<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 01 Apr 2026 11:38:18 +0530</lastBuildDate>
        <atom:link href="https://kannada.asianetnews.com/rss/kolar" rel="self" type="application/rss+xml"/>
        <item>
            <title><![CDATA[ಪದ್ಮ ಪ್ರಶಸ್ತಿ ಘನತೆ ಹೆಚ್ಚಿಸಿದ ಶತಾವಧಾನಿ ಡಾ.ಆರ್ ಗಣೇಶ್‌‌ಗೆ ನೀಡಿದ ಗೌರವ!]]></title>
            <link>https://kannada.asianetnews.com/karnataka-districts/shatavadhani-dr-r-ganesh-padma-bhushan-award-2026-karnataka-pride-san/articleshow-09gggtv</link>
            <guid isPermaLink="true">https://kannada.asianetnews.com/karnataka-districts/shatavadhani-dr-r-ganesh-padma-bhushan-award-2026-karnataka-pride-san/articleshow-09gggtv</guid>
            <pubDate>Mon, 26 Jan 2026 13:01:35 +0530</pubDate>
            <description><![CDATA[&lt;p&gt;ಶತಾವಧಾನಿ ಡಾ. ಆರ್ ಗಣೇಶರು ಸ್ವಯಮಾಚಾರ್ಯ ಮಾರ್ಗದಲ್ಲಿ ಹತ್ತಾರು ಶಾಸ್ತ್ರ-ಕಲೆಗಳನ್ನು ಕರಗತ ಮಾಡಿಕೊಂಡ 'ಸಂಸ್ಕೃತಿಯ ಪ್ರಹರಿ'. ಕನ್ನಡದಲ್ಲಿ ಅವಧಾನಕಲೆಯನ್ನು ಪುನರುಜ್ಜೀವನಗೊಳಿಸಿದ ಇವರು, 1200ಕ್ಕೂ ಹೆಚ್ಚು ಅವಧಾನಗಳು &amp;nbsp;ಮೂಲಕ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfwk6fzn1h92v9x5se7ffqsr,imgname-shatavadhani-dr-r-ganesh-1769412444149.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಚ್ ಎ ವಾಸುಕಿ, ಸಂಸ್ಕೃತಿ ಚಿಂತಕರು&lt;/strong&gt;&lt;/p&gt;&lt;p&gt;ನಾಡೋಜ ಡಾ. ಎಸ್ ಆರ್ ರಾಮಸ್ವಾಮಿಯವರ ಮಾತುಗಳಲ್ಲಿ ಬಣ್ಣಿಸುವುದಾದರೆ ಇವರು &quot;ವಿದ್ವಲ್ಲೋಕದ ವಿಸ್ಮಯ&quot; ಮಾತ್ರವಲ್ಲ, &quot;ಸಂಸ್ಕೃತಿಯ ಪ್ರಹರಿ&quot; ಕೂಡ. ಈ ಎರಡು ಪದಪುಂಜಗಳಲ್ಲಿ ರಾಮಸ್ವಾಮಿಗಳು ಶತಾವಧಾನಿ ಡಾ. ಆರ್ ಗಣೇಶರ ವ್ಯಕ್ತಿತ್ವವನ್ನಷ್ಟೇ ಅಲ್ಲ ವಿದ್ವಚ್ಚಾರಿತ್ರ್ಯವನ್ನೇ ಹಿಡಿದಿಟ್ಟಿದ್ದಾರೆ ಎಂಬುದು ಗಣನೀಯ.&lt;/p&gt;&lt;p&gt;ಇಂದು ಹತ್ತಾರು ಶಾಸ್ತ್ರ-ಕಲೆಗಳ ವಿಷಯದಲ್ಲಿ ಕಡೆಯ ಮಾತು ಎಂಬಂತಿರುವ ಗಣೇಶರು ಅವುಗಳಲ್ಲಿ ಯಾವುದನ್ನೂ ಗುರುಮುಖೇನ ಅಥವಾ ವಿಶ್ವವಿದ್ಯಾಲಯಗಳಿಗೆ ಹೋಗಿ ಕಲಿಯಲಿಲ್ಲ; ಕಲಿತದ್ದೆಲ್ಲ ಸ್ವಯಮಚಾರ್ಯಮಾರ್ಗದಲ್ಲೇ. ಇದು ವಿಸ್ಮಯದ ಮಾತಾಯಿತು. ಇನ್ನು ಪ್ರಹರಿ ಎಂದರೆ ದ್ವಾರಪಾಲಕ ಎಂದರ್ಥ.&lt;/p&gt;&lt;p&gt;&quot;ಸನಾತನ ಭಾರತೀಯ ಕಲೆ-ಸಂಸ್ಕೃತಿ&quot; ಎಂಬ ಮೌಲ್ಯಸೌಧದಲ್ಲಿ ನೆಮ್ಮದಿಯನ್ನು ಕಾಣುತ್ತಿರುವ ಹಲವರಿಗೆ ಗಣೇಶರು ನಮ್ಮ ಕಲೆ-ಮೌಲ್ಯಗಳನ್ನು ಕಾಯುತ್ತಿದ್ದಾರೆ ಎಂಬ ನೆಮ್ಮದಿ. ಕಾವ್ಯ-ಸಂಗೀತ-ನೃತ್ಯ-ಚಿತ್ರ-ಶಿಲ್ಪಾದಿಗಳಲ್ಲಿ ತೊಡಗಿಸಿಕೊಂಡವರಿಗೆ ಇವರು ಸೌಂದರ್ಯಮಾರ್ಗದರ್ಶಿ. ಸಂಸ್ಕೃತ-ಕನ್ನಡ-ತೆಲುಗು ಮುಂತಾದ ಹಲವು ಭಾಷೆಗಳಲ್ಲಿ ಇವರು ಉನ್ನತಸ್ತರದ ಸೃಷ್ಟಿಶೀಲ ಆಶುಕವಿ.&lt;/p&gt;&lt;p&gt;ಕನ್ನಡದ ಮಟ್ಟಿಗೆ ಹೇಳುವುದಾದರೆ, ವಿಸ್ಮೃತಪ್ರಾಯವಾಗಿದ್ದ ಅವಧಾನಕಲೆಯನ್ನು ಉಜ್ಜೀವನಗೊಳಿಸಿ ಅದನ್ನು ಶಿಖರಾಗ್ರಕ್ಕೆ ಮುಟ್ಟಿಸಿದ ಅಶೇಷ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಮಾನ್ಯವಾಗಿ ಒಬ್ಬರು ಉನ್ನತಸ್ತರದ ಸೃಷ್ಟಿಶೀಲ ಕವಿಯಾಗಿರಬಹುದು ಅಥವಾ ಉನ್ನತಸ್ತರದ ವಾಗ್ಮಿಯಾಗಿರಬಹುದು ಅಥವಾ ಉನ್ನತಸ್ತರದ ಲೇಖಕರಾಗಿರಬಹುದು; ಆದರೆ ಗಣೇಶರು ಈ ಮೂರೂ ಮಾರ್ಗಗಳಲ್ಲಿ ಉನ್ನತರು.&lt;/p&gt;&lt;p&gt;ವಿಜ್ಞಾನ-ತಂತ್ರಜ್ಞಾನಗಳಲ್ಲಿ ಭಾರತದ ಸರ್ವೋಚ್ಚ ವಿದ್ಯಾಸ್ಥಾನಗಳಲ್ಲೊಂದಾದ ಭಾರತೀಯ ವಿಜ್ಞಾನ ಮಂದಿರದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ರಾಮಯ್ಯ ಹಾಗು ಆರ್.ವಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರೂ ಕೂಡ ಗಣೇಶರ ಒಲವು ಎಂದೆಂದಿಗೂ ಇದ್ದದ್ದು ಕಾವ್ಯ-ಕಲೆಗಳಲ್ಲಿಯೇ.&lt;/p&gt;&lt;p&gt;ವಿಶ್ವವೇ ವಸ್ತುಗರ್ಭವಾಗಿರುವ ಅವಧಾನದಂತಹ ಕಲೆಗೆ ವಿಶ್ವಕುತೂಹಲಿಯಾಗದೆ ಸಾಧ್ಯವಿಲ್ಲ ಎಂಬುದು ಅದು ಹೇಗೋ ಗಣೇಶರಿಗೆ ಮನ ಮುಟ್ಟಿತ್ತು ಎನಿಸುತ್ತದೆ. ವಿಜ್ಞಾನ-ತಂತ್ರಜ್ಞಾನಗಳ ಪ್ರವೇಶ ಇದ್ದೇ ಇತ್ತು; ಇಂದಿಗೂ ಇದೆ. ಒಟ್ಟೊಟ್ಟಿಗೇ ವಿಸ್ತಾರವಾದ ವ್ಯಾಪ್ತಿಯಲ್ಲಿ ಭಾರತೀಯ ಶಾಸ್ತ್ರ-ಕಲೆ-ಆಚರಣೆಗಳ ಅಧ್ಯಯನ ಮಾಡಿ ಕರಗತ ಮಾಡಿಕೊಂಡರು. ಸೌಂದರ್ಯಮೀಮಾಂಸೆ ಅಥವಾ ಅಲಂಕಾರಶಾಸ್ತ್ರವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದರು. ಅದರ ಬೆಳಕಿನಲ್ಲಿ ಎಲ್ಲ ಕಲೆಗಳ ಅಂತರಾಳವನ್ನೇ ಹಿಡಿದು ಅಪೂರ್ವವಾದ ಸಮಗ್ರತೆಯನ್ನು ಸಾಧಿಸಿಕೊಂಡರು.&lt;/p&gt;&lt;p&gt;ಮಹಾನುಭಾವರಾದ ಡಿ. ವಿ. ಗುಂಡಪ್ಪನವರಿಂದ ಗಾಢವಾಗಿ ಪ್ರಭಾವಿತರಾಗಿರುವ ಗಣೇಶರು ಅವರ ಲೋಕದೃಷ್ಟಿಯನ್ನೇ ಮಾರ್ಗದರ್ಶನಕ್ಕಾಗಿ ನೆಚ್ಚಿಕೊಂಡರು. ಹೀಗೆ ಸ್ವಯಮಾಚಾರ್ಯಮಾರ್ಗದಲ್ಲಿ ಆಧುನಿಕತೆಯನ್ನು ತೊರೆಯದೆ ಸನಾತನತೆಯನ್ನು ಉಳಿಸಿಕೊಂಡ ಕಾರಣವೇ ಗಣೇಶರ ಕಾವ್ಯ-ಭಾಷಣ-ಬರೆಹಗಳಲ್ಲಿ ಅಪರೂಪದ ಸತ್ಯ-ಸೌಂದರ್ಯಗಳ ಸುವರ್ಣಪಾಕದ ಆಕರ್ಷಣೆಯಿದೆ.&lt;/p&gt;&lt;p&gt;ಇಂತಹ ಗಣೇಶರು 1200ಕ್ಕೂ ಹೆಚ್ಚು ಅವಧಾನಗಳನ್ನು ಮಾಡಿ ರಸಿಕರನ್ನು ರಂಜಿಸಿದ್ದಾರೆ; ಸಾವಿರಾರು ಗಂಟೆಗಳಷ್ಟು ಪ್ರಮಾಣದ ಮೌಲಿಕವಾದ ಭಾಷಣಗಳನ್ನು ನೀಡಿದ್ದಾರೆ; 75ಕ್ಕೂ ಹೆಚ್ಚು ಮೌಲಿಕವಾದ ಗ್ರಂಥಗಳನ್ನು ಬರೆದಿದ್ದಾರೆ. ಒಟ್ಟಂದದಲ್ಲಿ ಹೇಳಬೇಕಾದರೆ, ಗಣೇಶರು ಒಂದು ವಿಶ್ವವಿದ್ಯಾಲಯವು ಮಾಡಬೇಕಾದಷ್ಟು ಕೆಲಸಗಳನ್ನು ಏಕಾಂಗಿಯಾಗಿ ಮಾಡಿ ಮುಗಿಸಿದ್ದಾರೆ. ಇನ್ನೂ ಮಾಡುತ್ತಲಿದ್ದಾರೆ ಕೂಡ.&lt;/p&gt;&lt;p&gt;ಇಂತಹ ಮಹನೀಯರಿಗೆ ಈ ಬಾರಿಯ ಪದ್ಮಭೂಷಣ ಪ್ರಶಸ್ತಿ ಸಂದಿರುವುದು ಕನ್ನಡಿಗರಾದ ನಮಗೆಲ್ಲ ಸಂತಸದ ಸಂಗತಿ. ಇಂತಹ ಮಹನೀಯರಿಗೆ ಸಂದಿದೆ ಎಂಬ ಕಾರಣದಿಂದ ಪ್ರಶಸ್ತಿಯ ಘನತೆಯೂ ಹೆಚ್ಚಿದೆ. ಗಣೇಶರು ಪ್ರಶಸ್ತಿಗಳನ್ನು ಅರಸಿದವರಲ್ಲ; ಆದರೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, ಕೇಂದ್ರ ಸರ್ಕಾರದ ಬಾದರಾಯಣ ವ್ಯಾಸ ಪುರಸ್ಕಾರ - ಹೀಗೆ ಹತ್ತು ಹಲವು ಪ್ರಶಸ್ತಿಗಳು ಅದಾಗಲೇ ಗಣೇಶರನ್ನು ಅರಸಿಕೊಂಡು ಬಂದಿವೆ. ಈ ಸಾಲಿಗೆ ಇಂದಿನಿಂದ ಪದ್ಮಭೂಷಣ ಕೂಡ ಸೇರುತ್ತದೆ. ಈ ಸಂದರ್ಭದಲ್ಲಿ ಗಣೇಶರನ್ನು ನಾವೆಲ್ಲರೂ ಆದರಾಭಿಮಾನಗಳಿಂದ ಅಭಿನಂದಿಸುತ್ತೇವೆ. ಭಾರತೀಯ ಸಾಹಿತ್ಯ-ಸಂಸ್ಕೃತಿಗಳಿಗೆ ಅವರ ಸೇವೆ ಹೀಗೆಯೇ ಮುಂದುವರೆಯುತ್ತಿರಲಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kolar</category>
            <dc:creator>Suvarna News</dc:creator>
            <atom:link href="https://kannada.asianetnews.com/karnataka-districts/shatavadhani-dr-r-ganesh-padma-bhushan-award-2026-karnataka-pride-san/articleshow-09gggtv"/>
        </item>
        <item>
            <title><![CDATA[ಬೆಂಗಳೂರು: ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸೋ ಮೆಮೋ ರೈಲು ಸಮಯ ಪರಿಷ್ಕರಣೆ]]></title>
            <link>https://kannada.asianetnews.com/karnataka-districts/whitefield-marikuppam-memu-train-timings-revised-from-february-2nd/articleshow-0k27x4x</link>
            <guid isPermaLink="true">https://kannada.asianetnews.com/karnataka-districts/whitefield-marikuppam-memu-train-timings-revised-from-february-2nd/articleshow-0k27x4x</guid>
            <pubDate>Fri, 30 Jan 2026 22:18:05 +0530</pubDate>
            <description><![CDATA[&lt;p&gt;ಪ್ರಯಾಣಿಕರ ಬಹುದಿನಗಳ ಬೇಡಿಕೆ ಮತ್ತು ಸಂಸದ ಎಂ. ಮಲ್ಲೇಶಬಾಬು ಅವರ ಪ್ರಯತ್ನದ ಫಲವಾಗಿ, ಬೆಂಗಳೂರು ವೈಟ್&zwnj;ಫೀಲ್ಡ್&zwnj;ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸುವ ಮೆಮೋ ರೈಲಿನ ಸಮಯವನ್ನು ಪರಿಷ್ಕರಿಸಲಾಗಿದೆ. ಫೆಬ್ರವರಿ 2ರಿಂದ ಜಾರಿಗೆ ಬರುವ ಈ ಹೊಸ ವೇಳಾಪಟ್ಟಿ .&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kf3awrrkynhjj3neef58jb59,imgname-train--3--1768564876051.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಂಗಾರಪೇಟೆ: &lt;/strong&gt;ಬೆಂಗಳೂರು ವೈಟ್&zwnj;ಫೀಲ್ಡ್&zwnj;ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸುವ ಮೆಮೋ ರೈಲಿನ ಸಮಯವನ್ನು ಪರಿಷ್ಕರಿಸಬೇಕೆಂಬ ಪ್ರಯಾಣಿಕರ ದೀರ್ಘಕಾಲದ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದೆ. ಸಂಸದ ಎಂ. ಮಲ್ಲೇಶಬಾಬು ಅವರು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಯ ಬದಲಾವಣೆಗೆ ಶ್ರಮಿಸಿದ ಪರಿಣಾಮ, ಫೆಬ್ರವರಿ 2ರಿಂದ ಹೊಸ ಸಮಯ ಜಾರಿಗೆ ಬರಲಿದ್ದು, ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಈ ಹಿಂದೆ, ಬೆಂಗಳೂರಿನಿಂದ ಬೃಂದಾವನ ಎಕ್ಸ್&zwnj;ಪ್ರೆಸ್ ರೈಲು ಬಂಗಾರಪೇಟೆ ಪಟ್ಟಣಕ್ಕೆ ಆಗಮಿಸಿದ ಬಳಿಕ, ವೈಟ್&zwnj;ಫೀಲ್ಡ್&zwnj;ನಿಂದ ಪಟ್ಟಣ ಮಾರ್ಗವಾಗಿ ಮಾರಿಕುಪ್ಪಂಗೆ ಮೆಮೋ ರೈಲು ಸಂಚರಿಸುತ್ತಿತ್ತು. ಇದರಿಂದ ಮೆಜೆಸ್ಟಿಕ್&zwnj;ನಿಂದ ಬೃಂದಾವನ ರೈಲಿನಲ್ಲಿ ಪ್ರಯಾಣಿಸಿ ಬರುವ ಮಾರಿಕುಪ್ಪಂ ಪ್ರಯಾಣಿಕರಿಗೆ ಮೆಮೋ ರೈಲು ಹಿಡಿದು ಸುಲಭವಾಗಿ ಗಮ್ಯಸ್ಥಾನ ತಲುಪಲು ಅನುಕೂಲವಾಗಿತ್ತು.&lt;/p&gt;&lt;h2&gt;ಮೆಮೋ ರೈಲು ಸಿಗದೆ ತೀವ್ರ ಅನಾನುಕೂಲವಾಗಿತ್ತು&lt;/h2&gt;&lt;p&gt;ಆದರೆ ಇತ್ತೀಚಿನ ದಿನಗಳಲ್ಲಿ ಮೆಮೋ ರೈಲು ಬೃಂದಾವನ ರೈಲಿಗಿಂತ ಮುಂಚಿತವಾಗಿಯೇ ಬಂಗಾರಪೇಟೆಗೆ ಆಗಮಿಸಲು ಆರಂಭಿಸಿದ್ದರಿಂದ, ಬೃಂದಾವನ ರೈಲಿನಲ್ಲಿ ಬರುವ ಮಾರಿಕುಪ್ಪಂ ಪ್ರಯಾಣಿಕರಿಗೆ ಮೆಮೋ ರೈಲು ಸಿಗದೆ ತೀವ್ರ ಅನಾನುಕೂಲ ಉಂಟಾಗಿತ್ತು. ಇದರಿಂದಾಗಿ ನಿತ್ಯವೂ ಬಸ್&zwnj;ಗಳ ಅವಲಂಬನೆಯೇ ಅನಿವಾರ್ಯವಾಗಿದ್ದು, ಪ್ರಯಾಣಿಕರು ಸಮಯ ಮತ್ತು ಹಣ ಎರಡರಲ್ಲೂ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಖಂಡಿಸಿ ಇತ್ತೀಚೆಗೆ ಸಿಪಿಐ ಕಾರ್ಯಕರ್ತರು ಹಾಗೂ ಪ್ರಯಾಣಿಕರು ಬಂಗಾರಪೇಟೆ ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ್ದರು. ಮೆಮೋ ರೈಲಿನ ಸಮಯವನ್ನು ಮರುಪರಿಷ್ಕರಿಸುವಂತೆ ಅವರು ಒತ್ತಾಯಿಸಿದ್ದರು.&lt;/p&gt;&lt;h2&gt;ಸಂಸದ ಎಂ. ಮಲ್ಲೇಶಬಾಬು ಪ್ರಯತ್ನ&lt;/h2&gt;&lt;p&gt;ಪ್ರಯಾಣಿಕರ ಈ ಬೇಡಿಕೆಗೆ ಸ್ಪಂದಿಸಿದ ಸಂಸದ ಎಂ. ಮಲ್ಲೇಶಬಾಬು ಅವರು, ರೈಲ್ವೆ ಇಲಾಖೆಯ ಡಿಆರ್&zwnj;ಎಂ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಮೆಮೋ ರೈಲಿನ ಸಮಯವನ್ನು ಬದಲಾಯಿಸಲು ಒತ್ತಾಯಿಸಿದರು. ಅದರಂತೆ, ವೈಟ್&zwnj;ಫೀಲ್ಡ್&zwnj;ನಿಂದ ಮಧ್ಯಾಹ್ನ 2.55ಕ್ಕೆ ನಿರ್ಗಮಿಸುತ್ತಿದ್ದ ಮೆಮೋ ರೈಲನ್ನು ಮಧ್ಯಾಹ್ನ 3.30ಕ್ಕೆ ನಿರ್ಗಮಿಸುವಂತೆ ಸಮಯ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಿದರು. ಸಂಸದ ಮಲ್ಲೇಶಬಾಬು ಅವರ ಪ್ರಯತ್ನಕ್ಕೆ ಸ್ಪಂದಿಸಿದ ರೈಲ್ವೆ ಇಲಾಖೆ, ಫೆಬ್ರವರಿ 2ರಿಂದ ವೈಟ್&zwnj;ಫೀಲ್ಡ್&ndash;ಮಾರಿಕುಪ್ಪಂ ಮೆಮೋ ರೈಲಿನ ಸಮಯವನ್ನು ಅಧಿಕೃತವಾಗಿ ಪರಿಷ್ಕರಿಸಿದೆ. ಇದರಂತೆ, ರೈಲು ಈಗ ಮಧ್ಯಾಹ್ನ 2.55ರ ಬದಲಾಗಿ 3.30ಕ್ಕೆ ವೈಟ್&zwnj;ಫೀಲ್ಡ್&zwnj;ನಿಂದ ನಿರ್ಗಮಿಸಲಿದೆ.&lt;/p&gt;&lt;p&gt;ಈ ನಿರ್ಧಾರದಿಂದ ಬೃಂದಾವನ ರೈಲಿನಲ್ಲಿ ಬರುವ ಮಾರಿಕುಪ್ಪಂ ಪ್ರಯಾಣಿಕರಿಗೆ ಮತ್ತೆ ಮೆಮೋ ರೈಲು ಸಂಪರ್ಕ ದೊರೆಯಲಿದ್ದು, ನಿತ್ಯದ ಪ್ರಯಾಣ ಸುಗಮವಾಗಲಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸಿದ ಸಂಸದ ಎಂ. ಮಲ್ಲೇಶಬಾಬು ಅವರಿಗೆ ಪ್ರಯಾಣಿಕರು ಅಭಿನಂದನೆ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>kolar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/whitefield-marikuppam-memu-train-timings-revised-from-february-2nd/articleshow-0k27x4x"/>
        </item>
        <item>
            <title><![CDATA[ಕೋಲಾರದ ಕರುಳು ಹಿಂಡುವ ದುರಂತ: ತಾಯಿಯ ಕಠಿಣ ನಿರ್ಧಾರಕ್ಕೆ ಇಬ್ಬರು ಕಂದಮ್ಮಗಳ ಸಾವು!]]></title>
            <link>https://kannada.asianetnews.com/karnataka-districts/kolar-tragedy-mother-jumps-into-pond-with-two-children-in-bangarapete-kids-drown-gdp/articleshow-1zqypdw</link>
            <guid isPermaLink="true">https://kannada.asianetnews.com/karnataka-districts/kolar-tragedy-mother-jumps-into-pond-with-two-children-in-bangarapete-kids-drown-gdp/articleshow-1zqypdw</guid>
            <pubDate>Mon, 02 Mar 2026 18:53:46 +0530</pubDate>
