<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 27 Apr 2026 08:10:16 +0530</lastBuildDate>
        <atom:link href="https://kannada.asianetnews.com/rss/koppal" rel="self" type="application/rss+xml"/>
        <item>
            <title><![CDATA[ಕೊಪ್ಪಳ ಬಡವರ ಹೊಟ್ಟೆಗೆ ಸೇರಬೇಕಿದ್ದ ಅನ್ನಕ್ಕೆ ಕನ್ನ ಹಾಕಿದ್ದ ಖದೀಮರು; 150 ಟನ್ ಅಕ್ರಮ ಅನ್ನಭಾಗ್ಯ ಅಕ್ಕಿ ಜಪ್ತಿ!]]></title>
            <link>https://kannada.asianetnews.com/karnataka-districts/koppal-munirabad-police-seize-150-tons-of-illegal-anna-bhagya-rice-in-massive-raid-sat/articleshow-2bhwiby</link>
            <guid isPermaLink="true">https://kannada.asianetnews.com/karnataka-districts/koppal-munirabad-police-seize-150-tons-of-illegal-anna-bhagya-rice-in-massive-raid-sat/articleshow-2bhwiby</guid>
            <pubDate>Fri, 24 Apr 2026 11:52:31 +0530</pubDate>
            <description><![CDATA[&lt;p&gt;ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸರು ಮತ್ತು ಆಹಾರ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 150 ಟನ್&zwnj;ಗೂ ಅಧಿಕ 'ಅನ್ನಭಾಗ್ಯ' ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಕೂಕನಪಳ್ಳಿ ಗ್ರಾಮದ ಜಮೀನೊಂದರಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpz2dhvc6mycmbtj98rk1zmw,imgname-koppal-annabhagya-rice-1777011705708.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಏ.24): ರಾ&lt;/strong&gt;ಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದ ಜಾಲವೊಂದನ್ನು ಮುನಿರಾಬಾದ್ ಪೊಲೀಸರು ಭೇದಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 150 ಟನ್&zwnj;ಗೂ ಅಧಿಕ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಜಮೀನಿನಲ್ಲಿ ಅಡಗಿಸಿಟ್ಟಿದ್ದ ಅಕ್ಕಿ ಪತ್ತೆ:&lt;/strong&gt;&lt;/h3&gt;&lt;p&gt;ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಸಮೀಪವಿರುವ ಜಮೀನೊಂದರಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಮುನಿರಾಬಾದ್ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಈ ವೇಳೆ ಜಮೀನಿನಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್&zwnj; ಹಾಗೂ ಬಯಲು ಪ್ರದೇಶದಲ್ಲಿ ಸಾವಿರಕ್ಕೂ ಅಧಿಕ ಅಕ್ಕಿ ಮೂಟೆಗಳು ಪತ್ತೆಯಾಗಿವೆ.&lt;/p&gt;&lt;h2&gt;&lt;strong&gt;ಬಡವರ ಅನ್ನಕ್ಕೆ ಕನ್ನ ಹಾಕಿದ ಖದೀಮರು:&lt;/strong&gt;&lt;/h2&gt;&lt;p&gt;ಗ್ರಾಮೀಣ ಭಾಗದ ಬಡ ಜನರಿಂದ ಕಡಿಮೆ ಬೆಲೆಗೆ ಅನ್ನಭಾಗ್ಯ ಅಕ್ಕಿಯನ್ನು ಸಂಗ್ರಹಿಸುತ್ತಿದ್ದ ಈ ಖದೀಮರು, ಅದನ್ನು ಕೂಕನಪಳ್ಳಿ ಸಮೀಪದ ಈ ನಿರ್ಜನ ಪ್ರದೇಶದ ಜಮೀನಿನಲ್ಲಿ ದಾಸ್ತಾನು ಮಾಡುತ್ತಿದ್ದರು. ಇಲ್ಲಿಂದ ಈ ಅಕ್ಕಿಯನ್ನು ಬೇರೆ ರಾಜ್ಯಗಳಿಗೆ ಅಥವಾ ಹೆಚ್ಚಿನ ಬೆಲೆಗೆ ಪಾಲಿಶ್ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಬಡವರ ಹೊಟ್ಟೆ ಸೇರಬೇಕಿದ್ದ ಸುಮಾರು 150 ಟನ್&zwnj;ಗೂ ಅಧಿಕ ತೂಕದ ಅಕ್ಕಿಯನ್ನು ಸೀಜ್ ಮಾಡುವ ಮೂಲಕ ಪೊಲೀಸರು ಅಕ್ಕಿ ಕಳ್ಳರಿಗೆ ದೊಡ್ಡ ಪೆಟ್ಟು ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಸ್ಥಳದಲ್ಲಿ ಬೀಡು ಬಿಟ್ಟಿರುವ ಡಿಎಆರ್ ಪೊಲೀಸರು:&lt;/strong&gt;&lt;/h3&gt;&lt;p&gt;ಕಾರ್ಯಾಚರಣೆಯ ತೀವ್ರತೆಯನ್ನು ಗಮನಿಸಿ, ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ದಾಸ್ತಾನು ಮಾಡಲಾದ ಅಕ್ಕಿ ಸುರಕ್ಷಿತವಾಗಿರಲು ಜಿಲ್ಲಾ ಸಶಸ್ತ್ರ ಮೀಸಲು ಪಡೆ (DAR) ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಆಹಾರ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪತ್ತೆಯಾದ ಅಕ್ಕಿ ಮೂಟೆಗಳ ಮೌಲ್ಯ ಲಕ್ಷಾಂತರ ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ.&lt;/p&gt;&lt;h3&gt;&lt;strong&gt;ಕಾನೂನು ಕ್ರಮಕ್ಕೆ ಮುಂದಾದ ಅಧಿಕಾರಿಗಳು:&lt;/strong&gt;&lt;/h3&gt;&lt;p&gt;ಈ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಅಕ್ರಮ ದಾಸ್ತಾನಿನ ಹಿಂದಿರುವ ಪ್ರಮುಖ ಸೂತ್ರಧಾರಿಗಳು ಯಾರು? ಈ ಜಾಲದ ಹಿಂದೆ ಯಾರ ಕೈವಾಡವಿದೆ? ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಕ್ಕಿ ಕಳ್ಳತನ ಮತ್ತು ಅಕ್ರಮ ಸಾಗಾಟದ ವಿರುದ್ಧ ಮುನಿರಾಬಾದ್ ಪೊಲೀಸರು ನಡೆಸಿರುವ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ದೂರುಗಳ ಬೆನ್ನಲ್ಲೇ ಈ ಬೃಹತ್ ಪ್ರಮಾಣದ ಅಕ್ಕಿ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/koppal-munirabad-police-seize-150-tons-of-illegal-anna-bhagya-rice-in-massive-raid-sat/articleshow-2bhwiby"/>
        </item>
        <item>
            <title><![CDATA[ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ: ಬಸವರಾಜ ರಾಯರೆಡ್ಡಿ]]></title>
            <link>https://kannada.asianetnews.com/karnataka-districts/basavaraj-rayareddy-temple-entry-caste-discrimination-statement-gvd/articleshow-4c8srs9</link>
            <guid isPermaLink="true">https://kannada.asianetnews.com/karnataka-districts/basavaraj-rayareddy-temple-entry-caste-discrimination-statement-gvd/articleshow-4c8srs9</guid>
            <pubDate>Wed, 15 Apr 2026 18:36:29 +0530</pubDate>
            <description><![CDATA[&lt;p&gt;ನಾಯಿ, ಬೆಕ್ಕುಗಳನ್ನು ತಮ್ಮ ಮಲಗುವ ಬೆಡ್ ಮೇಲೆ ಮಲಗಿಸಿಕೊಳ್ಳುತ್ತಾರೆ. ಆದರೆ ಶೋಷಿತ ವರ್ಗದ ಜನರಿಗೆ ದೇವಸ್ಥಾನ, ಮನೆ ಪ್ರವೇಶ ಇಲ್ಲವೆಂಬುದು ನ್ಯಾಯವೇ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರಶ್ನಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jzhc77rtwj5gt6sfxpcwcms8,imgname-dd-1751856160538.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುಕನೂರು (ಏ.15): &lt;/strong&gt;ದೇವಸ್ಥಾನಗಳಲ್ಲಿ ಮಲ ಮೂತ್ರ ಮಾಡುವ ನಾಯಿ ಗರ್ಭ ಗುಡಿವರೆಗೆ ಹೋಗಿ ಬರುತ್ತವೆ. ಅಲ್ಲದೇ ನಾಯಿ, ಬೆಕ್ಕುಗಳನ್ನು ತಮ್ಮ ಮಲಗುವ ಬೆಡ್ ಮೇಲೆ ಮಲಗಿಸಿಕೊಳ್ಳುತ್ತಾರೆ. ಆದರೆ ಶೋಷಿತ ವರ್ಗದ ಜನರಿಗೆ ದೇವಸ್ಥಾನ, ಮನೆ ಪ್ರವೇಶ ಇಲ್ಲವೆಂಬುದು ನ್ಯಾಯವೇ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರಶ್ನಿಸಿದರು. ಪಟ್ಟಣದ ಗವಿಸಿದ್ದೇಶ್ವರ ಪ್ರೌಢ ಶಾಲೆ ಆವರಣದಲ್ಲಿ ತಾಲೂಕಾಡಳಿತ, ತಾಪಂ, ಪಪಂದಿಂದ ಜರುಗಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುಷ್ಮ ನಮನ ಸಲ್ಲಿಸಿ ಮಾತನಾಡಿದರು.&lt;/p&gt;&lt;p&gt;ಮನುಷ್ಯನಲ್ಲಿ ಜಾತಿ, ಧರ್ಮದ ವಿಷ ಬೀಜ ಬೆಳೆಯಬಾರದು. ದೇಶದಲ್ಲಿ ಧರ್ಮದ ಹೆಸರಿನಲ್ಲಿ ಶ್ರೇಣಿಕೃತ ಸಮಾಜ ಬೆಳೆಯುತ್ತಿದೆ. ಹಿಂದೂ ಧರ್ಮಕ್ಕೆ ಸ್ಥಾಪಿತರಿಲ್ಲ.ಅ ದು ಮನುಷ್ಯ ಧರ್ಮ ಸಾರುತ್ತದೆ.ಇದರ ಮಧ್ಯದಲ್ಲಿ ತಮ್ಮ ಪ್ರತಿಷ್ಠೆಗೆ ಕೆಲವರು ಮನು ಸಂಸ್ಕೃತಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮನುಸ್ಮೃತಿಯಲ್ಲಿ ಕೆಲವರು ದೊಡ್ಡವರು, ಕೆಲವರು ಸಣ್ಣವರು ಎಂಬ ಭಾವ ಇದೆ. ಶ್ರೇಣಿಕೃತ ಸಮಾಜ ಅದಾಗಿದೆ. ಜೀವಶಾಸ್ತ್ರ ಪ್ರಕಾರ ಎಲ್ಲರೂ ಸಮಾನರು.ದಲಿತರು, ಪರಿಶಿಷ್ಟ ಜಾತಿಗೆ ಸೇರಿದ 101 ವರ್ಗಕ್ಕೆ ಸಮಾನತೆ ಇನ್ನೂ ಬರುತ್ತಿಲ್ಲ. ಹರಿಜನ ಕೆರಿ ಬೇರೆ ಬೇಡ. ಅವರು ಸಹ ಗ್ರಾಮಸ್ಥರೊಂದಿಗೆ ಇರಬೇಕು. ಮನುಷ್ಯ ಮನುಷ್ಯ ಒಂದಾಗಬೇಕು.&lt;/p&gt;&lt;p&gt;ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಚುನಾವಣೆಗೆ ಕೋಟಿ ಗಟ್ಟಲೆ ಖರ್ಚು ಮಾಡುತ್ತಾರೆ. ನಂತರ ಗೆದ್ದವರ ಬ್ಲೇಡ್ ಹಾಕುವ ಕಾರ್ಯ ಮಾಡುತ್ತಾರೆ.ವಿಚಾರವಂತರು ರಾಜಕೀಯಕ್ಕೆ ಬರಬೇಕು ಎಂಬುದು ಇದೆ. ಆದರೆ ಸದ್ಯ ಜಾತಿ, ಧರ್ಮ, ಹಣದ ಮೇಲೆ ರಾಜಕೀಯ ಇದೆ,ಇದು ಬದಲಾವಣೆ ಆಗದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದರು.&lt;/p&gt;&lt;h2&gt;&lt;strong&gt;ಸಹಕಾರ ಅವಶ್ಯ&lt;/strong&gt;&lt;/h2&gt;&lt;p&gt;33% ಮಹಿಳೆಯರಿಗೆ ರಾಜಕೀಯ ಮೀಸಲಾತಿಯನ್ನು ಪ್ರಧಾನಿ ಮನಮೋಹನ ಸಿಂಗ್ ಅವಧಿಯಲ್ಲಿ ಬಿಲ್ ಪಾಸ್ ಮಾಡಲಾಗಿತ್ತು. ಸದ್ಯ ಅದನ್ನು ಜಾರಿಗೆ ತರಲಾಗುತ್ತಿದೆ. ಡಿ ಲಿಮಿಟೇಷನ್ ಕಾಯ್ದೆ ಜಾರಿಗೆ ಆಗಬಹುದು. ಇದರಿದ 300 ಕ್ಷೇತ್ರ ಹೆಚ್ಚಲಿವೆ. ಯಲಬುರ್ಗಾ ಒಂದು ಹಾಗೂ ಕುಕನೂರು ಒಂದು ಸಹ ಕ್ಷೇತ್ರವಾಗಬಹುದು. ಅಭಿವೃದ್ಧಿಗೆ ಜನರ ಸಹಕಾರ ಅವಶ್ಯ. ಗುದ್ನೇಶ್ವರ ದೇವಸ್ಥಾನ ಜಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ತಹಸೀಲ್ದಾರ ಕಚೇರಿ, ಕೋರ್ಟ, ಬುದ್ದ,ಬಸವ,ಅಂಬೇಡ್ಕರ್ ಭವನ ಹಾಗೂ 100 ಬೆಡ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ.&lt;/p&gt;&lt;p&gt;ಸ್ಥಳೀಯರು ಜಾಗ ತಮ್ಮದೆಂದು ಕೋರ್ಟ ಮೆಟ್ಟಿಲೇರಿದ್ದಾರೆ. ಅವರ ವಾದ ಖುಲಾಸೆ ಆಗಬಹುದು. ದೇವಸ್ಥಾನ ಜಾಗ ಯಾರ ಸ್ವಂತದ್ದು ಅಲ್ಲ.ಹಾಗಿದರೆ ಅದನ್ನು ನಾನು ಸಹ ಬರೆದುಕೊಳ್ಳಬಹುದಿತ್ತಲ್ಲ, ನಾನು ಸಾರ್ವಜನಿಕರ ಒಳಿತಿಗೆ ಕಾರ್ಯ ಮಾಡುತ್ತಿದ್ದೇನೆ. ಅಭಿವೃದ್ಧಿಗಾಗಿ ಜನರು ಎಚ್ಚೆತ್ತುಕೊಳ್ಳಬೇಕು. ಇಡೀ ದೇಶದಲ್ಲಿ ಎಲ್ಲೂ ಇರದ ಮೂರು ಕೌಶಲ್ಯ ಅಭಿವೃದ್ಧಿ ಕೇಂದ್ರ ಯಲಬುರ್ಗಾ ಕ್ಷೇತ್ರಕ್ಕೆ ತಂದಿದ್ದೇನೆ. ಈಗಾಗಲೇ ಎರಡು ಮಂಜೂರಾಗಿವೆ. ಇನ್ನೊಂದು ಗುನ್ನಾಳದಲ್ಲಿ ಮಾಡುತ್ತೇನೆ ಎಂದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basavaraj-rayareddy-temple-entry-caste-discrimination-statement-gvd/articleshow-4c8srs9"/>
        </item>
        <item>
            <title><![CDATA[ತಹಶೀಲ್ದಾರ್‌ಗಿಂತ ದೊಡ್ಡವನಾದನಾ ಸಚಿವ ಶಿವರಾಜ ತಂಗಡಗಿ ಪುತ್ರ? ಅಧಿಕಾರಿಗಳು ಕುರ್ಚಿ ಇಲ್ಲದೆ ನಿಂತರೆ, ಮಗನಿಗೆ ರಾಜ ಮರ್ಯಾದೆ!]]></title>
            <link>https://kannada.asianetnews.com/gallery/karnataka-districts/kanakagiri-utsav-meeting-minister-shivaraj-tangadagi-s-son-gets-seat-tahsildars-left-standing-5vxhoyb</link>
            <guid isPermaLink="true">https://kannada.asianetnews.com/gallery/karnataka-districts/kanakagiri-utsav-meeting-minister-shivaraj-tangadagi-s-son-gets-seat-tahsildars-left-standing-5vxhoyb</guid>
            <pubDate>Wed, 22 Apr 2026 13:19:08 +0530</pubDate>
            <description><![CDATA[&lt;p&gt;ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಿನ್ನೆ ನಡೆದ ಉತ್ಸವದ ಪೂರ್ವಭಾವಿ ಸಭೆಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಿಕಿರಣ್, ಜಿಲ್ಲಾಡಳಿತದ ಅಧಿಕೃತ ಸಭೆಯಲ್ಲಿ ವೇದಿಕೆ ಮೇಲೆ ಕುಳಿತು ದರ್ಬಾರ್ ನಡೆಸಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpt1v4g5trcrs0r2k659szk3,imgname-whatsapp-image-2026-04-22-at-11.56.17-am-1776843330053.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಿನ್ನೆ ನಡೆದ ಉತ್ಸವದ ಪೂರ್ವಭಾವಿ ಸಭೆಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಿಕಿರಣ್, ಜಿಲ್ಲಾಡಳಿತದ ಅಧಿಕೃತ ಸಭೆಯಲ್ಲಿ ವೇದಿಕೆ ಮೇಲೆ ಕುಳಿತು ದರ್ಬಾರ್ ನಡೆಸಿದ್ದಾರೆ&lt;/p&gt;&lt;img&gt;&lt;p&gt;ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಿನ್ನೆ ನಡೆದ ಉತ್ಸವದ ಪೂರ್ವಭಾವಿ ಸಭೆಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಿಕಿರಣ್, ಜಿಲ್ಲಾಡಳಿತದ ಅಧಿಕೃತ ಸಭೆಯಲ್ಲಿ ವೇದಿಕೆ ಮೇಲೆ ಕುಳಿತು ದರ್ಬಾರ್ ನಡೆಸಿದ್ದಾರೆ. ಶಿಷ್ಟಾಚಾರದ ಪ್ರಕಾರ ಸಭೆ ನಡೆಸಬೇಕಿದ್ದ ಅಧಿಕಾರಿಗಳು ಮೂಲೆಗುಂಪಾಗಿದ್ದು, ಸಚಿವರ ಪುತ್ರನಿಗೆ ಸಿಕ್ಕ 'ವಿಶೇಷ ಮರ್ಯಾದೆ' ಈಗ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ.&lt;/p&gt;&lt;img&gt;&lt;p&gt;ಆಘಾತಕಾರಿ ವಿಷಯವೆಂದರೆ, ಸಭೆಯಲ್ಲಿ ವೇದಿಕೆಯ ಮೇಲೆ ಕನಕಗಿರಿ ತಹಶೀಲ್ದಾರ್ ವಿಶ್ವನಾಥ್ ಮುರಡಿ ಮತ್ತು ತಾಲ್ಲೂಕು ಪಂಚಾಯತ್ ಇಓ ರಾಜಶೇಖರ್ ಅವರಿಗೆ ಕುಳಿತುಕೊಳ್ಳಲು ಕುರ್ಚಿಯೇ ಇರಲಿಲ್ಲ. ಕ್ಷೇತ್ರದ ಜವಾಬ್ದಾರಿಯುತ ಅಧಿಕಾರಿಗಳು ಸಭೆಯ ಉದ್ದಕ್ಕೂ ನಿಂತುಕೊಂಡೇ ಇದ್ದರೆ, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲದ ಸಚಿವರ ಪುತ್ರ ಶಶಿಕಿರಣ್ ಮಾತ್ರ ಕುರ್ಚಿಯ ಮೇಲೆ ರಾಜಾರೋಷವಾಗಿ ಕುಳಿತಿದ್ದರು&lt;/p&gt;&lt;img&gt;&lt;p&gt;ಕನಿಷ್ಟ ಪಕ್ಷ ಪಕ್ಕದಲ್ಲಿ ನಿಂತ ಅಧಿಕಾರಿಗಳನ್ನ ನೋಡಿಯಾದ್ರೂ ಕುರ್ಚಿ ವ್ಯವಸ್ಥೆ ಮಾಡುವಂತೆ ಸಚಿವ ಶಿವರಾಜ ತಂಗಡಗಿಯೂ ಹೇಳಲಿಲ್ಲ. ಪುತ್ರನೂ ಹೇಳಲಿಲ್ಲ. ಜಿಲ್ಲಾಡಳಿತದ ಈ ನಡೆಯು ಅಧಿಕಾರಿಗಳ ಸ್ವಾಭಿಮಾನವನ್ನು ಸಚಿವರ ಪುತ್ರನ ಪಾದದ ಕೆಳಗೆ ಇಟ್ಟಂತಿದೆ ಟೀಕೆ ವ್ಯಕ್ತವಾಗಿದೆ..&lt;/p&gt;&lt;img&gt;&lt;p&gt;ಸರಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮಾತ್ರ ಸ್ಥಾನವಿರಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಜಿಲ್ಲಾಡಳಿತವೇ ಸಚಿವರ ಪುತ್ರನಿಗೆ ಕುರ್ಚಿ ಹಾಕಿ, ರಾಜ ಮರ್ಯಾದೆ ನೀಡಿದೆ. ಅತ್ತ ಜವಾಬ್ದಾರಿಯುತ ಅಧಿಕಾರಿಗಳನ್ನು ಸಭೆಯುದ್ದಕ್ಕೂ ನಿಲ್ಲಿಸಿ ಸಚಿವರ ಮಗನಿಗೆ ಆದ್ಯತೆ ನೀಡಿದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಪ್ರಜಾಪ್ರಭುತ್ವವೋ ಅಥವಾ ಸಚಿವರ ಕುಟುಂಬದ 'ಖಾಸಗಿ ದರ್ಬಾರ್'ವೋ ಎಂಬ ಪ್ರಶ್ನೆ ಎದ್ದಿದೆ.&lt;/p&gt;&lt;p&gt;&lt;strong&gt;ವಿಡಿಯೋ ವೈರಲ್&lt;/strong&gt;&lt;/p&gt;&lt;p&gt;ಕನಕಗಿರಿ ಉತ್ಸವದ ಹೆಸರಿನಲ್ಲಿ ನಡೆಯುತ್ತಿರುವ ಈ 'ಪುತ್ರ ವ್ಯಾಮೋಹ'ದ ಸಭೆಯ ವಿಡಿಯೋಗಳು ಈಗ ವೈರಲ್ ಆಗುತ್ತಿದ್ದು, ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/kanakagiri-utsav-meeting-minister-shivaraj-tangadagi-s-son-gets-seat-tahsildars-left-standing-5vxhoyb"/>
