<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Jul 2026 22:23:57 +0530</lastBuildDate>
        <atom:link href="https://kannada.asianetnews.com/rss/koppal" rel="self" type="application/rss+xml"/>
        <item>
            <title><![CDATA[ಗಂಗಾವತಿಯಲ್ಲಿ ಮಿನಿ ವಿಧಾನಸೌಧ ಸ್ಥಳಾಂತರಕ್ಕೆ ಎಚ್.ಆರ್. ಶ್ರೀನಾಥ್ ಬಿಗ್ ಡಿಮ್ಯಾಂಡ್]]></title>
            <link>https://kannada.asianetnews.com/karnataka-districts/gangavathi-news-hr-srinath-demands-mini-vidhana-soudha-shift-gvd/articleshow-0p5kwad</link>
            <guid isPermaLink="true">https://kannada.asianetnews.com/karnataka-districts/gangavathi-news-hr-srinath-demands-mini-vidhana-soudha-shift-gvd/articleshow-0p5kwad</guid>
            <pubDate>Tue, 14 Jul 2026 16:49:53 +0530</pubDate>
            <description><![CDATA[&lt;p&gt;ನಗರದ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಮಿನಿ ವಿಧಾನಸೌಧವನ್ನು ರದ್ದು ಪಡಿಸಿ ನಗರದ ಹಳೇ ಪ್ರವಾಸಿ ಮಂದಿರದ ಸ್ಥಳದಲ್ಲಿ ನಿರ್ಮಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಅವರು ಶಾಸಕರಿಗೆ ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxeh7j3fbkpmh2nyxycb84r,imgname-vj-1779104783939.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.14): &lt;/strong&gt;ನಗರದ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಮಿನಿ ವಿಧಾನಸೌಧವನ್ನು ರದ್ದು ಪಡಿಸಿ ನಗರದ ಹಳೇ ಪ್ರವಾಸಿ ಮಂದಿರದ ಸ್ಥಳದಲ್ಲಿ ನಿರ್ಮಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎಚ್.ಆರ್. ಶ್ರೀನಾಥ್ ಅವರು ಶಾಸಕರಿಗೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು ಗಂಗಾವತಿ ನಗರದಲ್ಲಿ ಸುಮಾರು 3 ಕೀಮಿ ದೂರದ ಆನೆಗೊಂದಿ ರಸ್ತೆ ಮಾರ್ಗದಲ್ಲಿ ಮಿನಿ ವಿಧಾನ ಸೌಧ ಇದೆ. ಗ್ರಾಮೀಣ ಪ್ರದೇಶದಿಂದ ಮತ್ತು ನಗರದಲ್ಲಿ ಸಾರ್ವಜನಿಕರು ಸೌಧಕ್ಕೆ ತೆರಳಬೇಕಾದರೆ ಕನಿಷ್ಟ 100 ರುಗಳಿಂದ 150 ರು ಅಟೋಗಳಿಗೆ ನೀಡಬೇಕಾಗುತ್ತದೆ. ಇದರಿಂದ ಬಡ ಜನರಿಗೆ ಹೊರೆಯಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಹಳೆ ಐಬಿ ತೆರುವುಗೊಳಿಸಿ ಕಟ್ಟಡ ನಿರ್ಮಿಸಿ&lt;/strong&gt;&lt;/p&gt;&lt;p&gt;ನಗರದ ಬಸ್ ನಿಲ್ದಾಣ ಹತ್ತಿರವಿರುವ ಹಳೆ ಪ್ರವಾಸಿ ಮಂದಿರ ಮತ್ತು ಹಳೇ ತಹಸೀಲ್ದಾರ್ ಕಚೇರಿಯ ಕಟ್ಟಡಗಳನ್ನು ತೆರವುಗೊಳಿಸಿ ಇದೇ ಸ್ಥಳದಲ್ಲಿ ವಿಧಾನ ಸೌಧ ನಿರ್ಮಿಸಬೇಕೆಂದು ಸಲಹೆ ನೀಡಿದರು. ವಿವಿಧ ಇಲಾಖೆಗಳು ಒಂದೇ ಸ್ಥಳದಲ್ಲಿದ್ದರೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ ಅವರು ಸರಕಾರ ಇದಕ್ಕಾಗಿ ವಿಶೇಷ ಅನುದಾನ ನೀಡಿ ಸುಂದರ ಮಿನಿ ವಿಧಾನಸೌದ ನಿರ್ಮಿಸಬೇಕೆಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಕಾಲೇಜು ಮೈದಾನದಲ್ಲಿ ರಂಗ ಮಂದಿರ ನಿರ್ಮಿಸಿ&lt;/strong&gt;&lt;/h2&gt;&lt;p&gt;ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭವ್ಯವಾದ ರಂಗ ಮಂದಿರ ನಿರ್ಮಿಸ ಬೇಕೆಂದು ಎಚ್.ಆರ್.ಶ್ರೀನಾಥ ಒತ್ತಾಯಿಸಿದರು. ಕಳೆದ 30 ವರ್ಷಗಳ ಹಿಂದೆ ಇದ್ದ ಹಳೆ ಕಟ್ಟಡವನ್ನು ನಗರಸಭೆಯವರು ತೆರವುಗೊಳಿಸಿದ್ದಾರೆ. ಈ ಸ್ಥಳದಲ್ಲಿ ಫುಡ್ ಕೋರ್ಟ್ ಮಾಡಲು ನಗರಸಭೆಯವರು ಸೂಚಿಸಿರುವುದು ಸರಿಯಲ್ಲ ಎಂದರು.&lt;/p&gt;&lt;p&gt;ಕಾಲೇಜು ಮೈದಾನದಲ್ಲಿ ವೃದ್ದರು, ಮಹಿಳೆಯರು ವಾಕಿಂಗ್ ಬರುವುದಲ್ಲದೆ ವಿದ್ಯಾರ್ಥಿನಿಯರು ಕಾಲೇಜಿನಿಂದ ಸಂಚಾರ ಮಾಡುತ್ತಾರೆ. ಇದರಿಂದ ಫುಡ್ ಕೋರ್ಟ್ ಮಾಡಿದರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಸಲು ಆಸ್ಪದ ನೀಡಿದಂತಾಗುತ್ತದೆ. ಕಾರಣ ನಗರಸಭೆಯವರು ಈ ಸ್ಥಳವನ್ನು ಭವ್ಯವಾದ ರಂಗಮಂದಿರಕ್ಕೆ ಮೀಸಲಿರಿಸಬೇಕೆಂದು ಒತ್ತಾಯಿಸಿದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-news-hr-srinath-demands-mini-vidhana-soudha-shift-gvd/articleshow-0p5kwad"/>
        </item>
        <item>
            <title><![CDATA[ಗಂಗಾವತಿ: ಮನೆ ಮುಂದೆ ಮಂಡಲ, ಅರಿಶಿನ ಕುಂಕುಮ! ವಾಮಾಚಾರಕ್ಕೆ ಬೆಚ್ಚಿಬಿದ್ದ ಜನ]]></title>
            <link>https://kannada.asianetnews.com/karnataka-districts/locals-in-gangavathi-fearful-after-acts-of-black-magic-by-miscreants-rav/articleshow-3m4axgw</link>
            <guid isPermaLink="true">https://kannada.asianetnews.com/karnataka-districts/locals-in-gangavathi-fearful-after-acts-of-black-magic-by-miscreants-rav/articleshow-3m4axgw</guid>
            <pubDate>Thu, 09 Jul 2026 07:15:22 +0530</pubDate>
            <description><![CDATA[&lt;p&gt;ಕೊಪ್ಪಳ ಜಿಲ್ಲೆಯ ಗಂಗಾವತಿಯ ಮುಜಾವರ್ ಕ್ಯಾಂಪ್&zwnj;ನಲ್ಲಿ ಕಿಡಿಗೇಡಿಗಳು ಹಲವು ಮನೆಗಳ ಮುಂದೆ ಮಂಡಲ, ಅರಿಶಿನ-ಕುಂಕುಮ ಹಾಗೂ ನಿಂಬೆಹಣ್ಣು ಇಟ್ಟು ವಾಮಾಚಾರ ನಡೆಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx28ep7n20y75455jajzc43m,imgname-----------------------2026-07-09t070734.555-1783561148661.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಜು.9)&lt;/strong&gt;: ಮನೆ ಮುಂದೆ ಮಂಡಲ ಹಾಕಿ ಅರಿಶಿನ ಕುಂಕುಮ,ನಿಂಬೆ ಹಣ್ಣು ಇಟ್ಟು ಕಿಡಿಗೇಡಿಗಳು ವಾಮಾಚಾರ ನಡೆಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮುಜಾವರ್ ಕ್ಯಾಂಪ್&zwnj;ನಲ್ಲಿನ ಹಲವು ಮನೆಗಳ ಮುಂದೆ ನಡೆದಿದ್ದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.&lt;/p&gt;&lt;h2&gt;ನಿಂಬೆ ಹಣ್ಣು ಅರಿಸಿನ ಕಂಡು ಭಯಬಿದ್ದ ಜನ:&lt;/h2&gt;&lt;p&gt;ಮಂಡಲ ಹಾಕಿ, ಅರಿಶಿನ-ಕುಂಕುಮ ಎರಚಿ, ನಿಂಬೆಹಣ್ಣುಗಳನ್ನು ಇಟ್ಟಿರುವ ದೃಶ್ಯಗಳು ಒಂದು ಮನೆಗಲ್ಲ, ದಾರಿಯುದ್ಧಕ್ಕೂ ಈ ರೀತಿ ವಾಮಾಚಾರ ಮಾಡಿರುವ ಕಿಡಿಗಳು. ಇದರಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದಾರಿಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ.&lt;/p&gt;&lt;p&gt;ಸ್ಥಳೀಯರು ಹೇಳುವಂತೆ, ಈ ಕೃತ್ಯ ಯಾರು ಮಾಡುತ್ತಿದ್ದರೋ, ಯಾಕೆ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಕೆಲ ದಿನಗಳಿಂದ ನಿರಂತರವಾಗಿ ಈ ರೀತಿಯ ಘಟನೆಗಳು ನಡೆಯುತ್ತಿವೆ. ಇದರಿಂದ ಇಲ್ಲಿನ ಜನ ಭಯಿದಿಂದ ಜೀವನ ನಡೆಸುವಂತಾಗಿದೆ ಆಗಿದೆ ಎಂದು ಗೋಳು ತೋಡಿಕೊಂಡಿದ್ದಾರೆ.&lt;/p&gt;&lt;h3&gt;ಕಿಡಿಗೇಡಿಗಳ ಕೃತ್ಯವೋ? ಭಯ ಹುಟ್ಟಿಸೋ ಪ್ರಯತ್ನವೋ?&lt;/h3&gt;&lt;p&gt;ಮೇಲ್ನೋಟಕ್ಕೆ ಇದು ಸ್ಥಳೀಯರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಈ ರೀತಿ ವಾಮಾಚಾರ ಮಾಡಿರುವ ಅನುಮಾನಗಳಿವೆ. ಇಂಥ ಕೃತ್ಯ ಮಾಡಿದವರನ್ನ ಪೊಲೀಸರು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/locals-in-gangavathi-fearful-after-acts-of-black-magic-by-miscreants-rav/articleshow-3m4axgw"/>
        </item>
        <item>
            <title><![CDATA[ರೈತರಿಗೆ ಗುಡ್ ನ್ಯೂಸ್: ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಸರ್ಕಾರದ ಭರವಸೆ]]></title>
            <link>https://kannada.asianetnews.com/karnataka-districts/navali-balancing-reservoir-minister-sharan-prakash-patil-big-update-gvd/articleshow-59gguxu</link>
            <guid isPermaLink="true">https://kannada.asianetnews.com/karnataka-districts/navali-balancing-reservoir-minister-sharan-prakash-patil-big-update-gvd/articleshow-59gguxu</guid>
            <pubDate>Fri, 03 Jul 2026 17:46:28 +0530</pubDate>
            <description><![CDATA[&lt;p&gt;ನವಲಿ ಬಳಿ ಸಮತೋಲನ ಜಲಾಶಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾಗಿರುವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwkxp2gh99xag1npskygsmvp,imgname-ch-1783080094225.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.03): &lt;/strong&gt;ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನ ಜಲಾಶಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾಗಿರುವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ರಾಯಚೂರಿಗೆ ಹೋಗುವ ಮಾರ್ಗದಲ್ಲಿ ಗಂಗಾವತಿಯ ವೆಂಕಟೇಶ ಕುಲಕರ್ಣಿ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಪ್ರಸ್ತುತ ವರ್ಷ ಮಳೆ ಬರುತ್ತಿಲ್ಲ.&lt;/p&gt;&lt;p&gt;ಇದರಿಂದ ಭದ್ರಾ ಜಲಾಶಯ ಭರ್ತಿಯಾಗದೆ ಇರುವದರಿದ ತುಂಗಭದ್ರಾ ಜಲಾಶಯಕ್ಕೆ ನೀರು ಬರುತ್ತಿಲ್ಲ. ಈ ಕಾರಣಕ್ಕೆ ಸರ್ಕಾರ ಪ್ರಸ್ತುತ ಬೆಳೆಗೆ ನೀರು ಅನುಮಾನ ಎಂದು ಪ್ರಕಟಿಸಲಾಗಿದೆ. ಒಂದು ವೇಳೆ ಸಮರ್ಪಕವಾಗಿ ನೀರು ಬಂದು ಜಲಾಶಯಕ್ಕೆ ನೀರು ಸಂಗ್ರಹವಾದರೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ ಎಂದರು.&lt;/p&gt;&lt;p&gt;ಜಲಾಶಯದಲ್ಲಿ 35 ಟಿಎಂಸಿ ಹೂಳು ತುಂಬಿದ್ದರಿಂದ ಪರ್ಯಾಯವಾಗಿ ಜಿಲ್ಲೆಯ ನವಲಿ ಗ್ರಾಮದ ಬಳಿ 35 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಬದ್ದವಾಗಿದ್ದು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆ ಮಾಡುತ್ತಿದ್ದಾರೆ ಎಂದರು. ಈಗಾಗಲೆ ಜಲಾಶಯದ ಬಗ್ಗೆ ಯೋಜನೆ ಸಿದ್ದಪಡಿಸಿದ್ದು, ಪ್ರಗತಿಯಲ್ಲಿದೆ ಎಂದರು.&lt;/p&gt;&lt;h2&gt;&lt;strong&gt;ಜಿಲ್ಲಾಮಟ್ಟದಲ್ಲಿ ಸಭೆ&lt;/strong&gt;&lt;/h2&gt;&lt;p&gt;ಪ್ರತಿ ವರ್ಷ ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆನ್ನುವುದಕ್ಕೆ ಕೇಂದ್ರ ಸರ್ಕಾರ ಇದರಲ್ಲಿ ವಿಫಲವಾಗಿದೆ. ಆದರೂ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದರು. ಬರಗಾಲ ಪರಿಹಾರ ಮತ್ತು ಬೆಳೆಗಳ ನಷ್ಟದ ಕುರಿತು ಜಿಲ್ಲಾಮಟ್ಟದಲ್ಲಿ ಸಭೆ ನಡೆಸಲಾಗಿದೆ ಎಂದರು.&lt;/p&gt;&lt;p&gt;ಈ ವೇಳೆ ವೆಂಕಟೇಶ ಕುಲಕರ್ಣಿ ಅವರ ನಿವಾಸದಲ್ಲಿ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಶ್ರೀಲತಾ ವೆಂಕಟೇಶ ಕುಲಕರ್ಣಿ, ಚಂದನಾ, ನ್ಯಾಯವಾದಿ ಸುಭಾಸ್, ಟಿಎಂಪಿಸಿಎಂಸ್ ಅದ್ಯಕ್ಷ ಚೆನ್ನಪ್ಪ ಮಳಗಿ, ಶ್ರೀನಿವಾಸ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ,ನಿಖಿಲ್, ವಿಷ್ಣು ಪ್ರಸಾದ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/navali-balancing-reservoir-minister-sharan-prakash-patil-big-update-gvd/articleshow-59gguxu"/>