            <description><![CDATA[&lt;p&gt;ಕೋಲಾರದ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ, ಕೌಟುಂಬಿಕ ಕಲಹದಿಂದ ನೊಂದ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕುಂಟೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಸ್ಥಳೀಯರು ತಾಯಿಯನ್ನು ರಕ್ಷಿಸಿದ್ದಾರೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjqbg2gmy2k3qz2svr2byn3n,imgname-kolar-tragedy--1--1772457822739.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ:&lt;/strong&gt; ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಕುಂಟೆಗೆ ಹಾರಿ ಆತ್ಮ*ಹತ್ಯೆಗೆ ಯತ್ನಿಸಿದ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ತಾಯಿಯನ್ನು ಸ್ಥಳೀಯರು ಸಮಯಕ್ಕೆ ಸರಿಯಾಗಿ ರಕ್ಷಿಸಿದ್ದಾರೆ.&lt;/p&gt;&lt;h2&gt;ಘಟನೆಯ ವಿವರ&lt;/h2&gt;&lt;p&gt;ಬೂದಿಕೋಟೆ ಗ್ರಾಮದ ನಿವಾಸಿ ಉಷಾ ಎಂಬ ಮಹಿಳೆ, ಗಂಡನ ಕಿರುಕುಳ ಮತ್ತು ಮನೆಯೊಳಗಿನ ನಿರಂತರ ಕಲಹದಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಆಕೆ ತನ್ನ ಇಬ್ಬರು ಮಕ್ಕಳು ನಿತೀಶ್ (6) ಮತ್ತು ಅನೀಶ್ (5) ಅವರನ್ನು ಕರೆದುಕೊಂಡು ಗ್ರಾಮದ ಸಮೀಪದ ಕುಂಟೆಗೆ ಹಾರಿದ್ದಾಳೆ. ನೀರಿಗೆ ಬಿದ್ದ ತಕ್ಷಣ ಮಕ್ಕಳು ಮುಳುಗಿ ಅಸಹಾಯಕ ಸ್ಥಿತಿಗೆ ತಲುಪಿದ್ದು, ಸ್ಥಳೀಯರು ಗಮನಿಸಿ ತಕ್ಷಣ ರಕ್ಷಣೆಗೆ ಮುಂದಾಗಿದ್ದಾರೆ.&lt;/p&gt;&lt;h2&gt;ಮಕ್ಕಳ ಸಾವು, ತಾಯಿ ರಕ್ಷಣೆ&lt;/h2&gt;&lt;p&gt;ಸ್ಥಳೀಯರ ತ್ವರಿತ ಸ್ಪಂದನೆಯಿಂದ ಉಷಾಳನ್ನು ಜೀವಂತವಾಗಿ ಹೊರತೆಗೆದುಕೊಳ್ಳಲಾಯಿತಾದರೂ, ದುರದೃಷ್ಟವಶಾತ್ ಇಬ್ಬರು ಮಕ್ಕಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳ ಮೃತದೇಹಗಳನ್ನು ಕುಂಟೆಯಿಂದ ಹೊರತೆಗೆದು, ಮುಂದಿನ ಕಾನೂನು ಪ್ರಕ್ರಿಯೆಗಾಗಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.&lt;/p&gt;&lt;h2&gt;ಪೊಲೀಸ್ ಕ್ರಮ&lt;/h2&gt;&lt;p&gt;ಘಟನೆಯ ಮಾಹಿತಿ ಪಡೆದ ಬೂದಿಕೋಟೆ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತ್ಮ*ಹತ್ಯೆ ಯತ್ನಕ್ಕೆ ಕಾರಣಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಕುಟುಂಬದ ಹಿನ್ನೆಲೆ, ಗಂಡನ ಕಿರುಕುಳ ಆರೋಪಗಳು ಹಾಗೂ ಇತರ ಸಾಂದರ್ಭಿಕ ಅಂಶಗಳನ್ನು ಆಧರಿಸಿ ವಿಚಾರಣೆ ಮುಂದುವರಿದಿದೆ.&lt;/p&gt;]]></content:encoded>
            <category>kolar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kolar-tragedy-mother-jumps-into-pond-with-two-children-in-bangarapete-kids-drown-gdp/articleshow-1zqypdw"/>
        </item>
        <item>
            <title><![CDATA[ಅಕ್ರಮ ನಡೆಸಿತ್ತಾ ಕಾನ್ಫಿಡೆಂಟ್ ಗ್ರೂಪ್? ಸಿಜೆ ರಾಯ್ ಸಾವಿನಿಂದ ಮೃತ ಅಧಿಕಾರಿ ಡಿಕೆ ರವಿ ಹೇಳಿಕೆ ವೈರಲ್]]></title>
            <link>https://kannada.asianetnews.com/bengaluru-urban/cj-roy-death-late-ias-officer-dk-ravi-old-warning-on-confident-group-goes-viral/articleshow-3wvgdym</link>
            <guid isPermaLink="true">https://kannada.asianetnews.com/bengaluru-urban/cj-roy-death-late-ias-officer-dk-ravi-old-warning-on-confident-group-goes-viral/articleshow-3wvgdym</guid>
            <pubDate>Sat, 31 Jan 2026 19:36:03 +0530</pubDate>
            <description><![CDATA[&lt;p&gt;ಅಕ್ರಮ ನಡೆಸಿತ್ತಾ ಕಾನ್ಫಿಡೆಂಟ್ ಗ್ರೂಪ್? ಸಿಜೆ ರಾಯ್ ಸಾವಿನಿಂದ ಮೃತ ಅಧಿಕಾರಿ ಡಿಕೆ ರವಿ ಹೇಳಿಕೆ ವೈರಲ್ ಆಗುತ್ತಿದೆ. ಕಾನ್ಫಿಡೆಂಟ್ ಗ್ರೂಪ್ ಅಕ್ರಮ ಪತ್ತೆ ಹಚ್ಚಿದ ಕಾರಣಕ್ಕೆ ದಕ್ಷ ಅಧಿಕಾರಿ ವರ್ಗಾವಣೆ ಶಿಕ್ಷೆಗೆ ಒಳಗಾಗಿದ್ರಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kga5xqvsbakxbqnp8wn3t21s,imgname-cj-roy-dk-ravi-1769868287865.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜ.31) &lt;/strong&gt;ಕಾನ್ಫಿಡೆಂಟ್ ಗ್ರೂಪ್ ಚೇರ್ಮೆನ್ ಸಿಜೆ ರಾಯ್ ದುರಂತ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರ ಎಸ್&zwnj;ಐಟಿ ತನಿಖೆಗೆ ಆದೇಶಿಸಿದೆ. ಇತ್ತ ಸಿಜೆ ರಾಯ್ ಸಾವಿನ ಸುತ್ತ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿಜೆ ರಾಯ್ ಸಾಮಾಜಿಕ ಕಾರ್ಯಗಳು, ಮನೋರಂಜನಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಇದೇ ವೇಳೆ ಕರ್ನಾಟಕ ಕಂಡ ಅತ್ಯಂತ ದಕ್ಷ ಅಧಿಕಾರಿಗಳಲ್ಲೊಬ್ಬರಾದ ಮೃತ ಐಎಎಸ್ ಅಧಿಕಾರಿ ಡಿಕೆ ರವಿ ಹೇಳಿಕೆ, ಹಳೇ ಪ್ರಕರಣವೊಂದು ಮತ್ತೆ ಮುನ್ನಲೆಗೆ ಬಂದಿದೆ. ಸಿಜೆ ರಾಯ್ ದುರಂತ ಸಾವಿನ ಬೆನ್ನಲ್ಲೇ ಮೃತ ಅಧಿಕಾರಿ ಡಿಕೆ ರವಿ ಪತ್ತೆ ಹಚ್ಚಿದ ಹಳೇ ಕೇಸ್ ಒಂದು ಭಾರಿ ಸದ್ದು ಮಾಡುತ್ತಿದೆ.&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ಸಿಜೆ ರಾಯ್ ಅವರ ಕಾನ್ಫಿಡೆಂಟ್ ಗ್ರೂಪ್ ನಡೆಸಿದೆ ಎನ್ನಲಾದ ಅಕ್ರಮವನ್ನು ಅಂದು ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಡಿಕೆ ರವಿ ಪತ್ತೆ ಹಚ್ಚಿದ್ದರು. ಈ ಕುರಿತು ಸ್ವತಃ ಡಿಕೆ ರವಿ ಅವರೇ ಅಕ್ರಮದ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಕೋಲಾರದಲ್ಲಿ ಕಾನ್ಫಿಡೆಂಟ್ ಗ್ರೂಪ್ ಗಾಲ್ಫ್ ಹಾಗೂ ವಿಲ್ಲಾ ಮಾಡಲು ಭಾರಿ ಪ್ರಮಾಣದಲ್ಲಿ ಭೂಮಿ ಖರೀದಿ ಹಾಗೂ ಒತ್ತುವರಿ ಮಾಡಿಕೊಂಡಿತ್ತು. ಇದರಲ್ಲಿ ಸರ್ಕಾರದ 40ಕ್ಕೂ ಹೆಚ್ಚು ಏಕರೆ ಪ್ರದೇಶವನ್ನು ಕಾನ್ಫಿಡೆಂಟ್ ಗ್ರೂಪ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ. ನಕಲಿ ದಾಖಲೆ ಸೃಷ್ಟಿಸಿ, ಹಲವು ಅಧಿಕಾರಿಗಳ, ರಾಜಕಾರಣಿಗಳು, ಶಾಸಕರ ನೆರವಿನಿಂದ ಈ ಅಕ್ರಮ ನಡೆದಿದೆ ಎಂದು ಸ್ವತಃ ಡಿಕೆ ರವಿ ಅವರೇ ದಾಖಲೆ ಸಮೇತ ಬಿಡುಗಡೆ ಮಾಡಿದ್ದರು. 2013-14ರಲ್ಲಿ ನಡೆದ ಈ ಪ್ರಕರಣ ಇದೀಗ ಸಿಜೆ ರಾಯ್ ಸಾವಿನಿಂದ ಮತ್ತೆ ಮುನ್ನಲೆಗೆ ಬಂದಿದೆ.&lt;/p&gt;&lt;p&gt;ಕೋಲಾರದ ಬಂಗಾರಪೇಟೆ ಸಮೀಪ ಕಾನ್ಫಿಡೆಂಟ್ ಗ್ರೂಪ್ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರಿ ಬಂಡವಾಳ ಹೂಡಿಕೆ ಮಾಡಿತ್ತು. ಆದರೆ ಈ ಹೂಡಿಕೆಯಲ್ಲಿ ಸಕ್ರಮಕ್ಕಿಂತ ಅಕ್ರಮವೇ ಹೆಚ್ಚಾಗಿತ್ತು ಅನ್ನೋದು ಅಂದಿನ ಜಿಲ್ಲಾಧಿಕಾರಿ ಡಿಕೆ ರವಿ ಹೇಳಿದ್ದರು. ಇದಕ್ಕೆ ಪೂರಕ ದಾಖಲೆಯನ್ನು ಬಹಿರಂಗಪಡಿಸಿದ್ದರು. 150 ಎಕರೆ ಪ್ರದೇಶದಲ್ಲಿ ಕಾನ್ಫಿಡೆಂಟ್ ಗ್ರೂಪ್ ವಿಶಾಲವಾದ ಗಾಲ್ಫ್ ಕೋರ್ಟ್, ಅತ್ಯಂತ ಐಷಾರಾಮಿ ವಿಲ್ಲಾಗಳನ್ನು ನಿರ್ಮಾಣ ಮಾಡಿತ್ತು. ಆದರೆ ಈ 150 ಏಕರೆಯಲ್ಲಿ 40ಕ್ಕೂ ಹೆಚ್ಚು ಏಕರೆ ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಡಿಕೆ ರವಿ ಆರೋಪಿಸಿದ್ದರು. ಇದಕ್ಕೆ ಭೂ, ಕಂದಾಯ, ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಅಂದಿನ ಸ್ಥಳೀಯ ಶಾಸಕರು ಸಾಥ್ ನೀಡಿದ್ದಾರೆ ಎಂಬ ಸ್ಫೋಟಕ ಆರೋಪವನ್ನು ಡಿಕೆ ರವಿ ಮಾಡಿದ್ದರು.&lt;/p&gt;&lt;h2&gt;ಅಕ್ರಮ ಪತ್ತೆ ಹಚ್ಚಿದ ಡಿಕೆ ರವಿಗೆ ವರ್ಗಾವಣೆ ಶಿಕ್ಷೆ&lt;/h2&gt;&lt;p&gt;ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಿಕೆ ರವಿ, ಕಾನ್ಫಿಡೆಂಟ್ ಗ್ರೂಪ್ ನಡೆಸಿದೆ ಎನ್ನಲಾದ ಅಕ್ರವನ್ನು ಬಯಲಿಗೆಳೆದಿದ್ದರು. ದುರಂತ ಅಂದರೆ ಈ ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕರಲ್ಲಿ ಅಂದಿನ ಕೋಲಾರದ ಸ್ಥಳೀಯ ಶಾಸಕರು ಸದಸ್ಯರಾಗಿದ್ದರು. ಹೀಗಾಗಿ ಡಿಕೆ ರವಿಗೆ ಶಾಸಕರು ಧಮ್ಕಿ ಹಾಕಿದ್ದರು ಎಂದು ವರದಿಯಾಗಿದೆ. ಕಾನ್ಫಿಡೆಂಟ್ ಗ್ರೂಪ್ ಅಕ್ರಮ ಬಯಲಿಗೆಳೆದ ಬೆನ್ನಲ್ಲೇ ಡಿಕೆ ರವಿ ಕೋಲಾರದಿಂದ ವರ್ಗಾವಣೆಗೊಂಡಿದ್ದರು. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿತ್ತು ಅನ್ನೋ ಆರೋಪ ಬಲವಾಗಿ ಕೇಳಿಬಂದಿತ್ತು.&lt;/p&gt;&lt;h2&gt;ಸಿಜೆ ರಾಯ್ ಕಾನ್ಫಿಡೆಂಟ್ ಗ್ರೂಪ್ ಮೇಲೆ ಗಂಭೀರ ಆರೋಪ&lt;/h2&gt;&lt;p&gt;ಕಾನ್ಫಿಡೆಂಟ್ ಗ್ರೂಪ್ ಬೆಂಗಳೂರು, ಕೋಲಾರ ಸೇರಿದಂತೆ ಹಲೆವೆಡೆ ವಿಸ್ತಾರಗೊಳ್ಳುತ್ತಿದ್ದಂತೆ ಗಂಭೀರ ಆರೋಪಗಳು ಕೇಳಿಬಂದಿತ್ತು. ಭೂ ಕಬಳಿಕೆ, ಅಕ್ರಮ ಒತ್ತುವರಿ ಆರೋಪಗಳು ಕೇಳಿಬಂದಿತ್ತು. ಡಿಕೆ ರವಿ ಕಾನ್ಫಿಡೆಂಟ್ ಗ್ರೂಪ್ ವಿರುದ್ದ ತೊಡೆ ತಟ್ಟಿ ನಿಂತಿದ್ದರು. ದುರಂತ ಅಂದರೆ ಹಲವು ಒತ್ತಡ, ಕಿರುಕುಳದಿಂದ ಡಿಕೆ ರವಿ ದುರಂತ ಅಂತ್ಯಕಂಡಿದ್ದರು. ಇದೀಗ ಕಾನ್ಫಿಡೆಂಟ್ ಗ್ರೂಪ್ ಚೇರ್ಮೆನ್ ಸಿಜೆ ರಾಯ್ ಎದೆಗೆ ಗುಂಡು ಹಾರಿಸಿಕೊಂಡು ಬದುಕು ಅಂತ್ಯಗೊಳಿಸಿದ್ದಾರೆ. ಪ್ರಕರಣದ ತನಿಖೆಗೆ ಎಸ್&zwnj;ಐಟಿ ಇಳಿದಿದೆ. ಹೀಗಾಗಿ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗುವ ಸಾಧ್ಯತೆ ಇದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Just sharing without any context.&amp;nbsp;Confident Group Real Estate Scandal-ಕಾನ್ಫಿಡೆಂಟ್ ಗ್ರೂಪ್ ಕರ್ಮಕಾಂಡ. #CJRoy #DKRavihttps://t.co/PpvPmjufzo&lt;/p&gt;&lt;p&gt;&mdash; Mal-Lee (@MallikarjunaNH) January 31, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kolar</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-urban/cj-roy-death-late-ias-officer-dk-ravi-old-warning-on-confident-group-goes-viral/articleshow-3wvgdym"/>
        </item>
        <item>
            <title><![CDATA[ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ: ಡ್ರಗ್ಸ್ ಕಂಟ್ರೋಲರ್ ಶ್ಯಾಮಲಾ ಲೋಕಾ ಬಲೆಗೆ]]></title>
            <link>https://kannada.asianetnews.com/state/kolar-35000-bribe-to-renew-medical-store-license-drugs-controller-arrested/articleshow-7zz6gb7</link>
            <guid isPermaLink="true">https://kannada.asianetnews.com/state/kolar-35000-bribe-to-renew-medical-store-license-drugs-controller-arrested/articleshow-7zz6gb7</guid>
            <pubDate>Wed, 18 Mar 2026 16:23:33 +0530</pubDate>
            <description><![CDATA[&lt;p&gt;ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಸಹಾಯಕ ಡ್ರಗ್ಸ್ ಕಂಟ್ರೋಲರ್ ಲೋಕಾ ಬಲೆಗೆ ಬಿದ್ದಿದ್ದಾರೆ. ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ಮೂವರು ಬಲೆಗೆ ಬಿದ್ದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km08tb9qpj87n39bz2f65ta9,imgname-kolara-lokayukta-raid-1773830745399.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೋಲಾರ : ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಸಹಾಯಕ ಡ್ರಗ್ಸ್ ಕಂಟ್ರೋಲರ್ ಲೋಕಾ ಬಲೆಗೆ ಬಿದ್ದಿದ್ದಾರೆ. ಘಟನೆ ಸಂಬಂಧ ಸಹಾಯಕ ಔಷಧ ನಿಯಂತ್ರಕರಾದ ಶ್ಯಾಮಲಾ, ವಾಹನ ಚಾಲಕ ಮಹಂತೇಶ್ ಮತ್ತು ನಿವೃತ್ತ ಡಿ ಗ್ರೂಪ್ ನೌಕರ ಶ್ರೀನಿವಾಸನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಲಂಚದ ಹಣ ಬಿಸಾಡಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಆದರೆ ಅವರನ್ನು ಬೆನ್ನಟ್ಟಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ.&lt;/p&gt;&lt;p&gt;ದಲಿತ ಮುಖಂಡ ಹೂಹಳ್ಳಿ ಪ್ರಕಾಶ್ ಹಾಗೂ ಕೃಷ್ಣಯ್ಯ ಎಂಬುವವರು ಇವರ ವಿರುದ್ಧ ದೂರು ನೀಡಿದ್ದರು. ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ ಆರೋಪಿಗಳು 35,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸ್ವೀಕರಿಸಿದ ಹಣವನ್ನು ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಮಾರ್ಗಮಧ್ಯೆ ಎಸೆದಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಹಣಕ್ಕಾಗಿ ತಡರಾತ್ರಿಯವರೆಗೆ ಹುಡುಕಾಡಿದ್ದಾರೆ. ಆದರೆ ಅವರಿಗೂ ಹಣ ಸಿಕ್ಕಿಲ್ಲ, ಹಣ ಸಿಗದ ಹಿನ್ನೆಲೆ ಹಣ ಸ್ವೀಕರಿಸಿರುವ ವಿಡಿಯೋ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ನಿರ್ಧರಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;ನಿಂಗೆ ಮಗಳನ್ನ ಕೊಡಲ್ಲ ಎಂದಿದ್ದಕ್ಕೆ ಯುವತಿ ತಲೆ ಒಡೆದು ಆಕೆಯ ಮನೆಯವರ ಮೇಲೆ ಹಲ್ಲೆ ಮಾಡಿದ ಕಿರಾತಕ&lt;/p&gt;&lt;p&gt;ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆದಿದ್ದು, ಈ ವೇಳೆ ಅಧಿಕಾರಿಗಳನ್ನು ಕಂಡು ಎಡಿಸಿ ಶ್ಯಾಮಲಾ ಹಾಗೂ ಮತ್ತಿಬ್ಬರು ಎಸ್ಕೇಪ್​​ ಆಗಿದ್ದರು. ಇವರ ಕಾರನ್ನು ಬೆನ್ನಟ್ಟಿದ್ದ ಲೋಕಾಯುಕ್ತ ಪೊಲೀಸರು ಮೂವರನ್ನೂ ಅಂತಿಮವಾಗಿ ಬಂಧಿಸಿದ್ದರು. ಆದರೆ ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆಂದು ಪಡೆದಿದ್ದ 35 ಸಾವಿರ ರೂಪಾಯಿ ಲಂಚದ ಹಣವನ್ನು ಮಾರ್ಗ ಮಧ್ಯದಲ್ಲಿಯೇ ಇವರು ಎಸೆದಿದ್ದರು.&lt;/p&gt;&lt;p&gt;ಸದ್ಯ ಸಹಾಯಕ ಔಷಧ ನಿಯಂತ್ರಕಿ ಶ್ಯಾಮಲಾ, ನಿವೃತ್ತ ಡಿಗ್ರೂಪ್ ನೌಕರ ಶ್ರೀನಿವಾಸ್, ಹಾಗೂ ಡ್ರೈವರ್ ಮಹಂತೇಶ್ ಸದ್ಯ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಇವಿ ಕಾರು ಚಾರ್ಜಿಂಗ್ ವೇಳೆ ದುರಂತ: ಬೆಂಕಿ ಮನೆಗೆ ಹಬ್ಬಿ 8 ಜನ ಸಜೀವ ದಹನ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kolar</category>
            <dc:creator>Anusha Kb</dc:creator>
            <atom:link href="https://kannada.asianetnews.com/state/kolar-35000-bribe-to-renew-medical-store-license-drugs-controller-arrested/articleshow-7zz6gb7"/>