        </item>
        <item>
            <title><![CDATA[ಪ್ರೇಮ ಪ್ರಕರಣಗಳೆಲ್ಲಾ ಲವ್ ಜಿಹಾದ್‌ಗಳಲ್ಲ: ಬಿಜೆಪಿ ಆರೋಪಕ್ಕೆ ಸಂಸದ ಹಿಟ್ನಾಳ ತಿರುಗೇಟು]]></title>
            <link>https://kannada.asianetnews.com/karnataka-districts/koppal-not-all-love-affairs-are-love-jihad-congress-mp-rajashekhar-hitnal-hits-back-at-bjp-s-accusation-mrq/articleshow-6vnaf30</link>
            <guid isPermaLink="true">https://kannada.asianetnews.com/karnataka-districts/koppal-not-all-love-affairs-are-love-jihad-congress-mp-rajashekhar-hitnal-hits-back-at-bjp-s-accusation-mrq/articleshow-6vnaf30</guid>
            <pubDate>Wed, 15 Apr 2026 08:07:54 +0530</pubDate>
            <description><![CDATA[&lt;p&gt;ಕೊಪ್ಪಳದಲ್ಲಿನ ಹಿಂದು-ಮುಸ್ಲಿಂ ಪ್ರೇಮ ಪ್ರಕರಣಕ್ಕೆ ಲವ್ ಜಿಹಾದ್ ಪಟ್ಟ ಕಟ್ಟಲಾಗುತ್ತಿದ್ದು, ಇದು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಎಲ್ಲಾ ಪ್ರೇಮ ಪ್ರಕರಣಗಳು ಲವ್ ಜಿಹಾದ್ ಅಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp7ftg0ajzm1ad0x8hsj4c9x,imgname-rajashekhar-hitnal--1776220454921.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ:&lt;/strong&gt; ಹಿಂದು-ಮುಸ್ಲಿಂ ಲವ್ ಪ್ರಕರಣಗಳೆಲ್ಲ ಲವ್ ಜಿಹಾದ್&zwnj;ಗಳಲ್ಲ. ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ, ಸುಮ್ಮನೇ ಆರೋಪ ಮಾಡುತ್ತಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಏನೇನೋ ಆರೋಪ ಮಾಡುವುದಲ್ಲ, ಕಾಂಗ್ರೆಸ್ ಪಕ್ಷಕ್ಕೂ ಪ್ರಕರಣಕ್ಕೂ ಏನು ಸಂಬಂಧ ಇದೆ? ಸುಮ್ಮನೆ ಎಲ್ಲದಕ್ಕೂ ಕಾಂಗ್ರೆಸ್ ದೂರುವುದಲ್ಲ. ಹಾಗೊಂದು ವೇಳೆ ಅವರಿಗೆ ಕಾಳಜಿ ಇದ್ದರೆ ಪೊಲೀಸ್ ಠಾಣೆಯಲ್ಲಿ ಇಂಥ ನೂರಾರು ಪ್ರಕರಣಗಳು ಇದ್ದು, ಪಂಚಾಯಿತಿ ಮಾಡಲಿ ಎಂದು ಕುಟುಕಿದರು.&lt;/p&gt;&lt;h2&gt;&lt;strong&gt;ಆತನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಲಿ&lt;/strong&gt;&lt;/h2&gt;&lt;p&gt;ತಪ್ಪು ಮಾಡಿದರೆ ಪೊಲೀಸರು ಕ್ರಮ ವಹಿಸುತ್ತಾರೆ. ಅವರು ಯಾರನ್ನೂ ಕೇಳುವುದಿಲ್ಲ. ಆರೋಪಿ ಗಾಂಜಾ, ಚರಸ್ ಮತ್ತು ಮಟ್ಕಾ ದಂಧೆಯಲ್ಲಿದ್ದರೆ ಆತನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಲಿ. ನಾವು ಇಂಥ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ್ದೇವೆ ಎಂದರು.&lt;/p&gt;&lt;p&gt;ಸಚಿವ ಸಂಪುಟ ಪುನರ್ ರಚನೆಗೂ ಮತ್ತು ಹಲವರು ಸಚಿವ ಸ್ಥಾನ ಕೇಳುತ್ತಿರುವುದಕ್ಕೂ ಸಿಎಂ ಬದಲಾವಣೆಗೂ ಯಾವುದೇ ಸಂಬಂಧವೇ ಇಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ. ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತೇನೆ ಎಂದರು.&lt;/p&gt;&lt;h3&gt;&lt;strong&gt;ಲವ್ ಜಿಹಾದ್ ಹಿಂದೆ ಕಾಂಗ್ರೆಸ್: ಕ್ಯಾವಟರ್ ಗಂಭೀರ ಆರೋಪ&lt;/strong&gt;&lt;/h3&gt;&lt;p&gt;ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಮುಸ್ತಫಾ ಖಾದ್ರಿ ನಡೆಸುತ್ತಿರುವ ಲವ್ ಜಿಹಾದ್ ಹಿಂದೆ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರ ನೇರವಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;p&gt;ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿ ಲವ್ ಜಿಹಾದ್&zwnj; ಖೆಡ್ಡಾಕ್ಕೆ ಕೆಡವಲಾಗುತ್ತಿದೆ. ಪ್ರೀತಿಯ ಹೆಸರಲ್ಲಿ ಬಲೆಗೆ ಬಿಳಿಸಿಕೊಂಡು ಯುವತಿಯರ ಜೀವನ ಹಾಳು ಮಾಡುವ ದಂಧೆ ಬೇರೂರಿದೆ. ಕಳೆದೊಂದು ವಾರದಲ್ಲಿ ಹುಬ್ಬಳ್ಳಿಯಲ್ಲಿ ಮೂರು ಹಾಗೂ ಕೊಪ್ಪಳದಲ್ಲಿ ಒಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂತಹ ಪ್ರಕರಣ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಈ ಮೂಲಕ ಕಾಂಗ್ರೆಸ್ ನಾಯಕರ ಕೃಪಾ ಕಟಾಕ್ಷದಿಂದಲೇ ಲವ್ ಜಿಹಾದ್ ಪ್ರಕರಣ ನಡೆಯುತ್ತಿವೆ ಎಂದು ಹೇಳಿದರು.&lt;/p&gt;&lt;p&gt;&amp;nbsp;&lt;/p&gt;&lt;p&gt;Koppal: ಮುಸ್ತಾಫಾನ ಮೊಬೈಲ್ ರೀಸೆಟ್ ಮಾಡಿದ್ಯಾರು? ಕಡು ಬಡವನಾಗಿದ್ರೂ ಹೈಫೈ ಜೀವನಶೈಲಿ#Koppal #LoveJihad https://t.co/sVEyOTolUR&lt;/p&gt;&lt;p&gt;&mdash; Asianet Suvarna News (@AsianetNewsSN) April 14, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್&lt;/strong&gt;&lt;/p&gt;&lt;p&gt;ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ ಪೊಲೀಸರು ಕಾಂಗ್ರೆಸ್&zwnj; ಸಂಸದ-ಶಾಸಕರ ಒತ್ತಡಕ್ಕೆ ಮಣಿದು ಆತನನ್ನು ಬಂಧಿಸಿಲ್ಲ ಎಂದು ಕಾಣುತ್ತಿದೆ. ಹೀಗಾಗಿ ಹಿಂದೂ ಯುವತಿಯರು ಇನ್ನಾದರೂ ಜಾಗೃತಗೊಳ್ಳಬೇಕು. ಇಂತಹ ಲವ್ ಜಿಹಾದ್ ಷಡ್ಯಂತ್ರಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ಅಲ್ಲದೆ, ಇಂತಹ ವಿಚಾರದಲ್ಲಿ ಮತ ಬ್ಯಾಂಕ್&zwnj;ಗೋಸ್ಕರ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ನೀತಿ ಅನುಸರಿಸುವುದು ಸರಿಯಲ್ಲ ಎಂದು ಕಿಡಿಕಾರಿದರು. ಲವ್ ಜಿಹಾದ್ ನಡೆಸುತ್ತಿರುವ ಆರೋಪಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕೆಂದು ಬಸವರಾಜ ಕ್ಯಾವಟರ್ ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಂಡ ರೇ* ಮಾಡ್ತಿದ್ರೆ, ಹೊರಗೆ ಕಾವಲು ಕಾಯ್ತಿದ್ದ ಬ್ಯುಟಿ ಪಾರ್ಲರ್ ಆಂಟಿ ಯಾಸ್ಮೀನ್&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಎಲ್ಲಾ ವಿರೋಧ ಮೀರಿ ಮದುವೆಯಾದ ಖ್ಯಾತ ಯುಟ್ಯೂಬರ್ ಸಕೀಬ್ ಸೈಫಿ ಮತ್ತು ಕನ್ನಿಕಾ ಶರ್ಮಾ#SaqibSaifi #KanikaSharma #Marriage https://t.co/2xds8rgDd8&lt;/p&gt;&lt;p&gt;&mdash; Asianet Suvarna News (@AsianetNewsSN) March 30, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-not-all-love-affairs-are-love-jihad-congress-mp-rajashekhar-hitnal-hits-back-at-bjp-s-accusation-mrq/articleshow-6vnaf30"/>
        </item>
        <item>
            <title><![CDATA[SSLCಯಲ್ಲಿ ಜಸ್ಟ್‌ ಪಾಸ್‌, ಫೇಲ್‌ ಆದವರಿಗೆ ಉಂಟು ವಿವಿಧ ಕೋರ್ಸ್; ಧೃತಿಗೆಡುವ ಅಗತ್ಯವೇ ಇಲ್ಲ]]></title>
            <link>https://kannada.asianetnews.com/education/there-are-various-courses-for-those-who-just-passed-and-failed-in-sslc-mrq/articleshow-9odg0hw</link>
            <guid isPermaLink="true">https://kannada.asianetnews.com/education/there-are-various-courses-for-those-who-just-passed-and-failed-in-sslc-mrq/articleshow-9odg0hw</guid>
            <pubDate>Mon, 27 Apr 2026 08:10:10 +0530</pubDate>
            <description><![CDATA[&lt;p&gt;SSLC ಫಲಿತಾಂಶದಲ್ಲಿ ಕಡಿಮೆ ಅಂಕ ಪಡೆದ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೃತಿಗೆಡುವ ಅಗತ್ಯವಿಲ್ಲ. ಅವರಿಗಾಗಿ ಐಟಿಐ ಸೇರಿದಂತೆ ಹಲವಾರು ತರಬೇತಿ ಸಂಸ್ಥೆಗಳು ಉದ್ಯೋಗಾವಕಾಶದ ಬಾಗಿಲು ತೆರೆದಿವೆ. ಈ ಕೋರ್ಸ್&zwnj;ಗಳನ್ನು ಪೂರ್ಣಗೊಳಿಸಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉತ್ತಮ ಭವಿಷ್ಯರೂಪಿಸಿಕೊಳ್ಳಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpcztsef23g52m1r7vha11cc,imgname-atal-awasiya-vidyalaya-yojana-up-cbse-result-2026-1776405013967.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೋಮರಡ್ಡಿ ಅಳವಂಡಿ ಕೊಪ್ಪಳ&lt;/strong&gt;&lt;/p&gt;&lt;p&gt;ಈಗಷ್ಟೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಪ್ಪಳ ಜಿಲ್ಲೆಗೆ ಈ ವರ್ಷ ಬಂಪರ್ ಫಲಿತಾಂಶ ಬಂದಿದೆ. ಇದರಲ್ಲಿ ಫೇಲ್&zwnj;, ಜಸ್ಟ್&zwnj; ಪಾಸಾದವರು ಧೃತಿಗೆಡುವ ಅಗತ್ಯವಿಲ್ಲ, ಅವರಿಗೂ ಅತ್ಯುತ್ತಮ ಅವಕಾಶ ಇದೆ.&lt;/p&gt;&lt;p&gt;ಹೀಗಾಗಿ ಕಡಿಮೆ ಅಂಕ ಬಂದಿದೆ ಎಂದು ಕೊರಗುತ್ತಾ ಕುಳಿತುಕೊಳ್ಳುವ ಬದಲು ಅತ್ಯುತ್ತಮ ಅವಕಾಶ ಸದ್ಬಳಕೆ ಮಾಡಿಕೊಂಡು ಬದುಕಿನಲ್ಲಿ ಯಶಸ್ವಿಯಾಗಲು ಸಾವಿರಾರು ಮಾರ್ಗಗಳಿವೆ.&lt;/p&gt;&lt;h2&gt;&lt;strong&gt;ರಾಜ್ಯಾದ್ಯಂತ 1500 ಐಟಿಐ ಕಾಲೇಜು&lt;/strong&gt;&lt;/h2&gt;&lt;p&gt;ರಾಜ್ಯಾದ್ಯಂತ 1500 ಐಟಿಐ ಕಾಲೇಜು ಇದ್ದು, ಇದರಲ್ಲಿ 270 ಸರ್ಕಾರಿ, 190 ಅನುದಾನಿತ ಹಾಗೂ ಉಳಿದವು ಖಾಸಗಿಯಾಗಿವೆ. ಇಲ್ಲಿ ಜಸ್ಟ್ ಪಾಸ್&zwnj; ಮತ್ತು ಫೇಲಾದವರಿಗೂ ಕೋರ್ಸ್ ಇವೆ. ಅಷ್ಟೇ ಅಲ್ಲ ಬೆಂಗಳೂರಿನ ಟೋಯೋಟಾ ಸಂಸ್ಥೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.50 ರಷ್ಟು ಅಂಕ ಪಡೆದವರಿಗೆ ಉಚಿತ ವಸತಿ, ಊಟದೊಂದಿಗೆ ತರಬೇತಿ ಶಿಕ್ಷಣ ನೀಡುತ್ತದೆ. ನಂತರ ಉದ್ಯೋಗಾವಕಾಶ ನೀಡುತ್ತದೆ. ಇಂತಹ ನೂರಾರು ಸಂಸ್ಥೆಗಳು ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಪಡೆದಿದ್ದರೂ ಅವಕಾಶ ನೀಡಲು ತರಬೇತಿ ನಡೆಸುತ್ತಿವೆ.&amp;nbsp;&lt;/p&gt;&lt;p&gt;ಐಟಿಐ ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರತಿ ಕಾಲೇಜಿನಲ್ಲಿಯೂ ಜೆಸ್ಟ್ ಪಾಸ್ ಆದವರಿಗೆ ವಿವಿಧ 13 ತರಬೇತಿ ಕೋರ್ಸ್ ಇರುತ್ತವೆ. ಫೇಲಾದವರಿಗೆ ಎರಡು ಕೋರ್ಸ್&zwnj;ಗಳಿವೆ. ಐಟಿಐ ಸಂಸ್ಥೆಯಲ್ಲಿ ತರಬೇತಿ ಪಡೆದ ಬಳಿಕ ತಾಂತ್ರಿಕ ಶಿಕ್ಷಣಾಧಾರಿತ ಉದ್ಯೋಗವಕಾಶ ಸಹ ಪಡೆಯಬಹುದಾಗಿದೆ. ರೇಲ್ವೆ, ರಕ್ಷಣಾ, ಬಿಎಚ್ ಇಎಲ್, ಎಸ್ಎಐಎಲ್, ಎಚ್ಎಎಲ್ ಮತ್ತು ರಾಜ್ಯದ ವಿದ್ಯುತ್ ಮಂಡಳಿಗಳಲ್ಲಿ ತಾಂತ್ರಿಕ ಸಹಾಯಕ ಮತ್ತು ಟೆಕ್ನಿಶಿಯನ್ ಆಗಿ ಕೆಲಸ ಪಡೆಯಬಹುದು. ಇದಲ್ಲದೆ ಖಾಸಗಿ ವಲಯದಲ್ಲಿಯೂ ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಮ್ಯಾನುಪ್ಯಾಕ್ಟರಿಂಗ್, ಕೈಗಾರಿಕೆಗಳಲ್ಲಿ ಪಿಟ್ಟರ್, ಆಟೋ ಮೆಕ್ಯಾನಿಕ್ ಸೇರಿದಂತೆ ಅನೇಕ ಅವಕಾಶಗಳು ಇವೆ.&lt;/p&gt;&lt;p&gt;ಐಟಿಐ ಮುಗಿಸಿದ ಮೇಲೆ ಅಪ್ರೆಂಟಿಸ್ ನಂತರ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ 5 ವರ್ಷ ಸೇವೆ ಮಾಡಿದವರನ್ನೇ ಐಟಿಐ ಕಾಲೇಜುಗಳಿಗೆ ಜೂನಿಯರ್ ಟ್ರೇನಿಂಗ್ ಆಫೀಸರ್ ಎಂದು ರಾಜ್ಯ ಸರ್ಕಾರವೇ ನೇಮಕ ಮಾಡಿಕೊಳ್ಳುತ್ತದೆ.&lt;/p&gt;&lt;p&gt;ಎಸ್ಸೆಸ್ಸೆಲ್ಸಿ ಫೇಲಾದವರಿಗೆ ಸೀಟ್ ಮೆಟಲ್ ವರ್ಕರ್ ಮತ್ತು ವೆಲ್ಡರ್ ಎನ್ನುವ ಎರಡು ಕೋರ್ಸ್ ಇವೆ. ಈ ಕೋರ್ಸ್ ನಲ್ಲಿ ಐಟಿಐ ಪೂರ್ಣಗೊಳಿಸಲು ಅವಕಾಶ ಇದೆ. ನಂತರ ಡಿಪ್ಲೋಮಾ ಮಾಡಲು ಅರ್ಹತೆ ಪಡೆಯುತ್ತಾರೆ.&lt;/p&gt;&lt;p&gt;ಹೀಗಾಗಿ, ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಬಂದಿದೆ ಮತ್ತು ಫೇಲಾಗಿದ್ದೇವೆ ಎಂದು ಧೃತಿಗೆಡದೆ ಇಂತಹ ಕೋರ್ಸ್&zwnj;ಗಳಿಗೆ ಪ್ರವೇಶ ಪಡೆಯಬಹುದಾಗಿದೆ.&lt;/p&gt;&lt;h3&gt;&lt;strong&gt;ಧೃತಿಗೆಡುವ ಅಗತ್ಯವೇ ಇಲ್ಲ&lt;/strong&gt;&lt;/h3&gt;&lt;p&gt;ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿದ್ದೇವೆ, ಕಡಿಮೆ ಅಂಕ ಬಂದಿವೆ ಎಂದು ಧೃತಿಗೆಡುವ ಅಗತ್ಯವೇ ಇಲ್ಲ. ಅವರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಕಷ್ಟು ಅವಕಾಶ ನೀಡುತ್ತದೆ. ಕೋರ್ಸ್ ಸಹ ಇವೆ. ಐಟಿಐಯಲ್ಲಿ ಪಾಸಾದ ಮತ್ತು ಫೇಲಾದವರಿಗೂ ಅವಕಾಶ ಉಂಟು ಎಂದು ಕುಕನೂರ ಐಟಿಐ ಜೂನಿಯರ್ ಟ್ರೇನಿಂಗ್ ಆಫೀಸರ್ ರಾಜೇಶ ಬಳ್ಳಾರಿ ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/there-are-various-courses-for-those-who-just-passed-and-failed-in-sslc-mrq/articleshow-9odg0hw"/>
