ್ ಮತ್ತು ಹಳಸಿದ ಮಾಂಸವನ್ನು ಗುರುತಿಸುವುದು ಹೇಗೆಂದು ತಿಳಿಯುವುದು ಬಹಳ ಮುಖ್ಯ. ನಿಮ್ಮ ಆರೋಗ್ಯ ಕೆಡದಂತೆ ಇರಬೇಕಾದರೆ, ಮಟನ್ ಖರೀದಿಸುವ ಮೊದಲು ಈ ಸಣ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5etvj3qthhhq9vmdc8kxjwz,imgname-red-meat-health-risks-1758213294199.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಂಸ: ತಾಜಾ ಮಟನ್ ಮತ್ತು ಹಳಸಿದ ಮಾಂಸವನ್ನು ಗುರುತಿಸುವುದು ಹೇಗೆಂದು ತಿಳಿಯುವುದು ಬಹಳ ಮುಖ್ಯ. ನಿಮ್ಮ ಆರೋಗ್ಯ ಕೆಡದಂತೆ ಇರಬೇಕಾದರೆ, ಮಟನ್ ಖರೀದಿಸುವ ಮೊದಲು ಈ ಸಣ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.&lt;/p&gt;&lt;img&gt;&lt;p&gt;ಭಾನುವಾರ ಬಂತೆಂದರೆ ಮಟನ್&zwnj;ಗೆ ಬೇಡಿಕೆ ಹೆಚ್ಚು. ಆದರೆ, ನೀವು ಖರೀದಿಸುವ ಮಟನ್ ತಾಜಾವೇ? ಕೆಲವು ವ್ಯಾಪಾರಿಗಳು ಹಳಸಿದ ಮಾಂಸಕ್ಕೆ ಬಣ್ಣ ಬೆರೆಸಿ ಮಾರುತ್ತಾರೆ. ಇದು ಫುಡ್ ಪಾಯ್ಸನ್&zwnj;ಗೆ ಕಾರಣವಾಗಬಹುದು. ಹೀಗಾಗಿ ಮಟನ್ ಖರೀದಿಸುವಾಗ ಎಚ್ಚರವಿರಲಿ.&lt;/p&gt;&lt;img&gt;&lt;p&gt;ಮಟನ್ ಅಂಗಡಿಗೆ ಹೋದಾಗ ಮೊದಲು ಮಾಂಸದ ಬಣ್ಣ ನೋಡಿ. ತಾಜಾ ಮಟನ್ ಯಾವಾಗಲೂ ತಿಳಿ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಹೊಳೆಯುತ್ತದೆ. ಮಾಂಸವು ಕಡು ಬಣ್ಣಕ್ಕೆ ತಿರುಗಿದ್ದರೆ, ಕಪ್ಪು ಕಲೆಗಳಿದ್ದರೆ ಅಥವಾ ಬಣ್ಣ ಕಳೆದುಕೊಂಡಿದ್ದರೆ ಅದು ಹಳಸಿದ ಮಾಂಸ ಎಂದರ್ಥ.&lt;/p&gt;&lt;img&gt;&lt;p&gt;ಮಟನ್ ತಾಜಾವಾಗಿದೆಯೇ ಎಂದು ತಿಳಿಯಲು ಅದನ್ನು ಮುಟ್ಟಿ ನೋಡುವುದು ಉತ್ತಮ. ತಾಜಾ ಮಟನ್ ಸ್ವಲ್ಪ ಗಟ್ಟಿಯಾಗಿ, ಸ್ಪ್ರಿಂಗ್&zwnj;ನಂತೆ ಇರುತ್ತದೆ. ಬೆರಳಿನಿಂದ ಒತ್ತಿದಾಗ ಗುಂಡಿ ತಕ್ಷಣವೇ ತುಂಬಬೇಕು. ಮೆತ್ತಗಿದ್ದರೆ ಅಥವಾ ಜಿಗುಟಾಗಿದ್ದರೆ ಅದು ಹಳಸಿದ ಮಾಂಸ.&lt;/p&gt;&lt;img&gt;&lt;p&gt;ಮಾಂಸಕ್ಕೆ ಒಂದು ಸಹಜ ವಾಸನೆ ಇರುತ್ತದೆ. ಆದರೆ ಅದು ಅಸಹ್ಯವಾಗಿರುವುದಿಲ್ಲ. ನೀವು ಖರೀದಿಸುವ ಮಟನ್&zwnj;ನಿಂದ ವಿಚಿತ್ರವಾದ, ಹುಳಿ ಅಥವಾ ಅಮೋನಿಯಾದಂತಹ ವಾಸನೆ ಬರುತ್ತಿದ್ದರೆ, ಅದು ಖಂಡಿತವಾಗಿಯೂ ಹಾಳಾಗಿದೆ. ಮಾಂಸದಿಂದ ನೀರು ಸೋರುತ್ತಿದ್ದರೆ ಅದು ಹಳೆಯ ಮಾಂಸ.&lt;/p&gt;&lt;img&gt;&lt;p&gt;ಮಟನ್ ಖರೀದಿಸುವಾಗ ಅಂಗಡಿಯ ಸ್ವಚ್ಛತೆಯನ್ನೂ ಗಮನಿಸಿ. ಪರವಾನಗಿ ಇರುವ, ಸ್ವಚ್ಛವಾದ ಸ್ಥಳಗಳಲ್ಲಿ ಮಾತ್ರ ಮಾಂಸವನ್ನು ಖರೀದಿಸಿ. ಧೂಳು ಮತ್ತು ನೊಣಗಳಿರುವ ಕಡೆ ಖರೀದಿಸಬೇಡಿ. ಖರೀದಿಸಿದ ನಂತರ ಬೇಗನೆ ಅಡುಗೆ ಮಾಡಿ ಅಥವಾ ಫ್ರಿಜ್&zwnj;ನಲ್ಲಿಡಿ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/food/how-to-identify-fresh-vs-stale-mutton-simple-tips-to-avoid-food-poisoning-kvn-mfwkzft"/>
        </item>
        <item>
            <title><![CDATA[ಬೇಸಿಗೆಯಲ್ಲಿ ಈ ತಪ್ಪು ಮಾಡ್ಬೇಡಿ, ಗ್ಯಾಸ್ ಸಿಲಿಂಡರ್‌ನಂತೆ ಫ್ರಿಡ್ಜ್ ಕೂಡ ಸ್ಫೋಟಗೊಳ್ಳಬಹುದು!]]></title>
            <link>https://kannada.asianetnews.com/gallery/life/is-your-refrigerator-safe-important-dos-and-donts-for-using-a-fridge-in-extreme-heat-q3xspnb</link>
            <guid isPermaLink="true">https://kannada.asianetnews.com/gallery/life/is-your-refrigerator-safe-important-dos-and-donts-for-using-a-fridge-in-extreme-heat-q3xspnb</guid>
            <pubDate>Wed, 29 Apr 2026 11:33:35 +0530</pubDate>
            <description><![CDATA[&lt;p&gt;Fridge safety tips summer: ಈ ಬಿಸಿಲಿಗೆ ಫ್ರಿಡ್ಜ್ ಎಲ್ಲರಿಗೂ ಅವಶ್ಯಕ. ಆದರೆ ಹೆಚ್ಚುತ್ತಿರುವ ತಾಪಮಾನದ ನಡುವೆ ಫ್ರಿಡ್ಜ್&zwnj;ಗಳು ಸ್ಫೋಟಗೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ. ನಾವು ಮಾಡುವ ಸಣ್ಣಪುಟ್ಟ ತಪ್ಪು, ನಿರ್ಲಕ್ಷ್ಯ ಈ ಅಪಾಯಕಾರಿ ಅನಾಹುತಕ್ಕೆ ಕಾರಣವಾಗಬಹುದು. &amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jmpe4pp3cc8jz107ksgga017,imgname-untitled-design---2025-02-22t142905.013.jpg" type="image/jpeg" height="390" width="690"/>
