<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 17 May 2026 23:46:19 +0530</lastBuildDate>
        <atom:link href="https://kannada.asianetnews.com/rss/koppal" rel="self" type="application/rss+xml"/>
        <item>
            <title><![CDATA[ಆಂಜನೇಯನಿಗೆ 'ನಾಮ' ಹಾಕಿದ ಉದ್ಯಮಿ: ಅಂಜನಾದ್ರಿಗೆ ಕೊಟ್ಟಿದ್ದು ₹2.50Cr ಚಿನ್ನವಲ್ಲ, ತಾಮ್ರ ಲೇಪಿತ 28 ಗ್ರಾಂ ಬಂಗಾರ!]]></title>
            <link>https://kannada.asianetnews.com/gallery/state/anjanadri-temple-fake-2-5-crore-gold-donation-case-mahesh-reddy-and-janardhana-reddy-sat-0hq3mvd</link>
            <guid isPermaLink="true">https://kannada.asianetnews.com/gallery/state/anjanadri-temple-fake-2-5-crore-gold-donation-case-mahesh-reddy-and-janardhana-reddy-sat-0hq3mvd</guid>
            <pubDate>Mon, 11 May 2026 13:45:26 +0530</pubDate>
            <description><![CDATA[&lt;p&gt;ಕೊಪ್ಪಳದ ಅಂಜನಾದ್ರಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು 2.50 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ದಾನ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಜಿಲ್ಲಾಡಳಿತದ ಪರಿಶೀಲನೆ ವೇಳೆ ಅದು ಅಪ್ಪಟ ಚಿನ್ನವಲ್ಲ, ಬದಲಿಗೆ ಚಿನ್ನದ ಲೇಪಿತ ತಾಮ್ರದ ಆಭರಣಗಳೆಂದು ತಿಳಿದುಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3er26v49pv0emr66s91681,imgname-anjanadri-hanuman-temple-donation-1778232592603.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳದ ಅಂಜನಾದ್ರಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು 2.50 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ದಾನ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಜಿಲ್ಲಾಡಳಿತದ ಪರಿಶೀಲನೆ ವೇಳೆ ಅದು ಅಪ್ಪಟ ಚಿನ್ನವಲ್ಲ, ಬದಲಿಗೆ ಚಿನ್ನದ ಲೇಪಿತ ತಾಮ್ರದ ಆಭರಣಗಳೆಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;&lt;strong&gt;ಕೊಪ್ಪಳ: ಹ&lt;/strong&gt;ನುಮಂತನ ಜನ್ಮಸ್ಥಳವೆಂದೇ ಪ್ರಸಿದ್ಧಿಯಾದ ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬರೋಬ್ಬರಿ 2.50 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದಾನ ನೀಡಿದ್ದೇನೆ ಎಂದು ಹೇಳಿಕೊಂಡಿದ್ದ ಉದ್ಯಮಿಯೊಬ್ಬರ ಅಸಲಿ ಮುಖವಾಡ ಈಗ ಬಯಲಾಗಿದೆ. ಅವರು ನೀಡಿದ್ದು ಅಪ್ಪಟ ಚಿನ್ನದ ಆಭರಣಗಳಲ್ಲ, ಬದಲಿಗೆ ಚಿನ್ನದ ಲೇಪಿತ ತಾಮ್ರದ ಆಭರಣಗಳು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.&lt;/p&gt;&lt;img&gt;&lt;p&gt;ಕಳೆದ ಮೇ 8 ರಂದು ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ಆಗಮಿಸಿ ಅಂಜನಾದ್ರಿ ದೇವಸ್ಥಾನಕ್ಕೆ ಭವ್ಯವಾದ ಪ್ರಭಾವಳಿ, ಚಕ್ರ ಮತ್ತು ಗದೆಯನ್ನು ದಾನವಾಗಿ ನೀಡಿದ್ದರು. ಈ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಜನಾರ್ದನ ರೆಡ್ಡಿ ಅವರು, ತಮ್ಮ ಆಪ್ತ ಸ್ನೇಹಿತರಾದ ಮಹೇಶ್ ರೆಡ್ಡಿ ಅವರು ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದೇವರಿಗೆ ಅರ್ಪಿಸಿದ್ದಾರೆ ಎಂದು ತಿಳಿಸಿದ್ದರು.&lt;/p&gt;&lt;img&gt;&lt;p&gt;ದಾನವಾಗಿ ಪಡೆದ ಆಭರಣಗಳನ್ನು ಜಿಲ್ಲಾಡಳಿತವು ಅಧಿಕೃತವಾಗಿ ಖಜಾನೆಗೆ ಜಮೆ ಮಾಡಿಕೊಳ್ಳುವ ಮೊದಲು ನಿಯಮದಂತೆ ಪರಿಶೀಲನೆ ನಡೆಸಿತು. ಸಹಾಯಕ ಆಯುಕ್ತರಾದ (AC) ಮಹೇಶ್ ಮಾಲಗಿತ್ತಿ ಅವರ ನೇತೃತ್ವದಲ್ಲಿ ಆಭರಣಗಳ ಖಚಿತತೆ ಪರೀಕ್ಷೆ ನಡೆಸಿದಾಗ ಅಧಿಕಾರಿಗಳಿಗೆ ಭಾರಿ ಶಾಕ್ ಕಾದಿತ್ತು.&lt;/p&gt;&lt;img&gt;&lt;p&gt;ಕೋಟಿ ಮೌಲ್ಯದ ಬಂಗಾರ ಎಂದು ನಂಬಲಾಗಿದ್ದ ಆಭರಣಗಳಲ್ಲಿ ಪತ್ತೆಯಾಗಿದ್ದು ಕೇವಲ 28 ಗ್ರಾಂ ಬಂಗಾರ ಮಾತ್ರ! ಉಳಿದಂತೆ ಇಡೀ ಆಭರಣಗಳು ತಾಮ್ರದಿಂದ ಮಾಡಲ್ಪಟ್ಟಿದ್ದು, ಮೇಲೆ ಚಿನ್ನದ ಲೇಪನ (Gold Plated) ಮಾಡಲಾಗಿತ್ತು ಎಂಬುದು ದೃಢಪಟ್ಟಿದೆ.&lt;/p&gt;&lt;img&gt;&lt;p&gt;ಉದ್ಯಮಿ ಮಹೇಶ್ ರೆಡ್ಡಿ ಅವರು ಈ ಆಭರಣಗಳಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಬಿಲ್ ಅಥವಾ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ನೀಡಿರಲಿಲ್ಲ. ಉದ್ಯಮಿಯ ಕೋರಿಕೆಯ ಮೇರೆಗೆ ಎರಡು ದಿನಗಳ ಕಾಲ ಮಾತ್ರ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು. ಆದರೆ ಈಗ ಸತ್ಯಾಂಶ ಬಯಲಾದ ಬೆನ್ನಲ್ಲೇ, ಜಿಲ್ಲಾಧಿಕಾರಿಗಳು ಉದ್ಯಮಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆಭರಣಗಳ ನಿಖರ ಮೌಲ್ಯ ಮತ್ತು ಅದರ ಅಧಿಕೃತ ಬಿಲ್&zwnj;ಗಳನ್ನು ತಕ್ಷಣವೇ ಸಲ್ಲಿಸುವಂತೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಅಧಿಕೃತ ದಾಖಲೆಗಳು ಮತ್ತು ಬಿಲ್&zwnj;ಗಳಿಲ್ಲದ ಕಾರಣ, ಜಿಲ್ಲಾಡಳಿತವು ಈ ಆಭರಣಗಳನ್ನು ಸರ್ಕಾರಿ ಖಜಾನೆಗೆ ಸೇರಿಸಿಕೊಳ್ಳಲು ನಿರಾಕರಿಸಿದೆ. ದೇವಸ್ಥಾನದ ಪಾವಿತ್ರ್ಯತೆ ಮತ್ತು ಭಕ್ತರ ನಂಬಿಕೆಯೊಂದಿಗೆ ಚೆಲ್ಲಾಟವಾಡಿದ ಈ ಘಟನೆ ಈಗ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಭಾವಿ ರಾಜಕಾರಣಿಯ ಜೊತೆ ಬಂದು ಕೋಟಿ ಮೌಲ್ಯದ ದಾನ ಎಂದು ಪ್ರಚಾರ ಪಡೆದ ಉದ್ಯಮಿ, ಈಗ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/anjanadri-temple-fake-2-5-crore-gold-donation-case-mahesh-reddy-and-janardhana-reddy-sat-0hq3mvd"/>
        </item>
        <item>
            <title><![CDATA[ಕೊಪ್ಪಳದ ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ ಮೌಲ್ಯದ ಚಿನ್ನದ ಆಭರಣ ದೇಣಿಗೆ ನೀಡಿದ ಹೈದರಾಬಾದ್ ಉದ್ಯಮಿ!]]></title>
            <link>https://kannada.asianetnews.com/gallery/karnataka-districts/hyderabad-businessman-mahesh-reddy-donates-rs2-5-crore-worth-gold-ornaments-to-anjanadri-hanuman-temple-in-koppal-gdp-16r2a1t</link>
            <guid isPermaLink="true">https://kannada.asianetnews.com/gallery/karnataka-districts/hyderabad-businessman-mahesh-reddy-donates-rs2-5-crore-worth-gold-ornaments-to-anjanadri-hanuman-temple-in-koppal-gdp-16r2a1t</guid>
            <pubDate>Fri, 08 May 2026 15:11:34 +0530</pubDate>
            <description><![CDATA[&lt;p&gt;ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿಗೆ, ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಅವರು ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಿರೀಟ, ಗದೆ ಮತ್ತು ಪ್ರಭಾವಳಿಯನ್ನು ಸಮರ್ಪಿಸಿದ್ದಾರೆ. ಈ ಐತಿಹಾಸಿಕ ದೇಣಿಗೆಯ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿ ಗಣ್ಯರು ಉಪಸ್ಥಿತರಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3er26v49pv0emr66s91681,imgname-anjanadri-hanuman-temple-donation-1778232592603.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿಗೆ, ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಅವರು ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಿರೀಟ, ಗದೆ ಮತ್ತು ಪ್ರಭಾವಳಿಯನ್ನು ಸಮರ್ಪಿಸಿದ್ದಾರೆ. ಈ ಐತಿಹಾಸಿಕ ದೇಣಿಗೆಯ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿ ಗಣ್ಯರು ಉಪಸ್ಥಿತರಿದ್ದರು.&lt;/p&gt;&lt;img&gt;&lt;p&gt;ಕೊಪ್ಪಳ: ತಾಲೂಕಿನ ಐತಿಹಾಸ ಪ್ರಸಿದ್ಧ ಆಂಜನೇಯಸ್ವಾಮಿ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿಗೆ ಚಿನ್ನದ ಕಿರೀಟ, ಗದೆ ಮತ್ತು ಪ್ರಭಾವಳಿಯನ್ನು ಮೇ 8 ರಂದು ಸಮರ್ಪಣೆ ಮಾಡಲಾಗಿದೆ. ಆಂಜನೇಯ ದೇಗುಲಕ್ಕೆ ಇದೇ ಮೊದಲ ಬಾರಿಗೆ ಭಾರೀ ಮೊತ್ತದ ಬಂಗಾರದ ಆಭರಣ ದೇಣಿಗೆ ನೀಡಲಾಗಿದೆ. ಹೈದರಾಬಾದ್ ನೆಲ್ಲೂರು ಮೂಲದ ಉದ್ಯಮಿ ಹಾಗೂ ಎಎಂಆರ್ ಸಮೂಹ ಸಂಸ್ಥೆಯ ಮಾಲಿಕ ಮಹೇಶ್ ರೆಡ್ಡಿ ಅವರು ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಹನುಮಂತನಿಗೆ ಸಮರ್ಪಣೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಭಾರತದ ಖ್ಯಾತ ಕನ್ಸ್ಟ್ರಕ್ಷನ್ ಸಂಸ್ಥೆ ಎ.ಎಂ.ಆರ್ ಗ್ರುಪ್&zwnj;ನ ಅಧ್ಯಕ್ಷ ಡಾ. ಎ.ಮಹೇಶ್ ರೆಡ್ಡಿ ಹಾಗೂ ಕುಟುಂಬದಿಂದ ಆಂಜನೇಯ ಸ್ವಾಮಿಗೆ ಚಿನ್ನದ ಪ್ರಭಾವಳಿ, ಕಿರೀಟ ಹಾಗೂ ಗದೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಗಿದೆ.1.50 ಕೆಜಿ ಅಂದಾಜು ₹ 2.50 ಕೋಟಿ ಮೌಲ್ಯದ ಆಭರಣ ಹೈದ್ರಾಬಾದನಲ್ಲಿ ತಯಾರಿಸಲಾಗಿದ್ದು, ತಯಾರಕರೇ ಆಗಮಿಸಿ ಆಂಜನೇಯಸ್ವಾಮಿಗೆ ಅಲಂಕರಿಸಲಿದ್ದಾರೆ. ಈ ಹಿನ್ನೆಲೆ ಬೆಳಗ್ಗೆ 5 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಆಂಧ್ರ, ಕರ್ನಾಟಕದಿಂದ ಪಂಡಿತರು ಆಗಮಿಸಿದ್ದು ಹೋಮ ಹವನಗಳು ಸೇರಿದಂತೆ ವಿವಿಧ ಕಾರ್ಯಕ್ರಮ ನೆರವೇರಿಸಿದರು.&lt;/p&gt;&lt;img&gt;&lt;p&gt;ಉದ್ಯಮಿ ಮಹೇಶ್ ರೆಡ್ಡಿ ಅವರು ತಮ್ಮ ಪತ್ನಿಯೊಂದಿಗೆ ದೇಗುಲಕ್ಕೆ ಆಗಮಿಸಿ, ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಬಂಗಾರದ ಪ್ರಭಾವಳಿ, ಚತ್ರಿ, ಕಿರೀಟ ಹಾಗೂ ಗದೆಯನ್ನು ಶ್ರೀ ಆಂಜನೇಯ ಸ್ವಾಮಿಗೆ ಅರ್ಪಿಸುವ ಮೂಲಕ ತಮ್ಮ ಸೇವೆ ಸಲ್ಲಿಸಿದರು. ಈ ವೇಳೆ ದೇವಾಲಯದ ಅರ್ಚಕರು ವೇದಮಂತ್ರಗಳೊಂದಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಸಮರ್ಪಿತ ಆಭರಣಗಳಿಗೆ ಪೂಜೆ ಸಲ್ಲಿಸಿದರು. ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಆಭರಣಗಳನ್ನು ಹಸ್ತಾಂತರ ಮಾಡಿದರು. ಆಂಜನೇಯ ಸ್ವಾಮಿಗೆ ವಿಶೇಷ ಸಂಕಲ್ಪ ಪೂಜೆ, ಸುಪ್ರಭಾತ ಸೇವೆ ಸಲ್ಲಿಸಿ, ಭಕ್ತಿ ಭಾವದಿಂದ ಬಂಗಾರದ ಪ್ರಭಾವಳಿ, ಚಕ್ರ, ಕಿರೀಟ ಹಾಗೂ ಗದೆ ಸೇರಿದಂತೆ ವಿವಿಧ ಆಭರಣಗಳನ್ನು ಒಪ್ಪಿಸಿದರು.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಾಸಕ ಜನಾರ್ದನ ರೆಡ್ಡಿ ಅವರ ಆಪ್ತ ಸ್ನೇಹಿತರಾಗಿರುವ ಮಹೇಶ್ ರೆಡ್ಡಿ, ಧಾರ್ಮಿಕ ಕಾರ್ಯಗಳಲ್ಲಿ ಸದಾ ಮುಂದಿರುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಹಲವು ದೇವಾಲಯಗಳಿಗೆ ದೇಣಿಗೆ ನೀಡಿದ್ದಾರೆ.&lt;/p&gt;&lt;p&gt;ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಮೊತ್ತದಲ್ಲಿ ಬಂಗಾರದ ಆಭರಣ ದೇಣಿಗೆಯಾಗಿ ಬಂದಿರುವುದು ವಿಶೇಷವಾಗಿದೆ. ದೇಣಿಗೆಯಾಗಿ ನೀಡಲಾದ ಆಭರಣಗಳನ್ನು ಗಂಗಾವತಿ ತಾಲೂಕು ಆಡಳಿತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಗಿದ್ದು, ಅವುಗಳನ್ನು ದೇವಾಲಯದ ನಿಯಮಾನುಸಾರ ಮುಂದಿನ ಕ್ರಮಗಳಲ್ಲಿ ಬಳಸಲಾಗುತ್ತದೆ.&lt;/p&gt;&lt;img&gt;&lt;p&gt;ಹೈದರಾಬಾದ್&zwnj;ನ ನೆಲ್ಲೂರು ಮೂಲದ ಮಹೇಶ್ ರೆಡ್ಡಿ ಅವರು ಎಎಂಆರ್ ಕನ್ಸ್ಟ್ರಕ್ಷನ್ ಕಂಪನಿಯ ಮಾಲಿಕರಾಗಿದ್ದು, ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೂ ಸುಮಾರು 140 ಕೆ.ಜಿ. ಬಂಗಾರ ದೇಣಿಗೆ ನೀಡಿದ್ದರು. ಇದೀಗ ಅಂಜನಾದ್ರಿ ದೇವಸ್ಥಾನಕ್ಕೂ ದೇಣಿಗೆ ನೀಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈ ದೇಣಿಗೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ಈ ಬೆಳವಣಿಗೆ ಅಂಜನಾದ್ರಿ ದೇವಸ್ಥಾನದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ಗಂಗಾವತಿ ತಹಸಿಲ್ದಾರರಾದ ವಸಂತ ಕುಮಾರಿ, ಕನಕಗಿರಿ ತಹಸಿಲ್ದಾರರಾದ ವಿಶ್ವನಾಥ್, ಗ್ರೇಡ್ 2 ತಹಶೀಲ್ದಾರರಾದ ಮಹಾಂತಗೌಡ ಪಾಟೀಲ್, ಮಾಜಿ ಸಂಸದರಾದ ಶಿವರಾಮಗೌಡ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ್, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಚಂದ್ರು ಹಿರೂರು, ಮುಖಂಡರಾದ ಮನೋಹರ ಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ್ ಬಲಕುಂದಿ, ಮಲ್ಲಿಕಾರ್ಜುನ ಸ್ವಾಮಿ, ಬಾಬು ರೆಡ್ಡಿ, ಗಂಗಾಧರ ಸ್ವಾಮಿ, ಸಂಗಮೇಶ್ ಬಾದವಾಡಿಗಿ, ವೆಂಕಟೇಶ್ ಜಬ್ಬಲಗುಡ್ಡ, ರಮೇಶ್ ಹೊಸಮಲಿ, ಮಂಜುನಾಥ ಗೊಂದಿ, ಮಂಜುನಾಥ ಕಲಾಲ್, ಅರ್ಜುನ್ ರಾಯ್ಕರ್, ವೀರೇಶ್ ಅಂಜನಾದ್ರಿ ಹಾಗೂ ತಾಲೂಕು ಆಡಳಿತ ಸಿಬ್ಬಂದಿ ವರ್ಗದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/hyderabad-businessman-mahesh-reddy-donates-rs2-5-crore-worth-gold-ornaments-to-anjanadri-hanuman-temple-in-koppal-gdp-16r2a1t"/>
