<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 10 Aug 2026 00:28:51 +0530</lastBuildDate>
        <atom:link href="https://kannada.asianetnews.com/rss/life" rel="self" type="application/rss+xml"/>
        <item>
            <title><![CDATA[Silver Bracelet: ಫ್ಲೋರಲ್ ಸಿಲ್ವರ್ ಡಿಸೈನ್‌ನ ಆಕರ್ಷಕ ಆಯ್ಕೆಗಳು, ನೋಡಿದ್ರೆ ಫಿದಾ ಆಗ್ತೀರಾ!]]></title>
            <link>https://kannada.asianetnews.com/webstories/fashion/stunning-floral-silver-bracelet-designs-for-women-gvd-oi3qzfx</link>
            <guid isPermaLink="true">https://kannada.asianetnews.com/webstories/fashion/stunning-floral-silver-bracelet-designs-for-women-gvd-oi3qzfx</guid>
            <pubDate>Mon, 10 Aug 2026 00:28:45 +0530</pubDate>
            <description><![CDATA[ಈಗ ಫ್ಲೋರಲ್ ಸಿಲ್ವರ್ ಬ್ರೇಸ್&zwnj;ಲೆಟ್&zwnj;ಗಳು ಸಿಕ್ಕಾಪಟ್ಟೆ ಟ್ರೆಂಡ್&zwnj;ನಲ್ಲಿವೆ. ಈ ಸ್ಟೋರಿಯಲ್ಲಿ ಓಪನ್ ಆಲಿವ್ ಲೀಫ್, ಲೋಟಸ್ ಫ್ಲೋರಲ್ ಮತ್ತು ಫ್ಲೋರಲ್ ಬಡ್ಸ್ ಬ್ರೇಸ್&zwnj;ಲೆಟ್&zwnj;ನಂತಹ ಕೆಲವು ಆಕರ್ಷಕ ಹಾಗೂ ಫ್ಯಾಷನಬಲ್ ಡಿಸೈನ್&zwnj;ಗಳನ್ನು ನೀಡಲಾಗಿದೆ. ಈ ವಿನ್ಯಾಸಗಳು ಆಫೀಸ್ ವೇರ್&zwnj;ಗೂ ಸೂಪರ್ ಆಗಿ ಹೊಂದುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzk8k629bzgcshj3syvfj7dx,imgname-trendy-silver-bracelet-design-1786279204937.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stunning-floral-silver-bracelet-designs-for-women-gvd-oi3qzfx"/>
        </item>
        <item>
            <title><![CDATA[ಜೀರೋ TO ಹೀರೋ, ಮೈಸೂರಿನಿಂದ ಅಮೆರಿಕಾ.. 'ಧರೆಗೆ ದೊಡ್ಡಣ್ಣ' ಆಗಿರೋ ರಾಕಿಂಗ್ ಸ್ಟಾರ್ ಯಶ್ ಹಿಂದಿರೋ ಸೀಕ್ರೆಟ್ ಇದು!]]></title>
            <link>https://kannada.asianetnews.com/gallery/entertainment/grew-up-in-a-village-in-mysore-and-yash-became-a-globally-recognized-superstar-is-revealed-here-9618xa2</link>
            <guid isPermaLink="true">https://kannada.asianetnews.com/gallery/entertainment/grew-up-in-a-village-in-mysore-and-yash-became-a-globally-recognized-superstar-is-revealed-here-9618xa2</guid>
            <pubDate>Sun, 09 Aug 2026 23:46:26 +0530</pubDate>
            <description><![CDATA[&lt;p&gt;ಕರ್ನಾಟಕದ ಹಾಸನದಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದಿರುವ ಕನ್ನಡದ ಹುಡುಗ ಯಶ್ ಇಂದು ಹಾಲಿವುಡ್ ಸಿನಿಮಾ ನಟರತ ಲೆವಲ್&zwnj;ಗೆ ಬೆಳೆದುನಿಂತಿದ್ದಾರೆ. ಅವರು ಇಷ್ಟೊಂದು ಎತ್ತರಕ್ಕೆ ಬೆಳೆದು ನಿಂತಿದ್ದು ಹೇಗೆ? ಆ ಸೀಕ್ರೆಟ್ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzkrzfe7a4dg1nxasdyq8epb,imgname-rocking-star-yash--1--1786296384967.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಹಾಸನದಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದಿರುವ ಕನ್ನಡದ ಹುಡುಗ ಯಶ್ ಇಂದು ಹಾಲಿವುಡ್ ಸಿನಿಮಾ ನಟರತ ಲೆವಲ್&zwnj;ಗೆ ಬೆಳೆದುನಿಂತಿದ್ದಾರೆ. ಅವರು ಇಷ್ಟೊಂದು ಎತ್ತರಕ್ಕೆ ಬೆಳೆದು ನಿಂತಿದ್ದು ಹೇಗೆ? ಆ ಸೀಕ್ರೆಟ್ ಇಲ್ಲಿದೆ ನೋಡಿ..&lt;/p&gt;&lt;img&gt;&lt;p&gt;ಕರ್ನಾಟಕದ ಹಾಸನದಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದಿರುವ ಕನ್ನಡದ ಹುಡುಗ ಯಶ್ ನಾಟಕ ಹಾಗೂ ಸೀರಿಯಲ್ ಮೂಲಕ ತಮ್ಮ ಬಣ್ಣದ ಬದುಕು ಶುರುಮಾಡಿದ್ದಾರೆ. ಬಳಿಕ, ಸಿನಿಮಾದಲ್ಲಿ ಸಣ್ಣಪುಟ್ಟ ಪಾತ್ರ ಮಾಡಿ, ಮೊಗ್ಗಿನ ಮನಸ್ಸು ಸಿನಿಮಾದ ಪಾತ್ರದ ಮೂಲಕ ಸಿನಿಮಾರಂಗದಲ್ಲಿ ನೆಲೆ ಕಂಡುಕೊಂಡರು.&lt;/p&gt;&lt;p&gt;ಆ ಬಳಿಕ ಕನ್ನಡದ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತ, ಸ್ಟಾರ್ ನಟರಾಗಿ ಬೆಳೆಯುತ್ತಾ ಇದ್ದರು.&lt;/p&gt;&lt;img&gt;&lt;p&gt;ಮೊಗ್ಗಿನ ಮನಸ್ಸು ಸಿನಿಮಾ ಬಳಿಕ ಯಶ್ ನಟನೆಯ ಹಲವಾರು ಸಿನಿಮಾಗಳು ತೆರೆಗೆ ಬಂದು ನಟ ಯಶ್ ಅವರು ಸ್ಟಾರ್ ನಟರಾಗಿ ಗುರುತಿಸಿಕೊಳ್ಳುತ್ತ ಸಾಗಿದರು. ರಾಜಾಹುಲಿ, ಗೂಗ್ಲಿ, ಡ್ರಾಮಾ, ಮಿಸ್ಟರ್ &amp;amp; ಮಿಸಸ್ ರಾಮಾಚಾರಿ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟ ಯಶ್ ಅವರು ನಾಯಕರಾಗಿ ನಟಿಸಿ ಜನಪ್ರಿಯತೆ ಪಡೆದರು.&lt;/p&gt;&lt;img&gt;&lt;p&gt;ಮುಂದೆ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಪಾರ್ಟ್ 1 ಸಿನಿಮಾ ಮೂಲಕ ಯಶ್ ಪ್ಯಾನ್ ಇಂಡಿಯಾ ನಟರಾಗಿ ಗುರುತಿಸಿಕೊಂಡರು. ಬಳಿಕ ಬಂದ ಇದೇ ಜೋಡಿ ಯಶ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ &lsquo;ಕೆಜಿಎಫ್ ಪಾರ್ಟ್ 2&rsquo; ಮೂಲಕ ಯಶ್ ಜಾಗತಿಕವಾಗಿ ಗುರುತಿಸಿಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು.&lt;/p&gt;&lt;img&gt;&lt;p&gt;ಕೆಜಿಎಫ್ ಬಳಿಕ ನಟ ಯಶ್ ಅವರು ಕನ್ನಡ ಸಿನಿಮಾ ನಟ ಎಂಬ ಗುರುತಿನ ಜೊತೆ ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಪಟ್ಟ ಪಡೆದುಕೊಂಡು ಜಗತ್ತಿನ ತುಂಬಾ ಅಭಿಮಾನಿಗಳನ್ನು ಗಳಿಸಿಕೊಂಡರು. ಮುಂದಿನ ಹೆಜ್ಜೆ ಎಂಬಂತೆ, ನಟ ಯಶ್ ಅವರು ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ನಟ ಹಾಗೂ ನಿರ್ಮಾಪಕರಾಗಿ ಕೆಲಸ ಶುರ ಮಾಡಿಕೊಂಡರು.&lt;/p&gt;&lt;img&gt;&lt;p&gt;ಕಳೆದ 4-5 ವರ್ಷಗಳಿಂದ ನಟ ಯಶ್ ಅವರು ತಮ್ಮ ಬಿಗ್ ಬಜೆಟ್ ಹಾಗೂ ಜಾಗತಿಕ ಮಟ್ಟದ ಸಿನಿಮಾಗಳಾದ ರಾಮಾಯಣ ಹಾಗೂ ಟಾಕ್ಸಿಕ್ ಸಲುವಾಗಿ ಡೆಡಿಕೇಟೆಡ್ ಆಗಿ ಕೆಲಸ ಮಾಡಿದರು. ಸದ್ಯ ಯಶ್ ನಾಯಕತ್ವದ ಟಾಕ್ಸಿಕ್ ಹಾಗೂ ಯಶ್ ವಿಲನ್ ರೋಲ್&zwnj;ನಲ್ಲಿ ನಟಿಸಿರುವ ಭಾರಿ ಬಜೆಟ್ ಚಿತ್ರವಾದ ರಾಮಾಯಣ, ಈ ಎರಡೂ ಸಿನಿಮಾಗಳೂ ತೆರೆಗೆ ಬರಲು ಸಜ್ಜಾಗಿ ನಿಂತಿವೆ.&lt;/p&gt;&lt;img&gt;&lt;p&gt;ಯಶ್ ನಾಯಕತ್ವ ಹಾಗೂ ನಿರ್ಮಾಣ ಪಾಲುದಾರಿಕೆಯ &lsquo;ಟಾಕ್ಸಿಕ್&rsquo; ಚಿತ್ರದ ಟ್ರೇಲರ ನಿನ್ನೆ ಅಂದರೆ 8 ಆಗಸ್ಟ್ 2026ರಂದು ಬೆಂಗಳೂರಿನಲ್ಲಿ ಅದ್ದೂರಿ ಈವೆಂಟ್ ಮೂಲಕ ಲಾಂಚ್ ಆಗಿದೆ. ಈ ಈವೆಂಟ್&zwnj;ಅನ್ನು ನೋಡಿ ಇಡೀ ಜಗತ್ತು ನಿಬ್ಬೆರಗಾಗಿ ಯಶ್ ಅವರನ್ನು ಮೆಚ್ಚಿ ಕೊಂಡಾಡುತ್ತಿದೆ. ಕನ್ನಡ-ಇಂಗ್ಲಿಷ್ ಭಾಷೆಯಲ್ಲಿ ಸಿದ್ಧವಾಗಿರುವ ಟಾಕ್ಸಿಕ್ ಸಿನಿಮಾ ಇದೇ ತಿಂಗಳ ಕೊನೆಯ ವಾರದಲ್ಲಿ, ಅಂದರೆ 26 ಆಗಸ್ಟ್ 2026 ರಂದು ಜಗತ್ತಿನಾದ್ಯಂತ ಭಾರತ ಹಾಗೂ ವಿದೇಶದ ಹಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಲಿದೆ. ಈಗಾಗಲೇ ಭಾರೀ ನಿರೀಕ್ಷೆ ಸೃಷ್ಟಿ ಮಾಡಿದೆ.&lt;/p&gt;&lt;img&gt;&lt;p&gt;ಇನ್ನು, ನಿರ್ಮಾಪಕರಲ್ಲೂ ಒಬ್ಬರಾಗಿ, ಯಶ್ವ ನಟನೆಯ &lsquo;ರಾಮಾಯಣ&rsquo; ಸಿನಿಮಾದ ಟ್ರೇಲರ್ ಕೂಡ ಕಳೆದ ವಾರ ಬಿಡುಗಡೆಯಾಗಿದ್ದು, ಭಾರೀ ಮೆಚ್ಚುಗೆ ಗಳಿಸಿದೆ. ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್ ಅದರಲ್ಲಿ ಅಕ್ಷರಶಃ ಮಿಂಚಿದ್ದಾರೆ. ಈ ಸಿನಿಮಾ ಕೂಡ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.&lt;/p&gt;&lt;img&gt;&lt;p&gt;ಕನ್ನಡದ ನಟರಾಗಿದ್ದ ಯಶ್ ಅವರು ಇಷ್ಟು ದೊಡ್ಡ ಮಟ್ಟಕ್ಕೆ, ವಿಶ್ವದಾದ್ಯಂತ ಹೆಸರು ಮಾಡಲು, ಹಾಲಿವುಡ್ ರೇಂಜ್ ರೀಚ್ ಆಗಲು, ಪ್ಯಾನ್ ವರ್ಲ್ಡ್ ನಟರಾಗಲು ಕಾರಣದ ಸಂಗತಿಗಳು ಯಾವವು ಗೊತ್ತಾ?&lt;/p&gt;&lt;p&gt;ಅದು ಮತ್ತೇನೂ ಅಲ್ಲ.. ಯಶ್ ಅವರ ಸತತ ಪರಿಶ್ರಮ, ಬಿಗ್ ಡ್ರೀಮ್ ಅಂದರೆ ಅತ್ಯಂತ ದೊಡ್ಡ ಕನಸು ಕಂಡಿದ್ದು ಹಾಗೂ ಅದನ್ನು ನನಸಾಗಿಸಲು ಹಗಲಿರುಳೂ ಶ್ರಮಿಸಿದ್ದೇ ಕಾರಣ. ಅದೃಷ್ಟದ ಬಲವೂ ಸಾಥ್ ನೀಡಿದ್ದರೂ ಕೂಡ, ಯಶ್ ಅವರ ಕೆಲಸದ ಶ್ರದ್ಧೆ, ಕನ್ನಡ ಸಿನಿಮಾವನ್ನು ಪ್ರಪಂಚಕ್ಕೇ ತಲುಪಿಸಬೇಕೆಂಬ ಅದಮ್ಯ ಬಯಕೆ ಹಾಗೂ ಅದಕ್ಕೆ ಬೇಕಾದ ತಂಡ ಕಟ್ಟಿಕೊಂಡು ಮಾಡಿದ ಅವರತ ಪ್ರಯತ್ನವೇ ಇಂಥ ಅಮೋಘ ಸಾಧನೆಗೆ ಕಾರಣ..&lt;/p&gt;&lt;p&gt;ಇಂದು ನಟ ಯಶ್ ಅವರು 'ಇಡೀ ವಿಶ್ವವೇ ಗುರುತಿಸುವ, ಆರಾಧಿಸುವ, ಪ್ಯಾನ್ ವರ್ಲ್ಡ್ ಪಟ್ಟ ಗಿಟ್ಟಿಸಿಕೊಂಡ ಕನ್ನಡದ ಏಕೈಕ ನಟ. ಅವರ ಮುಂಬರುವ 2 ಸಿನಿಮಾ ನೋಡಲು ಇಡೀ ಜಗತ್ತೇ ಕಾಯುತ್ತಿದೆ ಎಂದರೆ, ಅವರೇನು, ತಲುಪಿದ ಎತ್ತರವೇನು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ! ಅವರ ಸಾಧನೆಯೇ ಎಲ್ಲವನ್ನೂ ಹೇಳುತ್ತೆ..&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/entertainment/grew-up-in-a-village-in-mysore-and-yash-became-a-globally-recognized-superstar-is-revealed-here-9618xa2"/>
        </item>
        <item>
            <title><![CDATA[ಕೇವಲ 1 ಗ್ರಾಂನಲ್ಲಿ ಸಿಗುವ ಸಿಂಪಲ್ ಉಂಗುರಗಳು, ಡೈಲಿ ವೇರ್‌ಗೆ ಫೆಂಟಾಸ್ಟಿಕ್ ಲುಕ್]]></title>
            <link>https://kannada.asianetnews.com/webstories/fashion/budget-friendly-light-weight-gold-ring-designs-under-1-gram-g64t46w</link>
            <guid isPermaLink="true">https://kannada.asianetnews.com/webstories/fashion/budget-friendly-light-weight-gold-ring-designs-under-1-gram-g64t46w</guid>
            <pubDate>Sun, 09 Aug 2026 22:37:15 +0530</pubDate>
            <description><![CDATA[ಹುಡುಗಿಯರ ಕೈಬೆರಳುಗಳಿಗೆ ಉಂಗುರಗಳು ವಿಶೇಷ ಅಂದ ನೀಡುತ್ತವೆ. ಅದರಲ್ಲೂ ಕಡಿಮೆ ತೂಕದ ಉಂಗುರಗಳು ಬೆರಳುಗಳಿಗೆ ಇನ್ನಷ್ಟು ಸೌಂದರ್ಯ ತುಂಬುತ್ತವೆ. ಕೇವಲ 1 ಗ್ರಾಂ ತೂಕದಲ್ಲಿ ಲಭ್ಯವಿರುವ ಕೆಲವು ಆಕರ್ಷಕ ಉಂಗುರಗಳ ಡಿಸೈನ್&zwnj;ಗಳು ಇಲ್ಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks7n6k7d63qn8q0afjpq20rb,imgname-sleek-gold-ring-7-1779447319789.jpg" type="image/jpeg" height="390" width="690"/>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/fashion/budget-friendly-light-weight-gold-ring-designs-under-1-gram-g64t46w"/>
        </item>
        <item>
            <title><![CDATA[Metabolic Health: ಈ ಕಾಯಿಲೆ ಬರೋ ಮುನ್ನ ಎಚ್ಚೆತ್ತುಕೊಳ್ಳಿ! ನಿಮ್ಮ ಮೆಟಬಾಲಿಕ್ ಆರೋಗ್ಯ ಕಾಪಾಡೋ 5 ಸೂಪರ್ ಹ್ಯಾಬಿಟ್ಸ್ ಇಲ್ಲಿವೆ]]></title>
            <link>https://kannada.asianetnews.com/gallery/health-life/5-daily-habits-to-improve-metabolic-health-and-reduce-diabetes-risk-kqwzrs2</link>
            <guid isPermaLink="true">https://kannada.asianetnews.com/gallery/health-life/5-daily-habits-to-improve-metabolic-health-and-reduce-diabetes-risk-kqwzrs2</guid>
            <pubDate>Sun, 09 Aug 2026 22:31:54 +0530</pubDate>
            <description><![CDATA[ಕೇವಲ ಆಹಾರ ಪದ್ಧತಿಯಿಂದ ಮಾತ್ರ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ನಮ್ಮ ಒಟ್ಟಾರೆ ದೈನಂದಿನ ಅಭ್ಯಾಸಗಳು ಕೂಡ ಮಧುಮೇಹಕ್ಕೆ ಕಾರಣವಾಗಬಹುದು. ಹಾಗಾದರೆ ಮುಖ್ಯವಾಗಿ ಗಮನಿಸಬೇಕಾದ ವಿಷಯಗಳೇನು ಎಂದು ತಿಳಿಯೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01kw95qbt1rqyb9ywvcqjk5gjk,imgname-crunch-exercise--1--1782719426368.jpg" type="image/jpeg" height="390" width="690"/>
            <content:encoded><![CDATA[ಕೇವಲ ಆಹಾರ ಪದ್ಧತಿಯಿಂದ ಮಾತ್ರ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ನಮ್ಮ ಒಟ್ಟಾರೆ ದೈನಂದಿನ ಅಭ್ಯಾಸಗಳು ಕೂಡ ಮಧುಮೇಹಕ್ಕೆ ಕಾರಣವಾಗಬಹುದು. ಹಾಗಾದರೆ ಮುಖ್ಯವಾಗಿ ಗಮನಿಸಬೇಕಾದ ವಿಷಯಗಳೇನು ಎಂದು ತಿಳಿಯೋಣ.&lt;img&gt;ಪ್ರತಿದಿನ ವ್ಯಾಯಾಮ ಮಾಡುವುದು ಮಧುಮೇಹವನ್ನು ನಿಯಂತ್ರಿಸಲು ಮಾತ್ರವಲ್ಲ, ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಅರ್ಧ ಗಂಟೆ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.&lt;img&gt;ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದು ಮಧುಮೇಹಕ್ಕೆ ಕಾರಣವಾಗಬಹುದು. ಸಕ್ಕರೆ ಅಂಶವಿರುವ ಪಾನೀಯಗಳು, ಪ್ಯಾಕೆಟ್ ಆಹಾರಗಳನ್ನು ತಪ್ಪಿಸಿ. ಬದಲಿಗೆ, ಪೌಷ್ಟಿಕಾಂಶಯುಕ್ತ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ.&lt;img&gt;ಪ್ರತಿದಿನ ಕನಿಷ್ಠ 7 ಗಂಟೆಗಳ ಕಾಲವಾದರೂ ಚೆನ್ನಾಗಿ ನಿದ್ದೆ ಮಾಡುವುದು ಅವಶ್ಯಕ. ಸರಿಯಾದ ನಿದ್ರೆಯ ಅಭ್ಯಾಸವಿಲ್ಲದಿದ್ದರೆ ಮಧುಮೇಹದಂತಹ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು.&lt;img&gt;ದೀರ್ಘಕಾಲದ ಒತ್ತಡವು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ಇದು ಹಾರ್ಮೋನ್ ಬದಲಾವಣೆಗಳಿಗೆ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.&lt;img&gt;ನಮ್ಮಲ್ಲಿ ಹಲವರಿಗೆ ಆರೋಗ್ಯ ಸಮಸ್ಯೆಗಳನ್ನು ಹಗುರವಾಗಿ ತೆಗೆದುಕೊಳ್ಳುವ ಅಭ್ಯಾಸವಿದೆ. ಆದರೆ ಇದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಸಣ್ಣಪುಟ್ಟ ಲಕ್ಷಣಗಳನ್ನು ಸಹ ನಿರ್ಲಕ್ಷಿಸಬೇಡಿ.]]></content:encoded>
            <category>life</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/health-life/5-daily-habits-to-improve-metabolic-health-and-reduce-diabetes-risk-kqwzrs2"/>
        </item>
        <item>
            <title><![CDATA[ಭಾರೀ ಟ್ರೆಂಡ್‌ನಲ್ಲಿರುವ ಬೆಳ್ಳಿಯ ಕೈ-ಕಡಗಗಳು; ನೀವು ನೋಡಿದ್ರೆ ಫಿದಾ ಆಗ್ತೀರಾ!]]></title>
            <link>https://kannada.asianetnews.com/webstories/fashion/stunning-floral-silver-bracelet-designs-for-women-these-set-as-new-trend-stx6xtf</link>
            <guid isPermaLink="true">https://kannada.asianetnews.com/webstories/fashion/stunning-floral-silver-bracelet-designs-for-women-these-set-as-new-trend-stx6xtf</guid>
            <pubDate>Sun, 09 Aug 2026 22:29:06 +0530</pubDate>
            <description><![CDATA[ಈಗ ಫ್ಲೋರಲ್ ಸಿಲ್ವರ್ ಬ್ರೇಸ್&zwnj;ಲೆಟ್&zwnj;ಗಳು ಸಿಕ್ಕಾಪಟ್ಟೆ ಟ್ರೆಂಡ್&zwnj;ನಲ್ಲಿವೆ. ಈ ಸ್ಟೋರಿಯಲ್ಲಿ ಓಪನ್ ಆಲಿವ್ ಲೀಫ್, ಲೋಟಸ್ ಫ್ಲೋರಲ್ ಮತ್ತು ಫ್ಲೋರಲ್ ಬಡ್ಸ್ ಬ್ರೇಸ್&zwnj;ಲೆಟ್&zwnj;ನಂತಹ ಕೆಲವು ಆಕರ್ಷಕ ಹಾಗೂ ಫ್ಯಾಷನಬಲ್ ಡಿಸೈನ್&zwnj;ಗಳನ್ನು ನೀಡಲಾಗಿದೆ. ಈ ವಿನ್ಯಾಸಗಳು ಆಫೀಸ್ ವೇರ್&zwnj;ಗೂ ಸೂಪರ್ ಆಗಿ ಹೊಂದುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzk8k62099bsq3qkq0rhe28e,imgname-elegant-silver-bracelet-1786279204928.jpg" type="image/jpeg" height="390" width="690"/>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/fashion/stunning-floral-silver-bracelet-designs-for-women-these-set-as-new-trend-stx6xtf"/>
        </item>
        <item>
            <title><![CDATA[ಫ್ರೆಶ್, ಸಾಫ್ಟ್, ಎಳೆಯ ಮಟನ್ ಖರೀದಿಸೋದು ಹೇಗೆ? ಮೂರು ಅಂಶಗಳು ನಿಮಗೆ ಗೊತ್ತಿರಲಿ!]]></title>
            <link>https://kannada.asianetnews.com/gallery/food/how-to-buy-fresh-soft-mutton-three-things-you-should-know-mrq-f6ebypx</link>
            <guid isPermaLink="true">https://kannada.asianetnews.com/gallery/food/how-to-buy-fresh-soft-mutton-three-things-you-should-know-mrq-f6ebypx</guid>
            <pubDate>Sun, 09 Aug 2026 21:53:09 +0530</pubDate>
            <description><![CDATA[&lt;p&gt;ಮಟನ್ ಅಡುಗೆ ರುಚಿಯಾಗಿರಬೇಕಾದ್ರೆ ಖರೀದಿ ಮುಖ್ಯವಾಗುತ್ತದೆ. ಮಾಂಸ ಎಳೆಯದ್ದು ಮತ್ತು ಫ್ರೆಶ್ ಆಗಿದ್ರೆ ಮಾತ್ರ ಅಡುಗೆ ಟೇಸ್ಟಿಯಾಗಿರುತ್ತದೆ. ಹಾಗಾಗಿ ಮಟನ್ ಖರೀದಿಸುವಾಗ ಮೂರು ಅಂಶಗಳನ್ನು ಗಮನಿಸಬೇಕಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjpg97z7x5wrw681x01tq9h,imgname-chatgpt-image-aug-9--2026--12-53-31-pm-1786260235519.png" type="image/jpeg" height="390" width="690"/>
            <content:encoded><![CDATA[&lt;p&gt;ಮಟನ್ ಅಡುಗೆ ರುಚಿಯಾಗಿರಬೇಕಾದ್ರೆ ಖರೀದಿ ಮುಖ್ಯವಾಗುತ್ತದೆ. ಮಾಂಸ ಎಳೆಯದ್ದು ಮತ್ತು ಫ್ರೆಶ್ ಆಗಿದ್ರೆ ಮಾತ್ರ ಅಡುಗೆ ಟೇಸ್ಟಿಯಾಗಿರುತ್ತದೆ. ಹಾಗಾಗಿ ಮಟನ್ ಖರೀದಿಸುವಾಗ ಮೂರು ಅಂಶಗಳನ್ನು ಗಮನಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;ಮಟನ್ ಖರೀದಿಸುವಾಗ ಮಾಂಸದ ಸ್ವರೂಪ ಮತ್ತು ಅದು ಕಾಣುವ ರೀತಿ ಗಮನಿಸುವುದು ಮುಖ್ಯವಾಗುತ್ತದೆ. ಒಳ್ಳೆ ಗುಣಮಟ್ಟದ ಮಟನ್ ಸಾಮಾನ್ಯವಾಗಿ ಗಟ್ಟಿಯಾಗಿ, ನೋಡಲು ಚೆನ್ನಾಗಿರುತ್ತೆ. ಕುರಿ ಮಾಂಸವು ಕೆಂಪು ಬಣ್ಣದಲ್ಲಿದ್ದು, ಮಾಂಸದೊಳಗೆ ಸ್ವಲ್ಪ ಬಿಳಿ ಕೊಬ್ಬಿನ ಕಣಗಳು ಇರುವುದನ್ನು ನೀವು ನೋಡಬಹುದು.&lt;/p&gt;&lt;img&gt;&lt;p&gt;ಮಾಂಸವನ್ನು ನೋಡುವಾಗ ಅದರ ಮೇಲ್ಮೈಯನ್ನು ಗಮನಿಸಿ. ಸಹಜವಾದ ಗಟ್ಟಿ ಸ್ವರೂಪ ಇಲ್ಲದೆ, ಹೆಚ್ಚು ಜಿಗುಟಾಗಿದ್ದರೆ ಅಥವಾ ಜಿಡ್ಡು-ಜಿಡ್ಡಾಗಿದ್ದರೆ ಅದನ್ನು ಖರೀದಿಸದಿರುವುದು ಉತ್ತಮ. ಮಾಂಸದಿಂದ ಅಸಹಜ ಅಥವಾ ಹುಳಿಯಂತಹ ಕೆಟ್ಟ ವಾಸನೆ ಬಂದರೆ ಅದನ್ನು ಬಿಟ್ಟುಬಿಡಿ. ಬಣ್ಣ ಬದಲಾಗುವುದು ಮಾತ್ರ ಕೆಟ್ಟಿರುವ ಲಕ್ಷಣವಲ್ಲ; ಕೆಟ್ಟ ವಾಸನೆ ಮತ್ತು ಜಿಗುಟುತನದ ಜೊತೆಗೆ ಬಣ್ಣ ಬದಲಾಗಿದ್ದರೆ ಅದು ಗಂಭೀರ ಎಚ್ಚರಿಕೆಯಾಗಿದೆ.&lt;/p&gt;&lt;img&gt;&lt;p&gt;ಮಟನ್&zwnj;ನಲ್ಲಿರುವ ಕೊಬ್ಬನ್ನು ಗಮನಿಸುವುದು ಕೂಡ ಒಳ್ಳೆಯದು. ಉತ್ತಮ ಗುಣಮಟ್ಟದ ಕುರಿ ಮಾಂಸದಲ್ಲಿ ಬಿಳಿ ಮತ್ತು ಗಟ್ಟಿಯಾದ ಕೊಬ್ಬು ಕಾಣಸಿಗುತ್ತದೆ. ಹೆಚ್ಚು ದಪ್ಪವಾದ ಕೊಬ್ಬಿಗಿಂತ, ಮಾಂಸದೊಳಗೆ ಇರುವ ಸ್ವಲ್ಪ ಕೊಬ್ಬಿನ ಕಣಗಳು ರುಚಿ ಮತ್ತು ಸ್ವರೂಪಕ್ಕೆ ಸಹಾಯ ಮಾಡುತ್ತವೆ. ಇದಲ್ಲದೆ, ನೀವು ಮಾಡಲಿರುವ ಅಡುಗೆಗೆ ತಕ್ಕಂತೆ ಸರಿಯಾದ ಕಟ್ ಆಯ್ಕೆ ಮಾಡುವುದು ಮುಖ್ಯ. ಮಟನ್&zwnj;ನಲ್ಲಿ shoulder, rack, loin, leg ನಂತಹ ವಿಭಿನ್ನ ಕಟ್&zwnj;ಗಳಿವೆ; ಪ್ರತಿಯೊಂದು ಭಾಗವೂ ಬೇರೆ ಬೇರೆ ಅಡುಗೆ ವಿಧಾನಕ್ಕೆ ಸರಿಹೊಂದುತ್ತದೆ.&lt;/p&gt;&lt;img&gt;&lt;p&gt;1. ಮಾಂಸದ ಸ್ವರೂಪ: ಗಟ್ಟಿಯಾದ, ಸಹಜವಾದ texture ಇದೆಯೇ?&lt;/p&gt;&lt;p&gt;2. ಕೊಬ್ಬು: ಬಿಳಿಯಾಗಿದ್ದು, ಗಟ್ಟಿಯಾಗಿದೆಯೇ?&lt;/p&gt;&lt;p&gt;3. ವಾಸನೆ: ಅಸಹಜವಾದ ಕೆಟ್ಟ ವಾಸನೆ ಅಥವಾ ಹುಳಿ ವಾಸನೆ ಇದೆಯೇ?&lt;/p&gt;&lt;img&gt;&lt;p&gt;ನಂಬಿಕಸ್ಥ ಅಂಗಡಿಯಲ್ಲಿ ಖರೀದಿಸುವುದು ಮತ್ತು ಮಾಂಸವನ್ನು ಸರಿಯಾದ ರೀತಿಯಲ್ಲಿ ಕೋಲ್ಡ್ ಸ್ಟೋರೇಜ್&zwnj;ನಲ್ಲಿ ಇಟ್ಟಿದ್ದಾರೆಯೇ ಎಂಬುದನ್ನು ಗಮನಿಸುವುದು ಮುಖ್ಯ. ಮಟನ್ ರಬ್ಬರ್&zwnj;ನಂತೆ ಇರಬಾರದು ಎಂದರೆ, ಅಡುಗೆಮನೆಯಲ್ಲಿ ಮಾತ್ರ ಗಮನಹರಿಸಿದರೆ ಸಾಲದು. ಸರಿಯಾದ ಮಾಂಸವನ್ನು ಆಯ್ಕೆ ಮಾಡುವುದು ಅಂಗಡಿಯಲ್ಲೇ ಶುರುವಾಗುತ್ತದೆ!&lt;/p&gt;]]></content:encoded>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/food/how-to-buy-fresh-soft-mutton-three-things-you-should-know-mrq-f6ebypx"/>
        </item>
        <item>
            <title><![CDATA[ಹಾವು ಪೊರೆ ಬಿಚ್ಚುವುದನ್ನು ನೋಡಿದರೆ ಹಗೆ ತೀರಿಸಿಕೊಳ್ಳುತ್ತಾ? ಗೊತ್ತಿಲ್ಲದ ಸತ್ಯ ಇಲ್ಲಿದೆ!]]></title>
            <link>https://kannada.asianetnews.com/life/snake-myths-and-facts-does-a-snake-take-revenge-after-shedding-its-skin-gvd/articleshow-r4k6c2q</link>
            <guid isPermaLink="true">https://kannada.asianetnews.com/life/snake-myths-and-facts-does-a-snake-take-revenge-after-shedding-its-skin-gvd/articleshow-r4k6c2q</guid>
            <pubDate>Sun, 09 Aug 2026 19:12:59 +0530</pubDate>
            <description><![CDATA[&lt;p&gt;Snake Myths and Facts: ಹಾವುಗಳು ಹಳೆಯ ಚರ್ಮವನ್ನು ಕಳಚಿ ಹೊಸ ಚರ್ಮವನ್ನು ಪಡೆಯುವ ನೈಸರ್ಗಿಕ ಪ್ರಕ್ರಿಯೆಯನ್ನು ಪೊರೆ ಬಿಚ್ಚುವುದು ಅಥವಾ ಎಕ್ಡಿಸಿಸ್ (Ecdysis) ಎಂದು ಕರೆಯಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzkc5rrr6f6xwgnx4kzjhqjv,imgname-nkn-1786282959640.png" type="image/jpeg" height="390" width="690"/>
            <content:encoded><![CDATA[&lt;p&gt;ಹಾವುಗಳು ಹಳೆಯ ಚರ್ಮವನ್ನು ಕಳಚಿ ಹೊಸ ಚರ್ಮವನ್ನು ಪಡೆಯುವ ನೈಸರ್ಗಿಕ ಪ್ರಕ್ರಿಯೆಯನ್ನು ಪೊರೆ ಬಿಚ್ಚುವುದು ಅಥವಾ ಎಕ್ಡಿಸಿಸ್ (Ecdysis) ಎಂದು ಕರೆಯಲಾಗುತ್ತದೆ. ಹಾವಿನ ಬೆಳವಣಿಗೆ ಹಾಗೂ ದೇಹದ ಆರೋಗ್ಯದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಹಾವು ಪೊರೆ ಬಿಚ್ಚುವುದಕ್ಕೆ ಸಂಬಂಧಿಸಿದಂತೆ ಜನರಲ್ಲಿ ಹಲವು ನಂಬಿಕೆಗಳು ಮತ್ತು ಮೂಢನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿವೆ. ಅದರಲ್ಲೂ ಹಾವು ಪೊರೆ ಬಿಚ್ಚುವುದನ್ನು ನೋಡಿದರೆ ಅದು ಮನುಷ್ಯನ ಮೇಲೆ ಹಗೆ ತೀರಿಸಿಕೊಳ್ಳುತ್ತದೆ ಎಂಬ ಮಾತು ಸಾಕಷ್ಟು ಜನಪ್ರಿಯವಾಗಿದೆ. ಹಾಗಾದರೆ ಇದರಲ್ಲಿ ಎಷ್ಟು ಸತ್ಯ? ಹಾವುಗಳು ನಿಜವಾಗಿಯೂ ಮನುಷ್ಯರ ಮೇಲೆ ಪಗ ಇಟ್ಟುಕೊಳ್ಳುತ್ತವೆಯೇ? ತಿಳಿಯೋಣ.&lt;/p&gt;&lt;p&gt;&lt;strong&gt;ಹಾವುಗಳು ಪೊರೆ ಏಕೆ ಬಿಚ್ಚುತ್ತವೆ?&lt;/strong&gt;&lt;/p&gt;&lt;p&gt;ಹಾವುಗಳು ಹಳೆಯ ಚರ್ಮವನ್ನು ಕಳಚುವ ಪ್ರಕ್ರಿಯೆಯನ್ನು ಎಕ್ಡಿಸಿಸ್ ಎಂದು ಕರೆಯಲಾಗುತ್ತದೆ. ಹಾವು ಬೆಳೆಯುತ್ತಾ ಹೋದಂತೆ ಅದರ ದೇಹದ ಗಾತ್ರ ಹೆಚ್ಚಾಗುತ್ತದೆ. ಆದರೆ ಹೊರಗಿನ ಹಳೆಯ ಚರ್ಮವು ದೇಹದೊಂದಿಗೆ ಅದೇ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ಹೀಗಾಗಿ ಹಳೆಯ ಚರ್ಮವು ಹಾವಿನ ದೇಹಕ್ಕೆ ಬಿಗಿಯಾಗುತ್ತದೆ. ಈ ಸಂದರ್ಭದಲ್ಲಿ ಹಳೆಯ ಚರ್ಮದ ಕೆಳಗೆ ಹೊಸ ಚರ್ಮ ರೂಪುಗೊಳ್ಳುತ್ತದೆ. ನಂತರ ಹಾವು ತನ್ನ ಹಳೆಯ ಹೊರಪದರವನ್ನು ಕಳಚಿ ಹೊಸ ಚರ್ಮವನ್ನು ಪಡೆಯುತ್ತದೆ. ಇದು ಹಾವಿನ ದೇಹದ ಬೆಳವಣಿಗೆಯ ಸಹಜ ಪ್ರಕ್ರಿಯೆಯಾಗಿದ್ದು, ಹಳೆಯ ಅಥವಾ ಹಾನಿಗೊಳಗಾದ ಚರ್ಮವನ್ನು ತೆಗೆದುಹಾಕಲು ಸಹ ನೆರವಾಗುತ್ತದೆ.&lt;/p&gt;&lt;p&gt;&lt;strong&gt;ಹಾವು ಒಂದೇ ಬಾರಿಗೆ ಸಂಪೂರ್ಣ ಚರ್ಮವನ್ನು ಹೇಗೆ ಕಳಚುತ್ತದೆ?&lt;/strong&gt;&lt;/p&gt;&lt;p&gt;ಮನುಷ್ಯರ ಚರ್ಮವು ನಿರಂತರವಾಗಿ ಸಣ್ಣ ಸಣ್ಣ ಕೋಶಗಳ ರೂಪದಲ್ಲಿ ಉದುರುತ್ತಿರುತ್ತದೆ. ಆದರೆ ಹಾವಿನ ಹೊರಗಿನ ಕೆರಾಟಿನ್ ಪದರವು ನಿರಂತರ ಪದರದಂತಿರುವುದರಿಂದ, ಸಾಮಾನ್ಯವಾಗಿ ಅದು ಒಂದೇ ತುಂಡಿನಂತೆ ಕಳಚುತ್ತದೆ. ಪೊರೆ ಬಿಚ್ಚುವ ಮುನ್ನ ಹಾವಿನ ದೇಹದ ಬಣ್ಣ ಸ್ವಲ್ಪ ಮಸುಕಾಗಬಹುದು. ಅದರ ಕಣ್ಣುಗಳ ಮೇಲಿರುವ ಪಾರದರ್ಶಕ ಪದರವೂ ಮಸುಕಾಗಿ ಕಾಣಿಸಬಹುದು. ನಂತರ ಹಾವು ತನ್ನ ತಲೆಯನ್ನು ಕಲ್ಲು, ಮರದ ಕೊಂಬೆ ಅಥವಾ ಇತರ ಒರಟಾದ ಮೇಲ್ಮೈಗೆ ಉಜ್ಜಿ ಹಳೆಯ ಚರ್ಮವನ್ನು ಸಡಿಲಗೊಳಿಸುತ್ತದೆ. ಬಳಿಕ ದೇಹವನ್ನು ನಿಧಾನವಾಗಿ ಚಲಿಸುವ ಮೂಲಕ ಹಳೆಯ ಚರ್ಮದಿಂದ ಹೊರಬರುತ್ತದೆ.&lt;/p&gt;&lt;p&gt;&lt;strong&gt;ವರ್ಷಕ್ಕೆ ಎಷ್ಟು ಬಾರಿ ಪೊರೆ ಬಿಚ್ಚುತ್ತವೆ?&lt;/strong&gt;&lt;/p&gt;&lt;p&gt;ಎಲ್ಲಾ ಹಾವುಗಳು ಒಂದೇ ಸಂಖ್ಯೆಯಲ್ಲಿ ಚರ್ಮ ಕಳಚುವುದಿಲ್ಲ. ಹಾವಿನ ಜಾತಿ, ವಯಸ್ಸು, ಬೆಳವಣಿಗೆಯ ವೇಗ, ಆರೋಗ್ಯ, ಆಹಾರ ಹಾಗೂ ಪರಿಸರದಂತಹ ಹಲವು ಅಂಶಗಳ ಮೇಲೆ ಈ ಪ್ರಕ್ರಿಯೆ ಅವಲಂಬಿತವಾಗಿರುತ್ತದೆ. ಸಣ್ಣ ವಯಸ್ಸಿನ ಹಾವುಗಳು ವೇಗವಾಗಿ ಬೆಳೆಯುವುದರಿಂದ ದೊಡ್ಡ ಹಾವುಗಳಿಗಿಂತ ಹೆಚ್ಚು ಬಾರಿ ಚರ್ಮ ಕಳಚಬಹುದು. ಕೆಲವು ಹಾವುಗಳು ವರ್ಷದಲ್ಲಿ ಹಲವು ಬಾರಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತವೆ.&lt;/p&gt;&lt;p&gt;&lt;strong&gt;ಪೊರೆ ಬಿಚ್ಚುವ ಸಮಯದಲ್ಲಿ ಹಾವು ಅಪಾಯಕಾರಿಯೇ?&lt;/strong&gt;&lt;/p&gt;&lt;p&gt;ಹಾವು ಚರ್ಮ ಕಳಚುವ ಸಂದರ್ಭದಲ್ಲಿ ಸ್ವಲ್ಪ ಅಸಹಜತೆ ಮತ್ತು ಒತ್ತಡವನ್ನು ಅನುಭವಿಸಬಹುದು. ಅದರಲ್ಲೂ ಕಣ್ಣುಗಳ ಮೇಲಿರುವ ಪಾರದರ್ಶಕ ಪದರ ಮಸುಕಾಗುವುದರಿಂದ ದೃಷ್ಟಿಯಲ್ಲೂ ತಾತ್ಕಾಲಿಕ ಬದಲಾವಣೆ ಉಂಟಾಗಬಹುದು. ಹೀಗಾಗಿ ಆ ಸಮಯದಲ್ಲಿ ಹಾವಿನ ಬಳಿ ಹೋಗಿ ಮುಟ್ಟುವುದು, ಹಿಡಿಯಲು ಪ್ರಯತ್ನಿಸುವುದು ಅಥವಾ ಅದನ್ನು ಓಡಿಸುವುದು ಅಪಾಯಕಾರಿ. ಹಾವು ತನ್ನನ್ನು ಅಪಾಯದಲ್ಲಿದೆ ಎಂದು ಭಾವಿಸಿದರೆ ಆತ್ಮರಕ್ಷಣೆಗಾಗಿ ದಾಳಿ ಮಾಡುವ ಸಾಧ್ಯತೆ ಇದೆ. ಆದರೆ ಇಂತಹ ದಾಳಿಯನ್ನು &lsquo;ಹಗೆ&rsquo; ಅಥವಾ &lsquo;ಪ್ರತೀಕಾರ&rsquo;ದ ಫಲಿತಾಂಶ ಎಂದು ಪರಿಗಣಿಸುವುದು ವೈಜ್ಞಾನಿಕವಾಗಿ ತಪ್ಪು.&lt;/p&gt;&lt;p&gt;&lt;strong&gt;ಹಾವು ಪೊರೆ ಬಿಚ್ಚುವುದನ್ನು ನೋಡಿದರೆ ಹಗೆ ತೀರಿಸಿಕೊಳ್ಳುತ್ತದೆಯೇ?&lt;/strong&gt;&lt;/p&gt;&lt;p&gt;ಇದು ಬಹಳ ವರ್ಷಗಳಿಂದ ಜನರಲ್ಲಿ ಹರಿದಾಡುತ್ತಿರುವ ಒಂದು ನಂಬಿಕೆ ಮಾತ್ರ. ಹಾವು ತನ್ನ ಹಳೆಯ ಚರ್ಮವನ್ನು ನೆನಪಿಟ್ಟುಕೊಂಡು, ಅದನ್ನು ನೋಡಿದ ವ್ಯಕ್ತಿಯನ್ನು ಗುರುತಿಸಿ ನಂತರ ಹಗೆ ತೀರಿಸಿಕೊಳ್ಳುತ್ತದೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ವೈಜ್ಞಾನಿಕ ಸಾಕ್ಷ್ಯವಿಲ್ಲ. ಹಾವುಗಳು ಮನುಷ್ಯರಂತೆ ಹಗೆ, ಪ್ರತೀಕಾರ ಅಥವಾ ಸೇಡಿನ ಭಾವನೆಗಳನ್ನು ಇಟ್ಟುಕೊಂಡು ದಾಳಿ ಮಾಡುತ್ತವೆ ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಹಾವಿನ ದಾಳಿಯನ್ನು ಮುಖ್ಯವಾಗಿ ಅದರ ಸಹಜ ನಡವಳಿಕೆ ಮತ್ತು ಆತ್ಮರಕ್ಷಣೆಯ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕು. ಆದರೆ ಹಾವು ಪೊರೆ ಬಿಚ್ಚಿದ ಸ್ಥಳದ ಸುತ್ತಮುತ್ತಲೇ ಅದು ಇನ್ನೂ ಸಂಚರಿಸುತ್ತಿರುವ ಸಾಧ್ಯತೆ ಇರಬಹುದು. ಹೀಗಾಗಿ ಹಾವಿನ ಪೊರೆ ಕಂಡ ಸ್ಥಳದಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ.&lt;/p&gt;&lt;p&gt;&lt;strong&gt;ಹಾವು ಬಿಟ್ಟ ಚರ್ಮ ಮುಟ್ಟಿದರೆ ವಿಷ ಏರುತ್ತದೆಯೇ?&lt;/strong&gt;&lt;/p&gt;&lt;p&gt;ಹಾವು ಕಳಚಿದ ಹಳೆಯ ಚರ್ಮವು ಜೀವಂತ ಅಂಗಾಂಶವಲ್ಲ. ಅದು ಹೊರಗಿನ ಚರ್ಮದ ಪದರ ಮಾತ್ರ. ಆದ್ದರಿಂದ ಅದನ್ನು ಮುಟ್ಟುವುದರಿಂದ ಹಾವಿನ ವಿಷ ದೇಹಕ್ಕೆ ಸೇರುತ್ತದೆ ಎಂಬ ನಂಬಿಕೆ ಅಪೋಹ. ಹಾವಿನ ವಿಷವು ಮುಖ್ಯವಾಗಿ ಕಚ್ಚಿದ ಸಂದರ್ಭದಲ್ಲಿ ದೇಹಕ್ಕೆ ಸೇರುವ ಸಾಧ್ಯತೆಯಿದೆ. ಹೀಗಾಗಿ ಕಳಚಿದ ಚರ್ಮವನ್ನು ನೋಡಿ ಅದಕ್ಕೆ ವಿಷವಿದೆ ಎಂದು ಭಯಪಡುವ ಅಗತ್ಯವಿಲ್ಲ.&lt;/p&gt;&lt;p&gt;&lt;strong&gt;ಹಾವು ಬಿಟ್ಟ ಪೊರೆ ಕಂಡರೆ ಏನು ಮಾಡಬೇಕು?&lt;/strong&gt;&lt;/p&gt;&lt;p&gt;ಮನೆ, ತೋಟ ಅಥವಾ ಹೊರಾಂಗಣದಲ್ಲಿ ಹಾವು ಕಳಚಿದ ಚರ್ಮ ಕಂಡುಬಂದರೆ ಅದನ್ನು ಕೈಯಿಂದ ಹಿಡಿಯಲು ಅಥವಾ ಹತ್ತಿರ ಹೋಗಿ ಪರಿಶೀಲಿಸಲು ಪ್ರಯತ್ನಿಸಬೇಡಿ. ಆ ಪ್ರದೇಶವು ಹಾವಿಗೆ ಅನುಕೂಲಕರವಾದ ವಾಸಸ್ಥಳವಾಗಿರಬಹುದು. ಸುರಕ್ಷಿತ ಅಂತರ ಕಾಯ್ದುಕೊಂಡು ಅಲ್ಲಿಂದ ದೂರ ಸರಿಯುವುದು ಉತ್ತಮ. ಅಗತ್ಯವಿದ್ದರೆ ತರಬೇತಿ ಪಡೆದ ಹಾವು ರಕ್ಷಕರ ನೆರವು ಪಡೆಯಬಹುದು.&lt;/p&gt;&lt;h2&gt;&lt;strong&gt;ಹಗೆ ಅಲ್ಲ, ಇದು ಪ್ರಕೃತಿಯ ಸಹಜ ಪ್ರಕ್ರಿಯೆ!&lt;/strong&gt;&lt;/h2&gt;&lt;p&gt;ಹಾವು ಪೊರೆ ಬಿಚ್ಚುವುದು ಅದರ ದೇಹದ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಹಜ ಜೈವಿಕ ಪ್ರಕ್ರಿಯೆ. ಇದಕ್ಕೆ ಹಗೆ, ಸೇಡು ಅಥವಾ ಪ್ರತೀಕಾರದಂತಹ ಮಾನವೀಯ ಭಾವನೆಗಳನ್ನು ಜೋಡಿಸುವುದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಹೀಗಾಗಿ ಹಾವು ಪೊರೆ ಬಿಚ್ಚುವುದನ್ನು ಕಂಡರೆ ಭಯಪಡುವ ಬದಲು, ಹಾವಿನ ಬಳಿ ಹೋಗದೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/life/snake-myths-and-facts-does-a-snake-take-revenge-after-shedding-its-skin-gvd/articleshow-r4k6c2q"/>
        </item>
        <item>
            <title><![CDATA[ಮಾಡಿಟ್ಟ ಚಪಾತಿ ಬೇಗ ಗಟ್ಟಿಯಾಗತ್ತಾ? ಹೆಚ್ಚಿನವರು ಮಾಡ್ತಿರೋ ನಾಲ್ಕು ತಪ್ಪು ತಿಳಿಸಿದ ಮಾಸ್ಟರ್​ಷೆಫ್​]]></title>
            <link>https://kannada.asianetnews.com/gallery/kitchen/is-the-chapati-become-too-hard-in-some-hours-masterchef-reveals-four-mistakes-you-are-making-suc-mz3lfd1</link>
            <guid isPermaLink="true">https://kannada.asianetnews.com/gallery/kitchen/is-the-chapati-become-too-hard-in-some-hours-masterchef-reveals-four-mistakes-you-are-making-suc-mz3lfd1</guid>
            <pubDate>Sun, 09 Aug 2026 18:15:34 +0530</pubDate>
            <description><![CDATA[&lt;p&gt;ಚಪಾತಿ ತಣ್ಣಗಾದಾಗ ಗಟ್ಟಿಯಾಗಲು ಹಿಟ್ಟು ಕಲಸುವುದರಿಂದ ಹಿಡಿದು ಸಂಗ್ರಹಿಸುವವರೆಗೆ ಮಾಡುವ ನಾಲ್ಕು ಸಾಮಾನ್ಯ ತಪ್ಪುಗಳೇ ಕಾರಣ. ಬೆಚ್ಚಗಿನ ನೀರು ಬಳಸುವುದು, ಹಿಟ್ಟಿಗೆ ವಿಶ್ರಾಂತಿ ನೀಡುವುದು, ಸರಿಯಾದ ಉರಿಯಲ್ಲಿ ಬೇಯಿಸುವುದು ಚಪಾತಿಯನ್ನು ದೀರ್ಘಕಾಲ ಮೃದುವಾಗಿಡಬಹುದು ಎಂದು ಷೆಫ್​ ಸಲಹೆ ನೀಡುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx07kxb9nrmvbcf3jj37tbdj,imgname-wheat-chapati--2--1783493162345.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಪಾತಿ ತಣ್ಣಗಾದಾಗ ಗಟ್ಟಿಯಾಗಲು ಹಿಟ್ಟು ಕಲಸುವುದರಿಂದ ಹಿಡಿದು ಸಂಗ್ರಹಿಸುವವರೆಗೆ ಮಾಡುವ ನಾಲ್ಕು ಸಾಮಾನ್ಯ ತಪ್ಪುಗಳೇ ಕಾರಣ. ಬೆಚ್ಚಗಿನ ನೀರು ಬಳಸುವುದು, ಹಿಟ್ಟಿಗೆ ವಿಶ್ರಾಂತಿ ನೀಡುವುದು, ಸರಿಯಾದ ಉರಿಯಲ್ಲಿ ಬೇಯಿಸುವುದು ಚಪಾತಿಯನ್ನು ದೀರ್ಘಕಾಲ ಮೃದುವಾಗಿಡಬಹುದು ಎಂದು ಷೆಫ್​ ಸಲಹೆ ನೀಡುತ್ತಾರೆ.&lt;/p&gt;&lt;img&gt;&lt;p&gt;ಎಷ್ಟೋ ಸಂದರ್ಭಗಳಲ್ಲಿ ಚಪಾತಿ ಮಾಡಿಟ್ಟ ಕೆಲವೇ ಗಂಟೆಗಳಲ್ಲಿ ಅದು ತಣ್ಣಗಾಗುತ್ತಿದ್ದಂತೆಯೇ ಗಟ್ಟಿಯಾಗಿಬಿಡುತ್ತದೆ. ಇದಕ್ಕೆ ಕಾರಣ ಏನು ಗೊತ್ತಾ? ನೀವು ಮಾಡ್ತಿರೋ ನಾಲ್ಕು ತಪ್ಪುಗಳೇ ಇದಕ್ಕೆ ಕಾರಣ ಎನ್ನುತ್ತಾರೆ ಮಾಸ್ಟರ್​ಷೆಫ್​ ಮೊಬಾಸಿರ್​ ಹಾಸನ್​.&lt;/p&gt;&lt;img&gt;&lt;p&gt;ಹಾಗಿದ್ದರೆ ಆ ನಾಲ್ಕು ತಪ್ಪುಗಳು ಯಾವುದು ಎಂದು ನೋಡೋಣ. ಇದು ಶುರುವಾಗುವುದು ಹಿಟ್ಟು ಕಲಸುವುದರಿಂದಲೇ. ಅಲ್ಲಿಂದ ಆಗುವ ತಪ್ಪು ಪ್ರತಿ ಹೆಜ್ಜೆಯಲ್ಲಿಯೂ ಆಗುತ್ತಿದೆ.ಆದರೆ ಸಾಧಾರಣವಾಗಿ ಈ ತಪ್ಪು ಎಷ್ಟೋ ಮಂದಿಗೆ ತಿಳಿದೇ ಇರುವುದಿಲ್ಲ.&lt;/p&gt;&lt;img&gt;&lt;p&gt;ಮೊದಲನೆಯ ತಪ್ಪು ಎಂದರೆ, ಹಿಟ್ಟನ್ನು ಕಲಸುವಾಗ ತಣ್ಣೀರು ಹಾಕುವುದು. ಮೊಬಾಸಿರ್​ ಹಾಸನ್​ ಅವರು ಹೇಳುವ ಪ್ರಕಾರ, ಹಿಟ್ಟನ್ನು ತಣ್ಣೀರಿನಲ್ಲಿ ಕಲಸಬಾರದು, ಬದಲಿಗೆ ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಕಲಸಬೇಕು. ಇದರಿಂದ ಮಾಯಿಸ್ಟರೈಸರ್​ ಚೆನ್ನಾಗಿ ಉಳಿಯುತ್ತದೆ. ದೀರ್ಘಕಾಲ ಚಪಾತಿ ಸಾಫ್ಟ್​ ಆಗಿಯೇ ಇರುತ್ತದೆ.&lt;/p&gt;&lt;img&gt;&lt;p&gt;ಎರಡನೆಯ ತಪ್ಪು, ಹಿಟ್ಟನ್ನು ಕಲಸಿದ ತಕ್ಷಣವೇ ಚಪಾತಿ ಮಾಡುವುದು. ಇದು ತಪ್ಪು. ಹಿಟ್ಟನ್ನು ಕಲಸಿ ಕನಿಷ್ಠ 15 ನಿಮಿಷಗಳವರೆಗೆ ರೆಸ್ಟ್​ ಕೊಡಬೇಕು. ಅದರ ಮೇಲೆ ಒಂದು ಬಟ್ಟೆ ಮುಚ್ಚಿಟ್ಟರೆ ಚಪಾತಿ ದೀರ್ಘಕಾಲ ಸಾಫ್ಟ್​ ಆಗಿರುತ್ತದೆ.&lt;/p&gt;&lt;img&gt;&lt;p&gt;ಚಪಾತಿ ಮಾಡುವಾಗ ಅತಿ ಕಡಿಮೆ ಹೀಟ್​ನಲ್ಲಿ ಬೇಯಿಸುವುದು. ಈ ಸಂದರ್ಭದಲ್ಲಿ ಚಪಾತಿಯಲ್ಲಿನ ನೀರಿನಾಂಶವೆಲ್ಲಾ ನಿಧಾನವಾಗಿ ಹೀರುವುದರಿಂದ ಚಪಾತಿ ಗಟ್ಟಿಯಾಗುತ್ತದೆ. ಆದ್ದರಿಂದ ಅದನ್ನು ಮೀಡಿಯಂ ಹೈ ಹೀಟ್​ನಲ್ಲಿ ಬೇಯಿಸಬೇಕು.&lt;/p&gt;&lt;img&gt;&lt;p&gt;ಕೊನೆಯದಾಗಿ ಚಪಾತಿಯನ್ನು ನೇರವಾಗಿ ಡಬ್ಬದಲ್ಲಿ ಹಾಕುವುದು. ಇದು ಸರಿಯಲ್ಲ. ಅದರ ಬದಲು ಒಂದು ಕಾಟನ್​ ಬಟ್ಟೆ ಹಾಕಿ ಅದರಲ್ಲಿ ಚಪಾತಿ ಇಟ್ಟು ಮುಚ್ಚಬೇಕು ಎನ್ನುವುದು ಮಾಸ್ಟರ್​ಷೆಫ್​ ಸಲಹೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/kitchen/is-the-chapati-become-too-hard-in-some-hours-masterchef-reveals-four-mistakes-you-are-making-suc-mz3lfd1"/>
        </item>
        <item>
            <title><![CDATA[ಬಾದಾಮಿ, ಗೋಡಂಬಿ ಮಾತ್ರವಲ್ಲ! ಈ ಬೀಜದಲ್ಲೂ ಅಡಗಿದೆ ಆರೋಗ್ಯದ ರಹಸ್ಯ]]></title>
            <link>https://kannada.asianetnews.com/health-life/sunflower-seeds-benefits-why-should-you-add-them-to-your-diet-gvd/articleshow-87vw031</link>
            <guid isPermaLink="true">https://kannada.asianetnews.com/health-life/sunflower-seeds-benefits-why-should-you-add-them-to-your-diet-gvd/articleshow-87vw031</guid>
            <pubDate>Sun, 09 Aug 2026 17:15:37 +0530</pubDate>
            <description><![CDATA[&lt;p&gt;Sunflower Seeds Benefits: ಬಾದಾಮಿ, ಗೋಡಂಬಿಯಂತೆ ಸೂರ್ಯಕಾಂತಿ ಬೀಜಗಳೂ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿವೆ. ಪ್ರತಿದಿನ ಮಿತ ಪ್ರಮಾಣದಲ್ಲಿ ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹಕ್ಕೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzk5exzp44zfwbqca752q8rn,imgname-j-1786275919862.png" type="image/jpeg" height="390" width="690"/>
            <content:encoded><![CDATA[&lt;p&gt;ಬಾದಾಮಿ, ಗೋಡಂಬಿಯಂತೆ ಸೂರ್ಯಕಾಂತಿ ಬೀಜಗಳೂ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿವೆ. ಪ್ರತಿದಿನ ಮಿತ ಪ್ರಮಾಣದಲ್ಲಿ ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಅಗತ್ಯವಾದ ಕೆಲವು ಪೋಷಕಾಂಶಗಳು ದೊರೆಯಬಹುದು. ಆರೋಗ್ಯಕರ ಕೊಬ್ಬು, ಪ್ರೋಟೀನ್, ಫೈಬರ್, ವಿಟಮಿನ್&zwnj; E ಮತ್ತು ಜಿಂಕ್&zwnj;ನಂತಹ ಪೋಷಕಾಂಶಗಳು ಸೂರ್ಯಕಾಂತಿ ಬೀಜಗಳಲ್ಲಿ ಕಂಡುಬರುತ್ತವೆ.&lt;/p&gt;&lt;p&gt;ಸಣ್ಣ ಗಾತ್ರದಲ್ಲಿರುವ ಸೂರ್ಯಕಾಂತಿ ಬೀಜಗಳು ಪೌಷ್ಟಿಕಾಂಶದ ದೃಷ್ಟಿಯಿಂದ ಮಹತ್ವದ್ದಾಗಿವೆ. ಇವುಗಳಲ್ಲಿ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಕೊಬ್ಬುಗಳ ಜೊತೆಗೆ ಪ್ರೋಟೀನ್ ಮತ್ತು ಫೈಬರ್ ಕೂಡ ಇರುತ್ತವೆ. ಹೀಗಾಗಿ, ಸಮತೋಲಿತ ಆಹಾರದ ಭಾಗವಾಗಿ ಸೂರ್ಯಕಾಂತಿ ಬೀಜಗಳನ್ನು ಮಿತವಾಗಿ ಸೇವಿಸುವುದು ಉಪಯುಕ್ತವಾಗಬಹುದು.&lt;/p&gt;&lt;p&gt;&lt;strong&gt;ಹೃದಯದ ಆರೋಗ್ಯಕ್ಕೆ ಸಹಕಾರಿ?&lt;/strong&gt;&lt;/p&gt;&lt;p&gt;ಸೂರ್ಯಕಾಂತಿ ಬೀಜಗಳಲ್ಲಿ ಇರುವ ಅಪರ್ಯಾಪ್ತ ಕೊಬ್ಬುಗಳು ಮತ್ತು ಮೆಗ್ನೀಷಿಯಂ ಹೃದಯದ ಆರೋಗ್ಯವನ್ನು ಬೆಂಬಲಿಸುವ ಆಹಾರದ ಭಾಗವಾಗಬಹುದು. ಆರೋಗ್ಯಕರ ಆಹಾರ ಪದ್ಧತಿಯೊಂದಿಗೆ ಇಂತಹ ಪೋಷಕಾಂಶಗಳನ್ನು ಒಳಗೊಂಡ ಆಹಾರ ಸೇವಿಸುವುದು ಹೃದಯದ ಆರೋಗ್ಯಕ್ಕೆ ನೆರವಾಗಬಹುದು. ಆದರೆ ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದಲೇ ಕೊಲೆಸ್ಟ್ರಾಲ್ ಅಥವಾ ರಕ್ತದೊತ್ತಡ ನಿಯಂತ್ರಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಟ್ಟಾರೆ ಆಹಾರ ಪದ್ಧತಿ ಮತ್ತು ಜೀವನಶೈಲಿಯೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.&lt;/p&gt;&lt;p&gt;&lt;strong&gt;ರೋಗನಿರೋಧಕ ಶಕ್ತಿಗೆ ಪೋಷಕಾಂಶಗಳ ಬೆಂಬಲ&lt;/strong&gt;&lt;/p&gt;&lt;p&gt;ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್&zwnj; E ಮತ್ತು ಜಿಂಕ್&zwnj;ನಂತಹ ಪೋಷಕಾಂಶಗಳಿವೆ. ಇವು ದೇಹದ ಸಾಮಾನ್ಯ ರೋಗನಿರೋಧಕ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಅಗತ್ಯವಾಗಿವೆ. ವಿಟಮಿನ್&zwnj; E ದೇಹದ ಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುವಲ್ಲಿ ಪಾತ್ರವಹಿಸುತ್ತದೆ. ಜಿಂಕ್ ಕೂಡ ದೇಹದ ಹಲವು ಜೈವಿಕ ಪ್ರಕ್ರಿಯೆಗಳು ಹಾಗೂ ಸಾಮಾನ್ಯ ರೋಗನಿರೋಧಕ ಕಾರ್ಯಕ್ಕೆ ಅಗತ್ಯವಾದ ಖನಿಜವಾಗಿದೆ. ಹೀಗಾಗಿ, ಸೂರ್ಯಕಾಂತಿ ಬೀಜಗಳನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸುವುದರಿಂದ ಈ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗಬಹುದು.&lt;/p&gt;&lt;p&gt;&lt;strong&gt;ಚರ್ಮದ ಆರೋಗ್ಯಕ್ಕೂ ಉಪಯುಕ್ತ&lt;/strong&gt;&lt;/p&gt;&lt;p&gt;ಸೂರ್ಯಕಾಂತಿ ಬೀಜಗಳಲ್ಲಿ ಕಂಡುಬರುವ ವಿಟಮಿನ್&zwnj; E ಮತ್ತು ಆರೋಗ್ಯಕರ ಕೊಬ್ಬುಗಳು ಚರ್ಮದ ಸಾಮಾನ್ಯ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡಬಹುದು. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಮರ್ಪಕವಾಗಿ ದೊರೆಯುವುದು ಒಟ್ಟಾರೆ ಚರ್ಮದ ಆರೋಗ್ಯಕ್ಕೂ ಮುಖ್ಯ. ಆದರೆ ಕೇವಲ ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಚರ್ಮದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಭಾವಿಸುವುದು ಸರಿಯಲ್ಲ.&lt;/p&gt;&lt;p&gt;&lt;strong&gt;ಉರಿಯೂತ ಕಡಿಮೆ ಮಾಡಲು ಸಹಾಯವಾಗುತ್ತದೆಯೇ?&lt;/strong&gt;&lt;/p&gt;&lt;p&gt;ಸೂರ್ಯಕಾಂತಿ ಬೀಜಗಳಲ್ಲಿ ವಿವಿಧ ಪೋಷಕಾಂಶಗಳು ಮತ್ತು ಸಸ್ಯ ಮೂಲದ ಸಂಯುಕ್ತಗಳು ಇರುತ್ತವೆ. ಇವುಗಳನ್ನು ಒಳಗೊಂಡ ಸಮತೋಲಿತ ಆಹಾರ ಪದ್ಧತಿ ದೇಹದ ಒಟ್ಟಾರೆ ಆರೋಗ್ಯಕ್ಕೆ ಸಹಾಯಕವಾಗಬಹುದು. ಆದರೆ ಸೂರ್ಯಕಾಂತಿ ಬೀಜಗಳು ಯಾವುದೇ ಕಾಯಿಲೆ ಅಥವಾ ಉರಿಯೂತಕ್ಕೆ ನೇರ ಚಿಕಿತ್ಸೆಯಲ್ಲ. ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.&lt;/p&gt;&lt;p&gt;&lt;strong&gt;ದಿನಕ್ಕೆ ಎಷ್ಟು ಸೇವಿಸಬೇಕು?&lt;/strong&gt;&lt;/p&gt;&lt;p&gt;ಸೂರ್ಯಕಾಂತಿ ಬೀಜಗಳು ಪೌಷ್ಟಿಕವಾಗಿದ್ದರೂ, ಅವುಗಳಲ್ಲಿ ಕ್ಯಾಲೊರಿಗಳ ಪ್ರಮಾಣವೂ ಹೆಚ್ಚಿರುತ್ತದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಸೇವಿಸುವ ಬದಲು ಮಿತ ಪ್ರಮಾಣದಲ್ಲಿ ಆಹಾರದ ಭಾಗವಾಗಿ ಸೇರಿಸಿಕೊಳ್ಳುವುದು ಉತ್ತಮ. ಉಪ್ಪು ಸೇರಿಸದ ಅಥವಾ ಕಡಿಮೆ ಉಪ್ಪಿನ ಸೂರ್ಯಕಾಂತಿ ಬೀಜಗಳನ್ನು ಆಯ್ಕೆ ಮಾಡುವುದು ಉತ್ತಮ ಆಯ್ಕೆಯಾಗಬಹುದು. ಇವುಗಳನ್ನು ನೇರವಾಗಿ ತಿನ್ನುವುದರ ಜೊತೆಗೆ ಸಲಾಡ್, ಓಟ್ಸ್, ಮೊಸರು ಅಥವಾ ಇತರ ಆಹಾರಗಳ ಮೇಲೂ ಸೇರಿಸಬಹುದು.&lt;/p&gt;&lt;h2&gt;&lt;strong&gt;ಬಾದಾಮಿ, ಗೋಡಂಬಿಗೆ ಪರ್ಯಾಯವೇ?&lt;/strong&gt;&lt;/h2&gt;&lt;p&gt;ಬಾದಾಮಿ ಮತ್ತು ಗೋಡಂಬಿಯಂತೆಯೇ ಸೂರ್ಯಕಾಂತಿ ಬೀಜಗಳಲ್ಲೂ ಹಲವು ಪೋಷಕಾಂಶಗಳಿವೆ. ಆದರೆ ಇವುಗಳನ್ನು ಬಾದಾಮಿ ಅಥವಾ ಗೋಡಂಬಿಗಿಂತ &ldquo;ಹೆಚ್ಚು ಶಕ್ತಿಶಾಲಿ&rdquo; ಎಂದು ಹೇಳುವುದು ಸರಿಯಲ್ಲ. ಪ್ರತಿಯೊಂದು ಬೀಜ ಮತ್ತು ಕಾಯಿಯೂ ವಿಭಿನ್ನ ಪೋಷಕಾಂಶಗಳನ್ನು ಹೊಂದಿರುತ್ತದೆ. ಹೀಗಾಗಿ, ವಿವಿಧ ಬಗೆಯ ಬೀಜಗಳು, ಕಾಯಿಗಳು, ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡ ಸಮತೋಲಿತ ಆಹಾರ ಪದ್ಧತಿ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ.&lt;/p&gt;&lt;p&gt;&lt;strong&gt;ಹಕ್ಕುತ್ಯಾಗ: &lt;/strong&gt;ಈ ಲೇಖನದಲ್ಲಿರುವ ಮಾಹಿತಿಯು ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆ ಅಥವಾ ಯಾವುದೇ ಕಾಯಿಲೆಗೆ ಚಿಕಿತ್ಸೆಯ ಪರ್ಯಾಯವಲ್ಲ. ನಿಮ್ಮ ಆಹಾರದಲ್ಲಿ ಯಾವುದೇ ಪ್ರಮುಖ ಬದಲಾವಣೆ ಮಾಡುವ ಮೊದಲು, ವಿಶೇಷವಾಗಿ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ, ಅಲರ್ಜಿ ಅಥವಾ ವಿಶೇಷ ಆಹಾರ ನಿರ್ಬಂಧಗಳಿದ್ದರೆ, ಅರ್ಹ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಸೂಕ್ತ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/sunflower-seeds-benefits-why-should-you-add-them-to-your-diet-gvd/articleshow-87vw031"/>
