<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 26 Aug 2026 16:05:30 +0530</lastBuildDate>
        <atom:link href="https://kannada.asianetnews.com/rss/koppal" rel="self" type="application/rss+xml"/>
        <item>
            <title><![CDATA[Koppal: ಚಿರತೆ ಆತಂಕದ ಬೆನ್ನಲ್ಲೇ ಗಂಗಾವತಿಯಲ್ಲಿ ಹುಲಿ ಪ್ರತ್ಯಕ್ಷ: ಅರಣ್ಯ ಇಲಾಖೆ ಹೈ ಅಲರ್ಟ್!]]></title>
            <link>https://kannada.asianetnews.com/karnataka-districts/tiger-spotted-in-gangavathi-forest-cctv-footage-triggers-alert-gvd/articleshow-095g6xy</link>
            <guid isPermaLink="true">https://kannada.asianetnews.com/karnataka-districts/tiger-spotted-in-gangavathi-forest-cctv-footage-triggers-alert-gvd/articleshow-095g6xy</guid>
            <pubDate>Sun, 23 Aug 2026 22:34:52 +0530</pubDate>
            <description><![CDATA[&lt;p&gt;Gangavathi: ತೆಂಬಾ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಯವರು ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿರುವುದು ಇದೀಗ ದೃಢಪಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qrh00w1m7454q4xa4ns0p6,imgname-j-1787503869980.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಆ.23): &lt;/strong&gt;ತಾಲೂಕಿನ ಸಮೀಪದ ತೆಂಬಾ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಯವರು ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿರುವುದು ಇದೀಗ ದೃಢಪಟ್ಟಿದೆ.&lt;/p&gt;&lt;p&gt;ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಬ್ಬಲಗುಡ್ಡ, ಹೇಮಗುಡ್ಡ, ಚಿಕ್ಕಬೆಣಕಲ್, ಹಿರೇಬೆಣಕಲ್, ಸಾಣಾಪುರ ಸೇರಿದಂತೆ ಸುತ್ತಮುತ್ತಲಿನ ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.&lt;/p&gt;&lt;p&gt;ಅರಣ್ಯ ಇಲಾಖೆ ಸಿಬ್ಬಂದಿ ವಾಹನಗಳ ಮೂಲಕ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಧ್ವನಿವರ್ಧಕದ ಮೂಲಕ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅಗತ್ಯವಿಲ್ಲದೆ ಅರಣ್ಯ ಪ್ರದೇಶಕ್ಕೆ ತೆರಳದಂತೆ ಹಾಗೂ ರಾತ್ರಿ ವೇಳೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.&lt;/p&gt;&lt;p&gt;&lt;strong&gt;ಗಂಗಾವತಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಹುಲಿ ಪತ್ತೆ?&lt;/strong&gt;&lt;/p&gt;&lt;p&gt;ಗಂಗಾವತಿ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಗೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದರಿಂದ ಸ್ಥಳೀಯರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಹುಲಿಯ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು, ಅದನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.&lt;/p&gt;&lt;p&gt;ಈ ಹಿಂದೆ ದುರ್ಗಾಬೆಟ್ಟ ಹಾಗೂ ವಿರೂಪಾಪುರಗಡ್ಡೆ ಭಾಗಗಳಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದವು. ಚಿರತೆ ದಾಳಿಯಿಂದ ಇಬ್ಬರು ಮೃತಪಟ್ಟ ಘಟನೆಗಳೂ ನಡೆದಿದ್ದವು. ಇದೀಗ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಣ್ಯ ಇಲಾಖೆ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಿದೆ.&lt;/p&gt;&lt;p&gt;&lt;strong&gt;ಜನರು ಎಚ್ಚರಿಕೆಯಿಂದ ಇರುವಂತೆ ಎಚ್.ಆರ್. ಶ್ರೀನಾಥ ಮನವಿ&lt;/strong&gt;&lt;/p&gt;&lt;p&gt;ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚಿನ ಜಾಗರೂಕತೆ ವಹಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಗಂಗಾವತಿ ತಾಲೂಕಿನಲ್ಲಿ ಈ ಹಿಂದೆಯೂ ಚಿರತೆಗಳು ಜನರ ಮೇಲೆ ದಾಳಿ ನಡೆಸಿದ ಘಟನೆಗಳು ನಡೆದಿವೆ. ಹೀಗಾಗಿ ಹುಲಿ ಕಾಣಿಸಿಕೊಂಡಿರುವ ಸಂದರ್ಭದಲ್ಲಿ ಮತ್ತೊಂದು ಅಹಿತಕರ ಘಟನೆ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಹುಲಿಯ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು, ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.&lt;/p&gt;&lt;p&gt;&lt;strong&gt;ನಾಳೆ ಅರಣ್ಯ ಇಲಾಖೆ ಕಾರ್ಯಾಚರಣೆ&lt;/strong&gt;&lt;/p&gt;&lt;p&gt;ಗಂಗಾವತಿ ತಾಲೂಕಿನ ಆನೆಗೊಂದಿ ಅರಣ್ಯ ಪ್ರದೇಶದ ಸರ್ವೆ ನಂ.1ರಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಹುಲಿಯ ಚಲನವಲನದ ಮೇಲೆ ನಿಗಾ ಇರಿಸಿರುವ ಅಧಿಕಾರಿಗಳು, ಆಗಸ್ಟ್ 24ರಂದು ಹುಲಿ ಸೆರೆ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ ಅವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ಸೂಚನೆ ನೀಡಿದ್ದು, ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಸೂಚನೆ&lt;/strong&gt;&lt;/p&gt;&lt;p&gt;ಹುಲಿ ಸೆರೆ ಕಾರ್ಯಾಚರಣೆ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಪ್ರದೇಶದತ್ತ ತೆರಳದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲದೆ, ದನಕರುಗಳನ್ನು ಅರಣ್ಯ ಪ್ರದೇಶಕ್ಕೆ ಮೇಯಲು ಬಿಡದಂತೆ ಎಚ್ಚರಿಕೆ ನೀಡಲಾಗಿದೆ. ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ ಜನರು ಗುಂಪು ಸೇರುವುದು ಅಥವಾ ಅರಣ್ಯ ಪ್ರದೇಶಕ್ಕೆ ತೆರಳುವುದರಿಂದ ಅಪಾಯ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.&lt;/p&gt;&lt;p&gt;&lt;strong&gt;ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಕ್ರಮ&lt;/strong&gt;&lt;/p&gt;&lt;p&gt;ಹುಲಿ ಸೆರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಮಾನವ-ವನ್ಯಜೀವಿ ಸಂಘರ್ಷಕ್ಕೆ ಅವಕಾಶವಾಗದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಸ್&zwnj;ಪಿ ರಾಮ್ ಎಲ್. ಅರಸಿದ್ದಿ ಸೂಚಿಸಿದ್ದಾರೆ. ಸದ್ಯ ಆನೆಗೊಂದಿ ಅರಣ್ಯ ಪ್ರದೇಶದಲ್ಲಿ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಆ.24ರ ಕಾರ್ಯಾಚರಣೆಯತ್ತ ಸ್ಥಳೀಯರ ಗಮನ ನೆಟ್ಟಿದೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/tiger-spotted-in-gangavathi-forest-cctv-footage-triggers-alert-gvd/articleshow-095g6xy"/>
        </item>
        <item>
            <title><![CDATA[‘ಜೈಲಿಗೆ ಕಳಿಸ್ತೇನೆ’: ದೇವಸ್ಥಾನ ಅನುದಾನ ದುರ್ಬಳಕೆ ಆರೋಪಕ್ಕೆ ಜನಾರ್ದನ ರೆಡ್ಡಿ ಖಡಕ್ ವಾರ್ನಿಂಗ್!]]></title>
            <link>https://kannada.asianetnews.com/karnataka-districts/janardhana-reddy-reacts-to-temple-fund-misuse-allegations-in-gangavathi-gvd/articleshow-1m2b77h</link>
            <guid isPermaLink="true">https://kannada.asianetnews.com/karnataka-districts/janardhana-reddy-reacts-to-temple-fund-misuse-allegations-in-gangavathi-gvd/articleshow-1m2b77h</guid>
            <pubDate>Fri, 21 Aug 2026 21:39:37 +0530</pubDate>
            <description><![CDATA[&lt;p&gt;ಕಾಮಗಾರಿಗಳಿಗೆ ವೈಯಕ್ತಿಕವಾಗಿ ಸುಮಾರು ₹10 ಕೋಟಿ ಅನುದಾನ ನೀಡಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿಗೆ ನೀಡಿರುವ ಅನುದಾನ ದುರ್ಬಳಕೆಯಾಗಲು ಸಾಧ್ಯವೇ ಇಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0jh1reaz9vr7has9phpgs1w,imgname-bjv-1787328258506.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಆ.21): &lt;/strong&gt;ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವೈಯಕ್ತಿಕವಾಗಿ ಸುಮಾರು ₹10 ಕೋಟಿ ಅನುದಾನ ನೀಡಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿಗೆ ನೀಡಿರುವ ಅನುದಾನ ದುರ್ಬಳಕೆಯಾಗಲು ಸಾಧ್ಯವೇ ಇಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳ ಹಣ ದುರ್ಬಳಕೆಯಾಗಿದೆ ಎಂದು ಕೆಲವರು ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದರು.&lt;/p&gt;&lt;p&gt;&lt;strong&gt;ಆರ್&zwnj;ಟಿಐ ನೆಪದಲ್ಲಿ ಅಪಪ್ರಚಾರ: ರೆಡ್ಡಿ ಆರೋಪ&lt;/strong&gt;&lt;/p&gt;&lt;p&gt;ನಗರದ ಕರವೇ ಮುಖಂಡರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದು ದೇವಸ್ಥಾನಗಳ ಅಭಿವೃದ್ಧಿಗೆ ಬಿಡುಗಡೆಯಾದ ಹಣ ದುರ್ಬಳಕೆಯಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದರು. &lsquo;ಮಾಹಿತಿ ಹಕ್ಕಿನ ನೆಪದಲ್ಲಿ ಕೆಲ ಇಲಾಖೆಗಳಲ್ಲಿ ಬ್ಲಾಕ್&zwnj;ಮೇಲ್ ಮಾಡಿದ ಉದಾಹರಣೆಗಳಿವೆ. ನನ್ನ ಹಿಂದೆ ಇದ್ದುಕೊಂಡೇ ಇಂತಹ ಕೆಲಸಗಳಿಗೆ ಮುಂದಾಗಿರುವವರು ಇದೀಗ ನನ್ನ ವಿರುದ್ಧ ಕಪ್ಪುಚುಕ್ಕೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ&rsquo; ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಜೈಲಿಗೆ ಕಳುಹಿಸುವ ಕ್ರಮವನ್ನೂ ಕೈಗೊಳ್ಳುತ್ತೇನೆ ಎಂದು ಜನಾರ್ದನ ರೆಡ್ಡಿ ಎಚ್ಚರಿಕೆ ನೀಡಿದರು.&lt;/p&gt;&lt;p&gt;&lt;strong&gt;ನಗರ, ಗ್ರಾಮೀಣ ಭಾಗದ ದೇಗುಲಗಳಿಗೂ ಅನುದಾನ&lt;/strong&gt;&lt;/p&gt;&lt;p&gt;ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳ ಹಲವು ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದು ಶಾಸಕ ಹೇಳಿದರು. ಕಾಮಗಾರಿಗಳನ್ನು ಗುತ್ತಿಗೆದಾರರ ಸಮ್ಮುಖದಲ್ಲಿ ನಡೆಸಲಾಗುತ್ತಿದ್ದು, ಕೆಲವು ದೇವಸ್ಥಾನಗಳಿಗೆ ಕಾಮಗಾರಿ ಆರಂಭಿಸಲು ಮುಂಗಡ ಹಣವನ್ನೂ ನೀಡಲಾಗಿದೆ ಎಂದು ತಿಳಿಸಿದರು. 2024-25ನೇ ಸಾಲಿನಲ್ಲಿ ನಗರದ ಕೆಲವು ದೇವಸ್ಥಾನಗಳಿಗೆ ನೀಡಿರುವ ಅನುದಾನದ ಕುರಿತು ದುರ್ಬಳಕೆ ಆರೋಪ ಮಾಡುತ್ತಿರುವವರ ಮೇಲೆ ನಿಗಾ ಇಡಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಅಂಜನಾದ್ರಿ ದೇವಸ್ಥಾನದ ಚಿನ್ನದ ವಸ್ತುಗಳ ವಿಚಾರ&lt;/strong&gt;&lt;/h2&gt;&lt;p&gt;ಅಂಜನಾದ್ರಿಯ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಚಿನ್ನದ ವಸ್ತುಗಳನ್ನು ನೀಡಿದ ಸಂದರ್ಭದಲ್ಲೂ ಕೆಲವರು ಅಪಪ್ರಚಾರ ಮಾಡಿದ್ದರು ಎಂದು ಜನಾರ್ದನ ರೆಡ್ಡಿ ಹೇಳಿದರು. ಆದರೆ, ದೇಣಿಗೆ ನೀಡಿದ ಭಕ್ತರು ಸಂಬಂಧಿಸಿದ ಲೆಕ್ಕಪತ್ರಗಳನ್ನು ನೀಡಿದ್ದಾರೆ. ಹೀಗಾಗಿ ದೇವಸ್ಥಾನಗಳ ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ತಮ್ಮ ಹಿಂದೆ ಇದ್ದು ಇದೀಗ ಅಪಪ್ರಚಾರಕ್ಕೆ ಮುಂದಾಗಿರುವ ಕರವೇ ರಾಜ್ಯಾಧ್ಯಕ್ಷ ಎಂದು ಹೇಳಿಕೊಳ್ಳುವ ವ್ಯಕ್ತಿಯ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;&lsquo;ದೇವಸ್ಥಾನಗಳ ಅನುದಾನ ದುರ್ಬಳಕೆಯಾಗಿಲ್ಲ. ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ&rsquo; ಎಂದು ಜನಾರ್ದನ ರೆಡ್ಡಿ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ, ಯಮೂನೂರು ಚೌಡ್ಕಿ, ವೀರೇಶ ಬಲಕುಂದಿ, ಚಂದ್ರು ಹಿರಿಯೂರು, ಡಿ.ಕೆ. ಆಗೋಲಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/janardhana-reddy-reacts-to-temple-fund-misuse-allegations-in-gangavathi-gvd/articleshow-1m2b77h"/>
        </item>
        <item>
            <title><![CDATA[ಕೊಪ್ಪಳ ನೆಲದಲ್ಲಿ ಅಡಗಿದ್ದ ವಿಜಯನಗರ, ಕೆಳದಿ ಅರಸರ ಕಾಲದ ಅಪರೂಪದ ಲಿಂಗಮುದ್ರೆ ಕಲ್ಲು ಪತ್ತೆ, ಏನಿದರ ವಿಶೇಷತೆ?]]></title>
            <link>https://kannada.asianetnews.com/karnataka-districts/rare-vijayanagara-era-lingamudra-boundary-stone-discovered-in-kanakagiri-koppal-gdp/articleshow-24mk1yu</link>
            <guid isPermaLink="true">https://kannada.asianetnews.com/karnataka-districts/rare-vijayanagara-era-lingamudra-boundary-stone-discovered-in-kanakagiri-koppal-gdp/articleshow-24mk1yu</guid>
            <pubDate>Wed, 12 Aug 2026 10:48:40 +0530</pubDate>