        </item>
        <item>
            <title><![CDATA[ಬಿಜೆಪಿಯವರು ಹಿಂದುತ್ವದ ಮುಖವಾಡ ಹಾಕಿಕೊಂಡ ಖದೀಮರು; ಘಜ್ನಿ, ಘೋರಿಗೆ ಹೋಲಿಸಿದ ಸಚಿವ ಶರಣಪ್ರಕಾಶ್ ಪಾಟೀಲ್!]]></title>
            <link>https://kannada.asianetnews.com/state/sharanprakash-patil-attacks-bjp-rss-over-ram-mandir-funds-koppal-news-san/articleshow-6m9nlhd</link>
            <guid isPermaLink="true">https://kannada.asianetnews.com/state/sharanprakash-patil-attacks-bjp-rss-over-ram-mandir-funds-koppal-news-san/articleshow-6m9nlhd</guid>
            <pubDate>Fri, 03 Jul 2026 12:53:38 +0530</pubDate>
            <description><![CDATA[&lt;p&gt;ಸಚಿವ ಶರಣಪ್ರಕಾಶ್ ಪಾಟೀಲ್ ಅವರು, ಅಯೋಧ್ಯೆ ರಾಮ ಮಂದಿರದ ಹಣವನ್ನು ಲೂಟಿ ಮಾಡುವ ಮೂಲಕ ಬಿಜೆಪಿ ಸರ್ಕಾರವು ಮೊಹಮ್ಮದ್ ಘಜ್ನಿಯಂತೆ ವರ್ತಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwkdmfxwgkjs9v9kes7rgeyx,imgname-sharanprakash-patil-1783063265212.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಜು.3):&lt;/strong&gt; 'ಹಿಂದುತ್ವ ರಕ್ಷಣೆ ಮಾಡುತ್ತೇವೆ ಎಂದು ದೇಶದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಈಗ ಅಯೋಧ್ಯೆಯ ರಾಮ ಮಂದಿರವನ್ನು ಲೂಟಿ ಮಾಡುತ್ತಿದೆ. ಹಿಂದೆ ಭಾರತಕ್ಕೆ ದಾಳಿ ಇಟ್ಟು ಸೋಮನಾಥ ದೇವಸ್ಥಾನವನ್ನು ಲೂಟಿ ಮಾಡಿದ ಮೊಹಮ್ಮದ್ ಘಜ್ನಿ ಮತ್ತು ಮೊಹಮ್ಮದ್ ಘೋರಿಗೂ, ಇಂದಿನ ಬಿಜೆಪಿಯವರಿಗೂ ಯಾವುದೇ ವ್ಯತ್ಯಾಸವಿಲ್ಲ,&quot; ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಗಂಭೀರವಾಗಿ ಆರೋಪಿಸಿದ್ದಾರೆ.&lt;/p&gt;&lt;p&gt;ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಮಮಂದಿರದ ಹೆಸರಿನಲ್ಲಿ ಹಣ ಲೂಟಿ ಮಾಡಿರುವುದು ಈ ದೇಶದ ದೊಡ್ಡ ದುರಂತ. ಇವರ ಬಳಿ ಯಾವುದೇ ಸತ್ವ, ಬದ್ಧತೆ ಇಲ್ಲ. ಇವರಿಗೆ ಹಿಂದುತ್ವದ ಬಗ್ಗೆ ಕಾಳಜಿಯೂ ಇಲ್ಲ. ಇವರೆಲ್ಲ ಹಿಂದುತ್ವದ ಮುಖವಾಡ ಧರಿಸಿರುವ ಖದೀಮರು ಎಂದು ಹರಿಹಾಯ್ದರು.&lt;/p&gt;&lt;p&gt;ಇಡೀ ದೇಶದ ಜನ ಭಕ್ತಿಯಿಂದ ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಆದರೆ ಇವರು ಕೇವಲ ಹುಂಡಿಯ ಹಣವನ್ನಷ್ಟೇ ಲೂಟಿ ಮಾಡಿಲ್ಲ; ರಾಮಮಂದಿರ ಕಟ್ಟಲು ಸಂಗ್ರಹವಾದ ಭಾರಿ ಮೊತ್ತದ ಹಣದಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಈ ಹಣವನ್ನು ಲೂಟಿ ಮಾಡಿ ಬಿಜೆಪಿ, ಆರ್&zwnj;ಎಸ್&zwnj;ಎಸ್ ಮತ್ತು ವಿಶ್ವ ಹಿಂದೂ ಪರಿಷತ್ (VHP) ನಾಯಕರು ಶ್ರೀಮಂತರಾಗಿದ್ದಾರೆ. ದೇಶದ ಜನರ ಹಣ ಲೂಟಿಯಾಗುತ್ತಿದ್ದರೂ ಪ್ರಧಾನಿ ಮೋದಿಯವರು ಯಾಕೆ ತನಿಖೆ ಮಾಡಿಸುತ್ತಿಲ್ಲ? ಬಿಜೆಪಿಯವರು ಕೇವಲ ಹಣವನ್ನಷ್ಟೇ ಅಲ್ಲ, ಜನರ ವಿಶ್ವಾಸವನ್ನೂ ಲೂಟಿ ಮಾಡಿದ್ದಾರೆ. ಅವರಿಗೆ ಜನರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಪ್ರಧಾನಿ ಮೋದಿ ತಕ್ಷಣವೇ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಈ ಇಡೀ ಹಗರಣವು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ (Supreme Court Monitoring) ತನಿಖೆಯಾಗಬೇಕು,&quot; ಎಂದು ಅವರು ಆಗ್ರಹಿಸಿದರು.&lt;/p&gt;&lt;h2&gt;&lt;strong&gt;ಆರ್&zwnj;ಎಸ್&zwnj;ಎಸ್&zwnj;ನವರಿಗೆ ನಿಯತ್ತೂ ಇಲ್ಲ, ದೇಶಪ್ರೇಮವೂ ಇಲ್ಲ!&lt;/strong&gt;&lt;/h2&gt;&lt;p&gt;ಇದೇ ವೇಳೆ ಆರ್&zwnj;ಎಸ್&zwnj;ಎಸ್ (RSS) ಸಂಸ್ಥೆಯ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಆಡಿದ್ದ ಮಾತುಗಳನ್ನು ಶರಣಪ್ರಕಾಶ್ ಪಾಟೀಲ್ ಸಂಪೂರ್ಣವಾಗಿ ಸಮರ್ಥಿಸಿಕೊಂಡರು.&lt;/p&gt;&lt;p&gt;ಪ್ರಿಯಾಂಕ್ ಖರ್ಗೆ ಹೇಳಿರುವುದು ನೂರಕ್ಕೆ ನೂರರಷ್ಟು ಸರಿ ಇದೆ. ಆರ್&zwnj;ಎಸ್&zwnj;ಎಸ್ ಎನ್ನುವುದು ಒಂದು ಸಂಸ್ಥೆಯಾಗಿದ್ದು, ಅದು ಕಡ್ಡಾಯವಾಗಿ ನೋಂದಣಿ (Registration) ಆಗಲೇಬೇಕು. ದೇಶದಾದ್ಯಂತ ಸಂಘಟನೆ ಹೊಂದಿದ್ದೇವೆ, ಶಿಸ್ತಿನ ಮಾರ್ಚ್ ನಡೆಸುತ್ತೇವೆ ಎನ್ನುವ ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲವೇ? ನೋಂದಣಿ ಮಾಡಿಕೊಳ್ಳಲು ಇವರಿಗಿರುವ ಇಕ್ಕಟ್ಟೇನು? ನಾವು ಸಂಘಟನೆಯನ್ನು ಬ್ಯಾನ್ ಮಾಡಿ ಎಂದು ಹೇಳುತ್ತಿಲ್ಲ, ಕೇವಲ ನಿಯಮದಂತೆ ನೋಂದಣಿ ಮಾಡಿ ಎನ್ನುತ್ತಿದ್ದೇವೆ ಎಂದರು.&lt;/p&gt;&lt;p&gt;ಮುಂದುವರಿದು ಮಾತನಾಡಿದ ಅವರು, &quot;ಆರ್&zwnj;ಎಸ್&zwnj;ಎಸ್ ಸಂಘಟನೆಯವರ ನಿಯತ್ತು ಸರಿ ಇಲ್ಲ. ಅವರಿಗೆ ನಿಜವಾದ ದೇಶಪ್ರೇಮವೂ ಇಲ್ಲ ಮತ್ತು ಅವರು ದೇಶದ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಅವರ ಮೇಲೆ ನಾವು ನಂಬಿಕೆ ಇಡಲು ಸಾಧ್ಯವಿಲ್ಲ,&quot; ಎಂದು ಸಚಿವರು ಟೀಕಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>koppal</category>
            <dc:creator>Santosh Naik</dc:creator>
            <atom:link href="https://kannada.asianetnews.com/state/sharanprakash-patil-attacks-bjp-rss-over-ram-mandir-funds-koppal-news-san/articleshow-6m9nlhd"/>
        </item>
        <item>
            <title><![CDATA[ಬಿಡದಿ ಟೌನ್‌ಶಿಪ್ ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನ ಕೊಡಿ: ಡಿಕೆಶಿಗೆ ಜನಾರ್ದನ ರೆಡ್ಡಿ ಟಾಂಗ್]]></title>
            <link>https://kannada.asianetnews.com/karnataka-districts/mla-janardhan-reddy-on-cm-dk-shivakumar-bidadi-township-gvd/articleshow-7p9105a</link>
            <guid isPermaLink="true">https://kannada.asianetnews.com/karnataka-districts/mla-janardhan-reddy-on-cm-dk-shivakumar-bidadi-township-gvd/articleshow-7p9105a</guid>
            <pubDate>Thu, 02 Jul 2026 19:01:25 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್&zwnj;ಶಿಪ್ ವಿಚಾರ ಬಿಟ್ಟು ರಾಜ್ಯದ ಅಭಿವೃದ್ದಿ ಕಡೆಗೆ ಗಮನಹರಿಸಲಿ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwhgd7vj43rp8es0032wky7z,imgname-hvh-1782999064434.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.02):&lt;/strong&gt; ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್&zwnj;ಶಿಪ್ ವಿಚಾರ ಬಿಟ್ಟು ರಾಜ್ಯದ ಅಭಿವೃದ್ದಿ ಕಡೆಗೆ ಗಮನಹರಿಸಲಿ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದ ಚಿಕ್ಕ ಬೊಮ್ಮನಾಳ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆವೇರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.&lt;/p&gt;&lt;p&gt;ಮುಖ್ಯಮಂತ್ರಿಗಳಿಗೆ ರಿಯಲ್ ಎಸ್ಟೇಟ್ ಅಂದರೆ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಈಗಾಗಲೆ ಬಿಡದಿ ವಿಷಯ ನ್ಯಾಯಲಯ ಮೆಟ್ಟಿಲು ಏರಿದೆ. ಕಾರಣ ಮುಖ್ಯಮಂತ್ರಿಗಳು ಬಿಡದಿ ವಿಷಯ ಬಿಟ್ಟು ರಾಜ್ಯದ ಹಿತ ಕಾಪಾಡುವದಕ್ಕೆ ಮುಂದಾಗಬೇಕೆಂದರು. ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕುರಿತು ಅಡಿಯೋ ವೈರಲ್ ಪ್ರಶ್ನೆಗೆ ಸದಾನಂದಗೌಡರು ನಿಷ್ಟಾವಂತ ನಾಯಕರಾಗಿದ್ದಾರೆ. ಆ ಅಡಿಯೋ ತಮಗೆ ಸಂಬಂಧಿಸಿದ್ದಲ್ಲ ಎಂದು ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;ಈ ವಿಷಯ ಪದೆ ಪದೆ ಹೇಳಿಕೆ ನೀಡುವದು ಸರಿಯಲ್ಲ ಎಂದರು. ಎಐ ಟೆಕ್ನಾಲಜಿ ಬಂದ ಮೇಲೆ ಸಾಕಷ್ಟು ರೀತಿಯಲ್ಲಿ ಬದಾಲವಣೆಯಾಗುತ್ತದೆ. ಇದರಿಂದ ಒಳ್ಳೆಯದು, ಇದೆ ಕೆಟ್ಟದ್ದು ಇದೆ. ಇದರಿಂದ ಏನು ಮಾಡಲು ಸಾದ್ಯ ಇಲ್ಲ ಎಂದರು. ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಸೃಷ್ಟಿಯಾಗುವ ಸಂಭವ ಇದೆ ಎಂದ ಅವರು ಗ್ಯಾರಂಟಿ ಯೋಜನೆಯಲ್ಲಿ ಜನರಿಗೆ ಕಳೆದ ಮೂರು ತಿಂಗಳಿನಿಂದ ಹಣ ತಲುಪುತ್ತಿಲ್ಲ ಎಂದರು.&lt;/p&gt;&lt;h2&gt;&lt;strong&gt;ನೈತಿಕತೆ ಇಲ್ಲ&lt;/strong&gt;&lt;/h2&gt;&lt;p&gt;ಗ್ಯಾರಂಟಿ ಯೋಜನೆ ನೆಪದಲ್ಲಿ ಯೋಜನೆ ಬಂದ್ ಮಾಡುವ ಹುನ್ನಾರದಲ್ಲಿ ಸರ್ಕಾರ ಇದೆ ಎಂದರು. ರಾಮ ಮಂದಿರ ಟ್ರಸ್ಟ್ ಹಣ ದುರುಪಯೋಗವಾಗಿದೆ ಎನ್ನುವದಕ್ಕೆ ಲೆಕ್ಕ ಕೇಳುವ ನೈತಿಕತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 500 ವರ್ಷಗಳ ಇತಿಹಾಸ ಇದೆ. ರಾಮ ಭಕ್ತ ಹನುಮನ್ನು ಬಿಟ್ಟರೆ ಮತ್ತೇ ನರೇಂದ್ರ ಮೋದಿ ಮತ್ತು ಆದಿತ್ಯನಾಥ ಭಕ್ತರು ಎಂದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mla-janardhan-reddy-on-cm-dk-shivakumar-bidadi-township-gvd/articleshow-7p9105a"/>
        </item>
        <item>
            <title><![CDATA[ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಯುರೋಪ್ ಪ್ರವಾಸಿಗರು ಯಾಕೆ ಬಂದರು? ಇಲ್ಲಿದೆ ಕಾರಣ!]]></title>
            <link>https://kannada.asianetnews.com/gallery/karnataka-districts/european-tourists-visit-anjanadri-hills-gagan-mahal-gangavathi-gvd-86z6ulf</link>
            <guid isPermaLink="true">https://kannada.asianetnews.com/gallery/karnataka-districts/european-tourists-visit-anjanadri-hills-gagan-mahal-gangavathi-gvd-86z6ulf</guid>
            <pubDate>Thu, 02 Jul 2026 19:04:39 +0530</pubDate>
            <description><![CDATA[&lt;p&gt;ಸಚಿವಾಲಯದಿಂದ ಆಗಮಿಸಿದ್ದ ಈ ಪ್ರವಾಸಿಗರ ತಂಡವನ್ನು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಶೇಜಸ್ವರ ಅವರು ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwhg4cm0h1papfn4k6cvmb4c,imgname-1-1782998774400.png" type="image/jpeg" height="390" width="690"/>
            <content:encoded><![CDATA[&lt;p&gt;ಸಚಿವಾಲಯದಿಂದ ಆಗಮಿಸಿದ್ದ ಈ ಪ್ರವಾಸಿಗರ ತಂಡವನ್ನು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಶೇಜಸ್ವರ ಅವರು ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಗಂಗಾವತಿ (ಜು.02): &lt;/strong&gt;ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ, ಹುಚ್ಚಪ್ಪಯ್ಯನ ಮಠ ಮತ್ತು ಆನೆಗೊಂದಿಯ ಗಗನ್ ಮಹಲ್ ಸ್ಥಳಗಳಿಗೆ ಯುರೋಪ್ ರಾಷ್ಟ್ರದ 16 ಸದಸ್ಯರ ಪ್ರವಾಸಿಗರ ತಂಡ ಗುರುವಾರ ಭೇಟಿ ನೀಡಿ ವಿಕ್ಷಣೆ ಮಾಡಿದರು.&lt;/p&gt;&lt;img&gt;&lt;p&gt;ಯುರೋಪ್ ರಾಷ್ಟ್ರದ ವಿದೇಶಾಂಗ ಸಚಿವಾಲಯದಿಂದ ಆಗಮಿಸಿದ್ದ ಈ ಪ್ರವಾಸಿಗರ ತಂಡವನ್ನು ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಶೇಜಸ್ವರ ಅವರು ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಅಂಜನಾದ್ರಿ ಬೆಟ್ಟ ಏರಿದ ಪ್ರವಾಸಿಗರು ಅಲ್ಲಿಂದಲೆ ನೈಸರ್ಗಿಕವಾಗಿರುವ ಪರಿಸರವನ್ನು ವೀಕ್ಷಿಸಿದ್ದಲ್ಲದೆ ತುಂಗಭದ್ರಾ ನದಿ ತೀರವನ್ನು ಪ್ರಶಂಸಿಸಿದ್ದಾರೆ. ನಂತರ ಗಗನ್ ಮಹಲ್&zwnj;ಗೆ ಆಗಮಿಸಿ ವಿಜಯನಗರ ಸಾಮ್ರಾಜ್ಯದ ಚಿತ್ರಗಳನ್ನು ವೀಕ್ಷಿಸಿದ್ದಾರೆ. ಇದಕ್ಕಿಂತ ಪೂರ್ವದಲ್ಲಿ ಹಂಪಿ, ಕಮಲಾಪುರ, ವಿಜಯ ವಿಠಲ ದೇವಸ್ಥಾನ ಸೇರಿದಂತೆ ವಿವಿಧ ಐತಿಹಾಸಿಕ ಪ್ರಸಿದ್ಧ ಸ್ಥಳಗಳನ್ನು ವೀಕ್ಷಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/karnataka-districts/european-tourists-visit-anjanadri-hills-gagan-mahal-gangavathi-gvd-86z6ulf"/>
