<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 05 Jun 2026 16:02:05 +0530</lastBuildDate>
        <atom:link href="https://kannada.asianetnews.com/rss/koppal" rel="self" type="application/rss+xml"/>
        <item>
            <title><![CDATA[ಕೊಪ್ಪಳ: ದಾಸೋಹದಲ್ಲಿ ಹೆಗಲಮೇಲೆ ಅಕ್ಕಿ ಮೂಟೆ ಹೊತ್ತ ಗವಿಸಿದ್ದೇಶ್ವರ ಶ್ರೀಗಳು!]]></title>
            <link>https://kannada.asianetnews.com/state/koppal-gavisiddeshwara-swamiji-carries-rice-bag-on-shoulder-for-dasoha-viral/articleshow-tf4qt37</link>
            <guid isPermaLink="true">https://kannada.asianetnews.com/state/koppal-gavisiddeshwara-swamiji-carries-rice-bag-on-shoulder-for-dasoha-viral/articleshow-tf4qt37</guid>
            <pubDate>Sat, 10 Jan 2026 20:16:02 +0530</pubDate>
            <description><![CDATA[&lt;p&gt;ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತವಾದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ, ಗವಿಸಿದ್ದೇಶ್ವರ ಸ್ವಾಮೀಜಿಗಳು ಸ್ವತಃ ಅಕ್ಕಿ ಮೂಟೆ ಹೊತ್ತು ದಾಸೋಹ ಸೇವೆ ಮಾಡಿದ್ದಾರೆ. ಶ್ರೀಗಳ ಈ ಸರಳತೆ ಮತ್ತು 'ಕಾಯಕವೇ ಕೈಲಾಸ' ತತ್ವದ ಪಾಲನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kem58tbkqrwssa6k50ny91vs,imgname-----------------------2026-01-10t200354.597-1768055662963.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಜ.10):&lt;/strong&gt; ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಜಾತ್ರೆ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಅಜ್ಜನ ಜಾತ್ರೆಗೆ ಆಗಮಿಸಿದರು. ಇದೀಗ ಜಾತ್ರೆಯ ದಾಸೋಹ ಭವನದಲ್ಲಿ ನಡೆದ ಒಂದು ಅಪರೂಪದ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.&lt;/p&gt;&lt;h2&gt;ದಾಸೋಹದಲ್ಲಿ ಅಕ್ಕಿ ಮೂಟೆ ಹೊತ್ತ ಸ್ವಾಮೀಜಿ!&lt;/h2&gt;&lt;p&gt;ಅಸಂಖ್ಯಾತ ಭಕ್ತರ ಆರಾಧ್ಯ ದೈವ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಯವರು ಅಕ್ಷರಶಃ ಜನಸಾಮಾನ್ಯರಂತೆ ದಾಸೋಹ ಭವನದಲ್ಲಿ ಕಾರ್ಯನಿರ್ವಹಿಸಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಜನವರಿ 18ರ ವರೆಗೆ ನಡೆಯಲಿರುವ ಮಹಾಪ್ರಸಾದ ಸೇವೆಗಾಗಿ ಬಂದಿದ್ದ ಅಕ್ಕಿ ಮೂಟೆಯೊಂದನ್ನು ಶ್ರೀಗಳು ಸ್ವತಃ ತಮ್ಮ ಹೆಗಲ ಮೇಲೆ ಹೊತ್ತು ಅಡುಗೆ ಕೋಣೆಗೆ ತಲುಪಿಸಿದ್ದಾರೆ. ಲಕ್ಷಾಂತರ ಭಕ್ತರಿದ್ದರೂ ಶ್ರೀಗಳು ತೋರಿದ ಈ ಸರಳತೆ ಭಕ್ತರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.&lt;/p&gt;&lt;h3&gt;ಮಕ್ಕಳೊಂದಿಗೆ ಮಕ್ಕಳಾದ ಗವಿಸಿದ್ದೇಶ್ವರ ಶ್ರೀಗಳು&lt;/h3&gt;&lt;p&gt;ಅಕ್ಕಿ ಮೂಟೆ ಹೊತ್ತು ದಾಸೋಹ ಸೇವೆ ಮಾಡಿದ ಬಳಿಕ, ಶ್ರೀಗಳು ಅಲ್ಲಿ ಕೆಲಸ ಮಾಡುತ್ತಿದ್ದ ಪುಟಾಣಿ ಮಕ್ಕಳೊಂದಿಗೆ ಕೆಲಕಾಲ ಕಾಲ ಕಳೆದರು. ಮಹಾದಾಸೋಹದ ಸೇವೆಯಲ್ಲಿ ತೊಡಗಿದ್ದ ಮಕ್ಕಳ ಯೋಗಕ್ಷೇಮ ವಿಚಾರಿಸಿ, ಅವರೊಂದಿಗೆ ಬೆರೆತು ಸಂತಸ ಹಂಚಿಕೊಂಡರು. ಶ್ರೀಗಳ ಈ ನಡೆ 'ಕಾಯಕವೇ ಕೈಲಾಸ' ಎಂಬ ತತ್ವಕ್ಕೆ ಸಾಕ್ಷಿಯಂತಿದೆ. ಜಾತ್ರೆಯ ಮಹಾಪ್ರಸಾದದ ವ್ಯವಸ್ಥೆಯನ್ನು ಖುದ್ದು ಮೇಲ್ವಿಚಾರಣೆ ಮಾಡುವ ಮೂಲಕ ಶ್ರೀಗಳು ಮಾದರಿಯಾಗಿದ್ದಾರೆ.&lt;/p&gt;&lt;p&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಫುಲ್ ವೈರಲ್&lt;/strong&gt;&lt;/p&gt;&lt;p&gt;ಗವಿಸಿದ್ದೇಶ್ವರ ಸ್ವಾಮೀಜಿಯವರು ಅಕ್ಕಿ ಮೂಟೆ ಹೊತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. 'ಇವರೇ ನೋಡಿ ನಿಜವಾದ ದಾಸೋಹಿ' 'ಪೀಠದ ಮೇಲೆ ಕುಳಿತು ಉಪದೇಶ ಮಾಡುವುದಕ್ಕಿಂತ ಕಾಯಕದಲ್ಲಿ ತೊಡಗುವುದು ದೊಡ್ಡದು' ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಕುಂಭಮೇಳವೆಂದೇ ಕರೆಸಿಕೊಳ್ಳುವ ಈ ಜಾತ್ರೆಗೆ ಈ ಬಾರಿ ದಾಖಲೆ ಪ್ರಮಾಣದ ಲಕ್ಷ ಲಕ್ಷ ಭಕ್ತರು ಹರಿದು ಬಂದರು.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/koppal-gavisiddeshwara-swamiji-carries-rice-bag-on-shoulder-for-dasoha-viral/articleshow-tf4qt37"/>
        </item>
        <item>
            <title><![CDATA[ಕೊಪ್ಪಳ ಕಾಂಗ್ರೆಸ್‌ನಲ್ಲಿ ನಡೆಯಲಿರುವ ದೊಡ್ಡ ಬದಲಾವಣೆಯ ಸುಳಿವು ನೀಡಿದ ಹರಿಪ್ರಸಾದ್!]]></title>
            <link>https://kannada.asianetnews.com/karnataka-districts/bk-hariprasad-calls-for-congress-unity-in-koppal-gangavathi-gvd/articleshow-1abmlgy</link>
            <guid isPermaLink="true">https://kannada.asianetnews.com/karnataka-districts/bk-hariprasad-calls-for-congress-unity-in-koppal-gangavathi-gvd/articleshow-1abmlgy</guid>
            <pubDate>Thu, 04 Jun 2026 17:26:12 +0530</pubDate>
            <description><![CDATA[&lt;p&gt;ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಭಿನ್ನಮತಗೊಂಡಿರುವ ಕಾಂಗ್ರೆಸ್ ಘಟಕಗಳಲ್ಲಿ ಒಗ್ಗಟ್ಟಾಗಿ ಪಕ್ಷ ಸಂಘಟಿಸ ಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅದ್ಯಕ್ಷ ಬಿ.ಕೆ.ಹರಿಪ್ರಾಸದ್ ಸೂಚನೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt97v4z97w2dttvm1fm28hjb,imgname-vjv-1780574163945.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.04): &lt;/strong&gt;ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಭಿನ್ನಮತಗೊಂಡಿರುವ ಕಾಂಗ್ರೆಸ್ ಘಟಕಗಳಲ್ಲಿ ಒಗ್ಗಟ್ಟಾಗಿ ಪಕ್ಷ ಸಂಘಟಿಸ ಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅದ್ಯಕ್ಷ ಬಿ.ಕೆ.ಹರಿಪ್ರಾಸದ್ ಸೂಚನೆ ನೀಡಿದರು ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ತಿಳಿಸಿದರು.&lt;/p&gt;&lt;p&gt;ಬೆಂಗಳೂರಿನಲ್ಲಿ ಬಿ.ಕೆ.ಹರಿಪ್ರಸಾದ್ ಅವರ ನಿವಾಸಕ್ಕೆ ತೆರಳಿ ಶುಭಕೋರಿದ ನಂತರ ದೂರವಾಣಿ ಮೂಲಕ ಪತ್ರಕರ್ತರ ಜೊತೆ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸಾರಿಥ್ಯವನ್ನು ನನಗೆ ನೀಡಿದ ಅವಧಿಯಲ್ಲಿ ಪಕ್ಷ ಸಂಘಟಿಸಿ ಬರುವ 2028 ರ ಚುನಾವಣೆಯಲ್ಲಿ ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ.&lt;/p&gt;&lt;h2&gt;&lt;strong&gt;ರಾಜಕೀಯ ನನಗೆ ಗೊತ್ತಿದೆ&lt;/strong&gt;&lt;/h2&gt;&lt;p&gt;ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಂತೆ ತಿಳಿಸಿದ್ದಾರೆಂದು ಹೇಳಿದರು. ಗಂಗಾವತಿ ಕಾಂಗ್ರೆಸ್ ರಾಜಕೀಯ ನನಗೆ ಗೊತ್ತಿದೆ ಎಲ್ಲಾ ಮುಖಂಡರು ತಮ್ಮ ಭಿನ್ನಮತ ಬಿಟ್ಟು ಒಗ್ಗಟ್ಟಾಗಿ ಶ್ರಮಿಸಿರಿ ಎಂದು ತಿಳಿಸಿದ್ದು. ಈ ಹಿನ್ನೆಲೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ ಎಂದರು.&lt;/p&gt;&lt;p&gt;ತಾವು ಮತ್ತು ಮುಖ್ಯಮಂತ್ರಿಗಳು ರಾಜ್ಯದ ಪ್ರವಾಸದ ಜೊತೆಗೆ ಸರಕಾರದ ಅಭಿವೃದ್ದಿ ಕಾರ್ಯಗಳ ಅನುಷ್ಠಾನಗೊಂಡಿರುವದರ ಬಗ್ಗೆ ಪ್ರಚಾರ ಮತ್ತು ಪಕ್ಷದ ಸಂಘಟನೆಗೆ ರಾಜ್ಯ ಪ್ರವಾಸ ಕೈಗೊಳ್ಳುವದಾಗಿ ಹರಿಪ್ರಸಾದ್ ತಿಳಿಸಿದ್ದಾರೆಂದು ಹೇಳಿದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bk-hariprasad-calls-for-congress-unity-in-koppal-gangavathi-gvd/articleshow-1abmlgy"/>
        </item>
        <item>
            <title><![CDATA[ಸನಾತನ ಹಿಂದೂ ಧರ್ಮಕ್ಕೆ ಉದಯನಿಧಿ ಅವಮಾನ: ಮಾಜಿ ಎಂಎಲ್ಸಿ ಶ್ರೀನಾಥ ಆಕ್ರೋಶ]]></title>
            <link>https://kannada.asianetnews.com/karnataka-districts/hr-srinath-reacts-to-udhayanidhi-stalin-sanatana-dharma-remarks-gvd/articleshow-68emcmh</link>
            <guid isPermaLink="true">https://kannada.asianetnews.com/karnataka-districts/hr-srinath-reacts-to-udhayanidhi-stalin-sanatana-dharma-remarks-gvd/articleshow-68emcmh</guid>
            <pubDate>Mon, 18 May 2026 17:16:37 +0530</pubDate>
            <description><![CDATA[&lt;p&gt;ಸನಾತನ ಹಿಂದೂ ಧರ್ಮಕ್ಕೆ ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವಮಾನ ಮಾಡಿರುವದಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxeh7j3fbkpmh2nyxycb84r,imgname-vj-1779104783939.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.18): &lt;/strong&gt;ಸನಾತನ ಹಿಂದೂ ಧರ್ಮಕ್ಕೆ ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವಮಾನ ಮಾಡಿರುವದಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಹಿಂದೆ 2023ರಲ್ಲಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡ ಬೇಕೆಂದು ಹೇಳಿಕೆ ನೀಡಿದ್ದರು.&lt;/p&gt;&lt;p&gt;ಈಗ ಮತ್ತೇ ಹಿಂದು ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಇವರಿಗೆ ಧರ್ಮದ ಪ್ರಜ್ಞೆ ಇಲ್ಲಾ, ಕೇವಲ ಒಂದೇ ಜಾತಿಗೆ ಸೀಮಿತರಾಗಿದ್ದಂತೆ ಕಾಣುತ್ತದೆ ಎಂದರು. ಕಾಂಗ್ರೆಸ್ ಪಕ್ಷ ಜಾತ್ಯಾತೀತವಾಗಿರುವ ಪಕ್ಷವಾಗಿದೆ. ಕಾಂಗ್ರೆಸ್ ನಲ್ಲಿ ಶೇ.70 ರಷ್ಟು ಹಿಂದು ಧರ್ಮದವರಿದ್ದಾರೆ. ಚುನಾವಣೆ ಸಂದ್ರಭದಲ್ಲಿ ಹಿಂದೂಗಳು ಬೇಕು. ನಂತರ ಧರ್ಮವನ್ನು ದ್ವೇಷ ಮಾಡುವಂತ ಇತಹ ವ್ಯಕ್ತಿಗಳನ್ನು ಕಾಂಗ್ರೆಸ್ ನಾಯಕರುಗಳು ದೂರ ಇಡಬೇಕೆಂದರು.&lt;/p&gt;&lt;p&gt;ಸನಾತನ ಹಿಂದು ಧರ್ಮ ಕಾಲಕಾಲದಿಂದ ಬಂದಿದೆ. ಎಲ್ಲಾ ಪಕ್ಷಗಳಲ್ಲಿ ಹಿಂದೂ ಧರ್ಮಿಯರು ಇದ್ದಾರೆ. ಕೇವಲ ಬಿಜೆಪಿ ಪಕ್ಷ ಅಥಾವ ಜೆಡಿಎಸ್ ಪಕ್ಷ ಸೇರಿದಂತೆ ಇತರ ಪಕ್ಷಗಳಿಗೆ ಹಿಂದೂಗಳು ಮೀಸಲಾಗಿಲ್ಲ. ಎಲ್ಲಾ ಪಕ್ಷಗಳಿಗಿಂತಲೂ ಕಾಂಗ್ರೆಸ್ ಪಕ್ಷದಲ್ಲಿ ಅಧಿಕವಾಗಿ ಹಿಂದೂಗಳು ಇದ್ದಾರೆ ಎಂದರು. ಅನ್ಯ ಧರ್ಮೀಯರನ್ನು ಪ್ರೀತಿಸಲಿ ಅದಕ್ಕೆ ನಾವು ಯಾವುದೇ ತಕರಾರು ಮಾಡುವುದಿಲ್ಲ. ಆದರೆ ಸನಾತನ ಹಿಂದೂ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡಿರುವ ಉದಯನಿಧಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.&lt;/p&gt;&lt;h2&gt;&lt;strong&gt;ಹೊಸ ವಿವಾದ&lt;/strong&gt;&lt;/h2&gt;&lt;p&gt;ಈ ಹಿಂದೆ ಹಿಂದೂ ಧರ್ಮದ ಬಗ್ಗೆ ಅವಮಾನ ಮಾಡಿದಾಗ ಉಚ್ಚ ನ್ಯಾಯಲಯ ದ್ವೇಷ ಭಾಷಣ ಎಂದು ಹೇಳಿತ್ತು. ಈಗ ಮತ್ತೆ ವಿವಾದ ಎಬ್ಬಿಸಿ ಹಿಂದೂಗಳನ್ನು ಕೆರಳಿಸುವುದಕ್ಕೆ ಮುಂದಾಗಿದ್ದಾರೆ ಎಂದು ಎಚ್ಚರಿಸಿದರು. ಕೂಡಲೆ ಕಾಂಗ್ರೆಸ್ ಪಕ್ಷ ಇಂತಹ ದ್ವೇಷ ಹುಟ್ಟಿಸುವ ಉದಯ ನಿಧಿ ಅವರ ಪಕ್ಷದ ಜೊತೆಗೆ ಹೊಂದಾಣಿಕೆಯಾಗಬಾರದು, ಸನಾತನ ಹಿಂದೂ ಧರ್ಮದ ಉಳಿವಿಗೆ ಎಲ್ಲರು ಹೋರಾಟ ನಡೆಸಬೇಕಾಗಿದೆ ಎಂದು ಎಚ್.ಆರ್.ಶ್ರೀನಾಥ ಹೇಳಿದರು. ಈ ವೇಳೆ ಮುಖಂಡರಾದ ಗೌಳಿ ರಮೇಶ, ಮೂಸ್ಟೂರು ರಾಜಶೇಖರಪ್ಪ, ಸುರೇಶ ಗೌರಪ್ಪ ಇದ್ದರು.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/hr-srinath-reacts-to-udhayanidhi-stalin-sanatana-dharma-remarks-gvd/articleshow-68emcmh"/>
        </item>
        <item>
            <title><![CDATA[ಕರ್ನಾಟಕ ಮಣ್ಣಲ್ಲಿ ಜಪಾನ್‌ 'ಮಿಯಾಜಾಕಿ' ಕಮಾಲ್: ಕೊಪ್ಪಳ ಬಳಿಕ ಬೀದರ್‌ನಲ್ಲೂ ದುಬಾರಿ ಮಾವು? ರೇಟ್ ಸಿಕ್ಕಿದ್ದೆಷ್ಟು?]]></title>
            <link>https://kannada.asianetnews.com/gallery/karnataka-districts/world-s-costliest-miyazaki-mango-now-grown-in-bidar-karnataka-check-price-and-details-sat-6g7g80y</link>