            <content:encoded><![CDATA[&lt;p&gt;Fridge safety tips summer: ಈ ಬಿಸಿಲಿಗೆ ಫ್ರಿಡ್ಜ್ ಎಲ್ಲರಿಗೂ ಅವಶ್ಯಕ. ಆದರೆ ಹೆಚ್ಚುತ್ತಿರುವ ತಾಪಮಾನದ ನಡುವೆ ಫ್ರಿಡ್ಜ್&zwnj;ಗಳು ಸ್ಫೋಟಗೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ. ನಾವು ಮಾಡುವ ಸಣ್ಣಪುಟ್ಟ ತಪ್ಪು, ನಿರ್ಲಕ್ಷ್ಯ ಈ ಅಪಾಯಕಾರಿ ಅನಾಹುತಕ್ಕೆ ಕಾರಣವಾಗಬಹುದು. &amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್&zwnj;ಗಳ ಮಾದರಿಯಲ್ಲೇ ಫ್ರಿಡ್ಜ್&zwnj;ಗಳು ಕೂಡ ಸ್ಫೋಟಗೊಳ್ಳುತ್ತಿರುವ ಸುದ್ದಿಯನ್ನು ನಾವು ಕೇಳುತ್ತಿದ್ದೇವೆ. ಇದಕ್ಕೆ ಪ್ರಮುಖ ಕಾರಣ ಫ್ರಿಡ್ಜ್ ಅನ್ನು ಸರಿಯಾದ ಸ್ಥಳದಲ್ಲಿ ಇಡದಿರುವುದು ಮತ್ತು ಮಿತಿಮೀರಿದ ಬಳಕೆ. ಫ್ರಿಡ್ಜ್ ಹಿಂಭಾಗದಲ್ಲಿರುವ ಸಂಕೋಚಕ (Compressor) ಬಿಸಿಯಾದಾಗ ಅದಕ್ಕೆ ಸರಿಯಾದ ಗಾಳಿ ಸಿಗದಿದ್ದರೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.&lt;/p&gt;&lt;img&gt;&lt;p&gt;&lt;strong&gt;ಸರಿಯಾದ ಅಂತರವಿರಲಿ&lt;/strong&gt;ಫ್ರಿಡ್ಜ್ ಅನ್ನು ಎಂದಿಗೂ ಗೋಡೆಗೆ ಅಂಟಿಸಿ ಇಡಬಾರದು. ಗೋಡೆ ಮತ್ತು ಫ್ರಿಡ್ಜ್ ನಡುವೆ ಕನಿಷ್ಠ 6 ಇಂಚುಗಳಷ್ಟು ಜಾಗ ಇರಬೇಕು. ಇದರಿಂದ ಗಾಳಿಯ ಸಂಚಾರ (Air circulation) ಸುಲಲಿತವಾಗಿ ನಡೆದು ಕಂಪ್ರೆಸರ್ ತಂಪಾಗಿರುತ್ತದೆ.&lt;/p&gt;&lt;img&gt;&lt;p&gt;ಫ್ರಿಡ್ಜ್&zwnj;ನಲ್ಲಿ ವಸ್ತುಗಳನ್ನು ಕಿಕ್ಕಿರಿದು ತುಂಬಿಸಬಾರದು. ಗಾಳಿ ಆಡಲು ಸ್ವಲ್ಪ ಜಾಗವಿದ್ದಾಗ ಮಾತ್ರ ಕೂಲಿಂಗ್ ಎಲ್ಲಾ ಕಡೆ ಸಮಾನವಾಗಿ ಹರಡುತ್ತದೆ. ಇಲ್ಲದಿದ್ದರೆ ಕೂಲಿಂಗ್ ಕಡಿಮೆಯಾಗಿ ಆಹಾರ ಪದಾರ್ಥಗಳು ಬೇಗನೆ ಹಾಳಾಗುತ್ತವೆ.&lt;/p&gt;&lt;img&gt;&lt;p&gt;ಮಳೆ ಬೀಳುವಾಗ ಅಥವಾ ಗುಡುಗು ಸಹಿತ ಮಿಂಚು ಬರುವಾಗ ವಿದ್ಯುತ್ ಏರಿಳಿತದ (Power fluctuations) ಕಾರಣದಿಂದ ಬೋರ್ಡ್&zwnj;ಗಳು ಸುಟ್ಟುಹೋಗುವ ಅಪಾಯವಿರುತ್ತದೆ. ಅಂತಹ ಸಮಯದಲ್ಲಿ ಫ್ರಿಡ್ಜ್ ಸ್ವಿಚ್ ಆಫ್ ಮಾಡಿ ಪ್ಲಗ್ ತೆಗೆಯುವುದು ಅತ್ಯಂತ ಸುರಕ್ಷಿತ.&lt;/p&gt;&lt;img&gt;&lt;p&gt;ಫ್ರೀಜರ್&zwnj;ನಲ್ಲಿ ಐಸ್ ಹೆಚ್ಚಾಗಿ ಗಡ್ಡೆ ಕಟ್ಟಿದಾಗ ಚಾಕು ಅಥವಾ ಸ್ಕ್ರೂ ಡ್ರೈವರ್&zwnj;ನಿಂದ ಚುಚ್ಚಬಾರದು. ಇದರಿಂದ ಗ್ಯಾಸ್ ಪೈಪ್&zwnj;ಗಳು ಲೀಕ್ ಆಗಿ ಫ್ರಿಡ್ಜ್ ಹಾಳಾಗುತ್ತದೆ. ಕೇವಲ 'ಡಿಫ್ರಾಸ್ಟ್' (Defrost) ಬಟನ್ ಒತ್ತಿ ಐಸ್ ಕರಗುವವರೆಗೆ ಕಾಯಬೇಕು.&lt;/p&gt;&lt;img&gt;&lt;p&gt;ಉಪ್ಪಿನಕಾಯಿ, ಹುಣಸೆಹಣ್ಣಿನಂತಹ ವಸ್ತುಗಳನ್ನು ಫ್ರಿಡ್ಜ್&zwnj;ನಲ್ಲಿ ಇಡುವ ಅಗತ್ಯವಿಲ್ಲ. ಇವುಗಳನ್ನು ಇಡುವುದರಿಂದ ಫ್ರಿಡ್ಜ್&zwnj;ನಲ್ಲಿ ಕೆಟ್ಟ ವಾಸನೆ ಬರುವುದು ಮಾತ್ರವಲ್ಲದೆ, ಅನಗತ್ಯವಾಗಿ ಜಾಗವೂ ವ್ಯರ್ಥವಾಗುತ್ತದೆ.&lt;/p&gt;&lt;p&gt;ಈ ಸರಳ ಕ್ರಮಗಳನ್ನು ಪಾಲಿಸುವ ಮೂಲಕ ಬೇಸಿಗೆಯಲ್ಲಿ ನಿಮ್ಮ ಫ್ರಿಡ್ಜ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಿ ಮತ್ತು ವಿದ್ಯುತ್ ಬಿಲ್ ಅನ್ನು ಕೂಡ ಉಳಿಸಿ.&amp;nbsp;&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/is-your-refrigerator-safe-important-dos-and-donts-for-using-a-fridge-in-extreme-heat-q3xspnb"/>
        </item>
        <item>
            <title><![CDATA[ನೀವು ಹಸಿವು ಎಂದೊಡನೆ ನಿಮ್ಮಿಷ್ಟದ ಊಟ ಆರ್ಡರ್: ಸ್ವಿಗ್ಗಿಯಿಂದ ಹೊಸ ಕ್ರಾಂತಿ, 'ಬಿಲ್ಡರ್ಸ್ ಕ್ಲಬ್' ಶುರು!]]></title>
            <link>https://kannada.asianetnews.com/gallery/business/swiggy-launches-ai-builders-club-soon-your-food-will-be-ordered-automatically-gdp-naxgckv</link>
