<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 27 Jun 2026 07:59:30 +0530</lastBuildDate>
        <atom:link href="https://kannada.asianetnews.com/rss/koppal" rel="self" type="application/rss+xml"/>
        <item>
            <title><![CDATA[ಕೊಪ್ಪಳ ಕಾಂಗ್ರೆಸ್‌ನಲ್ಲಿ ನಡೆಯಲಿರುವ ದೊಡ್ಡ ಬದಲಾವಣೆಯ ಸುಳಿವು ನೀಡಿದ ಹರಿಪ್ರಸಾದ್!]]></title>
            <link>https://kannada.asianetnews.com/karnataka-districts/bk-hariprasad-calls-for-congress-unity-in-koppal-gangavathi-gvd/articleshow-1abmlgy</link>
            <guid isPermaLink="true">https://kannada.asianetnews.com/karnataka-districts/bk-hariprasad-calls-for-congress-unity-in-koppal-gangavathi-gvd/articleshow-1abmlgy</guid>
            <pubDate>Thu, 04 Jun 2026 17:26:12 +0530</pubDate>
            <description><![CDATA[&lt;p&gt;ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಭಿನ್ನಮತಗೊಂಡಿರುವ ಕಾಂಗ್ರೆಸ್ ಘಟಕಗಳಲ್ಲಿ ಒಗ್ಗಟ್ಟಾಗಿ ಪಕ್ಷ ಸಂಘಟಿಸ ಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅದ್ಯಕ್ಷ ಬಿ.ಕೆ.ಹರಿಪ್ರಾಸದ್ ಸೂಚನೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt97v4z97w2dttvm1fm28hjb,imgname-vjv-1780574163945.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.04): &lt;/strong&gt;ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಭಿನ್ನಮತಗೊಂಡಿರುವ ಕಾಂಗ್ರೆಸ್ ಘಟಕಗಳಲ್ಲಿ ಒಗ್ಗಟ್ಟಾಗಿ ಪಕ್ಷ ಸಂಘಟಿಸ ಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅದ್ಯಕ್ಷ ಬಿ.ಕೆ.ಹರಿಪ್ರಾಸದ್ ಸೂಚನೆ ನೀಡಿದರು ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ತಿಳಿಸಿದರು.&lt;/p&gt;&lt;p&gt;ಬೆಂಗಳೂರಿನಲ್ಲಿ ಬಿ.ಕೆ.ಹರಿಪ್ರಸಾದ್ ಅವರ ನಿವಾಸಕ್ಕೆ ತೆರಳಿ ಶುಭಕೋರಿದ ನಂತರ ದೂರವಾಣಿ ಮೂಲಕ ಪತ್ರಕರ್ತರ ಜೊತೆ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸಾರಿಥ್ಯವನ್ನು ನನಗೆ ನೀಡಿದ ಅವಧಿಯಲ್ಲಿ ಪಕ್ಷ ಸಂಘಟಿಸಿ ಬರುವ 2028 ರ ಚುನಾವಣೆಯಲ್ಲಿ ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ.&lt;/p&gt;&lt;h2&gt;&lt;strong&gt;ರಾಜಕೀಯ ನನಗೆ ಗೊತ್ತಿದೆ&lt;/strong&gt;&lt;/h2&gt;&lt;p&gt;ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಂತೆ ತಿಳಿಸಿದ್ದಾರೆಂದು ಹೇಳಿದರು. ಗಂಗಾವತಿ ಕಾಂಗ್ರೆಸ್ ರಾಜಕೀಯ ನನಗೆ ಗೊತ್ತಿದೆ ಎಲ್ಲಾ ಮುಖಂಡರು ತಮ್ಮ ಭಿನ್ನಮತ ಬಿಟ್ಟು ಒಗ್ಗಟ್ಟಾಗಿ ಶ್ರಮಿಸಿರಿ ಎಂದು ತಿಳಿಸಿದ್ದು. ಈ ಹಿನ್ನೆಲೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ ಎಂದರು.&lt;/p&gt;&lt;p&gt;ತಾವು ಮತ್ತು ಮುಖ್ಯಮಂತ್ರಿಗಳು ರಾಜ್ಯದ ಪ್ರವಾಸದ ಜೊತೆಗೆ ಸರಕಾರದ ಅಭಿವೃದ್ದಿ ಕಾರ್ಯಗಳ ಅನುಷ್ಠಾನಗೊಂಡಿರುವದರ ಬಗ್ಗೆ ಪ್ರಚಾರ ಮತ್ತು ಪಕ್ಷದ ಸಂಘಟನೆಗೆ ರಾಜ್ಯ ಪ್ರವಾಸ ಕೈಗೊಳ್ಳುವದಾಗಿ ಹರಿಪ್ರಸಾದ್ ತಿಳಿಸಿದ್ದಾರೆಂದು ಹೇಳಿದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bk-hariprasad-calls-for-congress-unity-in-koppal-gangavathi-gvd/articleshow-1abmlgy"/>
        </item>
        <item>
            <title><![CDATA[ಮಾಳವ್ವ ಹೋಟೆಲ್‌ನಲ್ಲಿ ಊಟಕ್ಕಿಲ್ಲ ಲೆಕ್ಕ; ಇವರೇ ಇಲ್ಲಿನ ಜನರಿಗೆ ಅನ್ನಪೂರ್ಣೇಶ್ವರಿ]]></title>
            <link>https://kannada.asianetnews.com/gallery/karnataka-districts/koppal-district-kanakagiri-malavva-hotel-video-viral-first-priority-is-to-feed-hungry-then-calculate-money-mrq-219v6ep</link>
            <guid isPermaLink="true">https://kannada.asianetnews.com/gallery/karnataka-districts/koppal-district-kanakagiri-malavva-hotel-video-viral-first-priority-is-to-feed-hungry-then-calculate-money-mrq-219v6ep</guid>
            <pubDate>Thu, 11 Jun 2026 12:27:39 +0530</pubDate>
            <description><![CDATA[&lt;p&gt;Viral Video: ಸುಮಾರು 40 ವರ್ಷಗಳಿಂದ ಮಾಳವ್ವ ಎಂಬುವವರು ಹೋಟೆಲ್ ನಡೆಸುತ್ತಿದ್ದಾರೆ. ರುಚಿಕರವಾದ ತಿಂಡಿಗಳಿಗೆ ಮಾತ್ರವಲ್ಲದೆ, ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡಿ, ಜನರ ಪ್ರೀತಿಗೆ ಪಾತ್ರರಾಗಿ 'ಅನ್ನಪೂರ್ಣೇಶ್ವರಿ' ಎನಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt0x2h1xhxtbhnm1s4pcpm58,imgname-malavva-hotel--6--1780294435901.jpg" type="image/jpeg" height="390" width="690"/>
            <content:encoded><![CDATA[&lt;p&gt;Viral Video: ಸುಮಾರು 40 ವರ್ಷಗಳಿಂದ ಮಾಳವ್ವ ಎಂಬುವವರು ಹೋಟೆಲ್ ನಡೆಸುತ್ತಿದ್ದಾರೆ. ರುಚಿಕರವಾದ ತಿಂಡಿಗಳಿಗೆ ಮಾತ್ರವಲ್ಲದೆ, ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡಿ, ಜನರ ಪ್ರೀತಿಗೆ ಪಾತ್ರರಾಗಿ 'ಅನ್ನಪೂರ್ಣೇಶ್ವರಿ' ಎನಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೆಲವೊಂದು ಹೋಟೆಲ್&zwnj;ಗಳು ಕೇವಲ ಹಣಕ್ಕೆ ಆಹಾರವನ್ನು ಸರಬರಾಜು ಮಾಡಲ್ಲ. ಬದಲಿಗೆ ಸುತ್ತಲಿನ ಹಳ್ಳಿಗಳ ಜನರು ಹೋಟೆಲ್&zwnj;ಗಳ ಜೊತೆ ಅವಿನಾಭ ಸಂಬಂಧ ಹೊಂದಿರುತ್ತಾರೆ. ಅಂತಹುವುದೇ ಒಂದು ಹೋಟೆಲ್ ನಮ್ಮ ಕನಕಗಿರಿಯಲ್ಲಿ ನಿಮಗೆ ಸಿಗುತ್ತದೆ. ಕನಕಗಿರಿ ಮಾತ್ರವಲ್ಲ ಸುತ್ತಮುತ್ತಲಿನ ಹಳ್ಳಿಯವರಿಗೆ ಮಾಳವ್ವ ಹೋಟೆಲ್ ಅಂದ್ರೆ ಏನು ಒಂದು ರೀತಿಯ ಖುಷಿ.&lt;/p&gt;&lt;img&gt;&lt;p&gt;Mr.Chaaraniga ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಳವ್ವ ಹೋಟೆಲ್&zwnj; ವಿಡಿಯೋ ಅಪ್ಲೋಡ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಾಳವ್ವ ಅವರ ಮಾತುಗಳಲ್ಲಿ ತಾಯಿ ಎಷ್ಟು ಸಿಂಪಲ್ ಅನ್ನೋದು ಗೊತ್ತಾಗುತ್ತದೆ. ಸುಮಾರು 40 ವರ್ಷಗಳಿಂದ ಕನಕಗಿರಿಯಲ್ಲಿ ಹೋಟೆಲ್ ನಡೆಸಿಕೊಂಡು ಬಂದಿದ್ದಾರೆ. ವಯಸ್ಸು ಎಷ್ಟು ಅಂತ ಕೇಳಿದ್ರೆ, ನನಗೆ ನನ್ನ ಮಕ್ಕಳು ವಯಸ್ಸು ಸಹ ಗೊತ್ತಿಲ್ಲ. ಗಣತಿಗೆ ಬಂದವರು ವಯಸ್ಸು ಕೇಳಿದ್ರೆ ನೀವೇ ಬರೆದುಕೊಳ್ಳಿ ಎಂದು ಹೇಳುತ್ತಾರೆ.&lt;/p&gt;&lt;img&gt;&lt;p&gt;ಈ ಹೋಟೆಲ್&zwnj;ನಲ್ಲಿ ಬೆಳಗ್ಗೆ ಇಡ್ಲಿ, ಬೋಂಡಾ, ಮಿರ್ಚಿ ಬಜ್ಜಿ, ಅವಲಕ್ಕಿ, ಮಂಡಾಳು ಒಗ್ಗರಣೆ, ಉಪ್ಪಿಟ್ಟು, ಪುಲಾವ್ ಚಟ್ನಿ ಮಾಡುತ್ತಾರೆ. ಮಧ್ಯಾಹ್ನದ ನಂತರ ನಿಮಗೆ ಬಿಸಿ ಬಿಸಿ ಬಜ್ಜಿ ಮತ್ತು ಮಂಡಕ್ಕಿಯೂ ನಿಮಗೆ ಇಲ್ಲಿ ಸಿಗುತ್ತದೆ. ಮಾಳವ್ವ ಅಜ್ಜಿ ಕೇವಲ ಹೋಟೆಲ್ ನಡೆಸಿದ್ರೆ ಇಷ್ಟು ಫೇಮಸ್ ಅಗುತ್ತಿರಲಿಲ್ಲ. ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿಯೂ ಆಹಾರ ನೀಡುತ್ತಾರೆ.&lt;/p&gt;&lt;img&gt;&lt;p&gt;ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇಲ್ಲಿ ಬೋಂಡಾ ಸ್ಪೆಷಲ್ ಉಪ್ಪಿಟ್ಟು. ನಾನು ವಿದ್ಯಾರ್ಥಿಯಾಗಿದ್ದಾಗ ಇಲ್ಲಿ ಊಟ ಮಾಡಿದ್ದ ನೆನಪು, ಒಮ್ಮೆಯಂತೂ ಹಣವೇ ಇರಲಿಲ್ಲ. ಮರುದಿನ ನಾನಾಗಿಯೇ ಕೊಟ್ಟಾಗಲೇ ಹಣ ಪಡೆದುಕೊಂಡ್ರು. ಇವರು ನಮಗೆ ನಿಜವಾಗ್ಲೂ ಅನ್ನಪೂರ್ಣೇಶ್ವರಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಮಾಳವ್ವ ಅವರ ಹೋಟೆಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ಇದೇ ವಿಡಿಯೋಗೆ ಕಮೆಂಟ್ ಮಾಡಿರುವ ಚೆನ್ನಪ್ಪ ಗೌಡ ಎಂಬವರು, ಇದು ನಮ್ಮ ಅಮ್ಮ. ನಾನು ಇವರ ಕೈ ತುತ್ತು ತಿಂದಿದ್ದೀನಿ. ಸುಮಾರು 23ವರ್ಷ ಕನಕಗಿರಿಯಲ್ಲಿ ಇದ್ದು ಶಿಕ್ಷಕನಾಗಿ ದುಡಿದು ಈಗ ನನ್ನ ಮೂಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದೀನಿ. ನನ್ನ ಕೊಪ್ಪಳ ಜಿಲ್ಲೆಯನ್ನು ಅನ್ನ ಕೊಟ್ಟಿದೆ ಜೀವನ ಕೊಟ್ಟಿದೆ. ಜನರ ಪ್ರೀತಿ ಕೊಟ್ಟಿದೆ missyou ಕೊಪ್ಪಳ ಎಂದು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ಶಿವಾಜಿ ರಾವ್ ಎಂಬವರು, ಇವರು ನಮ್ಮ ಕನಕಗಿರಿಯ ದೊಡ್ಡಮ್ಮನವರು ಅಂತ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;1978ರ ಸ್ಕೂಲ್ ಮಾರ್ಕ್ಸ್ ಕಾರ್ಡ್ ವೈರಲ್; ವಿಭಿನ್ನ, ವಿಶೇಷತೆಯ ಕೊಪ್ಪಳ ಶಾಲೆಯ ಅಂಕಪಟ್ಟಿ&lt;/strong&gt;&lt;/p&gt;&lt;img&gt;&lt;p&gt;ಮಾಳವ್ವ ತಾಯಿ ಫೋಟೋ ಹಂಚಿಕೊಂಡಿರುವ Mr.Chaaraniga, ಕನಕಗಿರಿ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದಾಗ ಊಟಕ್ಕೆ ಅಂಥ ಹೋದಾಗ ತಿಳಿದಿದ್ದು ಮಾಳವ್ವ ಹೋಟೆಲ್. ಅಜ್ಜಿ ಸುಮಾರು 40 ವರ್ಷದಿಂದ ನಡೆಸುತ್ತಿರುವ ಹೋಟೆಲ್. ಅಲ್ಲಿನ ರುಚಿ ಶುಚಿ ಬಗ್ಗೆ ಅಲ್ಲಿನ ಜನರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಮಕ್ಕಳು , ಶಿಕ್ಷಕರು ಮತ್ತು ಊರಿನ ಜನರೇ ಹೇಳಿದಾಹಾಗೆ ರುಚಿ ಮಾತ್ರ ಸೂಪರ್ ಎಂದು ಬರೆದುಕೊಂಡಿದ್ದಾರೆ. ನೀವು ಮಾಳವ್ವ ಹೋಟೆಲ್&zwnj;ಗೆ ಹೋಗಿದ್ರೆ ನಿಮ್ಮ ಅನುಭವವನ್ನು ಕಮೆಂಟ್ ಮಾಡಿ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಾಲಿಗೆ ಪೊರಕೆ ತಾಗಿದ್ದಕ್ಕೆ ಬೈದ ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಥಳಿಸಿದ ಮಹಿಳೆ!&lt;/strong&gt;&lt;/p&gt;]]></content:encoded>
            <category>koppal</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/koppal-district-kanakagiri-malavva-hotel-video-viral-first-priority-is-to-feed-hungry-then-calculate-money-mrq-219v6ep"/>
        </item>
        <item>
            <title><![CDATA[TB Dam inauguration: 'ನನಗೆ ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತಾಡ್ತಿದ್ದೆ..' ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರ ಸಿಎಂ]]></title>
            <link>https://kannada.asianetnews.com/karnataka-districts/tb-dam-crest-gate-inauguarion-today-andhra-cm-chandrababu-naidu-speech-in-kannada-rav/articleshow-9nbwyxg</link>
            <guid isPermaLink="true">https://kannada.asianetnews.com/karnataka-districts/tb-dam-crest-gate-inauguarion-today-andhra-cm-chandrababu-naidu-speech-in-kannada-rav/articleshow-9nbwyxg</guid>
            <pubDate>Thu, 25 Jun 2026 15:10:32 +0530</pubDate>