            <description><![CDATA[ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ದೇವಲಾಪುರದಲ್ಲಿ, ವಿಜಯನಗರ ಮತ್ತು ಕೆಳದಿ ಅರಸರ ಕಾಲದ ಅಪರೂಪದ 'ಲಿಂಗಮುದ್ರೆ ಕಲ್ಲು' ಪತ್ತೆಯಾಗಿದೆ. ಭೂಮಿಯ ಗಡಿ ಗುರುತಿಸಲು ಬಳಸುತ್ತಿದ್ದ ಈ ಕಲ್ಲಿನ ಶೋಧನೆಯು, ಈ ಪ್ರದೇಶದಲ್ಲಿ ಮತ್ತಷ್ಟು ಐತಿಹಾಸಿಕ ಕುರುಹುಗಳು ಸಿಗುವ ಸಾಧ್ಯತೆಯನ್ನು ಹೆಚ್ಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzt6an9j9tqphknmb6vb191n,imgname-lingamudra-boundary-stone-in-koppal-1786511709489.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ:&lt;/strong&gt; ಕನಕಗಿರಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ವಿಜಯನಗರ ಹಾಗೂ ಕೆಳದಿ ಅರಸರ ಆಳ್ವಿಕೆಯ ಕಾಲಕ್ಕೆ ಸೇರಿದ, ಇದುವರೆಗೂ ಎಲ್ಲೂ ಅಪ್ರಕಟಿತವಾಗಿದ್ದ ಅಪರೂಪದ 'ಲಿಂಗಮುದ್ರೆ ಕಲ್ಲು' ಒಂದನ್ನು ಸಂಶೋಧಕ ಡಾ. ಯಮನೂರ ನಾಯಕ ವಡಕಿ ಪತ್ತೆ ಹಚ್ಚಿದ್ದಾರೆ.&lt;/p&gt;&lt;h2&gt;&lt;strong&gt;ಭೂಮಿಯ ಗಡಿ ಗುರುತಿನ ಲಿಂಗಮುದ್ರೆ&lt;/strong&gt;&lt;/h2&gt;&lt;p&gt;ದೇವಲಾಪುರ ಗ್ರಾಮದ ನಿವಾಸಿ ನಾಗಪ್ಪ ತಳವಾರ ಅವರ ಮನೆಯ ಮುಂಭಾಗದಲ್ಲಿರುವ ಗುಂಡು ಕಲ್ಲಿನ ಮೇಲೆ ಈ ಲಿಂಗಮುದ್ರೆ ಕೆತ್ತನೆಯಾಗಿದೆ. ಪುರಾತನ ಕಾಲದಲ್ಲಿ ದಾನವಾಗಿ ನೀಡಲಾಗುತ್ತಿದ್ದ ಜಮೀನಿನ ನಾಲ್ಕೂ ಮೂಲೆಗಳ ಗಡಿಯನ್ನು ಗುರುತಿಸಲು ಈ ರೀತಿಯ ಲಿಂಗಮುದ್ರೆ ಕಲ್ಲುಗಳನ್ನು ನೆಡುವುದು ವಿಜಯನಗರ ಮತ್ತು ಕೆಳದಿ ಅರಸರ ಕಾಲದ ಸಂಪ್ರದಾಯವಾಗಿತ್ತು.&lt;/p&gt;&lt;h2&gt;ಕಲ್ಲಿನಲ್ಲಿರುವ ಪ್ರಮುಖ ಚಿಹ್ನೆಗಳು:&lt;/h2&gt;&lt;p&gt;&lt;strong&gt;ಶಿವಲಿಂಗ:&lt;/strong&gt; ಧಾರ್ಮಿಕ ಹಾಗೂ ರಾಜಮುದ್ರೆಯ ಸಂಕೇತ.&lt;/p&gt;&lt;p&gt;&lt;strong&gt;ಸೂರ್ಯ ಮತ್ತು ಚಂದ್ರ:&lt;/strong&gt; 'ಸೂರ್ಯ-ಚಂದ್ರರು ಇರುವವರೆಗೆ ಈ ದಾನ ಚಿರಸ್ಥಾಯಿಯಾಗಿರಲಿ' ಎಂಬ ಆಶಯವನ್ನು ಸೂಚಿಸುವ ಸಾಂಪ್ರದಾಯಿಕ ಸಂಕೇತಗಳು ಈ ಶಾಸನದಲ್ಲಿ ಬರೆಯಲಾಗಿದೆ.&lt;/p&gt;&lt;h2&gt;ಮತ್ತಷ್ಟು ಸಂಶೋಧನೆಗೆ ಅವಕಾಶ&lt;/h2&gt;&lt;p&gt;ಸಾಮಾನ್ಯವಾಗಿ ದಾನ ನೀಡಿದ ಭೂಮಿಯ ನಾಲ್ಕೂ ದಿಕ್ಕುಗಳಲ್ಲಿ ಇಂತಹ ಕಲ್ಲುಗಳನ್ನು ಸ್ಥಾಪಿಸಲಾಗುತ್ತಿತ್ತು. ಇದೀಗ ದೇವಲಾಪುರದಲ್ಲಿ ಒಂದು ಕಲ್ಲು ಪತ್ತೆಯಾಗಿದ್ದು, ಉಳಿದ ಮೂರು ದಿಕ್ಕುಗಳಲ್ಲೂ ಇಂತಹ ಕಲ್ಲುಗಳು ಇರುವ ಸಾಧ್ಯತೆಯಿದೆ. ಇದುವರೆಗಿನ ಯಾವುದೇ ಇತಿಹಾಸ ಸಂಶೋಧನೆಗಳಲ್ಲೂ ಒಂದೇ ಸ್ಥಳದ ನಾಲ್ಕೂ ದಿಕ್ಕುಗಳ ಲಿಂಗಮುದ್ರೆ ಕಲ್ಲುಗಳು ಸಂಪೂರ್ಣವಾಗಿ ದೊರೆತಿಲ್ಲ. ಆದರೆ, ದೇವಲಾಪುರದಲ್ಲಿ ವ್ಯವಸ್ಥಿತ ಶೋಧ ನಡೆಸಿದರೆ ಕನಿಷ್ಠ ಒಂದೆರಡು ಕಲ್ಲುಗಳಾದರೂ ಸಿಗುವ ಸಾಧ್ಯತೆಯಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಕಲ್ಲಿನ ಮೇಲೆ ಸೂರ್ಯ ಹಾಗೂ ಚಂದ್ರನ ಕೆತ್ತನೆ ಇರುವುದರಿಂದ, ಈ ಪ್ರದೇಶದ ಸುತ್ತಮುತ್ತ ಇನ್ನಷ್ಟು ಪ್ರಾಚೀನ ಶಾಸನಗಳು ಹಾಗೂ ವೀರಗಲ್ಲುಗಳು ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ಡಾ. ಯಮನೂರಪ್ಪ ವಡಕಿ ತಿಳಿಸಿದ್ದಾರೆ.&lt;/p&gt;&lt;h2&gt;ಏನಿದು ಲಿಂಗಮುದ್ರೆ ಕಲ್ಲು:&lt;/h2&gt;&lt;p&gt;ಲಿಂಗಮುದ್ರೆ ಕಲ್ಲು ಎಂದರೆ ಪ್ರಾಚೀನ ಹಾಗೂ ಮಧ್ಯಕಾಲೀನ ಕರ್ನಾಟಕದಲ್ಲಿ ಭೂಮಿಯ ಗಡಿಗಳನ್ನು, ದಾನ-ಧರ್ಮಗಳನ್ನು ಅಥವಾ ಜಮೀನಿನ ಹದ್ದುಗಳನ್ನು ಗುರುತಿಸಲು ಬಳಸುತ್ತಿದ್ದ ವಿಶೇಷ ಕೆತ್ತನೆಯುಳ್ಳ ಕಲ್ಲು. ಇವುಗಳ ಮೇಲೆ ಸಾಮಾನ್ಯವಾಗಿ ಶಿವಲಿಂಗ ಅಥವಾ ನಂದಿಯ ಚಿತ್ರದೊಂದಿಗೆ ಕೆಲವು ಧರ್ಮದ ಚಿಹ್ನೆಗಳು ಅಥವಾ ಶಾಸನಗಳು ಇರುತ್ತವೆ.&lt;/p&gt;&lt;p&gt;ಕರ್ನಾಟಕದ ಕೊಪ್ಪಳ (ಕನಕಗಿರಿ), ಶಿವಮೊಗ್ಗ, ಉಡುಪಿ (ಬಸ್ರೂರು) ಮುಂತಾದ ಜಿಲ್ಲೆಗಳಲ್ಲಿ ವಿಜಯನಗರ ಹಾಗೂ ಕೆಳದಿ ಕಾಲದ ಹಲವು ಲಿಂಗಮುದ್ರೆ ಕಲ್ಲುಗಳು ಇತ್ತೀಚಿನ ದಿನಗಳಲ್ಲಿ ಸಂಶೋಧಕರಿಗೆ ಸಿಕ್ಕಿವೆ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-vijayanagara-era-lingamudra-boundary-stone-discovered-in-kanakagiri-koppal-gdp/articleshow-24mk1yu"/>
        </item>
        <item>
            <title><![CDATA[ಹುಲಿಯ ಜಾಡು ಹಿಡಿದ ಅರಣ್ಯ ಇಲಾಖೆ: ಗಂಗಾವತಿಯಲ್ಲಿ ನಡೆಯುತ್ತಿದೆ ಮಹಾ ಕಾರ್ಯಾಚರಣೆ!]]></title>
            <link>https://kannada.asianetnews.com/karnataka-districts/koppal-where-did-the-tiger-come-from-mystery-deepens-after-gangavathi-near-anegundi-sighting-gvd/articleshow-46e94zf</link>
            <guid isPermaLink="true">https://kannada.asianetnews.com/karnataka-districts/koppal-where-did-the-tiger-come-from-mystery-deepens-after-gangavathi-near-anegundi-sighting-gvd/articleshow-46e94zf</guid>
            <pubDate>Mon, 24 Aug 2026 22:52:43 +0530</pubDate>
            <description><![CDATA[&lt;p&gt;Koppal News: ಗಂಗಾವತಿ ಸುತ್ತಮುತ್ತಲಿನ ಏಳು ಗುಡ್ಡಗಳ ಪ್ರದೇಶಗಳಲ್ಲಿ ಈ ಹಿಂದೆ ಚಿರತೆ, ಕರಡಿ ಸೇರಿದಂತೆ ಹಲವು ಕಾಡುಪ್ರಾಣಿಗಳು ಕಾಣಿಸಿಕೊಂಡಿದ್ದವು. ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಆನೆಗಳು ಹಾಗೂ ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಕಾರ್ಯಾಚರಣೆಯನ್ನೂ ನಡೆಸಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0tcpmdnzp0s53grvkqp7eqh,imgname-vjhv-1787592135087.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಆ.24): &lt;/strong&gt;ದಟ್ಟ ಅರಣ್ಯ ಪ್ರದೇಶಕ್ಕೆ ಹೆಸರಾದ ಕಿಷ್ಕಿಂದೆ ನಾಡು ಗಂಗಾವತಿಯ ಸುತ್ತಮುತ್ತ ಇದೀಗ ಹುಲಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನ ಆನೆಗೊಂದಿ ವ್ಯಾಪ್ತಿಯ ಸರ್ವೆ ನಂ.1ರ ತೆಂಬ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿದೆ. ಇದಕ್ಕೂ ಮುನ್ನ ಇದೇ ಹುಲಿ ಸಮೀಪದ ರೆಸಾರ್ಟ್&zwnj;ನ ಸಿಸಿ ಕ್ಯಾಮೆರಾದಲ್ಲೂ ಕಾಣಿಸಿಕೊಂಡಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಬಯಲುಸೀಮೆಗೆ ಹುಲಿ ಬಂದಿದ್ದಾದರೂ ಎಲ್ಲಿಂದ?&lt;/strong&gt;&lt;/p&gt;&lt;p&gt;ಗಂಗಾವತಿ ಸುತ್ತಮುತ್ತಲಿನ ಏಳು ಗುಡ್ಡಗಳ ಪ್ರದೇಶಗಳಲ್ಲಿ ಈ ಹಿಂದೆ ಚಿರತೆ, ಕರಡಿ ಸೇರಿದಂತೆ ಹಲವು ಕಾಡುಪ್ರಾಣಿಗಳು ಕಾಣಿಸಿಕೊಂಡಿದ್ದವು. ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಆನೆಗಳು ಹಾಗೂ ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಕಾರ್ಯಾಚರಣೆಯನ್ನೂ ನಡೆಸಿತ್ತು.&lt;/p&gt;&lt;p&gt;ಆದರೆ ಇದೀಗ ದಟ್ಟ ಅರಣ್ಯ ಪ್ರದೇಶದಿಂದ ಬಯಲುಸೀಮೆಗೆ ಹುಲಿ ಹೇಗೆ ಬಂದಿದೆ ಎಂಬುದು ಅರಣ್ಯ ಇಲಾಖೆಗೆ ಸವಾಲಾಗಿದೆ. ದಾಂಡೇಲಿ, ಬಂಡೀಪುರ, ಚಿಕ್ಕಮಗಳೂರು ಅಥವಾ ನಾಗರಹೊಳೆ ಭಾಗದ ಅರಣ್ಯ ಪ್ರದೇಶಗಳಿಂದ ಹುಲಿ ಬಂದಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಮತ್ತೊಂದೆಡೆ, ಕಮಲಾಪುರ ಬಳಿಯ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯದಿಂದ ಹುಲಿ ತಪ್ಪಿಸಿಕೊಂಡು ಬಂದಿರಬಹುದೇ ಎಂಬ ಅನುಮಾನವನ್ನೂ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಹುಲಿ ಕಾಣಿಸಿಕೊಂಡಿದ್ದರಿಂದ ಗ್ರಾಮಗಳಲ್ಲಿ ಆತಂಕ&lt;/strong&gt;&lt;/p&gt;&lt;p&gt;ಹುಲಿಯ ಚಲನವಲನ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಹಲವು ಗ್ರಾಮಗಳ ಜನರು ಆತಂಕಗೊಂಡಿದ್ದಾರೆ. ಮಲ್ಲಾಪುರ, ಸಂಗಾಪುರ, ರಾಮಪುರ, ಕಡೆಬಾಗಿಲು, ತೆಂಬ ಅರಣ್ಯ ಪ್ರದೇಶ, ಹಳೇ ಕುಮಟಾ, ಹೇಮಗುಡ್ಡ ಹಾಗೂ ಹಿರೇಬೆಣಕಲ್ ಸೇರಿದಂತೆ ಗುಡ್ಡಗಾಡು ಪ್ರದೇಶಗಳ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಚಿರತೆಗಳ ಹಾವಳಿಯಿಂದ ಆತಂಕಕ್ಕೊಳಗಾಗಿದ್ದ ಜನರಿಗೆ ಇದೀಗ ಹುಲಿ ಪ್ರತ್ಯಕ್ಷವಾಗಿರುವುದು ಮತ್ತಷ್ಟು ಭಯ ಹುಟ್ಟಿಸಿದೆ.&lt;/p&gt;&lt;p&gt;&lt;strong&gt;ಹುಲಿ ಸೆರೆಗೆ ಅರಣ್ಯ, ಪೊಲೀಸ್ ಇಲಾಖೆ ಸಜ್ಜು&lt;/strong&gt;&lt;/p&gt;&lt;p&gt;ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆಗೆ ಸಿದ್ಧತೆ ನಡೆಸಿವೆ. ಸೋಮವಾರ ವಿರುಪಾಪುರಗಡ್ಡೆಯ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಹಿರಿಯ ಅರಣ್ಯ ಅಧಿಕಾರಿಗಳು ಸಭೆ ನಡೆಸಿ ಮುಂದಿನ ಕಾರ್ಯಾಚರಣೆಯ ಕುರಿತು ಚರ್ಚಿಸಿದರು.&lt;/p&gt;&lt;p&gt;ಬಳ್ಳಾರಿ ಐಜಿಪಿ ಡಾ. ಹರ್ಷ ಗುಪ್ತಾ ಅವರು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ, ಹುಲಿಯ ಚಲನವಲನದ ಮೇಲೆ ನಿಗಾ ಇಟ್ಟು ಶೀಘ್ರವೇ ಅದನ್ನು ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಹುಲಿ ಯಾವ ಅರಣ್ಯ ಪ್ರದೇಶದಿಂದ ಬಂದಿರಬಹುದು ಎಂಬುದನ್ನು ಪತ್ತೆಹಚ್ಚುವುದು ಹಾಗೂ ಅದನ್ನು ಸೆರೆ ಹಿಡಿಯಲು ಕೈಗೊಳ್ಳಬೇಕಾದ ಕಾರ್ಯಾಚರಣೆ ಕುರಿತು ಚರ್ಚೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಬಂಡೀಪುರ ಅರಣ್ಯ ಪ್ರದೇಶದ ಹುಲಿ ಚಲನವಲನ ತಜ್ಞರ ನೆರವು ಪಡೆಯುವ ಬಗ್ಗೆಯೂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.&lt;/p&gt;&lt;p&gt;&lt;strong&gt;15 ಪೊಲೀಸ್ ಸಿಬ್ಬಂದಿ, 25ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ನಿಯೋಜನೆ&lt;/strong&gt;&lt;/p&gt;&lt;p&gt;ಹುಲಿ ಸೆರೆ ಕಾರ್ಯಾಚರಣೆಗೆ ಈಗಾಗಲೇ 15 ಪೊಲೀಸ್ ಸಿಬ್ಬಂದಿ ಹಾಗೂ 25ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ. ಹುಲಿಯನ್ನು ಸೆರೆ ಹಿಡಿಯಲು ಅಗತ್ಯವಿರುವ ಬೋನ್ ಸೇರಿದಂತೆ ವಿವಿಧ ಉಪಕರಣಗಳನ್ನು ಕೂಡ ಸಿದ್ಧಪಡಿಸಲಾಗಿದೆ.&lt;/p&gt;&lt;p&gt;ಸದ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಹುಲಿಯ ಚಲನವಲನದ ಆಧಾರದ ಮೇಲೆ ಅರಣ್ಯ ಇಲಾಖೆ ನಿಗಾ ವಹಿಸಿದ್ದು, ಹುಲಿ ಯಾವ ದಿಕ್ಕಿನಲ್ಲಿ ಸಂಚರಿಸುತ್ತಿದೆ ಮತ್ತು ಅದರ ಮುಂದಿನ ಚಲನವಲನ ಏನು ಎಂಬುದರ ಮೇಲೆ ಅಧಿಕಾರಿಗಳ ತಂಡ ಕಣ್ಣಿಟ್ಟಿದೆ. ಹುಲಿ ಸೆರೆ ಸಿಕ್ಕ ಬಳಿಕವೇ ಅದು ಎಲ್ಲಿಂದ ಬಂದಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ದೊರೆಯುವ ಸಾಧ್ಯತೆಯಿದೆ.&lt;/p&gt;&lt;p&gt;ಹುಲಿಯ ಚಲನ ವಲನ ಬಗ್ಗೆ ನಿಗಾವಹಿಸಲಾಗಿದೆ. ಈಗಾಗಲೇ ಸಿಸಿ ಕ್ಯಾಮರಗಳ ಮೂಲಕ ಕೆಲವೊಂದು ಅರಣ್ಯ ಪ್ರದೇಶಗಳನ್ನು ಗುರುತಿಸಲಾಗಿದ್ದು, ಯಾವ ರೀತಿಯಾಗಿ ಸೆರೆ ಹಿಡಿಯಬೇಕೆನ್ನುವದರ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯಲಾಗಿದೆ. ಶೀಘ್ರದಲ್ಲಿ ಹುಲಿಯನ್ನು ಸೆರೆ ಹಿಡಿದು ಬೇರೆ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ.&lt;strong&gt;-ಬಸವರಾಜ್ ವಲಯ ಅರಣ್ಯಾಧಿಕಾರಿಗಳು, ಗಂಗಾವತಿ&lt;/strong&gt;&lt;/p&gt;&lt;p&gt;ಗಂಗಾವತಿ ತಾಲೂಕಿನ 7 ಗುಡ್ಡಗಳ ಪ್ರದೇಶದಲ್ಲಿ ಹುಲಿಯು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮೊದಲನೇ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದರಿಂದ ಬೇರೆ ಪ್ರದೇಶದಿಂದ ಬಂದಿರಬಹುದೆಂದು ಉಹಿಸಲಾಗುತ್ತದೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ಹುಲಿಯನ್ನು ರಕ್ಷಿಸುವುದರ ಜೊತೆಗೆ ಜನರ ಆತಂಕ ತಪ್ಪಿಸಬೇಕು.&lt;strong&gt;-ಎಚ್.ಆರ್.ಶ್ರೀನಾಥ, ಮಾಜಿ ಎಂಎಲ್ಸಿ ಗಂಗಾವತಿ&lt;/strong&gt;&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-where-did-the-tiger-come-from-mystery-deepens-after-gangavathi-near-anegundi-sighting-gvd/articleshow-46e94zf"/>
        </item>
        <item>
            <title><![CDATA[ಭತ್ತದ ಕಣಜ ಗಂಗಾವತಿಯಲ್ಲಿ ತೆಲಂಗಾಣದ ‘ಅನ್ನಭಾಗ್ಯ’ ಅಕ್ಕಿ ಪತ್ತೆ! ರೈಸ್ ಮಿಲ್‌ನಲ್ಲಿ ಭಾರಿ ಗೋಲ್‌ಮಾಲ್!]]></title>
            <link>https://kannada.asianetnews.com/gallery/karnataka-districts/koppal-gangavathi-rice-mill-telangana-pds-anna-bhagya-rice-seized-investigation-6t7i0a5</link>
            <guid isPermaLink="true">https://kannada.asianetnews.com/gallery/karnataka-districts/koppal-gangavathi-rice-mill-telangana-pds-anna-bhagya-rice-seized-investigation-6t7i0a5</guid>
            <pubDate>Wed, 26 Aug 2026 09:16:23 +0530</pubDate>
            <description><![CDATA[ಭತ್ತದ ಕಣಜ ಗಂಗಾವತಿಯ ರೈಸ್ ಮಿಲ್&zwnj;ಗಳಲ್ಲಿ ನೆರೆಯ ತೆಲಂಗಾಣದ ಪಡಿತರ ಅಕ್ಕಿ ಅಕ್ರಮವಾಗಿ ಪತ್ತೆಯಾಗಿದೆ. ಈ ಅಕ್ಕಿಯನ್ನು ಪಾಲಿಶ್ ಮಾಡಿ, ಹೊಸ ಬ್ರ್ಯಾಂಡ್ ಹೆಸರಿನಲ್ಲಿ ದುಬಾರಿ ಬೆಲೆಗೆ ಮರು-ಮಾರಾಟ ಮಾಡುವ ಅಂತರರಾಜ್ಯ ಜಾಲದ ಶಂಕೆ ವ್ಯಕ್ತವಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0y23g1egb46gspy9ktcb7ss,imgname-talangana-rice-in-gangavathi-ricemill-1787715239982.jpg" type="image/jpeg" height="390" width="690"/>