            <guid isPermaLink="true">https://kannada.asianetnews.com/gallery/business/swiggy-launches-ai-builders-club-soon-your-food-will-be-ordered-automatically-gdp-naxgckv</guid>
            <pubDate>Wed, 29 Apr 2026 10:40:49 +0530</pubDate>
            <description><![CDATA[&lt;p&gt;ಸ್ವಿಗ್ಗಿ ಸಂಸ್ಥೆಯು 'ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದ್ದು, ಡೆವಲಪರ್&zwnj;ಗಳು ಎಐ ಏಜೆಂಟ್&zwnj;ಗಳನ್ನು ನಿರ್ಮಿಸಲು ಆಹ್ವಾನಿಸಿದೆ. ಈ ತಂತ್ರಜ್ಞಾನವು ಗ್ರಾಹಕರ ಇಷ್ಟಗಳನ್ನು ಅರಿತು, 'ನನಗೆ ಹಸಿವಾಗ್ತಿದೆ' ಎಂದು ಟೈಪ್ ಮಾಡಿದರೆ ಸಾಕು, ತಾನಾಗಿಯೇ ಊಟವನ್ನು ಆರ್ಡರ್ ಮಾಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqbs47zx9sm0vpskfjezqyab,imgname-swiggy-1777438171133.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ವಿಗ್ಗಿ ಸಂಸ್ಥೆಯು 'ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದ್ದು, ಡೆವಲಪರ್&zwnj;ಗಳು ಎಐ ಏಜೆಂಟ್&zwnj;ಗಳನ್ನು ನಿರ್ಮಿಸಲು ಆಹ್ವಾನಿಸಿದೆ. ಈ ತಂತ್ರಜ್ಞಾನವು ಗ್ರಾಹಕರ ಇಷ್ಟಗಳನ್ನು ಅರಿತು, 'ನನಗೆ ಹಸಿವಾಗ್ತಿದೆ' ಎಂದು ಟೈಪ್ ಮಾಡಿದರೆ ಸಾಕು, ತಾನಾಗಿಯೇ ಊಟವನ್ನು ಆರ್ಡರ್ ಮಾಡಲಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ನಾವು ಸಾಮಾನ್ಯವಾಗಿ ಯಾವುದಾದರೂ ಅಗ್ರಿಗೇಟರ್&zwnj; ಆ್ಯಪ್ ಓಪನ್ ಮಾಡಿ, ನಮಗೆ ಬೇಕಾದ ಊಟವನ್ನು ಹುಡುಕಿ ಆರ್ಡರ್ ಮಾಡುತ್ತೇವೆ. ಆದರೆ ಮುಂದಿನ ದಿನಗಳಲ್ಲಿ ನೀವು ಕೇವಲ &quot;ನನಗೆ ಹಸಿವಾಗ್ತಿದೆ&quot; ಎಂದು ಟೈಪ್ ಮಾಡಿದರೆ ಸಾಕು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನವೇ ನಿಮ್ಮಿಷ್ಟದ ಊಟವನ್ನು ಸ್ವಿಗ್ಗಿಯಲ್ಲಿ ತಾನಾಗಿಯೇ ಆರ್ಡರ್ ಮಾಡಲಿದೆ!ಇಂಥಹದ್ದೊಂದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸ್ವಿಗ್ಗಿ ಸಂಸ್ಥೆ ಇದೀಗ ಸಾಫ್ಟ್&zwnj;ವೇರ್ ಡೆವಲಪರ್&zwnj;ಗಳಿಗೆ, ಸ್ಟಾರ್ಟ್&zwnj;ಅಪ್&zwnj;ಗಳಿಗೆ ಮತ್ತು ಐಟಿ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡಿದ್ದು, ಇದಕ್ಕಾಗಿ 'ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದೆ.&lt;/p&gt;&lt;img&gt;&lt;p&gt;ಸರಳವಾಗಿ ಹೇಳಬೇಕೆಂದರೆ, ಸ್ವಿಗ್ಗಿ ತನ್ನ ಒಳಗಿನ 'ಸಾಫ್ಟ್&zwnj;ವೇರ್ ಸಿಸ್ಟಮ್' ಅನ್ನು (ಇದನ್ನು ತಾಂತ್ರಿಕ ಭಾಷೆಯಲ್ಲಿ ಎಪಿಐ ಮತ್ತು ಎಂಸಿಪಿ ಎನ್ನುತ್ತಾರೆ) ಹೊರಗಿನ ಡೆವಲಪರ್&zwnj;ಗಳಿಗೆ ಬಳಸಲು ನೀಡುತ್ತಿದೆ. ಆರಂಭಿಕ ಹಂತದಲ್ಲಿ 3 ಎಂಸಿಪಿ ಸರ್ವರ್&zwnj;ಗಳು ಮತ್ತು 18ಕ್ಕೂ ಹೆಚ್ಚು ಎಪಿಐ ಟೂಲ್&zwnj;ಗಳನ್ನು ನೀಡಲಾಗುತ್ತದೆ.&lt;/p&gt;&lt;p&gt;ಇದನ್ನು ಬಳಸಿಕೊಂಡು ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳು ಹೊಸ 'ಎಐ ಏಜೆಂಟ್' ಅಥವಾ ಸ್ಮಾರ್ಟ್ ಅಸಿಸ್ಟೆಂಟ್&zwnj;ಗಳನ್ನು ಸೃಷ್ಟಿಸಬಹುದು. ಈ ಎಐ ಏಜೆಂಟ್&zwnj;ಗಳು ಆಯಾ ಗ್ರಾಹಕರ ಅಭ್ಯಾಸಗಳನ್ನು ಗಮನಿಸಿ ನಂತರ ಮನುಷ್ಯರಂತೆಯೇ ಯೋಚಿಸಿ, ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡುವುದು, ಇನ್&zwnj;ಸ್ಟಾಮಾರ್ಟ್&zwnj;ನಲ್ಲಿ ದಿನಸಿ ತರಿಸುವುದು ಅಥವಾ ಡೈನ್&zwnj;ಔಟ್ ಮೂಲಕ ಹೋಟೆಲ್&zwnj;ನಲ್ಲಿ ಟೇಬಲ್ ಬುಕ್ ಮಾಡುವಂತಹ ಕೆಲಸಗಳನ್ನು ಮಾಡಲಿವೆ.&lt;/p&gt;&lt;img&gt;&lt;p&gt;ಸ್ವಿಗ್ಗಿಯ ಈ ಬಿಲ್ಡರ್ಸ್ ಕ್ಲಬ್ ಸಂಪೂರ್ಣವಾಗಿ ಅಮೆಜಾನ್&zwnj;ನ ಎಂಟರ್&zwnj;ಪ್ರೈಸ್-ಗ್ರೇಡ್ ಎಐ ತಂತ್ರಜ್ಞಾನದ (ಎಡಬ್ಲ್ಯೂಎಸ್&zwnj;) ಮೇಲೆ ಕಾರ್ಯನಿರ್ವಹಿಸಲಿದೆ. ಡೆವಲಪರ್&zwnj;ಗಳಿಗೆ ಸುಲಭವಾಗಿ ತಂತ್ರಜ್ಞಾನವನ್ನು ಡೆವಲಪ್&zwnj; ಮಾಡಲು ಮೂರು ಪ್ರಮುಖ ಸೌಲಭ್ಯಗಳನ್ನು ಸಹ ನೀಡಲಾಗಿದೆ.