            <guid isPermaLink="true">https://kannada.asianetnews.com/gallery/karnataka-districts/world-s-costliest-miyazaki-mango-now-grown-in-bidar-karnataka-check-price-and-details-sat-6g7g80y</guid>
            <pubDate>Fri, 22 May 2026 16:37:01 +0530</pubDate>
            <description><![CDATA[&lt;p&gt;ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರೊಬ್ಬರು ಜಪಾನ್ ಮೂಲದ, ವಿಶ್ವದ ಅತ್ಯಂತ ದುಬಾರಿ ಮಿಯಾಜಾಕಿ ಮಾವನ್ನು ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಹಣ್ಣಿಗೆ, ಸ್ಥಳೀಯ ಮಾರುಕಟ್ಟೆ ಸಿಗದಿರುವುದು ಸವಾಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks7mzsqgab1q6bfhpnxv7ncy,imgname-bidar-miyazaki-mango-1779447097072.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರೊಬ್ಬರು ಜಪಾನ್ ಮೂಲದ, ವಿಶ್ವದ ಅತ್ಯಂತ ದುಬಾರಿ ಮಿಯಾಜಾಕಿ ಮಾವನ್ನು ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಹಣ್ಣಿಗೆ, ಸ್ಥಳೀಯ ಮಾರುಕಟ್ಟೆ ಸಿಗದಿರುವುದು ಸವಾಲಾಗಿದೆ.&lt;/p&gt;&lt;img&gt;&lt;p&gt;ಜಗತ್ತಿನ ಹಣ್ಣುಗಳ ರಾಜ ಮಾವಿನ ಹಣ್ಣಿನಲ್ಲಿ ಜಪಾನ್ ಮೂಲದ ಮಿಯಾಜಾಕಿ ಹಣ್ಣು ನಿಜಕ್ಕೂ ರಾಜರಲ್ಲಿ ರಾಜ ಎಂದು ಹೇಳಬಹುದು. ಕಾರಣ ಈ ಮಿಯಾಜಾಕಿ ಹಣ್ಣಿಗೆ 1 ಕೆಜಿಗೆ 2.5 ಲಕ್ಷ ರೂ. ಎಂದು ಹೇಳುತ್ತಾರೆ. ಆದರೆ, ಭಾರತದ ರೈತರು ಈವರೆಗೆ 10 ಸಾವಿರ ರೂ. ಕೆಜಿ ಮಾರಾಟ ಮಾಡಿದ್ದನ್ನೂ ಯಾರೂ ನೋಡಿಲ್ಲ.&lt;/p&gt;&lt;p&gt;ಹೀಗಿರುವಾಗ, ಕೊಪ್ಪಳದಲ್ಲಿ ಮಿಯಾಜಾಕಿ ಮಾವಿನ ಹಣ್ಣು ಬೆಳೆದು ಕೇವಲ 3 ಸಾವಿರ ರೂ.ಗೆ ಒಂದು ಕೆಜಿ ಹಣ್ಣು ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದನು. ಇದೀಗ ಬೀದರ್&zwnj;ನಲ್ಲಿಯೂ ಮತ್ತೊಬ್ಬ ರೈತ ಮಿಯಾಜಾಕಿ ಮಾವು ಬೆಳೆದು ಸುದ್ದಿಗೆ ಬಂದಿದ್ದಾರೆ. ಅವರ ಕುರಿತ ವಿಶೇಷ ಮಾಹಿತಿ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲ್ಬರ್ಗಾ ಗ್ರಾಮದ ರೈತರು ಈ ಅಪರೂಪದ ಸಾಹಸಕ್ಕೆ ಕೈಹಾಕಿದ್ದಾರೆ. ಇವರು ಜಪಾನ್ ದೇಶದಿಂದಲೇ ನೇರವಾಗಿ ಈ ಮಿಯಾಜಾಕಿ ಮಾವಿನ ಗಿಡಗಳನ್ನು ತರಿಸಿ, ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ 4 ಗಿಡಗಳನ್ನು ನಾಟಿ ಮಾಡಿದ್ದರು. ಈಗ ಈ ಗಿಡಗಳಲ್ಲಿ ಹಣ್ಣುಗಳು ಸಮೃದ್ಧವಾಗಿ ಬಂದಿವೆ.&lt;/p&gt;&lt;img&gt;&lt;p&gt;ಈ ಮಾವಿನ ಹಣ್ಣುಗಳು ಸಾಮಾನ್ಯ ಮಾವಿಗಿಂತ ಹೆಚ್ಚು ಸಿಹಿಯಾಗಿದ್ದು, ಗಾಢ ಕೆಂಪು ಬಣ್ಣದಿಂದ ಕೂಡಿವೆ. ಒಂದೊಂದು ಹಣ್ಣು ಸುಮಾರು 200 ರಿಂದ 500 ಗ್ರಾಂವರೆಗೆ ತೂಕ ಬರುತ್ತದೆ. ಸದ್ಯಕ್ಕೆ ಇದನ್ನು ಮನೆಯ ಬಳಕೆಗಾಗಿ ಬೆಳೆದಿದ್ದರೂ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಸುವ ಇರಾದೆ ರೈತರದ್ದಾಗಿದೆ.&lt;/p&gt;&lt;img&gt;&lt;p&gt;ಅಂತಹ ಅದ್ಭುತ ಮತ್ತು ದುಬಾರಿ 'ಮಿಯಾಜಾಕಿ' (Miyazaki Mango) ಮಾವಿನ ಹಣ್ಣು ಈಗ ಕರ್ನಾಟಕದ ಮಣ್ಣಿನಲ್ಲಿಯೂ ಬೆಳೆಯುತ್ತಿದೆ. ಕೊಪ್ಪಳದ ಬಳಿಕ ಇದೀಗ ಗಡಿ ಜಿಲ್ಲೆ ಬೀದರ್&zwnj;ನ ರೈತರು ಈ ಅತಿ ದುಬಾರಿ ಮಾವು ಬೆಳೆದು ಸುದ್ದಿಯಾಗಿದ್ದಾರೆ. ಇದೀಗ ಪ್ರಾಯೋಗಿಕ ಬೆಳೆ ಯಶಸ್ವಿ ಆಗಿದ್ದು, ಹೆಚ್ಚಿನ ಗಿಡ ಬೆಳೆಯಲು ಉತ್ಸುಕರಾಗಿದ್ದಾರೆ.&lt;/p&gt;&lt;img&gt;&lt;p&gt;ಬೀದರ್&zwnj;ಗಿಂತ ಮೊದಲು ಕೊಪ್ಪಳ ಜಿಲ್ಲೆಯ ನಾಗಪ್ಪ ಬಗನಾಳ ಎಂಬ ರೈತರು ಈ ಮಿಯಾಜಾಕಿ ಮಾವನ್ನು ಬೆಳೆದು ಸದ್ದು ಮಾಡಿದ್ದರು. ಕಲ್ ತಾವರಗೇರಾ ಗ್ರಾಮದ ನಾಗಪ್ಪ ಅವರು 2 ಎಕರೆ ಪ್ರದೇಶದಲ್ಲಿ ಬರೋಬ್ಬರಿ 180 ಗಿಡಗಳನ್ನು ಬೆಳೆಸಿದ್ದಾರೆ. ಮೂರು ವರ್ಷಗಳ ಹಿಂದೆ ದೆಹಲಿಯಿಂದ ರೈಲು ಮೂಲಕ ಸಸಿಗಳನ್ನು ತರಿಸಿದ್ದ ಅವರು, ಪ್ರತಿ ಸಸಿಗೆ 1,300 ರೂಪಾಯಿ ವೆಚ್ಚ ಮಾಡಿದ್ದರು.&lt;/p&gt;&lt;img&gt;&lt;p&gt;ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಯಾಜಾಕಿ ಮಾವಿನ ಹಣ್ಣಿಗೆ ಕೆಜಿಗೆ 2.50 ಲಕ್ಷ ರೂಪಾಯಿ ಬೆಲೆ ಇದೆ. ಇದನ್ನು ಜಪಾನ್&zwnj;ನಲ್ಲಿ 'ಸೂರ್ಯನ ಮೊಟ್ಟೆ' (Egg of the Sun) ಎಂದು ಕರೆಯಲಾಗುತ್ತದೆ. ಆದರೆ, ನಮ್ಮ ಸ್ಥಳೀಯ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ಅಳಲು. ಕೊಪ್ಪಳದ ಮಾವು ಮೇಳದಲ್ಲಿ ಈ ಹಣ್ಣು ಕೆಜಿಗೆ ಕೇವಲ 3 ಸಾವಿರ ರೂಪಾಯಿಗೆ ಮಾರಾಟವಾಗಿದೆ. ವಿಶ್ವದ ಅತ್ಯಂತ ದುಬಾರಿ ಹಣ್ಣನ್ನು ಬೆಳೆದರೂ, ಅದಕ್ಕೆ ತಕ್ಕ ಮಾರುಕಟ್ಟೆ ಇಲ್ಲದಿರುವುದು ರೈತರಿಗೆ ದೊಡ್ಡ ಸವಾಲಾಗಿದೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/world-s-costliest-miyazaki-mango-now-grown-in-bidar-karnataka-check-price-and-details-sat-6g7g80y"/>
        </item>
        <item>
            <title><![CDATA[ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ: ಪ್ರಧಾನಿ ಮೋದಿ ವಿರುದ್ಧ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ]]></title>
            <link>https://kannada.asianetnews.com/karnataka-districts/shivaraj-tangadagi-criticises-pm-modi-over-economy-and-fuel-comments-gvd/articleshow-7sl9gwi</link>
            <guid isPermaLink="true">https://kannada.asianetnews.com/karnataka-districts/shivaraj-tangadagi-criticises-pm-modi-over-economy-and-fuel-comments-gvd/articleshow-7sl9gwi</guid>
            <pubDate>Mon, 18 May 2026 17:42:25 +0530</pubDate>
            <description><![CDATA[&lt;p&gt;ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಪ್ರಧಾನಿ ಮೋದಿ ಹೇಳಿಕೆ ಕುರಿತು ಟೀಕೆ ವ್ಯಕ್ತಪಡಿಸಿದ್ದಾರೆ. ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk654cwwr3f7bnp3jba2kcst,imgname----------------------94--1772954465180.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರಟಗಿ (ಮೇ.18): &lt;/strong&gt;ದೇಶದ ಆರ್ಥಿಕ ಪರಿಸ್ಥಿತಿ ಸದ್ಯ ಸಂಪೂರ್ಣ ಹದಗೆಟ್ಟು ಅಧೋಗತಿಗೆ ಹೋಗಿದ್ದು, ತೈಲ ಬೆಲೆ ಗಗನಕ್ಕೇರಿದೆ. ಈ ಸತ್ಯ ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಈಗ ಎಚ್ಚರಿಕೆ ಮಾತುಗಳಲ್ಲಿ ಬಂಗಾರ ಖರೀದಿಸಬೇಡಿ, ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎಂದು ಉಚಿತ ಸಲಹೆ ನೀಡಿ ತಮ್ಮ ಆಡಳಿತ ವೈಫಲ್ಯ ಮರೆಮಾಚುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.&lt;/p&gt;&lt;p&gt;ಇನ್ನು ನೀಟ್ ಪರೀಕ್ಷೆಯಲ್ಲಿನ ಪ್ರಶ್ನೆಪತ್ರಿಕೆ ಲೀಕ್ ಆಗಿದೆ, ಆರ್ಥಿಕ ವ್ಯವಸ್ಥೆ ವೀಕ್ ಆಗಿದೆ, ಶೇರುಪೇಟೆ ಮಾರುಕಟ್ಟೆ ಶೇಕ್ ಆಗಿದೆ, ಈ ಮೂರು ಈ ದೇಶದ ಮೋದಿ ಆಡಳಿತದ ದುರಾವಸ್ಥೆ ಸ್ಪಷ್ಟವಾಗಿ ತೋರಿಸುತ್ತದೆ ಎಂದರು. ಯಲ್ಲಮ್ಮನ ದೇವಸ್ಥಾನದಲ್ಲಿ ಸರದಿ ಸಾಲಿನಲ್ಲಿ ಮುಂದೆ ಇದ್ದವರು ಯಲ್ಲಮ್ಮ ನೀನಗ ನಾಲ್ಕು ಉಧೋ ಎಂದರೆ ಸಾಕು ಹಿಂದಿದ್ದವರೆಲ್ಲರೂ ಉಧೋ ಉಧೋ ಎನ್ನಲು ಶುರು ಮಾಡುತ್ತಾರೆ. ಹಾಗೆಯೇ ಮೋದಿ ಅಂಧ ಭಕ್ತರು ಅವರ ನಡೆಯನ್ನೆ ಬೆಂಬಲಿಸುತ್ತಾರೆ.&lt;/p&gt;&lt;p&gt;ಸೈಕಲ್ ಮೇಲೆ ಓಡಾಡುವುದು ದೇಶಭಕ್ತಿ ಅಲ್ಲ. ದೇಶದ ಆರ್ಥಿಕ ಸ್ಥಿತಿ ಹಳ್ಳ ಹಿಡಿದಿದೆ ಎನ್ನುವುದು ಇಡೀ ವಿಶ್ವಕ್ಕೆ ಬಿಜೆಪಿ ತೋರಿಸಿಕೊಡುತ್ತಿದೆ ಎಂದು ತಂಗಡಗಿ ಟೀಕಿಸಿದರು. ದೇಶದೊಳಗೆ ಆಡಳಿತ ಮಾಡಲು ಗೊತ್ತಿರಲಾರದ ಒಬ್ಬನನ್ನು ಪ್ರಧಾನ ಮಂತ್ರಿ ಮಾಡಿದರೆ ದೇಶಕ್ಕೆ ಇದೇ ಪರಿಸ್ಥಿತಿ ಬರುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ನೋಡಿಕೊಳ್ಳಲು ಸಾಧ್ಯವಿದ್ದವರು ಬಂದು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುತ್ತಾರೆ. ಅದನ್ನು ಬಿಟ್ಟು ದೇಶದ ಜನತೆಗೆ ಪುಕ್ಕಟೆ ಸಲಹೆ ನೀಡುವುದು ದೊಡ್ಡಸ್ತಿಕೆಯಲ್ಲ.&lt;/p&gt;&lt;h2&gt;&lt;strong&gt;ದೇಶ ಅಧೋಗತಿ&lt;/strong&gt;&lt;/h2&gt;&lt;p&gt;ದೇಶದಲ್ಲಿ ಉದ್ಭವಿಸಿರುವ ಈ ಸಮಸ್ಯೆ ಯುದ್ಧದಿಂದಲ್ಲ. ಒಬ್ಬ ಪೆದ್ದನ ದುರಾಡಳಿತವಾಗಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್&zwnj; ಸ್ವಾಮಿ ಅವರೆ ಹೇಳಿದ್ದಾರೆ. ವಸ್ತುಸ್ಥಿತಿ ಹೀಗಿದ್ದ ಮೇಲೆ ಮೋದಿ ಅವರ ಅಂಧಭಕ್ತರು ದೇಶ ಅಧೋಗತಿಗೆ ಹೋಗಿದೆ ಎಂಬುದನ್ನು ಅರಿತುಕೊಂಡು ಸತ್ಯ ಅರಿಯಬೇಕು, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ, ರಾಜ್ಯದ ಮುಖ್ಯಮಂತ್ರಿ ಬಗ್ಗೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಮಾತನಾಡಲು ಹಿರಿಯರಾದ ಬಸವರಾಜ ರಾಯರೆಡ್ಡಿ ಅವರಿಗೆ ಬಿಟ್ಟಿದ್ದೇವೆ. ನಾವೇನಿದ್ದರೂ ಪಕ್ಷ ವಹಿಸಿ ಕೆಲಸ ಮಾತ್ರ ಮಾಡುತ್ತೇವೆ.&lt;/p&gt;&lt;p&gt;ಸಂಪುಟ ರಚನೆ, ಸೇರಿದಂತೆ ಎಲ್ಲ ರಚನೆಗಳನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದಷ್ಟೇ ತಂಗಡಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಕ್ಷದ ಹೈಕಮಾಂಡ್ ವಹಿಸಿದ ಕೆಲಸ ಕಾರ್ಯ ಮಾತ್ರ ಮಾಡಬೇಕು. ಇತರ ಯಾವುದೇ ವಿಷಯ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಪಕ್ಷ ವಹಿಸಿದ ಕೆಲಸವನ್ನಷ್ಟೇ ಶಿರಸಾವಹಿಸಿ ಮಾಡುತ್ತಾ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ ಎಂದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/shivaraj-tangadagi-criticises-pm-modi-over-economy-and-fuel-comments-gvd/articleshow-7sl9gwi"/>
        </item>
        <item>
            <title><![CDATA[1993 To 2026: ಒಂದೇ  ಶಾಲೆಯಲ್ಲಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕ!]]></title>
            <link>https://kannada.asianetnews.com/karnataka-districts/koppal-s-kanakareddy-madinala-teacher-who-retired-after-serving-in-the-same-school-for-33-years-tippanala-kanakagiri-mrq/articleshow-99vzsnx</link>
            <guid isPermaLink="true">https://kannada.asianetnews.com/karnataka-districts/koppal-s-kanakareddy-madinala-teacher-who-retired-after-serving-in-the-same-school-for-33-years-tippanala-kanakagiri-mrq/articleshow-99vzsnx</guid>
            <pubDate>Mon, 01 Jun 2026 06:25:43 +0530</pubDate>