        </item>
        <item>
            <title><![CDATA[ಘನ ತ್ಯಾಜ್ಯ ವಿಲೇವಾರಿಗೆ ನಾಗರಿಕರು ಸಹಕರಿಸಿ: ಗಂಗಾವತಿ ಪ್ರಾಣೇಶ್ ವಿಶೇಷ ಮನವಿ]]></title>
            <link>https://kannada.asianetnews.com/karnataka-districts/gangavathi-municipality-solid-waste-awareness-gangavathi-pranesh-gvd/articleshow-afkin8g</link>
            <guid isPermaLink="true">https://kannada.asianetnews.com/karnataka-districts/gangavathi-municipality-solid-waste-awareness-gangavathi-pranesh-gvd/articleshow-afkin8g</guid>
            <pubDate>Wed, 08 Jul 2026 19:52:34 +0530</pubDate>
            <description><![CDATA[&lt;p&gt;ವಿವಿಧ ವಾರ್ಡುಗಳಲ್ಲಿ ಪೌರ ಕಾರ್ಮಿಕರು ವಾಹನಗಳ ಮೂಲಕ ಆಗಮಿಸಿದ್ದ ಸಂದರ್ಭದಲ್ಲಿ ಘನ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ನಾಗರಿಕರು ಸಹಕರಿಸಬೇಕೆಂದು ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx11mf21aptncdejhz6n053n,imgname-ch-1783520443457.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.08): &lt;/strong&gt;ನಗರದ ವಿವಿಧ ವಾರ್ಡುಗಳಲ್ಲಿ ಪೌರ ಕಾರ್ಮಿಕರು ವಾಹನಗಳ ಮೂಲಕ ಆಗಮಿಸಿದ್ದ ಸಂದರ್ಭದಲ್ಲಿ ಘನ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ನಾಗರಿಕರು ಸಹಕರಿಸಬೇಕೆಂದು ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಹೇಳಿದರು. ನಗರದ 3 ಮತ್ತು 4ನೇ ವಾರ್ಡ ಜಯನಗರ ಸತ್ಯನಾರಾಯಣ ಪೇಟೆಯಲ್ಲಿ ನಗರಸಭೆಯವರು ಕೈಗೊಂಡಿರುವ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.&lt;/p&gt;&lt;p&gt;ನಗರಸಭೆ ಪೌರ ಕಾರ್ಮಿಕರು ದಿನ ನಿತ್ಯ ಮನೆಯ ಕೆಲಸದಂತೆ ಕೆಲಸ ಮಾಡುತ್ತಾರೆ. ಘನ ತ್ಯಾಜ್ಯಗಳ ಬಗ್ಗೆ ಧ್ವನಿ ವರ್ಧಕಗಳ ಮೂಲಕ ಜಾಗೃತಿ ಮೂಡಿಸುತ್ತಾರೆ. ಕಾರಣ ಸಾರ್ವಜನಿಕರು ಮನೆ ಮನೆಗೆ ವಾಹನಗಳು ಬಂದಾಗ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ತ್ಯಾಜ್ಯಗಳನ್ನು ಬೇರ್ಪಡಿಸಿ ನಗರಸಭೆಯವರು ಗುರಿತಿಸಿರುವ ಡಬ್ಬಿಗಳಲ್ಲಿ ಹಾಕಬೇಕೆಂದು ಸೂಚಿಸಿದರು. ವಾರ್ಡುಗಳಲ್ಲಿ ಖಾಲಿ ನಿವೇಶನಗಳಿದ್ದು, ಜಾಲಿ ಮುಳ್ಳುಗಳು ಬೆಳಿದಿವೆ. ಈ ಸ್ಥಳಗಳಲ್ಲಿ ವಿಷ ಜಂತುಗಳು ಸಂಚರಿಸುತ್ತಿದ್ದರಿರಂದ ಸಾರ್ವಜನಿಕರು ಭಯ ಬೀತರಾಗಿದ್ದಾರೆ. ನಗರಸಭೆಯವರು ಕ್ರಮ ಕೈಗೊಳ್ಳಬೇಕೆಂದರು.&lt;/p&gt;&lt;h2&gt;&lt;strong&gt;ಮೇಲಿಂದ ಮೇಲೆ ಹಲ್ಲೆ&lt;/strong&gt;&lt;/h2&gt;&lt;p&gt;ಪತ್ರಕರ್ತ ರಾಮಮೂರ್ತಿ ನವಲಿ ಮಾತನಾಡಿ ನಗರಸಭೆಯ ಕಾರ್ಮಿಕರು ಆಗಮಿಸಿದ್ದ ಸಂದರ್ಭದಲ್ಲಿ ನಾಗರಿಕರು ಸಹಕರಿಸಬೇಕೆಂದು ತಿಳಿಸಿದ ಅವರು ಇತ್ತೀಚಿಗೆ ಪೌರ ಕಾರ್ಮಿಕರ ಮೇಲೆ ಮೇಲಿಂದ ಮೇಲೆ ಹಲ್ಲೆ ಘಟನೆ ನಡೆಯುತ್ತಿವೆ. ಕಾರಣ ಇಂತಹ ಘಟನೆ ಮರುಕಳಿಸದೆ ಮನೆ ಮನೆಗೆ ಪೌರ ಕಾರ್ಮಿಕರು ಬಂದಾಗ ಸಹಕರಿಸಬೇಕೆಂದು ತಿಳಿಸಿದರು. ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಕುರಿತು ನಗರಸಭೆಯವರು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ನಗರಸಭೆಯವರು ಪ್ರಚಾರ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸ ಬೇಕೆಂದರು.&lt;/p&gt;&lt;p&gt;ನಗರ ಯೋಜನಾ ಪ್ರಾಧಿಕಾರದ ಮಾಜಿ ಅದ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅದರಂತೆ ನಗರಸಭೆಯವರು ಕೈಗೊಂಡಿರುವ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಸಂದರ್ಭದಲ್ಲಿ ಎಲ್ಲರು ಸಹಕರಿಸಬೇಕೆಂದರು. ಈ ವೇಳೆ ಪ್ರಮುಖರಾದ ರಾಘವೇಂದ್ರ ಮೇಗೂರು, ವಾದಿರಾಜಚಾರ ಕಲ್ಮಂಗಿ, ಮಲ್ಲಿಕಾರ್ಜುನ ಟೆಂಗಿನಕಾಯಿ, ಸಹನಾ ಮಲ್ಲಿಕಾರ್ಜುನ ಟೆಂಗಿನಕಾಯಿ, ರೇಷ್ಮಾ ಹಿರೇಮಠ, ಮಂಜುನಾಥಸ್ವಾಮಿ, ಕಮ್ಯೂನಿಟಿ ಮೊಬಲೈಜರ್ ಸಂಗೀತಾ, ಶ್ರೀದೇವಿ, ಮೇಲ್ವಿಚಾರಕಾರದ ಲಕ್ಷ್ಮಣ, ಯೂಸಫ್, ಭೋಗೇಶ ಆದಾಪುರ, ದುರಗಪ್ಪ, ಭೀಮಣ್ಣ, ಮಂಜುನಾಥ, ಕೃಷ್ಣ, ಗಂಗಮ್ಮ, ಬಸಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-municipality-solid-waste-awareness-gangavathi-pranesh-gvd/articleshow-afkin8g"/>
        </item>
        <item>
            <title><![CDATA[ದೊಡ್ಡ ಕನಸು ಕಾಣಿ, ಕಠಿಣ ಪರಿಶ್ರಮ ಮಾಡಿ: ವಿದ್ಯಾರ್ಥಿನಿಯರಿಗೆ ರವಿ ಡಿ. ಚನ್ನಣ್ಣನವರ್ ಸ್ಪೂರ್ತಿದಾಯಕ ಸಂದೇಶ]]></title>
            <link>https://kannada.asianetnews.com/karnataka-districts/dig-ravi-d-channannavar-advice-to-students-gangavathi-gvd/articleshow-ayw1p3g</link>
            <guid isPermaLink="true">https://kannada.asianetnews.com/karnataka-districts/dig-ravi-d-channannavar-advice-to-students-gangavathi-gvd/articleshow-ayw1p3g</guid>
            <pubDate>Sat, 11 Jul 2026 17:41:22 +0530</pubDate>
            <description><![CDATA[&lt;p&gt;ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಬೆಂಗಳೂರು ಡಿಐಜಿ ರವಿ ಡಿ. ಚನ್ನಣ್ಣನವರ್, ಜ್ಞಾನ, ಶಿಸ್ತು, ಸಂಸ್ಕಾರ, ಸಮಯದ ಮಹತ್ವ ಹಾಗೂ ಮೊಬೈಲ್ ದುರ್ಬಳಕೆ ಬಗ್ಗೆ ವಿದ್ಯಾರ್ಥಿನಿಯರಿಗೆ ಮಹತ್ವದ ಸಲಹೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx8hd2ag0q354jhxzd66r57m,imgname-vjv-1783771859280.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.11): &lt;/strong&gt;ಜ್ಞಾನ, ಶಿಸ್ತು ಮತ್ತು ಸಂಸ್ಕಾರದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳ ಬೇಕೆಂದು ಬೆಂಗಳೂರು ಡೆಪ್ಯೂಟಿ ಇನ್&zwnj;ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ರವಿ ಡಿ. ಚನ್ನಣ್ಣನವರ್ ಹೇಳಿದರು. ನಗರದ ಐಎಂಎ ಭವನದಲ್ಲಿ ಜ್ಞಾನಸಿರಿ ಪ್ರಥಮ ದರ್ಜೆ ಕಲಾ ಮತ್ತು ಮಹಿಳಾ ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಶಕ್ತಿಯಾಗಿದೆ ಎಂದು ಹೇಳಿದರು.&lt;/p&gt;&lt;p&gt;ವಿದ್ಯಾರ್ಥಿನಿಯರು ಜೀವನದಲ್ಲಿ ದೊಡ್ಡ ಗುರಿಯನ್ನು ಹೊಂದಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಪ್ರತಿಯೊಬ್ಬರೂ ಸಮಯದ ಮಹತ್ವ ಅರಿತು ಶಿಸ್ತು, ಪ್ರಾಮಾಣಿಕತೆ ಮತ್ತು ಪರಿಶ್ರಮವನ್ನು ಜೀವನದ ಮೌಲ್ಯಗಳನ್ನಾಗಿ ಅಳವಡಿಸಿಕೊಳ್ಳಬೇಕು. ಇಂದಿನ ಯುವಜನತೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಜ್ಞಾನ ವೃದ್ಧಿಗೆ ಬಳಸಬೇಕು ಹೊರತು ದುರ್ಬಳಕೆಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು. ಮಹಿಳೆಯರು ಶಿಕ್ಷಣದ ಮೂಲಕ ಸಮಾಜದಲ್ಲಿ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದ್ದು, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಆತ್ಮಸ್ಥೈರ್ಯ, ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮ ಅಗತ್ಯ.&lt;/p&gt;&lt;p&gt;ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನವನ್ನು ಗೌರವಿಸಿ ಉತ್ತಮ ನಾಗರಿಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ದೇಶದ ಅಭಿವೃದ್ಧಿಗೆ ವಿದ್ಯಾವಂತ, ಸಂಸ್ಕಾರವಂತ ಮತ್ತು ಜವಾಬ್ದಾರಿಯುತ ಯುವ ಸಮುದಾಯ ಅಗತ್ಯವಾಗಿದೆ. ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಉನ್ನತ ಗುರಿಯೊಂದಿಗೆ ಮುನ್ನಡೆದರೆ ಕುಟುಂಬಕ್ಕೂ, ಸಮಾಜಕ್ಕೂ ಹಾಗೂ ರಾಷ್ಟ್ರಕ್ಕೂ ಕೀರ್ತಿ ತಂದುಕೊಡಬಹುದು ಎಂದು ಡಿಐಜಿ ರವಿ ಡಿ. ಚನ್ನಣ್ಣನವರ್ ಅಭಿಪ್ರಾಯಪಟ್ಟರು. ತಾವು ಬಡತನ ಅನುಭವಿಸಿದ ಕುರಿತು ಪ್ರಸ್ತಾಪಿಸಿದರು.&lt;/p&gt;&lt;h2&gt;&lt;strong&gt;ಮಕ್ಕಳಿಗೆ ವಿದ್ಯಾರ್ಜನೆ&lt;/strong&gt;&lt;/h2&gt;&lt;p&gt;ಶಾಸಕ ಗಾಲಿ ಜನಾರ್ದನ ಮಾತನಾಡಿ ನ್ಯಾಯಧೀಶರಾಗಿ ನಿವೃತ್ತಿಯಾಗಿರುವ ಎನ್.ಎಸ್ ಪಾಟೀಲ್ ಅವರು ಕಾಲೇಜು ಪ್ರಾರಂಭಿಸಿ ಮಕ್ಕಳಿಗೆ ವಿದ್ಯಾರ್ಜನೆ ನೀಡಿದ್ದಾರೆ. ಈ ಸಂಸ್ಥೆಗೆ ಸದಾ ಸಹಕಾರ ನೀಡುವುದಾಗಿ ಹೇಳಿದರು. ಶಾಸಕ ಶಿವರಾಜ ತಂಗಡಗಿ ಮಾತನಾಡಿ ನ್ಯಾಯಧೀಶರಾಗಿ ನಿವೃತ್ತಿಯಾಗಿರುವ ಎನ್ ಎಸ್ ಪಾಟೀಲ್ ಅವರು ರಾಜಕೀಯ ಕ್ಷೇತ್ರದಲ್ಲಿ ಭಾಗವಹಿಸಬೇಕಾಗಿತ್ತು. ಈ ಹಿಂದೆಯು ಸಹ ರಾಜಕೀಯ ಕ್ಷೇತ್ರದಲ್ಲಿದ್ದು ನಂತರ ನ್ಯಾಯಂಗ ಕ್ಷೇತ್ರಕ್ಕೆ ಹೋಗಿದ್ದಾರೆ. ಇವರು ಕಾಲೇಜು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿರುವದು ಪ್ಪಶಂಸನೀಯವಾಗಿದೆ ಎಂದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dig-ravi-d-channannavar-advice-to-students-gangavathi-gvd/articleshow-ayw1p3g"/>
        </item>
        <item>
            <title><![CDATA[ಕರ್ನಾಟಕದ ಜಲಾಶಯಗಳಿಗೆ ಹರಿದುಬಂದ ಜಲರಾಶಿ: ಒಂದೇ ದಿನದಲ್ಲಿ ಆಲಮಟ್ಟಿಗೆ 11 ಟಿಎಂಸಿ ನೀರು]]></title>
            <link>https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx</link>
            <guid isPermaLink="true">https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx</guid>
            <pubDate>Thu, 09 Jul 2026 18:00:43 +0530</pubDate>