        </item>
        <item>
            <title><![CDATA[KSRTC ವೀಕೆಂಡ್ ಟೂರ್ ಪ್ಯಾಕೇಜ್: ಕಡಿಮೆ ದರದಲ್ಲಿ ತಲಕಾಡು, ಮೇಲುಕೋಟೆ, ಚಿಕ್ಕತಿರುಪತಿ ಪ್ರವಾಸ!]]></title>
            <link>https://kannada.asianetnews.com/travel/ksrtc-bangalore-weekend-package-tours-route-details-ticket-price-and-booking-sat/articleshow-9glhiu7</link>
            <guid isPermaLink="true">https://kannada.asianetnews.com/travel/ksrtc-bangalore-weekend-package-tours-route-details-ticket-price-and-booking-sat/articleshow-9glhiu7</guid>
            <pubDate>Fri, 13 Feb 2026 20:24:01 +0530</pubDate>
            <description><![CDATA[ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸ ಕೈಗೊಳ್ಳುವವರಿಗಾಗಿ ಕೆಎಸ್&zwnj;ಆರ್&zwnj;ಟಿಸಿ ಕಡಿಮೆ ದರದಲ್ಲಿ ವಿಶೇಷ ಪ್ಯಾಕೇಜ್ ಟೂರ್&zwnj;ಗಳನ್ನು ಆರಂಭಿಸಿದೆ. ಪ್ರತಿ ಶನಿವಾರ ಮತ್ತು ಭಾನುವಾರದಂದು ಲಭ್ಯವಿರುವ ಈ ಪ್ರವಾಸಗಳು ಗಗನಚುಕ್ಕಿ-ಭರಚುಕ್ಕಿ, ಕೋಟಿಲಿಂಗೇಶ್ವರ, ಮತ್ತು ಮೇಲುಕೋಟೆಯಂತಹ ಪ್ರಮುಖ ತಾಣಗಳನ್ನು ಒಳಗೊಂಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khbqqz69mp4qs2ma3vzy9dmz,imgname-ksrtc-tour-package-1770994269384.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಫೆ.13): ವಾ&lt;/strong&gt;ರಾಂತ್ಯ ಬಂತೆಂದರೆ ಸಾಕು ಬೆಂಗಳೂರಿಗರು ನಗರದ ಗದ್ದಲದಿಂದ ದೂರ ಎಲ್ಲಾದರೂ ಒಂದು ದಿನದ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡುತ್ತಾರೆ. ಅಂತಹ ಪ್ರವಾಸ ಪ್ರಿಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್&zwnj;ಆರ್&zwnj;ಟಿಸಿ) ಸಿಹಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಅತ್ಯಂತ ಕಡಿಮೆ ದರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ 'ಪ್ಯಾಕೇಜ್ ಟೂರ್' ಸೇವೆಗಳನ್ನು ಪರಿಚಯಿಸಲಾಗಿದೆ.&lt;/p&gt;&lt;p&gt;ಈ ಪ್ಯಾಕೇಜ್ ಟೂರ್&zwnj;ಗಳು ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಕಾರ್ಯಾಚರಣೆ ನಡೆಸಲಿದ್ದು, ನಗರದ ನಿವಾಸಿಗಳಿಗೆ ಒಂದು ದಿನದ ಪ್ರವಾಸವನ್ನು ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ಪೂರೈಸಲು ಸಹಾಯವಾಗಲಿದೆ. ನಿಗಮವು ಇದಕ್ಕಾಗಿ 'ರಾಜಹಂಸ' ಮತ್ತು 'ಅಶ್ವಮೇಧ ಕ್ಲಾಸಿಕ್' ಬಸ್&zwnj;ಗಳನ್ನು ನಿಯೋಜಿಸಿದೆ.&lt;/p&gt;&lt;h2&gt;&lt;strong&gt;ಯಾವೆಲ್ಲಾ ಪ್ಯಾಕೇಜ್&zwnj;ಗಳು ಲಭ್ಯ?&lt;/strong&gt;&lt;/h2&gt;&lt;h3&gt;&lt;strong&gt;1. ಗಗನಚುಕ್ಕಿ - ಭರಚುಕ್ಕಿ - ತಲಕಾಡು ಪ್ರವಾಸ:&lt;/strong&gt;&lt;/h3&gt;&lt;p&gt;ಈ ಪ್ರವಾಸದಲ್ಲಿ ಬೆಂಗಳೂರಿನಿಂದ ಹೊರಟು ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳನ್ನು ವೀಕ್ಷಿಸಬಹುದು. ಒಟ್ಟು 340 ಕಿ.ಮೀ ಪ್ರಯಾಣ ಇದಾಗಿದೆ. ರಾಜಹಂಸ ಬಸ್&zwnj;ನಲ್ಲಿ ವಯಸ್ಕರಿಗೆ 750 ರೂ. ಹಾಗೂ ಮಕ್ಕಳಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಅಶ್ವಮೇಧ ಕ್ಲಾಸಿಕ್ ಬಸ್&zwnj;ನಲ್ಲಿ ಪ್ರಯಾಣಿಸಿದರೆ ವಯಸ್ಕರಿಗೆ 600 ರೂ. ಮತ್ತು ಮಕ್ಕಳಿಗೆ 450 ರೂ. ಟಿಕೆಟ್ ದರವಿರುತ್ತದೆ.&lt;/p&gt;&lt;h3&gt;&lt;strong&gt;2. ಚಿಕ್ಕತಿರುಪತಿ - ಕೋಟಿಲಿಂಗೇಶ್ವರ ಧಾರ್ಮಿಕ ಪ್ರವಾಸ:&lt;/strong&gt;&lt;/h3&gt;&lt;p&gt;ಧಾರ್ಮಿಕ ಆಸಕ್ತಿ ಹೊಂದಿರುವವರಿಗಾಗಿ ಕೋಲಾರ ಜಿಲ್ಲೆಯ ಪ್ರಮುಖ ತಾಣಗಳನ್ನು ಒಳಗೊಂಡ ಈ ಪ್ಯಾಕೇಜ್ ಸೂಕ್ತವಾಗಿದೆ. ಬೆಂಗಳೂರಿನಿಂದ ಹೊರಟು ಚಿಕ್ಕತಿರುಪತಿ, ಕೋಟಿಲಿಂಗೇಶ್ವರ, ಬಂಗಾರುತಿರುಪತಿ, ಆವಣಿ, ಮುಳಬಾಗಿಲು, ಕುರುಡುಮಲೆ ಮತ್ತು ಕೋಲಾರಕ್ಕೆ ಭೇಟಿ ನೀಡಲಾಗುತ್ತದೆ. ಅಶ್ವಮೇಧ ಕ್ಲಾಸಿಕ್ ಬಸ್&zwnj;ನಲ್ಲಿ 270 ಕಿ.ಮೀ ಪ್ರಯಾಣಕ್ಕೆ ವಯಸ್ಕರಿಗೆ 600 ರೂ. ಮತ್ತು ಮಕ್ಕಳಿಗೆ 450 ರೂ. ದರವಿದೆ.&lt;/p&gt;&lt;h3&gt;&lt;strong&gt;3. ಮೇಲುಕೋಟೆ - ಶ್ರೀರಂಗಪಟ್ಟಣ ಪ್ರವಾಸ:&lt;/strong&gt;&lt;/h3&gt;&lt;p&gt;ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ವೀಕ್ಷಣೆಗಾಗಿ ಈ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. ಇದು ಬೆಂಗಳೂರು, ಶ್ರೀರಂಗಪಟ್ಟಣ, ಕಲ್ಲಹಳ್ಳಿ ಮತ್ತು ಮೇಲುಕೋಟೆ ತಾಣಗಳನ್ನು ಒಳಗೊಂಡಿದೆ. 350 ಕಿ.ಮೀ ದೂರದ ಈ ಪ್ರವಾಸಕ್ಕೆ ಅಶ್ವಮೇಧ ಕ್ಲಾಸಿಕ್ ಬಸ್&zwnj;ನಲ್ಲಿ ವಯಸ್ಕರಿಗೆ 670 ರೂ. ಹಾಗೂ ಮಕ್ಕಳಿಗೆ 500 ರೂ. ದರ ನಿಗದಿಪಡಿಸಲಾಗಿದೆ.&lt;/p&gt;&lt;h2&gt;&lt;strong&gt;ಗಮನಿಸಬೇಕಾದ ಅಂಶಗಳು:&lt;/strong&gt;&lt;/h2&gt;&lt;p&gt;ಈ ಟಿಕೆಟ್ ದರವು ಕೇವಲ ಬಸ್ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಪ್ರೇಕ್ಷಣೀಯ ಸ್ಥಳಗಳ ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವೆಚ್ಚವನ್ನು ಪ್ರಯಾಣಿಕರೇ ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ. ಈಗಾಗಲೇ ಈ ಪ್ಯಾಕೇಜ್&zwnj;ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಬುಕಿಂಗ್ ಹೇಗೆ?&lt;/strong&gt;&lt;/h2&gt;&lt;p&gt;ಆಸಕ್ತರು ಕೆಎಸ್&zwnj;ಆರ್&zwnj;ಟಿಸಿಯ ಅಧಿಕೃತ ವೆಬ್&zwnj;ಸೈಟ್ https://ksrtc.in/ ಅಥವಾ www.ksrtc.karnataka.gov.in ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: 080-26252625, 7760990100 / 7760990560 / 7760990287. ಕಡಿಮೆ ಖರ್ಚಿನಲ್ಲಿ ವಾರಾಂತ್ಯವನ್ನು ಅರ್ಥಪೂರ್ಣವಾಗಿ ಕಳೆಯಲು ಬಯಸುವವರಿಗೆ ಕೆಎಸ್&zwnj;ಆರ್&zwnj;ಟಿಸಿಯ ಈ ಪ್ಯಾಕೇಜ್&zwnj;ಗಳು ಅತ್ಯುತ್ತಮ ಆಯ್ಕೆಯಾಗಿವೆ.&lt;/p&gt;]]></content:encoded>
            <category>kolar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/travel/ksrtc-bangalore-weekend-package-tours-route-details-ticket-price-and-booking-sat/articleshow-9glhiu7"/>
        </item>
        <item>
            <title><![CDATA[ಹೊಸಕೋಟೆ ಭೀಕರ ದುರಂತ: ಎಲ್ಲಾ ಏರ್‌ಬ್ಯಾಗ್ ಧ್ವಂಸ, ಕಾರು ಅದೆಷ್ಟು ವೇಗದಲ್ಲಿ ಇತ್ತು ಎಂಬುದಕ್ಕೆ ಸಾಕ್ಷಿ!]]></title>
            <link>https://kannada.asianetnews.com/karnataka-districts/high-speed-xuv700-crash-near-hoskote-claims-seven-lives-including-six-students/articleshow-9k67w45</link>
            <guid isPermaLink="true">https://kannada.asianetnews.com/karnataka-districts/high-speed-xuv700-crash-near-hoskote-claims-seven-lives-including-six-students/articleshow-9k67w45</guid>
            <pubDate>Fri, 13 Feb 2026 12:46:52 +0530</pubDate>
            <description><![CDATA[ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಕ್ಯಾಂಟರ್, ಬೈಕ್ ಮತ್ತು ಎಕ್ಸ್&zwnj;ಯುವಿ ಕಾರಿನ ನಡುವಿನ ಡಿಕ್ಕಿಯಿಂದಾಗಿ, ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khavmy510r8eqn8kw2652ef5,imgname-hoskote-accident--1--1770964809889.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ. ಸತ್ಯವರ ಗ್ರಾಮದ ಸಮೀಪ ಇಂದು ಶುಕ್ರವಾರ ಬೆಳಗ್ಗೆ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕಾರಿನಲ್ಲಿದ್ದ ಆರು ಮಂದಿ ಹಾಗೂ ಓರ್ವ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ.&lt;/p&gt;&lt;p&gt;ಈ ದುರ್ಘಟನೆ ಹೊಸಕೋಟೆ&ndash;ದಾಬಸ್&zwnj;ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕ್ಯಾಂಟರ್ ವಾಹನ, ಬೈಕ್ ಹಾಗೂ ಮಹೀಂದ್ರಾ ಎಕ್ಸ್&zwnj;ಯುವಿ 700 ಕಾರಿನ ನಡುವೆ ಸಂಭವಿಸಿದ ಸರಣಿ ಡಿಕ್ಕಿಯಿಂದ ಈ ಅಪಘಾತ ಸಂಭವಿಸಿದೆ. ಮಾತ್ರವಲ್ಲ ಕ್ಯಾಂಟರ್ ವಾಹನದ ವೀಲ್ ಕಟ್&zwnj; ಆಗಿ ರೋಡ್&zwnj; ಗೆ ಬಂದಾಗ ಎದುರಿನಿಂದ ಬರುತ್ತಿದ್ದ ಬ್ರೀಜಾ ಕಾರು ಕೂಡ ಅದಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ಭೀಕರತೆಯನ್ನು ಸ್ಥಳದಲ್ಲಿನ ಚಿತ್ರಣಗಳೇ ಬಿಚ್ಚಿಡುತ್ತಿದೆ.&lt;/p&gt;&lt;p&gt;ಪ್ರಾಥಮಿಕ ಮಾಹಿತಿಯ ಪ್ರಕಾರ, ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಅತೀವೇಗವಾಗಿ ಚಲಿಸುತ್ತಿದ್ದ ಎಕ್ಸ್&zwnj;ಯುವಿ 700 ಕಾರು ಮೊದಲು ಕಾರಿನಿಂದ ಮುಂದೆ ಸಾಗುತ್ತಿದ್ದ ಬೈಕ್&zwnj;ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆ ಮೇಲೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ನಂತರ ನಿಯಂತ್ರಣ ತಪ್ಪಿದ ಕಾರು ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.&lt;/p&gt;&lt;h2&gt;ಎಲ್ಲಾ ಏರ್&zwnj;ಬ್ಯಾಗ್&zwnj;ಗಳು ಕೂಡ ಬ್ಲಾಸ್ಟ್ ಆಗಿ ಧ್ವಂಸ&lt;/h2&gt;&lt;p&gt;ಕ್ಯಾಂಟರ್&zwnj;ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ ನ ಎಲ್ಲಾ ಏರ್ ಬ್ಯಾಗ್ ಗಳು ಓಪನ್ ಆಗಿದೆ. ಕ್ಯಾಂಟರ್&zwnj; ನ ವೀಲ್ ಕಟ್ ಆಗಿ ರಸ್ತೆಗೆ ಉರುಳಿದೆ. ಅಪಘಾತದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ಕಾರಿನಿಂದ ಓಪನ್ ಆಗಿರುವ ಏರ್ ಬ್ಯಾಗ್&zwnj;ಗಳು ಬಿಚ್ಚಿಡುತ್ತಿವೆ. ಡಿಕ್ಕಿಯ ರಭಸಕ್ಕೆ ಕಾರಿನ ಎಲ್ಲಾ ಏರ್ ಬ್ಯಾಗ್&zwnj;ಗಳು ಓಪನ್ ಆಗಿದ್ದು, ಎಲ್ಲಾ ಏರ್&zwnj;ಬ್ಯಾಗ್&zwnj;ಗಳು ಕೂಡ ಬ್ಲಾಸ್ಟ್ ಆಗಿ ಧ್ವಂಸವಾಗಿದೆ.&lt;/p&gt;&lt;p&gt;ಅಪಘಾತದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಎಕ್ಸ್&zwnj;ಯುವಿ 700 ಕಾರಿನ ನೋಂದಣಿ ಸಂಖ್ಯೆ KA 03 NW 0138 ಆಗಿದ್ದು, ಕಾರಿನ ಗುರುತೇ ಸಿಗದಂತಾಗಿದೆ. ಸರಣಿ ಅಪಘಾತಕ್ಕೆ ಕಾರಿನ ಅತೀವೇಗ ಮತ್ತು ನಿರ್ಲಕ್ಷ್ಯ ಚಾಲನೆಯೇ ಕಾರಣವಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.&lt;/p&gt;&lt;h2&gt;ಮೃತಪಟ್ಟವರ ಮಾಹಿತಿ ಇಂತಿದೆ:&lt;/h2&gt;&lt;ol&gt; &lt;li&gt;ಅಶ್ವಿನ್ ನಾಯರ್ 17 ವರ್ಷ ಆರ್ ವಿ ಪಿಯು ಕಾಲೇಜ್ , ಕೊತ್ತನೂರು ನಿವಾಸಿ&lt;/li&gt; &lt;li&gt;ಅರ್ಹನ್ ಶರೀಫ್, ಸಿಎಂಆರ್ ಶಾಲೆ ವಿದ್ಯಾರ್ಥಿ, ಹೆಚ್ ವಿ ಆರ್ ಲೇಔಟ್ ನಿವಾಸಿ&lt;/li&gt; &lt;li&gt;ಅಯನ್ ಅಲಿ 17 ವರ್ಷ ಸಿ ಎಂ ಆರ್ ಸ್ಕೂಲ್&lt;/li&gt; &lt;li&gt;ಭರತ್ 18 ವರ್ಷ , ಸಿಎಂಆರ್ ಕಾಲೇಜ್, ಫ್ರೇಜನ್ ಟೌನ್ ನಿವಾಸಿ.&lt;/li&gt; &lt;li&gt;ಈತನ್ ಜಾರ್ಜ್ 17 ವರ್ಷ. ಆರ್ ವಿ 1st ಪಿಯು ಕಾಲೇಜ್( ಹುಳಿಮಾವು ನಿವಾಸಿ)&lt;/li&gt; &lt;li&gt;ಫರ್ಹಾನ್, 17 ವರ್ಷ&lt;/li&gt; &lt;li&gt;ಗಗನ್ 26 ವರ್ಷ ( ಬೈಕ್ ಸವಾರ ) ಸಫಲ್ ನಲ್ಲಿ ಕೆಲಸ&lt;/li&gt;&lt;/ol&gt;]]></content:encoded>
            <category>kolar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/high-speed-xuv700-crash-near-hoskote-claims-seven-lives-including-six-students/articleshow-9k67w45"/>
        </item>
        <item>
            <title><![CDATA[ಗಗನಕ್ಕೇರಿದ ಬೆಲೆ: KGFನಲ್ಲಿರೋ ಚಿನ್ನ ಮಿಶ್ರಿತ ಮಣ್ಣನ್ನು ಮೂಟೆಗಳಲ್ಲಿ ತುಂಬಿಕೊಂಡು ಹೋದ ಮಹಿಳೆಯರು]]></title>
            <link>https://kannada.asianetnews.com/karnataka-districts/woman-arrested-for-stealing-gold-mixed-soil-from-kgf-mining-area-in-kolar-mrq/articleshow-9qxmm8t</link>
            <guid isPermaLink="true">https://kannada.asianetnews.com/karnataka-districts/woman-arrested-for-stealing-gold-mixed-soil-from-kgf-mining-area-in-kolar-mrq/articleshow-9qxmm8t</guid>
            <pubDate>Sat, 21 Feb 2026 13:38:15 +0530</pubDate>