&lt;/p&gt;&lt;p&gt;&lt;strong&gt;ಅಮೆಜಾನ್&zwnj; ಬೆಡ್&zwnj;ರಾಕ್&zwnj;:&lt;/strong&gt; ಇದು ಮೆಟಾ, ಮಿಸ್ಟ್ರಲ್ ಎಐನಂತಹ ಜಗತ್ತಿನ ಟಾಪ್ ಎಐ ತಂತ್ರಜ್ಞಾನಗಳನ್ನು ಒಂದೇ ಕಡೆ ಒದಗಿಸಲಿದೆ.&lt;/p&gt;&lt;p&gt;&lt;strong&gt;ಎಡಬ್ಲ್ಯೂಎಸ್&zwnj; ಟ್ರೈನಿಯಮ್:&lt;/strong&gt; ಇವು ಎಐಗಾಗಿ ವಿನ್ಯಾಸಗೊಳಿಸಲಾದ ವಿಶೇಷ 'ಚಿಪ್'ಗಳಾಗಿದ್ದು, ಎಐ ತರಬೇತಿ ವೆಚ್ಚದಲ್ಲಿ ಶೇ. 50ರಷ್ಟು ಹಣ ಉಳಿಸುತ್ತವೆ. ಅಷ್ಟೇ ಅಲ್ಲದೆ ಶೇ. 30-40ರಷ್ಟು ವೇಗವಾಗಿ ಕೆಲಸ ಮಾಡುತ್ತವೆ.&lt;/p&gt;&lt;p&gt;&lt;strong&gt;ಅಮೆಜಾನ್&zwnj; ಏಜೆಂಟ್&zwnj;ಕೋರ್&zwnj;: &lt;/strong&gt;ಡೆವಲಪರ್&zwnj;ಗಳು ಸುಲಭವಾಗಿ ಎಐ ಏಜೆಂಟ್&zwnj;ಗಳನ್ನು (ಸ್ಮಾರ್ಟ್ ಅಸಿಸ್ಟೆಂಟ್) ನಿರ್ಮಿಸಲು ಸಹಾಯ ಮಾಡುವ ಸಾಫ್ಟ್&zwnj;ವೇರ್ ಇದಾಗಿದೆ.&lt;/p&gt;&lt;img&gt;&lt;p&gt;ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಿಗ್ಗಿಯ ಸಿಟಿಒ ಮಧುಸೂಧನ್ ರಾವ್, &quot;ನಾವು ಡೆವಲಪರ್&zwnj;ಗಳಿಗೆ ನಮ್ಮ ತಂತ್ರಜ್ಞಾನವನ್ನು ನೀಡುತ್ತಿದ್ದೇವೆ. ಅವರು ಸ್ವಿಗ್ಗಿಯ ಮೇಲೆ ದೊಡ್ಡ ಮಟ್ಟದ ಎಐ ಅಪ್ಲಿಕೇಶನ್&zwnj;ಗಳನ್ನು ನಿರ್ಮಿಸಬಹುದು. ಈ ಮೂಲಕ ಸ್ವಿಗ್ಗಿ ಕೇವಲ ಒಂದು ಆ್ಯಪ್ ಆಗಿ ಉಳಿಯದೆ, ಹೊಸ ತಂತ್ರಜ್ಞಾನಗಳು ಹುಟ್ಟುವ 'ಎಕೋಸಿಸ್ಟಮ್' ಆಗಿ ಬದಲಾಗುತ್ತಿದೆ,&rdquo; ಎಂದರು.&lt;/p&gt;&lt;p&gt;ಎ&quot;ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್ ಎಐ-ಚಾಲಿತ ಕಾಮರ್ಸ್&zwnj;ನ ಮುಂದಿನ ಹಂತವಾಗಿದೆ. ಡೆವಲಪರ್&zwnj;ಗಳಿಗೆ ಮಿತಿಯಿಲ್ಲದೆ ಹೊಸ ಆವಿಷ್ಕಾರಗಳನ್ನು ಮಾಡಲು ನಾವು ಅಮೆಜಾನ್ ಬೆಡ್&zwnj;ರಾಕ್ ಮತ್ತು ಟ್ರೈನಿಯಮ್ ಮೂಲಕ ಮೂಲಸೌಕರ್ಯವನ್ನು ಒದಗಿಸುತ್ತಿದ್ದೇವೆ&quot; ಎಂದು ಡಬ್ಲ್ಯೂಎಸ್&zwnj; ಇಂಡಿಯಾದ ಅಧ್ಯಕ್ಷ ಸಂದೀಪ್ ದತ್ತಾ ತಿಳಿಸಿದರು.&lt;/p&gt;&lt;img&gt;&lt;p&gt;ತಂತ್ರಜ್ಞಾನದ ಬಗ್ಗೆ ಅರಿವಿರುವ ಡೆವಲಪರ್&zwnj;ಗಳು, ಸ್ಟಾರ್ಟ್&zwnj;ಅಪ್&zwnj;ಗಳು ಮತ್ತು ಕಂಪನಿಗಳು mcp.swiggy.com/builders ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಸ್ವಿಗ್ಗಿ ಇದನ್ನು ಪರಿಶೀಲಿಸಿ ತನ್ನ ವೇದಿಕೆಗೆ ಪ್ರವೇಶವನ್ನು ನೀಡುತ್ತದೆ. ಆಯ್ಕೆಯಾದ ಟೆಕ್ಕಿಗಳಿಗೆ ಸ್ವಿಗ್ಗಿಯಿಂದಲೇ ನೇರ ಎಂಜಿನಿಯರಿಂಗ್ ಬೆಂಬಲ, ಜೊತೆಯಾಗಿ ಬ್ರ್ಯಾಂಡಿಂಗ್ ಮಾಡುವ ಅವಕಾಶ ಮತ್ತು ವ್ಯಾಪಾರ ಬೆಳೆಸಲು ಪಾಲುದಾರಿಕೆ ಕೂಡ ಸಿಗಲಿದೆ.&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/swiggy-launches-ai-builders-club-soon-your-food-will-be-ordered-automatically-gdp-naxgckv"/>
        </item>
        <item>
            <title><![CDATA[ಯಾರೂ ಊಹಿಸದ ಸ್ಥಳದಲ್ಲಿ ನಟಿ Sanjana Burli ಹನಿಮೂನ್​: ಸ್ಥಳ ರಿವೀಲ್ ಮಾಡಲ್ಲ ಎಂದಿದ್ದು ಇದಕ್ಕೇನಾ]]></title>
            <link>https://kannada.asianetnews.com/gallery/relationship/puttakkana-makkalu-sneha-sanjana-burli-honeymoon-in-anzania-mnemba-suc-gwtifw3</link>
            <guid isPermaLink="true">https://kannada.asianetnews.com/gallery/relationship/puttakkana-makkalu-sneha-sanjana-burli-honeymoon-in-anzania-mnemba-suc-gwtifw3</guid>
            <pubDate>Tue, 28 Apr 2026 19:55:13 +0530</pubDate>
            <description><![CDATA['ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ, ವೈದ್ಯ ಸಮರ್ಥ ಚೆನ್ನಗಿರಿ ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ತಮ್ಮ ಮಧುಚಂದ್ರಕ್ಕಾಗಿ ಆಫ್ರಿಕಾದ ತಾಂಜೇನಿಯಾ ಬಳಿಯಿರುವ ವಿಶೇಷ ಮ್ನೆಂಬಾ ದ್ವೀಪಕ್ಕೆ ತೆರಳಿದ್ದು, ಅದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqa7hm8459p6fcjanmcgn5vj,imgname-sanjana-burli-04-1777386180868.jpg" type="image/jpeg" height="390" width="690"/>