            <description><![CDATA[&lt;p&gt;ಮಹಾರಾಷ್ಟ್ರ ಮತ್ತು ಕರ್ನಾಟಕದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ರಾಜ್ಯದ ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳಲ್ಲಿ 20 ಟಿಎಂಸಿ ನೀರು ಹರಿದುಬಂದಿದೆ. ಕೃಷ್ಣಾ ಕೊಳ್ಳದ ಆಲಮಟ್ಟಿ, ಘಟಪ್ರಭಾ ಜಲಾಶಯಗಳು ಗಣನೀಯ ಪ್ರಮಾಣದ ನೀರನ್ನು ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3d6vm0cz6ss4d6kpwsxq8q,imgname-almatti-reservoir-storage-1783599689344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಜು.9): &lt;/strong&gt;ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಹಾಗೂ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮುಂಗಾರಿನ ಭಾರಿ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ. ಕುಡಿಯುವ ನೀರು ಮತ್ತು ಕೃಷಿ ಉದ್ದೇಶಗಳಿಗಾಗಿ ಬಳಸಲಾಗುವ ಕರ್ನಾಟಕದ 10 ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 20 ಟಿಎಂಸಿ (TMC) ನೀರು ಹರಿದುಬಂದಿದೆ. ಇದರಲ್ಲಿ ಕೃಷ್ಣಾ ಕೊಳ್ಳದ ಆರು ಜಲಾಶಯಗಳಿಗೇ ದಾಖಲೆಯ 17.4 ಟಿಎಂಸಿ ನೀರು ಸೇರ್ಪಡೆಯಾಗಿದೆ.&lt;/p&gt;&lt;p&gt;ಮಹಾರಾಷ್ಟ್ರ ಮತ್ತು ಕರ್ನಾಟಕದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಆಲಮಟ್ಟಿ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಮತ್ತು ಭದ್ರಾ ಜಲಾಶಯಗಳಿಗೆ ನಿರಂತರ ನೀರಿನ ಆಸರೆಯಾಗುತ್ತಿದೆ. ವಿಶೇಷವೆಂದರೆ, ಜುಲೈ ತಿಂಗಳ ಆರಂಭದಲ್ಲಿ ಭದ್ರಾ ಜಲಾಶಯವನ್ನು ಹೊರತುಪಡಿಸಿ ಈ ಕೊಳ್ಳದ ಉಳಿದೆಲ್ಲಾ ಅಣೆಕಟ್ಟುಗಳಲ್ಲಿ ಒಳಹರಿವಿನ ಪ್ರಮಾಣ ಸಂಪೂರ್ಣ ಶೂನ್ಯವಾಗಿತ್ತು.&lt;/p&gt;&lt;h2&gt;&lt;strong&gt;ಆಲಮಟ್ಟಿಗೆ ಒಂದೇ ದಿನದಲ್ಲಿ 11 ಟಿಎಂಸಿ ನೀರು&lt;/strong&gt;&lt;/h2&gt;&lt;p&gt;ಜುಲೈ 8 ರಂದು ಕೃಷ್ಣಾ ಕೊಳ್ಳದ ಪ್ರಮುಖ ಜಲಾಶಯವಾದ ಆಲಮಟ್ಟಿಗೆ ಕೇವಲ 24 ಗಂಟೆಗಳಲ್ಲಿ 1.26 ಲಕ್ಷ ಕ್ಯೂಸೆಕ್ (ಅಂದರೆ ಸುಮಾರು 10.92 ಟಿಎಂಸಿ) ನಷ್ಟು ಭಾರಿ ಒಳಹರಿವು ದಾಖಲಾಗಿದೆ. ಜುಲೈ 7 ರಂದು ಆಲಮಟ್ಟಿ ಜಲಾಶಯದಲ್ಲಿ 22.46 ಟಿಎಂಸಿ ನೀರು ಸಂಗ್ರಹವಿತ್ತು ಮತ್ತು ಕೇವಲ 21,625 ಕ್ಯೂಸೆಕ್ ಒಳಹರಿವು ಇತ್ತು. ಆದರೆ, ಬುಧವಾರದ ವೇಳೆಗೆ ಜಲಾಶಯದ ಪ್ರಸ್ತುತ ನೀರಿನ ಸಂಗ್ರಹ 33.34 ಟಿಎಂಸಿಗೆ ಏರಿಕೆಯಾಗಿದ್ದು, ಒಳಹರಿವು ಕೂಡ 1,26,373 ಕ್ಯೂಸೆಕ್&zwnj;ಗೆ ತಲುಪಿದೆ.&lt;/p&gt;&lt;h2&gt;&lt;strong&gt;ಘಟಪ್ರಭಾ ಮತ್ತು ತುಂಗಭದ್ರಾ ಜಲಾಶಯಗಳ ಸ್ಥಿತಿ&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅತಿ ಹೆಚ್ಚು ಪ್ರಯೋಜನ ಪಡೆದ ಮತ್ತೊಂದು ಜಲಾಶಯವೆಂದರೆ ಘಟಪ್ರಭಾ. ಕೇವಲ 24 ಗಂಟೆಗಳ ಅವಧಿಯಲ್ಲಿ ಈ ಅಣೆಕಟ್ಟಿನ ನೀರಿನ ಮಟ್ಟ ಸುಮಾರು 4 ಟಿಎಂಸಿಯಷ್ಟು ಹೆಚ್ಚಾಗಿದೆ. ಇತ್ತ ತುಂಗಭದ್ರಾ ಜಲಾಶಯಕ್ಕೂ 24 ಗಂಟೆಗಳಲ್ಲಿ 17,507 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 2 ಟಿಎಂಸಿಯಷ್ಟು ನೀರು ಸಂಗ್ರಹಕ್ಕೆ ಸೇರ್ಪಡೆಯಾಗಿದೆ.&lt;/p&gt;&lt;h2&gt;&lt;strong&gt;ಮಲಪ್ರಭಾಗೆ ಮೂರು ಪಟ್ಟು ಹೆಚ್ಚಿದ ಒಳಹರಿವು&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಲಪ್ರಭಾ ಅಣೆಕಟ್ಟಿನ ಒಳಹರಿವು ಹಿಂದಿನ ದಿನಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಜಲಾಶಯಕ್ಕೆ 13,700 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇನ್ನು ಆಲಮಟ್ಟಿ ಜಲಾಶಯದ ಸಮತೋಲನ ಅಣೆಕಟ್ಟಾಗಿರುವ ನಾರಾಯಣಪುರ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಶೂನ್ಯವಾಗಿಯೇ ಮುಂದುವರಿದಿದೆ. ಪ್ರಸ್ತುತ ಈ ಅಣೆಕಟ್ಟು ತನ್ನ ಒಟ್ಟು 33 ಟಿಎಂಸಿ ಸಾಮರ್ಥ್ಯದ ಎದುರು 19.89 ಟಿಎಂಸಿ ನೀರನ್ನು ಹೊಂದಿದೆ.&lt;/p&gt;&lt;table&gt; &lt;tbody&gt;  &lt;tr&gt;   &lt;td&gt;ಜಲಾಶಯ&lt;/td&gt;   &lt;td&gt;ಒಟ್ಟು ಸಾಮರ್ಥ್ಯ&lt;/td&gt;   &lt;td&gt;ಪ್ರಸ್ತುತ ಸಂಗ್ರಹಣೆ (In tmcft)&lt;/td&gt;   &lt;td&gt;ಒಳಹರಿವು (cusec)&lt;/td&gt;   &lt;td&gt;ಹೊರಹರಿವು (cusec)&lt;/td&gt;  &lt;/tr&gt;  &lt;tr&gt;   &lt;td&gt;&lt;strong&gt;ಕೃಷ್ಣಾ ಕೊಳ್ಳ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;ಆಲಮಟ್ಟಿ&lt;/td&gt;   &lt;td&gt;123.08&lt;/td&gt;   &lt;td&gt;33.34&lt;/td&gt;   &lt;td&gt;1,26,625&lt;/td&gt;   &lt;td&gt;100&lt;/td&gt;  &lt;/tr&gt;  &lt;tr&gt;   &lt;td&gt;ತುಂಗಭದ್ರಾ&lt;/td&gt;   &lt;td&gt;105.79&lt;/td&gt;   &lt;td&gt;11.22&lt;/td&gt;   &lt;td&gt;17,507&lt;/td&gt;   &lt;td&gt;170&lt;/td&gt;  &lt;/tr&gt;  &lt;tr&gt;   &lt;td&gt;ಭದ್ರಾ&lt;/td&gt;   &lt;td&gt;71.54&lt;/td&gt;   &lt;td&gt;28.75&lt;/td&gt;   &lt;td&gt;17,818&lt;/td&gt;   &lt;td&gt;214&lt;/td&gt;  &lt;/tr&gt;  &lt;tr&gt;   &lt;td&gt;ಹಿಡಕಲ್&lt;/td&gt;   &lt;td&gt;51&lt;/td&gt;   &lt;td&gt;13.18&lt;/td&gt;   &lt;td&gt;26,393&lt;/td&gt;   &lt;td&gt;110&lt;/td&gt;  &lt;/tr&gt;  &lt;tr&gt;   &lt;td&gt;ಮಲಪ್ರಭಾ&lt;/td&gt;   &lt;td&gt;37.73&lt;/td&gt;   &lt;td&gt;10.38&lt;/td&gt;   &lt;td&gt;13,700&lt;/td&gt;   &lt;td&gt;194&lt;/td&gt;  &lt;/tr&gt;  &lt;tr&gt;   &lt;td&gt;ನಾರಾಯಣಪುರ&lt;/td&gt;   &lt;td&gt;33.31&lt;/td&gt;   &lt;td&gt;19.82&lt;/td&gt;   &lt;td&gt;0&lt;/td&gt;   &lt;td&gt;767&lt;/td&gt;  &lt;/tr&gt;  &lt;tr&gt;   &lt;td&gt;&lt;strong&gt;ಕಾವೇರಿ ಕೊಳ್ಳ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;ಹಾರಂಗಿ&lt;/td&gt;   &lt;td&gt;8.5&lt;/td&gt;   &lt;td&gt;4.03&lt;/td&gt;   &lt;td&gt;2,090&lt;/td&gt;   &lt;td&gt;180&lt;/td&gt;  &lt;/tr&gt;  &lt;tr&gt;   &lt;td&gt;ಹೇಮಾವತಿ&lt;/td&gt;   &lt;td&gt;37.10&lt;/td&gt;   &lt;td&gt;18.78&lt;/td&gt;   &lt;td&gt;16,593&lt;/td&gt;   &lt;td&gt;300&lt;/td&gt;  &lt;/tr&gt;  &lt;tr&gt;   &lt;td&gt;ಕೆಆರ್&zwnj; ಸಾಗರ&lt;/td&gt;   &lt;td&gt;49.45&lt;/td&gt;   &lt;td&gt;12.49&lt;/td&gt;   &lt;td&gt;7,531&lt;/td&gt;   &lt;td&gt;790&lt;/td&gt;  &lt;/tr&gt;  &lt;tr&gt;   &lt;td&gt;ಕಬಿನಿ&lt;/td&gt;   &lt;td&gt;19.52&lt;/td&gt;   &lt;td&gt;7.96&lt;/td&gt;   &lt;td&gt;10,757&lt;/td&gt;   &lt;td&gt;500&lt;/td&gt;  &lt;/tr&gt;  &lt;tr&gt;   &lt;td&gt;ವಾಣಿವಿಲಾಸ ಸಾಗರ&lt;/td&gt;   &lt;td&gt;30.42&lt;/td&gt;   &lt;td&gt;23.76&lt;/td&gt;   &lt;td&gt;0&lt;/td&gt;   &lt;td&gt;0&lt;/td&gt;  &lt;/tr&gt; &lt;/tbody&gt;&lt;/table&gt;&lt;h2&gt;&lt;strong&gt;ಕಾವೇರಿ ಕೊಳ್ಳದ ಜಲಾಶಯಗಳಲ್ಲೂ ಸ್ಥಿರ ಪ್ರಗತಿ&lt;/strong&gt;&lt;/h2&gt;&lt;p&gt;ಮತ್ತೊಂದೆಡೆ ಕಾವೇರಿ ಕೊಳ್ಳದ ನಾಲ್ಕು ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ನಿಧಾನ ಹಾಗೂ ಸ್ಥಿರವಾಗಿ ಮುಂದುವರಿದಿದೆ. ಈ ನಾಲ್ಕು ಅಣೆಕಟ್ಟುಗಳ ಒಟ್ಟು ನೀರಿನ ಸಾಮರ್ಥ್ಯ 114.57 ಟಿಎಂಸಿ ಆಗಿದ್ದು, ಪ್ರಸ್ತುತ 43.25 ಟಿಎಂಸಿ (ಶೇ. 38 ರಷ್ಟು) ನೀರು ಸಂಗ್ರಹವಾಗಿದೆ. ಜುಲೈ 7 ರಂದು ಇವುಗಳಲ್ಲಿ 40.23 ಟಿಎಂಸಿ ನೀರಿತ್ತು.&lt;/p&gt;&lt;p&gt;ಕಾವೇರಿ ಕೊಳ್ಳದಲ್ಲಿ ಹಾರಂಗಿ ಜಲಾಶಯವು ಅತ್ಯಂತ ಕಡಿಮೆ ಎಂದರೆ 1,657 ಕ್ಯೂಸೆಕ್ ಒಳಹರಿವನ್ನು ಪಡೆದಿದೆ. ಆದರೆ ಹೇಮಾವತಿ ಜಲಾಶಯದ ಒಳಹರಿವು ಕಳೆದ 24 ಗಂಟೆಗಳಲ್ಲಿ ದುಪ್ಪಟ್ಟಾಗಿದ್ದು, 16,593 ಕ್ಯೂಸೆಕ್&zwnj;ಗೆ ತಲುಪಿದೆ. ಅದೇ ರೀತಿ ಕಬಿನಿ ಜಲಾಶಯದ ಒಳಹರಿವು ಕೂಡ ಒಂದೇ ದಿನದಲ್ಲಿ ದುಪ್ಪಟ್ಟಾಗಿದ್ದು, ಪ್ರಸ್ತುತ 10,757 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಒಟ್ಟಾರೆಯಾಗಿ ರಾಜ್ಯದ ಪ್ರಮುಖ ನದಿ ಕೊಳ್ಳಗಳಲ್ಲಿ ನೀರಿನ ಆಶಾಭಾವನೆ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>koppal</category>
            <dc:creator>Santosh Naik</dc:creator>
            <atom:link href="https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx"/>
        </item>
        <item>
            <title><![CDATA['ಸಾವಿರಾರು ಕೋಟಿ ಹಣ ಎಲ್ಲಿಂದ ಬರುತ್ತೆ?': ಆರ್‌ಎಸ್‌ಎಸ್ ಬಗ್ಗೆ ಶಿವರಾಜ ತಂಗಡಗಿ ಪ್ರಶ್ನೆ]]></title>
            <link>https://kannada.asianetnews.com/karnataka-districts/shivaraj-tangadagi-demands-ed-probe-into-rss-funding-gvd/articleshow-c9ur301</link>
            <guid isPermaLink="true">https://kannada.asianetnews.com/karnataka-districts/shivaraj-tangadagi-demands-ed-probe-into-rss-funding-gvd/articleshow-c9ur301</guid>
            <pubDate>Sat, 11 Jul 2026 19:46:07 +0530</pubDate>
            <description><![CDATA[&lt;p&gt;ಶಾಸಕ ಶಿವರಾಜ ತಂಗಡಗಿ, ಆರ್&zwnj;ಎಸ್&zwnj;ಎಸ್&zwnj;ಗೆ ಬರುತ್ತಿರುವ ಹಣದ ಮೂಲದ ಬಗ್ಗೆ ಇಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಬಿಜೆಪಿ, ಎಸ್&zwnj;ಐಆರ್&zwnj;, ಅಂಜನಾದ್ರಿ ಕಾಣಿಕೆ ಹುಂಡಿ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kem1q2ybv4tansqsa0ry8evp,imgname-shivaraj-tangadagi-1768051936203.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.11): &lt;/strong&gt;ಆರ್&zwnj;ಎಸ್&zwnj;ಎಸ್ ಮೇಲೆ ಇಡಿ ದಾಳಿ ಮಾಡಿದಾಗ ಇವರ ನಾಟಕ ಬಯಲಾಗುತ್ತದೆ ಎಂದು ಕನಕಗಿರಿ ಶಾಸಕರಾಗಿರುವ ಮಾಜಿ ಸಚಿವ ಶಿವರಾಜ ತಂಗಡಗಿ ದೂರಿದರು. ನಗರದ ಐಎಂಎ ಭವನದಲ್ಲಿ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಆರ್&zwnj;ಎಸ್&zwnj;ಎಸ್ ಸಂಘಟನೆಗೆ ಸಾವಿರಾರು ಕೋಟಿ ಹಣ ಎಲ್ಲಿಂದ ಬರ್ತಾ ಇದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಹೇಳಿದ ಅವರು ಕರ್ನಾಟಕದಲ್ಲಿ ಓಟ್ ಚೋರಿ ಮಾಡಲು ಆಗಲ್ಲ ಅಂತ ಬಿಜೆಪಿಗೆ ಟೆನ್ಷನ್ ಶುರುವಾಗಿದೆ ಎಂದರು. ರಾಜ್ಯದಲ್ಲಿ ಎಸ್&zwnj;ಐಆರ್ ಚೆನ್ನಾಗಿ ಕೆಲಸ ನಡೆದಿದೆ.ಇದರಿಂದ ಬಿಜೆಪಿ ಪಕ್ಷದವರಿಗೆ ಟೆನ್ಯಿಷನ್ ಶುರುವಾಗಿದೆ ಎಂದರು.&lt;/p&gt;&lt;p&gt;ಎಸ್&zwnj;ಐಆರ್ ಕೆಲಸ ಕಾಂಗ್ರೆಸ್ ಪಕ್ಷದವರು ಮಾಡ್ತಾ ಇಲ್ಲ. ಈ ಕೆಲಸ ಚುನಾವಣಾ ಆಯೋಗ ಮಾಡ್ತಾ ಇದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಸಿಗಬೇಕು, ಕೊಡಬೇಕು ಅನ್ನೋದು ನಮ್ಮ ವಾದವಾಗಿದೆ ಎಂದರು. ಕಾಂಗ್ರೆಸ್ ಸರ್ಕಾರದ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಬಿಜೆಪಿಯವರು ಮಾಡ್ತಾ ಇದ್ದಾರೆ. ಯಾವ ಹಂತದಲ್ಲಿ ರಾಜ್ಯ ಸರ್ಕಾರ ದುರುಪಯೋಗ ಮಾಡ್ತಿದೆ ಎನ್ನುವದರ ಬಗ್ಗೆ ಪ್ರೂಫ್ ನೀಡಲಿ ಎಂದರು. ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಅವರು ವಿನಾಃ ಕಾರಣ ಮಾತಾಡ್ತಾ ಇದ್ದಾರೆ ಎಂದರು. ಪಶ್ಚಿಮ ಬಂಗಾಳ ಹಾಗೂ ಮಧ್ಯ ಪ್ರದೇಶದಲ್ಲಿ 86 ಲಕ್ಷ ಮತದಾರರ ಪಟ್ಟಿಯಿಂದ ತೆದಗು ಹಾಕಿದ್ದಾರೆ ಇದಕ್ಕೆ ಉತ್ತರ ನೀಡಲಿ ಎಂದರು.&lt;/p&gt;&lt;h2&gt;&lt;strong&gt;ಅಯೋಧ್ಯೆ ನಂತರ ಅಂಜನಾದ್ರಿಗೆ ಬಿಜೆಪಿಯವರು ಕೈ ಹಾಕ್ತಾರೆ&lt;/strong&gt;&lt;/h2&gt;&lt;p&gt;ಈಗಾಗಲೇ ಅಯೋಧ್ಯೆಯಲ್ಲಿ ನಡೆದಿರುವ ಕಾಣಿಕೆ ಹುಂಡಿಯ ಭ್ರಷ್ಟಾಚಾರ ಬಟಾ ಬಯಲಾಗಿದ್ದು, ಈಗ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯ ಕಾಣಿಕೆ ಹುಂಡಿಗೆ ಕೈ ಹಾಕಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಶಾಸಕ ತಂಗಡಗಿ ಆರೋಪಿಸಿದರು. ಆರ್&zwnj;ಎಸ್&zwnj;ಎಸ್ ಮತ್ತು ಬಿಜೆಪಿಯವರು ಬಂದರೆ ಹುಷಾರ್ ಅಂತಾ ಹೇಳುವ ಪರಿಸ್ಥಿತಿ ಒದಗಿದೆ ಎಂದರು. 2029 ಲೋಕಸಭಾ ಚುನಾವಣೆಗೆ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರವಾಗಿ ನನ್ನ ಸಂಪೂಪರ್ಣ ವಿರೋಧ ಇದೆ ಎಂದರು.&lt;/p&gt;&lt;p&gt;ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ರೀತಿ ಕೆಲಸ ಮಾಡಲು ಸಾಧ್ಯ ಇದೆಯಾ ಎಂದು ಪ್ರಶ್ನಿಸಿದರು. ದೇಶದಲ್ಲಿ ಬಿಜೆಪಿಯ ಗಾಳಿ ಹೋಗಿದೆ, ಎಲ್ಲ ಕಡೆ ಗಾಳಿ ಟುಸ್ ಮುರ್ಗಾ ಆಗಿದೆ ಎಂದರು. ಕಾಂಗ್ರೆಸ್ ಪಕ್ಷ ಮಹಿಳಾ ಕಾನೂನಿಗೆ ವಿರೋಧ ಮಾಡಿಲ್ಲ ಸಂಪೂರ್ಣವಾಗಿ ಬೆಂಬಲ ಇದೆ ಎಂದರು. ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ತಮಗೆ ಅವಕಾಶ ಸಿಕ್ಕೇ ಸಿಗುತ್ತದೆ. ನಾನು ಪ್ರಬಲ ಆಕಾಂಕ್ಷಿ ಎಂದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/shivaraj-tangadagi-demands-ed-probe-into-rss-funding-gvd/articleshow-c9ur301"/>