        </item>
        <item>
            <title><![CDATA[ಬಿಸಿಲು ಹೆಚ್ಚಾದ ಹಿನ್ನೆಲೆ ಅಂಜನಾದ್ರಿ ಬೆಟ್ಟಕ್ಕೆ ಬೆ.11ರಿಂದ ಸಂಜೆ 4ರ ವರೆಗೂ ಪ್ರವೇಶ ನಿರ್ಬಂಧ]]></title>
            <link>https://kannada.asianetnews.com/karnataka-districts/anjanadri-hill-entry-restricted-from-11-am-to-4-pm-due-heat-stroke-rav/articleshow-asmllu0</link>
            <guid isPermaLink="true">https://kannada.asianetnews.com/karnataka-districts/anjanadri-hill-entry-restricted-from-11-am-to-4-pm-due-heat-stroke-rav/articleshow-asmllu0</guid>
            <pubDate>Sat, 18 Apr 2026 10:12:42 +0530</pubDate>
            <description><![CDATA[ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಇತ್ತೀಚೆಗೆ ಇಬ್ಬರು ಭಕ್ತರ ಸಾವಿನ ಹಿನ್ನೆಲೆಯಲ್ಲಿ ದರ್ಶನದ ಸಮಯವನ್ನು ಬದಲಾಯಿಸಲಾಗಿದೆ. ಜಿಲ್ಲಾಡಳಿತದ ಆದೇಶದಂತೆ, ಇನ್ನು ಮುಂದೆ ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಭಕ್ತರಿಗೆ ಬೆಟ್ಟ ಹತ್ತಲು ನಿರ್ಬಂಧ ಹೇರಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpfdqp7gwd0z3cxr1g1jgxsm,imgname-----------------------2026-04-18t100114.769-1776486701296.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಏ.18):&lt;/strong&gt; ತಾಪಮಾನ ಹೆಚ್ಚಿದ್ದು, ಅಂಜನಾದ್ರಿ ಬೆಟ್ಟವನ್ನು ಮಧ್ಯಾಹ್ನ ಉರಿಬಿಸಿಲಿನಲ್ಲಿ ಏರುವುದರಿಂದ ಕೆಲವರ ಆರೋಗ್ಯ ಏರುಪೇರಾಗುತ್ತಿದೆ. ಹೀಗಾಗಿ, ಅಂಜನಾದ್ರಿ ಬೆಟ್ಟ ಏರಲು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ನಿರ್ಬಂಧ ಹೇರಲಾಗಿದೆ.&amp;nbsp;&lt;/p&gt;&lt;p&gt;ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನ ಸಮಯ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಆದೇಶ ಹೊರಡಿಸಿದ್ದಾರೆ.&amp;nbsp;&lt;/p&gt;&lt;p&gt;ದೇವರ ದರ್ಶನಕ್ಕೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಮತ್ತು ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಳೆದ 2 ತಿಂಗಳ ಅವಧಿಯಲ್ಲಿ ಇಬ್ಬರು ಭಕ್ತರು ದೇವಸ್ಥಾನದ ಮೆಟ್ಟಿಲುಗಳನ್ನು ಏರಿ ಮೇಲೆ ಹೋದ ನಂತರ ಉಸಿರಾಡಲು ತೊಂದರೆಯಾಗಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಮಾರ್ಚ್&zwnj;ನಲ್ಲಿ ಗುಜರಾತ್ ಮೂಲದ ಭಕ್ತರೊಬ್ಬರು ಮೆಟ್ಟಿಲು ಏರುವಾಗ ಎದೆಯ ನೋವು ಕಾಣಿಸಿಕೊಂಡು ಮೃತಪಟ್ಟಿದ್ದರು. ಏ.1ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಂಜನೇಯ ದೇವಸ್ಥಾನದ ಗರ್ಭಗುಡಿಯಲ್ಲಿ ಕುಳಿತು ದರ್ಶನ ಪಡೆದ ಬಳಿಕ ದಾವಣಗೆರೆ ಮೂಲದ ಭಕ್ತನೊಬ್ಬ ಬಿಸಿಲಿನ ತಾಪದಿಂದ ಕುಸಿದು ಬಿದ್ದು ಮೃತಪಟ್ಟಿದ್ದ.&lt;/p&gt;&lt;p&gt;&lt;strong&gt;ಇಂದಿನ ತಾಪಮಾನ :.&lt;/strong&gt;&lt;/p&gt;&lt;p&gt;ನಗರ ಗರಿಷ್ಠ(ಡಿಗ್ರಿ.ಸೆಂ.) ಕನಿಷ್ಠ(ಡಿಗ್ರಿ.ಸೆಂ.)&lt;/p&gt;&lt;ul&gt; &lt;li&gt;ಕಲಬುರಗಿ 43.2 28.6&lt;/li&gt; &lt;li&gt;ಬೀದರ್&zwnj; 41.0 24.8&lt;/li&gt; &lt;li&gt;ರಾಯಚೂರು 40.4 27.0&lt;/li&gt; &lt;li&gt;ವಿಜಯಪುರ 40.0 24.0&lt;/li&gt; &lt;li&gt;ಗದಗ 38.4 23.0&lt;/li&gt; &lt;li&gt;ಧಾರವಾಡ 37.5 20.0&lt;/li&gt; &lt;li&gt;ಬಾಗಲಕೋಟೆ 37.5 24.7&lt;/li&gt; &lt;li&gt;ಮೈಸೂರು 37.0 21.2&lt;/li&gt; &lt;li&gt;ಶಿವಮೊಗ್ಗ 37.0 22.8&lt;/li&gt; &lt;li&gt;ದಾವಣಗೆರೆ 37.0 22.5&lt;/li&gt; &lt;li&gt;Apr 18, 2026, 12:10:18 AM&lt;/li&gt;&lt;/ul&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/anjanadri-hill-entry-restricted-from-11-am-to-4-pm-due-heat-stroke-rav/articleshow-asmllu0"/>
        </item>
        <item>
            <title><![CDATA[Koppal: ಮುಸ್ತಾಫಾನ ಮೊಬೈಲ್ ರೀಸೆಟ್ ಮಾಡಿದ್ಯಾರು? ಕಡು ಬಡವನಾಗಿದ್ರೂ ಹೈಫೈ ಜೀವನಶೈಲಿ]]></title>
            <link>https://kannada.asianetnews.com/karnataka-districts/koppal-love-jihad-case-who-reset-mustafa-s-mobile-despite-being-extremely-poor-he-lives-a-hi-fi-lifestyle-mrq/articleshow-c5rt4nl</link>
            <guid isPermaLink="true">https://kannada.asianetnews.com/karnataka-districts/koppal-love-jihad-case-who-reset-mustafa-s-mobile-despite-being-extremely-poor-he-lives-a-hi-fi-lifestyle-mrq/articleshow-c5rt4nl</guid>
            <pubDate>Tue, 14 Apr 2026 11:16:33 +0530</pubDate>
            <description><![CDATA[&lt;p&gt;ಕೊಪ್ಪಳದಲ್ಲಿ ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಮುಸ್ತಾಫಾ ಖಾದ್ರಿಗೆ ಅಂತರ ರಾಜ್ಯ ಸಂಪರ್ಕದ ಶಂಕೆ ವ್ಯಕ್ತವಾಗಿದೆ. ಯುವತಿಯರ ಖಾಸಗಿ ವೀಡಿಯೋ, ಫೋಟೋಗಳಿರುವ ಆತನ ಮೊಬೈಲ್&zwnj;ಗಳನ್ನು ಪೊಲೀಸರು ವಶಕ್ಕೆ ಪಡೆದು ಎಫ್&zwnj;ಎಸ್&zwnj;ಎಲ್&zwnj;ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knxvg3vyjk1fg366p787bvkk,imgname-koppal-love-jihad--1--1775897153406.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ:&lt;/strong&gt; ಯುವತಿಯರನ್ನು ಪುಸಲಾಯಿಸಿ ಅವರೊಂದಿಗಿನ ಖಾಸಗಿ ವೀಡಿಯೋ, ಫೋಟೋ ಚಿತ್ರೀಕರಿಸಿಕೊಂಡಿರುವ ಮತ್ತು ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಕೊಪ್ಪಳ ತಾಲೂಕಿನ ಕಂಪ್ಲಿಯ ಮುಸ್ತಾಫಾ ಖಾದ್ರಿಗೆ ಅಂತರ ರಾಜ್ಯ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ಆತನ ಎರಡು ಮೊಬೈಲ್&zwnj; ವಶಪಡೆದು ಎಫ್&zwnj;ಎಸ್&zwnj;ಎಲ್&zwnj;ಗೆ ಕಳುಹಿಸಿದ್ದು, ವರದಿ ಬಂದ ಮೇಲೆ ಮತ್ತಷ್ಟು ರಹಸ್ಯ ಬಯಲಾಗಲಿದೆ.&lt;/p&gt;&lt;p&gt;ಮಟ್ಕಾ ಬುಕ್ಕಿಗಳೊಂದಿಗೆ ಹಾಗೂ ಗಾಂಜಾ, ಚರಸ್ ಮಾರಾಟ ದಂಧೆ ಮಾಡುತ್ತಿರುವ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ. ಅತ್ಯಂತ ಕಡುಬಡತನದ ಮುಸ್ತಾಫ್ ಖಾದ್ರಿಯ ಹೈಫೈ ಜೀವನ ಶೈಲಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಹೋದರ ದುಡಿಯಲು ಬೆಂಗಳೂರಿಗೆ ಹೋಗಿದ್ದರೆ ಮುಸ್ತಾಫ್ ಕಾರ್ಪೆಂಟರ್ ಕೆಲಸ ಮಾಡಲೆಂದು ನಿತ್ಯವೂ ಕೊಪ್ಪಳಕ್ಕೆ ಬರುತ್ತಿದ್ದನಂತೆ. ಹೀಗೆ ಬರುವ ಆತ ಬೆಳಗ್ಗೆಯೇ ಬಂದು, ತಡರಾತ್ರಿ ಮನೆಗೆ ಹೋಗುತ್ತಿದ್ದನು. ಗ್ರಾಮದಲ್ಲಿ ಓಡಾಡಿದ್ದೇ ಅಪರೂಪ ಎಂದು ಸ್ಥಳೀಯರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ದೂರು ದಾಖಲು&lt;/strong&gt;&lt;/h2&gt;&lt;p&gt;ವಿಶ್ವ ಹಿಂದೂ ಪರಿಷತ್ ಕೊಪ್ಪಳ ಜಿಲ್ಲಾಧ್ಯಕ್ಷ ಡಾ. ಸಂಗಮೇಶ ಹಿರೇಮಠ ನೀಡಿದ ದೂರು ಮತ್ತು ಮಸ್ತಾಫ್ ಪರವಾಗಿ ಯುವತಿಯೋರ್ವಳು ನೀಡಿದ ದೂರಿನ ಅನ್ವಯ ಎರಡು ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಪೊಲೀಸರು ಮುಸ್ತಾಫಾ ಮೊಬೈಲ್ ವಶಪಡಿಸಿಕೊಂಡು, ನೋಟಿಸ್ ಸಹ ಜಾರಿಗೊಳಿಸಿದ್ದಾರೆ. ಆದರೆ, ಪೋನ್&zwnj; ಲಾಕ್&zwnj; ಮಾಡಿದ್ದರಿಂದ ಅದರಲ್ಲಿರುವುದು ಏನು ಎನ್ನುವುದು ತಿಳಿದುಬಂದಿಲ್ಲ. ಅದರಲ್ಲಿ ವಿಡಿಯೋ ಫೋಟೋಗಳಿವೆ ಎಂದು ದೂರು ನೀಡಲಾಗಿದೆ.&lt;/p&gt;&lt;h3&gt;&lt;strong&gt;ಮೊಬೈಲ್&zwnj; ದಿಢೀರ್ ರೀಸೆಟ್&zwnj;&lt;/strong&gt;&lt;/h3&gt;&lt;p&gt;ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು ಈತನ ಮಾಹಿತಿ ದೊರೆತ ತಕ್ಷಣ ಅವನ ಮೊಬೈಲ್&zwnj; ಪರಿಶೀಲಿಸುವಾಗ ಸಾವಿರಾರು ಅಶ್ಲೀಲ ವೀಡಿಯೋ, ಫೋಟೋ ಇರುವುದು ಗಮನಕ್ಕೆ ಬಂದಿವೆ. ಇದನ್ನು ಪರಿಶೀಲಿಸುವಾಗಲೇ ಆರೋಪಿ ಮುಸ್ತಾಫ್&zwnj; ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಅದಾದ 10 ನಿಮಿಷದಲ್ಲಿಯೇ ಆರೋಪಿಯ ಮೊಬೈಲ್&zwnj;ನಲ್ಲಿದ್ದ ಎಲ್ಲ ಆ್ಯಪ್&zwnj; ತನ್ನಿಂದ ತಾನೇ ರೀಸೆಟ್ ಆಗಿವೆಯಂತೆ. ಹಾಗಾದರೆ ದೂರದಿಂದಲೇ ಆ ಮೊಬೈಲ್ ನಿರ್ವಹಣೆ ಮಾಡಿದ್ದು ಯಾರು ಎನ್ನುವುದು ಸಹ ತನಿಖೆಯಾಗಬೇಕಾಗಿದೆ.&lt;/p&gt;&lt;p&gt;ಈಗ ಲಭ್ಯ ಮಾಹಿತಿ ಪ್ರಕಾರ ಆತನಿಗೆ ಅಂತರ ರಾಜ್ಯ ಲಿಂಕ್ ಇತ್ತು ಎನ್ನಲಾಗಿದೆ. ಮಟ್ಕಾ ಬುಕ್ಕಿಗಳು ಮತ್ತು ಗಾಂಜಾ ಚರಸ್ ಪೂರೈಕೆಯ ವಾಸನೆಯೂ ಬಂದಿದ್ದು, ಅದೆಲ್ಲವೂ ತನಿಖೆಯಿಂದಲೇ ತಿಳಿಯಬೇಕಿದೆ. ಆರೋಪಿ ಮುಸ್ತಾಫಾನನ್ನು ವಿಚಾರಣೆ ನಡೆಸಿರುವ ಪೊಲೀಸರು, ಎಫ್&zwnj;ಎಸ್&zwnj;ಎಲ್ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ನಂತರ ಬ್ಯಾಂಕ್ ಖಾತೆ ಪರಿಶೀಲಿಸಿದರೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.&lt;/p&gt;&lt;h3&gt;&lt;strong&gt;ದೂರಿನಲ್ಲಿ ಏನಿದೆ?&lt;/strong&gt;&lt;/h3&gt;&lt;p&gt;ವಿಎಚ್&zwnj;ಪಿ ಮುಖಂಡ ಡಾ. ಸಂಗಮೇಶ ಹಿರೇಮಠ ಏ. 9ರಂದು ನೀಡಿದ ದೂರಿನಲ್ಲಿ ಆರೋಪಿಯ ಮೊಬೈಲ್&zwnj; ಪರಿಶೀಲಿಸಿದಾಗ ಎರಡು ಮೊಬೈಲ್&zwnj;ನಲ್ಲಿ 7000 ಅಶ್ಲೀಲ ಫೋಟೋ, 9700 ವೀಡಿಯೋಗಳಿವೆ. ಇದರಲ್ಲಿ ವಿವಿಧ ಸಮಾಜದ 16 ಮುಗ್ಧ ಹೆಣ್ಣು ಮಕ್ಕಳ ಅಶ್ಲೀಲ ಫೋಟೋ, ವೀಡಿಯೋ ಇಟ್ಟುಕೊಂಡು ಅವರಿಗೆ ಮಾನಸಿಕ ಹಿಂಸೆ ನೀಡಿದ್ದಾನೆ. ಜತೆಗೆ ಈ ಮಹಿಳೆಯರ ಸಮ್ಮತಿ ಇಲ್ಲದೆ ವೀಡಿಯೋ ಹಾಗೂ ಫೋಟೋಗಳನ್ನು ಮತ್ತೊಬ್ಬರಿಗೆ ಕಳುಹಿಸಿರುವ ಸಾಧ್ಯತೆ ಇದೆ. ಆದರಿಂದ ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ತಿಳಿಸಿದ್ದರು.&lt;/p&gt;&lt;p&gt;ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಸಾವಿರಾರು ವೀಡಿಯೋ, ಫೋಟೋ ಇರುವುದರಿಂದ ಅವುಗಳೆಲ್ಲವನ್ನು ತನಿಖೆಗೆ ಒಳಪಡಿಸಿಬೇಕು. ಅಮಾಯಕ ಹೆಣ್ಣು ಮಕ್ಕಳ ಬಲಿಯಾಗುತ್ತಿದ್ದು ಜಾಲ ಭೇದಿಸಿ ಮಟ್ಟ ಹಾಕಬೇಕು. ಪ್ರೀತಿಸಿ ಮದುವೆಯಾಗಲು ಹಕ್ಕು ಇದೆ. ಆದರೆ, ಖಾಸಗಿ ವೀಡಿಯೋ ಮಾಡಿಕೊಳ್ಳುವುದು, ಫೋಟೋ ತೆಗೆಯುವುದು ಅಕ್ಷ್ಯಮ್ಯ ಅಪರಾಧ. ಈ ಮೂಲಕ ಬ್ಲಾಕ್ ಸಹ ಮಾಡಿರುವ ಶಂಕೆ ಇದೆ ಎಂದು ಕೊಪ್ಪಳದ ವಿಎಚ್&zwnj;ಪಿ ಅಧ್ಯಕ್ಷ ಡಾ. ಸಂಗಮೇಶ ಹಿರೇಮಠ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೊಪ್ಪಳದಲ್ಲೂ 'ಲವ್ ಜಿಹಾದ್': ಮುಸ್ತಫಾ ಮೊಬೈಲ್&zwnj;ನಲ್ಲಿ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಪತ್ತೆ! ಎಸ್&zwnj;ಪಿಗೆ ದೂರು&lt;/strong&gt;&lt;/p&gt;&lt;p&gt;ಮೊಬೈಲ್&zwnj;ಗಳು ಲಾಕ್&zwnj; ಇರುವುದರಿಂದ ಯಾವ ಮಾಹಿತಿ ಲಭ್ಯವಾಗಿಲ್ಲ. ಅವುಗಳನ್ನು ಎಫ್&zwnj;ಎಸ್&zwnj;ಎಲ್&zwnj;ಗೆ ಕಳುಹಿಸಿಕೊಟ್ಟಿದ್ದು ವರದಿ ಬಂದ ಬಳಿಕವೇ ನಿಜಾಂಶ ತಿಳಿಯಲಿದೆ. ವರದಿ ಯಾವ ರೀತಿ ಬರುತ್ತದೆ ಅದರ ಆಧಾರದ ಮೇಲೆ ತನಿಖೆ ನಡೆಸಲಾಗುವುದು. ಅಂತರ ರಾಜ್ಯ ಲಿಂಕ್ ಸೇರಿದಂತೆ ಇನ್ಯಾವುದೇ ಆರೋಪದ ಬಗ್ಗೆಯೂ ಈಗಲೇ ಏನು ಹೇಳಲು ಆಗದು ಎಸ್&zwnj; ಪಿ ಡಾ. ರಾಮ ಎಲ್. ಅರಸಿದ್ದಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆಯೇ &lsquo;ಲವ್ ಜಿಹಾದ್&rsquo;? ಹುಬ್ಬಳ್ಳಿ ಘಟನೆ ಮಾಸುವ ಮುನ್ನವೇ ಕೊಪ್ಪಳದಲ್ಲಿ ಮರುಕಳಿಸಿದ ಕೃತ್ಯ!&lt;/strong&gt;&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-love-jihad-case-who-reset-mustafa-s-mobile-despite-being-extremely-poor-he-lives-a-hi-fi-lifestyle-mrq/articleshow-c5rt4nl"/>
        </item>
        <item>
            <title><![CDATA[ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆಯೇ ‘ಲವ್ ಜಿಹಾದ್’? ಹುಬ್ಬಳ್ಳಿ ಘಟನೆ ಮಾಸುವ ಮುನ್ನವೇ ಕೊಪ್ಪಳದಲ್ಲಿ ಮರುಕಳಿಸಿದ ಕೃತ್ಯ!]]></title>
            <link>https://kannada.asianetnews.com/karnataka-districts/after-hubballi-love-jihad-hits-koppal-hindu-girl-blackmailed-using-nude-images-rav/articleshow-dpf249x</link>
            <guid isPermaLink="true">https://kannada.asianetnews.com/karnataka-districts/after-hubballi-love-jihad-hits-koppal-hindu-girl-blackmailed-using-nude-images-rav/articleshow-dpf249x</guid>
