<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 04 Aug 2026 18:11:52 +0530</lastBuildDate>
        <atom:link href="https://kannada.asianetnews.com/rss/koppal" rel="self" type="application/rss+xml"/>
        <item>
            <title><![CDATA[ಗಂಗಾವತಿಯಲ್ಲಿ ಮಿನಿ ವಿಧಾನಸೌಧ ಸ್ಥಳಾಂತರಕ್ಕೆ ಎಚ್.ಆರ್. ಶ್ರೀನಾಥ್ ಬಿಗ್ ಡಿಮ್ಯಾಂಡ್]]></title>
            <link>https://kannada.asianetnews.com/karnataka-districts/gangavathi-news-hr-srinath-demands-mini-vidhana-soudha-shift-gvd/articleshow-0p5kwad</link>
            <guid isPermaLink="true">https://kannada.asianetnews.com/karnataka-districts/gangavathi-news-hr-srinath-demands-mini-vidhana-soudha-shift-gvd/articleshow-0p5kwad</guid>
            <pubDate>Tue, 14 Jul 2026 16:49:53 +0530</pubDate>
            <description><![CDATA[&lt;p&gt;ನಗರದ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಮಿನಿ ವಿಧಾನಸೌಧವನ್ನು ರದ್ದು ಪಡಿಸಿ ನಗರದ ಹಳೇ ಪ್ರವಾಸಿ ಮಂದಿರದ ಸ್ಥಳದಲ್ಲಿ ನಿರ್ಮಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಅವರು ಶಾಸಕರಿಗೆ ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxeh7j3fbkpmh2nyxycb84r,imgname-vj-1779104783939.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.14): &lt;/strong&gt;ನಗರದ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಮಿನಿ ವಿಧಾನಸೌಧವನ್ನು ರದ್ದು ಪಡಿಸಿ ನಗರದ ಹಳೇ ಪ್ರವಾಸಿ ಮಂದಿರದ ಸ್ಥಳದಲ್ಲಿ ನಿರ್ಮಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎಚ್.ಆರ್. ಶ್ರೀನಾಥ್ ಅವರು ಶಾಸಕರಿಗೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು ಗಂಗಾವತಿ ನಗರದಲ್ಲಿ ಸುಮಾರು 3 ಕೀಮಿ ದೂರದ ಆನೆಗೊಂದಿ ರಸ್ತೆ ಮಾರ್ಗದಲ್ಲಿ ಮಿನಿ ವಿಧಾನ ಸೌಧ ಇದೆ. ಗ್ರಾಮೀಣ ಪ್ರದೇಶದಿಂದ ಮತ್ತು ನಗರದಲ್ಲಿ ಸಾರ್ವಜನಿಕರು ಸೌಧಕ್ಕೆ ತೆರಳಬೇಕಾದರೆ ಕನಿಷ್ಟ 100 ರುಗಳಿಂದ 150 ರು ಅಟೋಗಳಿಗೆ ನೀಡಬೇಕಾಗುತ್ತದೆ. ಇದರಿಂದ ಬಡ ಜನರಿಗೆ ಹೊರೆಯಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಹಳೆ ಐಬಿ ತೆರುವುಗೊಳಿಸಿ ಕಟ್ಟಡ ನಿರ್ಮಿಸಿ&lt;/strong&gt;&lt;/p&gt;&lt;p&gt;ನಗರದ ಬಸ್ ನಿಲ್ದಾಣ ಹತ್ತಿರವಿರುವ ಹಳೆ ಪ್ರವಾಸಿ ಮಂದಿರ ಮತ್ತು ಹಳೇ ತಹಸೀಲ್ದಾರ್ ಕಚೇರಿಯ ಕಟ್ಟಡಗಳನ್ನು ತೆರವುಗೊಳಿಸಿ ಇದೇ ಸ್ಥಳದಲ್ಲಿ ವಿಧಾನ ಸೌಧ ನಿರ್ಮಿಸಬೇಕೆಂದು ಸಲಹೆ ನೀಡಿದರು. ವಿವಿಧ ಇಲಾಖೆಗಳು ಒಂದೇ ಸ್ಥಳದಲ್ಲಿದ್ದರೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ ಅವರು ಸರಕಾರ ಇದಕ್ಕಾಗಿ ವಿಶೇಷ ಅನುದಾನ ನೀಡಿ ಸುಂದರ ಮಿನಿ ವಿಧಾನಸೌದ ನಿರ್ಮಿಸಬೇಕೆಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಕಾಲೇಜು ಮೈದಾನದಲ್ಲಿ ರಂಗ ಮಂದಿರ ನಿರ್ಮಿಸಿ&lt;/strong&gt;&lt;/h2&gt;&lt;p&gt;ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭವ್ಯವಾದ ರಂಗ ಮಂದಿರ ನಿರ್ಮಿಸ ಬೇಕೆಂದು ಎಚ್.ಆರ್.ಶ್ರೀನಾಥ ಒತ್ತಾಯಿಸಿದರು. ಕಳೆದ 30 ವರ್ಷಗಳ ಹಿಂದೆ ಇದ್ದ ಹಳೆ ಕಟ್ಟಡವನ್ನು ನಗರಸಭೆಯವರು ತೆರವುಗೊಳಿಸಿದ್ದಾರೆ. ಈ ಸ್ಥಳದಲ್ಲಿ ಫುಡ್ ಕೋರ್ಟ್ ಮಾಡಲು ನಗರಸಭೆಯವರು ಸೂಚಿಸಿರುವುದು ಸರಿಯಲ್ಲ ಎಂದರು.&lt;/p&gt;&lt;p&gt;ಕಾಲೇಜು ಮೈದಾನದಲ್ಲಿ ವೃದ್ದರು, ಮಹಿಳೆಯರು ವಾಕಿಂಗ್ ಬರುವುದಲ್ಲದೆ ವಿದ್ಯಾರ್ಥಿನಿಯರು ಕಾಲೇಜಿನಿಂದ ಸಂಚಾರ ಮಾಡುತ್ತಾರೆ. ಇದರಿಂದ ಫುಡ್ ಕೋರ್ಟ್ ಮಾಡಿದರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಸಲು ಆಸ್ಪದ ನೀಡಿದಂತಾಗುತ್ತದೆ. ಕಾರಣ ನಗರಸಭೆಯವರು ಈ ಸ್ಥಳವನ್ನು ಭವ್ಯವಾದ ರಂಗಮಂದಿರಕ್ಕೆ ಮೀಸಲಿರಿಸಬೇಕೆಂದು ಒತ್ತಾಯಿಸಿದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-news-hr-srinath-demands-mini-vidhana-soudha-shift-gvd/articleshow-0p5kwad"/>
        </item>
        <item>
            <title><![CDATA[ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆ ನಿರ್ಲಕ್ಷ: ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪ]]></title>
            <link>https://kannada.asianetnews.com/karnataka-districts/paranna-munavalli-alleges-congress-neglecting-irrigation-projects-in-karnataka-gvd/articleshow-2omhxdo</link>
            <guid isPermaLink="true">https://kannada.asianetnews.com/karnataka-districts/paranna-munavalli-alleges-congress-neglecting-irrigation-projects-in-karnataka-gvd/articleshow-2omhxdo</guid>
            <pubDate>Wed, 29 Jul 2026 17:09:20 +0530</pubDate>
            <description><![CDATA[&lt;p&gt;Farmers Agitation: ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದ್ದಾರೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyptqjxpscn7mry4gtnd2h77,imgname-nk-1785325145014.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.29): &lt;/strong&gt;ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದ್ದಾರೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೈತರ ಜ್ವಲಂತ ಸಮಸ್ಯೆಯಾಗಿರುವ ತುಂಗಭದ್ರಾ ಯೋಜನೆಯಡಿಯಲ್ಲಿ ಬರುವ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಸರಕಾರ ನಿರ್ಲಕ್ಷ ವಹಿಸುತ್ತಿದೆ.&lt;/p&gt;&lt;p&gt;ಈಗಾಗಲೇ ಹಲವಾರು ಬಾರಿ ಜಿಲ್ಲಾಧಿಕಾರಿಗಳನ್ನು ಮತ್ತು ನೀರಾವರಿ ಅಧಿಕಾರಿಗಳನ್ನು ಭೇಟಿಯಾಗಿದ್ದರು ಸಹ ಗಮನಹರಿಸುತ್ತಿಲ್ಲ ಎಂದರು. ನವಲಿ ಬಳಿ ಸಮಾನಂತರ ಜಲಾಶಯದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಚರ್ಚಿಸುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಕೇವಲ ಕಾವೇರಿ ನೀರಿನ ಯೋಜನೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಪ್ರದೇಶದ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.&lt;/p&gt;&lt;h2&gt;&lt;strong&gt;ಪ್ರತಿಭಟನೆ ನಡೆಸಿ ಒತ್ತಾಯ&lt;/strong&gt;&lt;/h2&gt;&lt;p&gt;ವಿಜಯನಗರ ಕಾಲುವೆ 11 ಎ ಗೆ ನೀರು ಬಿಡುವಂತೆ ಒತ್ತಾಯಿಸಿ ಜುಲೈ 31 ರಂದು ಅಂಜನಾದ್ರಿಯಿಂದ ತುಂಗಭದ್ರಾ ಜಲಾಶಯದವರಿಗೂ ಪಾದಯಾತ್ರೆ ಮತ್ತು ಹೋರಾಟ ನಡೆಸಲಾಗುತ್ತದೆ ಎಂದರು. ಬಿಜೆಪಿ ಮುಖಂಡ ಬಸವರಾಜ್ ಕ್ಯಾಟರ್ ಮಾತನಾಡಿ, ಕೊಪ್ಪಳ ಗಂಗಾವತಿ ಸೇರಿದಂತೆ 25 ಕ್ಕು ಹೆಚ್ಚು ಗ್ರಾಮಗಳ ರೈತರು ವಿಜಯನಗರ ಕಾಲುವೆಗಳಿಗೆ ನೀರು ಬಿಡುವಂತೆ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗುತ್ತದೆ. ಸುಮಾರು 6 ರಿಂದ 7 ಸಾವಿರ ರೈತರು ಭಾಗವಹಿಸುತ್ತಾರೆ ಎಂದರು.&lt;/p&gt;&lt;p&gt;ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಬಿಜೆಪಿ ನಾಯಕರುಗಳ ತಂಡ ಬರ ಜಿಲ್ಲೆಗಳಿಗೆ ಭೇಟಿ ನೀಡಿ ರೈತರಿಗೆ ಕೂಡಲೆ ಬರ ಪರಿಹಾರ ನೀಡುವಂತೆ ಒತ್ತಾಯಿಸಿದೆ ಎಂದರು. ಈ ವೇಳೆ ಮುಖಂಡರುಗಳಾದ ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಹೇರೂರು, ಚನ್ನಪ್ಪ ಮಳಗಿ, ಡಿ.ಕೆ ಆಗೋಲಿ, ಚಂದ್ರಶೇಖರ ಹಿರಿಯೂರು, ವಿರೇಶ ಬಲಕುಂದಿ, ನಾರಾಯಣಪ್ಪ, ಶಿವಪ್ಪ ಗಾಂದಿನಗರ ಇತರರು ಇದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/paranna-munavalli-alleges-congress-neglecting-irrigation-projects-in-karnataka-gvd/articleshow-2omhxdo"/>
        </item>
        <item>
            <title><![CDATA[ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ: ವಿಸ್ತರಣೆಯಾಗುತ್ತಾ ಹುಬ್ಬಳ್ಳಿ ಟ್ರೈನ್?]]></title>
            <link>https://kannada.asianetnews.com/gallery/karnataka-districts/request-submitted-indian-railways-state-minister-v-somanna-to-start-daily-train-service-from-kushtagi-to-bengaluru-mrq-4qdnatm</link>
            <guid isPermaLink="true">https://kannada.asianetnews.com/gallery/karnataka-districts/request-submitted-indian-railways-state-minister-v-somanna-to-start-daily-train-service-from-kushtagi-to-bengaluru-mrq-4qdnatm</guid>
            <pubDate>Sun, 19 Jul 2026 15:14:13 +0530</pubDate>
            <description><![CDATA[&lt;p&gt;ಕುಷ್ಟಗಿಯಿಂದ ಬೆಂಗಳೂರಿಗೆ ನಿತ್ಯ ರೈಲು ಸಂಚಾರ ಆರಂಭಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ. ಶಾಸಕ ದೊಡ್ಡನಗೌಡ ಪಾಟೀಲರ ಒತ್ತಡವನ್ನೂ ಉಲ್ಲೇಖಿಸಿ, ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwvn01mbsdd55r8zm5pm5d0,imgname-kushtagi-railway-station-1784453693492.jpg" type="image/jpeg" height="390" width="690"/>
            <content:encoded><![CDATA[&lt;p&gt;ಕುಷ್ಟಗಿಯಿಂದ ಬೆಂಗಳೂರಿಗೆ ನಿತ್ಯ ರೈಲು ಸಂಚಾರ ಆರಂಭಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ. ಶಾಸಕ ದೊಡ್ಡನಗೌಡ ಪಾಟೀಲರ ಒತ್ತಡವನ್ನೂ ಉಲ್ಲೇಖಿಸಿ, ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಕೊಪ್ಪಳ ಜಿಲ್ಲೆಯ ಕುಷ್ಟಗಿಯಿಂದ ಬೆಂಗಳೂರಿಗೆ ನಿತ್ಯ ರೈಲು ಸಂಚಾರ ಆರಂಭಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಸಲ್ಲಿಸಿದ ಮನವಿಗೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಬೇಡಿಕೆ ಗಮನದಲ್ಲಿಟ್ಟುಕೊಂಡು ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಬಾದಾಮಿಯಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನವೀಕರಿಸಲಾದ ರೈಲು ನಿಲ್ದಾಣದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ನಿವಾಸದಲ್ಲಿ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.&lt;/p&gt;&lt;img&gt;&lt;p&gt;ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ್, ಗದಗ&ndash;ವಾಡಿ ರೈಲು ಯೋಜನೆಯಡಿ ಕುಷ್ಟಗಿಗೆ ರೈಲು ಸಂಪರ್ಕ ದೊರೆತಿರುವುದು ಸಾರ್ವಜನಿಕರಿಗೆ ಅನುಕೂಲವಾಗಿದೆ. ಆದರೆ ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ಇಲ್ಲದ ಕಾರಣ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.&lt;/p&gt;&lt;img&gt;&lt;p&gt;ಬೆಂಗಳೂರು&ndash;ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್&zwnj;ಫಾಸ್ಟ್ ರೈಲನ್ನು ಗದಗ ಜಂಕ್ಷನ್&zwnj;ವರೆಗೆ ವಿಸ್ತರಿಸುವ ಪ್ರಸ್ತಾವನೆ ಇದ್ದು, ಅದನ್ನು ಕುಷ್ಟಗಿವರೆಗೂ ವಿಸ್ತರಿಸಿದರೆ ಕುಷ್ಟಗಿ&ndash;ಬೆಂಗಳೂರು ನೇರ ರೈಲು ಸೇವೆ ಕಲ್ಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;2ನೇ ವಿಮಾನ ನಿಲ್ದಾಣ ಕನಕಪುರಕ್ಕೆ ಬೇಡ; ಸಿಎಂಗೆ ಪತ್ರ ಬರೆದು ಸ್ಥಳ ಹೇಳಿದ ವಿಜಯೇಂದ್ರ&lt;/strong&gt;&lt;/p&gt;&lt;img&gt;&lt;p&gt;ಮನವಿ ಸ್ವೀಕರಿಸಿದ ಸಚಿವ ವಿ.ಸೋಮಣ್ಣ, ದೇಶದಾದ್ಯಂತ ಹೊಸ ರೈಲು ಮಾರ್ಗ, ರೈಲು ಸೇವೆಗಳ ವಿಸ್ತರಣೆ ಹಾಗೂ ವಿವಿಧ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಬೇಡಿಕೆಗಳಿವೆ.ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಆದ್ಯತೆ ಆಧಾರದ ಮೇಲೆ ಪರಿಗಣಿಸಲಾಗುತ್ತಿದೆ. ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸೇವೆ ಆರಂಭಿಸುವ ಕುರಿತು ಕುಷ್ಟಗಿಯ ಶಾಸಕ ದೊಡ್ಡನಗೌಡ ಪಾಟೀಲ ಒತ್ತಡ ಹೇರಿದ್ದು, ಈ ಬೇಡಿಕೆಯ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಮಹಾಂತಯ್ಯ ಅರಳೇಲಿಮಠ, ಬಾಬು ಘೋರ್ಪಡೆ, ಶರಣಪ್ಪ ಲಿಂಗಶೆಟ್ಟರ ಸೇರಿದಂತೆ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/request-submitted-indian-railways-state-minister-v-somanna-to-start-daily-train-service-from-kushtagi-to-bengaluru-mrq-4qdnatm"/>