        </item>
        <item>
            <title><![CDATA[ಕೊಪ್ಪಳ ಕೆಆರ್‌ಐಡಿಎಲ್‌ನಲ್ಲಿ ₹72 ಕೋಟಿ ಲೂಟಿ; ಇಂಜಿನಿಯರ್ ಝರಣಪ್ಪ ಚಿಂಚೋಳಿಕರ್ ಸೇವೆಯಿಂದ ಅಮಾನತು!]]></title>
            <link>https://kannada.asianetnews.com/karnataka-districts/koppal-kridl-72-crore-scam-ee-jharanappa-chincholikar-arrested-suspended-suvarna-news-impact-sat/articleshow-eoibnpm</link>
            <guid isPermaLink="true">https://kannada.asianetnews.com/karnataka-districts/koppal-kridl-72-crore-scam-ee-jharanappa-chincholikar-arrested-suspended-suvarna-news-impact-sat/articleshow-eoibnpm</guid>
            <pubDate>Fri, 17 Jul 2026 22:23:53 +0530</pubDate>
            <description><![CDATA[ಕೊಪ್ಪಳ ಕೆಆರ್&zwnj;ಐಡಿಎಲ್ ಇಲಾಖೆಯಲ್ಲಿ ನಡೆದ 72 ಕೋಟಿ ರೂಪಾಯಿಗಳ ಬೃಹತ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಹಗರಣದ ಪ್ರಮುಖ ಆರೋಪಿಗಳಾದ ಕಾರ್ಯಪಾಲಕ ಅಭಿಯಂತರ ಝರಣಪ್ಪ ಚಿಂಚೋಳಿಕರ್ ಮತ್ತು ಗುತ್ತಿಗೆದಾರ ದೇವರಾಜ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxrfwzw214vbjfyyx4e571cf,imgname-koppal-jharanappa-chincholikar-arrest-1784307154817.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ: ಜಿ&lt;/strong&gt;ಲ್ಲೆಯ ಕೆಆರ್&zwnj;ಐಡಿಎಲ್ (KRIDL) ಇಲಾಖೆಯಲ್ಲಿ ನಡೆದಿದ್ದ ಬಹುಕೋಟಿ ಭ್ರಷ್ಟಾಚಾರ (Corruption Case) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು (Lokayukta Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಹಗರಣದ (Scam) ಕಿಂಗ್&zwnj;ಪಿನ್ ಎನ್ನಲಾದ ಕಾರ್ಯಪಾಲಕ ಅಭಿಯಂತರ (Executive Engineer - EE) ಝರಣಪ್ಪ ಎಂ. ಚಿಂಚೋಳಿಕರ್ ಮತ್ತು ಗುತ್ತಿಗೆದಾರ (Contractor) ದೇವರಾಜ್ ಎಂಬುವವರನ್ನು ಪೊಲೀಸರು ಬಂಧಿಸಿ (Arrest) ಜೈಲಿಗಟ್ಟಿದ್ದಾರೆ. ಇದು ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suvarna News) ಪ್ರಸಾರ ಮಾಡಿದ್ದ ವರದಿಯ ಬಿಗ್ ಇಂಪ್ಯಾಕ್ಟ್ (Big Impact) ಆಗಿದೆ.&lt;/p&gt;&lt;h2&gt;&lt;strong&gt;ಏನಿದು 72 ಕೋಟಿ ರೂಪಾಯಿ ಹಗರಣ?&amp;nbsp;&lt;/strong&gt;&lt;/h2&gt;&lt;p&gt;ಕೊಪ್ಪಳ ಕೆಆರ್&zwnj;ಐಡಿಎಲ್&zwnj;ನಲ್ಲಿ ಕಾರ್ಯಪಾಲಕ ಅಭಿಯಂತರರಾಗಿದ್ದ (EE) ಝರಣಪ್ಪ ಚಿಂಚೋಳಿಕರ್, ಜಿಲ್ಲೆಯ ಹಲವೆಡೆ ಅಭಿವೃದ್ಧಿ ಕಾಮಗಾರಿಗಳ (Development Works) ಹೆಸರಿನಲ್ಲಿ ಭಾರೀ ಅಕ್ರಮ ನಡೆಸಿದ್ದರು. ಮೈದಾನದಲ್ಲಿ ಯಾವುದೇ ನೈಜ ಕೆಲಸಗಳನ್ನು (Physical Work) ನಡೆಸದೆಯೇ, ಕೇವಲ ಕಾಗದದ ಮೇಲೆ ಬಿಲ್ ಸೃಷ್ಟಿಸಿ (Fake Bills) ಬರೋಬ್ಬರಿ 72 ಕೋಟಿ ರೂಪಾಯಿಗಳನ್ನು ಎತ್ತುವಳಿ ಮಾಡಿದ್ದರು ಎಂಬ ಗಂಭೀರ ಆರೋಪ ಇವರ ಮೇಲಿದೆ. ಈ ಬೃಹತ್ ಹಗರಣದ ಕುರಿತು 'ಏಷ್ಯಾನೆಟ್ ಸುವರ್ಣ ನ್ಯೂಸ್' ಸರಣಿ ವರದಿಗಳನ್ನು (Detailed Investigation Reports) ಪ್ರಸಾರ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿತ್ತು.&lt;/p&gt;&lt;h2&gt;&lt;strong&gt;ಲೋಕಾಯುಕ್ತ ಪೊಲೀಸರ ಮಿಂಚಿನ ಕಾರ್ಯಾಚರಣೆ&amp;nbsp;&lt;/strong&gt;&lt;/h2&gt;&lt;p&gt;ಬೆಂಗಳೂರು ಲೋಕಾಯುಕ್ತ ಡಿವೈಎಸ್ಪಿ (Lokayukta DySP) ಮಲ್ಲಿಕಾರ್ಜುನ ಚುಕ್ಕಿ ನೇತೃತ್ವದ ತಂಡವು ಹಗರಣದ ತನಿಖೆ ನಡೆಸಿ, ಪ್ರಮುಖ ಆರೋಪಿ (Prime Accused) ಝರಣಪ್ಪ ಚಿಂಚೋಳಿಕರ್ ಮತ್ತು ಇವರಿಗೆ ಸಾಥ್ ನೀಡಿದ್ದ ಗುತ್ತಿಗೆದಾರ ದೇವರಾಜ್&zwnj;ನನ್ನು ಬಂಧಿಸಿದೆ. ಇಬ್ಬರನ್ನೂ ನ್ಯಾಯಾಲಯಕ್ಕೆ (Court) ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ.&lt;/p&gt;&lt;h2&gt;&lt;strong&gt;ಅಧಿಕಾರಿ ಅಮಾನತ್ತು :&lt;/strong&gt;&lt;/h2&gt;&lt;p&gt;ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾದ (Arrested) ಬೆನ್ನಲ್ಲೇ, ಕೆಆರ್&zwnj;ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರು (Managing Director) ಝರಣಪ್ಪ ಎಂ. ಚಿಂಚೋಳಿಕರ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ (Suspended) ಆದೇಶ ಹೊರಡಿಸಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಯ ವಿರುದ್ಧ ಈಗ ಇಲಾಖಾ ತನಿಖೆಯೂ (Departmental Enquiry) ಚುರುಕುಗೊಂಡಿದೆ.&lt;/p&gt;&lt;h2&gt;&lt;strong&gt;ಸುವರ್ಣ ನ್ಯೂಸ್ ವರದಿಗೆ ಸಂದ ಜಯ:&lt;/strong&gt;&lt;/h2&gt;&lt;p&gt;ಕೊಪ್ಪಳದಂತಹ ಜಿಲ್ಲೆಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು (Taxpayers Money) ಲೂಟಿ ಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಸುವರ್ಣ ನ್ಯೂಸ್ ನಿರಂತರವಾಗಿ ಧ್ವನಿ ಎತ್ತಿತ್ತು. ಮಾಧ್ಯಮದ ವರದಿಯಿಂದ ಎಚ್ಚೆತ್ತ ಲೋಕಾಯುಕ್ತ ಅಧಿಕಾರಿಗಳು ಇಂದು ಭ್ರಷ್ಟರನ್ನ (Corrupt Officials) ಜೈಲಿಗಟ್ಟಿದ್ದಾರೆ. ಸುವರ್ಣ ನ್ಯೂಸ್&zwnj;ನ ಈ ಸಾಮಾಜಿಕ ಕಳಕಳಿಗೆ ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/koppal-kridl-72-crore-scam-ee-jharanappa-chincholikar-arrested-suspended-suvarna-news-impact-sat/articleshow-eoibnpm"/>
        </item>
        <item>
            <title><![CDATA[ಕೊಪ್ಪಳ-ತಳಕಲ್-ಜಿಲ್ಲಾಧಿಕಾರಿಗಳ ಕಚೇರಿ ಮಾರ್ಗದಲ್ಲಿ ನೂತನ ಬಸ್ ಸಂಚಾರ ಶಾಸಕರಿಂದ ಚಾಲನೆ]]></title>
            <link>https://kannada.asianetnews.com/karnataka-districts/mla-raghavendra-hitnal-launches-new-bus-service-on-koppal-talakal-district-magistrate-s-office-route-mrq/articleshow-m6p1kg3</link>
            <guid isPermaLink="true">https://kannada.asianetnews.com/karnataka-districts/mla-raghavendra-hitnal-launches-new-bus-service-on-koppal-talakal-district-magistrate-s-office-route-mrq/articleshow-m6p1kg3</guid>
            <pubDate>Thu, 02 Jul 2026 14:26:08 +0530</pubDate>
            <description><![CDATA[ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ-ತಳಕಲ್-ಜಿಲ್ಲಾಧಿಕಾರಿಗಳ ಕಚೇರಿ ಮಾರ್ಗದಲ್ಲಿ ನೂತನ ನಗರ ಸಾರಿಗೆ ಬಸ್&zwnj;ಗೆ ಚಾಲನೆ ನೀಡಿದರು. ಈ ಹೊಸ ಸೇವೆಯು ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಅನುಕೂಲ ಕಲ್ಪಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwh0cw0cy33y1gebsrvhddj6,imgname-koppal-bus-1782982275084.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ:&lt;/strong&gt; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗದಿಂದ ಕೊಪ್ಪಳ-ತಳಕಲ್-ಜಿಲ್ಲಾಧಿಕಾರಿಗಳ ಕಚೇರಿ ಮಾರ್ಗದಲ್ಲಿ ಇಂದಿನಿಂದ ನೂತನ ನಗರ ಸಾರಿಗೆ ಆರಂಭಿಸಲಾಗಿದೆ.&lt;/p&gt;&lt;p&gt;ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನೂತನ ಬಸ್ ಸಂಚಾರಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.&lt;/p&gt;&lt;p&gt;ಕೊಪ್ಪಳ-ತಳಕಲ್-ಡಿಸಿ ಆಫೀಸ್ ಮಾರ್ಗದಲ್ಲಿ ನೂತನ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಸಾರ್ವಜನಿಕ ಪ್ರಯಾಣಿಕರ ಮನವಿಗೆ ಸ್ಪಂದಿಸಿ ನೂತನ ಬಸ್ ಸಂಚಾರ ಆರಂಭಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಕೊಪ್ಪಳ ನಗರ ಸಂಚಾರ ಮತ್ತು ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲು ಅನುಕೂಲವಾಗಲಿದೆ.&amp;nbsp;&lt;/p&gt;&lt;h2&gt;&lt;strong&gt;ಯಾರಿಗೆಲ್ಲಾ ಅನುಕೂಲ ಆಗಲಿದೆ?&lt;/strong&gt;&lt;/h2&gt;&lt;p&gt;ತಳಕಲ್ ಇಂಜಿನಿಯರಿಂಗ್ ಕಾಲೇಜು, ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳಿಗೂ ನೂತನ ಬಸ್ ಸಂಚಾರ ಸಹಕಾರಿಯಾಗಲಿದೆ&zwnj;. ಅಲ್ಲದೇ ನಮ್ಮ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳಾ ಫಲಾನುಭವಿಗಳು ಈ ನಗರ ಸಾರಿಗೆ ಮೂಲಕ ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ.ಗೊಂಡಬಾಳ, ಕೊಪ್ಪಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಾಲಚಂದ್ರನ್, ಸದಸ್ಯ ಪರುಶುರಾಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಸಿನಯ್ಯ, ಕಾರ್ಮಿಕ ಕಲ್ಯಾಣ ಅಧಿಕಾರಿ ಸತ್ಯನಾರಾಯಣ, ಅಂಕಿ ಸಂಖ್ಯೆ ಅಧಿಕಾರಿ ಎಂ.ಡಿ. ಶಬ್ಬೀರ್, ಲೆಕ್ಕಪತ್ರ ಅಧಿಕಾರಿ ಚಿತ್ತವಡಿಗಪ್ಪ, ಘಟಕ ವ್ಯವಸ್ಥಾಪಕ ರಮೇಶ ಚಿಣಗಿ ಸೇರಿದಂತೆ ಇತರೆ ಜನಪ್ರತಿನಿಧಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗದ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Gangavathi Temple News: ವಿಜಯನಗರ ಕಾಲದ ನಿಧಿಗಾಗಿ ಕಳ್ಳರ ಬೇಟೆ: ಕೊನೆಗೆ ನಡೆದಿದ್ದು ಏನು?&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;TB Dam ನೋಡೋಕೆ ಮುಗಿಬಿದ್ದ ಪ್ರವಾಸಿಗರು!; ಲೇಸರ್ ಲೈಟಿಂಗ್ ನೆರಳಿನಲ್ಲಿ ಚಿನ್ನದ ನದಿಯಂತಾದ ತುಂಗಭದ್ರಾ ಒಡಲು!&lt;/strong&gt;&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mla-raghavendra-hitnal-launches-new-bus-service-on-koppal-talakal-district-magistrate-s-office-route-mrq/articleshow-m6p1kg3"/>
        </item>
        <item>
            <title><![CDATA[ಬ್ಯಾಗ್‌ ಜಿಪ್‌ ರಿಪೇರಿ ಮಾಡೋ ಗಂಗಾವತಿ ಹುಡುಗನ 1 ದಿನದ ಎಷ್ಟು ಸಂಪಾದನೆ ಎಷ್ಟು? ಇದೇ ಬ್ಯುಸಿನೆಸ್‌ ತಾಕತ್ತು!]]></title>