            <description><![CDATA[ತುಂಗಭದ್ರಾ ಜಲಾಶಯದ 33 ಹೊಸ ಕ್ರೆಸ್ಟ್ ಗೇಟ್&zwnj;ಗಳನ್ನು ಲೋಕಾರ್ಪಣೆ ಮಾಡಲಾಯಿತು. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಭಾಗವಹಿಸಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಕನ್ನಡದಲ್ಲಿ ಭಾಷಣ ಆರಂಭಿಸಿ ಎಲ್ಲರ ಗಮನ ಸೆಳೆದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kvz20p8wydfevbv4842n9e71,imgname-----------------------2026-06-25t143904.607-1782379993372.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳ (ಜೂ.25): ತುಂಗಭದ್ರಾ ಜಲಾಶಯ(TB Dam)ದ 33 ಗೇಟ್&zwnj;ಗಳ ಲೋಕಾರ್ಪಣೆ(Inauguration) ಕಾರ್ಯಕ್ರಮ ಇಂದು (ಜೂ.25,ಗುರುವಾರ) ಟಿಬಿ ಡ್ಯಾಂ(TB Dam) ಹಾಗೂ ಸಾರ್ವಜನಿಕ ಸಮಾರಂಭ ಮುನಿರಾಬಾದಿನ ಸರ್ಕಾರಿ ಹೈಸ್ಕೂಲ್&zwnj; ಮೈದಾನದಲ್ಲಿ ನಡೆಯಿತು. ಈ ಐತಿಹಾಸಕ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಅತ್ಯುತ್ಸಾಹದಿಂದ ಭಾಗಿಯಾದದರು.&lt;/p&gt;&lt;h2&gt;ಕಾರ್ಯಕ್ರಮದಲ್ಲಿ ನಾಯ್ಡು ಫುಲ್ ಕ್ರೇಜ್&lt;/h2&gt;&lt;p&gt;ತುಂಗಭದ್ರಾ ಕ್ರೆಸ್ಟ್ ಗೇಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬೆಳಗ್ಗೆಯೇ ಆಗಮಿಸಿ ಚಂದ್ರಬಾಬು ನಾಯ್ಡು ಕಾರ್ಯಕ್ರಮದ ಆರಂಭದಿಂದ ಉತ್ಸಾಹದಿಂದ ಲವಲವಿಕೆಯಿಂದ ಓಡಾಡುವುದು ಕಂಡುಬಂತು. ಕರ್ನಾಟಕದಲ್ಲೂ ನಾಯ್ಡು ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಹಿಯಾಯಿತು. ಅವರ ಭಾಷಣ ಆರಂಭಕ್ಕೂ ಮುನ್ನವೇ ಅಭಿಮಾನಿಗಳ ಉದ್ಘೋಷ ಕೇಳಿಬಂದವು. ನಾಯ್ಡು ಅವರು ಭಾವಚಿತ್ರ ಹಿಡಿದು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು.&lt;/p&gt;&lt;h3&gt;ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರ ಸಿಎಂ!&lt;/h3&gt;&lt;p&gt;'ಎಲ್ಲ ರೈತ ಬಾಂಧವರಿಗೆ ನನ್ನ ನಮಸ್ಕಾರಗಳು..' ಎನ್ನುತ್ತಾ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕನ್ನಡದಲ್ಲೇ ಭಾಷಣ ಆರಂಭಿಸಿದರು. ತಾಯಿ ತುಂಗಭದ್ರೆಗೆ ಶಿರಭಾಗಿ ನಮಸ್ಕಾರ ಮಾಡ್ತೀನಿ. ಗೇಟ್ ಅಳವಡಿಕೆಯಲ್ಲಿ ಶ್ರಮವಹಿಸಿದ ತುಂಗಭದ್ರಾ ಆಡಳಿತ ಮಂಡಳಿಗೂ ಧನ್ಯವಾದ ಎಂದು ಕೈಮುಗಿದರು.&lt;/p&gt;&lt;p&gt;&lt;strong&gt;ನನಗೆ ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತಾಡ್ತಿದ್ದೆ: ನಾಯ್ಡು&lt;/strong&gt;&lt;/p&gt;&lt;p&gt;ಕನ್ನಡಲ್ಲಿ ಭಾಷಣ ಮಾಡುವಾಗಲೇ 'ನನಗೆ ಸ್ಪಷ್ಟವಾಗಿ ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡ್ತಿದ್ದೆ. ನಾವು ತುಂಗಾ ಪಾನಃ ಗಂಗಾ ಸ್ನಾನ: ಅಂತಾ ಹೇಳ್ತೀವಿ. ತುಂಗಾ ಕುಡಿಯಲು ಶುದ್ಧ ಎಂದೇ ಪ್ರಸಿದ್ಧಿ ಪಡೆದಿದೆ. ತುಂಗಭದ್ರಾ 19 ಕ್ರಸ್ಟ್ ಗೇಟ್ ಕೊಚ್ಚಿ ಹೋಗಿತ್ತು. ಆದರೀಗ ಕೊಚ್ಚಿಹೋದ ಗೇಟ್ ಅಷ್ಟೇ ಅಲ್ಲ ಜಲಾಶಯದ ಎಲ್ಲ 33 ಗೇಟ್&zwnj;ಗಳು ಹೊಸದಾಗಿ ಅಳವಡಿಸಿ ಲೋಕಾರ್ಪಣೆ ಮಾಡಿದ್ದೇವೆ. ಹೊಸ ಗೇಟ್ ಅಳವಡಿಕೆ ವಿಳಂಬವಾಗಿದ್ರೂ ಭಾರೀ ಅಪಾಯ ಎದುರಾಗ್ತಿತ್ತು. ಆದರೆ ಕೇವಲ ಆರು ತಿಂಗಳಲ್ಲೇ ಮುಗಿಸಿರೋದಕ್ಕೆ ಹೆಮ್ಮೆ ಅನಿಸುತ್ತಿದೆ. ಹೀಗಾಗಿ ಎದುರಾಗಬಹುದಾಗಿ ಒಂದು ದೊಡ್ಡ ಅಪಾಯ ದೂರವಾಗಿದೆ.&lt;/p&gt;&lt;p&gt;&lt;strong&gt;ಪ್ರಧಾನಿ ಮೋದಿ ಬಗ್ಗೆ ಹಾಡಿ ಹೊಗಳಿದ ನಾಯ್ಡು&lt;/strong&gt;&lt;/p&gt;&lt;p&gt;ಈ ಕ್ರೆಸ್ಟ್ ಗೇಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮೂರು ರಾಜ್ಯದ ಮುಖ್ಯಮಂತ್ರಿಗಳು ಒಂದೇ ವೇದಿಕೆ ಹಂಚಿಕೊಂಡಿದ್ದು ಒಂದು ಚರಿತ್ರೆ. ಈ ಚರಿತ್ರೆ ಇಂದು ಇಲ್ಲಿ ಸೃಷ್ಟಿಯಾಗಿದೆ. ಇದೆಲ್ಲದಕ್ಕೆ ನರೇಂದ್ರ ಮೋದಿಯವರ ಟೈಮಿಂಗ್ ಕಾರಣ. ಅವರದ್ದು ರೈಟ್ ಟೈಂ, ರೈಟ್ ಡಿಸಿಷನ್ ಎಂದು ಭಾಷಣದ ವೇಳೆ ಪ್ರಧಾನಿ ಮೋದಿಯವರನ್ನ ನಾಯ್ಡು ಹಾಡಿ ಹೊಗಳಿದರು.&lt;/p&gt;]]></content:encoded>
            <category>koppal</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/tb-dam-crest-gate-inauguarion-today-andhra-cm-chandrababu-naidu-speech-in-kannada-rav/articleshow-9nbwyxg"/>
        </item>
        <item>
            <title><![CDATA[ಬದುಕು ಸಿಹಿ ಮಾಡುವ ಕಹಿ ಬೇವಿನ ಹಣ್ಣು ಆಯುವ ಕಾಯಕ; ದಿನಕ್ಕೆ ಎಷ್ಟು ಸಿಗುತ್ತೆ ಹಣ?]]></title>
            <link>https://kannada.asianetnews.com/karnataka-districts/women-in-rural-north-karnataka-are-earning-extra-income-by-collecting-and-selling-neem-seeds-mrq/articleshow-ch5b9rl</link>
            <guid isPermaLink="true">https://kannada.asianetnews.com/karnataka-districts/women-in-rural-north-karnataka-are-earning-extra-income-by-collecting-and-selling-neem-seeds-mrq/articleshow-ch5b9rl</guid>
            <pubDate>Wed, 24 Jun 2026 08:06:29 +0530</pubDate>
            <description><![CDATA[ಬೇವಿನ ಹಣ್ಣಿನ ಸುಗ್ಗಿ ಆರಂಭವಾಗಿದ್ದು, ಗ್ರಾಮೀಣ ಭಾಗದ ಮಹಿಳೆಯರು ಇದನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಉಪ ಆದಾಯ ಗಳಿಸುತ್ತಿದ್ದಾರೆ. ಔಷಧೀಯ ಗುಣಗಳನ್ನು ಹೊಂದಿರುವ ಈ ಬೇವಿನ ಬೀಜಗಳು ಸಾವಯವ ಕೃಷಿಯಲ್ಲಿ ಕೀಟನಾಶಕವಾಗಿ ಮತ್ತು ಗೊಬ್ಬರವಾಗಿ ಬಳಕೆಯಾಗುತ್ತಿದ್ದು, ಇತ್ತೀಚೆಗೆ ಇದಕ್ಕೆ ಬೇಡಿಕೆ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvvqkrq1schdwpfkm3masnbz,imgname-yelburga-1782268420833.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ&lt;/strong&gt;&lt;/p&gt;&lt;p&gt;&lt;strong&gt;ಕೊಪ್ಪಳ: &lt;/strong&gt;ಬೇವಿನ ಹಣ್ಣಿನ ಸುಗ್ಗಿ ಆರಂಭವಾಗಿದ್ದು, ಗ್ರಾಮೀಣ ಪ್ರದೇಶದ ರೈತ ಮಹಿಳೆಯರು, ಮಕ್ಕಳು ಬೇವಿನ ಹಣ್ಣು ಆರಿಸುವ ಕಾಯಕದಲ್ಲಿ ತೊಡಗಿರುವುದು ಕಂಡು ಬರುತ್ತಿದೆ.&lt;/p&gt;&lt;p&gt;ಗ್ರಾಮೀಣ ಪ್ರದೇಶದ ರೈತರ ಜಮೀನುಗಳ ಬದುಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಬೇವಿನ ಮರಗಳಲ್ಲಿ ಬಿಡುವ ಹಣ್ಣುಗಳಿಗೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಿದೆ. ಔಷಧೀಯ ಗುಣ ಹೊಂದಿರುವ ಬೇವಿನ ಬೀಜದಿಂದ ಹತ್ತಾರು ಪ್ರಯೋಜನವಿದೆ. ಜತೆಗೆ ಮಹಿಳೆಯರಿಗೆ ಆದಾಯ ದೊರೆಯುತ್ತದೆ.&lt;/p&gt;&lt;h2&gt;&lt;strong&gt;ಇದು ಕೃಷಿಯ ಉಪ ಕಸುಬು&lt;/strong&gt;&lt;/h2&gt;&lt;p&gt;ಜಮೀನಿನಲ್ಲಿ ಬಿತ್ತನೆ, ಕಳೆ ತೆಗೆಯುವುದು ಹಾಗೂ ಇನ್ನಿತರ ಕೃಷಿ ಚಟುವಟಿಕೆಯಿಂದ ಬಿಡುವಿದ್ದಾಗ ಮಹಿಳೆಯರು, ಮಕ್ಕಳು ಬೇವಿನ ಬೀಜ ಸಂಗ್ರಹಿಸುತ್ತಾರೆ. ಕೆಲವರಿಗೆ ಇದು ಕೃಷಿಯ ಜತೆಗೆ ಉಪಕಸಬು. ಬೇವಿನ ಬೀಜ ಸಂಗ್ರಹದಿಂದ ಕೆಲವು ಮಹಿಳೆಯರು ಸಾವಿರಾರು ರುಪಾಯಿ ಗಳಿಸುತ್ತಾರೆ.&lt;/p&gt;&lt;p&gt;ಜೀವನ ನಿರ್ವಹಣೆಗೆ ಸಹಕಾರಿ:ಬೇವಿನ ಬೀಜಕ್ಕೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಿದೆ. ರೈತರ ಜಮೀನು, ರಸ್ತೆ ಬದಿ ಬೆಳೆದಿರುವ ಬೇವಿನ ಮರಗಳಿಂದ ಬೇವಿನಹಣ್ಣು ಆರಿಸಿ, ಸಂಗ್ರಹಿಸಲಾಗುತ್ತದೆ. ಅವುಗಳನ್ನು ಖರೀದಿ ಮಾಡಲು ವರ್ತಕರು ಹಳ್ಳಿಗಳಿಗೆ ಮತ್ತು ಜಮೀನುಗಳಿಗೆ ಆಗಮಿಸುತ್ತಾರೆ. ಒಂದು ಡಬ್ಬಿ ಬೇವಿನ ಬೀಜಕ್ಕೆ ₹೧೩೦ರಿಂದ ₹೧೫೦ರ ವರೆಗೆ ದರ ಇರುತ್ತದೆ. ಬೇವಿನ ಹಣ್ಣು ಸಂಗ್ರಹಿಸಿ ಮಾರಾಟ ಮಾಡಿದ ಹಣದಿಂದ ಜೀವನ ನಿರ್ವಹಣೆಗೆ ದಾರಿಯಾಗಲಿದೆ ಎನ್ನುತ್ತಾರೆ ರೈತ ಮಹಿಳೆಯರು.&lt;/p&gt;&lt;h3&gt;&lt;strong&gt;ರೋಗ ನಿಯಂತ್ರಣಕ್ಕೆ ರಾಮಬಾಣ&lt;/strong&gt;&lt;/h3&gt;&lt;p&gt;ಬೇವಿನ ಬೀಜ ಹಾಗೂ ಹಿಂಡಿಯಿಂದ ಉಪಯೋಗವಿದೆ. ಸಾವಯವ ಕೃಷಿಯಲ್ಲಿ ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆ ಮತ್ತು ಸಾಕಷ್ಟು ಪೋಷಕಾಂಶ ದೊರೆಯುತ್ತವೆ. ಇದರಲ್ಲಿ ಅಜಾಡಿರೆಕ್ಟಿನ್ ಎನ್ನುವ ವಿಷ ಅಂಶ ಇರುತ್ತದೆ. ನಾನಾ ಬೆಳೆ ತಿನ್ನುವ ಕೀಟ, ರೋಗಗಳ ನಿಯಂತ್ರಣಕ್ಕೆ ರಾಮಬಾಣವಾಗಿದೆ ಎನ್ನುತ್ತಾರೆ ಗಂಗಾವತಿ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಪಿ.ಆರ್. ಬದರಿಪ್ರಸಾದ್.&lt;/p&gt;&lt;p&gt;ಬೇವಿನ ಬೀಜದ ಎಣ್ಣೆ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ರೋಗ ಹತೋಟಿಯಲ್ಲಿಡಬಹುದು. ಇದನ್ನು ನಾನಾ ಬೆಳೆಗಳಿಗೆ ಸಾವಯವ ಗೊಬ್ಬರದ ರೂಪದಲ್ಲಿ ಬಳಕೆ ಮಾಡಬಹುದು. ಬೇವಿನ ಹಿಂಡಿ ತಯಾರಿಸಿ ಹೊಲಗಳಲ್ಲಿ ಹಾಕುವುದರಿಂದ ಬೆಳೆಗಳಲ್ಲಿನ ರೋಗಬಾಧೆ ತಡೆಯಬಹುದು ಎಂದು ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Gruhalakshmi New Guidlines: ಗೃಹಲಕ್ಶ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಶೀಘ್ರ ಆಹ್ವಾನ; ಇವೆಲ್ಲ ದಾಖಲೆಗಳು ರೆಡಿ ಮಾಡ್ಕೊಳ್ಳಿ!&lt;/strong&gt;&lt;/p&gt;&lt;p&gt;ಮುಂಗಾರು ಮಳೆಯಾಗದೆ ಬಿತ್ತಿದ ಬೆಳೆಗಳು ಒಣಗುತ್ತಿದೆ. ಈಗ ಕೃಷಿ ಚಟುವಟಿಕೆ ಸ್ಥಗಿತಗೊಂಡಿವೆ. ಹೀಗಾಗಿ ಜೀವನ ನಿರ್ವಹಣೆಗೆ ಬೇವಿನ ಹಣ್ಣು ಸಂಗ್ರಹಿಸುತ್ತಿದ್ದೇವೆ. ಹಣ್ಣು ಮಾರಾಟ ಮಾಡಿದ ಹಣ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ಬೇವಿನ ಹಣ್ಣು ಸಂಗ್ರಹಿಸುವ ಮಹಿಳೆಯರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪುತ್ತೂರಿನ ಕೂಲಿ ಕಾರ್ಮಿಕ ಪುರಂದರ್&zwnj;ಗೆ ಅದೃಷ್ಟ ತಂದು ಕೊಟ್ಟ ದೇಸಿ ನಾಯಿ &lsquo;ಚಿನ್ನು&rsquo;&lt;/strong&gt;&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/women-in-rural-north-karnataka-are-earning-extra-income-by-collecting-and-selling-neem-seeds-mrq/articleshow-ch5b9rl"/>
        </item>
        <item>
            <title><![CDATA[ಹಿರೇಬೆಣಕಲ್ ಮೋರೆರ್ ಶಿಲಾ ಸಮಾಧಿಗಳಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಬೆಳಕು: ಎಚ್.ಆರ್.ಶ್ರೀನಾಥ ಪ್ರಶಂಸೆ]]></title>
            <link>https://kannada.asianetnews.com/karnataka-districts/kannadaprabha-suvarna-news-hirebenakal-morer-hill-stone-tombs-heritage-news-gvd/articleshow-chrxnix</link>
            <guid isPermaLink="true">https://kannada.asianetnews.com/karnataka-districts/kannadaprabha-suvarna-news-hirebenakal-morer-hill-stone-tombs-heritage-news-gvd/articleshow-chrxnix</guid>
            <pubDate>Mon, 01 Jun 2026 18:06:57 +0530</pubDate>
            <description><![CDATA[&lt;p&gt;ಕನ್ನಡಪ್ರಭ-ಏಷ್ಯಾನೆಟ್ ಸೂವರ್ಣ ನ್ಯೂಸ್ ವಾಹಿನಿಯಿಂದ ಹಿರೇಬೆಕಲ್ ಮೋರೆರ್ ಬೆಟ್ಟದ ಶಿಲಾ ಸಮಾಧಿಗಳು ಬೆಳಕಿಗೆ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಪ್ರಶಂಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1jzm2mqh5kzww6012vc1d8,imgname-vhjc-1780317409364.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.01): &lt;/strong&gt;ಕನ್ನಡಪ್ರಭ-ಏಷ್ಯಾನೆಟ್ ಸೂವರ್ಣ ನ್ಯೂಸ್ ವಾಹಿನಿಯಿಂದ ಹಿರೇಬೆಕಲ್ ಮೋರೆರ್ ಬೆಟ್ಟದ ಶಿಲಾ ಸಮಾಧಿಗಳು ಬೆಳಕಿಗೆ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಪ್ರಶಂಸಿದರು. ನಗರದ ಕೊಟ್ಟೂರು ಬಸವೇಶ್ವರ ದೇವಸ್ಥನ ವೇದಿಕೆಯಲ್ಲಿ ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಪ್ರತಿಷ್ಠಾನ, ಹಾಗು ಪರಿಸರ ಸೇವಾ ಟ್ರಸ್ಟ್ ಏರ್ಪಿಡಿಸಿದ್ದ &ldquo;ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಸಂಭ್ರಮ&rdquo; ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.&lt;/p&gt;&lt;p&gt;ಕಳೆದ 40 ದಶಕಗಳ ಹಿಂದೆ ಹಿರೇಬೆಣಕಲ್ ಬೆಟ್ಟದಲ್ಲಿರುವ ಮೋರೆರ್ ಶಿಲಾ ಸಮಾಧಿಗಳ ಬಗ್ಗೆ ಇತಿಹಾಸ ಕೇಳಿದ್ದಲ್ಲದೆ ಆ ಸ್ಥಳವನ್ನು ವೀಕ್ಷಿಸಲಾಗಿತ್ತು. ಈಗ ಸರಕಾರ ಈ ಪ್ರದೇಶವನ್ನು ಅಭಿವೃದ್ದಿ ಪಡಿಸುವದಕ್ಕೆ ಮುಂದೆ ಬರಬೇಕೆಂದರು. ಇತ್ತೀಚಿಗೆ ಸರಕಾರ ಮೋರೆರ್ ಬೆಟ್ಟದ ಬಳಿ ಅಣು ಸ್ಥಾವರ ಸ್ಥಾಪನೆಗೆ ಸರಕಾರ ಮುಂದಾಗಿತ್ತು. ಇದರ ವಿರುದ್ಧ ಹೋರಾಟ ನಡೆಸಿದ್ದರಿಂದ ಸ್ಥಾಪನೆ ರದ್ದಾಗಿತು ಎಂದರು. ಕೂಡಲೆ ಸರಕಾರ ಐತಿಹಾಸಿಕ ಪ್ರದೇಶಗಳ ಅಭಿವೃದ್ದಿಗೆ ಅನುದಾನ ನೀಡಬೇಕೆಂದರು.&lt;/p&gt;&lt;p&gt;ಪ್ರಾಸ್ತಾವಿಕವಾಗಿ ಮಾತನಾಡಿದ ಸಂಶೋದಕ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಮೋರೆರ್ ಬೆಟ್ಟದಲ್ಲಿರುವ ಶಿಲಾ ಸಮಾಧಿಗಳ ಬಗ್ಗೆ ಇತಿಹಾಸ ಇದ್ದು, ಇತ್ತ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ವಾಹಿನಿಯು 7 ಅಧ್ಬುತಗಳ ಪರಿಚಯದ ಸಂದರ್ಭದಲ್ಲಿ ಹಿರೇಬೆಣಕಲ್&zwnj;ಗೆ ಪ್ರಥಮ ಸ್ಥಾನ ನೀಡಿ ಬೆಳಕು ಚೆಲ್ಲಿದರು ಎಂದು ಶ್ಲಾಘಿಸಿದರು.&lt;/p&gt;&lt;h2&gt;&lt;strong&gt;ಸರ್ಕಾರಕ್ಕೆ ಪ್ರಸ್ತಾವನೆ&lt;/strong&gt;&lt;/h2&gt;&lt;p&gt;ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಹಿರೇಬೆಣಕಲ್ ಇತಿಹಾಸ ಪ್ರಸಿದ್ಧವಾಗಿದ್ದು, ತಾವು ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಪ್ರದೇಶದ ಅಭಿವೃದ್ದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿದರು. ಹಿರೇಬೆಣಕಲ್ ಮೋರೆರ್ ಸಾಂಸ್ಕೃತಿಕ ಪ್ರತಿಷ್ಠಾನದ ಮಂಜುನಾಥ ಗುಡ್ಲಾನೂರ ಅವರು ಮೋರೆರ್ ಶಿಲಾ ಸಮಾದಿಗಳು ಮತ್ತು ಅಭಿವೃದ್ದಿಯ ಕುರಿತು ವಿವರಿಸಿದರು. ಇದೇ ವೇಳೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.&lt;/p&gt;&lt;p&gt;ಸಾನಿದ್ಯವನ್ನು ತಲೇಖಾನ್ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಎಚ್.ಎಸ್.ಮುರುಳಿಧರ, ಲಲಿತರಾಣಿ ಶ್ರೀರಂಗದೇವರಾಯಲು, ಡಾ. ಸೋಮರಾಜು, ಡಾ. ಚಂದ್ರಪ್ಪ, ಹಾಸ್ಯ ಕಲಾವಿದರಾದ ಬಿ.ಪ್ರಾಣೇಶ, ನರಸಿಂಹ ಜೋಷಿ, ಕನ್ನಡಪ್ರಭ ವರರದಿಗಾರ ರಾಮಮೂರ್ತಿ ನವಲಿ, ಟಿ.ಆಂಜನೇಯ, ಡಾ.ಸುಲೋಚನ ಚಿನಿವಾಲರ್, ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮೀದೇವಿ ಗುಡ್ಲಾನೂರ, ಡಾ.ಬದರಿಪ್ರಸಾದ್, ಶಿಕ್ಷಕ ಶರಣಪ್ಪ ಹಕ್ಕಂಡಿ, ವಿರೂಪಾಕ್ಷಪ್ಪ ಶಿರವಾರ್, ಮಾರುತಿ ಐಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/kannadaprabha-suvarna-news-hirebenakal-morer-hill-stone-tombs-heritage-news-gvd/articleshow-chrxnix"/>
