<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 16 Sep 2026 09:12:45 +0530</lastBuildDate>
        <atom:link href="https://kannada.asianetnews.com/rss/koppal" rel="self" type="application/rss+xml"/>
        <item>
            <title><![CDATA[ಒಂದು ಸರ್ಕಾರಿ ಶಾಲೆ 10 ವಿದ್ಯಾರ್ಥಿಗಳು, 3 ಶಿಕ್ಷಕರು: ₹1000 ಕೊಟ್ಟರೂ ಅಡ್ಮಿಷನ್ ಮಾಡಲು ಬರ್ತಿಲ್ಲ ಮಕ್ಕಳು!]]></title>
            <link>https://kannada.asianetnews.com/karnataka-districts/koppal-government-school-declining-students-headmaster-offers-1000-rupees-incentive-sat/articleshow-46gig98</link>
            <guid isPermaLink="true">https://kannada.asianetnews.com/karnataka-districts/koppal-government-school-declining-students-headmaster-offers-1000-rupees-incentive-sat/articleshow-46gig98</guid>
            <pubDate>Thu, 10 Sep 2026 07:30:03 +0530</pubDate>
            <description><![CDATA[ಕೊಪ್ಪಳದ ಸಿರಸಪ್ಪಯ್ಯನ ಮಠದ ಬಳಿಯ ಸರ್ಕಾರಿ ಶಾಲೆಯು ಮಕ್ಕಳ ಸಂಖ್ಯೆಯ ತೀವ್ರ ಕುಸಿತವನ್ನು ಎದುರಿಸುತ್ತಿದೆ. ಹಿಂದೆ ನೂರಾರು ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ಈ ಶಾಲೆಯಲ್ಲಿ ಈಗ ಕೇವಲ 25 ಮಕ್ಕಳಿದ್ದು, ಅವರಿಗೆ ಮೂವರು ಶಿಕ್ಷಕರಿದ್ದಾರೆ. ಸಮೀಪದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿರುವುದೇ ಈ ಸ್ಥಿತಿಗೆ ಪ್ರಮುಖ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24ggechz5x7cng326xpbt4t,imgname-gemini-generated-image-7qha557qha557qha-1789005412753.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ- ಸೋಮರಡ್ಡಿ ಅಳವಂಡಿ&lt;/strong&gt;&lt;/p&gt;&lt;p&gt;&lt;strong&gt;ಕೊಪ್ಪಳ:&lt;/strong&gt; 1ರಿಂದ 7ನೇ ತರಗತಿ ವರೆಗೂ ಶಾಲೆ ಇದ್ದರೂ ಇಲ್ಲಿ ದಾಖಲಾಗಿರುವುದು ಕೇವಲ 25 ಮಕ್ಕಳು. ಇದರಲ್ಲಿ 10ರಿಂದ 15 ಮಕ್ಕಳು ಮಾತ್ರ ಶಾಲೆಗೆ ಬರುತ್ತಿದ್ದು, ಅವರಿಗೆ ಮೂವರು ಶಿಕ್ಷಕರು ಪಾಠ ಬೋಧಿಸುತ್ತಾರೆ.&lt;/p&gt;&lt;p&gt;ಇದು ನಗರದ ಸಿರಸಪ್ಪಯ್ಯನ ಮಠದ ಬಳಿ ಇರುವ ಸರ್ಕಾರಿ ಶಾಲೆಯ ವಾಸ್ತವ ಸ್ಥಿತಿ.&lt;/p&gt;&lt;p&gt;ಕಳೆದ ಮೂರು ವರ್ಷಗಳ ಹಿಂದೆ ನೂರಾರು ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ಈ ಶಾಲೆ ಈಗ ಮಕ್ಕಳ ಸಂಖ್ಯೆ ಕೊರತೆಯಿಂದ ಬಿಕೋ ಎನ್ನುತ್ತಿದೆ. ಶಾಲೆ ಅತ್ಯುತ್ತಮ ಮೈದಾನ ಮತ್ತು ಬೇಕಿರುವಷ್ಟು ಕೊಠಡಿಗಳನ್ನು ಹೊಂದಿದೆ. ಆದರೆ, ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು ಈಗ ಕೇವಲ 25 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. 1ರಿಂದ 7ನೇ ತರಗತಿ ಇರುವ ಈ ಶಾಲೆಯಲ್ಲಿ ಕೆಲವೊಂದು ತರಗತಿಗೆ ಓರ್ವನೇ ವಿದ್ಯಾರ್ಥಿ ಇದ್ದಾರೆ.&lt;/p&gt;&lt;h2&gt;&lt;strong&gt;ಮೂವರು ಶಿಕ್ಷಕರು:&amp;nbsp;&lt;/strong&gt;&lt;/h2&gt;&lt;p&gt;ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೀಡಿದರೆ ಕೇವಲ ಒಬ್ಬರು ಶಿಕ್ಷಕರು ಮಾತ್ರ ಈ ಶಾಲೆಯಲ್ಲಿ ಇರಬೇಕಾಗುತ್ತದೆ. ಆದರೂ ಓರ್ವ ಕಾಯಂ ಶಿಕ್ಷಕರಿದ್ದು , ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಿಸಲು ಪ್ರಭಾರಿ ಮುಖ್ಯೋಪಾಧ್ಯಾಯ ಪ್ರಹ್ಲಾದ್&zwnj; ಹೂಗಾರ ಅವರು ಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ₹ 1000 ಪ್ರೋತ್ಸಾಹಧನ ನೀಡುತ್ತಿದ್ದಾರೆ. ಆದರೂ ಸಹ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿಲ್ಲ.&lt;/p&gt;&lt;h2&gt;&lt;strong&gt;ಆಂಗ್ಲ ಮಾಧ್ಯಮದಿಂದ ಹೊಡೆತ:&amp;nbsp;&lt;/strong&gt;&lt;/h2&gt;&lt;p&gt;ಸಿರಪ್ಪಯ್ಯನಮಠ ಶಾಲೆಯಿಂದ ಕೂಗಳತೆ ದೂರದಲ್ಲಿ ಮೌಲಾನ್&zwnj; ಆಜಾದ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪಬ್ಲಿಕ್ ಶಾಲೆ ಆರಂಭವಾಗಿರುವುದರಿಂದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿಯಲು ಕಾರಣವಾಗಿದೆ. ಈ ಶಾಲೆಗಳು ಪ್ರಾರಂಭವಾಗುವ ಮುನ್ನ ಸಿರಪ್ಪಯ್ಯನ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ನೂರಾರು ಸಂಖ್ಯೆಯಲ್ಲಿದ್ದರು. ಇದು ಇದೊಂದೆ ಶಾಲೆಯ ಚಿತ್ರಣವಲ್ಲ. ಎಲ್ಲೆಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ನಿರ್ಮಿಸಿದೆಯೋ ಅಲ್ಲಿ ಕನ್ನಡ ಮಾಧ್ಯಮ ಶಾಲೆಗಳ ದಾಖಲಾತಿಯಲ್ಲಿ ಭಾರೀ ಕುಸಿತ ಕಂಡಿದೆ.&lt;/p&gt;&lt;p&gt;ಶಾಲೆಗೆ ಮಕ್ಕಳನ್ನು ಕರೆ ತರಲು ಪ್ರಯತ್ನಿಸಿದರೂ ಬರುತ್ತಿಲ್ಲ. ನೂತನವಾಗಿ ಪ್ರವೇಶ ಪಡೆಯುವ ಮಕ್ಕಳಿಗೆ ₹ 1000 ಪ್ರೋತ್ಸಾಧನವನ್ನು ನಾನೇ ಕೊಡುತ್ತಿದ್ದೇನೆ. ಆದರೂ ಈ ವರ್ಷ ಶಾಲೆಗೆ ಮಕ್ಕಳು ದಾಖಲಿಸಿಲ್ಲ ಎಂದು ಪ್ರಭಾರಿ ಮುಖ್ಯೋಪಾಧ್ಯಾಯ&lt;strong&gt; ಪ್ರಹ್ಲಾದ ಹೂಗಾರ &lt;/strong&gt;ಹೇಳಿದರು.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/koppal-government-school-declining-students-headmaster-offers-1000-rupees-incentive-sat/articleshow-46gig98"/>
        </item>
        <item>
            <title><![CDATA['ಬೇರೆ ಧರ್ಮದವರಿಗೆ ತೊಂದರೆ ಕೊಡಬೇಡಿ': ಗಣೇಶ ಹಬ್ಬಕ್ಕೂ ಮುನ್ನ ಎಸ್‌ಪಿ ಸಾಹಿಲ್ ಖಡಕ್ ಸೂಚನೆ!]]></title>
            <link>https://kannada.asianetnews.com/karnataka-districts/koppal-gangavathi-ganesha-festival-sp-sahil-bagla-urges-peace-and-harmony-strict-instructions-gvd/articleshow-84g6tf6</link>
            <guid isPermaLink="true">https://kannada.asianetnews.com/karnataka-districts/koppal-gangavathi-ganesha-festival-sp-sahil-bagla-urges-peace-and-harmony-strict-instructions-gvd/articleshow-84g6tf6</guid>
            <pubDate>Fri, 11 Sep 2026 21:47:02 +0530</pubDate>
            <description><![CDATA[&lt;p&gt;ಗಂಗಾವತಿಯಲ್ಲಿ 150ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ. ಗಣೇಶ ಹಬ್ಬದ ಮುನ್ನ ಎಸ್&zwnj;ಪಿ ಸಾಹಿಲ್ ಬಾಗ್ಲಾ ಸೌಹಾರ್ದತೆ ಕಾಪಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಹಬ್ಬದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m28m2qmt3t6whqsws4bv6wcr,imgname-v-1789143375514.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಸೆ.11): &lt;/strong&gt;ಗಣೇಶ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಅನಗತ್ಯವಾಗಿ ಬೇರೆ ಧರ್ಮದವರಿಗೆ ತೊಂದರೆ ಉಂಟುಮಾಡುವಂತಹ ಯಾವುದೇ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಹೇಳಿದರು.&lt;/p&gt;&lt;p&gt;ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಂಗಾವತಿ ನಗರದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹೀಗಾಗಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳು ಶಾಂತಿ ಹಾಗೂ ಸೌಹಾರ್ದತೆಯಿಂದ ನಡೆಯುವಂತೆ ಎಲ್ಲರೂ ಸಹಕರಿಸಬೇಕು ಎಂದರು.&lt;/p&gt;&lt;p&gt;ಗಣೇಶ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯಿಂದ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗಣೇಶ ಮಂಟಪಗಳಿಗಾಗಿ ಜೆಸ್ಕಾಂ, ಅರಣ್ಯ ಇಲಾಖೆ ಹಾಗೂ ನಗರಸಭೆಯಿಂದ ಅಗತ್ಯ ಪರವಾನಿಗೆಗಳನ್ನು ಪಡೆಯಬೇಕು ಎಂದು ಸೂಚಿಸಿದರು.&lt;img&gt;&lt;/p&gt;&lt;p&gt;ವಿಸರ್ಜನೆ ಸಂದರ್ಭದಲ್ಲಿ ದಾಸನಾಳ ಹಾಗೂ ಕಂಪ್ಲಿ ತುಂಗಭದ್ರಾ ಸೇತುವೆ ಬಳಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಎಸ್&zwnj;ಪಿ ಸಾಹಿಲ್ ಬಾಗ್ಲಾ ಮನವಿ ಮಾಡಿದರು.&lt;/p&gt;&lt;p&gt;&lt;strong&gt;ಗಣೇಶ ಹಬ್ಬ ಸಂಘಟನೆಯ ಉದ್ದೇಶವಾಗಲಿ&lt;/strong&gt;&lt;/p&gt;&lt;p&gt;ಮಾಜಿ ಸಂಸದ ಶಿವರಾಮ ಗೌಡ ಮಾತನಾಡಿ, ಗಣೇಶ ಹಬ್ಬದ ಆಚರಣೆ ಸಂಘಟನೆಯ ಉದ್ದೇಶದಿಂದ ನಡೆಯಬೇಕು. ಹಬ್ಬದ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ಭಾವೈಕ್ಯತೆಯ ನಗರವಾಗಿದೆ. ಈ ಹಿಂದೆ ಭಾವೈಕ್ಯತೆಯ ಪ್ರತೀಕವಾಗಿ ಎಂ.ಎಸ್. ಅನ್ಸಾರಿ ಅವರು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಪಾಲ್ಗೊಂಡು ಸೌಹಾರ್ದತೆ ಮೆರೆದಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.&lt;/p&gt;&lt;p&gt;ಗಣೇಶ ಮಂಟಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕು. ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಅಂಬ್ಯುಲೆನ್ಸ್, ಜೆಸಿಬಿ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಡಿಜೆ ಬಳಕೆಯಲ್ಲೂ ನಿಯಮಗಳನ್ನು ಪಾಲಿಸುವಂತೆ ಕ್ರಮ ಕೈಗೊಂಡು ಸೌಹಾರ್ದತೆಯಿಂದ ಹಬ್ಬ ಆಚರಿಸುವ ವಾತಾವರಣ ನಿರ್ಮಿಸಬೇಕು ಎಂದು ಅವರು ಮನವಿ ಮಾಡಿದರು.&lt;img&gt;&lt;/p&gt;&lt;p&gt;ನಗರಸಭೆ ಮಾಜಿ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಮಾತನಾಡಿ, ಡಿಜೆ ಸೌಂಡ್&zwnj;ಗೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾರ್ಗಸೂಚಿ ಹಾಗೂ ಘೋಷಣೆ ಮಾಡಬೇಕು. ಮೊದಲನೇ ಗಣಪತಿಗೆ ಮಾತ್ರ ಅವಕಾಶ ನೀಡಿ, ಕೊನೆಯ ಗಣಪತಿ ವಿಸರ್ಜನೆ ಮಾಡುವವರಿಗೆ ಅವಕಾಶ ನೀಡದಂತಹ ತಾರತಮ್ಯ ಮಾಡಬಾರದು. ಪರವಾನಿಗೆ ನೀಡುವಲ್ಲಿ ಯಾವುದೇ ಗೊಂದಲವಿದ್ದರೆ ಎಲ್ಲ ಗಣೇಶ ಮೂರ್ತಿಗಳ ವಿಸರ್ಜನೆಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.&lt;/p&gt;&lt;p&gt;ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಗಣೇಶ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;ಸಭೆಯಲ್ಲಿ ತಹಸೀಲ್ದಾರ್ ವಸಂತಕುಮಾರಿ, ಇಒ ರಂಗಪ್ಪರೆಡ್ಡಿ, ಇಲಿಯಾಸ್ ಖಾದ್ರಿ, ಪಿಐ ಪ್ರಕಾಶ ಯಾತನೂರು, ಸಿಪಿಐ ರಂಗಪ್ಪ, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಹಾಗೂ ಡಿವೈಎಸ್&zwnj;ಪಿ ಜಾಯಪ್ಪ ನ್ಯಾಮಗೌಡರ್ ಉಪಸ್ಥಿತರಿದ್ದರು. ವಿನಯ ಪಾಟೀಲ್, ಶರಣಪ್ಪ, ನೀಲಕಂಠ ನಾಗಶಟ್ಟಿ, ಉಸ್ಮಾನ್, ಕಾಶಿನಾಥ್ ಚಿತ್ರಗಾರ, ವಿರೂಪಾಕ್ಷಗೌಡ ನಾಯಕ, ಪಂಪಣ್ಣ ನಾಯಕ, ಎಸ್.ಎಚ್. ಮುಧೋಳ್ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿ ತಮ್ಮ ಸಲಹೆಗಳನ್ನು ನೀಡಿದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-gangavathi-ganesha-festival-sp-sahil-bagla-urges-peace-and-harmony-strict-instructions-gvd/articleshow-84g6tf6"/>
        </item>
        <item>
            <title><![CDATA[ಕೊಪ್ಪಳ: ಮನೇಲಿ ಕೂಲಿಗೆ ಹೋಗು ಅಂದಿದ್ದಕ್ಕೆ AI ನಲ್ಲಿ ಹುಲಿ ಸೃಷ್ಟಿಸಿ ಆತಂಕ, ಮೈಗಳ್ಳನಿಗೆ 50 ಬಸ್ಕಿ ಹೊಡೆಸಿದ ಅರಣ್ಯ ಸಿಬ್ಬಂದಿ!]]></title>
            <link>https://kannada.asianetnews.com/gallery/karnataka-districts/a-youth-from-kavali-village-in-koppal-created-ai-tiger-shared-it-on-instagram-to-skip-work-villagers-panic-rav-9vqocgz</link>
            <guid isPermaLink="true">https://kannada.asianetnews.com/gallery/karnataka-districts/a-youth-from-kavali-village-in-koppal-created-ai-tiger-shared-it-on-instagram-to-skip-work-villagers-panic-rav-9vqocgz</guid>
            <pubDate>Sun, 06 Sep 2026 10:50:53 +0530</pubDate>
            <description><![CDATA[&lt;p&gt;AI ತಂತ್ರಜ್ಞಾನ ಯುವಕರ ಕೈಗೆ ಬಂದ ನಂತರ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚುತ್ತಿದೆ, ಅನುಕೂಲಕ್ಕಿಂತ ಅನಾಹುತವೇ ಸೃಷ್ಟಿಸುತ್ತಿದೆ ಎಂಬುದಕ್ಕೆ ಇಲ್ಲೊಂದು ಘಟನೆ ತಾಜಾ ನಿದರ್ಶನವಾಗಿದೆ. ಕೊಪ್ಪಳದ ಕವಳಿ ಗ್ರಾಮ ಹುಡುಗನೊಬ್ಬ ಕೆಲಸ ತಪ್ಪಿಸಲು ಎಐ ಬಳಸಿ ಅನಾಹುತ ಸೃಷ್ಟಿಸಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1thkjje9qcp85f9280tg6p4,imgname-koppal-ai-tiger-1788671019598.jpg" type="image/jpeg" height="390" width="690"/>