            <pubDate>Sun, 12 Apr 2026 06:47:56 +0530</pubDate>
            <description><![CDATA[&lt;p&gt;Koppal Love jihad: ಕೊಪ್ಪಳದಲ್ಲಿ ಹಿಂದೂ ವಿದ್ಯಾರ್ಥಿನಿಯನ್ನು ಪ್ರೀತಿಯ ನಾಟಕವಾಡಿ ಪುಸಲಾಯಿಸಿದ ಆರೋಪದ ಮೇಲೆ ಮುಸ್ಲಿಂ ಯುವಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಯುವಕನ ಮೊಬೈಲ್&zwnj;ನಲ್ಲಿ ಇತರ ಹಿಂದೂ ಯುವತಿಯರ ಫೋಟೋ, ವಿಡಿಯೋ ಪತ್ತೆಯಾಗಿದ್ದು, ಇದು ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzktpy60nx2bhxpf0dwgjbz,imgname-----------------------2026-04-12t063833.105-1775956220870.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಏ.12) &lt;/strong&gt;ರಾಜ್ಯದಲ್ಲಿ ಮುಸ್ಲಿಂ ಯುವಕರಿಂದ ಲವ್ ಜಿಹಾದ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸರ್ಕಾರ ಮತ್ತು ವಿಪಕ್ಷ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ಎರಡ್ಮೂರು ಲವ್ ಜಿಹಾದ್&zwnj; ಕೇಸ್&zwnj;ಗಳು ವರದಿಯಾಗಿರುವ ಬೆನ್ನಲ್ಲೇ ಕೊಪ್ಪಳದಲ್ಲಿಯೂ ಶನಿವಾರ ಲವ್ ಜಿಹಾದ್ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಹೌದು, ಪ್ರೀತಿಯ ನಾಟಕವಾಡಿ ಹಿಂದೂ ವಿದ್ಯಾರ್ಥಿಯನ್ನು ಮುಸ್ಲಿಂ ಯುವಕನೋರ್ವ ಪುಸಲಾಯಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ಇದರ ಹಿಂದೆ ಲವ್&zwnj; ಜಿಹಾದ್ ಉದ್ದೇಶವಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಆ ಆರೋಪಿಯನ್ನು ಯುವಕರ ಗುಂಪೊಂದು ಪೊಲೀಸರ ವಶಕ್ಕೆ ಒಪ್ಪಿಸಿದೆ.&lt;/p&gt;&lt;p&gt;ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ &lt;strong&gt;ಮುಸ್ತಾಫ್&zwnj;&lt;/strong&gt; ಎನ್ನುವಾತ ಕುಷ್ಟಗಿ ತಾಲೂಕಿನ ಗ್ರಾಮವೊಂದರಲ್ಲಿ ವಿದ್ಯಾರ್ಥಿನಿಯ ಜತೆಗಿದ್ದ ವೇಳೆ ಕೆಲ ಹಿಂದೂ ಯುವಕರ ಕೈಗೆ ಸಿಕ್ಕಿಕೊಂಡಿದ್ದಾನೆ. ಈ ವೇಳೆ ಯುವಕರು ಆತನ ಮೊಬೈಲ್&zwnj; ಪರಿಶೀಲಿಸಿದಾಗ ಹಿಂದೂ ಯುವತಿಯರ ಪೋಟೋ, ವಿಡಿಯೋ ಪತ್ತೆಯಾಗಿವೆ. ಅಲ್ಲದೇ ಈತ ಜೂಜಾಟ, ಮಟ್ಕಾ ದಂಧೆ ನಡೆಸುತ್ತಿದ್ದ ಎಂಬ ಮಾಹಿತಿ ದೊರಕಿದೆ. ಮುಸ್ತಾಫ್ ತನ್ನ ಮೊಬೈಲ್&zwnj;ನಲ್ಲಿ ಹಿಂದೂ ಯುವತಿಯರ ಜತೆಗೆ ಇರುವ ಅಶ್ಲೀಲ ವಿಡಿಯೋ, ನಗ್ನ ಫೋಟೋ ಇಟ್ಟುಕೊಂಡು ಬ್ಲ್ಯಾಕ್&zwnj;ಮೇಲ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಯುವಕರು ನಗರ ಪೊಲೀಸ್ ಠಾಣೆಗೆ ಮುಸ್ತಾಫ್&zwnj;ನನ್ನು ಒಪ್ಪಿಸಿದ್ದಾರೆ. ಈ ವೇಳೆ ಆತ ಹಿಂದೂ ಯುವತಿಯನ್ನು ಮದುವೆ ಆಗುವುದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.&lt;/p&gt;&lt;h2&gt;ಹಿಂದೂ ಪರ ಸಂಘಟನೆಯಿಂದ ದೂರು:&lt;/h2&gt;&lt;p&gt;ಲವ್&zwnj; ಜಿಹಾದ್&zwnj; ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಯ ಮುಖಂಡರು ಎಸ್&zwnj;ಪಿಗೆ ಮನವಿ ಸಲ್ಲಿಸಿ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಂಗಮೇಶ ಹಿರೇಮಠ ಜಿಲ್ಲೆಯಲ್ಲಿ ಇಂತಹ ಕೃತ್ಯ ನಡೆಯುತ್ತಿದ್ದು, ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ವೇಳೆ ಮನವಿ ಸ್ವೀಕರಿಸಿದ ಎಸ್&zwnj;ಪಿ ಡಾ.ರಾಮ ಅರಸಿದ್ದಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h3&gt;ಹುಬ್ಬಳ್ಳಿಯಲ್ಲಿ 3 ಪ್ರಕರಣಗಳು&lt;/h3&gt;&lt;p&gt;ಇತ್ತೀಚೆಗೆ ಒಂದೇ ವಾರದಲ್ಲಿ ಹುಬ್ಬಳ್ಳಿಯಲ್ಲಿ 3 ಲವ್&zwnj; ಜಿಹಾದ್&zwnj; ಪ್ರಕರಣಗಳು ದಾಖಲಾಗಿವೆ. ಸಮೀರ್ ಮುಲ್ಲಾ ಎಂಬ ಜಿಮ್&zwnj; ಟ್ರೈನರ್&zwnj; ಹಿಂದೂ ಯುವತಿಯನ್ನು ಗುರಿಯಾಗಿಸಿಕೊಂಡು ಲವ್&zwnj; ಮಾಡಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಆ ಬಳಿಕ ಹಣ ವಸೂಲಿ ಮಾಡಿ ಗರ್ಭನಿರೋಧಕ ಔಷಧಿ ತೆಗೆದುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದ. ಈ ರೀತಿ ಹಲವು ಯುವತಿಯರಿಗೆ ಆತ ವಂಚಿಸಿದ ಆರೋಪಗಳೂ ಕೇಳಿಬಂದಿವೆ. ಅಲ್ಲದೇ, ಶುಕ್ರವಾರ ಗಾಂಜಾ ವ್ಯಸನಿಯಾಗಿರುವ ಸಮೀರ್ ಬೂದಿಹಾಳ ಎಂಬಾತ ಹಿಂದೂ ಯುವತಿಯರಿಗೆ ಡ್ರಗ್ಸ್&zwnj; ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಹಿಂದೂ ಸಂಘಟನೆಗಳು ಆಪಾದಿಸಿದ್ದು, ಆತನ ಫೋನ್&zwnj;ನಲ್ಲಿ ಮಾದಕ ವಸ್ತು ಸೇವನೆ ದೃಶ್ಯಗಳು ಲಭ್ಯವಾಗಿವೆ ಎನ್ನಲಾಗಿದೆ.---&lt;/p&gt;&lt;p&gt;&lt;strong&gt;ಇದೊಂದು ಜಾಲ&lt;/strong&gt;&lt;/p&gt;&lt;p&gt;ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೊಂದು ಜಾಲ ಇದೆ. ಬಹಳಷ್ಟು ಕಡೆ ಲವ್ ಜಿಹಾದ್&zwnj;ಗಳು ನಡೆಯುತ್ತಿವೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜನರು ಬೀದಿಗೆ ಇಳಿಯುವಂತಹ ಸ್ಥಿತಿಯನ್ನು ಸರ್ಕಾರ ತರಬಾರದು.&lt;/p&gt;&lt;p&gt;-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/after-hubballi-love-jihad-hits-koppal-hindu-girl-blackmailed-using-nude-images-rav/articleshow-dpf249x"/>
        </item>
        <item>
            <title><![CDATA[Anjanadri Hill: 90ರ ಅಜ್ಜಿಯ ಹೊತ್ತು ಅಂಜನಾದ್ರಿ 575 ಮೆಟ್ಟಿಲು ಹತ್ತಿದ ಮೊಮ್ಮಗ! ಹನುಮನ ಜನ್ಮಸ್ಥಳದ ದರ್ಶನ  ಹಡೆದವ್ವ]]></title>
            <link>https://kannada.asianetnews.com/karnataka-districts/grandson-climbs-575-steps-of-anjanadri-carrying-90-year-old-grandmother-koppal-rav/articleshow-fytefwy</link>
            <guid isPermaLink="true">https://kannada.asianetnews.com/karnataka-districts/grandson-climbs-575-steps-of-anjanadri-carrying-90-year-old-grandmother-koppal-rav/articleshow-fytefwy</guid>
            <pubDate>Sun, 19 Apr 2026 04:55:50 +0530</pubDate>
            <description><![CDATA[ವಿಜಯನಗರದ ಯುವಕನೊಬ್ಬ ತನ್ನ 90 ವರ್ಷದ ಅಜ್ಜಿಯ ಆಸೆಯನ್ನು ಪೂರೈಸಲು, ಆಕೆಯನ್ನು ಹೊತ್ತುಕೊಂಡು ಗಂಗಾವತಿಯ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು ಏರಿದ್ದಾನೆ. ಮೊಮ್ಮಗನ ಈ ಕಾರ್ಯದಿಂದ ಅಜ್ಜಿಯ ಹನುಮ ಜನ್ಮಸ್ಥಳ ದರ್ಶನದ ಕನಸು ನನಸಾಗಿದ್ದು, ಈ ಘಟನೆ ಎಲ್ಲರ ಮನಗೆದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kphdrt9a6y06bhprmm76fyzc,imgname-----------------------2026-04-19t044024.776-1776553847082.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಏ.19): &lt;/strong&gt;90 ವರ್ಷದ ಅಜ್ಜಿಯನ್ನು ಹೊತ್ತುಕೊಂಡು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯ 575 ಮೆಟ್ಟಿಲುಗಳನ್ನು ಏರುವ ಮೂಲಕ ಹನುಮನ ಜನ್ಮಸ್ಥಳ ದರ್ಶನ ಪಡೆಯಬೇಕೆಂಬ ಅಜ್ಜಿಯ ಕನಸನ್ನು ಮೊಮ್ಮಗ ನನಸು ಮಾಡಿದ್ದಾನೆ.&lt;/p&gt;&lt;p&gt;ವಿಜಯನಗರ ಜಿಲ್ಲೆಯ ಅಜೇಯ ಎಂಬ ಯುವಕ ಶುಕ್ರವಾರ ಸಂಜೆ ಬಿಸಿಲಿನ ಧಗೆಯಲ್ಲಿ ಅಜ್ಜಿಯನ್ನು ಹೊತ್ತುಕೊಂಡು ಮೆಟ್ಟಿಲಿನ ಮಧ್ಯದಲ್ಲಿರುವ ಗಿಡ-ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಾ ಅಜ್ಜಿಗೆ ಬಾಯಾರಿಕೆ ಆದಾಗ ನೀರು ಕುಡಿಸುತ್ತಾ ಮೆಟ್ಟಿಲು ಏರಿ ಆಂಜನೇಯಸ್ವಾಮಿಯ ದರ್ಶನ ಮಾಡಿಸಿದ್ದಾನೆ. ದೇವರ ದರ್ಶನ ಪಡೆದ ಬಳಿಕ &lsquo;ನಾನು ಪಾವನಳಾದೆ&rsquo; ಎಂದು ಅಜ್ಜಿ ಧನ್ಯತೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಮೈಸೂರು: ಚಿರತೆಯಿಂದ ಅತ್ತೆಯನ್ನ ರಕ್ಷಿಸಿದ ಸೊಸೆಗೆ ಕಿತ್ತೂರು ಚೆನ್ನಮ್ಮ ಸಾಹಸ ಪ್ರಶಸ್ತಿ?&lt;/p&gt;&lt;p&gt;ವಿವಿಧ ರಾಜ್ಯಗಳಿಂದ ಬಹಳಷ್ಟು ವೃದ್ಧರು ಆಗಮಿಸುತ್ತಾರೆ. ಆದರೆ, ಮೆಟ್ಟಿಲು ಹತ್ತಲು ಆಗದೆ ದೂರದಿಂದ ಕೈಮುಗಿದು ಭಕ್ತಿ ಸಮರ್ಪಿಸುತ್ತಾರೆ. ಹಾಗಾಗಿ ಸರ್ಕಾರ ಕೂಡಲೇ ಬೆಟ್ಟಕ್ಕೆ ರೋಪ್&zwnj;ವೇ ನಿರ್ಮಿಸಲಿ ಎಂದು ಭಕ್ತರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; &lt;/strong&gt;ಬಿಸಿಲು ಹೆಚ್ಚಾದ ಹಿನ್ನೆಲೆ ಅಂಜನಾದ್ರಿ ಬೆಟ್ಟಕ್ಕೆ ಬೆ.11ರಿಂದ ಸಂಜೆ 4ರ ವರೆಗೂ ಪ್ರವೇಶ ನಿರ್ಬಂಧ&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/grandson-climbs-575-steps-of-anjanadri-carrying-90-year-old-grandmother-koppal-rav/articleshow-fytefwy"/>
        </item>
        <item>
            <title><![CDATA[Koppal: ಕಿಮ್ಸ್ ಐಸಿಯುನಲ್ಲಿರುವ ಕಂದಮ್ಮಗಳಿಗಿಲ್ಲ ಎಸಿ: ಮನೆಯಿಂದ ಫ್ಯಾನ್ ತಂದ ಪೋಷಕರು]]></title>
            <link>https://kannada.asianetnews.com/karnataka-districts/koppal-kims-hospital-in-chaos-no-ac-in-icu-people-brought-fans-from-home-mrq/articleshow-hvpa5na</link>
            <guid isPermaLink="true">https://kannada.asianetnews.com/karnataka-districts/koppal-kims-hospital-in-chaos-no-ac-in-icu-people-brought-fans-from-home-mrq/articleshow-hvpa5na</guid>
            <pubDate>Mon, 20 Apr 2026 08:49:13 +0530</pubDate>
            <description><![CDATA[&lt;p&gt;ಕೊಪ್ಪಳ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಎಸಿ ಮತ್ತು ಫ್ಯಾನ್ ಇಲ್ಲದೆ ಕಂದಮ್ಮಗಳು ತೀವ್ರ ಬಿಸಿಲಿನಿಂದ ಬಳಲುತ್ತಿವೆ. ಮಕ್ಕಳ ಪಾಡು ನೋಡಲಾರದೆ ಪಾಲಕರು ಮನೆಯಿಂದಲೇ ಫ್ಯಾನ್ ತಂದು ಅಳವಡಿಸಿದ್ದು, ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpme9nfzmx0z0cv9qtj52znd,imgname-koppal-kims-1776655062527.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೋಮರಡ್ಡಿ ಅಳವಂಡಿ&amp;nbsp;&lt;/strong&gt;&lt;/p&gt;&lt;p&gt;&lt;strong&gt;ಕೊಪ್ಪಳ: &lt;/strong&gt;ಐಸಿಯುನಲ್ಲಿರುವ 6 ಕಂದಮ್ಮಗಳಿಗೆ ಎಸಿಯೂ ಇಲ್ಲ, ಪ್ಯಾನ್ ಸಹ ಇಲ್ಲ. ಅವರ ಚಟಪಟಿಕೆ ನೋಡಲಾರದೇ ಪಾಲಕರು ಮನೆಯಿಂದ ಪ್ಯಾನ್ ತಂದಿಟ್ಟಿದ್ದಾರೆ. &amp;nbsp;ಇನ್ನು ವಾರ್ಡ್&zwnj;ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂದಮ್ಮಗಳಿಗೂ ಪ್ಯಾನ್ ಇಲ್ಲ. ಅಷ್ಟೇ ಯಾಕೆ ವಾರ್ಡ್&zwnj;ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳ ಪಾಡು ಹೇಳತೀರದು.&lt;/p&gt;&lt;p&gt;ಹೀಗಾಗಿ, ಕೊಪ್ಪಳ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಗಳಿಂದ ಗುಣಮುಖರಾಗಲು ದಾಖಲಾಗಿರುವ ಕಂದಮ್ಮ ಮತ್ತು ರೋಗಿಗಳು ಅಕ್ಷರಶಃ ಬೇಯುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಕೆಟ್ಟ ಎಸಿ, ಕೇವಲ 1 ಪ್ಯಾನ್ ಹಾಕಿದ ಸಿಬ್ಬಂದಿ&lt;/strong&gt;&lt;/h2&gt;&lt;p&gt;ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ತಾಪಮಾನ 39-40 ಆಸುಪಾಸು ಇದೆ. ಹೀಗಾಗಿ ಸಾಮಾನ್ಯರೇ ಈ ಝಳಕ್ಕೆ ಚಡಪಡಿಸುತ್ತಿದ್ದಾರೆ. ಅಂಥದ್ದರಲ್ಲಿ ನಾನಾ ರೋಗದಿಂದ ಬಲಳುತ್ತಿರುವ ಕಂದಮ್ಮ ಚಿಕಿತ್ಸೆಗಾಗಿ ಕೊಪ್ಪಳ ಕಿಮ್ಸ್ (ಮೆಡಿಕಲ್ ಕಾಲೇಜು ಬೋಧಕ ಆಸ್ಪತ್ರೆ)ಯಲ್ಲಿ ದಾಖಲಾಗಿದ್ದರೆ ಐಸಿಯು ಕೊಠಡಿಯಲ್ಲಿನ ಎಸಿ ಕೆಟ್ಟು ಹೋಗಿದೆ. ಹೀಗಾಗಿ, ಕೇವಲ 1 ಪ್ಯಾನ್ ಹಾಕಿದ್ದಾರೆ. ಇದರಿಂದ ಐಸಿಯುನಲ್ಲಿರುವ ಮಕ್ಕಳಿಗೆ ಗಾಳಿಯೂ ಬಾರದೆ ರೋದಿಸುತ್ತಿವೆ. ಐಸಿಯುನಲ್ಲಿರುವ ಮಕ್ಕಳಿಗೆ ವಿಶೇಷ ನಿಗಾ ಬೇಕು. ಆದರೆ, ಕನಿಷ್ಠ ತಂಪಾದ ವಾತಾವರಣವೂ ಇಲ್ಲದೆ ಹೇಗೆ ತಾನೇ ಆ ಮಕ್ಕಳು ಚಿಕಿತ್ಸೆಯಿಂದ ಗುಣಮುಖರಾಗಲು ಸಾಧ್ಯ ಎನ್ನುವುದು ಪಾಲಕರ ಅಂಬೋಣ.&lt;/p&gt;&lt;p&gt;ಇದರಿಂದ ವಿಧಿಯಿಲ್ಲದೆ ಅನೇಕ ಪಾಲಕರು ತಾವೇ ಮನೆಯಿಂದ ಪ್ಯಾನ್ ತಂದು ಹಾಕಿಕೊಂಡು ಮಕ್ಕಳನ್ನು ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೊಪ್ಪಳ ಕಿಮ್ಸ್ ಆಸ್ಪತ್ರೆಯ ವಾಸ್ತವ ಚಿತ್ರಣ ಮತ್ತು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎನಿಸುತ್ತದೆ.&lt;/p&gt;&lt;h3&gt;&lt;strong&gt;ಕುಡಿಯಲು ನೀರು ಸಹ ಇಲ್ಲ&lt;/strong&gt;&lt;/h3&gt;&lt;p&gt;ಅಷ್ಟೇ ಅಲ್ಲ, ಅಲ್ಲಿ ಕುಡಿವ ನೀರಿನ ಸಮಸ್ಯೆಯೂ ಇದೆ. ಹೀಗಾಗಿ, ಅನೇಕರು ಮನೆಯಿಂದ ಇಲ್ಲವೇ ಹೊರಗೆ ಹೋಟೆಲ್ ನಿಂದ ನೀರು ತಂದು ಕುಡಿಯುತ್ತಿದ್ದಾರೆ. ನೀರು ಸಹ ತಂದು ಕುಡಿಯಬೇಕೆಂದರೆ ಹೇಗೆ ಸಾರ್ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.&lt;/p&gt;&lt;p&gt;ಮೊದಲೇ ವಿಪರೀತ ಬಿಸಿಲು, ಇದರಿಂದ ಪ್ಯಾನ್ ಇಲ್ಲದೆ ಇರಲು ಆಗುವುದಿಲ್ಲ. ಅಂಥದ್ದರಲ್ಲಿ ಆಸ್ಪತ್ರೆಯಲ್ಲಿಯೇ ಸರಿಯಾದ ವ್ಯವಸ್ಥೆ ಇರದಿದ್ದರೆ ಹೇಗೆ ಎನ್ನುವುದಕ್ಕೆ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.