        </item>
        <item>
            <title><![CDATA[ವಿಜಯನಗರ ಕಾಲುವೆಗೆ ನೀರು ಬಿಡುಗಡೆಗೆ ರೈತರ ಹೋರಾಟ: ಜುಲೈ 31ರಂದು ತುಂಗಭದ್ರಾ ಜಲಾಶಯಕ್ಕೆ ಮುತ್ತಿಗೆ]]></title>
            <link>https://kannada.asianetnews.com/karnataka-districts/farmers-to-protest-on-july-31-demanding-water-release-from-tungabhadra-dam-gvd/articleshow-85oa2gk</link>
            <guid isPermaLink="true">https://kannada.asianetnews.com/karnataka-districts/farmers-to-protest-on-july-31-demanding-water-release-from-tungabhadra-dam-gvd/articleshow-85oa2gk</guid>
            <pubDate>Wed, 29 Jul 2026 16:59:03 +0530</pubDate>
            <description><![CDATA[&lt;p&gt;Tungabhadra Dam: ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಒತ್ತಾಯಿಸಿ ಜುಲೈ 31 ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypt4kts57zgjb6xhngddx11,imgname-vhhv-1785324523352.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.29): &lt;/strong&gt;ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಒತ್ತಾಯಿಸಿ ಜುಲೈ 31 ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ತಾಲೂಕಿನ ಪಂಪಾಸರೋವರದ ಆವರಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.&lt;/p&gt;&lt;p&gt;ಕಳೆದ ದಿನ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ಜೊತೆ ಜಲಾಶಯಕ್ಕೆ ತೆರಳಿ ಇನ್ನು ಎರಡು ಮೂರು ದಿನಗಳಲ್ಲಿ ವಿಜಯನಗರ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಲಾಗಿದೆ. ಆದರೂ ಅಧಿಕಾರಿಗಳ ಗಮನ ಸೆಳೆಯಲು ಗಂಗಾವತಿ ಮತ್ತು ಕೊಪ್ಪಳ ಭಾಗದವರು ಜೊತೆಯಾಗಿ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.&lt;/p&gt;&lt;p&gt;ರೈತರು ಎಲ್ಲರು ಸೇರಿ ಹೋರಾಟ ನಡೆಸಬೇಕೆಂದು ನಿರ್ಧರಿಸಲಾಯಿತು. ಜಲಾಶಯದಿಂದ 11 ಎ ವಿಜಯನಗರ ಕಾಲುವೆಗೆ ನೀರು ಬಿಡಲೆಬೇಕೆಂದು ಒತ್ತಾಯಿಸಲಾಗುತ್ತದೆ ಎಂದರು. ಜುಲೈ.31 ರಂದು ಗಂಗಾವತಿ ಮತ್ತು ಕೊಪ್ಪಳ ಭಾಗದ ರೈತರು ಲಿಂಗಾಪುರ ಬಳಿ ಸೇರಿ ಅಲ್ಲಿಂದ ಜಲಾಶಯಕ್ಕೆ ತೆರಳಿ ನೀರಾವರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದರು.&lt;/p&gt;&lt;h2&gt;&lt;strong&gt;ರೈತರು ಒಂದಾಗಿ ಹೋರಾಟ ಮಾಡಬೇಕು&lt;/strong&gt;&lt;/h2&gt;&lt;p&gt;ಸಿಂಗನಾಳ ವಿರೂಪಾಕ್ಷಪ್ಪ ಅವರು ಮಾತನಾಡಿ ನಾವೆಲ್ಲ ರೈತರು ಒಂದಾಗಿ ಹೋರಾಟ ಮಾಡಬೇಕು, ರಾಜ್ಯದಲ್ಲಿ ಈ ಕಾಂಗ್ರೆಸ್ ಪಕ್ಷದ ಆಡಳಿತ ಇರುವುದರಿಂದ ಈ ರೀತಿ ರೈತರಿಗೆ ತೊಂದರೆಗಳು ಆಗುತ್ತಿದೆ ಎಂದು ದೂರಿದರು. ಮಾಜಿ ಸಂಸದ ಶಿವರಾಮ ಗೌಡ, ಸಿದ್ದರಾಮಯ್ಯ ಸ್ವಾಮಿ, ಗ್ರಾಮೀಣ ಅಧ್ಯಕ್ಷ ಡಿ.ಕೆ ಆಗೊಲಿ, ಮನೋಹರ ಗೌಡ, ರೈತ ಮುಖಂಡ ಗಿರಿಗೌಡ, ತಿಪ್ಪರುದ್ರ ಸ್ವಾಮಿ, ಚನ್ನಪ್ಪ ಮಳಗಿ, ನಾರಾಯಣಪ್ಪ, ಆನೆಗುಂದಿ ಹಾಗೂ ಸುತ್ತಮುತ್ತಲಿನ ಹಳ್ಳಿಯ ರೈತರು ಭಾಗವಹಿಸಿದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/farmers-to-protest-on-july-31-demanding-water-release-from-tungabhadra-dam-gvd/articleshow-85oa2gk"/>
        </item>
        <item>
            <title><![CDATA[ಆಷಾಢ ಏಕಾದಶಿ: ಬೆಂಗಳೂರಿನಲ್ಲಿ ಮಂತ್ರಾಲಯ ಶ್ರೀಗಳಿಂದ ಭಕ್ತರಿಗೆ ತಪ್ತ ಮುದ್ರಧಾರಣೆ, ವಿಶೇಷ ಪೂಜೆ]]></title>
            <link>https://kannada.asianetnews.com/karnataka-districts/raghavendra-mutt-ashada-ekadashi-subudhendra-teertha-swamiji-tapta-mudra-event-gvd/articleshow-8pg2hdd</link>
            <guid isPermaLink="true">https://kannada.asianetnews.com/karnataka-districts/raghavendra-mutt-ashada-ekadashi-subudhendra-teertha-swamiji-tapta-mudra-event-gvd/articleshow-8pg2hdd</guid>
            <pubDate>Sat, 25 Jul 2026 19:35:16 +0530</pubDate>
            <description><![CDATA[&lt;p&gt;Ashada Ekadashi: ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kycsdr8bk61zf7ytnfzvy257,imgname-jv-1784988229899.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಗಂಗಾವತಿ (ಜು.25): &lt;/strong&gt;ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಸುಬುದೇಂಧ್ರತೀರ್ಥ ಶ್ರೀಪಾದಂಗಳವರು ಭಕ್ತರಿಗೆ ತಪ್ತಮುದ್ರಾಧಾರಣೆ ನೆರವೇರಿಸಿದರು.&lt;/p&gt;&lt;p&gt;ಆಷಾಢ ಮೊದಲ ಏಕಾದಶಿಯ ಅಂಗವಾಗಿ ಶ್ರೀಮಠದಲ್ಲಿ ಶ್ರೀಮನ್ಮೂಲ ರಾಮದೇವರ ಪೂಜೆ, ಸುದರ್ಶನ ಹೋಮ, ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ವಿಶೇಷ ಪೂಜೆ ಹಾಗೂ ತೊಟ್ಟಿಲು ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುದರ್ಶನ ಹೋಮದಲ್ಲಿ ಭಾಗವಹಿಸಿದ ಬಳಿಕ ಶ್ರೀಗಳು ಸ್ವತಃ ತಪ್ತಮುದ್ರಾಧಾರಣೆ ಮಾಡಿಕೊಂಡು, ನಂತರ ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿದರು.&lt;/p&gt;&lt;p&gt;&lt;strong&gt;ಶರೀರ ಶುದ್ಧೀಕರಣಕ್ಕೆ ತಪ್ತಮುದ್ರಾಧಾರಣೆ: ಶ್ರೀಗಳು&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಸುಬುದೇಂಧ್ರತೀರ್ಥ ಶ್ರೀಪಾದಂಗಳವರು, &quot;ಮಾನವನ ಶರೀರ ಶುದ್ಧೀಕರಣಕ್ಕಾಗಿ ಚಾತುರ್ಮಾಸ್ಯದ ಆಷಾಢ ಮೊದಲ ಏಕಾದಶಿಯಂದು ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳುವುದು ಮಹತ್ವದ್ದಾಗಿದೆ. ಇದರಿಂದ ಶರೀರ ಶುದ್ಧೀಕರಣ ಹಾಗೂ ಪಂಪಾ ಸಂಸ್ಕಾರವಾಗುತ್ತದೆ. ಈ ದಿನ ದಾನ, ಧರ್ಮಗಳನ್ನು ಮಾಡುವುದರಿಂದ ವಿಶೇಷ ಫಲ ದೊರೆಯುತ್ತದೆ,&quot; ಎಂದು ಹೇಳಿದರು. ಸುದರ್ಶನ ಹೋಮದಲ್ಲಿ ಶಂಖ ಮತ್ತು ಚಕ್ರದ ಮುದ್ರೆಗಳನ್ನು ಪೂಜಿಸಿ, ನಂತರ ಅವುಗಳಿಂದ ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.&lt;/p&gt;&lt;h2&gt;&lt;strong&gt;10 ಸಾವಿರಕ್ಕೂ ಅಧಿಕ ಭಕ್ತರು ಭಾಗಿ&lt;/strong&gt;&lt;/h2&gt;&lt;p&gt;ಜಯನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ನಡೆದ ತಪ್ತಮುದ್ರಾಧಾರಣೆ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು. ಬೆಂಗಳೂರು ಸೇರಿದಂತೆ ಮಂತ್ರಾಲಯ, ರಾಯಚೂರು, ಬಳ್ಳಾರಿ, ಧಾರವಾಡ, ಗಂಗಾವತಿ, ಹೊಸಪೇಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬೆಳಗ್ಗೆ 8 ಗಂಟೆಗೆ ಆರಂಭವಾದ ತಪ್ತಮುದ್ರಾಧಾರಣೆ ಕಾರ್ಯಕ್ರಮ ಮಧ್ಯಾಹ್ನದವರೆಗೂ ನಡೆಯಿತು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀಗಳ ಆಶೀರ್ವಾದ ಪಡೆದುಕೊಂಡರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ರಾಯಚೂರಿನ ರಾಯಚೂರು ವಾಣಿ ಸಂಪಾದಕ ಅರವಿಂದ ಕುಲಕರ್ಣಿ ಅವರ ಕುಟುಂಬದವರು, ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಕರ್ನಾಟಕ ವಿಭಾಗದ ಪಿಆರ್&zwnj;ಒ ಸಂಜೀವ ಕುಲಕರ್ಣಿ, ಆನೆಗೊಂದಿ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಮಾದಿನೂರು ಸುದೀಂದ್ರರಾವ್ ಕುಲಕರ್ಣಿ, ಪತ್ರಕರ್ತ ರಾಮಮೂರ್ತಿ ನವಲಿ, ವಿಜಯ ಕುಲಕರ್ಣಿ, ಆನಂದ ಕುಲಕರ್ಣಿ, ನಾಗರಾಜ್ ಚೂಡಿ, ಶ್ರೀನಿವಾಸರಾವ್ ಹೇರೂರು ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು. ಆಷಾಢ ಏಕಾದಶಿಯ ಈ ಧಾರ್ಮಿಕ ಕಾರ್ಯಕ್ರಮವು ಭಕ್ತರಲ್ಲಿ ಭಕ್ತಿ, ಆಧ್ಯಾತ್ಮಿಕತೆ ಮತ್ತು ಸಂಪ್ರದಾಯದ ಮಹತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿತು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/raghavendra-mutt-ashada-ekadashi-subudhendra-teertha-swamiji-tapta-mudra-event-gvd/articleshow-8pg2hdd"/>
        </item>
        <item>
            <title><![CDATA[ಕೊಪ್ಪಳಕ್ಕೆ ಇಬ್ಬರು ಸಚಿವರು: ಜಿಲ್ಲೆಯ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದ ಜನಾರ್ದನ ರೆಡ್ಡಿ]]></title>
            <link>https://kannada.asianetnews.com/karnataka-districts/janardhana-reddy-welcomes-two-ministers-for-koppal-district-gvd/articleshow-9dv7gfq</link>
            <guid isPermaLink="true">https://kannada.asianetnews.com/karnataka-districts/janardhana-reddy-welcomes-two-ministers-for-koppal-district-gvd/articleshow-9dv7gfq</guid>
            <pubDate>Mon, 03 Aug 2026 21:09:01 +0530</pubDate>