        </item>
        <item>
            <title><![CDATA[ಗೃಹಲಕ್ಷ್ಮೀ ಹಣದಲ್ಲಿ ರೊಟ್ಟಿ ಕೇಂದ್ರ ಆರಂಭಿಸಿ ಸ್ವಾವಲಂಬಿ ಬದುಕಿನತ್ತ ಕುಷ್ಟಗಿಯ ಮಹಿಳೆಯರು]]></title>
            <link>https://kannada.asianetnews.com/karnataka-districts/koppal-district-kushtagi-women-who-started-roti-center-with-gruhalakshmi-money-and-took-a-step-towards-self-reliance-mrq/articleshow-57ck82c</link>
            <guid isPermaLink="true">https://kannada.asianetnews.com/karnataka-districts/koppal-district-kushtagi-women-who-started-roti-center-with-gruhalakshmi-money-and-took-a-step-towards-self-reliance-mrq/articleshow-57ck82c</guid>
            <pubDate>Sun, 17 May 2026 07:22:08 +0530</pubDate>
            <description><![CDATA[ಕುಷ್ಟಗಿ ಪಟ್ಟಣದ ಮೂವರು ಮಹಿಳೆಯರು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಿಂದ ದೊರೆತ ಹಣವನ್ನು ಸದ್ಬಳಕೆ ಮಾಡಿಕೊಂಡು 'ಗೃಹಲಕ್ಷ್ಮೀ ರೊಟ್ಟಿ ಕೇಂದ್ರ'ವನ್ನು ಆರಂಭಿಸಿದ್ದಾರೆ. ಈ ಸ್ವಯಂ ಉದ್ಯೋಗದ ಮೂಲಕ ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krst3ctcqztnsqd3krws0pvx,imgname-guruha-lakshmi-1778982695756.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ&lt;/strong&gt;&lt;/p&gt;&lt;p&gt;ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮೀ ಯೋಜನೆಯಡಿ ದೊರೆಯುತ್ತಿರುವ ಮಾಸಿಕ ಎರಡು ಸಾವಿರ ರುಪಾಯಿ ಸದ್ಬಳಕೆ ಮಾಡಿಕೊಂಡಿರುವ ಪಟ್ಟಣದ ಮೂವರು ಮಹಿಳೆಯರು ರೊಟ್ಟಿ ಕೇಂದ್ರ ಆರಂಭಿಸಿ ಕೇಂದ್ರಕ್ಕೆ &quot;ಗೃಹಲಕ್ಷ್ಮೀ ರೊಟ್ಟಿ ಕೇಂದ್ರ&quot; ಎಂದು ಹೆಸರಿಡುವ ಮೂಲಕ ಗಮನ ಸೆಳೆದಿದ್ದಾರೆ.&lt;/p&gt;&lt;h2&gt;&lt;strong&gt;ಸ್ವಯಂ ಉದ್ಯೋಗ ಆರಂಭಿಸಿದ ಮಹಿಳೆಯರು&lt;/strong&gt;&lt;/h2&gt;&lt;p&gt;ಹೌದು. ಪಟ್ಟಣದ ನಿವಾಸಿಗಳಾದ ಮಕ್ತುಮ್ಬಿ ಕೊಪ್ಪದ, ಸಾಜನಬಿ ದಾದಿಬಾಯಿ, ಹುಸೇನಬಿ ಕಮ್ಮಾರ ಎಂಬ ಮೂವರು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಿಂದ ಲಭಿಸಿದ ಆರ್ಥಿಕ ನೆರವನ್ನು ಉಳಿತಾಯ ಮಾಡುವ ಮೂಲಕ ಹುಬ್ಬಳ್ಳಿಯಲ್ಲಿ ರೊಟ್ಟಿ ಮಿಷನ್ ಖರೀದಿಸಿ ಸ್ವಯಂ ಉದ್ಯೋಗ ಆರಂಭಿಸುವಲ್ಲಿ ಮುಂದಾಗಿದ್ದಾರೆ.&lt;/p&gt;&lt;p&gt;ಈ ರೊಟ್ಟಿ ಉದ್ಯಮ ಕಟ್ಟಿಕೊಳ್ಳಲು 29 ಕಂತುಗಳ ಪೈಕಿ ಒಟ್ಟು 58 ಸಾವಿರದಂತೆ ಮೂರು ಜನ ಹಣ ಹೂಡಿಕೆಯ ಜತೆಗೆ ಸ್ವಂತ ಹಣ ಜೋಡಿಸಿಕೊಂಡು ₹2ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ರೊಟ್ಟಿ ತಯಾರಿಕಾ ಮೀಷನ್ ಅಳವಡಿಸಿಕೊಂಡು ಉದ್ಯಮ ಆರಂಭಿಸುವ ಮೂಲಕ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದಾರೆ.&lt;/p&gt;&lt;h3&gt;&lt;strong&gt;ಸ್ವಾವಲಂಬಿ ಬದುಕಿನ ಹೆಜ್ಜೆ&lt;/strong&gt;&lt;/h3&gt;&lt;p&gt;ಈ ರೊಟ್ಟಿ ಮೀಷನ್ ದಿಂದ ಪ್ರತಿನಿತ್ಯವೂ ತಯಾರಾಗುವ ರೊಟ್ಟಿ ಪಟ್ಟಣದಲ್ಲಿರುವ ಹೋಟೆಲ್, ಡಾಬಾ, ಖಾನಾವಳಿ, ಸಭೆ ಸಮಾರಂಭಕ್ಕೆ ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದ್ದು, ಮಹಿಳೆಯರಿಗೆ ಸ್ಥಿರ ಆದಾಯದೊಂದಿಗೆ ಸ್ವಾವಲಂಬಿ ಬದುಕಿನ ಹೆಜ್ಜೆಯಾಗಿದೆ.&lt;/p&gt;&lt;h3&gt;&lt;strong&gt;ಗಣ್ಯರಿಂದ ಚಾಲನೆ&lt;/strong&gt;&lt;/h3&gt;&lt;p&gt;ಕುಷ್ಟಗಿ ಪಟ್ಟಣದಲ್ಲಿ ಮೂವರು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಹಣದಿಂದ ಸ್ಥಾಪಿಸಿರುವ ಗೃಹಲಕ್ಷ್ಮೀ ರೊಟ್ಟಿ ಕೇಂದ್ರವನ್ನು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್&zwnj; ದೋಟಿಹಾಳ, ಕಾಂಗ್ರೆಸ್ ಯುವಮುಖಂಡ ದೊಡ್ಡಬಸನಗೌಡ ಬಯ್ಯಾಪೂರ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್, ಗ್ಯಾರಂಟಿ ಸಮಿತಿಯ ಸದಸ್ಯರು, ಸಿಡಿಪಿಒ ಇಲಾಖೆ ಅಧಿಕಾರಿಗಳು, ಗಣ್ಯರು ಕೇಂದ್ರ ಉದ್ಘಾಟಿಸಿದರು.&lt;/p&gt;&lt;p&gt;ಕಾಂಗ್ರೆಸ್&zwnj; ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬರುವ ಎರಡು ಸಾವಿರ ಹಣ ಉಳಿತಾಯ ಮಾಡುವ ಮೂಲಕ ನಾವು ಮೂವರು ಸೇರಿಕೊಂಡು ಅಂದಾಜು ಎರಡು ಲಕ್ಷಗಳಲ್ಲಿ ರೊಟ್ಟಿ ಕೇಂದ್ರ ಆರಂಭಿಸಿದ್ದು, ಉದ್ಯಮದಲ್ಲಿ ಯಶಸ್ವಿಯಾಗುವ ಭರವಸೆಯಿದೆ ಎನ್ನುತ್ತಾರೆ ಗೃಹಲಕ್ಷ್ಮೀ ರೊಟ್ಟಿ ಕೇಂದ್ರದ ಮಹಿಳೆಯರು.&lt;/p&gt;&lt;p&gt;ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಜತೆಗೆ ಕುಟುಂಬದ ಆರ್ಥಿಕ ಸ್ಥೀತಿ ಸುಧಾರಣೆಯಾಗಲು ಸಹಕಾರಿಯಾಗಿದೆ. ಯೋಜನೆ ನೆರವಿನಿಂದ ಕುಷ್ಟಗಿಯಲ್ಲಿ ರೊಟ್ಟಿ ಕೇಂದ್ರ ಸ್ಥಾಪನೆ ಮಾಡಿರುವದು ಶ್ಲಾಘನೀಯವಾಗಿದೆ ಎಂದು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್&zwnj; ದೋಟಿಹಾಳ ತಿಳಿಸಿದ್ದಾರೆ.&lt;/p&gt;&lt;p&gt;ಗೃಹಲಕ್ಷ್ಮೀ ಯೋಜನೆ ಹಣ ಉದ್ಯೋಗ ಸೃಷ್ಟಿಗೆ ಬಳಸಿರುವುದು ಮಾದರಿ ಕಾರ್ಯವಾಗಿದ್ದು, ಮಹಿಳೆಯರು ಸರ್ಕಾರಿ ಯೋಜನೆ ಸದ್ಬಳಕೆ ಮಾಡಿಕೊಂಡರೆ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್&zwnj; ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪುರ ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಕೃಷಿ ಭೂಮಿಗೆ ಬೋರ್&zwnj;ವೆಲ್ ಹಾಕಿಸಿದ ಹುಬ್ಬಳ್ಳಿಯ ಈರವ್ವ#Hubballi #GruhalakshmiScheme #Congress #LaxmiHebbalkar #CongressGuarantee @siddaramaiah @DKShivakumar @laxmi_hebbalkar @INCKarnataka https://t.co/Q9JiyX7yrk&lt;/p&gt;&lt;p&gt;&mdash; Asianet Suvarna News (@AsianetNewsSN) May 12, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಗೃಹಲಕ್ಷ್ಮೀ ಯೋಜನೆ ಹಣದಿಂದ ಅನೇಕ ಫಲಾನುಭವಿಗಳು ಬಟ್ಟೆ ಅಂಗಡಿ, ಹೊಲಿಗೆ ಯಂತ್ರ ವಿವಿಧ ವ್ಯಾಪಾರ ವಹಿವಾಟು ಮೂಲಕ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಕುಷ್ಟಗಿಯಲ್ಲಿ ಮೂರು ಜನ ಮಹಿಳೆಯರು ಸೇರಿಕೊಂಡು ಉದ್ಯಮ ಕಟ್ಟಿಕೊಂಡಿರುವುದು ಮಹಿಳೆಯರ ಆತ್ಮವಿಶ್ವಾಸದ ಸಂಘಟಿತ ಪ್ರಯತ್ನ ಇತರರಿಗೆ ಪ್ರೇರಣೆಯಾಗಲಿದೆ ಎಂದು ಕುಷ್ಟಗಿ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಫಾರೂಕ್ ಡಾಲಾಯತ್ ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-district-kushtagi-women-who-started-roti-center-with-gruhalakshmi-money-and-took-a-step-towards-self-reliance-mrq/articleshow-57ck82c"/>
        </item>
        <item>
            <title><![CDATA[ಜಗತ್ತಿನ ದುಬಾರಿ ಮಿಯಾ ಜಾಕಿ ಮಾವು ಬೆಳೆದ ಕೊಪ್ಪಳದ ರೈತನಿಗೆ ಸಿಕ್ಕಿದ್ದು ಕೇವಲ 3 ಸಾವಿರ ರೂ!]]></title>
            <link>https://kannada.asianetnews.com/gallery/karnataka-districts/karnataka-koppala-farmer-struggles-to-sell-premium-world-costliest-miyazaki-mango-sold-at-just-rs-3000-per-kg-gdp-59ye9iv</link>
            <guid isPermaLink="true">https://kannada.asianetnews.com/gallery/karnataka-districts/karnataka-koppala-farmer-struggles-to-sell-premium-world-costliest-miyazaki-mango-sold-at-just-rs-3000-per-kg-gdp-59ye9iv</guid>
            <pubDate>Tue, 12 May 2026 16:18:26 +0530</pubDate>
            <description><![CDATA[&lt;p&gt;ಕೊಪ್ಪಳದ ರೈತರೊಬ್ಬರು ವಿಶ್ವದ ಅತ್ಯಂತ ದುಬಾರಿ ಮಿಯಾ ಜಾಕಿ ಮಾವನ್ನು &amp;nbsp;ಬೆಳೆದಿದ್ದಾರೆ. ಆದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಈ ಮಾವಿಗೆ ಸ್ಥಳೀಯವಾಗಿ ಕೇವಲ 3 ಸಾವಿರ ರೂಪಾಯಿ ಬೆಲೆ ಸಿಕ್ಕಿದ್ದು, ಮಾರುಕಟ್ಟೆಯ ಸವಾಲು ಎದುರಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krdvwxdvf05x1h2bza8atdrx,imgname-karnataka-farmer-grows-world-s-costliest-miyazaki-mango--2--1778581927355.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳದ ರೈತರೊಬ್ಬರು ವಿಶ್ವದ ಅತ್ಯಂತ ದುಬಾರಿ ಮಿಯಾ ಜಾಕಿ ಮಾವನ್ನು &amp;nbsp;ಬೆಳೆದಿದ್ದಾರೆ. ಆದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಈ ಮಾವಿಗೆ ಸ್ಥಳೀಯವಾಗಿ ಕೇವಲ 3 ಸಾವಿರ ರೂಪಾಯಿ ಬೆಲೆ ಸಿಕ್ಕಿದ್ದು, ಮಾರುಕಟ್ಟೆಯ ಸವಾಲು ಎದುರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಜಗತ್ತಿನ ದುಬಾರಿ ಮಾವು ಎಂದೇ ಪ್ರಸಿದ್ಧಿಯಾಗಿರುವ ಜಪಾನ್ ಮೂಲದ ಮಿಯಾ ಜಾಕಿ ಮಾವು ಕೊಪ್ಪಳದ ರೈತನೋರ್ವ ಬೆಳೆದಿದ್ದು, ಅದು ಈಗ ಬಂಪರ್ ಬೆಳೆ ಬಂದಿದೆ. ಆದರೆ ವಿಶ್ವದ ದುಬಾರಿ ಮಾವಿಗೆ ಈಗ ದರದ ಸಮಸ್ಯೆ ಎದುರಾಗಿದೆ. 2.50 ಲಕ್ಷ ಇದ್ದ ಮೀಯಾ ಜಾಕಿ ಕೊಪ್ಪಳದ ಮಾವು ಮೇಳದಲ್ಲಿ ಪ್ರತಿ ಕೆಜಿಗೆ ಕೇವಲ 3 ಸಾವಿರ ರೂಪಾಯಿ ಮಾರಾಟವಾಗಿದೆ.&lt;/p&gt;&lt;img&gt;&lt;p&gt;ಈ ಹಿಂದೆ ಕೊಪ್ಪಳ ತೋಟಗಾರಿಕಾ ಇಲಾಖೆ ಹಣ್ಣು ಮಾರಾಟ ಮೇಳದಲ್ಲಿ ಮೂರು ವರ್ಷಗಳ ಹಿಂದೆ ಪ್ರದರ್ಶನಕ್ಕೆ ಇಟ್ಟಿದ್ದ ಮಿಯಾಜಾಕಿ ಮಾವು ನೋಡಿ ಅದರಿಂದ ಪ್ರೇರಣೆಗೊಂಡ ರೈತ ನಾಗಪ್ಪ ಬಗನಾಳ ತಾಲೂಕಿನ ಕಲ್&zwnj; ತಾವರಗೇರಾ ಗ್ರಾಮದಲ್ಲಿರುವ ತಮ್ಮ 2 ಎಕರೆ ಪ್ರದೇಶದಲ್ಲಿ ಮಿಯಾ ಜಾಕಿ ಬೆಳೆದಿದ್ದರು. ಆದರೆ ಸದ್ಯ ನಾಗಪ್ಪ ಬೆಳೆದ ಮಿಯಾ ಜಾಕಿ ಮಾವಿನ ಹಣ್ಣಿಗೆ ಉತ್ತಮ ಬೆಲೆ ಸಿಕ್ಕಿಲ್ಲ. ಕೆಜಿ ಗೆ 2.50 ಲಕ್ಷ ಮೌಲ್ಯದ ಮಾವು ಈಗ ಬರೇ 3 ಸಾವಿರ ರೂಗೆ ಮಾರಾಟವಾಗಿದೆ. ಹೀಗಾಗಿ ಮಿಯಾ ಜಾಕಿಗೆ ಉತ್ತಮ ಬೆಲೆ ಕೊಡಿಸುವಂತೆ ರೈತ ನಾಗಪ್ಪ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಮೂರು ವರ್ಷಗಳ ಹಿಂದೆ ದೆಹಲಿಯಿಂದ ರೈಲು ಮೂಲಕ 200 ಮಿಯಾಜಾಕಿ ಮಾವು ಸಸಿಯನ್ನು ನಾಗಪ್ಪ ಬಗನಾಳ ತರಿಸಿದ್ದರು. ಪ್ರತಿ ಸಸಿಗೆ ₹1300 ಕೊಟ್ಟಿದ್ದಾರೆ. ನಾಟಿ ಮಾಡಿದ ಬಳಿಕ 20 ಸಸಿಗಳು ಸತ್ತಿವೆ. 180 ಮಿಯಾಜಾಕಿ ಮಾವಿನ ಗಿಡಗಳು ಭರ್ಜರಿಯಾಗಿ ಬೆಳೆದು ನಿಂತು, ಈ ಪೈಕಿ ಈ ವರ್ಷ ಒಂದಷ್ಟು ಗಿಡಗಳು ನಿರೀಕ್ಷೆಗೂ ಮೀರಿ ಫಸಲು ನೀಡಿವೆ.&lt;/p&gt;&lt;img&gt;&lt;p&gt;ಪ್ರತ್ಯೇಕ ಉಪಚಾರವೇನೂ ಇಲ್ಲದೆ ಎಲ್ಲಾ ಮಾವು ಬೆಳೆದಂತೆ ಬೆಳೆದ ಮಿಯಾಜಾಕಿ ಮಾವಿಗೆ ಮಾರುಕಟ್ಟೆಯದ್ದೆ ದೊಡ್ಡ ಸವಾಲು ಆಗಿದೆ. ಈ ವರ್ಷವಷ್ಟೇ ಬೆಳೆದಿರುವ ಮಿಯಾಜಾಕಿ ಮಾವಿಗೆ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲ. ಹೀಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೇ ಇದನ್ನು ಮಾರಾಟ ಮಾಡಬೇಕಾಗಿದೆ. ರಫ್ತು ಮಾಡುವುದು ಕೂಡ ಸವಾಲಿನ ಕೆಲಸವಾಗಿದೆ.&lt;/p&gt;&lt;img&gt;&lt;p&gt;ಜಪಾನ್ ದೇಶದ ಕ್ಯುಶು ಪ್ರಾಂತದ ಮಿಯಾಜಾಕಿ ನಗರದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುವುದರಿಂದ ಇದಕ್ಕೆ ಮಿಯಾ ಜಾಕಿ ಮಾವು ಎಂದು ಹೆಸರು ಬಂದಿದೆ. ಸಾಮಾನ್ಯವಾಗಿ ಜಪಾನ್ ಸುತ್ತಮುತ್ತಲ ಪ್ರದೇಶದಲ್ಲಿಯೇ ಬೆಳೆಯುವ ಈ ಮಾವು ಜಗತ್ತಿನ ದುಬಾರಿ ಮಾವು ಎಂದೇ ಪ್ರಸಿದ್ಧಿಯಾಗಿದೆ. ಪ್ರತಿ ಕೆಜಿಗೆ ₹2.5 ಲಕ್ಷದಿಂದ ₹3 ಲಕ್ಷಕ್ಕೆ ಇದು ಮಾರಾಟವಾಗುತ್ತದೆ. ದುಬಾರಿ ಮಾವು ಎನ್ನುವ ಕಾರಣಕ್ಕಾಗಿ ಕಷ್ಟಪಟ್ಟು ಬೆಳೆದಿದ್ದೇವೆ. ನಿರೀಕ್ಷೆಗೂ ಮೀರಿ ಉತ್ತಮ ಫಸಲು ಬಂದಿದೆ. ಈಗ ಅದನ್ನು ಮಾರಾಟ ಮಾಡುವುದೇ ದೊಡ್ಡ ಸವಾಲು ಎಂದು ರೈತ ನಾಗಪ್ಪ ಬಗನಾಳ ತಿಳಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/karnataka-koppala-farmer-struggles-to-sell-premium-world-costliest-miyazaki-mango-sold-at-just-rs-3000-per-kg-gdp-59ye9iv"/>