            <content:encoded><![CDATA[ಭತ್ತದ ಕಣಜ ಗಂಗಾವತಿಯ ರೈಸ್ ಮಿಲ್&zwnj;ಗಳಲ್ಲಿ ನೆರೆಯ ತೆಲಂಗಾಣದ ಪಡಿತರ ಅಕ್ಕಿ ಅಕ್ರಮವಾಗಿ ಪತ್ತೆಯಾಗಿದೆ. ಈ ಅಕ್ಕಿಯನ್ನು ಪಾಲಿಶ್ ಮಾಡಿ, ಹೊಸ ಬ್ರ್ಯಾಂಡ್ ಹೆಸರಿನಲ್ಲಿ ದುಬಾರಿ ಬೆಲೆಗೆ ಮರು-ಮಾರಾಟ ಮಾಡುವ ಅಂತರರಾಜ್ಯ ಜಾಲದ ಶಂಕೆ ವ್ಯಕ್ತವಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.&lt;img&gt;&lt;p&gt;&lt;strong&gt;ಕೊಪ್ಪಳ (ಆ.26): ಭ&lt;/strong&gt;ತ್ತದ ಕಣಜ ಎಂದೇ ವಿಶ್ವವಿಖ್ಯಾತಿ ಪಡೆದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅಂತರರಾಜ್ಯ ಪಡಿತರ ಅಕ್ಕಿಯ ಅಕ್ರಮ ದಂಧೆಯೊಂದು ಬಯಲಿಗೆ ಬಂದಿದೆ. ಗಂಗಾವತಿಯ ಕೆಲ ಪ್ರಮುಖ ರೈಸ್ ಮಿಲ್&zwnj;ಗಳಲ್ಲಿ ನೆರೆಯ ತೆಲಂಗಾಣ ಸರ್ಕಾರದ 'ಅನ್ನಭಾಗ್ಯ' (ಪಡಿತರ) ಅಕ್ಕಿ ಮೂಟೆಗಳು ನೂರಾರು ಸಂಖ್ಯೆಯಲ್ಲಿ ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ತೀವ್ರ ಸಂಚಲನ ಹಾಗೂ ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.&lt;/p&gt;&lt;p&gt;ಉತ್ತಮ ಗುಣಮಟ್ಟದ ಸೋನಾ ಮಸೂರಿ ಭತ್ತಕ್ಕೆ ಹೆಸರಾದ ಗಂಗಾವತಿಗೆ ನೆರೆಯ ರಾಜ್ಯದಿಂದ ಪಡಿತರ ಅಕ್ಕಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂದಿದ್ದು ಯಾಕೆ ಎಂಬ ಪ್ರಶ್ನೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.&lt;/p&gt;&lt;img&gt;&lt;p&gt;&lt;strong&gt;ಪಾಲಿಶ್ ಮಾಡಿ ರೀ-ಪ್ಯಾಕ್ ಮಾಡುವ ಶಂಕೆ!&lt;/strong&gt;&lt;/p&gt;&lt;p&gt;ಮೂಲಗಳ ಪ್ರಕಾರ, ತೆಲಂಗಾಣದಲ್ಲಿ ಬಡವರಿಗೆ ವಿತರಿಸಲಾಗುವ ಉಚಿತ/ರಿಯಾಯಿತಿ ದರದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಕಲೆಕ್ಟ್ ಮಾಡಿ, ಲಾರಿಗಳ ಮೂಲಕ ಗಂಗಾವತಿಯ ರೈಸ್ ಮಿಲ್&zwnj;ಗಳಿಗೆ ತರಲಾಗುತ್ತಿದೆ. ಇಲ್ಲಿನ ಮಿಲ್&zwnj;ಗಳಲ್ಲಿ ಆ ಪಡಿತರ ಅಕ್ಕಿಯನ್ನು ಪಾಲಿಶ್ (Polish) ಮಾಡಿ, ಹೊಸ ಬ್ರ್ಯಾಂಡೆಡ್ ಚೀಲಗಳಿಗೆ ತುಂಬಿ, ಪ್ರೀಮಿಯಂ ಕ್ವಾಲಿಟಿ ಅಕ್ಕಿಯ ಹೆಸರಿನಲ್ಲಿ ಮುಕ್ತ ಮಾರುಕಟ್ಟೆಗೆ ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳ ದೌಡು: ತೀವ್ರ ಪರಿಶೀಲನೆ&lt;/strong&gt;&lt;/p&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ತಂಡವು ಗಂಗಾವತಿಯ ರೈಸ್ ಮಿಲ್&zwnj;ಗಳಿಗೆ ದಾಳಿ ನಡೆಸಿದ್ದು, ಪತ್ತೆಯಾಗಿರುವ ಅಕ್ಕಿ ಮೂಟೆಗಳು ಎಲ್ಲಿಂದ ಬಂದವು? ಇದಕ್ಕೆ ಸಂಬಂಧಿಸಿದ ಬಿಲ್ ಮತ್ತು ಇ-ವೇ ಬಿಲ್&zwnj;ಗಳು ಇವೆಯೇ? ಎಂಬ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ರೈಸ್ ಮಿಲ್&zwnj;ನಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಪ್ರತ್ಯಕ್ಷ!&lt;/strong&gt;&lt;/p&gt;&lt;p&gt;ಈ ಅಕ್ಕಿ ಪತ್ತೆಯಾದ ರೈಸ್ ಮಿಲ್&zwnj;ನಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ ಅವರು ದಿಢೀರ್ ಪ್ರತ್ಯಕ್ಷರಾಗಿರುವುದು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಹುಬ್ಬೇರಿಸಿದೆ.&lt;/p&gt;&lt;img&gt;&lt;p&gt;ಪಡಿತರ ಅಕ್ಕಿ ಮೂಟೆಗಳು ಪತ್ತೆಯಾದ ಜಾಗದಲ್ಲಿ ಆಡಳಿತಾರೂಢ ಪಕ್ಷದ ಪ್ರಮುಖ ಮುಖಂಡ ಹಾಗೂ ಗ್ಯಾರಂಟಿ ಸಮಿತಿಯ ಅಧ್ಯಕ್ಷರೇ ಹಾಜರಿದ್ದದ್ದು ಹಲವು ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಈ ಅಂತರರಾಜ್ಯ ಅಕ್ರಮ ದಂಧೆಯ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆಳೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/koppal-gangavathi-rice-mill-telangana-pds-anna-bhagya-rice-seized-investigation-6t7i0a5"/>
        </item>
        <item>
            <title><![CDATA[30 ವರ್ಷದಿಂದ ಮದ್ಯ, ಗುಟ್ಕಾ ನಿಷೇಧಿಸಿ ರಾಜ್ಯದ ಮಾದರಿಯಾದ ಕೊಪ್ಪಳ ಜಿಲ್ಲೆಯ ಗ್ರಾಮ]]></title>
            <link>https://kannada.asianetnews.com/karnataka-districts/koppal-hanumanahalli-has-become-a-model-for-state-by-completely-banning-alcohol-and-gutka-for-last-30-years-mrq/articleshow-79ocuqt</link>
            <guid isPermaLink="true">https://kannada.asianetnews.com/karnataka-districts/koppal-hanumanahalli-has-become-a-model-for-state-by-completely-banning-alcohol-and-gutka-for-last-30-years-mrq/articleshow-79ocuqt</guid>
            <pubDate>Mon, 17 Aug 2026 06:28:56 +0530</pubDate>
            <description><![CDATA[&lt;p&gt;ಕಳೆದ 30 ವರ್ಷಗಳಿಂದ ಮದ್ಯ ಮತ್ತು ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಿ ರಾಜ್ಯಕ್ಕೆ ಈ ಗ್ರಾಮ ಮಾದರಿಯಾಗಿದೆ. ಈ ಸಾಮೂಹಿಕ ನಿರ್ಧಾರದಿಂದಾಗಿ ಗ್ರಾಮದಲ್ಲಿ ಯುವಕರು ಸರಿದಾರಿಯಲ್ಲಿದ್ದು, ಆರೋಗ್ಯವಂತರಾಗಿದ್ದಾರೆ ಮತ್ತು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzv8gmvx6ez8fzq4nkdkk4r9,imgname-karnataka-pan-masala-gutka-1786547557245.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೋಮರೆಡ್ಡಿ ಅಳವಂಡಿ&lt;/strong&gt;&lt;/p&gt;&lt;p&gt;&lt;strong&gt;ಕೊಪ್ಪಳ&lt;/strong&gt;: ಕರ್ನಾಟಕ ಸರ್ಕಾರ ಈಗ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿ ಅದನ್ನು ಯಥಾವತ್ತಾಗಿ ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಕೊಪ್ಪಳ ತಾಲೂಕಿನ ಹನುಮಳ್ಳಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಗುಟ್ಕಾವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೇ ಮದ್ಯಪಾನ ಮತ್ತು ಮದ್ಯ ಮಾರಾಟವನ್ನೂ ಮಾಡುವಂತಿಲ್ಲ.&lt;/p&gt;&lt;h2&gt;&lt;strong&gt;30 ವರ್ಷಗಳ ಹಿಂದೆಯೇ ಸಂಪೂರ್ಣ ನಿಷೇಧ&lt;/strong&gt;&lt;/h2&gt;&lt;p&gt;ಸುಮಾರು 300 ಮನೆ, 1500 ಜನಸಂಖ್ಯೆ ಇರುವ ಕೊಪ್ಪಳ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಕಳೆದ 30 ವರ್ಷಗಳ ಹಿಂದೆಯೇ ಗುಟ್ಕಾ ಸೇರಿದಂತೆ ತಂಬಾಕುಯಕ್ತ ಪದಾರ್ಥಗಳ ಸೇವನೆ ಮತ್ತು ಮಾರಾಟ ನಿಷೇಧ ಮಾಡಲಾಗಿದೆ. ಗ್ರಾಮದ ಎಲ್ಲರೂ ಸೇರಿ ತೆಗೆದುಕೊಂಡಿರುವ ಈ ತೀರ್ಮಾನ ಇಂದಿಗೂ ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ.&lt;/p&gt;&lt;p&gt;ಕೃಷಿ ಜೊತೆ ಕೋಳಿ, ಕುರಿ ಸಾಕಾಣಿಕೆ&lt;/p&gt;&lt;p&gt;ಹನುಮನಹಳ್ಳಿಯಲ್ಲಿ ಬಹುತೇಕ ಕೃಷಿ ಕುಟುಂಬವಿದ್ದು, ಸೊಪ್ಪು ತರಕಾರಿ ಬೆಳೆಯುತ್ತಾರೆ. ಈ ಊರಲ್ಲಿ ಗುಟ್ಕಾ ಸೇರಿದಂತೆ ಮದ್ಯಪಾನ, ಮದ್ಯ ಮಾರಾಟ ಇರದೇ ಇರುವುದರಿಂದ ಗ್ರಾಮದ ಯುವಕರು ಸರಿದಾರಿಯಲ್ಲಿ ಸಾಗಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಎಂತಹ ಭೀಕರ ಬರಗಾಲ ಇದ್ದರೂ ಸಹ ಹನುಮನಹಳ್ಳಿ ಗ್ರಾಮಸ್ಥರು ಗುಳೆ ಹೋದ ಉದಾಹರಣೆ ಇಲ್ಲ. ಇವರು ಕೃಷಿಯನ್ನೇ ಅತ್ಯಂತ ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ಕುಲಕಸುಬು ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮಾಡುತ್ತಾರೆ.&lt;/p&gt;&lt;p&gt;ಗುಟ್ಕಾ ಸೇರಿದಂತೆ ತಂಬಾಕು, ಮದ್ಯಪಾನ ಇರದೇ ಇರುವುದರಿಂದ ಇಲ್ಲಿ ಹೃದಯಾಘಾತ ಸೇರಿದಂತೆ ಇತರ ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆಯು ಅತ್ಯಂತ ವಿರಳ. ರಾಜ್ಯ ಸರ್ಕಾರ ಈಗಷ್ಟೇ ಗುಟ್ಕಾ ನಿಷೇಧ ಮಾಡುವ ಪ್ರಸ್ತಾಪ ಮಾಡಿದೆ, ಅದನ್ನು ಪರಿಪೂರ್ಣವಾಗಿ ಜಾರಿ ಮಾಡುವ ಮುನ್ನವೇ ಅಪಸ್ವರದಿಂದ ಒತ್ತಡಕ್ಕೆ ಒಳಗಾಗಿದೆ. ಆದರೆ ಹನುಮನಹಳ್ಳಿ ರಾಜ್ಯಕ್ಕೆ ಮಾದರಿ ಎನ್ನುವಂತಿದೆ.&lt;/p&gt;&lt;p&gt;ನಮ್ಮೂರಲ್ಲಿ ನಮಗೆ ಗೊತ್ತಿರುವಂತೆ ಗುಟ್ಕಾ ಮಾರಾಟ ಮಾಡುತ್ತಿಲ್ಲ. ಹಾಗೆ ಮದ್ಯ ಮಾರಾಟವೂ ಇಲ್ಲ ಮತ್ತು ಹೋಟೆಲ್&zwnj;ಗಳು ಸಹ ಇಲ್ಲಿ ಇಲ್ಲ ಎಂದು ಗ್ರಾಮಸ್ಥ ರಾಘವೇಂದ್ರ ಬಡಿಗೇರ್ ಹೇಳುತ್ತಾರೆ.&lt;/p&gt;&lt;p&gt;ಗುಟ್ಕಾ ಮೊದಲ ಬಾರಿಗೆ ಬಂದಾಗಲೇ ಗ್ರಾಮದ ಎಲ್ಲರೂ ಸೇರಿ ನಿಷೇಧ ಮಾಡಿದ್ದೇವೆ. ಅದಕ್ಕೂ ಮೊದಲು ನಮ್ಮೂರಲ್ಲಿ ಮದ್ಯಪಾನ ಹಾಗೂ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ಗ್ರಾಮದ ಹಿರಿಯ ಕುಬೇರಪ್ಪ ಹೇಳುತ್ತಾರೆ.&lt;/p&gt;&lt;h3&gt;&lt;strong&gt;ಕೊಪ್ಪಳದ ಹಳ್ಳಿಗೆ &lsquo;ಮದ್ಯಮುಕ್ತ ಗ್ರಾಮ&rsquo; ಪ್ರಶಸ್ತಿ ಕೊಟ್ಟ ಸರ್ಕಾರ&lt;/strong&gt;&lt;/h3&gt;&lt;p&gt;ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕೊಪ್ಪಳದ ಹಟ್ಟಿ ಗ್ರಾಮಕ್ಕೆ ರಾಜ್ಯಮಟ್ಟದ ಮದ್ಯಮುಕ್ತ ಸಂಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ಮಹಿಳೆಯರನ್ನು ಸನ್ಮಾನಿಸಿ, ಹಟ್ಟಿ ಗ್ರಾಮಕ್ಕೆ &lsquo;ಸಂಯಮ ಪ್ರಶಸ್ತಿ&rsquo; ಪ್ರದಾನ ಮಾಡಲಾಯಿತು.&lt;/p&gt;&lt;p&gt;ಜೊತೆಗೆ, ಕೊಪ್ಪಳ ತಾಲೂಕಿನ ಹಟ್ಟಿ, ತಾಳ ಕನಕಾಪುರ, ಕಾಮನೂರು, ಹನುಮನಹಳ್ಳಿ ಹಾಗೂ ಲೇಬಗೇರಿ, ಕುಕನೂರು ತಾಲೂಕಿನ ಬಿನ್ನಾಳ ಮತ್ತು ಚಿಕ್ಕೆನಕೊಪ್ಪ, ಕುಷ್ಟಗಿ ತಾಲೂಕಿನ ಮತ್ನಾಳ, ನಾಗರಾಳ, ಬೋದೂರು ತಾಂಡಾ ಹಾಗೂ ಹಿರೇಬನ್ನಿಗೋಳ ಗ್ರಾಮಗಳಿಗೆ ಮದ್ಯ ಮಾರಾಟ ಮುಕ್ತ ಅಭಿನಂದನಾ ಪ್ರಶಸ್ತಿ ವಿತರಣೆ ಮಾಡಲಾಯಿತು. ಬಳಿಕ, ಪ್ರೊ.ಕೆ.ಪುಟ್ಟರಂಗಪ್ಪ ರಚಿಸಿದ ಪಾನ ನಿರೋಧ ಚಳವಳಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.&lt;/p&gt;&lt;p&gt;ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್&zwnj;ದ ಗುರುಮಹಾಂತ ಶ್ರೀಗಳು ಹಾಗೂ ಗುರುಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-hanumanahalli-has-become-a-model-for-state-by-completely-banning-alcohol-and-gutka-for-last-30-years-mrq/articleshow-79ocuqt"/>
        </item>
        <item>
            <title><![CDATA[ವಾಲ್ಮೀಕಿ ನಿಗಮ ಹಗರಣ: ಈಗ ನಾನು ಏಟು ತಿಂದ ಹುಲಿ, ಬಿಜೆಪಿ ಆರೋಪಕ್ಕೆ ಉತ್ತರಿಸುವೆ -ನಾಗೇಂದ್ರ]]></title>
            <link>https://kannada.asianetnews.com/politics/b-nagendra-responds-to-bjp-s-allegations-on-valmiki-corporation-scam-rav/articleshow-7hy8agw</link>
            <guid isPermaLink="true">https://kannada.asianetnews.com/politics/b-nagendra-responds-to-bjp-s-allegations-on-valmiki-corporation-scam-rav/articleshow-7hy8agw</guid>
            <pubDate>Wed, 12 Aug 2026 06:07:12 +0530</pubDate>
            <description><![CDATA[&lt;p&gt;ದಲಿತರು ಮತ್ತು ಹಿಂದುಳಿದವರನ್ನು ಕಂಡರೆ ಬಿಜೆಪಿಗೆ ಆಗುವುದಿಲ್ಲ, ಅದಕ್ಕಾಗಿಯೇ ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಸಚಿವ ಬಿ.ನಾಗೇಂದ್ರ ಆರೋಪಿಸಿದ್ದಾರೆ. ತಾವು ಏಟು ತಿಂದ ಹುಲಿಯಾಗಿದ್ದು, ರಾಜ್ಯ ಮೆಚ್ಚುವ ಕೆಲಸ ಮಾಡಿ ಬಿಜೆಪಿಯ ಆರೋಪಗಳಿಗೆ ಉತ್ತರ ನೀಡುವುದಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzj40vg3wdthzdehnhpss9kg,imgname-----------------------2026-08-09t072738.708-1786240855555.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಆ.12):&lt;/strong&gt; ದಲಿತರು ಮತ್ತು ಹಿಂದುಳಿದವರನ್ನು ಕಂಡರೇ ಬಿಜೆಪಿಯವರಿಗೆ ಆಗಲ್ಲ. ಅದಕ್ಕಾಗಿಯೇ ನನ್ನ ವಿರುದ್ಧ ಹೋರಾಟ ಮಾಡಲು ಮುಂದಾಗಿದ್ದಾರೆ. ಈಗ ನಾನು ಏಟು ತಿಂದ ಹುಲಿಯಾಗಿದ್ದು, ರಾಜ್ಯ ಮೆಚ್ಚುವಂತಹ ಕೆಲಸ ಮಾಡಿ ಬಿಜೆಪಿಯವರ ಆರೋಪಗಳಿಗೆ ಉತ್ತರ, ಸ್ಪಷ್ಟನೆ ನೀಡುತ್ತೇನೆ ಎಂದು ಸಚಿವ ಬಿ.ನಾಗೇಂದ್ರ ತಿರುಗೇಟು ನೀಡಿದ್ದಾರೆ.&lt;/p&gt;&lt;p&gt;ನಾಗೇಂದ್ರ ರಾಜಿನಾಮೆ ನೀಡದಿದ್ದರೆ ಸದನ ನಡೆಯಲು ಬಿಡಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಗೆ ದಿಟ್ಟ ಉತ್ತರವನ್ನ ಕೊಡಲಿಕ್ಕೆ ನಾವು ಸದನದಲ್ಲಿ ತಯಾರಾಗಿದ್ದೇವೆ. ನಾನು ಅಪರಾಧಿಯಲ್ಲ, ಆರೋಪಿಯಷ್ಟೇ. ಆದರೂ ಕೂಡ ನನಗೆ ಸಚಿವ ಸ್ಥಾನ ನೀಡಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.&lt;/p&gt;&lt;p&gt;ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದು ವಿರೋಧಪಕ್ಷದವರ ಕೆಲಸ. ಅವರು ಪ್ರಶ್ನೆಗಳಿಗೆ ಸಚಿವ ಸಂಪುಟದ ಎಲ್ಲರೂ ಅದಕ್ಕೆ ಉತ್ತರ ಕೊಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತಗಳಿಗೆ ನಾವು ಬದ್ಧರಾಗಿದ್ದೇವೆ&lt;/p&gt;&lt;p&gt;ಬಿಜೆಪಿಯವರು ಸದನದಲ್ಲಿ ಕೇಳಿದರೇ ನಾನು ಸ್ಪಷ್ಟನೆ ನೀಡುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರೇ ಈ ಕುರಿತು ಹೇಳಿದ್ದಾರೆ. ಇಷ್ಟಾದರೂ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ದೆಹಲಿ ಸೇರಿದಂತೆ ವಿವಿಧೆಡೆ ಪರವಾನಗಿ ಪಡೆದು ಹೋಗಿ ಬಂದಿದ್ದೇನೆ. ಬಿಜೆಪಿಯವರಿಗೆ ಮಾಹಿತಿ ಕೊರತೆ ಇದೆ. ದಲಿತರನ್ನ ಬೆಳೆಯಲು ಬಿಡಬಾರದೆಂದು ತುಳಿಯಲು ಹೋರಾಟ ಮಾಡುತ್ತಿದ್ದಾರೆ ಎಂದರು.&lt;/p&gt;&lt;h2&gt;ಹಗರಣದ ಹಣ ವಾಪಸ್:&lt;/h2&gt;&lt;p&gt;ವಾಲ್ಮೀಕಿ ನಿಗಮದ ಹಗರಣದಲ್ಲಿ ನಾನು ಮುಕ್ತನಾಗುತ್ತೇನೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಹೋಗಿದ್ದ ಹಣವನ್ನು ವಾಪಸ್ ತರುತ್ತಿದ್ದೇವೆ. ಅದು ಯಾವ ರೀತಿ ಪೋಲಾಗಿದೆ ಅನ್ನೋದು ಪ್ರಪಂಚಕ್ಕೆ ಗೊತ್ತು. ಆ ಪ್ರಕರಣ ನ್ಯಾಯಾಲಯದಲ್ಲಿದೆ. ನಾನು ಆ ಕೇಸ್&zwnj;ನಿಂದ ನಿರಪರಾಧಿಯಾಗಿ ಹೊರಗಡೆ ಬರುತ್ತೇನೆ. ಈ ವಿಷಯದಲ್ಲಿ ದೇವರ ಮೇಲೆ ನಂಬಿಕೆ ಇದೆ ಎಂದು ನಾಗೇಂದ್ರ ಹೇಳಿದರು.&lt;/p&gt;&lt;p&gt;- ಬಿಜೆಪಿಯವರಿಗೆ ದಲಿತರನ್ನು ಕಂಡರೇ ಆಗುವುದಿಲ್ಲ&lt;/p&gt;&lt;p&gt;- ವಾಲ್ಮೀಕಿ ಹಗರಣದಿಂದ ಮುಕ್ತನಾಗುವೆ: ಸಚಿವ&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/b-nagendra-responds-to-bjp-s-allegations-on-valmiki-corporation-scam-rav/articleshow-7hy8agw"/>
        </item>
        <item>
            <title><![CDATA[ತೀರ್ಥಹಳ್ಳಿ ದುರಂತ: ಇಬ್ಬರು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಶ್ರೀಹುಚ್ಚೇಶ್ವರ ಶಾಲೆ]]></title>