        </item>
        <item>
            <title><![CDATA['ಬೆಂಗಳೂರಿನಲ್ಲಿ ₹50 ಲಕ್ಷ ಪ್ಯಾಕೇಜ್‌ಗೂ ಬೆಲೆಯಿಲ್ವಾ?!': ಐಟಿ ಉದ್ಯೋಗಿಯ ಶಾಕಿಂಗ್ ವಿಶ್ಲೇಷಣೆ!]]></title>
            <link>https://kannada.asianetnews.com/viral/50-lpa-in-bengaluru-still-not-rich-techies-viral-cost-of-living-breakdown/articleshow-m36ca4n</link>
            <guid isPermaLink="true">https://kannada.asianetnews.com/viral/50-lpa-in-bengaluru-still-not-rich-techies-viral-cost-of-living-breakdown/articleshow-m36ca4n</guid>
            <pubDate>Sun, 09 Aug 2026 17:00:22 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ₹50 ಲಕ್ಷ ವಾರ್ಷಿಕ ಸಂಬಳ ಪಡೆದರೂ ದೊಡ್ಡ ಸಂಪತ್ತು ಕಟ್ಟುವುದು ಕಷ್ಟ ಎಂದು ಟೆಕ್ಕಿ ಅನ್ಮೋಲ್ ಅಗರ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ ವಾದಿಸಿದ್ದಾರೆ. ತೆರಿಗೆ ಬಳಿಕ ಸುಮಾರು ₹3 ಲಕ್ಷ ತಿಂಗಳ ಆದಾಯದಲ್ಲಿ ಬಾಡಿಗೆ, ಕಾರು, ದಿನಸಿ, ಜೀವನಶೈಲಿ ಖರ್ಚು ಸೇರಿ ಹೆಚ್ಚಿನ ಮೊತ್ತ ವ್ಯಯವಾಗುತ್ತದೆ. ಅವರ ಲೆಕ್ಕಾಚಾರ ಇದೀಗ ಆನ್&zwnj;ಲೈನ್&zwnj;ನಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgw4n7y7cspbjr782fm78kd,imgname-techies-viral-post-on-bengaluru-life-style---salary--1--1786199037182.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;₹50 ಲಕ್ಷ ಸಂಬಳ ಬಂದರೂ ಬೆಂಗಳೂರಿನಲ್ಲಿ ಶ್ರೀಮಂತರಾಗೋದು ಕಷ್ಟವೇ?&lt;/strong&gt;&lt;/p&gt;&lt;p&gt;ಬೆಂಗಳೂರು ದೇಶದ ಪ್ರಮುಖ ಟೆಕ್ ಹಬ್&zwnj;ಗಳಲ್ಲಿ ಒಂದಾಗಿದೆ. ಇಲ್ಲಿ ಲಕ್ಷಾಂತರ ಟೆಕ್ಕಿಗಳು ಹೆಚ್ಚಿನ ವೇತನ ಪಡೆಯುತ್ತಿದ್ದರೂ, ಹೆಚ್ಚಿನ ಸಂಬಳ ಎಂದರೆ ಹೆಚ್ಚಿನ ಸಂಪತ್ತು ಎಂದೇನಲ್ಲ ಎಂಬ ಚರ್ಚೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.&lt;/p&gt;&lt;p&gt;ಟೆಕ್ ಉದ್ಯೋಗಿ ಅನ್ಮೋಲ್ ಅಗರ್ವಾಲ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಬೆಂಗಳೂರಿನ ಜೀವನ ವೆಚ್ಚವನ್ನು ಗಮನಿಸಿದರೆ ₹50 ಲಕ್ಷ ವಾರ್ಷಿಕ ವೇತನವೂ ದೊಡ್ಡ ಸಂಪತ್ತು ಕಟ್ಟಲು ಸಾಕಾಗುವುದಿಲ್ಲ ಎಂದು ವಾದಿಸಿದ್ದಾರೆ. ಅವರ ಈ ಅಭಿಪ್ರಾಯ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;₹50 LPA ಸಂಬಳದಲ್ಲಿ ನಿಜವಾಗಿ ಕೈಗೆ ಸಿಗೋದು ಎಷ್ಟು?&lt;/strong&gt;&lt;/p&gt;&lt;p&gt;ಅಗರ್ವಾಲ್ ತಮ್ಮ ಲೆಕ್ಕಾಚಾರಕ್ಕಾಗಿ ₹50 ಲಕ್ಷವನ್ನೇ ಸಂಪೂರ್ಣ ಮೂಲ ವೇತನ ಎಂದು ಪರಿಗಣಿಸಿದ್ದಾರೆ. ತೆರಿಗೆ ಮತ್ತು EPF ಮುಂತಾದ ಕಡಿತಗಳ ನಂತರ ವಾರ್ಷಿಕವಾಗಿ ಸುಮಾರು ₹35 ಲಕ್ಷ ಉಳಿಯಬಹುದು ಎಂದು ಅವರು ಅಂದಾಜಿಸಿದ್ದಾರೆ. ಅಂದರೆ ತಿಂಗಳಿಗೆ ಸರಿಸುಮಾರು ₹3 ಲಕ್ಷ ಕೈಗೆ ಸಿಗುವ ಪರಿಸ್ಥಿತಿ ಎಂದು ಅವರು ಲೆಕ್ಕ ಹಾಕಿದ್ದಾರೆ.&lt;/p&gt;&lt;p&gt;&lt;strong&gt;ಬಾಡಿಗೆಗೇ ₹60&ndash;70 ಸಾವಿರ!&lt;/strong&gt;&lt;/p&gt;&lt;p&gt;ಬೆಂಗಳೂರಿನಲ್ಲಿ ಉತ್ತಮ ಪ್ರದೇಶದಲ್ಲಿ 2BHK ಮನೆಗೆ ತಿಂಗಳಿಗೆ ₹60,000&ndash;₹70,000 ಬಾಡಿಗೆ ಹೋಗಬಹುದು ಎಂಬುದು ಅವರ ಅಂದಾಜು. ಇದಕ್ಕೆ ಕೆಲಸದಾಳು, ಅಡುಗೆ ಸಹಾಯಕ, ದಿನಸಿ, ಜಿಮ್, ಶಾಪಿಂಗ್ ಮತ್ತು ಪ್ರಯಾಣದ ವೆಚ್ಚ ಸೇರಿಸಿದರೆ ತಿಂಗಳ ಖರ್ಚು ಸುಮಾರು ₹1.2&ndash;1.3 ಲಕ್ಷ ತಲುಪಬಹುದು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಕಾರು ಖರೀದಿಸಿದರೆ ಮತ್ತೊಂದು ದೊಡ್ಡ ಖರ್ಚು!&lt;/strong&gt;&lt;/p&gt;&lt;p&gt;ಕಾರು ಹೊಂದಿದ್ದರೆ EMI, ಇಂಧನ, ನಿರ್ವಹಣೆ, ವಿಮೆ ಸೇರಿದಂತೆ ತಿಂಗಳಿಗೆ ಸುಮಾರು ₹50,000 ಹೆಚ್ಚುವರಿ ವೆಚ್ಚವಾಗಬಹುದು ಎಂದು ಅಗರ್ವಾಲ್ ತಮ್ಮ ಉದಾಹರಣೆಯಲ್ಲಿ ಹೇಳಿದ್ದಾರೆ. ಮಕ್ಕಳಿರುವ ಕುಟುಂಬಗಳಿಗೆ ಶಿಕ್ಷಣ ಮತ್ತು ಇತರ ಖರ್ಚುಗಳು ಸೇರಿದರೆ ಉಳಿತಾಯದ ಮೊತ್ತ ಮತ್ತಷ್ಟು ಕಡಿಮೆಯಾಗಬಹುದು.&lt;/p&gt;&lt;p&gt;&lt;strong&gt;₹3 ಲಕ್ಷ ಸಂಬಳ... ಕೈಯಲ್ಲಿ ಉಳಿಯೋದು ₹1 ಲಕ್ಷ?&lt;/strong&gt;&lt;/p&gt;&lt;p&gt;ಈ ಎಲ್ಲ ವೆಚ್ಚಗಳನ್ನು ಕಳೆದ ನಂತರ ತಿಂಗಳಿಗೆ ಸುಮಾರು ₹1 ಲಕ್ಷದಷ್ಟು ಹಣವನ್ನು ಮಾತ್ರ ಹೂಡಿಕೆ ಅಥವಾ ಸಂಪತ್ತು ನಿರ್ಮಾಣಕ್ಕೆ ಮೀಸಲಿಡಲು ಸಾಧ್ಯವಾಗಬಹುದು ಎಂಬುದು ಅವರ ಲೆಕ್ಕಾಚಾರ. ಆದರೆ ಇದು ವ್ಯಕ್ತಿಯ ಜೀವನಶೈಲಿ, ಕುಟುಂಬದ ಗಾತ್ರ, ವಾಸಿಸುವ ಪ್ರದೇಶ ಮತ್ತು ಖರ್ಚಿನ ಅಭ್ಯಾಸದ ಮೇಲೆ ಬಹಳಷ್ಟು ಬದಲಾಗುತ್ತದೆ.&lt;/p&gt;&lt;p&gt;&lt;strong&gt;ಮನೆ ಖರೀದಿಸುವುದು ಮತ್ತೊಂದು ಸವಾಲು!&lt;/strong&gt;&lt;/p&gt;&lt;p&gt;ಬೆಂಗಳೂರಿನ ಆಸ್ತಿ ಬೆಲೆಗಳನ್ನೂ ಟೆಕ್ಕಿ ತಮ್ಮ ವಾದದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಇಂದು ಸುಮಾರು ₹3 ಕೋಟಿಗೆ ಇರುವ ಮನೆ ಮುಂದಿನ ದಿನಗಳಲ್ಲಿ ₹6&ndash;7 ಕೋಟಿಗೆ ಏರಬಹುದು ಎಂಬ ಉದಾಹರಣೆಯನ್ನು ಅವರು ನೀಡಿದ್ದಾರೆ. ಹೀಗಾಗಿ ಉತ್ತಮ ಸಂಬಳವಿದ್ದರೂ ಸ್ವಂತ ಮನೆ ಖರೀದಿಸುವುದು ಸುಲಭವಾಗುವುದಿಲ್ಲ ಎಂಬುದು ಅವರ ಅಭಿಪ್ರಾಯ.&lt;/p&gt;&lt;p&gt;&lt;strong&gt;ಹೆಚ್ಚು ಸಂಬಳಕ್ಕಿಂತ ಕಡಿಮೆ ಖರ್ಚಿನಲ್ಲಿ ಬದುಕುವುದೇ ಜಾಣತನ..!&lt;/strong&gt;&lt;/p&gt;&lt;p&gt;ಈ ಸಮಸ್ಯೆಗೆ ಪರ್ಯಾಯವಾಗಿ ರಿಮೋಟ್ ಉದ್ಯೋಗ ಅಥವಾ ಸ್ವಂತ ಉದ್ಯಮದಂತಹ ಆಯ್ಕೆಗಳನ್ನು ಅವರು ಸೂಚಿಸಿದ್ದಾರೆ. ಕಡಿಮೆ ಜೀವನ ವೆಚ್ಚವಿರುವ Tier-3 ನಗರದಲ್ಲಿ ವಾಸಿಸುತ್ತಾ ಹೆಚ್ಚಿನ ಆದಾಯ ಗಳಿಸುವುದು ಸಂಪತ್ತು ನಿರ್ಮಾಣಕ್ಕೆ ಹೆಚ್ಚು ಅನುಕೂಲಕರವಾಗಬಹುದು ಎಂಬುದು ಅವರ ವಾದ.&lt;/p&gt;&lt;p&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ!&lt;/strong&gt;&lt;/p&gt;&lt;p&gt;ಅವರ ವಿಡಿಯೋಗೆ ಕೆಲವರು ಬೆಂಬಲ ವ್ಯಕ್ತಪಡಿಸಿ ಬೆಂಗಳೂರಿನ ದುಬಾರಿ ಜೀವನದ ಅನುಭವವನ್ನು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು ವಿದೇಶದಲ್ಲಿ ಉದ್ಯೋಗ ಹುಡುಕುವುದು ಅಥವಾ ಬೇರೆ ನಗರಗಳಿಗೆ ತೆರಳುವುದು ಉತ್ತಮ ಆಯ್ಕೆ ಎಂದು ಪ್ರತಿಕ್ರಿಯಿಸಿದ್ದಾರೆ.&lt;/p&gt;View this post on Instagram&lt;p&gt;A post shared by Anmol Agarwal (@notaboringdeveloper)&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/50-lpa-in-bengaluru-still-not-rich-techies-viral-cost-of-living-breakdown/articleshow-m36ca4n"/>
        </item>
        <item>
            <title><![CDATA[ನೆಲ ಒರೆಸುವ ನೀರಿಗೆ ಇದನ್ನು ಸೇರಿಸಿ: ಮನೆ ಸ್ವಚ್ಛವಾಗುವುದರ ಜೊತೆಗೆ ತಾಜಾ ವಾಸನೆಯೂ ಇರುತ್ತೆ!]]></title>
            <link>https://kannada.asianetnews.com/life/floor-cleaning-tips-add-these-to-mop-water-for-cleaner-floors-gvd/articleshow-3m6ttib</link>
            <guid isPermaLink="true">https://kannada.asianetnews.com/life/floor-cleaning-tips-add-these-to-mop-water-for-cleaner-floors-gvd/articleshow-3m6ttib</guid>
            <pubDate>Sun, 09 Aug 2026 16:54:08 +0530</pubDate>
            <description><![CDATA[&lt;p&gt;ಪ್ರತಿದಿನ ನೆಲ ಒರೆಸುವುದು ಮನೆಯ ಸ್ವಚ್ಛತೆಯ ಪ್ರಮುಖ ಭಾಗ. ಆದರೆ ಕೆಲವೊಮ್ಮೆ ಚೆನ್ನಾಗಿ ಒರೆಸಿದ ಕೆಲವೇ ಗಂಟೆಗಳಲ್ಲಿ ನೆಲ ಮತ್ತೆ ಕೊಳೆಯಾಗಿ ಕಾಣಿಸಬಹುದು. ಕೆಲ ಸಂದರ್ಭಗಳಲ್ಲಿ ಮನೆಯಲ್ಲಿ ಅಹಿತಕರ ವಾಸನೆಯೂ ಕಾಣಿಸಿಕೊಳ್ಳಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzk47ngh8d0zthv5w0hwnhkt,imgname-h-1786274633232.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Homemade Floor Cleaner: &lt;/strong&gt;ಮನೆ ಸ್ವಚ್ಛವಾಗಿರುವುದು ಮಾತ್ರವಲ್ಲದೆ, ನೆಲ ಹೊಳೆಯುತ್ತಾ ಸುಗಂಧಭರಿತವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ದುಬಾರಿ ಕ್ಲೀನಿಂಗ್ ಉತ್ಪನ್ನಗಳನ್ನೇ ಬಳಸಬೇಕೆಂದಿಲ್ಲ. ಮನೆಯಲ್ಲೇ ಸಾಮಾನ್ಯವಾಗಿ ಸಿಗುವ ಕೆಲವು ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ನೆಲ ಒರೆಸುವ ನೀರಿಗೆ ಸೇರಿಸುವ ಮೂಲಕ ಸ್ವಚ್ಛತೆಗೆ ಸಹಾಯ ಮಾಡಬಹುದು.&lt;/p&gt;&lt;p&gt;ಪ್ರತಿದಿನ ನೆಲ ಒರೆಸುವುದು ಮನೆಯ ಸ್ವಚ್ಛತೆಯ ಪ್ರಮುಖ ಭಾಗ. ಆದರೆ ಕೆಲವೊಮ್ಮೆ ಚೆನ್ನಾಗಿ ಒರೆಸಿದ ಕೆಲವೇ ಗಂಟೆಗಳಲ್ಲಿ ನೆಲ ಮತ್ತೆ ಕೊಳೆಯಾಗಿ ಕಾಣಿಸಬಹುದು. ಕೆಲ ಸಂದರ್ಭಗಳಲ್ಲಿ ಮನೆಯಲ್ಲಿ ಅಹಿತಕರ ವಾಸನೆಯೂ ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಮನೆಯಲ್ಲಿರುವ ಕೆಲವು ಸಾಮಾನ್ಯ ವಸ್ತುಗಳನ್ನು ಬಳಸಬಹುದು. ಇವು ದುಬಾರಿ ಕ್ಲೀನರ್&zwnj;ಗಳಿಗೆ ಪರ್ಯಾಯವಾಗಬಹುದು ಎಂಬುದು ಜನಪ್ರಿಯ ಮನೆ ಸ್ವಚ್ಛತಾ ಸಲಹೆ. ಆದರೆ ಯಾವುದೇ ವಸ್ತುವನ್ನು ಬಳಸುವ ಮೊದಲು ನೆಲದ ಮೇಲ್ಮೈಗೆ ಅದು ಸೂಕ್ತವೇ ಎಂಬುದನ್ನು ಪರಿಶೀಲಿಸುವುದು ಮುಖ್ಯ.&lt;/p&gt;&lt;p&gt;&lt;strong&gt;ವೈಟ್ ವಿನೆಗರ್&lt;/strong&gt;&lt;/p&gt;&lt;p&gt;ನೆಲದ ಮೇಲೆ ಕಲೆಗಳು, ಜಿಡ್ಡು ಅಥವಾ ಕೊಳೆಯಿದ್ದರೆ ವೈಟ್ ವಿನೆಗರ್ ಕೆಲವು ಮೇಲ್ಮೈಗಳಲ್ಲಿ ಸ್ವಚ್ಛಗೊಳಿಸಲು ಸಹಾಯ ಮಾಡಬಹುದು. ಇದನ್ನು ನೆಲ ಒರೆಸುವ ನೀರಿಗೆ ಅಲ್ಪ ಪ್ರಮಾಣದಲ್ಲಿ ಸೇರಿಸಿ ಬಳಸಲಾಗುತ್ತದೆ. ವಿನೆಗರ್&zwnj;ನ ವಾಸನೆ ಆರಂಭದಲ್ಲಿ ಸ್ವಲ್ಪ ತೀವ್ರವಾಗಿರಬಹುದು. ಆದರೆ ನೆಲ ಒಣಗಿದ ನಂತರ ಸಾಮಾನ್ಯವಾಗಿ ಅದು ಕಡಿಮೆಯಾಗುತ್ತದೆ.&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ವಿನೆಗರ್ ಅನ್ನು ಮಾರ್ಬಲ್, ಗ್ರಾನೈಟ್ ಅಥವಾ ಇತರ ನೈಸರ್ಗಿಕ ಕಲ್ಲಿನ ಮೇಲ್ಮೈಗಳಲ್ಲಿ ಬಳಸುವುದು ಸೂಕ್ತವಲ್ಲ. ಆಮ್ಲೀಯ ಸ್ವಭಾವದಿಂದ ಮೇಲ್ಮೈ ಹಾನಿಗೊಳಗಾಗುವ ಸಾಧ್ಯತೆ ಇರುವುದರಿಂದ, ಮೊದಲು ಉತ್ಪನ್ನದ ಸೂಚನೆಗಳನ್ನು ಪರಿಶೀಲಿಸಿ.&lt;/p&gt;&lt;p&gt;&lt;strong&gt;ಬೇಕಿಂಗ್ ಸೋಡಾ&lt;/strong&gt;&lt;/p&gt;&lt;p&gt;ನೆಲದಲ್ಲಿ ಅಹಿತಕರ ವಾಸನೆ ಅಥವಾ ಹಳೆಯ ಕಲೆಗಳಿದ್ದರೆ ಬೇಕಿಂಗ್ ಸೋಡಾವನ್ನು ಕೆಲವು ಸಂದರ್ಭಗಳಲ್ಲಿ ಬಳಸಬಹುದು. ಇದು ಸೌಮ್ಯ ಸ್ಕ್ರಬ್ಬಿಂಗ್ ಏಜೆಂಟ್&zwnj;ನಂತೆ ಕಾರ್ಯನಿರ್ವಹಿಸಿ ಕೊಳೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಅಲ್ಪ ಪ್ರಮಾಣದ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಬೆರೆಸಿ ಬಳಸಬಹುದು. ಆದರೆ ನೆಲದ ಮೇಲ್ಮೈಗೆ ಹಾನಿಯಾಗದಂತೆ ಮೊದಲು ಸಣ್ಣ ಭಾಗದಲ್ಲಿ ಪರೀಕ್ಷಿಸುವುದು ಉತ್ತಮ.&lt;/p&gt;&lt;p&gt;&lt;strong&gt;ನಿಂಬೆ ರಸ&lt;/strong&gt;&lt;/p&gt;&lt;p&gt;ನಿಂಬೆ ರಸದಲ್ಲಿರುವ ಆಮ್ಲೀಯ ಅಂಶವು ಕೆಲವು ರೀತಿಯ ಕಲೆ ಮತ್ತು ಜಿಡ್ಡನ್ನು ಸಡಿಲಗೊಳಿಸಲು ಸಹಾಯ ಮಾಡಬಹುದು. ಜೊತೆಗೆ ನಿಂಬೆಯ ಸುವಾಸನೆಯಿಂದ ಮನೆಗೆ ತಾಜಾತನದ ಅನುಭವವೂ ಸಿಗಬಹುದು. ನೆಲ ಒರೆಸುವ ನೀರಿಗೆ ಸುಮಾರು 2ರಿಂದ 3 ಚಮಚ ನಿಂಬೆ ರಸವನ್ನು ಸೇರಿಸುವ ಸಲಹೆ ಜನಪ್ರಿಯವಾಗಿದೆ. ಆದರೆ ಕಲ್ಲಿನ ಅಥವಾ ಸೂಕ್ಷ್ಮ ಮೇಲ್ಮೈಗಳ ಮೇಲೆ ನಿಂಬೆ ರಸ ಬಳಸುವ ಮೊದಲು ಎಚ್ಚರಿಕೆ ವಹಿಸಬೇಕು.&lt;/p&gt;&lt;p&gt;&lt;strong&gt;ಸುಗಂಧ ತೈಲಗಳು&lt;/strong&gt;&lt;/p&gt;&lt;p&gt;ನೆಲ ಒರೆಸಿದ ನಂತರ ಮನೆಯಲ್ಲಿ ತಾಜಾ ಸುವಾಸನೆ ಇರಬೇಕೆಂದರೆ, ಕೆಲವು ಹನಿ ಸುಗಂಧ ತೈಲವನ್ನು ಬಳಸಬಹುದು. ಲ್ಯಾವೆಂಡರ್, ಪುದೀನಾ, ಯೂಕಲಿಪ್ಟಸ್ ಅಥವಾ ನಿಂಬೆ ಸುವಾಸನೆಯ ತೈಲಗಳು ಮನೆಯ ವಾತಾವರಣಕ್ಕೆ ಆಹ್ಲಾದಕರ ಪರಿಮಳ ನೀಡಬಹುದು. ಆದರೆ ಹೆಚ್ಚು ಪ್ರಮಾಣದಲ್ಲಿ ತೈಲ ಬಳಸುವುದರಿಂದ ನೆಲ ಜಾರುವಂತಾಗಬಹುದು. ಆದ್ದರಿಂದ ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವುದು ಉತ್ತಮ.&lt;/p&gt;&lt;p&gt;&lt;strong&gt;ಉಪ್ಪು&lt;/strong&gt;&lt;/p&gt;&lt;p&gt;ಅಡುಗೆಯಲ್ಲಿ ಬಳಸುವ ಉಪ್ಪನ್ನು ಮನೆ ಸ್ವಚ್ಛತೆಗೂ ಬಳಸಬಹುದು ಎಂಬ ನಂಬಿಕೆ ಇದೆ. ನೆಲ ಒರೆಸುವ ನೀರಿಗೆ ಸ್ವಲ್ಪ ಪ್ರಮಾಣದ ಉಪ್ಪು ಸೇರಿಸುವುದು ನೆಲದ ಸ್ವಚ್ಛತೆಗೆ ಸಹಾಯ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ. ಇದು ಇರುವೆಗಳು ಸೇರಿದಂತೆ ಕೆಲವು ಸಣ್ಣ ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ ಎಂಬ ಜನಪ್ರಿಯ ನಂಬಿಕೆಯೂ ಇದೆ. ಆದರೆ ಉಪ್ಪನ್ನು ಸೋಂಕುನಾಶಕ ಅಥವಾ ಕೀಟನಾಶಕಕ್ಕೆ ಪರ್ಯಾಯವೆಂದು ಪರಿಗಣಿಸಬಾರದು.&lt;/p&gt;&lt;h2&gt;&lt;strong&gt;ನೆಲ ಒರೆಸುವಾಗ ಈ ವಿಷಯ ಗಮನದಲ್ಲಿರಲಿ&lt;/strong&gt;&lt;/h2&gt;&lt;p&gt;ಮನೆಯಲ್ಲಿರುವ ಸಾಮಾನ್ಯ ವಸ್ತುಗಳನ್ನು ಬಳಸಿಕೊಂಡು ನೆಲ ಸ್ವಚ್ಛಗೊಳಿಸುವುದು ಸರಳ ಹಾಗೂ ಕಡಿಮೆ ವೆಚ್ಚದ ವಿಧಾನವಾಗಿರಬಹುದು. ಆದರೆ ಎಲ್ಲಾ ವಸ್ತುಗಳನ್ನೂ ಒಂದಕ್ಕೊಂದು ಬೆರೆಸುವುದು ಸುರಕ್ಷಿತವಲ್ಲ. ವಿಶೇಷವಾಗಿ ವಿನೆಗರ್ ಮತ್ತು ಬ್ಲೀಚ್&zwnj; ಅನ್ನು ಎಂದಿಗೂ ಒಟ್ಟಿಗೆ ಮಿಶ್ರಣ ಮಾಡಬಾರದು, ಏಕೆಂದರೆ ಅಪಾಯಕಾರಿ ಅನಿಲ ಬಿಡುಗಡೆಯಾಗಬಹುದು. ನೆಲದ ವಸ್ತುವಿನ ಸ್ವರೂಪಕ್ಕೆ ಅನುಗುಣವಾಗಿ ಕ್ಲೀನಿಂಗ್ ವಿಧಾನವನ್ನು ಆಯ್ಕೆ ಮಾಡುವುದು ಮುಖ್ಯ. ಸರಿಯಾದ ವಸ್ತುವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ, ನಿಮ್ಮ ಮನೆಯ ನೆಲವನ್ನು ಸ್ವಚ್ಛವಾಗಿ ಮತ್ತು ತಾಜಾತನದಿಂದ ಇಡಲು ಸಹಾಯವಾಗಬಹುದು. ದುಬಾರಿ ಕ್ಲೀನರ್ ಬಳಸುವ ಮೊದಲು ಮನೆಯಲ್ಲಿರುವ ಸರಳ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳುವುದು ಕೂಡ ಉಪಯುಕ್ತ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/life/floor-cleaning-tips-add-these-to-mop-water-for-cleaner-floors-gvd/articleshow-3m6ttib"/>
        </item>
        <item>
            <title><![CDATA[ಪುರುಷರಿಗೆ ಬಲ, ಮಹಿಳೆಯರಿಗೆ ಎಡ.. ಪ್ರತಿದಿನ ನೋಡಿದರೂ ಗಮನಿಸದ ಶರ್ಟ್ ಬಟನ್‌ಗಳ ಈ ವಿಚಿತ್ರ ವ್ಯತ್ಯಾಸ ಗೊತ್ತಾ?]]></title>
            <link>https://kannada.asianetnews.com/life/why-are-mens-shirt-buttons-on-the-right-and-womens-on-the-left-gvd/articleshow-bgracxf</link>
            <guid isPermaLink="true">https://kannada.asianetnews.com/life/why-are-mens-shirt-buttons-on-the-right-and-womens-on-the-left-gvd/articleshow-bgracxf</guid>
            <pubDate>Sun, 09 Aug 2026 16:33:48 +0530</pubDate>
            <description><![CDATA[&lt;p&gt;ಪುರುಷರ ಶರ್ಟ್&zwnj;ಗಳಲ್ಲಿ ಸಾಮಾನ್ಯವಾಗಿ ಬಟನ್&zwnj;ಗಳು ಬಲಭಾಗದಲ್ಲಿದ್ದರೆ, ಮಹಿಳೆಯರ ಶರ್ಟ್&zwnj;ಗಳಲ್ಲಿ ಅವು ಎಡಭಾಗದಲ್ಲಿರುವುದನ್ನು ನೀವು ಗಮನಿಸಿರಬಹುದು. ಇದು ಕೇವಲ ಫ್ಯಾಷನ್ ಅಥವಾ ವಿನ್ಯಾಸದ ವಿಚಾರವಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzk329fmjeqpg8jdqxx6frw0,imgname-jbj-1786273408500.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Shirt Buttons: &lt;/strong&gt;ಪುರುಷರ ಶರ್ಟ್&zwnj;ಗಳಲ್ಲಿ ಸಾಮಾನ್ಯವಾಗಿ ಬಟನ್&zwnj;ಗಳು ಬಲಭಾಗದಲ್ಲಿದ್ದರೆ, ಮಹಿಳೆಯರ ಶರ್ಟ್&zwnj;ಗಳಲ್ಲಿ ಅವು ಎಡಭಾಗದಲ್ಲಿರುವುದನ್ನು ನೀವು ಗಮನಿಸಿರಬಹುದು. ಇದು ಕೇವಲ ಫ್ಯಾಷನ್ ಅಥವಾ ವಿನ್ಯಾಸದ ವಿಚಾರವಲ್ಲ. ಈ ವಿಭಿನ್ನ ಬಟನ್&zwnj;ಗಳ ವಿನ್ಯಾಸದ ಹಿಂದೆ ಹಲವು ವರ್ಷಗಳಿಂದ ಹೇಳಿಕೊಂಡು ಬರುತ್ತಿರುವ ಐತಿಹಾಸಿಕ ಕಾರಣಗಳಿವೆ. ಆದರೆ, ಇದಕ್ಕೆ ಇದೇ ಒಂದು ಕಾರಣ ಎಂದು ಖಚಿತಪಡಿಸುವ ನಿರ್ದಿಷ್ಟ ಐತಿಹಾಸಿಕ ದಾಖಲೆಗಳು ಇಲ್ಲ ಎಂಬುದು ಗಮನಾರ್ಹ.&lt;/p&gt;&lt;p&gt;ಪುರುಷರು ಮತ್ತು ಮಹಿಳೆಯರು ಧರಿಸುವ ಶರ್ಟ್&zwnj;ಗಳಲ್ಲಿ ಬಟನ್&zwnj;ಗಳು ಒಂದೇ ಬದಿಯಲ್ಲಿ ಇರದಿರುವುದು ಇಂದಿಗೂ ಸಾಮಾನ್ಯವಾಗಿದೆ. ಪುರುಷರ ಶರ್ಟ್&zwnj;ಗಳಲ್ಲಿ ಬಲಭಾಗದಲ್ಲಿ ಹಾಗೂ ಮಹಿಳೆಯರ ಶರ್ಟ್&zwnj;ಗಳಲ್ಲಿ ಎಡಭಾಗದಲ್ಲಿ ಬಟನ್&zwnj;ಗಳನ್ನು ಅಳವಡಿಸುವ ಪದ್ಧತಿ ಹಲವು ಶತಮಾನಗಳಿಂದ ಮುಂದುವರಿದುಕೊಂಡು ಬಂದಿದೆ. ಆದರೆ ಈ ವಿನ್ಯಾಸದ ನಿಖರ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ಹಲವು ಭಿನ್ನಾಭಿಪ್ರಾಯಗಳಿವೆ.&lt;/p&gt;&lt;p&gt;&lt;strong&gt;ಶತಮಾನಗಳ ಹಿಂದಿನ ಉಡುಪು ಸಂಪ್ರದಾಯ&lt;/strong&gt;&lt;/p&gt;&lt;p&gt;ಬಟನ್&zwnj;ಗಳ ಈ ವಿನ್ಯಾಸ ಯುರೋಪ್&zwnj;ನಲ್ಲಿ ಹಲವು ಶತಮಾನಗಳ ಹಿಂದೆ ರೂಪುಗೊಂಡಿರಬಹುದು ಎಂದು ಇತಿಹಾಸದ ಅಧ್ಯಯನಗಳಲ್ಲಿ ಹೇಳಲಾಗುತ್ತದೆ. ಆ ಕಾಲದಲ್ಲಿ ಬಟನ್&zwnj;ಗಳು ಕೇವಲ ಬಟ್ಟೆಗಳನ್ನು ಮುಚ್ಚಲು ಬಳಸುವ ಸಾಮಾನ್ಯ ವಸ್ತುವಾಗಿರಲಿಲ್ಲ. ಶ್ರೀಮಂತರು ಧರಿಸುತ್ತಿದ್ದ ಉಡುಪುಗಳಲ್ಲಿ ಅವು ಅಲಂಕಾರಿಕ ಅಂಶವಾಗಿಯೂ ಕಾಣಿಸಿಕೊಳ್ಳುತ್ತಿದ್ದವು. ಕಾಲಕ್ರಮೇಣ ಪುರುಷರು ಮತ್ತು ಮಹಿಳೆಯರ ಉಡುಪುಗಳ ವಿನ್ಯಾಸದಲ್ಲಿ ಹಲವು ಬದಲಾವಣೆಗಳು ನಡೆದವು. ಅದರ ಭಾಗವಾಗಿ ಬಟನ್&zwnj;ಗಳನ್ನು ವಿಭಿನ್ನ ಬದಿಗಳಲ್ಲಿ ಅಳವಡಿಸುವ ಪದ್ಧತಿಯೂ ರೂಢಿಗೆ ಬಂದಿರಬಹುದು ಎನ್ನಲಾಗುತ್ತದೆ.&lt;/p&gt;&lt;p&gt;&lt;strong&gt;ಮಹಿಳೆಯರಿಗೆ ಇತರರು ಉಡುಪು ತೊಡಿಸುತ್ತಿದ್ದರೇ?&lt;/strong&gt;&lt;/p&gt;&lt;p&gt;ಮಹಿಳೆಯರ ಉಡುಪುಗಳಲ್ಲಿ ಬಟನ್&zwnj;ಗಳು ಎಡಭಾಗದಲ್ಲಿರಲು ನೀಡಲಾಗುವ ಪ್ರಮುಖ ವಿವರಣೆಗಳಲ್ಲಿ ಇದೂ ಒಂದು. ಹಿಂದಿನ ಕಾಲದಲ್ಲಿ, ವಿಶೇಷವಾಗಿ ಶ್ರೀಮಂತ ಕುಟುಂಬಗಳ ಮಹಿಳೆಯರು ಸ್ವತಃ ಉಡುಪು ಧರಿಸುವ ಬದಲು ಸಹಾಯಕರು ಅಥವಾ ಸೇವಕಿಯರ ನೆರವು ಪಡೆಯುತ್ತಿದ್ದರು ಎನ್ನಲಾಗುತ್ತದೆ. ಬಹುತೇಕ ಜನರು ಬಲಗೈ ಬಳಸುವವರಾಗಿರುವುದರಿಂದ, ಮಹಿಳೆಯ ಎದುರು ನಿಂತು ಆಕೆಗೆ ಉಡುಪು ತೊಡಿಸುವ ವ್ಯಕ್ತಿಗೆ ಬಟನ್&zwnj;ಗಳು ಎಡಭಾಗದಲ್ಲಿದ್ದರೆ ಅವುಗಳನ್ನು ಹಾಕುವುದು ಸುಲಭವಾಗಿರಬಹುದೆಂಬ ವಾದವಿದೆ. ಆದರೆ ಈ ವಿವರಣೆಯನ್ನು ಖಚಿತಪಡಿಸುವ ನೇರ ಐತಿಹಾಸಿಕ ಸಾಕ್ಷ್ಯಗಳು ಸೀಮಿತವಾಗಿವೆ.&lt;/p&gt;&lt;p&gt;&lt;strong&gt;ತಾಯಂದಿರಿಗೆ ಅನುಕೂಲವಾಗಲೆಂದು ಬಟನ್&zwnj;ಗಳ ವಿನ್ಯಾಸ?&lt;/strong&gt;&lt;/p&gt;&lt;p&gt;ಮಹಿಳೆಯರ ಉಡುಪುಗಳಲ್ಲಿ ಬಟನ್&zwnj;ಗಳು ಎಡಭಾಗದಲ್ಲಿರುವುದಕ್ಕೆ ಮತ್ತೊಂದು ಕುತೂಹಲಕಾರಿ ವಿವರಣೆಯೂ ಇದೆ. ಹಿಂದಿನ ಕಾಲದಲ್ಲಿ ತಾಯಂದಿರು ಮಗುವನ್ನು ಒಂದು ಕೈಯಲ್ಲಿ ಹಿಡಿದುಕೊಂಡೇ ಇನ್ನೊಂದು ಕೈಯಿಂದ ಉಡುಪಿನ ಬಟನ್&zwnj;ಗಳನ್ನು ತೆರೆಯಲು ಅಥವಾ ಮುಚ್ಚಲು ಅನುಕೂಲವಾಗುವಂತೆ ಈ ವಿನ್ಯಾಸ ರೂಪುಗೊಂಡಿರಬಹುದು ಎಂಬ ಸಿದ್ಧಾಂತವಿದೆ. ಆದರೆ ಈ ಕಾರಣಕ್ಕೂ ಖಚಿತ ಐತಿಹಾಸಿಕ ದಾಖಲೆಗಳಿಲ್ಲ. ಹೀಗಾಗಿ ಇದನ್ನು ಒಂದು ಸಾಧ್ಯತೆಯಾಗಿ ಮಾತ್ರ ಪರಿಗಣಿಸಲಾಗುತ್ತದೆ.&lt;/p&gt;&lt;p&gt;&lt;strong&gt;ಪುರುಷರ ಶರ್ಟ್&zwnj;ಗಳಲ್ಲಿ ಬಟನ್&zwnj;ಗಳು ಬಲಭಾಗದಲ್ಲಿರುವುದೇಕೆ?&lt;/strong&gt;&lt;/p&gt;&lt;p&gt;ಪುರುಷರ ಉಡುಪುಗಳಲ್ಲಿ ಬಟನ್&zwnj;ಗಳು ಬಲಭಾಗದಲ್ಲಿರುವುದಕ್ಕೆ ಯುದ್ಧ ಮತ್ತು ಆಯುಧ ಬಳಕೆಯೊಂದಿಗೆ ಸಂಬಂಧಿಸಿದ ಒಂದು ಸಿದ್ಧಾಂತವೂ ಇದೆ. ಹಿಂದಿನ ಕಾಲದಲ್ಲಿ ಪುರುಷರು ಕತ್ತಿ ಸೇರಿದಂತೆ ವಿವಿಧ ಆಯುಧಗಳನ್ನು ಬಲಗೈಯಿಂದ ಬಳಸುತ್ತಿದ್ದರು. ಹೀಗಾಗಿ ಆಯುಧವನ್ನು ಹೊರತೆಗೆಯುವಾಗ ಅಥವಾ ಬಳಸುವಾಗ ಉಡುಪಿನ ಮುಂಭಾಗದ ಭಾಗ ಅಡ್ಡಿಯಾಗದಂತೆ ಬಟನ್&zwnj;ಗಳ ವಿನ್ಯಾಸ ರೂಪುಗೊಂಡಿರಬಹುದು ಎಂಬ ವಾದವಿದೆ. ಆದರೆ ಇದೂ ಸಹ ಇತಿಹಾಸದಲ್ಲಿ ಜನಪ್ರಿಯವಾಗಿರುವ ವಿವರಣೆಗಳಲ್ಲಿ ಒಂದೇ ಹೊರತು, ಖಚಿತವಾಗಿ ಸಾಬೀತಾದ ಕಾರಣವಲ್ಲ.&lt;/p&gt;&lt;p&gt;&lt;strong&gt;ಹಾಗಾದರೆ ನಿಜವಾದ ಕಾರಣ ಯಾವುದು?&lt;/strong&gt;&lt;/p&gt;&lt;p&gt;ಪುರುಷರ ಶರ್ಟ್&zwnj;ಗಳಲ್ಲಿ ಬಟನ್&zwnj;ಗಳು ಬಲಭಾಗದಲ್ಲೂ, ಮಹಿಳೆಯರ ಶರ್ಟ್&zwnj;ಗಳಲ್ಲಿ ಎಡಭಾಗದಲ್ಲೂ ಇರುವುದಕ್ಕೆ ಒಂದೇ ಒಂದು ಕಾರಣವನ್ನು ಖಚಿತವಾಗಿ ಸಾಬೀತುಪಡಿಸುವ ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲ. ಮಹಿಳೆಯರಿಗೆ ಇತರರು ಉಡುಪು ತೊಡಿಸುತ್ತಿದ್ದ ಸಾಮಾಜಿಕ ಪದ್ಧತಿ, ತಾಯಂದಿರಿಗೆ ಅನುಕೂಲ, ಪುರುಷರ ಆಯುಧ ಬಳಕೆ ಸೇರಿದಂತೆ ಹಲವು ಸಿದ್ಧಾಂತಗಳು ಇದಕ್ಕೆ ಕಾರಣಗಳಾಗಿ ಹೇಳಲ್ಪಡುತ್ತವೆ. ಇವುಗಳಲ್ಲಿ ಇತರರು ಮಹಿಳೆಯರಿಗೆ ಉಡುಪು ತೊಡಿಸುತ್ತಿದ್ದ ಪದ್ಧತಿಗೆ ಸಂಬಂಧಿಸಿದ ವಿವರಣೆ ಹೆಚ್ಚು ಜನಪ್ರಿಯವಾಗಿದ್ದರೂ, ಅದನ್ನೂ ಸಂಪೂರ್ಣವಾಗಿ ಸಾಬೀತಾದ ಐತಿಹಾಸಿಕ ಸತ್ಯ ಎಂದು ಹೇಳಲು ಸಾಧ್ಯವಿಲ್ಲ.&lt;/p&gt;&lt;h2&gt;&lt;strong&gt;ಶತಮಾನಗಳ ಹಿಂದಿನ ಪದ್ಧತಿ ಇಂದಿಗೂ ಏಕೆ ಮುಂದುವರಿದಿದೆ?&lt;/strong&gt;&lt;/h2&gt;&lt;p&gt;ಕಾಲ ಬದಲಾಯಿತು. ಜನರ ಜೀವನಶೈಲಿ ಬದಲಾಯಿತು. ಮಹಿಳೆಯರು ಮತ್ತು ಪುರುಷರು ಉಡುಪು ಧರಿಸುವ ವಿಧಾನದಲ್ಲೂ ಸಾಕಷ್ಟು ಬದಲಾವಣೆಗಳಾದವು. ಆದರೆ ಶರ್ಟ್&zwnj;ಗಳ ಬಟನ್&zwnj;ಗಳ ಈ ವಿಭಿನ್ನ ವಿನ್ಯಾಸ ಮಾತ್ರ ಇಂದಿಗೂ ಮುಂದುವರಿದಿದೆ. ಫ್ಯಾಷನ್ ಕ್ಷೇತ್ರದಲ್ಲಿ ಹಲವು ಹೊಸ ವಿನ್ಯಾಸಗಳು ಬಂದರೂ, ಪುರುಷರ ಶರ್ಟ್&zwnj;ಗಳಿಗೆ ಬಲಭಾಗದಲ್ಲಿ ಮತ್ತು ಮಹಿಳೆಯರ ಶರ್ಟ್&zwnj;ಗಳಿಗೆ ಎಡಭಾಗದಲ್ಲಿ ಬಟನ್&zwnj;ಗಳನ್ನು ಅಳವಡಿಸುವ ಸಾಂಪ್ರದಾಯಿಕ ಪದ್ಧತಿ ಇನ್ನೂ ವ್ಯಾಪಕವಾಗಿದೆ. ಹೀಗಾಗಿ, ನೀವು ಮುಂದಿನ ಬಾರಿ ಶರ್ಟ್&zwnj; ಧರಿಸುವಾಗ ಅದರ ಬಟನ್&zwnj;ಗಳು ಯಾವ ಬದಿಯಲ್ಲಿವೆ ಎಂಬುದನ್ನು ಒಮ್ಮೆ ಗಮನಿಸಿ. ನೀವು ಪ್ರತಿದಿನ ಬಳಸುವ ಈ ಸಣ್ಣ ವಿನ್ಯಾಸದ ಹಿಂದೆ ಶತಮಾನಗಳಷ್ಟು ಹಳೆಯ ಉಡುಪು ಸಂಪ್ರದಾಯ ಮತ್ತು ಹಲವು ಕುತೂಹಲಕಾರಿ ಐತಿಹಾಸಿಕ ಸಿದ್ಧಾಂತಗಳಿವೆ!&lt;/p&gt;&lt;p&gt;&lt;strong&gt;ಹಕ್ಕುತ್ಯಾಗ: &lt;/strong&gt;ಈ ಲೇಖನದಲ್ಲಿರುವ ಜೀವನಶೈಲಿ ಮತ್ತು ಐತಿಹಾಸಿಕ ಮಾಹಿತಿಗಳು ಸಾಮಾನ್ಯ ಅರಿವು ಹಾಗೂ ಜಾಗೃತಿಗಾಗಿ ಮಾತ್ರ. ಇಲ್ಲಿ ನೀಡಿರುವ ಐತಿಹಾಸಿಕ ವಿವರಣೆಗಳಲ್ಲಿ ಕೆಲವು ಸಿದ್ಧಾಂತಗಳು ಮತ್ತು ಜನಪ್ರಿಯ ನಂಬಿಕೆಗಳನ್ನು ಒಳಗೊಂಡಿವೆ. ಅವುಗಳನ್ನು ಖಚಿತವಾಗಿ ಸಾಬೀತಾದ ಐತಿಹಾಸಿಕ ಸಂಗತಿಗಳೆಂದು ಪರಿಗಣಿಸಬಾರದು.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/life/why-are-mens-shirt-buttons-on-the-right-and-womens-on-the-left-gvd/articleshow-bgracxf"/>
        </item>
        <item>
            <title><![CDATA[‘S’ ಆಕಾರದಲ್ಲಿ ಓಡಿದರೆ ಹಾವಿನಿಂದ ತಪ್ಪಿಸಿಕೊಳ್ಳಬಹುದಾ? ಅಸಲಿ ಸತ್ಯ ಇಲ್ಲಿದೆ]]></title>
            <link>https://kannada.asianetnews.com/life/snake-attack-should-you-run-in-an-s-shape-to-escape-gvd/articleshow-97ky7g1</link>
            <guid isPermaLink="true">https://kannada.asianetnews.com/life/snake-attack-should-you-run-in-an-s-shape-to-escape-gvd/articleshow-97ky7g1</guid>
            <pubDate>Sun, 09 Aug 2026 16:17:26 +0530</pubDate>
            <description><![CDATA[&lt;p&gt;ಹಾವು ಬೆನ್ನಟ್ಟಿದಾಗ &lsquo;S&rsquo; ಆಕಾರದಲ್ಲಿ ಓಡಿದರೆ ಅದರಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹರಿದಾಡುತ್ತದೆ. ಆದರೆ ಇದಕ್ಕೆ ಯಾವುದೇ ಖಚಿತ ವೈಜ್ಞಾನಿಕ ಆಧಾರವಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzk24c3cm9p27cgmn1xgby5p,imgname-kk-1786272428140.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Snake Attack: &lt;/strong&gt;ಹಾವು ಬೆನ್ನಟ್ಟಿದಾಗ &lsquo;S&rsquo; ಆಕಾರದಲ್ಲಿ ಓಡಿದರೆ ಅದರಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹರಿದಾಡುತ್ತದೆ. ಆದರೆ ಇದಕ್ಕೆ ಯಾವುದೇ ಖಚಿತ ವೈಜ್ಞಾನಿಕ ಆಧಾರವಿಲ್ಲ. ಸಾಮಾನ್ಯವಾಗಿ ಹಾವುಗಳು ಮನುಷ್ಯರನ್ನು ಬೇಟೆಯಾಡಲು ಬೆನ್ನಟ್ಟುವುದಿಲ್ಲ. ಹೀಗಾಗಿ ಹಾವು ಕಂಡಾಗ ಗಾಬರಿಯಾಗದೆ, ಸುರಕ್ಷಿತ ಅಂತರ ಕಾಯ್ದುಕೊಂಡು ನಿಧಾನವಾಗಿ ದೂರ ಸರಿಯುವುದು ಹೆಚ್ಚು ಸುರಕ್ಷಿತ.&lt;/p&gt;&lt;p&gt;ಹಾವುಗಳು ಸಾಮಾನ್ಯವಾಗಿ ಮನುಷ್ಯರನ್ನು ಕಂಡಾಗ ಸಂಘರ್ಷಕ್ಕೆ ಮುಂದಾಗುವುದಕ್ಕಿಂತ ದೂರ ಸರಿಯಲು ಪ್ರಯತ್ನಿಸುತ್ತವೆ. ಆದರೆ ತಮಗೆ ಅಪಾಯ ಎದುರಾಗಿದೆ ಅಥವಾ ತಮ್ಮನ್ನು ಕೆಣಕಲಾಗುತ್ತಿದೆ ಎಂದು ಭಾವಿಸಿದರೆ ಆತ್ಮರಕ್ಷಣೆಗಾಗಿ ದಾಳಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಹಾವನ್ನು ಕಂಡ ತಕ್ಷಣ ಅದನ್ನು ಹಿಡಿಯಲು, ಹೊಡೆಯಲು ಅಥವಾ ಓಡಿಸಲು ಪ್ರಯತ್ನಿಸುವುದು ಅಪಾಯಕಾರಿ.&lt;/p&gt;&lt;p&gt;&lt;strong&gt;ಸಾಮಾಜಿಕ ಜಾಲತಾಣಗಳಲ್ಲಿ ಹರಡುವ &lsquo;S&rsquo; ಆಕಾರದ ಓಟದ ನಂಬಿಕೆ&lt;/strong&gt;&lt;/p&gt;&lt;p&gt;ಹಾವು ಬೆನ್ನಟ್ಟಿದರೆ ನೇರವಾಗಿ ಓಡುವ ಬದಲು ಬಲಕ್ಕೆ, ಎಡಕ್ಕೆ ತಿರುಗುತ್ತಾ &lsquo;S&rsquo; ಆಕಾರದಲ್ಲಿ ಓಡಿದರೆ ಹಾವಿನಿಂದ ತಪ್ಪಿಸಿಕೊಳ್ಳಬಹುದು ಎಂಬ ನಂಬಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಣಿಸಿಕೊಳ್ಳುತ್ತದೆ. ಹಾವುಗಳು ಚಲಿಸುವ ರೀತಿಯನ್ನು ಆಧರಿಸಿ ಈ ಕಲ್ಪನೆ ಜನಪ್ರಿಯವಾಗಿರಬಹುದು. ಆದರೆ ಮನುಷ್ಯರು ಹೀಗೆ ಓಡುವುದರಿಂದ ಹಾವಿನಿಂದ ತಪ್ಪಿಸಿಕೊಳ್ಳಬಹುದು ಎಂಬುದನ್ನು ದೃಢಪಡಿಸುವ ವಿಶ್ವಾಸಾರ್ಹ ವೈಜ್ಞಾನಿಕ ಸಾಕ್ಷ್ಯವಿಲ್ಲ.&lt;/p&gt;&lt;p&gt;&lt;strong&gt;ಹಾವು ಮನುಷ್ಯರನ್ನು ಬೆನ್ನಟ್ಟುತ್ತದೆಯೇ?&lt;/strong&gt;&lt;/p&gt;&lt;p&gt;ಸಾಮಾನ್ಯವಾಗಿ ಹಾವುಗಳು ಮನುಷ್ಯರನ್ನು ಬೇಟೆಯಾಡುವ ಉದ್ದೇಶದಿಂದ ಬೆನ್ನಟ್ಟುವುದಿಲ್ಲ. ಮನುಷ್ಯರನ್ನು ಎದುರಿಸಿದಾಗ ಬಹುತೇಕ ಹಾವುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಅಲ್ಲಿಂದ ದೂರ ಹೋಗಲು ಪ್ರಯತ್ನಿಸುತ್ತವೆ. ಆದರೆ ಅವುಗಳಿಗೆ ಬೆದರಿಕೆ ಎದುರಾಗಿದೆ ಎಂದು ಅನಿಸಿದರೆ ಆತ್ಮರಕ್ಷಣೆಗಾಗಿ ದಾಳಿ ಮಾಡಬಹುದು. ಕೆಲವೊಮ್ಮೆ ಹಾವು ತನ್ನ ಸುರಕ್ಷತೆಗಾಗಿ ಅಥವಾ ಸಮೀಪದಲ್ಲಿರುವ ಗೂಡು, ಮರಿಗಳು ಅಥವಾ ಆಶ್ರಯ ಪ್ರದೇಶವನ್ನು ರಕ್ಷಿಸಲು ವೇಗವಾಗಿ ಚಲಿಸಬಹುದು. ಇದನ್ನು ಮನುಷ್ಯನನ್ನು ಉದ್ದೇಶಪೂರ್ವಕವಾಗಿ ಬೆನ್ನಟ್ಟುತ್ತಿರುವಂತೆ ತಪ್ಪಾಗಿ ಅರ್ಥೈಸುವ ಸಾಧ್ಯತೆಯೂ ಇದೆ.&lt;/p&gt;&lt;p&gt;&lt;strong&gt;&lsquo;S&rsquo; ಆಕಾರದಲ್ಲಿ ಓಡುವುದು ಸುರಕ್ಷಿತವೇ?&lt;/strong&gt;&lt;/p&gt;&lt;p&gt;ಹಾವಿನಿಂದ ತಪ್ಪಿಸಿಕೊಳ್ಳಲು ನಿರ್ದಿಷ್ಟವಾಗಿ &lsquo;S&rsquo; ಆಕಾರದಲ್ಲಿ ಓಡಬೇಕು ಎಂಬುದಕ್ಕೆ ಖಚಿತ ವೈಜ್ಞಾನಿಕ ಆಧಾರವಿಲ್ಲ. ಬದಲಾಗಿ, ಗಾಬರಿಯಿಂದ ಅಡ್ಡಾದಿಡ್ಡಿಯಾಗಿ ಓಡುವುದರಿಂದ ಕಾಲು ಜಾರಿ ಬೀಳುವ ಅಥವಾ ಅಪಾಯದ ಪರಿಸ್ಥಿತಿಗೆ ಸಿಲುಕುವ ಸಾಧ್ಯತೆ ಹೆಚ್ಚಬಹುದು. ಹೀಗಾಗಿ ಹಾವನ್ನು ಎದುರಿಸಿದ ಸಂದರ್ಭದಲ್ಲಿ ಮುಖ್ಯವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮತ್ತು ಹಾವಿನಿಂದ ದೂರ ಸರಿಯುವುದು ಅತ್ಯಂತ ಮುಖ್ಯ.&lt;/p&gt;&lt;p&gt;&lt;strong&gt;ಹಾವು ಕಂಡರೆ ಏನು ಮಾಡಬೇಕು?&lt;/strong&gt;&lt;/p&gt;&lt;p&gt;ಮನೆ, ತೋಟ ಅಥವಾ ಹೊರಾಂಗಣದಲ್ಲಿ ಹಾವು ಕಾಣಿಸಿಕೊಂಡರೆ ಅದನ್ನು ಸಮೀಪಿಸಿ ಓಡಿಸಲು ಪ್ರಯತ್ನಿಸಬಾರದು. ಹಾವನ್ನು ಹೊಡೆಯುವುದು, ಹಿಡಿಯುವುದು ಅಥವಾ ಅದರ ಮೇಲೆ ವಸ್ತುಗಳನ್ನು ಎಸೆಯುವುದು ಅಪಾಯಕಾರಿ. ಗಾಬರಿಯಾಗದೆ ನಿಧಾನವಾಗಿ ಹಿಂದೆ ಸರಿದು ಸುರಕ್ಷಿತ ಸ್ಥಳಕ್ಕೆ ತೆರಳುವುದು ಉತ್ತಮ. ಸಾಧ್ಯವಾದರೆ ಹಾವಿಗೆ ಸ್ವತಃ ಅಲ್ಲಿಂದ ತೆರಳಲು ಅವಕಾಶ ನೀಡಬೇಕು. ಹಾವು ಇರುವ ಸ್ಥಳವನ್ನು ಸುರಕ್ಷಿತ ಅಂತರದಿಂದ ಗಮನಿಸಿ, ಅಗತ್ಯವಿದ್ದರೆ ತರಬೇತಿ ಪಡೆದ ಹಾವು ರಕ್ಷಕರ ನೆರವನ್ನು ಪಡೆಯಬಹುದು.&lt;/p&gt;&lt;h2&gt;&lt;strong&gt;ಹಾವು ಕಚ್ಚಿದರೆ ತಕ್ಷಣ ಏನು ಮಾಡಬೇಕು?&lt;/strong&gt;&lt;/h2&gt;&lt;p&gt;ಹಾವು ಕಚ್ಚಿದೆ ಎಂಬ ಅನುಮಾನವಿದ್ದರೂ ಸಮಯ ವ್ಯರ್ಥ ಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಕಚ್ಚಿದ ಜಾಗವನ್ನು ಕತ್ತರಿಸುವುದು, ವಿಷವನ್ನು ಬಾಯಿಯಿಂದ ಹೀರುವುದು, ಮನೆಮದ್ದು ಪ್ರಯೋಗಿಸುವುದು ಅಥವಾ ಯಾವುದೇ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವುದು ಅಪಾಯಕಾರಿ. ಹಾವು ಕಚ್ಚಿದ ಸಂದರ್ಭದಲ್ಲಿ ಸಾಧ್ಯವಾದಷ್ಟು ಶಾಂತವಾಗಿದ್ದು, ದೇಹದ ಚಲನವಲನವನ್ನು ಕಡಿಮೆ ಮಾಡಿಕೊಂಡು, ತಕ್ಷಣ ಆಸ್ಪತ್ರೆಗೆ ತೆರಳುವುದು ಅತ್ಯಂತ ಸುರಕ್ಷಿತ ಕ್ರಮವಾಗಿದೆ.&lt;/p&gt;&lt;p&gt;&lt;strong&gt;ಮುಖ್ಯವಾಗಿ: &lt;/strong&gt;ಹಾವು ಬೆನ್ನಟ್ಟಿದಾಗ &lsquo;S&rsquo; ಆಕಾರದಲ್ಲಿ ಓಡಿದರೆ ಖಂಡಿತವಾಗಿ ತಪ್ಪಿಸಿಕೊಳ್ಳಬಹುದು ಎಂಬುದು ದೃಢಪಟ್ಟ ವೈಜ್ಞಾನಿಕ ಸತ್ಯವಲ್ಲ. ಹಾವನ್ನು ಕಂಡಾಗ ಗಾಬರಿಯಾಗದೆ ಸುರಕ್ಷಿತ ಅಂತರ ಕಾಯ್ದುಕೊಂಡು ದೂರ ಸರಿಯುವುದು ಮತ್ತು ಹಾವು ಕಚ್ಚಿದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ.&lt;/p&gt;&lt;p&gt;&lt;strong&gt;ಹಕ್ಕುತ್ಯಾಗ: &lt;/strong&gt;ಈ ಲೇಖನದಲ್ಲಿರುವ ಆರೋಗ್ಯ ಮತ್ತು ಜೀವನಶೈಲಿ ಮಾಹಿತಿಗಳು ಸಾಮಾನ್ಯ ಜಾಗೃತಿಗಾಗಿ ಮಾತ್ರ. ಇವು ವೈದ್ಯಕೀಯ ಸಲಹೆಯಲ್ಲ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಹಾವು ಕಡಿತದ ಸಂದರ್ಭದಲ್ಲಿ ಅರ್ಹ ವೈದ್ಯಕೀಯ ತಜ್ಞರ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಅಗತ್ಯ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/life/snake-attack-should-you-run-in-an-s-shape-to-escape-gvd/articleshow-97ky7g1"/>
        </item>
        <item>
            <title><![CDATA[ಮನೆಯ ಬಾಗಿಲಿಗೆ ಇದೊಂದು ಬೇರು ಕಟ್ಟಿದರೆ ಸಾಕು; ಮನೆಯೊಳಕ್ಕೆ ಹಾವು ಬರೋದಿಲ್ಲ! ಗೊತ್ತಾ ಈ ರಹಸ್ಯ?]]></title>
            <link>https://kannada.asianetnews.com/health-life/try-the-root-of-the-sarpagandha-plant-to-the-door-of-the-house-prevents-snakes-from-entering/articleshow-n1bddmy</link>
            <guid isPermaLink="true">https://kannada.asianetnews.com/health-life/try-the-root-of-the-sarpagandha-plant-to-the-door-of-the-house-prevents-snakes-from-entering/articleshow-n1bddmy</guid>
            <pubDate>Sun, 09 Aug 2026 15:44:52 +0530</pubDate>
            <description><![CDATA[&lt;p&gt;ಯಾವುದೇ ಹಾವನ್ನು ಕಂಡಾಗ ಗಾಬರಿಗೊಂಡು ಅದನ್ನು ಹೊಡೆಯಲು ಹೋಗಬೇಡಿ. ಪ್ರತಿಯೊಂದು ಜೀವಿಯೂ ಪ್ರಕೃತಿಯ ಸಮತೋಲನಕ್ಕೆ ಮುಖ್ಯ. ಹಾವಿನಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಮತ್ತು ತಕ್ಷಣ ತರಬೇತಿ ಪಡೆದ ಉರಗ ರಕ್ಷಕರಿಗೆ ಅಥವಾ ಅರಣ್ಯ ಇಲಾಖೆಗೆ ಕರೆ ಮಾಡಿ. ಈ ಬೇರು ಹಾವು ಬಾಗಿಲಿಗೆ ಕಟ್ಟಿದರೆ ಹಾವು ಮನೆಯೊಳಕ್ಕೆ ಬರೋದಿಲ್ಲ, ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjzckcfrs17cgzhejmtbgbv,imgname-snake-medicine-sarphagandha-1786269552014.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Sarpagandha plant to the door of the house prevents snakes from entering: ಮನೆಯ ಬಾಗಿಲಿಗೆ ಸರ್ಪಗಂಧ ಗಿಡದ ಬೇರನ್ನು ಕಟ್ಟಿದರೆ ಹಾವುಗಳು ಮನೆಯ ಒಳಗೆ ಬರುವುದಿಲ್ಲ: ಆದರೆ ಹೇಗೆ ಬಳಸುವುದು?&lt;/strong&gt;&lt;/p&gt;&lt;p&gt;ಮಳೆಗಾಲದ ಸೌಂದರ್ಯವನ್ನು ಸವಿಯುವ ಹೊತ್ತಲ್ಲಿ, ನಮ್ಮ ಮನೆಯೊಳಗೆ ಅರಿಯದ ಅತಿಥಿಗಳಂತೆ ಹಾವುಗಳು ಬರುವ ಭೀತಿ ಎಲ್ಲರನ್ನೂ ಕಾಡುತ್ತದೆ. ಈ ಮಳೆಗಾಲದ ಲೈಫ್&zwnj;ಸ್ಟೈಲ್&zwnj;ಗೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಹಿರಿಯರ ಬಾಯಲ್ಲಿ ಕೇಳಿಬರುವ ಒಂದು ಕುತೂಹಲಕಾರಿ ವಿಷಯವೆಂದರೆ &quot;ಮನೆಯ ಬಾಗಿಲಿಗೆ ಒಂದು ಗಿಡದ ಬೇರು ಕಟ್ಟಿದರೆ ಹಾವುಗಳು ಹತ್ತಿರ ಸುಳಿಯುವುದಿಲ್ಲ&quot; ಎಂಬ ಮಾತು. ಇದು ಕೇವಲ ಮೂಢನಂಬಿಕೆಯೋ ಅಥವಾ ಇದರ ಹಿಂದೆ ಏನಾದರೂ ಮರ್ಮವಿದೆಯೇ? ಈ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.&lt;/p&gt;&lt;p&gt;ಸಂಪ್ರದಾಯ ಮತ್ತು ನಂಬಿಕೆಯ 'ಸರ್ಪಗಂಧ':&lt;/p&gt;&lt;p&gt;ಆಯುರ್ವೇದದಲ್ಲಿ ಹೆಸರುವಾಸಿಯಾದ 'ಸರ್ಪಗಂಧ' ಸಸ್ಯಕ್ಕೆ ಹಾವುಗಳನ್ನು ದೂರವಿಡುವ ಶಕ್ತಿಯಿದೆ ಎಂಬ ದಟ್ಟವಾದ ನಂಬಿಕೆ ನಮ್ಮ ಜನಪದದಲ್ಲಿದೆ. ಮಳೆಗಾಲ ಆರಂಭವಾದ ಕೂಡಲೇ ಹಳ್ಳಿಗಳಲ್ಲಿ ಮತ್ತು ಕೆಲವು ನಗರ ಪ್ರದೇಶಗಳಲ್ಲಿಯೂ ಸರ್ಪಗಂಧದ ಬೇರನ್ನು ಮನೆಯ ಹೊಸ್ತಿಲಿಗೆ ಅಥವಾ ಕಿಟಕಿಗಳಿಗೆ ಕಟ್ಟುತ್ತಾರೆ. ಈ ಬೇರಿನಿಂದ ಹೊರಬರುವ ವಿಶಿಷ್ಟವಾದ ವಾಸನೆ ಹಾವಿನ ಘ್ರಾಣಶಕ್ತಿಗೆ ಕಿರಿಕಿರಿ ಉಂಟುಮಾಡುತ್ತದೆ, ಹಾಗಾಗಿ ಹಾವುಗಳು ಆ ಕಡೆ ಬರುವುದಿಲ್ಲ ಎಂಬುದು ಅನೇಕರ ವಾದ. ಆದರೆ, ನೆನಪಿರಲಿ, ಇದಕ್ಕೆ ಯಾವುದೇ ಬಲವಾದ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಕೇವಲ ಮುನ್ನೆಚ್ಚರಿಕೆಯ ಒಂದು ಭಾಗವಷ್ಟೇ.&lt;/p&gt;&lt;h2&gt;ಪರಿಮಳಯುಕ್ತ ಅರೋಮಾ ಥೆರಪಿ ಹಾವುಗಳಿಗೂ ಅನ್ವಯವೇ?&lt;/h2&gt;&lt;p&gt;ನಮ್ಮ ದೈನಂದಿನ ಜೀವನದಲ್ಲಿ ನಾವು ಬಳಸುವ ಲವಂಗ ಮತ್ತು ದಾಲ್ಚಿನ್ನಿ ಎಣ್ಣೆಗಳು ಕೇವಲ ಅಡುಗೆಗೆ ಅಥವಾ ಆರೋಗ್ಯಕ್ಕೆ ಮಾತ್ರವಲ್ಲ, ಹಾವುಗಳನ್ನು ದೂರವಿಡಲು ಸಹಕಾರಿ ಎಂಬ ಮಾತು ಕೇಳಿಬರುತ್ತದೆ. ಲವಂಗದ ಎಣ್ಣೆಯ ತೀಕ್ಷ್ಣವಾದ ವಾಸನೆಯು ಹಾವುಗಳಿಗೆ ಇಷ್ಟವಾಗುವುದಿಲ್ಲವಂತೆ. ಇದನ್ನು ಮನೆಯ ಸುತ್ತಮುತ್ತ ಸಿಂಪಡಿಸುವುದರಿಂದ ಒಂದು ಮಟ್ಟದ ರಕ್ಷಣೆ ಸಿಗಬಹುದು ಎಂದು ನಂಬಲಾಗಿದೆ. ಹಾಗೆಯೇ, ತುಳಸಿ ಗಿಡದ ಒಣಗಿದ ಬೇರನ್ನು ಕಟ್ಟುವುದು ಕೂಡ ಇದೇ ಸಾಲಿಗೆ ಸೇರುತ್ತದೆ.&lt;/p&gt;&lt;p&gt;ಆಧುನಿಕ ಲೈಫ್&zwnj;ಸ್ಟೈಲ್ ಮತ್ತು ಮನೆ ಅಂಗಳದ ಸ್ವಚ್ಛತೆ:&lt;/p&gt;&lt;p&gt;ಹಾವುಗಳು ಮನೆಯೊಳಗೆ ಬಾರದಂತೆ ತಡೆಯಲು ಕೇವಲ ಬೇರುಗಳನ್ನು ನಂಬುವುದಕ್ಕಿಂತ, ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಹೆಚ್ಚು ಮುಖ್ಯ.&lt;/p&gt;&lt;p&gt;ಪೊದೆಗಳ ತೆರವು: ಮಳೆಗಾಲದಲ್ಲಿ ಮನೆಯ ಸುತ್ತ ಗಿಡಗಂಟಿಗಳು ಅತಿಯಾಗಿ ಬೆಳೆಯದಂತೆ ನೋಡಿಕೊಳ್ಳಿ. ಇದು ಹಾವುಗಳಿಗೆ ಅಡಗುತಾಣವಾಗುತ್ತದೆ.&lt;/p&gt;&lt;p&gt;ಕಸದ ರಾಶಿ ಬೇಡ: ಮನೆಯ ಹತ್ತಿರ ಹಳೆಯ ಕಟ್ಟಿಗೆ, ಕಲ್ಲು ಅಥವಾ ಪ್ಲಾಸ್ಟಿಕ್ ಸಾಮಗ್ರಿಗಳನ್ನು ರಾಶಿ ಹಾಕಬೇಡಿ. ಇವು ಹಾವುಗಳ ನೆಚ್ಚಿನ ವಿಶ್ರಾಂತಿ ತಾಣಗಳು.&lt;/p&gt;&lt;p&gt;ಇಲಿಗಳ ನಿಯಂತ್ರಣ: ಹಾವಿನ ಮುಖ್ಯ ಆಹಾರ ಇಲಿಗಳು. ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಹೆಚ್ಚಿದ್ದರೆ, ಸಹಜವಾಗಿಯೇ ಹಾವುಗಳು ಅಲ್ಲಿಗೆ ಆಕರ್ಷಿತವಾಗುತ್ತವೆ. ಆದ್ದರಿಂದ ಇಲಿಗಳ ನಿಯಂತ್ರಣಕ್ಕೆ ಆದ್ಯತೆ ನೀಡಿ.&lt;/p&gt;&lt;p&gt;ಬಿರುಕುಗಳನ್ನು ಮುಚ್ಚಿ: ಬಾಗಿಲಿನ ಕೆಳಭಾಗದ ಸಣ್ಣ ಅಂತರ ಅಥವಾ ಗೋಡೆಯ ಬಿರುಕುಗಳನ್ನು ತಕ್ಷಣ ಸರಿಪಡಿಸಿ.&lt;/p&gt;&lt;h3&gt;ಒಂದು ವೇಳೆ ಹಾವು ಕಂಡರೆ ಏನು ಮಾಡಬೇಕು?&lt;/h3&gt;&lt;p&gt;ಯಾವುದೇ ಹಾವನ್ನು ಕಂಡಾಗ ಗಾಬರಿಗೊಂಡು ಅದನ್ನು ಹೊಡೆಯಲು ಹೋಗಬೇಡಿ. ಪ್ರತಿಯೊಂದು ಜೀವಿಯೂ ಪ್ರಕೃತಿಯ ಸಮತೋಲನಕ್ಕೆ ಮುಖ್ಯ. ಹಾವಿನಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಮತ್ತು ತಕ್ಷಣ ತರಬೇತಿ ಪಡೆದ ಉರಗ ರಕ್ಷಕರಿಗೆ ಅಥವಾ ಅರಣ್ಯ ಇಲಾಖೆಗೆ ಕರೆ ಮಾಡಿ.&lt;/p&gt;&lt;p&gt;ಅಂತಿಮ ಮಾತು:&lt;/p&gt;&lt;p&gt;ಮನೆಯ ಬಾಗಿಲಿಗೆ ಬೇರು ಕಟ್ಟುವುದು ಅಥವಾ ಎಣ್ಣೆ ಸಿಂಪಡಿಸುವುದು ಒಂದು ಸಾಂಪ್ರದಾಯಿಕ ಮುನ್ನೆಚ್ಚರಿಕೆಯಾಗಿ ಇರಲಿ. ಆದರೆ, ವೈಜ್ಞಾನಿಕವಾಗಿ ಮನೆಯ ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಜಾಗರೂಕತೆಯೇ ನಮಗೆ ನಿಜವಾದ ರಕ್ಷಣೆ ನೀಡುತ್ತದೆ. ಈ ಮಳೆಗಾಲದಲ್ಲಿ ಸುರಕ್ಷಿತವಾಗಿರಿ ಮತ್ತು ಪ್ರಕೃತಿಯನ್ನು ಸಂಭ್ರಮಿಸಿ!&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/try-the-root-of-the-sarpagandha-plant-to-the-door-of-the-house-prevents-snakes-from-entering/articleshow-n1bddmy"/>