            <description><![CDATA[&lt;p&gt;ತಿಪ್ಪನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಕನಕರೆಡ್ಡಿ ಮಾದಿನಾಳ ಅವರು ಸತತ 33 ವರ್ಷಗಳ ಕಾಲ ಸೇವೆ ಸಲ್ಲಿಸಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಅವಧಿಯಲ್ಲಿ ಸ್ಮಾರ್ಟ್&zwnj;ಕ್ಲಾಸ್, ಕಂಪ್ಯೂಟರ್ ಶಿಕ್ಷಣದಂತಹ ಸೌಲಭ್ಯಗಳನ್ನು ಒದಗಿಸಿ, ಇದೀಗ ಸೇವೆಯಿಂದ ನಿವೃತ್ತರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt0an5e79pyjt4xef9vqq955,imgname-kanakagiri-1780275123655.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಂ. ಪ್ರಹ್ಲಾದ್ ಕನಕಗಿರಿ&lt;/strong&gt;&lt;/p&gt;&lt;p&gt;&lt;strong&gt;ಕೊಪ್ಪಳ: &lt;/strong&gt;ಮುಖ್ಯ ಶಿಕ್ಷಕರೊಬ್ಬರು 33 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ, ತಿಂಗಳ ಹಿಂದೆ ಹಿರಿಯ ಮುಖ್ಯೋಪಾಧ್ಯಾಯರಾಗಿ ಬೇರೆ ಶಾಲೆಗೆ ವರ್ಗಾವಣೆಗೊಂಡು ಮೇ 30ರಂದು ನಿವೃತ್ತರಾಗಿದ್ದಾರೆ.&lt;/p&gt;&lt;p&gt;ಹೌದು, ತಾಲೂಕಿನ ತಿಪ್ಪನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತತ 33 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಕನಕರೆಡ್ಡಿ ಮಾದಿನಾಳ ಅವರು ತಿಂಗಳ ಹಿಂದೆ ಹಿರಿಯ ಮುಖ್ಯೋಪಾಧ್ಯಾಯರಾಗಿ ಮುಂಬಡ್ತಿ ಹೊಂದಿದ ಹಿನ್ನೆಲೆಯಲ್ಲಿ ಪಕ್ಕದ ಜೀರಾಳ ಗ್ರಾಮದ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡರು. ಒಂದೇ ತಿಂಗಳಲ್ಲಿ ನಿವೃತ್ತಿ ಹೊಂದಿದರು.&lt;/p&gt;&lt;p&gt;ಕನಕರೆಡ್ಡಿ ಅವರು 1993 ಜೂನ್ ತಿಂಗಳಲ್ಲಿ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅಂದು ಶಾಲೆ ವಾತಾವರಣ, ಕೊಠಡಿ, ನೋಡುವಂತಿರಲಿಲ್ಲ. ಕ್ರಮೇಣ ಗ್ರಾಮದ ಹಿರಿಯರ ಹಾಗೂ ಯುವಕರ ಜತೆ ಸಮನ್ವಯತೆ ಕಾಯ್ದುಕೊಂಡು ಕಲಿಕೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಮುಂದಾದರು. ಆನಂತರ 2015ಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡು ಗ್ರಾಮಸ್ಥರ, ಸರ್ಕಾರ ಮತ್ತು ಇಲಾಖೆಯ ಸಹಕಾರದಿಂದ ಹೊಸ ಕೊಠಡಿ ನಿರ್ಮಾಣ, ಬಿಸಿಯೂಟ, ಸಮತಟ್ಟಾದ ಮೈದಾನ ಸೇರಿ ನಾನಾ ಕಾರ್ಯ ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಿದರು.&lt;/p&gt;&lt;h2&gt;ಪಾಠದ ಜೊತೆ ಶಾಲೆಯಲ್ಲಿ ಅಭಿವೃದ್ಧಿ ಕೆಲಸ&lt;/h2&gt;&lt;p&gt;11 ವರ್ಷಗಳ ಮುಖ್ಯಶಿಕ್ಷಕರಾಗಿ ಸೇವೆಯಲ್ಲಿದ್ದಾಗ 6 ಮತ್ತು 7ನೇ ತರಗತಿ ಮಕ್ಕಳಿಗೆ ಸ್ಮಾರ್ಟ್&zwnj;ಕ್ಲಾಸ್, ಸೋಲಾರ್&zwnj; ಕಂಪನಿಗಳ ಜತೆ ಮಾತುಕತೆ ನಡೆಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಾಲಾ ಕಾಂಪೌಂಡ್ ನಿರ್ಮಾಣ, ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಶಾಲೆಗೆ ಬೇಕಾದ ಅಗತ್ಯ ಸಾಮಗ್ರಿ ಪಡೆದರು. ಸದ್ಯ ಶಾಲೆಯ 6 ಕಂಪ್ಯೂಟರ್&zwnj;ಗಳ ಮೂಲಕ ವಿದ್ಯಾರ್ಥಿಗಳಿಗೆ ಗಣಕಯಂತ್ರ ತರಬೇತಿ ನೀಡಲಾಗುತ್ತಿದೆ.&lt;/p&gt;&lt;p&gt;ತಾಲೂಕಿನಲ್ಲೆ ಹೆಚ್ಚು ಸರ್ಕಾರಿ ನೌಕರಿದಾರರನ್ನು ತಿಪ್ಪನಾಳ ಗ್ರಾಮ ಹೊಂದಿದೆ. ಬಡ, ಹಿಂದುಳಿದ ಮಕ್ಕಳು ಮುನ್ನಲೆಗೆ ತಂದು ನೌಕರರದಾರರನ್ನಾಗಿ ಮಾಡಲು ಮುಖ್ಯಶಿಕ್ಷಕ ಕನಕರೆಡ್ಡಿ ಪಾತ್ರ ದೊಡ್ಡದಿದೆ. ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ತಿಪ್ಪನಾಳ ಸರ್ಕಾರಿ ಶಾಲೆ ತಿರುಗಿ ನೋಡುವಂತೆ ಮಾಡಿರುವುದಕ್ಕೆ ಖುಷಿ ತಂದಿದೆ ಎಂದು ಹಿರಿಯ ಶಿಕ್ಷಕ ಶಿವಾನಂದ ಬೆಲ್ಲದ್ ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಮುಖ್ಯಶಿಕ್ಷಕ ಕನಕರೆಡ್ಡಿ ಭಾವುಕ ಮಾತು&lt;/strong&gt;&lt;/h3&gt;&lt;p&gt;ನಾನು ಮೂಲ ಕೃಷಿಕ. ಪಿಯುಸಿ ಮುಗಿಸಿದ್ದರಿಂದ ಶಿಕ್ಷಕ ವೃತ್ತಿಗೆ ಬಂದೆ. ಬಳಿಕ ಮಾವನವರಾದ ಹೇಮರೆಡ್ಡಿ ಶಿವನಗುಂಡಿ ಮಾರ್ಗದರ್ಶನದಲ್ಲಿ ತಿಪ್ಪನಾಳ ಶಾಲೆ ಆಯ್ಕೆ ಮಾಡಿಕೊಂಡು ಬಡ, ಹಿಂದುಳಿದ ಮಕ್ಕಳಿಗೆ ಓದು, ಬರಹ ಕಲಿಸಿದೆ. ಎಲ್ಲರೊಟ್ಟಿಗೆ ಬೆರೆತು ಶಾಲೆ ಅಭಿವೃದ್ಧಿಪಡಿಸಲು ಶ್ರಮಿಸಿದ್ದೇನೆ. ತಿಪ್ಪನಾಳ ಶಾಲೆಯಲ್ಲಿ 33 ವರ್ಷ ಹಿರಿಯ ಮುಖ್ಯೋಪಾಧ್ಯಾಯನಾಗಿ ಜೀರಾಳದಲ್ಲಿ 1 ತಿಂಗಳ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ ಎಂದು ನಿವೃತ್ತ ಮುಖ್ಯಶಿಕ್ಷಕ ಕನಕರೆಡ್ಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-s-kanakareddy-madinala-teacher-who-retired-after-serving-in-the-same-school-for-33-years-tippanala-kanakagiri-mrq/articleshow-99vzsnx"/>
        </item>
        <item>
            <title><![CDATA[ನನ್ನ ಗಟ್ಟಿ ಧ್ವನಿ ಅಡಗಿಸಲು ಪ್ಯಾಕೇಜ್ ಮಾಡಿ ಸೋಲಿಸಿದ್ದಾರೆ: ಮಾಜಿ ಸಚಿವ ಎಚ್.ಆಂಜನೇಯ]]></title>
            <link>https://kannada.asianetnews.com/karnataka-districts/former-minister-h-anjaneya-election-defeat-conspiracy-gvd/articleshow-avq03f6</link>
            <guid isPermaLink="true">https://kannada.asianetnews.com/karnataka-districts/former-minister-h-anjaneya-election-defeat-conspiracy-gvd/articleshow-avq03f6</guid>
            <pubDate>Sat, 23 May 2026 19:53:31 +0530</pubDate>
            <description><![CDATA[&lt;p&gt;ಸಮಾಜದ ಪರವಾದ ನನ್ನ ಗಟ್ಟಿಧ್ವನಿ ಅಡಗಿಸಲು ದುಷ್ಟಶಕ್ತಿಗಳು ಪ್ಯಾಕೇಜ್ ಮಾಡಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ನೋವಿನಿಂದ ಹೇಳಿಕೊಂಡರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0zehg6269zvhnhb7ch7tck4,imgname-fbf-1753402097858.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಮೇ.23): &lt;/strong&gt;ಸಮಾಜದ ಪರವಾದ ನನ್ನ ಗಟ್ಟಿಧ್ವನಿ ಅಡಗಿಸಲು ದುಷ್ಟಶಕ್ತಿಗಳು ಪ್ಯಾಕೇಜ್ ಮಾಡಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ. ಕೆಲ ದುಷ್ಟ ಶಕ್ತಿಗಳು ಒಗ್ಗೂಡಿ, ಹಣ ಚೆಲ್ಲಿ, ನನ್ನ ವಿರುದ್ಧ ಷಢ್ಯಂತ್ರ ಮಾಡಿ ಸೋಲಿಸಿದ್ದಾರೆ ಎಂದು ನೋವಿನಿಂದ ಹೇಳಿಕೊಂಡರು.&lt;/p&gt;&lt;p&gt;ನನ್ನನ್ನು ಕೆಲವರು ಮಾತ್ರ ಸೋಲಿಸಿಲ್ಲ, ಅನೇಕರು ಸೇರಿಕೊಂಡು ಸೋಲಿಸಿದ್ದಾರೆ. ನಾನು ಸಮಾಜದ ಪರ ಧ್ವನಿ ಎತ್ತುವುದು ನಮ್ಮ ಪಕ್ಷದವರಿಗೆ ಇಷ್ಟ ಇರಲಿಲ್ಲ. ಹೀಗಾಗಿ ನನ್ನ ಸೋಲಿಗೆ ನನ್ನ ಪಕ್ಷದವರು ಕಾರಣವಾಗಿದ್ದಾರೆ. ಯಾರು ಏನು ಎಂದು ನಾನು ಹೇಳುವುದಿಲ್ಲ. ಬಿ.ಆರ್.ಅಂಬೇಡ್ಕರ್ ಅವರನ್ನೇ ಸೋಲಿಸಿದ್ದನ್ನು ನೋಡಿದ್ದೇವೆ. ನನ್ನಂತವನನ್ನು ಬಿಡುತ್ತಾರೆಯೇ ಎಂದು ಬೇಸರದಿಂದ ಹೇಳಿದರು.&lt;/p&gt;&lt;p&gt;ನಾನು ಶಾಸಕ, ಮಂತ್ರಿಯಾಗುವುದು ಮುಖ್ಯವಲ್ಲ. ನಾನು ಸಮಾಜದ ಪರವಾಗಿ ಜೀವ ಇರುವವರೆಗೂ ಹೋರಾಟ ಮಾಡುತ್ತೇನೆ. ಸಾಮಾಜಿಕ ನ್ಯಾಯದ ಪರವಾಗಿ ಯಾರು ಇರುತ್ತಾರೋ ಅವರು ಕೆಲವರಿಗೆ ಹಿಡಿಸುವುದು ಇಲ್ಲ. ಆದರೆ, ಇದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸಮಾಜದ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ. ನನ್ನ ಸೋಲಿನಲ್ಲಿ ನನ್ನದು ಪಾತ್ರವಿದೆ. ಹುಚ್ಚು ಸ್ವಾಭಿಮಾನದಿಂದ ಕೆಲವರು ಕರೆದರು ನಾನು ಹೋಗಲಿಲ್ಲ. ಹಣ ಕೊಡುತ್ತೇನೆ ಎಂದರೂ ಅವರ ಬಳಿ ಹೋಗಲಿಲ್ಲ ಎಂದು ಚುನಾವಣೆಯ ಸಂದರ್ಭದ ವಿವರಣೆ ಮಾಡಿದರು.&lt;/p&gt;&lt;h2&gt;&lt;strong&gt;ಈಗಲೇ ಏನು ಹೇಳುವುದಿಲ್ಲ&lt;/strong&gt;&lt;/h2&gt;&lt;p&gt;ನನಗೆ ಸ್ಪರ್ಧೆ ಮಾಡಬೇಡ ಎಂದಿದ್ದರು. ಆದರೂ ನಾನೇ ಹಠ ಹಿಡಿದು ಸ್ಪರ್ಧೆ ಮಾಡಿದ್ದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ ಅನ್ಯಾಯವಾಗಿದೆ. ಈ ಬಾರಿಯಾದರೂ ಸರಿ ಮಾಡಬೇಕಾಗಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜದವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಈಗಲೇ ಏನು ಹೇಳುವುದಿಲ್ಲ, ಇನ್ನು ವರ್ಷವಿದ್ದಾಗ ಈ ಕುರಿತು ತೀರ್ಮಾನ ಮಾಡುತ್ತೇನೆ ಎಂದರು. ಸಿಎಂ ಬದಲಾವಣೆ ಸೇರಿದಂತೆ ಯಾವುದೇ ವಿಷಯದ ಕುರಿತು ನಾನು ಮಾತಾಡುವುದಿಲ್ಲ ಎಂದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/former-minister-h-anjaneya-election-defeat-conspiracy-gvd/articleshow-avq03f6"/>
        </item>
        <item>
            <title><![CDATA[ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡ್ತಾರಾ?: ಶಾಸಕ ಜನಾರ್ದನ ರೆಡ್ಡಿ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/will-siddaramaiah-step-down-as-cm-what-did-mla-janardhan-reddy-say-gvd/articleshow-cg5wqiw</link>
            <guid isPermaLink="true">https://kannada.asianetnews.com/karnataka-districts/will-siddaramaiah-step-down-as-cm-what-did-mla-janardhan-reddy-say-gvd/articleshow-cg5wqiw</guid>
            <pubDate>Wed, 27 May 2026 20:55:56 +0530</pubDate>
            <description><![CDATA[&lt;p&gt;ರಾಜ್ಯ ಕಾಂಗ್ರೆಸ್&zwnj; ಸರ್ಕಾರ ಹಿಜಾಬ್ ವಿಚಾರದಲ್ಲಿ ರಾಜ್ಯದಲ್ಲಿ ಶಾಂತಿ ಹಾಳು ಮಾಡುತ್ತಿದೆ, ಮುಸ್ಲಿಂರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದರು. ಸಿಎಂ ಕುರ್ಚಿ ಜಗಳದಿಂದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfsfprntht5kfn6twd3yjgvr,imgname-gali-janardhan-reddy--4--1769308119738.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಮೇ.27):&lt;/strong&gt; ರಾಜ್ಯ ಕಾಂಗ್ರೆಸ್&zwnj; ಸರ್ಕಾರ ಹಿಜಾಬ್ ವಿಚಾರದಲ್ಲಿ ರಾಜ್ಯದಲ್ಲಿ ಶಾಂತಿ ಹಾಳು ಮಾಡುತ್ತಿದೆ, ಮುಸ್ಲಿಂರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದರು. ಸಿಎಂ ಕುರ್ಚಿ ಜಗಳದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಸಿದ್ದರಾಮಯ್ಯಗೆ ಸೀಟ್ ಬಿಟ್ಟು ಕೊಡುವಂತೆ ಒತ್ತಡ ಬರ್ತಿದೆ. ಇಂದು ಇಲ್ಲವೇ ಅಂತಿಮ ತೀರ್ಮಾನವಾಗಲಿದೆ ಎಂದರು.&lt;/p&gt;&lt;p&gt;ಮೂರು ವರ್ಷ ಜಗಳದಲ್ಲಿಯೇ ಕಾಲ ಕಳಿದಿದ್ದಿರಿ, ಉಳಿದ ಎರಡು ವರ್ಷವಾದ್ರೂ ಸರಿಯಾದ ಅಭಿವೃದ್ಧಿ ಕೆಲಸ ಮಾಡಲಿ. ಡಿಸಿಎಂ ಡಿಕೆಶಿ ಸಿಎಂ ಆಗುವ ಕನಸು ಹೊತ್ತವರು ಅಧಿಕಾರ ಹಂಚಿಕೆ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ ಎರಡು ವರ್ಷ ಮುಗಿದು ಆರು ತಿಂಗಳ ಕಳೆದ್ರೂ ಬಿಟ್ಟು ಕೊಡ್ತಿಲ್ಲ ಸದ್ಯ ಸಿಎಂ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತಗೊಂಡಿದೆ ಎಂದರು.&lt;/p&gt;&lt;p&gt;ಪರಮೇಶ್ವರ ಹಾಗೂ ಖರ್ಗೆ ಸಿಎಂ ಆಗಬೇಕು ಎನ್ನುವ ವಿಚಾರವಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ, ಇಲ್ಲವಾದ್ರೆ ಡಿಕೆಶಿ ಸಿಎಂ ಆಗ್ತಾರೆ, ಹೈಕಮಾಂಡ್ ಡಿಕೆಶಿ ಪರವಾಗಿ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವಾಗಿದ್ದು ಸಿದ್ದರಾಮಯ್ಯ ಬೇಡ ಅಂದ್ರೂ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂದರು.&lt;/p&gt;&lt;p&gt;ಅಧ್ಯಕ್ಷರ ನೇಮಕ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು, ಶ್ರೀರಾಮುಲು ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಎಂಬ ಚರ್ಚೆಯ ವಿಚಾರವಾಗಿ ಶ್ರೀರಾಮುಲು ಆಗಲಿ ಎನ್ನುವುದು ನನ್ನ ಬಯಕೆ, ನಾನು ಪಕ್ಷದಲ್ಲಿ ಹುದ್ದೆಗಳನ್ನು ಕೇಳಿಲ್ಲ ನಮಗೆ ಪಕ್ಷ ಅಧಿಕಾರಕ್ಕೆ ಬರಲಿ ಅಂತ ಮಾತ್ರ ಕೆಲಸ ಮಾಡೋದು, ವಿಜಯೇಂದ್ರ, ಶ್ರೀರಾಮುಲು ಅವರಲ್ಲಿ ಯಾರೇ ಅಧ್ಯಕ್ಷ ಆದರೂ ಅದರ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳಲಿದ್ದಾರೆ ಎಂದರು.&lt;/p&gt;&lt;p&gt;ಬಸನಗೌಡ ಪಾಟೀಲ್ ಯತ್ನಾಳ ಹೇಳುವುದರಲ್ಲಿ ತಪ್ಪೇನಿದೆ, ಎಸ್ ಸರ್ ಅನ್ನೋ ಪದ ಅಮೇರಿಕದಲ್ಲಿ ಉಪಯೋಗಿಸಲಿ ನಮ್ಮ ದೇಶದಲ್ಲಿ ನಾವು ಜೈ ಶ್ರೀರಾಮ್ ಅನ್ನೋದರಲ್ಲಿ ತಪ್ಪೇನಿಲ್ಲ, ನಾನು ಸನಾತನ ಧರ್ಮದವನಾಗಿ ಕುಂಕುಮ ಹಚ್ಕೋತಿನಿ, ಕೆಲವರು ಹಚ್ಕೊಳಲ್ಲ ಅದು ಅವರ ಧರ್ಮದ ಪದ್ಧತಿ, ಕೆಲವರು ಈಗ ದೇವರ ಟ್ಯಾಟು ಹಾಕಿಕೊಳ್ಳುತ್ತಿದ್ದಾರೆ ಎಂದ ಅವರು, ಮಧು ಬಂಗಾರಪ್ಪ ಬಂದು ಹಚ್ಚೆ ತೆಗಿಸಲಾಗುವುದು ಎಂದು ಹುಚ್ಚಾಟ ಮಾಡುತ್ತಿದ್ದಾರೆ, ಇದರಿಂದ ಅವರಿಗೆ ಯಾವುದೇ ಲಾಭ ಇಲ್ಲ, 2028ಕ್ಕೆ 150ಕ್ಕೂ ಹೆಚ್ಚು ಸೀಟ್ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.&lt;/p&gt;&lt;p&gt;ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಹಿಟ್ನಾಳ ಬ್ರದರ್ಸ್ ಪೈಟ್ ವಿಚಾರವಾಗಿ ನಾನು ಚುನಾವಣೆಯಲ್ಲಿ ಗೆದ್ದ ಬಳಿಕ ನನಗೆ ಹಿಟ್ನಾಳ ಬ್ರದರ್ಸ ಪರಿಚಯ ಆಗಿದ್ದು, ಹಿಟ್ನಾಳ ಬ್ರದರ್ಸ್ ಫೇಸ್ ಹೇಗಿರತ್ತೆ ಅಂತ ನೋಡಿದ್ದೆ ಅವತ್ತು, ಇಕ್ಬಾಲ್ ಅನ್ಸಾರಿ ಬಾಯಿಗೆ ಬಂದಂತೆ ಹೇಳುವುದು ಸರಿಯಲ್ಲ, ನನ್ನನ್ನ ಯಾರು ಗಂಗಾವತಿಗೆ ಕರೆದುಕೊಂಡು ಬಂದಿಲ್ಲ ಗಂಗಾವತಿಯಲ್ಲಿ ಎರಡು ಬಾರಿ ಪರಣ್ಣ ಮುನವಳ್ಳಿ ಪರ ಪ್ರಚಾರ ಮಾಡಿದ್ದಿನಿ ಗಂಗಾವತಿ ಬಳ್ಳಾರಿಗೆ ಎನು ವ್ಯತ್ಯಾಸ ಇಲ್ಲ, ಜನರ ಪ್ರೀತಿ ವಿಶ್ವಾಸದಿಂದ ನಾನು ಗಂಗಾವತಿಗೆ ಬಂದಿದ್ದೇನೆ ಬಳ್ಳಾರಿಗೆ ಹೋಗಲು ಕೋರ್ಟ ನಿಷೇಧ ಇರುವ ಕಾರಣಕ್ಕೆ ನಾನು ಗಂಗಾವತಿಗೆ ಬಂದಿದ್ದು, ಮುಂದೆಯೂ ನಾನು ಗಂಗಾವತಿಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.&lt;/p&gt;&lt;p&gt;ಇಕ್ಬಾಲ್&zwnj; ಅನ್ಸಾರಿ ಜೆಡಿಎಸ್&zwnj; ಹೋಗುತ್ತಾರೋ ಅಥವಾ ಕಾಂಗ್ರೆಸ್&zwnj;ಲ್ಲಿ ಉಳಿತ್ತಾರೆ ಗೊತ್ತಿಲ್ಲ, ಆದರೆ ಅವರು ಹೇಳಿರುವ ಒಂದು ಮಾತು ಸತ್ಯ, ಕೊಪ್ಪಳ ರಿಪಬ್ಲಿಕ್&zwnj; ಆಗಿರುವುದಂತು ಸತ್ಯ. ನಮಗೆ ಈ ಹಿಂದೆ ರಿಪಬ್ಲಿಕ್ ಆಫ್&zwnj; ಬಳ್ಳಾರಿ ಅಂತ ಕಪ್ಪು ಬಟ್ಟೆ ಹಾಕಿದ್ದರು ಈಗ ಹಿಟ್ನಾಳ ಫ್ಯಾಮಿಲಿ ಕೊಪ್ಪಳ ರಿಪಬ್ಲಿಕ್ ಅಂತ ಹೇಳ್ತಿರೋದು ಸತ್ಯ.&lt;/p&gt;&lt;h2&gt;&lt;strong&gt;ಗಂಗಾವತಿಯಲ್ಲಿ ಸ್ಪರ್ಧೆ ಮಾಡುತ್ತೇನೆ&lt;/strong&gt;&lt;/h2&gt;&lt;p&gt;ಕಳೆದ ವರ್ಷ ನನಗೆ ಕಾನೂನಿನ ತೊಂದರೆ ಆದ ವೇಳೆ ಅಣ್ಣ,ತಮ್ಮ ಅವರ ತಂದೆಯನ್ನು ಕರೆದುಕೊಂಡ ಬಂದು ಗಂಗಾವತಿಯಲ್ಲಿ ಕೂತಿದ್ರೂ ಹೀಗಾಗಿ ಕೊಪ್ಪಳದಲ್ಲಿ ಅವರ ನೀರಿಳಿಸಲು ಇಕ್ಬಾಲ್ ಅನ್ಸಾರಿ ತೀರ್ಮಾನ ಮಾಡಿರಬೇಕು. ಇದರಿಂದ ನಮ್ಮ ಪಕ್ಷಕ್ಕೆ ಒಳ್ಳೆಯದಾಗುತ್ತೆ ಅಂತ ನನ್ನ ಭಾವನೆ ಎಂದರು. ಮನುಷ್ಯ ಸೋತಾಗ ನೂರೆಂಟು ಲೆಕ್ಕಾಚಾರ ಮಾಡ್ತಾರೆ, ಅದಕ್ಕೆ ಹಿಟ್ನಾಳ ಅವರೇ ನನ್ನ ಕರೆದುಕೊಂಡು ಬಂದ್ರೂ ಅಂತ ಲೆಕ್ಕಾಚಾರ ಹಾಕಿರಬೇಕು ಅನ್ಸಾರಿ, ನೂರಕ್ಕೆ ನೂರು 2028 ಕ್ಕೂ ನಾನು ಗಂಗಾವತಿಯಲ್ಲಿ ಸ್ಪರ್ಧೆ ಮಾಡುತ್ತೇನೆ ಯಾವುದೇ ಸಂಶಯ ಬೇಡ ಎಂದರು.&lt;/p&gt;&lt;p&gt;ನನಗೆ ಗಂಗಾವತಿ ಕ್ಷೇತ್ರ ರಾಜಕಿಯ ಪುನರ್ಜನ್ಮ ನೀಡಿದೆ, ಜನರಿಗೂ ನಾನು ಹೇಳಿದ್ದು ನಾನು ಇಲ್ಲೆ ಸ್ಪರ್ಧೆ ಮಾಡುತ್ತೇನೆ, ಬಿಜೆಪಿ ಸರ್ಕಾರ ರೈತರಿಗೆ ಬೀಜಕ್ಕೆ ಸಹಾಯಧನ ನೀಡುತ್ತಿತ್ತು, ಆದರೆ ಇದರ ಬಗ್ಗೆ ಕಾಂಗ್ರೆಸ್ ಸರ್ಕಾರ ಯೋಚನೆ ಮಾಡುತ್ತಿಲ್ಲ. ನಾವು ರೈತರ ಬೀಜ ಗೊಬ್ಬರದ ಬಗ್ಗೆ ಯೋಚನೆ ಮಾಡುತ್ತಿದ್ದರೆ ಅವರು ದೆಹಲಿಯಲ್ಲಿ ಸಿಎಂ ಕುರ್ಚಿಗೆ ಗುದ್ದಾಟ ನಡೆಸಿದ್ದಾರೆ. ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಹಾಳಾಗಿದೆ, ಮುಂದೆ ಏನಾಗತ್ತೊ ಗೊತ್ತಿಲ್ಲ ಎಂದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/will-siddaramaiah-step-down-as-cm-what-did-mla-janardhan-reddy-say-gvd/articleshow-cg5wqiw"/>