            <link>https://kannada.asianetnews.com/karnataka-districts/thirthahalli-tragedy-srihucheshwara-school-takes-responsibility-for-the-education-of-two-children-mrq/articleshow-7w4eh98</link>
            <guid isPermaLink="true">https://kannada.asianetnews.com/karnataka-districts/thirthahalli-tragedy-srihucheshwara-school-takes-responsibility-for-the-education-of-two-children-mrq/articleshow-7w4eh98</guid>
            <pubDate>Tue, 18 Aug 2026 07:51:00 +0530</pubDate>
            <description><![CDATA[ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಗುಡ್ಡ ಕುಸಿತ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಕಕ್ಕರಗೋಳ ಗ್ರಾಮದ ಇಬ್ಬರು ಮಕ್ಕಳಿಗೆ ಬೂದಗುಂಪಾ ಗ್ರಾಮದ ಶ್ರೀಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಆಸರೆಯಾಗಿದೆ. ಶಾಲೆಯು ಮಕ್ಕಳ 8ನೇ ತರಗತಿಯವರೆಗಿನ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಂಡು ಮಾನವೀಯತೆ ಮೆರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09ahj8bnktv0p1ht3rtn5rp,imgname-thirthahalli-tragedy-1787019446539.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ: &lt;/strong&gt;ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆ.2ರಂದು ನಡೆದ ಗುಡ್ಡ ಕುಸಿತ ದುರಂತದಲ್ಲಿ ಅಕಾಲಿಕ ಮೃತಪಟ್ಟ ತಾಲೂಕಿನ ಕಕ್ಕರಗೋಳ ಗ್ರಾಮದ ಕಾರ್ಮಿಕ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಮೀಪದ ಬೂದಗುಂಪಾ ಗ್ರಾಮದ ಶ್ರೀಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಂದಾಗಿದೆ.&lt;/p&gt;&lt;p&gt;ದುರಂತದಲ್ಲಿ ಕಕ್ಕರಗೋಳದ ಮಲ್ಲಿಕಾರ್ಜುನ ಕಟಗಿ (35), ಪತ್ನಿ ನಾಗವೇಣಿ ಕಟಗಿ (28) ಹಾಗೂ 3 ವರ್ಷದ ಮಗು ಸಂತೋಷ್ ಮೃತಪಟ್ಟಿದ್ದರು. ಬದುಕಿನ ಬಂಡಿ ಸಾಗಿಸಲು ಕೂಲಿ ಕೆಲಸಕ್ಕೆ ತೆರಳಿದ್ದ ಕುಟುಂಬ ತೀರ್ಥಹಳ್ಳಿಯಲ್ಲಿ ತಾತ್ಕಾಲಿಕ ಶೆಡ್&zwnj;ನಲ್ಲಿ ವಾಸವಾಗಿತ್ತು. ತಡರಾತ್ರಿ 2.30ಕ್ಕೆ ಗುಡ್ಡ ಕುಸಿದು ಈ ದುರ್ಘಟನೆ ಸಂಭವಿಸಿತು.&lt;/p&gt;&lt;h2&gt;&lt;strong&gt;ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ&lt;/strong&gt;&lt;/h2&gt;&lt;p&gt;ಮೃತ ಕಾರ್ಮಿಕ ಮಲ್ಲಿಕಾರ್ಜುನ ಕಟಗಿಯವರ ಮನೆಗೆ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಬೂದಗುಂಪಾದ ಕಾರ್ಯದರ್ಶಿ ಸಂತೋಷ್ ಕುಮಾರ್ ಜಿ. ಎರಕಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.&lt;/p&gt;&lt;p&gt;ಈ ವೇಳೆ ಮಾತನಾಡಿದ ಅವರು, ಬಡ ಕುಟುಂಬವೊಂದು ದುಡಿಮೆ ಅರಸಿ ಹೊರಟು ದುರಂತ ಅಂತ್ಯ ಕಂಡಿರುವುದು ದುರ್ದೈವ. ಹೀಗಾಗಿ ಅಕಾಲಿಕ ಮೃತ್ಯುವಿಗೆ ಬಲಿಯಾದ ಕಾರ್ಮಿಕನ ಮಕ್ಕಳಾದ ಮಹಾಲಕ್ಷ್ಮೀ ಹಾಗೂ ದಿವ್ಯಗೆ ತಮ್ಮ ಶಾಲೆಯಲ್ಲಿ 8ನೇ ತರಗತಿಯವರೆಗೂ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;30 ವರ್ಷದಿಂದ ಮದ್ಯ, ಗುಟ್ಕಾ ನಿಷೇಧಿಸಿ ರಾಜ್ಯದ ಮಾದರಿಯಾದ ಕೊಪ್ಪಳ ಜಿಲ್ಲೆಯ ಗ್ರಾಮ&lt;/strong&gt;&lt;/p&gt;&lt;p&gt;ಶಾಲೆಯ ಶಿಕ್ಷಕರು, ಕಕ್ಕರಗೋಳ ಗ್ರಾಮದ ನಿವಾಸಿಗಳಾದ ನರಸಿಂಹ, ಈರಪ್ಪ ರೌಡಕುಂದಿ, ಜಡಿಯಪ್ಪ ಕಾರಟಗಿ, ಬಸವರಾಜ ಛಲವಾದಿ, ಪಂಪಾಪತಿ ಜಲ್ಲಿ, ಭೀಮಣ್ಣ ಕಟಿಗೇರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಾವಿರಾರು ವಿದ್ಯಾರ್ಥಿಗಳು ಒಂದೇ ಕಡೆ ಸೇರಿದ್ದೇಕೆ? ಗಂಗಾವತಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾಡಿದ್ದೇನು?&lt;/strong&gt;&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/thirthahalli-tragedy-srihucheshwara-school-takes-responsibility-for-the-education-of-two-children-mrq/articleshow-7w4eh98"/>
        </item>
        <item>
            <title><![CDATA[ವಂದೇ ಮಾತರಂ ವಿವಾದ: ಕೊಪ್ಪಳದಲ್ಲಿ ಬಿಜೆಪಿ ಆರ್‌ಎಸ್‌ಎಸ್ ವಿರುದ್ಧ ಸಚಿವ ತಂಗಡಗಿ ವಾಗ್ದಾಳಿ!]]></title>
            <link>https://kannada.asianetnews.com/politics/vande-mataram-row-minister-shivaraj-tangadagi-slams-bjp-rss-at-kanakagiri-koppal-rav/articleshow-9fc0a9o</link>
            <guid isPermaLink="true">https://kannada.asianetnews.com/politics/vande-mataram-row-minister-shivaraj-tangadagi-slams-bjp-rss-at-kanakagiri-koppal-rav/articleshow-9fc0a9o</guid>
            <pubDate>Sun, 23 Aug 2026 12:23:21 +0530</pubDate>
            <description><![CDATA[&lt;p&gt;ವಂದೇ ಮಾತರಂ ಹಾಡದವರನ್ನು ದೇಶ ಬಿಟ್ಟು ಹೋಗಿ ಎನ್ನುವ ಬಿಜೆಪಿಗೆ, ನೋಂದಣಿ ಮಾಡಿಸದ ಆರ್&zwnj;ಎಸ್&zwnj;ಎಸ್&zwnj; ಪಾಕಿಸ್ತಾನಕ್ಕೆ ಹೋಗಬೇಕೇ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ. ಸಚಿವ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಬಿಜೆಪಿಗೆ ತಿರುಗೇಟು, ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk654cwwr3f7bnp3jba2kcst,imgname----------------------94--1772954465180.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಆ.23):&lt;/strong&gt; 'ವಂದೇ ಮಾತರಂ'ಹಾಡದವರು ದೇಶ ಬಿಟ್ಟು ಹೋಗಿ ಎಂದು ಬಿಜೆಪಿಯವರು ಹೇಳ್ತಿದ್ದಾರೆ. ಹಾಗಾದ್ರೆ ರಾಷ್ಟ್ರಗೀತೆ ಹಾಡಲಾರದವರು, ರಾಷ್ಟ್ರ ಧ್ವಜ ಹಾರಿಸದವರು, ರಿಜಿಸ್ಟ್ರೇಶನ್ ಮಾಡಿಸಲಾಗದವರು ಪಾಕಿಸ್ತಾನಕ್ಕೆ ಹೋಗಬೇಕಾ? ಎಂದು ಆರೆಸ್ಸೆಸ್ ಬಿಜೆಪಿ ವಿರುದ್ಧ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಇಂದು ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ದೇಶದಲ್ಲಿ ಇಂಥ ವ್ಯವಸ್ಥೆ ಇದೆ ನೋಡಿ, ಪ್ರತಿಯೊಂದು ಸಂಸ್ಥೆ ಕಾನೂನು ಪ್ರಕಾರ ರಿಜಿಸ್ಟ್ರೇಶನ್ ಮಾಡಿಸಬೇಕು. ಆದರೆ ಇವರು ರಿಜಿಸ್ಟ್ರೇಶನ್ ಮಾಡಿಸೊಲ್ಲ ಎಂದು ಈ ದೇಶಭಕ್ತರು ವಾದ ಮಾಡ್ತಾರಲ್ಲ ಇವರು ಎಲ್ಲಿಗೆ ಹೋಗಬೇಕು? ಬೆಂಗಳೂರಲ್ಲಿ ಒಂದು ನಾಯಿ ಸಾಕಲು ರಜಿಸ್ಟ್ರೇಶನ್ ಮಾಡಿಸಬೇಕು. ಹೀಗಿರುವಾಗ ನೂರು ವರ್ಷ ಪೂರೈಸಿದ ಸಂಸ್ಥೆಯೊಂದು ಇನ್ನುವರೆಗೆ ರಿಜಿಸ್ಟ್ರೇಶನ್ ಆಗಿಲ್ಲ, ಮುಂದೆನೂ ಮಾಡಿಸಲ್ಲ ಅಂತಾರೆ ಅಂದ್ರೆ ಏನರ್ಥ? ಎಂದು ಪ್ರಶ್ನಿಸಿದರು.&lt;/p&gt;&lt;h2&gt;ಕಾಂಗ್ರೆಸ್ 1937 ರಿಂದ ವಂದೇ ಮಾತರಂ ಹಾಡುತ್ತಿದೆ&lt;/h2&gt;&lt;p&gt;1937 ರಿಂದಲೇ ನಾವು ವಂದೇ ಮಾತರಂ ಹಾಡುತ್ತಿದ್ದೇವೆ. ನಾವು ಅಂದಿನಿಂದ ಇಂದಿನವರೆಗೂ ವಂದೇ ಮಾತರಂನ ಎರಡು ಚರಣಗಳನ್ನ ಹಾಡುತ್ತಾ ಬಂದಿದ್ದೇವೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಎರಡು ಚರಣ ಹಾಡುತ್ತೇವೆ. ಸರ್ಕಾರದ ಕಾರ್ಯಕ್ರಮ ಇದ್ದಾಗ ಸಂಪೂರ್ಣ ಹಾಡ್ತೀವಿ. ಈಗ ವಂದೇ ಮಾತರಂ ಹಾಡುವ ಬಗ್ಗೆ ಕಾನೂನು ಮಾಡುವ ಬಿಜೆಪಿಯವರು&lt;/p&gt;&lt;p&gt;1937 ರಲ್ಲಿ ಇದ್ರಾ? ನಮ್ಮ ರೀತಿ ಇವರು(ಆರ್&zwnj;ಎಸ್&zwnj;ಎಸ್&zwnj;) ಯಾಕೆ ರಿಜಿಸ್ಟ್ರೇಶನ್ ಮಾಡಿಸ್ತೀವಿ ಅಂತಾ ಒಪ್ಪಿಕೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದರು.&lt;/p&gt;&lt;p&gt;ಇನ್ನು ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತಂಗಡಗಿ, ಬಿಜೆಪಿಯವರಿಗೆ ಮಾತಾಡೋಕೆ ಯಾವ ವಿಷಯ ಸಿಗ್ತಿಲ್ಲ. ಹೀಗಾಗಿ ನಾಗೇಂದ್ರ ವಿಚಾರ ಇಟ್ಕೊಂಡು ರಾಜಕೀಯ ಮಾಡ್ತಿದ್ದಾರೆ. ಹಾಗೆ ನೋಡಿದ್ರೆ ಕೇಂದ್ರದ 23 ಮಂತ್ರಿಗಳ ಮೇಲೆ ಕೇಸ್ ಇವೆ. ಶುದ್ಧ ಹಸ್ತದ 56 ಇಂಚಿನ ಮೋದಿ ಸಂಪುಟದಲ್ಲಿನ 23 ಜನರ ಮೇಲೆ ಕೇಸ್ ಇವೆ. ಇಂಥವರು ನಾಗೇಂದ್ರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ನಾಗೇಂದ್ರ ಆರೋಪಿ ಅಷ್ಟೇ, ಅಪರಾಧಿ ಅಲ್ಲ ಎಂದು ಸಮರ್ಥಿಸಿಕೊಂಡರು. ನಾವು ಎಲ್ಲೇ ಹೋದ್ರೂ ಉತ್ತರ ಕೊಡ್ತೇವೆ. ಇದು ಪ್ರಜಾಪ್ರಭುತ್ವ. ಆದರೆ ಈ ದೇಶದ ಪ್ರಧಾನಿ ಯಾಕೆ ಉತ್ತರ ಕೊಡುತ್ತಿಲ್ಲ ಎಂದು ಪ್ರತಿಭಟನಕಾರರ ಮೇಲೆ ಪೆಲ್ಲೆಟ್ ಗನ್ ಪ್ರಕರಣ ಸಂಬಂಧ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/vande-mataram-row-minister-shivaraj-tangadagi-slams-bjp-rss-at-kanakagiri-koppal-rav/articleshow-9fc0a9o"/>
        </item>
        <item>
            <title><![CDATA[ಮದ್ಯಪಾನ ಮುಕ್ತವಾದ ಕೊಪ್ಪಳದ ಈ ಗ್ರಾಮಕ್ಕಿಂದು ರಾಜ್ಯಮಟ್ಟದ ಪ್ರಶಸ್ತಿ! ಇದು ಮಹಿಳೆಯರ ಹೋರಾಟದ ಫಲ]]></title>
            <link>https://kannada.asianetnews.com/karnataka-districts/alcohol-free-village-in-koppal-received-a-state-level-award-today-rav/articleshow-9gmn9sd</link>
            <guid isPermaLink="true">https://kannada.asianetnews.com/karnataka-districts/alcohol-free-village-in-koppal-received-a-state-level-award-today-rav/articleshow-9gmn9sd</guid>
            <pubDate>Sun, 16 Aug 2026 06:08:12 +0530</pubDate>
            <description><![CDATA[ಕೊಪ್ಪಳದ ಹಟ್ಟಿ ಗ್ರಾಮದ ಮಹಿಳೆಯರು ಒಗ್ಗಟ್ಟಾಗಿ ಹೋರಾಡಿ ತಮ್ಮ ಗ್ರಾಮವನ್ನು ಮದ್ಯ ಮುಕ್ತವನ್ನಾಗಿಸಿದ್ದಾರೆ. ಈ ಮಾದರಿ ಸಾಧನೆಗಾಗಿ, ಸಾಮಾನ್ಯವಾಗಿ ವ್ಯಕ್ತಿಗಳಿಗೆ ನೀಡಲಾಗುವ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ರಾಜ್ಯಮಟ್ಟದ ಪ್ರಶಸ್ತಿಯು ಇದೇ ಮೊದಲ ಬಾರಿಗೆ ಗ್ರಾಮವೊಂದಕ್ಕೆ ಲಭಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m03zx54x6k5cb7ns89hnz13g,imgname-----------------------2026-08-16t055039.906-1786840519837.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೋಮರಡ್ಡಿ ಅಳವಂಡಿ ಕೊಪ್ಪಳ&lt;/strong&gt;&lt;/p&gt;&lt;p&gt;ಮಹಿಳೆಯರ ಹೋರಾಟದಿಂದ ಕಳೆದೊಂದು ವರ್ಷದಿಂದ ಗ್ರಾಮ ಮದ್ಯ ಮುಕ್ತವಾಗಿದ್ದು, ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಈ ಮಹಿಳೆಯರ ಒಗ್ಗಟ್ಟಿನ ಹೋರಾಟದಿಂದ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇದೇ ಮೊದಲ ಬಾರಿಗೆ ವ್ಯಕ್ತಿಗೆ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿ ಗ್ರಾಮವೊಂದಕ್ಕೆ ನೀಡಿದೆ.&lt;/p&gt;&lt;p&gt;ಸಾಮಾನ್ಯವಾಗಿ ಮದ್ಯವ್ಯಸನಿ ಮದ್ಯ ಮುಕ್ತನಾದ ಮೇಲೆ ಪರಿವರ್ತನೆಯ ಬದುಕು ಸಾಗಿಸುತ್ತಿದ್ದರೆ ಅಂತಹ ವ್ಯಕ್ತಿಗೆ ಅಥವಾ ಮದ್ಯಪಾನ ವಿರೋಧಿ ಹೋರಾಟ ಮಾಡುತ್ತ, ಮದ್ಯಪಾನ ಮಾಡದಿರುವಂತೆ ಜಾಗೃತಿ ಮೂಡಿಸುವ ವ್ಯಕ್ತಿಗೆ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರತಿ ವರ್ಷವೂ ರಾಜ್ಯಮಟ್ಟದ ಮದ್ಯಪಾನ ಸಂಯಮ ಪ್ರಶಸ್ತಿ ಕೊಡುತ್ತದೆ.&lt;/p&gt;&lt;p&gt;ಈ ವರ್ಷ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳಿಗೆ ಈ ಪ್ರಶಸ್ತಿ ನೀಡಲು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮುಂದಾಗಿತ್ತು. ಇದಕ್ಕಾಗಿ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು ಭೇಟಿಯಾಗಿ ಪ್ರಶಸ್ತಿ ಕೊಡಮಾಡುವ ಕುರಿತು ಮನವರಿಕೆ ಮಾಡಲು ಪ್ರಯತ್ನಿಸಲಾಯಿತು. ಆದರೆ ಶ್ರೀಗಳು ನನಗ್ಯಾವ ಪ್ರಶಸ್ತಿಯೂ ಬೇಡ, ಯಾವ ಪ್ರಶಸ್ತಿ ನಾನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಪ್ರಶಸ್ತಿ ಸ್ವೀಕಾರ ಮಾಡಲು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮ ಸೂಕ್ತವಾಗಿದೆ ಎಂದು ಸಲಹೆ ನೀಡಿದರು. ಹೀಗಾಗಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದಾಗ, ಗ್ರಾಮದಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧ ಇರುವುದು ಕಂಡು ಬಂದಿದೆ.&lt;/p&gt;&lt;p&gt;ಗ್ರಾಮದ ಮಹಿಳೆಯರು ಒಗ್ಗಟ್ಟಾಗಿ ಮದ್ಯಪಾನ ವಿರುದ್ಧ ಹೋರಾಟ ಮಾಡಿ, ಗ್ರಾಮವನ್ನು ಮದ್ಯಮುಕ್ತ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ವ್ಯಕ್ತಿಗೆ ನೀಡುವ ಪ್ರಶಸ್ತಿ ಇದೇ ಮೊದಲ ಬಾರಿಗೆ ಹಟ್ಟಿ ಗ್ರಾಮಕ್ಕೆ ರಾಜ್ಯ ಮದ್ಯಪಾನ ಸಂಯಮ ಪ್ರಶಸ್ತಿ ಹಾಗೂ ಲಕ್ಷ ರುಪಾಯಿ ನಗದು ಬಹುಮಾನ ಘೋಷಣೆ ಮಾಡಲಾಗಿದೆ.&lt;/p&gt;&lt;p&gt;ಪ್ರಶಸ್ತಿ ಪ್ರದಾನ:ಹಟ್ಟಿ ಗ್ರಾಮಕ್ಕೆ ಆ. 16ರಂದು ಪ್ರಶಸ್ತಿ ಪ್ರದಾನ ಮಾಡಲು ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ಗ್ರಾಮದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ.&lt;/p&gt;&lt;p&gt;ಮಹಿಳೆಯರ ಹೋರಾಟ-ನೆಮ್ಮದಿ:ಹಟ್ಟಿ ಗ್ರಾಮದಲ್ಲಿ ಅತಿಯಾದ ಮದ್ಯಪಾನದಿಂದ ಕೆಲ ಯುವಕರು ಪ್ರಾಣತೆತ್ತಿದ್ದರು. ಅಲ್ಲದೆ ಗ್ರಾಮದಲ್ಲಿ ನೆಮ್ಮದಿ ಇಲ್ಲದಂತಾಗಿತ್ತು. ನಿಮ್ಮಿಂದ ಮಾತ್ರ ಗ್ರಾಮವನ್ನು ಮದ್ಯಪಾನ ಮುಕ್ತ ಮಾಡಲು ಸಾಧ್ಯ ಎಂದು ಹಿರಿಯರು ಗ್ರಾಮದ ಮಹಿಳೆಯರಿಗೆ ಹೇಳಿದ್ದರು. ಗ್ರಾಮದ ಮಹಿಳೆಯರೆಲ್ಲ ಒಗ್ಗಟ್ಟಾಗಿ 2-3 ವರ್ಷಗಳ ಹಿಂದೆ ನಿರಂತರ ಹೋರಾಟ ಮಾಡಿದ್ದರು. ಆ ಪರಿಣಾಮ ಗ್ರಾಮದಲ್ಲಿ ಕಳೆದೊಂದು ವರ್ಷದಿಂದ ಮದ್ಯಪಾನ ನಿಷೇಧ ಹಾಗೂ ಮದ್ಯ ಮಾರಾಟ ನಿಷೇಧ ಜಾರಿಯಾಗಿದೆ. ಇದರಿಂದ ಈಗ ಗ್ರಾಮದಲ್ಲಿ ನೆಮ್ಮದಿ ಮನೆ ಮಾಡಿದೆ. ಮಹಿಳೆಯರ ಹೋರಾಟ ಈಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.&lt;/p&gt;&lt;p&gt;ಹತ್ತು ಸಾವಿರ ರೊಟ್ಟಿ:ಹಟ್ಟಿ ಗ್ರಾಮದಲ್ಲಿ ಗವಿಸಿದ್ದೇಶ್ವರ ಮಠದ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಅವರು ಪ್ರತಿ ವರ್ಷ 10,000ಕ್ಕೂ ಅಧಿಕ ರೊಟ್ಟಿ ಕೈಯಿಂದಲೇ ತಟ್ಟಿ ತಯಾರಿಸಿ, ಗವಿಸಿದ್ದೇಶ್ವರ ಜಾತ್ರೆಗೆ ತಂದುಕೊಡುತ್ತಾರೆ. ಇದಕ್ಕಾಗಿ ಒಗ್ಗಟ್ಟಾದ ಮಹಿಳೆಯರು ರೊಟ್ಟಿ ತಟ್ಟುತ್ತಲೆ ತಮ್ಮೂರಿನ ಗಂಭೀರ ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ. ಮದ್ಯಪಾನ ವಿರುದ್ಧ ಹೋರಾಡಲು ತೀರ್ಮಾನಿಸಿದ್ದಾರೆ. ಇದರ ಫಲವೇ ಈಗ ರಾಜ್ಯ ಮದ್ಯಪಾನ ಸಂಯಮ ಮಂಡಳಿ ರಾಜ್ಯಮಟ್ಟದ ಪ್ರಶಸ್ತಿ.&lt;/p&gt;&lt;p&gt;ನಮ್ಮೂರು ಮಹಿಳೆಯರು ಹೋರಾಟ ಮಾಡಿದ ಪರಿಣಾಮ ಈಗ ಗ್ರಾಮ ಮದ್ಯಪಾನ ಮತ್ತು ಮದ್ಯ ಮಾರಾಟ ಮುಕ್ತವಾಗಿದೆ. ಇದುವೇ ಈಗ ರಾಜ್ಯಮಟ್ಟದ ಪ್ರಶಸ್ತಿ ಲಭಿಸುವಂತೆ ಮಾಡಿದೆ ಎಂದು ಗ್ರಾಮಸ್ಥ ರಾಮಣ್ಣ ಚೌಡ್ಕಿ ತಿಳಿಸಿದ್ದಾರೆ.&lt;/p&gt;&lt;p&gt;ಹಟ್ಟಿ ಗ್ರಾಮದ ಮಹಿಳೆಯರ ನಡೆ ನಿಜಕ್ಕೂ ಮಾದರಿ. ಇಂಥ ಮಹಿಳೆಯರನ್ನು ಗುರುತಿಸಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಗ್ರಾಮಕ್ಕೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/alcohol-free-village-in-koppal-received-a-state-level-award-today-rav/articleshow-9gmn9sd"/>