        </item>
        <item>
            <title><![CDATA[ಬೆಂಗಳೂರು ಜನಕ್ಕೆ ಹೇಳಿ ಮಾಡಿಸಿದ ನೈಸರ್ಗಿಕ ರಸದೌತಣ ತಾಣಗಳು; ಟ್ರೆಕ್ಕಿಂಗ್, ಬೋಟಿಂಗ್, ಹನಿಮೂನ್‌ಗೂ ಬೆಸ್ಟ್!]]></title>
            <link>https://kannada.asianetnews.com/travel/top-5-kerala-tourist-places-near-bengaluru-road-trip-nature-getaway-budget-friendly-trips/articleshow-rxzau3s</link>
            <guid isPermaLink="true">https://kannada.asianetnews.com/travel/top-5-kerala-tourist-places-near-bengaluru-road-trip-nature-getaway-budget-friendly-trips/articleshow-rxzau3s</guid>
            <pubDate>Sat, 08 Aug 2026 22:39:10 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ಕೇವಲ 4-5 ಗಂಟೆಗಳ ಪ್ರಯಾಣದಲ್ಲಿ ತಲುಪಬಹುದಾದ ಕೇರಳದ ಐದು ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ಸ್ಥಳಗಳು ಚಾರಣ, ಜಂಗಲ್ ಸಫಾರಿ, ಪ್ಯಾರಾಗ್ಲೈಡಿಂಗ್ ಮತ್ತು ಹೌಸ್&zwnj;ಬೋಟ್ ವಿಹಾರದಂತಹ ಸಾಹಸಮಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಪ್ರಕೃತಿ ಪ್ರೇಮಿಗಳಿಗೆ ಮರೆಯಲಾಗದ ಅನುಭವ ನೀಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kd03f5es6atk2t1g4w86jekg,imgname-munnar-1766308943321.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಿಂದ ಕೇವಲ 4 ರಿಂದ 5 ಗಂಟೆಗಳ ದೂರದಲ್ಲಿರುವ ನೈಸರ್ಗಿಕ ರಮಣೀಯ ತಾಣಗಳಿಗೆ ಪ್ರಕೃತಿ ಪ್ರೇಮಿಗಳೊಮ್ಮೆ ಭೇಟಿ ಕೊಡಲೇಬೇಕು. ಸ್ವಂತ ಕಾರಿದ್ದವರಿಗೆ ಇದು ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಅದರಲ್ಲಿಯೂ ಕಡಿಮೆ ಬಜೆಟ್&zwnj;ನಲ್ಲಿ ಹನಿಮೂನ್ ಮಾಡಿಕೊಳ್ಳೋರಿಗೆ ಹಾಗೂ ಜಡಿ ಮಳೆ, ಮುಗಿಲೇ ಕವಚಿ ಭೂಮಿಗೆ ಬಿದ್ದಂತೆ ಕಾಣುವ ಮಂಜಿನ ತೋಟದ ಅನುಭವ ನೀಡುವ ಈ ಪ್ರವಾಸಿ ತಾಣಗಳನ್ನು ನೀವು ಮಿಸ್ ಮಾಡಿಕೊಳ್ಳಲೇಬೇಡಿ. ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ 5 ಪ್ರವಾಸಿ ತಾಣಗಳು ಇಲ್ಲಿವೆ.&lt;/p&gt;&lt;p&gt;ಪಶ್ಚಿಮ ಘಟ್ಟ ಪ್ರದೇಶದಲ್ಲಿ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಮಾಡಲಾಗದ ಸ್ಥಿತಿಂದಾಗಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುವ ಕೇರಳಿಗರ ಸ್ವಂತ ನಾಡು ಹೇಗಿದೆ ಗೊತ್ತಾ? ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ 5 ಪ್ರವಾಸಿ ತಾಣಗಳು ಇಲ್ಲಿವೆ.&lt;/p&gt;&lt;h2&gt;&lt;strong&gt;1. ಮುನ್ನಾರ್&lt;/strong&gt;&lt;/h2&gt;&lt;p&gt;ಪಶ್ಚಿಮ ಘಟ್ಟಗಳಲ್ಲಿರುವ ಮುನ್ನಾರ್, ಚಾರಣ ಪ್ರಿಯರಿಗೆ ಸ್ವರ್ಗವಾಗಿದೆ. ಮಂಜಿನಿಂದ ಆವೃತವಾಗಿರುವ ಇಲ್ಲಿನ ವಿಶಾಲವಾದ ಚಹಾ ತೋಟಗಳು, ಬೆಟ್ಟಗಳು, ಪರ್ವತಗಳು ಟ್ರಕ್ಕಿಂಗ್ ಅನುಭವವನ್ನು ಮೆಮೊರೆಬಲ್ ಆಗಿಸುತ್ತದೆ. ಮುನ್ನಾರ್&zwnj;ನಲ್ಲಿರುವ ಕೆಲವು ಜನಪ್ರಿಯ ಟ್ರೆಕ್ಕಿಂಗ್ ಟ್ರೇಲ್&zwnj;ಗಳೆಂದರೆ ಅನಮುಡಿ ಶಿಖರ, ಮೀಸಪುಲಿಮಲ ಮತ್ತು ಚೋಕ್ರಮುಡಿ. ಪಶ್ಚಿಮ ಘಟ್ಟಗಳ ಸುಂದರವಾದ (Beautiful) ಸೊಬಗು, ಹಚ್ಚ ಹಸಿರಾದ ಪರ್ವತ ಆಹ್ಲಾದಕರ ಅನುಭವವನ್ನು ನೀಡುತ್ತದೆ.&lt;/p&gt;&lt;h2&gt;&lt;strong&gt;2. ವಯನಾಡ್&lt;/strong&gt;&lt;/h2&gt;&lt;p&gt;ವಯನಾಡ್ ತನ್ನ ದಟ್ಟವಾದ ಕಾಡುಗಳು (Forest) ಮತ್ತು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ, ಇದು ಸಾಹಸ ಪ್ರಿಯರಿಗೆ ಸ್ವರ್ಗವಾಗಿದೆ. ಪ್ರವಾಸಿಗರು ಇಲ್ಲಿ ರೋಮಾಂಚಕ ಜಂಗಲ್ ಸಫಾರಿಗಳನ್ನು ಮಾಡಬಹುದು, ಗುಪ್ತ ಗುಹೆಗಳನ್ನು ಅನ್ವೇಷಿಸಬಹುದು ಮತ್ತು ದಟ್ಟವಾದ ಕಾಡುಗಳ ಮೂಲಕ ಚಾರಣ (Trekking) ಮಾಡಬಹುದು. ಚೆಂಬ್ರಾ ಶಿಖರವು ಅಡ್ವೆಂಚರ್ ಇಷ್ಟಪಡುವವರಿಗೆ ಉತ್ತಮ ತಾಣವಾಗಿದೆ.&lt;/p&gt;&lt;h2&gt;&lt;strong&gt;3. ವಾಗಮೋನ್&lt;/strong&gt;&lt;/h2&gt;&lt;p&gt;ಕೇರಳದಲ್ಲಿ ಹೆಚ್ಚು ಪ್ರಸಿದ್ಧವಾಗಿಲ್ಲದ ಸ್ಥಳ ವಾಗಮೋನ್. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ಈ ಸ್ಥಳದ ಬಗ್ಗೆ ತಿಳಿದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಾಹಸ ಉತ್ಸಾಹಿಗಳಲ್ಲಿ, ವಿಶೇಷವಾಗಿ ಪ್ಯಾರಾಗ್ಲೈಡಿಂಗ್ ಅಭಿಮಾನಿಗಳಲ್ಲಿ ಇದು ಜನಪ್ರಿಯತೆಯನ್ನು ಗಳಿಸುತ್ತಿದೆ. ಹಚ್ಚ ಹಸಿರಿನ ಹುಲ್ಲುಗಾವಲುಗಳು, ರೋಲಿಂಗ್ ಬೆಟ್ಟಗಳು ಮತ್ತು ಅನುಕೂಲಕರವಾದ ಗಾಳಿಯ ಪರಿಸ್ಥಿತಿಗಳು ವಾಗಮೋನ್&zwnj;ನ್ನು ಪ್ಯಾರಾಗ್ಲೈಡಿಂಗ್&zwnj;ಗೆ ಸೂಕ್ತವಾದ ತಾಣವನ್ನಾಗಿ ಮಾಡುತ್ತದೆ.&lt;/p&gt;&lt;h2&gt;&lt;strong&gt;4. ತೇಕ್ಕಡಿ&lt;/strong&gt;&lt;/h2&gt;&lt;p&gt;ತೇಕ್ಕಡಿ, ವನ್ಯಜೀವಿಗಳನ್ನು ಇಷ್ಟಪಡುವವರು ಭೇಟಿ ನೀಡಲೇಬೇಕಾದ ತಾಣವಾಗಿದೆ. ಪೆರಿಯಾರ್ ವನ್ಯಜೀವಿ ಅಭಯಾರಣ್ಯವು ದಟ್ಟವಾದ ಕಾಡುಗಳು ಮತ್ತು ಸುಂದರವಾದ ಸರೋವರಗಳ ನಡುವೆ ನೆಲೆಸಿದೆ. ಜಂಗಲ್ ಸಫಾರಿಗಳು, ಬಿದಿರಿನ ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್&zwnj;ನಂತಹ ಅತ್ಯಾಕರ್ಷಕ ಚಟುವಟಿಕೆಗಳಿಗೆ ಅವಕಾಶ ಒದಗಿಸುತ್ತದೆ. ಆನೆಗಳು, ಹುಲಿಗಳು ಮತ್ತು ಹಲವಾರು ಇತರ ಪ್ರಾಣಿಗಳನ್ನು ಇಲ್ಲಿ ನೋಡಬಹುದು.&lt;/p&gt;&lt;h2&gt;&lt;strong&gt;5. ಅಲೆಪ್ಪಿ&lt;/strong&gt;&lt;/h2&gt;&lt;p&gt;ಕೇರಳದ ಹಿನ್ನೀರಿನ ಈ ಪ್ರದೇಶವು ಪ್ರಶಾಂತವಾದ ಹೌಸ್&zwnj;ಬೋಟ್ ವಿಹಾರಕ್ಕೆ ಪ್ರಸಿದ್ಧವಾಗಿದೆ, ಅಲೆಪ್ಪಿ ರೋಮಾಂಚಕ ಕಯಾಕಿಂಗ್ ಸಾಹಸಗಳನ್ನು ಮಾಡಲು ಸಹ ಅವಕಾಶ ಒದಗಿಸುತ್ತದೆ. ಶಾಂತವಾದ ಹಿನ್ನೀರು, ಅಂಕುಡೊಂಕಾದ ಕಾಲುವೆಗಳು ಮತ್ತು ಸೊಂಪಾದ ಗದ್ದೆಗಳ ಮೂಲಕ ಪ್ರಯಾಣಿಸಬಹುದು.&lt;/p&gt;&lt;p&gt;ಹಚ್ಚ ಹಸಿರಿನ ಭೂದೃಶ್ಯಗಳು, ಹಿನ್ನೀರು ಮತ್ತು ರೋಮಾಂಚಕ ಸಾಹಸಕ್ರೀಡೆಗಳಿಗೆ ಪ್ರಸಿದ್ಧಿಯಾಗಿದೆ. ಕೇರಳಕ್ಕೆ ಪ್ರವಾಸ ಎಂದ ತಕ್ಷಣ ಬರೀ ಮುನ್ನಾರ್&zwnj;, ಅತಿರಪಳ್ಳಿ ಫಾಲ್ಸ್ ಎಂದೇ ಅಂದುಕೊಳ್ಳಬೇಕಾಗಿಲ್ಲ. ಇದಲ್ಲದೆ, ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ ಐದು ಪ್ರವಾಸಿ ತಾಣಗಳು ಇಲ್ಲಿವೆ. ನೀವು ದಿನನಿತ್ಯದ ರೊಟೀನ್ ಜೀವನದಿಂದ ವಿಶ್ರಾಂತಿ ಬಯಸುತ್ತಿದ್ದಲ್ಲಿ ಕೇರಳದ ಈ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಈ ಗಮ್ಯಸ್ಥಾನಗಳು ಸಾಹಸಕ್ರೀಡೆಗಳಿಗೆ ಅವಕಾಶ ನೀಡುವುದರ ಜೊತೆಗೆ ಆಹ್ಲಾದಕರ ಅನುಭವ ನೀಡುತ್ತದೆ. ಸುಂದರ ಪರಿಸದರಲ್ಲಿ ಮನಸ್ಸು ಸಹ ಉಲ್ಲಸಿತಗೊಳ್ಳುತ್ತದೆ. ಆದರೆ ಈ ಎಲ್ಲಾ ಸ್ಥಳಗಳಿಗೆ ಪ್ರಯಾಣಿಸುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/travel/top-5-kerala-tourist-places-near-bengaluru-road-trip-nature-getaway-budget-friendly-trips/articleshow-rxzau3s"/>
        </item>
        <item>
            <title><![CDATA[ಸೋಮವಾರ, ಮಂಗಳವಾರ, ಶನಿವಾರ ಯಾವುದೇ ಕಾರಣಕ್ಕೂ ಈ ಕೆಲಸ ಮಾಡಬೇಡಿ; ದರಿದ್ರ ಅಟ್ಟಾಡಿಸಿಕೊಂಡು ಬರುತ್ತೆ ಎಚ್ಚರ!]]></title>
            <link>https://kannada.asianetnews.com/astrology/astrology-vastu-guide-things-you-should-never-do-from-sunday-to-saturday-to-avoid-bad-luck/articleshow-khugm1i</link>
            <guid isPermaLink="true">https://kannada.asianetnews.com/astrology/astrology-vastu-guide-things-you-should-never-do-from-sunday-to-saturday-to-avoid-bad-luck/articleshow-khugm1i</guid>
            <pubDate>Sat, 08 Aug 2026 23:09:14 +0530</pubDate>
            <description><![CDATA[&lt;p&gt;ಹಿಂದೂ ಜ್ಯೋತಿಷ್ಯದ ಪ್ರಕಾರ, ವಾರದ ಪ್ರತಿ ದಿನವೂ ನಿರ್ದಿಷ್ಟ ದೇವತೆ ಮತ್ತು ಗ್ರಹಕ್ಕೆ ಸಮರ್ಪಿತವಾಗಿದೆ. ಆಯಾ ದಿನಗಳಲ್ಲಿ ಕೆಲವು ನಿಷಿದ್ಧ ಕಾರ್ಯಗಳನ್ನು ಮಾಡುವುದರಿಂದ ಜಾತಕದಲ್ಲಿ ಗ್ರಹ ದೋಷ ಉಂಟಾಗಬಹುದು. ಉದಾಹರಣೆಗೆ, ಮಂಗಳವಾರ ಸಾಲ ನೀಡುವುದು ಅಥವಾ ಗುರುವಾರ ಕ್ಷೌರ ಮಾಡುವುದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಮನೆಯಲ್ಲಿ ದಾರಿದ್ರ್ಯ ಮತ್ತು ಆರ್ಥಿಕ ನಷ್ಟಗಳು ಸಂಭವಿಸಬಹುದು ಎಂದು ನಂಬಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzh76ss8qtvgwadahp5vhn09,imgname-day-wise-vastu-and-astrology-guide-1786210641701.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಿಂದೂ ಪಂಚಾಂಗದ (Hindu Panchang) ಮತ್ತು ವೈದಿಕ ಜ್ಯೋತಿಷ್ಯದ (Vedic Astrology) ಪ್ರಕಾರ, ವಾರದ ಏಳೂ ದಿನಗಳು ನಿರ್ದಿಷ್ಟ ದೇವರು ಹಾಗೂ ನವಗ್ರಹಗಳಿಗೆ (Nine Planets) ಸಮರ್ಪಿತವಾಗಿವೆ. ಪ್ರತಿಯೊಂದು ದಿನಕ್ಕೂ ತನ್ನದೇ ಆದ ವಿಶೇಷ ಧಾರ್ಮಿಕ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಕೆಲವು ದಿನಗಳಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಜಾತಕದಲ್ಲಿ (Horoscope) ಗ್ರಹ ದೋಷ ಉಂಟಾಗಿ, ಮನೆಗೆ ದರಿದ್ರ ಹಾಗೂ ಧನ ನಷ್ಟ ಎದುರಾಗಬಹುದು.&lt;/p&gt;&lt;p&gt;&lt;strong&gt;ವಾರದ ಭಾನುವಾರದಿಂದ ಶನಿವಾರದವರೆಗೆ ಯಾವ ದಿನ ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂಬುದರ ಪೂರ್ಣ ವಿವರ ಇಲ್ಲಿದೆ:&lt;/strong&gt;&lt;/p&gt;&lt;h2&gt;&lt;strong&gt;1. ಭಾನುವಾರ (Sunday) - ಸೂರ್ಯದೇವನ ದಿನ:&lt;/strong&gt;&lt;/h2&gt;&lt;ul&gt; &lt;li&gt;ಭಾನುವಾರವು ನವಗ್ರಹಗಳ ಅಧಿಪತಿಯಾದ ಸೂರ್ಯದೇವನಿಗೆ (Lord Surya) ಮೀಸಲಾಗಿದೆ.&lt;/li&gt; &lt;li&gt;ಪುರುಷರು ತಮ್ಮ ತಂದೆಯೊಂದಿಗೆ ಮತ್ತು ಮಹಿಳೆಯರು ತಮ್ಮ ಗಂಡನೊಂದಿಗೆ ಯಾವುದೇ ಕಾರಣಕ್ಕೂ ಜಗಳವಾಡಬಾರದು ಹಾಗೂ ಅವರನ್ನು ಅವಮಾನಿಸಬಾರದು.&lt;/li&gt; &lt;li&gt;ಭಾನುವಾರ ಕಪ್ಪು ಬಟ್ಟೆಗಳನ್ನು (Black Clothes) ಧರಿಸುವುದನ್ನು ನಿಷೇಧಿಸಲಾಗಿದೆ.&lt;/li&gt; &lt;li&gt;ಈ ದಿನ ತುಳಸಿ ಎಲೆಗಳನ್ನು (Tulsi Leaves) ಕೀಳಬಾರದು ಹಾಗೂ ತುಳಸಿ ಗಿಡಕ್ಕೆ ನೀರು ಹಾಕಬಾರದು. ಬೆಳಿಗ್ಗೆ ತಡವಾಗಿ ಏಳುವುದು ಸಹ ಸೂರ್ಯ ದೋಷಕ್ಕೆ ಕಾರಣವಾಗುತ್ತದೆ.&lt;/li&gt;&lt;/ul&gt;&lt;h2&gt;&lt;strong&gt;2. ಸೋಮವಾರ (Monday) - ಶಿವ ಹಾಗೂ ಚಂದ್ರನ ದಿನ:&lt;/strong&gt;&lt;/h2&gt;&lt;ul&gt; &lt;li&gt;ಸೋಮವಾರವನ್ನು ಪರಮೇಶ್ವರ (Lord Shiva) ಮತ್ತು ಚಂದ್ರದೇವನಿಗೆ (Moon) ಸಮರ್ಪಿಸಲಾಗಿದೆ.&lt;/li&gt; &lt;li&gt;ಸೋಮವಾರ ಹೊಸ ಉದ್ಯೋಗವನ್ನು (New Job) ಪ್ರಾರಂಭಿಸಬಾರದು. ಹೀಗೆ ಮಾಡಿದರೆ ಕೆಲಸದಲ್ಲಿ ಸವಾಲುಗಳು ಎದುರಾಗಬಹುದು.&lt;/li&gt; &lt;li&gt;ಈ ದಿನ ಪೂರ್ವ (East) ಮತ್ತು ಉತ್ತರ (North) ದಿಕ್ಕಿಗೆ ಪ್ರಯಾಣಿಸುವುದು ಶುಭಕರವಲ್ಲ.&lt;/li&gt; &lt;li&gt;ಮಧ್ಯಾಹ್ನದ ವೇಳೆ ನಿದ್ದೆ ಮಾಡುವುದು ಮತ್ತು ತಾಯಿಯನ್ನು ಅವಮಾನಿಸುವುದು ಚಂದ್ರ ದೋಷವನ್ನು ಉಂಟುಮಾಡುತ್ತದೆ.&lt;/li&gt;&lt;/ul&gt;&lt;h2&gt;&lt;strong&gt;3. ಮಂಗಳವಾರ (Tuesday) - ಆಂಜನೇಯ ಹಾಗೂ ಮಂಗಳ ಗ್ರಹದ ದಿನ:&lt;/strong&gt;&lt;/h2&gt;&lt;ul&gt; &lt;li&gt;ಮಂಗಳವಾರವು ಶ್ರೀ ಆಂಜನೇಯ (Lord Hanuman) ಮತ್ತು ಮಂಗಳ ಗ್ರಹಕ್ಕೆ (Mars) ಮೀಸಲಾಗಿದೆ.&lt;/li&gt; &lt;li&gt;ಜಾತಕದಲ್ಲಿ ಮಂಗಳನು ಧೈರ್ಯ ಮತ್ತು ಸಹೋದರತ್ವದ ಸಂಕೇತ. ಆದ್ದರಿಂದ ಹಿರಿಯ ಸಹೋದರನೊಂದಿಗೆ (Elder Brother) ಜಗಳವಾಡಬೇಡಿ.&lt;/li&gt; &lt;li&gt;ಈ ದಿನ ಯಾರಿಗೂ ಸಾಲ (Loan/Money) ನೀಡಬಾರದು. ಆ ಹಣ ಮರಳಿ ಬರುವುದು ಕಷ್ಟ.&lt;/li&gt; &lt;li&gt;ಗಡ್ಡ, ಕೂದಲು ಮತ್ತು ಉಗುರು ಕತ್ತರಿಸುವುದನ್ನು (Haircut &amp;amp; Nail Clipping) ನಿಷೇಧಿಸಲಾಗಿದೆ. ಕೋರ್ಟ್ ಮತ್ತು ಕಾನೂನು ಹೋರಾಟಗಳನ್ನು ಈ ದಿನ ತಪ್ಪಿಸಿ.&lt;/li&gt;&lt;/ul&gt;&lt;h2&gt;&lt;strong&gt;4. ಬುಧವಾರ (Wednesday) - ಗಣೇಶ ಹಾಗೂ ಬುಧ ಗ್ರಹದ ದಿನ:&lt;/strong&gt;&lt;/h2&gt;&lt;ul&gt; &lt;li&gt;ಬುಧವಾರ ಜ್ಞಾನಕಾರಕ ಗಣಪತಿ (Lord Ganesha) ಮತ್ತು ಬುಧ ಗ್ರಹಕ್ಕೆ (Mercury) ಸಮರ್ಪಿತ.&lt;/li&gt; &lt;li&gt;ಈ ದಿನ ಸಾಲ ಕೊಡುವುದು ಅಥವಾ ಸಾಲ ತರುವುದು ಎರಡೂ ಆರ್ಥಿಕ ಅಸ್ಥಿರತೆಗೆ (Financial Instability) ಕಾರಣವಾಗುತ್ತದೆ.&lt;/li&gt; &lt;li&gt;ಮಹಿಳೆಯರು ಅಥವಾ ನಪುಂಸಕರನ್ನು ಅವಮಾನಿಸಿದರೆ ಜಾತಕದಲ್ಲಿ ಬುಧನ ಸ್ಥಾನ ದುರ್ಬಲಗೊಳ್ಳುತ್ತದೆ.&lt;/li&gt;&lt;/ul&gt;&lt;h2&gt;&lt;strong&gt;5. ಗುರುವಾರ (Thursday) - ವಿಷ್ಣು ಹಾಗೂ ಬೃಹಸ್ಪತಿಯ ದಿನ:&lt;/strong&gt;&lt;/h2&gt;&lt;ul&gt; &lt;li&gt;ಗುರುವಾರವು ಶ್ರೀ ಹರಿ ವಿಷ್ಣು (Lord Vishnu) ಮತ್ತು ಗುರು ಗ್ರಹಕ್ಕೆ (Jupiter) ಮೀಸಲಾಗಿದೆ.&lt;/li&gt; &lt;li&gt;ಈ ದಿನ ಉಗುರು ಕತ್ತರಿಸುವುದು, ಕ್ಷೌರ ಮಾಡಿಕೊಳ್ಳುವುದು ಹಾಗೂ ಮಹಿಳೆಯರು ತಲೆಗೂದಲು ತೊಳೆಯುವುದನ್ನು (Hair Wash) ಮಾಡಬಾರದು.&lt;/li&gt; &lt;li&gt;ಗುರುಗಳು ಮತ್ತು ಹಿರಿಯರನ್ನು ನಿಂದಿಸಬಾರದು. ದಕ್ಷಿಣ ದಿಕ್ಕಿಗೆ (South Direction) ಪ್ರಯಾಣ ಮಾಡಬಾರದು.&lt;/li&gt; &lt;li&gt;ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳುಹಿಸುವುದು, ಮಾಂಸ-ಮದ್ಯ ಸೇವನೆ (Non-Veg &amp;amp; Alcohol) ಮಾಡುವುದು ಹಾಗೂ ಜೇಡರ ಬಲೆ ಸ್ವಚ್ಛಗೊಳಿಸುವುದು ಅಶುಭ.&lt;/li&gt;&lt;/ul&gt;&lt;h2&gt;&lt;strong&gt;6. ಶುಕ್ರವಾರ (Friday) - ಲಕ್ಷ್ಮೀದೇವಿ ಹಾಗೂ ಶುಕ್ರ ಗ್ರಹದ ದಿನ:&lt;/strong&gt;&lt;/h2&gt;&lt;ul&gt; &lt;li&gt;ಶುಕ್ರವಾರವು ವೈಭವಲಕ್ಷ್ಮಿ (Goddess Lakshmi) ಮತ್ತು ಶುಕ್ರ ಗ್ರಹಕ್ಕೆ (Venus) ಸಮರ್ಪಿತ.&lt;/li&gt; &lt;li&gt;ಶುಕ್ರನು ದಾಂಪತ್ಯ ಸುಖದ ಸಂಕೇತ. ಈ ದಿನ ಗಂಡ-ಹೆಂಡತಿ ಜಗಳವಾಡಬಾರದು.&lt;/li&gt; &lt;li&gt;ಅಂಧರು ಅಥವಾ ಹೆಣ್ಣುಮಕ್ಕಳನ್ನು ಅವಮಾನಿಸಬಾರದು. ಈ ದಿನ ಸಕ್ಕರೆ (Sugar) ಮತ್ತು ಬೆಳ್ಳಿಯನ್ನು (Silver) ದಾನ ಮಾಡಬಾರದು.&lt;/li&gt;&lt;/ul&gt;&lt;h2&gt;&lt;strong&gt;7. ಶನಿವಾರ (Saturday) - ಶನಿದೇವನ ದಿನ:&lt;/strong&gt;&lt;/h2&gt;&lt;ul&gt; &lt;li&gt;ಶನಿವಾರವು ನ್ಯಾಯದೇವನಾದ ಶನಿ ದೇವರಿಗೆ (Lord Saturn) ಮೀಸಲಾಗಿದೆ.&lt;/li&gt; &lt;li&gt;ಈ ದಿನ ಕತ್ತರಿ (Scissors), ಉದ್ದಿನಬೇಳೆ (Urad Dal) ಮತ್ತು ಕಬ್ಬಿಣದ ವಸ್ತುಗಳನ್ನು (Iron Items) ಖರೀದಿಸಬಾರದು.&lt;/li&gt; &lt;li&gt;ಪೂರ್ವ ಮತ್ತು ಉತ್ತರ ದಿಕ್ಕಿನ ಪ್ರಯಾಣ ತಪ್ಪಿಸಿ. ಬಡವರು, ಅಸಹಾಯಕರು ಹಾಗೂ ಕಾಯಕಯೋಗಿಗಳನ್ನು ಅವಮಾನಿಸಿದರೆ ಶನಿ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.&lt;/li&gt;&lt;/ul&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/astrology/astrology-vastu-guide-things-you-should-never-do-from-sunday-to-saturday-to-avoid-bad-luck/articleshow-khugm1i"/>
        </item>
        <item>
            <title><![CDATA[ಇವನಲ್ವೇ ರಿಯಲ್ ಹೀರೋ! ಪ್ರೇಯಸಿಯ ಕನಸು ನನಸು ಮಾಡಲು ಬೈಕ್ ಹತ್ತಿ ಡೆಲಿವರಿ ಬಾಯ್ ಆದ ಟೆಕ್ಕಿ!]]></title>
            <link>https://kannada.asianetnews.com/viral/this-man-worked-two-shifts-for-8-months-to-buy-his-girlfriend-a-6-lakh-engagement-ring/articleshow-pcqi1fa</link>
            <guid isPermaLink="true">https://kannada.asianetnews.com/viral/this-man-worked-two-shifts-for-8-months-to-buy-his-girlfriend-a-6-lakh-engagement-ring/articleshow-pcqi1fa</guid>
            <pubDate>Sun, 09 Aug 2026 15:00:45 +0530</pubDate>
            <description><![CDATA[&lt;p&gt;ಗೆಳತಿಗೆ ಪ್ರಪೋಸ್ ಮಾಡಲು ₹6 ಲಕ್ಷದ ಕನಸಿನ ನಿಶ್ಚಿತಾರ್ಥದ ಉಂಗುರ ಖರೀದಿಸಲು ಬ್ರಾಡ್ಲಿ ಚೋ ಎಂಟು ತಿಂಗಳು ಎರಡು ಶಿಫ್ಟ್&zwnj;ಗಳಲ್ಲಿ ಕೆಲಸ ಮಾಡಿದರು. ಹಗಲು ಕಾರ್ಪೊರೇಟ್ ಉದ್ಯೋಗ, ರಾತ್ರಿ ಫುಡ್ ಡೆಲಿವರಿ ಮಾಡುತ್ತಿದ್ದ ಅವರು ನಿದ್ದೆ, ವಿಶ್ರಾಂತಿ ತ್ಯಜಿಸಿ ಹಣ ಉಳಿಸಿದರು. ಕಸ್ಟಮ್ ಡೈಮಂಡ್ ರಿಂಗ್ ಖರೀದಿಸಿದ ಅವರ ಪ್ರೇಮಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgmf0m8tbpfda82tepzkrvz,imgname-for-love--he-worked-until-2-am-every-night-to-buy-his-girlfriend-a-diamond-ring-1786190987912.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರೀತಿ ಎಂದರೆ ಕೇವಲ ಮಾತುಗಳಲ್ಲ, ಅದಕ್ಕಾಗಿ ಮಾಡುವ ಪ್ರಯತ್ನವೂ ಹೌದು ಎಂಬುದನ್ನು ಬ್ರಾಡ್ಲಿ ಚೋ ಅವರ ಕಥೆ ತೋರಿಸಿದೆ. ತನ್ನ ಗೆಳತಿ ಜೂಲಿಯಾಗೆ ಪ್ರಪೋಸ್ ಮಾಡಲು ವಿಶೇಷವಾದ ನಿಶ್ಚಿತಾರ್ಥದ ಉಂಗುರ ಖರೀದಿಸಬೇಕೆಂದು ನಿರ್ಧರಿಸಿದ ಅವರು, ಅದಕ್ಕಾಗಿ ಬರೋಬ್ಬರಿ ಎಂಟು ತಿಂಗಳು ಹೆಚ್ಚುವರಿ ಕೆಲಸ ಮಾಡಿದರು.&lt;/p&gt;&lt;p&gt;&lt;strong&gt;ಕನಸಿಗಾಗಿ ಹಗಲು-ರಾತ್ರಿ ದುಡಿದ ಯುವಕ!&lt;/strong&gt;&lt;/p&gt;&lt;p&gt;ಬ್ರಾಡ್ಲಿ ಅವರ ಬಳಿ ಈಗಾಗಲೇ ಪೂರ್ಣಕಾಲಿಕ ಉದ್ಯೋಗವಿತ್ತು. ಆದರೂ ಕನಸಿನ ಉಂಗುರಕ್ಕಾಗಿ ಹೆಚ್ಚುವರಿ ಹಣ ಬೇಕಾಗಿತ್ತು. ಹೀಗಾಗಿ ಪ್ರತಿದಿನದ ಕಚೇರಿ ಕೆಲಸ ಮುಗಿದ ಬಳಿಕ ಅವರು ಆಹಾರ ವಿತರಣಾ ರೈಡರ್ ಆಗಿ ಕೆಲಸ ಆರಂಭಿಸಿದರು.&lt;/p&gt;&lt;p&gt;ರಾತ್ರಿ ತಡವರೆಗೆ ಆರ್ಡರ್&zwnj;ಗಳನ್ನು ತಲುಪಿಸುತ್ತಿದ್ದ ಅವರು, ತಮ್ಮ ಈ ಪ್ರಯಾಣವನ್ನು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳ ಮೂಲಕ ದಾಖಲಿಸುತ್ತಿದ್ದರು. ಕೆಲಸದ ನಂತರ ವೀಡಿಯೊ ಚಿತ್ರೀಕರಣ, ಎಡಿಟಿಂಗ್ ಹಾಗೂ ಮರುದಿನದ ಕೆಲಸಕ್ಕೆ ಸಿದ್ಧತೆ&mdash;ಇವೆಲ್ಲವೂ ಅವರ ದಿನಚರಿಯ ಭಾಗವಾಗಿತ್ತು.&lt;/p&gt;&lt;p&gt;&lt;strong&gt;ನಿದ್ದೆ ಕೇವಲ 4 ಗಂಟೆ!&lt;/strong&gt;&lt;/p&gt;&lt;p&gt;ಸುಮಾರು ಎಂಟು ತಿಂಗಳ ಕಾಲ ಈ ಜೀವನಶೈಲಿ ಮುಂದುವರಿಯಿತು. ಕೆಲ ದಿನಗಳಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮಲಗಿ, ಬೆಳಗ್ಗೆ 6 ಗಂಟೆಗೆ ಮತ್ತೆ ಎದ್ದುಕೊಳ್ಳಬೇಕಾಗುತ್ತಿತ್ತು. ಈ ಅವಧಿಯಲ್ಲಿ ಅವರು ಎರಡು ವಾರಗಳ ಕಾಲ ಅನಾರೋಗ್ಯಕ್ಕೂ ಒಳಗಾಗಿದ್ದರು.&lt;/p&gt;&lt;p&gt;ಅಷ್ಟೇ ಅಲ್ಲ, ಅವರ ಡೆಲಿವರಿ ಕೆಲಸದ ವೀಡಿಯೊವೊಂದನ್ನು ಬಾಸ್ ನೋಡಿದ ಬಳಿಕ ಪೂರ್ಣಕಾಲಿಕ ಉದ್ಯೋಗವನ್ನೇ ಕಳೆದುಕೊಳ್ಳುವ ಪರಿಸ್ಥಿತಿಯೂ ಎದುರಾಗಿತ್ತು ಎಂದು ಬ್ರಾಡ್ಲಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;89ನೇ ದಿನಕ್ಕೆ ತಲುಪಿದ ಕನಸು..!&lt;/strong&gt;&lt;/p&gt;&lt;p&gt;ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್&zwnj;ನಲ್ಲಿ ಬ್ರಾಡ್ಲಿ, ಗೆಳತಿಗೆ ಪ್ರಪೋಸ್ ಮಾಡಲು ಬೇಕಾದ ಉಂಗುರ ಖರೀದಿಸಿದ ದಿನವನ್ನು '89ನೇ ದಿನ' ಎಂದು ದಾಖಲಿಸಿದ್ದಾರೆ. ಸತತ ಪರಿಶ್ರಮದ ಬಳಿಕ ಅವರು ಸುಮಾರು $6,500, ಅಂದರೆ ಸುಮಾರು ₹6 ಲಕ್ಷ ಹಣವನ್ನು ಸಂಗ್ರಹಿಸಿದ್ದರು.&lt;/p&gt;&lt;p&gt;ಅವರು ಆಯ್ಕೆ ಮಾಡಿಕೊಂಡಿದ್ದು ಸಾಮಾನ್ಯ ಉಂಗುರವಲ್ಲ. ಜೂಲಿಯಾಗೆ ವಿಶೇಷವಾಗಿರಬೇಕು ಎಂಬ ಉದ್ದೇಶದಿಂದ ಕಸ್ಟಮ್ ವಿನ್ಯಾಸದ ಉಂಗುರವನ್ನು ತಯಾರಿಸಲಾಯಿತು. ಅದರಲ್ಲಿ ಪ್ರಯೋಗಾಲಯದಲ್ಲಿ ಬೆಳೆದ ವಜ್ರದ ಜೊತೆಗೆ ಇಬ್ಬರ ಜನ್ಮರತ್ನಗಳನ್ನೂ ಸೇರಿಸಲಾಗಿದೆ.&lt;/p&gt;&lt;p&gt;&lt;strong&gt;ಪ್ರೇಮಿಯ ಕಥೆಗೆ ಮನಸೋತ ಉಂಗುರ ವಿನ್ಯಾಸಕ!&lt;/strong&gt;&lt;/p&gt;&lt;p&gt;ಉಂಗುರ ವಿನ್ಯಾಸಕ ಕೂರೋಶ್ ಮತ್ತು ಅವರ ತಂಡ ಬ್ರಾಡ್ಲಿ ಅವರ ಪ್ರಯಾಣವನ್ನು ಮೆಚ್ಚಿಕೊಂಡಿದೆ. ಉಂಗುರದ ಬೆಲೆಗಿಂತ ಜೂಲಿಯಾಗಾಗಿ ಪ್ರತಿಯೊಂದು ವಿವರಕ್ಕೂ ಅವರು ತೋರಿದ ಪ್ರೀತಿ, ಸಮಯ ಮತ್ತು ಪರಿಶ್ರಮವೇ ತಮ್ಮನ್ನು ಹೆಚ್ಚು ಪ್ರಭಾವಿತಗೊಳಿಸಿದೆ ಎಂದು ವಿನ್ಯಾಸಕರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆ!&lt;/strong&gt;&lt;/p&gt;&lt;p&gt;ಬ್ರಾಡ್ಲಿಯ ಪ್ರಯಾಣದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹಲವರ ಗಮನ ಸೆಳೆದಿವೆ. ಮೊದಲ ದಿನದಿಂದ ಅವರ ಕಥೆಯನ್ನು ಅನುಸರಿಸುತ್ತಿದ್ದವರು, ಅವರ ಪರಿಶ್ರಮ ಕೊನೆಗೂ ಫಲ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಅನೇಕರು ಮುಂದಿನ ಹಂತವಾದ ಪ್ರಪೋಸಲ್ ವೀಡಿಯೊ ಹಂಚಿಕೊಳ್ಳುವಂತೆ ಬ್ರಾಡ್ಲಿಗೆ ಮನವಿ ಮಾಡಿದ್ದಾರೆ. ಅವರ ಕಥೆ ಹಲವರ ಪಾಲಿಗೆ ಪ್ರೀತಿ, ಬದ್ಧತೆ ಮತ್ತು ಪರಿಶ್ರಮದ ಸ್ಫೂರ್ತಿದಾಯಕ ಉದಾಹರಣೆಯಾಗಿದೆ.&lt;/p&gt;&lt;p&gt;&lt;strong&gt;ಪ್ರೀತಿಗಾಗಿ ಮಾಡಿದ ತ್ಯಾಗವೇ ಈ ಕಥೆಯ ವಿಶೇಷ!&lt;/strong&gt;&lt;/p&gt;&lt;p&gt;ಬ್ರಾಡ್ಲಿಯ ಕಥೆಯಲ್ಲಿ ಗಮನ ಸೆಳೆಯುವುದು ₹6 ಲಕ್ಷದ ಉಂಗುರವಲ್ಲ. ಅದನ್ನು ಖರೀದಿಸಲು ಅವರು ತೆಗೆದುಕೊಂಡ ಎಂಟು ತಿಂಗಳ ಪರಿಶ್ರಮವೇ. ಗೆಳತಿಗಾಗಿ ತನ್ನ ಸಮಯ, ನಿದ್ದೆ ಮತ್ತು ಆರಾಮವನ್ನು ತ್ಯಾಗ ಮಾಡಿ ಕನಸಿನ ಉಂಗುರವನ್ನು ಖರೀದಿಸಿದ ಈ ಕಥೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೃದಯಸ್ಪರ್ಶಿ ಪ್ರೇಮಕಥೆಯಾಗಿ ವೈರಲ್ ಆಗುತ್ತಿದೆ.&lt;/p&gt;View this post on Instagram&lt;p&gt;A post shared by Bradley Cho (@bradjcho)&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/this-man-worked-two-shifts-for-8-months-to-buy-his-girlfriend-a-6-lakh-engagement-ring/articleshow-pcqi1fa"/>
        </item>
        <item>
            <title><![CDATA[ಹಳೆಯ ಬಟ್ಟೆ ಎಸೆಯಬೇಡಿ, ಹಣ ಪಡೆಯಿರಿ; ಬೆಂಗಳೂರಿನ ಈ ಸ್ಟಾರ್ಟ್‌ಅಪ್ ಮನೆ ಬಾಗಿಲಿಗೇ ಬಂದು ಬಟ್ಟೆ ಕೊಂಡುಕೊಳ್ಳುತ್ತದೆ]]></title>
            <link>https://kannada.asianetnews.com/bengaluru-urban/bengaluru-textile-waste-nokasa-old-clothes-recycling-suh/articleshow-0lgiogo</link>
            <guid isPermaLink="true">https://kannada.asianetnews.com/bengaluru-urban/bengaluru-textile-waste-nokasa-old-clothes-recycling-suh/articleshow-0lgiogo</guid>
            <pubDate>Sun, 09 Aug 2026 14:51:39 +0530</pubDate>
            <description><![CDATA[&lt;p&gt;ಹರಿದ ಬಟ್ಟೆ ಕೆಲವರು ಕಸದೊಂದಿಗೆ ಎಸೆದರೆ, ಇನ್ನೂ ಕೆಲವರು ದಾನ ಮಾಡುತ್ತಾರೆ. ಆದರೆ ಹಳೆಯ ಬಟ್ಟೆಗಳನ್ನು ಕಸವೆಂದು ನೋಡದೆ, ಅವುಗಳಿಂದಲೇ ಪರಿಸರ ಉಳಿಸುವ ಜೊತೆಗೆ ಹಣ ಗಳಿಸುವ ಅವಕಾಶವೊಂದು ಬೆಂಗಳೂರಿನಲ್ಲಿ ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjx5b1ydv98z7rt262cccxw,imgname-bengaluru-textile-waste-nokasa-old-clothes-recycling-1786267216958.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆಯಲ್ಲಿ ಕಪಾಟು ತುಂಬಿಕೊಂಡಿರುವ ಹಳೆಯ ಬಟ್ಟೆಗಳು, ಬಳಸದೆ ಮೂಲೆಯಲ್ಲಿ ಬಿದ್ದಿರುವ ಡ್ರೆಸ್&zwnj;ಗಳು, ಹರಿದ ಬಟ್ಟೆಗಳು ಇವುಗಳನ್ನು ಏನು ಮಾಡಬೇಕು ಎಂಬುದು ಬಹುತೇಕರಿಗೆ ದೊಡ್ಡ ಪ್ರಶ್ನೆ. ಕೆಲವರು ಕಸದೊಂದಿಗೆ ಎಸೆದರೆ, ಇನ್ನೂ ಕೆಲವರು ದಾನ ಮಾಡುತ್ತಾರೆ. ಆದರೆ ಹಳೆಯ ಬಟ್ಟೆಗಳನ್ನು ಕಸವೆಂದು ನೋಡದೆ, ಅವುಗಳಿಂದಲೇ ಪರಿಸರ ಉಳಿಸುವ ಜೊತೆಗೆ ಹಣ ಗಳಿಸುವ ಅವಕಾಶವೊಂದು ಬೆಂಗಳೂರಿನಲ್ಲಿ ಸಿಕ್ಕಿದೆ. ಬೆಂಗಳೂರಿನ NoKasa ಎಂಬ ಸ್ಟಾರ್ಟ್&zwnj;ಅಪ್ ಹಳೆಯ ಬಟ್ಟೆಗಳನ್ನು ಮನೆ ಬಾಗಿಲಿಗೇ ಬಂದು ಸಂಗ್ರಹಿಸಿ, ಅವುಗಳನ್ನು ಮರುಬಳಕೆ, ಮರುಸಂಸ್ಕರಣೆ ಹಾಗೂ ಅಪ್&zwnj;ಸೈಕ್ಲಿಂಗ್ ಮಾಡುವ ಕೆಲಸ ಮಾಡುತ್ತಿದೆ. ಇದರ ವಿಶೇಷವೆಂದರೆ, ಬಳಕೆದಾರರು ತಮ್ಮ ಹಳೆಯ ಬಟ್ಟೆಗಳನ್ನು ನೀಡುವ ಮೂಲಕ ಕ್ಯಾಶ್&zwnj;ಬ್ಯಾಕ್ ಕೂಡ ಪಡೆಯಬಹುದು.&lt;/p&gt;&lt;h2&gt;ಹಳೆಯ ಬಟ್ಟೆ ಕೊಟ್ಟರೆ ಹಣ&lt;/h2&gt;&lt;p&gt;NoKasaನಲ್ಲಿ ಹಳೆಯ ಬಟ್ಟೆಗಳನ್ನು ಮಾರಾಟ ಮಾಡಬಹುದು ಅಥವಾ ದಾನ ಮಾಡಬಹುದು. ಬಟ್ಟೆಗಳನ್ನು ಮಾರಾಟ ಮಾಡಲು ನೀಡಿದರೆ ಪ್ರತಿ ಕೆಜಿಗೆ ಸುಮಾರು ₹20ವರೆಗೆ ಕ್ಯಾಶ್&zwnj;ಬ್ಯಾಕ್ ನೀಡಲಾಗುತ್ತದೆ. ಮನೆ ಬಾಗಿಲಿನಿಂದ ಬಟ್ಟೆ ಸಂಗ್ರಹಿಸುವ ಸೇವೆಗೆ ₹50 ಶುಲ್ಕವಿದ್ದು, ಬಟ್ಟೆಗಳನ್ನು ದಾನ ಮಾಡುವವರಿಗೆ ಈ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಅಂದರೆ ಕಪಾಟಿನನಲ್ಲಿರುವ ಹಳೆಯ ಬಟ್ಟೆಗಳನ್ನು ಹೊರಹಾಕುವುದರ ಜೊತೆಗೆ, ಅವುಗಳಿಂದ ಸ್ವಲ್ಪ ಹಣವನ್ನೂ ಪಡೆಯಬಹುದು.&lt;/p&gt;&lt;h2&gt;ಬೆಂಗಳೂರಿನ ಟೆಕ್ಸ್&zwnj;ಟೈಲ್ ವೇಸ್ಟ್&zwnj;ಗೆ ಪರಿಹಾರ&lt;/h2&gt;&lt;p&gt;ಭಾರತದಲ್ಲಿ ಪ್ರತಿವರ್ಷ ಸುಮಾರು 7.1ರಿಂದ 7.8 ಮಿಲಿಯನ್ ಟನ್&zwnj;ಗಳಷ್ಟು ಟೆಕ್ಸ್&zwnj;ಟೈಲ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಬಳಸಿದ ಬಟ್ಟೆಗಳಲ್ಲಿ ಬಹುಪಾಲು ಸೂಕ್ತ ರೀತಿಯಲ್ಲಿ ಸಂಸ್ಕರಣೆಯಾಗದೆ ಲ್ಯಾಂಡ್&zwnj;ಫಿಲ್&zwnj;ಗಳಿಗೆ ಸೇರುವ ಸಮಸ್ಯೆಯಿದೆ. ಇದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ NoKasa ಆರಂಭವಾಗಿದೆ. ಈ ಸ್ಟಾರ್ಟ್&zwnj;ಅಪ್ ಅನ್ನು ಹಾಸ್ಟೆಲ್ ಸ್ನೇಹಿತರಾದ ಪ್ರಸಾದ್ ಲಿಂಗವಾರ್ ಮತ್ತು ನಚಿಕೇತ್ ಆಚಾರ್ಯ ಆರಂಭಿಸಿದ್ದಾರೆ. 2024ರಲ್ಲಿ ಆರಂಭವಾದ NoKasa, ಆರಂಭದಲ್ಲಿ ವಸತಿ ಸಮುಚ್ಚಯಗಳಲ್ಲಿ ಸ್ಮಾರ್ಟ್ ಬಿನ್&zwnj;ಗಳ ಮೂಲಕ ಹಳೆಯ ಬಟ್ಟೆಗಳನ್ನು ಸಂಗ್ರಹಿಸುತ್ತಿತ್ತು. ಬಳಿಕ ಮನೆ ಬಾಗಿಲಿಗೆ ತೆರಳಿ ಬಟ್ಟೆ ಸಂಗ್ರಹಿಸುವ ಸೇವೆಯನ್ನೂ ಆರಂಭಿಸಿತು.&lt;/p&gt;&lt;h2&gt;ಬಟ್ಟೆ ಕೊಟ್ಟ ಮೇಲೆ ಏನಾಗುತ್ತದೆ?&lt;/h2&gt;&lt;p&gt;ನೀವು ನೀಡಿದ ಹಳೆಯ ಬಟ್ಟೆಗಳು ನೇರವಾಗಿ ಕಸದ ರಾಶಿಗೆ ಹೋಗುವುದಿಲ್ಲ. ಬೆಂಗಳೂರಿನ ಕಗ್ಗದಾಸಪುರದಲ್ಲಿರುವ ಗೋದಾಮಿನಲ್ಲಿ ಬಟ್ಟೆಗಳನ್ನು ಗುಣಮಟ್ಟದ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಧರಿಸಲು ಯೋಗ್ಯವಾಗಿರುವ ಬಟ್ಟೆಗಳನ್ನು ಮರುಮಾರಾಟ ಅಥವಾ ಥ್ರಿಫ್ಟ್ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಹೆಚ್ಚು ಹಾಳಾಗಿರುವ ಬಟ್ಟೆಗಳನ್ನು ರಿಸೈಕ್ಲಿಂಗ್ ಮತ್ತು ಅಪ್&zwnj;ಸೈಕ್ಲಿಂಗ್&zwnj;ಗೆ ಬಳಸಲಾಗುತ್ತದೆ. ಕೆಲವು ಬಟ್ಟೆಗಳಿಂದ ಬ್ಯಾಗ್&zwnj;ಗಳು, ರಗ್&zwnj;ಗಳು ಹಾಗೂ ಮನೆಯ ಅಲಂಕಾರಿಕ ವಸ್ತುಗಳನ್ನೂ ತಯಾರಿಸಲಾಗುತ್ತದೆ.&lt;/p&gt;&lt;h2&gt;20 ಟನ್&zwnj;ಗೂ ಹೆಚ್ಚು ಬಟ್ಟೆ ಸಂಗ್ರಹ&lt;/h2&gt;&lt;p&gt;NoKasa ಪ್ರಕಾರ, ಕಳೆದ ಅವಧಿಯಲ್ಲಿ 20 ಟನ್&zwnj;ಗೂ ಹೆಚ್ಚು ಬಟ್ಟೆಗಳನ್ನು ಸಂಗ್ರಹಿಸಲಾಗಿದ್ದು, ಸುಮಾರು 60,000ರಿಂದ 70,000 ಉಡುಪುಗಳನ್ನು ಲ್ಯಾಂಡ್&zwnj;ಫಿಲ್&zwnj;ಗೆ ಸೇರುವುದರಿಂದ ತಪ್ಪಿಸಲಾಗಿದೆ. ಅವುಗಳಲ್ಲಿ ದೊಡ್ಡ ಪ್ರಮಾಣದ ಬಟ್ಟೆಗಳನ್ನು ಮರುಬಳಕೆ ಮಾಡಲಾಗಿದ್ದು, ಉಳಿದವುಗಳನ್ನು ರಿಸೈಕ್ಲಿಂಗ್, ಅಪ್&zwnj;ಸೈಕ್ಲಿಂಗ್ ಅಥವಾ ಡೌನ್&zwnj;ಸೈಕ್ಲಿಂಗ್&zwnj;ಗೆ ಕಳುಹಿಸಲಾಗಿದೆ.&lt;/p&gt;&lt;h2&gt;ಮುಂದಿನ ಗುರಿ ಏನು?&lt;/h2&gt;&lt;p&gt;ಹಳೆಯ ಬಟ್ಟೆಗಳನ್ನು ಕೇವಲ ಸಂಗ್ರಹಿಸುವುದಷ್ಟೇ ಅಲ್ಲದೆ, ಅವುಗಳನ್ನು ತೊಳೆದು, ರಿಪೇರಿ ಮಾಡಿ, ಡೈಯಿಂಗ್ ಮಾಡುವ ರಿಫರ್ಬಿಷ್&zwnj;ಮೆಂಟ್ ಸೆಂಟರ್ ಆರಂಭಿಸುವ ಯೋಜನೆಯೂ ಸಂಸ್ಥೆ ಹೊಂದಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಮರುಬಳಕೆಯ ಬಟ್ಟೆಗಳನ್ನು ಮಾರಾಟ ಮಾಡುವ ಆನ್&zwnj;ಲೈನ್ ಥ್ರಿಫ್ಟ್ ಪ್ಲಾಟ್&zwnj;ಫಾರ್ಮ್&zwnj;ಗೂ ಮುಂದಿನ ದಿನಗಳಲ್ಲಿ ವಿಸ್ತರಿಸುವ ಯೋಜನೆ ಇದೆ.&lt;/p&gt;&lt;h2&gt;ಕಸವಲ್ಲ, ಸಂಪನ್ಮೂಲ&lt;/h2&gt;&lt;p&gt;ಹಳೆಯ ಬಟ್ಟೆಗಳನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಅವುಗಳಿಗೆ ಮತ್ತೊಂದು ಜೀವನ ನೀಡಬಹುದು ಎಂಬುದನ್ನು NoKasa ಮಾದರಿ ತೋರಿಸುತ್ತಿದೆ. ಒಂದು ಕಡೆ ಮನೆ ಕಪಾಟಿನಲ್ಲಿ ಜಾಗ ಖಾಲಿಯಾಗುತ್ತದೆ, ಮತ್ತೊಂದೆಡೆ ಹಳೆಯ ಬಟ್ಟೆಗಳಿಂದ ಆದಾಯವೂ ಸಿಗುತ್ತದೆ. ಮುಖ್ಯವಾಗಿ, ಬಟ್ಟೆಗಳು ಲ್ಯಾಂಡ್&zwnj;ಫಿಲ್ ಸೇರುವುದನ್ನು ತಡೆಯುವ ಮೂಲಕ ಪರಿಸರಕ್ಕೂ ನೆರವಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/bengaluru-urban/bengaluru-textile-waste-nokasa-old-clothes-recycling-suh/articleshow-0lgiogo"/>
        </item>
        <item>
            <title><![CDATA[ಹಣ್ಣಿನಿಂದ ಹಿಡಿದು ಇಡ್ಲಿಯವರೆಗೆ; Karna Serialನಿಂದ ದೂರವಾದ ನಮ್ರತಾ ಗೌಡ ಇಲ್ಲೇನು ಮಾಡ್ತಿದ್ದಾರೆ ನೋಡಿ]]></title>
            <link>https://kannada.asianetnews.com/gallery/entertainment/karna-serial-namratha-gowda-about-her-breakfast-routine-with-fruits-and-idli-sambar-suc-c2owd87</link>
            <guid isPermaLink="true">https://kannada.asianetnews.com/gallery/entertainment/karna-serial-namratha-gowda-about-her-breakfast-routine-with-fruits-and-idli-sambar-suc-c2owd87</guid>
            <pubDate>Sun, 09 Aug 2026 13:00:35 +0530</pubDate>
            <description><![CDATA[&lt;p&gt;'ಕರ್ಣ' ಸೀರಿಯಲ್&zwnj;ನಿಂದ ಹೊರಬಂದಿರುವ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸೆಲೆಬ್ರಿಟಿಗಳ ಮನೆಯಲ್ಲಿ ಏನೇನು ಆಗತ್ತೆ ಎಂದು ನೋಡಲು ಇಚ್ಛಿಸುವ ತಮ್ಮ ಫ್ಯಾನ್ಸ್​ಗಾಗಿ ನಟಿ, ತಮ್ಮ ಬೆಳಗಿನ ದಿನಚರಿಯ ವಿಡಿಯೋ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjpq3eccw0fc2mqxyjq7zkb,imgname-namratha-gowda-1786260458956.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕರ್ಣ' ಸೀರಿಯಲ್&zwnj;ನಿಂದ ಹೊರಬಂದಿರುವ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸೆಲೆಬ್ರಿಟಿಗಳ ಮನೆಯಲ್ಲಿ ಏನೇನು ಆಗತ್ತೆ ಎಂದು ನೋಡಲು ಇಚ್ಛಿಸುವ ತಮ್ಮ ಫ್ಯಾನ್ಸ್​ಗಾಗಿ ನಟಿ, ತಮ್ಮ ಬೆಳಗಿನ ದಿನಚರಿಯ ವಿಡಿಯೋ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಸ್ಟೋರಿಯೇ ಫುಲ್​ ಬದಲಾಗಿ ಹೋಗಿದೆ. ಆರಂಭದಲ್ಲಿ ನಿಧಿ, ನಿತ್ಯಾ ಮತ್ತು ಕರ್ಣನ ಸುತ್ತಲೂ ಸುತ್ತುತ್ತಿದ್ದ ಸ್ಟೋರಿ ಬೇರೆ ರೂಪ ಪಡೆದು ನಿತ್ಯಾ ಕಣ್ಮರೆಯಾಗಿದ್ದಾಳೆ. ಈಗ ಸ್ಟೋರಿ ಕರ್ಣನ ಕುಟುಂಬದ ಸುತ್ತಲೂ ಸುತ್ತುತ್ತಿದೆ.&lt;/p&gt;&lt;img&gt;&lt;p&gt;ಆರಂಭದಲ್ಲಿ ನಿತ್ಯಾ ಇದ್ದಾಗ ಆ ಸ್ಟೋರಿಯನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ನಿತ್ಯಾನ್ನು ಕರ್ಣ ಅನಿವಾರ್ಯವಾಗಿ ಮದುವೆಯಾದಾಗ, ಮುಂದೇನು ಎನ್ನುವ ತವಕ ಇತ್ತು. ಕೊನೆಗೆ ಈಗ ನಿತ್ಯಳನ್ನು ಸಂಪೂರ್ಣ ದೂರ ಮಾಡಿದ್ದು, ನಿತ್ಯಾ ಪಾತ್ರಧಾರಿಯಾಗಿದ್ದ ನಮ್ರತಾ ಗೌಡ (Namratha Gowda) ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಮಾತ್ರ ಆ್ಯಕ್ಟೀವ್​ ಆಗಿದ್ದಾರೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಅವರ ಅಡುಗೆಗೆ, ಮನೆ ಕೆಲಸಕ್ಕೆ ಎಲ್ಲವೂ ಆಳು-ಕಾಳುಗಳು ಇರುತ್ತಾರೆ ಎಂದು ಅಂದುಕೊಳ್ಳುವುದು ಸಾಮಾನ್ಯ. ಇದರ ಹೊರತಾಗಿಯೂ ಕೆಲವರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಕೊನೆಯ ಪಕ್ಷ ಅಡುಗೆಯನ್ನಾದರೂ ತಾವೇ ಮಾಡುತ್ತಾರೆ.&lt;/p&gt;&lt;img&gt;&lt;p&gt;ಹಾಗೆಯೇ ನಟಿ ನಮ್ರತಾ ಗೌಡ ಅವರು ಇದೀಗ ತಮ್ಮ ಬೆಳಗಿನ ದಿನಚರಿಯ ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ. ಆರಂಭದಲ್ಲಿ ಫ್ರೂಟ್ಸ್​ ತಿನ್ನುವ ಮೂಲಕ ದಿನಚರಿ ಆರಂಭಿಸಿರುವ ನಮ್ರತಾ ಅವರು ಕೊನೆಗೆ ಇಡ್ಲಿ ಮಾಡುವುದನ್ನು ತೋರಿಸಿದ್ದಾರೆ. ಇಡ್ಲಿ ಮಾಡಿ ಅದಕ್ಕೆ ಚಟ್ನಿಯನ್ನೂ ಮಾಡಿದ್ದಾರೆ. ಕೊನೆಗೆ ನುಗ್ಗೆಕಾಯಿಯ ಸಾಂಬಾರ್​ ಮಾಡಿರುವುದನ್ನು ತೋರಿಸಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಮಾಡುವಂಥದ್ದೇ. ಆದರೆ ಇದನದ್ನು ಬೇರೆ ಸಾಮಾನ್ಯ ಜನರು ಮಾಡಿದರೆ ಯಾರೂ ನೋಡಲ್ಲ. ಆದರೆ ಸೆಲೆಬ್ರಿಟಿಗಳ ಮನೆಯಲ್ಲಿ ಏನೇನು ನಡೆಯುತ್ತದೆ ಎನ್ನುವ ಕುತೂಹಲ ಅವರ ಅಭಿಮಾನಿಗಳಿಗೆ ಇರುವ ಕಾರಣದಿಂದ ತನ್ನ ನೆಚ್ಚಿನ ತಾರೆಯರ ಮನೆಯ ಒಳಗೆ ಇಣುವುದು ಅವರಿಗೆ ಇಷ್ಟವಾಗುತ್ತದೆ.&lt;/p&gt;&lt;img&gt;&lt;p&gt;ಅದೇ ರೀತಿ, ನಮ್ರತಾ ಗೌಡ ಅವರ ಈ ಬೆಳಗಿನ ಬ್ರೇಕ್​ಫಾಸ್ಟ್​ ದಿನಚರಿಯನ್ನು ನೋಡಿ ಹಲವರು ಕಮೆಂಟ್ಸ್​ ಮಾಡಿದ್ದಾರೆ. ಅದರಲ್ಲಿ ಹಲವರು ನಿಮ್ಮನ್ನು ಸೀರಿಯಲ್​​ನಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು, ನಮ್ರತಾ ಅವರೇ ಅಡುಗೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/karna-serial-namratha-gowda-about-her-breakfast-routine-with-fruits-and-idli-sambar-suc-c2owd87"/>
        </item>
        <item>
            <title><![CDATA[Miss Universe India: ಫೈನಲ್‌ಗೂ ಮುನ್ನ ಇಂದೋರ್‌ನಲ್ಲಿ ಸೂಫಿ ನೈಟ್! 52 ಸ್ಪರ್ಧಿಗಳ ರಿಲ್ಯಾಕ್ಸ್]]></title>
            <link>https://kannada.asianetnews.com/fashion/miss-universe-india-2026-finalists-unwind-at-sufi-night-ahead-of-jaipur-finale/articleshow-4s1h13t</link>
            <guid isPermaLink="true">https://kannada.asianetnews.com/fashion/miss-universe-india-2026-finalists-unwind-at-sufi-night-ahead-of-jaipur-finale/articleshow-4s1h13t</guid>
            <pubDate>Sun, 09 Aug 2026 13:32:13 +0530</pubDate>
            <description><![CDATA[&lt;p&gt;ಮಿಸ್ ಯೂನಿವರ್ಸ್ ಇಂಡಿಯಾ 2026ರ 52 ಫೈನಲಿಸ್ಟ್&zwnj;ಗಳು ತಮ್ಮ 10 ದಿನಗಳ ತರಬೇತಿ ಕಾರ್ಯಕ್ರಮದ ಭಾಗವಾಗಿ ಇಂದೋರ್&zwnj;ನಲ್ಲಿ ನಡೆದ ಸೂಫಿ ನೈಟ್&zwnj;ನಲ್ಲಿ ಭಾಗವಹಿಸಿದ್ದರು. ಗ್ಲಾಮಾನಂದ್ ಗ್ರೂಪ್ ಆಯೋಜಿಸುತ್ತಿರುವ ಈ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಆಗಸ್ಟ್ 23 ರಂದು ಜೈಪುರದಲ್ಲಿ ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-8ec5ca69-498d-4878-b2c8-fce79a22462c.jpg" type="image/jpeg" height="390" width="690"/>