            <description><![CDATA[&lt;p&gt;ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ, ಚಿನ್ನ ಮಿಶ್ರಿತ ಮಣ್ಣನ್ನು ಕಳವು ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಹಲವರನ್ನು ಉರಿಗಾಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಣಿ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khzkcmc60eq6sx1ks1nnd53p,imgname-gold-mining-1771660792198.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ&lt;/strong&gt;: ದಿನೇ ದಿನೇ ಚಿನ್ನದ ಬೆಲೆ ಕಾಣುತ್ತಿರುವ ಸಂದರ್ಭದಲ್ಲಿ 2001ರಲ್ಲಿ ಮುಚ್ಚಿರುವ ಚಿನ್ನದ ಗಣಿಗಳ ಪ್ರದೇಶದಲ್ಲಿ ಚಿನ್ನ ಮಿಶ್ರಿತ ಮಣ್ಣನ್ನು ಕೊರೆದು ಚೀಲಗಳಲ್ಲಿ ತುಂಬಿಕೊಂಡು ಕಳವು ಮಾಡುತ್ತಿದ್ದ ಮಹಿಳೆಯರನ್ನು ಉರಿಗಾಂ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಉರಿಗಾಂ ಠಾಣಾ ವ್ಯಾಪ್ತಿಗೆ ಸೇರಿದ ಬಿಜಿಎಂಎಲ್&zwnj;ಗೆ ಸೇರಿದ ಗಿಲ್ಬರ್ಟ್ ಶಾಫ್ಟ್&zwnj;ನ ಹಿಂಭಾಗದಲ್ಲಿ ಸೆಕ್ಯೂರಿಟಿ ಗಾರ್ಡ್ ತ್ಯಾಗವೇಲು ಗಸ್ತು ಮಾಡುತ್ತಿದ್ದಾಗ ಆರೋಪಿಗಳಾದ ಕಾರ್ತಿಕ್, ಶ್ಯಾಮ್ ವಿಜಯ್, ವೇಲಾಂಗಣಿ, ಸೌಂದರಿ, ಸುಜಾತ, ಮೇರಿ, ರಿಚರ್ಡ್ ಎಂಬುವವರು ಬಿಜಿಎಂಎಲ್&zwnj;ಗೆ ಸೇರಿದ ಗಿಫ್ಫಾರ್ಟ್ ಶಾಫ್ಟ್ ಕಾಂಪೌಂಡ್&zwnj;ಗೆ ಅಳವಡಿಸಿದ್ದ ಕಬ್ಬಿಣದ ಕಂಬಿಗಳಿಂದ ಕೂಡಿದ್ದ ಬೇಲಿಯನ್ನು ಕಿತ್ತು ಒಳಗೆ ಪ್ರವೇಶಿಸಿ ಗಿಫ್ಫಾರ್ಟ್ ಶಾಫ್ಟ್ನ ಹಿಂಭಾಗದಲ್ಲಿ ಬಿದ್ದಿರುವ ಚಿನ್ನ ಮಿಶ್ರಿತ ಮಣ್ಣನ್ನು ಕೊರೆದು ಮೂಟೆಗಳಲ್ಲಿ ತುಂಬಿಸಿಕೊಂಡು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದುದು ಪತ್ತೆಯಾಗಿದ್ದು, ಕೂಡಲೇ ಆರೋಪಿಗಳನ್ನು ಹಿಡಿದು ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;41 ಸಾವಿರ ಬೆಲೆ ಬಾಳುವ ಚಿನ್ನ ಮಿಶ್ರಿತ ಮಣ್ಣು ವಶಕ್ಕೆ&lt;/strong&gt;&lt;/h2&gt;&lt;p&gt;ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 12 ಸಿಮೆಂಟ್ ಮೂಟೆಗಳಲ್ಲಿ ತುಂಬಿಸಿದ್ದ 41 ಸಾವಿರ ಬೆಲೆ ಬಾಳುವ ಚಿನ್ನ ಮಿಶ್ರಿತ ಮಣ್ಣು, 6 ಕಬ್ಬಿಣದ ಕೊಕ್ಕಿಗಳು, 2 ಪ್ಲಾಸ್ಟಿಕ್ ಬಾಣಲಿ, 2 ಸನಿಕೆ, ಒಂದು ಕಬ್ಬಿಣದ ಹಾರೆಯನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಚಿನ್ನದ ಗಣಿಗಳ ಪ್ರದೇಶದಲ್ಲಿ ಚಿನ್ನದ ಅಧಿರು ಮಿಶ್ರಿತ ಮಣ್ಣಿನ ಎರಡು ಪ್ರಕರಣಗಳು ದಾಖಲಾಗಿದ್ದು, 12 ಸಿಮೆಂಟ್ ಚೀಲಗಳ ಚಿನ್ನ ಮಿಶ್ರಿತ ಮಣ್ಣನ್ನು ವಶಪಡಿಕೊಳ್ಳಲಾಗಿದೆ ಎಂದು ಎಸ್ಪಿ ಶಿವಾಂಶು ರಜಪೂತ್ ತಿಳಿಸಿದ್ದಾರೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೋಲಾರಕ್ಕೆ ಜಪಾನ್&zwnj; ಜಾಕ್&zwnj;ಪಾಟ್, 600 ಕೋಟಿ ಹೂಡಿಕೆಗೆ ಅಸ್ತು; ಧಾರವಾಡದಲ್ಲಿ ಎಂಜಿನಿಯರ್ ಉದ್ಯೋಗ ಸೃಷಿ&lt;/strong&gt;&lt;/p&gt;&lt;h3&gt;&lt;strong&gt;ಚಿನ್ನದ ಗಣಿಗಳ ಭದ್ರತಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ&lt;/strong&gt;&lt;/h3&gt;&lt;p&gt;ಈಗಾಗಲೇ ಚಿನ್ನದ ಗಣಿಗಳ ಪ್ರದೇಶದಲ್ಲಿ ಪೊಲೀಸ್&zwnj;ರು ಪಹರೆಯನ್ನು ಬಿಗಿಗೊಳಿಸಲಾಗಿದ್ದು, ಇದರ ಜೊತೆಗೆ ಚಿನ್ನದ ಗಣಿಗಳ ಭದ್ರತಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ನಿಷೇದಿತ ಚಿನ್ನದ ಗಣಿಗಳ ಪ್ರದೇಶದಲ್ಲಿ ಚಿನ್ನದ ಅದಿರು ಮಿಶ್ರಿತ ಮಣ್ಣನ್ನು ತೆಗೆಯಬಾರದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ : &lt;/strong&gt;&lt;strong&gt;ಕೋಲಾರದಲ್ಲಿ 10 ಸಾವಿರ ಕೋಟಿ ಚಿನ್ನದ ಗಣಿಗಾರಿಕೆ ಯೋಜನೆ!&lt;/strong&gt;&lt;/p&gt;]]></content:encoded>
            <category>kolar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/woman-arrested-for-stealing-gold-mixed-soil-from-kgf-mining-area-in-kolar-mrq/articleshow-9qxmm8t"/>
        </item>
        <item>
            <title><![CDATA[ಶಾಸಕ ಶರತ್ ಬಚ್ಚೇಗೌಡರ ಹೊಸಕೋಟೆ ಮೆಟ್ರೋ ಕನಸು ನನಸು, ಮೆಟ್ರೋ ವಿಸ್ತರಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್]]></title>
            <link>https://kannada.asianetnews.com/karnataka-districts/namma-metro-to-reach-hoskote-karnataka-govt-clears-kr-puram-extension-study/articleshow-aihg7ro</link>
            <guid isPermaLink="true">https://kannada.asianetnews.com/karnataka-districts/namma-metro-to-reach-hoskote-karnataka-govt-clears-kr-puram-extension-study/articleshow-aihg7ro</guid>
            <pubDate>Mon, 02 Feb 2026 18:58:43 +0530</pubDate>
            <description><![CDATA[&lt;p&gt;ಹೊಸಕೋಟೆ ಜನರ ಬಹುನಿರೀಕ್ಷಿತ ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಶಾಸಕ ಶರತ್ ಬಚ್ಚೇಗೌಡರ ಪ್ರಯತ್ನದ ಫಲವಾಗಿ, ಕೆ.ಆರ್.ಪುರಂನಿಂದ ಹೊಸಕೋಟೆಯವರೆಗಿನ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯು ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4yppefvemjfw7v3bmza2zy9,imgname-namma-metro-fares-to-rise-1757672061435.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಕೋಟೆ:&lt;/strong&gt; ಬಹುನಿರೀಕ್ಷಿತ ಹೊಸಕೋಟೆ ಜನರ ಕನಸಾದ ಮೆಟ್ರೋ ಯೋಜನೆ ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ಕೆ.ಆರ್.ಪುರಂನಿಂದ ಹೊಸಕೋಟೆಯವರೆಗೆ ಮೆಟ್ರೋ ರೈಲು ವಿಸ್ತರಿಸುವ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಯೋಜನೆಯ ಕಾರ್ಯಸಾಧ್ಯತೆ ಮತ್ತು ತಾಂತ್ರಿಕ ಅಧ್ಯಯನಕ್ಕಾಗಿ ದೆಹಲಿ ಮೂಲದ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಅಧ್ಯಯನ ನಡೆಸುವಂತೆ ನಿರ್ದೇಶನ ನೀಡಲಾಗಿದೆ.&lt;/p&gt;&lt;h2&gt;ಭರವಸೆ ನೀಡಿದ್ದ ಶಾಸಕ ಶರತ್ ಬಚ್ಚೇಗೌಡ&lt;/h2&gt;&lt;p&gt;ಕ್ಷೇತ್ರದ ಜನರಿಗೆ ಚುನಾವಣಾ ಪ್ರಚಾರದ ವೇಳೆ ಹೊಸಕೋಟೆಗೆ ಮೆಟ್ರೋ ತರಲಾಗುವುದು ಎಂದು ಭರವಸೆ ನೀಡಿದ್ದ ಶಾಸಕ ಶರತ್ ಬಚ್ಚೇಗೌಡರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಆ ಭರವಸೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಕೆ.ಆರ್.ಪುರಂನಿಂದ ಹೊಸಕೋಟೆಯವರೆಗೆ ಒಟ್ಟು 16.3 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗವನ್ನು ನಿರ್ಮಿಸುವ ಪ್ರಸ್ತಾವನೆ ರೂಪುಗೊಂಡಿದ್ದು, ಈ ಮಾರ್ಗದಲ್ಲಿ 11 ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್&zwnj;ಸಿಎಲ್) ಇದೀಗ ಅಧ್ಯಯನ ಕಾರ್ಯವನ್ನು ಆರಂಭಿಸಿದೆ.&lt;/p&gt;&lt;p&gt;ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ಹೊಸಕೋಟೆ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿದಿನವೂ ಹೊಸಕೋಟೆ&ndash;ಬೆಂಗಳೂರು ಮಾರ್ಗದಲ್ಲಿ ಸಾವಿರಾರು ಜನರು ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಅಲ್ಲದೆ ಕೋಲಾರ, ಮಾಲೂರು, ಚಿಂತಾಮಣಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಹೊಸಕೋಟೆಗೆ ಬಂದು ಅಲ್ಲಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ.&lt;/p&gt;&lt;p&gt;ಈ ಹಿನ್ನಲೆಯಲ್ಲಿ, ಹೊಸಕೋಟೆ ಭಾಗದ ಜನರ ಸಂಚಾರ ಸುಗಮಗೊಳಿಸುವುದು ಹಾಗೂ ಬೆಂಗಳೂರಿಗೆ ಉದ್ಯೋಗ, ಶಿಕ್ಷಣ ಮತ್ತು ಇತರೆ ಕೆಲಸಗಳಿಗೆ ತೆರಳುವವರಿಗೆ ಅನುಕೂಲವಾಗಲೆಂದು ಮೆಟ್ರೋ ರೈಲು ಸೇವೆಯನ್ನು ಹೊಸಕೋಟೆಯವರೆಗೆ ವಿಸ್ತರಿಸುವ ಅಗತ್ಯ ಬಹುಕಾಲದಿಂದಲೂ ಕೇಳಿಬರುತ್ತಿತ್ತು. ಈ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಶಾಸಕ ಶರತ್ ಬಚ್ಚೇಗೌಡರು ಚುನಾವಣಾ ಸಮಯದಲ್ಲೇ ಮೆಟ್ರೋ ಯೋಜನೆಯ ಭರವಸೆ ನೀಡಿದ್ದರು.&lt;/p&gt;&lt;h2&gt;ಭರವಸೆ ಈಡೇರಿಸಲು ಶರತ್ ಬಚ್ಚೇಗೌಡರು ನಿರಂತರ ಪ್ರಯತ್ನ&lt;/h2&gt;&lt;p&gt;ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರವೂ ತಮ್ಮ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಶರತ್ ಬಚ್ಚೇಗೌಡರು ನಿರಂತರ ಪ್ರಯತ್ನ ನಡೆಸಿದರು. ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆ ಜಾರಿಗೆ ತರುವಂತೆ ಆಗ್ರಹಿಸುತ್ತಲೇ ಬಂದ ಅವರು, ಹೊಸಕೋಟೆಯವರೆಗೆ ಮೆಟ್ರೋ ವಿಸ್ತರಣೆ ಅಗತ್ಯವಿದೆ ಎಂದು ವಿಧಾನಸಭೆಯಲ್ಲಿಯೂ ವಿಷಯವನ್ನು ಪ್ರಸ್ತಾಪಿಸಿದ್ದರು. ಅವರ ಸತತ ಪ್ರಯತ್ನದ ಫಲವಾಗಿ ಇದೀಗ ಮೆಟ್ರೋ ವಿಸ್ತರಣಾ ಯೋಜನೆ ಅಧ್ಯಯನ ಹಂತಕ್ಕೆ ತಲುಪಿದ್ದು, ಹೊಸಕೋಟೆ ಜನರಲ್ಲಿ ಹೊಸ ನಿರೀಕ್ಷೆ ಮತ್ತು ಸಂತಸ ಮೂಡಿಸಿದೆ. ಈ ಯೋಜನೆ ಜಾರಿಗೆ ಬಂದರೆ ಹೊಸಕೋಟೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ತಾಲ್ಲೂಕುಗಳ ಜನರಿಗೆ ಸುಗಮ ಹಾಗೂ ವೇಗವಾದ ಸಂಚಾರ ಸೌಲಭ್ಯ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>kolar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/namma-metro-to-reach-hoskote-karnataka-govt-clears-kr-puram-extension-study/articleshow-aihg7ro"/>
        </item>
        <item>
            <title><![CDATA[ಕೋಲಾರ: ತಂಗಿಯನ್ನು ನಿಂದಿಸಿದ್ದಕ್ಕೆ 5 ಬಾರಿ ದೂರು ಕೊಟ್ಟರೂ ಪೊಲೀಸರು ಕ್ಯಾರೇ ಅನ್ನಲಿಲ್ಲ ಅದಕ್ಕಾಗಿ ಕೊಂದೆ!]]></title>
            <link>https://kannada.asianetnews.com/karnataka-districts/kolar-murder-case-suspect-confesses-to-brutal-killing-on-social-media/articleshow-bhyx05k</link>
            <guid isPermaLink="true">https://kannada.asianetnews.com/karnataka-districts/kolar-murder-case-suspect-confesses-to-brutal-killing-on-social-media/articleshow-bhyx05k</guid>
            <pubDate>Thu, 29 Jan 2026 18:17:02 +0530</pubDate>
            <description><![CDATA[&lt;p&gt;ಕೋಲಾರದ ಮೆಟ್ಟುಬಂಡೆ ಬಳಿ ನಡೆದ ಯಲ್ಲೇಶ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆರೋಪಿ ಬಿಂದು ಕುಮಾರ್, ತನ್ನ ತಂಗಿಗೆ ಯಲ್ಲೇಶ್ ಕಿರುಕುಳ ನೀಡುತ್ತಿದ್ದ ಕಾರಣ, ತಾನೇ ಈ ಕೊಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ತಪ್ಪೊಪ್ಪಿಕೊಂಡಿದ್ದಾನೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kg274cv6vqsn2cq6ez0j6mjz,imgname-murder-1769601119078.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ: &lt;/strong&gt;ಜಿಲ್ಲೆಯ ಮೆಟ್ಟುಬಂಡೆ ಬಳಿ ಸಂಭವಿಸಿದ ಭೀಕರ ಕೊಲೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಜನವರಿ 27ರಂದು ಯಲ್ಲೇಶ್ (41) ಎಂಬ ವ್ಯಕ್ತಿಯನ್ನು ನಿರ್ದಯವಾಗಿ ಕೊಲೆ ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಶಂಕಿತ ಆರೋಪಿಯೊಬ್ಬ ಸ್ವತಃ ಪ್ರತ್ಯಕ್ಷವಾಗಿ ತಪ್ಪೊಪ್ಪಿಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.&lt;/p&gt;&lt;p&gt;ನರಸಾಪುರ ನಿವಾಸಿ ಸಂತೋಷ್ ಅವರ ಪುತ್ರ ಬಿಂದು ಕುಮಾರ್ ಎಂಬಾತನೇ ಈ ಕೊಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಬಹಿರಂಗ ಹೇಳಿಕೆ ನೀಡಿದ್ದಾನೆ. &ldquo;ಯಲ್ಲೇಶ್&zwnj;ನ ಕೊಲೆ ಮಾಡಿದ್ದು ನಾನೇ. ನನ್ನೊಂದಿಗೆ ಅಕ್ಷಯ್ ಮತ್ತು ಅಕ್ಷಯ್ ಅವರ ಸಹೋದರ ಕೂಡ ಇದ್ದರು&rdquo; ಎಂದು ಬಿಂದು ಕುಮಾರ್ ಹೇಳಿಕೊಂಡಿದ್ದಾನೆ.&lt;/p&gt;&lt;h2&gt;ತಂದೆ ಭಾಗಿಯಾಗಿಲ್ಲವೆಂದು &amp;nbsp;ಸ್ಪಷ್ಟನೆ:&lt;/h2&gt;&lt;p&gt;ಈ ಕೊಲೆ ಪ್ರಕರಣಕ್ಕೆ ತನ್ನ ತಂದೆ ಸಂತೋಷ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ ಬಿಂದು ಕುಮಾರ್, &ldquo;ನನ್ನ ತಂದೆ ಸಂತೋಷ್ ಕಳೆದ ಎಂಟು ವರ್ಷಗಳಿಂದಲೇ ಮನೆ ಬಿಟ್ಟು ದೂರವಾಗಿದ್ದಾರೆ. ಈ ಘಟನೆಯಲ್ಲಿ ಅವರು ಭಾಗಿಯಾಗಿಲ್ಲ&rdquo; ಎಂದು ಹೇಳಿದ್ದಾನೆ.&lt;/p&gt;&lt;p&gt;ತಪ್ಪೊಪ್ಪಿಗೆಯಲ್ಲಿ ಆರೋಪಿ ಬಿಂದು ಕುಮಾರ್ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾನೆ. &ldquo;ಯಲ್ಲೇಶ್ ನನ್ನ ತಂಗಿಯ ಬಗ್ಗೆ ಅತ್ಯಂತ ಕೆಟ್ಟ ಹಾಗೂ ಅವಾಚ್ಯವಾಗಿ ಮಾತನಾಡುತ್ತಿದ್ದ. ಇದಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳು ನಮ್ಮ ಬಳಿ ಇವೆ. ಈ ವಿಷಯವಾಗಿ ಐದು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ&rdquo; ಎಂದು ಆರೋಪಿಸಿದ್ದಾನೆ.&lt;/p&gt;&lt;p&gt;ಇದಲ್ಲದೆ, &ldquo;ಯಲ್ಲೇಶ್ ನನ್ನ ಮೇಲೆ ಹಲ್ಲೆ ಮಾಡಿಸಿದ್ದ. ನಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಕೂಡ ನೀಡಿದ್ದ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೇ ಆತ ಬೆದರಿಕೆ ಹಾಕಿದ್ದಾನೆ. ನಮ್ಮ ಜೀವಕ್ಕೆ ಅಪಾಯವಿದೆ ಎಂಬ ಮಾಹಿತಿ ನನಗೆ ಮುಂಚಿತವಾಗಿಯೇ ಲಭಿಸಿತ್ತು&rdquo; ಎಂದು ಬಿಂದು ಕುಮಾರ್ ಹೇಳಿದ್ದಾನೆ.&lt;/p&gt;&lt;h2&gt;ಕೊಲೆ ಮಾಡಿದ್ದು ಇದಕ್ಕಂತೆ!&lt;/h2&gt;&lt;p&gt;ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, &ldquo;ನನ್ನನ್ನು ಮತ್ತು ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ನಾನು ಮೊದಲು ಕ್ರಮ ಕೈಗೊಳ್ಳಬೇಕಾಯಿತು. ಅದಕ್ಕಾಗಿ ಕೊಲೆ ಮಾಡಲು ತೀರ್ಮಾನಿಸಿದೆ&rdquo; ಎಂದು ಆತ ಹೇಳಿಕೊಂಡಿದ್ದಾನೆ. ಜೊತೆಗೆ, &ldquo;ಯಲ್ಲೇಶ್&zwnj;ನನ್ನು ಕಲ್ಲಿನಿಂದ ಅಲ್ಲ, ಮಚ್ಚಿನಿಂದ ಕೊಲೆ ಮಾಡಲಾಗಿದೆ. ಮಚ್ಚಿನೊಂದಿಗೆ ನಾವೇ ನ್ಯಾಯಾಲಯದ ಎದುರು ಶರಣಾಗುತ್ತೇವೆ&rdquo; ಎಂದು ಸಾಮಾಜಿಕ ಜಾಲತಾಣದ ಮೂಲಕ ಘೋಷಣೆ ಮಾಡಿದ್ದಾನೆ.&lt;/p&gt;&lt;p&gt;ಇನ್ನೊಂದು ಮಹತ್ವದ ಅಂಶವೆಂದರೆ, ಯಲ್ಲೇಶ್, ಶಂಕಿತ ಆರೋಪಿ ಸಂತೋಷ್ ಅವರ ಪತ್ನಿಯನ್ನು ಪ್ರೀತಿಸಿ ಮದುವೆಯಾಗಿದ್ದನೆಂಬ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿಯೇ ಕುಟುಂಬದೊಳಗಿನ ವೈಷಮ್ಯ ಮತ್ತು ದ್ವೇಷ ಈ ಭೀಕರ ಕೊಲೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.&lt;/p&gt;&lt;p&gt;ಮೊದಲು ಯಲ್ಲೇಶ್ ಕೊಲೆ ಮಾಡಿಲ್ಲ ಎಂದು ತಂದೆ ಸಂತೋಷ್ ಸ್ಪಷ್ಟನೆ ನೀಡಿದ ನಂತರವೇ, ಅವರ ಪುತ್ರ ಬಿಂದು ಕುಮಾರ್ ಸ್ವತಃ ಮುಂದೆ ಬಂದು ಕೊಲೆ ಆರೋಪವನ್ನು ಒಪ್ಪಿಕೊಂಡಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ.&lt;/p&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಪ್ಪೊಪ್ಪಿಗೆ ವೀಡಿಯೋವನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಈ ಘಟನೆ ಭಾರೀ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>kolar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kolar-murder-case-suspect-confesses-to-brutal-killing-on-social-media/articleshow-bhyx05k"/>