        </item>
        <item>
            <title><![CDATA[ಸಾವಿರಾರು ವಿದ್ಯಾರ್ಥಿಗಳು ಒಂದೇ ಕಡೆ ಸೇರಿದ್ದೇಕೆ? ಗಂಗಾವತಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾಡಿದ್ದೇನು?]]></title>
            <link>https://kannada.asianetnews.com/karnataka-districts/janardhana-reddy-flags-off-grand-triranga-yatra-in-gangavathi-gvd/articleshow-aeb71yz</link>
            <guid isPermaLink="true">https://kannada.asianetnews.com/karnataka-districts/janardhana-reddy-flags-off-grand-triranga-yatra-in-gangavathi-gvd/articleshow-aeb71yz</guid>
            <pubDate>Fri, 14 Aug 2026 17:17:01 +0530</pubDate>
            <description><![CDATA[&lt;p&gt;80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ &quot;ಬೃಹತ್ ತಿರಂಗ ಯಾತ್ರೆ&quot;ಗೆ ಶಾಸಕ ಜನಾರ್ದನ ರೆಡ್ಡಿ ಚಾಲನೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m001h28qjbk1ahnmvyf74cs1,imgname-nkn-1786708003095.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಆ.14):&lt;/strong&gt; 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ &quot;ಬೃಹತ್ ತಿರಂಗ ಯಾತ್ರೆ&quot;ಗೆ ಶಾಸಕ ಜನಾರ್ದನ ರೆಡ್ಡಿ ಚಾಲನೆ ನೀಡಿದರು. ಬಾಬು ಜಗಜೀವನ್ ರಾಮ್ ವೃತ್ತದಿಂದ ಆರಂಭವಾದ ತಿರಂಗಾ ಯಾತ್ರೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಂಚರಿಸಿ ಶ್ರೀ ಕೃಷ್ಣದೇವರಾಯ ವೃತ್ತಕ್ಕೆ ತಲುಪಿತು.&lt;/p&gt;&lt;p&gt;ಈ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ ಅವರು, ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಸೌಹಾರ್ದ್ಯತೆ ಮತ್ತು ಯುವಕರಲ್ಲಿ ದೇಶ ಪ್ರಜ್ಞೆ ಬರ ಬೇಕೆಂಬ ಉದ್ದೇಶದಿಂದ ತಿರಂಗ ಯಾತ್ರೆಗೆ ನೀಡಿದ ಸೂಚನೆ ಹಿನ್ನಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ಈ ಯಾತ್ರೆ ಹಮ್ಮಿಕೊಂಡಿದೆ. ಮಕ್ಕಳಲ್ಲಿ ಮತ್ತು ಯುವಕರಲ್ಲಿ ದೇಶ ಭಕ್ತಿ ಬರಬೇಕೆಂದು ತಿಳಿಸಿದರು.&lt;/p&gt;&lt;p&gt;ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಮೋದಿ ಅವರ ಆಪೇಕ್ಷದ ಮೇರೆಗೆ ಯುವಕರಲ್ಲಿ ದೇಶ ಭಕ್ತಿ ಮೂಡಬೇಕು ಮತ್ತು ಮನೆ ಮನೆಗಳಲ್ಲಿ ಧ್ವಜ ಹಾರಾಟ ಆಗಬೇಕು. ಮೂರು ದಿನಗಳ ಕಾಲ ಈ ಹಬ್ಬ ಆಚರಣೆಯಾಗಬೇಕೆಂದು ತಿಳಿಸಿದರು. ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ ಮಾತನಾಡಿ, ಈ ತಿರಂಗದ ಉದ್ದೇಶ ಮಕ್ಕಳಲ್ಲಿ ರಾಷ್ಟ್ರಭಕ್ತಿ ಮತ್ತು ಸೌಹಾರ್ದತೆ ಬೆಳೆಯಬೇಕೆನ್ನುವುದೇ ಈ ಕಾರ್ಯಕ್ರಮವಾಗಿದೆ ಎಂದರು.&lt;/p&gt;&lt;h2&gt;&lt;strong&gt;ಸಾವಿರಾರು ಮಕ್ಕಳು ಭಾಗಿ&lt;/strong&gt;&lt;/h2&gt;&lt;p&gt;ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ ಬೃಹತ್ ತಿರಂಗ ಯಾತ್ರೆಯಲ್ಲಿ ವಿವಿಧ ಕಾಲೇಜು ಮತ್ತು ಪ್ರೌಢ ಶಾಲೆಯ ಸಾವಿರಾರು ಮಕ್ಕಳು ಭಾಗಿಯಾಗಿದ್ದರು. ಈ ವೇಳೆ ಕೊಟ್ಟೂರು ಸ್ವಾಮೀಜಿ, ಬಿಜೆಪಿ ಜಿಲ್ಲಾ ಮಾಜಿ ಅದ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮನೋಹರ್ ಗೌಡ ಹೇರೂರು, ನಗರ ಮಂಡಲ ಅಧ್ಯಕ್ಷರಾದ ಚಂದ್ರು ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷರಾದ ಡಿಕೆ ಆಗೋಲಿ, ಯುವ ಮೋರ್ಚಾ ಅಧ್ಯಕ್ಷರಾದ ರಮೇಶ್ ಹೊಸಮಲಿ, ಮುಖಂಡರಾದ ಯಮನೂರ್ ಚೌಡ್ಕಿ, ಆನಂದಗೌಡ ಶರಣಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/janardhana-reddy-flags-off-grand-triranga-yatra-in-gangavathi-gvd/articleshow-aeb71yz"/>
        </item>
        <item>
            <title><![CDATA[ಗುಟ್ಕಾ ಬ್ಯಾನ್‌: ಕಂತೆ ಕಂತೆ ಹಣ ತಂದು ಗುಟ್ಕಾ ಖರೀದಿಸಿದ ಜನ!]]></title>
            <link>https://kannada.asianetnews.com/karnataka-districts/gutkha-ban-fear-people-in-koppal-buying-packets-worth-hundreds-of-rupees-rav/articleshow-brp77w1</link>
            <guid isPermaLink="true">https://kannada.asianetnews.com/karnataka-districts/gutkha-ban-fear-people-in-koppal-buying-packets-worth-hundreds-of-rupees-rav/articleshow-brp77w1</guid>
            <pubDate>Fri, 14 Aug 2026 04:55:08 +0530</pubDate>
            <description><![CDATA[ರಾಜ್ಯದಲ್ಲಿ ಗುಟ್ಕಾ ನಿಷೇಧದ ಸುದ್ದಿ ಹಬ್ಬುತ್ತಿದ್ದಂತೆ, ಕೊಪ್ಪಳ ಜಿಲ್ಲೆಯಲ್ಲಿ ಜನರು ಗುಟ್ಕಾ ಖರೀದಿಗೆ ಮುಗಿಬಿದ್ದಿದ್ದಾರೆ. ಸಾಲ ಮಾಡಿಕೊಂಡು ಬಂದು ಚೀಲಗಟ್ಟಲೆ ಗುಟ್ಕಾ ಖರೀದಿಸುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzypwv42vkmfyq5hpt4zbq1h,imgname-----------------------2026-08-14t044542.858-1786663300226.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಕೊಪ್ಪಳ (ಆ.14): &lt;/strong&gt;ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧ ಕುರಿತು ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯಲ್ಲಿ ಗುಟ್ಕಾ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡು ಬಂದಿತು. ಸಾಲ ಮಾಡಿ ಕಂತೆ ಕಂತೆ ಹಣ ಕೈಯಲ್ಲಿ ಹಿಡಿದುಕೊಂಡು ಬಂದು ಗುಟ್ಕಾ ಖರೀದಿಸಿ ಹೋಗುತ್ತಿರುವುದು ಅಚ್ಚರಿ ಮೂಡಿಸಿತು. ಎಷ್ಟಾದರೂ ಇರಲಿ, ಗುಟ್ಕಾ ಕೊಡಿ ಎಂದು ಚೀಲದಲ್ಲಿ ತುಂಬಿಕೊಂಡು ಸೈಕಲ್, ಬೈಕ್&zwnj;ನಲ್ಲಿ ಹೇರಿಕೊಂಡು ಹೋಗುತ್ತಿದ್ದಾರೆ.&lt;/p&gt;&lt;h2&gt;ಎಚ್ಚರವಾದ ವ್ಯಾಪಾರಸ್ಥರು:&lt;/h2&gt;&lt;p&gt;ಬೆಳಗ್ಗೆ ಗುಟ್ಕಾ ಖರೀದಿಗೆ ಬಂದವರಿಗೆ ಪ್ಯಾಕೆಟ್, ಚೀಲಗಟ್ಟಲೇ ಮಾರಾಟ ಮಾಡಿದವರು ಮಧ್ಯಾಹ್ನದ ವೇಳೆಗೆ ಗುಟ್ಕಾ ಸ್ಟಾಕ್&zwnj; ಇದ್ದರೂ ಮಾರಾಟ ಮಾಡದೆ ಖಾಲಿಯಾಗಿದೆ ಎಂದಿದ್ದಾರೆ. ಗೋದಾಮಿನಲ್ಲಿ ಗುಟ್ಕಾ ಇಟ್ಟರೆ ಸಮಸ್ಯೆಯಾಗುತ್ತದೆ ಎಂದು ಬೇರೆಡೆ ಸಾಗಿಸಿದ್ದಾರೆ.&lt;/p&gt;&lt;p&gt;ದುಬಾರಿ ಬೆಲೆ: ಯಾವುದೇ ಅಂಗಡಿಯಲ್ಲಿ ಗುಟ್ಕಾ ಕೇಳಿದರೂ ಇಲ್ಲ ಎನ್ನುತ್ತಿದ್ದಾರೆ. ಆದರೆ ಕದ್ದು ಮುಚ್ಚಿ ದುಬಾರಿ ಮೊತ್ತಕ್ಕೆ ಮಾರುತ್ತಿದ್ದಾರೆ. ₹25 ರು. ಇದ್ದ ಒಂದು ಗುಟ್ಕಾ ಪ್ಯಾಕೆಟ್&zwnj;ನ ಬೆಲೆ ಸದ್ಯ 100 ರು. ತಲುಪಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧ ಕುರಿತು ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯಲ್ಲಿ ಗುಟ್ಕಾ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡು ಬಂದಿತು. ಸಾಲ ಮಾಡಿ ಕಂತೆ ಕಂತೆ ಹಣ ಕೈಯಲ್ಲಿ ಹಿಡಿದುಕೊಂಡು ಬಂದು ಗುಟ್ಕಾ ಖರೀದಿಸಿ ಹೋಗುತ್ತಿರುವುದು ಅಚ್ಚರಿ ಮೂಡಿಸಿತು. ಎಷ್ಟಾದರೂ ಇರಲಿ, ಗುಟ್ಕಾ ಕೊಡಿ ಎಂದು ಚೀಲದಲ್ಲಿ ತುಂಬಿಕೊಂಡು ಸೈಕಲ್, ಬೈಕ್&zwnj;ನಲ್ಲಿ ಹೇರಿಕೊಂಡು ಹೋಗುತ್ತಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gutkha-ban-fear-people-in-koppal-buying-packets-worth-hundreds-of-rupees-rav/articleshow-brp77w1"/>
        </item>
        <item>
            <title><![CDATA[ಬೆಂಗಳೂರು–ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ರೈಲು ಕುಷ್ಟಗಿಗೆ ವಿಸ್ತರಿಸಲು ಒತ್ತಾಯ!]]></title>
            <link>https://kannada.asianetnews.com/karnataka-districts/kushtagi-demand-direct-train-to-bengaluru-swr-urged-to-extend-hubballi-superfast-express-gdp/articleshow-osm4bkk</link>
            <guid isPermaLink="true">https://kannada.asianetnews.com/karnataka-districts/kushtagi-demand-direct-train-to-bengaluru-swr-urged-to-extend-hubballi-superfast-express-gdp/articleshow-osm4bkk</guid>
            <pubDate>Fri, 21 Aug 2026 14:19:23 +0530</pubDate>
            <description><![CDATA[&lt;p&gt;ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು, ಬೆಂಗಳೂರು&ndash;ಹುಬ್ಬಳ್ಳಿ ಸೂಪರ್&zwnj;ಫಾಸ್ಟ್ ರೈಲನ್ನು ಕುಷ್ಟಗಿವರೆಗೆ ವಿಸ್ತರಿಸಿ, ರಾಜಧಾನಿಗೆ ನೇರ ಸಂಪರ್ಕ ಕಲ್ಪಿಸಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯಿಂದ ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಕಡಿಮೆ ವೆಚ್ಚದಲ್ಲಿ, ಸುರಕ್ಷಿತವಾಗಿ ಬೆಂಗಳೂರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzqn8j2c22bzrg9s4m376k2c,imgname-hubballi-ankola-train-double-track-new-project--3--1786426705996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುಷ್ಟಗಿ: &lt;/strong&gt;ಬೆಂಗಳೂರು&ndash;ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್&zwnj;ಫಾಸ್ಟ್ ರೈಲು ಸಂಖ್ಯೆ 20688/20687 ಅನ್ನು ಗದಗ ಹಾಗೂ ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿವರೆಗೆ ವಿಸ್ತರಿಸಿ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ. ಅನಂತ ಅವರಿಗೆ ಮನವಿ ಸಲ್ಲಿಸಿದರು.&lt;/p&gt;&lt;h2&gt;2025ರ ಮೇ.15ರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ನಿತ್ಯ ರೈಲು ಸಂಚಾರ&lt;/h2&gt;&lt;p&gt;ಪ್ರಮುಖರು ಮಾತನಾಡಿ, ಕುಷ್ಟಗಿ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸಬೇಕೆಂಬ ಜನರ ಏಳು ದಶಕಗಳ ಬೇಡಿಕೆ ಗದಗ&ndash;ವಾಡಿ ರೈಲ್ವೆ ಯೋಜನೆಯ ಮೂಲಕ ಈಡೇರಿದೆ. 2025ರ ಮೇ.15ರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ನಿತ್ಯ ರೈಲು ಸಂಚಾರ ಆರಂಭವಾಗಿದ್ದು, ಇದರಿಂದ ತಾಲೂಕಿನ ಜನರಿಗೆ ಅನುಕೂಲವಾಗಿದೆ. ಆದರೆ ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ಇಲ್ಲದಿರುವುದರಿಂದ ಸಾರ್ವಜನಿಕರು ಸರ್ಕಾರಿ ಹಾಗೂ ಖಾಸಗಿ ಬಸ್&zwnj; ಅವಲಂಬಿಸುವಂತಾಗಿದೆ. ಪ್ರತಿದಿನ ಬೆಂಗಳೂರಿಗೆ ತೆರಳುವ ಜನರಿಗೆ ಹೆಚ್ಚಿನ ಹಣ ವ್ಯಯಿಸಿ ಪ್ರಯಾಣಿಸಬೇಕಾಗಿದ್ದು ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸೇವೆ ಆರಂಭಿಸಬೇಕು ಎಂದು ತಿಳಿಸಿದರು.&lt;/p&gt;&lt;p&gt;ಪ್ರತ್ಯೇಕವಾಗಿ ಹೊಸ ರೈಲು ಆರಂಭಿಸುವ ಬದಲು ಬೆಂಗಳೂರು&ndash;ಹುಬ್ಬಳ್ಳಿ ನಡುವೆ ಈಗಾಗಲೇ ಸಂಚರಿಸುತ್ತಿರುವ ಸೂಪರ್&zwnj;ಫಾಸ್ಟ್ ರೈಲು ಸಂಖ್ಯೆ 20688/20687 ಅನ್ನು ಗದಗ ಹಾಗೂ ತಳಕಲ್ ಜಂಕ್ಷನ್ ಮಾರ್ಗವಾಗಿ ಕುಷ್ಟಗಿವರೆಗೆ ವಿಸ್ತರಿಸಬಹುದು. ಇದರಿಂದ ರೈಲ್ವೆ ಇಲಾಖೆಗೆ ಹೆಚ್ಚುವರಿ ಪ್ರಯಾಣಿಕರು ದೊರೆಯುವುದರ ಜತೆಗೆ ಕುಷ್ಟಗಿ ಭಾಗದ ಜನರ ಬಹುದಿನಗಳ ಬೇಡಿಕೆಯೂ ಈಡೇರಲಿದೆ ಎಂದರು.&lt;/p&gt;&lt;p&gt;ಬೆಂಗಳೂರಿನಿಂದ ರಾತ್ರಿ ಹೊರಟು ಬೆಳಗ್ಗೆ ಕುಷ್ಟಗಿ ತಲುಪುವ ಹಾಗೂ ಸಂಜೆ ಕುಷ್ಟಗಿಯಿಂದ ಬೆಂಗಳೂರಿನತ್ತ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಿದರೆ ಸಾರ್ವಜನಿಕರಿಗೆ ರಾತ್ರಿ ಪ್ರಯಾಣದ ಸೌಲಭ್ಯ ದೊರೆಯಲಿದೆ. ಪ್ರಸ್ತುತ ಬಸ್&zwnj;ಗಳಲ್ಲಿ ಪ್ರಯಾಣಿಸುವವರಿಗೆ ಹೋಲಿಸಿದರೆ ರೈಲು ಪ್ರಯಾಣ ಸುರಕ್ಷಿತ, ಕಡಿಮೆ ವೆಚ್ಚದ ಹಾಗೂ ಹೆಚ್ಚು ಆರಾಮದಾಯಕವಾಗಲಿದೆ ಎಂದು ತಿಳಿಸಿದರು.&lt;/p&gt;&lt;p&gt;ಕುಷ್ಟಗಿಗೆ ಬೆಂಗಳೂರು ರೈಲು ಸಂಪರ್ಕ ಕಲ್ಪಿಸಿದರೆ ಕುಷ್ಟಗಿ ತಾಲೂಕಿನ ಜನರಿಗೆ ಮಾತ್ರವಲ್ಲದೆ ಗಜೇಂದ್ರಗಡ, ಇಲಕಲ್, ಯಲಬುರ್ಗಾ, ಕುಕನೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರಿಗೂ ಅನುಕೂಲವಾಗಲಿದೆ. ಗದಗ ಜಿಲ್ಲೆಯ ವಿವಿಧ ಭಾಗಗಳ ಪ್ರಯಾಣಿಕರೂ ಈ ರೈಲು ಸೇವೆ ಬಳಸಿಕೊಳ್ಳಬಹುದಾಗಿದೆ.&lt;/p&gt;&lt;p&gt;ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೂ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಹೋರಾಟ ಸಮಿತಿ ಪ್ರಮುಖ ಭರತೇಶ ಜೋಷಿ, ಎನ್&zwnj;.ಎಸ್&zwnj;.ಘೋರ್ಪಡೆ, ಮಂಜುನಾಥ ಎಂ, ಉಮೇಶ ಮಂಗಳೂರು, ಸುರೇಶಗೌಡ ಕುಂಟನಗೌಡರ, ಮಲ್ಲಣ್ಣ ಪಲ್ಲೇದ, ವಿರೇಶ ಕರಡಿ ಸೇರಿದಂತೆ ಅನೇಕರು ಇದ್ದರು.&lt;/p&gt;&lt;p&gt;&lt;img&gt;&lt;/p&gt;&lt;p&gt;ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಬೆಂಗಳೂರು&ndash;ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್&zwnj;ಫಾಸ್ಟ್ ರೈಲು ಸಂಖ್ಯೆ 20688/20687 ಅನ್ನು ಗದಗ ಹಾಗೂ ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿವರೆಗೆ ವಿಸ್ತರಿಸಿ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ. ಅನಂತ ಅವರಿಗೆ ಮನವಿ ಸಲ್ಲಿಸಿದರು.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kushtagi-demand-direct-train-to-bengaluru-swr-urged-to-extend-hubballi-superfast-express-gdp/articleshow-osm4bkk"/>