            <content:encoded><![CDATA['ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ, ವೈದ್ಯ ಸಮರ್ಥ ಚೆನ್ನಗಿರಿ ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ತಮ್ಮ ಮಧುಚಂದ್ರಕ್ಕಾಗಿ ಆಫ್ರಿಕಾದ ತಾಂಜೇನಿಯಾ ಬಳಿಯಿರುವ ವಿಶೇಷ ಮ್ನೆಂಬಾ ದ್ವೀಪಕ್ಕೆ ತೆರಳಿದ್ದು, ಅದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.&lt;img&gt;&lt;p&gt;ನಟಿ ಸಂಜನಾ ಬುರ್ಲಿ ಅರ್ಥಾತ್​ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಮೇಡಂ ಸ್ನೇಹಾ, ಹಾಗೂ ಗಂಧದ ಗುಡಿ (Gandhada Gudi) ಸೀರಿಯಲ್​ ಚಂದನಾ ಆಗಿ ಮಿಂಚಿದ್ದ ನಟಿ ಇದೀಗ ದಾಂಪತ್ಯ ಜೀವನ ಎಂಜಾಯ್&zwnj; ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಮರ್ಥ ಚೆನ್ನಗಿರಿ ಎಂಬುವವರ ಜೊತೆ ಸಂಜನಾ ಬುರ್ಲಿ ಮದುವೆ ಆಗಿದ್ದಾರೆ. ಮದುವೆಗಾಗಿ ಸೀರಿಯಲ್​ನಿಂದ ಹೊರಕ್ಕೆ ಬಂದಿರೋ ನಟಿ ಇದೀಗ ಹನಿಮೂನ್&zwnj;ಗೆ ಹೋಗಿದ್ದಾರೆ.&lt;/p&gt;&lt;img&gt;&lt;p&gt;ಏಷ್ಯಾನೆಟ್&zwnj; ಸುವರ್ಣ ಜೊತೆಗಿನ ಸಂದರ್ಶನದ ವೇಳೆ ಹನಿಮೂನ್&zwnj; ಸ್ಥಳದ ಬಗ್ಗೆ ಪತಿ ಕೇಳಲು ಹೋದಾಗ, ಅಡ್ಡ ತಡೆದಿದ್ದ ಸಂಜನಾ, ಈಗಲೇ ರಿವೀಲ್&zwnj; ಮಾಡಬೇಡಿ ಎಂದಿದ್ದರು. ಅಲ್ಲಿಗೆ ತಾವು ಎಲ್ಲಿಗೆ ಹೋಗುತ್ತೇವೆ ಎಂದು ಅವರು ಗುಟ್ಟಾಗಿ ಇಟ್ಟಿದ್ದರು. ಇದರಿಂದ ಅದೊಂದು ವಿಶೇಷ ಸ್ಥಳ ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದು, ಅದೀಗ ನಿಜವಾಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಈ ಜೋಡಿ ಹನಿಮೂನ್&zwnj;ಗೆ ಹೋಗಿರುವುದು ಆಫ್ರಿಕಾದ ತಾಂಜೇನಿಯಾ ಬಳಿ ಇರುವ ಮ್ನೆಂಬಾ ದ್ವೀಪಕ್ಕೆ. (Tanzania Mnemba) ಅದರ ಫೋಟೋಗಳನ್ನು ನಟಿ ಶೇರ್&zwnj; ಮಾಡಿಕೊಂಡಿದ್ದಾರೆ. ಸ್ಫಟಿಕದಂತೆ ಹೊಳೆಯುವ ಬಿಳಿ ಮರಳು ಮತ್ತು ತಿಳಿ ನೀರು ಬಣ್ಣದ ಸಮುದ್ರದ ನೀರಿಗೆ ಹೆಸರುವಾಸಿಯಾಗಿದೆ ಈ ದ್ವೀಪ.&lt;/p&gt;&lt;img&gt;&lt;p&gt;ಈ ದ್ವೀಪದ ವಿಶೇಷತೆ ಏನೆಂದ್ರೆ, ಇಲ್ಲಿ ಇದು ಸಂರಕ್ಷಿತ ಪ್ರದೇಶವಾಗಿದ್ದು, ಹವಳದ ಬಂಡೆಗಳಿವೆ. ಸ್ಕೂಬಾ ಡೈವಿಂಗ್&zwnj;ಗೆ ವಿಶ್ವದ ಅತ್ಯುತ್ತಮ ತಾಣಗಳಲ್ಲಿ ಒಂದು ಎಂದು ಇದನ್ನು ಬಣ್ಣಿಸಲಾಗಿದೆ. ಇಲ್ಲಿಯ ವಾಸ ಸಕತ್&zwnj; ದುಬಾರಿ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಇನ್ನು ಸಂಜನಾ ಅವರ ಪತಿ ಕುರಿತು ಹೇಳುವುದಾದರೆ, ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್&zwnj;ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/puttakkana-makkalu-sneha-sanjana-burli-honeymoon-in-anzania-mnemba-suc-gwtifw3"/>
        </item>
        <item>
            <title><![CDATA['ಲೋ ಅರ್ಜುನ, ನಿಂಗೆ ಹಾರ್ಟ್​ ಸರ್ಜನ್​ ಸರ್ಟಿಫಿಕೇಟ್​ ಕೊಟ್ಟವರು ಯಾರು?' Karna Serial ಫ್ಯಾನ್ಸ್​ ಆಕ್ರೋಶ]]></title>
            <link>https://kannada.asianetnews.com/gallery/tv-talk/karna-serial-arjun-who-is-heart-surgeon-not-knowing-nidhis-heart-trolled-suc-xi648af</link>
            <guid isPermaLink="true">https://kannada.asianetnews.com/gallery/tv-talk/karna-serial-arjun-who-is-heart-surgeon-not-knowing-nidhis-heart-trolled-suc-xi648af</guid>
            <pubDate>Tue, 28 Apr 2026 22:40:02 +0530</pubDate>