            <content:encoded><![CDATA[&lt;p&gt;AI ತಂತ್ರಜ್ಞಾನ ಯುವಕರ ಕೈಗೆ ಬಂದ ನಂತರ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚುತ್ತಿದೆ, ಅನುಕೂಲಕ್ಕಿಂತ ಅನಾಹುತವೇ ಸೃಷ್ಟಿಸುತ್ತಿದೆ ಎಂಬುದಕ್ಕೆ ಇಲ್ಲೊಂದು ಘಟನೆ ತಾಜಾ ನಿದರ್ಶನವಾಗಿದೆ. ಕೊಪ್ಪಳದ ಕವಳಿ ಗ್ರಾಮ ಹುಡುಗನೊಬ್ಬ ಕೆಲಸ ತಪ್ಪಿಸಲು ಎಐ ಬಳಸಿ ಅನಾಹುತ ಸೃಷ್ಟಿಸಿದ್ದಾನೆ.&lt;/p&gt;&lt;img&gt;&lt;p&gt;ಕೊಪ್ಪಳದ ಕವಳಿ ಗ್ರಾಮದ ಈರಣ್ಣ ಎಂಬ ಹುಡುಗ ಎಐ ಸೃಷ್ಟಿಸಿ ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆಗೆಡಿಸಿದ ಅಸಾಮಿ. ಈರಣ್ಣ ಪೋಷಕರು ಬಡವರು. ದೈನಂದಿನ ಜೀವನ ನಿರ್ವಹಣೆಗೆ ಕೂಲಿ ಮಾಡಬೇಕಾದ ಅನಿವಾರ್ಯತೆ. ಇಂಥ ಪರಿಸ್ಥಿತಿಯಲ್ಲಿ ಒಬ್ಬರೇ ದುಡಿದರೆ ಆಗದು ಅಂತಾ ಮಗ ಈರಣ್ಣನಿಗೆ ಕೆಲಸಕ್ಕೆ ಹೋಗುವಂತೆ ಹೇಳಿದ್ದಾರೆ. ಆದರೆ ಈರಣ್ಣ ಸೋಮಾರಿತನ ಕೂಲಿ ಕೆಲಸ ಮಾಡಲು ಇಷ್ಟವಿಲ್ಲದಿರುವುದು ಹೇಗಾದರೂ ಕೂಲಿಗೆ ಹೋಗುವುದು ತಪ್ಪಿಸಲು ಇಂಥ ಅನಾಹುತ ಸೃಷ್ಟಿಸಿದ್ದಾನೆ. ಎಐನಲ್ಲಿ ಹುಲಿ ಸೃಷ್ಟಿ, ಗುಡ್ಡದಲ್ಲಿ ಹುಲಿ ಬಂದಿದೆ ಅಂತಾ ಇನ್ಸ್&zwnj;ಟಾಗ್ರಾಮ್&zwnj; ನಲ್ಲಿ ಶೇರ್&zwnj; ಮಾಡಿಕೊಂಡಿದ್ದ ಯುವಕ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ.&lt;/p&gt;&lt;img&gt;&lt;p&gt;ಕೂಲಿ ಕೆಲಸದಿಂದ ತಪ್ಪಿಸಿಕೊಳ್ಳು ಎಐ ನಲ್ಲಿ ಹುಲಿ ಸೃಷ್ಟಿಸಿ ಆತಂಕ ಸೃಷ್ಟಿಸಿದ ಯುವಕನಿಗೆ ಅರಣ್ಯಾಧಿಕಾರಿಗಳು ತಕ್ಕ ಶಾಸ್ತಿ ಮಾಡಿದ್ದಾರೆ. ಯುವಕ ಇದ್ದಲ್ಲಿಗೆ ತೆರಳಿದ ಅರಣ್ಯ ಸಿಬ್ಬಂದಿ 50 ಬಸ್ಕಿ ಹೊಡೆಸಿದ್ದಾರೆ. ಅರಣ್ಯ ಸಿಬ್ಬಂದಿ ವಿಚಾರಣೆ ವೇಳೆ ಕೆಲಸದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದೆ ಅಂತಾ ಈರಣ್ಣ ತಪ್ಪೊಪ್ಪಿಕೊಂಡಿದ್ದಾನೆ.&lt;/p&gt;&lt;p&gt;ಈಗಾಗಲೇ ಕೊಪ್ಪಳ ಸುತ್ತಮುತ್ತ ಕರಡಿ, ಹುಲಿ ಪ್ರತ್ಯಕ್ಷ ವರದಿಗಳಿಂದ ಹಳ್ಳಿಯ ಜನರು ಕೂಲಿಗೆ ಹೋಗಲು ಹೆದರುವಂತಾಗಿದೆ. ಹೀಗಿರುವಾಗ ಎಐನಲ್ಲಿ ಹುಲಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು.&lt;/p&gt;&lt;img&gt;&lt;p&gt;ನೈಜ ವಿಡಿಯೋ ರೀತಿಯಲ್ಲೇ ಕಾಣುವ ದೃಶ್ಯವನ್ನು ಕಂಡು ಗ್ರಾಮಸ್ಥರು ಗೊಂದಲಕ್ಕೆ ಒಳಗಾಗಿದ್ದಾರೆ. ಇಂಥದೊಂದು ಎಐ ತಂತ್ರಜ್ಞಾನ ಎಂಬುದನ್ನ ತಿಳಿಯಾದ ಹಳ್ಳಿಯ ಕೂಲಿ ಕಾರ್ಮಿಕರು, ಕೃಷಿಕರು ಇದನ್ನೇ ನಿಜವೆಂದು ಭಾವಿಸಿ ಹೊರಗೆ ಬರಲು ಹೆದರುವಂತಹ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಇಂಥ ವಿಡಿಯೋಗಳ ಬಗ್ಗೆ ಅರಣ್ಯ ಇಲಾಖೆ, ಪೊಲೀಸರು ಕಠಿಣ ಕ್ರಮ ಜರುಗಿಸಬೇಕಾದ ಅಗತ್ಯವಿದೆ.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/a-youth-from-kavali-village-in-koppal-created-ai-tiger-shared-it-on-instagram-to-skip-work-villagers-panic-rav-9vqocgz"/>
        </item>
        <item>
            <title><![CDATA[2028ರ ಸಿಎಂ ಬಗ್ಗೆ ಬಂತು ಭವಿಷ್ಯವಾಣಿ: ಬೂದೇಶ್ವರ ದೇವಸ್ಥಾನದಲ್ಲಿ ಎಚ್.ಜಿ.ರಾಮುಲು ಮಾತು]]></title>
            <link>https://kannada.asianetnews.com/karnataka-districts/koppal-dk-shivakumar-will-be-karnataka-cm-again-in-2028-says-ex-mp-hg-ramulu-gvd/articleshow-abdb2ns</link>
            <guid isPermaLink="true">https://kannada.asianetnews.com/karnataka-districts/koppal-dk-shivakumar-will-be-karnataka-cm-again-in-2028-says-ex-mp-hg-ramulu-gvd/articleshow-abdb2ns</guid>
            <pubDate>Sat, 05 Sep 2026 20:52:44 +0530</pubDate>
            <description><![CDATA[&lt;p&gt;ಗಂಗಾವತಿಯಲ್ಲಿ ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಚ್.ಜಿ.ರಾಮುಲು ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 2028ರಲ್ಲೂ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1s2hne9pw34ghkj0ake7z2e,imgname-vchv-1788621673929.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಸೆ.05):&lt;/strong&gt; ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 2028ರಲ್ಲೂ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಚ್.ಜಿ.ರಾಮುಲು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;ಸಮೀಪದ ಬೂದೇಶ್ವರ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಂಡಿಯಾಗದ ಸಂಕಲ್ಪ ಪೂಜೆಗೆ ಆಗಮಿಸಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಿ ಉತ್ತಮ ಅವಕಾಶ ಸಿಕ್ಕಿದೆ. ಅಧಿಕಾರಾವಧಿ ಕಡಿಮೆಯಿದ್ದರೂ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲೂ ಡಿ.ಕೆ.ಶಿವಕುಮಾರ್ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದರು.&lt;/p&gt;&lt;p&gt;ಬೂದೇಶ್ವರ ದೇವಸ್ಥಾನವು ಪುಣ್ಯ ಕ್ಷೇತ್ರವಾಗಿದ್ದು, ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರರು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂಬ ನಂಬಿಕೆಯಿದೆ. ಇದೇ ಪವಿತ್ರ ಭೂಮಿಯಲ್ಲಿ ಭೂದೇಶ್ವರ ದೇವರ ದೇವಸ್ಥಾನವನ್ನು ಸ್ಥಾಪಿಸಲಾಗಿದೆ ಎಂದು ಎಚ್.ಜಿ.ರಾಮುಲು ತಿಳಿಸಿದರು. ದೇವಸ್ಥಾನ ನಿರ್ಮಾಣಕ್ಕೂ ಮುನ್ನವೇ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಈ ಸ್ಥಳಕ್ಕೆ ಭೇಟಿ ನೀಡಿದ್ದರು. ಇದೀಗ ಅವರ ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಇಲ್ಲಿಗೆ ಭೇಟಿ ನೀಡಿರುವುದು ವಿಶೇಷ ಎಂದರು.&lt;/p&gt;&lt;h2&gt;&lt;strong&gt;ಸಂತಸದ ಸಂಗತಿ&lt;/strong&gt;&lt;/h2&gt;&lt;p&gt;ಡಿ.ಕೆ.ಶಿವಕುಮಾರ್ ಅವರು ತಮ್ಮ ಶಿಷ್ಯನ ರೀತಿಯವರಾಗಿದ್ದು, ಅವರು ಮುಖ್ಯಮಂತ್ರಿಯಾಗಿರುವುದು ಸಂತಸದ ಸಂಗತಿ. ರಾಜ್ಯದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಆದರೆ ಲಭ್ಯವಿರುವ ಸಮಯ ಕಡಿಮೆಯಾಗಿದೆ. ಹೀಗಾಗಿ ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ಬಾರಿಯೂ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ್, ವಿಜಯನಗರ ಶಾಸಕ ಗವಿಯಪ್ಪ, ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಸಂಗಣ್ಣ ಕರಡಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಸವರಾಜ ಹಿಟ್ನಾಳ್, ಕೆ.ಕಾಳಪ್ಪ, ಮುಸ್ಟೂರು ರಾಜಶೇಖರಪ್ಪ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಡಾ. ಎ.ಸೋಮರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-dk-shivakumar-will-be-karnataka-cm-again-in-2028-says-ex-mp-hg-ramulu-gvd/articleshow-abdb2ns"/>
        </item>
        <item>
            <title><![CDATA[ಚಂಡಿಕಾಯಾಗಕ್ಕೂ ಮುನ್ನ ಬೂದೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಿಎಂ ಡಿಕೆಶಿ: ಕಾರಣ ಇದೇನಾ?]]></title>
            <link>https://kannada.asianetnews.com/karnataka-districts/koppal-cm-dk-shivakumar-visits-boodeshwar-temple-ahead-of-chandi-yaga-performs-special-pooja-gvd/articleshow-diac3mp</link>
            <guid isPermaLink="true">https://kannada.asianetnews.com/karnataka-districts/koppal-cm-dk-shivakumar-visits-boodeshwar-temple-ahead-of-chandi-yaga-performs-special-pooja-gvd/articleshow-diac3mp</guid>
            <pubDate>Sat, 05 Sep 2026 21:22:51 +0530</pubDate>
            <description><![CDATA[&lt;p&gt;ಗಂಗಾವತಿ ಸಮೀಪದ ಬೂದಗುಂಪಾ ಗ್ರಾಮದ ಬೂದೇಶ್ವರ ದೇವಸ್ಥಾನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಚಂಡಿಕಾಯಾಗಕ್ಕೆ ಸಂಕಲ್ಪ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿರುವುದಾಗಿ ಡಿಕೆಶಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1s3mhsfnkp41968zpg3y4gr,imgname-bkb-1788622817071.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಸೆ.05): &lt;/strong&gt;ಸಮೀಪದ ಬೂದಗುಂಪಾ ಗ್ರಾಮದ ಬೂದೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಭೇಟಿ ನೀಡಿ, ಚಂಡಿಯಾಗಕ್ಕೆ ಸಂಕಲ್ಪ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಚ್.ಜಿ.ರಾಮುಲು ಅವರು ಸೆ.6ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರಿನಲ್ಲಿ ಬೂದೇಶ್ವರ ದೇವಸ್ಥಾನದಲ್ಲಿ ಚಂಡಿಕಾಯಾಗ, ಸಂಕಲ್ಪ ಹೋಮ ಹಾಗೂ ಅಷ್ಟೋತ್ತರ ಹೋಮಗಳನ್ನು ಆಯೋಜಿಸಿದ್ದರು.&lt;/p&gt;&lt;p&gt;ಯಾಗದಲ್ಲಿ ಭಾಗವಹಿಸಬೇಕಿದ್ದ ಮುಖ್ಯಮಂತ್ರಿ ಕಾರಣಾಂತರಗಳಿಂದ ಭಾನುವಾರ ಆಗಮಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಒಂದು ದಿನ ಮುಂಚಿತವಾಗಿಯೇ ಶನಿವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೂದೇಶ್ವರ ದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿದವು.&lt;/p&gt;&lt;p&gt;&lt;strong&gt;&lsquo;ರಾಮುಲು ಅವರು ನಮ್ಮ ಪಕ್ಷದ ಹಿರಿಯರು, ತಂದೆ-ಮಗನ ಸಂಬಂಧವಿದೆ&rsquo;&lt;/strong&gt;&lt;/p&gt;&lt;p&gt;ಪೂಜೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಎಚ್.ಜಿ.ರಾಮುಲು ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ತಮ್ಮೊಂದಿಗೆ ಸುಮಾರು 40 ವರ್ಷಗಳಿಂದ ಪರಿಚಯ ಹೊಂದಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;'ರಾಮುಲು ಅವರಿಗೂ ನನಗೂ ತಂದೆ-ಮಗನ ಸಂಬಂಧವಿದೆ. ಅವರ ಆಶೀರ್ವಾದ ಪಡೆಯಬೇಕು ಎಂಬ ಉದ್ದೇಶದಿಂದ ದೇವಸ್ಥಾನಕ್ಕೆ ಬಂದಿದ್ದೇನೆ. ಅವರು ಕೂಡ ಹಲವು ವರ್ಷಗಳಿಂದ ಬೂದೇಶ್ವರ ದೇವಸ್ಥಾನಕ್ಕೆ ಬನ್ನಿ ಎಂದು ಹೇಳುತ್ತಿದ್ದರು. ಆದರೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಸಮಯ ಕೂಡಿ ಬಂದಿರುವುದರಿಂದ ದೇವಸ್ಥಾನಕ್ಕೆ ಬಂದಿದ್ದೇನೆ' ಎಂದರು.&lt;/p&gt;&lt;p&gt;ನಾಳೆ ಚಂಡಿಕಾಯಾಗ ನಡೆಯಲಿರುವ ಹಿನ್ನೆಲೆಯಲ್ಲಿ ಸಂಕಲ್ಪ ಮಾಡಲು ಆಗಮಿಸಿರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ಉತ್ತಮ ಮಳೆ ಹಾಗೂ ಉತ್ತಮ ಬೆಳೆ ಆಗಬೇಕು, ಜಲಾಶಯಗಳು ಭರ್ತಿಯಾಗಬೇಕು ಎಂದು ಸಂಕಲ್ಪ ಮಾಡಿರುವುದಾಗಿ ಹೇಳಿದರು. ಇದೇ ವೇಳೆ, ಬಿಜೆಪಿಯವರು ಪಾದಯಾತ್ರೆ ಮಾಡುತ್ತಿದ್ದಾರೆ, ಮಾಡಲಿ. ತಾವು ಭಕ್ತಿಯಿಂದ ದೇವಸ್ಥಾನಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ರಾಜಕೀಯ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.&lt;/p&gt;&lt;p&gt;&lt;strong&gt;ರಾಮುಲು ಭೇಟಿಯಾಗಿ ಆಶೀರ್ವಾದ ಪಡೆದ ಸಿಎಂ&lt;/strong&gt;&lt;/p&gt;&lt;p&gt;ದೇವಸ್ಥಾನಕ್ಕೆ ತೆರಳುವುದಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಿರಿಯ ಕಾಂಗ್ರೆಸ್ ನಾಯಕ ಎಚ್.ಜಿ.ರಾಮುಲು ಅವರನ್ನು ಭೇಟಿಯಾಗಿ ಅವರ ಪಾದಗಳಿಗೆ ನಮಸ್ಕರಿಸಿದರು. ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್, ಹೊಸಪೇಟೆ ಶಾಸಕ ಗವಿಯಪ್ಪ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಬಸವರಾಜ್ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್, ಎಚ್.ಆರ್.ಭರತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.&lt;/p&gt;&lt;h2&gt;&lt;strong&gt;ಪೂರ್ಣಕುಂಭ, ವೇದಘೋಷದೊಂದಿಗೆ ಸ್ವಾಗತ&lt;/strong&gt;&lt;/h2&gt;&lt;p&gt;ಬೂದೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸುತ್ತಿದ್ದಂತೆ ಪುರೋಹಿತರು ಪೂರ್ಣಕುಂಭ ಹಾಗೂ ವೇದಘೋಷದೊಂದಿಗೆ ಅವರನ್ನು ಸ್ವಾಗತಿಸಿದರು. ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-cm-dk-shivakumar-visits-boodeshwar-temple-ahead-of-chandi-yaga-performs-special-pooja-gvd/articleshow-diac3mp"/>
        </item>
        <item>
            <title><![CDATA[Koppal: AI ಚಿತ್ರ ಮೂಲಕ ಹೊಲದ ಬಳಿ ಗುಡ್ಡದಲ್ಲಿ 'ಹುಲಿ' ಇದೆ ಎಂದು ಹೆದರಿಸಿದ ಯುವಕ]]></title>
            <link>https://kannada.asianetnews.com/karnataka-districts/koppal-young-man-scares-people-with-ai-image-of-tiger-on-hill-near-farm-mrq/articleshow-dits4uq</link>
            <guid isPermaLink="true">https://kannada.asianetnews.com/karnataka-districts/koppal-young-man-scares-people-with-ai-image-of-tiger-on-hill-near-farm-mrq/articleshow-dits4uq</guid>
            <pubDate>Sun, 06 Sep 2026 06:15:59 +0530</pubDate>