        </item>
        <item>
            <title><![CDATA[ಹಿರೇಬೆಣಕಲ್ ಮೋರೆರ್ ಶಿಲಾ ಸಮಾಧಿಗಳಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಬೆಳಕು: ಎಚ್.ಆರ್.ಶ್ರೀನಾಥ ಪ್ರಶಂಸೆ]]></title>
            <link>https://kannada.asianetnews.com/karnataka-districts/kannadaprabha-suvarna-news-hirebenakal-morer-hill-stone-tombs-heritage-news-gvd/articleshow-chrxnix</link>
            <guid isPermaLink="true">https://kannada.asianetnews.com/karnataka-districts/kannadaprabha-suvarna-news-hirebenakal-morer-hill-stone-tombs-heritage-news-gvd/articleshow-chrxnix</guid>
            <pubDate>Mon, 01 Jun 2026 18:06:57 +0530</pubDate>
            <description><![CDATA[&lt;p&gt;ಕನ್ನಡಪ್ರಭ-ಏಷ್ಯಾನೆಟ್ ಸೂವರ್ಣ ನ್ಯೂಸ್ ವಾಹಿನಿಯಿಂದ ಹಿರೇಬೆಕಲ್ ಮೋರೆರ್ ಬೆಟ್ಟದ ಶಿಲಾ ಸಮಾಧಿಗಳು ಬೆಳಕಿಗೆ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಪ್ರಶಂಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1jzm2mqh5kzww6012vc1d8,imgname-vhjc-1780317409364.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.01): &lt;/strong&gt;ಕನ್ನಡಪ್ರಭ-ಏಷ್ಯಾನೆಟ್ ಸೂವರ್ಣ ನ್ಯೂಸ್ ವಾಹಿನಿಯಿಂದ ಹಿರೇಬೆಕಲ್ ಮೋರೆರ್ ಬೆಟ್ಟದ ಶಿಲಾ ಸಮಾಧಿಗಳು ಬೆಳಕಿಗೆ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಪ್ರಶಂಸಿದರು. ನಗರದ ಕೊಟ್ಟೂರು ಬಸವೇಶ್ವರ ದೇವಸ್ಥನ ವೇದಿಕೆಯಲ್ಲಿ ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಪ್ರತಿಷ್ಠಾನ, ಹಾಗು ಪರಿಸರ ಸೇವಾ ಟ್ರಸ್ಟ್ ಏರ್ಪಿಡಿಸಿದ್ದ &ldquo;ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಸಂಭ್ರಮ&rdquo; ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.&lt;/p&gt;&lt;p&gt;ಕಳೆದ 40 ದಶಕಗಳ ಹಿಂದೆ ಹಿರೇಬೆಣಕಲ್ ಬೆಟ್ಟದಲ್ಲಿರುವ ಮೋರೆರ್ ಶಿಲಾ ಸಮಾಧಿಗಳ ಬಗ್ಗೆ ಇತಿಹಾಸ ಕೇಳಿದ್ದಲ್ಲದೆ ಆ ಸ್ಥಳವನ್ನು ವೀಕ್ಷಿಸಲಾಗಿತ್ತು. ಈಗ ಸರಕಾರ ಈ ಪ್ರದೇಶವನ್ನು ಅಭಿವೃದ್ದಿ ಪಡಿಸುವದಕ್ಕೆ ಮುಂದೆ ಬರಬೇಕೆಂದರು. ಇತ್ತೀಚಿಗೆ ಸರಕಾರ ಮೋರೆರ್ ಬೆಟ್ಟದ ಬಳಿ ಅಣು ಸ್ಥಾವರ ಸ್ಥಾಪನೆಗೆ ಸರಕಾರ ಮುಂದಾಗಿತ್ತು. ಇದರ ವಿರುದ್ಧ ಹೋರಾಟ ನಡೆಸಿದ್ದರಿಂದ ಸ್ಥಾಪನೆ ರದ್ದಾಗಿತು ಎಂದರು. ಕೂಡಲೆ ಸರಕಾರ ಐತಿಹಾಸಿಕ ಪ್ರದೇಶಗಳ ಅಭಿವೃದ್ದಿಗೆ ಅನುದಾನ ನೀಡಬೇಕೆಂದರು.&lt;/p&gt;&lt;p&gt;ಪ್ರಾಸ್ತಾವಿಕವಾಗಿ ಮಾತನಾಡಿದ ಸಂಶೋದಕ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಮೋರೆರ್ ಬೆಟ್ಟದಲ್ಲಿರುವ ಶಿಲಾ ಸಮಾಧಿಗಳ ಬಗ್ಗೆ ಇತಿಹಾಸ ಇದ್ದು, ಇತ್ತ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ವಾಹಿನಿಯು 7 ಅಧ್ಬುತಗಳ ಪರಿಚಯದ ಸಂದರ್ಭದಲ್ಲಿ ಹಿರೇಬೆಣಕಲ್&zwnj;ಗೆ ಪ್ರಥಮ ಸ್ಥಾನ ನೀಡಿ ಬೆಳಕು ಚೆಲ್ಲಿದರು ಎಂದು ಶ್ಲಾಘಿಸಿದರು.&lt;/p&gt;&lt;h2&gt;&lt;strong&gt;ಸರ್ಕಾರಕ್ಕೆ ಪ್ರಸ್ತಾವನೆ&lt;/strong&gt;&lt;/h2&gt;&lt;p&gt;ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಹಿರೇಬೆಣಕಲ್ ಇತಿಹಾಸ ಪ್ರಸಿದ್ಧವಾಗಿದ್ದು, ತಾವು ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಪ್ರದೇಶದ ಅಭಿವೃದ್ದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿದರು. ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಪ್ರತಿಷ್ಠಾನದ ಮಂಜುನಾಥ ಗುಡ್ಲಾನೂರ ಅವರು ಮೋರೆರ್ ಶಿಲಾ ಸಮಾದಿಗಳು ಮತ್ತು ಅಭಿವೃದ್ದಿಯ ಕುರಿತು ವಿವರಿಸಿದರು. ಇದೇ ವೇಳೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.&lt;/p&gt;&lt;p&gt;ಸಾನಿದ್ಯವನ್ನು ತಲೇಖಾನ್ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಎಚ್.ಎಸ್.ಮುರುಳಿಧರ, ಲಲಿತರಾಣಿ ಶ್ರೀರಂಗದೇವರಾಯಲು, ಡಾ. ಸೋಮರಾಜು, ಡಾ. ಚಂದ್ರಪ್ಪ, ಹಾಸ್ಯ ಕಲಾವಿದರಾದ ಬಿ.ಪ್ರಾಣೇಶ, ನರಸಿಂಹ ಜೋಷಿ, ಕನ್ನಡಪ್ರಭ ವರರದಿಗಾರ ರಾಮಮೂರ್ತಿ ನವಲಿ, ಟಿ.ಆಂಜನೇಯ, ಡಾ.ಸುಲೋಚನ ಚಿನಿವಾಲರ್, ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮೀದೇವಿ ಗುಡ್ಲಾನೂರ, ಡಾ.ಬದರಿಪ್ರಸಾದ್, ಶಿಕ್ಷಕ ಶರಣಪ್ಪ ಹಕ್ಕಂಡಿ, ವಿರೂಪಾಕ್ಷಪ್ಪ ಶಿರವಾರ್, ಮಾರುತಿ ಐಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/kannadaprabha-suvarna-news-hirebenakal-morer-hill-stone-tombs-heritage-news-gvd/articleshow-chrxnix"/>
        </item>
        <item>
            <title><![CDATA[ಸಿಎಂ ಸಿದ್ದರಾಮಯ್ಯರದ್ದು ಮೂರು ವರ್ಷದ ಮಗುವಿನ ತುಂಟಾಟಿಕೆ: ಶ್ರೀರಾಮುಲು ವ್ಯಂಗ್ಯ]]></title>
            <link>https://kannada.asianetnews.com/karnataka-districts/sriramulu-slams-siddaramaiah-over-congress-government-3-years-gvd/articleshow-dg8r69g</link>
            <guid isPermaLink="true">https://kannada.asianetnews.com/karnataka-districts/sriramulu-slams-siddaramaiah-over-congress-government-3-years-gvd/articleshow-dg8r69g</guid>
            <pubDate>Mon, 18 May 2026 22:26:13 +0530</pubDate>
            <description><![CDATA[&lt;p&gt;ಮಾಜಿ ಸಚಿವ ಶ್ರೀರಾಮುಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಆಡಳಿತ ಕುರಿತು ತೀವ್ರ ಟೀಕೆ ಮಾಡಿದ್ದು, ಬೆಲೆ ಏರಿಕೆ ಮತ್ತು ಆಡಳಿತ ವೈಫಲ್ಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k79trzrtmne3aemcfth8n1va,imgname-fefe-1760192921369.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಮೇ.18): &lt;/strong&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಮೂರು ವರ್ಷದ ಮಗುವಿನ ತುಂಟಾಟಿಕೆ, ಅಧಿಕಾರ ಅಂದಂಗೆ ಆಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಸರ್ಕಾರದ ಮೂರು ವರ್ಷದ ಸಂಭ್ರಮ ಕಾರ್ಯಕ್ರಮ ಮಾಡುವುದು, ಸಿದ್ದರಾಮಯ್ಯ ಮೂರು ವರ್ಷ ಮಗುವಿನಂತೆ ವರ್ತಿಸಿದ ಸಂಕೇತವಾಗಿದೆ. ಎಲ್ಲ ಬೆಲೆ ಏರಿಕೆ ಮಾಡಿ ಈಗ ಏನು ಮಾಡಿದ್ದಾರೆ ಎಂಬ ಕಾರಣಕ್ಕೆ ಕಾರ್ಯಕ್ರಮ ಮಾಡುತ್ತಾರೆ ಎಂದು ಪ್ರಶ್ನಿಸಿದರು.&lt;/p&gt;&lt;p&gt;ಗ್ಯಾರಂಟಿಗಳ ಹಿನ್ನೆಲೆ ಎಲ್ಲ ದರ ಏರಿಕೆ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಶೂ ನೀಡಿಲ್ಲ. ಅಂಗನವಾಡಿ, ಸರ್ಕಾರಿ ನೌಕರರಿಗೆ ವೇತನ ನೀಡಿಲ್ಲ. ಮೂರು ವರ್ಷದಲ್ಲಿ ಖಜಾನೆ ಖಾಲಿ ಮಾಡಿಕೊಂಡು ಕುಳಿತಿದ್ದಾರೆ. ಮೂರು ವರ್ಷದ ಮಗುವಿನ ತುಂಟಾಟಿಕೆ ಆಡಳಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದಾಗಿದೆ ಎಂದರು. ಸಿಎಂ ಬದಲಾವಣೆ ಚರ್ಚೆಯೇ ಕಾಂಗ್ರೆಸ್ ಅಭಿವೃದ್ಧಿ ಆಗಿದೆ. ಸಿದ್ದರಾಮಯ್ಯ ನಿಂತಿರುವ ನಾಲ್ಕು ಕಾಲುಗಳಲ್ಲಿ ಒಂದನ್ನು ಡಿ.ಕೆ. ಶಿವಕುಮಾರ ಕಿತ್ತಿಕೊಂಡಿದ್ದಾರೆ. ಈ ಖುರ್ಚಿಗಾಗಿ ಕಿತ್ತಾಟ ನಡೆದಿದೆ ಎಂದು ಆರೋಪಿಸಿದರು.&lt;/p&gt;&lt;h2&gt;&lt;strong&gt;ಪ್ರಧಾನಿ ಮೋದಿಯಿಂದ ಮಿತವ್ಯಯ&lt;/strong&gt;&lt;/h2&gt;&lt;p&gt;ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಿತವ್ಯಯ ಬಳಕೆ ಮಾಡಿದ್ದಾರೆ. ಮೋದಿ ಹೇಳಿದಂತೆ ಅವರು ಭದ್ರತಾ ವಾಹನ ಕಡಿಮೆ ಮಾಡಿದ್ದಾರೆ. ಈಗ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಹ ತಮ್ಮ ಬೆಂಗಾವಲು ಪಡೆ ಕಡಿಮೆ ಮಾಡಬೇಕು. ರಾಹುಲ್ ಗಾಂಧಿ, ಸಿದ್ದರಾಮಯ್ಯ ದೇಶ ಮುಖ್ಯ ಎನ್ನುತ್ತಿಲ್ಲ, ಅವರು ಕುಟುಂಬ ಮುಖ್ಯ ಎನ್ನುತ್ತಾರೆ. ಮೋದಿ ಅವರಿಗೆ ಬೆದರಿಕೆಗಳಿದ್ದರೂ ಬೆಂಗಾವಲು ಪಡೆ ಕಡಿಮೆ ಮಾಡಿದ್ದಾರೆ. ಈಗ ಕಾಂಗ್ರೆಸ್&zwnj;ನವರು ಬೆಂಗಾವಲು ಪಡೆ ಕಡಿಮೆ ಮಾಡಬೇಕು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶ ಆಳ್ವಿಕೆ ಮಾಡಿದ್ದಾರೆ. ಇಂದಿರಾ ಗಾಂಧಿ ಹಾಗೂ ಚಿದಂಬರ ಸಹ ಹಿಂದೆ ಚಿನ್ನ ಖರೀದಿಸಬಾರದು ಎಂದಿದ್ದರು.&lt;/p&gt;&lt;p&gt;ಮೋದಿ ಹೇಳಿದ್ದಾರೆ ಎಂಬ ಕಾರಣ ವಿರೋಧ ಮಾಡುತ್ತಿದ್ದಾರೆ, ಯುದ್ದದ ಹಿನ್ನೆಲೆ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ ಕುಸಿತವಾಗಿದೆ. ಕಾಂಗ್ರೆಸ್&zwnj;ನವರು ಪ್ರಧಾನಿಯನ್ನು ಡಮ್ಮಿ&zwnj; ಮಾಡಿದ್ದರು. ಶಾಸಕ ರಾಯರಡ್ಡಿ ಅವರ ಸ್ಥಿತಿ ಸಹ ಹಾಗೇ ಇದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಹೇಳಿಕೊಂಡು ಚುನಾವಣೆ ಗೆದ್ದಿದ್ದಾರೆ. 2028ರಲ್ಲಿ ಅವರು ಗೆಲ್ಲೋದಿಲ್ಲ ಎಂದು ಹೇಳಿದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sriramulu-slams-siddaramaiah-over-congress-government-3-years-gvd/articleshow-dg8r69g"/>
        </item>
        <item>
            <title><![CDATA[Karnataka's Yuvan Nidhi: ಯುವ ನಿಧಿ ಅನುದಾನ ಗೃಹಲಕ್ಷ್ಮೀಗೆ ವರ್ಗಾವಣೆ? 3ತಿಂಗಳಿನಿಂದ ಪದವೀಧರರಿಗೆ ತಲುಪದ ನಿರುದ್ಯೋಗ ಭತ್ಯೆ!]]></title>
            <link>https://kannada.asianetnews.com/state/karnataka-s-yuvan-nidhi-scheme-failed-youth-fund-not-reaching-graduates-for-three-months-rav/articleshow-e0zg70n</link>
            <guid isPermaLink="true">https://kannada.asianetnews.com/state/karnataka-s-yuvan-nidhi-scheme-failed-youth-fund-not-reaching-graduates-for-three-months-rav/articleshow-e0zg70n</guid>
            <pubDate>Fri, 29 May 2026 10:08:26 +0530</pubDate>