            <description><![CDATA[&lt;p&gt;G Janardhana Reddy: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಿರುವದು ಸಂತಸ ತಂದಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz44dpnbp7bdwcr18m4mzq2s,imgname-jkj-1785771514539.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಆ.03):&lt;/strong&gt; ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಿರುವದು ಸಂತಸ ತಂದಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಮತ್ತು ಕನಕಗಿರಿ ಶಾಸಕ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ನೀಡಿರುವದರಿಂದ ಈ ಭಾಗದ ಮತದಾರರ ಭಾಗ್ಯವಾಗಿದೆ. ಇದರಿಂದ ಹಚ್ಚಿನ ಅಭಿವೃದ್ದಿಯಾಗುತ್ತದೆ ಎನ್ನುವುದು ಮತದಾರರ ನೀರಿಕ್ಷೆ ಇದೆ.&lt;/p&gt;&lt;p&gt;ಇದ್ದ ಸ್ವಲ್ಪ ಸಮಯದಲ್ಲಿ ಜಿಲ್ಲೆಯ ಸರ್ವಾಂಗಿಣ ಅಭಿವೃದ್ದಿಗೆ ಸಚಿವದ್ವಯರು ಶ್ರಮಿಸಲಿ ಎಂದರು. ಹಿರಿಯ ಶಾಸಕರನ್ನು ಕಡೆಗಣಿಸಿದ್ದಾರೆಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಯಾವ ಮಾನದಂಡ ಇಟ್ಟುಕೊಂಡು ಸ್ಥಾನಗಳನ್ನು ನೀಡಿದ್ದಾರೆ ಅವರಿಗೆ ಗೊತ್ತಿರ ವಿಷಯವಾಗಿದೆ. ಬಳ್ಳಾರಿಯ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಷಯ ಎಂದರು. ಈ ವೇಳೆ ಮನೋಹರಗೌಡ ಹೇರೂರು, ಜಿಲಾನ್ ಪಾಷಾ, ವಿರೇಶ ಬಲಕುಂದಿ, ಅಮರಜ್ಯೋತಿ ನರಸಪ್ಪ, ಟಿ.ಜಿ.ಬಾಬು ಇದ್ದರು.&lt;/p&gt;&lt;h2&gt;&lt;strong&gt;ಮಾದಕ ವಸ್ತುಗಳ ಸೇವನೆಯಿಂದ ಕುಟಂಬಗಳು ಬೀದಿಪಾಲು&lt;/strong&gt;&lt;/h2&gt;&lt;p&gt;ಮಾದಕ ವಸ್ತುಗಳ ಸೇವನೆಯಿಂದ ಕುಟಂಬಗಳು ಬೀದಿ ಪಾಲಾಗುತ್ತದೆ ಕಾರಣ ಮಾದಕ ವಸ್ತುಗಳಿಂದ ದೂರ ಇರಬೇಕೆಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಜರುಗಿದ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಆಯೋಜಿಸಲಾದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾದಕ ವ್ಯಸನವು ಕೇವಲ ಒಬ್ಬ ವ್ಯಕ್ತಿಯನ್ನಷ್ಟೇ ಅಲ್ಲದೆ, ಕುಟುಂಬ, ಸಮಾಜ ಹಾಗೂ ಇಡೀ ದೇಶದ ಭವಿಷ್ಯವನ್ನೇ ನಾಶಮಾಡುತ್ತದೆ.&lt;/p&gt;&lt;p&gt;ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ &quot;ನಶಾ ಮುಕ್ತ ಯುವ-ವಿಕಸಿತ ಭಾರತ&quot; ಕನಸು ನನಸಾಗಬೇಕಾದರೆ, 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣವಾಗಬೇಕಾದರೆ ನಮ್ಮ ಯುವಶಕ್ತಿ ಡ್ರಗ್ಸ್&zwnj;ನಿಂದ ಸಂಪೂರ್ಣ ಮುಕ್ತವಾಗಿರಬೇಕೆಂದರು. ನಮ್ಮ ದೇಶದ ಸಾಮರ್ಥ್ಯವನ್ನು ಕುಗ್ಗಿಸಲು ಯತ್ನಿಸುತ್ತಿರುವ ಬಾಹ್ಯ ಶಕ್ತಿಗಳ ಈ ಷಡ್ಯಂತ್ರವನ್ನು ನಾವೆಲ್ಲರೂ ಒಟ್ಟಾಗಿ ವಿಫಲಗೊಳಿಸಬೇಕಿದೆ. ಬನ್ನಿ, ಪ್ರತಿಯೊಬ್ಬರೂ ಮಾದಕ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸೋಣ ಎಂದರು.&lt;/p&gt;&lt;p&gt;ಇತ್ತೀಚಿಗೆ ಗಂಗಾವತಿ ತಾಲೂಕಿನಲ್ಲಿ ವಿದೇಶಿ ಮಹಿಳೆಯರ ಮೇಲೆ ನಡೆದ ಅಹಿತಕರ ಘಟನೆಗೆ ಮಾದಕ ವಸ್ತುಗಳ ಸೇವೆನೆ ಕಾರಣ ಎಂದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ಪ್ರಸ್ತಾವಿಕವಾಗಿ ಮಾತನಾಡಿ 16 ರಿಂದ 21 ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳು ಜಾಗೃತಿಯಿಂದ ಇರ ಬೇಕು. ಬಹಳಷ್ಟು ಯುವಕು ಮತ್ತು ಯುವತಿಯರು ಈ ವಯಸ್ಸಿನಲ್ಲಿಯೇ ದಾರಿ ತಪ್ಪುತ್ತಾರೆ. ಜಾಗೃತಿಯಿಂದ ಇರಬೇಕೆಂದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/janardhana-reddy-welcomes-two-ministers-for-koppal-district-gvd/articleshow-9dv7gfq"/>
        </item>
        <item>
            <title><![CDATA[Koppal: ಪರಿಹಾರ ನೀಡದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ ಡಿಪೋ ಬಸ್ ಜಪ್ತಿ]]></title>
            <link>https://kannada.asianetnews.com/gallery/karnataka-districts/delay-in-compensation-from-transport-agency-court-orders-seizure-of-koppal-depot-bus-mrq-9qy1kz5</link>
            <guid isPermaLink="true">https://kannada.asianetnews.com/gallery/karnataka-districts/delay-in-compensation-from-transport-agency-court-orders-seizure-of-koppal-depot-bus-mrq-9qy1kz5</guid>
            <pubDate>Sat, 18 Jul 2026 12:46:24 +0530</pubDate>
            <description><![CDATA[&lt;p&gt;ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ, ನ್ಯಾಯಾಲಯದ ಆದೇಶದಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸನ್ನು ಕೂಡ್ಲಿಗಿಯಲ್ಲಿ ಜಪ್ತಿ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxt10sn4ykt59557g3brthz4,imgname-kudligi--2--1784358659748.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ, ನ್ಯಾಯಾಲಯದ ಆದೇಶದಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸನ್ನು ಕೂಡ್ಲಿಗಿಯಲ್ಲಿ ಜಪ್ತಿ ಮಾಡಲಾಗಿದೆ.&lt;/p&gt;&lt;img&gt;&lt;p&gt;ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ, ಪರಿಹಾರ ನೀಡದ ಕಾರಣ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಜಪ್ತಿಗೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಸಂತ್ರಸ್ತರ ಪರ ವಕೀಲರ ಜೊತೆಗೆ ನ್ಯಾಯಾಲಯದ ಸಿಬ್ಬಂದಿ ಬಸ್ ಜಪ್ತಿ ಮಾಡಿದ ಘಟನೆ ಕೂಡ್ಲಿಗಿ ನಡೆದಿದೆ.&lt;/p&gt;&lt;img&gt;&lt;p&gt;2019 ನವಂಬರ್ 10ರಂದು ಕೂಡ್ಲಿಗಿ ತಾಲೂಕಿನ ಕ್ಯಾಸನಕೇರಿ ಗ್ರ&zwj;ಾಮದ ನಾಗಪ್ಪ (55) ಟಾಟಾ ಏಸ್ ಆಟೋದಲ್ಲಿ ಹೊಸಪೇಟೆ ಯಿಂದ ಕೂಡ್ಲಿಗಿ ಕಡೆ ಬರುತ್ತಿದ್ದರು. ಶಿವಪುರ ಗ್ರ&zwj;ಾಮದ ಬಳಿ ಕೂಡ್ಲಿಗಿಯಿಂದ ಹೊಸಪೇಟೆ ಕಡೆ ತೆರಳುತ್ತಿದ್ದ ಕೊಪ್ಪಳ ಡಿಪೋಗೆ ಸೇರಿದ ಸಾರಿಗೆ ಬಸ್ ಡಿಕ್ಕಿ ಹೊಡೆದಿತ್ತು.&lt;/p&gt;&lt;img&gt;&lt;p&gt;ಅಪಘಾತದಲ್ಲಿ ಆಟೋದಲ್ಲಿದ್ದ ಕ್ಯಾಸನಕೇರಿ ಮೂಲದ ನಾಗಪ್ಪ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಕೊಟ್ರಮ್ಮ ಅವರು ನೀಡಿದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಾರಿಗೆ ಸಂಸ್ಥೆಗೆ ಆದೇಶಿಸಿತ್ತು&lt;/p&gt;&lt;img&gt;&lt;p&gt;ನ್ಯಾಯಾಲಯದ ಆದೇಶದ ಹೊರತಾಗಿಯೂ ಸಾರಿಗೆ ಸಂಸ್ಥೆಯು ಪರಿಹಾರ ಧನ ನೀಡಲು ವಿಳಂಬ ಮಾಡಿತ್ತು. ಇದರಿಂದ ಆಕ್ರೋಶಗೊಂಡ ನ್ಯಾಯಾಲಯವು ಬಸ್ ಜಪ್ತಿ ಮಾಡಲು ಅಂತಿಮ ಆದೇಶ ಹೊರಡಿಸಿತು. ನ್ಯಾಯಾಲಯದ ನಿರ್ದೇಶನದಂತೆ ಅಧಿಕಾರಿಗಳು ಬಸ್&zwnj;ಅನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/delay-in-compensation-from-transport-agency-court-orders-seizure-of-koppal-depot-bus-mrq-9qy1kz5"/>
        </item>
        <item>
            <title><![CDATA[ಕೊಪ್ಪಳ ಕೆಆರ್‌ಐಡಿಎಲ್‌ನಲ್ಲಿ ₹72 ಕೋಟಿ ಲೂಟಿ; ಇಂಜಿನಿಯರ್ ಝರಣಪ್ಪ ಚಿಂಚೋಳಿಕರ್ ಸೇವೆಯಿಂದ ಅಮಾನತು!]]></title>
            <link>https://kannada.asianetnews.com/karnataka-districts/koppal-kridl-72-crore-scam-ee-jharanappa-chincholikar-arrested-suspended-suvarna-news-impact-sat/articleshow-eoibnpm</link>
            <guid isPermaLink="true">https://kannada.asianetnews.com/karnataka-districts/koppal-kridl-72-crore-scam-ee-jharanappa-chincholikar-arrested-suspended-suvarna-news-impact-sat/articleshow-eoibnpm</guid>
            <pubDate>Fri, 17 Jul 2026 22:23:53 +0530</pubDate>
            <description><![CDATA[ಕೊಪ್ಪಳ ಕೆಆರ್&zwnj;ಐಡಿಎಲ್ ಇಲಾಖೆಯಲ್ಲಿ ನಡೆದ 72 ಕೋಟಿ ರೂಪಾಯಿಗಳ ಬೃಹತ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಹಗರಣದ ಪ್ರಮುಖ ಆರೋಪಿಗಳಾದ ಕಾರ್ಯಪಾಲಕ ಅಭಿಯಂತರ ಝರಣಪ್ಪ ಚಿಂಚೋಳಿಕರ್ ಮತ್ತು ಗುತ್ತಿಗೆದಾರ ದೇವರಾಜ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxrfwzw214vbjfyyx4e571cf,imgname-koppal-jharanappa-chincholikar-arrest-1784307154817.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ: ಜಿ&lt;/strong&gt;ಲ್ಲೆಯ ಕೆಆರ್&zwnj;ಐಡಿಎಲ್ (KRIDL) ಇಲಾಖೆಯಲ್ಲಿ ನಡೆದಿದ್ದ ಬಹುಕೋಟಿ ಭ್ರಷ್ಟಾಚಾರ (Corruption Case) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು (Lokayukta Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಹಗರಣದ (Scam) ಕಿಂಗ್&zwnj;ಪಿನ್ ಎನ್ನಲಾದ ಕಾರ್ಯಪಾಲಕ ಅಭಿಯಂತರ (Executive Engineer - EE) ಝರಣಪ್ಪ ಎಂ. ಚಿಂಚೋಳಿಕರ್ ಮತ್ತು ಗುತ್ತಿಗೆದಾರ (Contractor) ದೇವರಾಜ್ ಎಂಬುವವರನ್ನು ಪೊಲೀಸರು ಬಂಧಿಸಿ (Arrest) ಜೈಲಿಗಟ್ಟಿದ್ದಾರೆ. ಇದು ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suvarna News) ಪ್ರಸಾರ ಮಾಡಿದ್ದ ವರದಿಯ ಬಿಗ್ ಇಂಪ್ಯಾಕ್ಟ್ (Big Impact) ಆಗಿದೆ.&lt;/p&gt;&lt;h2&gt;&lt;strong&gt;ಏನಿದು 72 ಕೋಟಿ ರೂಪಾಯಿ ಹಗರಣ?&amp;nbsp;&lt;/strong&gt;&lt;/h2&gt;&lt;p&gt;ಕೊಪ್ಪಳ ಕೆಆರ್&zwnj;ಐಡಿಎಲ್&zwnj;ನಲ್ಲಿ ಕಾರ್ಯಪಾಲಕ ಅಭಿಯಂತರರಾಗಿದ್ದ (EE) ಝರಣಪ್ಪ ಚಿಂಚೋಳಿಕರ್, ಜಿಲ್ಲೆಯ ಹಲವೆಡೆ ಅಭಿವೃದ್ಧಿ ಕಾಮಗಾರಿಗಳ (Development Works) ಹೆಸರಿನಲ್ಲಿ ಭಾರೀ ಅಕ್ರಮ ನಡೆಸಿದ್ದರು. ಮೈದಾನದಲ್ಲಿ ಯಾವುದೇ ನೈಜ ಕೆಲಸಗಳನ್ನು (Physical Work) ನಡೆಸದೆಯೇ, ಕೇವಲ ಕಾಗದದ ಮೇಲೆ ಬಿಲ್ ಸೃಷ್ಟಿಸಿ (Fake Bills) ಬರೋಬ್ಬರಿ 72 ಕೋಟಿ ರೂಪಾಯಿಗಳನ್ನು ಎತ್ತುವಳಿ ಮಾಡಿದ್ದರು ಎಂಬ ಗಂಭೀರ ಆರೋಪ ಇವರ ಮೇಲಿದೆ. ಈ ಬೃಹತ್ ಹಗರಣದ ಕುರಿತು 'ಏಷ್ಯಾನೆಟ್ ಸುವರ್ಣ ನ್ಯೂಸ್' ಸರಣಿ ವರದಿಗಳನ್ನು (Detailed Investigation Reports) ಪ್ರಸಾರ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿತ್ತು.&lt;/p&gt;&lt;h2&gt;&lt;strong&gt;ಲೋಕಾಯುಕ್ತ ಪೊಲೀಸರ ಮಿಂಚಿನ ಕಾರ್ಯಾಚರಣೆ&amp;nbsp;&lt;/strong&gt;&lt;/h2&gt;&lt;p&gt;ಬೆಂಗಳೂರು ಲೋಕಾಯುಕ್ತ ಡಿವೈಎಸ್ಪಿ (Lokayukta DySP) ಮಲ್ಲಿಕಾರ್ಜುನ ಚುಕ್ಕಿ ನೇತೃತ್ವದ ತಂಡವು ಹಗರಣದ ತನಿಖೆ ನಡೆಸಿ, ಪ್ರಮುಖ ಆರೋಪಿ (Prime Accused) ಝರಣಪ್ಪ ಚಿಂಚೋಳಿಕರ್ ಮತ್ತು ಇವರಿಗೆ ಸಾಥ್ ನೀಡಿದ್ದ ಗುತ್ತಿಗೆದಾರ ದೇವರಾಜ್&zwnj;ನನ್ನು ಬಂಧಿಸಿದೆ. ಇಬ್ಬರನ್ನೂ ನ್ಯಾಯಾಲಯಕ್ಕೆ (Court) ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ.&lt;/p&gt;&lt;h2&gt;&lt;strong&gt;ಅಧಿಕಾರಿ ಅಮಾನತ್ತು :&lt;/strong&gt;&lt;/h2&gt;&lt;p&gt;ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾದ (Arrested) ಬೆನ್ನಲ್ಲೇ, ಕೆಆರ್&zwnj;ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರು (Managing Director) ಝರಣಪ್ಪ ಎಂ. ಚಿಂಚೋಳಿಕರ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ (Suspended) ಆದೇಶ ಹೊರಡಿಸಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಯ ವಿರುದ್ಧ ಈಗ ಇಲಾಖಾ ತನಿಖೆಯೂ (Departmental Enquiry) ಚುರುಕುಗೊಂಡಿದೆ.&lt;/p&gt;&lt;h2&gt;&lt;strong&gt;ಸುವರ್ಣ ನ್ಯೂಸ್ ವರದಿಗೆ ಸಂದ ಜಯ:&lt;/strong&gt;&lt;/h2&gt;&lt;p&gt;ಕೊಪ್ಪಳದಂತಹ ಜಿಲ್ಲೆಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು (Taxpayers Money) ಲೂಟಿ ಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಸುವರ್ಣ ನ್ಯೂಸ್ ನಿರಂತರವಾಗಿ ಧ್ವನಿ ಎತ್ತಿತ್ತು. ಮಾಧ್ಯಮದ ವರದಿಯಿಂದ ಎಚ್ಚೆತ್ತ ಲೋಕಾಯುಕ್ತ ಅಧಿಕಾರಿಗಳು ಇಂದು ಭ್ರಷ್ಟರನ್ನ (Corrupt Officials) ಜೈಲಿಗಟ್ಟಿದ್ದಾರೆ. ಸುವರ್ಣ ನ್ಯೂಸ್&zwnj;ನ ಈ ಸಾಮಾಜಿಕ ಕಳಕಳಿಗೆ ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/koppal-kridl-72-crore-scam-ee-jharanappa-chincholikar-arrested-suspended-suvarna-news-impact-sat/articleshow-eoibnpm"/>
        </item>
        <item>
            <title><![CDATA[ಕೊಪ್ಪಳ 'ಪ್ರತಿಭಟನೆಗೆ ಬಗ್ಗದ ಬಲ್ಡೋಟಾ ಕಾರ್ಖಾನೆ ಬಗ್ಗು ಬಡಿದ ರೈತರು'; ಕಾಂಪೌಂಡ್, ಗೇಟ್ ಮುರಿದು ಆಕ್ರೋಶ!]]></title>
            <link>https://kannada.asianetnews.com/gallery/karnataka-districts/koppal-farmers-protest-protesters-break-baldota-factory-compound-wall-baldota-hathao-slogans-echo-sat-ex541ti</link>
            <guid isPermaLink="true">https://kannada.asianetnews.com/gallery/karnataka-districts/koppal-farmers-protest-protesters-break-baldota-factory-compound-wall-baldota-hathao-slogans-echo-sat-ex541ti</guid>