            <description><![CDATA[ಕೊಪ್ಪಳದ ಯುವಕನೊಬ್ಬ ಹೊಲಕ್ಕೆ ಹೋಗುವುದನ್ನು ತಪ್ಪಿಸಲು ಎಐ ಬಳಸಿ ಹುಲಿಯ ನಕಲಿ ಚಿತ್ರವನ್ನು ಸೃಷ್ಟಿಸಿದ್ದಾನೆ. ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಯುವಕನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1s5zq602e98saxprm964zt2,imgname-koppal-tiger-1788625280192.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ: &lt;/strong&gt;ಮನೆಯಲ್ಲಿ ಹೊಲಕ್ಕೆ ಹೋಗು ಎಂದರೆ ಅಲ್ಲಿ ಹುಲಿ ಬಂದಿದೆ ಎಂದು ಎಐ ಚಿತ್ರದ ಮೂಲಕ ಹುಲಿ ಇರುವುದನ್ನು ತೋರಿಸಿದ್ದಲ್ಲದೆ, ಅದನ್ನು ಸೋಶಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡುವ ಮೂಲಕ ಆತಂಕ ಸೃಷ್ಟಿಸಿದ ಯುವಕನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಕ ಶಾಸ್ತಿ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಕವಳಿ ಗ್ರಾಮದ ಈರಣ್ಣ ಹೊನ್ನುಂಚಿ ಎನ್ನುವ ಯುವಕ ಇಂಥದ್ದೊಂದು ಆತಂಕ ಸೃಷ್ಟಿಸಿರುವುದನ್ನು ಪತ್ತೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಆತ ಸೃಷ್ಟಿ ಮಾಡಿದ ಎಐ ಚಿತ್ರದಲ್ಲಿರುವ ಗುಡ್ಡದ ಬಳಿ ಕರೆದುಕೊಂಡು ಹೋಗಿ ಆತನ ಮೂಲಕವೇ ಆತನು ಮಾಡಿದ ತಪ್ಪನ್ನು ಹೇಳಿಸಿದ್ದಾರೆ. ಅಷ್ಟೇ ಅಲ್ಲ ಯುವಕನಿಗೆ 50 ಬಸ್ಕಿ ಹೊಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮನೆಯವರಿಗೆ ಹೊಲಕ್ಕೆ ಹೋಗೋದು ಬೇಡ ಅಂದಿದ್ದ!&lt;/strong&gt;&lt;/h2&gt;&lt;p&gt;ಈರಣ್ಣ ಎನ್ನುವಾತನಿಗೆ ಮನೆಯಲ್ಲಿ ಹೊಲಕ್ಕೆ ಹೋಗು ಎಂದು ಹೇಳಿದ್ದಾರೆ. ಇದನ್ನು ತಪ್ಪಿಸಿಕೊಳ್ಳಲು ತನ್ನ ಮೊಬೈಲ್ ನಲ್ಲಿ ಹೊಲದ ಪಕ್ಕದಲ್ಲಿರುವ ಗುಡ್ಡವೊಂದರ ಚಿತ್ರವನ್ನು ಬಳಸಿ ಎಐ ಮೂಲಕ ಗುಡ್ಡದ ಮೇಲೆ ಹುಲಿ ಕಾಣಿಸುವಂತೆ ಮಾಡಿದ್ದಾನೆ. ಅದನ್ನು ಮನೆಯವರಿಗೆ ತೋರಿಸಿ ಅಲ್ಲಿ ಹುಲಿ ಬಂದಿದೆ ಎಂದು ಹೇಳಿದ್ದಾನೆ. ಇದರಿಂದ ಅವರು ಹೊಲಕ್ಕೆ ಹೋಗುವುದು ಬೇಡ ಎಂದಿದ್ದಾರೆ.&lt;/p&gt;&lt;p&gt;ಅಷ್ಟಕ್ಕೆ ಸುಮ್ಮನಾಗದ ಈರಣ್ಣ ಅದನ್ನು ಸೋಶಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡಿದ್ದಾನೆ. ಹೀಗೆ ಅಪ್ಲೋಡ್ ಆದ ಫೋಟೋದಿಂದ ಜನರು ಆತಂಕಗೊಂಡಿದ್ದಾರೆ. ಈ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಚಂಡಿಕಾಯಾಗಕ್ಕೂ ಮುನ್ನ ಬೂದೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಿಎಂ ಡಿಕೆಶಿ: ಕಾರಣ ಇದೇನಾ?&lt;/strong&gt;&lt;/p&gt;&lt;h3&gt;&lt;strong&gt;ಯುವಕನಿಂದಲೇ ಹೇಳಿಕೆ&lt;/strong&gt;&lt;/h3&gt;&lt;p&gt;ಫೋಟೋದ ಮೇಲೆ ಅನುಮಾನ ಬಂದ ಅರಣ್ಯ ಇಲಾಖೆ ಅಧಿಕಾರಿಗಳು, ಅದನ್ನು ಪರಾಮರ್ಶೆಗೆ ಒಳಪಡಿಸಿದಾಗ ಅದು ಕೃತಕ ಬುದ್ಧಿಮತ್ತೆಯ ಚಿತ್ರ ಎನ್ನುವುದು ಗೊತ್ತಾಗಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಫೋಟೋ ಅಪ್ಲೋಡ್ ಮಾಡಿದ ಯುವಕನನ್ನು ಬೆನ್ನಟ್ಟಿದ್ದಾರೆ. ಯುವಕ ಈರಣ್ಣ ಪತ್ತೆಯಾದ ಮೇಲೆ ಆತನು ಬಳಕೆ ಮಾಡಿದ ಚಿತ್ರ ಗುಡ್ಡದ ಬಳಿಗೆ ಕರೆದುಕೊಂಡು ಹೋಗಿ, ಆತನ ಮೂಲಕವೇ ನಾನೇನು ತಪ್ಪು ಮಾಡಿದ್ದೇನೆ ಎಂದು ಹೇಳಿಸಿ, ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಹೀಗೆ ಕೃತಕ ಬುದ್ಧಿಮತ್ತೆಯ ಚಿತ್ರ ದುರ್ಬಳಕೆ ಮಾಡಿಕೊಂಡ ಈರಣ್ಣನಿಗೆ 50 ಬಸ್ಕಿ ಹೊಡೆಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Koppal: ವಿಚಿತ್ರ ಖಯಾಲಿ, ಬಳ್ಳಾರಿ ಮೂಲದ ಬೈಕ್ ಕಳ್ಳ ಕೊಪ್ಪಳದಲ್ಲಿ ಅರೆಸ್ಟ್! ಕದ್ದಿದ್ದೆಷ್ಟು ಗೊತ್ತಾ?&lt;/strong&gt;&lt;/p&gt;]]></content:encoded>
            <category>koppal</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/koppal-young-man-scares-people-with-ai-image-of-tiger-on-hill-near-farm-mrq/articleshow-dits4uq"/>
        </item>
        <item>
            <title><![CDATA[BJP Padayatra Karatagi: ಬಿಜೆಪಿ ಪಾದಯಾತ್ರೆಗೆ ಭರ್ಜರಿ ಸ್ವಾಗತ;  ಇಂದು ಕಾರಗಿಯಲ್ಲಿ ನಡೆಯುವ ಕಾರ್ಯಕ್ರಮಗಳೇನು?]]></title>
            <link>https://kannada.asianetnews.com/politics/bjp-padayatra-entry-into-kartagi-today-koppal-rav/articleshow-efq1ge3</link>
            <guid isPermaLink="true">https://kannada.asianetnews.com/politics/bjp-padayatra-entry-into-kartagi-today-koppal-rav/articleshow-efq1ge3</guid>
            <pubDate>Fri, 04 Sep 2026 09:47:31 +0530</pubDate>
            <description><![CDATA[&lt;p&gt;ವಾಲ್ಮೀಕಿ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯು ಸೆಪ್ಟೆಂಬರ್ 4 ರಂದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕನ್ನು ಪ್ರವೇಶಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1n9tcy02srnhtbkt2088xyx,imgname-bjp-padayatre-reached-karatagi-1788495082427.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರಟಗಿ (ಸೆ.4&lt;/strong&gt;) ಕೊಪ್ಪಳ: \Bವಾಲ್ಮೀಕಿ ಹಗರಣದ ಸಮಗ್ರ ತನಿಖೆ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟಿರುವ ಬಿಜೆಪಿ ನಾಯಕರು ಈಗಾಗಲೇ ಪಾದಯಾತ್ರೆಯ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸೆ. 4ರಂದು ಜಿಲ್ಲೆಯ ಕಾರಟಗಿ ತಾಲೂಕು ಪ್ರವೇಶ ಮಾಡಲಿದ್ದಾರೆ.&lt;/p&gt;&lt;h2&gt;ಬಿಜೆಪಿ ಪಾದಯಾತ್ರೆ, ಕಾರಟಗಿಯಲ್ಲಿ ಭರ್ಜರಿ ಸ್ವಾಗತಕ್ಕೆ ಸಿದ್ಧತೆ&lt;/h2&gt;&lt;p&gt;ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಅದ್ಧೂರಿ ಸ್ವಾಗತ ನೀಡಲು ಪಕ್ಷದ ಸ್ಥಳೀಯ ಮುಖಂಡರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಲಿಂಗಸುಗೂರಿನಿಂದ ಬಳ್ಳಾರಿಯತ್ತ ಸಾಗುತ್ತಿರುವ ಪಾದಯಾತ್ರೆ ಚನ್ನಳ್ಳಿ ಕ್ರಾಸ್ ಮೂಲಕ ಕಾರಟಗಿ ತಾಲೂಕು ಪ್ರವೇಶಿಸಲಿದೆ. ಇಲ್ಲಿ ಕುಂಭ-ಕಳಶಗಳೊಂದಿಗೆ ಪಾದಯಾತ್ರಿಕರನ್ನು ಸ್ವಾಗತಿಸಲು ವೇದಿಕೆ ಸಜ್ಜುಗೊಂಡಿದೆ. ಬಳಿಕ ಕಾರಟಗಿ, ಸಾಲುಂಚಿಮರ, ಸಿದ್ದಾಪುರ, ಶ್ರೀರಾಮನಗರ, ಮರಳಿ ಹಾಗೂ ಕಲ್ಗುಡಿ ಗ್ರಾಮಗಳಲ್ಲಿ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.&lt;/p&gt;&lt;p&gt;ಪಾದಯಾತ್ರೆ ಸಾಗುವ ಪ್ರಮುಖ ಸ್ಥಳಗಳಲ್ಲಿ ಬಿಜೆಪಿ ನಾಯಕರಿಗೆ ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಲಾಗುವುದು. ಮಾರ್ಗದುದ್ದಕ್ಕೂ ಪಕ್ಷದ ಧ್ವಜ, ಬ್ಯಾನರ್&zwnj;ಗಳನ್ನು ಅಳವಡಿಸಲಾಗಿದ್ದು, ಪಾದಯಾತ್ರೆ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ.&lt;/p&gt;&lt;h3&gt;&lt;strong&gt;ಪಾದಯಾತ್ರೆಗೆ ಕಾರಟಗಿಯಲ್ಲಿ ಜನಸಾಗರ ನಿರೀಕ್ಷೆ&lt;/strong&gt;&lt;/h3&gt;&lt;p&gt;ಕ್ಷೇತ್ರದ ವಿವಿಧ ಜಿಪಂ ಕ್ಷೇತ್ರಗಳಿಂದ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಯರಡೋಣ, ನವಲಿ ಹಾಗೂ ಚಳ್ಳೂರು ಜಿಪಂ ಕ್ಷೇತ್ರಗಳ ಜನರು ಕಾರಟಗಿಗೆ ಆಗಮಿಸಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸಿದ್ದಾಪುರ, ಮರಳಿ, ಹುಲಿಹೈದರ್, ಕನಕಗಿರಿ ಹಾಗೂ ಹೇರೂರು ಜಿಪಂ ಕ್ಷೇತ್ರಗಳ ಜನರು ಸಿದ್ದಾಪುರದಲ್ಲಿ ಪಾದಯಾತ್ರೆ ಸೇರಿಕೊಂಡು ಜಂಗಮರ ಕಲ್ಗುಡಿಯ ವರೆಗೆ ಹೆಜ್ಜೆ ಹಾಕಲಿದ್ದಾರೆ.&lt;/p&gt;&lt;h3&gt;ಪಾದಯಾತ್ರಿಕರ ಅನುಕೂಲಕ್ಕಾಗಿ ಪ್ರತಿ ಎರಡು ಕಿ.ಮೀ.ಗೊಮ್ಮೆ ನೀರು, ಟೀ ಹಾಗೂ ಕಾಫಿ ವ್ಯವಸ್ಥೆ&lt;/h3&gt;&lt;p&gt;&lt;strong&gt;ಕಲ್ಯಾಣ ಮಂಟಪದಲ್ಲಿ ವಸತಿ&lt;/strong&gt;:&lt;/p&gt;&lt;p&gt;ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗೆ ಪಟ್ಟಣದ ಅಮ್ಮ ಮಹೇಶ್ವರಿ ಕಲ್ಯಾಣ ಮಂಟಪ ಸೇರಿದಂತೆ ವಿವಿಧೆಡೆ ವಸತಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯಮಟ್ಟದ ನಾಯಕರು ಹಾಗೂ ಪ್ರಮುಖ ಮುಖಂಡರಿಗೆ ಕಾರಟಗಿ, ಮರಳಿ, ಶ್ರೀರಾಮನಗರ ಹಾಗೂ ಗಂಗಾವತಿಯ ಹೋಟೆಲ್&zwnj;ಗಳಲ್ಲಿ ವಸತಿ ಮಾಡಲಿದ್ದಾರೆ.&lt;/p&gt;&lt;p&gt;ಕುಂಭ ಸ್ವಾಗತ: \Bಚನ್ನಳ್ಳಿ ಕ್ರಾಸಿನಲ್ಲಿ ಕುಂಭದೊಂದಿಗೆ ಸ್ವಾಗತಿಸಲು ಸಿದ್ಧತೆ ಕೈಗೊಳ್ಳಾಗಿದೆ. ಮಹಿಳೆಯರು ಕುಂಭ ಹೊತ್ತು ಬಿಜೆಪಿ ಪಾದಯಾತ್ರಿಕರನ್ನು ಸ್ವಾಗತಿಸುತ್ತಿದ್ದಾರೆ. ಈಗಾಗಲೇ ರಸ್ತೆಗಳು ಬಿಜೆಪಿ ಬಾವುಟಗಳಿಂದ ಅಲಂಕೃತಗೊಂಡಿವೆ.&lt;/p&gt;&lt;p&gt;&lt;strong&gt;ಪಾದಯಾತ್ರೆ ಮಾಹಿತಿ&lt;/strong&gt;: ಸೆ. 4ರಂದು ಮಧ್ಯಾಹ್ನ 4 ಗಂಟೆಗೆ ಸಿಂಧನೂರಿನ ಹಂಚನಾಳ ಕ್ಯಾಂಪಿನಿಂದ ಕೊಪ್ಪಳ ಜಿಲ್ಲೆಯ ಚನ್ನಳ್ಳಿ ಕ್ರಾಸ್&zwnj;ಗೆ ಪ್ರವೇಶ, ಚನ್ನಳ್ಳಿ ಕ್ರಾಸಿನಿಂದ ಕಾರಟಗಿಗೆ ಆಗಮನ, ಕಾರಟಗಿಯಲ್ಲಿ ಬಹಿರಂಗ ಪ್ರವೇಶ, ಕಾರಟಗಿಯಲ್ಲಿ ವಸತಿ&lt;/p&gt;&lt;p&gt;ಸೆ. 5ರಂದು ಕಾರಟಗಿಯಿಂದ ಸಿದ್ದಾಪುರ, ಮಧ್ಯಾಹ್ನ ಸಿದ್ದಾಪುರದಿಂದ ಜಂಗಮರ ಕಲ್ಗುಡಿ, ಜಂಗಮರ ಕಲ್ಗೂಡಿಯಲ್ಲಿ ಬಹಿರಂಗ ಸಭೆ ಹಾಗೂ ವಸತಿ&lt;/p&gt;&lt;p&gt;ಸೆ. 6ರಂದು ಜಂಗಮರ ಕಲ್ಗೂಡಿಯಿಂದ ಗಂಗಾವತಿ ಪ್ರವೇಶ, ಮಧ್ಯಾಹ್ನ ಆನಂತರ ಬಳ್ಳಾರಿ ಜಿಲ್ಲೆಯ ಕಂಪ್ಲಿಗೆ ತೆರಳುವರು.&lt;/p&gt;&lt;p&gt;\Bಐತಿಹಾಸಿಕ ಕ್ಷಣ: \Bಪಾದಯಾತ್ರೆ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ಜನರು ಪಾದಯಾತ್ರೆಯಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸುತ್ತಿದ್ದಾರೆ. ಇದೊಂದು ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಿದ ಐತಿಹಾಸಿಕ ಕ್ಷಣ ಆಗುತ್ತಿದೆ ಎಂದು ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್ ಹೇಳಿದರು.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/bjp-padayatra-entry-into-kartagi-today-koppal-rav/articleshow-efq1ge3"/>
        </item>
        <item>
            <title><![CDATA[Koppal: ವಿಚಿತ್ರ ಖಯಾಲಿ, ಬಳ್ಳಾರಿ ಮೂಲದ ಬೈಕ್ ಕಳ್ಳ ಕೊಪ್ಪಳದಲ್ಲಿ ಅರೆಸ್ಟ್! ಕದ್ದಿದ್ದೆಷ್ಟು ಗೊತ್ತಾ?]]></title>
            <link>https://kannada.asianetnews.com/karnataka-districts/bike-theft-in-front-of-koppal-govt-hospital-mohammed-irfan-from-ballari-arrested/articleshow-eig3vme</link>
            <guid isPermaLink="true">https://kannada.asianetnews.com/karnataka-districts/bike-theft-in-front-of-koppal-govt-hospital-mohammed-irfan-from-ballari-arrested/articleshow-eig3vme</guid>
            <pubDate>Fri, 04 Sep 2026 14:45:28 +0530</pubDate>
            <description><![CDATA[ಬೈಕ್ ರೈಡ್ ಮಾಡುವ ಖಯಾಲಿಗಾಗಿ ಬರೋಬ್ಬರಿ 16 ಬೈಕ್&zwnj;ಗಳನ್ನು ಕದ್ದಿದ್ದ ಬಳ್ಳಾರಿ ಮೂಲದ ಮೊಹಮ್ಮದ್ ಇರ್ಫಾನ್ ಎಂಬಾತನನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲಾ ಆಸ್ಪತ್ರೆ ಬಳಿ ಬೈಕ್ ಕದಿಯುವಾಗ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾದ ಬಳಿಕ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1nv3z4ekwj448ew5bgwr4tz,imgname-koppal-bike-theft-case-1788513221774.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಸೆ.4):&lt;/strong&gt; ರೈಡ್ ಮಾಡುವ ಖಯಾಲಿಗೆ ಬರೋಬ್ಬರಿ 16 ಬೈಕ್&zwnj;ಗಳನ್ನ ಕದ್ದಿದ್ದ ಬಳ್ಳಾರಿ ಮೂಲದ ಖತರ್ನಾಕ್ ಕಳ್ಳನನ್ನ ಕೊಪ್ಪಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ. ಮೂಲತಃ ಬಳ್ಳಾರಿಯವನಾಗಿದ್ದ ಸುತ್ತಮುತ್ತಲಿನ ಪಟ್ಟಣಗಳಲ್ಲಿ ವಿವಿಧ ಬೈಕ್&zwnj;ಗಳನ್ನ ರೈಡ್ ಮಾಡುವ ಖಯಾಲಿಗೆ ಕದಿಯುತ್ತಿದ್ದ. ಕೆಲ ದಿನಗಳು ಬಳಸಿ ಕೊನೆಗೆ ಬೇರೆಯವರಿಗೆ ಮಾರಾಟ ಮಾಡುವ ಮೂಲಕ ಬಂದ ಹಣದಲ್ಲಿ ಮಜಾ ಮಾಡುತ್ತಿದ್ದ ಕದೀಮ.&lt;/p&gt;&lt;h2&gt;ಸಿಕ್ಕಿಬಿದ್ದಿದ್ದು ಹೇಗೆ?&lt;/h2&gt;&lt;p&gt;ಮೊಹಮ್ಮದ್ ಇರ್ಫಾನ್ ಬೈಕ್ ಕದಿಯುವಲ್ಲಿ ಎತ್ತಿದ ಕೈ. ಯಾರಿಗೂ ಅನುಮಾನ ಬಾರದಂತೆ,ಪೊಲೀಸರ ಕಣ್ಣಿಗೂ ಬೀಳದಂತೆ ಬೈಕ್ ಕದ್ದು ರೈಡ್ ಖಯಾಲಿ ತಿರಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ. ಅದೇ ರೀತಿ ಒಟ್ಟು ಹದಿನಾರಕ್ಕೂ ಹೆಚ್ಚು ಬೈಕ್&zwnj; ಕದ್ದಿದ್ದ ಇರ್ಫಾನ್. ಇತ್ತೀಚೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಬೈಕ್ ಒಂದನ್ನು ಕಳ್ಳತನ ಮಾಡಿದ್ದ. ಈ ಬಾರಿ ಕದೀಮ ಇರ್ಫಾನ್ ಗ್ರಹಚಾರ ಕೆಟ್ಟಿತ್ತೇನೋ, ಬೈಕ್ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ್ತ್ತು.&lt;/p&gt;&lt;h3&gt;ಕೊಪ್ಪಳ ಜಿಲ್ಲಾಸ್ಪತ್ರೆ ಮುಂಭಾಗದ ಬೈಕ್ ಕಳ್ಳತನ&lt;/h3&gt;&lt;p&gt;ಇತ್ತ ಬೈಕ್&zwnj; ಕಳ್ಳತನ ಪ್ರಕರಣ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಅಲರ್ಟ್ ಆದ ಕೊಪ್ಪಳ ಪೊಲೀಸರು ಮೊದಲಿಗೆ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿನ ಸಿಸಿಟಿವಿಗನ್ನ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕದೀಮನ ಕೈಚಳಕದ ದೃಶ್ಯ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯಗನ್ನಾಧರಿಸಿ ಮೊಹಮ್ಮದ್ ಇರ್ಫಾನ್&zwnj; ಪತ್ತೆ ಹಚ್ಚಿ ಕೊನೆಗೂ ಬಂಧಿಸಿ ಜೈಲಿಗಟ್ಟಿದ್ದಾರೆ. ತನಿಖೆ ವೇಳೆ ಬೈಕ್ ರೈಡ್ ಚಟಕ್ಕಾಗಿ ಕದಿಯುತ್ತಿದ್ದ ಬಗ್ಗೆ ಪೊಲೀಸರ ಮುಂದೆ ಇರ್ಫಾನ್ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಕೊಪ್ಪಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರಿದಿದೆ.&lt;/p&gt;&lt;p&gt;ತನಿಖೆಯಲ್ಲಿ ರೈಡ್ ಗಾಗಿ ಬೈಕ್ ಕಳ್ಳತನ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಮೊಹಮ್ಮದ್ ಇರ್ಫಾನ್&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/bike-theft-in-front-of-koppal-govt-hospital-mohammed-irfan-from-ballari-arrested/articleshow-eig3vme"/>
        </item>
        <item>
            <title><![CDATA[ಈ ಜಿಲ್ಲೆಯ ಗಣೇಶ ವಿಗ್ರಹಗಳಿಗೆ ಆಂಧ್ರ, ತೆಲಂಗಾಣದಲ್ಲೂ ಭರ್ಜರಿ ಬೇಡಿಕೆ: ಇಲ್ಲಿದೆ ಕಾರಣ!]]></title>
            <link>https://kannada.asianetnews.com/karnataka-districts/koppal-gangavathi-ganesh-chaturthi-ganesha-idols-draw-demand-from-andhra-pradesh-and-telangana-gvd/articleshow-emy078i</link>
            <guid isPermaLink="true">https://kannada.asianetnews.com/karnataka-districts/koppal-gangavathi-ganesh-chaturthi-ganesha-idols-draw-demand-from-andhra-pradesh-and-telangana-gvd/articleshow-emy078i</guid>
            <pubDate>Sun, 13 Sep 2026 17:14:20 +0530</pubDate>