            <description><![CDATA[ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಯ ಹಣ ಕಳೆದ ಮೂರು ತಿಂಗಳಿಂದ ಪದವೀಧರರಿಗೆ ತಲುಪಿಲ್ಲ. ಕೊಪ್ಪಳ ಜಿಲ್ಲೆಯ ಸಾವಿರಾರು ಫಲಾನುಭವಿಗಳು ನಿರುದ್ಯೋಗ ಭತ್ಯೆಗಾಗಿ ಕಾಯುತ್ತಿದ್ದು, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksrzx430rq0frgj706qr4dw0,imgname-----------------------2026-05-29t095845.214-1780028969056.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.29): &lt;/strong&gt;ಸರ್ಕಾರ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆ ಮುಂದುವರಿದಿದ್ದರೂ ಪದವೀಧರರಿಗೆ ಮಾತ್ರ ಮೂರು ತಿಂಗಳಿಂದ ಯುವ ನಿಧಿ ಯೋಜನೆಯ ನಿರುದ್ಯೋಗ ಭತ್ಯೆ ಮರೀಚಿಕೆಯಾಗಿದೆ.&lt;/p&gt;&lt;p&gt;ಪದವಿ ಮುಗಿಸಿ ಕೆಲಸ ದೊರೆಯದೆ ಯುವ ನಿಧಿ ಯೋಜನೆಗಾಗಿ ತಿಂಗಳ ಕೊನೆಯ ಸಮಯಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಮೂರು ತಿಂಗಳಿಂದ ಬಾರದ ಹಿನ್ನೆಲೆ ಪದವೀಧರರು ಪರದಾಡುವಂತಾಗಿದೆ. ಪದವೀಧರರಿಗೆ ₹3000, ಡಿಪ್ಲೊಮಾ ಪದವೀಧರರಿಗೆ ₹1500 ಸರ್ಕಾರ ನಿಗದಿ ಮಾಡಿದೆ. ಈಗಾಗಲೇ ಗೃಹಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಗೆ ಅನುದಾನ ಬರುತ್ತಿದ್ದು, ಯುವ ನಿಧಿ ಫಲಾನುಭವಿಗಳಿಗೆ ಮಾತ್ರ ತಲುಪಲು ವಿಳಂಬವಾಗುತ್ತಿದೆ.&lt;/p&gt;&lt;h2&gt;14404 ಪದವೀಧರ ನೋಂದಣಿ:&lt;/h2&gt;&lt;p&gt;ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 14404 ಪದವೀಧರರು ನೋಂದಣಿ ಮಾಡಿದ್ದು, ಕೊಪ್ಪಳ ತಾಲೂಕಿನಲ್ಲಿ ಜನವರಿ 2026ರ ವೇಳೆಗೆ 3805 ಪದವೀಧರರ ಖಾತೆಗೆ 80292000 ಹಣ ಸಂದಾಯವಾಗಿದೆ. ಕುಷ್ಟಗಿ ತಾಲೂಕಿನಲ್ಲಿ 3037 ಪದವಿ ಫಲಾನುಭವಿಗಳಿದ್ದು, ₹63876000 ಸಂದಾಯವಾಗಿದೆ. ಗಂಗಾವತಿ ತಾಲೂಕಿನಲ್ಲಿ 3381 ಫಲಾನುಭವಿಗಳಿದ್ದು, ₹90637500 ಸಂದಾಯವಾಗಿದೆ. ಕಾರಟಗಿ ತಾಲೂಕಿನಲ್ಲಿ 790 ಫಲಾನುಭವಿಗಳಿದ್ದು, ₹7911000 ಸಂದಾಯವಾಗಿದೆ. ಕನಕಗಿರಿ 727 ಫಲಾನುಭವಿಗಳಿದ್ದು, 70320007 ಸಂದಾಯವಾಗಿದೆ. ಯಲಬುರ್ಗಾ ತಾಲೂಕಿನಲ್ಲಿ 2064 ಫಲಾನುಭವಿಗಳಿದ್ದು, 47167500 ಹಣ ಸಂದಾಯವಾಗಿದ್ದು, ಕುಕನೂರು ತಾಲೂಕಿನಲ್ಲಿ 600 ಫಲಾನುಭವಿಗಳಿದ್ದಾರೆ. ಇವರ ಖಾತೆಗೆ 6286500 ಸಂದಾಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 14404 ಫಲಾನುಭವಿಗಳಿದ್ದು, 303202500 ಹಣ ಸಂದಾಯವಾಗಿದೆ.&lt;/p&gt;&lt;h3&gt;ಗೃಹಲಕ್ಷ್ಮೀ ಯೋಜನೆಗೆ ವರ್ಗಾವಣೆ:&lt;/h3&gt;&lt;p&gt;ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ ಯುವ ನಿಧಿ ಯೋಜನೆಯ ಕೋಟ್ಯಂತರ ಅನುದಾನ ಗೃಹಲಕ್ಷ್ಮೀ ಯೋಜನೆಗೆ ವರ್ಗಾವಣೆಯಾಗಿರುವದರ ಬಗ್ಗೆ ದೂರು ಕೇಳಿ ಬರುತ್ತದೆ. ಕಳೆದ ಫೆಬ್ರುವರಿಯಿಂದ ಯೋಜನೆ ಹಣ ತಲುಪದ ಕಾರಣ ಫಲಾನುಭವಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಯುವ ನಿಧಿ ಕಚೇರಿಗೆ ಸಂಪರ್ಕ ಮಾಡುತ್ತಿದ್ದಾರೆ. ನಿರುದ್ಯೋಗಿಗಳಿಗೆ ಈ ಯೋಜನೆ ಆಶ್ರಯವಾಗಿದೆ. ಆದರೆ ಕಳೆದ ಮೂರು ತಿಂಗಳಿನಿಂದ ಹಣ ಬಾರದ ಕಾರಣ ವಂಚಿತರಾಗುತ್ತಿದ್ದಾರೆ.&lt;/p&gt;&lt;p&gt;ಕಳೆದ ಮೂರು ತಿಂಗಳಿಂದ ಯುವ ನಿಧಿ ಹಣ ಬಂದಿಲ್ಲ, ಪ್ರತಿ ತಿಂಗಳು ಈ ಯೋಜನೆಯ ಅಪ್ಡೇಟ್ ಮಾಡುತ್ತಾ ಬಂದಿರುತ್ತೇವೆ ಈ ಯೋಜನೆಯ ಅನುದಾನ ಗೃಹ ಲಕ್ಷ್ಮಿ ಯೋಜನೆಗೆ ವರ್ಗಾಯಿಸಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.&lt;/p&gt;&lt;p&gt;&lt;strong&gt;ಯುವ ನಿಧಿ ಫಲಾನುಭವಿ, ಕೊಪ್ಪಳ ಜಿಲ್ಲೆ&lt;/strong&gt;&lt;/p&gt;&lt;p&gt;ಕಳೆದ ಮೂರು ತಿಂಗಳಿಂದ ಯುವ ನಿಧಿ ಬಂದಿಲ್ಲ. ಕೆಲವೊಂದು ತಾಂತ್ರಿಕ ಕಾರಣದಿಂದ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆ ತಲುಪಿಲ್ಲ. ಈ ಕುರಿತು ಸಚಿವರ ಜತೆಗೆ ಮಾತನಾಡಿದ್ದು, ಇನ್ನೂ 3-4 ದಿನಗಳಲ್ಲಿ ಫಲಾನುಭವಿಗಳಿಗೆ ಭತ್ಯೆ ತಲುಪುತ್ತದೆ.&lt;/p&gt;&lt;p&gt;ರಡ್ಡಿ ಶ್ರೀನಿವಾಸ ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಯೋಜನೆ ಕೊಪ್ಪಳ&lt;/p&gt;&lt;p&gt;&lt;strong&gt;ಫೋಟು 26 ಜಿಎನ್ ಜಿ1- ಯುವ ನಿಧಿ&lt;/strong&gt;&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-s-yuvan-nidhi-scheme-failed-youth-fund-not-reaching-graduates-for-three-months-rav/articleshow-e0zg70n"/>
        </item>
        <item>
            <title><![CDATA[ಕಣ್ಣೀರಿನ ನಡುವೆ ಮತ್ತೊಂದು ದುರಂತ: ಮಸಣದಿಂದ ಮರಳುತ್ತಿದ್ದ ಇಬ್ಬರು ಅಪಘಾತದಲ್ಲಿ ಸಾವು]]></title>
            <link>https://kannada.asianetnews.com/crime/kukunoor-road-accident-two-men-die-after-funeral-gvd/articleshow-h8nm8yz</link>
            <guid isPermaLink="true">https://kannada.asianetnews.com/crime/kukunoor-road-accident-two-men-die-after-funeral-gvd/articleshow-h8nm8yz</guid>
            <pubDate>Wed, 20 May 2026 20:39:28 +0530</pubDate>
            <description><![CDATA[&lt;p&gt;ಮಣ್ಣು ಕೊಟ್ಟು ತಮ್ಮೂರಿಗೆ ತೆರಳುತ್ತಿದ್ದ ಇಬ್ಬರು ಮಸಣ ಸೇರಿದ ದುರ್ಘಟನೆ ಬುಧವಾರ ಜರುಗಿದೆ. ತಾಲೂಕಿನ ರಾಜೂರು ಗ್ರಾಮದ ಬೈಪಾಸ್ ರಸ್ತೆಯಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ರಸ್ತೆ ಅಪಘಾತ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp17vdhxcq5hdgr1hdrzgpw1,imgname-samruddhi-mahamarg-accident--1776010769981.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುಕನೂರು (ಮೇ.20): &lt;/strong&gt;ಮಣ್ಣು ಕೊಟ್ಟು ತಮ್ಮೂರಿಗೆ ತೆರಳುತ್ತಿದ್ದ ಇಬ್ಬರು ಮಸಣ ಸೇರಿದ ದುರ್ಘಟನೆ ಬುಧವಾರ ಜರುಗಿದೆ. ತಾಲೂಕಿನ ರಾಜೂರು ಗ್ರಾಮದ ಬೈಪಾಸ್ ರಸ್ತೆಯಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೆ ಮೃತಪಟ್ಟ ಘಟನೆ ಜರುಗಿದೆ.&lt;/p&gt;&lt;p&gt;ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದ ನಿವಾಸಿಗಳಾದ ಶಂಕ್ರಪ್ಪ ತುತ್ತುರೊಟ್ಟಿ(47) ಮತ್ತು ಬಸಪ್ಪ ಗೋಗೆರಿ(50) ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ. ಕುಕನೂರು ಪಟ್ಟಣದ ಸಂಬಂಧಿಕರ ಅಂತ್ಯಸಂಸ್ಕಾರ ಮುಗಿಸಿಕೊಂಡು ಮರಳಿ ಬಳೂಟಗಿ ಗ್ರಾಮಕ್ಕೆ ಹೋಗುತ್ತಿದ್ದಾಗ ಟಿಪ್ಪರ್ ಮೂಲಕ ಬಂದ ಜವರಾಯ ಬೈಕ್&zwnj;ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಇಬ್ಬರೂ ಸಹ ಮೃತಪಟ್ಟಿದ್ದಾರೆ. ಈ ಕುರಿತು ಕುಕನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಪ್ಪರ್ ಸಹ ಮಗೂಚಿ ಬಿದ್ದಿದೆ.&lt;/p&gt;&lt;h2&gt;&lt;strong&gt;ಕೊಲ್ಲೂರಿನ ಬಳಿ ಅಪಘಾತ: ಇಬ್ಬರ ಸಾವು, 8 ಮಂದಿಗೆ ಗಾಯ&lt;/strong&gt;&lt;/h2&gt;&lt;p&gt;ಇಲ್ಲಿನ ಕೊಲ್ಲೂರಿನ ಹೊರವಲಯದಲ್ಲಿ ಸಂಭವಿಸಿದ ಜೀಪ್ ಹಾಗೂ ಲಾರಿ ಡಿಕ್ಕಿಯಲ್ಲಿ ಇಬ್ಬರು ಮಹಿಳೆಯರು ದಾರುಣವಾಗಿ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ. ಮೃತರು ಜೀಪ್&zwnj;ನಲ್ಲಿ ಪ್ರಯಾಣಿಸುತ್ತಿದ್ದ ಕೇರಳ ಕೊಟ್ಟಾಯಂ ಜಿಲ್ಲೆಯ ಪಾಲಂ ಮೂಲದ ಜ್ಯೋತಿ (45) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಕೊಟ್ಟಾಯಂ ಜಿಲ್ಲೆಯ ಆರ್ಯ ಅನೂಪ್ (28) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.&lt;/p&gt;&lt;p&gt;ಗಾಯಗೊಂಡಿರುವ ಉಳಿದ ಪ್ರಯಾಣಿಕರನ್ನು ಕುಂದಾಪುರ ಹಾಗೂ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಯಾತ್ರಾರ್ಥಿಗಳು ಭಾನುವಾರ ಕೊಲ್ಲೂರು ಮೂಕಾಂಬಿಕಾ ದೇವಾಲಯ ಹಾಗೂ ಕೊಡಚಾದ್ರಿ ಪ್ರವಾಸಕ್ಕೆಂದು ಕೇರಳದ ಕೊಟ್ಟಾಯಂ ಜಿಲ್ಲೆಯಿಂದ ಆಗಮಿಸಿದ್ದರು. ಬೆಳಗ್ಗೆ ಜೀಪಲ್ಲಿ ಕೊಡಚಾದ್ರಿಗೆ ತೆರಳಿ ಕೊಲ್ಲೂರಿಗೆ ಹಿಂದಿರುಗುತ್ತಿದ್ದಾಗ, ದಳಿ ಎಂಬಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಮಲ್ಪೆಯಿಂದ ಮೀನು ತುಂಬಿಸಿಕೊಂಡು ಶಿವಮೊಗ್ಗ ಕಡೆಗೆ ಪ್ರಯಾಣಿಸುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ.&lt;/p&gt;&lt;p&gt;ದೇವರಾಜ್ ಎಂಬವರು ಚಾಲಕರಾಗಿದ್ದ ಜೀಪಿನಲ್ಲಿ ಮೂವರು ಮಕ್ಕಳು ಸೇರಿ 10 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದ ಭೀಕರತೆ ಇಬ್ಬರು ಮೃತಪಟ್ಟಿದ್ದಾರೆ. ಉಳಿದ 8 ಪ್ರಯಾಣಿಕರಿಗೆ ಗಾಯಗಳಾಗಿದ್ದು, ನಾಲ್ವರನ್ನು ಮಣಿಪಾಲದ ಕೆಎಂಸಿಗೆ ಹಾಗೂ ನಾಲ್ವರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಸೇರಿಸಲಾಗಿದೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/kukunoor-road-accident-two-men-die-after-funeral-gvd/articleshow-h8nm8yz"/>
        </item>
        <item>
            <title><![CDATA[ಗಂಗಾವತಿ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಗುಂಪುಗಾರಿಕೆ: ತ್ರಿಶಂಕು ಸ್ಥಿತಿಯಲ್ಲಿ ಕಾರ್ಯಕರ್ತರು]]></title>
            <link>https://kannada.asianetnews.com/karnataka-districts/gangavathi-congress-internal-conflict-three-groups-gvd/articleshow-hxda411</link>
            <guid isPermaLink="true">https://kannada.asianetnews.com/karnataka-districts/gangavathi-congress-internal-conflict-three-groups-gvd/articleshow-hxda411</guid>
            <pubDate>Thu, 21 May 2026 16:05:22 +0530</pubDate>
            <description><![CDATA[&lt;p&gt;ಗಂಗಾವತಿ ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರದಲ್ಲಿರುವ ಕಾಂಗ್ರೆಸ್&zwnj; ಪಕ್ಷ ನಾವಿಕ ಇಲ್ಲದ ಹಡಗಿನಂತಾಗಿದೆ. ಈಗಾಗಲೇ ಕಾಂಗ್ರೆಸ್&zwnj; ಮೂರು ಗುಂಪುಗಳಿದ್ದು, ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzhdmkgbd5a6zgrtse7mevx,imgname-----------------------2026-04-12t055752.365-1775953695344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/p&gt;&lt;p&gt;&lt;strong&gt;ಗಂಗಾವತಿ (ಮೇ.21): &lt;/strong&gt;ಗಂಗಾವತಿ ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರದಲ್ಲಿರುವ ಕಾಂಗ್ರೆಸ್&zwnj; ಪಕ್ಷ ನಾವಿಕ ಇಲ್ಲದ ಹಡಗಿನಂತಾಗಿದೆ. ಈಗಾಗಲೇ ಕಾಂಗ್ರೆಸ್&zwnj; ಮೂರು ಗುಂಪುಗಳಿದ್ದು, ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್&zwnj; ಪಕ್ಷದಿಂದ ದಿ. ಶ್ರೀರಂಗದೇವರಾಯಲು ಶಾಸಕರಾದ ನಂತರ ಯಾರೂ ಚುನಾಯಿತರಾಗಿಲ್ಲ. ಈಗಿರುವ ಕಾಂಗ್ರೆಸ್ ಮುಖಂಡರ ಭಿನ್ನಮತ, ಕಚ್ಚಾಟ, ಆರೋಪ ಪ್ರತ್ಯಾರೋಪ, ಬೇರೆ ಪಕ್ಷದವರೊಂದಿಗೆ ಶಾಮೀಲು ಸೇರಿದಂತೆ ಪಕ್ಷದ ಅಂತರಿಕ ಜಗಳದಿಂದ ಕ್ಷೇತ್ರದಲ್ಲಿ ಪಕ್ಷ ನೆಲಕಚ್ಚಿದೆ.&lt;/p&gt;&lt;p&gt;ನಗರದಲ್ಲಿ ಕಾಂಗ್ರೆಸ್&zwnj; ಮುಖಂಡರ ಗುಂಪುಗಾರಿಕೆ ಮುಂದುವರಿದಿದೆ. ಪಕ್ಷ ಸಂಘಟನೆಯಲ್ಲಿ ಗುಂಪುಗಾರಿಕೆ, ಬೂತಮಟ್ಟದ ಸದಸ್ಯರ ಅಭಿಯಾನ, ಕಾರ್ಯಕರ್ತರ ನೇಮಕಾತಿ, ವರ್ಗಾವಣೆ ಸೇರಿದಂತೆ ಇತರ ವಿಷಯಗಳಲ್ಲಿ ಗುಂಪುಗಾರಿಕೆ ನಡೆದಿರುವುದು ಹೊಸದೇನಲ್ಲ. ಕಳೆದ ವಾರದಿಂದ ಮುಖಂಡರುಗಳ ವಾಕ್ಸಮರ ನಡೆದಿರುವುದು ಭಿನ್ನಮತಕ್ಕೆ ಪುಷ್ಠಿ ನೀಡಿದೆ. ಗಂಗಾವತಿಯ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ವಿಪ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಗುಂಪು ಮೂರು ಪಂಗಡಗಳಾಗಿವೆ.&lt;/p&gt;&lt;p&gt;ಅನ್ಸಾರಿ ಈಗ ಬೆಂಗಳೂರಿನಲ್ಲಿದ್ದು ಪಕ್ಷ ನಿರ್ಲಕ್ಷಿಸಿದ್ದಾರೆ ಎಂಬ ಕಾರಣಕ್ಕೆ ಬೂತ್ ಮಟ್ಟದ ಉಸ್ತುವಾರಿಗೆ ಸಂಸದ ರಾಜಶೇಖರ ಹಿಟ್ನಾಳ ಅವರನ್ನು ನೇಮಕ ಮಾಡಿರುವುದು ಅನ್ಸಾರಿ ಸಿಡಿಮಿಡಿಗೆ ಕಾರಣವಾಗಿದೆ. ಮಾಜಿ ಸಚಿವ ಮಲ್ಲಿಕಾರ್ಜನ ನಾಗಪ್ಪ ಬೆಂಬಲಿಗರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ತಾವು ಹೇಳಿದ ಕಾರ್ಯಕರ್ತರಿಗೆ ನಾಮನಿರ್ದೇಶನ ಮಾಡದೇ ಇರುವದು ಕೆಪಿಸಿಸಿ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ.&lt;/p&gt;&lt;p&gt;ಕಾರ್ಯಕರ್ತರು ತ್ರಿಶಂಕು:ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ಒಳ ಜಗಳದಿಂದ ಕಾರ್ಯಕರ್ತರಿಗೆ ತ್ರಿಶಂಕು ಸ್ಥಿತಿ ಒದಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಪರಿಸ್ಥಿತಿ ಬಂದಾಗ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅನ್ಯ ಪಕ್ಷಕ್ಕೆ ಬೆಂಬಲಿಸಿ ಪಲಾಯನ ಮಾಡಿದ್ದರು. ಈಗ ಚುನಾವಣೆ ಸನಿಹದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸ್ಥಿತಿ ಡೋಲಾಯಮಾನವಾಗಿದೆ. ಇದರಿಂದಾಗಿ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ನಾವಿಕ ಇಲ್ಲದ ಹಡಗಿನಂತಾಗಿದೆ.&lt;/p&gt;&lt;h2&gt;&lt;strong&gt;ಜವಾಬ್ದಾರಿ ನಿರ್ವಹಿಸಿಲ್ಲ&lt;/strong&gt;&lt;/h2&gt;&lt;p&gt;ಗಂಗಾವತಿ ಕ್ಷೇತ್ರದಲ್ಲಿ ಮುಖಂಡರೊಬ್ಬರು ದಿನಕ್ಕೊಂದು ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ವರಿಷ್ಠರು ಇವರ ಬಗ್ಗೆ ಗಮನಹರಿಸುತ್ತಿದ್ದಾರೆ. ಗಂಗಾವತಿ ಕ್ಷೇತ್ರದ ಬಿಎಲ್ 2 ನೇಮಕ ಮಾಡುವ ಕುರಿತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಎರಡು ಮೂರು ಬಾರಿ ಸಂಪರ್ಕಿಸಿದ್ದೇನೆ. ಅವರು ಸರಿಯಾದ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಿಲ್ಲ. ಈ ಕಾರಣಕ್ಕೆ ವರಿಷ್ಠರ ಜತೆ ಮಾತನಾಡಿ ಈ ಸ್ಥಾನಕ್ಕೆ ಸಂಸದ ರಾಜಶೇಖರ್ ಹಿಟ್ನಾಳ್ ಅವರಿಗೆ ಶಿಫಾರಸ್ಸುಮಾಡಿದೆ. ಪಕ್ಷದ ಡ್ಯಾಮೇಜ್ ಹೇಳಿಕೆ ಸರಿಯಲ್ಲ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ತಿಳಿಸಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್ ವರಿಷ್ಠರು ಗಂಗಾವತಿ ವಿಧಾನಸಭಾ ಕ್ಷೇತ್ರದ ಕಡೆ ಗಮನ ಹರಿಸುತ್ತಿಲ್ಲ. ಮಖಂಡರಿಗೆ ಬೆಲೆ ಇಲ್ಲದಂತಾಗಿದೆ. ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಭಿನ್ನಮತಕ್ಕೆ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕಾರಣರಾಗಿದ್ದಾರೆ. ಕೂಡಲೇ ಪುನರಚನೆ ಸಂದರ್ಭದಲ್ಲಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/gangavathi-congress-internal-conflict-three-groups-gvd/articleshow-hxda411"/>
        </item>
        <item>
            <title><![CDATA[ಗಂಗಾವತಿಯಲ್ಲಿ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದ ಆಕಳು: 5 ಗಂಟೆಗಳ ಬಳಿಕ ಆಗಿದ್ದೇನು?]]></title>
            <link>https://kannada.asianetnews.com/karnataka-districts/gangavathi-cow-falls-into-septic-tank-rescue-operation-gvd/articleshow-k6ltchb</link>
            <guid isPermaLink="true">https://kannada.asianetnews.com/karnataka-districts/gangavathi-cow-falls-into-septic-tank-rescue-operation-gvd/articleshow-k6ltchb</guid>
            <pubDate>Sun, 17 May 2026 23:46:14 +0530</pubDate>
            <description><![CDATA[&lt;p&gt;ಸೆಪ್ಟಿಕ್ ಟ್ಯಾಂಕ್&zwnj;ನಲ್ಲಿ ಕುಸಿದು ಬಿದ್ದು ಆಕಳು ನರಳುತ್ತಿರುವ ಘಟನೆ ನಗರದ ಕುಮಾರರಾಮ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಕುಮಾರರಾಮ ಬಡಾವಣೆಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krvfjrwhdhgapmexe24ez2qs,imgname-vjjv-1779038774161.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.17): &lt;/strong&gt;ಸೆಪ್ಟಿಕ್ ಟ್ಯಾಂಕ್&zwnj;ನಲ್ಲಿ ಕುಸಿದು ಬಿದ್ದು ಆಕಳು ನರಳುತ್ತಿರುವ ಘಟನೆ ನಗರದ ಕುಮಾರರಾಮ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಕುಮಾರರಾಮ ಬಡಾವಣೆಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಸರಿಯಾದ ರೀತಿಯಲ್ಲಿ ಮುಚ್ಚದೆ ಇರುವದರಿಂದ ಕಲ್ಮಠಕ್ಕೆ ಸೇರಿದ್ದ ಆಕಳು ಟ್ಯಾಂಕ್ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಕುಸಿದಿದೆ. ಪರಿಣಾಮವಾಗಿ ಆಕಳು ಸುಮಾರು ಐದು ಗಂಟೆಗಳ ಕಾಲ ಟ್ಯಾಂಕ್&zwnj;ನಲ್ಲಿ ನರಳುತ್ತಿರುವುದು ಸಾಮಾನ್ಯವಾಗಿತ್ತು.&lt;/p&gt;&lt;p&gt;ಕುಮಾರರಾಮ ಬಡಾವಣೆಯ ಜನರು ನಗರಸಭೆಯವರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಸಿಬ್ಬಂದಿಗಳು ಜೆಸಿಬಿ ಯಂತ್ರದಿಂದ ಟ್ಯಾಂಕ್ ಒಡೆದು ಹಗ್ಗದಿಂದ ಆಕಳನ್ನು ಮೇಲಕ್ಕೆ ಎತ್ತುವ ಕಾರ್ಯಾಚರಣೆ ಮಾಡಿದರು. ನಗರಸಭೆಯಿಂದ ಕೈಗೊಂಡ ಬಹುತೇಕ ಸಾರ್ವಜನಿಕ ಶೌಚಾಲಯದ ಟ್ಯಾಂಕ್&zwnj;ಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚದೆ ಇರುವುದೇ ಇಂತಹ ಅವಘಡಕ್ಕೆ ಕಾರಣವಾಗಿವೆ. ನಗರದ 3ನೇ ವಾರ್ಡಿನಲ್ಲಿಯು ಸಹ ಒಳ ಚರಂಡಿ ಮಂಡಳಿಯವರು ಕೈಗೊಂಡ ಯುಜಿಡಿ ಟ್ಯಾಂಕ್&zwnj;ಗಳು ಬಹುತೇಕವಾಗಿ ತೆರೆದಿವೆ.&lt;/p&gt;&lt;h2&gt;&lt;strong&gt;ರಸ್ತೆಗಳು ಸಹ ಅಧೋಗತಿಯತ್ತ&lt;/strong&gt;&lt;/h2&gt;&lt;p&gt;ಎಷ್ಟೋ ಜನರು ಬೈಕ್&zwnj;ಗಳಲ್ಲಿ ಚರಂಡಿಯಲ್ಲಿ ಬಿದ್ದು ಗಾಯಗೊಂಡ ಘಟನೆ ಮಾಸುವ ಮುನ್ನವೆ ಮತ್ತೇ ಕುಮಾರರಾಮ ಬಡಾವಣೆಯಲ್ಲಿಈ ಘಟನೆ ನಡೆದಿದೆ. ಒಳಚರಂಡಿಗಳು ಸರಿಯಾದ ರೀತಿಯಲ್ಲಿ ಕಾಮಗಾರಿಯಾಗದ ಕಾರಣ ರಸ್ತೆಗಳು ಸಹ ಅಧೋಗತಿಯತ್ತ ಸಾಗಿವೆ ಎಂಬ ಅರೋಪ ಕೇಳಿ ಬರುತ್ತದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದರಿಂದ ನಗರಸಭೆ ವಿರುದ್ಧ ನಾಗರಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/gangavathi-cow-falls-into-septic-tank-rescue-operation-gvd/articleshow-k6ltchb"/>
        </item>
        <item>
            <title><![CDATA[ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಕುಷ್ಟಗಿಯವರೆಗೆ ವಿಸ್ತರಿಸಲು ಹೆಚ್ಚಿದ ಒತ್ತಾಯ, ಪ್ರಯೋಜನವೇನು?]]></title>
            <link>https://kannada.asianetnews.com/gallery/karnataka-districts/demand-mounts-to-extend-bengaluru-hubballi-superfast-express-to-kushtagi-gdp-kiasa7k</link>
            <guid isPermaLink="true">https://kannada.asianetnews.com/gallery/karnataka-districts/demand-mounts-to-extend-bengaluru-hubballi-superfast-express-to-kushtagi-gdp-kiasa7k</guid>
            <pubDate>Wed, 27 May 2026 09:37:44 +0530</pubDate>
            <description><![CDATA[&lt;p&gt;ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯು ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk9bp62qv9cthntcjy9jaten,imgname-chittur-railway-station-1773062002775.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯು ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಕುಷ್ಟಗಿ: ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಒತ್ತಾಯಿಸಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ಅವರಿಗೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದರು. ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿರೇಶ ಬಂಗಾರಶೆಟ್ಟರ ಮಾತನಾಡಿ, ಬೆಂಗಳೂರು ಹುಬ್ಬಳ್ಳಿ ಚಲಿಸುವ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸಬೇಕು ಎಂದರು.&lt;/p&gt;&lt;img&gt;&lt;p&gt;ಗದಗ ರೈಲ್ವೆ ಹೋರಾಟ ಸಮಿತಿಯವರು ಈಗಾಗಲೇ ಆಂದೋಲನ ಪ್ರಾರಂಭಿಸಿದ್ದು, ಈ ರೈಲನ್ನು ಗದಗಕ್ಕೆ ವಿಸ್ತರಿಸುವಂತೆ ಒತ್ತಾಯಿಸಿ ಹಲವಾರು ಮನವಿ ಸಲ್ಲಿಸಿದ್ದಾರೆ. ಮುಂದಿನ ಹಂತವಾಗಿ, ಈ ರೈಲನ್ನು ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಗೆ ವಿಸ್ತರಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.ಈ ಸೌಲಭ್ಯ ಕುಷ್ಟಗಿ ತಾಲೂಕು ಮಾತ್ರವಲ್ಲದೆ,ಗಜೇಂದ್ರಗಡ, ಇಲಕಲ್, ಯಲಬುರ್ಗಾ, ಕುಕನೂರು ಮತ್ತು ಗದಗ ಜಿಲ್ಲೆಯ ಜನರಿಗೂ ಪ್ರಯೋಜನ ನೀಡುತ್ತದೆ. ಇದು ವೈದ್ಯಕೀಯ ಅಗತ್ಯ, ಹೈಕೋರ್ಟ್, ಶಿಕ್ಷಣ ಮತ್ತು ವ್ಯವಹಾರಕ್ಕೆ ಅನುಕೂಲಕರವಾಗಲಿದೆ ಕಾರ್ಮಿಕರಿಗೂ ಇದು ಪ್ರಯೋಜನ ನೀಡುತ್ತದೆ ಎಂದರು.&lt;/p&gt;&lt;img&gt;&lt;p&gt;ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್&zwnj;ಗಳಿಂದ ಅಕ್ರಮವಾಗಿ ಅಧಿಕ ಶುಲ್ಕ ವಿಧಿಸುವುದನ್ನು ಇದು ತಡೆಯುತ್ತದೆ. ಬೆಂಗಳೂರು-ಹುಬ್ಬಳ್ಳಿ ರೈಲನ್ನು ಗದಗ ಮೂಲಕ ಕುಷ್ಟಗಿಗೆ ವಿಸ್ತರಿಸುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಸರ್ಕಾರಿ ಮತ್ತು ಖಾಸಗಿ ಬಸ್&zwnj;ಗಳಲ್ಲಿ ಬೆಂಗಳೂರಿಗೆ ಪ್ರತಿ ದಿನ ಪ್ರಯಾಣಿಸುವ ಜನರಿಗೆ ಸಹಕಾರಿಯಾಗಲಿದೆ ಎಂದರು. ಕಳೆದ ವರ್ಷ ಮೇ 15ರಂದು ಗದಗ-ವಾಡಿ ರೈಲ್ವೆ ಯೋಜನೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಪರ್ಕ ಸಕ್ರಿಯಗೊಳಿಸಿದ ನಂತರ, ಕುಷ್ಟಗಿ-ಬೆಂಗಳೂರು ಸಂಪರ್ಕದ ಬೇಡಿಕೆ ಬಲವಾಗಿ ಕೇಳಿಬರುತ್ತಿದ್ದು, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಹಲವಾರು ಮನವಿ ಸಲ್ಲಿಸಲಾಗಿದೆ. ಕುಷ್ಟಗಿಗೆ ರೈಲು ಸೇವೆ ಆರಂಭವಾಗಿ ವರ್ಷ ಕಳೆದರೂ ಮತ್ತೊಂದು ರೈಲು ಸಂಪರ್ಕ ಪಡೆಯುವ ಕನಸು ಇನ್ನೂ ನನಸಾಗಿಲ್ಲ ಎಂದರು.&lt;/p&gt;&lt;img&gt;&lt;p&gt;ಕುಷ್ಟಗಿಯಿಂದ ಹುಬ್ಬಳ್ಳಿಗೆ ಒಂದೇ ಒಂದು ರೈಲು ಚಲಿಸುತ್ತದೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ನಿಲ್ದಾಣ ಬೆಳಗ್ಗೆ 6-7 ಮತ್ತು ರಾತ್ರಿ 8-9 ರವರೆಗೆ ಮಾತ್ರ ಪ್ರಯಾಣಿಕರು ಇರುತ್ತಿದ್ದು ಉಳಿದ ಸಮಯಗಳಲ್ಲಿ ನಿರ್ಜನ ಪ್ರದೇಶವಾಗಿರುತ್ತದೆ. ಆದ್ದರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ಮತ್ತೊಂದು ರೈಲು ಮತ್ತು ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಪರ್ಕದ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಈ ಕುರಿತು ಈಗಾಗಲೆ ಸಂಬಂಧಿಸಿದ ಸಚಿವರಿಗೆ ಹಾಗೂ ಸಂಸದರಿಗೂ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಶ್ರೀಧರ ಘೋರ್ಪಡೆ, ಮಂಜುನಾಥ ಮಹಾಲಿಂಗಪೂರ, ಬಸವರಾಜ ಸಾಲಿಮಠ ಸೇರಿದಂತೆ ಅನೇಕರು ಇದ್ದರು.&lt;/p&gt;&lt;img&gt;&lt;p&gt;ಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಕುಡಿಯುವ ನೀರಿನ ಸೌಲಭ್ಯ, ಕಳ್ಳತನ ಪ್ರಕರಣಗಳ ತಡೆಗೆ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಬೇಕಿದೆ, ರೈಲ್ವೆ ಪೊಲೀಸರನ್ನು ನಿಯೋಜಿಸಬೇಕು ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ, ನಿರಂತರ ವಿದ್ಯುತ್ ಒದಗಿಸುವುದು, ಕುಷ್ಟಗಿಯಿಂದ ಹುಬ್ಬಳ್ಳಿಗೆ ಬೆಳಗ್ಗೆ 7 ಗಂಟೆಗೆ ರೈಲು ಓಡಿಸಬೇಕಿದೆ, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮೊದಲನೆ ಪ್ಲಾಟ್ ಫಾರಂಗೆ ನಿಲ್ಲುವಂತೆ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.&lt;/p&gt;&lt;p&gt;ಕುಷ್ಟಗಿ ಬೆಂಗಳೂರು ರೈಲು ಸೇವೆ ಹಾಗೂ ಕುಷ್ಟಗಿ ಹುಬ್ಬಳ್ಳಿ ಇನ್ನೊಂದು ರೈಲು ಸೇವೆ ಜತೆಗೆ ಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಕುರಿತು ಕೊಪ್ಪಳ ಸಂಸದರು ಒತ್ತಾಯಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ತುರ್ತು ಸಭೆ ಮಾಡಿ ಸಾಧಕ ಭಾಧಕ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/demand-mounts-to-extend-bengaluru-hubballi-superfast-express-to-kushtagi-gdp-kiasa7k"/>
        </item>
        <item>
            <title><![CDATA[40 ವರ್ಷವಾದ್ರೂ ಮಾಳವ್ವ ಹೋಟೆಲ್‌ನ ರುಚಿ ಕಡಿಮೆಯಾಗಿಲ್ಲ; ಇಲ್ಲಿ ಜನಕ್ಕೆ ಇವ್ರೇ ಅನ್ನಪೂರ್ಣೇಶ್ವರಿ]]></title>
            <link>https://kannada.asianetnews.com/gallery/karnataka-districts/koppal-a-grandmother-named-malavva-has-been-running-a-hotel-in-kanakagiri-for-about-40-years-video-viral-mrq-lazpoag</link>
            <guid isPermaLink="true">https://kannada.asianetnews.com/gallery/karnataka-districts/koppal-a-grandmother-named-malavva-has-been-running-a-hotel-in-kanakagiri-for-about-40-years-video-viral-mrq-lazpoag</guid>