        </item>
        <item>
            <title><![CDATA[ಜಮೀರ್, ನಾಗೇಂದ್ರರನ್ನು ಸಂಪುಟದಿಂದ ಕೈಬಿಡಿ: ಸರ್ಕಾರಕ್ಕೆ ಜನಾರ್ದನ ರೆಡ್ಡಿ ಎಚ್ಚರಿಕೆ ಕೊಟ್ಟಿದ್ಯಾಕೆ?]]></title>
            <link>https://kannada.asianetnews.com/karnataka-districts/janardhana-reddy-warns-karnataka-government-over-zameer-ahmed-and-nagendra-gvd/articleshow-p8gc87q</link>
            <guid isPermaLink="true">https://kannada.asianetnews.com/karnataka-districts/janardhana-reddy-warns-karnataka-government-over-zameer-ahmed-and-nagendra-gvd/articleshow-p8gc87q</guid>
            <pubDate>Sat, 15 Aug 2026 18:15:26 +0530</pubDate>
            <description><![CDATA[&lt;p&gt;ಅಭಿವೃದ್ಧಿಗೆ ಮೀಸಲಾದ ಹಣ ದುರುಪಯೋಗ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾಗಿರುವ ವಿಚಾರ ಮುಂದಿಟ್ಟುಕೊಂಡು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02q6av3nqbxbsp5cv0ejj5g,imgname-hc-1786797828963.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಆ.15): &lt;/strong&gt;ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಾದ ಹಣ ದುರುಪಯೋಗ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾಗಿರುವ ವಿಚಾರ ಮುಂದಿಟ್ಟುಕೊಂಡು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರಾದ ನಾಗೇಂದ್ರ ಮತ್ತು ಜಮೀರ್ ಅಹ್ಮದ್ ಅವರನ್ನು ಸಚಿವ ಸಂಪುಟದಿಂದ ಕೈಬಿಡದಿದ್ದರೆ ಸರ್ಕಾರಕ್ಕೆ ಧಕ್ಕೆಯಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಾರ್ದನ ರೆಡ್ಡಿ, ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರ ವಿರುದ್ಧದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ದುರುಪಯೋಗ ಪ್ರಕರಣವನ್ನು ಪ್ರಸ್ತಾಪಿಸಿದರು.&lt;/p&gt;&lt;p&gt;&lt;strong&gt;&lsquo;ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಅವಕಾಶ ನೀಡುತ್ತಿದೆ&rsquo;&lt;/strong&gt;&lt;/p&gt;&lt;p&gt;ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಹಣದ ಅವ್ಯವಹಾರ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ಪ್ರಶ್ನಿಸಿದ ಜನಾರ್ದನ ರೆಡ್ಡಿ, ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಸರ್ಕಾರ ಅವಕಾಶ ನೀಡುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು. ಮತ್ತೊಂದೆಡೆ, ವಿಜಯನಗರ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಲು ಸಚಿವ ಜಮೀರ್ ಅಹ್ಮದ್ ನಿರಾಕರಿಸಿರುವ ವಿಚಾರವನ್ನೂ ಅವರು ಪ್ರಸ್ತಾಪಿಸಿದರು. ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರೂ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಜಮೀರ್ ಲಿಖಿತವಾಗಿ ತಿಳಿಸಿದ್ದಾರೆ ಎಂದು ಆರೋಪಿಸಿದ ಜನಾರ್ದನ ರೆಡ್ಡಿ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. &lsquo;ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಧಕ್ಕೆಯಾಗುವುದು ಖಚಿತ&rsquo; ಎಂದು ಅವರು ಎಚ್ಚರಿಕೆ ನೀಡಿದರು.&lt;/p&gt;&lt;p&gt;&lt;strong&gt;&lsquo;ಸ್ವಾತಂತ್ರ್ಯ ಕೇವಲ ಒಂದು ದಿನದ ಆಚರಣೆಯಲ್ಲ&rsquo;&lt;/strong&gt;&lt;/p&gt;&lt;p&gt;ಸ್ವಾತಂತ್ರ್ಯೋತ್ಸವದ ಮಹತ್ವವನ್ನು ವಿವರಿಸಿದ ಜನಾರ್ದನ ರೆಡ್ಡಿ, ಸ್ವಾತಂತ್ರ್ಯವೆಂದರೆ ಕೇವಲ ಒಂದು ದಿನದ ಆಚರಣೆಯಲ್ಲ ಎಂದು ಹೇಳಿದರು. ದೇಶದ ಏಕತೆ, ಸಾರ್ವಭೌಮತೆ ಮತ್ತು ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ಸಂಕಲ್ಪ ಮಾಡಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿ, ಅಭಿವೃದ್ಧಿ ಹೊಂದಿದ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.&lt;/p&gt;&lt;h2&gt;&lt;strong&gt;&lsquo;ಬಳ್ಳಾರಿ ಮಾದರಿಯಲ್ಲಿ ಗಂಗಾವತಿ ಅಭಿವೃದ್ಧಿ&rsquo;&lt;/strong&gt;&lt;/h2&gt;&lt;p&gt;ಇದೇ ವೇಳೆ ಗಂಗಾವತಿ ನಗರದ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಜನಾರ್ದನ ರೆಡ್ಡಿ ಮಾಹಿತಿ ನೀಡಿದರು. ಬಳ್ಳಾರಿ ಮಾದರಿಯಲ್ಲಿ ಗಂಗಾವತಿಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು. ಅಮೃತ್ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ನವೀಕರಣ ಸೇರಿದಂತೆ ಹಲವು ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು. ಅಲ್ಲದೆ, ಸುಮಾರು ₹260 ಕೋಟಿ ವೆಚ್ಚದಲ್ಲಿ 27 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆನೆಗೊಂದಿಯನ್ನು ₹10 ಕೋಟಿ ವೆಚ್ಚದಲ್ಲಿ ಪಾರಂಪರಿಕ ಗ್ರಾಮವಾಗಿ ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದು ಜನಾರ್ದನ ರೆಡ್ಡಿ ಹೇಳಿದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/janardhana-reddy-warns-karnataka-government-over-zameer-ahmed-and-nagendra-gvd/articleshow-p8gc87q"/>
        </item>
        <item>
            <title><![CDATA[ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅಪರಾಧಿ ಅಲ್ಲ, ಅವರೇಕೆ ಹುದ್ದೆ ಬಿಡಬೇಕು: ತಂಗಡಗಿ]]></title>
            <link>https://kannada.asianetnews.com/politics/valmiki-corporation-scam-minister-tangadagi-bats-for-b-nagendra-rav/articleshow-q06rl9b</link>
            <guid isPermaLink="true">https://kannada.asianetnews.com/politics/valmiki-corporation-scam-minister-tangadagi-bats-for-b-nagendra-rav/articleshow-q06rl9b</guid>
            <pubDate>Wed, 12 Aug 2026 06:52:12 +0530</pubDate>
            <description><![CDATA[&lt;p&gt;ಸಚಿವ ನಾಗೇಂದ್ರ ಅವರು ಕೇವಲ ಆರೋಪಿಯಾಗಿದ್ದು, ಅಪರಾಧಿಯಲ್ಲ, ಹಾಗಾಗಿ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಬಿಜೆಪಿಯ ಅನೇಕ ನಾಯಕರು ಬೇಲ್ ಮೇಲೆ ಇದ್ದು, ರಾಮಮಂದಿರದ ಹುಂಡಿ ಹಣ ಹೊಡೆದಿದ್ದಾರೆ, ಅವರಿಗೆ ಪ್ರತಿಭಟಿಸುವ ನೈತಿಕ ಹಕ್ಕಿಲ್ಲ ಎಂದು ಅವರು ತಿರುಗೇಟು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzsreqth1m8f40dyf85f3kna,imgname-----------------------2026-08-12t064022.413-1786497163089.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಆ.12):&lt;/strong&gt; ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಬೇಕು. ಅವರೇನು ಅಪರಾಧಿಗಳಲ್ಲ, ಬರಿ ಆರೋಪಿ ಅಷ್ಟೇ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಾಕೆ ಹೋರಾಟ ಮಾಡುತ್ತಾರೆ. ಅವರಲ್ಲಿ ಎಷ್ಟು ನಾಯಕರು ಬೇಲ್ ಮೇಲೆ ಇಲ್ಲ ಎಂದು ಕುಟುಕಿದರು.&lt;/p&gt;&lt;h2&gt;ಬಿಜೆಪಿ ಮಾಡೋದೆಲ್ಲ ಒಳ್ಳೆಯದು, ಕಾಂಗ್ರೆಸ್&zwnj;ನವರು ಮಾಡಿದ್ರೆ ಕೆಟ್ಟದ್ದಾ?&lt;/h2&gt;&lt;p&gt;ಗಂಗಾವತಿ ಶಾಸಕ ಜನಾರ್ದನರೆಡ್ಡಿ ಅವರಿಗೆ ಈ ಕುರಿತು ಪ್ರಶ್ನೆ ಮಾಡುವ ಅಧಿಕಾರವೇ ಇಲ್ಲ. ಅವರೇ ಯಾವ ಯಾವ ಕೇಸ್&zwnj;ನಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲವೇ, ಅದಿರು ಹಗರಣ ಬಗ್ಗೆ ಜನರಿಗೆ ಗೊತ್ತಿಲ್ಲವೇ ಎಂದರು.&lt;/p&gt;&lt;p&gt;ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಈಗ ನಾನು ಏಟು ತಿಂದ ಹುಲಿ, ಬಿಜೆಪಿ ಆರೋಪಕ್ಕೆ ಉತ್ತರಿಸುವೆ -ನಾಗೇಂದ್ರ&lt;/p&gt;&lt;p&gt;ಬಿಜೆಪಿಯವರು ತಾವು ಮಾಡಿದ್ದೆಲ್ಲ ಒಳ್ಳೆಯದು, ಕಾಂಗ್ರೆಸ್ ನವರು ಮಾಡಿದರೆ ಕೆಟ್ಟದ್ದಾ? ಬಿಜೆಪಿಯವರು ರಾಮರಾಮ ಎಂದು ರಾಮಮಂದಿರ ನಿರ್ಮಾಣ ಮಾಡಿ ರಾಮನ ಹುಂಡಿ ಹೊಡೆದರಲ್ಲ, ಇದಕ್ಕೆ ಏನು ಹೇಳುತ್ತಾರೆ ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;B Nagendra: ಕೋರ್ಟ್&zwnj; ಷರತ್ತು ಮೀರಿ ನಾಗೇಂದ್ರ ದಿಲ್ಲಿ ಭೇಟಿ: ಇಡಿ ತನಿಖೆ, ಸಾಕ್ಷ್ಯ ಸಿಕ್ಕರೆ ಏನಾಗುತ್ತೆ?&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/valmiki-corporation-scam-minister-tangadagi-bats-for-b-nagendra-rav/articleshow-q06rl9b"/>
        </item>
        <item>
            <title><![CDATA[ಕೊಪ್ಪಳಕ್ಕೆ ಬಿಗ್ ನ್ಯೂಸ್! 2 ವರ್ಷದಲ್ಲಿ ಆರೋಗ್ಯ ಸೇವೆ ವಿಸ್ತರಣೆ: ಸದ್ಗುರು ಮಧುಸೂದನ ಸಾಯಿ ಘೋಷಣೆ]]></title>
            <link>https://kannada.asianetnews.com/karnataka-districts/madhusudana-sai-announces-healthcare-expansion-in-koppal-and-north-karnataka-gvd/articleshow-rzqfgu5</link>
            <guid isPermaLink="true">https://kannada.asianetnews.com/karnataka-districts/madhusudana-sai-announces-healthcare-expansion-in-koppal-and-north-karnataka-gvd/articleshow-rzqfgu5</guid>
            <pubDate>Sun, 23 Aug 2026 22:05:10 +0530</pubDate>
            <description><![CDATA[&lt;p&gt;Madhusudana Sai: ಜಿಲ್ಲೆಯ ಹಲವು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣ ಸೇರಿದಂತೆ ಹಲವು ವಿಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರು ವೈದ್ಯರಾಗಿ ಸೇವೆ ಸಲ್ಲಿಸಲು ಸಿದ್ಧರಿರುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qpsr7w6aht904z2ekg190c,imgname-whatsapp-image-2026-08-23-at-9.45.48-pm-1787502059772.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಆ.23): &lt;/strong&gt;ಇದೇ ಜಿಲ್ಲೆಯ ಹಲವು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣ ಸೇರಿದಂತೆ ಹಲವು ವಿಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರು ವೈದ್ಯರಾಗಿ ಸೇವೆ ಸಲ್ಲಿಸಲು ಸಿದ್ಧರಿರುತ್ತಾರೆ. ಆ ಬಳಿಕ ಕೊಪ್ಪಳ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ವಿಸ್ತರಿಸುವ ಉದ್ದೇಶವಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.&lt;/p&gt;&lt;p&gt;ನಗರದಲ್ಲಿ ಭಾನುವಾರ (ಆಗಸ್ಟ್ 23) ನಡೆದ &quot;ದಿವ್ಯ ಸಂಜೆ&quot; ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದ ಮತ್ತು ವಾಗ್ಮಿ ಗಂಗಾವತಿ ಪ್ರಾಣೇಶ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸದ್ಗುರು, ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದುಕೊಂಡಿದ್ದೇವೆ. ಅನ್ನ ದಾಸೋಹ, ಅಕ್ಷರ ದಾಸೋಹ ಮತ್ತು ಆರೋಗ್ಯ ದಾಸೋಹದ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಪೋಷಕರಿಬ್ಬರೂ ಉದ್ಯೋಗಸ್ಥರಾಗಿರುವುದರಿಂದ ಮಕ್ಕಳ ಬೆಳವಣಿಗೆ ಗಮನಿಸಲು ಸಾಕಷ್ಟು ಸಮಯ ದೊರೆಯುತ್ತಿಲ್ಲ. ಮತ್ತೊಂದೆಡೆ ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವವೂ ವ್ಯಾಪಕವಾಗುತ್ತಿದೆ. ಮಕ್ಕಳು ದಾರಿ ತಪ್ಪುತ್ತಿರುವುದು ಭವಿಷ್ಯದ ಸಮಾಜಕ್ಕೆ ಗಂಭೀರ ಅಪಾಯವಾಗಿದೆ ಎಂದು ಎಚ್ಚರಿಸಿದರು.