        </item>
        <item>
            <title><![CDATA[19 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯ: ಕುಷ್ಟಗಿಯಲ್ಲಿ ತಂದೆ-ಮಗಳ ಭಾವನಾತ್ಮಕ ಮಿಲನ!]]></title>
            <link>https://kannada.asianetnews.com/gallery/special/father-and-daughter-reunion-after-19-years-in-kushtagi-6408tg7</link>
            <guid isPermaLink="true">https://kannada.asianetnews.com/gallery/special/father-and-daughter-reunion-after-19-years-in-kushtagi-6408tg7</guid>
            <pubDate>Thu, 14 May 2026 15:35:39 +0530</pubDate>
            <description><![CDATA[&lt;p&gt;ದೀರ್ಘ 19 ವರ್ಷಗಳ ಬಳಿಕ ತಂದೆ ಮತ್ತು ಮಗಳು ಭೇಟಿಯಾದ ಘಟನೆ ಎಲ್ಲರ ಮನಸ್ಸನ್ನೂ ಭಾವುಕರನ್ನಾಗಿಸಿತು. ಬಾಲ್ಯದಲ್ಲೇ ತಂದೆಯಿಂದ ದೂರವಾಗಿದ್ದ ಮಗಳು, ಅನೇಕ ವರ್ಷಗಳ ನಿರೀಕ್ಷೆಯ ನಂತರ ತಂದೆಯನ್ನು ಭೇಟಿ ಮಾಡಿದ್ದು ಒಂದು ಅಪರೂಪದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krjyygns1hz2h01xpmfcx4wa,imgname-new-project---2026-05-14t152744.434-1778752897721.jpg" type="image/jpeg" height="390" width="690"/>
            <content:encoded><![CDATA[&lt;p&gt;ದೀರ್ಘ 19 ವರ್ಷಗಳ ಬಳಿಕ ತಂದೆ ಮತ್ತು ಮಗಳು ಭೇಟಿಯಾದ ಘಟನೆ ಎಲ್ಲರ ಮನಸ್ಸನ್ನೂ ಭಾವುಕರನ್ನಾಗಿಸಿತು. ಬಾಲ್ಯದಲ್ಲೇ ತಂದೆಯಿಂದ ದೂರವಾಗಿದ್ದ ಮಗಳು, ಅನೇಕ ವರ್ಷಗಳ ನಿರೀಕ್ಷೆಯ ನಂತರ ತಂದೆಯನ್ನು ಭೇಟಿ ಮಾಡಿದ್ದು ಒಂದು ಅಪರೂಪದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕುಟುಂಬದ ಅನಿವಾರ್ಯ ಪರಿಸ್ಥಿತಿಗಳಿಂದ ತಂದೆ-ಮಗಳು ಹಲವು ವರ್ಷಗಳಿಂದ ದೂರವಾಗಿದ್ದರು ಎಂದು ತಿಳಿದುಬಂದಿದೆ. ಕಾಲ ಕಳೆಯುತ್ತಿದ್ದರೂ, ತಂದೆಯನ್ನು ಮತ್ತೊಮ್ಮೆ ನೋಡಬೇಕೆಂಬ ಆಸೆ ಮಗಳ ಮನದಲ್ಲಿ ಜೀವಂತವಾಗಿಯೇ ಇತ್ತು. ಪ್ರತಿಯೊಂದು ಹಬ್ಬ, ವಿಶೇಷ ಸಂದರ್ಭಗಳಲ್ಲಿ &ldquo;ತವರು ಮನೆಯವರು&rdquo; ಎಂಬ ಕೊರತೆ ಆಕೆಯನ್ನು ಕಾಡುತ್ತಿತ್ತು .&lt;/p&gt;&lt;img&gt;&lt;p&gt;ಇತ್ತೀಚೆಗೆ ನಡೆದ ಈ ಭೇಟಿಯಲ್ಲಿ, ತಂದೆಯನ್ನು ಕಂಡ ಕ್ಷಣ ಮಗಳು ಶ್ರುತಿ ಮಾತು ಬಾರದೆ ಭಾವುಕಳಾದಳು. ವರ್ಷಗಳ ಬಳಿಕ ಮಗಳನ್ನು ಕಂಡ ತಂದೆ ಹನುಮಂತ ರಾವ್ ದೇಸಾಯಿ ಭಾವುಕರಾದರು. 19 ವರ್ಷಗಳ ದೂರವು ಆ ಒಂದು ಬೇಟಿಯಲ್ಲಿ ಕರಗಿದಂತಾಯಿತು.&lt;/p&gt;&lt;img&gt;&lt;p&gt;&ldquo;ಮಗಳೇ&hellip;&rdquo; ಎಂಬ ತಂದೆಯ ಕರೆಯೊಂದಿಗೆ ಇಬ್ಬರ ಭಾವನೆಗಳು ಉಕ್ಕಿಬಂದವು. ಆ ಕ್ಷಣದಲ್ಲಿ ಅಲ್ಲಿದ್ದ ಕುಟುಂಬಸ್ಥರು ಹಾಗೂ ಬಂಧುಮಿತ್ರರೂ ಭಾವುಕರಾದರು. ಮಾತುಗಳಿಗಿಂತ ಕಣ್ಣೀರು ಅವರ ಪ್ರೀತಿ, ನೋವು ಮತ್ತು ನಿರೀಕ್ಷೆಯನ್ನು ಹೆಚ್ಚು ಸ್ಪಷ್ಟವಾಗಿ ವ್ಯಕ್ತಪಡಿಸಿತು.&lt;/p&gt;&lt;img&gt;&lt;p&gt;ಈ ಘಟನೆ ಕುಟುಂಬ ಸಂಬಂಧಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸುವಂತಿದ್ದು, ಎಷ್ಟೇ ವರ್ಷಗಳ ಅಂತರ ಇದ್ದರೂ ಹೃದಯಗಳ ಬಾಂಧವ್ಯ ಎಂದಿಗೂ ಕಡಿದುಹೋಗುವುದಿಲ್ಲ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ಕುಷ್ಟಗಿ ತಾಲೂಕು ಅಡವಿಸಾಗರದಲ್ಲಿ ತಂದೆ ವಾಸವಿದ್ದರು. ತಾಯಿಗೆ ಮಾನಸಿಕ ಸಮಸ್ಯೆ ಇದ್ದಾಗ, ತಂದೆ ಎರಡನೇ ಮದುವೆ ಆಗಿದ್ದರು. ಶ್ರುತಿ ತಾಯಿಗೆ ಮಾನಸಿಕ ಸಮಸ್ಯೆ ಇದ್ದಾಗ, ತಂದೆ ಎರಡನೇ ಮದುವೆ ಆಗಿದ್ದರು. ಹುಡುಗಿಯ ಅಕ್ಕ ಮನೆ ಮುಂದಿರುವ ಬಾವಿಗೆ ಬಿದ್ದಿದ್ದರು. ಹೀಗಾಗಿ ಎರಡನೇ ಮಗಳು ಒಂದೂವರೆ ವರ್ಷವಿದ್ದಾಗ ತಾಯಿ ತಂಗಿ ಚಿಕ್ಕಮ್ಮ ಧಾರವಾಡಕ್ಕೆ ಕರೆತಂದು ಬೆಳೆಸಿದ್ದರು. ಆಮೇಲೆ 8ನೇ ಕ್ಲಾಸಿನಲ್ಲಿದ್ದಾಗ ತಂದೆ-ಮಗಳು ಭೇಟಿಯಾಗಿದ್ದರು. ಆಮೇಲೆ ತಂದೆ ಬೇರೆ ಕಡೆಗೆ ಶಿಫ್ಟ್&zwnj; ಆಗಿದ್ದರೂ ಕೂಡ ಭೇಟಿ ಆಗಿರಲಿಲ್ಲ. ಕೌಟುಂಬಿಕ ಸಮಸ್ಯೆ ಇತ್ತು ಎಂದು ಮಗಳು-ತಂದೆ ಭೇಟಿ ಆಗಿರಲಿಲ್ಲ, ತಂದೆ ಜೊತೆಗೆ ಚಿಕ್ಕಮ್ಮ ಕೂಡ ಕಾಂಟ್ಯಾಕ್ಟ್&zwnj; ಇರದ ಕಾರಣ ಹೀಗೆ ಭೇಟಿ ಆಗೋದು 19 ವರ್ಷ ಆಗಿದೆ.&lt;/p&gt;]]></content:encoded>
            <category>koppal</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/special/father-and-daughter-reunion-after-19-years-in-kushtagi-6408tg7"/>
        </item>
        <item>
            <title><![CDATA[ಈಜಲು ಹೋದ ಕೊಪ್ಪಳದ ಯುವಕ ನೀರಿನಲ್ಲಿ ಮುಳುಗಿ ಸಾವು, ಮತೃದೇಹಕ್ಕಾಗಿ ಹುಡುಕಾಟ]]></title>
            <link>https://kannada.asianetnews.com/gallery/karnataka-districts/young-man-from-koppal-goes-missing-after-drowning-incident-during-swim-apobvq3</link>
            <guid isPermaLink="true">https://kannada.asianetnews.com/gallery/karnataka-districts/young-man-from-koppal-goes-missing-after-drowning-incident-during-swim-apobvq3</guid>
            <pubDate>Sun, 10 May 2026 21:41:41 +0530</pubDate>
            <description><![CDATA[&lt;p&gt;17ರ ಹರೆಯದ ಯುವಕ ಬೋದೂರು ಗ್ರಾಮದಲ್ಲಿ ಈಜಾಡಲು ತೆರಳಿದ್ದಾನೆ. 6 ಮಂದಿ ಯುವಕರ ಗುಂಪು ಈಜಾಡುತ್ತಿದ್ದ ವೇಳೆ ಅಪ್ಪಾಜಿಗೌಡ ನೀರಿನಲ್ಲಿ ಮುಳುಗಿ ಮೃತಪಟ್ಟ ದುರಂತ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr9a6503yysje3bgd5gn69d9,imgname-koppal-youth-drowns-1778429137922.png" type="image/jpeg" height="390" width="690"/>
            <content:encoded><![CDATA[&lt;p&gt;17ರ ಹರೆಯದ ಯುವಕ ಬೋದೂರು ಗ್ರಾಮದಲ್ಲಿ ಈಜಾಡಲು ತೆರಳಿದ್ದಾನೆ. 6 ಮಂದಿ ಯುವಕರ ಗುಂಪು ಈಜಾಡುತ್ತಿದ್ದ ವೇಳೆ ಅಪ್ಪಾಜಿಗೌಡ ನೀರಿನಲ್ಲಿ ಮುಳುಗಿ ಮೃತಪಟ್ಟ ದುರಂತ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.&lt;/p&gt;&lt;img&gt;&lt;p&gt;ಬಿಸಿಲ ಬೇಗೆ ಕಾರಣ ಹಲವರು ನದಿ, ಕೆರೆ ಸೇರಿದಂತೆ ಹಲೆವೆಡೆ ಈಜಾಡಲು ತೆರಳುತ್ತಿದ್ದಾರೆ. ಇತ್ತ ಮೇ ತಿಂಗಳ ಕಾರಣ ಹಲವು ನದಿಗಳು, ಕೆರೆಗಳಲ್ಲಿ ನೀರಿನ ಪ್ರಮಾಣವೂ ಕಡಿಮೆ ಇದೆ. ಆದರೆ ಭಾರಿ ಗುಂಡಿ ಪ್ರದೇಶಗಳಲ್ಲಿ ನೀರು ನಿಂತುಕೊಂಡಿರುತ್ತದೆ. ಈ ಆಳವನ್ನು ಅಕಿಯದೇ ಈಜಲು ತೆರಳುತ್ತಿರುವಾಗ ದುರಂತಗಳು ನಡೆಯುತ್ತಿದೆ. ಇದೀಗ ಕೊಪ್ಪಳದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೋದೂರು ಗ್ರಾಮದಲ್ಲಿ ದುರಂತ ನಡೆದಿದೆ.&lt;/p&gt;&lt;img&gt;&lt;p&gt;17ರ ಹರೆಯದ ಅಪ್ಪಾಜಿಗೌಡ ಹಾಗೂ ಇತರ ಐವರು ಸೇರಿ ಈಜಾಡಲು ಹೋಗಿದ್ದಾರೆ. ಸ್ನೇಹಿತರ ಜೊತೆ ಈಜಾಡುತ್ತಿರುವಾಗ ಅಪ್ಪಾಜಿಗೌಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ನೇಹಿತರು ಅಪ್ಪಾಜಿಗೌಡನ ಬದುಕಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.&lt;/p&gt;&lt;img&gt;&lt;p&gt;ಆರು ಸ್ನೇಹಿತರು ಈಡಾಜುತ್ತಿದ್ದಂತೆ ದುರಂತ ನಡೆದಿದೆ. ಅಪ್ಪಾಜಿಗೌಡನ ಏಕಾಏಕಿ ನೀರಿನ ಆಳಕ್ಕೆ ಮುಳುಗಿದ್ದಾನೆ. ಹೀಗಾಗಿ ಇತರ ಸ್ನೇಹಿತರು ಸಹಾಯಕ್ಕಾಗಿ ಕೂಗಿದ್ದಾರೆ. ಸ್ಛಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಇದೇ ವೇಳೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಆರಂಭಿಸಿದೆ.&lt;/p&gt;&lt;img&gt;&lt;p&gt;ನೀರಿನಲ್ಲಿ ಮುಳುಗಿ ಮೃತಪಟ್ಟ ಅಪ್ಪಾಜಿಗೌಡ ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂಧಿಗಳು ಹುಡುಕಾಟ ನಡೆಸುತ್ತಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;&lt;h2&gt;ಅಪ್ಪಾಜಿಗೌಡ ಮೃತದೇಹಕ್ಕಾಗಿ ಹುಡುಕಾಟ&lt;/h2&gt;]]></content:encoded>
            <category>koppal</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/karnataka-districts/young-man-from-koppal-goes-missing-after-drowning-incident-during-swim-apobvq3"/>
        </item>
        <item>
            <title><![CDATA[ಅಂಜನಾದ್ರಿಗೆ ಕೊಟ್ಟ 2.3 ಕೋಟಿ ಮೌಲ್ಯದ ಬಂಗಾರದ ಬಿಲ್ ತೋರಿಸಿದ ಉದ್ಯಮಿ! ದೇವರಿಗೆ ಸಿಕ್ಕಿದ್ದು 28 ಗ್ರಾಂ ಚಿನ್ನ!]]></title>
            <link>https://kannada.asianetnews.com/gallery/karnataka-districts/anjanadri-gold-row-businessman-mahesh-reddy-releases-2-20-crore-bill-after-media-reports-sat-c0tpcqf</link>
            <guid isPermaLink="true">https://kannada.asianetnews.com/gallery/karnataka-districts/anjanadri-gold-row-businessman-mahesh-reddy-releases-2-20-crore-bill-after-media-reports-sat-c0tpcqf</guid>
            <pubDate>Mon, 11 May 2026 17:38:14 +0530</pubDate>
            <description><![CDATA[&lt;p&gt;ಕೊಪ್ಪಳದ ಅಂಜನಾದ್ರಿ ದೇವಸ್ಥಾನಕ್ಕೆ ಉದ್ಯಮಿ ಮಹೇಶ್ ರೆಡ್ಡಿ ನೀಡಿದ್ದ ಚಿನ್ನದ ಆಭರಣಗಳ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಮಾಧ್ಯಮ ವರದಿಗಳ ನಂತರ ಉದ್ಯಮಿ ಬಿಡುಗಡೆ ಮಾಡಿದ ಆಭರಣ ಖರೀದಿಯ ಬಿಲ್, ಅದರ ಮೌಲ್ಯ ಮತ್ತು ದಿನಾಂಕದ ಬಗ್ಗೆಯೇ ಹಲವು ಹೊಸ ಅನುಮಾನಗಳನ್ನು ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3er26tpkn2q5r30z6jdvwa,imgname-anjanadri-hanuman-temple-donation--1--1778232592602.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳದ ಅಂಜನಾದ್ರಿ ದೇವಸ್ಥಾನಕ್ಕೆ ಉದ್ಯಮಿ ಮಹೇಶ್ ರೆಡ್ಡಿ ನೀಡಿದ್ದ ಚಿನ್ನದ ಆಭರಣಗಳ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಮಾಧ್ಯಮ ವರದಿಗಳ ನಂತರ ಉದ್ಯಮಿ ಬಿಡುಗಡೆ ಮಾಡಿದ ಆಭರಣ ಖರೀದಿಯ ಬಿಲ್, ಅದರ ಮೌಲ್ಯ ಮತ್ತು ದಿನಾಂಕದ ಬಗ್ಗೆಯೇ ಹಲವು ಹೊಸ ಅನುಮಾನಗಳನ್ನು ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ಕೊಪ್ಪಳ ಜಿಲ್ಲೆಯಲ್ಲಿರುವ ಹನುಮಂತನ ಜನ್ಮಸ್ಥಳ ಅಂಜನಾದ್ರಿಯ ಆಂಜನೇಯನಿಗೆ ನೀಡಲಾದ ಆಭರಣಗಳ ಮೌಲ್ಯ ಮತ್ತು ಅಸಲಿಯತ್ತಿನ ಬಗ್ಗೆ ಎದ್ದಿದ್ದ ವಿವಾದಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ, ಕೊನೆಗೂ ಆಭರಣ ಖರೀದಿಯ ಬಿಲ್ ಬಿಡುಗಡೆ ಮಾಡಿದ್ದಾರೆ. ಆದರೆ, ಈ ಬಿಲ್ ಹಲವು ಹೊಸ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.&lt;/p&gt;&lt;img&gt;&lt;p&gt;ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಸ್ನೇಹಿತ ಮಹೇಶ್ ರೆಡ್ಡಿ ಅವರು ಮೇ 8 ರಂದು ಅಂಜನಾದ್ರಿ ದೇವಸ್ಥಾನಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಪ್ರಭಾವಳಿ, ಚಕ್ರ ಮತ್ತು ಗದೆಯನ್ನು ದಾನವಾಗಿ ನೀಡಿದ್ದರು. ಆದರೆ ಇವು ಕೇವಲ ಚಿನ್ನದ ಲೇಪಿತ ಆಭರಣಗಳು ಎಂಬ ವರದಿಗಳು ಹರಿದಾಡುತ್ತಿದ್ದವು. ಜಿಲ್ಲಾಡಳಿತ ನೋಟಿಸ್ ನೀಡಿದ್ದರೂ ಬಿಲ್ ನೀಡದ ಉದ್ಯಮಿ, ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರವಾದ ನಂತರ ಇಂದು ಅಧಿಕೃತವಾಗಿ ಬಿಲ್ ಬಿಡುಗಡೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಮಹೇಶ್ ರೆಡ್ಡಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ:&lt;/p&gt;&lt;p&gt;&lt;strong&gt;ಖರೀದಿ ದಿನಾಂಕ: &lt;/strong&gt;28/04/2026 ರಂದು ಹೈದರಾಬಾದ್&zwnj;ನಲ್ಲಿ ಈ ಬಂಗಾರವನ್ನು ಖರೀದಿ ಮಾಡಲಾಗಿದೆ ಎಂದು ಬಿಲ್ ತೋರಿಸುತ್ತಿದೆ.&lt;/p&gt;&lt;p&gt;&lt;strong&gt;ಒಟ್ಟು ಮೌಲ್ಯ: &lt;/strong&gt;2 ಕೋಟಿ 20 ಲಕ್ಷ 42 ಸಾವಿರ (2,20,42,000) ರೂಪಾಯಿಗಳ ಬಿಲ್ ಇದಾಗಿದೆ.&lt;/p&gt;&lt;p&gt;&lt;strong&gt;ಚಿನ್ನದ ಪ್ರಮಾಣ:&lt;/strong&gt; ಹೈದರಾಬಾದ್&zwnj;ನಲ್ಲಿ ಸುಮಾರು 1,400 ಗ್ರಾಂ (1.4 ಕೆಜಿ) ಬಂಗಾರ ಖರೀದಿ ಮಾಡಿರುವುದಾಗಿ ಉದ್ಯಮಿ ಬಿಲ್&zwnj;ನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;p&gt;&lt;strong&gt;ಕಂಪನಿ ಹೆಸರು:&lt;/strong&gt; ಈ ಬಿಲ್ ಎ ಎಮ್ ಆರ್ (AMR) ಕಂಪನಿಯ ಹೆಸರಿನಲ್ಲಿ ಜನರೇಟ್ ಆಗಿದೆ.&lt;/p&gt;&lt;img&gt;&lt;p&gt;ಜಿಲ್ಲಾಡಳಿತವು ಕಳೆದ ಎರಡು ದಿನಗಳಿಂದ ಪದೇ ಪದೇ ನೋಟಿಸ್ ನೀಡಿದ್ದರೂ ಬಿಲ್ ನೀಡದ ಮಹೇಶ್ ರೆಡ್ಡಿ, ಈಗ ದಿಢೀರ್ ಆಗಿ ಬಿಲ್ ಬಿಡುಗಡೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2.50 ಕೋಟಿ ಮೌಲ್ಯದ ಚಿನ್ನ ಎಂದು ಆರಂಭದಲ್ಲಿ ಹೇಳಲಾಗಿತ್ತು, ಆದರೆ ಬಿಲ್&zwnj;ನಲ್ಲಿ 2.20 ಕೋಟಿ ಮೌಲ್ಯ ಉಲ್ಲೇಖವಾಗಿದೆ. ಅಂಜನಾದ್ರಿಯಲ್ಲಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಕೇವಲ 28 ಗ್ರಾಂ ಚಿನ್ನ ಪತ್ತೆಯಾಗಿತ್ತು ಎಂಬ ಮಾಹಿತಿ ಇರುವುದರಿಂದ, ಈ 1,400 ಗ್ರಾಂ ಚಿನ್ನದ ಬಿಲ್ ಮತ್ತು ದೇವಸ್ಥಾನಕ್ಕೆ ನೀಡಿದ ಆಭರಣಗಳಿಗೂ ಸಾಮ್ಯತೆ ಇದೆಯೇ ಎಂಬುದು ಈಗ ತನಿಖೆಯಾಗಬೇಕಿದೆ.&lt;/p&gt;&lt;img&gt;&lt;p&gt;ಮೇ 8 ರಂದು ಕುಟುಂಬ ಸಮೇತರಾಗಿ ಅಂಜನಾದ್ರಿಗೆ ಆಗಮಿಸಿದ್ದ ಮಹೇಶ್ ರೆಡ್ಡಿ, ಅದ್ಧೂರಿಯಾಗಿ ಆಂಜನೇಯನಿಗೆ ಈ ಕಾಣಿಕೆ ಅರ್ಪಿಸಿದ್ದರು. ಸದ್ಯ ಜಿಲ್ಲಾಡಳಿತವು ಈ ಬಿಲ್&zwnj;ಗಳನ್ನು ಪರಿಶೀಲಿಸಿ, ಅವುಗಳ ಸತ್ಯಾಸತ್ಯತೆಯನ್ನು ಪತ್ತೆಹಚ್ಚುವವರೆಗೆ ಈ 'ಚಿನ್ನದ' ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/anjanadri-gold-row-businessman-mahesh-reddy-releases-2-20-crore-bill-after-media-reports-sat-c0tpcqf"/>