            <pubDate>Mon, 01 Jun 2026 11:56:31 +0530</pubDate>
            <description><![CDATA[ಕನಕಗಿರಿಯಲ್ಲಿ ಸುಮಾರು 40 ವರ್ಷಗಳಿಂದ ಮಾಳವ್ವ ಎಂಬ ಅಜ್ಜಿ ಹೋಟೆಲ್ ನಡೆಸುತ್ತಿದ್ದಾರೆ. ತಮ್ಮ ಕೈರುಚಿಯ ತಿಂಡಿ ಹಾಗೂ ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡುವ ಮೂಲಕ ಇವರು ಜನರ ಪ್ರೀತಿ ಗಳಿಸಿದ್ದು, ಸದ್ಯ ಇವರ ವಿಡಿಯೋ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt0x2h1w6y2g3taj5yvehp1h,imgname-malavva-hotel--3--1780294435900.jpg" type="image/jpeg" height="390" width="690"/>
            <content:encoded><![CDATA[ಕನಕಗಿರಿಯಲ್ಲಿ ಸುಮಾರು 40 ವರ್ಷಗಳಿಂದ ಮಾಳವ್ವ ಎಂಬ ಅಜ್ಜಿ ಹೋಟೆಲ್ ನಡೆಸುತ್ತಿದ್ದಾರೆ. ತಮ್ಮ ಕೈರುಚಿಯ ತಿಂಡಿ ಹಾಗೂ ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡುವ ಮೂಲಕ ಇವರು ಜನರ ಪ್ರೀತಿ ಗಳಿಸಿದ್ದು, ಸದ್ಯ ಇವರ ವಿಡಿಯೋ ವೈರಲ್ ಆಗಿದೆ.&lt;img&gt;&lt;p&gt;ಕೆಲವೊಂದು ಹೋಟೆಲ್&zwnj;ಗಳು ಕೇವಲ ಹಣಕ್ಕೆ ಆಹಾರವನ್ನು ಸರಬರಾಜು ಮಾಡಲ್ಲ. ಬದಲಿಗೆ ಸುತ್ತಲಿನ ಹಳ್ಳಿಗಳ ಜನರು ಹೋಟೆಲ್&zwnj;ಗಳ ಜೊತೆ ಅವಿನಾಭ ಸಂಬಂಧ ಹೊಂದಿರುತ್ತಾರೆ. ಅಂತಹುವುದೇ ಒಂದು ಹೋಟೆಲ್ ನಮ್ಮ ಕನಕಗಿರಿಯಲ್ಲಿ ನಿಮಗೆ ಸಿಗುತ್ತದೆ. ಕನಕಗಿರಿ ಮಾತ್ರವಲ್ಲ ಸುತ್ತಮುತ್ತಲಿನ ಹಳ್ಳಿಯವರಿಗೆ ಮಾಳವ್ವ ಹೋಟೆಲ್ ಅಂದ್ರೆ ಏನು ಒಂದು ರೀತಿಯ ಖುಷಿ.&lt;/p&gt;&lt;img&gt;&lt;p&gt;Mr.Chaaraniga ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಳವ್ವ ಹೋಟೆಲ್&zwnj; ವಿಡಿಯೋ ಅಪ್ಲೋಡ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಾಳವ್ವ ಅವರ ಮಾತುಗಳಲ್ಲಿ ತಾಯಿ ಎಷ್ಟು ಸಿಂಪಲ್ ಅನ್ನೋದು ಗೊತ್ತಾಗುತ್ತದೆ. ಸುಮಾರು 40 ವರ್ಷಗಳಿಂದ ಕನಕಗಿರಿಯಲ್ಲಿ ಹೋಟೆಲ್ ನಡೆಸಿಕೊಂಡು ಬಂದಿದ್ದಾರೆ. ವಯಸ್ಸು ಎಷ್ಟು ಅಂತ ಕೇಳಿದ್ರೆ, ನನಗೆ ನನ್ನ ಮಕ್ಕಳು ವಯಸ್ಸು ಸಹ ಗೊತ್ತಿಲ್ಲ. ಗಣತಿಗೆ ಬಂದವರು ವಯಸ್ಸು ಕೇಳಿದ್ರೆ ನೀವೇ ಬರೆದುಕೊಳ್ಳಿ ಎಂದು ಹೇಳುತ್ತಾರೆ.&lt;/p&gt;&lt;img&gt;&lt;p&gt;ಈ ಹೋಟೆಲ್&zwnj;ನಲ್ಲಿ ಬೆಳಗ್ಗೆ ಇಡ್ಲಿ, ಬೋಂಡಾ, ಮಿರ್ಚಿ ಬಜ್ಜಿ, ಅವಲಕ್ಕಿ, ಮಂಡಾಳು ಒಗ್ಗರಣೆ, ಉಪ್ಪಿಟ್ಟು, ಪುಲಾವ್ ಚಟ್ನಿ ಮಾಡುತ್ತಾರೆ. ಮಧ್ಯಾಹ್ನದ ನಂತರ ನಿಮಗೆ ಬಿಸಿ ಬಿಸಿ ಬಜ್ಜಿ ಮತ್ತು ಮಂಡಕ್ಕಿಯೂ ನಿಮಗೆ ಇಲ್ಲಿ ಸಿಗುತ್ತದೆ. ಮಾಳವ್ವ ಅಜ್ಜಿ ಕೇವಲ ಹೋಟೆಲ್ ನಡೆಸಿದ್ರೆ ಇಷ್ಟು ಫೇಮಸ್ ಅಗುತ್ತಿರಲಿಲ್ಲ. ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿಯೂ ಆಹಾರ ನೀಡುತ್ತಾರೆ.&lt;/p&gt;&lt;img&gt;&lt;p&gt;ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇಲ್ಲಿ ಬೋಂಡಾ ಸ್ಪೆಷಲ್ ಉಪ್ಪಿಟ್ಟು. ನಾನು ವಿದ್ಯಾರ್ಥಿಯಾಗಿದ್ದಾಗ ಇಲ್ಲಿ ಊಟ ಮಾಡಿದ್ದ ನೆನಪು, ಒಮ್ಮೆಯಂತೂ ಹಣವೇ ಇರಲಿಲ್ಲ. ಮರುದಿನ ನಾನಾಗಿಯೇ ಕೊಟ್ಟಾಗಲೇ ಹಣ ಪಡೆದುಕೊಂಡ್ರು. ಇವರು ನಮಗೆ ನಿಜವಾಗ್ಲೂ ಅನ್ನಪೂರ್ಣೇಶ್ವರಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಮಾಳವ್ವ ಅವರ ಹೋಟೆಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ಇದೇ ವಿಡಿಯೋಗೆ ಕಮೆಂಟ್ ಮಾಡಿರುವ ಚೆನ್ನಪ್ಪ ಗೌಡ ಎಂಬವರು, ಇದು ನಮ್ಮ ಅಮ್ಮ. ನಾನು ಇವರ ಕೈ ತುತ್ತು ತಿಂದಿದ್ದೀನಿ. ಸುಮಾರು 23ವರ್ಷ ಕನಕಗಿರಿಯಲ್ಲಿ ಇದ್ದು ಶಿಕ್ಷಕನಾಗಿ ದುಡಿದು ಈಗ ನನ್ನ ಮೂಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದೀನಿ. ನನ್ನ ಕೊಪ್ಪಳ ಜಿಲ್ಲೆಯನ್ನು ಅನ್ನ ಕೊಟ್ಟಿದೆ ಜೀವನ ಕೊಟ್ಟಿದೆ. ಜನರ ಪ್ರೀತಿ ಕೊಟ್ಟಿದೆ missyou ಕೊಪ್ಪಳ ಎಂದು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ಶಿವಾಜಿ ರಾವ್ ಎಂಬವರು, ಇವರು ನಮ್ಮ ಕನಕಗಿರಿಯ ದೊಡ್ಡಮ್ಮನವರು ಅಂತ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವಿದ್ಯಾರ್ಥಿಗಳಿಗಾಗಿ ಕೇವಲ 10 ರೂ.ಯಲ್ಲಿ ತಿಂಡಿ ನೀಡುವ ತಿಪ್ಪಣ್ಣ ಹೋಟೆಲ್&zwnj;; ಪ್ರೇಮಾ ಅಜ್ಜಿ ಅಂದ್ರೆ ಫೇಮಸ್&lt;/strong&gt;&lt;/p&gt;&lt;img&gt;&lt;p&gt;ಮಾಳವ್ವ ತಾಯಿ ಫೋಟೋ ಹಂಚಿಕೊಂಡಿರುವ Mr.Chaaraniga, ಕನಕಗಿರಿ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದಾಗ ಊಟಕ್ಕೆ ಅಂಥ ಹೋದಾಗ ತಿಳಿದಿದ್ದು ಮಾಳವ್ವ ಹೋಟೆಲ್. ಅಜ್ಜಿ ಸುಮಾರು 40 ವರ್ಷದಿಂದ ನಡೆಸುತ್ತಿರುವ ಹೋಟೆಲ್. ಅಲ್ಲಿನ ರುಚಿ ಶುಚಿ ಬಗ್ಗೆ ಅಲ್ಲಿನ ಜನರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಮಕ್ಕಳು , ಶಿಕ್ಷಕರು ಮತ್ತು ಊರಿನ ಜನರೇ ಹೇಳಿದಾಹಾಗೆ ರುಚಿ ಮಾತ್ರ ಸೂಪರ್ ಎಂದು ಬರೆದುಕೊಂಡಿದ್ದಾರೆ. ನೀವು ಮಾಳವ್ವ ಹೋಟೆಲ್&zwnj;ಗೆ ಹೋಗಿದ್ರೆ ನಿಮ್ಮ ಅನುಭವವನ್ನು ಕಮೆಂಟ್ ಮಾಡಿ.&lt;/p&gt;&lt;p&gt;&lt;/p&gt;]]></content:encoded>
            <category>koppal</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/koppal-a-grandmother-named-malavva-has-been-running-a-hotel-in-kanakagiri-for-about-40-years-video-viral-mrq-lazpoag"/>
        </item>
        <item>
            <title><![CDATA[ಗಂಗಾವತಿ ಕಾಂಗ್ರೆಸ್‌ನಲ್ಲಿ ಭಿನ್ನಮತ? ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಗಂಭೀರ ಆರೋಪ]]></title>
            <link>https://kannada.asianetnews.com/karnataka-districts/hr-srinath-slams-congress-leadership-gangavathi-local-leaders-neglect-gvd/articleshow-lbfvgz4</link>
            <guid isPermaLink="true">https://kannada.asianetnews.com/karnataka-districts/hr-srinath-slams-congress-leadership-gangavathi-local-leaders-neglect-gvd/articleshow-lbfvgz4</guid>
            <pubDate>Tue, 19 May 2026 20:27:25 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಮತ್ತು ಪಕ್ಷ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಸ್ಥಳೀಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks0bvetx1a00epnyc59fq8m7,imgname-jk-1779202636637.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.19): &lt;/strong&gt;ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಮತ್ತು ಪಕ್ಷ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಸ್ಥಳೀಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸರ್ವೇಶ್ ಹೊಟೆಲ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಸ್ಥಳೀಯರನ್ನು ಕಡೆಗಣಿಸುತ್ತಾ ಬಂದಿದ್ದಾರೆ.&lt;/p&gt;&lt;p&gt;ತಾವೊಬ್ಬ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ವರಿಷ್ಠರಿಗೆ ಕಾರ್ಯಕರ್ತರ ನೇಮಕ ಬಗ್ಗೆ ಶಿಫಾರಸ್ತು ಮಾಡಿದರೆ ಕಡೆಗಣಿಸುತ್ತಿದ್ದಾರೆಂದು ದೂರಿದರು. ತಮ್ಮ ತಂದೆ 5 ಭಾರಿ ಸಂಸದರಾಗಿ, ಶಾಸಕರಾಗಿ ಕಾಂಗ್ರೆಸ್ ಉಳಿವಿಗಾಗಿ ಹೋರಾಡಿದ ನಾಯಕರಾಗಿದ್ದಾರೆ. ತಾವು ಸಹ ಎರಡು ಭಾರಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾಗಿ, ಕಾಡಾ ಅದ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದೇನೆ. ಆದರೆ ಪಕ್ಷದ ಸಂಘಟನೆಯಲ್ಲಿದ್ದರು ಸಹ ವರಿಷ್ಟರು ಪಕ್ಷಕ್ಕೆ ದುಡಿಯದವರಿಗೆ ಕೆಲವೊಂದು ನಾಮನಿರ್ದೇಶನ ಮತ್ತು ಪಕ್ಷದ ಅಧಿಕಾರ ನೀಡಿರುವುದು ಕಾಂಗ್ರೆಸ್ ಅವನತಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಿಗೆ ತಾವು ಬೇರೆಯವರಿಗೆ ಶಿಫಾರಸ್ತು ಮಾಡಿದ್ದರು ಸಹ ನಾಗರಾಜ ನಂದಾಪುರ ಎನ್ನುವರಿಗೆ ನೇಮಕ ಮಾಡಿದ್ದಾರೆ ಎಂದು ದೂರಿದರು. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಾಕಷ್ಟು ಹಣ ಪಡೆದು ದಲ್ಲಾಳಿ ನಡೆದಿದೆ. ಇದಕ್ಕೆ ತಾವು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವದಿಲ್ಲ. ತಾವು ಹಿಂದೆ ಅಧಿಕಾರದಲ್ಲಿದ್ದಾಗ ಹಣದ ಆಸೆಗೆ ಹೋದವರು ನಾವಲ್ಲ. ಇತ್ತೀಚಿಗೆ ವರ್ಗಾವಣೆ ವ್ಯಾಪಾರ ನಡೆದಿದೆ ಎಂದರು.&lt;/p&gt;&lt;h2&gt;&lt;strong&gt;ಸಚಿವ ತಂಗಡಗಿ, ಸಂಸದ ಹಿಟ್ನಾಳ್ ರಿಂದ ಅಧಿಕಾರ ಚಲಾವಣೆ&lt;/strong&gt;&lt;/h2&gt;&lt;p&gt;ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಡರನ್ನು ವಿಶ್ವಾಸಕ್ಕೆ ಪಡೆದು ಸಚಿವ ಶಿವರಾಜ ತಂಗಡಗಿ ಮತ್ತು ಸಂಸದ ರಾಜಶೇಖರ್ ಹಿಟ್ನಾಳ್ ಅವರು ಅಧಿಕಾರ ಚಲಾವಣೆ ಮಾಡುವುದು ಬಿಟ್ಟು ಸಂಸದರು ಮತ್ತು ಸಚಿವರು ಕೂಡಿಕೊಂಡು ಗಂಗಾವತಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಉದ್ಭವಿಸುವದಕ್ಕೆ ಕಾರಣರಾಗಿದ್ದಾರೆಂದು ಅರೋಪಿಸಿದರು. ಸಚಿವರು ಕೇವಲ ಕನಕಗಿರಿ ಸಂಬಂಧ ಅಲ್ಲಾ ಗಂಗಾವತಿಯ ಕೆಲ ಭಾಗವು ಸಹ ಸಚಿವರ ವ್ಯಾಪ್ತಿಗೆ ಬರುತ್ತದೆ. ಆದರೆ ಇವರು ಪಕ್ಷಕ್ಕೆ ದುಡಿದವರನ್ನು ಬಿಟ್ಟು ಅನ್ಯ ಪಕ್ಷದವರಿಗೆ ಮಣಿ ಹಾಕಿ ನೇಮಕ ಮಾಡಿದ್ದಾರೆಂದು ಅಕ್ರೋಶ ವ್ಯಕ್ತ ಪಡಿಸಿದರು.&lt;/p&gt;&lt;p&gt;ಕಾಂಗ್ರೆಸ್ ಬೂತ್ ಮಟ್ಟದ ಪ್ರತಿನಿಧಿಯನ್ನಾಗಿ ಸಂಸದ ರಾಜಶೇಖರ್ ಹಿಟ್ನಾಳ್ ಅವರನ್ನು ನೇಮಕ ಮಾಡಿದ್ದಾರೆ. ಗಂಗಾವತಿಯಲ್ಲಿ ಯಾವ ನಾಯಕರು ಇಲ್ಲವೇ ಎಂದು ಪ್ರಶ್ನೆಸಿದರು. ಆಯಾ ಕ್ಷೇತ್ರದ ಕಾಂಗ್ರೆಸ್ ಶಾಸಕರಿಗೆ ಬೂತ್ ಮಟ್ಟದ ಪ್ರತಿನಿಧಿಯಾಗಿ ಮಾಡಿದ್ದಾರೆ. ಪರಾಭವಗೊಂಡವರಿಗೆ ಏಕೆ ಅಧಿಕಾರ ನೀಡಿಲ್ಲ. ಸಂಸದರು ಇದನ್ನು ಅರ್ಥೈಸಿಕೊಳ್ಳ ಬೇಕಾಗಿತ್ತು ಎಂದರು. ಇನ್ನು ಎರಡು ವರ್ಷ ಅಧಿಕಾರ ಇದೆ. ಕಾಂಗ್ರೆಸ್ ನಾಯಕರುಗಳು ಸ್ಥಳೀಯರನ್ನು ಕಡೆಗಣಿಸಿದರೆ ಬರುವ ಚುನಾವಣೆಯಲ್ಲಿ ಕಾರ್ಯಕರ್ತರೆ ಪಾಠ ಕಲಿಸುವುದು ನೂರಕ್ಕೆ ನೂರು ಸತ್ಯ ಎಂದರು.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/hr-srinath-slams-congress-leadership-gangavathi-local-leaders-neglect-gvd/articleshow-lbfvgz4"/>
        </item>
        <item>
            <title><![CDATA[Anjanadri Temple: ತಾಪಮಾನ ಏರಿದರೂ ಭಕ್ತಿ ಕಡಿಮೆ ಆಗಲಿಲ್ಲ; ಒಂದೇ ದಿನ ಅಂಜನಾದ್ರಿಗೆ 25 ಸಾವಿರ ಭಕ್ತರ ಭೇಟಿ!]]></title>
            <link>https://kannada.asianetnews.com/gallery/karnataka-districts/25000-devotees-visit-anjanadri-in-a-single-day-despite-scorching-heat-rav-miqek6y</link>
            <guid isPermaLink="true">https://kannada.asianetnews.com/gallery/karnataka-districts/25000-devotees-visit-anjanadri-in-a-single-day-despite-scorching-heat-rav-miqek6y</guid>
            <pubDate>Sun, 24 May 2026 05:20:24 +0530</pubDate>