&lt;/p&gt;&lt;p&gt;ಕೊಪ್ಪಳ ಕಿಮ್ಸ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ರೋಗಿಗಳು ಚಿಕಿತ್ಸೆಗೆಂದು ಬಂದು ಗುಣಮುಖವಾಗುವ ಬದಲು ಮತ್ತಷ್ಟು ಸುಸ್ತಾಗುತ್ತಿದ್ದಾರೆ. ಅದರಲ್ಲೂ ಹಸುಗೂಸು ಪಡುವ ಯಾತನೆ ಆ ದೇವರಿಗೆ ಪ್ರೀತಿ.&amp;nbsp;&lt;/p&gt;&lt;h3&gt;&lt;strong&gt;ದುರಸ್ತಿ ಮಾಡಿಸಿಲ್ಲ: ಸಾರ್ವಜನಿಕರ ಆಕ್ರೋಶ&lt;/strong&gt;&lt;/h3&gt;&lt;p&gt;ಎಸಿ ಕೆಟ್ಟಿದ್ದರೂ ಅದನ್ನು ತುರ್ತಾಗಿ ದುರಸ್ತಿ ಮಾಡಿಸಬೇಕಾದವರು ಮಾಡಿಸಿಲ್ಲ. ಈ ಕುರಿತು ಕೇಳಿದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಎಸಿ ಸರ್ವಿಸ್ ಮಾಡಬೇಕಾಗಿದ್ದರಿಂದ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ಸೂಚಿಸಲಾಗಿದೆ. ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಕೊಪ್ಪಳ ಕಿಮ್ಸ್&zwnj; ನಿರ್ದೇಶಕ ವಿಜಯಕುಮಾರ ಇಟಗಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದೂರು ಕೊಟ್ಟವಳ ವರಿಸಲು ವ್ಯಕ್ತಿಗೆ ಪೊಲೀಸ್&zwnj; ಬೆದರಿಕೆ, ಹೈಕೋರ್ಟ್&zwnj; ಕೆಂಡಾಮಂಡಲ&lt;/strong&gt;&lt;/p&gt;&lt;p&gt;ಅಯ್ಯೋ ನಮ್ಮ ಕಂದಮ್ಮನನ್ನು ಚಿಕಿತ್ಸೆಗೆಂದು ದಾಖಲಿಸಿದೆ. ಆದರೆ, ಇಲ್ಲಿ ಬಿಸಿಲಿನ ಝಳಕ್ಕೆ ಫ್ಯಾನ್ ಸಹ ಇಲ್ಲದಿರುವುದರಿಂದ ಮನೆಯಿಂದ ತಂದು ಹಾಕಿದ್ದೇವೆ. ಮಕ್ಕಳು ಪಡುವ ಯಾತನೆ ನೋಡಿದರೆ ಕಣ್ಣೀರು ಬರುತ್ತದೆ ಎಂದು ರೋಗಿಯ ಸಂಬಂಧಿ ಹುಲಗಪ್ಪ ತಿಳಿಸಿದ್ದಾರೆ.&lt;/p&gt;&lt;p&gt;ನಮ್ಮ ದೊಡ್ಡಮ್ಮನ ಮಗನನ್ನು ಆಡ್ಮಿಶನ್ ಮಾಡಿದ್ದೇವೆ. ಮಗು ಮೊದಲೇ ಸಮಸ್ಯೆಯಿಂದ ಬಳಲುತ್ತಿದೆ. ಅಂಥದ್ದರಲ್ಲಿ ಫ್ಯಾನ್ ಸಹ ಇಲ್ಲದಿರುವ ವಾರ್ಡ್ ನಲ್ಲಿ ಸಮಸ್ಯೆಯಾಯಿತು. ಹೀಗಾಗಿ ಮನೆಯಿಂದ ಫ್ಯಾನ್&zwnj; ತಂದು ಹಾಕಿದ್ದೇವೆ ಎಂದು ರೋಗಿ ಸಂಬಂಧಿ ಕಿರಣ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪತಿಯ ಲಾಕರ್&zwnj;ನಿಂದ 23 ಲಕ್ಷ ಮೌಲ್ಯದ ಚಿನ್ನ ಕದ್ದ ಪತ್ನಿ! ಕಾಪುವಿನಲ್ಲೊಂದು ವಿಚಿತ್ರ ಕಳ್ಳತನ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಎರಡು ವರ್ಷಗಳಲ್ಲಿ 7147 ತಾಯಂದಿರಿಂದ 1,530 ಲೀಟರ್ ಎದೆಹಾಲು ಸಂಗ್ರಹಿಸಿದೆ. ಈ ಮಹತ್ವದ ಕಾರ್ಯದಿಂದಾಗಿ, ತಾಯಿಯ ಹಾಲಿನ ಕೊರತೆಯಿದ್ದ 2,599 ಶಿಶುಗಳಿಗೆ ಪೌಷ್ಟಿಕಾಂಶ ನೀಡಿ ಅವುಗಳ ಆರೋಗ್ಯ ರಕ್ಷಣೆಯಲ್ಲಿ ಯಶಸ್ವಿಯಾಗಿದೆ.#Hubballi https://t.co/KSnYEoGrmz&lt;/p&gt;&lt;p&gt;&mdash; Asianet Suvarna News (@AsianetNewsSN) April 20, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-kims-hospital-in-chaos-no-ac-in-icu-people-brought-fans-from-home-mrq/articleshow-hvpa5na"/>
        </item>
        <item>
            <title><![CDATA[ಕೊಪ್ಪಳ: ಕುಕನೂರು ಬಳಿ ಕಾಲುವೆಯಲ್ಲಿ ಎರಡು ಸುಟ್ಟ ಮೃತದೇಹ ಪತ್ತೆ, ಹತ್ಯೆ ಮಾಡಿರುವ ಶಂಕೆ!]]></title>
            <link>https://kannada.asianetnews.com/karnataka-districts/koppal-horror-two-bodies-found-in-decomposed-burnt-condition-in-kukanoor-gdp/articleshow-k7imdz1</link>
            <guid isPermaLink="true">https://kannada.asianetnews.com/karnataka-districts/koppal-horror-two-bodies-found-in-decomposed-burnt-condition-in-kukanoor-gdp/articleshow-k7imdz1</guid>
            <pubDate>Mon, 13 Apr 2026 12:55:30 +0530</pubDate>
            <description><![CDATA[ಕೊಪ್ಪಳ ಜಿಲ್ಲೆಯ ಕುಕನೂರು ಬಳಿ ಪೈಪ್&zwnj;ಲೈನ್ ಕಾಲುವೆಯಲ್ಲಿ ಎರಡು ಕೊಳೆತ ಮತ್ತು ಸುಟ್ಟ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ರುದ್ರೇಶ್ ಗಂಗಾವತಿ ಮತ್ತು ರವಿ ರಾಮಣ್ಣ ತಟ್ಟಿ ಎಂದು ಗುರುತಿಸಲಾಗಿದ್ದು, ಪೊಲೀಸರು ಇದು ಕೊಲೆ ಎಂದು ಶಂಕಿಸಿ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp2v6vqfne6g2tky8td23kp2,imgname-koppal-horror-1776064622319.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ: &lt;/strong&gt;ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಸಮೀಪ ಭೀಕರ ಘಟನೆ ಬೆಳಕಿಗೆ ಬಂದಿದ್ದು, ಕೊಳೆತ ಹಾಗೂ ಸುಟ್ಟ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;ಕೊಪ್ಪಳ ರಸ್ತೆಯ ಪಕ್ಕದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಪೈಪ್&zwnj;ಲೈನ್ ಅಳವಡಿಸಲು ತೋಡಲಾಗಿದ್ದ ಕಾಲುವೆಯಲ್ಲಿ ಈ ಮೃತದೇಹಗಳು ಪತ್ತೆಯಾಗಿವೆ. ಸ್ಥಳೀಯರು ದುರ್ಗಂಧ ಬರುತ್ತಿರುವುದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ, ಕಾಲುವೆಯೊಳಗೆ ಕೊಳೆತ ಸ್ಥಿತಿಯಲ್ಲಿದ್ದ ಎರಡು ಶವಗಳು ಕಂಡುಬಂದವು. ತಕ್ಷಣವೇ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಯಿತು.&lt;/p&gt;&lt;h2&gt;ನಾಲ್ಕು ರಿಂದ ಐದು ದಿನಗಳ ಹಿಂದೆ ಈ ಇಬ್ಬರನ್ನು ಹ*ತ್ಯೆ ಮಾಡಿರುವ ಶಂಕೆ&lt;/h2&gt;&lt;p&gt;ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು ನಾಲ್ಕು ರಿಂದ ಐದು ದಿನಗಳ ಹಿಂದೆ ಈ ಇಬ್ಬರನ್ನು ಹ*ತ್ಯೆ ಮಾಡಿ, ಬಳಿಕ ಶವಗಳನ್ನು ಇಲ್ಲಿ ತಂದು ಎಸೆದು ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದು, ಕೆಲವು ಭಾಗಗಳಲ್ಲಿ ಸುಟ್ಟ ಗುರುತುಗಳೂ ಕಾಣಿಸಿಕೊಂಡಿರುವುದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ.&lt;/p&gt;&lt;h2&gt;ಮೃತರ ಗುರುತು ಪತ್ತೆ&lt;/h2&gt;&lt;p&gt;ಪರಿಶೀಲನೆ ಬಳಿಕ, ಮೃತರನ್ನು ಕುಕನೂರು ಪಟ್ಟಣದ ನಿವಾಸಿಗಳಾದ ರುದ್ರೇಶ್ ಗಂಗಾವತಿ (23) ಮತ್ತು ರವಿ ರಾಮಣ್ಣ ತಟ್ಟಿ (32) ಎಂದು ಗುರುತಿಸಲಾಗಿದೆ. ಇವರಿಬ್ಬರಿಗೂ ಏನು ಕಾರಣಕ್ಕೆ ಹ*ತ್ಯೆ ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.&lt;/p&gt;&lt;p&gt;ಘಟನಾ ಸ್ಥಳಕ್ಕೆ ಕುಕನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು, ಹತ್ಯೆಗೆ ಕಾರಣಗಳೇನು? ಆರೋಪಿಗಳು ಯಾರು? ಎಂಬುದನ್ನು ಪತ್ತೆಹಚ್ಚಲು ವಿವಿಧ ಕೋಣಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಈ ದಾರುಣ ಘಟನೆ ಪ್ರದೇಶದ ಜನರಲ್ಲಿ ಭಯ ಹಾಗೂ ಆಕ್ರೋಶ ಉಂಟುಮಾಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/koppal-horror-two-bodies-found-in-decomposed-burnt-condition-in-kukanoor-gdp/articleshow-k7imdz1"/>
        </item>
        <item>
            <title><![CDATA[ಗಂಗಾವತಿ ಬಿಜೆಪಿ ಮುಖಂಡ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣ: ಆರು ಮಂದಿ ದೋಷಿ, ಆರು ಜನ ಬಿಡುಗಡೆ! ಶಿಕ್ಷೆ ಏನು?]]></title>
            <link>https://kannada.asianetnews.com/karnataka-districts/gangavathi-bjp-leader-venkatesh-kurubara-murder-case-verdict-koppal-sat/articleshow-ndc4lme</link>
            <guid isPermaLink="true">https://kannada.asianetnews.com/karnataka-districts/gangavathi-bjp-leader-venkatesh-kurubara-murder-case-verdict-koppal-sat/articleshow-ndc4lme</guid>
            <pubDate>Thu, 23 Apr 2026 12:57:17 +0530</pubDate>
            <description><![CDATA[&lt;p&gt;ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣದಲ್ಲಿ, ನ್ಯಾಯಾಲಯು 12 ಆರೋಪಿಗಳ ಪೈಕಿ 6 ಮಂದಿಯನ್ನು ದೋಷಿಗಳೆಂದು ಘೋಷಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ 6 ಮಂದಿಯನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದೆ. ದೋಷಿಗಳ ಶಿಕ್ಷೆ ಪ್ರಮಾಣವೇನು? ಓದಿ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpwkrk73sss35ha7h83wqqzy,imgname-gangavathi-bjp-leader-venkatesh-kurubara-1776929230051.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಏ.23): ಜಿ&lt;/strong&gt;ಲ್ಲೆಯ ಗಂಗಾವತಿ ನಗರದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದ ಒಟ್ಟು 12 ಆರೋಪಿಗಳ ಪೈಕಿ ಆರು ಮಂದಿಯನ್ನು ನ್ಯಾಯಾಲಯವು ದೋಷಿಗಳೆಂದು ಘೋಷಿಸಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ ಆರು ಮಂದಿಯನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ.&lt;/p&gt;&lt;h3&gt;&lt;strong&gt;ಪ್ರಕರಣದ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಕಳೆದ ಅಕ್ಟೋಬರ್ 7, 2025 ರಂದು ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ವೆಂಕಟೇಶ್ ಕುರುಬರ ಅವರನ್ನು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಂತಕರು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದರು. ಈ ಕೊಲೆ ಪ್ರಕರಣ ಇಡೀ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ ರಾಜಕಾರಣದಲ್ಲೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಘಟನೆ ನಡೆದ ನಂತರ ತನಿಖೆ ಕೈಗೆತ್ತಿಕೊಂಡ ಗಂಗಾವತಿ ನಗರ ಪೊಲೀಸರು, ಅತ್ಯಂತ ಚುರುಕಿನ ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದರು.&lt;/p&gt;&lt;h2&gt;&lt;strong&gt;927 ಪುಟಗಳ ಚಾರ್ಜ್ ಶೀಟ್ ಮತ್ತು ತನಿಖೆ:&lt;/strong&gt;&lt;/h2&gt;&lt;p&gt;ಕೊಲೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಗಂಗಾವತಿ ನಗರ ಪೊಲೀಸರು ಸುಮಾರು 927 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು (Charge sheet) ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ತನಿಖಾಧಿಕಾರಿಗಳು ವೈಜ್ಞಾನಿಕ ಪುರಾವೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿ ಪ್ರಕರಣದ ಆಳವಾದ ವಿಚಾರಣೆಗೆ ಸಹಕರಿಸಿದ್ದರು.&lt;/p&gt;&lt;h2&gt;&lt;strong&gt;ಆರು ಮಂದಿ ದೋಷಿ, ಆರು ಜನ ಬಿಡುಗಡೆ:&lt;/strong&gt;&lt;/h2&gt;&lt;p&gt;ಸುದೀರ್ಘ ವಿಚಾರಣೆ ನಡೆಸಿದ ಗಂಗಾವತಿಯ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಇಂದು ಅಂತಿಮ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ರವಿ ಸೇರಿದಂತೆ ಎ1 (A1) ರಿಂದ ಎ6 (A6) ವರೆಗಿನ ಆರು ಆರೋಪಿಗಳನ್ನು ದೋಷಿಗಳೆಂದು ನ್ಯಾಯಾಲಯ ಪರಿಗಣಿಸಿದೆ. ಇನ್ನುಳಿದ ಏಳನೇ ಆರೋಪಿಯಿಂದ 12ನೇ ಆರೋಪಿಯವರೆಗಿನ (A7 to A12) ಆರು ಜನರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಿರ್ದೋಷಿಗಳೆಂದು ಘೋಷಿಸಿ ಬಿಡುಗಡೆ ಮಾಡಿದೆ.&lt;/p&gt;&lt;p&gt;&lt;strong&gt;ದೋಷಿಗಳು:&lt;/strong&gt; ರವಿ (ಪ್ರಮುಖ ಆರೋಪಿ), ಅಲ್ತಾಪ್ ಬಳ್ಳಾರಿ, ಗಂಗಾಧರ್, ದಾದಾಪೀರ ಬಳ್ಳಾರಿ, ಮೈಲಾರಿ @ ವಿಜಯ್ ಮತ್ತು ಸಲೀಮ್.&lt;/p&gt;&lt;p&gt;&lt;strong&gt;ಬಿಡುಗಡೆಯಾದವರು: &lt;/strong&gt;ಚೈತ್ರಾ, ಕಾರ್ತಿಕ್, ಭೀಮ್ @ ಭರತ್, ಧನರಾಜ್, ಶರಣಬಸವ್ ಅಲಿಯಾಸ್ ಹತ್ತು ರೊಟ್ಟಿ ಶರಣ ಮತ್ತು ಮಲ್ಲಿಕಾರ್ಜುನ @ ಡಿಜಿ ಮಲ್ಲಿ.&lt;/p&gt;&lt;h3&gt;&lt;strong&gt;ಶಿಕ್ಷೆ ಪ್ರಮಾಣದ ಕುತೂಹಲ:&lt;/strong&gt;&lt;/h3&gt;&lt;p&gt;ಆರು ಮಂದಿ ಆರೋಪಿಗಳು ದೋಷಿ ಎಂದು ಸಾಬೀತಾಗಿದ್ದು, ಈ ದೋಷಿಗಳಿಗೆ ನ್ಯಾಯಾಲಯವು ಯಾವ ರೀತಿಯ ಶಿಕ್ಷೆ ವಿಧಿಸಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ದೋಷಿಗಳ ಶಿಕ್ಷೆಯ ಪ್ರಮಾಣವನ್ನು ಇದೇ ತಿಂಗಳು ಏಪ್ರಿಲ್ 27 ರಂದು ನ್ಯಾಯಾಲಯವು ಅಧಿಕೃತವಾಗಿ ಪ್ರಕಟಿಸಲಿದೆ. ಹತ್ಯೆಗೊಳಗಾದ ವೆಂಕಟೇಶ್ ಕುರುಬರ ಕುಟುಂಬಸ್ಥರು ಮತ್ತು ಬೆಂಬಲಿಗರು ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿದ್ದು, ಕಠಿಣ ಶಿಕ್ಷೆಯ ನಿರೀಕ್ಷೆಯಲ್ಲಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/gangavathi-bjp-leader-venkatesh-kurubara-murder-case-verdict-koppal-sat/articleshow-ndc4lme"/>
        </item>
        <item>
            <title><![CDATA[ಕೊಪ್ಪಳದಲ್ಲಿ ಕುಡಿಯುವ ನೀರಿಗಾಗಿ ಸಚಿವರ ಕಾರು ಅಡ್ಡಗಟ್ಟಿದ ಮಹಿಳೆಯರು; ಮತ್ತೊಂದೆಡೆ ಪಿಡಿಒ ಕಚೇರಿಗೆ ಮುತ್ತಿಗೆ]]></title>
            <link>https://kannada.asianetnews.com/gallery/karnataka-districts/koppal-raichur-drinking-water-crisis-minister-shivaraj-tangadagi-car-blocked-strike-on-pdo-office-sat-nu9wh1f</link>