        </item>
        <item>
            <title><![CDATA[ಕೊಪ್ಪಳದ ಅಂಜನಾದ್ರಿ: ಹನುಮನ ಜನ್ಮಭೂಮಿ ವಿವಾದ, ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ]]></title>
            <link>https://kannada.asianetnews.com/gallery/state/hanuman-janmabhoomi-supreme-court-refuses-urgent-hearing-anjanadri-gdp-cw4gnzc</link>
            <guid isPermaLink="true">https://kannada.asianetnews.com/gallery/state/hanuman-janmabhoomi-supreme-court-refuses-urgent-hearing-anjanadri-gdp-cw4gnzc</guid>
            <pubDate>Mon, 22 Jun 2026 14:42:37 +0530</pubDate>
            <description><![CDATA[&lt;p&gt;ಹನುಮಂತನ ಜನ್ಮಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಿರಾಕರಿಸಿದ್ದು, ಪ್ರಕರಣವನ್ನು ಮತ್ತೆ ಕರ್ನಾಟಕ ಹೈಕೋರ್ಟ್&zwnj;ಗೆ ಹಿಂತಿರುಗಿಸಿದೆ. ಕರ್ನಾಟಕದ ಕಿಷ್ಕಿಂಧೆ, ಆಂಧ್ರದ ತಿರುಮಲ ಮತ್ತು ಕರ್ನಾಟಕದ ಗೋಕರ್ಣದ ನಡುವೆ ಹನುಮನ ನಿಜವಾದ ಜನ್ಮಸ್ಥಳ ಯಾವುದು&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksbkt4k5b1tst2cqf7b8mjsv,imgname-----------------------2026-05-24t045804.337-1779580080741.jpg" type="image/jpeg" height="390" width="690"/>
            <content:encoded><![CDATA[&lt;p&gt;ಹನುಮಂತನ ಜನ್ಮಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಿರಾಕರಿಸಿದ್ದು, ಪ್ರಕರಣವನ್ನು ಮತ್ತೆ ಕರ್ನಾಟಕ ಹೈಕೋರ್ಟ್&zwnj;ಗೆ ಹಿಂತಿರುಗಿಸಿದೆ. ಕರ್ನಾಟಕದ ಕಿಷ್ಕಿಂಧೆ, ಆಂಧ್ರದ ತಿರುಮಲ ಮತ್ತು ಕರ್ನಾಟಕದ ಗೋಕರ್ಣದ ನಡುವೆ ಹನುಮನ ನಿಜವಾದ ಜನ್ಮಸ್ಥಳ ಯಾವುದು&amp;nbsp;&lt;/p&gt;&lt;img&gt;&lt;p&gt;ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಭಗವಾನ್ ಹನುಮಂತನ ನಿಜವಾದ ಜನ್ಮಸ್ಥಳ ಯಾವುದು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಸುಪ್ರೀಂ ಕೋರ್ಟ್ ಸೋಮವಾರ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದ ನಂತರ ಪ್ರಕರಣವನ್ನು ಮರು ವಿಚಾರಣೆಗೆ ಒಳಪಡಿಸಿರುವ ನಿರ್ಧಾರದ ಬಗ್ಗೆ ಅರ್ಜಿದಾರರು ತೀವ್ರ ಕಳವಳ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ಸರ್ವೋಚ್ಚ ನ್ಯಾಯಾಲಯ ಒಲವು ತೋರಲಿಲ್ಲ.&lt;/p&gt;&lt;p&gt;ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ದ್ವಿಪೀಠದ ಮುಂದೆ ಈ ವಿಷಯವನ್ನು ಸಾಮಾನ್ಯ ಕಾರಣ ಪಟ್ಟಿಯ ಹೊರಗೆ (Out of Turn) ಮೌಖಿಕವಾಗಿ ಪ್ರಸ್ತಾಪಿಸಲಾಯಿತು. ಆದರೆ, ಈ ಹಂತದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಪೀಠವು, &quot;ಕರ್ನಾಟಕ ಹೈಕೋರ್ಟ್ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಲು ಸಮರ್ಥವಾಗಿದೆ&quot; ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತು.&lt;/p&gt;&lt;img&gt;&lt;p&gt;ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲರು, ಕರ್ನಾಟಕ ಹೈಕೋರ್ಟ್ ಮುಂದೆ ಅತ್ಯಂತ ಅಸಾಮಾನ್ಯ ಮತ್ತು ವಿಚಿತ್ರ ಕಾರ್ಯವಿಧಾನದ ಪರಿಸ್ಥಿತಿ ಉದ್ಭವಿಸಿದೆ ಎಂದು ವಾದಿಸಿದರು.&lt;/p&gt;&lt;h2&gt;ವಕೀಲರ ಪ್ರಮುಖ ವಾದಗಳು:&lt;/h2&gt;&lt;ul&gt; &lt;li&gt;ಹೈಕೋರ್ಟ್ ಈಗಾಗಲೇ ಈ ವಿವಾದದ ಸುದೀರ್ಘ ವಿಚಾರಣೆ ನಡೆಸಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.&lt;/li&gt; &lt;li&gt;ನಂತರ ಮುಕ್ತ ನ್ಯಾಯಾಲಯದಲ್ಲಿ (Open Court) ತೀರ್ಪನ್ನು ಪ್ರಕಟಿಸಿ, ಆದೇಶದ ಪ್ರತಿಯನ್ನು ಘೋಷಿಸಿ ಸಹಿ ಕೂಡ ಮಾಡಲಾಗಿತ್ತು.&lt;/li&gt; &lt;li&gt;ಆದರೆ, ತೀರ್ಪು ಪ್ರಕಟವಾದ ಬೆನ್ನಲ್ಲೇ, ಈ ಪ್ರಕರಣವನ್ನು ಇದ್ದಕ್ಕಿದ್ದಂತೆ ಮರುದಿನವೇ ಮತ್ತೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.&lt;/li&gt;&lt;/ul&gt;&lt;p&gt;ಕಾನೂನಿನ ಪ್ರಕಾರ, ಒಮ್ಮೆ ನ್ಯಾಯಾಲಯವು ತೀರ್ಪು ಪ್ರಕಟಿಸಿ ಸಹಿ ಮಾಡಿದ ನಂತರ, ಆ ವಿಷಯದ ಮೇಲೆ ನ್ಯಾಯಾಲಯದ ನ್ಯಾಯವ್ಯಾಪ್ತಿ ಮುಕ್ತಾಯಗೊಳ್ಳುತ್ತದೆ. ಇದನ್ನು ಕಾನೂನು ಪರಿಭಾಷೆಯಲ್ಲಿ &lsquo;ಫಂಕ್ಟಸ್ ಅಫಿಷಿಯೋ&rsquo; (Functus Officio) ಎನ್ನಲಾಗುತ್ತದೆ. ನಿರ್ದಿಷ್ಟ ಕಾನೂನು ವಿನಾಯಿತಿಗಳನ್ನು ಹೊರತುಪಡಿಸಿ ಅದೇ ಪ್ರಕರಣವನ್ನು ಮತ್ತೆ ವಿಚಾರಣೆ ಮಾಡಲು ಸಾಧ್ಯವಿಲ್ಲ. ತೀರ್ಪು ಬಂದ ನಂತರವೂ ಮರುಪರಿಶೀಲನೆಗೆ ಒಳಪಡಿಸಿರುವುದು ಗಂಭೀರ ಕಾರ್ಯವಿಧಾನದ ಲೋಪ ಎಂದು ವಕೀಲರು ತಕ್ಷಣದ ಹಸ್ತಕ್ಷೇಪ ಕೋರಿದರು.&lt;/p&gt;&lt;img&gt;&lt;p&gt;ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಕರ್ನಾಟಕ ಹೈಕೋರ್ಟ್&zwnj;ನ ಕಾರ್ಯವೈಖರಿ ಮತ್ತು ಪದ್ಧತಿಯನ್ನು ಸಮರ್ಥಿಸಿಕೊಂಡರು.&lt;/p&gt;&lt;p&gt;ಕರ್ನಾಟಕ ಹೈಕೋರ್ಟ್ ತನ್ನದೇ ಆದ ವಿಶೇಷ ಕಾರ್ಯವಿಧಾನವನ್ನು ಹೊಂದಿದೆ. ಅಗತ್ಯವಿದ್ದಲ್ಲಿ ಆದೇಶದ ಕೆಲವು ಅಂಶಗಳನ್ನು ಸ್ಪಷ್ಟಪಡಿಸುವ, ತಿದ್ದುಪಡಿ ಮಾಡುವ ಅಥವಾ ಸರಿಪಡಿಸುವ ಪ್ರಕ್ರಿಯೆಯನ್ನು ಹೈಕೋರ್ಟ್ ಚಲಾಯಿಸಬಹುದು. ಹೈಕೋರ್ಟ್ ಈ ಸಮಸ್ಯೆಯನ್ನು ಸ್ವತಃ ನಿಭಾಯಿಸಲಿ ಎಂದು ನ್ಯಾಯಮೂರ್ತಿ ನಾಗರತ್ನ ಅವರು ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿದರು. ತಾಂತ್ರಿಕ ಅಥವಾ ಕಾನೂನು ಆಕ್ಷೇಪಣೆಗಳಿದ್ದರೆ ಹೈಕೋರ್ಟ್ ಮೊದಲು ಅವುಗಳನ್ನು ಪರಿಗಣಿಸಲಿ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಯಾವುದೇ ತಕ್ಷಣದ ಪರಿಹಾರ ನೀಡಲು ನಿರಾಕರಿಸಿತು.&amp;nbsp;&lt;/p&gt;&lt;img&gt;&lt;p&gt;ವಿಶೇಷವೆಂದರೆ, ಈ ಹನುಮಾನ್ ಜನ್ಮಭೂಮಿ ವಿವಾದವು ಎರಡು ವಿಭಿನ್ನ ಧರ್ಮಗಳ ನಡುವಿನದ್ದಲ್ಲ. ಬದಲಾಗಿ, ಇಬ್ಬರು ಹಿಂದೂ ಧಾರ್ಮಿಕ ಸಂಸ್ಥೆಗಳ ನಡುವೆ ನಡೆಯುತ್ತಿರುವ ಐತಿಹಾಸಿಕ ಮತ್ತು ಧಾರ್ಮಿಕ ಹಕ್ಕುಗಳ ಪೈಪೋಟಿಯಾಗಿದೆ. 2021 ರಲ್ಲಿ ಆರಂಭವಾದ ಈ ವಿವಾದದಲ್ಲಿ ಪ್ರಮುಖವಾಗಿ ಮೂರು ವಾದಗಳು ಮುಂಚೂಣಿಯಲ್ಲಿವೆ.&lt;/p&gt;&lt;h2&gt;ಆಂಧ್ರಪ್ರದೇಶದ ತಿರುಮಲ (TTD ಹಕ್ಕು)&lt;/h2&gt;&lt;p&gt;ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಗಳು (TTD), ತನ್ನ ವ್ಯಾಪ್ತಿಯ ತಿರುಮಲ ಬೆಟ್ಟಗಳಲ್ಲಿರುವ ಅಂಜನಾದ್ರಿ ಪರ್ವತವೇ ಹನುಮಂತನ ನಿಜವಾದ ಜನ್ಮಸ್ಥಳ ಎಂದು ಪ್ರತಿಪಾದಿಸಿದೆ. ತನ್ನ ನಿಲುವನ್ನು ಬೆಂಬಲಿಸಲು ಟಿಟಿಡಿ ಎಂಟು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿತ್ತು. ಪುರಾಣ ಸಾಹಿತ್ಯ, ಪ್ರಾಚೀನ ತಾಮ್ರ ಫಲಕಗಳು, ಶಾಸನಗಳು ಮತ್ತು ಭೌಗೋಳಿಕ ಪುರಾವೆಗಳನ್ನು ಆಧರಿಸಿ ಸಮಿತಿಯು ವರದಿ ನೀಡಿದ್ದು, ಅದರಂತೆ ಟಿಟಿಡಿ ಒಂದು ಕಿರುಪುಸ್ತಕವನ್ನೂ ಪ್ರಕಟಿಸಿದೆ. ಅಲ್ಲದೆ, ರಾಮ ನವಮಿಯಂದು ಆ ಸ್ಥಳವನ್ನು ಹನುಮನ ಜನ್ಮಸ್ಥಳವೆಂದು ಔಪಚಾರಿಕವಾಗಿ ಪವಿತ್ರೀಕರಿಸಿ, ಅಲ್ಲಿ ಪ್ರವಾಸೋದ್ಯಮ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ.&lt;/p&gt;&lt;img&gt;&lt;p&gt;ಕರ್ನಾಟಕದ ಯುನೆಸ್ಕೋ ಮಾನ್ಯತೆ ಪಡೆದ ಪಾರಂಪರಿಕ ಪ್ರದೇಶವಾದ ಹಂಪಿಯ ಬಳಿಯಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟವೇ ಹನುಮಂತನ ನಿಜವಾದ ಜನ್ಮಸ್ಥಳ ಎಂದು &lsquo;ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್&rsquo; ಮತ್ತು ಅದರ ಸಂಸ್ಥಾಪಕ ಸ್ವಾಮಿ ಗೋವಿಂದಾನಂದ ಸರಸ್ವತಿ ಪ್ರತಿಪಾದಿಸಿದ್ದಾರೆ. ವಾಲ್ಮೀಕಿ ರಾಮಾಯಣ, ಸ್ಕಂದ ಪುರಾಣ, ವರಾಹ ಪುರಾಣ ಮತ್ತು ಬ್ರಹ್ಮಾಂಡ ಪುರಾಣದಂತಹ ಪಠ್ಯಗಳನ್ನು ಆಧರಿಸಿ ವೈದಿಕ ವಿದ್ವಾಂಸರು ಹಾಗೂ ಇತಿಹಾಸಕಾರರ ಸಮಿತಿ ಈ ತೀರ್ಮಾನಕ್ಕೆ ಬಂದಿದೆ. ಇಂದಿನ ಹಂಪಿ ಮತ್ತು ತುಂಗಭದ್ರಾ ನದಿಯ ಸುತ್ತಲಿನ ಕಿಷ್ಕಿಂಧಾ ಪ್ರದೇಶದ ಅಂಜನಹಳ್ಳಿಯೇ ಹನುಮನ ಜನ್ಮಭೂಮಿ ಎಂಬುದು ಇವರ ವಾದ. ಈ ಕುರಿತು ಇತ್ತಂಡಗಳ ನಡುವೆ ಸುದೀರ್ಘ ಚರ್ಚೆ ನಡೆದಿದ್ದರೂ ಒಮ್ಮತ ಮೂಡಿಲ್ಲ.&lt;/p&gt;&lt;img&gt;&lt;p&gt;ಇವೆರಡರ ನಡುವೆ, ಕರ್ನಾಟಕದ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಗೋಕರ್ಣವು ಹನುಮಂತನ ನಿಜವಾದ ಜನ್ಮಸ್ಥಳ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ರಾಮಚಂದ್ರಾಪುರ ಮಠವು ಮೂರನೇ ವಾದವನ್ನು ಮಂಡಿಸಿದೆ. ವಾಲ್ಮೀಕಿ ರಾಮಾಯಣದ ಉಲ್ಲೇಖಗಳ ಪ್ರಕಾರ, ಹನುಮಂತ ಗೋಕರ್ಣದಲ್ಲಿ ಜನಿಸಿದನು. ಆದರೆ ಕಿಷ್ಕಿಂಧೆಯ ಅಂಜನಾದ್ರಿಯು ಅವನ ನಂತರದ ಚಟುವಟಿಕೆಗಳ ಕೇಂದ್ರವಾಗಿದ್ದರಿಂದ, ಅದು ಹನುಮಂತನ &lsquo;ಕರ್ಮಭೂಮಿ&rsquo;ಯೇ ಹೊರತು ಜನ್ಮಭೂಮಿಯಲ್ಲ ಎನ್ನುವುದು ಮಠದ ವ್ಯಾಖ್ಯಾನವಾಗಿದೆ.&lt;/p&gt;&lt;img&gt;&lt;p&gt;ಸುಪ್ರೀಂ ಕೋರ್ಟ್ ಸದ್ಯಕ್ಕೆ ಮಧ್ಯಪ್ರವೇಶಿಸಲು ನಿರಾಕರಿಸಿರುವುದರಿಂದ, ಈ ಜಟಲ ಧಾರ್ಮಿಕ ವಿವಾದದ ಕಾನೂನು ಹೋರಾಟ ಈಗ ಮತ್ತೆ ಕರ್ನಾಟಕ ಹೈಕೋರ್ಟ್&zwnj;ನಲ್ಲೇ ಮುಂದುವರಿಯಲಿದೆ. ಹೈಕೋರ್ಟ್ ತನ್ನ ಮರು ವಿಚಾರಣೆಯ ಸಂದರ್ಭದಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದೆ ಹಾಗೂ ತೀರ್ಪಿನ ಗೊಂದಲಗಳನ್ನು ಹೇಗೆ ಬಗೆಹರಿಸಲಿದೆ ಎಂಬುದರ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ. ಹನುಮಂತನ ಜನ್ಮಸ್ಥಳದ ಕುರಿತಾದ ಈ ಚರ್ಚೆ ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕಿದೆ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/hanuman-janmabhoomi-supreme-court-refuses-urgent-hearing-anjanadri-gdp-cw4gnzc"/>
        </item>
        <item>
            <title><![CDATA[TB Dam ನೋಡೋಕೆ ಮುಗಿಬಿದ್ದ ಪ್ರವಾಸಿಗರು!; ಲೇಸರ್ ಲೈಟಿಂಗ್ ನೆರಳಿನಲ್ಲಿ ಚಿನ್ನದ ನದಿಯಂತಾದ ತುಂಗಭದ್ರಾ ಒಡಲು!]]></title>
            <link>https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo</link>
            <guid isPermaLink="true">https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo</guid>
            <pubDate>Wed, 24 Jun 2026 20:59:22 +0530</pubDate>