            <content:encoded><![CDATA[&lt;p&gt;Miss Universe India 2026 ಕಿರೀಟಕ್ಕಾಗಿ ಸ್ಪರ್ಧಿಸುತ್ತಿರುವ 52 ಫೈನಲಿಸ್ಟ್&zwnj;ಗಳು ಫೈನಲ್&zwnj;ಗೂ ಮುನ್ನ ನಡೆಯುತ್ತಿರುವ 10 ದಿನಗಳ ತರಬೇತಿ ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 8 ರಂದು ಮಧ್ಯಪ್ರದೇಶದ ಇಂದೋರ್/ದೇವಾಸ್ ಬಳಿಯ ಅನ್&zwnj;ವಿಂಡ್ ರೆಸಾರ್ಟ್&zwnj;ನಲ್ಲಿ ಆಯೋಜಿಸಲಾಗಿದ್ದ ಸೂಫಿ ನೈಟ್&zwnj;ನಲ್ಲಿ ಒಂದೆಡೆ ಸೇರಿದ್ದರು.&lt;/p&gt;&lt;p&gt;ಈ ಸಂಗೀತ ಸಂಜೆಯನ್ನು ಸ್ಪರ್ಧಿಗಳಿಗೆ ವಿಶ್ರಾಂತಿ ನೀಡಲು, ಲೈವ್ ಸಂಗೀತವನ್ನು ಆನಂದಿಸಲು ಮತ್ತು ಕಠಿಣ ಸ್ಪರ್ಧೆಯ ಶೆಡ್ಯುಲ್ಡ್ ನಡುವೆ ಪರಸ್ಪರ ಬೆರೆಯಲು ಆಯೋಜಿಸಲಾಗಿತ್ತು ಎಂದು ರಾಷ್ಟ್ರೀಯ ನಿರ್ದೇಶಕ ನಿಖಿಲ್ ಆನಂದ್ ತಿಳಿಸಿದ್ದಾರೆ.&lt;/p&gt;&lt;p&gt;ಕಾರ್ಯಕ್ರಮದ ಥೀಮ್&zwnj;ಗೆ ತಕ್ಕಂತೆ ಸ್ಪರ್ಧಿಗಳು ಸಾಂಪ್ರದಾಯಿಕ ಇಂಡೋ-ವೆಸ್ಟರ್ನ್ ಉಡುಗೆಗಳು ಮತ್ತು ಸೀರೆಗಳಲ್ಲಿ ಮಿಂಚಿದರು.&lt;/p&gt;&lt;h2&gt;ಗ್ರ್ಯಾಂಡ್ ಫಿನಾಲೆ ಯಾವಾಗ?&lt;/h2&gt;&lt;p&gt;ಗ್ಲಾಮಾನಂದ್ ಗ್ರೂಪ್ ಈ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಇದರ ಗ್ರ್ಯಾಂಡ್ ಫಿನಾಲೆ ಆಗಸ್ಟ್ 23 ರಂದು ರಾಜಸ್ಥಾನದ ಜೈಪುರದ ಝೀ ಸ್ಟುಡಿಯೋಸ್&zwnj;ನಲ್ಲಿ ನಡೆಯಲಿದೆ. ಈಗಿನ ಮಿಸ್ ಯೂನಿವರ್ಸ್ ಇಂಡಿಯಾ, ಮನಿಕಾ ವಿಶ್ವಕರ್ಮ ಅವರು ಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಉತ್ತರಾಧಿಕಾರಿಗೆ ಕಿರೀಟವನ್ನು ತೊಡಿಸಲಿದ್ದಾರೆ.&lt;/p&gt;&lt;h3&gt;52 ಫೈನಲಿಸ್ಟ್&zwnj;ಗಳ ಆಯ್ಕೆ&lt;/h3&gt;&lt;p&gt;ಭಾರತದಾದ್ಯಂತ ನಡೆದ ಪ್ರಾದೇಶಿಕ ರಾಜ್ಯ ಮಟ್ಟದ ಸ್ಪರ್ಧೆಗಳ ಮೂಲಕ ಈ 52 ಫೈನಲಿಸ್ಟ್&zwnj;ಗಳನ್ನು ಆಯ್ಕೆ ಮಾಡಲಾಗಿದೆ. ಅಂತಿಮ ಮತ್ತು ಎನ್&zwnj;ಆರ್&zwnj;ಐ ಆಡಿಷನ್&zwnj;ಗಳ ಮೂಲಕ ಹೆಚ್ಚುವರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಯೋಜಕರ ಪ್ರಕಾರ, ಫೆಬ್ರವರಿಯಲ್ಲಿ ಆಡಿಷನ್&zwnj;ಗಳು ಪ್ರಾರಂಭವಾಗಿದ್ದವು. ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಮೊದಲು ಸುಮಾರು 8,000 ದಿಂದ 9,000 ಆಕಾಂಕ್ಷಿಗಳನ್ನು ಪರಿಗಣಿಸಲಾಗಿತ್ತು. ಇದೀಗ ಸ್ಪರ್ಧಿಗಳು ಸಂವಹನ, ಪ್ರೆಸೆಂಟೇಶನ್, ನೃತ್ಯ, ರಿಹರ್ಸಲ್ ಮತ್ತು ಸ್ಪರ್ಧೆಯ ಇತರ ಅಂಶಗಳ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಫೈನಲ್&zwnj;ಗೆ ಹತ್ತಿರವಾಗುತ್ತಿದ್ದಂತೆ ರಿಹರ್ಸಲ್ ಸಮಯ ದಿನಕ್ಕೆ ಸುಮಾರು 14 ರಿಂದ 15 ಗಂಟೆಗಳವರೆಗೆ ಹೆಚ್ಚಾಗಬಹುದು ಎಂದು ಆಯೋಜಕರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಫೈನಲಿಸ್ಟ್&zwnj;ಗಳ ಡ್ರಿಮ್ಸ್, ಮಾತುಗಳು&lt;/strong&gt;&lt;/p&gt;&lt;p&gt;&lt;strong&gt;ಪ್ರಮಿತಿ ರಾಣಾ, ದೆಹಲಿ:&lt;/strong&gt;&lt;/p&gt;&lt;p&gt;ದೆಹಲಿಯ ಫೈನಲಿಸ್ಟ್ ಪ್ರಮಿತಿ ರಾಣಾ ಈ ಅನುಭವವನ್ನು ಒಂದು The Learning Journey&lt;/p&gt;&lt;p&gt;ಎಂದು ಬಣ್ಣಿಸಿದ್ದಾರೆ. 'ಈ ಎಲ್ಲ ವಿಷಯಗಳಿಂದ ನೀವು ಕೇವಲ ಬಾಹ್ಯ ವಿಷಯಗಳನ್ನು ಕಲಿಯುವುದಿಲ್ಲ. ಶಿಸ್ತು, ಸ್ಥೈರ್ಯ, ಈ ಎಲ್ಲ ವಿಷಯಗಳನ್ನು ನೀವು ಒಳಗಿನಿಂದ ಕಲಿಯುತ್ತೀರಿ ಎಂದು ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.&lt;/p&gt;&lt;p&gt;&lt;strong&gt;ರಾಣಾ ಅವರ ಗುರಿ ಸ್ಪಷ್ಟವಾಗಿತ್ತು, 'ಮಿಸ್ ಯೂನಿವರ್ಸ್ ಇಂಡಿಯಾ ಆಗುವುದೇ ನನ್ನ ಗುರಿ.&lt;/strong&gt;&lt;/p&gt;&lt;p&gt;ದೆಹಲಿಯನ್ನು ಪ್ರತಿನಿಧಿಸುತ್ತಿರುವ ಅವರು, ಈ ರಾಜ್ಯದಿಂದ ಇನ್ನೂ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಬಂದಿಲ್ಲ ಎಂದು ಹೇಳಿ, ನಾನು ಅದನ್ನು ಬದಲಾಯಿಸುತ್ತೇನೆ ಎಂದು ಅತ್ಮವಿಶ್ವಾದಿಂದ ನುಡಿದರು. ಹಿಂದೆ ಮಾಡೆಲಿಂಗ್ ಮತ್ತು ಕ್ಯಾಬಿನ್ ಕ್ರೂ ಅನುಭವವಿದ್ದರೂ, ಇದು ತಮ್ಮ ಮೊದಲ ಸೌಂದರ್ಯ ಸ್ಪರ್ಧೆ ಎಂದು ಹೇಳಿದ ಅವರು ತಮ್ಮ ಆತ್ಮವಿಶ್ವಾಸ, ಮಾತನಾಡುವ ಕೌಶಲ್ಯ, ನಡಿಗೆ ಮತ್ತು ಶಿಸ್ತಿಗೆ ತಮ್ಮ ಮಾರ್ಗದರ್ಶಕರಿಗೆ ಕೃತಜ್ಞತೆ ಸಲ್ಲಿಸಿದರು.&lt;/p&gt;&lt;p&gt;&lt;strong&gt;ಉಮಾಂಗ ಕುಮಾವತ್, ಮಧ್ಯಪ್ರದೇಶ&lt;/strong&gt;&lt;/p&gt;&lt;p&gt;ಮಧ್ಯಪ್ರದೇಶದ ಪ್ರತಿನಿಧಿ ಉಮಾಂಗ ಕುಮಾವತ್, ಈ ಸ್ಪರ್ಧೆಯತ್ತ ತಮ್ಮ ಪಯಣ ಹಲವು ವರ್ಷಗಳ ಹಿಂದೆಯೇ ಆರಂಭವಾಯಿತು ಎಂದು ಹೇಳಿದರು. ಸುಶ್ಮಿತಾ ಸೇನ್ ಯಾವಾಗಲೂ ನನ್ನ ಸ್ಫೂರ್ತಿ. ಹಾಗಾಗಿ, ನಾನು ಯಾವಾಗಲೂ ಮಿಸ್ ಯೂನಿವರ್ಸ್ ಇಂಡಿಯಾಗೆ ಹೋಗಿ, ಮಿಸ್ ಯೂನಿವರ್ಸ್&zwnj;ನಲ್ಲಿ ಭಾರತವನ್ನು ಪ್ರತಿನಿಧಿಸಲು ಬಯಸಿದ್ದೆ' ಎಂದರು.&lt;/p&gt;&lt;p&gt;ಕುಮಾವತ್ ಈ ಸ್ಪರ್ಧೆಯನ್ನು 'ತುಂಬಾ ಕಠಿಣ ಸ್ಪರ್ಧೆ' ಎಂದು ಬಣ್ಣಿಸಿದರೂ, ತಯಾರಿ ಉದ್ದಕ್ಕೂ ಸ್ಪರ್ಧಿಗಳು ಬೆಳೆಯುತ್ತಲೇ ಇರುತ್ತಾರೆ ಎಂದರು. ಹಾಗಾಗಿ, ಈಗ ಬೆಳವಣಿಗೆ ಅನ್ನೋದು ಒಂದು ಪಯಣ. ಮತ್ತು ನಾವಿಲ್ಲಿ ಇರುವುದಕ್ಕೆ ತುಂಬಾ ಖುಷಿ ಇದೆ ಎಂದು ಅವರು ಹೇಳಿದರು.&lt;/p&gt;&lt;p&gt;&lt;strong&gt;ಅನ್ನಿ ಶರ್ಮಾ, ವೈಲ್ಡ್ ಕಾರ್ಡ್ ಎಂಟ್ರಿ&lt;/strong&gt;&lt;/p&gt;&lt;p&gt;ದೆಹಲಿಯಲ್ಲಿ ಮೊದಲ ರನ್ನರ್-ಅಪ್ ಆಗಿ, ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧೆಗೆ ಪ್ರವೇಶಿಸಿದ ಅನ್ನಿ ಶರ್ಮಾ, ತಮ್ಮ ಆಕಾಂಕ್ಷೆಗಳು ಸೌಂದರ್ಯ ಸ್ಪರ್ಧೆಗೂ ಮೀರಿದ್ದು ಎಂದು ಹೇಳಿದರು. ನಾನು ನಟಿಯಾಗಲು ಬಯಸುತ್ತೇನೆ ಎಂದ ಅವರು, ತಮ್ಮ ಗುರಿ ಸಮಗ್ರ ಯೋಗಕ್ಷೇಮ ಮತ್ತು ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಪ್ರೋತ್ಸಾಹಿಸುವುದಾಗಿದೆ ಎಂದು ಹೇಳಿದರು.&lt;/p&gt;&lt;p&gt;&lt;strong&gt;ಗ್ರ್ಯಾಂಡ್ ಫಿನಾಲೆ ಬಳಿಕ ಮುಂದೇನು?&lt;/strong&gt;&lt;/p&gt;&lt;p&gt;ಇಂದೋರ್ ಕಾರ್ಯಕ್ರಮದ ನಂತರ, ಸ್ಪರ್ಧಿಗಳು ಆಗಸ್ಟ್ 11 ರಂದು ಜೈಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಆಗಸ್ಟ್ 23 ರ ಫಿನಾಲೆವರೆಗೂ ಮತ್ತೊಂದು ಹಂತದ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ 20 ರಂದು, ಅವರು ರಾಷ್ಟ್ರೀಯ ಉಡುಗೆ, ಸೂಟ್ಸ್, ಈವ್ನಿಂಗ್ ಗೌನ್ ಮತ್ತು ಟ್ಯಾಲೆಂಟ್ ರೌಂಡ್&zwnj;ಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಂತಿಮ ವಿಜೇತರು ನವೆಂಬರ್ 2026 ರಲ್ಲಿ ಪೋರ್ಟೊ ರಿಕೊದ ಸ್ಯಾನ್ ಜುವಾನ್&zwnj;ನಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.&lt;/p&gt;&lt;p&gt;ರಾಷ್ಟ್ರೀಯ ಫೈನಲ್ ಅನ್ನು ಅಧಿಕೃತ ಗ್ಲಾಮಾನಂದ್ ಯೂಟ್ಯೂಬ್ ಚಾನೆಲ್&zwnj;ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. (ANI)&lt;/p&gt;&lt;p&gt;(ಶೀರ್ಷಿಕೆಯನ್ನು ಹೊರತುಪಡಿಸಿ, ಈ ಸುದ್ದಿಯನ್ನು ಏಷ್ಯಾನೆಟ್ ನ್ಯೂಸ್ ಸಂಪಾದಕೀಯ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>life</category>
            <dc:creator>Ravi Janekal</dc:creator>
            <atom:link href="https://kannada.asianetnews.com/fashion/miss-universe-india-2026-finalists-unwind-at-sufi-night-ahead-of-jaipur-finale/articleshow-4s1h13t"/>
        </item>
        <item>
            <title><![CDATA[ಕೊನೆಗೂ Bigg Boss ಗಿಲ್ಲಿ ಫ್ಯಾನ್ಸ್​ ಆಸೆ ನೆರವೇರಿಸಿದ ಕಾವ್ಯಾ ಶೈವ: ಲೈವ್​ನಲ್ಲಿ ಬಂದು ಹೇಳಿದ್ದೇನು]]></title>
            <link>https://kannada.asianetnews.com/gallery/tv-talk/bigg-boss-kavya-shaiva-opens-up-about-gilli-nata-and-wish-him-best-future-suc-hmqwye3</link>
            <guid isPermaLink="true">https://kannada.asianetnews.com/gallery/tv-talk/bigg-boss-kavya-shaiva-opens-up-about-gilli-nata-and-wish-him-best-future-suc-hmqwye3</guid>
            <pubDate>Sun, 09 Aug 2026 12:07:15 +0530</pubDate>
            <description><![CDATA[ಬಿಗ್​ಬಾಸ್​​ 12ರ ಸ್ಪರ್ಧಿಗಳಾದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮುಂದುವರೆದಿದೆ. ಇತ್ತೀಚೆಗೆ ಇನ್​ಸ್ಟಾಗ್ರಾಮ್​ ಲೈವ್​ ಬಂದ ಕಾವ್ಯಾ, ಗಿಲ್ಲಿ ನಟರ ವೃತ್ತಿಜೀವನಕ್ಕೆ ಶುಭ ಹಾರೈಸುವ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzjkq616b34wntmfveawy1qd,imgname-kavya-shaiva-and-gilli--nata-1786257315878.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​​ 12ರ ಸ್ಪರ್ಧಿಗಳಾದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮುಂದುವರೆದಿದೆ. ಇತ್ತೀಚೆಗೆ ಇನ್​ಸ್ಟಾಗ್ರಾಮ್​ ಲೈವ್​ ಬಂದ ಕಾವ್ಯಾ, ಗಿಲ್ಲಿ ನಟರ ವೃತ್ತಿಜೀವನಕ್ಕೆ ಶುಭ ಹಾರೈಸುವ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.&lt;img&gt;&lt;p&gt;ಬಿಗ್​ಬಾಸ್​​ 12 (Bigg Boss 12) ಹವಾ ತಣ್ಣಗಾಗುತ್ತಾ ಬಂದು ಇನ್ನೇನು ಕೆಲವೇ ದಿನಗಳಲ್ಲಿ 13ನೇ ಸೀಸನ್​ ಆರಂಭ ಆಗಲಿದೆ. ಇದರ ಹೊರತಾಗಿಯೂ 12ರ ಕೆಲವು ಸ್ಪರ್ಧಿಗಳಿಗೆ ಇನ್ನೂ ಸಕತ್​ ಡಿಮಾಂಡ್​ ಇದ್ದೇ ಇದೆ. ಕೆಲವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂಥವರಲ್ಲಿ ಒಬ್ಬರು ಬಿಗ್​ಬಾಸ್​​ ವಿನ್ನರ್​ ಗಿಲ್ಲಿ ನಟ ಮತ್ತು ಅವರ ಜೊತೆ ಸಕತ್​ ಸೌಂಡ್​ ಮಾಡಿದ್ದ ಕಾವ್ಯಾ ಶೈವ.&lt;/p&gt;&lt;img&gt;&lt;p&gt;ಆದರೆ ಬಿಗ್​ಬಾಸ್​ ಮನೆಯಲ್ಲಿ ಇವರ ಜೋಡಿ ನೋಡಿ ಇಷ್ಟಪಟ್ಟವರು ಹಲವರು. ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದೇ ಅಂದುಕೊಂಡವರೂ ಹಲವರು. ಇವರಿಬ್ಬರ ಬಾಂಡಿಂಗ್​ ಸಿಕ್ಕಾಪಟ್ಟೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅದೆಷ್ಟರ ಮಟ್ಟಿಗೆ ಎಂದರೆ ಹಲವರು ಇವರಿಬ್ಬರ ಮದುವೆಯನ್ನೂ ಎಐ ಮೂಲಕ ಮಾಡಿಸಿ, ಮಗುವನ್ನೂ ಹುಟ್ಟಿಸಿಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಗಿಲ್ಲಿ ನಟ (Bigg Boss Gilli Nata) ಹೊರಕ್ಕೆ ಬಂದಾಗ ಕಾವ್ಯಾ ಶೈವ ಬಗ್ಗೆ ಕೇಳಿದ ಮಾತಿಗೆ, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅಂಥದ್ದೇನೂ ಇಲ್ಲ ಎಂದಿದ್ದರು. ಆದರೆ ಅವರ ಕೆಲವು ಅಭಿಮಾನಿಗಳು ಮಾತ್ರ ಬಿಡುತ್ತಿಲ್ಲ. ಕಾವ್ಯಾ ಶೈವ ನಮಗೆ ಇಷ್ಟ ಆಗಿದ್ದಾಳೆ. ಇಬ್ಬರನ್ನೂ ಮದುವೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ.&lt;/p&gt;&lt;img&gt;&lt;p&gt;ಇದೇ ಕಾರಣಕ್ಕೆ ಗಿಲ್ಲಿ ನಟನ ಬಗ್ಗೆ (Bigg Boss Gilli Nata and Kavya Shaiva) ಹೇಳಿ ಹೇಳಿ ಎಂದು ಪದೇ ಪದೇ ಕಾವ್ಯಾ ಶೈವ ಅವರಿಗೆ ಅಭಿಮಾನಿಗಳು ಕಾಡುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಇನ್​ಸ್ಟಾಗ್ರಾಮ್​ ಲೈವ್​ಗೆ ಬಂದ ಕಾವ್ಯಾ ಶೈವ ಅವರು, ನೀವು ಪದೇ ಪದೇ ಗಿಲ್ಲಿ ನಟನ ಬಗ್ಗೆ ಹೇಳಿ ಹೇಳಿ ಅಂತಾನೇ ಇರುತ್ತೀರಿ. ಅದಕ್ಕಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಗಿಲ್ಲಿ ನಟ ಸದ್ಯ ಪಳಾರ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿ. ಅದೇ ರೀತಿ ಅವರಿಗೆ ಒಳ್ಳೊಳ್ಳೆಯ ಪ್ರಾಜೆಕ್ಟ್​ಗಳು ಸಿಗಲಿ, ಮತ್ತಷ್ಟು ಅವರು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಗಿಲ್ಲಿ ನಟನ ಬಗ್ಗೆ ಇನ್ನೇನು ಹೇಳುತ್ತಾರೆ ಎಂದು ಕಾದಿದ್ದ ಗಿಲ್ಲಿ ಫ್ಯಾನ್ಸ್​ಗೆ ಕೊಂಚ ನಿರಾಸೆಯಾದರೂ, ಕಾವ್ಯಾ ಬಾಯಲ್ಲಿ ಗಿಲ್ಲಿಯ ಮಾತು ಬಂತಲ್ಲ ಎಂದು ಖುಷಿ ಪಟ್ಟುಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಗಿಲ್ಲಿ ನಟನ ಮದುವೆಯ ಬಗ್ಗೆ ಕೇಳಿದ ಮಾತಿಗೆ ಅವರ ತಾಯಿ ಈ ಹಿಂದೆ, ಅವನು ನಮಗೆ ಇಷ್ಟು ಕೀರ್ತಿ ತಂದುಕೊಟ್ಟಿದ್ದಾನೆ. ಅವನು ಇಷ್ಟಪಟ್ಟ ಹುಡುಗಿಯ ಜೊತೆ ನಾವು ಮದುವೆ ಮಾಡಿಸುತ್ತೇವೆ. ಅವನು ಯಾರನ್ನೇ ಇಷ್ಟಪಟ್ಟರೂ, ಅವರ ಜೊತೆ ಮದುವೆ ಮಾಡಿಸುತ್ತೇವೆ ಎಂದಿದ್ದರು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-kavya-shaiva-opens-up-about-gilli-nata-and-wish-him-best-future-suc-hmqwye3"/>
        </item>
        <item>
            <title><![CDATA[ಪೋಷಕರೇ ಈ ಶಾಕಿಂಗ್ ವರದಿ ಕಡೆಗಣಿಸಬೇಡಿ: ಮಕ್ಕಳ ಹೃದಯಾಘಾತಕ್ಕೆ ಇದೇ ಕಾರಣ! 13 ರಾಜ್ಯಗಳ ಅಧ್ಯಯನದಲ್ಲಿ ಹೊರಬಿತ್ತು ಬೆಚ್ಚಿಬೀಳಿಸುವ ಮಾಹಿತಿ!]]></title>
            <link>https://kannada.asianetnews.com/gallery/health-life/children-heart-attack-risk-shocking-study-reveals-causes-parents-must-know-rav-3pad3c7</link>
            <guid isPermaLink="true">https://kannada.asianetnews.com/gallery/health-life/children-heart-attack-risk-shocking-study-reveals-causes-parents-must-know-rav-3pad3c7</guid>
            <pubDate>Sun, 09 Aug 2026 11:32:04 +0530</pubDate>
            <description><![CDATA[&lt;p&gt;ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಹುಬ್ಬಳ್ಳಿಯ ಕೆಎಂಸಿಆರ್&zwnj;ಐ, ಕೇಂದ್ರ ಆರೋಗ್ಯ ಸಂಶೋಧನಾ ಇಲಾಖೆ ಜಂಟಿಯಾಗಿ ಅಧ್ಯಯನ ನಡೆಸಿವೆ. ದೇಶದ 13 ರಾಜ್ಯಗಳು, ಕರ್ನಾಟಕದ 25 ಜಿಲ್ಲೆಗಳ ಮಕ್ಕಳ ಒಳಗೊಂಡ ಅಧ್ಯಯನದಲ್ಲಿ ಹಲವು ಆಘಾತಕಾರಿ ಅಂಶಗಳು ಪತ್ತೆಯಾಗಿವೆ ಎಂಬುದು ವಿಶೇಷ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjh0k4nbwwgxfynqvtvsy78,imgname-----------------------2026-08-09t111514.483-1786254478485.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಹುಬ್ಬಳ್ಳಿಯ ಕೆಎಂಸಿಆರ್&zwnj;ಐ, ಕೇಂದ್ರ ಆರೋಗ್ಯ ಸಂಶೋಧನಾ ಇಲಾಖೆ ಜಂಟಿಯಾಗಿ ಅಧ್ಯಯನ ನಡೆಸಿವೆ. ದೇಶದ 13 ರಾಜ್ಯಗಳು, ಕರ್ನಾಟಕದ 25 ಜಿಲ್ಲೆಗಳ ಮಕ್ಕಳ ಒಳಗೊಂಡ ಅಧ್ಯಯನದಲ್ಲಿ ಹಲವು ಆಘಾತಕಾರಿ ಅಂಶಗಳು ಪತ್ತೆಯಾಗಿವೆ ಎಂಬುದು ವಿಶೇಷ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಹುಬ್ಬಳ್ಳಿಯ ಕೆಎಂಸಿಆರ್&zwnj;ಐನ ಬಹುವಿಭಾಗೀಯ ಸಂಶೋಧನಾ (ಎಂಆರ್&zwnj;ಯು) ಘಟಕ ಈ ಹಿಂದೆ ಧಾರವಾಡ ಜಿಲ್ಲೆಯಾದ್ಯಂತ ಸಂಶೋಧನಾ ಅಧ್ಯಯನ ಕೈಗೊಂಡಿತ್ತು. ಬಳಿಕ, ಇದೇ ಅಧ್ಯಯನದ ಆಧಾರದ ಮೇಲೆ ಕೆಎಂಸಿಆರ್&zwnj;ಐ, ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ ಜೊತೆ ಜಂಟಿಯಾಗಿ ದೇಶದ 13 ರಾಜ್ಯ ಹಾಗೂ ಕರ್ನಾಟಕದ 25 ಜಿಲ್ಲೆಗಳಲ್ಲಿ ಈ ಸಂಬಂಧ ಸಂಶೋಧನಾ ಅಧ್ಯಯನ ನಡೆಸಿದ್ದು, ಅಧ್ಯಯನದ ವೇಳೆ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ದೇಶದಲ್ಲಿ ಈ ರೀತಿಯ ಅಧ್ಯಯನ ನಡೆದಿದ್ದು ಇದೇ ಮೊದಲು ಎಂಬುದು ವಿಶೇಷ.&lt;/p&gt;&lt;img&gt;&lt;p&gt;ಮಕ್ಕಳು ಆಟೋಟಗಳಿಂದ ದೂರ ಇರುವುದರಿಂದ ಕಾಣಿಸಿಕೊಳ್ಳುವ ಬೊಜ್ಜು, ಹದಿಹರೆಯದ ವಯಸ್ಸಿನಲ್ಲೇ ಧೂಮಪಾನ-ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗುವುದು ಹೃದಯಾಘಾತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂಬ ಸಂಗತಿ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ.&lt;/p&gt;&lt;img&gt;&lt;p&gt;ಅಧ್ಯಯನದ ವೇಳೆ ರಾಜ್ಯದ 25 ಜಿಲ್ಲೆ, ದೇಶದ 13 ರಾಜ್ಯಗಳ 8 ರಿಂದ 30ರ ಪ್ರಾಯದ 347 ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದವರೂ ಇದ್ದಾರೆ. ಇವರೆಲ್ಲರ ಹೃದಯದ ರಕ್ತನಾಳದ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಚಯಾಪಚಯ ವೈಪರೀತ್ಯ ಮತ್ತು ರಕ್ತನಾಳಗಳ ಒಳಪದರ ಹಾನಿಯ ಆರಂಭಿಕ ಲಕ್ಷಣಗಳು ಇವರಲ್ಲಿ ಕಂಡು ಬಂದಿವೆ. ಇವೆಲ್ಲ ಹೃದಯಾಘಾತಕ್ಕೆ ಕಾರಣವಾಗುವ ಪ್ರಕ್ರಿಯೆಗಳಾಗಿವೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ಪರೀಕ್ಷೆಗೆ ಒಳಪಡಿಸಿದವರಲ್ಲಿ ಶೇ.70ರಷ್ಟು ಮಕ್ಕಳು ಹೃದಯದ ಸಮಸ್ಯೆಗೆ ತುತ್ತಾಗುವ ಸಂಭವವಿರುವುದು ಬಯಲಾಗಿದೆ. ಬದಲಾದ ಜೀವನ ಶೈಲಿ, ಆಟೋಟಗಳಿಂದ ದೂರ ಉಳಿದಿದ್ದರಿಂದ ಬೊಜ್ಜು ಕಾಣಿಸಿಕೊಳ್ಳುವುದು, ಆಲ್ಕೋಹಾಲ್, ಧೂಮಪಾನ, ತಂಬಾಕು, ಜಂಕ್&zwnj; ಫುಡ್ ಸೇವನೆಯಿಂದ ಅವರಲ್ಲಿನ ಎಂಡೋಥೀಲಿಯಂ, ಅಂದರೆ ಅಪಧಮನಿಯ ಒಳಪದರು ಹಾಳಾಗುತ್ತಿರುವುದು ಕಂಡು ಬಂದಿದೆ. ಹೈಪರ್ಹೋಮೋಸಿಸ್ಟಿನೆಮಿಯಾ ಲಕ್ಷಣದಲ್ಲಿ ಹೆಚ್ಚಳ, ಹೈ-ಸೆನ್ಸಿಟಿವಿಟಿ, ಸಿ-ರಿಯಾಕ್ಟಿವ್ ಪ್ರೊಟಿನ್ (ಎಚ್ ಎಸ್-ಸಿಆರ್&zwnj;ಪಿ) ಹದಿಹರೆಯದವರಲ್ಲಿ ಶೇ.28.24 ಇದ್ದು, ಇದು ಹೃದಯಾಘಾತದ ಆರಂಭಿಕ ಹಂತ ತಲುಪಿದೆ ಎಂದು ಅಧ್ಯಯನ ತಿಳಿಸಿದೆ. ರಕ್ತದ ಒಳಪದರು ಹಾಳಾದರೆ 10-15 ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆ,&zwnj; ಕಿಡ್ನಿ ಸಮಸ್ಯೆ ಹಾಗೂ ಸ್ಟ್ರೋಕ್ ಆಗುವ ಸಂಭವ ಹೆಚ್ಚಿರುತ್ತದೆ ಎಂಬುದು ಬೆಳಕಿಗೆ ಬಂದಿದೆ.&lt;/p&gt;&lt;img&gt;&lt;p&gt;8 ರಿಂದ 14 ವರ್ಷದ ಶಾಲಾ ಮಕ್ಕಳು ಹಾಗೂ 18 ರಿಂದ 30 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಎರಡು ಹಂತಗಳಲ್ಲಿ ಅಧ್ಯಯನ ಮಾಡಲಾಗಿದೆ. ಶಾಲಾ ಮಕ್ಕಳಲ್ಲಿ ಶೇ.70ಕ್ಕಿಂತ ಹೆಚ್ಚು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಶೇ.75ಕ್ಕಿಂತ ಹೆಚ್ಚು ಮಕ್ಕಳಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಅಪಾಯಕಾರಿ ಅಂಶಗಳು ಕಂಡು ಬಂದಿವೆ.&lt;/p&gt;&lt;img&gt;&lt;p&gt;&lt;strong&gt;ವರದಿ ಸಲ್ಲಿಸಲು ಸಿದ್ಧತೆ:&lt;/strong&gt;&lt;/p&gt;&lt;p&gt;ಈ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರಕ್ಕೂ ಸಲ್ಲಿಸಲು ಸಿದ್ಧತೆ ನಡೆದಿದೆ. ಶೀಘ್ರದಲ್ಲಿಯೇ ಜಿಲ್ಲಾಡಳಿತ ಸಭೆ ಕರೆದು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಜತೆ ಚರ್ಚಿಸಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಿದೆ.&lt;/p&gt;&lt;p&gt;&lt;strong&gt;ಪರಿಹಾರವೇನು?:&lt;/strong&gt;&lt;/p&gt;&lt;p&gt;ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಂಸಿಆರ್&zwnj;ಐನ ಎಂಆರ್&zwnj;ಯು ನೋಡಲ್ ಅಧಿಕಾರಿ ಡಾ.ರಾಮ ಕೌಲಗುಡ್, ಇದು ಜೀವನ ಶೈಲಿಯ ಮೇಲೆ ಅವಲಂಬಿತವಾಗಿದ್ದು, ಆಹಾರ ಪದ್ಧತಿ ಬದಲಿಸಬೇಕಿದೆ. ಮಕ್ಕಳ ಚಟುವಟಿಕೆ ಕಡಿಮೆಯಾಗಿದ್ದು, ಮಾನಸಿಕ ಒತ್ತಡಕ್ಕೆ &zwnj;ಕಾರಣವಾಗಲಿದೆ.&zwnj; ಮಕ್ಕಳ ಶಾರೀರಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಅವರಿಗೆ ಮೊಬೈಲ್ ಬಳಕೆ ಮಿತಗೊಳಿಸಬೇಕು. ಮಕ್ಕಳಿಗೆ ಪೋಷಕರು ಅಂಕ ಪಡೆಯಲು ಒತ್ತಡ ಹಾಕುವುದರಿಂದ ಸರಿಯಾದ ನಿದ್ದೆ ಇಲ್ಲದೆ ಇರುವುದು ಸಹ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಈ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಚಿಕ್ಕಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಲು ಒಂದು ಸಂಶೋಧನೆ ಮಾಡಲಾಗಿತ್ತು. ಇದೇ ಅಧ್ಯಯನದ ಆಧಾರದ ಮೇಲೆ ದೇಶಾದ್ಯಂತ &zwnj;ಅಧ್ಯಯನ ಮಾಡಲಾಗಿದೆ. ಶೀಘ್ರದಲ್ಲೇ ಸರ್ಕಾರಕ್ಕೂ ವರದಿ ಸಲ್ಲಿಸಲಾಗುವುದು. ಅಧ್ಯಯನಕ್ಕೆ ಹಲವು ವೈದ್ಯಕೀಯ ಕಾಲೇಜುಗಳು ಸಾಥ್ ನೀಡಿದ್ದವು.&lt;/p&gt;&lt;p&gt;&lt;strong&gt;-ಡಾ। ರಾಮ ಕೌಲಗುಡ್, ಎಂಆರ್&zwnj;ಯು ನೋಡಲ್ ಅಧಿಕಾರಿ ಕೆಎಂಸಿಆರ್&zwnj;ಐ.&lt;/strong&gt;&lt;/p&gt;&lt;p&gt;&lt;strong&gt;ವರದಿ: ಶಿವಾನಂದ ಗೊಂಬಿ&lt;/strong&gt;&lt;/p&gt;]]></content:encoded>
            <category>life</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/health-life/children-heart-attack-risk-shocking-study-reveals-causes-parents-must-know-rav-3pad3c7"/>
        </item>
        <item>
            <title><![CDATA[ಫ್ರಿಡ್ಜ್ ಬಳಕೆಯ ಈ ಸತ್ಯಗಳು ನಿಮಗೆ ತಿಳಿದಿದೆಯೇ? ತಾಪಮಾನ, ಸ್ವಚ್ಛತೆ, ಬಳಕೆ ಟಿಪ್ಸ್]]></title>
            <link>https://kannada.asianetnews.com/gallery/kitchen/kitchen-fridge-maintenance-temperature-cleaning-and-usage-tips-mrq-f4geae3</link>
            <guid isPermaLink="true">https://kannada.asianetnews.com/gallery/kitchen/kitchen-fridge-maintenance-temperature-cleaning-and-usage-tips-mrq-f4geae3</guid>
            <pubDate>Sun, 09 Aug 2026 10:58:56 +0530</pubDate>
            <description><![CDATA[ಫ್ರಿಡ್ಜ್&zwnj;ನ ಕಾರ್ಯಕ್ಷಮತೆ ಹೆಚ್ಚಿಸಲು, ಅದರ ತಾಪಮಾನವನ್ನು ಸುಮಾರು 4&deg;C ನಲ್ಲಿ ಇಡುವುದು, ಆಹಾರವನ್ನು ಮುಚ್ಚಿಡುವುದು, ಮತ್ತು ಅತಿಯಾಗಿ ತುಂಬದಿರುವುದು ಮುಖ್ಯ. ಗಾಳಿಯ ಚಲನೆಗೆ ಜಾಗ ಬಿಟ್ಟು, ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಆಹಾರದ ತಾಜಾತನವನ್ನು ಕಾಪಾಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kt64ymdgck6964yrqxajg6eq,imgname-chatgpt-image-jun-3--2026--12-37-23-pm-1780470469040.png" type="image/jpeg" height="390" width="690"/>
            <content:encoded><![CDATA[ಫ್ರಿಡ್ಜ್&zwnj;ನ ಕಾರ್ಯಕ್ಷಮತೆ ಹೆಚ್ಚಿಸಲು, ಅದರ ತಾಪಮಾನವನ್ನು ಸುಮಾರು 4&deg;C ನಲ್ಲಿ ಇಡುವುದು, ಆಹಾರವನ್ನು ಮುಚ್ಚಿಡುವುದು, ಮತ್ತು ಅತಿಯಾಗಿ ತುಂಬದಿರುವುದು ಮುಖ್ಯ. ಗಾಳಿಯ ಚಲನೆಗೆ ಜಾಗ ಬಿಟ್ಟು, ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಆಹಾರದ ತಾಜಾತನವನ್ನು ಕಾಪಾಡಬಹುದು.&lt;img&gt;&lt;p&gt;ತಾಪಮಾನವನ್ನು ಸರಿಯಾಗಿ ಇಡಿ: ಸಾಮಾನ್ಯವಾಗಿ, ಫ್ರಿಡ್ಜ್&zwnj;ನ ಒಳಗಿನ ತಾಪಮಾನವನ್ನು ಸುಮಾರು 4&deg;C ಅಥವಾ ಅದಕ್ಕಿಂತ ಕಡಿಮೆ ಇಡಲು ಶಿಫಾರಸು ಮಾಡಲಾಗುತ್ತದೆ. ಫ್ರೀಜರ್ ಭಾಗವು ಸಾಮಾನ್ಯವಾಗಿ -18&deg;C ನಲ್ಲಿರುವುದು ಸರಿ.&lt;/p&gt;&lt;img&gt;&lt;p&gt;ಬೇಯಿಸಿದ ಆಹಾರ ಮತ್ತು ಉಳಿದ ಆಹಾರವನ್ನು ತೆರೆದ ಸ್ಥಿತಿಯಲ್ಲಿ ಇಡಬೇಡಿ, ಬದಲಿಗೆ ಮುಚ್ಚಳವಿರುವ ಪಾತ್ರೆಗಳಲ್ಲಿ ಸಂಗ್ರಹಿಸಿ. ಇದರಿಂದ ಆಹಾರದ ವಾಸನೆ ಇತರ ವಸ್ತುಗಳಿಗೆ ಹರಡುವುದನ್ನು ತಡೆಯಬಹುದು.&lt;/p&gt;&lt;img&gt;&lt;p&gt;ಒಳಗಿರುವ ತಂಪಾದ ಗಾಳಿ ಸರಾಗವಾಗಿ ಚಲಿಸಬೇಕು. ಗಾಳಿಯ ದ್ವಾರಗಳ ಮುಂದೆ ಆಹಾರ ಪದಾರ್ಥಗಳನ್ನು ಜೋಡಿಸದೆ ಸ್ವಲ್ಪ ಜಾಗ ಬಿಡುವುದು ಅವಶ್ಯಕ.&lt;/p&gt;&lt;img&gt;&lt;p&gt;ಫ್ರಿಡ್ಜ್&zwnj;ನ ಮೇಲೆ ವಸ್ತುಗಳನ್ನು ಇಡುವುದನ್ನು ರೂಢಿ ಮಾಡಿಕೊಳ್ಳಬೇಡಿ. ವಿಶೇಷವಾಗಿ ಗಾಳಿಯಾಡುವ ಅಥವಾ ಶಾಖ ಹೊರಹೋಗುವ ಭಾಗಗಳನ್ನು ಮುಚ್ಚಬೇಡಿ. ನಿಮ್ಮ ಫ್ರಿಡ್ಜ್ ತಯಾರಕರ ಮಾರ್ಗದರ್ಶಿಯನ್ನು ಗಮನಿಸುವುದು ಕೂಡ ಮುಖ್ಯ.&lt;/p&gt;&lt;img&gt;&lt;p&gt;ಫ್ರಿಡ್ಜ್ ಒಳಗೆ ಆಹಾರ ಸೋರಿದರೆ ಅಥವಾ ಕೊಳೆಯಾಗಿದ್ದರೆ ತಕ್ಷಣ ಸ್ವಚ್ಛಗೊಳಿಸಿ. ನಿರ್ದಿಷ್ಟ ಕಾಲಾವಧಿಯಲ್ಲಿ ಶೆಲ್ಫ್&zwnj;ಗಳು ಮತ್ತು ಡ್ರಾಯರ್&zwnj;ಗಳನ್ನು ಸ್ವಚ್ಛಗೊಳಿಸುವುದು ಒಳ್ಳೆಯ ಅಭ್ಯಾಸ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಫ್ರಿಡ್ಜ್ ಡೋರ್&zwnj;ನಲ್ಲಿ ಏನು ಇಡಬಹುದು, ಏನು ಇಡಬಾರದು? 99% ಜನರಿಗೆ ಗೊತ್ತಿಲ್ಲದ ಸೀಕ್ರೆಟ್!&lt;/strong&gt;&lt;/p&gt;]]></content:encoded>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/kitchen/kitchen-fridge-maintenance-temperature-cleaning-and-usage-tips-mrq-f4geae3"/>
        </item>
        <item>
            <title><![CDATA[ನೀನು ಕೊಲ್ಲದಿದ್ರೆ ಗಂಡನ ನಾನೇ ಹ*ತ್ಯೆ ಮಾಡ್ತೀನಿ: ಲವರ್‌ಗೆ ಮೆಸೇಜ್‌ ಕಳುಹಿಸಿದ ಮಹಿಳೆ]]></title>
            <link>https://kannada.asianetnews.com/relationship/illicit-relationship-telangana-woman-conspires-with-lover-to-kill-husband-instagram-message-reveals-mrq/articleshow-rlgp93p</link>
            <guid isPermaLink="true">https://kannada.asianetnews.com/relationship/illicit-relationship-telangana-woman-conspires-with-lover-to-kill-husband-instagram-message-reveals-mrq/articleshow-rlgp93p</guid>
            <pubDate>Sun, 09 Aug 2026 09:30:02 +0530</pubDate>
            <description><![CDATA[&lt;p&gt;ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ. ಪತ್ನಿಯ ಇನ್&zwnj;ಸ್ಟಾಗ್ರಾಂ ಸಂದೇಶಗಳನ್ನು ನೋಡಿದ ಪತಿ, ಈ ಕೊಲೆ ಸಂಚನ್ನು ಪತ್ತೆಹಚ್ಚಿ ಪೊಲೀಸರಿಗೆ ದೂರು ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjamky70r8ryjb0b8mhy9q6,imgname-message-1786247794630.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್&zwnj;: &lt;/strong&gt;ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ರಸ್ತೆ ಅಪಘಾತದಲ್ಲಿ ಪತಿಯನ್ನು ಕೊಲ್ಲಲು ಸಂಚು ಹೂಡಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಪತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆತನೇ ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.&lt;/p&gt;&lt;h2&gt;&lt;strong&gt;ಇಲ್ಲದಿದ್ದರೆ ನಾನೇ ಕೊಲ್ಲುತ್ತೇನೆ&lt;/strong&gt;&lt;/h2&gt;&lt;p&gt;ಮಹಬೂಬಾಬಾದ್ ಜಿಲ್ಲೆಯ ಚಿಲಕೋಡು ಗ್ರಾಮದ ಗಾಡೆ ರಾಜೇಶ್ವರ ರಾವ್ ಎಂಬುವವರು ತಮ್ಮ ಪತ್ನಿ ಭವಾನಿಯ ಮೊಬೈಲ್ ಪರೀಕ್ಷಿಸಿದಾಗ ಈ ಭೀಕರ ಸಂಚು ಬಯಲಾಗಿದೆ. ಪತ್ನಿ ಕೋರಿಯರ್ ಡೆಲಿವರ್ ಏಜೆಂಟ್&zwnj; ಆಗಿರುವ ತನ್ನ ಪ್ರಿಯಕರ ಸೈದುಲು ಎಂಬಾತನಿಗೆ &lsquo;ನನ್ನ ಗಂಡನನ್ನು ಕೊಲ್ಲು. ಇಲ್ಲದಿದ್ದರೆ ನಾನೇ ಕೊಲ್ಲುತ್ತೇನೆ&rsquo; ಎಂದು ಇನ್&zwnj;ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ಕೊಲೆ ನಂತರ ಇಬ್ಬರೂ ಇದನ್ನು ಅಪಘಾತ ಎಂದು ಬಿಂಬಿಸಲು ಯೋಜಿಸಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಳೆದ ವರ್ಷ ಗರ್ಭಿಣಿಯಾಗಿದ್ದಾಗಲೇ ಅಕ್ರಮ ಸಂಬಂಧ ಇಟ್ಕೊಂಡು ಸಿಕ್ಕಿಬಿದ್ದ ಗಂಡ: ಒಂದೇ ವರ್ಷದಲ್ಲಿ ಸಾಧಿಸಿದ ನ&lt;/strong&gt;&lt;strong&gt;ಟಿ&lt;/strong&gt;&lt;/p&gt;&lt;h3&gt;&lt;strong&gt;ರಕ್ಷಣೆ ಕೇಳಿದ ಗಂಡ&amp;nbsp;&lt;/strong&gt;&lt;/h3&gt;&lt;p&gt;ಸಂಚು ತಿಳಿಯುತ್ತಿದ್ದಂತೆಯೇ ರಾಜೇಶ್ವರ ರಾವ್ ಪೊಲೀಸರನ್ನು ಸಂಪರ್ಕಿಸಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಕೊ*ಲೆ ಯತ್ನ ಹಾಗೂ ಸಂಚಿನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪತ್ನಿಯ ಓದಿಗಾಗಿ ಕೂಲಿಯನ್ನೂ ಮಾಡಿದ, ಜಮೀನೂ ಮಾರಿದ: ಕೆಲಸ ಸಿಕ್ಕ ಮೇಲೆ ಸತಿ ಶಿರೋಮಣಿ ಮಾಡಿದ್ದೇನು?&lt;/strong&gt;&lt;/p&gt;]]></content:encoded>
            <category>life</category>
            <dc:creator>Kannadaprabha News</dc:creator>
            <atom:link href="https://kannada.asianetnews.com/relationship/illicit-relationship-telangana-woman-conspires-with-lover-to-kill-husband-instagram-message-reveals-mrq/articleshow-rlgp93p"/>
        </item>
        <item>
            <title><![CDATA[ಕಬ್ಬಿಣ Vs ನಾನ್‌ಸ್ಟಿಕ್ ? ಯಾವ ಕಾವಲಿ ಮೇಲೆ ದೋಸೆ ಟೇಸ್ಟಿ ಆಗುತ್ತೆ? ಎರಡರಲ್ಲಿ ಬೆಸ್ಟ್ ಯಾವುದು?]]></title>
            <link>https://kannada.asianetnews.com/kitchen/kitchen-tips-iron-vs-non-stick-which-pan-makes-dosa-tastier-which-is-the-best-mrq/articleshow-ya54oms</link>
            <guid isPermaLink="true">https://kannada.asianetnews.com/kitchen/kitchen-tips-iron-vs-non-stick-which-pan-makes-dosa-tastier-which-is-the-best-mrq/articleshow-ya54oms</guid>
            <pubDate>Sun, 09 Aug 2026 08:41:28 +0530</pubDate>
            <description><![CDATA[ದೋಸೆ ಮಾಡಲು ಕಬ್ಬಿಣದ ಹಂಚು ಮತ್ತು ನಾನ್&zwnj;ಸ್ಟಿಕ್&zwnj; ತವಾ ನಡುವಿನ ವ್ಯತ್ಯಾಸಗಳನ್ನು ಈ ಲೇಖನ ವಿವರಿಸುತ್ತದೆ. ನಿರ್ವಹಣೆ, ರುಚಿ, ಬಾಳಿಕೆ, ಮತ್ತು ಬಳಕೆಯ ಸುಲಭತೆಯ ಆಧಾರದ ಮೇಲೆ ನಿಮ್ಮ ಅಡುಗೆ ಶೈಲಿಗೆ ಯಾವುದು ಉತ್ತಮ ಎಂಬುದನ್ನು ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj6nrjserjf9m8th5nk2sem,imgname-dosa-1786243637849.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗ್ಗಿನ ತಿಂಡಿಗೆ ದೋಸೆ ಮಾಡುವಾಗ, ಕಬ್ಬಿಣದ ಹಂಚು ಬಳಸಬೇಕಾ ಅಥವಾ ನಾನ್&zwnj;ಸ್ಟಿಕ್&zwnj; ತವಾ ಬಳಸಬೇಕಾ ಅನ್ನೋ ಗೊಂದಲ ಹಲವರಲ್ಲಿದೆ. ಗರಿಗರಿ ದೋಸೆಯಿಂದ ಹಿಡಿದು ನಿರ್ವಹಣೆ, ಬಾಳಿಕೆ, ಅಡುಗೆಯ ಅನುಕೂಲದವರೆಗೆ &mdash; ಎರಡರ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಇಲ್ಲಿ ತಿಳಿದುಕೊಳ್ಳಿ.&lt;/p&gt;&lt;h2&gt;&lt;strong&gt;ಕಬ್ಬಿಣದ ಹಂಚು ಬಳಸುವುದು ಅಷ್ಟು ಸುಲಭವೇ?&lt;/strong&gt;&lt;/h2&gt;&lt;p&gt;ಇಲ್ಲ. ನಾನ್&zwnj;ಸ್ಟಿಕ್&zwnj;ಗೆ ಹೋಲಿಸಿದರೆ ಕಬ್ಬಿಣದ ಹಂಚಿಗೆ ಸ್ವಲ್ಪ ಹೆಚ್ಚಿನ ನಿರ್ವಹಣೆ ಬೇಕು. ಹೊಸ ಕಬ್ಬಿಣದ ಹಂಚನ್ನು ಬಳಸುವ ಮೊದಲು ಸರಿಯಾಗಿ 'ಸೀಸನಿಂಗ್' ಮಾಡುವುದು ಮುಖ್ಯ. ಎಣ್ಣೆ ಹಚ್ಚಿ ಬಿಸಿ ಮಾಡಿ, ಮತ್ತೆ ತಣ್ಣಗಾಗಿಸಿ ಬಳಸುವಂತಹ ವಿಧಾನಗಳು ಅದರ ಮೇಲ್ಮೈಯಲ್ಲಿ ನೈಸರ್ಗಿಕ ನಾನ್&zwnj;ಸ್ಟಿಕ್&zwnj; ಗುಣವನ್ನು ಉಂಟುಮಾಡಲು ಸಹಾಯ ಮಾಡುತ್ತವೆ.&lt;/p&gt;&lt;p&gt;ಅಲ್ಲದೆ, ಬಳಸಿದ ನಂತರ ನೀರು ನಿಲ್ಲಲು ಬಿಡಬಾರದು. ಚೆನ್ನಾಗಿ ಒಣಗಿಸಿ, ಅಗತ್ಯವಿದ್ದಷ್ಟು ಎಣ್ಣೆ ಹಚ್ಚಿಟ್ಟರೆ ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು. ಸರಿಯಾಗಿ ನಿರ್ವಹಿಸದ ಕಬ್ಬಿಣದ ಹಂಚಿನಲ್ಲಿ ದೋಸೆ ಅಂಟಿಕೊಳ್ಳುವುದಲ್ಲದೆ, ಹಂಚಿನ ಮೇಲ್ಮೈಯಲ್ಲಿ ತುಕ್ಕು ಹಿಡಿಯಬಹುದು.&lt;/p&gt;&lt;h3&gt;&lt;strong&gt;ನಾನ್&zwnj;ಸ್ಟಿಕ್&zwnj; ತವಾ &ndash; ವೇಗದ ಅಡುಗೆಗೆ ಅನುಕೂಲಕರ ಆಯ್ಕೆ!&lt;/strong&gt;&lt;/h3&gt;&lt;p&gt;ನಾನ್&zwnj;ಸ್ಟಿಕ್&zwnj; ತವಾದ ಅತಿದೊಡ್ಡ ಅನುಕೂಲವೇ ಅದರ ಬಳಕೆಯ ಸುಲಭತೆ. ದೋಸೆ ಹಿಟ್ಟನ್ನು ಸುರಿದ ತಕ್ಷಣ ಸುಲಭವಾಗಿ ಹರಡಬಹುದು. ದೋಸೆ ಅಂಟಿಕೊಳ್ಳದ ಕಾರಣ, ಅದನ್ನು ತಿರುವಿ ಹಾಕುವುದೂ ಸುಲಭ. ವಿಶೇಷವಾಗಿ ಅಡುಗೆಯಲ್ಲಿ ಹೊಸಬರಿಗೆ ಇದು ಹೆಚ್ಚು ಅನುಕೂಲಕರ. ಇದಲ್ಲದೆ, ಕಬ್ಬಿಣದ ಹಂಚಿಗಿಂತ ಕಡಿಮೆ ಎಣ್ಣೆಯಲ್ಲೇ ಹಲವು ಖಾದ್ಯಗಳನ್ನು ಬೇಯಿಸಬಹುದು. ಇದರಿಂದ ಕಡಿಮೆ ಎಣ್ಣೆ ಬಳಸಲು ಇಷ್ಟಪಡುವವರಿಗೆ ನಾನ್&zwnj;ಸ್ಟಿಕ್&zwnj; ತವಾ ಒಂದು ಉತ್ತಮ ಆಯ್ಕೆಯಾಗಿದೆ.&lt;/p&gt;&lt;p&gt;ಬೆಳಗ್ಗಿನ ಅವಸರದಲ್ಲಿ ಹಲವು ದೋಸೆಗಳನ್ನು ಬೇಗನೆ ಮಾಡಬೇಕಾದ ಸಂದರ್ಭದಲ್ಲಿ, ನಾನ್&zwnj;ಸ್ಟಿಕ್&zwnj; ತವಾ ಸಮಯವನ್ನೂ ಉಳಿಸುತ್ತದೆ.&lt;/p&gt;&lt;p&gt;&lt;strong&gt;ನಾನ್&zwnj;ಸ್ಟಿಕ್&zwnj; ತವಾದಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ!&lt;/strong&gt;&lt;/p&gt;&lt;p&gt;ನಾನ್&zwnj;ಸ್ಟಿಕ್&zwnj; ತವಾವನ್ನು ಹೇಗೆ ಬೇಕಾದರೂ ಬಳಸಬಹುದು ಎಂದರ್ಥವಲ್ಲ. ಅದರ ಮೇಲ್ಮೈಯಲ್ಲಿರುವ 'ಕೋಟಿಂಗ್' ಹಾಳಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ವಿಶೇಷವಾಗಿ ಲೋಹದ ಸೌಟು, ಚಾಕು ಅಥವಾ ಮೆಟಲ್ ಸ್ಪ್ಯಾಚುಲಾ ಬಳಸಿದರೆ ಕೋಟಿಂಗ್ ಮೇಲೆ ಗೀರುಗಳು ಬೀಳಬಹುದು.&lt;/p&gt;&lt;p&gt;ಆದ್ದರಿಂದ ನಾನ್&zwnj;ಸ್ಟಿಕ್&zwnj; ತವಾಗೆ ಮರ, ಸಿಲಿಕಾನ್ ಅಥವಾ ತಯಾರಕರು ಶಿಫಾರಸು ಮಾಡುವ ಉಪಕರಣಗಳನ್ನು ಬಳಸುವುದು ಉತ್ತಮ. ಖಾಲಿ ನಾನ್&zwnj;ಸ್ಟಿಕ್&zwnj; ತವಾವನ್ನು ಅತಿ ಹೆಚ್ಚು ಉರಿಯಲ್ಲಿ ದೀರ್ಘಕಾಲ ಬಿಸಿ ಮಾಡುವುದನ್ನು ತಪ್ಪಿಸುವುದು ಸುರಕ್ಷಿತ ಅಭ್ಯಾಸ. ತವಾ ತಯಾರಕರು ನೀಡುವ ಬಳಕೆಯ ಸೂಚನೆಗಳನ್ನು ಪಾಲಿಸಬೇಕು.&lt;/p&gt;&lt;p&gt;&lt;strong&gt;ಯಾವ ಕಾವಲಿ ಮೇಲೆ ದೋಸೆ ಟೇಸ್ಟಿ ಆಗುತ್ತೆ?&lt;/strong&gt;&lt;/p&gt;&lt;p&gt;ಇದು ಸಂಪೂರ್ಣವಾಗಿ ವೈಯಕ್ತಿಕ ಇಷ್ಟವನ್ನು ಅವಲಂಬಿಸಿದ್ದರೂ, ಅನೇಕ ಸಾಂಪ್ರದಾಯಿಕ ಅಡುಗೆ ಪ್ರಿಯರು ಕಬ್ಬಿಣದ ಹಂಚಿನಲ್ಲಿ ಮಾಡಿದ ದೋಸೆಗೆ ಒಂದು தனி ರುಚಿ ಮತ್ತು ವಿನ್ಯಾಸ (texture) ಇದೆ ಎಂದು ಪರಿಗಣಿಸುತ್ತಾರೆ. ವಿಶೇಷವಾಗಿ ಹಂಚನ್ನು ಚೆನ್ನಾಗಿ ಸೀಸನಿಂಗ್ ಮಾಡಿದ್ದರೆ, ಸರಿಯಾದ ಪ್ರಮಾಣದಲ್ಲಿ ಎಣ್ಣೆ ಬಳಸಿ, ಹಿಟ್ಟಿನ ಹದವನ್ನು ಸರಿಯಾಗಿಟ್ಟರೆ ಗರಿಗರಿಯಾದ ದೋಸೆಯನ್ನು ಸುಲಭವಾಗಿ ಪಡೆಯಬಹುದು. ನಾನ್&zwnj;ಸ್ಟಿಕ್&zwnj;ನಲ್ಲಿ ದೋಸೆ ಅಂಟಿಕೊಳ್ಳದೆ ಸುಲಭವಾಗಿ ಬರುವುದರಿಂದ, ಬಳಕೆಯ ಅನುಕೂಲದಲ್ಲಿ ಅದು ಮುಂದಿದೆ.&lt;/p&gt;&lt;p&gt;&lt;strong&gt;ಬಾಳಿಕೆ ಯಾರಿಗೆ ಹೆಚ್ಚು?&lt;/strong&gt;&lt;/p&gt;&lt;p&gt;ಇಲ್ಲಿ ಸಾಮಾನ್ಯವಾಗಿ ಕಬ್ಬಿಣದ ಹಂಚೇ ಮುಂದಿದೆ. ಉತ್ತಮ ಗುಣಮಟ್ಟದ ಕಬ್ಬಿಣದ ಹಂಚನ್ನು ಸರಿಯಾಗಿ ನಿರ್ವಹಿಸಿದರೆ ಹಲವು ವರ್ಷಗಳ ಕಾಲ ಬಳಸಬಹುದು. ತಲೆಮಾರುಗಳಿಂದ ಬಳಸುತ್ತಿರುವ ಕಬ್ಬಿಣದ ಹಂಚುಗಳು ಅನೇಕ ಮನೆಗಳಲ್ಲಿವೆ. ನಾನ್&zwnj;ಸ್ಟಿಕ್&zwnj; ತವಾದ ಬಾಳಿಕೆಯು ಅದರ ಕೋಟಿಂಗ್&zwnj;ನ ಗುಣಮಟ್ಟ, ಬಳಸುವ ರೀತಿ, ತಾಪಮಾನ ಮತ್ತು ನಿರ್ವಹಣೆಯನ್ನು ಅವಲಂಬಿಸಿರುತ್ತದೆ. ಕೋಟಿಂಗ್ ಹಾಳಾದರೆ ಅಥವಾ ತಯಾರಕರು ಹೇಳುವ ಬಳಕೆಯ ಮಿತಿಯನ್ನು ಮೀರಿದರೆ ತವಾವನ್ನು ಬದಲಾಯಿಸಬೇಕಾಗಬಹುದು.&lt;/p&gt;&lt;p&gt;&lt;strong&gt;ತೂಕ ಮತ್ತು ಬಳಕೆಯಲ್ಲಿ ಯಾವುದು ಅನುಕೂಲ?&lt;/strong&gt;&lt;/p&gt;&lt;p&gt;ಕಬ್ಬಿಣದ ಹಂಚು ಸಾಮಾನ್ಯವಾಗಿ ಭಾರವಾಗಿರುತ್ತದೆ. ಅದನ್ನು ಪದೇ ಪದೇ ಎತ್ತಿಡುವುದು ಕೆಲವರಿಗೆ ಕಷ್ಟವಾಗಬಹುದು. ನಾನ್&zwnj;ಸ್ಟಿಕ್&zwnj; ತವಾಗಳು ಹೆಚ್ಚಾಗಿ ಹಗುರವಾಗಿರುವುದರಿಂದ ದಿನನಿತ್ಯ ಬಳಸಲು ಮತ್ತು ತೊಳೆಯಲು ಸುಲಭವಾಗಿರುತ್ತದೆ. ಆದ್ದರಿಂದ, ಅನುಕೂಲ ಮುಖ್ಯವಾದರೆ ನಾನ್&zwnj;ಸ್ಟಿಕ್&zwnj;; ದೀರ್ಘಕಾಲದ ಬಳಕೆ ಮತ್ತು ಸಾಂಪ್ರದಾಯಿಕ ಅಡುಗೆ ಅನುಭವ ಮುಖ್ಯವಾದರೆ ಕಬ್ಬಿಣದ ಹಂಚು ಎಂದು ಸಾಮಾನ್ಯವಾಗಿ ಹೇಳಬಹುದು.&lt;/p&gt;&lt;p&gt;&lt;strong&gt;ಸ್ವಚ್ಛಗೊಳಿಸುವುದರಲ್ಲಿ ಪ್ರಮುಖ ವ್ಯತ್ಯಾಸ&lt;/strong&gt;&lt;/p&gt;&lt;p&gt;ನಾನ್&zwnj;ಸ್ಟಿಕ್&zwnj; ತವಾವನ್ನು ಸ್ವಚ್ಛಗೊಳಿಸುವುದು ಸಾಮಾನ್ಯವಾಗಿ ಸುಲಭ. ಆಹಾರ ಅಂಟಿಕೊಳ್ಳದ ಕಾರಣ ಹೆಚ್ಚು ಉಜ್ಜಬೇಕಾಗಿಲ್ಲ. ಕಬ್ಬಿಣದ ಹಂಚನ್ನು ಸ್ವಚ್ಛಗೊಳಿಸುವಾಗ ಅದರ ಸೀಸನಿಂಗ್&zwnj;ಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಸ್ವಚ್ಛಗೊಳಿಸಿದ ನಂತರ ತೇವಾಂಶವಿಲ್ಲದೆ ಚೆನ್ನಾಗಿ ಒಣಗಿಸುವುದು ಬಹಳ ಅವಶ್ಯಕ. ಕಬ್ಬಿಣದ ಹಂಚಿನಲ್ಲಿ ತುಕ್ಕು ಹಿಡಿದರೆ, ಅದನ್ನು ಸರಿಪಡಿಸಿ ಮತ್ತೆ ಸೀಸನಿಂಗ್ ಮಾಡಬೇಕಾಗಬಹುದು.&lt;/p&gt;&lt;p&gt;&lt;strong&gt;ಯಾವ ತವಾ ಖರೀದಿಸಬೇಕು?&lt;/strong&gt;&lt;/p&gt;&lt;p&gt;ಇದಕ್ಕೆ ಒಂದೇ ಉತ್ತರವಿಲ್ಲ.&lt;/p&gt;&lt;p&gt;ಗರಿಗರಿಯಾದ ದೋಸೆ, ದೀರ್ಘಕಾಲದ ಬಳಕೆ, ಸಾಂಪ್ರದಾಯಿಕ ಅಡುಗೆ ನಿಮಗೆ ಮುಖ್ಯವಾಗಿದ್ದರೆ, ಉತ್ತಮ ಗುಣಮಟ್ಟದ ಕಬ್ಬಿಣದ ದೋಸೆ ಹಂಚು ಅತ್ಯುತ್ತಮ ಆಯ್ಕೆಯಾಗಬಹುದು. ಸುಲಭ ಬಳಕೆ, ಕಡಿಮೆ ಎಣ್ಣೆ, ಸುಲಭ ಸ್ವಚ್ಛತೆ, ಕಡಿಮೆ ತೂಕ ಮುಖ್ಯವಾದರೆ, ಗುಣಮಟ್ಟದ ನಾನ್&zwnj;ಸ್ಟಿಕ್&zwnj; ತವಾ ನಿಮಗೆ ಅನುಕೂಲಕರವಾಗಿರುತ್ತದೆ. ಕೆಲವು ಮನೆಗಳಲ್ಲಿ ಎರಡನ್ನೂ ಇಟ್ಟುಕೊಳ್ಳುವುದು ಕೂಡ ಒಂದು ಉತ್ತಮ ಅಭ್ಯಾಸ. ದಿನನಿತ್ಯದ ಅವಸರದ ಅಡುಗೆಗೆ ನಾನ್&zwnj;ಸ್ಟಿಕ್&zwnj; ತವಾ ಮತ್ತು ಗರಿಗರಿ ದೋಸೆ, ಅಡೆ ಮುಂತಾದವುಗಳಿಗೆ ಕಬ್ಬಿಣದ ಹಂಚನ್ನು ಬಳಸಬಹುದು.&lt;/p&gt;&lt;p&gt;&lt;strong&gt;ಮುಖ್ಯವಾಗಿ ನೆನಪಿಡಬೇಕಾದದ್ದು!&lt;/strong&gt;&lt;/p&gt;&lt;p&gt;ತವಾ ಯಾವುದೇ ಇರಲಿ, ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಕಬ್ಬಿಣದ ಹಂಚನ್ನು ಸರಿಯಾಗಿ ಸೀಸನಿಂಗ್ ಮಾಡಿ ನಿರ್ವಹಿಸಬೇಕು. ನಾನ್&zwnj;ಸ್ಟಿಕ್&zwnj; ತವಾವನ್ನು ಅನಗತ್ಯವಾಗಿ ಅತಿ ಹೆಚ್ಚು ಬಿಸಿ ಮಾಡದೆ, ಕೋಟಿಂಗ್&zwnj;ಗೆ ಗೀರು ಬೀಳುವಂತಹ ಉಪಕರಣಗಳನ್ನು ಬಳಸದೆ ಉಪಯೋಗಿಸಬೇಕು. ಅಲ್ಲದೆ, ನಾನ್&zwnj;ಸ್ಟಿಕ್&zwnj; ಕೋಟಿಂಗ್ ಹಾಳಾಗಿ ಸಿಪ್ಪೆ ಏಳುವುದು, ಗೀರುಗಳು ಕಾಣಿಸಿಕೊಂಡರೆ ತಯಾರಕರ ಮಾರ್ಗದರ್ಶನದಂತೆ ತವಾವನ್ನು ಬದಲಾಯಿಸುವುದು ಒಳ್ಳೆಯದು.&lt;/p&gt;&lt;p&gt;&lt;strong&gt;ಅಂತಿಮ ತೀರ್ಪು&lt;/strong&gt;&lt;/p&gt;&lt;p&gt;ರುಚಿ + ದೀರ್ಘ ಬಾಳಿಕೆ + ಸಂಪ್ರದಾಯ = ಕಬ್ಬಿಣದ ದೋಸೆ ಹಂಚು&lt;/p&gt;&lt;p&gt;ಅನುಕೂಲ + ಸುಲಭ ಸ್ವಚ್ಛತೆ + ಕಡಿಮೆ ಎಣ್ಣೆ ಬಳಕೆ = ನಾನ್&zwnj;ಸ್ಟಿಕ್&zwnj; ತವಾ&lt;/p&gt;&lt;p&gt;ಆದ್ದರಿಂದ, &quot;ಯಾವುದು ಉತ್ತಮ?&quot; ಎನ್ನುವುದಕ್ಕಿಂತ &quot;ನನ್ನ ಅಡುಗೆಯ ಅಗತ್ಯಕ್ಕೆ ಯಾವುದು ಉತ್ತಮ?. ನಿಮ್ಮ ಅಡುಗೆ ಶೈಲಿ, ನಿರ್ವಹಣೆಗೆ ಲಭ್ಯವಿರುವ ಸಮಯ ಮತ್ತು ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿದರೆ ಎರಡೂ ಅತ್ಯುತ್ತಮ ಅಡುಗೆ ಸಾಧನಗಳಾಗಬಲ್ಲವು.&lt;/p&gt;]]></content:encoded>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/kitchen/kitchen-tips-iron-vs-non-stick-which-pan-makes-dosa-tastier-which-is-the-best-mrq/articleshow-ya54oms"/>
        </item>
        <item>
            <title><![CDATA[Floral Earrings: ಫ್ಲೋರಲ್ ಸ್ಟಡ್ ಕಿವಿಯೋಲೆಗಳ ಅಂದದ ಡಿಸೈನ್‌ಗಳು: ನೋಡಿದ್ರೆ ಖುಷಿಯಾಗೋದು ಗ್ಯಾರಂಟಿ!]]></title>
            <link>https://kannada.asianetnews.com/webstories/fashion/stunning-floral-stud-earring-designs-for-a-modern-look-gvd-2b542hh</link>
            <guid isPermaLink="true">https://kannada.asianetnews.com/webstories/fashion/stunning-floral-stud-earring-designs-for-a-modern-look-gvd-2b542hh</guid>
            <pubDate>Sun, 09 Aug 2026 00:29:24 +0530</pubDate>
            <description><![CDATA[ಫ್ಲೋರಲ್ ಸ್ಟಡ್ ಓಲೆಗಳ ಟ್ರೆಂಡಿ ಡಿಸೈನ್&zwnj;ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಪರ್ಲ್ ಸ್ಟೋನ್&zwnj;ವರ್ಕ್, ರೋಸ್ ಪ್ಯಾಟರ್ನ್, ಜಿಯೋಮೆಟ್ರಿಕ್ ಪ್ಯಾಚ್&zwnj;ವರ್ಕ್ ಹಾಗೂ ಆರ್ಕಿಡ್ ಸ್ಟೈಲ್&zwnj;ನಂತಹ ಹಲವು ವಿನ್ಯಾಸಗಳು ನಿಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzgeygps0n9m6mrxy702yppg,imgname-sawan-jewellery-for-wife-1786185204441.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stunning-floral-stud-earring-designs-for-a-modern-look-gvd-2b542hh"/>
        </item>
        <item>
            <title><![CDATA[ಈ ಪದಾರ್ಥ ಸೇರಿಸಿ ಒಗ್ಗರಣೆ ಹಾಕಿ.. ಮುಖ ಮಾತ್ರವಲ್ಲ ಗೋಡೆಗೂ ಎಣ್ಣೆ ಸಿಡಿಯಲ್ಲ]]></title>
            <link>https://kannada.asianetnews.com/webstories/food/a-pinch-of-salt-no-more-oil-splatter-in-your-kitchen-rkm18l0</link>
            <guid isPermaLink="true">https://kannada.asianetnews.com/webstories/food/a-pinch-of-salt-no-more-oil-splatter-in-your-kitchen-rkm18l0</guid>