            <guid isPermaLink="true">https://kannada.asianetnews.com/gallery/karnataka-districts/koppal-raichur-drinking-water-crisis-minister-shivaraj-tangadagi-car-blocked-strike-on-pdo-office-sat-nu9wh1f</guid>
            <pubDate>Wed, 22 Apr 2026 16:26:15 +0530</pubDate>
            <description><![CDATA[&lt;p&gt;ಕಲ್ಯಾಣ ಕರ್ನಾಟಕದ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕೊಪ್ಪಳದಲ್ಲಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಸಚಿವರ ಕಾರನ್ನು ಅಡ್ಡಗಟ್ಟಿ ಪ್ರತಿಭಟಿಸಿದರೆ, ರಾಯಚೂರಿನಲ್ಲಿ ಕೋಟಿಗಳ ಯೋಜನೆ ವಿಫಲವಾದ ಹಿನ್ನೆಲೆ, ಪಿಡಿಒ ಕಚೇರಿಗೆ ಮುತ್ತಿಗೆ ಹಾಕಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kptc2mggf0sk74zrqzsn1z7n,imgname-koppal-and-raichur-water-crisis-shivraj-tangadagi-1776854061584.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲ್ಯಾಣ ಕರ್ನಾಟಕದ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕೊಪ್ಪಳದಲ್ಲಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಸಚಿವರ ಕಾರನ್ನು ಅಡ್ಡಗಟ್ಟಿ ಪ್ರತಿಭಟಿಸಿದರೆ, ರಾಯಚೂರಿನಲ್ಲಿ ಕೋಟಿಗಳ ಯೋಜನೆ ವಿಫಲವಾದ ಹಿನ್ನೆಲೆ, ಪಿಡಿಒ ಕಚೇರಿಗೆ ಮುತ್ತಿಗೆ ಹಾಕಿದರು.&lt;/p&gt;&lt;img&gt;&lt;p&gt;&lt;strong&gt;ಕೊಪ್ಪಳ/ರಾಯಚೂರು (ಏ.22): ಬಿ&lt;/strong&gt;ಸಿಲ ನಾಡು ಖ್ಯಾತಿಯ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈಗ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹನಿ ನೀರಿಗಾಗಿ ಮೈಲುಗಟ್ಟಲೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀರಿನ ಬವಣೆಯ ವಿರುದ್ಧ ಜನರ ಆಕ್ರೋಶದ ಕಟ್ಟೆ ಒಡೆದಿದ್ದು, ಕೊಪ್ಪಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾರನ್ನೇ ತಡೆದು ಮಹಿಳೆಯರು ಪ್ರತಿಭಟಿಸಿದರೆ, ರಾಯಚೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ವಿನೂತನ ಹೋರಾಟ ನಡೆಸಿದ್ದಾರೆ.&lt;/p&gt;&lt;img&gt;&lt;p&gt;ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಇಂದು ಹೈಡ್ರಾಮಾ ನಡೆದಿದೆ. ನವಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲು ತೆರಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮಹಿಳೆಯರು ಶಾಕ್ ನೀಡಿದ್ದಾರೆ. ನೀರಿನ ಸಮಸ್ಯೆ ತಾಳಲಾರದೆ ಆಕ್ರೋಶಗೊಂಡಿದ್ದ ಗ್ರಾಮದ ಮಹಿಳೆಯರು, ಸಚಿವರ ಕಾರಿನ ಮುಂದೆ ಖಾಲಿ ಕೊಡಗಳನ್ನು ಹಿಡಿದು ಅಡ್ಡ ನಿಂತು ಪ್ರತಿಭಟನೆ ನಡೆಸಿದರು.&lt;/p&gt;&lt;img&gt;&lt;p&gt;'ನಮಗೆ ಅಭಿವೃದ್ಧಿ ಕಾಮಗಾರಿಗಳಿಗಿಂತ ಮೊದಲು ಕುಡಿಯಲು ನೀರು ಕೊಡಿ' ಎಂದು ಮಹಿಳೆಯರು ಸಚಿವರ ಮುಂದೆ ಅಳಲು ತೋಡಿಕೊಂಡರು. ಈ ವೇಳೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಚಿವರು ಮಹಿಳೆಯರ ಮನವೊಲಿಸಲು ಯತ್ನಿಸಿದರಾದರೂ, ಕೂಡಲೇ ಶಾಶ್ವತ ಪರಿಹಾರ ಕಲ್ಪಿಸುವಂತೆ ಮಹಿಳೆಯರು ಪಟ್ಟು ಹಿಡಿದರು.&lt;/p&gt;&lt;img&gt;&lt;p&gt;ಇನ್ನೊಂದೆಡೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾಮದಲ್ಲಿ ನೀರಿನ ಸಮಸ್ಯೆ ವಿಕೋಪಕ್ಕೆ ಹೋಗಿದೆ. ಈ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಬರೋಬ್ಬರಿ 11 ಕೋಟಿ ರೂಪಾಯಿ ವೆಚ್ಚದಲ್ಲಿ 'ಬಹುಗ್ರಾಮ ಕುಡಿಯುವ ನೀರಿನ ಯೋಜನೆ' ಜಾರಿಯಲ್ಲಿದೆ. ಆದರೆ, ಕಳೆದ ಒಂದು ವಾರದಿಂದ ಈ ಯೋಜನೆಯ ಎರಡು ಮೋಟಾರುಗಳು ಸುಟ್ಟು ಹೋಗಿದ್ದು, ಪಲಕನಮರಡಿ, ಮದರಕಲ್, ವಂದಲಿ ಮತ್ತು ದೇವರಗುಡ್ಡ ಗ್ರಾಮಗಳು ಸಂಪೂರ್ಣವಾಗಿ ಬಾಯಾರಿಕೆಯಿಂದ ತತ್ತರಿಸುತ್ತಿವೆ.&lt;/p&gt;&lt;img&gt;&lt;p&gt;ಮೋಟಾರು ಸುಟ್ಟು ಹೋಗಿದ್ದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ತಿಮ್ಮಣ್ಣ ಅವರು ಕ್ಯಾರೆ ಎನ್ನುತ್ತಿಲ್ಲ ಎಂಬುದು ಗ್ರಾಮಸ್ಥರ ಗಂಭೀರ ಆರೋಪ. ಮೋಟಾರು ರಿಪೇರಿ ಮಾಡಿಸಿ ಎಂದು ಕೇಳಿದರೆ, 'ಪಂಚಾಯತ್&zwnj;ನಲ್ಲಿ ಅನುದಾನವಿಲ್ಲ' ಎಂಬ ಹಾರಿಕೆ ಉತ್ತರ ನೀಡಿ ದುರ್ವರ್ತನೆ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.&amp;nbsp;&lt;/p&gt;&lt;p&gt;ಇದರಿಂದ ಬೇಸತ್ತ ಜನರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯತ್ ಕಚೇರಿ ಮುಂದೆ ಜಮಾಯಿಸಿ ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಸರ್ಕಾರದ ಗಮನ ಸೆಳೆದರು.&lt;/p&gt;&lt;img&gt;&lt;p&gt;ಕೋಟಿ ಕೋಟಿ ರೂಪಾಯಿ ವೆಚ್ಚದ ಯೋಜನೆಗಳು ಕಾಗದದ ಮೇಲೆ ಕಾಣಿಸುತ್ತಿದ್ದರೂ, ಜನರ ಗಂಟಲು ಮಾತ್ರ ಒಣಗುತ್ತಿದೆ. ಅಧಿಕಾರಿಗಳ ಸಮನ್ವಯದ ಕೊರತೆ ಮತ್ತು ನಿರ್ಲಕ್ಷ್ಯದಿಂದಾಗಿ ಜನರು ರಸ್ತೆಗಿಳಿದು ಹೋರಾಡುವಂತಾಗಿದೆ. ಇನ್ನಾದರೂ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/koppal-raichur-drinking-water-crisis-minister-shivaraj-tangadagi-car-blocked-strike-on-pdo-office-sat-nu9wh1f"/>
        </item>
        <item>
            <title><![CDATA[ಕೊಪ್ಪಳ ರೈತನ ಹೊಲದಲ್ಲಿ ಬೆಳೆದ ಜಪಾನಿನ  ಪ್ರಸಿದ್ಧ ಮಿಯಾ ಜಾಕಿ ಮಾವು, ದುಬಾರಿ ಹಣ್ಣಿಗೆ ಮಾರುಕಟ್ಟೆಯದ್ದೇ ಚಿಂತೆ!]]></title>
            <link>https://kannada.asianetnews.com/karnataka-districts/world-costliest-miyazaki-mango-successfully-grown-by-koppal-farmer-in-karnataka-gdp/articleshow-p65grzh</link>
            <guid isPermaLink="true">https://kannada.asianetnews.com/karnataka-districts/world-costliest-miyazaki-mango-successfully-grown-by-koppal-farmer-in-karnataka-gdp/articleshow-p65grzh</guid>
            <pubDate>Sat, 25 Apr 2026 15:27:50 +0530</pubDate>
            <description><![CDATA[ಕೊಪ್ಪಳ ತಾಲೂಕಿನ ರೈತ ನಾಗಪ್ಪ ಬಗನಾಳ ಅವರು, ಜಪಾನ್ ಮೂಲದ ಮತ್ತು ವಿಶ್ವದ ಅತ್ಯಂತ ದುಬಾರಿ ಎನಿಸಿದ ಮಿಯಾ ಜಾಕಿ ಮಾವನ್ನು ತಮ್ಮ ಹೊಲದಲ್ಲಿ ಯಶಸ್ವಿಯಾಗಿ ಬೆಳೆದಿದ್ದಾರೆ. ತೋಟಗಾರಿಕಾ ಇಲಾಖೆಯ ಪ್ರೇರಣೆಯಿಂದ ಸಸಿಗಳನ್ನು ತರಿಸಿ ಬೆಳೆಸಿದ ಅವರು, ಈಗ ಉತ್ತಮ ಫಸಲು ಪಡೆದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯ ಹುಡುಕಾಟದಲ್ಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpmtm5gzf8014k0zxhcxhp92,imgname-miyazaki-mango--1--1776667989535.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಸೋಮರಡ್ಡಿ ಅಳವಂಡಿ ಕೊಪ್ಪಳ&lt;/p&gt;&lt;p&gt;ಜಗತ್ತಿನ ದುಬಾರಿ ಮಾವು ಎಂದೇ ಪ್ರಸಿದ್ಧಿಯಾಗಿರುವ ಜಪಾನ್ ಮೂಲದ ಮಿಯಾ ಜಾಕಿ ಮಾವು ಕೊಪ್ಪಳದ ರೈತನೋರ್ವ ಬೆಳೆದಿದ್ದು, ಅದು ಈಗ ಬಂಪರ್ ಬೆಳೆ ಬಂದಿದೆ. ಕೊಪ್ಪಳ ತೋಟಗಾರಿಕಾ ಇಲಾಖೆ ಹಣ್ಣು ಮಾರಾಟ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಮಿಯಾಜಾಕಿ ಮಾವು ನೋಡಿ ಪ್ರೇರಣೆಗೊಂಡ ರೈತ ನಾಗಪ್ಪ ಬಗನಾಳ ಕೊಪ್ಪಳ ತಾಲೂಕಿನ ಕಲ್&zwnj; ತಾವರಗೇರಾ ಗ್ರಾಮದಲ್ಲಿರುವ ತಮ್ಮ ಹೊಲದಲ್ಲಿ ಬೆಳೆದಿದ್ದಾರೆ.&lt;/p&gt;&lt;p&gt;ಜಪಾನ್ ಮೂಲದ ಮಾವು ಕೊಪ್ಪಳ ತಾಲೂಕಿನಲ್ಲಿ ಯಶಸ್ವಿಯಾಗಿ ಬೆಳೆದಿರುವ ವಿಚಾರ ತೋಟಗಾರಿಕಾ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಬೇರೆ ಬೇರೆ ರೈತರು ನಾಗಪ್ಪ ಬಗನಾಳ ಅವರ ಹೊಲಕ್ಕೆ ಬಂದು ನೋಡಿಕೊಂಡು ಹೋಗುತ್ತಿದ್ದಾರೆ.&lt;/p&gt;&lt;h2&gt;ಒಂದು ಗಿಡಕ್ಕೆ ₹1300 ರೂ&lt;/h2&gt;&lt;p&gt;ಮೂರು ವರ್ಷಗಳ ಹಿಂದೆ ದೆಹಲಿಯಿಂದ ರೈಲು ಮೂಲಕ 200 ಮಿಯಾಜಾಕಿ ಮಾವು ಸಸಿಯನ್ನು ನಾಗಪ್ಪ ಬಗನಾಳ ತರಿಸಿದ್ದರು. ಪ್ರತಿ ಸಸಿಗೆ ₹1300 ನೀಡಿದ್ದಾರೆ. ನಾಟಿ ಮಾಡಿದ ಬಳಿಕ 20 ಸಸಿಗಳು ಸತ್ತವು. 180 ಮಿಯಾಜಾಕಿ ಮಾವಿನ ಗಿಡಗಳು ಭರ್ಜರಿಯಾಗಿ ಬೆಳೆದು ನಿಂತಿವೆ. ಈ ಪೈಕಿ ಈ ವರ್ಷ ಒಂದಷ್ಟು ಗಿಡಗಳು ಫಸಲು ನೀಡಿವೆ.&lt;/p&gt;&lt;p&gt;ಇದಕ್ಕೆ ಪ್ರತ್ಯೇಕ ಉಪಚಾರವೇನೂ ಮಾಡಿಲ್ಲ, ಆದರೆ, ಮಾವು ಬೆಳೆಯಲು ಅನುಸರಿಸುವ ಕ್ರಮ ಕೈಗೊಂಡಿದ್ದೇವೆ. ಸರಿಯಾದ ಗೊಬ್ಬರ ಬಳಕೆ ಮಾಡಿ, ನಿರ್ವಹಣೆ ಮಾಡಿದ್ದರಿಂದ ನಮ್ಮ ನಿರೀಕ್ಷೆ ಮೀರಿ ಮಿಯಾ ಜಾಕಿ ಮಾವು ಬೆಳೆದಿದೆ ಎನ್ನುತ್ತಾರೆ ಅವರು.&lt;/p&gt;&lt;p&gt;ಮಾರುಕಟ್ಟೆ ಸವಾಲು:ಮಾರುಕಟ್ಟೆಯದ್ದೆ ದೊಡ್ಡ ಸವಾಲು ಆಗಿದೆ. ಈ ವರ್ಷವಷ್ಟೇ ಬೆಳೆದಿರುವ ಮಿಯಾಜಾಕಿ ಮಾವಿಗೆ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲ. ಹೀಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೇ ಇದನ್ನು ಮಾರಾಟ ಮಾಡಬೇಕಾಗಿದೆ. ರಫ್ತು ಮಾಡುವುದಕ್ಕಾಗಿ ರೈತ ದಾರಿ ಹುಡುಕುತ್ತಿದ್ದಾರೆ.&lt;/p&gt;&lt;h2&gt;ಏನಿದು ಮಿಯಾ ಜಾಕಿ ಮಾವು?:&amp;nbsp;&lt;/h2&gt;&lt;p&gt;ಜಪಾನ್ ದೇಶದ ಕ್ಯುಶು ಪ್ರಾಂತದ ಮಿಯಾಜಾಕಿ ನಗರದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುವುದರಿಂದ ಇದಕ್ಕೆ ಮಿಯಾ ಜಾಕಿ ಮಾವು ಎಂದು ಹೆಸರು ಬಂದಿದೆ. ಸಾಮಾನ್ಯವಾಗಿ ಜಪಾನ್ ಸುತ್ತಮುತ್ತಲ ಪ್ರದೇಶದಲ್ಲಿಯೇ ಬೆಳೆಯುವ ಈ ಮಾವು ಜಗತ್ತಿನ ದುಬಾರಿ ಮಾವು ಎಂದೇ ಪ್ರಸಿದ್ಧಿಯಾಗಿದೆ. ಪ್ರತಿ ಕೆಜಿಗೆ ₹2.5 ಲಕ್ಷದಿಂದ ₹3 ಲಕ್ಷಕ್ಕೆ ಇದು ಮಾರಾಟವಾಗುತ್ತದೆ.&lt;/p&gt;&lt;p&gt;ಕೊಪ್ಪಳ ಹಣ್ಣು ಮಾರಾಟ ಮತ್ತು ಪ್ರದರ್ಶನದ ವೇಳೆಯಲ್ಲಿ ಜಗತ್ತಿನ ದುಬಾರಿ ಮಾವು ಮಿಯಾಜಾಕಿ ಕೊಪ್ಪಳದಲ್ಲಿ ಪ್ರದರ್ಶನ ಮಾಡಿ, ಪರಿಚಯ ಮಾಡಲಾಗಿತ್ತು. ಆದರಿಂದ ಪ್ರೇರಣೆಗೊಂಡು ರೈತನೋರ್ವ ಬೆಳೆದಿದ್ದು, ಯಶಸ್ವಿಯಾಗಿದೆ ಎಂದು ಕೊಪ್ಪಳ ತೋಟಗಾರಿಕಾ ಇಲಾಖೆ ಜೆಡಿ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.&lt;/p&gt;&lt;p&gt;ದುಬಾರಿ ಮಾವು ಎನ್ನುವ ಕಾರಣಕ್ಕಾಗಿ ಕಷ್ಟಪಟ್ಟು, ರಿಸ್ಕ್ ತೆಗೆದುಕೊಂಡು ಬೆಳೆದಿದ್ದೇವೆ. ನಿರೀಕ್ಷೆಯಂತೆ ಉತ್ತಮ ಫಸಲು ಬಂದಿದೆ. ಈಗ ಅದನ್ನು ಮಾರಾಟ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ರೈತ ನಾಗಪ್ಪ ಬಗನಾಳ ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/world-costliest-miyazaki-mango-successfully-grown-by-koppal-farmer-in-karnataka-gdp/articleshow-p65grzh"/>
        </item>
        <item>
            <title><![CDATA[ಅಕ್ಷಯ ತೃತೀಯದಂದು ಮುಸ್ಲಿಂರ ಅಂಗಡಿಯಲ್ಲಿ ಚಿನ್ನ ಖರೀದಿಸಬೇಡಿ: ಹಿಂದೂಗಳಿಗೆ ಮುತಾಲಿಕ್ ಕರೆ, ಲವ್ ಜಿಹಾದ್, ಪೊಲೀಸರ ವಿರುದ್ಧ ಕಿಡಿ]]></title>
            <link>https://kannada.asianetnews.com/karnataka-districts/dont-buy-gold-from-muslim-shops-on-akshaya-tritiya-muthalik-calls-on-hindus-at-koppal/articleshow-r412pz5</link>
            <guid isPermaLink="true">https://kannada.asianetnews.com/karnataka-districts/dont-buy-gold-from-muslim-shops-on-akshaya-tritiya-muthalik-calls-on-hindus-at-koppal/articleshow-r412pz5</guid>
            <pubDate>Sat, 18 Apr 2026 13:09:19 +0530</pubDate>