        </item>
        <item>
            <title><![CDATA[ತುಂಗಭದ್ರಾ ಡ್ಯಾಂ ಬಳಿ ಟ್ರ್ಯಾಕ್ಟರ್ ದುರಂತ, ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಸಿಎಂ ಸಿದ್ದರಾಮಯ್ಯ ತೀವ್ರ ಸಂತಾಪ]]></title>
            <link>https://kannada.asianetnews.com/karnataka-districts/death-toll-rises-in-tractor-accident-near-tungabhadra-dam-in-karnataka-s-koppal-vijayanagara-gdp/articleshow-ggodops</link>
            <guid isPermaLink="true">https://kannada.asianetnews.com/karnataka-districts/death-toll-rises-in-tractor-accident-near-tungabhadra-dam-in-karnataka-s-koppal-vijayanagara-gdp/articleshow-ggodops</guid>
            <pubDate>Fri, 15 May 2026 21:09:51 +0530</pubDate>
            <description><![CDATA[ಕೊಪ್ಪಳದ ಮುನಿರಾಬಾದ್ ಬಳಿ ತುಂಗಭದ್ರಾ ಸೇತುವೆಯಿಂದ ಟ್ರ್ಯಾಕ್ಟರ್ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಸದಸ್ಯರು ಈ ದುರಂತದಲ್ಲಿ ಮೃತಪಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krp4j47740j74h3srbtxpkcg,imgname-tractor-accident-near-tungabhadra-dam-1778859446503.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ/ವಿಜಯನಗರ:&lt;/strong&gt; ಜಿಲ್ಲೆಯ ಮುನಿರಾಬಾದ್ ಸಮೀಪ ತುಂಗಭದ್ರಾ ಡ್ಯಾಂ ಬಳಿ ಸಂಭವಿಸಿದ ಭೀಕರ ಟ್ರ್ಯಾಕ್ಟರ್ ಅಪಘಾತ ಪ್ರಕರಣದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಮಾಯಾ (16) ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿ ಕೂಡ್ಲಿಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾಳೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಈ ದುರ್ಘಟನೆಯಲ್ಲಿ ಈಗಾಗಲೇ ಆರು ಮಂದಿ ಮೃತಪಟ್ಟಿದ್ದು, ಮಾಯಾ ಸಾವಿನೊಂದಿಗೆ ಒಟ್ಟು ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾಯಾಳಿಗೆ ವೈದ್ಯರು ನಿರಂತರ ಚಿಕಿತ್ಸೆ ನೀಡಿದರೂ ಆಕೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ.&lt;/p&gt;&lt;h2&gt;ಗಾಯಾಳುಗಳಿಗೆ ಮುಂದುವರೆದ ಚಿಕಿತ್ಸೆ&lt;/h2&gt;&lt;p&gt;ಅಪಘಾತದಲ್ಲಿ ಗಾಯಗೊಂಡ ಇತರರಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಮೊದಲು ದಾಖಲಾದ 9 ಮಂದಿಯಲ್ಲಿ ಒಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದೀಗ 8 ಮಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಇನ್ನೂ ಗಂಭೀರವಾಗಿರುವುದರಿಂದ ವೈದ್ಯರು ವಿಶೇಷ ಗಮನ ಹರಿಸಿದ್ದಾರೆ.&lt;/p&gt;&lt;h2&gt;ಸಿಎಂ ಸಿದ್ದರಾಮಯ್ಯ ಸಂತಾಪ&lt;/h2&gt;&lt;p&gt;ಇನ್ನು ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, &quot;ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ ಭಕ್ತಾದಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಒಂದು ತುಂಗಭದ್ರಾ ಸೇತುವೆಯ ಮೇಲಿಂದ ಕೆಳಗೆಬಿದ್ದ ಪರಿಣಾಮ ಚಿಕ್ಕ ಮಕ್ಕಳು ಸೇರಿದಂತೆ ಆರು ಮಂದಿ ದುರಂತ ಸಾವಿಗೀಡಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.&lt;/p&gt;&lt;p&gt;ದುರ್ಘಟನೆಯ ಬಗ್ಗೆ ಸಂಸದರಾದ ತುಕಾರಾಂ ಅವರೊಂದಿಗೆ ಮಾತನಾಡಿ, ಮಾಹಿತಿ ಪಡೆದುಕೊಂಡಿದ್ದೇನೆ. ಮೃತರೆಲ್ಲರೂ ಬಡ ಕುಟುಂಬಕ್ಕೆ ಸೇರಿದವರು, ಈ ಸಾವುಗಳು ಅವರ ಕುಟುಂಬದವರನ್ನು ಮತ್ತಷ್ಟು ಕಷ್ಟಕ್ಕೆ ನೂಕುವ ಹಿನ್ನೆಲೆಯಲ್ಲಿ, ಮಾನವೀಯ ನೆಲೆಯಲ್ಲಿ ಮೃತರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.&quot; ಎಂದಿದ್ದಾರೆ&lt;/p&gt;&lt;h2&gt;ಘಟನೆ ಹಿನ್ನೆಲೆ&lt;/h2&gt;&lt;p&gt;ಟ್ರ್ಯಾಕ್ಟರ್&zwnj;ನಲ್ಲಿ ಒಟ್ಟು 19 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಸೇತುವೆಯಿಂದ ಕೆಳಗೆ ಬಿದ್ದು ದುರಂತ ಸಂಭವಿಸಿತ್ತು. ಒಂದು ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದೀಗ ಒಟ್ಟು 7 ಮಂದಿ ಮೃತಪಟ್ಟಿದ್ದು ಎಲ್ಲರೂ ಒಂದೇ ಕುಟುಂಬದ ಸದಸ್ಯರು. ಕೆಂಚಪ್ಪ (35), ಮಹಾಂತೇಶ್ (18), ಭರತ್ (1), ಸವಿತಾ (12), ಮಾಂತೇಶ್, ಮಾಯಾ (16) ಹಾಗೂ ಗೌರಮ್ಮ ಮೃತರೆಲ್ಲರೂ ಸಂಡೂರು ತಾಲೂಕಿನ ಯಶವಂತನಗರ ಹಾಗೂ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮ ಮತ್ತು ಭೈರದೇರಗುಡ್ಡ ಗ್ರಾಮದ ನಿವಾಸಿಗಳಾಗಿದ್ದಾರೆ.&lt;/p&gt;&lt;p&gt;ಹುಲಿಗೆಮ್ಮ ದೇವಸ್ಥಾನಕ್ಕೆಂದು ಕುಟುಂಬದವರೆಲ್ಲ ಬ್ಯಾಟಿ ( ದೇವರು) ಮಾಡಲು ತೆರಳುತ್ತಿದ್ದ ವೇಳೆ ಈ ದುರಂತ ನಡೆದಿದೆ.ಕೃಷಿ ಚಟುವಟಿಕೆಗಾಗಿ ಬಳಕೆಯಾಗಬೇಕಾದ ವಾಹನದಲ್ಲಿ ಮನುಷ್ಯರನ್ನು ಹೊತ್ತೊಯ್ದು ಈಗ ಈ ದುರಂತ ನಡೆದಿದೆ.ಅಪಘಾತದಲ್ಲಿ ಗಾಯಗೊಂಡವರನ್ನು ಹೊಸಪೇಟೆ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ ಭಕ್ತಾದಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಒಂದು ತುಂಗಭದ್ರಾ ಸೇತುವೆಯ ಮೇಲಿಂದ ಕೆಳಗೆಬಿದ್ದ ಪರಿಣಾಮ ಚಿಕ್ಕ ಮಕ್ಕಳು ಸೇರಿದಂತೆ ಆರು ಮಂದಿ ದುರಂತ ಸಾವಿಗೀಡಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.ದುರ್ಘಟನೆಯ ಬಗ್ಗೆ ಸಂಸದರಾದ ತುಕಾರಾಂ&hellip; pic.twitter.com/63q7VpZaAi&lt;/p&gt;&lt;p&gt;&mdash; Siddaramaiah (@siddaramaiah) May 15, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/death-toll-rises-in-tractor-accident-near-tungabhadra-dam-in-karnataka-s-koppal-vijayanagara-gdp/articleshow-ggodops"/>
        </item>
        <item>
            <title><![CDATA[ಗಂಗಾವತಿಯಲ್ಲಿ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದ ಆಕಳು: 5 ಗಂಟೆಗಳ ಬಳಿಕ ಆಗಿದ್ದೇನು?]]></title>
            <link>https://kannada.asianetnews.com/karnataka-districts/gangavathi-cow-falls-into-septic-tank-rescue-operation-gvd/articleshow-k6ltchb</link>
            <guid isPermaLink="true">https://kannada.asianetnews.com/karnataka-districts/gangavathi-cow-falls-into-septic-tank-rescue-operation-gvd/articleshow-k6ltchb</guid>
            <pubDate>Sun, 17 May 2026 23:46:14 +0530</pubDate>
            <description><![CDATA[&lt;p&gt;ಸೆಪ್ಟಿಕ್ ಟ್ಯಾಂಕ್&zwnj;ನಲ್ಲಿ ಕುಸಿದು ಬಿದ್ದು ಆಕಳು ನರಳುತ್ತಿರುವ ಘಟನೆ ನಗರದ ಕುಮಾರರಾಮ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಕುಮಾರರಾಮ ಬಡಾವಣೆಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krvfjrwhdhgapmexe24ez2qs,imgname-vjjv-1779038774161.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.17): &lt;/strong&gt;ಸೆಪ್ಟಿಕ್ ಟ್ಯಾಂಕ್&zwnj;ನಲ್ಲಿ ಕುಸಿದು ಬಿದ್ದು ಆಕಳು ನರಳುತ್ತಿರುವ ಘಟನೆ ನಗರದ ಕುಮಾರರಾಮ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಕುಮಾರರಾಮ ಬಡಾವಣೆಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಸರಿಯಾದ ರೀತಿಯಲ್ಲಿ ಮುಚ್ಚದೆ ಇರುವದರಿಂದ ಕಲ್ಮಠಕ್ಕೆ ಸೇರಿದ್ದ ಆಕಳು ಟ್ಯಾಂಕ್ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಕುಸಿದಿದೆ. ಪರಿಣಾಮವಾಗಿ ಆಕಳು ಸುಮಾರು ಐದು ಗಂಟೆಗಳ ಕಾಲ ಟ್ಯಾಂಕ್&zwnj;ನಲ್ಲಿ ನರಳುತ್ತಿರುವುದು ಸಾಮಾನ್ಯವಾಗಿತ್ತು.&lt;/p&gt;&lt;p&gt;ಕುಮಾರರಾಮ ಬಡಾವಣೆಯ ಜನರು ನಗರಸಭೆಯವರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಸಿಬ್ಬಂದಿಗಳು ಜೆಸಿಬಿ ಯಂತ್ರದಿಂದ ಟ್ಯಾಂಕ್ ಒಡೆದು ಹಗ್ಗದಿಂದ ಆಕಳನ್ನು ಮೇಲಕ್ಕೆ ಎತ್ತುವ ಕಾರ್ಯಾಚರಣೆ ಮಾಡಿದರು. ನಗರಸಭೆಯಿಂದ ಕೈಗೊಂಡ ಬಹುತೇಕ ಸಾರ್ವಜನಿಕ ಶೌಚಾಲಯದ ಟ್ಯಾಂಕ್&zwnj;ಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚದೆ ಇರುವುದೇ ಇಂತಹ ಅವಘಡಕ್ಕೆ ಕಾರಣವಾಗಿವೆ. ನಗರದ 3ನೇ ವಾರ್ಡಿನಲ್ಲಿಯು ಸಹ ಒಳ ಚರಂಡಿ ಮಂಡಳಿಯವರು ಕೈಗೊಂಡ ಯುಜಿಡಿ ಟ್ಯಾಂಕ್&zwnj;ಗಳು ಬಹುತೇಕವಾಗಿ ತೆರೆದಿವೆ.&lt;/p&gt;&lt;h2&gt;&lt;strong&gt;ರಸ್ತೆಗಳು ಸಹ ಅಧೋಗತಿಯತ್ತ&lt;/strong&gt;&lt;/h2&gt;&lt;p&gt;ಎಷ್ಟೋ ಜನರು ಬೈಕ್&zwnj;ಗಳಲ್ಲಿ ಚರಂಡಿಯಲ್ಲಿ ಬಿದ್ದು ಗಾಯಗೊಂಡ ಘಟನೆ ಮಾಸುವ ಮುನ್ನವೆ ಮತ್ತೇ ಕುಮಾರರಾಮ ಬಡಾವಣೆಯಲ್ಲಿಈ ಘಟನೆ ನಡೆದಿದೆ. ಒಳಚರಂಡಿಗಳು ಸರಿಯಾದ ರೀತಿಯಲ್ಲಿ ಕಾಮಗಾರಿಯಾಗದ ಕಾರಣ ರಸ್ತೆಗಳು ಸಹ ಅಧೋಗತಿಯತ್ತ ಸಾಗಿವೆ ಎಂಬ ಅರೋಪ ಕೇಳಿ ಬರುತ್ತದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದರಿಂದ ನಗರಸಭೆ ವಿರುದ್ಧ ನಾಗರಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/gangavathi-cow-falls-into-septic-tank-rescue-operation-gvd/articleshow-k6ltchb"/>
        </item>
        <item>
            <title><![CDATA[ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು: ಪಟ್ಟಣಶೆಟ್ಟಿ ಟೀಕೆ]]></title>
            <link>https://kannada.asianetnews.com/karnataka-districts/gangavathi-congress-internal-conflict-somanath-patnashetty-gvd/articleshow-m5b0q18</link>
            <guid isPermaLink="true">https://kannada.asianetnews.com/karnataka-districts/gangavathi-congress-internal-conflict-somanath-patnashetty-gvd/articleshow-m5b0q18</guid>
            <pubDate>Thu, 07 May 2026 19:09:42 +0530</pubDate>