            <pubDate>Tue, 21 Jul 2026 16:23:41 +0530</pubDate>
            <description><![CDATA[ಕೊಪ್ಪಳದಲ್ಲಿ 46ನೇ ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಬಲ್ಡೋಟಾ ಕಾರ್ಖಾನೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. 'ಬಲ್ಡೋಟಾ ಹಠಾವೋ, ಕೊಪ್ಪಳ ಬಚಾವೋ' ಎಂದು ಘೋಷಣೆ ಕೂಗಿದ ಸಾವಿರಾರು ರೈತರು, ಕಾರ್ಖಾನೆಯ ಕಂಪೌಂಡ್ ಒಡೆದು ಒಳನುಗ್ಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01ky24azzq7qxpegyb8y36sw2c,imgname-koppal-farmers-baldota-factory-wall-collapse-1784630575094.jpg" type="image/jpeg" height="390" width="690"/>
            <content:encoded><![CDATA[ಕೊಪ್ಪಳದಲ್ಲಿ 46ನೇ ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಬಲ್ಡೋಟಾ ಕಾರ್ಖಾನೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. 'ಬಲ್ಡೋಟಾ ಹಠಾವೋ, ಕೊಪ್ಪಳ ಬಚಾವೋ' ಎಂದು ಘೋಷಣೆ ಕೂಗಿದ ಸಾವಿರಾರು ರೈತರು, ಕಾರ್ಖಾನೆಯ ಕಂಪೌಂಡ್ ಒಡೆದು ಒಳನುಗ್ಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.&lt;img&gt;&lt;p&gt;&lt;strong&gt;ಕೊಪ್ಪಳ (ಜು.21): ಕೊ&lt;/strong&gt;ಪ್ಪಳ ಜಿಲ್ಲೆಯಲ್ಲಿ ಇಂದು ನಡೆದ 46ನೇ ರೈತ ಹುತಾತ್ಮ ದಿನಾಚರಣೆಯು (46th Farmer Martyr's Day) ತೀವ್ರ ಸ್ವರೂಪ ಪಡೆದುಕೊಂಡಿದೆ. ನಗರದ ಹೊರವಲಯದಲ್ಲಿರುವ ಬಲ್ಡೋಟಾ ಕಾರ್ಖಾನೆಯ (Baldota Factory) ವಿರುದ್ಧ ಸಿಡಿದೆದ್ದ ನೂರಾರು ರೈತರು, ಕಾರ್ಖಾನೆಯ ಕಂಪೌಂಡ್ ಒಡೆದು ಒಳಗೆ ನುಗ್ಗುವ ಮೂಲಕ ಉದ್ವಿಗ್ನ ವಾತಾವರಣ ನಿರ್ಮಾಣ ಮಾಡಿದರು.&lt;/p&gt;&lt;img&gt;&lt;p&gt;&lt;strong&gt;ಬೃಹತ್ ರ&zwj;್ಯಾಲಿ ಮತ್ತು ಪ್ರತಿಭಟನೆ:&lt;/strong&gt;&lt;/p&gt;&lt;p&gt;ಇಂದು ಬೆಳಿಗ್ಗೆ ನಗರದ ಐತಿಹಾಸಿಕ ಗವಿಮಠದಿಂದ (Gavi Matha) ಬೃಹತ್ ರ&zwj;್ಯಾಲಿ ಆರಂಭಗೊಂಡಿತು. ರ&zwj;್ಯಾಲಿಯು ಗಡಿಯಾರ ಕಂಬ (Clock Tower), ಅಶೋಕ ವೃತ್ತ ಮತ್ತು ಬಸವೇಶ್ವರ ವೃತ್ತದ ಮೂಲಕ ಸಾಗಿ ಬಲ್ಡೋಟಾ ಕಾರ್ಖಾನೆಯ ದ್ವಾರವನ್ನು ತಲುಪಿತು. ಈ ರ&zwj;್ಯಾಲಿಯಲ್ಲಿ ಕೆಆರ್&zwnj;ಎಸ್ ಪಕ್ಷದ (KRS Party) ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ (Ravi Krishna Reddy) ಸೇರಿದಂತೆ ರಾಜ್ಯದ ವಿವಿಧ ಭಾಗಗಳ ರೈತ ನಾಯಕರು ಮತ್ತು ಸಾವಿರಾರು ರೈತರು ಭಾಗವಹಿಸಿದ್ದರು.&lt;/p&gt;&lt;img&gt;&lt;p&gt;&lt;strong&gt;ಕಂಪೌಂಡ್ ಒಡೆದು ಒಳಗೆ ನುಗ್ಗಿದ ರೈತರು:&lt;/strong&gt;&lt;/p&gt;&lt;p&gt;ರ&zwj;್ಯಾಲಿಯು ತಾಲೂಕಿನ ಬಸಾಪುರ (Basapura) ಬಳಿ ಇರುವ ಕಾರ್ಖಾನೆಯ ಬಳಿ ತಲುಪುತ್ತಿದ್ದಂತೆ ರೈತರ ಆಕ್ರೋಶ ಮುಗಿಲು ಮುಟ್ಟಿತು. 'ಬಲ್ಡೋಟಾ ಹಠಾವೋ, ಕೊಪ್ಪಳ ಬಚಾವೋ' (Baldota Hathao, Koppal Bachao) ಎಂದು ಘೋಷಣೆ ಕೂಗುತ್ತಾ ಬಂದ ರೈತರು, ಪೊಲೀಸರ ತಡೆಯನ್ನೂ ಲೆಕ್ಕಿಸದೆ ಕಾರ್ಖಾನೆಯ ಕಂಪೌಂಡ್ ಒಡೆದು ಹಾಕಿದರು. ಅಷ್ಟಕ್ಕೇ ನಿಲ್ಲದ ರೈತರು, ಕಾರ್ಖಾನೆ ಆವರಣದಲ್ಲಿರುವ ಕೆರೆಗೆ (Factory Lake) ನುಗ್ಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;&lt;strong&gt;ಪೊಲೀಸರ ಹರಸಾಹಸ:&lt;/strong&gt;&lt;/p&gt;&lt;p&gt;ರೈತರನ್ನು ನಿಯಂತ್ರಿಸಲು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ (Tight Police Security) ಕಲ್ಪಿಸಲಾಗಿತ್ತು. ರೈತರು ಕಂಪೌಂಡ್ ಒಡೆದು ಒಳಗೆ ನುಗ್ಗುತ್ತಿದ್ದಂತೆ ಪೊಲೀಸರು ಅವರನ್ನು ತಡೆಯಲು ಹರಸಾಹಸ ಪಟ್ಟರು.&lt;/p&gt;&lt;img&gt;&lt;p&gt;ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಹಿಡಿದು ರೈತರನ್ನು ವಾಪಸ್ ಕಳುಹಿಸಲು ಪ್ರಯತ್ನಿಸಿದರು. ಸದ್ಯ ಕಾರ್ಖಾನೆಯ ಸುತ್ತಮುತ್ತ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ರೈತ ಸಮಾವೇಶ:&lt;/strong&gt;&lt;/p&gt;&lt;p&gt;ಬಲ್ಡೋಟಾ ಕಾರ್ಖಾನೆಯ ಗೇಟ್ ಎದುರು ರೈತರ ಬೃಹತ್ ಸಮಾವೇಶ ಆಯೋಜನೆಗೊಂಡಿದ್ದು, ರೈತ ಮುಖಂಡರು ಕಾರ್ಖಾನೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ರೈತ ಹುತಾತ್ಮ ದಿನಾಚರಣೆಯು ಈ ಬಾರಿ ಕಾರ್ಖಾನೆ ವಿರುದ್ಧದ ದೊಡ್ಡ ಮಟ್ಟದ ಚಳವಳಿಯಾಗಿ (Movement) ಮಾರ್ಪಟ್ಟಿದ್ದು, ಕೊಪ್ಪಳ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನ ಸೆಳೆದಿದೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/koppal-farmers-protest-protesters-break-baldota-factory-compound-wall-baldota-hathao-slogans-echo-sat-ex541ti"/>
        </item>
        <item>
            <title><![CDATA[ವಿಜಯನಗರ ಅರಸರ ಕಾಲದ ಅಣೆಕಟ್ಟಿಗೆ ಮತ್ತೆ ರೈತರ ಮೊರೆ: ಅಷ್ಟಕ್ಕೂ ಆಗಿದ್ದೇನು?]]></title>
            <link>https://kannada.asianetnews.com/karnataka-districts/gangavathi-farmers-fight-for-canal-water-vijayanagara-canal-water-issue-gvd/articleshow-f3mzzqx</link>
            <guid isPermaLink="true">https://kannada.asianetnews.com/karnataka-districts/gangavathi-farmers-fight-for-canal-water-vijayanagara-canal-water-issue-gvd/articleshow-f3mzzqx</guid>
            <pubDate>Sat, 25 Jul 2026 19:19:12 +0530</pubDate>
            <description><![CDATA[&lt;p&gt;Gangavathi: ವಿಜಯನಗರ ಕಾಲುವೆಗೆ ತುಂಗಭದ್ರಾ ನದಿಯಿಂದ ಸಮರ್ಪಕವಾಗಿ ನೀರು ಹರಿಯದ ಕಾರಣ ರೈತರು ಅಣೆಕಟ್ಟಿನ ಕೆಳ ಭಾಗದ ಮೋರೆ (ತಡೆಗೋಡೆ)ಗಳನ್ನು ಮುಚ್ಚಿ ನೀರು ಹರಿಸುವ ಪ್ರಯತ್ನ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kycrjj454tvfhtdjnd5bh99m,imgname-kj-1784987338884.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಜು.25):&lt;/strong&gt; ವಿಜಯನಗರ ಕಾಲುವೆಗೆ ತುಂಗಭದ್ರಾ ನದಿಯಿಂದ ಸಮರ್ಪಕವಾಗಿ ನೀರು ಹರಿಯದ ಕಾರಣ ರೈತರು ಅಣೆಕಟ್ಟಿನ ಕೆಳ ಭಾಗದ ಮೋರೆ (ತಡೆಗೋಡೆ)ಗಳನ್ನು ಮುಚ್ಚಿ ನೀರು ಹರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ತಾಲೂಕಿನ ಸಾಣಾಪುರ ಬಳಿ ತುಂಗಭದ್ರಾ ನದಿಗೆ ಕಟ್ಟಲಾಗಿದ್ದ ಅಣೆಕಟ್ಟಿನ ಮೋರೆ ಮುಚ್ಚಲು ಸುಮಾರು 200ಕ್ಕೂ ಅಧಿಕ ರೈತರು ಪ್ರಯತ್ನ ನಡೆಸಿದರು.&lt;/p&gt;&lt;p&gt;ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿದ್ದ ಅಣೆಕಟ್ಟಿನ ಮೂಲಕ ರೈತರು ತಮ್ಮ ಹೊಲಗದ್ದೆಗಳಿಗೆ ನೀರು ಪಡೆದುಕೊಳ್ಳುತ್ತಿದ್ದರು. ಸಾಣಾಪುರ ಬಳಿ ಅರಸರು ಅಣೆಕಟ್ಟು ನಿರ್ಮಿಸಿ ರೈತರಿಗೆ ನೀರು ಪೂರೈಸುತ್ತಿದ್ದರು. ಅಣೆಕಟ್ಟಿನ ಕೆಳ ಭಾಗದಲ್ಲಿ 8 ಮೋರೆಗಳಿದ್ದು, ಇದರ ಮೂಲಕ ಸುಮಾರು 18 ಗ್ರಾಮಗಳ ರೈತರ ಗದ್ದೆಗಳಿಗೆ ನೀರು ಪೂರೈಕೆ ಮಾಡುತ್ತಿದ್ದರು. ಸಾಣಾಪುರ ಗ್ರಾಮದಿಂದ ಸಂಗಾಪುರ ಲಕ್ಷ್ಮೀನಾರಾಯಣ ಕೆರೆಯವರಿಗೂ ಕಾಲುವೆ ಇದ್ದು, ಸುಮಾರ 2500ಕ್ಕೂ ಅಧಿಕ ಎಕರೆ ಭೂಮಿ ಇದೆ, ನಿರಂತರ 11 ತಿಂಗಳು ರೈತರು ಇಲ್ಲಿ ಬೆಳೆ ಬೆಳೆಯುತ್ತಿದ್ದರು.&lt;/p&gt;&lt;p&gt;&lt;strong&gt;ಸಮರ್ಪಕ ನೀರಿಗಾಗಿ ಹೋರಾಟ: &lt;/strong&gt;ಪ್ರತಿ ವರ್ಷ ರೈತರು ಒಂದಲ್ಲ ಒಂದು ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಬಾರಿ ಗೇಟ್&zwnj; ದುರಸ್ತಿ, ಮಳೆ ಇಲ್ಲದೇ ಜಲಾಶಯಕ್ಕೆ ನೀರಿನ ಸಂಗ್ರಹದ ಕೊರತೆ ಇದ್ದಿದ್ದರಿಂದ ರೈತರು ವಿಜಯನಗರ ಕಾಲುವೆ ನೀರು ಬಳಕೆ ಮಾಡುವದು ಅನಿವಾರ್ಯವಾಗಿದೆ. ನದಿಯಿಂದ ನೀರು ಅಧಿಕ ಮಟ್ಟದಲ್ಲಿ ಹರಿಯುತ್ತಿದ್ದರಿಂದ ಸಾಣಾಪುರ ಬಳಿ ಇರುವ ವಿಜಯನಗರ ಅಣೆಕಟ್ಟಿನ ಕೆಳ ಭಾಗದಲ್ಲಿರುವ ಮೋರೆಗಳ ಮೂಲಕ ಕಾಲುವೆಗೆ ಸರಿಯಾದ ರೀತಿ ನೀರು ಹೋಗುತ್ತಿಲ್ಲ. ಈ ಕಾರಣಕ್ಕೆ ರೈತರು ಮೋರೆಗಳನ್ನು ತಾಡಪಾಲ್ ಮತ್ತು ಮರಳು ಚೀಲಗಳಿಂದ ಮುಚ್ಚಿದರೆ ಕಾಲುವೆಗೆ ಹೆಚ್ಚಿನ ನೀರು ಪೂರೈಕೆಯಾಗುತ್ತದೆ ಎನ್ನುವದು ರೈತರ ವಾದವಾಗಿದೆ.&lt;/p&gt;&lt;p&gt;&lt;strong&gt;ಪುರಾತತ್ವ ಇಲಾಖೆ ಆಕ್ಷೇಪ: &lt;/strong&gt;ವಿಜಯನಗರ ಕಾಲುವೆ ನೀರು ಪೂರೈಕೆ ಮತ್ತು ಅಣೆಕಟ್ಟಿನ ದುರಸ್ತಿಗಾಗಿ ಸರ್ಕಾರ ಅನುದಾನ ನೀಡಿದ್ದರೂ ಸಹ ಪುರಾತತ್ವ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ದುರಸ್ತಿ ಕಾರ್ಯ ನಡೆಯುತ್ತಿಲ್ಲ ಎಂದು ರೈತರು ಅರೋಪಿಸಿದ್ದಾರೆ. ಪ್ರಸ್ತುತ ರೈತರಿಂದ ಸಾಣಾಪುರ ಬಳಿಯಿರುವ ವಿಜಯನಗರ ಆಣೆಕಟ್ಟಿಗೆ ಮೋರೆ ಮುಚ್ಚಿ ಕಾಲುವೆಗೆ ನೀರು ಹರಿಸಿಕೊಳ್ಳುವ ಯತ್ನ ನಡೆದಿದೆ.&lt;/p&gt;&lt;p&gt;ವಿಜಯನಗರ ಕಾಲದಲ್ಲಿ ಸಾಣಾಪುರ ಬಳಿ ಅಣೆಕಟ್ಟು ನಿರ್ಮಿಸಲಾಗಿದೆ. ಈ ಅಣೆಕಟ್ಟಿನ ಮೂಲಕ ವಿಜಯನಗರ ಕಾಲುವೆಗಳಿಗೆ ನೀರು ಪೂರೈಕೆಯಾಗುತ್ತಿದೆ. ಈಗ ನದಿ ನೀರಿನ ಹರಿವು ಕಡಿಮೆಯಾಗಿದ್ದರಿಂದ ಕಾಲುವೆಗೆ ನೀರು ಪೂರೈಕೆ ಸ್ವಲ್ಪಮಟ್ಟಿಗೆ ವಿಳಂಬವಾಗುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆ ಮುಖ್ಯ ಅಭಿಯಂತರ ಎಂ.ಎಸ್. ಗೋಡೇಕರ್ ತಿಳಿಸಿದ್ದಾರೆ.&lt;/p&gt;&lt;p&gt;ಅಣೆಕಟ್ಟಿನ ಮೋರೆಗಳನ್ನು ತಾಡಪಲ್ಲು ಮತ್ತು ಮರಳು ಚೀಲಗಳಿಂದ ಮುಚ್ಚಲಾಗಿದೆ. ಇದರಿಂದ ವಿಜಯನಗರ ಕಾಲುವೆಗೆ ಸಮರ್ಪಕ ನೀರು ಹರಿಯುತ್ತದೆ. ಇಲ್ಲದಿದ್ದರೆ ಕಾಲುವೆ ನೀರು ಅವಲಂಬಿತವಾಗಿರುವ ರೈತರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ ಎಂದು ಗೂಗಿಬಂಡಿ ಕ್ಯಾಂಪ್ ಪ್ರಗತಿಪರ ರೈತ ಸುಬ್ಬರಾವ್ ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-farmers-fight-for-canal-water-vijayanagara-canal-water-issue-gvd/articleshow-f3mzzqx"/>
        </item>
        <item>
            <title><![CDATA[ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿತ ದುರಂತ: ಕೊಪ್ಪಳದ 4 ವರ್ಷದ ಮಗು ಸೇರಿ ಮೂವರು ಸಾವು]]></title>
            <link>https://kannada.asianetnews.com/karnataka-districts/landslide-in-thirthahalli-claims-lives-of-three-family-members-from-koppal-gvd/articleshow-fqel26z</link>
            <guid isPermaLink="true">https://kannada.asianetnews.com/karnataka-districts/landslide-in-thirthahalli-claims-lives-of-three-family-members-from-koppal-gvd/articleshow-fqel26z</guid>
            <pubDate>Sun, 02 Aug 2026 19:08:36 +0530</pubDate>