            <pubDate>Sat, 08 Aug 2026 22:37:42 +0530</pubDate>
            <description><![CDATA[&lt;p&gt;Kitchen hacks: ಒಗ್ಗರಣೆ ಹಾಕುವಾಗ ಎಣ್ಣೆ ಸಿಡಿದು ಅಡುಗೆ ಮನೆಯ ಗೋಡೆಗಳೆಲ್ಲಾ ಗಲೀಜಾಗುವುದು ದೊಡ್ಡ ತಲೆನೋವು. ಆದರೆ ಇನ್ನು ಮುಂದೆ ಈ ಚಿಂತೆ ಬೇಡ!&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzh52kg775td4af79fxb4zk8,imgname-indian-kitchen-tips-1786208407047.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/food/a-pinch-of-salt-no-more-oil-splatter-in-your-kitchen-rkm18l0"/>
        </item>
        <item>
            <title><![CDATA[ತಿಂಡಿಯಿಂದ ಸ್ವೀಟ್‌ವರೆಗೆ, ಅತ್ಯಂತ ರುಚಿ ಹಾಗೂ ಪೋಷಕಾಂಶದ ಅವಕಾಡೋ  ರೆಸಿಪಿ]]></title>
            <link>https://kannada.asianetnews.com/webstories/food/from-snacks-to-sweets-delicious-and-nutritious-avocado-recipes-you-must-try-mqo4vop</link>
            <guid isPermaLink="true">https://kannada.asianetnews.com/webstories/food/from-snacks-to-sweets-delicious-and-nutritious-avocado-recipes-you-must-try-mqo4vop</guid>
            <pubDate>Sat, 08 Aug 2026 22:25:53 +0530</pubDate>
            <description><![CDATA[&lt;p&gt;ಟೋಸ್ಟ್, ಸ್ಮೂಥಿಯಿಂದ ಹಿಡಿದು ಬ್ರೌನಿ, ಐಸ್&zwnj;ಕ್ರೀಮ್&zwnj;ವರೆಗೆ 6 ರುಚಿಕರವಾದ ಅವಕಾಡೊ ರೆಸಿಪಿಗಳ ಬಗ್ಗೆ ತಿಳಿಯಿರಿ. ಇವು ದಿನದ ಪ್ರತಿ ಊಟಕ್ಕೂ ರುಚಿ ಮತ್ತು ಪೋಷಣೆಯನ್ನು ನೀಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j43g7nxhm37c95pmtnc77en4,imgname-fotojet--36-.jpg" type="image/jpeg" height="390" width="690"/>
            <category>life</category>
            <dc:creator>Chethan Kumar</dc:creator>
            <atom:link href="https://kannada.asianetnews.com/webstories/food/from-snacks-to-sweets-delicious-and-nutritious-avocado-recipes-you-must-try-mqo4vop"/>
        </item>
        <item>
            <title><![CDATA[ಶಿವಗಂಗೆ ಬೆಟ್ಟಕ್ಕೆ ಬಂದಿದ್ದ 31ರ ಹರೆಯದ ಉದ್ಯಮಿ ಪುತ್ರ ನಾಪತ್ತೆ, ಶಾಂತಲಾ ಡ್ರಾಪ್‌ನಲ್ಲಿ ಶೋಧ]]></title>
            <link>https://kannada.asianetnews.com/bengaluru-rural/businessman-31-year-old-son-goes-missing-after-shivagange-trekking-search-launched/articleshow-y9mxugs</link>
            <guid isPermaLink="true">https://kannada.asianetnews.com/bengaluru-rural/businessman-31-year-old-son-goes-missing-after-shivagange-trekking-search-launched/articleshow-y9mxugs</guid>
            <pubDate>Sat, 08 Aug 2026 19:49:16 +0530</pubDate>
            <description><![CDATA[&lt;p&gt;ದಕ್ಷಿಣ ಕಾಶಿ ಎಂದೇ ಗುರುತಿಸಿಕೊಂಡಿರುವ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದಿದ್ದ ಉದ್ಯಮಿಯ ಪುತ್ರ ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟದ ಶಾಂತಾಲಾ ಡ್ರಾಪ್ ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಇಲ್ಲಿ ಶೋಧ ಕಾರ್ಯ ನಡೆಯುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgvvb07haza741cm465qcaa,imgname-entrepreneur-son-missing-at-shivagange-1786198731776.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.08) &lt;/strong&gt;ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ ಅತ್ಯಂತ ಸುಂದರ ಪ್ರಕೃತಿ ತಾಣ. ಈ ಬೆಟ್ಟ ಹತ್ತಲು ಪ್ರತಿ ದಿನ ಹಲವು ಸಾಹಸಿಗಳು ಆಗಮಿಸುತ್ತಾರೆ. ಸುರಕ್ಷತಾ ಮಾರ್ಗದರ್ಶನಗಳ ಜೊತೆಗೆ ಬೆಟ್ಟ ಹತ್ತುತ್ತಾರೆ. ಹೀಗೆ ಖ್ಯಾತ ಉದ್ಯಮಿಯ ಪುತ್ರ 31ರ ಹರೆಯದ ಪ್ರತೀಕ್ ಉಪಾದ್ಯಾ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದು ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟ ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಪ್ರತೀಕ್ ಉಪದ್ಯಾಯನ ಸುಳಿವಿಲ್ಲ. ಪೊಲೀಸರು ಡ್ರೋನ್ ಬಳಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.&lt;/p&gt;&lt;h2&gt;ಬುಲೆಟ್ ಬೈಕ್ ಪಾರ್ಕ್ ಮಾಡಿ ಬೆಟ್ಟ ಹತ್ತಿದ್ದ ಪ್ರತೀಕ್&lt;/h2&gt;&lt;p&gt;ಐದು ದಿನಗಳ ಹಿಂದೆ ವೈಟ್ ಫೀಲ್ಡ್&zwnj;&zwj;ನಲ್ಲಿ ಬುಲೆಟ್ ಬೈಕ್ ಬಾಡಿಗೆ ಪಡೆದಿದ್ದ ಪ್ರತೀಕ್ ಉಪಾದ್ಯಾಯ ಒಂದಷ್ಟು ಕಡೆ ಸುತ್ತಾಡಿದ್ದಾನೆ. ನಿನ್ನೆ (ಆ.07) ನೆಲಮಂಗಲ ತಾಲೂಕಿನಲ್ಲಿರುವ ಶಿವಗಂಗೆ ಬೆಟ್ಟ ಹತ್ತಲು ಆಗಮಿಸಿದ್ದಾನೆ. ಶಿವಗಂಗೆಗೆ ಬೈಕ್ ಮೂಲಕ ಬಂದ ಪ್ರತೀಕ್ ಉಪಾದ್ಯಾಯ, ಪಾರ್ಕಿಂಗ್ ಸ್ಥಳದಲ್ಲಿ ಬುಲೆಟ್ ಬೈಕ್ ಪಾರ್ಕ್ ಮಾಡಿದ್ದಾನೆ. ಬಳಿಕ ಬೆಟ್ಟ ಹತ್ತಲು ಆರಂಭಿಸಿದ್ದಾನೆ. ಈತ ಪಾರ್ಕಿಂಗ್ ಮಾಡಿ ಬೆಟ್ಟ ಹತ್ತುವ ಕೆಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.&lt;/p&gt;&lt;h2&gt;ನಾಪತ್ತೆ ಹಿಂದೆ ಸಾಕಷ್ಟು ಅನುಮಾನ&lt;/h2&gt;&lt;p&gt;ಪ್ರತೀಕ್ ಉಪಾದ್ಯಾಯ ವಾಪಸ್ ಮರಳಿರುವ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿಲ್ಲ. ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.ಪ್ರತೀಕ್ ಉಪಾದ್ಯಾಯನ ಫೋನ್ ಬೇರೆ ಕಡೆ ಸ್ವಿಚ್ ಆಗಿದೆ. ಪ್ರತೀಕ್ ಉಪಾದ್ಯಾಯ ನಾಪತ್ತೆಯಾಗಿರುವ ಸ್ಥಳಕ್ಕೂ ಫೋನ್ ಸ್ವೀಚ್ ಆಗಿರುವ ಲೋಕೇಶನ್ ಬೇರೆ ಬೇರೆಯಾಗಿದೆ. ಇತ್ತ ಐದು ದಿನಗಳ ಹಿಂದೆ ಬೈಕ್ ಬಾಡಿಗೆ ಪಡೆದು ಸುತ್ತಾಟ ಆರಂಭಿಸಿದ ಹಿಂದೆಯೂ ಕೆಲ ಅನುಮಾನಗಳು ವ್ಯಕ್ತವಾಗಿದೆ.&lt;/p&gt;&lt;p&gt;ಶಿವಗಂಗೆ ಬೆಟ್ಟ ಸಮುದ್ರದ ಮಟ್ಟದಿಂದ 4800 ಅಡಿ ಎತ್ತರದಲ್ಲಿರುವ ಬೆಟ್ಟ . ಜೊತೆಗೆ ಹಲವು ಕಡೆ ಅತ್ಯಂತ ಅಪಾಯಕಾರಿಯಾಗಿದೆ. ಈ ಪೈಕಿ ಶಾಂತಲಾ ಡ್ರಾಪ್ ಅತೀ ಎಚ್ಚರವಹಿಸಬೇಕಾದ ಸ್ಥಳ. ಮರಗಿಡಗಳು ಕಲ್ಲು ಬಂಡೆಗಳಿಂದ ಕೂಡಿರುವ ಶಾಂತಲಾ ಡ್ರಾಪ್ ಬಳಿ ಹಲವು ಸೂಚನಾ ಫಲಕಗಳು ಇವೆ. ಇದೀಗ ಪೊಲೀಸರು ಡ್ರೋನ್ ಬಳಸಿ ಶಾಂತಲಾ ಡ್ರಾಪ್ ಬಳಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪ್ರತೀಕ್ ಉಪಾದ್ಯಾಯ ನಾಪತ್ತೆ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>life</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-rural/businessman-31-year-old-son-goes-missing-after-shivagange-trekking-search-launched/articleshow-y9mxugs"/>
        </item>
        <item>
            <title><![CDATA[ದೆವ್ವ, ಆತ್ಮ, ನಿಗೂಢ ಶಬ್ದಗಳು.. ಹೈದರಾಬಾದ್‌ನ ಈ 7 ಜಾಗಗಳ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಿ!]]></title>
            <link>https://kannada.asianetnews.com/life/hyderabad-haunted-places-7-spooky-spots-with-mysterious-stories-gvd/articleshow-37ggdg2</link>
            <guid isPermaLink="true">https://kannada.asianetnews.com/life/hyderabad-haunted-places-7-spooky-spots-with-mysterious-stories-gvd/articleshow-37ggdg2</guid>
            <pubDate>Sat, 08 Aug 2026 19:00:50 +0530</pubDate>
            <description><![CDATA[&lt;p&gt;Hyderabad Haunted Places: ಕೋಟ್ಯಂತರ ಜನಸಂಖ್ಯೆ, ಸದಾ ಗಿಜಿಗುಡುವ ರಸ್ತೆಗಳು, ಐತಿಹಾಸಿಕ ಕಟ್ಟಡಗಳು ಹಾಗೂ ಆಧುನಿಕ ಗಗನಚುಂಬಿ ಕಟ್ಟಡಗಳಿಂದ ಕೂಡಿರುವ ಹೈದರಾಬಾದ್&zwnj; ನಗರಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgrxexd97az3kbry9hxc8w6,imgname-nkb-1786195655597.png" type="image/jpeg" height="390" width="690"/>
            <content:encoded><![CDATA[&lt;p&gt;ಕೋಟ್ಯಂತರ ಜನಸಂಖ್ಯೆ, ಸದಾ ಗಿಜಿಗುಡುವ ರಸ್ತೆಗಳು, ಐತಿಹಾಸಿಕ ಕಟ್ಟಡಗಳು ಹಾಗೂ ಆಧುನಿಕ ಗಗನಚುಂಬಿ ಕಟ್ಟಡಗಳಿಂದ ಕೂಡಿರುವ ಹೈದರಾಬಾದ್&zwnj; ನಗರಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಆದರೆ ಪ್ರತಿಯೊಂದು ನಗರಕ್ಕೂ ಒಂದು ಕತ್ತಲೆಯ ಮುಖ ಇರುವಂತೆ, ಭಾಗ್ಯನಗರಕ್ಕೂ ಕೆಲವು ಜಾಗಗಳಿವೆ. ಈ ಪ್ರದೇಶಗಳ ಸುತ್ತ ಹಲವು ವರ್ಷಗಳಿಂದ ಭೂತ, ಆತ್ಮ, ನಿಗೂಢ ಘಟನೆಗಳು ಹಾಗೂ ಭಯಾನಕ ಅನುಭವಗಳ ಕಥೆಗಳು ಹರಿದಾಡುತ್ತಿವೆ. ಹಾಗಾದರೆ ಹೈದರಾಬಾದ್&zwnj;ನ &lsquo;ಹಾಂಟೆಡ್&zwnj; ಪ್ಲೇಸಸ್&zwnj;&rsquo; ಎಂದು ಹೇಳಲಾಗುವ ಆ ಜಾಗಗಳು ಯಾವುವು? ಅವುಗಳ ಬಗ್ಗೆ ಸ್ಥಳೀಯವಾಗಿ ಕೇಳಿಬರುವ ಕಥೆಗಳೇನು? ಇದರ ಹಿಂದೆ ನಿಜಕ್ಕೂ ಏನಾದರೂ ರಹಸ್ಯವಿದೆಯೇ? ನೋಡೋಣ.&lt;/p&gt;&lt;p&gt;&lt;strong&gt;ಗೋಲ್ಕೊಂಡ ಕೋಟೆ: ಕತ್ತಲಾಗುತ್ತಿದ್ದಂತೆ ಭಯಾನಕವಾಗುವ ಕೋಟೆ!&lt;/strong&gt;&lt;/p&gt;&lt;p&gt;ಹೈದರಾಬಾದ್&zwnj; ಎಂದಾಕ್ಷಣ ನೆನಪಾಗುವ ಐತಿಹಾಸಿಕ ತಾಣಗಳಲ್ಲಿ ಗೋಲ್ಕೊಂಡ ಕೋಟೆಯೂ ಒಂದು. ಹಗಲಿನಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುವ ಈ ಕೋಟೆ, ಕತ್ತಲಾಗುತ್ತಿದ್ದಂತೆ ಭಯಾನಕ ವಾತಾವರಣ ಪಡೆದುಕೊಳ್ಳುತ್ತದೆ ಎಂಬ ಮಾತು ಸ್ಥಳೀಯವಾಗಿ ಚಾಲ್ತಿಯಲ್ಲಿದೆ. ಕಾಕತೀಯರು ಹಾಗೂ ಕುತುಬ್&zwnj;ಶಾಹಿಗಳ ಕಾಲದ ಈ ಕೋಟೆಯಲ್ಲಿ ರಾಜರ ಕಾಲದಲ್ಲಿ ಅನ್ಯಾಯವಾಗಿ ಸಾವನ್ನಪ್ಪಿದವರ ಆತ್ಮಗಳು ಅಲೆದಾಡುತ್ತವೆ ಎಂಬ ನಂಬಿಕೆಯಿದೆ. ವಿಶೇಷವಾಗಿ ತಾರಾಮತಿ ಎಂಬ ನೃತ್ಯಗಾರ್ತಿಯ ಆತ್ಮ ರಾತ್ರಿ ವೇಳೆ ಕೋಟೆಯಲ್ಲಿ ನೃತ್ಯ ಮಾಡುತ್ತದೆ, ಕೋಟೆಯ ಸುತ್ತ ವಿಚಿತ್ರ ಶಬ್ದಗಳು ಕೇಳಿಸುತ್ತವೆ ಎಂಬ ಕಥೆಗಳೂ ಇವೆ. ಇದೇ ಕಾರಣಕ್ಕೆ ಸಂಜೆ ಬಳಿಕ ಕೋಟೆಯೊಳಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ ಎಂಬ ಮಾತು ಕೂಡ ಕೇಳಿಬರುತ್ತದೆ. ಆದರೆ ಈ ಭಯಾನಕ ಕಥೆಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಗಮನಿಸಬೇಕು.&lt;/p&gt;&lt;p&gt;&lt;strong&gt;ಕುಂದನ್&zwnj;ಬಾಗ್&zwnj; ಹಾಂಟೆಡ್&zwnj; ಹೌಸ್&zwnj;: ರಾತ್ರಿ ಕಾಣಿಸುವ ನಿಗೂಢ ಬೆಳಕು!&lt;/strong&gt;&lt;/p&gt;&lt;p&gt;ಬಂಜಾರಾ ಹಿಲ್ಸ್&zwnj;ನ ಕುಂದನ್&zwnj;ಬಾಗ್&zwnj; ಪ್ರದೇಶದಲ್ಲಿರುವ ಹಳೆಯ ಮನೆಯೊಂದರ ಸುತ್ತಲೂ ಹಲವು ವರ್ಷಗಳಿಂದ ಭಯಾನಕ ಕಥೆಗಳು ಹರಿದಾಡುತ್ತಿವೆ.ಒಂದು ಕಾಲದಲ್ಲಿ ಈ ಮನೆಯಲ್ಲಿ ಮೂವರು ಮಹಿಳೆಯರು ವಿಚಿತ್ರವಾಗಿ ವರ್ತಿಸುತ್ತಿದ್ದರು ಹಾಗೂ ವಾಮಾಚಾರ ಮಾಡುತ್ತಿದ್ದರು ಎಂಬ ಪ್ರಚಾರವಿತ್ತು. ಅವರು ಮೃತಪಟ್ಟ ಬಳಿಕವೂ ರಾತ್ರಿ ವೇಳೆ ಮನೆಯೊಳಗೆ ಯಾರೋ ಮೇಣದಬತ್ತಿ ಹಿಡಿದು ಓಡಾಡುತ್ತಿರುವಂತೆ ಬೆಳಕು ಕಾಣಿಸುತ್ತಿತ್ತು ಎಂದು ಸುತ್ತಮುತ್ತಲಿನವರು ಹೇಳುತ್ತಿದ್ದರೆಂಬ ಕಥೆಗಳಿವೆ. ಇಂತಹ ವದಂತಿಗಳಿಂದಾಗಿ ಈ ಮನೆ ಹೈದರಾಬಾದ್&zwnj;ನ ಪ್ರಸಿದ್ಧ &lsquo;ಹಾಂಟೆಡ್&zwnj; ಹೌಸ್&zwnj;&rsquo;ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.&lt;/p&gt;&lt;p&gt;&lt;strong&gt;ಖೈರತಾಬಾದ್&zwnj;ನ ಹಳೆಯ ಸೈನ್ಸ್&zwnj; ಕಾಲೇಜು&lt;/strong&gt;&lt;/p&gt;&lt;p&gt;ಖೈರತಾಬಾದ್&zwnj;ನ ಹಳೆಯ ಸೈನ್ಸ್&zwnj; ಕಾಲೇಜು ಕಟ್ಟಡದ ಸುತ್ತಲೂ ಕೂಡ ಹಲವು ನಿಗೂಢ ಕಥೆಗಳು ಚಾಲ್ತಿಯಲ್ಲಿವೆ. ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ನಂತರ, ಅಲ್ಲಿನ ಪ್ರಯೋಗಾಲಯದಲ್ಲಿ ಇಡಲಾಗಿದ್ದ ಅಸ್ಥಿಪಂಜರಗಳು ಹಾಗೂ ಮಾನವ ದೇಹದ ಭಾಗಗಳು ರಾತ್ರಿ ವೇಳೆ ಚಲಿಸುತ್ತವೆ ಎಂಬ ವದಂತಿ ಹರಡಿತ್ತು. ಅಲ್ಲದೆ, ಅಲ್ಲಿ ಕಾವಲು ಕಾಯುತ್ತಿದ್ದ ಭದ್ರತಾ ಸಿಬ್ಬಂದಿ ವಿಚಿತ್ರ ಘಟನೆಗಳಿಂದ ಸಾವನ್ನಪ್ಪಿದ್ದಾರೆ ಎಂಬ ಕಥೆಗಳೂ ಕೇಳಿಬರುತ್ತವೆ. ಈ ಘಟನೆಗಳಿಗೆ ಅಧಿಕೃತ ಅಥವಾ ವೈಜ್ಞಾನಿಕ ಸಾಕ್ಷ್ಯಗಳಿಲ್ಲದಿದ್ದರೂ, ಸ್ಥಳೀಯವಾಗಿ ಈ ಕಟ್ಟಡದ ಬಗ್ಗೆ ಭಯದ ವಾತಾವರಣವಿದೆ ಎಂಬ ಮಾತುಗಳಿವೆ.&lt;/p&gt;&lt;p&gt;&lt;strong&gt;ರಾಮೋಜಿ ಫಿಲ್ಮ್&zwnj; ಸಿಟಿ: ಶೂಟಿಂಗ್&zwnj; ವೇಳೆ ನಿಗೂಢ ಘಟನೆಗಳಂತೆ!&lt;/strong&gt;&lt;/p&gt;&lt;p&gt;ಹೈದರಾಬಾದ್&zwnj;ನ ಮತ್ತೊಂದು ಪ್ರಮುಖ ಪ್ರವಾಸಿ ತಾಣ ರಾಮೋಜಿ ಫಿಲ್ಮ್&zwnj; ಸಿಟಿ. ಸಾವಿರಾರು ಸಿನಿಮಾಗಳ ಶೂಟಿಂಗ್&zwnj;ಗೆ ಸಾಕ್ಷಿಯಾಗಿರುವ ಈ ವಿಶಾಲ ಪ್ರದೇಶದ ಕೆಲವು ಹೋಟೆಲ್&zwnj;ಗಳು ಮತ್ತು ಶೂಟಿಂಗ್&zwnj; ಸ್ಥಳಗಳ ಬಗ್ಗೆಯೂ ಭಯಾನಕ ಕಥೆಗಳು ಹರಿದಾಡುತ್ತವೆ. ಈ ಪ್ರದೇಶ ಹಿಂದೆ ನಿಜಾಮರ ಕಾಲದ ಯುದ್ಧಭೂಮಿಯಾಗಿತ್ತು ಎಂಬ ಹಿನ್ನೆಲೆಯೊಂದಿಗೆ, ಶೂಟಿಂಗ್&zwnj; ವೇಳೆ ಏಕಾಏಕಿ ಲೈಟ್&zwnj;ಗಳು ಬಿದ್ದುಹೋಗುವುದು, ಕನ್ನಡಿಗಳ ಮೇಲೆ ವಿಚಿತ್ರ ಅಕ್ಷರಗಳು ಕಾಣಿಸಿಕೊಳ್ಳುವುದು ಸೇರಿದಂತೆ ಕೆಲವು ನಿಗೂಢ ಘಟನೆಗಳು ನಡೆದಿವೆ ಎಂದು ಕೆಲವರು ಹೇಳುತ್ತಾರೆ. ಇವುಗಳಿಗೂ ಅಧಿಕೃತ ದೃಢೀಕರಣವಿಲ್ಲ.&lt;/p&gt;&lt;p&gt;&lt;strong&gt;ರವೀಂದ್ರನಗರ: ಆತ್ಮಹತ್ಯೆಗಳ ಸರಣಿಯ ಹಿಂದೆ ಭೂತದ ಕಥೆ?&lt;/strong&gt;&lt;/p&gt;&lt;p&gt;2012ರಲ್ಲಿ ರವೀಂದ್ರನಗರದಲ್ಲಿ ನಡೆದ ಆತ್ಮಹತ್ಯೆಗಳ ಸರಣಿಯ ಬಳಿಕ ಈ ಪ್ರದೇಶವೂ ಹೈದರಾಬಾದ್&zwnj;ನ ಭಯಾನಕ ಸ್ಥಳಗಳ ಪಟ್ಟಿಯಲ್ಲಿ ಸೇರಿಕೊಂಡಿತು ಎಂಬ ಪ್ರಚಾರವಿದೆ. ಸತತವಾಗಿ ಸಂಭವಿಸಿದ ಕೆಲವು ಆತ್ಮಹತ್ಯೆಗಳ ಹಿಂದೆ ಯಾವುದೋ ಆತ್ಮದ ಕೈವಾಡವಿದೆ ಎಂದು ಸ್ಥಳೀಯರು ನಂಬಿದ್ದರು ಎನ್ನಲಾಗುತ್ತದೆ. ಭಯದಿಂದ ಕೆಲವು ನಿವಾಸಿಗಳು ರಾತ್ರಿ ವೇಳೆ ಮನೆಗಳ ಹೊರಗೆ ಕಾವಲು ಕಾಯುತ್ತಿದ್ದರೆಂಬ ಮಾತುಗಳೂ ಇವೆ. ಈ ಭೀತಿಯ ಕಾರಣದಿಂದ ಹಲವು ಕುಟುಂಬಗಳು ಆ ಪ್ರದೇಶವನ್ನು ತೊರೆದು ಹೋಗಿದ್ದವು ಎಂಬ ಕಥೆಗಳು ಹರಿದಾಡಿವೆ. ಆ ಸಂದರ್ಭದಲ್ಲಿ &lsquo;ಭೂತ&rsquo;ವನ್ನು ಕೇಂದ್ರವಾಗಿಟ್ಟುಕೊಂಡು ಕೆಲವು ಮಾಧ್ಯಮ ವರದಿಗಳೂ ಪ್ರಕಟವಾಗಿದ್ದವು ಎನ್ನಲಾಗುತ್ತದೆ. ಇಂದಿಗೂ ರಾತ್ರಿ ವೇಳೆ ಈ ಪ್ರದೇಶ ನಿರ್ಜನವಾಗಿರುತ್ತದೆ ಎಂಬ ಮಾತು ಕೇಳಿಬರುತ್ತದೆ. ಕೆಲವು ಮನೆಗಳ ಮೇಲೆ ಕೆಂಪು ಬಣ್ಣದಲ್ಲಿ &lsquo;ಜೈ ಶ್ರೀರಾಮ್&zwnj;&rsquo; ಎಂದು ಬರೆಯಲಾಗಿರುವುದು ಕಾಣಿಸುತ್ತದೆ ಎಂಬ ಉಲ್ಲೇಖಗಳೂ ಇವೆ.&lt;/p&gt;&lt;p&gt;&lt;strong&gt;&lsquo;ದೇಡ್&zwnj; ಲಖ್&zwnj; ಕಾ ಘರ್&zwnj;&rsquo;: ಒಂದು ಮನೆಯ ಸುತ್ತ ಸುತ್ತುವ ಭಯಾನಕ ಕಥೆ&lt;/strong&gt;&lt;/p&gt;&lt;p&gt;ಹೈದರಾಬಾದ್&zwnj;ನಲ್ಲಿ &lsquo;ದೇಡ್&zwnj; ಲಖ್&zwnj; ಕಾ ಘರ್&zwnj;&rsquo; ಎಂದೇ ಕರೆಯಲಾಗುವ ಮತ್ತೊಂದು ಮನೆಯ ಬಗ್ಗೆಯೂ ನಿಗೂಢ ಕಥೆಯೊಂದು ಪ್ರಚಲಿತದಲ್ಲಿದೆ. ಲಕ್ಷ್ಮಣ್&zwnj; ಎಂಬ ವ್ಯಕ್ತಿ ಸುಮಾರು 1.5 ಲಕ್ಷ ರೂಪಾಯಿ ಖರ್ಚು ಮಾಡಿ ಈ ಭವ್ಯ ಮನೆಯನ್ನು ನಿರ್ಮಿಸಿದ್ದರು ಎಂಬುದು ಸ್ಥಳೀಯವಾಗಿ ಕೇಳಿಬರುವ ಕಥೆ. ಆದರೆ ಮನೆ ನಿರ್ಮಾಣವಾದ ಬಳಿಕ ಅವರ ಪತ್ನಿ ಹೃದಯಾಘಾತದಿಂದ ಮೃತಪಟ್ಟರು ಎನ್ನಲಾಗುತ್ತದೆ. ಮನೆಯೊಳಗೆ ಏನೋ ಸರಿಯಿಲ್ಲ ಎಂಬ ಭಾವನೆಯಿಂದ ಲಕ್ಷ್ಮಣ್&zwnj; ಮತ್ತೆ ಅಲ್ಲಿಗೆ ವಾಪಸ್&zwnj; ಬರಲಿಲ್ಲ ಎಂಬ ಮಾತಿದೆ. ನಂತರ ಈ ಮನೆಯನ್ನು ಒಬ್ಬ ವಿದ್ಯಾರ್ಥಿಗೆ ಬಾಡಿಗೆಗೆ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂಬ ಕಥೆಯೂ ಇದೆ. ಇದಾದ ಬಳಿಕ ಆ ಮನೆಯಲ್ಲಿ ವಾಸಿಸಿದ ಕುಟುಂಬಗಳಿಗೂ ಇದೇ ರೀತಿಯ ದುರಂತಗಳು ಸಂಭವಿಸಿದವು ಎಂಬ ವದಂತಿಗಳು ಹರಡಿದವು. ವಿಶೇಷವಾಗಿ ಮನೆಯೊಳಗಿಂದ ಮಹಿಳೆಯೊಬ್ಬಳು ಅಳುತ್ತಿರುವಂತೆ ವಿಚಿತ್ರ ಶಬ್ದಗಳು ಕೇಳಿಸುತ್ತಿದ್ದವು ಎಂದು ಸ್ಥಳೀಯರು ಹೇಳುತ್ತಾರೆ.&lt;/p&gt;&lt;p&gt;&lt;strong&gt;ಬಂಜಾರಾ ಹಿಲ್ಸ್&zwnj;ನ ಸ್ಮಶಾನ: ಮಧ್ಯರಾತ್ರಿ ಹೋಗಲು ಜನರು ಹೆದರುವ ಜಾಗ!&lt;/strong&gt;&lt;/p&gt;&lt;p&gt;ಬಂಜಾರಾ ಹಿಲ್ಸ್&zwnj;ನ 2ನೇ ರಸ್ತೆಯಲ್ಲಿರುವ ಸ್ಮಶಾನದ ಸುತ್ತಲೂ ಕೂಡ ಹಲವು ಭಯಾನಕ ಕಥೆಗಳಿವೆ. ರಾತ್ರಿ ವೇಳೆ ಯಾವುದೇ ಕಾರಣವಿಲ್ಲದೆ ಬೀದಿ ದೀಪಗಳು ಮಿನುಗುವುದು, ಏಕಾಏಕಿ ತಾಪಮಾನ ಕಡಿಮೆಯಾಗುವುದು, ಮಧ್ಯರಾತ್ರಿ ಆ ಮಾರ್ಗದಲ್ಲಿ ಸಾಗುವ ವಾಹನಗಳು ಕೆಟ್ಟು ನಿಲ್ಲುವುದು ಸೇರಿದಂತೆ ವಿಚಿತ್ರ ಅನುಭವಗಳು ಎದುರಾಗುತ್ತವೆ ಎಂದು ಕೆಲವರು ಹೇಳುತ್ತಾರೆ. ಹೀಗಾಗಿ ಮಧ್ಯರಾತ್ರಿಯಲ್ಲಿ ಈ ಪ್ರದೇಶದ ಬಳಿ ಓಡಾಡಲು ಜನರು ಹಿಂದೇಟು ಹಾಕುತ್ತಾರೆ ಎಂಬ ಮಾತಿದೆ.&lt;/p&gt;&lt;p&gt;&lt;strong&gt;ಶಂಷಾಬಾದ್&zwnj; ವಿಮಾನ ನಿಲ್ದಾಣದ ಬಗ್ಗೆಯೂ ನಿಗೂಢ ಕಥೆಗಳಿವೆಯಂತೆ!&lt;/strong&gt;&lt;/p&gt;&lt;p&gt;ಶಂಷಾಬಾದ್&zwnj; ಸಮೀಪದಲ್ಲಿರುವ ರಾಜೀವ್&zwnj; ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇಂತಹ ಕಥೆಗಳಿಂದ ಹೊರತಾಗಿಲ್ಲ. ವಿಮಾನ ನಿಲ್ದಾಣ ನಿರ್ಮಾಣದ ಹಿಂದೆ ಹಲವು ವಿವಾದಗಳು ಹಾಗೂ ಸಾವುಗಳು ಸಂಭವಿಸಿದ್ದವು ಎಂಬ ಮಾತುಗಳು ಕೇಳಿಬರುತ್ತವೆ. ಆ ಘಟನೆಗಳಲ್ಲಿ ಮೃತಪಟ್ಟವರ ಮೃತದೇಹಗಳನ್ನು ವಿಮಾನ ನಿಲ್ದಾಣದ ಕೆಳಗೆ ಹೂಳಲಾಗಿದೆ ಮತ್ತು ಅವರ ಆತ್ಮಗಳು ಇಂದಿಗೂ ಅಲ್ಲೇ ಅಲೆದಾಡುತ್ತಿವೆ ಎಂಬ ನಂಬಿಕೆಯೂ ಕೆಲವರಲ್ಲಿದೆ. ಆದರೆ ಇಂತಹ ಹೇಳಿಕೆಗಳಿಗೆ ಯಾವುದೇ ದೃಢವಾದ ಪುರಾವೆಗಳಿಲ್ಲ.&lt;/p&gt;&lt;h2&gt;&lt;strong&gt;ನಿಜಕ್ಕೂ ಈ ಜಾಗಗಳಲ್ಲಿ ದೆವ್ವಗಳಿವೆಯೇ?&lt;/strong&gt;&lt;/h2&gt;&lt;p&gt;ಹೈದರಾಬಾದ್&zwnj;ನ ಈ ಸ್ಥಳಗಳ ಸುತ್ತಲೂ ವರ್ಷಗಳಿಂದ ಭಯಾನಕ ಕಥೆಗಳು, ವದಂತಿಗಳು ಮತ್ತು ನಿಗೂಢ ಘಟನೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೆ ಇವುಗಳಲ್ಲಿ ಬಹುತೇಕ ಘಟನೆಗಳಿಗೆ ವೈಜ್ಞಾನಿಕ ಅಥವಾ ಅಧಿಕೃತ ಸಾಕ್ಷ್ಯಗಳಿಲ್ಲ. ಕತ್ತಲಿನ ವಾತಾವರಣ, ಹಳೆಯ ಕಟ್ಟಡಗಳು, ಐತಿಹಾಸಿಕ ಹಿನ್ನೆಲೆ ಹಾಗೂ ಜನರ ಕಲ್ಪನೆಗಳು ಸೇರಿ ಇಂತಹ ಕಥೆಗಳಿಗೆ ಮತ್ತಷ್ಟು ಬಣ್ಣ ತುಂಬಿರಬಹುದು. ಆದರೂ ಭಯ ಮತ್ತು ರಹಸ್ಯಗಳನ್ನು ಇಷ್ಟಪಡುವವರಿಗೆ ಹೈದರಾಬಾದ್&zwnj;ನ ಈ ಸ್ಥಳಗಳು ಇಂದಿಗೂ ಕುತೂಹಲದ ಕೇಂದ್ರಗಳಾಗಿವೆ. ನಿಜಕ್ಕೂ ಇಲ್ಲಿ ಏನಾದರೂ ಅತೀಂದ್ರಿಯ ಶಕ್ತಿ ಇದೆಯೇ? ಅಥವಾ ಇವೆಲ್ಲವೂ ಕಾಲಕ್ರಮೇಣ ಹುಟ್ಟಿಕೊಂಡ ಕಥೆಗಳೇ? ಉತ್ತರ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/life/hyderabad-haunted-places-7-spooky-spots-with-mysterious-stories-gvd/articleshow-37ggdg2"/>
        </item>
        <item>
            <title><![CDATA[ಮನೆಯಲ್ಲೇ ಸೌತೆಕಾಯಿ ಬೆಳೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್]]></title>
            <link>https://kannada.asianetnews.com/webstories/life/5-simple-secrets-for-growing-perfect-cucumbers-at-home-s2rgapm</link>
            <guid isPermaLink="true">https://kannada.asianetnews.com/webstories/life/5-simple-secrets-for-growing-perfect-cucumbers-at-home-s2rgapm</guid>
            <pubDate>Sat, 08 Aug 2026 18:46:10 +0530</pubDate>
            <description><![CDATA[&lt;p&gt;Cucumber growing tips: ಮನೆಯಲ್ಲೇ ಸೌತೆಕಾಯಿ ಬೀಜ ನೆಟ್ಟು, ಅದರಿಂದ ಉತ್ತಮ ಇಳುವರಿ ಪಡೆಯಲು ಏನು ಮಾಡಬೇಕು ಅಂತ ಯೋಚಿಸ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ಕೆಲವು ಸುಲಭ ಉಪಾಯಗಳು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgj14y8etdxp44ee3269j6p,imgname-new-project---2026-08-08t165635.520-1786188436424.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/life/5-simple-secrets-for-growing-perfect-cucumbers-at-home-s2rgapm"/>
        </item>
        <item>
            <title><![CDATA[ಗೋಡೆ ಮೇಲೆ ಮಕ್ಕಳು ಗೀಚಿದ್ದಾರಾ? ಬಟ್ಟೆಗೆ ಚ್ಯೂಯಿಂಗ್​ ಗಮ್ ಅಂಟಿದ್ಯಾ? ಚಸ್ಮಕ್ಕೆ ಗೀರು ಬಿದ್ದಿದ್ಯಾ? ಚಿಂತೆ ಬಿಡಿ]]></title>
            <link>https://kannada.asianetnews.com/gallery/life/scratch-the-wall-spect-get-scratched-chewing-gum-stick-to-clothes-easy-tips-to-remove-it-suc-6gg48gv</link>
            <guid isPermaLink="true">https://kannada.asianetnews.com/gallery/life/scratch-the-wall-spect-get-scratched-chewing-gum-stick-to-clothes-easy-tips-to-remove-it-suc-6gg48gv</guid>
            <pubDate>Sat, 08 Aug 2026 18:42:13 +0530</pubDate>
            <description><![CDATA[&lt;p&gt;ಬಟ್ಟೆಗೆ ಅಂಟಿದ ಚ್ಯೂಯಿಂಗ್ ಗಮ್, ಗೋಡೆಯ ಮೇಲಿನ ಗೀಚು, ಕನ್ನಡಕದ ಗೀರು ಮತ್ತು ಬಾಟಲಿಯ ಕೆಟ್ಟ ವಾಸನೆಯಂತಹ ದಿನನಿತ್ಯದ ಸಮಸ್ಯೆಗಳಿಗೆ ಇಲ್ಲಿ ಸುಲಭವಾದ ಮನೆಮದ್ದುಗಳನ್ನು ನೀಡಲಾಗಿದೆ. ಐಸ್, ಕೊಬ್ಬರಿ ಎಣ್ಣೆ, ಆಲೂಗಡ್ಡೆ ರಸ ಮತ್ತು ಉಪ್ಪಿನಂತಹ ಸರಳ ವಸ್ತು ಬಳಸಿ ಹೇಗೆ ಪರಿಹರಿಸಬಹುದು ಎಂದು ವಿವರಿಸಲಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgqqr377yt6fceqryj2b243,imgname-tips-00-1786194419815.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಟ್ಟೆಗೆ ಅಂಟಿದ ಚ್ಯೂಯಿಂಗ್ ಗಮ್, ಗೋಡೆಯ ಮೇಲಿನ ಗೀಚು, ಕನ್ನಡಕದ ಗೀರು ಮತ್ತು ಬಾಟಲಿಯ ಕೆಟ್ಟ ವಾಸನೆಯಂತಹ ದಿನನಿತ್ಯದ ಸಮಸ್ಯೆಗಳಿಗೆ ಇಲ್ಲಿ ಸುಲಭವಾದ ಮನೆಮದ್ದುಗಳನ್ನು ನೀಡಲಾಗಿದೆ. ಐಸ್, ಕೊಬ್ಬರಿ ಎಣ್ಣೆ, ಆಲೂಗಡ್ಡೆ ರಸ ಮತ್ತು ಉಪ್ಪಿನಂತಹ ಸರಳ ವಸ್ತು ಬಳಸಿ ಹೇಗೆ ಪರಿಹರಿಸಬಹುದು ಎಂದು ವಿವರಿಸಲಾಗಿದೆ&lt;/p&gt;&lt;img&gt;&lt;p&gt;ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ ಎನ್ನುವ ಮಾತಿದೆ. ಅದೇ ರೀತಿ, ದಿನನಿತ್ಯ ಮನೆಯಲ್ಲಿ ಆಗುವ ಕೆಲವೊಂದು ಎಡವಟ್ಟುಗಳಿಗೂ ಏನಾದರೂ ಪರಿಹಾರ ಇದ್ದೇ ಇರುತ್ತದೆ. ಮನೆಯಲ್ಲಿ ಮಕ್ಕಳು ಇದ್ದರೆ ಗೋಡೆ ಮೇಲೆ ತಮ್ಮ ಕಲಾಕೃತಿಯನ್ನು ರಚಿಸುವುದು, ಮನಸ್ಸಿಗೆ ಬಂದದ್ದನ್ನೇ ಗೀಚೋದು ಇದ್ದೇ ಇರುತ್ತದೆ. ಇನ್ನು ಚಸ್ಮವನ್ನು ಎಲ್ಲೆಲ್ಲೋ ಇಡುವ ಕಾರಣ, ಗೀರು ಬೀಳುತ್ತದೆ. ಮನೆಯಲ್ಲಿ ಮಕ್ಕಳ ಕಿತಾಪತಿಯಿಂದಲೋ ಅಥವಾ ಶಾಲಾ, ಕಾಲೇಜು, ಕಚೇರಿಗಳಲ್ಲಿ ಸ್ನೇಹಿತರ ಕಿತಾಪತಿಯಿಂದಲೋ ಅಥವಾ ಆಕಸ್ಮಿಕವಾಗಿ ಬಟ್ಟೆಯ ಮೇಲೆ ಚ್ಯೂಯಿಂಗ್​ ಗಮ್​ ಅಂಟಿ ಬಿಟ್ಟರೆ ಸುಲಭದಲ್ಲಿ ಹೋಗುವುದೇ ಇಲ್ಲ. ಅವುಗಳೂ ಸೇರಿದಂತೆ ಕೆಲವೊಂದಕ್ಕೆ ಇಲ್ಲಿ ಸುಲಭದ ಪರಿಹಾರ ನೀಡಲಾಗಿದೆ.&lt;/p&gt;&lt;img&gt;&lt;p&gt;ಬಟ್ಟೆಯ ಮೇಲೆ ಯಾವುದಾದರೂ ಕಾರಣಕ್ಕೆ ಚ್ಯೂಯಿಂಗ್​ ಗಮ್​ ಅಂಟಿದ್ರೆ, ಅದನ್ನು ಕೀಳಲು ಸಾಧ್ಯವೇ ಇಲ್ಲ. ಎಳೆದಷ್ಟೂ ಎಳೆಯುತ್ತಲೇ ಹೋಗುತ್ತದೆ ಅದು. ಅಂಥ ಸಂದರ್ಭದಲ್ಲಿ, ಒಂದು ಐಸ್​ ತೆಗೆದುಕೊಂಡು ಚ್ಯೂಯಿಂಗ್​ ಗಮ್​ ಮೇಲೆ ಇಟ್ಟು ಉಜ್ಜಿ. ಚ್ಯೂಯಿಂಗ್​ ಗಮ್​ ಗಟ್ಟಿಯಾಗಿ ಮೇಲೆ ಸುಲಭದಲ್ಲಿ ಬರುತ್ತದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಮಕ್ಕಳು ಇರುವ ಮನೆಗಳಲ್ಲಿನ ಗೋಡೆಗಳು ಪೆನ್ನು, ಪೆನ್ಸಿಲ್​ಗಳ ತಾಣವಾಗಿರುತ್ತದೆ. ಬೇಡ ಬೇಡ ಎಂದರೂ ಮಕ್ಕಳು ಅದರ ಮೇಲೆ ಗೀಚುವುದು ಸರ್ವೇ ಸಾಮಾನ್ಯ. ಸುಂದರ ಗೋಡೆ ಕಂಡ ತಕ್ಷಣ ಅದರ ಮೇಲೆ ಗೀಚಿಬಿಡೋಣ ಎನ್ನುತ್ತದೆ ಮಕ್ಕಳ ಮನಸ್ಸು. ಇದಕ್ಕಾಗಿ ಪದೇ ಪದೇ ಪೇಂಟ್​ ಮಾಡಿಸುವುದು ಕಷ್ಟವೇ ಸರಿ. ಆದರೆ ಆ ಚಿಂತೆ ಬಿಡಿ. ಇದಕ್ಕೆ ಸುಲಭದ ಉಪಾಯ ಇದೆ. ಅದೇನೆಂದರೆ, ಕೊಬ್ಬರಿ ಎಣ್ಣೆಯನ್ನು ಒಂದು ಬಟ್ಟೆಯ ಮೇಲೆ ಹಾಕಿಕೊಂಡು ಅದನ್ನು ಗೋಡೆಗೆ ಉಜ್ಜಿ. ಇದರಿಂದ ಸುಲಭದಲ್ಲಿ ಎಲ್ಲಾ ಬಣ್ಣಬಣ್ಣದ ಗೀಟುಗಳು ಮಾಯವಾಗುತ್ತವೆ.&lt;/p&gt;&lt;img&gt;&lt;p&gt;ಇನ್ನು ಚಸ್ಮದ ವಿಷಯ. ಚಸ್ಮ ಇಲ್ಲದಿದ್ದರೆ ಎಷ್ಟೋ ಮಂದಿಯ ಪಾಡು ಆ ದೇವರೇ ಕಾಪಾಡಬೇಕು. ಆದರೆ ಎಷ್ಟೇ ಚೆನ್ನಾಗಿ ಇಟ್ಟುಕೊಂಡರೂ, ಇದರ ಮೇಲೆ ಗೀರು ಬೀಳುವುದು ಸಹಜ. ಯಾವ್ಯಾವುದೋ ವಸ್ತುಗಳಿಗೆ ತಾಗಿ ಗೀರು ಬಿದ್ದುಬಿಡುತ್ತದೆ. ಅದನ್ನು ಸರಿ ಮಾಡುವ ಉಪಾಯವು ತುಂಬಾ ಸುಲಭ. ಸ್ಪೆಕ್ಟ್​ನ ಗ್ಲಾಸ್​​ಗೆ ಸ್ವಲ್ಪ ಆಲೂಗಡ್ಡೆಯ ರಸವನ್ನು ಹಾಕಿ ಒಣ ಬಟ್ಟೆಯಿಂದ ಉಜ್ಜಿದರೆ ಫಳಫಳ ಹೊಳೆಯುತ್ತದೆ.&lt;/p&gt;&lt;img&gt;&lt;p&gt;ಪ್ಲಾಸ್ಟಿಕ್​ ಬಾಟಲಿಯಿಂದ ಕೆಟ್ಟ ವಾಸನೆ ಬರ್ತಿದ್ಯಾ? ಹಾಗಿದ್ದರೆ ಚಿಂತೆ ಬಿಡಿ. ನೀವು ಮಾಡಬೇಕಿರುವುದು ಇಷ್ಟೇ. ಬಾಟಲಿಗೆ ಸ್ವಲ್ಪ ಉಪ್ಪು ಹಾಕಿ, ಸ್ವಲ್ಪ ಬಿಸಿ ನೀರು ಹಾಕಿ ಅದನ್ನು ಚೆನ್ನಾಗಿ ಅಲ್ಲಾಡಿಸಿ ನೀರು ಎಸೆಯಿರಿ. ವಾಸನೆ ಗಾಯಬ್​.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/scratch-the-wall-spect-get-scratched-chewing-gum-stick-to-clothes-easy-tips-to-remove-it-suc-6gg48gv"/>
        </item>
        <item>
            <title><![CDATA[ಚಳಿ, ಹಿಮ, ಗಡ್ಡೆಗಟ್ಟುವ ಸಮುದ್ರ.. ಆದರೂ ಪೆಂಗ್ವಿನ್‌ಗಳಿಗೆ ಏನೂ ಆಗಲ್ಲ: ಏನಿದರ ರಹಸ್ಯ?]]></title>
            <link>https://kannada.asianetnews.com/life/why-don-t-penguins-freeze-in-antarctica-the-amazing-secret-of-their-bodies-gvd/articleshow-11cvavq</link>
            <guid isPermaLink="true">https://kannada.asianetnews.com/life/why-don-t-penguins-freeze-in-antarctica-the-amazing-secret-of-their-bodies-gvd/articleshow-11cvavq</guid>
            <pubDate>Sat, 08 Aug 2026 18:35:47 +0530</pubDate>
            <description><![CDATA[&lt;p&gt;ಅಂಟಾರ್ಕ್ಟಿಕಾ ಎಂದರೆ ನೆನಪಾಗುವುದೇ ಹಿಮ, ಕೊರೆಯುವ ಚಳಿ ಮತ್ತು ಗಡ್ಡೆಗಟ್ಟಿಸುವ ಗಾಳಿ. ಇದು ವಿಶ್ವದ ಅತ್ಯಂತ ಶೀತ ಪ್ರದೇಶಗಳಲ್ಲಿ ಒಂದಾಗಿದ್ದು, ಚಳಿಗಾಲದಲ್ಲಿ ಇಲ್ಲಿನ ತಾಪಮಾನ ಮೈನಸ್&zwnj; 50 ಡಿಗ್ರಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgqn02aa6fz1jnnd47e0qgt,imgname-vjv-1786194329674.png" type="image/jpeg" height="390" width="690"/>
            <content:encoded><![CDATA[&lt;p&gt;ಅಂಟಾರ್ಕ್ಟಿಕಾ ಎಂದರೆ ನೆನಪಾಗುವುದೇ ಹಿಮ, ಕೊರೆಯುವ ಚಳಿ ಮತ್ತು ಗಡ್ಡೆಗಟ್ಟಿಸುವ ಗಾಳಿ. ಇದು ವಿಶ್ವದ ಅತ್ಯಂತ ಶೀತ ಪ್ರದೇಶಗಳಲ್ಲಿ ಒಂದಾಗಿದ್ದು, ಚಳಿಗಾಲದಲ್ಲಿ ಇಲ್ಲಿನ ತಾಪಮಾನ ಮೈನಸ್&zwnj; 50 ಡಿಗ್ರಿ ಸೆಲ್ಸಿಯಸ್&zwnj;ಗಿಂತಲೂ ಕೆಳಗೆ ಇಳಿಯುತ್ತದೆ. ಹಿಮಪಾತ, ಹಿಮ ಬಿರುಗಾಳಿ ಹಾಗೂ ತಿಂಗಳುಗಟ್ಟಲೆ ಆವರಿಸುವ ಹಿಮದಿಂದಾಗಿ, ಸೂಕ್ತ ರಕ್ಷಣಾ ಉಡುಪುಗಳಿಲ್ಲದೆ ಮನುಷ್ಯರು ಇಲ್ಲಿ ಹೆಚ್ಚು ಹೊತ್ತು ಬದುಕುವುದು ಅಸಾಧ್ಯ.&lt;/p&gt;&lt;p&gt;ಆದರೆ ಇದೇ ಪರಿಸರದಲ್ಲಿ ಪೆಂಗ್ವಿನ್&zwnj;ಗಳು ಮಾತ್ರ ಯಾವುದೇ ಭಯವಿಲ್ಲದೆ ಬದುಕುತ್ತವೆ. ಹಿಮದ ಮೇಲೆ ಬರಿಗಾಲಿನಲ್ಲಿ ನಡೆಯುವುದು, ಗಡ್ಡೆಗಟ್ಟುವಷ್ಟು ತಣ್ಣನೆಯ ಸಮುದ್ರದಲ್ಲಿ ಈಜುವುದು, ಗಂಟೆಗಟ್ಟಲೆ ಹಿಮದ ನಡುವೆ ನಿಂತಿರುವುದು ಅವುಗಳಿಗೆ ಸಾಮಾನ್ಯ. ಹಾಗಾದರೆ ಇಷ್ಟೊಂದು ಚಳಿಯಲ್ಲೂ ಅವುಗಳ ದೇಹ ಗಡ್ಡೆಗಟ್ಟುವುದಿಲ್ಲವೇಕೆ? ಇದರ ಹಿಂದೆ ಪ್ರಕೃತಿ ರೂಪಿಸಿರುವ ಅದ್ಭುತ ದೇಹ ವ್ಯವಸ್ಥೆಯಿದೆ.&lt;/p&gt;&lt;p&gt;&lt;strong&gt;ಪೆಂಗ್ವಿನ್&zwnj;ಗಳ ದೇಹವೇ ಒಂದು ನೈಸರ್ಗಿಕ ಜಾಕೆಟ್&zwnj;!&lt;/strong&gt;&lt;/p&gt;&lt;p&gt;ಪೆಂಗ್ವಿನ್&zwnj;ಗಳ ದೇಹದ ಮೇಲೆ ದಟ್ಟವಾಗಿರುವ ಈಕಗಳು ಕೇವಲ ಅವುಗಳನ್ನು ಸುಂದರವಾಗಿ ಕಾಣಿಸುವುದಕ್ಕಷ್ಟೇ ಅಲ್ಲ. ಅವುಗಳ ದೇಹವನ್ನು ತೀವ್ರ ಚಳಿಯಿಂದ ರಕ್ಷಿಸುವ ಪ್ರಮುಖ ಕವಚವೂ ಹೌದು. ನೀರು ಒಳನುಗ್ಗದಂತೆ ಇರುವ ಈ ದಟ್ಟ ಈಕಗಳು ಚರ್ಮದ ಸಮೀಪ ಬೆಚ್ಚಗಿನ ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತವೆ. ಹೀಗಾಗಿ ಅವುಗಳಿಗೆ ನೈಸರ್ಗಿಕ ಜಾಕೆಟ್&zwnj;ನಂತೆ ಕೆಲಸ ಮಾಡುತ್ತವೆ. ಇದರ ಕೆಳಭಾಗದಲ್ಲಿ ದಪ್ಪವಾದ ಕೊಬ್ಬಿನ ಪದರ ಇರುತ್ತದೆ. ಇದನ್ನು ಬ್ಲಬ್ಬರ್&zwnj; ಎಂದು ಕರೆಯಲಾಗುತ್ತದೆ. ಈ ಕೊಬ್ಬಿನ ಪದರವು ಹೊರಗಿನ ಚಳಿಯನ್ನು ದೇಹದೊಳಗೆ ಪ್ರವೇಶಿಸದಂತೆ ತಡೆಯುತ್ತದೆ. ಈಕಗಳು ಮತ್ತು ಬ್ಲಬ್ಬರ್&zwnj;-ಈ ಎರಡು ಪದರಗಳು ಸೇರಿ ದೇಹದ ಉಷ್ಣತೆ ಹೊರಗೆ ಹೋಗದಂತೆ ಕಾಪಾಡುತ್ತವೆ.&lt;/p&gt;&lt;p&gt;&lt;strong&gt;ಅಸಲಿ ರಹಸ್ಯ ಇರುವುದು ಪಾದಗಳಲ್ಲಿ!&lt;/strong&gt;&lt;/p&gt;&lt;p&gt;ಪೆಂಗ್ವಿನ್&zwnj;ಗಳ ದೇಹದ ಮತ್ತೊಂದು ಅಚ್ಚರಿಯ ವೈಶಿಷ್ಟ್ಯ ಅವುಗಳ ಪಾದಗಳಲ್ಲಿ ಅಡಗಿದೆ. ಪಾದಗಳಿಗೆ ಈಕಗಳಿರುವುದಿಲ್ಲ. ಆದರೂ ಹಿಮದ ಮೇಲೆ ಗಂಟೆಗಟ್ಟಲೆ ನಡೆದಾಡಿದರೂ ಅವುಗಳ ಪಾದಗಳು ಗಡ್ಡೆಗಟ್ಟುವುದಿಲ್ಲ.&lt;/p&gt;&lt;p&gt;&lt;strong&gt;ಇದಕ್ಕೆ ಕಾರಣ ಅವುಗಳಲ್ಲಿರುವ ವಿಶೇಷ ರಕ್ತ ಪರಿಚಲನಾ ವ್ಯವಸ್ಥೆ.&lt;/strong&gt;&lt;/p&gt;&lt;p&gt;ಹೃದಯದಿಂದ ಬರುವ ಬೆಚ್ಚಗಿನ ರಕ್ತ ಮತ್ತು ಪಾದಗಳಿಂದ ದೇಹದತ್ತ ಹಿಂದಿರುಗುವ ತಣ್ಣನೆಯ ರಕ್ತ ಒಂದಕ್ಕೊಂದು ಅತ್ಯಂತ ಸಮೀಪದಲ್ಲಿ ಹರಿಯುತ್ತದೆ. ಈ ಸಂದರ್ಭದಲ್ಲಿ ಬೆಚ್ಚಗಿನ ರಕ್ತದಲ್ಲಿರುವ ಉಷ್ಣತೆ ತಣ್ಣನೆಯ ರಕ್ತಕ್ಕೆ ವರ್ಗಾವಣೆಯಾಗುತ್ತದೆ. ಹೀಗಾಗಿ ಪಾದಗಳಿಗೆ ತಲುಪುವ ರಕ್ತದ ಉಷ್ಣತೆ ಸ್ವಲ್ಪ ಕಡಿಮೆಯಾಗಿರುತ್ತದೆ. ಇದರಿಂದ ದೇಹದ ಅಮೂಲ್ಯವಾದ ಉಷ್ಣತೆ ಪಾದಗಳ ಮೂಲಕ ಹೊರಗೆ ಅನಗತ್ಯವಾಗಿ ನಷ್ಟವಾಗುವುದಿಲ್ಲ. ಅದೇ ಸಮಯದಲ್ಲಿ ಪಾದಗಳಿಂದ ಮೇಲಕ್ಕೆ ಹಿಂದಿರುಗುವ ರಕ್ತವೂ ದೇಹಕ್ಕೆ ತಲುಪುವ ಮುನ್ನವೇ ಬೆಚ್ಚಗಾಗುತ್ತದೆ. ಈ ಅದ್ಭುತ ವ್ಯವಸ್ಥೆಯನ್ನು ವಿಜ್ಞಾನಿಗಳು &lsquo;ಕೌಂಟರ್&zwnj;-ಕರೆಂಟ್&zwnj; ಹೀಟ್&zwnj; ಎಕ್ಸ್&zwnj;ಚೇಂಜ್&zwnj; ಸಿಸ್ಟಮ್&zwnj;&rsquo; ಎಂದು ಕರೆಯುತ್ತಾರೆ.&lt;/p&gt;&lt;p&gt;&lt;strong&gt;ಪಾದಗಳು ಗಡ್ಡೆಗಟ್ಟದಿರುವುದಕ್ಕೆ ಇದೇ ಕಾರಣ!&lt;/strong&gt;&lt;/p&gt;&lt;p&gt;ಈ ವ್ಯವಸ್ಥೆಯ ಪರಿಣಾಮವಾಗಿ ಪೆಂಗ್ವಿನ್&zwnj;ಗಳ ಪಾದಗಳ ಉಷ್ಣತೆ ಗಡ್ಡೆಗಟ್ಟುವ ಮಟ್ಟಕ್ಕಿಂತ ಕೆಲವೇ ಡಿಗ್ರಿಗಳಷ್ಟು ಹೆಚ್ಚಿರುತ್ತದೆ. ದೇಹದ ಅಂಗಾಂಶಗಳಿಗೆ ಹಾನಿಯಾಗದಿರಲು ಬೇಕಾದಷ್ಟು ಉಷ್ಣತೆ ಅಲ್ಲಿ ಇರುತ್ತದೆ. ಆದರೆ ದೇಹದ ಉಳಿದ ಭಾಗದಲ್ಲಿರುವ ಅಮೂಲ್ಯವಾದ ಉಷ್ಣತೆ ವ್ಯರ್ಥವಾಗಿ ಹೊರಗೆ ಹೋಗುವುದಿಲ್ಲ. ಹೀಗಾಗಿ ಪೆಂಗ್ವಿನ್&zwnj;ಗಳು ಹಿಮದ ಮೇಲೆ ನಿಂತಿದ್ದರೂ ಫ್ರಾಸ್ಟ್&zwnj;ಬೈಟ್&zwnj;ನಂತಹ ಸಮಸ್ಯೆಗಳಿಂದ ರಕ್ಷಿಸಲ್ಪಡುತ್ತವೆ.&lt;/p&gt;&lt;p&gt;&lt;strong&gt;ಎಲ್ಲಾ ಪೆಂಗ್ವಿನ್&zwnj;ಗಳಿಗೂ ಒಂದೇ ರೀತಿಯ ವ್ಯವಸ್ಥೆಯೇ?&lt;/strong&gt;&lt;/p&gt;&lt;p&gt;ಇಲ್ಲ. ಪೆಂಗ್ವಿನ್&zwnj;ಗಳು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ಅವುಗಳ ದೇಹದ ರಚನೆಯಲ್ಲೂ ವ್ಯತ್ಯಾಸವಿರುತ್ತದೆ. ಅಂಟಾರ್ಕ್ಟಿಕಾದಂತಹ ಅತ್ಯಂತ ಚಳಿ ಪ್ರದೇಶಗಳಲ್ಲಿ ವಾಸಿಸುವ ಪೆಂಗ್ವಿನ್&zwnj;ಗಳಿಗೆ ದೇಹದ ಉಷ್ಣತೆ ಉಳಿಸಿಕೊಳ್ಳುವ ವ್ಯವಸ್ಥೆಗಳು ಹೆಚ್ಚು ಅಗತ್ಯ. ಆದರೆ ದಕ್ಷಿಣ ಆಫ್ರಿಕಾದಂತಹ ತುಸು ಬೆಚ್ಚಗಿನ ಪ್ರದೇಶಗಳಲ್ಲಿ ವಾಸಿಸುವ ಪೆಂಗ್ವಿನ್&zwnj;ಗಳಿಗೆ ಹೆಚ್ಚುವರಿ ಉಷ್ಣತೆಯನ್ನು ಹೊರಹಾಕುವ ವ್ಯವಸ್ಥೆ ಬೇಕಾಗುತ್ತದೆ. ಅಂತಹ ಪೆಂಗ್ವಿನ್&zwnj;ಗಳಲ್ಲಿ ದೊಡ್ಡ ಫ್ಲಿಪ್ಪರ್&zwnj;ಗಳು ಮತ್ತು ಮುಖದ ಕೆಲವು ಭಾಗಗಳಲ್ಲಿ ಈಕಗಳಿಲ್ಲದ ಚರ್ಮ ಕಾಣಿಸಿಕೊಳ್ಳುತ್ತದೆ. ಇವು ದೇಹದಲ್ಲಿರುವ ಹೆಚ್ಚುವರಿ ಉಷ್ಣತೆಯನ್ನು ಹೊರಗೆ ಕಳುಹಿಸಲು ಸಹಾಯ ಮಾಡುತ್ತವೆ. ಅಂದರೆ, ಯಾವ ಪ್ರದೇಶದಲ್ಲಿ ಯಾವ ರೀತಿಯ ಹವಾಮಾನವಿದೆಯೋ, ಅದಕ್ಕೆ ತಕ್ಕಂತೆ ಪ್ರಕೃತಿ ಪ್ರತಿಯೊಂದು ಜೀವಿಯ ದೇಹವನ್ನೂ ರೂಪಿಸಿದೆ.&lt;/p&gt;&lt;h2&gt;&lt;strong&gt;ಪೆಂಗ್ವಿನ್&zwnj;ಗಳಿಂದ ಇಂಜಿನಿಯರ್&zwnj;ಗಳಿಗೂ ಸ್ಫೂರ್ತಿ!&lt;/strong&gt;&lt;/h2&gt;&lt;p&gt;ಪೆಂಗ್ವಿನ್&zwnj;ಗಳ ದೇಹದ ಈ ಅದ್ಭುತ ವ್ಯವಸ್ಥೆ ಕೇವಲ ವಿಜ್ಞಾನಿಗಳಿಗೆ ಮಾತ್ರ ಕುತೂಹಲದ ವಿಷಯವಲ್ಲ. ಇಂಜಿನಿಯರ್&zwnj;ಗಳಿಗೂ ಇದು ಸ್ಫೂರ್ತಿಯಾಗಿದೆ. ಕಟ್ಟಡಗಳು, ವಾಹನಗಳು ಮತ್ತು ಕೈಗಾರಿಕೆಗಳಲ್ಲಿ ಬಳಸುವ ಆಧುನಿಕ ಹೀಟ್&zwnj; ಎಕ್ಸ್&zwnj;ಚೇಂಜರ್&zwnj; ತಂತ್ರಜ್ಞಾನದಲ್ಲೂ ಇದೇ ರೀತಿಯ ತತ್ವವನ್ನು ಬಳಸಲಾಗುತ್ತದೆ. ಉಷ್ಣತೆಯ ನಷ್ಟವನ್ನು ಕಡಿಮೆ ಮಾಡುವುದು ಮತ್ತು ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಇದರ ಪ್ರಮುಖ ಉದ್ದೇಶ. ಲಕ್ಷಾಂತರ ವರ್ಷಗಳ ವಿಕಾಸದ ಮೂಲಕ ಪ್ರಕೃತಿ ರೂಪಿಸಿರುವ ಈ ಅದ್ಭುತ ದೇಹ ವ್ಯವಸ್ಥೆಯಿಂದಾಗಿ, ಭೂಮಿಯ ಅತ್ಯಂತ ಕಠಿಣ ಚಳಿಯಲ್ಲೂ ಪೆಂಗ್ವಿನ್&zwnj;ಗಳು ಸುಲಭವಾಗಿ ಬದುಕುಳಿಯುತ್ತಿವೆ. ಮಂಜಿನ ನಡುವೆ ಅವುಗಳ ಬದುಕಿನ ರಹಸ್ಯವೇನು ಎಂಬ ಪ್ರಶ್ನೆಗೆ ಪ್ರಕೃತಿಯ ಉತ್ತರ ಒಂದೇ&mdash;ಅದ್ಭುತ ದೇಹ ವಿನ್ಯಾಸ ಮತ್ತು ಅಷ್ಟೇ ಅದ್ಭುತವಾದ ಉಷ್ಣ ನಿಯಂತ್ರಣ ವ್ಯವಸ್ಥೆ!&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/life/why-don-t-penguins-freeze-in-antarctica-the-amazing-secret-of-their-bodies-gvd/articleshow-11cvavq"/>
        </item>
        <item>
            <title><![CDATA[ಬೆಳಗಿನ ಜಾವ 3 ಗಂಟೆಗೆ ಆಟೋ ಓಡಿಸುವ ಮಹಿಳೆ.. ಕಾರಣ ಏನೆಂದು ಗೊತ್ತಾದ್ರೆ ಸಲಾಂ ಅಂತೀರಾ]]></title>
            <link>https://kannada.asianetnews.com/viral/hats-off-to-the-brave-woman-driving-an-auto-at-3-am-for-a-heroic-reason/articleshow-n75wm0n</link>
            <guid isPermaLink="true">https://kannada.asianetnews.com/viral/hats-off-to-the-brave-woman-driving-an-auto-at-3-am-for-a-heroic-reason/articleshow-n75wm0n</guid>
            <pubDate>Sat, 08 Aug 2026 18:31:57 +0530</pubDate>
            <description><![CDATA[&lt;p&gt;&lt;strong&gt;Woman auto driver: &lt;/strong&gt;ಮುಂಜಾನೆ 3 ಗಂಟೆಗೆ ಜನರು ನಿದ್ರಿಸುತ್ತಿದ್ದರೆ, ಈ ಮಹಿಳೆ ಆಟೋ ಓಡಿಸುತ್ತಾ ರಸ್ತೆಯಲ್ಲಿರುತ್ತಾರೆ. ಆದರೆ ಹಣಕ್ಕಾಗಿ ಅಲ್ಲ, ಅಂದಹಾಗೆ ವಡೋದರಾದ ಈ ಮಹಿಳೆಯ ಸ್ಫೂರ್ತಿದಾಯಕ ಕಥೆ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgq5chrqw2r598b0cknawcj,imgname-thumbnail---2026-08-08t182602.130-1786193818167.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಾ&lt;/strong&gt;ಮಾನ್ಯವಾಗಿ ಮುಂಜಾನೆ 3 ಗಂಟೆಯ ಸಮಯವೆಂದರೆ ಇಡೀ ದೇಶವೇ ಗಾಢ ನಿದ್ರೆಯಲ್ಲಿರುತ್ತದೆ. ರಸ್ತೆಗಳು ನಿರ್ಜನವಾಗಿರುತ್ತವೆ. ಅಂತಹ ಸಮಯದಲ್ಲಿ ಒರ್ವ ಮಹಿಳೆ ಆಟೋರಿಕ್ಷಾ ಓಡಿಸುತ್ತಿರುವುದು ಕಂಡರೆ ಎಂಥವರು ಕೂಡ ಒಂದು ಕ್ಷಣ ಅಚ್ಚರಿಯಿಂದ ನೋಡುವುದು ಸಹಜ. ಇದೀಗ ಇನ್&zwnj;ಸ್ಟಾಗ್ರಾಂ ಬಳಕೆದಾರರಾದ ಸನ್ಯಮ್ ಗಾರ್ಗ್ ಎಂಬುವವರಿಗೂ ಇತ್ತೀಚೆಗೆ ಇಂತಹದ್ದೇ ಒಂದು ಅನುಭವವಾಗಿದೆ. ಅವರು ಮುಂಜಾನೆ 3 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದಾಗ ಒರ್ವ ಮಹಿಳೆ ತನ್ನ ಪತಿಯೊಂದಿಗೆ ಆಟೋ ಓಡಿಸುತ್ತಿರುವುದು ಕಂಡುಬಂದಿದೆ. ಕುತೂಹಲದಿಂದ ಸನ್ಯಮ್ ಅವರು ಆಕೆಯನ್ನು ಮಾತನಾಡಿಸಿದಾಗ ತಿಳಿದ ವಿಷಯಗಳು ಆಕೆಗೆ ಎಂಥವರು ಒಮ್ಮೆ ಸಲಾಂ ಹೊಡೆಯುವಂತಿದೆ.&lt;/p&gt;&lt;h2&gt;&lt;strong&gt;ಹಣಕ್ಕಾಗಿ ಮಾತ್ರ ಆಟೋ ಓಡಿಸುತ್ತಿಲ್ಲ&lt;/strong&gt;&lt;/h2&gt;&lt;p&gt;ಗುಜರಾತ್&zwnj;ನ ವಡೋದರಾ ನಗರದ ಈ ಮಹಿಳೆ ಮಾನವೀಯತೆಯ ಪ್ರತಿರೂಪದಂತೆ ಇದ್ದಾರೆ. ಈಕೆಯ ಪತಿ ಕೂಡ ಒಬ್ಬ ಆಟೋ ಚಾಲಕ. ತನ್ನ ಪತ್ನಿ ಆರ್ಥಿಕವಾಗಿ ಯಾರ ಮೇಲೂ ಅವಲಂಬಿತಳಾಗಬಾರದು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ಉದ್ದೇಶದಿಂದ ಪತಿಯೇ ಆಕೆಗೆ ಆಟೋ ಡ್ರೈವಿಂಗ್ ಕಲಿಸಿದ್ದಾರೆ. ಈಗ ಈ ದಂಪತಿ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಾ ತಮ್ಮ ಇಬ್ಬರು ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಆದರೆ, ಇವರು ಕೇವಲ ಹಣಕ್ಕಾಗಿ ಮಾತ್ರ ಆಟೋ ಓಡಿಸುತ್ತಿಲ್ಲ.&lt;/p&gt;&lt;h2&gt;&lt;strong&gt;ಗರ್ಭಿಣಿಯರು, ರೋಗಿಗಳು, ಒಬ್ಬಂಟಿ ಮಹಿಳೆಯರಿಂದ ದುಡ್ಡು ಕೇಳಲ್ಲ&lt;/strong&gt;&lt;/h2&gt;&lt;p&gt;ನಗರಗಳಲ್ಲಿ ಹಗಲಿನಲ್ಲಿ ವಾಹನಗಳು ಸುಲಭವಾಗಿ ಸಿಗುತ್ತವೆ. ಆದರೆ ಅರ್ಧರಾತ್ರಿಯ ಸಮಯದಲ್ಲಿ ಮಹಿಳೆಯರು, ಮಕ್ಕಳು ಅಥವಾ ವೃದ್ಧರಿಗೆ ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ಆಸ್ಪತ್ರೆಗೆ ಹೋಗಲು ವಾಹನ ಸಿಗದೆ ಪರದಾಡುತ್ತಾರೆ. ಈ ಕಷ್ಟವನ್ನು ಅರ್ಥಮಾಡಿಕೊಂಡಿರುವ ಈ ಮಹಿಳಾ ಆಟೋ ಚಾಲಕಿ, ರಾತ್ರಿ 3 ಗಂಟೆಯಾದರೂ ಸರಿ, ಯಾರಾದರೂ ಆಪತ್ತಿನಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕರೆ ತಕ್ಷಣ ಅಲ್ಲಿಗೆ ಧಾವಿಸುತ್ತಾರೆ. ವಿಶೇಷವೆಂದರೆ, ಆಸ್ಪತ್ರೆಗೆ ಹೋಗಬೇಕಾದ ಗರ್ಭಿಣಿಯರು, ರೋಗಿಗಳು ಅಥವಾ ಒಬ್ಬಂಟಿ ಮಹಿಳೆಯರಿಂದ ಈಕೆ ಒಂದು ರೂಪಾಯಿಯನ್ನೂ ಪಡೆಯದೆ ಉಚಿತವಾಗಿ ಸೇವೆಯನ್ನು ಒದಗಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹಣ ಪಡೆಯಲು ನಿರಾಕರಣೆ&lt;/strong&gt;&lt;/h2&gt;&lt;p&gt;&quot;ಕೇವಲ ಹಣ ಸಂಪಾದಿಸುವುದಷ್ಟೇ ನನ್ನ ಗುರಿಯಲ್ಲ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಮಹಿಳೆಯರಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುವುದು ನನ್ನ ಜೀವನದ ಉದ್ದೇಶ&quot; ಎಂದು ಈ ಧೀರೆ ಹೆಮ್ಮೆಯಿಂದ ಹೇಳುತ್ತಾರೆ. ಎಷ್ಟೋ ಬಾರಿ ಪ್ರಯಾಣಿಕರು ಹಣ ಕೊಡಲು ಮುಂದಾದರೂ, ತುರ್ತು ಪರಿಸ್ಥಿತಿಯಲ್ಲಿದ್ದವರಿಂದ ಹಣ ಪಡೆಯಲು ಈಕೆ ನಿರಾಕರಿಸುತ್ತಾರೆ.&lt;/p&gt;&lt;h2&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆ&lt;/strong&gt;&lt;/h2&gt;&lt;p&gt;ಸನ್ಯಮ್ ಗಾರ್ಗ್ ಅವರು ಹಂಚಿಕೊಂಡ ಈ ವಿಡಿಯೋ ಇಂಟರ್ನೆಟ್&zwnj;ನಲ್ಲಿ ಸಖತ್ ವೈರಲ್ ಆಗಿದೆ. ಲಕ್ಷಾಂತರ ಜನರು ಈ ಮಹಿಳೆಯ ಸೇವಾ ಮನೋಭಾವಕ್ಕೆ ಮಾರುಹೋಗಿದ್ದಾರೆ. &quot;ಇಂದಿನ ಸ್ವಾರ್ಥಿ ಜಗತ್ತಿನಲ್ಲಿ ಇಂತಹವರು ದೇವರಿಗಿಂತ ಕಡಿಮೆ ಇಲ್ಲ&quot; ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ವಡೋದರಾದ ಈ ಮಹಿಳೆ ನೂರಾರು ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.&lt;/p&gt;&lt;p&gt;&lt;strong&gt;ಇಲ್ಲಿದೆ ನೋಡಿ ವಿಡಿಯೋ&amp;nbsp;&lt;/strong&gt;&lt;/p&gt;View this post on Instagram&lt;p&gt;A post shared by Sanyam Garg | Online Coach (@sanyam_shiftstrong)&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/hats-off-to-the-brave-woman-driving-an-auto-at-3-am-for-a-heroic-reason/articleshow-n75wm0n"/>