            <description><![CDATA[&lt;p&gt;ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ ಎಂದು ಕಾಂಗ್ರೆಸ್ ಪಕ್ಷದವರೇಯಾಗಿರುವ ಮುಖಂಡ ಹಾಗು ನ್ಯಾಯವಾದಿ ಸೋಮನಾಥ ಪಟ್ಟಣಶೆಟ್ಟಿ ಟೀಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1amp5ttxxwmqt5kw1zgtst,imgname-whatsapp-image-2026-05-07-at-6.46.42-pm-1778161178810.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.07): &lt;/strong&gt;ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ ಎಂದು ಕಾಂಗ್ರೆಸ್ ಪಕ್ಷದವರೇಯಾಗಿರುವ ಮುಖಂಡ ಹಾಗು ನ್ಯಾಯವಾದಿ ಸೋಮನಾಥ ಪಟ್ಟಣಶೆಟ್ಟಿ ಟೀಕಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರುಗಳ ಒಗ್ಗಟ್ಟಿನ ಕೊರತೆ ಕಾಣುತ್ತದೆ.&lt;/p&gt;&lt;p&gt;ಇದರಿಂದ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಇದೇಯೋ ಇಲ್ಲವೋ ಎನ್ನುವಂತಾಗಿದೆ ಎಂದು ತಿಳಿಸಿದ್ದಾರೆ. ಗಂಗಾವತಿ ನಗರದಲ್ಲಿ ಕಾಂಗ್ರೆಸ್ ಪಕ್ಷದವರೇ ಆಗಿರುವ ಇಬ್ಬರು ಮಾಜಿ ಸಚಿವರು, ಮಾಜಿ ಶಾಸಕರು ಇದ್ದರು. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ ಎಂದು ದೂರಿದ್ದಾರೆ.&lt;/p&gt;&lt;p&gt;ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮತ್ತು ಕೊಪ್ಪಳ ಸಂಸದರು ಕಾಂಗ್ರೆಸ್ ಮತ್ತು ಸಚಿವರು ಕಾಂಗ್ರೆಸ್ ಇದ್ದರು ಸಹ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಕುಂಠಿತವಾಗಿದೆ ಎಂದು ದೂರಿರುವ ಅವರು ಆದರೆ ತಾವು ಪಕ್ಷದ ಸಂಘಟನೆಗೆ ಶ್ರಮಿಸುತ್ತೆನೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಭಿನ್ನಾಭಿಪ್ರಾಯ ಬಿಡಿ&lt;/strong&gt;&lt;/h2&gt;&lt;p&gt;ಈ ಹಿಂದೆ ಕಾಂಗ್ರೆಸ್ ಸರಕಾರ ಬಡವರ ಹಿತ ಕಾಪಾಡಿದ ಇತಿಹಾಸ ಇದೆ. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇದೆ ಮುಖಂಡರುಗಳು ಭಿನ್ನಾಭಿಪ್ರಾಯ ಬಿಟ್ಟು ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರ ಹಿತ ಕಾಪಾಡಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ. ಮುಂಬರುವ ಎಲ್ಲಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮುಖಂಡರು ಪಕ್ಷದ ಶ್ರೇಯೋಭಿವೃದ್ಧಿಗೆ ದುಡಿಯಬೇಕಾಗಿದೆ ಎಂದರು.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/gangavathi-congress-internal-conflict-somanath-patnashetty-gvd/articleshow-m5b0q18"/>
        </item>
        <item>
            <title><![CDATA[ಗಂಗಾವತಿ ರೆಸಾರ್ಟ್ ಈಜುಕೊಳದಲ್ಲಿ ಗಲಾಟೆ: ಮಹಿಳಾ ಪೇದೆ ಸೇರಿ 8 ಜನರಿಗೆ ಗಾಯ]]></title>
            <link>https://kannada.asianetnews.com/crime/gangavathi-resort-swimming-pool-fight-8-injured-gvd/articleshow-ovbuez6</link>
            <guid isPermaLink="true">https://kannada.asianetnews.com/crime/gangavathi-resort-swimming-pool-fight-8-injured-gvd/articleshow-ovbuez6</guid>
            <pubDate>Sun, 17 May 2026 23:26:27 +0530</pubDate>
            <description><![CDATA[&lt;p&gt;ತಾಲೂಕಿನ ರೆಸಾರ್ಟ್&zwnj;ವೊಂದರ ಈಜುಕೊಳದಲ್ಲಿ ಕ್ಷುಲಕ ಕಾರಣಕ್ಕೆ 8 ಜನರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ ಕೊಪ್ಪಳದ ಮಹಿಳಾ ಪೇದೆ ಮೇಲೆ ಹಲ್ಲೆ ನಡೆದಿದ್ದು, ಅವರ ಚಿನ್ನದ ಸರ ನಾಪತ್ತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krvdy4gdnedyrgpk74aczcg6,imgname-vj-1779037049357.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.17): &lt;/strong&gt;ತಾಲೂಕಿನ ರೆಸಾರ್ಟ್&zwnj;ವೊಂದರ ಈಜುಕೊಳದಲ್ಲಿ ಕ್ಷುಲಕ ಕಾರಣಕ್ಕೆ 8 ಜನರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ ಕೊಪ್ಪಳದ ಮಹಿಳಾ ಪೇದೆ ಮೇಲೆ ಹಲ್ಲೆ ನಡೆದಿದ್ದು, ಅವರ ಚಿನ್ನದ ಸರ ನಾಪತ್ತೆಯಾಗಿದೆ.&lt;/p&gt;&lt;p&gt;&lt;strong&gt;ನಡೆದಿದ್ದೇನು: &lt;/strong&gt;ತಾಲೂಕಿನ ಚಿಕ್ಕ ಜಂತಕಲ್ ಗ್ರಾಮದಿಂದ ರೆಸಾರ್ಟ್&zwnj;ಗೆ ಬಂದಿದ್ದ ಮಹಿಳೆಯರು ಸೇರಿದಂತೆ 8 ಜನರ ಗುಂಪು ಈಜುಗೊಳದಲ್ಲಿ ಇಳಿದಿದ್ದಾರೆ. ಇದೇ ಸಮಯದಲ್ಲಿ ಗಂಗಾವತಿಯಿಂದ ಬಂದಿದ್ದ ಕೆಲ ಯುವಕರು ನೀರಿನ ಬಾಟಲು ಎಸೆದಾಡುವ ಪ್ರಸಂಗ ನಡೆದು ವಿಕೋಪಕ್ಕೆ ಹೋಗಿದೆ. ನಂತರ ಅಂಜನಾದ್ರಿಯ ಬಳಿಯಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮಿಸಲಾಯಿಸಿದ್ದಾರೆ. ಇದರಲ್ಲಿ ಪೇದೆ ಮೇಲೆ ಹಲ್ಲೆ ನಡೆದಿದ್ದು, ಚಿನ್ನದ ಸರ ಕಿತ್ತುಕೊಂಡ್ಡಿದ್ದಾರೆ. ಸದ್ಯ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;p&gt;ಪ್ರಭಾರಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ, ಗ್ರಾಮೀಣ ಪೋಲಿಸ್ ಠಾಣೆ ಸಿಪಿಐ ರಂಗಪ್ಪ ದೊಡ್ಮನಿ,ಗಂಗಾವತಿ ನಗರ ಪೋಲಿಸ್ ಠಾಣೆ ಪಿಐ ಪ್ರಕಾಶ ಯಾತನೂರ ನಗರದ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ, ವಿಚಾರಣೆ ಕೈಗೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ಬಿಗಿ ಭದ್ರತೆ&lt;/strong&gt;&lt;/h2&gt;&lt;p&gt;ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುಗಳನ್ನು ವಿಚಾರಿಸಲು ಜನರು ಬರುತ್ತಿದ್ದಂತೆಯೇ ಗುಂಪುಗಳನ್ನು ಪೋಲಿಸರು ಚದುರಿಸಿದ್ದಾರೆ.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/crime/gangavathi-resort-swimming-pool-fight-8-injured-gvd/articleshow-ovbuez6"/>
        </item>
        <item>
            <title><![CDATA[ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಣ್ಣ ಚಿತ್ರಗಾರ ಇನ್ನಿಲ್ಲ: ಕಲಾಲೋಕಕ್ಕೆ ಅಪಾರ ನಷ್ಟ]]></title>
            <link>https://kannada.asianetnews.com/karnataka-districts/state-award-winning-sculptor-venkanna-chitragara-death-gvd/articleshow-pdho11o</link>
            <guid isPermaLink="true">https://kannada.asianetnews.com/karnataka-districts/state-award-winning-sculptor-venkanna-chitragara-death-gvd/articleshow-pdho11o</guid>
            <pubDate>Fri, 08 May 2026 19:49:32 +0530</pubDate>
            <description><![CDATA[&lt;p&gt;ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗು ಕಲಾವಿದ, ಖ್ಯಾತ ಶಿಲ್ಪಿ ವೆಂಕಣ್ಣ ಚಿತ್ರಗಾರ ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ನಿಧನರಾದರು. ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಮೃತರಿಗೆ 76 ವರ್ಷಗಳಾಗಿದ್ದವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3z9nzqqzrjqa64kw4e35bs,imgname-xxjjn-1778249947127.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.08): &lt;/strong&gt;ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗು ಕಲಾವಿದ, ಖ್ಯಾತ ಶಿಲ್ಪಿ ವೆಂಕಣ್ಣ ಚಿತ್ರಗಾರ ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ನಿಧನರಾದರು. ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಮೃತರಿಗೆ 76 ವರ್ಷಗಳಾಗಿದ್ದವು. ಮೂವರು ಪುತ್ರಿಯರು, ಇಬ್ಬರು ಪುತ್ರರರು ಸೇರಿದಂತೆ ಅಪಾರ ಬಳಗ ಇದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಪ್ರಸಿದ್ಧ ದೇವಸ್ಥಾನಗಳ ರಥ( ತೇರುಗಳ)ಗಳನ್ನು ನಿರ್ಮಾಣ ಮಾಡಿದ ಕೀರ್ತಿ ವೆಂಕಣ್ಣ ಅವರಿಗೆ ಸಲ್ಲುತ್ತದೆ.&lt;/p&gt;&lt;p&gt;ಕಟ್ಟಿಗೆಯ ಕೆಲಸದಲ್ಲಿ ನೈಪುಣ್ಯತೆ, ಗಣೇಶ ಮೂರ್ತಿಗಳ ತಯಾರಿ. ಗೊಂಬೆಗಳ ತಯಾರಿಯಲ್ಲಿ ಚಾಪು ಮೂಡಿಸಿದ್ದ ವೆಂಕಣ್ಣ ಅವರಿಗೆ 2023-24 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ನಿಧನಕ್ಕೆ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. ಇವರ ಅಂತ್ಯಕ್ರಿಯೆ ಮೇ.9 ಶನಿವಾರ ಬೆಳಿಗ್ಗೆ 10 ಗಂಟೆಗೆ ಗಂಗಾವತಿಯಲ್ಲಿ ನಡೆಯಲಿದೆ.&lt;/p&gt;&lt;h2&gt;&lt;strong&gt;ಹೆಮ್ಮೆಯ ಶಿಲ್ಪಿ&lt;/strong&gt;&lt;/h2&gt;&lt;p&gt;ಗಂಗಾವತಿಯ ವೆಂಕಣ್ಣ ಚಿತ್ರಗಾರ ಅವರು ಸುಮಾರು ಐವತ್ತು ವರ್ಷಗಳಿಂದ ರಥ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 100ಕ್ಕೂ ಅಧಿಕ ರಥಗಳು ಇವರ ಕೈಯ್ಯಲ್ಲಿ ಅರಳಿವೆ. ಇವರು ನಿರ್ಮಿಸಿರುವ ರಥಗಳು ವಿಜಯನಗರ ಶೈಲಿಯ ವಾಸ್ತುಪ್ರಕಾರ ಹೊಂದಿದ್ದು, ಕೇವಲ ಕೊಪ್ಪಳ ಜಿಲ್ಲೆಗೆ ಮಾತ್ರ ಸೀಮಿತವಾಗದೆ ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಕಾಣಬಹುದು.&lt;/p&gt;&lt;p&gt;ಪರಿಸರಸ್ನೇಹಿ ಸುಂದರವಾದ ಮಣ್ಣಿನ ಮೂರ್ತಿಗಳನ್ನೂ ಸಹ ಮಾಡುವಲ್ಲಿ ಪ್ರಸಿದ್ಧಿ ಹೊಂದಿರುವ ಇವರು ಅನೇಕ ಗ್ರಾಮದೇವತೆಗಳು, ಪಲ್ಲಕ್ಕಿ, ಪೂಜಾ ಮಂಟಪ, ದೇವರ ತೊಟ್ಟಿಲು, ಛತ್ರಿ, ಸಿಂಹಾಸನ ಇತ್ಯಾದಿ ಕರಕುಶಲ ಕೆಲಸಗಳನ್ನು ಮಾಡುತ್ತಾರೆ. ಅನೇಕ ಸಂಘ ಸಂಸ್ಥೆಗಳು ಇವರ ಕಲಾನೈಪುಣ್ಯತೆಯನ್ನು ಗುರುತಿಸಿ, ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿದೆ. &lsquo;ರಥರಚನ ಕೋವಿದ&rsquo; ಹಾಗೂ &lsquo;ಕದಂಬ&rsquo;ಪ್ರಶಸ್ತಿ ಇವರದ್ದಾಗಿವೆ.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/state-award-winning-sculptor-venkanna-chitragara-death-gvd/articleshow-pdho11o"/>
        </item>
        <item>
            <title><![CDATA[ಹೈದರಾಬಾದ್ ಉದ್ಯಮಿ ಅಂಜನಾದ್ರಿಗೆ ಅರ್ಪಿಸಿದ ಚಿನ್ನದ ಕಿರೀಟ, ಗದೆ ಅಸಲಿಯತ್ತು ಬಯಲು]]></title>
            <link>https://kannada.asianetnews.com/karnataka-districts/koppal-anjanadri-betta-crown-mace-that-hyderabad-businessman-gave-to-anjanadri-were-only-gold-plated-copper-mrq/articleshow-pr38mqs</link>
            <guid isPermaLink="true">https://kannada.asianetnews.com/karnataka-districts/koppal-anjanadri-betta-crown-mace-that-hyderabad-businessman-gave-to-anjanadri-were-only-gold-plated-copper-mrq/articleshow-pr38mqs</guid>
            <pubDate>Mon, 11 May 2026 05:51:47 +0530</pubDate>
            <description><![CDATA[ಗಂಗಾವತಿಯ ಕಿಷ್ಕಿಂದಾ ಅಂಜನಾದ್ರಿಗೆ ಹೈದರಾಬಾದ್ ಉದ್ಯಮಿಯೊಬ್ಬರು ಸಮರ್ಪಿಸಿದ್ದ ಆಭರಣಗಳು ಚಿನ್ನದ್ದಲ್ಲ, ಬದಲಿಗೆ ಚಿನ್ನಲೇಪಿತ ತಾಮ್ರ ಎಂದು ದೃಢಪಟ್ಟಿದೆ. ಲೋಹ ತಜ್ಞರ ಪರೀಕ್ಷೆ ನಂತರ, ದೇವಾಲಯದ ಆಡಳಿತಾಧಿಕಾರಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ದಾನಿಗಳಿಂದ ಸಾಮಗ್ರಿಗಳ ಮೌಲ್ಯದ ರಸೀದಿ ಕೇಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kra6e4jfw75f65ppekjk8g74,imgname-anhanadri-1778458759759.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಂಗಾವತಿ (ಕೊಪ್ಪಳ): &amp;nbsp;ತಾಲೂಕಿನ ಐತಿಹಾಸಿಕ ಕಿಷ್ಕಿಂದಾ ಅಂಜನಾದ್ರಿಯ ಆಂಜನೇಯಸ್ವಾಮಿಗೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ಕುಟುಂಬಸ್ಥರು ಸಮರ್ಪಣೆ ಮಾಡಿರುವ ಪ್ರಭಾವಳಿ, ಕಿರೀಟ, ಗದೆ ಸೇರಿದಂತೆ 12 ಸಾಮಗ್ರಿಗಳು ಚಿನ್ನಲೇಪಿತ ತಾಮ್ರದಿಂದ ಕೂಡಿದ್ದಾಗಿವೆ. ಎಲ್ಲವೂ ಚಿನ್ನದಿಂದ ಕೂಡಿಲ್ಲ ಎಂದು ಕಿಷ್ಕಿಂದಾ ಅಂಜನಾದ್ರಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಭಾವಳಿ ಗದೆ, ಕಿರೀಟ ಇತರ ಪೂಜಾ ಸಾಮಗ್ರಿಗಳು&lt;/strong&gt;&lt;/h2&gt;&lt;p&gt;ಕಿಷ್ಕಿಂದಾ ಅಂಜನಾದ್ರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ದೇವಾಲಯಕ್ಕೆ ಸಮರ್ಪಣೆಯಾಗಿರುವ ಸಾಮಾನುಗಳನ್ನು ಲೋಹ ತಜ್ಞರಿಂದ ಪರೀಕ್ಷೆ ಮಾಡಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹೈದರಾಬಾದ್ ಮೂಲದ ಎಎಂಆರ್ ಕಂಪನಿಯ ಮಹೇಶ ರೆಡ್ಡಿ ಹಾಗೂ ಕುಟುಂಬಸ್ಥರು ಮೇ 8ರಂದು ಪ್ರಭಾವಳಿ ಗದೆ, ಕಿರೀಟ ಇತರ ಪೂಜಾ ಸಾಮಗ್ರಿಗಳನ್ನು ಸಮರ್ಪಣೆ ಮಾಡಿದ್ದರು.&amp;nbsp;&lt;/p&gt;&lt;h3&gt;&lt;strong&gt;ತಾಮ್ರಕ್ಕೆ ಚಿನ್ನದ ತಗಡು ಲೇಪನ&lt;/strong&gt;&lt;/h3&gt;&lt;p&gt;ಒಂದೂವರೆ ಕೇಜಿ ಚಿನ್ನದಿಂದ ಮಾಡಲಾದ ಅಂದಾಜು ₹2.30 ಕೋಟಿ ಮೌಲ್ಯದ ಆಭರಣಗಳು ಇವು ಎಂದು ಹೇಳಲಾಗಿತ್ತು. ಆದರೆ, ಇವು ಚಿನ್ನಲೇಪಿತ ತಾಮ್ರದಿಂದ ಕೂಡಿವೆ ಎಂದು ಲೋಹ ಪರಿಶೋಧಕರು ದೃಢಪಡಿಸಿದ್ದು, ತಾಮ್ರಕ್ಕೆ ಚಿನ್ನದ ತಗಡು ಲೇಪನ ಮಾಡಲಾಗಿದೆ. ಎಲ್ಲವೂ ಚಿನ್ನದ ಸಾಮಗ್ರಿ ಅಲ್ಲ. ದಾನ ನೀಡಿದ ದಾನಿಗಳನ್ನು ಸಂಪರ್ಕಿಸಿ ಆಂಜನೇಯನಿಗೆ ಸಮರ್ಪಣೆ ಮಾಡಿದ ಸಾಮಗ್ರಿಗಳ ಮೌಲ್ಯ ಹಾಗೂ ರಸೀದಿಯನ್ನು ದೇವಾಲಯದ ಕಮಿಟಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಶೀಘ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-anjanadri-betta-crown-mace-that-hyderabad-businessman-gave-to-anjanadri-were-only-gold-plated-copper-mrq/articleshow-pr38mqs"/>