        </item>
        <item>
            <title><![CDATA[ಹೊಸಕೋಟೆ ಭೀಕರ ಅಪಘಾತ: 7 ಮಂದಿ ಮೃತರ ಗುರುತು ಪತ್ತೆ, ಸಾವನ್ನಪ್ಪಿದವರು 17 ವರ್ಷದ ವಿದ್ಯಾರ್ಥಿಗಳು!]]></title>
            <link>https://kannada.asianetnews.com/karnataka-districts/fatal-chain-collision-involving-xuv-lorry-and-bike-near-hoskote-leaves-seven-dead/articleshow-blnn0va</link>
            <guid isPermaLink="true">https://kannada.asianetnews.com/karnataka-districts/fatal-chain-collision-involving-xuv-lorry-and-bike-near-hoskote-leaves-seven-dead/articleshow-blnn0va</guid>
            <pubDate>Fri, 13 Feb 2026 11:29:08 +0530</pubDate>
            <description><![CDATA[ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಶುಕ್ರವಾರ ನಡೆದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್, ಬೈಕ್ ಮತ್ತು ಎಕ್ಸ್&zwnj;ಯುವಿ ಕಾರಿನ ನಡುವೆ ನಡೆದ ಈ ದುರಂತದಲ್ಲಿ ಮೃತಪಟ್ಟವರಲ್ಲಿ ಆರು ವಿದ್ಯಾರ್ಥಿಗಳು ಮತ್ತು ಓರ್ವ ಬೈಕ್ ಸವಾರ ಸೇರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khamczgt5t3fbvbqmqhz2q2v,imgname-hoskote-accident-car-and-canter-photos--5--1770957209114.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ. ಸತ್ಯವರ ಗ್ರಾಮದ ಸಮೀಪ ಇಂದು ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದ್ದು, ಮೃತರ ಗುರುತು ಪತ್ತೆಯಾಗಿದೆ.&lt;/p&gt;&lt;h2&gt;ಕಾರಿನಲ್ಲಿದ್ದ 6 ಮಂದಿ ವಿದ್ಯಾರ್ಥಿಗಳು, ಓರ್ವ ಬೈಕ್ ಸವಾರ&lt;/h2&gt;&lt;p&gt;ಹೊಸಕೋಟೆ&ndash;ದಾಬಸ್&zwnj;ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಕ್ಸ್&zwnj;ಯುವಿ (XUV) ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿದ್ದು, ಈ ಭೀಕರ ದುರ್ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ 6 ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದರೆ, ಕಾರಿನಲ್ಲಿದ್ದವರು ಮತ್ತು ಬೈಕ್ ಸವಾರರು ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು.&lt;/p&gt;&lt;h2&gt;ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದು, ಮೃತ ವಿದ್ಯಾರ್ಥಿಗಳ ವಿವರಗಳು ಈ ಕೆಳಕಂಡಂತಿವೆ:&lt;/h2&gt;&lt;ul&gt; &lt;li&gt;ಅಶ್ವಿನ್ ನಾಯರ್ (17) &ndash; ಆರ್&zwnj;ವಿ ಪಿಯು ಕಾಲೇಜ್ ವಿದ್ಯಾರ್ಥಿ, ಕೊತ್ತನೂರು ನಿವಾಸಿ&lt;/li&gt; &lt;li&gt;ಅರ್ಹನ್ ಶರೀಫ್ &ndash; ಸಿಎಂಆರ್ ಶಾಲೆ ವಿದ್ಯಾರ್ಥಿ, ಹೆಚ್&zwnj;ವಿಆರ್ ಲೇಔಟ್ ನಿವಾಸಿ&lt;/li&gt; &lt;li&gt;ಅಯನ್ ಅಲಿ (17) &ndash; ಸಿಎಂಆರ್ ಶಾಲೆ ವಿದ್ಯಾರ್ಥಿ&lt;/li&gt; &lt;li&gt;ಭರತ್ (18) &ndash; ಸಿಎಂಆರ್ ಕಾಲೇಜ್ ವಿದ್ಯಾರ್ಥಿ, ಫ್ರೇಜರ್ ಟೌನ್ ನಿವಾಸಿ&lt;/li&gt; &lt;li&gt;ಈತನ್ ಜಾರ್ಜ್ (17) &ndash; ಆರ್&zwnj;ವಿ ಪ್ರಥಮ ಪಿಯು ಕಾಲೇಜ್ ವಿದ್ಯಾರ್ಥಿ, ಹುಳಿಮಾವು ನಿವಾಸಿ&lt;/li&gt; &lt;li&gt;ಫರ್ಹಾನ್ &amp;nbsp;(17) -&amp;nbsp;ಮೃತಪಟ್ಟ ಮತ್ತೊಬ್ಬ ಯುವಕ&lt;/li&gt; &lt;li&gt;ಗಗನ್ (26) - ಮೃತ ಬೈಕ್ ಸವಾರ, ಸಫಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ&amp;nbsp;&lt;/li&gt;&lt;/ul&gt;&lt;p&gt;ಅಪಘಾತಕ್ಕೀಡಾದ ಎಕ್ಸ್&zwnj;ಯುವಿ ಕಾರು ಅಯನ್ ಅಲಿ ಎಂಬ ಯುವಕನಿಗೆ ಸೇರಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ಆಕ್ರಂದನ ಮುಗಿಲು ಮುಟ್ಟಿದೆ. ಯುವ ವಯಸ್ಸಿನ ವಿದ್ಯಾರ್ಥಿಗಳ ಸಾವಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಮತ್ತು ದುಃಖ ವ್ಯಕ್ತವಾಗಿದೆ.&lt;/p&gt;]]></content:encoded>
            <category>kolar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/fatal-chain-collision-involving-xuv-lorry-and-bike-near-hoskote-leaves-seven-dead/articleshow-blnn0va"/>
        </item>
        <item>
            <title><![CDATA[ಸಡಗರ ಸಂಭ್ರಮದಿಂದ ನಡೆದ ಐತಿಹಾಸಿಕ ಬೇತಮಂಗಲದ ಒನಕೆ ಕರಗ]]></title>
            <link>https://kannada.asianetnews.com/karnataka-districts/the-historic-betamangala-festival-onake-karaga-was-celebrated-with-great-enthusiasm-kolar-mrq/articleshow-flhgc0z</link>
            <guid isPermaLink="true">https://kannada.asianetnews.com/karnataka-districts/the-historic-betamangala-festival-onake-karaga-was-celebrated-with-great-enthusiasm-kolar-mrq/articleshow-flhgc0z</guid>
            <pubDate>Wed, 01 Apr 2026 11:38:13 +0530</pubDate>
            <description><![CDATA[&lt;p&gt;ಕೋಲಾರದ ಬೇತಮಂಗಲದಲ್ಲಿ 116ನೇ ವರ್ಷದ ಐತಿಹಾಸಿಕ ಒನಕೆ ಕರಗವು ಸಡಗರದಿಂದ ಜರುಗಿತು. ಇದರೊಂದಿಗೆ, ದಾವಣಗೆರೆಯ ಹೆಮ್ಮನಬೇತೂರಿನಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಮತ್ತು ವೇಮಗಲ್&zwnj;ನಲ್ಲಿ ದೊಡ್ಡ ದ್ಯಾವರ ಜಾತ್ರೆಯು ಭಕ್ತಿಭಾವದಿಂದ ನೆರವೇರಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn3tcjm08d2kk6xvef6t5p28,imgname-onake-karaaga-1775023573632.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ:&lt;/strong&gt; ಬೇತಮಂಗಲದ ಐತಿಹಾಸಿಕ ಪ್ರಸಿದ್ಧ 116ನೇ ವರ್ಷದ ಕರಗ ಮಹೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು, ವಸಂತ್ಯುತ್ಸವದ ಪ್ರಯುಕ್ತ ನಡೆದ &lsquo;ಒನಕೆ ಕರಗ&rsquo; ಪ್ರದರ್ಶನವು ನೋಡುಗರ ಕಣ್ಮನ ಸೆಳೆಯಿತು.&lt;/p&gt;&lt;p&gt;ಕರಗ ಪೂಜಾರಿ ಕೃಷ್ಣಮೂರ್ತಿ ತಲೆಯ ಮೇಲೆ ಒನಕೆ ಕರಗ ಹೊತ್ತು, ತಮಟೆ ಹಾಗೂ ವಾದ್ಯಗೋಷ್ಠಿಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಅತ್ಯಂತ ಸಮತೋಲನದಿಂದ ಪ್ರದರ್ಶಿಸಿದ ನೃತ್ಯವು ನೆರೆದಿದ್ದ ಸಾವಿರಾರು ಭಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕರಗ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಪೋತಲರಾಜು ಗಾವು ಸೇವೆ ನೆರವೇರಿತು.&lt;/p&gt;&lt;p&gt;ಧ್ವಜಾರೋಹಣದ ಮೂಲಕ ವಿಧ್ಯುಕ್ತವಾಗಿ ಆರಂಭಗೊಂಡಿದ್ದ ಮಹೋತ್ಸವವು ಹಸಿ ಕರಗ, ದೀಪೋತ್ಸವ ಹಾಗೂ ಹೂವಿನ ಕರಗದಂತಹ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮ ಮೂಲಕ ಸಾಗಿ ಬಂದು ನಡೆದ ವಸಂತೋತ್ಸವದೊಂದಿಗೆ ಕರಗ ಮಹೋತ್ಸವ ಮಕ್ತಾಯಗೊಂಡಿತು.&lt;/p&gt;&lt;h2&gt;&lt;strong&gt;ಏ.2ರಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೊಡ್ಡ ರಥೋತ್ಸವ&lt;/strong&gt;&lt;/h2&gt;&lt;p&gt;ದಾವಣಗೆರೆ: ತಾಲೂಕಿನ ಹೆಮ್ಮನಬೇತೂರು ಗ್ರಾಮದಲ್ಲಿ ಏ.2ರಂದು ಸಂಜೆ 6 ಗಂಟೆಗೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೊಡ್ಡ ರಥೋತ್ಸವ ಅಪಾರ ಭಕ್ತರ ಸಮ್ಮುಖ ನೆರವೇರಲಿದೆ ಎಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಧರ್ಮದರ್ಶಿ ಗೌಡರ ಬಸವರಾಜ್ ತಿಳಿಸಿದ್ದಾರೆ.&lt;/p&gt;&lt;p&gt;ಏ.1ರಂದು ಬೆಳಗ್ಗೆ 8 ಗಂಟೆಗೆ ರಥೋತ್ಸವದ ಕಾಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಕಂಕಣಧಾರಣೆ ನೆರವೇರಲಿದೆ. ರಾತ್ರಿ 9 ಗಂಟೆಗೆ ಸ್ವಾಮಿ ಸನ್ನಿಧಿಯಲ್ಲಿ ಸಣ್ಣ ರಥೋತ್ಸವ, ಏ.2ರಂದು ಸಂಜೆ 6 ಗಂಟೆಗೆ ದೊಡ್ಡ ರಥೋತ್ಸವ ನೆರವೇರಲಿದೆ. ಏ.3ರಂದು ಸಂಜೆ 4 ಗಂಟೆಗೆ ಬೆಲ್ಲದ ಬಂಡಿ ಉತ್ಸವ, ಏ.4ರಂದು ಬೆಳಗ್ಗೆ 8 ಗಂಟೆಗೆ ಓಕಳಿ ಕಾಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಾದಾಮಿ ಜಾತ್ರೆಯಲ್ಲಿ 30 ದಿನದಲ್ಲಿ 1 ಕೋಟಿ ಸಿಕ್ತು: ರಾಜು ತಾಳಿಕೋಟಿ ಪುತ್ರ ಭರತ್&lt;/strong&gt;&lt;/p&gt;&lt;h3&gt;&lt;strong&gt;ವೇಮಗಲ್&zwnj;ನಲ್ಲಿ ದೊಡ್ಡ ದ್ಯಾವರ ಜಾತ್ರೆ ಸಂಭ್ರಮ&lt;/strong&gt;&lt;/h3&gt;&lt;p&gt;ಕೋಲಾರ ತಾಲೂಕಿನ ವೇಮಗಲ್&zwnj;ನಲ್ಲಿ ಕುರುಬ ಸಮುದಾಯದ ಆರಾಧ್ಯ ದೈವವಾದ ದೊಡ್ಡ ದ್ಯಾವರ ಜಾತ್ರೆ ಭಕ್ತಿಭಾವದಿಂದ ಹಾಗೂ ವೈಭವದಿಂದ ನೆರವೇರಿತು. ಶ್ರೀ ಬೀರೇಶ್ವರ, ಶ್ರೀ ಸಿದ್ದೇದೇವರು, ಶ್ರೀ ಭತ್ತೇಶ್ವರ, ಶ್ರೀ ಬೆಳ್ಳೂರು ಬೇರೆಶ್ವರ, ಶ್ರೀ ಬಿಡದೀಶ್ವರಸ್ವಾಮಿ ದೇವಾಲಯದಲ್ಲಿ ಮನೆ ದೇವರ ದೊಡ್ಡಜಾತ್ರೆ ಭಾನುವಾರ ಆರಂಭಗೊಂಡಿತ್ತು. ದೊಡ್ಡ ಜಾತ್ರೆಯ ಕೇಂದ್ರಬಿಂದುವಾದ ಬಸವ ಸಮೇತ ಗುರುಗಳನ್ನು ಆಹ್ವಾನಿಸುವ ಕಾರ್ಯ ನಡೆದು ಸಂಜೆ ಗಂಗಾಪೂಜೆ, ನವಗ್ರಹ ಪೂಜೆ ನೆರವೇರಿತು. ಜಾತ್ರೆಯ ಅಂಗವಾಗಿ ಸೋಮವಾರ ಬೆಳಗ್ಗೆ ನಾಗದೇವತೆಗಳಿಗೆ ತನಿ ಎರೆಯುವ ಕಾರ್ಯ, ಮನೆತನದ ಹಿರಿಯರಿಗೆ ಬಟ್ಟೆ ಇಡುವುದು, ವೀರಗಾರರ ಪೂಜೆ, ದೇವರಿಗೆ ರುದ್ರಾಭಿಷೇಕ ನಡೆಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಕಾಲ್ನಡಿಗೆ ಮೂಲಕ ತಿರುಮಲಕ್ಕೆ ಬರುವ ಭಕ್ತಾದಿಗಳಿಗೆ ಸಂತಸದ ಸುದ್ದಿ; ಇನ್ಮುಂದೆ ಇರಲ್ಲ ಜೀವ ಭಯ&lt;/strong&gt;&lt;/p&gt;]]></content:encoded>
            <category>kolar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/the-historic-betamangala-festival-onake-karaga-was-celebrated-with-great-enthusiasm-kolar-mrq/articleshow-flhgc0z"/>
        </item>
        <item>
            <title><![CDATA[ಅಜ್ಜಿಗೆ ಕಾರು ಗುದ್ದಿ ರಾಜಕೀಯ ದರ್ಪ ತೋರಿದ ಕಾಂಗ್ರೆಸ್ ಮುಖಂಡ; ಜನರೇ ನಾಲ್ಕು ಇಕ್ಕೋವಷ್ಟರಲ್ಲಿ ಪೊಲೀಸರು ಬಂದ್ರು!]]></title>
            <link>https://kannada.asianetnews.com/karnataka-districts/kolar-congress-leader-muniraju-car-hit-elderly-woman-controversy-misbehavior-sat/articleshow-fyeg7k7</link>
            <guid isPermaLink="true">https://kannada.asianetnews.com/karnataka-districts/kolar-congress-leader-muniraju-car-hit-elderly-woman-controversy-misbehavior-sat/articleshow-fyeg7k7</guid>
            <pubDate>Mon, 26 Jan 2026 19:38:19 +0530</pubDate>
            <description><![CDATA[&lt;p&gt;ಕೋಲಾರದಲ್ಲಿ ಕಾಂಗ್ರೆಸ್ ಮುಖಂಡ ಮುನಿರಾಜು ಅವರ ಕಾರು ವೃದ್ಧೆಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದೆ. ಅಪಘಾತದ ನಂತರ, ಸಹಾಯ ಮಾಡುವ ಬದಲು ಮುಖಂಡ ಮತ್ತು ಅವರ ಬೆಂಬಲಿಗರು ಸಾರ್ವಜನಿಕರ ಮೇಲೆ ದರ್ಪ ತೋರಿದ್ದು, ಇದರಿಂದ ಕುಪಿತಗೊಂಡ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfxa00ymwr73xzeyrj0j17ya,imgname-kolar-congress-leader-muniraju--2--1769436349396.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ (ಜ.24): ಕೋ&lt;/strong&gt;ಲಾರ ಜಿಲ್ಲಾ ಕೇಂದ್ರದ ಸಾರಿಗೆ ಇಲಾಖಾ ಕಚೇರಿ (ಆರ್&zwnj;ಟಿಓ) ಬಳಿ ವೇಗವಾಗಿ ಬಂದ ಕಾರೊಂದು ಪಾದಾಚಾರಿ ವೃದ್ದೆಗೆ ಡಿಕ್ಕಿ ಹೊಡೆದಿದ್ದು, ಘಟನೆಯ ನಂತರ ಕಾಂಗ್ರೆಸ್ ಮುಖಂಡ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು ಬೆಂಬಲಿಗರು ಸ್ಥಳೀಯ ಜನರ ಮೇಲೆ ದರ್ಪ ಪ್ರದರ್ಶಿಸಿದ ಘಟನೆ ನಡೆದಿದೆ. ನಂತರ, ಜನರೆಲ್ಲರೂ ಸೇರಿ ಮುನಿರಾಜು ಹಾಗೂ ಬೆಂಬಲಿಗರಿಗೆ ಮೈಚಳಿ ಬಿಡಿಸಿ ಕಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಬಂಗಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮುನಿರಾಜು ಅವರಿಗೆ ಸೇರಿದ ಕಾರು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವೃದ್ದೆಯ ಒಂದು ಕಾಲು ಮುರಿದಿದ್ದು, ತಲೆ ಹಾಗೂ ಮೈಕೈಗೆ ಗಂಭೀರ ಗಾಯಗಳಾಗಿವೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ವೃದ್ದೆಯ ಕಡೆಯವರು ಕಾರನ್ನು ತಡೆದು ನಿಲ್ಲಿಸಿದ್ದಾರೆ.&lt;/p&gt;&lt;h2&gt;&lt;strong&gt;ಮಾನವೀಯತೆ ಮರೆತ ಮುಖಂಡನ ದರ್ಪ&lt;/strong&gt;&lt;/h2&gt;&lt;p&gt;ಅಪಘಾತದಿಂದ ತೀವ್ರ ನೋವಿನಲ್ಲಿದ್ದ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸುವ ಬದಲು, ಪ್ರಶ್ನಿಸಲು ಬಂದ ವೃದ್ದೆಯ ಕಡೆಯವರ ಮೇಲೆ ಮುನಿರಾಜು ಹಾಗೂ ಅವರ ಬೆಂಬಲಿಗರು ವಾಗ್ವಾದಕ್ಕಿಳಿದಿದ್ದಾರೆ. ಅಧಿಕಾರದ ಮದದಲ್ಲಿ ಸಾರ್ವಜನಿಕರ ಮೇಲೆ ದರ್ಪ ಪ್ರದರ್ಶಿಸಿದ ಮುಖಂಡ ಮುನಿರಾಜು, ಪ್ರಶ್ನೆ ಮಾಡಿದ ಜನರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 'ತಪ್ಪು ಮಾಡಿದ್ದರೂ ಕ್ಷಮೆ ಕೇಳುವ ಬದಲು ಅಧಿಕಾರ ತೋರಿಸುತ್ತಿದ್ದಾರೆ' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಆಸ್ಪತ್ರೆಗೆ ದಾಖಲು:&lt;/strong&gt;&lt;/h2&gt;&lt;p&gt;ಗಂಭೀರವಾಗಿ ಗಾಯಗೊಂಡಿರುವ ವೃದ್ದೆಯನ್ನು ತಕ್ಷಣವೇ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆಡಳಿತ ಪಕ್ಷದ ಮುಖಂಡನ ಈ ನಡೆ ಈಗ ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>kolar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kolar-congress-leader-muniraju-car-hit-elderly-woman-controversy-misbehavior-sat/articleshow-fyeg7k7"/>