            <description><![CDATA[&lt;p&gt;ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್&zwnj;ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvx3pn214ctd15f65z9mtdn3,imgname-tungabhadra-dam--2--1782314652737.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್&zwnj;ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.&amp;nbsp;&lt;/p&gt;&lt;img&gt;&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ನಾಳೆ (ಜೂನ್ 25) ಐತಿಹಾಸಿಕ ಕ್ಷಣವೊಂದು ದಾಖಲಾಗಲಿದೆ. ಜಲಾಶಯಕ್ಕೆ ಅಳವಡಿಸಲಾಗಿರುವ ನೂತನ ಕ್ರಸ್ಟ್ ಗೇಟ್&zwnj;ಗಳ ಅಧಿಕೃತ ಲೋಕಾರ್ಪಣೆ ಕಾರ್ಯಕ್ರಮ ನಾಳೆ ನೆರವೇರಲಿದ್ದು, ಈ ಸಂಭ್ರಮದ ಹಿನ್ನೆಲೆಯಲ್ಲಿ ಇಡೀ ಜಲಾಶಯವನ್ನು ವಿದ್ಯುತ್ ದೀಪಾಲಂಕಾರದಿಂದ ಅತ್ಯಂತ ಆಕರ್ಷಕವಾಗಿ ಶೃಂಗರಿಸಲಾಗಿದೆ. ಸಿಎಂ ಡಿಕೆ ಶಿವಕುಮಾರ್&zwnj;, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್&zwnj; ರೆಡ್ಡಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದರೊಂದಿಗೆ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿಆರ್&zwnj; ಪಾಟೀಲ್&zwnj; ಕೂಡ ಇರಲಿದ್ದಾರೆ.&lt;/p&gt;&lt;img&gt;&lt;p&gt;ಹೊಸ ಕ್ರಸ್ಟ್ ಗೇಟ್&zwnj;ಗಳ ಲೋಕಾರ್ಪಣೆಯ ಸಂಭ್ರಮಕ್ಕಾಗಿ ತುಂಗಭದ್ರಾ ಆಣೆಕಟ್ಟನ್ನು ವಧುವಿನಂತೆ ಸಜ್ಜುಗೊಳಿಸಲಾಗಿದೆ. ಇಡೀ ಜಲಾಶಯದ ಆಣೆಕಟ್ಟಿನ ಮೇಲೆ ಮೈಲಿಗಟ್ಟಲೆ ಸಾಲು ಸಾಲಾಗಿ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿಯ ವೇಳೆಗೆ ಜಲಾಶಯದ ನೀರು ಮತ್ತು ಗೋಡೆಗಳ ಮೇಲೆ ಪ್ರತಿಫಲಿಸುತ್ತಿರುವ ದೀಪಗಳ ಬೆಳಕು ನೋಡುಗರ ಕಣ್ಣು ಕೋರೈಸುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಕಳೆದ ಅವಧಿಯಲ್ಲಿ ಜಲಾಶಯದ ಪ್ರಮುಖ ಕ್ರಸ್ಟ್ ಗೇಟ್ (ಗೇಟ್ ನಂ. 19) ಕೊಚ್ಚಿ ಹೋಗಿ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ, ಯುದ್ಧೋಪಾದಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಸ್ಟಾಪ್ ಲಾಗ್ ಮತ್ತು ಕ್ರಸ್ಟ್ ಗೇಟ್&zwnj;ಗಳನ್ನು ಸಿದ್ಧಪಡಿಸಲಾಗಿತ್ತು. ಈ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಳೆ ಅಧಿಕೃತವಾಗಿ ಇವುಗಳನ್ನು ಸಾರ್ವಜನಿಕ ಸೇವೆಗೆ ಹಾಗೂ ರೈತರ ಹಿತದೃಷ್ಟಿಯಿಂದ ಲೋಕಾರ್ಪಣೆ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಹೊಸ ಗೇಟ್&zwnj;ಗಳ ಉದ್ಘಾಟನೆಗೆ ಸಾಕ್ಷಿಯಾಗಲಿರುವ ವಿಜಯನಗರದ ತುಂಗಭದ್ರಾ ಆಣೆಕಟ್ಟಿನ ಉದ್ದಕ್ಕೂ ಎಲ್ಇಡಿ (LED) ದೀಪಗಳ ಭವ್ಯ ಮಾಲೆಯನ್ನು ಹಾಕಲಾಗಿದೆ. ವಿವಿಧ ಬಣ್ಣಗಳ ಲೇಸರ್ ಮತ್ತು ಫ್ಲಡ್ ಲೈಟ್&zwnj;ಗಳ ನೆರಳಿನಾಟವು ಜಲಾಶಯಕ್ಕೆ ಹೊಸ ಕಳೆಯನ್ನು ತಂದಿದ್ದು, ಜಲಾಶಯದ ಹಿನ್ನೀರು ಚಿನ್ನದ ನದಿಯಂತೆ ಮಿನುಗುತ್ತಿದೆ.&lt;/p&gt;&lt;img&gt;&lt;p&gt;ಹಿಂದೆ ಗೇಟ್ ಮುರಿದು ಕೋಟ್ಯಂತರ ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗಿ, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭಾರಿ ಆತಂಕ ಮೂಡಿಸಿತ್ತು. ಆದರೆ ಈಗ ಇಂಜಿನಿಯರ್&zwnj;ಗಳು ಮತ್ತು ತಜ್ಞರ ಶ್ರಮದಿಂದ ಹೊಸ ಗೇಟ್&zwnj;ಗಳು ಯಶಸ್ವಿಯಾಗಿ ಅಳವಡಿಕೆಯಾಗಿ, ಡ್ಯಾಂ ಸಂಪೂರ್ಣ ಸುರಕ್ಷಿತವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯ ಕಾರ್ಯಕ್ರಮವು ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;img&gt;&lt;p&gt;ಜಲಾಶಯದ ಈ ಅಭೂತಪೂರ್ವ ದೀಪಾಲಂಕಾರದ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಪ್ರವಾಸಿಗರು ಇಂದಿನಿಂದಲೇ ಜಲಾಶಯದತ್ತ ಧಾವಿಸುತ್ತಿದ್ದಾರೆ. ಮುಸ್ಸಂಜೆಯ ವೇಳೆ ಇಡೀ ಆಣೆಕಟ್ಟು ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್&zwnj;ಗಳಲ್ಲಿ ಸೆರೆಹಿಡಿಯುತ್ತಿದ್ದು, ಪ್ರವಾಸಿ ತಾಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;img&gt;&lt;p&gt;ನಾಳೆ ನಡೆಯಲಿರುವ ಈ ಕ್ರಸ್ಟ್ ಗೇಟ್&zwnj;ಗಳ ಉದ್ಘಾಟನೆಯು ಕೇವಲ ಒಂದು ತಾಂತ್ರಿಕ ಕಾರ್ಯಕ್ರಮವಾಗಿರದೆ, ಕೋಟ್ಯಂತರ ಎಕರೆ ಕೃಷಿ ಭೂಮಿಯ ಜಲ ಭದ್ರತೆಯ ಸಂಕೇತವಾಗಿದೆ. ಯಾವುದೇ ತಾಂತ್ರಿಕ ದೋಷ ಬರದಂತೆ ಅತ್ಯಂತ ಭದ್ರವಾಗಿ ಈ ಗೇಟ್&zwnj;ಗಳನ್ನು ವಿನ್ಯಾಸಗೊಳಿಸಲಾಗಿದ್ದು, ನಾಳೆಯಿಂದ ಜಲಾಶಯವು ಸಂಪೂರ್ಣ ಸಾಮರ್ಥ್ಯದೊಂದಿಗೆ ನೀರನ್ನು ಸಂಗ್ರಹಿಸಲು ಸನ್ನದ್ಧವಾಗಲಿದೆ.&lt;/p&gt;]]></content:encoded>
            <category>koppal</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo"/>
        </item>
        <item>
            <title><![CDATA[ಮುಂಗಾರಿಗೂ ಮುನ್ನವೇ ರೈತರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್, ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆಗೆ ದಿನಾಂಕ ಫಿಕ್ಸ್]]></title>
            <link>https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq</link>
            <guid isPermaLink="true">https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq</guid>
            <pubDate>Tue, 16 Jun 2026 18:20:31 +0530</pubDate>
            <description><![CDATA[ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್&zwnj;ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv87c751ar2rqkxkezbdekhr,imgname-tungabhadra-dam--2--1781613862049.jpg" type="image/jpeg" height="390" width="690"/>
            <content:encoded><![CDATA[ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್&zwnj;ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.&lt;img&gt;&lt;p&gt;ಕಳೆದ ವರ್ಷ ತಾಂತ್ರಿಕ ದೋಷದಿಂದಾಗಿ ದುರಂತಕ್ಕೀಡಾಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್&zwnj; ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಮುಂಗಾರು ಮಳೆಗಾಲ ಆರಂಭವಾಗುತ್ತಿರುವ ಬೆನ್ನಲ್ಲೇ ಜೂನ್ 25ರಂದು ಹೊಸ ಗೇಟ್&zwnj;ಗಳನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲು ದಿನಾಂಕ ನಿಗದಿಪಡಿಸಲಾಗಿದೆ. ಮುಂಗಾರು ಮುನ್ನವೇ ಡ್ಯಾಂ ಸಂಪೂರ್ಣ ಸಿದ್ಧವಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.&lt;/p&gt;&lt;img&gt;&lt;p&gt;ತುಂಗಭದ್ರಾ ಜಲಾಶಯದ ನೀರು ಮೂರು ರಾಜ್ಯಗಳಿಗೆ ಹಂಚಿಕೆಯಾಗುವುದರಿಂದ, ಈ ಲೋಕಾರ್ಪಣೆ ಕಾರ್ಯಕ್ರಮ ಜಂಟಿ ಸಮಾರಂಭವಾಗಿ ಮೂಡಿಬರಲಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಮೂರೂ ರಾಜ್ಯಗಳ ಹಲವು ಗಣ್ಯರು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಇದಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸುತ್ತಿದೆ.&lt;/p&gt;&lt;img&gt;&lt;p&gt;1953ರಲ್ಲಿ ನಿರ್ಮಾಣವಾಗಿದ್ದ ತುಂಗಭದ್ರಾ ಅಣೆಕಟ್ಟಿನ ಮೂಲ ಗೇಟ್&zwnj;ಗಳ ಜೀವಿತಾವಧಿ ಕೇವಲ 50 ವರ್ಷಗಳೆಂದು ತಜ್ಞರು ಮೊದಲೇ ಎಚ್ಚರಿಸಿದ್ದರು. ಆದರೂ ಹಳೆಯ ಗೇಟ್&zwnj;ಗಳನ್ನೇ ಮುಂದುವರಿಸಲಾಗಿತ್ತು. ಪರಿಣಾಮವಾಗಿ, 2024ರ ಆಗಸ್ಟ್ 10ರಂದು ರಾತ್ರಿ ಸುಮಾರು 60 ಅಡಿ ಅಗಲ ಹಾಗೂ 20 ಅಡಿ ಎತ್ತರದ ಬೃಹತ್ ಗೇಟ್&zwnj;ವೊಂದು ಇದ್ದಕ್ಕಿದ್ದಂತೆ ಕಳಚಿ ಬಿದ್ದಿತ್ತು. ಇದರಿಂದಾಗಿ ಅಪಾರ ಪ್ರಮಾಣದ ನೀರು ನದಿಗೆ ಪೋಲಾಗಿ, ಭಾರಿ ರಾಜಕೀಯ ವಾಕ್ಸಮರ ಹಾಗೂ ಆತಂಕ ಸೃಷ್ಟಿಯಾಗಿತ್ತು.&lt;/p&gt;&lt;img&gt;&lt;p&gt;ಈ ದುರಂತದ ನಂತರ ಎಚ್ಚೆತ್ತ ಸರ್ಕಾರ, ಕಳೆದ ಡಿಸೆಂಬರ್&zwnj;ನಲ್ಲಿ ಭಾರಿ ಬಜೆಟ್&zwnj;ನೊಂದಿಗೆ ಹೊಸ ಗೇಟ್&zwnj;ಗಳ ಅಳವಡಿಕೆಗೆ ಚಾಲನೆ ನೀಡಿತ್ತು. ದೇಶದ ಪ್ರಮುಖ ಡ್ಯಾಂಗಳಾದ ಕೆಆರ್&zwnj;ಎಸ್, ನಾರಾಯಣಪುರ ಹಾಗೂ ಪಶ್ಚಿಮ ಬಂಗಾಳದ ಫರಕ್ಕಾ ಬ್ಯಾರೇಜ್&zwnj;ಗಳಿಗೆ ಗೇಟ್ ಅಳವಡಿಸಿದ ಅನುಭವವಿರುವ ಗುಜರಾತ್ ಮೂಲದ 'ಹಾರ್ಡ್&zwnj;ವೇರ್ ಟೂಲ್ಸ್ ಮತ್ತು ಮೆಷಿನ್ ಪ್ರಾಜೆಕ್ಟ್ಸ್ ಲಿಮಿಟೆಡ್' ಸಂಸ್ಥೆಗೆ ಇದರ ಗುತ್ತಿಗೆ ನೀಡಲಾಗಿತ್ತು. ಒಟ್ಟು 51.81 ಕೋಟಿ ರೂಪಾಯಿ ವೆಚ್ಚದಲ್ಲಿ ಗದಗ ಸಮೀಪದ ಅಡವಿಸೋಮಾಪುರ ಹಾಗೂ ವಿಜಯನಗರದ ಟಿಬಿ ಬೋರ್ಡ್ ಯಾರ್ಡ್&zwnj;ಗಳಲ್ಲಿ ಈ ಗೇಟ್&zwnj;ಗಳನ್ನು ಅತ್ಯಂತ ವೇಗವಾಗಿ ಸಿದ್ಧಪಡಿಸಲಾಯಿತು.&lt;/p&gt;&lt;img&gt;&lt;p&gt;ಹೊಸ ಗೇಟ್ ಅಳವಡಿಸುವ ತಾಂತ್ರಿಕ ಅನಿವಾರ್ಯತೆಯಿಂದಾಗಿ, ಕಳೆದ ಡಿಸೆಂಬರ್ ತಿಂಗಳ ಎರಡನೇ ಬೆಳೆಗೆ ನೀರು ಬಿಡದಿರಲು ಸರ್ಕಾರ ನಿರ್ಧರಿಸಿತ್ತು. ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಲಕ್ಷಾಂತರ ರೈತರು ತಮ್ಮ ಒಂದು ಇಡೀ ಬೆಳೆಯನ್ನು ತ್ಯಾಗ ಮಾಡಿದ್ದರು. ಮುಂಗಾರು ಮಳೆಗೂ ಮುನ್ನ ಕೆಲಸ ಮುಗಿಯುತ್ತಾ ಎಂಬ ಆತಂಕ ರೈತರನ್ನು ಕಾಡಿತ್ತಾದರೂ, ಗುತ್ತಿಗೆ ಕಂಪನಿಯು ಹಗಲಿರುಳು ಶ್ರಮಿಸಿ ಸಕಾಲಕ್ಕೆ ಕೆಲಸ ಮುಗಿಸುವ ಮೂಲಕ ರೈತರ ನಂಬಿಕೆಯನ್ನು ಉಳಿಸಿಕೊಂಡಿದೆ.&lt;/p&gt;&lt;img&gt;&lt;p&gt;ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (KSNDMC) ಇತ್ತೀಚಿನ ತಾಜಾ ಮಾಹಿತಿ ಪ್ರಕಾರ, ಜೂನ್ 16ರ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ ಸದ್ಯಕ್ಕೆ 9 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ (2025) ಇದೇ ಅವಧಿಯಲ್ಲಿ ಜಲಾಶಯದಲ್ಲಿ 28 ಟಿಎಂಸಿ ನೀರು ಲಭ್ಯವಿತ್ತು. ಸದ್ಯ ಮುಂಗಾರು ಮಳೆ ಆರಂಭವಾಗುತ್ತಿರುವುದರಿಂದ ಹೊಸ ಗೇಟ್&zwnj;ಗಳ ಬಲದೊಂದಿಗೆ ಡ್ಯಾಂನಲ್ಲಿ ನೀರಿನ ಸಂಗ್ರಹದ ಪ್ರಮಾಣ ವೇಗವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>koppal</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq"/>
        </item>
        <item>
            <title><![CDATA[Tungabhadra Dam: ನವಲಿ ಸಮತೋಲನ ಜಲಾಶಯಕ್ಕೆ ಹಸಿರು ನಿಶಾನೆ ಸಿಗುತ್ತಾ? ರೈತರಲ್ಲಿ ಹೆಚ್ಚಿದ ನಿರೀಕ್ಷೆ]]></title>
            <link>https://kannada.asianetnews.com/karnataka-districts/navali-balancing-reservoir-project-koppal-tungabhadra-three-state-cms-gvd/articleshow-h0it2nz</link>
            <guid isPermaLink="true">https://kannada.asianetnews.com/karnataka-districts/navali-balancing-reservoir-project-koppal-tungabhadra-three-state-cms-gvd/articleshow-h0it2nz</guid>
            <pubDate>Wed, 24 Jun 2026 19:10:00 +0530</pubDate>
            <description><![CDATA[&lt;p&gt;Navali Balancing Reservoir: ಕೊಪ್ಪಳ ಜಿಲ್ಲೆಯ ನವಲಿ ಬಳಿ 32 ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣಕ್ಕೆ ಮೂರು ರಾಜ್ಯಗಳ ಸರ್ಕಾರಗಳ ಮುಂದೆ ಪ್ರಸ್ತಾವನೆ ಇದೆ. ತುಂಗಭದ್ರಾ ಜಲಾಶಯದ 33 ಸ್ಪಿಲ್&zwnj;ವೇ ಗೇಟ್ ಉದ್ಘಾಟನೆಗೆ ಆಗಮಿಸುವ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvwxqpdty2z7f6vt6smp1gbx,imgname-cgh-1782308395450.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಜೂ.24):&lt;/strong&gt; ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣದ ಪ್ರಸ್ತಾವನೆ ಮೂರು ರಾಜ್ಯಗಳ ಸರಕಾರದ ಮುಂದೆ ಪ್ರಸ್ತಾವನೆ ಇದ್ದು, ತುಂಗಭದ್ರಾ ಜಲಾಶಯದ 33 ಸ್ಪಿಲ್ ವೇ ಗೇಟುಗಳ ಉದ್ಘಾಟನೆಗೆ ಆಗಮಿಸುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಹಸಿರು ನಿಶಾನೆ ದೊರೆಯುವದೆ ಎನ್ನುವ ಲೆಕ್ಕಚಾರ ರೈತರಲ್ಲಿ ಇದೆ. ತುಂಗಭದ್ರಾ ಜಲಾಶಯದಲ್ಲಿ 32 ಟಿಎಂಸಿ ಹೂಳು ತುಂಬಿದೆ. ಇದರಿಂದ ನೀರಿನ ಸಾಮರ್ಥ್ಯ ಇಳಿಮುಖವಾಗಿದ್ದರಿಂದ ಪರ್ಯಾಯವಾಗಿ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ 2008 ರಲ್ಲಿ ಸರಕಾರ ಸರ್ವೆ ಮಾಡಿತ್ತು.&lt;/p&gt;&lt;p&gt;&lt;strong&gt;32 ಟಿಎಂಸಿ ನೀರು ಸಂಗ್ರಹ&lt;/strong&gt;&lt;/p&gt;&lt;p&gt;ನವಲಿ ಬಳಿ 32 ಟಿಎಂಸಿ ನೀರು ತುಂಬುವ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ನೇತ್ರತ್ವದ ಸರಕಾರದ ಮುಂದೆ ಪ್ರಸ್ತಾವನೆ ಇತ್ತು. ಇದಕ್ಕಾಗಿ ವಿಸೃತ ಯೋಜನೆ( ಡಿಪಿಆರ್) ತಯಾರಿಸುವದಕ್ಕೆ ಸರಕಾರ ಆಡಳಿತಾತ್ಮಕ ಒಪ್ಪಿಗೆ ಸೂಚನೆ ನೀಡಿದ್ದಲ್ಲದೆ ಇದಕ್ಕಾಗಿ 14 ಕೋಟಿ 30 ಲಕ್ಷ ರು ಅನುದಾನ ನೀಡಿತ್ತು. ಅಲ್ಲದೆ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ನವಲಿ ಬಳಿ ಜಲಾಶಯದ ಸ್ಥಳವನ್ನು ಪರಿಶೀಲನೆ ಮಾಡಿದ್ದರು.&lt;/p&gt;&lt;p&gt;ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪ್ರಸ್ತಾವನೆಗೆ ಸಮತೋಲನ ಜಲಾಶಯ ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಗೇಟ್ ದುರಸ್ಥಿ ಸಂದರ್ಭದಲ್ಲಿ ಜಲಾಶಯ ವಿಕ್ಷಣೆಗೆ ಆಗಮಿಸಿದ್ದ ಜಲಸಂಪನ್ಮೂಲ ಸಚಿವರಾಗಿದ್ದ ಇಂದಿನ ಮುಖ್ಯಮಂತ್ರಿನ ಡಿ.ಕೆ.ಶಿವಕುಮಾರ ಅವರು ಸಹ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಭರವಸೆ ನೀಡಿದ್ದರು.&lt;/p&gt;&lt;p&gt;&lt;strong&gt;ಆಂಧ್ರ, ತೆಲಂಗಾಣ ರಾಜ್ಯಕ್ಕೆ ಸಮರ್ಪಕ ನೀರು&lt;/strong&gt;&lt;/p&gt;&lt;p&gt;ನವಲಿ ಬಳಿ 32 ಟಿಎಂಸಿ ನೀರಿನ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಾಣವಾಗುವದರಿಂದ ಕರ್ನಾಟಕಕ್ಕೆ ಶೇ. 20 ರಷ್ಟು ತನ್ನ ನೀರಿನ ಪಾಲು ಮೀಸಲಿರುತ್ತದೆ. ಜೊತೆಗೆ ಆಂಧ್ರ ಮತ್ತು ತೆಲಂಗಾಣ, ರಾಜ್ಯಕ್ಕೆ ತುಂಗಭದ್ರಾ ಜಲಾಶಯದಿಂದ ತನ್ನ ಪಾಲಿನ ನೀರಿನ ಜೊತೆಗೆ 10 ಟಿಎಂಸಿ ಅದಿಕ ನೀರು ಕಾಲುವೆ ಮೂಲಕ ಹಂಚಿಕೆಯಾಗಲಿದೆ.&lt;/p&gt;&lt;p&gt;&lt;strong&gt;16 ಸಾವಿರ ಎಕರೆ ಪ್ರದೇಶದಲ್ಲಿ ಸಮತೋಲನಾ ಜಲಾಶಯ&lt;/strong&gt;&lt;/p&gt;&lt;p&gt;ನವಲಿ ಯಿಂದ ಕರಡೋಣಿ ಹೋಗುವ ಮಾರ್ಗದಲ್ಲಿ ಜಲಾಶಯ ನಿರ್ಮಾಣಕ್ಕೆ ಸ್ಥಳ ನಿಗದಿಯಾಗಿದ್ದು ಸುಮಾರು 16 ಸಾವಿರ ಎಕರೆ ಜಮೀನನ್ನು ಸರ್ವೆ ಮಾಡಿದೆ. ಜಲಾಶಯ ನಿರ್ಮಾಣವಾಗುವದರಿಂದ 20 ಗ್ರಾಮಗಳು ಮುಳಗಡೆಯಾಗಲಿವೆ. ನವಲಿಯಿಂದ ಸೋಮನಾಳ ಗ್ರಾಮದ ಬಳಿ ಇರುವ ತುಂಗಭದ್ರಾ ಎಡದಂಡೆ ಕಾಲುವೆಗೆ ಜೋಡಣೆಯಾಗಲಿದೆ.