        </item>
        <item>
            <title><![CDATA[ವಿಜಯನಗರ: ಸೇತುವೆಯಿಂದ ಟ್ರ್ಯಾಕ್ಟರ್ ಬಿದ್ದು 6 ಮಂದಿ ಸಾವು, ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ, 5ಲಕ್ಷ ರೂ ಪರಿಹಾರ]]></title>
            <link>https://kannada.asianetnews.com/gallery/karnataka-districts/many-killed-in-tragic-tractor-crash-at-munirabad-near-tungabhadra-dam-in-vijayanagara-gdp-pzi835g</link>
            <guid isPermaLink="true">https://kannada.asianetnews.com/gallery/karnataka-districts/many-killed-in-tragic-tractor-crash-at-munirabad-near-tungabhadra-dam-in-vijayanagara-gdp-pzi835g</guid>
            <pubDate>Fri, 15 May 2026 19:52:09 +0530</pubDate>
            <description><![CDATA[&lt;p&gt;ಹೊಸಪೇಟೆ ಸಮೀಪದ ಮುನಿರಾಬಾದ್&zwnj;ನಲ್ಲಿ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ. ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸರ್ಕಾರ ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krnyatvvcfr0rzestagb610x,imgname-vijayanagara-road-accident-1778852916091.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೊಸಪೇಟೆ ಸಮೀಪದ ಮುನಿರಾಬಾದ್&zwnj;ನಲ್ಲಿ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ. ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸರ್ಕಾರ ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ.&amp;nbsp;&lt;/p&gt;&lt;img&gt;&lt;p&gt;ವಿಜಯನಗರ: ಹೊಸಪೇಟೆ ಸಮೀಪದ ಟಿಬಿ ಡ್ಯಾಂ ಬಳಿಯ ಮುನಿರಾಬಾದ್&zwnj; ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಕನಿಷ್ಠ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಮನಕಲಕುವಂತಿದೆ. ಟ್ರ್ಯಾಕ್ಟರ್&zwnj;ನಲ್ಲಿ ಒಟ್ಟು 19 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಸರ್ಕಾರದಿಂದ ಇದೀಗ ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.&lt;/p&gt;&lt;img&gt;&lt;p&gt;ಮೃತರಲ್ಲಿ ಒಂದೇ ಕುಟುಂಬದ ಸದಸ್ಯರು ಸೇರಿದಂತೆ ಮಹಿಳೆಯರು ಮತ್ತು ಒಂದು ವರ್ಷದ ಮಗು ಸೇರಿರುವುದು ದುರ್ಘಟನೆಯ ಗಂಭೀರತೆಯನ್ನು ಹೆಚ್ಚಿಸಿದೆ. ಮೃತಪಟ್ಟ 6 ಮಂದಿ ಗುರುತು ಪತ್ತೆಯಾಗಿದ್ದು, ಕೆಂಚಪ್ಪ (35), ಮಹಾಂತೇಶ್ (18), ಭರತ್ (1), ಸವಿತಾ (12), ಮಾಂತೇಶ್ ಹಾಗೂ ಗೌರಮ್ಮ ಮೃತರೆಲ್ಲರೂ ಸಂಡೂರು ತಾಲೂಕಿನ ಯಶವಂತನಗರ ಹಾಗೂ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಇನ್ನು ಈ ಟ್ರ್ಯಾಕ್ಟರ್ ಅಪಘಾತದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಮಹಾಲಕ್ಷ್ಮೀ ಎಂಬಾಕೆ ಪಾರಾಗಿದ್ದಾರೆ. ಆದರೆ ಆಕೆಯ ತಾಯಿ ಗೀತಾ ಹಾಗೂ ಸಹೋದರ ಭರತ್ ಮೃತಪಟ್ಟಿದ್ದಾರೆ. ಇವರು ಕೂಡ್ಲಿಗಿ ತಾಲೂಕಿನ ಭೈರದೇರಗುಡ್ಡ ಗ್ರಾಮದವರು.&lt;/p&gt;&lt;img&gt;&lt;p&gt;ಹುಲಿಗೆಮ್ಮ ದೇವಸ್ಥಾನಕ್ಕೆ ಬ್ಯಾಟಿ ( ದೇವರು) ಮಾಡಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಟ್ರ್ಯಾಕ್ಟರ್ ಮೂಲತಃ ಕೃಷಿ ಚಟುವಟಿಕೆಗಾಗಿ ಬಳಕೆಯಾಗಬೇಕಾದ ವಾಹನವಾಗಿದ್ದು, ಇದರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಸುವುದು ಅಪಾಯಕಾರಿ ಆದರೂ ಈ ವಾಹನದಲ್ಲಿ 19 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿ ತಿಳಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಹೊಸಪೇಟೆ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ&lt;/p&gt;&lt;img&gt;&lt;p&gt;ಹೊಸಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರ ಎದುರು ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮವರನ್ನು ಕಳೆದುಕೊಂಡ ನೋವಿನಲ್ಲಿ ಕುಟುಂಬ ಸದಸ್ಯರು ಒಬ್ಬರನ್ನೊಬ್ಬರು ಅಪ್ಪಿಕೊಂಡು ರೋದಿಸುತ್ತಿರುವ ದೃಶ್ಯಗಳು ಮನಕಲಕುವಂತಿವೆ. ಶವಾಗಾರದ ಎದುರು ತಂದೆ, ಮಗನ ಆಕ್ರಂದನ ಹೇಳ ತೀರದು. ಹೆಂಡತಿ, ಮಗನನ್ನ ಕಳೆದುಕೊಂಡ ಗಂಡ ಮಲ್ಲೇಶ್ ಹಾಗೂ ಮತ್ತೊರ್ವ ಮಗ ಶವಾಗಾರದ ಎದುರು ಒಬ್ಬರಿಗೊಬ್ಬರು ತಬ್ಬಿ ಕೊಂಡು ರೋಧಿಸ್ತಿರುವುದು ಅಲ್ಲಿ ನೆರೆದಿದ್ದವರ ಕಣ್ಣಲ್ಲೂ ನೀರು ತರಿಸಿತು&lt;/p&gt;&lt;img&gt;&lt;p&gt;ಘಟನೆಯ ಮಾಹಿತಿ ತಿಳಿದ ತಕ್ಷಣ ಬಳ್ಳಾರಿ ವಲಯ ಐಜಿಪಿ ಡಾ. ಹರ್ಷಾ ಹಾಗೂ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳ್ಳಾರಿ ವಲಯ ಐಜಿಪಿ ಡಾ. ಹರ್ಷಾ ಗಾಯಾಳುಗಳ ಆರೋಗ್ಯ&zwnj; ವಿಚಾರಣೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದರು. ಹೊಸಪೇಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಕೊಪ್ಪಳ ಎಸ್ಪಿ ಎಲ್.&zwnj;ಅರಸಿದ್ದಿ, ವಿಜಯನಗರ ಎಸ್ಪಿ ಜಾಹ್ನವಿ ಕೂಡ ಭೇಟಿ ನೀಡಿದರು.&lt;/p&gt;&lt;img&gt;&lt;p&gt;ಟಿಬಿ ಡ್ಯಾಂ ಬಳಿ ಟ್ರ್ಯಾಕ್ಟರ್ ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಸರ್ಕಾರಿ&zwnj; ಆಸ್ಪತ್ರೆಗೆ ಸಂಸದ ತುಕಾರಾಂ ಭೇಟಿ ಗಾಯಗೊಂಡವರ ಆರೋಗ್ಯ&zwnj; ವಿಚಾರಿಸಿ ಸಾಂತ್ವನ ಹೇಳಿದರು. ಬಳಿಕ ಮಾತಾಡಿದ ಸಂಸದ ತುಕಾರಾಂ ಸಿಎಂ ಸಿದ್ದರಾಮಯ್ಯ ಅವರ ಬಳಿ ಮಾತಾಡಿದ್ದೇನೆ. ಮೃತ ಪ್ರತಿಯೊಬ್ಬರ ಕುಟುಂಬಕ್ಕೂ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಜೊತೆಗೆ ಗಾಯಾಳುಗಳ ವೆಚ್ಚವನ್ನ ನಾನೇ ಸಂಪೂರ್ಣವಾಗಿ ಬರಿಸುತ್ತೇನೆ ಎಂದರು.&amp;nbsp;&lt;/p&gt;&lt;img&gt;&lt;p&gt;ಇದೇ ವೇಳೆ ಘಟನೆ ಬಗ್ಗೆಯೂ ಮಾಹಿತಿ ನೀಡಿದ ಅವರು, &amp;nbsp;ಸಂಡೂರಿನಿಂದ ಕೂಡ್ಲಿಗಿ ಬಂದು ಅಲ್ಲಿಂದ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಗಾಡಿ ಗುದ್ದಿದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಘಟನೆಯಲ್ಲಿ ಟ್ರ್ಯಾಕ್ಟರ್ ಡ್ರೈವರ್ ಸಹಿತ ಆರು ಜನ ಸಾವನ್ನಪ್ಪಿದ್ದಾರೆ. 19 ಜನ ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು . ಅಷ್ಟೇ ಅಲ್ಲದೇ ಟ್ರ್ಯಾಕ್ಟರ್ ಇರುವುದು ಕೃಷಿ ಚಟುವಟಿಕೆ ಬಳಕೆಗೆ. ಜನಸಾಮಾನ್ಯರು ಈ ಬಗ್ಗೆ ಅರಿತುಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್, RTO ಸಭೆ ಕರೆದು ಸೂಚನೆ ನೀಡಲಾಗುವುದು ಎಂದರು. ಈ ಘಟನೆ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್&zwnj;ಗಳನ್ನು ಪ್ರಯಾಣಿಕರ ಸಾಗಣೆಗೆ ಬಳಸುವುದು ಎಷ್ಟು ಅಪಾಯಕಾರಿಯಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ದುರ್ಘಟನೆ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/many-killed-in-tragic-tractor-crash-at-munirabad-near-tungabhadra-dam-in-vijayanagara-gdp-pzi835g"/>
        </item>
        <item>
            <title><![CDATA[ಅಂಜನಾದ್ರಿ ಹನುಮ ದೇವರಿಗೆ ₹2.5 ಕೋಟಿ ಮೌಲ್ಯದ ಬಂಗಾರದ ಕಿರೀಟ, ಗದೆ: ಎ.ಎಂ.ಆರ್ ಗ್ರೂಪ್ ಮಹೇಶ್ ರೆಡ್ಡಿ ಅರ್ಪಣೆ!]]></title>
            <link>https://kannada.asianetnews.com/gallery/state/hampi-near-anjanadri-hill-hanuman-gold-crown-mace-offering-amr-group-mahesh-reddy-sat-q5a71b3</link>
            <guid isPermaLink="true">https://kannada.asianetnews.com/gallery/state/hampi-near-anjanadri-hill-hanuman-gold-crown-mace-offering-amr-group-mahesh-reddy-sat-q5a71b3</guid>
            <pubDate>Thu, 07 May 2026 21:30:28 +0530</pubDate>
            <description><![CDATA[&lt;p&gt;ಕೊಪ್ಪಳದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿಗೆ, ಎ.ಎಂ.ಆರ್ ಗ್ರೂಪ್&zwnj;ನ ಅಧ್ಯಕ್ಷರಾದ ಡಾ. ಎ. ಮಹೇಶ್ ರೆಡ್ಡಿ ಅವರು 2.50 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ, ಗದೆ ಹಾಗೂ ಪ್ರಭಾವಳಿಯನ್ನು ಹರಕೆಯಾಗಿ ಸಮರ್ಪಿಸಿದ್ದಾರೆ. ಈ ಅಂಗವಾಗಿ ಮೇ 8 ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1hn3dp6sw6w2adph3pxmne,imgname-anjanadri-temple-janardhana-reddy-gold-gift-1778168532406.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿಗೆ, ಎ.ಎಂ.ಆರ್ ಗ್ರೂಪ್&zwnj;ನ ಅಧ್ಯಕ್ಷರಾದ ಡಾ. ಎ. ಮಹೇಶ್ ರೆಡ್ಡಿ ಅವರು 2.50 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ, ಗದೆ ಹಾಗೂ ಪ್ರಭಾವಳಿಯನ್ನು ಹರಕೆಯಾಗಿ ಸಮರ್ಪಿಸಿದ್ದಾರೆ. ಈ ಅಂಗವಾಗಿ ಮೇ 8 ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.&lt;/p&gt;&lt;img&gt;&lt;p&gt;&lt;strong&gt;ಕೊಪ್ಪಳ (ಮೇ 07): ಶ್ರೀ&lt;/strong&gt;ರಾಮನ ಭಂಟ ಹನುಮಂತನ ಜನ್ಮಸ್ಥಳವಾಗಿ ವಿಶ್ವವಿಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟದಲ್ಲಿ ಭಕ್ತಿಯ ಪರಾಕಾಷ್ಠೆ ಕಂಡುಬಂದಿದೆ. ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಗೆ ಭಕ್ತರೊಬ್ಬರು ಸುಮಾರು 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಹರಕೆ ತೀರಿಸಿದ್ದಾರೆ.&lt;/p&gt;&lt;img&gt;&lt;p&gt;ಭಾರತದ ಖ್ಯಾತ ಕನ್ಸ್ಟ್ರಕ್ಷನ್ ಸಂಸ್ಥೆಯಾದ ಎ.ಎಂ.ಆರ್ (AMR) ಗ್ರೂಪ್&zwnj;ನ ಅಧ್ಯಕ್ಷರಾದ ಡಾ. ಎ. ಮಹೇಶ್ ರೆಡ್ಡಿ ಹಾಗೂ ಅವರ ಕುಟುಂಬದವರು ಈ ಧಾರ್ಮಿಕ ಕಾರ್ಯಕ್ಕೆ ಮುಂದಾಗಿದ್ದಾರೆ. ಶ್ರೀ ಸ್ವಾಮಿಯ ಮೇಲಿನ ಅತೀವ ಭಕ್ತಿಯಿಂದಾಗಿ ಅವರು ಸುಮಾರು 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾದ ಸುಂದರ ಬಂಗಾರದ ಕಿರೀಟ, ಗದೆ ಹಾಗೂ ಭವ್ಯವಾದ ಪ್ರಭಾವಳಿಯನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ. ಈ ಆಭರಣಗಳು ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಮತ್ತಷ್ಟು ಕಳೆಯನ್ನು ನೀಡಲಿವೆ.&lt;/p&gt;&lt;img&gt;&lt;p&gt;ಈ ಕಾಣಿಕೆ ಅರ್ಪಣೆಯ ಅಂಗವಾಗಿ ಮೇ 8 ರಂದು ಬೆಳಿಗ್ಗೆಯಿಂದಲೇ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಶ್ರೀ ದೇವರಿಗೆ ಅರ್ಪಿಸುವ ಮೊದಲು ಹಸಿರು ಬೆಟ್ಟದ ಮಡಿಲಲ್ಲಿ ಹವನ, ಹೋಮ ಹಾಗೂ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ವೇದಮೂರ್ತಿಗಳ ಸಾರಥ್ಯದಲ್ಲಿ ನಡೆಯುವ ಈ ಪೂಜಾ ಕಾರ್ಯಕ್ರಮಗಳಲ್ಲಿ ಮಹೇಶ್ ರೆಡ್ಡಿ ಅವರ ಕುಟುಂಬದವರು ಪಾಲ್ಗೊಳ್ಳಲಿದ್ದಾರೆ.&lt;/p&gt;&lt;img&gt;&lt;p&gt;ಈ ಮಹತ್ವದ ಧಾರ್ಮಿಕ ಸಮಾರಂಭದಲ್ಲಿ ಗಂಗಾವತಿ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ದನರೆಡ್ಡಿ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಆಸಕ್ತಿ ಹೊಂದಿರುವ ಶಾಸಕರು, ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಅಂಜನಾದ್ರಿ ಬೆಟ್ಟಕ್ಕೆ ದೇಶ-ವಿದೇಶಗಳಿಂದ ಭಕ್ತರ ಆಗಮನ ಹೆಚ್ಚಾಗಿದೆ. ದೇವಸ್ಥಾನಕ್ಕೆ ಬಂಗಾರದ ಆಭರಣಗಳು ಅರ್ಪಣೆಯಾಗುತ್ತಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ. ಹನುಮ ಜನ್ಮಸ್ಥಳದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ಇಂತಹ ಕಾರ್ಯಗಳು ಪ್ರವಾಸೋದ್ಯಮ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ಮಹತ್ವ ಪಡೆದಿವೆ.&lt;/p&gt;&lt;img&gt;&lt;p&gt;ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿಗೆ ಬಂಗಾರದ ಮೆರುಗು ಬಂದಿರುವುದು ಹನುಮ ಮಾಲೆಧಾರಿಗಳು ಹಾಗೂ ಭಕ್ತ ಸಮೂಹಕ್ಕೆ ಹಬ್ಬದ ಸಡಗರ ತಂದಿದೆ. ಇನ್ನುಮುಂದೆ ದೇವಸ್ಥಾನಕ್ಕೆ ಭದ್ರತೆಯನ್ನೂ ಹೆಚ್ಚಿಸಲಾಗುತ್ತದೆ.&lt;/p&gt;]]></content:encoded>