            <description><![CDATA[&lt;p&gt;ಕೊಪ್ಪಳದಲ್ಲಿ ಮಾತನಾಡಿದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಬಂಗಾರ ಖರೀದಿಸುವಂತೆ ಕರೆ. ಅಳವಂಡಿ ಲವ್ ಜಿಹಾದ್ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ ಅವರು, ಟಿಸಿಎಸ್ ಮತಾಂತರ ಪ್ರಕರಣದ ಬಗ್ಗೆ ಎನ್&zwnj;ಐಎ ತನಿಖೆಗೆ ಆಗ್ರಹ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfr1x80bamq2xg8gw01vm0d,imgname-----------------------2026-04-18t130113.055-1776497521920.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳ (ಏ.18) ಅಕ್ಷಯ ತೃತೀಯದಂದು ಮುಸ್ಲಿಂ ಸಮುದಾಯದ ಅಂಗಡಿಗಳಲ್ಲಿ ಬಂಗಾರ ಖರೀದಿಸಬಾರದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಿಂದೂಗಳಿಗೆ ಕರೆ ನೀಡಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಬಂಗಾರ ಖರೀದಿಸುವ ಶಾಸ್ತ್ರ ಪವಿತ್ರವಾದದ್ದು. ಮೂರ್ತಿ ಭಂಜಕರ ಬಳಿ ವ್ಯವಹಾರ ಬೇಡ, ಧರ್ಮಕ್ಕಾಗಿ ಹಲಾಲ್ ಮುಕ್ತ ವ್ಯವಹಾರ ನಡೆಸಿ, ಹಿಂದೂ ಜ್ಯುವೆಲ್ಲರಿ ಶಾಪ್&zwnj;ಗಳಲ್ಲಿ ಬಂಗಾರ ಖರೀದಿಸುವಂಎ ಕರೆ ನೀಡಿದರು.&lt;/p&gt;&lt;h2&gt;ಐಟಿ ಸೆಕ್ಟರ್&zwnj; TCS ನಲ್ಲೇ ಮತಾಂತರ ಆಘಾತಕಾರಿ&lt;/h2&gt;&lt;p&gt;ನಾಸಿಕ್&zwnj;ನ ಟಿಸಿಎಸ್ (TCS) ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಮತಾಂತರ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ ಮುತಾಲಿಕ್, ಇದು ಅತ್ಯಂತ ಗಂಭೀರ ವಿಚಾರ. ದೇಶದ ಇಡೀ ಐಟಿ ಸೆಕ್ಟರ್ ಅನ್ನು ಎನ್&zwnj;ಐಎ (NIA) ಮೂಲಕ ಸಮೀಕ್ಷೆ ನಡೆಸಬೇಕು. ನಿದಾ ಖಾನ್ ಎಂಬಾಕೆ ಹಲವರೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಯಿದ್ದು, ತನಿಖೆ ಚುರುಕುಗೊಳ್ಳಬೇಕು ಎಂದು ಆಗ್ರಹಿಸಿದರು.&lt;/p&gt;&lt;h3&gt;ಅಳವಂಡಿ ಪ್ರಕರಣ: ಪೊಲೀಸರಿಗೆ ಹೆಣ್ಮಕ್ಕಳಿದ್ದಾರೋ ಇಲ್ವೋ?&lt;/h3&gt;&lt;p&gt;ಕೊಪ್ಪಳದ ಅಳವಂಡಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣದ ಬಗ್ಗೆ ಮಾತನಾಡುತ್ತಾ ಪೊಲೀಸರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಅಳವಂಡಿಯಲ್ಲಿ ನಡೆದಿರುವುದು ಐದನೆಯ ಪ್ರಕರಣವಾಗಿದೆ. ಮುಸ್ತಾಫ್ ಗಾಂಜಾ, ಡ್ರಗ್. ಮಟ್ಕಾ ಕಿಂಗ್ ಪಿನ್, ಅವನ ಮೊಬೈಲ್&zwnj;ನಲ್ಲಿ ನಾಲ್ಕು ಸಾವಿರ ಅಶ್ಲೀಲ ವಿಡಿಯೋ, ಆರು ಸಾವಿರ ಫೋಟೊಗಳಿವೆ. ಅವುಗಳನ್ನು ಸ್ವಲ್ಪ ಸಮಯದಲ್ಲೇ ಡಿಲಿಟ್ ಮಾಡಿದ್ದಾನೆ. ಮುಸ್ತಾಫ್ ಅಕ್ರಮಗಳ ಕಿಂಗ್&zwnj;ಪಿನ್ ಆಗಿದ್ದರೂ ಪೊಲೀಸರು ಏಕೆ ಬಂಧಿಸಿಲ್ಲ? ನೀವು ಸೆಗಣಿ ತಿನ್ನುತ್ತಿದ್ದೀರಾ? ಎಂದು ಪ್ರಶ್ನಿಸಿದ ಮುತಾಲಿಕ್, ಅಳವಂಡಿ ಕಾಂಗ್ರೆಸ್ ಮುಖಂಡರು ಮುಸ್ಲಿಂ ಓಲೈಕೆಯಲ್ಲಿ ತೊಡಗಿದ್ದು, ಈ ಕೇಸ್&zwnj;ನ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಆದರೆ ಈ ಪೊಲೀಸರು ಖಾಕಿ ತೊಟ್ಟು ಕರ್ತವ್ಯ ಪಾಲನೆ ಮಾಡದೇ ಭ್ರಷ್ಟಾಚಾರಕ್ಕೆ ಬಲಿಯಾಗಿದ್ದಾರೆ' ಎಂದು ಗಂಭೀರ ಆರೋಪ ಮಾಡಿದರು.&lt;/p&gt;&lt;h3&gt;ವಾಲ್ಮೀಕಿ ಸಮಾಜದ ಯುವತಿ ಮೇಲೆ ಮತಾಂತರದ ಪ್ರಭಾವ&lt;/h3&gt;&lt;p&gt;ವಾಲ್ಮೀಕಿ ಸಮಾಜದ ಯುವತಿ ಮುಸ್ತಾಫ್ ಮನೆಯಲ್ಲಿದ್ದು, ಆಕೆಗೆ ಈಗಾಗಲೇ ಹಿಜಾಬ್, ಬುರ್ಕಾ ಹಾಗೂ ನಮಾಜ್ ಕಲಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಂ ಕ್ರಿಮಿನಲ್&zwnj;ಗಳಿಗೆ ರೇಪಿಸ್ಟ್ ಕೊಲೆಗಾರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಕೋರ್ಟ್&zwnj;ಗಳು ಇಂತಹ ಪ್ರಕರಣಗಳಲ್ಲಿ ವಿಳಂಬ ಮಾಡದೆ ತಕ್ಷಣ ತೀರ್ಪು ನೀಡಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಭಜರಂಗ ದಳ ಜಿಲ್ಲಾಧ್ಯಕ್ಷ ಅರುಣ ಹೂಗಾರ ಹಾಗೂ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀಧರ ಕಲಬುರಗಿ ಉಪಸ್ಥಿತರಿದ್ದರು.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/dont-buy-gold-from-muslim-shops-on-akshaya-tritiya-muthalik-calls-on-hindus-at-koppal/articleshow-r412pz5"/>
        </item>
        <item>
            <title><![CDATA[ಕೊಪ್ಪಳದ ಸಾಮೂಹಿಕ ವಿವಾಹದಲ್ಲಿ ನಕಲಿ ದಾಖಲೆ ನೀಡಿ ಅಪ್ರಾಪ್ತೆಗೆ ಮದುವೆ ಮಾಡಲು ಯತ್ನ!]]></title>
            <link>https://kannada.asianetnews.com/karnataka-districts/attempt-to-marry-a-minor-by-giving-fake-documents-at-a-mass-wedding-in-koppal-rav/articleshow-ry6isd9</link>
            <guid isPermaLink="true">https://kannada.asianetnews.com/karnataka-districts/attempt-to-marry-a-minor-by-giving-fake-documents-at-a-mass-wedding-in-koppal-rav/articleshow-ry6isd9</guid>
            <pubDate>Thu, 23 Apr 2026 08:20:22 +0530</pubDate>
            <description><![CDATA[&lt;p&gt;ಕೊಪ್ಪಳ ಜಿಲ್ಲೆಯ ತಾಳಕೇರಿಯಲ್ಲಿ, ಸಾಮೂಹಿಕ ವಿವಾಹದಲ್ಲಿ ನಕಲಿ ಶಾಲಾ ದೃಢೀಕರಣ ಪತ್ರ ಬಳಸಿ ಅಪ್ರಾಪ್ತೆಗೆ ಮದುವೆ ಮಾಡಲು ಯತ್ನಿಸಲಾಗಿತ್ತು. ಸಹಾಯವಾಣಿಗೆ ಬಂದ ಕರೆ ಆಧರಿಸಿ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ದಾಖಲೆ ಪರಿಶೀಲಿಸಿ ಬಾಲ್ಯವಿವಾಹ ತಡೆದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j767q33p5vm3qq9vhddsxn0j,imgname-Child-marriage-3-1725712534646.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳ (ಏ.23) ಶಾಲೆಯ ನಕಲಿ ದೃಢೀಕರಣ ಪತ್ರ ನೀಡಿ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತೆಗೆ ಮದುವೆ ನಡೆದಿದ್ದ ತಯಾರಿಯನ್ನು ಅಧಿಕಾರಿಗಳು ತಡೆದಿದ್ದಾರೆ.&lt;/p&gt;&lt;p&gt;ತಾಳಕೇರಿ ಗ್ರಾಮದಲ್ಲಿ ಸಾಮೂಹಿಕ ವಿವಾಹ ಏರ್ಪಾಡಾಗಿತ್ತು. ಇಲ್ಲಿ ಅಪ್ರಾಪ್ತೆಗೆ ಮದುವೆ ಮಾಡಲು ಮುಂದಾದ ಪೋಷಕರು, ವಿವಾಹದ ವಯಸ್ಸು ದೃಢೀಕರಣಕ್ಕಾಗಿ ಸೂಳೆಕಲ್ ಶಾಲೆಯ ದಾಖಲಾತಿ ದೃಢೀಕರಣ ನೀಡಿದ್ದರು. ಇದನ್ನೇ ನಂಬಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡುವುದಕ್ಕೆ ಸಮ್ಮತಿ ಸಿಕ್ಕಿತ್ತು. ಆದರೆ, ಈ ಬಾಲ್ಯವಿವಾಹದ ಬಗ್ಗೆ ಸ್ಥಳೀಯರು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.&lt;/p&gt;&lt;p&gt;ಮಾಹಿತಿ ಆಧರಿಸಿ ತಾಳಕೇರಿಯಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹದ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ, ಬಾಲಕಿಯ ದಾಖಲೆ ಪರಿಶೀಲಿಸಿದಾಗ ಅದು ನಕಲಿ ಶಾಲಾ ದೃಢೀಕರಣ ಪತ್ರ ಎಂಬುದು ಗೊತ್ತಾಗಿದೆ. ಇದು ಅಧಿಕಾರಿಗಳಿಗೂ ಶಾಕ್&zwnj; ನೀಡಿದೆ. ಕೊನೆಗೆ ಸೂಳೆಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ದಾಖಲೆ ಬಗ್ಗೆ ಕೇಳಿದಾಗ ನಾನು ಅಂತಹ ಯಾವುದೇ ದೃಢೀಕರಣ ನೀಡಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಶಾಲೆಯ ಹೆಸರಿನಲ್ಲಿ ನಕಲಿ ದೃಢೀಕರಣ ಪತ್ರ ಸೃಜಿಸಿಕೊಂಡಿದ್ದಾರೆ ಎನ್ನುವುದು ಪತ್ತೆಯಾಗುತ್ತಿದ್ದಂತೆ ಮುಖ್ಯೋಪಾಧ್ಯಯರು ಜಿಲ್ಲಾಡಳಿತಕ್ಕೆ ಈ ಕುರಿತು ಲಿಖಿತ ದೂರು ನೀಡಿದ್ದಾರೆ. ಬಳಿಕ, ಅಧಿಕಾರಿಗಳು ಬಾಲ್ಯವಿವಾಹ ತಡೆದಿದ್ದಾರೆ. ಷಡ್ಯಂತ್ರ ಪತ್ತೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಮಕ್ಕಳ ರಕ್ಷಣಾ ಘಟಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದೆ.&lt;/p&gt;&lt;h2&gt;ಕಾನೂನು ಕ್ರಮ&lt;/h2&gt;&lt;p&gt;ನಕಲಿ ಶಾಲಾ ದಾಖಲಾತಿ ಸೃಷ್ಟಿಸಿಕೊಂಡು ಬಾಲ್ಯವಿವಾಹ ಮಾಡಲು ಮುಂದಾಗಿದ್ದ ಪ್ರಕರಣ ಪತ್ತೆ ಮಾಡಿ, ತಡೆ ಹಿಡಿಯಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.&lt;/p&gt;&lt;p&gt;&lt;strong&gt;-ಸಿಂಧು ಅಂಗಡಿ, ಮಕ್ಕಳ ರಕ್ಷಣಾಧಿಕಾರಿ.&lt;/strong&gt;&lt;/p&gt;&lt;p&gt;ಹೆಚ್ಚುತ್ತಿರುವ ಬಾಲ್ಯವಿವಾಹ:&lt;/p&gt;&lt;p&gt;ಕೊಪ್ಪಳ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಬಸವ ಜಯಂತಿಯಂದು ನಡೆದ ಸಾಮೂಹಿಕ ವಿವಾಹದಲ್ಲಿಯೇ 6 ಬಾಲ್ಯವಿವಾಹ ಪ್ರಕರಣ ಪತ್ತೆ ಮಾಡಲಾಗಿದೆ. ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/attempt-to-marry-a-minor-by-giving-fake-documents-at-a-mass-wedding-in-koppal-rav/articleshow-ry6isd9"/>
        </item>
        <item>
            <title><![CDATA[ಮಳೆಗಾಲಕ್ಕೂ ಮುನ್ನ ತುಂಗಭದ್ರಾ ಜಲಾಶಯ ಸೇಫ್; ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಯಶಸ್ವಿ]]></title>
            <link>https://kannada.asianetnews.com/gallery/state/vijayanagara-tungabhadra-dam-safety-ensured-all-33-new-crest-gates-successfully-installed-sat-tlb93us</link>
            <guid isPermaLink="true">https://kannada.asianetnews.com/gallery/state/vijayanagara-tungabhadra-dam-safety-ensured-all-33-new-crest-gates-successfully-installed-sat-tlb93us</guid>
            <pubDate>Sun, 26 Apr 2026 10:52:23 +0530</pubDate>
            <description><![CDATA[&lt;p&gt;ಆಗಸ್ಟ್ 2024ರಲ್ಲಿ ಗೇಟ್ ಕಿತ್ತುಹೋಗಿ ನೀರು ಸೋರಿಕೆಯಾದ ನಂತರ, ತುಂಗಭದ್ರಾ ಜಲಾಶಯದ ಎಲ್ಲಾ 33 ಶಿಥಿಲಗೊಂಡಿದ್ದ ಗೇಟ್&zwnj;ಗಳನ್ನು ಬದಲಾಯಿಸಲು ನಿರ್ಧರಿಸಲಾಯಿತು. ₹52 ಕೋಟಿ ವೆಚ್ಚದ ಈ ಬೃಹತ್ ಯೋಜನೆಯಡಿ, ನೂತನ ಗೇಟ್&zwnj;ಗಳ ಅಳವಡಿಕೆ ಕಾರ್ಯವು ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq438tjnbj4d47gvzxsfh5kf,imgname-tungabhadra-reservoir-1777180371541.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಗಸ್ಟ್ 2024ರಲ್ಲಿ ಗೇಟ್ ಕಿತ್ತುಹೋಗಿ ನೀರು ಸೋರಿಕೆಯಾದ ನಂತರ, ತುಂಗಭದ್ರಾ ಜಲಾಶಯದ ಎಲ್ಲಾ 33 ಶಿಥಿಲಗೊಂಡಿದ್ದ ಗೇಟ್&zwnj;ಗಳನ್ನು ಬದಲಾಯಿಸಲು ನಿರ್ಧರಿಸಲಾಯಿತು. ₹52 ಕೋಟಿ ವೆಚ್ಚದ ಈ ಬೃಹತ್ ಯೋಜನೆಯಡಿ, ನೂತನ ಗೇಟ್&zwnj;ಗಳ ಅಳವಡಿಕೆ ಕಾರ್ಯವು ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ.&lt;/p&gt;&lt;img&gt;&lt;p&gt;&lt;strong&gt;ವಿಜಯನಗರ (ಏ.26): ತುಂ&lt;/strong&gt;ಗಭದ್ರಾ ಜಲಾಶಯದ 33 ನೂತನ ಗೇಟ್&zwnj; ಅಳವಡಿಕೆ ಕಾರ್ಯ ಶನಿವಾರ ಸಂಪೂರ್ಣಗೊಂಡಿದೆ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್.ಕೆ. ರೆಡ್ಡಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಕುರಿತು ಮಾತನಾಡಿದ ಅವರು, ನೂತನ ಗೇಟ್&zwnj; ಅಳವಡಿಕೆ ಕಾರ್ಯ ಡಿ.24, 2025 ರಿಂದ ಪ್ರಾರಂಭವಾಗಿದ್ದು, ಏ.25ಕ್ಕೆ ಸಂಪನ್ನಗೊಂಡಿದೆ. ಇನ್ನೂ ಸಣ್ಣಪುಟ್ಟ ಕೆಲಸಗಳಿದ್ದು, ಮೇ ಅಂತ್ಯದವರೆಗೆ ಪೂರ್ಣಗೊಳ್ಳಲಿದೆ ಎಂದರು.ಆಗಸ್ಟ್ 2024ರ ಮಧ್ಯರಾತ್ರಿ ತುಂಗಭದ್ರಾ ಜಲಾಶಯದ ಗೇಟ್ ನಂ.19 ನೀರಿನ ರಭಸಕ್ಕೆ ಕಿತ್ತು ಹೋದ ಪರಿಣಾಮ 45,000 ಕ್ಯೂಸಕ್&zwnj; ನೀರು ಸೋರಿಕೆ ಆಗಿತ್ತು.&lt;/p&gt;&lt;img&gt;&lt;p&gt;ತಕ್ಷಣ ಎಚ್ಚೆತ್ತ ತುಂಗಭದ್ರಾ ಮಂಡಳಿ ಅಧಿಕಾರಿಗಳು ಜಲಾಶಯ ಗೇಟ್ ತಜ್ಞ ಕನ್ನಯ್ಯ ನಾಯ್ಡು ಅವರನ್ನು ಕರೆಸಿ ಗೇಟ್ ನಂ.19ಕ್ಕೆ ಸ್ಟಾಪ್ ಲಾಕ್ ಅಳವಡಿಸಿ ಪೋಲಾಗುತ್ತಿದ್ದ ನೀರನ್ನು ತಡೆಯುವಲ್ಲಿ ಯಶಸ್ವಿಯಾದರು.&lt;/p&gt;&lt;img&gt;&lt;p&gt;ತಜ್ಞ ಕನ್ನಯ್ಯ ನಾಯ್ಡು ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್&zwnj; ಪರಿಶೀಲಿಸಿ ಜಲಾಶಯದ ಗೇಟ್&zwnj;ಗಳು ಶಿಥಿಲಗೊಂಡಿದ್ದು, ಜಲಾಶಯದ ನೀರನ್ನು ತಡೆಯುವ ಸಾಮರ್ಥ್ಯ ಗೇಟ್&zwnj;ಗಳು ಕಳೆದುಕೊಂಡಿವೆ ತಕ್ಷಣವೇ ಬದಲಿಸಬೇಕು ಎಂದು ಕರ್ನಾಟಕ ಹಾಗೂ ಆಂಧ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು.&lt;/p&gt;&lt;img&gt;&lt;p&gt;ಕನ್ನಯ್ಯ ನಾಯ್ಡು ಸಲಹೆ ಗಂಭೀರವಾಗಿ ಪರಿಗಣಿಸಿದ ತುಂಗಭದ್ರಾ ಮಂಡಳಿಯು ಮೇ. 2025ರಲ್ಲಿ ತುಂಗಭದ್ರಾ ಜಲಾಶಯದ ನೂತನ ಗೇಟ್&zwnj; ಅಳವಡಿಸುವ ನಿಟ್ಟಿನಲ್ಲಿ ₹52 ಕೋಟಿ ಟೆಂಡರ್ ಕರೆದು ಗುಜರಾತ್ ಮೂಲದ ಕಂಪನಿಗೆ ಗೇಟ್ ಅಳವಡಿಸುವ ಟೆಂಡರ್ ನೀಡಿದ್ದರು.&lt;/p&gt;&lt;img&gt;&lt;p&gt;ಜೂನ್ 2025ರಲ್ಲಿ ಗೇಟ್ ಬದಲಿಸುವ ನಿಟ್ಟಿನಲ್ಲಿ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಒಂದುವರೆ ವರ್ಷ ಅವಧಿ ನೀಡಲಾಯಿತು, ಅಂದರೆ, ಜೂನ್ 2025 ರಿಂದ ಡಿಸೆಂಬರ್ 2026ರವರೆಗೆ ಗೇಟ್&zwnj; ಅಳವಡಿಕೆ ಕಾರ್ಯ ಮುಗಿಸಬೇಕು ಎಂದು ಗುತ್ತಿಗೆದಾರನೊಂದಿಗೆ ಒಪ್ಪಂದ ಮಾಡಲಾಯಿತು.&lt;/p&gt;&lt;img&gt;&lt;p&gt;ಜನವರಿ ತಿಂಗಳಲ್ಲಿ ಒಂದು ಗೇಟ್&zwnj; ಸಹ ಅಳವಡಿಕೆ ಮಾಡದ ಕಾರಣ ಕನ್ನಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಗೇಟ್ ಅಳವಡಿಕೆ ಕಾರ್ಯಕ್ಕೆ ಮೂರು ಪ್ರತ್ಯೇಕ ತಂಡ ರಚಿಸಿ ಒಂದು ತಂಡದಿಂದ ಗೇಟ್ ನಿರ್ಮಾಣ, ಇನ್ನೊಂದು ತಂಡ ಹಳೇ ಗೇಟ್&zwnj; ತೆರವು ಕಾರ್ಯಾಚರಣೆ, ಮೂರನೇ ತಂಡದಿಂದ ನೂತನ ಗೇಟ್&zwnj; ಅಳವಡಿಕೆ ಕಾರ್ಯ ಮಾಡಲಾಯಿತು.&lt;/p&gt;&lt;img&gt;&lt;p&gt;ಈ ಮೂರು ತಂಡದಲ್ಲಿ ಒಟ್ಟು 120 ಜನರು ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದರು. ಇದಲ್ಲದೆ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ, ಮುಖ್ಯ ಅಭಿಯಂತರರು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ತುಂಗಭದ್ರಾ ಮಂಡಳಿ ಇಂಜಿನಿಯರ್ ಈ ಕಾರ್ಯದಲ್ಲಿ ಭಾಗಿಯಾಗಿದ್ದರು.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/vijayanagara-tungabhadra-dam-safety-ensured-all-33-new-crest-gates-successfully-installed-sat-tlb93us"/>
        </item>
        <item>
            <title><![CDATA[India Book of Records 2026: ಕಣ್ಣು ಮುಚ್ಚಿ ಭಾರತದ ನಕಾಶೆ ಜೋಡಿಸಿ ಕೊಪ್ಪಳದ ವಿದ್ಯಾರ್ಥಿ ರೆಕಾರ್ಡ್‌!]]></title>
            <link>https://kannada.asianetnews.com/karnataka-districts/koppal-boy-tejas-enters-india-book-of-records-for-solving-india-map-puzzle-blindfolded-rav/articleshow-ubgk7l5</link>
            <guid isPermaLink="true">https://kannada.asianetnews.com/karnataka-districts/koppal-boy-tejas-enters-india-book-of-records-for-solving-india-map-puzzle-blindfolded-rav/articleshow-ubgk7l5</guid>