            <description><![CDATA[&lt;p&gt;Thirthahalli Landslide: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ದುಡಿಯಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ್ ಗ್ರಾಮದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz1b3j6bye8jdbjvxcrx04zt,imgname-jjv-1785677859019.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಆ.02): &lt;/strong&gt;ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ದುಡಿಯಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ್ ಗ್ರಾಮದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಕಕ್ಕರಗೋಳ್ ಗ್ರಾಮದ ಮಲ್ಲಿಕಾರ್ಜುನ, (35) ಪತ್ನಿ ನಾಗವೇಣಿ (26), ಸಂತೋಷ (4) ಮಗು ಸಾವನ್ನಪ್ಪಿದ್ದಾರೆ. ಇವರು ಕಳೆದ ಆರು ತಿಂಗಳ ಹಿಂದಷ್ಟೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ದುಡಿಯಲು ಹೋಗಿದ್ದರು.&lt;/p&gt;&lt;p&gt;ಮನೆಯಲ್ಲಿ ವಾಸ ಮಾಡಿದ್ದ ಸಂದರ್ಭದಲ್ಲಿ ಅತಿಯಾದ ಮಳೆಯಿಂದ ಗುಡ್ಡ ಕುಸಿದಿದ್ದು, ಮೂವರು ಮೃತಪಟ್ಟಿದ್ದು, ಹನುಮಂತಪ್ಪ (26) ಎನ್ನುವಾತ ತೀವ್ರ ಗಾಯಗೊಂಡಿದ್ದಾರೆ. ಇವರನ್ನು ಶಿವಮೊಗ್ಗ ನಗರದ ಮೇಘ ರಾಜನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.&lt;/p&gt;&lt;h2&gt;&lt;strong&gt;ಆಕ್ರಂದನ&lt;/strong&gt;&lt;/h2&gt;&lt;p&gt;ದುಡಿಯುಲು ಕುಟಂಬ ಸಮೇತ ತೀರ್ಥಹಳ್ಳಿಗೆ ಹೋಗಿದ್ದ ಒಂದೇ ಕುಟಂಬವರು ಸಾವನ್ನಪ್ಪಿದ್ದರಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಕಳೆದ 6 ತಿಂಗಳ ಹಿಂದೆ ಗದ್ದೆ, ಹೊಲಗಳಲ್ಲಿ ದುಡಿಯಲು ಹೋಗಿದ್ದ ಮಲ್ಲಿಕಾರ್ಜನ, ಪತ್ನಿ ನಾಗವೇಣಿ, ಇವರ ಮಗು 4 ವರ್ಷದ ಸಂತೋಷ ಗುಡ್ಡ ಕುಸಿದ ಪರಿಣಾಮವಾಗಿ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.&lt;/p&gt;&lt;p&gt;ಈ ಸುದ್ದಿ ತಿಳಿಯುತ್ತಲೇ ಮೃತ ಮಲ್ಲಿಕಾರ್ಜುನ ಅವರ ತಂದೆ ಲಕ್ಷ್ಣಣ, ತಾಯಿ ಗೌರಮ್ಮ ದಿಕ್ಕು ದೋಚದೆ ಕಣ್ಣೀರಿಟ್ಟಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತರ ಮರಣೋತ್ತರ ಪರೀಕ್ಷೆ ನಡೆದಿದ್ದು, ಸೋಮವಾರ ಬೆಳಿಗ್ಗೆ ಕಕ್ಕರಗೋಳ್ ಗ್ರಾಮಕ್ಕೆ ಮೃತದೇಹಗಳನ್ನು ತರಲಾಗುತ್ತದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/landslide-in-thirthahalli-claims-lives-of-three-family-members-from-koppal-gvd/articleshow-fqel26z"/>
        </item>
        <item>
            <title><![CDATA[35 ಟಿಎಂಸಿ ನೀರಿದ್ದರೂ ವಿಜಯನಗರ 11ಎ ಕಾಲುವೆಗೆ ನೀರಿಲ್ಲ: ಸರ್ಕಾರದ ವಿರುದ್ಧ ರೆಡ್ಡಿ, ಶ್ರೀರಾಮುಲು ಆಕ್ರೋಶ]]></title>
            <link>https://kannada.asianetnews.com/karnataka-districts/bjp-protests-demanding-water-release-to-vijayanagar-11a-canal-gvd/articleshow-g4tyiqv</link>
            <guid isPermaLink="true">https://kannada.asianetnews.com/karnataka-districts/bjp-protests-demanding-water-release-to-vijayanagar-11a-canal-gvd/articleshow-g4tyiqv</guid>
            <pubDate>Fri, 31 Jul 2026 17:29:39 +0530</pubDate>
            <description><![CDATA[&lt;p&gt;Vijayanagar 11A Canal: ವಿಜಯನಗರ 11 ಎ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದಿಂದ ಅಂಜನಾದ್ರಿಯಿಂದ ಮುನಿರಾಬಾದ್ ನೀರಾವರಿ ಇಲಾಖೆಯವರಿಗೂ ಬೃಹತ್ ಪ್ರತಿಭಟನೆ ನಡೆಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvzjayxyjbbe7zwg4zn5xj9,imgname-vvjv-1785497988061.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.31): &lt;/strong&gt;ವಿಜಯನಗರ 11 ಎ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದಿಂದ ಅಂಜನಾದ್ರಿಯಿಂದ ಮುನಿರಾಬಾದ್ ನೀರಾವರಿ ಇಲಾಖೆಯವರಿಗೂ ಬೃಹತ್ ಪ್ರತಿಭಟನೆ ನಡೆಯಿತು. ಅಂಜನಾದ್ರಿ ಬೆಟ್ಟದ ಕೆಳಗೆ ಜಮಾಯಿಸಿದ್ದ ರೈತರು ಅಂಜನಾದ್ರಿ ಬೆಟ್ಟದ ಕೆಳಗೆ ಇರುವ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು. ಸರಿಯಾದ ಸಮಯಕ್ಕೆ ಕಾಲುವೆಗೆ ನೀರು ಬಿಡದ ಕಾರಣ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಜೊತೆಗೆ ಬಿಜೆಪಿ ಪಕ್ಷಕ್ಕೆ ಜಯ ಘೋಷಿಸಿದರು. ವಿಜಯನಗರ ಕಾಲುವೆಯ ವ್ಯಾಪ್ತಿಗೆ ಬರುವ 15 ಗ್ರಾಮಗಳ ರೈತರು ಭಾಗವಹಿಸಿದ್ದರು.&lt;/p&gt;&lt;p&gt;ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದ ಅವರು ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರೆಯನ್ನು ಮುಖ್ಯಮಂತ್ರಿಗಳು ಅಲಕ್ಷಿಸುತ್ತಿದ್ದಾರೆ. ಸಚಿವ ಸಂಪುಟದ ವಿಸ್ತರಣೆಯಲ್ಲಿ ಕಾಲ ಕಳೆಯುತ್ತಿದ್ದಾರೆಂದು ದೂರಿದರು. ಈ ಹಿಂದೆ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ರೈತರಿಗೆ ನೀರಿನ ತೊಂದರೆಯಾಗದಂತೆ ರೈತರ ಹಿತ ಕಾಡುತ್ತಿದ್ದರು. ಈಗ ಕಾಂಗ್ರೆಸ್ ಸರ್ಕಾರ ರೈತರನ್ನು ಕಡೆಗಣಿಸುತ್ತಿದ್ದಾರೆಂದು ಅಕ್ರೋಶ ವ್ಯಕ್ತಪಡಿಸಿದರು. ಜಲಾಶಯದಲ್ಲಿ 35 ಟಿಎಂಸಿ ನೀರು ಇದೆ,15 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದ್ದರೂ ಸಹ ನೀರು ಬಿಡಲು ಮೀನಾಮೇಷ ಮಾಡುತ್ತಿದೆ ಎಂದು ಅರೋಪಿಸಿದರು. ರೈತರು ಕಣ್ಣೀರು ಹಾಕುತ್ತಿದ್ದಾರೆ. ರೈತರ ಶಾಪ ಸರ್ಕಾರಕ್ಕೆ ತಲುಪುತ್ತದೆ ಎಂದರು.&lt;/p&gt;&lt;h2&gt;&lt;strong&gt;ಸಮಯ ವ್ಯರ್ಥ&lt;/strong&gt;&lt;/h2&gt;&lt;p&gt;ಮಾಜಿ ಸಂಸದ ಬಿ.ಶ್ರೀರಾಮುಲು ಮಾತನಾಡಿ ನಮ್ಮ ನೀರು, ನಮ್ಮ ಹಕ್ಕು ಎನ್ನುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸದೆ ದೆಹಲಿಯಲ್ಲಿ ಮುಖ್ಯಮಂತ್ರಿಗಳು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಇದರಿಂದ ನೀರಾವರಿ ಯೋಜನೆಗಳು ಅಧೋಗತಿಯತ್ತಸಾಗಿವೆ ಎಂದರು.&lt;/p&gt;&lt;p&gt;ಕೂಡಲೆ ವಿಜಯನಗರ ಕಾಲುವೆ 11 ಎ ನೀರು ಬಿಡ ಬೇಕೆಂದು ಒತ್ತಾಯಿಸಿದ ಅವರು ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಕಾಂಗ್ರೆಸ್ ಸರ್ಕಾರ ಇದ್ದ ಕಡೆ ನೀರಾವರಿ ಯೋಜನೆ ಬಗ್ಗೆ ಎಚ್ಚೆತ್ತುಕೊಳ್ಳುತ್ತದೆ. ತಮಿಳುನಾಡಿಗೆ 4.56 ಟಿಎಂಸಿ ನೀರನ್ನು ಕಾವೇರಿಯಿಂದ ಬಿಡುಗಡೆ ಮಾಡಿದ್ದಾರೆ ಎಂದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕುಡಿಯುವ ನೀರಿಗೆ ಕಾಲುವೆಗೆ ಬಿಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ರೈತರ ಕೃಷಿಗಳ ಬಗ್ಗೆ ಕಾಳಜಿ ಇಲ್ಲ ಎಂದರು.&lt;/p&gt;&lt;p&gt;ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ವಿಜಯನಗರ ಕಾಲುವೆ 11 ಎ .ಹಳೆಯದಾದ ಕಾಲುವೆಯಾಗಿದೆ. ಈ ಭಾಗದಲ್ಲಿ ರೈತರು ಭತ್ತ ಬೆಳೆಯುತ್ತಿದ್ದು, ನೀರು ಇಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೂಡಲೆ ಸರ್ಕಾರ ಗಮನಹರಿಸಬೇಕೆಂದರು.&lt;/p&gt;&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದ ಅವರು ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರೆಯನ್ನು ಮುಖ್ಯಮಂತ್ರಿಗಳು ಅಲಕ್ಷಿಸುತ್ತಿದ್ದಾರೆ. ಸಚಿವ ಸಂಪುಟದ ವಿಸ್ತರಣೆಯಲ್ಲಿ ಕಾಲ ಕಳೆಯುತ್ತಿದ್ದಾರೆಂದು ದೂರಿದರು.&lt;strong&gt;-ಜನಾರ್ದನ ರೆಡ್ಡಿ, ಶಾಸಕರು ಗಂಗಾವತಿ&lt;/strong&gt;&lt;/p&gt;&lt;p&gt;ನಮ್ಮ ನೀರು, ನಮ್ಮ ಹಕ್ಕು ಎನ್ನುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸದೆ ದೆಹಲಿಯಲ್ಲಿ ಮುಖ್ಯಮಂತ್ರಿಗಳು ಸಮಯ ವ್ಯರ್ಥ ಮಾಡುತ್ತಿದ್ದರೆ. ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಇದರಿಂದ ನೀರಾವರಿ ಯೋಜನೆಗಳು ಅಧೋಗತಿಯತ್ತಸಾಗಿವೆ ಎಂದರು.&lt;strong&gt;-ಬಿ.ಶ್ರೀರಾಮುಲು, ಮಾಜಿ ಸಂಸದ ಬಳ್ಳಾರಿ&lt;/strong&gt;&lt;/p&gt;&lt;p&gt;ವಿಜಯನಗರ ಕಾಲುವೆ 11 ಎ .ಹಳೆಯದಾದ ಕಾಲುವೆಯಾಗಿದೆ. ಈ ಭಾಗದಲ್ಲಿ ರೈತರು ಭತ್ತ ಬೆಳೆಯುತ್ತಿದ್ದು, ನೀರು ಇಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೂಡಲೆ ಸರ್ಕಾರ ಗಮನಹರಿಸ ಬೇಕು.&lt;strong&gt;-ಪರಣ್ಣ ಮುನವಳ್ಳಿ, ಮಾಜಿ ಶಾಸಕರು&lt;/strong&gt;&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bjp-protests-demanding-water-release-to-vijayanagar-11a-canal-gvd/articleshow-g4tyiqv"/>
        </item>
        <item>
            <title><![CDATA[ಡಿವೈಡರ್, ಫುಟ್‌ಪಾತ್, ವಿದ್ಯುತ್ ದೀಪಗಳೊಂದಿಗೆ ಹೊಸ ರಸ್ತೆ: ಗಂಗಾವತಿಗೆ ಸಿಗಲಿದೆ ಹೊಸ ರೂಪ]]></title>
            <link>https://kannada.asianetnews.com/karnataka-districts/gangavathi-road-widening-10-crore-development-widening-project-gvd/articleshow-gg0dg7q</link>
            <guid isPermaLink="true">https://kannada.asianetnews.com/karnataka-districts/gangavathi-road-widening-10-crore-development-widening-project-gvd/articleshow-gg0dg7q</guid>
            <pubDate>Sat, 18 Jul 2026 16:49:23 +0530</pubDate>
            <description><![CDATA[&lt;p&gt;Gangavathi Road Widening: ಗಂಗಾವತಿ-ಆನೆಗೊಂದಿಯ ವಿರುಪಾಪುರ ತಾಂಡಾ ಮಾರ್ಗದ ತಾಯಿ ಮಕ್ಕಳ ಆಸ್ಪತ್ರೆಯ ರಸ್ತೆ ಅಗಲೀಕರಣ ಶುರುವಾಗಿದ್ದು, ರಸ್ತೆ ಬದಿಯ ಕಟ್ಟಡಗಳ ತೆರವು ಕಾರ್ಯಾಚರಣೆಗೆ ದಿನಗಣನೆ ಪ್ರಾರಂಭವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxtf72xa88h5afs2v26x7tvt,imgname-hh-1784373545897.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಜು.18): &lt;/strong&gt;ಗಂಗಾವತಿ-ಆನೆಗೊಂದಿಯ ವಿರುಪಾಪುರ ತಾಂಡಾ ಮಾರ್ಗದ ತಾಯಿ ಮಕ್ಕಳ ಆಸ್ಪತ್ರೆಯ ರಸ್ತೆ ಅಗಲೀಕರಣ ಶುರುವಾಗಿದ್ದು, ರಸ್ತೆ ಬದಿಯ ಕಟ್ಟಡಗಳ ತೆರವು ಕಾರ್ಯಾಚರಣೆಗೆ ದಿನಗಣನೆ ಪ್ರಾರಂಭವಾಗಿದೆ. ಯಾವ ಸಮಯದಲ್ಲಾದರೂ ನಗರಸಭೆಯವರು ರಸ್ತೆ ಬದಿಯ ಕಟ್ಟಡ ತೆರವು ಮಾಡಬಹುದು. ಈಗಾಗಲೇ ಮಾಜಿ ಸಂಸದ ಎಚ್&zwnj;.ಜಿ. ರಾಮುಲು ನಿವಾಸದ ರಸ್ತೆಯಿಂದ (ಬಸವೇಶ್ವರ ವೃತ್ತ) ವಿರುಪಾಪುರ ತಾಂಡಾದ ಸೇವಾಲಾಲ್ ವೃತ್ತದ ರಸ್ತೆಯ ಮೂಲಕ ತಾಯಿ ಮಕ್ಕಳ ಆಸ್ಪತ್ರೆಯವರಿಗೂ ಅಗಲೀಕರಣಕ್ಕೆ ನಗರಸಭೆ ಮುಂದಾಗಿದೆ.&lt;/p&gt;&lt;p&gt;ಕಳೆದ ತಿಂಗಳು ನಗರಸಭೆಯವರು ಸರ್ವೇ ಮಾಡಿ ರಸ್ತೆ ಬದಿಯ ಕಟ್ಟಡ ಗುರುತಿಸಿದ್ದಾರೆ. ರಸ್ತೆಯ ಒಟ್ಟು ಅಗಲೀಕರಣ 70 ಫೀಟ್ ಇದ್ದು, ಮದ್ಯ ರಸ್ತೆಯಿಂದ 35/35 ಫೀಟ್ ನಂತೆ ಅಗಲೀಕರಣ ಮಾಡಲು ಸಿದ್ಧತೆ ನಡೆಸಿದೆ. ಕಳೆದ ಆರು ತಿಂಗಳಿನಿಂದ ಜುಲೈನಗರ, ಗುಂಡಮ್ಮ ಕ್ಯಾಂಪ್ ರಸ್ತೆಯ ಅಗಲೀಕರಣ ನಡೆದಿದ್ದು, ರಸ್ತೆಯ ಮಧ್ಯದಲ್ಲಿ ಡಿವೈಡರ್ ಮತ್ತು ವಿದ್ಯುತ್ ದೀಪ ಅಳವಡಿಸಲಾಗಿದೆ. ಅಲ್ಲದೇ ಕನಕದಾಸ ವೃತ್ತದಿಂದ ನೀಲಕಂಠೇಶ್ವರ ವೃತ್ತದವರಿಗೂ ರಸ್ತೆ ಅಗಲೀಕರಣ ಮುಕ್ತಾಯವಾಗಿದೆ.&lt;/p&gt;&lt;p&gt;&lt;strong&gt;10 ಕೋಟಿ ರು ಅನುದಾನ&lt;/strong&gt;&lt;/p&gt;&lt;p&gt;ಗಂಗಾವತಿ ನಗರದ ಮಾಜಿ ಸಂಸದ ಎಚ್. ಜಿ. ರಾಮುಲು ನಿವಾಸದ ಮಾರ್ಗದ ರಸ್ತೆಯಿಂದ ಸೇವಾಲಾಲ್ ವೃತ್ತದ ಮೂಲಕ ತಾಯಿ ಮಕ್ಕಳ ಆಸ್ಪತ್ರೆ 1.2 ಕಿಮಿ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕ್ಕಾಗಿ ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಅಭಿವೃದ್ದಿಯೋಜನೆ ಅಡಿಯಲ್ಲಿ ₹10 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ ಅಗಲೀಕರಣ ಇದ್ದ ಸ್ಥಳದಲ್ಲಿ ರಸ್ತೆ ಅಭಿವೃದ್ಧಿ ನಡೆದಿದ್ದು, ಲೋಕೋಪಯೋಗಿ ಇಲಾಖೆಯವರು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿದ್ದಾರೆ. ರಸ್ತೆ, ಅಗಲೀಕರಣ, ಡಿವೈಡರ್ ನಿರ್ಮಾಣ, ವಿದ್ಯುತ್ ದೀಪಗಳ ಕಂಬ ಅಳವಡಿಕೆ, ಚರಂಡಿ, ಫುಟ್ ಪಾತ್ ಸೇರಿದಂತೆ ವಿವಿಧ ಕಾಮಗಾರಿ ಈ ಅನುದಾನದಲ್ಲಿ ನಿರ್ವಹಿಸಲಿದಾರೆ.&lt;/p&gt;&lt;p&gt;&lt;strong&gt;ಅವಕಾಶ ನೀಡಿ&lt;/strong&gt;&lt;/p&gt;&lt;p&gt;ವಿರುಪಾಪುರ ತಾಂಡಾದಲ್ಲಿ ತೀರಾ ಬಡ ಕುಟಂಬಗಳಿದ್ದು, ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಒಂದು ವೇಳೆ 70 ಫೀಟ್ ನಂತೆ ರಸ್ತೆ ಅಗಲೀಕರಣ ಮಾಡಿದರೆ ಗುಡಿಸಲು ನಿವಾಸಿಗಳು ಬೀದಿಗೆ ಬರುವ ಪರಿಸ್ಥಿತಿ ಬರುತ್ತದೆ. ಕಾರಣ ಅಗಲೀಕರಣ ಸಡಿಲಗೊಳಿಸಿ ಅವಕಾಶ ನೀಡುವಂತೆ ನಿವಾಸಿಗಳು ನಗರಸಭೆಗೆ ಕೋರಿದ್ದಾರೆ.&lt;/p&gt;&lt;p&gt;&lt;strong&gt;ಸ್ವಯ ಪ್ರೇರಿತ ತೆರವುಗೊಳಿಸಿ&lt;/strong&gt;&lt;/p&gt;&lt;p&gt;ಈಗಾಗಲೇ ರಸ್ತೆ ಅಗಲೀಕರಣಕ್ಕೆ ಮಾರ್ಕ್ ಮಾಡಲಾಗಿದ್ದು, ರಸ್ತೆಬದಿಯಲ್ಲಿ ಬರುವ ಕಟ್ಟಡ, ಮಳಿಗೆ ಸ್ವಂಪ್ರೇರಿತ ತೆರವುಗೊಳಿಸಿಕೊಳ್ಳಿ ಎಂದು ನಗರಸಭೆಯವರು ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಕಾಮಗಾರಿ ಪ್ರಾರಂಭಿಸಿದ್ದು, ಉಳಿದ ಸ್ಥಳ ತೆರವುಗೊಳಿಸುವ ಅವಶ್ಯಕತೆ ಇರುವದರಿಂದ ಸ್ವಂಪ್ರೇರಿತರಾಗಿ ತೆರವುಗೊಳಿಸಿಕೊಳ್ಳುವಂತೆ ತಿಳಿಸಿದ್ದಾರೆ. ಪ್ರಸ್ತುತ ರಸ್ತೆ ಅಗಲೀಕರಣ, ಕಟ್ಟಡಗಳ ತೆರವು ಕಾರ್ಯಕ್ಕೆ ದಿನಗಣನೆ ಪ್ರಾರಂಭವಾಗಿದೆ.&lt;/p&gt;&lt;p&gt;ರಸ್ತೆ ಅಗಲೀಕರಣ, ರಸ್ತೆ ಬದಿಯಲ್ಲಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ನಗರಸಭೆಯಿಂದ ನಡೆಸಲಾಗುತ್ತದೆ. 70 ಫೀಟ್ ಅಳತೆಯಂತೆ ಸರ್ವೇ ಮಾಡಲಾಗಿದ್ದು, ಇದಕ್ಕಾಗಿ ₹10 ಕೋಟಿ ಅನುದಾನ ಮಂಜೂರಾಗಿದೆ. ಸ್ವಯಂ ಪ್ರೇರಿತರಾಗಿ ಕಟ್ಟಡ ತೆರವುಗೊಳಿಸಿಕೊಳ್ಳಲು ನಿವಾಸಿಗಳು ಸಮಯ ಕೇಳಿದ್ದಾರೆ.-ಆಸ್ಮಾ ಬೇಗಂ, ಎಇಇ ನಗರಸಭೆ&lt;/p&gt;&lt;p&gt;ಬಸವೇಶ್ವರ ವೃತ್ತದಿಂದ ತಾಯಿ, ಮಕ್ಕಳ ಆಸ್ಪತ್ರೆಯವರಿಗೆ ರಸ್ತೆ ಅಗಲೀಕರಣ ಮಾಡಲಾಗುತ್ತಿದ್ದು, ಡಾಂಬರೀಕರಣ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಡಿಯಲ್ಲಿ ₹10 ಕೋಟಿ ಮಂಜೂರಾಗಿದೆ.ಪಿಡ್ಲೂಡಿ ಇಲಾಖೆ ಕಾರ್ಯ ನಿರ್ವಹಿಸುತ್ತದೆ.-ವಿಶ್ವನಾಥ, ಎಇಇ ಲೋಕೋಪಯೋಗಿ ಇಲಾಖೆ&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-road-widening-10-crore-development-widening-project-gvd/articleshow-gg0dg7q"/>