        </item>
        <item>
            <title><![CDATA[ಬಿಸಿನೆಸ್ ಶುರು ಮಾಡೋ ಮುನ್ನ ಮರೆಯದೇ ಇದೊಂದು ಕೆಲಸ ಮಾಡಿ..! ಯುವ ಉದ್ಯಮಿಯ ಕಿವಿಮಾತು ವೈರಲ್..!]]></title>
            <link>https://kannada.asianetnews.com/business/want-to-start-a-business-entrepreneur-akash-singh-shares-one-important-piece-of-advice-kvn/articleshow-fspmohn</link>
            <guid isPermaLink="true">https://kannada.asianetnews.com/business/want-to-start-a-business-entrepreneur-akash-singh-shares-one-important-piece-of-advice-kvn/articleshow-fspmohn</guid>
            <pubDate>Sat, 08 Aug 2026 18:21:25 +0530</pubDate>
            <description><![CDATA[ಲಕ್ನೋ ಮೂಲದ ಉದ್ಯಮಿ ಆಕಾಶ್ ಸಿಂಗ್, ಸ್ವಂತ ಬಿಸಿನೆಸ್ ಆರಂಭಿಸುವ ಮುನ್ನ ಉದ್ಯೋಗ ಮಾಡಿ ವೃತ್ತಿಪರ ಅನುಭವ ಗಳಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಕಚೇರಿ ವಾತಾವರಣದಲ್ಲಿ ಕೆಲಸ ಮಾಡುವುದರಿಂದ ಸಿಗುವ ಪ್ರಾಯೋಗಿಕ ಜ್ಞಾನವು, ಬಿಸಿನೆಸ್ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು ಸಹಾಯ ಮಾಡುತ್ತದೆ ಎಂಬುದು ಅವರ ಅಭಿಪ್ರಾಯ.]]></description>
            <media:content url="https://static.asianetnews.com/images/w-1280,h-720,format-jpg,imgid-01kxwr4ytmdnyap2mc33gat711,imgname-----------------------2026-07-19t135557.459-1784450022228.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ವಂತ ಬಿಸಿನೆಸ್ ಶುರು ಮಾಡಬೇಕು ಅಂತ ಕನಸು ಕಾಣೋರಿಗೆ ಇಲ್ಲೊಬ್ಬರು ಉದ್ಯಮಿ ಸೂಪರ್ ಸಲಹೆ ಕೊಟ್ಟಿದ್ದಾರೆ. ಲಕ್ನೋ ಮೂಲದ ರಿಯಲ್ ಎಸ್ಟೇಟ್ ಮತ್ತು ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಸಂಸ್ಥಾಪಕ ಆಕಾಶ್ ಸಿಂಗ್ ಈ ಕಿವಿಮಾತು ಹೇಳಿದ್ದಾರೆ. ಸ್ವಂತ ಉದ್ಯಮ ಆರಂಭಿಸುವ ಮೊದಲು, ಒಂದು ಸಾಮಾನ್ಯ ಕೆಲಸ ಮಾಡಿ ವೃತ್ತಿಪರ ಅನುಭವ ಗಳಿಸಬೇಕು ಅನ್ನೋದು ಅವರ ಅಭಿಪ್ರಾಯ. ಯಾಕಂದ್ರೆ, ಆಫೀಸ್ ವಾತಾವರಣದಲ್ಲಿ ಕೆಲಸ ಮಾಡಿದ್ರೆ ಸಿಗೋ ಪ್ರಾಕ್ಟಿಕಲ್ ಜ್ಞಾನ, ಸುಮ್ಮನೆ ಬಿಸಿನೆಸ್ ಬಗ್ಗೆ ಕನಸು ಕಾಣುವಾಗ ಸಿಗಲ್ಲ ಅಂತ ಆಕಾಶ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೊದಲು ಕೆಲಸಕ್ಕೆ ಸೇರಿ ವರ್ಕ್ ಕಲ್ಚರ್ ತಿಳಿಯಿರಿ&lt;/strong&gt;&lt;/h2&gt;&lt;p&gt;'ಮೊದಲು ಎಲ್ಲರೂ ಒಂದು ಕೆಲಸಕ್ಕೆ ಸೇರಿ ವರ್ಕ್ ಕಲ್ಚರ್ ಅಂದ್ರೆ ಏನು, ಈ ಜಗತ್ತು ಹೇಗೆ ಕೆಲಸ ಮಾಡುತ್ತೆ, ಜನ ಹೇಗೆ ಹಣ ಸಂಪಾದಿಸುತ್ತಾರೆ ಅನ್ನೋದನ್ನ ನೋಡಿ ಕಲಿಬೇಕು. ಒಂದು ಕಾಲದಲ್ಲಿ ನನಗೂ ತುಂಬಾ ಐಡಿಯಾಗಳಿದ್ದವು. ಆದರೆ, ಕೆಲಸ ಮಾಡಲು ಶುರು ಮಾಡಿದ ಮೇಲೆಯೇ, ವಿಷಯಗಳನ್ನು ನಿಜವಾಗಿ ಹೇಗೆ ಕಾರ್ಯಗತಗೊಳಿಸಲಾಗುತ್ತೆ ಅನ್ನೋದು ನನಗೆ ಅರ್ಥವಾಗಿದ್ದು, ಅದರ ಬಗ್ಗೆ ಜ್ಞಾನ ಬಂದಿದ್ದು' ಅಂತ ಆಕಾಶ್ ಸಿಂಗ್ ವಿಡಿಯೋದಲ್ಲಿ ಹೇಳಿದ್ದಾರೆ.&lt;/p&gt;&lt;p&gt;ಬೇರೆಯವರ ಕೈಕೆಳಗೆ ಕೆಲಸ ಮಾಡುವುದರಿಂದ, ಪ್ರಾಜೆಕ್ಟ್&zwnj;ಗಳನ್ನು ನಿಜ ಜೀವನದಲ್ಲಿ ಹೇಗೆ ಕಾರ್ಯಗತಗೊಳಿಸಬಹುದು ಅನ್ನೋದರ ಬಗ್ಗೆ ಪ್ರಮುಖ ಒಳನೋಟಗಳು ಸಿಗುತ್ತವೆ ಅಂತಾನೂ ಅವರು ಹೇಳಿದ್ದಾರೆ. ಬಿಸಿನೆಸ್ ಶುರು ಮಾಡೋ ಮುನ್ನ ಹೊರಗೆ ಹೋಗಿ ಜಗತ್ತು ಹೇಗೆ ಕೆಲಸ ಮಾಡುತ್ತೆ ಅಂತ ನೋಡಿದ್ರೆ, ಐಡಿಯಾಗಳನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ ತಾನಾಗಿಯೇ ಬರುತ್ತೆ ಅನ್ನೋದು ಅವರ ಮಾತು.&lt;/p&gt;&lt;h3&gt;&lt;strong&gt;ಯುವ ಉದ್ಯಮಿಯ ಮಾತು ವೈರಲ್&lt;/strong&gt;&lt;/h3&gt;&lt;p&gt;Instagram ನಲ್ಲಿ ಶೇರ್ ಮಾಡಲಾದ ಈ ವಿಡಿಯೋವನ್ನು ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬರು, 'ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ನಾನು ಇಂದು ಎರಡು ಕಂಪನಿಗಳನ್ನು ನಡೆಸುತ್ತಿದ್ದೇನೆ, ಆದರೆ ಎರಡು ವರ್ಷ ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವದೊಂದಿಗೆ ಬಿಸಿನೆಸ್&zwnj;ಗೆ ಇಳಿದಿದ್ದೆ' ಎಂದು ಬರೆದಿದ್ದಾರೆ.&lt;/p&gt;View this post on Instagram&lt;p&gt;A post shared by Akash singh (@akashsingh_5000)&lt;/p&gt;&lt;p&gt;&lt;/p&gt;&lt;p&gt;ಇನ್ನೊಬ್ಬರು, 'ನಿಮ್ಮ ಮಾತಿನ ಅರ್ಥ ನನಗೆ ಗೊತ್ತಾಯ್ತು. ಆದರೆ ಕೆಲವೊಮ್ಮೆ ಒಂದೇ ಕೆಲಸದಲ್ಲಿ ಉಳಿದುಕೊಂಡರೆ, ಜನರು ಅದನ್ನೇ ಸೇಫ್ ಝೋನ್ ಅಂದುಕೊಂಡು ಅಲ್ಲೇ ಉಳಿದುಬಿಡುವ ಅಪಾಯವೂ ಇದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಮತ್ತೋರ್ವ ನೆಟ್ಟಿಗರು, ನೀವೆಷ್ಟೇ ಶಿಕ್ಷಣ ಪಡೆದರೂ, ನಿಮಗೆ ಒಪ್ಪುವ ಕನಸಿನ ಕೆಲಸ ಸಿಗಲಿಲ್ಲ ಎಂದಾದರೇ, ಯಾವುದೇ ಹಿಂಜರಿಕೆಯಿಲ್ಲದೇ ಸಣ್ಣದೋ ದೊಡ್ಡದೋ ನಿಮ್ಮಿಷ್ಟದ ಕೆಲಸ ಮಾಡಿ. ಅಲ್ಲಿಂದ ಕಲಿತು ಒಂದೊಂದೇ ಹೆಜ್ಜೆಯಿಡುತ್ತಾ ಯಶಸ್ಸಿನ ಶಿಖರವೇರಬಹುದು ಎಂದು ಕಮೆಂಟ್ ಮಾಡಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/business/want-to-start-a-business-entrepreneur-akash-singh-shares-one-important-piece-of-advice-kvn/articleshow-fspmohn"/>
        </item>
        <item>
            <title><![CDATA[ವಿಶ್ವದ ಹಳೆಯ ದೈತ್ಯ ಆಮೆಗೀಗ 195 ವರ್ಷ: ಪ್ರಧಾನಿ ಮೋದಿಗೂ ಇದೆ ಕುತೂಹಲ ಲಿಂಕ್​- ಏನಿದು ವಿಷ್ಯ]]></title>
            <link>https://kannada.asianetnews.com/gallery/life/worlds-oldest-known-tortoise-still-alive-as-reports-of-death-revealed-as-hoax-suc-2b3ptwd</link>
            <guid isPermaLink="true">https://kannada.asianetnews.com/gallery/life/worlds-oldest-known-tortoise-still-alive-as-reports-of-death-revealed-as-hoax-suc-2b3ptwd</guid>
            <pubDate>Sat, 08 Aug 2026 17:54:38 +0530</pubDate>
            <description><![CDATA[&lt;p&gt;ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎನಿಸಿರುವ ಜೊನಾಥನ್ ಆಮೆಗೆ ಸುಮಾರು 195 ವರ್ಷ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸೀಶೆಲ್ಸ್ ಪ್ರವಾಸದ ವೇಳೆ ಇಂತಹದ್ದೇ ಆಮೆಯೊಂದನ್ನು ಭೇಟಿಯಾಗಿ ಆಹಾರ ನೀಡಿದ್ದರು. ಈ ಮೂಲಕ ವಿಶ್ವದ ಹಿರಿಯ ಆಮೆ ಮತ್ತು ಭಾರತದ ಪ್ರಧಾನಿ ನಡುವೆ ವಿಶೇಷ ನಂಟು ಬೆಸೆದುಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgmsp9wrfa2ye4nm335b9p4,imgname-tortise-1786191337788.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎನಿಸಿರುವ ಜೊನಾಥನ್ ಆಮೆಗೆ ಸುಮಾರು 195 ವರ್ಷ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸೀಶೆಲ್ಸ್ ಪ್ರವಾಸದ ವೇಳೆ ಇಂತಹದ್ದೇ ಆಮೆಯೊಂದನ್ನು ಭೇಟಿಯಾಗಿ ಆಹಾರ ನೀಡಿದ್ದರು. ಈ ಮೂಲಕ ವಿಶ್ವದ ಹಿರಿಯ ಆಮೆ ಮತ್ತು ಭಾರತದ ಪ್ರಧಾನಿ ನಡುವೆ ವಿಶೇಷ ನಂಟು ಬೆಸೆದುಕೊಂಡಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಆಮೆಗಳು 80 ರಿಂದ ಅಬ್ಬಬ್ಬಾ ಎಂದರೆ 150 ವರ್ಷಗಳು ಬದುಕುತ್ತವೆ. ಆದರೆ ವಿಶ್ವದ ಅತ್ಯಂತ ಹಿರಿಯ ಆಮೆಗೆ ಈಗ 195 ವರ್ಷ ವಯಸ್ಸಾಗಿದ್ದು, ಇದಿನ್ನೂ ಜೀವಂತವಾಗಿದೆ. ಕುತೂಹಲದ ವಿಷಯ ಏನೆಂದರೆ, ಈ ಆಮೆಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಒಂದು ಲಿಂಕ್​ ಇದೆ.&lt;/p&gt;&lt;img&gt;&lt;p&gt;ಹೌದು. ಈ ಆಮೆಯ ಹೆಸರು. ಜೊನಾಥನ್ (Jonathan). ಇದನ್ನು ವಿಶ್ವದ ಅತ್ಯಂತ ಹಳೆಯ ಜೀವಂತ ಭೂಪ್ರಾಣಿ ಎಂದು ಪರಿಗಣಿಸಲ್ಪಟ್ಟಿರುವ ದೈತ್ಯ ಆಮೆಯಾಗಿದೆ. 1832ರಲ್ಲಿ ಜನಿಸಿದೆ ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ಇದರ ವಯಸ್ಸು ಸುಮಾರು 195 ವರ್ಷಗಳು. ಇದು ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಸೇಂಟ್ ಹೆಲೆನಾ ದ್ವೀಪದ ಗವರ್ನರ್ ಅಧಿಕೃತ ನಿವಾಸದಲ್ಲಿ ವಾಸಿಸುತ್ತಿದೆ.&lt;/p&gt;&lt;img&gt;&lt;p&gt;ಇದನ್ನು ಕೆಲ ತಿಂಗಳ ಹಿಂದೆ ಸೀಶೆಲ್ಸ್&zwnj; ಪ್ರವಾಸದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿದ್ದರು. ಅಲ್ಲಿನ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಜತೆ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದರು. ಆಮೆಗೆ ಆಹಾರ ನೀಡಿದ್ದರು. ಇದೇ ವೇಳೆ ಭೇಟಿಯ ನೆನಪಿಗಾಗಿ ಸಸಿಯೊಂದನ್ನು ನೆಟ್ಟಿದ್ದರು.&lt;/p&gt;&lt;img&gt;&lt;p&gt;ಭಾರತ ಮತ್ತು ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಶೆಲ್ಸ್&zwnj; ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದರು. ಈ ವೇಳೆ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಜೋನಾಥನ್&zwnj; ಆಮೆ ಭೇಟಿ ಮಾಡಿ ಗಮನ ಸೆಳೆದಿದ್ದರು.&lt;/p&gt;&lt;img&gt;&lt;p&gt;ಈ ಆಮೆಯ ವಿಶೇಷತೆ ಎಂದರೆ ಇದನ್ನು 1882ರಲ್ಲಿ ಸೀಶೆಲ್ಸ್&zwnj;ನಿಂದ ಸೇಂಟ್ ಹೆಲೆನಾ ದ್ವೀಪಕ್ಕೆ ತರಲಾಯಿತು. ಆ ಹೊತ್ತಿಗೆ ಅದಕ್ಕೆ ಸುಮಾರು 50 ವರ್ಷ ವಯಸ್ಸಾಗಿತ್ತು. ಇದು ಬ್ರಿಟಿಷ್ ಸಾಮ್ರಾಜ್ಯದ ಅನೇಕ ರಾಜಮನೆತನದವರನ್ನು ಮತ್ತು ಪ್ರಮುಖ ವ್ಯಕ್ತಿಗಳನ್ನು ಕಂಡಿದೆ. ವಯಸ್ಸಾಗಿದ್ದರೂ ಇದು ಈಗಲೂ ಆರೋಗ್ಯವಾಗಿದ್ದು, ಹುಲ್ಲು ತಿನ್ನುವುದು ಮತ್ತು ಬಿಸಿಲಿನಲ್ಲಿ ಓಡಾಡುವುದನ್ನು ಆನಂದಿಸುತ್ತದೆ.&lt;/p&gt;&lt;img&gt;&lt;p&gt;ಈ ಹಿಂದೆ ಜೊನಾಥನ್&zwnj; ಆಮೆಯನ್ನು ಪಶುವೈದ್ಯ ಜೋ ಹಾಲಿನ್ಸ್&zwnj; ಅವರು ನೋಡಿಕೊಳ್ಳುತ್ತಿದ್ದರು. ಅವರ ಖಾತೆಯಿಂದ ಕಳೆದ ವರ್ಷ ಈ ಆಮೆ ಸಾವನ್ನಪ್ಪಿದೆ ಎನ್ನುವ ಸುದ್ದಿ ಸದ್ದು ಮಾಡಿದ್ದು, ಭಾರಿ ಕೋಲಾಹಲಕ್ಕೂ ಕಾರಣವಾಗಿತ್ತು. ಈ ವರದಿಯನ್ನು BBC, USA Today ಮತ್ತು Daily Mail ಸೇರಿದಂತೆ ಮಾಧ್ಯಮಗಳಲ್ಲಿ ಪ್ರಸಾರ ಕೂಡ ಆಗಿಬಿಟ್ಟಿತ್ತು. ಕೊನೆಗೆ ಹಾಲಿನ್ಸ್​ ಅವರು, ಇದು ಸುಳ್ಳು ಸುದ್ದಿ. ಆಮೆ ಜೀವಂತವಾಗಿದೆ, ಯಾರೋ ಕಿಡಿಗೇಡಿಗಳು ಈ ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದಿದ್ದರು.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/worlds-oldest-known-tortoise-still-alive-as-reports-of-death-revealed-as-hoax-suc-2b3ptwd"/>
        </item>
        <item>
            <title><![CDATA[ನೋಡಿದ್ರೆ ಫಿದಾ ಆಗ್ತೀರಾ, ಅದ್ಭುತ ವಿನ್ಯಾಸದ ಪಟಿಯಾಲಾ ಸೂಟ್ಸ್‌ ಇಲ್ಲಿವೆ!]]></title>
            <link>https://kannada.asianetnews.com/webstories/fashion/trending-patiala-suit-designs-for-every-occasion-must-try-once-kvn-wemlhbk</link>
            <guid isPermaLink="true">https://kannada.asianetnews.com/webstories/fashion/trending-patiala-suit-designs-for-every-occasion-must-try-once-kvn-wemlhbk</guid>
            <pubDate>Sat, 08 Aug 2026 17:45:21 +0530</pubDate>
            <description><![CDATA[ಸೌಂದರ್ಯ, ಆರಾಮ ಹಾಗೂ ಟ್ರೆಂಡಿ ಲುಕ್ ಬಯಸೋರಿಗೆ ಪಟಿಯಾಲಾ ಸೂಟ್ಸ್ ಬೆಸ್ಟ್ ಆಯ್ಕೆ. ಇಲ್ಲಿ ಲೇಟೆಸ್ಟ್ ಡಿಸೈನ್&zwnj;ನ ಪಟಿಯಾಲಾ ಸೂಟ್&zwnj;ಗಳಿವೆ. ಇವು ಪ್ರತಿಯೊಂದು ಸಂದರ್ಭಕ್ಕೂ ಸೂಕ್ತವಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jrfh7sj33367k8qwsx6g4bvm,imgname-insta-2-1744278120003.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/trending-patiala-suit-designs-for-every-occasion-must-try-once-kvn-wemlhbk"/>
        </item>
        <item>
            <title><![CDATA[How To Find Snakes: ನಿಮ್ಮ ಮನೆ ಬಳಿ ಹಾವು ಓಡಾಡುತ್ತಿದೆ ಅಂತ ಗುರುತಿಸೋದು ಹೇಗೆ? ಇಲ್ಲಿದೆ ನೋಡಿ 6 ಮುನ್ಸೂಚನೆಗಳು!]]></title>
            <link>https://kannada.asianetnews.com/life/if-snakes-are-moving-around-your-home-certain-signs-will-appear-experts-warns-sns/articleshow-ragmfh6</link>
            <guid isPermaLink="true">https://kannada.asianetnews.com/life/if-snakes-are-moving-around-your-home-certain-signs-will-appear-experts-warns-sns/articleshow-ragmfh6</guid>
            <pubDate>Sat, 08 Aug 2026 17:40:45 +0530</pubDate>
            <description><![CDATA[&lt;p&gt;ನಿಮ್ಮ ಮನೆಯ ಬಳಿ ಹಾವುಗಳು ಓಡಾಡುತ್ತಿದ್ದರೆ ಈ ಲಕ್ಷಣಗಳು ಕಂಡು ಬರುತ್ತದೆ. ಈ ಆರು ಲಕ್ಷಣಗಳಲ್ಲಿ ಒಂದು ಸಿಗ್ನಲ್ ನಿಮ್ಮ ಗಮನಕ್ಕೆ ಬಂದರೂ ನೀವು ಎಚ್ಚರಿಕೆಯಿಂದ ಇರೋದು ಉತ್ತಮ ಅಂತ ತಜ್ಞರು ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgmacch1682s9e6sxpd1hnn,imgname-snake-near-home-1786190836113.jpg" type="image/jpeg" height="390" width="690"/>
            <content:encoded><![CDATA[&lt;p&gt;ತೀವ್ರವಾದ ವಾತಾವರಣದಿಂದ ತಪ್ಪಿಸಿಕೊಡು ಸುರಕ್ಷಿತವಾಗಿರಲು ಹಾವುಗಳು ಮನುಷ್ಯರು ವಾಸಿಸುವ ಪ್ರದೇಶಗಳತ್ತಾ ಮುಖ ಮಾಡುತ್ತವೆ. ಹಾವುಗಳಿಗೆ ತಣ್ಣನೆಯ ಹಾಗೂ ಬೆಚ್ಚಗಿನ, ಕತ್ತಲಿನ ಹಾಗೂ ಪ್ರಶಾಂತ ವಾತಾವರಣಗಳು ಸುರಕ್ಷಿತ ಎನಿಸುತ್ತವೆ. ಈ ಕಾರಣದಿಂದಲೇ ಮನೆಯ ಬೆಸ್ಮೆಂಟ್, ಗ್ಯಾರೇಜ್, ಗಾರ್ಡನ್ ಅಥವಾ ಸ್ಟೋರ್ ರೂಮ್ ಗಳಲ್ಲಿ ಬಂದು ಸೇರಿಕೊಳ್ಳುತ್ತದೆ. ಆದರೆ ನಿಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾವುಗಳ ಸಂಚಾರ ಇದೆಯಾ ಅಂತ ತಿಳಿದುಕೊಳ್ಳುವುದು ಬಹಳಮುಖ್ಯವಾಗುತ್ತದೆ. ಕೆಲವು ಸ್ಪಷ್ಟ ಸೂಚನೆಗಳ ಮೂಲಕ ನೀವು ಹಾವುಗಳ ಇದೆಯಾ ಅಂತ ಕಂಡುಕೊಳ್ಳಬಹುದಾಗಿದೆ.&lt;/p&gt;&lt;h3&gt;ಹಾವಿನ ಪೊರೆ:&lt;/h3&gt;&lt;p&gt;ಹಾವುಗಳ ವಯಸ್ಸು ಹೆಚ್ಚಾಗುವ ಸಂದರ್ಭದಲ್ಲಿ ಅವು ಪೊರೆಯನ್ನು ಕಳಚುತ್ತವೆ. ನಿಮ್ಮ ಮನೆಯ ಸಮೀಪ ಇಂತಹ ಪೊರೆ ಕಂಡು ಬಂದರೆ ಹಾವು ಆ ಪ್ರದೇಶದಲ್ಲಿ ಸಂಚಾರ ಮಾಡುತ್ತಿದೆ ಎಂದು ತಿಳಿದುಕೊಳ್ಳಬಹುದು. ಹಾವಿನ ಪೊರೆ ಬಹುತೇಕ ಸಂದರ್ಭದಲ್ಲಿ ತೆಳ್ಳಗಿನ ಹಾಳೆಯಂತೆ ಇರುತ್ತದೆ. ಸಾಮಾನ್ಯವಾಗಿ ಹಾವುಗಳು ಪೊರೆ ಬಿಟ್ಟ ಪ್ರದೇಶಗಳ ಸುತ್ತಮುತ್ತ ವಾಸಿಸುತ್ತವೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಸಾಕು ಪ್ರಾಣಿಗಳ ವರ್ತನೆ:&lt;/h3&gt;&lt;p&gt;ನಾಯಿಗಳು, ಬೆಕ್ಕುಗಳಿಗೆ ಸೂಕ್ಷ್ಮಗ್ರಹಣ ಸಾಮರ್ಥ್ಯ ಹೆಚ್ಚು. ಬೀದಿನಾಯಿ ಆಗಲಿ ಮನೆಯ ಸಾಕುನಾಯಿ ಆಗಲಿ, ಕತ್ತಲು ಪ್ರದೇಶ, ಬೀಲಗಳು, ಕಲ್ಲಿನ ನಡುವಿನ ಖಾಲಿ ಸ್ಥಳಗಳ ಕಡೆ ನೋಡುತ್ತಾ ಅವರು ಶಬ್ದ ಮಾಡಿದರೆ ನೀವು ಕಂಡಿತ ಅದನ್ನು ಗಮನಿಸಬೇಕು. ಏಕೆಂದರೆ ಅವು ನಮಗಿಂತ ವೇಗವಾಗಿ ಹಾವುಗಳ ಚಲನವಲನವನ್ನು ಗುರುತಿಸುತ್ತವೆ.&lt;/p&gt;&lt;h3&gt;ಇಲಿ, ಕಪ್ಪೆಗಳು ನಾಪತ್ತೆ:&lt;/h3&gt;&lt;p&gt;ಮನೆಯ ಬಳಿ ಅಥವಾ ಗಾರ್ಡನ್ ಪ್ರದೇಶಗಳಲ್ಲಿ ಇಲಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಏಕಾಏಕಿ ಇವು ನಾಪತ್ತೆ ಆಗಿರೋದು ನಿಮ್ಮ ಗಮನಕ್ಕೆ ಬಂದರೆ ಮನೆಯ ಬಳಿ ಹಾವು ಓಡಾಡುತ್ತಿದೆ ಅಂತ ಆರ್ಥ. ಏಕೆಂದರೆ ಸುಲಭವಾಗಿ ಆಹಾರ ಹುಡುಕಿಕೊಂಡು ಹಾವುಗಳು ಇಲಿ ಮತ್ತು ಕಪ್ಪೆಗಳನ್ನು ಸೇವಿಸುತ್ತದೆ.&lt;/p&gt;&lt;h3&gt;S ರೀತಿಯ ಚಲನೆಯ ಗುರುತು:&lt;/h3&gt;&lt;p&gt;ದೂಳು ಅಥವಾ ಮರಳು, ಮಣ್ಣಿನ ಮೇಲೆ ಎಸ್ ಆಕಾರದಲ್ಲಿ ಗುರುತುಗಳು ಕಂಡು ಬಂದರೆ ಗಮನಿಸಬೇಕಾಗುತ್ತದೆ. ಏಕೆಂದರೆ ಇಲಿ ಸೇರಿದಂತೆ ಬೇರೆ ಯಾವುದೇ ಪ್ರಾಣಿ ಸಂಚಾರ ಮಾಡಿದರು ಈ ರೀತಿ ಗುರುತುಗಳು ಕಾಣಿಸಿಕೊಳ್ಳುವುದಿಲ್ಲ. ಅದರಲ್ಲೂ ಪೊದೆಗಳ ಪಕ್ಕ, ಕತ್ತಲ ಕೋಣೆಗಳ ಬಳಿ ಇಂತಹ ಗುರುತು ಬಂದರೆ ಎಚ್ಚರಿಕೆ ವಹಿಸಿ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಪಕ್ಷಿಗಳ ಶಬ್ದ, ರಾತ್ರಿ ವೇಳೆ ಸದ್ದು:&lt;/h3&gt;&lt;p&gt;ಸಣ್ಣ ಜಾತಿಯ ಪಕ್ಷಿಗಳು ಹಾವುಗಳನ್ನು ನೋಡಿದ ಕೂಡಲೇ ತಮ್ಮ ರಕ್ಷಣೆಗಾಗಿ ಗುಂಪು ಕಟ್ಟಿಕೊಂಡು ಶಬ್ದ ಮಾಡಲು ಪ್ರಾರಂಭ ಮಾಡುತ್ತವೆ. ಇಂತಹ ಶಬ್ದಗಳು ನಿಮ್ಮ ಮನೆಯ ಬಳಿ ಕೇಳಿದರೆ ಆ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿ. ರಾತ್ರಿ ವೇಳೆ ಗೋಡೆ, ಫ್ಲೋರ್ ಬೋರ್ಡ್ ಗಳ ಬಳಿ ಶಬ್ದ ಕೇಳಿದರೆ ಹಾವಿನ ಸಂಚಾರ ಇದೆಯೇ ಅಂತ ಖಚಿತಪಡಿಸಿಕೊಳ್ಳಬೇಕು.&lt;/p&gt;&lt;h2&gt;ಹಾವು ಮನೆಗೆ ಬಂದರೆ ಏನು ಮಾಡಬೇಕು?&lt;/h2&gt;&lt;p&gt;ನಿಮ್ಮ ಮನೆಯ ಬಳಿ ಹಾವು ಇರುವ ಸಂದೇಹ ಎದುರಾದರೆ, ಕೂಡಲೇ ಅದನ್ನು ರಕ್ಷಣೆ ಮಾಡಿ ಸೂಕ್ತ ಸ್ಥಳದಲ್ಲಿ ಬಿಡುಗಡೆಗೆ ಮಾಡುವ ಕ್ರಮಕೈಗೊಳ್ಳಬೇಕು. ಹಾವುಗಳ ಸೆರೆ ವಿಶೇಷ ಸ್ನೇಕ್ ಟ್ರಾಪ್ಸ್ ಬಳಕೆ ಮಾಡಬಹುದು. ಹಾವು ಈ ಟ್ರಾಪ್ ಗಳಿಗೆ ಸಿಕ್ಕಿಬಿದ್ದರೆ ಕೂಡಲೇ ಅವುಗಳನ್ನು ಕಾಡು ಪ್ರದೇಶಗಳಲ್ಲಿ ಬಿಡುವ ಕೆಲಸ ಮಾಡಬೇಕು.&lt;/p&gt;&lt;p&gt;ಹಾವುಗಳು ಕಂಡರೆ ಬಹುತೇಕ ಮಂದಿಗೆ ಭಯ ಇರುವುದಿರಂದ ಅವುಗಳ ರಕ್ಷಣೆಗೆ ರಕ್ಷಣ್ಯ ಇಲಾಖೆ ಸಿಬ್ಬಂದಿ ಅಥವಾ ಹಾವುಗಳ ರಕ್ಷಣೆಯನ್ನು ಮಾಡುವ ಸ್ವಯಃ ಸೇವಕರ ನೆರವು ಪಡೆದುಕೊಳ್ಳಬಹುದು. ಮನೆಯ ಬಳಿ ಯಾವುದೇ ರೀತಿ ಬೀಲ ಹಾಗೂ ಸಣ್ಣ ಕತ್ತಲಿನ ಪ್ರದೇಶಗಳು ಇರದಂತೆ ಎಚ್ಚರಿಕೆ ವಹಿಸಬೇಕು. ಮನೆಯ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮನೆಯ ಬಳಿ ಕಪ್ಪೆ ಅಥವಾ ಇಲಿ ಇದರಂತೆ ನೋಡಿಕೊಂಡರೆ, ಅವುಗಳನ್ನು ಹಿಡಿದು ತಿನ್ನಲು ಹಾವುಗಳು ಬರುವುದನ್ನು ತಪ್ಪಿಸಬಹುದು.&lt;/p&gt;]]></content:encoded>
            <category>life</category>
            <dc:creator>Sumanth SN</dc:creator>
            <atom:link href="https://kannada.asianetnews.com/life/if-snakes-are-moving-around-your-home-certain-signs-will-appear-experts-warns-sns/articleshow-ragmfh6"/>
        </item>
        <item>
            <title><![CDATA[ಮಳೆಗಾಲದಲ್ಲಿ ಕಿಟಕಿ ಬಳಿ ಸ್ಪೂನ್ ಇಡೋದ್ರಿಂದ ಏನಾಗುತ್ತೇ? 90% ಜನರಿಗೆ ಈ ಸೀಕ್ರೆಟ್ ಟ್ರಿಕ್ ಗೊತ್ತೇ ಇಲ್ಲ]]></title>
            <link>https://kannada.asianetnews.com/gallery/kitchen/can-a-spoon-help-prevent-condensation-on-windows-fg1u057</link>
            <guid isPermaLink="true">https://kannada.asianetnews.com/gallery/kitchen/can-a-spoon-help-prevent-condensation-on-windows-fg1u057</guid>
            <pubDate>Sat, 08 Aug 2026 17:40:36 +0530</pubDate>
            <description><![CDATA[&lt;p&gt;ಮಳೆಗಾಲದಲ್ಲಿ, ಕಿಟಕಿ ಗಾಜುಗಳ ಮೇಲೆ ನೀರಿನ ಹನಿಗಳು ಸಂಗ್ರಹವಾಗಿ ಕೋಣೆಯಲ್ಲಿ ತೇವ ಉಂಟಾಗುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ತೊಡೆದುಹಾಕಲು, ಕಿಟಕಿಯ ಮೇಲೆ ಚಮಚವನ್ನು ಇಡುವ ಟ್ರಿಕ್ಸ್ ವ್ಯಾಪಕವಾಗಿ ಚರ್ಚಿಸಲಾಗುತ್ತದೆ. ಇದು ವಿಚಿತ್ರವೆನಿಸಬಹುದು, ಆದರೆ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgkfst81wps3t27cj66tss6,imgname-spoon-near-window-1786189965128.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಳೆಗಾಲದಲ್ಲಿ, ಕಿಟಕಿ ಗಾಜುಗಳ ಮೇಲೆ ನೀರಿನ ಹನಿಗಳು ಸಂಗ್ರಹವಾಗಿ ಕೋಣೆಯಲ್ಲಿ ತೇವ ಉಂಟಾಗುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ತೊಡೆದುಹಾಕಲು, ಕಿಟಕಿಯ ಮೇಲೆ ಚಮಚವನ್ನು ಇಡುವ ಟ್ರಿಕ್ಸ್ ವ್ಯಾಪಕವಾಗಿ ಚರ್ಚಿಸಲಾಗುತ್ತದೆ. ಇದು ವಿಚಿತ್ರವೆನಿಸಬಹುದು, ಆದರೆ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ.&lt;/p&gt;&lt;img&gt;&lt;p&gt;ನಿಮ್ಮ ಮನೆಯ ಕಿಟಕಿಗಳ ಮೇಲೂ ಚಳಿ ಅಥವಾ ಮಳೆಗಾಲದಲ್ಲಿ ನೀರಿನ ಹನಿಗಳು ಜಮೆಯಾಗುತ್ತವೆಯೇ? ಕಿಟಕಿಯ ಗಾಜಿನಿಂದ ಕೆಳಗೆ ಹರಿಯುವ ಈ ನೀರು ಗೋಡೆಗಳನ್ನು ಹಾಳುಮಾಡುವುದರ ಜೊತೆಗೆ ಮನೆಯಲ್ಲಿ ತೇವಾಂಶ, ಫಂಗಸ್ ಮತ್ತು ವಿಚಿತ್ರ ವಾಸನೆ ಉಂಟಾಗಲು ಕಾರಣವಾಗಬಹುದು. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಇತ್ತೀಚೆಗೆ ಒಂದು ಸಿಂಪಲ್ ಟ್ರಿಕ್ ಜನಪ್ರಿಯವಾಗುತ್ತಿದೆ. ಅದೇನೆಂದರೆ, ಕಿಟಕಿಯ ಬಳಿ ಸ್ಟೀಲ್ ಚಮಚವನ್ನು ಇಡುವುದು. 100ರಲ್ಲಿ 90 ಮಂದಿಗೆ ಈ ಸಿಂಪಲ್ ಟ್ರಿಕ್ ನಿಜವಾಗಿಯೂ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿದಿರಲಿಕ್ಕಿಲ್ಲ. ಇದನ್ನ ಹೇಗೆ ಮಾಡೋದು ನೋಡೋಣ.&lt;/p&gt;&lt;img&gt;&lt;p&gt;ಮನೆಯ ಒಳಗಿನ ತಾಪಮಾನವು ಹೊರಗಿನ ತಾಪಮಾನಕ್ಕಿಂತ ಹೆಚ್ಚಾಗಿದ್ದು, ಗಾಳಿಯಲ್ಲಿ ತೇವಾಂಶ ಹೆಚ್ಚಿರುವಾಗ ಈ ಸಮಸ್ಯೆ ಹೆಚ್ಚಾಗುತ್ತದೆ. ಬೆಚ್ಚಗಿನ ಗಾಳಿ ಕಿಟಕಿಯ ತಂಪಾದ ಗಾಜಿಗೆ ತಾಗಿದಾಗ, ಗಾಳಿಯಲ್ಲಿರುವ ನೀರಿನ ಆವಿ ನೀರಿನ ಹನಿಗಳಾಗಿ ಪರಿವರ್ತನೆಯಾಗುತ್ತದೆ. ಈ ಪ್ರಕ್ರಿಯೆಯನ್ನು ವಿಜ್ಞಾನದಲ್ಲಿ ಕಂಡೆನ್ಸೇಶನ್ ಎಂದು ಕರೆಯಲಾಗುತ್ತದೆ. ಕಿಟಕಿಯ ಮೇಲೆ ನಿರಂತರವಾಗಿ ನೀರು ಜಮೆಯಾಗುತ್ತಿದ್ದರೆ, ಅದರ ಚೌಕಟ್ಟು ಹಾಳಾಗಬಹುದು. ಅಲ್ಲದೆ, ಕಿಟಕಿಯ ಸುತ್ತಲಿನ ಗೋಡೆಗಳಲ್ಲಿ ತೇವಾಂಶ ಉಂಟಾಗಿ ಕ್ರಮೇಣ ಫಂಗಸ್ ಬೆಳೆಯುವ ಸಾಧ್ಯತೆಯೂ ಇರುತ್ತದೆ.&lt;/p&gt;&lt;img&gt;&lt;p&gt;ಈ ಉಪಾಯವನ್ನು ಪ್ರಯತ್ನಿಸಲು ಯಾವುದೇ ದುಬಾರಿ ಸಾಧನದ ಅಗತ್ಯವಿಲ್ಲ. ನಿಮಗೆ ಸ್ಟೇನ್&zwnj;ಲೆಸ್ ಸ್ಟೀಲ್ ಅಥವಾ ಬೇರೆ ಯಾವುದೇ ಸ್ಟೀಲ್ ಚಮಚ ಸಾಕು. ಚಮಚವನ್ನು ಕಿಟಕಿಯ ಫ್ರೇಮ್ ಅಥವಾ ಕಿಟಕಿಯ ಸೈಡಲ್ಲಿ ಇಡಬಹುದು. ಚಮಚವನ್ನು ಕಿಟಕಿಯ ಗಾಜಿನ ಸಮೀಪ ಇರಿಸುವಂತೆ ನೋಡಿಕೊಳ್ಳಿ. ಚಮಚದ ಹ್ಯಾಂಡಲ್ ಮನೆಯ ಒಳಭಾಗದ ಕಡೆಗೆ ಮತ್ತು ಚಮಚದ ಬಟ್ಟಲಿನ ಭಾಗ ಕಿಟಕಿಯ ಗಾಜಿನ ಕಡೆಗೆ ಇರುವಂತೆ ಇಡಬೇಕು.&lt;/p&gt;&lt;img&gt;&lt;p&gt;ಈ ವಿಧಾನವು ಲೋಹದ ಉಷ್ಣ ವಾಹಕತೆಯ ಗುಣವನ್ನು ಆಧರಿಸಿದೆ. ಕಬ್ಬಿಣ, ಸ್ಟೀಲ್ ಅಥವಾ ಅಲ್ಯೂಮಿನಿಯಂನಂತಹ ಲೋಹಗಳು ತಾಪಮಾನವನ್ನು ಗಾಜಿಗಿಂತ ವೇಗವಾಗಿ ಸ್ವೀಕರಿಸಿ ಕಳೆದುಕೊಳ್ಳುತ್ತವೆ. ಕೋಣೆಯ ಬೆಚ್ಚಗಿನ ಮತ್ತು ತೇವಾಂಶಭರಿತ ಗಾಳಿಯಿಂದಾಗಿ ಕಿಟಕಿಯ ಮೇಲೆ ಆವಿ ನೀರು ಹರಿಯಬಹುದು. ಆದರೆ ಚಮಚವನ್ನು ಕಿಟಕಿ ಬಳಿ ಇಡುವುದರಿಂದ, ಗಾಜಿನ ಮೇಲೆ ಜಮೆಯಾಗುವ ತೇವಾಂಶವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ಆದರೆ ಇದು ಹೆಚ್ಚಿನ ಮಟ್ಟದಲ್ಲಿ ಎಫೆಕ್ಟಿವ್ ಆಗಿರುವುದಿಲ್ಲ&lt;/p&gt;&lt;img&gt;&lt;ul&gt; &lt;li&gt;ತೇವಾಂಶದ ಒಂದು ಭಾಗ ಚಮಚದ ತಂಪಾದ ಮೇಲ್ಮೈಯಲ್ಲಿ ನೀರಿನ ಹನಿಗಳಾಗಿ ರೂಪುಗೊಳ್ಳಬಹುದು. ಇದರಿಂದ ಗ್ಲಾಸ್ ಮೇಲೆ ಜಮೆಯಾಗುವ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು.&lt;/li&gt; &lt;li&gt;ಗಾಜಿನ ಮೇಲೆ ಜಮೆಯಾದ ನೀರು ಕೆಳಗೆ ಹರಿದು ಮರದ ಚೌಕಟ್ಟು ಅಥವಾ ಪೇಂಟ್&zwnj;ಗೆ ಹಾನಿ ಮಾಡಬಹುದು. ಆದರೆ ಚಮಚ ಇಟ್ಟರೆ, ಈ ಸಮಸ್ಯೆ ಕಡಿಮೆಯಾಗುತ್ತದೆ.&lt;/li&gt; &lt;li&gt;ಕಿಟಕಿಯ ಸುತ್ತಲಿನ ಪ್ರದೇಶದಲ್ಲಿ ನಿರಂತರ ತೇವಾಂಶ ಇರುವುದರಿಂದ ಫಂಗಸ್ ಬೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಚಮಚ ಇಡುವುದರಿಂದ ಅದು ಕಡಿಮೆಯಾಗುತ್ತದೆ.&lt;/li&gt;&lt;/ul&gt;&lt;img&gt;&lt;p&gt;ಮನೆಯಲ್ಲಿ ಅತಿಯಾದ ತೇವಾಂಶ ಇದ್ದರೆ ಫಂಗಸ್ ಮತ್ತು ಇತರ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ಇದರಿಂದ ಮನೆಯ ಕೆಲವು ಭಾಗಗಳಲ್ಲಿ ಮುಚ್ಚಿದ ಅಥವಾ ಕೊಳೆತಂತಹ ವಾಸನೆ ಉಂಟಾಗಬಹುದು. ಕಿಟಕಿಯ ಬಳಿ ಚಮಚವನ್ನು ಇಡುವುದರಿಂದ ಸಣ್ಣಮಟ್ಟಿಗೆ ತೇವಾಂಶ ಮತ್ತು ವಾಸನೆ ತಡೆಯಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ಮನೆಯ ಕಿಟಕಿಯ ಬದಿಯಿಂದ ನೀರು ಲೀಕ್ ಆಗುತ್ತಿದ್ದರೆ ಇದು ಖಂಡಿತವಾಗಿಯೂ ಉಪಯೋಗಕ್ಕೆ ಬರುವುದಿಲ್ಲ. ಅಷ್ಟೇ ಅಲ್ಲ, ಈ ಚಮಚದ ಉಪಾಯ ಹೆಚ್ಚಿನ ಪ್ರಮಾಣದ ತೇವಾಂಶವನ್ನು ಸಹ ನಿಯಂತ್ರಿಸುವುದಿಲ್ಲ. ಸಣ್ಣಮಟ್ಟಿಗೆ ಇದು ಸಹಾಯ ಮಾಡುತ್ತೆ ಅಷ್ಟೇ.&lt;/p&gt;&lt;p&gt;ವಿ.ಸೂ: ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಟ್ರಿಕ್. ಇದನ್ನ ಮಾಡುವುದರಿಂದ ಸಮಸ್ಯೆ ಇಲ್ಲ, ಆದರೆ ಸಂಪೂರ್ಣ ಪರಿಹಾರ ಸಿಗುವ ಸಾಧ್ಯತೆ ಕಡಿಮೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/kitchen/can-a-spoon-help-prevent-condensation-on-windows-fg1u057"/>
        </item>
        <item>
            <title><![CDATA[Gold Necklace: 10 ಗ್ರಾಂ ಚಿನ್ನದಲ್ಲಿ ಸಿಗುವ ಟ್ರೆಂಡಿ ನೆಕ್ಲೇಸ್ ಡಿಸೈನ್ ನೋಡಿ]]></title>
            <link>https://kannada.asianetnews.com/webstories/fashion/stunning-lightweight-trendy-gold-stone-necklace-designs-under-10-grams-must-try-once-kvn-0q57bbq</link>
            <guid isPermaLink="true">https://kannada.asianetnews.com/webstories/fashion/stunning-lightweight-trendy-gold-stone-necklace-designs-under-10-grams-must-try-once-kvn-0q57bbq</guid>
            <pubDate>Sat, 08 Aug 2026 16:59:29 +0530</pubDate>
            <description><![CDATA[&lt;p&gt;ಕಡಿಮೆ ತೂಕದ ನೆಕ್ಲೇಸ್&zwnj; ಬೇಕಾ? ಹಾಗಿದ್ರೆ ಚಿನ್ನ ಕಡಿಮೆ ಇದ್ದು, ಕಲ್ಲುಗಳೇ ಹೆಚ್ಚಾಗಿರುವ ನೆಕ್ಲೇಸ್&zwnj;ಗಳನ್ನು ಆರಿಸಿಕೊಳ್ಳಬೇಕು. ಇವುಗಳು ಸುಮಾರು 10 ಗ್ರಾಂ ಒಳಗೆ ಲಭ್ಯವಿರುತ್ತವೆ. ಆ ಡಿಸೈನ್&zwnj;ಗಳು ಯಾವುವು ಅಂತಾ ನೋಡೋಣ ಬನ್ನಿ...&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg3qtq7eswz8gp99za8gsdg,imgname-whatsapp-image-2026-08-08-at-12.34.12-pm--7--1786173450983.jpeg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/stunning-lightweight-trendy-gold-stone-necklace-designs-under-10-grams-must-try-once-kvn-0q57bbq"/>
        </item>
        <item>
            <title><![CDATA[ಫ್ರಿಜ್‌ನಲ್ಲಿಟ್ಟರೂ ನಿಂಬೆಹಣ್ಣು ಒಣಗುತ್ತಿದ್ಯಾ? ಈ ಸಿಂಪಲ್ ಹ್ಯಾಕ್ ಬಳಸಿ, 14 ದಿನ ಫ್ರೆಶ್ ಆಗಿರುತ್ತೆ!]]></title>
            <link>https://kannada.asianetnews.com/gallery/kitchen/how-to-keep-lemons-fresh-for-14-days-easy-storage-hack-2pu701c</link>
            <guid isPermaLink="true">https://kannada.asianetnews.com/gallery/kitchen/how-to-keep-lemons-fresh-for-14-days-easy-storage-hack-2pu701c</guid>
            <pubDate>Sat, 08 Aug 2026 16:34:59 +0530</pubDate>
            <description><![CDATA[&lt;p&gt;Easy Storage Hack: ನಿಂಬೆಹಣ್ಣುಗಳನ್ನು ರೆಫ್ರಿಜರೇಟರ್&zwnj;ನಲ್ಲಿಟ್ಟರೂ ಬೇಗನೆ ಒಣಗಿದರೆ, ನಿಮ್ಮ ಅದನ್ನು ಸ್ಟೋರ್ ಮಾಡಿಡುವ ವಿಧಾನವನ್ನು ನೀವು ಬದಲಾಯಿಸಬೇಕು. ಈ ಕಿಚನ್ ಟ್ರಿಕ್ಸ್ ನಿಂಬೆಹಣ್ಣುಗಳನ್ನು ತಿಂಗಳುಗಳವರೆಗೆ ತಾಜಾ ಮತ್ತು ರಸಭರಿತವಾಗಿಡಲು ಸಹಾಯ ಮಾಡುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzggmv24kzts88q98ffg0cjz,imgname-lemon-storage-tips-1786186984512.jpg" type="image/jpeg" height="390" width="690"/>
            <content:encoded><![CDATA[&lt;p&gt;Easy Storage Hack: ನಿಂಬೆಹಣ್ಣುಗಳನ್ನು ರೆಫ್ರಿಜರೇಟರ್&zwnj;ನಲ್ಲಿಟ್ಟರೂ ಬೇಗನೆ ಒಣಗಿದರೆ, ನಿಮ್ಮ ಅದನ್ನು ಸ್ಟೋರ್ ಮಾಡಿಡುವ ವಿಧಾನವನ್ನು ನೀವು ಬದಲಾಯಿಸಬೇಕು. ಈ ಕಿಚನ್ ಟ್ರಿಕ್ಸ್ ನಿಂಬೆಹಣ್ಣುಗಳನ್ನು ತಿಂಗಳುಗಳವರೆಗೆ ತಾಜಾ ಮತ್ತು ರಸಭರಿತವಾಗಿಡಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಬಹುತೇಕ ಪ್ರತಿಯೊಂದು ಮನೆಯಲ್ಲೂ ನಿಂಬೆಹಣ್ಣನ್ನು ಬಳಸಲಾಗುತ್ತದೆ. ಕೆಲವರು ನಿಂಬೆಹಣ್ಣಿನಿಂದ ನಿಂಬೆಹಣ್ಣಿನ ಜ್ಯೂಸ್ ತಯಾರಿಸುತ್ತಾರೆ, ಕೆಲವರು ಸಲಾಡ್&zwnj;ಗೆ ಸೇರಿಸುತ್ತಾರೆ, ಇನ್ನು ಕೆಲವರು ಅಡುಗೆಯ ರುಚಿ ಹೆಚ್ಚಿಸಲು ಬಳಸುತ್ತಾರೆ. ಆದರೆ ನಿಂಬೆಹಣ್ಣಿನ ಸಮಸ್ಯೆ ಎಂದರೆ ಕೆಲವೇ ದಿನಗಳಲ್ಲಿ ಅದು ಒಣಗಿ ಗಟ್ಟಿಯಾಗುತ್ತದೆ.&lt;/p&gt;&lt;img&gt;&lt;p&gt;ನಿಂಬೆಹಣ್ಣನ್ನು ಫ್ರಿಜ್&zwnj;ನಲ್ಲಿ ಇಟ್ಟರೆ ತಾಜಾವಾಗಿರುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಸಂಗ್ರಹಿಸದಿದ್ದರೆ ಫ್ರಿಜ್&zwnj;ನಲ್ಲಿದ್ದರೂ ನಿಂಬೆಹಣ್ಣು ರಸ ಕಳೆದುಕೊಂಡು, ಗಟ್ಟಿಯಾಗುತ್ತದೆ. ಹಾಗಾದರೆ ನಿಂಬೆಹಣ್ಣನ್ನು ದೀರ್ಘಕಾಲ, ಅಂದರೆ ಸುಮಾರು 14 ದಿನಗಳವರೆಗೆ ತಾಜಾವಾಗಿಡಲು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ. ಈ ಸುಲಭ ಉಪಾಯಗಳು ನಿಮಗೂ ಉಪಯುಕ್ತವಾಗಬಹುದು.&lt;/p&gt;&lt;img&gt;&lt;p&gt;&lt;strong&gt;ತೆಳುವಾದ ಎಣ್ಣೆಯ ಲೇಪನ&lt;/strong&gt;&lt;/p&gt;&lt;p&gt;ನಿಂಬೆಹಣ್ಣಿನ ಮೇಲ್ಭಾಗಕ್ಕೆ ಎಡಿಬಲ್ ಎಣ್ಣೆಯ ತೆಳುವಾದ ಪದರವನ್ನು ಹಚ್ಚಿ. ಹೆಚ್ಚು ಎಣ್ಣೆ ಹಚ್ಚಬಾರದು ಎಂಬುದು ನೆನಪಿರಲಿ. ಹೀಗೆ ಮಾಡುವುದರಿಂದ ಹೊರಭಾಗದಲ್ಲಿರುವ ಎಣ್ಣೆಯ ಪದರ ನಿಂಬೆಹಣ್ಣಿನ ಒಳಗಿನ ತೇವಾಂಶ ಹೊರಗೆ ಹೋಗದಂತೆ ತಡೆಯುತ್ತದೆ. ಇದರಿಂದ ನಿಂಬೆಹಣ್ಣು ಹೆಚ್ಚು ಕಾಲ ತಾಜಾವಾಗಿರುತ್ತದೆ.&lt;/p&gt;&lt;img&gt;&lt;p&gt;ನಿಂಬೆಹಣ್ಣಿಗೆ ಎಣ್ಣೆಯ ಲೇಪನ ಮಾಡಿದ ನಂತರ ಅವುಗಳನ್ನು ಸ್ವಚ್ಛ ಮತ್ತು ಒಣಗಿದ ಗಾಳಿಯಾಡದ ಡಬ್ಬಿಯಲ್ಲಿ ಇರಿಸಿ. ಇದರಿಂದ ನಿಂಬೆಹಣ್ಣು ನೇರವಾಗಿ ಗಾಳಿಯ ಸಂಪರ್ಕಕ್ಕೆ ಬರುವುದಿಲ್ಲ ಮತ್ತು ಅದರ ತಾಜಾತನ ಉಳಿಯುತ್ತದೆ. ನಿಂಬೆಹಣ್ಣನ್ನು ಸಂಗ್ರಹಿಸುವ ಈ ಸಣ್ಣ ಅಭ್ಯಾಸವೂ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು.&lt;/p&gt;&lt;img&gt;&lt;p&gt;ಈಗ ಗಾಳಿಯಾಡದ ಡಬ್ಬಿಯನ್ನು ಮುಚ್ಚಿ ಫ್ರಿಜ್&zwnj;ನಲ್ಲಿ ಇಡಿ. ಫ್ರಿಜ್&zwnj;ನ ತಂಪಾದ ತಾಪಮಾನ ಮತ್ತು ಡಬ್ಬಿಯ ಕಾರಣದಿಂದ ಗಾಳಿಯ ಸಂಪರ್ಕ ಕಡಿಮೆಯಾಗುವುದರಿಂದ ನಿಂಬೆಹಣ್ಣು ಹೆಚ್ಚು ಕಾಲ ತಾಜಾವಾಗಿರುತ್ತದೆ. ಜೊತೆಗೆ ಅದರ ಮೇಲೆ ಶಿಲೀಂಧ್ರ ಬೆಳೆಯುವುದನ್ನೂ ತಡೆಯಲು ಇದು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಈ ರೀತಿಯಲ್ಲಿ ನಿಂಬೆಹಣ್ಣನ್ನು ಸಂಗ್ರಹಿಸುವುದರಿಂದ ಹಲವು ಪ್ರಯೋಜನಗಳಿವೆ. ಮೊದಲನೆಯದಾಗಿ, ನಿಂಬೆಹಣ್ಣು ಕನಿಷ್ಠ 14 ದಿನಗಳವರೆಗೆ ತಾಜಾ ಮತ್ತು ರಸಭರಿತವಾಗಿರುತ್ತವೆ. ಅವುಗಳ ಮೇಲಿನ ಸಿಪ್ಪೆ ಕೂಡ ಬೇಗನೆ ಸುಕ್ಕುಗಟ್ಟುವುದಿಲ್ಲ. ಇದರಿಂದ ಪದೇಪದೇ ನಿಂಬೆಹಣ್ಣು ಖರೀದಿಸುವ ಅಗತ್ಯ ಇರುವುದಿಲ್ಲ. ಆಹಾರ ವ್ಯರ್ಥವಾಗುವುದನ್ನು ತಡೆಯುವುದರ ಜೊತೆಗೆ ಹಣವನ್ನೂ ಉಳಿಸಬಹುದು.&lt;/p&gt;&lt;img&gt;&lt;ul&gt; &lt;li&gt;ನಿಂಬೆಹಣ್ಣು ಖರೀದಿಸುವಾಗಲೇ ಅವು ತಾಜಾ ಮತ್ತು ಉತ್ತಮ ಗುಣಮಟ್ಟದ್ದಾಗಿವೆಯೇ ಎಂಬುದನ್ನು ಗಮನಿಸಿ.&lt;/li&gt; &lt;li&gt;ಯಾವುದೇ ನಿಂಬೆಹಣ್ಣು ಹಾಳಾಗಿದ್ದರೆ ಅಥವಾ ನೀವು ಯಾವುದಾದರೂ ನಿಂಬೆಹಣ್ಣನ್ನು ಕತ್ತರಿಸಿದ್ದರೆ, ಅದನ್ನು ಉಳಿದ ನಿಂಬೆಹಣ್ಣುಗಳಿಂದ ಪ್ರತ್ಯೇಕವಾಗಿ ಇಡಿ.&lt;/li&gt; &lt;li&gt;ನಿಂಬೆಹಣ್ಣನ್ನು ಸಂಗ್ರಹಿಸುವ ಡಬ್ಬಿಯಲ್ಲಿ ತೇವಾಂಶ ಸಂಗ್ರಹವಾಗದಂತೆ ನೋಡಿಕೊಳ್ಳಿ.&lt;/li&gt;&lt;/ul&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/kitchen/how-to-keep-lemons-fresh-for-14-days-easy-storage-hack-2pu701c"/>
        </item>
        <item>
            <title><![CDATA[ವಾಷಿಂಗ್ ಮಷಿನ್‌ನಲ್ಲಿ ಪ್ಯಾರಸಿಟಮಾಲ್ ಮಾತ್ರೆ ಹಾಕಿದ್ರೆ ಸಾಕು, ಕೊಳೆಯೆಲ್ಲಾ ಹೋಗಿ ಬಟ್ಟೆ ಹೊಸದರಂತೆ ಹೊಳೆಯುತ್ತೆ!]]></title>
            <link>https://kannada.asianetnews.com/life/can-fever-tablets-really-clean-stains-inside-the-bizarre-viral-video/articleshow-5zqld23</link>
            <guid isPermaLink="true">https://kannada.asianetnews.com/life/can-fever-tablets-really-clean-stains-inside-the-bizarre-viral-video/articleshow-5zqld23</guid>
            <pubDate>Sat, 08 Aug 2026 15:30:26 +0530</pubDate>
            <description><![CDATA[&lt;p&gt;&lt;strong&gt;Paracetamol laundry hack:&lt;/strong&gt; ಜ್ವರಕ್ಕೆ ಬಳಸುವ ಪ್ಯಾರಸಿಟಮಾಲ್ ಮಾತ್ರೆ ವಾಷಿಂಗ್ ಮಷಿನ್&zwnj;ನಲ್ಲಿ ಹಾಕಿದ್ರೆ ಬಟ್ಟೆಗಳ ಮೇಲಿನ ಮೊಂಡು ಕಲೆ ಮಾಯವಾಗುತ್ತಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಚಿತ್ರ ಹ್ಯಾಕ್ ಮತ್ತು ಅದರ ಹಿಂದಿನ ಅಸಲಿ ಸತ್ಯ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgd08nrgjrs8szgprgr9zef,imgname-thumbnail---2026-08-08t152850.648-1786183164537.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮ&lt;/strong&gt;ನೆಯಲ್ಲಿ ಬಟ್ಟೆಗಳನ್ನು ಅಥವಾ ವಸ್ತುಗಳನ್ನು ಶುಚಿಗೊಳಿಸಲು ನಾವು ಸಾಮಾನ್ಯವಾಗಿ ಬೇಕಿಂಗ್ ಸೋಡಾ, ನಿಂಬೆರಸ ಅಥವಾ ವಿನೆಗರ್ ಬಳಸುವುದನ್ನು ಕೇಳಿದ್ದೇವೆ. ಆದರೆ ಜ್ವರ ಮತ್ತು ಮೈಕೈ ನೋವಿಗೆ ಬಳಸುವ 'ಪ್ಯಾರಸಿಟಮಾಲ್' (Paracetamol) ಮಾತ್ರೆಗಳನ್ನು ಬಟ್ಟೆ ತೊಳೆಯಲು ಬಳಸಬಹುದು ಎಂದರೆ ನೀವು ನಂಬುತ್ತೀರಾ? ಹೌದು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಇಂತಹದ್ದೊಂದು ವಿಚಿತ್ರ ಪ್ರಯೋಗದ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದೆ.&lt;/p&gt;&lt;h2&gt;&lt;strong&gt;ವೈರಲ್ ವಿಡಿಯೋದಲ್ಲೇನಿದೆ?&lt;/strong&gt;&lt;/h2&gt;&lt;p&gt;ಇನ್&zwnj;ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ತನ್ನ ಮನೆಯ ವಾಷಿಂಗ್ ಮಷಿನ್&zwnj;ನಲ್ಲಿ ಕೊಳಕು ಬಟ್ಟೆಗಳ ಜೊತೆಗೆ ಕೆಲವು ಪ್ಯಾರಸಿಟಮಾಲ್ ಮಾತ್ರೆಗಳನ್ನು ಹಾಕಿ ಮಷಿನ್ ಆನ್ ಮಾಡುತ್ತಾರೆ. ಸ್ವಲ್ಪ ಸಮಯದ ನಂತರ ಬಟ್ಟೆಗಳನ್ನು ಹೊರತೆಗೆದಾಗ, ಅವು ಯಾವುದೇ ಕಲೆಗಳಿಲ್ಲದೆ ಹೊಸದರಂತೆ ಮಿನುಗುತ್ತಿರುತ್ತವೆ.&lt;/p&gt;&lt;p&gt;ಅಷ್ಟೇ ಅಲ್ಲದೆ, ಕಾಲರ್ ಭಾಗದಲ್ಲಿ ಹಳದಿ ಬಣ್ಣದ ಮೊಂಡು ಕಲೆಗಳಿದ್ದ ಬಿಳಿ ಶರ್ಟ್ ಅನ್ನು ನೀರಿನ ಟಬ್&zwnj;ನಲ್ಲಿ ಹಾಕಿ, ಅದಕ್ಕೆ ಪ್ಯಾರಸಿಟಮಾಲ್ ಮಾತ್ರೆಗಳನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ಆ ಶರ್ಟ್ ಅನ್ನು ನೋಡಿದಾಗ, ಕಾಲರ್ ಮೇಲಿದ್ದ ಹಳದಿ ಕಲೆಗಳು ಸಂಪೂರ್ಣವಾಗಿ ಮಾಯವಾಗಿ ಶರ್ಟ್ ಅಚ್ಚ ಬಿಳಿ ಬಣ್ಣಕ್ಕೆ ತಿರುಗಿರುತ್ತದೆ. ಈ ವಿಡಿಯೋ @acharyaveda_ ಎಂಬ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದಾರೆ.&lt;/p&gt;&lt;h2&gt;&lt;strong&gt;ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?&lt;/strong&gt;&lt;/h2&gt;&lt;p&gt;ಈ ವಿಡಿಯೋ ಕಂಡು ನೆಟ್ಟಿಗರು ಎರಡು ಗುಂಪುಗಳಾಗಿ ಚರ್ಚಿಸುತ್ತಿದ್ದಾರೆ. ಕೆಲವರು ಇದೊಂದು ಅದ್ಭುತ 'ಮ್ಯಾಜಿಕ್' ಮತ್ತು ಸ್ಮಾರ್ಟ್ ಟ್ರಿಕ್ ಎಂದು ಹೊಗಳುತ್ತಿದ್ದಾರೆ. &quot;ನಾನು ಇದನ್ನು ಪ್ರಯತ್ನಿಸಿದೆ, ಇದು ನಿಜಕ್ಕೂ ಕೆಲಸ ಮಾಡುತ್ತದೆ&quot; ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು &quot;ಇದು ನಿಜವೋ ಇಲ್ಲವೋ ಎಂದು ಯಾರಾದರೂ ಪ್ರಯತ್ನಿಸಿ ಹೇಳಿದರೆ ನಾನು ಕೂಡ ಮಾಡುತ್ತೇನೆ&quot; ಎಂದಿದ್ದಾರೆ.&lt;/p&gt;&lt;p&gt;ಆದರೆ, ಇನ್ನೊಂದು ವರ್ಗದ ಜನರು ಈ ಪ್ರಯೋಗವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. &quot;ಪ್ರಾಣ ಉಳಿಸುವ ಔಷಧಿಗಳನ್ನು ಹೀಗೆ ಬಟ್ಟೆ ತೊಳೆಯಲು ಬಳಸುವುದು ತಪ್ಪು. ಇದು ಮದ್ದಿನ ದುರ್ಬಳಕೆ&quot; ಎಂದು ಕಿಡಿಕಾರಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಡಿಟರ್ಜೆಂಟ್&zwnj;ಗಳು ಇರುವಾಗ ಇಂತಹ ಪ್ರಯೋಗಗಳ ಅವಶ್ಯಕತೆಯಿಲ್ಲ ಎಂಬುದು ಇವರ ವಾದ.&lt;/p&gt;&lt;h2&gt;&lt;strong&gt;ಮತ್ತೆ ಮುನ್ನೆಲೆಗೆ ಬಂದ ವಿಡಿಯೋ&lt;/strong&gt;&lt;/h2&gt;&lt;p&gt;ಈ ವಿಡಿಯೋ ಹಳೆಯದಾಗಿದ್ದರೂ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇಂತಹ ಹ್ಯಾಕ್&zwnj;ಗಳು ನೋಡಲು ಆಕರ್ಷಕವಾಗಿದ್ದರೂ, ಪ್ಯಾರಸಿಟಮಾಲ್&zwnj;ನಲ್ಲಿರುವ ರಾಸಾಯನಿಕಗಳು ಬಟ್ಟೆಯ ನೂಲು ಅಥವಾ ವಾಷಿಂಗ್ ಮಷಿನ್&zwnj;ನ ಆಂತರಿಕ ಭಾಗಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದು ಸ್ಪಷ್ಟವಿಲ್ಲ. ಆದ್ದರಿಂದ ಕಲೆಗಳನ್ನು ತೆಗೆಯಲು ಬಟ್ಟೆಗಳಿಗೆಂದೇ ತಯಾರಾದ ಸಾಬೂನು ಅಥವಾ ಪುಡಿಗಳನ್ನು ಬಳಸುವುದು ಹೆಚ್ಚು ಸುರಕ್ಷಿತ. ಔಷಧಗಳನ್ನು ಕೇವಲ ವೈದ್ಯಕೀಯ ಉದ್ದೇಶಗಳಿಗೆ ಮಾತ್ರ ಬಳಸುವುದು ಸೂಕ್ತ.&lt;/p&gt;&lt;h2&gt;&lt;strong&gt;ಇದು ಗಮನದಲ್ಲಿರಲಿ&lt;/strong&gt;&lt;/h2&gt;&lt;h3&gt;&lt;strong&gt;ವಾಷಿಂಗ್ ಮಷಿನ್ ಆರೋಗ್ಯ&lt;/strong&gt;&lt;/h3&gt;&lt;p&gt;ಮಾತ್ರೆಗಳು ನೀರಿನಲ್ಲಿ ಸರಿಯಾಗಿ ಕರಗದೆ ಮಷಿನ್&zwnj;ನ ಪೈಪ್&zwnj;ಗಳಲ್ಲಿ ಸಿಲುಕಿಕೊಳ್ಳಬಹುದು ಅಥವಾ ಮಷಿನ್&zwnj;ನ ಒಳಗಿನ ಲೋಹದ ಭಾಗಗಳ ಜೊತೆ ರಾಸಾಯನಿಕ ಕ್ರಿಯೆ ನಡೆಸಿ ಮಷಿನ್ ತುಕ್ಕು ಹಿಡಿಯಲು ಕಾರಣವಾಗಬಹುದು.&lt;/p&gt;&lt;h3&gt;&lt;strong&gt;ಚರ್ಮದ ಸಮಸ್ಯೆ&lt;/strong&gt;&lt;/h3&gt;&lt;p&gt;ಬಟ್ಟೆ ತೊಳೆದ ನಂತರವೂ ಮಾತ್ರೆಯ ರಾಸಾಯನಿಕ ಅಂಶಗಳು ಬಟ್ಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ಉಳಿದುಕೊಳ್ಳಬಹುದು. ಅಂತಹ ಬಟ್ಟೆಯನ್ನು ಧರಿಸಿದಾಗ ಚರ್ಮದ ಮೇಲೆ ಅಲರ್ಜಿ, ತುರಿಕೆ ಅಥವಾ ಕೆಂಪು ದದ್ದುಗಳು ಉಂಟಾಗಬಹುದು.&lt;/p&gt;&lt;h3&gt;&lt;strong&gt;ವೈಜ್ಞಾನಿಕ ಪರೀಕ್ಷೆ ನಡೆದಿಲ್ಲ&lt;/strong&gt;&lt;/h3&gt;&lt;p&gt;ಡಿಟರ್ಜೆಂಟ್ ಪುಡಿಗಳನ್ನು ಬಟ್ಟೆ ತೊಳೆಯಲೆಂದೇ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ ತಯಾರಿಸಲಾಗುತ್ತದೆ. ಆದರೆ ಮಾತ್ರೆಗಳು ಮನುಷ್ಯನ ರಕ್ತಗತವಾಗಲು ತಯಾರಿಸಲ್ಪಟ್ಟವುಗಳೇ ಹೊರತು, ಬಟ್ಟೆ ತೊಳೆಯಲು ಅಲ್ಲ. ಹಾಗಾಗಿ ಇದು ಬಟ್ಟೆಯ ಮೇಲೆ ಅಥವಾ ಮಷಿನ್ ಮೇಲೆ ಏನು ತೊಂದರೆ ಕೊಡುತ್ತದೆ ಎಂಬುದು ಇನ್ನೂ ಯಾರಿಗೂ ಗೊತ್ತಿಲ್ಲ.&lt;/p&gt;&lt;p&gt;सफ़ेद कपडे से मैल हटाने का सबसे आसान तरीका... pic.twitter.com/vQn2Ijhq4T&lt;/p&gt;&lt;p&gt;&mdash;  (@acharyaveda_) October 5, 2025&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/life/can-fever-tablets-really-clean-stains-inside-the-bizarre-viral-video/articleshow-5zqld23"/>