            <link>https://kannada.asianetnews.com/gallery/business/the-daily-income-of-a-bag-zipper-repairer-in-gangavathi-koppal-nu1wpmu</link>
            <guid isPermaLink="true">https://kannada.asianetnews.com/gallery/business/the-daily-income-of-a-bag-zipper-repairer-in-gangavathi-koppal-nu1wpmu</guid>
            <pubDate>Thu, 16 Jul 2026 12:52:03 +0530</pubDate>
            <description><![CDATA[&lt;p&gt;Bag Zip Repairer: ಬ್ಯಾಗ್&zwnj; ಜಿಪ್&zwnj; ರಿಪೇರಿ ಮಾಡುವವರು ಹೀಗೆ ಒಂದಿಷ್ಟು ವಸ್ತುಗಳ ರಿಪೇರಿ ಮಾಡುವವರು ದಿನಕ್ಕೆ ಎಷ್ಟು ಹಣ ಸಂಪಾದನೆ ಮಾಡ್ತಾರೆ ಎಂದು ಅನೇಕರು ಅಂದುಕೊಳ್ಳಬಹುದು, ಇದೆಲ್ಲ ಸಣ್ಣ ಉದ್ಯೋಗ ಎನಿಸಬಹುದು. ಗಂಗಾವತಿ ಹುಡುಗನೊಬ್ಬ ಬ್ಯಾಗ್&zwnj; ಜಿಪ್&zwnj; ಹಾಕಿ ಎಷ್ಟು ಹಣ ಗಳಿಸ್ತಾನೆ ಗೊತ್ತಾ?&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmw8yhc8gpcwr6ctanzctc0,imgname-new-project--36--1784185911852.jpg" type="image/jpeg" height="390" width="690"/>
            <content:encoded><![CDATA[&lt;p&gt;Bag Zip Repairer: ಬ್ಯಾಗ್&zwnj; ಜಿಪ್&zwnj; ರಿಪೇರಿ ಮಾಡುವವರು ಹೀಗೆ ಒಂದಿಷ್ಟು ವಸ್ತುಗಳ ರಿಪೇರಿ ಮಾಡುವವರು ದಿನಕ್ಕೆ ಎಷ್ಟು ಹಣ ಸಂಪಾದನೆ ಮಾಡ್ತಾರೆ ಎಂದು ಅನೇಕರು ಅಂದುಕೊಳ್ಳಬಹುದು, ಇದೆಲ್ಲ ಸಣ್ಣ ಉದ್ಯೋಗ ಎನಿಸಬಹುದು. ಗಂಗಾವತಿ ಹುಡುಗನೊಬ್ಬ ಬ್ಯಾಗ್&zwnj; ಜಿಪ್&zwnj; ಹಾಕಿ ಎಷ್ಟು ಹಣ ಗಳಿಸ್ತಾನೆ ಗೊತ್ತಾ?&lt;/p&gt;&lt;p&gt;&lt;/p&gt;&lt;img&gt;&lt;p&gt;ಇತ್ತೀಚೆಗೆ ಒಂದು ಬ್ಯಾಗ್&zwnj;ಗೆ ಜಿಪ್&zwnj; ಹಾಕೋಕೆ ಕರ್ನಾಟಕದಲ್ಲಿ ಮಿನಿಮಮ್&zwnj; 50 ರೂಪಾಯಿ ತಗೊಳ್ತಾರೆ. ಅದೇ ಬೆಂಗಳೂರಿನಲ್ಲಿ 100 ರೂಪಾಯಿ ತಗೊಳ್ತಾರೆ. 350 ರೂಪಾಯಿಗೆ ಹೊಸ ಬ್ಯಾಗ್&zwnj; ಬರುವುದು, ಆದರೆ ರಿಪೇರಿಗೆ ಮಾತ್ರ ದುಬಾರಿ ಬೆಲೆ ತೆರಬೇಕು.&lt;/p&gt;&lt;img&gt;&lt;p&gt;ಬ್ಯಾಗ್&zwnj; ರಿಪೇರಿ ಮಾಡುವವರು, ಡ್ರೆಸ್&zwnj; ಸ್ಟಿಚ್&zwnj; ಮಾಡಿಕೊಡುವವರು ಎಷ್ಟು ಹಣ ಗಳಿಸುತ್ತಾರೆ ಎಂದು ಕೆಲವರಿಗೆ ಡೌಟ್&zwnj; ಇರುತ್ತದೆ. ಎಲ್ಲರೂ ಬ್ಯಾಗ್&zwnj; ರಿಪೇರಿ ಮಾಡಿಕೊಡೋದಿಲ್ಲ, ಕೆಲವರು ಮಾತ್ರ ಬ್ಯಾಗ್&zwnj; ಅಥವಾ ಇನ್ಯಾವುದೋ ವಸ್ತುಗಳ ರಿಪೇರಿ ಮಾಡ್ತಾರೆ.&lt;/p&gt;&lt;img&gt;&lt;p&gt;ಈಗ ಗಂಗಾವತಿ ಮೂಲದ ಹುಡುಗನೊಬ್ಬ ರಸ್ತೆ ಬದಿಯಲ್ಲಿ ಹೊಲಿಗೆ ಮಶಿನ್&zwnj; ಇಟ್ಕೊಂಡು ಬ್ಯಾಗ್&zwnj; ರಿಪೇರಿ ಮಾಡುತ್ತಿದ್ದಾನೆ. ಇವನ ಆದಾಯದ ವಿಡಿಯೋ ಈಗ ವೈರಲ್&zwnj; ಆಗ್ತಿದೆ. ಹಾಗಿದ್ದರೆ ಇವನ ಒಂದು ದಿನದ ಆದಾಯ ಎಷ್ಟು? ಖರ್ಚು ಎಷ್ಟು?&lt;/p&gt;&lt;p&gt;ಶಹೀಲ್&zwnj; ಕೆ ಆರ್&zwnj; ಎನ್ನುವವರು ಈ ಹುಡುಗನ ಬಳಿ ಬ್ಯಾಗ್&zwnj; ರಿಪೇರಿ ಮಾಡಿಸಿದ್ದಾರೆ. ಆಗ ಅವರು ಒಂದು ದಿನಕ್ಕೆ ಎಷ್ಟು ಹಣ ಗಳಿಸುತ್ತೀಯಾ? ಖರ್ಚು ಎಷ್ಟು ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ. ಆಗ ಆ ಹುಡುಗ ಹೇಳಿದ ಮಾತು ಕೇಳಿ ಎಲ್ಲರೂ ಹೌಹಾರಿದ್ದಾರೆ.&lt;/p&gt;&lt;img&gt;&lt;p&gt;ಈ ಹುಡುಗ ಒಂದು ದಿನಕ್ಕೆ ಏನಿಲ್ಲ ಅಂದ್ರೂ 2000 ರೂಪಾಯಿ ಹಣ ಗಳಿಸುತ್ತಾನೆ. ಅದರಲ್ಲಿ 300 ರೂಪಾಯಿ ಖರ್ಚು ಆಗುವುದು. ಒಟ್ಟು 1700 ರೂಪಾಯಿ ಉಳಿತಾಯ ಆಗುತ್ತದೆ.&lt;/p&gt;&lt;img&gt;&lt;p&gt;50 ರೂಪಾಯಿ ಗಳಿಸಲೀ, 500 ರೂಪಾಯಿ ಗಳಿಸಲಿ ಉದ್ಯಮಕ್ಕೆ ಅದರದ್ದೇ ಆದ ಮಹತ್ವ ಇದೆ. ಬೀದಿಯಲ್ಲಿ ನಿಂತು ಪಾನಿಪುರಿ ಮಾರುವವರು ದಿನಕ್ಕೆ 3000 ರೂಪಾಯಿ ಹಣ ಗಳಿಸುತ್ತಾರೆ. ಇಂಜಿನಿಯರಿಂಗ್&zwnj; ಅಥವಾ ಇನ್ಯಾವುದೋ ದೊಡ್ಡ ಡಿಗ್ರಿ ಪಡೆದವರಿಗೂ ಕೂಡ ಇಷ್ಟು ಹಣ ಸಿಗೋದಿಲ್ಲ.&lt;/p&gt;]]></content:encoded>
            <category>koppal</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/the-daily-income-of-a-bag-zipper-repairer-in-gangavathi-koppal-nu1wpmu"/>
        </item>
        <item>
            <title><![CDATA[ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಜನಸಾಗರ: ಟೋಕನ್ ವ್ಯವಸ್ಥೆ ವಿರುದ್ಧ ಅಸಮಾಧಾನ]]></title>
            <link>https://kannada.asianetnews.com/karnataka-districts/gangavathi-aadhaar-update-rush-at-tahsildar-office-gvd/articleshow-p4t8sax</link>
            <guid isPermaLink="true">https://kannada.asianetnews.com/karnataka-districts/gangavathi-aadhaar-update-rush-at-tahsildar-office-gvd/articleshow-p4t8sax</guid>
            <pubDate>Mon, 13 Jul 2026 18:34:09 +0530</pubDate>
            <description><![CDATA[&lt;p&gt;Gangavathi: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವ್ಯಸ್ಥೆಯ ಆಗರವಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಒದಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxds7eykj6ppyh7paxz8ffhv,imgname-bbj-1783947836371.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/p&gt;&lt;p&gt;&lt;strong&gt;ಗಂಗಾವತಿ (ಜು.13): &lt;/strong&gt;ನಗರದ ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವ್ಯಸ್ಥೆಯ ಆಗರವಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಒದಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಆಧಾರ್ ಕಾರ್ಡುಗಳ ತಿದ್ದುಪಡಿ ಮತ್ತು ಹೊಸದಾಗಿ ಸೇರ್ಪಡೆ ಮಾಡುವ ಕಾರ್ಯ, ಈಗ ಪ್ರಾರಂಭವಾಗಿದ್ದು ಜನರು ಕಚೇರಿಯಲ್ಲಿ ನೂಕು ನುಗ್ಗಲು ನಡೆಸಿದ್ದಾರೆ.&lt;/p&gt;&lt;p&gt;ಸರ್ಕಾರ ಹೊಸ ಯೋಜನೆ ಅದರಲ್ಲಿ ಎಸ್&zwnj;ಐಆರ್, ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯ ಪುನರ್ ಪರಿಶೀಲನೆ ಘೋಷಿಸಿದ ಹಿನ್ನಲೆಯಲ್ಲಿ ಜನರು ಮೂಲ ಪ್ರಮಾಣ ಪತ್ರಗಳಿಗಾಗಿ ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದ್ದಾರೆ. ನಗರದ ತಹಶೀಲ್ದಾರ್ ಕಚೇರಿಯ ಪಡಸಾಲೆಯಲ್ಲಿ ಆಧಾರ್ ಕಾರ್ಡ್ ಪಡೆಯಲು ಸೋಮವಾರ ನೂಕು ನುಗ್ಗಲು ನಡೆಸಿದರು.&lt;/p&gt;&lt;h2&gt;&lt;strong&gt;40 ಟೋಕನ್ ವಿತರಣೆ&lt;/strong&gt;&lt;/h2&gt;&lt;p&gt;ನಗರ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಬರುವ ಜನರು ಬೆಳಿಗ್ಗೆಯಿಂದಲೆ ಟೋಕನ್ ಗಾಗಿ ಕಾಯುವ ಪರಿಸ್ಥಿತಿ ಒದಗಿದೆ. ಕಚೇರಿಯ ಪಡಸಾಲೆಯಲ್ಲಿ ಕೇವಲ 40 ಜನರಿಗೆ ಮಾತ್ರ ಟೋಕನ್ ನೀಡುತ್ತಿದ್ದಾರೆ. ಈ ಟೋಕನ್ ಪಡೆಯಲು ಜನರು ಹರಸಾಹಸ ಮಾಡುತ್ತಿದ್ದು, ಟೋಕನ್ ಪಡೆದ ನಂತರ ಆಧಾರ್ ಕಾರ್ಡುಗಳ ತಿದ್ದುಪಡಿಗೆ ಮತ್ತೆ ಸಾಹಸ ಮಾಡುವ ಪರಿಸ್ಥಿತಿ ಒದಗಿದೆ. ಈ ಹಿಂದೆ ಪಡಸಾಲೆಯಲ್ಲಿ ಎರಡು ಕೇಂದ್ರಗಳಿದ್ದವು. ನಂತರ ಒಂದು ಕೇಂದ್ರವನ್ನು ರದ್ದು ಪಡಿಸಿರುವದರಿಂದ ಈಗ ಕೇವಲ ಒಂದೇ ಕೇಂದ್ರದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಕಂಪ್ಯೂಟರ್ ಆಪರೇಟರುಗಳಿಂದ ಬಂದಿದೆ.&lt;/p&gt;&lt;p&gt;ಇದರಿಂದ ಕೆಲಸ ಮಾಡುವದಕ್ಕೆ ಆಪರೇಟರುಗಳಿಗೆ ಆಸ್ಪದ ಇಲ್ಲದಂತಾಗಿದೆ. ಗಂಗಾವತಿ ತಾಲೂಕಿನಲ್ಲಿ ಗಂಗಾವತಿ, ವೆಂಕಟಗಿರಿ ಹೋಬಳಿಯಲ್ಲಿ ಆಧಾರ್ ಕಾರ್ಡುಗಳ ತಿದ್ದುಪಡಿ ಮಾಡುವ ಕೇಂದ್ರ ಇತ್ತು ಈಗ ಅದು ರದ್ದಾಗಿದೆ. ಮರಳಿ ಹೋಬಳಿಯಲ್ಲಿ ಮಾತ್ರ ಆಧಾರ್ ಕಾರ್ಡುಗಳ ತಿದ್ದುಪುಡಿ ಮಾಡುವ ಅವಕಾಶ ಇರುವುದರಿಂದ ಜನರು ದಿನ ನಿತ್ಯ ಅಲೆದಾಡುವ ಪರಿಸ್ಥಿತಿ ಒದಗಿದೆ.&lt;/p&gt;&lt;p&gt;ಗಂಗಾವತಿ ತಹಶೀಲ್ದಾರ್ ಕಚೇರಿ ಅವ್ಯವ್ಯಸ್ಥೆಯ ಆಗರವಾಗಿದೆ. ಆಧಾರ್ ಕಾರ್ಡುಗಳ ತಿದ್ದುಪಡಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳು ಪಡೆಯ ಬೇಕಾದರೆ ಒಂದು ದಿನ ಕಚೇರಿಯಲ್ಲಿ ಕಳೆಯುವ ಪರಿಸ್ಥಿತಿ ಇದೆ. ಸಮಸ್ಯೆ ಹೇಳಬೇಕಾದರೆ ಹೊಸದಾಗಿ ಬಂದ ತಹಸೀಲ್ದಾರರು ಕಚೇರಿಯಲ್ಲಿ ಸಿಗುತ್ತಿಲ್ಲ. ಇದರಿಂದ ಆಧಾರ್ ಕಾರ್ಡುಗಳ ತಿದ್ದುಪಡಿಗಾಗಿ ನೂಕು ನುಗ್ಗಲು ನಡೆಯುತ್ತಿದೆ.-ತಿಮ್ಮಪ್ಪ, ಗಂಗಾವತಿ&lt;/p&gt;&lt;p&gt;ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಆಧಾರ್ ಕಾರ್ಡು ತಿದ್ದುಪಡಿಗಾಗಿ ನೂಕು ನುಗ್ಗಲು ನಡೆದಿದೆ ಎಂದು ಗೊತ್ತಾಗಿದೆ. ಇವತ್ತು ಪ್ರಭಾರಿ ಗ್ರೇಡ್ -2 ತಹಸೀಲ್ದಾರರಾಗಿ ಇವತ್ತು ಹಾಜರಾಗಿದ್ದೇನೆ. ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ.-ಷಣ್ಮುಖಪ್ಪ, ಪ್ರಭಾರಿ ಗ್ರೇಡ್-2 ತಹಶೀಲ್ದಾರ್, ಗಂಗಾವತಿ&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-aadhaar-update-rush-at-tahsildar-office-gvd/articleshow-p4t8sax"/>
        </item>
        <item>
            <title><![CDATA[64 ದಿನಗಳಲ್ಲಿ ಅಂಜನಾದ್ರಿ ದೇವಸ್ಥಾನದ ಹುಂಡಿಯಲ್ಲಿ ₹71.77 ಲಕ್ಷ ಕಾಣಿಕೆ: ವಿದೇಶಿ ಕರೆನ್ಸಿಯೂ ಪತ್ತೆ]]></title>
            <link>https://kannada.asianetnews.com/gallery/karnataka-districts/anjanadri-temple-hundi-collection-71-lakh-foreign-currency-found-gvd-pddrt6h</link>
            <guid isPermaLink="true">https://kannada.asianetnews.com/gallery/karnataka-districts/anjanadri-temple-hundi-collection-71-lakh-foreign-currency-found-gvd-pddrt6h</guid>
            <pubDate>Tue, 07 Jul 2026 20:31:12 +0530</pubDate>
            <description><![CDATA[&lt;p&gt;ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ತೆರೆಯುವ ಕಾರ್ಯ ಶುಕ್ರವಾರ (ಜುಲೈ 3) ಪೊಲೀಸ್ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲಿನ ನಡುವೆ ನಡೆಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyh3n37kwcwyfrscx0w9jrx,imgname-anj--3--1783436006503.jpeg" type="image/jpeg" height="390" width="690"/>