        </item>
        <item>
            <title><![CDATA[ಬಾಡಿಗೆ ಕಟ್ಟಡದಲ್ಲೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ: ಸಾರ್ವಜನಿಕರ ಪರದಾಟ ಹೆಚ್ಚಳ]]></title>
            <link>https://kannada.asianetnews.com/karnataka-districts/gangavathi-rural-police-station-building-update-koppal-news-gvd/articleshow-lcsp17r</link>
            <guid isPermaLink="true">https://kannada.asianetnews.com/karnataka-districts/gangavathi-rural-police-station-building-update-koppal-news-gvd/articleshow-lcsp17r</guid>
            <pubDate>Sat, 25 Jul 2026 19:07:47 +0530</pubDate>
            <description><![CDATA[&lt;p&gt;Gangavathi: ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಈಗ ಗ್ರಾಮೀಣ ಭಾಗದಿಂದ ದೂರು ಕೊಡಲು ಬರುವ ಜನರು 3 ಕಿ ಮೀ ದೂರು ಹೋಗಿ ಪರದಾಡುವ ಪ್ರಸಂಗ ಒದಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kycqxft3rt3t2sv3meccdck3,imgname-nch-1784986648387.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಜು.25): &lt;/strong&gt;ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಈಗ ಗ್ರಾಮೀಣ ಭಾಗದಿಂದ ದೂರು ಕೊಡಲು ಬರುವ ಜನರು 3 ಕಿ ಮೀ ದೂರು ಹೋಗಿ ಪರದಾಡುವ ಪ್ರಸಂಗ ಒದಗಿದೆ. ಈ ಹಿಂದೆ ಗ್ರಾಮೀಣ ಪೊಲೀಸ್ ಠಾಣೆಯ ನಗರದ ಪೊಲೀಸ್ ಸಮುಚ್ಚಯದಲ್ಲಿ ಇತ್ತು. ತೀರಾ ಹಳೆಯದಾಗಿದ್ದರಿಂದ ಅನುದಾನ ಬರುತ್ತದೆ ಎನ್ನುವ ಲೆಕ್ಕಚಾರದಿಂದ ಇದ್ದ ಕಟ್ಟಡ ನೆಲಸಮ ಮಾಡಲಾಗಿದೆ.&lt;/p&gt;&lt;p&gt;&lt;strong&gt;ಬಾಡಿಗೆ ಕಟ್ಟಡದಲ್ಲಿ ಗ್ರಾಮೀಣ ಠಾಣೆ: &lt;/strong&gt;ನಗರದ ಸಿಬಿಎಸ್ ಗಂಜ್ ಪ್ರದೇಶದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಸಮಿತಿ ಅಧ್ಯಕ್ಷರ ಅತಿಥಿ ಗೃಹದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಬಾಡಿಗೆ ಇದ್ದು, ಇದಕ್ಕಾಗಿ 22 ಸಾವಿರ ರುಪಾಯಿಗಳನ್ನು ಸಮಿತಿಗೆ ಪೊಲೀಸ್ ಇಲಾಖೆ ಪಾವತಿಸುತ್ತಿದೆ. ಸಮಿತಿಗೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಇಲ್ಲದ ಕಾರಣ ಅಧ್ಯಕ್ಷರ ಅತಿಥಿ ಗೃಹವನ್ನು 55 ತಿಂಗಳು ಕರಾರು ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಇದ್ದ ಕಟ್ಟಡ ನೆಲ ಸಮ: &lt;/strong&gt;ತೀರಾ ಹಳೆಯದಾದ ಗ್ರಾಮೀಣ ಪೊಲೀಸ್ ಠಾಣೆಯ ಕಟ್ಟಡವನ್ನು ನೆಲಸಮ ಮಾಡಿ ಹೊಸಕಟ್ಟಡ ನಿರ್ಮಾಣಕ್ಕೆ ಜಾಗೆ ಸಿದ್ದಪಡಿಸಲಾಗಿತ್ತು. 40 ವರ್ಷಗ ಳ ಹಳೆಯದಾದ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡಕ್ಕೆ ಕಾಯುತ್ತಿದ್ದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಹೊಸ ಕಟ್ಟಡ ಮರಿಚಿಕೆಯಾಗಿ ಉಳಿಯಿತು.&lt;/p&gt;&lt;p&gt;&lt;strong&gt;ಬಾರದ ಅನುದಾನ: &lt;/strong&gt;ಗ್ರಾಮೀಣ ಪೊಲೀಸ್ ಠಾಣೆಯ ಹೊಸಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ಸ್ಟೇಟ್ ಪೊಲೀಸ್ ಹೌಸಿಂಗ್ ಬೋರ್ಡಿನವರು 2 ಕೋಟಿ 80 ಲಕ್ಷ ರು ವೆಚ್ಚದ ಅಂದಾಜು ಪಟ್ಟಿ ಮಾಡಿ ರಾಜ್ಯ ಸ್ಟೇಟ್ ಪೊಲೀಸ್ ಹೌಸಿಂಗ್ ಬೋರ್ಡಿಗೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಅನುದಾನ ಬಾರದ ಕಾರಣ ಕಳೆದ ಒಂದು ವರ್ಷದಿಂದ ಹಾಳು ಬಿದ್ದಿದೆ.&lt;/p&gt;&lt;p&gt;&lt;strong&gt;ದೂರುದಾರರ ಪರದಾಟ: &lt;/strong&gt;ಗಂಗಾವತಿ ನಗರ ಪೊಲೀಸ್ ಸಮುಚ್ಚಯದಲ್ಲಿ ಡಿವೈಎಸ್ಪಿ ಕಚೇರಿ, ನಗರ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆ ಜೊತೆಗೆ ಗ್ರಾಮೀಣ ಪೊಲೀಸ್ ಠಾಣೆಯು ಇತ್ತು. ಆ ಸಂದರ್ಭದಲ್ಲಿ ಗ್ರಾಮೀಣ ಭಾಗದಿಂದ ವಿವಿಧ ರೀತಿಯ ಪ್ರಕರಣಗಳ ಕುರಿತು ದೂರು ನೀಡುತ್ತಿದ್ದು, ಈಗ 3 ಕೀಮಿ ದೂರದಲ್ಲಿ ಠಾಣೆ ಇರುವದರಿಂದ ಗ್ರಾಮೀಣ ಭಾಗದ ಜನರು ಪರದಾಡುವ ಪರಿಸ್ಥಿತಿ ಒದಗಿದೆ.&lt;/p&gt;&lt;p&gt;ಅಲ್ಲದೆ ಪೊಲೀಸ್ ಸಿಬ್ಬಂದಿಗಳು ತಮ್ಮ ವಸತಿ ಗೃಹದಿಂದ ಠಾಣೆಗೆ ಹೋಗಲು ವಿಳಂಭವಾಗುವ ಪರಿಸ್ಥಿತಿ ಎದುರಿಸುವ ಪರಿಸ್ಥಿತಿ ಒದಗಿದೆ. ಇನ್ನಾದರು ಸರ್ಕಾರ( ಕರ್ನಾಟಕ ಸ್ಟೇಟ್ ಪೊಲೀಸ್ ಹೌಸಿಂಗ್ ಬೋರ್ಡ್) ಅನುದಾನ ನೀಡಿದರೆ ಸಾರ್ವಜನಿಕರಿಗೆ ಮತ್ತು ಪೊಲೀಸ್ ಸಿಬ್ಬಂದಿಗಳಿಗೂ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತದೆ.&lt;/p&gt;&lt;p&gt;ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿದೆ, ಹೊಸಕಟ್ಟಡಕ್ಕಾಗಿ ಸರ್ಕಾರ ಅನುದಾನ ಮಂಜೂರಿ ಮಾಡಿ ಅನುಮೋದನೆ ನೀಡಬೇಕಾಗಿದೆ. ಪ್ರತಿ ವರ್ಷ ಪ್ರತಿ ತಾಲೂಕಗಳಿಗೆ ಠಾಣೆಯ ಕಟ್ಟಡಕ್ಕಾಗಿ ಅನುದಾನ ನೀಡುತ್ತಾ ಬರುತ್ತದೆ. ಈ ವರ್ಷ ಅನುದಾನ ಬರಬಹುದು.&lt;strong&gt;-ಜಾಯಪ್ಪ ನ್ಯಾಮಗೌಡರ್, ಡಿವೈಎಸ್ಪಿ ಗಂಗಾವತಿ&lt;/strong&gt;&lt;/p&gt;&lt;p&gt;ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಹೊಸ ಕಟ್ಟಡದ ಪ್ರಸ್ತಾನೆಯ ಬಗ್ಗೆ ಮಾಹಿತಿ ಇಲ್ಲ. ಕಳೆದ 4 ತಿಂಗಳಿನಿಂದ ಅಧಿಕಾರ ವಹಿಸಿಕೊಂಡಿದ್ದೇನೆ. ಕಟ್ಟಡದ ಬಗ್ಗೆ ಮಾಹಿತಿ ಇಲ್ಲ.&lt;strong&gt;-ಲಿಂಗರಾಜ್, ಎಇಇ, ಕರ್ನಾಟಕ ಸ್ಟೇಟ್ ಪೊಲೀಸ್ ಹೌಸಿಂಗ್ ಬೋರ್ಡ್, ರಾಯಚೂರು.&lt;/strong&gt;&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-rural-police-station-building-update-koppal-news-gvd/articleshow-lcsp17r"/>
        </item>
        <item>
            <title><![CDATA[ಕುಡಿಯುವ ನೀರನ್ನ ಅಕ್ರಮವಾಗಿ ಜಮೀನಿಗೆ ಹರಿಸಿಕೊಂಡ ರೈತರು.. ಕೊಪ್ಪಳದಲ್ಲಿ ಅಸಲಿಗೆ ಆಗಿದ್ದೇನು?]]></title>
            <link>https://kannada.asianetnews.com/koppal/farmers-accused-of-illegally-diverting-canal-water-in-dasanala-gangavathi-gkn/articleshow-n2dr5nw</link>
            <guid isPermaLink="true">https://kannada.asianetnews.com/koppal/farmers-accused-of-illegally-diverting-canal-water-in-dasanala-gangavathi-gkn/articleshow-n2dr5nw</guid>
            <pubDate>Fri, 31 Jul 2026 10:10:07 +0530</pubDate>
            <description><![CDATA[&lt;p&gt;ಗಂಗಾವತಿ ತಾಲೂಕಿನ ಬಸಾಪಟ್ಟಣ, ಹಿರೇಬೆಣಕಲ್ ಹಾಗೂ ದಾಸನಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೀರು ಹರಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಡಿಸ್ಟ್ರುಬ್ಯೂಟರ್ (Distributor) 14, 15, 16 ಮತ್ತು 17 ರಲ್ಲಿ ರೈತರು ಮುಖ್ಯ ಕಾಲುವೆಯಿಂದ (Main Canal) ಸಣ್ಣ ಕಾಲುವೆಗಳು ಹಾಗೂ ಉಪ-ಕಾಲುವೆಗಳ ಮೂಲಕ ಜಮೀನುಗಳಿಗೆ ಅಕ್ರಮವಾಗಿ ನೀರನ್ನು ಹರಿಸಿಕೊಳ್ಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyv7aecxcx0djqsyzjjx0te1,imgname-farmers-accused-of-illegally-diverting-canal-water-in-dasanala--gangavathi-1785472563613.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ: &lt;/strong&gt;ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜನರ ಕುಡಿಯುವ ನೀರಿಗಾಗಿ ಮೀಸಲಿಟ್ಟಿದ್ದ ಕಾಲುವೆ ನೀರನ್ನು ಕೆಲವು ರೈತರು ಅಕ್ರಮವಾಗಿ ತಮ್ಮ ಜಮೀನುಗಳಿಗೆ ಹರಿಸಿಕೊಳ್ಳುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶವಿದ್ದಾಗ್ಯೂ, ಗಂಗಾವತಿ ತಾಲೂಕಿನ ದಾಸನಾಳ ಸೇರಿದಂತೆ ಹಲವೆಡೆ ರಾಜಾರೋಷವಾಗಿ ಅಕ್ರಮ ನೀರು ಬಳಕೆ ನಡೆಯುತ್ತಿದೆ. ಆದರೂ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಕುಡಿಯುವ ನೀರಿಗಾಗಿ ಬಿಟ್ಟಿದ್ದ ನೀರು ಕೃಷಿಗೆ ಬಳಕೆ!&lt;/strong&gt;&lt;/h2&gt;&lt;p&gt;ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೊಂದರೆ ನೀಗಿಸಲು ತುಂಗಭದ್ರಾ ಎಡದಂಡೆ ಕಾಲುವೆಗೆ (TLBC) ನೀರು ಹರಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ರೈತರು ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ಅಥವಾ ಜಮೀನುಗಳಿಗೆ ಬಳಸಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಕೆಲವು ರೈತರು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ನಡೆಯುತ್ತಿದೆ ಅಕ್ರಮ?&lt;/strong&gt;&lt;/h2&gt;&lt;p&gt;ಗಂಗಾವತಿ ತಾಲೂಕಿನ ಬಸಾಪಟ್ಟಣ, ಹಿರೇಬೆಣಕಲ್ ಹಾಗೂ ದಾಸನಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೀರು ಹರಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಡಿಸ್ಟ್ರುಬ್ಯೂಟರ್ (Distributor) 14, 15, 16 ಮತ್ತು 17 ರಲ್ಲಿ ರೈತರು ಮುಖ್ಯ ಕಾಲುವೆಯಿಂದ (Main Canal) ಸಣ್ಣ ಕಾಲುವೆಗಳು ಹಾಗೂ ಉಪ-ಕಾಲುವೆಗಳ ಮೂಲಕ ಜಮೀನುಗಳಿಗೆ ಅಕ್ರಮವಾಗಿ ನೀರನ್ನು ಹರಿಸಿಕೊಳ್ಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ಶಾಮೀಲು ಶಂಕೆ?&lt;/strong&gt;&lt;/h2&gt;&lt;p&gt;ಹಲವು ಗ್ರಾಮಗಳಲ್ಲಿ ಬಹಿರಂಗವಾಗಿಯೇ ಅಕ್ರಮವಾಗಿ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದರೂ, ಸಂಬಂಧಪಟ್ಟ ನೀರಾವರಿ ಇಲಾಖೆ ಹಾಗೂ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಅಕ್ರಮ ಕೃತ್ಯಕ್ಕೆ ಅಧಿಕಾರಿಗಳೇ ರೈತರೊಂದಿಗೆ ಶಾಮೀಲಾಗಿದ್ದಾರೆಯೇ ಎಂಬ ದಟ್ಟ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಭೀತಿ ಇದ್ದರೂ, ಜವಾಬ್ದಾರಿಯುತ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮವಾಗಿ ನೀರು ಹರಿಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕುಡಿಯುವ ನೀರನ್ನು ರಕ್ಷಿಸಬೇಕು ಎಂದು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಜನತೆ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/koppal/farmers-accused-of-illegally-diverting-canal-water-in-dasanala-gangavathi-gkn/articleshow-n2dr5nw"/>