            <description><![CDATA[&lt;p&gt;ಕೊಪ್ಪಳ: ಉರಿ ಬಿಸಿಲು ಲೆಕ್ಕಿಸದೆ ಶನಿವಾರ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಅಂದಾಜು 25000 ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ನಿನ್ನೆ ಅಷ್ಟು ಭಕ್ತರು ಆಗಮಿಸಿ ದರ್ಷನ ಪಡೆಯಲು ಕಾರಣವೇನು ತಿಳಿಯಿರಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksbkt4k5b1tst2cqf7b8mjsv,imgname-----------------------2026-05-24t045804.337-1779580080741.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳ: ಉರಿ ಬಿಸಿಲು ಲೆಕ್ಕಿಸದೆ ಶನಿವಾರ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಅಂದಾಜು 25000 ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ನಿನ್ನೆ ಅಷ್ಟು ಭಕ್ತರು ಆಗಮಿಸಿ ದರ್ಷನ ಪಡೆಯಲು ಕಾರಣವೇನು ತಿಳಿಯಿರಿ&lt;/p&gt;&lt;img&gt;&lt;p&gt;ಉರಿ ಬಿಸಿಲು ಲೆಕ್ಕಿಸದೆ ಶನಿವಾರ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಪೌರಾಣಿಕ ಪ್ರಸಿದ್ಧ ಕ್ಷೇತ್ರ, ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಅಂದಾಜು 25000 ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು&lt;/p&gt;&lt;img&gt;&lt;p&gt;ಬೆಳಗ್ಗೆಯಿಂದಲೇ ಆಗಮಿಸಿದ್ದ ಭಕ್ತರು ಗುಡ್ಡ ಏರಿ ಹನುಮಂತನ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು. 11 ಗಂಟೆಯ ಬಳಿಕವೂ ಭಕ್ತರ ಸಂಖ್ಯೆ ಕಡಿಮೆ ಆಗಲಿಲ್ಲ&lt;/p&gt;&lt;img&gt;&lt;p&gt;ವಿಪರೀತ ಬಿಸಿಲು ಇರುವುದರಿಂದ 11ರ ನಂತರ ಬೆಟ್ಟ ಏರುವುದಕ್ಕೆ ಅವಕಾಶ ಇಲ್ಲದ ಕಾರಣ ಮತ್ತೆ ಸಂಜೆ ಬೆಟ್ಟ ಹತ್ತಲು ಭಕ್ತರು ಕೆಳಗಡೆಯೇ ಕಾಯುತ್ತಾ ಕುಳಿತಿದ್ದರು.&lt;/p&gt;&lt;img&gt;&lt;p&gt;ದೇವಸ್ಥಾನ ಸಮಿತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕೇವಲ 4 ನಲ್ಲಿಗಳು ಮಾತ್ರ ಇದ್ದು, ಹೆಚ್ಚಾಗಿ ಭಕ್ತರು ಆಗಮಿಸಿದ್ದರಿಂದ ಕುಡಿಯುವ ನೀರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/25000-devotees-visit-anjanadri-in-a-single-day-despite-scorching-heat-rav-miqek6y"/>
        </item>
        <item>
            <title><![CDATA[ಗಂಗಾವತಿ ನ್ಯಾಯಾಲಯದಲ್ಲಿ ದುರಂತ: 25 ವರ್ಷದ ಯುವ ವಕೀಲ ಹೃದಯಾಘಾತದಿಂದ ಸಾವು!]]></title>
            <link>https://kannada.asianetnews.com/karnataka-districts/gangavathi-young-lawyer-kanakesh-murudi-dies-heart-attack-gvd/articleshow-mwshy7w</link>
            <guid isPermaLink="true">https://kannada.asianetnews.com/karnataka-districts/gangavathi-young-lawyer-kanakesh-murudi-dies-heart-attack-gvd/articleshow-mwshy7w</guid>
            <pubDate>Wed, 20 May 2026 18:56:04 +0530</pubDate>
            <description><![CDATA[&lt;p&gt;ಯುವ ವಕೀಲ ಕನಕೇಶ್ ಮುರುಡಿ (25) ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಕೂಡಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರೊಳಗೆ ಕನಕೇಶ ಮೃತಪಟ್ಟಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2s0w2zynz7amn8hfwpf499,imgname-c-n-1779283554399.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.20): &lt;/strong&gt;ಇಲ್ಲಿಯ ಯುವ ವಕೀಲ ಕನಕೇಶ್ ಮುರುಡಿ (25) ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ನ್ಯಾಯಾಲಯದ ವಕೀಲರ ಸಂಘದ ಸಭಾಂಗಣದಲ್ಲಿ ಜರುಗಿದ ನ್ಯಾಯಾಧೀಶರ ಬಿಳ್ಕೋಡುಗೆ ಸಮಾರಂಭದಲ್ಲಿ ಭಾಗಿಯಾದ ನಂತರ ಏರ್ಪಡಿಸಿದ್ದ ಭೋಜನಕೂಟದ ನಂತರ ಈ ಘಟನೆ ನಡೆದಿದೆ. ಮೂಲತ ಕನಕಗಿರಿ ತಾಲೂಕಿನ ಚಿಕ್ಕ ಮಾದಿನಾಳ ಗ್ರಾಮದ ಕನಕೇಶ ಮುರುಡಿ ಅವರು ಕಳೆದ ಒಂದು ವರ್ಷದ ಹಿಂದೆ ಕಾನೂನು ಪದವಿ ಮುಗಿಸಿ ಪ್ರಾಕ್ಟಿಸ್ ಮಾಡುತ್ತಿದ್ದರು.&lt;/p&gt;&lt;p&gt;ನ್ಯಾಯಾಲಯದ ಆವರಣದಲ್ಲಿದ್ದ ಕ್ಯಾಂಟಿನ್ ಬಳಿ ನೀರು ಕುಡಿದ ಕನಕೇಶ ಮುರುಡಿ ಅವರಿಗೆ ವಾಂತಿ ಪ್ರಾರಂಭವಾಗಿದೆ. ನಂತರ ಕುಸಿದು ಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಲೆ ಕಾರ್ಯಕ್ರಮದಲ್ಲಿದ್ದ ನ್ಯಾಯಾಧೀಶರು, ನ್ಯಾಯವಾದಿಗಳು ಆಗಮಿಸಿ ಕೂಡಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರೊಳಗೆ ಕನಕೇಶ ಮೃತಪಟ್ಟಿದ್ದಾರೆ. ಕನಕೇಶ್&zwnj;ಗೆ ತಾಯಿ, ಸೇರಿದಂತೆ ಅಪಾರ ಬಳಗ ಇದೆ.&lt;/p&gt;&lt;h2&gt;&lt;strong&gt;ಮತ್ತೊಂದು ಆಘಾತ&lt;/strong&gt;&lt;/h2&gt;&lt;p&gt;ಸದ್ಯ ಮೃತದೇಹವನ್ನು ಸ್ವಗ್ರಾಮ ಚಿಕ್ಕಮಾದಿನಾಳ ಗ್ರಾಮಕ್ಕೆ ಕಳಿಸಿಕೊಡಲಾಯಿತು. ಕನಕೇಶ್ ಮುರುಡಿ ನಿಧನಕ್ಕೆ ನ್ಯಾಯಾಧೀಶರು, ನ್ಯಾಯವಾದಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಇನ್ನು ಕಳೆದ ಎರಡು ತಿಂಗಳ ಹಿಂದೆ ಕುಷ್ಟಗಿ ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ತಾವರಗೇರೆಯ ಯುವ ನ್ಯಾಯವಾದಿ ಸುದ್ದಿ ವಕೀಲರು ಹೃದಯಘಾತದಿಂದ ಮೃತಪಟ್ಟಿದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-young-lawyer-kanakesh-murudi-dies-heart-attack-gvd/articleshow-mwshy7w"/>
        </item>
        <item>
            <title><![CDATA[ಗಂಗಾವತಿ ರೆಸಾರ್ಟ್ ಈಜುಕೊಳದಲ್ಲಿ ಗಲಾಟೆ: ಮಹಿಳಾ ಪೇದೆ ಸೇರಿ 8 ಜನರಿಗೆ ಗಾಯ]]></title>
            <link>https://kannada.asianetnews.com/crime/gangavathi-resort-swimming-pool-fight-8-injured-gvd/articleshow-ovbuez6</link>
            <guid isPermaLink="true">https://kannada.asianetnews.com/crime/gangavathi-resort-swimming-pool-fight-8-injured-gvd/articleshow-ovbuez6</guid>
            <pubDate>Sun, 17 May 2026 23:26:27 +0530</pubDate>
            <description><![CDATA[&lt;p&gt;ತಾಲೂಕಿನ ರೆಸಾರ್ಟ್&zwnj;ವೊಂದರ ಈಜುಕೊಳದಲ್ಲಿ ಕ್ಷುಲಕ ಕಾರಣಕ್ಕೆ 8 ಜನರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ ಕೊಪ್ಪಳದ ಮಹಿಳಾ ಪೇದೆ ಮೇಲೆ ಹಲ್ಲೆ ನಡೆದಿದ್ದು, ಅವರ ಚಿನ್ನದ ಸರ ನಾಪತ್ತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krvdy4gdnedyrgpk74aczcg6,imgname-vj-1779037049357.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.17): &lt;/strong&gt;ತಾಲೂಕಿನ ರೆಸಾರ್ಟ್&zwnj;ವೊಂದರ ಈಜುಕೊಳದಲ್ಲಿ ಕ್ಷುಲಕ ಕಾರಣಕ್ಕೆ 8 ಜನರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ ಕೊಪ್ಪಳದ ಮಹಿಳಾ ಪೇದೆ ಮೇಲೆ ಹಲ್ಲೆ ನಡೆದಿದ್ದು, ಅವರ ಚಿನ್ನದ ಸರ ನಾಪತ್ತೆಯಾಗಿದೆ.&lt;/p&gt;&lt;p&gt;&lt;strong&gt;ನಡೆದಿದ್ದೇನು: &lt;/strong&gt;ತಾಲೂಕಿನ ಚಿಕ್ಕ ಜಂತಕಲ್ ಗ್ರಾಮದಿಂದ ರೆಸಾರ್ಟ್&zwnj;ಗೆ ಬಂದಿದ್ದ ಮಹಿಳೆಯರು ಸೇರಿದಂತೆ 8 ಜನರ ಗುಂಪು ಈಜುಗೊಳದಲ್ಲಿ ಇಳಿದಿದ್ದಾರೆ. ಇದೇ ಸಮಯದಲ್ಲಿ ಗಂಗಾವತಿಯಿಂದ ಬಂದಿದ್ದ ಕೆಲ ಯುವಕರು ನೀರಿನ ಬಾಟಲು ಎಸೆದಾಡುವ ಪ್ರಸಂಗ ನಡೆದು ವಿಕೋಪಕ್ಕೆ ಹೋಗಿದೆ. ನಂತರ ಅಂಜನಾದ್ರಿಯ ಬಳಿಯಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮಿಸಲಾಯಿಸಿದ್ದಾರೆ. ಇದರಲ್ಲಿ ಪೇದೆ ಮೇಲೆ ಹಲ್ಲೆ ನಡೆದಿದ್ದು, ಚಿನ್ನದ ಸರ ಕಿತ್ತುಕೊಂಡ್ಡಿದ್ದಾರೆ. ಸದ್ಯ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;p&gt;ಪ್ರಭಾರಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ, ಗ್ರಾಮೀಣ ಪೋಲಿಸ್ ಠಾಣೆ ಸಿಪಿಐ ರಂಗಪ್ಪ ದೊಡ್ಮನಿ,ಗಂಗಾವತಿ ನಗರ ಪೋಲಿಸ್ ಠಾಣೆ ಪಿಐ ಪ್ರಕಾಶ ಯಾತನೂರ ನಗರದ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ, ವಿಚಾರಣೆ ಕೈಗೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ಬಿಗಿ ಭದ್ರತೆ&lt;/strong&gt;&lt;/h2&gt;&lt;p&gt;ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುಗಳನ್ನು ವಿಚಾರಿಸಲು ಜನರು ಬರುತ್ತಿದ್ದಂತೆಯೇ ಗುಂಪುಗಳನ್ನು ಪೋಲಿಸರು ಚದುರಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/crime/gangavathi-resort-swimming-pool-fight-8-injured-gvd/articleshow-ovbuez6"/>
        </item>
        <item>
            <title><![CDATA[60 ವರ್ಷದ ಇತಿಹಾಸ.. ಓಬೇರಾಯನ ಕಾಲದ ಪ್ರವಾಸಿಮಂದಿರ ಅಧೋಗತಿ: ಸಾರ್ವಜನಿಕರ ಆಕ್ರೋಶ]]></title>
            <link>https://kannada.asianetnews.com/karnataka-districts/gangavathi-tourist-bungalow-illegal-activities-gvd/articleshow-poilqr4</link>
            <guid isPermaLink="true">https://kannada.asianetnews.com/karnataka-districts/gangavathi-tourist-bungalow-illegal-activities-gvd/articleshow-poilqr4</guid>
            <pubDate>Mon, 25 May 2026 16:20:27 +0530</pubDate>
            <description><![CDATA[&lt;p&gt;ನಗರದ ಮಧ್ಯಭಾಗದಲ್ಲಿರುವ ಓಬೇರಾಯನ ಕಾಲದ ಹಳೆ ಪ್ರವಾಸಿ ಮಂದಿರ ಅಧೋಗತಿಯತ್ತ ಸಾಗಿದೆ. ಸುಮಾರು 60 ವರ್ಷಗಳ ಹಳೆಯ ಪ್ರವಾಸಿ ಮಂದಿರಕ್ಕೆ ಮುಕ್ತಿ ಇಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfc3dc3xbregasj8v3a3khp,imgname-cj-1779706213763.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/p&gt;&lt;p&gt;&lt;strong&gt;ಗಂಗಾವತಿ (ಮೇ.25)&lt;/strong&gt;: ನಗರದ ಮಧ್ಯಭಾಗದಲ್ಲಿರುವ ಓಬೇರಾಯನ ಕಾಲದ ಹಳೆ ಪ್ರವಾಸಿ ಮಂದಿರ ಅಧೋಗತಿಯತ್ತ ಸಾಗಿದೆ. ಸುಮಾರು 60 ವರ್ಷಗಳ ಹಳೆಯ ಪ್ರವಾಸಿ ಮಂದಿರಕ್ಕೆ ಮುಕ್ತಿ ಇಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಪ್ರವಾಸಿ ಮಂದಿರ ಸುಮಾರು ಒಂದೂವರೆ ಎಕರೆ ಪ್ರದೇಶ ಹೊಂದಿದೆ. ಈ ಪ್ರದೇಶದಲ್ಲಿ ಎರಡು ಕಟ್ಟಡ ಹೊಂದಿದ್ದು, ಈಗ ಇದರ ಸುತ್ತಲಿನ ಪ್ರದೇಶ ಗುಜರಿ ವಾಹನಗಳ ನಿಲುಗಡೆ ಹಾಗೂ ಮದ್ಯಪಾನ ಮಾಡುವವರ ತಾಣವಾಗಿ ಮಾರ್ಪಟ್ಟಿದೆ.&lt;/p&gt;&lt;p&gt;ಈ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿಯೇ ಅತ್ಯುತ್ತಮ ಪ್ರವಾಸಿ ಮಂದಿರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸ್ಥಳಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ಹಿರಿಯ ಅಧಿಕಾರಿಗಳು ವಾಸ್ತವ್ಯ ಮಾಡಿದ್ದ ಉದಾಹರಣೆಗಳಿವೆ. ಆದರೆ ಈಗ ಈ ಪ್ರವಾಸಿ ಮಂದಿರಕ್ಕೆ ಯಾರೂ ಬರದಂತಾಗಿದೆ.&lt;/p&gt;&lt;p&gt;ಗುಜರಿ ವಾಹನಗಳ ತಾಣ: ಗಂಗಾವತಿ ನಗರದಲ್ಲಿರುವ ಯಾವುದೇ ಇಲಾಖೆಯ ವಾಹನ ಕೆಟ್ಟು ನಿಂತರೆ ಈ ಹಳೆ ಪ್ರವಾಸಿ ಮಂದಿರದಲ್ಲಿ ನಿಲ್ಲಿಸಿ ಹೋಗುತ್ತಾರೆ. ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆ ಕೆಲವು ವಾಹನ ಹಲವಾರು ವರ್ಷಗಳಿಂದ ನಿಂತಿದ್ದು ಈಗ ಗುಜರಿ ವಾಹನಗಳ ತಾಣವಾಗಿದೆ. ಕೆಲವರು ಕೆಟ್ಟ ವಾಹನಗಳ ಯಂತ್ರ ಸೇರಿದಂತೆ ಉಪಕರಣ ಕಳ್ಳತನವಾಗಿರುವ ಆರೋಪ ಕೇಳಿಬರುತ್ತಿವೆ.&lt;/p&gt;&lt;h2&gt;&lt;strong&gt;ತ್ಯಾಜ್ಯ ವಸ್ತುಗಳ ಸಂಗ್ರಹ&lt;/strong&gt;&lt;/h2&gt;&lt;p&gt;ನಗರಸಭೆಯ ಕೆಟ್ಟ ವಾಹನದಲ್ಲಿ ದಿನ ನಿತ್ಯ ತ್ಯಾಜ್ಯ ತುಂಬಿ ಸಾಗಾಟ ಮಾಡುತ್ತಿದ್ದಾರೆ. ಪ್ರವಾಸಿ ಮಂದಿರದ ಹೊರ ಭಾಗದಲ್ಲಿ ಹೋಟೆಲ್, ಉದ್ಯಾನ, ಸ್ನಾತಕೋತ್ತರ ಕೇಂದ್ರ ಇದ್ದು, ದಿನ ನಿತ್ಯ ತ್ಯಾಜ್ಯಗಳ ದುರ್ವಾಸನೆ ಅನುಭವಿಸುವ ಪರಿಸ್ಥಿತಿ ಜನರಿಗೆ ಒದಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಉತ್ತಮ ಪ್ರವಾಸಿ ಮಂದಿರ ನಿರ್ಮಾಣ ಮಾಡಿದರೆ ಬರುವ ಗಣ್ಯರು ಹಾಗೂ ಅತಿಥಿಗಳಿಗೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ.&lt;/p&gt;&lt;p&gt;ಲೋಕೋಪಯೋಗಿ ಇಲಾಖೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ 3 ಸ್ಟಾರ್ ಹೊಟೇಲ್ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಪ್ರವಾಸಿ ಮಂದಿರ ಹಾಳು ಬಿದ್ದಿದ್ದು, ಹಲವಾರು ಭಾರಿ ವಿವಿಧ ಇಲಾಖೆಗಳಿಗೆ ಗುಜರಿ ವಾಹನ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ ತಿಳಿಸಿದ್ದಾರೆ.&lt;/p&gt;&lt;p&gt;ಗಂಗಾವತಿಯ ಹಳೆಯ ಪ್ರವಾಸಿ ಮಂದಿರ ಆವರಣದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿವೆ. ಗುಜರಿ ವಾಹನ ಸೇರಿದಂತೆ ನಗರಸಭೆಯ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಹೇರೂರು ಜಿಪಂ ಮಾಜಿ ಉಪಾಧ್ಯಕ್ಷ ವಿರೂಪಾಕ್ಷಗೌಡ ಹೇರೂರು ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gangavathi-tourist-bungalow-illegal-activities-gvd/articleshow-poilqr4"/>
        </item>
    </channel>
</rss>