            <content:encoded><![CDATA[&lt;p&gt;ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ತೆರೆಯುವ ಕಾರ್ಯ ಶುಕ್ರವಾರ (ಜುಲೈ 3) ಪೊಲೀಸ್ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲಿನ ನಡುವೆ ನಡೆಯಿತು.&lt;/p&gt;&lt;img&gt;&lt;p&gt;&lt;strong&gt;ಗಂಗಾವತಿ (ಜು.07):&lt;/strong&gt; ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ತೆರೆಯುವ ಕಾರ್ಯ ಶುಕ್ರವಾರ (ಜುಲೈ 3) ಪೊಲೀಸ್ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲಿನ ನಡುವೆ ನಡೆಯಿತು. ಭಕ್ತರು ಸಲ್ಲಿಸಿದ ಕಾಣಿಕೆಗಳ ಎಣಿಕೆಯಲ್ಲಿ ಒಟ್ಟು ₹71,77,460 ಸಂಗ್ರಹವಾಗಿರುವುದು ಬೆಳಕಿಗೆ ಬಂದಿದೆ.&lt;/p&gt;&lt;img&gt;&lt;p&gt;ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಂತೆ, ಕಳೆದ ಮಾರ್ಚ್ 26ರಿಂದ ಜುಲೈ 3ರವರೆಗೆ (ಒಟ್ಟು 64 ದಿನಗಳ ಅವಧಿ) ಭಕ್ತರು ಸಲ್ಲಿಸಿದ ಕಾಣಿಕೆಗಳನ್ನು ಎಣಿಕೆ ಮಾಡಲಾಯಿತು. ಈ ವೇಳೆ ಭಾರತದ ಕರೆನ್ಸಿಯ ಜೊತೆಗೆ ನೇಪಾಳ, ಅಮೆರಿಕ (United States of America), ಥೈಲ್ಯಾಂಡ್ ಮತ್ತು ಹಾಂಕಾಂಗ್ ದೇಶಗಳ ವಿದೇಶಿ ನೋಟುಗಳು ಹಾಗೂ ನಾಣ್ಯಗಳೂ ಹುಂಡಿಯಲ್ಲಿ ಪತ್ತೆಯಾಗಿವೆ.&lt;/p&gt;&lt;img&gt;&lt;p&gt;ಹುಂಡಿ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ದೇವಸ್ಥಾನದ ಸಿಬ್ಬಂದಿ, ಕೆಜಿಬಿ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು. ಸಂಪೂರ್ಣ ಪ್ರಕ್ರಿಯೆಯನ್ನು ಪೊಲೀಸ್ ಬಂದೋಬಸ್ತ್, ಸಿಸಿಟಿವಿ ಕ್ಯಾಮೆರಾ ಹಾಗೂ ವಿಡಿಯೊ ಚಿತ್ರೀಕರಣದ ಕಟ್ಟುನಿಟ್ಟಿನ ಭದ್ರತೆಯಲ್ಲಿ ನಡೆಸಲಾಯಿತು.&lt;/p&gt;&lt;img&gt;&lt;p&gt;ಗಮನಾರ್ಹ ಸಂಗತಿಯೆಂದರೆ, ಕಳೆದ ಬಾರಿ ಮಾರ್ಚ್&zwnj;ನಲ್ಲಿ 26, 2026ರಂದು ಹುಂಡಿ ತೆರೆಯಲಾಗಿದ್ದು, ಆಗ ₹31,30,730 ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ಅದಕ್ಕಿಂತ ಎರಡು ಪಟ್ಟು ಹೆಚ್ಚು ಕಾಣಿಕೆ ಸಂಗ್ರಹವಾಗಿರುವುದು ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮೇಲಿನ ಭಕ್ತರ ಅಪಾರ ನಂಬಿಕೆ ಮತ್ತು ಭಕ್ತಿಭಾವಕ್ಕೆ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/karnataka-districts/anjanadri-temple-hundi-collection-71-lakh-foreign-currency-found-gvd-pddrt6h"/>
        </item>
        <item>
            <title><![CDATA['ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿಮ್ಹಾನ್ಸ್‌ಗೆ ಹೋಗಲಿ': ಶಾಸಕ ಜನಾರ್ದನ ರೆಡ್ಡಿ ವಿವಾದಾತ್ಮಕ ಹೇಳಿಕೆ]]></title>
            <link>https://kannada.asianetnews.com/karnataka-districts/mla-janardhan-reddy-slams-priyank-kharge-over-rss-remarks-gvd/articleshow-sbe9va2</link>
            <guid isPermaLink="true">https://kannada.asianetnews.com/karnataka-districts/mla-janardhan-reddy-slams-priyank-kharge-over-rss-remarks-gvd/articleshow-sbe9va2</guid>
            <pubDate>Sat, 11 Jul 2026 18:17:34 +0530</pubDate>
            <description><![CDATA[&lt;p&gt;ಶಾಸಕ ಜನಾರ್ದನ ರೆಡ್ಡಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರ್&zwnj;ಎಸ್&zwnj;ಎಸ್ ಕುರಿತು ನೀಡುತ್ತಿರುವ ಹೇಳಿಕೆಗಳು, ಇಲಾಖೆಯ ನಿರ್ವಹಣೆ ಹಾಗೂ ರಾಜಕೀಯ ಉದ್ದೇಶಗಳ ಬಗ್ಗೆ ರೆಡ್ಡಿ ಹಲವು ಆರೋಪಗಳನ್ನು ಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx8k8jmx754mw4d961yntx36,imgname-bj-1783773809309.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.11):&lt;/strong&gt; ಆರ್&zwnj;ಎಸ್&zwnj;ಎಸ್ ಸೇರಿದಂತೆ ಹಿಂದು ಸಂಘಟನೆಗಳ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದಲ್ಲಿ ನಿಶಕ್ತ ಸಚಿವರಾಗಿದ್ದಾರೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಟೀಕಿಸಿದರು. ತಾಲೂಕಿನ ಆನೆಗೊಂದಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.&lt;/p&gt;&lt;p&gt;ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದಲ್ಲಿ ಸಂಪೂರ್ಣ ನಿಶಕ್ತರಾಗಿದ್ದಾರೆ ಎಂದು ಟೀಕಿಸಿದ ರೆಡ್ಡಿ, ಅವರು ಇಲಾಖೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದನ್ನು ಬಿಟ್ಟು, ಕೇವಲ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರಬೇಕು ಎನ್ನುವ ಚಟದಿಂದ ದಿನಾಲೂ ಆರ್&zwnj;ಎಸ್ಎಸ್ ಸಂಘಟನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಏಕಾಏಕಿ ಇವರಿಗೆ ಪ್ರಮುಖ ಜವಾಬ್ದಾರಿ ನೀಡಿದ್ದು, ಆದರೆ ಇವರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ.&lt;/p&gt;&lt;p&gt;ಇನ್ನು ಹದಿನೈದು ದಿನಗಳ ಕಾಲ ಇವರ ನಡವಳಿಕೆಯನ್ನು ಗಮನಿಸಿ, ತದನಂತರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಇವರ ಮಾನಸಿಕ ಸ್ಥಿತಿ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ತಪಾಸಣೆ ಒಳಪಡಿಸಬೇಕಿದೆ ಎಂದು ಲೇವಡಿ ಮಾಡಿದರು. ದೇಶದಲ್ಲಿ ಜವಾಹರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಅವರ ಕಾಲದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್&zwnj;ಎಸ್ಎಸ್) ಯಾರಿಗೂ ಅಲುಗಾಡಿಸಲು ಸಾಧ್ಯವಾಗಿಲ್ಲ.&lt;/p&gt;&lt;h2&gt;&lt;strong&gt;ಬೇಜವಾಬ್ದಾರಿ ಹೇಳಿಕೆ&lt;/strong&gt;&lt;/h2&gt;&lt;p&gt;ಇಂತಹ ಬಲಿಷ್ಠ ಸಂಘಟನೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಶಾಸಕರು, ಕೇವಲ ರಾಜಕೀಯ ದ್ವೇಷವಲ್ಲ, ಬದಲಿಗೆ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿಯಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇತ್ತೀಚೆಗೆ ನಡೆದ ಆರ್&zwnj;ಎಸ್ಎಸ್ ಪಥಸಂಚಲನ ವಿಚಾರವು ಹೈಕೋರ್ಟ್&zwnj; ಮೆಟ್ಟಿಲೇರಿತ್ತು. ಅಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಕಂಡು ಸಚಿವರಿಗೆ ದಿಗಿಲಾಗಿದೆ, ಅದೇ ಭಯದಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಆಕ್ರೋಶವನ್ನು ವ್ಯಕ್ತಪಡಿಸಿದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mla-janardhan-reddy-slams-priyank-kharge-over-rss-remarks-gvd/articleshow-sbe9va2"/>
        </item>
        <item>
            <title><![CDATA[ಗಂಗಾವತಿಯಲ್ಲಿ ಬೆಚ್ಚಿಬೀಳಿಸಿದ ಘಟನೆ: ಯುವಕನ ಕೊಲೆ ಮಾಡಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು]]></title>
            <link>https://kannada.asianetnews.com/crime/gangavathi-young-man-mu-rder-burnt-body-found-chirchanagudda-tanda-gvd/articleshow-sinzmmc</link>
            <guid isPermaLink="true">https://kannada.asianetnews.com/crime/gangavathi-young-man-mu-rder-burnt-body-found-chirchanagudda-tanda-gvd/articleshow-sinzmmc</guid>
            <pubDate>Sun, 05 Jul 2026 21:42:30 +0530</pubDate>
            <description><![CDATA[&lt;p&gt;ಸಮೀಪದ ಚಿರ್ಚನಗುಡ್ಡ ತಾಂಡಾ ಬಳಿ ಅಪರಚಿತ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಧ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕಗಿರಿ ತಾಲೂಕಿನ ಚಿರ್ಚನ ಗುಡ್ಡ ತಾಂಡಾದ ಬಳಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jyk54a7zg48733zetfgbsr1d,imgname-crime-scene-1750842091775.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.05): &lt;/strong&gt;ಸಮೀಪದ ಚಿರ್ಚನಗುಡ್ಡ ತಾಂಡಾ ಬಳಿ ಅಪರಚಿತ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಧ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕಗಿರಿ ತಾಲೂಕಿನ ಚಿರ್ಚನ ಗುಡ್ಡ ತಾಂಡಾದ ಬಳಿ ನಡೆದಿದೆ.&lt;/p&gt;&lt;p&gt;ಕಳೆದ ತಿಂಗಳು ಕನಕಗಿರಿಯಲ್ಲಿ ಮಹಿಳೆಯ ಮೇಲೆ ಅತ್ಯಾ*ಚಾರ ನಡೆಸಿ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಮಾಸುವ ಮುನ್ನವೆ ಮತ್ತೇ ಕನಕಗಿರಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದರಿಂದ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಚಿರ್ಚನ ಗುಡ್ಡದ ತಾಂಡಾದ ಹೊರವಲಯದಲ್ಲಿ 25 ರಿಂದ 30 ವರ್ಷದ ಯುವಕನನ್ನು ಕೊಲೆ ಮಾಡಿ ಬಿಸಾಡಿದ್ದು, ಬೆಂಕಿ ಹಚ್ಚಿದ್ದಾರೆ. ಈ ಕೃತ್ಯ 3 -4 ದಿನಗಳಿಂದ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.&lt;/p&gt;&lt;h2&gt;&lt;strong&gt;ದುರ್ವಾಸೆಯಿಂದ ಪತ್ತೆಯಾದ ಕರಕಲು ಶವ&lt;/strong&gt;&lt;/h2&gt;&lt;p&gt;ನಿರ್ಜನ ಪ್ರದೇಶದಲ್ಲಿ ಕರಕಲಾದ ಶವದ ದುರ್ವಾಸನೆಯಿಂದ ಶವ ಪತ್ತೆಯಾಗಿದೆ. ಮಹಿಳೆಯೊಬ್ಬರು ಹೊಲದ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ದುರ್ವಾಸನೆ ಬಂದಿದೆ, ಇದನ್ನು ಜಾಡು ಹಿಡಿದ ಮಹಿಳೆ ವೀಕ್ಷಿಸಿದಾಗ ಕರಕಲಾದ ಶವ ಕಾಣಿಸಿಕೊಂಡಿದೆ.&lt;/p&gt;&lt;p&gt;ನಂತರ ಗ್ರಾಮಸ್ಥರು ಕೂಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಕೊಲೆಯಾಗಿದೆ ಎಂದು ಶಂಕಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತಯೇ ಶನಿವಾರ ರಾತ್ರಿ ಎಸ್ ಪಿ ರಾಮ್ ಎಲ್ ಅರಸಿದ್ದಿ, ಗಂಗಾವತಿ ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ಕನಕಗಿರಿ ಪೊಲೀಸ್ ಠಾಣೆಯ ಸಿಪಿಐ ನಾರಾಯಣ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/gangavathi-young-man-mu-rder-burnt-body-found-chirchanagudda-tanda-gvd/articleshow-sinzmmc"/>
        </item>
        <item>
            <title><![CDATA[ಕೊಪ್ಪಳ: ಚಿನ್ನದ ವ್ಯಾಪಾರಿಯ ಇಡೀ ಕುಟುಂಬ ಸರ್ವನಾಶ, ಸಾಮೂಹಿಕವಾಗಿ ಸಾವಿಗೆ ಶರಣು!]]></title>
            <link>https://kannada.asianetnews.com/karnataka-districts/koppal-tragedy-gangavathi-jeweller-shop-owner-wife-and-son-mass-death-gdp/articleshow-vbghmgv</link>
            <guid isPermaLink="true">https://kannada.asianetnews.com/karnataka-districts/koppal-tragedy-gangavathi-jeweller-shop-owner-wife-and-son-mass-death-gdp/articleshow-vbghmgv</guid>
            <pubDate>Sat, 04 Jul 2026 15:06:36 +0530</pubDate>