        </item>
        <item>
            <title><![CDATA[ಬ್ಯಾಗ್‌ ಜಿಪ್‌ ರಿಪೇರಿ ಮಾಡೋ ಗಂಗಾವತಿ ಹುಡುಗನ 1 ದಿನದ ಎಷ್ಟು ಸಂಪಾದನೆ ಎಷ್ಟು? ಇದೇ ಬ್ಯುಸಿನೆಸ್‌ ತಾಕತ್ತು!]]></title>
            <link>https://kannada.asianetnews.com/gallery/business/the-daily-income-of-a-bag-zipper-repairer-in-gangavathi-koppal-nu1wpmu</link>
            <guid isPermaLink="true">https://kannada.asianetnews.com/gallery/business/the-daily-income-of-a-bag-zipper-repairer-in-gangavathi-koppal-nu1wpmu</guid>
            <pubDate>Thu, 16 Jul 2026 12:52:03 +0530</pubDate>
            <description><![CDATA[&lt;p&gt;Bag Zip Repairer: ಬ್ಯಾಗ್&zwnj; ಜಿಪ್&zwnj; ರಿಪೇರಿ ಮಾಡುವವರು ಹೀಗೆ ಒಂದಿಷ್ಟು ವಸ್ತುಗಳ ರಿಪೇರಿ ಮಾಡುವವರು ದಿನಕ್ಕೆ ಎಷ್ಟು ಹಣ ಸಂಪಾದನೆ ಮಾಡ್ತಾರೆ ಎಂದು ಅನೇಕರು ಅಂದುಕೊಳ್ಳಬಹುದು, ಇದೆಲ್ಲ ಸಣ್ಣ ಉದ್ಯೋಗ ಎನಿಸಬಹುದು. ಗಂಗಾವತಿ ಹುಡುಗನೊಬ್ಬ ಬ್ಯಾಗ್&zwnj; ಜಿಪ್&zwnj; ಹಾಕಿ ಎಷ್ಟು ಹಣ ಗಳಿಸ್ತಾನೆ ಗೊತ್ತಾ?&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmw8yhc8gpcwr6ctanzctc0,imgname-new-project--36--1784185911852.jpg" type="image/jpeg" height="390" width="690"/>
            <content:encoded><![CDATA[&lt;p&gt;Bag Zip Repairer: ಬ್ಯಾಗ್&zwnj; ಜಿಪ್&zwnj; ರಿಪೇರಿ ಮಾಡುವವರು ಹೀಗೆ ಒಂದಿಷ್ಟು ವಸ್ತುಗಳ ರಿಪೇರಿ ಮಾಡುವವರು ದಿನಕ್ಕೆ ಎಷ್ಟು ಹಣ ಸಂಪಾದನೆ ಮಾಡ್ತಾರೆ ಎಂದು ಅನೇಕರು ಅಂದುಕೊಳ್ಳಬಹುದು, ಇದೆಲ್ಲ ಸಣ್ಣ ಉದ್ಯೋಗ ಎನಿಸಬಹುದು. ಗಂಗಾವತಿ ಹುಡುಗನೊಬ್ಬ ಬ್ಯಾಗ್&zwnj; ಜಿಪ್&zwnj; ಹಾಕಿ ಎಷ್ಟು ಹಣ ಗಳಿಸ್ತಾನೆ ಗೊತ್ತಾ?&lt;/p&gt;&lt;p&gt;&lt;/p&gt;&lt;img&gt;&lt;p&gt;ಇತ್ತೀಚೆಗೆ ಒಂದು ಬ್ಯಾಗ್&zwnj;ಗೆ ಜಿಪ್&zwnj; ಹಾಕೋಕೆ ಕರ್ನಾಟಕದಲ್ಲಿ ಮಿನಿಮಮ್&zwnj; 50 ರೂಪಾಯಿ ತಗೊಳ್ತಾರೆ. ಅದೇ ಬೆಂಗಳೂರಿನಲ್ಲಿ 100 ರೂಪಾಯಿ ತಗೊಳ್ತಾರೆ. 350 ರೂಪಾಯಿಗೆ ಹೊಸ ಬ್ಯಾಗ್&zwnj; ಬರುವುದು, ಆದರೆ ರಿಪೇರಿಗೆ ಮಾತ್ರ ದುಬಾರಿ ಬೆಲೆ ತೆರಬೇಕು.&lt;/p&gt;&lt;img&gt;&lt;p&gt;ಬ್ಯಾಗ್&zwnj; ರಿಪೇರಿ ಮಾಡುವವರು, ಡ್ರೆಸ್&zwnj; ಸ್ಟಿಚ್&zwnj; ಮಾಡಿಕೊಡುವವರು ಎಷ್ಟು ಹಣ ಗಳಿಸುತ್ತಾರೆ ಎಂದು ಕೆಲವರಿಗೆ ಡೌಟ್&zwnj; ಇರುತ್ತದೆ. ಎಲ್ಲರೂ ಬ್ಯಾಗ್&zwnj; ರಿಪೇರಿ ಮಾಡಿಕೊಡೋದಿಲ್ಲ, ಕೆಲವರು ಮಾತ್ರ ಬ್ಯಾಗ್&zwnj; ಅಥವಾ ಇನ್ಯಾವುದೋ ವಸ್ತುಗಳ ರಿಪೇರಿ ಮಾಡ್ತಾರೆ.&lt;/p&gt;&lt;img&gt;&lt;p&gt;ಈಗ ಗಂಗಾವತಿ ಮೂಲದ ಹುಡುಗನೊಬ್ಬ ರಸ್ತೆ ಬದಿಯಲ್ಲಿ ಹೊಲಿಗೆ ಮಶಿನ್&zwnj; ಇಟ್ಕೊಂಡು ಬ್ಯಾಗ್&zwnj; ರಿಪೇರಿ ಮಾಡುತ್ತಿದ್ದಾನೆ. ಇವನ ಆದಾಯದ ವಿಡಿಯೋ ಈಗ ವೈರಲ್&zwnj; ಆಗ್ತಿದೆ. ಹಾಗಿದ್ದರೆ ಇವನ ಒಂದು ದಿನದ ಆದಾಯ ಎಷ್ಟು? ಖರ್ಚು ಎಷ್ಟು?&lt;/p&gt;&lt;p&gt;ಶಹೀಲ್&zwnj; ಕೆ ಆರ್&zwnj; ಎನ್ನುವವರು ಈ ಹುಡುಗನ ಬಳಿ ಬ್ಯಾಗ್&zwnj; ರಿಪೇರಿ ಮಾಡಿಸಿದ್ದಾರೆ. ಆಗ ಅವರು ಒಂದು ದಿನಕ್ಕೆ ಎಷ್ಟು ಹಣ ಗಳಿಸುತ್ತೀಯಾ? ಖರ್ಚು ಎಷ್ಟು ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ. ಆಗ ಆ ಹುಡುಗ ಹೇಳಿದ ಮಾತು ಕೇಳಿ ಎಲ್ಲರೂ ಹೌಹಾರಿದ್ದಾರೆ.&lt;/p&gt;&lt;img&gt;&lt;p&gt;ಈ ಹುಡುಗ ಒಂದು ದಿನಕ್ಕೆ ಏನಿಲ್ಲ ಅಂದ್ರೂ 2000 ರೂಪಾಯಿ ಹಣ ಗಳಿಸುತ್ತಾನೆ. ಅದರಲ್ಲಿ 300 ರೂಪಾಯಿ ಖರ್ಚು ಆಗುವುದು. ಒಟ್ಟು 1700 ರೂಪಾಯಿ ಉಳಿತಾಯ ಆಗುತ್ತದೆ.&lt;/p&gt;&lt;img&gt;&lt;p&gt;50 ರೂಪಾಯಿ ಗಳಿಸಲೀ, 500 ರೂಪಾಯಿ ಗಳಿಸಲಿ ಉದ್ಯಮಕ್ಕೆ ಅದರದ್ದೇ ಆದ ಮಹತ್ವ ಇದೆ. ಬೀದಿಯಲ್ಲಿ ನಿಂತು ಪಾನಿಪುರಿ ಮಾರುವವರು ದಿನಕ್ಕೆ 3000 ರೂಪಾಯಿ ಹಣ ಗಳಿಸುತ್ತಾರೆ. ಇಂಜಿನಿಯರಿಂಗ್&zwnj; ಅಥವಾ ಇನ್ಯಾವುದೋ ದೊಡ್ಡ ಡಿಗ್ರಿ ಪಡೆದವರಿಗೂ ಕೂಡ ಇಷ್ಟು ಹಣ ಸಿಗೋದಿಲ್ಲ.&lt;/p&gt;]]></content:encoded>
            <category>koppal</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/the-daily-income-of-a-bag-zipper-repairer-in-gangavathi-koppal-nu1wpmu"/>
        </item>
        <item>
            <title><![CDATA[ತುಂಗಭದ್ರಾ ನೀರಿಗಾಗಿ ಕಾಯುತ್ತಿದ್ದ ರೈತರಿಗೆ ಸಿಹಿಸುದ್ದಿ: ಎನ್.ಎಸ್. ಬೋಸರಾಜು ಭರವಸೆಯೇನು?]]></title>
            <link>https://kannada.asianetnews.com/karnataka-districts/water-to-be-released-from-tungabhadra-dam-after-80-tmc-ns-boseraju-gvd/articleshow-omcu7pp</link>
            <guid isPermaLink="true">https://kannada.asianetnews.com/karnataka-districts/water-to-be-released-from-tungabhadra-dam-after-80-tmc-ns-boseraju-gvd/articleshow-omcu7pp</guid>
            <pubDate>Sun, 02 Aug 2026 22:47:47 +0530</pubDate>
            <description><![CDATA[&lt;p&gt;Tungabhadra Reservoir: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎನ್.ಎಸ್.ಬೋಸರಾಜು ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz1qp3r8df35042y42cgvym2,imgname-bk-1785691049736.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಆ.02):&lt;/strong&gt; ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎನ್.ಎಸ್.ಬೋಸರಾಜು ಹೇಳಿದರು. ನಗರದ ಮಾಜಿ ಸಂಸದ ಎಚ್.ಜಿ. ರಾಮುಲು ಅವರ ನಿವಾಸದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯಕ್ಕೆ ನೀರು ಹೆಚ್ಚಿನ ರೀತಿಯಲ್ಲಿ ಹರಿದು ಬರುತ್ತದೆ.&lt;/p&gt;&lt;p&gt;ಪ್ರಸ್ತುತ ದಿನ ಜಲಾಶಯದಲ್ಲಿ 41 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹವಾದ ತಕ್ಷಣ ಎಡದಂಡೆ ಮತ್ತು ಬಲದಂಡೆ ಸೇರಿದಂತೆ ವಿಜಯನಗರ, ರಾಯಬಸವ ಮತ್ತು ಎಚ್.ಎಲ್ ಸಿ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ ಎಂದು ಭರವಸೆ ನೀಡಿದರು. ರಾಜ್ಯದಲ್ಲಿರುವ ಜಲಾಶಯಗಳು ಭರ್ತಿಯಾಗುತ್ತಿದ್ದು, ರೈತರಿಗೆ ತೊಂದರೆಯಾಗದಂತೆ ನೀರು ಹರಿಸಲಾಗುತ್ತದೆ ಎಂದರು. ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಕೃಷಿಗೂ ನೀರು ಪೂರೈಸುತ್ತದೆ ಎಂದ ಅವರು ಸಾಣಾಪುರ ಬಳಿ ಹೊಸ ಜಲಾಶಯ ನಿರ್ಮಿಸುವ ಕುರಿತು ರೈತರು ನೀಡಿದ ಮನವಿ ಕುರಿತು ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲಾಗುತ್ತದೆ ಎಂದರು.&lt;/p&gt;&lt;p&gt;ತುಂಗಭದ್ರಾ ಜಲಾಶಯದ ಗೇಟ್ ಮುರಿದು ಹೋಗಿದ್ದ ಸಂದರ್ಭದಲ್ಲಿ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಎಲ್ಲಾ ಗೇಟುಗಳ ದುರಸ್ತಿಗೆ ಮುಂದಾದರು. ಆಂಧ್ರ ಪ್ರದೇಶದ ಸಹಕಾರ ಪಡೆದು ಯುದ್ದೋಪಾದಿಯಲ್ಲಿ ದುರಸ್ತಿ ಕಾರ್ಯ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಮಾತನಾಡಿ, ಈ ಭಾಗದ ರೈತರಿಗೆ ಕಳೆದ ಎರಡು ಬೆಳೆಗಳು ಇಲ್ಲದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೆ ಸರಕಾರ ರೈತರ ಬಗ್ಗೆ ಕಾಳಜಿವಹಿಸ ಬೇಕೆಂದರು.&lt;/p&gt;&lt;h2&gt;&lt;strong&gt;ಎಲ್ಲರ ಅಭಿಪ್ರಾಯ ಪಡೆದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಶಿಫಾರಸ್ಸು&lt;/strong&gt;&lt;/h2&gt;&lt;p&gt;ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸೇರಿದಂತೆ ತಾಲೂಕಿನ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಪ್ರಾಯ ಪಡೆದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಶಿಫಾರಸ್ತು ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈಗಾಗಲೇ ಜಿಲ್ಲೆಯ ಎಲ್ಲಾ ಮುಖಂಡರನ್ನು ವೀಕ್ಷಕರು ಭೇಟಿಯಾಗಿದ ಅಭಿಪ್ರಾಯ ಪಡೆಯುತ್ತಿದ್ದಾರೆ. ಅದರಂತೆ ಗಂಗಾವತಿ ನಗರಕ್ಕೆ ವೀಕ್ಷಕರು ಆಗಮಿಸಿ ಅಭಿಪ್ರಾಯ ಪಡೆದು 5 ರಿಂದ6 ಜನ ಮುಖಂಡರ ಹೆಸರುರುಗಳನ್ನು ಕೆಪಿಸಿಸಿಗೆ ಕಳಿಸಿಕೊಡಲಾಗುತ್ತದೆ ಎಂದರು.&lt;/p&gt;&lt;p&gt;ಕಾಂಗ್ರೆಸ್ ಪಕ್ಷ ಸಂಘಟನೆ ಮತ್ತು ಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ನಾಯಕರನ್ನು ಗುರುತಿಸಲಾಗುತ್ತದೆ. ಇದಕ್ಕಾಗಿ ವೀಕ್ಷಕರ ತಂಡ ಇದೆ ಎಂದು ಹೇಳಿದರು. ಗಂಗಾವತಿ ನಗರದಲ್ಲಿ ಮೂರು ಕಾಂಗ್ರೆಸ್ ಗುಂಪುಗಾರಿಕೆ ಇದೆ ಎನ್ನುವುದಕ್ಕೆ ಇನ್ನು ಎರಡು ಮೂರು ತಿಂಗಳಲ್ಲಿ ಪಕ್ಷವನ್ನು ಸರಿಪಡಿಸಲಾಗುತ್ತದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು. ಈ ವೇಳೆ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ, ರಾಯಚೂರು ಎಪಿಎಂಸಿ ಮಾಜಿ ಅಧ್ಯಕ್ಷ ಶಾಂತಪ್ಪ ಇದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/water-to-be-released-from-tungabhadra-dam-after-80-tmc-ns-boseraju-gvd/articleshow-omcu7pp"/>
        </item>
        <item>
            <title><![CDATA[ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಜನಸಾಗರ: ಟೋಕನ್ ವ್ಯವಸ್ಥೆ ವಿರುದ್ಧ ಅಸಮಾಧಾನ]]></title>
            <link>https://kannada.asianetnews.com/karnataka-districts/gangavathi-aadhaar-update-rush-at-tahsildar-office-gvd/articleshow-p4t8sax</link>
            <guid isPermaLink="true">https://kannada.asianetnews.com/karnataka-districts/gangavathi-aadhaar-update-rush-at-tahsildar-office-gvd/articleshow-p4t8sax</guid>
            <pubDate>Mon, 13 Jul 2026 18:34:09 +0530</pubDate>