            <description><![CDATA[&lt;p&gt;ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಗಂಗಾವತಿ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶ ವಿಗ್ರಹಗಳು, ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಗ್ರಹ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d99pp5t5gzgcrk35njhjb8,imgname-nkn-1789299841733.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಸೆ.13): &lt;/strong&gt;ಗೌರಿ-ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಗಂಗಾವತಿ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶ ವಿಗ್ರಹಗಳು, ಹೂವು-ಹಣ್ಣುಗಳು ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದು, ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರ ಚಟುವಟಿಕೆಗಳು ಗರಿಗೆದರಿವೆ. ಇದರ ಬೆನ್ನಲ್ಲೇ ಗಣೇಶ ವಿಗ್ರಹಗಳು ಸೇರಿದಂತೆ ವಿವಿಧ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ.&lt;/p&gt;&lt;p&gt;&lt;strong&gt;ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರು&lt;/strong&gt;&lt;/p&gt;&lt;p&gt;ಗಣೇಶ ವಿಗ್ರಹಗಳ ಮಾರಾಟಕ್ಕಾಗಿ ಕಿನ್ನಾಳ, ಭಾಗ್ಯನಗರ, ಕನಕಗಿರಿ ಹಾಗೂ ಹೊಸಪೇಟೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಕಲಾವಿದರು ಗಂಗಾವತಿಗೆ ಆಗಮಿಸಿದ್ದಾರೆ. ಸ್ಥಳೀಯ ಕಲಾವಿದರು ಕೂಡ ವಿವಿಧ ವಿನ್ಯಾಸ ಮತ್ತು ಗಾತ್ರದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದ್ದಾರೆ.&lt;/p&gt;&lt;p&gt;ನಗರದ ಗಾಂಧಿ ವೃತ್ತ, ಬಸವಣ್ಣ ವೃತ್ತ ಹಾಗೂ ಗುಂಡಮ್ಮ ಕ್ಯಾಂಪ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಗಣೇಶ ವಿಗ್ರಹಗಳ ಮಾರಾಟ ನಡೆಯುತ್ತಿದೆ. ಗಾತ್ರ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ಗಣೇಶ ಮೂರ್ತಿಗಳಿಗೆ ಬೆಲೆ ನಿಗದಿಯಾಗಿದ್ದು, ಸುಮಾರು ₹300ರಿಂದ ₹3 ಸಾವಿರದವರೆಗೆ ವಿಗ್ರಹಗಳು ಮಾರಾಟವಾಗುತ್ತಿವೆ. ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ವ್ಯಾಪಾರಿಗಳೊಂದಿಗೆ ಬೆಲೆ ಚೌಕಾಸಿ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.&lt;/p&gt;&lt;p&gt;&lt;strong&gt;ಆಂಧ್ರ, ತೆಲಂಗಾಣದಿಂದಲೂ ಗಣೇಶ ಮೂರ್ತಿಗಳಿಗೆ ಬೇಡಿಕೆ&lt;/strong&gt;&lt;/p&gt;&lt;p&gt;ಗಂಗಾವತಿ ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು ಪ್ರತಿಷ್ಠಾಪಿಸುವ ಬೃಹತ್ ಗಣೇಶ ಮೂರ್ತಿಗಳಿಗೆ ಈ ಬಾರಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಬೇಡಿಕೆ ಬಂದಿದೆ. ದೊಡ್ಡ ಗಾತ್ರದ ಗಣೇಶ ವಿಗ್ರಹಗಳನ್ನು ಮುಂಗಡವಾಗಿ ಬುಕ್ ಮಾಡಲಾಗಿದ್ದು, ಕೆಲವರು ಹಬ್ಬಕ್ಕೂ ಮುನ್ನವೇ ₹20 ಸಾವಿರದಿಂದ ₹50 ಸಾವಿರದವರೆಗೆ ಮುಂಗಡ ಹಣ ನೀಡಿದ್ದಾರೆ. ಕೆಲವು ಸಂಘ-ಸಂಸ್ಥೆಗಳು ಕನಿಷ್ಠ ₹1 ಲಕ್ಷದಿಂದ ₹2 ಲಕ್ಷದವರೆಗೆ ಬೆಲೆಬಾಳುವ ಗಣೇಶ ವಿಗ್ರಹಗಳನ್ನು ಖರೀದಿಸಿರುವುದು ವಿಶೇಷ. ಹೀಗಾಗಿ ದೊಡ್ಡ ಗಣೇಶ ಮೂರ್ತಿಗಳ ತಯಾರಿ ಮತ್ತು ಮಾರಾಟಕ್ಕೂ ಉತ್ತಮ ಬೇಡಿಕೆ ಕಂಡುಬಂದಿದೆ.&lt;/p&gt;&lt;p&gt;&lt;strong&gt;ಹೂವು, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಏರಿಕೆ&lt;/strong&gt;&lt;/p&gt;&lt;p&gt;ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ಬಾಳೆಕಂಬ ಸೇರಿದಂತೆ ಪೂಜೆಗೆ ಅಗತ್ಯವಿರುವ ವಸ್ತುಗಳ ಮಾರಾಟವೂ ಜೋರಾಗಿದೆ. ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಕೂಡ ಏರಿಕೆಯಾಗಿದೆ. ಗಂಗಾವತಿ ನಗರದಲ್ಲಿ ವರ್ಷವಿಡೀ ಹೂವು, ಹಣ್ಣು ಹಾಗೂ ಬಾಳೆಕಂಬಗಳ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಇದೀಗ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಿರುವುದರಿಂದ ಗ್ರಾಹಕರು ಹೆಚ್ಚಿನ ಬೆಲೆ ನೀಡಿ ಅಗತ್ಯ ವಸ್ತುಗಳನ್ನು ಖರೀದಿಸುವಂತಾಗಿದೆ.&lt;/p&gt;&lt;p&gt;&lt;strong&gt;ಹಬ್ಬದ ಖರೀದಿಯಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್&lt;/strong&gt;&lt;/p&gt;&lt;p&gt;ಗಣೇಶ ಹಬ್ಬದ ಖರೀದಿಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸುತ್ತಿರುವುದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಗಾಂಧಿ ವೃತ್ತ, ಬಸವಣ್ಣ ವೃತ್ತ ಹಾಗೂ ನಗರೇಶ್ವರ ದೇವಸ್ಥಾನದ ಮುಂಭಾಗ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ರಸ್ತೆ ಕಿರಿದಾಗಿರುವುದರಿಂದ ಹಬ್ಬದ ಖರೀದಿಗೆ ಆಗಮಿಸುವ ಜನರು ಮತ್ತು ವಾಹನಗಳ ಸಂಖ್ಯೆ ಹೆಚ್ಚಾದಾಗ ಸಂಚಾರ ಅಸ್ತವ್ಯಸ್ತವಾಗುತ್ತಿದೆ.&lt;/p&gt;&lt;p&gt;ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಗಂಗಾವತಿ ನಗರದಲ್ಲಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಒಂದೆಡೆ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಜನರನ್ನು ಆಕರ್ಷಿಸುತ್ತಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆ ಹಾಗೂ ಸಂಚಾರ ದಟ್ಟಣೆ ಸಾರ್ವಜನಿಕರಿಗೆ ಕೊಂಚ ತಲೆನೋವಾಗಿ ಪರಿಣಮಿಸಿದೆ.&lt;/p&gt;&lt;p&gt;ಕಳೆದ ಮೂರು ತಿಂಗಳಿನಿಂದ ಗಣೇಶ ವಿಗ್ರಹಗಳನ್ನು ತಯಾರು ಮಾಡುತ್ತಿದ್ದೇವೆ. ಈಗ ಬಣ್ಣದ ಬೆಲೆ ಹೆಚ್ಚಾಗಿದ್ದರಿಂದ ಮಾಡಿದ ಕೆಲಸಕ್ಕೆ ಕೂಲಿ ಸಿಗದಂತಾಗಿದೆ. ಮನೆಯ ಕುಟಂಬದವರು ಸೇರಿ ಗಣೇಶನ ವಿಗ್ರಹ ತಯಾರಿಸಿದ್ದೇವೆ. ನಾಲ್ಕು ರುಪಾಯಿ ಉಳಿಯುವಗೋಸ್ಕರ ಮತ್ತು ವಂಶ ಪಾರಂಪರಿಕವಾಗಿ ಕೈ ಕಸಬು ಬಿಡಬಾರದೆಂಬ ಕಾರಣಕ್ಕೆ ಗಣೇಶ ವಿಗ್ರಹಗಳನ್ನು ತಯಾರಿಸುವುದಕ್ಕೆ ಕಾರಣವಾಗಿದೆ.-ಪ್ರಕಾಶ, ಗಂಗಾವತಿ ಚಿತ್ರಗಾರ&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-gangavathi-ganesh-chaturthi-ganesha-idols-draw-demand-from-andhra-pradesh-and-telangana-gvd/articleshow-emy078i"/>
        </item>
        <item>
            <title><![CDATA[ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡ್ತೇನೆ - ಸಚಿವ ರಾಯರೆಡ್ಡಿ ಬೆದರಿಕೆ]]></title>
            <link>https://kannada.asianetnews.com/karnataka-districts/will-fire-officers-who-do-not-listen-minister-basavaraj-rayareddy-controversial-statement-gkn/articleshow-etxnats</link>
            <guid isPermaLink="true">https://kannada.asianetnews.com/karnataka-districts/will-fire-officers-who-do-not-listen-minister-basavaraj-rayareddy-controversial-statement-gkn/articleshow-etxnats</guid>
            <pubDate>Tue, 08 Sep 2026 20:21:43 +0530</pubDate>
            <description><![CDATA[&lt;p&gt;ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡುವುದಾಗಿ ಬೆದರಿಕೆ ಹಾಕಿದ ಸಚಿವ ಬಸವರಾಜ ರಾಯರೆಡ್ಡಿ, ತಹಶೀಲ್ದಾರ್ ತಮ್ಮ ಪಿಆರ್&zwnj;ಒ ಆಗಿ ಕೆಲಸ ಮಾಡಲಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲಿ ಡಿಜಿಟಲ್ ಸಿಗ್ನೇಚರ್ ಬಳಸಿ ಪತ್ರ ವಿಲೇವಾರಿ ಮಾಡುವಂತೆ ಪಿಎಗೆ ಸೂಚಿಸಿರುವ ಸಚಿವರು, ಅಧಿಕಾರಿಗಳ ವಿರುದ್ಧ ಅತಿರೇಕದ ಮಾತುಗಳನ್ನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20qyfge8dcx1t9w3vf15aj9,imgname-basavaraj-rayareddy-1788878994956.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ:&lt;/strong&gt; ಇಸ್ಲಾಂ ಧರ್ಮದ ಕುರಿತಾದ ಹೇಳಿಕೆಯಿಂದ ಇತ್ತೀಚೆಗಷ್ಟೇ ವಿವಾದಕ್ಕೆ ಸಿಲುಕಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಈಗ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕುವ ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡ್ತೇನೆ ಎಂದು ಎಚ್ಚರಿಕೆ ನೀಡುವ ಜೊತೆಗೆ, ತಹಶೀಲ್ದಾರ್ ಅವರನ್ನೇ ತಮ್ಮ ಪಿಆರ್&zwnj;ಒ (PRO) ಆಗಿ ಕೆಲಸ ಮಾಡುವಂತೆ ಸೂಚಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;&lt;strong&gt;ವೇದಿಕೆಯಲ್ಲೇ ತಹಶೀಲ್ದಾರ್&zwnj;ಗೆ ಸೂಚನೆ&lt;/strong&gt;&lt;/h2&gt;&lt;p&gt;ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ನಡೆದ ಪದವಿಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಅತಿರೇಕದ ಮಾತುಗಳನ್ನಾಡಿದ್ದಾರೆ. ವೇದಿಕೆಯಲ್ಲಿದ್ದ ಯಲಬುರ್ಗಾ ತಹಶೀಲ್ದಾರ್ ಪ್ರಕಾಶ್ ನಾಶಿ ಅವರ ಹೆಸರು ಹಿಡಿದು ಮಾತನಾಡಿದ ಸಚಿವರು, ನಾನು ಸಚಿವ ಸ್ಥಾನದ ಕಾರ್ಯಭಾರದಲ್ಲಿ ಸಂಪೂರ್ಣ ಬ್ಯುಸಿಯಾಗಿರುತ್ತೇನೆ. ಹೀಗಾಗಿ ನೀವೇ ಇನ್ನು ಮುಂದೆ ನನ್ನ ಪಿಆರ್&zwnj;ಒ ಆಗಿ ಕೆಲಸ ಮಾಡಬೇಕು ಎಂದು ಸಾರ್ವಜನಿಕವಾಗಿ ಸೂಚನೆ ನೀಡಿದರು.&lt;/p&gt;&lt;p&gt;ಅಧಿಕಾರಿಗಳ ಮೇಲಿನ ಸಚಿವರ ಸವಾರಿ ಇಲ್ಲಿಗೆ ನಿಲ್ಲಲಿಲ್ಲ. ತಮ್ಮ ಆಪ್ತ ಕಾರ್ಯದರ್ಶಿಗೆ (PA) ಸೂಚನೆ ನೀಡಿದ ಸಚಿವರು, ನನ್ನ ಡಿಜಿಟಲ್ ಸಿಗ್ನೇಚರ್ ಬಳಸಿ ನೀವೇ ಪತ್ರಗಳನ್ನು ವಿಲೇವಾರಿ ಮಾಡಿ ಎಂದು ಹೇಳಿದ್ದಾರೆ. ಸಚಿವರ ಸಹಿಯನ್ನು ಅವರ ಅನುಪಸ್ಥಿತಿಯಲ್ಲಿ ಪಿಎ ಬಳಸುವಂತೆ ಹೇಳಿರುವುದು ಕಾನೂನಾತ್ಮಕವಾಗಿಯೂ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.&lt;/p&gt;&lt;h2&gt;&lt;strong&gt;ಲೆಫ್ಟ್ ರೈಟ್ ತಗೊಂಡು ಫೈರ್ ಮಾಡ್ತೇನೆ!&lt;/strong&gt;&lt;/h2&gt;&lt;p&gt;ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿ ಎಷ್ಟು ದೊಡ್ಡದಿದೆ ಎಂದು ವಿವರಿಸಿದ ರಾಯರೆಡ್ಡಿ, ನಮ್ಮ ಇಲಾಖೆಯಲ್ಲಿ 1.52 ಕೋಟಿ ವಿದ್ಯಾರ್ಥಿಗಳು ಹಾಗೂ 96 ವಿಶ್ವವಿದ್ಯಾಲಯಗಳು ಬರುತ್ತವೆ. ಇಷ್ಟೊಂದು ದೊಡ್ಡ ಜವಾಬ್ದಾರಿ ಇರುವಾಗ ಅಧಿಕಾರಿಗಳು ನಮಗೆ ಸಹಕಾರ ನೀಡಬೇಕು. ಯಾವ ಅಧಿಕಾರಿ ಮಾತು ಕೇಳುವುದಿಲ್ಲವೋ ಹೇಳಿ, ಅಂತಹವರನ್ನು ಲೆಫ್ಟ್ ರೈಟ್ ತಗೊಂಡು ಫೈರ್ ಮಾಡ್ತೇನೆ ಎಂದು ಅಧಿಕಾರಿಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.&lt;/p&gt;&lt;p&gt;ಇದೇ ವೇಳೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ಎಂದಿನಂತೆ ಮುಂದುವರಿಯಲಿವೆ ಎಂದು ಭರವಸೆ ನೀಡಿದರು. ಅಧಿಕಾರಿಗಳನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಅಥವಾ ಬೆದರಿಕೆ ಹಾಕುವ ಧಾಟಿಯಲ್ಲಿ ಮಾತನಾಡಿದ ಸಚಿವರ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>koppal</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/will-fire-officers-who-do-not-listen-minister-basavaraj-rayareddy-controversial-statement-gkn/articleshow-etxnats"/>
        </item>
        <item>
            <title><![CDATA[73ನೇ ವಯಸ್ಸಿನಲ್ಲಿಯೂ ಕೆಲಸ; ದಿನಕ್ಕೆ 25 ಸಾವಿರ ಸಂಪಾದನೆ; ಇದು ಅಜ್ಜಿ ಖಾನಾವಳಿ!]]></title>
            <link>https://kannada.asianetnews.com/gallery/karnataka-districts/koppal-shivagangamma-ajji-khanavali-story-earning-25-thousand-rupees-per-day-old-woman-inspiration-success-story-mrq-g4lqy4i</link>
            <guid isPermaLink="true">https://kannada.asianetnews.com/gallery/karnataka-districts/koppal-shivagangamma-ajji-khanavali-story-earning-25-thousand-rupees-per-day-old-woman-inspiration-success-story-mrq-g4lqy4i</guid>
            <pubDate>Tue, 08 Sep 2026 12:45:55 +0530</pubDate>
            <description><![CDATA[&lt;p&gt;73 ವರ್ಷದ ಶಿವಗಂಗಮ್ಮ ಅಜ್ಜಿ, ಖಾನಾವಳಿಯನ್ನು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ವಯಸ್ಸನ್ನು ಮೀರಿ ದುಡಿಯುವ ಇವರ ಹೋಟೆಲ್, ರುಚಿಕರವಾದ ಜೋಳದ ರೊಟ್ಟಿಗೆ ಪ್ರಸಿದ್ಧವಾಗಿದ್ದು, ಕಾಯಕವೇ ಕೈಲಾಸವೆಂದು ನಂಬಿ ತಮ್ಮ ಕೊನೆಯುಸಿರಿನವರೆಗೂ ದುಡಿಯಬೇಕೆಂಬ ಹಂಬಲ ಹೊಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1zx91pfrcb0t5qdyn2xepe0,imgname-ajji-khanavali--3--1788851029711.jpg" type="image/jpeg" height="390" width="690"/>