            <description><![CDATA[ಕರ್ಣ ಸೀರಿಯಲ್&zwnj;ನಲ್ಲಿ, ಅಕ್ಕ ನಿತ್ಯಾಳ ಪ್ರೀತಿಗಾಗಿ ತಂಗಿ ನಿಧಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಅರ್ಜುನ್&zwnj;ನನ್ನು ಮದುವೆಯಾಗಲು ಒಪ್ಪಿದ್ದಾಳೆ. ಆದರೆ, ಹಾರ್ಟ್ ಸರ್ಜನ್ ಆಗಿರುವ ಅರ್ಜುನ್&zwnj;ಗೆ ನಿಧಿಯ ಮನಸ್ಸಿನ ದುಃಖ ಅರ್ಥವಾಗದಿರುವುದು ನೆಟ್ಟಿಗರ ಟ್ರೋಲ್&zwnj;ಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqagyfph859wkwb136z3hz2k,imgname-karna-serial-1777396039377.jpg" type="image/jpeg" height="390" width="690"/>
            <content:encoded><![CDATA[ಕರ್ಣ ಸೀರಿಯಲ್&zwnj;ನಲ್ಲಿ, ಅಕ್ಕ ನಿತ್ಯಾಳ ಪ್ರೀತಿಗಾಗಿ ತಂಗಿ ನಿಧಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಅರ್ಜುನ್&zwnj;ನನ್ನು ಮದುವೆಯಾಗಲು ಒಪ್ಪಿದ್ದಾಳೆ. ಆದರೆ, ಹಾರ್ಟ್ ಸರ್ಜನ್ ಆಗಿರುವ ಅರ್ಜುನ್&zwnj;ಗೆ ನಿಧಿಯ ಮನಸ್ಸಿನ ದುಃಖ ಅರ್ಥವಾಗದಿರುವುದು ನೆಟ್ಟಿಗರ ಟ್ರೋಲ್&zwnj;ಗೆ ಕಾರಣವಾಗಿದೆ.&lt;img&gt;&lt;p&gt;ಕರ್ಣ ಸೀರಿಯಲ್​​ನಲ್ಲಿ ಸದ್ಯ ನಿತ್ಯಾ ಮತ್ತು ನಿಧಿಯ ನಡುವಿನ ತೊಳಲಾಟದಲ್ಲಿ ನಿತ್ಯಾ ಗೆಲುವು ಸಾಧಿಸಿದ್ದಾಳೆ. ಕರ್ಣನ ಮೇಲೆ ತನಗೆ ಲವ್​ ಆಗಿರುವ ವಿಷಯವನ್ನು ಅವಳು ತಂಗಿ ನಿಧಿ ಎದುರಿಗೆ ಹೇಳಿಕೊಂಡು ಬಿಟ್ಟಿದ್ದಾಳೆ.&lt;/p&gt;&lt;img&gt;&lt;p&gt;ತನ್ನ ಅಕ್ಕನಿಗೆ ತನ್ನ ಲವ್​ ವಿಷ್ಯ ಹೇಳೋಣ ಎಂದುಕೊಂಡು ಕಾತರದಿಂದ ನಿಧಿ ಕಾಯುತ್ತಿದ್ದಳು. ಆದರೆ ಅದಕ್ಕೂ ಮುಂಚೆ ನಿತ್ಯಾ ತನಗೆ ಕರ್ಣನ ಮೇಲೆ ಲವ್​ ಆಗಿರೋ ವಿಷ್ಯ ತಿಳಿಸಿಬಿಟ್ಟಿದ್ದರಿಂದ ನಿಧಿ ಅಕ್ಕನಿಗಾಗಿ ತ್ಯಾಗ ಮಾಡಲು ಸಿದ್ಧ ಆಗಿದ್ದಾಳೆ.&lt;/p&gt;&lt;img&gt;&lt;p&gt;ನಿಧಿ ಮತ್ತು ಅರ್ಜುನ್​ ಮದುವೆ ಮಾತುಕತೆ ನಡೆಯುತ್ತಿರುವ ಕಾರಣ, ಅವನನ್ನು ಮದುವೆಯಾಗಲು ತಾನು ಸಿದ್ಧ ಎಂದು ನಿಧಿ ಹೇಳಿಬಿಟ್ಟಿದ್ದಾಳೆ. ಇದನ್ನು ಕೇಳಿ ಕರ್ಣನಿಗೆ ಶಾಕ್ ಆಗಿದೆ.&lt;/p&gt;&lt;img&gt;&lt;p&gt;ನಿತ್ಯಾ ಅಳುತ್ತಾ ಈ ವಿಷಯವನ್ನು ಹೇಳಿದರೂ, ಅದು ಅರ್ಜುನ್​ಗೆ ಗೊತ್ತೇ ಆಗಲಿಲ್ಲ. ನಿಧಿ ಮದುವೆಗೆ ಒಪ್ಪಿದ್ದು ನೋಡಿ ಖುಷಿಯಿಂದ ಕುಣಿದಾಡಿದ್ದಾನೆ.&lt;/p&gt;&lt;img&gt;&lt;p&gt;ಹೇಳಿ ಕೇಳಿ ಅವನು ಹಾರ್ಟ್​ ಸರ್ಜನ್​. ನಿಧಿ ಅಳುತ್ತಾ ಇರುವುದನ್ನು ನೋಡದಿದ್ದರೂ ಅವಳ ಮುಖ ನೋಡಿಯಾದರೂ ಅವನಿಗೆ ಅವಳಿಗೆ ಈ ಮದುವೆ ಇಷ್ಟ ಇಲ್ಲ ಎನ್ನುವುದು ತಿಳಿಯಬೇಕಿತ್ತು. ಆದರೆ ನಿಧಿ ಅಳುತ್ತಾ ಇದ್ದರೂ ಅವನಿಗೆ ಗೊತ್ತೇ ಆಗಲಿಲ್ಲ.&lt;/p&gt;&lt;img&gt;&lt;p&gt;ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಅರ್ಜುನ್​ಗೆ ಹಾರ್ಟ್​ ಸರ್ಜನ್​ ಸರ್ಟಿಫಿಕೇಟ್​ ಕೊಟ್ಟವರು ಯಾರು, ಅವರನ್ನು ಎಳೆದುಕೊಂಡು ಬನ್ನಿ ಎಂದು ನೆಟ್ಟಿಗರು ತಮಾಷೆಯ ಕಮೆಂಟ್ಸ್​ ಮಾಡುತ್ತಿದ್ದಾರೆ. ನಿಧಿಯ ಮುಖ ನೋಡಿದ್ರೂ ಅವಳ ಹೃದಯದಲ್ಲಿ ತಾನಿಲ್ಲ ಎನ್ನುವುದು ಅವನಿಗೆ ಗೊತ್ತಾಗಲಿಲ್ಲ ಎಂದ ಮೇಲೆ ಅವನನ್ನು ಹಾರ್ಟ್​ ಸರ್ಜನ್​ ಎಂದು ರೋಲ್ ಕೊಡುವ ಅಗತ್ಯ ಏನಿತ್ತು ಎಂದೂ ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-arjun-who-is-heart-surgeon-not-knowing-nidhis-heart-trolled-suc-xi648af"/>
        </item>
        <item>
            <title><![CDATA[6 ಬೋಲ್ಡ್ ಪ್ಲಂಗಿಂಗ್ ಬ್ಲೌಸ್ ಡಿಸೈನ್‌ಗಳು: ಪಾರ್ಟಿಗಳಲ್ಲಿ ಲುಕ್ ಮಸ್ತಾಗಿರುತ್ತೆ!]]></title>
            <link>https://kannada.asianetnews.com/webstories/fashion/six-plunging-blouse-designs-to-elevate-your-party-look-gvd-kymy5tf</link>
            <guid isPermaLink="true">https://kannada.asianetnews.com/webstories/fashion/six-plunging-blouse-designs-to-elevate-your-party-look-gvd-kymy5tf</guid>
            <pubDate>Tue, 28 Apr 2026 23:44:32 +0530</pubDate>