        </item>
        <item>
            <title><![CDATA[World Record Alert: ಬರೋಬ್ಬರಿ 8 ಅಡಿ 10 ಇಂಚು ಉದ್ದದ ಕೂದಲು ಬೆಳೆಸಿ ವಿಶ್ವದಾಖಲೆ; ಉಕ್ರೇನ್ ಮಹಿಳೆಯ ದಾಖಲೆ ಮುರಿದ 'ಭಾರತ ನಾರಿ']]></title>
            <link>https://kannada.asianetnews.com/life/indian-woman-set-world-record-by-growing-8-feet-10-inches-long-hair-guinness-world-record-sns/articleshow-79e89s4</link>
            <guid isPermaLink="true">https://kannada.asianetnews.com/life/indian-woman-set-world-record-by-growing-8-feet-10-inches-long-hair-guinness-world-record-sns/articleshow-79e89s4</guid>
            <pubDate>Sat, 08 Aug 2026 15:00:52 +0530</pubDate>
            <description><![CDATA[&lt;p&gt;ಉತ್ತರಾಖಂಡದ ರೇಣು ಧರಿಯಾಲ್, 8 ಅಡಿ 10 ಇಂಚು ಉದ್ದದ ಕೂದಲಿನೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಉಕ್ರೇನ್ ಮಹಿಳೆಯ ಹಿಂದಿನ ದಾಖಲೆಯನ್ನು ಮುರಿದಿರುವ ಇವರು, ಕಳೆದ 10 ವರ್ಷಗಳಿಂದ ಕೂದಲು ಕತ್ತರಿಸಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgaffxq87yyxyf3357xjfdc,imgname-longest-hair-1786180517814.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಹುತೇಕ ಮಹಿಳೆಯರು ಉದ್ದ ಜಡೆ ಬೆಳೆಸಬೇಕು ಅಂತ ಆಸೆಪಡುತ್ತಾರೆ. ತಮ್ಮ ತಲೆ ಕೂದಲು ಸೊಂಟಕ್ಕಿಂತ ಕೆಳಗೆ ಇರ್ಬೇಕು ಅಂತ ವಿವಿಧ ರೀತಿಯ ಶಾಂಪು, ಎಣ್ಣೆ, ಸಿರಮ್&zwnj;ಗಳನ್ನು ಬಳಕೆ ಮಾಡುತ್ತಾರೆ. ಎಷ್ಟೇ ಮಾಡಿದರೂ ಕೆಲವರಿಗೆ ಉದ್ದ ಕೂದಲು ಬೆಳೆಸಲು ಆಗೋದಿಲ್ಲ. ಆದರೆ ಕೆಲವರಿಗೆ ನೈಸರ್ಗಿಕವಾಗಿ ಕೂದಲು ಉದ್ದವಾಗಿ ಬೆಳೆಯುತ್ತದೆ. ಇಂತಹವರು ಸ್ನಾನ ಮಾಡಿದ ತಲೆ ಬೇಗ ಒಣಗುತ್ತಿಲ್ಲ, ಪ್ರತಿದನ ತಲೆಬಾಚುವುದು ಸವಾಲಿನ ಕೆಲಸ ಆಗುತ್ತಿದೆ ಅಂತ ಸಮಸ್ಯೆಗಳ ಪಟ್ಟಿ ಮಾಡುತ್ತಾರೆ. ಕೆಲವರು ತಮ್ಮ ಕೂದಲಿಗೆ ಕತ್ತರಿ ಪ್ರಯೋಗ ಕೂಡ ಮಾಡುತ್ತಾರೆ. ಆದರೆ ಇಲ್ಲಿ ಮಹಿಳೆಯೊಬ್ಬರು, ತಮ್ಮ ಉದ್ದದ ತಲೆ ಕೂದಲಿನ ಕಾರಣದಿಂದಲೇ 'ಗಿನ್ನಿಸ್ ವರ್ಲ್ಡ್ ರೆಕಾರ್ಡ್' ಮಾಡಿದ್ದಾರೆ. ಇವರ ಜಡೆಯ ಉದ್ದ ಬರೋಬ್ಬರಿ 271.5 ಸೆಂಟಿ ಮೀಟರ್ ಅಂದರೆ 8 ಅಡಿ 10 ಇಂಚು ಇರೋದು ವಿಶೇಷ ಸಂಗತಿಯಾಗಿದೆ.&lt;/p&gt;&lt;h2&gt;&lt;strong&gt;ಉಕ್ರೇನ್ ಮಹಿಳೆಯ ಈ ಹಿಂದಿನ ದಾಖಲೆ ಬ್ರೇಕ್!&lt;/strong&gt;&lt;/h2&gt;&lt;p&gt;ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಹಲ್ದ್ವಾನಿ ನಿವಾಸಿಯಾಗಿರುವ ರೇಣು ಧರಿಯಾಲ್ ಅವರ ಕೂಲಿನ ಉದ್ದವನ್ನು ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಗಳು, ಅಧಿಕೃತವಾಗಿ ದಾಖಲು ಮಾಡಿದ್ದಾರೆ. ಈ ಹಿಂದೆ ಉಕ್ರೇನ್ ದೇಶದ ಮಹಿಳೆಯ ಹೆಸರಿನಲ್ಲಿದ್ದ 8 ಅಡಿ 5 ಇಂಚಿನ ದಾಖಲೆಯನ್ನು ರೇಣು ಬ್ರೇಕ್ ಮಾಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;2015ರಲ್ಲಿ ಕೂದಲು ಕಟ್ ಮಾಡೋದನ್ನು ನಿಲ್ಲಿಸಿದೆ. ಕಳೆದ 10 ವರ್ಷಗಳಿಂದ ನಾನು ಕೂದಲು ಕಟ್ ಮಾಡಿಲ್ಲ. ಈಗ ಅದು ವಿಶ್ವದಾಖಲೆಯಾಗಿದೆ. ಭಾರತ ದೇಶದಲ್ಲಿ ಉದ್ದ ಕೂದಲು ಕೇಲ ಸೌಂದರ್ಯ ಮಾತ್ರವಲ್ಲದೆ ಸಂಸ್ಕೃತಿ, ಗುರುತಿಗೆ ಪ್ರತೀಕವಾಗಿ ನೋಡುತ್ತಾರೆ. ಇದೇ ನನಗೆ ಸ್ಫೂರ್ತಿ ನೀಡಿತ್ತು. ದಿನನಿತ್ಯದ ಕೆಲಸ ಮಾಡುವ ಸಂದರ್ಭದಲ್ಲಿ ಸ್ವಲ್ಪ ಸಮಸ್ಯೆ ಆದರೂ, ಕೂದಲು ಹೆಣೆದುಕೊಂಡು ಇರುವುದರಿಂದ ಹೆಚ್ಚು ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೀನಿ ಎಂದು ರೇಣು ಹೇಳಿದ್ದಾರೆ. ಗಿನ್ನಿಸ್ ಸಂಸ್ಥೆಯೂ ಪೋಸ್ಟ್ ಮಾಡಿರುವ ಫೋಟೋದಲ್ಲಿ ಆಕೆಯ ತಲೆ ಕೂದಲು ನೆಲಕ್ಕೆ ಮುಟ್ಟಿರೋದನ್ನು ಕಾಣಹುದು.&lt;/p&gt;&lt;h2&gt;&lt;strong&gt;ಉದ್ದ ಕೂದಲಿನ ಸೀಕ್ರೆಟ್ ಏನು?&lt;/strong&gt;&lt;/h2&gt;&lt;p&gt;ಇಷ್ಟು ಉದ್ದನೆಯ ಕೂದಲು ಬೆಳೆಯುವ ಹಿಂದಿನ ಸೀಕ್ರೆಟ್ ತಿಳಿಸಿರುವ ರೇಣು, ಕೂದಲಿನ ಸಂರಕ್ಷಣೆಗೆ ನಾನು ಯಾವುದೇ ದುಬಾರಿ ವಸ್ತುಗಳನ್ನು ಬಳಕೆ ಮಾಡೋದಿಲ್ಲ. ಯಾವುದೇ ಚಿಕಿತ್ಸೆಯನ್ನು ತೆಗೆದುಕೊಂಡಿಲ್ಲ. ರಾಸಾಯನಿಕ ಪದಾರ್ಥಗಳು ಇರುವ ವಸ್ತುಗಳನ್ನು ದೂರ ಇಟ್ಟು, ಮನೆಯಲ್ಲಿ ತಯಾರಿಸಿದ ಎಣ್ಣೆ ಮತ್ತು ಶಾಂಪು ಬಳಕೆ ಮಾಡ್ತೇನೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಇನ್ನು, ರೇಣು ಅವರು ಸ್ವತಃ ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲಿ ತಮ್ಮ ಉದ್ದ ಕೂದಲಿನ ರಕ್ಷಣೆಗೆ ಏನೆಲ್ಲಾ ಮಾಡ್ತಾರೆ ಅನ್ನೋದನ್ನು ವಿವರಿಸಿದ್ದಾರೆ. ತಲೆಕೂದಲು ಕ್ಲೀನ್ ಮಾಡಿಕೊಳ್ಳುವುದು, ಬಾಚಿಕೊಳ್ಳುವುದಕ್ಕೆ ಹೆಚ್ಚು ಸಮಯ ಬೇಕು. ಇದಕ್ಕೆ ನಮಗೆ ಸಂಯಮ ಬಹಳ ಮುಖ್ಯವಾಗುತ್ತದೆ ಎಂದಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಗಿನ್ನಿಸ್ ಸಂಸ್ಥೆಯೂ ದಾಖಲೆಯ ಬಗ್ಗೆ ಪೋಸ್ಟ್ ಮಾಡುತ್ತಿದ್ದರಂತೆ, ನೆಟ್ಟಿಗರು ರೇಣು ಅವರಿಗೆ ಶುಭಾಶಯ ತಿಳಿಸಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ನೆಟ್ಟಿಗರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದು, 'ನನಗೆ ತಲೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ಆದರೆ ಇವರು ತಲೆಯ ಮೇಲೆ ತಲೆಕೂದಲಿನ ಸ್ಟೋರ್ ಆರಂಭಿಸಿದ್ದಾರೆ' ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೋರ್ವ ನೆಟ್ಟಿಗ, 'ಭಾರತ ಗ್ರಾಮಗಳಲ್ಲಿ ಇಂತಹ ಅದೆಷ್ಟೋ ಬೆಳಕಿಗೆ ಬಾರದ ದಾಖಲೆ ಇರುತ್ತದೆ' ಎಂದು ಹೇಳಿದ್ದಾರೆ. ಹಲವರು ಕೂದಲಿನ ಸಂರಕ್ಷಣೆಗೆ ಪ್ರತಿದಿನ ಎಷ್ಟು ಸಮಯ ಮೀಸಲಿಡುತ್ತಾರೆ ಅಂತ ಪ್ರಶ್ನಿಸಿದ್ದಾರೆ. ನಮ್ಮ ಉದ್ದೇಶ ಸರಿಯಾಗಿದ್ದರೆ ಸಣ್ಣ ಸಣ್ಣ ಪ್ರಯತ್ನಗಳು ದೊಡ್ಡ ಫಲಿತಾಂಶಗಳನ್ನು ನೀಡುತ್ತವೆ ಎಂಬುವುದಕ್ಕೆ ಗಿನ್ನಿಸ್ ದಾಖಲೆ ನಿರ್ಮಿಸಿರುವ ರೇಣು ಧರಿಯಾಲ್ ಸಾಕ್ಷಿಯಾಗಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Sumanth SN</dc:creator>
            <atom:link href="https://kannada.asianetnews.com/life/indian-woman-set-world-record-by-growing-8-feet-10-inches-long-hair-guinness-world-record-sns/articleshow-79e89s4"/>
        </item>
        <item>
            <title><![CDATA[‘50% OFF’ ಅಂತ ನೋಡಿದ ತಕ್ಷಣ ಶಾಪಿಂಗ್ ಮಾಡ್ತೀರಾ? ನಿಮ್ಮ ಮೆದುಳು ಹೀಗೆ ಯಾಕೆ ಕೆಲಸ ಮಾಡುತ್ತೆ ಗೊತ್ತಾ?]]></title>
            <link>https://kannada.asianetnews.com/viral/why-do-discounts-make-us-want-to-shop-psychology-behind-it/articleshow-a5g5tu6</link>
            <guid isPermaLink="true">https://kannada.asianetnews.com/viral/why-do-discounts-make-us-want-to-shop-psychology-behind-it/articleshow-a5g5tu6</guid>
            <pubDate>Sat, 08 Aug 2026 14:39:46 +0530</pubDate>
            <description><![CDATA[&lt;p&gt;Discount Sale: ನೀವು ಕೂಡ ಡಿಸ್ಕೌಂಟ್ ಬೋರ್ಡ್ ನೋಡು ನೋಡುತ್ತಿದ್ದಂತೆ ವಸ್ತುಗಳನ್ನು, ಬಟ್ಟೆಗಳನ್ನು ಖರೀದಿಸುತ್ತೀರಾ? ಯಾಕೆ ಅದು ಡಿಸ್ಕೌಂಟ್ ಕಂಡ ತಕ್ಷಣ ಮನಸ್ಸಲ್ಲೇನೋ ಖುಷಿಯಾಗುವುದು, ಅದನ್ನು ಖರೀದಿಸುವವರೆಗೆ ನಿದ್ರೆ ಬಾರದಂತೆ ಆಗೋದು? ಇದರ ಹಿಂದೆ ಇದೆ. ನಮ್ಮ ಮೆದುಳಿನ ಆಟ. ಯಾಕಾಗಿ ಹೇಗಿಲ್ಲಾ ಆಗುತ್ತೆ ಅನ್ನೋದನ್ನು ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg9ttmbg1azmz3m4tg7tgyk,imgname-disount-sale-1786179840646.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&lsquo;50% OFF&rsquo; ಅಂತ ನೋಡಿದ ತಕ್ಷಣ ಶಾಪಿಂಗ್ ಮಾಡ್ತೀರಾ?&lt;/strong&gt;&lt;/h2&gt;&lt;p&gt;ಯಾವುದೇ ಅಂಗಡಿಯಲ್ಲಿ ಶೇ.50ರಷ್ಟು ಡಿಸ್ಕೌಂಟ್ ಎಂಬ ಬೋರ್ಡ್ ಕಂಡರೆ ನಮ್ಮ ಕಣ್ಣು ಸಹಜವಾಗಿಯೇ ಅದರತ್ತ ಹೋಗುತ್ತದೆ. ಆನ್&zwnj;ಲೈನ್ ಶಾಪಿಂಗ್&zwnj;ನಲ್ಲಿ ಯಾವುದಾದರೂ ವಸ್ತುವಿನ ಬೆಲೆ 4,999 ರೂಪಾಯಿಯಿಂದ 2,499 ರೂಪಾಯಿಗೆ ಇಳಿದಿರುವುದನ್ನು ನೋಡಿದ ತಕ್ಷಣ, ನಮ್ಮ ಮೆದುಳು &lsquo;ಅರ್ಧದಷ್ಟು ಹಣ ಉಳಿಯುತ್ತಿದೆ&rsquo; ಎಂದು ಹೇಳುತ್ತದೆ. ಅನೇಕ ಬಾರಿ ನಮಗೆ ಅಗತ್ಯವೇ ಇಲ್ಲದ ವಸ್ತುವನ್ನೂ ಖರೀದಿಸಿಬಿಡುತ್ತೇವೆ. ಹೀಗಾಗುವುದು ಏಕೆ? ನಿಜವಾಗಿಯೂ ನಮಗೆ ಡಿಸ್ಕೌಂಟ್ ಇಷ್ಟವೇ? ಅಥವಾ ವ್ಯಾಪಾರಿಗಳು ನಮ್ಮ ಮೆದುಳಿನ ಕೆಲವು ನಿರ್ದಿಷ್ಟ ಮನೋವೈಜ್ಞಾನಿಕ ಪ್ಯಾಟರ್ನ್ ಅರ್ಥಮಾಡಿಕೊಂಡು ಬೆಲೆಯನ್ನು ಪ್ರದರ್ಶಿಸುತ್ತಾರೆಯೇ?&lt;/p&gt;&lt;p&gt;ವ್ಯವಹಾರಿಕ ಅರ್ಥಶಾಸ್ತ್ರ ಮತ್ತು ಮನೋವಿಜ್ಞಾನದಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ಡೇನಿಯಲ್ ಕಹ್ನೆಮನ್ ಮತ್ತು ಅಮೋಸ್ ಟ್ವರ್ಸ್ಕಿ ಅವರ ಸಂಶೋಧನೆಗಳು ಮನುಷ್ಯರು ಆರ್ಥಿಕ ನಿರ್ಧಾರಗಳನ್ನು ಯಾವಾಗಲೂ ಸಂಪೂರ್ಣ ತರ್ಕದ ಆಧಾರದ ಮೇಲೆ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿವೆ. ಶಾಪಿಂಗ್&zwnj;ನಲ್ಲಿ ಭಾವನೆಗಳು, ಹೋಲಿಕೆ ಮತ್ತು ಮೊದಲು ಕಾಣಿಸುವ ಬೆಲೆಯೂ ದೊಡ್ಡ ಪರಿಣಾಮ ಬೀರುತ್ತವೆ.&lt;/p&gt;&lt;h3&gt;&lt;strong&gt;ಮೊದಲ ಬೆಲೆ ಮೆದುಳಿನಲ್ಲಿ ಅಚ್ಚೊತ್ತುತ್ತದೆ&lt;/strong&gt;&lt;/h3&gt;&lt;p&gt;ಒಂದು ಜಾಕೆಟ್&zwnj;ನ ಬೆಲೆ ಮೊದಲು 8,000 ರೂಪಾಯಿ ಎಂದು ನಮೂದಿಸಲಾಗಿದೆ ಎಂದು ಊಹಿಸಿಕೊಳ್ಳಿ. ಅದರ ಕೆಳಗೆ 3,999 ರೂಪಾಯಿಗಳ ಸೇಲ್ ಬೆಲೆಯನ್ನು ತೋರಿಸಲಾಗುತ್ತದೆ. ಆಗ 3,999 ರೂಪಾಯಿ ನಿಮಗೆ ಕಡಿಮೆ ಬೆಲೆಯಂತೆ ಕಾಣಬಹುದು. ಮನೋವಿಜ್ಞಾನದ ಭಾಷೆಯಲ್ಲಿ ಇದನ್ನು ಆಂಕರಿಂಗ್ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಆಂಕರಿಂಗ್ ಎಫೆಕ್ಟ್ ಎಂದರೆ ಮೊದಲ ಬೆಲೆ ನಮ್ಮ ಮೆದುಳಿನಲ್ಲಿ ಒಂದು ರೀತಿಯ ಪ್ರಭಾವವನ್ನು ಮೂಡಿಸುತ್ತದೆ. ನಂತರ ನಾವು ಎರಡನೇ ಬೆಲೆಯನ್ನು ನೋಡಿದಾಗ, ಮೆದುಳು ಸಹಜವಾಗಿಯೇ ಅದನ್ನು ಮೊದಲ ಬೆಲೆಯೊಂದಿಗೆ ಹೋಲಿಸಲು ಆರಂಭಿಸುತ್ತದೆ. ಜಾಕೆಟ್ ನಿಜವಾಗಿಯೂ 3,999 ರೂಪಾಯಿ ಬೆಲೆಗೆ ಯೋಗ್ಯವಾಗಿದೆಯೇ ಎಂದು ನಾವು ಯೋಚಿಸುವುದಿಲ್ಲ. ಬದಲಾಗಿ ಮೆದುಳು ಅದನ್ನು ಮೊದಲಿನ 8,000 ರೂಪಾಯಿಗಳೊಂದಿಗೆ ಹೋಲಿಸುತ್ತದೆ. ಹೀಗಾಗಿ &lsquo;ಮೊದಲು ಇಷ್ಟು, ಈಗ ಇಷ್ಟು&rsquo; ಎಂಬ ಡಿಸ್ಕೌಂಟ್&zwnj;ನ ಬಲೆಗೆ ನಾವು ಬೀಳುತ್ತೇವೆ.&lt;/p&gt;&lt;p&gt;&lt;strong&gt;ಡಿಸ್ಕೌಂಟ್ ಉಳಿತಾಯದಂತೆ ಕಾಣಲು ಆರಂಭಿಸುತ್ತದೆ&lt;/strong&gt;&lt;/p&gt;&lt;p&gt;2,000 ರೂಪಾಯಿ ಮೌಲ್ಯದ ವಸ್ತು 1,500 ರೂಪಾಯಿಗೆ ಸಿಗುತ್ತಿದೆ ಎಂದು ಹೇಳಿದರೆ, ನಿಮ್ಮ ಗಮನ 1,500 ರೂಪಾಯಿ ಖರ್ಚಾಗುತ್ತಿದೆ ಎಂಬುದರತ್ತ ಹೋಗಬಹುದು. ಆದರೆ &lsquo;500 ರೂಪಾಯಿ ಉಳಿಸಿ&rsquo; ಎಂದು ಹೇಳಿದರೆ, ಮೆದುಳಿನ ಗಮನ ಉಳಿತಾಯದತ್ತ ತಿರುಗುತ್ತದೆ. ಅಂದರೆ ಒಂದೇ ವ್ಯವಹಾರವನ್ನು ವಿಭಿನ್ನ ರೀತಿಯಲ್ಲಿ ನೋಡಲು ಸಾಧ್ಯವಾಗುತ್ತದೆ. ಗ್ರಾಹಕರು ಅನೇಕ ಬಾರಿ ತಾವು ಎಷ್ಟು ಖರ್ಚು ಮಾಡುತ್ತಿದ್ದೇವೆ ಎಂದು ಯೋಚಿಸುವುದಿಲ್ಲ. ಬದಲಾಗಿ ಎಷ್ಟು ಉಳಿಸುತ್ತಿದ್ದೇವೆ ಎಂದು ಯೋಚಿಸುತ್ತಾರೆ.&lt;/p&gt;&lt;p&gt;&lt;strong&gt;&lsquo;ಇಂದೇ&rsquo; ಎಂಬ ಆಫರ್ ಮನಸ್ಸನ್ನು ಏಕೆ ಆತುರಪಡಿಸುತ್ತದೆ?&lt;/strong&gt;&lt;/p&gt;&lt;p&gt;ಡಿಸ್ಕೌಂಟ್ ಜೊತೆಗೆ &lsquo;ಇಂದೇ ಕೊನೆಯ ದಿನ&rsquo;, &lsquo;ಇನ್ನೂ 2 ಗಂಟೆ ಮಾತ್ರ&rsquo; ಅಥವಾ &lsquo;ಸ್ಟಾಕ್ ಮುಗಿಯಲಿದೆ&rsquo; ಎಂದು ಬರೆದಿದ್ದರೆ, ಖರೀದಿಸುವ ಆಸೆ ಮತ್ತಷ್ಟು ಹೆಚ್ಚಾಗಬಹುದು. ಇಲ್ಲಿ ಸ್ಕಾರ್ಸಿಟಿ ಎಫೆಕ್ಟ್ ಕೆಲಸ ಮಾಡುತ್ತದೆ. ಮನೋವಿಜ್ಞಾನದ ಪ್ರಕಾರ, ಯಾವುದಾದರೂ ವಸ್ತು ಸೀಮಿತವಾಗಿ ಮಾತ್ರ ಲಭ್ಯವಿದೆ ಎಂದು ತಿಳಿಸಿದಾಗ ಅದರ ಮೇಲಿನ ಬೇಡಿಕೆ ಹೆಚ್ಚಾಗುತ್ತದೆ. ಅವಕಾಶ ಕೈತಪ್ಪಿದರೆ ಮತ್ತೆ ಸಿಗದೇ ಇರಬಹುದು ಎಂದು ಮೆದುಳು ಭಾವಿಸುತ್ತದೆ.&lt;/p&gt;&lt;p&gt;&lsquo;ಫ್ರೀ&rsquo; ಎಂದು ನೋಡಿದಾಗ ಮೆದುಳು ಇನ್ನಷ್ಟು ವೇಗವಾಗಿ ಬದಲಾಗುತ್ತದೆ. ಡಿಸ್ಕೌಂಟ್&zwnj;ನ ಅತ್ಯಂತ ಪ್ರಭಾವಶಾಲಿ ರೂಪ &lsquo;ಉಚಿತ&rsquo; ಎಂಬ ಪದವೇ ಆಗಿದೆ. ಒಂದು ವಸ್ತುವಿನ ಬೆಲೆ 100 ರೂ. ಮತ್ತು ಮತ್ತೊಂದರ ಬೆಲೆ 50 ರೂ. ಇದ್ದರೆ, ನಾವು ಎರಡನ್ನೂ ಅವುಗಳ ಬೆಲೆಯ ಆಧಾರದ ಮೇಲೆ ನೋಡಬಹುದು. ಆದರೆ ಎರಡನೇ ವಸ್ತುವನ್ನು ಉಚಿತವಾಗಿ ನೀಡಿದರೆ ಅದರ ಆಕರ್ಷಣೆ ಏಕಾಏಕಿ ಹೆಚ್ಚಾಗುತ್ತದೆ. ಹಲವು ಪ್ರಯೋಗಗಳಲ್ಲಿ ಸಂಶೋಧಕರು ಶೂನ್ಯ ಬೆಲೆ ಮಾನವನ ನಿರ್ಧಾರಗಳ ಮೇಲೆ ಸಾಮಾನ್ಯ ಬೆಲೆಗಳಿಗಿಂತ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದನ್ನು ತೋರಿಸಿದ್ದಾರೆ. ಅಂದರೆ, ಕೆಲವೊಮ್ಮೆ ಅದರ ಬೆಲೆ ಶೂನ್ಯವಾಗಿರುವುದರಿಂದಲೇ ನಮಗೆ ಸಿಗುವ ಲಾಭ ದೊಡ್ಡದಾಗಿ ಕಾಣುತ್ತದೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/viral/why-do-discounts-make-us-want-to-shop-psychology-behind-it/articleshow-a5g5tu6"/>
        </item>
        <item>
            <title><![CDATA[ಗಾಳಿ ಇಲ್ಲದಿದ್ರೂ, ಎಣ್ಣೆ,ಬತ್ತಿ ಸರಿಯಾಗಿದ್ರೂ  ದೀಪ ಆರುತ್ತಿದೆಯಾ? ಇದು ಯಾವುದರ ಮುನ್ಸೂಚನೆ ಗೊತ್ತಾ?]]></title>
            <link>https://kannada.asianetnews.com/gallery/festivals/why-your-puja-diya-goes-out-and-what-you-should-do-immediately-04fo3d4</link>
            <guid isPermaLink="true">https://kannada.asianetnews.com/gallery/festivals/why-your-puja-diya-goes-out-and-what-you-should-do-immediately-04fo3d4</guid>
            <pubDate>Sat, 08 Aug 2026 13:46:00 +0530</pubDate>
            <description><![CDATA[&lt;p&gt;Puja lamp meaning: ಪೂಜಾ ಸಮಯದಲ್ಲಿ ಹಚ್ಚಿದ ದೀಪ ದಿಢೀರನೆ ಆರಿ ಹೋದರೆ ಮನಸ್ಸಿನಲ್ಲಿ ಒಂದು ರೀತಿಯ ಆತಂಕ ಶುರುವಾಗುತ್ತದೆ. ಇದು ಅಶುಭದ ಸಂಕೇತವೇ ಅಥವಾ ಸಾಮಾನ್ಯವೇ? ಶಕುನ ಶಾಸ್ತ್ರವು ಇದರ ಬಗ್ಗೆ ಏನು ಹೇಳುತ್ತದೆ ಮತ್ತು ದೋಷ ನಿವಾರಣೆಗೆ ಯಾವ ಮಂತ್ರಗಳನ್ನು ಜಪಿಸಬೇಕು ಎಂಬ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky6y49qtfz4jcjnrwc3mw3mx,imgname-hindu-idol-worship-1784791836410.jpg" type="image/jpeg" height="390" width="690"/>
            <content:encoded><![CDATA[&lt;p&gt;Puja lamp meaning: ಪೂಜಾ ಸಮಯದಲ್ಲಿ ಹಚ್ಚಿದ ದೀಪ ದಿಢೀರನೆ ಆರಿ ಹೋದರೆ ಮನಸ್ಸಿನಲ್ಲಿ ಒಂದು ರೀತಿಯ ಆತಂಕ ಶುರುವಾಗುತ್ತದೆ. ಇದು ಅಶುಭದ ಸಂಕೇತವೇ ಅಥವಾ ಸಾಮಾನ್ಯವೇ? ಶಕುನ ಶಾಸ್ತ್ರವು ಇದರ ಬಗ್ಗೆ ಏನು ಹೇಳುತ್ತದೆ ಮತ್ತು ದೋಷ ನಿವಾರಣೆಗೆ ಯಾವ ಮಂತ್ರಗಳನ್ನು ಜಪಿಸಬೇಕು ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಶಾಸ್ತ್ರಗಳು ಏನು ಹೇಳುತ್ತವೆ?&lt;/strong&gt;ಹಿಂದೂ ಧರ್ಮದ ಸಂಪ್ರದಾಯದಂತೆ ಪ್ರತಿದಿನ ಮನೆಯಲ್ಲಿ ದೀಪಾರಾಧನೆ ಮಾಡುವುದು ಅತ್ಯಂತ ಅವಶ್ಯಕ. ಪೂಜಾ ಕೋಣೆಯಲ್ಲಿ ದೀಪ ಹಚ್ಚಿದ ನಂತರವೇ ಯಾವುದೇ ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ದೇವರ ಮುಂದೆ ಬೆಳಗುವ ದೀಪವನ್ನು ಜ್ಞಾನ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಹಚ್ಚಿದ ದೀಪವು ದಿಢೀರನೆ ಆರಿ ಹೋಗುತ್ತದೆ. ಇಂತಹ ಸಮಯದಲ್ಲಿ ಮನೆಯವರಿಗೆ ಏನಾದರೂ ಅಶುಭ ಸಂಭವಿಸುತ್ತದೆಯೇ ಎಂಬ ಭಯ ಕಾಡುವುದು ಸಹಜ. ಈ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತವೆ ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ದೀಪ ಆರಿ ಹೋಗಲು ನೈಸರ್ಗಿಕ ಕಾರಣಗಳೇನು?&lt;/strong&gt;ದೀಪವು ಆರಿ ಹೋದ ತಕ್ಷಣ ಗಾಬರಿಯಾಗುವ ಅಗತ್ಯವಿಲ್ಲ. ಹಲವು ಬಾರಿ ಬಲವಾದ ಗಾಳಿ ಬೀಸುವುದು, ಬತ್ತಿಯಲ್ಲಿನ ದೋಷ ಅಥವಾ ಎಣ್ಣೆ ಖಾಲಿಯಾಗುವುದು ದೀಪ ಆರಿ ಹೋಗಲು ಪ್ರಮುಖ ಕಾರಣಗಳಾಗಿರುತ್ತವೆ. ಇಂತಹ ನೈಸರ್ಗಿಕ ಕಾರಣಗಳಿಂದ ದೀಪ ಆರಿ ಹೋದರೆ ಅದನ್ನು ಅಶುಭ ಸೂಚನೆ ಎಂದು ಭಾವಿಸಬಾರದು. ಇದು ಕೇವಲ ತಾಂತ್ರಿಕ ಅಥವಾ ಸಾಮಾನ್ಯ ಸ್ಥಿತಿಯಾಗಿರುತ್ತದೆ.&lt;/p&gt;&lt;img&gt;&lt;p&gt;&lt;strong&gt;ಯಾವಾಗ ಎಚ್ಚರ ವಹಿಸಬೇಕು?&lt;/strong&gt;ಒಂದು ವೇಳೆ ಗಾಳಿಯೂ ಇಲ್ಲದೆ, ಎಣ್ಣೆ ಮತ್ತು ಬತ್ತಿ ಸರಿಯಾಗಿದ್ದರೂ ಸಹ ದೀಪವು ಪದೇ ಪದೇ ಆರಿ ಹೋಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು ಎಂದು ಶಕುನ ಶಾಸ್ತ್ರ ಹೇಳುತ್ತದೆ. ಇಂತಹ ಸಂದರ್ಭಗಳು ಭವಿಷ್ಯದಲ್ಲಿ ಬರಲಿರುವ ಕಷ್ಟಗಳ ಮುನ್ಸೂಚನೆಯಾಗಿರಬಹುದು ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಭಯಪಡದೆ ದೈವಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಉತ್ತಮ.&lt;/p&gt;&lt;img&gt;&lt;p&gt;&lt;strong&gt;ಪರಿಹಾರಗಳು ಮತ್ತು ಮುನ್ನೆಚ್ಚರಿಕೆಗಳು&lt;/strong&gt;&lt;strong&gt;ಕುಲದೇವತೆಯ ಆರಾಧನೆ: &lt;/strong&gt;ದೀಪ ಪದೇ ಪದೇ ಆರಿ ಹೋಗುತ್ತಿದ್ದರೆ ನಿಮ್ಮ ಕುಲದೇವತೆಯನ್ನು ವಿಶೇಷವಾಗಿ ಪೂಜಿಸಿ ಮತ್ತು ಪ್ರಾರ್ಥನೆ ಸಲ್ಲಿಸಿ.&lt;/p&gt;&lt;p&gt;&lt;strong&gt;ಮಂತ್ರ ಜಪ:&lt;/strong&gt; ಯಾವುದೇ ಕೆಡುಕು ಅಥವಾ ಅಶುಭದ ಭಯವಿದ್ದರೆ 'ಓಂ ನಮಃ ಶಿವಾಯ' ಮಂತ್ರವನ್ನು ಭಕ್ತಿಶ್ರದ್ಧೆಯಿಂದ ಜಪಿಸಿ. ಇದು ಮನಸ್ಸಿಗೆ ಶಾಂತಿ ನೀಡುವುದಲ್ಲದೆ ಸಕಾರಾತ್ಮಕತೆಯನ್ನು ತರುತ್ತದೆ.&lt;/p&gt;&lt;p&gt;&lt;strong&gt;ಹನುಮಾನ್ ಚಾಲೀಸಾ ಪಠಣ: &lt;/strong&gt;ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ನಿಮ್ಮಲ್ಲಿ ಧೈರ್ಯ ಮತ್ತು ಶಕ್ತಿ ಹೆಚ್ಚುತ್ತದೆ, ಇದರಿಂದ ಮುಂದೆ ಬರಬಹುದಾದ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಸಿಗುತ್ತದೆ.&lt;/p&gt;&lt;p&gt;&lt;strong&gt;ದಾನ ಧರ್ಮ: &lt;/strong&gt;ನಿಮ್ಮ ಜನ್ಮ ನಕ್ಷತ್ರ ಅಥವಾ ರಾಶಿಯ ಅಧಿಪತಿಗೆ ಅನುಗುಣವಾಗಿ ಬಡವರಿಗೆ ದಾನ ಮಾಡುವುದು ದೋಷ ನಿವಾರಣೆಗೆ ಸಹಾಯ ಮಾಡುತ್ತದೆ.&lt;/p&gt;&lt;p&gt;&lt;strong&gt;ಪಂಡಿತರ ಸಲಹೆ: &lt;/strong&gt;ಸಮಸ್ಯೆಗಳು ಪದೇ ಪದೇ ಎದುರಾಗುತ್ತಿದ್ದರೆ ನಿಮ್ಮ ಜಾತಕವನ್ನು ಪರಿಶೀಲಿಸಿ ಸೂಕ್ತ ಪರಿಹಾರಕ್ಕಾಗಿ ಜ್ಯೋತಿಷ್ಯ ಪಂಡಿತರ ಸಲಹೆ ಪಡೆಯಿರಿ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/festivals/why-your-puja-diya-goes-out-and-what-you-should-do-immediately-04fo3d4"/>
        </item>
        <item>
            <title><![CDATA[ಈ ಬ್ಯೂಟಿಫುಲ್ ನಟಿ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ! ಗುಟ್ಟಾಗಿ ಆದ ಮದುವೆಯ ಫೋಟೋ ವೈರಲ್]]></title>
            <link>https://kannada.asianetnews.com/cricket-sports/ramandeep-singh-begins-new-innings-with-actress-charli-chauhan-wedding-photos-viral-kvn/articleshow-v96wdqm</link>
            <guid isPermaLink="true">https://kannada.asianetnews.com/cricket-sports/ramandeep-singh-begins-new-innings-with-actress-charli-chauhan-wedding-photos-viral-kvn/articleshow-v96wdqm</guid>
            <pubDate>Sat, 08 Aug 2026 13:09:40 +0530</pubDate>
            <description><![CDATA[ಟೀಂ ಇಂಡಿಯಾ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕ್ರಿಕೆಟಿಗ ರಮಣ್&zwnj;ದೀಪ್ ಸಿಂಗ್, ಜನಪ್ರಿಯ ಟೆಲಿವಿಷನ್ ನಟಿ ಚಾರ್ಲಿ ಚೌವ್ಹಾಣ್ ಅವರೊಂದಿಗೆ ಗುಟ್ಟಾಗಿ ವಿವಾಹವಾಗಿದ್ದಾರೆ. ಅರ್ಶದೀಪ್ ಸಿಂಗ್ ಅವರ ಇನ್&zwnj;ಸ್ಟಾಗ್ರಾಮ್ ಸ್ಟೋರಿಯಿಂದ ಈ ಮದುವೆ ವಿಚಾರ ಬೆಳಕಿಗೆ ಬಂದಿದ್ದು, ಖಾಸಗಿ ಸಮಾರಂಭದಲ್ಲಿ ಕೆಲವೇ ಕೆಲವು ಆಪ್ತರು ಭಾಗಿಯಾಗಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kzfr378qpwszbcdfs5we2x11,imgname-whatsapp-image-2026-08-08-at-9.21.17-am-1786161241366.jpeg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಟೀಂ ಇಂಡಿಯಾ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಕ್ರಿಕೆಟಿಗ ರಮಣ್&zwnj;ದೀಪ್ ಸಿಂಗ್ ದಿಢೀರ್ ಎನ್ನುವಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಮಣ್&zwnj;ದೀಪ್ ಸಿಂಗ್ ಸದ್ಯ ಭಾರತ ತಂಡದಿಂದ ಹೊರಬಿದ್ದಿದ್ದು, ಐಪಿಎಲ್ ಹಾಗೂ ದೇಶಿ ಕ್ರಿಕೆಟ್&zwnj;ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. 29 ವರ್ಷದ ರಮಣ್&zwnj;ದೀಪ್ ಸಿಂಗ್&zwnj; ಐಪಿಎಲ್&zwnj;ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ದೇಶಿ ಕ್ರಿಕೆಟ್&zwnj;ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ರಮಣ್&zwnj;ದೀಪ್ ಸಿಂಗ್&zwnj; ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಬ್ಯೂಟಿಫುಲ್ ಟೆಲಿವಿಷನ್ ನಟಿ ಚಾರ್ಲಿ ಚೌವ್ಹಾಣ್ ಅವರೊಂದಿಗೆ ವಿವಾಹ ಮಾಡಿಕೊಂಡಿದ್ದಾರೆ. ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;h2&gt;&lt;strong&gt;ನಟಿ ಜತೆ ಹೊಸ ಇನ್ನಿಂಗ್ಸ್ ಆರಂಭಿಸಿದ ರಮಣ್&zwnj;ದೀಪ್ ಸಿಂಗ್&lt;/strong&gt;&lt;/h2&gt;&lt;p&gt;ಟೀಂ ಇಂಡಿಯಾ ಕ್ರಿಕೆಟಿಗ ರಮಣ್&zwnj;ದೀಪ್ ಸಿಂಗ್, ಇದೀಗ ಟೆಲಿವಿಷನ್ ನಟಿ ಚಾರ್ಲಿ ಚೌವ್ಹಾಣ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಚಾರ್ಲಿ ಚೌವ್ಹಾಣ್ ಈಗಾಗಲೇ ಹಲವು ರಿಯಾಲಿಟಿ ಶೋ ಹಾಗೂ ಟಿವಿ ಸೀರಿಯಲ್&zwnj;ಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಟೀಂ ಇಂಡಿಯಾ ಅರ್ಶದೀಪ್ ಸಿಂಗ್ ತಮ್ಮ ಅಧಿಕೃತ ಇನ್&zwnj;ಸ್ಟಾಗ್ರಾಮ್&zwnj;ನ ಸ್ಟೋರಿಯಲ್ಲಿ ಈ ನವಜೋಡಿಗೆ ಶುಭಹಾರೈಸಿದಾಗ, ಈ ಮದುವೆ ವಿಚಾರ ಬೆಳಕಿಗೆ ಬಂದಿದೆ. ರಮಣ್&zwnj;ದೀಪ್ ಸಿಂಗ್ ಹಾಗೂ ಚಾರ್ಲಿ ಚೌವ್ಹಾಣ್ ಖಾಸಗಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಕುಟುಂಬಸ್ಥರು, ಅತ್ಯಾಪ್ತ ಸ್ನೇಹಿತರು ಹಾಗೂ ಬಂಧುಗಳು ಮಾತ್ರ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪಂಜಾಬ್ ತಂಡದ ನಮನ್&zwnj; ಧೀರ್, ಅಶ್ವಿನಿ ಕುಮಾರ್, ಅರ್ಶದೀಪ್ ಸಿಂಗ್ ಹಾಗೂ ಹರ್ಪ್ರೀತ್ ಬ್ರಾರ್ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದ್ದರು.&lt;/p&gt;&lt;p&gt;Arshdeep Singh, Naman Dhir, Ashwini Kumar, Jassinder Singh and friends at Ramandeep Singh's Marriage  pic.twitter.com/7LRyeZuR9v&lt;/p&gt;&lt;p&gt;&mdash; Ayush Singh (@Ayush_Singh27) August 7, 2026&lt;/p&gt;&lt;p&gt;&lt;/p&gt;&lt;h3&gt;&lt;strong&gt;ರಮಣ್&zwnj;ದೀಪ್ ಸಿಂಗ್ ಪತ್ನಿ ಚಾರ್ಲಿ ಚೌವ್ಹಾಣ್ ಯಾರು?&lt;/strong&gt;&lt;/h3&gt;&lt;p&gt;ರಮಣ್&zwnj;ದೀಪ್ ಸಿಂಗ್ ಪತ್ನಿ ಚಾರ್ಲಿ ಚೌವ್ಹಾಣ್, ಜನಪ್ರಿಯ ಟೆಲಿವಿಷನ್ ನಟಿಯಾಗಿದ್ದಾರೆ. ಶಿಮ್ಲಾದಲ್ಲಿ ಹುಟ್ಟಿದ ಚಾರ್ಲಿ 'ಬೆಸ್ಟ್ ಫ್ರೆಂಡ್ಸ್&zwnj; ಫಾರೆವರ್', ಕೈಸೆ ಯೇ ಯಾರಿಯೋ ನಲ್ಲಿ ನಟಿಸುವ ಮೂಲಕ ಜನಮನ ಗೆದ್ದಿದ್ದಾರೆ. ಇನ್ನು ದಿ ಲವ್ ಬೈಟ್ಸ್&zwnj;ನಂತಹ ಶಾರ್ಟ್ ಫಿಲ್ಮ್&zwnj;ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಭಾರತ ಪರ ಎರಡು ಪಂದ್ಯಗಳನ್ನಾಡಿರುವ ರಮಣ್&zwnj;ದೀಪ್ ಸಿಂಗ್:&lt;/strong&gt;&lt;/h3&gt;&lt;p&gt;ರಮಣ್&zwnj;ದೀಪ್ ಸಿಂಗ್ ಐಪಿಎಲ್&zwnj;ನಲ್ಲಿ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ರಮಣ್&zwnj;ದೀಪ್ ಸಿಂಗ್ ಭಾರತ ಪರ ಇದುವರೆಗೂ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ರಮಣ್&zwnj;ದೀಪ್ ಸಿಂಗ್ 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟೀಂ ಇಂಡಿತಾ ಪರ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ರಮಣ್&zwnj;ದೀಪ್ ಸಿಂಗ್ ಭಾರತ ಪರ ಎರಡು ಪಂದ್ಯಗಳನ್ನಾಡಿದ್ದು, ಈ ಪೈಕಿ ಒಂದು ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿತ್ತು. ಆ ಪಂದ್ಯದಲ್ಲಿ ರಮಣ್&zwnj;ದೀಪ್ ಸಿಂಗ್ 15 ರನ್ ಗಳಿಸಿದ್ದರು. ಇನ್ನು ಎರಡು ಪಂದ್ಯಗಳಿಂದ ರಮಣ್&zwnj;ದೀಪ್ ಸಿಂಗ್ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ramandeep-singh-begins-new-innings-with-actress-charli-chauhan-wedding-photos-viral-kvn/articleshow-v96wdqm"/>
        </item>
        <item>
            <title><![CDATA[Different Marriage  - ಲ್ಯಾವೆಂಡರ್‌, ಓಪನ್‌ ಮ್ಯಾರೇಜ್‌ ಅರ್ಥ ಗೊತ್ತಿಲ್ದೆ ಮದುವೆ ಆಗ್ಬೇಡಿ]]></title>
            <link>https://kannada.asianetnews.com/gallery/relationship/what-are-zombie-lavender-marriages-find-out-what-the-husband-wife-relationship-ka75oga</link>
            <guid isPermaLink="true">https://kannada.asianetnews.com/gallery/relationship/what-are-zombie-lavender-marriages-find-out-what-the-husband-wife-relationship-ka75oga</guid>
            <pubDate>Sat, 08 Aug 2026 12:58:01 +0530</pubDate>
            <description><![CDATA[&lt;p&gt;ಮದುವೆ ಎಂದರೆ ಪ್ರೀತಿ, ನಂಬಿಕೆ, ಗೌರವ ಮತ್ತು ಜೊತೆಯಾಗಿ ಬದುಕುವ ಸಂಬಂಧ. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ ಸ್ವರೂಪ ಬದಲಾಗುತ್ತಿದೆ. ದಾಂಪತ್ಯ ಸಂಬಂಧಗಳಿಗೆ ಈಗ ಕೆಲವು ವಿಶೇಷ ಹೆಸರುಗಳನ್ನೂ ಬಳಸಲಾಗ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg3y9fnn1tn95qfcbg1h8m7,imgname-marriage-1786173662708.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ಎಂದರೆ ಪ್ರೀತಿ, ನಂಬಿಕೆ, ಗೌರವ ಮತ್ತು ಜೊತೆಯಾಗಿ ಬದುಕುವ ಸಂಬಂಧ. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ ಸ್ವರೂಪ ಬದಲಾಗುತ್ತಿದೆ. ದಾಂಪತ್ಯ ಸಂಬಂಧಗಳಿಗೆ ಈಗ ಕೆಲವು ವಿಶೇಷ ಹೆಸರುಗಳನ್ನೂ ಬಳಸಲಾಗ್ತಿದೆ.&lt;/p&gt;&lt;img&gt;&lt;p&gt;Zombie Marriage ಎಂದರೆ ಗಂಡ-ಹೆಂಡತಿಯ ಸಂಬಂಧ ಕೇವಲ ಹೆಸರಿಗೆ ಮಾತ್ರ ಉಳಿದಿರುವ ಮದುವೆ. ಇಬ್ಬರೂ ಸಮಾಜದ ಮುಂದೆ ದಂಪತಿಯಂತೆ ಕಾಣಿಸಿಕೊಂಡರೂ, ಅವರ ನಡುವೆ ಪ್ರೀತಿ, ಮಾತುಕತೆ ಮತ್ತು ಭಾವನಾತ್ಮಕ ಸಂಬಂಧ ಬಹಳ ಕಡಿಮೆಯಾಗಿರುತ್ತದೆ. ಮಕ್ಕಳಿಗಾಗಿ, ಕುಟುಂಬದ ಒತ್ತಡದಿಂದ, ಸಮಾಜದ ಭಯದಿಂದ ಅಥವಾ ಆರ್ಥಿಕ ಕಾರಣಗಳಿಂದ ಕೆಲವರು ಇಂತಹ ಮದುವೆಯನ್ನು ಮುಂದುವರಿಸುತ್ತಾರೆ.&lt;/p&gt;&lt;img&gt;&lt;p&gt;Lavender Marriage ಸಾಮಾನ್ಯವಾಗಿ ಒಬ್ಬರು ಅಥವಾ ಇಬ್ಬರೂ ತಮ್ಮ ಲೈಂಗಿಕ ಗುರುತನ್ನು ಕುಟುಂಬ ಅಥವಾ ಸಮಾಜದಿಂದ ಮರೆಮಾಚಲು ಮಾಡಿಕೊಂಡ ಮದುವೆಯನ್ನು ಸೂಚಿಸುತ್ತದೆ. ಇದ್ರಲ್ಲಿ ಇಬ್ಬರೂ ಸಲಿಂಗಕಾಮಿಗಳಾಗಿರುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಇಬ್ಬರಿಗೂ ಈ ವಿಷಯ ತಿಳಿದಿರುತ್ತದೆ. ಪರಸ್ಪರ ಒಪ್ಪಿಗೆಯಿಂದ ಸಂಬಂಧ ಮುಂದುವರಿಸುತ್ತಾರೆ. ಆದರೆ ಕೆಲವೊಮ್ಮೆ ಸಂಗಾತಿಗೂ ಈ ವಿಚಾರ ತಿಳಿದಿರುವುದಿಲ್ಲ.&lt;/p&gt;&lt;img&gt;&lt;p&gt;Open Marriageನಲ್ಲಿ ಗಂಡ-ಹೆಂಡತಿ ಪರಸ್ಪರ ಒಪ್ಪಿಗೆಯಿಂದ ಮದುವೆಯ ಹೊರತಾಗಿಯೂ ಇತರರೊಂದಿಗೆ ಪ್ರೀತಿ ಅಥವಾ ರೊಮ್ಯಾಂಟಿಕ್ ಸಂಬಂಧ ಹೊಂದಲು ಅವಕಾಶ ನೀಡುತ್ತಾರೆ. ಇದಕ್ಕೂ ಮುನ್ನ ಇಬ್ಬರೂ ಮಾತನಾಡಿ ಕೆಲವು ನಿಯಮಗಳನ್ನು ಒಪ್ಪಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;Open Marriageನಲ್ಲಿ ಗಂಡ-ಹೆಂಡತಿ ಪರಸ್ಪರ ಒಪ್ಪಿಗೆಯಿಂದ ಮದುವೆಯ ಹೊರತಾಗಿಯೂ ಇತರರೊಂದಿಗೆ ಪ್ರೀತಿ ಅಥವಾ ರೊಮ್ಯಾಂಟಿಕ್ ಸಂಬಂಧ ಹೊಂದಲು ಅವಕಾಶ ನೀಡುತ್ತಾರೆ. ಇದಕ್ಕೂ ಮುನ್ನ ಇಬ್ಬರೂ ಮಾತನಾಡಿ ಕೆಲವು ನಿಯಮಗಳನ್ನು ಒಪ್ಪಿಕೊಳ್ಳುತ್ತಾರೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/relationship/what-are-zombie-lavender-marriages-find-out-what-the-husband-wife-relationship-ka75oga"/>
        </item>
        <item>
            <title><![CDATA[ಬೆಳಗ್ಗೆನಾ? ರಾತ್ರಿನಾ? ಸಂಶೋಧನೆಯಲ್ಲಿ ಬಯಲಾಯ್ತು ಹಾವು ಕಚ್ಚುವ ಸಮಯ.. ಈ ಟೈಂನಲ್ಲಿ ಹುಷಾರ್!]]></title>
            <link>https://kannada.asianetnews.com/gallery/life/why-afternoon-is-the-riskiest-time-for-snakebites-umgvse2</link>
            <guid isPermaLink="true">https://kannada.asianetnews.com/gallery/life/why-afternoon-is-the-riskiest-time-for-snakebites-umgvse2</guid>
            <pubDate>Sat, 08 Aug 2026 12:43:05 +0530</pubDate>
            <description><![CDATA[&lt;p&gt;Snakebite prevention: ಹಾವಿನ ಕಡಿತದ ಅಪಾಯ ಕೇವಲ ರಾತ್ರಿ ವೇಳೆ ಮಾತ್ರ ಇರುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಈ ಸಮಯದಲ್ಲಿ ಕೆಲಸ ಮಾಡುವಾಗಲೇ ಜನರು ಹೆಚ್ಚು ಹಾವಿನ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇದರ ಅಸಲಿ ಕಾರಣ ಮತ್ತು ಮುನ್ನೆಚ್ಚರಿಕೆ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky77szrh8am2skg14warscej,imgname-snake-1784801984273.png" type="image/jpeg" height="390" width="690"/>
            <content:encoded><![CDATA[&lt;p&gt;Snakebite prevention: ಹಾವಿನ ಕಡಿತದ ಅಪಾಯ ಕೇವಲ ರಾತ್ರಿ ವೇಳೆ ಮಾತ್ರ ಇರುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಈ ಸಮಯದಲ್ಲಿ ಕೆಲಸ ಮಾಡುವಾಗಲೇ ಜನರು ಹೆಚ್ಚು ಹಾವಿನ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇದರ ಅಸಲಿ ಕಾರಣ ಮತ್ತು ಮುನ್ನೆಚ್ಚರಿಕೆ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಹಗಲು ಮತ್ತು ರಾತ್ರಿ&lt;/strong&gt;ಸಾಮಾನ್ಯವಾಗಿ ನಾವು ಹಾವು ರಾತ್ರಿ ವೇಳೆಯಲ್ಲೇ ಹೆಚ್ಚು ಅಪಾಯಕಾರಿ ಎಂದು ಭಾವಿಸುತ್ತೇವೆ. ಆದರೆ ಇತ್ತೀಚಿನ ಒಂದು ಸವಿಸ್ತಾರವಾದ ಅಧ್ಯಯನದ ಪ್ರಕಾರ, ಹಾವಿನ ಕಡಿತದ ಅಪಾಯವು ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲೂ ಸಮಾನವಾಗಿ ಹಂಚಿಕೆಯಾಗಿದೆ.&lt;/p&gt;&lt;img&gt;&lt;p&gt;&lt;strong&gt;ಅಧ್ಯಯನ ಹೇಳುವುದೇನು?&lt;/strong&gt;ಈ ಸಂಶೋಧನೆಯ ವರದಿಯ ಪ್ರಕಾರ, ಶೇಕಡ 52.6 ರಿಂದ 54.6 ರಷ್ಟು ಹಾವಿನ ಕಡಿತದ ಪ್ರಕರಣಗಳು ಹಗಲಿನ ವೇಳೆಯಲ್ಲೇ ಸಂಭವಿಸುತ್ತವೆ. ಉಳಿದ 47.4 ರಷ್ಟು ಪ್ರಕರಣಗಳು ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ನಡೆಯುತ್ತವೆ. ಅಂದರೆ, ಕತ್ತಲೆಗಿಂತಲೂ ಹೆಚ್ಚಾಗಿ ಬೆಳಕಿನಲ್ಲೇ ಹಾವುಗಳು ಹೆಚ್ಚು ಕಚ್ಚುತ್ತಿವೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.&lt;/p&gt;&lt;img&gt;&lt;p&gt;&lt;strong&gt;ಮಧ್ಯಾಹ್ನದ ಸಮಯವೇ ಹೆಚ್ಚು ಅಪಾಯಕಾರಿ&lt;/strong&gt;ವರದಿಯ ಪ್ರಕಾರ, ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗಿನ ಅವಧಿಯಲ್ಲಿ ಅತಿ ಹೆಚ್ಚು ಜನರು ಹಾವಿನ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ, ಈ ಸಮಯದಲ್ಲಿ ಹೆಚ್ಚಿನ ಜನರು ಹೊಲಗದ್ದೆಗಳಲ್ಲಿ ಅಥವಾ ಹೊರಗೆ ಕೆಲಸ ಮಾಡುತ್ತಿರುತ್ತಾರೆ.&lt;/p&gt;&lt;img&gt;&lt;p&gt;&lt;strong&gt;ರಾತ್ರಿ ಮಾತ್ರನಾ?&lt;/strong&gt;ರಾತ್ರಿಯಲ್ಲಿ ಓಡಾಡುವಾಗ ಬ್ಯಾಟರಿ ಲೈಟ್ ಅಥವಾ ಟಾರ್ಚ್ ಬಳಸುವಂತೆ ನಾವು ಎಚ್ಚರಿಕೆ ವಹಿಸುತ್ತೇವೆ. ಆದರೆ ಈ ಅಧ್ಯಯನದ ಪ್ರಕಾರ, ಕೇವಲ ರಾತ್ರಿ ಮಾತ್ರ ಮುನ್ನೆಚ್ಚರಿಕೆ ಸಾಕಾಗುವುದಿಲ್ಲ. ರೈತರು ಮತ್ತು ಹೊಲದಲ್ಲಿ ಕೆಲಸ ಮಾಡುವವರು ಮಧ್ಯಾಹ್ನದ ಬಿಸಿಲಿನಲ್ಲಿ ಕೆಲಸ ಮಾಡುವಾಗಲೂ ಅಷ್ಟೇ ಜಾಗರೂಕರಾಗಿರಬೇಕು.&lt;/p&gt;&lt;img&gt;&lt;p&gt;&lt;strong&gt;ತಡೆಗಟ್ಟುವ ಕ್ರಮಗಳು&lt;/strong&gt;&lt;/p&gt;&lt;p&gt;*ಹೊಲದಲ್ಲಿ ಕೆಲಸ ಮಾಡುವಾಗ ಪೂರ್ಣವಾಗಿ ಮುಚ್ಚಿದ ಬೂಟುಗಳು ಮತ್ತು ಬಟ್ಟೆಗಳನ್ನು ಧರಿಸುವುದು.&lt;/p&gt;&lt;p&gt;*ಕಟಾವಿನ ಸಮಯದಲ್ಲಿ ಅಥವಾ ಗಿಡಗಂಟೆಗಳ ಮಧ್ಯೆ ಕೆಲಸ ಮಾಡುವಾಗ ದೀರ್ಘವಾದ ಕೋಲನ್ನು ಬಳಸಿ ಪರೀಕ್ಷಿಸುವುದು.&lt;/p&gt;&lt;p&gt;*ಹಗಲಿನಲ್ಲೂ ಹೊಲಗಳಲ್ಲಿ ಅತಿ ಜಾಗರೂಕತೆಯಿಂದ ಹೆಜ್ಜೆ ಇಡುವುದು.&lt;/p&gt;&lt;p&gt;*ಕೇವಲ ರಾತ್ರಿ ಮಾತ್ರವಲ್ಲ, ಹಗಲಿನಲ್ಲಿ ಕೆಲಸ ಮಾಡುವಾಗಲೂ ಸರಿಯಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಹಾವಿನ ಕಡಿತದಿಂದ ಪಾರಾಗಲು ಅತಿ ಅವಶ್ಯಕವಾಗಿದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/why-afternoon-is-the-riskiest-time-for-snakebites-umgvse2"/>
        </item>
        <item>
            <title><![CDATA[ಫ್ರಿಡ್ಜ್ ಡೋರ್‌ನಲ್ಲಿ ಏನು ಇಡಬಹುದು, ಏನು ಇಡಬಾರದು? 99% ಜನರಿಗೆ ಗೊತ್ತಿಲ್ಲದ ಸೀಕ್ರೆಟ್!]]></title>
            <link>https://kannada.asianetnews.com/gallery/kitchen/kitchen-hacks-what-can-and-cannot-be-kept-in-the-fridge-door-a-secret-that-most-of-people-don-t-know-mrq-m0g620q</link>
            <guid isPermaLink="true">https://kannada.asianetnews.com/gallery/kitchen/kitchen-hacks-what-can-and-cannot-be-kept-in-the-fridge-door-a-secret-that-most-of-people-don-t-know-mrq-m0g620q</guid>
            <pubDate>Sat, 08 Aug 2026 12:29:40 +0530</pubDate>
            <description><![CDATA[&lt;p&gt;ಫ್ರಿಡ್ಜ್ ಡೋರ್&zwnj;ನಲ್ಲಿ ತಾಪಮಾನದ ಬದಲಾವಣೆ ಹೆಚ್ಚಾಗಿರುವುದರಿಂದ ಯಾವ ವಸ್ತುಗಳನ್ನು ಇರಿಸಬೇಕು ಮತ್ತು ಯಾವುದನ್ನು ಇರಿಬಾರದು ಎಂಬುದರ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಈ ಕುರಿತಾದ ಮಾಹಿತಿಯನ್ನು ಲೇಖನ ಒಳಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky3rynvpmzvzg6w9tx8pwnn8,imgname-chatgpt-image-jul-22--2026--07-29-23-am-1784685746038.png" type="image/jpeg" height="390" width="690"/>