            <content:encoded><![CDATA[&lt;p&gt;73 ವರ್ಷದ ಶಿವಗಂಗಮ್ಮ ಅಜ್ಜಿ, ಖಾನಾವಳಿಯನ್ನು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ವಯಸ್ಸನ್ನು ಮೀರಿ ದುಡಿಯುವ ಇವರ ಹೋಟೆಲ್, ರುಚಿಕರವಾದ ಜೋಳದ ರೊಟ್ಟಿಗೆ ಪ್ರಸಿದ್ಧವಾಗಿದ್ದು, ಕಾಯಕವೇ ಕೈಲಾಸವೆಂದು ನಂಬಿ ತಮ್ಮ ಕೊನೆಯುಸಿರಿನವರೆಗೂ ದುಡಿಯಬೇಕೆಂಬ ಹಂಬಲ ಹೊಂದಿದ್ದಾರೆ.&lt;/p&gt;&lt;img&gt;&lt;p&gt;ದುಡಿಬೇಕು ಅನ್ನೋ ಛಲ ಇದ್ರೆ ವಯಸ್ಸು ಅಡ್ಡಿ ಬರಲ್ಲ ಎಂಬುದಕ್ಕೆ ಈ ಅಜ್ಜಿ ಸಾಕ್ಷಿಯಾಗಿದ್ದಾರೆ. ವಯಸ್ಸು 73 ಆದರೂ 23ರ ಹರೆಯದವರಂತೆ ಕೆಲಸ ಮಾಡುತ್ತಾರೆ. ಬೆಳಗ್ಗೆ 9ಕ್ಕೆ ಶುರುವಾದ್ರೆ ಕೆಲಸ ರಾತ್ರಿ 11 ಗಂಟೆಗೆ ಮುಗಿಯುತ್ತದೆ. ಕೊಪ್ಪಳಕ್ಕೆ ಬರೋ ಜನರು ಈ ಅಜ್ಜಿಯ ಹೋಟೆಲ್ ಹುಡುಕಿಕೊಂಡು ಬರುತ್ತಾರೆ. ಬಂಗಾರ ಗಳಿಕೆ ಮಾಡಬಾರದು, ಬಂಗಾರದಂತಹ ಗುಣ ಸಂಪಾದನೆ ಮಾಡಬೇಕು ಅನ್ನೋದು ಅಜ್ಜಿಯವರ ಮಾತು. ಬೇಕು ಅನ್ನೋನು ಬೇಕೂಫ್, ಸಾಕು ಅನ್ನೋನೇ ಸಿದ್ದಪ್ಪ ಅನ್ನೋ ಅಜ್ಜಿ, ಪ್ರತಿಕ್ಷಣವೂ ಸಿದ್ದಾರೂಢ (ದೇವರು) ಅವರನ್ನು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಈ ಅಜ್ಜಿಯ ಹೆಸರು ಶಿವಗಂಗಮ್ಮ, ಶ್ರೀ ಸಿದ್ದಾರೂಢ ಹೆಸರಿನಲ್ಲಿ ಕಳೆದ 25 ವರ್ಷದಿಂದ ಖಾನಾವಳಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಅಜ್ಜಿಗೆ ನಾಲ್ಕು ಮಕ್ಕಳು. ಇಲ್ಲಿ ನೀಡಲಾಗುವ ಜೋಳದ ರೊಟ್ಟಿ ಕೊಪ್ಪಳದಲ್ಲಿ ಫೇಮಸ್. ನನಗೆ ಅಕ್ಷರಜ್ಞಾನ ಇಲ್ಲ ಸರ್. ಲೋಕಜ್ಞಾನ ಇದೆ. ಲೆಕ್ಕ ಮಾಡಲು ಯಾವುದೇ ಕ್ಯಾಲ್ಕುಲೇಟರ್ ಬಳಸಲ್ಲ.&lt;/p&gt;&lt;p&gt;ಲಾಕ್&zwnj;ಡೌನ್ ಸಂದರ್ಭದಲ್ಲಿಯೂ ಹೋಟೆಲ್ ಮುಚ್ಚದೇ ಕೆಲಸ ಮಾಡಿದ್ದೇನೆ. ಆ ವೇಳೆ ಪೊಲೀಸರು, ಪುರಸಭೆ ಸಿಬ್ಬಂದಿಯೂ ಇಲ್ಲಿಗೆ ಬಂದು ಊಟ ಮಾಡುತ್ತಿದ್ದರು. ಎಲ್ಲವೂ ಸಿದ್ದಾರೂಢ ಸ್ವಾಮೀಜಿಗಳ ಆಶೀರ್ವಾದದಿಂದ ಕೆಲಸ ನಡೆಯುತ್ತಿದೆ ಎಂದು ಅಜ್ಜಿ ಹೇಳುತ್ತಾರೆ.&lt;/p&gt;&lt;img&gt;&lt;p&gt;ಶಿವಗಂಗಮ್ಮ ಅವರ ಮೂಲತಃ ಹುನ್ನಾಳದ ನಿವಾಸಿ. ಕುಷ್ಟಗಿ ತಾಲೂಕಿನ ಮುನ್ನಾಳ ಗ್ರಾಮದ ಚಂದಲಿಂಗಪ್ಪ ಎಂಬವರ ಜೊತೆ ಮದುವೆಯಾಗುತ್ತದೆ. ಬಾಲ್ಯವಿವಾಹ ಆಗಿದ್ದರಿಂದ ಶಿವಲಿಂಗಮ್ಮಾ ಅವರಿಗೆ ಮದುವೆಯಾಗಿದ್ದು ಸಹ ಅಷ್ಟು ನೆನಪಿಲ್ಲ. ಗಂಡನೂ ಹೆಚ್ಚು ಕೆಲಸ ಮಾಡದ ಹಿನ್ನೆಲೆ ಉದ್ಯೋಗ ಅರಿಸಿಕೊಂಡು ಕೊಪ್ಪಳ ಪಟ್ಟಣಕ್ಕೆ ಬರುತ್ತಾರೆ.&lt;/p&gt;&lt;img&gt;&lt;p&gt;ತವರುಮನೆಯಲ್ಲಿ ಹೋಟೆಲ್ ವ್ಯಾಪಾರ ಮಾಡಿದ್ದರಿಂದ ಕೆಲಸದ ಅನುಭವ ಇತ್ತು. ಗಂಡನ ಮನೆಯಲ್ಲಿ ಸಣ್ಣದಾಗಿ ಹೋಟೆಲ್ ವ್ಯಾಪಾರ ಮಾಡಿದೆ. ಅಲ್ಲಿ ಹೆಚ್ಚು ವ್ಯಾಪಾರ ಇಲ್ಲದ ಕಾರಣ ಕೊಪ್ಪಳಕ್ಕೆ ಬಂದೆ. ಆರಂಭದಲ್ಲಿ ರಸ್ತೆಬದಿ ಹೋಟೆಲ್ ಇತ್ತು. ಈಗ ಇಲ್ಲಿಯವರಗೆ ಬಂದಿದ್ದೇನೆ.&lt;/p&gt;&lt;p&gt;ಕೊಪ್ಪಳದಲ್ಲಿ ಮಗ ಪ್ರತ್ಯೇಕ ಹೋಟೆಲ್ ಮಾಡ್ಕೊಂಡಿದ್ದಾನೆ. ಅಳಿಯನೂ ಸರ್ಕಲ್&zwnj;ನಲ್ಲಿ ಹೋಟೆಲ್ ಹಾಕಿಕೊಂಡಿದ್ದಾನೆ. ಇಲ್ಲಿ ನಾನೊಬ್ಬಳೇ ಹೋಟೆಲ್ ನಡೆಸುತ್ತಿದ್ದೇನೆ. ಅಡುಗೆ ಮಾತ್ರ ನಾನೇ ಮಾಡುವೆ. ಅಡುಗೆ ಮಾಡಿಯೇ ಗಲ್ಲಾಪೆಟ್ಟಿಗೆಗೆ ಬಂದು ಕುಳಿತುಕೊಳ್ಳುತ್ತೇನೆ ಎಂದು ಶಿವಗಂಗಮ್ಮಾ ಅಜ್ಜಿ ಹೇಳುತ್ತಾರೆ.&lt;/p&gt;&lt;img&gt;&lt;p&gt;ಕೊಪ್ಪಳಕ್ಕೆ ಬಂದು 25 ವರ್ಷ ಆಯ್ತು. ಕೈ-ಕಾಲು ಗಟ್ಟಿಯಾಗಿರುವಾಗಲೇ ಜೀವ ಹೋಗಬೇಕೆಂದು ಆ ಸಿದ್ದಾರೂಢನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಯಾರ ಹಂಗಿನಲ್ಲಿಯೂ ಇರಬಾರದು. ನಮ್ಮ ಖಾನಾವಳಿಗೆ ಬರುವ ಗ್ರಾಹಕರಲ್ಲಿ ಸಿದ್ದಾರೂಢರನ್ನು ಕಾಣುತ್ತೇನೆ. ಗ್ರಾಹಕರು ಸಹ ನನ್ನನ್ನು ತಾಯಿ ಸ್ವರೂಪದಲ್ಲಿ ನೋಡುತ್ತಾರೆ. ನನ್ನ ಜೀವನಕ್ಕಿಷ್ಟು ಸಾಕು. ಕೊನೆಯವರೆಗೂ ದುಡಿಯಬೇಕು, ಚೆನ್ನಾಗಿಯೇ ಇರೋವಾಗಲೇ ಶಿವನ ಪಾದ ಸೇರಿಕೊಳ್ಳಬೇಕು ಎಂದು ಅಜ್ಜಿ ಹೇಳುತ್ತಾರೆ.&lt;/p&gt;&lt;img&gt;&lt;p&gt;ತಿಂಗಳಿಗೆ ಒಂದು ಬಾರಿ ದಿನಸಿ ಖರೀದಿ ಮಾಡುತ್ತೇವೆ. ಪಾಟೀಲರ ಅಂಗಡಿಯಲ್ಲಿ ತಿಂಗಳಿಗೊಮ್ಮೆ 2 ಲಕ್ಷ ರೂಪಾಯಿಯಷ್ಟು ದಿನಸಿ ಖರೀದಿ ಮಾಡುತ್ತೇನೆ. ಇಲ್ಲಿ 10 ಜನರು ಕೆಲಸ ಮಾಡುತ್ತಾರೆ. ದಿನಕ್ಕೆ 25 ಸಾವಿರ ರೂಪಾಯಿಗಷ್ಟು ಕಲೆಕ್ಷನ್ ಆಗುತ್ತದೆ. ಉಳಿತಾಯ ಕಡಿಮೆಯಾಗುತ್ತದೆ. ಒಂದು ಊಟಕ್ಕೆ 2 ರೊಟ್ಟಿ ಕೊಡುತ್ತೇನೆ. ಅನ್ನಕ್ಕೆ ಯಾವುದೇ ಲಿಮಿಟ್ ಇಲ್ಲ. ಇದುವರೆಗೂ ಇಷ್ಟೇ ಅಂತ ಸೀಮಿತ ಮಾಡಿಲ್ಲ. ಈ ಹಿಂದೆ ಸಗಣಿಯನ್ನು ಸಂಗ್ರಹಿಸಿದ್ರೆ ತಿಂಗಳಿಗೆ 5 ರೂಪಾಯಿ ಸಿಗುತ್ತಿತ್ತು ಎಂದು ಹಳೆ ದಿನಗಳನ್ನು ನೆನಪು ಮಾಡಿಕೊಂಡರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Shivamogga ಉಪ್ಪಿನಕಾಯಿ ಬ್ಯುಸಿನೆಸ್; ದಿನಕ್ಕೆ 500-600 kg ಸೇಲ್, 3-4 ಕೋಟಿ ಆದಾಯ&lt;/strong&gt;&lt;/p&gt;]]></content:encoded>
            <category>koppal</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/koppal-shivagangamma-ajji-khanavali-story-earning-25-thousand-rupees-per-day-old-woman-inspiration-success-story-mrq-g4lqy4i"/>
        </item>
        <item>
            <title><![CDATA[ಹಾಡುತ್ತಾ, ಆಡುತ್ತಾ ಇಂಗ್ಲಿಷ್ ಕಲಿಕೆ: ಮುದ್ದಾಬಳ್ಳಿ ಮಕ್ಕಳ ನೆಚ್ಚಿನ ಶಿಕ್ಷಕ ಮಹ್ಮದ್ ಇಸ್ಮಾಯಿಲ್]]></title>
            <link>https://kannada.asianetnews.com/education/koppal-muddaballi-teacher-mahmad-ismail-inspires-rural-students-to-learn-english-youtube-gvd/articleshow-g6oaie4</link>
            <guid isPermaLink="true">https://kannada.asianetnews.com/education/koppal-muddaballi-teacher-mahmad-ismail-inspires-rural-students-to-learn-english-youtube-gvd/articleshow-g6oaie4</guid>
            <pubDate>Sat, 05 Sep 2026 15:47:19 +0530</pubDate>
            <description><![CDATA[&lt;p&gt;ಕೊಪ್ಪಳದ ಮುದ್ದಾಬಳ್ಳಿಯ ಶಿಕ್ಷಕ ಮಹ್ಮದ್ ಇಸ್ಮಾಯಿಲ್ ಅವರು YouTube, ಸ್ಮಾರ್ಟ್ ಕ್ಲಾಸ್ ಮತ್ತು ಭಾಷಾ ಆಟಗಳ ಮೂಲಕ ಗ್ರಾಮೀಣ ಮಕ್ಕಳಿಗೆ ಸರಳ ಹಾಗೂ ಪರಿಣಾಮಕಾರಿಯಾಗಿ ಇಂಗ್ಲಿಷ್ ಕಲಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1rh4jmxbvkrkhveew6sp25r,imgname-chc-1788603419293.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಸೆ.05):&lt;/strong&gt; ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯ ಶಿಕ್ಷಕ ಮಹ್ಮದ್ ಇಸ್ಮಾಯಿಲ್ ಅವರು ಯೂಟ್ಯೂಬ್, ಸ್ಮಾರ್ಟ್ ಕ್ಲಾಸ್ ಮತ್ತು ಭಾಷಾ ಆಟಗಳ ಮೂಲಕ ಮಕ್ಕಳಿಗೆ ಸರಳವಾಗಿ ಇಂಗ್ಲಿಷ್ ಕಲಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಇದೇ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇಸ್ಮಾಯಿಲ್, ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.&lt;/p&gt;&lt;p&gt;ಹಾಡು, ಆಟ ಹಾಗೂ ಪರಸ್ಪರ ಸಂವಹನದ ಮೂಲಕ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡಲು ಕಲಿಯುತ್ತಿದ್ದಾರೆ. ಯಾವುದೇ ಭಾಷಾ ಕಲಿಕೆಯು ಆಲಿಸುವಿಕೆ, ಬಳಕೆ, ನಿರಂತರ ಸಂವಹನ, ಬರವಣಿಗೆ, ಓದು ಮತ್ತು ಮನನದ ಮೂಲಕ ಮಾತ್ರ ಸಾಧ್ಯ ಎಂಬುದನ್ನು ಅರಿತುಕೊಂಡಿರುವ ಅವರು, ಇದೇ ತಂತ್ರವನ್ನು ಬೋಧನೆಯಲ್ಲಿ ಅಳವಡಿಸಿಕೊಂಡಿದ್ದಾರೆ.&lt;/p&gt;&lt;p&gt;ಸ್ವಂತ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ಇಸ್ಮಾಯಿಲ್, ತರಗತಿಯಲ್ಲಿ ವೈವಿಧ್ಯಮಯ ಚಟುವಟಿಕೆ ಮಾಡಿಸುವ ಜತೆಗೆ, ಮನೆಯಲ್ಲಬ ಮಕ್ಕಳು ಚಟುವಟಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸ್ವತಃ ಚಾರ್ಟ್&zwnj;ಗಳನ್ನು ತಯಾರಿಸಿ, ವಿಷಯವನ್ನು ವಿಶ್ಲೇಷಿಸಿ, ಇಂಗ್ಲಿಷ್&zwnj;ನಲ್ಲಿಯೇ ತರಗತಿಯ ಮುಂದೆ ಪ್ರಸ್ತುತಪಡಿಸುತ್ತಾರೆ.&lt;/p&gt;&lt;h2&gt;&lt;strong&gt;ಇತರ ಶಿಕ್ಷಕರಿಗೂ ಮಾದರಿ&lt;/strong&gt;&lt;/h2&gt;&lt;p&gt;ಇಸ್ಮಾಯಿಲ್ ಅವರ ಪ್ರಯತ್ನ ಗ್ರಾಮೀಣ ಮಕ್ಕಳಿಗೆ ಭಾಷೆ ಕಲಿಯುವಿಕೆಯನ್ನು ಸರಳ, ಆಸಕ್ತಿದಾಯಕ ಮತ್ತು ಪರಿಣಾಮಕಾರಿಯನ್ನಾಗಿಸಿದೆ. ಅವರ ವಿಭಿನ್ನ ಬೋಧನಾ ಕ್ರಮ ಇತರ ಶಿಕ್ಷಕರಿಗೂ ಮಾದರಿಯಾಗಿದೆ. ಪ್ರಶ್ನೋತ್ತರ, ಗುಂಪು ಚರ್ಚೆ, ಪದ ಆಟ, ಅಭಿನಯ ಮತ್ತು ಸರಳ ಸಂಭಾಷಣೆಗಳ ಮೂಲಕ ಮಕ್ಕಳನ್ನು ಮಾತನಾಡಲು ಉತ್ತೇಜಿಸುತ್ತಾರೆ.&lt;/p&gt;&lt;p&gt;ತಪ್ಪುಗಳಾದರೂ ಹಿಂಜರಿಯದೆ ಪ್ರಯತ್ನಿಸುವ ವಾತಾವರಣ ನಿರ್ಮಿಸಿರುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಾಗಿದೆ. ಪೋಷಕರಿಗೂ ಮಕ್ಕಳ ಚಟುವಟಿಕೆಗಳನ್ನು ಗಮನಿಸಿ ಪ್ರೋತ್ಸಾಹಿಸುವಂತೆ ತಿಳಿಸುತ್ತಿದ್ದಾರೆ. ಇದರಿಂದ ಶಾಲೆ ಮತ್ತು ಮನೆಯ ಕಲಿಕೆಯ ನಡುವಿನ ಸಂಪರ್ಕವೂ ಬಲಗೊಂಡಿದೆ. ಇಂತಹ ಪ್ರಯತ್ನಗಳು ಮಕ್ಕಳ ಭವಿಷ್ಯ ರೂಪಿಸುತ್ತಿವೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/education/koppal-muddaballi-teacher-mahmad-ismail-inspires-rural-students-to-learn-english-youtube-gvd/articleshow-g6oaie4"/>
        </item>
        <item>
            <title><![CDATA[ಮನೆಯ ಬೆಡ್‌ರೂಂನಲ್ಲಿ 50 ಅಡಿ ಗುಂಡಿ: ಒಂದೂವರೆ ತಿಂಗಳ ‘ನಿಧಿ ಶೋಧ’ದ ರಹಸ್ಯ ಬಯಲು!]]></title>
            <link>https://kannada.asianetnews.com/karnataka-districts/koppal-treasure-hunt-turns-into-police-case-8-fir-in-gangavathis-vadrahatti-gvd/articleshow-gkxxlnm</link>
            <guid isPermaLink="true">https://kannada.asianetnews.com/karnataka-districts/koppal-treasure-hunt-turns-into-police-case-8-fir-in-gangavathis-vadrahatti-gvd/articleshow-gkxxlnm</guid>
            <pubDate>Thu, 03 Sep 2026 19:46:40 +0530</pubDate>
            <description><![CDATA[&lt;p&gt;ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್&zwnj;ನಲ್ಲಿ ನಿಧಿ ಸಿಗುತ್ತದೆ ಎಂಬ ನಂಬಿಕೆಯಿಂದ ಮನೆಯ ಬೆಡ್&zwnj;ರೂಂನಲ್ಲೇ 50 ಅಡಿ ಆಳದ ಗುಂಡಿ ತೋಡಿದ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ಬಿಹಾರ ಮೂಲದ ಆರು&hellip;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1egwrne46b5gbv32z5cewq6,imgname-mbj-1788267618990.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಸೆ.03): &lt;/strong&gt;ನಿಧಿ ಸಿಗುತ್ತದೆ ಎಂಬ ಆಸೆಯಿಂದ ಮನೆಯೊಂದರೊಳಗೆ ಬರೋಬ್ಬರಿ 50 ಅಡಿ ಆಳದ ಗುಂಡಿ ತೋಡಿದ ಪ್ರಕರಣ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್&zwnj;ನಲ್ಲಿ ಬೆಳಕಿಗೆ ಬಂದಿದೆ. ಕಳೆದ ಒಂದೂವರೆ ತಿಂಗಳಿನಿಂದ ಮನೆಯ ಬೆಡ್&zwnj;ರೂಂನಲ್ಲೇ ರಹಸ್ಯವಾಗಿ ಗುಂಡಿ ತೋಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕರ ದಂಪತಿ ಸೇರಿದಂತೆ ಒಟ್ಟು 8 ಜನರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;ನಿಧಿಗಾಗಿ ಬಿಹಾರದಿಂದ ಆರು ಮಂದಿ ಕಾರ್ಮಿಕರನ್ನು ಕರೆಸಿ ಗುಂಡಿ ತೋಡಿಸಿರುವ ಆರೋಪ ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಮತ್ತು ಅವರ ಪತ್ನಿ ನಾಗಬಿಂದು ವಿರುದ್ಧ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಮನೆಯ ಬೆಡ್&zwnj;ರೂಂನಲ್ಲೇ 50 ಅಡಿ ಗುಂಡಿ!&lt;/strong&gt;&lt;/p&gt;&lt;p&gt;ಪೊಲೀಸ್ ತನಿಖೆಯಲ್ಲಿ ಹೊರಬಂದಿರುವ ಮಾಹಿತಿಯ ಪ್ರಕಾರ, ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ತಮ್ಮ ಮನೆಯಲ್ಲಿ ನಿಧಿ ಇದೆ ಎಂದು ಕಾರ್ಮಿಕರಿಗೆ ಹೇಳಿದ್ದರಂತೆ. ಸುಮಾರು 50 ಅಡಿ ಆಳಕ್ಕೆ ಅಗೆದರೆ ನಿಧಿ ಸಿಗುತ್ತದೆ ಎಂದು ನಂಬಿಸಿ, ಬಿಹಾರ ರಾಜ್ಯದ ಆರು ಮಂದಿ ಗೌಂಡಿಗಳನ್ನು ಗುಂಡಿ ತೋಡುವ ಕೆಲಸಕ್ಕೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ಮನೆಯ ಮಾಲೀಕರು ಸುಮಾರು ಒಂದೂವರೆ ತಿಂಗಳ ಹಿಂದೆಯೇ ಮನೆ ಖಾಲಿ ಮಾಡಿ ಬೆಂಗಳೂರಿಗೆ ತೆರಳಿದ್ದು, ಮನೆಯ ಬೆಡ್&zwnj;ರೂಂನಲ್ಲಿ ಗುಂಡಿ ತೋಡುವಂತೆ ಕಾರ್ಮಿಕರಿಗೆ ಸೂಚಿಸಿದ್ದರು ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಯಾರಿಗೂ ಗೊತ್ತಾಗದಂತೆ ರಾತ್ರಿಯಲ್ಲಿ &lsquo;ನಿಧಿ ಶೋಧ&rsquo;!&lt;/strong&gt;&lt;/p&gt;&lt;p&gt;ಮನೆಯ ಮಾಲೀಕರ ಮಾತನ್ನು ನಂಬಿದ ಆರು ಮಂದಿ ಕಾರ್ಮಿಕರು ಕಳೆದ ಒಂದೂವರೆ ತಿಂಗಳಿನಿಂದ ರಾತ್ರಿಯ ವೇಳೆ ಗುಂಡಿ ತೋಡುತ್ತಿದ್ದರು ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಶಬ್ದ ಮಾಡದೆ ಗುಂಡಿ ಅಗೆಯಲಾಗುತ್ತಿತ್ತು ಎನ್ನಲಾಗಿದೆ. ಅಗೆದ ಮಣ್ಣನ್ನು ಹೊರಗೆ ಹಾಕಿದರೆ ವಿಷಯ ಬಯಲಾಗುವ ಸಾಧ್ಯತೆ ಇದ್ದುದರಿಂದ, ಮಣ್ಣನ್ನು ಮನೆಯೊಳಗೇ ಸುಮಾರು 25ಕ್ಕೂ ಹೆಚ್ಚು ಚೀಲಗಳಲ್ಲಿ ತುಂಬಿ ಸಂಗ್ರಹಿಸಿಡಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;&lt;strong&gt;ಗುಂಡಿ ತೋಡುತ್ತಿದ್ದಾಗ ನೀರು ಬಂದರೂ ನಿಲ್ಲಲಿಲ್ಲ!&lt;/strong&gt;&lt;/p&gt;&lt;p&gt;ಗುಂಡಿ ಅಗೆಯುವ ಸಂದರ್ಭದಲ್ಲಿ ನೀರು ಕೂಡ ಬಂದಿತ್ತು ಎನ್ನಲಾಗಿದ್ದು, ಅದನ್ನು ಬಕೆಟ್&zwnj;ಗಳ ಮೂಲಕ ಹೊರಗೆ ತೆಗೆದು ಮತ್ತೆ ಗುಂಡಿ ತೋಡುವ ಕೆಲಸ ಮುಂದುವರಿಸಲಾಗಿತ್ತು ಎಂದು ಕಾರ್ಮಿಕರು ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಮನೆಯೊಳಗೆ ಇಷ್ಟೊಂದು ಆಳದ ಗುಂಡಿ ತೋಡುತ್ತಿದ್ದರೂ ಹೊರಗಿನವರಿಗೆ ಅನುಮಾನ ಬಾರದಂತೆ ಕೆಲಸ ನಡೆಸಲಾಗಿತ್ತು ಎನ್ನಲಾಗಿದೆ.&lt;/p&gt;&lt;p&gt;&lt;strong&gt;6 ಕಾರ್ಮಿಕರು ಪೊಲೀಸರ ವಶದಲ್ಲಿ&lt;/strong&gt;&lt;/p&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್, ಅವರ ಪತ್ನಿ ನಾಗಬಿಂದು ಹಾಗೂ ಬಿಹಾರ ಮೂಲದ ಸಂತೋಷ ಬಸವನ್, ಮಿಥುನ್ ಕುಮಾರ್, ಅಭಿಷೇಕ್ ಪವನ್, ಮಂಜೇಶ್ ಪಾಸ್ವಾನ್, ಬಿಹಕಾಶ್ ಕುಮಾರ್ ಪವನ್ ಮತ್ತು ಶಂಕರ ಪವನ್ ಸೇರಿದಂತೆ ಒಟ್ಟು 8 ಜನರ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ. ಆರು ಮಂದಿ ಬಿಹಾರ ಮೂಲದ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.&lt;/p&gt;&lt;h2&gt;&lt;strong&gt;ದೂರು ನೀಡಿದ ಬಳಿಕ ಪ್ರಕರಣ ಬಯಲು&lt;/strong&gt;&lt;/h2&gt;&lt;p&gt;ವಡ್ಡರಹಟ್ಟಿ ಕ್ಯಾಂಪ್&zwnj;ನ ಅರುಣ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಧಿಯ ಆಸೆಯಿಂದ ಮನೆಯೊಳಗೆ 50 ಅಡಿ ಆಳದ ಗುಂಡಿ ತೋಡಿರುವ ಪ್ರಕರಣ ಇದೀಗ ಸ್ಥಳೀಯವಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ನಿಜವಾಗಿಯೂ ಮನೆಯಲ್ಲಿ ನಿಧಿ ಇದೆ ಎಂಬ ನಂಬಿಕೆಯಿಂದಲೇ ಈ ಗುಂಡಿ ತೋಡಲಾಗಿತ್ತೇ? ಅಥವಾ ಇದರ ಹಿಂದೆ ಬೇರೆ ಉದ್ದೇಶವಿದೆಯೇ? ಎಂಬ ಹಲವು ಪ್ರಶ್ನೆಗಳು ಮೂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-treasure-hunt-turns-into-police-case-8-fir-in-gangavathis-vadrahatti-gvd/articleshow-gkxxlnm"/>
        </item>
        <item>
            <title><![CDATA[ಕೊಪ್ಪಳ ರೈತರಿಗೆ ಬಂಪರ್ ಸುದ್ದಿ: ಈ ಮೂರು ಯೋಜನೆಗಳಿಂದ 2027ರ ವೇಳೆಗೆ 1 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ!]]></title>