            <description><![CDATA[&lt;p&gt;Gangavathi: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವ್ಯಸ್ಥೆಯ ಆಗರವಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಒದಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxds7eykj6ppyh7paxz8ffhv,imgname-bbj-1783947836371.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/p&gt;&lt;p&gt;&lt;strong&gt;ಗಂಗಾವತಿ (ಜು.13): &lt;/strong&gt;ನಗರದ ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವ್ಯಸ್ಥೆಯ ಆಗರವಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಒದಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಆಧಾರ್ ಕಾರ್ಡುಗಳ ತಿದ್ದುಪಡಿ ಮತ್ತು ಹೊಸದಾಗಿ ಸೇರ್ಪಡೆ ಮಾಡುವ ಕಾರ್ಯ, ಈಗ ಪ್ರಾರಂಭವಾಗಿದ್ದು ಜನರು ಕಚೇರಿಯಲ್ಲಿ ನೂಕು ನುಗ್ಗಲು ನಡೆಸಿದ್ದಾರೆ.&lt;/p&gt;&lt;p&gt;ಸರ್ಕಾರ ಹೊಸ ಯೋಜನೆ ಅದರಲ್ಲಿ ಎಸ್&zwnj;ಐಆರ್, ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯ ಪುನರ್ ಪರಿಶೀಲನೆ ಘೋಷಿಸಿದ ಹಿನ್ನಲೆಯಲ್ಲಿ ಜನರು ಮೂಲ ಪ್ರಮಾಣ ಪತ್ರಗಳಿಗಾಗಿ ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದ್ದಾರೆ. ನಗರದ ತಹಶೀಲ್ದಾರ್ ಕಚೇರಿಯ ಪಡಸಾಲೆಯಲ್ಲಿ ಆಧಾರ್ ಕಾರ್ಡ್ ಪಡೆಯಲು ಸೋಮವಾರ ನೂಕು ನುಗ್ಗಲು ನಡೆಸಿದರು.&lt;/p&gt;&lt;h2&gt;&lt;strong&gt;40 ಟೋಕನ್ ವಿತರಣೆ&lt;/strong&gt;&lt;/h2&gt;&lt;p&gt;ನಗರ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಬರುವ ಜನರು ಬೆಳಿಗ್ಗೆಯಿಂದಲೆ ಟೋಕನ್ ಗಾಗಿ ಕಾಯುವ ಪರಿಸ್ಥಿತಿ ಒದಗಿದೆ. ಕಚೇರಿಯ ಪಡಸಾಲೆಯಲ್ಲಿ ಕೇವಲ 40 ಜನರಿಗೆ ಮಾತ್ರ ಟೋಕನ್ ನೀಡುತ್ತಿದ್ದಾರೆ. ಈ ಟೋಕನ್ ಪಡೆಯಲು ಜನರು ಹರಸಾಹಸ ಮಾಡುತ್ತಿದ್ದು, ಟೋಕನ್ ಪಡೆದ ನಂತರ ಆಧಾರ್ ಕಾರ್ಡುಗಳ ತಿದ್ದುಪಡಿಗೆ ಮತ್ತೆ ಸಾಹಸ ಮಾಡುವ ಪರಿಸ್ಥಿತಿ ಒದಗಿದೆ. ಈ ಹಿಂದೆ ಪಡಸಾಲೆಯಲ್ಲಿ ಎರಡು ಕೇಂದ್ರಗಳಿದ್ದವು. ನಂತರ ಒಂದು ಕೇಂದ್ರವನ್ನು ರದ್ದು ಪಡಿಸಿರುವದರಿಂದ ಈಗ ಕೇವಲ ಒಂದೇ ಕೇಂದ್ರದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಕಂಪ್ಯೂಟರ್ ಆಪರೇಟರುಗಳಿಂದ ಬಂದಿದೆ.&lt;/p&gt;&lt;p&gt;ಇದರಿಂದ ಕೆಲಸ ಮಾಡುವದಕ್ಕೆ ಆಪರೇಟರುಗಳಿಗೆ ಆಸ್ಪದ ಇಲ್ಲದಂತಾಗಿದೆ. ಗಂಗಾವತಿ ತಾಲೂಕಿನಲ್ಲಿ ಗಂಗಾವತಿ, ವೆಂಕಟಗಿರಿ ಹೋಬಳಿಯಲ್ಲಿ ಆಧಾರ್ ಕಾರ್ಡುಗಳ ತಿದ್ದುಪಡಿ ಮಾಡುವ ಕೇಂದ್ರ ಇತ್ತು ಈಗ ಅದು ರದ್ದಾಗಿದೆ. ಮರಳಿ ಹೋಬಳಿಯಲ್ಲಿ ಮಾತ್ರ ಆಧಾರ್ ಕಾರ್ಡುಗಳ ತಿದ್ದುಪುಡಿ ಮಾಡುವ ಅವಕಾಶ ಇರುವುದರಿಂದ ಜನರು ದಿನ ನಿತ್ಯ ಅಲೆದಾಡುವ ಪರಿಸ್ಥಿತಿ ಒದಗಿದೆ.&lt;/p&gt;&lt;p&gt;ಗಂಗಾವತಿ ತಹಶೀಲ್ದಾರ್ ಕಚೇರಿ ಅವ್ಯವ್ಯಸ್ಥೆಯ ಆಗರವಾಗಿದೆ. ಆಧಾರ್ ಕಾರ್ಡುಗಳ ತಿದ್ದುಪಡಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳು ಪಡೆಯ ಬೇಕಾದರೆ ಒಂದು ದಿನ ಕಚೇರಿಯಲ್ಲಿ ಕಳೆಯುವ ಪರಿಸ್ಥಿತಿ ಇದೆ. ಸಮಸ್ಯೆ ಹೇಳಬೇಕಾದರೆ ಹೊಸದಾಗಿ ಬಂದ ತಹಸೀಲ್ದಾರರು ಕಚೇರಿಯಲ್ಲಿ ಸಿಗುತ್ತಿಲ್ಲ. ಇದರಿಂದ ಆಧಾರ್ ಕಾರ್ಡುಗಳ ತಿದ್ದುಪಡಿಗಾಗಿ ನೂಕು ನುಗ್ಗಲು ನಡೆಯುತ್ತಿದೆ.-ತಿಮ್ಮಪ್ಪ, ಗಂಗಾವತಿ&lt;/p&gt;&lt;p&gt;ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಆಧಾರ್ ಕಾರ್ಡು ತಿದ್ದುಪಡಿಗಾಗಿ ನೂಕು ನುಗ್ಗಲು ನಡೆದಿದೆ ಎಂದು ಗೊತ್ತಾಗಿದೆ. ಇವತ್ತು ಪ್ರಭಾರಿ ಗ್ರೇಡ್ -2 ತಹಸೀಲ್ದಾರರಾಗಿ ಇವತ್ತು ಹಾಜರಾಗಿದ್ದೇನೆ. ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ.-ಷಣ್ಮುಖಪ್ಪ, ಪ್ರಭಾರಿ ಗ್ರೇಡ್-2 ತಹಶೀಲ್ದಾರ್, ಗಂಗಾವತಿ&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-aadhaar-update-rush-at-tahsildar-office-gvd/articleshow-p4t8sax"/>
        </item>
        <item>
            <title><![CDATA[ಹೆಂಡ್ತಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಧರಣಿ ಕುಳಿತ ಗಂಡ! ₹2,000 ಯೋಜನೆಯ ಹಣಕ್ಕೆ ₹25,000 ಖರ್ಚು ಮಾಡಿದ ಪತಿ!]]></title>
            <link>https://kannada.asianetnews.com/gallery/karnataka-districts/koppal-guest-teacher-husband-protest-for-wife-gruha-lakshmi-scheme-2000-money-sat-vzgqgdr</link>
            <guid isPermaLink="true">https://kannada.asianetnews.com/gallery/karnataka-districts/koppal-guest-teacher-husband-protest-for-wife-gruha-lakshmi-scheme-2000-money-sat-vzgqgdr</guid>
            <pubDate>Wed, 22 Jul 2026 14:20:06 +0530</pubDate>
            <description><![CDATA[ಕೊಪ್ಪಳದಲ್ಲಿ, ಗೃಹಲಕ್ಷ್ಮಿ ಯೋಜನೆಯ ಹಣ ಪತ್ನಿಗೆ ಬಾರದಿದ್ದಕ್ಕೆ ಪತಿಯೊಬ್ಬರು ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅತಿಥಿ ಶಿಕ್ಷಕಿಯಾಗಿರುವ ಪತ್ನಿಯ ಖಾತೆಗೆ ಹಣ ಜಮೆಯಾಗದ ಕಾರಣ, ಈವರೆಗೆ ₹25,000 ಖರ್ಚು ಮಾಡಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky4fqa4xmqqhxn35ctbfx04b,imgname-koppal-husband-protest-for-wife-gruha-lakshmi-scheme-money-1784709621916.jpg" type="image/jpeg" height="390" width="690"/>
            <content:encoded><![CDATA[ಕೊಪ್ಪಳದಲ್ಲಿ, ಗೃಹಲಕ್ಷ್ಮಿ ಯೋಜನೆಯ ಹಣ ಪತ್ನಿಗೆ ಬಾರದಿದ್ದಕ್ಕೆ ಪತಿಯೊಬ್ಬರು ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅತಿಥಿ ಶಿಕ್ಷಕಿಯಾಗಿರುವ ಪತ್ನಿಯ ಖಾತೆಗೆ ಹಣ ಜಮೆಯಾಗದ ಕಾರಣ, ಈವರೆಗೆ ₹25,000 ಖರ್ಚು ಮಾಡಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.&lt;img&gt;&lt;p&gt;ಕೊಪ್ಪಳ (ಜು.22): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅಡಿ ಪ್ರತಿ ತಿಂಗಳು ₹2,000 ಪಡೆಯಲು ಸಾವಿರಾರು ಮಹಿಳೆಯರು ಇಂದಿಗೂ ಕಾಯುತ್ತಿದ್ದಾರೆ. ಆದರೆ ಕೊಪ್ಪಳದಲ್ಲಿ (Koppal) ಪತ್ನಿಗೆ ಬರಬೇಕಾದ ಈ ಹಣಕ್ಕಾಗಿ ಪತಿಯೊಬ್ಬರು ಜಿಲ್ಲಾ ಆಡಳಿತ ಭವನದ ಮುಂದೆ ಏಕಾಂಗಿಯಾಗಿ ಪ್ರತಿಭಟನೆಗೆ (Protest) ಕುಳಿತಿರುವುದು ಎಲ್ಲರ ಗಮನ ಸೆಳೆಯುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಏನಿದು ಪ್ರಕರಣ?&amp;nbsp;&lt;/strong&gt;&lt;/p&gt;&lt;p&gt;ಕುಷ್ಟಗಿ ತಾಲ್ಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೋವಿ ಅವರ ಪತ್ನಿ ಶಿಲ್ಪಾ ಭೋವಿ ಅವರು ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ (Guest Teacher) ಕೆಲಸ ಮಾಡುತ್ತಿದ್ದಾರೆ. ಯೋಜನೆ ಜಾರಿಯಾದಾಗಿನಿಂದಲೂ ಶಿಲ್ಪಾ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾಗಿಲ್ಲ. ಇದರಿಂದ ಬೇಸತ್ತ ಪತಿ ಶರಣಪ್ಪ, ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;₹25,000 ಖರ್ಚು ಮಾಡಿದ ಶರಣಪ್ಪ!&lt;/strong&gt;&lt;/p&gt;&lt;p&gt;ಶರಣಪ್ಪ ಭೋವಿ ಅವರ ಪ್ರಕಾರ, ಕಳೆದ ಮೂರು ವರ್ಷಗಳಿಂದ (ಯೋಜನೆಯ ಆರಂಭದಿಂದ) ಹಣ ಪಡೆಯಲು ಆನ್&zwnj;ಲೈನ್ ಅಪ್ಲಿಕೇಶನ್ (Online Application) ಸಲ್ಲಿಸಲು ಮತ್ತು ತಾಂತ್ರಿಕ ದೋಷಗಳನ್ನು ಸರಿಪಡಿಸಲು ಹತ್ತಾರು ಕಚೇರಿಗಳಿಗೆ ಅಲೆದಾಡಿದ್ದಾರೆ. ಈ ಅಲೆದಾಟದಲ್ಲಿ ಅವರು ಇದುವರೆಗೆ ಬರೋಬ್ಬರಿ ₹25,000 ಖರ್ಚು ಮಾಡಿಕೊಂಡಿದ್ದಾರೆ! 'ಬರಬೇಕಾದ ಹಣ ಎರಡು ಸಾವಿರ, ಆದರೆ ಅದನ್ನು ಪಡೆಯಲು ನಾನು ಮಾಡಿದ ಖರ್ಚು ₹25,000 (ಇಪ್ಪತ್ತೈದು ಸಾವಿರ)' ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಅಧಿಕಾರಿಗಳ ಹಾರಿಕೆ ಉತ್ತರ&amp;nbsp;&lt;/strong&gt;&lt;/p&gt;&lt;p&gt;ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women and Child Development Department) ಅಧಿಕಾರಿಗಳನ್ನು ಭೇಟಿ ಮಾಡಿದರೆ, ಕೇವಲ &quot;ತಾಂತ್ರಿಕ ಕಾರಣ&quot; (Technical Issues) ಎನ್ನುವ ನೆಪವೊಡ್ಡುತ್ತಿದ್ದಾರೆ ಎಂದು ಶರಣಪ್ಪ ಆರೋಪಿಸಿದ್ದಾರೆ. ಪದೇ ಪದೇ ಅರ್ಜಿ ಸಲ್ಲಿಸಿದರೂ ಫಲ ಸಿಗದಿದ್ದಾಗ, ತಾವು ಖರ್ಚು ಮಾಡಿರುವ ₹25,000 ಹಣವನ್ನೇ ಸರ್ಕಾರ ವಾಪಸ್ ನೀಡಲಿ ಎಂದು ಅವರು ಮುಖ್ಯಮಂತ್ರಿಗಳು ಮತ್ತು ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಪತ್ರ ಬರೆದಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ನ್ಯಾಯ ಸಿಗುವವರೆಗೂ ಹೋರಾಟ:&lt;/strong&gt;&lt;/p&gt;&lt;p&gt;&lsquo;ನನ್ನ ಪತ್ನಿ ಒಬ್ಬ ಅತಿಥಿ ಶಿಕ್ಷಕಿಯಾಗಿದ್ದರೂ ಅವಳಿಗೆ ಸರ್ಕಾರದ ಸವಲತ್ತು ಸಿಗುತ್ತಿಲ್ಲ ಎಂದರೆ ಸಾಮಾನ್ಯ ಜನರ ಪರಿಸ್ಥಿತಿ ಏನು?&rsquo; ಎಂದು ಪ್ರಶ್ನಿಸಿರುವ ಶರಣಪ್ಪ, ಪತ್ನಿಯ ಖಾತೆಗೆ ಗೃಹಲಕ್ಷ್ಮಿ ಹಣ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/koppal-guest-teacher-husband-protest-for-wife-gruha-lakshmi-scheme-2000-money-sat-vzgqgdr"/>
        </item>
        <item>
            <title><![CDATA[ಶ್ರೀನಾಥ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ: ಎಐಸಿಸಿ ವೀಕ್ಷಕ ವಿವೇಕ್ ಬನಸಾಲ್‌ಗೆ ಕಾಂಗ್ರೆಸ್ ಕಾರ್ಯಕರ್ತರ ಮನವಿ]]></title>
            <link>https://kannada.asianetnews.com/karnataka-districts/congress-workers-urge-vivek-bansal-to-recommend-hr-srinath-for-corporation-board-post-gvd/articleshow-wgid7fr</link>
            <guid isPermaLink="true">https://kannada.asianetnews.com/karnataka-districts/congress-workers-urge-vivek-bansal-to-recommend-hr-srinath-for-corporation-board-post-gvd/articleshow-wgid7fr</guid>
            <pubDate>Tue, 04 Aug 2026 18:11:45 +0530</pubDate>
            <description><![CDATA[&lt;p&gt;Gangavathi Congress: ನಗರದ ಮಾಜಿ ಸಂಸದ ಹಾಗು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಎಚ್.ಜಿ.ರಾಮುಲು ನಿವಾಸಕ್ಕೆ ಎಐಸಿಸಿ ವೀಕ್ಷಕರಾಗಿರುವ ವಿವೇಕ್ ಬನಸಾಲ ಅವರು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz6cjkkbj1pt1h2rj1v01a99,imgname-b-bmb-1785847172715.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಆ.04):&lt;/strong&gt; ನಗರದ ಮಾಜಿ ಸಂಸದ ಹಾಗು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಎಚ್.ಜಿ.ರಾಮುಲು ನಿವಾಸಕ್ಕೆ ಎಐಸಿಸಿ ವೀಕ್ಷಕರಾಗಿರುವ ವಿವೇಕ್ ಬನಸಾಲ ಅವರು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಘಟಕಗಳ ಕಾಂಗ್ರೆಸ್ ಅಧ್ಯಕ್ಷರುಗಳು ಮತ್ತು ಪದಾದಿಕಾರಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಪಡೆದರು.&lt;/p&gt;&lt;p&gt;ನಂತರ ರಾಮುಲು ನಿವಾಸಕ್ಕೆ ಆಗಮಿಸಿ ಜಿಲ್ಲೆ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದ ಪಕ್ಷದ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ .ಆರ್ ಶ್ರೀನಾಥ್ ಅವರು ವಿವೇಕ್ ಬನಸಾಲ ಅವರನ್ನು ಸನ್ಮಾನಿಸಿದರು. ಓಬಿಸಿ ರಾಜ್ಯ ಘಟಕದ ಉಪಾಧ್ಯಕ್ಷರಾದ ರಾಜಶೇಖರ್ ಮುಷ್ಟೂರ್. ಮುಖಂಡರಾದ ರಮೇಶ್ ಗೌಳಿ ಉಪಸ್ಥಿತರಿದ್ದರು .&lt;/p&gt;&lt;h2&gt;&lt;strong&gt;ಶ್ರೀನಾಥ ಅವರಿಗೆ ಅವಕಾಶ ಕೊಡುವಂತೆ ಒತ್ತಾಯ&lt;/strong&gt;&lt;/h2&gt;&lt;p&gt;ಮಾಜಿ ಸಂಸದ ಹಾಗು ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ಎಚ್.ಜಿ.ರಾಮುಲು ಅವರ ಪುತ್ರ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರಿಗೆ ಪ್ರಸ್ತುತ ಸರ್ಕಾರದಲ್ಲಿ ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಎಐಸಿಸಿ ವೀಕ್ಷಕರಿಗೆ ಒತ್ತಾಯಿಸಿದರು.&lt;/p&gt;&lt;p&gt;ಶ್ರೀನಾಥ ಅವರು ಎರಡು ಭಾರಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದಲ್ಲದೆ ಇವರ ಅಧಿಕಾರವಧಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸೇರಿದಂತೆ ಗ್ರಾಮ ಪಂಚಾಯಿತಿಗಳು ಕಾಂಗ್ರೆಸ್ ಪಕ್ಷದ ಆಡಳಿತ ನಡೆಸುವಂತೆ ಸಂಘಟಿಸಿದ್ದರು. ಅಲ್ಲದೇ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದರು. ಇವರಿಂದ ಪಕ್ಷ ಸಂಘಟನೆ ಮಾಡುವದಲ್ಲದೆ ಕ್ಷೇತ್ರದ ಕಾರ್ಯಕರ್ತರಿಗೆ ಸ್ಪಂದಿಸುತ್ತಾರೆ. ಕಾರಣ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನೇತೃತ್ವದ ಸರ್ಕಾರದಲ್ಲಿ ನಿಗಮ ಮಂಡಳಿಗೆ ನೇಮಕ ಮಾಡುವಂತೆ ಒತ್ತಾಯಿಸಿದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/congress-workers-urge-vivek-bansal-to-recommend-hr-srinath-for-corporation-board-post-gvd/articleshow-wgid7fr"/>
        </item>
    </channel>
</rss>