            <category>koppal</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/hampi-near-anjanadri-hill-hanuman-gold-crown-mace-offering-amr-group-mahesh-reddy-sat-q5a71b3"/>
        </item>
        <item>
            <title><![CDATA[Miyazaki mango: ಕೊಪ್ಪಳದಲ್ಲಿ ₹2.5 ಲಕ್ಷ ಬೆಲೆಯ ಮಿಯಾಜಾಕಿ ಮಾವು ಕೇವಲ ₹3 ಸಾವಿರಕ್ಕೆ!]]></title>
            <link>https://kannada.asianetnews.com/state/koppal-miyazaki-mango-worth-rs-2-5-lakh-per-kg-sold-for-rs-300-rav/articleshow-sbkiggw</link>
            <guid isPermaLink="true">https://kannada.asianetnews.com/state/koppal-miyazaki-mango-worth-rs-2-5-lakh-per-kg-sold-for-rs-300-rav/articleshow-sbkiggw</guid>
            <pubDate>Wed, 13 May 2026 06:18:03 +0530</pubDate>
            <description><![CDATA[ಕೊಪ್ಪಳದಲ್ಲಿ ಆಯೋಜಿಸಲಾದ ಹಣ್ಣು ಮಾರಾಟ ಮೇಳದಲ್ಲಿ, ಜಪಾನ್&zwnj;ನಲ್ಲಿ ₹2.5 ಲಕ್ಷಕ್ಕೆ ಮಾರಾಟವಾಗುವ ದುಬಾರಿ ಮಿಯಾಜಾಕಿ ಮಾವು ಕೇವಲ ₹3 ಸಾವಿರಕ್ಕೆ ಲಭ್ಯವಿದೆ. ಸ್ಥಳೀಯ ರೈತರು ಈ ಮಾವನ್ನು ಯಶಸ್ವಿಯಾಗಿ ಬೆಳೆದಿದ್ದು, ಮೊದಲ ದಿನವೇ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krdvwxdw0n1r8m6b0b30qc8r,imgname-karnataka-farmer-grows-world-s-costliest-miyazaki-mango--1--1778581927356.jpg" type="image/jpeg" height="390" width="690"/>
            <content:encoded><![CDATA[&lt;p&gt;₹2.5 ಲಕ್ಷ ಬೆಲೆಯ ಮಿಯಾಜಾಕಿ ಮಾವು ₹3 ಸಾವಿರಕ್ಕೆ ಮಾರಾಟ!&lt;/p&gt;&lt;p&gt;&lt;strong&gt;ಕೊಪ್ಪಳ (ಮೇ.13):&lt;/strong&gt; ನಗರದಲ್ಲಿ ನಡೆಯುತ್ತಿರುವ ಹಣ್ಣು ಮಾರಾಟ ಮೇಳದ ಪ್ರದರ್ಶನದಲ್ಲಿ ಜಪಾನ್&zwnj; ದೇಶದಲ್ಲಿ ಕೇಜಿಗೆ ₹2.5 ಲಕ್ಷ ಮೌಲ್ಯವಿರುವ ಮಿಯಾಜಾಕಿ ಮಾವು ಈಗ ಇಲ್ಲಿ ಕೇವಲ ₹3 ಸಾವಿರಕ್ಕೆ ಕೆಜಿಯಂತೆ ಮಾರಾಟವಾಗುತ್ತಿದೆ.&lt;/p&gt;&lt;p&gt;ಭಾರತದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವಾಗ ಇಲ್ಲಿನ ರೈತರು ಪ್ರಯೋಗಾರ್ಥ ಬೆಳೆದು ಯಶಸ್ವಿಯಾಗಿದ್ದಾರೆ. ಜಿಲ್ಲಾದ್ಯಂತ ಸುಮಾರು 5-6 ಎಕರೆ ಪ್ರದೇಶದಲ್ಲಿ ನಾಲ್ಕಾರು ರೈತರು ಈ ಮಾವು ಬೆಳೆದು ಯಶಸ್ವಿಯಾಗಿದ್ದಾರೆ. ಜಿಲ್ಲಾ ತೋಟಗಾರಿಕಾ ಇಲಾಖೆಯಿಂದ ನಗರದಲ್ಲಿ ಏರ್ಪಡಿಸಿರುವ ಹಣ್ಣು ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಮಿಯಾಜಾಕಿ ಮಾವನ್ನು ಕೆಜಿಗೆ ₹3 ಸಾವಿರದಂತೆ ಮಾರಾಟಕ್ಕಿಟ್ಟಿದ್ದಾರೆ.&lt;/p&gt;&lt;p&gt;ನಾಗಪ್ಪ ಹಿರೇಬಗನಾಳ ಎನ್ನುವ ರೈತ ಬೆಳೆದಿದ್ದ 25 ಕೇಜಿ ಮಾವು ಮೊದಲ ದಿನವೇ ಬುಕ್ ಆಗಿರುವುದು ವಿಶೇಷ. ಆದರೆ, ಜಪಾನ್&zwnj; ದೇಶದಲ್ಲಿ ₹2.5 ಲಕ್ಷಕ್ಕೆ ಕೇಜಿಯಂತೆ ಮಾರಾಟವಾಗುತ್ತಿದೆ ಎನ್ನುವ ಮಿಯಾಜಾಕಿ ಇಲ್ಲಿ ಕೇವಲ ₹3 ಸಾವಿರಕ್ಕೆ ಮಾರಾಟ ಆಗುತ್ತಿರುವುದು ವಿಶೇಷ.&lt;/p&gt;&lt;p&gt;ಕೊಪ್ಪಳ ನಗರದ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಹಣ್ಣು ಮಾರಾಟ ಮೇಳದಲ್ಲಿ ಮಿಯಾಜಾಕಿ ಮಾವು.&lt;/p&gt;]]></content:encoded>
            <category>koppal</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/koppal-miyazaki-mango-worth-rs-2-5-lakh-per-kg-sold-for-rs-300-rav/articleshow-sbkiggw"/>
        </item>
        <item>
            <title><![CDATA[ಕೊಪ್ಪಳ ಹೋಟೆಲ್ ನಲ್ಲಿ ಅಪ್ರಾಪ್ತೆಯೊಂದಿಗೆ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ, ಭುಗಿಲೆದ್ದ ವಿವಾದ]]></title>
            <link>https://kannada.asianetnews.com/karnataka-districts/minor-girl-found-with-youth-in-koppal-hotel-sparks-tension-police-detain-8-probe-underway-gdp/articleshow-ssyfg1v</link>
            <guid isPermaLink="true">https://kannada.asianetnews.com/karnataka-districts/minor-girl-found-with-youth-in-koppal-hotel-sparks-tension-police-detain-8-probe-underway-gdp/articleshow-ssyfg1v</guid>
            <pubDate>Thu, 07 May 2026 13:53:46 +0530</pubDate>
            <description><![CDATA[ಕೊಪ್ಪಳದ ಹೋಟೆಲ್ ಒಂದರಲ್ಲಿ ಮುಸ್ಲಿಂ ಯುವಕನೊಂದಿಗೆ ಅಪ್ರಾಪ್ತ ಹಿಂದೂ ಯುವತಿ ಪತ್ತೆಯಾದ ಘಟನೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಈ ಸಂಬಂಧ ಭಜರಂಗ ದಳದ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕ್ರಮಕ್ಕೆ ಆಗ್ರಹಿಸಿವೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr0rehr6e1n6cjgyzh7t5gqq,imgname-koppal-hotel-1778142103302.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ: &lt;/strong&gt;ಕೊಪ್ಪಳದಲ್ಲಿ ಮತ್ತೊಂದು ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಅಪ್ರಾಪ್ತ ಹಿಂದೂ ಯುವತಿಯ ಜೊತೆ ಮುಸ್ಲಿಂ ಯುವಕ ಹರ್ಷಾ ಹೋಟೆಲ್ ನಲ್ಲಿ ಪತ್ತೆಯಾಗಿದ್ದು, ಪ್ರಶ್ನೆ ಮಾಡಿದ ಭಜರಂಗ ದಳದ ಕಾರ್ಯಕರ್ತರ ಮೇಲೆ ಎಫ್ ಐ ಆರ್ ದಾಖಲು ಮಾಡಿರುವ ಆರೋಪ ಕೇಳಿಬಂದಿದೆ. ಶಮೀರ್ ಎಂಬಾತನ ಜೊತೆ ಅಪ್ರಾಪ್ತ ಹಿಂದೂ ಯುವತಿ ಪತ್ತೆಯಾದಳು. ಅಪ್ರಾಪ್ತೆಯನ್ನ ಕರೆತಂದಿರೋ ಬಗ್ಗೆ ಭಜರಂಗದಳದ ಕಾರ್ಯಕರ್ಯರು ಪ್ರಶ್ನೆ ಮಾಡಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಭಜರಂಗದಳದ 8 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿವಿಧ &amp;nbsp;ಆಯಾಮಗಳಲ್ಲಿ ವಿಚಾರಣೆ ನಡೆಯುತ್ತಿದ್ದು, ಹಿಂದೂಪರ ಸಂಘಟನೆಗಳು ಮತ್ತು ಪೊಲೀಸರ ನಡುವೆ ವಾಗ್ವಾದ ಹೆಚ್ಚಾಗಿದೆ.&lt;/p&gt;&lt;p&gt;ಮಾಹಿತಿ ಪ್ರಕಾರ, ಶಮೀರ್ ಎಂಬ ಯುವಕನೊಂದಿಗೆ ಅಪ್ರಾಪ್ತೆಯೊಬ್ಬಳು ಹರ್ಷಾ ಹೋಟೆಲ್&zwnj;ನಲ್ಲಿ ಇದ್ದ ವೇಳೆ, ಕೆಲವು ಭಜರಂಗ ದಳದ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಅಪ್ರಾಪ್ತೆಯನ್ನ ಹೋಟೆಲ್&zwnj;ಗೆ ಕರೆತಂದ ಹಿನ್ನೆಲೆ ಬಗ್ಗೆ ಪ್ರಶ್ನೆ ಕೇಳಿದ ವೇಳೆ ವಾಗ್ವಾದ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಬಳಿಕ ಪರಿಸ್ಥಿತಿ ತೀವ್ರಗೊಂಡಿದ್ದು, ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.&lt;/p&gt;&lt;h2&gt;ಭಜರಂಗ ದಳದ ಎಂಟು ಮಂದಿ ಕಾರ್ಯಕರ್ತರ ಬಂಧನ&lt;/h2&gt;&lt;p&gt;ಈ ಸಂಬಂಧವಾಗಿ ಪೊಲೀಸರು ಭಜರಂಗ ದಳದ ಎಂಟು ಮಂದಿ ಕಾರ್ಯಕರ್ತರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು, ಅಪ್ರಾಪ್ತೆಯೊಂದಿಗೆ ಇದ್ದ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗಿತ್ತು ಎಂದು ಆಗ್ರಹ ವ್ಯಕ್ತಪಡಿಸಿವೆ. ಅವರ ಪ್ರಕಾರ, ಯುವಕನ ಮೇಲೆ ಕ್ರಮ ಕೈಗೊಳ್ಳದೇ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದು ಅನ್ಯಾಯಕರ ಕ್ರಮ ಎಂದು ಆರೋಪಿಸಲಾಗಿದೆ.&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ವಿಎಚ್&zwnj;ಪಿ, ಭಜರಂಗ ದಳ ಹಾಗೂ ಬಿಜೆಪಿ ಕಾರ್ಯಕರ್ತರು ಕೊಪ್ಪಳ ನಗರ ಪೊಲೀಸ್ ಠಾಣೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಠಾಣೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ ಪರಿಣಾಮ ಕೆಲವು ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.&lt;/p&gt;&lt;h2&gt;ಪೊಲೀಸರಿಂದ ಹೆಚ್ಚಿನ ತನಿಖೆ&lt;/h2&gt;&lt;p&gt;ಈ ವೇಳೆ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್&zwnj;ಪಿ) ಡಾ. ರಾಮ್ ಎಲ್. ಅರಸಿದ್ದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಸಿದರು. ಜೊತೆಗೆ ಎಂಎಲ್&zwnj;ಸಿ ಹೇಮಲತಾ ನಾಯಕ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಕೂಡ ಠಾಣೆಗೆ ಭೇಟಿ ನೀಡಿ, ಆರೋಪಿಯಾಗಿರುವ ಶಮೀರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.&lt;/p&gt;&lt;p&gt;ಪ್ರಸ್ತುತ ಪ್ರಕರಣದ ಕುರಿತಾಗಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ಅಪ್ರಾಪ್ತೆಯ ಸುರಕ್ಷತೆ ಹಾಗೂ ಕಾನೂನು ಪ್ರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/minor-girl-found-with-youth-in-koppal-hotel-sparks-tension-police-detain-8-probe-underway-gdp/articleshow-ssyfg1v"/>
        </item>
        <item>
            <title><![CDATA[ಕನಕಗಿರಿ ಉತ್ಸವಕ್ಕೆ ಸಿದ್ಧತೆ ಕೈಗೊಳ್ಳಿ: ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಟ್ನಾಳ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/kanakagiri-utsav-2026-preparation-meeting-gangavathi-gvd/articleshow-u0o49vk</link>
            <guid isPermaLink="true">https://kannada.asianetnews.com/karnataka-districts/kanakagiri-utsav-2026-preparation-meeting-gangavathi-gvd/articleshow-u0o49vk</guid>
            <pubDate>Wed, 06 May 2026 18:26:58 +0530</pubDate>
            <description><![CDATA[&lt;p&gt;ಸಮೀಪದ ಐತಿಹಾಸಿಕ ಕನಕಗಿರಿಯಲ್ಲಿ ಮೇ.16 ಮತ್ತು 17 ರಂದು ನಡೆಯುವ ಕನಕಗಿರಿ ಉತ್ಸವದ ಸಿದ್ದತೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಿರಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqynsn884vwzmgx6j6a7569k,imgname-cvjm-1778072212744.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.06): &lt;/strong&gt;ಸಮೀಪದ ಐತಿಹಾಸಿಕ ಕನಕಗಿರಿಯಲ್ಲಿ ಮೇ.16 ಮತ್ತು 17 ರಂದು ನಡೆಯುವ ಕನಕಗಿರಿ ಉತ್ಸವದ ಸಿದ್ದತೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಿರಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು. ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಮಾತನಾಡಿದ ಅವರು, ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉತ್ಸವ ಅಚರಣಾ ಸಮಿತಿಗಳೊಂದಿಗೆ ಮೂರನೆ ಸಭೆ ನಡೆಸಲಾಗುತ್ತಿದೆ. ಅಧಿಕಾರಿಗಳಿಗೆ ಆಯಾ ಕಾರ್ಯಗಳ ಬಗ್ಗೆ ಪುನಃ ಪುನಃ ನೆನಪು ಮಾಡಿ ಕಾರ್ಯ ನಿರ್ವಹಣೆಯನ್ನು ವೇಗಗೊಳಿಸಲಾಗುತ್ತಿದೆ.&lt;/p&gt;&lt;p&gt;ಅಧಿಕಾರಿಗಳು ತಮಗೆ ವಹಿಸಿದ ಕಾರ್ಯಗಳ ಬಗ್ಗೆ ಅರಿತು ಗೊಂದಲಕ್ಕೆ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಸಮಿತಿವಾರು ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಅತಿಥಿಗಳ ಸ್ವಾಗತ, ವಸತಿ, ಊಟ, ಸಾರಿಗೆ, ಗಣ್ಯರಿಗೆ ಕಲಾವಿದರಿಗೆ ಸನ್ಮಾನ ಸಾಮಗ್ರಿ ಹಾಗು ಶಿಷ್ಠಾಚಾರದ ಬಗ್ಗೆ ಗಮನ ಹರಿಸಲು ಸಹಾಯಕ ಆಯುಕ್ತರ ಅಧ್ಯಕ್ಷತೆಯ ಸ್ವಾಗತ ಸಮಿತಿಗೆ ಸೂಚನೆ ನೀಡಿದರು. ಆಯ್ಕೆ ಆಗುವ ಕಲಾವಿದರಿಗೆ ಗೊಂದಲಕ್ಕೆ ಅವಕಾಶವಿಲ್ಲದಂತೆ ಸಂಭಾವನೆ ಪಾವತಿಗೆ ಕ್ರಮ ವಹಿಸಲು ಸಾಂಸ್ಕೃತಿಕ ಸಮಿತಿಗೆ ಸೂಚನೆ ನೀಡಿದರು.