        </item>
        <item>
            <title><![CDATA[ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡಲಿ: ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ]]></title>
            <link>https://kannada.asianetnews.com/politics/basanagouda-patil-yatnal-muslim-reservation-row-karnataka-politics-gvd/articleshow-gkbf4hh</link>
            <guid isPermaLink="true">https://kannada.asianetnews.com/politics/basanagouda-patil-yatnal-muslim-reservation-row-karnataka-politics-gvd/articleshow-gkbf4hh</guid>
            <pubDate>Sat, 28 Mar 2026 22:29:01 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡಿ ಅದನ್ನು ದಲಿತರು, ಹಿಂದುಳಿದ ವರ್ಗಕ್ಕೆ ಕೊಡಲಿ. ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj4nkrdvr7qnva2vvbe0j7w9,imgname-br-patil-yatnal--2--1771830895035.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ (ಮಾ.28): &lt;/strong&gt;ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡಿ ಅದನ್ನು ದಲಿತರು, ಹಿಂದುಳಿದ ವರ್ಗಕ್ಕೆ ಕೊಡಲಿ. ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.&lt;/p&gt;&lt;p&gt;ನಗರದಲ್ಲಿ ಶ್ರೀರಾಮಸೇನೆ ಸಂಘಟನೆ ಶೋಭಾಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಸ್ಲಿಂ ಮೀಸಲಾತಿ ರದ್ದುಮಾಡಿ ಹಿಂದೂಗಳಿಗೆ ಹಂಚಬೇಕು. ರಂಜಾನ್ ವೇಳೆ ಎಲ್ಲಾದರೂ ಕಲ್ಲು ಹಾಕಿದ್ದಾರಾ. ಗಣೇಶ ಹಬ್ಬದ ವೇಳೆ ಮಾತ್ರ ಕಲ್ಲು ತೂರಾಟ ಯಾಕೆ. ರಾಮನವಮಿ ವೇಳೆ ಯಾಕೆ ಇವರಿಗೆ ಉರಿಯುತ್ತೆ, ಹಿಂದೂಗಳು ಪ್ರತಿಯೊಂದಕ್ಕೂ ಅನುಮತಿ ಪಡೆಯಬೇಕು, ಆದರೆ ಮುಸ್ಮಿಮರಿಗೆ ಯಾವುದೇ ಕಾನೂನು ಅಡ್ಡಿಯಿಲ್ಲ. ರಾಜ್ಯದಲ್ಲಿ ಮುಂದೆ ಹಿಂದೂಪರ ಸರ್ಕಾರ ಅಧಿಕಾರಕ್ಕೆ ಬರಬೇಕು, ನಾಟಕ ಆಡೋರು ಬೇಡ ಎಂದು ಭವಿಷ್ಯ ಎಂದು ಹೇಳಿದರು.&lt;/p&gt;&lt;p&gt;ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಯಾದರೆ ಖಂಡಿತ ಅಧಿಕಾರಕ್ಕೆ ಬರ್ತಾರೆ. ಮೇನಲ್ಲಿ ಚಿತ್ರದುರ್ಗದಲ್ಲಿ ಜಾಗೃತ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಮಾಡುತ್ತೇವೆ. ರಾಜ್ಯದಲ್ಲಿ ಪಾಕಿಸ್ತಾನ ಮಾದರಿ ಸರ್ಕಾರವಿದೆ. ಬರೀ ಅಲ್ಪಸಂಖ್ಯತರ ಪರವಾಗಿದೆ. ರಾಜ್ಯ ಬಜೆಟ್&zwnj;ನಲ್ಲಿ ದಲಿತರು, ಕುರುಬರು ಸೇರಿ ಯಾವುದೇ ಸಮಾಜಕ್ಕೂ ಅನುದಾನ ನೀಡಿಲ್ಲ ಎಂದು ಅವರು ಟೀಕಿಸಿದರು. ಡಿ.ಕೆ. ಶಿವಕುಮಾರ್ ಸಿಎಂ ಆಗಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರನ್ನು ಆ ಸಂಬಂಧ ಭೇಟಿಯಾಗಿದ್ದಾರೆ. ಆದರೆ ಅದಕ್ಕೆ ನರೇಂದ್ರ ಮೋದಿ ಒಪ್ಪಿಲ್ಲ. ಅದಕ್ಕಾಗಿ ಇನ್ನೂ ಡಿ.ಕೆ. ಸುರೇಶ್&zwnj; ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ನಾಚಿಕೆಗೇಡಿನ ಸಂಗತಿ&lt;/strong&gt;&lt;/h2&gt;&lt;p&gt;ಬಿಜೆಪಿ ನಮ್ಮನ್ನು ಬೆಳೆಸಿದ ಪಕ್ಷ. ನಾನು ಬಿಎಸ್&zwnj;ವೈ ರೀತಿ ಪಕ್ಷಕ್ಕೆ ಮರು ಸೇರ್ಪಡೆ ಆಗೋಲ್ಲ ಎಂದಿದ್ದರು, ನಾನು ಹಾಗೇ ಎಲ್ಲಾ ಹೇಳೊಕಾಗಲ್ಲ. ಉಪ್ಪು ತಿಂದಿದ್ದು ಬಿಜೆಪಿಯಿಂದ. ನಮಗೆಲ್ಲಾ ಐಪಿಎಲ್ ಟಿಕೆಟ್ ಬೇಕು ಎಂದು ಕೇಳುತ್ತಾರೆ ಎಂದರೆ ಎಷ್ಟೊಂದು ನಾಚಿಕೆಗೇಡಿನ ಶಾಸಕರಿದ್ದಾರೆ ನೋಡಿ. ರಾಜ್ಯದಲ್ಲಿ ಆಯಾ ಕ್ಷೇತ್ರದ ಸಮಸ್ಯೆಗಳು, ನೀರಾವರಿ ಯೋಜನೆ, ಕೈಗಾರಿಕೆ ಬಗ್ಗೆ ಚರ್ಚೆಯಾಗಬೇಕು. ಅದು ಬಿಟ್ಟು ಐಪಿಎಲ್&zwnj; ಟಿಕೆಟ್&zwnj; ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದರಿಂದ ಶಾಸಕರ ಘನತೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.&lt;/p&gt;]]></content:encoded>
            <category>kolar</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/basanagouda-patil-yatnal-muslim-reservation-row-karnataka-politics-gvd/articleshow-gkbf4hh"/>
        </item>
        <item>
            <title><![CDATA[ಬಂಗಾರ ಮೈಮೇಲಿದ್ರೆ ಜೀವಕ್ಕೆ ಕುತ್ತು: ಚಿನ್ನಕ್ಕಾಗಿ ವೃದ್ಧೆಯ ಕಿವಿಯನ್ನೆ ಕತ್ತರಿಸಿದ ಕಳ್ಳರ ಗ್ಯಾಂಗ್]]></title>
            <link>https://kannada.asianetnews.com/gallery/state/thieves-cut-off-elderly-woman-ear-for-gold-earrings-in-hoovalli-srinivasapura-gplm4b6</link>
            <guid isPermaLink="true">https://kannada.asianetnews.com/gallery/state/thieves-cut-off-elderly-woman-ear-for-gold-earrings-in-hoovalli-srinivasapura-gplm4b6</guid>
            <pubDate>Fri, 06 Mar 2026 20:30:32 +0530</pubDate>
            <description><![CDATA[&lt;p&gt;ಚಿನ್ನದ ಆಭರಣಕ್ಕಾಗಿ ದುಷ್ಕರ್ಮಿಗಳು ಒಂಟಿ ವೃದ್ಧೆಯ ಮೇಲೆ ಹಲ್ಲೆ ಮಾಡಿ ಆಕೆಯ ಚಿನ್ನದ ಬೆಂಡೋಲೆಗಾಗಿ ಕಿವಿಯನ್ನೇ ಕತ್ತರಿಸಿದಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೂವಳ್ಳಿಯಲ್ಲಿ ನಡೆದಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk1sg4wxpcn673436bbn2m8s,imgname-thieves-cut-off-old-woman-s-ear-for-gold--3--1772808049565.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿನ್ನದ ಆಭರಣಕ್ಕಾಗಿ ದುಷ್ಕರ್ಮಿಗಳು ಒಂಟಿ ವೃದ್ಧೆಯ ಮೇಲೆ ಹಲ್ಲೆ ಮಾಡಿ ಆಕೆಯ ಚಿನ್ನದ ಬೆಂಡೋಲೆಗಾಗಿ ಕಿವಿಯನ್ನೇ ಕತ್ತರಿಸಿದಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೂವಳ್ಳಿಯಲ್ಲಿ ನಡೆದಿದೆ.&amp;nbsp;&lt;/p&gt;&lt;img&gt;&lt;p&gt;ಕೋಲಾರ : ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಇದರಿಂದಾಗಿ ಈಗ ಚಿನ್ನ ಧರಿಸುವವರ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ. ದುಬಾರಿ ಚಿನ್ನವನ್ನು ಮೈ ಮೇಲೆ ಹಾಕಿ ರಸ್ತೆಯಲ್ಲಿ ನಡೆಯಲು ಸಾಧ್ಯವಾಗದಂತಹ ಘಟನೆಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಹಾಗೆಯೇ ಈಗ ಕೋಲಾರದಲ್ಲಿ ದುಷ್ಕರ್ಮಿಗಳು ಚಿನ್ನದ ಕಿವಿಯೋಲೆ ಧರಿಸಿದ್ದ ವೃದ್ಧೆಯ ಕಿವಿಯನ್ನೇ ಕಿತ್ತೊಯ್ದಿದ್ದಾರೆ.&lt;/p&gt;&lt;img&gt;&lt;p&gt;ಕಿವಿಯೋಲೆಗಾಗಿ ವೃದ್ದೆಯ ಕಿವಿಯನ್ನೆ ಕಳ್ಳರ ಗ್ಯಾಂಗ್ ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೂವಳ್ಳಿಯಲ್ಲಿ ಈ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ರತ್ನಮ್ಮ ಎಂಬ 70 ವರ್ಷದ ವೃದ್ಧೆಯ ಮೇಲೆ ದಾಳಿ ಮಾಡಿದ ಕಳ್ಳರ ಗ್ಯಾಂಗ್ ಅವರ ಕಿವಿಯನ್ನೇ ಕತ್ತರಿಸಿ ಕಿವಿಯೋಲೆ ಹಾಗೂ ಅವರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.&lt;/p&gt;&lt;img&gt;&lt;p&gt;ರತ್ನಮ್ಮ ಅವರು ಒಂಟಿ ಮನೆಯಲ್ಲಿ ವಾಸವಾಗಿದ್ದರು. ತಡ ರಾತ್ರಿ ಒಂಟಿ ಮನೆ ಮೇಲೆ ದಾಳಿ ಮಾಡಿರುವ ಕಿಡಿಗೇಡಿಗಳು ಅವರ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮನೆಯಲ್ಲೇ ನಿದ್ದೆಗೆ ಜಾರಿದ ಮಗು : ಕಾಣೆಯಾಗಿದ್ದಾನೆ ಅಂತ ಊರೆಲ್ಲಾ ಹುಡುಕಿ ಬೆಸ್ತು ಬಿದ್ದ ಕುಟುಂಬ&lt;/strong&gt;&lt;/p&gt;&lt;img&gt;&lt;p&gt;ಸುಮಾರು 25 ಗ್ರಾಂ ಚಿನ್ನದ ಸರ ಹಾಗೂ ಕಿವಿಯೋಲೆ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದು, ಕಿವಿಯೋಲೆಗಾಗಿ ಈ ಪಾಪಿಗಳು ವೃದ್ಧೆಯ ಕಿವಿಯನ್ನೇ ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿದ್ದು, ಕಳ್ಳರ ಗ್ಯಾಂಗ್&zwnj; ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಬಹ್ರೇನ್&zwnj;ನಲ್ಲಿ ಕತಾರ್ ನೌಕಾಪಡೆ ಸಿಬ್ಬಂದಿ ನೆಲೆಸಿದ್ದ ಕಟ್ಟಡಗಳ ಮೇಲೆ ಇರಾನ್ ದಾಳಿ&lt;/p&gt;]]></content:encoded>
            <category>kolar</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/thieves-cut-off-elderly-woman-ear-for-gold-earrings-in-hoovalli-srinivasapura-gplm4b6"/>
        </item>
        <item>
            <title><![CDATA[ಕೋಲಾರ:  ಪತ್ನಿ ಜೊತೆಗೆ ಮಾವನ ಅಕ್ರಮ ಸಂಬಂಧ, ಚಾಕುವಿನಿಂದ ಚುಚ್ಚಿ ಕೊಂದ ಅಳಿಯ]]></title>
            <link>https://kannada.asianetnews.com/karnataka-districts/family-dispute-turns-fatal-in-karnataka-kolar-uncle-murdered-by-nephew/articleshow-gq6bxm8</link>
            <guid isPermaLink="true">https://kannada.asianetnews.com/karnataka-districts/family-dispute-turns-fatal-in-karnataka-kolar-uncle-murdered-by-nephew/articleshow-gq6bxm8</guid>
            <pubDate>Wed, 18 Feb 2026 18:00:38 +0530</pubDate>
            <description><![CDATA[&lt;p&gt;ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿಟಗಾನಹಳ್ಳಿ ಗ್ರಾಮದಲ್ಲಿ, ಪತ್ನಿಯೊಂದಿಗೆ ಸೋದರ ಮಾವನಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ಅಳಿಯನೇ ಮಾವನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಹೊಸಕೋಟೆಯಿಂದ ಬಂದಿದ್ದ ನಯಾಜ್ ಖಾನ್ ಎಂಬುವವರನ್ನು ಆರೋಪಿ ಶಾಹಿದ್ ಖಾನ್ ಕೊಲೆ ಮಾಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khrbh47m5cgejg92jv954gth,imgname-kolar-murder-case-1771417669876.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ: &lt;/strong&gt;ಜಿಲ್ಲೆಯಲ್ಲಿ ಅಕ್ರಮ ಸಂಬಂಧದ ಶಂಕೆಯಿಂದ ಭೀಕರ ಹತ್ಯೆ ಪ್ರಕರಣವೊಂದು ಮಾಲೂರು ತಾಲೂಕಿನ ಮಿಟಗಾನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪತ್ನಿಯೊಂದಿಗೆ ಸೋದರ ಮಾವನಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನ ಹಿನ್ನೆಲೆಯಲ್ಲಿ ಅಳಿಯನೇ ಮಾವನನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ.&lt;/p&gt;&lt;p&gt;ಮೃತನನ್ನು ನಯಾಜ್ ಖಾನ್ (38) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಶಾಹಿದ್ ಖಾನ್ (33) ಎಂದು ಗುರುತಿಸಲಾಗಿದೆ. ಶಾಹಿದ್ ಖಾನ್ ಮೃತ ನಯಾಜ್ ಖಾನ್ ಅವರ ಸಹೋದರಿಯ ಪುತ್ರನಾಗಿದ್ದು, ಮಾವ&ndash;ಅಳಿಯ ಸಂಬಂಧ ಹೊಂದಿದ್ದರು.&lt;/p&gt;&lt;h2&gt;ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ&lt;/h2&gt;&lt;p&gt;ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಶಾಹಿದ್ ಖಾನ್ ಅವರ ಪತ್ನಿಯೊಂದಿಗೆ ನಯಾಜ್ ಖಾನ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಕಳೆದ ಕೆಲ ದಿನಗಳಿಂದ ಶಾಹಿದ್ ಮನಸ್ಸಿನಲ್ಲಿ ಕಾಡುತ್ತಿತ್ತು. ಇದೇ ವಿಚಾರವಾಗಿ ಕುಟುಂಬದೊಳಗೆ ಈಗಾಗಲೇ ಅಸಮಾಧಾನ ಹಾಗೂ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.&lt;/p&gt;&lt;p&gt;ಇಂದು ಬೆಳಿಗ್ಗೆ ನಯಾಜ್ ಖಾನ್ ಹೊಸಕೋಟೆ ಯಿಂದ ಶಾಹಿದ್ ಖಾನ್ ವಾಸವಿದ್ದ ಮಿಟಗಾನಹಳ್ಳಿ ಗ್ರಾಮಕ್ಕೆ ಬಂದಿದ್ದಾನೆ. ಈ ವೇಳೆ ಪತ್ನಿಯೊಂದಿಗೆ ಇರುವ ಸಂಬಂಧದ ವಿಚಾರವನ್ನು ಶಾಹಿದ್ ಪ್ರಶ್ನಿಸಿದ್ದಾನೆ. ಮಾತಿಗೆ ಮಾತು ಬೆಳೆದು ವಾಗ್ವಾದ ತೀವ್ರ ಸ್ವರೂಪ ಪಡೆದಿದೆ. ಈ ವೇಳೆ ಶಾಹಿದ್ ಖಾನ್, ಕೈಯಲ್ಲಿದ್ದ ಚಾಕುವಿನಿಂದ ನಯಾಜ್ ಖಾನ್&zwnj;ಗೆ ಹಲವು ಬಾರಿ ಇರಿದಿದ್ದಾನೆ. ಗಂಭೀರ ಗಾಯಗಳಿಂದ ನಯಾಜ್ ಖಾನ್ ಸ್ಥಳದಲ್ಲೇ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ.&lt;/p&gt;&lt;h2&gt;ಕುಟುಂಬ ಹಿನ್ನೆಲೆ&lt;/h2&gt;&lt;p&gt;ಆರೋಪಿ ಶಾಹಿದ್ ಖಾನ್&zwnj;ಗೆ ಮೂರು ಹೆಣ್ಣು ಮಕ್ಕಳು ಇದ್ದು, ಕುಟುಂಬ ಸಮೇತ ಮಿಟಗಾನಹಳ್ಳಿ ಪ್ರದೇಶದಲ್ಲಿ ಜಮೀನನ್ನು ಕಾಯುವ ಕೆಲಸ ಮಾಡುತ್ತಿದ್ದರು. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನವರಾದ ಶಾಹಿದ್ ಖಾನ್, ಕೆಲ ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ನೆಲೆಸಿದ್ದರು. ಘಟನೆಯ ಮಾಹಿತಿ ಪಡೆದ ತಕ್ಷಣ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಶಾಹಿದ್ ಖಾನ್&zwnj;ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.&lt;/p&gt;]]></content:encoded>