            <link>https://kannada.asianetnews.com/karnataka-districts/koppal-farmers-get-big-boost-1-lakh-acres-to-receive-irrigation-by-2027-through-3-projects-rav/articleshow-gs3c2in</link>
            <guid isPermaLink="true">https://kannada.asianetnews.com/karnataka-districts/koppal-farmers-get-big-boost-1-lakh-acres-to-receive-irrigation-by-2027-through-3-projects-rav/articleshow-gs3c2in</guid>
            <pubDate>Wed, 16 Sep 2026 09:12:40 +0530</pubDate>
            <description><![CDATA[&lt;p&gt;ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 2027ರ ವೇಳೆಗೆ ಸಿಂಗಟಾಲೂರು, ಅಳವಂಡಿ-ಬೆಟಗೇರಿ ಹಾಗೂ ನವಲಕಲ್ ಏತ ನೀರಾವರಿ ಯೋಜನೆಗಳ ಮೂಲಕ ಒಂದು ಲಕ್ಷ ಎಕರೆಗೆ ನೀರು ಒದಗಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ತಿಳಿಸಿದ್ದಾರೆ. ಈ ಯೋಜನೆಗಳಿಂದ ಕೊಪ್ಪಳದ 9 ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2m4qnmeebcha5ggbsckq9my,imgname-koppal-3-projects-1789529937550.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳ: ಸಿಂಗಟಾಲೂರು, ಅಳವಂಡಿ-ಬೆಟಗೇರಿ ಹಾಗೂ ನವಲಕಲ್ ಮೂರು ಏತ ನೀರಾವರಿ ಯೋಜನೆಗಳ ಮೂಲಕ 2027ರ ವೇಳೆಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ ಒಂದು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.&lt;/p&gt;&lt;p&gt;ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಿಂದ 9 ಸಾವಿರ ಎಕರೆ, ನವಲಕಲ್ ಏತ ನೀರಾವರಿ ಯೋಜನೆಯಿಂದ 15 ಸಾವಿರ ಎಕರೆ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ 78 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.&lt;/p&gt;&lt;h2&gt;ಸಿಂಗಟಾಲೂರು ಯೋಜನೆ&lt;/h2&gt;&lt;p&gt;ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಈ ಹಿಂದೆ 98 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಗುರಿ ಹೊಂದಲಾಗಿತ್ತು. ಆದರೆ, ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶವನ್ನು ಈಗಾಗಲೇ ಸೌರ ಹಾಗೂ ಪವನ ವಿದ್ಯುತ್ ಯೋಜನೆಗಳಿಗೆ ನೀಡಿರುವುದರಿಂದ ನೀರಾವರಿ ವ್ಯಾಪ್ತಿ ಕಡಿಮೆಯಾಗಿದೆ. ಮಧ್ಯಪ್ರದೇಶ ಮಾದರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಯೋಜನೆ ಹಾಗೂ ಕಾಲುವೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ₹519 ಕೋಟಿ ಅನುದಾನ ನೀಡಲಿದೆ ಎಂದು ತಿಳಿಸಿದರು.&lt;/p&gt;&lt;h3&gt;ಅಳವಂಡಿ-ಬೆಟಗೇರಿ ಶೀಘ್ರ ಲೋಕಾರ್ಪಣೆ&lt;/h3&gt;&lt;p&gt;ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದಿಂದ ಸುಮಾರು 2 ಕಿಮೀ ಅಂತರದಲ್ಲಿದೆ. ಕೃಷ್ಣಾ ಕೊಳ್ಳದ ವ್ಯಾಪ್ತಿಗೆ ಬರುವ ತುಂಗಭದ್ರಾ ನದಿಯಿಂದ ಯೋಜನೆಗೆ 0.50 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಇದರಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ 9 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ.&lt;/p&gt;&lt;p&gt;ಯೋಜನೆಯಡಿ 1.02 ಕಿ.ಮೀ. ಉದ್ದದ ಇಂಟೇಕ್ ಕಾಲುವೆ, 16.50 ಕಿ.ಮೀ. ಉದ್ದದ ಎಂಎಸ್ ರೈಸಿಂಗ್ ಮೇನ್, 1760 ಎಚ್&zwnj;ಪಿ ಸಾಮರ್ಥ್ಯದ 2+1 ಪಂಪ್&zwnj;ಗಳು ಮತ್ತು ಮೋಟಾರ್&zwnj;ಗಳು, ಎರಡು ಡೆಲಿವರಿ ಚೇಂಬರ್&zwnj;ಗಳು, ಜಾಕ್&zwnj;ವೆಲ್ ಸಮೀಪ 33/6.6. ಕೆವಿ ಸಬ್&zwnj;ಸ್ಟೇಷನ್, 6.10 ಕಿ.ಮೀ. ಉದ್ದದ ಟ್ರಾನ್ಸ್&zwnj;ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ನಿರ್ಮಿಸಲಾಗಿದೆ. ಸೆ. 10ರಂದು ಸಬ್&zwnj;ಸ್ಟೇಷನ್ ಚಾರ್ಜ್ ಮಾಡಲಾಗಿದೆ ಎಂದರು.&lt;/p&gt;&lt;p&gt;ಪ್ರತಿ ಪಂಪ್&zwnj;ನಿಂದ 28.28 ಕ್ಯುಸೆಕ್&zwnj;ನಂತೆ ಒಟ್ಟು 56.56 ಕ್ಯುಸೆಕ್ ನೀರನ್ನು ಹರಿಸಲಾಗುವುದು. ಜಲಾಶಯದ ನೀರಿನ ಮಟ್ಟ 1605 ಅಡಿ ಇರುವ ವರೆಗೆ ಲಭ್ಯವಿರುವ ನೀರನ್ನು ಯೋಜನೆಗೆ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.&lt;/p&gt;&lt;h3&gt;ಹೆಚ್ಚುವರಿ 3 ಸಾವಿರ ಎಕರೆಗೆ ಕಾಮಗಾರಿ&lt;/h3&gt;&lt;p&gt;ಯೋಜನೆಯಡಿ ಹೆಚ್ಚುವರಿಯಾಗಿ 3 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ.ವಿ.ಆರ್. ಕನ್&zwnj;ಸ್ಟ್ರಕ್ಷನ್&zwnj;ಗೆ ₹4.59 ಕೋಟಿಗೆ 2021ರ ಮಾ. 30ರಂದು ಒಂಬತ್ತು ತಿಂಗಳ ಅವಧಿಗೆ ವಹಿಸಲಾಗಿತ್ತು. ರೈಸಿಂಗ್ ಮೇನ್ ಕಾಮಗಾರಿ ಪೂರ್ಣಗೊಂಡಿದ್ದು, ಪಂಪ್&zwnj;ಗಳ ಅಳವಡಿಕೆ ಹಾಗೂ ಸಬ್&zwnj;ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಹಿಟ್ನಾಳ್ ತಿಳಿಸಿದರು.&lt;/p&gt;&lt;p&gt;ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿಪಿಆರ್&zwnj;ನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಲಾಗಿದ್ದು, ₹211 ಕೋಟಿಗೆ ಅನುಮೋದನೆ ದೊರೆತಿದೆ. ಯೋಜನೆಯಡಿ 6 ಸಾವಿರ ಎಕರೆ ಜಮೀನುಗಳಿಗೆ ಒಟ್ಟು 39.78 ಕಿ.ಮೀ. ಉದ್ದದ ಮುಖ್ಯ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿದೆ ಎಂದರು.&lt;/p&gt;&lt;h3&gt;9 ಗ್ರಾಮಗಳ ರೈತರಿಗೆ ಅನುಕೂಲ&lt;/h3&gt;&lt;p&gt;ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು ಮತ್ತು ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.&lt;/p&gt;&lt;p&gt;9 ಸಾವಿರ ಎಕರೆ ಪ್ರದೇಶಕ್ಕೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ ಇನ್ನೂ ₹47 ಕೋಟಿ ಅನುದಾನದ ಅಗತ್ಯವಿದೆ. ಈ ಅನುದಾನ ದೊರೆತರೆ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ರೈತರಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದು ಶಾಸಕ ಹಿಟ್ನಾಳ್ ಹೇಳಿದರು.&lt;/p&gt;&lt;p&gt;ನವಲಕಲ್ ಏತ ನೀರಾವರಿ ಯೋಜನೆಯೂ ಈಗಾಗಲೇ ಪೂರ್ಣಗೊಂಡಿದ್ದು, ಕಾಲುವೆ ನಿರ್ಮಾಣದ ಮೂಲಕ 15 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಉಪಸ್ಥಿತರಿದ್ದರು.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-farmers-get-big-boost-1-lakh-acres-to-receive-irrigation-by-2027-through-3-projects-rav/articleshow-gs3c2in"/>
        </item>
        <item>
            <title><![CDATA[ಪಾಠ ಹೇಳುವುದಷ್ಟೇ ಅಲ್ಲ, ಶಾಲೆಯನ್ನೇ ಬದಲಿಸಿದ ಶಿಕ್ಷಕ: ಮಕ್ಕಳ ಕಲಿಕೆಗೆ ಹೊಸ ಸ್ಪರ್ಶ!]]></title>
            <link>https://kannada.asianetnews.com/education/koppal-adavibhavi-government-school-teacher-manjunath-hiremath-leads-by-example-education-sports-gvd/articleshow-icgh8f5</link>
            <guid isPermaLink="true">https://kannada.asianetnews.com/education/koppal-adavibhavi-government-school-teacher-manjunath-hiremath-leads-by-example-education-sports-gvd/articleshow-icgh8f5</guid>
            <pubDate>Sat, 05 Sep 2026 15:29:23 +0530</pubDate>
            <description><![CDATA[&lt;p&gt;ಅಡವಿಭಾವಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ನಾಗಯ್ಯ ಹಿರೇಮಠ ಶಿಕ್ಷಣದ ಜೊತೆಗೆ ಸಾಹಿತ್ಯ, ಕ್ರೀಡೆ, ಪರಿಸರ ಸಂರಕ್ಷಣೆ, ತಂತ್ರಜ್ಞಾನ ಆಧಾರಿತ ಬೋಧನೆ ಹಾಗೂ ಶಾಲಾಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1rg3qc7ft7asaqvb8a4gbfm,imgname-bj-1788602342791.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹನುಮಸಾಗರ (ಸೆ.05):&lt;/strong&gt; ಅಡವಿಭಾವಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ನಾಗಯ್ಯ ಹಿರೇಮಠ ಶಿಕ್ಷಣದ ಜೊತೆಗೆ ಸಾಹಿತ್ಯ, ಕ್ರೀಡೆ, ಪರಿಸರ ಸಂರಕ್ಷಣೆ, ತಂತ್ರಜ್ಞಾನ ಆಧಾರಿತ ಬೋಧನೆ ಹಾಗೂ ಶಾಲಾಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. 2008ರ ಜುಲೈ 16ರಂದು ಶಿಕ್ಷಕ ವೃತ್ತಿಗೆ ಸೇರ್ಪಡೆಯಾದ ಅವರು ಹನಮಗಿರಿ ಶಾಲೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ಅಡವಿಭಾವಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದರು.&lt;/p&gt;&lt;p&gt;ದಾನಿಗಳು ಹಾಗೂ ಗ್ರಾಮಸ್ಥರನ್ನು ಸಂಪರ್ಕಿಸಿ ಸುಮಾರು ₹2.50 ಲಕ್ಷ ಮೌಲ್ಯದ ವಿವಿಧ ಸಾಮಗ್ರಿಗಳನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್&zwnj;ಗಳು, ಫ್ಯಾನ್&zwnj;ಗಳು, ಅಲಮಾರಿಗಳು, ಖುರ್ಚಿ, ಟೇಬಲ್, ತಟ್ಟೆ, ಲೋಟ ಸೇರಿದಂತೆ ಅಗತ್ಯ ಪರಿಕರಗಳನ್ನು ಶಾಲೆಗೆ ಒದಗಿಸುವ ಮೂಲಕ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿದ್ದಾರೆ.&lt;/p&gt;&lt;p&gt;ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್&zwnj;ಗಳ ಮೂಲಕ ಪರಿಣಾಮಕಾರಿ ಬೋಧನೆ ಮಾಡುತ್ತಿದ್ದಾರೆ. ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ಶೈಕ್ಷಣಿಕ ಪ್ರವಾಸ, ಹೊರಸಂಚಾರ ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳಲ್ಲಿ ಕಲಿಕೆಯ ಕುತೂಹಲ ಹೆಚ್ಚಿಸಿದ್ದಾರೆ.&lt;/p&gt;&lt;p&gt;ಪ್ರತಿವರ್ಷ ಶಾಲೆಯ ವಿದ್ಯಾರ್ಥಿಗಳು ಇನ್ಸ್ಫೈರ್&zwnj; (INSPIRE Award)ಗೆ ಆಯ್ಕೆಯಾಗುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರತಿವರ್ಷ ಸುಮಾರು ಐದು ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ಶಾಲೆಗೆ ಆಯ್ಕೆಯಾಗುವಂತೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.&lt;/p&gt;&lt;p&gt;ನಲಿ-ಕಲಿ, ಇಂಗ್ಲಿಷ್ ಬೈಲಿಂಗ್ವಲ್ ಸೇರಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಎಂಆರ್&zwnj;ಪಿ (Master Resource Person) ಆಗಿ ಕಾರ್ಯನಿರ್ವಹಿಸಿರುವ ಅವರು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಶಿಕ್ಷಕರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಬಿಎಲ್&zwnj;ಒ ಆಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದು, ಶಿಕ್ಷಕ ವೃತ್ತಿಯೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಕೈಯಲ್ಲಿ ಪುಸ್ತಕ, ಮೈದಾನದಲ್ಲಿ ಕ್ರೀಡೆ&lt;/strong&gt;&lt;/h2&gt;&lt;p&gt;ಸಾಹಿತ್ಯದ ಮೇಲೂ ವಿಶೇಷ ಆಸಕ್ತಿ ಹೊಂದಿರುವ ಅವರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/education/koppal-adavibhavi-government-school-teacher-manjunath-hiremath-leads-by-example-education-sports-gvd/articleshow-icgh8f5"/>
        </item>
        <item>
            <title><![CDATA[Basavaraj Rayareddy: ಇಸ್ಲಾಂ ಪರ ಹೇಳಿಕೆ ಬೆನ್ನಲ್ಲೇ ವೇದಿಕೆಯಲ್ಲಿ ನಿಂತು ರಾಯರೆಡ್ಡಿ ಸಾವಿನ ಕುರಿತು ಮಾರ್ಮಿಕ ಮಾತು]]></title>
            <link>https://kannada.asianetnews.com/karnataka-districts/basavaraj-rayareddy-islam-statement-controversy-death-statement-karnataka-yelburga-kallur-viral-statement-bmk/articleshow-oc8i1ck</link>
            <guid isPermaLink="true">https://kannada.asianetnews.com/karnataka-districts/basavaraj-rayareddy-islam-statement-controversy-death-statement-karnataka-yelburga-kallur-viral-statement-bmk/articleshow-oc8i1ck</guid>
            <pubDate>Wed, 02 Sep 2026 16:19:51 +0530</pubDate>