            <description><![CDATA[&lt;p&gt;ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ಜ್ಯುವೆಲರಿ ಅಂಗಡಿ ಮಾಲೀಕ ಪ್ರಕಾಶ್ ರಾಯ್ಕರ್, ಅವರ ಪತ್ನಿ ಮತ್ತು ಮಗ ಸೇರಿದಂತೆ ಒಂದೇ ಕುಟುಂಬದ ಮೂವರು ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ದಾರುಣ ಘಟನೆಯು ಇಡೀ ನಗರವನ್ನು ಬೆಚ್ಚಿಬೀಳಿಸಿದ್ದು, ಸಾಲಬಾಧೆಯೇ ಸಾವಿಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwp7gk70hqcggpcbtaxnrs73,imgname-koppal-tragedy-gangavathi-jeweller-shop-owner-1783157509343.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ&lt;/strong&gt;: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಜೀವನದಲ್ಲಿ ಎದುರಾದ ತೀವ್ರ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಲಾರದೆ, ಒಂದೇ ಕುಟುಂಬದ ಮೂವರು ಸದಸ್ಯರು ಸಾಮೂಹಿಕವಾಗಿ ಸಾವಿಗೆ ಶರಣಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಇಡೀ ಗಂಗಾವತಿ ನಗರವೇ ಶಾಕ್ ಆಗಿದೆ.&lt;/p&gt;&lt;h2&gt;ಮನೆಯಲ್ಲೇ ನೇಣಿಗೆ ಶರಣಾದ ಪತಿ, ಪತ್ನಿ ಮತ್ತು ಮಗ:&lt;/h2&gt;&lt;p&gt;ಗಂಗಾವತಿ ನಗರದ ಪ್ರಶಾಂತ ನಗರದ ವಸತಿ ಪ್ರದೇಶದ ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರು ಒಟ್ಟಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. . ಮೃತರನ್ನು ಪ್ರಕಾಶ್ ರಾಯ್ಕರ್ (54 ವರ್ಷ), ಅವರ ಪತ್ನಿ ಪ್ರಭಾ (46 ವರ್ಷ) ಮತ್ತು ಅವರ 21 ವರ್ಷದ ಮಗ ಶಶಾಂಕ್ ರಾಯ್ಕರ್ ಎಂದು ಗುರುತಿಸಲಾಗಿದೆ. ಭವಿಷ್ಯದ ಬಗ್ಗೆ ನೂರೆಂಟು ಕನಸುಗಳನ್ನು ಕಾಣಬೇಕಿದ್ದ ಇನ್ನೂ ಸಣ್ಣ ವಯಸ್ಸಿನ ಮಗನೊಂದಿಗೆ ಇಡೀ ಕುಟುಂಬವೇ ಇಂತಹ ಕಠಿಣ ನಿರ್ಧಾರ ಕೈಗೊಂಡಿರುವುದು ಸ್ಥಳೀಯರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.&lt;/p&gt;&lt;h2&gt;ಜ್ಯುವೆಲರಿ ಶಾಪ್ ಮಾಲೀಕನಿಗೆ ಕಾಡಿದ ಆರ್ಥಿಕ ಸಂಕಷ್ಟ:&lt;/h2&gt;&lt;p&gt;ಸ್ಥಳೀಯ ಮೂಲಗಳಿಂದ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ಪ್ರಕಾಶ್ ರಾಯ್ಕರ್ ಅವರು ಗಂಗಾವತಿ ನಗರದಲ್ಲಿ ಸ್ವಂತ ಜ್ಯುವೆಲರಿ ಶಾಪ್ (ಚಿನ್ನಾಭರಣಗಳ ಅಂಗಡಿ) ನಡೆಸುತ್ತಿದ್ದರು. ಮೇಲ್ನೋಟಕ್ಕೆ ಇವರ ಈ ಸಾವಿನ ನಿರ್ಧಾರಕ್ಕೆ ಭಾರಿ ಪ್ರಮಾಣದ ಸಾಲಬಾಧೆಯೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವ್ಯಾಪಾರದಲ್ಲಿ ಉಂಟಾದ ನಷ್ಟ ಅಥವಾ ವೈಯಕ್ತಿಕ ಹಣಕಾಸಿನ ಬಿಕ್ಕಟ್ಟು ಅವರನ್ನು ತೀವ್ರ ಮಾನಸಿಕ ಖಿನ್ನತೆಗೆ ದೂಡಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಇಡೀ ಸುಖೀ ಕುಟುಂಬವನ್ನೇ ಬಲಿಪಡೆದ ಈ ಘಟನೆಯ ಅಸಲಿ ಮತ್ತು ನಿಖರವಾದ ಕಾರಣ ಏನು ಎಂಬುದು ಇನ್ನು ಅಧಿಕೃತವಾಗಿ ತಿಳಿದುಬಂದಿಲ್ಲ.&lt;/p&gt;&lt;h2&gt;ಸ್ಥಳಕ್ಕೆ ಎಸ್&zwnj;ಪಿ ಭೇಟಿ, ತನಿಖೆ ಚುರುಕು:&lt;/h2&gt;&lt;p&gt;ವಿಷಯ ತಿಳಿಯುತ್ತಿದ್ದಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ರಾಮ್ ಎಲ್. ಅರಸಿದ್ದಿ ಅವರು ಸಿಬ್ಬಂದಿಯೊಂದಿಗೆ ತಕ್ಷಣವೇ ಪ್ರಶಾಂತ ನಗರದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸ್ಥಳದಲ್ಲಿ ಅಗತ್ಯ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ.&lt;/p&gt;&lt;h2&gt;&amp;nbsp;ಸೀಸ್&zwnj; ಆದ ಮನೆಯಲ್ಲೇ ಸಾವು&lt;/h2&gt;&lt;p&gt;ಕೊಪ್ಪಳದ ಗಂಗಾವತಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪಪಿದ ಪ್ರಕರಣಕ್ಕೆ ಸಬಂಧಿಸಿ ಮಾತನಾಡಿರುವ ಎಸ್ಪಿ ಡಾ ರಾಮ್ ಎಲ್ ಅರಸಿದ್ದಿ, ಕುಟುಂಬದ ಸಾಮೂಹಿಕ ಆತ್ಮ*ತ್ಯೆಗೆ ಸಾಲ ಬಾಧೆಯೇ ಪ್ರಮುಖ ಕಾರಣ ಎಂದಿದ್ದಾರೆ. ಪ್ರಕಾಶ್ ರಾಯ್ಕರ್ ಮಾನ್ವಿ ಪಟ್ಟಣ ಬ್ಯಾಂಕ್ ನಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲದ ಹಿನ್ನಲೆಯಲ್ಲಿ ಮಾರಿದ್ದ ಮನೆಯಲ್ಲಿಯೇ ಪ್ರಕಾಶ್ ಕುಟುಂಬ ಸಾಮೂಹಿಕವಾಗಿ ಮೃತಪಟ್ಟಿದೆ. ಮಾರಿದ್ದ ಮನೆಯ ಹಿಂದಿನ ಬಾಗಿಲು ಒಡೆದು ಒಳಗಡೆ ಹೋಗಿ ಮೂವರು ನೇಣಿಗೆ ಶರಣಾಗಿದ್ದಾರೆ. 2021 ರಲ್ಲಿ ಸಾಲದ ಹಿನ್ನಲೆಯಲ್ಲಿ ನಾಗರಾಜ ಎನ್ನುವರಿಗೆ ಪ್ರಕಾಶ್ ಮನೆ ಮಾರಿದ್ದರು. ಕಳೆದ ಫೆಬ್ರುವರಿವರೆಗೂ ಪ್ರಕಾಶ್ ರಾಯ್ಕರ್ ಕುಟುಂಬ ಮಾರಿದ್ದ ಮನೆಯಲ್ಲಿಯೇ ಇದ್ದರು. ಮನೆ ಖರೀದಿಸಿದ್ದ ನಾಗರಾಜ ಸಹ ಮಾನ್ವಿ ಬ್ಯಾಂಕ್ ನಲ್ಲಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸದ ಹಿನ್ನಲೆಯಲ್ಲಿ ನಾಗರಾಜ್ ಮನೆಯನ್ನು ಮಾನ್ವಿ ಪಟ್ಟಣ ಬ್ಯಾಂಕ್&zwnj;ನವರು ಸೀಜ್ ಮಾಡಿದ್ದರು. ಇದೀಗ ಸೀಜ್ ಮಾಡಿದ್ದ ಮನೆಯಲ್ಲಿಯೇ ಪ್ರಕಾಶ ರಾಯ್ಕರ್ ಕುಟುಂಬ ಸಾವು ಕಂಡಿದೆ. ಪ್ರಕಾಶ್ ರಾಯ್ಕರ್ ಅವರದ್ದು ಕೋಟಿಗಟ್ಟಲೆ ಸಾಲ ಇದೆ ಎನ್ನಲಾಗಿದೆ. ಪ್ರಕಾಶ್ ಅನೇಕ ಕಡೆ ಪ್ರಾರ್ಪಟಿ ಮಾಡಿ ಅವುಗಳನ್ನು ಮಾರಾಟ ಮಾಡಿದ್ದಾನೆ. ಪ್ರಕಾಶ್ ರಿಯಲ್ ಎಸ್ಟೇಟ್ ಮಾಡುತ್ತಿದ್ದ ಎನ್ನುವುದರ ಬಗ್ಗೆ ಗೊತ್ತಿಲ್ಲ. ಪ್ರಕಾಶ್ ರಾಯ್ಕರ್ ಸಹೋದರ ದೂರು ನೀಡುತ್ತಾರೆ. ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತೇವೆ ಎಂದ ಎಸ್ಪಿ ಡಾ ರಾಮ್ ಅರಸಿದ್ದಿ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/koppal-tragedy-gangavathi-jeweller-shop-owner-wife-and-son-mass-death-gdp/articleshow-vbghmgv"/>
        </item>
        <item>
            <title><![CDATA[ಭದ್ರಾ ಜಲಾಶಯದಲ್ಲಿ ನೀರಿನ ಅಭಾವ: ರೈತರಿಗೆ ಸರ್ಕಾರದ ಮಹತ್ವದ ಸೂಚನೆ]]></title>
            <link>https://kannada.asianetnews.com/karnataka-districts/bhadra-dam-water-crisis-farmers-face-uncertainty-karnataka-gvd/articleshow-vg3dtra</link>
            <guid isPermaLink="true">https://kannada.asianetnews.com/karnataka-districts/bhadra-dam-water-crisis-farmers-face-uncertainty-karnataka-gvd/articleshow-vg3dtra</guid>
            <pubDate>Fri, 03 Jul 2026 16:29:43 +0530</pubDate>
            <description><![CDATA[&lt;p&gt;Bhadra Dam: ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸಲು ಸರ್ಕಾರದ ಆದೇಶವಾಗಿರುವ ಹಿನ್ನಲೆಯಲ್ಲಿ ಅಚ್ಚುಕಟ್ಟು ಭಾಗದ ಎಲ್ಲಾ ರೈತರು ಇಲಾಖೆಯೊಂದಿಗೆ ಸಹಕರಿಸಬೇಕು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwkt3rqz9b7y3w0wm5gmjz8z,imgname-hi-1783076348671.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.03):&lt;/strong&gt; ಪ್ರಸ್ತುತ ಮಳೆ ಕೊರತೆಯಿಂದಾಗಿ ಭದ್ರಾ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದಿಲ್ಲ. ಆದಕಾರಣ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಾಗುವುದಿಲ್ಲವೆಂದು ಕರ್ನಾಟಕ ನೀರಾವರಿ ನಿಗಮದ ಬಿ.ಆರ್. ಪ್ರಾಜೆಕ್ಟ್, ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ, ಹಾಗೂ ಅಧೀಕ್ಷಕ ಅಭಿಯಂತರರು ರೈತರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸಲು ಸರ್ಕಾರದ ಆದೇಶವಾಗಿರುವ ಹಿನ್ನಲೆಯಲ್ಲಿ ಅಚ್ಚುಕಟ್ಟು ಭಾಗದ ಎಲ್ಲಾ ರೈತರು ಇಲಾಖೆಯೊಂದಿಗೆ ಸಹಕರಿಸಬೇಕು. ಮುಂಬರುವ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿ ಜಲಾಶಯ ಭರ್ತಿಯಾದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಆಯೋಜಿಸಿ ಬೆಳೆಗಳಿಗೆ ನೀರು ಹರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ರೈತರು ಆತಂಕ&lt;/strong&gt;&lt;/h2&gt;&lt;p&gt;ಭದ್ರಾ ಜಲಾಶಯ ಖಾಲಿಯಾಗಿರುವುದರಿಂದ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ರೈತರು ಸಹ ಈಗ ಆತಂಕಗೊಂಡಿದ್ದು, ಜಲಾಶಯದ ಕ್ರಸ್ಟ್ ಗೆಟ್ ದುರಸ್ತಿಯಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ನೀರು ಇದ್ದರು ಸಹ ಹಿಂಗಾರು ಬೇಸಿಗೆ ಬೆಳೆಗೆ ನೀರು ಹರಿಸದ ಪರಿಣಾಮ ರೈತರು ಕಳೆದ ವರ್ಷ ಒಂದೆ ಬೆಳೆಗೆ ಸಿಮೀತರಾಗಿದ್ದರು. ಈಗ ಜಲಾಶಯದಲ್ಲಿ ಹೊಸ ಗೇಟ್ ಜೋಡಿಸಿದ ಪರಿಣಾಮ ರೈತರು ಹರ್ಷಗೊಂಡಿದ್ದರು.&lt;/p&gt;&lt;p&gt;ಆದರೆ ಈಗ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಾಗಿರುವುದರಿಂದ ಬೇಸಿಗೆ ಬೆಳೆ ಬೆಳೆಯವ ಅವಕಾಶ ಬರುತ್ತದೆಯೋ ಇಲ್ಲ ಎಂದು ಚಿಂತಿತರಾಗಿದ್ದಾರೆ. ಈ ನಡುವೆ ಭದ್ರಾ ಜಲಾಶಯದಲ್ಲಿ ನೀರು ಖಾಲಿಯಾಗಿರುವ ವಿಷಯ ತಿಳಿದು ಈಗ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಭತ್ತ ಬೆಳೆಯುವ ರೈತರು ಆತಂಕಕ್ಕಿಡಗಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bhadra-dam-water-crisis-farmers-face-uncertainty-karnataka-gvd/articleshow-vg3dtra"/>
        </item>
        <item>
            <title><![CDATA[ರೈಲು ಇಂಜಿನ್ ಡಿಕ್ಕಿ: ಪತ್ನಿಯನ್ನ ಸುರಕ್ಷಿತ ಸ್ಥಳಕ್ಕೆ ತಳ್ಳಿ ಸೇತುವೆಯಿಂದ ಬಿದ್ದು ವ್ಯಕ್ತಿ ಸಾವು]]></title>
            <link>https://kannada.asianetnews.com/karnataka-districts/koppal-huligi-man-fell-to-his-death-from-the-tungabhadra-railway-bridge-after-being-hit-by-a-train-engine-mrq/articleshow-zmnwe2e</link>
            <guid isPermaLink="true">https://kannada.asianetnews.com/karnataka-districts/koppal-huligi-man-fell-to-his-death-from-the-tungabhadra-railway-bridge-after-being-hit-by-a-train-engine-mrq/articleshow-zmnwe2e</guid>
            <pubDate>Wed, 08 Jul 2026 07:17:15 +0530</pubDate>
            <description><![CDATA[ಕೊಪ್ಪಳ ತಾಲೂಕಿನ ಹುಲಿಗಿಯಲ್ಲಿ, ರೈಲು ಇಂಜಿನ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ತುಂಗಭದ್ರಾ ರೈಲು ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಪತ್ನಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪತ್ನಿಯನ್ನು ಸುರಕ್ಷಿತ ಸ್ಥಳಕ್ಕೆ ತಳ್ಳಿ, ತಾನು ಪಾರಾಗುವ ಯತ್ನದಲ್ಲಿ ಇಂಜಿನ್ ಬಡಿದು ಮೃತಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kshamfcb642ftj4pq07ab7fn,imgname-indian-railways-rules--1--1779771784587.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ:&lt;/strong&gt; ರೈಲಿನ ಇಂಜಿನ್ ಬಡಿದು ಸೇತುವೆ ಮೇಲಿನಿಂದ ವ್ಯಕ್ತಿಯೊಬ್ಬ ಬಿದ್ದು ಸಾವಿಗೀಡಾದ ದುರ್ಘಟನೆ ತಾಲೂಕಿನ ಹುಲಿಗಿಯಲ್ಲಿ ಜರುಗಿದೆ.&lt;/p&gt;&lt;p&gt;ಮೃತನು ಹೊಸಪೇಟೆ ಹತ್ತಿರದ ಚಿತವಾಡಗಿಯ ಜಗದೀಶ್ ಕೆ. (35) ಎಂದು ತಿಳಿದು ಬಂದಿದೆ.&zwnj; ಜಗದೀಶ್ ಪತ್ನಿಯೊಂದಿಗೆ ಸಂಬಂಧಿಕರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾಗ ಈ ದುರ್ಘಟನೆ ಜರುಗಿದೆ.&lt;/p&gt;&lt;h2&gt;&lt;strong&gt;ರೈಲ್ವೆ ಸೇತುವೆ ಮೇಲಿನಿಂದ ನಡೆದುಕೊಂಡು ಹೋಗ್ತಿದ್ದಾಗ ಘಟನೆ&lt;/strong&gt;&lt;/h2&gt;&lt;p&gt;ಚಿತವಾಡಗಿಯಿಂದ ಬೈಕ್ ನಲ್ಲಿ ಪತ್ನಿಯೊಂದಿಗೆ ಆಗಮಿಸಿದ ಜಗದೀಶ್ ಹುಲಿಗಿಯಲ್ಲಿರುವ ತುಂಗಭದ್ರಾ ನದಿಗೆ ನಿರ್ಮಿಸಿರುವ ಬೃಹತ್ ರೈಲು ಸೇತುವೆ ಆಚೆ ಬೈಕ್ ನಿಲ್ಲಿಸಿ ರೈಲ್ವೆ ಸೇತುವೆ ಮೇಲಿನಿಂದ ನಡೆದುಕೊಂಡು ಕಾರ್ಯಕ್ರಮದತ್ತ ಹೊರಟಿದ್ದರು.&lt;/p&gt;&lt;p&gt;ಸೇತುವೆ ಮೇಲಿದ್ದಾಗಲೇ ರೈಲು ವೇಗವಾಗಿ ಬಂದಿದ್ದು, ಹತ್ತಿರ ಬಂದಾಗ ಗಮನಿಸಿ ಅವಸರದಲ್ಲಿಯೆ ಪತ್ನಿಯನ್ನು ಸೇತುವೆ ಪಕ್ಕ ಇರುವ ಬಾಕ್ಸ್ ನಂಥ ಸೇಫ್ಟಿ ಪ್ಲಾಟಫಾರ್ಮ್ ಗೆ ಕಳಿಸಿ ತಾನೂ ಹೋಗುವ ಪ್ರಯತ್ನದಲ್ಲಿದ್ದಾಗ ರೈಲಿನ ಇಂಜಿನ್ ಬಡಿದು ಜಗದೀಶ್ ಸೇತುವೆ ಮೇಲಿನಿಂದ ಕೆಳಗೆ ಬಿದ್ದು ನದಿಯ ಬಂಡೆಗೆ ಬಡಿದು ಸಾವಿಗೀಡಾಗಿದ್ಧಾರೆ. ಕೊಪ್ಪಳ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-huligi-man-fell-to-his-death-from-the-tungabhadra-railway-bridge-after-being-hit-by-a-train-engine-mrq/articleshow-zmnwe2e"/>
        </item>
    </channel>
</rss>