&lt;img&gt;&lt;/p&gt;&lt;p&gt;ವಿದೇಶಗಳ ಮಕ್ಕಳಲ್ಲಿ ಕಂಡುಬರುವ ಹಿಂಸಾಚಾರ, ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ, ಶಸ್ತ್ರಾಸ್ತ್ರಗಳ ದುರುಪಯೋಗದಂತಹ ಸಮಸ್ಯೆಗಳು ಭಾರತದಲ್ಲಿಯೂ ಕಾಣಿಸಿಕೊಳ್ಳುವ ಆತಂಕವಿದೆ. ಇಂತಹ ಸಮಸ್ಯೆಗಳಿಗೆ ಮೌಲ್ಯಾಧಾರಿತ ಶಿಕ್ಷಣವೇ ಶಾಶ್ವತ ಪರಿಹಾರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ನಮ್ಮ ದೇಶವು ನಿಜವಾದ ಅರ್ಥದಲ್ಲಿ 'ವಿಕಸಿತ ಭಾರತ' ಆಗಬೇಕಾದರೆ ನಮ್ಮ ಹಳ್ಳಿಗಳು ಮೊದಲು ಅಭಿವೃದ್ಧಿಯಾಗಬೇಕು. ಗ್ರಾಮೀಣ ಜನರಿಗೆ ಅಗತ್ಯ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು. ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬಡತನ ಮತ್ತು ಮೂಲಸೌಲಭ್ಯಗಳ ಕೊರತೆಯನ್ನು ಗಮನಿಸಿದ್ದೇವೆ. ಕೊಪ್ಪಳದಲ್ಲಿ ಗುರುಕುಲದ ಮೂಲಕ ಶಿಕ್ಷಣ ಸೇವೆಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.&lt;/p&gt;&lt;p&gt;ಶಾಸಕ ರಾಘವೇಂದ್ರ ಹಿಟ್ನಾಳ್, ಕೈಗಾರಿಕೋದ್ಯಮಿ ಶ್ರೀನಿವಾಸ ಗುಪ್ತ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಕರಡಿ ಸಂಗಣ್ಣ, ಶಾರದಾ ಶಿಕ್ಷಣ ಸಂಸ್ಥೆಗಳ ಸ್ಥಾಪಕ ವಿ.ಆರ್.ಪಾಟೀಲ್, ಗಂಗಾವತಿ ಕ್ಷೇತ್ರದ ಮಾಜಿ ಶಾಸಕರಾದ ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ಶರಣಪ್ಪ, ಉದ್ಯಮಿ ಗುರುರಾಜ್ ಹಾಲಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.&lt;/p&gt;&lt;p&gt;ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ವೇದಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆಸಕ್ತಿಯಿಂದ ಪಾಲ್ಗೊಂಡ ನೂರಾರು ನಾಗರಿಕರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ &quot;ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್&quot; ನಿರ್ವಹಿಸುತ್ತಿರುವ ಸೇವಾ ಚಟುವಟಿಕೆಗಳ ಅಗಾಧತೆಯ ಪರಿಚಯ ಮಾಡಿಕೊಂಡರು. ಸಂಸ್ಥೆಯ ಕಾರ್ಯಚಟುವಟಿಕೆಗಳ ವಿಡಿಯೊ ಪ್ರದರ್ಶಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಶಾಂತಗೌಡ ಬಿರಾದಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ &quot;ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ&quot; ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ಸ್ವರಮೇಳ (ಸಾಯಿ ಸಿಂಫನಿ ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.&lt;img&gt;&lt;/p&gt;&lt;p&gt;&lt;strong&gt;ಡಾ. ಎಚ್&zwnj;.ಡಿ. ಪಾಟೀಲ ಅವರಿಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ&lt;/strong&gt;&lt;/p&gt;&lt;p&gt;ಕಾರ್ಯಕ್ರಮದಲ್ಲಿ ಕೆಪಿಎಸ್&zwnj;ಸಿ ಮಾಜಿ ಸದಸ್ಯರೂ ಆದ ಸಮಾಜ ಸೇವಕ ಡಾ. ಎಚ್&zwnj;.ಡಿ. ಪಾಟೀಲ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಕರ್ನಾಟಕ ಪರಿವರ್ತಕ ಪ್ರಶಸ್ತಿ' ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಚ್.ಡಿ.ಪಾಟೀಲ್, ಕಲ್ಯಾಣ ಕರ್ನಾಟಕವು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ತಮ್ಮ ವೈದ್ಯಕೀಯ ಕ್ಷೇತ್ರದ ಸೌಲಭ್ಯಗಳು ಈ ಭಾಗಕ್ಕೂ ವಿಸ್ತರಿಸಬೇಕು. 'ಕೃಷಿ ಋಷಿ' ಮೂಲಕ ನಮ್ಮ ಜಿಲ್ಲೆಯ ರೈತರನ್ನೂ ಗೌರವಿಸಿ ಎಂದು ಮನವಿ ಮಾಡಿದರು.&lt;/p&gt;&lt;p&gt;&lt;strong&gt;ಸೇವೆಗೆ ಮಿಗಿಲಾದ ಧರ್ಮವಿಲ್ಲ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ&lt;/strong&gt;&lt;/p&gt;&lt;p&gt;ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ತಮ್ಮ ಅನುಪಸ್ಥಿತಿಯಲ್ಲಿ ಸಂದೇಶವನ್ನು ಕಳುಹಿಸಿದ್ದರು. &quot;ಸೇವೆಗೆ ಮಿಗಿಲಾದ ಧರ್ಮವಿಲ್ಲ, ನಿಸ್ವಾರ್ಥ ಮನಸ್ಸಿಗಿಂತ ದೊಡ್ಡ ಸಂಪತ್ತಿಲ್ಲ. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸೇವಾಯಜ್ಞ ಶ್ಲಾಘನೀಯ. ಈ ಸಮಾಜಮುಖಿ ಸತ್ಕಾರ್ಯವು ಇನ್ನಷ್ಟು ಜನರಿಗೆ ತಲುಪಬೇಕು. ಇದು ನಿರಂತರವಾಗಿ ಹೀಗೆಯೇ ಮುಂದುವರಿಯಲಿ&quot; ಎಂದು ಆಶಯ ವ್ಯಕ್ತಪಡಿಸಿದ್ದರು.&lt;/p&gt;&lt;p&gt;ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ, &quot;ಪ್ರತಿ ಜೀವಿಯಲ್ಲೂ ತನ್ನನ್ನು ಕಾಣುವ ಏಕತ್ವದ ಅನುಭವವೇ ನಿಜವಾದ ಜ್ಞಾನ. ಭಕ್ತನು ಕರುಣೆ ಮತ್ತು ಪ್ರೀತಿಯನ್ನು ಜಗತ್ತಿನ ಜೀವಿಗಳ ಮೇಲೆ ಸುರಿಸಿ ಸಂತೋಷ ನೀಡುವುದೇ ಶ್ರೇಷ್ಠ ಪೂಜೆ. ಸುಖ, ಭೋಗ ಮತ್ತು ಕೀರ್ತಿಗಳಲ್ಲಿ ನಿಜವಾದ ಸಂತೋಷವಿಲ್ಲ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳ ಸಮಗ್ರ ಬೆಳವಣಿಗೆಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಮಾರ್ಗದರ್ಶನ ನೀಡುತ್ತಿದ್ದಾರೆ&quot; ಎಂದು ಹೇಳಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ತನ್ನ ಬದುಕಿನ ಕಥನ ಹಂಚಿಕೊಂಡ ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಗುರುಕುಲದ 7ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್, &quot;ನನ್ನ ಪೋಷಕರು ಆರ್ಥಿಕ ಸಂಕಷ್ಟದಲ್ಲಿದ್ದರು. ನನಗೆ ಸರಿಯಾದ ಶಿಕ್ಷಣ ಸಿಗುವಂತೆ ಮಾಡುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಆದರೆ ಗುರುಕುಲಕ್ಕೆ ಸೇರಿದ ಬಳಿಕ ಶಿಕ್ಷಣ, ಊಟ, ವಸತಿ ಹಾಗೂ ಕ್ರೀಡೆ ಸೇರಿದಂತೆ ಎಲ್ಲ ಸೌಲಭ್ಯಗಳು ಉಚಿತವಾಗಿ ದೊರೆಯುತ್ತಿವೆ. ಅಕ್ಕನಿಗೆ ನರ್ಸಿಂಗ್ ಓದಲು ಅವಕಾಶ ಮಾಡಿಕೊಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಂದೆಗೆ ಉಚಿತ ಚಿಕಿತ್ಸೆ ಸಿಕ್ಕಿದೆ. ಭವಿಷ್ಯದಲ್ಲಿ ದೊಡ್ಡ ವಿಜ್ಞಾನಿಯಾಗಿ ಸಾಕಷ್ಟು ಹಣ ಮಾಡಬೇಕು ಎನ್ನುವ ಆಸೆ ಈ ಮೊದಲು ಇತ್ತು. ವಿಜ್ಞಾನಿಯಾಗಬೇಕು ಎನ್ನುವ ಆಸೆ ಈಗಲೂ ಇದೆ. ಆದರೆ ಹಣ ಮಾಡಬೇಕೆನ್ನುವ ಆಸೆ ಹೋಗಿದೆ. ದೇಶಸೇವೆ ಮಾಡುವ ಆಸೆ ಮೊಳೆತಿದೆ&quot; ಎಂದು ವಿವರಿಸಿದರು.&lt;img&gt;&lt;/p&gt;&lt;h2&gt;&lt;strong&gt;ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಪರಿಚಯ&lt;/strong&gt;&lt;/h2&gt;&lt;p&gt;ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಮಾಜಮುಖಿ ಸೇವೆ ಮತ್ತು ಸಂಸ್ಕಾರವನ್ನು ವಿದ್ಯಾರ್ಥಿಗಳ ಬದುಕಿನ ಭಾಗವಾಗಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಗುರುಕುಲ ಕಾರ್ಯನಿರ್ವಹಿಸುತ್ತಿದೆ. ಜೂನ್ 5, 2018ರಂದು ಸ್ಥಾಪನೆಯಾದ ಈ ಬಾಲಕರ ಕ್ಯಾಂಪಸ್, ಶಿಕ್ಷಣ ಮತ್ತು ಸೇವೆಯ ಸಮನ್ವಯದ ಕೇಂದ್ರವಾಗಿ ಬೆಳೆದಿದೆ. 50 ಎಕರೆ ಶುಷ್ಕ ಭೂಮಿಯಲ್ಲಿ ಆರಂಭವಾದ ಕ್ಯಾಂಪಸ್ ಇಂದು ಹಸಿರು ಪರಿಸರದ ಸುಂದರ ಆವರಣವಾಗಿ ರೂಪುಗೊಂಡಿದೆ.&lt;/p&gt;&lt;p&gt;ಈ ವರೆಗೆ 237 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದು, ಪ್ರಸ್ತುತ 58 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಶೇ 60ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯವರು, ಶೇ 93ರಷ್ಟು ವಿದ್ಯಾರ್ಥಿಗಳು ಬಿಪಿಎಲ್ ಕುಟುಂಬಗಳಿಗೆ ಸೇರಿದವರು. ಶಿಕ್ಷಣದ ಜೊತೆಗೆ ವೇದ, ಭಜನೆ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಮೂಲಕ ಸಂಸ್ಕಾರಯುತ ಹಾಗೂ ಸಮಾಜಮುಖಿ ನಾಗರಿಕರನ್ನು ರೂಪಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಶೀಘ್ರದಲ್ಲೇ ಆರೋಗ್ಯ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶವನ್ನೂ ಸಂಸ್ಥೆಯು ಹೊಂದಿದೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/madhusudana-sai-announces-healthcare-expansion-in-koppal-and-north-karnataka-gvd/articleshow-rzqfgu5"/>
        </item>
        <item>
            <title><![CDATA[Koppal: ಇತಿಮಿತಿಯಲ್ಲಿ ಯೋಚಿಸಿ ಹೆಜ್ಜೆ ಇಡಿ; ಸಚಿವ ಶಿವರಾಜ್ ತಂಗಡಗಿಗೆ ಸ್ವಪಕ್ಷದ ಹಿರಿಯ ನಾಯಕನ ಖಡಕ್ ಎಚ್ಚರಿಕೆ!]]></title>
            <link>https://kannada.asianetnews.com/karnataka-districts/gangavathi-politics-iqbal-ansari-shivraj-tangadagi-janardhana-reddy-allegations-bmk/articleshow-s4u9ndx</link>
            <guid isPermaLink="true">https://kannada.asianetnews.com/karnataka-districts/gangavathi-politics-iqbal-ansari-shivraj-tangadagi-janardhana-reddy-allegations-bmk/articleshow-s4u9ndx</guid>
            <pubDate>Wed, 26 Aug 2026 16:05:24 +0530</pubDate>
            <description><![CDATA[ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸ್ವಪಕ್ಷದ ಸಚಿವ ಶಿವರಾಜ್ ತಂಗಡಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದೇ ವೇಳೆ, ಶಾಸಕ ಜನಾರ್ದನ ರೆಡ್ಡಿ ಅವರನ್ನು 'ಸುಳ್ಳಿನ ಗುಡ್ಡ' ಎಂದು ಕರೆದು, 35 ವರ್ಷಗಳ ಹಿಂದಿನ ಫೈನಾನ್ಸ್ ಕಂಪನಿ ವಂಚನೆ ಪ್ರಕರಣವನ್ನು ನೆನಪಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0yt6tgejqghy9xkk8kbb2jb,imgname-shivaraj-tangadagi-1787740514830.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳ ಜಿಲ್ಲೆಯ ಗಂಗಾವತಿ ರಾಜಕಾರಣದಲ್ಲಿ ಭಿನ್ನಮತ ಮತ್ತು ರಾಜಕೀಯ ವಾಗ್ದಾಳಿಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಕೊಪ್ಪಳದ ಗಂಗಾವತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ, ಸ್ವಪಕ್ಷದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಗಂಗಾವತಿಯ ಶಾಸಕರಾದ ಜನಾರ್ದನ ರೆಡ್ಡಿ ಅವರ ವಿರುದ್ಧವೂ ಹಳೆಯ ಪ್ರಕರಣಗಳನ್ನು ನೆನಪಿಸಿ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಸಚಿವ ಶಿವರಾಜ್ ತಂಗಡಗಿ ವಿರುದ್ಧ ಅಸಮಾಧಾನ!&lt;/strong&gt;&lt;/h2&gt;&lt;p&gt;ತಾವು ಮತ್ತು ಸಚಿವ ಶಿವರಾಜ್ ತಂಗಡಗಿ ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದು ಸ್ಪಷ್ಟಪಡಿಸಿದ ಇಕ್ಬಾಲ್ ಅನ್ಸಾರಿ, ತಂಗಡಗಿ ಅವರು ತಮ್ಮ ಇತಿಮಿತಿಯಲ್ಲಿ ಯೋಚನೆ ಮಾಡಿ ಹೆಜ್ಜೆ ಇಡಬೇಕು ಎಂದು ಎಚ್ಚರಿಸಿದ್ದಾರೆ. ನಾನು ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸೋತಿರಬಹುದು, ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಗಂಗಾವತಿಯಲ್ಲಿ ಪಿಯೂನ್&zwnj;ನಿಂದ ಹಿಡಿದು ಪ್ರತಿಯೊಬ್ಬ ಅಧಿಕಾರಿಯನ್ನು ತಂಗಡಗಿ ಅವರೇ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;&lt;h3&gt;&lt;strong&gt;ಅನ್ಸಾರಿ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ತಮ್ಮ ಕಾರ್ಯಕರ್ತರ ಕೆಲಸಗಳು ಸುಲಭವಾಗಿ ಆಗಲು ಬೇಕಾದ ಅಧಿಕಾರಿಗಳನ್ನು ಹಾಕಿಕೊಳ್ಳುವುದು ತಮ್ಮ ಕರ್ತವ್ಯವಾಗಿದ್ದು, ಇದನ್ನು ದುಡ್ಡು ಮಾಡಲು ಮಾಡುತ್ತಿಲ್ಲ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ಅನ್ಸಾರಿ ಹೇಳಿದರು. ಒಂದು ವೇಳೆ ಸಚಿವರು ಈ ವಿಷಯವನ್ನು ಅರ್ಥ ಮಾಡಿಕೊಳ್ಳದಿದ್ದರೆ, ಸಾರ್ವಜನಿಕರ ಮುಂದೆ ಬಂದು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಜನಾರ್ದನ ರೆಡ್ಡಿ ವಿರುದ್ಧ ಗಂಭೀರ ಆರೋಪ!&lt;/strong&gt;&lt;/h3&gt;&lt;p&gt;ಇದೇ ವೇಳೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧವೂ ಹರಿಹಾಯ್ದ ಅನ್ಸಾರಿ, ರೆಡ್ಡಿ ಅವರನ್ನು &quot;ಸುಳ್ಳಿನ ದೊಡ್ಡ ಗುಡ್ಡ&quot; ಎಂದು ಬಣ್ಣಿಸಿದ್ದಾರೆ. ಜನಾರ್ದನ ರೆಡ್ಡಿ ಬಂದಾಗಲೆಲ್ಲ ದೇವರ ಪೂಜೆ ಮಾಡಿಕೊಂಡು ಹೋಗಿ, ಭಗವಂತನ ಕೃಪೆ ಎಂದು ಹೇಳುತ್ತಾ ಜನರಿಗೆ ಮರಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗಂಗಾವತಿಯ ಮುಗ್ಧ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ, ಮರಳು ಮಾಡಿ ಮತ ಪಡೆದು ಗೆದ್ದಿದ್ದಾರೆ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರದಿಂದ ಮನೆ ಕಟ್ಟಿಸಿಕೊಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಬೇಕು; ಅದನ್ನು ಬಿಟ್ಟು ಈಗ ಕೊಟ್ಟ ಮಾತನ್ನು ನಡೆಸಿಕೊಡಲು ಏನೇನೋ ನೆಪಗಳನ್ನು ಹೇಳಬಾರದು ಎಂದು ಆಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಫೈನಾನ್ಸ್ ಕಂಪನಿ ವಂಚನೆ ಪ್ರಕರಣ ನೆನಪಿಸಿದ ಅನ್ಸಾರಿ!&lt;/strong&gt;&lt;/h3&gt;&lt;p&gt;ಜನಾರ್ದನ ರೆಡ್ಡಿ ಅವರ ಗತಕಾಲದ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಇಕ್ಬಾಲ್ ಅನ್ಸಾರಿ, &quot;ಸುಮಾರು 35 ವರ್ಷಗಳ ಹಿಂದೆ ಜನಾರ್ದನ ರೆಡ್ಡಿ 'ಎನೋಬಲ್ ಇಂಡಿಯಾ' ಎನ್ನುವ ಫೈನಾನ್ಸ್ ಕಂಪನಿಯನ್ನು ತೆರೆದಿದ್ದರು. ಆ ಮೂಲಕ ಸಾರ್ವಜನಿಕರಿಂದ ಹಣ ಹಾಕಿಸಿಕೊಂಡು ರಾತೋರಾತ್ರಿ ಓಡಿ ಹೋಗಿದ್ದರು. ಆ ಕಂಪನಿಯಲ್ಲಿ ಹಣ ಹಾಕಿ ಮೋಸ ಹೋದ ಜನರು ಇಂದಿಗೂ ಗಂಗಾವತಿಯಲ್ಲಿ ಇದ್ದಾರೆ. ಅವರನ್ನು ಕೇಳಿದರೆ ಜನಾರ್ದನ ರೆಡ್ಡಿ ಅವರ ನೈಜ ಬಣ್ಣ ಏನೆಂಬುದು ಗೊತ್ತಾಗುತ್ತದೆ&quot; ಎಂದು ಹೇಳುವ ಮೂಲಕ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/gangavathi-politics-iqbal-ansari-shivraj-tangadagi-janardhana-reddy-allegations-bmk/articleshow-s4u9ndx"/>
        </item>
        <item>
            <title><![CDATA[BEO ಕಚೇರಿ ಅಧೀಕ್ಷಕ ಮಂಜುನಾಥ್ ಆತ್ಮ*ತ್ಯೆ ಶಂಕೆ; ಡೆತ್ ನೋಟ್‌ನಲ್ಲಿ ಮೂವರು ಅಧಿಕಾರಿಗಳ ಹೆಸರು!]]></title>