&lt;/p&gt;&lt;p&gt;&lt;strong&gt;ಪ್ರಧಾನಿ ಭರವಸೆ ಈಡೇರುವುದೇ&lt;/strong&gt;&lt;/p&gt;&lt;p&gt;ಕಳೆದ 8 ವರ್ಷಗಳ ಹಿಂದೆ ಗಂಗಾವತಿ ವಿದಾನ ಸಭಾ ಕ್ಷೇತ್ರದ ಚುನಾವಣೆಯ(2019) ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗ ಸಭೆಯಲ್ಲಿ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣ ಮಾಡುವದು ಖಚಿತ ಇದಕ್ಕೆ ಆಂದ್ರ ಮತ್ತು ತೆಲಂಗಾಣ ಸರಕಾರದಿಂದ ಒಪ್ಪಿಗೆ ಸೂಚಿಸುವ ಭರವಸೆ ಜೊತೆಗೆ ಕೇಂದ್ರದ ಸಂಪೂರ್ಣ ಸಹಕಾರ ಇದೆ ಎಂದು ಭರವಸೆ ನೀಡಿದ್ದರು. ಮೂರು ರಾಜ್ಯದ ಮುಖ್ಯಮಂತ್ರಿಗಳ ಮುಂದೆ ಇದೆ.&lt;/p&gt;&lt;p&gt;&lt;strong&gt;ಪ್ರಸ್ತಾವನೆ&lt;/strong&gt;&lt;/p&gt;&lt;p&gt;ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಮಾಡುವ ಪ್ರಸ್ತಾವನೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯ ಸರಕಾರದ ಮುಂದೆ ಇದೆ. ಜೂನ್ .25 ರಂದು ತುಂಗಭದ್ರಾ ಜಲಾಶಯಕ್ಕೆ ಅಳವಡಿಸಿದ 33 ಸ್ಪಿಲ್ ವೇ ಗೇಟುಗಳ ಉದ್ಘಾಟನೆಗೆ ಆಗಮಿಸುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ತುಂಗಭದ್ರಾ ಬೋರ್ಡ್ ಮೂಲಕ ಸಮತೋಲನ ಜಲಾಶಯದ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿದರೆ ಜಲಾಶಯ ನಿರ್ಮಾಣ ಸುಗಮವಾಗಲಿದೆ. ಇದರಿಂದಾಗಿ ಈ ಭಾಗದ ರೈತರ ಬಹುದಿನಗಳ ಬೇಡಿಕೆಗೆ ಹಸಿರು ನಿಶಾನೆ ದೊರೆತಂತಾಗುತ್ತದೆ.&lt;/p&gt;&lt;p&gt;ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣವಾಗುವದರಿಂದ ಮೂರು ರಾಜ್ಯಗಳಿಗೆ ಹೆಚ್ಚಿನ ನೀರಿನ ಲಭ್ಯತೆ ಆಗುತ್ತದೆ. ಜೊತೆಗೆ ಅಂದ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ತನ್ನ ನೀರಿನ ಪಾಲುದಾರಿಕೆ ಜೊತೆಗೆ ಶೇ.10 ಟಿಎಂಸಿ ನೀರು ಅಧಿಕವಾಗಿ ಲಭ್ಯವಾಗುತ್ತದೆ. ಮೂರು ರಾಜ್ಯದ ಮುಖ್ಯಮಂತ್ರಿಗಳು ಪರಿಶೀಲನೆ ಮಾಡಿ ಜಲಾಶಯ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರೆ ನೀರಾವರಿ ಯೋಜನೆಗೆ ಆದ್ಯತೆ ದೊರೆತಂತಾಗುತ್ತದೆ.-ವಿ.ಪಿ.ಉದ್ದಿಹಾಳ, ನೀರಾವರಿ ತಜ್ಞರು ಮತ್ತು ನಿವೃತ್ತ ಮುಖ್ಯ ಅಭಿಯಂತರರು, ಜಲಸಂಪನ್ಮೂಲ ಇಲಾಖೆ&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/navali-balancing-reservoir-project-koppal-tungabhadra-three-state-cms-gvd/articleshow-h0it2nz"/>
        </item>
        <item>
            <title><![CDATA[1978ರ ಸ್ಕೂಲ್ ಮಾರ್ಕ್ಸ್ ಕಾರ್ಡ್ ವೈರಲ್; ವಿಭಿನ್ನ, ವಿಶೇಷತೆಯ ಕೊಪ್ಪಳ ಶಾಲೆಯ ಅಂಕಪಟ್ಟಿ]]></title>
            <link>https://kannada.asianetnews.com/gallery/karnataka-districts/9th-class-1978s-mark-card-goes-viral-koppal-school-s-mark-sheet-is-different-special-mrq-hifkt7c</link>
            <guid isPermaLink="true">https://kannada.asianetnews.com/gallery/karnataka-districts/9th-class-1978s-mark-card-goes-viral-koppal-school-s-mark-sheet-is-different-special-mrq-hifkt7c</guid>
            <pubDate>Thu, 11 Jun 2026 12:09:14 +0530</pubDate>
            <description><![CDATA[1978ರ 9ನೇ ತರಗತಿಯ ಅಂಕಪಟ್ಟಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲ್ಲಿಕಾರ್ಜುನ್ ಮೇಟಿ ಎಂಬುವವರು ತಮ್ಮ ಅಂಕಪಟ್ಟಿಯನ್ನು ಹಂಚಿಕೊಂಡು, ಅಂದಿನ ದಿನಗಳಲ್ಲಿ ಹೆಚ್ಚು ಅಂಕಗಳ ಒತ್ತಡವಿರಲಿಲ್ಲ ಮತ್ತು ಪಾಸ್ ಆಗುವುದೇ ದೊಡ್ಡ ಸಂಭ್ರಮವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kttnsqpzzvq0w643f7arh7yj,imgname-marks-card-1781159223007.jpg" type="image/jpeg" height="390" width="690"/>
            <content:encoded><![CDATA[1978ರ 9ನೇ ತರಗತಿಯ ಅಂಕಪಟ್ಟಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲ್ಲಿಕಾರ್ಜುನ್ ಮೇಟಿ ಎಂಬುವವರು ತಮ್ಮ ಅಂಕಪಟ್ಟಿಯನ್ನು ಹಂಚಿಕೊಂಡು, ಅಂದಿನ ದಿನಗಳಲ್ಲಿ ಹೆಚ್ಚು ಅಂಕಗಳ ಒತ್ತಡವಿರಲಿಲ್ಲ ಮತ್ತು ಪಾಸ್ ಆಗುವುದೇ ದೊಡ್ಡ ಸಂಭ್ರಮವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.&lt;img&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ 1978ರ ಅಂಕಪಟ್ಟಿಯ ಫೋಟೋವೊಂದು ಮುನ್ನೆಲೆಗೆ ಬಂದಿದೆ. ಈ ಮಾರ್ಕ್ಸ್ ಕಾರ್ಡ್ ತುಂಬಾ ವಿಭಿನ್ನ ಮತ್ತು ವಿಶೇಷವಾಗಿದೆ. ಮಲ್ಲಿಕಾರ್ಜುನ್ ಮೇಟಿ ಎಂಬವರು ತಮ್ಮ ಅಂಕಪಟ್ಟಿ ಜೊತೆ ಅಂದಿನ ಸುಂದರ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇದೇ ಪೋಸ್ಟ್&zwnj;ನಲ್ಲಿ ಅಂದು ಹೆಚ್ಚು ಅಂಕ ತೆಗೆಯಬೇಕೆಂಬ ಒತ್ತಡ ಇರಲಿಲ್ಲ ಎಂಬ ವಿಷಯವನ್ನು ಒತ್ತಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಇಂದಿನ ಮಕ್ಕಳಿಗೆ ಹೆಚ್ಚು ಅಂಕ ತೆಗೆಯಬೇಕೆಂಬ ಒತ್ತಡದಲ್ಲಿರುತ್ತಾರೆ. ಇದಕ್ಕೆ ತಕ್ಕಂತೆ ಪೋಷಕರು ಸಹ ಎಲ್ಲರಿಗಿಂತ ತಮ್ಮ ಮಕ್ಕಳು ಹೆಚ್ಚು ಅಂಕ ತೆಗೆಯಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಎಷ್ಟೋ ಜನರು, ಶಾಲೆ ಜೊತೆ ಮಕ್ಕಳನ್ನು ಟ್ಯೂಷನ್&zwnj;ಗೆ ಹಾಕುತ್ತಾರೆ. ಶಾಲೆ-ಟ್ಯೂಷನ್&zwnj; ಮುಗಿಸ್ಕೊಂಡು ಬಂದ್ರೂ ಓದುವಂತೆ ಒತ್ತಡ ಹಾಕುತ್ತಾರೆ.&lt;/p&gt;&lt;img&gt;&lt;p&gt;ಮಲ್ಲಿಕಾರ್ಜುನ್ ಮೇಟಿಯವರು ತಮ್ಮ 9ನೇ ಕ್ಲಾಸ್&zwnj;ನ ಅಂಕಪಟ್ಟಿ ಹಂಚಿಕೊಂಡಿದ್ದಾರೆ. ಈ ಅಂಕಪಟ್ಟಿಯ ಪ್ರಕಾರ, ಮಲ್ಲಿಕಾರ್ಜುನ್ ಮೇಟಿಯವರು ಕೊಪ್ಪಳದ SGMP ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. 600ಕ್ಕೆ 271 ಅಂಕಗಳನ್ನು ತೆಗೆದುಕೊಂಡು ತೇರ್ಗಡೆಯಾಗಿದ್ದಾರೆ. ವಿಷಯವಾರು ಅಂಕಗಳನ್ನು ಸಹ ನೀವು ಅಂಕಪಟ್ಟಿಯಲ್ಲಿ ಕಾಣಬಹುದಾಗಿದೆ.&lt;/p&gt;&lt;img&gt;&lt;p&gt;ಕನ್ನಡ: 150ಕ್ಕೆ 76, ಇಂಗ್ಲಿಷ್: 100ಕ್ಕೆ 50, ಹಿಂದಿ: 50ಕ್ಕೆ 26, ಗಣಿತ: 100ಕ್ಕೆ 44, ವಿಜ್ಞಾನ: 32 ಮತ್ತು ಸಮಾಜ: 43&lt;/p&gt;&lt;p&gt;ಇತ್ತೀಚೆಗೆ ರಾಜ್ಯದಲ್ಲಿ ಮೂರನೇ ಭಾಷೆ ಆಯ್ಕೆ ಬಗ್ಗೆ ಹೆಚ್ಚು ಚರ್ಚೆಯಲ್ಲಿದೆ. ಈ ಹಿಂದೆ ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿ ಹಿಂದಿಯನ್ನು ಓದುತ್ತಿದ್ದರು. ಆದ್ರೆ ಹಿಂದಿ ಪರೀಕ್ಷೆ ಕೇವಲ 50 ಅಂಕಗಳಿಗೆ ಮಾತ್ರ ಸೀಮಿತವಾಗಿತ್ತು. 50 ಅಂಕಗಳಿಗೆ ಕನಿಷ್ಠ 15 ಮಾರ್ಕ್ ತೆಗೆದುಕೊಂಡ್ರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದರು. ಮಲ್ಲಿಕಾರ್ಜುನ್ ಮೇಟಿಯವರು ಹಿಂದಿ ವಿಷಯದಲ್ಲಿ 50ಕ್ಕೆ 26 ಅಂಕ ತೆಗೆದುಕೊಂಡಿರೋದನ್ನು ಗಮನಿಸಬಹುದು.&lt;/p&gt;&lt;img&gt;&lt;p&gt;ಒಟ್ಟು ಪರೀಕ್ಷದಾಗ ಪಾಸ್ ಆಗಬೇಕು ಅಂತಿದ್ರು. ನಾವು ಅಷ್ಟು ಗುರಿ ಇಟ್ಕೊಂಡಿರ್ತಿದ್ವಿ. ಪಾಸೂ ಆಗ್ತಿದ್ವಿ. ಆಗ ನಮಗೆಲ್ಲಾ Rank, ಡಿಸ್ಟಿಂಕ್ಷನ್, ಎ+ ಅದೂ ಇದೂ ಇರ್ತಿದ್ದಿಲ್ಲ. ಪಾಸ್ ಆದರೆ ಮನೆಯವರೆಲ್ಲರಿಗೂ ಖುಷಿಯೋ ಖುಷಿ. ನಮಗ ದೊಡ್ಡ ಮರ್ಯಾದಿ ಸಿಗುತಿತ್ತು. ಹಿಂದಿ ವಿಷಯ ಹ್ಯಾಂಗ್ ಓದಿದವೋ, ಬರಿತಿದ್ವೋ ಗೊತ್ತೇ ಇಲ್ಲ. ಆದ್ರೂ ಸೂಪರ್. ಹಿಂದಿ ಓದಿ ಕಲಿತಿಲ್ಲ. ಹಿಂದಿ ಸಿನಿಮಾ ನೋಡಿ ಹಿಂದಿ ಭಾಷೆ ಒಂದಿಷ್ಟು ಮಾತಾಡೋದು ಕಲಿತಿದ್ದೇವೆ ಎಂದು ಫೇಸ್&zwnj;ಬುಕ್&zwnj;ನಲ್ಲಿ ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/9th-class-1978s-mark-card-goes-viral-koppal-school-s-mark-sheet-is-different-special-mrq-hifkt7c"/>
        </item>
        <item>
            <title><![CDATA[Gangavathi: ಮನೆಯ ಕಸ ಬೇರ್ಪಡಿಸಿ ಎಂದ ಸಿಬ್ಬಂದಿ ಮೇಲೆ ಹಲ್ಲೆ: ಆರೋಪಿಯ ಮನೆ ಮುಂದೆ ಕಸ ಸುರಿದು ಪ್ರತಿಭಟನೆ]]></title>
            <link>https://kannada.asianetnews.com/karnataka-districts/gangavathi-municipal-worker-assaulted-over-waste-segregation-protest-erupts-gvd/articleshow-hyghluk</link>
            <guid isPermaLink="true">https://kannada.asianetnews.com/karnataka-districts/gangavathi-municipal-worker-assaulted-over-waste-segregation-protest-erupts-gvd/articleshow-hyghluk</guid>
            <pubDate>Tue, 23 Jun 2026 18:45:27 +0530</pubDate>
            <description><![CDATA[&lt;p&gt;Gangavathi ಕಿಲ್ಲಾ ಏರಿಯಾದಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಹಾಕುವಂತೆ ಸೂಚಿಸಿದ ನಗರಸಭೆ ಸಿಬ್ಬಂದಿ ಅಬ್ದುಲ್ ನಬಿಸಾಬ್ ಮೇಲೆ ಹಲ್ಲೆ ನಡೆದಿದೆ. ಘಟನೆಯನ್ನು ಖಂಡಿಸಿ ನಗರಸಭೆ ಸಿಬ್ಬಂದಿಗಳು ಆರೋಪಿಯ ಮನೆ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt9xwwtjjd70sekb37apave,imgname-cch-1782220518298.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.23):&lt;/strong&gt; ಮನೆಯೊಳಗಿನ ಕಸ ಹಾಕುವ ವಿಚಾರವಾಗಿ ನಗರಸಭೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಘಟನೆ ನಗರದ ಕಿಲ್ಲಾ ಏರಿಯಾದ 6ನೇ ವಾರ್ಡಿನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ನಗರಸಭೆಯ ವಾಹನದಲ್ಲಿ ಕಸ ತುಂಬಿಕೊಂಡು ಹೋಗುವ ಸಿಬ್ಬಂದಿ ಅಬ್ದುಲ್ ನಬಿಸಾಬ ಎನ್ನುವಾತನ ಮೇಲೆ ಹಲ್ಲೆ ನಡೆದಿದೆ.&lt;/p&gt;&lt;p&gt;ಕಿಲ್ಲಾ ಏರಿಯಾದಲ್ಲಿ ಮನೆ ಮನೆಗೆ ತೆರಳಿ ಕಸ ತುಂಬಿಕೊಂಡು ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಸಿ ಕಸ ಮತ್ತು ಒಣ ಕಸ ಬೇರೆ ಬೇರೆ ಹಾಕಿರಿ ಎಂದು ಸಿಬ್ಬಂದಿ ಅಬ್ದುಲ್ ನಬಿ ಹೇಳಿತ್ತಿದ್ದಂತಯೇ ಕಿಲ್ಲಾ ಏರಿಯಾದ ನಿವಾಸಿ ಇಸಾಕ್ ಎನ್ನುವಾತ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾನೆ. ಇದಕ್ಕೆ ವಿರೋಧಿಸಿದ ನಗರಸಭೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹಲ್ಲೆಗೊಳಗಾದ ಸಿಬ್ಬಂದಿಗೆ ಬೆಂಬಲಿಸಿ ಇಸಾಕ್ ಮನೆಯ ಮುಂಭಾಗದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಸಿಬ್ಬಂದಿ ಅಬ್ದುಲ್ ನಬಿಸಾಬ ಅವರನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.&lt;/p&gt;&lt;p&gt;&lt;strong&gt;ಪ್ರತಿಭಟನೆ&lt;/strong&gt;&lt;/p&gt;&lt;p&gt;ಸಿಬ್ಬಂದಿ ಅಬ್ದುಲ್ ನಬಿಸಾಬ ಮೇಲೆ ಹಲ್ಲೆ ಮಾಡಿದ ಇಸಾಕ್ ನಿವಾಸದ ಮುಂದೆ ಕಸ ಹಾಕಿ ಪ್ರತಿಭಟನೆ ನಡೆಸಿದ ನಗರಸಭೆ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ಕಸದ ವಾಹನಗಳ ಮೂಲಕ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ಮಾಡಿದ ಇಸಾಕ್ ನನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು. ನಗರದ ಕಸ ಮತ್ತು ನಿವಾಸಿಗಳ ಮನೆಯ ಕಸವನ್ನು ವಿಲೇವಾರಿ ಮಾಡಿ ಹೊರ ಹಾಕುವ ಕೆಲಸ ಸಿಬ್ಬಂದಿಗಳು ಮಾಡುತ್ತಿದ್ದಾರೆ. ಇಂತಹ ಸಿಬ್ಬಂದಿಗಳ ಮೇಲೆ ಪದೆ ಪದೆ ಹಲ್ಲೆ ನಡೆಯುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ರಾಜಿ ಸಂಧಾನಕ್ಕೆ ಯತ್ನ&lt;/strong&gt;&lt;/h2&gt;&lt;p&gt;ನಗರಸಭೆಯ ಸಿಬ್ಬಂದಿ ಅಬ್ದುಲ್ ನಬಿಸಾಬ ಮೇಲೆ ಹಲ್ಲೆ ನಡೆಸಿದ ಇಸಾಕ್ ಸಂಬಂದಿಗಳು ನಗರ ಪೊಲೀಸ್ ಠಾಣೆಗೆ ಆಗಮಿಸಿ ರಾಜಿ ಸಂಧಾನ ಮಾಡುವಂತೆ ಕೋರಿದ್ದಾರೆ. ಆದರೆ ಸಿಬ್ಬಂದಿಗಳು ರಾಜಿಗೆ ಒಪ್ಪದೆ ಕ್ರಮ ಕೈಗೊಳ್ಳಬೇಕು ಮತ್ತು ಬಂಧಿಸಲೇಬೇಕೆಂದು ಜಿದ್ದು ಹಿಡಿದಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-municipal-worker-assaulted-over-waste-segregation-protest-erupts-gvd/articleshow-hyghluk"/>
        </item>
        <item>
            <title><![CDATA[ತುಂಗಭದ್ರಾ ಡ್ಯಾಂ 33 ಕ್ರಸ್ಟ್‌ ಗೇಟ್‌ ಲೋಕಾರ್ಪಣೆ: ಮೂರು ರಾಜ್ಯ, ಮೂವರು ಮುಖ್ಯಮಂತ್ರಿಗಳು, ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಕಾರ್ಯಕ್ರಮ!]]></title>
            <link>https://kannada.asianetnews.com/gallery/karnataka-districts/cm-dk-shivakumar-inauguration-33-spillway-gates-of-tungabhadra-dam-koppal-ap-and-telangana-cms-attend-rav-komylbl</link>