            <category>kolar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/family-dispute-turns-fatal-in-karnataka-kolar-uncle-murdered-by-nephew/articleshow-gq6bxm8"/>
        </item>
        <item>
            <title><![CDATA[ಕೋಲಾರದಲ್ಲಿ ಜಗತ್ತಿನ 4ನೇ ಅತಿದೊಡ್ಡ ಹೆಲಿಕಾಪ್ಟರ್ ಘಟಕ; 20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ- ಎಂ.ಬಿ. ಪಾಟೀಲ]]></title>
            <link>https://kannada.asianetnews.com/karnataka-districts/airbus-tata-world-fourth-largest-helicopter-unit-vemagal-kolar-karnataka-mb-patil-sat/articleshow-hn2z8ny</link>
            <guid isPermaLink="true">https://kannada.asianetnews.com/karnataka-districts/airbus-tata-world-fourth-largest-helicopter-unit-vemagal-kolar-karnataka-mb-patil-sat/articleshow-hn2z8ny</guid>
            <pubDate>Tue, 17 Feb 2026 18:18:53 +0530</pubDate>
            <description><![CDATA[&lt;p&gt;ಫ್ರಾನ್ಸ್&zwnj;ನ 'ಏರ್ ಬಸ್' ಮತ್ತು ಭಾರತದ 'ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್' ಸಹಭಾಗಿತ್ವದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಜೋಡಣೆ ಘಟಕ ಕೋಲಾರದಲ್ಲಿ ಚಾಲನೆಗೊಂಡಿದೆ. ಪ್ರಧಾನಿ ಮೋದಿಯಿಂದ ಉದ್ಘಾಟನೆಗೊಂಡ ಈ ಘಟಕ, ಮುಂದಿನ 20 ವರ್ಷಗಳಲ್ಲಿ 500 ಹೆಲಿಕಾಪ್ಟರ್&zwnj; ತಯಾರಿಸುವ ಗುರಿ ಹೊಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khnt8wchfwzk0x0ze91j2rq6,imgname-karnataka-helicopter-unit-1771332465041.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ (ಫೆ.17): ಕ&lt;/strong&gt;ರ್ನಾಟಕದ ಕೈಗಾರಿಕಾ ಭೂಪಟದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಫ್ರಾನ್ಸ್ ಮೂಲದ 'ಏರ್ ಬಸ್' ಮತ್ತು ಭಾರತದ 'ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್' (ಟಿಎಎಸ್ಎಲ್) ಜಂಟಿ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಿರುವ ದೇಶದ ಪ್ರಪ್ರಥಮ ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕಕ್ಕೆ ಇಂದು ಚಾಲನೆ ದೊರೆತಿದೆ. ಈ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಬರೋಬ್ಬರಿ 500 ಹೆಲಿಕಾಪ್ಟರ್&zwnj;ಗಳು ಸಿದ್ಧವಾಗಲಿದ್ದು, ಕರ್ನಾಟಕವು ಜಾಗತಿಕ ಏರೋಸ್ಪೇಸ್ ಹಬ್ ಆಗಿ ಹೊರಹೊಮ್ಮಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೋದಿ-ಮ್ಯಾಕ್ರೋನ್ ವರ್ಚುವಲ್ ಚಾಲನೆ:&lt;/strong&gt;&lt;/h2&gt;&lt;p&gt;ಮಂಗಳವಾರ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೋನ್ ಅವರು ಮಹಾರಾಷ್ಟ್ರದ ಲೋಕಭವನದಿಂದ ವರ್ಚುವಲ್ ಮೂಲಕ ಘಟಕವನ್ನು ಉದ್ಘಾಟಿಸಿದರು. ವೇಮಗಲ್ ಘಟಕದಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವಾಟ್ರಿನ್ ಮತ್ತು ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಉಪಸ್ಥಿತರಿದ್ದರು.&lt;/p&gt;&lt;h2&gt;&lt;strong&gt;ದಾಖಲೆ ಅವಧಿಯಲ್ಲಿ ಯೋಜನೆ ಪೂರ್ಣ:&lt;/strong&gt;&lt;/h2&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ ಬಿ ಪಾಟೀಲ, 'ನಾನು ಕೈಗಾರಿಕಾ ಸಚಿವನಾದ ಮೇಲೆ ಈ ಯೋಜನೆಗೆ 17 ಎಕರೆ ಜಾಗವನ್ನು ನೀಡಲಾಗಿತ್ತು. ಕೇವಲ ಒಂದೂವರೆ ವರ್ಷದ ದಾಖಲೆ ಅವಧಿಯಲ್ಲಿ ಈ ಬೃಹತ್ ಘಟಕವು ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇಲಾಖೆಗಳ ನಡುವಿನ ಸಮನ್ವಯ ಮತ್ತು ಅತ್ಯುತ್ತಮ ಮೂಲಸೌಕರ್ಯದಿಂದಾಗಿ ಈ ಚಾರಿತ್ರಿಕ ಯೋಜನೆ ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಂಡಿದೆ' ಎಂದು ಹರ್ಷ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಜಗತ್ತಿನ 4ನೇ ಅತಿದೊಡ್ಡ ಘಟಕ:&lt;/strong&gt;&lt;/h2&gt;&lt;p&gt;ಫ್ರಾನ್ಸ್, ಅಮೆರಿಕ ಮತ್ತು ಬ್ರೆಜಿಲ್ ನಂತರ ಜಗತ್ತಿನ ನಾಲ್ಕನೇ ಎಚ್125 (H125) ಹೆಲಿಕಾಪ್ಟರ್ ಅಂತಿಮ ಜೋಡಣೆ ಘಟಕ (Final Assembly Line) ಕರ್ನಾಟಕದಲ್ಲಿ ಆರಂಭವಾಗಿದೆ. ಇದು ರಾಜ್ಯದ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ಹಿಡಿದ ಕನ್ನಡಿಯಾಗಿದೆ. ಇಲ್ಲಿ ಆರಂಭದಲ್ಲಿ ವರ್ಷಕ್ಕೆ 10 ಹೆಲಿಕಾಪ್ಟರ್&zwnj;ಗಳನ್ನು ತಯಾರಿಸಲಾಗುವುದು ಮತ್ತು ಹಂತ ಹಂತವಾಗಿ ಉತ್ಪಾದನೆಯನ್ನು ಹೆಚ್ಚಿಸಿ 500ರ ಗಡಿ ತಲುಪುವ ಗುರಿ ಹೊಂದಲಾಗಿದೆ.&lt;/p&gt;&lt;h2&gt;&lt;strong&gt;ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿ:&lt;/strong&gt;&lt;/h2&gt;&lt;p&gt;ಈ ಯೋಜನೆಯನ್ನು ಪಡೆಯಲು ಆಂಧ್ರಪ್ರದೇಶ, ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ ಕರ್ನಾಟಕದ ಎಂಜಿನಿಯರಿಂಗ್ ಪರಿಣತಿಯನ್ನು ಗುರುತಿಸಿ ಈ ಯೋಜನೆಯನ್ನು ಇಲ್ಲಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈ ಘಟಕದಿಂದ ಏವಿಯಾನಿಕ್ಸ್, ಹೈಡ್ರಾಲಿಕ್ ಸರ್ಕ್ಯೂಟ್ ಮತ್ತು ಎಂಜಿನ್ ಬಿಡಿಭಾಗಗಳ ತಯಾರಿಕಾ ವಲಯದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (SME) ಹೆಚ್ಚಿನ ಅವಕಾಶಗಳು ಸಿಗಲಿವೆ. ಇದು ರಾಜ್ಯದ ಯುವಜನತೆಗೆ ಆಧುನಿಕ ತಂತ್ರಜ್ಞಾನ ವಲಯದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಚಿವರು ವಿವರಿಸಿದರು.&lt;/p&gt;&lt;p&gt;ಏರ್ ಬಸ್ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಶೇ. 80 ರಷ್ಟು ಪಾಲು ಹೊಂದಿದ್ದು, ರಾಜ್ಯದಲ್ಲಿ ಇದರ ಉತ್ಪಾದನೆ ಆರಂಭವಾಗುತ್ತಿರುವುದು ರಕ್ಷಣಾ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಹೊಸ ಶಕ್ತಿ ನೀಡಲಿದೆ. ಕರ್ನಾಟಕ ಸರ್ಕಾರವು ಈ ಕ್ಷೇತ್ರದಲ್ಲಿ ಕೇಂದ್ರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧವಾಗಿದೆ ಎಂದು ಪಾಟೀಲ ಪುನರುಚ್ಚರಿಸಿದರು.&lt;/p&gt;]]></content:encoded>
            <category>kolar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/airbus-tata-world-fourth-largest-helicopter-unit-vemagal-kolar-karnataka-mb-patil-sat/articleshow-hn2z8ny"/>
        </item>
        <item>
            <title><![CDATA[ಹೊಸಕೋಟೆ ದುರಂತ: ಸಿದ್ದಿಸಲಿಲ್ವಾ ಶಾಂತಿ ಹೂಮ, ಪೂಜೆಯ ಹೂವು ಬಾಡುವ ಮುನ್ನವೇ ಅದೇ ಜಾಗದಲ್ಲಿ 7 ಜನರ ಬಲಿ!]]></title>
            <link>https://kannada.asianetnews.com/karnataka-districts/hoskote-accident-tragedy-repeats-at-black-spot-seven-dead-days-after-peace-puja/articleshow-ohnzwon</link>
            <guid isPermaLink="true">https://kannada.asianetnews.com/karnataka-districts/hoskote-accident-tragedy-repeats-at-black-spot-seven-dead-days-after-peace-puja/articleshow-ohnzwon</guid>
            <pubDate>Fri, 13 Feb 2026 13:21:41 +0530</pubDate>
            <description><![CDATA[&lt;p&gt;ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಪಘಾತಗಳನ್ನು ತಡೆಯಲು ಇದೇ ಸ್ಥಳದಲ್ಲಿ ಗ್ರಾಮಸ್ಥರು ಶಾಂತಿ ಪೂಜೆ ನಡೆಸಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khamczgt58rasswkx0re9tnd,imgname-hoskote-accident-car-and-canter-photos--6--1770957209114.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt; ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ. ಸತ್ಯವರ ಗ್ರಾಮದ ಸಮೀಪ ಇಂದು ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತ ಸ್ಥಳೀಯರಲ್ಲಿ ಆತಂಕ ಮತ್ತು ಭೀತಿಯನ್ನು ಮೂಡಿಸಿದೆ. ವಿಶೇಷವೆಂದರೆ, ಇದೇ ಸ್ಥಳದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಅಪಘಾತ ಸಂಭವಿಸಿದ್ದ ಹಿನ್ನೆಲೆ, ಸ್ಥಳೀಯರು ವಿಶೇಷ ಶಾಂತಿ ಪೂಜೆಯನ್ನು ನೆರವೇರಿಸಿದ್ದರು. ಆದರೆ ಈ ಪೂಜೆ ಕೂಡ ಫಲಿಸಲಿಲ್ಲ. ಇಂದು ಪೂಜೆ ಮಾಡಿದ ಸ್ಥಳದಲ್ಲಿಯೇ ಸರಣಿ ಅಪಘಾತವಾಗಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.&lt;/p&gt;&lt;h2&gt;ಅಪಘಾತದ ಹಾಟ್&zwnj;ಸ್ಟಾಟ್ ಆಗ್ತದೆ ಈ ಜಾಗ&lt;/h2&gt;&lt;p&gt;ಸ್ಥಳೀಯರ ಮಾಹಿತಿ ಪ್ರಕಾರ, ಇತ್ತೀಚೆಗೆ ಇದೇ ಪ್ರದೇಶದಲ್ಲಿ ಅಪಘಾತ ಸಂಭವಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಈ ರಸ್ತೆ ಭಾಗ ಅಪಾಯಕಾರಿ ವಲಯವಾಗಿ ಪರಿಗಣಿಸಲ್ಪಟ್ಟಿದ್ದು, ದುರ್ಘಟನೆಗಳು ಮರುಕಳಿಸದಿರಲಿ ಎಂಬ ಉದ್ದೇಶದಿಂದ ಗ್ರಾಮಸ್ಥರು ಸೇರಿ ಶಾಂತಿ ಪೂಜೆಯನ್ನು ಆಯೋಜಿಸಿದ್ದರು. ಪೂಜೆಯ ಮೂಲಕ ದುಷ್ಟಶಕ್ತಿಗಳ ನಿವಾರಣೆ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿತ್ತು.&lt;/p&gt;&lt;p&gt;ಆದರೆ, ಪೂಜೆ ಮಾಡಿರುವ ಜಾಗದಲ್ಲಿ ಹೂವುಗಳೆಲ್ಲ ಇನ್ನೂ ಬಾಡದೆ ಹಾಗೆಯೇ ಇದೆ. ಇಂದು ಎಲ್ಲರನ್ನೂ ಬೆಚ್ಚಿಬೀಳಿಸುವಂತೆ &amp;nbsp;ಅದೇ ಸ್ಥಳದಲ್ಲಿ ಮತ್ತೊಮ್ಮೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಒಂದೇ ಕಾರಿನಲ್ಲಿದ್ದ ಆರು ಮಂದಿ ವಿದ್ಯಾರ್ಥಿಗಳು ಹಾಗೂ ಓರ್ವ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಾಂತಿ ಪೂಜೆ ನಡೆದ ಕೆಲವೇ ದಿನಗಳಲ್ಲಿ ಈ ಮಟ್ಟದ ದುರ್ಘಟನೆ ಸಂಭವಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಶಾಂತಿ ಪೂಜೆ ನಡೆದ ಸ್ಥಳದಲ್ಲೇ ಮರುಕಳಿಸಿದ ಈ ದುರ್ಘಟನೆ, ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ ವೈಜ್ಞಾನಿಕ ರಸ್ತೆ ಸುರಕ್ಷತಾ ಕ್ರಮಗಳ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.&lt;/p&gt;&lt;h2&gt;ಮೃತಪಟ್ಟ 7 ಜನ ದುದೈವಿಗಳು&lt;/h2&gt;&lt;ul&gt; &lt;li&gt;ಗಗನ್ 26 ವರ್ಷ ( ಬೈಕ್ ಸವಾರ ) ಸಫಲ್ ನಲ್ಲಿ ಕೆಲಸ&lt;/li&gt;&lt;/ul&gt;&lt;h3&gt;ಮೃತ ವಿದ್ಯಾರ್ಥಿಗಳು.&lt;/h3&gt;&lt;ul&gt; &lt;li&gt;ಅಶ್ವಿನ್ ನಾಯರ್ 17 ವರ್ಷ ಆರ್ ವಿ ಪಿಯು ಕಾಲೇಜ್ , ಕೊತ್ತನೂರು ನಿವಾಸಿ&lt;/li&gt; &lt;li&gt;ಅರ್ಹನ್ ಶರೀಫ್, ಸಿಎಂಆರ್ ಶಾಲೆ ವಿದ್ಯಾರ್ಥಿ, ಹೆಚ್ ವಿ ಆರ್ ಲೇಔಟ್ ನಿವಾಸಿ&lt;/li&gt; &lt;li&gt;ಅಯನ್ ಅಲಿ 17 ವರ್ಷ ಸಿ ಎಂ ಆರ್ ಸ್ಕೂಲ್&lt;/li&gt; &lt;li&gt;ಭರತ್ 18 ವರ್ಷ , ಸಿಎಂಆರ್ ಕಾಲೇಜ್, ಫ್ರೇಜನ್ ಟೌನ್ ನಿವಾಸಿ.&lt;/li&gt; &lt;li&gt;ಈತನ್ ಜಾರ್ಜ್ 17 ವರ್ಷ. ಆರ್ ವಿ 1st ಪಿಯು ಕಾಲೇಜ್( ಹುಳಿಮಾವು ನಿವಾಸಿ)&lt;/li&gt; &lt;li&gt;ಫರ್ಹಾನ್, 17 ವರ್ಷ&lt;/li&gt;&lt;/ul&gt;&lt;p&gt;&amp;nbsp;&lt;/p&gt;]]></content:encoded>
            <category>kolar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hoskote-accident-tragedy-repeats-at-black-spot-seven-dead-days-after-peace-puja/articleshow-ohnzwon"/>
        </item>
        <item>
            <title><![CDATA[ಕೋಲಾರ ಶಾಕಿಂಗ್: ಕಮೀಷನ್ ಆಸೆಗೆ ಲೀವ್ ಇನ್ ಟುಗೆದರ್‌ ಜೋಡಿಯ ಮಗು ಮಾರಿಸಿದ ಮಧ್ಯವರ್ತಿ, 5 ಲಕ್ಷಕ್ಕೆ ಮಾರಾಟ!]]></title>
            <link>https://kannada.asianetnews.com/karnataka-districts/kolar-shocker-newborn-baby-sold-just-days-after-birth-in-srinivaspur-police-bust-baby-selling-racket/articleshow-qopps15</link>
            <guid isPermaLink="true">https://kannada.asianetnews.com/karnataka-districts/kolar-shocker-newborn-baby-sold-just-days-after-birth-in-srinivaspur-police-bust-baby-selling-racket/articleshow-qopps15</guid>
            <pubDate>Sat, 07 Feb 2026 16:45:09 +0530</pubDate>