            <pubDate>Thu, 23 Apr 2026 12:38:00 +0530</pubDate>
            <description><![CDATA[&lt;p&gt;ಕೊಪ್ಪಳದ ಶಾರದಾ ಇಂಟರ್&zwnj; ನ್ಯಾಷನಲ್ ಶಾಲೆಯ 4ನೇ ತರಗತಿ ವಿದ್ಯಾರ್ಥಿ ತೇಜಸ್, ಕಣ್ಣು ಮುಚ್ಚಿ ಭಾರತದ ಮ್ಯಾಪ್ ಪಜಲ್ ಅನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026ರಲ್ಲಿ ವಿಶಿಷ್ಟ ದಾಖಲೆ ಮಾಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpwje8xwgs791hp4ja7hs0m0,imgname-untitled-design--7--1776927843260.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಏ.23):&lt;/strong&gt; ಜಿಲ್ಲೆಯ ಕಿದದಾಳದ ಶಾರದಾ ಇಂಟರ್&zwnj; ನ್ಯಾಷನಲ್ ಶಾಲೆಯ ವಿದ್ಯಾರ್ಥಿ ತೇಜಸ್ (4ನೇ ತರಗತಿ) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026ನಲ್ಲಿ ವಿಶಿಷ್ಟ ದಾಖಲೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.&lt;/p&gt;&lt;p&gt;ತೇಜಸ್, ಕಣ್ಣು ಮುಚ್ಚಿದ (ಬ್ಲೈಂಡ್&zwnj; ಫೋಲ್ಡ್) ಸ್ಥಿತಿಯಲ್ಲಿ ಭಾರತದ ಮ್ಯಾಪ್ ಪಜಲ್&zwnj;ಗಳನ್ನು ಅಚ್ಚುಕಟ್ಟಾಗಿ ಹಾಗೂ ಅತ್ಯಂತ ವೇಗವಾಗಿ ಪರಿಹರಿಸುವ ಅಪೂರ್ವ ಸಾಮರ್ಥ್ಯ ಪ್ರದರ್ಶಿಸಿ ನಿಗದಿತ 5 ನಿಮಿಷಗಳಿಗಿಂತ ಮುನ್ನ ಪೂರ್ಣಗೊಳಿಸಿ ಈ ಸಾಧನೆ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಕೊಪ್ಪಳದ ಸಾಮೂಹಿಕ ವಿವಾಹದಲ್ಲಿ ನಕಲಿ ದಾಖಲೆ ನೀಡಿ ಅಪ್ರಾಪ್ತೆಗೆ ಮದುವೆ ಮಾಡಲು ಯತ್ನ!&lt;/p&gt;&lt;p&gt;ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ತೇಜಸ್&zwnj;ನನ್ನು ಅತ್ಯಂತ ಶಿಸ್ತುಬದ್ಧ, ಏಕಾಗ್ರತೆ ಹೊಂದಿದ ಮತ್ತು ವಿದ್ಯಾಭ್ಯಾಸದಲ್ಲಿ ಶ್ರೇಷ್ಠ ಸಾಧನೆ ಮಾಡುವ ವಿದ್ಯಾರ್ಥಿ ಎಂದು ಶ್ಲಾಘಿಸಿದ್ದು, ಇಂತಹ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪೋಷಕರು ತೇಜಸ್ ಅವರ ಸಾಧನೆಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.&lt;/p&gt;&lt;p&gt;ಜಿಲ್ಲೆಯ ಕಿದದಾಳದ ಶಾರದಾ ಇಂಟರ್&zwnj; ನ್ಯಾಷನಲ್ ಶಾಲೆಯ ವಿದ್ಯಾರ್ಥಿ ತೇಜಸ್ (4ನೇ ತರಗತಿ) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026ನಲ್ಲಿ ವಿಶಿಷ್ಟ ದಾಖಲೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-boy-tejas-enters-india-book-of-records-for-solving-india-map-puzzle-blindfolded-rav/articleshow-ubgk7l5"/>
        </item>
        <item>
            <title><![CDATA[Karnataka cabinet reshuffle : 'ಸಿಎಂ ಆರ್ಥಿಕ ಸಲಹೆಗಾರ' ಎಂದು ಸುಮ್ನೆ ಹುದ್ದೆ ಕೊಟ್ಟಿದ್ದಾರೆ: ರಾಯರಡ್ಡಿ]]></title>
            <link>https://kannada.asianetnews.com/politics/karnataka-cabinet-reshuffle-basavaraj-rayaraddy-on-congress-mlas-visit-delhi-rav/articleshow-w9it1vb</link>
            <guid isPermaLink="true">https://kannada.asianetnews.com/politics/karnataka-cabinet-reshuffle-basavaraj-rayaraddy-on-congress-mlas-visit-delhi-rav/articleshow-w9it1vb</guid>
            <pubDate>Wed, 15 Apr 2026 08:01:38 +0530</pubDate>
            <description><![CDATA[ಮೇ 4ರ ನಂತರ ಸಚಿವ ಸಂಪುಟ ಪುನರ್&zwnj; ರಚನೆಯಾಗುವ ಸಾಧ್ಯತೆಯಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಈಗಿರುವ 25 ಸಚಿವರನ್ನು ಕೈಬಿಟ್ಟು ಹೊಸಬರು ಮತ್ತು ಹಿರಿಯರಿಗೆ ಅವಕಾಶ ನೀಡಿದರೆ ಸರ್ಕಾರ ಇನ್ನಷ್ಟು ಕ್ರಿಯಾಶೀಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp7ff5x399dqb9k62kv03psa,imgname-----------------------2026-04-15t075246.623-1776220084131.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುಕನೂರು (ಏ.15)&lt;/strong&gt;: ಮೇ 4ರ ನಂತರ ಸಚಿವ ಸಂಪುಟ ಪುನರ್&zwnj; ರಚನೆ ಬಗ್ಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರು ಹಾಗೂ ವರಷ್ಠರು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಬದಲಾವಣೆ ಆದರೆ ಒಳ್ಳೆಯದು, ಬದಲಾವಣೆ ಅಗತ್ಯವಿದೆ, ಈಗಿರುವ 25 ಸಚಿವರನ್ನು ಕೈಬಿಟ್ಟು ಹೊಸಬರು, ಹಿರಿಯರಿಗೆ ಅವಕಾಶ ನೀಡಿದರೆ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.&lt;/p&gt;&lt;p&gt;ಪಟ್ಟಣದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಿ ಎಂದು ಕೆಲ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಭೇಟಿ ಆಗಿದ್ದಾರೆ. ಈಗಾಗಲೇ ಸಿಎಂ ಸಹ ಪಕ್ಷದ ವರಿಷ್ಠರನ್ನು ಭೇಟಿ ಆಗಲು ಸೂಚನೆ ನೀಡಿದ್ದಾರೆ ಎಂದರು.&lt;/p&gt;&lt;h2&gt;ಶಾಸಕರಾದವರು ಮಂತ್ರಿ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ?&lt;/h2&gt;&lt;p&gt;ಶಾಸಕರಾದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನ್ನಿಲ್ಲ. ಮಂತ್ರಿ ಮಾಡ್ತೇನೆ ಅಂದ್ರೇ ನಾನು ಬೇಡ ಅನ್ನಲು ಆಗುತ್ತಾ, ಸಿಎಂ ಆಗುತ್ತೇನೆ ಅಂದ್ರೆ ಬೇಡ ಅನ್ನಲ್ಲ, ಪ್ರಧಾನಿ ಮಂತ್ರಿ ಆಗ್ತೇನೆ ಅಂದ್ರೇ ಬೇಡ ಅನ್ನಲು ಆಗುತ್ತಾ, ಆದರೆ ಆಗಬೇಕಲ್ಲ. ಅದಕ್ಕಾಗಿ ಒಂದು ಚೌಕಟ್ಟು ಇದೆ. ಆ ಚೌಕಟ್ಟಿನಲ್ಲಿ ಮಂತ್ರಿ ಮಾಡುತ್ತಾರೆ. ಮಂತ್ರಿ ಆಗುವವರ ಬಗ್ಗೆ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳಬೇಕು ಎಂದರು.&lt;/p&gt;&lt;h3&gt;ಇವರೇ ಕೆಲ ಜನ ಕಾಯಂ ಇರಬೇಕು ಅಂದ್ರೆ ಹೇಗೆ?&lt;/h3&gt;&lt;p&gt;ಸಿಎಂ ಸೇರಿ 34 ಜನ ಸಚಿವರಿದ್ದಾರೆ. ಅದರಲ್ಲಿ 25 ಜನರನ್ನು ತೆಗೆದು ಹೊಸಬರನ್ನು ಮಂತ್ರಿ ಮಾಡಲಿ, ಎಲ್ಲರಿಗೂ ಅನುಭವ ಬರುತ್ತದೆ. ಇವರೇ ಕೆಲ ಜನ ಕಾಯಂ ಇರಬೇಕು ಅಂದರೆ ಹೇಗೆ ಎಂದರು.&lt;/p&gt;&lt;p&gt;ನನ್ನ ಮಂತ್ರಿ ಮಾಡುವುದು ಪಕ್ಷಕ್ಕೆ ಬಿಟ್ಟಿದ್ದು: ನಾನು ಸಹ ಹಲವು ಸಾರಿ ಗೆದ್ದು ಬಂದಿದ್ದೇನೆ, ಆದ್ರೂ ಮಂತ್ರಿ ಮಾಡಿಲ್ಲ, ನನ್ನನ್ನು ಮಂತ್ರಿ ಮಾಡುವುದು ಬಿಡುವುದು ಪಕ್ಷಕ್ಕೆ ಬಿಟ್ಟಿದ್ದು, ಪಕ್ಷಕ್ಕೆ ನಿಷ್ಠರಾಗಿದ್ದೇವೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಇದೊಂದು ಸುಮ್ನೇ ಪೋಸ್ಟ್ ಕೊಟ್ಟಿದ್ದಾರೆ. ಸುಮ್ನೇ ಸಿಎಂ ಜತೆ ಒಳ್ಳೆ ಬಜೆಟ್ ಕೊಡುತ್ತೇವೆ. ಆದರೆ ಯಾವುದೇ ಅಧಿಕಾರ ಇಲ್ಲ. ಮಂತ್ರಿ ಆದರೆ ಇಲಾಖೆಯ ಕಾರ್ಯ ಮಾಡಲು ಸಾಧ್ಯ. ಒಳ್ಳೆ ಜನ ಬರಬೇಕು. ಒಳ್ಳೆ ಜನ ಮಂತ್ರಿಗಳಾಗಬೇಕು. ಇನ್ನೂ 2 ವರ್ಷಗಳ ಕಾಲ ಜನರಿಗೆ ಒಳ್ಳೆ ಆಡಳಿತ ನೀಡಬೇಕು ಎಂಬುದು ನನ್ನ ಆಸೆ ಎಂದರು.&lt;/p&gt;&lt;p&gt;ಸಿಎಂ ಮಂತ್ರಿ ಮಂಡಲ ಬದಲಾವಣೆ ಬಗ್ಗೆ ಯಾವುದೇ ಮೀಟಿಂಗ್ ಕರೆದಿಲ್ಲ, ಏ.15ರಂದು ಬಜೆಟ್ ಮಾಡಿದ ಎಲ್ಲ ಅಧಿಕಾರಿಗಳಿಗೆ ಸಾಂಪ್ರದಾಯಕವಾಗಿ ಔತಣಕೂಟ ಸಿಎಂ ಕೊಡುತ್ತಿದ್ದಾರೆ. ಮಂತ್ರಿ ಮಂಡಲಕ್ಕೂ ಅಧಿಕಾರಿಗಳ ಔತಣಕೂಟಕ್ಕೂ ಯಾವುದೇ ಸಂಬಂಧವಿಲ್ಲ. ಮೇ. 4 ನಂತರ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರು, ವರಿಷ್ಠರು ಕುಳಿತುಕೊಂಡು ಬದಲಾವಣೆ ಮಾಡಬೇಕಾದ ಅವಶ್ಯಕತೆ ಇದೆ, ಬದಲಾವಣೆ ಆದರೆ ಒಳ್ಳೆಯದು ಎಂದರು.&lt;/p&gt;&lt;p&gt;&lt;strong&gt;ಮಂತ್ರಿ ಆದರೂ ಖುಷಿ ಆಗದಿದ್ದರೂ ಖುಷಿ&lt;/strong&gt;&lt;/p&gt;&lt;p&gt;ಮಂತ್ರಿ ಆಗುವುದು ಖಚಿತವಲ್ಲವೇ ಎಂಬ ಪ್ರಶ್ನೆಗೆ, ನಾನು ಹೇಗೆ ಹೇಳಲಿ, ಮಂತ್ರಿ ಆದರೂ ಖುಷಿ ಆಗದಿದ್ದರೂ ಖುಷಿ. ಜನರ ಕೆಲಸ ಮಾಡುತ್ತಾ ಇರುತ್ತೇನೆ ಎಂದರು.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-cabinet-reshuffle-basavaraj-rayaraddy-on-congress-mlas-visit-delhi-rav/articleshow-w9it1vb"/>
        </item>
        <item>
            <title><![CDATA[ಬಿಸಿಲಿಗೆ ಇಬ್ಬರು ಭಕ್ತರ ಸಾವು ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಅಂಜನಾದ್ರಿ ಬೆಟ್ಟಕ್ಕೆ ಪ್ರವೇಶಕ್ಕಿಲ್ಲ ಅವಕಾಶ!]]></title>
            <link>https://kannada.asianetnews.com/karnataka-districts/koppal-heatwave-entry-restricted-to-anjanadri-hill-after-two-devotee-deaths-gdp/articleshow-xqam4ir</link>
            <guid isPermaLink="true">https://kannada.asianetnews.com/karnataka-districts/koppal-heatwave-entry-restricted-to-anjanadri-hill-after-two-devotee-deaths-gdp/articleshow-xqam4ir</guid>
            <pubDate>Sat, 18 Apr 2026 16:07:49 +0530</pubDate>
            <description><![CDATA[ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚುತ್ತಿರುವ ಉರಿಬಿಸಿಲಿನಿಂದಾಗಿ ಜಿಲ್ಲಾಡಳಿತವು ಮಧ್ಯಾಹ್ನ 11 ರಿಂದ ಸಂಜೆ 4 ರವರೆಗೆ ಭಕ್ತರ ಪ್ರವೇಶವನ್ನು ನಿಷೇಧಿಸಿದೆ. ಇತ್ತೀಚೆಗೆ ಇಬ್ಬರು ಭಕ್ತರು ಬಿಸಿಲಿನ ತಾಪದಿಂದ ಮೃತಪಟ್ಟ ಹಿನ್ನೆಲೆಯಲ್ಲಿ, ಆರೋಗ್ಯದ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jwyr5a91xy3br1bgq9pr2431,imgname-----------------------2025-06-05t060340.974-1749083662625.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ: &lt;/strong&gt;ಉರಿಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಮಧ್ಯಾಹ್ನದ ವೇಳೆ ಬೆಟ್ಟ ಏರುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ಗಮನಿಸಿ, ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.&lt;/p&gt;&lt;h2&gt;575 ಮೆಟ್ಟಿಲುಗಳನ್ನು ಏರಿ ದರ್ಶನ&lt;/h2&gt;&lt;p&gt;ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭಕ್ತರು ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ವಿಶೇಷವಾಗಿ ವಾರಾಂತ್ಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಉರಿಬಿಸಿಲಿನ ನಡುವೆಯೂ 575 ಮೆಟ್ಟಿಲುಗಳನ್ನು ಏರಿ ದರ್ಶನ ಪಡೆಯುವುದು ಅನೇಕ ಮಂದಿಗೆ ಸವಾಲಾಗುತ್ತಿದೆ.&lt;/p&gt;&lt;h2&gt;ಇಬ್ಬರ ಸಾವು&lt;/h2&gt;&lt;p&gt;ಕಳೆದ 2&ndash;3 ತಿಂಗಳ ಅವಧಿಯಲ್ಲಿ, ಬೆಟ್ಟ ಏರಿ ದರ್ಶನ ಪಡೆದ ಬಳಿಕ ಉಸಿರಾಟದ ತೊಂದರೆ ಮತ್ತು ಬಿಸಿಲಿನ ತಾಪದಿಂದ ಇಬ್ಬರು ಭಕ್ತರು ಮೃತಪಟ್ಟಿದ್ದಾರೆ. ಮಾರ್ಚ್ ತಿಂಗಳಲ್ಲಿ ಗುಜರಾತ್ ಮೂಲದ ಭಕ್ತನೊಬ್ಬ ಮೆಟ್ಟಿಲು ಏರುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದರೆ, ಏಪ್ರಿಲ್ 1ರಂದು ಮಧ್ಯಾಹ್ನ ವೇಳೆಯಲ್ಲಿ ದಾವಣಗೆರೆ ಮೂಲದ ಮತ್ತೊಬ್ಬ ಭಕ್ತ ಗರ್ಭಗುಡಿಯಲ್ಲಿ ದರ್ಶನ ಪಡೆದ ಬಳಿಕ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ದುರ್ಘಟನೆಗಳು ಜಿಲ್ಲಾಡಳಿತವನ್ನು ಎಚ್ಚರಿಕೆಗೆ ತಂದಿವೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ದರ್ಶನ ಸಮಯದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಅದರಂತೆ, ಭಕ್ತರಿಗೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಬೆಟ್ಟ ಏರಲು ಸಂಪೂರ್ಣ ನಿರ್ಬಂಧ ಹೇರಲಾಗಿದೆ.&lt;/p&gt;&lt;h2&gt;ಬಿಸಿಲಿನ ತಾಪದಿಂದ ನಿರ್ಜಲೀಕರಣ, ಉಸಿರಾಟದ ತೊಂದರೆ&lt;/h2&gt;&lt;p&gt;ಬಿಸಿಲಿನ ತಾಪದಿಂದ ನಿರ್ಜಲೀಕರಣ, ಉಸಿರಾಟದ ತೊಂದರೆ, ದೌರ್ಬಲ್ಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಕ್ತರ ಆರೋಗ್ಯ ರಕ್ಷಣೆ ಮುಖ್ಯ ಉದ್ದೇಶವಾಗಿದ್ದು, ಯಾವುದೇ ಅಪಾಯವನ್ನು ತಪ್ಪಿಸುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.&lt;/p&gt;&lt;p&gt;ಜಿಲ್ಲಾಡಳಿತದ ಈ ನಿರ್ಧಾರವನ್ನು ಭಕ್ತರು ಸ್ವಾಗತಿಸಿದ್ದು, ಬೆಟ್ಟದ ಮೇಲ್ಭಾಗದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲು ಹಾಗೂ ತುರ್ತು ಚಿಕಿತ್ಸೆ ಸೌಲಭ್ಯಗಳನ್ನು ಒದಗಿಸಲು ಮನವಿ ಮಾಡಿದ್ದಾರೆ. ಹೆಚ್ಚುತ್ತಿರುವ ಬಿಸಿಲಿನ ತಾಪಮಾನವನ್ನು ಮನಗಂಡು, ಭಕ್ತರು ಕೂಡ ಸುರಕ್ಷತಾ ಸೂಚನೆಗಳನ್ನು ಪಾಲಿಸಿ, ನಿರ್ದಿಷ್ಟ ಸಮಯದಲ್ಲಿ ಮಾತ್ರ ದರ್ಶನಕ್ಕೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;&lt;p&gt;ಒಟ್ಟಾರೆ, ಅಂಜನಾದ್ರಿ ಬೆಟ್ಟದಲ್ಲಿ ಭಕ್ತರ ಸುರಕ್ಷತೆಯನ್ನು ಕಾಪಾಡಲು ಕೈಗೊಂಡಿರುವ ಈ ಕ್ರಮಗಳು ತಾತ್ಕಾಲಿಕವಾದರೂ ಅಗತ್ಯವಾಗಿದ್ದು, ಬಿಸಿಲಿನ ತೀವ್ರತೆ ಕಡಿಮೆಯಾಗುವವರೆಗೆ ಮುಂದುವರಿಯುವ ಸಾಧ್ಯತೆ ಇದೆ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/koppal-heatwave-entry-restricted-to-anjanadri-hill-after-two-devotee-deaths-gdp/articleshow-xqam4ir"/>
        </item>
    </channel>
</rss>