            <link>https://kannada.asianetnews.com/karnataka-districts/beo-office-superintendent-manjunath-death-note-three-of-icers-names-karnataka-news-bmk/articleshow-snlpabc</link>
            <guid isPermaLink="true">https://kannada.asianetnews.com/karnataka-districts/beo-office-superintendent-manjunath-death-note-three-of-icers-names-karnataka-news-bmk/articleshow-snlpabc</guid>
            <pubDate>Mon, 24 Aug 2026 21:31:16 +0530</pubDate>
            <description><![CDATA[ಗಂಗಾವತಿ ಬಿಇಓ ಕಚೇರಿ ಅಧೀಕ್ಷಕ ಮಂಜುನಾಥ್, ತುಂಗಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್&zwnj;ನಲ್ಲಿ, ಕೆಲಸದ ಒತ್ತಡ ಹಾಗೂ ಮಾನಸಿಕ ಕಿರುಕುಳ ನೀಡಿದ ಮೂವರು ಮೇಲಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0t81be15jey61ce26n4w5bc,imgname-beo-manju--1787587243457.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಓ) ಕಚೇರಿಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಹೆಚ್.ಜಿ. (53) ಅವರು ತುಂಗಭದ್ರಾ ಎಡದಂಡೆ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದೆ. ಹಲವು ವರ್ಷಗಳಿಂದ ಇದೇ ಕಚೇರಿಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದ ವಿಕಲಚೇತನ ಅಧಿಕಾರಿಯೊಬ್ಬರು ಈ ನಿರ್ಧಾರಕ್ಕೆ ಬಂದಿರುವುದು ಇಡೀ ಇಲಾಖೆಯನ್ನು ಆಘಾತಕ್ಕೆ ಈಡುಮಾಡಿದೆ.&lt;/p&gt;&lt;h2&gt;&lt;strong&gt;ಸ್ಥಳದಲ್ಲಿ ತ್ರಿಚಕ್ರ ವಾಹನ ಹಾಗೂ ಡೆತ್ ನೋಟ್ ಪತ್ತೆ!&lt;/strong&gt;&lt;/h2&gt;&lt;p&gt;ಸೋಮವಾರ ಬೆಳಿಗ್ಗೆ ವಡ್ಡರಹಟ್ಟಿ ಹಾಗೂ ಆರಾಳ್ ಗ್ರಾಮದ ಮಧ್ಯೆ ಹಾದುಹೋಗುವ ತುಂಗಭದ್ರಾ ಎಡದಂಡೆ ಕಾಲುವೆಯ ದಂಡೆಯ ಮೇಲೆ ಮಂಜುನಾಥ್ ಅವರ ತ್ರಿಚಕ್ರ ವಾಹನ (ದಿವ್ಯಾಂಗರ ಸ್ಕೂಟರ್) ಹಾಗೂ ಚಪ್ಪಲಿಗಳು ಪತ್ತೆಯಾಗಿವೆ. ಅನುಮಾನಗೊಂಡ ಸಾರ್ವಜನಿಕರು ಮತ್ತು ಪೊಲೀಸರು ಪರಿಶೀಲಿಸಿದಾಗ, ಮಂಜುನಾಥ್ ಅವರು ಬರೆದಿಟ್ಟಿದ್ದರೆನ್ನಲಾದ ಡೆತ್ ನೋಟ್ ಸಹ ದೊರೆತಿದೆ. ಈ ಡೆತ್ ನೋಟ್ ಸಿಕ್ಕ ಬೆನ್ನಲ್ಲೇ ಅವರು ಕಾಲುವೆಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.&lt;/p&gt;&lt;h3&gt;&lt;strong&gt;ಡೆತ್ ನೋಟ್&zwnj;ನಲ್ಲಿ ಪ್ರಭಾವಿ ಅಧಿಕಾರಿಗಳ ಹೆಸರು!&lt;/strong&gt;&lt;/h3&gt;&lt;p&gt;ವಿಕಲಚೇತನ ಮಂಜುನಾಥ್ ಅವರು ಬರೆದಿಟ್ಟಿರುವ ಡೆತ್ ನೋಟ್&zwnj;ನಲ್ಲಿ ಕಚೇರಿಯ ವರಿಷ್ಠರು ಹಾಗೂ ಸಹೋದ್ಯೋಗಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಬಿಇಓ (ಕ್ಷೇತ್ರ ಶಿಕ್ಷಣಾಧಿಕಾರಿ) ನಟೇಶ್ ಹೆಚ್.ಬಿ., ಮತ್ತೊಬ್ಬ ಅಧಿಕಾರಿ ಶಿವಪ್ರಸಾದ್ ಸ್ವಾಮಿ ಹಾಗೂ ಅಧೀಕ್ಷಕಿ ರೇಣುಕಾ ವೈ. ಗೌಡರ್ ಅವರು ತಮಗೆ ನಿರಂತರವಾಗಿ ನೀಡುತ್ತಿದ್ದ ಅಧಿಕ ಕೆಲಸದ ಒತ್ತಡ ಮತ್ತು ಮಾನಸಿಕ ಕಿರುಕುಳವೇ ಈ ಕಠಿಣ ನಿರ್ಧಾರಕ್ಕೆ ಕಾರಣ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಮಾನಸಿಕ ಹಿಂಸೆಯನ್ನು ತಡೆಯಲಾಗದೆ, ಬೇರೆ ದಾರಿ ಕಾಣದೆ ಆರಾಳ್ ಗ್ರಾಮದ ಬಳಿಯ ಕಾಲುವೆಗೆ ಹಾರಿ ಪ್ರಾಣ ತತ್ಯಾಗ ಮಾಡುತ್ತಿರುವುದಾಗಿ ಮಂಜುನಾಥ್ ಡೆತ್ ನೋಟ್&zwnj;ನಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಅಗ್ನಿಶಾಮಕ ದಳದಿಂದ ತೀವ್ರ ಶೋಧ!&lt;/strong&gt;&lt;/h3&gt;&lt;p&gt;ವಿಷಯ ತಿಳಿದ ತಕ್ಷಣವೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಮಂಜುನಾಥ್ ಅವರ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳೀಯ ಈಜುಗಾರರ ನೆರವಿನಿಂದ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ದೂರು ಮತ್ತು ತನಿಖೆ!&lt;/strong&gt;&lt;/h3&gt;&lt;p&gt;ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಡೆತ್ ನೋಟ್ ಅನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಕಚೇರಿಯ ಒಳಗಿನ ಆಂತರಿಕ ಕಿರುಕುಳ ಮತ್ತು ಕರ್ತವ್ಯದ ಒತ್ತಡದ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ವರ್ಷಗಳಿಂದ ವಿಕಲಚೇತನರಾಗಿದ್ದರೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗೆ ಕಚೇರಿಯಲ್ಲಿ ಸೂಕ್ತ ಬೆಂಬಲ ಸಿಗದೆ, ಕಿರುಕುಳ ಅನುಭವಿಸಿ ಈ ರೀತಿ ಪ್ರಾಣ ಕಳೆದುಕೊಳ್ಳುವಂತಾಗಿದ್ದು ಸಾರ್ವಜನಿಕರ ಹಾಗೂ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>koppal</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/beo-office-superintendent-manjunath-death-note-three-of-icers-names-karnataka-news-bmk/articleshow-snlpabc"/>
        </item>
        <item>
            <title><![CDATA[ಶ್ರಾವಣ ಶನಿವಾರ ಅಂಜನಾದ್ರಿಯಲ್ಲಿ ಭಕ್ತಸಾಗರ: ತ್ರಿವರ್ಣ ಹೂಗಳಿಂದ ಕಂಗೊಳಿಸಿದ ಆಂಜನೇಯ]]></title>
            <link>https://kannada.asianetnews.com/karnataka-districts/over-30000-devotees-visit-anjanadri-on-shravana-saturday-and-independence-day-gvd/articleshow-t0mnv39</link>
            <guid isPermaLink="true">https://kannada.asianetnews.com/karnataka-districts/over-30000-devotees-visit-anjanadri-on-shravana-saturday-and-independence-day-gvd/articleshow-t0mnv39</guid>
            <pubDate>Sat, 15 Aug 2026 18:03:30 +0530</pubDate>
            <description><![CDATA[&lt;p&gt;Anjanadri: ಶ್ರಾವಣ ಮಾಸದ ಮೊದಲ ಶನಿವಾರ ಹಾಗೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಭಕ್ತರ ದಂಡೇ ಹರಿದುಬಂದಿದೆ. ಹನುಮಂತನ ಜನ್ಮಸ್ಥಳವೆಂದು ನಂಬಲಾಗುವ ಅಂಜನಾದ್ರಿ ಬೆಟ್ಟದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02p1bp8mbe5xqk0tjgfygd7,imgname-kk-1786796617416.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಆ.15): &lt;/strong&gt;ಶ್ರಾವಣ ಮಾಸದ ಮೊದಲ ಶನಿವಾರ ಹಾಗೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಭಕ್ತರ ದಂಡೇ ಹರಿದುಬಂದಿದೆ. ಹನುಮಂತನ ಜನ್ಮಸ್ಥಳವೆಂದು ನಂಬಲಾಗುವ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದರ್ಶನಕ್ಕೆ ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ವಿವಿಧ ನಗರಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು.&lt;/p&gt;&lt;p&gt;ಶನಿವಾರ ಬೆಳಗ್ಗೆಯಿಂದಲೇ ಅಂಜನಾದ್ರಿ ಬೆಟ್ಟದತ್ತ ಭಕ್ತರ ಸಂಚಾರ ಹೆಚ್ಚಾಗಿದ್ದು, ಒಂದೇ ದಿನ 30 ಸಾವಿರಕ್ಕೂ ಅಧಿಕ ಮಂದಿ ಸ್ವಾಮಿಯ ದರ್ಶನ ಪಡೆದರು ಎಂದು ತಿಳಿದುಬಂದಿದೆ. ಶ್ರಾವಣ ಶನಿವಾರದ ವಿಶೇಷತೆ ಹಾಗೂ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಎರಡೂ ಒಂದೇ ದಿನ ಬಂದಿದ್ದರಿಂದ ಈ ಬಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು.&lt;/p&gt;&lt;p&gt;&lt;strong&gt;ಭಕ್ತರಿಗಾಗಿ ವಿಶೇಷ ಸಂಚಾರ ವ್ಯವಸ್ಥೆ&lt;/strong&gt;&lt;/p&gt;&lt;p&gt;ಭಕ್ತರಿಗೆ ಮುನಿರಾಬಾದ್ ರಸ್ತೆಯ ಮಾರ್ಗದಿಂದ ಬೆಟ್ಟ ಏರಲು ಪ್ರವೇಶ ಕಲ್ಪಿಸಲಾಗಿತ್ತು. ದರ್ಶನ ಪಡೆದ ಬಳಿಕ ಚಿಕ್ಕರಾಂಪುರ ಮಾರ್ಗವಾಗಿ ಮೆಟ್ಟಿಲು ಇಳಿದು ತೆರಳಲು ವ್ಯವಸ್ಥೆ ಮಾಡಲಾಗಿತ್ತು. ದೂರದ ಊರುಗಳಿಂದ ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸಾವಿರಾರು ಭಕ್ತರು ಕಾರು, ಬೈಕ್ ಸೇರಿದಂತೆ ವಿವಿಧ ವಾಹನಗಳಲ್ಲಿ ಅಂಜನಾದ್ರಿಗೆ ಆಗಮಿಸಿದ್ದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.&lt;/p&gt;&lt;p&gt;&lt;strong&gt;ಹೂಗಳಿಂದ ಕಂಗೊಳಿಸಿದ ನವಲಿ ಆಂಜನೇಯಸ್ವಾಮಿ&lt;/strong&gt;&lt;/p&gt;&lt;p&gt;ಇದೇ ವೇಳೆ ಸಮೀಪದ ನವಲಿ ಗ್ರಾಮದ ಐತಿಹಾಸಿಕ ಭೋಗಾಪುರೇಶ (ಆಂಜನೇಯಸ್ವಾಮಿ) ದೇವಸ್ಥಾನದಲ್ಲೂ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಷ್ಟ್ರಧ್ವಜದ ಮೂರು ಬಣ್ಣಗಳನ್ನು ಪ್ರತಿಬಿಂಬಿಸುವಂತೆ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಹೂಗಳಿಂದ ಆಂಜನೇಯಸ್ವಾಮಿಯ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಕೇಸರಿ ಬಣ್ಣಕ್ಕೆ ಕನಕಾಂಬರ, ಬಿಳಿ ಬಣ್ಣಕ್ಕೆ ಮಲ್ಲಿಗೆ ಹಾಗೂ ಹಸಿರು ಬಣ್ಣಕ್ಕೆ ತುಳಸಿ ದಳಗಳನ್ನು ಬಳಸಲಾಗಿತ್ತು.&lt;/p&gt;&lt;p&gt;ಸ್ವಾತಂತ್ರ್ಯೋತ್ಸವದ ದಿನ ಹೂಗಳಿಂದ ಮೂಡಿಬಂದ ರಾಷ್ಟ್ರಧ್ವಜದ ಬಣ್ಣಗಳ ಅಲಂಕಾರ ಭಕ್ತರ ಗಮನ ಸೆಳೆಯಿತು. ಶ್ರಾವಣ ಶನಿವಾರದ ಪ್ರಯುಕ್ತ ನವಲಿ ಆಂಜನೇಯಸ್ವಾಮಿ ದೇವಸ್ಥಾನಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ದರ್ಶನ ಪಡೆದರು. ಅಂಜನಾದ್ರಿಯಲ್ಲಿ ಭಕ್ತರ ಭರಾಟೆ, ನವಲಿಯಲ್ಲಿ ರಾಷ್ಟ್ರಧ್ವಜದ ಬಣ್ಣಗಳಲ್ಲಿ ಕಂಗೊಳಿಸಿದ ಆಂಜನೇಯಸ್ವಾಮಿ-ಸ್ವಾತಂತ್ರ್ಯೋತ್ಸವ ಹಾಗೂ ಶ್ರಾವಣ ಶನಿವಾರದಂದು ಕೊಪ್ಪಳ ಜಿಲ್ಲೆಯ ದೇವಾಲಯಗಳು ಭಕ್ತಿಯಿಂದ ಕಳೆಗಟ್ಟಿದವು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/over-30000-devotees-visit-anjanadri-on-shravana-saturday-and-independence-day-gvd/articleshow-t0mnv39"/>
        </item>
        <item>
            <title><![CDATA[ಕೊಪ್ಪಳದಲ್ಲಿ ಕರ್ನಾಟಕವೇ ಬೆಚ್ಚಿಬೀಳಿಸೋ ಕೃತ್ಯ: ಲವ್‌ ಹೆಸರಲ್ಲಿ ಬಾಲಕಿಯ ಮೇಲೆ ಬಲತ್ಕಾರ ಮಾಡಿ ವಿಡಿಯೋ ಮಾಡಿದ ಪಾಪಿ,  ಮಾಡಿದ್ದೇನು?]]></title>
            <link>https://kannada.asianetnews.com/karnataka-districts/pocso-case-registered-over-assault-a-minor-girl-in-koppal-seven-accused-arrested/articleshow-ulp12kr</link>
            <guid isPermaLink="true">https://kannada.asianetnews.com/karnataka-districts/pocso-case-registered-over-assault-a-minor-girl-in-koppal-seven-accused-arrested/articleshow-ulp12kr</guid>
            <pubDate>Fri, 21 Aug 2026 06:08:31 +0530</pubDate>
            <description><![CDATA[&lt;p&gt;ಕೊಪ್ಪಳದಲ್ಲಿ ಪ್ರೀತಿಯ ನಾಟಕವಾಡಿ ಅಪ್ರಾಪ್ತೆಯ ಮೇಲೆ ಅತ್ಯಾ೧ಚಾರವೆಸಗಿದ ಯುವಕ, ಅದರ ವಿಡಿಯೋವನ್ನು ಸ್ನೇಹಿತರಿಗೆ ಹಂಚಿಕೊಂಡಿದ್ದಾನೆ. ನಂತರ, ಆ ವಿಡಿಯೋ ತೋರಿಸಿ ಬಾಲಕಿಯನ್ನು ಬ್ಲ್ಯಾಕ್&zwnj;ಮೇಲ್&zwnj; ಮಾಡಿ, ಆತನ ಸ್ನೇಹಿತರು ಎರಡು ವರ್ಷಗಳಿಂದ ನಿರಂತರ ದೌರ್ಜನ್ಯ. ಪೊಕ್ಸೊ ಕೇಸ್ ದಾಕಲು ಏಳು ಆರೋಪಿಗಳ ಬಂಧನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0gvs9hq29y8kb0tvypr32kn,imgname-----------------------2026-08-21t060304.533-1787272406583.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಕೊಪ್ಪಳ (ಆ.21): &lt;/strong&gt;ಪ್ರೀತಿಸುವ ನಾಟಕವಾಡಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ೧ಚಾರ ಮಾಡಿದ ಕಿಚಕನೊಬ್ಬ ರೇಪ್&zwnj; ವಿಡಿಯೋ ಚಿತ್ರಿಸಿಕೊಂಡಿದ್ದು, ಅದನ್ನು ತೋರಿಸಿ ಆತನ ಸ್ನೇಹಿತರೂ ಬಾಲಕಿಯನ್ನು ಬ್ಲಾಕ್&zwnj;ಮೇಲ್&zwnj; ಮಾಡಿ ಸರಣಿ ಅತ್ಯಾ೧ಚಾರಿಂದ ಗರ್ಭಿಣಿ ಮಾಡಿದ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆ ಕುಟುಗನಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;- 2 ವರ್ಷದಿಂದ ಬಾಲಕಿಗೆ ನರಕ । 7 ಜನರ ಬಂಧನ&lt;/h2&gt;&lt;p&gt;ಸಂತ್ರಸ್ತ ಬಾಲಕಿಯ ಪಾಲಕರು ನೀಡಿದ ದೂರಿನ ಮೇರೆಗೆ ಪೋಕ್ಸೋ ಕೇಸ್ ದಾಖಲಿಕೊಂಡಿರುವ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ 2 ವರ್ಷದ ಹಿಂದೆ ಬಾಲಕಿ 9ನೇ ತರಗತಿಯಲ್ಲಿದ್ದಾಗ ಅದೇ ಗ್ರಾಮದ ಯುವಕನೊಬ್ಬ ಪ್ರೀತಿಸುವ ನಾಟಕವಾಡಿ ದೈಹಿಕ ಸಂಬಂಧ ಬೆಳೆಸಿದ್ದು, ಅದನ್ನು ತನ್ನ ಮೊಬೈಲ್&zwnj;ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ ಆ ದೃಶ್ಯವನ್ನು ಸ್ನೇಹಿತರಿಗೆ ಶೇರ್ ಸಹ ಮಾಡಿದ್ದು, ಆತನ ಸಹಚರರು ಬಾಲಕಿಗೆ ದೃಶ್ಯಾವಳಿ ತೋರಿಸಿ ಅತ್ಯಾ೧ಚಾರ ಎಸಗಿದ್ದಾರೆ. ಅಲ್ಲದೇ, ರೇಪ್&zwnj; ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಬೆದರಿಸಿದ್ದಾರೆ. ಕಿಚಕರ ಅಟ್ಟಹಾಸದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿನಿ ಶಿಕ್ಷಣ ಮೊಟಕುಗೊಳಿಸಿ ನರಕಯಾತನೆ ಅನುಭವಿಸುತ್ತಿದ್ದು, ಬಾಲಕಿಯನ್ನು ಕೊಪ್ಪಳ ಬಾಲ ಮಂದಿರದಲ್ಲಿ ಇರಿಸಲಾಗಿದೆ.&lt;/p&gt;&lt;p&gt;\Bಬಂಧಿತರು: \Bಪ್ರಕರಣದಲ್ಲಿ ಕಿರಣ್ ಕುಮಾರ್ ತೊಂಡಿಹಾಳ, ಹರ್ಷ ಪೊಲೀಸ್ ಪಾಟೀಲ್, ರಮೇಶ್ ಚಿಪ್ಪವರ, ಮಲ್ಲಪ್ಪ ಹರಿಜನ, ಸಿದ್ದಲಿಂಗಪ್ಪ ವಾಲ್ಮೀಕಿ, ಕಿರಣ ಕುಮಾರ ಆಧೋನಿ ಹಾಗೂ ಫಕೀರಪ್ಪ ಧರ್ಮಾಪುರ ಎನ್ನುವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/pocso-case-registered-over-assault-a-minor-girl-in-koppal-seven-accused-arrested/articleshow-ulp12kr"/>
        </item>
    </channel>
</rss>