            <description><![CDATA[&lt;p&gt;ಸೀರೆ ಮತ್ತು ಲೆಹೆಂಗಾಗಳ ಜೊತೆ ಪ್ಲಂಗಿಂಗ್ ನೆಕ್ ಬ್ಲೌಸ್ ಡಿಸೈನ್&zwnj;ಗಳು ಈಗ ಸಿಕ್ಕಾಪಟ್ಟೆ ಟ್ರೆಂಡ್&zwnj;ನಲ್ಲಿವೆ. ಈ ಡಿಸೈನ್&zwnj;ಗಳು ಪಾರ್ಟಿ ಲುಕ್&zwnj;ಗೆ ಗ್ಲಾಮರಸ್, ಮಾಡರ್ನ್ ಹಾಗೂ ಸ್ಟೈಲಿಶ್ ಟಚ್ ಕೊಡುತ್ತವೆ. ಇಲ್ಲಿವೆ 6 ಸುಂದರ ಬ್ಲೌಸ್ ಡಿಸೈನ್&zwnj;ಗಳು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jfempektbej4es8mrtdff508,imgname-Embroidered-Plunging-Neckline-Blouse-e-1734584515194.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/six-plunging-blouse-designs-to-elevate-your-party-look-gvd-kymy5tf"/>
        </item>
        <item>
            <title><![CDATA[ಅತ್ತೆ ಮದುವೆಗೆ ರೆಡಿಯಾಗ್ತಿದ್ದಾಳೆ ಪುಟಾಣಿ: ಇಲ್ಲಿವೆ ಸುಂದರ ಮೆಹಂದಿ ಡಿಸೈನ್ಸ್!]]></title>
            <link>https://kannada.asianetnews.com/webstories/fashion/simple-and-cute-mehndi-designs-for-kids-wedding-season-gvd-ay7fctv</link>
            <guid isPermaLink="true">https://kannada.asianetnews.com/webstories/fashion/simple-and-cute-mehndi-designs-for-kids-wedding-season-gvd-ay7fctv</guid>
            <pubDate>Tue, 28 Apr 2026 22:55:16 +0530</pubDate>
            <description><![CDATA[&lt;p&gt;ಮನೆಯಲ್ಲಿ ಅತ್ತೆಯ ಮದುವೆ ಸಂಭ್ರಮ. ಪುಟಾಣಿ ಮಗಳು ಮೆಹಂದಿ ಹಾಕಿಸಬೇಕು ಅಂತ ಹಠ ಮಾಡುತ್ತಿದ್ದಾಳಾ? ಯಾವ ಡಿಸೈನ್ ಹಾಕಿಸೋದು ಅಂತ ಗೊಂದಲದಲ್ಲಿದ್ದರೆ, ಇಲ್ಲಿವೆ 7 ಸುಲಭ ಹಾಗೂ ಹೊಸ ಮೆಹಂದಿ ಡಿಸೈನ್ಸ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq9zmmkbftc2vpass6zwzm0y,imgname-mehndi-designs-for-kids-simple-5-1777377890922.png" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/simple-and-cute-mehndi-designs-for-kids-wedding-season-gvd-ay7fctv"/>
        </item>
        <item>
            <title><![CDATA[2 ವರ್ಷದ ಮಗಳ ಪುಟ್ಟ ಪಾದಗಳಿಗೆ 6 ಹಗುರವಾದ ಬೆಳ್ಳಿ ಗೆಜ್ಜೆ ಡಿಸೈನ್ಸ್!]]></title>
            <link>https://kannada.asianetnews.com/webstories/fashion/lightweight-silver-anklet-designs-for-2-year-old-baby-girl-gvd-ugiu6bb</link>
            <guid isPermaLink="true">https://kannada.asianetnews.com/webstories/fashion/lightweight-silver-anklet-designs-for-2-year-old-baby-girl-gvd-ugiu6bb</guid>
            <pubDate>Tue, 28 Apr 2026 22:26:30 +0530</pubDate>
            <description><![CDATA[&lt;p&gt;2 ವರ್ಷದ ಹೆಣ್ಣು ಮಗುವಿಗೆ ಸ್ಟರ್ಲಿಂಗ್ ಸಿಲ್ವರ್ 925 ಗೆಜ್ಜೆ ಒಂದು ಸುಂದರ ಉಡುಗೊರೆ. ಮಕ್ಕಳ ಪುಟ್ಟ ಪಾದಗಳಿಗೆ ಫ್ಯಾನ್ಸಿ ಹಾಗೂ ಆಕರ್ಷಕ ಲುಕ್ ನೀಡುವ ಸ್ಟೋನ್ ವರ್ಕ್, ಗೆಜ್ಜೆ, ಮೀನಾಕಾರಿ ಮತ್ತು ಎಲೆ ವಿನ್ಯಾಸದ ಲೇಟೆಸ್ಟ್ ಡಿಸೈನ್&zwnj;ಗಳ ಬಗ್ಗೆ ಇಲ್ಲಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq9mbq72mrpfj4jcda0zxhgj,imgname-2-year-girl-silver-payal-1777366064354.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/lightweight-silver-anklet-designs-for-2-year-old-baby-girl-gvd-ugiu6bb"/>
        </item>
        <item>
            <title><![CDATA[ಬೇಸಿಗೆಯಲ್ಲಿ ತಿನ್ನಬೇಕಾದ 7 ಹಣ್ಣುಗಳು! ಇಲ್ದಿದ್ರೆ ಆರೋಗ್ಯಕ್ಕೆ ಹಾನಿ ಗ್ಯಾರಂಟಿ!]]></title>
            <link>https://kannada.asianetnews.com/webstories/food/summer-seven-fruits-you-must-eat-for-hydration-and-good-health-sat-ogzh8mr</link>