            <description><![CDATA[&lt;p&gt;ಕೋಲಾರದ ಶ್ರೀನಿವಾಸಪುರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಜೋಡಿಯೊಂದು ಹಣದಾಸೆಗೆ ತಮ್ಮ ನವಜಾತ ಗಂಡು ಮಗುವನ್ನು ಮಾರಾಟ ಮಾಡಿದೆ. ಈ ಮಗು ಮಾರಾಟ ಜಾಲವನ್ನು ಪತ್ತೆಹಚ್ಚಿದ ಪೊಲೀಸರು, ಮಗುವನ್ನು ಖರೀದಿಸಿದ ದಂಪತಿ ಹಾಗೂ ಮಧ್ಯವರ್ತಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgvwnc2q703jwz56tkrgwc28,imgname-kolara-1770462556247.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ: &lt;/strong&gt;ಮಗು ಆಗಿಲ್ಲವೆಂದು ಈಗಲೂ ಅದೆಷ್ಟೋ ಜನರು ಪರದಾಡ್ತಿದ್ದಾರೆ. ಆಸ್ಪತ್ರೆ, ದೇವಸ್ಥಾನ ಅಂತ ಪ್ರತಿದಿನ ಸುತ್ತಾಡ್ತಿದ್ದಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಮಗು ಮಾರಾಟ ಜಾಲದಲ್ಲಿ ತೊಡಗಿದ್ದು,ಅಮಾಯಕರನ್ನು ವಂಚಿಸುತ್ತಿದೆ. ಸದ್ಯ ಇದೇ ರೀತಿಯ ವಂಚನೆ ಜಾಲವೊಂದು ಪೊಲೀಸರಿಗೆ ತಗಲಾಕಿಕೊಂಡಿದ್ದು, ಏನೂ ಅರಿಯದ ಹಸುಗೂಸು ತಾಯಿಯ ಮಡಿಲು ಸೇರಿದೆ.&lt;/p&gt;&lt;p&gt;ತಾಯಿ ಅಂದ್ರೆ ಭೂಮಿಯ ಭಾರ ಹೊರುವವಳು. ತಾನು ನೋವುಂಡು ಮಕ್ಕಳಿಗೆ ಜೀವನ ಎರೆಯುವವಳು. ಆದ್ರೆ ಇಲ್ಲೊಂದು ತಾಯಿ ತಾನೇ ಹೆತ್ತ ಮಗುವನ್ನು ಹುಟ್ಟಿದ ಮೂರೇ ದಿನದಲ್ಲಿ ಮಾರಾಟ ಮಾಡಿದ್ದಾಳೆ. ಹೌದು ಮಾನವೀಯತೆಯೇ ಇಲ್ಲದಿರುವ ಆಘಾತಕಾರಿ ಘಟನೆಯೊಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಮಗು ಹುಟ್ಟಿದ ಕೇವಲ ಐದು ದಿನಗಳಲ್ಲೇ ಜೋಡಿಗಳು ತಮ್ಮದೇ ಗಂಡು ಮಗುವನ್ನು ಮಾರಿದ್ದಾರೆ.&amp;nbsp;&lt;/p&gt;&lt;h2&gt;ಲಿವ್ ಇನ್ ಟುಗೆದರ್ ಇದ್ದ ಜೋಡಿ&lt;/h2&gt;&lt;p&gt;ರಾಘವೇಂದ್ರ ಹಾಗೂ ನೀತು ಇಬ್ಬರೂ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ನೀತುಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ರು ಸಹ ಗಂಡನನ್ನು ಬಿಟ್ಟು ಚಾಲಕನ ಕೆಲಸ ಮಾಡ್ತಿರುವ ರಾಘವೇಂದ್ರ ಜೊತೆ ಶ್ರೀನಿವಾಸಪುರ ಪಟ್ಟಣದಲ್ಲಿ ಸಂಸಾರ ಮಾಡುತ್ತಿದ್ದಾಳೆ. ಇವರಿಬ್ಬರ ಸಂಬಂಧದ ಕುರುಹು ಎಂಬಂತೆ ಆರು ದಿನಗಳ ಹಿಂದೆ ಶ್ರೀನಿವಾಸಪುರ ಖಾಸಗಿ ಆಸ್ಪತ್ರೆಯಲ್ಲಿ ನೀತು ಹಾಗೂ ರಾಘವೇಂದ್ರಗೆ ಗಂಡು ಮಗು ಜನಿಸಿದೆ, ಆದ್ರೆ ಹಣದ ಆಸೆಗೆ ಹುಟ್ಟಿದ್ದ ಮೂರೇ ದಿನದಲ್ಲಿ ಮಗು ಮಾರಾಟ ಮಾಡಿ ತಗಲಾಕಿಕೊಂಡಿದ್ದು, ಪೊಲೀಸರ ಅತಿಥಿಯಾಗಿದ್ದಾರೆ.&lt;/p&gt;&lt;h2&gt;5 ಲಕ್ಷಕ್ಕೆ ಮಗು ಮಾರಾಟ&lt;/h2&gt;&lt;p&gt;ಶ್ರೀನಿವಾಸಪುರ ಪಟ್ಟಣದ ನಿವಾಸಿ ಹಾಗೂ ಮಗು ಮಾರಾಟ ಜಾಲದ ಮಧ್ಯವರ್ತಿ ಆಗಿರುವ ನಾರಾಯಣಸ್ವಾಮಿ ಅನ್ನೋ ವ್ಯಕ್ತಿಗೆ ನೀತು ಹಾಗೂ ರಾಘವೇಂದ್ರ ಸೇರಿ ಶುಕ್ರವಾರ ಎರಡು ಲಕ್ಷ ರುಪಾಯಿಗೆ ಗಂಡು ಮಗು ಮಾರಾಟ ಮಾಡುತ್ತಾರೆ. ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ಮಂಜುಳ ಹಾಗೂ ಕೃಷ್ಣ ಅನ್ನೋ ದಂಪತಿಗೆ ಮಧ್ಯವರ್ತಿ ನಾರಾಯಣಸ್ವಾಮಿ ಐದು ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಮಗು ಮಾರಾಟದ ವಿಚಾರ ತಿಳಿದ ಸ್ಥಳೀಯರೊಬ್ಬರು ಶ್ರೀನಿವಾಸಪುರ ಪೊಲೀಸರಿಗೆ ತಿಳಿಸುತ್ತಾರೆ, ಕೂಡಲೇ ಎಚ್ಚೆತ್ತ ಪೊಲೀಸರು ತನಿಖೆ ನಡೆಸಿದ ಬಳಿಕ ಮಾರಾಟದ ಬಗ್ಗೆ ನೀತು ಹಾಗೂ ರಾಘವೇಂದ್ರ ಒಪ್ಪಿಕೊಂಡಿದಾರೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದ ಕಾರಣ ಮಾರಾಟ ಮಾಡಿದ್ದೇವೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಪ್ರಕರಣ ಸಂಬಂಧ ನೀತು, ರಾಘವೇಂದ್ರ, ನಾರಾಯಣಸ್ವಾಮಿ ಸೇರಿ ಒಟ್ಟು ಐವರನ್ನು ಪೊಲೀಸರು ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಮಗುವನ್ನು ಮರಳಿ ಪಡೆದು ಪೋಷಕರಿಗೆ ಒಪ್ಪಿಸಲಾಗಿದೆ. ಅದೇನೆ ಇರಲಿ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದೆ. ಕಾಮದ ಆಸೆಗೆ ಮಗು ಮಾಡಿಕೊಂಡು ಹಣದಾಸೆಗೆ ಮಾರಾಟ ಮಾಡ್ತಿರೋದ್ರಿಂದ ಪವಿತ್ರವಾದ ತಾಯಿ ತನಕ್ಕೆ ಅವಮಾನ ಆಗ್ತಿರೋದಂತು ಸುಳ್ಳಲ್ಲ.&lt;/p&gt;]]></content:encoded>
            <category>kolar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kolar-shocker-newborn-baby-sold-just-days-after-birth-in-srinivaspur-police-bust-baby-selling-racket/articleshow-qopps15"/>
        </item>
        <item>
            <title><![CDATA[ಹೊಸಕೋಟೆ ದುರಂತ: ಮನೆಯಲ್ಲಿ ಹೇಳದೆ ನೈಟ್‌ರೈಡ್‌ ಹೋದ ಅಪ್ರಾಪ್ತರು! ಮಗನನ್ನು ಕಳೆದುಕೊಂಡ ಅಂಧ ತಾಯಿ! ಕಥೆ ಒಂದೊಂದಲ್ಲ]]></title>
            <link>https://kannada.asianetnews.com/gallery/karnataka-districts/bangalore-rural-horror-6-students-biker-die-at-hoskote-accident-blind-mother-loses-her-support-vp2lif4</link>
            <guid isPermaLink="true">https://kannada.asianetnews.com/gallery/karnataka-districts/bangalore-rural-horror-6-students-biker-die-at-hoskote-accident-blind-mother-loses-her-support-vp2lif4</guid>
            <pubDate>Fri, 13 Feb 2026 15:37:48 +0530</pubDate>
            <description><![CDATA[&lt;p&gt;ಹೊಸಕೋಟೆ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಮತ್ತು ಓರ್ವ ಬೈಕ್ ಸವಾರ ಸೇರಿದಂತೆ ಏಳು ಮಂದಿ ದುರ್ಮರಣ ಹೊಂದಿದ್ದಾರೆ. ಅತೀವ ವೇಗದಿಂದ ಬಂದ ಎಕ್ಸ್&zwnj;ಯುವಿ ಕಾರು ಬೈಕ್ ಹಾಗೂ ಕ್ಯಾಂಟರ್&zwnj;ಗೆ ಡಿಕ್ಕಿ ಹೊಡೆದಿದ್ದೇ ದುರಂತಕ್ಕೆ ಕಾರಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khb3k96qx9rvr1vd9562e9c1,imgname-hoskote-accident--2--1770973144279.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೊಸಕೋಟೆ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಮತ್ತು ಓರ್ವ ಬೈಕ್ ಸವಾರ ಸೇರಿದಂತೆ ಏಳು ಮಂದಿ ದುರ್ಮರಣ ಹೊಂದಿದ್ದಾರೆ. ಅತೀವ ವೇಗದಿಂದ ಬಂದ ಎಕ್ಸ್&zwnj;ಯುವಿ ಕಾರು ಬೈಕ್ ಹಾಗೂ ಕ್ಯಾಂಟರ್&zwnj;ಗೆ ಡಿಕ್ಕಿ ಹೊಡೆದಿದ್ದೇ ದುರಂತಕ್ಕೆ ಕಾರಣ.&lt;/p&gt;&lt;img&gt;&lt;p&gt;ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ. ಸತ್ಯವಾರ ಗ್ರಾಮದ ಸಮೀಪ ಇಂದು ನಸುಕಿನ ಜಾವ ಸುಮಾರು ಬೆಳಗ್ಗೆ 4:50ರ ವೇಳೆಗೆ ಭೀಕರ ಸರಣಿ ರಸ್ತೆ ಅಪಘಾತ ದುರ್ಘಟನೆಯಲ್ಲಿ ಒಂದೇ ಕಾರಿನಲ್ಲಿದ್ದ ಆರು ಯುವಕರು ಹಾಗೂ ಓರ್ವ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮೃತರೆಲ್ಲರೂ ವಿದ್ಯಾರ್ಥಿಗಳಾಗಿದ್ದು ಒಬ್ಬೊಬ್ಬರ ಕುಟುಣಂಬದ್ದು ಒಂದೊಂದು ಕರುಣಾಜನಕ ಕಥೆಯಾಗಿದೆ.&lt;/p&gt;&lt;img&gt;&lt;p&gt;ಮೃತ ಬೈಕ್ ಸವಾರ ಗಗನ್ (26) ಸಫಲ್ ಮಾರುಕಟ್ಟೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದು, ದೇವನಾಯಕನಹಳ್ಳಿ (ದೇವನಹಳ್ಳಿ ತಾಲೂಕು) ನಿವಾಸಿಯಾಗಿದ್ದರು. ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಇಡೀ ಕುಟುಂಬಕ್ಕೆ ಈತನೇ ಆಧಾರಸ್ತಂಭವಾಗಿತ್ತು. 6 ಜನ ವಿದ್ಯಾರ್ಥಿಗಳ ಮೋಜು ಮಸ್ತಿಗೆ ಬೈಕ್ ಸವಾರ ಗಗನ್ ಬಲಿಯಾದ. ಗಗನ್ ಮಾವ ದೇವರಾಜ್ ಮಾತನಾಡಿ, &ldquo;ಗಗನ್ ನಮ್ಮ ಮನೆಯ ಆಧಾರ ಸ್ತಂಭ. ಆತನ ತಾಯಿಗೆ ಕಣ್ಣು ಕಾಣಿಸುವುದಿಲ್ಲ. ತಂದೆ-ತಾಯಿಗೆ ಒಬ್ಬನೇ ಮಗ. ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಅವನು ಮೃತಪಟ್ಟಿದ್ದಾನೆ&rdquo; ಎಂದು ಕಣ್ಣೀರಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಮೃತ ಯುವಕರಲ್ಲಿ ಒಬ್ಬನಾದ ಅಶ್ವಿನ್ ನಾಯರ್ ಇನ್ನೂ 17 ವರ್ಷ. ಯಲಹಂಕದ ಆರ್&zwnj;ವಿ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ನಿನ್ನೆ ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ನೈಟ್ ಔಟ್&zwnj;ಗೆ ಹೋಗಿದ್ದ ಅಶ್ವಿನ್, ಅಮ್ಮನಿಗೆ ತಿಳಿಸದೇ ಮನೆಯಿಂದ ಹೊರಟಿದ್ದಾನೆ. ಮಗ ಮನೆಯಲ್ಲಿ ಮಲಗಿದ್ದಾನೆ ಎಂದುಕೊಂಡಿದ್ದ ತಾಯಿಗೆ, ಬೆಳಗ್ಗೆ ಸೆಕ್ಯೂರಿಟಿ ಗಾರ್ಡ್ ಬಂದು &ldquo;ನಿಮ್ಮ ಮಗ ಕಾರಿನಲ್ಲಿ ಸ್ನೇಹಿತರ ಜೊತೆಗೆ ಹೋಗಿದ್ದಾನೆ&rdquo; ಎಂದು ಹೇಳಿದಾಗ ಆತಂಕ ಉಂಟಾಗಿದೆ. ತಾಯಿ ಮಗನಿಗೆ ಕರೆ ಮಾಡಿದಾಗ, ಪೊಲೀಸರು ಫೋನ್ ಎತ್ತಿದ್ದು, ಅಪಘಾತವಾಗಿದೆ ನಿಮ್ಮ ಮಗ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅಶ್ವಿನ್ ಕುಟುಂಬಕ್ಕೆ ಈ ಸುದ್ದಿ ಆಘಾತ ತಂದಿದೆ.&lt;/p&gt;&lt;img&gt;&lt;p&gt;ಅಪಘಾತದಲ್ಲಿ ಮೃತಪಟ್ಟ ಮತ್ತೊಬ್ಬ ವಿದ್ಯಾರ್ಥಿ ಅರ್ಹಾನ್ ಶರೀಫ್ ಅವರ ಮನೆ ಫ್ರೇಜರ್ ಟೌನ್ನಲ್ಲಿ ಶೋಕ ಮಡುಗಟ್ಟಿದೆ. 10ನೇ ತರಗತಿಯಲ್ಲಿ ಓದುತ್ತಿದ್ದ ಅರ್ಹಾನ್, ಸೋಮವಾರ ಕುಟುಂಬದೊಂದಿಗೆ ದುಬೈ ಮೂಲಕ ಮೆಕ್ಕಾಗೆ ಉಮ್ರಾ ಯಾತ್ರೆಗೆ ತೆರಳಬೇಕಿತ್ತು. ಇದಕ್ಕಾಗಿ ಟಿಕೆಟ್ ಕೂಡ ಬುಕ್ ಆಗಿತ್ತು. ಅರ್ಹಾನ್ ಮಾವ ಸೈಯ್ಯದ್ ಮಾತನಾಡಿ, &ldquo;ರಾತ್ರಿ ಯಾರಿಗೂ ಹೇಳದೇ ಸ್ನೇಹಿತರ ಜೊತೆಗೆ ಹೋಗಿದ್ದ. ಬೆಳಗ್ಗೆ ಪೊಲೀಸರ ಕರೆ ಬಂದಾಗಲೇ ವಿಷಯ ಗೊತ್ತಾಯಿತು. ಮಗನ ಕನಸುಗಳೆಲ್ಲ ಮಣ್ಣಾಗಿ ಹೋದವು&rdquo; ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಮೃತ ಯುವಕ ಈತನ್ ಜಾರ್ಜ್ ರಾತ್ರಿ &lsquo;ರೂಮ್&zwnj;ನಲ್ಲಿ ಮಲಗ್ತೇನೆ&rsquo; ಎಂದು ಹೇಳಿ ಹೊರಟಿದ್ದ. ಬೆಳಗ್ಗೆ ಪೊಲೀಸರಿಂದ ಕರೆ ಬಂದಾಗ, ತಂದೆ &ldquo;ನಮ್ಮ ಮಗ ಮನೆಯಲ್ಲೇ ಇದ್ದಾನೆ&rdquo; ಎಂದು ಹೇಳಿದರು. ನಂತರ ರೂಮ್&zwnj;ಗೆ ಹೋಗಿ ಬಾಗಿಲು ತಟ್ಟಿದರೂ ತೆಗೆಯದ ಕಾರಣ, ಆತಂಕಗೊಂಡು ಆಸ್ಪತ್ರೆಗೆ ಧಾವಿಸಿದಾಗಲೇ ಮಗ ಸಾವನ್ನಪ್ಪಿರುವ ಸುದ್ದಿ ಖಚಿತವಾಗಿದೆ. ಕುಟುಂಬ ಅಲ್ಲೇ ಕುಸಿದು ಹೋಗಿದೆ&lt;/p&gt;&lt;img&gt;&lt;p&gt;ಘಟನೆ ಕುರಿತು ಚಂದ್ರಕಾಂತ್, ಬೆಂಗಳೂರು ಗ್ರಾಮಾಂತರ ಎಸ್&zwnj;ಪಿ ಮಾತನಾಡಿ, &ldquo;ಸುಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಏಳು ಮಂದಿ ಮೃತಪಟ್ಟಿದ್ದಾರೆ. ಆರಂಭದಲ್ಲಿ ಯಾರ ಗುರುತೂ ಸಿಗದಷ್ಟು ಅಪಘಾತದ ತೀವ್ರತೆ ಇತ್ತು. ಮೃತರೆಲ್ಲ 16 ರಿಂದ 20 ವರ್ಷದ ಯುವಕರು. ಎಕ್ಸ್&zwnj;ಯುವಿ ಕಾರು ಮೊದಲು ಬೈಕ್&zwnj;ಗೆ, ನಂತರ ಕ್ಯಾಂಟರ್&zwnj;ಗೆ ಡಿಕ್ಕಿ ಹೊಡೆದಿದೆ. ಈ ಪ್ರಕರಣದ ತನಿಖೆಯನ್ನು ಹೊಸಕೋಟೆ ಡಿವೈಎಸ್ಪಿ ನೇತೃತ್ವದಲ್ಲಿ ನಡೆಸಲು ಆದೇಶಿಸಲಾಗಿದೆ. ಕಾರು ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ&rdquo; ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಅತೀವೇಗವಾಗಿ ಚಲಿಸುತ್ತಿದ್ದ KA 03 NW 0138 ಸಂಖ್ಯೆಯ ಮಹೀಂದ್ರಾ ಎಕ್ಸ್&zwnj;ಯುವಿ 700 ಕಾರು ಮೊದಲು ಮುಂದೆ ಸಾಗುತ್ತಿದ್ದ ಬೈಕ್&zwnj;ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಗನ್ (26) ಬೈಕ್ ಮೇಲಿಂದ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.&lt;/p&gt;&lt;p&gt;ನಂತರ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್&zwnj;ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಆ ಬಳಿಕ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯಿಂದ ಕ್ಯಾಂಟರ್ ಕೂಡ ಪಲ್ಟಿಯಾಗಿ ಪಕ್ಕದ ರಸ್ತೆಗೆ ಬಿದ್ದಿದ್ದು ಅದರ ಹಿಂಭಾಗದ ಚಕ್ರದ ಭಾಗ ಮಧ್ಯ ರಸ್ತೆಯಲ್ಲಿ ಬಿದ್ದ ಕಾರಣ, ನಂತರ ಬರುತ್ತಿದ್ದ ಬ್ರೀಜಾ ಕಾರು ಅದಕ್ಕೆ ಡಿಕ್ಕಿ ಹೊಡೆದಿದೆ. ಈ ರೀತಿ ಒಂದರ ಹಿಂದೆ ಒಂದು ನಡೆದ ಡಿಕ್ಕಿಗಳಿಂದ ಘಟನಾ ಸ್ಥಳವೇ ಭೀಕರ ಅಪಘಾತದ ಸನ್ನಿವೇಶ ಹೇಗಿರಬಹುದೆಂದು ಕಣ್ಣಮುಂದೆ ಕಟ್ಟಿಕೊಟ್ಟಂತೆ ಇದೆ. ಅಪಘಾತದ ತೀವ್ರತೆಗೆ ಎಕ್ಸ್&zwnj;ಯುವಿ ಕಾರಿನಲ್ಲಿದ್ದ ಆರು ಮಂದಿ ಯುವಕರು ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನ ಸ್ಥಿತಿ ಗುರುತೇ ಸಿಗದಷ್ಟು ನಜ್ಜುಗುಜ್ಜಾಗಿದ್ದು, ಏರ್&zwnj;ಬ್ಯಾಗ್&zwnj;ಗಳು ಸಂಪೂರ್ಣವಾಗಿ ಓಪನ್ ಆಗಿ ಬ್ಲಾಸ್ಟ್&zwnj; ಆಗಿದೆ.&lt;/p&gt;&lt;img&gt;&lt;p&gt;&lt;strong&gt;1.ಅಶ್ವಿನ್ ನಾಯರ್,&lt;/strong&gt;ತಂದೆ: ಅಜಿತ್ ನಾಯರ್,ವಯಸ್ಸು: 17 ವರ್ಷ,1ನೇ ಪಿಯುಸಿ ವಿದ್ಯಾರ್ಥಿ, ಆರ್&zwnj;ವಿ ಪಿಯು ಕಾಲೇಜು, ಯಲಹಂಕ,ವಿಳಾಸ: ಕೊತ್ತನೂರು.&lt;/p&gt;&lt;p&gt;&lt;strong&gt;2.ಈತನ್ ಜಾರ್ಜ್,&lt;/strong&gt;ತಂದೆ: ಜಾನ್ ಜಾರ್ಜ್,ವಯಸ್ಸು: 17 ವರ್ಷ,1ನೇ ಪಿಯುಸಿ ವಿದ್ಯಾರ್ಥಿ, ಆರ್&zwnj;ವಿ ಪಿಯು ಕಾಲೇಜು, ಯಲಹಂಕ,ವಿಳಾಸ: ಹುಳಿಮಾವು &ndash; ಹೆನ್ನೂರು ರಸ್ತೆ.&lt;/p&gt;&lt;p&gt;&lt;strong&gt;3.ಅಹ್ರಾಮ್ ಶರೀಫ್,&lt;/strong&gt;ತಂದೆ: ನೂರುಲ್ಲಾ ಶರೀಫ್,ವಯಸ್ಸು: 16 ವರ್ಷ,10ನೇ ತರಗತಿ ವಿದ್ಯಾರ್ಥಿ, ಸಿಎಂಆರ್ ಶಾಲೆ,ವಿಳಾಸ: ಎಚ್&zwnj;ವಿಆರ್ ಲೇಔಟ್.&lt;/p&gt;&lt;p&gt;&lt;strong&gt;4.ಅಯಾನ್ ಅಲಿ,&lt;/strong&gt;ತಂದೆ: ಅಜ್ಗರ್ ಅಲಿ,ವಯಸ್ಸು: 17 ವರ್ಷ,10ನೇ ತರಗತಿ ವಿದ್ಯಾರ್ಥಿ, ಸಿಎಂಆರ್ ಶಾಲೆ,ವಿಳಾಸ: ಕೊತ್ತನೂರು.&lt;/p&gt;&lt;img&gt;&lt;p&gt;&lt;strong&gt;5.ಭರತ್,&lt;/strong&gt;ತಂದೆ: ಗೋಪಿಯವರು,ವಯಸ್ಸು: 17 ವರ್ಷ,10ನೇ ತರಗತಿ ವಿದ್ಯಾರ್ಥಿ, ಶೋಭಾನ ಮೆಮೋರಿಯಲ್ ಶಾಲೆ,ವಿಳಾಸ: ಫ್ರೇಜರ್ ಟೌನ್.&lt;/p&gt;&lt;p&gt;&lt;strong&gt;6.ಫರ್ಹಾನ್,&lt;/strong&gt;ತಂದೆ: ಫಿರೋಜ್,ವಯಸ್ಸು: 18 ವರ್ಷ,ವಿಳಾಸ: ಕಮ್ಮನಹಳ್ಳಿ.&lt;/p&gt;&lt;p&gt;&lt;strong&gt;7.ಗಗನ್,&lt;/strong&gt;ತಂದೆ: ನಾಗರಾಜಪ್ಪ,ವಯಸ್ಸು: 26 ವರ್ಷ,ವೃತ್ತಿ: ಸಫಲ್ ಮಾರುಕಟ್ಟೆ &ndash; ಮೇಲ್ವಿಚಾರಕ,ವಿಳಾಸ: ದೇವನಾಯಕನಹಳ್ಳಿ, ಚೆನ್ನರಾಯಪಟ್ಟಣ ತಾಲೂಕು,(ದ್ವಿಚಕ್ರ ವಾಹನ ಸವಾರ).&lt;/p&gt;&lt;p&gt;&lt;strong&gt;ಗಾಯಗೊಂಡ ಕ್ಯಾಂಟರ್ ಚಾಲಕ&lt;/strong&gt;&lt;/p&gt;&lt;p&gt;ಬಾಲಸುಬ್ರಹ್ಮಣ್ಯಂ,ವಯಸ್ಸು: 32 ವರ್ಷ,ಸಂತೆಹಳ್ಳಿ ಗ್ರಾಮ, ಕಸಬಾ ಹೋಬಳಿ, ಮಳೂರು ತಾಲೂಕು.&lt;/p&gt;]]></content:encoded>
            <category>kolar</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bangalore-rural-horror-6-students-biker-die-at-hoskote-accident-blind-mother-loses-her-support-vp2lif4"/>
        </item>
    </channel>
</rss>