            <description><![CDATA[&lt;p&gt;ಇಸ್ಲಾಂ ಪರ ಹೇಳಿಕೆ ವಿವಾದದ ನಂತರ, ಸಚಿವ ಬಸವರಾಜ ರಾಯರೆಡ್ಡಿ ಅವರು ವೇದಿಕೆಯೊಂದರಲ್ಲಿ ಸಾವಿನ ಕುರಿತು ಮಾರ್ಮಿಕವಾಗಿ ಮಾತನಾಡಿದ್ದಾರೆ. ಹಾಗಾದರೆ ಅವರು ಸಾವಿನ ಕುರಿತು ಹೇಳಿದ್ದೇನು? ಈ ಕುರಿತು ಕಂಪ್ಲಿಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j2dptyzbz002d1a8338cmt2z,imgname-basavaraj-rayareddy.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ ಕಷ್ಟದ ವಾತಾವರಣ ಮತ್ತು ತಮ್ಮ ವಿರುದ್ಧದ ತೀವ್ರ ವಾಗ್ದಾಳಿಗಳ ಬೆನ್ನಲ್ಲೇ ಸಚಿವ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಸ್ಲಾಂ ಧರ್ಮದ ಪರವಾಗಿ ಅವರು ನೀಡಿದ್ದಾರೆನ್ನಲಾದ ಹೇಳಿಕೆ ರಾಜಕೀಯ ರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಬೆನ್ನಲ್ಲೇ, ರಾಯರೆಡ್ಡಿ ಅವರು ನಾನು ವೇದಿಕೆಯಲ್ಲಿ ನೀಡದ ಆ ಒಂದು ಮಾತು ಈಗ ಮತ್ತೆ ಸಂಚಲನ ಸೃಷ್ಟಿಸಿದೆ.&lt;/p&gt;&lt;h2&gt;&lt;strong&gt;ಸಾವಿನ ಕುರಿತು ಮಾರ್ಮಿಕ ಮಾತು!&lt;/strong&gt;&lt;/h2&gt;&lt;p&gt;ವೇದಿಕೆಯಲ್ಲಿದ್ದ ಅಮರಯ್ಯ ಎಂಬುವವರನ್ನು ಕರೆಯುತ್ತಾ ಬಸವರಾಜ ರಾಯರೆಡ್ಡಿ ಅವರು ಸಾವಿನ ಕುರಿತು ಸುದೀರ್ಘವಾಗಿ ಮಾತನಾಡಿದರು. ಮನುಷ್ಯನಿಗೆ ಸಾವು ಬರುವುದು ಅತ್ಯಂತ ಸಹಜ. ಸಾವು ಎಂಬುದು ಎಲ್ಲರಿಗೂ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ಅದು ಈಗಲೇ ಬರಬಹುದು ಅಥವಾ ಆಮೇಲೆಯೂ ಬರಬಹುದು. ಆದರೆ ನಾನು ಯಾವುದೇ ಕಾರಣಕ್ಕೂ ಸಾವಿಗೆ ಹೆದರುವವನಲ್ಲ&quot; ಎಂದು ದೃಢವಾಗಿ ಹೇಳಿದರು.&lt;/p&gt;&lt;h3&gt;&lt;strong&gt;ಪ್ರಚಾರ ಸಿಕ್ಕಿದ್ದಕ್ಕೆ ಧನ್ಯವಾದ ಎಂದ ಸಚಿವ!&lt;/strong&gt;&lt;/h3&gt;&lt;p&gt;ಇಸ್ಲಾಂ ಧರ್ಮ ಶ್ರೇಷ್ಠ ಎಂಬರ್ಥದಲ್ಲಿ ನೀಡಿದ್ದ ಹೇಳಿಕೆಯ ಬಗ್ಗೆ ಮಾತನಾಡಿದ ರಾಯರೆಡ್ಡಿ, &quot;ಜನರು ನಾನು ಪ್ರಚಾರಕ್ಕಾಗಿಯೇ ಈ ರೀತಿ ಮಾತನಾಡಿದ್ದೇನೆ ಎಂದು ಅಂದುಕೊಂಡಿದ್ದಾರೆ. ಹಾಗಿದ್ದರೆ ನನಗೆ ಎರಡು ದಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಕೊಟ್ಟಿದ್ದಕ್ಕೆ ಮಾಧ್ಯಮಗಳಿಗೆ ಹಾಗೂ ಜನರಿಗೆ ಧನ್ಯವಾದಗಳು. ಇಲ್ಲದಿದ್ದರೆ ಬಸವರಾಜ ರಾಯರೆಡ್ಡಿ ಎಂದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಈಗ ಸೌದಿ ಅರೇಬಿಯಾ, ಇರಾನ್&zwnj; ನಲ್ಲೂ ನನಗೆ ಪ್ರಚಾರ ಸಿಕ್ಕಿದೆ ಎಂದು ಮುಖ್ಯಮಂತ್ರಿಗಳು ಕೂಡ ಹೇಳಿದ್ದಾರೆ. ಅಲ್ ಝಜೀರಾ ನ್ಯೂಸ್&zwnj; ಕೂಡ ತೋರಿಸಿದೆ, ಬಿಹಾರದ ಸಂಸದ ಡ್ಯಾನಿಶ್ ಅಲಿ ಮತ್ತು ಡಿಕೆ ಶಿವಕುಮಾರ್ ನಿನ್ನೆ ಫೋನ್ ಮಾಡಿ ಮಾತನಾಡಿದರು ಎಂದು ವ್ಯಂಗ್ಯವಾಗಿ ಹಾಗೂ ಹಾಸ್ಯಮಯವಾಗಿ ತಮ್ಮ ಪ್ರತಿಕ್ರಿಯೆ ನೀಡಿದರು.&lt;/p&gt;&lt;h3&gt;&lt;strong&gt;ಧರ್ಮಗಳ ಅಧ್ಯಯನ ಮತ್ತು ದೇವಸ್ಥಾನಗಳ ಕುರಿತು ನಿಲುವು!&lt;/strong&gt;&lt;/h3&gt;&lt;p&gt;ದೇವಸ್ಥಾನಗಳಿಗೆ ಭೇಟಿ ನೀಡುವ ಕುರಿತು ಮಾತನಾಡಿದ ಅವರು, &quot;ನಾನು ನನ್ನ ಸ್ವಾರ್ಥಕ್ಕಾಗಿ ದೇವಸ್ಥಾನಗಳಿಗೆ ಹೋಗಲ್ಲ. 'ನನ್ನನ್ನು ಮಂತ್ರಿ ಮಾಡು' ಎಂದು ದೇವಸ್ಥಾನದಲ್ಲಿ ಬೇಡಿಕೊಳ್ಳಲು ಅಥವಾ ಸ್ವಾಮೀಜಿಗಳ ಕಾಲು ಬೀಳಲು ನಾನು ಹೋಗುವುದಿಲ್ಲ. ದೇವರು ಇರುವುದು ಪ್ರತಿಯೊಬ್ಬರ ಮನಸ್ಸಿನಲ್ಲಿ. ಇಂದು ನಾನು ದೇವಸ್ಥಾನಕ್ಕೆ ಹೋಗಿದ್ದು ನಾಡಿಗೆ ಒಳ್ಳೆಯ ಮಳೆ ಬರಲಿ ಎಂದು ಕೇಳಿಕೊಳ್ಳುವುದಕ್ಕಾಗಿ ಮಾತ್ರ. ನಮಗೆ ಜನರೇ ದೇವರು&quot; ಎಂದರು.&lt;/p&gt;&lt;h3&gt;&lt;strong&gt;ತಮ್ಮ ಧಾರ್ಮಿಕ ಅಧ್ಯಯನದ ಪಯಣವನ್ನು ವಿವರಿಸಿದ ರಾಯರೆಡ್ಡಿ!&lt;/strong&gt;&lt;/h3&gt;&lt;p&gt;&lt;strong&gt;ಶಕ್ತಿ ಪೀಠಗಳು; &lt;/strong&gt;ಮಾನಸ ಸರೋವರದಲ್ಲಿ ಮುಳುಗಿ ಬಂದಿದ್ದೇನೆ. ಕಾಮಾಕ್ಯ ಶಕ್ತಿ ಪೀಠ ಸೇರಿದಂತೆ ನಾಲ್ಕೈದು ಶಕ್ತಿ ಪೀಠಗಳಿಗೆ ಹೋಗಿ ಅಭ್ಯಾಸ ಮಾಡಿದ್ದೇನೆ.&lt;/p&gt;&lt;p&gt;&lt;strong&gt;ವೈಷ್ಣವಿ ದೇವಿ ದರ್ಶನ ಮತ್ತು ಆರ್. ಅಶೋಕ್ ಗೂಢಚಾರ!;&lt;/strong&gt; ವೈಷ್ಣವಿ ದೇವಿಗೆ ಸವದಿ, ಅಶೋಕ್ ಮತ್ತು ನಾನು ಸೇರಿ ಹೋಗಿದ್ದೆವು. ವೈಷ್ಣವಿ ದೇವಿಯ ಫೋಟೋ ತೋರಿಸುತ್ತಾ, ಅವತ್ತೇ ದೆಹಲಿಯ ಬಿಜೆಪಿ ನಾಯಕರು ಆರ್. ಅಶೋಕ್ ವಿರೋಧ ಪಕ್ಷದ ನಾಯಕರಾಗುತ್ತಾರೆ ಎಂದು ಹೇಳಿದ್ದರು. ಆ ನ್ಯೂಸ್ ಅನ್ನು ನಾನೇ ಶಕ್ತಿ ಪೀಠದಲ್ಲಿ ಅಶೋಕ್&zwnj;ಗೆ ಕೊಟ್ಟಿದ್ದೆ. ಅಶೋಕ್ ನನ್ನ ಪಕ್ಕದಲ್ಲೇ ಇದ್ದಾಗ ಅವತ್ತೇ ಶುಭಾಶಯ ತಿಳಿಸಿದ್ದೆ ಎಂದು ಹಳೆಯ ರಹಸ್ಯವನ್ನು ಹೊರಹಾಕಿದರು.&lt;/p&gt;&lt;p&gt;&lt;strong&gt;ಅಧ್ಯಯನ ಯಾನ;&lt;/strong&gt; ಜುದಾಯಿಸಂ, ಜೈನಿಸಂ, ಸಾರಾನಾಥ್ ಹಾಗೂ ಬುದ್ಧ ತಪಸ್ಸು ಮಾಡಿದ ಮರದ ಕೆಳಗೆ ಕುಳಿತು ಅಧ್ಯಯನ ನಡೆಸಿದ್ದೇನೆ. ಉಪನಿಷತ್ತುಗಳು, ವೇದಗಳನ್ನು ಓದಿದ್ದೇನೆ, ಏಸು ಕ್ರಿಸ್ತನ ಸಮಾಧಿಗೂ ಭೇಟಿ ನೀಡಿದ್ದೇನೆ.&lt;/p&gt;&lt;h3&gt;&lt;strong&gt;ಮತಾಂತರವಾಗಲ್ಲ, ಶರಣ ತತ್ವವೇ ನನ್ನ ಹಾದಿ!&lt;/strong&gt;&lt;/h3&gt;&lt;p&gt;ಮುಸ್ಲಿಂ ಸಮುದಾಯದ ಸಭೆಯಲ್ಲಿ ಸರ್ವ ಧರ್ಮವೂ ಶ್ರೇಷ್ಠ ಎಂದು ಹೇಳಿದ್ದೇನೆ ಹೊರತು ಯಾರನ್ನೂ ಬೈಯಲು ಸಾಧ್ಯವಿಲ್ಲ. ಹಜ್ ಅಥವಾ ಉಮ್ರಾಗೆ ಹೋಗಲು ನಾನು ಮುಸ್ಲಿಂ ಅಲ್ಲ, ನಾನು ಬೇರೆ ಯಾವುದೇ ಧರ್ಮಕ್ಕೂ ಮತಾಂತರಗೊಳ್ಳುವುದಿಲ್ಲ. ನಾನು ಶರಣ ತತ್ವವನ್ನು ನಂಬುವವನು. ನನಗೆ ಎಸ್&zwnj;ಸಿ, ಎಸ್&zwnj;ಟಿ ಸೇರಿದಂತೆ ಎಲ್ಲಾ ಸಮುದಾಯದವರೂ ಒಂದೇ. ಧರ್ಮಗಳ ಸಾರ ಒಂದೇ ಆಗಿದೆ,&quot; ಎಂದು ಪುನರುಚ್ಚರಿಸಿದರು. ಕೊನೆಯಲ್ಲಿ, &quot;ನನ್ನ ಹೆಂಡತಿ ಮತ್ತು ಮಗಳು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕರೆದಿದ್ದಾರೆ, ಅವರು ಕರೆದರೆ ಹೋಗಲೇಬೇಕಲ್ಲವೇ? ಹಾಗೆಯೇ ನಾನು ಪ್ರಸ್ತುತ ಸುತ್ತೂರು ಮಠಕ್ಕೂ ಹೋಗುತ್ತಿದ್ದೇನೆ&quot; ಎಂದು ತಿಳಿಸುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.&lt;/p&gt;]]></content:encoded>
            <category>koppal</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/basavaraj-rayareddy-islam-statement-controversy-death-statement-karnataka-yelburga-kallur-viral-statement-bmk/articleshow-oc8i1ck"/>
        </item>
        <item>
            <title><![CDATA[ಇಸ್ಲಾಂ ಪರ ಹೇಳಿಕೆ ನೀಡಿದ ರಾಯರೆಡ್ಡಿಗೆ ಅಪ್ಪ, ಅಜ್ಜನ ಧರ್ಮನಿಷ್ಠೆ ನೆನಪಿಸಿದ ಹಾಲಪ್ಪ ಆಚಾರ್!]]></title>
            <link>https://kannada.asianetnews.com/politics/former-minister-halappa-achar-slams-basavaraj-rayareddy-over-his-controversial-stats-about-islam-rav/articleshow-soogitf</link>
            <guid isPermaLink="true">https://kannada.asianetnews.com/politics/former-minister-halappa-achar-slams-basavaraj-rayareddy-over-his-controversial-stats-about-islam-rav/articleshow-soogitf</guid>
            <pubDate>Thu, 03 Sep 2026 07:19:09 +0530</pubDate>
            <description><![CDATA[&lt;p&gt;ಸಚಿವ ಬಸವರಾಜ ರಾಯರಡ್ಡಿ ಅವರು ಇಸ್ಲಾಂ ಧರ್ಮ ಶ್ರೇಷ್ಠ ಎಂದು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಮಾಜಿ ಸಚಿವ ಹಾಲಪ್ಪ ಆಚಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಯರಡ್ಡಿ ಮೊದಲು ತಮ್ಮ ತಂದೆ-ತಾಯಿಯ ಧರ್ಮವನ್ನು ಅಧ್ಯಯನ ಮಾಡಲಿ, ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1jep0cae3nvqa26j4rja3j3,imgname-halappa-achar-1788399518090.jpg" type="image/jpeg" height="390" width="690"/>
            <content:encoded><![CDATA[&lt;p&gt;ಕುಕನೂರು ಸೆ.3: ಸಚಿವ ಬಸವರಾಜ ರಾಯರಡ್ಡಿ(Basavaraj Rayareddy) ಮೊದಲು ತಮ್ಮ ಅಪ್ಪ, ಅಜ್ಜನ ಧರ್ಮ, ನಡೆಯನ್ನು ಅಧ್ಯಯನ ಮಾಡಲಿ. ಮಾನಸಿಕ ಸಮತೋಲನ ಕಳೆದುಕೊಂಡು ಎಡಬಿಡಂಗಿತನ ಮಾಡುವುದು ಬೇಡ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಟೀಕಿಸಿದ್ದಾರೆ.&lt;/p&gt;&lt;h2&gt;ಎಲ್ಲರಿಗೂ ಅವರ ತಂದೆ-ತಾಯಿಯಂತೆ ಅವರ ಧರ್ಮವೂ ಶ್ರೇಷ್ಠ&lt;/h2&gt;&lt;p&gt;ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವರಾಜ ರಾಯರಡ್ಡಿ ಅವರು ಎಲ್ಲ ಧರ್ಮಕ್ಕಿಂತ ಇಸ್ಲಾಂ ಶ್ರೇಷ್ಠ ಅಂದಿದ್ದಾರೆ. ಅವರು ಯಾವ ಧರ್ಮದವರು? ಅವರಿಗೆ ಅವರ ಧರ್ಮ ಶ್ರೇಷ್ಠ ಅಲ್ಲವೇ? ಎಲ್ಲರಿಗೂ ಅವರ ತಂದೆ-ತಾಯಿ ಶ್ರೇಷ್ಠ ಹಾಗೂ ಅವರ ಧರ್ಮವೂ ಶ್ರೇಷ್ಠ ಆಗಿರಬೇಕು. ಮಂತ್ರಿಯಾಗಿ ಸಂವಿಧಾನಾತ್ಮಕವಾಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ತಿಂಗಳಲ್ಲಿ ಜನರ ಮನಸ್ಸು ಘಾಸಿಗೊಳಿಸಲು ಯಾರನ್ನೋ ಓಲೈಸಲು ಸ್ವಂತ ಧರ್ಮವನ್ನು ಅವಹೇಳನ ಮಾಡುವುದು ಸರಿಯಲ್ಲ. ಸಚಿವ ರಾಯರಡ್ಡಿ ಅವರ ತಂದೆ ಬಸಲಿಂಗಪ್ಪ ಅವರು ಹತ್ತು ವರ್ಷಗಳ ಕಾಲ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹಿಂದೂ ಧರ್ಮಾಚರಣೆ ಮಾಡಿದರು. ಇವರು ಅವರಿಗೇನು ಬೆಲೆ ಕೊಟ್ಟಂತ್ತಾಯಿತು ಎಂದು ಪ್ರಶ್ನಿಸಿದರು.&lt;/p&gt;&lt;p&gt;ಧರ್ಮ-ಧರ್ಮದಲ್ಲಿ ಬೆಂಕಿ ಹಚ್ಚುವ ಕೆಲಸ ಆಗಬಾದರು. ಮೆಕ್ಕಾಗೆ ಹೋಗುವ ಅವಕಾಶ ಇಲ್ಲ ಎಂದು ಸಚಿವ ರಾಯರಡ್ಡಿ ಹೇಳಿದ್ದಾರೆ. ಹೋಗಬೇಕೆಂದರೆ ಹೋಗುವ ಅವಕಾಶ ಮಾಡಿಸಿಕೊಳ್ಳಿ ಎಂದು ಹಾಲಪ್ಪ ಆಚಾರ್ ಟೀಕಿಸಿದರು.&lt;/p&gt;&lt;h3&gt;ವಿನಾಶ ಕಾಲೇ ವಿಪರೀಟ ಬುದ್ಧಿ&lt;/h3&gt;&lt;p&gt;ಹೊಸ ಧರ್ಮ ಸ್ಥಾಪನೆ ಪೂರ್ವ ತಂದೆ-ತಾಯಿ ಹೇಗೆ ನಡೆದುಕೊಂಡಿದ್ದಾರೆ ಅನ್ನುವ ಅಧ್ಯಯನ ಮಾಡಿ. ತಂದೆ- ತಾಯಿ, ಅಜ್ಜನ ಧರ್ಮನಿಷ್ಠೆ ಪಾಲನೆ ಮಾಡಿ ಎಂದರು.&lt;/p&gt;&lt;p&gt;ಎಲ್ಲ ಧರ್ಮಕ್ಕಿಂತ ಮುಸ್ಲಿಂ ಧರ್ಮ ಶ್ರೇಷ್ಠ ಎಂದಿರುವ ಅರ್ಥ ಏನು, ವಿನಾಶ ಕಾಲೇ ವಿಪರೀತಿ ಬುದ್ಧಿ ಎಂಬಂತೆ ಹೇಳುವುದು ಒಂದು ಮಾಡುವುದು ಎಂಬಂತೆ ರಾಯರಡ್ಡಿ ಅವರ ನಡೆ ರಾಷ್ಟ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನಗಳಿಗೆ ಹೋಗಬೇಡಿ ಎಂದು ಅವರೇ ದೇವಸ್ಥಾನಕ್ಕೆ ತೆರಳುತ್ತಿರುವುದು ಸಚಿವ ರಾಯರಡ್ಡಿ ಅವರ ಎಡಬಿಡಂಗಿತನದ ಪ್ರದರ್ಶನ ಆಗಿದೆ ಎಂದಿದ್ದಾರೆ.&lt;/p&gt;&lt;p&gt;ಈ ವೇಳೆ ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಶಿವಕುಮಾರ ನಾಗಲಾಪೂರಮಠ, ಶರಣಪ್ಪ ಬಣ್ಣದಬಾವಿ, ಮಂಜುನಾಥ ನಾಡಗೌಡರ್, ಪಪಂ ಮಾಜಿ ಅಧ್ಯಕ್ಷ ಶಂಭು ಜೋಳದ, ಪ್ರಕಾಶ ತಹಸೀಲ್ದಾರ್, ಲಕ್ಷ್ಮಣ ಕಾಳಿ, ಬಸವರಾಜ ಹಾಳಕೇರಿ ಇತರರಿದ್ದರು.&lt;/p&gt;&lt;h3&gt;ಬರ ಮರೆತು ದೆಹಲಿಯಲ್ಲಿ ಬಿಡುಬಿಟ್ಟಿದ್ದ ಕಾಂಗ್ರೆಸ್&lt;/h3&gt;&lt;p&gt;ರಾಜ್ಯದಲ್ಲಿ ಬರ ಆವರಿಸಿದ್ದರೂ ಒಂದು ತಿಂಗಳ ಪರ್ಯಂತ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟು ರಾಜ್ಯವನ್ನು ಕತ್ತಲೆಗೆ ದೂಡಿದರು. ಕೇವಲ 101 ತಾಲೂಕು ಮಾತ್ರ ಬರಪೀಡಿತ ಎಂದು ಘೋಷಣೆ ಆಗಿವೆ. ರೈತಪರ ಜನಪರ ಕಾಳಜಿ ಸರ್ಕಾರಕ್ಕಿಲ್ಲ. ಅಭಿವೃದ್ಧಿಗೆ ಹಣ ಇಲ್ಲ ಅನ್ನುವ ಸಚಿವ ರಾಯರಡ್ಡಿ ಅವರು ಮತ್ತೊಂದು ಕಡೆ ಸಾಕಷ್ಟು ಹಣ ಇದೆ ಅನ್ನುತ್ತಾರೆ. ಕ್ಷೇತ್ರದ ಜನರ ಭ್ರಮನಿರಸ ಮಾಡಿದ್ದಾರೆ. ಬೆಣಕಲ್ಲ ಕೆರೆಗೆ ಇದುವರೆಗೂ ನೀರು ಬಂದಿಲ್ಲ. ಇದರಿಂದ ಅಲ್ಲಿನ ರೈತರಿಗೆ ನಷ್ಟವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.&lt;/p&gt;&lt;p&gt;ಹಿಂದೆ ಮಹಮ್ಮದ್ ಅಲಿ ಜಿನ್ನಾಓಲೈಸಲು ನೆಹರು ಅವರು ಭಾರತದ ವಿಭಜನೆ ಮಾಡಿದರು. ಕಾಂಗ್ರೆಸ್ ಡಿಎನ್ಎದಲ್ಲಿ ಒಡೆದಾಳುವ ನೀತಿ ಬಂದಿದೆ. ಅದೇ ರೀತಿ ಸಚಿವ ಬಸವರಾಜ ರಾಯರಡ್ಡಿ ಜನರನ್ನು ಓಲೈಸಲು ಹೋಗಿ ಧರ್ಮ-ಧರ್ಮಗಳ ಮಧ್ಯೆ ಒಡೆದಾಡುವ ನೀತಿ ಅನುಸರಿಸುತ್ತಿದ್ದಾರೆ.&lt;/p&gt;&lt;p&gt;ಸಿಎಂ ಡಿಕೆಶಿಗೆ ದಮ್ಮು, ತಾಕತ್ತಿದ್ದರೆ ಸಚಿವ ರಾಯರಡ್ಡಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು. ಪಕ್ಷಗಳು ಮಾತ್ರವಲ್ಲದೇ ಜನರು ರಾಯರಡ್ಡಿ ಅವರು ನೀಡಿರುವ ಹೇಳಿಕೆ ಖಂಡಿಸಿದ್ದಾರೆ. ಅವರು ಜನರ ಕ್ಷಮೆ ಕೇಳಬೇಕು ಎಂದಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/former-minister-halappa-achar-slams-basavaraj-rayareddy-over-his-controversial-stats-about-islam-rav/articleshow-soogitf"/>
        </item>
        <item>
            <title><![CDATA[ತುಂಗಭದ್ರಾ ಕಾಲುವೆಯಲ್ಲಿ ಅಕ್ರಮದ ಆಟ: 10ಕ್ಕೂ ಹೆಚ್ಚು ಪೈಪ್‌ಗಳನ್ನು ಕಿತ್ತೊಗೆದ ಸಿಬ್ಬಂದಿಗಳು]]></title>
            <link>https://kannada.asianetnews.com/karnataka-districts/koppal-gangavathi-water-crisis-tungabhadra-canal-over-10-illegal-pipelines-removed-gvd/articleshow-t98t53o</link>
            <guid isPermaLink="true">https://kannada.asianetnews.com/karnataka-districts/koppal-gangavathi-water-crisis-tungabhadra-canal-over-10-illegal-pipelines-removed-gvd/articleshow-t98t53o</guid>
            <pubDate>Thu, 03 Sep 2026 20:00:35 +0530</pubDate>
            <description><![CDATA[&lt;p&gt;ಗಂಗಾವತಿ ಭಾಗಕ್ಕೆ ಮಾತ್ರ ಸೀಮಿತವಾಗದೆ ಸೋಮನಾಳ, ಮೈಲಾಪುರ, ಚಿಕ್ಕಡಂಕನಕಲ್ ಹಾಗೂ ಕಾರಟಗಿ ಭಾಗಗಳಲ್ಲಿಯೂ ಕೆಲ ಪ್ರಭಾವಿ ರೈತರು ಕಾಲುವೆಗೆ ಅಕ್ರಮವಾಗಿ ಪೈಪ್&zwnj;ಗಳನ್ನು ಜೋಡಿಸಿಕೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ktqngsw7wda7wdavxcbkff,imgname-vjv-1788445709849.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಸೆ.03): &lt;/strong&gt;ತುಂಗಭದ್ರಾ ಎಡದಂಡೆ ಕಾಲುವೆಯಿಂದ ಅಕ್ರಮವಾಗಿ ನೀರು ಪಡೆಯಲು ಪ್ರಭಾವಿ ರೈತರು ಅಳವಡಿಸಿದ್ದ ಪೈಪ್&zwnj;ಗಳ ವಿರುದ್ಧ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿದ್ದಾರೆ. ಕಾಲುವೆಗೆ ರಂದ್ರ ಕೊರೆದು ಅಳವಡಿಸಿದ್ದ ಪೈಪ್&zwnj;ಗಳನ್ನು ಜೆಸಿಬಿ ಮೂಲಕ ಕಿತ್ತೊಗೆದು ತೆರವುಗೊಳಿಸಲಾಗಿದೆ.&lt;/p&gt;&lt;p&gt;ತಾಲೂಕಿನ ದಾಸನಾಳ ವ್ಯಾಪ್ತಿಯ ತುಂಗಭದ್ರಾ ಕಾಲುವೆಯ ನಂ. 20ರಿಂದ 24ನೇ ಮೈಲ್&zwnj;ವರೆಗೆ ಕೆಲ ರೈತರು ಕಾಲುವೆಯೊಳಗೆ ರಂದ್ರ ಕೊರೆದು ತಮ್ಮ ಜಮೀನುಗಳಿಗೆ ಪೈಪ್&zwnj;ಗಳನ್ನು ಅಳವಡಿಸಿಕೊಂಡು ನೀರು ಪಡೆಯುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ಅಕ್ರಮ ಪೈಪ್&zwnj;ಗಳನ್ನು ತೆರವುಗೊಳಿಸಿದ್ದಾರೆ. ಸುಮಾರು 10ಕ್ಕೂ ಹೆಚ್ಚು ರೈತರ ಜಮೀನುಗಳಿಗೆ ಅಳವಡಿಸಿದ್ದ ಪೈಪ್&zwnj;ಗಳನ್ನು ಕಾರ್ಯಾಚರಣೆ ವೇಳೆ ಕಿತ್ತೊಗೆಯಲಾಗಿದೆ.&lt;/p&gt;&lt;p&gt;&lt;strong&gt;ಕೆಳಭಾಗದ ರೈತರಿಗೆ ನೀರಿನ ಸಂಕಷ್ಟ&lt;/strong&gt;&lt;/p&gt;&lt;p&gt;ಕಾಲುವೆಗೆ ನೀರು ಹರಿಸಿ ಸುಮಾರು 20 ದಿನ ಕಳೆದರೂ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮುನಿರಾಬಾದ್ 0 ಮೈಲ್&zwnj;ನಿಂದ ರಾಯಚೂರು ಭಾಗದವರೆಗೆ ಸಮರ್ಪಕ ನೀರು ತಲುಪದ ಹಿನ್ನೆಲೆಯಲ್ಲಿ ಹಲವು ರೈತರು ಇನ್ನೂ ಭತ್ತ ನಾಟಿ ಮಾಡದೆ ನೀರಿಗಾಗಿ ಕಾಯುವಂತಾಗಿದೆ. ಉಪ ಕಾಲುವೆಗಳಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಕೆಳಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಹಲವು ಭಾಗಗಳಲ್ಲೂ ಅಕ್ರಮ ಪೈಪ್&zwnj;ಗಳ ಆರೋಪ&lt;/strong&gt;&lt;/p&gt;&lt;p&gt;ಗಂಗಾವತಿ ಭಾಗಕ್ಕೆ ಮಾತ್ರ ಸೀಮಿತವಾಗದೆ ಸೋಮನಾಳ, ಮೈಲಾಪುರ, ಚಿಕ್ಕಡಂಕನಕಲ್ ಹಾಗೂ ಕಾರಟಗಿ ಭಾಗಗಳಲ್ಲಿಯೂ ಕೆಲ ಪ್ರಭಾವಿ ರೈತರು ಕಾಲುವೆಗೆ ಅಕ್ರಮವಾಗಿ ಪೈಪ್&zwnj;ಗಳನ್ನು ಜೋಡಿಸಿಕೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ಅಕ್ರಮ ಪೈಪ್&zwnj;ಗಳ ಮೂಲಕ ನೀರನ್ನು ತಿರುಗಿಸಿಕೊಳ್ಳುವುದರಿಂದ ಕೆಳಭಾಗದ ರೈತರಿಗೆ ನೀರು ತಲುಪುವಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ರೈತರು ದೂರಿದ್ದಾರೆ.&lt;/p&gt;&lt;h2&gt;&lt;strong&gt;ಮತ್ತೆ ಪೈಪ್ ಅಳವಡಿಸುವ ಆತಂಕ&lt;/strong&gt;&lt;/h2&gt;&lt;p&gt;ಈ ಹಿಂದೆ ಅಕ್ರಮವಾಗಿ ಪೈಪ್&zwnj;ಗಳನ್ನು ಅಳವಡಿಸಿಕೊಂಡವರ ವಿರುದ್ಧ ಜಲಸಂಪನ್ಮೂಲ ಇಲಾಖೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದರ ಜತೆಗೆ, ನೀರು ಎತ್ತುವ ಯಂತ್ರಗಳನ್ನೂ ಜಪ್ತಿ ಮಾಡಿತ್ತು. ಆದರೆ ಈ ಬಾರಿ ಕೇವಲ ಪೈಪ್&zwnj;ಗಳನ್ನು ತೆರವುಗೊಳಿಸಿ ಕಾರ್ಯಾಚರಣೆ ಮುಗಿಸಿರುವುದರಿಂದ, ಮತ್ತೆ ಅದೇ ಸ್ಥಳಗಳಲ್ಲಿ ಪೈಪ್&zwnj;ಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೆಳಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಅಕ್ರಮ ನೀರು ಬಳಕೆಗೆ ಕಡಿವಾಣ ಹಾಕಿ, ಕಾಲುವೆಯ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಜಲಸಂಪನ್ಮೂಲ ಇಲಾಖೆ ಎಸ್&zwnj;ಇ ಶ್ರೀನಿವಾಸ ಮಲ್ಲಿಗೆವಾಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಅಮರೇಶ ಕಂಪ್ಲಿ ಸೇರಿದಂತೆ ಜೆಸ್ಕಾಂ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-gangavathi-water-crisis-tungabhadra-canal-over-10-illegal-pipelines-removed-gvd/articleshow-t98t53o"/>