&lt;/p&gt;&lt;p&gt;ಜನಸಂದಣಿ ನಿಯಂತ್ರಣದ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಶಿಸ್ತುಬದ್ದ ಬ್ಯಾರಿಕೆಡಿಂಗ್ ವ್ಯವಸ್ಥೆ ಮಾಡಲು ವೇದಿಕೆ ಸಮಿತಿಗೆ ಸೂಚನೆ ನೀಡಿದರು. ಆಹಾರ ತಯಾರಿಕೆ ಸ್ಥಳದಲ್ಲಿ ಶುಚಿತ್ವ ಇರಬೇಕು. ಆಹಾರ ಶುಚಿ ಮತ್ತು ರುಚಿಯ ಬಗ್ಗೆ ಗಮನ ಕೊಡಬೇಕು. ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ತಂಡಗಳ ರಚಿಸಿ ಆಹಾರ ಪೂರೈಕೆಗೆ ಕ್ರಮ ವಹಿಸಲು ಆಹಾರ ಸಮಿತಿಗೆ ಸೂಚನೆ ನೀಡಿದರು. ಆಯಾ ಕ್ರೀಡಾ ತಂಡಗಳ ವಿವರ, ಪಾವತಿಸಬೇಕಾದ ಸಂಭಾವನೆ ಎಲ್ಲವೂ ಪಾರದರ್ಶಕವಾಗಿರಬೇಕು ಎಂದು ಕ್ರೀಡಾ ಸಮಿತಿಗೆ ಸೂಚನೆ ನೀಡಿದರು.&lt;/p&gt;&lt;p&gt;ಕಲಾವಿದರು, ಕ್ರೀಡಾಪಟುಗಳು ಹಾಗೂ ಪತ್ರಕರ್ತರಿಗೆ ರೂಮು ಕಾಯ್ದಿರಿಸುವ ಎಲ್ಲಾ ಕಡೆಗೆ ನೋಡಲ್ ಅಧಿಕಾರಿಗಳನ್ನು ಹಾಕಬೇಕು ಎಂದು ವಸತಿ ಸಮಿತಿಗೆ ನಿರ್ದೇಶನ ನೀಡಿದರು. ಪ್ರಚಾರ ಸಾಮಗ್ರಿ ಬ್ಯಾನರ್ ಪೋಸ್ಟರಗಳನ್ನು ಪಡೆದು ವ್ಯಾಪಕ ಪ್ರಚಾರ ಕಾರ್ಯ ನಡೆಸಲು ಪ್ರಚಾರ ಸಮಿತಿಗೆ ಸೂಚನೆ ನೀಡಿದರು. ಹೆಲಿಕ್ಯಾಪ್ಟರ್ ರೈಡಿಂಗ್ ಕಾರ್ಯವು ಸುರಕ್ಷಿತ ಕ್ರಮಗಳೊಂದಿಗೆ ನಡೆಸಲು ಭದ್ರತಾ ಸಮಿತಿ ಮತ್ತು ಖಾಸಗಿ ಎಜೆನ್ಸಿಗೆ ಸೂಚನೆ ನೀಡಿದರು.&lt;/p&gt;&lt;h2&gt;&lt;strong&gt;ಸಮಿತಿಗೆ ಸೂಚನೆ&lt;/strong&gt;&lt;/h2&gt;&lt;p&gt;ಉತ್ಸವ ವೇದಿಕೆಯ ವ್ಯಾಪ್ತಿಯಲ್ಲಿ ಒಪಿಡಿ ತೆರೆಯಲು, ಕನಕಗಿರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಔಷಧಿ ದಾಸ್ತಾನು ಮಾಡಲು, ದಿನವಿಡೀ ಆರೋಗ್ಯ ಸೇವೆ ಒದಗಿಸಲು ಮತ್ತು ಅಂಬ್ಯುಲೆನ್ಸ್ ವಾಹನ ಸಿದ್ದವಿಟ್ಟುಕೊಳ್ಳಲು ಆರೋಗ್ಯ ನೈರ್ಮಲೀಕರಣ ಸಮಿತಿಗೆ ಸೂಚನೆ ನೀಡಿದರು. ಕನಕಗಿರಿ ಗ್ರಾಮದಲ್ಲಿ ಸ್ವಚ್ಚತೆ ಮತ್ತು ವೇದಿಕೆ ಪ್ರದೇಶದಲ್ಲಿ ಮರಮ್ ಹಾಕಿಸಲು, ಕನಕಗಿರಿ ಉತ್ಸವ ಸ್ಥಳ ಸಂಪರ್ಕ ರಸ್ತೆ ದುರಸ್ತಿ ಮಾಡಲು, ಸಾರ್ವಜನಿಕರಿಗೆ ನೀರಿಗಾಗಿ ನಳಗಳ ಮತ್ತು ತಾತ್ಕಾಲಿಕ ಶೌಚಾಲಯಗಳ ನಿರ್ಮಾಣಕ್ಕೆ ಮತ್ತು ವೇದಿಕೆಯ ಸ್ಥಳ ಲೆವೆಲ್ ಮಾಡಲು ಮೂಲಭೂತ ಸೌಕರ್ಯ ಸಮಿತಿಗೆ ಸೂಚನೆ ನೀಡಿದರು.&lt;/p&gt;&lt;p&gt;ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿ ಜೆ ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರ, ಕನಕಗಿರಿ ತಹಸೀಲ್ದಾರ ವಿಶ್ವನಾಥ ಮುರಡಿ, ತಾಪಂ ಇಓ ಕೆ. ರಾಜಶೇಖರ ಇದ್ದರು.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/kanakagiri-utsav-2026-preparation-meeting-gangavathi-gvd/articleshow-u0o49vk"/>
        </item>
        <item>
            <title><![CDATA[ವಿಜಯನಗರದ ಅಪರೂಪದ ಶಾಸನ ಹಂಪಾದೇವನಹಳ್ಳಿ ಮತ್ತೆ, ಶ್ರೀಕೃಷ್ಣದೇವರಾಯನ ಮರೆತ ಅಧ್ಯಾಯ ಮತ್ತೆ ಮರುಕಳಿಸಿತು]]></title>
            <link>https://kannada.asianetnews.com/karnataka-districts/rare-16th-century-vijayanagara-inscription-discovered-in-karnataka-koppal-district-gdp/articleshow-y1k33p4</link>
            <guid isPermaLink="true">https://kannada.asianetnews.com/karnataka-districts/rare-16th-century-vijayanagara-inscription-discovered-in-karnataka-koppal-district-gdp/articleshow-y1k33p4</guid>
            <pubDate>Thu, 07 May 2026 12:55:42 +0530</pubDate>
            <description><![CDATA[ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿಯಲ್ಲಿ 16ನೇ ಶತಮಾನಕ್ಕೆ ಸೇರಿದ ವಿಜಯನಗರ ಸಾಮ್ರಾಜ್ಯದ ಅಪರೂಪದ, ಅಪ್ರಕಟಿತ ಶಾಸನವೊಂದು ಪತ್ತೆಯಾಗಿದೆ. ಈ ಶಾಸನವು ಗ್ರಾಮವನ್ನು 'ಕೃಷ್ಣರಾಯಪುರ' ಎಂದು ಮರುನಾಮಕರಣ ಮಾಡಿ ದಾನ ನೀಡಿದ ಬಗ್ಗೆ ಉಲ್ಲೇಖಿಸಿದ್ದು, ಇದು ಶ್ರೀಕೃಷ್ಣದೇವರಾಯರ ಕಾಲದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr0mve1r320kbnddjsqyh505,imgname-rare-16th-century-vijayanagara-inscription-discovered-in-karnataka-s-koppal-district-1778138331192.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಂಪ್ಲಿ: &lt;/strong&gt;ವಿಜಯನಗರ ಸಾಮ್ರಾಜ್ಯದ ಇತಿಹಾಸಕ್ಕೆ ಮತ್ತೊಂದು ಮಹತ್ವದ ಪುರಾವೆ ಸೇರ್ಪಡೆಯಾಗಿದ್ದು, ತಾಲೂಕಿನ ಹಂಪಾದೇವನಹಳ್ಳಿಯಲ್ಲಿ 16ನೇ ಶತಮಾನದ ಅಪರೂಪದ ಶಾಸನವೊಂದು ಪತ್ತೆಯಾಗಿದೆ. ಗ್ರಾಮದ ಪಶ್ಚಿಮ ಭಾಗದಲ್ಲಿರುವ ನಾರಿಹಳ್ಳ ದಂಡೆಯ ಸಮೀಪ ಈ ಅಪ್ರಕಟಿತ ಶಾಸನ ಬೆಳಕಿಗೆ ಬಂದಿದ್ದು, ಇತಿಹಾಸ ಸಂಶೋಧಕರು ಹಾಗೂ ಇತಿಹಾಸಾಸಕ್ತರಲ್ಲಿ ಭಾರೀ ಕುತೂಹಲ ಮೂಡಿಸಿದೆ.&lt;/p&gt;&lt;p&gt;ಈ ಐತಿಹಾಸಿಕ ಶಾಸನವನ್ನು ಕೊಪ್ಪಳ ತಾಲೂಕಿನ ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆ. ಅಂಜಿನಯ್ಯ ಪತ್ತೆಹಚ್ಚಿದ್ದು, ಅದರ ಪ್ರಾಥಮಿಕ ಅಧ್ಯಯನ ಹಾಗೂ ಓದು ಕಾರ್ಯವನ್ನು ನಡೆಸಿದ್ದಾರೆ. ಕನ್ನಡ ಲಿಪಿಯಲ್ಲಿ ಕೆತ್ತಲಾಗಿರುವ ಈ ಶಾಸನವು ವಿಜಯನಗರ ಸಾಮ್ರಾಜ್ಯದ ಸುವರ್ಣಯುಗವನ್ನು ಪ್ರತಿಬಿಂಬಿಸುತ್ತಿದ್ದು, ವಿಶೇಷವಾಗಿ ಸಾಮ್ರಾಟ ಶ್ರೀಕೃಷ್ಣದೇವರಾಯರ ಕಾಲಘಟ್ಟಕ್ಕೆ ಸೇರಿದದ್ದಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;ಹಂಪಾದೇವನಹಳ್ಳಿ - ಕೃಷ್ಣರಾಯಪುರ&lt;/h2&gt;&lt;p&gt;ಶಾಸನದ ವಿಷಯವಸ್ತು ಅತ್ಯಂತ ಮಹತ್ವದ್ದಾಗಿದ್ದು, ಹಂಪಾದೇವನಹಳ್ಳಿಯನ್ನು &ldquo;ಕೃಷ್ಣರಾಯಪುರ&rdquo; ಎಂದು ಮರುನಾಮಕರಣ ಮಾಡಿ ದಾನ ನೀಡಿರುವ ಉಲ್ಲೇಖ ಅದರಲ್ಲಿ ಕಂಡುಬಂದಿದೆ. ಇದು ವಿಜಯನಗರ ಸಾಮ್ರಾಜ್ಯದ ಆಡಳಿತ ವ್ಯವಸ್ಥೆ, ಗ್ರಾಮಗಳ ಮರುನಾಮಕರಣ ಪದ್ಧತಿ ಹಾಗೂ ಧಾರ್ಮಿಕ-ಸಾಮಾಜಿಕ ದಾನಧರ್ಮಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಒದಗಿಸುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.&lt;/p&gt;&lt;p&gt;ಶಾಸನದ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರರ ಚಿಹ್ನೆಗಳನ್ನು ಕೆತ್ತಲಾಗಿದ್ದು, ಇದು ಆ ಕಾಲದ ಶಾಸನಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಶಾಶ್ವತತೆಯ ಸಂಕೇತವಾಗಿದೆ. ಕೆಳಭಾಗದಲ್ಲಿ ವಿಷ್ಣುವಿನ ವಾಮನ ಅವತಾರದ ಸುಂದರ ಶಿಲ್ಪಾಕೃತಿಯನ್ನು ಕೆತ್ತಲಾಗಿರುವುದು ವಿಶೇಷ ಆಕರ್ಷಣೆಯಾಗಿದೆ. ಈ ಶಿಲ್ಪಕಲೆಯು ವಿಜಯನಗರ ಕಾಲದ ಕಲಾತ್ಮಕ ವೈಭವ ಮತ್ತು ಧಾರ್ಮಿಕ ನಂಬಿಕೆಗಳನ್ನು ಪ್ರತಿಬಿಂಬಿಸುತ್ತದೆ.&lt;/p&gt;&lt;h2&gt;ವಿಜಯನಗರ ಕಾಲದ ಇತಿಹಾಸ ಅಧ್ಯಯನ&lt;/h2&gt;&lt;p&gt;ಸುಮಾರು ಐದು ಅಡಿ ಎತ್ತರದ ಈ ಗ್ರಾನೈಟ್ ಶಿಲಾಶಾಸನವು ಉತ್ತಮ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಇತಿಹಾಸ ಅಧ್ಯಯನಕ್ಕೆ ಮಹತ್ವದ ಬೆಳವಣಿಗೆಯಾಗಿದೆ. ವಿಜಯನಗರ ಕಾಲದ ಭಾಷೆ, ಆಡಳಿತ, ಧಾರ್ಮಿಕ ಆಚರಣೆಗಳು ಹಾಗೂ ಶಿಲ್ಪಕಲೆಯ ಕುರಿತು ಇನ್ನಷ್ಟು ಅಧ್ಯಯನ ನಡೆಸಲು ಈ ಶಾಸನ ನೆರವಾಗಲಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಶಾಸನ ಪತ್ತೆ ಕಾರ್ಯದಲ್ಲಿ ಗ್ರಾಮದ ಯುವಕರೂ ಪ್ರಮುಖ ಪಾತ್ರವಹಿಸಿದ್ದಾರೆ. ಕರಿಬಸವ, ಉಮೇಶ್ ಮತ್ತು ಪ್ರವೀಣ್ ಸೇರಿದಂತೆ ಸ್ಥಳೀಯ ಯುವಕರು ಸ್ಥಳ ಗುರುತಿಸುವುದು ಹಾಗೂ ಮಾಹಿತಿ ಸಂಗ್ರಹಣೆಯಲ್ಲಿ ಸಹಕರಿಸಿದ್ದು, ಅವರ ಪ್ರಯತ್ನಕ್ಕೂ ಪ್ರಶಂಸೆ ವ್ಯಕ್ತವಾಗಿದೆ.&lt;/p&gt;&lt;p&gt;ಒಟ್ಟಾರೆ, ಹಂಪಾದೇವನಹಳ್ಳಿಯಲ್ಲಿ ಪತ್ತೆಯಾದ ಈ ಅಪರೂಪದ ಶಾಸನವು ವಿಜಯನಗರ ಸಾಮ್ರಾಜ್ಯದ ವೈಭವವನ್ನು ಮತ್ತೊಮ್ಮೆ ಸ್ಮರಿಸುವಂತೆ ಮಾಡಿದ್ದು, ರಾಜ್ಯದ ಪುರಾತತ್ವ ಹಾಗೂ ಇತಿಹಾಸ ಅಧ್ಯಯನ ಕ್ಷೇತ್ರಕ್ಕೆ ಹೊಸ ಅಧ್ಯಾಯವನ್ನು ಸೇರಿಸಿದೆ.&lt;/p&gt;]]></content:encoded>
            <category>koppal</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-16th-century-vijayanagara-inscription-discovered-in-karnataka-koppal-district-gdp/articleshow-y1k33p4"/>
        </item>
        <item>
            <title><![CDATA[ಅಂಜನಾದ್ರಿ ದೇವಾಲಯಕ್ಕೆ ದಾನವಾದ ಆಭರಣಗಳು ಸಂಪೂರ್ಣ ಚಿನ್ನವಲ್ಲ: ಎಸಿ ಮಾಲಗಿತ್ತಿ ಹೇಳೋದೇನು?]]></title>
            <link>https://kannada.asianetnews.com/karnataka-districts/anjanadri-temple-gold-plated-copper-jewellery-clarification-gvd/articleshow-yreyb09</link>
            <guid isPermaLink="true">https://kannada.asianetnews.com/karnataka-districts/anjanadri-temple-gold-plated-copper-jewellery-clarification-gvd/articleshow-yreyb09</guid>
            <pubDate>Sun, 10 May 2026 21:23:13 +0530</pubDate>
            <description><![CDATA[&lt;p&gt;ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದ್ರಾಬಾದ್ ಮೂಲಕ ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸಮರ್ಪಣೆ ಮಾಡಿರುವ ಪ್ರಭಾವಳಿ,ಕಿರೀಟ, ಗಧೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr99f2cbd7jgykhwwvc96aqm,imgname-mvm-1778428381579.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.10): &lt;/strong&gt;ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದ್ರಾಬಾದ್ ಮೂಲಕ ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸಮರ್ಪಣೆ ಮಾಡಿರುವ ಪ್ರಭಾವಳಿ,ಕಿರೀಟ, ಗಧೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದೆ. ಎಲ್ಲವೂ ಚಿನ್ನದಿಂದ ಕೂಡಿಲ್ಲ ಎಂದು ಕಿಷ್ಕಿಂಧಾ ಅಂಜನಾದ್ರಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.&lt;/p&gt;&lt;p&gt;ಅವರು ಭಾನುವಾರ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ದೇವಾಲಯಕ್ಕೆ ಸಮರ್ಪಣೆಯಾಗಿರುವ ಸಾಮಾನುಗಳನ್ನು ಲೋಹ ತಜ್ಞರಿಂದ ಪರೀಕ್ಷೆ ಮಾಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹೈದ್ರಾಬಾದ್ ಮೂಲಕ ಎಎಂಆರ್ ಕಂಷ್ಟ್ರಕ್ಷನ್ ಕಂಪನಿಯ ಮಹೇಶ ರೆಡ್ಡಿ ಹಾಗೂ ಕುಟುಂಬದವರು ಮೇ.8 ರಂದು ಒಂದುವರೇ ಕೆಜಿ ಚಿನ್ನ ಅಂದಾಜು 2 ಕೋಟಿ 30 ಲಕ್ಷ ರು ಮೌಲ್ಯದ ಆಭರಣಗಳನ್ನು ಸಮರ್ಪಣೆ ಮಾಡಿದ ಪ್ರಭಾವಳಿ ಗದೆ, ಕಿರೀಟ ಇತರೆ ಪೂಜಾ ಸಾಮಾನುಗಳು ಎಂದು ಹೇಳಲಾಗಿತ್ತು.&lt;/p&gt;&lt;h2&gt;&lt;strong&gt;ಚಿನ್ನದ ತಗಡು ಲೇಪನ&lt;/strong&gt;&lt;/h2&gt;&lt;p&gt;ಈಗ ಚಿನ್ನ ಲೇಪಿತ ತಾಮ್ರದಿಂದ ಕೂಡಿವೆ ಎಂದು ಲೋಹ ಪರಿಶೋಧಕರು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡವಾಗ ಬಂಗಾರದ ಮೌಲ್ಯ ಮಾಪನ ಮಾಡುವ ಗುಂಡಾಚಾರ್ ಮತ್ತು ಪರಶುರಾಮ ವಿಶ್ವಕರ್ಮ ಇವರು ದೃಢಪಡಿಸಿದ್ದು, ತಾಮ್ರದ ಸಾಮಾನುಗಳಿಗೆ ಚಿನ್ನದ ತಗಡು ಲೇಪನ ಮಾಡಲಾಗಿದೆ. ಎಲ್ಲವೂ ಚಿನ್ನದ ಸಾಮಾನುಗಳು ಅಲ್ಲ. ದಾನ ನೀಡಿದ ದಾನಿಗಳನ್ನು ಸಂಪರ್ಕ ಮಾಡಿ ಶ್ರೀಆಂಜನೇಯನಿಗೆ ಸಮರ್ಪಣೆ ಮಾಡಿದ ಸಾಮಾನುಗಳ ಮೌಲ್ಯ ಹಾಗೂ ರಸೀದಿಯನ್ನು ದೇವಾಲಯ ಕಮೀಟಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು ಶೀಘ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದಾನಿಗಳು ದೇವಾಲಯಗಳಿಗೆ ನೀಡಿದ ಚಿನ್ನಾಭರಣೆ, ಬೆಳ್ಳಿ, ವಜ್ರ, ವೈಡೂರ್ಯ ಇತರೆ ಅಮೂಲ್ಯ ವಸ್ತುಗಳ ಮೌಲ್ಯ ಮಾಪನ ಮಾಡಿ ರಸೀದಿ ಸಮೇತ ದಾಖಲೆಗಳನ್ನು ಇಡಬೇಕಾಗುತ್ತದೆ. ಆದ್ದರಿಂದ ಲೋಹ ಶೋಧಕರು ಮತ್ತು ಮೌಲ್ಯಮಾಪನ ಮಾಡುವವರಿಂದ ಮೌಲ್ಯ ಮಾಡಿಸಿ ದಾಖಲೆ ಇರಿಸಲಾಗುತ್ತದೆ ಎಂದು ಮಾಲಗಿತ್ತಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಯು.ವಸಂತಕುಮಾರಿ, ಕಂದಾಯ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳಿದ್ದರು.&lt;/p&gt;]]></content:encoded>
            <category>koppal</category>
            <dc:creator>Asianet News</dc:creator>
            <atom:link href="https://kannada.asianetnews.com/karnataka-districts/anjanadri-temple-gold-plated-copper-jewellery-clarification-gvd/articleshow-yreyb09"/>
        </item>
    </channel>
</rss>