            <guid isPermaLink="true">https://kannada.asianetnews.com/webstories/food/summer-seven-fruits-you-must-eat-for-hydration-and-good-health-sat-ogzh8mr</guid>
            <pubDate>Tue, 28 Apr 2026 20:47:18 +0530</pubDate>
            <description><![CDATA[&lt;p&gt;ಬೇಸಿಗೆಯ ಬಿಸಿಲಿನಿಂದ ದೇಹವನ್ನು ತಂಪಾಗಿಡಲು ಮತ್ತು ಆರೋಗ್ಯವಾಗಿರಲು ಕೆಲವು ಹಣ್ಣುಗಳು ತುಂಬಾ ಸಹಕಾರಿ. ಅಂತಹ 7 ಪ್ರಮುಖ ಹಣ್ಣುಗಳ ಬಗ್ಗೆ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq71mg0efvb8pf3cspmbpy5q,imgname-fruits-1777279320078.jpg" type="image/jpeg" height="390" width="690"/>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/food/summer-seven-fruits-you-must-eat-for-hydration-and-good-health-sat-ogzh8mr"/>
        </item>
        <item>
            <title><![CDATA[Wing Earrings: ರೆಕ್ಕೆಯಂತಹ 5 ಟ್ರೆಂಡಿ ಇಯರಿಂಗ್ಸ್ ಧರಿಸಿ, ನಿಮ್ಮ ಲುಕ್ ಬದಲಿಸಿ]]></title>
            <link>https://kannada.asianetnews.com/webstories/fashion/latest-wing-earring-designs-for-a-stylish-look-gvd-codcbtg</link>
            <guid isPermaLink="true">https://kannada.asianetnews.com/webstories/fashion/latest-wing-earring-designs-for-a-stylish-look-gvd-codcbtg</guid>
            <pubDate>Tue, 28 Apr 2026 19:42:39 +0530</pubDate>
            <description><![CDATA[&lt;p&gt;ಡೈಲಿ ಯೂಸ್&zwnj;ಗೆ ಇಯರಿಂಗ್ಸ್ ಹಾಕಿಕೊಳ್ಳುವುದು ಸಾಮಾನ್ಯ. ಆದರೆ, ವಿಭಿನ್ನ ಡಿಸೈನ್&zwnj;ನ ಓಲೆಗಳು ನಿಮ್ಮ ಕಾನ್ಫಿಡೆನ್ಸ್ ಹೆಚ್ಚಿಸುತ್ತವೆ. ಇಲ್ಲಿವೆ 5 ಟ್ರೆಂಡಿ ವಿಂಗ್ ಇಯರಿಂಗ್ಸ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgps03gve97tx7jtesjm77s4,imgname-danglar-earring-1770290941467.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/latest-wing-earring-designs-for-a-stylish-look-gvd-codcbtg"/>
        </item>
        <item>
            <title><![CDATA[ಗಾಜಿನ ಬಳೆ ಬದಲು ಅಕ್ರಿಲಿಕ್ ಬಳೆ ಟ್ರೈ ಮಾಡಿ: ಟ್ರೆಂಡಿ ಲುಕ್ ನಿಮ್ಮದಾಗಿಸಿಕೊಳ್ಳಿ]]></title>
            <link>https://kannada.asianetnews.com/webstories/fashion/latest-acrylic-bangle-designs-for-a-modern-trendy-look-gvd-5xqk1zy</link>
            <guid isPermaLink="true">https://kannada.asianetnews.com/webstories/fashion/latest-acrylic-bangle-designs-for-a-modern-trendy-look-gvd-5xqk1zy</guid>
            <pubDate>Tue, 28 Apr 2026 19:26:48 +0530</pubDate>
            <description><![CDATA[&lt;p&gt;ಕೈಗಳಲ್ಲಿ ಗಾಜಿನ ಬಳೆಗಳನ್ನು ಧರಿಸುವ ಬದಲು, ನೀವು ಅಕ್ರಿಲಿಕ್ ಬಳೆಗಳನ್ನು ಧರಿಸಬಹುದು. ಇವು ಸದ್ಯ ಸಾಕಷ್ಟು ಟ್ರೆಂಡ್&zwnj;ನಲ್ಲಿವೆ. ಇವು ಗಾಜಿನಂತೆ ಹೊಳೆಯುವ ನೋಟವನ್ನು ನೀಡುತ್ತವೆ, ಆದರೆ ಹೆಚ್ಚು ಮಾಡರ್ನ್, ಚಂಕಿ ಮತ್ತು ಕ್ಲಾಸಿ ಲುಕ್ ಕೊಡುತ್ತವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpwf70z175b0hzqknqf53dsh,imgname-acrylic-bangles-design-1-1776924460001.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/latest-acrylic-bangle-designs-for-a-modern-trendy-look-gvd-5xqk1zy"/>
        </item>
    </channel>
</rss>