        </item>
        <item>
            <title><![CDATA[ತಂಗಡಗಿ-ಜನಾರ್ದನ ರೆಡ್ಡಿ ಟ್ವೀಟ್ ವಾರ್ ಮತ್ತೊಂದು ಹಂತಕ್ಕೆ! ರಾಜೀನಾಮೆಗೆ ನಾನೂ ರೆಡಿ, ರೆಡ್ಡಿ ನೇರ ಸವಾಲ್!]]></title>
            <link>https://kannada.asianetnews.com/politics/shivraj-tangadagi-vs-janardhana-reddy-twitter-war-escalates-over-old-video-rav/articleshow-xxkbd74</link>
            <guid isPermaLink="true">https://kannada.asianetnews.com/politics/shivraj-tangadagi-vs-janardhana-reddy-twitter-war-escalates-over-old-video-rav/articleshow-xxkbd74</guid>
            <pubDate>Wed, 09 Sep 2026 09:12:54 +0530</pubDate>
            <description><![CDATA[ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ಜನಾರ್ಧನರೆಡ್ಡಿ ನಡುವಿನ ಟ್ವೀಟ್ ಸಮರ ತಾರಕಕ್ಕೇರಿದೆ. ಜನಾರ್ಧನರೆಡ್ಡಿ ತಮಗೆ ಸಹಾಯ ಮಾಡಿದ್ದರ ಬಗ್ಗೆ ಈ ಹಿಂದೆ ತಂಗಡಗಿಯವರೇ ಮಾತನಾಡಿದ್ದ ಹಳೆಯ ವಿಡಿಯೋವನ್ನು ರೆಡ್ಡಿ ಹಂಚಿಕೊಂಡಿದ್ದು, ರಾಜೀನಾಮೆ ನೀಡಿ ಚುನಾವಣೆಗೆ ಬರುವಂತೆ ನೇರ ಸವಾಲು ಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m223z8kat3ep9vbedgcs3b64,imgname-shivraj-tangadagi-vs-janardhana-reddy-1788925157994.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ಜನಾರ್ಧನರೆಡ್ಡಿ ನಡುವಿನ ಟ್ವೀಟ್ ಸಮರ ಸದ್ಯ ಮತ್ತೊಂದು ಹಂತಕ್ಕೆ ತಲುಪಿದೆ. ತಂಗಡಗಿ ನೀಡಿದ್ದ ಹೇಳಿಕೆಯ ವಿಡಿಯೋವನ್ನೇ ಜನಾರ್ಧನರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಚಿವ ತಂಗಡಗಿಗೆ ಕೊಟ್ಟಿದ್ದಾರೆ.&lt;/p&gt;&lt;h2&gt;ತಂಗಡಗಿ ವಿಡಿಯೋ ಪೋಸ್ಟ್ ಮಾಡಿದ ರೆಡ್ಡಿ!&lt;/h2&gt;&lt;p&gt;ಇತ್ತೀಚೆಗೆ ನಡೆದ ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಜನಾರ್ಧನರೆಡ್ಡಿಯನ್ನು ಹೊಗಳಿದ್ದರು ಎನ್ನಲಾದ ವಿಡಿಯೋ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದೇ ವಿಡಿಯೋವನ್ನು ಜನಾರ್ಧನರೆಡ್ಡಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, 'ನಿಮ್ಮ ಸ್ವಂತ ಬಾಯಿಯಿಂದಲೇ ಹೇಳಿದ್ದ ವಿಡಿಯೋ ಇನ್ನಮೊಮ್ಮೆ ಕೇಳು..' ಎಂದು ತಿರುಗೇಟು ನೀಡಿದ್ದಾರೆ.&lt;/p&gt;&lt;p&gt;ಈ ಹಿಂದೆ ಮಾತನಾಡಿದ್ದ ಸಚಿವ ಶಿವರಾಜ ತಂಗಡಗಿ, ಜನಾರ್ಧನರೆಡ್ಡಿ ನನಗೆ ಸಹಾಯ ಮಾಡಿದ್ದಾರೆ. ಸಹಾಯ ಮಾಡಿದ ಯಾರನ್ನೂ ನಾನು ಮರೆಯುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಇದೀಗ ಆ ಹೇಳಿಕೆ ವಿಡಿಯೋ ಮುಂದಿಟ್ಟು ತಂಗಡಿಗೆಗೆ ತಿರುಗೇಟು ನೀಡಿದ್ದಾರೆ. ಈ ವಿಡಿಯೋದಿಂದಾಗಿ ಕೊಪ್ಪಳ ರಾಜಕಾರಣದಲ್ಲಿ ಇಬ್ಬರು ನಾಯಕರ ನಡುವಿನ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪಿದೆ.&lt;/p&gt;&lt;h3&gt;&lsquo;ಲೇ ಅನ್ನೋಕೆ ನನಗೂ ಬರುತ್ತೆ...&rsquo;&lt;/h3&gt;&lt;p&gt;ಇದಕ್ಕೂ ಮುನ್ನ ಜನಾರ್ಧನರೆಡ್ಡಿ ಅವರ ಟೀಕೆಗೆ ಪ್ರತಿಕ್ರಿಯಿಸಿದ್ದ ಸಚಿವ ತಂಗಡಗಿ, ಫೇಸ್&zwnj;ಬುಕ್&zwnj;ನಲ್ಲಿ ಸುದೀರ್ಘವಾಗಿ ಪೋಸ್ಟ್ ಮಾಡಿದ್ದರು, 'ಲೇ ಅನ್ನೋಕೆ ನನಗೂ ಬರುತ್ತೆ. ಆದರೆ ನಾನು ಅನ್ನಲ್ಲ..' ಎಂಬರ್ಥದಲ್ಲಿ ತಂಗಡಗಿ ಬರೆದಿದ್ದ ಪೋಸ್ಟ್ ಕೂಡ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ತಂಗಡಗಿಯ ಪೋಸ್ಟ್&zwnj;ಗೆ ಪ್ರತಿಯಾಗಿ ಜನಾರ್ಧನರೆಡ್ಡಿ ಹಳೆಯ ವಿಡಿಯೋ ಬಿಡುಗಡೆ ಮಾಡಿ ತಿರುಗೇಟು ನೀಡಿರುವುದು ಇಬ್ಬರ ನಡುವಿನ ಟ್ವಿಟ್ ವಾರ್ ಕುತೂಹಲ ಮೂಡಿಸಿದೆ.&lt;/p&gt;&lt;h3&gt;ಹಳೆಯ ಹೊಗಳಿಕೆಯೇ ಈಗ ರೆಡ್ಡಿ ಅಸ್ತ್ರ!&lt;/h3&gt;&lt;p&gt;ತಂಗಡಗಿ ಒಮ್ಮೆ ನಾನು ಯಾರಿಂದಲೂ ಹಣ ಪಡೆದಿಲ್ಲ, ಸ್ವಂತ ಬಲದ ಮೇಲೆ ಗೆದ್ದಿದ್ದೇನೆ ಹೇಳಿದರೆ, ಇನ್ನೊಂದು ರೆಡ್ಡಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಂಗಡಗಿ ತಮ್ಮ ಹಿಂದಿನ ಹೇಳಿಕೆಯಲ್ಲಿ ಜನಾರ್ಧನರೆಡ್ಡಿ ಮಾಡಿದ ಸಹಾಯವನ್ನು ನೆನಪಿಸಿಕೊಂಡು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಇದೀಗ ಅದೇ ವಿಡಿಯೋ ಮುಂದಿಟ್ಟುಕೊಂಡು ರೆಡ್ಡಿ ಸವಾಲು ಹಾಕಿದ್ದಾರೆ.&lt;/p&gt;&lt;h3&gt;ಲೇ ತಮ್ಮ ನಿನ್ನದೇ ವಿಡಿಯೋ ನೋಡು..!&lt;/h3&gt;&lt;p&gt;ನನ್ ಯಾರಿಗೂ ತಲೆಬಾಗಿಲ್ಲ, ಯಾರತ್ರನು ಗಣಿ ಹಣ ಪಡೆದಿಲ್ಲ ಅಂದೆ ಅಲ್ವಾ? ಕಳೆದ ಜುಲೈನಲ್ಲಿ ಖಾಸಗಿ ಕಾಲೇಜಿನ ಸಮಾರಂಭದಲ್ಲಿ ಸ್ವತಃ ನಿನ್ನ ಬಾಯಿಂದಲೇ ಯಾರ ಆಶೀರ್ವಾದದಿಂದ, ಯಾರ ಹಣದಿಂದ ನೀನು ಮೊದಲ ಸಲ ಶಾಸಕನಾದೆ, ಮಂತ್ರಿಯಾದೆ ಅಂತ ಒಪ್ಕೊಂಡಿರೋ ವಿಡಿಯೋ ನೋಡು. ನೀನು ಗಣಿ ದುಡ್ಡಲ್ಲೇ ಶಾಸಕನಾಗಿದ್ದು ಹಾಗೂ ಮಂತ್ರಿಯಾಗಿದ್ದು ಅಂತ ನಾನು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದು ಅದರಲ್ಲೇನಿದೆ? ನೀನೇ ಸ್ವತಃ ಒಪ್ಪಿಕೊಂಡಿರುವೆಲ್ಲ? ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;'ಲೇ ತಮ್ಮಾ.. ಅನ್ನೋದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯ&lt;/h3&gt;&lt;p&gt;ಲೇ ತಮ್ಮ ಎನ್ನುವುದು ಉತ್ತರ ಕರ್ನಾಟಕ ಭಾಷೆಯಲ್ಲಿ ಸಾಮಾನ್ಯ ಪದವಾಗಿದೆ. ವಯಸ್ಸಿನ ಕಿರಿಯರಿಗೆ ಪ್ರೀತಿಯಿಂದ ಕರೆಯುವ ಮಾತು, ಅದು ಅವಾಚ್ಯವಾಗಲಿ, ಏಕವಚನ ಎಂದಾಗಲಿ ಅಲ್ಲ ಎಂದು ಸ್ಪಷ್ಟನೆ ನೀಡಿದ ರೆಡ್ಡಿ, ನನ್ನಿಂದ ಹಣ ಪಡೆದಿಲ್ಲವಾ? ನೀನು ಹೇಳಿರುವುದು ನೆನಪಿಲ್ಲ ಅಂದ್ರೆ, ಕಿವಿಗೆ ಹೆಡ್&zwnj;ಫೋನ್ ಹಾಕ್ಕೊಂಡು ಇನ್ನೊಂದು ಸಲ ಕ್ಲಿಯರ್ ಆಗಿ ನಿನ್ನದೇ ವಿಡಿಯೋ ಕೇಳಿಸ್ಕೋ!&lt;/p&gt;&lt;h3&gt;ತಂಗಡಗಿಗೆ ಜನಾರ್ದನ ರೆಡ್ಡಿ ಸವಾಲ್&lt;/h3&gt;&lt;p&gt;ಹೇ ತಂಗಡಗಿ, ವಿಧಾನಸೌಧಕ್ಕೆ ನಿನ್ನ ಕಾರಿನಲ್ಲೇ ಜೊತೆಯಲ್ಲೇ ಬರ್ತೀನಿ! ನೀನು ಮಂತ್ರಿ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ, ಜೊತೆಗೆ ಆ ನಾಗೇಂದ್ರ ಹಾಗೂ ಇಡೀ ಬಳ್ಳಾರಿ ಕಾಂಗ್ರೆಸ್ ಶಾಸಕರನ್ನು ಕರ್ಕೊಂಡು ಬಾ. ನಾನು ನಿನ್ನ ಮುಂದೆನೇ ಇರುತ್ತೇನೆ.ಅವರೆಲ್ಲರ ರಾಜೀನಾಮೆ ಕೊಡಿಸು, ನಿಮ್ಮ ರಾಜೀನಾಮೆಗಳು ಸ್ವೀಕಾರ ಆಗಿದ್ದ ತಕ್ಷಣ ನಾನು ಕೂಡ ರಾಜೀನಾಮೆ ಕೊಡುತ್ತೇನೆ. ಜೊತೆಗೆ ಚುನಾವಣಾ ಅಖಾಡಕ್ಕೆ ಧುಮುಕೋಣ! ಯಾರು ಜನನಾಯಕರು, ಯಾರಿಗೆ ಜನ ಠೇವಣಿ ಕಸಿದು ಮನೆಗೆ ಕಳಿಸ್ತಾರೆ ಅಂತ ನೇರವಾಗಿಯೇ ಗಂಗಾವತಿ ಹಾಗೂ ಕನಕಗಿರಿಯಲ್ಲಿ ತೀರ್ಮಾನ ಆಗಿಹೋಗಲಿ ಎಂದು ರೆಡ್ಡಿ ನೇರ ಸವಾಲ್ ಹಾಕಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/shivraj-tangadagi-vs-janardhana-reddy-twitter-war-escalates-over-old-video-rav/articleshow-xxkbd74"/>
        </item>
        <item>
            <title><![CDATA['ಇಡಿ ದಾಳಿ ಸುಮ್ಮನೆ ನಡೆಯಲ್ಲ': ಸತೀಶ್ ಜಾರಕಿಹೊಳಿ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ?]]></title>
            <link>https://kannada.asianetnews.com/karnataka-districts/koppal-gangavathi-mla-janardhana-reddy-reacts-to-ed-raid-on-minister-satish-jarkiholi-gvd/articleshow-y14qyyn</link>
            <guid isPermaLink="true">https://kannada.asianetnews.com/karnataka-districts/koppal-gangavathi-mla-janardhana-reddy-reacts-to-ed-raid-on-minister-satish-jarkiholi-gvd/articleshow-y14qyyn</guid>
            <pubDate>Sat, 12 Sep 2026 18:27:16 +0530</pubDate>
            <description><![CDATA[&lt;p&gt;ಗಂಗಾವತಿಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲಿನ ಇಡಿ ದಾಳಿ ಸಮಂಜಸವಾಗಿದ್ದು, ಅದು ರಾಜಕೀಯ ಪ್ರೇರಿತವಲ್ಲ ಎಂದು ಹೇಳಿದ್ದಾರೆ. ಸೂಕ್ತ ದಾಖಲೆಗಳು ಮತ್ತು ಆಧಾರಗಳಿದ್ದರೆ ಮಾತ್ರ ಇಡಿ ದಾಳಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2atx547qqhtcsv6p8jgt2nc,imgname-bkb-1789217641607.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಸೆ.12): &lt;/strong&gt;ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿ ಸಮಂಜಸವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ನಗರಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಯಾವುದೇ ಕಾರಣವಿಲ್ಲದೆ ದಾಳಿ ನಡೆಸುವುದಿಲ್ಲ. ಸೂಕ್ತ ದಾಖಲೆಗಳು ಹಾಗೂ ಆಧಾರಗಳಿದ್ದರೆ ಮಾತ್ರ ದಾಳಿ ನಡೆಸಲಾಗುತ್ತದೆ.&lt;/p&gt;&lt;p&gt;ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು. ಹೀಗಾಗಿ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಆಧಾರಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟರು.&lt;/p&gt;&lt;p&gt;&lt;strong&gt;&lsquo;ನಮ್ಮ ಮೇಲಿನ ದಾಳಿಯೂ ರಾಜಕೀಯ ಪ್ರೇರಿತ ಎಂದರ್ಥ&rsquo;&lt;/strong&gt;&lt;/p&gt;&lt;p&gt;ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಹೇಳುವುದಾದರೆ, ಈ ಹಿಂದೆ ತಮ್ಮ ಮೇಲಾದ ಇಡಿ ದಾಳಿಯೂ ರಾಜಕೀಯ ಪ್ರೇರಿತ ಎಂದು ಒಪ್ಪಿಕೊಂಡಂತಾಗುತ್ತದೆ ಎಂದು ಜನಾರ್ದನ ರೆಡ್ಡಿ ವ್ಯಂಗ್ಯವಾಡಿದರು.&lt;/p&gt;&lt;p&gt;ಇಡಿ ದಾಳಿ ನಡೆದಿದೆ ಎಂದರೆ ಅಕ್ರಮ ಅಥವಾ ಅವ್ಯವಹಾರದ ಕುರಿತು ತನಿಖೆಯ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ಇನ್ನೂ ನಾಲ್ಕೈದು ಸಚಿವರ ಮೇಲೆ ಇಡಿ ದಾಳಿ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. ಹಾಗಾದರೆ ಆ ಸಚಿವರ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ ಎಂಬುದನ್ನು ಮುಖ್ಯಮಂತ್ರಿಯವರೇ ಒಪ್ಪಿಕೊಂಡಂತಾಗುತ್ತದೆ ಎಂದು ಟೀಕಿಸಿದರು.&lt;/p&gt;&lt;p&gt;&lt;strong&gt;&lsquo;ಒಂದು ಕೋಟಿ ಪಡೆದು ಡಿವೈಎಸ್ಪಿ ಪೋಸ್ಟಿಂಗ್&rsquo; ಆರೋಪ&lt;/strong&gt;&lt;/p&gt;&lt;p&gt;ಪೊಲೀಸ್ ಅಧಿಕಾರಿಗಳ ಪೋಸ್ಟಿಂಗ್&zwnj;ನಲ್ಲಿ ಸಚಿವ ಶಿವರಾಜ ತಂಗಡಗಿ ಅವರು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂಬ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಆರೋಪದ ಬಗ್ಗೆಯೂ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದರು. ತಮ್ಮದೇ ಪಕ್ಷದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಒಂದು ಕೋಟಿ ರೂಪಾಯಿ ಪಡೆದು ಡಿವೈಎಸ್ಪಿ ಹುದ್ದೆಗೆ ಪೋಸ್ಟಿಂಗ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;p&gt;ಇಂತಹ ಆರೋಪವನ್ನು ಲಘುವಾಗಿ ಪರಿಗಣಿಸಬಾರದು ಎಂದು ಅವರು ಹೇಳಿದರು. ಆರೋಪ ಗಂಭೀರವಾಗಿರುವುದರಿಂದ ಸಚಿವ ಶಿವರಾಜ ತಂಗಡಗಿ ಅವರು ಪ್ರಕರಣವನ್ನು ಲೋಕಾಯುಕ್ತ ಅಥವಾ ಸಿಬಿಐ ತನಿಖೆಗೆ ವಹಿಸಬೇಕಿತ್ತು. ಆದರೆ ತನಿಖೆಗೆ ಒಪ್ಪಿಸುವ ಬದಲು &lsquo;ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ&rsquo; ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಜನಾರ್ದನ ರೆಡ್ಡಿ ಟೀಕಿಸಿದರು.&lt;/p&gt;&lt;h2&gt;&lt;strong&gt;&lsquo;ಆರೋಪ ಸತ್ಯವೋ, ಸುಳ್ಳೋ ತನಿಖೆಯಿಂದ ಬಹಿರಂಗವಾಗಲಿ&rsquo;&lt;/strong&gt;&lt;/h2&gt;&lt;p&gt;ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯವೋ ಅಥವಾ ಸುಳ್ಳೋ ಎಂಬುದು ತನಿಖೆಯಿಂದಲೇ ಬಹಿರಂಗವಾಗಬೇಕು ಎಂದು ಜನಾರ್ದನ ರೆಡ್ಡಿ ಹೇಳಿದರು. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ತಾವೇ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಅವರು ತಿಳಿಸಿದರು. ಆರೋಪಗಳಿಗೆ ಸೂಕ್ತ ತನಿಖೆ ನಡೆದರೆ ವಾಸ್ತವಾಂಶ ಏನೆಂಬುದು ಹೊರಬರಲಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-gangavathi-mla-janardhana-reddy-reacts-to-ed-raid-on-minister-satish-jarkiholi-gvd/articleshow-y14qyyn"/>
        </item>
    </channel>
</rss>