            <guid isPermaLink="true">https://kannada.asianetnews.com/gallery/karnataka-districts/cm-dk-shivakumar-inauguration-33-spillway-gates-of-tungabhadra-dam-koppal-ap-and-telangana-cms-attend-rav-komylbl</guid>
            <pubDate>Thu, 25 Jun 2026 11:43:48 +0530</pubDate>
            <description><![CDATA[&lt;p&gt;ತುಂಗಭದ್ರಾ ಜಲಾಶಯ(TB Dam)ದ 33 ಗೇಟ್&zwnj;ಗಳ ಲೋಕಾರ್ಪಣೆ(Inauguration) ಕಾರ್ಯಕ್ರಮ ಇಂದು (ಜೂ.25,ಗುರುವಾರ) ಟಿಬಿ ಡ್ಯಾಂ(TB Dam) ಹಾಗೂ ಸಾರ್ವಜನಿಕ ಸಮಾರಂಭ ಮುನಿರಾಬಾದಿನ ಸರ್ಕಾರಿ ಹೈಸ್ಕೂಲ್&zwnj; ಮೈದಾನದಲ್ಲಿ ನಡೆಯಲಿದ್ದು, &amp;nbsp;ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvynj89jyy8g9h22622txx6d,imgname-whatsapp-image-2026-06-25-at-10.30.53-am-1782366937394.jpeg" type="image/jpeg" height="390" width="690"/>
            <content:encoded><![CDATA[&lt;p&gt;ತುಂಗಭದ್ರಾ ಜಲಾಶಯ(TB Dam)ದ 33 ಗೇಟ್&zwnj;ಗಳ ಲೋಕಾರ್ಪಣೆ(Inauguration) ಕಾರ್ಯಕ್ರಮ ಇಂದು (ಜೂ.25,ಗುರುವಾರ) ಟಿಬಿ ಡ್ಯಾಂ(TB Dam) ಹಾಗೂ ಸಾರ್ವಜನಿಕ ಸಮಾರಂಭ ಮುನಿರಾಬಾದಿನ ಸರ್ಕಾರಿ ಹೈಸ್ಕೂಲ್&zwnj; ಮೈದಾನದಲ್ಲಿ ನಡೆಯಲಿದ್ದು, &amp;nbsp;ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ತುಂಗಭದ್ರಾ ಜಲಾಶಯ(TB Dam)ದ 33 ಗೇಟ್&zwnj;ಗಳ ಲೋಕಾರ್ಪಣೆ(Inauguration) ಕಾರ್ಯಕ್ರಮ ಇಂದು (ಜೂ.25,ಗುರುವಾರ) ಟಿಬಿ ಡ್ಯಾಂ(TB Dam) ಹಾಗೂ ಸಾರ್ವಜನಿಕ ಸಮಾರಂಭ ಮುನಿರಾಬಾದಿನ ಸರ್ಕಾರಿ ಹೈಸ್ಕೂಲ್&zwnj; ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ನಿಮಿತ್ತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದ ನಿಮಿತ್ತ ತುಂಗಭದ್ರಾ ಜಲಾಶಯವನ್ನು ಮದುವಣಗಿತ್ತಿಯಂತೆ ಅಲಂಕರಿಸಲಾಗಿದೆ. ಜಲಾಶಯ ತಳಿರು ತೋರಣ ಹಾಗೂ ವಿದ್ಯುತ್&zwnj; ದೀಪಾಲಂಕಾರದಿಂದ ರಾರಾಜಿಸುತ್ತಿದೆ.&amp;nbsp;&lt;/p&gt;&lt;p&gt;ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿಯೇ ಗೇಟ್&zwnj; ಲೋಕಾರ್ಪಣೆ ಕಾರ್ಯಕ್ರಮ ಎರಡನೇ ಅತಿ ದೊಡ್ಡ ಬೃಹತ್&zwnj; ಕಾರ್ಯಕ್ರಮವಾಗಿದೆ. 1953ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್&zwnj; ನೆಹರು ತುಂಗಭದ್ರಾ ಜಲಾಶಯವನ್ನು ಲೋಕಾರ್ಪಣೆ ಮಾಡಲು ಆಗಮಿಸಿದ್ದು ಮೊದಲ ಬೃಹತ್&zwnj; ಕಾರ್ಯಕ್ರಮವಾಗಿತ್ತು&lt;/p&gt;&lt;img&gt;&lt;p&gt;ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿಯೇ ಗೇಟ್&zwnj; ಲೋಕಾರ್ಪಣೆ ಕಾರ್ಯಕ್ರಮ ಎರಡನೇ ಅತಿ ದೊಡ್ಡ ಬೃಹತ್&zwnj; ಕಾರ್ಯಕ್ರಮವಾಗಿದೆ. 1953ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್&zwnj; ನೆಹರು ತುಂಗಭದ್ರಾ ಜಲಾಶಯವನ್ನು ಲೋಕಾರ್ಪಣೆ ಮಾಡಲು ಆಗಮಿಸಿದ್ದು ಮೊದಲ ಬೃಹತ್&zwnj; ಕಾರ್ಯಕ್ರಮವಾಗಿತ್ತು&lt;/p&gt;&lt;img&gt;&lt;p&gt;ತುಂಗಭದ್ರಾ ಜಲಾಶಯದ ಮೇಲೆ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ಮುಖ್ಯ ಮಂತ್ರಿಗಳು ತುಂಗಭದ್ರಾ ಮಾತೆಗೆ ಪೂಜೆ ಸಲ್ಲಿಸುವರು. ನಂತರ ನೂತನವಾಗಿ ನಿರ್ಮಿಸಿದ 33 ಗೇಟುಗಳನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಲೋಕಾರ್ಪಣೆ ಮಾಡುವರು. ನಂತರ ಮೂರು ರಾಜ್ಯದ ಮುಖ್ಯಮಂತ್ರಿಗಳು ರಸ್ತೆ ಮಾರ್ಗವಾಗಿ ಮುನಿರಾಬಾದಿಗೆ ಆಗಮಿಸಿ ಇಲ್ಲಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲ್ಲಿರುವ ಸಾರ್ವಜನಿಕ ಸಭೆಯಲ್ಲಿ ರೈತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.&lt;/p&gt;&lt;img&gt;&lt;p&gt;ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಮುನಿರಾಬಾದಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುನಿರಾಬಾದ್&zwnj;ನಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುನಿರಾಬಾದ್ ಆರಕ್ಷರ ಭದ್ರಕೋಟೆಯಾಗಿ ಪರಿಣಮಿಸಿದೆ.&lt;/p&gt;&lt;p&gt;ಟಿ ಬಿ ಡ್ಯಾಂ ಕ್ರಸ್ಟ್ ಗೇಟ್ ಗಳ ಉದ್ಘಾಟನೆಗೆ ಕೊಪ್ಪಳಕ್ಕೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೊಸಲಿಂಗಾಪೂರದ ಐ ಆರ್ ಬಿ ಕೇಂದ್ರಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದರು. ಸ್ಥಳೀಯ ನಾಯಕರು ರೇವಂತ್&zwnj; ರೆಡ್ಡಿಯನ್ನ ಸ್ವಾಗತಿಸಿದರು. ಈಗಾಗಲೇ ಸ್ಥಳಕ್ಕೆ ಆಮಿಸಿರುವ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಮತ್ತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು,&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/cm-dk-shivakumar-inauguration-33-spillway-gates-of-tungabhadra-dam-koppal-ap-and-telangana-cms-attend-rav-komylbl"/>
        </item>
        <item>
            <title><![CDATA[FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ]]></title>
            <link>https://kannada.asianetnews.com/karnataka-districts/online-gaming-addiction-boy-attacks-family-koppal-double-murder-mobile-addict-san-videoshow-l4amv6z</link>
            <guid isPermaLink="true">https://kannada.asianetnews.com/karnataka-districts/online-gaming-addiction-boy-attacks-family-koppal-double-murder-mobile-addict-san-videoshow-l4amv6z</guid>
            <pubDate>Fri, 12 Jun 2026 22:34:11 +0530</pubDate>
            <description><![CDATA[&lt;p&gt;ಕೊಪ್ಪಳದಲ್ಲಿ ಆನ್&zwnj;ಲೈನ್ ಗೇಮಿಂಗ್ ಚಟಕ್ಕೆ ಬಿದ್ದ ವಿದ್ಯಾರ್ಥಿಯೊಬ್ಬ, ಮೊಬೈಲ್ ಕಸಿದಿದ್ದಕ್ಕೆ ತನ್ನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘೋರ ಕೃತ್ಯದಲ್ಲಿ ತಂದೆ ಮತ್ತು ಅಕ್ಕ ಸಾವನ್ನಪ್ಪಿದ್ದು, ತಾಯಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xae5psm" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಜೂ.12): &lt;/strong&gt;ಎಸ್&zwnj;ಎಸ್&zwnj;ಎಲ್&zwnj;ಸಿಯಲ್ಲಿ ಶೇ. 93 ಹಾಗೂ ಪಿಯುಸಿಯಲ್ಲಿ ಶೇ. 85 ಅಂಕ ಗಳಿಸಿದ್ದ ವಿದ್ಯಾರ್ಥಿಯೊಬ್ಬ ಆನ್&zwnj;ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಇಡೀ ಕುಟುಂಬವನ್ನೇ ಮಸಣವಾಗಿಸಿದ ಘೋರ ಘಟನೆ ಕೊಪ್ಪಳದ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದಿದೆ. ಹಗಲು-ರಾತ್ರಿ ಎನ್ನದೆ ಮೊಬೈಲ್ ಗೇಮ್ಸ್ ಆಡುತ್ತಿದ್ದ ಮಗನ ಚಟ ಬಿಡಿಸಲು ಹೆತ್ತವರು ಮೊಬೈಲ್ ಕೊಡುವುದನ್ನು ನಿಲ್ಲಿಸಿದ್ದರು.&lt;/p&gt;&lt;p&gt;&lt;strong&gt;ಕೊಪ್ಪಳದ ಸೊಸೆ ಮೈಮೇಲೆ ಬಂದ ಮಾವನ ಆತ್ಮ! ಬೀಡಿ ಸೇಯುತ್ತಾ ದಂಗು ಬಡಿಸಿದ ಮಹಿಳೆ- ವಿಡಿಯೋ ವೈರಲ್&lt;/strong&gt;&lt;/p&gt;&lt;p&gt;ಇದರಿಂದ ತೀವ್ರ ಆಕ್ರೋಶಗೊಂಡ ಯುವಕ, ತಡರಾತ್ರಿ ಎದ್ದು ಇಡೀ ಕುಟುಂಬದ ಮೇಲೆ ಚಾಕುವಿನಿಂದ ಭೀಕರ ದಾಳಿ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ತಂದೆ ಸ್ಥಳದಲ್ಲೇ ಮೃತಪಟ್ಟರೆ, ಅಕ್ಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ತಾಯಿ ಸದ್ಯ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.&lt;/p&gt;&lt;p&gt;ಮನೆಮಂದಿಯನ್ನೆಲ್ಲಾ ಕತ್ತರಿಸಿ ಕ್ರೌರ್ಯ ಮೆರೆದ ಯುವಕ, ನಂತರ ತಾನೂ ಸಹ ಕತ್ತು ಕೊಯ್ದುಕೊಂಡು ಆ*ತ್ಮಹ*ತ್ಯೆಗೆ ಯತ್ನಿಸಿದ್ದಾನೆ. ಈ ಆಘಾತಕಾರಿ ಡಬಲ್ ಮರ್ಡರ್ ಪ್ರಕರಣ ಸದ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಮಕ್ಕಳ ಕೈಗೆ ಮೊಬೈಲ್ ನೀಡುವ ಪೋಷಕರಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>koppal</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/online-gaming-addiction-boy-attacks-family-koppal-double-murder-mobile-addict-san-videoshow-l4amv6z"/>
        </item>
        <item>
            <title><![CDATA[ಫ್ರೀ ಬಸ್‌ ಪಾಸ್‌ ಅರ್ಜಿ: ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಪರದಾಟ]]></title>
            <link>https://kannada.asianetnews.com/karnataka-districts/koppal-kushtagi-free-bus-pass-application-students-struggle-due-to-technical-glitch-mrq/articleshow-lk8nyhn</link>
            <guid isPermaLink="true">https://kannada.asianetnews.com/karnataka-districts/koppal-kushtagi-free-bus-pass-application-students-struggle-due-to-technical-glitch-mrq/articleshow-lk8nyhn</guid>
            <pubDate>Mon, 15 Jun 2026 06:08:00 +0530</pubDate>
            <description><![CDATA[ಶಾಲಾ-ಕಾಲೇಜು ವಿದ್ಯಾರ್ಥಿಗಳ ಉಚಿತ ಬಸ್&zwnj;ಪಾಸ್&zwnj; ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸರ್ವರ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದೆ. ಒಟಿಪಿ ಬಾರದಿರುವುದು ಮತ್ತು ಬೋರ್ಡಿಂಗ್/ಡ್ರಾಪಿಂಗ್ ಪಾಯಿಂಟ್ ದೋಷಗಳಿಂದಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗದೆ, ಪ್ರತಿದಿನ ಹಣ ಕೊಟ್ಟು ಪ್ರಯಾಣಿಸುವಂತಾಗಿದೆ. ಈ ತಾಂತ್ರಿಕ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv4ba51vh7f9tcscfwfvsqp7,imgname-free-bus-pass-1781483770939.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪರಶಿವಮೂರ್ತಿ ಮಾಟಲದಿನ್ನಿ&lt;/strong&gt;&lt;/p&gt;&lt;p&gt;&lt;strong&gt;ಕೊಪ್ಪಳ:&lt;/strong&gt; ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಉಚಿತ ಬಸ್&zwnj;ಪಾಸ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಕಳೆದ ಮೂರು ದಿನಗಳಿಂದ ಉಂಟಾಗಿರುವ ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.&lt;/p&gt;&lt;p&gt;ಬಸ್&zwnj;ಪಾಸ್&zwnj;ಗಾಗಿ ಆನ್&zwnj;ಲೈನ್&zwnj; ಮೂಲಕ ಅರ್ಜಿ ಸಲ್ಲಿಸಲು ಮುಂದಾಗಿರುವ ವಿದ್ಯಾರ್ಥಿಗಳಿಗೆ ಸರ್ವರ್ ಸಮಸ್ಯೆ ಹಾಗೂ ನಿರ್ದಿಷ್ಟವಾಗಿ ಹತ್ತುವ (ಬೋರ್ಡಿಂಗ್ ಪಾಯಿಂಟ್), ಇಳಿಯುವ (ಡ್ರಾಪ್ ಪಾಯಿಂಟ್) ಸ್ಥಳವನ್ನು ತೋರಿಸಲುತ್ತಿಲ್ಲ. ಅಲ್ಲದೆ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತಿಲ್ಲ. ಇದರಿಂದ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ.&lt;/p&gt;&lt;p&gt;2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಬಸ್&zwnj;ಪಾಸ್ ಪಡೆಯಲು ಸಾವಿರಾರು ವಿದ್ಯಾರ್ಥಿಗಳು ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ತಾಂತ್ರಿಕ ದೋಷಗಳಿಂದ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗದೇ ವಿದ್ಯಾರ್ಥಿಗಳು ಮತ್ತು ಪೋಷಕರು ದಿನನಿತ್ಯವಾಗಿ ಪರದಾಡುವಂತಾಗಿದೆ.&lt;/p&gt;&lt;p&gt;ಶಾಲಾ-ಕಾಲೇಜುಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿದಿನ ದೂರದ ಊರುಗಳಿಂದ ಶಾಲಾ ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಬಸ್&zwnj;ಪಾಸ್ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳು ಪ್ರತಿದಿನ ಬಸ್ ದರ ಪಾವತಿಸಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕುಟುಂಬಗಳ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ. ಬಸ್&zwnj; ಪಾಸ್&zwnj; ನೀಡಲು 60 ಕಿ.ಮೀ. ಮಿತಿ ಇದೆ. ಪೋರ್ಟಲ್&zwnj;ನಲ್ಲಿ ವಿದ್ಯಾರ್ಥಿಗಳ ವಾಸದ ಸ್ಥಳ ಮತ್ತು ಶಾಲೆ- ಕಾಲೇಜು ಇರುವ ಸ್ಥಳದ ಮಾಹಿತಿ ಸರಿಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಪಾಸ್&zwnj; ಅರ್ಜಿ ಭರ್ತಿ ಮಾಡಲು ತೀವ್ರ ಸಮಸ್ಯೆ ಆಗಿದೆ.