            <content:encoded><![CDATA[&lt;p&gt;ಫ್ರಿಡ್ಜ್ ಡೋರ್&zwnj;ನಲ್ಲಿ ತಾಪಮಾನದ ಬದಲಾವಣೆ ಹೆಚ್ಚಾಗಿರುವುದರಿಂದ ಯಾವ ವಸ್ತುಗಳನ್ನು ಇರಿಸಬೇಕು ಮತ್ತು ಯಾವುದನ್ನು ಇರಿಬಾರದು ಎಂಬುದರ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಈ ಕುರಿತಾದ ಮಾಹಿತಿಯನ್ನು ಲೇಖನ ಒಳಗೊಂಡಿದೆ.&lt;/p&gt;&lt;img&gt;&lt;p&gt;ಮನೆಯಲ್ಲಿ ಬಳಸುವ ಫ್ರಿಡ್ಜ್&zwnj;ನಲ್ಲಿ ಪ್ರತಿಯೊಂದು ವಸ್ತುವನ್ನು ಸರಿಯಾದ ಜಾಗದಲ್ಲಿ ಇಡುವುದು ಬಹಳ ಮುಖ್ಯ. ಅದರಲ್ಲೂ, ಅನೇಕರು ಹಾಲು, ಮೊಟ್ಟೆಯಂತಹ ವಸ್ತುಗಳನ್ನು ಸುಲಭವಾಗಿ ಸಿಗುತ್ತದೆ ಎಂದು ಫ್ರಿಡ್ಜ್ ಡೋರ್&zwnj;ನಲ್ಲಿ ಇಡುತ್ತಾರೆ. ಆದರೆ, ಫ್ರಿಡ್ಜ್&zwnj;ನ ಇತರ ಭಾಗಗಳಿಗೆ ಹೋಲಿಸಿದರೆ, ಡೋರ್ ಭಾಗದಲ್ಲಿ ತಾಪಮಾನದ ಬದಲಾವಣೆ ಹೆಚ್ಚಾಗಿರುತ್ತದೆ.&lt;/p&gt;&lt;p&gt;ಹೀಗಾಗಿ, ಬೇಗನೆ ಹಾಳಾಗುವ ಆಹಾರಗಳನ್ನು ಅಲ್ಲಿ ಇಡುವುದು ಸರಿಯಾದ ಕ್ರಮವಲ್ಲ. ಹಾಗಾಗಿ, ಫ್ರಿಡ್ಜ್ ಡೋರ್&zwnj;ನಲ್ಲಿ ಹೆಚ್ಚು ಕಾಲ ಕೆಡದೆ ಇರುವ ವಸ್ತುಗಳನ್ನು ಮಾತ್ರ ಇಡುವುದು ಉತ್ತಮ.&lt;/p&gt;&lt;img&gt;&lt;p&gt;&lt;strong&gt;ಸಾಸ್ ಮತ್ತು ಕಾಂಡಿಮೆಂಟ್ಸ್: &lt;/strong&gt;ಕೆಚಪ್, ಮಸ್ಟರ್ಡ್, ಸೋಯಾ ಸಾಸ್, ಮಯೋನೈಸ್, ಸಲಾಡ್ ಡ್ರೆಸ್ಸಿಂಗ್&zwnj;ನಂತಹ ವಸ್ತುಗಳನ್ನು ನೀವು ಡೋರ್ ಭಾಗದಲ್ಲಿ ಇಡಬಹುದು. ಇವುಗಳಲ್ಲಿ ಉಪ್ಪು, ಸಕ್ಕರೆ, ವಿನೆಗರ್&zwnj;ನಂತಹ ಸಂರಕ್ಷಕಗಳು ಇರುವುದರಿಂದ, ಸಣ್ಣ ಪ್ರಮಾಣದ ತಾಪಮಾನ ಬದಲಾವಣೆಗಳನ್ನು ಇವು ತಡೆದುಕೊಳ್ಳುತ್ತವೆ.&lt;/p&gt;&lt;p&gt;&lt;strong&gt;ಉಪ್ಪಿನಕಾಯಿ, ಜಾಮ್: &lt;/strong&gt;ಉಪ್ಪಿನಕಾಯಿ, ಜಾಮ್&zwnj;ಗಳನ್ನು ದೀರ್ಘಕಾಲ ಬಳಸುವಂತೆ ತಯಾರಿಸಲಾಗಿರುತ್ತದೆ. ಹಾಗಾಗಿ ಇವುಗಳನ್ನು ಫ್ರಿಡ್ಜ್ ಡೋರ್&zwnj;ನಲ್ಲಿ ಇಡುವುದು ಸೂಕ್ತ. ಆಗಾಗ ಬಳಸುವವರಿಗೆ ಇಲ್ಲಿ ಇಟ್ಟರೆ ಸುಲಭವಾಗಿ ಸಿಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ತಂಪು ಪಾನೀಯಗಳು ಮತ್ತು ಜ್ಯೂಸ್:&lt;/strong&gt; ನೀರಿನ ಬಾಟಲಿಗಳು, ಕೆಲವು ಬಗೆಯ ಜ್ಯೂಸ್ ಮತ್ತು ತಂಪು ಪಾನೀಯಗಳನ್ನು ಡೋರ್ ರ್ಯಾಕ್&zwnj;ನಲ್ಲಿ ಇಡಬಹುದು. ಇವುಗಳನ್ನು ಪದೇ ಪದೇ ತೆಗೆದು ಬಳಸುವುದರಿಂದ ಡೋರ್ ಭಾಗವು ಅನುಕೂಲಕರವಾಗಿರುತ್ತದೆ.&lt;/p&gt;&lt;p&gt;&lt;strong&gt;ಬೆಣ್ಣೆ ಮತ್ತು ಕೆಲವು ಸ್ಪ್ರೆಡ್&zwnj;ಗಳು: &lt;/strong&gt;ಬೆಣ್ಣೆ, ಪೀನಟ್ ಬಟರ್&zwnj;ನಂತಹ ವಸ್ತುಗಳನ್ನು ಅವುಗಳ ಲೇಬಲ್&zwnj;ನಲ್ಲಿ ಸೂಚಿಸಿರುವ ಶೇಖರಣಾ ವಿಧಾನಗಳನ್ನು ಅನುಸರಿಸಿ ಡೋರ್ ಭಾಗದಲ್ಲಿ ಇಡಬಹುದು.&lt;/p&gt;&lt;img&gt;&lt;p&gt;&lt;strong&gt;ಹಾಲು: &lt;/strong&gt;ನೀವು ಫ್ರಿಡ್ಜ್ ತೆರೆದಾಗಲೆಲ್ಲಾ ಡೋರ್ ಭಾಗದ ತಾಪಮಾನ ಬದಲಾಗಬಹುದು. ಆದ್ದರಿಂದ, ಹಾಲಿನಂತಹ ಬೇಗನೆ ಕೆಟ್ಟುಹೋಗುವ ವಸ್ತುಗಳನ್ನು ಫ್ರಿಡ್ಜ್&zwnj;ನ ಒಳಗಿನ ತಂಪಾದ ಜಾಗದಲ್ಲಿ ಇಡುವುದು ಉತ್ತಮ.&lt;/p&gt;&lt;p&gt;&lt;strong&gt;ಮೊಟ್ಟೆ: &lt;/strong&gt;ಫ್ರಿಡ್ಜ್ ಡೋರ್&zwnj;ನಲ್ಲಿ ಮೊಟ್ಟೆ ಇಡಲು ಜಾಗ ಇರುವುದರಿಂದ, ಹೆಚ್ಚಿನವರು ಅಲ್ಲಿಯೇ ಮೊಟ್ಟೆಗಳನ್ನು ಇಡುತ್ತಾರೆ. ಆದರೆ, ಡೋರ್ ಪದೇ ಪದೇ ತೆರೆಯುವುದರಿಂದ ಉಂಟಾಗುವ ತಾಪಮಾನ ಬದಲಾವಣೆಯನ್ನು ತಪ್ಪಿಸಲು, ಮೊಟ್ಟೆಗಳನ್ನು ಫ್ರಿಡ್ಜ್&zwnj;ನ ಒಳಭಾಗದಲ್ಲಿ ಇಡುವುದು ಸುರಕ್ಷಿತ.&lt;/p&gt;&lt;img&gt;&lt;p&gt;&lt;strong&gt;ಹಸಿ ಮಾಂಸ ಮತ್ತು ಮೀನು:&lt;/strong&gt; ಮಾಂಸ, ಮೀನಿನಂತಹ ಬೇಗನೆ ಕೆಡುವ ಆಹಾರಗಳಿಗೆ ಸ್ಥಿರವಾದ ತಂಪಾದ ವಾತಾವರಣ ಬೇಕು. ಆದ್ದರಿಂದ, ಇವುಗಳನ್ನು ಡೋರ್&zwnj;ನಲ್ಲಿ ಇಡುವುದನ್ನು ತಪ್ಪಿಸುವುದು ಒಳ್ಳೆಯದು. ಇವು ಸೋರದಂತೆ ಮುಚ್ಚಿದ ಪಾತ್ರೆಯಲ್ಲಿಟ್ಟು ಕೆಳಗಿನ ಟ್ರೇನಲ್ಲಿ ಸಂಗ್ರಹಿಸಿ.&lt;/p&gt;&lt;p&gt;&lt;strong&gt;ಸೊಪ್ಪು ಮತ್ತು ತರಕಾರಿಗಳು:&lt;/strong&gt; ಸೊಪ್ಪು, ಕೆಲವು ತರಕಾರಿಗಳನ್ನು ಡೋರ್ ರ್ಯಾಕ್&zwnj;ನಲ್ಲಿ ಇಡುವುದನ್ನು ತಪ್ಪಿಸಬೇಕು. ಇವುಗಳಿಗಾಗಿಯೇ ಫ್ರಿಡ್ಜ್&zwnj;ನಲ್ಲಿರುವ ತರಕಾರಿ ಶೇಖರಣಾ ಬಾಕ್ಸ್ ಬಳಸುವುದು ಉತ್ತಮ.&lt;/p&gt;]]></content:encoded>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/kitchen/kitchen-hacks-what-can-and-cannot-be-kept-in-the-fridge-door-a-secret-that-most-of-people-don-t-know-mrq-m0g620q"/>
        </item>
        <item>
            <title><![CDATA[ನೀಲಿ ಮತ್ತು ಕಿತ್ತಳೆ ಲೈನ್​ ಮೆಟ್ರೋ ಬಗ್ಗೆ BMRCL ಬಿಗ್​ ಅಪ್​ಡೇಟ್: ಇವುಗಳ ಕಾರ್ಯಾರಂಭ ಯಾವಾಗ]]></title>
            <link>https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx</link>
            <guid isPermaLink="true">https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx</guid>
            <pubDate>Sat, 08 Aug 2026 12:29:15 +0530</pubDate>
            <description><![CDATA[ಬೆಂಗಳೂರು ಮೆಟ್ರೋದ ಸಿಲ್ಕ್ ಬೋರ್ಡ್-ವಿಮಾನ ನಿಲ್ದಾಣ ನೀಲಿ ಮಾರ್ಗದ ಕಾಮಗಾರಿ ಶೇ. 72.75ರಷ್ಟು ಪೂರ್ಣಗೊಂಡಿದ್ದು, 2026-27ರ ನಡುವೆ ಹಂತ ಹಂತವಾಗಿ ತೆರೆಯುವ ನಿರೀಕ್ಷೆಯಿದೆ. ಆದರೆ, ಪ್ರಸ್ತಾವಿತ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆ ಬಾಕಿ ಇರುವುದರಿಂದ 3ನೇ ಹಂತದ ಆರೆಂಜ್ ಮಾರ್ಗವು ಕೇವಲ ಶೇ. 3.6ರಷ್ಟು ಪ್ರಗತಿ ಸಾಧಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzg2nqqd1adtxhws5p9sy497,imgname-namma-metro-1786172333804.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೆಂಗಳೂರು ಮೆಟ್ರೋದ ಸಿಲ್ಕ್ ಬೋರ್ಡ್ ಅನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ನೀಲಿ ಮಾರ್ಗದ ಕಾಮಗಾರಿ ಸದ್ಯ ಶೇಕಡಾ 72.75 ರಷ್ಟು ಪೂರ್ಣಗೊಂಡಿದ್ದು, ನಿಗದಿತ ವೇಳಾಪಟ್ಟಿಯ ಪ್ರಕಾರ ಮುಂದುವರೆದಿದೆ ಎಂದು BMRCL ಹೇಳಿದೆ. ವಿಮಾನ ನಿಲ್ದಾಣ ಕಾರಿಡಾರ್ 2026 ರ ಅಂತ್ಯದಿಂದ 2027 ರ ಅಂತ್ಯದ ನಡುವೆ ಹಂತಗಳಲ್ಲಿ ತೆರೆಯುವ ನಿರೀಕ್ಷೆಯಿದ್ದರೂ, ಪ್ರಸ್ತಾವಿತ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆಗಳು ಬಾಕಿ ಇರುವುದರಿಂದ 3 ನೇ ಹಂತದ ಆರೆಂಜ್ ಮಾರ್ಗವು ಕೇವಲ 3.6% ಪ್ರಗತಿಯನ್ನು ಸಾಧಿಸಿದೆ ಎಂದಿದೆ.&lt;/p&gt;&lt;p&gt;ಬಿಎಂಆರ್&zwnj;ಸಿಎಲ್ ವೇಳಾಪಟ್ಟಿಯ ಪ್ರಕಾರ, ಸಿಲ್ಕ್ ಬೋರ್ಡ್-ಕೆಆರ್ ಪುರಂ ವಿಭಾಗವು 2026 ರ ಅಂತ್ಯದ ವೇಳೆಗೆ, ಹೆಬ್ಬಾಳ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 2027 ರ ಮಧ್ಯಭಾಗದಲ್ಲಿ ಮತ್ತು ಕೆಆರ್ ಪುರಂ-ಹೆಬ್ಬಾಳ ವಿಭಾಗವು 2027 ರ ಅಂತ್ಯದ ವೇಳೆಗೆ ತೆರೆಯುವ ನಿರೀಕ್ಷೆಯಿದೆ. ಬೆಂಗಳೂರು ಮೆಟ್ರೋದ 58.19 ಕಿ.ಮೀ. ಹಂತಗಳನ್ನು ಒಳಗೊಂಡಿರುವ 2ಎ ಮತ್ತು 2ಬಿ ಹಂತಗಳು ಜೂನ್ ವೇಳೆಗೆ ಶೇ. 72.75 ಪೂರ್ಣಗೊಂಡಿದ್ದು, 72.09 ಕಿ.ಮೀ. ಹಂತ 2 ಯೋಜನೆಯು ಶೇ. 95.70 ಪೂರ್ಣಗೊಂಡಿದೆ. 14,788 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2ಎ ಮತ್ತು 2ಬಿ ಹಂತಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ 58 ಕಿ.ಮೀ. ಬ್ಲೂ ಲೈನ್ ಕಾರಿಡಾರ್ ನಿರ್ಮಾಣ ಪ್ರಾರಂಭವಾದಾಗಿನಿಂದ ಕಾಮಗಾರಿಯಲ್ಲಿ ವಿಳಂಬ ಆಗುತ್ತಿದೆ. ಸಿಲ್ಕ್ ಬೋರ್ಡ್-ಕೆಆರ್ ಪುರಂ ಎಲಿವೇಟೆಡ್ ವಿಭಾಗದ ಕೆಲಸವು ಆಗಸ್ಟ್ 2021 ರಲ್ಲಿ ಪ್ರಾರಂಭವಾಯಿತು, ಆದರೆ ಕೆಆರ್ ಪುರಂ-ವಿಮಾನ ನಿಲ್ದಾಣದ ನಿರ್ಮಾಣವು 2022 ರ ಆರಂಭದಲ್ಲಿ ಪ್ರಾರಂಭವಾಯಿತು.&lt;/p&gt;&lt;h2&gt;&lt;strong&gt;ಸವಾಲಾಗಿರುವ ಕಾಮಗಾರಿ&lt;/strong&gt;&lt;/h2&gt;&lt;p&gt;ಭೂಸ್ವಾಧೀನ ಸಮಸ್ಯೆಗಳು, ಮರಗಳ ತೆರವು ವಿಳಂಬ, ಹೊರ ವರ್ತುಲ ರಸ್ತೆಯ ಉದ್ದಕ್ಕೂ ಸಂಚಾರ ದಟ್ಟಣೆ, ಬಾಕಿ ಇರುವ ಅನುಮೋದನೆಗಳು ಮತ್ತು ಕಾರ್ಮಿಕರ ಕೊರತೆಯಿಂದಾಗಿ ಕೆಆರ್ ಪುರಂ-ಹೆಬ್ಬಾಳ ವಿಭಾಗವು ಅತ್ಯಂತ ಸವಾಲಿನ ವಿಭಾಗವಾಗಿ ಮುಂದುವರೆದಿದೆ. ಜನವರಿ 2023 ರಲ್ಲಿ ಪಿಯರ್ ಕುಸಿದು ಮಹಿಳೆ ಮತ್ತು ಅವರ ಚಿಕ್ಕ ಮಗನ ಪ್ರಾಣ ಕಳೆದುಕೊಂಡ ನಂತರ ನಿರ್ಮಾಣ ಕಾರ್ಯದ ಮೇಲೂ ಪರಿಣಾಮ ಬೀರಿದೆ. ಬಿಎಂಆರ್ ಸಿಎಲ್ ಸಿಲ್ಕ್ ಬೋರ್ಡ್-ಕೆಆರ್ ಪುರಂ ವಿಭಾಗದಲ್ಲಿ ಅಕ್ಟೋಬರ್&zwnj;ನಲ್ಲಿ ಪ್ರಾಯೋಗಿಕ ಸಂಚಾರಗಳನ್ನು ಪ್ರಾರಂಭಿಸಲು ಯೋಜಿಸಿದ್ದರೂ, ಬೈಯಪ್ಪನಹಳ್ಳಿಗೆ ಡಿಪೋ ಸಂಪರ್ಕ ಮತ್ತು ಸಿಲ್ಕ್ ಬೋರ್ಡ್, ಇಬ್ಲೂರು ಮತ್ತು ಮಾರತಹಳ್ಳಿಯಂತಹ ನಿಲ್ದಾಣಗಳಲ್ಲಿ ನಾಗರಿಕ ನಿರ್ಮಾಣ ಸೇರಿದಂತೆ ಪ್ರಮುಖ ಕಾರ್ಯಗಳು ಇನ್ನೂ ಬಾಕಿ ಉಳಿದಿವೆ.&lt;/p&gt;&lt;h3&gt;&lt;strong&gt;ಅಡೆತಡೆ ಮೀರಿ ಆರಂಭ&lt;/strong&gt;&lt;/h3&gt;&lt;p&gt;ಈ ಅಡೆತಡೆಗಳ ಹೊರತಾಗಿಯೂ, ಯೋಜನೆಯ ಸಮಯವು ಬದಲಾಗದೆ ಉಳಿದಿದೆ ಎಂದು ಬಿಎಂಆರ್ ಸಿಎಲ್ ವಕ್ತಾರರು ತಿಳಿಸಿದ್ದಾರೆ. ಏತನ್ಮಧ್ಯೆ, 3ನೇ ಹಂತದ ಅಡಿಯಲ್ಲಿ 45 ಕಿಮೀ ಆರೆಂಜ್ ಲೈನ್ ಕೇವಲ ಶೇ. 3.6ರಷ್ಟು ಭೌತಿಕ ಪ್ರಗತಿಯನ್ನು ಸಾಧಿಸಿದೆ. ಎರಡು ವರ್ಷಗಳ ಹಿಂದೆ ಅಂದಾಜು ರೂ. 15,611 ಕೋಟಿ ವೆಚ್ಚದಲ್ಲಿ ಅನುಮೋದನೆ ಪಡೆದ ಈ ಕಾರಿಡಾರ್, ಕೆಂಪಾಪುರವನ್ನು ಜೆಪಿ ನಗರದಿಂದ ಹೊರ ವರ್ತುಲ ರಸ್ತೆ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಸಂಪರ್ಕಿಸುತ್ತದೆ. ಕರ್ನಾಟಕ ಸರ್ಕಾರದ ಪ್ರಸ್ತಾವಿತ ರೂ. 9,700 ಕೋಟಿ ವೆಚ್ಚದ, ಮೆಟ್ರೋ ಜೋಡಣೆಯ ಕೆಲವು ಭಾಗಗಳ ಮೇಲೆ ಯೋಜಿಸಲಾದ 37 ಕಿಮೀ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆ ಬಾಕಿ ಇರುವುದರಿಂದ ಆರೆಂಜ್ ಲೈನ್&zwnj;ನ ಕೆಲಸವು ಪ್ರಾಥಮಿಕವಾಗಿ ವಿಳಂಬವಾಗಿದೆ. ಮೂರು ನಿರ್ಮಾಣ ಪ್ಯಾಕೇಜ್&zwnj;ಗಳಿಗೆ ಈಗಾಗಲೇ ಟೆಂಡರ್&zwnj;ಗಳನ್ನು ಕರೆಯಲಾಗಿದ್ದರೂ, ಪ್ರಸ್ತಾವನೆಗೆ ಅನುಮತಿ ಸಿಗುವವರೆಗೆ ಅನುಷ್ಠಾನವು ಸ್ಥಗಿತಗೊಂಡಿದೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx"/>
        </item>
        <item>
            <title><![CDATA[ಎರಡು ಮದುವೆ, 40 ಲಕ್ಷ ಖಾತೆಯಲ್ಲಿದ್ರೂ ವೃದ್ದಾಶ್ರಮದಲ್ಲಿದ್ದಾಳೆ ಮಹಿಳೆ]]></title>
            <link>https://kannada.asianetnews.com/relationship/two-marriages-the-deaths-of-both-husbands-and-40-lakh-in-the-bank-account-the-story-of-a-destitute-woman/articleshow-v6qp58u</link>
            <guid isPermaLink="true">https://kannada.asianetnews.com/relationship/two-marriages-the-deaths-of-both-husbands-and-40-lakh-in-the-bank-account-the-story-of-a-destitute-woman/articleshow-v6qp58u</guid>
            <pubDate>Sat, 08 Aug 2026 11:57:06 +0530</pubDate>
            <description><![CDATA[&lt;p&gt;ವೃದ್ಧಾಪ್ಯದಲ್ಲಿ ಪ್ರತಿಯೊಬ್ಬರಿಗೂ ಹಣಕ್ಕಿಂತ ಹೆಚ್ಚಾಗಿ ಬೇಕಾಗಿರುವುದು ಮನೆಯವರ ಪ್ರೀತಿ ಮತ್ತು ಅಮ್ಮ, ನೀವು ಚಿಂತೆ ಮಾಡಬೇಡಿ, ನಾವಿದ್ದೇವೆ ಎನ್ನುವ ಮಕ್ಕಳ ಸಾಂತ್ವಾನ. ಆದ್ರೆ ಸೋನಿಪತ್ನ ವೃದ್ಧಾಶ್ರಮವೊಂದರಲ್ಲಿ ಜೀವನ ಕಳೆಯುತ್ತಿರುವ ಈ ವೃದ್ಧೆ ಕಥೆ ಮಾತ್ರ ಭಿನ್ನವಾಗಿದೆ. ಎಲ್ಲರೂ ಇದ್ದು, ಎಲ್ಲವೂ ಇದ್ದು ಆಕೆ ಒಂಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg0v00qmb6mexnxrhtkbhmk,imgname-old-age-home-1786170408983.jpg" type="image/jpeg" height="390" width="690"/>
            <content:encoded><![CDATA[&lt;p&gt;ವೃದ್ಧಾಪ್ಯದಲ್ಲಿ ಸುಖ &ndash; ಶಾಂತ ಜೀವನ ನಡೆಸಲು ಜನರು ಬಯಸ್ತಾರೆ. ಖಾತೆಯಲ್ಲಿ ಹಣವಿದ್ರೆ ವೃದ್ಧಾಪ್ಯ ಸುಖಕರವಾಗಿ ಸಾಗುತ್ತೆ. ಆಸರೆ ನೀಡಲು ಯಾರಾದ್ರೂ ಸಿಕ್ತಾರೆ ಅಂತ ಒಂದು ನಂಬಿಕೆ ನಮ್ಮಲ್ಲಿದೆ. ಆದ್ರೆ ಇದು ಎಲ್ಲರ ಬಾಳಲ್ಲಿ ಸತ್ಯವಾಗೋದಿಲ್ಲ. ವೃದ್ಧೆಯೊಬ್ಬರ ಬಳಿ ಹಣವಿದೆ, ಮಗನಿದ್ದಾನೆ. ಆದ್ರೂ ಆಕೆ ವೃದ್ಧಾಶ್ರಮದಲ್ಲಿ ಜೀವನ ನಡೆಸ್ತಿದ್ದಾಳೆ.&lt;/p&gt;&lt;h2&gt;ಎಲ್ಲ ಇದ್ದೂ ಏನೂ ಇಲ್ಲದ ಜೀವನ&lt;/h2&gt;&lt;p&gt;ಸೋನಿಪತ್ನ ವೃದ್ಧಾಶ್ರಮದಲ್ಲಿರುವ ಮಹಿಳೆಯೊಬ್ಬರಿಗೆ ಎರಡು ಮದುವೆ ಆಗಿತ್ತು. ಇಬ್ಬರೂ ಪತಿಯರನ್ನು ಈಕೆ ಕಳೆದುಕೊಂಡಿದ್ದಾರೆ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ, 40 ಲಕ್ಷ ರೂಪಾಯಿಗಳಷ್ಟು ಹಣವನ್ನು ಕೂಡ ಉಳಿಸಿಕೊಂಡಿದ್ದಾರೆ. ಆದರೂ ಇಂದು ಸ್ವಂತ ಮನೆಯಲ್ಲಿರದೆ ವೃದ್ಧಾಶ್ರಮದಲ್ಲಿ ಜೀವನ ನಡೆಸುತ್ತಿದ್ದಾರೆ.&lt;/p&gt;&lt;p&gt;ಮಹಿಳೆಗೆ ಮೊದಲೊಂದು ಮದುವೆ ಆಗಿತ್ತು. ಪತಿ ಮರಣದ ನಂತ್ರ ಇನ್ನೊಂದು ಮದುವೆ ಆಗಿದ್ದರು. ಆದ್ರೆ ಎರಡನೇ ಪತಿ ನಿಧನದ ನಂತ್ರ ಆಕೆಗೆ ಯಾರೂ ಇರಲಿಲ್ಲ. ಮಗ ಆಕೆಯನ್ನು ಇಟ್ಟುಕೊಳ್ಳಲು ಇಷ್ಟಪಡಲಿಲ್ಲ. ಹಾಗಾಗಿ ಮಹಿಳೆ ಈಗ ವೃದ್ಧಾಶ್ರಮದಲ್ಲಿ ಜೀವನ ನಡೆಸುತ್ತಿದ್ದಾಳೆ.&lt;/p&gt;&lt;h3&gt;ತಾಯಿ ಕರುಳು&lt;/h3&gt;&lt;p&gt;ಮಗನಿಂದ ದೂರವಾಗಿ ವೃದ್ಧಾಶ್ರಮದಲ್ಲಿ ಒಂಟಿ ಜೀವನ ನಡೆಸುತ್ತಿದ್ದರೂ ಮಹಿಳೆಗೆ ಮಗನ ಮೇಲಿನ ಪ್ರೀತಿ ಕಡಿಮೆ ಆಗಲಿಲ್ಲ. ಮಗನ ಮೇಲೆ ಬೇಸರವಿದ್ರೂ ಮಗನಿಗೆ ಕೆಟ್ಟದನ್ನು ಬಯಸುತ್ತಿಲ್ಲ ಮಹಿಳೆ. ತನ್ನ ನಿಧನದ ನಂತ್ರ 40 ಲಕ್ಷ ಹಣವನ್ನು ಮಗನಿಗೆ ನೀಡಿ ಎಂದು ಮಹಿಳೆ ಹೇಳಿದ್ದಾಳೆ. ಹಣ, ಆಸ್ತಿ, ಮನೆ ಎಲ್ಲವೂ ಇದ್ದರೂ, ವೃದ್ಧಾಪ್ಯದಲ್ಲಿ ಒಂಟಿತನ ಕಾಡಿದರೆ ಆ ನೋವು ತುಂಬಾ ದೊಡ್ಡದು. ಜೀವನದ ಈ ಹಂತದಲ್ಲಿ ವೃದ್ಧರಿಗೆ ದೊಡ್ಡದಾದ ಮನೆಗಿಂತ, ತಮ್ಮವರ ಜೊತೆ ಕುಳಿತು ಮಾತನಾಡುವ ಅವಕಾಶ ಸಿಗ್ಬೇಕು. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿರುವ ಸದಸ್ಯರ ಸಂಖ್ಯೆ ಕಡಿಮೆ ಆಗ್ತಿದೆ, ವೃದ್ಧಾಶ್ರಮದ ದೊಡ್ಡದಾಗ್ತಿದೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/relationship/two-marriages-the-deaths-of-both-husbands-and-40-lakh-in-the-bank-account-the-story-of-a-destitute-woman/articleshow-v6qp58u"/>
        </item>
        <item>
            <title><![CDATA[ಕರಿಬೇವು ಗಿಡ ಬೆಳೆಯುತ್ತಿಲ್ಲವೇ? ಮನೆಯಲ್ಲಿಯೇ ಸಿಗುವ ಒಂದೇ ಒಂದು ಪದಾರ್ಥ ಬಳಸಿ.. 15 ದಿನದಲ್ಲಿ ಮ್ಯಾಜಿಕ್ ನೋಡಿ]]></title>
            <link>https://kannada.asianetnews.com/gallery/life/how-to-make-your-curry-leaf-plant-grow-faster-with-this-simple-kitchen-hack-ug0mo3c</link>
            <guid isPermaLink="true">https://kannada.asianetnews.com/gallery/life/how-to-make-your-curry-leaf-plant-grow-faster-with-this-simple-kitchen-hack-ug0mo3c</guid>
            <pubDate>Sat, 08 Aug 2026 11:53:34 +0530</pubDate>
            <description><![CDATA[&lt;p&gt;Curry leaf plant growth tips: ಮನೆಯ ಕುಂಡದಲ್ಲಿರುವ ಕರಿಬೇವು ಗಿಡ ಸೊರಗುತ್ತಿದೆಯೇ? ಎಲೆಗಳು ಚಿಗುರುತ್ತಿಲ್ಲವೇ? ಚಿಂತಿಸಬೇಡಿ, ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ ಒಂದು ಪದಾರ್ಥ ಬಳಸಿ ಕೇವಲ 15 ದಿನದಲ್ಲಿ ಗಿಡವನ್ನು ಹಸಿರಾಗಿ ಮತ್ತು ದಟ್ಟವಾಗಿ ಬೆಳೆಸುವ ಸುಲಭ ವಿಧಾನ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg0aryba7qm7beaxc0qkhtx,imgname-thumbnail---2026-08-08t114736.291-1786169877450.jpg" type="image/jpeg" height="390" width="690"/>
            <content:encoded><![CDATA[&lt;p&gt;Curry leaf plant growth tips: ಮನೆಯ ಕುಂಡದಲ್ಲಿರುವ ಕರಿಬೇವು ಗಿಡ ಸೊರಗುತ್ತಿದೆಯೇ? ಎಲೆಗಳು ಚಿಗುರುತ್ತಿಲ್ಲವೇ? ಚಿಂತಿಸಬೇಡಿ, ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ ಒಂದು ಪದಾರ್ಥ ಬಳಸಿ ಕೇವಲ 15 ದಿನದಲ್ಲಿ ಗಿಡವನ್ನು ಹಸಿರಾಗಿ ಮತ್ತು ದಟ್ಟವಾಗಿ ಬೆಳೆಸುವ ಸುಲಭ ವಿಧಾನ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಮನೆಯಲ್ಲಿಯೇ ಸಿಗುವ ಪದಾರ್ಥವಿದು&lt;/strong&gt;ಕರಿಬೇವು ಅಡುಗೆ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹೆಚ್ಚಿನವರು ಇದನ್ನು ಮನೆಯ ಬಾಲ್ಕನಿ ಅಥವಾ ಕೈತೋಟದಲ್ಲಿ ಬೆಳೆಸಲು ಇಷ್ಟಪಡುತ್ತಾರೆ. ಆದರೆ ಹಲವು ಬಾರಿ ಕರಿಬೇವು ಗಿಡ ಸರಿಯಾಗಿ ಬೆಳೆಯುವುದಿಲ್ಲ, ಎಲೆಗಳು ಹಳದಿಯಾಗಿ ಉದುರುತ್ತವೆ ಅಥವಾ ಗಿಡ ಸೊರಗಿದಂತೆ ಕಾಣುತ್ತದೆ. ಇಂತಹ ಸಮಯದಲ್ಲಿ ಮಾರುಕಟ್ಟೆಯಿಂದ ದುಬಾರಿ ಗೊಬ್ಬರ ತರುವ ಬದಲು, ಮನೆಯಲ್ಲಿಯೇ ಸಿಗುವ ಒಂದು ಪದಾರ್ಥ ಬಳಸಿದರೆ ಸಾಕು.&lt;/p&gt;&lt;img&gt;&lt;p&gt;&lt;strong&gt;ಆ ಮ್ಯಾಜಿಕ್ ಪದಾರ್ಥ ಯಾವುದು?&lt;/strong&gt;ಅದುವೇ 'ಹುಳಿ ಮಜ್ಜಿಗೆ'. ಹೌದು, ಮನೆಯಲ್ಲಿ ಉಳಿದು ಹುಳಿಯಾಗಿರುವ ಮಜ್ಜಿಗೆ ಅಥವಾ ಮೊಸರಿನ ನೀರು ಕರಿಬೇವು ಗಿಡಕ್ಕೆ ಅಮೃತವಿದ್ದಂತೆ. ಇದರಲ್ಲಿ ನೈಸರ್ಗಿಕ ಸಾರಜನಕ (Nitrogen) ಮತ್ತು ಉತ್ತಮ ಬ್ಯಾಕ್ಟೀರಿಯಾಗಳಿವೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಬೇರುಗಳು ಬಲಗೊಳ್ಳಲು ಮತ್ತು ಗಿಡ ಹಸಿರಾಗಿ ಬೆಳೆಯಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ಬಳಸುವ ವಿಧಾನ&lt;/strong&gt;*2-3 ದಿನ ಹಳೆಯದಾದ ಚೆನ್ನಾಗಿ ಹುಳಿಯಾಗಿರುವ ಮಜ್ಜಿಗೆಯನ್ನು ತೆಗೆದುಕೊಳ್ಳಿ. ಎಷ್ಟು ಹುಳಿಯಾಗಿದ್ದರೆ ಅಷ್ಟು ಒಳ್ಳೆಯದು.&lt;/p&gt;&lt;p&gt;*ಒಂದು ಲೋಟ ಹುಳಿ ಮಜ್ಜಿಗೆಗೆ ಕನಿಷ್ಠ 8 ರಿಂದ 10 ಲೋಟ ಶುದ್ಧ ನೀರನ್ನು ಬೆರೆಸಿ ತೆಳ್ಳಗೆ ಮಾಡಿ.&lt;/p&gt;&lt;p&gt;*ಈ ಮಿಶ್ರಣವನ್ನು ಗಿಡದ ಬುಡದ ಮಣ್ಣಿಗೆ ಹಾಕಿ. ನೀವು ಈ ದ್ರಾವಣವನ್ನು ಕರಿಬೇವು ಎಲೆಗಳ ಮೇಲೆ ಲಘುವಾಗಿ ಸ್ಪ್ರೇ ಕೂಡ ಮಾಡಬಹುದು.&lt;/p&gt;&lt;p&gt;*ಇದನ್ನು ತಿಂಗಳಿಗೆ ಕೇವಲ 1 ಅಥವಾ 2 ಬಾರಿ ಮಾತ್ರ ಮಾಡಿ. ಪ್ರತಿದಿನ ಹಾಕುವ ಅವಶ್ಯಕತೆಯಿಲ್ಲ.&lt;/p&gt;&lt;img&gt;&lt;p&gt;&lt;strong&gt;ಗಿಡದ ಆರೈಕೆಗಾಗಿ ಇತರೆ ಟಿಪ್ಸ್&lt;/strong&gt;&lt;/p&gt;&lt;p&gt;&lt;strong&gt;ಬಿಸಿಲು&lt;/strong&gt;ಕರಿಬೇವು ಗಿಡಕ್ಕೆ ದಿನಕ್ಕೆ ಕನಿಷ್ಠ 5-6 ಗಂಟೆಗಳ ಕಾಲ ನೇರ ಬಿಸಿಲು ಬೇಕೇ ಬೇಕು. ಬಿಸಿಲು ಕಡಿಮೆಯಾದರೆ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ.&lt;/p&gt;&lt;p&gt;&lt;strong&gt;ನೀರು&lt;/strong&gt;ಕುಂಡದ ಮಣ್ಣು ಮೇಲ್ಭಾಗದಲ್ಲಿ 1-2 ಇಂಚು ಒಣಗಿದಾಗ ಮಾತ್ರ ನೀರು ಹಾಕಿ. ಅತಿಯಾದ ನೀರು ಬೇರುಗಳು ಕೊಳೆಯಲು ಕಾರಣವಾಗಬಹುದು.&lt;/p&gt;&lt;img&gt;&lt;p&gt;ಕತ್ತರಿಸುವುದು (Pruning)ಗಿಡ ಗುಂಪುಗುಂಪಾಗಿ (Bushy) ಬೆಳೆಯಬೇಕೆಂದರೆ, ಮೇಲ್ಭಾಗದ ಉದ್ದನೆಯ ಟೊಂಗೆಗಳನ್ನು ಆಗಾಗ ಕತ್ತರಿಸುತ್ತಿರಿ. ಇದರಿಂದ ಹೊಸ ಚಿಗುರುಗಳು ಬಂದು ಗಿಡ ದಟ್ಟವಾಗಿ ಬೆಳೆಯುತ್ತದೆ.&lt;/p&gt;&lt;img&gt;&lt;p&gt;&lt;strong&gt;ದೊಡ್ಡ ಕುಂಡ&lt;/strong&gt;*ಗಿಡ ದೊಡ್ಡದಾಗುತ್ತಿದ್ದಂತೆ ಸಣ್ಣ ಕುಂಡದಿಂದ ದೊಡ್ಡ ಕುಂಡಕ್ಕೆ ಸ್ಥಳಾಂತರಿಸುವುದು (Repotting) ಉತ್ತಮ.&lt;/p&gt;&lt;p&gt;*ಈ ಮಜ್ಜಿಗೆಯ ಪ್ರಯೋಗ ಮಾಡಿದ 7-10 ದಿನಗಳಲ್ಲಿ ನೀವು ಹೊಸ ಚಿಗುರುಗಳನ್ನು ಗಮನಿಸಬಹುದು ಮತ್ತು 15-20 ದಿನಗಳಲ್ಲಿ ಗಿಡವು ಮೊದಲಿಗಿಂತ ಹೆಚ್ಚು ಹಸಿರಾಗಿ, ದಟ್ಟವಾಗಿ ಬೆಳೆಯುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/how-to-make-your-curry-leaf-plant-grow-faster-with-this-simple-kitchen-hack-ug0mo3c"/>
        </item>
        <item>
            <title><![CDATA[ಬಿಳಿ ಟೈಲ್ಸ್ ಹಳದಿ ಆಗೋಗಿದ್ಯಾ? ತಿಕ್ಕಿ ತಿಕ್ಕಿ ಕೈ ನೋಯಿಸಬೇಡಿ… ಸಿಂಪಲ್ ಟ್ರಿಕ್ ಟ್ರೈ ಮಾಡಿದ್ರೆ ಹೊಳಪು ಗ್ಯಾರಂತಿ]]></title>
            <link>https://kannada.asianetnews.com/kitchen/tile-cleaning-tips-you-should-try-at-home-for-dirty-tiles/articleshow-3bb7mdn</link>
            <guid isPermaLink="true">https://kannada.asianetnews.com/kitchen/tile-cleaning-tips-you-should-try-at-home-for-dirty-tiles/articleshow-3bb7mdn</guid>
            <pubDate>Sat, 08 Aug 2026 11:06:18 +0530</pubDate>
            <description><![CDATA[&lt;p&gt;Tile Cleaning Tips: ಬಿಳಿ ಟೈಲ್ಸ್&zwnj;ಗಳ ಮೇಲಿನ ಹಳದಿ ಕಲೆಗಳು ಮತ್ತು ಮೊಂಡುತನದ ಕಲೆಗಳನ್ನು ಈಗ ಸುಲಭವಾಗಿ ತೆಗೆದುಹಾಕಬಹುದು. ಸರಳವಾದ ಗೃಹೋಪಯೋಗಿ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಟೈಲ್ಸ್&zwnj;ಗಳ ಹೊಳಪನ್ನು ಹೊಸ ವೈಭವಕ್ಕೆ ಪುನಃಸ್ಥಾಪಿಸಲು ಪರಿಣಾಮಕಾರಿ ಮಾರ್ಗಗಳನ್ನು ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz0v1gaxsgf0rb7m3a5arp9b,imgname-----------------------2026-08-01t114425.164-1785661014365.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಬಿಳಿ ಟೈಲ್ಸ್ ಬಣ್ಣ ಕಳೆದುಕೊಂಡಿದ್ಯಾ?&lt;/strong&gt;&lt;/h2&gt;&lt;p&gt;ಬಿಳಿ ಟೈಲ್ಸ್&zwnj;ಗಳು ಮನೆಗೆ ಸ್ವಚ್ಛ, ಹೊಳೆಯುವ ಮತ್ತು ಆಕರ್ಷಕ ನೋಟವನ್ನು ನೀಡುತ್ತವೆ, ಆದರೆ ಕೆಲವು ಸಮಯದ ನಂತರ , ಅವು ಹಳದಿ ಕಲೆಗಳು, ಧೂಳು, ಸೋಪಿನ ಕಲ್ಮಷ ಮತ್ತು ತೇವಾಂಶದಿಂದ ಮೊಂಡುತನದ ಕೊಳೆಗೆ ಗುರಿಯಾಗಬಹುದು. ಸ್ನಾನಗೃಹ ಮತ್ತು ಅಡುಗೆಮನೆಯ ಟೈಲ್ಸ್&zwnj;ಗಳು, ನಿರ್ದಿಷ್ಟವಾಗಿ, ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ಅನೇಕ ಜನರು ಅವುಗಳನ್ನು ಸ್ವಚ್ಛಗೊಳಿಸಲು ದುಬಾರಿ ಕೆಮಿಕಲ್ ಬಳಸುತ್ತಾರೆ, ಆದರೆ ಸರಳವಾದ ಗೃಹೋಪಯೋಗಿ ವಸ್ತುಗಳನ್ನು ಬಳಸಿಕೊಂಡು ಮತ್ತೆ ಟೈಲ್ಸನ್ನು ಹೊಳೆಯುವಂತೆ ಮಾಡಬಹುದು.&lt;/p&gt;&lt;p&gt;ಬಿಳಿ ಟೈಲ್ಸ್&zwnj;ಗಳ ಮೇಲೆ ತಿಳಿ ಹಳದಿ ಕಲೆಗಳು ಕಾಣಿಸಿಕೊಂಡರೆ, ಅಡಿಗೆ ಸೋಡಾ ಮತ್ತು ಬಿಳಿ ವಿನೆಗರ್ ಮಿಶ್ರಣವು ತುಂಬಾ ಪರಿಣಾಮಕಾರಿಯಾಗಿದೆ. ಮೊದಲು, ಟೈಲ್ಸ್&zwnj;ಗಳ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ ಮತ್ತು ನಂತರ ಅವುಗಳ ಮೇಲೆ ಸ್ವಲ್ಪ ವಿನೆಗರ್ ಸುರಿಯಿರಿ. ಕೊಳೆಯನ್ನು ಸಡಿಲಗೊಳಿಸಲು ಕೆಲವು ನಿಮಿಷಗಳ ಕಾಲ ಬಿಡಿ. ನಂತರ, ಮೃದುವಾದ ಬ್ರಷ್ ಅಥವಾ ಸ್ಪಂಜಿನಿಂದ ನಿಧಾನವಾಗಿ ಸ್ಕ್ರಬ್ ಮಾಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ಈ ವಿಧಾನವು ಟೈಲ್&zwnj;ಗಳ ಹೊಳಪನ್ನು ಮತ್ತೆ ಹೊಸದರಂತೆ ಕಾಣಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಕೆಟ್ಟ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.&lt;/p&gt;&lt;p&gt;ಟೈಲ್ಸ್ ಮೇಲೆ ಕಲೆಯಾಗಿದ್ದರೆ, ನಿಂಬೆ ರಸವನ್ನು ನೇರವಾಗಿ ಕಲೆಯ ಮೇಲೆ ಹಾಕಿ, 10-15 ನಿಮಿಷ ಹಾಗೇ ಬಿಡಿ. ನಂತರ ಸ್ಪಾಂಜ್ ಅಥವಾ ಒದ್ದೆ ಬಟ್ಟೆಯಿಂದ ಅದನ್ನು ಒರೆಸಿ. ಒಂದು ವೇಳೆ ಕಲೆ ಹಳೆಯದಾಗಿದ್ರೆ, ನಿಂಬೆ ರಸಕ್ಕೆ ಉಪ್ಪು ಸೇರಿಸಿ, ಕಲೆ ಮೇಲೆ ಹಾಕಿ ನಂತರ ಅದನ್ನು ಒರೆಸಿ. ಇದರಿಂದ ಕಲೆ ಬೇಗನೆ ನಿವಾರಣೆಯಾಗುತ್ತದೆ.&lt;/p&gt;&lt;p&gt;ಒಂದು ವೇಳೆ ಸಾಮಾನ್ಯ ವಿಧಾನದ ಮೂಲಕ ಕಲೆ ಹೋಗದೇ ಇದ್ದರೆ, ನೀವು ಕ್ಲೋರಿನ್ ಫಾರಾಕ್ಸೈಡ್ ಬಳಕೆ ಮಾಡಬಹುದು. ಅದನ್ನು ಕಲೆಯ ಮೇಲೆ ಹಾಕಿ, ಸ್ವಲ್ಪ ಹೊತ್ತಿನ ಅದನ್ನು ಚೆನ್ನಾಗಿ ಕ್ಲೀನ್ ಮಾಡಿ, ಕಲೆ ನಿವಾರಣೆಯಾಗುತ್ತದೆ.&lt;/p&gt;&lt;p&gt;ಇನ್ನು ಟೈಲ್ಸ್ ಮೇಲೆ ಗಾಢವಾದ ಹಳದಿ ಕಲೆಗಳಿದ್ದರೆ, ಅದರ ಮೇಲೆ ಬೇಕಿಂಗ್ ಸೋಡಾ ಮತ್ತು ನೀರನ್ನು ಬೆರೆಸಿ ಪೇಸ್ಟ್ ಮಾಡಿ ಹಾಕಿ, ಸ್ವಲ್ಪ ಹೊತ್ತಿನ ನಂತರ ಕ್ಲೀನ್ ಮಾಡಿ. ಇದರಿಂದ ಹಳದಿ ಕಲೆ ನಿವಾರಣೆಯಾಗುತ್ತದೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/kitchen/tile-cleaning-tips-you-should-try-at-home-for-dirty-tiles/articleshow-3bb7mdn"/>
        </item>
        <item>
            <title><![CDATA[ಹೆಚ್ಚು ಕಾಲ ಬದುಕಬೇಕಾ? ವ್ಯಾಯಾಮ ಮಾಡಿದ್ರೆ ಸಾಲದು, ಬೆಳಗಿನ ತಿಂಡಿ, ರಾತ್ರಿಯ ಊಟ ಹೀಗಿರಲಿ!]]></title>
            <link>https://kannada.asianetnews.com/gallery/health-life/want-to-live-longer-exercise-isnt-enough-here-is-how-your-dinner-should-be-z50fx8a</link>
            <guid isPermaLink="true">https://kannada.asianetnews.com/gallery/health-life/want-to-live-longer-exercise-isnt-enough-here-is-how-your-dinner-should-be-z50fx8a</guid>
            <pubDate>Sat, 08 Aug 2026 08:23:22 +0530</pubDate>
            <description><![CDATA[&lt;p&gt;ಪ್ರತಿಯೊಬ್ಬರಿಗೂ ದೀರ್ಘಕಾಲ ಬದುಕಬೇಕು ಅನ್ನುವ ಆಸೆ ಇರುತ್ತೆ. ಅದಕ್ಕಾಗಿ ನಿತ್ಯ ವ್ಯಾಯಾಮ ಮಾಡುತ್ತಾರೆ. ಆದರೆ ಆರೋಗ್ಯವಾಗಿರಲು ವ್ಯಾಯಾಮ ಮಾಡಿದರೆ ಸಾಲದು, ಆಹಾರವೂ ಮುಖ್ಯ. ದೀರ್ಘಕಾಲ ಆರೋಗ್ಯದಿಂದ ಇರಲು ಊಟದ ವಿಧಾನ ಹೇಗಿರಬೇಕು? ಮುಂದೆ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfkjqcry73x4w6kga9n5krg,imgname-----------------------2026-08-08t080155.527-1786156506520.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರತಿಯೊಬ್ಬರಿಗೂ ದೀರ್ಘಕಾಲ ಬದುಕಬೇಕು ಅನ್ನುವ ಆಸೆ ಇರುತ್ತೆ. ಅದಕ್ಕಾಗಿ ನಿತ್ಯ ವ್ಯಾಯಾಮ ಮಾಡುತ್ತಾರೆ. ಆದರೆ ಆರೋಗ್ಯವಾಗಿರಲು ವ್ಯಾಯಾಮ ಮಾಡಿದರೆ ಸಾಲದು, ಆಹಾರವೂ ಮುಖ್ಯ. ದೀರ್ಘಕಾಲ ಆರೋಗ್ಯದಿಂದ ಇರಲು ಊಟದ ವಿಧಾನ ಹೇಗಿರಬೇಕು? ಮುಂದೆ ಓದಿ.&lt;/p&gt;&lt;img&gt;&lt;p&gt;ಆರೋಗ್ಯಕರ ಜೀವನ ಎಷ್ಟು ಮುಖ್ಯ ಅಂತಾ ತಿಳಿಬೇಕೆಂದರೆ ಒಮ್ಮೆಯಾದರೂ ದೊಡ್ಡ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು ಹೇಳ್ತಾರೆ. ಆರೋಗ್ಯದ ಕುರಿತು ನಿರ್ಲಕ್ಷ್ಯದಿಂದ ವಿವಿಧ ರೋಗ ರುಜಿನಗಳಿಗೆ ತುತ್ತಾದ ರೋಗಿಗಳ ನರಳಾಟ ನೋಡಿದಾಗ ಪ್ರತಿಯೊಬ್ಬರಿಗೂ ಆರೋಗ್ಯದ ಮಹತ್ವ ಅರಿವಾಗುತ್ತದೆ.&lt;/p&gt;&lt;img&gt;&lt;p&gt;ಪ್ರತಿಯೊಬ್ಬರೂ ಇಂದು ಆರೋಗ್ಯವಾಗಿರಲು ದೀರ್ಘಕಾಲದವರೆಗೆ ಯಾವುದೇ ಕಾಯಿಲೆ ಬಾರದಂತೆ ಇರಲು ಇಷ್ಟಪಡ್ತಾರೆ. ಆರೋಗ್ಯವಾಗಿರಲು ಕೇವಲ ವ್ಯಾಯಾಮ ಮಾಡಿ ಕಟ್ಟುಮಸ್ತಾದ ದೇಹ ಬಳಸಿಬಿಟ್ಟರೆ ಸಾಲದು. ಆದರೆ ನೀವು ಪ್ರತಿ ದಿನ ಏನು ತಿನ್ನುತ್ತೀರಿ ಅನ್ನೋದರ ಮೇಲೆ ನಿಮ್ಮ ಆರೋಗ್ಯ ಹೇಗಿದೆ ಅನ್ನೋದು ತಿಳಿಯುತ್ತೆ.ಅದರಲ್ಲೂ ರಾತ್ರಿ ಊಟದ ಬಗ್ಗೆ ಹೆಚ್ಚು ಗಮನ ಹರಿಸೋದು ಮುಖ್ಯ. ರಾತ್ರಿ ಡಿನ್ನರ್ ಪಾರ್ಟಿ ಅಂತಾ ಹೊಟ್ಟೆ ಬಿರಿಯುವಂತೆ ತಿಂದು ಮಲಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ರಾತ್ರಿ ವೇಳೆ ಸರಿಯಾದ ಆಹಾರ ಮುಖ್ಯ. ಏಕೆಂದ್ರೆ ನಮ್ಮ ದೇಹಕ್ಕೆ ವಿಶ್ರಾಂತಿಯ ಸಮಯವದು. ಹೀಗಾಗಿ ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿದರೆ ರಾತ್ರಿಯ ನಿದ್ದೆಯು ಚೆನ್ನಾಗಿರುತ್ತೆ.&lt;/p&gt;&lt;img&gt;&lt;p&gt;ಹಾಗಾದರೆ ರಾತ್ರಿಯ ಊಟದಲ್ಲಿ ಏನೇನಿರಬೇಕು?&lt;/p&gt;&lt;p&gt;&lt;strong&gt;ಹಸಿರು ತರಕಾರಿಗಳನ್ನು ತಿನ್ನಬೇಕು&lt;/strong&gt;&lt;/p&gt;&lt;p&gt;ಊಟದ ತಟ್ಟೆಯಲ್ಲಿ ಹಸಿರು ತರಕಾರಿಗಳಿರಲಿ. ಪಾಲಕ್, ಸೋರೆಕಾಯಿ, ಬೆಂಡೆಕಾಯಿ, ಟೊಮೆಟೋ, ಬೀನ್ಸ್, ಎಲೆಕೋಸು ಮುಂತಾದ ಹಸಿರು ತರಕಾರಿಗಳಲ್ಲಿ ಯಾವುದಾದರೊಂದು ಊಟದಲ್ಲಿರಲಿ. ಯಾಕೆಂದರೆ ಇವು ಹೊಟ್ಟೆಗೆ, ಆರೋಗ್ಯಕ್ಕೆ ಒಳ್ಳೆಯದು. ರಾತ್ರಿ ಜೀರ್ಣಿಸಿಕೊಳ್ಳಲು ಸುಲಭ. ಆದರೆ ಯಾವುದೇ ಕಾರಣಕ್ಕೂ ಎಣ್ಣೆ ಮಸಾಲೆ ಪದಾರ್ಥ ಸೇವನೆ ಬೇಡ.&lt;/p&gt;&lt;img&gt;&lt;p&gt;ಹಿಂದಿನ ಜನರು ಅನ್ನಕ್ಕಿಂತ ಹೆಚ್ಚಾಗಿ ರೊಟ್ಟಿ ಬೇಳೆ ತಿಂದು ಗಟ್ಟಿಯಾಗಿದ್ದರು. ಈಗ ಫಾಸ್ಟ್ ಫುಡ್ ಕಾಲ, ರೊಟ್ಟಿ ಬೇಳೆ ಎಲ್ಲ ಯಾರು ತಿಂತಾರೀ ಅದರಲ್ಲೇನಿದೆ ಟೆಸ್ಟ್ ಅನ್ನೋ ಜನ ಫಾಸ್ಟ್ ಫುಡ್ ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ ರಾತ್ರಿ ಒಂದು ಬಟ್ಟಲು ಬೇಳೆ, ಎರಡು ರೊಟ್ಟಿ ತಿಂದ್ರೆ ಸಾಕು. ಬೇಳೆ ಯಾಕೆ ತಿನ್ನಬೇಕೆಂದ್ರೆ ದೇಹಕ್ಕೆ ಶಕ್ತಿ ತುಂಬಲು, ಹಸಿವು ತಡೆಯಲು ಬೇಕು. ಬೇಳೆ ಬೇಡಪ್ಪ ಅಂದ್ರೆ ನೀವು ಬೇಳೆ ಬದಲಿಗೆ ಪನೀರ್ ಅಥವಾ ಸೋಯಾಬೀನ್ ಅನ್ನು ಸಹ ತಿನ್ನಬಹುದು. ಆದರೆ ಯಾವುದೇ ಆದರೂ ಮಿತಿ ಇರಲಿ.&lt;/p&gt;&lt;img&gt;&lt;p&gt;ಇನ್ನೊಂದು ರಾತ್ರಿ ಊಟದಲ್ಲಿ ಸ್ವಲ್ಪ ಸಲಾಡ್ ತಿನ್ನೋದು ಮರೆಯಬೇಡಿ, ಸೌತೆಕಾಯಿ, ಟೊಮೆಟೊ ಅಥವಾ ಗಜ್ಜರಿ, ಬೀಟ್ರೂಟ್ ಯಾವುದೇ ಆಗಿರಲಿ ಊಟದ ತಟ್ಟೆಯಲ್ಲಿ ಏನಾದರೊಂದು ಸೈಡ್&zwnj;ಗಿರಲಿ. ಸಲಾಡ್ ತಿನ್ನುವುದರಿಂದ ಹೊಟ್ಟೆ ಬೇಗನೇ ತುಂಬುತ್ತೆ. ಇದರಿಂದ ಅತಿಯಾಗಿ ತಿನ್ನುವುದು ಕಡಿಮೆ ಆಗುತ್ತೆ. ಊಟದಲ್ಲಿ ನಿಂಬೆರಸ ಹಾಕಿಕೊಂಡರೆ ಇನ್ನೂ ಉತ್ತಮ.&lt;/p&gt;&lt;img&gt;&lt;p&gt;ರಾತ್ರಿ ಲೈಟಾಗಿ ಊಟ ಮಾಡಿದ ನಂತರ ಸ್ವಲ್ಪ ಹಸಿವು ಎನಿಸಿದರೆ ನೀವು ಸೇಬು, ಪಪ್ಪಾಯಿ, ಪೇರಲ ಹಣ್ಣುಗಳನ್ನು ತಿನ್ನಬಹುದು. ಆದರೆ ಊಟದವಾದ ತಕ್ಷಣ ಯಾವುದೇ ಕಾರಣಕ್ಕೂ ಹಣ್ಣುಗಳನ್ನ ತಿನ್ನುವುದು ತಪ್ಪಿಸಿ, ಸ್ವಲ್ಪ ಸಮಯ ಬಿಟ್ಟು ತಿನ್ನುವುದು ಉತ್ತಮ.&lt;/p&gt;&lt;p&gt;ನೀವು ಲಘು ಭೋಜನ ಮಾಡಿ ಸ್ವಲ್ಪ ಸಮಯದ ನಂತರ ಹಸಿವಾದರೆ, ನೀವು ಸೇಬು, ಪಪ್ಪಾಯಿ ಅಥವಾ ಪೇರಲದಂತಹ ಹಣ್ಣನ್ನು ತಿನ್ನಬಹುದು. ಆದರೆ ಊಟದ ನಂತರ ತಕ್ಷಣ ಹೆಚ್ಚು ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ. ಸ್ವಲ್ಪ ಸಮಯ ಕಾಯುವುದು ಉತ್ತಮ.&lt;/p&gt;&lt;p&gt;&lt;strong&gt;ಇವುಗಳಿಂದ ದೂರ ಇರಿ!&lt;/strong&gt;&lt;/p&gt;&lt;p&gt;ರಾತ್ರಿವೇಳೆ ಹೆಚ್ಚು ಹುರಿದ ಆಹಾರ, ಫಾಸ್ಟ್ ಫುಡ್, ಸ್ವೀಟ್ಸ್, ಕೂಲ್&zwnj;ಡ್ರಿಂಕ್ಸ್ ಬೇಡವೇ ಬೇಡ.&lt;/p&gt;&lt;p&gt;ಊಟವಾದ ತಕ್ಷಣ ಮಲಗುವುದು ಒಳ್ಳೆಯ ಅಭ್ಯಾಸವಲ್ಲ. 30 ನಿಮಿಷಗಳ ಕಾಲ ವಾಕ್ ಮಾಡಿ ನಂತರ ಮಲಗುವುದು ಒಳ್ಳೇದು.&lt;/p&gt;&lt;p&gt;&lt;strong&gt;ಆಹಾರದ ಜೊತೆ ನಿಮ್ಮ ಹ್ಯಾಬಿಟ್ ಕೂಡ ಬದಲಿಸಿ&lt;/strong&gt;&lt;/p&gt;&lt;p&gt;ನೀವು ನಿಜವಾಗಿಯೂ ಹೆಚ್ಚು ಕಾಲ ಆರೋಗ್ಯಯುತವಾಗಿ ಬದುಕುವ ಆಸೆ ಇದ್ರೆ, ವ್ಯಾಯಾಮ, ರಾತ್ರಿ ಊಟ ಅಷ್ಟೇ ಅಲ್ಲ, ಊಟದ ನಂತರವೂ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಅವುಗಳೆಂದರೆ&lt;/p&gt;&lt;ul&gt; &lt;li&gt;ಊಟ ತಪ್ಪಿಸದೆ ಸಮಯಕ್ಕೆ ಸರಿಯಾಗಿ ತಿನ್ನುವುದು.&lt;/li&gt; &lt;li&gt;ಸಾಕಷ್ಟು ನೀರು ಕುಡಿಯಿರಿ.&lt;/li&gt; &lt;li&gt;ಉತ್ತಮವಾಗಿ ನಿದ್ರಿಸಿ.&lt;/li&gt; &lt;li&gt;ಪ್ರತಿದಿನ ವಾಕಿಂಗ್ ಮಾಡಿ.&lt;/li&gt; &lt;li&gt;ವ್ಯಾಯಾಮ.&lt;/li&gt; &lt;li&gt;ಊಟ ಹೆಚ್ಚು ಬೇಡ, ಕಡಿಮೆ ಬೇಡ.&lt;/li&gt;&lt;/ul&gt;]]></content:encoded>
            <category>life</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/health-life/want-to-live-longer-exercise-isnt-enough-here-is-how-your-dinner-should-be-z50fx8a"/>
        </item>
        <item>
            <title><![CDATA[Inside Bengaluru Star hotel: ಸ್ಟಾರ್‌ ಹೋಟೆಲಲ್ಲಿ ಕೊಳೆತ ತರಕಾರಿ, ಹಳತಾದ ಮಾಂಸ!  26 ಹೋಟೆಲ್‌ ಮೇಲೆ ಆಹಾರ ಇಲಾಖೆ ದಾಳಿ!]]></title>
            <link>https://kannada.asianetnews.com/state/rotten-veggies-stale-meat-at-star-hotel-food-safety-department-raids-26-hotels-in-bengaluru-rav/articleshow-nea5p0t</link>
            <guid isPermaLink="true">https://kannada.asianetnews.com/state/rotten-veggies-stale-meat-at-star-hotel-food-safety-department-raids-26-hotels-in-bengaluru-rav/articleshow-nea5p0t</guid>
            <pubDate>Sat, 08 Aug 2026 06:14:57 +0530</pubDate>
            <description><![CDATA[&lt;p&gt;ಬೆಂಗಳೂರಿನ 26 ತ್ರಿತಾರಾ ಮತ್ತು ಪಂಚತಾರಾ ಹೋಟೆಲ್&zwnj;ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿದ್ದು, ಅವಧಿ ಮೀರಿದ ಮಾಂಸ, ಕೊಳೆತ ತರಕಾರಿಗಳು ಮತ್ತು ಗಂಭೀರ ಅನೈರ್ಮಲ್ಯವನ್ನು ಪತ್ತೆಹಚ್ಚಿದೆ. ದಿ ಲಲಿತ್ ಅಶೋಕ್&zwnj;, ತಾಜ್&zwnj;ನಂತಹ ಪ್ರತಿಷ್ಠಿತ ಹೋಟೆಲ್&zwnj;ಗಳಿಂದಲೂ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfd113jzy751tnje42r3wmz,imgname-----------------------2026-08-08t061022.325-1786149635186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.8): &lt;/strong&gt;ಬೆಂಗಳೂರು ವ್ಯಾಪ್ತಿಯ ತ್ರಿತಾರಾ(3 Star Hotels) ಹಾಗೂ ಪಂಚತಾರಾ ಹೋಟೆಲ್&zwnj;(Five star) ಸೇರಿ 26 ತಾರಾ ಹೋಟೆಲ್&zwnj;ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ(Food Safety Department Raids) ನಡೆಸಿದ್ದು, ಅವಧಿ ಮೀರಿದ ಮಾಂಸ, ಕೊಳೆತ ತರಕಾರಿ ಪತ್ತೆಯಾಗಿದೆ.&lt;/p&gt;&lt;p&gt;ಆಹಾರ ಸುರಕ್ಷತೆ ನಿಯಮ ಉಲ್ಲಂಘನೆ, ಮಾಂಸಾಹಾರಿ ಹಾಗೂ ಸಸ್ಯಾಹಾರಿ ಆಹಾರ ಪ್ರತ್ಯೇಕಿಸದೆ ಒಟ್ಟಾಗಿ ಸಂಗ್ರಹಿಸಿರುವುದು, ಅವಧಿ ಮೀರಿದ ಆಹಾರ, ಅನೈರ್ಮಲ್ಯ, ಲೇಬಲ್&zwnj; ಇಲ್ಲದಿರುವ ಬ್ರಾಂಡ್ ಬಳಕೆ, ತರಕಾರಿಗಳ ಮೇಲೆ ಫಂಗಸ್&zwnj; ಬೆಳೆದಿರುವುದು ಸೇರಿ ಗಂಭೀರ ಲೋಪಗಳು ಪತ್ತೆಯಾಗಿವೆ. ಹೀಗಾಗಿ ಸಂಬಂಧಪಟ್ಟ ಹೋಟೆಲ್&zwnj;ಗಳಿಗೆ ನೋಟಿಸ್&zwnj; ಜಾರಿ ಮಾಡಿದ್ದು, ನ್ಯಾಯ ನಿರ್ಣಾಯಕ ಅಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h2&gt;ಹೋಟೆಲ್&zwnj; ಆಹಾರ ಜಪ್ತಿ:&lt;/h2&gt;&lt;p&gt;ತಪಾಸಣೆಯ ವೇಳೆ ದಿ ಲಲಿತ್ ಅಶೋಕ್&zwnj; ಹೋಟೆಲ್&zwnj;ನಿಂದ 76 ಕೆ.ಜಿ. ಮಾಂಸ, 200 ಕೆ.ಜಿ. ತರಕಾರಿ ಜಪ್ತಿ ಮಾಡಲಾಗಿದೆ. ಜತೆಗೆ 32 ಲೀಟರ್&zwnj; ಅವಧಿ ಮೀರಿದ ಹಾಲು ವಶಪಡಿಸಿಕೊಂಡು ನಾಶಪಡಿಸಲಾಗಿದೆ.&lt;/p&gt;&lt;p&gt;ಶಾಂಗ್ರಿ-ಲಾ ಹೋಟೆಲ್&zwnj;ನಲ್ಲಿ 15 ಕೆ.ಜಿ. ಮಾಂಸ, ಫೋರ್&zwnj; ಸೀಸನ್ಸ್&zwnj; ಹೋಟೆಲ್&zwnj;ನಲ್ಲಿ 19 ಕೆ.ಜಿ. ಮಾಂಸ, ತಾಜ್ ವಿವಾಂತ- ವೈಟ್&zwnj;ಫೀಲ್ಡ್&zwnj;ನಲ್ಲಿ 3 ಕೆ.ಜಿ. ಅವಧಿ ಮೀರಿದ ಬೇಕರಿ ಉತ್ಪನ್ನ ಜಪ್ತಿ ಮಾಡಲಾಗಿದೆ.&lt;/p&gt;&lt;p&gt;ಜತೆಗೆ ಯಶವಂತಪುರದ ತಾಜ್&zwnj; ಹೋಟೆಲ್&zwnj;ನಲ್ಲಿ 72 ಕೆ.ಜಿ. ಮಾಂಸ ಹಾಗೂ ಸಾಲಮನ್&zwnj; ಮೀನು, ಏಟ್ರಿಯಾ ಹೋಟೆಲ್&zwnj;ನಲ್ಲಿ 105 ಕೆ.ಜಿ. ಅವಧಿ ಮೀರಿದ ಆಹಾರ ಪದಾರ್ಥ ಜಪ್ತಿ ಮಾಡಲಾಗಿದೆ. ಇದರಲ್ಲಿ 50 ಕೆ.ಜಿ. ಕೋಳಿ ಮಾಂಸ, 25 ಕೆ.ಜಿ. ಮಾಂಸ, 23 ಕೆ.ಜಿ.ಮೀನು ಹಾಗೂ 7 ಕೆ.ಜಿ. ತರಕಾರಿ ಸೇರಿದೆ. ಇವುಗಳನ್ನು ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;ಸುರಕ್ಷತೆ ಉಲ್ಲಂಘನೆ:&lt;/h3&gt;&lt;p&gt;ಅಡುಗೆ ಮನೆ, ಆಹಾರ ಸಂಗ್ರಹಣೆ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಎಫ್ಎಸ್&zwnj;ಎಸ್&zwnj;ಎಐ ನಿಯಮಗಳಿಗೆ ಅನುಗುಣವಾಗಿರುವ ಮಾಂಸ ಉತ್ಪನ್ನಗಳ ಲೇಬಲಿಂಗ್&zwnj; ಇಲ್ಲದಿರುವುದು, ಅವಧಿ ಮೀರಿದ ಹಾಲಿನ ಉತ್ಪನ್ನಗಳು, ಬೇಕರಿ ಉತ್ಪನ್ನ, ಕೋಳಿ ಮಾಂಸ, ಮೀನು, ಮಾಂಸ ಹಾಗೂ ತರಕಾರಿ ಸಂಗ್ರಹ ಪತ್ತೆಯಾಗಿದೆ. ತರಕಾರಿ ಹಾಗೂ ಆಹಾರ ಪದಾರ್ಥಗಳಲ್ಲಿ ಶಿಲೀಂಧ್ರವೂ ಪತ್ತೆಯಾಗಿದೆ.&lt;/p&gt;&lt;p&gt;ಈ ಬಗ್ಗೆ ಪತ್ರಿಕ್ರಿಯಿಸಿರುವ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಮಾಹಿತಿ ನೀಡಿ, ತಾರಾ ಹೋಟೆಲ್&zwnj;ಗಳ ಮೇಲೆ ದಾಳಿ ಮಾಡಿ ಸ್ವಚ್ಛತೆ ಮತ್ತು ಗುಣಮಟ್ಟ ಪರಿಶೀಲಿಸಿದ್ದೇವೆ. ಲೋಪಗಳು ಪತ್ತೆಯಾಗಿರುವ ಹೋಟೆಲ್&zwnj;ಗಳಿಗೆ ನೋಟಿಸ್&zwnj; ಜಾರಿ ಮಾಡಿ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.&lt;/p&gt;&lt;p&gt;ಸಸ್ಯಾಹಾರಿ, ಮಾಂಸಾಹಾರಿ ಆಹಾರಗಳನ್ನು ಹೇಗೆ ಸಂಗ್ರಹಿಸಲಾಗಿದೆ ಎಂದು ಪರಿಶೀಲಿಸಲಾಗಿದೆ. ಗಂಭೀರ ಲೋಪ ಕಂಡುಬಂದರೆ ಪರವಾನಗಿ ರದ್ದು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;h3&gt;ಜನರಿಗೆ ಸತ್ಯ ತಿಳಿಯಬೇಕು&lt;/h3&gt;&lt;p&gt;ಹೋಟೆಲ್&zwnj;ಗಳಲ್ಲಿ ಗುಣಮಟ್ಟ ಚೆನ್ನಾಗಿರುತ್ತದೆ ಎಂದು ಜನರು ಹೋಗುತ್ತಾರೆ. ಜನರಿಗೆ ವಾಸ್ತವ ತಿಳಿಸುವ ಕೆಲಸ ಮಾಡುತ್ತೇವೆ. ಬಳಿಕ ಜನರೇ ನಿರ್ಧಾರ ಮಾಡುತ್ತಾರೆ. ಒಟ್ಟಾರೆ ಜನರ ಆರೋಗ್ಯ ರಕ್ಷಣೆ ನಮ್ಮ ಉದ್ದೇಶ.&lt;/p&gt;&lt;p&gt;&lt;strong&gt;-ಯು.ಟಿ. ಖಾದರ್, ಆರೋಗ್ಯ ಸಚಿವ&lt;/strong&gt;&lt;/p&gt;]]></content:encoded>
            <category>life</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rotten-veggies-stale-meat-at-star-hotel-food-safety-department-raids-26-hotels-in-bengaluru-rav/articleshow-nea5p0t"/>
        </item>
        <item>
            <title><![CDATA[Growing Garlic: ಮನೆಯಲ್ಲೇ ಬೆಳ್ಳುಳ್ಳಿ ಬೆಳೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್]]></title>
            <link>https://kannada.asianetnews.com/webstories/life/simple-steps-to-grow-garlic-at-home-in-a-pot-gvd-64kwc14</link>
            <guid isPermaLink="true">https://kannada.asianetnews.com/webstories/life/simple-steps-to-grow-garlic-at-home-in-a-pot-gvd-64kwc14</guid>
            <pubDate>Sat, 08 Aug 2026 00:29:57 +0530</pubDate>
            <description><![CDATA[&lt;p&gt;ನಮ್ಮ ಮನೆಯಲ್ಲೇ ಬೆಳ್ಳುಳ್ಳಿ ಬೆಳೆಯೋದು ಅಷ್ಟೇನೂ ಕಷ್ಟವಲ್ಲ. ಆದರೆ, ಕೆಲವು ಮುಖ್ಯ ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjq2twzj3m83731ne1xq9fz9,imgname-new-project---2026-03-02t161920.697-1772448740338.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/life/simple-steps-to-grow-garlic-at-home-in-a-pot-gvd-64kwc14"/>
        </item>
    </channel>
</rss>