&lt;/p&gt;&lt;h2&gt;&lt;strong&gt;ಸಮಸ್ಯೆ ಬಗೆಹರಿಸಿ&lt;/strong&gt;&lt;/h2&gt;&lt;p&gt;ಕಳೆದ ಮೂರು ದಿನಗಳಿಂದ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಕ್ಕೆ ಬಸ್ ಪಾಸ್ ಅರ್ಜಿ ಸಲ್ಲಿಸಲು ಅಲೆದಾಡುತ್ತಿದ್ದರೂ ಒಟಿಪಿ ಬರುತ್ತಿಲ್ಲ. ದಿನನಿತ್ಯವೂ ಪ್ರಯಾಣ ವೆಚ್ಚ ಕೊಟ್ಟು ಶಾಲಾ ಕಾಲೇಜಿಗೆ ಹೋಗಿ ಬರಬೇಕಿದೆ. ಸರ್ವರ್ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಿಕೊಡಬೇಕಿದೆ ಎಂದು ವಿದ್ಯಾರ್ಥಿ ಸಮರ್ಥ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಸರ್ವರ್&zwnj; ಸಮಸ್ಯೆ&lt;/strong&gt;&lt;/p&gt;&lt;p&gt;ಹೊಸ ಬಸ್ ಪಾಸ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಒಟಿಪಿ ಸಮಸ್ಯೆ ಎದುರಾಗುತ್ತಿದ್ದು, ಸರಿಯಾಗಿ ಸರ್ವರ್ ಕಾರ್ಯನಿರ್ವಹಿಸುತ್ತಿಲ್ಲ. ವಿದ್ಯಾರ್ಥಿ ಸ್ವಂತ ಸ್ಥಳ ಹಾಗೂ ಶಾಲಾ-ಕಾಲೇಜು ಇರುವ ಸ್ಥಳದ ಬೋರ್ಡಿಂಗ್ ಪಾಯಿಂಟ್ ಹಾಗೂ ಡ್ರಾಪಿಂಗ್ ಪಾಯಿಂಟ್ ಸಮಸ್ಯೆ ಎದುರಾಗುತ್ತಿದೆ. ಅಧಿಕಾರಿಗಳು ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ಒನ್ ಸಿಬ್ಬಂದಿ ವೀರೇಶ್ ಕರಡಿ ಅವರು ಹೇಳುತ್ತಾರೆ.&lt;/p&gt;&lt;h3&gt;&lt;strong&gt;ಸರ್ಕಾರದ ಗಮನಕ್ಕೆ:&lt;/strong&gt;&lt;/h3&gt;&lt;p&gt;ಜೂ.13ರ ವರೆಗೆ 469 ಬಸ್ ಪಾಸ್ ವಿತರಿಸಲಾಗಿದ್ದು, ಸದ್ಯ ಸರ್ವರ್ ಸಮಸ್ಯೆ ಎದುರಾಗಿದೆ. ಬೋರ್ಡಿಂಗ್ ಪಾಯಿಂಟ್ ಹಾಗೂ ಡ್ರಾಪಿಂಗ್ ಪಾಯಿಂಟ್ ಬಗ್ಗೆ ಇರುವ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.&lt;/p&gt;&lt;p&gt;-ಶಿವಶಂಕರಗೌಡ ಪಾಟೀಲ, ಡಿಪೋ ಮ್ಯಾನೇಜರ್, ಕುಷ್ಟಗಿ ಬಸ್ ಡಿಪೋ.&lt;/p&gt;&lt;p&gt;&lt;strong&gt;ಶೈಕ್ಷಣಿಕ ಭವಿಷ್ಯಕ್ಕೆ ಹಿನ್ನಡೆ:&lt;/strong&gt;&lt;/p&gt;&lt;p&gt;ವಿದ್ಯಾರ್ಥಿಗಳಿಗೆ ಬಸ್&zwnj;ಪಾಸ್ ಸೌಲಭ್ಯ ಅತ್ಯಂತ ಅಗತ್ಯವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿದಿನ ಹತ್ತಾರು ಕಿಲೋಮೀಟರ್ ದೂರ ಪ್ರಯಾಣಿಸಿ ಶಾಲಾ, ಕಾಲೇಜುಗಳಿಗೆ ಹಾಜರಾಗುತ್ತಾರೆ. ಬಸ್&zwnj;ಪಾಸ್ ಇಲ್ಲದೆ ಪ್ರಯಾಣ ವೆಚ್ಚ ಹೆಚ್ಚಾಗುವುದರಿಂದ ಆರ್ಥಿಕ ಹೊರೆ ಜತೆಗೆ ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗುವ ಸಾಧ್ಯತೆಯೂ ಇರುತ್ತದೆ. ಸಂಬಂಧಿಸಿದ ಇಲಾಖೆಗಳು ಹಾಗೂ ತಾಂತ್ರಿಕ ತಜ್ಞರು ಕೂಡಲೇ ಸರ್ವರ್ ಸಮಸ್ಯೆ ಪರಿಹರಿಸಿ ಅರ್ಜಿ ಪ್ರಕ್ರಿಯೆ ಸುಗಮಗೊಳಿಸಬೇಕು ಎಂದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-kushtagi-free-bus-pass-application-students-struggle-due-to-technical-glitch-mrq/articleshow-lk8nyhn"/>
        </item>
        <item>
            <title><![CDATA[Gangavathi: ಅಪ್ರಾಪ್ತ ಬಾಲಕಿಯ ಮದುವೆ ಪ್ರಕರಣಕ್ಕೆ 8 ವರ್ಷಗಳ ಬಳಿಕ ತೀರ್ಪು: ನಾಲ್ವರಿಗೆ 2 ವರ್ಷ ಜೈಲು]]></title>
            <link>https://kannada.asianetnews.com/crime/gangavathi-child-marriage-case-four-convicted-2-years-jail-gvd/articleshow-lw9o26t</link>
            <guid isPermaLink="true">https://kannada.asianetnews.com/crime/gangavathi-child-marriage-case-four-convicted-2-years-jail-gvd/articleshow-lw9o26t</guid>
            <pubDate>Wed, 17 Jun 2026 19:42:46 +0530</pubDate>
            <description><![CDATA[&lt;p&gt;Gangavathi ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ 2018ರಲ್ಲಿ ನಡೆದ ಅಪ್ರಾಪ್ತ ಬಾಲಕಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವರ ಸೇರಿ ನಾಲ್ವರಿಗೆ ದಂಡ ವಿಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvaytpfhsk52dxd23nzvybyy,imgname-ccj-1781705562608.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.17):&lt;/strong&gt; ಕಳೆದ 8 ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜರುಗಿದ ಅಪ್ರಾಪ್ತ ಬಾಲಕಿ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಲಯವು ನಾಲ್ಕು ಜನರಿಗೆ 2 ವರ್ಷ ಜೈಲು ಮತ್ತು ತಲಾ 10 ಸಾವಿರ ರು ದಂಡ ವಿಧಿಸಿ ತೀರ್ಪು ನೀಡಿದೆ.&lt;/p&gt;&lt;p&gt;2018ರಲ್ಲಿ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಗುಡದಪ್ಪ ಎನ್ನುವವರ ಜೊತೆ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿತ್ತು. ಆಗಿನ ಸಿಪಿಐ ಆಗಿದ್ದ ಪ್ರಕಾಶ ಮಾಳೆ ಅವರು ನ್ಯಾಯಲಯಕ್ಕೆ ದೋಷರೋಪಣಪಟ್ಟಿ ನೀಡಿದ್ದರು.&lt;/p&gt;&lt;h2&gt;&lt;strong&gt;ಮಹತ್ವದ ತೀರ್ಪು&lt;/strong&gt;&lt;/h2&gt;&lt;p&gt;ಈ ಪ್ರಕರವನ್ನು ಕೈಗೆತ್ತಿಕೊಂಡಿದ್ದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಲಯದ ನ್ಯಾಯಧೀಶರಾದ ನಾಗೇಶ ಪಾಟೀಲ್ ಅವರು ಸಾಕ್ಷಾಧಾರಗಳಿಂದ ವಿಚಾರಣೆ ಕೈಗೊಂಡಿದ್ದ ಸಂದರ್ಭದಲ್ಲಿ ದೃಢ ಪಟ್ಟಿದ್ದರಿದಂದ ವಿವಾಹವಾಗಿದ್ದ ಗುಡದಪ್ಪ, ಈತನ ತಂದೆ ಮರಿಯಪ್ಪ, ತಾಯಿ ಹುಲಿಗೆಮ್ಮ ಮತ್ತು ಬಾಲಕಿ ತಾಯಿ ಚೆನ್ನಮ್ಮ ಅವರು ದೋಷಿಗಳೆಂದು ತೀರ್ಪ ನೀಡಿ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸುವಂತೆ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕರಾದ ನಿರಂಜನಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/gangavathi-child-marriage-case-four-convicted-2-years-jail-gvd/articleshow-lw9o26t"/>
        </item>
        <item>
            <title><![CDATA[ಕೊಪ್ಪಳ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು, ಹಲವರಿಗೆ ಗಾಯ]]></title>
            <link>https://kannada.asianetnews.com/karnataka-districts/three-killed-several-injured-in-horrific-accident-on-national-highway-63-in-koppal/articleshow-pamcsr8</link>
            <guid isPermaLink="true">https://kannada.asianetnews.com/karnataka-districts/three-killed-several-injured-in-horrific-accident-on-national-highway-63-in-koppal/articleshow-pamcsr8</guid>
            <pubDate>Sat, 27 Jun 2026 07:59:25 +0530</pubDate>
            <description><![CDATA[&lt;p&gt;ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw3ehz96h1yvgwrms9b3v7ta,imgname-koppal-accident-1782527360294.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಜೂ.27) &lt;/strong&gt;ಕುಟುಂಬ ಸಮೇತ ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರ ಒಮಿನಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಲಾರಿ ನಡುವಿನ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕುಕನೂರು ತಾಲೂಕಿನ ಭಾನಾಪೂರದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಘಟನೆ ನಡೆದಿದೆ.ಒಮಿನಿಯಲ್ಲಿದ್ದ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;p&gt;ಕೊಪ್ಪಳ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಕೆಂಚಮ್ಮ ಬಾಳೆಕಾಯಿ(35),ಅಮೃತಾ ಕೋಟ್ಯಾಳ್(25), ರಮೇಶ್ ಬಳ್ಳಾರಿ(45) ಮೃತರು ಎಂದು ಗುರುತಿಸಲಾಗಿದೆ. ಓಮಿನಿ ವಾಹನದ ಮೂಲಕ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಲೆ ಘಟನೆ ನಡೆದಿದೆ. ಓಮಿನಿ ನಿಧಾನವಾಗಿ ಸಾಗುತ್ತಿತ್ತು. ಆದರೆ ದಿಢೀರ್ ಆಗಿ ಡಿವೈಡ್ ದಾಟಿಕೊಂಡ ಬಂದ ಅಶೋಕ್ ಲೈಲ್ಯಾಂಡ್ ಲಾರಿ ನೇರವಾಗಿ ಓಮಿನಿ ವಾಹನಕ್ಕೆ ಡಿಕ್ಕಿಯಾಗಿದೆ. ಅತೀ ವೇಗದಲ್ಲಿದ್ದ ಲೇಲ್ಯಾಂಡ್ ಲಾರಿ ಹಾಗೂ ಕಾರು ನಡುವಿನ ಅಪಘಾತಕದಲ್ಲಿ ಓಮಿನಿ ವಾಹನ ಅಪ್ಪಚ್ಚಿಯಾಗಿದೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;&lt;h2&gt;ತುಮಕೂರಿನಲ್ಲಿ ಹೊಸ ಬೈಕ್ ಖರೀದಿ ಬೆನ್ನಲ್ಲೇ ಅಪಘಾತ&lt;/h2&gt;&lt;p&gt;ತುಮಕೂರಿನಲ್ಲಿ ಹೊಸ ಬೈಕ್ ಖರೀದಿ ಬಳಿಕ ಮೊದಲ ರೈಡ್ ನಲ್ಲೇ ಅಪಘಾತಕ್ಕೀಡದ ಯುವಕ ಮೃತಪಟ್ಟ ಘಟನೆ ನಡೆದಿದೆ. 19 ವರ್ಷದ ನಂದೀಶ್ ಕುಮಾರ್ ಮೃತ ದುರ್ದೈವಿ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಮೂಲತಃ ಪಾವಗಡದ ದೊಡ್ಡಹಳ್ಳಿ ನಿವಾಸಿಯಾದ ನಂದೀಶ್, ಹೊಸ ಬೈಕ್ ಖರೀದಿಸಿದ್ದ. ಹೊಸ ಬೈಕ್ ಮೂಲಕ ಗೆಳೆಯನ ಜೊತೆ ಸ್ವಗ್ರಾಮಕ್ಕೆ ಬರುತಿದ್ದ ವೇಳೆ ವೈಎನ್ ಹೊಸಕೋಟೆ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡ ನಂದೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತನ ಜೊತೆ ಹಿಂಬದಿಯಲ್ಲಿ ಕುಳಿತಿದ್ದ ಗೆಳೆಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.&lt;/p&gt;&lt;h2&gt;ಬಳ್ಳಾರಿಯಲ್ಲಿ ರಸ್ತೆ ಬದಿಗೆ ಉರುಳಿದ ಬಸ್&lt;/h2&gt;&lt;p&gt;ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಸ್ ಉರುಳಿದ ಘಟನೆ ಬಳ್ಳಾರಿ ನಗರದ ಫಸ್ಟ್&zwnj; ಗೇಟ್ ಎದುರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ ನಡೆದಿದೆ. ಬಸ್ ಚಲಿಸುತ್ತಿದ್ದ ವೇಳೆ ಹಠಾತ್ತನೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಅಪಘಾತದ ಸಮಯದಲ್ಲಿ ಬಸ್&zwnj;ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಸಬಸ್ ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಅಪಘಾತ ಹಿನ್ನೆಲೆ ಈ ಮಾರ್ಗದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>koppal</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/three-killed-several-injured-in-horrific-accident-on-national-highway-63-in-koppal/articleshow-pamcsr8"/>
        </item>
        <item>
            <title><![CDATA[Koppal: ಸ್ವಂತ ಖರ್ಚಿನಲ್ಲಿ ಜನರಿಗೆ ತನ್ನದೇ ಕೊಳಬಾವಿಯ ನೀರು ಪೂರೈಕೆ ಮಾಡುವ ಶಿವಕುಮಾರ್]]></title>
            <link>https://kannada.asianetnews.com/karnataka-districts/koppal-yelburga-shivakumar-myageri-supplies-water-from-his-own-borewell-to-people-at-his-own-expense-mrq/articleshow-rgrc66p</link>
            <guid isPermaLink="true">https://kannada.asianetnews.com/karnataka-districts/koppal-yelburga-shivakumar-myageri-supplies-water-from-his-own-borewell-to-people-at-his-own-expense-mrq/articleshow-rgrc66p</guid>
            <pubDate>Mon, 15 Jun 2026 07:12:10 +0530</pubDate>
            <description><![CDATA[&lt;p&gt;ಯಲಬುರ್ಗಾ ಪಟ್ಟಣದ 12ನೇ ವಾರ್ಡ್&zwnj;ನಲ್ಲಿ ನೀರಿನ ಸಮಸ್ಯೆ ಉಂಟಾದಾಗ, ಶಿವಕುಮಾರ ಮ್ಯಾಗೇರಿ ಎಂಬ ಯುವಕ ತನ್ನ ಸ್ವಂತ ಕೊಳವೆಬಾವಿಯಿಂದ ನಿವಾಸಿಗಳಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದಾನೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಆತ ಮಾಡುತ್ತಿರುವ ಈ ಸಮಾಜ ಸೇವೆಯನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv4exshhzw69q2pzsa0r2n11,imgname-yalaburga-1781487560241.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ: &lt;/strong&gt;ಬೇಸಿಗೆಯಲ್ಲಿ ಅಲ್ಲಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಪಟ್ಟಣದ ಹೊರವಲಯದಲ್ಲಿ ಇರುವ ೧೨ನೇ ವಾರ್ಡಿಗೆ ಶಿವಕುಮಾರ ಮ್ಯಾಗೇರಿ ಎಂಬ ಯುವಕ ತನ್ನದೇ ಬೋರ್&zwnj;ಬೆಲ್ ಮೂಲಕ ನಿವಾಸಿಗಳಿಗೆ ನೀರು ಪೂರೈಕೆ ಮಾಡುವ ಮೂಲಕ ಸೈ ಎನಿಸಿದ್ದಾನೆ.&lt;/p&gt;&lt;h2&gt;&lt;strong&gt;ಉಚಿತವಾಗಿ ನೀರು ಸರಬರಾಜು&lt;/strong&gt;&lt;/h2&gt;&lt;p&gt;12ನೇ ವಾರ್ಡ್&zwnj;ನಲ್ಲಿ ಮೂರ್ನಾಲ್ಕು ದಿನಗಳಿಂದ ಮೋಟರ್ ದುರಸ್ತಿ, ಪೈಪ್&zwnj;ಲೈನ್ ಸಮಸ್ಯೆಯಿದೆ. ಸರಿಯಾದ ಸಮಯಕ್ಕೆ ದುರಸ್ತಿಯಾಗದ ಕಾರಣ ನೀರಿನ ತೊಂದರೆಯಾಗಿದೆ. ಅದೇ ವಾರ್ಡ್&zwnj;ನ ನಿವಾಸಿ ಶಿವಕುಮಾರ ಮ್ಯಾಗೇರಿ ತನ್ನದೇ ಸ್ವಂತ ಕೊಳವೆಬಾವಿಯ ನೀರನ್ನು ಆಶ್ರಯ ಕಾಲನಿ ನಿವಾಸಿಗಳಿಗೆ ಸರಬರಾಜು ಮಾಡುತ್ತಿದ್ದಾನೆ. ಸ್ವತಃ ತಾನೇ ಮುಂದೆ ನಿಂತು ಪ್ರತಿಯೊಂದು ಮನೆಗೂ ನೀರು ತಲುಪುವಂತೆ ನೋಡಿಕೊಳ್ಳುತ್ತಿರುವುದು ವಿಶೇಷ.&lt;/p&gt;&lt;p&gt;ಶಿವಕುಮಾರ ಅವರ ಸಾಮಾಜಿಕ ಕಾರ್ಯವನ್ನು ನಿವಾಸಿಗಳು ಮೆಚ್ಚಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡುತ್ತಿದ್ದು, ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಾಮಾಜಿಕ ಕಾರ್ಯ&lt;/strong&gt;&lt;/h3&gt;&lt;p&gt;ವಾರ್ಡ್&zwnj;ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನೀರಿನ ಸಮಸ್ಯೆಯಾಗಿದೆ. ನಮ್ಮದೇ ವಾರ್ಡಿನ ಯುವಕ ಶಿವಕುಮಾರ ಅವರು ತಮ್ಮ ಸ್ವಂತ ಬೋರ್&zwnj;ವೆಲ್ ಮೂಲಕ ನೀರು ಪೂರೈಸುತ್ತಿದ್ದಾರೆ. ಅವರ ಸಾಮಾಜಿಕ ಕಾರ್ಯ ಮೆಚ್ಚುವಂಥದ್ದು ಎಂದು ವಾರ್ಡ್ ನಿವಾಸಿಯಾಗಿರುವ ಮಲ್ಲಪ್ಪ ಹೇಳುತ್ತಾರೆ.&lt;/p&gt;&lt;p&gt;ನನ್ನ ಸ್ವಂತ ಬೋರ್&zwnj;ವೆಲ್ ಮತ್ತು ನೀರಿನ ಟ್ಯಾಂಕರ್ ಇರುವುದರಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾದಾಗ ಉಚಿತವಾಗಿ ಮನೆ ಮನೆಗೆ ಪೂರೈಕೆ ಮಾಡುತ್ತಿದ್ದೇನೆ ಎಂದು ಸಮಾಜ ಸೇವಕ, &amp;nbsp;ಶಿವಕುಮಾರ್ ಮ್ಯಾಗೇರಿ ಹೇಳುತ್ತಾರೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-yelburga-shivakumar-myageri-supplies-water-from-his-own-borewell-to-people-at-his-own-expense-mrq/articleshow-rgrc66p"/>
        </item>
        <item>
            <title><![CDATA[ಕೊಪ್ಪಳದ ಸೊಸೆ ಮೈಮೇಲೆ ಬಂದ ಮಾವನ ಆತ್ಮ! ಬೀಡಿ ಸೇಯುತ್ತಾ ದಂಗು ಬಡಿಸಿದ ಮಹಿಳೆ- ವಿಡಿಯೋ ವೈರಲ್]]></title>
            <link>https://kannada.asianetnews.com/viral/father-in-laws-soul-into-daughter-in-laws-body-koppal-video-gone-viral-suc/articleshow-sditg2y</link>
            <guid isPermaLink="true">https://kannada.asianetnews.com/viral/father-in-laws-soul-into-daughter-in-laws-body-koppal-video-gone-viral-suc/articleshow-sditg2y</guid>
            <pubDate>Wed, 10 Jun 2026 17:14:21 +0530</pubDate>
            <description><![CDATA[ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹತ್ತು ವರ್ಷಗಳ ಹಿಂದೆ ನಿಧನರಾದ ಮಾವನ ಆತ್ಮ ತನ್ನ ಮೈಮೇಲೆ ಬಂದಿದೆ ಎಂದು ಹೇಳುತ್ತಿರುವ ಸೊಸೆಯೊಬ್ಬಳು, ಮಾವನಂತೆಯೇ ಬೀಡಿ ಸೇದಲು ಆರಂಭಿಸಿದ್ದಾಳೆ. ಈ ಘಟನೆಯು ಸ್ಥಳೀಯರಲ್ಲಿ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktrngfxbj9v5vka4nkxxtqac,imgname-koppal-woman-1781091811243.jpg" type="image/jpeg" height="390" width="690"/>
            <content:encoded><![CDATA[&lt;p&gt;ಆತ್ಮ, ಭೂತ, ಪ್ರೇತ, ಪಿಶಾಚಿ ಇವೆಲ್ಲಾ ಇವೆಯೋ ಇಲ್ಲವೋ ಎಂದು ಬಹಳ ಚರ್ಚೆಗಳು ನಡೆಯುತ್ತಲೇ ಇವೆ. ಕೆಲವರು ತಾವು ಇವುಗಳನ್ನೆಲ್ಲಾ ನೋಡಿರುವುದಾಗಿ ಹೇಳಿದರೆ, ಮತ್ತೆ ಕೆಲವರು ಇದು ಮಾನಸಿಕ ಸಮಸ್ಯೆ ಅಷ್ಟೇ. ಭೂತ-ಪ್ರೇತ ಏನೂ ಇಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಅನಿಸಿಕೆ. ಇದರ ಇರುವಿಕೆ, ಇದರ ಅಸ್ತಿತ್ವದ ಬಗ್ಗೆ ಜನರಲ್ಲಿ ಇನ್ನೂ ಕುತೂಹಲ ಇದ್ದೇ ಇದೆ.&lt;/p&gt;&lt;h2&gt;&lt;strong&gt;ಮೈಮೇಲೆ ಬರುವ ಆತ್ಮ&lt;/strong&gt;&lt;/h2&gt;&lt;p&gt;ಇದರ ನಡುವೆಯೇ ದೇವರು ಮೈಮೇಲೆ ಬರುವುದು ಎನ್ನುವ ಘಟನೆ ಬಹುತೇಕ ಕಡೆಗಳಲ್ಲಿ ನಡೆಯುವುದು ಇದೆ. ಇದರ ಬಗ್ಗೆಯೂ ಸಾಕಷ್ಟು ಪರ-ವಿರೋಧದ ಚರ್ಚೆಗಳು ಆಗುತ್ತಲೇ ಇರುತ್ತವೆ. ಇದನ್ನು ನಂಬುವವರು ಎಷ್ಟು ಮಂದಿ ಇದ್ದಾರೋ, ಅಷ್ಟೇ ನಂಬದವರೂ ಇದ್ದಾರೆ. ದೇವರು ಬರುವ ವಿಷಯ ಒಂದೆಡೆಯಾದರೆ, ಬೇರೆಯವರ ಆತ್ಮ ಮೈಮೇಲೆ ಬರುತ್ತದೆ ಎನ್ನುವ ಮಾತು ಕೂಡ ಅಲ್ಲಲ್ಲಿ ಕೇಳಿಬರುವುದು ಉಂಟು.&lt;/p&gt;&lt;p&gt;ಅಂಥದ್ದೇ ಒಂದು ಘಟನೆ ಕೊಪ್ಪಳ ತಾಲೂಕಿನ ಹೊಳೆ ಮುದ್ಲಾಪುರ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಸೊಸೆಯ ಮೈಮೇಲೆ ಮಾವನ ಆತ್ಮ ಬಂದಿದೆಯಂತೆ! ಚಂದ್ರಪ್ಪ ಎನ್ನುವವರಿಗೆ ಬೀಡಿ ಸೇದುವ ಚಟವಿತ್ತು. ಅವರು ಇದಾಗಲೇ ಸತ್ತು 10 ವರ್ಷಗಳ ಮೇಲಾಗಿವೆ. ಇದೀಗ ಅವರ ಸೊಸೆ ಹನುಮವ್ವ ಏಕಾಏಕಿ ಬೀಡಿ ಸೇದಲು ಶುರು ಮಾಡಿಬಿಟ್ಟಿದ್ದಾಳೆ. ಸೊಸೆಯಲ್ಲಿ ಆಗಿರುವ ಈ ಬದಲಾವಣೆ ನೋಡಿ ಮನೆಯವರು ದಂಗಾಗಿ ಹೋಗಿದ್ದಾರೆ. ಕೊನೆಗೆ, ಸೊಸೆ ಹನುಮವ್ವ, ನಾನು ಹನುವಮ್ಮ ಅಲ್ಲ, ಚಂದ್ರಪ್ಪ ಎಂದಾಗಿ ಎಲ್ಲರೂ ನಿಂತಲ್ಲೇ ಕುಸಿದು ಹೋಗಿದ್ದಾರೆ.&lt;/p&gt;&lt;h3&gt;&lt;strong&gt;ಮಾವನ ಆತ್ಮ ಸೊಸೆಯ ಮೇಲೆ&lt;/strong&gt;&lt;/h3&gt;&lt;p&gt;ಮಾವನ ಆತ್ಮ ಸೊಸೆಯ ಮೇಲೆ ಬಂದಿರುವ ವಿಷಯ ಹಳ್ಳಿಗಳಲ್ಲಿ ಹಲ್​ಚಲ್​ ಸೃಷ್ಟಿಸಿ, ಜನರು ದೌಡಾಯಿಸುತ್ತಿದ್ದಾರೆ. ನಿಜವಾಗಿಯೂ ಆಗಿದ್ದೇನು ಎನ್ನುವ ಬಗ್ಗೆ ಕೆಲವರು ತಲೆ ಕೆಡಿಸಿಕೊಂಡಿದ್ದರೆ, ಮತ್ತೆ ಕೆಲವರು ನಿಜಕ್ಕೂ ಮಾವನ ಆತ್ಮ ಸೊಸೆಯ ಮೇಲೆ ಬಂದಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಈಕೆಗೆ ಬೀಡಿ ಸೇದುವ ಇಚ್ಛೆ ಉಂಟಾಗಿದ್ದರಿಂದ ಹೀಗೆ ಮಾಡಿರಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಏನು ಈ ವಿಷ್ಯ ಎನ್ನುವುದು ತಿಳಿಯಬೇಕಿದೆ. ಸದ್ಯ ಇದರ ವಿಡಿಯೋಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.&lt;/p&gt;]]></content:encoded>
            <category>koppal</category>
            <dc:creator>Suchethana D</dc:creator>
            <atom:link href="https://kannada.asianetnews.com/viral/father-in-laws-soul-into-daughter-in-laws-body-koppal-video-gone-viral-suc/articleshow-sditg2y"/>
        </item>
        <item>
            <title><![CDATA[ಕನಕಗಿರಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಮಹಿಳೆ ಮೇಲೆ ಸಾಮೂಹಿಕ ಅತ್ಯಾ*ಚಾರ ಶಂಕೆ, ಬೆಂಕಿ ಹಚ್ಚಿ ಹ*ತ್ಯೆ?]]></title>
            <link>https://kannada.asianetnews.com/crime/kanakagiri-woman-burnt-alive-gangr-ape-suspicion-koppal-gvd/articleshow-uzfg3de</link>
            <guid isPermaLink="true">https://kannada.asianetnews.com/crime/kanakagiri-woman-burnt-alive-gangr-ape-suspicion-koppal-gvd/articleshow-uzfg3de</guid>
            <pubDate>Tue, 09 Jun 2026 19:00:08 +0530</pubDate>
            <description><![CDATA[&lt;p&gt;ಸಮೀಪದ ಕನಕಗಿರಿ ಪಟ್ಟಣದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ (40) ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಿ ನಂತರ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5p48hs215m8hwn7vvxgyt5p,imgname-fotojet---2025-09-21t180335.851-1758458038050.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.09):&lt;/strong&gt; ಸಮೀಪದ ಕನಕಗಿರಿ ಪಟ್ಟಣದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ (40) ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಿ ನಂತರ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಕನಕಗಿರಿಯ 5ನೇ ವಾರ್ಡಿನ ಸಂಗನಗೌಡ ತಾವರಗೇರಾ ಎನ್ನುವರ ನಿರ್ಮಾಣ ಹಂತದ ಕಟ್ಟದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸರಿಯಾಗಿ 9.30 ಕ್ಕೆ ಈ ಘಟನೆ ನಡೆದಿದ್ದು, ಬೆಂಕಿ ಬೃಹತ್ ಪ್ರಮಾಣದಲ್ಲಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವೀಕ್ಷಿಸಿದಾಗ ಮಹಿಳೆಯನ್ನು ಹಸಿರು ಮ್ಯಾಟ್&zwnj;ನಿಂದ ಸುತ್ತಿ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಕಂಡು ಬಂದಿದೆ.&lt;/p&gt;&lt;p&gt;&lt;strong&gt;ಗ್ಯಾಂಗ್ ರೇ*ಪ್ ಶಂಕೆ&lt;/strong&gt;&lt;/p&gt;&lt;p&gt;ಕನಕಗಿರಿಯ 5ನೇ ವಾರ್ಡಿನಲ್ಲಿ ನಡೆದಿರುವ ಘಟನೆ ಗ್ಯಾಂಗ್ ರೇ*ಪ್ ಆಗಿರಬಹುದೆಂದು ಶಂಕಿಸಿದ್ದಾರೆ. ಮಹಿಳೆ ಕಟ್ಟಡದ ಕೊಠಡಿಯೊಂದರ ಮೂಲೆಯ ಬಳಿ ಚಪ್ಪಲಿ ಬಿಡಲಾಗಿದ್ದು, ಹಸಿರು ಮ್ಯಾಟ್ ಹಾಸಿರುವುದರ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಈ ಕೃತ್ಯ ಇಬ್ಬರು ದುಷ್ಕ್ರರ್ಮಿಗಳು ಎಸಗಿರಬಹುದೆಂದು ಶಂಕಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಮ್ ಎಲ್ ಅರಸಿದ್ದಿ, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಒಂದೇ ವಾರದಲ್ಲಿ ಮೂರು ಪೈಶಾಚಿಕ ಕೃತ್ಯ, ತಲ್ಲಣಗೊಂಡ ಜನತೆ&lt;/strong&gt;&lt;/h2&gt;&lt;p&gt;ಕಳೆದ ವರ್ಷ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ವಿದೇಶಿ ಮಹಿಳೆ ಮೇಲೆ ಅತ್ಯಾ*ಚಾರ, ಕೊಲೆ ಪ್ರಕರಣ ಮತ್ತು ಬಿಜೆಪಿ ಮುಖಂಡ ಕೊಲೆ ಪ್ರಕರಣ ಹಸಿರಿರುವಾಗಲೆ ಕಳೆದ ಒಂದು ವಾರದ ಹಿಂದೆ ಶರಣಬಸವೇಶ್ವರ ಕ್ಯಾಂಪಿನಲ್ಲಿ ವೃದ್ದೆಯ ಅನುಮಾನಸ್ಪದ ಸಾವು, ಅಯೋದ್ಯೆಯಲ್ಲಿ ತಂದೆ ಮಗಳ ಕೊಲೆ ಪ್ರಕರಣ ಮಾಸುವ ಮುನ್ನವೆ ಮತ್ತೆ ಕನಕಗಿರಿಯಲ್ಲಿ ಗ್ಯಾಂಗ್ ರೇಪ್ ಆಗಿರುವುದರಿಂದ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದಾರೆ. ಅಹಿತಕರ ಘಟನೆಗಳಿಂದ ಭಯಭೀತರಾಗಿರುವ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎನ್ನುವ ಕೂಗು ಕೇಳಿ ಬರುತ್ತದೆ. ಇನ್ನಾದರು ಪೊಲೀಸ್ ಇಲಾಖೆ ಮುನ್ನಚ್ಚರಿಕೆ ವಹಿಸಿ ಮಹಿಳೆಯರಿಗೆ ರಕ್ಷಣೆ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/kanakagiri-woman-burnt-alive-gangr-ape-suspicion-koppal-gvd/articleshow-uzfg3de"/>
        </item>
        <item>
            <title><![CDATA[Gangavathi Temple News: ವಿಜಯನಗರ ಕಾಲದ ನಿಧಿಗಾಗಿ ಕಳ್ಳರ ಬೇಟೆ: ಕೊನೆಗೆ ನಡೆದಿದ್ದು ಏನು?]]></title>
            <link>https://kannada.asianetnews.com/karnataka-districts/gangavathi-timlapur-lakshmi-temple-treasure-hunt-attempt-gvd/articleshow-y9nuahe</link>
            <guid isPermaLink="true">https://kannada.asianetnews.com/karnataka-districts/gangavathi-timlapur-lakshmi-temple-treasure-hunt-attempt-gvd/articleshow-y9nuahe</guid>
            <pubDate>Sun, 21 Jun 2026 16:48:10 +0530</pubDate>
            <description><![CDATA[&lt;p&gt;Gangavathi ತಾಲೂಕಿನ ತಿಮಲಾಪುರ ಗ್ರಾಮದ ಪುರಾತನ ಲಕ್ಷ್ಮೀ ದೇಗುಲದಲ್ಲಿ ನಿಧಿಗಾಗಿ ಕಳ್ಳರು ಶೋಧನೆ ನಡೆಸಲು ಯತ್ನಿಸಿದ್ದಾರೆ. ವಿಜಯನಗರ ಕಾಲದ ದೇಗುಲದಲ್ಲಿ ನಿಧಿ ಇದೆ ಎಂಬ ಅನುಮಾನದಿಂದ ದೇಗುಲಕ್ಕೆ ಹಾನಿ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmyaxqsskwr9yx3dbaak1w3,imgname-kn-1782040590073.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.21): &lt;/strong&gt;ತಾಲೂಕಿನ ಕೊನೆ ಗ್ರಾಮ ತಿಮಲಾಪುರ ಬಳಿ ಲಕ್ಷ್ಮೀ ದೇಗುಲದಲ್ಲಿ ನಿಧಿಗಾಗಿ ಕಳ್ಳರು ಯತ್ನ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿರುವ ದೇಗುಲದಲ್ಲಿ ನಿಧಿ ಇರಬಹುದೆಂದು ಊಹಿಸಿ ಕಳ್ಳರು ದೇಗುಲ ಪ್ರವೇಶಿಸಿ ಶೋಧನೆ ನಡೆಸಿದ್ದಾರೆ.&lt;/p&gt;&lt;p&gt;ದೇಗುಲದಲ್ಲಿ ಲಕ್ಷ್ಮಿಮೂರ್ತಿ ಇಲ್ಲದಿದ್ದರೂ ಸಹ ನಿಧಿ ಇರಬಹುದೆಂಬ ಕಾರಣಕ್ಕೆ ಮಧ್ಯರಾತ್ರಿ 4 ರಿಂದ 5 ಜನರು ದೇಗುಲ ಮುಂಭಾಗ ಒಡೆದಿದ್ದಾರೆ. ಇದೇ ವೇಳೆ ಶ್ವಾನಗಳು ಬೊಗಳಿದ್ದರಿಂದ ಕಳ್ಳರು ಕಾಲ್ಕಿತ್ತಿದ್ದಾರೆ.&lt;/p&gt;&lt;p&gt;ಕಳೆದ 8 ವರ್ಷಗಳ ಹಿಂದೆ ನವವೃಂದಾವನ ಗಡ್ಡೆಯಲ್ಲಿರುವ ಕೃಷ್ಣದೇವರಾಯರ ರಾಜ ಗುರು ವ್ಯಾಸರಾಯರ ವೃಂದಾವನವನ್ನು ನಿಧಿಗಾಗಿ ಧ್ವಂಸಗೊಳಿಸಿ ವಿಫಲವಾದ ಘಟನೆ ಮಾಸುವ ಮುನ್ನವೇ ಮತ್ತೇ ಅರಸರ ಕಾಲದ ಲಕ್ಷ್ಮಿ ದೇಗುಲಕ್ಕೆ ಲಗ್ಗೆ ಹಾಕಿ ವಿಫಲರಾಗಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಅಲ್ಲದೇ ಗವಿ ರಂಗನಾಥ. ಮಲ್ಲಾಪುರ, ಚಿಂತಾಮಣಿ ಸೇರಿದಂತೆ ವಿಜಯನಗರ ಕಾಲದ ದೇಗುಲಗಳನ್ನು ನಿಧಿಗಾಗಿ ಅಗೆದಿರುವ ಉದಾಹರಣೆಗಳು ಇವೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gangavathi-timlapur-lakshmi-temple-treasure-hunt-attempt-gvd/articleshow-y9nuahe"/>
        </item>
    </channel>
</rss>
